ವಿಕಿಪೀಡಿಯ
knwiki
https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.17
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಪೀಡಿಯ
ವಿಕಿಪೀಡಿಯ ಚರ್ಚೆಪುಟ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆಪುಟ
ಕರಡು
ಕರಡು ಚರ್ಚೆಪುಟ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ರಕ್ತಪಿಶಾಚಿ
0
21903
1384569
1380252
2026-08-28T14:14:09Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384569
wikitext
text/x-wiki
{{Otheruses}}
[[ಚಿತ್ರ:Burne-Jones-le-Vampire.jpg|thumb|260px|ಫಿಲಿಪ್ ಬರ್ನೆ-ಜೋನ್ಸ್ರ ದ ವ್ಯಾಂಪೈರ್, 1897]]
ಜೀವಿಗಳು [[ಶವ]]ವಾಗಿದ್ದರೂ ಅಥವಾ ಬದುಕಿದ್ದರೂ ವ್ಯತ್ಯಾಸವೇ ಇಲ್ಲದಂತೆ ಅವುಗಳ ಜೀವಾಳ(ಸಾಮಾನ್ಯವಾಗಿ ರಕ್ತದ ರೂಪದಲ್ಲಿ)ವನ್ನು ಕುಡಿದು ಜೀವಿಸುವ [[ಪೌರಾಣಿಕ]] ಇಲ್ಲವೇ [[ದಂತಕಥೆಯ]] ಕಲ್ಪನೆಗಳೇ '''ರಕ್ತಪಿಶಾಚಿಗ''' ಳಾಗಿವೆ.<ref name="Levkievskaja">{{fr icon}} {{cite journal |last=Levkievskaja |first=E.E. |month=September |year=1997 |title=La mythologie slave : problèmes de répartition dialectale (une étude de cas : le vampire) |journal=Cahiers Slaves |volume=1 |url=http://www.recherches-slaves.paris4.sorbonne.fr/Cahier1/Levkievskaja.htm |accessdate=2007-12-29 |archive-date=2008-01-12 |archive-url=https://web.archive.org/web/20080112192340/http://www.recherches-slaves.paris4.sorbonne.fr/Cahier1/Levkievskaja.htm |url-status=dead }}</ref><ref name="Cremene89">ಕ್ರೆಮೆನೆ, ''ಮೈಥಾಲಜಿ ಡು ವ್ಯಾಂಪೈರ್ '' , p. 89.</ref><ref name="ReferenceA">ಬನ್ಸನ್, ''ರಕ್ತಪಿಶಾಚಿ ವಿಶ್ವಕೋಶ'' , p. 219.</ref><ref>{{uk icon}} Словник символів, Потапенко О.І., Дмитренко М.К., Потапенко Г.І. та ін., 1997.[https://web.archive.org/web/20070927212332/http://www.ber.te.ua/cgi-bin/dic/dic.php?nom=359] ಆನ್ಲೈನ್ ಲೇಖನ.</ref><ref>{{cite book
| last = Dundes
| first = Alan
| title = The Vampire: A Casebook
| url = https://archive.org/details/vampirecasebook00dund
| publisher = University of Wisconsin Press
| date = 1998
| pages = [https://archive.org/details/vampirecasebook00dund/page/13 13]
| isbn = 0299159248 }}</ref><ref>
{{cite encyclopedia
| title = Vampire
| encyclopedia = Encyclopaedia Britannica
| volume = 27
| pages = 876
| publisher = Encyclopaedia Britannica Company
| date = 1911
| accessdate = may 26, 2009}}</ref>
ದಂತಕಥೆಗಳ ಪ್ರಕಾರ, ರಕ್ತಪಿಶಾಚಿಗಳು ಆಗ್ಗಾಗ್ಗೆ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತವಲ್ಲದೇ ತಾವು ಬದುಕಿದ್ದಾಗ ಇದ್ದ ಸ್ಥಳದ ನೆರೆಹೊರೆಯಲ್ಲಿ ಉಪದ್ರವ ಕೊಡುವುದು ಇಲ್ಲವೇ ಸಾವುನೋವು ಉಂಟುಮಾಡುತ್ತಿರುತ್ತವೆ. ಶವಹೊದಿಕೆಗಳನ್ನು ಹೊದೆಯುವ ಅವು ಊದಿಕೊಂಡಿರುತ್ತವೆ ಹಾಗೂ ಕೆಂಪು ಕಳೆಯ ಅಥವಾ ಗಾಢ ಮುಖಚರ್ಯೆಯನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತದೆ. ಈ ವಿಚಾರವು 19ನೇ ಶತಮಾನದ ಮೊದಲ ಭಾಗದ ಆಧುನಿಕ ವರ್ಣನೆಯಲ್ಲಿನ ಕಾಲ್ಪನಿಕ ನೀಳವಾಗಿ ಪೇಲವವಾಗಿರುವ ರಕ್ತಪಿಶಾಚಿಗಳಿಗಿಂತ ಗಮನಾರ್ಹವಾಗಿ ಭಿನ್ನವಾಗಿವೆ. [[ಅನೇಕ ಸಂಸ್ಕೃತಿಗಳಲ್ಲಿ ರಕ್ತಪಿಶಾಚಿಗಳ ಬಗ್ಗೆ ದಾಖಲಾಗಿದ್ದು]], ಸಾರಸ್ವತ ಇತಿಹಾಸತಜ್ಞ ಬ್ರಿಯಾನ್ ಫ್ರಾಸ್ಟ್ರ ಊಹನೆಯಾದ “ರಕ್ತಪಿಶಾಚಿಗಳ ಮತ್ತು ರಕ್ತ ಹೀರುವ ಪ್ರೇತಗಳ ಮೇಲಿನ ನಂಬಿಕೆ ಮನುಷ್ಯನಷ್ಟೇ ಹಳೆಯದು" ತರಹದ ನಂಬಿಕೆಗಳಿದ್ದು "ಇತಿಹಾಸಪೂರ್ವ"ದ<ref>ಫ್ರಾಸ್ಟ್ , ಬ್ರಿಯಾನ್ ಜೆ. ''ದ ಮಾನ್ಸ್ಟರ್ ವಿತ್ ಎ ಥೌಸಂಡ್ ಫೇಸಸ್ : ಗೈಸಸ್ ಆಫ್ ದ ವ್ಯಾಂಪೈರ್ ಇನ್ ಮಿಥ್ ಅಂಡ್ ಲಿಟರೇಚರ್'' , ವಿಸ್ಜನ್ಸಿನ್ ವಿಶ್ವವಿದ್ಯಾಲಯದ ಮುದ್ರಣ (1989) p. 3.</ref> ಕಡೆ ಗಮನ ಸೆಳೆದರೂ, ರಕ್ತಪಿಶಾಚಿ ದಂತಕಥೆಗಳು ಹೆಚ್ಚು ಪ್ರಚಲಿತವಿದ್ದ [[ಬಾಲ್ಕನ್ಸ್]] ಮತ್ತು [[ಪೂರ್ವ ಯೂರೋಪ್]]ಗಳಂತಹಾ<ref name="SU223">ಸಿಲ್ವರ್ & ಉರ್ಸಿನಿ , ''ದ ವ್ಯಾಂಪೈರ್ ಫಿಲ್ಮ್'' , pp. 22–23.</ref> ಪ್ರದೇಶಗಳಿಂದ ರಕ್ತಪಿಶಾಚಿ ಮೂಢನಂಬಿಕೆಯು [[ಪಾಶ್ಚಿಮಾತ್ಯ ಯೂರೋಪ್]]ನಲ್ಲಿ ಹೆಚ್ಚು ಪ್ರಭಾವ ಬೀರತೊಡಗುವವರೆಗೆ ಎಂದರೆ ''ರಕ್ತಪಿಶಾಚಿ'' ಎಂಬ ಪದವು 18ನೇ ಶತಮಾನದ ಪೂರ್ವಾರ್ಧದವರೆಗೆ ಹೆಚ್ಚು ಜನಬಳಕೆಯಲ್ಲಿರಲಿಲ್ಲ. [[ಸರ್ಬಿಯಾ]] ಮತ್ತು [[ಬಲ್ಗೇರಿಯಾ]]ದಲ್ಲಿ ''ವ್ಯಾಂಪಿರ್'' (вампир), [[ಗ್ರೀಸ್]]ನಲ್ಲಿ ''[[ವ್ರಿಕೊಲಕಾಸ್]]'' ಹಾಗೂ [[ರೊಮೇನಿಯಾ]]ದಲ್ಲಿ ''[[ಸ್ಟ್ರಿಗೋಯಿ]]'' ನಂತೆ ಇದೇ ರೀತಿಯ ಸ್ಥಳೀಯ ಪ್ರೇತಗಳನ್ನು ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತಿತ್ತು. ಯೂರೋಪ್ನಲ್ಲಿನ ಈ ರೀತಿಯ ರಕ್ತಪಿಶಾಚಿ ಮೂಢನಂಬಿಕೆಯ ಹೆಚ್ಚಳವು [[ಸಾಮೂಹಿಕ ಉನ್ಮಾದ]]ದ ರೂಪ ತಾಳಿದ್ದುದರಿಂದ ಕೆಲವೊಮ್ಮೆ ಶವಗಳನ್ನು ಸುಡುಗಂಬಗಳಲ್ಲಿ ಸುಡುವುದಲ್ಲದೇ, ಇತರರನ್ನು ರಕ್ತಪಿಶಾಚಿಯೆಂದು ಅನುಮಾನಿಸಿ ನಡೆಸಿಕೊಳ್ಳುವುದೂ ಸಹಾ ನಡೆಯುತ್ತಿತ್ತು.
ಆಧುನಿಕ ಕಲ್ಪನೆಯ ವರ್ಚಸ್ವಿ ಮತ್ತು ನವೀನ ತಾಂತ್ರಿಕತೆಯ/ನುರಿತ/ಜಾಣ ರಕ್ತಪಿಶಾಚಿಯ ಜನ್ಮ 1819ರಲ್ಲಿ [[ಜಾನ್ ಪಾಲಿಡೊರಿ]]ರ ‘''[[ದ ವ್ಯಾಂಪೈರ್]]'' ’ ಕಾದಂಬರಿಯ ಪ್ರಕಟಣೆಯೊಂದಿಗೆ ಆಯಿತು. ಈ ಕಥೆಯು ಅತ್ಯಂತ ಯಶಸ್ವಿಯಾದುದಲ್ಲದೇ ಚರ್ಚಾತ್ಮಕವಾಗಿ 19ನೇ ಶತಮಾನ<ref name="SU378" /> ದ ಪೂರ್ವಾರ್ಧದ ರಕ್ತಪಿಶಾಚಿ ಕುರಿತ ಅತಿ ಪ್ರಭಾವೀ ಕೃತಿಯೆನಿಸಿಕೊಂಡಿತು. ಆದಾಗ್ಯೂ, [[ಬ್ರಾಮ್ ಸ್ಟಾಕರ್]]ರ 1897ರ ಕಾದಂಬರಿ ''[[ಡ್ರಾಕುಲಾ]]'' ವೇ ಇಂದಿಗೂ ನೆನಪಿಸಿಕೊಳ್ಳಬಲ್ಲ ಸರ್ವೋತ್ಕೃಷ್ಟ [[ರಕ್ತಪಿಶಾಚಿ ಕಾದಂಬರಿ]]. ಇದು ಆಧುನಿಕ ರಕ್ತಪಿಶಾಚಿ ಕಲ್ಪನೆಗೆ ಮೂಲಭೂತ ರೂಪ ಕಲ್ಪಿಸಿಕೊಟ್ಟಿತು. ಮುಂಚಿನ ಪೌರಾಣಿಕ ಕಥೆಗಳಾದ [[ತೋಳಮಾನವರು]] ಮತ್ತು ಅದೇ ತರಹದ ಕಾಲ್ಪನಿಕ ಭೂತಪ್ರೇತಗಳ "ಒಂದು ವಯಸ್ಸಿನ ಕುತೂಹಲಗಳಿಗೆ ಧ್ವನಿಯಾಗುವ," ಮತ್ತು "ಹಳೆಯ [[ವಿಕ್ಟೋರಿಯನ್]] ವ್ಯವಸ್ಥೆಯ ಕಾಲದ ಭಯಗಳ" <ref name="Sellers">ಸೆಲ್ಲರ್ಸ್, ಸೂಸನ್. ''ಮಿಥ್ ಅಂಡ್ ಫೇರಿ ಟೇಲ್ ಇನ್ ಕಾಂಟೆಂಪೊರರಿ ವಿಮೆನ್ಸ್ ಫಿಕ್ಷನ್'' , ಪಾಲ್ಗ್ರೇವ್ ಮ್ಯಾಕ್ಮಿಲ್ಲನ್ (2001) p. 85.</ref> ಮೇಲೆ ''[[ಡ್ರಾಕುಲಾ]]'' ಕಲ್ಪನೆ ರೂಪುಗೊಂಡಿತ್ತು.
ಈ ಪುಸ್ತಕದ ಯಶಸ್ಸು ಪುಸ್ತಕಗಳು, ಚಿತ್ರಗಳು, ವಿಡಿಯೋ ಆಟಗಳು ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ 21ನೇ ಶತಮಾನದ ಈಗಲೂ ಜನಪ್ರಿಯವಾಗಿರುವ ಪ್ರತ್ಯೇಕ ರಕ್ತಪಿಶಾಚಿ [[ಪ್ರಭೇದ]]ವನ್ನೇ ಹುಟ್ಟು ಹಾಕಿತು. ಭಯಾನಕ ಪ್ರಭೇದದಲ್ಲಿ ಸಾರಸ್ವತ ಇತಿಹಾಸತಜ್ಞೆ ಸೂಸನ್ ಸೆಲ್ಲರ್ಸ್ರ ಪ್ರಸ್ತುತ ರಕ್ತಪಿಶಾಚಿ ಕಲ್ಪನೆಯು "ದುಸ್ವಪ್ನಗಳ ಕಲ್ಪನೆಯ ಸುರಕ್ಷತೆಯ ಹೋಲಿಕೆ"<ref name="Sellers" /> ಯಲ್ಲಿ ರಕ್ತಪಿಶಾಚಿಯು ಪ್ರಧಾನ ಸ್ಥಾನವನ್ನು ಕಾಯ್ದುಕೊಂಡಿದೆ.
== ವ್ಯುತ್ಪತ್ತಿ ಶಾಸ್ತ್ರ ==
''[[ಆಕ್ಸ್ಫರ್ಡ್ ಆಂಗ್ಲ ಪದಕೋಶ]]'' ದ ಪ್ರಕಾರ ''ರಕ್ತಪಿಶಾಚಿ'' ಪದದ ಆಂಗ್ಲ ರೂಪವು 1734ರಿಂದ ಬಳಕೆಯಲ್ಲಿದ್ದು, 1745ರಲ್ಲಿ ''[[ಹರ್ಲೆಯನ್ ಮಿಸೆಲಿನಿ]]'' ಯಲ್ಲಿ ಪ್ರಕಟಿತವಾದ ''ಟ್ರಾವೆಲ್ಸ್ ಆಫ್ ಥ್ರೀ ಇಂಗ್ಲಿಷ್ ಜೆಂಟಲ್ಮೆನ್'' ಎಂಬ ಶೀರ್ಷಿಕೆಯ ಪ್ರವಾಸಕಥನದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಂಡಿತು.<ref>{{cite encyclopedia|title=Vampire|encyclopedia=Oxford English Dictionary|editor=J. Simpson, E. Weiner (eds)|year=1989|edition=2nd edition |location=Oxford |publisher=Clarendon Press|id=ISBN 0-19-861186-2}}</ref><ref>{{cite book |title=Harleian Miscellany |last=Johnson |first=Samuel |authorlink=Samuel Johnson|year=1745|chapter=IV|publisher=T. Osborne|location=London|page=358}}</ref> [[ಜರ್ಮನ್]] ಸಾಹಿತ್ಯದಲ್ಲಿ ರಕ್ತಪಿಶಾಚಿಗಳ ಬಗ್ಗೆ ಮುಂಚೆಯೇ ಚರ್ಚಿಸಲಾಗಿತ್ತು.<ref name="barber5" /> [[1718ರಲ್ಲಿ]] ಆಸ್ಟ್ರಿಯಾವು ಉತ್ತರ [[ಸರ್ಬಿಯಾ]] ಮತ್ತು [[ಒಲ್ಟೇನಿಯಾ]]ದ ನಿಯಂತ್ರಣ ಪಡೆದುಕೊಂಡ ನಂತರ, ಅಲ್ಲಿನ ಅಧಿಕಾರಿಗಳು ಶವಗಳನ್ನು ಹೊರತೆಗೆದು "ರಕ್ತಪಿಶಾಚಿಗಳ ಕೊಲ್ಲುವಿಕೆ"ಯ ಸ್ಥಳೀಯ ಆಚರಣೆಗಳನ್ನು ಪತ್ತೆಹಚ್ಚಿದರು.<ref name="barber5" /> 1725ರಿಂದ 1732ರ ನಡುವಿನಲ್ಲಿ ತಯಾರಾದ ಈ ವರದಿಗಳು ವ್ಯಾಪಕ ಪ್ರಚಾರವನ್ನು ಪಡೆದುಕೊಂಡವು.<ref name="barber5">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 5.</ref>
18ನೇ ಶತಮಾನದ ಪೂರ್ವಭಾಗದಲ್ಲಿ [[ಸರ್ಬಿಯನ್]] ಭಾಷೆಯ вампир/''ವ್ಯಾಂಪಿರ್'' <ref name="Grimm">{{de icon}} {{cite web|url=http://germazope.uni-trier.de/Projects/WBB/woerterbuecher/dwb/wbgui?lemid=GV00025|title=Deutsches Wörterbuch von Jacob Grimm und Wilhelm Grimm. 16 Bde. (in 32 Teilbänden). Leipzig: S. Hirzel 1854-1960|accessdate=2006-06-13|archive-date=2007-09-26|archive-url=https://web.archive.org/web/20070926215950/http://germazope.uni-trier.de/Projects/WBB/woerterbuecher/dwb/wbgui?lemid=GV00025|url-status=dead}}</ref><ref name="MW">{{cite web |title=Vampire |publisher=Merriam-Webster Online Dictionary |url=http://www.merriamwebster.com/dictionary/vampire |accessdate=2006-06-13 |archive-date=2006-06-14 |archive-url=https://web.archive.org/web/20060614081137/http://www.merriamwebster.com/dictionary/vampire |url-status=dead }}</ref><ref name="Tresor">{{fr icon}} {{cite web |url=http://atilf.atilf.fr/dendien/scripts/fast.exe?mot=vampire |title=Trésor de la Langue Française informatisé |accessdate=2006-06-13 |archive-date=2012-05-26 |archive-url=https://archive.is/20120526220130/http://atilf.atilf.fr/dendien/scripts/fast.exe?mot=vampire |url-status=dead }}</ref><ref>{{fr icon}} {{cite book |last=Dauzat |first=Albert|title=Dictionnaire étymologique de la langue française |year=1938 |publisher=Librairie Larousse |location=Paris |oclc=904687}}</ref><ref>{{cite web |last=Weibel |first=Peter |title=Phantom Painting - Reading Reed: Painting between Autopsy and Autoscopy |publisher=David Reed's Vampire Study Center |url=http://thegalleriesatmoore.org/publications/vampirestudy/weiben12.shtml |accessdate=2007-02-23 |archive-date=2007-09-27 |archive-url=https://web.archive.org/web/20070927172528/http://thegalleriesatmoore.org/publications/vampirestudy/weiben12.shtml |url-status=dead }}</ref> ಪದದಿಂದ ಜನಿಸಿದ ಜರ್ಮನ್ ಭಾಷೆಯ ''ವ್ಯಾಂಪಿರ್'' ಪದದಿಂದ ಆಂಗ್ಲ ಪದವನ್ನು (ಪ್ರಾಯಶಃ [[ಫ್ರೆಂಚ್]] ''ವ್ಯಾಂಪೈರ್'' ದ ಮೂಲಕ) ನಿಷ್ಪತ್ತಿಗೊಳಿಸಲಾಗಿದೆ. ಸರ್ಬಿಯನ್ ರೂಪವು ಬಹುಪಾಲು ಎಲ್ಲಾ [[ಸ್ಲಾವಿಕ್ ಭಾಷೆಗಳಲ್ಲಿ]] ಸಮಾನಾರ್ಥಕ ಪದಗಳನ್ನು ಹೊಂದಿದೆ : [[ಬಲ್ಗೇರಿಯನ್ ಭಾಷೆಯ]] вампир (''ವ್ಯಾಂಪಿರ್'' ), [[ಝೆಕ್]] ಮತ್ತು [[ಸ್ಲೊವಾಕ್]]ನ ''ಉಪಿರ್'' , [[ಪೋಲಿಷ್]] ಭಾಷೆಯ ''ವೇಪೀರಜ್'' , ಮತ್ತು (ಬಹುಶಃ [[ಪೂರ್ವ ಸ್ಲಾವಿಯ]]ದಿಂದ ಪ್ರಭಾವಿತವಾದ) ''ಉಪಿಯೊರ್'' , [[ರಷ್ಯನ್ ಭಾಷೆಯ]] упырь (''ಉಪಿರ್'' <nowiki>'</nowiki>), [[ಬೆಲಾರಷ್ಯನ್ ಭಾಷೆಯ]] упыр (''ಉಪಿರ್'' ), [[ಉಕ್ರೇನ್ ಭಾಷೆಯ]] упирь (''ಉಪಿರ್'' <nowiki>'</nowiki>), ಮತ್ತು [[ಪ್ರಾಚೀನ ರಷ್ಯನ್ ಭಾಷೆಯ]] упирь (''ಉಪಿರ್'' <nowiki>'</nowiki>). (ಗಮನಿಸಬೇಕಾದ ವಿಷಯವೆಂದರೆ ಇಲ್ಲಿನ ಅನೇಕ ಭಾಷೆಗಳು ಪಾಶ್ಚಿಮಾತ್ಯ ಜಗತ್ತಿನಿಂದ ಎರವಲು ಪಡೆದ "ವಾಂಪಿರ್/ವ್ಯಾಂಪಿರ್" ರೂಪಗಳನ್ನೂ ಹೊಂದಿದ್ದರೂ ಇವೆಲ್ಲವೂ ಅದನ್ನು ಗುರುತಿಸಲು ಬಳಸುವ ಮೂಲ ಸ್ಥಳೀಯ ಪದಗಳಿಗಿಂತ ಪ್ರತ್ಯೇಕ ಅಸ್ತಿತ್ವವನ್ನೇ ಹೊಂದಿವೆ.) ಇವುಗಳ ನಿಖರ ವ್ಯುತ್ಪತ್ತಿಯು ಅಷ್ಟು ಸ್ಪಷ್ಟವಿಲ್ಲ.<ref name="Tokarev">{{ru icon}} {{cite book |last=Tokarev |first=Sergei Aleksandrovich |title=Mify Narodov Mira|year=1982|publisher=Moscow |location=Sovetskaya Entsiklopediya|oclc=7576647}} ("ವಿಶ್ವದ ಜನರ ದಂತಕಥೆಗಳು"). ಉಪಿರ್'</ref> ಪ್ರಸ್ತಾಪಿತ [[ಪ್ರಾಚೀನ-ಸ್ಲಾವಿಕ್]] ರೂಪಗಳು *{{Unicode|ǫpyrь}} ಮತ್ತು *{{Unicode|ǫpirь}}.<ref name="Vasmer">{{ru icon}} {{cite web|url=http://vasmer.narod.ru/p752.htm|title=Russian Etymological Dictionary by [[Max Vasmer]]|accessdate=2006-06-13}}</ref> ಒಂದು ಹಳೆಯ ಹಾಗೂ ಹೆಚ್ಚು ಪ್ರಚಲಿತವಲ್ಲದ ಸಿದ್ಧಾಂತದ ಪ್ರಕಾರ ಸ್ಲಾವಿಕ್ ಭಾಷೆಗಳು "ಮಾಟಗಾತಿ"ಗೆ ಬಳಸುವ [[ಟರ್ಕಿ ಭಾಷೆಯ]] ಪದದಿಂದ ನಿಷ್ಪತ್ತಿಯಾದ ಪದವನ್ನು ಆಕರವನ್ನಾಗಿ ಹೊಂದಿವೆ (e.g., [[ಟಾಟಾರ್]] ''ಉಬಿರ್'' ).<ref name="Vasmer" /><ref>{{bg icon}}ಮ್ಲಾಡೆನವ್ , ಸ್ಟೆಫನ್ (1941). Etimologičeski i pravopisen rečnik na bǎlgarskiya knižoven ezik.</ref>
ಪ್ರಾಚೀನ ರಷ್ಯನ್ ರೂಪವಾದ Упирь (''ಉಪಿರ್<nowiki>'</nowiki>'' )ನ ಬಳಕೆಯು ಸಾಮಾನ್ಯ ನಂಬಿಕೆಯ ಪ್ರಕಾರ 6555ನೆಯ (1047 AD)<ref>{{cite book |last=Melton |first=J.G. |title=The Vampire Book: The Encyclopedia of the Undead |url=https://archive.org/details/vampirebookencyc0000melt |year=1994 |location=Detroit |publisher=Visible Ink Press |isbn=0-8103-2295-1 |page=xxxi |nopp=true}}</ref> ಇಸವಿಯಲ್ಲಿ ಪ್ರಪ್ರಥಮವಾಗಿ ದಾಖಲಾಗಿದೆ. ಇದು [[ನವ್ಗೋರೋಡ್]]ನ ರಾಜಕುಮಾರ [[ವ್ಲಾಡಿಮಿರ್ ಯಾರೊಸ್ಲಾವೊವಿಚ್]]<ref name="Bible">{{ru icon}} {{Cite web |first=A. I. |last=Sobolevskij |title=Slavjano-russkaja paleografija |url=http://www.textology.ru/drevnost/srp2.shtml |accessdate=2007-12-21 |archive-date=2007-11-03 |archive-url=https://web.archive.org/web/20071103160829/http://www.textology.ru/drevnost/srp2.shtml |url-status=dead }} [http://www.stsl.ru/manuscripts/book.php?col=1&manuscript=089 ಮೂಲ ಹಸ್ತಪ್ರತಿ, Книги 16 Пророков толковыя] {{Webarchive|url=https://web.archive.org/web/20121101015410/http://www.stsl.ru/manuscripts/book.php?col=1&manuscript=089 |date=2012-11-01 }}.</ref> ಗೆಂದು [[ಗ್ಲಾಗೋಲಿಟಿಕ್ ಭಾಷೆ]]ಯಿಂದ [[ಸಿರಿಲಿಕ್ ಭಾಷೆ]]ಗೆ ಪುರೋಹಿತನೊಬ್ಬ ತರ್ಜುಮೆ ಮಾಡಿದ [[ಬುಕ್ ಆಫ್ ಪ್ಸಾಮ್ಸ್]]ಎಂಬ ಪುಸ್ತಕದ ಹಸ್ತಪ್ರತಿಯ [[ಮುಕ್ತಾಯಮುದ್ರೆ]] ಆಗಿತ್ತು. ಪುರೋಹಿತನು ಅದರಲ್ಲಿ ತನ್ನ ಹೆಸರನ್ನು "ದುಷ್ಟ ರಕ್ತಪಿಶಾಚಿ" ಅಥವಾ "ವಿಕಾರ ರಕ್ತಪಿಶಾಚಿ"<ref name="Opir">{{cite journal |last=Lind |first=John H. |title=Varangians in Europe’s Eastern and Northern Periphery|journal=Ennen ja Nyt |issue=4 |year=2004 |url=http://www.ennenjanyt.net/4-04/lind.html |accessdate=2007-02-20}}</ref> ಎಂಬರ್ಥ ಬರುವ "''ಉಪಿರ್''' ''ಲಿಖ್ಯಿ'' " (Упирь Лихый), ಎಂದು ಬರೆದುಕೊಳ್ಳುತ್ತಾನೆ. ಈ ತರಹದ ಸುಸ್ಪಷ್ಟ ಅಪರಿಚಿತ ಹೆಸರುಗಳನ್ನು ಬಳಸಿರುವುದು [[ನಿಸರ್ಗಾರಾಧಕರಿಂದ/ನಾಸ್ತಿಕರಿಂದ]] ತಪ್ಪಿಸಿಕೊಳ್ಳುವ ಹಾಗೂ ಖಾಸಗಿಯಾಗಿ ಉಪನಾಮವನ್ನಿಟ್ಟುಕೊಳ್ಳುವ ಪರಿಪಾಠಗಳೆರಡಕ್ಕೂ ಉದಾಹರಣೆಯಾಗುತ್ತದೆ.<ref>{{cite book|last=Dolotova|first=I.A.|coauthors=O.A. Rodionov & A.B. Van'kova|title=История России. 6-7 кл : Учебник для основной школы: В 2-х частях. Ч. 1: С древнейших времен до конца XVI века|year=2002|publisher=ЦГО|isbn=5-7662-0149-4|url=http://www.ndce.ru/fulltext/pdf/1000292.pdf|format=PDF|accessdate=2007-02-28|archive-date=2007-06-14|archive-url=https://web.archive.org/web/20070614015221/http://www.ndce.ru/fulltext/pdf/1000292.pdf|url-status=dead}} ("ರಷ್ಯದ ಇತಿಹಾಸ. 6-7 kl.: ಪ್ರಾಥಮಿಕ ಶಾಲೆಗೆ ಪಠ್ಯಪುಸ್ತಕ : 2-X ಭಾಗಗಳಲ್ಲಿ. ಭಾಗ 1: ಪ್ರಾಚೀನ ಕಾಲದಿಂದ XVI ಶತಮಾನದ ಕೊನೆಯವರೆಗೆ.")</ref>
ಮತ್ತೊಂದು ಹಳೆಯ ರಷ್ಯನ್ ಪದದ ಪ್ರಾಚೀನ ಬಳಕೆಯೆಂದರೆ ನಾಸ್ತಿಕವಿರೋಧಿ ಗ್ರಂಥ "ಸಂತ ಗ್ರಿಗೋರಿಯವರ ಉಪದೇಶ" [[ನಾಸ್ತಿಕ]]ರಿಂದ ''ಉಪಿರಿ'' ಆರಾಧನೆಯಿತ್ತೆಂದು ಹೇಳಲಾಗುವ 11ರಿಂದ–13ನೇ ಶತಮಾನದ ವಿವಿಧ ಕಾಲಮಾನಗಳಲ್ಲಿ ಗುರುತಿಸಲಾಗಿರುವ ಪುಸ್ತಕದಲ್ಲಿದೆ.<ref>{{ru icon}} {{cite web |url=http://historic.ru/books/item/f00/s00/z0000031/index.shtml |title=Рыбаков Б.А. Язычество древних славян / М.: Издательство 'Наука,' 1981 г. |accessdate=2007-02-28}}</ref><ref name="period">{{ru icon}} {{cite journal |last=Зубов |first=Н.И. |title=Загадка Периодизации Славянского Язычества В Древнерусских Списках “Слова Св. Григория ... О Том, Како Первое Погани Суще Языци, Кланялися Идолом...” |journal=Живая Старина |volume=1 |issue=17 |pages=6–10 |year=1998 |url=http://kapija.narod.ru/Ethnoslavistics/zub_period.htm |accessdate=2007-02-28 |archive-date=2007-02-25 |archive-url=https://web.archive.org/web/20070225025712/http://kapija.narod.ru/Ethnoslavistics/zub_period.htm |url-status=dead }}</ref>
ವ್ಯುತ್ಪತ್ತಿ ಮೂಲದ ಬಗೆಗೆ ಇರುವ ಒಂದು ಸಿದ್ಧಾಂತದ ಪ್ರಕಾರ : [[ಆಲ್ಬೇನಿಯನ್]] ಪದಗಳಾದ ಧೆಂಬ್ {ಹಲ್ಲು} ಮತ್ತು ಪೈರ್ {ಹೀರುವಿಕೆ}ಗಳಿಂದ ರೂಪಿಸಿತ್ತು.
== ಜಾನಪದ ನಂಬಿಕೆಗಳು ==
ರಕ್ತಪಿಶಾಚಿತನದ ಕಲ್ಪನೆಯು ಸಹಸ್ರಮಾನಗಳಿಂದಲೇ ಇದೆ, [[ಮೆಸಪಟೋಮಿಯಾ]], [[ಹೀಬ್ರೂ]], [[ಪ್ರಾಚೀನ ಗ್ರೀಕ್]] ಮತ್ತು [[ರೋಮನ್]] ಜನಾಂಗಗಳು ಆಧುನಿಕ ರಕ್ತಪಿಶಾಚಿಗಳ ಪೂರ್ವಭಾವಿ ರೂಪಗಳೆಂದು ಗುರುತಿಸಲಾಗುವ ದೆವ್ವ ಹಾಗೂ ಪ್ರೇತಗಳನ್ನು ಕುರಿತ ಕಥೆಗಳನ್ನು ಹೊಂದಿದ್ದವು. ಈ ಪ್ರಾಚೀನ ನಾಗರೀಕತೆಗಳಲ್ಲಿ ರಕ್ತಪಿಶಾಚಿ-ಮಾದರಿಯ ಜೀವಿಗಳ ಪ್ರಸಕ್ತಿಯಿದ್ದಾಗ್ಯೂ, ರಕ್ತಪಿಶಾಚಿಯೆಂದು ಈಗ ಕರೆಯಲ್ಪಡುವ ಜೀವಿಯ ಬಗೆಗಿನ ಜಾನಪದ ಮೂಲಗಳು [[ಆಗ್ನೇಯ ಯೂರೋಪ್]],<ref name="SU223">ಸಿಲ್ವರ್ & ಉರ್ಸಿನಿ, pp. 22–23.</ref> ನಲ್ಲಿ ಅನೇಕ ಜನಾಂಗೀಯ [[ಕಂಠೋಕ್ತ ಸಂಪ್ರದಾಯಗಳನ್ನು]] ಲಿಖಿತರೂಪದಲ್ಲಿ ದಾಖಲಿಸಿ ಪ್ರಕಟಿಸಲು ಆರಂಭಿಸಿದ 18ನೇ ಶತಮಾನದ ಆದಿಭಾಗವನ್ನು ಆಶ್ರಯಿಸುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ, ರಕ್ತಪಿಶಾಚಿಗಳು ದುಷ್ಟ ವ್ಯಕ್ತಿಗಳ [[ಪ್ರೇತ]]ಗಳೋ, [[ಆತ್ಮಹತ್ಯೆ]] ಮಾಡಿಕೊಂಡ ವ್ಯಕ್ತಿಗಳು ಅಥವಾ ಮಾಟಗಾರರಾಗಿರುತ್ತಿದ್ದರೂ, ದುಷ್ಟ ಪ್ರೇತವೊಂದಕ್ಕೆ ಶವವೊಂದು [[ಸಿಕ್ಕಿದಾಗ]] ಅದರಿಂದ ಇಲ್ಲವೇ ರಕ್ತಪಿಶಾಚಿಯಿಂದ ಕೊಲ್ಲಲ್ಪಟ್ಟ ಕಾರಣ ಸಹಾ ರಕ್ತಪಿಶಾಚಿಗಳ ಸೃಷ್ಟಿಗೆ ಕಾರಣವಾಗಬಹುದಿತ್ತು. ಈ ತರಹದ ದಂತಕಥೆಗಳಲ್ಲಿನ ನಂಬಿಕೆ ಎಷ್ಟು ವ್ಯಾಪಕವಾಗಿತ್ತೆಂದರೆ ಕೆಲ ಪ್ರದೇಶಗಳಲ್ಲಿ [[ಸಾಮೂಹಿಕ ಉನ್ಮಾದ]]ವನ್ನುಂಟು ಮಾಡಿ, ಹಲವೊಮ್ಮೆ ರಕ್ತಪಿಶಾಚಿಗಳಾಗಿರಬಹುದೆಂದು ಅನುಮಾನಿತರಾಗಿದ್ದವರನ್ನು ಸಾರ್ವಜನಿಕವಾಗಿ ಕೊಲ್ಲುತ್ತಿದ್ದ ನಿದರ್ಶನಗಳೂ ಇದ್ದವು.<ref name="Cohen" />
=== ವಿವರಣೆ ಹಾಗೂ ಸಾಮಾನ್ಯ ಲಕ್ಷಣಗಳು ===
[[ಚಿತ್ರ:Munch vampire.jpg|225px|thumb|ಎಡ್ವರ್ಡ್ ಮುಂಚ್ರ ವ್ಯಾಂಪೈರೆನ್ "ದ ವ್ಯಾಂಪೈರ್ ,"]]
ದಂತಕಥೆಯ ರಕ್ತಪಿಶಾಚಿಯ ಬಗ್ಗೆ ಹೀಗೆಯೇ ಎಂದು ನಿರ್ದಿಷ್ಟ ವಿವರಣೆ ಕೊಡಲು ಕಷ್ಟಸಾಧ್ಯವಾದರೂ ಅನೇಕ ಐರೋಪ್ಯ ದಂತಕಥೆಗಳ ಮಧ್ಯೆ ಸಾಕಷ್ಟು ಸಾಮ್ಯತೆಗಳಿದ್ದವು. ರಕ್ತಪಿಶಾಚಿಗಳು ನೋಡಲು ಸಾಮಾನ್ಯವಾಗಿ ಊದಿಕೊಂಡಂತೆ ಕೆಂಪಗಿನ, ನೇರಳೆ ಬಣ್ಣದ ಅಥವಾ ದಟ್ಟ ವರ್ಣದವಾಗಿರುತ್ತಿದ್ದವು, ಈ ಲಕ್ಷಣಗಳನ್ನು ಸಾಮಾನ್ಯವಾಗಿ ಆಗತಾನೆ ರಕ್ತ ಕುಡಿದಿರುವುದನ್ನು ಸೂಚಿಸುತ್ತದೆ ಎನ್ನಲಾಗುತ್ತಿತ್ತು. ಅದಿದ್ದ ಶವಪೆಟ್ಟಿಗೆ ಇಲ್ಲವೇ ಶವಹೊದಿಕೆಯೊಳಗೆ ನೋಡಿದರೆ ದಿಟವಾಗಿ ಬಾಯಿ ಮತ್ತು ಮೂಗುಗಳಿಂದ ರಕ್ತ ಸೋರುವುದನ್ನು ಹಾಗೂ ಸಾಮಾನ್ಯವಾಗಿ ಅದರ ಎಡಕಣ್ಣು ತೆರೆದಿರುವುದನ್ನು ಕಾಣಬಹುದಿತ್ತು.<ref name="Barb412">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , pp. 41–42.</ref> ಹೂಳುವಾಗ ಹೊದಿಸಿದ್ದ ನಾರಿನ ಶವಹೊದಿಕೆಯನ್ನು ಹೊದ್ದಿರುತ್ತಿದ್ದ ಇವುಗಳ ಹಲ್ಲು,ಕೂದಲು ಮತ್ತು ಉಗುರುಗಳು ಅಸಾಮಾನ್ಯ ಬೆಳವಣಿಗೆಯನ್ನು ಹೊಂದಿರುತ್ತಿದ್ದರೂ ಕೋರೆಹಲ್ಲುಗಳ ಪ್ರಸಕ್ತಿಯಿರಲಿಲ್ಲ.<ref name="Barb2">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 2.</ref>
==== ರಕ್ತಪಿಶಾಚಿಗಳ ಸೃಷ್ಟಿ ====
ರಕ್ತಪಿಶಾಚಿಗಳ ಉಗಮಕ್ಕೆ ಕಾರಣಗಳು ಬಹಳ ವಿಧವಿದ್ದು ಮೂಲ ದಂತಕಥೆಯಲ್ಲಿ ವ್ಯತ್ಯಾಸವಾಗಿವೆ. ಸ್ಲಾವಿಕ್ ಮತ್ತು ಚೀನೀಯ ಸಂಪ್ರದಾಯಗಳಲ್ಲಿ, ಯಾವುದೇ ಪ್ರಾಣಿಗಳಿಂದ ನಿರ್ದಿಷ್ಟವಾಗಿ ನಾಯಿ ಅಥವಾ ಬೆಕ್ಕುಗಳಿಂದ ಆಕ್ರಮಿತವಾಗಿ ಸತ್ತ ವ್ಯಕ್ತಿಯ ಶವವು ರಕ್ತಪಿಶಾಚಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.<ref name="Barb30">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 33.</ref> ಗಾಯಗೊಂಡು ಸತ್ತ ವ್ಯಕ್ತಿಯ ಶವದ ಗಾಯವನ್ನು ಬಿಸಿನೀರಿನಿಂದ ಸ್ವಚ್ಛಗೊಳಿಸದಿದ್ದರೂ ಅಪಾಯ ಖಚಿತ. ರಷ್ಯನ್ ದಂತಕಥೆಯ ಪ್ರಕಾರ, ರಕ್ತಪಿಶಾಚಿಗಳು ಹಿಂದೆ ತಾವು ಬದುಕಿದ್ದಾಗ ಮಾಟಗಾರರು ಇಲ್ಲವೇ [[ಚರ್ಚ್ನ್ನು]] ವಿರೋಧಿಸುತ್ತಿದ್ದವರಲ್ಲಿ ಒಬ್ಬರಾಗಿರುತ್ತಿದ್ದರು.[<ref name="Strange & Amazing">{{cite book|author=Reader's Digest Association |title=The Reader's Digest Book of strange stories, amazing facts: stories that are bizarre, unusual, odd, astonishing, incredible ... but true |edition= |year=1988 |publisher=Reader's Digest |location=London |isbn=0-949819-89-1 |pages=432–433 |chapter=Vampires Galore!}}</ref>
ಕೆಲದಿನಗಳ ಹಿಂದೆ ಸಾವನ್ನಪ್ಪಿದ ತಮ್ಮ ಪ್ರೀತಿಪಾತ್ರರು ಭೂತಪ್ರೇತಗಳಾಗಿ ಬದಲಾಗದಿರಲು ಅನೇಕ ಸಾಂಸ್ಕೃತಿಕ ಆಚರಣೆಗಳು ಚಾಲ್ತಿಯಲ್ಲಿದ್ದವು. ಶವವನ್ನು ತಲೆಕೆಳಕಾಗಿ ಹೂಳುವುದು ಹೆಚ್ಚು ಬಳಕೆಯಲ್ಲಿತ್ತಾದರೂ, ಇತರೆ ಯಾವುದೇ ಪ್ರೇತ ದೇಹಕ್ಕೆ ಪ್ರವೇಶಿಸದಂತೆ ಸಮಾಧಿಯ ಬಳಿ [[ಪಿಕಾಸಿ]] ಅಥವಾ [[ಗುದ್ದಲಿ]]ಗಳಂತಾ<ref name="Barb5051">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , pp. 50-51.</ref> ಐಹಿಕ ವಸ್ತುಗಳನ್ನಿಟ್ಟು ಅಥವಾ ಶವಪೆಟ್ಟಿಗೆಯಿಂದ ಹೊರಬರದೇ ಅಲ್ಲೇ ಇರದಂತೆ ಸತ್ತವರನ್ನು ಸಂಪ್ರೀತಿಗೊಳಿಸಲು ಪ್ರಯತ್ನಿಸುವುದೂ ಇತ್ತು. ಈ ವಿಧಾನವು [[ಪ್ರಾಚೀನ ಗ್ರೀಕ್]] ಪಾತಾಳದ [[ಸ್ಟಿಕ್ಸ್ ನದಿ]]ಯನ್ನು ದಾಟಲು ತೆರಬೇಕಾದ ಸುಂಕಕ್ಕೆಂದು [[ಶವದ ಬಾಯಿಯಲ್ಲಿ ಒಬುಲಸನ್ನು]] ಇಡುವ ಪ್ರವೃತ್ತಿಯನ್ನು ಹೋಲುತ್ತದಾದರೂ; ಆ ಬಿಲ್ಲೆಯನ್ನು ದುಷ್ಟಶಕ್ತಿಗಳು ದೇಹ ಪ್ರವೇಶಿಸದಂತೆ ತಡೆಯಲು ಇಡುವುದಾಗಿ ವಾದವಿವಾದಗಳಿದ್ದರೂ, ಇದೂ ಸಹಾ ನಂತರ ರಕ್ತಪಿಶಾಚಿ ಬಗೆಗೆ ದಂತಕಥೆಯಲ್ಲಿ ಪ್ರಭಾವ ಬೀರಿದ್ದಿರಬಹುದಾಗಿದೆ. ಇದು ''[[ರಿಕೊಲಕಾಸ್]],'' ಎಂದು ಕರೆಸಿಕೊಳ್ಳುವ ರಕ್ತಪಿಶಾಚಿಯಾಗುವುದನ್ನು ತಡೆಯಲು “ಏಸು ಕ್ರಿಸ್ತನು ಜಯಿಸುತ್ತಾನೆ” ಎಂಬ ಬರಹವಿರುತ್ತಿದ್ದ ಮೇಣದ ಶಿಲುಬೆ ಮತ್ತು ಮಡಿಕೆಯನ್ನು ಶವದ ಮೇಲಿಡುತ್ತಿದ್ದ ಸಂಪ್ರದಾಯದ ಮೂಲಕ ಆಧುನಿಕ ಗ್ರೀಕ್ ದಂತಕಥೆಯಲ್ಲಿ ಸಹಾ ಚಾಲ್ತಿಯಲ್ಲಿದೆ.<ref>{{cite book |last=Lawson |first=John Cuthbert|title=Modern Greek Folklore and Ancient Greek Religion |url=https://archive.org/details/cu31924026472252 |pages=[https://archive.org/details/cu31924026472252/page/405 405]–06 |year=1910 |publisher=Cambridge University Press |location=Cambridge |oclc=1465746}}</ref> ಯೂರೋಪ್ನಲ್ಲಿ ಚಾಲ್ತಿಯಲ್ಲಿದ್ದ ಇತರೆ ವಿಧಾನಗಳೆಂದರೆ ಮಂಡಿಯ ಬಳಿಯ ಸ್ನಾಯುರಜ್ಜುವನ್ನು ಮುರಿಯುವುದು ಅಥವಾ ಅಫೀಮು ಸಸ್ಯಗಳು, ಸಾಸಿವೆ ಅಥವಾ ಮರಳನ್ನು ರಕ್ತಪಿಶಾಚಿಯಾಗಬಹುದಾದ ವ್ಯಕ್ತಿಯ ಸಮಾಧಿಯ ಪಕ್ಕದಲ್ಲಿಡುವುದು; ಇದರ ಉದ್ದೇಶವೇನೆಂದರೆ ಪಿಶಾಚಿಯು ಅಲ್ಲಿ ಬಿದ್ದಿರುವ ಧಾನ್ಯಕಾಳುಗಳನ್ನು ಎಣಿಸುತ್ತಿದ್ದು ರಾತ್ರಿಯಿಡೀ ಪುರುಸೊತ್ತಿರದಂತೆ ಮಾಡುವುದು.<ref name="Barb49">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 49.</ref> ಇದೇ ಮಾದರಿಯ ಚೀನೀ ಆಖ್ಯಾಯಗಳ ಪ್ರಕಾರ ರಕ್ತಪಿಶಾಚಿಯಂತಹಾ ಜೀವಿ ಅಕ್ಕಿ ಚೀಲವೊಂದನ್ನು ಕಂಡರೆ ಅದು ಪ್ರತಿ ಕಾಳನ್ನು ಎಣಿಸಲೇಬೇಕಿರುತ್ತದೆ; ಈ ಕಲ್ಪನೆಯು ಭಾರತ ಉಪಖಂಡದ ಹಾಗೂ ದಕ್ಷಿಣ ಅಮೇರಿಕಾದ ಮಾಟಗಾರರು ಹಾಗೂ ಇತರ ದುಷ್ಟ ಹಾಗೂ ಉಪದ್ರವಕಾರಿ ಶಕ್ತಿಗಳು ಅಥವಾ ವ್ಯಕ್ತಿಗಳ ಬಗೆಗಿನ ದಂತಕಥೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಯವಸ್ತುವಾಗಿದೆ.<ref name="Jaramillo">{{es icon}} {{cite book|last=Jaramillo Londoño|first=Agustín|title=Testamento del paisa |year=1986 |origyear=1967 |edition=7th |publisher=Susaeta Ediciones |location=Medellín |isbn=958-95125-0-X}}</ref>
==== ರಕ್ತಪಿಶಾಚಿಗಳನ್ನು ಗುರುತಿಸುವುದು ====
ಅನೇಕ ವಿಷದವಾದ ಆಚರಣೆಗಳನ್ನು ರಕ್ತಪಿಶಾಚಿಯನ್ನು ಗುರುತಿಸಲು ಮಾಡಲಾಗುತ್ತದೆ. ರಕ್ತಪಿಶಾಚಿಯ ಸಮಾಧಿಯನ್ನು ಕಂಡುಹಿಡಿಯಲು ಬಳಸುವ ವಿಧಾನಗಳೆಂದರೆ ಅವಿವಾಹಿತ ಬಾಲಕನನ್ನು ಸ್ಮಶಾನದಲ್ಲಿ ಅಥವಾ ಚರ್ಚ್ ಆವರಣದಲ್ಲಿ ಬೀಜದ ಕುದುರೆಯ ಮೇಲೆ ಕುಳ್ಳಿರಿಸಿ ಓಡುವಂತೆ ಮಾಡುವುದು - ಆಗ ಅನುಮಾನಾಸ್ಪದ ಸಮಾಧಿಯ ಮುಂದೆ ಕುದುರೆಯು ಓಡಲು ಅಡ್ಡಿಯಾಗಬಹುದಿರುತ್ತದೆ.<ref name="Strange & Amazing" /> ಸಾಮಾನ್ಯವಾಗಿ ಇದಕ್ಕೆ ಕಪ್ಪು ಕುದುರೆ ಅಗತ್ಯ, ಆದರೆ ಆಲ್ಬೇನಿಯಾದಲ್ಲಿ ಇದು ಬಿಳಿಯದೇ ಆಗಿರಬೇಕು.<ref name="Barb6869">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , pp. 68-69.</ref> ಸಮಾಧಿಯ ಬಳಿಯ ನೆಲದಲ್ಲಿ ಕಾಣಿಸಿಕೊಳ್ಳುವ ಗುಣಿಗಳನ್ನು ರಕ್ತಪಿಶಾಚಿ ಚಟುವಟಿಕೆಯ ಸೂಚನೆಯೆನ್ನಲಾಗುತ್ತಿತ್ತು.<ref name="Barb125">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 125.</ref>
ರಕ್ತಪಿಶಾಚಿಗಳಾಗಿರಬಹುದೆಂದು ನಂಬಲಾಗುವ ಶವಗಳು ಸಾಮಾನ್ಯವಾಗಿ ಇರಬೇಕಾದುದಕ್ಕಿಂತ ಉತ್ತಮ ದೇಹಸ್ಥಿತಿಯನ್ನು ಕಾಪಾಡಿಕೊಂಡಿದ್ದು, ಅಲ್ಪ ಪ್ರಮಾಣದ ಇಲ್ಲವೇ ಸ್ವಲ್ಪವೂ ಕೊಳೆತಿರದೇ ಇರುತ್ತವೆ.<ref name="Barb109">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 109.</ref> ಕೆಲ ಸಂದರ್ಭಗಳಲ್ಲಿ, ಅನುಮಾನಿತ ಸಮಾಧಿಗಳನ್ನು ತೆರೆದಾಗ, ಹಳ್ಳಿಗರು ಬಲಿಪಶುವಾದ ವ್ಯಕ್ತಿಯ ತಾಜಾ ರಕ್ತ ಮುಖವೆಲ್ಲಾ ಹರಡಿದ್ದುದನ್ನು ನೋಡಿದುದಾಗಿ ವಿವರಿಸುತ್ತಾರೆ.<ref name="Barb1145">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , pp. 114-15.</ref> ಆಯಾ ಪ್ರದೇಶದಲ್ಲಿ ರಕ್ತಪಿಶಾಚಿಯು ಚಟುವಟಿಕೆಯಿಂದಿದೆ ಎಂಬುದರ ಸೂಚನೆಗಳೆಂದರೆ ಜಾನುವಾರು,ಕುರಿಗಳು,ಸಂಬಂಧಿಕರು ಅಥವಾ ನೆರೆಹೊರೆಯವರ ಮರಣ. ದಂತಕಥೆಯ ರಕ್ತಪಿಶಾಚಿಗಳು ತಮ್ಮ ಇರುವಿಕೆಯನ್ನು [[ಸಣ್ಣ ಪ್ರಮಾಣದ ಗಲಾಟೆ]]ಯನ್ನು ಎಂದರೆ, ಛಾವಣಿಯ ಮೇಲೆ ಕಲ್ಲು ತೂರುವುದು ಅಥವಾ ಮನೆಯ ವಸ್ತುಗಳನ್ನು ಚಲಿಸುವಂತೆ ಮಾಡುವುದು,<ref name="Barb96">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 96.</ref> ಹಾಗೂ ಜನರು ಮಲಗಿರುವಾಗ ಅವರನ್ನು [[ಒತ್ತುವುದು/ಅಮುಕುವುದು]] ಮಾಡುವುದರ ಮೂಲಕ ತೋರುತ್ತವೆ.<ref name="Bun1689">ಬನ್ಸನ್, ''ರಕ್ತಪಿಶಾಚಿ ವಿಶ್ವಕೋಶ'' , pp. 168-69.</ref>
==== ರಕ್ಷಣೆ ====
[[ಚಿತ್ರ:Ernst6-thumb.gif|thumb|left|ಮ್ಯಾಕ್ಸ್ ಅರ್ನೆಸ್ಟ್ಸ್ರ ಉನೆ ಸೆಮನೆ ಡೆ ಬೊಂಟೆ ದಿಂದ ಒಂದು ಚಿತ್ರ]]
[[ದುರದೃಷ್ಟನಿವಾರಕ]] — ಭೂತ ಪ್ರೇತಗಳಿಂದ ಕಾಪಾಡಬಲ್ಲ ಐಹಿಕ ಅಥವಾ ದೈವಿಕ ವಸ್ತುಗಳಾದ [[ಬೆಳ್ಳುಳ್ಳಿ]]<ref>ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 63.</ref> ಅಥವಾ [[ಪವಿತ್ರ ನೀರು]] ರಕ್ತಪಿಶಾಚಿ ದಂತಕಥೆಯಲ್ಲಿ ಅತಿ ಸಾಮಾನ್ಯ. ವಸ್ತುಗಳು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗೊಳ್ಳುತ್ತವೆ; [[ಕಾಡುಗುಲಾಬಿ]]ಯ ಕೊಂಬೆ ಮತ್ತು [[ಹಾಥಾರ್ನ್]] ಸಸ್ಯಗಳು ರಕ್ತಪಿಶಾಚಿಗಳಿಗೆ ಹಾನಿಯುಂಟು ಮಾಡಬಲ್ಲವು ಎಂದು ನಂಬಲಾಗಿದೆ; ಯೂರೋಪ್ನಲ್ಲಿ, ಮನೆಯ ಛಾವಣಿಯ ಮೇಲೆ ಸಾಸಿವೆಯನ್ನು ಹರಡಿದರೆ ಅವು ದೂರ ಇರುತ್ತವೆ ಎಂಬ ಪ್ರತೀತಿ ಇದೆ.<ref>{{cite book|last=Mappin |first=Jenni|title=Didjaknow: Truly Amazing & Crazy Facts About... Everything |year=2003 |publisher=Pancake |location=Australia|isbn=0-330-40171-8|page=50}}</ref> ಇತರೆ ದುರದೃಷ್ಟನಿವಾರಕಗಳೆಂದರೆ ದೈವಿಕ ವಸ್ತುಗಳಾದ [[ಶಿಲುಬೆ]], [[ರೋಸರಿ]] ಅಥವಾ ಪವಿತ್ರ ನೀರು. ರಕ್ತಪಿಶಾಚಿಗಳು ಪವಿತ್ರೀಕರಿಸಿದ ಸ್ಥಳಗಳಾದ ಚರ್ಚ್ಗಳು ಅಥವಾ ದೇವಸ್ಥಾನಗಳು ಅಥವಾ ನದಿಸಂಗಮಗಳಲ್ಲಿ ನಡೆಯಲಾರವು ಎಂಬ ನಂಬಿಕೆ ಇದೆ.<ref>ಬುರ್ಕ್ ಹಾರ್ಡ್ಟ್, "ವ್ಯಾಂಪಿರ್ಗ್ಲಾಬೆ ಅಂಡ್ ವ್ಯಾಂಪಿರ್ಸೇಜ್", p. 221.</ref> ಸಾಂಪ್ರದಾಯಿಕವಾಗಿ ದುರದೃಷ್ಟನಿವಾರಕ ಎಂದು ಹೇಳಲಾಗದಿದ್ದರೂ ಕನ್ನಡಿಗಳನ್ನು ರಕ್ತಪಿಶಾಚಿಗಳನ್ನು ದೂರವಿರಿಸಲು, ಅದರಲ್ಲೂ ಬಾಗಿಲಿನಲ್ಲಿ ಹೊರಗಿನ ಕಡೆ ಮುಖ ಮಾಡಿ ಇಡುತ್ತಾರೆ (ಕೆಲ ಸಂಸ್ಕೃತಿಗಳಲ್ಲಿ, ರಕ್ತಪಿಶಾಚಿಗಳಿಗೆ ಪ್ರತಿಬಿಂಬವಿರುವುದಿಲ್ಲ ಮತ್ತು ಕೆಲವೊಮ್ಮೆ ನೆರಳಿರುವುದಿಲ್ಲ, ಇದು ಬಹುಶಃ ರಕ್ತಪಿಶಾಚಿಗಳ ಆತ್ಮರಾಹಿತ್ಯವನ್ನು ಸೂಚಿಸಲಿರಬಹುದು).<ref name="EoOc">{{cite book |last=Spence |first=Lewis |title=An Encyclopaedia of Occultism |url=https://archive.org/details/encyclopaediaofo1960spen |year=1960 |publisher=University Books |location=New Hyde Parks|oclc=3417655}}</ref> ಈ ಲಕ್ಷಣವು, ಸಾರ್ವತ್ರಿಕವಲ್ಲದೇ ಇದ್ದರೂ (ಗ್ರೀಕ್ ''ರಿಕೊಲಕಾಸ್/ಟಿಂಪಾನಿಯೋಸ್'' ಗಳು ನೆರಳು ಹಾಗೂ ಪ್ರತಿಬಿಂಬ ಎರಡನ್ನೂ ಹೊಂದಿದ್ದವು), ''ಡ್ರಾಕುಲಾ'' ದಲ್ಲಿ ಬ್ರಾಮ್ ಸ್ಟಾಕರ್ರು ಬಳಸಿದ್ದರು, ನಂತರವೂ ಇದು ಸಮಕಾಲೀನ ಲೇಖಕರು ಹಾಗೂ ಚಿತ್ರನಿರ್ಮಾಪಕರಲ್ಲಿ ಜನಪ್ರಿಯವಾಗಿತ್ತು.<ref name="SU25">ಸಿಲ್ವರ್ & ಉರ್ಸಿನಿ, ''ದ ವ್ಯಾಂಪೈರ್ ಫಿಲ್ಮ್ '' , p. 25.</ref> ಕೆಲ ನಂಬಿಕೆಗಳ ಪ್ರಕಾರ ರಕ್ತಪಿಶಾಚಿಯು ಯಜಮಾನನ ಆಹ್ವಾನವಿಲ್ಲದೇ ಯಾವುದೇ ಮನೆಯನ್ನು ಪ್ರವೇಶಿಸುವಂತಿಲ್ಲ, ಆದರೆ ಒಮ್ಮೆ ಪ್ರವೇಶ ಪಡೆದರೆ ಮತ್ತೆ ತಮ್ಮಿಚ್ಛೆಯಂತೆ ಓಡಾಡಿಕೊಂಡಿರಬಹುದು.<ref name="EoOc" /> ದಂತಕಥೆಯ ರಕ್ತಪಿಶಾಚಿಗಳು ರಾತ್ರಿಯಲ್ಲಿ ಹೆಚ್ಚು ಚಟುವಟಿಕೆಯಿಂದಿರುತ್ತವಾದರೂ, ಸೂರ್ಯನ ಬೆಳಕಿಂದ ಅವಕ್ಕೆ ಅಪಾಯ ಎಂದೇನಿಲ್ಲ.<ref name="SU25" />
ಅನುಮಾನಿತ ರಕ್ತಪಿಶಾಚಿಗಳನ್ನು ನಾಶಮಾಡುವ ವಿಧಾನಗಳು ಅನೇಕವಿದ್ದು, ಅದರಲ್ಲಿ ನೇತು ಹಾಕಿ ಸುಡುವುದು ನಿರ್ದಿಷ್ಟವಾಗಿ ದಕ್ಷಿಣ ಸ್ಲಾವಿಕ್ ಸಂಸ್ಕೃತಿಗಳಲ್ಲಿ ಬಹಳ ಸಾಮಾನ್ಯ ಪದ್ಧತಿಯಾಗಿತ್ತು.<ref name="Barber73">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 73.</ref> ಇದಕ್ಕೆ [[ಆಶ್]] ಮರವು ರಷ್ಯಾ ಮತ್ತು ಬಾಲ್ಟಿಕ್ ರಾಜ್ಯ<ref>{{de icon}} {{cite book|last=Alseikaite-Gimbutiene |first=Marija |authorlink=Marija Gimbutas |title=Die Bestattung in Litauen in der vorgeschichtlichen Zeit |year=1946 |location=Tübingen|oclc=1059867}} (ಪ್ರಬಂಧ).</ref> ಗಳಲ್ಲಿ ಬಳಕೆಯಾಗುತ್ತಿದ್ದರೆ, ಸರ್ಬಿಯಾ<ref name="Vuk59">{{cite journal |last=Vukanović |first=T.P. |year=1959 |title=The Vampire |journal=Journal of the Gypsy Lore Society |volume=38 |pages=111–18}}</ref> ದಲ್ಲಿ [[ಹಾಥಾರ್ನ್]] ಹಾಗೂ [[ಸಿಲೇಶಿಯಾ/ಸಿಲೇಸಿಯಾ]]ದಲ್ಲಿ [[ಓಕ್]] ಮರವು ಬಳಕೆಯಾಗುತ್ತಿತ್ತು.<ref>{{de icon}} {{cite journal|last=Klapper |first=Joseph|title=Die schlesischen Geschichten von den schädingenden Toten |journal=Mitteilungen der schlesischen Gesellschaft für Volkskunde |volume=11 |pages=58–93 |year=1909}}</ref> ಸಂಭಾವ್ಯ ರಕ್ತಪಿಶಾಚಿಗಳನ್ನು ಬಹಳ ಸಾಮಾನ್ಯವಾಗಿ ಹೃದಯದ ಮೂಲಕ ನೇತುಹಾಕುತ್ತಿದ್ದರೂ, ರಷ್ಯಾ ಮತ್ತು ಉತ್ತರಜರ್ಮನಿ<ref>{{de icon}} {{cite book |last=Löwenstimm |first=A.|title=Aberglaube und Stafrecht |page=99 |year=1897 |publisher=Berlin}}</ref><ref>{{de icon}} {{cite book |last=Bachtold-Staubli |first=H. |title=Handwörterbuch des deutschen Aberglaubens |year=1934–35 |publisher=Berlin}}</ref> ಗಳಲ್ಲಿ ಬಾಯಿಯ ಮೂಲಕ ಹಾಗೂ ಈಶಾನ್ಯ ಸರ್ಬಿಯಾ<ref>{{de icon}} {{cite journal |last=Filipovic |first=Milenko |year=1962 |title=Die Leichenverbrennung bei den Südslaven |journal=Wiener völkerkundliche Mitteilungen |volume=10 |pages=61–71}}</ref> ಹೊಟ್ಟೆಯ ಮೂಲಕ ನೇತುಹಾಕಲಾಗುತ್ತಿತ್ತು. ಎದೆಯ ಚರ್ಮದ ಮೂಲಕ ಚುಚ್ಚುವುದು ಊದಿಕೊಂಡಿರುವ ರಕ್ತಪಿಶಾಚಿಯನ್ನು ಕುಂದಿಸುವ ವಿಧಾನವಾಗಿದ್ದು; ಪಿಕಾಸಿಗಳಂಥ ಚೂಪಾದ ವಸ್ತುಗಳನ್ನಿಟ್ಟು ಹೂಳುವುದರ ಸಮಾನ ವಿಧಾನವಾಗಿದೆ. ಇದರಿಂದ ಪಿಶಾಚಿಯಾಗಲು ದೇಹವು ಊದಿಕೊಳ್ಳಲು ಆರಂಭಿಸಿದರೆ ಈ ಚೂಪಾದ ವಸ್ತುಗಳು ಅದರ ಮೂಲಕ ತೂರಿಹೋಗಿ ಆ ಯತ್ನವನ್ನು ನಿಷ್ಫಲಗೊಳಿಸುವ ಸಾಧ್ಯತೆ ಇರುತ್ತಿತ್ತು.<ref name="Barb158">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 158.</ref> [[ಶಿರಚ್ಛೇದನ]]ವು [[ಜರ್ಮನಿ]] ಹಾಗೂ ಪಶ್ಚಿಮ ಸ್ಲಾವಿಕ್ ಪ್ರದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿದ್ದ ವಿಧಾನವಾಗಿತ್ತು, ನಂತರ ತಲೆಯನ್ನು ಕಾಲುಗಳ ನಡುವೆ ಇಲ್ಲವೇ ಪೃಷ್ಠದ ಹಿಂದೆ ಅಥವಾ ದೇಹದಿಂದ ದೂರವಾಗಿ ಹೂಳುತ್ತಿದ್ದರು.<ref name="Barber73"/> ಈ ವಿಧಾನವು ಆತ್ಮದ ನಿರ್ಗಮನವನ್ನು ತ್ವರೆಪಡಿಸುವುದೆಂದು ನಂಬಿದ್ದರು, ಕೆಲವೊಂದು ಸಂಸ್ಕೃತಿಗಳಲ್ಲಿ ಶವದಲ್ಲೇ ಆತ್ಮವು ಕಾಲಹರಣ ಮಾಡುತ್ತದೆ ಎಂದು ನಂಬಿದ್ದರು. ರಕ್ತಪಿಶಾಚಿಯ ತಲೆ, ದೇಹ ಅಥವಾ ಬಟ್ಟೆಗಳನ್ನು ಸಹಾ ಮೊಳೆ ಹೊಡೆದು ಏಳಲಾಗದಂತೆ ನೆಲಕ್ಕೆ ಕಚ್ಚಿಕೊಂಡಿರುವ ವಿಧಾನವೂ ಇತ್ತು.<ref name="Barb157">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 157.</ref> ಜಿಪ್ಸಿಗಳು ಉಕ್ಕು ಅಥವಾ ಕಬ್ಬಿಣದ ಸೂಜಿಗಳನ್ನು ಶವದ ಹೃದಯದೊಳಕ್ಕೆ ಚುಚ್ಚಿ ಕಬ್ಬಿಣದ ತುಂಡುಗಳನ್ನು ಬಾಯಿಯಲ್ಲಿ, ಕಣ್ಣು, ಕಿವಿಗಳ ಮೇಲೆ ಮತ್ತು ಬೆರಳುಗಳ ನಡುವೆ ಇಟ್ಟು ಹೂಳುತ್ತಿದ್ದರು. ಅವರು ಹಾಥಾರ್ನ್ಅನ್ನು ಶವದ ಕಾಲುಚೀಲದೊಳಕ್ಕೆ ಇಡುವುದು ಇಲ್ಲವೇ ಕಾಲುಗಳ ಮೂಲಕ ಹಾಥಾರ್ನ್ ಅನ್ನು ನುಗ್ಗಿಸುವುದನ್ನೂ ಮಾಡುತ್ತಿದ್ದರು. [[ವೆನಿಸ್]] ಹತ್ತಿರದ 16ನೇ ಶತಮಾನದ ಸಮಾಧಿಯೊಂದರಲ್ಲಿ ರಕ್ತಪಿಶಾಚಿಯೆಂದು ನಂಬಲಾದ ಮಹಿಳೆಯ ಶವವೊಂದರ ಬಾಯಲ್ಲಿ ಇಟ್ಟಿಗೆಯನ್ನು ಇಟ್ಟಿದ್ದನ್ನು 2006ರಲ್ಲಿ ಪತ್ತೆಹಚ್ಚಿದ ಪ್ರಾಕ್ತನಶಾಸ್ತ್ರಜ್ಞರು ಇದನ್ನು ಕೊಲ್ಲುವ ಆಚರಣೆ ಎಂದು ಮನಗಂಡರು.<ref>ಏರಿಯಲ್ ಡೇವಿಡ್ರಿಂದ ವರದಿಯಾದದ್ದು , "ಇಟಲಿಯಲ್ಲಿನ ಅಗೆತದಿಂದ ವೆನಿಸ್ನಲ್ಲಿ ಸ್ತ್ರೀ 'ರಕ್ತಪಿಶಾಚಿ' ಪತ್ತೆ ," 13 ಮಾರ್ಚ್ 2009, [[Yahoo! News]] ಮೂಲಕ [[Associated Press]], [https://archive.today/20211014180118/https://www.webcitation.org/5fFdDvCQQ?url=http://fe8.story.media.ac4.yahoo.com/news/us/story/ap/20090313/ap_on_re_eu/eu_italy_vampire_of_venice/print ಸಂಗ್ರಹಿಸಿಡಲಾಗಿದೆ]; Reutersನಿಂದಲೂ ಸಹಾ , "ಸಂಶೋಧಕರಿಂದ ಮಧ್ಯಯುಗದ 'ರಕ್ತಪಿಶಾಚಿ'ಯನ್ನು ಬೆಂಬಲಿಸುವ ಅವಶೇಷ ಪತ್ತೆ " ಎಂಬ ಶೀರ್ಷಿಕೆಯಡಿ ''ದ ಆಸ್ಟ್ರೇಲಿಯನ್'' ನಲ್ಲಿ ಪ್ರಕಟವಾಗಿದೆ, 13 ಮಾರ್ಚ್ 2009, ಚಿತ್ರದೊಂದಿಗೆ [https://web.archive.org/web/20090317093300/http://www.theaustralian.news.com.au/story/0,25197,25180518-30417,00.html ಸಂಗ್ರಹಿಸಲಾಗಿದೆ] (ಕೆಳಗೆ ನೋಡಿ).</ref> ಇನ್ನಿತರ ವಿಧಾನಗಳೆಂದರೆ ಸಮಾಧಿಯ ಮೇಲೆಲ್ಲಾ ಕುದಿಯುವ ನೀರನ್ನು ಚೆಲ್ಲುವುದು ಅಥವಾ ಸಂಪೂರ್ಣವಾಗಿ ದೇಹವನ್ನು ದಹಿಸುವುದು. ಬಾಲ್ಕನ್ನಲ್ಲಿ ರಕ್ತಪಿಶಾಚಿಗಳನ್ನು ಗುಂಡು ಹಾರಿಸಿ ಅಥವಾ ಮುಳುಗಿಸಿ, ಅಥವಾ ಶವಯಾತ್ರೆಯನ್ನು ಪುನರಾವರ್ತಿಸಿ, [[ಪವಿತ್ರ ನೀರನ್ನು]] ದೇಹಕ್ಕೆ ಪ್ರೋಕ್ಷಿಸುವುದರ ಮೂಲಕ ಅಥವಾ [[ಭೂತೋಚ್ಚಾಟನೆ]] ಮೂಲಕ ಕೊಲ್ಲಬಹುದಾಗಿತ್ತು. ರೊಮೇನಿಯಾದಲ್ಲಿ ಬೆಳ್ಳುಳ್ಳಿಯನ್ನು ಬಾಯಲ್ಲಿಡಬಹುದಾಗಿತ್ತು, ಮತ್ತು 19ನೇ ಶತಮಾನದವರೆಗೆ, ಶವಪೆಟ್ಟಿಗೆಯ ಮೂಲಕ ಗುಂಡನ್ನು ಹಾರಿಸುವ ಮುನ್ನೆಚ್ಚರಿಕೆಯ ಪರಿಪಾಠವನ್ನು ಇಟ್ಟುಕೊಳ್ಳಲಾಗುತ್ತಿತ್ತು. ಪ್ರತಿರೋಧದ ಸಂದರ್ಭಗಳಲ್ಲಿ ದೇಹದ ಅಂಗಗಳನ್ನು ಬೇರ್ಪಡಿಸಿ ಅವನ್ನು ಸುಟ್ಟು ನೀರಿನಲ್ಲಿ ಬೆರೆಸಿ ಕುಟುಂಬದವರ ಸುಪರ್ದಿಗೆ ಕೊಡಲಾಗುತ್ತಿತ್ತು. ಜರ್ಮನಿಯ ಸ್ಯಾಕ್ಸನ್ ಪ್ರದೇಶಗಳಲ್ಲಿ ಅನುಮಾನಿತ ರಕ್ತಪಿಶಾಚಿಗಳ ಬಾಯಲ್ಲಿ ನಿಂಬೆಹಣ್ಣು ಇಡಲಾಗುತ್ತಿತ್ತು.<ref>ಬನ್ಸನ್, ''ರಕ್ತಪಿಶಾಚಿಗಳ ವಿಶ್ವಕೋಶ'' , p. 154.</ref>
=== ಪ್ರಾಚೀನ ನಂಬಿಕೆಗಳು ===
[[ಚಿತ್ರ:Lilith (John Collier painting).jpg|thumb|200px|ಜಾನ್ ಕೊಲ್ಲೀರ್ರ ಲಿಲಿತ್ (1892),]]
ಅನೇಕ ಶತಮಾನಗಳಿಂದ ವಿಶ್ವದಾದ್ಯಂತ ಪ್ರತಿ ಸಂಸ್ಕೃತಿಯಲ್ಲೂ ಅತಿಮಾನುಷ ಶಕ್ತಿಗಳು ಬದುಕಿರುವ ವ್ಯಕ್ತಿಗಳ ರಕ್ತ ಹೀರುವ ಅಥವಾ ಮಾಂಸ ತಿನ್ನುವ ಕಥೆಗಳಿವೆ.<ref>{{cite book|last=McNally|first=Raymond T.|coauthors=Florescu, Radu.|title=In Search of Dracula|url=https://archive.org/details/insearchofdracul00mcna|year=1994|publisher=Houghton Mifflin|isbn=0-395-65783-0|page=[https://archive.org/details/insearchofdracul00mcna/page/117 117]}}</ref> ಇಂದು ನಾವು ಇವುಗಳು ರಕ್ತಪಿಶಾಚಿಗಳಿರಬಹುದು ಎಂದುಕೊಳ್ಳುತ್ತೇವೆ. ಆದರೆ ಪ್ರಾಚೀನ ಕಾಲದಲ್ಲಿ ''ರಕ್ತಪಿಶಾಚಿ'' ಎನ್ನುವ ಕಲ್ಪನೆಯೇ ಅಸ್ತಿತ್ವದಲ್ಲಿರಲಿಲ್ಲ; ರಕ್ತ ಕುಡಿಯುವಿಕೆ ಹಾಗೂ ಆ ತರಹದ ಚಟುವಟಿಕೆಗಳನ್ನು [[ಪ್ರೇತಗಳು]] ಅಥವಾ ಆ ತರಹದ ಮಾಂಸ ತಿನ್ನುವ ಹಾಗೂ ರಕ್ತ ಕುಡಿಯುವ [[ಶಕ್ತಿಗಳಿಗೆ]] ಆರೋಪಿಸುತ್ತಿದ್ದರು; [[ದೆವ್ವವನ್ನು]] ಸಹಾ ರಕ್ತ ಪಿಶಾಚಿ<ref name="Marigny1">ಮಾರಿಗ್ನಿ, ''ರಕ್ತಪಿಶಾಚಿಗಳು'' , pp. 24–25.</ref> ಯಂತೆಯೇ ಪರಿಗಣಿಸಲಾಗುತ್ತಿತ್ತು. ಬಹಳಷ್ಟು ಮಟ್ಟಿಗೆ ಪ್ರತಿ ದೇಶವೂ ಸಹಾ ಒಂದಲ್ಲಾ ಒಂದು ವಿಧದ ಪ್ರೇತ ಅಥವಾ ದೆವ್ವ ಅಥವಾ ಇನ್ನೂ ಕೆಲವು ವಿಷಯಗಳಲ್ಲಿ ದೈವವೂ ಸಹಾ ರಕ್ತಕುಡಿಯುವುದೆಂಬುದಾಗಿ ನಂಬಲಾಗುತ್ತಿತ್ತು. [[ಭಾರತ]]ದಲ್ಲಿ ಉದಾಹರಣೆಗೆ [[ಬೇತಾಳ]]ದ, ಪಿಶಾಚಿಯಂತಹಾ ಶವಗಳಲ್ಲಿ ಆವಾಹನೆಯಾಗುವಂತಹಾ ಶಕ್ತಿಗಳ ಕಥೆಗಳು ''[[ಬೇತಾಳ ಪಚೀಸಿ]]'' ಎಂಬ ಗ್ರಂಥದಲ್ಲಿ ಮಾಡಲಾಗಿದೆ. ''[[ಕಥಾಸರಿತ್ಸಾಗರ]]'' ದ ಒಂದು ಪ್ರಮುಖ ಕಥೆಯಲ್ಲಿ [[ವಿಕ್ರಮಾದಿತ್ಯ]] ಚಕ್ರವರ್ತಿಯು ರಾತ್ರಿಗಳಲ್ಲಿ ತಪ್ಪಿಸಿಕೊಂಡು ಹೋಗುವ ಬೇತಾಳವೊಂದನ್ನು ವಶಪಡಿಸಿಕೊಳ್ಳುವ ಸಾಹಸಗಳ ಕಥೆಯಿದೆ.<ref>{{cite book |last=Burton |first=Sir Richard R. |authorlink=Richard Francis Burton |title=Vikram and The Vampire:Classic Hindu Tales of Adventure, Magic, and Romance |origyear=1870 |year=1893 |publisher=Tylston and Edwards |location=London |url=http://www.sacred-texts.com/goth/vav/vav00.htm |accessdate=2007-09-28}}</ref> ''[[ಪಿಶಾಚಿ]],'' ಎಂದೆನಿಸಿಕೊಳ್ಳುವ ದುಷ್ಟರ ಅಥವಾ ಹುಚ್ಚರಾಗಿ ಸತ್ತವರ ಆತ್ಮಗಳು ಸಹಾ ರಕ್ತಪಿಶಾಚಿಗಳ ಲಕ್ಷಣಗಳನ್ನೇ ಹೊಂದಿರುತ್ತವೆ.<ref name="Bun200">ಬನ್ಸನ್, ''ರಕ್ತಪಿಶಾಚಿ ವಿಶ್ವಕೋಶ'' , p. 200.</ref> ಕೋರೆಹಲ್ಲುಗಳನ್ನು ಹೊಂದಿ ಶವಗಳ ಅಥವಾ ಅಸ್ಥಿಪಂಜರಗಳ ಹಾರವನ್ನು ಧರಿಸಿದ ಪ್ರಾಚೀನ ಭಾರತೀಯ ದೇವತೆ [[ಕಾಳಿ]]ಯನ್ನೂ ರಕ್ತ ಕುಡಿಯುವಿಕೆಗೆ ಉದಾಹರಿಸುತ್ತಾರೆ.<ref name="Bun1401">ಬನ್ಸನ್, ''ರಕ್ತಪಿಶಾಚಿ ವಿಶ್ವಕೋಶ'' , pp. 140–141.</ref> ಪ್ರಾಚೀನ [[ಈಜಿಪ್ಟ್]]ನಲ್ಲಿ [[ಸೆಖ್ಮೆಟ್]] ಎಂಬ ದೇವತೆ ರಕ್ತ ಕುಡಿಯುತ್ತಿದ್ದಳು.<ref>[http://www.ancientegyptonline.co.uk/Sekhmet.html ]</ref>
[[ಪರ್ಷಿಯ]]ನ್ನರು ರಕ್ತ ಕುಡಿಯುವ ಪ್ರೇತಗಳ ಕಥೆಯನ್ನು ಹೊಂದಿರುವವ ನಾಗರೀಕತೆಗಳಲ್ಲಿ ಮೊದಲಿಗರು; ಉತ್ಖನನ ಮಾಡಿದಾಗ ಸಿಕ್ಕ [[ಮಣ್ಣಿನ ಮಡಕೆ]]ಗಳಲ್ಲಿ ಮಾನವರ ರಕ್ತ ಕುಡಿಯುವ ಪ್ರಾಣಿಗಳ ಚಿತ್ರಗಳನ್ನು ಮೂಡಿಸಲಾಗಿತ್ತು.<ref name="Marigny3">ಮಾರಿಗ್ನಿ, ''ರಕ್ತಪಿಶಾಚಿಗಳು'' , p. 14.</ref> ಪ್ರಾಚೀನ [[ಬ್ಯಾಬಿಲೋನಿಯಾ]]ವು ಕಾಲ್ಪನಿಕ [[ಲಿಲಿಟು]]<ref name="Hurwitz" /> ಎಂಬ, [[ಹೀಬ್ರೂ ದೆವ್ವಗಳ ಕಥೆ]]ಯಲ್ಲಿಯ ಲಿಲಿತ್([[ಹೀಬ್ರೂ]] לילית) ಮತ್ತು ಆಕೆಯ ಮಕ್ಕಳಾದ [[ಲಿಲು]]ಗಳ ಕಥೆಗೆ ಸಮಾನವಾದ ಕಥೆಗಳನ್ನು ಹೊಂದಿತ್ತು. ಲಿಲಿಟುವನ್ನು ಪ್ರೇತವನ್ನಾಗಿ ಹಾಗೂ ಎಳೆ ಮಕ್ಕಳ ರಕ್ತವನ್ನು ಕುಡಿದು ಜೀವಿಸುವದೆಂದು ಪರಿಭಾವಿಸಲಾಗಿತ್ತು. ಯಹೂದ್ಯರ ಪಿಶಾಚಿಗಳು ಗಂಡಸರು ಮತ್ತು ಹೆಂಗಸರ ಜೊತೆಗೆ ಆಗ ತಾನೆ ಜನಿಸಿದ ಮಕ್ಕಳ ರಕ್ತವನ್ನು ಕುಡಿಯುವುದಾಗಿ ಪ್ರತೀತಿ ಇತ್ತು.<ref name="Hurwitz">ಹರ್ವಿಟ್ಜ್,''ಲಿಲಿತ್.''</ref>
ಪ್ರಾಚೀನ [[ಗ್ರೀಕ್]] ಮತ್ತು [[ರೋಮನ್ ಪುರಾಣ]]ಗಳು [[ಎಂಪುಸೇ]]<ref name="GraveEmp">{{cite book |last=Graves |first=Robert |authorlink=Robert Graves|title=[[The Greek Myths]] |origyear=1955 |year=1990 |publisher=Penguin |location=London |isbn=0-14-001026-2 |pages=[https://archive.org/details/liang.greekmythsvolume0001robe/page/189 189]–90|chapter=The Empusae}}</ref>, [[ಲಾಮಿಯಾ]]<ref name="Gravlam">ಗ್ರೇವ್ಸ್, "ಲಾಮಿಯಾ", '' ಗ್ರೀಕ್ ಮಿಥ್ಸ್'' ನಲ್ಲಿ, pp. 205–206.</ref> ಮತ್ತು [[ಸ್ಟ್ರಿಗಸ್]] ಎಂಬ ಮೂರು ಪಿಶಾಚಿಗಳನ್ನು ಹೆಸರಿಸುತ್ತವೆ. ಕಾಲಾಂತರದಲ್ಲಿ ಮೊದಲೆರಡು ಪದಗಳು ಮಾಟಗಾರರನ್ನು ಮತ್ತು ದೆವ್ವಗಳನ್ನು ಹೆಸರಿಸಲು ಬಳಕೆಯಾದವು. [[ಹೆಕೆಟ್]] ಎಂಬ ದೇವತೆಯ ಮಗಳಾದ ಎಂಪುಸೇ ಪಿಶಾಚಿ ಸ್ವಭಾವದ [[ಕಂಚಿನ]] ಕಾಲುಗಳನ್ನು ಹೊಂದಿದ್ದ ಜೀವಿಯಾಗಿತ್ತು. ರಕ್ತ ಕುಡಿದು ಬದುಕುತ್ತಿದ್ದ ಆಕೆ ಗಂಡಸರನ್ನು ಆಕರ್ಷಿಸಲು ಯುವತಿಯ ರೂಪ ತಾಳಿ ಅವರು ಮಲಗಿದಾಗ ಅವರ ರಕ್ತ ಕುಡಿಯುತ್ತಿದ್ದಳು.<ref name="GraveEmp" /> ಲಾಮಿಯಾ ಹಾಗೂ ''ಗೆಲ್ಲೌಡ್ಸ್'' ಅಥವಾ [[ಗೆಲ್ಲೋ]]ಗಳೂ ಕೂಡಾ ಹಸುಗೂಸುಗಳ ಮೇಲೆ ಇದೇ ರೀತಿ ರಾತ್ರಿ ಅವು ಹಾಸಿಗೆ ಮೇಲೆ ಮಲಗಿದಾಗ ಆಕ್ರಮಣ ಮಾಡಿ ಅವುಗಳ ರಕ್ತ ಕುಡಿಯುತ್ತಿದ್ದವು.<ref name="Gravlam" /> ಲಾಮಿಯಾನಂತೆ ''ಸ್ಟ್ರಿಗಸ್'' ಕೂಡಾ ಮಕ್ಕಳ ರಕ್ತವನ್ನು ಕುಡಿಯುತ್ತಿದ್ದರೂ ಯುವಕರ ಮೇಲೂ ಸಹಾ ಆಕ್ರಮಣ ಮಾಡುತ್ತಿದ್ದಳು. ಅವರು ಕಾಗೆಗಳ ಅಥವಾ ಪಕ್ಷಿಗಳ ದೇಹವನ್ನು ಹೊಂದಿರುತ್ತಿದ್ದರೆಂದು ಸಾಮಾನ್ಯವಾಗಿ ಪ್ರಚಲಿತವಾಗಿದ್ದರೂ, ನಂತರ ರೋಮನ್ ಪುರಾಣಗಳಲ್ಲಿ ''ಸ್ಟ್ರಿಕ್ಸ್'' ಎಂಬ ಮನುಷ್ಯರ ರಕ್ತ ಮಾಂಸ ತಿಂದು ಬದುಕುವ ನಿಶಾಚರ ಪಕ್ಷಿಯಾಗಿ ಅಳವಡಿಸಿಕೊಳ್ಳಲಾಯಿತು.<ref>{{cite journal |last=Oliphant |first=Samuel Grant |year=1913 |title=The Story of the Strix: Ancient |journal=Transactions and Proceedings of the American Philological Association |volume=44 |pages=133–49 |doi=10.2307/282549 |issn=00659711 |month=Jan |day=01}}</ref>
=== ಮಧ್ಯಯುಗೀಯ ಹಾಗೂ ನಂತರದ ಐರೋಪ್ಯ ದಂತಕಥೆ ===
ರಕ್ತಪಿಶಾಚಿಗಳ ಬಗೆಗಿನ ಅನೇಕ ಕಲ್ಪನೆಗಳು [[ಮಧ್ಯಯುಗೀಯ ಅವಧಿ]]ಯಲ್ಲಿ ಕಾಣಿಸಿಕೊಂಡವು. 12ನೇ ಶತಮಾನದ ಆಂಗ್ಲ ಇತಿಹಾಸತಜ್ಞರು ಮತ್ತು ಚರಿತ್ರಕಾರರಾದ [[ವಾಲ್ಟರ್ ಮ್ಯಾಪ್]] ಮತ್ತು [[ನ್ಯೂಬರ್ಗ್ನ ವಿಲಿಯಂ]] [[ಪ್ರೇತಗಳ]],<ref name="Cohen" /><ref>{{cite web|author=William of Newburgh |coauthors=Paul Halsall |authorlink=William of Newburgh |title=Book 5, Chapter 22-24 |work=Historia rerum Anglicarum |publisher=Fordham University |year=2000 |accessdate=2007-10-16 |url=http://www.fordham.edu/halsall/basis/williamofnewburgh-five.html}}</ref> ಬಗ್ಗೆ ದಾಖಲಿಸಿದ್ದರೂ, ಆಂಗ್ಲ ದಂತಕಥೆಗಳಲ್ಲಿ ಇದರ ನಂತರದ ಪುರಾವೆಗಳು ಸಾಕಷ್ಟಿಲ್ಲ.<ref name="Jones121">ಜೋನ್ಸ್, "ದ ವ್ಯಾಂಪೈರ್," p. 121.</ref> ಈ ಕಥೆಗಳು ನಂತರದ 18ನೇ ಶತಮಾನದಲ್ಲಿ ಪೂರ್ವ ಯುರೋಪ್ನಲ್ಲಿನ ಕಂಡುಬಂದ ಜಾನಪದ ಕಥೆಗಳನ್ನು ಹೋಲುತ್ತವೆ, ಅಲ್ಲದೇ ನಂತರ ಜರ್ಮನಿ ಮತ್ತು ಇಂಗ್ಲೆಂಡ್ಗಳಿಗೆ ಹರಡಿದ ರಕ್ತಪಿಶಾಚಿ ಆಖ್ಯಾಯಿಕೆಗಳ ಮೂಲವಾಗಿತ್ತು. ನಂತರ ಅಲ್ಲೆಲ್ಲಾ ಇದಕ್ಕೆ ಮತ್ತಷ್ಟು ವರ್ಣಮಯಗೊಳಿಸಿ ಮತ್ತಷ್ಟು ಜನಪ್ರಿಯಗೊಳಿಸಲಾಯಿತು.
18ನೇ ಶತಮಾನದಲ್ಲಿ ಪೂರ್ವ ಯುರೋಪ್ನಲ್ಲಿ, ರಕ್ತಪಿಶಾಚಿ ಹುಡುಕಾಟವು ವಿಕೋಪಕ್ಕೆ ಹೋಗಿ ಸಂಭಾವ್ಯ ಪ್ರೇತಗಳನ್ನು ಪತ್ತೆಹಚ್ಚಿ ಕೊಲ್ಲಲು ಅಡಿಗಡಿಗೆ ಶವ ನೇತುಹಾಕುವಿಕೆ ಹಾಗೂ ಸಮಾಧಿ ತೋಡುವಿಕೆಯು ನಡೆಯುತ್ತಿತ್ತು ಹಾಗೂ ಸರ್ಕಾರಿ ಅಧಿಕಾರಿಗಳೂ ಸಹಾ ಈ ರಕ್ತಪಿಶಾಚಿಗಳ ಬೇಟೆಗಳು ಮತ್ತು ನೇತುಹಾಕುವಿಕೆಯಲ್ಲಿ ಸಕ್ರಿಯರಾಗಿದ್ದರು.<ref name="Barb5to9" /> ಇನ್ನಿತರ ಅನೇಕ ಜಾನಪದ ಕಲ್ಪನೆಗಳನ್ನು ತೊಡೆದು ಹಾಕಿ [[ಜ್ಞಾನೋದಯ ಯುಗ]]ವೆಂದು ಕರೆಸಿಕೊಂಡಿದ್ದರೂ ರಕ್ತಪಿಶಾಚಿಗಳ ಮೇಲಿನ ನಂಬಿಕೆ ನಾಟಕೀಯವಾಗಿ ಹೆಚ್ಚುತ್ತಲೇ ಹೋಗಿ ಅದರ ಪರಿಣಾಮವಾಗಿ ಬಹುಪಾಲು ಯೂರೋಪ್ನಲ್ಲಿ ಸಾಮೂಹಿಕ ಉನ್ಮಾದದ ರೂಪ ತಾಳಿತು.<ref name="Cohen" /> 1721ರಲ್ಲಿ [[ಪೂರ್ವ ಪ್ರಷ್ಯ]]ದಲ್ಲಿ ಹಾಗೂ [[ಹಬ್ಸ್ಬರ್ಗ್ ಚಕ್ರಾಧಿಪತ್ಯ]]ದಲ್ಲಿ 1725ರಿಂದ 1734ರವರೆಗೆ ನಡೆಯಿತೆನ್ನಲಾದ ಹಾಗೂ ನಂತರ ಇತರೆಡೆ ಹರಡಿದ ರಕ್ತಪಿಶಾಚಿ ಆಕ್ರಮಣದ ಪುಕಾರುಗಳೊಂದಿಗೆ ಇದು ವ್ಯಾಪಕವಾಯಿತು. ಎರಡು ಪ್ರಸಿದ್ಧ ರಕ್ತಪಿಶಾಚಿ ಸಂಗತಿಗಳಲ್ಲಿ ಮೊದಲಿಗೆ ಅಧಿಕೃತವಾಗಿ ದಾಖಲಾದ ಸಂಗತಿಯೆಂದರೆ [[ಸರ್ಬಿಯಾ]]ದ [[ಪೀಟರ್ ಪ್ಲೋಗೋಜೋವಿಟ್ಜ್]] ಮತ್ತು [[ಅರ್ನಾಲ್ಡ್ ಪೌಲೆ]]ರದಾಗಿತ್ತು. ತಮ್ಮ 62ನೇ ವಯಸ್ಸಿನಲ್ಲಿ ಮೃತರಾಗಿದ್ದ ಪ್ಲೋಗೋಜೋವಿಟ್ಜ್, ತಮ್ಮ ಸಾವಿನ ನಂತರ ಮತ್ತೆ ತಮ್ಮ ಪುತ್ರನ ಬಳಿ ಬಂದು ಆಹಾರಕ್ಕಾಗಿ ಪೀಡಿಸಿದರು. ಆಗ ಆತ ನಿರಾಕರಿಸಿದ ಕಾರಣ ಮರುದಿನ ಆತನು ಸಾವು ಕಂಡನು. ಪ್ಲೋಗೋಜೋವಿಟ್ಜ್, ಮತ್ತೆ ಹಿಂತಿರುಗಿ ನೆರೆಹೊರೆಯವರ ಮೇಲೆ ಸಹಾ ಆಕ್ರಮಣ ಮಾಡಿದ್ದರೆಂದು ಪ್ರತೀತಿ ಇದೆ. ಅವರೆಲ್ಲಾ ರಕ್ತದ ಕೊರತೆಯಿಂದ ಸತ್ತಿದ್ದರು.<ref name="Barb5to9">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , pp. 5–9.</ref> ಎರಡನೇ ಸಂಗತಿಯಲ್ಲಿ ಕೃಷಿಕವೃತ್ತಿ ಕೈಗೊಂಡಿದ್ದ ಮಾಜಿಯೋಧ ಪೌಲೆ, ಕೆಲವರ್ಷಗಳ ಹಿಂದೆ ರಕ್ತಪಿಶಾಚಿಯಿಂದ ಆಕ್ರಮಣಕ್ಕೊಳಗಾಗಿದ್ದರು. ಅವರು [[ಹುಲ್ಲನ್ನು ಒಣಗಿಸುತ್ತಿದ್ದಾಗ/ಹೇ ನೃತ್ಯ ಮಾಡುತ್ತಿದ್ದಾಗ]] ಮೃತಪಟ್ಟಿದ್ದರು. ಆತನ ಮರಣದ ನಂತರ ಆಸುಪಾಸಿನಲ್ಲಿ ಅನೇಕರು ಸಾವು ಕಂಡರು, ಇದರಿಂದಾಗಿ ಪೌಲೆ ಮರಳಿಬಂದು ನೆರೆಹೊರೆಯವರನ್ನು ಕಾಡುತ್ತಿದ್ದಾನೆ ಎಂಬ ಅಭಿಪ್ರಾಯ ಎಲ್ಲರಲ್ಲೂ ಮೂಡಿತ್ತು.<ref name="Barb1521" /> ಮತ್ತೊಂದು ವಿಖ್ಯಾತ ಸರ್ಬಿಯನ್ ರಕ್ತಪಿಶಾಚಿ ದಂತಕಥೆಯ ಪ್ರಕಾರ ಜಲಗಿರಣಿಯಲ್ಲಿ ವಾಸಿಸುತ್ತಿದ್ದ ಹಾಗೂ ಗಿರಣಿಯವರನ್ನು ಕೊಂದು ರಕ್ತ ಕುಡಿಯುತ್ತಿದ್ದ [[ಸಾವಾ ಸವಾನೊವಿಕ್]] ಎಂಬಾತನನ್ನು ಹೆಸರಿಸುತ್ತವೆ. ಸರ್ಬಿಯನ್ ಲೇಖಕ [[ಮಿಲೊವನ್ ಗಿಲ್ಸಿಕ್]] ಬರೆದ ಕಥೆಯೊಂದರಲ್ಲಿ ಈ ದಂತಕಥೆಯ ಪಾತ್ರ ಬಳಸಲಾಗಿತ್ತು ಮತ್ತು ಸರ್ಬಿಯದ 1973ರ ಭಯಾನಕ ಚಿತ್ರ ''[[ಲೆಪಿಟಿರಿಕಾ]]'' ಇದರ ಮೇಲೆ ಆಧಾರಿತವಾಗಿತ್ತು.
ಈ ಎರಡು ಘಟನೆಗಳಲ್ಲಿ ಉತ್ತಮ ಮಾಹಿತಿ ದಾಖಲಿಸಲಾಗಿತ್ತು : ಸರ್ಕಾರಿ ಅಧಿಕಾರಿಗಳು ದೇಹಗಳನ್ನು ಪರೀಕ್ಷಿಸಿ ವರದಿ ತಯಾರಿಸಿ ಅದನ್ನು ಯುರೋಪ್ನಾದ್ಯಂತ ಪುಸ್ತಕ ರೂಪದಲ್ಲಿ ಪ್ರಕಟಿಸಿದರು.<ref name="Barb1521">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , pp. 15–21.</ref> "18ನೇ-ಶತಮಾನದ ರಕ್ತಪಿಶಾಚಿ ವಿವಾದ" ಎಂದು ಹೆಸರಾದ ಈ ಉನ್ಮಾದವು ಒಂದು ಸಂತತಿಯನ್ನು ವಿಕೋಪಕ್ಕೆ ಹೋಗುವಂತೆ ಮಾಡಿತ್ತು. ಈ ಸಮಸ್ಯೆಯು ಗ್ರಾಮೀಣ ಸಮುದಾಯದಲ್ಲಿ ಸಾಮಾನ್ಯವಾದ ಮೂಢನಂಬಿಕೆಗಳ ಕಾರಣವಾಗಿ ರಕ್ತಪಿಶಾಚಿ ಆಕ್ರಮಣಗಳೆಂದು ಮೂಡಿದ ಭಾವನೆ ಸಾಂಕ್ರಾಮಿಕವಾಗಿ ಹರಡಿ ಸ್ಥಳೀಯರು ಸಮಾಧಿಗಳನ್ನು ಹೊರತೆಗೆಯುವುದು ಹಾಗೂ ನೇತು ಹಾಕಿ ಸುಡುವುದು ಮುಂತಾದ ಕಾರ್ಯಗಳನ್ನು ಮಾಡತೊಡಗಿದ್ದರು. ಆಗಿನ ಅನೇಕ ಪ್ರಾಜ್ಞರು ರಕ್ತಪಿಶಾಚಿಗಳು ಅಸ್ತಿತ್ವದಲ್ಲಿಲ್ಲ ಹಾಗೂ ಈ ಸಮಸ್ಯೆಗಳು ಅವಧಿಗೆ ಮುಂಚಿತವಾಗಿ ಹೂಳುವಿಕೆಯಿಂದಾಗಿ ಅಥವಾ [[ರೇಬೀಸ್]]ನಿಂದಾಗಿ ಆಗುತ್ತಿರುವುದೆಂದು ಹೇಳಿದರೂ ಈ [[ಮೂಢನಂಬಿಕೆ]] ಬೆಳೆಯುತ್ತಲೇ ಹೋಯಿತು. [[ಡಾಮ್ ಅಗಸ್ಟೀನ್ ಕ್ಯಾಲ್ಮೆಟ್]] ಎಂಬ ಗೌರವಾರ್ಹ [[ಬ್ರಹ್ಮಜ್ಞಾನಿ]] ಮತ್ತು ಪ್ರಾಜ್ಞರು ವ್ಯಾಪಕವಾದ ವಿವರಗಳುಳ್ಳ ಗ್ರಂಥವನ್ನು 1746ರಲ್ಲಿ ಬರೆದರೂ, ರಕ್ತಪಿಶಾಚಿಗಳ ಅಸ್ತಿತ್ವದ ಬಗೆಗೆ ಅದರಲ್ಲಿ ಖಚಿತತೆಯಿರಲಿಲ್ಲ. ಕಾಲ್ಮೆಟ್ ರಕ್ತಪಿಶಾಚಿ ವೃತ್ತಾಂತಗಳ ಕುರಿತು ಅನೇಕ ಓದುಗರು, [[ವೊಲ್ಟೇರ್]] ಎಂಬ ವಿಮರ್ಶಕ ಹಾಗೂ ಬೆಂಬಲಿಗ [[ಭೂತಶಾಸ್ತ್ರಜ್ಞ]]ರ ವರದಿಗಳನ್ನು ಸಂಗ್ರಹಿಸಿ ರಕ್ತಪಿಶಾಚಿಗಳು ಅಸ್ತಿತ್ವದಲ್ಲಿವೆ ಎಂಬ ಅಭಿಪ್ರಾಯ ಬರುವ ಹಾಗೆ ಗ್ರಂಥವನ್ನು ರಚಿಸಿದರು.<ref name="Hoyt84" /> ತನ್ನ ''[[ತತ್ವಶಾಸ್ತ್ರದ ಪದಕೋಶ]]'' ದಲ್ಲಿ ವಾಲ್ಟೇರ್ ಹೀಗೆ ಬರೆದರು :<ref>{{cite book|title=Philosophical Dictionary |url=https://archive.org/details/philosophicaldic0000volt_b1u7 |author=Voltaire |year=1984 |origyear=1764 |publisher=Penguin|location=|isbn=014044257X}}</ref>
{{quote|These vampires were corpses, who went out of their graves at night to suck the blood of the living, either at their throats or stomachs, after which they returned to their cemeteries. The persons so sucked waned, grew pale, and fell into consumption; while the sucking corpses grew fat, got rosy, and enjoyed an excellent appetite. It was in [[ಪೋಲೆಂಡ್|Poland]], [[ಹಂಗರಿ|Hungary]], [[Silesia]], [[Moravia]], [[ಆಸ್ಟ್ರಿಯ|Austria]], and [[Alsace-Lorraine|Lorraine]], that the dead made this good cheer.}}
[[ಆಸ್ಟ್ರಿಯಾದ ಸಾಮ್ರಾಜ್ಞಿ ಮಾರಿಯಾ ಥೆರೆಸಾರು]] ತಮ್ಮ ಖಾಸಗಿ ವೈದ್ಯ [[ಗೆರಾರ್ಡ್ ವಾನ್ ಸ್ವಿಟಿಯೆನ್]] ಎಂಬುವವರನ್ನು ಪ್ರೇತಗಳ ಅಸ್ತಿತ್ವದ ಬಗ್ಗೆ ತನಿಖೆ ನಡೆಸಲು ಕಳಿಸಿದಾಗ ಈ ವಿವಾದ ಕೊನೆಗೊಂಡಿತು. ಆತನ ವರದಿಯ ಪ್ರಕಾರ ರಕ್ತಪಿಶಾಚಿಗಳು ಅಸ್ತಿತ್ವದಲ್ಲಿರಲಿಲ್ಲ. ಹಾಗಾಗಿ ಸಾಮ್ರಾಜ್ಞಿಯು ಸಮಾಧಿಗಳನ್ನು ತೆರೆಯುವುದು ಹಾಗೂ ದೇಹಗಳನ್ನು ಪವಿತ್ರಗೊಳಿಸುವುದರ ವಿರುದ್ಧ ಕಾನೂನುಗಳನ್ನು ಜಾರಿಗೆ ತಂದು ರಕ್ತಪಿಶಾಚಿ ಸಾಂಕ್ರಾಮಿಕಕ್ಕೆ ಕೊನೆ ಹಾಡಿದಳು. ಈ ಖಂಡನೆಯ ನಂತರವೂ ಕಲಾಕೃತಿಗಳಲ್ಲಿ ಹಾಗೂ ಸ್ಥಳೀಯ ಮೂಢನಂಬಿಕೆಗಳಲ್ಲಿ ರಕ್ತಪಿಶಾಚಿಯ ಪ್ರಸಕ್ತಿಯು ಈಗಲೂ ಮುಂದುವರಿದಿದೆ.<ref name="Hoyt84">{{cite book |last=Hoyt |first=Olga |title=Lust for Blood: The Consuming Story of Vampires |url=https://archive.org/details/lustforbloodcons0000hoyt |year=1984 |chapter=The Monk's Investigation |pages=[https://archive.org/details/lustforbloodcons0000hoyt/page/101 101]–06 |publisher=Scarborough House |location=Chelsea |isbn=0-8128-8511-2}}</ref>
=== ಐರೋಪ್ಯವಲ್ಲದ ನಂಬಿಕೆಗಳು ===
==== ಆಫ್ರಿಕಾ ====
[[ಆಫ್ರಿಕಾ]]ದ ಅನೇಕ ಪ್ರದೇಶಗಳಲ್ಲಿ ಪ್ರೇತಗಳಂತ ಶಕ್ತಿಗಳ ಬಗ್ಗೆ ಕಥೆಗಳಿವೆ: [[ಪಶ್ಚಿಮ ಆಫ್ರಿಕಾ]]ದಲ್ಲಿ [[ಅಶಾಂತಿ]] ಜನರು ಕಬ್ಬಿಣದ ಹಲ್ಲಿನ, ಮರದಲ್ಲಿ ವಾಸಿಸುವ ''[[ಅಸಾನ್ಬೊಸಮ್]]'' ,<ref name="Buns11">ಬನ್ಸನ್, ''ರಕ್ತಪಿಶಾಚಿ ವಿಶ್ವಕೋಶ'' , p. 11.</ref> ಬಗ್ಗೆ ಹೇಳಿದರೆ [[ಈವ್ ಜನರು]] [[ಮಿಂಚುಹುಳು]]ವಿನ ರೂಪ ತಳೆದು ಮಕ್ಕಳ ಬೇಟೆಯಾಡುವ ''[[ಅಡ್ಜೆ,]]'' ಯ ಬಗ್ಗೆ ಹೇಳುತ್ತಾರೆ.<ref name="Buns2">ಬನ್ಸನ್, ''ರಕ್ತಪಿಶಾಚಿ ವಿಶ್ವಕೋಶ'' , p. 2.</ref> ಪೂರ್ವ ಕೇಪ್ ಪ್ರದೇಶದಲ್ಲಿ ಉದ್ದನೇ ಉಗುರಿನ ಪಕ್ಷಿಯ ರೂಪ ತಳೆದು ಗುಡುಗು ಹಾಗೂ ಮಿಂಚು ತರಿಸಬಲ್ಲ ''[[ಇಂಪುಂಡುಲು]],'' ಇದ್ದರೆ, [[ಮಡಗಾಸ್ಕರ್]]ನ [[ಬೆಟ್ಸಿಲಿಯೊ]] ಜನರು ''ರಮಂಗ'' ಎಂಬ ವಿಲಕ್ಷಣ ರಕ್ತ ಕುಡಿಯುವ ಹಾಗೂ ಸಾತ್ವಿಕರ/ಕುಲೀನರ ಕತ್ತರಿಸಿದ ಉಗುರುಗಳನ್ನು ತಿನ್ನುವ ಜೀವಂತ ರಕ್ತಪಿಶಾಚಿಯ ಬಗ್ಗೆ ಹೇಳುತ್ತಾರೆ.<ref name="ReferenceA"/>
==== ಅಮೇರಿಕಾ ಖಂಡ/ಅಮೇರಿಕಾಗಳು ====
''[[ಲೂಗರೂ]]'' ಎಂಬುದು ರಕ್ತಪಿಶಾಚಿ ನಂಬಿಕೆಯು ಅನೇಕ ನಂಬಿಕೆಗಳ ಸಂಯೋಜನೆಯಾಗಬಲ್ಲದು ಎಂಬುದಕ್ಕೆ ಉತ್ತಮ ಉದಾಹರಣೆ, ಇದು ಫ್ರೆಂಚ್ ಮತ್ತು ಆಫ್ರಿಕಾಗಳ ವೊಡು ಅಥವಾ [[ವೂಡೂ]] ಎಂಬುದರ ಸಂಯೋಜನೆ. ''ಲೂಗರೂ'' ಎಂಬ ಪದ ಬಹುಶಃ ಫ್ರೆಂಚ್ನ ''[[ಲೌಪ್-ಗರೌ]]'' ("ತೋಳಮಾನವ" ಎಂಬರ್ಥದಲ್ಲಿ)ನಿಂದಾಗಿದೆ ಹಾಗೂ ಇದು [[ಮಾರಿಷಸ್ನ ಸಂಸ್ಕೃತಿ]]ಯಲ್ಲಿ ಸಾಮಾನ್ಯವಾಗಿದೆ. ಆದಾಗ್ಯೂ ''ಲೂಗರೂ'' ನ ಕಥೆಗಳು [[ಕೆರಿಬಿಯನ್ ದ್ವೀಪಗಳು]] ಮತ್ತು ಯುನೈಟೆಡ್ ಸ್ಟೇಟ್ಸ್ನ [[ಲೂಸಿಯಾನಾ]]ಗಳಲ್ಲಿ ವ್ಯಾಪಕವಾಗಿ ಹರಡಿವೆ.<ref name="Buns1623">ಬನ್ಸನ್, ''ರಕ್ತಪಿಶಾಚಿ ವಿಶ್ವಕೋಶ'' , pp. 162-63.</ref> ಇದೇ ಮಾದರಿಯ ರಾಕ್ಷಸಿಯರೆಂದರೆ [[ಟ್ರಿನಿಡಾಡ್]]ನ ''[[ಸೌಕೌಯಾಂಟ್]]'' ಮತ್ತು [[ಕೊಲಂಬಿಯಾ]] ದಂತಕಥೆಯ ''[[ಟುಂಡಾ]]'' ಮತ್ತು ''[[ಪಟಸೋಲಾ]]'' . ದಕ್ಷಿಣ [[ಚಿಲಿ]]ಯ [[ಮಪುಚೆ]]ಯು ''[[ಪ್ಯೂಚೆನ್]]'' ಎಂಬ ರಕ್ತ ಕುಡಿಯುವ ಹಾವನ್ನು ಹೊಂದಿದೆ.<ref>{{es icon}} {{cite book|author=Martinez Vilches, Oscar|title=Chiloe Misterioso: Turismo, Mitologia Chilota, leyendas |year=1992 |page=179 |publisher=Ediciones de la Voz de Chiloe |location=Chile |oclc=33852127}}</ref> ದಕ್ಷಿಣ ಅಮೇರಿಕಾದ ಮೂಢನಂಬಿಕೆಯ ಪ್ರಕಾರ ಬಾಗಿಲ ಬಳಿ ಇಲ್ಲವೇ ಹಿಂದೆ ''[[ಲೋಳಿಸರ]]'' ವನ್ನು ತಿರುವುಮುರುವಾಗಿ ನೇತುಹಾಕಿದರೆ ಪ್ರೇತಗಳಂತಹಾ ಶಕ್ತಿಗಳು ಬರದಂತೆ ತಡೆಯಬಹುದು.<ref name="Jaramillo" /> ಅಜ್ಟೆಕ್ನ ದಂತಕಥೆಯಲ್ಲಿ ಹೆರಿಗೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಪ್ರೇತಗಳು ಮಕ್ಕಳನ್ನು ಕದಿಯುವ ಹಾಗೂ ಬದುಕಿರುವರೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ಅವರನ್ನು ಹುಚ್ಚರನ್ನಾಗಿ ಮಾರ್ಪಡಿಸುವ [[ಸಿಹುಆಟೆಟೆವೊ]] ಎಂಬ ಅಸ್ಥಿಪಂಜರ ಮುಖದ ಶಕ್ತಿಗಳ ಬಗ್ಗೆ ದಾಖಲಿಸುತ್ತವೆ.<ref name="Strange & Amazing" />
18ನೇ ಮತ್ತು 19ನೇ ಶತಮಾನಗಳ ಕೊನೆಯಲ್ಲಿ ನ್ಯೂ ಇಂಗ್ಲೆಂಡ್ನ ಭಾಗಗಳಲ್ಲಿ ಅದರಲ್ಲೂ [[ರ್ಹೋಡ್/ರೋಡ್ ದ್ವೀಪ]] ಮತ್ತು ಪೂರ್ವ [[ಕನೆಕ್ಟಿಕಟ್]]ಗಳಲ್ಲಿ ರಕ್ತಪಿಶಾಚಿಗಳ ಬಗೆಗಿನ ನಂಬಿಕೆ ಹೆಚ್ಚಾಯಿತು. ಅನೇಕ ಸಂಗತಿಗಳಲ್ಲಿ ಕುಟುಂಬದ ವ್ಯಕ್ತಿಗಳು ಮರಣ ಹೊಂದಿದ ವ್ಯಕ್ತಿ ಓರ್ವ ರಕ್ತಪಿಶಾಚಿಯಾಗಿದ್ದು ಕುಟುಂಬದಲ್ಲಿನ ಅನಾರೋಗ್ಯ ಹಾಗೂ ಸಾವುಗಳಿಗೆ ಕಾರಣವಾಗಿರುವರೆಂಬ ನಂಬಿಕೆಯಿಂದ ತಮ್ಮ ಪ್ರೀತಿಪಾತ್ರರ ಶವಗಳಿಂದ ಅವರ ಹೃದಯವನ್ನು ಬೇರ್ಪಡಿಸುತ್ತಿದ್ದರೂ, ಸತ್ತವರ ಕುರಿತು ರಕ್ತಪಿಶಾಚಿಯೆಂಬ ಪದವನ್ನು ಬಳಸುತ್ತಿರಲಿಲ್ಲ. ಮಾರಣಾಂತಿಕ ರೋಗ [[ಕ್ಷಯ]] ಅಥವಾ ಆಗ ಹೇಳುತ್ತಿದ್ದ ಹಾಗೆ "ಶ್ವಾಸಕೋಶದ ರೋಗ"ವು ರಾತ್ರಿ ಹೊತ್ತು ಕ್ಷಯದಿಂದ ಈ ಹಿಂದೆ ಸತ್ತ ಕುಟುಂಬದ ವ್ಯಕ್ತಿಯ ಭೇಟಿ ನೀಡುವಿಕೆಯಿಂದಾಗುತ್ತದೆ ಎಂಬ ನಂಬಿಕೆ ಇತ್ತು.<ref name="sledzik">{{cite journal |last=Sledzik |first=Paul S. |coauthors=Nicholas Bellantoni |month=June |year=1994 |title=Bioarcheological and biocultural evidence for the New England vampire folk belief |journal=American Journal of Physical Anthropology |volume=94 |issue=2 |pages=269–274 |doi=10.1002/ajpa.1330940210 |url=http://www.ceev.net/biocultural.pdf |format=PDF |pmid=8085617 |issn=0002-9483 |access-date=2009-12-08 |archive-date=2003-10-04 |archive-url=https://web.archive.org/web/20031004001708/http://www.ceev.net/biocultural.pdf |url-status=dead }}</ref> ಅತ್ಯಂತ ಪ್ರಸಿದ್ಧವಾದ ಹಾಗೂ ತೀರ ಇತ್ತೀಚೆಗೆ ದಾಖಲಾಗಿದ್ದ ಶಂಕಿತ ರಕ್ತಪಿಶಾಚಿ ಸಂಗತಿಯೆಂದರೆ 1892ರಲ್ಲಿ [[ರ್ಹೋಡ್ ದ್ವೀಪದ ಎಕ್ಸಿಟಿರ್]]ನಲ್ಲಿ ಮರಣಹೊಂದಿದ್ದ ಹತ್ತೊಂಬತ್ತು ವರ್ಷದ [[ಮರ್ಸಿ ಬ್ರೌನ್]] ಎಂಬಾಕೆಯದು. ಆಕೆಯ ತಂದೆ, ಕುಟುಂಬ ವೈದ್ಯರೊಡಗೂಡಿ ಆಕೆಯ ಸಮಾಧಿಯಿಂದ ಆಕೆಯ ದೇಹವನ್ನು ಹೊರತೆಗೆದು ಹೃದಯವನ್ನು ತೆಗೆದುಹಾಕಿ ಸುಟ್ಟಿದ್ದರು.<ref>{{cite web |url=http://seacoastnh.com/Places_&_Events/The_Grave_Site/Real_Vampires_in_New_England?/ |title=Interview with a REAL Vampire Stalker |publisher=SeacoastNH.com |accessdate=2006-06-14 |archive-date=2011-08-22 |archive-url=https://www.webcitation.org/618KXgznE?url=http://www.seacoastnh.com/Places_ |url-status=dead }}</ref>
==== ಏಷ್ಯಾ ====
ಪ್ರಾಚೀನ ದಂತಕಥೆಯ ಮೂಲದೊಂದಿಗೆ, ಆಧುನಿಕ ರಕ್ತಪಿಶಾಚಿಗಳ ಮೇಲಿನ ನಂಬಿಕೆ [[ಏಷ್ಯಾ]]ದ ಪ್ರಮುಖ ಭೂಭಾಗದುದ್ದಕ್ಕೂ ಶವಭಕ್ಷಕ ಪಿಶಾಚಿಗಳ ರೂಪದಲ್ಲಿ ಹಾಗೂ [[ಆಗ್ನೇಯ ಏಷ್ಯಾ]]ದ ದ್ವೀಪಗಳಲ್ಲಿ ರಕ್ತಪಿಶಾಚಿ ರೂಪದಲ್ಲಿ ಕಥೆಗಳಲ್ಲಿ ರಾರಾಜಿಸಿದವು. [[ಭಾರತ]]ವು ಸಹಾ ಇತರ ರಕ್ತಪಿಶಾಚಿ ಕಲ್ಪನೆಗಳನ್ನು ಹುಟ್ಟುಹಾಕಿತು. ''[[ಭೂತ]]'' ಅಥವಾ ''ಪ್ರೇತ'' ಎಂಬುದು ಅಕಾಲದಲ್ಲಿ ಮರಣ ಹೊಂದಿದ ವ್ಯಕ್ತಿಯ ಆತ್ಮ. ಅದು ರಾತ್ರಿ ಹೊತ್ತು ಶವಗಳೊಳಗೆ ಪ್ರವೇಶಿಸಿ ಆ ದೇಹಗಳ ಮೂಲಕ ಜೀವಂತ ವ್ಯಕ್ತಿಗಳನ್ನು [[ಪಿಶಾಚಿ]]ಯ ಮಾದರಿಯಲ್ಲೇ ಕಾಡುತ್ತದೆ.<ref>ಬನ್ಸನ್, ''ರಕ್ತಪಿಶಾಚಿ ವಿಶ್ವಕೋಶ'' , pp. 23-24.</ref> ಉತ್ತರಭಾರತದಲ್ಲಿ ಕರುಳಿನಿಂದ ಸುತ್ತುವರಿದ ತಲೆಯುಳ್ಳ ಹಾಗೂ ಕಪಾಲದ ಮೂಲಕ ರಕ್ತ ಕುಡಿಯುವ ರಕ್ತಪಿಶಾಚಿ ತರಹದ ಶಕ್ತಿಯೊಂದನ್ನು ''ಬ್ರಹ್ಮರಾಕ್ಷಸ'' ಎನ್ನುತ್ತಾರೆ. [[ಜಪಾನೀ]] ಚಲನಚಿತ್ರಗಳಲ್ಲಿ ರಕ್ತಪಿಶಾಚಿಗಳು 1950ರ ದಶಕದ ಅಂತ್ಯದಲ್ಲೇ ಕಾಣಿಸಿಕೊಂಡರೂ ಅವುಗಳ ದಂತಕಥೆಯ ಮೂಲವು ಪಾಶ್ಚಿಮಾತ್ಯವೇ ಆಗಿದೆ.<ref name="Buns378">ಬನ್ಸನ್, ''ರಕ್ತಪಿಶಾಚಿ ವಿಶ್ವಕೋಶ'' , pp. 137-38.</ref> ಆದಾಗ್ಯೂ [[ನುಕೇಕುಬಿ]] ಎಂಬ ಶಕ್ತಿಯ ರುಂಡವು ಮುಂಡದಿಂದ ಬೇರೆಯಾಗಿ ರಾತ್ರಿಹೊತ್ತು ಮಾನವ ಬಲಿಯನ್ನು ಹುಡುಕುತ್ತಿರುತ್ತದೆ.<ref>{{cite book |title=Kwaidan: Stories and Studies of Strange Things |url=https://archive.org/details/kwaidanstories00hearrich |last=Hearn |first=Lafcadio |authorlink=Lafcadio Hearn |year=1903 |publisher=Houghton, Mifflin and Company |location=Boston}}</ref>
ತಮ್ಮ ದೇಹದ ಮೇಲ್ಭಾಗವನ್ನು ಪ್ರತ್ಯೇಕಿಸಿಕೊಳ್ಳಬಲ್ಲ ರಕ್ತಪಿಶಾಚಿನಿಯರ ತರಹದ ಶಕ್ತಿಗಳ ಕಥೆಯು [[ಫಿಲಿಪ್ಪೀನ್ಸ್]], [[ಮಲೇಷಿಯಾ]] ಮತ್ತು [[ಇಂಡೋನೇಷ್ಯಾ]]ಗಳಲ್ಲೂ ಇವೆ. [[ಫಿಲಿಪ್ಪೀನ್ಸ್]]ನಲ್ಲಿ ಪ್ರಮುಖ ಎರಡು ರಕ್ತಪಿಶಾಚಿ-ತರಹದ ಶಕ್ತಿಗಳಿವೆ: [[ಟಗಲಾಗ್]] ''ಮಂಡುರುಗೊ'' ("ರಕ್ತ-ಹೀರುವ") ಮತ್ತು [[ವಿಸಯನ್]] ''[[ಮನನಂಗ್ಗಲ್]] '' ("ಸ್ವಯಂ-ವಿಭಜನೆಗೊಳ್ಳಬಲ್ಲ"). ಮಂಡುರುಗೊ ಎಂಬುದು ಬೆಳಗಿನ ಸಮಯದಲ್ಲಿ ಆಕರ್ಷಕ ಹುಡುಗಿಯ ರೂಪ ತಳೆದು ರಾತ್ರಿಯ ಹೊತ್ತಿಗೆ ರೆಕ್ಕೆ ಹಾಗೂ ಉದ್ದನೆಯ ಟೊಳ್ಳಾದ ನೂಲಿನ ಮಾದರಿಯ ನಾಲಿಗೆಯನ್ನು ಬೆಳೆಸಿಕೊಳ್ಳಬಲ್ಲ [[ಅಸವಾಂಗ್]] ಪಿಶಾಚಿಯ ಒಂದು ವಿಧವಾಗಿದೆ. ಈ ನಾಲಿಗೆಯಿಂದ ನಿದ್ದೆ ಮಾಡುತ್ತಿರುವ ಬಲಿಯ ರಕ್ತ ಹೀರಲಾಗುತ್ತದೆ. ''ಮನನಂಗ್ಗಲ್'' ಎಂಬುದು ರಾತ್ರಿ ಹೊತ್ತು ಬಾವಲಿ ತರಹದ ದೊಡ್ಡ ಗಾತ್ರದ ರೆಕ್ಕೆಗಳನ್ನು ಮೂಡಿಸಿಕೊಳ್ಳಲು ತನ್ನ ಮುಂಡದ ಮೇಲ್ಭಾಗವನ್ನು ಪ್ರತ್ಯೇಕಿಸಬಲ್ಲ ಹಾಗೂ ತಮ್ಮ ಮನೆಯಲ್ಲಿ ಸುಖನಿದ್ದೆಯಲ್ಲಿರುವ ಗರ್ಭಿಣಿಯರ ಮೇಲೆ ಆಕ್ರಮಣ ಮಾಡಲು ಪ್ರಬುದ್ಧ ವಯಸ್ಸಿನ ಸುಂದರ ಹೆಣ್ಣಿನ ರೂಪದಲ್ಲಿರುವ ಶಕ್ತಿ. ಅವು ಉದ್ದನೆಯ ಸೊಂಡಿಲಿನ ತರಹದ ನಾಲಿಗೆಯನ್ನು [[ಗರ್ಭಿಣಿ]]ಯ ಹೊಟ್ಟೆಯಲ್ಲಿರುವ [[ಭ್ರೂಣ]]ವನ್ನು ಹೀರಲು ಬಳಸುತ್ತವೆ. ಅವು ಕರುಳು (ನಿರ್ದಿಷ್ಟವಾಗಿ [[ಹೃದಯ]] ಮತ್ತು [[ಪಿತ್ತಜನಕಾಂಗ]]) ಮತ್ತು ರೋಗಿಗಳ ಕಫವನ್ನು ತಿನ್ನಲು ಅಪೇಕ್ಷಿಸುತ್ತವೆ.<ref name="ramos">{{cite book |last=Ramos |first=Maximo D. |title=Creatures of Philippine Lower Mythology |origyear=1971 |year=1990 |publisher=Phoenix Publishing |location=Quezon |isbn=971-06-0691-3}}</ref>
[[ಮಲೇಷ್ಯಾ]]ದ ''[[ಪೆಲಂಗ್ಗಾಲನ್]]'' ಎಂಬ ದುಷ್ಟಶಕ್ತಿಯು ಸುಂದರ ಪ್ರಬುದ್ಧ ಹೆಣ್ಣು ಇಲ್ಲವೇ ಯುವತಿಯಾಗಿದ್ದು ತನ್ನ ಸೌಂದರ್ಯವನ್ನು [[ಮಾಟಮಂತ್ರ]] ಅಥವಾ ಇನ್ನಿತರ ವಾಮಮಾರ್ಗದಿಂದ ಪಡೆದಿದ್ದು ಸ್ಥಳೀಯ ದಂತಕಥೆಯಲ್ಲಿ ದಟ್ಟ ವರ್ಣದವಳ ರೂಪ ಪಡೆದಿರುವ ಅಥವಾ ಪ್ರೇತಸ್ವರೂಪದ ಶಕ್ತಿಯಾಗಿತ್ತು. ಆಕೆ ತನ್ನ ಕೋರೆಹಲ್ಲಿರುವ ರುಂಡವನ್ನು ಪ್ರತ್ಯೇಕಿಸಿ ರಕ್ತಕ್ಕೋಸ್ಕರ ರಾತ್ರಿಹೊತ್ತು ಗರ್ಭಿಣಿಯರನ್ನು ಹುಡುಕಲು ಬಳಸಬಹುದಾದ ಸಾಮರ್ಥ್ಯ ಹೊಂದಿತ್ತು.<ref>ಬನ್ಸನ್, ''ರಕ್ತಪಿಶಾಚಿ ವಿಶ್ವಕೋಶ'' , p. 197.</ref> ಮಲೇಷಿಯನ್ನರು ತನ್ನ ಕರುಳಿಗೆ ಮುಳ್ಳುಗಳು ತಾಕೀತೆಂಬ ಭಯದಿಂದ ''ಪೆನಂಗ್ಗಾಲನ್'' ಮನೆಯೊಳಗೆ ಬರದಿರಬಹುದೆಂಬ ಉದ್ದೇಶದಿಂದ ತಮ್ಮ ಮನೆಯ ಬಾಗಿಲು ಹಾಗೂ ಕಿಟಕಿಗಳ ಸುತ್ತಮುತ್ತಲೂ ''ಜೆರುಜು'' (ಬ್ರಹ್ಮದಂಡಿ)ವನ್ನು ನೇತುಹಾಕುತ್ತಿದ್ದರು.<ref>ಹೋಯ್ಟ್, ''ಲಸ್ಟ್ ಫಾರ್ ಬ್ಲಡ್'' , p. 34.</ref> [[ಬಲಿನೀಸ್ ದಂತಕಥೆ]]ಯಲ್ಲಿನ [[ಲೇಯಕ್]] ಎಂಬುದು ಇದೇ ರೀತಿಯ ಶಕ್ತಿ.<ref>{{cite journal|title=Witchcraft, Grief, and the Ambivalence of Emotions |url=https://archive.org/details/sim_american-ethnologist_1999-08_26_3/page/711 |journal=American Ethnologist |volume=26 |issue=3 |month=August |year=1999 |pages=711–737 |doi=10.1525/ae.1999.26.3.711 |author=Stephen, Michele|unused_data=|last Stephen }}</ref> ಇಂಡೋನೇಷ್ಯಾದ ''ಕುಂಟಿಲಾನಕ್'' ಅಥವಾ ''ಮಟಿಯಾನಕ್'' <ref>ಬನ್ಸನ್, ''ರಕ್ತಪಿಶಾಚಿ ವಿಶ್ವಕೋಶ'' , p. 208.</ref> ಅಥವಾ ಮಲೇಷ್ಯಾದ ''[[ಪೊಂಟಿಯಾನಕ್]]'' ಅಥವಾ ''ಲ್ಯಾಂಗ್ಸುಯಿರ್'' ,<ref>ಬನ್ಸನ್, ''ರಕ್ತಪಿಶಾಚಿ ವಿಶ್ವಕೋಶ'' , p. 150.</ref> ಎಂಬುದೊಂದು ಹೆರಿಗೆಯಲ್ಲಿ ಸತ್ತ ಮಹಿಳೆಯ ಪ್ರೇತವಾಗಿದ್ದು, ಸೇಡು ತೀರಿಸುವ ಉದ್ದೇಶ ಹೊಂದಿದ್ದ ಹಾಗೂ ಹಳ್ಳಿಗಳನ್ನು ಬೆದರಿಸುವ ಶಕ್ತಿಯಾಗಿತ್ತು. ಆಕೆಯು ಉದ್ದ ಕಪ್ಪು ಕೂದಲಿನ ಸುಂದರ ಹೆಣ್ಣೊಬ್ಬಳ ರೂಪದಲ್ಲಿದ್ದು ಆಕೆಯ ಉದ್ದ ಕೂದಲು ಆಕೆಯು ಮಕ್ಕಳ ರಕ್ತ ಹೀರುತ್ತಿದ್ದ ತನ್ನ ಕತ್ತಿನ ಹಿಂಭಾಗದ ರಂಧ್ರವನ್ನು ಮರೆಮಾಡುತ್ತಿತ್ತು. ಆ ರಂಧ್ರವನ್ನು ಆಕೆಯ ಕೂದಲಿನಿಂದ ತುಂಬಿಸಿದರೆ ಆಕೆಯನ್ನು ನಾಶಪಡಿಸಬಹುದಿತ್ತು. ಶವಗಳ ಬಾಯಿಯಲ್ಲಿ ಗಾಜಿನ ತುಂಡುಗಳನ್ನಿಟ್ಟು ಪ್ರತಿ ಕಂಕುಳಿನಲ್ಲಿ ಮೊಟ್ಟೆಗಳನ್ನು ಹಾಗೂ ಅಂಗೈಯಲ್ಲಿ ಸೂಜಿಗಳನ್ನಿಟ್ಟು ಅವುಗಳನ್ನು ''ಲ್ಯಾಂಗ್ಸುಯಿರ್'' ಆಗದಂತೆ ಮಾಡಲಾಗುತ್ತಿತ್ತು.<ref>ಹೋಯ್ಟ್, ''ಲಸ್ಟ್ ಫಾರ್ ಬ್ಲಡ್'' , p. 35.</ref>
[[ಜಿಯಾಂಗ್ ಷಿ]] ({{zh|t=僵屍 or 殭屍|s=僵尸|p=jiāngshī}}; ಅಕ್ಷರಶಃ ಹೇಳಬೇಕೆಂದರೆ "ಮರಗಟ್ಟಿದ ಶವ"), "ಚೀನೀ ರಕ್ತಪಿಶಾಚಿ"ಗಳೆಂದು ಪಾಶ್ಚಿಮಾತ್ಯರಿಂದ ಕೆಲಬಾರಿ ಕರೆಸಿಕೊಳ್ಳುವ ಪ್ರೇತದಿಂದ ಆವಾಹಿತವಾದ ಶವಗಳಾಗಿದ್ದು ಅಲೆದಾಡಿಕೊಂಡಿರುತ್ತಿದ್ದ ಅವು ಜೀವಿಗಳನ್ನು ಆಕ್ರಮಿಸಿ ಅವುಗಳಿಂದ ರಕ್ತ([[ಕ್ವಿ]])ವನ್ನು ಹೀರುತ್ತಿದ್ದ ಶಕ್ತಿಗಳು. ಆತ್ಮವು (魄 ''ಪೊ'' ) ವ್ಯಕ್ತಿಯ ದೇಹದಿಂದ ಹೊರಬರಲಾಗದೇ ಇದ್ದ ಸಂದರ್ಭಗಳಲ್ಲಿ ಅವುಗಳು ಸೃಷ್ಟಿಯಾಗುತ್ತವೆಂದು ಹೇಳಲಾಗುತ್ತಿತ್ತು.<ref>{{cite book |last=Suckling |first=Nigel |title=Vampires |url=https://archive.org/details/vampires0000suck |year=2006 |publisher=Facts, Figures & Fun |location=London |isbn=190433248X |page=[https://archive.org/details/vampires0000suck/page/31 31]}}</ref> ಆದಾಗ್ಯೂ ಕೆಲವರು ರಕ್ತಪಿಶಾಚಿಗಳೊಂದಿಗೆ ''ಜಿಯಾಂಗ್ ಷಿ'' ಗಳ ಹೋಲಿಕೆ ಸರಿಯಲ್ಲವೆನ್ನುತ್ತಾ ''ಜಿಯಾಂಗ್ ಷಿ'' ಗಳು ಸ್ವಬುದ್ಧಿಯಿಲ್ಲದ ಜೀವಿಗಳೆನ್ನುತ್ತಾರೆ.<ref>{{cite book |last=劉 |first=天賜 |title=僵屍與吸血鬼 |year=2008 |publisher=Joint Publishing (H.K.) |location=Hong Kong |isbn=9789620427350 |page=196}}</ref> ಈ ಶಕ್ತಿಯ ವಿಶೇಷವೇನೆಂದರೆ ಅದರ ಹಸಿರುಮಿಶ್ರಿತ ಬಿಳಿ ಬಣ್ಣದ ತುಪ್ಪಳದ ಚರ್ಮ, ಪ್ರಾಯಶಃ ಶವದ ಮೇಲೆ ಬೆಳೆಯುವ [[ಅಣಬೆ]] ಅಥವಾ [[ಮೇಲ್ಮಣ್ಣಿನ]] ವರ್ಣದಿಂದ ಇದು ಕಲ್ಪಿತವಾಗಿರಬಹುದು.<ref>{{cite book |last=de Groot |first=J.J.M. |title=The Religious System of China |orig=1910 |location=Leyden |publisher=E.J. Brill |oclc=7022203}}</ref>
=== ಆಧುನಿಕ ನಂಬಿಕೆಗಳು ===
ಆಧುನಿಕ ಕಾಲ್ಪನಿಕ ಕಥೆಗಳಲ್ಲಿ ರಕ್ತಪಿಶಾಚಿಯನ್ನು ಸಭ್ಯ ವರ್ಚಸ್ಸುಳ್ಳ ದುರುಳ/ಖಳನಾಯಕನೆಂಬ ರೀತಿಯಲ್ಲಿ ಚಿತ್ರಿಸಲಾಗಿರುತ್ತದೆ.<ref name="Barb2" /> ರಕ್ತಪಿಶಾಚಿ ತರಹದ ಶಕ್ತಿಗಳ ಬಗೆಗಿನ ಸಾಮಾನ್ಯ ಅಪನಂಬಿಕೆಯಿದ್ದರೂ ರಕ್ತಪಿಶಾಚಿಗಳ ಅಪರೂಪದ ದರ್ಶನಗಳು ವರದಿಯಾಗಿವೆ. ವಾಸ್ತವಿಕವಾಗಿ, ರಕ್ತಪಿಶಾಚಿಯನ್ನು ಬೇಟೆಯಾಡುವ ಸಮುದಾಯಗಳು ಈಗಲೂ ಇದ್ದು ಸಾಮಾಜಿಕ ಕಾರಣಗಳಿಗೋಸ್ಕರ ಉದಾರವಾದ ಸಂಪ್ರದಾಯಗಳನ್ನು ಪಾಲಿಸುತ್ತಿವೆ.<ref name="Cohen" /> ರಕ್ತಪಿಶಾಚಿ ಆಕ್ರಮಣಗಳ ಆರೋಪಗಳನ್ನು [[ಆಫ್ರಿಕಾ]]ದ [[ಮಲಾವಿ]] ದೇಶದಲ್ಲಿ 2002ರ ಕೊನೆಯಲ್ಲಿ ಮತ್ತು 2003ರ ಮೊದಲಭಾಗದಲ್ಲಿ ಸಾರಾಸಗಟಾಗಿ ನಿರಾಕರಿಸಲಾಯಿತು, ಜನರ ಗುಂಪು ಒಬ್ಬ ವ್ಯಕ್ತಿಯನ್ನು ಕಲ್ಲು ಹೊಡೆದು ಸಾಯಿಸಿ ಹಾಗೂ ರಕ್ತಪಿಶಾಚಿಗಳೊಂದಿಗೆ ಸರ್ಕಾರವೂ ಶಾಮೀಲಾಗಿದೆಯೆಂಬ ಅಭಿಪ್ರಾಯದಿಂದ ಗವರ್ನರ್ [[ಎರಿಕ್ ಚಿವಾಯ]] ಸೇರಿದಂತೆ ಕನಿಷ್ಟ ಇತರ ನಾಲ್ವರ ಮೇಲೆ ಆಕ್ರಮಣ ಮಾಡಲಾಯಿತು.<ref>{{cite news |first=Raphael |last=Tenthani |title='Vampires' strike Malawi villages |publisher=[[BBC News]] |url=http://news.bbc.co.uk/2/hi/africa/2602461.stm |date=23 December 2002 |accessdate=2007-12-29}}</ref>
1970ರ ಮೊದಲ ಭಾಗದಲ್ಲಿ ಸ್ಥಳೀಯ ಪತ್ರಿಕೆಯೊಂದು [[ಲಂಡನ್]]ನ [[ಹೈಗೇಟ್ ಸಮಾಧಿಸ್ಥಳ]]ವನ್ನು ರಕ್ತಪಿಶಾಚಿಗ್ರಸ್ತವಾಗಿದೆ ಎಂಬ ಪುಕಾರನ್ನು ಹಬ್ಬಿಸಿತು. ಹವ್ಯಾಸಿ ರಕ್ತಪಿಶಾಚಿ ಬೇಟೆಗಾರರೆಲ್ಲ ಬಹುಸಂಖ್ಯೆಯಲ್ಲಿ ಸಮಾಧಿಸ್ಥಳದಲ್ಲಿ ಗುಂಪುಗೂಡಿದ್ದರು. ಈ ಸಂಗತಿಯ ಬಗ್ಗೆ ಅನೇಕ ಪುಸ್ತಕಗಳನ್ನು ಬರೆಯಲಾಗಿದ್ದು, ಅದರಲ್ಲಿ ಪ್ರಮುಖವೆಂದರೆ ಸೀನ್ ಮ್ಯಾಂಚೆಸ್ಟರ್ ಎಂಬ ಸ್ಥಳೀಯ "[[ಹೈಗೇಟ್ ರಕ್ತಪಿಶಾಚಿ]]"ಯ ಅಸ್ತಿತ್ವವನ್ನು ಮೊದಲು ತಿಳಿಸಿದ್ದ ಹಾಗೂ ನಂತರ [[ಭೂತೋಚ್ಚಾಟನೆ]] ಮಾಡಿ ಆ ಸ್ಥಳದಲ್ಲಿದ್ದ ರಕ್ತಪಿಶಾಚಿಗಳ ಪೂರ್ಣ ವ್ಯವಸ್ಥೆಯನ್ನೇ ನಾಶಪಡಿಸಿದೆ ಎಂದು ಹೇಳಿಕೊಂಡ ವ್ಯಕ್ತಿಯ ಕಥೆ.<ref>{{cite book |title=The Highgate Vampire: The Infernal World of the Undead Unearthed at [[ಲಂಡನ್]]'s Highgate Cemetery and Environs |last=Manchester |first=Sean |year=1991 |location= London |publisher=Gothic Press |isbn=1-872486-01-0}}</ref> ಜನವರಿ 2005ರಲ್ಲಿ, [[ಇಂಗ್ಲೆಂಡ್]]ನ [[ಬರ್ಮಿಂಗ್ಹ್ಯಾಂ]]ನಲ್ಲಿ ಆಕ್ರಮಣಕಾರಿ ಶಕ್ತಿಯೊಂದು ಅನೇಕ ವ್ಯಕ್ತಿಗಳನ್ನು ಕಚ್ಚಿದೆ ಎಂಬ ಪುಕಾರುಗಳ ಹಬ್ಬಿ, ರಕ್ತಪಿಶಾಚಿಯ ರಾಜಾರೋಷದ ಓಡಾಟದ ಬಗ್ಗೆ ಆತಂಕ ವ್ಯಕ್ತವಾಯಿತು. ಆದಾಗ್ಯೂ ಸ್ಥಳೀಯ ಆರಕ್ಷಕರು ಆ ಮಾದರಿಯ ಯಾವುದೇ ಅಪರಾಧವು ವರದಿಯಾಗಿಲ್ಲ ಹಾಗೂ ಇದೊಂದು [[ನಗರಪ್ರದೇಶದ ದಂತಕಥೆ]]ಯಿರಬೇಕೆಂಬ ಅಭಿಪ್ರಾಯ ನೀಡಿದರು.<ref name="guardian1">{{cite web |title=Reality Bites |publisher=[[The Guardian]] |url=https://www.theguardian.com/g2/story/0,3604,1392607,00.html |date=January 18, 2005 |accessdate=2007-12-29}}</ref>
ರಕ್ತಪಿಶಾಚಿ ಮಾದರಿಯ ಆಧುನಿಕ ಗಮನಾರ್ಹ ಸಂಗತಿಗಳಲ್ಲಿ [[ಪೋರ್ಟರಿಕೊ]] ಮತ್ತು [[ಮೆಕ್ಸಿಕೊ]]ನ ''[[ಚುಪಾಕಬ್ರಾ]]'' (ಮೇಕೆ-ರಕ್ತಹೀರುವ ಶಕ್ತಿ) ಎಂಬ [[ಸಾಕುಪ್ರಾಣಿಗಳ]] ರಕ್ತ ಕುಡಿದು ಅಥವಾ ಮಾಂಸ ತಿಂದು ಬದುಕುವ ಪ್ರಾಣಿಯೊಂದು ಕಂಡುಬಂದು ಅದನ್ನು ಕೆಲವರು ಇದೂ ಒಂದು ರಕ್ತಪಿಶಾಚಿಯಿರಬಹುದೆಂದರು. "ಚುಪಾಕಬ್ರಾ ಉನ್ಮಾದ"ವನ್ನು 1990ರ ದಶಕದ ಮಧ್ಯದಲ್ಲಿನ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯ ಪರಿಣಾಮವೆನ್ನುತ್ತಾರೆ.<ref name="trail">{{cite web| author=Stephen Wagner| url=http://paranormal.about.com/library/weekly/aa051898.htm| title=On the trail of the Chupacabras| accessdate=2007-10-05| archive-date=2005-09-19| archive-url=https://web.archive.org/web/20050919215215/http://paranormal.about.com/library/weekly/aa051898.htm| url-status=dead}}</ref>
ರಕ್ತಪಿಶಾಚಿ ಜಾನಪದದ ಹೆಚ್ಚಿನಂಶ ಮೂಲವಾದ ಯುರೋಪ್ನಲ್ಲಿ, ರಕ್ತಪಿಶಾಚಿಯನ್ನು ಕಾಲ್ಪನಿಕ ಶಕ್ತಿಯೆಂದು ಭಾವಿಸಿದ್ದರೂ ಅನೇಕ ಸಮುದಾಯಗಳು ಪ್ರೇತದ ಕಲ್ಪನೆಯನ್ನು ಮಿತವ್ಯಯದ ದೃಷ್ಟಿಯಿಂದ ಅಂಗೀಕರಿಸಿವೆ. ಅನೇಕ ಸಂದರ್ಭಗಳಲ್ಲಿ, ವಿಶಿಷ್ಟವಾಗಿ ಸಣ್ಣ ಪ್ರದೇಶಗಳಲ್ಲಿ ರಕ್ತಪಿಶಾಚಿ ಮೂಢನಂಬಿಕೆಯು ಈಗಲೂ ಮಿತಿಮೀರಿದ್ದು ರಕ್ತಪಿಶಾಚಿ ಆಕ್ರಮಣದ ಸಂಗತಿಗಳು ಹಾಗೂ ಆಪಾದನೆಗಳು ಆಗ್ಗಾಗ್ಗೆ ಆಗುತ್ತಲೇ ಇರುತ್ತವೆ. [[ರೊಮೇನಿಯಾ]]ದಲ್ಲಿ 2004ರ ಫೆಬ್ರವರಿಯಲ್ಲಿ ಟೊಮಾ ಪಿಟ್ರೆ ಎಂಬಾತನ ಅನೇಕ ಸಂಬಂಧಿಕರು ಆತನು ರಕ್ತಪಿಶಾಚಿಯಾಗಿದ್ದಾನೆಂದು ಹೆದರಿದ್ದರು. ಅವರು ಆತನ ಶವವನ್ನು ಹೊರತೆಗೆದು ಹೃದಯವನ್ನು ಬೇರ್ಪಡಿಸಿ ಸುಟ್ಟು ಹಾಕಿ ಅದರ ಬೂದಿಯನ್ನು ಕುಡಿಯುವ ನೀರಿನಲ್ಲಿ ಮಿಶ್ರಣ ಮಾಡಿದರು.<ref>{{cite news|author=Taylor T|date=2007-10-28|title=The real vampire slayers|work=The Independent|url=http://news.independent.co.uk/europe/article3096920.ece|accessdate=2007-12-14|archive-date=2007-12-19|archive-url=https://web.archive.org/web/20071219095645/http://news.independent.co.uk/europe/article3096920.ece|url-status=dead}}</ref>
ರಕ್ತಪಿಶಾಚಿಗಳನ್ನು ಕುರಿತ ನಂಬಿಕೆಯು ಆಧುನಿಕ ದಿನಮಾನದ [[ಇಂದ್ರಜಾಲ ಕಾರ್ಯಾಚರಣೆ]]ಗಳ ಸುಸಂಬದ್ಧತೆಯನ್ನು ಸೂಚಿಸುತ್ತದೆ. ರಕ್ತಪಿಶಾಚಿಯ ಬಗೆಗಿನ ಕಾಲ್ಪನಿಕತೆ, ಅದರ [[ಐಂದ್ರಜಾಲಿಕ]] ಲಕ್ಷಣಗಳು, ಮೋಹಗೊಳಿಸುವಿಕೆ ಮತ್ತು ಕೊಳ್ಳೆಹೊಡೆಯುವ ಮೂಲರೂಪವು ಆಚರಣೆ, ಶಕ್ತಿಯುತ ಕಾರ್ಯಾಚರಣೆ ಮತ್ತು ಮಾಟಮಂತ್ರ ವ್ಯವಸ್ಥೆಯನ್ನು ಒಂದು ದೈವಿಕ ವ್ಯವಸ್ಥೆಯನ್ನಾಗಿ ಸಹಾ ಅಳವಡಿಸಿಕೊಳ್ಳಬಹುದಾಗಿದೆ.<ref>ಹ್ಯೂಮ್, L., & ಕಥ್ಲೀನ್ ಮೆಕ್ಫಿಲಿಪ್ಸ್, K. (Eds.). (2006) ) ಪಾಪ್ಯುಲಾರ್ ಸ್ಪಿರಿಚಿಯುಅಲಿಟೀಸ್ : ದ ಪಾಲಿಟಿಕ್ಸ್ ಆಫ್ ಕಾಂಟೆಂಪೋರರಿ ಎಂಚಾಂಟ್ಮೆಂಟ್ ಬರ್ಲಿಂಗ್ಟನ್ , ಆಷ್ಗೇಟ್ ಪ್ರಕಾಶನ</ref> ಯೂರೋಪಿನ ಮಾಂತ್ರಿಕರ ಸಮಾಜದ ಭಾಗವಾಗಿ ರಕ್ತಪಿಶಾಚಿಯು ಶತಮಾನಗಳಿಂದ ಇದ್ದು, ನಂತರ ಅಮೇರಿಕದ ಉಪಸಂಸ್ಕೃತಿಗೆ ದಶಕಕ್ಕೂ ಹೆಚ್ಚಿನ ಕಾಲದಿಂದ ಹರಡಿದ್ದು [[ನವ್ಯ ಗೋತಿಕ್]] ಶೈಲಿಯ ಸೌಂದರ್ಯಶಾಸ್ತ್ರದಿಂದ ಪ್ರಭಾವಿತವಾಗಿ ಹಾಗೂ ಅದರೊಂದಿಗೆ ಒಡಗೂಡಿಕೊಂಡಿದೆ.<ref>ಯಂಗ್, T. H. (1999). ಡಾನ್ಸಿಂಗ್ ಆನ್ ಬೆಲಾ ಲುಗೊಸಿಸ್ ಗ್ರೇವ್ : ದ ಪಾಲಿಟಿಕ್ಸ್ ಅಂಡ್ ಆಸ್ತಿಟಿಕ್ಸ್ ಆಫ್ ಗೋತಿಕ್ ಕ್ಲಬ್ ಡಾನ್ಸಿಂಗ್. ''ಡಾನ್ಸ್ ರಿಸರ್ಚ್'' , 17(1), 75-97.</ref>
== ರಕ್ತಪಿಶಾಚಿ ನಂಬಿಕೆಗಳ ಮೂಲಗಳು ==
[[ಚಿತ್ರ:Moraine le vampire.jpg|220px|thumb|right|ಫೆವಲ್ನಲ್ಲಿ (1851–1852) R. ಡಿ ಮೊರೈನೆರ ಲೆ ವ್ಯಾಂಪೈರ್, ಲಿಥೋಗ್ರಾಫ್.]]
ರಕ್ತಪಿಶಾಚಿ ನಂಬಿಕೆಗಳ ಮೂಲದ ಬಗ್ಗೆ ಅನೇಕ ಸಿದ್ಧಾಂತಗಳಿದ್ದು ಮೂಢನಂಬಿಕೆಗಳಿಗೆ ಹಾಗೂ ರಕ್ತಪಿಶಾಚಿಗಳಿಂದಾಗುವ ಕೆಲವೊಮ್ಮೆ ಆಗುವ [[ಸಾಮೂಹಿಕ ಉನ್ಮಾದ]]ಕ್ಕೆ ವಿವರಣೆ ಕೊಡಲು ಶಕ್ತವಾಗಿವೆ. [[ಅಕಾಲಿಕ ಹೂಳುವಿಕೆ]]ಯಿಂದ ಹಿಡಿದು [[ಸಾವಿನ]] ನಂತರ ದೇಹದ [[ಕೊಳೆಯುವಿಕೆ]]ಯ ಚಕ್ರದ ಬಗೆಗಿನ ಮೌಢ್ಯವು ರಕ್ತಪಿಶಾಚಿಗಳ ಮೇಲಿನ ನಂಬಿಕೆಗೆ ಕಾರಣವೆನ್ನುತ್ತಾರೆ.
=== ಸ್ಲಾವಿಕ್ ಆಧ್ಯಾತ್ಮಿಕತೆ ===
ಅನೇಕ ಸಂಸ್ಕೃತಿಗಳು ಪೂರ್ವ ಯೂರೋಪ್ನ ರಕ್ತಪಿಶಾಚಿಗಳೊಂದಿಗೆ ಹೋಲಿಸಬಲ್ಲ [[ಪ್ರೇತ]]ಗಳ ಬಗೆಗಿನ [[ಮೂಢನಂಬಿಕೆ]]ಗಳನ್ನು ಹೊಂದಿದ್ದರೂ, [[ಸ್ಲಾವಿಕ್]] ರಕ್ತಪಿಶಾಚಿಯ ಮೂಢನಂಬಿಕೆಯು ಜನಪ್ರಿಯ ಸಂಸ್ಕೃತಿಗಳಲ್ಲಿ ರಕ್ತಪಿಶಾಚಿಯ ಕಲ್ಪನೆಯನ್ನು ವ್ಯಾಪಿಸುವಂತೆ ಮಾಡಿತ್ತು. ಸ್ಲಾವಿಕ್ ಸಂಸ್ಕೃತಿಯ ರಕ್ತಪಿಶಾಚಿ ನಂಬಿಕೆಗಳ ಮೂಲ, ಕ್ರೈಸ್ತಮತಾವಲಂಬನೆಗಿಂತ ಹಿಂದಿನ ಸ್ಲಾವಿಕ್ ಜನರ ಆಧ್ಯಾತ್ಮಿಕ ನಂಬಿಕೆಗಳು, ಆಚರಣೆಗಳು ಮತ್ತು ಸಾವಿನ ನಂತರದ ಬದುಕಿನ ಬಗ್ಗೆ ಅವರಿಗಿದ್ದ ಅಭಿಪ್ರಾಯವಾಗಿತ್ತು. [[ಕ್ರೈಸ್ತಮತಾವಲಂಬನೆಗಿಂತ ಹಿಂದಿನ "ಹಳೆಯ ಧರ್ಮ"ದ ಬಗೆಗಿನ ಸ್ಲಾವಿಕ್ ದಾಖಲೆಗಳು]] ಲಭ್ಯವಿಲ್ಲದಿದ್ದರೂ, ಆಗಿನ [[ನಾಸ್ತಿಕ]]ರ ಧಾರ್ಮಿಕ ನಂಬಿಕೆಗಳು ಹಾಗೂ ಆಚರಣೆಗಳನ್ನು ತಮ್ಮ ಪ್ರದೇಶವು ಕ್ರೈಸ್ತಧರ್ಮಕ್ಕೆ ಮತಾಂತರಗೊಂಡ ನಂತರವೂ ಸ್ಲಾವಿಕ್ ಜನರು ಉಳಿಸಿಕೊಂಡು ಬಂದಿದ್ದಾರೆ. ಆ ತರಹದ ನಂಬಿಕೆಗಳು ಹಾಗೂ ಆಚರಣೆಗಳೆಂದರೆ [[ಪೂರ್ವಿಕರ ಆರಾಧನೆ]], [[ಕೌಟುಂಬಿಕ ಶಕ್ತಿಗಳು]], ಮತ್ತು ಮರಣಾನಂತರದ [[ಆತ್ಮ]]ದ ಬಗೆಗಿನ ನಂಬಿಕೆ. ಸ್ಲಾವಿಕ್ ಪ್ರದೇಶಗಳಲ್ಲಿನ ರಕ್ತಪಿಶಾಚಿ ನಂಬಿಕೆಗಳ ಮೂಲ ಸ್ಲಾವಿಕ್ ಆತ್ಮವಾದದ ಸಂಕೀರ್ಣತೆಯಿರಬಹುದಾಗಿದೆ.
ದೆವ್ವಗಳು ಮತ್ತು ಆತ್ಮಗಳು [[ಕೈಗಾರಿಕಾಪೂರ್ವ]] ಸ್ಲಾವಿಕ್ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸಿದ್ದವಲ್ಲದೇ, ಮಾನವರ ಜೀವನದ ಮೇಲೆ ಪರಸ್ಪರ ಪ್ರಭಾವ ಹೊಂದಿರುತ್ತಿತ್ತು. ಕೆಲ ಶಕ್ತಿಗಳು ಪರೋಪಕಾರಿಯಾಗಿದ್ದು, ಮಾನವ ಕಾರ್ಯಗಳಿಗೆ ಸಹಕಾರಿಯಾಗಿದ್ದರೆ, ಉಳಿದವು ಅಪಾಯಕಾರಿ ಹಾಗೂ ವಿನಾಶಕಾರಿಯಾಗಿದ್ದವು. ಆ ತರಹದ ಶಕ್ತಿಗಳೆಂದರೆ [[ಡೊಮೊವೊಯ್]],[[ರುಸಾಲ್ಕಾ]], [[ವಿಲಾ]], [[ಕಿಕಿಮೊರಾ]], [[ಪೊಲುಡ್ನಿತ್ಸಾ]] ಮತ್ತು [[ವೊಡ್ಯಾನಾಯ್]]. ಈ ಶಕ್ತಿಗಳು ಪೂರ್ವಿಕರಿಂದ ಜನ್ಯವಾದವು ಇಲ್ಲವೇ ವಿಶೇಷ ಮರಣ ಹೊಂದಿದ ವ್ಯಕ್ತಿಗಳದ್ದು ಎಂಬ ನಂಬಿಕೆಯೂ ಇತ್ತು. ಈ ತರಹದ ಶಕ್ತಿಗಳು ತಮಗೆ ಬೇಕೆಂದ ರೂಪದಲ್ಲಿ ಮನುಷ್ಯರ ಇಲ್ಲವೇ ಪ್ರಾಣಿಗಳ ರೂಪದಲ್ಲಿಯೂ ಸಹಾ ಕಾಣಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದವು. ಇವುಗಳಲ್ಲಿ ಕೆಲ ಶಕ್ತಿಗಳು ಮನುಷ್ಯರಿಗೆ ಉಪದ್ರವ ಕೊಡುವ ಎಂದರೆ ಮನುಷ್ಯರನ್ನು ಮುಳುಗಿಸುವ, ಕೃಷಿಚಟುವಟಿಕೆಗೆ ತೊಂದರೆ ಮಾಡುವ ಅಥವಾ ಜಾನುವಾರುಗಳ ಅಥವಾ ಮನುಷ್ಯರ ರಕ್ತ ಹೀರುವ ದುಷ್ಟ ಕೆಲಸಗಳನ್ನು ಮಾಡುತ್ತಿದ್ದವು. ಆದ್ದರಿಂದ [[ಸ್ಲಾವಿಕ್]] ಜನರು ಸಂಭಾವ್ಯ ದುಷ್ಟಕಾರ್ಯಗಳಲ್ಲಿ ತೊಡಗದಂತೆ ತಡೆಯಲು ಈ ಶಕ್ತಿಗಳನ್ನು ಸುಪ್ರೀತಗೊಳಿಸಲು ತಯಾರಾಗಿರುತ್ತಿದ್ದರು.<ref name="Perk23">ಪರ್ಕೋವ್ಸ್ಕಿ, "ವ್ಯಾಂಪೈರ್ಸ್ ಆಫ್ ದ ಸ್ಲಾವ್ಸ್," p. 23.</ref>
ಸಾಮಾನ್ಯ ಸ್ಲಾವಿಕ್ ನಂಬಿಕೆಯೆಂದರೆ ದೇಹ ಮತ್ತು ಆತ್ಮಗಳ ನಡುವಿನ ಪ್ರತ್ಯೇಕತೆಯಾಗಿದೆ. ಆಗ ಆತ್ಮವು ನಶ್ವರವಲ್ಲವೆಂಬ ನಂಬಿಕೆ ಇತ್ತು. ಸ್ಲಾವಿಕರ ನಂಬಿಕೆಯ ಪ್ರಕಾರ ಸಾವಿನ ನಂತರ ಆತ್ಮವು ದೇಹದಿಂದ ಹೊರಬಿದ್ದು ತನ್ನ ನೆರೆಹೊರೆ ಹಾಗೂ ಕಾರ್ಯಸ್ಥಳಗಳಲ್ಲಿ ಸುಮಾರು 40 ದಿನಗಳ ಕಾಲ ಅಲೆದಾಡಿ ನಂತರ ಶಾಶ್ವತ ಬದುಕಿಗೆ ಮರಳುತ್ತದೆ.<ref name="Perk23" /> ಇದರಿಂದಾಗಿ ಆತ್ಮವು ಬೇಕೆಂದಾಗ ಬಂದುಹೋಗಲು ಅನುಕೂಲವಾಗುವಂತೆ ಕಿಟಕಿ ಅಥವಾ ಬಾಗಿಲೊಂದನ್ನು ತೆರೆದೇ ಇಟ್ಟಿರುವುದು ಅಗತ್ಯ ಎಂಬ ನಂಬಿಕೆ ಇತ್ತು. ಈ ಸಮಯದಲ್ಲಿ ಆತ್ಮವು ಸತ್ತ ವ್ಯಕ್ತಿಯ ಶವದೊಳಗೆ ಮರುಪ್ರವೇಶ ಮಾಡುವ ಸಾಮರ್ಥ್ಯ ಪಡೆದಿರುತ್ತದೆ ಎಂಬ ನಂಬಿಕೆಯೂ ಇದೆ. ಈ ಹಿಂದೆ ಚರ್ಚಿಸಿದ ಶಕ್ತಿಗಳ ಹಾಗೆಯೇ ಹೀಗೆ 40 ದಿನಗಳ ಕಾಲ ಓಡಾಡುವ ಆತ್ಮವು ತನ್ನ ಕುಟುಂಬದವರಿಗೆ ಹಾಗೂ ನೆರೆಹೊರೆಯವರಿಗೆ ಒಳ್ಳೆಯದು ಅಥವಾ ಕೆಟ್ಟದು ಮಾಡುವ ಸಾಧ್ಯತೆ ಇರುತ್ತದೆ. ಓರ್ವ ವ್ಯಕ್ತಿಯ ಸಾವಿನ ನಂತರ [[ಶವಸಂಸ್ಕಾರ]]ಗಳನ್ನು ಸರಿಯಾಗಿ ಮಾಡಿದರೆ ಆತ್ಮವು ದೇಹದಿಂದ ಬಿಡುಗಡೆ ಹೊಂದುವಾಗ ಪರಿಶುದ್ಧವಾಗಿ ಶಾಂತಿಯಿಂದಿರುತ್ತದೆ ಎಂಬ ನಂಬಿಕೆಯಿಂದಾಗಿ ಕಾರ್ಯಗಳಿಗೆ ಬಹಳ ಮಹತ್ವ ನೀಡಲಾಗುತ್ತಿತ್ತು. ಜ್ಞಾನಸ್ನಾನ ಮಾಡಿಸದ ಮಗುವಿನ ಮರಣ, ಅಥವಾ ಕ್ರೂರ ಅಥವಾ ಅಕಾಲ ಮರಣ ಅಥವಾ ಪರಮ ಪಾತಕಿಯ ಮರಣ(ಮಾಂತ್ರಿಕ ಇಲ್ಲವೇ ಕೊಲೆಗಡುಕರ ತರಹದ ವ್ಯಕ್ತಿಗಳು) ಮುಂತಾದುವು ಸಾವಿನ ನಂತರ ಆತ್ಮವೊಂದು ಅಶುಚಿಯಾಗಿರಲು ಕಾರಣವಾಗಬಹುದು. ಉಚಿತ ರೀತಿಯಲ್ಲಿ ಶವಸಂಸ್ಕಾರ ನಡೆಸದೇ ಇರುವುದೂ ಆತ್ಮವು ಅಶುಚಿಯಾಗಿರಲು ಕಾರಣವಾಗಬಹುದು. ಬದಲಾಗಿ ಸರಿಯಾಗಿ ಶವಸಂಸ್ಕಾರ ನಡೆಸದ ದೇಹವು ಇನ್ನಿತರ ಅಶುದ್ಧ ಆತ್ಮಗಳ ಇಲ್ಲವೇ ಪ್ರೇತಗಳ ವಶವರ್ತಿಯಾಗಬಹುದು. ಅಶುಚಿಯಾದ ಆತ್ಮವು ಪ್ರತೀಕಾರ ಕೈಗೊಳ್ಳುವ ಸಾಧ್ಯತೆಯು ಸ್ಲಾವಿಕರ ಭಯಕ್ಕೆ ಕಾರಣವಾಗಿತ್ತು.<ref name="Perk21-25">ಪರ್ಕೋವ್ಸ್ಕಿ, "ವ್ಯಾಂಪೈರ್ಸ್ ಆಫ್ ದ ಸ್ಲಾವ್ಸ್," pp. 21-25.</ref>
ಈ ತರಹ ಸಾವು ಹಾಗೂ ಆತ್ಮಗಳೊಂದಿಗೆ ತಳಕು ಹಾಕಿಕೊಂಡ ನಂಬಿಕೆಗಳು ಸ್ಲಾವಿಕರ ''ವ್ಯಾಂಪಿರ್'' ಕುರಿತ ಕಲ್ಪನೆಗೆ ಮೂಲವಾಗಿದೆ. ರಕ್ತಪಿಶಾಚಿಯೆಂದರೆ ಕೊಳೆಯುತ್ತಿರುವ ದೇಹಕ್ಕೆ ಸೇರಿಕೊಂಡಿರುವ [[ಅಶುಚಿಯಾದ ಆತ್ಮ]]ದ ಪ್ರಕಟರೂಪ. ಈ ಪ್ರೇತವು ಪ್ರತೀಕಾರ ಮನೋಭಾವದ್ದಾಗಿದ್ದು ಬದುಕಿರುವವರ ಬಗ್ಗೆ ಅಸೂಯೆಯಿಂದಿದ್ದು, ದೇಹದ ಉಳಿಯುವಿಕೆಗೆ ಜೀವಂತ ವ್ಯಕ್ತಿಯ ರಕ್ತದ ಬೇಟೆಯಾಡತೊಡಗುತ್ತದೆ ಎಂಬ ಅಭಿಪ್ರಾಯವಿತ್ತು.<ref name="Barb197">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 197.</ref> ಈ ರಕ್ತಪಿಶಾಚಿಯ ಕಲ್ಪನೆಯು ಅಲ್ಪಪ್ರಮಾಣದ ವ್ಯತ್ಯಾಸದೊಂದಿಗೆ [[ಸ್ಲಾವಿಕ್ ದೇಶಗಳಲ್ಲಿ]] ಹಾಗೂ ಅವುಗಳ ಸ್ಲಾವಿಕೇತರ ನೆರೆಹೊರೆ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದ್ದರೂ, ಇವುಗಳ ಮೂಲವನ್ನು ಸ್ಲಾವಿಕ್ ಪ್ರದೇಶಗಳಲ್ಲಿ ಮತಾಂತರದ ಮುನ್ನ ಇದ್ದ ಸ್ಲಾವಿಕ್ ಆತ್ಮವಾದ ವ್ಯವಸ್ಥೆಯಲ್ಲಿ ಕಾಣಬಹುದಾಗಿದೆ.
=== ರೋಗಶಾಸ್ತ್ರ ===
==== ಕೊಳೆಯುವಿಕೆ ====
ಪಾಲ್ ಬಾರ್ಬರ್ ''ರಕ್ತಪಿಶಾಚಿಗಳು, ಸಮಾಧಿಕ್ರಿಯೆ ಮತ್ತು ಮರಣ'' ಎಂಬ ತನ್ನ ಪುಸ್ತಕದಲ್ಲಿ ರಕ್ತಪಿಶಾಚಿಗಳ ಮೇಲಿನ ನಂಬಿಕೆಯು [[ಕೈಗಾರಿಕಾಪೂರ್ವ ಸಮಾಜ]]ದ ಜನರು ನಿಸರ್ಗದಲ್ಲಿನ ಸಾವಿನ ಹಾಗೂ ದೇಹ ಕೊಳೆಯುವಿಕೆಯ ಪ್ರಕ್ರಿಯೆಯನ್ನು ವಿವರಿಸುವ ಪ್ರಯತ್ನದಲ್ಲಿ ವಿಫಲರಾಗಿ ಕಂಡುಕೊಂಡ ಮಾರ್ಗವಿದು ಎಂದು ವಿವರಿಸಿದ್ದಾರೆ<ref name="Barb1to4">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , pp. 1-4.</ref>
ಜನರು ಶವವೊಂದನ್ನು ಅಗೆದು ತೆಗೆದಾಗ ಸಾಮಾನ್ಯ ಶವವು ಹೇಗೆ ಕಾಣಬಹುದಿರುತ್ತದೋ ಹಾಗೆ ಇರದಿದ್ದರೆ ರಕ್ತಪಿಶಾಚಿಗಳ ಕಾಟದ ಬಗ್ಗೆ ಅನುಮಾನಿಸುತ್ತಿದ್ದರು. ಕೊಳೆಯುವಿಕೆಯ ವೇಗವು ಉಷ್ಣಾಂಶ ಹಾಗೂ ಮಣ್ಣಿನ ಗುಣಲಕ್ಷಣಗಳ ಮೇಲೆ ವ್ಯತ್ಯಾಸವಾಗುತ್ತಿದ್ದಾಗ್ಯೂ, ಅದರ ಲಕ್ಷಣಗಳ ಬಗ್ಗೆ ವಿವರಗಳು ಲಭ್ಯವಿರಲಿಲ್ಲ. ಇದರಿಂದಾಗಿ ರಕ್ತಪಿಶಾಚಿ ಹಂತಕರಿಗೆ ಶವವು ಕೊಳೆತೇ ಇಲ್ಲ ಅಥವಾ ಕೊಳೆಯುವ ಸಂಜ್ಞೆಗಳನ್ನೇ ವಿರೋಧಾಭಾಸವಾಗಿ ದೇಹವು ಪುನರುಜ್ಜೀವಗೊಂಡಿದೆ ಎಂದು ಅಪಾರ್ಥ ಮಾಡಿಕೊಳ್ಳುವ ಅವಕಾಶ ಮಾಡಿಕೊಡುತ್ತಾ ಇತ್ತು.<ref>{{cite web |last=Barber |first=Paul |title=Staking claims: the vampires of folklore and fiction |work=Skeptical Inquirer |date=1996-03-01 |url=http://findarticles.com/p/articles/mi_m2843/is_n2_v20/ai_18158446/pg_1 |accessdate=2006-04-30 |archiveurl=https://web.archive.org/web/20071217235556/http://findarticles.com/p/articles/mi_m2843/is_n2_v20/ai_18158446/pg_1 |archivedate=2007-12-17 |url-status=dead }}</ref> ಮುಂಡದಲ್ಲಿ ಕೊಳೆತದಿಂದುಂಟಾಗುವ ಅನಿಲಗಳ ಸಂಗ್ರಹದಿಂದ ಶವವು ಊದಿಕೊಂಡು, ಒತ್ತಡ ಹೆಚ್ಚುವುದರಿಂದ ಮೂಗು ಹಾಗೂ ಬಾಯಿಯಿಂದ ರಕ್ತ ಸೋರುತ್ತಿರುತ್ತಿತ್ತು. ಇದು ದೇಹಕ್ಕೆ "ತುಂಬಿಕೊಂಡಿರುವ" "ಉತ್ತಮ ಪೋಷಿತವಾಗಿರುವ" ಮತ್ತು "ಕೆಂಪುವರ್ಣ"ದಿಂದ ಕಂಗೊಳಿಸುವಂತೆ ಮಾಡಿ, ವ್ಯಕ್ತಿಯು ಬದುಕಿದ್ದಾಗ ತೆಳ್ಳಗಿದ್ದರೆ ಇನ್ನಷ್ಟು ಎದ್ದು ಕಾಣುವ ಬದಲಾವಣೆಗಳ ಹಾಗೆ ತೋರುತ್ತಿತ್ತು. [[ಅರ್ನಾಲ್ಡ್ ಪೌಲೆ ಸನ್ನಿವೇಶ]]ದಲ್ಲಿ ವೃದ್ಧೆಯ ಹೊರತೆಗೆದ ಶವ ನೋಡಿದಾಗ ಆಕೆಯ ನೆರೆಹೊರೆಯವರಿಂದ ಆಕೆ ಜೀವಂತವಾಗಿದ್ದಾಗ ಇದ್ದುದಕ್ಕಿಂತ ಹೆಚ್ಚು ದಷ್ಟಪುಷ್ಟವಾಗಿ ಹಾಗೂ ಆರೋಗ್ಯಕರವಾಗಿ ಇದೆ ಎಂಬ ಅಭಿಪ್ರಾಯ ಬಂದಿತ್ತು.<ref name="Barb117">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 117.</ref> ಹೊರಸೂಸಿದ ರಕ್ತವು ಶವವು ರಕ್ತಪಿಶಾಚಿ ತರಹದ ಚಟುವಟಿಕೆಯಲ್ಲಿ ಇತ್ತೀಚೆಗೆ ತೊಡಗಿತ್ತು ಎಂಬ ಅಭಿಪ್ರಾಯ ಮೂಡಿಸುವ ಹಾಗಿರುತ್ತಿತ್ತು.<ref name="Barb1145" /> ಕೊಳೆಯುವಿಕೆಯಿಂದ ಚರ್ಮದ ಬಣ್ಣವು ಗಾಢವಾಗುತ್ತದೆ.<ref name="Barb105">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 105.</ref> ಊದಿಕೊಂಡ ಕೊಳೆತ ದೇಹವನ್ನು ನೇತುಹಾಕಿದಾಗ ರಕ್ತವು ಹೊರಗೆ ಜಿನುಗಿ ಸಂಗ್ರಹಗೊಂಡ ಅನಿಲಗಳು ದೇಹದ ಹೊರಗೆ ಹೋಗುವಂತೆ ಒತ್ತಡ ನೀಡುತ್ತದೆ. ಇದರಿಂದಾಗಿ ಅನಿಲಗಳು ಧ್ವನಿಪೆಟ್ಟಿಗೆಯಿಂದ ಹೊರಗೆ ಹೋದಾಗ ಇಲ್ಲವೇ ಗುದದ್ವಾರದಿಂದ ಹೊರಗೆ ಹೋದಾಗ [[ಪೊಳ್ಳಾದ ವಸ್ತು]]ವಿಂದ ಆಗುವ ಧ್ವನಿಗೆ ಸಮಾನವಾದ ಧ್ವನಿಯು ಕೇಳಿಬಂದು ಅದು ಒಂದು ತರಹದ ನರಳಿಕೆಯಂತಿರುತ್ತದೆ. [[ಪೀಟರ್ ಪ್ಲೋಗೋಜೊವಿಟ್ಜ್]] ಸಂಗತಿಯ ಅಧಿಕೃತ ವರದಿಯು "ಗೌರವದಿಂದ ಹೇಳುವುದಾದರೆ ಇತರ ರೌದ್ರ ಲಕ್ಷಣಗಳ" ಬಗೆಗೆ ಹೇಳುತ್ತದೆ.<ref name="Barb119">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 119.</ref>
ಸಾವಿನ ನಂತರ ಚರ್ಮ ಹಾಗೂ ಒಸಡುಗಳು ದ್ರವವನ್ನು ಕಳೆದುಕೊಂಡು ಕಿರಿದಾಗಿ ಕೂದಲು, ಉಗುರುಗಳು ಮತ್ತು ಹಲ್ಲುಗಳು, ಅದರಲ್ಲೂ ದವಡೆಯಲ್ಲಿ ಹುದುಗಿದ್ದ ಹಲ್ಲನ್ನು ಸಹಾ ಎದ್ದು ಕಾಣುವ ಹಾಗೆ ಮಾಡುತ್ತದೆ. ಇದರಿಂದಾಗಿ ಕೂದಲು, ಉಗುರುಗಳು ಮತ್ತು ಹಲ್ಲು ಬೆಳೆದ ಹಾಗೆ ಭ್ರಮೆ ಉಂಟುಮಾಡುತ್ತದೆ. ಒಂದು ಹಂತದಲ್ಲಿ ಉಗುರುಗಳು ಹೊರಬಿದ್ದು ಚರ್ಮವು ಸುಲಿದುಕೊಂಡು ಬರುತ್ತದೆ, ಪ್ಲೋಗೋವಿಟ್ಜ್ ಸನ್ನಿವೇಶದಲ್ಲಿ ವರದಿಯಾದ ಹಾಗೆ [[ಒಳಚರ್ಮ]] ಹಾಗೂ [[ಉಗುರಿನ ತಳ]]ದ ಹೊರಸೂಸುವಿಕೆಯನ್ನು "ಹೊಸ ಚರ್ಮ" ಹಾಗೂ "ಹೊಸ ಉಗುರುಗಳಾಗಿ" ಅರ್ಥೈಸಿದ್ದರು.<ref name="Barb119" />
==== ಸಜೀವ ಹೂಳುವಿಕೆ ====
ರಕ್ತಪಿಶಾಚಿ ದಂತಕಥೆಗಳು ಆ-ಕಾಲದ ಪ್ರಸಕ್ತ ವೈದ್ಯಕೀಯ ಜ್ಞಾನದ ಕೊರತೆಯಿಂದಾಗಿ [[ಬದುಕಿದ್ದವರನ್ನೇ ಹೂಳುತ್ತಿದ್ದ]] ವಿಚಾರದಿಂದಲೂ ಪ್ರಭಾವಿತವಾಗಿರಬಹುದು ಎಂಬ ವಾದಸರಣಿಯೂ ಇದೆ. ಕೆಲ ಸಂದರ್ಭಗಳಲ್ಲಿ ನಿರ್ದಿಷ್ಟ ಶವಪೆಟ್ಟಿಗೆಗಳಿಂದ ಧ್ವನಿಗಳು ಕೇಳಿಬರುತ್ತಿದ್ದು, ನಂತರ ಅಗೆದು ಹೊರತೆಗೆದಾಗ ಬಲಿಯಾದ ವ್ಯಕ್ತಿಯು ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನದ ಕುರುಹಾಗಿ ಶವಪೆಟ್ಟಿಗೆಯ ಒಳಗೆ ಉಗುರಿನ ಗುರುತುಗಳು ಕಾಣಬರುತ್ತಿದ್ದವು. ಇನ್ನಿತರ ಸಂದರ್ಭಗಳಲ್ಲಿ ವ್ಯಕ್ತಿಯು ತಮ್ಮ ತಲೆ ಮೂಗು ಅಥವಾ ಮುಖದಿಂದ ತೆರೆಯಲು ಮಾಡಿದ ಪ್ರಯತ್ನದಿಂದಾಗಿ "ಆಹಾರ ಸೇವನೆ ಮಾಡುತ್ತಿದ್ದ ಭಾವನೆ ಮೂಡುತ್ತವೆ".<ref name="Marigny2">ಮಾರಿಗ್ನಿ, ''ರಕ್ತಪಿಶಾಚಿಗಳು'' , pp. 48-49.</ref> ಈ ವಾದಸರಣಿಯಲ್ಲಿನ ತೊಂದರೆಯೆಂದರೆ ಸಜೀವ ಹೂಳುವಿಕೆಗೆ ಒಳಗಾದವರು ಇನ್ನೂ ಹೆಚ್ಚಿನ ಕಾಲ ಆಹಾರ, ನೀರು ಅಥವಾ ಶುದ್ಧ ಗಾಳಿಯ ಸೇವನೆ ಇಲ್ಲದೆ ಹೇಗೆ ಬದುಕಿದ್ದರು ಎಂಬ ಪ್ರಶ್ನೆ. ಧ್ವನಿಯ ವಿಚಾರಕ್ಕೆ ನೀಡಬಹುದಾದ ಇನ್ನೊಂದು ವಿವರಣೆಯೆಂದರೆ ನೈಸರ್ಗಿಕ ಕೊಳೆಯುವಿಕೆಯಿಂದ ದೇಹದಿಂದ ಹೊರಹೊಮ್ಮುವ ಅನಿಲಗಳ ಬೊಬ್ಬಳದಿಂದಾಗುತ್ತದೆ ಎಂಬುದು.<ref name="Barber128">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 128.</ref> ಅಸ್ತವ್ಯಸ್ತವಾದ ಸಮಾಧಿಗಳ ಬಗೆಗಿನ ಮತ್ತೊಂದು ಸಾಧ್ಯ ವಿವರಣೆಯೆಂದರೆ [[ಸಮಾಧಿ ದರೋಡೆ]].<ref name="Barber13738">ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , pp. 137-38.</ref>
==== ಸೋಂಕು ====
ದಂತಕಥೆಯಲ್ಲಿನ ರಕ್ತಪಿಶಾಚಿ ಕುರಿತ ನಂಬಿಕೆಯನ್ನು ಗುರುತಿಸಲಾಗದೇ ಹೋದ ಹಾಗೂ ನಿಗೂಢ ರೀತಿಯ ರೋಗಗಳಿಂದಾದ ಒಂದೇ ಕುಟುಂಬದ ಅಥವಾ ಒಂದೇ ಸಣ್ಣ ಸಮುದಾಯದ ಜನರ ಸಾವಿನ ಸರಣಿಗಳೊಂದಿಗೆ ತಳಕು ಹಾಕಲಾಗುತ್ತದೆ.<ref name="sledzik" /> ಸಾಂಕ್ರಾಮಿಕದ ಪ್ರಸ್ತಾಪವು ನಿದರ್ಶನಯೋಗ್ಯವಾದ ಸಂಗತಿಗಳಾದ [[ಪೀಟರ್ ಪ್ಲೋಗೋವಿಟ್ಜ್]] ಮತ್ತು [[ಅರ್ನಾಲ್ಡ್ ಪೌಲೆ]] ಸಂದರ್ಭಗಳಲ್ಲಿ ಹಾಗೂ ಇನ್ನಷ್ಟು ಸ್ಪಷ್ಟವಾಗಿ [[ಮರ್ಸಿ ಬ್ರೌನ್]] ದೃಷ್ಟಾಂತಗಳಲ್ಲಿದೆ. ನ್ಯೂ ಇಂಗ್ಲೆಂಡ್ನಲ್ಲಿನ ರಕ್ತಪಿಶಾಚಿ ನಂಬಿಕೆಗಳಲ್ಲಿ ಸಾಮಾನ್ಯವಾಗಿ, ನಿರ್ದಿಷ್ಟ ರೋಗವಾದ [[ಕ್ಷಯರೋಗ]]ವು ರಕ್ತಪಿಶಾಚಿ ಕುರಿತಾದ ವಿಕೋಪಗಳಿಗೆ ಕಾರಣವಾಗಿತ್ತೆಂಬ ಭಾವವಿದೆ. [[ಗೆಡ್ಡೆ ಜ್ವರ]]ದ ನ್ಯುಮೋನಿಯಾ ಮಾದರಿಯ ಈ ರೋಗವು ಶ್ವಾಸಕೋಶದ ಅಂಗಾಂಶದ ಅನಾರೋಗ್ಯವು ಬಾಯಿಯ ತುದಿಯಲ್ಲಿ ರಕ್ತ ಒಸರಲು ಕಾರಣವಾಗುತ್ತಿತ್ತು.<ref>ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 115.</ref>
==== ಪ್ರೋಫೇರಿಯಾ ====
1985ರಲ್ಲಿ ಜೀವರಸಾಯನ ವಿಜ್ಞಾನಿ [[ಡೇವಿಡ್ ಡಾಲ್ಫಿನ್]] ರಕ್ತಪಿಶಾಚಿ ದಂತಕಥೆಗೂ ಪ್ರೋಫೇರಿಯಾ ಎಂಬ ವಿರಳ ರಕ್ತವ್ಯಾಧಿಗೂ ಸಂಬಂಧವಿದೆ ಎಂಬ ಆಲೋಚನೆಯನ್ನು ಮುಂದಿಟ್ಟರು. ಅಭಿಧಮನಿಯೊಳಗಿನ [[ಹೇಮ್]]ನ ಮೂಲಕ ಚಿಕಿತ್ಸೆ ಮಾಡಬೇಕಾದ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಪ್ರಮಾಣದ ರಕ್ತ ಕುಡಿಯುವಿಕೆಯು ಜಠರದ ಮೂಲಕ ಹೇಗಾದರೂ ರಕ್ತ ಪರಿಚಲನೆಯೊಳಗೆ ಹೀಮ ಸೇರಿಕೊಳ್ಳುವ ಸಾಧ್ಯತೆಯನ್ನು ತೋರಿಸಿದರು. ಆದ್ದರಿಂದ ರಕ್ತಪಿಶಾಚಿಗಳು ಕೇವಲ ಪ್ರೋಫೇರಿಯಾ ಪೀಡಿತರಾಗಿದ್ದು ಹೀಮನ್ನು ಬದಲಾಯಿಸಿ ತಮ್ಮ ಗುಣಲಕ್ಷಣಗಳಿಂದ ಬಿಡುಗಡೆ ಹೊಂದಬೇಕಿರುತ್ತದೆ.<ref>ಡಾಲ್ಫಿನ್ ಡಿ (1985) "ವೆರ್ವೂಲ್ವ್ಸ್ ಅಂಡ್ ವ್ಯಾಂಪೈರ್ಸ್," ಅಮೇರಿಕನ್ ಅಸೋಸಿಯೇಷನ್ ಫಾರ್ ದ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ನ ವಾರ್ಷಿಕ ವರದಿ.</ref> ಆದರೆ ಈ ಸಿದ್ಧಾಂತವನ್ನು ವೈದ್ಯಕೀಯವಾಗಿ ತಿರಸ್ಲರಿಸಲಾಯಿತು. ಪ್ರೋಫೇರಿಯಾ ಪೀಡಿತರು ಹೀಮಕ್ಕೆಂದು ಹಂಬಲಿಸುತ್ತಿರುತ್ತಾರೆ ಅಥವಾ ರಕ್ತ ಕುಡಿಯುವಿಕೆಯು ಪ್ರೋಫೇರಿಯಾದಿಂದ ಬಿಡುಗಡೆ ಹೊಂದಲು ನೆರವಾಗುತ್ತದೆ ಎಂಬುದು ರೋಗದ ಬಗೆಗಿನ ಅಜ್ಞಾನದಿಂದ ಬಂದಿರುವ ನಂಬಿಕೆ ಎನ್ನಲಾಯಿತು. ಇದಲ್ಲದೇ, ಕಾಲ್ಪನಿಕ (ರಕ್ತಹೀರುವ) ರಕ್ತಪಿಶಾಚಿಗಳನ್ನು ದಂತಕಥೆಗಳಲ್ಲಿ ಬರುವ ರಕ್ತಹೀರದ ಪಿಶಾಚಿಗಳೆಂದು ಡಾಲ್ಫಿನ್ ಗೊಂದಲಕ್ಕೊಳಗಾಗಿದ್ದರೆಂದು ಹೇಳಲಾಗಿದೆ.<ref>ಬಾರ್ಬರ್, ''ವ್ಯಾಂಪೈರ್, ಬ್ಯುರಿಯಲ್ ಅಂಡ್ ಡೆತ್ '' , p. 100.</ref> ಇದೇ ರೀತಿಯಲ್ಲಿ ಸೂರ್ಯನ ಬೆಳಕಿನ ಬಗೆಗಿನ ಸೂಕ್ಷ್ಮತೆಯನ್ನು ಸಹಾ ಭಾವಿಸಲಾಯಿತು, ಆದರೆ ಇದೂ ಸಹಾ ಕೇವಲ ಕಾಲ್ಪನಿಕ ರಕ್ತಪಿಶಾಚಿಗಳ ವಿಚಾರಕ್ಕೆ ಮಾತ್ರ ಸಂಬಂಧಿಸಿತ್ತೆಂದು ಭಾವಿಸಲಾಯಿತು. ಇದೇನೇ ಆದರೂ ಡಾಲ್ಫಿನ್ ತನ್ನ ಅಧ್ಯಯನಗಳನ್ನು ವ್ಯಾಪಕವಾಗಿ ಪ್ರಚುರಪಡಿಸಲು ಹೋಗಲಿಲ್ಲ.<ref>{{cite web |last=Adams |first=Cecil |title=Did vampires suffer from the disease porphyria—or not? |work=The Straight Dope |publisher=Chicago Reader |date=May 7, 1999 |accessdate=2007-12-25 |url=http://www.straightdope.com/classics/a990507.html |archive-date=2008-07-20 |archive-url=https://web.archive.org/web/20080720115852/http://www.straightdope.com/classics/a990507.html |url-status=dead }}</ref> ತಜ್ಞರಿಂದ ನಿರಾಕರಣೆಯಾಗಿದ್ದರೂ ಈ ಸಂಪರ್ಕವು ಮಾಧ್ಯಮದ<ref>{{cite web |last=Pierach|firstClaus A. |title=Vampire Label Unfair To Porphyria Sufferers |work=Opinion |publisher=New York Times |date=June 13, 1985 |url=http://query.nytimes.com/gst/fullpage.html?res=9C04E4D71239F930A25755C0A963948260 |accessdate=2007-12-25}}</ref> ಗಮನ ಸೆಳೆದು ಜನಪ್ರಿಯ ಆಧುನಿಕ ದಂತಕಥೆಯಾಯಿತು.<ref>{{cite web |last=Kujtan |first=Peter W. |title=Porphyria: The Vampire Disease|publisher=The Mississauga News online |date=October 29, 2005 |url =http://www.bydewey.com/drkporphyria.html |accessdate=2009-11-09}}</ref>
==== ರೇಬೀಸ್ ====
ರಕ್ತಪಿಶಾಚಿ ದಂತಕಥೆಯೊಂದಿಗೆ [[ರೇಬೀಸ್]] ಅನ್ನು ಸೇರಿಸಲಾಗಿದೆ. ಸ್ಪೇನ್ನ [[ವಿಗೊ]] ನಗರದ ಕ್ಸೆರಲ್ ಆಸ್ಪತ್ರೆಯ ನರವಿಜ್ಞಾನಿ ಡಾ|| ಜುಆನ್ ಗೋಮೆಜ್-ಆಲೊನ್ಸೊ, ಎಂಬುವವರು ''[[ನರವಿಜ್ಞಾನ]]'' ದ ವರದಿಯೊಂದರಲ್ಲಿ ಈ ಸಾಧ್ಯತೆಯನ್ನು ಪರಿಶೀಲಿಸಿದ್ದಾರೆ. ಬೆಳ್ಳುಳ್ಳಿ ಹಾಗೂ ಬೆಳಕಿನ ಬಗೆಗಿನ ಸಂವೇದನೆಯು ರೇಬೀಸ್ನ ಲಕ್ಷಣವಾದ ಅತಿಸೂಕ್ಷ್ಮತೆಯಿಂದಾಗಿರಬಹುದಾಗಿದೆ. ರೋಗವು ಮಿದುಳಿನ ಕೆಲಭಾಗಗಳಲ್ಲಿ ಪರಿಣಾಮ ಬೀರಿ ನಿದ್ರಾವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಹಾಗೆ (ನಿಶಾಚರರಾಗುವಂತೆ) ಅಲ್ಲದೇ ವಿಪರೀತ [[ಲೈಂಗಿಕತೆ]]ಗೊಳಪಡುವಂತೆ ಮಾಡುತ್ತದೆ. ಒಂದು ದಂತಕಥೆಯ ಪ್ರಕಾರ ವ್ಯಕ್ತಿಯು ತನ್ನ ಸ್ವಂತ ಪ್ರತಿಬಿಂಬವನ್ನು ನೋಡಲು ಶಕ್ತನಾದರೆ ಉನ್ಮತ್ತನಲ್ಲ (ದಂತಕಥೆಗಳ ಪ್ರಕಾರ ರಕ್ತಪಿಶಾಚಿಗಳಿಗೆ ಪ್ರತಿಬಿಂಬವಿರುವುದಿಲ್ಲ). ರಕ್ತಪಿಶಾಚಿಗಳ ಕಥೆಗಳಲ್ಲಿ ಸಾಮಾನ್ಯವಾಗಿರುವ ತೋಳಗಳು ಹಾಗೂ ಬಾವಲಿಗಳು ರೇಬೀಸ್ ವಾಹಕಗಳಾಗಿರುವ ಸಾಧ್ಯತೆ ಇದೆ. ಈ ರೋಗವು ಉಳಿದವರನ್ನು ಕಚ್ಚುವ ಭಾವನೆ ಬರುವಂತೆ ಹಾಗೂ ಬಾಯಿಂದ ರಕ್ತದ ಬುರುಗು ಬರುವಂತೆ ಮಾಡುವ ಸಾಧ್ಯತೆ ಇದೆ.<ref>{{cite journal |last=Gómez-Alonso |first= Juan |month=September |year=1998 |title=Rabies: a possible explanation for the vampire legend |url=https://archive.org/details/sim_neurology_1998-09_51_3/page/856 |journal=Neurology |volume=51 |issue=3 |pages=856–9 |pmid=9748039 |issn=0028-3878}}</ref><ref>{{cite news |date=September 24, 1998 |url=http://news.bbc.co.uk/2/hi/europe/178623.stm |title=Rabies-The Vampire's Kiss |publisher=BBC news |accessdate=2007-03-18}}</ref>
=== ಮನೋಬಲ ವಿಜ್ಞಾನದ ತಿಳಿಯುವಿಕೆ ===
ತನ್ನ 1931ರ ''ದುಃಸ್ವಪ್ನದ ಬಗೆಗಿನ ಗ್ರಂಥ'' ದಲ್ಲಿ, ವೆಲ್ಶ್ನ ಮನೋವಿಶ್ಲೇಷಕ [[ಅರ್ನೆಸ್ಟ್ ಜೋನ್ಸ್]] ಎಂಬಾತ ರಕ್ತಪಿಶಾಚಿಗಳು ಅನೇಕ ಪ್ರಜ್ಞೆಯಿಲ್ಲದ ಪ್ರೇರಣೆ ಹಾಗೂ [[ಸ್ವರಕ್ಷಣಾ ವ್ಯವಸ್ಥೆ]]ಗಳ ಸಂಜ್ಞೆಗಳು ಎಂದಿದ್ದಾರೆ. ಪ್ರೀತಿ, ಅಪರಾಧಿ ಭಾವ ಅಥವಾ ದ್ವೇಷಗಳು ಸಮಾಧಿಗೆ ಸತ್ತವರ ಪುನರಾಗಮನದ ಬಗೆಗೆ ಆಲೋಚನೆ ಮೂಡುವ ಹಾಗೆ ಮಾಡುತ್ತವೆ. ಪ್ರೀತಿಪಾತ್ರರ ಜೊತೆಗೂಡಬೇಕೆಂದಿರುವವರು ಹಾಗೂ ದುಃಖಿತರಾದವರು ಇತ್ತೀಚೆಗೆ ಸತ್ತವರು ಸಹಾ ತಮ್ಮ ಹಾಗೆಯೇ ಹಾತೊರೆಯುತ್ತಿರುತ್ತಾರೆ ಎಂಬ [[ಭಾವನೆ ಹೊಂದಿರುತ್ತಾರೆ]]. ಇದರಿಂದಾಗಿಯೇ ದಂತಕಥೆಯ ರಕ್ತಪಿಶಾಚಿಗಳು ಮತ್ತು ದೆವ್ವಗಳು ಸಂಬಂಧಿಕರನ್ನು ಭೇಟಿ ಮಾಡುತ್ತಿರುತ್ತವೆ, ಅದರಲ್ಲೂ ತಮ್ಮ ಸಂಗಾತಿಗೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತವೆ.<ref>ಜೋನ್ಸ್, "ದ ವ್ಯಾಂಪೈರ್," pp. 100-102.</ref> ಆದರೆ ಅಪ್ರಜ್ಞಾಪೂರ್ವಕ ಅಪರಾಧಿಭಾವವು ಜೊತೆಗೂಡುವಿಕೆಯ ಆಸೆಯನ್ನು ಆತಂಕಕ್ಕೆ ಮಾರ್ಪಡಿಸುತ್ತದೆ. ಇದು [[ಫ್ರೂಡ್]] ಹೇಳಿದ ಸಂಬಂಧದಂತೆ [[ದಮನ]] ಮನೋಭಾವನೆಗೆ ಎಡೆ ಮಾಡಿ ದಿಗಿಲಿನ ಅನಾರೋಗ್ಯಕ್ಕೆಡೆ ಮಾಡುತ್ತದೆ.<ref>{{cite journal |last=Jones |first=Ernest |year=1911 |title=The Pathology of Morbid Anxiety |journal=Journal of Abnormal Psychology |volume=6 |issue=2 |pages=81–106 |url=http://content.apa.org/journals/abn/6/2/81 |doi=10.1037/h0074306 |pmid=17296997 |month=Feb |last1=Yamada |first1=N |last2=Higashi |first2=M |last3=Otsubo |first3=R |last4=Sakuma |first4=T |last5=Oyama |first5=N |last6=Tanaka |first6=R |last7=Iihara |first7=K |last8=Naritomi |first8=H |last9=Minematsu |first9=K |issn=0195-6108}}</ref> ಜೋನ್ಸ್ ಕಲ್ಪನೆಯ ಪ್ರಕಾರ ಇಂತಹಾ ಸಂದರ್ಭದಲ್ಲಿ ಮೂಲ (ಲೈಂಗಿಕ) ಜೊತೆಗೂಡುವಿಕೆಯ ಆಸೆಯು ತೀವ್ರವಾಗಿ ಬದಲಾಗಿ ಆಸೆಯು ಭಯವನ್ನುಂಟು ಮಾಡಿ; ಪ್ರೀತಿಯು ವಿಕೃತತೆಗೆ ತಿರುಗಿ ಆ ವಸ್ತು ಅಥವಾ ಪ್ರೀತಿಪಾತ್ರರು ಅಜ್ಞಾತ ವಸ್ತುವಾಗಿಬಿಡುತ್ತಾರೆ. ಲೈಂಗಿಕ ಭಾವನೆಯು ಇರಬಹುದು ಅಥವಾ ಇಲ್ಲದಿರಬಹುದು.<ref>ಜೋನ್ಸ್, "ದ ವ್ಯಾಂಪೈರ್," p. 106.</ref> ಕೆಲ ಆಧುನಿಕ ವಿಮರ್ಶಕರು ಸರಳ ಸಿದ್ಧಾಂತವೊಂದನ್ನು ಮುಂದಿಡುತ್ತಾರೆ : ಜನರು ಸಾವಿಲ್ಲದ ರಕ್ತಪಿಶಾಚಿಗಳೊಂದಿಗೆ ಗುರುತಿಸಿಕೊಂಡು, ಸಾವಿನ ಬಗೆಗಿನ ಭಯವನ್ನು ಹೋಗಲಾಡಿಸಲು ಅಥವಾ ಕನಿಷ್ಟ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ.<ref>[https://books.google.com/books?id=KXOUiGfJ8_oC&pg=PT205&lpg=PP1&ie=ISO-8859-1&output=html ಮೆಕ್ಮಹಾನ್, ''ಟ್ವಿಲೈಟ್ ಆಫ್ ಆನ್ ಐಡಲ್'' , p. 193].</ref>
ರಕ್ತ ಹೀರುವಿಕೆಯಲ್ಲಿನ ಸ್ವಾಭಾವಿಕ ಲೈಂಗಿಕತೆಗೆ ನರಭಕ್ಷಕತ್ವ ಮತ್ತು ದಂತಕಥೆಗಳಲ್ಲಿಯಂತೆ [[ಸ್ವಪ್ನಪಿಶಾಚಿ]] ತರಹದ ನಡತೆಯ ಪರಸ್ಪರ ಸಂಬಂಧವನ್ನು ಗಮನಿಸಬಹುದು. ಅನೇಕ ದಂತಕಥೆಗಳಲ್ಲಿ ಅನೇಕ ಜೀವಿಗಳು ಇನ್ನಿತರ ದ್ರವಗಳನ್ನು ತಮ್ಮ ಬಲಿಪಶುವಿನಿಂದ ಹೀರುವುದನ್ನು ಹೇಳುತ್ತವೆ, ಇದು ಅಪ್ರಜ್ಞಾಪೂರ್ವಕವಾಗಿ ವೀರ್ಯಕ್ಕೆ ಸಂಬಂಧಿಸಿರುವ ಸಾಧ್ಯತೆ ಹೆಚ್ಚಿದೆ. ಅಂತಿಮವಾಗಿ ಜೋನ್ಸ್ ಲೈಂಗಿಕತೆಯ ಸಾಮಾನ್ಯ ಆಕರ್ಷಣೆಯನ್ನು ಹತ್ತಿಕ್ಕಿದರೆ, ಹಿಮ್ಮೆಟ್ಟುವಿಕೆ ಆರಂಭವಾಗಬಹುದು, ಅದು ವಿಶೇಷವಾಗಿ [[ವಿಕೃತತೆ]]ಗೆ ತಿರುಗಿ [[ಬಾಯಿಯ ವಿಕೃತ ಬಳಕೆ]]ಯು ರಕ್ತಪಿಶಾಚಿಯ ನಡತೆಯಲ್ಲೇ ಅಂತರ್ಗತವಾಗಿರುತ್ತದೆ.<ref>ಜೋನ್ಸ್, "ದ ವ್ಯಾಂಪೈರ್", pp. 116-20.</ref>
=== ರಾಜಕೀಯ ವ್ಯಾಖ್ಯಾನ ===
ಆಧುನಿಕ ಯುಗದಲ್ಲಿ ರಕ್ತಪಿಶಾಚಿ ದಂತಕಥೆಯ ಮರುಅನ್ವೇಷಣೆಯು ರಾಜಕೀಯ ಪ್ರಭಾವವಿಲ್ಲದೇ ನಡೆದಿಲ್ಲ.<ref>{{cite book |last=Glover |first=David |year=1996 |title=Vampires, Mummies, and Liberals: Bram Stoker and the Politics of Popular Fiction |url=https://archive.org/details/vampiresmummiesl0000glov |publisher=Duke University Press |place=Durham, NC. }}</ref> ಶ್ರೀಮಂತ ಕೌಂಟಿಯ ಅಧಿಪತಿ ಡ್ರಾಕುಲಾ ಕೆಲ ಉನ್ಮತ್ತ ಸೇವಕರಿಂದ ಪ್ರತ್ಯೇಕವಾಗಿ ಏಕಾಂಗಿಯಾಗಿ ತನ್ನ ಕೋಟೆಯಲ್ಲಿರುತ್ತಿದ್ದು, ಕೇವಲ ರಾತ್ರಿಯಲ್ಲಿ ಕಾಣಿಸಿಕೊಂಡು ''[[ಪ್ರಾಚೀನ ಪರೋಪಜೀವಿ ಪ್ರಭುತ್ವ]]'' ಗಳ ಸಂಕೇತವಾಗಿ ತನ್ನ ರೈತರ ರಕ್ತ ಹೀರುತ್ತಿದ್ದ. [[ವರ್ನರ್ ಹರ್ಜೋಗ್]] ತನ್ನ ''[[ನೊಸ್ಫೆರಟು ದ ವ್ಯಾಂಪೈರ್]]'' ಎಂಬ ಪುಸ್ತಕದಲ್ಲಿ ಆತನ ಯುವ ದಳ್ಳಾಳಿ ರಕ್ತಪಿಶಾಚಿಯಾಗಿ ಬದಲಾದಾಗ ಈ ರಾಜಕೀಯ ವ್ಯಾಖ್ಯಾನದ ವಿಚಿತ್ರ ತಿರುವನ್ನು ನೀಡುತ್ತಾನೆ; ಈ ರೀತಿಯಲ್ಲಿ [[ಬಂಡವಾಳಶಾಹಿ]] [[ಬೂರ್ಜ್ವಾ]] ಯೊಬ್ಬ ಮುಂದಿನ ಪರೋಪಜೀವಿ ಪ್ರಭುತ್ವವಾಗಿ ಬದಲಾಗುತ್ತಾನೆ.<ref>{{cite journal |last=Brass |first=Tom |journal=Dialectical Anthropology |volume=25 |page=205–237 |year=2000 |title=Nymphs, Shepherds, and Vampires: The Agrarian Myth on Film |url=https://archive.org/details/sim_dialectical-anthropology_2000_25_3-4/page/205 |doi=10.1023/A:1011615201664}}</ref>
=== ಮನೋರೋಗವಿಜ್ಞಾನ ===
ಅನೇಕ ಕೊಲೆಗಾರರು ತಮ್ಮ ಬಲಿಗಳ ಮೇಲೆ ರಕ್ತಪಿಶಾಚಿ ತರಹದ ಆಚರಣೆಗಳನ್ನು ನಡೆಸಿದ್ದಾರೆ. [[ಸರಣಿ ಹಂತಕ]]ರಾದ [[ಪೀಟರ್ ಕುರ್ಟೆನ್]] ಮತ್ತು [[ರಿಚರ್ಡ್ ಟ್ರೆಂಟನ್ ಚೇಸ್]]ರು ತಾವು ಕೊಲೆ ಮಾಡಿದವರ ರಕ್ತ ಕುಡಿಯುತ್ತಾರೆ ಎಂಬ ವಿಚಾರ ತಿಳಿದ ಮೇಲೆ [[ಪೀತಪತ್ರಿಕೆ]]ಗಳಲ್ಲಿ ಅವರಿಬ್ಬರನ್ನು "ರಕ್ತಪಿಶಾಚಿಗಳು" ಎಂದೇ ಕರೆಯಲಾಗುತ್ತಿತ್ತು. ಅದೇ ರೀತಿಯಲ್ಲಿ, 1932ರಲ್ಲಿ, [[ಸ್ವೀಡನ್]]ನ [[ಸ್ಟಾಕ್ಹೋಮ್]]ನಲ್ಲಿ ಪರಿಹಾರವಾಗದ ಕೊಲೆ ಮೊಕದ್ದಮೆಯೊಂದರಲ್ಲಿ ವ್ಯಕ್ತಿಯ ಸಾವಿನ ಸನ್ನಿವೇಶವನ್ನು ಗಮನಿಸಿ "[[ರಕ್ತಪಿಶಾಚಿ ಕೊಲೆಗಾರ]]" ಎಂಬ ಉಪನಾಮವನ್ನಿಡಲಾಗಿತ್ತು.<ref name="Stig1">{{sv icon}} {{cite book |last=Linnell |first=Stig |title=Stockholms spökhus och andra ruskiga ställen |origyear=1968 |year=1993 |publisher=Raben Prisma |isbn=91-518-2738-7}}</ref> 16ನೇ ಶತಮಾನದ ಅಂತಿಮಭಾಗದಲ್ಲಿ ಹಂಗೆರಿಯ ಕೌಂಟೆಸ್ ಮತ್ತು ಸಾಮೂಹಿಕ ಕೊಲೆಗಾರ್ತಿ [[ಎಲಿಜಬೆತ್ ಬಥೊರಿ]] ಎಂಬಾಕೆ ಶತಮಾನದ ಅಂತ್ಯದ ಬರಹಗಳಲ್ಲಿ ತನ್ನ ಸೌಂದರ್ಯ ಇಲ್ಲವೇ ಯೌವನವನ್ನು ಉಳಿಸಿಕೊಳ್ಳಲು ತನ್ನಿಂದ ಕೊಲೆಯಾದವರ ರಕ್ತದಲ್ಲಿ ಸ್ನಾನ ಮಾಡುತ್ತಿದ್ದುದಕ್ಕಾಗಿ ಕುಖ್ಯಾತಳಾಗಿದ್ದಳು.<ref name="Hoyt6871">ಹೋಯ್ಟ್ ''ಲಸ್ಟ್ ಫಾರ್ ಬ್ಲಡ್: ದ ಕನ್ಸ್ಯೂಮಿಂಗ್ ಸ್ಟೋರಿ ಆಫ್ ವ್ಯಾಂಪೈರ್ಸ್ '' pp. 68-71.</ref>
[[ರಕ್ತಪಿಶಾಚಿ ಜೀವನಶೈಲಿ]] ಎಂಬುದು [[ಗೋಥ್ ಜನರ ಉಪಸಂಸ್ಕೃತಿ]]ಯಲ್ಲೇ ಸಮಕಾಲೀನ ಉಪಸಂಸ್ಕೃತಿಯಾಗಿದೆ. ಕುಮತ ಪ್ರತಿಮಾಪಂಥಕ್ಕೆ ಸಂಬಂಧಿಸಿದ ಜನಪ್ರಿಯ ಸಂಸ್ಕೃತಿ, [[ಭಯಾನಕ ಚಿತ್ರ]]ಗಳು, [[ಆನ್ನೆ ರೈಸ್]]ರ ಕಥೆಗಳು, ಮತ್ತು ವಿಕ್ಟೋರಿಯಾ ಕಾಲದ ಇಂಗ್ಲೆಂಡ್ನ ಶ್ರೀಮಂತ ಇತಿಹಾಸದಿಂದ ಪ್ರಭಾವಿತರಾಗಿ ಇವರು ಇತರರ ರಕ್ತವನ್ನು ಸಮಯ ಕಳೆಯುವುದಕ್ಕಾಗಿ ಹೀರುತ್ತಿದ್ದರು.<ref>ಸ್ಕಲ್, ''ದ ಮಾನ್ಸ್ಟರ್ ಷೋ'' , pp. 342-43.</ref> ರಕ್ತಪಿಶಾಚಿ ಉಪಸಂಸ್ಕೃತಿಯಲ್ಲಿನ ರಕ್ತಪಿಶಾಚಿ ನಂಬಿಕೆಯು ''ಉತ್ಸಾಹಿ ರಕ್ತಪಿಶಾಚಿ'' ಎಂದು ಸಾಮಾನ್ಯವಾಗಿ ಕರೆಯಲಾಗುವ ರಕ್ತ-ಸಂಬಂಧಿತ ರಕ್ತಪಿಶಾಚಿ ನಂಬಿಕೆಯನ್ನು ಮತ್ತು [[ಪ್ರಾಣಿಕ್]] ಶಕ್ತಿಯ ಮೂಲಕ ಆಹಾರ ಪಡೆಯುವ ''ಮಾನಸಿಕ ರಕ್ತಪಿಶಾಚಿತನ'' ಎರಡನ್ನೂ ಹೊಂದಿದೆ.<ref>{{cite journal|last=Jon|first=A. Asbjorn|year=2002|title=The Psychic Vampire and Vampyre Subculture|journal=Australian Folklore|issue=12|pages=143–148|issn=0819-0852}}</ref>
=== ರಕ್ತಪಿಶಾಚಿ ಬಾವಲಿಗಳು ===
[[ಚಿತ್ರ:Desmodus.jpg|thumb|right|ಪೆರುವಿನಲ್ಲಿನ ಒಂದು ರಕ್ತಪಿಶಾಚಿ ಬಾವಲಿ]]
ಅನೇಕ ಸಂಸ್ಕೃತಿಗಳು, [[ರಕ್ತಪಿಶಾಚಿ ಬಾವಲಿ]]ಗಳ ಬಗೆಗೆ ಕಥೆಗಳನ್ನು ಹೊಂದಿದ್ದಾಗ್ಯೂ ಅವು ಇತ್ತೀಚೆಗಷ್ಟೇ ಸಾಂಪ್ರದಾಯಿಕ ರಕ್ತಪಿಶಾಚಿ ಸಿದ್ಧಾಂತದ ಅಖಂಡ ಭಾಗವಾಗಿವೆ. ವಾಸ್ತವಿಕವಾಗಿ, ರಕ್ತಪಿಶಾಚಿ ಬಾವಲಿಗಳು ರಕ್ತಪಿಶಾಚಿ ದಂತಕಥೆಗಳಲ್ಲಿ ಕಾಣಿಸಿಕೊಂಡದ್ದು 16ನೇ ಶತಮಾನದಲ್ಲಿ [[ದಕ್ಷಿಣ ಅಮೇರಿಕಾ]]ದ ಪ್ರಮುಖ ಭೂಭಾಗದಲ್ಲಿ ಅವು ಕಾಣಿಸಿಕೊಂಡಾಗ.<ref name="Cohen2">ಕೋಹೆನ್, ''ಪ್ರೇತಗಳ/ರಾಕ್ಷಸರ ವಿಶ್ವಕೋಶ'' , pp. 95-96.</ref> ಯೂರೋಪ್ನಲ್ಲಿ ರಕ್ತಪಿಶಾಚಿ ಬಾವಲಿಗಳು ಇರಲಿಲ್ಲವಾದರೂ [[ಬಾವಲಿ]]ಗಳು ಹಾಗೂ [[ಗೂಬೆ]]ಗಳನ್ನು ಪ್ರಮುಖವಾಗಿ ಅವುಗಳ ನಿಶಾಚರ,<ref name="Cohen2" /><ref name="Cooper92">{{cite book |last=Cooper |first=J.C. |title=Symbolic and Mythological Animals |url=https://archive.org/details/symbolicmytholog0000coop |pages=[https://archive.org/details/symbolicmytholog0000coop/page/25 25]–26 |year=1992 |publisher=Aquarian Press |location=London |isbn=1-85538-118-4}}</ref> ಆಚರಣೆಗಳಿಂದಾಗಿ ಅಲೌಕಿಕ ಹಾಗೂ ಶಕುನಗಳ ವಿಚಾರದಲ್ಲಿ ನಂಬಲಾಗುತ್ತದೆ, ಆಧುನಿಕ ಆಂಗ್ಲ [[ಹೆರಾಲ್ಡಿಕ್]] ಸಂಸ್ಕೃತಿಯಲ್ಲಿ ಬಾವಲಿ ಎಂದರೆ "ಅಂಧಕಾರ ಮತ್ತು ಗಲಿಬಿಲಿಗಳ ಶಕ್ತಿಯ ಬಗೆಗಿನ ಜ್ಞಾನ".<ref>{{cite web |title=Heraldic "Meanings" |publisher=American College of Heraldry |accessdate=2006-04-30 |url=http://www.americancollegeofheraldry.org/achsymbols.html |archive-date=2011-07-19 |archive-url=https://web.archive.org/web/20110719030400/http://www.americancollegeofheraldry.org/achsymbols.html |url-status=dead }}</ref>
ನಿಜವಾದ [[ರಕ್ತಪಿಶಾಚಿ ಬಾವಲಿ]]ಗಳ ಮೂರು ತಳಿಗಳು [[ಲ್ಯಾಟಿನ್ ಅಮೇರಿಕಾ]]ದ [[ಸ್ಥಳೀಯ]] ತಳಿಗಳಾಗಿದ್ದು ಅವು ಮನುಷ್ಯ ಸ್ಮೃತಿಗೆ ಒಳಪಟ್ಟಂತೆ ಯಾವುದೇ [[ಹಳೆಕಾಲ]]ದ ಸಂಬಂಧಿತ ತಳಿಗಳನ್ನು ಹೊಂದಿವೆಯೆಂಬುದಕ್ಕೆ ಯಾವುದೇ ಆಧಾರವಿಲ್ಲ. ಆದ್ದರಿಂದ ದಂತಕಥೆಯಲ್ಲಿನ ರಕ್ತಪಿಶಾಚಿಯು ರಕ್ತಪಿಶಾಚಿ ಬಾವಲಿಯ ಅಸ್ಪಷ್ಟ ಪ್ರತಿಬಿಂಬ ಇಲ್ಲವೇ ನೆನಪನ್ನು ತರುತ್ತದೆ ಎಂಬುದು ಅಸಾಧ್ಯ. ಬಾವಲಿಗಳಿಗೆ ಆ ಹೆಸರು ದೊರಕಿದ್ದು ಈ ದಂತಕಥೆಗಳಿಂದಾಗಿಯೇ ಹೊರತು ಬೇರೆ ವಿಧದಲ್ಲಲ್ಲ; ''ಆಕ್ಸ್ಫರ್ಡ್ ಆಂಗ್ಲ ಪದಕೋಶ'' ವು ದಂತಕಥೆಯಲ್ಲಿನ ಬಳಕೆಯನ್ನು 1734ರಿಂದಲೇ ದಾಖಲಿಸಿದ್ದರೂ ಅದು ಪ್ರಾಣಿಶಾಸ್ತ್ರದಲ್ಲಿ ಕಾಣಿಸಿಕೊಂಡದ್ದು 1774ರಲ್ಲಿ. ರಕ್ತಪಿಶಾಚಿ ಬಾವಲಿಯ ಕಡಿತವು ವ್ಯಕ್ತಿಗೆ ಹಾನಿಕರವಲ್ಲದೇ ಹೋದರೂ, ಅದು ದೊಡ್ಡದಾದ ಬಲಿಗಳಾದ ಮನುಷ್ಯರ ಹಾಗೂ ಆಕಳ ರಕ್ತ ಹೀರುತ್ತದಲ್ಲದೇ ತನ್ನ ಬಲಿಪಶುವಿನ ಎರಡು ತ್ರಿಶೂಲಗಳ ಗುರುತನ್ನು ತನ್ನ ಕಡಿತದ ಕುರುಹಾಗಿ ಬಿಟ್ಟಿರುತ್ತದೆ.<ref name="Cohen2" />
ಸಾಹಿತ್ಯದ [[ಡ್ರಾಕುಲಾ]] ಕಥೆಯಲ್ಲಿ ಅನೇಕ ಬಾರಿ ಬಾವಲಿಯಾಗಿ ಬದಲಾಗುತ್ತಾನಲ್ಲದೇ, ರಕ್ತಪಿಶಾಚಿ ಬಾವಲಿಗಳೇ ಅದರಲ್ಲಿ ಎರಡು ಬಾರಿ ಪ್ರಸ್ತಾಪವಾಗಿವೆ. 1927ರಲ್ಲಿ ''ಡ್ರಾಕುಲಾ'' ದ ರಂಗಭೂಮಿಯ ಪ್ರದರ್ಶನವು ಡ್ರಾಕುಲಾ ಬಾವಲಿಯಾಗಿ ಬದಲಾಗುವುದರಲ್ಲಿ ಕಾದಂಬರಿಯನ್ನೇ ಅನುಸರಿಸುತ್ತದೆ, ಅದೇ ರೀತಿ [[ಚಿತ್ರ]]ದಲ್ಲಿ ಕೂಡಾ [[ಬೆಲಾ ಲುಗೋಸಿ]] ಬಾವಲಿಯಾಗಿ ಬದಲಾಗುತ್ತಾನೆ.<ref name="Cohen2" /> ಬಾವಲಿಯಾಗಿ ಬದಲಾಗುವ ದೃಶ್ಯವನ್ನು 1943ರ ''[[ಸನ್ ಆಫ್ ಡ್ರಾಕುಲಾ]]'' ಚಿತ್ರದಲ್ಲಿ [[ಲಾನ್ ಚ್ಯಾನಿ Jr.]] ಬಳಸಿದ್ದಾರೆ.<ref>ಸ್ಕಲ್, ''V ಈಸ್ ಫಾರ್ ವ್ಯಾಂಪೈರ್'' , pp. 19-21.</ref>
== ಆಧುನಿಕ ಕಥೆಗಳಲ್ಲಿ ==
ರಕ್ತಪಿಶಾಚಿಯು ಈಗ ಜನಪ್ರಿಯ ಕಥೆಗಳಲ್ಲಿ ನಿಶ್ಚಿತ ಪಾತ್ರ. ಈ ತರಹದ ಕಥೆಗಳು ಹದಿನೆಂಟನೇ ಶತಮಾನದ ಕಾವ್ಯದಲ್ಲಿ ಆರಂಭವಾಗಿ ಹತ್ತೊಂಭತ್ತನೇ ಶತಮಾನದಲ್ಲಿ ಸಣ್ಣಕತೆಗಳ ರೂಪದಲ್ಲಿ ಮುಂದುವರೆಯಿತು. ಅದರಲ್ಲಿ ಪ್ರಥಮ ಹಾಗೂ ಹೆಚ್ಚು ಪ್ರಭಾವ ಬೀರಿದ್ದು ಎಂದರೆ [[ಲಾರ್ಡ್ ರುತ್ವೆನ್]] ರಕ್ತಪಿಶಾಚಿಯ ಮೇಲೆ ಚಿತ್ರಿಸಿದ [[ಜಾನ್ ಪೊಲಿಡೊರಿ]]ಯ ''[[ದ ವ್ಯಾಂಪೈರ್]]'' (1819). ಲಾರ್ಡ್ ರುತ್ವೆನ್ನ ಶೋಷಣೆಗಳನ್ನು ಮತ್ತಷ್ಟು ವಿವರವಾಗಿ ಆತ ಪ್ರತಿ ನಾಯಕನಾಗಿದ್ದ ರಕ್ತಪಿಶಾಚಿ ನಾಟಕಗಳ ಸರಣಿಯಲ್ಲಿ ಚಿತ್ರಿಸಲಾಯಿತು. ರಕ್ತಪಿಶಾಚಿ ವಿಷಯವು [[ಅತಿಭಯಾನಕ]] ಸರಣಿ ಕಿರುಪುಸ್ತಕಗಳಾದ ''[[ವಾರ್ನಿ ದ ವ್ಯಾಂಪೈರ್]]'' (1847)ಗಳಲ್ಲಿ ಮುಂದುವರೆದು 1897ರಲ್ಲಿ ಪ್ರಕಟವಾದ [[ಬ್ರಾಮ್ ಸ್ಟೋಕರ್]]ರ ಸರ್ವೋತ್ತಮ ರಕ್ತಪಿಶಾಚಿ ಕಾದಂಬರಿಯೆನಿಸಿದ ''[[ಡ್ರಾಕುಲಾ]]'' ದಲ್ಲಿ ಪರಾಕಾಷ್ಠೆ ತಲುಪಿತು.<ref name="Christopher">ಕ್ರಿಸ್ಟೋಫರ್ ಫ್ರೇಲಿಂಗ್ (1992) '') ವ್ಯಾಂಪೈರ್ಸ್ - ಲಾರ್ಡ್ ಬೈರನ್ ಟು ಕೌಂಟ್ ಡ್ರಾಕುಲಾ'' .</ref> ಕಾಲಾಂತರದಲ್ಲಿ ಈಗ ಅವಿಭಾಜ್ಯವೆನಿಸಿದ ಗುಣಲಕ್ಷಣಗಳನ್ನು ರಕ್ತಪಿಶಾಚಿಗೆ ನೀಡಲಾಯಿತು: ಕೋರೆಹಲ್ಲು ಹಾಗೂ ಸೂರ್ಯನ ಬೆಳಕಿನ ಬಗೆಗಿನ ಭಯವು 19ನೇ ಶತಮಾನದ ಅವಧಿಯಲ್ಲಿ ವಾರ್ನಿ ದ ವ್ಯಾಂಪೈರ್ ಮತ್ತು [[ಕೌಂಟ್ ಡ್ರಾಕುಲಾ]]ಗಳಿಬ್ಬರೂ ಹೊರಬಂದಿರುವ ಕೋರೆ ಹಲ್ಲು<ref name="Skal99">ಸ್ಕಲ್, ''V ಫಾರ್ ವ್ಯಾಂಪೈರ್'' , p. 99.</ref> ಗಳಿರುವ ಹಾಗೆ ಕಾಣಿಸಿಕೊಂಡರೆ [[ಮುರ್ನೌ'ನ]] ''[[ನೊಸ್ಫೆರಟು]]'' (1922) ಸೂರ್ಯನ ಬೆಳಕಿಗೆ ಹೆದರುವ ಲಕ್ಷಣ ತೋರಿತು.<ref name="Skal104">ಸ್ಕಲ್, ''V ಫಾರ್ ವ್ಯಾಂಪೈರ್'' , p. 104.</ref> 1920ರ ದಶಕದ ರಂಗಭೂಮಿಯ ನಾಟಕಗಳಲ್ಲಿ ನಾಟಕಕಾರ [[ಹ್ಯಾಮಿಲ್ಟನ್ ಡೀನ್]] ಪರಿಚಯಿಸಿದ ಎತ್ತರದ ಕತ್ತುಪಟ್ಟಿಯ ದೊಗಲೆ ಪೋಷಾಕು ರಂಗದ ಮೇಲೆ ಡ್ರಾಕುಲಾ ಅದೃಶ್ಯನಾಗಲು ಅನುಕೂಲ ಮಾಡಿತು.<ref name="Skal62">ಸ್ಕಲ್, ''V ಫಾರ್ ವ್ಯಾಂಪೈರ್'' , p. 62.</ref> ಲಾರ್ಡ್ ರುತ್ವೆನ್ ಮತ್ತು ವಾರ್ನೆಗಳು ಚಂದ್ರನ ಬೆಳಕಿಂದ ಶಮನಗೊಳ್ಳುವ ಸಾಮರ್ಥ್ಯ ಪಡೆದಿದ್ದರು. ಇದರ ಬಗ್ಗೆ ಸಾಂಪ್ರದಾಯಿಕ ದಂತಕಥೆಗಳಲ್ಲಿ ಯಾವುದೇ ಪ್ರಸ್ತಾಪವಿಲ್ಲ.<ref name="SU389">ಸಿಲ್ವರ್ & ಉರ್ಸಿನಿ, ''ದ ವ್ಯಾಂಪೈರ್ ಫಿಲ್ಮ್'' , pp. 38-39.</ref> ದಂತಕಥೆಗಳಲ್ಲಿ ಅಧಿಕೃತವಾಗಿ ದಾಖಲಾಗದೇ ಹೋದರೂ ರಕ್ತಪಿಶಾಚಿ ಚಿತ್ರಗಳು ಮತ್ತು ಸಾಹಿತ್ಯದಲ್ಲಿ [[ಅಮರತ್ವ]] ಎಂಬುದು ಹೆಚ್ಚಿನ ಮಹತ್ವ ಪಡೆದುಕೊಂಡಿರುತ್ತದೆ. ಆತನ ಶಾಶ್ವತ ಬದುಕಿಗೆ ನೀಡಬೇಕಾದ ಬೆಲೆ ವಿಪರೀತವಾದದ್ದು, ಅದು ರೈತರ ರಕ್ತದ ನಿರಂತರ ಅಗತ್ಯ.<ref>ಬನ್ಸನ್, ''ರಕ್ತಪಿಶಾಚಿಗಳ ವಿಶ್ವಕೋಶ'' , p. 131.</ref>
=== ಸಾಹಿತ್ಯ ===
[[ಚಿತ್ರ:Carmilla.jpg|thumb|200px|D. H. ಫ್ರಿಸ್ಟನ್ರ "ಕಾರ್ಮಿಲ್ಲಾ" , 1872, ದ ಡಾರ್ಕ್ ಬ್ಲೂ ನಿಂದ]]
ರಕ್ತಪಿಶಾಚಿ ಅಥವಾ ಪ್ರೇತವು [[ಹೇನ್ರಿಚ್ ಆಗಸ್ಟ್ ಆಸ್ಸೆನ್ಫೆಲ್ಡರ್]]ರ ''ದ ವ್ಯಾಂಪೈರ್'' (1748), [[ಗಾಟ್ಫ್ರೀಡ್ ಆಗಸ್ಟ್ ಬರ್ಗರ್]]ರ ''ಲೆನೋರ್'' (1773) [[ಜೋಹಾನ್ ವೋಲ್ಫ್ಗ್ಯಾಂಗ್ ವಾನ್ ಗೊಯೆಥೆ]]ರ ''ಡೈ ಬ್ರಾಟ್ ವಾನ್ ಕೋರಿಂತ್'' (''ಕೋರಿಂತ್ನ ವಧು'' )(1797), [[ಸ್ಯಾಮುಯೆಲ್ ಟೇಲರ್ ಕೊಲೆರಿಡ್ಜ್]]ರ ಅಪೂರ್ಣ ಕಾವ್ಯ ''[[ಕ್ರಿಸ್ತಾಬೆಲ್]]'' ಮತ್ತು [[ಲಾರ್ಡ್ ಬೈರನ್]]ರ ''[[ದ ಗಿಯಾಓರ್]]'' (1813)ದಂತಹಾ ಕಾವ್ಯಗಳಲ್ಲಿ ಮೊದಲಿಗೆ ಕಾಣಿಸಿಕೊಂಡಿತು.<ref name="Marigny poems">ಮಾರಿಗ್ನಿ, ''ರಕ್ತಪಿಶಾಚಿಗಳು'' , pp. 114–115.</ref> ರಕ್ತಪಿಶಾಚಿಗಳಿಗೆ ಸಂಬಂಧಿಸಿದ ''[[ದ ವ್ಯಾಂಪೈರ್]]'' (1819) ಎಂಬ ಗದ್ಯ ಕಥನಾ ವಸ್ತುವನ್ನು ಪ್ರಥಮಬಾರಿಗೆ ರಚಿಸಿದ ಗೌರವವು ಬೈರನ್ಗೆ ಸಲ್ಲುತ್ತದೆ. ವಸ್ತುತಃ ಇದನ್ನು ಬೈರನ್ನ ಖಾಸಗಿ ವೈದ್ಯ, [[ಜಾನ್ ಪೊಲಿಡೊರಿ]] ತನ್ನ ಸುಪ್ರಸಿದ್ಧ ರೋಗಿಯ ತುಣುಕು ತುಣುಕಾದ ಕಥೆಯನ್ನು ಅಳವಡಿಸಿ ರಚಿಸಿದ್ದನು.<ref name="Cohen">ಕೋಹೆನ್, ''ಪ್ರೇತಗಳ/ರಾಕ್ಷಸರ ವಿಶ್ವಕೋಶ'' , pp. 271-274.</ref><ref name="Christopher" /> ಬೈರನ್ನದೇ ಆದ ಪ್ರಭಾವಿ ವ್ಯಕ್ತಿತ್ವ ಆತನ ನಲ್ಲೆ [[ಲೇಡಿ ಕ್ಯಾರೊಲಿನ್ ಲ್ಯಾಂಬ್]]ಳ ''ಹೊಗಳಿಕೆಯಿಲ್ಲದ ಸತ್ಯಕಥೆ'' ಯ, ''ಗ್ಲೆನಾರ್ವನ್('' ಬೈರನ್ನ ನಿರಂಕುಶ ಜೀವನವನ್ನು ಆಧರಿಸಿದ ಗೋತಿಕ್ ಕಲ್ಪನಾ ಪ್ರಧಾನ ಕಥೆ) ಅನ್ನು ಮಾದರಿಯಾಗಿರಿಸಿಕೊಂಡು ಪಾಲಿಡೊರಿ ತನ್ನ [[ಲಾರ್ಡ್ ರುತ್ವೆನ್]]ನನ್ನು ರೂಪಿಸಿದ್ದನು. ರಕ್ತಪಿಶಾಚಿ ಕುರಿತ ''ದ ವ್ಯಾಂಪೈರ್'' 19ನೇ ಶತಮಾನದ ಮೊದಲ ಭಾಗದ ಒಂದು ಅತ್ಯಂತ ಯಶಸ್ವಿ ಹಾಗೂ ಪ್ರಭಾವೀ ಕೃತಿ.<ref name="SU378">ಸಿಲ್ವರ್ & ಉರ್ಸಿನಿ, ''ದ ವ್ಯಾಂಪೈರ್ ಫಿಲ್ಮ್'' , pp. 37-38.</ref>
[[ಜೇಮ್ಸ್ ಮಾಲ್ಕಾಲ್ಮ್ ರೈಮರ್]](ನಂತರ ಸರದಿಯಲ್ಲಿ [[ಥಾಮಸ್ ಪ್ರೆಸ್ಕೆಟ್ ಪ್ರೆಸ್ಟ್]]ರನ್ನು ಹೆಸರಿಸಲಾಗಿತ್ತು) ವಿರಚಿತ ''[[ವಾರ್ನೆ ದ ವ್ಯಾಂಪೈರ್]]'' ಮಧ್ಯಂತರ [[ವಿಕ್ಟೋರಿಯನ್ ಯುಗ]]ದ ಯುಗಪ್ರವರ್ತಕ [[ಗೋತಿಕ್ ಭಯಾನಕ]] ಕಥೆಯಾಗಿತ್ತು. ಇದು ಮೊದಲಿಗೆ 1845ರಿಂದ 1847ರವರೆಗೆ ಸಾಮಾನ್ಯವಾಗಿ ತಮ್ಮ ಅಗ್ಗದ ಬೆಲೆ ಹಾಗೂ ಭಯಾನಕ ಕಥೆಗಳಿಂದಾಗಿ [[ಪೈಸೆ ಬೀಭತ್ಸ]] ಎನ್ನಲಾಗುವ ''ಕಿರುಕಥಾಪುಸ್ತಕದ ಸರಣಿ'' ಯ ರೂಪದಲ್ಲಿ ಕಾಣಿಸಿಕೊಂಡಿತು. 1847ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಗೊಂಡ ಇದು ಎರಡು ಅಂಕಣಗಳಿರುವ 868 ಪುಟಗಳನ್ನು ಹೊಂದಿತ್ತು. ಈ ಕಥೆಯು ಪ್ರತ್ಯೇಕ ರಹಸ್ಯಕಥನಾ ಶೈಲಿಯಲ್ಲಿದ್ದು ವಾರ್ನೆಯ ಭಯಾನಕ ಶೋಷಣೆಗಳನ್ನು ವಿವರಿಸುವ ಚಿತ್ರಣಗಳನ್ನು ಕೊಡುತ್ತಿತ್ತು.<ref name="SU389" /> ಈ ಪ್ರಭೇದಕ್ಕೆ ಮತ್ತೊಂದು ಪ್ರಮುಖ ಸೇರ್ಪಡೆಯೆಂದರೆ [[ಷೆರಿಡನ್ ಲೆ ಫಾನು]]ರ [[ಸಲಿಂಗಕಾಮಿನಿ ರಕ್ತಪಿಶಾಚಿ]] ಕಥೆಯಾದ ''[[ಕಾರ್ಮಿಲ್ಲಾ]]'' (1871). ಕಾರ್ಮಿಲ್ಲಾ ರಕ್ತಪಿಶಾಚಿಯ ಪರಿಸ್ಥಿತಿಯನ್ನು ಎತ್ತಿ ತೋರಿಸಿ ವಾರ್ನೆಗೆ ಹೋಲಿಸಿದರೆ ಕಾರ್ಮಿಲ್ಲಾ ರಕ್ತಪಿಶಾಚಿಯನ್ನು ಸಹಾನುಭೂತಿಯಿಂದ ಚಿತ್ರಿಸಲಾಗಿದೆ.<ref name="SU401">ಸಿಲ್ವರ್ & ಉರ್ಸಿನಿ, ''ದ ವ್ಯಾಂಪೈರ್ ಫಿಲ್ಮ್'' , pp. 40–41.</ref>
ಜನಪ್ರಿಯ ಕಾಲ್ಪನಿಕ ಕಥಾಪ್ರಕಾರದಲ್ಲಿ ರಕ್ತಪಿಶಾಚಿಗಳ ಕುರಿತ ಯಾವುದೇ ಕಥೆಯೂ [[ಬ್ರಾಮ್ ಸ್ಟೋಕರ್]]ರ ''[[ಡ್ರಾಕುಲಾ]]'' (1897)ದಷ್ಟು ಪ್ರಭಾವೀ ಹಾಗೂ ಪ್ರಮಾಣೀಭೂತವಾಗಿರಲಿಲ್ಲ.<ref name="SU43">ಸಿಲ್ವರ್ & ಉರ್ಸಿನಿ, ''ದ ವ್ಯಾಂಪೈರ್ ಫಿಲ್ಮ್'' , p. 43.</ref> ಅದರಲ್ಲಿನ ರಕ್ತಪಿಶಾಚಿಗಳ ಬಗ್ಗೆ ಪ್ರೇತಗಳ ವಶಪಡಿಕೆಯಿಂದ ಹರಡುವ ಸಾಂಕ್ರಾಮಿಕವೆಂಬಂತೆ ಲೈಂಗಿಕ, ರಕ್ತ ಹಾಗೂ ಸಾವಿನ ಅಂತರ್ಭಾವದೊಂದಿಗೆ ಚಿತ್ರಿಸಿದ ರೀತಿಯು [[ವಿಕ್ಟೋರಿಯನ್]] ಯೂರೋಪ್ನಲ್ಲಿ ಸಾಮಾನ್ಯವಾಗಿದ್ದ [[ಕ್ಷಯ ರೋಗ]] ಹಾಗೂ [[ಉಪದಂಶ]] ರೋಗಗಳ ಹಾವಳಿಯನ್ನು ನೆನಪಿಗೆ ತರಿಸಿತ್ತು. ಸ್ಟೋಕರ್ಸ್ನ ಕೃತಿಯಲ್ಲಿನ ರಕ್ತಪಿಶಾಚಿಯ ಲಕ್ಷಣಗಳು ದಂತಕಥೆಯಲ್ಲಿನ ಲಕ್ಷಣದೊಳಗೆ ಸಮ್ಮಿಳಿತಗೊಂಡು ಆಧುನಿಕ ಕಾಲ್ಪನಿಕ ರಕ್ತಪಿಶಾಚಿಯ ರೂಪ ತಳೆಯಿತು. 1800ರ ದಶಕದ ಕೊನೆಯಲ್ಲಿ ''ದ ವ್ಯಾಂಪೈರ್'' ಮತ್ತು "ಕಾರ್ಮಿಲ್ಲಾ"ಗಳಂಥ ಹಿಂದಿನ ಕಥೆಗಳ ಆಧಾರ ಮತ್ತು [[ಎಮಿಲಿ ಗೆರಾರ್ಡ್]]ರ ''ದ ಲ್ಯಾಂಡ್ ಬಿಹೈಂಡ್ ದ ಫಾರೆಸ್ಟ್'' (1888) ಮತ್ತು ಟ್ರಾನ್ಸಿಲ್ವೇನಿಯಾ ಮತ್ತು ರಕ್ತಪಿಶಾಚಿಗಳ ಬಗೆಗಿನ ಇನ್ನಿತರ ಪುಸ್ತಕಗಳನ್ನು ಓದುತ್ತಾ ತನ್ನ ಹೊಸ ಪುಸ್ತಕಕ್ಕೆಂದು ಅಧ್ಯಯನ ಕೈಗೊಂಡರು. ಲಂಡನ್ನಲ್ಲಿ ಸಹೋದ್ಯೋಗಿಯೊಬ್ಬರು "ನಿಜ ಜೀವನದ ಡ್ರಾಕುಲಾ," ಎಂದು ಹೆಸರಾದ [[ವ್ಲಾಡ್ ಟೆಪೆಸ್]] ಬಗ್ಗೆ ಹೇಳಿದಾಗ ಸ್ಟೋಕರ್ ಅದನ್ನು ತಕ್ಷಣ ತನ್ನ ಪುಸ್ತಕದಲ್ಲಿ ಸೇರಿಸಿದರು. 1897ರಲ್ಲಿ ಪ್ರಕಟಗೊಂಡಾಗ ಇದರ ಮೊದಲ ಅಧ್ಯಾಯವನ್ನು ಬಿಡಲಾಗಿತ್ತು, ಆದರೆ 1914ರಲ್ಲಿ ಇದನ್ನು ''ಡ್ರಾಕುಲಾದ ಅತಿಥಿ'' ಯ ಕಥೆಯಾಗಿ ಸೇರಿಸಲಾಯಿತು.<ref name="Marigny Drac">ಮಾರಿಗ್ನಿ, ''ರಕ್ತಪಿಶಾಚಿಗಳು'' , pp. 82–85.</ref>
ರಿಚರ್ಡ್ ಮ್ಯಾಥೆಸನ್ರ 1954 ''[[ಐ ಯಾಮ್ ಲೆಜೆಂಡ್]]'' ಎಂಬುದು ಪ್ರಥಮ "ವೈಜ್ಞಾನಿಕ" ರಕ್ತಪಿಶಾಚಿ ಕಾದಂಬರಿಗಳಲ್ಲೊಂದಾಗಿತ್ತಲ್ಲದೇ, [[ದ ಲಾಸ್ಟ್ ಮ್ಯಾನ್ ಆನ್ ಅರ್ಥ್]](1964), [[ದ ಒಮೆಗಾ ಮ್ಯಾನ್]](1971) ಮತ್ತು [[ಐ ಯಾಮ್ ಲೆಜೆಂಡ್]](2007) ಚಿತ್ರಗಳ ಮೂಲಕಥೆಯೂ ಆಗಿದೆ.
ಇಪ್ಪತ್ತೊಂದನೇ ಶತಮಾನವು ರಕ್ತಪಿಶಾಚಿ ಕಥೆಗಳ ಹೆಚ್ಚು ಉದಾಹರಣೆಗಳನ್ನು ತಂದಿದೆ ಉದಾಹರಣೆಗೆ [[ಜೆ.ಆರ್. ವಾರ್ಡ್]]ರ [[ಬ್ಲ್ಯಾಕ್ ಡಾಗ್ಗರ್ ಬ್ರದರ್ಹುಡ್]] ಸರಣಿ ಮತ್ತು ಇತರ ಹದಿಹರೆಯದವರನ್ನು ಹಾಗೂ ಯುವಜನತೆಯನ್ನು ಸೆಳೆವ ಅತ್ಯಂತ ಜನಪ್ರಿಯ ರಕ್ತಪಿಶಾಚಿ ಕಥಾಪುಸ್ತಕಗಳು. ಆ ತರಹದ [[ಅತಿಸಾಮಾನ್ಯ ಪ್ರಣಯ]] ಕಾದಂಬರಿಗಳು ಮತ್ತು ಸಂಬಂಧಿತ ರಕ್ತಪಿಶಾಚಿಯಂತೆ ವರ್ತಿಸುವ [[ಲಲನೆಯರ]] ಮತ್ತು [[ನಿಗೂಢ ರಕ್ತಪಿಶಾಚಿ ಪತ್ತೇದಾರಿ]] ಕಥೆಗಳು ಗಮನಾರ್ಹವಾಗಿ ಜನಪ್ರಿಯ ಮತ್ತು ವಿಕಸಿಸುತ್ತಿರುವ ಸಮಕಾಲೀನ ಪ್ರಕಟಣಾ ವಿಶೇಷವಾಗಿವೆ.<ref>[http://www.usatoday.com/life/books/news/2006-06-28-vampire-romance_x.htm ರಕ್ತಪಿಶಾಚಿ ಪ್ರಣಯ].</ref> [[ಎಲ್.ಎ. ಬ್ಯಾಂಕ್ಸ್]]ರ [[ದ ವ್ಯಾಂಪೈರ್ ಹಂಟ್ರೆಸ್ ಲೆಜೆಂಡ್ ಸರಣಿ]], [[ಲಾರೆಲ್ ಕೆ. ಹ್ಯಾಮಿಲ್ಟನ್]]ರ ಶೃಂಗಾರಾತ್ಮಕ[[Anita Blake: Vampire Hunter]] ಸರಣಿ, ಮತ್ತು [[ಕಿಂ ಹ್ಯಾರಿಸ್ಸನ್]]ರ [[ದ ಹಾಲೋಸ್]] ಸರಣಿಗಳು ರಕ್ತಪಿಶಾಚಿಯನ್ನು ವಿವಿಧ ದೃಷ್ಟಿಕೋನಗಳಲ್ಲಿ ಚಿತ್ರಿಸುತ್ತವೆ, ಅವುಗಳಲ್ಲಿ ಕೆಲವು ಮೂಲ ದಂತಕಥೆಗಳಿಗೆ ಸಂಬಂಧವಿಲ್ಲದವು.
ಇಪ್ಪತ್ತನೇ ಶತಮಾನದ ಉತ್ತರಾರ್ಧವು ಬಹು-ಸಂಪುಟ ರಕ್ತಪಿಶಾಚಿ ಗ್ರಂಥಗಳನ್ನು ಕಂಡಿತು. ಇವುಗಳಲ್ಲಿ ಪ್ರಥಮವಾದುದು ಅಲ್ಪ ಪ್ರಮಾಣದಲ್ಲಿ ಸಮಕಾಲೀನ ಅಮೇರಿಕದ ಕಿರುತೆರೆ ಸರಣಿ ''[[ಡಾರ್ಕ್ ಷಾಡೋಸ್]]'' ಆಧಾರಿತ ಗೋತಿಕ್ ಪ್ರಣಯ ಲೇಖಕಿ [[ಮರಿಲಿನ್ ರಾಸ್]] ''[[ಬರ್ನಬಾರ ಕಾಲಿನ್ಸ್]]'' ಸರಣಿ(1966-71). ಇದು ರಕ್ತಪಿಶಾಚಿಗಳನ್ನು ಸಾಂಪ್ರದಾಯಿಕ ದುಷ್ಟಶಕ್ತಿಯಾಗಲ್ಲದೇ ಕಾವ್ಯಮಯವಾಗಿ ದುರಂತ ನಾಯಕರಾಗಿ ಕಾಣುವ ಹೊಸ ಒಲವನ್ನು ರೂಪಿಸಿತು. ಈ ನಿಯಮವನ್ನು ಕಾದಂಬರಿಕಾರ್ತಿ [[ಅನ್ನೆ ರೈಸ್]]ರ ಬಹುಜನಪ್ರಿಯ ಮತ್ತು ಪ್ರಭಾವೀ ಕೃತಿ ''[[ವ್ಯಾಂಪೈರ್ ಕ್ರಾನಿಕಲ್ಸ್]]'' (1976–2003).<ref name="SU205">ಸಿಲ್ವರ್ & ಉರ್ಸಿನಿ, ''ದ ವ್ಯಾಂಪೈರ್ ಫಿಲ್ಮ್'' , p. 205.</ref> [[ಸ್ಟಿಫನಿ ಮೇಯರ್]]ರ ವ್ಯಾಂಪೈರ್ಸ್ ಇನ್ ''ಟ್ವಿಲೈಟ್'' (2005-2008) ಸರಣಿಯು ಬೆಳ್ಳುಳ್ಳಿ ಹಾಗೂ ಶಿಲುಬೆಯ ಪ್ರಭಾವಕ್ಕೊಳಗಾಗದ ಹಾಗೂ ಬೆಳಕಿಂದ ಅಪಾಯ ಇಲ್ಲದ ರಕ್ತಪಿಶಾಚಿಗಳನ್ನೊಳಗೊಂಡಿತ್ತು (ಇದು ಅವುಗಳ ಅಲೌಕಿಕ ಶಕ್ತಿಯನ್ನು ತೋರುತ್ತಿತ್ತು).<ref name="slate">{{cite web|url=http://www.slate.com/id/2205143/|title=I Vant To Upend Your Expectations: Why movie vampires always break all the vampire rules|last=Beam|first=Christopher |date=2008, November 20|work=Slate Magazine|accessdate=2009-07-17}}</ref>
=== ಚಲನಚಿತ್ರ ಮತ್ತು ಕಿರುತೆರೆ ===
ಅಭಿಜಾತ ಭಯಾನಕ ಚಿತ್ರಗಳ ಸರ್ವೋತ್ಕೃಷ್ಟ ಪಾತ್ರವಾಗಿ ಪರಿಗಣಿಸಲಾದ ರಕ್ತಪಿಶಾಚಿಯು ಚಿತ್ರ ಹಾಗೂ ಆಟಗಳ ಉದ್ಯಮಕ್ಕೆ ಶ್ರೀಮಂತ ವಿಷಯವಾಗಿದೆ. [[ಷರ್ಲಾಕ್ ಹೋಮ್ಸ್]]ನ್ನು ಬಿಟ್ಟರೆ [[ಡ್ರಾಕುಲಾವೇ ಅತಿ ಹೆಚ್ಚು ಚಿತ್ರಗಳಲ್ಲಿನ ಪ್ರಮುಖ ಪಾತ್ರ]]ವಾಗಿದ್ದು, ಮೊದಲಿನ ಅನೇಕ ಚಿತ್ರಗಳು ''ಡ್ರಾಕುಲಾ'' ಕಾದಂಬರಿ ಆಧಾರಿತವಾಗಿರುತ್ತಿದ್ದವು ಇಲ್ಲವೇ ಅತ್ಯಂತ ಸಮೀಪ ರೂಪವಾಗಿರುತ್ತಿದ್ದವು. ಇದರಲ್ಲಿ ಡ್ರಾಕುಲಾವನ್ನು ಚಿತ್ರೀಕರಿಸಿದ ಪ್ರಥಮ ಚಿತ್ರ ಹೆಗ್ಗುರುತಿನ [[ಎಫ್.ಡಬ್ಲ್ಯೂ. ಮುರ್ನಾವು]]ರಿಂದ ನಿರ್ದೇಶಿತ 1922ರ ಜರ್ಮನ್ ಮೂಕಿ ಚಿತ್ರ ''[[ನೊಸ್ಫೆರಟು]]'' ಸೇರಿದೆ. ಹೆಸರುಗಳು ಹಾಗೂ ಪಾತ್ರಗಳು ''ಡ್ರಾಕುಲಾ'' ವನ್ನು ಅನುಕರಿಸುವಂತೆ ಉದ್ದೇಶಿಸಲಾಗಿದ್ದರೂ ಮುರ್ನಾವು ಸ್ಟೋಕರ್ರ ವಿಧವೆ ಪತ್ನಿಯಿಂದ ಹಾಗೆ ಮಾಡಲು ಅನುಮತಿ ಪಡೆಯಲಾಗದ್ದರಿಂದ ಅನೇಕ ವಿವರಗಳನ್ನು ಬದಲಾಯಿಸಬೇಕಾಯಿತು. '''''ಇದರೊಂದಿಗೆ ಕೌಂಟ್ ಆಗಿ [[ಬೆಲಾ ಲುಗೊಸಿ]] ನಟಿಸಿದ್ದ ಯೂನಿವರ್ಸಲ್ನ ''' '' '''[[ಡ್ರಾಕುಲಾ]]''(1931) ಚಿತ್ರವೂ ಇದೆ. ಇದು ಡ್ರಾಕುಲಾವನ್ನು ಆಧರಿಸಿದ ಪ್ರಥಮ ಧ್ವನಿಸಮೇತ ಚಿತ್ರವೂ ಹೌದು. '' ''' '''ಈ ದಶಕವು ಇನ್ನೂ ಅನೇಕ ಡ್ರಾಕುಲಾ ಚಿತ್ರಗಳನ್ನು ಕಂಡಿತು, ಪ್ರಮುಖವಾಗಿ ''1936ರ<ref name="Marigny film1">ಮಾರಿಗ್ನಿ, ರಕ್ತಪಿಶಾಚಿಗಳು'', pp. 90-92.''</ref> [[ಡ್ರಾಕುಲಾ'ಸ್ ಡಾಟರ್]].'' '''
ಡ್ರಾಕುಲಾವು ಕೌಂಟ್ ಪಾತ್ರದಲ್ಲಿ [[ಕ್ರಿಸ್ಟೋಫರ್ ಲೀ]] ನಟಿಸಿದ ವಿಖ್ಯಾತ [[ಹ್ಯಾಮರ್ ಭಯಾನಕ]] ಸರಣಿ ಚಿತ್ರಗಳಲ್ಲಿ ಹೊಸ ಪೀಳಿಗೆಗಾಗಿ ಮರುಜನ್ಮ ಪಡೆದ ರಕ್ತಪಿಶಾಚಿಯ ದಂತಕಥೆಯು ಚಲನಚಿತ್ರೋದ್ಯಮದಲ್ಲಿ ಭದ್ರವಾಗಿ ಬೇರೂರಿತು. ಲೀ ನಟಿಸಿದ್ದ 1958ರ ಯಶಸ್ವಿ ''[[ಡ್ರಾಕುಲಾ]]'' ಚಿತ್ರವು ಏಳು ಅನುಕ್ರಮ ಚಿತ್ರಗಳಾಗಿ ಮುಂದುವರೆಯಿತು. ಕೇವಲ ಎರಡರಲ್ಲಿ ಮಾತ್ರವೇ ಡ್ರಾಕುಲಾ ಪಾತ್ರ ವಹಿಸದೇ ಉಳಿದೆಲ್ಲಾ ಚಿತ್ರಗಳಲ್ಲಿ ಡ್ರಾಕುಲಾ ಆಗಿ ಮರಳಿದ ಲೀ ಆ ಪಾತ್ರದಲ್ಲಿ ಹೆಸರುವಾಸಿಯಾದರು.<ref name="Marigny film2">ಮಾರಿಗ್ನಿ, ''ರಕ್ತಪಿಶಾಚಿಗಳು'' , pp. 92-95.</ref> 1970ರ ದಶಕದ ಹೊತ್ತಿಗೆ, ''[[ಕೌಂಟ್ ಯೋರ್ಗಾ, ವ್ಯಾಂಪೈರ್]]'' (1970), 1972ರ ''[[ಬ್ಲಾಕುಲಾ]]'' ದಲ್ಲಿ ಆಫ್ರಿಕಾದ ಕೌಂಟ್ ಆಗಿ ಚಿತ್ರಗಳಲ್ಲಿ ರಕ್ತಪಿಶಾಚಿಗಳು ವಿವಿಧ ಅಸದೃಶ ರೀತಿಯಲ್ಲಿ ಕಾಣಿಸಿಕೊಂಡವು. 1979ರ ''[[ಸೇಲಮ್ಸ್ ಲಾಟ್]]'' ಮತ್ತು [[ಕ್ಲಾಸ್ ಕಿನ್ಸ್ಕಿ]]ಯೊಂದಿಗೆ ನಟಿಸಿದ ''[[ನೊಸ್ಫೆರಟು ದ ವ್ಯಾಂಪೈರ್]]'' ಎಂಬ ಹೆಸರಿನ ಚಿತ್ರಗಳಲ್ಲಿ ''ನೊಸ್ಫೆರಟು'' ಮಾದರಿಯ ರಕ್ತಪಿಶಾಚಿಯು ಇತ್ತು. ಅನೇಕ ಚಿತ್ರಗಳು ಕಾರ್ಮಿಲ್ಲಾ ಆಧಾರಿತ ಹ್ಯಾಮರ್ ಹಾರರ್ನ ''[[ದ ವ್ಯಾಂಪೈರ್ ಲವರ್ಸ್]]'' (1970) ತರಹದ ಸ್ತ್ರೀ ರಕ್ತಪಿಶಾಚಿಗಳನ್ನು ಅದರಲ್ಲೂ ಸಲಿಂಗಕಾಮಿ ರಕ್ತಪಿಶಾಚಿ ಪ್ರತಿಸ್ಪರ್ಧಿಗಳನ್ನು ಚಿತ್ರಿಸಿದರೂ ಮೂಲ ಹಂದರವು ದುಷ್ಟ ರಕ್ತಪಿಶಾಚಿ ಪಾತ್ರವೇ ಸುತ್ತುತಲಿತ್ತು.<ref name="Marigny film2" />
1972ರ ಕಿರುತೆರೆ ಸರಣಿ''[[Kolchak: The Night Stalker]]'' ಡಾನ್ ಕುರ್ಟಿಸ್ನ ಮಾರ್ಗದರ್ಶಿ ಕಥೆಯು ಲಾಸ್ ವೇಗಾಸ್ ಪಟ್ಟಿಯಲ್ಲಿ ಕಾರ್ಲ್ ಕೊಲ್ಚಾಲ್ಕ್ ಎಂಬ ವರದಿಗಾರ್ತಿ ರಕ್ತಪಿಶಾಚಿಯ ಹಿಂದೆ ಬೀಳುವುದರ ಸುತ್ತ ಸುತ್ತುತ್ತದೆ. ನಂತರದ ಚಿತ್ರಗಳು ಕಥಾಹಂದರದಲ್ಲಿ ವೈವಿಧ್ಯತೆಯನ್ನು ತೋರಿದವು, ಉದಾಹರಣೆಗೆ ಕೆಲವು [[ಮಾರ್ವೆಲ್ ಕಾಮಿಕ್ಸ್]]ನ [[ಬ್ಲೇಡ್]] ಚಿತ್ರಗಳಲ್ಲಿ ಮತ್ತು ''[[ಬಫ್ಫಿ ದ ವ್ಯಾಂಪೈರ್ ಸ್ಲೇಯರ್]]'' ಎಂಬ ಚಿತ್ರಗಳಲ್ಲಿ ''[[ಬ್ಲೇಡ್]]'' ನಂತಹಾ ರಕ್ತಪಿಶಾಚಿ-ಬೇಟೆಗಾರರ ಮೇಲೆ ಕೇಂದ್ರೀಕೃತವಾದ ಕಥೆ ಹೊಂದಿವೆ. 1992ರಲ್ಲಿ ಬಿಡುಗಡೆಯಾದ ''ಬಫ್ಫಿ'' , ಅದೇ ಹೆಸರಿನ ದೀರ್ಘ ಕಾಲದಿಂದ ಪ್ರಸಾರವಾಗುತ್ತಿದ್ದ ಜನಪ್ರಿಯ [[TV ಸರಣಿ]] ಹಾಗೂ ಅದರ ಉಪಸರಣಿ ''[[ಏಂಜೆಲ್]]'' ಗಳು ಕಿರುತೆರೆಯಲ್ಲಿ ರಕ್ತಪಿಶಾಚಿಯ ಆಗಮನದ ಪೂರ್ವಛಾಯೆ ನೀಡಿದವು. 1983ರ ''[[ದ ಹಂಗರ್]]'' , 1994ರ ''[[Interview with the Vampire: The Vampire Chronicles]]'' ಮತ್ತು ಅದರ ಪರೋಕ್ಷ ಉತ್ತರಭಾಗವಾದ ''[[ಕ್ವೀನ್ ಆಫ್ ಡಾಮ್ನೆಡ್]]'' ನಂತಹಾ ಇನ್ನೂ ಅನೇಕ ಚಿತ್ರಗಳು ರಕ್ತಪಿಶಾಚಿಯನ್ನು ನಾಯಕನನ್ನಾಗಿ ತೋರಿದವು. ''[[ಬ್ರಾಮ್ ಸ್ಟೋಕರ್ರ ಡ್ರಾಕುಲಾ]]'' ವು 1992ರ ಆ ಕಾಲದ ಗಮನಾರ್ಹ ಚಿತ್ರವಾಗಿ ಸಾರ್ವಕಾಲಿಕ ಅತಿಹೆಚ್ಚು ಗಳಿಕೆಯ ರಕ್ತಪಿಶಾಚಿ ಚಿತ್ರ ಎನಿಸಿತು.<ref name="SU208">ಸಿಲ್ವರ್ & ಉರ್ಸಿನಿ, ''ದ ವ್ಯಾಂಪೈರ್ ಫಿಲ್ಮ್'' , p. 208.</ref> ರಕ್ತಪಿಶಾಚಿಗೆ ಸಂಬಂಧಿಸಿದ ಕಥಾಹಂದರದಲ್ಲಿ ಹೆಚ್ಚಿನ ಆಸಕ್ತಿಯು 2004ರಲ್ಲಿನ ''[[ಅಂಡರ್ವರ್ಲ್ಡ್]]'' ಮತ್ತು ''[[ವಾನ್ ಹೆಲ್ಸಿಂಗ್]]'' , ರಷ್ಯನ್ ''[[ನೈಟ್ ವಾಚ್]]'' ಮತ್ತು '''[[ಸೇಲಮ್ಸ್ ಲಾಟ್]]'' 'ನ TV ಕಿರುಸರಣಿಯಂತಹಾ ಚಿತ್ರಗಳಲ್ಲಿ ರಕ್ತಪಿಶಾಚಿ ಚಿತ್ರಣಕ್ಕೆ ಕಾರಣವಾಯಿತು. ಆಧುನಿಕ [[ಟೊರೊಂಟೋ]]ದ ಮಾಜಿ ಪತ್ತೆದಾರಿಣಿ ಹಾಗೂ ರಕ್ತಪಿಶಾಚಿಯಾಗಿ ಬದಲಾದ [[ಇಂಗ್ಲೆಂಡ್ನ ಹೆನ್ರಿ VIII]]ನ ಅಕ್ರಮಸಂತಾನ ಹೆನ್ರಿ ಫಿಟ್ಜ್ರಾಯ್ ಎಂಬ ಪಾತ್ರವನ್ನು ನಾಯಕನಾಗಿಸಿದ ''[[ಬ್ಲಡ್ ಟೈಸ್]]'' ಸರಣಿಯು 2007ರಲ್ಲಿ [[ಲೈಫ್ಟೈಮ್ ಟೆಲಿವಿಷನ್]]ನಲ್ಲಿ ಪ್ರಸಾರವಾಯಿತು. ''[[ಟ್ರೂಬ್ಲಡ್]]'' ಎಂಬ ಶೀರ್ಷಿಕೆಯ 2008ರ HBOನ ಸರಣಿಯು ರಕ್ತಪಿಶಾಚಿ ವಸ್ತುವಿಗೆ [[ದಕ್ಷಿಣ]]ದ ಚಹರೆ ಮೂಡಿಸುತ್ತದೆ.<ref name="slate" /> ರಕ್ತಪಿಶಾಚಿ ವಿಷಯದ ಮೇಲಿನ ಹೆಚ್ಚುತ್ತಿರುವ ಆಸಕ್ತಿಯನ್ನು, ಅದರಲ್ಲಿ ತೋರಿಸಲಾಗುವ [[ಲೈಂಗಿಕತೆ]] ಹಾಗೂ ಸಾವಿನ ನಿರಂತರ ಅಂಜಿಕೆಗಳ ಸಂಯೋಜನೆಯಾಗಿ ಪರಿಗಣಿಸಲಾಗಿದೆ.<ref>{{cite book|last=Bartlett |first=Wayne|coauthors=Flavia Idriceanu |title=Legends of Blood: The Vampire in History and Myth |url=https://archive.org/details/legendsofbloodva0000bart |year=2005 |publisher=NPI Media Group |location=London |isbn=0-7509-3736-X |page=[https://archive.org/details/legendsofbloodva0000bart/page/46 46]}}</ref>
== ಅಡಿಟಿಪ್ಪಣಿಗಳು ==
{{reflist|2}}
== ಉಲ್ಲೇಖಗಳು ==
{{Refbegin}}
* {{cite book|last=Barber|first=Paul|title=Vampires, Burial and Death: Folklore and Reality|url=https://archive.org/details/vampiresburialde0000barb_n4n9|year=1988 |publisher=Yale University Press |location=New York |isbn=0-300-04126-8}}
* {{cite book|last=Bunson|first=Matthew|title=The Vampire Encyclopedia|year=1993|publisher=Thames & Hudson|location=London|isbn=0-500-277486}}
* {{de icon}} {{cite book|last=Burkhardt|first=Dagmar|title=Beiträge zur Südosteuropa-Forschung: Anlässlich des I. Internationalen Balkanologenkongresses in Sofia 26. VIII.-1. IX. 1966|chapter=Vampirglaube und Vampirsage auf dem Balkan|year=1966|publisher=Rudolf Trofenik |location=Munich|oclc=1475919}}
* {{cite book|last=Cohen|first=Daniel|title=Encyclopedia of Monsters: Bigfoot, Chinese Wildman, Nessie, Sea Ape, Werewolf and many more...|year=1989|publisher=Michael O'Mara Books Ltd|location=London|isbn=0-948397-94-2}}
* {{fr icon}} {{cite book|last=Créméné|first=Adrien|title=La mythologie du vampire en Roumanie|url=https://archive.org/details/lamythologieduva0000crem|year=1981|publisher=Rocher|location=Monaco|isbn=2-268-00095-8}}
* {{fr icon}} {{cite book|last=Faivre|first=Antoine|title=Les Vampires. Essai historique, critique et littéraire|year=1962|location=Paris |publisher= Eric Losfeld|oclc=6139817}}
* {{fr icon}} {{cite book|last=Féval|first=Paul|title=Les tribunaux secrets : ouvrage historique|year=1851-1852|location=Paris |publisher= E. et V. Penaud frères}}
* {{cite book|last=Frayling|first=Christopher|title=Vampyres, Lord Byron to Count Dracula|url=https://archive.org/details/isbn_9780571167920|year=1991 |location=London|publisher=Faber|isbn=0-571-16792-6}}
* {{it icon}} {{cite book|last=Introvigne|first=Massimo|title=La stirpe di Dracula: Indagine sul vampirismo dall'antichità ai nostri giorni |year=1997 |location=Milan |publisher=Mondadori |isbn=88-04-42735-3}}
* {{cite book |last=Hurwitz |first=Siegmund |editor=Gela Jacobson (trans.) |year=1992 |origyear=1980 |title=Lilith, the First Eve: Historical and Psychological Aspects of the Dark Feminine |url=https://archive.org/details/lilithfirstevehi0000hurw |location=Einsiedeln, Switzerland |isbn=3-85630-522-X |publisher=Daimon Verlag}}
* {{cite book |last=Jennings |first=Lee Byron |chapter=An Early German Vampire Tale: Wilhelm Waiblinger's 'Olura' |editor=Reinhard Breymayer and Hartmut Froeschle (eds.)|year=2004 |origyear=1986 |title=In dem milden und glücklichen Schwaben und in der Neuen Welt: Beiträge zur Goethezeit |location=Stuttgart |publisher=Akademischer Verlag Stuttgart |isbn=3-88099-428-5 |pages=295–306}}
* {{cite book|last=Jones|first=Ernest |title=On the Nightmare |chapter=The Vampire |year=1931 |publisher=Hogarth Press and Institute of Psycho-Analysis |location=London |oclc=2382718}}
* {{cite book|last=Marigny|first=Jean|authorlink=|title=Vampires: The World of the Undead |year=1993 |publisher=Thames & Hudson |location=London |isbn=0-500-30041-0}}
* {{cite book|last=McNally |first=Raymond T. |title=Dracula Was a Woman |url=https://archive.org/details/bwb_P8-AMG-840 |year=1983 |publisher=McGraw Hill |isbn=0-07-045671-2}}
* {{cite book|last=Schwartz |first=Howard |title=Lilith's Cave: Jewish tales of the supernatural |url=https://archive.org/details/lilithscavejewis00schw |publisher=Harper & Row |year=1988 |location=San Francisco |isbn=0-06-250779-6}}
* {{cite book|last=Skal|first=David J.|title=V is for Vampire |url=https://archive.org/details/visforvampirethe00skal|year=1996 |location=New York |publisher=Plume |isbn=0-452-27173-8}}
* {{cite book|last=Skal|first=David J.|title=The Monster Show: A Cultural History of Horror |url=https://archive.org/details/monstershowcultu0000skal_z3p3|year=1993 |publisher=Penguin |location=New York |isbn=0-14-024002-0}}
* {{cite book|last=Silver|first= Alain|coauthors=James Ursini|title=The Vampire Film: From Nosferatu to Bram Stoker's Dracula|url=https://archive.org/details/vampirefilmfromn0000silv|year=1993|publisher=Limelight|location=New York|isbn=0-87910-170-9}}
* {{cite book |last=Summers |first=Montague |authorlink=Montague Summers |year=2005 |origyear=1928 |title=Vampires and Vampirism |url=https://archive.org/details/vampiresvampiris0000summ |location=Mineola, NY |publisher=Dover |isbn=0-486-43996-8}} (ಮೂಲವಾಗಿ ''ದ ವ್ಯಾಂಪೈರ್ : ಹಿಸ್ ಕಿತ್ ಅಂಡ್ ಕಿನ್'' ಎಂದು ಪ್ರಕಟಿಸಲಾಗಿದೆ )
* {{cite book |last=Summers |first=Montague |year=1996 |origyear=1929 |title=The Vampire in Europe |url=https://archive.org/details/vampireineurope0000summ_s8q8 |location=Gramercy Books |publisher=New York |isbn=0-517-14989-3}} (''ದ ವ್ಯಾಂಪೈರ್ ಇನ್ ಲೋರ್ ಅಂಡ್ ಲೆಜೆಂಡ್'' ಎಂದೂ ಪ್ರಕಟಿಸಲಾಗಿದೆ, ISBN 0-486-41942-8)
* {{sr icon}} {{cite book|last=Vuković|first=Milan T.|title=Народни обичаји, веровања и пословице код Срба|publisher=Сазвежђа|year=2004|location=Belgrade|isbn=86-83699-08-0}}
* {{Cite journal
| last = Wilson
| first = Katharina M
| title = The History of the Word "Vampire"
| journal = Journal of the History of Ideas
| volume = 46
| issue = 4
| pages = 577-583
| date = Oct. - Dec., 1985
| year = 1985
| url = https://archive.org/details/sim_journal-of-the-history-of-ideas_october-december-1985_46_4/page/577
| doi =
| id = }}
* {{cite book |last=Wright |first=Dudley |title=The Book of Vampires |url=https://archive.org/details/bookofvampires0000wrig_l1b7 |year=1973 |location=New York |publisher=Causeway Books |origyear=1914 |isbn=0-88356-007-0}} (ಮೂಲವಾಗಿ ''ವ್ಯಾಂಪೈರ್ ಅಂಡ್ ವ್ಯಾಂಪಿರಿಸಂ'' ಎಂದು ಪ್ರಕಟಿಸಲಾಗಿದೆ; ''ದ ಹಿಸ್ಟರಿ ಆಫ್ ವ್ಯಾಂಪೈರ್ಸ್'' ಎಂದೂ ಪ್ರಕಟಿಸಲಾಗಿದೆ)
{{refend}}
== ಹೊರಗಿನ ಕೊಂಡಿಗಳು ==
{{Commons|Vampire}}
* [http://www.blooferland.com/drc/index.php?title=Journal_of_Dracula_Studies ''ಡ್ರಾಕುಲಾ ಅಧ್ಯಯನದ ಸಂಚಿಕೆ '' ] {{Webarchive|url=https://web.archive.org/web/20080414210504/http://www.blooferland.com/drc/index.php?title=Journal_of_Dracula_Studies |date=2008-04-14 }}
{{Interwikineeded}}
[[ವರ್ಗ:ಧರ್ಮ ಮತ್ತು ನಂಬಿಕೆಗಳು]]
[[ವರ್ಗ:ದೈಹಿಕ ಪ್ರೇತ]]
[[ವರ್ಗ:ರಕ್ತಪಿಶಾಚಿ ನಂಬಿಕೆ]]
[[ವರ್ಗ:ಆಕೃತಿ ಬದಲಾಯಿಸುವಿಕೆ]]
[[ವರ್ಗ:ಸ್ಲಾವಿಕ್ ದಂತಕಥಾ ಜೀವಿಗಳು]]
[[ವರ್ಗ:ರಕ್ತಪಿಶಾಚಿಗಳು]]
91ervujirydbaaus5x8j1mvfj1t0ta7
ಶಾನ್ ಕಾನರಿ
0
22940
1384590
1379827
2026-08-28T20:08:27Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384590
wikitext
text/x-wiki
{{Infobox person
| honorific_prefix = Sir
| name = ಶಾನ್ ಕಾನರಿ
| honorific_suffix =
| image = SeanConneryJune08.jpg
| caption = 2008 ರ ಎಡಿನ್ಬರ್ಗ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಶಾನ್ ಕಾನರಿ
| birth_name = ಥಾಮಸ್ ಶಾನ್ ಕಾನರಿ
| birth_date = {{Birth date|1930|8|25|df=yes}}
| birth_place = Fountainbridge, Edinburgh, Scotland
| death_date = {{Death date and age|2020|10|31|1930|8|25|df=yes}}<!--He died on the 31st per The New York Times and in Nassau per BBC (all cited in death section)-->
| death_place = Nassau, The Bahamas|Nassau, The Bahamas
| net_worth =
| occupation = Actor
| years_active = 1954–2003, 2012
| spouse = {{unbulleted list|{{marriage|Diane Cilento|1962|1973|end=div}}|{{marriage|Micheline Roquebrune|1975}}}}
| children = Jason Connery
| family = Neil Connery (brother)
| website = {{url|seanconnery.com}}
| signature = File:Signature of Sean Connery.svg
| module = {{Infobox military person|embed=yes
| allegiance = {{flag|United Kingdom}}
| branch = {{navy|United Kingdom}}
| serviceyears = 1946–1949
| rank = Able Seaman
| servicenumber =
| unit = HMS Formidable (67)|HMS ''Formidable''
}}
}}
'''ಸರ್ ಥಾಮಸ್ ಸೀನ್ ಕಾನರಿ''' (ಹುಟ್ಟಿದ್ದು 25 ಆಗಸ್ಟ್ 1930 - 2020), ಸಾಮಾನ್ಯವಾಗಿ '''ಸೀನ್ ಕಾನರಿ''' ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ, ಇವರು [[ಅಕಾಡೆಮಿ ಅವಾರ್ಡ್]], [[ಗೋಲ್ಡನ್ ಗ್ಲೋಬ್]], ಮತ್ತು [[BAFTA ಅವಾರ್ಡ್]] ವಿಜೇತ ಸ್ಕಾಟಿಷ್ ನಟ ಹಾಗೂ [[ನಿರ್ಮಾಪಕ]].
ಚಿತ್ರರಂಗದಲ್ಲಿ ಇವರು [[ಜೇಮ್ಸ್ ಬಾಂಡ್]] ಪಾತ್ರದಲ್ಲಿ ಅಭಿನಯಿಸುವ ಮೂಲಕ ಚಿರಪರಿಚಿತರು, 1962 ಮತ್ತು 1983ರ ಮಧ್ಯದಲ್ಲಿ ಏಳು ಬಾಂಡ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.<ref>{{cite web|url=http://news.bbc.co.uk/1/hi/entertainment/4799550.stm|title=Profile: Sean Connery|publisher=[[BBC News Online]]|accessdate=2007-03-19|date=2006-03-12}}</ref> 1988ರಲ್ಲಿ, ಕಾನರಿಯವರು ತಮ್ಮ ''[[ದ ಅನ್ಟಚಬಲ್ಸ್]]'' ಚಿತ್ರದ ಸಹನಟನೆಗಾಗಿ [[ಅತ್ಯುತ್ತಮ ಸಹನಟ ಅಕಾಡೆಮಿ ಪ್ರಶಸ್ತಿ]]ಗೆ ಪಾತ್ರರಾದರು.<ref>{{cite web|url=http://www.popculturemadness.com/Trivia/Oscars/Top-1987-O.html|title=popculture.com's Oscar Winners Archive|publisher=www.popculturemadness.com|accessdate=2008-05-13|archive-date=2011-03-01|archive-url=https://web.archive.org/web/20110301054111/http://www.popculturemadness.com/Trivia/Oscars/Top-1987-O.html|url-status=dead}}</ref> ಅವರ ಚಲನಚಿತ್ರದ ವೃತ್ತಿಜೀವನದಲ್ಲಿ ''[[ಮಾರ್ನೀ]]'' , ''[[ಇಂಡಿಯಾನಾ ಜೋನ್ಸ್ ಅಂಡ್ ಲಾಸ್ಟ್ ಕ್ರುಸೇಡ್]]'' , ''[[ದ ಹಂಟ್ ಫಾರ್ ರೆಡ್ ಅಕ್ಟೋಬರ್]]'' , ''[[ಡ್ರ್ಯಾಗನ್ಹಾರ್ಟ್]]'' , ಮತ್ತು ''[[ದ ರಾಕ್]]'' ನಂತಹ ಚಿತ್ರಗಳೂ ಸೇರಿವೆ.
ಕಾನರಿಯವರು "ಸ್ಕಾಟ್ನ ಮಹಾನ್ ವ್ಯಕ್ತಿ" ಯಾಗಿ ಆಯ್ಕೆಯಾಗಿದ್ದರು <ref>{{Cite web |url=http://findarticles.com/p/articles/mi_qn4156/is_20040125/ai_n9627858 |title=FindArticles.com |access-date=2010-03-29 |archive-date=2009-07-15 |archive-url=https://web.archive.org/web/20090715151651/http://findarticles.com/p/articles/mi_qn4156/is_20040125/ai_n9627858/ |url-status=dead }}</ref> ಹಾಗೂ 2000ರ ಜುಲೈನಲ್ಲಿ [[ಕ್ವೀನ್ ಎಲಿಜಬೆತ್ II]] ಇವರಿಂದ [[ಸರ್ ಎಂಬ ಗೌರವ]]ವನ್ನು ಸ್ವೀಕರಿಸಿದರು.<ref>{{cite web|url=http://www.seanconnery.com/biography/knighthood|title=Official website's entry on 2000 knighthood|publisher=www.seanconnery.com|accessdate=2007-09-29}}</ref> 1989ರಲ್ಲಿ, ಇವರನ್ನು ''[[ಪೀಪಲ್]] ಮ್ಯಾಗಜೀನ್'' ''ಸೆಕ್ಸಿಯೆಸ್ಟ್ ಪುರುಷ'' ನೆಂದು ಘೋಷಿಸಿತು, ಮತ್ತು 1999ರಲ್ಲಿ, ಅವರ 69ನೆಯ ವಯಸ್ಸಿನಲ್ಲಿ, ''ಶತಮಾನದ ಸೆಕ್ಸಿಯೆಸ್ಟ್ ಪುರುಷ'' ಎಂದು ಜನರಿಂದ ಚುನಾಯಿಸಲ್ಪಟ್ಟರು.
== ಆರಂಭಿಕ ಜೀವನ ==
ಥಾಮಸ್ ಸೀನ್ ಕಾನರಿ ಇವರು [[ಫೌಂಟೇನ್ ಬ್ರಿಡ್ಜ್]]ನಲ್ಲಿ ಜನಿಸಿದರು, [[ಎಡಿನ್ಬರ್ಗ್]]ನಿಂದ ಯುಫೆಮಿಯಾ "ಎಫ್ಫೀ" (née Maclean), ಇವರ ತಾಯಿ ಒಬ್ಬ ಸ್ವಚ್ಛಗೊಳಿಸುವವರು ಹಾಗೂ ತಂದೆ ಜೋಸೆಫ್ ಕಾನರಿ ಕಾರ್ಖಾನೆಯ ಕಾರ್ಮಿಕ ಹಾಗು [[ಲಾರಿ]] ಚಾಲಕರಾಗಿದ್ದರು.<ref>{{cite web|url=http://www.filmreference.com/film/58/Sean-Connery.html|title=Sean Connery Biography|publisher=www.filmreference.com|accessdate=2007-09-29}}</ref> ಇವರ ತಂದೆ [[ಕಂಟ್ರಿ ವೆಕ್ಸ್ಫೊರ್ಡ್]] ಮೂಲದ [[ಐರಿಶ್ ಡಿಸೆಂಟ್]]ನ [[ರೋಮನ್ ಕ್ಯಾಥೊಲಿಕ್]] ಕುಟುಂಬಕ್ಕೆ ಸೇರಿದವರಾಗಿದ್ದರು, ಹಾಗೂ ತಾಯಿಯು ಒಬ್ಬ [[ಪ್ರೊಟೆಸ್ಟೆಂಟ್]]. ಇವರಿಗೆ [[ನೀಲ್]] ಎಂಬ ಒಬ್ಬ ಸಹೋದರನಿದ್ದಾನೆ.
ಕಾನರಿಯವರು ನಟರಾಗುಗುವ ಮುನ್ನ ತಮ್ಮ ಬಾಲ್ಯದಲ್ಲಿ ಸೀಮಸ್ ಎಂಬ ಐರಿಷ್ ಗೆಳೆಯನನ್ನು ಹೊಂದಿದ್ದರು, ಇಬ್ಬರೂ ಒಟ್ಟಿಗೆ ಇರುವಾಗ ಇಬ್ಬರಿಗೂ ಪರಿಚಯವಿರುವ ಜನರು ಕಾನರಿಯವರ ಮಧ್ಯದ ಹೆಸರಾದ ಸೀನ್ ಎಂದು ಕರೆಯುತ್ತಿದ್ದರು ಎಂದು ಕಾನರಿಯವರು ಹೇಳಿಕೊಂಡಿದ್ದಾರೆ.
ಅವರ ಮೊದಲ ವೃತ್ತಿ ಎಡಿನ್ ಬರ್ಗ್ನ [[ಸೇಂಟ್. ಕತ್ಬರ್ಟ್ಸ್ ಕೋ-ಆಪರೇಟೀವ್ ಸೊಸೈಟಿ]]ಯಲ್ಲಿ [[ಹಾಲು ವಿತರಕ]]ನ ಕೆಲಸವಾಗಿತ್ತು.<ref>{{cite web|url=http://heritage.scotsman.com/greatscots.cfm?id=2275262005|title=From the Co-op with love.. the days Sir Sean earned £1 a week|publisher=[[The Scotsman]]|accessdate=2007-09-29|date=2005-11-21}}</ref> ನಂತರದಲ್ಲಿ ಅವರು ರಾಯಲ್ ನೇವಿ ಸೇರಿದರು ಈ ಸಮಯದಲ್ಲಿ ಅವರು ಎರಡು ಟಾಟ್ಟೂಗಳನ್ನು ಆಯ್ಕೆಮಾಡಿಕೊಂಡಿದ್ದನ್ನು ಅವರ ಅಧಿಕೃತ ವೆಬ್ಸೈಟ್ನಲ್ಲಿ ವಿವರಿಸಿದ್ದಾರೆ:
<blockquote>’ಇತರೆ ಟಾಟ್ಟೂಗಳಂತೆ, ಅವರವು ಹುಡುಗಾಟಿಕೆಯವಾಗಿರಲಿಲ್ಲ - ಅವರ ಟಾಟ್ಟೂಗಳು ಅವರ ಜೀವನದುದ್ದಕ್ಕೂ ಇದ್ದ ಎರಡು ಜವಾಬ್ದಾರಿಗಳನ್ನು ಅವು ಸೂಚಿಸುತ್ತಿದ್ದವು: ಅವರ ಕುಟುಂಬ ಮತ್ತು ಸ್ಕಾಟ್ಲ್ಯಾಂಡ್. ನಂತರ ಆರು ದಶಕಗಳ ನಂತರ, ಅವರ ಟಾಟ್ಟೂಗಳು ಅದೇ ಎರಡು ಆಲೋಚನೆಗಳನ್ನು ಬಿಂಬಿಸುತ್ತಿದ್ದವು: ಒಂದು ಟಾಟ್ಟೂ ತಮ್ಮ ತಂದೆ ತಾಯಿಯರಿಗೆ ಸಲ್ಲಿಸುವಂತಹದ್ದಾಗಿದ್ದು "ಅಮ್ಮ ಮತ್ತು ಅಪ್ಪ," ಎಂದು ಬರೆದಿತ್ತು ಮತ್ತು ಇನ್ನೊಂದರಲ್ಲಿ "ಎಂದೆಂದಿಗೂ ಸ್ಕಾಟ್ಲ್ಯಾಂಡ್" ಎಂಬುದನ್ನು ವಿವರಿಸುತ್ತಿತ್ತು.<ref>http://seanconnery.com/biography/</ref></blockquote>
ಕಾನರಿಯವರು ನಂತರ [[ಡುಯೋಡೆನಲ್]] [[ಅಲ್ಸರ್]]ನಿಂದ ಬಳಲುತ್ತಿದ್ದು ವೈದ್ಯಕೀಯ ಕಾರಣಗಳಿಂದಾಗಿ ನೇವಿಯಿಂದ [[ವಿಸರ್ಜಿಸ]]ಲ್ಪಟ್ಟರು. ಅದಾದ ಮೇಲೆ, ಅವರು ಕೋ-ಆಪ್ಗೆ ಹಿಂದಿರುಗಿದರು, ಅಲ್ಲಿ ಇತರೆ ಕೆಲಸಗಳ ಜೊತೆಗೆ, ಒಬ್ಬ ಲಾರಿ ಚಾಲಕನಾಗಿ, ಒಬ್ಬ ಕಾರ್ಮಿಕನಾಗಿ, [[ಎಡಿನ್ಬರ್ಗ್ ಕಾಲೇಜ್ ಆಫ್ ಆರ್ಟ್]]ನ ಒಬ್ಬ [[ಕಲಾವಿದನಿಗೆ ರೂಪದರ್ಶಿ]]ಯಾಗಿ , ಮತ್ತು ಹೆಣವನ್ನಿಡುವ ಪೆಟ್ಟಿಗೆಯ [[ಪಾಲಿಷ್ ಮಾಡುವವ]]ನಾಗಿ ಕಾರ್ಯ ನಿರ್ವಹಿಸಿದರು.<ref>{{cite web|url=http://news.scotsman.com/entertainment.cfm?id=924382003|title=Even as an unknown, Sean was still a draw|publisher=[[The Scotsman]]|accessdate=2007-09-29|date=2003-08-22}}</ref>
== ನಟನಾ ವೃತ್ತಿ ==
ಸ್ವಲ್ಪ ಹೆಚ್ಚು ಹಣ ಗಳಿಸುವ ಉದ್ದೇಶದಿಂದ, ಅವರು 1951ರ ಕೊನೆಯ ಭಾಗದಲ್ಲಿ [[ಕಿಂಗ್ಸ್ ಥಿಯೇಟರ್]]ನ ತೆರೆಯ ಹಿಂಬಾಗದಲ್ಲಿ ಸಹಾಯಕನಾಗಿ ಕೆಲಸ ಮಾಡಿದರು.<ref name="Tiscali" /> ಈ ಕೆಲಸಗಳಲ್ಲಿ ಅವರು ಹೆಚ್ಚಿನ ಆಸಕ್ತಿ ಹೊಂದಿದರು, ಮತ್ತು ಒಂದು ವೃತ್ತಿ ಜೀವನ ಪ್ರಾರಂಭವಾಯಿತು.
ಜೊತೆಯಲ್ಲಿಯೇ ಅವರು [[ಬಾಡಿಬಿಲ್ಡಿಂಗ್]] ಅನ್ನು ಹವ್ಯಾಸವಾಗಿ ಬೆಳೆಸಿಕೊಂಡರು. ಅವರ ಅಧಿಕೃತ ವೆಬ್ಸೈಟ್ನಲ್ಲಿರುವ ಹೇಳಿಕೆಯಂತೆ ಅವರು 1950ರ [[ಮಿಸ್ಟರ್. ಯೂನಿವರ್ಸ್]] ಸ್ಪರ್ಧೆಯಲ್ಲಿ ಮೂರನೆಯವಗಾಗಿ ಆಯ್ಕೆಯಾಗಿದ್ದರು, ಬಹಳಷ್ಟು ಮೂಲಗಳು ಅವರನ್ನು 1953ರ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದವು ಕಿರಿಯರ ವರ್ಗದಲ್ಲಿ ಮೂರನೆಯವರು<ref name="Tiscali">{{cite web |url=http://www.tiscali.co.uk/entertainment/film/biography/artist/sean-connery/biography/114?page=3 |title=Sean Connery - Biography |last=Wills |first=Dominic |publisher=[[Tiscali]] |accessdate=September 20, 2009 }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಅಥವಾ ಉದ್ದನೆಯ ವ್ಯಕ್ತಿ ವರ್ಗೀಕರಣದಲ್ಲಿ ಭಾಗವಹಿಸಲು ವಿಫಲರಾದರು.<ref>{{cite web |url=http://musclememory.com/show.php?c=Mr+Universe+-+NABBA&y=1953 |title=1953 Mr. Universe - NABBA |accessdate=September 20, 2009 |archive-date=ಜುಲೈ 29, 2010 |archive-url=https://web.archive.org/web/20100729043018/http://musclememory.com/show.php?c=Mr+Universe+-+NABBA&y=1953 |url-status=dead }}</ref> ಇನ್ನೊಬ್ಬ ಸ್ಪರ್ಧಿಯು ''ಸೌತ್ ಪೆಸಿಫಿಕ್'' ನಿರ್ಮಾಣದಲ್ಲಿ ಆಡಿಷನ್ಗಳು ನಡೆಯುವುದರ ಬಗ್ಗೆ ಉಲ್ಲೇಖಿಸಿದರು;<ref name="Tiscali" /> ಕಾನರಿಯವರು ಒಂದು ಸಣ್ಣ ಪಾತ್ರವನ್ನು ಗಳಿಸಿದರು.
ಕಾನರಿಯವರು ಒಬ್ಬ ಒಳ್ಳೆಯ [[ಫುಟ್ಬಾಲ್]] ಆಟಗಾರರೂ ಆಗಿದ್ದರು, ಬಾಲ್ಯದ ದಿನಗಳಲ್ಲಿ [[ಬಾನಿರಿಗ್ಗ್ ರೋಸ್]]ಗಾಗಿ ಆಟ ಆಡಿದ್ದರು. ಅವರು [[ಈಸ್ಟ್ ಫಿಫೆ]]ಯ ಜೊತೆ ಪರೀಕ್ಷಾ ಪಂದ್ಯದಲ್ಲಿ ಅವಕಾಶವನ್ನು ಗಳಿಸಿದ್ದರು. [[ಮಾಂಚೆಸ್ಟರ್ ಯುನೈಟೆಡ್]]ನ ನಿರ್ವಾಹಕ ಆಯ್ಕೆಮಾಡಿದ ಆಟಗಾರನಾಗಿ ''ಸೌತ್ ಪೆಸಿಫಿಕ್'' ಜೊತೆಯಲ್ಲಿ ಪ್ರವಾಸದಲ್ಲಿದ್ದಾಗ ಸ್ಥಳೀಯ ತಂಡ [[ಮ್ಯಾಟ್ ಬುಸ್ಬಿ]] ವಿರುದ್ಧ ಫುಟ್ಬಾಲ್ ಆಟ ಆಡಿದ್ದರು. ವರದಿಗಳ ಪ್ರಕಾರ, ಬುಸ್ಬಿಯು ಪಂದ್ಯದ ಒಂದು ವಾರದ ನಂತರ [[£]]25ಗಳ ಮೊತ್ತಕ್ಕೆ ಒಪ್ಪಂದಕ್ಕೆ ಆಹ್ವಾನಿಸಿತು. ಕಾನರಿಯವರೇ ಒಪ್ಪಿಕೊಂಡಂತೆ ಆ ಆಹ್ವಾನದಿಂದ ಮೋಹಕ್ಕೊಳಗಾಗಿದ್ದರು, ಆದರೆ ನಂತರ ಯೋಚಿಸಿದಾಗ, " ನಾನು ಅರ್ಥಮಾಡಿಕೊಂಡಿದ್ದು ಒಬ್ಬ ಮೇಲ್ವರ್ಗದ ಫುಟ್ಬಾಲ್ ಆಟಗಾರನು 30ವರ್ಷ ವಯಸ್ಸಾಗುವುದರಲ್ಲಿ ಆಟದ ಉತ್ತುಂಗಕ್ಕೇರಬೇಕು, ಹಾಗೂ ನನಗಾಗಲೇ 23ವಯಸ್ಸಾಗಿದೆ. ನಾನು ನಟನಾಗಬೇಕೆಂದು ನಿರ್ಧರಿಸಿದೆ ಮತ್ತು ಇದು ನನ್ನ ಜಾಣತನವನ್ನು ಉಪಯೋಗಿಸಿಕೊಳ್ಳುವುದಕ್ಕೆ ಇದು ಉತ್ತಮವಾದದ್ದು ಎನಿಸಿತು."<ref>{{cite web |url=http://www.footballcentral.org/sfa/associations/scottish-junior-football-association/junior_game/sean_connery.cfm |title=NoNo7 |accessdate=2008-05-19 |year=2005 |month=April |publisher=Mud & Glory |archive-date=2007-10-11 |archive-url=https://web.archive.org/web/20071011145404/http://www.footballcentral.org/sfa/associations/scottish-junior-football-association/junior_game/sean_connery.cfm |url-status=dead }}</ref>
''[[ಅನದರ್ ಟೈಮ್, ಅನದರ್ ಪ್ಲೇಸ್]]'' (1958) ಚಿತ್ರದ ಪಾತ್ರವು ಅವರ ಪ್ರಮುಖ ಪಾತ್ರಗಳಲ್ಲೊಂದು. ಚಿತ್ರೀಕರಣದ ಸಂದರ್ಭದಲ್ಲಿ, ಲಾಸ್ ಏಂಜಲೀಸ್ನಿಂದ ಭೇಟಿ ನೀಡುತ್ತಿದ್ದ ನಟಿ [[ಲಾನಾ ಟರ್ನರ್]]ಳ ಗ್ಯಾಂಗ್ಸ್ಟರ್ ಗೆಳೆಯ [[ಜಾನಿ ಜಾನಿ ಸ್ಟಂಪನಾಟೊ]] ಅವಳು ಕೆಲಸದ ಸ್ಥಳದಲ್ಲಿ ಕಾನರಿಯೊಂದಿಗೆ ಸಂಬಂಧ ಹೊಂದಿದ್ದಾಳೆಂದು ನಂಬಿದ. ಅವನು ಚಿತ್ರೀಕರಣದ ಸ್ಥಳಕ್ಕೆ ಧಾವಿಸಿ ಗನ್ ಅನ್ನು ಕಾನರಿಯವರೆಡೆ ತೋರಿಸುತ್ತಾ ಅವರನ್ನು ನಿಶಸ್ತ್ರರನ್ನಾಗಿ ಮಾಡಲು ಬೆನ್ನಿಗೆ ಗುದ್ದಿದ, ಇದರಿಂದಾಗಿ ಸ್ಟಂಪನಾಟೊವನ್ನು ಚಿತ್ರೀಕರಣದಿಂದ ಬಹಿಷ್ಕರಿಸಲಾಯಿತು.<ref>{{Cite web |url=http://www.strongsville-ohio.net/data/columns/entertainment/archive/0011.html |title=That's Hollywood! |access-date=2010-03-29 |archive-date=2007-09-27 |archive-url=https://web.archive.org/web/20070927070157/http://www.strongsville-ohio.net/data/columns/entertainment/archive/0011.html |url-status=dead }}</ref>. ಸ್ಟಂಪನಾಟೊನ ಯಜಮಾನ [[ಮಿಕ್ಕಿ ಕೊಹೆನ್]]ನ ಕೆಳಗೆ ಕೆಲಸ ಮಾಡುವ ಒಬ್ಬನಿಂದ ಬೆದರಿಕೆಗಳನ್ನು ಕೇಳಿದ ನಂತರ ಕಾನರಿ ಸುಳ್ಳು ಹೇಳಲೇಬೇಕಾಯಿತೆಂದು ವಿವರಿಸಿದ್ದಾರೆ.
''[[ಡರ್ಬಿ ಒ’ಗಿಲ್ ಅಂಡ್ ದ ಲಿಟಲ್ ಪೀಪಲ್]]'' (1959) ಎಂಬ ಪ್ರಸಿದ್ಧ ಡಿಸ್ನಿ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಕಾನರಿಯವರು ಪಡೆದುಕೊಂಡರು. [[BBC ದೂರದರ್ಶನ]]ದ 1961ರ [[ರುಡೋಲ್ಫ್ ಕಾರ್ಟಿಯೆರ್]] ನಿರ್ಮಾಣದ ''[[ಅನ್ನಾ ಕರೆನಿನಾ]]'' ದಲ್ಲಿ ಪ್ರಮುಖ ಪಾತ್ರವನ್ನು ಪಡೆದುಕೊಂಡರು, ಇದರಲ್ಲಿ [[ಕ್ಲೆಯಿರ್ ಬ್ಲೂಮ್]] ಅವರು ಸಹನಟರಾಗಿ ಅಭಿನಯಿಸಿದ್ದರು.<ref name="karenina">{{cite web|url=http://www.screenonline.org.uk/people/id/1181098/index.html|title=Cartier, Rudolph (1904–1994)|first=Oliver|last=Wake|publisher=[[Screenonline]]|accessdate=2007-02-25}}</ref>
=== ಜೇಮ್ಸ್ ಬಾಂಡ್ (1962-1967;1971;1983) ===
ಗೂಢಚಾರ [[ಜೇಮ್ಸ್ ಬಾಂಡ್]] ಪಾತ್ರದಿಂದ ಕಾನರಿಯವರ ವೃತ್ತಿಯಲ್ಲಿ ಪ್ರಮುಖ ತಿರುವು ಸಿಕ್ಕಿತು. ಅವರು ಏಳು ಬಾಂಡ್ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದರು: ''[[Dr. ನೊ]]'' (1962), ''[[ಫ್ರಮ್ ರಷಿಯಾ ವಿತ್ ಲವ್]]'' (1963), ''[[ಗೋಲ್ಡ್ ಫಿಂಗರ್]]'' (1964), ''[[ಥಂಡರ್ಬಾಲ್]]'' (1965), ''[[ಯು ಓನ್ಲಿ ಲೀವ್ ಟ್ವೈಸ್]]'' (1967), ''[[ಡೈಮಂಡ್ಸ್ ಆರ್ ಫಾರೆವರ್]]'' (1971), ಮತ್ತು ''[[ನೆವರ್ ಸೇ ನೆವರ್ ಅಗೈನ್]]'' (1983). ಎಲ್ಲಾ ಏಳು ಚಿತ್ರಗಳೂ ಆರ್ಥಿಕವಾಗಿ ಯಶಸ್ಸುಗಳಿಸಿವೆ.
ಜೇಮ್ಸ್ ಬಾಂಡ್ ನಿರ್ಮಾಪಕ,[[ಐಯಾನ್ ಫ್ಲೆಮಿಂಗ್]] ಅವರು ಮೊದಲಿಗೆ ಇವರನ್ನು ಪಾತ್ರಕ್ಕೆ ಆಯ್ಕೆಮಾಡಿಕೊಳ್ಳುವಾಗ ಅನುಮಾನ ವ್ಯಕ್ತಪಡಿಸಿ, "ಅವನು ನನ್ನ ಕಲ್ಪನೆಯ ಜೇಮ್ಸ್ ಬಾಂಡ್ ತರಹ ಕಾಣಿಸುವುದಿಲ್ಲ" ಮತ್ತು "ನಾನು ಒಬ್ಬ ಬಾಂಡ್ ಮುಖಂಡನನ್ನು ಹುಡುಕುತ್ತಿದ್ದೇನೆ ಮತ್ತು ಹೆಚ್ಚು ಬೆಳೆದ ಸಾಹಸ ಪ್ರದರ್ಶಕನನ್ನಲ್ಲ," ಕಾನರಿಯು (ಮಸ್ಕ್ಯುಲರ್, 6' 2", ಮತ್ತು ಒಬ್ಬ ಸ್ಕಾಟ್) ಇದರಲ್ಲಿ ಇನ್ನೂ ಅನುಭವ ಹೊಂದಿಲ್ಲ ಎಂದು ಕೂಡಾ ಸೇರಿಸಿದರು.
ಆದಾಗ್ಯೂ ಫ್ಲೆಮಿಂಗ್ನ ಗೆಳತಿಯು ಕಾನರಿಗೆ ಅವಶ್ಯಕವಾಗಿ ಬೇಕಾದ ಲೈಂಗಿಕ ಆಕರ್ಷಣಾ ಶಕ್ತಿ ಇದೆ ಎಂದು ಹೇಳಿದಳು. ನಂತರ ''Dr. ನೊ'' ಚಿತ್ರದ ಪ್ರೀಮಿಯರ್ನ ಯಶಸ್ಸಿನ ನಂತರ ತನ್ನ ಮನಸ್ಸು ಬದಲಿಸಿದನು; ಅದರಿಂದ ಅವನು ಬಹಳ ಆಕರ್ಶಿತನಾದನು, ನಂತರದ ಕಾದಂಬರಿಗಳಲ್ಲಿ ಜೇಮ್ಸ್ ಬಾಂಡ್ನನ್ನು ಅರ್ಧ-ಸ್ಕಾಟಿಷ್, ಅರ್ಧ-ಸ್ವಿಸ್ ನವನಾಗಿ ರೂಪಿಸಿದನು.
ನಟನ ದೈಹಿಕ ಸೌಷ್ಠವವನ್ನು ಬಳಸಿಕೊಳ್ಳುವಾಗ ಮತ್ತು ಹೊಡೆದಾಟದ ದೃಶ್ಯಗಳಲ್ಲಿ ನಿರ್ದೇಶಕ [[ಟೆರೆನ್ಸ್ ಯಂಗ್]] ಅವರು ನಟನೆಗೆ ಇನ್ನೂ ಹೆಚ್ಚಿನ ಮೆರುಗನ್ನು ನೀಡುವಲ್ಲಿ ಸಲಹೆಗಳನ್ನು ಪಡೆದು ಜೇಮ್ಸ್ ಬಾಂಡ್ ಪಾತ್ರಧಾರಿ ಕಾನರಿಯವರು ಉತ್ತಮ ಶೈಲಿಗಳನ್ನು ತಮ್ಮದಾಗಿಸಿಕೊಂಡರು. ರಾಬರ್ಟ್ ಕಾಟನ್ ಅವರು ಬರೆದ ಕಾನರಿ ಜೀವನಚರಿತ್ರೆಯಲ್ಲಿ[[ಲೂಯಿಸ್ ಮ್ಯಾಕ್ಸ್ವೆಲ್]] (ಮೊದಲ [[ಮಿಸ್ ಮನಿಪೆನ್ನಿ]]) ಗಮನಿಸಿದಂತೆ, "ಟೆರೆನ್ಸ್ ಅವರು ಸೀನ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನು ಊಟಕ್ಕೆ ಕರೆದುಕೊಂಡು ಹೋಗಿ, ಹೇಗೆ ನಡೆಯಬೇಕು ಹೇಗೆ ಮಾತಾಡಬೇಕು, ಹೇಗೆ ತಿನ್ನಬೇಕೆಂದು ಕೂಡಾ ತೋರಿಸಿದ್ದಾರೆ." ಕಾಟನ್ ಅವರು ಹೀಗೆ ಬರೆಯುತ್ತಾರೆ, "ಚಿತ್ರತಂಡದ ಕೆಲವು ಸದಸ್ಯರು ಹೇಳುವಂತೆ ಕಾನರಿಯವರು ಸುಮ್ಮನೆ ಟೆರೆನ್ಸ್ ಯಂಗ್ ಹೇಳಿದಂತೆಯೇ ಮಾಡುತ್ತಾ ಹೋಗುತ್ತಾರೆ, ಆದರೆ ಯಂಗ್ ಮತ್ತು ಕಾನರಿಯವರಿಬ್ಬರಿಗೂ ತಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇವೆಂಬ ಅರಿವಿತ್ತು."<ref>{{cite web |url=http://www.hmss.com/films/young.htm |title=Terence Young: James Bond's Creator? |publisher=www.hmss.com |accessdate=2007-09-29 |archive-date=2010-02-23 |archive-url=https://web.archive.org/web/20100223020951/http://www.hmss.com/films/young.htm |url-status=dead }}</ref>
2005ರಲ್ಲಿ, ''ಫ್ರಮ್ ರಷಿಯಾ ವಿತ್ ಲವ್'' ಚಿತ್ರವು [[ಎಲೆಕ್ಟ್ರಾನಿಕ್ಸ್ ಆರ್ಟ್ಸ್]]ನಿಂದ [[ವೀಡಿಯೋ ಗೇಮ್]]ಗೆ ಅಳವಡಿಸಲ್ಪಟ್ಟಿತು,''[[James Bond 007: From Russia with Love]]'' ಆ ಚಿತ್ರದ ಪೋಷಕ ಪಾತ್ರ ಅವರಿಗೆ ಇಷ್ಟವಾದುದಾಗಿತ್ತು ಹಾಗೂ ಗೇಮ್ ಆವೃತ್ತಿಗೆ ಹೊಸದಾಗಿ ಧ್ವನಿಮುದ್ರಣದ ಕೆಲಸವನ್ನು ಕಾನರಿಯವರು ಮಾಡಿಕೊಟ್ಟರು.
=== ಬಾಂಡ್ಗಿಂತಲೂ ಮುಂದಕ್ಕೆ(1983-ಈಗಿನವರೆಗೂ) ===
[[ಚಿತ್ರ:SeanConnery88.jpg|thumb|right|1988ರಲ್ಲಿ ಕಾನರಿ]]
ಬಾಂಡ್ ಚಿತ್ರಗಳಲ್ಲಿ ಅಭಿನಯಿಸುವಾಗಲೇ, ಕಾನರಿಯವರು ಇತರೆ ಚಿತ್ರಗಳಾದ [[ಅಲ್ಫ್ರೆಡ್ ಹಿಚ್ಕಾಕ್]] ಅವರ ''[[ಮಾರ್ನೀ]]'' (1964) ಮತ್ತು ''[[ಮರ್ಡರ್ ಆನ್ ದ ಓರಿಯಂಟ್ ಎಕ್ಸ್ಪ್ರೆಸ್]]'' (1974) ಚಿತ್ರಗಳಲ್ಲಿಯೂ ಅಭಿನಯಿಸಿದರು. 1975ರಲ್ಲಿ ಬಿಡುಗಡೆಯಾದ ''[[ದ ಮ್ಯಾನ್ ಹು ವುಡ್ ಬಿ ಕಿಂಗ್]]'' ಮತ್ತು ''[[ದ ವಿಂಡ್ ಅಂಡ್ ದ ಲಯನ್]]'' ಚಿತ್ರಗಳಲ್ಲದೆ ನಂತರದ ದಶಕದಲ್ಲಿ ಕಾನರಿಯವರಿಗೆ ಅತ್ಯಂತ ಯಶಸ್ಸು ತಂದು ಕೊಟ್ಟ ಪಾತ್ರವಹಿಸಿದ ಚಿತ್ರಗಳೆಂದರೆ ''[[ಮರ್ಡರ್ ಒನ್ ಥೆ ಓರಿಯೆಂಟ್ ಎಕ್ಸ್ಪ್ರೆಸ್]]'' (1974) ಮತ್ತು ''[[ಎ ಬ್ರಿಡ್ಜ್ ಟೂ ಫಾರ್]]'' (1977).
1981ರಲ್ಲಿ, ಸೀನ್ ಕಾನರಿಯವರು [[ಅಗೇಮೆಮ್ನನ್]] ಪಾತ್ರದಲ್ಲಿ ''[[ಟೈಮ್ ಬ್ಯಾಂಡಿಟ್ಸ್]]'' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಪಾತ್ರದ ಆಯ್ಕೆ ಒಂದು ಜೋಕ್ನಿಂದಾಗಿದೆ ಅದನ್ನು [[ಮೈಕೇಲ್ ಪಲಿನ್]] ಅವರು ಸೇರಿಸಿದ್ದಾರೆ, ಇದರಲ್ಲಿ ಪಾತ್ರವನ್ನು ಹೀಗೆ ವರ್ಣಿಸಿದ್ದಾರೆ "ಸೀನ್ ಕಾನರಿ — ಅಥವಾ ಸಮನಾದ ಆದರೆ ಕಡಿಮೆ ಶ್ರೇಷ್ಟತೆಯನ್ನು ಹೊಂದಿದ ಒಬ್ಬ ವ್ಯಕ್ತಿ".<ref>{{cite web |url=http://www.channel4.com/film/reviews/film.jsp?id=109365§ion=extras |title=Time Bandits Extras |publisher=[[Channel 4]] |accessdate=February 15, 2009}}</ref> ಸ್ಕ್ರಿಪ್ಟ್ ನೋಡಿ ಕಾನರಿಯವರು ಸಹನಟನಾಗಿ ಅಭಿನಯಿಸಲು ಸಂತೋಷ ಪಟ್ಟರು.
1983ರಲ್ಲಿ ''[[ನೆವರ್ ಸೇ ನೆವರ್ ಅಗೈನ್]]'' ಅನುಭವದ ಮತ್ತು ಕೋರ್ಟ್ ಪ್ರಕರಣದ ನಂತರದಲ್ಲಿ, ಎರಡು ಪ್ರಮುಖ ಸ್ಟೂಡಿಯೋಗಳ ಮೇಲೆ ಅಸಂತೋಷವುಂಟಾಗಿ ಎರಡು ವರ್ಷಗಳ ಕಾಲ ಯಾವುದೇ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ನಂತರ ಯೂರೋಪಿಯನ್ ನಿರ್ಮಾಣದ ಯಶಸ್ವೀ ಚಲನಚಿತ್ರ ''[[ದ ನೇಮ್ ಆಫ್ ದ ರೋಸ್]]'' (1986), ಚಿತ್ರದ ಅಭಿನಯಕ್ಕಾಗಿ [[BAFTA]] ಅವಾರ್ಡ್ ಗಳಿಸಿದರು, ಕಾನರಿಯವರ ವಾಣಿಜ್ಯ ಚಿತ್ರಗಳತ್ತ ಇರುವ ಆಸಕ್ತಿಯು ಪುನಃಜೀವಂತವಾಯಿತು. ಅದೇ ವರ್ಷ, ''[[ಹೈಲ್ಯಾಂಡರ್]]'' ಚಿತ್ರದ ಪೋಷಕ ಪಾತ್ರದಲ್ಲಿ ಅಭಿನಯಿಸುವುದರೊಂದಿಗೆ ತಮಗಿಂತ ಹಿರಿಯ ಉಪದೇಶಕರಿಂದ ಕಿರಿಯ ಮಾರ್ಗದರ್ಶಕರವರೆಗೆ ಎಲ್ಲರಿಗೂ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿಕೊಟ್ಟರು, ಇದು ಅವರ ಹಲವಾರು ಚಿತ್ರಗಳಲ್ಲಿ ಪುನರಾವರ್ತಕ ಪಾತ್ರವಾಯಿತು.
ನಂತರದ ವರ್ಷದಲ್ಲಿ, ಮೊಂಡುತನದ ಪೋಲೀಸ್ ಆಗಿ ''[[ದ ಅನ್ಟಚಬಲ್ಸ್]]'' (1987) ನಲ್ಲಿ ನೀಡಿದ ಮನೋಜ್ಞ ಅಭಿನಯಕ್ಕೆ ಅವರು [[ಉತ್ತಮ ಪೋಷಕ ನಟ ಅಕಾಡೆಮಿ ಅವಾರ್ಡ್]] ಗಳಿಸಿದರು, ಅವರ ವೃತ್ತಿಜೀವನದುದ್ದಕ್ಕೂ ಗಳಿಸಿದ ಒಂದೇ ನಾಮನಿರ್ದೇಶನ ಇದಾಗಿತ್ತು.
ಆನಂತರ ಬಾಕ್ಸ್-ಆಫೀಸ್ನಲ್ಲಿ ಯಶಸ್ಸು ಗಳಿಸಿದ ಚಿತ್ರಗಳೆಂದರೆ ಮುಖ್ಯಪಾತ್ರದ ತಂದೆಯ ಪಾತ್ರದಲ್ಲಿ ಅಭಿನಯಿಸಿದ ''[[ಇಂಡಿಯಾನಾ ಜೋನ್ಸ್ ಅಂಡ್ ದ ಲಾಸ್ಟ್ ಕ್ರುಸೇಡ್]]'' ,''[[ದ ಹಂಟ್ ಫಾರ್ ರೆಡ್ ಅಕ್ಟೋಬರ್]]'' (1990) (ಇದರಲ್ಲಿ ವರದಿಯಾಗಿರುವಂತೆ ಇವರನ್ನು ಎರಡು ವಾರಗಳಿಗಾಗಿ ಕರೆಯಲಾಗಿತ್ತು'), ''[[ದ ರಷಿಯಾ ಹೌಸ್]]'' (1990), ''[[ದ ರಾಕ್]]'' (1996), ಮತ್ತು ''[[ಎಂಟ್ರಾಪ್ಮೆಂಟ್]]'' (1999). ''ಲಾಸ್ಟ್ ಕ್ರುಸೇಡ್'' ಮತ್ತು ''ದ ರಾಕ್'' ಎರಡೂ ಚಿತ್ರಗಳು ಪರೋಕ್ಷವಾಗಿ ಜೇಮ್ಸ್ ಬಾಂಡ್ನ ದಿನಗಳನ್ನು ನೆನಪಿಸಿದವು. [[ಸ್ಟೀವನ್ ಸ್ಪಿಯೆಲ್ಬರ್ಗ್]] ಮತ್ತು [[ಜಾರ್ಜ್ ಲುಕಾಸ್]] "[[ಇಂಡಿಯಾನಾ ಜೋನ್ಸ್]]ನ ತಂದೆ" ಕಾನರಿಯೇ ಆಗಬೇಕೆಂದು ಕೊಂಡರು ಏಕೆಂದರೆ ''[[ಇಂಡಿಯಾನಾ ಜೋನ್ಸ್]]'' ಸರಣಿಯು ನೇರವಾಗಿ ಬಾಂಡ್ ಚಿತ್ರದ ಸ್ಪೂರ್ತಿಯಾಗಿದೆ, ''ದ ರಾಕ್'' ನಲ್ಲಿನ ಅವರ ಜಾನ್ ಪ್ಯಾಟ್ರಿಕ್ ಮೇಸನ್ನ ಪಾತ್ರವು 1960ದಶಕದಿಂದ ಖೈದಿಯಾಗಿದ್ದ ಒಬ್ಬ ಬ್ರಿಟಿಷ್ ಗುಪ್ತಚರನದಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ, ಚಿತ್ರಗಳಾದ ''[[ಫರ್ಸ್ಟ್ ನೈಟ್]]'' (1995),''[[ದ ಅವೆಂಜರ್ಸ್]]'' (1998) ಮತ್ತು ''[[ದ ಲೀಗ್ ಆಫ್ ಎಕ್ಸ್ಟಾರ್ಡಿನರಿ ಜಂಟಲ್ಮೆನ್]]'' (2003) ಬಾಕ್ಸ್ ಆಫೀಸ್ನಲ್ಲಿ ಗೆದ್ದಿವೆ ಹಾಗೂ ವಿಮರ್ಶಾತ್ಮಕವಾಗಿ ನಿರಾಶೆಗೊಳಿಸಿವೆ, ಆದರೆ ''[[ಫೈಂಡಿಂಗ್ ಫಾರೆಸ್ಟರ್]]'' (2000) ಗಳಂತಹ ಚಿತ್ರಕ್ಕಾಗಿ ಸಕಾರಾತ್ಮಕ ಅಭಿಪ್ರಾಯಗಳನ್ನು ಗಳಿಸಿದ್ದಾರೆ. ಸಿನೆಮಾ ಪ್ರಪಂಚಕ್ಕೆ ನೀಡಿದ ಮಹೋನ್ನತ ಅಭಿನಯದ ಸಾಧನೆಗಾಗಿ ಅವರು[[ಕ್ರಿಸ್ಟಲ್ ಗ್ಲೋಬ್]] ಅನ್ನೂ ಗಳಿಸಿದರು.
=== ನಿವೃತ್ತಿ ===
ಕಾನರಿಯವರು ಚಿತ್ರದ ಸಂದರ್ಶನದಲ್ಲಿ ಹೇಳಿರುವಂತೆ (DVD ಬಿಡುಗಡೆಯೂ ಸಹ) ಅವರಿಗೆ ''[[ದ ಲಾರ್ಡ್ ಆಫ್ ದ ರಿಂಗ್ಸ್]]'' ಸರಣಿಯಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು "ಸ್ಕ್ರಿಪ್ಟ್ ಅರ್ಥವಾಗದ ಕಾರಣ" ನಿರಾಕರಿಸಿದರಂತೆ. [[CNN]] ವರದಿಮಾಡಿರುವಂತೆ ಅವರಿಗೆ [[ಗಂಡಾಲ್ಫ್]]ನಲ್ಲಿ ಅಭಿನಯಿಸುವುದಕ್ಕಾಗಿ ಪ್ರಪಂಚದಾದ್ಯಂತ ಬಾಕ್ಸ್-ಆಫೀಸ್ನಲ್ಲಿ ಗಳಿಸುವ ಆದಾಯದಲ್ಲಿ 15% ಹಣವನ್ನು ನೀಡುವುದಾಗಿ ಕೇಳಿಕೊಂಡಿದ್ದರು, ಅದರಲ್ಲಿ ಸ್ವೀಕರಿಸಿದ್ದರೆ, ಸುಮಾರು $400 ಮಿಲಿಯನ್ಗಳಷ್ಟು ಗಳಿಸಿಬಹುದಾಗಿತ್ತು.<ref>http://www.cnn.com/2008/LIVING/worklife/10/20/mf.rejected.movies/index.html</ref> ಆ ಸರಣಿಯ ಬೃಹತ್ ಪ್ರಮಾಣದ ಯಶಸ್ಸಿನ ನಂತರ, ಕಾನರಿಯವರು ''ಲೀಗ್ ಆಫ್ ಎಕ್ಸ್ಟ್ರಾರ್ಡಿನರಿ ಜಂಟಲ್ಮೆನ್'' , ಚಿತ್ರವನ್ನು ಅರ್ಥಮಾಡಿಕೊಳ್ಳದೇ ಇದ್ದರೂ ಅದರಲ್ಲಿ ಅಭಿನಯಿಸಲು ಒಪ್ಪಿಕೊಂಡರು. 2005ರ ಜುಲೈನಲ್ಲಿ, ಚಿತ್ರ-ನಿರ್ಮಾಣದಿಂದ ಅವರು ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆಂಬ ವರದಿ ಪ್ರಕಟವಾಯಿತು, ನಂತರ "ಈಡಿಯಟ್ಸ್ ನೌ ಇನ್ ಹಾಲಿವುಡ್"ನ ಭ್ರಮನಿರಸನದಿಂದಾಗಿ ಹಾಗೂ 2003ರ ಚಿತ್ರ ನಿರ್ಮಾಣದಲ್ಲಿ ಆದ ಗಲಭೆಯಿಂದಾಗಿ ಈ ನಿರ್ಧಾರ ತೆಗೆದುಕೊಂಡರು.<ref>{{cite web|url=http://news.scotsman.com/entertainment.cfm?id=1707662005|title=Never say never, but Connery ends career|publisher=[[The Scotsman]]|accessdate=2007-09-29|date=2005-07-31|archive-date=2007-05-16|archive-url=https://web.archive.org/web/20070516093852/http://news.scotsman.com/entertainment.cfm?id=1707662005|url-status=dead}}</ref>
2005ರಲ್ಲಿ ಬಿಡುಗಡೆಯಾಗಬೇಕಿದ್ದ ''[[ಜೋಸಿಯಾಹ್ಸ್ ಕೆನನ್]]'' ಚಿತ್ರವನ್ನು 2004ರ ಸೆಪ್ಟೆಂಬರ್ನಲ್ಲಿ ಹಿಂತೆಗೆದುಕೊಂಡುದಕ್ಕಾಗಿ ಕಾನರಿ ಈ ನಿರ್ಧಾರ ತೆಗೆದುಕೊಂಡಿರುವರೆಂದು ಮಾಧ್ಯಮವು ವರದಿ ಮಾಡಿತು. ಹೇಗಾದರೂ, 2004 ಡಿಸೆಂಬರ್ನಲ್ಲ್ಲಿ ನಡೆದ ''[[ದ ಸ್ಕಾಟ್ಸ್ಮನ್]]'' ವಾರ್ತಾಪತ್ರಿಕೆ ಜೊತೆಯಲ್ಲಿ ತಮ್ಮ ಮನೆ [[ಬಹಮನ್ಸ್]]ನಿಂದ ನಡೆದ ಸಂದರ್ಶನದಲ್ಲಿ, ಕಾನರಿಯವರು ತಮ್ಮ [[ಜೀವನಚರಿತ್ರೆ]]ಯನ್ನು ಬರೆಯುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಅಭಿನಯದಿಂದ ಕೆಲಕಾಲ ದೂರ ಉಳಿಯುವುದಾಗಿ ಹೇಳಿದರು. 2006ರ ಮಾರ್ಚ್ನಲ್ಲಿ ನ್ಯೂಯಾರ್ಕ್ನಲ್ಲಿ [[ಟಾರ್ಟನ್ ಡೇ]] ಆಚರಿಸುವಾಗ, ಕಾನರಿಯವರು ಮತ್ತೊಮ್ಮೆ ತಾವು ಇತಿಹಾಸ ಪುಸ್ತಕವೊಂದನ್ನು ಬರೆಯುತ್ತಿರುವುದಾಗಿ ಅದಕ್ಕಾಗಿ ಅಭಿನಯದಿಂದ ನಿವೃತ್ತಿ ಹೊಂದುತ್ತಿರುವುದಾಗಿ ತಿಳಿಸಿದರು. 25 ಆಗಸ್ಟ್ 2008ರಂದು, ಅವರ 78ನೆಯ ಜನ್ಮದಿನದಂದು, ಸಹ-ಲೇಖಕ [[ಮುರ್ರೇ ಗ್ರಿಗರ್]] ಜೊತೆಗೂಡಿ ಬರೆದ ತಮ್ಮ ಜೀವನಚರಿಗ್ರೆ ''ಬೀಯಿಂಗ್ ಎ ಸ್ಕಾಟ್'' ಅನ್ನು ಹೊರತಂದರು.
[[ಸಲಾಡಿನ್]] ಮತ್ತು [[ಕ್ರುಸೇಡ್ಸ್]] ಬಗೆಗಿನ $80 ಮಿಲಿಯನ್ ಚಿತ್ರದಲ್ಲಿ ಅಭಿನಯಿಸಬೇಕೆಂದು ಕೊಂಡಿದ್ದರು ಅದು [[ಜೋರ್ಡನ್]]ನಲ್ಲಿ ಚಿತ್ರೀಕರಣವಾಗಬೇಕಿತ್ತು ಅದಕ್ಕಿಂತ ಮೊದಲೇ [[2005 ಅಮ್ಮನ್ ಸ್ಪೋಟ]]ದಲ್ಲಿ ನಿರ್ಮಾಪಕ [[ಮುಸ್ತಾಫ ಅಕ್ಕಡ್]] ಅವರು ಕೊಲೆಯಾದರು. 8 ಜೂನ್ 2006ರಂದು ಕಾನರಿಯವರು [[ಅಮೆರಿಕನ್ ಫಿಲ್ಮ್ ಇನ್ಸ್ಟಿಟ್ಯೂಟ್]]ನಿಂದ ತಮ್ಮ [[ಜೀವಮಾನದ ಸಾಧನೆಗಾಗಿ ಪ್ರಶಸ್ತಿ]] ಗಳಿಸಿದಾಗ ಅವರು ಮತ್ತೊಮ್ಮೆ ತಾವು ಅಭಿನಯದಿಂದ ನಿವೃತ್ತರಾಗುವುಧಾಗಿ ದೃಢೀಕರಿಸಿದರು. 7 ಜೂನ್ 2007ರಂದು, [[ನಾಲ್ಕನೆಯ ಇಂಡಿಯಾನಾ ಜೋನ್ಸ್|ನಾಲ್ಕನೆಯ ''ಇಂಡಿಯಾನಾ ಜೋನ್ಸ್'']] ಅವರು ಅಭಿನಯಿಸುತ್ತಾರೆಂಬುದನ್ನು ಅಲ್ಲಗಳೆದರು, "ನಿವೃತ್ತಿ ಜೀವನವೂ ಹಾಳು ಹಾಸ್ಯವಾಗಿದೆ" ಎಂದು ಹೇಳಿದರು.<ref>{{cite web|url=http://news.bbc.co.uk/2/hi/entertainment/6733177.stm|title=Connery bows out of Indiana film|publisher=[[BBC News]]|accessdate=2007-09-29|date=2007-06-08}}</ref>
ಕಾನರಿಯವರು ಧ್ವನಿ ನಟನೆಗೆ ಹಿಂತಿರುಗಿದರು, ಅನಿಮೇಟೆಡ್ ಸಣ್ಣ ಚಿತ್ರ ''ಸರ್ ಬಿಲ್ಲಿ ದ ವೆಟ್'' ನ ಮುಖ್ಯ ಪಾತ್ರವೊಂದಕ್ಕೆ ತಮ್ಮ ಧ್ವನಿಯನ್ನು ನೀಡಿದರು ,<ref>{{imdb title|id=0851471|title=Sir Billi the Vet}}</ref> ಹಾಗೂ 2005ರಲ್ಲಿ ತಮ್ಮ ಬಾಂಡ್ ಚಿತ್ರ ''ಫ್ರಮ್ ರಷಿಯಾ ವಿತ್ ಲವ್'' ನ ವೀಡಿಯೋ ಗೇಮ್ ಆವೃತ್ತಿಗೆ ಧ್ವನಿಮುದ್ರಣ ಮಾಡಿದರು. ಗೇಮ್ ಡಿಸ್ಕ್ನ ಬಗೆಗಿನ ಒಂದು ಸಂದರ್ಶನದಲ್ಲಿ, ಕಾನರಿಯವರು ಗೇಮ್ ನಿರ್ಮಾಪಕರು ([[EA ಗೇಮ್ಸ್]]) ತಮ್ಮನ್ನು ಬಾಂಡ್ ಧ್ವನಿಗಾಗಿ ಕೇಳಿದ್ದು ಹಾಗೂ ಅವರೊಡನೆ ಕೆಲಸ ಮಾಡಿದ್ದು ಅವರಿಗೆ ಬಹಳ ಸಂತೋಷ ತಂದಿದೆಯೆಂದು ಹೇಳಿದ್ದಾರೆ ಹಾಗೂ ಮುಂದೆ ಇಂತಹ ಅವಕಾಶಗಳು ಸಿಕ್ಕಲ್ಲಿ ಮತ್ತೆ ಕೆಲಸ ಮಾಡುವ ಆಶಯ ವ್ಯಕ್ತ ಪಡಿಸಿದ್ದಾರೆ.{{cn}}
== ವೈಯಕ್ತಿಕ ಜೀವನ ==
1962 ರಿಂದ 1973ರ ಸಮಯದಲ್ಲಿ ಕಾನರಿಯವರು ನಟಿ [[ಡಿಯಾನೆ ಸಿಲೆಂಟೊ]] ಅವರನ್ನು ವಿವಾಹವಾಗಿದ್ದರು. ಅವರಿಗೊಬ್ಬ ಮಗ ಇದ್ದಾನೆ, ನಟ [[ಜೇಸನ್ ಕಾನರಿ]]. ಕಾನರಿ ಒಬ್ಬ ಫ್ರೆಂಚ್ ವರ್ಣ ಚಿತ್ರಗಾರ್ತಿ [[ಮೈಕೆಲಿನ್ ರೋಖ್ಬ್ರೂನ್]] (ಹುಟ್ಟಿದ್ದು 1929) ಅವರನ್ನು 1975ರಿಂದ ವಿವಾಹವಾಗಿದ್ದಾರೆ.
ಕಾನರಿ, ಒಬ್ಬ ತೀಕ್ಷ್ಣ ಗಾಲ್ಫರ್, ಫ್ರಾನ್ಸ್ನ ದಕ್ಷಿಣದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ (1979 ರಿಂದ) [[ಡೊಮೈನೆ ಡೆ ಟೆರ್ರೆ ಬ್ಲಾಂಚೆ]]<ref>ಫಿಯರಿಸ್, ಬಿವರ್ಲೆ. [https://www.theguardian.com/travel/2004/aug/01/hotels.observerescapesection2 "'We half expected someone to tuck us in with a goodnight kiss'"]. ''[[ದ ಅಬ್ಸರ್ವರ್]]'' , 1 ಆಗಸ್ಟ್ 2004. 3 ಸೆಪ್ಟೆಂಬರ್ 2009ರಲ್ಲಿ ಪ್ರವೇಶ ಪಡೆದಿದ್ದು.</ref> ಯನ್ನು ಹೊಂದಿದ್ದಾರೆ ಅಲ್ಲಿ 300 ಹೆಕ್ಟೇರ್ ಪ್ರದೇಶದಲ್ಲಿ ಒಂದು ಗಲ್ಫ್ ಕೋರ್ಸ್ ನಿರ್ಮಾಣ ಮಾಡಬೇಕೆಂಬ ಕನಸು ಅವರದ್ದಾಗಿದತ್ತು ಆದರೆ ಅವರ ಕನಸು ನನಸಾಗದೆ <ref>[http://www.exec-golf.com/home-slot-7/no-doubting-thomas "No doubting Thomas"] {{Webarchive|url=https://web.archive.org/web/20110105153027/http://www.exec-golf.com/home-slot-7/no-doubting-thomas |date=2011-01-05 }}. ''ಎಕ್ಸಿಕ್ಯುಟಿವ್ ಗಲ್ಫ್ ಮ್ಯಾಗಜೀನ್'' , ಜೂನ್ 26, 2009. 3 ಸೆಪ್ಟೆಂಬರ್ 2009ರಲ್ಲಿ ಪ್ರವೇಶ ಪಡೆದಿದ್ದು.</ref> ಅದನ್ನು ಜರ್ಮನ್ ಬಿಲಿಯನೇರ್ [[ಡಯಟ್ಮರ್ ಹಾಪ್ಪ್]] ಎಂಬುವವರಿಗೆ 1999ರಲ್ಲಿ ಮಾರಾಟ ಮಾಡಿದರು.
ಕಾನರಿಯವರು 2000 ಜುಲೈನಲ್ಲಿ [[ನೈಟ್ಹುಡ್ ಗೌರವಕ್ಕೆ ಪಾತ್ರರಾದರು]].<ref>{{cite web |url=http://news.bbc.co.uk/1/hi/scotland/819490.stm |title=Sir Sean's pride at knighthood |publisher=[[BBC News]] |date=5 July 2000}}</ref>
=== ಸ್ಕಾಟಿಷ್ ನ್ಯಾಷನಲ್ ಪಾರ್ಟಿ ===
ಕಾನರಿಯವರು [[ಸ್ಕಾಟಿಶ್ ನ್ಯಾಷನಲ್ ಪಾರ್ಟಿ]]ಯ ಸದಸ್ಯರಾಗಿದ್ದಾರೆ,<ref>{{cite news |url=https://www.theguardian.com/uk/1999/apr/27/gerardseenan |title=Connery goes on the SNP offensive |work=[[The Guardian]] |accessdate=2009-05-22 |date=1999-04-27 |first=Gerard |last=Seenan}}</ref><ref>{{cite news |url=http://findarticles.com/p/articles/mi_qn4156/is_19990502/ai_n13939208/ |title=patriotgames |work=Sunday Herald |accessdate=2009-05-22 |date=1999-05-02 |first=Paul |last=Pender }}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಇದು ಒಂದು [[ಸೆಂಟರ್-ಲೆಫ್ಟ್]] ರಾಜಕೀಯ ಪಕ್ಷ [[ಸ್ಕಾಟಿಶ್ ಸ್ವಾತಂತ್ರ್ಯ]]ಕ್ಕಾಗಿ ಹೋರಾಟ ನಡೆಸಿದೆ, ಮತ್ತು ಅವರು ಪಕ್ಷಕ್ಕೆ ಆರ್ಥಿಕವಾಗಿ ಸಹಾಯ ನೀಡಿದ್ದಾರೆ. 2008ರಲ್ಲಿ, ಕಾನರಿಯವರು ''ಸ್ಕಾಟಿಶ್ ಸಂಡೇ ಎಕ್ಸ್ಪ್ರೆಸ್'' ನಲ್ಲಿ ಹೀಗೆ ಹೇಳಿದ್ದಾರೆ ಅವರು ಅವರ ಜೀವಮಾನದಲ್ಲಿ ಸ್ಕಾಟ್ಲ್ಯಾಂಡ್ ಸ್ವಾತಂತ್ರ್ಯ ಗಳಿಸುತ್ತದೆ ಮತ್ತು ಈ ನಿಟ್ಟಿನಲ್ಲಿ [[2007ರ ಸ್ಕಾಟಿಶ್ ಪಾರ್ಲಿಮೆಂಟರಿ ಚುನಾವಣೆಯಲ್ಲಿ]] ಜಯಗಳಿಸಿದ ಮೈನಾರಿಟಿ ಸರ್ಕಾರದಲ್ಲಿ SNP ಯ ಕಾರ್ಯಾಚರಣೆಯನ್ನು ಪ್ರಶಂಸಿಸಿದ್ದಾರೆ . ಗಡಿ ದಾಟಿ ಬಹಮಸ್ನಲ್ಲಿ ವಾಸಿಸುತ್ತಿದ್ದ ಕಾನರಿಯವರು UK ರಾಜಕೀಯದ {{Citation needed|date=January 2010}} ಬಗ್ಗೆ ಆಗಾಗ್ಗೆ ಮುಚ್ಚುಮರೆಯಿಲ್ಲದೆ ಟೀಕಿಸುತ್ತಲೇ ಬಂದಿದ್ದಾರೆ. SNP ಗಾಗಿ ಸಾವಿರಾರು ಪೌಂಡ್ಗಳಷ್ಟು ಹಣವನ್ನು ದಾನ ಮಾಡಿದ್ದರು ಮತ್ತು ಸ್ಕಾಟ್ಲ್ಯಾಂಡ್ಗೆ ಸ್ವಾತಂತ್ರ್ಯ ಸಿಗುವವರೆಗೂ ತಾವು ಹಿಂದಿರುಗುವುದಿಲ್ಲವೆಂದು ಪ್ರಮಾಣ ಮಾಡಿದ್ದರು.<ref>[http://news.bbc.co.uk/1/hi/uk/7261161.stm ಕಾನರಿ: Scots independence close] (24 ಫೆಬ್ರವರಿ 2008)</ref> ನೈಟ್ಹುಡ್ ಅನ್ನು ಒಪ್ಪಿಕೊಂಡಿದಕ್ಕಾಗಿ 1999ರಲ್ಲಿ ಕಾರ್ಮಿಕ ಸರ್ಕಾರದಿಂದ ಕಪಟನೆಂಬ ಆರೋಪಕ್ಕೆ ಒಳಗಾದರು.{{Citation needed|date=January 2010}}
ಅವರು SNPಗೆ ನೀಡಿದ ಉತ್ತೇಜನವನ್ನು ಅವರ ಅಧಿಕೃತ ವೆಬ್ಸೈಟ್ನಲ್ಲಿ ಹೀಗೆ ಸ್ಪಷ್ಟಪಡಿಸಿದ್ದಾರೆ:
<blockquote>ಸ್ಕಾಟ್ಲ್ಯಾಂಡ್ನ ಸ್ವಾತಂತ್ರ್ಯಕ್ಕಾಗಿ ಹಾಗೂ ಸ್ಕಾಟಿಶ್ ನ್ಯಾಷನಲ್ ಪಾರ್ಟಿಗೆ ನೀಡಿದ ಸಹಕಾರದಿಂದಾಗಿ ಅವರಿಗೆ ಸಿಗಬೇಕಾಗಿದ್ದ ನೈಟ್ಹುಡ್ ಪ್ರಶಸ್ತಿ ಸಿಗಲು ವರ್ಷಗಳಷ್ಟು ನಿಧಾನವಾಯಿತೆಂಬುದು ಸಾಮಾನ್ಯವಾಗಿ ಎಲ್ಲರೂ ಒಪ್ಪುವಂತಹದ್ದು, ಸ್ಕಾಟ್ಲ್ಯಾಂಡ್ಗಾಗಿ ಅವರ ಜವಾಬ್ಧಾರಿ ಎಂದಿಗೂ ಅಲ್ಲಾಡಲಿಲ್ಲ. [[ಯುನೈಟೆಡ್ ಕಿಂಗ್ಡಮ್ನ ರಾಜಕೀಯ]]ವು ಜೇಮ್ಸ್ ಬಾಂಡ್ ಸಂಚುಗಳಿಗಿಂತ ಹೆಚ್ಚಿನ ಕುತೂಹಲಕಾರಿ ಸಂಚುಗಳಿರುವಂತಹದಾಗಿದೆ. ಸ್ಕಾಟ್ಲ್ಯಾಂಡ್ಗೆ ಇನ್ನೂ ಸ್ವಾತಂತ್ರ್ಯ ಸಿಗದೇ ಇರಬಹುದು, ಆದರೆ ಆಕೆ [[ಹೊಸ ಪಾರ್ಲಿಮೆಂಟ್]] ಅನ್ನು ಹೊಂದುತ್ತಾಳೆ. ಹೊಸ [[ಸ್ಕಾಟಿಶ್ ಪಾರ್ಲಿಮೆಂಟ್]] ರಚಿಸಲು ಹೌದು ಎಂಬ ಮತ ಪಡೆಯಲು [[ಸ್ಕಾಟಿಶ್ ರೆಫೆರೆಂಡಮ್]]ಗಾಗಿ ಸರ್ ಸೀನ್ ಅವರು ಅಭಿಯಾನ ನಡೆಸಿದರು. ಸ್ಕಾಟಿಶ್ ಪಾರ್ಲಿಮೆಂಟ್ ಬಲಶಾಲಿಯಾಗಿ ಬೆಳೆಯುತ್ತದೆ ಮತ್ತು ಸ್ಕಾಟ್ಲ್ಯಾಂಡ್ ಅವರ ಜೀವಮಾನದಲ್ಲಿ ಸ್ವಾತಂತ್ರ್ಯ ಪಡೆದೇ ಪಡೆಯುತ್ತದೆ ಎಂಬ ಬಲವಾದ ನಂಬಿಕೆ ಹೊಂದಿದ್ದಾರೆ.<ref>[http://www.seanconnery.com/biography/knighthood/ The Official Website of Sir Sean Connery - Knighthood]</ref></blockquote>
=== ಅಪಮಾನಕ್ಕಾಗಿ ದೂಷಣೆಗಳು ===
ಡಿಯಾನೆ ಸಿಲೆಂಟೊ 2006ರಲ್ಲಿ ತನ್ನ ಜೀವನಚರಿತ್ರೆ ''ಮೈ ನೈನ್ ಲೀವ್ಸ್'' ನಲ್ಲಿ, ಜೊತೆಗೆ ರೇಡಿಯೋ ಸಂದರ್ಶನಗಳಲ್ಲಿ, ಮುದ್ರಣ ಮಾಧ್ಯಮದಲ್ಲಿ ಕಾನರಿಯವರು ಆಕೆಗೆ ಹಲವಾರು ಬಾರಿ ಹೊಡೆದಿರುವುದಾಗಿ ಹೇಳಿಕೊಂಡಿದ್ದಾಳೆ. ಕಾನರಿ ಭಾವೋದ್ವೇಗದಿಂದ ದೂಷಣೆಗಳನ್ನು ತಳ್ಳಿ ಹಾಕಿದ್ದಾರೆ.<ref>{{cite news |url=http://news.scotsman.com/topics.cfm?tid=652&id=1993262005 |title=Jealous Connery beat me, says ex-wife |work=[[The Scotsman]] |accessdate=2007-09-29 |date=2005-09-25 |first=Stuart |last=MacDonald}}</ref> ಡಿಸೆಂಬರ್ 1987ರ [[ಬಾರ್ಬರಾ ವಾಲ್ಟರ್ಸ್]]ನೊಂದಿಗಿನ್ ಸಂದರ್ಶನದಲ್ಲಿ, ಒಬ್ಬ ಮಹಿಳೆ ಆಕೆಯ ವಾದವನ್ನು ಒಪ್ಪಿಕೊಂಡಾಗ್ಯೂ ಪುರುಷನನ್ನು ಕೆರಳಿಸುವುದು, ರೇಗಿಸುವುದನ್ನು ಮುಂದುವರೆಸಿದಾಗ, ಒಬ್ಬ ಪುರುಷ ತನ್ನ ಕೈಯಿಂದ ಮಹಿಳೆಗೆ ಹೊಡೆಯುವುದು ಒಪ್ಪಬಹುದಾದದ್ದು ಎಂದು ಹೇಳಿದ್ದಾರೆ.<ref>{{cite web |url=https://www.youtube.com/watch?v=3FgMLROTqJ0 |title=Barbra Walters interviews Sean Connery on smackin' bitches |publisher=[[YouTube]] |accessdate=2007-09-29}}</ref> 1965ರಲ್ಲಿ ಥಂಡರ್ಬಾಲ್ ಚಿತ್ರೀಕರಣದ ಸಮಯದಲ್ಲಿ ಪ್ಲೇಬಾಯ್ ಮ್ಯಾಗಜೀನ್ನೊಂದಿಗಿನ ಸಂದರ್ಶನದಲ್ಲಿ ಮತ್ತೋಮ್ಮೆ ಅದೇ ರೀತಿ ಹೇಳಿದ್ದಾರೆ: " ಒಬ್ಬ ಮಹಿಳೆಯನ್ನು ಹೊಡೆಯುವುದು ತಪ್ಪು ಎಂದು ನಾನೆಂದೂ ಯೋಚಿಸುವುದಿಲ್ಲ ... ಒಬ್ಬ ಮಹಿಳೆ ಕೆಟ್ಟವಳಾಗಿದ್ದಾಗ, ಅಥವಾ ಚಿತ್ತೋನ್ಮಮಾದದ ಲಕ್ಷಣ ಹೊಂದಿದ್ದಾಗ, ಅಥವಾ ಕ್ರೂರ-ಮನಸ್ಸಿನವಳಾಗಿದ್ದಾಗ, ನಾನು ಮಾಡಬಹುದು." 1993ರಲ್ಲಿ, ವ್ಯಾನಿಟಿ ಫೇರ್ ಉಲೇಖಿಸಿದಂತೆ "ಹೊಡೆತ ಬೇಕಾಗಿರುವ" ದಿಟ್ಟವಾಗಿ ಸವಾಲೆಸೆಯುವ ಹೆಂಗಸರಿದ್ದಾರೆ.<ref>http://www.dailymail.co.uk/news/article-1043053/Sean-Connery-The-story-brilliant-deeply-flawed-man.html</ref>
=== ಆರೋಗ್ಯ ===
1993ರಲ್ಲಿ, ಕಾನರಿಯವರು ಒಂದು ಗಂಟಲು ಖಾಯಿಲೆಗಾಗಿ [[ರೇಡಿಯೇಷನ್ ಚಿಕಿತ್ಸೆ]]ಗೆ ಒಳಪಡುವುದನ್ನು ಬಯಲುಮಾಡಿರಲಿಲ್ಲ ಮಾಧ್ಯಮಗಳು ನಟರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ [[ಧೂಮಪಾನ]] ಮಾಡುತ್ತಿರುವುದರಿಂದ [[ಗಂಟಲು ಕ್ಯಾನ್ಸರ್]]ನಿಂದ ಬಳಲುತ್ತಿರುವುದಾಗಿ ವರದಿ ಮಾಡಿದವು, ಹಾಗೂ ಜಪಾನೀಸ್ ಮತ್ತು ದಕ್ಷಿಣ ಆಫ್ರಿಕಾದ ಕೆಲ ವಾರ್ತಾ ಏಜೆನ್ಸಿಗಳು ಕಾನರಿಯವರು ನಿಧನಹೊಂದಿದರೆಂದು ಘೋಷಿಸಿದವು. ತಕ್ಷಣವೇ ಕಾನರಿಯವರು ''[[ಲೇಟ್ ಶೋ ವಿತ್ ಡೇವಿಡ್ ಲೆಟರ್ಮನ್]]'' ನಲ್ಲಿ ಇದೆಲ್ಲವನ್ನೂ ಅಲ್ಲಗಳೆಯಲು ಕಾಣಿಸಿಕೊಂಡರು. 1995 ಫೆಬ್ರವರಿಯಲ್ಲಿ ''[[ಎಂಟರ್ಟೈನ್ಮೆಂಟ್ ವೀಕ್ಲಿ]]'' ಜೊತೆ ಸಂದರ್ಶನದಲ್ಲಿ, ಅವರ ಧ್ವನಿತಂತುಗಳಲ್ಲಿರುವ ಗಂಟುಗಳನ್ನು ತೆಗೆಯಲು ರೇಡಿಯೇಷನ್ ಚಿಕಿತ್ಸೆ ಪಡೆದರೆಂದು ಹೇಳಿದರು. ಅವರ ತಂದೆಯವರು ಅತಿಯಾದ ಧೂಮಪಾನ ಮಾಡುತ್ತಿದ್ದು ಅವರು 1972ರಲ್ಲಿ [[ಗಂಟಲು ಕ್ಯಾನ್ಸರ್]]ನಿಂದ ನಿಧನಹೊಂದಿದರು. 2003ರಲ್ಲಿ, ಅವರು ತಮ್ಮ ಎರಡೂ ಕಣ್ಣುಗಳ [[ಕ್ಯಾಟರಾಕ್ಟ್]]ಗಳ ಶಸ್ತ್ರಚಿಕಿತ್ಸೆಗೆ ಒಳಗಾದರು. 12 ಮಾರ್ಚ್ 2006ರಂದು, ಅವರು ಜನವರಿಯಲ್ಲಿ ಕಿಡ್ನಿ ಗಡ್ಡೆಯನ್ನು ತೆಗೆಸಿಕೊಳ್ಳಲು ಒಳಗಾದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆಂದು ಪ್ರಕಟಿಸಿದರು. 2008ರಲ್ಲಿ ಗಾಲ್ಫ್ ಆಟವಾಡುತ್ತಿರುವಾಗ ಬಿದ್ದು ಅವರ ಬುಜದ ಮೂಳೆಗೆ ಪೆಟ್ಟಾಗಿತ್ತು.
== ಚಲನಚಿತ್ರಗಳ ಪಟ್ಟಿ ==
{| border="2" cellpadding="4" cellspacing="0" style="margin: 1em 1em 1em 0; background: #f9f9f9; border: 1px #aaa solid; border-collapse: collapse; font-size: 90%;" |- bgcolor="#B0C4DE" align="center" ! ವರ್ಷ ! ಸಿನಿಮಾ ! ಪಾತ್ರ ! ಇತರ ಟಿಪ್ಪಣಿಗಳು |- | [[1954 ಚಿತ್ರದಲ್ಲಿ|1954]] || ''[[ಲೈಲ್ಯಾಕ್ಸ್ ಇನ್ ದ ಸ್ಪ್ರಿಂಗ್]]'' || Undetermined role || (uncredited) |- |rowspan="4"| [[1957 ಚಿತ್ರದಲ್ಲಿ|1957]] || ''[[ನೋ ರೋಡ್ ಬ್ಯಾಕ್]]'' || ಸ್ಪೈಕ್ || |- | ''[[ಹೆಲ್ ಡ್ರೈವರ್ಸ್ (ಚಿತ್ರ)|ಹೆಲ್ ಡ್ರೈವರ್ಸ್]]'' || ಜಾನಿ ಕೇಟ್ಸ್ || |- | ''[[ಆಕ್ಷನ್ ಆಫ್ ದ ಟೈಗರ್]]'' || ಮೈಕ್ || |- | ''[[ಟೈಮ್ ಲಾಕ್]]'' || Welder #2 || |- |rowspan=2| [[1958 ರಲ್ಲಿ ಚಿತ್ರ|1958]] | ''[[ಅನದರ್ ಟೈಮ್, ಅನದರ್ ಪ್ಲೇಸ್ (1958 ಚಿತ್ರ)|ಅನದರ್ ಟೈಮ್, ಅನದರ್ ಪ್ಲೇಸ್]]'' | ಮಾರ್ಕ್ ಟ್ರೆವರ್ | |- |''[[ಎ ನೈಟ್ ಟು ರಿಮೆಂಬರ್ (1958 ಚಿತ್ರ)|ಎ ನೈಟ್ ಟು ರಿಮೆಂಬರ್]]'' |[[ಟೈಟಾನಿಕ್]] ಡೆಕ್ ಹ್ಯಾಂಡ್ |uncredited |- |rowspan="2"| [[1959 ರಲ್ಲಿ ಚಿತ್ರ|1959]] || ''[[ಡರ್ಬಿ ಓ’ ಗಿಲ್ ಅಂಡ್ ದ ಲಿಟಲ್ ಪೀಪಲ್]]'' || ಮೈಕೇಲ್ ಮೆಕ್ಬ್ರಿಡ್ || |- | ''[[ಟಾರ್ಜನ್ಸ್ ಗ್ರೇಟೆಸ್ಟ್ ಅಡ್ವೆಂಚರ್]]'' || ಓ'ಬನ್ನಿಯನ್ || |- |rowspan="2"| [[1961 ರ ಚಿತ್ರ|1961]] || ''[[ಆನ್ ದ ಫಿಡಲ್]]'' || ಪೆಡ್ಲರ್ ಪ್ಯಾಸ್ಕೋ || |- | ''[[ದ ಫ್ರೈಟಂಡ್ ಸಿಟಿ]]'' || ಪ್ಯಾಡಿ ಡಮಿಯನ್ || |- |rowspan="2"| [[1962 ರ ಚಿತ್ರ|1962]] || ''[[ದ ಲಾಂಗೆಸ್ಟ್ ಡೇ (ಫಿಲ್ಮ್)|ದ ಲಾಂಗೆಸ್ಟ್ ಡೇ]]'' || Pte.ಫ್ಲಾನಗನ್ || |- | ''[[Dr. ನೊ (ಚಿತ್ರ)|Dr. ನೊ]]'' || [[ಜೇಮ್ಸ್ ಬಾಂಡ್ (ಪಾತ್ರ)|ಜೇಮ್ಸ್ ಬಾಂಡ್]] || |- | [[1963 ರ ಚಿತ್ರ|1963]] || ''[[ಫ್ರಮ್ ರಷಿಯಾ ವಿತ್ ಲವ್ (ಚಿತ್ರ)|ಫ್ರಮ್ ರಷಿಯಾ ವಿತ್ ಲವ್]]'' || ಜೇಮ್ಸ್ ಬಾಂಡ್ || |- |rowspan="3"| [[1964 ರಲ್ಲಿ ಚಿತ್ರ|1964]] || ''[[ಮಾರ್ನೀ (ಚಿತ್ರ)|ಮಾರ್ನೀ]]'' || ಮಾರ್ಕ್ ರುಟ್ಲ್ಯಾಂಡ್ || |- | ''[[ವುಮನ್ ಆಫ್ ಸ್ಟ್ರಾ]]'' || ಆಂಥೊನಿ ರಿಚ್ಮಂಡ್ || |- | ''[[ಗೋಲ್ಡ್ ಫಿಂಗರ್(ಚಿತ್ರ)|ಗೋಲ್ಡ್ ಫಿಂಗರ್]]'' || ಜೇಮ್ಸ್ ಬಾಂಡ್ || |- |rowspan="2"| [[1965 ರ ಚಿತ್ರ|1965]] || ''[[ದ ಹಿಲ್ (ಚಿತ್ರ)|ದ ಹಿಲ್]]'' || ಟ್ರೂಪರ್ ಜೋ ರಾಬರ್ಟ್ಸ್ || |- | ''[[ಥಂಡರ್ಬಾಲ್ (ಚಿತ್ರ)|ಥಂಡರ್ ಬಾಲ್]]'' || ಜೇಮ್ಸ್ ಬಾಂಡ್ || |- |rowspan="2"| [[1966 ರ ಚಿತ್ರ|1966]] || ''[[ಅನ್ ಮಾಂಡೆ ನೊವೆಯು]]'' || ತನ್ನದೇ ಪಾತ್ರ|| (ಕ್ಯಾಮಿಯೊ) |- | ''[[ಎ ಫೈನ್ ಮ್ಯಾಡ್ನೆಸ್]]'' || ಸ್ಯಾಮ್ಸನ್ ಶಿಲ್ಲಿಟೋ || |- | [[1967 ರ ಚಿತ್ರ|1967]] || ''[[ಯೌ ಓನ್ಲಿ ಲೀವ್ ಟ್ವೈಸ್ (ಚಿತ್ರ)|ಯು ಓನ್ಲಿ ಲೀವ್ ಟ್ವೈಸ್]]'' || ಜೇಮ್ಸ್ ಬಾಂಡ್ || |- | [[1968 ರ ಚಿತ್ರ1968]] || ''[[ಶಲಕೊ (ಚಿತ್ರ)|ಶಲಕೊ]]'' || ಮೊಸಸ್ ಝೆಬುಲನ್ 'ಶಲಕೊ' ಕಾರ್ಲಿನ್ || |- | [[1969 ರ ಚಿತ್ರ|1969]] || ''[[ದ ಬೌಲರ್ ಅಂಡ್ ದ ಬಾನೆಟ್]]'' || ತನ್ನದೇ ಪಾತ್ರ || (ನಿರ್ದೇಶಕ; ಡಾಕ್ಯುಮೆಂಟರಿ) |- | [[1970 ರ ಚಿತ್ರ|1970]] || ''[[ದ ಮೊಲ್ಲಿ ಮಾಗುರೆಸ್ (ಚಿತ್ರ)|ದ ಮೊಲ್ಲಿ ಮಾಗುರೆಸ್]]'' || ಜಾಕ್ ಕೆಹೋ || |- |rowspan="3"| [[1971 ರ ಚಿತ್ರ|1971]] || ''[[ದ ರೆಡ್ ಟೆಂಟ್ (ಚಿತ್ರ)|ದ ರೆಡ್ ಟೆಂಟ್]]'' || [[ರೋಲ್ಡ್ ಅಮುಂಡ್ಸನ್]] || |- | ''[[ದ ಆಂಡರ್ಸನ್ ಟೇಪ್ಸ್]]'' || ಜಾನ್ ಆಂಡರ್ಸನ್ || |- | ''[[ಡೈಮಂಡ್ಸ್ ಆರ್ ಫಾರೆವರ್ (ಚಿತ್ರ)|ಡೈಮಂಡ್ಸ್ ಆರ್ ಫಾರೆವರ್]]'' || ಜೇಮ್ಸ್ ಬಾಂಡ್ || |- | [[1972 ರ ಚಿತ್ರ|1972]] || ''ಎಸ್ಪಾನಾ ಕಾಂಪೊ ಡೆ ಗಾಲ್ಫ್'' || ತನ್ನದೇ ಪಾತ್ರ || (ಸಣ್ಣ ವಿಷಯ) |- | [[1973 ರ ಚಿತ್ರ|1973]] || ''[[ದ ಅಫೆನ್ಸ್]]'' || ಡಿಟೆಕ್ಟಿವ್ ಸರ್ಜೆಂಟ್ ಜಾನ್ಸನ್ || |- |rowspan="2"| [[1974 ರ ಚಿತ್ರ|1974]] || ''[[ಝಾರ್ಡಾಝ್]]'' || ಝೆಡ್ || |- | ''[[ಮರ್ಡರ್ ಆನ್ ದ ಓರಿಯಂಟ್ ಎಕ್ಸ್ಪ್ರೆಸ್ (1974 ಚಿತ್ರ)|ಮರ್ಡರ್ ಆನ್ ದ ಓರಿಯಂಟ್ ಎಕ್ಸ್ಪ್ರೆಸ್]]'' || ಕರ್ನಲ್ ಅರ್ಬುತ್ನಾಟ್ || |- |rowspan="4"| [[1975 ರ ಚಿತ್ರ|1975]] || ''[[ರನ್ಸಮ್ (1975 ಚಿತ್ರ)|ರನ್ಸಮ್]]'' || ನಿಲ್ಸ್ ತಹಲ್ವಿಕ್ || |- | ''ದ ಡ್ರೀಮ್ ಫ್ಯಾಕ್ಟರಿ'' || ತನ್ನದೇ ಪಾತ್ರ || (ಡಾಕ್ಯುಮೆಂಟರಿ) |- | ''[[ದ ವಿಂಡ್ ಅಂಡ್ ದ ಲಯನ್]]'' || [[ಮಲಾಯ್ ಅಹಮದ್ ಎರ್ ರೈಸುನಿ|ಮಲಾಯ್ ಅಹಮದ್ ಎಲ್-ರೈಸುನಿ ದ ಮ್ಯಾಗ್ನಿಫಿಷಿಯೆಂಟ್]] || |- | ''[[ದ ಮ್ಯಾನ್ ಹು ವುಡ್ ಬಿ ದ ಕಿಂಗ್ (ಚಿತ್ರ)|ದ ಮ್ಯಾನ್ ಹು ವುಡ್ ಬಿ ದ ಕಿಂಗ್]]'' || [[ಡೇನಿಯಲ್ ಡ್ರಾವಟ್]] || |- | [[1976 ರ ಚಿತ್ರ|1976]] || ''[[ರಾಬಿನ್ ಅಂಡ್ ಮರಿಯನ್]]'' || [[ರಾಬಿನ್ ಹುಡ್]] || |- | [[1976 ರ ಚಿತ್ರ|1976]] || ''[[ದ ನೆಕ್ಸ್ಟ್ ಮ್ಯಾನ್]]'' || ಖಲೀಲ್ ಅಬ್ದುಲ್-ಮುಹಸೆನ್ || |- | [[1977 ರ ಚಿತ್ರ|1977]] || ''[[ಎ ಬ್ರಿಡ್ಜ್ ಟೂ ಫಾರ್ (ಚಿತ್ರ)|ಎ ಬ್ರಿಡ್ಜ್ ಟೂ ಫಾರ್]]'' || Maj. Gen. [[ರಾಯ್ ಉರ್ಖುಹರ್ಟ್]] || |- |rowspan="3"| [[1979 ರ ಚಿತ್ರ|1979]] || ''[[ದ ಫರ್ಸ್ಟ್ ಗ್ರೇಟ್ ಟ್ರೈನ್ ರಾಬರಿ]]'' || ಎಡ್ವರ್ಡ್ ಪಿಯರ್ಸ್/ಜಾನ್ ಸಿಮ್ಸ್/ಜಿಯಾಫ್ರಿ || |- | ''[[ಮಿಟಿಯೊರ್ (ಚಿತ್ರ)|ಮಿಟಿಯೊರ್]]'' || Dr. ಪಾಲ್ ಬ್ರಾಡ್ಲಿ || |- | ''[[ಕ್ಯೂಬಾ (ಚಿತ್ರ)|ಕ್ಯೂಬಾ]]'' || Maj. ರಾಬರ್ಟ್ ಡೇಪ್ಸ್ || |- |rowspan="2"| [[1981 ರ ಚಿತ್ರ|1981]] || ''[[ಔಟ್ಲ್ಯಾಂಡ್ (ಚಿತ್ರ)|ಔಟ್ಲ್ಯಾಂಡ್]]'' || ಮಾರ್ಷಲ್ ವಿಲಿಯಮ್ ಟಿ. ಓ'ನೀಲ್ || ನಾಮನಿರ್ದೇಶಿತ - [[ಉತ್ತಮ ನಟನಾಗಿ ಸ್ಯಾಟರ್ನ್ ಅವಾರ್ಡ್]] |- | ''[[ಟೈಮ್ ಬ್ಯಾಂಡಿಟ್ಸ್]]'' || [[ಅಗಮೆಮ್ನನ್|ಕಿಂಗ್ ಅಗಮೆಮ್ನನ್]]/ಫೈರ್ಮ್ಯಾನ್ || |- |rowspan="3"| [[1982 ರ ಚಿತ್ರ|1982]] || ''G'ole!'' '' ''|| ನಿರೂಪಕ || (ಡಾಕ್ಯುಮೆಂಟರಿ)''
|-
| ''[[ಫೈವ್ ಡೇಸ್ ಒನ್ ಸಮ್ಮರ್]]'' || ಡಗ್ಲಸ್ ಮೆರಿಡಿತ್ ||
|-
| ''[[ರಾಂಗ್ ಈಸ್ ರೈಟ್]]'' || ಪ್ಯಾಟ್ರಿಕ್ ಹೇಲ್ ||
|-
|rowspan="2"| [[1983]] || ''ಸೀನ್ ಕಾನರೀಸ್ ಎಡಿನ್ಬರ್ಗ್'' || ತನ್ನದೇ ಪಾತ್ರ|| (ಸಣ್ಣ ವಿಷಯ)
|-
| ''[[ನೆವರ್ ಸೇ ನೆವರ್ ಅಗೈನ್]]'' || ಜೇಮ್ಸ್ ಬಾಂಡ್ ||
|-
| [[1984]] || ''[[ಸ್ವೋರ್ಡ್ ಆಫ್ ವೇಲಿಯಂಟ್]]'' || [[ದ ಗ್ರೀನ್ ನೈಟ್]] ||
|-
|rowspan="2"| [[1986]] || ''[[ಹೈಲ್ಯಾಂಡರ್]]'' || [[ಜುವಾನ್ ಸಾಂಚೆಝ್ ವಿಲ್ಲಾ-ಲೋಬೋಸ್ ರಮಿರೆಝ್]] ||
|-
| ''[[ದ ನೇಮ್ ಆಫ್ ದ ರೋಸ್]]'' || [[ವಿಲಿಯಮ್ ಆಫ್ ಬಾಸ್ಕೆರ್ವಿಲ್ಲೆ]] || [[ಪ್ರಮುಖ ಪಾತ್ರದ ಉತ್ತಮ ನಟನೆಗಾಗಿ BAFTA ಅವಾರ್ಡ್]]
|-
| [[1987]] || ''[[ದ ಅನ್ಟಚಬಲ್ಸ್]]'' || ಜಿಮ್ ಮಾಲೋನ್ || [[ಉತ್ತಮ ಪೋಷಕ ನಟ ಅಕಾಡೆಮಿ ಅವಾರ್ಡ್]]<br />[[ಚಲನಚಿತ್ರ- ಅತ್ಯುತ್ತಮ ಪೋಷಕ ನಟ ಗೋಲ್ಡನ್ ಗ್ಲೋಬ್ ಪ್ರಶಸ್ತಿ]]<br />ಉತ್ತಮ ಪೋಷಕ ನಟ [[NBR]] ಅವಾರ್ಡ್<br />ಉತ್ತಮ ಪೋಷಕ ನಟ [[KCFCC]] ಅವಾರ್ಡ್ <br />| ನಾಮನಿರ್ದೇಶಿತ – BAFTA ಪ್ರಶಸ್ತಿ (ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ)
|-
| [[1988]] || ''[[ದ ಪ್ರಿಸಿಡಿಯೋ]]'' || Lt. Col. ಅಲನ್ ಕಾಲ್ಡ್ವೆಲ್ ||
|-
|rowspan="2"| [[1989]] || ''[[ಇಂಡಿಯಾನಾ ಜೋನ್ಸ್ ಅಂಡ್ ದ ಲಾಸ್ಟ್ ಕ್ರುಸೇಡ್]]'' || [[ಪ್ರೊಫೆಸರ್ ಹೆನ್ರಿ ಜೋನ್ಸ್ ಸೀನಿಯರ್]] || ನಾಮನಿರ್ದೇಶಿತ - [[ಉತ್ತಮ ಪೋಷಕ ನಟ ಗೋಲ್ಡನ್ ಗ್ಲೋಬ್ ಅವಾರ್ಡ್ - ಮೋಶನ್ ಚಿತ್ರ]]<br />| ನಾಮನಿರ್ದೇಶಿತ – BAFTA ಪ್ರಶಸ್ತಿ (ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ)
|-
| ''[[ಫ್ಯಾಮಿಲಿ ಬಿಸಿನೆಸ್]]'' || ಜೆಸ್ಸೀ ಮೆಕ್ಮುಲ್ಲೆನ್ ||
|-
|rowspan="2"| [[1990]] || ''[[ದ ಹಂಟ್ ಫಾರ್ ರೆಡ್ ಅಕ್ಟೋಬರ್]]'' || ಕ್ಯಾಪ್ಟನ್ ಮಾರ್ಕೊ ರೇಮಿಯಸ್ || ನಾಮನಿರ್ದೇಶಿತ - [[ಪ್ರಮುಖ ಪಾತ್ರದ ಉತ್ತಮ ನಟನೆಗೆ BAFTA ಅವಾರ್ಡ್]]
|-
| ''[[ದ ರಷಿಯಾ ಹೌಸ್]]'' || ಬಾರ್ಥೊಲೊಮೆವ್ 'ಬಾರ್ಲೆ' ಸ್ಕಾಟ್ ಬ್ಲೇರ್ ||
|-
|rowspan="2"| [[1991]] || ''[[Highlander II: The Quickening]]'' || [[ಜುವಾನ್ ಸ್ಯಾಂಚೆಝ್ ವಿಲ್ಲಾ-ಲೋಬೋಸ್ ರಾಮಿರೆಝ್]] ||
|-
| ''[[Robin Hood: Prince of Thieves]]'' || [[ಕಿಂಗ್ ರಿಚರ್ಡ್ I]] || (uncredited cameo)
|-
| [[1992]] || ''[[ಮೆಡಿಸಿನ್ ಮ್ಯಾನ್]]'' || Dr. ರಾಬರ್ಟ್ ಕ್ಯಾಂಪ್ಬೆಲ್ ||
|-
| [[1993]] || ''[[ರೈಸಿಂಗ್ ಸನ್]]'' || Capt. ಜಾನ್ ಕಾನರ್ || (ನಿರ್ವಾಹಕ ನಿರ್ಮಾಪಕರು ಕೂಡಾ )
|-
| [[1994]] || ''[[ಎ ಗುಡ್ ಮ್ಯಾನ್ ಇನ್ ಆಫ್ರಿಕಾ]]'' || Dr. ಅಲೆಕ್ಸ್ ಮುರ್ರೇ ||
|-
|rowspan="3"| [[1995]] || ''[[ದ ಥೀಫ್ ಅಂಡ್ ದ ಕಾಬ್ಲರ್]]'' || ಟ್ಯಾಕ್ ದ ಕಾಬ್ಲರ್ || (ಧ್ವನಿ; ಒರಿಜಿನಲ್ ಆವೃತ್ತಿ; ದೃಢಪಟ್ಟಿಲ್ಲ)
|-
| ''[[ಜಸ್ಟ್ ಕಾಸ್]]'' || ಪಾಲ್ ಆರ್ಮ್ಸ್ಟ್ರಾಂಗ್ || (ನಿರ್ವಾಹಕ ನಿರ್ಮಾಪಕರು ಕೂಡಾ)
|-
| ''[[ಫರ್ಸ್ಟ್ ನೈಟ್]]'' || [[ಕಿಂಗ್ ಆರ್ಥರ್]] ||
|-
|rowspan="2"| [[1996]] || ''[[ಡ್ರ್ಯಾಗನ್ಹಾರ್ಟ್]]'' || ಡ್ರ್ಯಾಕೊ || (ಧ್ವನಿ)
|-
| ''[[ದ ರಾಕ್]]'' || Capt. ಜಾನ್ ಪ್ಯಾಟ್ರಿಕ್ ಮೇಸನ್ (Ret.) || (ನಿರ್ವಾಹಕ ನಿರ್ಮಾಪಕರು ಕೂಡಾ)
|-
|rowspan="2"| [[1998]] ||''[[ದ ಅವೆಂಜರ್ಸ್]]'' || ಸರ್ ಆಗಸ್ಟ್ ಡೆ ವೈಂಟರ್ ||
|-
| ''[[ಪ್ಲೇಯಿಂಗ್ ಬೈ ಹಾರ್ಟ್]]'' || ಪಾಲ್ ||
|-
| [[1999]] || ''[[ಎಂಟ್ರಾಪ್ಮೆಂಟ್]]'' || ರಾಬರ್ಟ್ ಮ್ಯಾಕ್ ಡಾಫಲ್ || (ನಿರ್ಮಾಪಕರು ಕೂಡಾ)
|-
| [[2000]] || ''[[ಫೈಂಡಿಗ್ ಫಾರೆಸ್ಟರ್]]'' || ವಿಲಿಯಮ್ ಫಾರೆಸ್ಟರ್ ||
|-
| [[2003]] || ''[[ದ ಲೀಗ್ ಆಫ್ ಎಕ್ಸ್ಟಾರ್ಡಿನರಿ ಜಂಟಲ್ಮ್ಯಾನ್]]'' || [[ಅಲನ್ ಕ್ವಾಟರ್ಮೈನ್]] || (ಸಹ-ನಿರ್ಮಾಪಕರು ಕೂಡಾ)
|-
| [[2006]] || ''ಸರ್ ಬಿಲ್ಲಿ ದ ವೆಟ್'' || ಸರ್ ಬಿಲ್ಲಿ ||(ಧ್ವನಿ) ಅನಿಮೇಟೆಡ್ 2008ರ ಬಿಡುಗಡೆ
|-
|}
=== ವಿಡಿಯೋ ಆಟಗಳು ===
ಸೀನ್ ಕಾನರಿಯವರು ತಮ್ಮನ್ನು ಹೋಲುವ ವೀಡಿಯೋ ಗೇಮ್ ''[[ಫ್ರಮ್ ರಷಿಯಾ ವಿತ್ ಲವ್]]'' ಗಾಗಿ ತಮ್ಮ ದ್ವನಿಯನ್ನು ನೀಡುವ ಕೆಲಸ ಮಾಡಿದ್ದಾರೆ. ಅವರ ಹೋಲಿಕೆಯನ್ನು ಅವರ [[ಬಿಗ್ ಬಾಸ್ನ]] ಪಾತ್ರದ ರೀತಿಯಲ್ಲಿ ರೂಪಿಸಿದ್ದಾರೆ ''[[Metal Gear 2: Solid Snake]]'' .
== ಆಕರಗಳು ==
{{reflist|2}}
== ಹೊರಗಿನ ಕೊಂಡಿಗಳು ==
{{Commons category|Sean Connery}}
{{wikiquote}}
* [http://www.seanconnery.com/ ಅಧಿಕೃತ ಜಾಲತಾಣ]
* {{imdb|0000125}}
* {{ibdb|23802}}
* [[BBC]]: [http://news.bbc.co.uk/1/hi/uk/573476.stm ಸೀನ್ ಕಾನರಿ ಜೀವನ ಚರಿತ್ರೆ (1999)]
* [http://www.tcm.com/thismonth/article.jsp?cid=161355 Profile] @ [[Turner Classic Movies]]
{{Interwikineeded}}
[[ವರ್ಗ:೧೯೩೦ ಜನನ]]
[[ವರ್ಗ:20ನೆಯ-ಶತಮಾನದ ಸ್ಕಾಟಿಶ್ ಜನರು]]
[[ವರ್ಗ:21ನೆಯ-ಶತಮಾನದ ಸ್ಕಾಟಿಶ್ ಜನರು]]
[[ವರ್ಗ:ನೈಟ್ಹುಡ್ ಗಳಿಸಿದ ಬ್ರಿಟಿಷ್ ನಟರು]]
[[ವರ್ಗ:BAFTA ವಿಜೇತರು (ಜನರು)]]
[[ವರ್ಗ:ಅತ್ಯುತ್ತಮ ವಿದೇಶಿ ನಟ BAFTAಯ ಪ್ರಶಸ್ತಿ ವಿಜೇತರು]]
[[ವರ್ಗ:ಉತ್ತಮ ಪೋಷಕ ನಟ ಅಕಾಡೆಮಿ ಪ್ರಶಸ್ತಿ ವಿಜೇತರು]]
[[ವರ್ಗ:ಅತ್ಯುತ್ತಮ ಪೋಷಕ ನಟ ಗೋಲ್ಡನ್ ಗ್ಲೋಬ್ (ಚಲನಚಿತ್ರ) ವಿಜೇತರು]]
[[ವರ್ಗ:ಸೆಸಿಲ್ ಬಿ. ಡೆಮಿಲ್ಲೆ ಅವಾರ್ಡ್ ಗೋಲ್ಡನ್ ಗ್ಲೋಬ್ ವಿಜೇತರು]]
[[ವರ್ಗ:ನೈಟ್ಸ್ ಬ್ಯಾಚೆಲರ್]]
[[ವರ್ಗ:ಲೀಜನ್ ಡಿ'ಹಾನರ್ ಗೌರವ ಪಡೆದವರು]]
[[ವರ್ಗ:ಕೆನೆಡಿ ಸೆಂಟರ್ ಗೌರವ ಪಡೆದವರು]]
[[ವರ್ಗ:MTV ಮೂವೀ ಅವಾರ್ಡ್ ವಿಜೇತರು]]
[[ವರ್ಗ:ಎಡಿನ್ಬರ್ಗ್ನ ಜನರು]]
[[ವರ್ಗ:ರಾಯಲ್ ನೇವಿ ನಾವಿಕರು]]
[[ವರ್ಗ:ಐರಿಶ್ ಮೂಲದ ಸ್ಕಾಟಿಶ್ ಜನರು]]
[[ವರ್ಗ:ಸ್ಕಾಟಿಶ್ ಬಾಡಿ ಬಿಲ್ಡರ್ಸ್]]
[[ವರ್ಗ:ಸ್ಕಾಟಿಶ್ ಚಲನಚಿತ್ರ ನಟರು]]
[[ವರ್ಗ:ಸ್ಕಾಟಿಶ್ ಚಲನಚಿತ್ರ ನಿರ್ಮಾಪಕರು]]
[[ವರ್ಗ:ಸ್ಕಾಟಿಶ್ ದೇಶದ ಪ್ರಜೆಗಳು]]
[[ವರ್ಗ:ಸ್ಕಾಟಿಶ್ ಸ್ಟೇಜ್ ನಟರು]]
[[ವರ್ಗ:ಸ್ಕಾಟಿಶ್ ದೂರದರ್ಶನ ನಟರು]]
[[ವರ್ಗ:ಸ್ಕಾಟಿಶ್ ಧ್ವನಿ ನಟರು]]
[[ವರ್ಗ:ಈಗಿರುವ ವ್ಯಕ್ತಿಗಳು]]
[[ವರ್ಗ:ಹಾಲಿವುಡ್ ಚಲನಚಿತ್ರ ಕಲಾವಿದರು]]
ndzn90ukiborqzltfaouvcdq4q6qu5b
ಮ್ಯಾಂಚೆಸ್ಟರ್
0
23478
1384568
1380484
2026-08-28T13:11:00Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384568
wikitext
text/x-wiki
{{three other uses|the City of Manchester in England|the wider metropolitan county|Greater Manchester|the larger conurbation|Greater Manchester Urban Area|other uses|Manchester (disambiguation)}}
{{Coord|53|28|N|2|14|W|display=title}}
{{Infobox settlement
<!--See the Table at Infobox settlement for all fields and descriptions of usage-->
|official_name = City of Manchester
|other_name =
|native_name = <!-- for cities whose native name is not in English -->
|nickname = "[[Cottonopolis]]", "Warehouse City", "Rainy City", "[[Capital Of The North]]",[[Madchester]]
|settlement_type = [[City status in the United Kingdom|City]] & [[Metropolitan borough]]<!--For Town or Village (Leave blank for the default City)-->
|motto = "Concilio Et Labore" <small>''"By wisdom and effort"''</small>
<!-- images and maps ----------->
|image_skyline = Manchester main.png
|imagesize = 280px
|image_caption = A series of images of Manchester.
|image_flag =
|flag_size =
|image_seal =
|seal_size =
|image_shield =
|shield_link =
|shield_size =
|image_blank_emblem =
|blank_emblem_type = Coat of Arms of the City Council
|blank_emblem_size = 150px
|blank_emblem_link = Manchester City Council
|image_map = EnglandManchester.png
|mapsize = 200 * 247
|map_caption = Manchester shown within England
|image_map1 =
|mapsize1 =
|map_caption1 =
|image_dot_map =
|dot_mapsize =
|dot_map_caption =
|dot_x = |dot_y =
|pushpin_map = <!-- the name of a location map as per http://en.wikipedia.org/wiki/Template:Location_map -->
|pushpin_label_position = <!-- the position of the pushpin label: left, right, top, bottom, none -->
|pushpin_map_caption =
|pushpin_mapsize =
<!-- Location ------------------>
|subdivision_type = [[List of sovereign states|Sovereign state]]
|subdivision_name = United Kingdom
|subdivision_type1 = [[Constituent country]]
|subdivision_name1 = England
|subdivision_type2 = [[Regions of England|Region]]
|subdivision_name2 = [[North West England]]
|subdivision_type3 = [[Ceremonial counties of England|Ceremonial county]]
|subdivision_name3 = [[Greater Manchester]]
|subdivision_type4 = Admin HQ
|subdivision_name4 = [[Manchester city centre]]
<!-- Politics ----------------->
|government_footnotes =
|government_type = [[Metropolitan borough]], [[City status in the United Kingdom|City]]
|leader_title = Governing body
|leader_name = [[Manchester City Council]]
|leader_title1 = [[List of Lord Mayors of Manchester|Lord Mayor]]
|leader_name1 = Mavis Smitheman
|leader_title2 = [[MPs elected in the UK general election, 2005|MPs]]:
|leader_name2 = [[Paul Goggins]] [[Labour Party (UK)|(Lab)]]<br />[[Gerald Kaufman|Sir Gerald Kaufman]] [[Labour Party (UK)|(Lab)]]<br />[[John Leech (politician)|John Leech]] [[Liberal Democrats|(Lib Dem)]]<br />[[Tony Lloyd]] [[Labour Party (UK)|(Lab)]]<br />[[Graham Stringer]] [[Labour Party (UK)|(Lab)]]
|leader_title3 =
|leader_name3 =
|leader_title4 =
|leader_name4 =
|established_title = Founded
|established_date = 1st century
|established_title2 = Town charter
|established_date2 = 1301
|established_title3 = City status
|established_date3 = 1853
<!-- Area --------------------->
|area_magnitude =
|unit_pref = <!--Enter: Imperial, if Imperial (metric) is desired-->
|area_footnotes =
|area_total_km2 = 115.65<!-- ALL fields dealing with a measurements are subject to automatic unit conversion-->
|area_land_km2 = <!--See table @ Template:Infobox settlement for details on automatic unit conversion-->
|area_water_km2 =
|area_total_sq_mi =
|area_land_sq_mi =
|area_water_sq_mi =
|area_water_percent =
|area_urban_km2 =
|area_urban_sq_mi =
|area_metro_km2 =
|area_metro_sq_mi =
|area_blank1_title =
|area_blank1_km2 =
|area_blank1_sq_mi =
<!-- Population ----------------------->
|population_as_of = {{English statistics year}}
|population_footnotes =
|population_note =
|population_total = {{EnglishDistrictPopulation|ONS = 00BN}} ([[List of English districts by population|Ranked {{EnglishDistrictRank|ONS = 00BN}}]])
|population_density_km2 = 3815
|population_density_sq_mi =
|population_metro =
|population_density_metro_km2 =
|population_density_metro_sq_mi =
|population_urban = 2240230 <br /><small>([[Greater Manchester Urban Area]])</small>
|population_density_urban_km2 =
|population_density_urban_sq_mi =
|population_blank1_title = [[Greater Manchester|County]]
|population_blank1 = 2547700
|population_density_blank1_title = Density
|population_density_blank1_km2 = 1997
|population_density_blank1_sq_mi = 5172.2
|population_blank2_title = [[Larger Urban Zones|LUZ]]
|population_blank2 = 2539100
|population_density_blank2_km2 = 1984
|population_density_blank2_sq_mi =
|population_demonym = Mancunian
<!-- General information --------------->
|timezone = [[Greenwich Mean Time]]
|utc_offset = +0
|timezone_DST =
|utc_offset_DST =
|latd = 53 |latm = 28 |lats = |latNS = N
|longd = 2 |longm = 14 |longs = |longEW = W
|elevation_footnotes = <!--for references: use tags-->
|elevation_m = 38
|elevation_ft = 125
<!-- Area/postal codes & others -------->
|postal_code_type = Postcode
|postal_code = [[M postcode area|M]]
|area_code = 0161
|blank_name = Ethnicity<br /><small>([[United Kingdom Census 2001|2007 Estimates]]<ref>{{cite web |url=http://www.neighbourhood.statistics.gov.uk/dissemination/LeadTableView.do?a=3&b=276778&c=manchester&d=13&e=13&g=351271&i=1001x1003x1004&o=280&m=0&r=1&s=1256074943875&enc=1&dsFamilyId=1812 |publisher=[[Office for National Statistics]] |title=Manchester (local authority) Resident Population Estimates by Ethnic Group (Percentages) |accessdate=2009-10-20 |archive-date=2011-09-19 |archive-url=https://web.archive.org/web/20110919115033/http://www.neighbourhood.statistics.gov.uk/dissemination/LeadTableView.do?a=3&b=276778&c=manchester&d=13&e=13&g=351271&i=1001x1003x1004&o=280&m=0&r=1&s=1256074943875&enc=1&dsFamilyId=1812 |url-status=dead }}</ref>)</small>
|blank_info = '''75.8% [[White people|White]]'''<br />69.1% [[White British]]<br />2.6% [[Irish Briton|White Irish]]<br />4.0% [[White Other (United Kingdom Census)|Other White]]<br />'''3.3% [[British Mixed|Mixed]]'''<br />1.2% [[British Mixed|White & Black Caribbean]]<br />0.6% [[British Mixed|White & Black African]]<br />0.7% [[British Mixed|White & South Asian]]<br />0.7% [[British Mixed|White & Other]]<br />'''11.1% [[British Asian|South Asian]]'''<br />2.7% [[Indian British|Indian]]<br />6.1% [[Pakistani British|Pakistani]]<br />1.0% [[British Asian|Bangladeshi]]<br />1.3% [[British Asian|Other South Asian]]<br />'''5.5% [[Black British|Black]]'''<br />1.9% [[British African-Caribbean community|Black Caribbean]]<br />3.1% [[African British|Black African]]<br />0.5% [[Black British|Other Black]]<br />'''4.3% [[Oriental British|East Asian]] [[Other ethnic group (United Kingdom Census)|and Other]]'''<br />2.7% [[British Chinese|Chinese]]<br />1.6% [[Other ethnic group (United Kingdom Census)|Other]]
|blank1_name = [[ISO 3166-2:GB|ISO 3166-2]]
|blank1_info = GB-MAN
|blank2_name = [[ONS coding system|ONS code]]
|blank2_info = 00BN
|blank3_name = [[British national grid reference system|OS grid reference]]
|blank3_info = {{gbmappingsmall|SJ838980}}
|blank4_name = [[Nomenclature of Territorial Units for Statistics|NUTS]] 3
|blank4_info = UKD31
|blank5_name = [[Demonym]]
|blank5_info = [[Mancunian]]
|website = [http://www.manchester.gov.uk/ www.manchester.gov.uk]
|footnotes =
}}
'''ಮ್ಯಾಂಚೆಸ್ಟರ್''' ({{pron-en|ˈmæntʃɛstə|en-uk-Manchester.ogg}}) [[ಇಂಗ್ಲೆಂಡ್|ಇಂಗ್ಲೆಂಡ್ನ]] [[ಗ್ರೇಟರ್ ಮ್ಯಾಂಚೆಸ್ಟರ್|ಗ್ರೇಟರ್ ಮ್ಯಾಂಚೆಸ್ಟರ್ನ]] [[ನಗರ]] ಮತ್ತು [[ಪ್ರಧಾನನಗರ ವಿಭಾಗ|ಪ್ರಧಾನನಗರ ವಿಭಾಗವಾಗಿದೆ]].
ಇಸವಿ ೨೦೦೮ರಲ್ಲಿ, ನಗರದ ಜನಸಂಖ್ಯೆ ೪೬೪,೨೦೦ <ref name="Manchester population">{{English district population citation}}</ref> ಎಂದು ಅಂದಾಜು ಮಾಡಲಾಗಿದ್ದು, ಇಂಗ್ಲೆಂಡ್ನ [[ಏಳನೆಯ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ]] ಸ್ಥಳೀಯ ಆಡಳಿತ ಜಿಲ್ಲೆಯಾಗಿದೆ. ಮ್ಯಾಂಚೆಸ್ಟರ್ UKದ ಅತಿ ದೊಡ್ಡ [[ಪ್ರಧಾನನಗರ ಪ್ರದೇಶ|ಪ್ರಧಾನನಗರ ಪ್ರದೇಶಗಳೊಂದರಲ್ಲಿದೆ]]. ಗ್ರೇಟರ್ ಮ್ಯಾಂಚೆಸ್ಟರ್ನ ಪ್ರಧಾನನಗರದ ಕೌಂಟಿಯ ಅಂದಾಜು ಜನಸಂಖ್ಯೆ ೨,೫೬೨,೦೦೦. [[ಗ್ರೇಟರ್ ಮ್ಯಾಂಚೆಸ್ಟರ್ ನಗರ ಪ್ರದೇಶ|ಗ್ರೇಟರ್ ಮ್ಯಾಂಚೆಸ್ಟರ್ ನಗರ ಪ್ರದೇಶದ]] ಜನಸಂಖ್ಯೆಯು ೨,೨೪೦,೨೩೦ <ref name="Urban population">{{Cite web|url=http://www.statistics.gov.uk/census2001/corrections_ks_urban.asp|title=Key Statistics for urban areas in England and Wales|accessdate=2007-06-29|publisher=statistics.gov.uk|year=2001|author=[[United Kingdom Census 2001]]|archive-date=2013-07-05|archive-url=https://web.archive.org/web/20130705230544/http://www.ons.gov.uk/ons/guide-method/census/2011/index.html|url-status=dead}}</ref> ಹಾಗೂ ಮ್ಯಾಂಚೆಸ್ಟರ್ ಸುತ್ತ ಇರುವ [[ಲಾರ್ಜರ್ ಅರ್ಬನ್ ಜೋನ್]] UKಯ ಎರಡನೆಯ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ೨೦೦೪ [[ಅರ್ಬನ್ ಆಡಿಟ್]] ಪ್ರಕಾರ ೨,೫೩೯,೧೦೦ ಅಂದಾಜು ಜನಸಂಖ್ಯೆ ಹೊಂದಿದೆ.<ref name="urbanaudit" /> ಮ್ಯಾಂಚೆಸ್ಟರ್ನ [[ಡೆಮೊನಿಂ]](ನಿರ್ದಿಷ್ಟ ಸ್ಥಳದ ನಿವಾಸಿಗಳನ್ನು ಕರೆಯುವುದು)ನ್ನು ಮ್ಯಾನ್ಕುನಿಯನ್ ಎನ್ನಲಾಗಿದೆ.
ಮ್ಯಾಂಚೆಸ್ಟರ್ [[ವಾಯುವ್ಯ ಇಂಗ್ಲೆಂಡ್]]ನ ದಕ್ಷಿಣ ಮಧ್ಯ ಭಾಗದಲ್ಲಿದೆ. ಇದರ ದಕ್ಷಿಣದಲ್ಲಿ [[ಚೆಷೈರ್ ಬಯಲು ಪ್ರದೇಶ]] ಮತ್ತು ಉತ್ತರ ಮತ್ತು ಪೂರ್ವದಲ್ಲಿ [[ಪೆನೀನ್ಸ್]] ಇವೆ. [[ಮಾಮುಸಿಯಮ್]] [[ರೋಮನ್ ಕೋಟೆ|ರೋಮನ್ ಕೋಟೆಯೊಂದಿಗೆ]] ಸಂಬಂಧ ಹೊಂದಿದ ನಾಗರಿಕ ''[[ವೈಕಸ್]]'' ನೊಂದಿಗೆ ದಾಖಲಿತ [[ಮ್ಯಾಂಚೆಸ್ಟರ್ ಇತಿಹಾಸ]] ಆರಂಭವಾಯಿತು. ಇದನ್ನು [[ಮೆಡ್ಲಾಕ್]] ಮತ್ತು [[ಇರ್ವೆಲ್]] ನದಿಗಳ ಸಂಗಮದ ಬಳಿ ಮರಳುಗಲ್ಲಿನಲ್ಲಿ ಸ್ಥಾಪಿಸಲಾಗಿತ್ತು. [[ಐತಿಹಾಸಿಕವಾಗಿ]], ನಗರದ ಬಹಳಷ್ಟು ಭಾಗವು [[ಲಂಕಾಷೈರ್]]ಗೆ ಸೇರಿತ್ತು. ಆದರೂ, [[ಮರ್ಸೀ ನದಿ|ಮರ್ಸೀ ನದಿಯ]] ದಕ್ಷಿಣದಲ್ಲಿರುವ ಕೆಲವು ಪ್ರದೇಶಗಳು [[ಚೆಷೈರ್|ಚೆಷೈರ್ನಲ್ಲಿದ್ದವು]]. [[ಮಧ್ಯಯುಗ|ಮಧ್ಯಯುಗವಿಡೀ]] ಮ್ಯಾಂಚೆಸ್ಟರ್ ಒಂದು [[ಜಹಗೀರಿ|ಜಹಗೀರಿನ]] [[ಪಟ್ಟಣ|ಪಟ್ಟಣವಾಗಿತ್ತು]]. ಆದರೆ, ೧೯ನೆಯ ಶತಮಾನದ ತಿರುವಿನಲ್ಲಿ ಅಚ್ಚರಿಯ ಪ್ರಮಾಣದಲ್ಲಿ ವಿಸ್ತರಣೆ ಆರಂಭಿಸಿತು.[[ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಜವಳಿ ಉತ್ಪಾದನೆ|ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಜವಳಿ ಉತ್ಪಾದನೆಯಲ್ಲಿ]] ಚೇತರಿಕೆಯಿಂದ ಯೋಜನೆರಹಿತ [[ನಗರೀಕರಣ|ನಗರೀಕರಣದ]] ಪ್ರಕ್ರಿಯೆ ಭಾಗವಾಗಿ ಈ ಬೆಳವಣಿಗೆ ಉಂಟಾಯಿತು.<ref name="Cotton">{{cite book|title=The Cotton Industry|url=https://archive.org/details/cottonindustry0000aspi|last=Aspin|first=Chris|publisher=Shire Publications Ltd|year=1981|isbn=0-85263-545-1|page=[https://archive.org/details/cottonindustry0000aspi/page/3 3]}}</ref> ಮ್ಯಾಂಚೆಸ್ಟರ್ನ ನಗರೀಕರಣವು, [[ಕೈಗಾರಿಕಾ ಕ್ರಾಂತಿ]] ಮತ್ತು [[ವಿಕ್ಟೊರಿಯನ್ ಯುಗ|ವಿಕ್ಟೊರಿಯನ್ ಯುಗದ]] ಸಮಯಕ್ಕೆ ಹೆಚ್ಚಾಗಿ ಹೊಂದಿಕೆಯಾಗಿತ್ತು, ಇದರ ಫಲವಾಗಿ ವಿಶ್ವದ ಮೊದಲ [[ಕೈಗಾರಿಕೀಕೃತ]] ನಗರವಾಯಿತು.<ref name="Industrial city">{{cite book|title=Manchester: A History|url=https://archive.org/details/manchesterhistor0000kidd| last=Kidd|first=Alan|year=2006|publisher=Carnegie Publishing| location=Lancaster|isbn=1-85936-128-5}}<br />• {{cite book|title=Tradition in Action. The historical evolution of the Greater Manchester County|url=https://archive.org/details/traditioninactio0000fran|last=Frangopulo|first=Nicholas|year=1977|publisher=EP Publishing|location=Wakefield|isbn=0-7158-1203-3}}<br />• {{Cite web|url=http://www.eurofundingnw.org.uk/current_affairs.asp?section=affairs&id=34|title=Manchester United in Celebration of City|accessdate=2006-12-18|publisher=European Structural Funding|year=2002|archive-date=2006-12-07|archive-url=https://web.archive.org/web/20061207114505/http://www.eurofundingnw.org.uk/current_affairs.asp?section=affairs&id=34|url-status=dead}}</ref> ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಕೈಗಾರಿಕಾ ಕಟ್ಟಡ ನಿರ್ಮಾಣದಲ್ಲಿ ಚೇತರಿಕೆಯ ಫಲವಾಗಿ, ಪಟ್ಟಣವಾಗಿದ್ದ ಮ್ಯಾಂಚೆಸ್ಟರ್ ಒಂದು ಪ್ರಮುಖ [[ಗಿರಣಿ ಪಟ್ಟಣ]], [[ಪ್ರಧಾನನಗರ ವಿಭಾಗ|ಪ್ರಧಾನನಗರ ವಿಭಾಗವಾಗಿ]] ಪರಿವರ್ತನೆ ಹೊಂದಿ ಅಂತಿಮವಾಗಿ ೧೮೫೩ರಲ್ಲಿ ಗೌರವಸೂಚಕ '[[ನಗರ ಸ್ಥಾನಮಾನ]]' ಗಳಿಸಿತು.
[[ಇಂಗ್ಲಿಷ್ ಕೋರ್ ಸಿಟೀಸ್ ಗ್ರೂಪ್|ಇಂಗ್ಲಿಷ್ ಕೋರ್ ಸಿಟೀಸ್ ಗ್ರೂಪ್ನ]] ಅಂಗವಾಗಿರುವ ಮ್ಯಾಂಚೆಸ್ಟರ್ ನಗರವು ಇಂದು ಕಲೆ, ಮಾಧ್ಯಮ, ಉನ್ನತ ಶಿಕ್ಷಣ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಇವೆಲ್ಲ ಅಂಶಗಳು ೨೦೦೨ರಲ್ಲಿನ ಸಮೀಕ್ಷೆಯಲ್ಲಿ ಮ್ಯಾಂಚೆಸ್ಟರ್ [[ಯುನೈಟೆಡ್ ಕಿಂಗ್ಡಮ್ನ ಎರಡನೆಯ ಪ್ರಮುಖ ನಗರ]] ಎಂದು ಗುರುತಿಸಲು ಕೊಡುಗೆ ನೀಡಿತು.<ref name="Second city">{{Cite web|url=http://news.bbc.co.uk/1/hi/england/2253035.stm|title=Manchester 'England's second city'|accessdate=2007-05-02|publisher=[[BBC]]|year=೨೦೦೨}}
<br />• {{Cite web | url= http://www.ipsos-mori.com/researchpublications/researcharchive/poll.aspx?oItemId=1038 | title= Manchester 'England's Second City' | accessdate= 2009-08-15 | publisher= Ipsos MORI | year= 2002 }}
<br />• {{Cite web|url=http://property.timesonline.co.uk/tol/life_and_style/property/article541043.ece|title=Can Birmingham halt its decline?|accessdate=2007-08-01|publisher=[[The Times]]|year=೨೦೦೫|author=Riley, Catherine|archive-date=2011-08-11|archive-url=https://web.archive.org/web/20110811091707/http://property.timesonline.co.uk/tol/life_and_style/property/article541043.ece|url-status=dead}}
<br />• {{Cite web|url=http://news.bbc.co.uk/1/hi/england/manchester/4293814.stm|title=Manchester 'close to second city'|accessdate=2006-05-02|publisher=[[BBC]]|year=೨೦೦೫}}
<br />• {{Cite web|url=http://news.bbc.co.uk/1/hi/england/6349501.stm|title=Manchester tops second city poll|accessdate=2007-06-18|publisher=[[BBC]]|year=೨೦೦೭}}
<br />• {{Cite web|url=http://www.bbc.co.uk/pressoffice/pressreleases/stories/2007/02_february/09/birmingham.shtml|title=Birmingham loses out to Manchester in second city face off|accessdate=2007-06-18|publisher=[[BBC]]|year=೨೦೦೭}}</ref> ಇಸವಿ ೨೦೦೬ರಲ್ಲಿ ಪ್ರಕಟಿಸಲಾದ ಬ್ರಿಟಿಷ್ ವಾಣಿಜ್ಯ ಉದ್ಯಮಿಗಳ ಸಮೀಕ್ಷೆಯಲ್ಲಿ, ಉದ್ದಿಮೆಯೊಂದನ್ನು ಆರಂಭಿಸಲು ಮ್ಯಾಂಚೆಸ್ಟರ್ ಅತ್ಯುತ್ತಮ ನಗರವೆಂದು ಪರಿಗಣಿಸಲಾಯಿತು.<ref name="Best for business">{{Cite web|url=http://www.omis.co.uk/Downloads/BBC06.pdf|title=Britain's Best Cities 2005–2006 Executive Summary|accessdate=2007-09-08|publisher=OMIS Research|year=2006|format=PDF|archiveurl=https://web.archive.org/web/20071126231935/http://www.omis.co.uk/Downloads/BBC06.pdf|archivedate=2007-11-26}}</ref> ಇಸವಿ ೨೦೦೭ರಲ್ಲಿ ಪ್ರಕಟಿತ, ಮ್ಯಾಂಚೆಸ್ಟರ್ ಪಾರ್ಟ್ನರ್ಶಿಪ್ ನಿರೂಪಿಸಿದ ವರದಿಯ ಪ್ರಕಾರ, ಮ್ಯಾಂಚೆಸ್ಟರ್ "ಆರ್ಥಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರ" ಎಂದು ತೋರಿಸಿತು.<ref name="Fastest Growing City">{{Cite web|url=http://www.manchester.gov.uk/site/scripts/news_article.php?newsID=2915|title=Manchester – The State of the City|accessdate=2007-09-11|publisher=Manchester City Council|year=2007|archive-date=2013-01-12|archive-url=https://web.archive.org/web/20130112214407/http://www.manchester.gov.uk/site/scripts/news_article.php?newsID=2915|url-status=dead}}</ref> GaWC ಜಾಗತಿಕ ನಗರಗಳ ಪಟ್ಟಿಗಳಲ್ಲಿ, ಮ್ಯಾಂಚೆಸ್ಟರ್ [[ಗಾಮಾ ನಗರ]](ಜಾಗತಿಕ ನಗರ) ಎಂದು ಶ್ರೇಯಾಂಕಿತವಾಗಿದೆ.<ref>{{cite web|url= http://www.lboro.ac.uk/gawc/world2008t.html|title= GaWC - The World According to GaWC 2008<!-- Bot generated title -->|access-date= 2010-05-28|archive-date= 2016-08-11|archive-url= https://web.archive.org/web/20160811203314/http://www.lboro.ac.uk/gawc/world2008t.html|url-status= dead}}</ref> ವಿದೇಶೀ ಪ್ರವಾಸಿಗರ ಪಾಲಿಗೆ, ಮ್ಯಾಂಚೆಸ್ಟರ್ ಯುನೈಟೆಡ್ ಕಿಂಗ್ಡಮ್ನ ಮೂರನೆಯ ಅತಿ ಹೆಚ್ಚು ಪ್ರವಾಸಿ ನಗರವಾಗಿದೆ, ಹಾಗೂ [[ಲಂಡನ್]] ಹೊರತುಪಡಿಸಿ, [[ಇಂಗ್ಲೆಂಡ್|ಇಂಗ್ಲೆಂಡ್ನಲ್ಲೇ]] ಅತಿ ಹೆಚ್ಚು ಪ್ರವಾಸಿ ನಗರವಾಗಿದೆ.<ref>{{cite web |url=http://www.statistics.gov.uk/cci/nugget.asp?id=178 |title=National Statistics Online - International Visits |accessdate=2009-07-19 |publisher=ONS}}</ref> ಮ್ಯಾಂಚೆಸ್ಟರ್ [[2002 ಕಾಮನ್ವೆಲ್ತ್ ಕ್ರೀಡಾಕೂಟ|2002 ಕಾಮನ್ವೆಲ್ತ್ ಕ್ರೀಡಾಕೂಟದ]] ಆತಿಥ್ಯ ವಹಿಸಿತ್ತು. ಅದರ ಇತರೆ ಕ್ರೀಡಾ ಸಂಬಂಧಗಳೆಂದರೆ ಅದರ ಎರಡು [[ಪ್ರೀಮಿಯರ್ ಲೀಗ್]] ಫುಟ್ಬಾಲ್ ತಂಡಗಳಾದ [[ಮ್ಯಾಂಚೆಸ್ಟರ್ ಯುನೈಟೆಡ್]] ಹಾಗೂ [[ಮ್ಯಾಂಚೆಸ್ಟರ್ ಸಿಟಿ]].<ref>ಗಮನಿಸಿ: ಮ್ಯಾಂಚೆಸ್ಟರ್ ಯುನೈಟೆಡ್ನ ಮೈದಾನವು ಗ್ರೇಟರ್ ಮ್ಯಾಂಚೆಸ್ಟರ್ನಲ್ಲಿದೆ, ಆದರೆ ಇದು ಮ್ಯಾಂಚೆಸ್ಟರ್ [[ನಗರ ಸರಹದ್ದಿ|ನಗರ ಸರಹದ್ದಿನಾಚೆಗಿದೆ]]; ಇದು [[ಟ್ರಾಫೋರ್ಡ್]] ನಗರವಿಭಾಗದಲ್ಲಿದೆ.</ref>
== ಇತಿಹಾಸ ==
{{Main|History of Manchester}}
=== ಶಬ್ದ ನಿಷ್ಪತ್ತಿ ===
ಮ್ಯಾಂಚೆಸ್ಟರ್ ಎಂಬ ಹೆಸರು [[ಪುರಾತನ ರೋಮನ್]] ಹೆಸರಾದ ''[[ಮಾಮುಸಿಯಮ್]]'' ನಿಂದ ಉದ್ಭವವಾಗಿದೆ. ಮಾಮುಸಿಯಮ್ ಎಂಬುದು ರೋಮನ್ ಕೋಟೆ ಮತ್ತು ವಸಾಹತಿನ ಹೆಸರಾಗಿದೆ. ಇದನ್ನು ಸಾಮಾನ್ಯವಾಗಿ ಮೂಲ [[ಸೆಲ್ಟಿಕ್]] ಹೆಸರಿನ (''ಮ್ಯಾಮ್-'' (ಸ್ತನ) ಬಹುಶಃ ಅರ್ಥ: ಸ್ತನದಂತಹ ಬೆಟ್ಟ) ಲ್ಯಾಟಿನೀಕರಣವೆಂದು ಭಾವಿಸವಾಗಿದೆ. ಜೊತೆಗೆ, [[ಲ್ಯಾಟಿನ್]] ''[[ಕ್ಯಾಸ್ಟ್ರಾ]]'' (ಶಿಬಿರ (ಕ್ಯಾಂಪ್))ದಿಂದ ಜನ್ಯವಾದ [[ಪ್ರಾಚೀನ ಇಂಗ್ಲಿಷ್]] ಭಾಷೆಯ ''ಸೀಸ್ಟರ್'' = (ಪಟ್ಟಣ).<ref name="Place names">{{cite book|title=A Dictionary of British Place-Names|url=http://www.oxfordreference.com/pages/Subjects_and_Titles__2B_05|last=Mills|first=A.D.|year=2003|publisher=Oxford University Press|location=Oxford|isbn=0-19-852758-6}}</ref> ಇನ್ನೊಂದು ಪರ್ಯಾಯ ಸಿದ್ಧಾಂತದ ಪ್ರಕಾರ,ಇದರ ಮೂಲವು [[ಬ್ರಿಟಿಷ್ ಸೆಲ್ಟಿಕ್]]ನ '''ಮಮ್ಮಾ'' = "ತಾಯಿ" ಪದದಿಂದ ಜನ್ಯವಾಗಿದೆ. ಈ 'ತಾಯಿ'ಯು, ಕೋಟೆಯ ಕೆಳಗೆ ಹರಿಯುವ [[ಮೆಡ್ಲಾಕ್ ನದಿ|ಮೆಡ್ಲಾಕ್ ನದಿಯ]] ನದಿದೇವತೆಯಾಗಿದ್ದಳು. ''ಮ್ಯಾಮ್'' ಎಂದರೆ, [[ಐರಿಷ್ ಗೇಯಿಲಿಕ್]] ಭಾಷೆಯಲ್ಲಿ ಹೆಣ್ಣಿನ [[ಸ್ತನ]] ಹಾಗೂ ವೆಲ್ಷ್ ಭಾಷೆಯಲ್ಲಿ 'ತಾಯಿ' ಎಂಬ ಅರ್ಥ ನೀಡುತ್ತದೆ.<ref>ದಿ ಆಂಟಿಕ್ವಾರೀಸ್ ಜರ್ನಲ್ (ISSN ೦೦೦೩-೫೮೧೫) ೨೦೦೪, ಸಂಪುಟ. ೮೪, ಪಿಪಿ. ೩೫೩–೩೫೭</ref>
=== ಆರಂಭಿಕ ಇತಿಹಾಸ ===
[[ಬ್ರಿಗ್ಯಾಂಟಸ್]] ಎಂಬ ಪ್ರಮುಖ [[ಸೆಲ್ಟಿಕ್ ಬುಡಕಟ್ಟು ಜನಾಂಗ|ಸೆಲ್ಟಿಕ್ ಬುಡಕಟ್ಟು ಜನಾಂಗದವರು]] ಇಂದಿನ [[ಉತ್ತರ ಇಂಗ್ಲೆಂಡ್|ಉತ್ತರ ಇಂಗ್ಲೆಂಡ್ಸ್ಥಳದಲ್ಲಿ]] ವಾಸಿಸುತ್ತಿದ್ದರು. [[ಇರ್ವೆಲ್ ನದಿ|ಇರ್ವೆಲ್ ನದಿಯ]] ದಡದ ಎದುರು, ಇಂದು ನಿಂತಿರುವ [[ಮ್ಯಾಂಚೆಸ್ಟರ್ ಕಥಿಡ್ರಲ್]] ಬಳಿ ಮರಳುಗಲ್ಲಿನ ಶಿಲಾಸ್ತರವುಳ್ಳ ಆ ಸ್ಥಳದಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದರು.<ref name="Cooper">{{cite book |first=Glynis |last=Cooper |title=Salford: An Illustrated History |publisher=The Breedon Books Publishing Company |year=2005 |isbn=1-85983-455-8|page=19}}</ref> ಇವರ ಪ್ರಾಂತ್ಯವು ಇಂದಿನ [[ಸ್ಯಾಲ್ಫರ್ಡ್]] ಮತ್ತು [[ಸ್ಟ್ರೆಟ್ಫರ್ಡ್]]ನ ಫಲವತ್ತಾದ ತಗ್ಗುಪ್ರದೇಶದುದ್ದಕ್ಕೂ ವಿಸ್ತರಿಸಿತ್ತು. ಮೊದಲ ಶತಮಾನದಲ್ಲಿ [[ಬ್ರಿಟನ್ ಮೇಲೆ ರೋಮನ್ರ ವಿಜಯ|ಬ್ರಿಟನ್ ಮೇಲೆ ರೋಮನ್ರ ವಿಜಯದ]] ನಂತರ, ೭೯ನೆಯ ಇಸವಿಯಲ್ಲಿ [[ಜನರಲ್ ಅಗ್ರಿಕೋಲಾ]] [[ಡಿವಾ ವಿಕ್ಟ್ರಿಕ್ಸ್]] ([[ಚೆಸ್ಟರ್]]) ಮತ್ತು [[ಇಬೊರಾಕಮ್]] ([[ಯಾರ್ಕ್]]) ಒಂದಿಗೆ ರೋಮನ್ ಹಿತಾಸಕ್ತಿಗಳನ್ನು ಬ್ರಿಗ್ಯಾಂಟಸ್ನಿಂದ ರಕ್ಷಿಸಿಕೊಳ್ಳಲೆಂದು, [[ಮಾಮುಸಿಯಮ್]] ಎಂಬ [[ರೋಮನ್ ಕೋಟೆ|ರೋಮನ್ ಕೋಟೆಯನ್ನು]] ನಿರ್ಮಿಸುವಂತೆ ಆದೇಶ ಹೊರಡಿಸಿದ.<ref name="Cooper"/>
ಈ ಸಮಯದಿಂದಲೂ, ಕೇಂದ್ರೀಯ ಮ್ಯಾಂಚೆಸ್ಟರ್ ಕಾಯಂ ಆಗಿ ಸ್ಥಾಪಿತವಾಗಿದೆ.<ref name="Roman">{{cite book| title=Halloween: from Pagan Ritual to Party Night| url=http://www.oup.com/uk/catalogue/?ci=9780195168969| last=Rogers| first=Nicholas| year=2003| page=18| publisher=[[Oxford University Press]]| isbn=೦-೧೯-೫೧೬೮೯೬-೮}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ರೋಮನ್ ಕೋಟೆಯ ಅಂತಿಮ ಆವೃತ್ತಿಯ ಅಡಿಪಾಯಗಳ ಸ್ಥಿರ ಅವಶೇಷವು [[ಕ್ಯಾಸ್ಲ್ಫೀಲ್ಡ್|ಕ್ಯಾಸ್ಲ್ಫೀಲ್ಡ್ನಲ್ಲಿ]] ಕಾಣಬಹುದಾಗಿದೆ. ಸುಮಾರು ೩ ಶತಮಾನದ ಆಸುಪಾಸಿನಲ್ಲಿ ಮ್ಯಾಂಚೆಸ್ಟರ್ನಲ್ಲಿ ರೋಮನ್ ವಸಾಹತು ಬಹುಶಃ ಅಂತ್ಯಗೊಂಡಿತು. ''[[ವೈಕಸ್]]'' ಅಥವಾ ನಾಗರಿಕ ವಸಾಹತು ೩ನೇ ಶತಮಾನದ ಮಧ್ಯದಲ್ಲಿ ತೊರೆದಿರುವಂತೆ ಕಂಡುಬಂದಿದೆ. ಆದರೂ, ಕೋಟೆಯು ೩ನೇ ಶತಮಾನದ ಅಂತ್ಯ ಅಥವಾ ೪ನೆಯ ಶತಮಾನದ ವರೆಗೆ ಸಣ್ಣ ದಂಡಿಗೆ ಆಸರೆಯಾಗಿರಬಹುದು ಎನ್ನಲಾಗಿದೆ.<ref>{{cite book |last=Gregory |first=Richard (ed) |title=Roman Manchester: The University of Manchester's Excavations within the Vicus 2001–5 |page=190 |publisher=Oxbow Books |year=2007 |location=Oxford |isbn=978-1-84217-271-1}}</ref>
ಇಸವಿ ೧೦೬೬ರಲ್ಲಿ [[ನಾರ್ಮನ್ ವಿಜಯ|ನಾರ್ಮನ್ ವಿಜಯದ]] ಸಮಯದಲ್ಲಿ, ವಸಾಹತಿನ ಗಮನವು ಇರ್ವೆಲ್ ಮತ್ತು [[ಇರ್ಕ್]] ನದಿಗಳ ಸಂಗಮದತ್ತ ತಿರುಗಿತ್ತು.<ref name="Kidd">{{cite book|title=Manchester: A History|url=https://archive.org/details/manchesterhistor0000kidd| last=Kidd|first=Alan|year=2006|pages= [https://archive.org/details/manchesterhistor0000kidd/page/12 12], 15–24, 224|publisher=Carnegie Publishing|location=Lancaster|isbn=1-85936-128-5}}</ref> ಆನಂತರದ [[ಹ್ಯಾರಿಯಿಂಗ್ ಆಫ್ ದಿ ನಾರ್ತ್]](ದಂಡಯಾತ್ರೆಗಳ ಸರಣಿ)ನಲ್ಲಿ ವಿಶಾಲ ವಲಯವನ್ನು ಹಾಳುಗೆಡವಲಾಯಿತು.<ref name="Hylton">{{cite book|title=A History of Manchester|url=https://archive.org/details/historyofmanches0000hylt|last=Hylton|first=Stuart|year=2003|pages=[https://archive.org/details/historyofmanches0000hylt/page/1 1]–10, 22, 25, 42, 63–67, 69|publisher=Phillimore & Co|isbn=1-86077-240-4}}</ref><ref name="Arrowsmith">{{cite book|title=Stockport: a History|last=Arrowsmith|first=Peter|year=1997|page=30|publisher=Stockport Metropolitan Borough Council|isbn=0-905164-99-7}}</ref>
[[ಚಿತ್ರ:Map of manchester circa 1650.jpg|thumb|left|ಸುಮಾರು 1650 ಇಸವಿಯಲ್ಲಿ ಮ್ಯಾಂಚೆಸ್ಟರ್ನ ನಕ್ಷೆ.]]
[[ಚಿತ್ರ:Map of Manchester 1801.PNG|thumb|left|ಇಸವಿ 1801ರಲ್ಲಿ ಮ್ಯಾಂಚೆಸ್ಟರ್ ಮತ್ತು ಸ್ಯಾಲ್ಫರ್ಡ್ನ ನಕ್ಷೆ.]]
ಜಹಗೀರಿನ ಒಡೆಯ ಥಾಮಸ್ ಡಿ ಲಾ ವಾರ್ [[ಪಾದ್ರಿ ಹೋಬಳಿ|ಪಾದ್ರಿ ಹೋಬಳಿಗಾಗಿ]] ಒಂದು ಕೊಲೇಜಿಯೇಟ್ ಚರ್ಚ್ನ್ನು ೧೪೨೧ರಲ್ಲಿ ಸಂಸ್ಥಾಪಿಸಿ ನಿರ್ಮಿಸಿದ. ಈ ಚರ್ಚ್ ಇಂದು [[ಮ್ಯಾಂಚೆಸ್ಟರ್ ಕ್ಯಾಥಿಡ್ರಲ್]] ಆಗಿದೆ. ಕಾಲೇಜ್ನ ಸ್ಥಳೀಯ ಆವರಣಗಳಲ್ಲಿ [[ಚೆಟ್ಹ್ಯಾಮ್ಸ್ ಸ್ಕೂಲ್ ಆಫ್ ಮ್ಯೂಸಿಕ್]] ಮತ್ತು [[ಚೆಟ್ಹ್ಯಾಮ್ಸ್ ಲೈಬ್ರರಿ]] ಇವೆ.<ref name="Kidd"/><ref name="Hartwell">{{cite book|title=Pevsner Architectural Guides: Manchester|url=https://archive.org/details/manchester0000hart|last=Hartwell|first=Clare|year=2001|pages= [https://archive.org/details/manchester0000hart/page/11 11]–17, 155, 256, 267–268|publisher=Penguin Books|location=London|isbn=0-14-071131-7}}</ref> ಇಸವಿ ೧೬೫೩ಯಲ್ಲಿ ಆರಂಭಗೊಂಡ ಗ್ರಂಥಾಲಯವು ಇಂದಿಗೂ ಸಹ ಸಾರ್ವಜನಿಕರಿಗಾಗಿ ತೆರೆದಿದೆ. ಇದು [[ಯುನೈಟೆಡ್ ಕಿಂಗ್ಡಮ್|ಯುನೈಟೆಡ್ ಕಿಂಗ್ಡಮ್ನಲ್ಲಿಯೇ]] ಅತಿ ಹಳೆಯ ಸಾರ್ವಜನಿಕ ಉಚಿತ ಆಕರ ಗ್ರಂಥಾಲಯವಾಗಿದೆ.<ref name="Nicholls2004P20">{{cite book |first=Robert |last=Nicholls |title=Curiosities of Greater Manchester |url=https://archive.org/details/curiositiesofgre0000robe |publisher=Sutton Publishing |year=2004 |isbn=0-750-93661-4}}</ref>
ಮ್ಯಾಂಚೆಸ್ಟರ್ ೧೨೮೨ರಲ್ಲಿಯೇ [[ಮಾರುಕಟ್ಟೆ|ಮಾರುಕಟ್ಟೆಯೊಂದನ್ನು]] ಹೊಂದಿತ್ತೆಂದು ತಿಳಿಸಲಾಗಿದೆ.<ref>{{Cite book | title = Gazetteer of Markets and Fairs in England and Wales to 1516 | url = http://www.british-history.ac.uk/report.aspx?compid=40422&strquery=lancashire | last = Letters | first = Samantha | year = 2005 | page = 19 | publisher = British History Online | accessdate = 2009-05-05 | archive-date = 2012-03-14 | archive-url = https://web.archive.org/web/20120314084039/http://www.british-history.ac.uk/report.aspx?compid=40422&strquery=lancashire | url-status = dead }}</ref> ಸುಮಾರು ೧೪ನೆಯ ಶತಮಾನದಲ್ಲಿ, [[ಫ್ಲೆಮಿಷ್]] ನೇಕಾರರು ಮ್ಯಾಂಚೆಸ್ಟರ್ಗೆ ವಲಸೆ ಬಂದರು. ಈ ಗುಂಪಿನವರು ವಲಯದ ಜವಳಿ ಉದ್ದಿಮೆಯ ಅಡಿಪಾಯ ಎಂದು ಕೆಲವುಬಾರಿ ಮನ್ನಣೆ ನೀಡಲಾಗಿದೆ.<ref name="Flemish">{{cite book | title=Lancashire, The Industrial and Commercial South| url=https://archive.org/details/lancashireindust0000niko| last=Pevsner| first=Nikolaus| year=1969| page=[https://archive.org/details/lancashireindust0000niko/page/265 265]| publisher=Penguin Books| location=London| isbn=0-14-071036-1}}</ref> ಮ್ಯಾಂಚೆಸ್ಟರ್ [[ಉಣ್ಣೆ|ಉಣ್ಣೆಯ]] ಮತ್ತು [[ನಾರಿನ]] ಬಟ್ಟೆಯ ಉತ್ಪಾದನೆ ಮತ್ತು ವಹಿವಾಟಿನ ಪ್ರಮುಖ ಕೇಂದ್ರವಾಯಿತು. ಸುಮಾರು ೧೫೪೦ ಇಸವಿಯಲ್ಲಿ ಇನ್ನಷ್ಟು ವಿಸ್ತರಿಸಿ, [[ಜಾನ್ ಲೇಯ್ಲೆಂಡ್]] ವರ್ಣಿಸಿದಂತೆ, ಈ ನಗರವು ಇಡೀ ಲ್ಯಾಂಕಾಷೈರ್ನಲ್ಲಿಯೇ "ಅತ್ಯಂತ ಸಮರ್ಪಕ, ಅತ್ಯುತ್ತಮವಾಗಿ ನಿರ್ಮಿತ, ಅತಿ ವೇಗವಾಗಿ ಬೆಳೆದ ಹಾಗೂ ಅತಿ ಜನನಿಬಿಡ ನಗರವಾಯಿತು".<ref name="Kidd"/> ಲೇಯ್ಲೆಂಡ್ ಬಣ್ಣಿಸಿದ ಮ್ಯಾಂಚೆಸ್ಟರ್ ನಗರದ ಕೇವಲ ಕಥಿಡ್ರಲ್ ಮತ್ತು ಚೆಟ್ಹ್ಯಾಮ್ನ ಕಟ್ಟಡಗಳು ಗಮನಾರ್ಹವಾಗಿ ಉಳಿದುಕೊಂಡಿವೆ.<ref name="Hylton"/>
[[ಇಂಗ್ಲಿಷ್ ಅಂತರ್ಯುದ್ಧ|ಇಂಗ್ಲಿಷ್ ಅಂತರ್ಯುದ್ಧದ]] ಸಮಯ, ಮ್ಯಾಂಚೆಸ್ಟರ್ ಸಂಸತ್ತಿನ ಹಿತಾಸಕ್ತಿಯನ್ನು ಸಮರ್ಥಿಸಿತು. ಈ ಹಕ್ಕು ಅಲ್ಪಾವಧಿಯದಾಗಿದ್ದರೂ, ತನ್ನದೇ MPಯನ್ನು ಚುನಾಯಿಸಲು [[ಕ್ರೊಮ್ವೆಲ್]]ಅದಕ್ಕೆ ಅನುಮತಿ ನೀಡಿದ. ನಗರವನ್ನು ಕೇವಲ ಒಂದು ವರ್ಷದ ಕಾಲ ಪ್ರತಿನಿಧಿಸಿದ [[ಚಾರ್ಲ್ಸ್ ವೊರ್ಸ್ಲೆ]], ಆನಂತರ [[ರೂಲ್ ಆಫ್ ದಿ ಮೇಜರ್ ಜನರಲ್ಸ್]] ಸಂದರ್ಭದಲ್ಲಿ, ಲ್ಯಾಂಕಾಷೈರ್, ಚೆಷೈರ್ ಮತ್ತು ಸ್ಟ್ಯಾಫರ್ಡ್ಷೈರ್ ಕೌಂಟಿಗಳ ಮೇಜರ್ ಜನರಲ್ ಆಗಿ ನೇಮಕಗೊಂಡರು. ಅವರು ಒಬ್ಬ ದಕ್ಷ [[ಪ್ಯೂರಿಟನ್]]; ಏಲ್ ಮದ್ಯದ ಸಂತೋಷಕೂಟದ ಮನೆಗಳನ್ನು ಮುಚ್ಚಿಸಿ, [[ಕ್ರಿಸ್ಮಸ್]] ಆಚರಣೆಯನ್ನು ಬಹಿಷ್ಕರಿಸಿದ್ದರು. ಇಸವಿ ೧೬೫೬ರಲ್ಲಿ ಅವರು ನಿಧನರಾದರು.
ಸುಮಾರು ೧೬೦೦ ಇಸವಿಯ ನಂತರ, [[ಹತ್ತಿ|ಹತ್ತಿಯನ್ನು]] ಗಮನಾರ್ಹ ಪ್ರಮಾಣದಲ್ಲಿ, ಮೊದಲಿಗೆ ನಾರಿನ/ಹತ್ತಿಯ [[ದಪ್ಪ ಹತ್ತಿ ಬಟ್ಟೆ|ದಪ್ಪ ಹತ್ತಿ ಬಟ್ಟೆಗಳಲ್ಲಿ]] ಬಳಸಲಾಯಿತು. ಆದರೆ, ಸುಮಾರು ೧೭೫೦ ಇಸವಿಯಲ್ಲಿ, ಶುದ್ಧ ಹತ್ತಿಯ ಜವಳಿಗಳನ್ನು ಉತ್ಪಾದಿಸಲಾಯಿತು ಮ್ತತು ಹತ್ತಿಯು ಉಣ್ಣೆಗಿಂತಲೂ ಹೆಚ್ಚು ಪ್ರಾಮುಖ್ಯತೆ ಗಳಿಸಿತು.<ref name="Kidd"/> ಸುಮಾರು ೧೭೩೬ ಇಸವಿಯಲ್ಲಿ ಇರ್ವೆಲ್ ಮತ್ತು ಮರ್ಸಿ ನದಿಗಳನ್ನು ನೌಕಾ ಸಂಚಾರಯೋಗ್ಯವಾಗಿ ಮಾಡಲಾಯಿತು. ಮ್ಯಾಂಚೆಸ್ಟರ್ನಿಂದ ಮರ್ಸಿಯ ಸಮುದ್ರಧಕ್ಕೆಗೆ ಮಾರ್ಗವನ್ನು ತೆರೆಯಲಾಯಿತು. ಬ್ರಿಟನ್ನ ಮೊದಲ ಪೂರ್ಣ ಮಾನವನಿರ್ಮಿತ ಜಲಮಾರ್ಗವಾದ [[ಬ್ರಿಡ್ಜ್ವಾಟರ್ ಕಾಲುವೆ|ಬ್ರಿಡ್ಜ್ವಾಟರ್ ಕಾಲುವೆಯನ್ನು]] ೧೭೬೧ರಲ್ಲಿ ತೆರೆಯಲಾಯಿತು. [[ವೊರ್ಸ್ಲಿ|ವೊರ್ಸ್ಲಿಯ]] ಗಣಿಗಳಿಂದ ಕಲ್ಲಿದ್ದಲನ್ನು ಮಧ್ಯ ಮ್ಯಾಂಚೆಸ್ಟರ್ಗೆ ಈ ಕಾಲುವೆಯ ಮೂಲಕ ಸಾಗಿಸಲಾಯಿತು. ಇಸವಿ ೧೭೭೬ರಲ್ಲಿ ಈ ಕಾಲುವೆಯನ್ನು ರನ್ಕಾರ್ನ್ನಲ್ಲಿ ಮರ್ಸಿ ನದಿಯ ತನಕ ವಿಸ್ತರಿಸಲಾಯಿತು. ಪೈಪೋಟಿ ಮತ್ತು ಸುಧಾರಿತ ದಕ್ಷತೆಯ ಸಂಯೋಗದಿಂದ ಕಲ್ಲಿದ್ದಿಲಿನ ಬೆಲೆಯನ್ನು ಅರ್ಧಮಟ್ಟಕ್ಕಿಳಿಸಲಾಯಿತು ಹಾಗೂ ಕಚ್ಚಾ ಹತ್ತಿಯ ಸಾರಿಗೆ ವೆಚ್ಚವನ್ನು ಸಹ ಅರ್ಧಕ್ಕೆ ಇಳಿಸಲಾಯಿತು.<ref name="Kidd"/><ref name="Hartwell"/> ಸುತ್ತಮುತ್ತಲಿನ ಪಟ್ಟಣಗಳಲ್ಲಿ ಉತ್ಪಾದನೆಯಾದ ಜವಳಿಗಳಿಗಾಗಿ ಮ್ಯಾಂಚೆಸ್ಟರ್ ಪ್ರಮುಖ ಮಾರುಕಟ್ಟೆಯ ಸ್ಥಳವಾಯಿತು.<ref name="Kidd"/> ಇಸವಿ ೧೭೨೯ರಲ್ಲಿ ಆರಂಭಿಸಲಾದ [[ಸರಕು ವಿನಿಮಯ ಕೇಂದ್ರ]] <ref name="Hylton"/> ಹಾಗೂ ಹಲವು ದೊಡ್ಡ ಗೋದಾಮುಗಳು, ವಾಣಿಜ್ಯ ಚಟುವಟಿಕೆಗೆ ನೆರವಾದವು.
ಇಸವಿ ೧೭೮೦ರಲ್ಲಿ, [[ರಿಚರ್ಡ್ ಆರ್ಕ್ರೈಟ್]] ಮ್ಯಾಂಚೆಸ್ಟರ್ನ ಮೊದಲ ಹತ್ತಿಯ ಗಿರಣಿಯ ನಿರ್ಮಾಣ ಆರಂಭಿಸಿದ.<ref name="Hylton"/><ref name="Hartwell"/>
=== ಕೈಗಾರಿಕಾ ಕ್ರಾಂತಿ ===
[[ಚಿತ್ರ:McConnel & Company mills, about 1820.jpg|thumb|right|ಸುಮಾರು 1820 ಇಸವಿಯಲ್ಲಿ ಆನ್ಕೋಟ್ಸ್ನಲ್ಲಿರುವ ಹತ್ತಿ ಗಿರಣಿಗಳು.]] [[ಚಿತ್ರ:Manchester from Kersal Moor William Wylde (1857).jpg|thumb|right|ಇಸವಿ 1857ರಲ್ಲಿ ಕರ್ಸಾಲ್ ಮೂರ್ನಿಂದ ಮ್ಯಾಂಚೆಸ್ಟರ್, ವಿಲಿಯಮ್ ವೈಲ್ಡ್ರಿಂದ ರಚನೆ.ನಗರದಲ್ಲಿ ಹಲವಾರು ಜವಳಿ ಕೈಗಾರಿಕೆಗಳಿದ್ದ ಕಾರಣ, 19ನೆಯ ಶತಮಾನದ ಆರಂಭದಲ್ಲಿ ಮ್ಯಾಂಚೆಸ್ಟರ್ ಕಾಟನ್ಪೊಲಿಸ್ ಎಂಬ ಉಪನಾಮ ಗಳಿಸಿತ್ತು.]]
ಮ್ಯಾಂಚೆಸ್ಟರ್ನ ಇತಿಹಾಸದ ಬಹುಪಾಲು, [[ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಜವಳಿ ಉತ್ಪಾದನೆ|ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಜವಳಿ ಉತ್ಪಾದನೆಯೊಂದಿಗೆ]] ಸಂಬಂಧ ಹೊಂದಿದೆ. [[ಹತ್ತಿ ನೂಲುವಿಕೆ]] ಪ್ರಕ್ರಿಯೆಯ ಬಹುಪಾಲು [[ದಕ್ಷಿಣ ಲ್ಯಾಂಕಾಷೈರ್ ಮತ್ತು ಉತ್ತರ ಚೆಷೈರ್|ದಕ್ಷಿಣ ಲ್ಯಾಂಕಾಷೈರ್ ಮತ್ತು ಉತ್ತರ ಚೆಷೈರ್ನಲ್ಲಿ]] ನಡೆಯಿತು. ಮ್ಯಾಂಚೆಸ್ಟರ್ ಕೆಲ ಕಾಲ ಬಹುತೇಕ ಹತ್ತಿ ಸಂಸ್ಕರಣೆಯ ಉತ್ಪಾದನಾ ಕೇಂದ್ರವಾಗಿತ್ತು.<ref name="GM Arch">{{cite book|author=McNeil, Robina|coauthors=Michael Nevell|title=A Guide to the Industrial Archaeology of Greater Manchester|url=https://archive.org/details/guidetoindustria0000unse_e1n0|publisher=Association for Industrial Archaeology|year=2000|isbn=0-9528930-3-7}}</ref> ಆನಂತರ ಹತ್ತಿ ಉತ್ಪನ್ನಗಳಿಗೆ ವಿಶ್ವದಲ್ಲೇ ಅತಿ ದೊಡ್ಡ ಮಾರುಕಟ್ಟೆಯಾಯಿತು.<ref name="Kidd"/><ref name="Hall">{{cite book | last = Hall | first = Peter | title = Cities in Civilization | url = https://archive.org/details/citiesinciviliza00hall | publisher = Weidenfeld & Nicolson | location = London | year = 1998 | isbn = 0-297-84219-6 | chapter = The first industrial city: Manchester 1760-1830}}</ref> [[ವಿಕ್ಟೋರಿಯನ್ ಯುಗ|ವಿಕ್ಟೋರಿಯನ್ ಯುಗದಲ್ಲಿ]] ಮ್ಯಾಂಚೆಸ್ಟರ್ನ್ನು [[ಕಾಟನೊಪೊಲಿಸ್ (ಹತ್ತಿ ನಗರಿ)]] ಹಾಗೂ 'ವೇರ್ಹೌಸ್ ಸಿಟಿ' ಎನ್ನಲಾಗುತ್ತಿತ್ತು.<ref name="GM Arch"/> [[ಆಸ್ಟ್ರೇಲಿಯಾ]], [[ನ್ಯೂಜಿಲೆಂಡ್]] ಹಾಗೂ [[ದಕ್ಷಿಣ ಆಫ್ರಿಕಾ]] ದೇಶಗಳಲ್ಲಿ, ಮನೆಬಳಕೆಯ ನಾರುಬಟ್ಟೆಗಳಾದ ಹಾಸಿಗೆ-ಹೊದಿಕೆಗಳು, ದಿಂಬುಗಳು, ಟವೆಲ್ ಇತ್ಯಾದಿಗಳಿಗೆ ಇಂದಿಗೂ ಸಹ ಮ್ಯಾಂಚೆಸ್ಟರ್ ಪದವನ್ನು ಬಳಸಲಾಗುತ್ತದೆ.<ref>{{cite encyclopedia | title=Manchester, n. | encyclopedia=Oxford English Dictionary | year=2009 | month=March | url = http://dictionary.oed.com/cgi/entry/00300853?query_type=word&queryword=manchester+goods&first=1&max_to_show=10&single=1&sort_type=alpha | accessdate=2009-05-04 | location=Oxford | publisher=Oxford University Press}}</ref>
[[ಕೈಗಾರಿಕಾ ಕ್ರಾಂತಿ|ಕೈಗಾರಿಕಾ ಕ್ರಾಂತಿಯು]] ತಂದ ಯೋಜನಾರಹಿತ[[ನಗರೀಕರಣ]]<ref>{{cite web | url = http://www.timelines.tv/urban_slums.html | title = Timelines.tv Urban Slums | publisher = Timelines.tv | access-date = 2010-05-28 | archive-date = 2010-05-22 | archive-url = https://web.archive.org/web/20100522054335/http://timelines.tv/urban_slums.html | url-status = dead }}</ref> ದ ಪ್ರಕ್ರಿಯೆ ಕಾರಣ, ಮ್ಯಾಂಚೆಸ್ಟರ್ ೧೯ನೆಯ ಶತಮಾನದ ಹೊಸ್ತಿಲಲ್ಲಿ "ಅಚ್ಚರಿಗೊಳಿಸುವ ವೇಗ"ದಲ್ಲಿ ವಿಸ್ತರಿಸಲಾರಂಭಿಸಿತು.<ref name="autogenerated1">{{cite book|title=The Cotton Industry|url=https://archive.org/details/cottonindustry0000aspi|last=Aspin|first=Chris|publisher=Shire Publications|location=Aylesbury|year=1981|isbn=0-85263-545-1|page=[https://archive.org/details/cottonindustry0000aspi/page/3 3]}}</ref>
ಇದರಿಂದ ವಿವಿಧ ವ್ಯಾಪ್ತಿಯ ಕೈಗಾರಿಕೆಗಳು ಅಭಿವೃದ್ಧಿಯಾಯಿತು. ಇದರಿಂದಾಗಿ,೧೮೩೫ರಷ್ಟರಲ್ಲಿ 'ಮ್ಯಾಂಚೆಸ್ಟರ್ ಯಾವುದೇ ಪೈಪೋಟಿಯಿಲ್ಲದೆ ವಿಶ್ವದ ಪ್ರಥಮ ಮತ್ತು ಪ್ರಧಾನ ಕೈಗಾರಿಕಾ ನಗರವಾಯಿತು.' <ref name="Hall" /> ಎಂಜಿನಿಯರಿಂಗ್ ಉದ್ದಿಮೆಗಳು ಹತ್ತಿ ವಹಿವಾಟಿಗಾಗಿ ಆರಂಭದಲ್ಲಿ ಯಂತ್ರೋಪಕರಣಗಳನ್ನು ಉತ್ಪಾದಿಸಿದವು, ಆದರೆ ಆನಂತರ ಅವು ಸಾಮಾನ್ಯ ಉತ್ಪಾದನೆಗಳತ್ತ ವೈವಿಧ್ಯದ ಹಾದಿ ಹಿಡಿದವು. ಇದೇ ರೀತಿ, ಬಟ್ಟೆಗಳನ್ನು ಬಿಳಿದಾಗಿಸುವ ವಸ್ತುಗಳು ಮತ್ತು ವರ್ಣದ್ರವ್ಯಗಳ ಉತ್ಪಾದನೆಯೊಂದಿಗೆ, ರಾಸಾಯನಿಕ ಕೈಗಾರಿಕೆಗಳು ಆರಂಭವಾದವು. ಆದರೆ, ಆನಂತರ ಇತರೆ ಕ್ಷೇತ್ರಗಳತ್ತ ವಿಸ್ತರಿಸಿದವು. ಬ್ಯಾಂಕಿಂಗ್ ಹಾಗೂ ವಿಮೆಯಂತಹ ಹಣಕಾಸು ಸೇವಾ ಉದ್ದಿಮೆಗಳು ವಾಣಿಜ್ಯ ಕ್ಷೇತ್ರಕ್ಕೆ ಬೆಂಬಲ ನೀಡಿದವು. ವಹಿವಾಟು ಮತ್ತು ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ಕಾರ್ಯಗಳಿಗೆ ವಿಶಾಲವಾದ ಸಾರಿಗೆ ಮತ್ತು ವಿತರಣಾ ಮೂಸಸೌಲಭ್ಯದ ಅಗತ್ಯವಿತ್ತು. ಜಲಕಾಲುವೆ ವ್ಯವಸ್ಥೆಯನ್ನು ವಿಸ್ತರಿಸಲಾಯಿತು. ಮ್ಯಾಂಚೆಸ್ಟರ್ ವಿಶ್ವದಲ್ಲಿಯೇ ಮೊಟ್ಟಮೊದಲ ಅಂತರ-ನಗರ ಪ್ರಯಾಣಿಕ ರೈಲು ಮಾರ್ಗವೆನಿಸಿದ '[[ಲಿವರ್ಪೂಲ್-ಮ್ಯಾಂಚೆಸ್ಟರ್ ರೈಲ್ವೆ|ಲಿವರ್ಪೂಲ್-ಮ್ಯಾಂಚೆಸ್ಟರ್ ರೈಲ್ವೆಯ]] ಒಂದು ಕೊನೆಯಾಯಿತು. ವಿವಿಧ ರೀತಿಯ ಸಾರಿಗೆಗಳ ನಡುವಿನ ಪೈಪೋಟಿಗಳ ಕಾರಣ, ಸಾರಿಗೆ ದರಗಳನ್ನು ಕಡಿಮೆಯಾಗಿಸಿದವು.<ref name="Kidd" /> ಇಸವಿ ೧೮೭೮ರಲ್ಲಿ, [[ಬ್ರಿಟಿಷ್ ಟೆಲಿಕಾಮ್]]ನ ಪೂರ್ವದಲ್ಲಿದ್ದ[[GPO]], ಮ್ಯಾಂಚೆಸ್ಟರ್ನ ಒಂದು ವಾಣಿಜ್ಯ ಉದ್ದಿಮೆಗೆ ತನ್ನ ಮೊದಲ ದೂರವಾಣಿ ಉಪಕರಣವನ್ನು ಒದಗಿಸಿತು.<ref name="GPO">{{Cite web|url=http://www.btplc.com/Thegroup/BTsHistory/1851to1880/1878.htm|title=Events in Telecommunications History|accessdate=2009-05-05|publisher=BT Archives|year=1878|archive-date=2014-07-15|archive-url=https://web.archive.org/web/20140715073729/http://www.btplc.com/Thegroup/BTsHistory/1851to1880/1878.htm|url-status=dead}}</ref>
[[ಸ್ಯಾಲ್ಫರ್ಡ್|ಸ್ಯಾಲ್ಫರ್ಡ್ನಿಂದ]] ಉಬ್ಬರವಿಳಿತದ ಮರ್ಸಿಯಲ್ಲಿರುವ ಈಸ್ಟ್ಹ್ಯಾಮ್ ಲಾಕ್ಸ್ನತ್ತ ಹರಿಯುವ {{convert|58|km|mi|0}} <ref>{{cite web|url= http://www.aina.org.uk/aina_members/Directory-MSC.htm|title= Directory - MSC<!-- Bot generated title -->}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಇರ್ವೆಲ್ ಮತ್ತು ಮರ್ಸಿ ನದಿಗಳಲ್ಲಿ ಕಾಲುವೆ ಮಾರ್ಗಗಳನ್ನು ನಿರ್ಮಿಸುವುದರ ಮೂಲಕ, ೧೮೯೪ರಲ್ಲಿ,ಕೆಲವು ವಿಭಾಗಗಳಲ್ಲಿ [[ಮ್ಯಾಂಚೆಸ್ಟರ್ ಷಿಪ್ ಕೆನಾಲ್]]ನ್ನು ನಿರ್ಮಿಸಲಾಯಿತು. ಇದರಿಂದ, ಸಾಗರದಲ್ಲಿ ಸಾಗುವ ಹಡಗುಗಳು ನೇರವಾಗಿ ಮ್ಯಾಂಚೆಸ್ಟರ್ ಬಂದರಿನೊಳಗೆ ಬರಲು ಅನುಕೂಲವಾಯಿತು. ಪ್ರಧಾನನಗರ ವಿಭಾಗದ ಸ್ವಲ್ಪಆಚೆ ಕಾಲುವೆಯ ದಂಡೆಗಳಲ್ಲಿರುವ [[ಟ್ರ್ಯಾಫರ್ಡ್ ಪಾರ್ಕ್]]ನಲ್ಲಿ, ವಿಶ್ವದ ಮೊದಲ ಕೈಗಾರಿಕಾ ಪ್ರದೇಶವನ್ನು ರಚಿಸಲಾಯಿತು.<ref name="Kidd"/> ಹತ್ತಿ ಸಂಸ್ಕರಿಸುವ ಘಟಕಗಳೂ ಸೇರಿದಂತೆ,ದೊಡ್ಡ ಪ್ರಮಾಣದ ಹತ್ತಿ ಯಂತ್ರೋಪಕರಣಗಳು ವಿಶ್ವದ ಹಲವೆಡೆಗೆ ರಫ್ತಾಗುತ್ತಿದ್ದವು.
[[ಚಿತ್ರ:Peterloo Massacre.png|thumb|left|ಇಸವಿ 1819ರಲ್ಲಿ ಸಂಭವಿಸಿದ ಪೀಟರ್ಲೂ ಸಾಮೂಹಿಕ ಹತ್ಯಾಕಾಂಡದಲ್ಲಿ 15 ಸಾವುಗಳು ಹಾಗೂ ನೂರಾರು ಗಾಯಗಳು ಸಂಭವಿಸಿದವು.]]
ಬಂಡವಾಳಶಾಹಿಯ ಕೇಂದ್ರವಾಗಿದ್ದ ಮ್ಯಾಂಚೆಸ್ಟರ್ನಲ್ಲಿ ಹಿಂದೊಮ್ಮೆ ಆಹಾರ ಮತ್ತು ಕಾರ್ಮಿಕರ ಗಲಭೆಗಳು ಸಂಭವಿಸಿದವು ಹಾಗೂ ನಗರದ ಕಾರ್ಮಿಕ ಮತ್ತು ಹೆಸರು-ರಹಿತ ವರ್ಗಗಳು ಹೆಚ್ಚಿನ ರಾಜಕೀಯ ಮಾನ್ಯತೆಗಾಗಿ ಕರೆಗಳನ್ನು ನೀಡಿದ್ದವು. ಇಂತಹ ಒಂದು ಗಲಭೆಯ ಪರಿಣಾಮವಾಗಿ, ೧೬ ಆಗಸ್ಟ್ ೧೮೧೯ರಂದು [[ಪೀಟರ್ಲೂ ಹತ್ಯಾಕಾಂಡ]] ಸಂಭವಿಸಿತು. [[ಮ್ಯಾಂಚೆಸ್ಟರ್ ಬಂಡವಾಳಶಾಹಿ|ಮ್ಯಾಂಚೆಸ್ಟರ್ ಬಂಡವಾಳಶಾಹಿಯ]] ಆರ್ಥಿಕ ಶಾಲೆಯು ಅಲ್ಲಿ ಅಭಿವೃದ್ಧಿ ಹೊಂದಿತು. ಇಸವಿ ೧೮೩೮ರಿಂದ ಮ್ಯಾಂಚೆಸ್ಟರ್ [[ಕಾರ್ನ್ ಲಾ ವಿರೋಧಿ ಲೀಗ್]]ನ ಕೇಂದ್ರವಾಯಿತು.
[[ಮಾರ್ಕ್ಸ್ವಾದ]] ಮತ್ತು ವಾಮಪಂಥೀಯ ರಾಜಕೀಯದ ಇತಿಹಾಸದಲ್ಲಿ ಮ್ಯಾಂಚೆಸ್ಟರ್ ಗಮನಾರ್ಹ ಸ್ಥಾನ ಗಿಟ್ಟಿಸಿದೆ. [[ಫ್ರೆಡ್ರಿಕ್ ಎಂಜೆಲ್ಸ್|ಫ್ರೆಡ್ರಿಕ್ ಎಂಜೆಲ್ಸ್ರ]] ಕೃತಿಯ ವಿಷಯ''[[ದಿ ಕಂಡಿಷನ್ ಆಫ್ ದಿ ವರ್ಕಿಂಗ್ ಕ್ಲ್ಯಾಸ್ ಇನ್ ಇಂಗ್ಲೆಂಡ್ ಇನ್ 1844]]'' ಆಗಿತ್ತು. ಎಂಜಲ್ಸ್ ತಮ್ಮ ಜೀವನದ ಹೆಚ್ಚು ಭಾಗವನ್ನು ಮ್ಯಾಂಚೆಸ್ಟರ್ ಹಾಗೂ ಸುತ್ತಮುತ್ತಲಿನಲ್ಲಿ ಕಳೆದಿದ್ದರು. [[ಕಾರ್ಲ್ ಮಾರ್ಕ್ಸ್]] ಮ್ಯಾಂಚೆಸ್ಟರ್ಗೆ ಭೇಟಿ ನೀಡಿದಾಗ, ಎಂಜೆಲ್ಸ್ ಮತ್ತು ಮಾರ್ಕ್ಸ್ ಚೆಟ್ಹ್ಯಾಮ್ ಗ್ರಂಥಾಲಯದಲ್ಲಿ ಭೇಟಿಯಾದರು. ಆ ಸಮಯದಲ್ಲಿ ಕಾರ್ಲ್ ಮಾರ್ಕ್ಸ್ ಓದುತ್ತಿದ್ದ ಅರ್ಥಶಾಸ್ತ್ರದ ಪುಸ್ತಕಗಳನ್ನು ಆ ಗ್ರಂಥಾಲಯದ ಗೂಡುಗಳಲ್ಲಿ ಇಂದಿಗೂ ಕಾಣಬಹುದು. ಇದಲ್ಲದೆ, ಮಾರ್ಕ್ಸ್ ಮತ್ತು ಎಂಜೆಲ್ಸ್ ಭೇಟಿಯಾಗುತ್ತಿದ್ದ ಕಿಟಕಿ ಬಳಿಯ ಆಸನವನ್ನೂ ಸಹ ಕಾಣಬಹುದು.<ref name="Nicholls2004P20"/> ಮೊದಲ [[ಟ್ರೇಡ್ಸ್ ಯೂನಿಯನ್ ಕಾಂಗ್ರೆಸ್]] ಸಮ್ಮೇಳನವು ಮ್ಯಾಂಚೆಸ್ಟರ್ನ ಡೇವಿಡ್ ಸ್ಟ್ರೀಟ್ನಲ್ಲಿರುವ ಮೆಕ್ಯಾನಿಕ್ಸ್ ಇನ್ಸ್ಟಿಟ್ಯೂಟ್ನಲ್ಲಿ ೨ರಿಂದ ೬ ಜೂನ್ ೧೮೬೮ರ ವರೆಗೆ ನಡೆಯಿತು. ಮ್ಯಾಂಚೆಸ್ಟರ್ [[ಲೇಬರ್ ಪಾರ್ಟಿ]] ಮತ್ತು [[ಸಫ್ರಾಗೆಟ್]] ಆಂದೋಳನದ ಪ್ರಮುಖ ಉಗಮಸ್ಥಾನವಾಗಿತ್ತು.<ref>{{cite book|title=Manchester: A history|url=https://archive.org/details/manchesterhistor0000kidd|last=Kidd|first=Alan|year=2006|chapter=Chapter 9 England Arise! The Politics of Labour and Women's Suffrage|publisher=Carnegie Publishing|location=Lancaster|isbn=1-85936-128-5}}</ref>
ಆ ಸಮಯದಲ್ಲಿ, ಮ್ಯಾಂಚೆಸ್ಟರ್ ಎಂತಹ ಘಟನೆಯೂ ಸಂಭವಿಸಬಹುದಾದ ನಗರವಾಗಿತ್ತು. ಹೊಸ ಕೈಗಾರಿಕಾ ಪ್ರಕ್ರಿಯೆಗಳು, ನೂತನ ಚಿಂತನ ರೀತಿಗಳು ([[ಮುಕ್ತ ವಹಿವಾಟು]] ಮತ್ತು ''[[ತಾಟಸ್ಥ್ಯ ನೀತಿ]]'' ಗಳನ್ನು ಉತ್ತೇಜಿಸಿದ [[ಮ್ಯಾಂಚೆಸ್ಟರ್ ಶಾಲೆ]]), ಸಮಾಜದಲ್ಲಿ ಹೊಸ ವರ್ಗ ಮತ್ತು ಸಮುದಾಯಗಳು, ಹೊಸ ಧಾರ್ಮಿಕ ಪಂಥಗಳು ಹಾಗೂ ಕಾರ್ಮಿಕ ಸಂಘಟನೆಯ ಹೊಸ ರೂಪಗಳು. ಇದು ಬ್ರಿಟನ್ ಹಾಗೂ ಯುರೋಪ್ನಿಂದ ವಿದ್ಯಾವಂತ ಪ್ರವಾಸಿಗಳನ್ನು ತನ್ನತ್ತ ಸೆಳೆಯಿತು. ನಾವೀನ್ಯದ ಪ್ರಜ್ಞೆಯನ್ನು ಸೆರೆಹಿಡಿದ ಬಗ್ಗೆ ಒಂದು ಮಾತು ಇಂದಿಗೂ ಉಳಿದುಕೊಂಡಿದೆ,'ಮ್ಯಾಂಚೆಸ್ಟರ್ ಇಂದೇನು ಮಾಡುತ್ತದೆಯೋ, ಇಡೀ ವಿಶ್ವವು ನಾಳೆ ಮಾಡುತ್ತದೆ.' <ref name="manchester innovation">{{cite book|editor=Speake, Jennifer|title=The Oxford Dictionary of Proverbs|url=http://www.oxfordreference.com/views/ENTRY.html?subview=Main&entry=t90.e1326|accessdate=2007-07-06|year=2003|edition=4th|publisher=Oxford University Press|isbn=0-19-860524-2|quote=What Manchester says today, the rest of England says tomorrow}}<br />•{{cite web |url = http://www.conservatives.com/News/Speeches/2007/03/Osborne_Our_vision_to_make_Manchester_the_creative_capital_of_Europe.aspx |title = Osborne: Our vision to make Manchester the creative capital of Europe |accessdate = 2009-05-04 |last = Osborne |first = George |authorlink = George Osborne |date = March 7, 2007 |work = Conservative Party Website |publisher = Conservative Party |quote = The saying goes that what Manchester does today the rest of the world does tomorrow. |archive-date = 2009-06-28 |archive-url = https://web.archive.org/web/20090628122546/http://www.conservatives.com/News/Speeches/2007/03/Osborne_Our_vision_to_make_Manchester_the_creative_capital_of_Europe.aspx |url-status = dead }}<br />•{{Cite web|url=http://www.mmu.ac.uk/studyatmmu/manchesterlife/|title=Manchester Life|accessdate=2009-05-05|publisher=[[Manchester Metropolitan University]]|year=೨೦೦೭|archiveurl=https://web.archive.org/web/20080411200443/http://www.mmu.ac.uk/studyatmmu/manchesterlife/|archivedate=2008-04-11|quote=What Manchester does today, the world does tomorrow|url-status=dead}}</ref> ಮ್ಯಾಂಚೆಸ್ಟರ್ನ ಸ್ವರ್ಣಯುಗವು ಬಹುಶಃ ೧೯ನೆಯ ಶತಮಾನದ ಕೊನೆಯ ಕಾಲುಭಾಗವಾಗಿತ್ತು. ಪುರಭವನ ಸೇರಿದಂತೆ ನಗರದ ಹಲವು ಪ್ರಧಾನ ಸಾರ್ವಜನಿಕ ಭವನಗಳು ಆ ಕಾಲಕ್ಕೆ ಸೇರಿದ್ದವು. ನಗರದ ಕಾಸ್ಮೋಪಾಲಿಟನ್ ವಾತಾವರಣವು, [[ಹ್ಯಾಲೆ ವಾದ್ಯಗೋಷ್ಠಿ]] ಸೇರಿದಂತೆ ಚೈತನ್ಯಶೀಲ ಸಂಸ್ಕೃತಿಗೆ ಕೊಡುಗೆ ನೀಡಿತು. ಇಸವಿ ೧೮೮೯ರಲ್ಲಿ ಇಂಗ್ಲೆಂಡ್ನಲ್ಲಿ ಕೌಂಟಿ ಸಭೆಗಳನ್ನು ರಚಿಸಿದಾಗ, ಪೌರಸಭೆಯ ಪ್ರಧಾನನಗರ ವಿಭಾಗವು [[ಕೌಂಟಿ ವಿಭಾಗ|ಕೌಂಟಿ ವಿಭಾಗವಾಗಿ]], ಇನ್ನಷ್ಟು ಸ್ವಾಯತ್ತತೆ ಹೊಂದಿತು.
ಕೈಗಾರಿಕಾ ಕ್ರಾಂತಿಯು ನಗರಕ್ಕೆ ಸಂಪತ್ತು ನೀಡಿದರೂ, ಜನಸಂಖ್ಯೆಯ ಹೆಚ್ಚು ಪಾಲಿಗೆ ಬಡತನ ಮತ್ತು ಕೊಳಕುತನವನ್ನು ತಂದುಕೊಟ್ಟಿತು. 'ಮ್ಯಾಂಚೆಸ್ಟರ್ ಅತ್ಯುತ್ತಮ ಹಾಗೂ ಭಯಾನಕ ಪರಮಾವಧಿಗಳಿಗೆ ಒಯ್ಯುವ ತೀರಾ ಕೆಟ್ಟಸ್ಥಿತಿಯನ್ನು ನಿರೂಪಿಸುವ ನಗರ; ಪ್ರಪಂಚದಲ್ಲೇ ಹೊಸ ತರಹದ ನಗರ, ಅದರ ಕೈಗಾರಿಕಾ ಹೊರವಲಯಗಳಲ್ಲಿರುವ ಹೊಗೆ-ಕೊಳವೆಗಳು ಹೊಗೆಗಳನ್ನು ಉಗುಳುತ್ತ ನಿಮ್ಮನ್ನು ಬರಮಾಡುಕೊಳ್ಳುತ್ತವೆ' ಎಂದು
ಇತಿಹಾಸಜ್ಞ[[ಸೈಮನ್ ಸ್ಕಾಮಾ]] ಗಮನಸೆಳೆದಿದ್ದಾರೆ. ಮ್ಯಾಂಚೆಸ್ಟರ್ನ ಇಂತಹ ಕಪ್ಪುಚುಕ್ಕೆಗಳ ಪ್ರದೇಶಕ್ಕೆ ಭೇಟಿ ನೀಡಿದ ಅಮೆರಿಕನ್ ಪ್ರವಾಸಿಯಬ್ಬರು ಅಲ್ಲಿ 'ದರಿದ್ರವಾದ, ವಂಚಿತ, ದಮನಿತ, ಜರ್ಜರಿತ ಮನುಷ್ಯ ರೂಪವನ್ನು ಮಲಗಿದ ಮತ್ತು ರಕ್ತಸಿಕ್ತ ತುಣುಕುಗಳಲ್ಲಿ ಕಂಡಿದ್ದಾಗಿ'ಹೇಳಿದ್ದಾರೆ.<ref>{{cite episode |title=Victoria and Her Sisters |series= A History of Britain |serieslink= A History of Britain (TV series) |credits= [[Simon Schama]] (presenter) |network= [[BBC One]] |airdate= ೨೦೦೨-೦೬-೦೪ |number=೧೩}}</ref>
ಇಸವಿ ೧೮೫೩ರಲ್ಲಿ, ಮ್ಯಾಂಚೆಸ್ಟರ್ ಒಂದರಲ್ಲೇ [[ಹತ್ತಿ ಗಿರಣಿ|ಹತ್ತಿ ಗಿರಣಿಗಳ]] ಸಂಖ್ಯೆ ೧೦೮ರ ಶೃಂಗಕ್ಕೆ ಏರಿತು.<ref name="GM Arch"/> ಆನಂತರ,ಸಂಖ್ಯೆಯು ಕುಸಿಯಲಾರಂಭಿಸಿತು. ೧೮೫೦ರ ದಶಕದಲ್ಲಿ [[ಬೊಲ್ಟನ್]] ಹಾಗೂ ೧೮೬೦ರ ದಶಕದಲ್ಲಿ [[ಓಲ್ಡ್ಹ್ಯಾಮ್]] ಮ್ಯಾಂಚೆಸ್ಟರ್ನ್ನು ಮೀರಿ ಅತಿ ಹೆಚ್ಚು ಹತ್ತಿ ಗಿರಣಿಗಳನ್ನು ಹೊಂದಿದ ನಗರಗಳಾದವು.<ref name="GM Arch"/> ಆದರೆ, ಹತ್ತಿ ಗಿರಣಿಗಳ ಸಂಖ್ಯೆಯಲ್ಲಿ ಕುಸಿತದ ಅವಧಿಯು ನಗರವು ಆರ್ಥಿಕ ಕೇಂದ್ರವಾಗಿ ಅಭಿವೃದ್ಧಿಯಾಗುವುದಕ್ಕೆ ಹೊಂದಿಕೆಯಾಯಿತು.<ref name="GM Arch"/> ಮ್ಯಾಂಚೆಸ್ಟರ್ನಲ್ಲಿ ಹತ್ತಿ ಸಂಸ್ಕರಣಾ ಉದ್ದಿಮೆಯು ಮುಂದುವರೆಯಿತು. ಇಸವಿ ೧೯೧೩ರಲ್ಲಿ, ವಿಶ್ವದ ಹತ್ತಿ ಉತ್ಪಾದನೆಯ ೬೫%ರಷ್ಟು ಇಲ್ಲಿ ಸಂಸ್ಕರಣೆಯಾಗುತ್ತಿತ್ತು.<ref name="Kidd"/> [[ಮೊದಲ ಪ್ರಧಾನಯುದ್ಧ|ಮೊದಲ ಪ್ರಧಾನಯುದ್ಧದಿಂದ]] ರಫ್ತು ಮಾರುಕಟ್ಟೆಗಳ ಪ್ರವೇಶಕ್ಕೆ ಅಡಚಣೆಯಾಯಿತು. ವಿಶ್ವದ ಇತರೆಡೆ ಹತ್ತಿ ಸಂಸ್ಕರಣೆಯು ಹೆಚ್ಚಾಗತೊಡಗಿತು; ಇದಕ್ಕಾಗಿ ಸಾಮಾನ್ಯವಾಗಿ ಮ್ಯಾಂಚೆಸ್ಟರ್ನಲ್ಲಿ ತಯಾರಿಸಲಾದ ಯಂತ್ರಗಳನ್ನು ಬಳಸಲಾಯಿತು. ಮ್ಯಾಂಚೆಸ್ಟರ್ ಮಹಾ ಹಿಂಜರಿತ/೦}ದಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಯಿತು. ಜವಳಿ ಉತ್ಪಾದನೆ ಸೇರಿದಂತೆ ಹಳೆಯ ಉದ್ದಿಮೆಗಳ ಸ್ಥಾನವನ್ನು ತುಂಬುವ ರಚನಾತ್ಮಕ ಪರಿವರ್ತನೆಗಳು ನಡೆದವು.
=== ಮಹಾಯುದ್ಧ ಮತ್ತು ಮ್ಯಾಂಚೆಸ್ಟರ್ ಮೇಲೆ ಮಿಂಚಿನದಾಳಿ ===
UKಯ ಬಹುತೇಕ ಭಾಗದಂತೆ, [[ಮಹಾಯುದ್ಧ II|ಮಹಾಯುದ್ಧ IIದ]] ಸಮಯದಲ್ಲಿ ಮ್ಯಾಂಚೆಸ್ಟರ್ ವ್ಯಾಪಕ ಸನ್ನದ್ಧತೆ ಹೊಂದಿತು. ಉದಾಹರಣೆಗೆ,[[ಬೇಯರ್, ಪೀಕಾಕ್|ಬೇಯರ್, ಪೀಕಾಕ್ನಲ್ಲಿರುವ]] ಕ್ಯಾಸ್ಟಿಂಗ್ ಮತ್ತು ಯಂತ್ರ ತಜ್ಞತೆ,[[ಗೋರ್ಟನ್|ಗೋರ್ಟನ್ನ]] ಕಂಪನಿಯ ಹತ್ತಿ ತಯಾರಿಕೆಯಲ್ಲಿ ಯಂತ್ರಗಳ ಕೆಲಸಗಳನ್ನು ಬಾಂಬ್ ತಯಾರಿಕೆಗೆ ಪರಿವರ್ತಿಸಲಾಯಿತು.[[ಚಾರ್ಲ್ಟನ್-ಆನ್-ಮೆಡ್ಲಾಕ್|ಚಾರ್ಲ್ಟನ್-ಆನ್-ಮೆಡ್ಲಾಕ್ನಲ್ಲಿರುವ]] [[ಡನ್ಲಪ್]] ರಬ್ಬರ್ ಉದ್ದಿಮೆಯು [[ಬ್ಯಾರೆಜ್ ಬಲೂನ್]]ಗಳನ್ನು ಉತ್ಪಾದಿಸಲಾರಂಭಿಸಿತು. ನಗರದಾಚೆ [[ಟ್ರ್ಯಾಫರ್ಡ್ ಪಾರ್ಕ್]]ನಲ್ಲಿರುವ [[ಮೆಟ್ರೊಪೊಲಿಟನ್-ವಿಕರ್ಸ್]] ಉದ್ದಿಮೆಯು [[ಆವ್ರೊ ಮ್ಯಾಂಚೆಸ್ಟರ್]] ಮತ್ತು [[ಆವ್ರೊ ಲ್ಯಾಂಕ್ಯಾಸ್ಟರ್]] ಬಾಂಬರ್ಗಳನ್ನು ಉತ್ಪಾದಿಸಿತು. ಈ ಬಾಂಬರ್ಗಳನ್ನು ಚಲಾಯಿಸಲು [[ಫೊರ್ಡ್]] ಉದ್ದಿಮೆಯು [[ರೊಲ್ಸ್-ರಾಯ್ಸ್ ಮರ್ಲಿನ್]] ಎಂಜಿನ್ಗಳನ್ನು ತಯಾರಿಸಿತು. ಮ್ಯಾಂಚೆಸ್ಟರ್ [[ಲಫ್ಟ್ವಾಫ್]] ನಿಂದ ಬಾಂಬ್ ದಾಳಿಗೆ ಗುರಿಯಾಯಿತು. ಇಸವಿ ೧೯೪೦ರ ಅಪರಾರ್ಧದಲ್ಲಿ ಮಿಲಿಟರಿಯೇತರ ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಯುತ್ತಿದ್ದವು. [[ಕ್ರಿಸ್ಮಸ್ ಬ್ಲಿಟ್ಜ್]]ಸಂದರ್ಭದಲ್ಲಿ ದೊಡ್ಡ ಪ್ರಮಾಣದ ವೈಮಾನಿಕ ದಾಳಿ ೨೨/೨೩ ಮತ್ತು ೨೩/೨೪ ಡಿಸೆಂಬರ್ ೧೯೪೦ರ ಇರುಳಿನಲ್ಲಿ ನಡೆಯಿತು. ಅಂದಾಜು ೪೬೭ [[ಟನ್]] (೪೭೫ ಟನ್ನ್ಗಳು) ಭಾರೀ ಸ್ಫೋಟಕವಸ್ತುಗಳು ಹಾಗೂ ೩೭,೦೦೦ಕ್ಕಿಂತಲೂ ಹೆಚ್ಚು ಬೆಂಕಿಜನ್ಯ ಬಾಂಬ್ಗಳನ್ನು ಮ್ಯಾಂಚೆಸ್ಟರ್ ಮೇಲೆ ಉದುರಿಸಲಾಯಿತು. ಈ ದಾಳಿಯಲ್ಲಿ ೧೬೫ ಗೋದಾಮುಗಳು, ೨೦೦ ವಾಣಿಜ್ಯ ಕೇಂದ್ರಗಳು ಮತ್ತು ೧೫೦ ಕಚೇರಿಗಳು ಸೇರಿದಂತೆ ಐತಿಹಾಸಿಕ ನಗರ ಕೇಂದ್ರದ ಬಹುಭಾಗ ನಾಶವಾಯಿತು. ೩೭೬ ಜನರು ಮೃತಪಟ್ಟು ೩೦,೦೦೦ ಮನೆಗಳಿಗೆ ಹಾನಿಯುಂಟಾಯಿತು.<ref>{{cite book | last= Hardy | first= Clive | title= Manchester at War | url= https://archive.org/details/manchesteratwar0000cliv | edition= 2nd | year= 2005 | location= Altrincham| isbn= 1-84547-096-6 | pages=[https://archive.org/details/manchesteratwar0000cliv/page/75 75]–99 | chapter= The blitz | publisher= First Edition Limited }}</ref> ತೀವ್ರವಾಗಿ ಹಾನಿಯಾದ ಕಟ್ಟಡಗಳಲ್ಲಿ [[ಮ್ಯಾಂಚೆಸ್ಟರ್ ಕಥಿಡ್ರಲ್]] ಸಹ ಸೇರಿತ್ತು. ಇದನ್ನು ದುರಸ್ತಿ ಮಾಡಿ ಮರುಸ್ಥಿತಿಗೆ ತರಲು ೨೦ ವರ್ಷಗಳು ಬೇಕಾದವು.<ref name="WWII">{{Cite web | url= http://www.manchestercathedral.org/content/blogcategory/33/158/8/40/ | title= Timeline | accessdate= 2009-05-05 | publisher= Manchester Cathedral Online | year= 2008 | archive-date= 2008-12-06 | archive-url= https://web.archive.org/web/20081206171002/http://www.manchestercathedral.org/content/blogcategory/33/158/8/40/ | url-status= dead }}</ref>
=== ಮಹಾಯುದ್ಧ II ನಂತರ ===
ಹತ್ತಿಯ ಸಂಸ್ಕರಣೆ ಮತ್ತು ವಹಿವಾಟು ಚಟುವಟಿಕೆಯು ಶಾಂತಿಕಾಲದಲ್ಲಿ ಕುಸಿತಗೊಂಡಿತು ಹಾಗೂ ವಿನಿಮಯ ಕೇಂದ್ರವನ್ನು ೧೯೬೮ರಲ್ಲಿ ಮುಚ್ಚಲಾಯಿತು.<ref name="Kidd"/> ಇಸವಿ ೧೯೬೩ರಲ್ಲಿ ಮ್ಯಾಂಚೆಸ್ಟರ್ ಬಂದರು UKಯಲ್ಲಿ ಮೂರನೆಯ ಅತಿದೊಡ್ಡ ಬಂದರೆನಿಸಿತು.<ref name="UK's 3rd largest">{{cite book|title=Manchester: an Architectural History|url=http://www.manchesteruniversitypress.co.uk/catalogue/book.asp?id=1423|last=Parkinson-Bailey|first=John J|year=2000|page=127|publisher=Manchester University Press|location=Manchester|isbn=0-7190-5606-3|access-date=2010-05-28|archive-date=2007-12-27|archive-url=https://web.archive.org/web/20071227201545/http://www.manchesteruniversitypress.co.uk/catalogue/book.asp?id=1423|url-status=dead}}<br />• {{cite book|title=Lancashire, The Industrial and Commercial South|url=https://archive.org/details/lancashireindust0000niko|last=Pevsner| first=Nikolaus|year=1969|page=[https://archive.org/details/lancashireindust0000niko/page/267 267]|publisher=Penguin Books|location=London|isbn=0-14-071036-1}}</ref> ೩,೦೦೦ಕ್ಕಿಂತಲೂ ಹೆಚ್ಚು ನೌಕರರನ್ನು ಕೆಲಸಕ್ಕೆ ನೇಮಿಸಿಕೊಂಡಿತ್ತು. ಆದರೆ ಅದರ ಕಾಲುವೆಯು ದೊಡ್ಡ ಗಾತ್ರದ [[ಕಂಟೇನರ್]] ಸರಕು ಹಡಗುಗಳ ಸಂಚಾರವನ್ನು ನಿಭಾಯಿಸಲು ಅಸಮರ್ಥವಾಯಿತು. ಸಂಚಾರ ಕಡಿಮೆಯಾಗಿ, ಬಂದರನ್ನು ೧೯೮೨ರಲ್ಲಿ ಮುಚ್ಚಲಾಯಿತು.<ref name="ship close">{{Cite web | url= http://www.salford.gov.uk/milestones_v2.pdf | format= PDF | title= Salford Quays milestones: the story of Salford Quays | accessdate= 2009-05-05 | publisher= Salford City Council | year= 2005 | archive-date= 2009-03-27 | archive-url= https://web.archive.org/web/20090327122642/http://www.salford.gov.uk/milestones_v2.pdf | url-status= dead }}</ref> ಭಾರೀ ಕೈಗಾರಿಕೆಗಳು ೧೯೬೦ರ ದಶಕದಲ್ಲಿ ಇಳಿಮುಖ ಕಂಡವು. ಇಸವಿ ೧೯೭೯ರ ನಂತರ, [[ಮಾರ್ಗರೆಟ್ ಥ್ಯಾಚರ್]] ಸರ್ಕಾರ ಅನುಸರಿಸಿದ ಆರ್ಥಿಕ ನೀತಿಗಳಿಂದ ತೀವ್ರ ಕುಸಿತಕ್ಕೊಳಗಾಯಿತು. ಉತ್ಪಾದನಾ ಕ್ಷೇತ್ರದಲ್ಲಿ ಇಸವಿ ೧೯೬೧ರಿಂದ ೧೯೮೩ರ ವರೆಗೆ ಮ್ಯಾಂಚೆಸ್ಟರ್ನ ೧೫೦,೦೦೦ ನೌಕರಿಗಳ ನಷ್ಟವಾಯಿತು.<ref name="Kidd"/>
೧೯೮೦ರ ದಶಕದ ಅಪರಾರ್ಧದಲ್ಲಿ ಪುನಶ್ಚೇತನ ಕಾಣಲಾರಂಭಿಸಿತು. ಮೆಟ್ರೊಲಿಂಕ್, ಬ್ರಿಡ್ಜ್ವಾಟರ್ ಕನ್ಸರ್ಟ್ ಹಾಲ್, ಮ್ಯಾಂಚೆಸ್ಟರ್ ಈವನಿಂಗ್ ನ್ಯೂಸ್ ಅರೆನಾ ಹಾಗೂ (ಸ್ಯಾಲ್ಫರ್ಡ್ನಲ್ಲಿ) ಬಂದರನ್ನು ಸ್ಯಾಲ್ಫರ್ಡ್ ಕ್ವೇಯ್ಸ್ ಎಂಬ ಮರುನಾಮಕರಣ ಮುಂತಾದ ಉಪಕ್ರಮಗಳನ್ನು ಕೈಗೊಳ್ಳಲಾಯಿತು. ನಗರದ ಅಂತಾರಾಷ್ಟ್ರೀಯ ಚಿತ್ರಣವನ್ನು ಹೆಚ್ಚಿಸುವ ಪ್ರಕ್ರಿಯೆಯ ಭಾಗವಾಗಿ ಅಲ್ಲಿ [[ಒಲಂಪಿಕ್ ಕ್ರೀಡಾಕೂಟ|ಒಲಂಪಿಕ್ ಕ್ರೀಡಾಕೂಟಗಳಿಗೆ]] ಆತಿಥ್ಯ ವಹಿಸುವುದಕ್ಕಾಗಿ ಎರಡು ಬಿಡ್ ಮಾಡಲಾಯಿತು.<ref name="Regeneration"/>
ಐರಿಷ್ ಗಣತಂತ್ರವಾದಿಗಳು ಎನ್ನಲಾದ ಗುಂಪುಗಳಿಂದ ಮ್ಯಾಂಚೆಸ್ಟರ್ ಮೇಲೆ ದಾಳಿಗಳು ನಡೆದ ಇತಿಹಾಸವಿದೆ. ಇದರಲ್ಲಿ, ೧೮೬೭ರಲ್ಲಿ [[ಮ್ಯಾಂಚೆಸ್ಟರ್ ಹುತಾತ್ಮ]]ರ ದಾಳಿ, ೧೯೨೦ರಲ್ಲಿ ನಡೆದ ಅಗ್ನಿಸ್ಪರ್ಷ, ೧೯೩೯ರಲ್ಲಿ ನಡೆದ ಸರಣಿ ಸ್ಫೋಟಗಳು ಹಾಗೂ ೧೯೯೨ರಲ್ಲಿ ನಡೆದ ಎರಡು ಬಾಂಬ್ ಸ್ಫೋಟಗಳು ಸೇರಿವೆ. ಶನಿವಾರ, ೧೫ ಜೂನ್ ೧೯೯೬ರಂದು [[ಪ್ರಾವಿಷನಲ್ ಐರಿಷ್ ರಿಪಬ್ಲಿಕನ್ ಆರ್ಮಿ]] (IRA) [[1996 ಮ್ಯಾಂಚೆಸ್ಟರ್ ಬಾಂಬ್ ಸ್ಫೋಟ]] ನಡೆಸಿತು. ನಗರದ ಕೇಂದ್ರದಲ್ಲಿರುವ ಸರಕಿನ ಮಳಿಗೆಯ ಪಕ್ಕದಲ್ಲಿಯೇ ದೊಡ್ಡ ಬಾಂಬ್ನ್ನು ಸಿಡಿಸಿತ್ತು. ಬ್ರಿಟಿಷ್ ನೆಲದಲ್ಲಿ ಸಿಡಿಸಲಾದ ಅತ್ಯಂತ ದೊಡ್ಡ ಬಾಂಬ್ ಅದಾಗಿತ್ತು. ಇದು ೨೦೦ಕ್ಕಿಂತಲೂ ಹೆಚ್ಚು ಜನರನ್ನು ಗಾಯಗೊಳಿಸಿದ್ದಲ್ಲದೆ, ಸುತ್ತಮುತ್ತಲಿನ ಕಟ್ಟಡಗಳಿಗೆ ಹಾನಿಯೊಡ್ಡಿ, ಅರ್ಧ ಮೈಲು ದೂರದ ಕಟ್ಟಡದ ಕಿಟಕಿ ಗಾಜುಗಳನ್ನು ಒಡೆದುಹಾಕಿತ್ತು. ಹಾನಿಯ ಪ್ರಮಾಣವನ್ನು ಮೊದಲಿಗೆ £೫೦ ದಶಲಕ್ಷ ಎಂದು ಅಂದಾಜಿಸಲಾಗಿತ್ತು. ಆದರೆ, ಇದನ್ನು ತಕ್ಷಣವೇ ಇನ್ನೂ ಹೆಚ್ಚಿನ ಮೊತ್ತಕ್ಕೆ ಪರಿಷ್ಕರಿಸಲಾಗಿತ್ತು.<ref name="1996 IRA costs">{{cite book | title= A History of Manchester| url= https://archive.org/details/historyofmanches0000hylt| first= Stuart | last=Hylton| year= 2003| pages=[https://archive.org/details/historyofmanches0000hylt/page/227 227]–230 | publisher= Phillimore & Co | location= Chichester | isbn= 1-86077-240-4}}</ref> ಅಂತಿಮ ವಿಮಾ ಪಾವತಿಯ ಮೊತ್ತ £೪೦೦ ದಶಲಕ್ಷಕ್ಕಿಂತಲೂ ಹೆಚ್ಚಾಗಿತ್ತು. ಹಾನಿಗೀಡಾದ ವಾಣಿಜ್ಯ ಉದ್ದಿಮೆಗಳು ವಹಿವಾಟಿನ ನಷ್ಟದಿಂದ ಚೇತರಿಸಿಕೊಳ್ಳಲೇ ಇಲ್ಲ.<ref name="IRA business">{{Cite web | url=http://news.bbc.co.uk/1/hi/programmes/panorama/3704943.stm | title= Panorama – The cost of terrorism | accessdate= 2009-05-05 | publisher=[[BBC]] | date= ೧೫ May ೨೦೦೪}}</ref>
[[ಚಿತ್ರ:Manchester big screen.jpg|thumb|right|ಎಕ್ಸ್ಚೇಂಜ್ ಸ್ಕ್ವೇರ್ನಲ್ಲಿ BBC ಬಿಗ್ ಸ್ಕ್ರೀನ್ನಲ್ಲಿ ಪ್ರಸಾರವಾಗುತ್ತಿರುವ FIFA ವಿಶ್ವಕಪ್ ಫುಟ್ಬಾಲ್ನ ಒಂದು ಪಂದ್ಯ.]]
ಇಸವಿ ೧೯೯೬ರ ಬಾಂಬ್ ಸ್ಫೋಟದ ನಂತರ ಹೆಚ್ಚಿದ ಹೂಡಿಕೆ ಹಾಗೂ [[XVII ಕಾಮನ್ವೆಲ್ತ್ ಕ್ರೀಡಾಕೂಟ|XVII ಕಾಮನ್ವೆಲ್ತ್ ಕ್ರೀಡಾಕೂಟದ]] ನೆರವು ಪಡೆದ ಮ್ಯಾಂಚೆಸ್ಟರ್ನ ನಗರ ಕೇಂದ್ರವು ವ್ಯಾಪಕ ಪುನಶ್ಚೇತನಕ್ಕೆ ಒಳಗಾಯಿತು.<ref name="Regeneration">{{cite book|title=Pevsner Architectural Guides: Manchester|url=https://archive.org/details/manchester0000hart|last=Hartwell|first=Clare|year=2001|publisher=Penguin Books|location=London|isbn=0-14-071131-7}}<br />• {{cite book|title=Manchester: an Architectural History|url=http://www.manchesteruniversitypress.co.uk/catalogue/book.asp?id=1423|last=Parkinson-Bailey|first=John J|year=2000|publisher=Manchester University Press|location=Manchester|isbn=0-7190-5606-3|access-date=2010-05-28|archive-date=2007-12-27|archive-url=https://web.archive.org/web/20071227201545/http://www.manchesteruniversitypress.co.uk/catalogue/book.asp?id=1423|url-status=dead}}<br />• {{cite book|title=Lancashire: Manchester and the South-East|url=http://yalepress.yale.edu/yupbooks/book.asp?isbn=9780300105834|last=Hartwell|first=Clare|coauthors=Matthew Hyde, Nikolaus Pevsner|year=2004|publisher=Yale University Press|location=New Haven & London|isbn=0-300-10583-5}}</ref> [[ದಿ ಪ್ರಿಂಟ್ವರ್ಕ್ಸ್]] ಮತ್ತು ಟ್ರಯಾಂಗಲ್ನಂತಹ ಹೊಸದಾದ ಮತ್ತು ನವೀಕೃತ ಮಳಿಗೆಗಳು ಇಂದು ಜನಪ್ರಿಯ ವ್ಯಾಪಾರ ಮತ್ತು ಮನರಂಜನಾ ಕೇಂದ್ರಗಳಾಗಿವೆ. [[ಮ್ಯಾಂಚೆಸ್ಟರ್ ಅರ್ನ್ಡೇಲ್]] UKನಲ್ಲಿಯೇ ಅತಿ ದೊಡ್ಡ ನಗರ ಕೇಂದ್ರೀಯ ವ್ಯಾಪಾರ ಮಳಿಗೆಯಾಗಿದೆ.<ref name="Arndale">{{Cite web | url= http://www.prupim.com/about/properties/showProperty?contentId=3709 | title= Manchester Arndale | accessdate= 2008-10-09 | publisher= Prudential plc | year= 2007 | archive-date= 2010-04-19 | archive-url= https://web.archive.org/web/20100419051019/http://www.prupim.com/about/properties/showProperty?contentId=3709 | url-status= dead }}</ref>
೧೯೬೦ರ ದಶಕದಲ್ಲಿ ನಿರ್ಮಿಸಿದ ನಗರದ ದೊಡ್ಡ ಭಾಗಗಳನ್ನು ನೆಲಸಮಮಾಡಲಾಗಿದೆ ಮತ್ತು ಮರುಅಭಿವೃದ್ಧಿಗೊಳಿಸಲಾಗಿದೆ ಅಥವಾ ಗಾಜು ಮತ್ತು ಉಕ್ಕಿನ ಬಳಕೆಯಿಂದ ಆಧುನೀಕರಿಸಲಾಗಿದೆ. ಹಳೆಯ ಗಿರಣಿಗಳನ್ನು ಆಧುನಿಕ ವಸತಿಸಂಕೀರ್ಣಗಳನ್ನಾಗಿ ಪರಿವರ್ತಿಸಲಾಯಿತು. [[ಹುಲ್ಮ್]] ದೊಡ್ಡ ಪ್ರಮಾಣದಲ್ಲಿ ವ್ಯಾಪಕ ಪುನರುಜ್ಜೀವನ ಕಾರ್ಯಕ್ರಮಗಳಿಗೆ ಒಳಗಾಯಿತು. ಆಗಿನಿಂದ ದಶಲಕ್ಷ-ಪೌಂಡ್ ಮೌಲ್ಯದ ಲಾಫ್ಟ್ಹೌಸ್ ವಸತಿನಿಲಯಗಳನ್ನು ಅಭಿವೃದ್ಧಿಪಡಿಸಲಾಯಿತು. ಇಸವಿ ೨೦೦೬ರಲ್ಲಿ ನಿರ್ಮಾಣ ಪೂರ್ಣಗೊಂಡ ೧೬೯-ಮೀಟರ್ ಎತ್ತರದ, ೪೭-ಅಂತಸ್ತಿನ [[ಬೀಟ್ಹ್ಯಾಮ್ ಟವರ್ಸ್]] ಲಂಡನ್ನಾಚೆಗಿರುವ UKದಲ್ಲಿ ಅತಿ ಎತ್ತರದ ಕಟ್ಟಡ ಹಾಗೂ ಇಡೀ ಪಶ್ಚಿಮ ಯುರೋಪ್ನಲ್ಲೇ ಅತೀ ಎತ್ತರದ ವಾಸಸ್ಥಳದ ಕಟ್ಟಡವಾಗಿದೆ. ಕೆಳಭಾಗದ ೨೩ ಅಂತಸ್ತುಗಳಲ್ಲಿ ಹಿಲ್ಟನ್ ಹೋಟೆಲ್ ರೂಪುಗೊಂಡಿದ್ದು,ಇದರ ೨೩ನೆಯ ಅಂತಸ್ತಿನಲ್ಲಿ ಸ್ಕೈಬಾರ್ ಹೊಂದಿದೆ. ಇದರ ಮೇಲ್ಭಾಗದ ೨೪ ಅಂತಸ್ತುಗಳಲ್ಲಿ ವಸತಿನಿಲಯಗಳಿವೆ.<ref name="Beetham Tower">{{Cite news | url= http://news.bbc.co.uk/1/hi/england/manchester/4944590.stm | title=City building reaches full height | accessdate=2008-10-09 | publisher=[[BBC]] | date= ೨೬ April ೨೦೦೬}}</ref> ಜನವರಿ ೨೦೦೭ರಲ್ಲಿ, ನಗರದ ಈಸ್ಟ್ಲೆಂಡ್ಸ್ ಕ್ಷೇತ್ರದ ಪುನಶ್ಚೇತನಕ್ಕಾಗಿ UKಯ ಏಕೈಕ [[ಸೂಪರ್ಕ್ಯಾಸಿನೊ|ಸೂಪರ್ಕ್ಯಾಸಿನೊವನ್ನು]] ನಿರ್ಮಿಸಲು, ಸ್ವತಂತ್ರ ಮಂಡಳಿಯಾದ ಕ್ಯಾಸಿನೊ ಸಲಹಾ ಮಂಡಳಿಯು ಮ್ಯಾಂಚೆಸ್ಟರ್ಗೆ ಪರವಾನಗಿ ನೀಡಿತ್ತು.<ref name="Supercasino">{{Cite press | url= http://www.culture.gov.uk/cap/pressnotices/press_finalpanelreport300107.htm | title= Casino Advisory Panel Recommends to Secretary of State Where 17 New Casinos Should Be Located | accessdate= 2008-10-09 | publisher= Department for Culture, Media and Sport | date= 13 October 2006 | archive-date= 2008-10-14 | archive-url= https://web.archive.org/web/20081014190823/http://www.culture.gov.uk/Cap/pressnotices/press_finalpanelreport300107.htm | url-status= dead }}<br />• {{Cite news | url= http://www.bbc.co.uk/london/content/articles/2007/01/30/dome_feature.shtml | title= Greenwich loses Casino Bet | accessdate= 2008-10-09 | publisher= [[BBC]] | date= ೧೫ February ೨೦೦೭ }}</ref> ಆದರೆ, ಅದೇ ಮಾರ್ಚ್ ತಿಂಗಳಲ್ಲಿ [[ಹೌಸ್ ಆಫ್ ಲಾರ್ಡ್ಸ್]] ಈ ನಿರ್ಧಾರವನ್ನು ಮೂರು ಮತಗಳಿಂದ ತಿರಸ್ಕರಿಸಿತು. ಇದರಿಂದಾಗಿ ಮುಂಚಿನ [[ಹೌಸ್ ಆಫ್ ಕಾಮನ್ಸ್|ಹೌಸ್ ಆಫ್ ಕಾಮನ್ಸ್ಅಂಗೀಕಾರವು]] ಅರ್ಥಹೀನವೆನಿಸಿತು. ಇದು ಸೂಪರ್ಕ್ಯಾಸಿನೊ ಮತ್ತು ೧೪ ಇತರೆ ಸಣ್ಣ ಪ್ರಮಾಣದ ರಿಯಾಯತಿಗಳನ್ನು ಅಂತಿಮ ನಿರ್ಧಾರದ ತನಕ ಸಂಸದೀಯ ತ್ರಿಶಂಕು ಸ್ಥಿತಿಗೆ ತಳ್ಳಿತು.<ref name="Supercasino rejected">{{Cite news | url= http://news.bbc.co.uk/1/hi/uk_politics/6500859.stm | title= Lords scupper super-casino plan | accessdate= 2008-10-09 | publisher=[[BBC]] | date= ೨೮ March ೨೦೦೭}}</ref> ದಿನಾಂಕ ೧೧ ಜುಲೈ ೨೦೦೭ರಂದು ಸರ್ಕಾರಕ್ಕೆ ನಿಕಟವಾದ ಮೂಲವು ಇಡೀ ಸೂಪರ್ಕ್ಯಾಸಿನೊ ಯೋಜನೆಯು "ಯಾವುದೇ ಪ್ರಗತಿ ಸಾಧಿಸಿಲ್ಲ" ಎಂದು ಘೋಷಿಸಿತು.<ref name="Supercasino dead">{{Cite news | url= http://uk.reuters.com/article/businessNews/idUKL1156722520070711 | title= Brown cools on supercasino plan | accessdate= 2008-10-09 | publisher= [[Reuters]] | date= ೧೧ July ೨೦೦೭ | archive-date= 2013-01-05 | archive-url= https://archive.today/20130105035525/http://uk.reuters.com/article/businessNews/idUKL1156722520070711 | url-status= dead }}</ref> ಮ್ಯಾಂಚೆಸ್ಟರ್ ವಾಣಿಜ್ಯ ಮಂಡಳಿಯ ಸದಸ್ಯರೊಬ್ಬರು ಅಚ್ಚರಿ ಮತ್ತು ಆಘಾತದ ಪ್ರತಿಕ್ರಿಯೆ ನೀಡಿ, ಈ ಕುರಿತು ಬಹಳಷ್ಟು ಸಮಯ ಮತ್ತು ಹಣ ವ್ಯರ್ಥ ಮಾಡಲಾಗಿದೆ ಎಂದು ಉದ್ಗರಿಸಿದರು.<ref name="Supercasino anger">{{Cite news | url= http://news.bbc.co.uk/1/hi/england/manchester/6292630.stm | title= Anger at super-casino plan review | accessdate= 2008-10-09 | publisher= [[BBC]] | date= ೧೧ July ೨೦೦೭}}</ref> ಪ್ರಧಾನ ಮಂತ್ರಿಯೊಂದಿಗೆ ಮಾತುಕತೆ ನಡೆಸಿದ ನಂತರ, ಮ್ಯಾಂಚೆಸ್ಟರ್ ನಗರ ಮಂಡಳಿಯು ೨೪ ಜುಲೈ ೨೦೦೭ರಂದು ಪತ್ರಿಕಾ ಪ್ರಕರಣೆ ನೀಡಿ, 'ಕೆಲವು ವರದಿಗಳಿಗೆ ವ್ಯತಿರಿಕ್ತವಾಗಿ,ಪ್ರಾದೇಶಿಕ ಕ್ಯಾಸಿನೊಗೆ ಬಾಗಿಲು ಮುಚ್ಚಲಾಗಿಲ್ಲ' ಎಂದು ಸ್ಪಷ್ಟಪಡಿಸಿತು.<ref name="Supercasino not dead">{{Cite web | url= http://www.manchester.gov.uk/site/scripts/news_article.php?newsID=2812 | title= Manchester reaffirms casino commitment | accessdate= 2008-10-09 | publisher= [[Manchester City Council]] | date= ೨೭ July ೨೦೦೭ }}{{Dead link|date=ಏಪ್ರಿಲ್ 2026 |bot=InternetArchiveBot |fix-attempted=yes }}</ref> ಫೆಬ್ರವರಿ ೨೦೦೮ರಲ್ಲಿ ಸೂಪರ್ಕ್ಯಾಸಿನೊ ಅಧಿಕೃತವಾಗಿ ರದ್ದಾಗಿದೆ ಎಂದು ಘೋಷಿಸಲಾಯಿತು. ಮಾಧ್ಯಮಗಳು ಇದರ ಪರಿಹಾರ ಯೋಜನೆಯನ್ನು 'ಬೇಕಾಬಿಟ್ಟಿ ಪರಿಹಾರ ಯೋಜನೆ, ಲೊಳಲೊಟ್ಟೆ ಎಂಬಂತಹ ಆಶ್ವಾಸನೆಗಳ ಕಂತೆ' ಎಂದು ಟೀಕಿಸಿದವು.<ref name="SupercasinoDead">{{Cite news | url=http://www.manchestereveningnews.co.uk/news/s/1038288_empty_promises_and_spin | title=Empty promises and spin | accessdate=2008-10-09 | publisher= M.E.N. media | work= [[Manchester Evening News]] | date= ೨೬ February ೨೦೦೮ |author= Ottewell, David}}</ref>
೨೧ನೆಯ ಶತಮಾನದ ಆರಂಭದಿಂದಲೂ, ಅಂತಾರಾಷ್ಟ್ರೀಯ ಮಾಧ್ಯಮ,<ref>{{cite web|url=http://www.calendarlive.com/music/cl-et-manchester3jul03,0,6491516.story?coll=cl-music-features|title=With Manchester Festival, England's second city bids for cultural spotlight|accessdate=2009-05-05|publisher=LA Times|date=3 July 2007|archiveurl=https://web.archive.org/web/20071011140307/http://www.calendarlive.com/music/cl-et-manchester3jul03,0,6491516.story?coll=cl-music-features|archivedate=2007-10-11}}</ref> ಬ್ರಿಟಿಷ್ ಸಾರ್ವಜನಿಕರು,<ref>{{cite web|url=http://www.ipsos-mori.com/content/manchester-englands-second-city.ashx|title=Manchester poll 'England's second city'|accessdate=2009-05-05|publisher=Ipsos MORI North|year=2002|archive-date=2016-01-03|archive-url=https://web.archive.org/web/20160103170255/https://www.ipsos-mori.com/content/manchester-englands-second-city.ashx|url-status=dead}}</ref> ಸರ್ಕಾರದ ಸಚಿವರು<ref name="Prescott">{{cite news|title= Prescott ranks Manchester as second city|url= http://www.manchestereveningnews.co.uk/news/s/144/144945_prescott_ranks_manchester_as_second_city.html|work=[[Manchester Evening News]]|publisher=M.E.N media|date=೩ February ೨೦೦೫|accessdate=೨೦೦೯-೦೫-೦೫|quote=We have had fantastic co-operation here in Manchester—our second city, I am prepared to concede.}}</ref> ಮ್ಯಾಂಚೆಸ್ಟರ್ [[ಯುನೈಟೆಡ್ ಕಿಂಗ್ಡಮ್ನ ಎರಡನೆಯ ನಗರ|ಯುನೈಟೆಡ್ ಕಿಂಗ್ಡಮ್ನ ಎರಡನೆಯ ನಗರವೆಂದು]] ಪರಿಗಣಿಸಿದ್ದಾರೆ. [[BBC]] ೨೦೦೭ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ,ಇಂಗ್ಲೆಂಡ್ನ ಎರಡನೇ ನಗರ ವರ್ಗದಲ್ಲಿ, ಮ್ಯಾಂಚೆಸ್ಟರ್ನ್ನು ಬರ್ಮಿಂಗ್ಹ್ಯಾಮ್ ಮತ್ತು [[ಲಿವರ್ಪೂಲ್]] ನಗರಗಳಿಗಿಂತಲೂ ಮುಂದಿರಿಸಿದ್ದು,''ಮೂರನೆಯ'' ನಗರ ವರ್ಗದಲ್ಲೂ ಮುಂದಿರಿಸಿದೆ. ಇವೆರಡೂ ವರ್ಗಗಳು ಅಧಿಕೃತವಾಗಿ ಅಂಗೀಕಾರ ಪಡೆದಿಲ್ಲ.ಜೊತೆಗೆ ಎರಡನೆಯ ನಗರ ಎಂದು ನಿರ್ಣಯಿಸಲು ತೆಗೆದುಕೊಳ್ಳಲಾದ ಮಾನದಂಡಗಳು ಅಸ್ಪಷ್ಟವಾಗಿದೆ. [[ಜನಸಂಖ್ಯೆ|ಜನಸಂಖ್ಯೆಯ]] ದೃಷ್ಟಿಯಿಂದ ಮ್ಯಾಂಚೆಸ್ಟರ್ ಎರಡನೆಯ ''ಅತಿ ದೊಡ್ಡ'' ನಗರವಲ್ಲ. ಆದರೂ, ಸಾಂಸ್ಕೃತಿಕ ಮತ್ತು [[ಐತಿಹಾಸಿಕ]] ಮಾನದಂಡಗಳು ಹೆಚ್ಚು ಮುಖ್ಯ ಎಂದು ವಾದಿಸಲಾಗಿದೆ.<ref name="BBC2005">{{Cite web|url=http://news.bbc.co.uk/1/hi/england/manchester/4293814.stm|title=Manchester 'close to second city' |accessdate=2009-05-05|publisher=[[BBC]]|date=೨೯ September ೨೦೦೫}}</ref> ಇತ್ತೀಚೆಗಿನ ವರ್ಷಗಳಲ್ಲಿ ನಡೆದ ಪುನರಾಭಿವೃದ್ಧಿಯು ಮ್ಯಾಂಚೆಸ್ಟರ್ UKಯ ಎರಡನೆಯ ನಗರ ಎಂಬ ವಾದಗಳಿಗೆ ಪುಷ್ಠಿ ನೀಡಿವೆ ಎಂದು BBC ವರದಿ ಮಾಡಿದೆ.<ref name="2nd city">{{Cite web|url=http://news.bbc.co.uk/1/hi/england/2253035.stm|title=Manchester 'England's second city'|accessdate=2009-05-05|publisher=[[BBC]]|date=೧೨ September ೨೦೦೨}}<br />•{{Cite web|url=http://news.bbc.co.uk/1/hi/england/6349501.stm|title=Manchester tops second city poll|accessdate=2009-05-05|publisher=[[BBC]]|date=೧೦ February ೨೦೦೭}}<br />•{{Cite web|url=http://www.bbc.co.uk/pressoffice/pressreleases/stories/2007/02_february/09/birmingham.shtml|title=Birmingham loses out to Manchester in second city face off|accessdate=2009-05-05|publisher=[[BBC]]|date=೯ February ೨೦೦೭}}</ref> ಆದರೂ, UKದಲ್ಲಿ ಅನಧಿಕೃತವಾಗಿರುವ ಈ ಬಿರುದನ್ನು [[ಬರ್ಮಿಂಗ್ಹ್ಯಾಮ್]] ೨೦ನೆಯ ಶತಮಾನದ ಆರಂಭದಿಂದಲೂ ಸಾಂಪ್ರದಾಯಿಕವಾಗಿ ಅಲಂಕರಿಸಿದೆ.<ref name="2nd city contested">{{Cite web|url=http://travel.guardian.co.uk/article/2003/sep/06/unitedkingdom.birmingham.guardiansaturdaytravelsection|title=Second coming|author=Jeffries, Stuart|accessdate=2009-05-05|publisher=[[The Guardian]]|date=೬ September ೨೦೦೩|archive-date=2007-05-03|archive-url=https://web.archive.org/web/20070503073603/http://travel.guardian.co.uk/article/2003/sep/06/unitedkingdom.birmingham.guardiansaturdaytravelsection|url-status=dead}}</ref>
== ಆಡಳಿತ ==
[[ಚಿತ್ರ:Manchester town hall 2009 wide angle.jpg|thumb|ಆಲ್ಬರ್ಟ್ ಸ್ಕ್ವೇರ್ನಲ್ಲಿ ಮ್ಯಾಂಚೆಸ್ಟರ್ ಟೌನ್ ಹಾಲ್. ಇದು ಸ್ಥಳೀಯ ಆಡಳಿತದ ಕಾರ್ಯಸ್ಥಳ. ಈ ಕಟ್ಟಡವು ವಿಕ್ಟೋರಿಯನ್ ಯುಗದ ಗೋಥಿಕ್ ಪುನರುತ್ಥಾನದ ವಾಸ್ತುಶೈಲಿಯನ್ನು ಹೊಂದಿದೆ.]]
ಮ್ಯಾಂಚೆಸ್ಟರ್ ಮೂರು ಹಂತಗಳ ಸರ್ಕಾರದಿಂದ ಪ್ರತಿನಿಧಿಸಲ್ಪಟ್ಟಿದೆ: [[ಮ್ಯಾಂಚೆಸ್ಟರ್ ನಗರ ಮಂಡಳಿ]]("ಸ್ಥಳೀಯ") UK ಸಂಸತ್("ರಾಷ್ಟ್ರೀಯ") ಯುರೋಪಿಯನ್ ಸಂಸತ್("ಯರೋಪ್") [[ಗ್ರೇಟರ್ ಮ್ಯಾಂಚೆಸ್ಟರ್ ಕೌಂಟಿ ಕೌನ್ಸಿಲ್]] ಆಡಳಿತವನ್ನು ೧೯೮೬ರಲ್ಲಿ ತೆಗೆದುಹಾಕಲಾಯಿತು; ಅಂದಿನಿಂದ [[ಸಿಟಿ ಕೌನ್ಸಿಲ್]] ಪರಿಣಾಮಕಾರಿ[[ಏಕೀಕೃತ ಪ್ರಾಧಿಕಾರ|ಏಕೀಕೃತ ಪ್ರಾಧಿಕಾರವಾಗಿದೆ]]. ಇಸವಿ ೧೯೯೫ರಲ್ಲಿ ಇದರ ಆರಂಭದಿಂದಲೂ, ಮ್ಯಾಂಚೆಸ್ಟರ್ [[ಇಂಗ್ಲಿಷ್ ಕೋರ್ ಸಿಟೀಸ್ ಗ್ರೂಪ್]]ನ <ref name="Core city">{{Cite web|url=http://www.corecities.com/dev07/Introduction/about.html|title=About the Core Cities Group|accessdate=2007-07-09|publisher=[[English Core Cities Group]]|year=೨೦೦೪|archive-date=2007-09-19|archive-url=https://web.archive.org/web/20070919035621/http://www.corecities.com/dev07/Introduction/about.html|url-status=dead}}</ref> ಸದಸ್ಯ. ಇದು, ಇತರೆ ವಿಚಾರಗಳ ನಡುವೆ, ನಗರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸಲು ನೆರವಾಗುತ್ತದೆ.
ಇಸವಿ ೧೩೦೧ರಲ್ಲಿ ಮ್ಯಾಂಚೆಸ್ಟರ್ ಪಟ್ಟಣಕ್ಕೆ ಥಾಮಸ್ ಗ್ರೆಲ್ಲೆಯವರಿಂದ ಸನ್ನದು ದೊರೆಯಿತು. ಆದರೆ ೧೩೫೯ರಲ್ಲಿ ನಡೆದ ನ್ಯಾಯಾಲಯ ಪ್ರಕರಣವೊಂದರಲ್ಲಿ ನಗರವು [[ಪ್ರಧಾನನಗರ ವಿಭಾಗ ಪಟ್ಟ|ಪ್ರಧಾನನಗರ ವಿಭಾಗ ಪಟ್ಟವನ್ನು]] ಕಳೆದುಕೊಂಡಿತು. ಹತ್ತೊಂಬತ್ತನೆಯ ಶತಮಾನದ ತನಕ, ಸ್ಥಳೀಯ ಆಡಳಿತಕ್ಕೆ ಜಹಗೀರಿನ ಕೋರ್ಟ್ಗಳನ್ನು ಹೆಚ್ಚಾಗಿ ಒದಗಿಸಲಾಗಿತ್ತು; ಇದರ ಕೊನೆಯ ಸಭೆಯು ೧೮೪೬ರಲ್ಲಿ ಮುಕ್ತಾಯವಾಯಿತು.<ref name="GM Gazetteer">{{cite web|url=http://www.gmcro.co.uk/guides/gazette/gazframe.htm|date=2003-07-31|title=A select gazetteer of local government areas, Greater Manchester County|publisher=[[Greater Manchester County Record Office]]|accessdate=೨೦೦೭-೦೭-೦೯|archive-date=2007-09-28|archive-url=https://web.archive.org/web/20070928175017/http://www.gmcro.co.uk/guides/gazette/gazframe.htm|url-status=dead}}</ref>
[[ಬಹಳ ಪೂರ್ವ ಕಾಲ|ಬಹಳ ಪೂರ್ವ ಕಾಲದಿಂದಲೂ]], [[ಮ್ಯಾಂಚೆಸ್ಟರ್ ಪಟ್ಟಣ|ಮ್ಯಾಂಚೆಸ್ಟರ್ ಪಟ್ಟಣವು]] [[ಲ್ಯಾಂಕಾಷೈರ್]]ನ [[ಐತಿಹಾಸಿಕ ಕೌಂಟಿ ಗಡಿ|ಐತಿಹಾಸಿಕ ಕೌಂಟಿ ಗಡಿಗಳೊಳಗೇ]] ಇತ್ತು.<ref name="GM Gazetteer"/> 'ಅಕ್ಕಪಕ್ಕದಲ್ಲಿರುವ [[ಸ್ಟ್ರೆಟ್ಫರ್ಡ್]] ಮತ್ತು [[ಸ್ಯಾಲ್ಫರ್ಡ್]] ಆಡಳಿತಾತ್ಮಕವಾಗಿ ಮ್ಯಾಂಚೆಸ್ಟರ್ನೊಂದಿಗೆ ಏಕೀಕೃತವಾಗದಿರುವುದು ಇಂಗ್ಲೆಂಡಿನ ಗಮನಾರ್ಹ ಅಸಹಜತೆಗಳಲ್ಲಿ ಒಂದಾಗಿದೆ' ಎಂದು [[ಪೆವ್ಸ್ನರ್]] ಬರೆದಿದ್ದರು.<ref name="Flemish"/> [[ನಾರ್ಮನ್]] [[ಬ್ಯಾರನ್|ಬ್ಯಾರನ್ನ]] ಲೇಖನಿಯ ಪ್ರಯತ್ನವು ಮ್ಯಾಂಚೆಸ್ಟರ್ ಮತ್ತು ಸ್ಯಾಲ್ಫರ್ಡ್ನ್ನು ಪ್ರತ್ಯೇಕಿಸಲಾಯಿತು ಎನ್ನಲಾಗಿದೆ. ಆದರೂ ಸ್ಯಾಲ್ಫರ್ಡ್ ಮ್ಯಾಂಚೆಸ್ಟರ್ನಿಂದ ಪ್ರತ್ಯೇಕವಾಗಿರಲಿಲ್ಲ. ಬದಲಿಗೆ, ವಾಸ್ತವವಾಗಿ, ನಮ್ರ [[ಧಣಿ|ಧಣಿಗಳ]] ವಂಶವನ್ನು ಹೊಂದಿದ್ದ ಮ್ಯಾಂಚೆಸ್ಟರ್, ಸ್ಯಾಲ್ಫರ್ಡ್ನಿಂದ ಪ್ರತ್ಯೇಕವಾಗಿತ್ತು.<ref name="GM Evolution">{{cite book|title=Tradition in Action. The historical evolution of the Greater Manchester County|url=https://archive.org/details/traditioninactio0000fran|last=Frangopulo|first=Nicholas|year=1977|publisher=EP Publishing|location=Wakefield|isbn=0-7158-1203-3}}</ref> ಈ ಪ್ರತ್ಯೇಕತೆಯ ಫಲವಾಗಿ, ಸ್ಯಾಲ್ಫರ್ಡ್ [[ಸ್ಯಾಲ್ಫರ್ಡ್ಷೈರ್|ಸ್ಯಾಲ್ಫರ್ಡ್ಷೈರ್ನ]] ನ್ಯಾಯಾಂಗ ಸ್ಥಾನವಾಯಿತು.[[ಮ್ಯಾಂಚೆಸ್ಟರ್ನ ಪುರಾತನ ಪಾದ್ರಿ-ಹೋಬಳಿ|ಮ್ಯಾಂಚೆಸ್ಟರ್ನ ಪುರಾತನ ಪಾದ್ರಿ-ಹೋಬಳಿಯೂ]] ಇದರಲ್ಲಿ ಒಳಗೊಂಡಿತ್ತು. ಮ್ಯಾಂಚೆಸ್ಟರ್ನಲ್ಲಿ ಆನಂತರ ತನ್ನ ಹೆಸರಿನದೇ ಆದ [[ಪೂರ್ ಲಾ ಯುನಿಯನ್]] ರಚನೆಯಾಯಿತು.<ref name="GM Gazetteer"/> ಇಸವಿ ೧೭೯೨ರಲ್ಲಿ, ಮ್ಯಾಂಚೆಸ್ಟರ್ನ ಸಾಮಾಜಿಕ ಜೀವನವನ್ನು ಸುಧಾರಣೆಗೆ ಸಾಮಾನ್ಯವಾಗಿ ಪೋಲಿಸ್ ಆಯುಕ್ತರೆಂದು ಹೆಸರು ಪಡೆದ ಆಯುಕ್ತರನ್ನು ನೇಮಿಸಲಾಯಿತು. ಇಸವಿ ೧೮೩೮ರಲ್ಲಿ, ಮ್ಯಾಂಚೆಸ್ಟರ್ ತನ್ನ ಪ್ರಧಾನನಗರ ವಿಭಾಗ ಪಟ್ಟವನ್ನು ಪುನಃ ಪಡೆದುಕೊಂಡಿತು. ಈ ವಿಭಾಗದಲ್ಲಿ [[ಬೆಸ್ವಿಕ್]], [[ಚೀಟ್ಹ್ಯಾಮ್ ಹಿಲ್]], [[ಕಾರ್ಲ್ಟನ್ ಅಪಾನ್ ಮೆಡ್ಲಾಕ್]] ಹಾಗೂ [[ಹುಲ್ಮ್]] ಪಟ್ಟಣಗಳು ಸೇರಿದ್ದವು.<ref name="GM Gazetteer"/> ಇಸವಿ ೧೮೪೬ರರೊಳಗೆ ಪ್ರಧಾನನಗರ ವಿಭಾಗದ ಮಂಡಳಿಯು ಪೊಲೀಸ್ ಆಯುಕ್ತರುಗಳ ಅಧಿಕಾರಗಳನ್ನು ವಹಿಸಿಕೊಂಡಿತ್ತು. ಇಸವಿ ೧೮೫೩ರಲ್ಲಿ, ಮ್ಯಾಂಚೆಸ್ಟರ್ಗೆ [[ಯುನೈಟೆಡ್ ಕಿಂಗ್ಡಮ್ಲ್ಲಿ ನಗರ ಸ್ಥಾನಮಾನ]] ಪ್ರಾಪ್ತವಾಯಿತು.<ref name="GM Gazetteer"/>
ಇಸವಿ ೧೮೮೫ರಲ್ಲಿ, [[ಬ್ರ್ಯಾಡ್ಫರ್ಡ್]], [[ಹಾರ್ಪರ್ಹೆ]], [[ರಷ್ಹೋಮ್]] ಹಾಗೂ [[ಮಾಸ್ ಸೈಡ್]] ಮತ್ತು [[ವಿತಿಂಗ್ಟನ್]] ಪಟ್ಟಣಗಳ ಕೆಲ ಭಾಗಗಳು ಮ್ಯಾಂಚೆಸ್ಟರ್ ನಗರದ ಭಾಗಗಳಾದವು. ಇಸವಿ ೧೮೮೯ರಲ್ಲಿ, ನಗರವು ಲ್ಯಾಂಕಾಷೈರ್ನ [[ಆಡಳಿತ ಕೌಂಟಿ|ಆಡಳಿತ ಕೌಂಟಿಯಿಂದ]] ಪ್ರತ್ಯೇಕಗೊಂಡು, ಮ್ಯಾಂಚೆಸ್ಟರ್ನ [[ಕೌಂಟಿ ವಿಭಾಗ|ಕೌಂಟಿ ವಿಭಾಗವಾಯಿತು]]; ಹಾಗಾಗಿ, ನಗರವು [[ಲ್ಯಾಂಕಾಷೈರ್ ಕೌಂಟಿ ಮಂಡಳಿ|ಲ್ಯಾಂಕಾಷೈರ್ ಕೌಂಟಿ ಮಂಡಳಿಯ]] ಆಡಳಿತಕ್ಕೆ ಒಳಪಟ್ಟಿರಲಿಲ್ಲ.<ref name="GM Gazetteer"/> ಇಸವಿ ೧೮೯೦ರಿಂದ ೧೯೩೩ರ ವರೆಗೆ, [[ಬರ್ನೇಜ್]], [[ಕಾರ್ಲ್ಟನ್-ಕಮ್-ಹಾರ್ಡಿ]], [[ಡಿಡ್ಸ್ಬ್ಯೂರಿ]], [[ಫಾಲೊಫೀಲ್ಡ್]], [[ಲೀವೆನ್ಸ್ಹುಲ್ಮ್]], [[ಲಾಂಗ್ಸೈಟ್]] ಮತ್ತು [[ವಿತಿಂಗ್ಟನ್|ವಿತಿಂಗ್ಟನ್ನಂತಹ]] ಗ್ರಾಮಗಳು ಸೇರಿದಂತೆ, ಲ್ಯಾಂಕಾಷೈರ್ನಿಂದ ಇನ್ನಷ್ಟು ಪ್ರದೇಶಗಳನ್ನು ನಗರಕ್ಕೆ ಸೇರಿಸಲಾಯಿತು.
ಇಸವಿ ೧೯೩೧ರಲ್ಲಿ, [[ಬ್ಯಾಗ್ಲೆ]], [[ನಾರ್ತೆಂಡೆನ್|ನಾರ್ತೆಂಡೆನ್ನ]] [[ಚೆಷೈರ್]] [[ನಾಗರಿಕ ಹೋಬಳಿ|ನಾಗರಿಕ ಹೋಬಳಿಗಳನ್ನು]] ಮತ್ತು [[ಮರ್ಸಿ ನದಿ|ಮರ್ಸಿ ನದಿಯ]] ದಕ್ಷಿಣದಲ್ಲಿರುವ [[ಉತ್ತರ ಎಚೆಲ್ಸ್|ಉತ್ತರ ಎಚೆಲ್ಸ್ನ್ನು]] ಸೇರಿಸಿಕೊಳ್ಳಲಾಯಿತು.<ref name="GM Gazetteer" /> ಇಸವಿ ೧೯೭೪ರಲ್ಲಿ, [[1972ರ ಸ್ಥಳೀಯ ಸರ್ಕಾರ ಕಾಯಿದೆ|1972ರ ಸ್ಥಳೀಯ ಸರ್ಕಾರ ಕಾಯಿದೆಯಡಿ]] ಮ್ಯಾಂಚೆಸ್ಟರ್ ನಗರವು, [[ಗ್ರೇಟರ್ ಮ್ಯಾಂಚೆಸ್ಟರ್]] [[ಪ್ರಧಾನನಗರ ಕೌಂಟಿ|ಪ್ರಧಾನನಗರ ಕೌಂಟಿಯ]] [[ಪ್ರಧಾನನಗರ ಜಿಲ್ಲೆ|ಪ್ರಧಾನನಗರ ಜಿಲ್ಲೆಯಾಯಿತು]].<ref name="GM Gazetteer" /> ಅದೇ ವರ್ಷ, ಮ್ಯಾಂಚೆಸ್ಟರ್ ವಿಮಾನ ನಿಲ್ದಾಣ ನೆಲೆಹೊಂದಿರುವ[[ರಿಂಗ್ವೇ]] ಪಟ್ಟಣವನ್ನು ಮ್ಯಾಂಚೆಸ್ಟರ್ ನಗರಕ್ಕೆ ಸೇರಿಸಲಾಯಿತು.
== ಭೌಗೋಳಿಕ ವಿವರಣೆ ==
{{climate chart
|Manchester
|1|6|69
|1|7|50
|3|9|61
|4|12|51
|7|15|61
|10|18|67
|12|20|65
|12|20|79
|10|17|74
|8|14|77
|4|9|78
|2|7|78
|source=[http://www.climate-charts.com/Locations/u/UK03334.html Climate-Charts.com]
|float=right
}}
[[ಲಂಡನ್]]ನ {{Coord|53|28|0|N|2|14|0|W|type:city}}, {{convert|160|mi|km|0}} ವಾಯುವ್ಯದಲ್ಲಿರುವ ಮ್ಯಾಂಚೆಸ್ಟರ್, ಬೋಗುಣಿಯಾಕಾರದ ನೆಲದಲ್ಲಿದೆ. [[ಉತ್ತರ ಇಂಗ್ಲೆಂಡ್]]ನುದ್ದಕ್ಕೂ ಚಾಚಿಕೊಂಡಿರುವ ಪರ್ವತಶ್ರೇಣಿ[[ಪೆನೀನ್ ಬೆಟ್ಟಗಳು]] ಮ್ಯಾಂಚೆಸ್ಟರ್ನ ಉತ್ತರ ಮತ್ತು ಪೂರ್ವ ಗಡಿಗಳಲ್ಲಿವೆ. ಮ್ಯಾಂಚೆಸ್ಟರ್ನ ದಕ್ಷಿಣದಲ್ಲಿ [[ಚೆಷೈರ್ ಬಯಲುಸೀಮೆ ಪ್ರದೇಶ|ಚೆಷೈರ್ ಬಯಲುಸೀಮೆ ಪ್ರದೇಶವಿದೆ]]. [[ನಗರ ಕೇಂದ್ರ|ನಗರ ಕೇಂದ್ರವು]] [[ಇರ್ವೆಲ್ ನದಿ|ಇರ್ವೆಲ್ ನದಿಯ]] ಪೂರ್ವ ದಂಡೆಯ ಮೇಲೆ, ಈ ನದಿಯ[[ಮೆಡ್ಲಾಕ್]] ಮತ್ತು [[ಇರ್ಕ್]] ನದಿಗಳ ಸಂಗಮ ಸ್ಥಳದ ಸಮೀಪದಲ್ಲಿದೆ. [[ಸಮುದ್ರ ಮಟ್ಟ|ಸಮುದ್ರ ಮಟ್ಟಕ್ಕಿಂತ]] ಸುಮಾರು ೧೧೫ರಿಂದ ೧೩೮ ಅಡಿಗಳಷ್ಟು (೩೫ರಿಂದ ೪೨ ಮೀಟರ್ಗಳು) ಎತ್ತರವಿದ್ದು, ಇದು ಹೆಚ್ಚುಕಡಿಮೆ ತಗ್ಗು ಪ್ರದೇಶಕ್ಕೆ ಸಂಬಂಧಿಸಿದೆ.<ref name="Topography">{{cite book|title=Manchester: A History|url=https://archive.org/details/manchesterhistor0000kidd|last=Kidd|first=Alan|year=2006|page=[https://archive.org/details/manchesterhistor0000kidd/page/11 11]|publisher=Carnegie Publishing|location=Lancaster|isbn=1-85936-128-5}}</ref> [[ಮರ್ಸಿ ನದಿ|ಮರ್ಸಿ ನದಿಯು]] ಮ್ಯಾಂಚೆಸ್ಟರ್ನ ದಕ್ಷಿಣ ಭಾಗದಲ್ಲಿ ಹರಿಯುತ್ತದೆ. ಮ್ಯಾಂಚೆಸ್ಟರ್ ನಗರದ ಒಳಭಾಗದ ಬಹಳಷ್ಟು, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾಗವು ಸಮತಟ್ಟಾಗಿದೆ. ಇದರಿಂದಾಗಿ,ಬೆಟ್ಟದತಪ್ಪಲಿನ ಮತ್ತು ಚಳಿಗಾಲದ ತಿಂಗಳುಗಳಲ್ಲಿ ಮಂಜಿನ ಟೊಪ್ಪಿಗೆ ಧರಿಸುವ ಪೆನ್ನೈನ್ಸ್ ಬೆಟ್ಟಗಳಿಂದ ಕೂಡಿದ ನಗರದ ಹಲವು ಗಗನಚುಂಬಿ ಕಟ್ಟಡಗಳ ಮೇಲಿನಿಂದ ನಗರದ ವಿಶಾಲ ದೃಶ್ಯಗಳು ಕಾಣುತ್ತವೆ. ಮ್ಯಾಂಚೆಸ್ಟರ್ ವಿಶ್ವದಲ್ಲೇ ಮೊಟ್ಟಮೊದಲ ಕೈಗಾರಿಕೀಕೃತ ನಗರವಾಗಲು ನಗರದ ಭೌಗೋಳಿಕ ಲಕ್ಷಣಗಳು ಮುಖ್ಯ ಪ್ರಭಾವ ಬೀರಿದೆ. ಹವಾಗುಣ, [[ಲಿವರ್ಪೂಲ್]]ನಲ್ಲಿರುವ [[ಬಂದರಿ|ಬಂದರಿಗೆ]] ನಗರದ ಸಾಮೀಪ್ಯತೆ, ತನ್ನ ನದಿಗಳಿಂದ ಲಭ್ಯ ಜಲಶಕ್ತಿ, ಹಾಗೂ ಸನಿಹದಲ್ಲಿರುವ [[ಕಲ್ಲಿದ್ದಲು]] ನಿಕ್ಷೇಪಗಳು ಮ್ಯಾಂಚೆಸ್ಟರ್ನ ಪ್ರಮುಖ ಲಕ್ಷಣಗಳಾಗಿವೆ.<ref name="Coalfields">{{Cite web|url=http://www.msim.org.uk/media/159631/the%20manchester%20coalfields.pdf|title=The Manchester Coalfields|accessdate=2009-05-05|publisher=[[Museum of Science and Industry in Manchester]]|year=೨೦೦೧|format=PDF|archiveurl=https://web.archive.org/web/20070926041049/http://www.msim.org.uk/media/159631/the%20manchester%20coalfields.pdf|archivedate=2007-09-26}}</ref>
[[ಚಿತ್ರ:Map of Manchester.png|thumb|left|ಮ್ಯಾಂಚೆಸ್ಟರ್ ನಗರ.ಜಮೀನು ಬಳಕೆಯು ಸಂಪೂರ್ಣ ನಗರವಾಸಕ್ಕಾಗಿ ಬಳಸಲಾಗಿದೆ.]]
ಅಧಿಕೃತವಾಗಿ ಮ್ಯಾಂಚೆಸ್ಟರ್ ಹೆಸರು ಕೇವಲ ಗ್ರೇಟರ್ ಮ್ಯಾಂಚೆಸ್ಟರ್ನ ಪ್ರಧಾನನಗರ ಜಿಲ್ಲೆಗೆ ಅನ್ವಯಿಸಿದ್ದರೂ ಸಹ, ಇತರೆ ವಿಶಾಲ ವಿಭಾಗಗಳಿಗೂ ಸಹ, ಅದರಲ್ಲೂ ವಿಶೇಷವಾಗಿ ಗ್ರೇಟರ್ ಮ್ಯಾಂಚೆಸ್ಟರ್ ಕೌಂಟಿಯ ಬಹಳಷ್ಟು ವಿಸ್ತೀರ್ಣದ ಪ್ರದೇಶ ಮತ್ತು ನಗರಪ್ರದೇಶಕ್ಕೆ ಅನ್ವಯಿಸಲಾಗಿದೆ. 'ಮ್ಯಾಂಚೆಸ್ಟರ್ ನಗರ ವಲಯ', '[[ಮ್ಯಾಂಚೆಸ್ಟರ್ ಅಂಚೆ ಪಟ್ಟಣ]]' ಮತ್ತು '[[ಮ್ಯಾಂಚೆಸ್ಟರ್ ಕಂಜೆಷನ್ ಚಾರ್ಜ್]]' ಇವೆಲ್ಲವೂ ಇದರ ಉದಾಹರಣೆಗಳಾಗಿವೆ. ಗೃಹ-ವಸತಿ ಮಾರುಕಟ್ಟೆಗಳು, ವಾಣಿಕ್ಯ ಸಂಪರ್ಕ-ಕೊಂಡಿಗಳು, ದಿನದ ಕೆಲಸಕ್ಕಾಗಿ ಪ್ರಯಾಣದ ಮಾದರಿಗಳು, ಆಡಳಿತಾತ್ಮಕ ಸ್ಥಳಗಳು ಇತ್ಯಾದಿಯನ್ನು ವ್ಯಾಖ್ಯಾನಿಸಲು, [[ಮ್ಯಾಂಚೆಸ್ಟರ್ ನಗರ ವಲಯ|ಮ್ಯಾಂಚೆಸ್ಟರ್ ನಗರ ವಲಯದ]] ಆರ್ಥಿಕ ಭೂಗೋಳವನ್ನು ಬಳಸಲಾಗಿದೆ.<ref name="Northern Way">{{Cite web|url=http://www.thenorthernway.co.uk/page.asp?id=54|title=Manchester – Accelerating the growth of the North|accessdate=2009-05-05|publisher=The Northern Way|year=2007|archiveurl=https://web.archive.org/web/20070514021345/http://www.thenorthernway.co.uk/page.asp?id=54|archivedate=2007-05-14}}</ref> [[ದಿ ನಾರ್ದರ್ನ್ ವೇ]] ಆರ್ಥಿಕ ಅಭಿವೃದ್ಧಿ ನಿಯೋಗವು ವ್ಯಾಖ್ಯಾನಿಸಿದಂತೆ, ನಗರ ವಲಯ ಪ್ರದೇಶವು ಸ್ವಾಭಾವಿಕ ಆರ್ಥಿಕತೆಯ [[ಉದ್ಯೋಗಕ್ಕಾಗಿ ಪ್ರಯಾಣ ವಲಯ|ಉದ್ಯೋಗಕ್ಕಾಗಿ ಪ್ರಯಾಣ ವಲಯದ]] ಬಹಳಷ್ಟು ಭಾಗವನ್ನು ಒಳಗೊಂಡಿದೆ. ಇದು ಮ್ಯಾಂಚೆಸ್ಟರ್ ಮತ್ತು [[ಸ್ಯಾಲ್ಫರ್ಡ್]] ನಗರಗಳ ಜೊತೆಗೆ, ಪಕ್ಕದಲ್ಲಿರುವ ಪ್ರಧಾನನಗರ ವಿಭಾಗಗಳಾದ [[ಸ್ಟಾಕ್ಪೋರ್ಟ್]], [[ಟೇಂಸೈಡ್]], [[ಟ್ರ್ಯಾಫರ್ಡ್]], [[ಬೊಲ್ಟನ್]], [[ಬರಿ]], [[ಓಲ್ಡ್ಹ್ಯಾಮ್]], [[ರಾಕ್ಡೇಲ್]] ಹಾಗೂ [[ವಿಗ್ಯಾನ್]], ಜೊತೆಗೆ [[ವಾಯುವ್ಯ ಇಂಗ್ಲೆಂಡ್]] ಆಚೆಯಿರುವ [[ಹೈ ಪೀಕ್]], [[ಚೆಷೈರ್ ಪೂರ್ವ]], [[ಚೆಷೈರ್ ಪಶ್ಚಿಮ ಮತ್ತು ಚೆಸ್ಟರ್]] ಹಾಗೂ [[ವಾರಿಂಗ್ಟನ್]] ಸ್ಥಳಗಳನ್ನೂ ಸಹ ಒಳಗೊಂಡಿದೆ.<ref name="City Zone">{{Cite web|url=http://www.thenorthernway.co.uk/downloaddoc.asp?id=276|title=The Manchester City Region Development Programme|page= 5|accessdate=2009-05-05|publisher=[[The Northern Way]]|year=೨೦೦೬|format=PDF|archive-date=2008-12-06|archive-url=https://web.archive.org/web/20081206024033/http://www.thenorthernway.co.uk/downloaddoc.asp?id=276|url-status=dead}}</ref>
[[ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿ|ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿಯ]] ಉದ್ದೇಶಗಳಿಗಾಗಿ, ಮ್ಯಾಂಚೆಸ್ಟರ್ [[ಗ್ರೇಟರ್ ಮ್ಯಾಂಚೆಸ್ಟರ್ ನಗರ ಪ್ರದೇಶ|ಗ್ರೇಟರ್ ಮ್ಯಾಂಚೆಸ್ಟರ್ ನಗರ ಪ್ರದೇಶದಲ್ಲಿ]] ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ. ಇದು ಯುನೈಟೆಡ್ ಕಿಂಗ್ಡಮ್ನಲ್ಲಿ ಮೂರನೆಯ ಅತಿ ಹೆಚ್ಚು ನಗರಕೂಟವಾಗಿದೆ. ಮ್ಯಾಂಚೆಸ್ಟರ್ನಲ್ಲಿ ಹೆಚ್ಚು ಸಾಂದ್ರತೆಯ ನಗರ ವಲಯ ಮತ್ತು ಹೊರವಲಯ ಸ್ಥಳಗಳ ಮಿಶ್ರಣವಿದೆ. ನಗರದಲ್ಲಿ ಸುಮಾರು {{convert|260|ha|acre|0}},<ref>{{cite web|url= http://m2002.thecgf.com/venues/HPK/|title= Heaton Park|accessdate= 2009-07-20|publisher= thecgf.com|archive-date= 2007-08-31|archive-url= https://web.archive.org/web/20070831032941/http://m2002.thecgf.com/venues/HPK/|url-status= dead}}</ref> ಲ್ಲಿರುವ [[ಹೀಟನ್ ಪಾರ್ಕ್]], ಮ್ಯಾಂಚೆಸ್ಟರ್ನ ಅತಿದೊಡ್ಡ ಬಯಲು ಪ್ರದೇಶವಾಗಿದೆ. [[ಚೆಷೈರ್]]ನೊಂದಿಗಿನ ತನ್ನ ದಕ್ಷಿಣ ಗಡಿಯನ್ನು ಹೊರತುಪಡಿಸಿ, ಮ್ಯಾಂಚೆಸ್ಟರ್ ತನ್ನ ಎಲ್ಲಾ ಬದಿಗಳಲ್ಲಿಯೂ ಹಲವು ದೊಡ್ಡ ವಸಾಹತುಗಳಿಗೆ ಹೊಂದಿಕೊಂಡಿದೆ. [[M60]] ಹಾಗೂ [[M56 ಹೆದ್ದಾರಿ|M56 ಹೆದ್ದಾರಿಗಳು]] ಮ್ಯಾಂಚೆಸ್ಟರ್ನ ದಕ್ಷಿಣ ಭಾಗದಲ್ಲಿ ಕ್ರಮವಾಗಿ [[ನಾರ್ತೆಂಡೆನ್]] ಮತ್ತು [[ವಿತೆನ್ಷಾ]] ಮೂಲಕ ಹಾದುಹೋಗುತ್ತವೆ.
ಭಾರೀ ರೈಲುಮಾರ್ಗಗಳು ಎಲ್ಲಾ ದಿಕ್ಕುಗಳಿಂದಲೂ ನಗರಕ್ಕೆ ಪ್ರವೇಶಿಸುತ್ತವೆ.[[ಮ್ಯಾಂಚೆಸ್ಟರ್ ಪಿಕ್ಯಾಡಿಲಿ ನಿಲ್ದಾಣ|ಮ್ಯಾಂಚೆಸ್ಟರ್ ಪಿಕ್ಯಾಡಿಲಿ ನಿಲ್ದಾಣವು]] ಪ್ರಮುಖ ಗಮ್ಯಸ್ಥಾನವಾಗಿದೆ.
[[ಬ್ರಿಟಿಷ್ ದ್ವೀಪಗಳ]] ಬಹಳಷ್ಟು ಭಾಗಗಳಂತೆಯೇ ಮ್ಯಾಂಚೆಸ್ಟರ್ [[ಸಮಶೀತೋಷ್ಣ]] [[ಕಡಲ ಹವಾಗುಣ|ಕಡಲ ಹವಾಗುಣವನ್ನು]] ಹೊಂದಿದೆ. ಇಲ್ಲಿ ತಂಪಾದ ಬೇಸಿಗೆ ಮತ್ತು ಸೌಮ್ಯವಾದ ಚಳಿಗಾಲವಿರುತ್ತದೆ. ವರ್ಷದುದ್ದಕ್ಕೂ ನಿಯಮಿತವಾಗಿ ಆದರೆ ಸಾಮಾನ್ಯವಾಗಿ ಹಗುರ ಮಳೆಯಾಗುತ್ತದೆ. UK ಸರಾಸರಿ ವಾರ್ಷಿಕ ಮಳೆ {{convert|1125.0|mm|in|2}},<ref name="UK weather">{{Cite web|url=http://www.metoffice.gov.uk/climate/uk/averages/19712000/areal/uk.html|title=UK 1971–2000 averages|accessdate=2009-05-05|publisher=[[Met Office]]|year=೨೦೦೧|archive-date=2009-07-05|archive-url=https://web.archive.org/web/20090705140124/http://www.metoffice.gov.uk/climate/uk/averages/19712000/areal/uk.html|url-status=dead}}</ref> ಗೆ ಹೋಲಿಸಿದರೆ, ಮ್ಯಾಂಚೆಸ್ಟರ್ ನಗರದ ಸರಾಸರಿ ವಾರ್ಷಿಕ ಮಳೆಯು {{convert|806.6|mm|in|2}}<ref name="Manchester weather">{{Cite web|url=http://www.metoffice.gov.uk/climate/uk/averages/19712000/sites/manchester_airport.html|title=Manchester Airport 1971–2000 weather averages|accessdate=2009-05-05|publisher=[[Met Office]]|year=೨೦೦೧|archive-date=2003-08-20|archive-url=https://web.archive.org/web/20030820190304/http://www.metoffice.gov.uk/climate/uk/averages/19712000/sites/Manchester_airport.html|url-status=dead}}</ref> ಆಗಿದೆ. UK ಸರಾಸರಿ ೧೫೪.೪ <ref name="UK weather"/> ಗೆ ಹೋಲಿಸಿದರೆ, ಮ್ಯಾಂಚೆಸ್ಟರ್ನಲ್ಲಿ, ವಾರ್ಷಿಕ ಸರಾಸರಿ ೧೪೦.೪ ದಿನಗಳು ಮಳೆಯಾಗುತ್ತದೆ. ಆದರೂ, ಮ್ಯಾಂಚೆಸ್ಟರ್ನ ಆರ್ದ್ರತೆಯು ಇತರೆಡೆಗಿಂತಲು ತುಸು ಹೆಚ್ಚೇ ಇದೆ. ಇದು, ಅಲ್ಲಿ ಆರಂಭವಾದ ಜವಳಿ ಉತ್ಪಾದನಾ ಕ್ಷೇತ್ರವನ್ನು ಅತ್ಯುತ್ತಮಗೊಳಿಸಿದೆ(ನೂಲಿನ ಕಡಿಮೆ ಹರಿಯುವಿಕೆಯೊಂದಿಗೆ) [[ನಗರವಲಯದಲ್ಲಿ ಬೆಚ್ಚಗಿನ ವಾತಾವರಣ|ನಗರವಲಯದಲ್ಲಿ ಬೆಚ್ಚಗಿನ ವಾತಾವರಣದ]] ಪ್ರಭಾವದಿಂದಾಗಿ, ಹಿಮಪಾತಗಳು ಇಲ್ಲಿ ಸಾಮಾನ್ಯವಲ್ಲ. ಆದರೂ, ನಗರದ ಪೂರ್ವ ಮತ್ತು ಉತ್ತರ ಬದಿಯಲ್ಲಿ ಸುತ್ತುವರೆದಿರುವ [[ಪೆನೀನ್]] ಮತ್ತು [[ರೊಸೆನ್ಡೇಲ್ ಫಾರೆಸ್ಟ್]] ಬೆಟ್ಟಗಳಲ್ಲಿ ಹೆಚ್ಚು ಹಿಮಪಾತವಾಗುತ್ತದೆ. ಇದರ ಪರಿಣಾಮವಾಗಿ, ನಗರದಿಂದಾಚೆ ಹೋಗುವ ರಸ್ತೆಗಳು ಹಿಮದ ಕಾರಣ ಮುಚ್ಚಬೇಕಾಗುತ್ತದೆ.<ref name="Snow">{{Cite web|url=http://www.manchestereveningnews.co.uk/news/s/147/147321_roads_chaos_as_snow_sweeps_in.html|title=Roads chaos as snow sweeps in Manchester|accessdate=2009-05-05|publisher=[[Manchester Evening News]]|date=೨೪ February ೨೦೦೫}}</ref> [[ಓಲ್ಡ್ಹ್ಯಾಮ್]] ಮತ್ತು [[ಸ್ಟ್ಯಾಂಡೆಡ್ಜ್]] ಮೂಲಕ ಹಾದುಹೋಗುವ [[A62 ಹೆದ್ದಾರಿ]], [[ಷೆಫೀಲ್ಡ್|ಷೆಫೀಲ್ಡ್ನತ್ತ]] ಹಾದುಹೋಗುವ [[A57]] ([[ಸ್ನೇಕ್ ಪಾಸ್]]),<ref name="Peaks">{{Cite web|url=http://www.highpeak.co.uk/hp/h_snakbd.htm|title=Peak District sightseer's guide – Snake Pass|accessdate=2009-05-05|publisher=High Peak|year=2002|archive-date=2011-01-12|archive-url=https://web.archive.org/web/20110112081929/http://www.highpeak.co.uk/hp/h_snakbd.htm|url-status=dead}}</ref> ಹಾಗೂ [[ಸ್ಯಾಡ್ಲ್ವರ್ತ್ ಮೂರ್]] ಮೂಲಕ ಹಾದುಹೋಗುವ [[M62]] ದಾರಿಗಳು ಗಮನಾರ್ಹವಾಗಿವಾಗಿವೆ.
{{Manchester weatherbox}}
== ಜನಸಂಖ್ಯಾಶಾಸ್ತ್ರ ==
{{See also|Demography of Greater Manchester}}
{| class="wikitable" border="1" id="toc" style="float:right;margin-left:2em;width:40%;font-size:85%" cellspacing="3"
! colspan="4"|'''ಮ್ಯಾಂಚೆಸ್ಟರ್ (ಹೋಲಿಕೆ)''' <ref>{{cite web|url=http://www.manchester.gov.uk/planning/studies/census/keyfacts/|title=2001 Census; Key facts sheets|publisher=manchester.gov.uk|author=United Kingdom Census 2001|date=2007-01-17|accessdate=2007-07-10|archive-date=2006-07-21|archive-url=https://web.archive.org/web/20060721151251/http://www.manchester.gov.uk/planning/studies/census/keyfacts/|url-status=bot: unknown}}</ref><ref>{{cite web|url=http://www.neighbourhood.statistics.gov.uk/dissemination/LeadAreaSearch.do?a=7&i=1001&m=0&enc=1&areaSearchText=manchester&areaSearchType=13&extendedList=false|title=Manchester (Local Authority)|publisher=neighbourhood.statistics.gov.uk|author=United Kingdom Census 2001|year=2001|accessdate=2007-07-10}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
|-
| '''[[UK ಜನಗಣತಿ 2001]]'''
| '''ಮ್ಯಾಂಚೆಸ್ಟರ್'''
| '''[[ಗ್ರೇಟರ್ ಮ್ಯಾಂಚೆಸ್ಟರ್]]'''
| '''ಇಂಗ್ಲೆಂಡ್'''
|-
| ಒಟ್ಟು ಜನಸಂಖ್ಯೆ
| ೪೪೧,೨೦೦
| ೨,೫೪೭,೭೦೦
| ೪೯,೧೩೮,೮೩೧
|-
| ವಿದೇಶೀ ಸಂಜಾತರು
| ೧೫.೦%
| ೭.೨%
| ೯.೨%
|-
| ಬಿಳಿಯರು
| ೮೧.೦%
| ೯೧.೦%
| ೯೧.೦%
|-
| ಏಷ್ಯನ್ನರು
| ೯.೧%
| ೫.೭%
| ೪.೬%
|-
| ಕರಿಯರು
| ೪.೫%
| ೧.೨%
| ೨-೩%
|-
| ೭೫ ವಯಸ್ಸು ಮೀರಿದವರು
| ೬.೪%
| ೭.೦%
| ೭.೫%
|-
| [[ಕ್ರೈಸ್ತ]]
| ೬೨.೪%
| ೭೪%
| ೭೨%
|-
| [[ಮುಸ್ಲಿಂ]]
| ೯.೧%
| ೫.೦%
| ೩.೧%
|}
[[ಚಿತ್ರ:Greater Manchester Demography.png|thumb|right|ಇಸವಿ 1801ರಿಂದ 2001ರ ವರೆಗೆ, ಗ್ರೇಟರ್ ಮ್ಯಾಂಚೆಸ್ಟರ್ ಕೌಂಟಿಯ ನಗರವಿಭಾಗಗಳೊಂದಿಗೆ ಹೋಲಿಸಿದಂತೆ ಮ್ಯಾಂಚೆಸ್ಟರ್ನ ಜನಸಂಖ್ಯೆಯ ಮಾಹಿತಿ.]]
The [[ಯುನೈಟೆಡ್ ಕಿಂಗ್ಡಮ್ ಜನಗಣತಿ 2001]] ಪ್ರಕಾರ, ಮ್ಯಾಂಚೆಸ್ಟರ್ ನಿವಾಸಿಗಳ ಒಟ್ಟು ಜನಸಂಖ್ಯೆಯು ೩೯೨,೮೧೯ ಇತ್ತು. ಇಸವಿ ೧೯೯೧ ಜನಗಣತಿಯ ಸಂಖ್ಯೆಗಿಂತಲೂ ೯.೨%ರಷ್ಟು ಕಡಿಮೆಯಾಗಿದೆ.<ref name="2001 census">{{Cite web|url=http://www.statistics.gov.uk/census2001/profiles/00BN-A.asp|title=Manchester profile of 2001 census|accessdate=2006-10-25|publisher=Office for National Statistics|year=2003|archive-date=2011-08-11|archive-url=https://web.archive.org/web/20110811110429/http://www.statistics.gov.uk/census2001/profiles/00BN-A.asp|url-status=dead}}</ref>
ಸುಮಾರು ೮೩,೦೦೦ ಜನರು ೧೬ಕ್ಕಿಂತಲೂ ಕಡಿಮೆ ವಯಸ್ಸಿನವರಾಗಿದ್ದರು, ೨೮೫,೦೦೦ ಜನರು ೧೬-೭೪ರ ವಯಸ್ಸಿನ ಶ್ರೇಣಿಯಲ್ಲಿದ್ದರು, ಹಾಗೂ ೨೫,೦೦೦ ಜನರು ೭೫ಕ್ಕಿಂತಲೂ ಹೆಚ್ಚಿನ ವಯಸ್ಸಿನವರಾಗಿದ್ದರು.<ref name="2001 census" /> ೨೦೦೧ UK ಜನಗಣತಿಯ ಪ್ರಕಾರ, ಮ್ಯಾಂಚೆಸ್ಟರ್ನ ಜನಸಂಖ್ಯೆಯ ಪೈಕಿ ೭೫.೯%ರಷ್ಟು ತಾವು UKದಲ್ಲಿಯೇ ಜನಿಸಿರುವುದಾಗಿ ಹೇಳಿದ್ದಾರೆ. ಮ್ಯಾಂಚೆಸ್ಟರ್ನ ನಿವಾಸಿಗಳನ್ನು ''ಮ್ಯಾನ್ಕುನಿಯನ್ಸ್'' (ಅಥವಾ ಸಂಕ್ಷಿಪ್ತವಾಗಿ ಮ್ಯಾನ್ಕ್ಸ್) ಎನ್ನಲಾಗುತ್ತದೆ. ಮ್ಯಾಂಚೆಸ್ಟರ್ನಲ್ಲಿ, ಉದ್ಯೋಗದಲ್ಲಿರುವ ಜನಸಂಖ್ಯೆಯ ಪ್ರಮಾಣ UKನಲ್ಲಿಯೇ ಎರಡನೆಯ ಅತಿ ಕನಿಷ್ಠ ಸಂಖ್ಯೆಯಾಗಿದೆ. ಮ್ಯಾಂಚೆಸ್ಟರ್ನ ಅಧಿಕ ನಿರುದ್ಯೋಗ ಅಂಕಿಅಂಶಕ್ಕೆ ಮುಖ್ಯ ಕಾರಣ ಜನಸಂಖ್ಯೆಯ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳಿರುವುದು.<ref name="2001 census" />
ಇಸವಿ ೨೦೦೭ರಲ್ಲಿ ಪ್ರಕಟಿಸಲಾದ ವರದಿಯ ಪ್ರಕಾರ, '೬೦%ರಷ್ಟು ಮ್ಯಾಂಚೆಸ್ಟರ್ ನಿವಾಸಿಗಳು UKಯ ಅತಿ ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ'.<ref name="Fastest Growing City" />
ಇಸವಿ ೨೦೦೬ದ ಅರ್ಧವಾರ್ಷಿಕ ಅಂದಾಜುಗಳ ಪ್ರಕಾರ, ಮ್ಯಾಂಚೆಸ್ಟರ್ನ ಪ್ರಧಾನನಗರ ವಿಭಾಗದಲ್ಲಿನ ಜನಸಂಖ್ಯೆಯು ೪೫೨,೦೦೦ ಅಗಿದ್ದು, [[ವಾಯುವ್ಯ ಇಂಗ್ಲೆಂಡ್]]ನಲ್ಲಿ ಮ್ಯಾಂಚೆಸ್ಟರ್ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ನಗರವಾಗಿದೆ.<ref name="2006 Mid-year estimates">{{Cite web|url=http://www.statistics.gov.uk/statbase/Expodata/Spreadsheets/D9664.xls|title=Mid-year estimates for 2006|accessdate=2007-09-13|publisher=Office of National Statistics|year=2007|format=XLS|archive-date=2011-08-17|archive-url=https://web.archive.org/web/20110817102206/http://www.statistics.gov.uk/statbase/Expodata/Spreadsheets/D9664.xls|url-status=dead}}</ref> ಐತಿಹಾಸಿಕವಾಗಿ, ಮ್ಯಾಂಚೆಸ್ಟರ್ ನಗರದ ಜನಸಂಖ್ಯೆಯು ಕೇವಲ ವಿಕ್ಟೋರಿಯನ್ ಯುಗದಲ್ಲಿ ತೀವ್ರವಾಗಿ ಹೆಚ್ಚಾಗತೊಡಗಿ, ೧೯೩೧ರಲ್ಲಿ ತುತ್ತತುದಿಗೆ ೭೬೬,೩೧೧ ಏರಿತು. ತುತ್ತತುದಿ ತಲುಪಿದ ಬಳಿಕ, ಜನಸಂಖ್ಯೆಯು ತೀವ್ರವಾಗಿ ಕುಸಿಯತೊಡಗಿತು. ಇದಕ್ಕೆ ಉದಾಹರಿಸಿದ ಕಾರಣಗಳು [[ಕೊಳೆಗೇರಿ ತೆರವು]] ಹಾಗೂ [[WWII (ಎರಡನೆಯ ಮಹಾಯುದ್ಧ)|WWII (ಎರಡನೆಯ ಮಹಾಯುದ್ಧ)ನಂತರ]], ಮ್ಯಾಂಚೆಸ್ಟರ್ ನಗರ ಸಭೆಯಿಂದ [[ಹ್ಯಾಟರ್ಸ್ಲೆ]] ಮತ್ತು [[ಲ್ಯಾಂಗ್ಲೆ]] ಮುಂತಾದ [[ಸಾಮಾಜಿಕ ಗೃಹ]][[ಓವರ್ಸ್ಪಿಲ್ ಎಸ್ಟೇಟ್|ಓವರ್ಸ್ಪಿಲ್ ಎಸ್ಟೇಟ್ಗಳ]] ನಿರ್ಮಾಣದ ಹೆಚ್ಚಳ.<ref name="Slums">{{cite journal | last = Shapely | first = Peter | year = 2002–3 | title = The press and the system built developments of inner-city Manchester | journal = Manchester Region History Review | volume = 16 | pages = 30–39 | publisher = Manchester Centre for Regional History | location = Manchester | issn = 0952-4320 | url = http://www.mcrh.mmu.ac.uk/pubs/pdf/mrhr_16_shapely.pdf | format = PDF | accessdate = 2007-11-22|archiveurl=https://web.archive.org/web/20070221173022/http://www.mcrh.mmu.ac.uk/pubs/pdf/mrhr_16_shapely.pdf|archivedate=2007-02-21}}</ref>
ಇತರೆ ದೊಡ್ಡ ನಗರಗಳಂತೆ, ಮ್ಯಾಂಚೆಸ್ಟರ್ ವಾಸಿಗಳು ಧಾರ್ಮಿಕ ವೈವಿಧ್ಯ ಹೊಂದಿದ್ದಾರೆ. UKಯಲ್ಲಿ ಲಂಡನ್ ನಂತರ ಮ್ಯಾಂಚೆಸ್ಟರ್ ಎರಡನೆಯ ಅತಿ ಹೆಚ್ಚು [[ಯಹೂದ್ಯ|ಯಹೂದ್ಯರ]] ಸಂಖ್ಯೆ ಹೊಂದಿದೆ. [[ಗ್ರೇಟರ್ ಮ್ಯಾಂಚೆಸ್ಟರ್]] ಸಹ ಅತಿ ಹೆಚ್ಚು ಮುಸ್ಲಿಮ್ ಜನಸಂಖ್ಯೆಯನ್ನು ಹೊಂದಿದೆ.<ref name="Jewish Population">{{Cite web|url=http://www.somethingjewish.co.uk/regional_jews/manchester/index.htm|title="Second largest"|accessdate=2007-09-14|publisher=Something Jewish|archive-date=2007-08-30|archive-url=https://web.archive.org/web/20070830204112/http://www.somethingjewish.co.uk/regional_jews/manchester/index.htm|url-status=dead}}</ref>
ಇಂಗ್ಲಿಷ್ ರಾಷ್ಟ್ರೀಯ ಸರಾಸರಿಯಾದ ೦.೨೦%ಕ್ಕೆ ಹೋಲಿಸಿದರೆ, ಮ್ಯಾಂಚೆಸ್ಟರ್ ಜನಸಂಖ್ಯೆಯಲ್ಲಿ ಒಂದೇ ಮನೆಯಲ್ಲಿ ವಾಸಿಸುವ ಸಲಿಂಗಕಾಮಿ ಸಂಬಂಧ ಹೊಂದಿದವರು ೦.೪೪% ಇತ್ತು.<ref name="GayPopulation">{{Cite web|url=http://www.neighbourhood.statistics.gov.uk/dissemination/LeadTableView.do?a=3&b=276778&c=manchester&d=13&e=16&g=351271&i=1001x1003x1004&m=0&r=1&s=1195748081500&enc=1&dsFamilyId=201|title=Manchester Neighbourhood Statistics – Same-Sex couples|accessdate=2007-11-22|publisher=Office of National Statistics|year=2001|archive-date=2012-09-12|archive-url=https://web.archive.org/web/20120912184935/http://www.neighbourhood.statistics.gov.uk/dissemination/LeadTableView.do?a=3&b=276778&c=manchester&d=13&e=16&g=351271&i=1001x1003x1004&m=0&r=1&s=1195748081500&enc=1&dsFamilyId=201|url-status=dead}}</ref>
[[ಜಿಲ್ಲಾವಾರು ಜನಾಂಗೀಯ ವೈವಿಧ್ಯ|ಜಿಲ್ಲಾವಾರು ಜನಾಂಗೀಯ ವೈವಿಧ್ಯದಲ್ಲಿ]], ಮ್ಯಾಂಚೆಸ್ಟರ್ ನಗರವು ಗ್ರೇಟರ್ ಮ್ಯಾಂಚೆಸ್ಟರ್ ವಲಯದಲ್ಲಿ ಮೊದಲ ಸ್ಥಾನ ಹಾಗೂ ಇಂಗ್ಲೆಂಡ್ನಲ್ಲಿ ೩೪ನೆಯ ಸ್ಥಾನದಲ್ಲಿದೆ. ಇಸವಿ ೨೦೦೫ರ ಅಂದಾಜಿನ ಪ್ರಕಾರ, ೭೭.೬% ಜನರು '[[ಬಿಳಿಯರು]]' (೭೧.೦% ನಿವಾಸಿಗಳು[[ಬಿಳಿಯ ಬ್ರಿಟಿಷರು]], ೩.೦% [[ಬಿಳಿಯ ಐರಿಷ್]]ರು, ೩.೬% [[ಇತರೆ ಬಿಳಿಯರು]]- ಮಿಶ್ರಿತ ಯುರೋಪಿಯನ್ ಮತ್ತು ಬ್ರಿಟಿಷ್ ಪೂರ್ವಿಕರ ಬಗ್ಗೆ ಮಾಹಿತಿ ತಿಳಿದಿಲ್ಲ, ಸುಮಾರು ೨೫,೦೦೦ಕ್ಕಿಂತಲೂ [[ಇಟಾಲಿಯನ್]] ಮೂಲದ ಮ್ಯಾನ್ಕುನಿಯನ್ನರಿದ್ದಾರೆ. ನಗರದ ಜನಸಂಖ್ಯೆಯಲ್ಲಿ ಇವರದು ೫.೫%ರಷ್ಟು ಪಾಲಿದೆ <ref>[http://news.bbc.co.uk/1/hi/england/manchester/3223776.stm BBC NEWS | ಇಂಗ್ಲೆಂಡ್ | ಮ್ಯಾಂಚೆಸ್ಟರ್ | ಇಟಾಲಿಯನ್ಸ್ ರಿವೋಲ್ಟ್ ಓವರ್ ಚರ್ಚ್ ಕ್ಲೋಸರ್]</ref>). ೩.೨% [[ಮಿಶ್ರಿತ ಜನಾಂಗೀಯತೆ]] (೧.೩% ಮಿಶ್ರಿತ ಬಿಳಿಯ ಮತ್ತು ಕರಿಯ ಕೆರಿಬಿಯನ್ನರು, ೦.೬% ಮಿಶ್ರಿತ ಬಿಳಿ ಮತ್ತು ಕರಿಯ ಆಫ್ರಿಕನ್ನರು, ೦.೭% ಮಿಶ್ರಿತ ಬಿಳಿ ಮತ್ತು ಏಷ್ಯನ್, ೦.೭% ಇತರೆ ಮಿಶ್ರಿತ ಜನಾಂಗೀಯತೆ).
ನಗರದ ಜನಸಂಖ್ಯೆಯಲ್ಲಿ ೧೦.೩%ರಷ್ಟು ದಕ್ಷಿಣ ಏಷ್ಯನ್ ಮೂಲದವರಿದ್ದಾರೆ (೨.೩% [[ಭಾರತೀಯ]], ೫.೮% [[ಪಾಕಿಸ್ತಾನಿ]], ೧.೦% [[ಬಾಂಗ್ಲಾದೇಶಿ]], ೧.೨% [[ಇತರೆ ದಕ್ಷಿಣ]]).
೫.೨% [[ಕರಿಯರು]] (೨.೦% [[ಕರಿಯ ಕೆರಬ್ಬಿಯನ್ನರು]], ೨.೭% [[ಕರಿಯ ಆಫ್ರಿಕನ್ನರು]] ಹಾಗೂ ೦.೫% [[ಇತರ ಕರಿಯರು]]).
ನಗರದ ಜನಸಂಖ್ಯೆಯಲ್ಲಿ ೨.೩% [[ಚೀನೀ ಮೂಲದವರು]] ಹಾಗೂ ೧.೪% [[ಇತರೆ ಜನಾಂಗ|ಇತರೆ ಜನಾಂಗದವರಿದ್ದಾರೆ]].<ref name="Ethnic groups">{{Cite web|url=http://neighbourhood.statistics.gov.uk/dissemination/LeadTableView.do?a=3&b=276778&c=Manchester&d=13&e=13&g=351271&i=1001x1003x1004&m=0&r=1&s=1198673035015&enc=1&dsFamilyId=1812|title=Manchester ethnic grouping percentages|accessdate=2007-12-26|publisher=Office of National Statistics|year=2005|archive-date=2008-12-06|archive-url=https://web.archive.org/web/20081206062805/http://neighbourhood.statistics.gov.uk/dissemination/LeadTableView.do?a=3&b=276778&c=Manchester&d=13&e=13&g=351271&i=1001x1003x1004&m=0&r=1&s=1198673035015&enc=1&dsFamilyId=1812|url-status=dead}}</ref> [[ಮಾಸ್ ಸೈಡ್]], [[ಲಾಂಗ್ಸೈಟ್]], [[ಚೀಟ್ಹ್ಯಾಮ್ ಹಿಲ್]], [[ರಷ್ಹೋಮ್]] ಕ್ಷೇತ್ರಗಳು ಜನಾಂಗೀಯ ಅಲ್ಪಸಂಖ್ಯಾತರ ಕೇಂದ್ರಗಳು ಎಂದು ಕಿಡ್ ಗುರುತಿಸಿದ್ದಾರೆ.<ref name="Kidd" />
[[ಸೇಂಟ್ ಪ್ಯಾಟ್ರಿಕ್ ಡೇ]] ಮೆರವಣಿಗೆ ಸೇರಿದಂತೆ, ಮ್ಯಾಂಚೆಸ್ಟರ್ನಲ್ಲಿ ನಡೆಯುವ ಐರಿಷ್ ಉತ್ಸವವು ಯುರೋಪ್ನಲ್ಲಿ ನಡೆಯುವ ಅತಿ ದೊಡ್ಡ ಉತ್ಸವಗಳಲ್ಲಿ ಒಂದಾಗಿದೆ.<ref name="Irish festival">{{Cite web|url=http://www.manchesteririshfestival.co.uk|title=The Manchester Irish Festival: the largest in the UK|accessdate=2007-06-28|publisher=Manchester Irish Festival Website|year=2007}}</ref> ನಗರದಲ್ಲಿ,ಓರಿಯಂಟಲ್ ಉಪಾಹಾರಮಂದಿರಗಳು ಮತ್ತು ಚೀನೀ ಪ್ರಧಾನಮಾರುಕಟ್ಟೆಗಳ ಗಣನೀಯ ಸಂಖ್ಯೆಗಳೊಂದಿಗೆ ಸುಸ್ಥಾಪಿತ [[ಚೈನಾಟೌನ್]] ಸಹ ಇದೆ. ಈ ಪ್ರದೇಶವು ಸ್ಥಳೀಯ ವಿಶ್ವವಿದ್ಯಾನಿಲಯಗಳಿಗೆ ಸೇರುವ ಚೀನೀ ವಿದ್ಯಾರ್ಥಿಗಳನ್ನು ಅತಿ ಹೆಚ್ಚು ಸಂಖ್ಯೆಗಳಲ್ಲಿ ಆಕರ್ಷಿಸುತ್ತದೆ.<ref name="Chinatown">{{Cite web|url=http://www.bbc.co.uk/manchester/chinatown/2004/01/history.shtml|title=History of Manchester's Chinatown|accessdate=2007-11-22|publisher=[[bbc.co.uk]]|year=೨೦೦೪|work=[[BBC]]}}</ref>
ಇಸವಿ ೨೦೦೫ಕ್ಕಾಗಿ ನೀಡಲಾದ ಜನಸಂಖ್ಯಾ ಅಂದಾಜುಗಳ ಪ್ರಕಾರ, ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಮ್ಯಾಂಚೆಸ್ಟರ್ನಲ್ಲಿ ಅಪರಾಧ ಘಟನೆಗಳ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ತೀವ್ರವಾದ [[ನಗರೀಕರಣ|ನಗರೀಕರಣದ]] ಪರಿಣಾಮವಾಗಿ, ಮ್ಯಾಂಚೆಸ್ಟರ್ನ ಕೆಲವು ಭಾಗಗಳ ಮೇಲೆ ಕೆಟ್ಟ ಪ್ರಭಾವ ಬೀರಿತು. ಇದರ ಪರಿಣಾಮವಾಗಿ, ನಗರದ [[ಮಾಸ್ ಸೈಡ್]] ಮತ್ತು [[ವೈಥೆನ್ಷಾ]] ಕ್ಷೇತ್ರಗಳಲ್ಲಿ ಅಪರಾಧದ ಪ್ರಮಾಣಗಳು ಅತಿ ಹೆಚ್ಚಿನ ಮಟ್ಟದಲ್ಲಿದ್ದವು. ಜನಸಂಖ್ಯೆಯ ಪ್ರತಿ ೧,೦೦೦ ಜನರಲ್ಲಿ, ವಾಹನ-ಸಂಬಂಧಿತ ಅಪರಾಧಗಳು ಹಾಗೂ ವಾಹನ ಕಳುವಿನ ವಿಚಾರದಲ್ಲಿ, ಇಂಗ್ಲಿಷ್ ರಾಷ್ಟ್ರೀಯ ಸರಾಸರಿಯು ಕ್ರಮವಾಗಿ ೭.೬ ಮತ್ತು ೨.೯ಕ್ಕೆ ಹೋಲಿಸಿದರೆ, ಮ್ಯಾಂಚೆಸ್ಟರ್ನಲ್ಲಿ ಕ್ರಮವಾಗಿ ೨೫.೫ ಮತ್ತು ೮.೯ ಆಗಿತ್ತು.<ref name="CrimeFigs">{{Cite web|url=http://www.upmystreet.com/local/police-crime/figures/l/Manchester.html|title=Local Area Crime Figures for Manchester|accessdate=2007-11-22|publisher=UpMyStreet,co.uk|year=2006/7|archive-date=2007-11-25|archive-url=https://web.archive.org/web/20071125172649/http://www.upmystreet.com/local/police-crime/figures/l/Manchester.html|url-status=dead}}</ref> ಲೈಂಗಿಕ ಅಪರಾಧಗಳ ಸರಾಸರಿ ೦.೯ಕ್ಕೆ ಹೋಲಿಸಿದರೆ ನಗರದಲ್ಲಿ ಸರಾಸರಿ ೧.೯ ಆಗಿತ್ತು.<ref name="CrimeFigs"/> ಇನ್ನೊಬ್ಬ ವ್ಯಕ್ತಿ ವಿರುದ್ಧ ಹಿಂಸಾಪರಾಧದ ರಾಷ್ಟ್ರೀಯ ಸರಾಸರಿ ೧೬.೭ಕ್ಕೆ ಹೋಲಿಸಿದರೆ ಮ್ಯಾಂಚೆಸ್ಟರ್ ನಗರದ ಸರಾಸರಿ ೩೨.೭ ಆಗಿತ್ತು.<ref name="CrimeFigs"/> ಅಪರಾಧದ ಸಂಖ್ಯಾಶಾಸ್ತ್ರದ ಅಂಕಿಅಂಶಗಳನ್ನು ೨೦೦೬-೦೭ ಹಣಕಾಸು ವರ್ಷದಲ್ಲಿ ದಾಖಲಿಸಲಾಯಿತು.<ref name="CrimeFigsAbout">{{Cite web|url=http://www.upmystreet.com/local/police-crime/learn-more/l/Manchester.html|title=Local Area Crime Figures for Manchester – Learn More section|accessdate=2007-11-22|publisher=UpMyStreet,co.uk|year=2006/7|archive-date=2007-10-28|archive-url=https://web.archive.org/web/20071028143906/http://www.upmystreet.com/local/police-crime/learn-more/l/Manchester.html|url-status=dead}}</ref>
ಸ್ಥಳೀಯ ಸರ್ಕಾರೀ ಜಿಲ್ಲೆಗಳಿಗೆ ಹೊಂದಿಸಲಾದ ಕಾರ್ಯಶೀಲ ನಗರ ವಲಯದ [[ಯುರೋಸ್ಟ್ಯಾಟ್]] ಮಾನದಂಡವಾದ ಮ್ಯಾಂಚೆಸ್ಟರ್ [[ವಿಶಾಲ ನಗರ ವಲಯ|ವಿಶಾಲ ನಗರ ವಲಯದಲ್ಲಿ]] ಜನಸಂಖ್ಯೆಯು ೨೦೦೪ರಲ್ಲಿ ೨,೫೩೯,೧೦೦ ಆಗಿತ್ತು.<ref name="urbanaudit">{{cite web|url=http://www.urbanaudit.org/CityProfiles.aspx?CityCode=UK008C&CountryCode=UK|title=Urban Audit - City Profiles: Manchester|publisher=Urban Audit|accessdate=2008-10-05|archive-date=2013-01-12|archive-url=https://web.archive.org/web/20130112222759/http://www.urbanaudit.org/CityProfiles.aspx?CityCode=UK008C&CountryCode=UK|url-status=dead}}</ref> ಮ್ಯಾಂಚೆಸ್ಟರ್ನ ಜೊತೆಗೆ, LUZ [[ಗ್ರೇಟರ್ ಮ್ಯಾಂಚೆಸ್ಟರ್]] ಕೌಂಟಿಯ ಉಳಿದ ಭಾಗವನ್ನು ಸಹ ಸೇರಿಸಿಕೊಂಡಿದೆ.<ref>{{cite web|url=http://www.london.gov.uk/mayor/economic_unit/docs/wp13_towards_a_common_standard.pdf|title=Towards a Common Standard|page=29|format=PDF|publisher=Greater London Authority|accessdate=2008-10-05|archive-date=2008-12-17|archive-url=https://web.archive.org/web/20081217143002/http://www.london.gov.uk/mayor/economic_unit/docs/wp13_towards_a_common_standard.pdf|url-status=dead}}</ref> ಯುನೈಟೆಡ್ ಕಿಂಗ್ಡಮ್ನಲ್ಲಿ [[ಲಂಡನ್]] ನಂತರ ಮ್ಯಾಂಚೆಸ್ಟರ್ LUZ ಎರಡನೆಯ ಅತಿ ದೊಡ್ಡ ವಲಯವಾಗಿದೆ.
== ಆರ್ಥಿಕ ವ್ಯವಸ್ಧೆ ==
{{Main|Economy of Manchester}}
{{See also|List of companies based in Greater Manchester}}
thumb|right|ಬೀಟ್ಹ್ಯಾಮ್ ಗೋಪುರದಿಂದ ಕಂಡಂತೆ ಮ್ಯಾಂಚೆಸ್ಟರ್ ನಗರ ಕೇಂದ್ರದ ಇರುಳಿನ ದೃಶ್ಯ.
[[ಚಿತ್ರ:Chinatown arch manchester.jpg|right|thumb|ಚೀನಾಟೌನ್ನ ಕಮಾನಿನ ಪ್ರವೇಶದ್ವಾರ.]]
ಹತ್ತೊಂಬತ್ತನೆಯ ಶತಮಾನದ ಕೈಗಾರಿಕಾ ಕ್ರಾಂತಿಯಲ್ಲಿ ಮ್ಯಾಂಚೆಸ್ಟರ್ ಮುಂಚೂಣಿಯಲ್ಲಿತ್ತು. ಇದು ಉತ್ಪಾದನೆಯ ಪ್ರಮುಖ ಕೇಂದ್ರವಾಗಿತ್ತು. ನಗರದ ಆರ್ಥಿಕ ವ್ಯವಸ್ಥೆಯು ಇಂದು ಸೇವಾ-ಆಧಾರಿತವಾಗಿದೆ, ಹಾಗೂ, ೨೦೦೭ರಲ್ಲಿ, UKಯಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ನಗರವಾಗಿತ್ತು. ಒಳಬರುವ ಹೂಡಿಕೆಯು ರಾಜಧಾನಿಯ ನಂತರ ಎರಡನೇ ಸ್ಥಾನ ಪಡೆದಿತ್ತು.<ref name="SoTC"/> ''ಮ್ಯಾಂಚೆಸ್ಟರ್ನ ಸ್ಟೇಟ್ ಆಫ್ ದಿ ಸಿಟಿ ರಿಪೋರ್ಟ್'' ಹಣಕಾಸಿನ ಮತ್ತು ವೃತ್ತಿಪರ ಸೇವೆಗಳು, ಜೀವವಿಜ್ಞಾನ ಕೈಗಾರಿಕೆಗಳು, ಸೃಜನಾತ್ಮಕ, ಸಾಂಸ್ಕೃತಿಕ ಮತ್ತು ಮಾಧ್ಯಮ, ಉತ್ಪಾದನೆ ಮತ್ತು ಸಂವಹನ ಕ್ಷೇತ್ರಗಳನ್ನು ಪ್ರಮುಖ ಚಟುವಟಿಕೆಗಳ ಕ್ಷೇತ್ರಗಳು ಎಂದು ಗುರುತಿಸುತ್ತದೆ.<ref name="SoTC">{{cite web | url = http://www.manchesterpartnership.org.uk/includes/uploads/File/State%20of%20the%20City%2017%20OCT%20FINAL.pdf | title = Manchester’s State of the City Report 2006/2007 | accessdate = 2007-10-21 | author = Manchester Partnership | coauthors = Manchester City Council; KPMG | year = 2007 | month = September | format = PDF|archiveurl=https://web.archive.org/web/20071028165252/http://www.manchesterpartnership.org.uk/includes/uploads/File/State%20of%20the%20City%2017%20OCT%20FINAL.pdf|archivedate=2007-10-28}}</ref> ಇಸವಿ ೨೦೦೭ ಮತ್ತು ೨೦೦೮ರಲ್ಲಿ ನಗರವು,UKಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಎರಡನೆಯ ಅತ್ಯುತ್ತಮ ನಗರ ಎಂಬ ಶ್ರೇಯವನ್ನು ಸಾಧಿಸಿತು.<ref>{{cite web |url = http://www.cushwake.com/cwglobal/jsp/newsDetail.jsp?repId=c19200007p&LanId=EN&LocId=GLOBAL |title = London, Manchester and Birmingham lead UK survey of business friendly cities |accessdate = 2008-09-24 |date = 24 September 2008 |publisher = [[Cushman & Wakefield]] |work = Cushman & Wakefield web pages |archive-date = 2008-11-27 |archive-url = https://web.archive.org/web/20081127031929/http://www.cushwake.com/cwglobal/jsp/newsDetail.jsp?repId=c19200007p&LanId=EN&LocId=GLOBAL |url-status = dead }}</ref> ಇಸವಿ ೨೦೦೯ರಲ್ಲಿ UKಯಲ್ಲಿ ಮೂರನೆಯ ಸ್ಥಾನ ಹಾಗೂ ಯುರೋಪ್ನಲ್ಲಿ ಹದಿನಾರನೆಯ ಅತ್ಯುತ್ತಮ ನಗರ ಎನಿಸಿತು.<ref>{{cite web|url = http://www.cushwake.com/cwglobal/jsp/newsDetail.jsp?repId=c27300017p&LanId=EN&LocId=GLOBAL
|title=European Cities Monitor: Warsaw named as favoured city for expansion; London leads again|accessdate = 2009-10-07|date = 6 October 2008 |publisher=[[Cushman & Wakefield]]}}</ref>
ಲಂಡನ್ ಹೊರತುಪಡಿಸಿ, UKಯ ಅತಿ ದೊಡ್ಡ ಕಚೇರಿ ಮಾರುಕಟ್ಟೆಯು ಮ್ಯಾಂಚೆಸ್ಟರ್ನಲ್ಲಿದೆ.<ref name="Manc CGF"/> ಗ್ರೇಟರ್ ಮ್ಯಾಂಚೆಸ್ಟರ್ UK [[GVA|GVAದ]] £೪೨ ಶತಕೋಟಿ ಮೌಲ್ಯದಷ್ಟು ಪ್ರತಿನಿಧಿಸುತ್ತದೆ. ಇದು ಯಾವುದೇ ಇಂಗ್ಲಿಷ್ ಕೌಂಟಿಯಲ್ಲಿ ಮೂರನೆಯ ಅತಿ ದೊಡ್ಡ ಮೊತ್ತವಾಗಿದೆ ಹಾಗೂ [[ವೇಲ್ಸ್]] ಅಥವಾ [[ಈಶಾನ್ಯ ಇಂಗ್ಲೆಂಡ್]]ಗಿಂತ ಹೆಚ್ಚಾಗಿದೆ.<ref name="RegionalGVA">{{Cite web|url=http://www.statistics.gov.uk/downloads/theme_economy/Regional_GVA_December_2007.pdf|title=Regional GVA December 2007 (Page 7)|accessdate=2008-03-29|publisher=[[Office for National Statistics]]|year=೨೦೦೭|format=PDF|archiveurl=http://webarchive.nationalarchives.gov.uk/20080108083547/http://www.statistics.gov.uk/downloads/theme_economy/Regional_GVA_December_2007.pdf|archivedate=2008-01-08}}</ref>
ಸ್ಥಳೀಯ, ವಲಯವಾರು ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಸೇವೆ ಸಲ್ಲಿಸುವ ವಾಣಿಜ್ಯ ವಹಿವಾಟುಗಳಿಗೆ ಮ್ಯಾಂಚೆಸ್ಟರ್ ಕೇಂದ್ರಬಿಂದುವಾಗಿದೆ.<ref name="Manc CGF"/> ಇದು ಯುರೋಪ್ನ ಅತಿ ದೊಡ್ಡ ಹಣಕಾಸಿನ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ೧೫,೦೦೦ಕ್ಕಿಂತಲೂ ಹೆಚ್ಚು ಜನರು ಬ್ಯಾಂಕಿಂಗ್, ಹಣಕಾಸು ಹಾಗೂ ೬೦ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ.<ref name="Manc CGF"/> ವಿಶ್ವದಲ್ಲಿಯೇ ಅತಿ ದೊಡ್ಡ ಗ್ರಾಹಕ-ಸ್ವಾಮ್ಯದ ವಾಣಿಜ್ಯವಹಿವಾಟು [[ದಿ ಕೊ-ಆಪರೇಟಿವ್ ಗ್ರೂಪ್]] ಮ್ಯಾಂಚೆಸ್ಟರ್ನಲ್ಲಿ ನೆಲೆಹೊಂದಿದ್ದು,ನಗರದ ಅತಿ ದೊಡ್ಡ ಉದ್ಯಮಿಗಳಲ್ಲಿ ಒಂದಾಗಿದೆ. ಕಾನೂನು ಕ್ಷೇತ್ರ, ಲೆಕ್ಕನಿರ್ವಹಣೆ, ವ್ಯವಸ್ಥಾಪನಾ ಸಲಹೆ ಹಾಗೂ ಇತರೆ ವೃತ್ತಿಪರ ಹಾಗೂ ತಾಂತ್ರಿಕ ಸೇವೆಗಳು ಮ್ಯಾಂಚೆಸ್ಟರ್ನಲ್ಲಿವೆ.<ref name="Manc CGF"/>
ಮ್ಯಾಂಚೆಸ್ಟರ್ನ [[ಕೇಂದ್ರೀಯ ವಾಣಿಜ್ಯ ಜಿಲ್ಲೆ]] [[ನಗರದ ಮಧ್ಯಭಾಗ]] ಹಾಗೂ ಪಿಕ್ಯಾಡಿಲಿಯ ಪಕ್ಕದಲ್ಲಿದೆ. ಮಾಸ್ಲೆ ಬೀದಿ, ಡೀನ್ಸ್ಗೇಟ್, ಕಿಂಗ್ಸ್ ಬೀದಿ ಮತ್ತು ಪಿಕ್ಯಾಡಿಲಿಗೆ ಗಮನಹರಿಸಿದೆ. [[ಸ್ಪಿನಿಂಗ್ ಫೀಲ್ಡ್ಸ್]] ಎಂಬುದು £೧.೫ ಶತಕೋಟಿ ಮೌಲ್ಯದ ಬಹು-ಉಪಯೋಗಿ ಅಭಿವೃದ್ಧಿ ಯೋಜನೆಯಾಗಿದ್ದು, ಇದು ವಾಣಿಜ್ಯ ಜಿಲ್ಲೆಯನ್ನು ಡೀನ್ಸ್ಗೇಟ್ನ ಪಶ್ಚಿಮಕ್ಕೆ ವಿಸ್ತರಿಸುತ್ತಿದೆ.
ಈ ಕ್ಷೇತ್ರದಲ್ಲಿ ಕಾರ್ಯಾಲಯ, ಚಿಲ್ಲರೆ ವ್ಯಾಪಾರ, ಊಟೋಪಚಾರ ಸೇವೆ ಸೌಲಭ್ಯ ಮತ್ತು ಕ್ರೀಡಾ ಅಂಕಣಗಳನ್ನು ಸ್ಥಾಪಿಸುವುದಕ್ಕೆ ವಿನ್ಯಾಸಗೊಳಿಸಲಾಗಿದೆ. ಹಲವು ಪ್ರತಿಷ್ಠಿತ ಉದ್ದಿಮೆಗಳು ಇಲ್ಲಿ ಬಾಡಿಗೆಗಿವೆ; ಜೊತೆಗೆ, ಒಂದು [[ನಾಗರಿಕ ನ್ಯಾಯ ಕೇಂದ್ರ|ನಾಗರಿಕ ನ್ಯಾಯ ಕೇಂದ್ರವೂ]] ಸಹ ಅಕ್ಟೋಬರ್ ೨೦೦೭ರಿಂದ ಕಾರ್ಯಕಲಾಪಗಳನ್ನು ನಡೆಸುತ್ತಿದೆ.<ref>{{cite news | first = Tom | last = Calverley | title = Landmark court opens | url = http://www.manchestereveningnews.co.uk/news/s/1021575_landmark_court_opens | work = [[Manchester Evening News]] | publisher = M.E.N media | date = ೨೫ October ೨೦೦೭ | accessdate = ೨೦೦೭-೧೧-೦೧ }}<br />• {{cite news | first = Chris | last = Barry | title = City's 5-star rebirth | url = http://www.manchestereveningnews.co.uk/news/s/1019502_citys_5star_rebirth | work = [[Manchester Evening News]] | publisher = M.E.N media | date = ೧೨ October ೨೦೦೭ | accessdate = ೨೦೦೭-೧೧-೦೧ }}<br />• {{cite web | url = http://www.spinningfields-manchester.com/ | title = Spinningfields | accessdate = 2007-11-01 | year = 2005 | publisher = Allied London | archive-date = 2007-11-12 | archive-url = https://web.archive.org/web/20071112041259/http://www.spinningfields-manchester.com/ | url-status = dead }}</ref>
ಮ್ಯಾಂಚೆಸ್ಟರ್ [[ವಾಯುವ್ಯ ಇಂಗ್ಲೆಂಡ್]]ಗಾಗಿ ವಾಣಿಜ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರಬಿಂದುವಾಗಿದೆ.<ref name="Manc CGF">{{cite web|url=http://m2002.thecgf.com/Manchester/|format=http|title=Manchester host city; All about Manchester|author=Anon|publisher=m2002.thecgf.com|year=2002|accessdate=2007-11-08|archive-date=2007-11-06|archive-url=https://web.archive.org/web/20071106101646/http://m2002.thecgf.com/Manchester/|url-status=dead}}</ref> ಮಾರಾಟ ಪ್ರಮಾಣದ ವಿಚಾರದಲ್ಲಿ, ಇದು UKದಲ್ಲಿಯೇ ಮೂರನೆಯ ಅಥವಾ ನಾಲ್ಕನೆಯ ಅತಿ ದೊಡ್ಡ ಮಾರಾಟದ ಕ್ಷೇತ್ರವಾಗಿದೆ.<ref>{{cite web | url = http://www.bbc.co.uk/manchester/lifeinmanchester/shopping.shtml | title = Life in Manchester - Shopping | accessdate = 2007-10-12 | date = 15 December 2004 | work = bbc.co.uk | publisher = BBC }}<br />•{{cite news | first = Beverley | last = Fearis | title = Shopping: Spend, spend, spend <!-- and a lot more ... --> | work = Guardian Magazine Supplement | publisher = The Guardian | date = 29 September 2007 | accessdate = 2007-10-12 | quote = When it comes to shopping for fashion, Manchester is hard to beat. Rub shoulders with the Wags in the designer stores of Exchange Square and New Cathedral Street ...}}<br />•{{cite web | url = http://www.caci.co.uk/188.aspx | title = Credit crunch resistant retail centres unveiled | accessdate = 2009-05-04 | work = CACI web pages | publisher = CACI Limited | year = 2008 | month = April | archive-date = 2009-01-06 | archive-url = https://web.archive.org/web/20090106175807/http://www.caci.co.uk/188.aspx | url-status = dead }}<br />•{{cite press release | title = Experian publishes the definitive 2007 retail ranking | publisher = Experian | date = 28 September 2007 | url = http://press.experian.com/documents/showdoc.cfm?doc=2822 | accessdate = 2007-10-12 | archive-date = 2007-11-11 | archive-url = https://web.archive.org/web/20071111034324/http://press.experian.com/documents/showdoc.cfm?doc=2822 | url-status = dead }}</ref> ನಗರ ಕೇಂದ್ರದ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಸರಪಳಿ ಅಂಗಡಿಗಳಿಂದ ಹಿಡಿದು ದೊಡ್ಡ ಪ್ರಮಾಣದ ನಾಜೂಕು ವಸ್ತುಗಳ ಅಂಗಡಿಗಳ ವರೆಗೂ ವಿವಿಧ ಅಂಗಡಿಗಳಿವೆ. ಇವುಗಳಲ್ಲಿ [[ವಿವಿಯೆನ್ ವೆಸ್ಟ್ವುಡ್]], [[ಎಂಪೊರಿಯೊ ಅರ್ಮಾನಿ]], [[DKNY]], [[ಹಾರ್ವೆ ನಿಕೊಲ್ಸ್]], [[ಚಾನೆಲ್]] ಹಾಗೂ [[ಹರ್ಮೆಸ್]] ಅಂಗಡಿಗಳು ಸೇರಿವೆ. UKಯ ನಗರವಲಯದ ಅತಿ ದೊಡ್ಡ ವ್ಯಾಪಾರ ಮಳಿಗೆ [[ಮ್ಯಾಂಚೆಸ್ಟರ್ ಅರ್ನ್ಡೇಲ್]] ಸೇರಿದಂತೆ, ನಗರದಲ್ಲಿ ಇಂದು ಹಲವು ವ್ಯಾಪಾರಿ ಮಳಿಗೆಗಳಿವೆ.<ref name="Arndale"/>
== ಹೆಗ್ಗುರುತುಗಳು ==
{{Main|Architecture of Manchester}}
{{See also|List of tallest buildings and structures in Manchester|List of streets in Manchester}}
[[ಚಿತ್ರ:Beetham Tower Northern.jpg|thumb|right|ಡೀನ್ಸ್ಗೇಟ್ನಲ್ಲಿರುವ ಬೀಟ್ಹ್ಯಾಮ್ ಗೋಪುರ. ಪ್ರಸಕ್ತ ಇದು ಮ್ಯಾಂಚೆಸ್ಟರ್ನ ಅತಿ ಎತ್ತರದ ಕಟ್ಟಡ ಹಾಗೂ ಇಂಗ್ಲೆಂಡ್ನ ಅತಿ ಎತ್ತರದ ವಾಸಗೃಹಗಳಿರುವ ಗೋಪುರವಾಗಿದೆ.]]
ಮ್ಯಾಂಚೆಸ್ಟರ್ನ ಕಟ್ಟಡಗಳು [[ವಿಕ್ಟೋರಿಯನ್]] ಶೈಲಿಯಿಂದ ಹಿಡಿದು [[ಸಮಕಾಲೀನ ವಾಸ್ತುಶೈಲಿ|ಸಮಕಾಲೀನ ವಾಸ್ತುಶೈಲಿಯ]] ವರೆಗೂ, ವಿವಿಧ ರೀತಿಯ ವಾಸ್ತು ಶೈಲಿಗಳನ್ನು ನಿರೂಪಿಸುತ್ತವೆ.
ನಗರದ ಬಹಳಷ್ಟು ಕಟ್ಟಡಗಳಲ್ಲಿ [[ಕೆಂಪು ಇಟ್ಟಿಗೆ|ಕೆಂಪು ಇಟ್ಟಿಗೆಗಳನ್ನು]] ವ್ಯಾಪಕವಾಗಿ ಬಳಸಲಾಗಿದೆ. ನಗರದ ವಾಸ್ತುಶೈಲಿಯ ಬಹಳಷ್ಟು ಭಾಗವು ಅದು ವಿಶ್ವದಲ್ಲಿ ಹತ್ತಿ ವಹಿವಾಟಿನ ಜಾಗತಿಕ ಕೇಂದ್ರವಾಗಿದ್ದ ದಿನಗಳಿಗೆ ಕಿವಿಗೊಡುತ್ತವೆ.<ref name="Hartwell" /> ನಗರ ಕೇಂದ್ರದಾಚೆ, ಹಿಂದಿನ ಕಾಲದ [[ಹತ್ತಿ ಗಿರಣಿ|ಹತ್ತಿ ಗಿರಣಿಗಳು]] ಹೆಚ್ಚಿನ ಸಂಖ್ಯೆಯಲ್ಲಿವೆ. ಇವುಗಳಲ್ಲಿ ಕೆಲವು ಮುಚ್ಚಿದ ನಂತರವೂ ಅಕ್ಷರಶಃ ಹಾಗೆಯೇ ಉಳಿದಿವೆ; ಇನ್ನು ಹಲವನ್ನು ವಸತಿ ಕಟ್ಟಡಗಳು ಮತ್ತು ಕಾರ್ಯಾಲಯಗಳನ್ನು ಸ್ಥಾಪಿಸಲು ಮರುಪರಿವರ್ತನೆ ಮಾಡಲಾಗಿವೆ. [[ಆಲ್ಬರ್ಟ್ ಸ್ಕ್ವೇರ್|ಆಲ್ಬರ್ಟ್ ಸ್ಕ್ವೇರ್ನಲ್ಲಿರುವ]] [[ಮ್ಯಾಂಚೆಸ್ಟರ್ ಪುರ ಭವನ|ಮ್ಯಾಂಚೆಸ್ಟರ್ ಪುರ ಭವನವನ್ನು]] [[ಗೋಥಿಕ್ ರಿವೈವಲ್]] ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಇಂಗ್ಲೆಂಡಿನ ಅತ್ಯಂತ ಪ್ರಮುಖ ವಿಕ್ಟೋರಿಯನ್ ಕಟ್ಟಡಗಳ ಪೈಕಿ ಒಂದಾಗಿದೆ.<ref>ರಾಬಿನ್ಸನ್ (೧೯೮೬), ''ದಿ ಆರ್ಕಿಟೆಕ್ಚರ್ ಆಫ್ ನಾರ್ದರ್ನ್ ಇಂಗ್ಲೆಂಡ್'' , ಪಿ. ೧೫೩</ref> [[ವೆಸ್ಟ್ಮಿಂಸ್ಟರ್ ಅರಮನೆ|ವೆಸ್ಟ್ಮಿಂಸ್ಟರ್ ಅರಮನೆಯಲ್ಲಿ]] ಚಲನಚಿತ್ರ ಚಿತ್ರೀಕರಣಕ್ಕಾಗಿ ಯಾವುದೇ ಅನುಮತಿ ನೀಡದಿರುವ ಕಾರಣ, ಬದಲೀ ವ್ಯವಸ್ಥೆಯಾಗಿ, ಈ ಪುರಭವನದಲ್ಲಿ ಚಿತ್ರೀಕರಣ ನಡೆಸುವುದುಂಟು.<ref>{{cite web|url = http://www.manchester.gov.uk/townhall/documents/filmcharter.pdf|title = Film Location Charter|accessdate = 2007-11-12|date = 8 September 2003|format = PDF|publisher = [[Manchester City Council]]|archive-date = 2006-12-10|archive-url = https://web.archive.org/web/20061210094514/http://www.manchester.gov.uk/townhall/documents/filmcharter.pdf|url-status = bot: unknown}}<br />•{{cite web|url = http://www.manchester.gov.uk/townhall/venues/filming.htm|archiveurl = https://web.archive.org/web/20070424185615/http://www.manchester.gov.uk/townhall/venues/filming.htm|archivedate = 2007-04-24|title = Filming at Manchester Town Hall|accessdate = 2007-11-12|date = 17 October 2006|work = Manchester City Council web pages|publisher = Manchester City Council}}</ref> ೧೯೬೦ರ ಹಾಗೂ ೧೯೭೦ರ ದಶಕಗಳಲ್ಲಿ ನಿರ್ಮಿಸಲಾದ ಹಲವು [[ಗಗನಚುಂಬಿ ಕಟ್ಟಡಗಳು]] ಮ್ಯಾಂಚೆಸ್ಟರ್ನಲ್ಲಿವೆ. ಇವುಗಳಲ್ಲಿ [[ಮ್ಯಾಂಚೆಸ್ಟರ್ ವಿಕ್ಟೋರಿಯಾ ನಿಲ್ದಾಣ|ಮ್ಯಾಂಚೆಸ್ಟರ್ ವಿಕ್ಟೋರಿಯಾ ನಿಲ್ದಾಣದ]] ಬಳಿಯಿರುವ [[CIS ಗೋಪುರವು]] ೨೦೦೬ರಲ್ಲಿ [[ಬೀಟ್ಹ್ಯಾಮ್ ಗೋಪುರ|ಬೀಟ್ಹ್ಯಾಮ್ ಗೋಪುರನಿರ್ಮಾಣ]] ಮುಗಿಸುವ ತನಕ ಅತಿ ಎತ್ತರದ ಗೋಪುರವೆಂಬ ಹೆಗ್ಗಳಿಕೆ ಪಡೆದಿತ್ತು. ಇತ್ತೀಚೆಗಿನ ದಿನಗಳಲ್ಲಿ, [[ಹಿಲ್ಟನ್ ಹೋಟೆಲ್]] ಎಂಬ ಉಪಾಹಾರ ಗೃಹ ಹಾಗೂ ವಸತಿಸಂಕೀರ್ಣಗಳು ಸೇರಿದಂತೆ, ಗಗನಚುಂಬಿ ಕಟ್ಟಡಗಳ ನಿರ್ಮಾಣದಲ್ಲಿ ಹೊಸ ಭರಾಟೆಗೆ ಒಂದು ಉದಾಹರಣೆಯಾಗಿದೆ. ಇದು ಪೂರ್ಣಗೊಂಡ ನಂತರ, ಲಂಡನ್ನ ಹೊರಗೆ, UKಯಲ್ಲಿಯೇ ಅತ್ಯೆತ್ತರದ ಕಟ್ಟಡವಾಗಿತ್ತು.ಆದರೂ ಅದಕ್ಕಿಂತ ಎತ್ತರದ ಕಟ್ಟಡ, ಇಸವಿ ೨೦೦೮ರ ಪೂರ್ವದಲ್ಲಿ [[ಪಿಕ್ಯಾಡಿಲಿ ಗೋಪುರ|ಪಿಕ್ಯಾಡಿಲಿ ಗೋಪುರದ]] ನಿರ್ಮಾಣ ಕಾರ್ಯವನ್ನು [[ಮ್ಯಾಂಚೆಸ್ಟರ್ ಪಿಕ್ಯಾಡಿಲಿ ನಿಲ್ದಾಣ|ಮ್ಯಾಂಚೆಸ್ಟರ್ ಪಿಕ್ಯಾಡಿಲಿ ನಿಲ್ದಾಣದ]] ಹಿಂಭಾಗದಲ್ಲಿ ಆರಂಭಿಸಲಾಯಿತು (ಯೋಜನೆ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ).<ref name="Inacity">{{Cite web|url=http://www.manchesterconfidential.co.uk/property/index.asp?Sessionx=IpqiNw86JwfkNwB6IaqiNwA&realname=Too_hot_to_handle&frombounce=yes|title=Inacity step out as Ballymore stride in with plans for Eastgate Tower|accessdate=2007-09-11|publisher=Manchester Confidential|year=2007|archive-date=2008-12-06|archive-url=https://web.archive.org/web/20081206030740/http://www.manchesterconfidential.co.uk/property/index.asp?Sessionx=IpqiNw86JwfkNwB6IaqiNwA&realname=Too_hot_to_handle&frombounce=yes|url-status=dead}}</ref> [[ಅಕ್ಸ್ಫರ್ಡ್ ರೋಡ್ ನಿಲ್ದಾಣ|ಅಕ್ಸ್ಫರ್ಡ್ ರೋಡ್ ನಿಲ್ದಾಣದ]] ಎದುರಿಗಿರುವ [[ಹಸಿರು ಭವನ|ಹಸಿರು ಭವನವು]] ಮೊಟ್ಟಮೊದಲ ಪರಿಸರ-ಸ್ನೇಹಿ ಗೃಹನಿರ್ಮಾಣ ಯೋಜನೆಯಾಗಿದೆ. ಇದು UKಯ ಕೆಲವೇ ಯೋಜನೆಗಳಲ್ಲಿ ಒಂದಾಗಿದೆ.
ನಗರ ವಿಭಾಗದ ಉತ್ತರದಲ್ಲಿರುವ [[ಹೀಟನ್ ಪಾರ್ಕ್]] ಯುರೋಪ್ನಲ್ಲೇ ಅತಿದೊಡ್ಡ ಪುರಸಭಾ ಉದ್ಯಾನಗಳಲ್ಲಿ ಒಂದು. ಇದು ಉದ್ಯಾನಪ್ರದೇಶದ {{convert|610|acre|ha}} ವಿಸ್ತರಿಸಿದೆ.<ref name="HeatonPark">{{Cite web|url=http://www.manchester.gov.uk/site/scripts/documents_info.php?categoryID=200073heaton/&documentID=1422|title=About Heaton Park|accessdate=2007-11-23|publisher=[[Manchester City Council]]|year=೨೦೦೫|archive-date=2008-03-15|archive-url=https://web.archive.org/web/20080315081308/http://www.manchester.gov.uk/site/scripts/documents_info.php?categoryID=200073heaton%2F&documentID=1422|url-status=dead}}</ref>
ನಗರದಲ್ಲಿ ೧೩೫ ಉದ್ಯಾನವನಗಳು, ತೋಟಗಳು ಮತ್ತು ಮುಕ್ತ ಬಯಲು ಪ್ರದೇಶಗಳಿವೆ.<ref name="Parks">{{Cite web|url=http://www.manchester.gov.uk/site/scripts/documents.php?categoryID=200073|title=Manchester's parks and open spaces|accessdate=2007-11-23|publisher=[[Manchester City Council]]|year=೨೦೦೫}}</ref> ಎರಡು ದೊಡ್ಡ ಚೌಕಗಳು ಮ್ಯಾಂಚೆಸ್ಟರ್ನ ಸಾರ್ವಜನಿಕ ಸ್ಮಾರಕಗಳನ್ನು ಹೊಂದಿವೆ. [[ಪ್ರಿನ್ಸ್ ಆಲ್ಬರ್ಟ್]], [[ಬಿಷಪ್ ಜೇಮ್ಸ್ ಫ್ರೇಸರ್]], [[ಆಲಿವರ್ ಹೇವುಡ್]], [[ವಿಲಿಯಮ್ ಇವರ್ಟ್ ಗ್ಲ್ಯಾಡ್ಸ್ಟೋನ್]] ಮತ್ತು [[ಜಾನ್ ಬ್ರೈಟ್|ಜಾನ್ ಬ್ರೈಟ್ರ]] ಸ್ಮಾರಕಗಳು ಆಲ್ಬರ್ಟ್ ಚೌಕದಲ್ಲಿದೆ.
[[ವಿಕ್ಟೋರಿಯಾ ರಾಣಿ]], [[ರಾಬರ್ಟ್ ಪೀಲ್]], [[ಜೇಮ್ಸ್ ವ್ಯಾಟ್]] ಹಾಗೂ [[ಡ್ಯೂಕ್ ಆಫ್ ವೆಲಿಂಗ್ಟನ್|ಡ್ಯೂಕ್ ಆಫ್ ವೆಲಿಂಗ್ಟನ್ರ]] ಸ್ಮಾರಕಗಳು [[ಪಿಕ್ಯಾಡಿಲಿ ಗಾರ್ಡನ್ಸ್|ಪಿಕ್ಯಾಡಿಲಿ ಗಾರ್ಡನ್ಸ್ನಲ್ಲಿವೆ]].
ಸೇಂಟ್ ಪೀಟರ್ಸ್ ಸ್ಕ್ವೇರ್ನಲ್ಲಿ [[ಎಡ್ವಿನ್ ಲುಟ್ಯೆನ್ಸ್]] ನಿರ್ಮಿಸಿದ ಸ್ಮಾರಕ ಸಮಾಧಿಯು, ಮ್ಯಾಂಚೆಸ್ಟರ್ನಲ್ಲಿರುವ ಯುದ್ಧ ವೀರರ ಪ್ರಮುಖ ಸ್ಮಾರಕ ಸಮಾಧಿ. [[ಸ್ಯಾಕ್ವಿಲ್ ಪಾರ್ಕ್|ಸ್ಯಾಕ್ವಿಲ್ ಪಾರ್ಕ್ನಲ್ಲಿರುವ]] [[ಅಲಾನ್ ಟುರಿಂಗ್ ಸ್ಮಾರಕ|ಅಲಾನ್ ಟುರಿಂಗ್ ಸ್ಮಾರಕವು]] ಆಧುನಿಕ ಕಂಪ್ಯೂಟಿಂಗ್ನ ಜನಕರಾಗಿ ಇವರ ಕೊಡುಗೆಯನ್ನು ಸ್ಮರಿಸುತ್ತದೆ. ಜಾರ್ಜ್ ಗ್ರೇ ಬರ್ನಾರ್ಡ್ ರಚಿಸಿದ [[ಅಬ್ರಾಹಂ ಲಿಂಕನ್]] ಪ್ರತಿಮೆಯು ನಾಮಸೂಚಕ ಲಿಂಕನ್ ಚೌಕದಲ್ಲಿದೆ(ಹಲವು ವರ್ಷಗಳ ಕಾಲ ನಗರದ [[ಪ್ಲ್ಯಾಟ್ ಫೀಲ್ಡ್ಸ್|ಪ್ಲ್ಯಾಟ್ ಫೀಲ್ಡ್ಸ್ನಲ್ಲಿತ್ತು]]).ಅಮೆರಿಕಾ ಸಂಯುಕ್ತ ಸಂಸ್ಥಾನದ ಒಹಾಯೊ ರಾಜ್ಯದ ಸಿಂಸಿನ್ನಟಿ ನಗರದ ಚಾರ್ಲ್ಸ್ ಫೆಲ್ಪ್ಸ್ ಟ್ಯಾಫ್ಟ್ ದಂಪತಿಗಳು ನಗರಕ್ಕೆ ಇದನ್ನು ಕೊಡುಗೆಯಾಗಿ ನೀಡಿದ್ದರು. [[ಹತ್ತಿ ಕ್ಷಾಮ]] ಹಾಗೂ ೧೮೬೧–೧೮೬೫ <ref name="PSGM">{{cite book |last1=Cocks |first1=Harry |last2=Wyke |first2=Terry |title=Public Sculpture of Greater Manchester |series=Public Sculpture of Britain |publisher=Liverpool University Press |location=Liverpool |year=2004 |pages=11–27, 88–92, 111–121, 123–5, 130–2 |isbn=0-85323-567-8}}</ref> ಕಾಲದಲ್ಲಿ ನಡೆದ [[ಅಮೆರಿಕನ್ ಅಂತರ್ಯುದ್ಧ|ಅಮೆರಿಕನ್ ಅಂತರ್ಯುದ್ಧದಲ್ಲಿ]] ಲ್ಯಾಂಕಾಷೈರ್ ವಹಿಸಿದ ಪಾತ್ರವನ್ನು ಗುರುತಿಸುವುದಕ್ಕಾಗಿ ಈ ಕೊಡುಗೆ ನೀಡಲಾಗಿತ್ತು.
ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ [[ಕಾಂಕಾರ್ಡ್]] ವಿಮಾನವೊಂದು ಪ್ರದರ್ಶನಕ್ಕಿಡಲಾಗಿದೆ. {{clear}}
== ಸಾರಿಗೆ ==
{{imagestack|float=right|
[[ಚಿತ್ರ:Manchester Piccadilly station approach - April 11 2005.jpg|thumb|[[Manchester Piccadilly Station]], the principal railway and [[Manchester Metrolink|Metrolink]] station in Manchester.]]
[[ಚಿತ್ರ:No 3001 Manchester Metrolink tram.jpg|thumb|A [[Manchester Metrolink|Metrolink tram]].]]
[[ಚಿತ್ರ:Manchester free zone bus.jpg|thumb|One of the zero-fare [[bus]]es.]]
}}
{{Main|Transport in Manchester}}
{{See also|Manchester Airport|List of railway stations in Greater Manchester|Manchester Congestion Charge|Greater Manchester Transport Innovation Fund (TiF)}}
ಮ್ಯಾಂಚೆಸ್ಟರ್ ಹಾಗೂ ವಾಯುವ್ಯ ಇಂಗ್ಲೆಂಡ್ ವಲಯದ ವಾಸಿಗಳಿಗೆ [[ಮ್ಯಾಂಚೆಸ್ಟರ್ ವಿಮಾನ ನಿಲ್ದಾಣ|ಮ್ಯಾಂಚೆಸ್ಟರ್ ವಿಮಾನ ನಿಲ್ದಾಣವು]] ಉಪಯುಕ್ತವಾಗಿದೆ. ಲಂಡನ್ ಹೊರತುಪಡಿಸಿ, ಪ್ರಯಾಣಿಕರ ಸಂಚಾರದ ದೃಷ್ಟಿಯಿಂದ ಈ ವಿಮಾನ ನಿಲ್ದಾಣವು ಅತಿ ಜನನಿಬಿಡ ವಿಮಾನವಾಗಿದೆ. ಇದು ೨೦೦೮ರಲ್ಲಿ ೨೧.೦೬ ದಶಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಿದೆ. ಯುರೋಪ್, ಉತ್ತರ ಅಮೆರಿಕಾ, ಕೆರಿಬಿಯನ್ ದ್ವೀಪಗಳು, ಆಫ್ರಿಕಾ, ಮಧ್ಯಪ್ರಾಚ್ಯ ವಲಯ ಮತ್ತು ಏಷ್ಯಾದಲ್ಲಿರುವ ಸ್ಥಳಗಳಿಗೆ ವಿಮಾನ ಯಾನ ಸೌಲಭ್ಯಗಳಿವೆ ([[ಲಂಡನ್ ಹೀಥ್ರೋ|ಲಂಡನ್ ಹೀಥ್ರೋಗಿಂತ]] ಮ್ಯಾಂಚೆಸ್ಟರ್ ಹೆಚ್ಚು ಸ್ಥಳಗಳಿಗೆ ವಿಮಾನಯಾನ ಸಂಪರ್ಕ ಹೊಂದಿದೆ.).<ref>{{cite news | first = James | last = Wilson | title = A busy hub of connectivity | work = [[Financial Times]] – FT report – doing business in Manchester and the NorthWest | publisher = The Financial Times Limited | date = ೨೬ April ೨೦೦೭}}</ref> ಎರಡನೆಯ ರನ್ವೆಯನ್ನು ಇಸವಿ ೨೦೦೧ರಲ್ಲಿ ತೆರೆಯಲಾಯಿತು. ಅಂದಿನಿಂದಲೂ, ವಿಮಾನ ನಿಲ್ದಾಣಗಳಲ್ಲಿ ಸುಧಾರಣೆ ಮುಂದುವರಿದಿದೆ. ಇಸವಿ ೨೦೦೫ರಿಂದಲೂ ಪ್ರಯಾಣಿಕರ ಸಂಖ್ಯೆ ಬಹುಶಃ ಅಷ್ಟೇ ಸ್ಥಿರವಾಗಿ ಉಳಿದುಕೊಂಡಿದೆ.
ಮ್ಯಾಂಚೆಸ್ಟರ್ನಲ್ಲಿ ಸಮರ್ಪಕ ರೈಲು ಜಾಲವಿದೆ. ಪ್ರಯಾಣಿಕರ ವಿಚಾರದಲ್ಲಿ, ಲಂಡನ್ ಹೊರತುಪಡಿಸಿ, [[ಮ್ಯಾಂಚೆಸ್ಟರ್ ಪಿಕ್ಯಾಡಿಲಿ]] ೨೦೦೫ ಮತ್ತು ೨೦೦೬ರಲ್ಲಿ ಅತಿ ಜನನಿಬಿಡ ಇಂಗ್ಲಿಷ್ ರೈಲು ನಿಲ್ದಾಣವಾಗಿತ್ತು.<ref>{{Citeweb|title=Passenger Numbers 2005-06|url=http://www.rail-reg.gov.uk/upload/xls/station_usage_2005-06.xls|accessdate=2007-10-01|archive-date=2013-01-22|archive-url=https://web.archive.org/web/20130122100934/http://www.rail-reg.gov.uk/upload/xls/station_usage_2005-06.xls|url-status=dead}}</ref> ಸ್ಥಳೀಯ ರೈಲು ಸೇವಾ ಸಂಸ್ಥೆ [[ನಾರ್ದರ್ನ್ ರೇಲ್]] ಇಂಗ್ಲೆಂಡ್ ಉತ್ತರ ಭಾಗದುದ್ದಕ್ಕೂ ರೈಲು ಸೇವೆ ಒದಗಿಸುತ್ತದೆ. ಇತರೆ ರಾಷ್ಟ್ರೀಯ ರೈಲು ಸೇವಾ ಸಂಸ್ಥೆಗಳಲ್ಲಿ [[ವರ್ಜಿನ್ ಟ್ರೇನ್ಸ್]] ಸಹ ಸೇರಿದೆ. [[ಲಿವರ್ಪೂಲ್ ಮತ್ತು ಮ್ಯಾಂಚೆಸ್ಟರ್ ರೈಲ್ವೆ]] ವಿಶ್ವದ ಮೊಟ್ಟಮೊದಲ ಪ್ರಯಾಣಿಕ ರೈಲುಮಾರ್ಗವಾಗಿತ್ತು. ಗ್ರೇಟರ್ ಮ್ಯಾಂಚೆಸ್ಟರ್ನಲ್ಲಿ ಕೌಂಟಿಯಾದ್ಯಂತ ವಿಸ್ತಾರವಾದ ರೈಲು ಜಾಲ ಮತ್ತು ಎರಡು ಪ್ರಮುಖ ನಿಲ್ದಾಣಗಳಿವೆ. ಮ್ಯಾಂಚೆಸ್ಟರ್ ನಗರ ಕೇಂದ್ರದಲ್ಲಿ ಡಜನ್ಗಿಂತ ಹೆಚ್ಚು ರೈಲು ಆಧಾರಿತ ಉದ್ಯಾನವನ ಮತ್ತು ರೈಡ್ ತಾಣಗಳಿವೆ.<ref name="Park & Ride">{{Cite web|url=http://www.gmpte.com/content.cfm?category_id=3365350|title=GMPTE Park & Ride – Stations and Stops|accessdate=2007-09-11|publisher=[[GMPTE]]|year=೨೦೦೭|archive-date=2007-10-09|archive-url=https://web.archive.org/web/20071009125451/http://www.gmpte.com/content.cfm?category_id=3365350|url-status=dead}}</ref> ಪಿಕ್ಯಾಡಿಲಿ ನಿಲ್ದಾಣದ ಸಾಮರ್ಥ್ಯವನ್ನು ಹೆಚ್ಚಿಸಿ, ಮ್ಯಾಂಚೆಸ್ಟರ್ನ್ನು [[ಉತ್ತರ ಇಂಗ್ಲೆಂಡ್]]ನ ರೈಲುಕೇಂದ್ರವಾಗಿ ಮಾಡುವ ಕಾರ್ಯಸಾಧ್ಯತೆ ಕುರಿತು ಅಧ್ಯಯನ ನಡೆಸಲೆಂದು ಸರ್ಕಾರವು ಅಕ್ಟೋಬರ್ ೨೦೦೭ರಲ್ಲಿ ಆದೇಶ ಹೊರಡಿಸಿತು.<ref name="Rail hub">{{Cite web|url=http://www.manchestereveningnews.co.uk/news/s/1018628_plans_for_rail_capital_of_north|title=Plans for rail capital of north|accessdate=2007-10-05|publisher=MEN Media|date=5 October 2007|work=[[Manchester Evening News]]}}</ref>
ಇಸವಿ ೧೯೯೨ರಲ್ಲಿ [[ಮ್ಯಾಂಚೆಸ್ಟರ್ ಮೆಟ್ರೊಲಿಂಕ್]] ಆರಂಭದೊಂದಿಗೆ,ಮ್ಯಾಂಚೆಸ್ಟರ್ ಆಧುನಿಕ [[ಲಘು ರೈಲು]] [[ಟ್ರ್ಯಾಮ್]] ವ್ಯವಸ್ಥೆ ಹೊಂದಿದ UKಯಲ್ಲೇ ಮೊದಲ ನಗರವಾಯಿತು. ಸದ್ಯದ ವ್ಯವಸ್ಥೆಯು, ಲಘು ರೈಲಿಗಾಗಿ ಪರಿವರ್ತನೆಯಾದ ಮುಂಚಿನ ಪ್ರಯಾಣಿಕ ರೈಲು ಹಳಿಗಳ ಮೇಲೆ ಚಲಿಸಿ, ರಸ್ತೆಯಲ್ಲಿ ಅಳವಡಿಸಲಾದ ಟ್ರ್ಯಾಮ್ ಹಳಿಗಳ ಮೇಲೆ ಹಾದುಹೋಗಿ ನಗರ ಕೇಂದ್ರ ದಾಟಿ ಹೋಗುತ್ತದೆ.<ref name="metrolink-history">{{cite web|url=http://www.metrolink.co.uk/pdf/past_present_future.pdf|title=Metrolink History|date=2004-03-09|publisher=Manchester Metrolink|accessdate=2009-03-21|archiveurl=https://web.archive.org/web/20040428044638/http://www.metrolink.co.uk/pdf/past_present_future.pdf|archivedate=2004-04-28}}</ref> {{convert|23|mi|km|abbr=on}}-ಜಾಲದಲ್ಲಿ ಮೂರು ಮಾರ್ಗಗಳಿದ್ದು,೩೭ ನಿಲ್ದಾಣಗಳಿವೆ(ಮಧ್ಯದಲ್ಲಿ ಐದು ಬೀದಿ ಟ್ರ್ಯಾಮ್ ನಿಲುಗಡೆಗಳು ಸೇರಿ) ವಿಸ್ತರಣಾ ಯೋಜನೆಯೊಂದು ಆರಂಭವಾಗಿದೆ.<ref>{{cite web | url = http://www.gmpte.com/upload/library/met_brochure_0303.pdf | title = Metrolink: a network for the twenty-first century | accessdate = 2007-09-19 | year = 2002 | format = PDF | publisher = GMPTE|archiveurl=https://web.archive.org/web/20031206031659/http://www.gmpte.com/upload/library/met_brochure_0303.pdf|archivedate=2003-12-06}}</ref>
ಲಂಡನ್ ಹೊರತುಪಡಿಸಿ, ಈ ನಗರದಲ್ಲಿ ಅತಿ ವಿಸ್ತಾರವಾದ ಬಸ್ ಸೇವಾ ಜಾಲವಿದೆ. ನಗರದಿಂದ ಹರಡಿ, [[ಗ್ರೇಟರ್ ಮ್ಯಾಂಚೆಸ್ಟರ್]] ವಲಯದಲ್ಲಿ ೫೦ಕ್ಕಿಂತಲೂ ಹೆಚ್ಚು ಬಸ್ ಸಂಸ್ಥೆಗಳು ತಮ್ಮ ಬಸ್ ಸೇವೆಗಳನ್ನು ಒದಗಿಸುತ್ತಿವೆ. ಇಸವಿ ೧೯೮೬ರಲ್ಲಿ [[ನಿಯಂತ್ರಣಗಳನ್ನು ತೆಗೆಯುವ]] ಮುಂಚೆ, SELNEC ಹಾಗೂ ಆನಂತರ GMPTE ಮ್ಯಾಂಚೆಸ್ಟರ್ನಲ್ಲಿ ಸಾರಿಗೆ ಸೇವೆಗಾಗಿ ಎಲ್ಲಾ ಬಸ್ಗಳನ್ನೂ ನಿರ್ವಹಿಸಿದವು.<ref name="SELNEC buses">{{Cite web|url=http://www.gmbuses.co.uk/library/history/history.html|title=History of GM Buses and SELNEC PTE|accessdate=2007-09-20|publisher=Greater Manchester Buses Group|year=2000|archive-date=2012-02-08|archive-url=https://web.archive.org/web/20120208053958/http://www.gmbuses.co.uk/library/history/history.html|url-status=dead}}</ref> ಆನಂತರ, [[GM ಬಸಸ್]] ಬಸ್ ವ್ಯವಸ್ಥೆಯನ್ನು ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡಿತು. ಖಾಸಗೀಕರಣದ ನಂತರ, ಈ ಸಂಸ್ಥೆಯು ಇಬ್ಭಾಗವಾಗಿ GM ಬಸಸ್ ನಾರ್ತ್ ಮತ್ತು GM ಬಸಸ್ ಸೌತ್ ಎಂಬ ಉಪ ಸಂಸ್ಥೆಗಳಾದವು. ಆನಂತರ, ಇವೆರಡು ಉಪಸಂಸ್ಥೆಗಳನ್ನು ಕ್ರಮವಾಗಿ [[ಫಸ್ಟ್ ಮ್ಯಾಂಚೆಸ್ಟರ್]] ಮತ್ತು [[ಸ್ಟೇಜ್ಕೋಚ್ ಮ್ಯಾಂಚೆಸ್ಟರ್]] ಎಂಬ ಸಂಸ್ಥೆಗಳು ಸ್ವಾಮ್ಯಕ್ಕೆ ತೆಗೆದುಕೊಂಡವು.<ref>{{cite web | url = http://www.gmpte.com/upload/library/t&s01_02.pdf | title = GMPTE Trends and Statistics 2001/2002 | accessdate = 2007-09-19 | year = 2002 | format = PDF | publisher = GMPTE | pages = 28–9 | archive-date = 2009-03-27 | archive-url = https://web.archive.org/web/20090327122708/http://www.gmpte.com/upload/library/t%26s01_02.pdf | url-status = dead }}</ref> ಇದರ ಜೊತೆಗೆ,ಫಸ್ಟ್ ಮ್ಯಾಂಚೆಸ್ಟರ್,ಮೂರು ಮಾರ್ಗಗಳಲ್ಲಿ ಮ್ಯಾಂಚೆಸ್ಟರ್ನ ವಾಣಿಜ್ಯ ಜಿಲ್ಲೆಗಳ ಸುತ್ತ ಪ್ರಯಾಣಿಕರನ್ನು ಒಯ್ಯುವ [[ಉಚಿತ]] [[ಮೆಟ್ರೊಷಟ್ಲ್]] ಬಸ್ ಸೇವೆಯನ್ನು ಸಹ ನಡೆಸುತ್ತದೆ.<ref>{{cite news | first = Clarissa | last = Satchell | title = Free buses on another city route | url = http://www.manchestereveningnews.co.uk/news/s/175/175041_free_buses_on_another_city_route.html | work = [[Manchester Evening News]] | publisher = M.E.N media | date = ೨೨ September ೨೦೦೫ | accessdate = ೨೦೦೭-೦೯-೧೮}}</ref>
ಕೈಗಾರಿಕಾ ಕ್ರಾಂತಿಯ ಕಾಲದ ಅವಶೇಷವಾಗಿರುವ ವಿಸ್ತಾರವಾದ ಕಾಲುವೆ ಜಾಲವು ಉಳಿದುಕೊಂಡಿದ್ದು, ಇದನ್ನು ಈ ದಿನಗಳಲ್ಲಿ ಬಿಡುವಿನ ಸಮಯದ ವಿಹಾರಕ್ಕಾಗಿ ಬಳಸಲಾಗುತ್ತದೆ. [[ಮ್ಯಾಂಚೆಸ್ಟರ್ ಹಡಗು ಕಾಲುವೆ|ಮ್ಯಾಂಚೆಸ್ಟರ್ ಹಡಗು ಕಾಲುವೆಯು]] ಈಗಲೂ ತೆರೆದಿದ್ದರೂ, ಮೇಲ್ತುದಿಯತ್ತ ಸಂಚಾರದ ದಟ್ಟಣೆ ಅಷ್ಟಿಲ್ಲ.<ref>{{cite web | url = http://www.waterscape.com/North_West_Cities | title = North West Cities | accessdate = 2007-09-19 | year = 2007 | work = Waterscape | publisher = British Waterways | archive-date = 2008-10-24 | archive-url = https://web.archive.org/web/20081024224144/http://www.waterscape.com/North_West_Cities | url-status = dead }}<br />•{{cite news | first = Nigel | last = Pivaro | title = Ship canal cruising is all the rage | url = http://www.manchestereveningnews.co.uk/news/s/226/226106_ship_canal_cruising_is_all_the_rage.html | work = [[Manchester Evening News]] | publisher = M.E.N media | date = ೨೦ October ೨೦೦೬ | accessdate = ೨೦೦೭-೦೯-೧೯ }}</ref>
== ಸಂಸ್ಕೃತಿ ==
{{Main|Culture of Manchester}}
{{See also|List of people from Manchester}}
=== ಸಂಗೀತ ===
{{Main|Music of Manchester|List of bands from Manchester|Madchester}}
[[ಚಿತ್ರ:Bridgewater Hall in 2008.jpg|thumb|ಬ್ರಿಡ್ಜ್ವಾಟರ್ ಹಾಲ್]]
[[ಚಿತ್ರ:Manchester V. Cancer.jpg|thumb|MEN ಅರೆನಾ]]
[[ಚಿತ್ರ:SmithsPromoPhoto TQID 1985.jpg|thumb|ದಿ ಸ್ಮಿತ್ಸ್ ಎಂಬ ಮ್ಯಾಂಚೆಸ್ಟರ್ ಸಂಗೀತ ವಾದ್ಯತಂಡ]]
ಮ್ಯಾಂಚೆಸ್ಟರ್ನ ಸಂಗೀತ ರಂಗದಲ್ಲಿ ಖ್ಯಾತ ಪಡೆದ ವಾದ್ಯತಂಡಗಳಲ್ಲಿ [[ದಿ ಸ್ಮಿತ್ಸ್]], [[ಬಝ್ಕಾಕ್ಸ್]], [[ದಿ ಫಾಲ್]], [[ಜಾಯ್ ಡಿವಿಜನ್]] ಮತ್ತು ಅದರ ಉತ್ತರಾಧಿಕಾರಿ ವಾದ್ಯತಂಡ [[ನ್ಯೂ ಆರ್ಡರ್]], [[ಒಯೆಸಿಸ್]] ಮತ್ತು [[ಡವ್ಸ್]] ಸೇರಿದೆ.
೧೯೮೦ರ ದಶಕದಲ್ಲಿ ಖ್ಯಾತಿ ಪಡೆದ ಇಂಡೀ ವಾದ್ಯತಂಡಗಳಿಗೆ ಮ್ಯಾಂಚೆಸ್ಟರ್ ಪ್ರಾದೇಶಿಕ ಸ್ಫೂರ್ತಿಯ ಸೆಲೆಯಾಗಿದೆ. ಇವುಗಳಲ್ಲಿ [[ಹ್ಯಾಪಿ ಮಂಡೇಸ್]], [[ಇಂಸ್ಪಿರಲ್ ಕಾರ್ಪೆಟ್ಸ್]], [[ಜೇಮ್ಸ್]] ಮತ್ತು [[ದಿ ಸ್ಟೋನ್ ರೋಸಸ್]] ಸೇರಿವೆ. ಈ ವಾದ್ಯತಂಡಗಳು '[[ಮ್ಯಾಡ್ಚೆಸ್ಟರ್]]' ಸೀನ್ ಎಂದು ಹೆಸರಾದ ಮೂಲದಿಂದ ಬಂದವು. ಇವು ಫ್ಯಾಕ್ ೫೧ ಹ್ಯಾಸಿಯೆಂಡಾ ([[ದಿ ಹ್ಯಾಸಿಯೆಂಡಾ]] ಎಂದು ಸರಳವಾಗಿ ಹೆಸರಾಗಿದೆ) ಸುತ್ತ ಕೇಂದ್ರೀಕೃತವಾಗಿದೆ. [[ಫ್ಯಾಕ್ಟರಿ ರೆಕಾರ್ಡ್ಸ್]] ಸಂಸ್ಥಾಪಕ [[ಟೊನಿ ವಿಲ್ಸನ್]] ಇದನ್ನು ಅಭಿವೃದ್ಧಿಪಡಿಸಿದ್ದರು. ದಕ್ಷಿಣ ಇಂಗ್ಲೆಂಡ್ ಮೂಲದ್ದಾದರೂ ಸಹ, [[ದಿ ಕೆಮಿಕಲ್ ಬ್ರದರ್ಸ್]] ವಾದ್ಯತಂಡವು ತರುವಾಯ ಮ್ಯಾಂಚೆಸ್ಟರ್ನಲ್ಲಿ ರಚನೆಯಾಯಿತು.<ref name="ChemBros">{{Cite web|url=http://www.manchester.ac.uk/undergraduate/ourreputation/distinguishedalumni/thechemicalbrothers/|title=The Chemical Brothers – Alumni|accessdate=2007-11-12|publisher=[[University of Manchester]]|year=೨೦೦೫}}</ref> ಸ್ಟೋನ್ ರೋಸಸ್ ವಾದ್ಯತಂಡದ ಮಾಜಿ ಪ್ರಮುಖ ಕಲಾವಿದ [[ಇಯಾನ್ ಬ್ರೌನ್]] ಮತ್ತು ಸ್ಮಿತ್ಸ್ ವಾದ್ಯತಂಡದ ಮಾಜಿ ಕಲಾವಿದ [[ಮೊರಿಸ್ಸೆ]] ಇಂದಿಗೂ ಸೊಲೊ ವೃತ್ತಿಯಲ್ಲಿ ಮುಂದುವರೆದು ಸಾಫಲ್ಯ ಪಡೆದಿದ್ದಾರೆ. ಮ್ಯಾಂಚೆಸ್ಟರ್ನ ಇತರೆ ಗೀತೆಗಳಲ್ಲಿ [[ಟೇಕ್ ದಟ್]] ಮತ್ತು [[ಸಿಂಪ್ಲಿ ರೆಡ್]] ಸಹ ಸೇರಿದೆ. ಗ್ರೇಟರ್ ಮ್ಯಾಂಚೆಸ್ಟರ್ ಮೂಲದ ವಾದ್ಯತಂಡಗಳಲ್ಲಿ [[ಎ ಗಯ್ ಕಾಲ್ಡ್ ಜೆರಾಲ್ಡ್]], [[ದಿ ವರ್ವ್]] ತಂಡದ [[ರಿಚರ್ಡ್ ಆಷ್ಕ್ರಾಪ್ಟ್]] ಹಾಗೂ [[ಜಮೀರೊಕ್ವೆ]] ತಂಡದ [[ಜೇ ಕೇ]] ಸೇರಿದ್ದಾರೆ. ಹಳೆಯ ಕಾಲದ ಮ್ಯಾಂಚೆಸ್ಟರ್ ಕಲಾವಿದರಲ್ಲಿ ೧೯೬೦ರ ದಶಕದ ಬ್ಯಾಂಡ್ನ [[ದಿ ಹಾಲೀಸ್]], [[ಹರ್ಮನ್ಸ್ ಹರ್ಮಿಟ್ಸ್]] ಹಾಗೂ, ಸಾಮಾನ್ಯವಾಗಿ ಆಸ್ಟ್ರೇಲಿಯಾದೊಂದಿಗೆ ಸಂಬಂಧವಿದ್ದ,ಕಾರ್ಲ್ಟನ್ನಲ್ಲಿ ಬೆಳೆದ [[ಬೀ ಜೀಸ್]] ಸೇರಿದ್ದಾರೆ.<ref name="BeeGees">{{Cite web|url=http://news.bbc.co.uk/1/hi/england/manchester/3705559.stm|title=Bee Gees go back to their roots|accessdate=2007-11-12|publisher=[[BBC Online]]|date=೧೨ May ೨೦೦೪|work=[[BBC]]}}</ref>
[[ವಿಕ್ಟೋರಿಯಾ ನಿಲ್ದಾಣ|ವಿಕ್ಟೋರಿಯಾ ನಿಲ್ದಾಣದ]] ಪಕ್ಕದಲ್ಲಿರುವ [[ಮ್ಯಾಂಚೆಸ್ಟರ್ ಇವನಿಂಗ್ ನ್ಯೂಸ್ ಅರೆನಾ]], ಮ್ಯಾಂಚೆಸ್ಟರ್ನ ಮುಖ್ಯ ಪಾಪ್ ಸಂಗೀತ ಸ್ಥಳವಾಗಿದೆ. ಈ ರೀತಿಯ ಅಂಕಣಗಳಲ್ಲಿ ಇಡೀ ಯುರೋಪಿನಲ್ಲೇ ಅತಿ ದೊಡ್ಡ ಅಂಕಣವಾಗಿದ್ದು, ೨೧,೦೦೦ ಜನರಿಗೆ ಸ್ಥಳಾವಕಾಶವಿದೆ. ಇದು ''ಇಂಟರ್ನ್ಯಾಷನಲ್ ವೆನ್ಯೂ ಆಫ್ ದಿ ಇಯರ್'' ಎಂಬ ಹೆಗ್ಗಳಿಕೆ ಪಡೆದಿದೆ.<ref name="MEN">{{Cite web|url=http://www.pollstaronline.com/PCIA-Static/2001winners.htm|title=Pollstar Concert Industry Awards Winners Archives|accessdate=2007-06-24|publisher=Pollstar Online|year=2001|archive-date=2013-01-12|archive-url=https://web.archive.org/web/20130112222758/http://www.pollstaronline.com/PCIA-Static/2001winners.htm|url-status=dead}}<br />•{{cite news|first=Rachel|last=Brown|title=M.E.N Arena's world's top venue|url=http://www.manchestereveningnews.co.uk/entertainment/s/1013/1013264_arenas_worlds_top_venue.html|archiveurl=https://web.archive.org/web/20070927192629/http://www.manchestereveningnews.co.uk/entertainment/s/1013/1013264_arenas_worlds_top_venue.html|archivedate=2007-09-27|work=[[Manchester Evening News]]|publisher=M.E.N Media|accessdate=೨೦೦೭-೦೮-೧೨|quote=The M.E.N. Arena is the top-selling venue in the world.|date=೧೦ August ೨೦೦೭}}</ref> ವಾದ್ಯಗೋಷ್ಠಿ ಕಾರ್ಯಕ್ರಮಕ್ಕೆ ಹಾಜರಾಗುವವರ ವಿಚಾರದಲ್ಲಿ,ಕ್ರಮವಾಗಿ ಎರಡನೇ ಮತ್ತು ಮೂರನೇ ಅತೀ ಜನನಿಬಿಡ ಅಂಕಣಗಳಾಗಿರುವ [[ನ್ಯೂಯಾರ್ಕ್|ನ್ಯೂಯಾರ್ಕ್ನಲ್ಲಿರುವ]] [[ಮೆಡಿಸನ್ ಸ್ಕ್ವೇರ್ ಗಾರ್ಡನ್]] ಹಾಗೂ [[ಲಂಡನ್|ಲಂಡನ್ನ]] [[O2 ಅರೆನಾ|O2 ಅರೆನಾವನ್ನೂ]] ಮೀರಿ ಇದು ಅತಿ ಜನನಿಬಿಡ ಒಳಾಂಗಣ ಅಂಕಣವಾಗಿದೆ.<ref>{{Citeweb|title=M.E.N Named Most Popular Entertainment Venue on Planet|url=http://www.men-arena.com/about/?page_id=1412/|accessdate=2008-05-08|archive-date=2008-12-06|archive-url=https://web.archive.org/web/20081206040846/http://www.men-arena.com/about/?page_id=1412%2F|url-status=dead}}</ref> ಇತರೆ ಅಂಕಣಗಳಲ್ಲಿ [[ಮ್ಯಾಂಚೆಸ್ಟರ್ ಅಪೊಲೊ]] ಮತ್ತು [[ಮ್ಯಾಂಚೆಸ್ಟರ್ ಅಕಾಡೆಮಿ]] ಸಹ ಸೇರಿವೆ. [[ಬ್ಯಾಂಡ್ ಆನ್ ದಿ ವಾಲ್]] ರೋಡ್ಹೌಸ್, ನೈಟ್ ಅಂಡ್ ಡೇ ಕೆಫೆ, ರೂಬಿ ಲೌಂಜ್ ಮತ್ತು ದಿ ಡೆಫ್ ಇಂಸ್ಟಿಟ್ಯೂಟ್ ಸಣ್ಣ ಪ್ರಮಾಣದ ಅಂಕಣಗಳಾಗಿವೆ.
ಮ್ಯಾಂಚೆಸ್ಟರ್ನಲ್ಲಿ ಎರಡು [[ಸ್ವರಮೇಳ ವಾದ್ಯವೃಂದ|ಸ್ವರಮೇಳ ವಾದ್ಯವೃಂದಗಳಿವೆ]]: [[ಹ್ಯಾಲೆ]] ಮತ್ತು [[BBC ಫಿಲ್ಹಾರ್ಮೊನಿಕ್]]. ಮ್ಯಾಂಚೆಸ್ಟರ್ ಕ್ಯಾಮೆರಾಟಾ ಎಂಬ ಒಂದು [[ಚೇಂಬರ್ ವಾದ್ಯಗೋಷ್ಠಿ]] ಸಹ ಹೊಂದಿದೆ. ೧೯೫೦ರ ದಶಕದಲ್ಲಿ, ನಗರವು ಶಾಸ್ತ್ರೀಯ ಸಂಗೀತ ಸಂಯೋಜಕರ ಮ್ಯಾಂಚೆಸ್ಟರ್ ಸ್ಕೂಲ್ನ ಮೂಲವಾಗಿತ್ತು. [[ಹ್ಯಾರಿಸನ್ ಬರ್ಟ್ವಿಷ್ಲ್]], [[ಪೀಟರ್ ಮ್ಯಾಕ್ಸ್ವೆಲ್ ಡೇವೀಸ್]], ಡೇವಿಡ್ ಎಲ್ಲಿಸ್ ಮತ್ತು [[ಅಲೆಕ್ಸಾಂಡರ್ ಗೊಹ್ರ್]] ಈ ತಂಡದ ಸದಸ್ಯರಾಗಿದ್ದರು. ಮ್ಯಾಂಚೆಸ್ಟರ್ [[ರಾಯಲ್ ನಾರ್ದರ್ನ್ ಕಾಲೇಜ್ ಆಫ್ ಮ್ಯೂಸಿಕ್]] ಮತ್ತು [[ಚೆಟ್ಹ್ಯಾಮ್ ಸ್ಕೂಲ್ ಆಫ್ ಮ್ಯೂಸಿಕ್]] ಸಂಗೀತ ಕಲಿಕಾ ಕೇಂದ್ರಗಳಾಗಿದ್ದು, ಸಂಗೀತ ಶಿಕ್ಷಣ ಕೇಂದ್ರವಾಗಿದೆ.<ref>{{cite book | last = Redhead | first = Brian | title = Manchester: a Celebration | url = https://archive.org/details/manchestercelebr0000redh | authorlink = Brian Redhead | publisher = Andre Deutsch | location = London | year = 1993 | pages = [https://archive.org/details/manchestercelebr0000redh/page/60 60]–61 | isbn = 0-233-98816-5}}</ref> ಪೀಟರ್ ಸ್ಟ್ರೀಟ್ನಲ್ಲಿರುವ [[ಫ್ರೀ ಟ್ರೇಡ್ ಹಾಲ್]] ಶಾಸ್ತ್ರೀಯ ಸಂಗೀತ ಕಚೇರಿಗಳ ಮುಖ್ಯ ಸ್ಥಳವಾಗಿತ್ತು. ನಂತರ, ೨,೫೦೦ ಜನರಿಗೆ ಸ್ಥಳಾವಕಾಶ ನೀಡಬಲ್ಲ [[ಬ್ರಿಡ್ಜ್ವಾಟರ್ ಹಾಲ್]] ೧೯೯೬ರಲ್ಲಿ ಪೂರ್ಣವಾಗಿ, ಸಾರ್ವಜನಿಕರಿಗಾಗಿ ಲಭ್ಯವಾಯಿತು.<ref>{{cite news | title = Good Venue Guide; 28 – Bridgewater Hall, Manchester. | work = [[Independent on Sunday]] | date = ೧೨ April ೧೯೯೮}}</ref>
ಉತ್ತರ ಇಂಗ್ಲೆಂಡ್ನ ಸಂಪ್ರದಾಯವೆನಿಸಿದ [[ಬ್ರಾಸ್ ವಾದ್ಯ]] ಸಂಗೀತವು ಮ್ಯಾಂಚೆಸ್ಟರ್ನ ಸಂಗೀತ ಪರಂಪರೆಯ ಪ್ರಮುಖ ಅಂಶವಾಗಿದೆ.<ref name="mif-deller">{{cite web|url=http://www.mif.co.uk/events/procession-2/|title=Procession - Jeremy Deller|date=July 2009|publisher=Manchester International Festival|accessdate=2009-07-24|archive-date=2009-08-03|archive-url=https://web.archive.org/web/20090803064500/http://www.mif.co.uk/events/procession-2/|url-status=dead}}</ref> [[CWS]] ಮ್ಯಾಂಚೆಸ್ಟರ್ ಬ್ಯಾಂಡ್ ಹಾಗೂ [[ಫೇಯ್ರಿ ಬ್ಯಾಂಡ್]] ಸೇರಿದಂತೆ UKದ ಪ್ರಮುಖ ವಾದ್ಯತಂಡಗಳು ಮ್ಯಾಂಚೆಸ್ಟರ್ ಹಾಗು ಸುತ್ತಮುತ್ತಲ ಸ್ಥಳಗಳ ಮೂಲಗಳದ್ದಾಗಿವೆ. [[ವ್ಹಿಟ್ ಫ್ರೈಡೆ]] ಬ್ರಾಸ್ ವಾದ್ಯ ಗೋಷ್ಠಿ ಸ್ಪರ್ಧೆಯು ವಾರ್ಷಿಕವಾಗಿ [[ಸ್ಯಾಡ್ಲ್ವರ್ತ್]] ಮತ್ತು [[ಟೇಂಸೈಡ್]]ನ ಸುತ್ತಮುತ್ತಲ ಸ್ಥಳಗಳಲ್ಲಿ ನಡೆಯುತ್ತದೆ. ಇಸವಿ ೨೦೧೦ರಲ್ಲಿ, [[PRS ಫಾರ್ ಮ್ಯೂಸಿಕ್]] ಪ್ರಕಾರ, ಮ್ಯಾಂಚೆಸ್ಟರ್ UKದ ಏಳನೆಯ 'ಅತಿ ಸಂಗೀತಮಯ' ನಗರ ಎನ್ನಲಾಗಿತ್ತು <ref name="mirror.co.uk">http://www.mirror.co.uk/celebs/news/೨೦೧೦/೦೩/೧೩/bristol-named-britain-s-most-musical-city-೧೧೫೮೭೫-೨೨೧೦೭೬೫೦/{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref><ref name="mirror.co.uk"/>.
=== ಪ್ರದರ್ಶಿಸುವ ಕಲೆಗಳು ===
[[File:Manchester Opera House 3.jpg|thumb|right|ಮ್ಯಾಂಚೆಸ್ಟರ್ನ ಅತಿ ದೊಡ್ಡ ರಂಗಮಂದಿರ ಸ್ಥಳಗಳಲ್ಲಿ ಒಂದಾದ 'ದಿ ಒಪೆರಾ ಹೌಸ್'
]]ಮ್ಯಾಂಚೆಸ್ಟರ್ನಲ್ಲಿ ರಂಗಮಂದಿರ, ಗೀತನಾಟಕ ಮತ್ತು ನೃತ್ಯ ದೃಶ್ಯಗಳು ಸಕ್ರಿಯವಾಗಿವೆ. ದೊಡ್ಡ ಪ್ರಮಾಣದ ಪ್ರವಾಸಿ ಪ್ರದರ್ಶನಗಳ ಸ್ಥಳಗಳಿಗೆ ಇದು ಆವಾಸಸ್ಥಾನವಾಗಿದೆ.
ಇವುಗಳಲ್ಲಿ ದೊಡ್ಡ ಪ್ರಮಾಣದ ಪ್ರವಾಸಿ ಪ್ರದರ್ಶನಗಳನ್ನು ಏರ್ಪಡಿಸುವ [[ಮ್ಯಾಂಚೆಸ್ಟರ್ ಒಪೇರಾ ಹೌಸ್]] ಮತ್ತು [[ವೆಸ್ಟ್ಎಂಡ್]] ಪ್ರೊಡಕ್ಷನ್ಸ್ ಸೇರಿವೆ. [[ಪ್ಯಾಲೆಸ್ ಥಿಯೆಟರ್]]; ಅಂದಿನ ಮ್ಯಾಂಚೆಸ್ಟರ್ ಹತ್ತಿ ವಿನಿಮಯ ಕಚೇರಿಯಲ್ಲಿದ್ದ [[ರಾಯಲ್ ಎಕ್ಸ್ಚೇಂಜ್ ಥಿಯೆಟರ್]]; ಸ್ಯಾಲ್ಫರ್ಡ್ನಲ್ಲಿರುವ [[ಲೌರಿ ಸೆಂಟರ್]] ಪ್ರವಾಸಿ ನಾಟಕ ತಂಡಗಳಿಗಾಗಿ ನೆಚ್ಚಿನ ರಂಗಮಂದಿರವಾಗಿದ್ದು, ಇಲ್ಲಿ ಆಗಾಗ್ಗೆ [[ಒಪೆರಾ ನಾರ್ತ್]] ತಂಡವು ನಾಟಕ ಪ್ರದರ್ಶನಗಳನ್ನು ನಡೆಸುತ್ತದೆ.
ಕೇಂದ್ರೀಯ ಗ್ರಂಥಾಲಯದ ನೆಲಮಾಳಿಗೆಯಲ್ಲಿರುವ [[ಲೈಬ್ರರಿ ಥಿಯೆಟರ್]] ರಂಗಮಂದಿರ, ಗ್ರೀನ್ ರೂಮ್; [[ಕಾಂಟಾಕ್ಟ್ ಥಿಯೇಟರ್]] ಮತ್ತು ಸ್ಟುಡಿಯೊ ಸ್ಯಾಲ್ಫರ್ಡ್ - ಇವೆಲ್ಲವೂ ಸಣ್ಣ ಪ್ರಮಾಣದ ಪ್ರದರ್ಶನ ಸ್ಥಳಗಳು. [[ಡ್ಯಾನ್ಸ್ಹೌಸ್]] ನೃತ್ಯ ಪ್ರದರ್ಶನಗಳಿಗಾಗಿ ಮೀಸಲಾಗಿದೆ.<ref>{{cite web |url=http://www.thedancehouse.co.uk/about_us/the_dancehouse_theatre.asp |title=The Dancehouse Theatre |accessdate=2009-02-07 |publisher=thedancehouse.co.uk |archive-date=2015-08-16 |archive-url=https://web.archive.org/web/20150816204324/http://www.thedancehouse.co.uk/about_us/the_dancehouse_theatre.asp |url-status=dead }}</ref>
=== ವಸ್ತುಸಂಗ್ರಹಾಲಯಗಳು ಮತ್ತು ಕಲಾವಸ್ತು ಪ್ರದರ್ಶನಾಲಯಗಳು ===
[[ಚಿತ್ರ:Manchester Art Gallery, Mosley Street.jpg|thumb|ಸಿಟಿ ಆರ್ಟ್ ಗ್ಯಾಲರಿ]]
[[ಚಿತ್ರ:Shackleton AEW.JPG|thumb|Museum of Science & Industry|ಮ್ಯೂಸಿಯಮ್ ಆಫ್ ಸೈಯನ್ಸ್ ಅಂಡ್ ಇಂಡಸ್ಟ್ರಿ]]ಮಮಮ್ಯಾಂಚೆಸ್ಟರ್್ಲಿ ವಿವಿಧ ರೀತಿಗಳ ಸಾರ್ವಜನಿಕ ವಸ್ತು ಸಂಗ್ರಹಾಲಯಗಳು ಮತ್ತು ಕಲಾವಸ್ತು ಪ್ರದರ್ಶನಾಲಯಗಳಿವೆ.<ref name="culture24">{{cite web|url=http://www.culture24.org.uk/places+to+go/north+west/manchester|title=Manchester|year=2009|publisher=Culture24|accessdate=2009-07-24|archive-date=2009-06-07|archive-url=https://web.archive.org/web/20090607101416/http://www.culture24.org.uk/places+to+go/north+west/manchester|url-status=dead}}</ref>
ಮ್ಯಾಂಚೆಸ್ಟರ್ನ ರೋಮನ್ ಇತಿಹಾಸ, ಸಮೃದ್ಧ ಕೈಗಾರಿಕಾ ಪರಂಪರೆ ಮತ್ತು [[ಕೈಗಾರಿಕಾ ಕ್ರಾಂತಿ|ಕೈಗಾರಿಕಾ ಕ್ರಾಂತಿಯಲ್ಲಿ]] ಅದರ ಪಾತ್ರ, [[ಜವಳಿ ಉದ್ದಿಮೆ]], [[ಕಾರ್ಮಿಕ ಸಂಘ]] ಚಳವಳಿ, [[ಮಹಿಳೆಯರ ಅಭಿಮತ]] ಮತ್ತು [[ಫುಟ್ಬಾಲ್]] ಕುರಿತ ಪ್ರಮುಖ ಇತಿಹಾಸವನ್ನು ಮ್ಯಾಂಚೆಸ್ಟರ್ನ ವಸ್ತು ಪ್ರದರ್ಶನಾಲಯಗಳು ಬಿಂಬಿಸುತ್ತವೆ. [[ಕ್ಯಾಸ್ಲ್ಫೀಲ್ಡ್]] ಜಿಲ್ಲೆಯ ಕ್ಯಾಸ್ಲ್ಫೀಲ್ಡ್ನಲ್ಲಿ ಮ್ಯಾಮುಸಿಯಮ್ನ ರೋಮನ್ ಕೋಟೆಯ ಮರುನಿರ್ಮಿತ ಭಾಗವನ್ನು ಸಾರ್ವಜನಿಕರಿಗಾಗಿ ತೆರೆದಿಡಲಾಗಿದೆ. ಅಂದಿನ [[ಲಿವರ್ಪೂಲ್ ರಸ್ತೆ ರೈಲು ನಿಲ್ದಾಣ|ಲಿವರ್ಪೂಲ್ ರಸ್ತೆ ರೈಲು ನಿಲ್ದಾಣದಲ್ಲಿರುವ]] [[ಮ್ಯೂಸಿಯಮ್ ಆಫ್ ಸೈಯನ್ಸ್ ಅಂಡ್ ಇಂಡಸ್ಟ್ರಿ|ಮ್ಯೂಸಿಯಮ್ ಆಫ್ ಸೈಯನ್ಸ್ ಅಂಡ್ ಇಂಡಸ್ಟ್ರಿಯಲ್ಲಿ]] [[ಹಬೆಯ ಲೊಕೊಮೊಟಿವ್]]ಗಳು, ಕೈಗಾರಿಕಾ ಯಂತ್ರೋಪಕರಣಗಳು ಮತ್ತು [[ವಿಮಾನ|ವಿಮಾನಗಳ]] ವಿಶಾಲ ಸಂಗ್ರಹವಿದೆ.<ref name="mosi">{{cite web|url=http://www.mosi.org.uk/explore-mosi|title=Explore MOSI|year=2009|publisher=Museum of Science and Industry|accessdate=2009-07-24}}</ref> [[ಮ್ಯೂಸಿಯಮ್ ಆಫ್ ಟ್ರ್ಯಾನ್ಸ್ಪೋರ್ಟ್]]ನಲ್ಲಿ ಐತಿಹಾಸಿಕ ಬಸ್ ಮತ್ತು ಟ್ರ್ಯಾಮ್ಗಳ ಸಂಗ್ರಹಗಳನ್ನು ಪ್ರದರ್ಶನಕ್ಕಿಡಲಾಗಿದೆ.<ref name="gmts">{{cite web|url=http://www.gmts.co.uk/collections/vehicles.html|title=Vehicle Collection|year=2007|publisher=Greater Manchester Museum of Transport|accessdate=2009-07-24|archive-date=2009-06-06|archive-url=https://web.archive.org/web/20090606224147/http://www.gmts.co.uk/collections/vehicles.html|url-status=dead}}</ref> ಪಕ್ಕದ ಟ್ರ್ಯಾಫರ್ಡ್ ಪ್ರಧಾನನಗರ ವಿಭಾಗದ ನಗರ ಕೇಂದ್ರದಿಂದ ತುಸು ದೂರದಲ್ಲಿರುವ ಸ್ಯಾಲ್ಫರ್ಡ್ ಕ್ವೇಯ್ಸ್ನಲ್ಲಿ [[ಇಂಪೀರಿಯಲ್ ವಾರ್ ಮ್ಯೂಸಿಯಮ್ ನಾರ್ತ್]]ನ ನೆಲೆಯಾಗಿದೆ.<ref name="iwm">{{cite web|url=http://north.iwm.org.uk/|title=Imperial War Museum North website|publisher=Imperial War Museum|accessdate=2009-07-24|archive-date=2005-01-31|archive-url=https://web.archive.org/web/20050131172550/http://north.iwm.org.uk/|url-status=dead}}</ref> ೧೮೮೦ರ ದಶಕದಲ್ಲಿ ಸಾರ್ವಜನಿಕರಿಗೆ ತೆರೆಯಲಾದ [[ಮ್ಯಾಂಚೆಸ್ಟರ್ ಮ್ಯೂಸಿಯಮ್|ಮ್ಯಾಂಚೆಸ್ಟರ್ ಮ್ಯೂಸಿಯಮ್ನಲ್ಲಿ]] ಗಮನಾರ್ಹವಾದ [[ಈಜಿಪ್ಟ್ಶಾಸ್ತ್ರ]] ಮತ್ತು [[ನೈಸರ್ಗಿಕ ಇತಿಹಾಸ]] ಸಂಗ್ರಹಗಳಿವೆ.<ref name="museum">{{cite web|url=http://www.museum.manchester.ac.uk/aboutus/history/|title=The History of The Manchester Museum|publisher=University of Manchester|accessdate=2009-07-24|archive-date=2009-06-27|archive-url=https://web.archive.org/web/20090627082857/http://www.museum.manchester.ac.uk/aboutus/history/|url-status=dead}}</ref>
ಮಾಸ್ಲೆ ಬೀದಿಯಲ್ಲಿರುವ ಪುರಸಭೆ ಸ್ವಾಮ್ಯದ [[ಮ್ಯಾಂಚೆಸ್ಟರ್ ಕಲಾ ಪ್ರದರ್ಶನಾಲಯ|ಮ್ಯಾಂಚೆಸ್ಟರ್ ಕಲಾ ಪ್ರದರ್ಶನಾಲಯದಲ್ಲಿ]] ಯುರೋಪಿಯನ್ ವರ್ಣಚಿತ್ರಗಳ ಕಾಯಂ ಸಂಗ್ರಹ, ಬ್ರಿಟನ್ನ [[ಪ್ರಿರಫೆಲೈಟ್]] ಚಿತ್ರಕಲೆಯ ಅತಿ ಗಮನಾರ್ಹ ಸಂಗ್ರಹಗಳಿವೆ.<ref name="preraph1">{{cite web|url=http://www.24hourmuseum.org.uk/manchester/local/TRA18176.html?ixsid=0fgOeKoWN6b|title=The Pre-Raphaelite Collections|last=Moss|first=Richard|date=2003-10-17|publisher=24-Hour Museum|accessdate=2009-07-24|archive-date=2011-09-27|archive-url=https://web.archive.org/web/20110927122044/http://www.24hourmuseum.org.uk/manchester/local/TRA18176.html?ixsid=0fgOeKoWN6b|url-status=dead}}</ref><ref name="preraph2">{{cite book|last=Morris|first=Edward |title=Public art collections in north-west England|url=https://archive.org/details/publicartcollect0000morr|publisher=Liverpool University Press|year=2001|pages=[https://archive.org/details/publicartcollect0000morr/page/118 118]|isbn=0853235279|accessdate=2009-07-24}}</ref>
ನಗರದ ದಕ್ಷಿಣ ಭಾಗದಲ್ಲಿ, [[ವ್ಹಿಟ್ವರ್ತ್ ಕಲಾ ಪ್ರದರ್ಶನಾಲಯ|ವ್ಹಿಟ್ವರ್ತ್ ಕಲಾ ಪ್ರದರ್ಶನಾಲಯದಲ್ಲಿ]] ಆಧುನಿಕ ಕಲೆ, ಶಿಲ್ಪಕಲೆ ಮತ್ತು ಜವಳಿ ಸಂಗ್ರಹವಿದೆ.<ref name="whitworth">{{cite web|url=http://www.whitworth.manchester.ac.uk/collection/|title=Collection|publisher=Whitworth Gallery|accessdate=2009-07-24}}</ref> ಮ್ಯಾಂಚೆಸ್ಟರ್ನಲ್ಲಿ ಇತರೆ ವಸ್ತು ಪ್ರದರ್ಶನಾ ಸ್ಥಳಗಳಿವೆ. ಅವು [[ಕಾರ್ನರ್ಹೌಸ್]], [[ಉರ್ಬಿಸ್]] ಕೇಂದ್ರ, [[ಪ್ಲ್ಯಾಟ್ ಫೀಲ್ಡ್ಸ್ ಪಾರ್ಕ್|ಪ್ಲ್ಯಾಟ್ ಫೀಲ್ಡ್ಸ್ ಪಾರ್ಕ್ನಲ್ಲಿರುವ]] ಮ್ಯಾಂಚೆಸ್ಟರ್ ವೇಷಭೂಷಣ ಗ್ಯಾಲರಿ, [[ಪೀಪಲ್ಸ್ ಹಿಸ್ಟರಿ ಮ್ಯೂಸಿಯಮ್]], [[ಓಲ್ಡ್ ಟ್ರ್ಯಾಫರ್ಡ್ ಫುಟ್ಬಾಲ್ ಕ್ರೀಡಾಂಗಣ|ಓಲ್ಡ್ ಟ್ರ್ಯಾಫರ್ಡ್ ಫುಟ್ಬಾಲ್ ಕ್ರೀಡಾಂಗಣದಲ್ಲಿರುವ]] ಮ್ಯಾಂಚೆಸ್ಟರ್ ಯುನೈಟೆಡ್ ವಸ್ತುಪ್ರದರ್ಶನಾಲಯ ಹಾಗೂ [[ಮ್ಯಾಂಚೆಸ್ಟರ್ ಯಹೂದ್ಯರ ವಸ್ತು ಪ್ರದರ್ಶನಾಲಯ]].<ref name="virtualmanc">{{cite web|url=http://www.manchestereventsguide.co.uk/section/museums.html|title=Manchester Museums Guide|year=2009|publisher=Virtual Manchester|accessdate=2009-07-24|archive-date=2009-05-30|archive-url=https://web.archive.org/web/20090530143656/http://www.manchestereventsguide.co.uk/section/museums.html|url-status=dead}}</ref>
ಕೈಗಾರಿಕಾ ಮ್ಯಾಂಚೆಸ್ಟರ್ ಮತ್ತು ಸ್ಯಾಲ್ಫರ್ಡ್ನ ಬೆಂಕಿಕಡ್ಡಿ ಚಿತ್ರಕಲೆಗೆ ಖ್ಯಾತ ಸ್ಟ್ರೆಟ್ಫರ್ಡ್-ಸಂಜಾತ ಚಿತ್ರಕಲಾವಿದ {{nowrap|[[L. S. Lowry|L.S. Lowry]]}} ನ ಕಲಾಕೃತಿಗಳನ್ನು ನಗರ ಹಾಗು ವ್ಹಿಟ್ವರ್ತ್ ಮ್ಯಾಂಚೆಸ್ಟರ್ ವಸ್ತುಪ್ರದರ್ಶನಾಲಯ ಎರಡರಲ್ಲೂ ಕಾಣಬಹುದು. ಪಕ್ಕದ ಸ್ಯಾಲ್ಫರ್ಡ್ ನಗರ ವಿಭಾಗದಲ್ಲಿರುವ ಸ್ಯಾಲ್ಫರ್ಡ್ ಕ್ವೇಯ್ಸ್ನಲ್ಲಿರುವ ನ ಕಲಾಕೃತಿಗಳನ್ನು ನಗರ ಹಾಗು ವ್ಹಿಟ್ವರ್ತ್ ಮ್ಯಾಂಚೆಸ್ಟರ್ ವಸ್ತುಪ್ರದರ್ಶನಾಲಯ ಎರಡರಲ್ಲೂ ಕಾಣಬಹುದು. ಪಕ್ಕದ ಸ್ಯಾಲ್ಫರ್ಡ್ ನಗರ ವಿಭಾಗದಲ್ಲಿರುವ ಸ್ಯಾಲ್ಫರ್ಡ್ ಕ್ವೇಯ್ಸ್ನಲ್ಲಿರುವ [[ದಿ ಲೌರಿ]] ಕಲಾ ಕೇಂದ್ರದಲ್ಲಿ ಈತನ ಕಲಾಕೃತಿಯ ಖಾಯಂ ಪ್ರದರ್ಶನಕ್ಕೆ ಮುಡಿಪಾಗಿದೆ.<ref name="lowry">{{cite web|url=http://www.thelowry.com/lslowry/lslowrycollection.html|title=The Lowry Collection|year=2009|publisher=The Lowry|accessdate=2009-07-24}}</ref>
=== ಸಾಹಿತ್ಯ ===
ಹತ್ತೊಂಬತ್ತನೆಯ ಶತಮಾನದಲ್ಲಿ, ಕೈಗಾರಿಕೀಕರಣದಿಂದ ಬ್ರಿಟನ್ನಲ್ಲಿ ಗಮನಸೆಳೆದ ಬದಲಾವಣೆಗಳ ಕಾರ್ಯಗಳಲ್ಲಿ ಮ್ಯಾಂಚೆಸ್ಟರ್ ಕಾಣಿಸಿಕೊಂಡಿದೆ. ಇವುಗಳಲ್ಲಿ, [[ಎಲಿಜಬೆತ್ ಗ್ಯಾಸ್ಕೆಲ್|ಎಲಿಜಬೆತ್ ಗ್ಯಾಸ್ಕೆಲ್ರ]] ಕಾದಂಬರಿ ''[[ಮೇರಿ ಬಾರ್ಟನ್]]: ಎ ಟೇಲ್ ಆಫ್ ಮ್ಯಾಂಚೆಸ್ಟರ್ ಲೈಫ್'' (೧೮೪೮),<ref>{{cite web|url=http://www.bbc.co.uk/history/historic_figures/gaskell_elizabeth.shtml|title=Elizabeth Gaskell (1810 - 1865)|publisher=BBC|accessdate=2007-11-02}}</ref> ಹಾಗೂ, ಮ್ಯಾಂಚೆಸ್ಟರ್ನಲ್ಲಿ ವಾಸಿಸಿ, ನೌಕರಿ ಮಾಡಿಕೊಂಡಿದ್ದ [[ಫ್ರಿಡ್ರಿಕ್ ಏಂಜಲ್ಸ್]] ಬರೆದ ''[[ದಿ ಕಂಡಿಷನ್ ಆಫ್ ದಿ ವರ್ಕಿಂಗ್ ಕ್ಲ್ಯಾಸ್ ಇನ್ ಇಂಗ್ಲೆಂಡ್ ಇನ್ 1844]]'' ಸಹ ಸೇರಿವೆ. [[ಚಾರ್ಲ್ಸ್ ಡಿಕೆನ್ಸ್]] ತಮ್ಮ ಕಾದಂಬರಿ ''[[ಹಾರ್ಡ್ ಟೈಮ್ಸ್]]'' ನ್ನು ಈ ನಗರದಲ್ಲಿ ಸಿಧ್ಧಪಡಿಸಿದರೆಂದು ನಂಬಲಾಗಿದೆ. ಅದನ್ನು ಆಂಶಿಕವಾಗಿ [[ಪ್ರೆಸ್ಟನ್]] ನಗರವನ್ನು ಮಾದರಿಯಾಗಿಟ್ಟುಕೊಂಡಿದ್ದರೂ, ಇದು ಅವರ ಸ್ನೇಹಿತೆ ಶ್ರೀಮತಿ ಗ್ಯಾಸ್ಕೆಲ್ರ ಪ್ರಭಾವವನ್ನು ಎತ್ತಿ ತೋರಿಸುತ್ತದೆ.
=== ಧರ್ಮ ===
ವಿವಿಧ ಧಾರ್ಮಿಕ ಸಮುದಾಯದವರು ಮ್ಯಾಂಚೆಸ್ಟರ್ನಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಅತಿ ಹೆಚ್ಚು ಜನರು ಕ್ರಿಶ್ಚಿಯನ್ ಧರ್ಮದವರಾಗಿದ್ದು, ಇಸ್ಲಾಮ್ ಎರಡನೆಯ ಸ್ಥಾನದಲ್ಲಿದೆ. [[ಚೀಟ್ಹ್ಯಾಮ್ ಹಿಲ್]] ನಲ್ಲಿ ಯಹೂದ್ಯರು ಎರಡನೆಯ ಅತಿ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ, ಹಾಗೂ [[ಅನ್ಕೋಟ್ಸ್|ಅನ್ಕೋಟ್ಸ್ನಲ್ಲಿ]] ವಾಸಿಸುವ ಬಹಳಷ್ಟು ಜನರು ಐರಿಷ್ ಕ್ಯಾತೊಲಿಕ್ ಸಮುದಾಯದವರಾಗಿದ್ದಾರೆ. ನಗರದುದ್ದಗಲಕ್ಕೂ ಹಲವು ಇಗರ್ಜಿಗಳು (ಚರ್ಚ್ಗಳು), ದೇವಾಲಯಗಳು, ಮಸೀದಿಗಳು, ಯಹೂದ್ಯ ದೇವಾಲಯಗಳು ಹಾಗೂ ಪ್ರಧಾನ ಇಗರ್ಜಿಗಳಿವೆ.
=== ರಾತ್ರಿಜೀವನ ===
[[ಚಿತ್ರ:Canal street manchester.jpg|thumb|right|ಮ್ಯಾಂಚೆಸ್ಟರ್ನ ಅತಿ ಲವಲವಿಕೆಯುಳ್ಳ ರಾತ್ರಿವಿಹಾರಮಂದಿರಗಳಲ್ಲಿ ಒಂದಾದ ಕೆನಾಲ್ ಸ್ಟ್ರೀಟ್; ನಗರದ ಸಲಿಂಗಕಾಮಿ ಗ್ರಾಮದ ಭಾಗ.]] ಇಸವಿ ೧೯೯೩ರಿಂದಲೂ, ಸ್ಥಳೀಯ ಪ್ರಾಧಿಕಾರದ ಸಕ್ರಿಯ ನೆರವಿನೊಂದಿಗೆ, ಬಿಯರ್ ತಯಾರಿಕೆಯ ಉದ್ದಿಮೆಗಳಿಂದ ಬಾರ್ಗಳು,ಸಾರ್ವಜನಿಕ ಗೃಹಗಳು ಮತ್ತು ಮತ್ತು ಕ್ಲಬ್ಗಳಿಗೆ ಬಂಡವಾಳ ಹೂಡಿಕೆಯಿಂದ ಮ್ಯಾಂಚೆಸ್ಟರ್ನ ರಾತ್ರಿ-ವೇಳೆಯ ಆರ್ಥಿಕತೆಯು ಗಮನಾರ್ಹವಾಗಿ ವಿಸ್ತರಿಸಿದೆ.<ref name="Park"/> ಇಲ್ಲಿರುವ ೫೦೦ಕ್ಕಿಂತಲೂ ಹೆಚ್ಚು ಪರವಾನಗಿ ಹೊಂದಿದ ರಾತ್ರಿ-ಮನರಂಜನಾ ಕೇಂದ್ರಗಳು {{Formatnum:250000}} ಹೆಚ್ಚು ಗ್ರಾಹಕರನ್ನು ಹಿಡಿಸಬಹುದು,<ref>{{cite web | url = http://www.esrc.ac.uk/ESRCInfoCentre/about/CI/CP/research_publications/seven_sins/gluttony/nighttime.aspx?ComponentId=10894&SourcePageId=11003 | title = The Night-time Economy | publisher = Economic and Social Research Council | work = esrc society today | accessdate = 2007-11-12 | archive-date = 2008-08-07 | archive-url = https://web.archive.org/web/20080807013339/http://www.esrc.ac.uk/ESRCInfoCentre/about/CI/CP/research_publications/seven_sins/gluttony/nighttime.aspx?ComponentId=10894&SourcePageId=11003 | url-status = dead }}</ref> ಹಾಗೂ ವಾರಾಂತ್ಯದ ರಾತ್ರಿಯಲ್ಲಿ ಸುಮಾರು ೧೧೦-{{Formatnum:130000}} ಜನರು ಬಂದು ಸೇರಬಹುದು.<ref name="Hobbs"/> ರಾತ್ರಿ-ವೇಳೆಯ ಆರ್ಥಿಕತೆಯು ಸುಮಾರು <ref>{{cite web | url = http://news.bbc.co.uk/sport3/commonwealthgames2002/hi/features/newsid_1993000/1993489.stm | title = Guide to Manchester | work = BBC Sport | publisher = BBC | accessdate = 2007-11-12 | year = 2002}}</ref>{{nowrap|£100 million pa}} ಮೌಲ್ಯವನ್ನು ಹೊಂದಿದ್ದು {{Formatnum:12000}} ನೌಕರಿಗಳಿಗೆ ಆಧಾರ ನೀಡುತ್ತದೆ.<ref name="Hobbs">{{cite journal | last = Hobbs |coauthors = Simon Winlow, Philip Hadfield, Stuart Lister | first = Dick | year = 2005 | title = Violent Hypocrisy: Governance and the Night-time Economy | journal = European Journal of Criminology | volume = 2 | pages = 161 | doi = 10.1177/1477370805050864}}</ref>
[[ದಿ ಸ್ಟೋನ್ ರೋಸಸ್]], [[ಹ್ಯಾಪಿ ಮಂಡೇಸ್]], [[ಇಂಸ್ಪಿರಲ್ ಕಾರ್ಪೆಟ್ಸ್]], [[808 ಸ್ಟೇಟ್]], [[ಜೇಮ್ಸ್]] ಹಾಗೂ [[ದಿ ಷಾರ್ಲಟನ್ಸ್|ದಿ ಷಾರ್ಲಟನ್ಸ್ನಂತಹ]] ತಂಡಗಳ ಉದ್ಭವಕ್ಕೆ ಕಾರಣವಾದ ೧೯೮೦ರ ದಶಕದಲ್ಲಿನ [[ಮ್ಯಾಡ್ಚೆಸ್ಟರ್|ಮ್ಯಾಡ್ಚೆಸ್ಟರ್ದೃಶ್ಯವು]], [[ದಿ ಹ್ಯಾಸಿಯೆಂಡಾ|ದಿ ಹ್ಯಾಸಿಯೆಂಡಾದಂತಹ]] ಕ್ಲಬ್ಗಳನ್ನು ಆಧರಿಸಿತ್ತು.<ref name="Hasl">{{cite book | last = Haslam | first = Dave | title = Manchester, England | publisher = Fourth Estate | location = New York | year = 2000 | isbn = 1-84115-146-7}}</ref> ಈ ಕಾಲವು ''[[24 ಹಾವರ್ ಪಾರ್ಟಿ ಪೀಪಲ್]]'' ಎಂಬ ಚಲನಚಿತ್ರದ ಕಥಾವಿಷಯವಾಗಿತ್ತು. ಆ ಸಮಯದಲ್ಲಿ ದೊಡ್ಡ ಕ್ಲಬ್ಗಳು ಸಂಘಟಿತ ಅಪರಾಧಗಳಿಂದ ತೊಂದರೆಗಳಿಗೀಡಾಗುತ್ತಿದ್ದವು. ಸಿಬ್ಬಂದಿಯನ್ನು ಸಂಪೂರ್ಣವಾಗಿ ಬೆದರಿಸಲಾಗುತ್ತಿತ್ತು ಮತ್ತು ಉಚಿತ ಪ್ರವೇಶಕ್ಕೆ ಮತ್ತು ಮದ್ಯಪಾನಕ್ಕೆ ಒತ್ತಾಯಿಸಲಾಗುತ್ತಿತ್ತು(ಕೊಡಲಾಗುತ್ತಿತ್ತು), ಜೊತೆಗೆ ಮಾದಕವಸ್ತು ವ್ಯವಹಾರಗಳನ್ನೂ ಮುಕ್ತವಾಗಿ ನಡೆಸಲಾಗುತ್ತಿತ್ತು - ಎಂದು ಹ್ಯಾಸ್ಲಾಮ್ ಒಂದು ಕ್ಲಬ್ ಬಗ್ಗೆ ವಿವರಣೆ ನೀಡಿದ್ದಾರೆ.<ref name="Hasl"/> ಮಾದಕಮದ್ದು-ಸಂಬಂಧಿತ ಹಿಂಸಾಚಾರದ ಘಟನೆಗಳ ಸರಪಳಿ ನಡೆದ ಕಾರಣ, ದಿ ಹ್ಯಾಸಿಯೆಂಡಾವನ್ನು ೧೯೯೭ರಲ್ಲಿ ಮುಚ್ಚಿಸಲಾಯಿತು.<ref name="Park"/>
=== ಸಲಿಂಗಕಾಮಿಗಳ ಗ್ರಾಮ) ===
[[ಕೆನಾಲ್ ಸ್ಟ್ರೀಟ್]] ಪ್ರದೇಶದಲ್ಲಿರುವ ರಾತ್ರಿ-ಮನರಂಜನಾ ಗೃಹಗಳಲ್ಲಿ ಕನಿಷ್ಠ ಸುಮಾರು ೧೯೪೦ರ ದಶಕದಿಂದಲೂ <ref name="Park"/> ಸಲಿಂಗಕಾಮಿ ಗ್ರಾಹಕರು ಇದ್ದದ್ದು ಉಂಟು. ಈಗ ಈ ಪ್ರದೇಶವು ಮ್ಯಾಂಚೆಸ್ಟರ್ನ ಸಲಿಂಗಕಾಮಿ ಸಮುದಾಯದ ಕೇಂದ್ರವಾಗಿದೆ. ಮೂಲಭೂತ ಸೌಕರ್ಯಗಳಲ್ಲಿ ನಗರ ಸಭೆಯು ಹೂಡಿಕೆಯಲ್ಲಿ ತೊಡಗಿದ ನಂತರ, UKಯ ಮೊದಲ ಸಲಿಂಗಕಾಮಿ ಪ್ರಧಾನಮಾರುಕಟ್ಟೆಯನ್ನು ತೆರೆಯಲಾಯಿತು. ನೂತನ ಬಾರ್ಗಳು ಮತ್ತು ಕ್ಲಬ್ಗಳನ್ನು ಆರಂಭಿಸಿದಾಗಿಂದಲೂ ಪ್ರತಿ ವಾರಾಂತ್ಯದಲ್ಲಿ ೨೦,೦೦೦ ಪ್ರವಾಸಿಗಳನ್ನು ಈ ಪ್ರದೇಶವು ಆಕರ್ಷಿಸುತ್ತಿದೆ. ಇಸವಿ ೧೯೯೧ರಿಂದಲೂ, ಪ್ರತಿ ಆಗಸ್ಟ್ ತಿಂಗಳಂದು [[ಮ್ಯಾಂಚೆಸ್ಟರ್ ಪ್ರೈಡ್]] ಎಂಬ ಜನಪ್ರಿಯ ಉತ್ಸವವನ್ನು ಆಯೋಜಿಸಿದೆ.<ref>{{cite news | title=Europe's biggest gay festival to be held in UK |url=http://www.manchestereveningnews.co.uk/news/s/51/51498_europes_biggest_gay_festival_to_be_held_in_uk.html |work=[[Manchester Evening News]] |publisher=M.E.N media |date=೧೧ February ೨೦೦೩ |accessdate=೨೦೦೭-೦೫-೨೦}}</ref> ''[[ಕ್ವೀಯರ್ ಆಸ್ ಫೋಲ್ಕ್]]'' TV ಸರಣಿಯನ್ನು ಇಲ್ಲಿ ಹೆಣೆಯಲಾಯಿತು.
== ಶಿಕ್ಷಣ ==
{{See also|List of schools in Greater Manchester}}
[[ಚಿತ್ರ:Whitworthhall.jpg|thumb|right|ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯ ಕ್ಯಾಂಪಸ್ ಭಾಗವಾದ ವ್ಹಿಟ್ವರ್ತ್ ಹಾಲ್ನ ಪ್ರವೇಶದ್ವಾರ.]]
ಮ್ಯಾಂಚೆಸ್ಟರ್ ನಗರದಲ್ಲಿ ಎರಡು [[ವಿಶ್ವವಿದ್ಯಾನಿಲಯ|ವಿಶ್ವವಿದ್ಯಾನಿಲಯಗಳಿವೆ]]. [[ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯ|ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯವು]] ಯುನೈಟೆಡ್ ಕಿಂಗ್ಡಮ್ನಲ್ಲಿಯೇ ಅತಿದೊಡ್ಡ ಪೂರ್ಣಕಾಲಿಕ, ಕಾಲೇಜೇತರ ವಿಶ್ವವಿದ್ಯಾನಿಲಯವಾಗಿದೆ. ಇಸವಿ ೨೦೦೪ರಲ್ಲಿ [[ವಿಕ್ಟೋರಿಯಾ ಯುನಿವರ್ಸಿಟಿ ಆಫ್ ಮ್ಯಾಂಚೆಸ್ಟರ್]] ಮತ್ತು [[UMIST]] ವಿಲೀನಗೊಳಿಸಿ ಈ ವಿಶ್ವವಿದ್ಯಾನಿಲಯವನ್ನು ಸೃಷ್ಟಿಸಲಾಯಿತು.<ref name="Man Uni">{{Cite web| url=http://www.manchester.ac.uk/aboutus/news/archive/list/item/?id=2462&year=2007&month=01| title=Manchester still top of the popularity league|accessdate=2008-10-06|publisher=[[University of Manchester]]|date=೧೮ January ೨೦೦೭}}</ref> UKಯಲ್ಲಿ ಮೊದಲ ಬಾರಿಗೆ ೧೯೬೫ರಲ್ಲಿ MBA ಪಠ್ಯಕ್ರಮವನ್ನು ಪರಿಚಯಿಸಿದ [[ಮ್ಯಾಂಚೆಸ್ಟರ್ ಬ್ಯುಸಿನೆಸ್ ಸ್ಕೂಲ್|ಮ್ಯಾಂಚೆಸ್ಟರ್ ಬ್ಯುಸಿನೆಸ್ ಸ್ಕೂಲ್ನ್ನು]] ಒಳಗೊಂಡಿದೆ. ಇಸವಿ ೧೯೭೦ರಲ್ಲಿ ಮೂರು ಕಾಲೇಜ್ಗಳನ್ನು ವಿಲೀನಗೊಳಿಸಿ [[ಮ್ಯಾಂಚೆಸ್ಟರ್ ಮಹಾನಗರ ವಿಶ್ವವಿದ್ಯಾನಿಲಯ|ಮ್ಯಾಂಚೆಸ್ಟರ್ ಮಹಾನಗರ ವಿಶ್ವವಿದ್ಯಾನಿಲಯವನ್ನು]] ಮ್ಯಾಂಚೆಸ್ಟರ್ ಪಾಲಿಟೆಕ್ನಿಕ್ ಎಂದು ರೂಪಿಸಲಾಯಿತು. ಇಸವಿ ೧೯೯೨ರಲ್ಲಿ ಇದಕ್ಕೆ ವಿಶ್ವವಿದ್ಯಾನಿಲಯ ಸ್ಥಾನಮಾನ ದೊರೆಯಿತು. ಇದೇ ವರ್ಷದಲ್ಲಿ, ದಕ್ಷಿಣ ಚೆಷೈರ್ನಲ್ಲಿರುವ ಕ್ರೂ ಅಂಡ್ ಅಲ್ಸಗೆರ್ ಉನ್ನತ ಶಿಕ್ಷಣಾ ಕಾಲೇಜ್ನ್ನು ವಿಲೀನಗೊಳಿಸಿಕೊಂಡಿತು.<ref>{{cite book | last = Fowler | first = Alan | title = Many Arts, Many Skills: Origins of Manchester Metropolitan University | url = https://archive.org/details/manyartsmanyskil0000fowl | year = 1994 | publisher = Manchester Metropolitan University | location = Manchester | isbn = 1-870355-05-9 | pages = [https://archive.org/details/manyartsmanyskil0000fowl/page/115 115]–20, 226–8}}</ref>
ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯ, ಮ್ಯಾಂಚೆಸ್ಟರ್ ಮಹಾನಗರ ವಿಶ್ವವಿದ್ಯಾನಿಲಯ ಮತ್ತು [[ರಾಯಲ್ ನಾರ್ದರ್ನ್ ಕಾಲೇಜ್ ಆಫ್ ಮ್ಯೂಸಿಕ್]] - ಈ ಮೂರೂ ನಗರ ಕೇಂದ್ರದ ದಕ್ಷಿಣ ಬದಿಯಲ್ಲಿರುವ ಆಕ್ಸ್ಫರ್ಡ್ ರಸ್ತೆಯ ಸುತ್ತಲೂ ಗುಂಪಾಗಿವೆ. ಇದು ಯುರೋಪ್ನ ಅತಿ ವಿಶಾಲ ನಗರವಲಯದ ಉನ್ನತ ಶಿಕ್ಷಣ ಆವರಣವಾಗಿದೆ.<ref name="Higher edu">{{cite book|title=Pevsner Architectural Guides: Manchester|url=https://archive.org/details/manchester0000hart|last=Hartwell|first=Clare|year=2001|page=[https://archive.org/details/manchester0000hart/page/105 105]|publisher=Penguin Books|location=London|isbn=0-14-071131-7}}</ref> ಎಲ್ಲ ಒಟ್ಟಿಗೆ ಸೇರಿಸಿ, [[ಉನ್ನತ ಶಿಕ್ಷಣ|ಉನ್ನತ ಶಿಕ್ಷಣದಲ್ಲಿ]] ೭೩,೧೬೦ ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯಿದೆ.<ref>{{cite web|url=http://www.hesa.ac.uk/dox/dataTables/studentsAndQualifiers/download/institution0607.xls|title=Table 0a - All students by institution, mode of study, level of study, gender and domicile 2006/07|accessdate=2008-03-21|year=2008|format=XLS|work=Students and Qualifiers Data Tables|publisher=[[Higher Education Statistics Agency]]}}</ref> ಆದರೂ, ಇವರಲ್ಲಿ ೬,೦೦೦ ವಿದ್ಯಾರ್ಥಿಗಳು ಮ್ಯಾಂಚೆಸ್ಟರ್ ಪ್ರಧಾನನಗರ ವಿಶ್ವವಿದ್ಯಾಲಯದ [[ಚೆಷೈರ್]]ನಲ್ಲಿರುವ [[ಕ್ರೂ]] ಮತ್ತು [[ಅಲ್ಸಗೆರ್]] ಕ್ಯಾಂಪಸ್ಗಳಲ್ಲಿ ನೆಲೆಸಿದ್ದಾರೆ.<ref>{{cite web|url=http://www.cheshire.mmu.ac.uk/home/aboutus/history/mmucheshire.php|title=History - About Us|accessdate=2008-10-06|year=2008|work=MMU Cheshire|publisher=Manchester Metropolitan University|archive-date=2007-05-03|archive-url=https://web.archive.org/web/20070503071954/http://www.cheshire.mmu.ac.uk/home/aboutus/history/mmucheshire.php|url-status=dead}}</ref>
[[ಮ್ಯಾಂಚೆಸ್ಟರ್ ಗ್ರ್ಯಾಮರ್ ಸ್ಕೂಲ್]] ಮ್ಯಾಂಚೆಸ್ಟರ್ನ ಪ್ರಸಿದ್ಧ ಪ್ರೌಢಶಾಲೆಗಳಲ್ಲೊಂದು. ಕತಿಡ್ರಲ್ ಎನ್ನಲಾದ ಭವನದ ಪಕ್ಕದಲ್ಲಿ ಇದನ್ನು ೧೫೧೫ರಲ್ಲಿ <ref name="Man GS">{{cite book|title=Manchester: A History|url=https://archive.org/details/manchesterhistor0000kidd|last=Kidd|first=Alan|year=2006|page=[https://archive.org/details/manchesterhistor0000kidd/page/206 206]|publisher=Carnegie Publishing|location=Lancaster|isbn=1-85936-128-5}}<br />•{{cite book|title=A History of Manchester|url=https://archive.org/details/historyofmanches0000hylt|last=Hylton|first=Stuart|year=2003|page=[https://archive.org/details/historyofmanches0000hylt/page/25 25]|publisher=Phillimore & Co|isbn=1-86077-240-4}}</ref> ಒಂದು ಉಚಿತ [[ಗ್ರಾಮರ್ ಶಾಲೆ|ಗ್ರಾಮರ್ ಶಾಲೆಯಾಗಿ]] ಸ್ಥಾಪಿಸಲಾಯಿತು. ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಸ್ಥಳಾವಕಾಶ ನೀಡಲೆಂದು, ಇಸವಿ ೧೯೩೧ರಲ್ಲಿ ದಕ್ಷಿಣ ಮ್ಯಾಂಚೆಸ್ಟರ್ನ ಫ್ಯಾಲೊಫೀಲ್ಡ್ನಲ್ಲಿರುವ ಓಲ್ಡ್ ಹಾಲ್ ಲೇನ್ಗೆ ಸ್ಥಳಾಂತರಗೊಂಡಿತು. ಯುದ್ಧ-ನಂತರದ ಅವಧಿಯಲ್ಲಿ ಇದು [[ನೇರ ಅನುದಾನಿತ ಗ್ರಾಮರ್ ಶಾಲೆ|ನೇರ ಅನುದಾನಿತ ಗ್ರಾಮರ್ ಶಾಲೆಯಾಗಿತ್ತು]]. ಅರ್ಥಾತ್ ಈ ಶಾಲೆಗೆ ಸರ್ಕಾರದಿಂದ ಆಂಶಿಕ ಅನುದಾನ ದೊರೆಯುತ್ತಿತ್ತು. ಆದರೆ, ೧೯೭೬ರಲ್ಲಿ ನೇರ-ಅನುದಾನ ವ್ಯವಸ್ಥೆಯನ್ನು ರದ್ದುಗೊಳಿಸಿದಾಗ ಅದು ಪುನಃ ಮೊದಲಿನ ಸ್ವತಂತ್ರ ಸ್ಥಾನಮಾನಕ್ಕೆ ಮರಳಿತು.<ref name="MGS">{{cite book|title=Dare to be wise: a history of the Manchester Grammar School|url=https://archive.org/details/daretobewisehist0000bent|last=Bentley|first=James|year=1990|pages=[https://archive.org/details/daretobewisehist0000bent/page/108 108], 114, 119–121|publisher=James & James|location=London|isbn=0-907383-04-1}}</ref> ಇದರ ಹಿಂದಿನ ಕಟ್ಟಡದಲ್ಲಿ [[ಚೆಟ್ಹ್ಯಾಮ್ಸ್ ಸ್ಕೂಲ್ ಆಫ್ ಮ್ಯೂಸಿಕ್]] ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ. ಮೂರು ಶಾಲೆಗಳಾದ [[ವಿಲಿಯಮ್ ಹುಲ್ಮ್ ಗ್ರಾಮರ್ ಶಾಲೆ]], [[ವಿಥಿಂಗ್ಟನ್ ಬಾಲಿಕೆಯರ ಶಾಲೆ]] ಮತ್ತು [[ಮ್ಯಾಂಚೆಸ್ಟರ್ ಬಾಲಿಕೆಯರ ಪ್ರೌಢಶಾಲೆ]] ಸನಿಹದಲ್ಲಿವೆ.
== ಕ್ರೀಡೆ ==
{{Main|Sports in Manchester}}
[[ಚಿತ್ರ:City of Manchester Stadium 2.jpg|right|thumb|ಸಿಟಿ ಆಫ್ ಮ್ಯಾಂಚೆಸ್ಟರ್ ಕ್ರೀಡಾಂಗಣ; 2002 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇದನ್ನು ಬಳಸಲಾಗಿತ್ತು.]]
ಕ್ರೀಡೆಯ ನಗರವಾಗಿ ಮ್ಯಾಂಚೆಸ್ಟರ್ ಪ್ರಸಿದ್ಧವಾಗಿದೆ. ನಗರದ ಹೆಸರನ್ನು ಹೊಂದಿರುವ ಎರಡು [[ಪ್ರೀಮಿಯರ್ಷಿಪ್]] [[ಫುಟ್ಬಾಲ್]] ಸಂಘಟನೆಗಳಿವೆ - [[ಮ್ಯಾಂಚೆಸ್ಟರ್ ಯುನೈಟೆಡ್]] ಮತ್ತು [[ಮ್ಯಾಂಚೆಸ್ಟರ್ ಸಿಟಿ]] ಮ್ಯಾಂಚೆಸ್ಟರ್ ಸಿಟಿಯ ಆಟದ ಮೈದಾನ [[ಸಿಟಿ ಆಫ್ ಮ್ಯಾಂಚೆಸ್ಟರ್ ಕ್ರೀಡಾಂಗಣ|ಸಿಟಿ ಆಫ್ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿದೆ]] (೪೮,೦೦೦ ಪ್ರೇಕ್ಷಕರ ಸಾಮರ್ಥ್ಯ). ಮ್ಯಾಂಚೆಸ್ಟರ್ ಯುನೈಟೆಡ್ನ [[ಓಲ್ಡ್ ಟ್ರ್ಯಾಫರ್ಡ್]] ಮೈದಾನವು ಯುನೈಟೆಡ್ ಕಿಂಗ್ಡಮ್ನಲ್ಲೇ ಅತಿ ದೊಡ್ಡ ಕ್ಲಬ್ ಫುಟ್ಬಾಲ್ ಮೈದಾನವಾಗಿದೆ. ಈ ಮೈದಾನವು ೭೬,೦೦೦ ಪ್ರೇಕ್ಷಕರನ್ನು ಹಿಡಿಸಬಲ್ಲದು.ಸ್ವಲ್ಪ ನಗರದ ಆಚೆ [[ಟ್ರ್ಯಾಫರ್ಡ್]] ವಿಭಾಗದಲ್ಲಿದೆ. ಇಸವಿ [[2003|2003ರಲ್ಲಿ]] ನಡೆದ [[UEFA ಚಾಂಪಿಯನ್ಸ್ ಲಿಗ್]] ಫೈನಲ್ ಪಂದ್ಯದ ಆತಿಥ್ಯ ವಹಿಸಿದ ಇಂಗ್ಲೆಂಡ್ನ ಏಕೈಕ ಕ್ಲಬ್ ಫುಟ್ಬಾಲ್ ಮೈದಾನವಾಗಿದೆ. ಈ ಮೈದಾನವು [[ರಗ್ಬಿ ಲೀಗ್|ರಗ್ಬಿ ಲೀಗ್ನ]] [[ಸೂಪರ್ ಲೀಗ್ ಗ್ರ್ಯಾಂಡ್ ಫೈನಲ್]]ಗೆ ಕೂಡ ಸ್ಥಳವಾಗಿದೆ. [[ಲ್ಯಾಂಕಾಷೈರ್ ಕೌಂಟಿ ಕ್ರಿಕೆಟ್ ಕ್ಲಬ್|ಲ್ಯಾಂಕಾಷೈರ್ ಕೌಂಟಿ ಕ್ರಿಕೆಟ್ ಕ್ಲಬ್ನ]] ಮೈದಾನವೂ ಸಹ ಟ್ರ್ಯಾಫರ್ಡ್ನಲ್ಲಿದೆ. ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಮ್ಯಾಂಚೆಸ್ಟರ್ ಯುನೈಟೆಡ್ ವಿಶ್ವದಲ್ಲೇ ವ್ಯಾಪಕ ಫುಟ್ಬಾಲ್ ಕ್ಲಬ್ ಅಭಿಮಾನಿ ಬಳಗವನ್ನು ಹೊಂದಿದೆ. ಮ್ಯಾಂಚೆಸ್ಟರ್ ಸಿಟಿ ವಿಶ್ವದಲ್ಲೇ ಅತೀ ಶ್ರೀಮಂತ ಫುಟ್ಬಾಲ್ ಕ್ಲಬ್ ಎನಿಸಿದೆ. ಅದರ ಶ್ರೀಮಂತ ಮಾಲೀಕರು ಇದಕ್ಕೆ ಅಭನಂದನೀಯರು.<ref>{{cite news | author= Qureshi, Yakub | url=http://www.manchestereveningnews.co.uk/sport/football/manchester_city/s/1065021_the_new_football_powerhouse | title=The new football powerhouse | date= 2 September 2008 | accessdate= 2008-10-06 | work= Manchester Evening News | publisher = M.E.N. media}}</ref>
ಮ್ಯಾಂಚೆಸ್ಟರ್ ನಗರದ ಕ್ರೀಡಾಂಗಣವನ್ನು ೨೦೦೨ ಕಾಮೆನ್ವೆಲ್ತ್ ಕ್ರೀಡಾಕೂಟಕ್ಕಾಗಿ ನಿರ್ಮಿಸಲಾಯಿತು. ಕ್ರೀಡಾಕೂಟ ಮುಗಿದ ನಂತರ, ಕ್ರೀಡಾಂಗಣದ ಉತ್ತರ ಬದಿಯಲ್ಲಿರುವ ತಾತ್ಕಾಲಿಕ ಸ್ಟ್ಯಾಂಡ್ನ್ನು ತೆಗೆದು, ಕ್ರೀಡಾಂಗಣದ ಉಳಿದ ಭಾಗದ ವಿನ್ಯಾಸಕ್ಕೆ ಹೊಂದುವಂತೆ ಕಾಯಂ ರಚನೆಯನ್ನು ನಿರ್ಮಾಣ ಮಾಡಲಾಯಿತು. ಇದರ ಜೊತೆಗೆ, ನೆಲ ಮಟ್ಟವನ್ನು ಸುಮಾರು ೧೦ ಮೀಟರ್ಗಳಷ್ಟು ತಗ್ಗಿಸಿ,ಸಂಪೂರ್ಣ ಲೆವೆಲ್ ಒನ್ ಆಸನ ಪ್ರದೇಶವನ್ನು ನಿರ್ಮಿಸಲಾಯಿತು. ಕ್ರೀಡಾಕೂಟಕ್ಕಾಗಿ ಕ್ರೀಡಾಂಗಣದ ಕ್ಷಮತೆ ಸುಮಾರು ೩೮,೦೦೦ ಆಗಿತ್ತು. ಇಸವಿ ೨೦೦೩ರಲ್ಲಿ ಮ್ಯಾಂಚೆಸ್ಟರ್ ಸಿಟಿಯ ಅಗಮನಕ್ಕೆ ಸಿದ್ಧತೆಯಾಗಿ, ಪ್ರೇಕ್ಷಕರ ಆಸನಗಳನ್ನು ಇನ್ನಷ್ಟು ಹೆಚ್ಚಿಸಲಾಯಿತು. ಕ್ರೀಡಾಂಗಣದಲ್ಲಿ ಏಪ್ರಿಲ್ ೨೦೦೮ರಲ್ಲಿ ಅಧಿಕೃತ ಆಸನ ಸಾಮರ್ಥ್ಯವು ೪೭,೭೨೬ಎಂದು ದಾಖಲಾಯಿತು.<ref>{{cite book |last=James |first=Gary |title=Manchester - A Football History |publisher=James Ward |location=Halifax |year=2008 |isbn=978-0-9558127-0-5}}, pp೩೮೮-೩೯೧& p೪೨೫</ref> [[2008 UEFA ಕಪ್ ಫೈನಲ್ ಪಂದ್ಯ|2008 UEFA ಕಪ್ ಫೈನಲ್ ಪಂದ್ಯವನ್ನು]] ಈ ಕ್ರೀಡಾಂಗಣವು ಆಯೋಜಿಸಿತು.
ಮ್ಯಾಂಚೆಸ್ಟರ್ ಸಿಟಿ ತಂಡದ ಮುಂಚಿನ ಆವಾಸಸ್ಥಾನ[[ಮೇಯ್ನ್ ರೋಡ್|ಮೇಯ್ನ್ ರೋಡ್ನ್ನು]] ಇಂದು ನೆಲಸಮಗೊಳಿಸಲಾಗಿದೆ. ಇದು ಇಂದಿಗೂ ಸಹ, ಹಲವು ಗಮನಾರ್ಹ ಫುಟ್ಬಾಲ್ ದಾಖಲೆಗಳು ಮತ್ತು ಮೈಲುಗಲ್ಲುಗಳನ್ನು ಹೊಂದಿದೆ. ಇವುಗಳಲ್ಲಿ, ಇಂಗ್ಲೆಂಡ್ನಲ್ಲಿ ಆಯೋಜಿಸಲಾದ ಮೊಟ್ಟಮೊದಲ ವಿಶ್ವಕಪ್ ಅರ್ಹತಾ ಪಂದ್ಯ (೧೯೪೯); ೧೯೪೮ರಲ್ಲಿ ನಡೆದ ಮ್ಯಾಂಚೆಸ್ಟರ್ ಯುನೈಟೆಡ್ V ಆರ್ಸೆನಲ್ ಪಂದ್ಯ ವೀಕ್ಷಿಸಲು ದಾಖಲೆಯ ಲೀಗ್ ಪ್ರೇಕ್ಷಕರು (೮೩,೨೬೦); ಅತಿ ಹೆಚ್ಚು ಪ್ರಾದೇಶಿಕ ಹಾಜರು (೮೪,೫೬೯ , ಮ್ಯಾಂಚೆಸ್ಟರ್ ಸಿಟಿ V ಸ್ಟೋಕ್ ಸಿಟಿ, FA ಕಪ್, ೧೯೩೪) <ref>{{cite book |last=James |first=Gary |title=Manchester - A Football History |publisher=James Ward |location=Halifax |year=2008 |isbn=978-0-9558127-0-5}}, pp೩೮೧-೩೮೫</ref>
[[2002 ಕಾಮನ್ವೆಲ್ತ್ ಕ್ರೀಡಾಕೂಟ|2002 ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ]] ಉತ್ತಮ ದರ್ಜೆಯ ಕ್ರೀಡಾ ಸೌಲಭ್ಯಗಳನ್ನು ನಿರ್ಮಿಸಲಾಯಿತು. ಇದರಲ್ಲಿ ಮ್ಯಾಂಚೆಸ್ಟರ್ ನಗರ ಕ್ರೀಡಾಂಗಣ, [[ನ್ಯಾಷನಲ್ ಸ್ಕ್ವಾಷ್ ಕೇಂದ್ರ]] ಹಾಗೂ [[ಮ್ಯಾಂಚೆಸ್ಟರ್ ಅಕ್ವಾಟಿಕ್ಸ್ ಕೇಂದ್ರ]] ಸಹ ಸೇರಿವೆ.<ref>{{cite web |url = http://www.gameslegacy.com/cgi-bin/index.cgi/34 |title = Sporting Legacy |accessdate = 2008-10-06 |year = 2003 |work = Commonwealth Games Legacy Manchester 2002 |publisher = Commonwealth Games Legacy |archive-date = 2007-11-11 |archive-url = https://web.archive.org/web/20071111071627/http://www.gameslegacy.com/cgi-bin/index.cgi/34 |url-status = bot: unknown }}</ref> ಮ್ಯಾಂಚೆಸ್ಟರ್ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸಲು ಎರಡು ಬಾರಿ ಪೈಪೋಟಿ ನಡೆಸಿತ್ತು. ಆದರೆ, ೧೯೯೬ರಲ್ಲಿ [[ಅಟ್ಲಾಂಟಾ]] ಹಾಗೂ ೨೦೦೦ದ ಇಸವಿಯಲ್ಲಿ [[ಸಿಡ್ನಿ|ಸಿಡ್ನಿಇದನ್ನು]] ಪರಾಭವಗೊಳಿಸಿ, ಆತಿಥ್ಯ ವಹಿಸುವಲ್ಲಿ ಸಫಲವಾದವು. ಇಸವಿ ೨೦೦೦ದಲ್ಲಿ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯ ವಹಿಸಲು ಪೂರ್ವಸಿದ್ಧತೆಯ ಅಂಗವಾಗಿ, [[ಮ್ಯಾಂಚೆಸ್ಟರ್ ವೆಲೊಡ್ರೊಮ್]]ನ್ನು ಸಹ ನಿರ್ಮಿಸಲಾಯಿತು.<ref name="Park">{{cite book | last = Parkinson-Bailey | first = John J | title = Manchester: an Architectural History | url = https://archive.org/details/manchesterarchit0000park_m4y0 | year = 2000 | publisher = Manchester University Press | location = Manchester | isbn = 0-7190-5606-3 | pages = [https://archive.org/details/manchesterarchit0000park_m4y0/page/249 249]–250, 284–6}}</ref> ಮ್ಯಾಂಚೆಸ್ಟರ್ [[UCI ಟ್ರ್ಯಾಕ್ ಸೈಕ್ಲಿಂಗ್ ವಿಶ್ವ ಚಾಂಪಿಯನ್ಷಿಪ್]] ಪಂದ್ಯಾವಳಿಯನ್ನು ಮೂರನೆಯ ಬಾರಿ, ೨೦೦೮ರಲ್ಲಿ ಆತಿಥ್ಯ ವಹಿಸಿತು. ಲಂಡನ್ನಲ್ಲಿ[[2012ರ ಒಲಿಂಪಿಕ್ ಕ್ರೀಡಾಕೂಟ|2012ರ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ]] ಪೂರ್ವಸಿದ್ಧತೆ ನಡೆಸುವ ಕ್ರೀಡಾಪಟುಗಳು, ನಗರದ ಸುತ್ತಮುತ್ತಲಿರುವ ಹಲವು ಕ್ರೀಡಾ ಅಂಕಣಗಳನ್ನು ತರಬೇತಿ ಸಲುವಾಗಿ ಬಳಸಲಿದ್ದಾರೆ. ಇಸವಿ ೨೦೦೮ರಲ್ಲಿ [[MEN ಅರೆನಾ]] [[FINA]] ವಿಶ್ವ ಈಜು ಚಾಂಪಿಯನ್ಷಿಪ್ ಆತಿಥ್ಯ ವಹಿಸಿತ್ತು.<ref name="FINA">{{Cite web | url= http://www.fina.org/project/index.php?option=com_content&task=view&id=58&Itemid=380 | title= 9th Fina World Swimming Championships (25m) | accessdate= 2008-10-06 | publisher= Fina.org | year= 2008 | archive-date= 2015-09-04 | archive-url= https://web.archive.org/web/20150904003207/http://www.fina.org/project/index.php?option=com_content&task=view&id=58&Itemid=380 | url-status= dead }}</ref> ಇಸವಿ ೨೦೦೮ರಲ್ಲಿ ಮ್ಯಾಂಚೆಸ್ಟರ್ [[ವಿಶ್ವ ಸ್ಕ್ವಾಷ್ ಚಾಂಪಿಯನ್ಷಿಪ್ಸ್]] ಪಂದ್ಯಾವಳಿಯ ಆತಿಥ್ಯ ವಹಿಸಿತ್ತು.<ref>{{Cite web|url=http://www.worldsquash2008.com/|title=Hi-Tec World Squash Championships - Manchester 2008|publisher=Hi-Tec World Squash Championships Manchester 2008|year=2008|accessdate=2009-05-05|archive-date=2008-07-15|archive-url=https://web.archive.org/web/20080715100407/http://www.worldsquash2008.com/|url-status=dead}}</ref> ಜುಲೈ ೨೦೧೦ರಲ್ಲಿ [[2010 ವಿಶ್ವ ಲಾಕ್ರೊಸ್ ಚಾಂಪಿಯನ್ಷಿಪ್]] ಕ್ರೀಡಾಕೂಟದ ಆತಿಥ್ಯವನ್ನೂ ವಹಿಸಲಿದೆ.<ref>{{Cite web|url=http://www.2010worldlacrosse.com/|title=World Lacrosse Championships - Manchester 2010|publisher=World Lacrosse Championships 2010|year=2010|accessdate=2010-03-29}}</ref>
== ಸಮೂಹ ಮಾಧ್ಯಮ ==
{{Main|Media in Manchester}}
{{See also|List of television shows set in Manchester|Films set in Manchester}}
{{See also|List of national radio programmes made in Manchester}}
[[ಚಿತ್ರ:Granada TV.jpg|thumb|ಗ್ರೆನಡಾ ಟೆಲಿವಿಷನ್ನ ಪ್ರಧಾನ ಕಚೇರಿ]]
[[ಚಿತ್ರ:MEN Media Building.JPG|thumb|ಸ್ಪಿನಿಂಗ್ಫೀಲ್ಡ್ಸ್ ಜಿಲ್ಲೆಯಲ್ಲಿನ ಮ್ಯಾಂಚೆಸ್ಟರ್ ಈವನಿಂಗ್ ನ್ಯೂಸ್ ಪತ್ರಿಕೆಯ ಪ್ರಧಾನ ಕಚೇರಿ]]
[[ಚಿತ್ರ:Manchester eye.jpg|right|thumb|ದಿ ಮ್ಯಾಂಚೆಸ್ಟರ್ ಐಯ್]]
[[ITV]] ಫ್ರಾಂಚಿಸಿ [[ಗ್ರನಡಾ ಟೆಲೆವಿಷನ್]], ನಗರದ ಕ್ಯಾಸ್ಲ್ಫೀಲ್ಡ್ ಕ್ಷೇತ್ರದ ಕ್ವೇಯ್ ಬೀದಿಯಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ.<ref name="Skillset">{{cite web | url= http://www.skillset.org/uk/northwest/article_4334_1.asp | title= The creative media industries and workforce in North West England | publisher= skillset.org | year= 2008 | accessdate= 2008-10-06 | archive-date= 2007-11-28 | archive-url= https://web.archive.org/web/20071128065702/http://www.skillset.org/uk/northwest/article_4334_1.asp | url-status= dead }}</ref> ಗ್ರನಡಾ ವಿಶ್ವದ ಅತಿ ಹಳೆಯ ಹಾಗೂ ಅತಿ ಹೆಚ್ಚು ವೀಕ್ಷಿತ ಕಿರುತೆರೆಯ ದೈನಿಕ ಧಾರಾವಾಹಿ ''[[ಕಾರೊನೆಷನ್ ಸ್ಟ್ರೀಟ್]]'' ನ್ನು ನಿರ್ಮಿಸಿದೆ. ಇದು [[ITV1]] ವಾಹಿನಿಯಲ್ಲಿ ವಾರದಲ್ಲಿ ಐದು ಬಾರಿ ಪ್ರಸಾರವಾಗುತ್ತಲಿದೆ. ವಾಯುವ್ಯ ವಲಯಕ್ಕಾಗಿ ಸ್ಥಳೀಯ ವಾರ್ತೆಗಳು ಮತ್ತ್ತು ಕಾರ್ಯಕ್ರಮಗಳನ್ನು ಮ್ಯಾಂಚೆಸ್ಟರ್ನಲ್ಲಿ ನಿರ್ಮಾಣವಾಗುತ್ತವೆ.
ಇಂಗ್ಲೆಂಡ್ನಲ್ಲಿ ಲಂಡನ್ ಮತ್ತು [[ಬ್ರಿಸ್ಟಲ್|ಬ್ರಿಸ್ಟಲ್ಜತೆಗೆ]] ಮ್ಯಾಂಚೆಸ್ಟರ್ [[BBC|BBCಮೂರು]] ಮುಖ್ಯ ನೆಲೆಗಳಲ್ಲಿ ಒಂದಾಗಿದೆ. ''[[ಎ ಕ್ವೆಶ್ಚನ್ ಆಫ್ ಸ್ಪೋರ್ಟ್]]'' , ''[[ಮಾಸ್ಟರ್ಮೈಂಡ್]]'' ,<ref name="BBC programs">{{Cite press | url= http://www.bbc.co.uk/pressoffice/speeches/stories/bennett_manch.shtml | title=Championing sustainable TV production in the nations and regions | accessdate= 2008-10-06 | publisher= [[BBC]] | date= ೨೩ November ೨೦೦೫}}</ref> ಹಾಗೂ ''[[ರಿಯಲ್ ಸ್ಟೋರಿ]]'' ,<ref name="BBC real story">{{Cite press | url= http://www.bbc.co.uk/pressoffice/pressreleases/stories/2006/11_november/15/real.shtml | title= BBC One's Real Story with Fiona Bruce series comes to end in 2007 | accessdate= 2008-10-06 | publisher= [[BBC]] | date= ೧೫ November ೨೦೦೬}}</ref> ಸೇರಿದಂತೆ ಹಲವು ಕಾರ್ಯಕ್ರಮಗಳು ನಗರ ಕೇಂದ್ರದ ದಕ್ಷಿಣದಲ್ಲಿರುವ ಆಕ್ಸ್ಫರ್ಡ್ ರಸ್ತೆಯಲ್ಲಿರುವ ನ್ಯೂ ಬ್ರಾಡ್ಕ್ಯಾಸ್ಟಿಂಗ್ ಹೌಸ್ನಲ್ಲಿ ನಿರ್ಮಾಣವಾಗುತ್ತವೆ.
ಜನಪ್ರಿಯ ಸರಣಿ ''ಕಟಿಂಗ್ ಇಟ್'' ಕಾರ್ಯಕ್ರಮವನ್ನು ನಗರದ ಉತ್ತರ ಕ್ವಾರ್ಟರ್ನಲ್ಲಿ ಸಿದ್ಧಪಡಿಸಲಾಗಿದ್ದು, ಇದು ಐದು ಸರಣಿಗಳಾಗಿ [[BBC1|BBC1ರಲ್ಲಿ]] ಪ್ರಸಾರವಾಯಿತು. ''[[ಲೈಫ್ ಆನ್ ಮಾರ್ಸ್]]'' ಸರಣಿಯ ಕಥಾವಿಷಯವನ್ನು ೧೯೭೩ ಕಾಲದ ಮ್ಯಾಂಚೆಸ್ಟರ್ನಲ್ಲಿ ಹೆಣೆಯಲಾಯಿತು. ಇದಲ್ಲದೆ, ೨೦೦೭ರಲ್ಲಿ [[BAFTA]] ಹಾಗೂ [[ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ]] ವಿಜೇತ ಸರಣಿ ''[[ದಿ ಸ್ಟ್ರೀಟ್]]'' ನ ಕಥಾವಿಷಯವನ್ನೂ ಸಹ ಮ್ಯಾಂಚೆಸ್ಟರ್ನಲ್ಲಿ ಹೆಣೆಯಲಾಗಿತ್ತು.<ref>{{Cite web | title= International Emmys Awards to honor Al Gore |url= http://www.usatoday.com/life/people/2007-11-18-al-gore_N.htm | date= 19 November 2007 | accessdate= 2008-10-06}}</ref> ''[[ಟಾಪ್ ಆಫ್ ದಿ ಪಾಪ್ಸ್]]'' ನ ಮೊದಲ ಆವೃತ್ತಿಯನ್ನು ೧೯೬೪ರ ಹೊಸ ವರ್ಷದ ದಿನದಂದು [[ರಷ್ಹೋಮ್]]ನ ಸ್ಟುಡಿಯೊವೊಂದರಿಂದ(ಪರಿವರ್ತಿಸಲಾದ ಚರ್ಚ್) ಪ್ರಸಾರ ಮಾಡಲಾಯಿತು.<ref name="TOTP">{{Cite news | url= http://observer.guardian.co.uk/omm/story/0,,1818023,00.html | title= 'Top of the Pops' shows | accessdate= 2008-10-06 | work= Observer Music Monthly | publisher = Guardian News and Media Limited | date= July 16, 2006}}</ref>
ಮ್ಯಾಂಚೆಸ್ಟರ್ [[BBC ಒನ್|BBC ಒನ್ನ]] ವಾಯುವ್ಯ ವಲಯದ ಪ್ರಾದೇಶಿಕ ನೆಲೆ ಕೂಡ ಆಗಿದೆ. ಹಾಗಾಗಿ, ''ನಾರ್ತ್ ವೆಸ್ಟ್ ಟುನೈಟ್'' ನಂತಹ ಕಾರ್ಯಕ್ರಮಗಳನ್ನು ಇಲ್ಲಿ ತಯಾರಿಸಲಾಗುತ್ತದೆ.<ref name="NWT">{{Cite web|url=http://www.manchester2002-uk.com/media/tv-and-radio.html|title=Television & Radio Stations in Manchester|accessdate=2007-09-11|publisher=Manchester 2002 UK|year=2002|archive-date=2016-02-01|archive-url=https://web.archive.org/web/20160201064652/http://www.manchester2002-uk.com/media/tv-and-radio.html|url-status=dead}}</ref> BBC ತನ್ನ ಸಿಬ್ಬಂದಿಯಲ್ಲಿ ಅನೇಕ ಮಂದಿಯನ್ನು ಹಾಗೂ ಸೌಲಭ್ಯಗಳನ್ನು ಲಂಡನ್ನಿಂದ [[ಸ್ಯಾಲ್ಫರ್ಡ್ ಕ್ವೇಯ್ಸ್]]ನಲ್ಲಿರುವ ಮೀಡಿಯಾ ಸಿಟಿಗೆ ಸ್ಥಳಾಂತರಿಸಲು ಇಚ್ಛಿಸಿದೆ. ಮಕ್ಕಳ ವಿಭಾಗ ([[CBBC]]), ಹಾಸ್ಯ, ಕ್ರೀಡಾ ([[BBC ಸ್ಪೋರ್ಟ್]]) ಹಾಗೂ ನ್ಯೂ ಮೀಡಿಯಾ ವಿಭಾಗಗಳನ್ನು ೨೦೧೦ರ ಮುಂಚೆ ಸ್ಥಳಾಂತರಿಸಲು ನಿಗದಿಯಾಗಿದೆ.<ref name="Media city">{{Cite web | url=http://www.dtg.org.uk/news/news.php?id=2464 | title=BBC R&D to relocate to Salford Quays | accessdate=2008-10-06 | publisher=Digital TV Group | date=1 June 2007 | archive-date=2008-12-06 | archive-url=https://web.archive.org/web/20081206144955/http://www.dtg.org.uk/news/news.php?id=2464 | url-status=dead }}<br />• {{Cite press | url=http://www.bbc.co.uk/pressoffice/pressreleases/stories/2007/05_may/31/salford.shtml | title=BBC move to Salford gets green light | accessdate=2008-10-06 | publisher=[[BBC]] | date=೩೧ May ೨೦೦೭ }}</ref> ಮ್ಯಾಂಚೆಸ್ಟರ್ [[ಚಾನೆಲ್ M]] ಎಂಬ ತನ್ನದೇ ಆದ ದೂರದರ್ಶನ ವಾಹಿನಿಯನ್ನು ಹೊಂದಿದೆ. [[ಗಾರ್ಡಿಯನ್ ಮೀಡಿಯನ್ ಗ್ರೂಪ್]] ಇದರ ಮಾಲೀಕತ್ವ ವಹಿಸಿದೆ. ಇದು ೨೦೦೦ರಿಂದೀಚೆಗೆ ಕಾರ್ಯಾರಂಭಗೊಂಡಿತು.<ref name="Skillset" /> ಈ ವಾಹಿನಿಯು, ಸ್ಥಳೀಯ ವಾರ್ತೆಗಳು ಸೇರಿದಂತೆ ಬಹುಶಃ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ಪ್ರಸಾರ ಮಾಡುತ್ತದೆ. ಇದು [[BSkyB]] ದೂರದರ್ಶನ ವೇದಿಕೆಯ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿದೆ. ''[[ಫ್ರೇಸಿಯರ್]]'' ನ [[ಡಾಫ್ನ್ ಮೂನ್]]([[ಜೇನ್ ಲೀವ್ಸ್]] ಪಾತ್ರ) , ''[[ಲಾಸ್ಟ್]]'' ನ [[ಚಾರ್ಲೀ ಪೇಸ್]]([[ಡಾಮಿನಿಕ್ ಮೊನಾನ್]] ಪಾತ್ರ), [[ನಾವೊಮಿ ಡೊರಿಟ್]] (ಲಾಸ್ಟ್) ಮತ್ತು [[ನೆಸ್ಸಾ ಹೊಲ್ಟ್]] (''[[ಲಾಸ್ ವೆಗಾಸ್]]'' ) -ಎರಡರಲ್ಲೂ ಸ್ಥಳೀಯ ನಟಿ [[ಮಾರ್ಷಾ ಥಾಮ್ಸನ್]] ನಟನೆ, ಇವೆಲ್ಲವೂ ಮ್ಯಾಂಚೆಸ್ಟರ್ನ ಹಲವು ಟೆಲಿವಿಷನ್ ಪಾತ್ರಗಳಲ್ಲಿ ಸೇರಿವೆ.
ಲಂಡನ್ ಹೊರತುಪಡಿಸಿ ಮ್ಯಾಂಚೆಸ್ಟರ್ ಎರಡನೆಯ ಅತಿ ಹೆಚ್ಚು ಸ್ಥಳೀಯ ರೇಡಿಯೊ ಪ್ರಸಾರ ಕೇಂದ್ರಗಳನ್ನು ಹೊಂದಿದೆ.[[BBC ರೇಡಿಯೊ ಮ್ಯಾಂಚೆಸ್ಟರ್]], [[ಕೀ 103]], [[ಗೆಲೆಕ್ಸಿ]], [[ಪಿಕ್ಯಾಡಿಲಿ ಮ್ಯಾಜಿಕ್ 1152]], [[105.4 ಸೆಂಚುರಿ FM]], [[100.4 ಸ್ಮೂತ್ FM]], [[ಕ್ಯಾಪಿಟಲ್ ಗೋಲ್ಡ್ 1458]], ೯೬.೨ [[ದಿ ರೆವೊಲ್ಯೂಷನ್]], NMFM (ನಾರ್ತ್ ಮ್ಯಾಂಚೆಸ್ಟರ್ FM) ಹಾಗೂ [[Xfm|Xfmಇವುಗಳಲ್ಲಿ]] ಸೇರಿವೆ.<ref>{{cite web|url=http://www.northwestradio.info/fm.asp|publisher=northwestradio.info|author=Anon|format=http|year=2005|accessdate=2007-11-08|title=A Guide to Radio Stations in and Around North West England}}</ref><ref name="ofcomradio"/>
ರೇಡಿಯೊ ಮ್ಯಾಂಚೆಸ್ಟರ್ ೧೯೯೮ರಲ್ಲಿ BBC GMR ಆದ ನಂತರ ೨೦೦೬ರಲ್ಲಿ ತನ್ನ ಮುಂಚಿನ ಹೆಸರಿಗೆ ಮರಳಿತು.<ref>{{cite press | title= Radio Manchester goes back to its roots | publisher = [[BBC]] | date=೧೭ March ೨೦೦೬ | url= http://www.bbc.co.uk/pressoffice/pressreleases/stories/೨೦೦೬/೦೩_march/೧೭/manchester.shtml | accessdate = ೨೦೦೮-೧೦-೦೬}}</ref> ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿರುವ [[ಫ್ಯೂಸ್ FM]] ಮತ್ತು ಮ್ಯಾಂಚೆಸ್ಟರ್ ಪ್ರಧಾನನಗರ ವಿಶ್ವವಿದ್ಯಾನಿಲಯದಲ್ಲಿರುವ [[MMU ರೇಡಿಯೊ]] ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲಾದ ರೇಡಿಯೊ ಪ್ರಸಾರ ಕೇಂದ್ರಗಳಾಗಿವೆ.<ref>{{cite web | url= http://www.fusefm.co.uk/ | title= FUSE FM - Manchester Student Radio | accessdate= 2008-10-06 | work= fusefm.co.uk }}<br />•{{cite web | url= http://www.mmunion.co.uk/group/group.aspx?id=22869 | title= MMU radio | accessdate= 2008-10-06 | work= www.mmunion.co.uk | publisher= MMUnion | archive-date= 2008-12-06 | archive-url= https://web.archive.org/web/20081206142527/http://www.mmunion.co.uk/group/group.aspx?id=22869 | url-status= dead }}</ref> ರೇಡಿಯೊ ರಿಜೆನ್ ಈ [[ಸಮುದಾಯ ರೇಡಿಯೊ]] ಜಾಲವೊಂದರ ಸಂಘಟನೆ ವಹಿಸುತ್ತದೆ. ಇದರ ಪ್ರಸಾರ ಕೇಂದ್ರಗಳು ದಕ್ಷಿಣ ಮ್ಯಾಂಚೆಸ್ಟರ್ ಸಮುದಾಯಗಳಾದ[[ಆರ್ಡ್ವಿಕ್]], [[ಲಾಂಗ್ಸೈಟ್]] ಹಾಗೂ [[ಲೆವೆನ್ಸ್ಹುಲ್ಮ್]] ([[All FM]] ೯೬.೯) ಮತ್ತು [[ವಿತೆನ್ಷಾ]] (ವಿತೆನ್ಷಾ FM ೯೭.೨) ವ್ಯಾಪ್ತಿಯನ್ನು ಹೊಂದಿದೆ.<ref name="ofcomradio">[[ಆಫ್ಕಾಮ್]] ಅಂತರಜಾಲ ಮತ್ತು ಉಪಪುಟಗಳಲ್ಲಿ [http://www.ofcom.org.uk/radio/ ರೇಡಿಯೊ] {{Webarchive|url=https://web.archive.org/web/20090710144436/http://www.ofcom.org.uk/radio/ |date=2009-07-10 }} ನೋಡಿ; ಅದರಲ್ಲೂ ವಿಶೇಷವಾಗಿ [http://www.ofcom.org.uk/static/radiolicensing/amfm/analogue-main.htm ಡೈರೆಕ್ಟರಿ ಆಫ್ ಅನಾಲಜ್ ರೇಡಿಯೊ ಸ್ಟೇಷನ್ಸ್] {{Webarchive|url=https://web.archive.org/web/20110721102657/http://www.ofcom.org.uk/static/radiolicensing/amfm/analogue-main.htm |date=2011-07-21 }}, [https://web.archive.org/web/20071126231947/http://www.ofcom.org.uk/radio/ifi/rbl/formats/acrm_styles.pdf ಕಮರ್ಷಿಯಲ್ ರೇಡಿಯೊ ಸ್ಟೈಲ್ಸ್] ನ ನಕ್ಷೆ (PDF ಕಡತ) ಹಾಗೂ [https://web.archive.org/web/20070204140525/http://www.ofcom.org.uk/radio/ifi/rbl/formats/crmmap.pdf ಕಮ್ಯೂನಿಟಿ ರೇಡಿಯೊ ಇನ್ ದಿ UK] ಯ ನಕ್ಷೆ (PDF ಕಡತ) ನೋಡಿ. ದಿನಾಂಕ ೬ ನವೆಂಬರ್ ೨೦೦೭ರಂದು ಮರುಸಂಪಾದಿಸಿದ್ದು.</ref>
ಪ್ರಸಾರ ಸ್ಥಗಿತಗೊಳಿಸಿರುವ ರೇಡಿಯೊ ಕೇಂದ್ರಗಳಲ್ಲಿ ಸನ್ಸೆಟ್, ಇದು ಕಿಸ್ ೧೦೨ ಆಯಿತು(ಈಗ [[ಗೆಲೆಕ್ಸಿ ಮ್ಯಾಂಚೆಸ್ಟರ್]]) ಹಾಗೂ KFM ಇದು ಸಿಗ್ನಲ್ ಚೆಷೈರ್ ಆಗಿ, ಆನಂತರ [[ಇಮ್ಯಾಜಿನ್ FM]] ಆಯಿತು) ಸೇರಿವೆ. ಈ ಕೇಂದ್ರಗಳಲ್ಲದೆ, [[ಅನಧಿಕೃತ ರೇಡಿಯೊ|ಅನಧಿಕೃತ ರೇಡಿಯೊಪ್ರಸಾರ]] ಕೇಂದ್ರ ಸಹ ನಗರದ [[ಹೌಸ್ ಮ್ಯೂಸಿಕ್]] ಸಂಸ್ಕೃತಿಯಲ್ಲಿ ಗಮನಾರ್ಹ ಪಾತ್ರ ವಹಿಸಿತ್ತು. ಇದು [[ಮ್ಯಾಡ್ಚೆಸ್ಟರ್]] ಸೀನ್ ಎಂದು ಕೂಡ ಹೆಸರಾಗಿದೆ. ಇದು [[ಹ್ಯಾಸಿಯೆಂಡಾ|ಹ್ಯಾಸಿಯೆಂಡಾಮುಂತಾದ]] ಕ್ಲಬ್ಗಳನ್ನು ಆಧರಿಸಿ, ಕಿಸ್ ೧೦೨ ವಾಹಿನಿಯಲ್ಲಿ ತನ್ನದೇ ಆದ ಕಾರ್ಯಕ್ರಮವನ್ನು ಹೊಂದಿತ್ತು.
''ಮೈ ಸನ್, ಮೈ ಸನ್!'' ಸೇರಿದಂತೆ ಹಲವು [[ಹಾಲಿವುಡ್]] ಚಲನಚಿತ್ರಗಳ ಚಿತ್ರೀಕರಣ ಮ್ಯಾಂಚೆಸ್ಟರ್ನಲ್ಲಿ ನಡೆಸಲಾಗಿತ್ತು. (೧೯೪೦)ರಲ್ಲಿ ಬಿಡುಗಡೆಯಾದ 'ಮೈ ಸನ್, ಮೈ ಸನ್!' ಚಲನಚಿತ್ರವನ್ನು [[ಚಾರ್ಲ್ಸ್ ವಿಡೊರ್]] ನಿರ್ದೇಶಿಸಿದರು. ಇದರಲ್ಲಿ [[ಬ್ರಯಾನ್ ಅಹರ್ನ್]] ಮತ್ತು [[ಲುಯಿಸ್ ಹೇಯ್ವಾರ್ಡ್]]ಪಾತ್ರ ವಹಿಸಿದ್ದರು. ಇದಲ್ಲದೆ ''[[ಗ್ರ್ಯಾಂಡ್ ಹೋಟೆಲ್]]'' (೧೯೩೨) ಚಲನಚಿತ್ರದಲ್ಲಿ [[ವ್ಯಾಲೇಸ್ ಬೀರಿ]] ಆಗಾಗ್ಗೆ 'ಮ್ಯಾಂಚೆಸ್ಟರ್!' ಎಂದು ಕೂಗುವರು. ಇತರೆ ಚಲನಚಿತ್ರಗಳ ಪೈಕಿ, [[ಇವಾನ್ ಮೆಕ್ಗ್ರೆಗೊರ್]] ಅಭಿನಯಿಸಿದ ''[[ವೆಲ್ವೆಟ್ ಗೋಲ್ಡ್ಮೈನ್]]'' ಹಾಗೂ [[ಸರ್ ಅಲೆಕ್ ಗಿನ್ನೆಸ್|ಸರ್ ಅಲೆಕ್ ಗಿನ್ನೆಸ್ರ]] ''[[ದಿ ಮ್ಯಾನ್ ಇನ್ ದಿ ವೈಟ್ ಸೂಟ್]]'' ಸಹ ಸೇರಿವೆ. ಇನ್ನೂ ಇತ್ತೀಚೆಗೆ, ೨೦೦೨ರಲ್ಲಿ ಬಿಡುಗಡೆಯಾದ ಚಲನಚಿತ್ರ ''[[28 ಡೇಸ್ ಲೇಟರ್]]'' ನಲ್ಲಿ ಇಡೀ ಮ್ಯಾಂಚೆಸ್ಟರ್ ನಗರವು ನಿಯಂತ್ರಣ ತಪ್ಪಿದ ಬೆಂಕಿ ಆಕಸ್ಮಿಕದಲ್ಲಿ ಉರಿಯುತ್ತಿರುತ್ತದೆ. ಇಸವಿ ೨೦೦೪ರಲ್ಲಿ ಬಿಡುಗಡೆಯಾದ ಜಪಾನೀ ಭಾಷೆಯ ಆನಿಮೇಟೆಡ್ ಚಲನಚಿತ್ರ ''[[ಸ್ಟೀಮ್ಬಾಯ್]]'' ಸಹ ಆಂಶಿಕವಾಗಿ ಮ್ಯಾಂಚೆಸ್ಟರ್ನಲ್ಲಿ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಸಿದ್ಧವಾಗಿತ್ತು. ಈ ನಗರವು ಮ್ಯಾಂಚೆಸ್ಟರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತಾಣವಾಗಿದೆ,<ref>{{cite web | url= http://www.miff.co.uk/ | publisher= miff.co.uk | title= Manchester International Film Festival Home Page | accessdate= 2008-10-06 | archive-date= 2008-10-02 | archive-url= https://web.archive.org/web/20081002225450/http://www.miff.co.uk/ | url-status= dead }}</ref> ಹಾಗೂ ಕಾಮನ್ವೆಲ್ತ್ ಚಲನಚಿತ್ರೋತ್ಸವದ ಆತಿಥ್ಯವನ್ನೂ ಸಹ ವಹಿಸಿದೆ.
''[[ದಿ ಗಾರ್ಡಿಯನ್]]'' ಪತ್ರಿಕೆಯನ್ನು ೧೮೨೧ರಲ್ಲಿ ಮ್ಯಾಂಚೆಸ್ಟರ್ನಲ್ಲಿ ''ದಿ ಮ್ಯಾಂಚೆಸ್ಟರ್ ಗಾರ್ಡಿಯನ್'' ಎಂಬ ಹೆಸರಿನಲ್ಲಿ ಸ್ಥಾಪಿಸಲಾಗಿತ್ತು. ಇದರ ಪ್ರಧಾನ ಕಚೇರಿ ಈಗಲೂ ಮ್ಯಾಂಚೆಸ್ಟರ್ನಲ್ಲಿದೆ. ಆದರೂ ವ್ಯವಸ್ಥಾಪನಾ ಕಾರ್ಯನಿರ್ವಹಣೆಗಳಲ್ಲಿ ಬಹಳಷ್ಟು ಭಾಗವನ್ನು ೧೯೬೪ರಲ್ಲಿ ಲಂಡನ್ಗೆ ಸ್ಥಳಾಂತರಿಸಲಾಗಿತ್ತು.<ref name="Kidd"/> ಇದರ ಸಹೋದರಿ ಪ್ರಕಟಣೆಯಾದ ''[[ಮ್ಯಾಂಚೆಸ್ಟರ್ ಈವಿನಿಂಗ್ ನ್ಯೂಸ್]]'' UK ಪ್ರಾದೇಶಿಕ ಪತ್ರಿಕೆಗಳ ಪೈಕಿ ಅತಿ ಹೆಚ್ಚು ಪ್ರಸರಣ ಹೊಂದಿದ ಸಂಜೆ ಪತ್ರಿಕೆಯಾಗಿದೆ. ನಗರ ಕೇಂದ್ರದಲ್ಲಿ ಇದು ಉಚಿತವಾಗಿದ್ದರೂ, ಉಪನಗರದಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ. ಅದರ ಶಿರೋನಾಮೆ ಹಾಗಿದ್ದರೂ, ಪತ್ರಿಕೆಯು ಇಡೀ ದಿನವೂ ಲಭ್ಯ.<ref>{{cite news | url= https://www.theguardian.com/media/2007/aug/30/pressandpublishing.abcs1 | title= Paid-for sales of MEN slump | accessdate= 2008-10-06 | last= Sweney | first= Mark | date= 30 August 2007 | work= Guardian Unlimited | publisher= Guardian News and Media Limited}}
</ref> [[ಮೆಟ್ರೊ]] ನಾರ್ತ್ ವೆಸ್ಟ್ ಪತ್ರಿಕೆಯು [[ಮೆಟ್ರೊಲಿಂಕ್]] ನಿಲುಗಡೆಗಳಲ್ಲಿ, ರೇಲ್ವೆ ನಿಲ್ದಾಣಗಳು ಹಾಗೂ ಇತರೆ ಸ್ಥಳಗಳಲ್ಲಿ ಉಚಿತವಾಗಿ ಲಭ್ಯ. MEN ಗ್ರೂಪ್ ಹಲವು ಸ್ಥಳೀಯ ಸಾಪ್ತಾಹಿಕ ಉಚಿತ ಪತ್ರಿಕೆಗಳನ್ನು ವಿತರಿಸುತ್ತದೆ.<ref>{{cite web | url= http://www.merrymedia.co.uk/index.php?option=com_content&task=view&id=2881&Itemid=175 | title= M.E.N. Makes Changes To Metro Distribution | accessdate= 2008-10-06 | date= 9 March 2007 | work= Merry Media News | archive-date= 2007-10-22 | archive-url= https://web.archive.org/web/20071022154944/http://www.merrymedia.co.uk/index.php?option=com_content&task=view&id=2881&Itemid=175 | url-status= dead }}<br />• {{cite web | url= http://www.manchesteronline.co.uk/newspapers/ | title= manchester local press | accessdate= 2007-11-06 | year= 2007 | work= ManchesterOnline | publisher= GMG Regional Digital }}</ref>
''[[ದಿ ಡೇಯ್ಲಿ ಟೆಲಿಗ್ರ್ಯಾಫ್]]'' , ''[[ಡೇಯ್ಲಿ ಎಕ್ಸ್ಪ್ರೆಸ್]]'' , ''[[ಡೇಯ್ಲಿ ಮೇಯ್ಲ್]]'' , ''[[ದಿ ಡೇಯ್ಲಿ ಮಿರರ್]]'' , ''[[ದಿ ಸನ್]]'' ಸೇರಿದಂತೆ, ಬಹಳಷ್ಟು ರಾಷ್ಟ್ರೀಯ ದಿನಪತ್ರಿಕೆಗಳ ಕಾರ್ಯಾಲಯಗಳು ಹಲವು ವರ್ಷಗಳ ಕಾಲ ಮ್ಯಾಂಚೆಸ್ಟರ್ನಲ್ಲಿದ್ದವು. ಇಂದು ''[[ದಿ ಡೇಯ್ಲಿ ಸ್ಪೋರ್ಟ್]]'' ಮ್ಯಾಂಚೆಸ್ಟರ್ನಲ್ಲಿ ನೆಲೆಹೊಂದಿರುವ ಏಕೈಕ ದಿನಪತ್ರಿಕೆಯಾಗಿದೆ. ತನ್ನ ಉತ್ತುಂಗದಲ್ಲಿ {{Formatnum:1500}} ಪತ್ರಕರ್ತರನ್ನು ನೇಮಿಸಲಾಗಿತ್ತು, ಆದರೂ, ೧೯೮೦ರ ದಶಕದಲ್ಲಿ ಕಾರ್ಯಾಲಯಗಳು ಒಂದೊಂದಾಗಿ ಮುಚ್ಚಲಾರಂಭಿಸಿ, ಇಂದು 'ಸೆಕೆಂಡ್ ಫ್ಲೀಟ್ ಸ್ಟ್ರೀಟ್' ಎಂಬುದು ಇಲ್ಲವಾಗಿದೆ.<ref>{{cite book | last= Waterhouse | first= Robert | title= The Other Fleet Street | publisher= First Edition Limited | year= 2004 | isbn= 1-84547-083-4}}</ref> ಇತರೆ ಪ್ರಕಟಣೆಗಳ ಹೆಚ್ಚುವರಿ ಪತ್ರಕರ್ತರನ್ನು ನೇಮಿಸಿಕೊಂಡು ''ನಾರ್ತ್ ವೆಸ್ಟ್ ಟೈಮ್ಸ್'' ಎಂಬ ಉತ್ತರದ ದೈನಿಕ ಪತ್ರಿಕೆಯನ್ನು ಸ್ಥಾಪಿಸುವ ಯತ್ನ ನಡೆಯಿತು. ಆದರೆ ಈ ಪತ್ರಿಕೆಯು ೧೯೮೮ರಲ್ಲಿ ಮುಚ್ಚಿತು.<ref name="newpapers" /> [[ಯಾರ್ಕ್ಶೈರ್|ಯಾರ್ಕ್ಶೈರ್ಗಾಗಿ]] ''[[ಯಾರ್ಕ್ಶೈರ್ ಪೋಸ್ಟ್]]'' ಅಥವಾ [[ಈಶಾನ್ಯ]] ಇಂಗ್ಲೆಂಡ್ಗಾಗಿ ''[[ದಿ ನಾರ್ದರ್ನ್ ಇಕೊ]]'' ಧಾಟಿಯಲ್ಲೇ [[ವಾಯವ್ಯ]] ಇಂಗ್ಲೆಂಡ್ಗಾಗಿ ಅಪ್ಪಟ "ಸ್ಥಳೀಯ" ಸುದ್ದಿಗಳನ್ನು ಒದಗಿಸುವ ''[[ನಾರ್ತ್ ವೆಸ್ಟ್ ಇನ್ಕ್ವೈರರ್]]'' ಎಂಬ ಪತ್ರಿಕೆಯನ್ನು ಸ್ಥಾಪಿಸುವ ಯತ್ನ ನಡೆಯಿತು. ಆದರೆ ಈ ಪತ್ರಿಕೆಯು ಅಕ್ಟೋಬರ್ ೨೦೦೬ರಲ್ಲಿ ಮುಚ್ಚಿಹೋಯಿತು.<ref name="newpapers">{{cite news | url= http://news.independent.co.uk/media/article341851.ece | title= New quality weekly for Manchester is a good idea on paper | accessdate= 2008-10-06 | last= Herbert | first= Ian | date= 30 January 2006 | work= The Independent | publisher= Independent News and Media Limited | archive-date= 2008-08-30 | archive-url= https://web.archive.org/web/20080830052407/http://news.independent.co.uk/media/article341851.ece | url-status= dead }}<br />• {{cite web | url= http://www.nw-enquirer.co.uk/the_enquirer_suspends_publication_.html | archiveurl= https://web.archive.org/web/20070226214918/http://www.nw-enquirer.co.uk/the_enquirer_suspends_publication_.html | title= The Enquirer suspends publication | accessdate= 2008-10-06 | archivedate= 2007-02-26 | last= Waterhouse | first= Robert | date= 20 September 2006 | work= The North West Enquirer | publisher= The North West Enquirer | url-status= dead }}</ref> ''YQ ಮ್ಯಾಗಜೀನ್'' ಹಾಗೂ ''ಮೂವಿಂಗ್ ಮ್ಯಾಂಚೆಸ್ಟರ್'' ಸೇರಿದಂತೆ, ಹಲವು ಸ್ಥಳೀಯ ಜೀವನಶೈಲಿ ಪತ್ರಿಕೆಗಳು ಮ್ಯಾಂಚೆಸ್ಟರ್ನಲ್ಲಿವೆ.<ref>{{cite web | url= http://www.how-do.co.uk/north-west-media-features/special-features/what's-(not)-on?-20070322146 | title= What's (not) on? | accessdate= 2007-11-06 | last= Barnett | first= Mike | date= 22 March 2007 | work= How-Do | publisher= How-Do | archive-date= 2008-12-06 | archive-url= https://web.archive.org/web/20081206022037/http://www.how-do.co.uk/north-west-media-features/special-features/what's-(not)-on?-20070322146 | url-status= dead }}</ref>
== ಅವಳಿ ನಗರಗಳು ಮತ್ತು ದೂತಾವಾಸಗಳು ==
ಮ್ಯಾಂಚೆಸ್ಟರ್ ಹಲವು ಸ್ಥಳಗಳೊಂದಿಗೆ ವಿಧ್ಯುಕ್ತ '[[ಅವಳೀಕರಣ]]' ವ್ಯವಸ್ಥೆಯನ್ನು (ಅಥವಾ ಸ್ನೇಹ ಒಪ್ಪಂದಗಳು) ಮಾಡಿಕೊಂಡಿದೆ.<ref>[http://www.manchester.gov.uk/info/200033/councillors_democracy_and_elections/2754/deputy_leader_of_the_council_councillor_val_stevens/4 ಮ್ಯಾಂಚೆಸ್ಟರ್ ಸಿಟಿ ಕೌನ್ಸಿಲ್: ''ಕ್ವಶ್ಚನ್ಸ್ ಟು ದಿ ಡೆಪ್ಯುಟಿ ಲೀಡರ್ ಇನ್ 2007'' ] {{Webarchive|url=https://web.archive.org/web/20110926113021/http://www.manchester.gov.uk/info/200033/councillors_democracy_and_elections/2754/deputy_leader_of_the_council_councillor_val_stevens/4 |date=2011-09-26 }} ದಿನಾಂಕ ೮ ಜನವರಿ ೨೦೧೦ರಂದು ಮರುಸಂಪಾದಿಸಿದ್ದು.</ref><ref>ಅವಳೀಕರಣ ಒಪ್ಪಂದದ ಸಮಯ, ನಗರವು [[ಜರ್ಮನ್ ಡೆಮೊಕ್ರಾಟಿಕ್ ರಿಪಬ್ಲಿಕ್|ಜರ್ಮನ್ ಡೆಮೊಕ್ರಾಟಿಕ್ ರಿಪಬ್ಲಿಕ್ನಲ್ಲಿದ್ದು]], ಕಾರ್ಲ್-ಮಾರ್ಕ್ಸ್-ಸ್ಟಾಡ್ ಎಂದು ಹೆಸರಿಸಲಾಗಿತ್ತು.
</ref><ref name="Manchester">{{cite web|url=http://www.manchestereveningnews.co.uk/news/s/1128076_twinning_link_with_la|title=Twinning link with LA|publisher=Manchester Evening News|accessdate=2009-07-28}}</ref> ಇದರ ಜೊತೆಗೆ, [[ಬ್ರಿಟಿಷ್ ಸಭೆ|ಬ್ರಿಟಿಷ್ ಸಭೆಯು]] ಮ್ಯಾಂಚೆಸ್ಟರ್ನಲ್ಲಿ ಪ್ರಧಾನನಗರ ಕೇಂದ್ರವನ್ನು ನಿರ್ವಹಿಸುತ್ತದೆ.<ref>{{Cite web|url=http://www.britishcouncil.org/annual-report/index.htm|title=British Council Annual Report 2007–2008|accessdate=2009-05-01|publisher=[[British Council]]date = ೨೦೦೮-೦೫-೩೧|archive-date=2009-04-30|archive-url=https://web.archive.org/web/20090430022853/http://www.britishcouncil.org/annual-report/index.htm|url-status=dead}}</ref> ಅಧಿಕೃತವಾಗಿ ಅವಳಿ ನಗರವಾಗದಿದ್ದರೂ, [[ಫಿನ್ಲೆಂಡ್]] ದೇಶದ [[ಟ್ಯಾಂಪಿಯರ್]] ನಗರವು ''"ಫಿನ್ಲೆಂಡ್ನ ಮ್ಯಾಂಚೆಸ್ಟರ್"'' ಎಂದು ಹೆಸರಾಗಿದೆ ಅಥವಾ ಸಂಕ್ಷಿಪ್ತವಾಗಿ '''ಮ್ಯಾನ್ಸ್ (Manse)'' ' ಎನ್ನಲಾಗುತ್ತದೆ. ಇದೇ ರೀತಿ, ಭಾರತ ದೇಶದ ಅಹ್ಮದಾಬಾದ್ ನಗರವು ಸಹ ಭರಾಟೆಯ ಜವಳಿ ಕೈಗಾರಿಕೆಗಳ ಕೇಂದ್ರವಾಗಿ ಸ್ಥಾಪಿತವಾಗಿತ್ತು. ಇದರಿಂದಾಗಿ [[ಅಹ್ಮದಾಬಾದ್|ಅಹ್ಮದಾಬಾದ್ಗೆ]] '''ಪೂರ್ವದ ಮ್ಯಾಂಚೆಸ್ಟರ್'' ' ಎಂಬ ಉಪನಾಮವನ್ನು ಗಳಿಸಿಕೊಟ್ಟಿತು.<ref>{{cite book|last=Engineer|first=Ashgar Ali|title=The Gujarat Carnage|publisher=Orient Longman|year=2003|page=196|isbn=81-250-2496-4}}</ref><ref name="jnnurm">{{cite web |url=http://www.egovamc.com/cdp/AMC_CDP.pdf|format=PDF|title=Profile of the City Ahmedabad
|coauthors=Jawaharlal Nehru National Urban Renewal Mission
|year=2006
|work=Ahmedabad Municipal Corporation Ahmedabad, Urban Development Authority and CEPT University, Ahmedabad
|publisher=Ahmedabad Municipal Corporation
|accessdate=2008-07-22|archiveurl=https://web.archive.org/web/20070219032557/http://www.egovamc.com/cdp/AMC_CDP.pdf|archivedate=2007-02-19}}</ref>
{| class="wikitable" "text-align:left;font-size:100%;"|
|-
! style="background: #811541; color: #FFFFFF" ! |
! style="background: #811541; color: #FFFFFF" height="17" width="120" | ದೇಶ
! style="background: #810001; color: #FFFFFF" ! |
! style="background: #810001; color: #FFFFFF" ! width="100" | ಸ್ಥಳ
! style="background: #811541; color: #FFFFFF" ! |
! style="background: #811541; color: #FFFFFF" ! width="130" | ಕೌಂಟಿ / ಜಿಲ್ಲೆ / ವಲಯ / ರಾಜ್ಯ
! style="background: #811541; color: #FFFFFF" ! width="130" | ಮೂಲತಃ ಅವಳಿಯಾದದ್ದು
! style="background: #811541; color: #FFFFFF" ! width="40" | ದಿನಾಂಕ
|-
! style="background: #FFFFEF; color: #000000" ! | {{flagicon|Nicaragua}}
|! style="background: #FFFFEF; color: #000000" ! | ನಿಕಾರಾಗುವಾ
! style="background: #FFFFCF; color: #000000" ! |
|! style="background: #FFFFCF; color: #000000" ! | '''[[ಬಿಲ್ವಿ]]'''
! style="background: #FFFFEF; color: #000000" ! |
|! style="background: #FFFFEF; color: #000000" ! | ''[[ಅಟ್ಲ್ಯಾಂಟಿಕೊ ನಾರ್ಟ್]]''
|! style="background: #FFFFEF; color: #000000" ! | ಮ್ಯಾಂಚೆಸ್ಟರ್ ನಗರ
|! style="background: #FFFFEF; color: #000000" ! |
|-
! style="background: #FFFFEF; color: #000000" ! | {{flagicon|Germany}}
|! style="background: #FFFFEF; color: #000000" ! |ಜರ್ಮನಿ
! style="background: #FFFFCF; color: #000000" ! | [[ಚಿತ್ರ:Coat of arms of Chemnitz.svg|25px]]
|! style="background: #FFFFCF; color: #000000" ! | '''[[ಚೆಮ್ನಿಟ್ಜ್]]'''
! style="background: #FFFFEF; color: #000000" ! | [[ಚಿತ್ರ:Flag of Saxony.svg|25px]]
|! style="background: #FFFFEF; color: #000000" ! | ''[[ಸ್ಯಾಚ್ಸೆನ್]]''
|! style="background: #FFFFEF; color: #000000" ! | ಮ್ಯಾಂಚೆಸ್ಟರ್ ನಗರ
|! style="background: #FFFFEF; color: #000000" ! | ೧೯೮೩
|-
! style="background: #FFFFEF; color: #000000" ! | {{flagicon|Spain}}
|! style="background: #FFFFEF; color: #000000" ! | ಸ್ಪೇನ್
! style="background: #FFFFCF; color: #000000" ! | [[ಚಿತ್ರ:COA Córdoba, Spain.svg|25px]]
|! style="background: #FFFFCF; color: #000000" ! | '''[[ಕಾರ್ಡೊಬಾ]]'''
! style="background: #FFFFEF; color: #000000" ! | [[ಚಿತ್ರ:Bandera de Andalucia.svg|25px]]
|! style="background: #FFFFEF; color: #000000" ! | ''[[ಆಂಡಾಲೂಸಿಯಾ]]''
|! style="background: #FFFFEF; color: #000000" ! | ಮ್ಯಾಂಚೆಸ್ಟರ್ ನಗರ
|! style="background: #FFFFEF; color: #000000" ! |
|-
! style="background: #FFFFEF; color: #000000" ! | {{flagicon|Israel}}
|! style="background: #FFFFEF; color: #000000" ! | ಇಸ್ರೇಲ್
! style="background: #FFFFCF; color: #000000" ! | [[ಚಿತ್ರ:Rehovot COA.svg|25px]]
|! style="background: #FFFFCF; color: #000000" ! | '''[[ರೆಹೊವೊತ್]]'''
! style="background: #FFFFEF; color: #000000" ! |
|! style="background: #FFFFEF; color: #000000" ! | ''[[ಹಾಮೆರ್ಕಾಜ್]]''
|! style="background: #FFFFEF; color: #000000" ! | ಮ್ಯಾಂಚೆಸ್ಟರ್ನ ಕೌಂಟಿ ವಿಭಾಗ
|! style="background: #FFFFEF; color: #000000" ! |
|-
! style="background: #FFFFEF; color: #000000" ! | {{flagicon|Russia}}
|! style="background: #FFFFEF; color: #000000" ! |ರಷ್ಯಾ
! style="background: #FFFFCF; color: #000000" ! | [[ಚಿತ್ರ:Coat of Arms of Saint Petersburg (2003).svg|25px]]
|! style="background: #FFFFCF; color: #000000" ! | ಸೇಂಟ್ ಪೀಟರ್ಸ್ಬರ್ಗ್
! style="background: #FFFFEF; color: #000000" ! | [[ಚಿತ್ರ:Flag of Saint Petersburg Russia.svg|25px]]
|! style="background: #FFFFEF; color: #000000" ! | ''[[ಸ್ಯಾಂಕ್ಟ್-ಪೀಟರ್ಬರ್ಗ್]]''
|! style="background: #FFFFEF; color: #000000" ! | ಮ್ಯಾಂಚೆಸ್ಟರ್ನ ಕೌಂಟಿ ವಿಭಾಗ
|! style="background: #FFFFEF; color: #000000" ! | ೧೯೬೨
|-
! style="background: #FFFFEF; color: #000000" ! | {{flagicon|China}}
|! style="background: #FFFFEF; color: #000000" ! |ಚೀನಾ
! style="background: #FFFFCF; color: #000000" ! |
|! style="background: #FFFFCF; color: #000000" ! | '''[[ವೂಹಾನ್]]'''
! style="background: #FFFFEF; color: #000000" ! |
|! style="background: #FFFFEF; color: #000000" ! | ''[[ಹೂಬೇ]]''
|! style="background: #FFFFEF; color: #000000" ! | ಮ್ಯಾಂಚೆಸ್ಟರ್ ನಗರ
|! style="background: #FFFFEF; color: #000000" ! | ೧೯೮೬
|-
! style="background: #FFFFEF; color: #000000" ! | {{flagicon|Pakistan}}
|! style="background: #FFFFEF; color: #000000" ! ! | ಪಾಕಿಸ್ತಾನ
! style="background: #FFFFCF; color: #000000" ! |
|! style="background: #FFFFCF; color: #000000" ! | '''[[ಪೈಸಲಾಬಾದ್]]'''
! style="background: #FFFFEF; color: #000000" ! |
|! style="background: #FFFFEF; color: #000000" ! | ಪಂಜಾಬ್
|! style="background: #FFFFEF; color: #000000" ! | ಮ್ಯಾಂಚೆಸ್ಟರ್ ನಗರ
|! style="background: #FFFFEF; color: #000000" ! | ೧೯೯೭
|-
! style="background: #FFFFEF; color: #000000" ! | {{flagicon|USA}}
|! style="background: #FFFFEF; color: #000000" ! |ಅಮೆರಿಕಾ ಸಂಯುಕ್ತ ಸಂಸ್ಥಾನ
! style="background: #FFFFCF; color: #000000" ! | [[ಚಿತ್ರ:Seal of Los Angeles, California.svg|25px]]
|! style="background: #FFFFCF; color: #000000" ! |ಲಾಸ್ ಏಂಜಲೀಸ್
! style="background: #FFFFEF; color: #000000" ! | [[ಚಿತ್ರ:Flag of California.svg|25px]]
|! style="background: #FFFFEF; color: #000000" ! |ಕ್ಯಾಲಿಫೋರ್ನಿಯಾ
|! style="background: #FFFFEF; color: #000000" ! | ಮ್ಯಾಂಚೆಸ್ಟರ್ ನಗರ
|! style="background: #FFFFEF; color: #000000" ! | ೨೦೦೯
|}
ಲಂಡನ್ ಹೊರತುಪಡಿಸಿ, ಮ್ಯಾಂಚೆಸ್ಟರ್ UKಯಲ್ಲೇ ಅತಿ ಹೆಚ್ಚು [[ರಾಜತಾಂತ್ರಿಕ|ರಾಜತಾಂತ್ರಿಕರ]] ಗುಂಪಿಗೆ ಆವಾಸಸ್ಥಾನವಾಗಿದೆ. ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ವಹಿವಾಟು ಸಂಬಂಧಗಳ ವಿಸ್ತರಣೆಯ ಫಲವಾಗಿ, ೧೮೨೦ರ ದಶಕದಲ್ಲಿ ಮೊದಲ ರಾಜತಾಂತ್ರಿಕರ ಪ್ರವೇಶಕ್ಕೆ ದಾರಿಕಲ್ಪಿಸಿತು. ಅಂದಿನಿಂದಲೂ, ವಿಶ್ವದ ಎಲ್ಲ ಭಾಗಗಳಿಂದ, ಸುಮಾರು ೮೦೦ಕ್ಕೂ ಹೆಚ್ಚು ರಾಜತಾಂತ್ರಿಕರು ಮ್ಯಾಂಚೆಸ್ಟರ್ನಲ್ಲಿ ನೆಲೆಗೊಂಡಿದ್ದಾರೆ. ಮ್ಯಾಂಚೆಸ್ಟರ್ ಎರಡು ಶತಕಗಳಿಂದಲೂ(ಕನಿಷ್ಠ ಕಾನ್ಸಲ್ನ ವಿಚಾರದಲ್ಲಿ), UKಯ ಎರಡನೆಯ ನಗರವಾಗಿದ್ದು, ಇಂಗ್ಲೆಂಡ್ನ ಉತ್ತರ ಭಾಗದ ಬಹಳಷ್ಟು ಪ್ರದೇಶಗಳಿಗಾಗಿ ಕಾನ್ಸಲರ್ ಸೇವೆ ಒದಗಿಸುತ್ತದೆ. ಆಧುನಿಕ ಅಂತಾರಾಷ್ಟ್ರೀಯ ವಹಿವಾಟಿಗೆ ಅಗತ್ಯವಾದ ಕಾಗದಪತ್ರ ನಿರ್ವಹಿಸುವ ಕೆಲಸದ ಮೊತ್ತದಲ್ಲಿ ಇಳಿಮುಖವನ್ನು ಅಂತಾರಾಷ್ಟ್ರೀಯ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ನಗರಕ್ಕೆ ಭೇಟಿ ನೀಡುವ ಮೂಲಕ ಸರಿದೂಗಿಸಲಾಗುತ್ತದೆ. ಲಂಡನ್ ಹೊರತುಪಡಿಸಿ, ಮ್ಯಾಂಚೆಸ್ಟರ್ ನಗರವು UKಯಲ್ಲೇ ಅತಿ ದೊಡ್ಡ ಹಾಗೂ ಅತಿ ಜನನಿಬಿಡ ವಿಮಾನ ನಿಲ್ದಾಣವನ್ನು ಹೊಂದಿದ್ದು, ಹಲವರು ಇದರ ಮೂಲಕ ಹಾದು ಹೋಗುತ್ತಾರೆ.<ref>{{cite book |author= Fox, David |title= Manchester Consuls |year= 2007 |publisher=Carnegie Publishing |location= Lancaster |isbn= 978-1-85936-155-9 |pages=vii–ix}}<br />•{{cite web |title=Manchester Consular Association |url=http://www.mca.group.shef.ac.uk/ |publisher=Manchester Consular Association |accessdate=2007-09-15 |archive-date=2007-10-11 |archive-url=https://web.archive.org/web/20071011181617/http://mca.group.shef.ac.uk/ |url-status=dead }}<br />•{{cite web|url=http://mca.group.shef.ac.uk/page2.html|title=List of Consulates, Consulate Generals and High Commissioners|publisher=MCA (subsidiary of Sheffield University)|accessdate=2007-01-05|archive-date=2007-09-21|archive-url=https://web.archive.org/web/20070921024635/http://www.mca.group.shef.ac.uk/page2.html|url-status=dead}}</ref>
{|
|-
| vaನlign="top"
|
* {{flagicon|Belgium}} ಬೆಲ್ಜಿಯಮ್ ದೂತಾವಾಸ <ref>{{cite web |title=British Foreign & Commonwealth Office|publisher=UK FCO |url= http://www.fco.gov.uk/resources/en/protocol/consular-offices-outside-london |accessdate=2010-04-19|archiveurl=https://web.archive.org/web/20090813134347/http://www.fco.gov.uk/resources/en/protocol/consular-offices-outside-london|archivedate=2009-08-13}}</ref>
* {{flagicon|Brazil}} ಬ್ರೆಜಿಲ್ ದೂತಾವಾಸ
* {{flagicon|Chile}} ಚಿಲಿ ದೂತಾವಾಸ
* {{flagicon|China}} ಚೀನಾ ಪ್ರಜಾ ಗಣರಾಜ್ಯದ ಪ್ರಧಾನ ದೂತಾವಾಸ
* {{flagicon|Cyprus}} ಸೈಪ್ರಸ್ ದೂತಾವಾಸ
* {{flagicon|Czech Republic}} ಜೆಕ್ ಗಣರಾಜ್ಯದ ದೂತಾವಾಸ
* {{flagicon|Denmark}} ಡೆನ್ಮಾರ್ಕ್ ವಹಿವಾಟು ಆಯೋಗ
* {{flagicon|Finland}} ಫಿನ್ಲೆಂಡ್ ದೂತಾವಾಸ
* {{flagicon|France}} ಫ್ರಾನ್ಸ್ ದೂತಾವಾಸ
* {{flagicon|Iceland}} ಐಸ್ಲೆಂಡ್ ದೂತಾವಾಸ
* {{flagicon|Italy}} ಇಟಲಿ ದೂತಾವಾಸ
* {{flagicon|Japan}} ಜಪಾನ್ ದೂತಾವಾಸ
* {{flagicon|Latvia}} ಲಾಟ್ವಿಯಾ ದೂತಾವಾಸ
* {{flagicon|Monaco}} ಮೊನಾಕೊ ದೂತಾವಾಸ
* {{flagicon|Netherlands}} ನೆದರ್ಲೆಂಡ್ಸ್ ದೂತಾವಾಸ
* {{flagicon|Norway}} ರಾಯಲ್ ನಾರ್ವೆಜಿಯನ್ ದೂತಾವಾಸ
* {{flagicon|India}} ಭಾರತೀಯ ಪ್ರಧಾನ ದೂತಾವಾಸ
* {{flagicon|Pakistan}} ಪಾಕಿಸ್ತಾನ ಪ್ರಧಾನ ದೂತಾವಾಸ
* {{flagicon|Poland}} ಪೊಲೆಂಡ್ ಪ್ರಧಾನ ದೂತಾವಾಸ
* {{flagicon|Portugal}} ಪೋರ್ಚುಗಲ್ ಪ್ರಧಾನ ದೂತಾವಾಸ
* {{flagicon|Spain}} ಸ್ಪೇನ್ ಪ್ರಧಾನ ದೂತಾವಾಸ
* {{flagicon|Sweden}} ಸ್ವೀಡನ್ ಪ್ರಧಾನ ದೂತಾವಾಸ
* {{flagicon|Switzerland}} ಸ್ವಿಟ್ಜರ್ಲೆಂಡ್ ದೂತಾವಾಸ
|}
== ಆಕರಗಳು ==
{{reflist|colwidth=30em}}
== ಹೆಚ್ಚಿನ ಮಾಹಿತಿಗಾಗಿ ==
{|
| valign = "top" style="font-size:90%"
|
* ವಾಸ್ತುಶಿಲ್ಪ
** {{cite book | last = Hands| first = David | coauthors = Parker, Sarah | title = Manchester: A Guide to Recent Architecture | url = https://archive.org/details/manchesterguidet0000hand| publisher = Ellipsis Arts | location = London | year= 2000 | isbn = 1-899858-77-6}}
** {{cite book | last = Hartwell | first = Clare | title = Manchester | url = https://archive.org/details/manchester0000hart | series = Pevsner Architectural Guides | year= 2001 | publisher = Penguin Books | location = London | isbn = 0-14-071131-7}}
** {{cite book | last = Hartwell | first = Clare | coauthors = Hyde, Matthew, [[Nikolaus Pevsner|Pevsner, Nikolaus]] | series = The Buildings of England | title = Lancashire: Manchester and the South-East | year = ೨೦೦೪ | publisher = Yale University Press | location = New Haven & London | isbn = ೦-೩೦೦-೧೦೫೮೩-೫}}
**
** {{cite book | last = Parkinson-Bailey | first = John J. | title = Manchester: an Architectural History | url = https://archive.org/details/manchesterarchit0000park_m4y0 | year = 2000 | publisher = Manchester University Press | location = Manchester | isbn = 0-7190-5606-3}}
** {{cite book | last = Robinson | first = John Martin | title = The Architecture of Northern England | url = https://archive.org/details/architectureofno0000robi | year = 1986 | publisher = Macmillan | location = London | isbn = 0-333-37396-0}}
* ಸಾಮಾನ್ಯ
** {{cite book | last = Beesley | first = Ian | title = Victorian Manchester and Salford | url = https://archive.org/details/victorianmanches0000bees | publisher = Ryburn | location = Keele | year = 1988 | isbn = 1-85331-006-9}}
** {{cite book | last = Hylton | first = Stuart | title = A History of Manchester | url = https://archive.org/details/historyofmanches0000hylt | publisher = Phillimore & Company | location = Chichester | year= 2003 | isbn = 1-86077-240-4}}
** {{cite book | last = Kidd | first = Alan J. | title = Manchester | series = Town and City Histories | publisher = Ryburn | location = Keele | year = 1993 | isbn = 1-85331-016-6}}
** {{cite book | title = The Mancunian Way | url = https://archive.org/details/mancunianwaymanc0000unse | publisher = Clinamen Press | location = Manchester | year = 2002 | isbn = 1-903083-81-8 | author = <!-- not right --> Price, Jane; Stebbing, Ben (eds.)}}
** {{cite book | last = Redhead | first = Brian | title = Manchester: a Celebration | url = https://archive.org/details/manchestercelebr0000redh | authorlink = Brian Redhead | publisher = André Deutsch | location = London | year = 1993 | isbn = 0-233-98816-5}}
** {{cite book | last = Schofield | first = Jonathan | title = The City Life Guide to Manchester | year = 2005 | publisher = City Life | location = Manchester | isbn = 0-9549042-2-2}}
| valign = "top" style="font-size:೯೦%"
|
* ಸಂಸ್ಕೃತಿ
** {{cite book | last = Champion | first = Sarah | title = And God Created Manchester | year = 1990 | publisher = Wordsmith | location = Manchester | isbn = 1-873205-01-5}}
** {{cite book | last = Gatenby | first = Phill | title = Morrissey's Manchester: The Essential "Smiths" Tour | year = 2002 | location = Manchester | publisher = Empire Publications | isbn = 1-901746-28-3}}
** {{cite book | last = Haslam | first = Dave | title = Manchester, England | publisher = Fourth Estate | location = New York | year = 2000 | isbn = 1-84115-146-7}}
** {{cite book | last = Lee | first = C. P. | title = Shake, Rattle and Rain: popular music making in Manchester 1955–1995 | year = 2002 | publisher = Hardinge Simpole | location = Ottery St Mary | isbn = 1-84382-049-8}}
** {{cite book | last = Lee | first = C. P. | title = Like the Night (Revisited): Bob Dylan and the Road to the Manchester Free Trade Hall | publisher = Helter Skelter Publishing | location = London | year = 2004 | isbn = 1-900924-33-1}}
** {{cite book | title = The Haçienda Must Be Built | url = https://archive.org/details/haciendamustbebu0000unse | year = 1992 | publisher = [[International Music Publications]] | location = Woodford Green | isbn = ೦-೮೬೩೫೯-೮೫೭-೯ | author = <!-- not right --> Savage, John (editor)}}
* ಕ್ರೀಡೆ
**
* ಕ್ರೀಡೆ
** {{cite book |last=James |first=Gary |title=Manchester: a football history |publisher=James Ward |location=Halifax |year=2008 |isbn=978-0-9558127-0-5}}
** {{cite book |last=Inglis |first=Simon |title=Played In Manchester |publisher=Played In Britain |year=2004 |isbn=978-1-8735927-8-6}}
|}
== ಹೊರಗಿನ ಕೊಂಡಿಗಳು ==
{{Spoken Wikipedia-2|2008-02-03|Manchester (Part 1).ogg|Manchester (Part 2).ogg}}
{{sisterlinks|Manchester}}
* [http://www.manchester.gov.uk/ ಮ್ಯಾಂಚೆಸ್ಟರ್ ಸಿಟಿ ಕೌನ್ಸಿಲ್] {{Webarchive|url=https://web.archive.org/web/20110303042405/http://www.manchester.gov.uk/ |date=2011-03-03 }}
* {{wikivoyage|Manchester}}
* [http://www.visitmanchester.com/ ಅಫಿಸಿಯಲ್ ಟೂರಿಸ್ಟ್ ಬೋರ್ಡ್ ಸೈಟ್ ಆಫ್ ಮ್ಯಾಂಚೆಸ್ಟರ್]
* [http://www.gos.gov.uk/facts/factgonw/manchester/?a=42496 ಫ್ಯಾಕ್ಟ್ ಫೈಲ್: ಮ್ಯಾಂಚೆಸ್ಟರ್] {{Webarchive|url=https://web.archive.org/web/20090809064450/http://www.gos.gov.uk/facts/factgonw/manchester/?a=42496 |date=2009-08-09 }}
* [http://manchesterhistory.net/manchester/ManMenu.html ಆವರ್ ಮ್ಯಾಂಚೆಸ್ಟರ್]
{{Clear}}
== ಸಂಬಂಧಿತ ಮಾಹಿತಿ ==
{{UK cities}}
{{LargestUKCities}}
{{Commonwealth Games Host Cities}}
{{Interwikineeded}}
[[ವರ್ಗ:ಮ್ಯಾಂಚೆಸ್ಟರ್]]
[[ವರ್ಗ:ಮೊದಲ ಶತಮಾನದಲ್ಲಿ ಸ್ಥಾಪಿಸಲಾದ ವಸಾಹತುಗಳು]]
[[ವರ್ಗ:79 ಸಂಸ್ಥೆಗಳು]]
[[ವರ್ಗ:ಕಾಮನ್ವೆಲ್ತ್ ಕ್ರೀಡೆಗಳ ಆತಿಥ್ಯ ವಹಿಸಿದ ಅವಳಿ ನಗರಗಳು]]
[[ವರ್ಗ:ವಾಯವ್ಯ ಇಂಗ್ಲೆಂಡ್ನ ನಗರಗಳು]]
[[ವರ್ಗ:ಧ್ವನಿಮುದ್ರಿತ ಉಚ್ಚಾರಣೆಗಳನ್ನು ಒಳಗೊಂಡ ಲೇಖನಗಳು (UK ಇಂಗ್ಲಿಷ್)]]
[[ವರ್ಗ:ಮಹಾನಗರದ ನಗರವಿಭಾಗಗಳು]]
bznal8fkeptxhjor5p5u20qsk0m4471
ಮೇಲೋಗರ
0
29418
1384565
1379905
2026-08-28T12:11:11Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384565
wikitext
text/x-wiki
[[ಚಿತ್ರ:Indiandishes.jpg|thumb|ಭಾರತಕ್ಕೆ ಸೇರಿದ ತರಕಾರಿಯ ವೈವಿಧ್ಯಮಯ ಮೇಲೋಗರಗಳು.]]
[[ಚಿತ್ರ:Chicken makhani.jpg|right|thumb|ಭಾರತದ ಭೋಜನ ಮಂದಿರವೊಂದರಲ್ಲಿ ಬಡಿಸಲಾಗುವ ಬೆಣ್ಣೆ ಚಿಕನ್.]]
[[ಚಿತ್ರ:Red roast duck curry.jpg|thumb|ಥೈಲೆಂಡ್ಗೆ ಸೇರಿದ ಹುರಿದ ಕೆಂಪು ಬಾತುಕೋಳಿಯ (ಖಾರದ ಮತ್ತು ಮಸಾಲೆಭರಿತ) ಮೇಲೋಗರ.]]
[[ಚಿತ್ರ:Rice and chenopodium album leaf curry with potatoes and onions40.JPG|thumb|ಈರುಳ್ಳಿಗಳು ಮತ್ತು ಆಲೂಗಡ್ಡೆಗಳನ್ನು ಒಳಗೊಂಡಿರುವ ಕಾಡು ಓಮದ ಎಲೆಯ ಮೇಲೋಗರ ಹಾಗೂ ಅನ್ನ; ಇದು ಒಂದು ಸಸ್ಯಾಹಾರಿ ಮೇಲೋಗರ ಭಕ್ಷ್ಯವಾಗಿದೆ.]]
'''ಮೇಲೋಗರ''' (ಕರಿ) ಎಂಬುದು ವೈವಿಧ್ಯಮಯವಾದ ಮಸಾಲೆಯುಕ್ತ ಭಕ್ಷ್ಯಗಳನ್ನು ವಿವರಿಸಲು ಪಾಶ್ಚಾತ್ಯ ಸಂಸ್ಕೃತಿಯ ಉದ್ದಕ್ಕೂ ಬಳಸಲಾಗುವ ಒಂದು ಸಾರ್ವತ್ರಿಕ ವಿವರಣೆಯಾಗಿದ್ದು, ವಿಶೇಷವಾಗಿ ಭಾರತೀಯ, ಪಾಕಿಸ್ತಾನಿ ಅಥವಾ ಇತರ ದಕ್ಷಿಣ ಏಷ್ಯಾದ ಪಾಕಪದ್ಧತಿಗಳಿಗೆ ಸೇರಿದ ಮಸಾಲೆಯುಕ್ತ ಭಕ್ಷ್ಯಗಳನ್ನು ವಿವರಿಸಲು ಇದನ್ನು ಬಳಸಲಾಗುತ್ತದೆ. ಅರಿಶಿನ, ಧನಿಯಾ, ಮತ್ತು ಜೀರಿಗೆ ಇವು ಬಹುತೇಕ ಮಸಾಲೆ ಪುಡಿಗಳಲ್ಲಿ ಕಂಡುಬರುವ ಮೂರು ಮಸಾಲೆಗಳಾಗಿವೆ; ಭೌಗೋಳಿಕ ಪ್ರದೇಶ ಮತ್ತು ಸೇರ್ಪಡೆಗೊಳ್ಳುತ್ತಿರುವ ಆಹಾರಗಳನ್ನು (ಮಾಂಸಗಳು, ಮೀನುಗಳು, ಲೆಂಟಿಲ್ಗಳು, ಅನ್ನ, ಇತ್ಯಾದಿ) ಅವಲಂಬಿಸಿ ಹೆಚ್ಚುವರಿ ಮಸಾಲೆಗಳ ಒಂದು ವ್ಯಾಪಕ ಶ್ರೇಣಿಯನ್ನು ಇದರಲ್ಲಿ ಸೇರಿಸಬಹುದು.<ref>ರಾಘವನ್ S. ಹ್ಯಾಂಡ್ಬುಕ್ ಆಫ್ ಸ್ಪೈಸಸ್, ಸೀಸನಿಂಗ್ಸ್ ಅಂಡ್ ಫ್ಲೇವರಿಂಗ್ಸ್. CRC ಪ್ರೆಸ್, 2007 ISBN 0-8493-2842-X, ಪುಟ 302</ref> "ಮೇಲೋಗರ" ಎಂಬ ಆಹಾರಶೈಲಿಯನ್ನು ರೂಪಿಸುವಂಥ ಯಾವುದೇ ನಿರ್ದಿಷ್ಟ ಘಟಕವಸ್ತುವಿನ ಅಸ್ತಿತ್ವವೂ ಇಲ್ಲಿ ಕಂಡುಬರುವುದಿಲ್ಲವಾದ್ದರಿಂದ, "ಮೇಲೋಗರ" ಎಂಬ ಪದವು "ಎಸರು" ಅಥವಾ "ಮಾಂಸಭಕ್ಷ್ಯ" ಎಂಬುದಕ್ಕೆ ಹೋಲುವಂತಿದೆ.
ಅಂತರರಾಷ್ಟ್ರೀಯ ಪಾಕಪದ್ಧತಿಯಲ್ಲಿ ಎದ್ದುಕಾಣುವಂತೆ ಗುರುತಿಸಿಕೊಳ್ಳುವ ಸಲುವಾಗಿ, ಇತ್ತೀಚಿನ ದಶಕಗಳಲ್ಲಿ ಮೇಲೋಗರದ ಜನಪ್ರಿಯತೆಯು ಭಾರತೀಯ ಉಪಖಂಡದಿಂದ ಆಚೆಗೆ ಹರಡಿಕೊಂಡಿದೆ. ಇದರ ಪರಿಣಾಮವಾಗಿ, ಅದರದ್ದೇ ಆದ ಅನನ್ಯ ರುಚಿಗಳು ಮತ್ತು ಸಾಂಸ್ಕೃತಿಕ ಸಂವೇದನಾ ಶಕ್ತಿಗಳಿಗೆ ಹೊಂದಿಕೊಳ್ಳುವ ಸಲುವಾಗಿ ಪ್ರತಿಯೊಂದು ಸಂಸ್ಕೃತಿಯೂ ತನ್ನ ಸ್ಥಳೀಯ ಅಡುಗೆಯಲ್ಲಿ ಮಸಾಲೆಗಳನ್ನು ಅಳವಡಿಸಿಕೊಂಡಿದೆ. ಥಾಯ್ ಜನರ, ಬ್ರಿಟಿಷರ, ಜಪಾನಿಯರ ಮತ್ತು ಜಮೈಕನ್ನರ ಪಾಕಪದ್ಧತಿಗಳಲ್ಲಿ ಮೇಲೋಗರವು ಭರ್ಜರಿ ಜನಪ್ರಿಯತೆಯನ್ನು ಗಳಸಿಕೊಂಡಿರುವುದರಿಂದ, ಅದನ್ನು ಅಖಿಲ-ಏಷ್ಯಾದ ಅಥವಾ [[ಜಾಗತೀಕರಣ|ಜಾಗತಿಕ]] ಮಟ್ಟದ ಒಂದು ವಿದ್ಯಮಾನ ಎಂದು ಕರೆಯಬಹುದು.
== ವ್ಯುತ್ಪತ್ತಿ ==
{{Wiktionary}}
"ಮೇಲೋಗರ" ಎಂಬ ಪದವು ''{{IAST|ka<u>r</u>i}}'' (கறி)<ref>ಇದು ಆಧುನಿಕ ಪ್ರಜ್ಞೆಯಲ್ಲಿ ಇಂಗ್ಲಿಷ್ನ ''curry'' ಎಂಬುದಕ್ಕೆ ಸಂಬಂಧಿಸಿದ ಸಾರ್ವತ್ರಿಕವಾಗಿ ಸ್ವೀಕರಿಸಲ್ಪಟ್ಟ ಮೂಲವಾಗಿದೆ. ಆದಾಗ್ಯೂ ಇದರ ಕಾಗುಣಿತವು 'ಅಡುಗೆ' ಎಂಬುದನ್ನು ಸೂಚಿಸುವ "cury" (ಫ್ರೆಂಚ್ ಭಾಷೆಯ ''cuire'' ಎಂಬುದರಿಂದ ಪಡೆದದ್ದು) ಎಂಬ ಒಂದು ಹಳೆಯದಾದ ಸ್ವರೂಪವನ್ನು ಪ್ರಾಸಂಗಿಕವಾಗಿ ಪ್ರಸ್ತಾಪಿಸುವಂತೆ ತೋರುತ್ತದೆ; ಈ ಕುರಿತು 1390ಕ್ಕೆ ಸೇರಿದ ಫಾರ್ಮೆ ಆಫ್ ಕರಿ (Forme of Cury) ಎಂಬ ಪಾಕಶಾಲೆಯ ಅಡುಗೆ-ಪುಸ್ತಕದಲ್ಲಿ ಮೊದಲ ಬಾರಿಗೆ ಪ್ರಮಾಣೀಕರಿಸಲಾಯಿತು.</ref><ref>{{Cite web |url=https://dsal.uchicago.edu/cgi-bin/philologic/getobject.pl?c.0:1:705.hobson |title=University of Chicago |publisher=Dsal.uchicago.edu |date=2001-09-01 |accessdate=2009-06-08 |archive-date=5 ಸೆಪ್ಟೆಂಬರ್ 2006 |archive-url=https://web.archive.org/web/20060905045121/http://dsal.uchicago.edu/cgi-bin/philologic/getobject.pl?c.0:1:705.hobson |url-status=dead }}</ref> ಎಂಬ [[ತಮಿಳು]] ಪದದ ಒಂದು ಆಂಗ್ಲೀಕರಿಸಿದ ರೂಪಾಂತರವಾಗಿದ್ದು, ಅದು 'ವ್ಯಂಜನ' ಎಂಬ ಅರ್ಥವನ್ನು ಕೊಡುತ್ತದೆ ಮತ್ತು ಮಾಂಸರಸವೊಂದನ್ನು ಹೊಂದಿರುವ ಅಥವಾ ಹೊಂದದೇ ಇರುವ, ಮಸಾಲೆಗಳೊಂದಿಗೆ ಬೇಯಿಸಲಾಗಿರುವ ತರಕಾರಿಗಳು/ಮಾಂಸ ಎಂಬ ಅರ್ಥವನ್ನು ಹೊಂದಿರುವಂತೆ ಅದನ್ನು ಸಾಮಾನ್ಯವಾಗಿ ಅರ್ಥೈಸಿಕೊಳ್ಳಲಾಗುತ್ತದೆ.<ref>{{cite web|url=http://www.cookeryonline.com/India/INDIA4.html#K |title=Indian Cookery Terms |publisher=Cookeryonline.com |date=2007-02-24 |accessdate=2009-06-08}}</ref>
== ಭಾರತೀಯ ಉಪಖಂಡ ==
=== ಆಂಧ್ರದ ಪಾಕಪದ್ಧತಿ ===
ಆಂಧ್ರದ ಪಾಕಪದ್ಧತಿಯು ಮಸಾಲೆಭರಿತವಾಗಿದ್ದು ಒಂದು ಅನನ್ಯ ಪರಿಮಳವನ್ನು ಅದು ಹೊಂದಿದೆಯಾದರೂ, [[ಆಂಧ್ರ ಪ್ರದೇಶ|ಆಂಧ್ರಪ್ರದೇಶ]]ದ ಪಾಕಪದ್ಧತಿಯಲ್ಲಿ ಪ್ರಾದೇಶಿಕ ಮಾರ್ಪಾಡುಗಳು ಇರುವುದನ್ನು ಕಾಣಬಹುದು. ಆಂಧ್ರಪ್ರದೇಶದ ಪಶ್ಚಿಮ ಭಾಗದಲ್ಲಿರುವ [[ತೆಲಂಗಾಣ]] ಪ್ರಾಂತ್ಯವು ಅಂಬಲಿ, ಜೊನ್ನ ರೊಟ್ಟೆ/ಜೋಳದ ರೊಟ್ಟಿ, ಸಜ್ಜಾ ಕಾಳುಗಳಿಂದ ತಯಾರಿಸಲಾದ ಸಜ್ಜಾ ರೊಟ್ಟೆ/ರೊಟ್ಟಿ, ಹಾಗೂ ಹೈದರಾಬಾದಿ ಬಿರಿಯಾನಿಯಂಥ ಭಕ್ಷ್ಯಗಳನ್ನು ಹೊಂದಿದೆ. ಈ ಪ್ರದೇಶದಲ್ಲಿ [[ಲವಂಗ]], [[ದಾಲ್ಚಿನ್ನಿ|ದಾಲ್ಚಿನ್ನಿ ಚಕ್ಕೆ]], [[ಜಾಪತ್ರೆ|ಜಾಯಿಕಾಯಿ]], ಸೋಂಪು ಬೀಜ, ಮತ್ತು ಬೇ ಎಲೆಯಂಥ ಮಸಾಲೆಗಳನ್ನು ಬಳಸಿಕೊಂಡು ಮೇಲೋಗರಕ್ಕೆ ಪರಿಮಳ ಮತ್ತು ರುಚಿಯನ್ನು ನೀಡಲಾಗುತ್ತದೆ. ಆಂಧ್ರಪ್ರದೇಶದ ಕರಾವಳಿ ಭಾಗವು ತನ್ನ ಪಾಕಪದ್ಧತಿಯಲ್ಲಿ ಹೆಚ್ಚು ವೈವಿಧ್ಯತೆಯನ್ನು ಹೊಂದಿದ್ದು, ಇಲ್ಲಿ ತರಕಾರಿಗಳಿಂದ ಒಂದು ಬೃಹತ್ ವೈವಿಧ್ಯತೆಯ ಮೇಲೋಗರಗಳು ಹಾಗೂ ಮಾಂಸದಿಂದ ಸಣ್ಣ ಪ್ರಮಾಣದ ಮೇಲೋಗರಗಳು ತಯಾರಿಸಲ್ಪಡುತ್ತವೆ. ಈ ಪ್ರದೇಶದಲ್ಲಿ, ಧನಿಯಾ ಪುಡಿ, ಜೀರಿಗೆ ಬೀಜಗಳು/ಪುಡಿ, [[ಕರಿಮೆಣಸು|ಕರಿಮೆಣಸಿನ]] ಪುಡಿ, ಖಾರದ ಕೆಂಪು ಮೆಣಸಿನ ಹಣ್ಣುಗಳು/ಪುಡಿ, [[ಇಂಗು]], ತುಪ್ಪ, [[ಮೆಂತೆ|ಮೆಂತ್ಯದ]] ಬೀಜಗಳು, ಕರಿಬೇವಿನ ಸೊಪ್ಪು ಮತ್ತು ಅರಿಶಿನ ಇವುಗಳನ್ನು ಬಳಸಿಕೊಂಡು ಮೇಲೋಗರಕ್ಕೆ ಪರಿಮಳ ಮತ್ತು ರುಚಿಯನ್ನು ನೀಡಲಾಗುತ್ತದೆ. ಮೇಲೋಗರದಲ್ಲಿ ಅದೇ ತರಕಾರಿಗಳು ಬಳಸಲ್ಪಟ್ಟರೂ, ಆಂಧ್ರದ ಕರಾವಳಿ ಪ್ರದೇಶದ ಮೇಲೋಗರಗಳ ರುಚಿಯು [[ತೆಲಂಗಾಣ]] ಪ್ರದೇಶದ ಮೇಲೋಗರಗಳ ರುಚಿಗಿಂತ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಈ ಕಾರಣದಿಂದಲೇ ಮೇಲೋಗರ ಎಂಬುದು ಒಂದು ಕಟ್ಟುನಿಟ್ಟಾದ ಪಾಕವಿಧಾನ ಎಂಬುದಕ್ಕಿಂತ ಹೆಚ್ಚಾಗಿ ಒಂದು ಪರಿಕಲ್ಪನೆ ಎನಿಸಿಕೊಂಡಿದೆ. ಸ್ಥಳೀಯ ಮಸಾಲೆಗಳನ್ನು ಬಳಸಿಕೊಳ್ಳುವ ಸಲುವಾಗಿ ಇದನ್ನು ಅಗತ್ಯಾನುಸಾರವಾಗಿ ರೂಪಿಸಬಹುದು. ಮೇಲೋಗರಗಳನ್ನು ಮುಖ್ಯವಾಗಿ [[ಅಕ್ಕಿ|ಅನ್ನ]]ದ ಜೊತೆಯಲ್ಲಿ ತಿನ್ನಲಾಗುತ್ತದೆ.
=== ಬಂಗಾಳದ, ಬಾಂಗ್ಲಾದೇಶದ ಮತ್ತು ಒರಿಸ್ಸಾದ ಪಾಕಪದ್ಧತಿಗಳು ===
{{Main|Bangladeshi cuisine|Bengali cuisine|Oriya cuisine}}
[[ಚಿತ್ರ:Beef Curry in Bangladesh.jpg|right|thumb|ಬಾಂಗ್ಲಾದೇಶದ ಢಾಕಾದಲ್ಲಿ, ಹುರಿದ ಈರುಳ್ಳಿಯೊಂದಿಗೆ ಬಡಿಸಲಾಗುವ ದನದ ಮಾಂಸದ ಮೇಲೋಗರ.]]
ಬಂಗಾಳಿ ಪಾಕಪದ್ಧತಿಯು ಅತಿ ಯಥೇಷ್ಟವಾಗಿ ಮೇಲೋಗರಗಳನ್ನು ಒಳಗೊಂಡಿದೆ. ಸಮುದ್ರಾಹಾರ ಮತ್ತು ತಾಜಾ ಮೀನುಗಳು ಬಂಗಾಳಿಗಳ ಮಹಾನ್ ಅಚ್ಚುಮೆಚ್ಚಿನ ಆಹಾರಗಳಾಗಿದ್ದು, ಅವುಗಳಿಗೆ ಜೊತೆಯಾಗಿ ಸೇವಿಸಲೆಂದು ಒಂದು ದೊಡ್ಡ ಸಂಖ್ಯೆಯಲ್ಲಿ ಮೇಲೋಗರಗಳು ರೂಪಿಸಲ್ಪಟ್ಟಿವೆ. ಗಸಗಸೆ ಬೀಜಗಳ ರೀತಿಯಲ್ಲಿಯೇ ಸಾಸಿವೆ ಬೀಜಗಳು ಮತ್ತು ಸಾಸಿವೆ ಎಣ್ಣೆಯನ್ನು ಅನೇಕ ಪಾಕವಿಧಾನಗಳಿಗೆ ಸೇರಿಸಲಾಗುತ್ತದೆ.
ಒರಿಯಾ ಜನರು ಇದೇ ರೀತಿಯ ಆಹಾರ ಸೇವನಾ ಪರಿಪಾಠಗಳನ್ನು ಹೊಂದಿದ್ದು, ಈ ಬಗೆಯ ಮೇಲೋಗರಗಳನ್ನು ತಯಾರಿಸುವಲ್ಲಿ ಅವರು ಪ್ರವೀಣರೆಂದು ಪರಿಗಣಿಸಲ್ಪಟ್ಟಿದ್ದಾರೆ. ಒರಿಯಾದ ಜನರು ಹೆಚ್ಚಿನ ಸಂಖ್ಯೆಯಲ್ಲಿ [[ಪಶ್ಚಿಮ ಬಂಗಾಳ]]ದಲ್ಲಿ ಪ್ರಧಾನ ಬಾಣಸಿಗರಾಗಿ ಉದ್ಯೋಗದಲ್ಲಿರುವುದು ಈ ಅಂಶವನ್ನು ಸಾಬೀತುಪಡಿಸುತ್ತದೆ.
=== ಗುಜರಾತಿ ಮತ್ತು ರಾಜಾಸ್ತಾನಿ ಪಾಕಪದ್ಧತಿ ===
{{Main|Gujarati cuisine}}{{main|Rajasthani cuisine}}
ವಿಶಿಷ್ಟವಾಗಿರುವ [[ಗುಜರಾತ್|ಗುಜರಾತಿ]] ಮತ್ತು [[ರಾಜಸ್ಥಾನ|ರಾಜಾಸ್ತಾನಿ]] ಪಾಕಪದ್ಧತಿಯನ್ನು ಥಾಲಿ ಎಂದು ಕರೆಯಲಾಗುತ್ತದೆ. ರೋಟಿ (ಗೋಧಿಹಿಟ್ಟಿನಿಂದ ಮಾಡಲಾದ ಒಂದು ಮಟ್ಟಸವಾದ ರೊಟ್ಟಿ), [[ತೊವ್ವೆ|ದಾಲ್]] ಅಥವಾ, ಚಾವಲ್ (ಅನ್ನ), ಮತ್ತು ಷಾಕ್ (ಪಲ್ಯ) (ತರಕಾರಿಗಳ ವಿಭಿನ್ನ ಸಂಯೋಜನೆಗಳಿಂದ ಮಾಡಲಾದ ಒಂದು ಭಕ್ಷ್ಯ; ತರಕಾರಿಗಳನ್ನು ಕಲಕುತ್ತಾ ಬಾಡಿಸಿರಬಹುದಾಗಿದ್ದು ಅವು ಮಸಾಲೆಭರಿತ ಅಥವಾ ಸಿಹಿಯಾಗಿರುತ್ತವೆ) ಇವುಗಳನ್ನು ಥಾಲಿಯು ಒಳಗೊಂಡಿರುತ್ತದೆ. ರುಚಿಯನ್ನು ಅವಲಂಬಿಸಿ ಪಾಕಪದ್ಧತಿಯ ಪರಿಮಳ ಮತ್ತು ತಾಪವು ಬದಲಾಗುತ್ತದೆ.
=== ಕರ್ನಾಟಕದ ಪಾಕಪದ್ಧತಿ ===
{{Main|Cuisine of Karnataka}}
[[ಚಿತ್ರ:Karnatakadishes.jpg|thumb|ಭಾರತದ ಕರ್ನಾಟಕಕ್ಕೆ ಸೇರಿದ ಮೇಲೋಗರ-ಆಧರಿತ ಭಕ್ಷ್ಯಗಳು.]]
ಕರ್ನಾಟಕದ ಮೇಲೋಗರಗಳು ವಿಶಿಷ್ಟವಾಗಿ ಸಸ್ಯಾಹಾರದ ಸ್ವರೂಪವನ್ನು ಹೊಂದಿದ್ದು, ಬಹುತೇಕವಾಗಿ ಕರಾವಳಿ ಪ್ರದೇಶಗಳ ಸುತ್ತಮುತ್ತ ಮಾಂಸ ಮತ್ತು ಮೀನುಗಳ ಸೇವನೆಯು ಕಂಡುಬರುತ್ತದೆ. ತರಕಾರಿಗಳು ಮತ್ತು ಮಸಾಲೆಗಳ ಒಂದು ವ್ಯಾಪಕ ವೈವಿಧ್ಯತೆಯನ್ನು ಅವರು ಬಳಸುತ್ತಾರೆ, ಹಾಗೂ ತೆಂಗಿನಕಾಯಿ ಮತ್ತು ಬೆಲ್ಲ ಇಲ್ಲಿನ ಸಾಮಾನ್ಯ ರುಚಿಗಳಾಗಿವೆ. ಅವು ಶುಷ್ಕ ಮತ್ತು ವ್ಯಂಜನ ಆಧರಿತ ಮೇಲೋಗರಗಳಾಗಿವೆ. ವ್ಯಂಜನ ಆಧರಿತವಾಗಿರುವ ಕೆಲವೊಂದು ವಿಶಿಷ್ಟ ಭಕ್ಷ್ಯಗಳಲ್ಲಿ ಇವು ಸೇರಿವೆ: ಸಾರು, ಗೊಜ್ಜು, ತೊವ್ವೆ, ಹುಳಿ, ಮಜ್ಜಿಗೆ ಹುಳಿ, ಸಾಗು ಅಥವಾ ಕೂಟು; ಮಜ್ಜಿಗೆ ಹುಳಿಯು ಉತ್ತರ ಭಾರತದಲ್ಲಿ ತಯಾರಿಸಲಾಗುವ "ಕಡಿ" ಎಂಬ ಭಕ್ಷ್ಯವನ್ನು ಹೋಲುವಂತಿರುತ್ತದೆ. ಸಾಗು ಅಥವಾ ಕೂಟನ್ನು ಬಿಸಿಯಾದ ಅನ್ನದೊಂದಿಗೆ ಬೆರೆಸಿಕೊಂಡು ತಿನ್ನಲಾಗುತ್ತದೆ.
=== ಮಲಯಾಳಿ ಪಾಕಪದ್ಧತಿ ===
{{Main|Cuisine of Kerala}}
[[ಕೇರಳ]] ರಾಜ್ಯದ ಮಲಯಾಳಿ ಮೇಲೋಗರಗಳು ಚೂರುಚೂರು ಮಾಡಿದ [[ತೆಂಗಿನಕಾಯಿ]]ಯ ಜಲಪಿಷ್ಟ (ಪೇಸ್ಟ್) ಅಥವಾ ತೆಂಗಿನಕಾಯಿಯ ಹಾಲು, ಕರಿಬೇವಿನ ಸೊಪ್ಪು, ಮತ್ತು ನಾನಾಬಗೆಯ ಮಸಾಲೆಗಳನ್ನು ವಿಶಿಷ್ಟವಾಗಿ ಒಳಗೊಂಡಿರುತ್ತದೆ. ಬಹುತೇಕ ಪ್ರತಿಯೊಂದು ಭಕ್ಷ್ಯದಲ್ಲಿಯೂ ಸಾಸಿವೆ ಬೀಜಗಳನ್ನು ಬಳಸಲಾಗುತ್ತದೆ ಹಾಗೂ ಇವುಗಳ ಜೊತೆಯಲ್ಲಿ ಬಿಸಿ ಎಣ್ಣೆಯಲ್ಲಿ ಹುರಿಯಲಾದ ಈರುಳ್ಳಿಗಳು, ಕರಿಬೇವಿನ ಸೊಪ್ಪು, ಕೊಚ್ಚಿದ ಕೆಂಪು ಒಣಮೆಣಸಿನಕಾಯಿಗಳು ಕೂಡಾ ಬಳಕೆಯಾಗುತ್ತವೆ ಎಂಬುದು ಗಮನಾರ್ಹ ಸಂಗತಿ. ಬಹುತೇಕ ಮಾಂಸಾಹಾರಿ ಭಕ್ಷ್ಯಗಳು ಅತೀವವಾಗಿ ಮಸಾಲೆಯುಕ್ತವಾಗಿರುತ್ತವೆ. ಕೇರಳ ರಾಜ್ಯವು ಸದ್ಯಾ ಎಂಬ ತನ್ನ ಸಾಂಪ್ರದಾಯಿಕ ಸಸ್ಯಾಹಾರಿ ಭೋಜನಕ್ಕೆ ಪ್ರಸಿದ್ಧಿಯನ್ನು ಪಡೆದಿದ್ದು, ಕುಸುಬಲ ಅಕ್ಕಿಯ ಅನ್ನ ಹಾಗೂ ಹೆಚ್ಚುಸಂಖ್ಯೆಯಲ್ಲಿರುವ ವಿಶೇಷ-ಭಕ್ಷ್ಯಗಳನ್ನು ಅದು ಒಳಗೊಂಡಿರುತ್ತದೆ ಮತ್ತು ಒಂದು ಬಾಳೆ ಎಲೆಯ ಮೇಲೆ ಈ ಭೋಜನವನ್ನು ವಾಡಿಕೆಯಾಗಿ ಬಡಿಸಲಾಗುತ್ತದೆ. ಈ ಭೋಜನದಲ್ಲಿರುವ ವಿಶೇಷ-ಭಕ್ಷ್ಯಗಳೆಂದರೆ: ಪರಿಪ್ಪು (ಹೆಸರುಕಾಳು), ಪಾಪಡಂ, ಒಂದಷ್ಟು ತುಪ್ಪ, ಸಾಂಬಾರ್, [[ಸಾರು|ರಸಂ]], ಅವಿಯಲ್, ಕಾಲನ್, ಕಿಚಡಿ, ಪಚಡಿ, ಇಂಜಿಪುಳಿ, ಕೂಟ್ಟುಕರಿ, [[ಉಪ್ಪಿನಕಾಯಿ|ಉಪ್ಪಿನಕಾಯಿಗಳು]] (ಮಾವಿನಕಾಯಿ, ನಿಂಬೆ), ಥೋರಣ್, ಒಂದರಿಂದ ನಾಲ್ಕು ಬಗೆಯ ಪಾಯಸಂಗಳು, ಬೊಳಿ, ಓಲನ್, ಪುಲಿಸೆರಿ, ಮೊರು (ಮಜ್ಜಿಗೆ), ಉಪ್ಪೇರಿ, [[ಬಾಳೆ ಹಣ್ಣು|ಬಾಳೆಹಣ್ಣಿನ]] ಚಿಪ್ಸ್, ಇತ್ಯಾದಿ.
=== ಉತ್ತರ ಭಾರತದ ಪಾಕಪದ್ಧತಿಗಳು ===
[[ಚಿತ್ರ:Vegthali.jpg|thumb|ಭಾರತದಲ್ಲಿ ರೋಟಿಯೊಂದಿಗೆ ಸೇವಿಸಲಾಗುವ ತರಕಾರಿ ಮೇಲೋಗರಗಳು.]]
ಉತ್ತರ ಭಾರತದ ಪಾಕಪದ್ಧತಿಯಲ್ಲಿ, ಕಾಶ್ಮೀರದ ಪಾಕಪದ್ಧತಿಯಾದ ಮುಘಲಾಯ್ ಪಾಕಪದ್ಧತಿ, ಉತ್ತರ ಪ್ರದೇಶದ ಪಾಕಪದ್ಧತಿಯಾದ ಅವಧಿ ಪಾಕಪದ್ಧತಿ ಹಾಗೂ ಭೋಜ್ಪುರಿ ಪಾಕಪದ್ಧತಿ ಇವುಗಳು ಸೇರಿವೆ. ''ಕಡಿ'' ಎಂಬುದೊಂದು ವಿಶಿಷ್ಟ ಭಕ್ಷ್ಯವಾಗಿದ್ದು, ಮೊಸರನ್ನು ಚೆನ್ನಾಗಿ ಕಡೆದು ತುಪ್ಪ ಮತ್ತು ಕಡಲೇಹಿಟ್ಟಿನ ಒಂದು ಮಿಶ್ರಣಕ್ಕೆ ಅದನ್ನು ಬೆರೆಸುವ ಮೂಲಕ ಕಡಿಯನ್ನು ತಯಾರಿಸಲಾಗುತ್ತದೆ. ಇದಕ್ಕೆ ಸೇರಿಸಲ್ಪಡುವ ಮಸಾಲೆಗಳು ಭಿನ್ನವಾಗಿರುತ್ತವೆಯಾದರೂ, ಅರಿಶಿನ ಮತ್ತು ಕರಿ ಸಾಸಿವೆ ಬೀಜವನ್ನು ಅದು ಸಾಮಾನ್ಯವಾಗಿ ಒಳಗೊಂಡಿರುತ್ತದೆ. ಇದನ್ನು ಬಹುತೇಕವಾಗಿ ಅನ್ನದೊಂದಿಗೆ ತಿನ್ನಲಾಗುತ್ತದೆ. ಆಹಾರ-ಭಕ್ಷ್ಯಗಳು ''ಸೂಖಿ'' (ಶುಷ್ಕ) ಮತ್ತು ''ತರಿ'' (ದ್ರವಪಧಾರ್ಥವನ್ನು ಹೊಂದಿರುವಂಥದ್ದು) ಎಂಬ ರೀತಿಯಲ್ಲಿ ವರ್ಗೀಕರಿಸಲ್ಪಟ್ಟಿರುವ ಉತ್ತರ ಭಾರತದಲ್ಲಿ, ''ಕರಿ'' (ಮೇಲೋಗರ) ಎಂಬ ಪದವು ಅನೇಕವೇಳೆ ಗೊಂದಲ ಹುಟ್ಟಿಸುತ್ತದೆ; ಇದು ''ತರಿ'' (ಪರ್ಷಿಯನ್-ಜನ್ಯವಾದ ''ತರ್'' ಎಂಬ ಪದದಿಂದ ಇದು ಉದ್ಭವಿಸಿದ್ದು, ''ಒದ್ದೆಯಾದ'' ಎಂಬ ಅರ್ಥವನ್ನು ಅದು ನೀಡುತ್ತದೆ) ಎಂಬ ಹಿಂದಿ-ಉರ್ದು ಪದವನ್ನು ಹೋಲುವ-ಧ್ವನಿಸುವ ರೀತಿಯಲ್ಲಿರುವುದೇ ಇದಕ್ಕೆ ಕಾರಣ. ಅಷ್ಟೇ ಅಲ್ಲ, ಮಸಾಲೆಯ ಹಾಜರಿ ಅಥವಾ ಗೈರುಹಾಜರಿಗೆ ಸಂಬಂಧಿಸಿದಂತಾಗಲೀ, ಭಕ್ಷ್ಯವು ಭಾರತೀಯ ಭಕ್ಷ್ಯವೋ ಅಥವಾ ಅಲ್ಲವೋ ಎಂಬುದಕ್ಕೆ ಸಂಬಂಧಿಸಿದಂತಾಗಲೀ ಅದು ಯಾವುದೇ ಸೂಚ್ಯಾರ್ಥಗಳನ್ನು ಹೊಂದಿಲ್ಲ (ಉದಾಹರಣೆಗೆ, ಯಾವುದೇ ಮಾಂಸಭಕ್ಷ್ಯವು, ಅದು ಮಸಾಲೆಭರಿತವಾಗಿರಲಿ ಅಥವಾ ಅಲ್ಲದಿರಲಿ, ಕೇವಲವಾಗಿ ಅದು ಒದ್ದೆಯಾದ ಸ್ವರೂಪದಲ್ಲಿರುವ ಕಾರಣದಿಂದ ಒಂದು ಮೇಲೋಗರ ಭಕ್ಷ್ಯವಾಗಿ ಪರಿಗಣಿಸಲ್ಪಡುತ್ತದೆ).<ref>{{Cite book|url=https://books.google.com/books?id=Fk8FQa2ZSFQC |title=India| author=Sarina Singh |publisher=Lonely Planet |accessdate=2010-05-17|quote=generally cooked sukhi (dry) or tari (in a sauce) | isbn=9781740596947}}</ref><ref>{{Cite book|url=https://books.google.com/books?id=E2saAQAAIAAJ|title=Hanklyn-janklin: a stranger's rumble-tumble guide to some words, customs, and quiddities, Indian and Indo-British| author=Nigel B. Hankin |publisher=Banyan Books |accessdate=2010-05-17|quote=In the north, a hot savoury gravy-like sauce, ideally containing ghee, added to vegetables or into which a chapati may be dipped, will be termed tari}}</ref><ref>{{Cite book|url=https://books.google.com/books?id=HkPwaXWipVcC|title=Colloquial Urdu: the complete course for beginners|author=Tej K. Bhatia, Ashok Koul|publisher=Routledge|accessdate=2010-05-17|quote="Do you like spicy food or curry? In America, curry is the name of a dish but this is not the case in India. Curry is neither always spicy not is curry powder usually sold. Curry is usually liquid (tari vali)" tar:wet, tari:liquid, tari vali sabzi | isbn=9780415135405}}</ref> [[ಉರ್ದೂ|ಉರ್ದು]] ಭಾಷೆಯಲ್ಲಿ, ಮೇಲೋಗರವು ಸಾಮಾನ್ಯವಾಗಿ ''ಸಾಲನ್'' (سالن) ಎಂಬುದಾಗಿ ಉಲ್ಲೇಖಿಸಲ್ಪಡುತ್ತದೆ. ''ಮಸಾಲೆದಾರ್'' (ಅಂದರೆ ''ಮಸಾಲಾ'' ಯುಕ್ತವಾದದ್ದು) ಎಂಬುದು ಒಂದು ಮಸಾಲೆಯುಕ್ತ ಭಕ್ಷ್ಯಕ್ಕೆ ಸಂಬಂಧಿಸಿದಂತೆ ಹಿಂದಿ-ಉರ್ದುವಿನಲ್ಲಿರುವ ಸಮಾನಾರ್ಥಕ ಪದವಾಗಿದೆ.<ref>{{Cite book|url=https://books.google.com/books?id=HkPwaXWipVcC|title=Colloquial Urdu: the complete course for beginners|author=Tej K. Bhatia, Ashok Koul|publisher=Routledge|accessdate=2010-05-17|quote="Hamare yahan (America) curry ka matlab koi masaledar Hindustani khana hai. In America, curry is any spicy (masaledar) Indian dish" | isbn=9780415135405}}</ref>
=== ಪಾಕಿಸ್ತಾನಿ ಪಾಕಪದ್ಧತಿ ===
{{Main|Pakistani cuisine}}
[[ಚಿತ್ರ:Riceandcereal.JPG|thumb|ಅನ್ನದೊಂದಿಗೆ ಸೇವಿಸಲಾಗುವ ಮಸಾಲೆ ಹಾಕಿದ ರಾಜ್ಮಾ.]]
ಕರಾಹಿ ಎಂಬುದು ಒಂದು ಅಚ್ಚುಮೆಚ್ಚಿನ [[ಪಾಕಿಸ್ತಾನ|ಪಾಕಿಸ್ತಾನಿ]] ಮೇಲೋಗರವಾಗಿದ್ದು, ಇದು ಒಂದು ಶುಷ್ಕ ಮಸಾಲೆ ರಬ್ನಲ್ಲಿ ಬೇಯಿಸಲಾದ ಮಟನ್ ಅಥವಾ ಚಿಕನ್ ಆಗಿರುತ್ತದೆ. ಲಾಹೋರಿ ಕರಾಹಿಯು ಬೆಳ್ಳುಳ್ಳಿ, ಮಸಾಲೆಗಳು ಮತ್ತು ವಿನೆಗರ್ನ್ನು ಒಳಗೊಂಡಿರುತ್ತದೆ. ಪೆಷಾವರಿ ಕರಾಹಿಯು ಒಂದು ಸರಳ ಭಕ್ಷ್ಯವಾಗಿದ್ದು, ಇದನ್ನು ಕೇವಲ ಮಾಂಸ, ಉಪ್ಪು, ಟೊಮೆಟೋಗಳು ಮತ್ತು ಧನಿಯಾವನ್ನು ಬಳಸಿ ತಯಾರಿಸಲಾಗಿರುತ್ತದೆ.
=== ಪಂಜಾಬಿ ಪಾಕಪದ್ದತಿ ===
{{Main|Punjabi cuisine}}
ಪಂಜಾಬಿ ಮೇಲೋಗರಗಳು ಮುಖ್ಯವಾಗಿ ಮಸಾಲಾಗಳು (ಮಸಾಲೆ ಮಿಶ್ರಣಗಳು), ಅಪ್ಪಟ ದೇಸಿ ತುಪ್ಪವನ್ನು ಆಧರಿಸಿದ್ದು, ಹೇರಳವಾದ ಪ್ರಮಾಣಗಳಲ್ಲಿ ಬೆಣ್ಣೆ ಮತ್ತು ಕೆನೆಯನ್ನು ಅವು ಒಳಗೊಂಡಿರುತ್ತವೆ. ಮಹಾ ದಿ ದಾಲ್ ಮತ್ತು ಸಾರೋಂ ದ ಸಾಗ್ (ಸರ್ಸೋಂ ಕಾ ಸಾಗ್) ರೀತಿಯ, ಪಂಜಾಬ್ಗೆ ಏಕಮಾತ್ರವಾಗಿರುವ ನಿರ್ದಿಷ್ಟ ಭಕ್ಷ್ಯಗಳನ್ನೂ ಇಲ್ಲಿ ಕಾಣಬಹುದು.
=== ಸಿಂಧಿ ಪಾಕಪದ್ಧತಿ ===
{{Main|Sindhi cuisine}}
ಸಿಂಧಿ ಜನರ ಪಾಕಪದ್ಧತಿಗೆ ಸಿಂಧಿ ಪಾಕಪದ್ಧತಿ ಎಂದು ಉಲ್ಲೇಖಿಸಲಾಗುತ್ತದೆ. ಬಹುಪಾಲು ಸಿಂಧಿ ಕುಟುಂಬಗಳಲ್ಲಿ ಕಂಡುಬರುವ ದೈನಂದಿನ ಆಹಾರವು ಗೋಧಿ-ಆಧರಿತವಾದ ಮಟ್ಟಸವಾದ-ರೊಟ್ಟಿ (ಫುಲ್ಕಾ) ಮತ್ತು ಅನ್ನವನ್ನು ಒಳಗೊಂಡಿದ್ದು, ಎರಡು ಭಕ್ಷ್ಯಗಳು ಇವುಗಳ ಜೊತೆಗೂಡಿರುತ್ತವೆ; ಈ ಭಕ್ಷ್ಯಗಳ ಪೈಕಿ ಒಂದು ಮಾಂಸರಸವಾಗಿದ್ದರೆ, ಮತ್ತೊಂದು ಶುಷ್ಕ ಭಕ್ಷ್ಯವಾಗಿರುತ್ತದೆ.
=== ತಮಿಳರ ಮತ್ತು ಸಿಂಹಳೀಯರ ಪಾಕಪದ್ಧತಿಗಳು ===
{{Main|South Indian cuisine|Sri Lankan cuisine}}
ತಮಿಳು ಪಾಕಪದ್ಧತಿಯ ವಿಶಿಷ್ಟವೆನಿಸುವ ಪರಿಮಳ ಮತ್ತು ಸುವಾಸನೆಯು ಮಸಾಲೆಗಳ ಒಂದು ಹದವಾದ ಮಿಶ್ರಣ ಮತ್ತು ಸಂಯೋಜನೆಯಿಂದ ಸಾಧಿಸಲ್ಪಡುತ್ತದೆ. ಅಂಥ ಘಟಕಾಂಶಗಳೆಂದರೆ: ಕರಿಬೇವಿನ ಸೊಪ್ಪು, [[ಹುಣಸೆ|ಹುಣಿಸೇಹಣ್ಣು]], ಧನಿಯಾ, [[ಶುಂಠಿ]], ಬೆಳ್ಳುಳ್ಳಿ, ಒಣಮೆಣಸಿನಕಾಯಿ, [[ಕರಿಮೆಣಸು|ಮೆಣಸಿನಕಾಳು]], ಗಸಗಸೆ ಬೀಜಗಳು, ಸಾಸಿವೆ ಬೀಜಗಳು, [[ದಾಲ್ಚಿನ್ನಿ|ದಾಲ್ಚಿನ್ನಿ ಚಕ್ಕೆ]], [[ಲವಂಗ|ಲವಂಗಗಳು]], [[ಏಲಕ್ಕಿ]], ಜೀರಿಗೆ, ಸೋಂಪಿನ ಗಿಡ ಅಥವಾ ಸೋಂಪಿನ ಬೀಜಗಳು, ಮೆಂತ್ಯದ ಬೀಜಗಳು, [[ಜಾಪತ್ರೆ|ಜಾಯಿಕಾಯಿ]], [[ತೆಂಗಿನಕಾಯಿ]], ಅರಿಶಿನದ ಬೇರು ಅಥವಾ ಪುಡಿ, ಮತ್ತು ಪನ್ನೀರು. [[ಮಸೂರ ಅವರೆ|ಲೆಂಟಿಲ್ಗಳು]], [[ತರಕಾರಿ|ತರಕಾರಿಗಳು]] ಮತ್ತು ಹೈನು ಉತ್ಪನ್ನಗಳು ಅತ್ಯಾವಶ್ಯಕವಾದ ಜೊತೆಯಲ್ಲಿರುವ ಘಟಕಾಂಶಗಳಾಗಿವೆ ಮತ್ತು ಅವನ್ನು ಅನ್ನದೊಂದಿಗೆ ಅನೇಕವೇಳೆ ಬಡಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಸಸ್ಯಾಹಾರದ ಸ್ವರೂಪವನ್ನು ಹೊಂದಿರುವ ಆಹಾರಗಳು, ಆಹಾರ-ಸೇವಾಪಟ್ಟಿಯಲ್ಲಿ ತಮ್ಮ ಪ್ರಾಬಲ್ಯವನ್ನು ತೋರಿಸಿದರೆ, ಮಾಂಸಾಹಾರಿ ಭಕ್ಷ್ಯಗಳ ಒಂದು ಶ್ರೇಣಿಯೂ ಇಲ್ಲಿ ಕಂಡುಬರುತ್ತದೆ; ಸಾಂಪ್ರದಾಯಿಕವಾದ ತಮಿಳು ಮಸಾಲೆಗಳು ಮತ್ತು ರುಚಿಕಟ್ಟುವಿಕೆಯೊಂದಿಗೆ ಬೇಯಿಸಲಾದ ಸಿಹಿನೀರಿನ ಮೀನು ಮತ್ತು ಸಮುದ್ರಾಹಾರಗಳು ಮಾಂಸಾಹಾರಿ ಭಕ್ಷ್ಯಗಳಲ್ಲಿ ಸೇರಿವೆ. ದಕ್ಷಿಣ ಭಾರತದ ನಾಲ್ಕು ರಾಜ್ಯಗಳಿಗೂ ಈ ಮಾತು ಚೆನ್ನಾಗಿ ಅನ್ವಯಿಸುತ್ತದೆ.
ಶ್ರೀಲಂಕಾದ ಪಾಕಪದ್ಧತಿಯಲ್ಲಿ, ಸಾಮಾನ್ಯವಾಗಿ ದಿನವಹಿ ಸೇವಿಸಲ್ಪಡುವ [[ಅಕ್ಕಿ|ಅನ್ನ]]ವನ್ನು ಯಾವುದೇ ವಿಶೇಷ ಸಂದರ್ಭದಲ್ಲಿ ಕಾಣಬಹುದು; ಅದೇವೇಳೆಗೆ, ಮಸಾಲೆಭರಿತ ಮೇಲೋಗರಗಳು ಭೋಜನಕೂಟ ಮತ್ತು ಮಧ್ಯಾಹ್ನದ ಭೋಜನಕ್ಕೆ ಸಂಬಂಧಿಸಿದ ಅಚ್ಚುಮೆಚ್ಚಿನ ಭಕ್ಷ್ಯಗಳಾಗಿವೆ. 'ಅನ್ನ ಮತ್ತು ಮೇಲೋಗರ' ಎಂಬ ಪದಗುಚ್ಛವು ಶ್ರೀಲಂಕಾದ ಭಕ್ಷ್ಯಗಳ ಒಂದು ಶ್ರೇಣಿಗೆ ಉಲ್ಲೇಖಿಸಲ್ಪಡುತ್ತದೆ.
== ದಕ್ಷಿಣ ಏಷ್ಯಾದ ಇತರ ಪಾಕಪದ್ಧತಿಗಳು ==
=== ಆಫ್ಘನ್ ಮತ್ತು ಪಾಶ್ತನ್ ಪಾಕಪದ್ಧತಿ ===
{{Main|Afghan cuisine|Pashtun cuisine}}
ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ನೆಲೆಸಿರುವ ಪಾಶ್ತನ್ ಜನರ ಪಾಕಪದ್ಧತಿಯು ನೆರೆಹೊರೆಯ ದೇಶವಾದ ಆಫ್ಘಾನಿಸ್ತಾನದ ಪಾಕಪದ್ಧತಿಯನ್ನು ಒಂದಷ್ಟು ಹೋಲುವಂತಿದ್ದು, ಅದು ದಕ್ಷಿಣ ಏಷ್ಯಾದ ಬೃಹತ್ ಪ್ರಭಾವವನ್ನು ಹೊರತುಪಡಿಸಿ ಗೋಧಿ, ಮೆಕ್ಕೆಜೋಳ, ಬಾರ್ಲಿ ಮತ್ತು ಅಕ್ಕಿಯಂಥ ಏಕದಳ ಧಾನ್ಯಗಳ ಮೇಲೆ ಬಹುತೇಕವಾಗಿ ಆಧರಿಸಿದೆ. ಈ ಪ್ರಧಾನ ಘಟಕಗಳ ಜೊತೆಗೆ ಹೈನು ಉತ್ಪನ್ನಗಳು (ಮೊಸರು, ಹಾಲೊಡಕು), ನಾನಾಬಗೆಯ ಕರಟಕಾಯಿಗಳು, ಸ್ಥಳೀಯ ತರಕಾರಿಗಳು, ಮತ್ತು ತಾಜಾ ಆಗಿರುವ ಹಾಗೂ ಒಣಗಿಸಿದ ಹಣ್ಣುಗಳು ಸೇರಿರುತ್ತವೆ.
=== ಈಶಾನ್ಯ ಭಾರತೀಯರ ಮತ್ತು ನೇಪಾಳಿಯರ ಪಾಕಪದ್ಧತಿಗಳು ===
{{Main|Nepalese cuisine|Cuisine of Assam|Naga cuisine|Sikkimese cuisine|Tripuri cuisine}}
ಈಶಾನ್ಯ ಭಾರತದ ಮೇಲೋಗರಗಳು ಭಾರತದ ಇತರ ಭಾಗಗಳಲ್ಲಿ ಕಂಡುಬರುವ ಮೇಲೋಗರಗಳಿಗಿಂತ ಅತ್ಯಂತ ವಿಭಿನ್ನವಾಗಿವೆ. ಈ ಪ್ರದೇಶದ ಪಾಕಪದ್ಧತಿಯು, ಬರ್ಮಾ ಮತ್ತು ಟಿಬೆಟ್ನಂಥ ಅದರ ನೆರೆಹೊರೆಯ ದೇಶಗಳಿಂದ ಪ್ರಭಾವಿಸಲ್ಪಟ್ಟಿದೆ. ಸುಪರಿಚಿತ ಭಾರತೀಯ ಮಸಾಲೆಗಳು ಇಲ್ಲಿ ಕಡಿಮೆ ಪ್ರಮಾಣದಲ್ಲಿ ಬಳಸಲ್ಪಡುತ್ತವೆ. ಯಾಕ್ ಎಂಬುದು ಭಾರತದ ಈ ಪ್ರದೇಶದಲ್ಲಿ ಕಂಡುಬರುವ ಒಂದು ಜನಪ್ರಿಯ ಮಾಂಸವಾಗಿದೆ.
ಅನ್ನ ಮತ್ತು ಲೆಂಟಿಲ್ ಎಸರನ್ನು ಒಳಗೊಂಡಿರುವ ದಾಲ್ ಭಾತ್, [[ನೇಪಾಳ]]ದ ಒಂದು ಪ್ರಧಾನಭಕ್ಷ್ಯವಾಗಿದೆ. ನೇವಾ ಪಾಕಪದ್ಧತಿಯು ಪಾಕಪದ್ಧತಿಯ ಒಂದು ಬಗೆಯಾಗಿದ್ದು, ಇದು ಶತಮಾನಗಳ ಕಾಲದಿಂದಲೂ ನೇಪಾಳದ ನೇವಾರರಿಂದ ಅಭಿವೃದ್ಧಿಯಾಗುತ್ತಾ ಬಂದಿದೆ ಎಂಬುದು ವಿಶೇಷ.
== ಏಷ್ಯಾದ ಇತರ ಪಾಕಪದ್ಧತಿಗಳು ==
=== ಚೀನಿಯರ ಪಾಕಪದ್ಧತಿ ===
{{See also|Chinese cuisine}}
ಚೀನಿಯರ ಮೇಲೋಗರಗಳು (咖哩, ಗಾ ಲೀ) ವೈಶಿಷ್ಟ್ಯತೆಯಿಂದ ಕೂಡಿದ್ದು ಇವೆಲ್ಲವನ್ನೂ ಒಳಗೊಂಡಿರುತ್ತವೆ: ಚಿಕನ್, ದನದ ಮಾಂಸ, ಮೀನು, ಕುರಿಮರಿ ಮಾಂಸ, ಅಥವಾ ಇತರ ಮಾಂಸಗಳು, ಹಸಿರು ಮೆಣಸಿನಕಾಳುಗಳು, ಈರುಳ್ಳಿಗಳು, ಆಲೂಗಡ್ಡೆಗಳ ದೊಡ್ಡ ತುಂಡುಗಳು. ಅಷ್ಟೇ ಅಲ್ಲ, ಲಘುವಾಗಿ ಮಸಾಲೆಭರಿತವಾಗಿರುವ ಒಂದು ಹಳದಿ ಮೇಲೋಗರ ವ್ಯಂಜನದಲ್ಲಿರುವ ಹಾಗೂ ಆವಿಯಿಂದ ಬೇಯಿಸಿದ ಅನ್ನದ ಮೇಲೆ ಅಲಂಕರಿಸಲಾಗಿರುವ ವೈವಿಧ್ಯಮಯದ ಇತರ ಘಟಕವಸ್ತುಗಳು ಮತ್ತು ಮಸಾಲೆಗಳು. ಮೇಲೋಗರದ ಪರಿಮಳವನ್ನು ವರ್ಧಿಸುವ ಸಲುವಾಗಿ ಬಿಳಿ ಮೆಣಸಿನಕಾಳು, ಸೋಯಾ ಗೊಜ್ಜು, ಖಾರದ ಗೊಜ್ಜು, ಮತ್ತು/ಅಥವಾ ಖಾರದ ಒಣಮೆಣಸಿನಕಾಯಿ ಎಣ್ಣೆಯನ್ನು ವ್ಯಂಜನಕ್ಕೆ ಸೇರಿಸಬಹುದು.
ಚೀನಿಯರ ಅತ್ಯಂತ ಸಾಮಾನ್ಯವಾಗಿರುವ ಮೇಲೋಗರ ವ್ಯಂಜನ ವೈವಿಧ್ಯವನ್ನು ಪುಡಿಯ ಸ್ವರೂಪದಲ್ಲಿ ಸಾಮಾನ್ಯವಾಗಿ ಮಾರಲಾಗುತ್ತದೆ. ಸಿಂಗಪೂರಿನ ಮತ್ತು ಮಲೇಷಿಯಾದ ಒಂದು ವ್ಯಂಜನ-ವೈವಿಧ್ಯದಿಂದ ಇದು ಬಂದಿರಬಹುದು ಎಂದು ತೋರುತ್ತದೆ. ಸಿಂಗಪೂರ್ ಮತ್ತು ಮಲೇಷಿಯಾದ ದೇಶಗಳು ಸಟಾಯ್ ವ್ಯಂಜನವನ್ನೂ ಸಹ ಚೀನಿಯರಿಗೆ ಪರಿಚಯಿಸಿದವು ಎಂಬುದು ಗಮನಿಸಬೇಕಾದ ಸಂಗತಿ. ಚೀನಾ ದೇಶದ ಕ್ಯಾಂಟನ್ ನಗರದ ಜನಾಂಗಕ್ಕೆ ಸಂಬಂಧಿಸಿದ ([[ಕೌಲಾಲಂಪುರ್|ಕೌಲಾಲಂಪುರ್]]ನಲ್ಲಿ ಪ್ರಾಬಲ್ಯವನ್ನು ಹೊಂದಿರುವ), ಚೀನಿಯರ-ಮಲೇಷಿಯನ್ನರ ಈ ಹಳದಿ ಬಣ್ಣದ ವ್ಯಂಜನ-ವೈವಿಧ್ಯವು, ಕ್ಯಾಂಟನ್ ನಗರದ ನಿವಾಸಿಗಳಿಂದ ಚೀನಾದಲ್ಲಿ ಸ್ವಾಭಾವಿಕವಾಗಿ ಪರಿಚಯಿಸಲ್ಪಟ್ಟಿತು. ಇದು ಹಾಂಕಾಂಗ್ ಪಾಕಪದ್ಧತಿಯಲ್ಲಿ ವಿಶಿಷ್ಟವಾಗಿ ಸೇರಿಕೊಂಡಿದೆ. (ಕುತೂಹಲಕರವೆಂಬಂತೆ, ಮಲಯದ ಸಟಾಯ್ ವ್ಯಂಜನವನ್ನು ಟಿಯೊಚ್ಯೂ ಜನಾಂಗೀಯರು ಚೀನಾಕ್ಕೆ ಪರಿಚಯಿಸಿ, ಅದರಲ್ಲಿ ವ್ಯಾಪಕವಾದ ಯಶಸ್ಸನ್ನು ಪಡೆದುಕೊಂಡಂತೆ ತೋರುತ್ತದೆ; ಟಿಯೊಚ್ಯೂ ಜನಾಂಗೀಯರು ಸಿಂಗಪೂರ್ನಲ್ಲಿರುವ ಚೀನಿಯರ ಪೈಕಿ ಎರಡನೇ ಅತಿದೊಡ್ಡ ಗುಂಪು ಎನಿಸಿಕೊಂಡಿದ್ದರೆ, ಥೈಲೆಂಡ್ನಲ್ಲಿ ಪ್ರಬಲ ಗುಂಪು ಎನಿಸಿಕೊಂಡಿದ್ದಾರೆ.)
ಪ್ರತಿಯೊಂದು ಭೋಜನ ಮಂದಿರವನ್ನು ಅವಲಂಬಿಸಿ, ಚೀನಿಯರ ಮೇಲೋಗರದಲ್ಲಿ ಅನೇಕ ವಿಭಿನ್ನ ವೈವಿಧ್ಯಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಒಂದು ದಪ್ಪನಾದ ಮಂದತೆಯನ್ನು ಹೊಂದಿರುವ ಏಷ್ಯಾದ ಇತರ ಮೇಲೋಗರಗಳಿಗಿಂತ ಭಿನ್ನವಾಗಿ, ಚೀನಿಯರ ಮೇಲೋಗರವು ಬಹುತೇಕವಾಗಿ ನೀರಿನಂತೆ ಇರುತ್ತದೆ.{{Citation needed|date=March 2010}} "ಗಲಿಮಿಯಾನ್" (ಮಲೇಷಿಯಾದ "ಮೇಲೋಗರ ಮೀ" ಅಥವಾ "ಮೇಲೋಗರ ದಪ್ಪಶಾವಿಗೆಗಳಿಂದ" ಬಂದದ್ದು) ಎಂಬುದೂ ಸಹ ಚೀನಿಯರ ಒಂದು ಜನಪ್ರಿಯವಾದ ಮೇಲೋಗರ ಭಕ್ಷ್ಯವಾಗಿದೆ.
=== ಜಪಾನಿಯರ ಪಾಕಪದ್ಧತಿ ===
[[ಚಿತ್ರ:Curry rice by Hyougushi in Kyoto.jpg|thumb|ಜಪಾನಿಯರ ಶೈಲಿಯ ಕಾರೆ-ರೈಸು (ಮೇಲೋಗರದ ಅನ್ನ)]]
[[ಚಿತ್ರ:Curry-bun,curry-pan,katori-city,japan.JPG|thumb|ಕಾರೆ-ಪಾನ್ (ಮೇಲೋಗರದ ಬ್ರೆಡ್)]]
{{Main|Japanese curry}}
{{Nihongo|Japanese curry|カレー|karē}} ಎಂಬುದು ಜಪಾನ್ನಲ್ಲಿ ಕಂಡುಬರುವ ಅತ್ಯಂತ ಜನಪ್ರಿಯ ಭಕ್ಷ್ಯಗಳ ಪೈಕಿ ಒಂದೆನಿಸಿದೆ; 2005ರಲ್ಲಿ ನಡೆಸಲಾದ ಒಂದು ಸಮೀಕ್ಷೆಯ ಅನುಸಾರ, ಜಪಾನಿಯರು ಈ ಭಕ್ಷ್ಯವನ್ನು ವರ್ಷವೊಂದರಲ್ಲಿ ಸರಾಸರಿ 125 ಬಾರಿ ಸೇವಿಸುತ್ತಾರೆ.<ref>{{Cite web|url=http://www.sbcurry.com/qa/number_1.html|title=Curry Q&A|author=S&B Foods Inc|language=Japanese|accessdate=2008-04-11}}{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ''ಕರೇ ರೈಸು'' ಎಂಬ ಸ್ವರೂಪದಲ್ಲಿ ಸಾಮಾನ್ಯವಾಗಿ ತಿನ್ನಲ್ಪಡುವ ಇದು ಮೇಲೋಗರ, ಅನ್ನವನ್ನು ಒಳಗೊಂಡಿರುತ್ತದೆ ಮತ್ತು ಉಪ್ಪಿನಕಾಯಿ ಹಾಕಲಾದ ತರಕಾರಿಗಳನ್ನು ಅನೇಕವೇಳೆ ಒಳಗೊಂಡಿರುತ್ತದೆ; ಒಂದೇ ತಟ್ಟೆಯ ಮೇಲೆ ಇದನ್ನು ಬಡಿಸಲಾಗುತ್ತದೆ ಹಾಗೂ ಒಂದು ಚಮಚದ ನೆರವಿನಿಂದ ತಿನ್ನಲಾಗುತ್ತದೆ. ಇದು ಧ್ಯಾಹ್ನದ ಭೋಜನ ಸಮಯದ ಒಂದು ಸಾಮಾನ್ಯ ಕ್ಯಾಂಟೀನು ಭಕ್ಷ್ಯವಾಗಿದೆ.
ಜಪಾನ್ ದೇಶವು ತನ್ನ ರಾಷ್ಟ್ರೀಯ ಸ್ವಯಂ-ಪ್ರತ್ಯೇಕತೆಯ (ಸಕೊಕು) ಕಾರ್ಯನೀತಿಯನ್ನು ಕೊನೆಗೊಳಿಸಿದ ನಂತರ, ಮೆಯಿಜಿ ಯುಗದಲ್ಲಿ (1868–1912) ಬ್ರಿಟಿಷರು [[ಜಪಾನ್|ಜಪಾನ್]] ದೇಶಕ್ಕೆ ಮೇಲೋಗರವನ್ನು ಪರಿಚಯಿಸಿದರು ಹಾಗೂ ಮೇಲೋಗರವು [[ಜಪಾನ್|ಜಪಾನ್]] ದೇಶದಲ್ಲಿ ಒಂದು ಪಾಶ್ಚಾತ್ಯ ಭಕ್ಷ್ಯವಾಗಿ ವರ್ಗೀಕರಿಸಲ್ಪಟ್ಟಿದೆ. ಜಪಾನಿಯರ ಭೂಸೇನೆ ಮತ್ತು ನೌಕಾದಳದಲ್ಲಿ ಈ ಮೇಲೋಗರವು ಬಳಸಲ್ಪಡುತ್ತಿರುವುದರಿಂದ ದೇಶದ ಉದ್ದಗಲಕ್ಕೂ ಇದು ಹಬ್ಬಿಕೊಳ್ಳಲು ಸಾಧ್ಯವಾಗಿದೆ ಎಂಬುದಾಗಿ ಸಾಮಾನ್ಯವಾಗಿ ಹೇಳಲಾಗುತ್ತದೆ. ಯುದ್ಧಭೂಮಿಯ ಹಾಗೂ ನೌಕಾದಳದ ಅನುಕೂಲಕರ ಕ್ಯಾಂಟೀನು ಅಡುಗೆಯಾಗಿ ಇದನ್ನು ಇಲ್ಲಿನ ಭೂಸೇನೆ ಹಾಗೂ ನೌಕಾದಳಗಳು ಅಳವಡಿಸಿಕೊಂಡಿರುವುದರಿಂದ, ಒತ್ತಾಯದಿಂದ ಸೇನೆಗೆ ಸೇರಿದವರಾಗಿದ್ದು ಅತಿದೂರದ ಗ್ರಾಮಾಂತರ ಪ್ರದೇಶದಿಂದ ಬಂದಿರುವ ಯೋಧರೂ ಸಹ ಈ ಭಕ್ಷ್ಯದ ಸೇವನೆಯ ಅನುಭವವನ್ನು ಪಡೆದುಕೊಳ್ಳಲು ಈ ಕ್ರಮವು ಅವಕಾಶ ನೀಡಿದೆ ಎಂದು ಹೇಳಬಹುದು. ಜಪಾನಿನ ಕಡಲತಡಿಯ ಸ್ವರಕ್ಷಣಾ ಪಡೆಯು ಮಧ್ಯಾಹ್ನದ ಭೋಜನಕ್ಕಾಗಿ ಪ್ರತಿ ಶುಕ್ರವಾರದಂದು ಮೇಲೋಗರವನ್ನು ಸಾಂಪ್ರದಾಯಿಕವಾಗಿ ವ್ಯವಸ್ಥೆಗೊಳಿಸುತ್ತದೆ ಹಾಗೂ ಅನೇಕ ಹಡಗುಗಳು ತಮ್ಮದೇ ಆದ ಅನನ್ಯ ಪಾಕವಿಧಾನಗಳನ್ನು ಹೊಂದಿವೆ.
ಜಪಾನಿಯರ ಪ್ರಮಾಣಕವಾದ ಮೇಲೋಗರವು ಈರುಳ್ಳಿಗಳು, ಕ್ಯಾರಟ್ಗಳು, ಆಲೂಗಡ್ಡೆಗಳನ್ನು ಒಳಗೊಂಡಿರುತ್ತದೆ, ಮತ್ತು ಕೆಲವೊಮ್ಮೆ ಅಜ್ಮೋದ (ತೋಟದ ಸೊಪ್ಪು), ಹಾಗೂ ದೊಡ್ಡ ಮಡಿಕೆಯೊಂದರಲ್ಲಿ ಬೇಯಿಸಲಾದ ಒಂದು ಮಾಂಸವೂ ಇದರಲ್ಲಿ ಸೇರಿರುತ್ತದೆ. ಕೆಲವೊಮ್ಮೆ, ಹೆಚ್ಚುವರಿ ಮಾಧುರ್ಯಕ್ಕಾಗಿ ತುರಿಯಲಾದ [[ಸೇಬು]]ಗಳು ಅಥವಾ [[ಜೇನು|ಜೇನುತುಪ್ಪ]]ವನ್ನು ಸೇರಿಸಲಾಗುತ್ತದೆ ಮತ್ತು ಕೆಲವೊಮ್ಮೆ ಅದರ ಬದಲಿಗೆ ಇತರ ತರಕಾರಿಗಳನ್ನು ಬಳಸಲಾಗುತ್ತದೆ. ಮಾಂಸಕ್ಕೆ ಸಂಬಂಧಿಸಿ ಹೇಳುವುದಾದರೆ, ಹಂದಿಮಾಂಸ, ದನದ ಮಾಂಸ ಮತ್ತು ಚಿಕನ್ ಮೊದಲಾದವು ಇಳಿಯುತ್ತಿರುವ ಜನಪ್ರಿಯತೆಯ ಅನುಕ್ರಮದಲ್ಲಿರುವ ಅತ್ಯಂತ ಜನಪ್ರಿಯ ಭಕ್ಷ್ಯಗಳಾಗಿವೆ. [[ಟೋಕ್ಯೊ|ಟೋಕಿಯೊ]]ವನ್ನು ಒಳಗೊಂಡಂತೆ ಜಪಾನ್ನ ಉತ್ತರದ ಮತ್ತು ಪೂರ್ವದ ಭಾಗದಲ್ಲಿ, ಹಂದಿಮಾಂಸವು ಮೇಲೋಗರಕ್ಕೆ ಸಂಬಂಧಿಸಿದಂತಿರುವ ಅತ್ಯಂತ ಜನಪ್ರಿಯ ಮಾಂಸವಾಗಿದೆ. ಒಸಾಕವನ್ನು ಒಳಗೊಂಡಂತೆ ಜಪಾನ್ನ ಪಶ್ಚಿಮ ಭಾಗದಲ್ಲಿ ದನದ ಮಾಂಸವು ಹೆಚ್ಚು ಸಾಮಾನ್ಯವಾಗಿದೆ, ಮತ್ತು ಒಕಿನಾವಾದಲ್ಲಿ ಚಿಕನ್ ಕಡೆಗೆ ಒಲವು ತೋರಲಾಗುತ್ತದೆ.<ref>[http://curryken.fc2web.com/minzoku/minzoku.htm ದಿ ಕರಿ ರೈಸ್ ರಿಸರ್ಚ್] (ಜಪಾನಿ ಭಾಷೆಯಲ್ಲಿರುವಂಥದ್ದು)</ref> ಮೇಲೋಗರದ ರುಚಿಕಟ್ಟುವಿಕೆಯನ್ನು ಒಂದು ಘನೀಕರಿಸಿದ ಇಟ್ಟಿಗೆಯ ಸ್ವರೂಪದಲ್ಲಿ ಸಾಮಾನ್ಯವಾಗಿ ಮಾರಲಾಗುತ್ತದೆ ಮತ್ತು ಇದು ಮಾಂಸ ಹಾಗೂ ತರಕಾರಿಗಳ ಮಿಶ್ರಣದಲ್ಲಿ ಕರಗುತ್ತದೆ.
ಮೇಲೋಗರ-ಅನ್ನವನ್ನು ಕೆಲವೊಮ್ಮೆ ಬ್ರೆಡ್ಡಿನ ಚೂರುಗಳಿಂದ ಮುಚ್ಚಲಾದ ಹಂದಿಮಾಂಸದ ಕಟ್ಲೆಟ್ನಿಂದ (ಟೊಂಕಾಟ್ಸು) ಅಲಂಕರಿಸಲಾಗುತ್ತದೆ; ಇದನ್ನು ''ಕಾಟ್ಸು-ಕಾರೆ'' ("ಕಟ್ಲೆಟ್ ಮೇಲೋಗರ") ಎಂದು ಕರೆಯಲಾಗುತ್ತದೆ. ಕೊರೊಕ್ಕೆಗಳೂ (ಆಲೂಗಡ್ಡೆ ಕ್ರೋಕೆಟ್ಗಳು) ಸಹ ಒಂದು ಸಾಮಾನ್ಯ ಅಲಂಕರಣ ಪದಾರ್ಥವೆನಿಸಿಕೊಂಡಿವೆ.
ಅನ್ನದೊಂದಿಗೆ ಇರುವುದನ್ನು ಹೊರತುಪಡಿಸಿ, ''ಕಾರೆ ಉದಾನ್'' (ಮೇಲೋಗರದ ಪರಿಮಳಯುಕ್ತ ಎಸರಿನಲ್ಲಿರುವ ದಪ್ಪ ಶಾವಿಗೆಗಳು) ಮತ್ತು ''ಕಾರೆ-ಪಾನ್'' ("ಮೇಲೋಗರದ ಬ್ರೆಡ್" — ಇದು ಕೊಬ್ಬಿನಲ್ಲಿ ಅದ್ದಿ ಕರಿದ ಚೆನ್ನಾಗಿ ಬಡಿದ ಬ್ರೆಡ್ ಆಗಿದ್ದು, ಇದರ ಮಧ್ಯಭಾಗದಲ್ಲಿ ಮೇಲೋಗರವಿರುತ್ತದೆ) ಕೂಡಾ ಜನಪ್ರಿಯವಾಗಿವೆ.
20ನೇ ಶತಮಾನದ ಆರಂಭದಲ್ಲಿ ಜಪಾನಿಯರು ಕೊರಿಯಾದ ಮೇಲೆ ಆಕ್ರಮಣ ಮಾಡಿದ ಸಂದರ್ಭದಲ್ಲಿ, ಅವರಿಂದ ಮೇಲೋಗರವು ಕೊರಿಯಾಗೆ ಪರಿಚಯಿಸಲ್ಪಟ್ಟಿತು. ಆದ್ದರಿಂದಲೇ ಇದು ಜಪಾನಿಯರ ಮೇಲೋಗರದ ರೂಪಾಂತರಕ್ಕೆ ಸರಿಸುಮಾರಾಗಿ ತದ್ರೂಪವಾಗಿದೆ.ಇದರಲ್ಲಿನ ಸಾಮಾನ್ಯ ಘಟಕವಸ್ತುಗಳಲ್ಲಿ ಅನ್ನ, ಮೇಲೋಗರ ವ್ಯಂಜನ, ತರಕಾರಿಗಳು, ಕಿಮ್ಚಿ, ಹೊಗೆಯಾಡಿಸಿದ ಹಂದಿಮಾಂಸ, ಮತ್ತು ವಸಾಬಿ ಸೇರಿವೆ.
=== ಆಗ್ನೇಯ ಏಷ್ಯಾದ ಪಾಕಪದ್ಧತಿಗಳು ===
{{See also|Cuisine of Cambodia|Cuisine of Laos|Cuisine of Singapore}}
[[ಕಾಂಬೋಡಿಯ|ಕಾಂಬೋಡಿಯಾ]], ಲಾವೊಸ್, ಥೈಲೆಂಡ್ನಂಥ ದೇಶಗಳನ್ನು ಒಳಗೊಂಡಂತೆ ಆಗ್ನೇಯ ಏಷ್ಯಾ ವಲಯ, ಮತ್ತು ಆಗ್ನೇಯ ಏಷ್ಯಾದ ಕೆಲವೊಂದು ಅಲ್ಪಸಂಖ್ಯಾತ ಗುಂಪುಗಳೂ ಸಹ ತಮ್ಮದೇ ಆದ ಮೇಲೋಗರದ ರೂಪಾಂತರಗಳನ್ನು ಹೊಂದಿವೆ. ಈ ದೇಶಗಳು ಅನೇಕ ರೀತಿಯಲ್ಲಿ ಭಾರತೀಯ ಸಂಸ್ಕೃತಿಯಿಂದ ಪಡೆದ ಪ್ರಭಾವಗಳು ಮತ್ತು ಪಾಕಪದ್ಧತಿಯನ್ನು ಹೊಂದಿದ್ದವು ಎಂಬುದನ್ನು ಇಲ್ಲಿ ಗಮನಿಸಬೇಕು. ಶತಮಾನಗಳಷ್ಟು ಮುಂಚೆಯೇ ಇಲ್ಲಿಗೆ ತೆರಳಿದ್ದ ದಕ್ಷಿಣ ಏಷ್ಯಾದ ಪ್ರವಾಸಿಗರು ಈ ಪ್ರಭಾವಗಳಿಗೆ ಕಾರಣ ಎಂಬುದು ಗಮನಾರ್ಹ ಸಂಗತಿ.
==== ಬರ್ಮನ್ನರ ಪಾಕಪದ್ಧತಿ ====
{{See also|Cuisine of Burma}}
ಬರ್ಮನ್ನರ ಪಾಕಪದ್ಧತಿಯು, ಮೇಲೋಗರಗಳ ಒಂದು ಅತ್ಯಂತ ವಿಭಿನ್ನ ಆಧಾರ ಮತ್ತು ಅರ್ಥೈಸಿಕೊಳ್ಳುವಿಕೆಯನ್ನು ಹೊಂದಿದೆ. ಬರ್ಮನ್ನರ ಬಹುತೇಕ ಎಲ್ಲಾ ಮೇಲೋಗರಗಳ ಪೈಕಿಯ ಪ್ರಧಾನ ಘಟಕವಸ್ತುಗಳೆಂದರೆ, ತಾಜಾ ಈರುಳ್ಳಿ (ಇದು ಮಾಂಸರಸವನ್ನು ರೂಪಿಸುತ್ತದೆ ಮತ್ತು ಮೇಲೋಗರದ ಮುಖ್ಯಭಾಗವಾಗಿದೆ), ಭಾರತೀಯ ಮಸಾಲೆಗಳು ಮತ್ತು ಕೆಂಪು ಮೆಣಸಿನಕಾಯಿಗಳು. ಸಾಮಾನ್ಯವಾಗಿ, ಮಾಂಸ ಮತ್ತು ಮೀನುಗಳು ಜನಪ್ರಿಯ ಮೇಲೋಗರಗಳಿಗೆ ಸಂಬಂಧಿಸಿದ ಮುಖ್ಯ ಘಟಕವಸ್ತುಗಳಾಗಿರುತ್ತವೆ.
ಬರ್ಮನ್ನರ ಮೇಲೋಗರಗಳನ್ನು ಎರಡು ಬಗೆಗಳಾಗಿ ಸಾಮಾನ್ಯೀಕರಿಸಬಹುದು. ಅವುಗಳೆಂದರೆ: ಉತ್ತರ ಭಾರತೀಯ ಅಥವಾ ಪಾಕಿಸ್ತಾನಿ ಪ್ರಭಾವವನ್ನು ಪ್ರದರ್ಶಿಸುವ ಮಸಾಲೆಭರಿತ ಖಾರದ ಭಕ್ಷ್ಯಗಳು ಹಾಗೂ ಲಘುವಾದ 'ಸಿಹಿ' ಮೇಲೋಗರಗಳು. ಬರ್ಮನ್ನರ ಮೇಲೋಗರಗಳಲ್ಲಿ ತೆಂಗಿನಕಾಯಿ ಹಾಲಿನ ಕೊರತೆಯು ಅಗಾಧ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಕಾರಣದಿಂದಾಗಿ ಅವು ಆಗ್ನೇಯ ಏಷ್ಯಾದ ಬಹುಪಾಲು ಮೇಲೋಗರಗಳಿಂದ ಪ್ರತ್ಯೇಕವಾಗಿ ಇರಿಸಲ್ಪಟ್ಟಿವೆ.
ತಾಜಾ ಈರುಳ್ಳಿ, ಬೆಳ್ಳುಳ್ಳಿ ಮತ್ತು ಒಣಮೆಣಸಿನಕಾಯಿಯ ಜಲಪಿಷ್ಟ ಇವು ನಿಯತವಾದ ಘಟಕವಸ್ತುಗಳಲ್ಲಿ ಸೇರಿವೆ. ನಿಯತವಾಗಿ ಬಳಸಲ್ಪಡುವ ಮಸಾಲೆಗಳಲ್ಲಿ ಗರಮ್ ಮಸಾಲಾ, ಒಣಗಿಸಿದ ಮೆಣಸಿನಕಾಯಿಯ ಪುಡಿ, ಜೀರಿಗೆ ಪುಡಿ, ಅರಿಶಿನ ಇವು ಸೇರಿವೆ. ಅಷ್ಟೇ ಅಲ್ಲ, ಮೀನುಗಳಿಂದ ಅಥವಾ ಸೀಗಡಿಗಳಿಂದ ತಯಾರಿಸಲಾದ ನ್ಗಾಪಿ ಎಂಬ ಒಂದು ಹುದುಗುಬರಿಸಿದ ಜಲಪಿಷ್ಟವೂ ಇವುಗಳಲ್ಲಿ ಸೇರಿವೆ.
ಹೆಚ್ಚುವರಿ ಎಣ್ಣೆಯು ಆಹಾರದ ಸುದೀರ್ಘ ಬಾಳಿಕೆಗೆ ನೆರವಾಗುವುದರಿಂದ, ಬರ್ಮನ್ನರ ಮೇಲೋಗರಗಳು ಸಾಕಷ್ಟು ಎಣ್ಣೆಯಿಂದ ಕೂಡಿರುತ್ತವೆ. ದಪ್ಪ-ಎಳೆಯ ಶಾವಿಗೆಗೆ ಸಮನಾದ, ನ್ಯಾನ್ ಗ್ಯಿ ಥೊಕ್ ಎಂದು ಕರೆಯಲ್ಪಡುವ ಒಂದು ಖಾದ್ಯ-ಪದಾರ್ಥವೂ ಇಲ್ಲಿ ಕಂಡುಬರುತ್ತದೆ. ಇದರಲ್ಲಿ ಗೋಧಿಯ ಅಥವಾ ಅಕ್ಕಿಯ ಶಾವಿಗೆಗಳನ್ನು ಮಂದವಾಗಿರುವ ಚಿಕನ್ ಮೇಲೋಗರದ ಜೊತೆಯಲ್ಲಿ ತಿನ್ನಲಾಗುತ್ತದೆ.
==== ಇಂಡೋನೇಷಿಯಾದ ಪಾಕಪದ್ಧತಿ ====
[[ಚಿತ್ರ:Rendang plate.jpg|thumb|ಅನ್ನದೊಂದಿಗಿನ ರೆಂಡ್ಯಾಂಗ್.]]
{{See also|Cuisine of Indonesia}}
ಇಂಡೋನೇಷಿಯಾದಲ್ಲಿ ಗುಲಾಯ್ ಮತ್ತು ಕಾರಿ ಅಥವಾ ಕಾರೆ ಎಂಬ ವ್ಯಂಜನಗಳು ಮೇಲೋಗರದ ಮೇಲೆ ಆಧರಿತವಾಗಿವೆ. ಅವು ಅನೇಕವೇಳೆ ಅತೀವವಾಗಿ ಸ್ಥಳೀಯವಾಗಿಸಲ್ಪಡುತ್ತವೆ ಮತ್ತು ಲಭ್ಯವಿರುವ ಮಾಂಸ ಹಾಗೂ ತರಕಾರಿಗಳನ್ನು ಪ್ರತಿಬಿಂಬಿಸುತ್ತವೆ. ಆದ್ದರಿಂದ ಒಂದು ಮಸಾಲೆಯುಕ್ತ ವ್ಯಂಜನದಲ್ಲಿ, ವೈವಿಧ್ಯಮಯವಾದ ಮಾಂಸಗಳು (ಪರಿಮಳಯುಕ್ತ "ಗುಲಾಯ್ ಕ್ಯಾಂಬಿಂಗ್"ನಲ್ಲಿರುವಂತೆ ಚಿಕನ್, ದನದ ಮಾಂಸ, ಭಾರತದ ಸಾಕಿದ ಎಮ್ಮೆ ಮತ್ತು ಮೇಕೆಯ ಮಾಂಸ), ಸಮುದ್ರಾಹಾರ (ಸೀಗಡಿ, ಏಡಿ, ಕಪ್ಪೆಚಿಪ್ಪಿನ ಜೀವಿ, ಕ್ಲ್ಯಾಂ ಮೃದ್ವಂಗಿ, ಸ್ಕ್ವಿಡ್ ಹುಳು, ಇತ್ಯಾದಿ.), ಮೀನು ಅಥವಾ ತರಕಾರಿ ಭಕ್ಷ್ಯಗಳನ್ನು ಅವು ಅಳವಡಿಸಿಕೊಳ್ಳಬಲ್ಲವಾಗಿವೆ. ಮೆಣಸಿನ ಹಣ್ಣುಗಳು, ಕ್ಯಾಫರ್ ನಿಂಬೆ ಎಲೆಗಳು, ನಿಂಬೆ ಹುಲ್ಲು, ಗಲಾಂಗಲ್, ಇಂಡೋನೇಷಿಯಾದ ಬೇ ಎಲೆಗಳು ಅಥವಾ ಸಲಾಮ್ ಎಲೆಗಳು, ಮೋಂಬತ್ತಿ ಹಣ್ಣುಗಳು, ಅರಿಶಿನ, ಅರಿಶಿನದ ಎಲೆಗಳು, ಅಸಂ ಗೆಲುಗುರ್, ಅಸಂ ಕಂಡಿಸ್, ಇಂಚಾಕದ ಜಲಪಿಷ್ಟ (ಟೆರಾಸಿ), ಜೀರಿಗೆ, ಧನಿಯಾ ಬೀಜ ಮತ್ತು ತೆಂಗಿನಕಾಯಿಯ ಹಾಲು ಇವೇ ಮೊದಲಾದ ಸ್ಥಳೀಯ ಘಟಕವಸ್ತುಗಳನ್ನು ಅವು ಬಳಸಿಕೊಳ್ಳುತ್ತವೆ. ಪಶ್ಚಿಮ ಸುಮಾತ್ರಾದ ಪಾಕಪದ್ಧತಿಗೆ ಸೇರಿದ ರೆಂಡ್ಯಾಂಗ್ ಎಂಬುದು ಒಂದು ಜನಪ್ರಿಯ ಮೇಲೋಗರವಾಗಿದೆ. ಮಾಂಸವನ್ನು ಸಂಸ್ಕರಿಸುವ ಮತ್ತು ಅದಕ್ಕೆ ಪರಿಮಳ ನೀಡಿ ರುಚಿಕಟ್ಟುವ ದೃಷ್ಟಿಯಿಂದ ಮಂದವಾದ ತೆಂಗಿನಕಾಯಿಯ ಹಾಲಿನಲ್ಲಿ ಹಲವಾರು ಗಂಟೆಗಳವರೆಗೆ ನಿಧಾನವಾಗಿ-ಬೇಯಿಸಲಾದ ಭಾರತದ ಸಾಕೆಮ್ಮೆಯನ್ನು ಸಾಚಾ ಅಥವಾ ಅಪ್ಪಟವಾದ ರೆಂಡ್ಯಾಂಗ್ ಬಳಸಿಕೊಳ್ಳುತ್ತದೆ. ಏಸೆಹ್ನಲ್ಲಿ, ಮೇಲೋಗರಗಳು ದೌನ್ ಸಲಾಮ್ ಕೊಜಾ ಅಥವಾ ದೌನ್ ಕಾರಿಯನ್ನು (ಇದನ್ನು "ಕರಿಬೇವಿನ ಸೊಪ್ಪು" ಎಂಬುದಾಗಿ ಅನುವಾದಿಸಲಾಗುತ್ತದೆ) ಬಳಸಿಕೊಳ್ಳುತ್ತವೆ. [[:id:Opor ayam|ಒಪೊರ್ ಆಯಮ್]] ಎಂಬುದು ಮತ್ತೊಂದು ಬಗೆಯ ಮೇಲೋಗರವಾಗಿದ್ದು, ಇದರ ರುಚಿಯು ಗುಲಾಯ್ನ ರುಚಿಯನ್ನು ಅತೀವವಾಗಿ ಹೋಲುತ್ತದೆ. ಕೆಲವೊಬ್ಬರು{{Who|date=October 2010}} ಹೇಳುವ ಪ್ರಕಾರ, ಒಪೊರ್ ಎಂಬುದು ಸ್ವತಃ ಗುಲಾಯ್ನ್ನು (ಗುಲಾಯ್ ಎಂಬುದು ಸುಮಾತ್ರಾದಲ್ಲಿ ಬಳಸಲಾಗುವ ಪದವಾಗಿದೆ) ಉಲ್ಲೇಖಿಸಲು ಜಾವಾದಲ್ಲಿ ವ್ಯಾಪಕವಾಗಿ ಬಳಸಲಾಗುವ ಹೆಸರಾಗಿದೆ; ಆದಾಗ್ಯೂ, ಒಪೊರ್ನಲ್ಲಿ (ಸಾಮಾನ್ಯವಾಗಿ) ದಾಲ್ಚಿನ್ನಿ ಚಕ್ಕೆಯನ್ನು ಬಳಸುವುದಿಲ್ಲ, ಆದರೆ ಗುಲಾಯ್ನಲ್ಲಿ ದಾಲ್ಚಿನ್ನಿ ಚಕ್ಕೆಯನ್ನು ಬಳಸಲಾಗುತ್ತದೆ. [[ರಂಜಾನ್|ಈದ್]]{{dn}} ಹಬ್ಬದ ಆಸುಪಾಸಿನಲ್ಲಿ ಕುಟುಂಬ ಭೋಜನವೊಂದರ ಭಾಗವಾಗಿಯೂ ಒಪೊರ್ ಸುಪರಿಚಿತವಾಗಿದ್ದರೆ, ಗುಲಾಯ್ನ್ನು ಪಶ್ಚಿಮ ಸುಮಾತ್ರಾದ ಭೋಜನ ಮಂದಿರಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ.
==== ಮಲೇಷಿಯಾದ ಪಾಕಪದ್ಧತಿ ====
{{See also|Cuisine of Malaysia}}
ಮಲೇಷಿಯಾವು ಪ್ರಾಚೀನ ವ್ಯಾಪಾರ ಮಾರ್ಗಗಳ ಕೂಡುರಸ್ತೆಯಲ್ಲಿ ನೆಲೆಗೊಂಡಿರುವ ಕಾರಣದಿಂದಾಗಿ, ಅದು ಮಲೇಷಿಯಾದ ಪಾಕಪದ್ಧತಿಯ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರಿದೆ. ಆರಂಭದಲ್ಲಿ, ಮೇಲೋಗರವು ಭಾರತೀಯ ಸಮುದಾಯದ ಮಾರ್ಗವಾಗಿ ಮಲೇಷಿಯಾದ ಕಡಲದಂಡೆಗಳೆಡೆಗೆ ತನ್ನ ಮಾರ್ಗವನ್ನು ಕಂಡುಕೊಂಡಿರಬಹುದು ಎಂಬ ಸಾಧ್ಯತೆಯಿರುವ ಸಂದರ್ಭದಲ್ಲೇ, ಇದು ಅಂದಿನಿಂದ ಮೊದಲ್ಗೊಂಡು ಮಲಯನ್ನರು ಮತ್ತು ಚೀನಿಯರ ಒಂದು ಪ್ರಧಾನ ಆಹಾರವಾಗಿಯೂ ಹೊರಹೊಮ್ಮಿದೆ ಎಂಬ ಅಂಶವು ಗಮನಾರ್ಹವೆನಿಸುತ್ತದೆ. ಒಂದನ್ನೊಂದು ಹೋಲುವ ಜನಾಂಗೀಯ ಗುಂಪುಗಳ ವ್ಯಾಪ್ತಿಯೊಳಗಿದ್ದರೂ, ಮಲೇಷಿಯಾದ ಮೇಲೋಗರಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗುತ್ತಾ ಹೋಗುತ್ತವೆ; ಸಾಂಸ್ಕೃತಿಕ, ಧಾರ್ಮಿಕ, ವ್ಯಾವಸಾಯಿಕ ಅಥವಾ ಆರ್ಥಿಕ ಅಂಶಗಳಂಥ ಅನೇಕ ಅಂಶಗಳಿಂದ ಅವು ಪ್ರಭಾವಿಸಲ್ಪಟ್ಟಿರುವುದೇ ಇದಕ್ಕೆ ಕಾರಣ.
ಅರಿಶಿನ, ತೆಂಗಿನಕಾಯಿಯ ಹಾಲು, ಕಿರು ಈರುಳ್ಳಿಗಳು, ಶುಂಠಿ, ಬೆಲಾಕನ್ (ಇಂಚಾಕದ ಜಲಪಿಷ್ಟ), ಒಣಮೆಣಸಿನಕಾಯಿಗಳು, ಮತ್ತು ಬೆಳ್ಳುಳ್ಳಿಯನ್ನು ಸಮೃದ್ಧವಾಗಿ ಹೊಂದಿರುವ ಮಸಾಲೆ ಪುಡಿಗಳನ್ನು ಮಲೇಷಿಯಾದ ಮೇಲೋಗರಗಳು ವಿಶಿಷ್ಟವಾಗಿ ಬಳಸುತ್ತವೆ. ಹುಣಿಸೇಹಣ್ಣು ಕೂಡಾ ಅನೇಕವೇಳೆ ಬಳಸಲ್ಪಡುತ್ತದೆ. ರೆಂಡ್ಯಾಂಗ್ ಎಂಬುದು ಮಲೇಷಿಯಾ, ಸಿಂಗಪೂರ್, ಮತ್ತು ಇಂಡೋನೇಷಿಯಾಗಳಲ್ಲಿ ಸೇವಿಸಲ್ಪಡುವ ಮೇಲೋಗರದ ಮತ್ತೊಂದು ರೂಪವಾಗಿದೆ; ಆದರೂ ಸಹ ಇದು ಸಾಕಷ್ಟು ಶುಷ್ಕವಾಗಿರುತ್ತದೆ ಹಾಗೂ ಮಲೇಷಿಯಾದ ಒಂದು ಸಾಂಪ್ರದಾಯಿಕವಾದ ಮೇಲೋಗರಕ್ಕೆ ಹೋಲಿಸಿದಾಗ, ಇದು ಹೆಚ್ಚಿನಂಶ ಮಾಂಸವನ್ನು ಮತ್ತು ಹೆಚ್ಚು ಪ್ರಮಾಣದ ತೆಂಗಿನಕಾಯಿಯ ಹಾಲನ್ನು ಒಳಗೊಂಡಿರುತ್ತದೆ. ಮಲಯ ಸಾಹಿತ್ಯದಲ್ಲಿ ರೆಂಡ್ಯಾಂಗ್ ಉಲ್ಲೇಖಿಸಲ್ಪಟ್ಟಿದ್ದು, ಹಿಕಾಯತ್ ಅಮೀರ್ ಹಮ್ಜಾಹ್<ref>{{Cite book|url=https://books.google.com/books?id=rahQDaE0bD8C&pg=PA10&dq=rendang+hikayat |title=Hikayat Amir Hamzah |publisher=Books.google.com |date= |accessdate=2009-06-08 | isbn=9789831921166}}</ref> (1550ರ ಕಾಲದವ)<ref>{{Cite web |url=http://mcp.anu.edu.au/N/AHmz_bib.html |title=malay concordance project |publisher=Mcp.anu.edu.au |date= |accessdate=2009-06-08 |archive-date=2011-07-06 |archive-url=https://web.archive.org/web/20110706113928/http://mcp.anu.edu.au/N/AHmz_bib.html |url-status=dead }}</ref> ಎಂಬಾತ ಇಂಡೋನೇಷಿಯನ್ನರು, ಸಿಂಗಪೂರಿನ ಜನರು ಮತ್ತು ಮಲೇಷಿಯನ್ನರ ವಲಯದಲ್ಲಿ ಜನಪ್ರಿಯನಾಗಿದ್ದಾನೆ. ಮಟನ್, ಚಿಕನ್, ಇಂಚಾಕ, ಕಟ್ಲ್ ಮೀನು, ಮೀನುಗಳು, ನೀಳಬದನೆಗಳು, ಮೊಟ್ಟೆಗಳು, ಮತ್ತು ತರಕಾರಿಗಳನ್ನು ಒಳಗೊಂಡಂತೆ ಎಲ್ಲ ಬಗೆಯ ಖಾದ್ಯಪದಾರ್ಥಗಳಿಗೂ ಮಲೇಷಿಯಾದಲ್ಲಿ ಮಸಾಲೆ ಹಾಕಲಾಗುತ್ತದೆ.
==== ಫಿಲಿಪೈನ್ ಪಾಕಪದ್ಧತಿ ====
{{See also|cuisine of the Philippines}}
ಫಿಲಿಪೈನ್ಸ್ನಲ್ಲಿ, ಬಹುತೇಕವಾಗಿ ರೇಖಾತ್ಮಕವಾಗಿರುವ ಮೇಲೋಗರದ ಪಾಕವಿಧಾನಗಳ ಒಂದು ಶ್ರೇಣಿಯನ್ನು ಕಾಣಬಹುದು. ಇಲ್ಲಿನ ವಿಶಿಷ್ಟವಾದ ಮೇಲೋಗರ ಭಕ್ಷ್ಯವು ಸಾಮಾನ್ಯವಾಗಿ ಒಂದೋ ಹಂದಿಮಾಂಸದ್ದಾಗಿರುತ್ತದೆ ಅಥವಾ ಚಿಕನ್ನದ್ದಾಗಿರುತ್ತದೆ; ಇತರ ಸ್ಥಳೀಯ ಭಕ್ಷ್ಯಗಳ ತಯಾರಿಕಾ ವಿಧಾನವನ್ನು ಹೋಲುವ ವಿಧಾನವೊಂದರಲ್ಲಿ ಇಲ್ಲಿ ಮಾಂಸವನ್ನು ಬೇಯಿಸಲಾಗುವುದೇ ಇದಕ್ಕೆ ಕಾರಣ; ಇಲ್ಲಿನ ಇತರ ಸ್ಥಳೀಯ ಭಕ್ಷ್ಯಗಳಲ್ಲಿ ಅಡೊಬೊ, ಕಾಲ್ಡೆರೆಟಾ, ಮತ್ತು ಆಲೂಗಡ್ಡೆಗಳು, ಬೇ ಎಲೆಯನ್ನು ಒಳಗೊಂಡಿರುವ ಹಾಗೂ ಪೂರಕವಾಗಲು ಕೆಲವೊಮ್ಮೆ ಕ್ಯಾರಟ್ಗಳನ್ನು ಒಳಗೊಳ್ಳುವ ಮೆಕ್ಯಾಡೊ ಸೇರಿವೆ.
==== ಥಾಯ್ ಪಾಕಪದ್ಧತಿ ====
{{See also|Cuisine of Thailand}}
ಒಣ ಮೆಣಸಿನಕಾಯಿಗಳು, ಮಸಾಲೆಗಳು ಮತ್ತು ಗಿಡಮೂಲಿಕೆಗಳಿಂದ ತಯಾರಿಸಲಾದ ಜಲಪಿಷ್ಟವೊಂದರ ಮೇಲೆ ಆಧರಿತವಾಗಿರುವ ವ್ಯಂಜನವೊಂದರಲ್ಲಿನ ಮಾಂಸ, ಮೀನು ಮತ್ತು/ಅಥವಾ ತರಕಾರಿ ಭಕ್ಷ್ಯಗಳು ಥಾಯ್ ಪಾಕಪದ್ಧತಿಯಲ್ಲಿನ ಮೇಲೋಗರಗಳಾಗಿವೆ. ಮೆಣಸಿನ ಹಣ್ಣುಗಳು, ಕ್ಯಾಫರ್ ನಿಂಬೆಯ ಎಲೆಗಳು, ನಿಂಬೆ ಹುಲ್ಲು, ಗಲಾಂಗಲ್ನಂಥ ಸ್ಥಳೀಯ ಘಟಕವಸ್ತುಗಳನ್ನು ಅವು ಬಳಸಿಕೊಳ್ಳುತ್ತವೆ, ಮತ್ತು ಮಧ್ಯಭಾಗದ ಮತ್ತು ದಕ್ಷಿಣದ ಥಾಯ್ ಪಾಕಪದ್ಧತಿಯಲ್ಲಿ ತೆಂಗಿನಕಾಯಿಯ ಹಾಲೂ ಸಹ ಬಳಸಲ್ಪಡುತ್ತದೆ. ಉತ್ತರದ ಮತ್ತು ಈಶಾನ್ಯ ಭಾಗದ ಥಾಯ್ ಮೇಲೋಗರಗಳು ತೆಂಗಿನಕಾಯಿಯ ಹಾಲನ್ನು ಸಾಮಾನ್ಯವಾಗಿ ಒಳಗೊಂಡಿರುವುದಿಲ್ಲ. ತಾಜಾ ಗಿಡಮೂಲಿಕೆಗಳು, ಮಸಾಲೆಗಳು, ಮತ್ತು ಇತರ ತಾಜಾ ಘಟಕವಸ್ತುಗಳನ್ನು ಬಳಸುವ ಕಾರಣದಿಂದಾಗಿ, ಥಾಯ್ ಮೇಲೋಗರಗಳು ಭಾರತೀಯ ಮೇಲೋಗರಗಳಿಗಿಂತ ಹೆಚ್ಚು ಸುವಾಸನಾಯುಕ್ತವಾಗಿರುವ ಪ್ರವೃತ್ತಿಯನ್ನು ಹೊರಹೊಮ್ಮಿಸುತ್ತವೆ. ಪಶ್ಚಿಮ ಭಾಗದಲ್ಲಿ, ಕೆಲವೊಂದು ಥಾಯ್ ಮೇಲೋಗರಗಳು ಬಣ್ಣದ ಆಧಾರದ ಮೇಲೆ ವಿವರಿಸಲ್ಪಡುತ್ತವೆ; ಕೆಂಪು ಮೇಲೋಗರಗಳು ಕೆಂಪು ಮೆಣಸಿನಕಾಯಿಗಳನ್ನು ಬಳಸಿದರೆ, ಹಸಿರು ಮೇಲೋಗರಗಳು ಹಸಿರು ಮೆಣಸಿನಕಾಯಿಗಳನ್ನು ಬಳಸುತ್ತವೆ. ಇಲ್ಲಿನ ಹಳದಿ ಮೇಲೋಗರವು ಭಾರತೀಯ ಮೇಲೋಗರಗಳನ್ನು ಅತೀವವಾಗಿ ಹೋಲುವಂತಿರುತ್ತದೆ. ಅರಿಶಿನ, ಜೀರಿಗೆ, ಮತ್ತು ಇತರ ಒಣಗಿಸಿದ ಮಸಾಲೆಗಳನ್ನು ಬಳಸುವುದೇ ಇದಕ್ಕೆ ಕಾರಣವೆನ್ನಬಹುದು. ಸದರಿ ಹಳದಿ ಮೇಲೋಗರವನ್ನು ಥಾಯ್ನಲ್ಲಿ ''ಕೇಂಗ್ ಕರಿ'' ಎಂದು ಕರೆಯಲಾಗುತ್ತದೆ ಮತ್ತು ಇದು ಹೊಂದಿರುವ ನಾನಾಬಗೆಯ ಕಾಗುಣಿತಗಳ ಪೈಕಿ ಒಂದರ ಅಕ್ಷರಶಃ ಅನುವಾದವು "ಮೇಲೋಗರದ ಎಸರು" ಎಂದು ಧ್ವನಿಸುತ್ತದೆ. ಕೆಲವೊಂದು ಭಕ್ಷ್ಯಗಳು ಭಾರತೀಯ ಶೈಲಿಯ ಮೇಲೋಗರ ಪುಡಿಯೊಂದನ್ನು (ಥಾಯ್: ''ಪೊಂಗ್ ಕರಿ'' ) ಕೂಡ ಬಳಕೆಮಾಡಿಕೊಳ್ಳುತ್ತವೆ.
ಥಾಯ್ ಮೇಲೋಗರಗಳು:
* ಹಳದಿ ಮೇಲೋಗರ
* ಮಸ್ಸಾಮನ್ ಮೇಲೋಗರ
* ಹಸಿರು ಮೇಲೋಗರ
* ಕೆಂಪು ಮೇಲೋಗರ
* ಫಾನೇಂಗ್ ಮೇಲೋಗರ
* ಖಾವೊ ಸೊಯಿ
* ಕೇಂಗ್ ಹ್ಯಾಂಗಲ್
* ಕೇಂಗ್ ಲ್ಯೂಯಾಂಗ್
==== ವಿಯೆಟ್ನಾಮಿಯರ ಪಾಕಪದ್ಧತಿ ====
{{See also|Cuisine of Vietnam}}
[[ವಿಯೆಟ್ನಾಮ್|ವಿಯೆಟ್ನಾಮ್]]ನಲ್ಲಿ ಮೇಲೋಗರವನ್ನು ''ಕಾ ರಿ'' ಎಂಬುದಾಗಿ ಕರೆಯಲಾಗುತ್ತದೆ. ವಿಯೆಟ್ನಾಮಿಯರ ಮೇಲೋಗರವು ಇವೆಲ್ಲವನ್ನೂ ಒಳಗೊಳ್ಳುತ್ತದೆ: ತೆಂಗಿನಕಾಯಿ ಹಾಲು, ಆಲೂಗಡ್ಡೆ, ಸಿಹಿ ಆಲೂಗಡ್ಡೆ, ಕೆಸವು ಬೇರುಗಳು, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಈರುಳ್ಳಿಯಿಂದ ಅಲಂಕರಿಸಲ್ಪಟ್ಟ ಚಿಕನ್. ವಿಯೆಟ್ನಾಮಿಯರ ಮೇಲೋಗರವು ಭಾರತದ ಮೇಲೋಗರಕ್ಕಿಂತ ಹೆಚ್ಚಿನ ರೀತಿಯಲ್ಲಿ ಎಸರಿನಂತಿರುತ್ತದೆ. ಮೇಕೆಯ ಮೇಲೋಗರವೂ ಇಲ್ಲಿ ಕಂಡುಬರುತ್ತದೆಯಾದರೂ, ಅದು ವಿಶೇಷೀಕರಿಸಲ್ಪಟ್ಟ ಕೆಲವೇ ಭೋಜನ ಮಂದಿರಗಳಲ್ಲಿ ಲಭ್ಯ ಎಂಬುದು ವಿಶೇಷ. ಒಂದು ಉದ್ದವಾದ ಫ್ರೆಂಚ್ ಬ್ರೆಡ್ಡು, ಅನ್ನದ ಶಾವಿಗೆ ಅಥವಾ ಆವಿಯಿಂದ ಬೇಯಿಸಿದ ಅನ್ನದೊಂದಿಗೆ ಸದರಿ ಮೇಲೋಗರವನ್ನು ಸಾಮಾನ್ಯವಾಗಿ ಸೇವಿಸಲಾಗುತ್ತದೆ. ಮನೆಯಲ್ಲಾದರೆ, ಕುಟುಂಬ ಸದಸ್ಯನೋರ್ವನ ಮರಣದ ಪ್ರತಿ ವಾರ್ಷಿಕ ದಿನದಂದು ಇಲ್ಲಿನ ಜನರು ಕೇವಲ ಚಿಕನ್ ಮೇಲೋಗರವನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ. ವಿಯೆಟ್ನಾಮಿಯರ ಮೇಲೋಗರವು ದಕ್ಷಿಣ ಭಾಗದ ಒಂದು ಆಹಾರವಾಗಿ ಪರಿಗಣಿಸಲ್ಪಟ್ಟಿದೆ.
== ಇತರ ಪಾಕಪದ್ಧತಿಗಳು ==
ಇತರ ದೇಶಗಳು ತಮ್ಮದೇ ಆದಂಥ ಮೇಲೋಗರದ ವೈವಿಧ್ಯಗಳನ್ನು ಹೊಂದಿದ್ದು, ಸುಪರಿಚಿತ ಉದಾಹರಣೆಗಳಲ್ಲಿ ಇವು ಸೇರಿವೆ:
* ದಕ್ಷಿಣ ಆಫ್ರಿಕಾ: ಕೇಪ್ ಮಲಯ ಮೇಲೋಗರಗಳು ಮತ್ತು ಡರ್ಬಾನ್ ಮೇಲೋಗರಗಳು
* ಕೆರಿಬಿಯನ್: ಕರಿ ಗೋಟ್
* [[ಫಿಜಿ]], [[ಸಮೋಅ|ಸಮೋವಾ]], ಮತ್ತು [[ಟೋಂಗಾ]]: ಸಾಮಾನ್ಯವಾಗಿ "ಕಾರೆ" ಅಥವಾ "ಕಾಳೆ" ಎಂಬುದಾಗಿ ಪರಿಚಿತವಾಗಿರುವ ಇಲ್ಲಿನ ಮಸಾಲೆಯು, ಮಸಾಲೆ ಹಾಕಲ್ಪಟ್ಟ ಕುರಿಮರಿ ಮಾಂಸ, ಮಟನ್, ಮತ್ತು ಚಿಕನ್ ಮಾಂಸಭಕ್ಷ್ಯಗಳಲ್ಲಿನ ಒಂದು ಜನಪ್ರಿಯ ಘಟಕವಸ್ತುವಾಗಿದೆ. ಅನೇಕವೇಳೆ ಇದನ್ನು ತೆಂಗಿನಕಾಯಿಯ ಹಾಲಿನಿಂದ ತಯಾರಿಸಲಾಗುತ್ತದೆ ಹಾಗೂ ಅನ್ನ ಅಥವಾ ಕೆಸವು ಇದರ ಜೊತೆಗೂಡುತ್ತವೆ.
* ಇಥಿಯೋಪಿಯಾ: ವ್ಯಾಟ್ ಎಂಬುದು ಇಲ್ಲಿನ ದಪ್ಪನಾದ ಅತೀವವಾಗಿ ಮಸಾಲೆಯುಕ್ತವಾಗಿರುವ ಒಂದು ಮಾಂಸಭಕ್ಷ್ಯವಾಗಿದೆ
* ಜರ್ಮನಿ: ಕರಿವರ್ಸ್ಟ್
* ಮಧ್ಯಭಾಗದ ಆಫ್ರಿಕಾ: ಇಲ್ಲಿನ ಕಡಲೇಕಾಯಿ ಮಾಂಸಭಕ್ಷ್ಯವು ತಾಂತ್ರಿಕವಾಗಿ ಒಂದು ಮೇಲೋಗರವಲ್ಲದಿದ್ದರೂ, ಇದು ಅದನ್ನು ಹೋಲುವ ಶೈಲಿಯಲ್ಲಿದೆ
* ಮಧ್ಯಭಾಗದ ಯುರೋಪ್: ಗುಲಾಶ್ ಎಂಬುದು ಇಲ್ಲಿನ ಒಂದು ಮಸಾಲೆಭರಿತ ಮಾಂಸಭಕ್ಷ್ಯ ಅಥವಾ ಎಸರು ಆಗಿದ್ದು, ಸಾಮಾನ್ಯವಾಗಿ ಇದನ್ನು ಕೆಂಪುಮೆಣಸು, ಬೆಳ್ಳುಳ್ಳಿ, ಆಲೂಗಡ್ಡೆಗಳು, ದನದ ಮಾಂಸ ಅಥವಾ ಹಂದಿಮಾಂಸ ಮತ್ತು ಸಬ್ಬಸಿಗೆಯಿಂದ ತಯಾರಿಸಲಾಗುತ್ತದೆ. ಇದನ್ನು ಅನ್ನದೊಂದಿಗೆ ಬಡಿಸಲಾಗುವುದಿಲ್ಲ.
ಮೇಲೋಗರದ ಪುಡಿ ಅಥವಾ ಮಸಾಲೆ ಪುಡಿಯನ್ನು ಇತರ ಪಾಕಪದ್ಧತಿಗಳಲ್ಲಿ ಒಂದು ಗೌಣವಾದ ಘಟಕವಸ್ತುವಾಗಿ ಬಳಸಲಾಗುತ್ತದೆ; ಶಿಷ್ಟ ಫ್ರೆಂಚ್ ಬೆಷಮೆಲ್ ಗೊಜ್ಜಿನ ಒಂದು "ಮೇಲೋಗರ ವ್ಯಂಜನ"ದ (''ಸಾಸ್ ಔ ಕರಿ'', ಕೆಲವೊಮ್ಮೆ ''ಔ ಕರಿ'' ಕೂಡಾ) ಮಾರ್ಪಾಡು ಇದಕ್ಕೊಂದು ಉದಾಹರಣೆ.
=== ಬ್ರಿಟಿಷ್ ಪಾಕವಿಧಾನ ===
{{See also|Anglo-Indian cuisine}}
ಬ್ರಿಟಿಷ್ ಪಾಕಪದ್ಧತಿಯಲ್ಲಿ, ಮಸಾಲೆ ಪುಡಿಯಿಂದ ಅಥವಾ ಪುಡಿ ಮತ್ತು ಎಣ್ಣೆಗಳಿಂದ ತಯಾರಿಸಿದ ಒಂದು ಜಲಪಿಷ್ಟದಿಂದ ಪರಿಮಳಯುಕ್ತವಾಗಿಸಿ ರುಚಿಕಟ್ಟಲ್ಪಟ್ಟಿರುವ ವ್ಯಂಜನ-ಆಧರಿತ ಭಕ್ಷ್ಯವೊಂದನ್ನು ಸೂಚಿಸಲು "ಮೇಲೋಗರ" ಎಂಬ ಪದವನ್ನು ಪ್ರಧಾನವಾಗಿ ಬಳಸಲಾಗುತ್ತದೆ. ಆದಾಗ್ಯೂ, ಶುಂಠಿ ಮತ್ತು ಬೆಳ್ಳುಳ್ಳಿಯಂಥ ತಾಜಾ ಮಸಾಲೆಗಳನ್ನು ಹಾಗೂ ತಾಜಾ ಆಗಿ ರುಬ್ಬಿದ ಒಣಗಿಸಿದ ಮಸಾಲೆಗಳಿಂದ ಪಡೆದ ಒಂದು ಆರಂಭಿಕ ಮಸಾಲೆಯ ತಯಾರಿಕೆಯನ್ನು ಕೆಲವೊಮ್ಮೆ ಬಳಸಲಾಗುತ್ತದೆ.
ಬ್ರಿಟನ್ನಲ್ಲಿ ಮೇಲೋಗರದ ಮೊದಲ ಪಾಕವಿಧಾನವು ಹಾನ್ನಾ ಗ್ಲಾಸೆ ಎಂಬಾಕೆಯು 1747ರಲ್ಲಿ ಹೊರತಂದ ''ದಿ ಆರ್ಟ್ ಆಫ್ ಕುಕರಿ ಮೇಡ್ ಪ್ಲೇನ್ ಅಂಡ್ ಈಸಿ'' ಎಂಬ ಪುಸ್ತಕದಲ್ಲಿ ಕಾಣಿಸಿಕೊಂಡಿತು.<ref>{{Cite book| title= The art of cookery, made plain and easy | url= https://archive.org/details/artofcookerymade00glas | author=Hannah Glasse | id=OCLC 4942063 | year = 1747}}</ref> ಅವಳ ಪುಸ್ತಕದ ಮೊದಲ ಆವೃತ್ತಿಯಲ್ಲಿ, "ಮೇಲೋಗರ"ದ ರುಚಿಕಟ್ಟುವಿಕೆಗಾಗಿ ಕೇವಲ ಮೆಣಸಿನಕಾಳು ಮತ್ತು ಧನಿಯಾ ಬೀಜಗಳ ಬಳಕೆಯನ್ನಷ್ಟೇ ಉಲ್ಲೇಖಿಸಲಾಗಿತ್ತು. ಪುಸ್ತಕದ ನಾಲ್ಕನೇ ಆವೃತ್ತಿಯ ವೇಳೆಗೆ, ತುಲನಾತ್ಮಕವಾಗಿ ಸಾಮಾನ್ಯವಾಗಿರುವ ಇತರ ಘಟಕವಸ್ತುಗಳಾದ ಅರಿಶಿನ ಮತ್ತು [[ಶುಂಠಿ]] ಸೇರಿಸಲ್ಪಟ್ಟವು. ಖಾರದ ಮಸಾಲೆಗಳ ಬಳಕೆಯು ಇದರಲ್ಲಿ ಉಲ್ಲೇಖಿಸಲ್ಪಡಲಿಲ್ಲ, ಇದು ಭಾರತದಲ್ಲಿನ ಮೆಣಸಿನಕಾಯಿಯ ಸೀಮಿತ ಬಳಕೆಯನ್ನು ಪ್ರತಿಬಿಂಬಿಸಿತು; ಮೆಣಸಿನಕಾಯಿಯ ಸಸ್ಯಗಳು ಸುಮಾರು 15ನೇ ಶತಮಾನದ ವೇಳೆಗೆ ಮಾತ್ರವೇ ಭಾರತದೊಳಗೆ ಪರಿಚಯಿಸಲ್ಪಟ್ಟಿದ್ದವು ಮತ್ತು ಆ ಸಮಯದಲ್ಲಿ ಅವು ದಕ್ಷಿಣದ ಭಾರತದಲ್ಲಷ್ಟೇ ಜನಪ್ರಿಯವಾಗಿದ್ದವು. ಚಾರ್ಲ್ಸ್ ಎಲ್ಮ್ ಫ್ರಾಂಕಟೆಲ್ಲಿ ಮತ್ತು ಶ್ರೀಮತಿ ಬೀಟನ್ರಂಥ ಪಾಕಶಾಸ್ತ್ರ ಪ್ರವೀಣರು ಬರೆದ 19ನೇ ಶತಮಾನದ ಅಡುಗೆ ಪುಸ್ತಕಗಳಲ್ಲಿ ಮೇಲೋಗರದ ಅನೇಕ ಪಾಕವಿಧಾನಗಳಿದ್ದವು. ''ಮಿಸೆಸ್ ಬೀಟನ್'ಸ್ ಬುಕ್ ಆಫ್ ಹೌಸ್ಹೋಲ್ಡ್ ಮ್ಯಾನೇಜ್ಮೆಂಟ್'' ಎಂಬ ಪುಸ್ತಕದಲ್ಲಿ ಮಸಾಲೆ ಪುಡಿಯ ಪಾಕಸೂತ್ರವನ್ನು ನೀಡಲಾಗಿದ್ದು, ಅದರಲ್ಲಿ ಧನಿಯಾ, ಅರಿಶಿನ, ದಾಲ್ಚಿನ್ನಿ ಚಕ್ಕೆ, ಕೇಎನ್ ಮೆಣಸು, ಸಾಸಿವೆ, ಶುಂಠಿ, ಪಿಮೆಂಟೊ ಮೆಣಸು ಮತ್ತು ಮೆಂತ್ಯವನ್ನು ಘಟಕವಸ್ತುಗಳಾಗಿ ಉಲ್ಲೇಖಿಸಲಾಗಿದೆ; ಆದರೂ "ಯಾವುದೇ ಗೌರವಾನ್ವಿತ ಅಂಗಡಿ"ಯಲ್ಲಿ ಪುಡಿಯನ್ನು ಖರೀದಿಸುವುದು ಹೆಚ್ಚು ಮಿತವ್ಯಯಕಾರಿಯಾಗಿರುತ್ತದೆ ಎಂದು ಲೇಖಕಿ ಬೀಟನ್ ಸದರಿ ಪುಸ್ತಕದಲ್ಲಿ ಉಲ್ಲೇಖಿಸುತ್ತಾಳೆ.<ref>{{Cite book| title= Mrs. Beeton's book of household management | author=Isabella Mary Beeton | pages=215 | isbn=0-304-35726-X | year = 1861}}</ref> 1810ರಲ್ಲಿ, ಸೇಕ್ ಡೀನ್ ಮಹೊಮದ್ ಎಂಬ ಬ್ರಿಟಿಷ್ ಬಂಗಾಳಿ ಉದ್ಯಮಿಯು ಇಂಗ್ಲೆಂಡ್ನಲ್ಲಿ ಮೊದಲ ಭಾರತೀಯ ಮೇಲೋಗರ ಗೃಹವನ್ನು ಪ್ರಾರಂಭಿಸಿದ. [[ಲಂಡನ್|ಲಂಡನ್]]ನಲ್ಲಿ ಪ್ರಾರಂಭವಾದ ಈ ಗೃಹಕ್ಕೆ ಹಿಂದೂಸ್ತಾನಿ ಕಾಫಿ ಹೌಸ್ ಎಂಬ ಹೆಸರನ್ನಿಡಲಾಗಿತ್ತು.<ref>{{Cite news|title=Curry house founder is honoured|date=29 September 2005|publisher=BBC News|url=http://news.bbc.co.uk/1/hi/england/london/4290124.stm|accessdate=2008-10-09 | location=London}}</ref> ಐತಿಹ್ಯವೊಂದರ ಅನುಸಾರ, 19ನೇ ಶತಮಾನದಲ್ಲಿ ಮೇಲೋಗರದೆಡೆಗೆ ನಡೆದ ಒಂದು ಪ್ರಯತ್ನವು ವೋರ್ಸೆಸ್ಟರ್ಷೈರ್ ವ್ಯಂಜನದ ಆವಿಷ್ಕಾರದಲ್ಲಿ ಪರಿಣಮಿಸಿತು.<ref>{{Cite book| title= Curry: A tale of cooks and conquerors | url= https://archive.org/details/currytaleofcooks0000coll | author=Lizzie Collingham | isbn=0 09 943786 4 | year = 2006 | publisher = Vintage | chapter = Curry Powder| pages=[https://archive.org/details/currytaleofcooks0000coll/page/149 149]–150 }}</ref>
ಆಮದುಗಾರಿಕೆಯ ರೂಪದಲ್ಲಿ ಬ್ರಿಟಿಷ್ ಪ್ರಭುತ್ವದಿಂದ ಸ್ವೀಕರಿಸಲಾದ ಉತ್ಪನ್ನಗಳ ಕಾರಣದಿಂದ ಹಾಗೂ 1950ರ ದಶಕದಿಂದ ಮೊದಲ್ಗೊಂಡು ನಂತರದಲ್ಲಿ ದಕ್ಷಿಣ ಏಷ್ಯಾದಿಂದ ನಡೆದ ವಲಸೆಯ ಒಂದು ಪರಿಣಾಮವಾಗಿ, ಬ್ರಿಟನ್ನಲ್ಲಿ ಮೇಲೋಗರದ ಜನಪ್ರಿಯತೆಯು ಅತೀವವಾಗಿ ಬೆಳೆಯಿತು.
1970ರ ದಶಕದ ಆರಂಭಿಕ ಭಾಗದವರೆಗೆ, ಬ್ರಿಟನ್ನಲ್ಲಿದ್ದ ಭಾರತೀಯ ಭೋಜನ ಮಂದಿರಗಳ ಪೈಕಿ ಮುಕ್ಕಾಲುಭಾಗಕ್ಕೂ ಹೆಚ್ಚಿನವು ಬಂಗಾಳಿ ಮೂಲದ ಜನರ ಮಾಲೀಕತ್ವದ ಮತ್ತು ಅವರಿಂದ ನಡೆಸಲ್ಪಡುತ್ತಿರುವ ವ್ಯವಹಾರದ ಅಸ್ತಿತ್ವಗಳಾಗಿ ಗುರುತಿಸಲ್ಪಟ್ಟವು. ಅವುಗಳ ಪೈಕಿ ಬಹುತೇಕ ಭೋಜನ ಮಂದಿರಗಳು, 1971ರಲ್ಲಿ [[ಬಾಂಗ್ಲಾದೇಶ]] ಎಂದು ಹೆಸರಾದ ಪೂರ್ವ ಪಾಕಿಸ್ತಾನಕ್ಕೆ ಸೇರಿದ ವಲಸೆಗಾರರಿಂದ ನಡೆಸಲ್ಪಡುತ್ತಿದ್ದವು. ಭೋಜನಮಂದಿರದ ಬಾಂಗ್ಲಾದೇಶೀಯ ಮಾಲೀಕರು ಸಿಲ್ಹೆಟ್ನ ಈಶಾನ್ಯದ ವಿಭಾಗದಿಂದ ಅಗಾಧ ಪ್ರಮಾಣದಲ್ಲಿ ಬಂದವರಾಗಿದ್ದರು. 1998ರವರೆಗೂ, UKಯಲ್ಲಿನ ಸರಿಸುಮಾರು 85%ನಷ್ಟು ಮೇಲೋಗರ ಭೋಜನ ಮಂದಿರಗಳು ಬ್ರಿಟಿಷ್ ಬಾಂಗ್ಲಾದೇಶದ ಭೋಜನ ಮಂದಿರಗಳಾಗಿದ್ದವು<ref>{{Cite web|url=http://www.curryhouse.co.uk/scene/ethnshow.htm|title=UK Curry Scene|accessdate=2006-12-12}}</ref>, ಆದರೆ 2003ರಲ್ಲಿ ಈ ಅಂಕಿ-ಅಂಶವು ಕೇವಲ 65%ಗಿಂತ ಸ್ವಲ್ಪವೇ ಮೇಲಿನ ಮಟ್ಟಕ್ಕೆ ಕುಸಿಯಿತು.<ref>{{Cite web|url=http://www.bbc.co.uk/worldservice/specials/177_food/page5.shtml|title=Indian Curry in London|accessdate=2006-12-12}}</ref> ಪ್ರಸಕ್ತವಾಗಿ, [[ಲಂಡನ್|ಲಂಡನ್]]ನ ಕೆಲವೊಂದು ಭಾಗಗಳಲ್ಲಿನ ಬಾಂಗ್ಲಾದೇಶೀಯ ಭೋಜನ ಮಂದಿರಗಳ ಪ್ರಾಬಲ್ಯವು ಸಾರ್ವತ್ರಿಕವಾಗಿ ಕುಸಿಯುತ್ತಿದೆ ಹಾಗೂ ಮತ್ತಷ್ಟು ಉತ್ತರಕ್ಕೆ ಸಾಗಿದಂತೆ ಅಲ್ಲಿಯೂ ಈ ಸ್ಥಿತಿಯನ್ನು ಕಾಣಬಹುದು. ಗ್ಲಾಸ್ಗೊದಲ್ಲಿ ಬೇರೆಲ್ಲೂ ಕಾಣದಷ್ಟು ಹೆಚ್ಚು ಸಂಖ್ಯೆಯಲ್ಲಿ ಪಂಜಾಬಿ ಮೂಲದ ಭೋಜನ ಮಂದಿರಗಳನ್ನು ಕಾಣಬಹುದು.<ref>{{Cite web|url=http://www.menumagazine.co.uk/book/restauranthistory.html|title=The history of the "ethnic" restaurant in Britain|accessdate=2006-12-12|archive-date=14 ಜನವರಿ 2017|archive-url=https://web.archive.org/web/20170114124618/http://www.menumagazine.co.uk/book/restauranthistory.html|url-status=dead}}</ref>
ಭೋಜನ ಮಂದಿರವೊಂದರ ಮಾಲೀಕತ್ವದ ಜನಾಂಗೀಯ ಮೂಲವನ್ನು ಲೆಕ್ಕಿಸದೆ, ಇಲ್ಲಿನ ಆಹಾರ-ಸೇವಾಪಟ್ಟಿಯು ಅನೇಕವೇಳೆ ವ್ಯಾಪಕವಾದ ಭಾರತೀಯ ಉಪಖಂಡದಿಂದ (ಕೆಲವೊಮ್ಮೆ ನೇಪಾಳಿಯರ ಭಕ್ಷ್ಯಗಳನ್ನೂ ಒಳಗೊಂಡಂತೆ), ಮತ್ತು ಕೆಲವೊಮ್ಮೆ ವ್ಯಾಪ್ತಿಯಾಚೆಗಿನ ಪ್ರದೇಶಗಳಿಗೆ ಸೇರಿದ ಪಾಕಪದ್ಧತಿಗಳಿಂದ (ಪರ್ಷಿಯನ್ ಭಕ್ಷ್ಯಗಳ ರೀತಿಯಲ್ಲಿ) ಪ್ರಭಾವಿಸಲ್ಪಡುತ್ತದೆ. ಭಾರತೀಯ ಆಹಾರದ ಮೇಲಿನ ಕೆಲವೊಂದು ಬ್ರಿಟಿಷ್ ಮಾರ್ಪಾಡುಗಳನ್ನು UKಯಿಂದ ಭಾರತಕ್ಕೆ ರಫ್ತುಮಾಡಲಾಗುತ್ತಿದೆ.<ref>{{Cite news|url=http://news.bbc.co.uk/1/hi/world/south_asia/8635456.stm|title=Can the British curry take off in India?|accessdate=2010-04-23 | work=BBC News | date=2010-04-21}}</ref> ಬ್ರಿಟಿಷ್-ಶೈಲಿಯ ಮೇಲೋಗರ ಭೋಜನ ಮಂದಿರಗಳು [[ಕೆನಡಾ]], [[ಆಸ್ಟ್ರೇಲಿಯ|ಆಸ್ಟ್ರೇಲಿಯಾ]] ಮತ್ತು [[ನ್ಯೂ ಜೀಲ್ಯಾಂಡ್|ನ್ಯೂಜಿಲೆಂಡ್]]ಗಳಲ್ಲೂ ಜನಪ್ರಿಯವಾಗಿವೆ.
ಮೇಲೋಗರವು ಎಷ್ಟರ ಮಟ್ಟಿಗೆ ಬ್ರಿಟಿಷ್ ಪಾಕಪದ್ಧತಿಯ ಒಂದು ಅವಿಭಾಜ್ಯ ಅಂಗವಾಗಿದೆಯೆಂದರೆ, ಚಿಕನ್ ಟಿಕ್ಕಾ ಮಸಾಲಾವನ್ನು "ಒಂದು ನಿಜವಾದ ಬ್ರಿಟಿಷ್ ರಾಷ್ಟ್ರೀಯ ಭಕ್ಷ್ಯ" ಎಂಬುದಾಗಿ 1990ರ ದಶಕದ ಅಂತ್ಯಭಾಗದಿಂದಲೂ ಉಲ್ಲೇಖಿಸಲಾಗುತ್ತಿದೆ.<ref>{{Cite news|url=https://www.theguardian.com/race/story/0,,657407,00.html|title=Robin Cook's chicken tikka masala speech|accessdate=2006-12-12 | work=The Guardian | location=London | date=2001-04-19}}</ref> ಆಲೂಗಡ್ಡೆ ಉಪ್ಪೇರಿಗಳಿಗೆ ಮೀಸಲಾದ ಒಂದು ಒಂದು ಪರಿಮಳ-ವಸ್ತುವಾಗಿ, ಮತ್ತು [[ಪೀಟ್ಸಾ|ಪಿಜ್ಜಾ]] ಅಲಂಕರಣದ ಒಂದು ಪದಾರ್ಥವಾಗಿಯೂ ಅದು ಈಗ ಇಂಟರ್ಸಿಟಿ ರೈಲಿನ ಟ್ರೇನುಗಳಲ್ಲಿ ಲಭ್ಯವಿದೆ.
[[ಎರಡನೇ ಎಲಿಜಬೆಥ್|ರಾಣಿ IIನೇ ಎಲಿಜಬೆತ್]]ಳ ಕಿರೀಟಧಾರಣೋತ್ಸವವನ್ನು ನೆನಪಿಗೆ ತರುವುದಕ್ಕಾಗಿ 1953ರಲ್ಲಿ ಆವಿಷ್ಕರಿಸಲ್ಪಟ್ಟ "ಕಾರೊನೇಷನ್ ಚಿಕನ್" ಎಂಬ ಒಂದು ತಂಪಾದ ಭಕ್ಷ್ಯ, ಮತ್ತು ಉಪ್ಪೇರಿಗಳಂಥ ಬ್ರಿಟಿಷರ ಸಾಂಪ್ರದಾಯಿಕ ದಿಢೀರ್ ಆಹಾರ ಭಕ್ಷ್ಯಗಳೊಂದಿಗೆ ಬಿಸಿಬಿಸಿಯಾಗಿ ಸಾಮಾನ್ಯವಾಗಿ ಬಡಿಸಲಾಗುವ '''ಮೇಲೋಗರದ ವ್ಯಂಜನ''' (ಅಥವಾ '''ಮೇಲೋಗರದ ಮಾಂಸರಸ''' ) ಇವುಗಳು ಬ್ರಿಟಿಷರ ಇತರ ಮೇಲೋಗರ ಉತ್ಪನ್ನಗಳಲ್ಲಿ ಸೇರಿವೆ. ಮೇಲೋಗರ ವ್ಯಂಜನವು ಬೀಜವಿಲ್ಲದ ಒಣದ್ರಾಕ್ಷಿಗಳನ್ನು ಸಂದರ್ಭಾನುಸಾರ ಒಳಗೊಳ್ಳುತ್ತದೆ.
==== ಬ್ರಿಟಿಷ್ ಮೇಲೋಗರ ಗೃಹ ====
ಹೆಚ್ಚೂಕಮ್ಮಿ ಭಾರತೀಯ ಉಪಖಂಡದ ಎಲ್ಲಾ ಭಾಗಗಳಲ್ಲಿ ಮತ್ತು ಭಾರತದ ನೆರೆಯ ದೇಶಗಳಾದ ಬಾಂಗ್ಲಾದೇಶ ಹಾಗೂ [[ಪಾಕಿಸ್ತಾನ]]ಗಳಲ್ಲಿ ಮೇಲೋಗರವನ್ನು ಸೇವಿಸಲಾಗುತ್ತದೆ; ಬಳಸಲ್ಪಡುವ ಸ್ಥಳೀಯ ಘಟಕವಸ್ತುಗಳನ್ನು ಅವಲಂಬಿಸಿ ಮೇಲೋಗರದ ಶೈಲಿ, ರುಚಿ ಮತ್ತು ಸುವಾಸನೆಗಳು ಭಿನ್ನವಾಗಿರುವ ಮಟ್ಟಗಳಲ್ಲಿರುತ್ತದೆ.
UKಯಲ್ಲಿರುವ ಬಂಗಾಳಿಗಳು ಔದ್ಯಮಿಕ ಉದ್ಯೋಗದ ನೆರವಿನೊಂದಿಗೆ ದೊಡ್ಡ ನಗರಗಳಲ್ಲಿ ನೆಲೆಗೊಂಡರು. ಲಂಡನ್ನಲ್ಲಿ ಬಂಗಾಳಿಗಳು ಈಸ್ಟ್ ಎಂಡ್ ಪ್ರದೇಶದಲ್ಲಿ ನೆಲೆಗೊಂಡಿದ್ದಾರೆ. ಹಡಗುಕಟ್ಟೆಗಳಲ್ಲಿ ಕೆಲಸಮಾಡುತ್ತಿರುವ ಅನೇಕ ಆಮದುದಾರರಿಗೆ ಹಾಗೂ ಪೂರ್ವ ಬಂಗಾಳದಿಂದ ಬರುವ ಹಡಗು ರವಾನೆಯ ಸರಕಿಗೆ ಈಸ್ಟ್ ಎಂಡ್ ಪ್ರದೇಶವು ಶತಮಾನಗಳಿಂದಲೂ ಮೊದಲ ತಂಗುದಾಣವೆನಿಸಿಕೊಂಡು ಬಂದಿದೆ. ಪ್ರಯಾಣದ ನಡುವೆ ಅವರು ಕೈಗೊಳ್ಳುತ್ತಿದ್ದ ತಂಗಣೆಯ ದೆಸೆಯಿಂದಾಗಿ ಆಹಾರ/ಮೇಲೋಗರದ ಮಳಿಗೆಗಳು ಪ್ರಾರಂಭವಾಗುವುದಕ್ಕೆ ಒಂದು ದಾರಿ ಸಿಕ್ಕಂತಾಯಿತು; ಕುಟುಂಬದ ವಲಸೆ ಮತ್ತು ನೆಲೆಗೊಳ್ಳುವಿಕೆಯಂಥ ಪ್ರಕ್ರಿಯೆಗಳು ಒಂದಷ್ಟು ದಶಕಗಳ ನಂತರ ನೆರವೇರಿದ್ದರಿಂದ, ಅಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಪುರುಷ-ಕಾರ್ಯತಂಡಕ್ಕೆ ಆಹಾರ ಒದಗಿಸುವುದಕ್ಕಾಗಿ ಸದರಿ ಮಳಿಗೆಗಳು ಪ್ರಾರಂಭವಾದವು.
ಎಲ್ಲಾ ವ್ಯಂಜನಗಳಿಗೆ ಸಂಬಂಧಿಸಿದಂತೆ, ಸಾಮಾನ್ಯವಾಗಿರುವ ಒಂದು ಪ್ರಧಾನ ಘಟಕಾಂಶದ ಬಳಕೆಯ ಮೂಲಕ ಈ ಪಾಕಪದ್ಧತಿಯು ವಿಶಿಷ್ಟೀಕರಿಸಲ್ಪಟ್ಟಿದೆ. ಈ ಪ್ರಧಾನ ಘಟಕಾಂಶಕ್ಕೆ ಮಸಾಲೆಗಳು ಸೇರಿಸಲ್ಪಟ್ಟಾಗ ಪ್ರತ್ಯೇಕ ಭಕ್ಷ್ಯಗಳು ತಯಾರಾಗುತ್ತವೆ ಎಂಬುದು ವಿಶೇಷ. ಸ್ವಲ್ಪವೇ ಜಿಡ್ಡಿನಲ್ಲಿ ಬೇಗನೆ ಹುರಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ತಾಜಾ ಶುಂಠಿಯ ಒಂದು ಮಿಶ್ರಣವು ಸಾಮಾನ್ಯವಾಗಿ ಪ್ರಮಾಣಕ ಗ್ರಾಸ ಅಥವಾ "ಪೂರಕವಸ್ತು"ವಾಗಿದ್ದು, ಪಾಕವಿಧಾನವನ್ನು ಅವಲಂಬಿಸಿ ಇದಕ್ಕೆ ನಾನಾಬಗೆಯ ಮಸಾಲೆಗಳನ್ನು ಸೇರಿಸಲಾಗುತ್ತದೆ; ಆದರೆ ಇದರಲ್ಲಿ ಲವಂಗಗಳು, ದಾಲ್ಚಿನ್ನಿ ಚಕ್ಕೆ, ಏಲಕ್ಕಿ, ಮೆಣಸಿನಕಾಯಿಗಳು, ಮೆಣಸಿನಕಾಳುಗಳು, ಜೀರಿಗೆ ಮತ್ತು ಸಾಸಿವೆ ಬೀಜಗಳಂಥ ಘಟಕಗಳೂ ಸೇರಿರಲು ಸಾಧ್ಯವಿದೆ. ಧನಿಯಾ ಬೀಜದ ಪುಡಿಯನ್ನು ಒಂದು ಸಾಂದ್ರಕಾರಿ ಮಧ್ಯವರ್ತಿಯಾಗಿ ವ್ಯಾಪಕವಾಗಿ ಬಳಸಲಾಗುತ್ತದೆ, ಮತ್ತು ಅರಿಶಿನವನ್ನು ಬಣ್ಣ ಮತ್ತು ಅದರ ಜೀರ್ಣಕಾರಿ ಗುಣಗಳಿಗಾಗಿ ಸೇರಿಸಲಾಗುತ್ತದೆ. ತಾಜಾ ಅಥವಾ ಡಬ್ಬಿಯಲ್ಲಿ ಹಾಕಿ ಸಂರಕ್ಷಿಸಿಟ್ಟ ಟೊಮೆಟೋಗಳು ಮತ್ತು ಗಂಟೆ ಮೆಣಸಿನಕಾಳುಗಳು ಒಂದು ಸಾಮಾನ್ಯ ಸೇರ್ಪಡೆ ಎನಿಸಿಕೊಳ್ಳುತ್ತವೆ.
ಉತ್ತಮ-ಗುಣಮಟ್ಟದ ಭೋಜನ ಮಂದಿರಗಳು ಸಾಮಾನ್ಯವಾಗಿ ಒಂದು ದಿನವಹಿ ಆಧಾರದ ಮೇಲೆ ಹೊಸ ವ್ಯಂಜನಗಳನ್ನು ತಯಾರಿಸಿಕೊಳ್ಳುತ್ತವೆ; ಇದಕ್ಕಾಗಿ ಅವು ಸಾಧ್ಯವಾದೆಡೆಯೆಲ್ಲಾ ತಾಜಾ ಘಟಕವಸ್ತುಗಳನ್ನು ಬಳಸಿಕೊಳ್ಳುತ್ತವೆ ಹಾಗೂ ಮಸಾಲೆಗಳನ್ನು ಸ್ವತಃ ಪುಡಿಮಾಡಿಕೊಳ್ಳುತ್ತವೆ. ಶೈತ್ಯೀಕರಿಸಿದ ಅಥವಾ ಒಣಗಿಸಿದ ಘಟಕವಸ್ತುಗಳನ್ನು ಹಾಗೂ ಪೂರ್ವಭಾವಿಯಾಗಿ-ಪೊಟ್ಟಣಕಟ್ಟಲಾದ ಮಸಾಲೆ ಮಿಶ್ರಣಗಳನ್ನು ತೀರಾ ಸಾಧಾರಣವಾದ ಸಂಸ್ಥೆಗಳು ಆಶ್ರಯಿಸಬಹುದು.
ಇಲ್ಲಿನ ಹೆಸರುಗಳು ಸಾಂಪ್ರದಾಯಿಕ ಭಕ್ಷ್ಯಗಳಿಗೆ ಹೋಲುವಂತಿರಬಹುದಾದರೂ, ಅವುಗಳ ಪಾಕವಿಧಾನಗಳು ಸಾಮಾನ್ಯವಾಗಿ ಹೋಲುವಂತಿರುವುದಿಲ್ಲ.
* ಕೊರ್ಮ/ಕೂರ್ಮ - ಲಘುವಾಗಿರುವ ಇದು, ಹಳದಿ ಬಣ್ಣವನ್ನು ಹೊಂದಿದ್ದು, ಬಾದಾಮಿ ಮತ್ತು ತೆಂಗಿನಕಾಯಿ ಪುಡಿಯನ್ನು ಒಳಗೊಂಡಿರುತ್ತದೆ.
* ಮೇಲೋಗರ - ಮಧ್ಯಮ ಮಟ್ಟದಲ್ಲಿರುವ ಇದು, ಕಂದು ಬಣ್ಣವನ್ನು ಹೊಂದಿದ್ದು, ಮಾಂಸರಸದ-ರೀತಿಯ ವ್ಯಂಜನವಾಗಿರುತ್ತದೆ.
* ಬಿರಿಯಾನಿ - ಇದು ಮಸಾಲೆಯುಕ್ತ ಅನ್ನ ಮತ್ತು ಮಾಂಸವನ್ನು ಒಟ್ಟಿಗೆ ಬೇಯಿಸಿ ತಯಾರಿಸಿದ ಭಕ್ಷ್ಯವಾಗಿದ್ದು, ತರಕಾರಿ ಮೇಲೋಗರದ ವ್ಯಂಜನದೊಂದಿಗೆ ಸಾಮಾನ್ಯವಾಗಿ ಬಡಿಸಲಾಗುತ್ತದೆ.
* ಡುಪಿಯಾಜಾ/ಡೊಪಿಯಾಜಾ - ಇದೊಂದು ಮಧ್ಯಮ ಮಟ್ಟದ ಮೇಲೋಗರವಾಗಿದ್ದು, ಸದರಿ ಪದವು "ಜೋಡಿ ಈರುಳ್ಳಿ" ಎಂಬ ಅರ್ಥವನ್ನು ಕೊಡುತ್ತದೆ ಹಾಗೂ ಇದರ ಪ್ರಧಾನ ಘಟಕವಸ್ತುವಾಗಿ ಬೇಯಿಸಿದ ಮತ್ತು ಬಾಡಿಸಿದ ಈರುಳ್ಳಿಗಳನ್ನು ಬಳಸಲಾಗಿದೆ ಎಂಬುದನ್ನು ಉಲ್ಲೇಖಿಸುತ್ತದೆ.
* ಪಸಂದ - ಇದೊಂದು ಲಘು ಮೇಲೋಗರ ವ್ಯಂಜನವಾಗಿದ್ದು, ಕೆನೆ, ತೆಂಗಿನಕಾಯಿಯ ಹಾಲು, ಮತ್ತು ಬಾದಾಮಿಗಳು ಅಥವಾ ಗೋಡಂಬಿಗಳನ್ನು ಬಳಸಿಕೊಂಡು ಇದನ್ನು ತಯಾರಿಸಲಾಗುತ್ತದೆ.
* ರೋಘನ್ ಜೋಶ್ ["ರೋಘನ್" (ಕೊಬ್ಬು) ಮತ್ತು "ಜೋಶ್" (ಶಕ್ತಿ/ತಾಪ) ಎಂಬ ಪದಗಳಿಂದ ರೂಪುಗೊಂಡಿರುವ ಹೆಸರಿದು. ಇಂಗ್ಲಿಷ್ನಲ್ಲಿರುವಂತೆ ಇದು "ಮಸಾಲೆಯಿಂದ ಕೂಡಿರುವಿಕೆ"ಯನ್ನು ಅಥವಾ ತಾಪಮಾನವನ್ನು ಉಲ್ಲೇಖಿಸಬಹುದು] - ಇದು ಮಧ್ಯಮ ಮಟ್ಟದ ವ್ಯಂಜನವಾಗಿದ್ದು ಟೊಮೆಟೋಗಳು ಮತ್ತು ಕೆಂಪುಮೆಣಸನ್ನು ಒಳಗೊಂಡಿರುತ್ತದೆ.
* ಭುನಾ - ಮಧ್ಯಮವಾಗಿದ್ದು, ಮಂದತೆಯಿಂದ ಕೂಡಿರುವ ಈ ವ್ಯಂಜನವು ಒಂದಷ್ಟು ತರಕಾರಿಗಳನ್ನು ಒಳಗೊಂಡಿರುತ್ತದೆ.
* ಧನ್ಸಾಕ್ - ಇದು ಮಧ್ಯಮ/ಖಾರ, ಸಿಹಿ ಮತ್ತು ಹುಳಿಯ ವ್ಯಂಜನವಾಗಿದ್ದು ಲೆಂಟಿಲ್ಗಳನ್ನು ಒಳಗೊಂಡಿರುತ್ತದೆ (ಮೂಲತಃ ಇದೊಂದು ಪಾರ್ಸಿ ಭಕ್ಷ್ಯವಾಗಿದೆ). ಈ ಭಕ್ಷ್ಯವು ಅನೇಕವೇಳೆ [[ಅನಾನಸ್|ಅನಾನಸು]] ಹಣ್ಣನ್ನೂ ಒಳಗೊಳ್ಳುತ್ತದೆ.
* ಮದ್ರಾಸ್ - ಯಥೋಚಿತವಾಗಿ ಖಾರವಾಗಿರುವ ಈ ಮೇಲೋಗರವು, ಕೆಂಪು ಬಣ್ಣವನ್ನು ಹೊಂದಿರುತ್ತದೆ ಮತ್ತು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಣಮೆಣಸಿನಕಾಯಿಯ ಪುಡಿಯನ್ನು ಬಳಸಲಾಗಿರುತ್ತದೆ.
* ಪಾಠಿಯಾ - ಇದು ರುಚಿಯಲ್ಲಿ ಖಾರವಾಗಿದ್ದು ಒಂದು ಮದ್ರಾಸ್ ವ್ಯಂಜನವನ್ನು ಸಾಮಾನ್ಯವಾಗಿ ಹೋಲುವ ರೀತಿಯಲ್ಲಿರುತ್ತದೆ ಹಾಗೂ ನಿಂಬೆರಸ ಮತ್ತು ಟೊಮೆಟೊ ಪ್ಯೂರೀಯನ್ನು ಒಳಗೊಂಡಿರುತ್ತದೆ.
* ಜಾಲ್ಫ್ರೆಜಿ - ಈರುಳ್ಳಿ, ಹಸಿರು ಮೆಣಸಿನಕಾಯಿಯನ್ನು ಒಳಗೊಂಡಿರುವ ಇದು ಒಂದು ಮಂದವಾಗಿರುವ ವ್ಯಂಜನವಾಗಿದೆ.
* ಸಾಂಬಾರ್ - ಮಧ್ಯಮ ತಾಪದ ಈ ಹುಳಿ ಮೇಲೋಗರವನ್ನು ಲೆಂಟಿಲ್ಗಳು ಮತ್ತು ನಿಂಬೆಹಣ್ಣುಗಳಿಂದ ತಯಾರಿಸಲಾಗುತ್ತದೆ.
* ವಿಂಡಾಲೂ - ಇದನ್ನು ಭೋಜನ ಮಂದಿರದ ಶಿಷ್ಟ "ಖಾರದ" ಮೇಲೋಗರವೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆಯಾದರೂ, ಮಸಾಲೆಯಿಂದ ಕೂಡಿರುವಿಕೆಯ ಯಾವುದೇ ನಿರ್ದಿಷ್ಟ ಮಟ್ಟವನ್ನು ಒಂದು ನಿಜವಾದ ವಿಂಡಾಲೂ ನಿರ್ದಿಷ್ಟವಾಗಿ ಸೂಚಿಸುವುದಿಲ್ಲ. ಈ ಹೆಸರು ಐರೋಪ್ಯ ಮೂಲಗಳನ್ನು ಹೊಂದಿದ್ದು, "ವಿನ್ಹಾ ಡಾ'ಲ್ಹೊಸ್" ಎಂಬ ಪೋರ್ಚುಗೀಸ್ ಶಬ್ದದಿಂದ ಅದು ಜನ್ಯವಾಗಿದೆ; "ವಿನ್ಹಾ ಡಾ'ಲ್ಹೊಸ್" ಎಂಬುದು ಒಂದು ಮ್ಯಾರಿನೇಡ್ ಆಗಿದ್ದು, ಮದ್ಯವನ್ನು ("ವಿನ್ಹೊ"), ಅಥವಾ ಕೆಲವೊಮ್ಮೆ ವಿನೆಗರ್ ಮತ್ತು ಬೆಳ್ಳುಳ್ಳಿಯನ್ನು ("ಅಲ್ಹೊ") ಒಳಗೊಂಡಿರುತ್ತದೆ; ಬಿಸಿ ಹವಾಮಾನದಲ್ಲಿ ಹಂದಿಮಾಂಸವು ಕೆಟ್ಟುಹೋಗದಂತೆ ತಡೆಗಟ್ಟಲು ಇದನ್ನು ಬಳಸಲಾಗುತ್ತದೆ.
* ಫಾಲ್ - ಇದು ಅತೀವವಾಗಿ ಖಾರವಾಗಿರುವ ಭಕ್ಷ್ಯವಾಗಿದ್ದು ರುಬ್ಬಿದ ಮೆಣಸಿನಕಾಯಿಗಳು, ಶುಂಠಿ ಮತ್ತು ಸೋಂಪಿನಗಿಡವನ್ನು ಇದರಲ್ಲಿ ಬಳಸಲಾಗಿರುತ್ತದೆ.
1960ರ ದಶಕದಲ್ಲಿ ತಂದೂರ್ ಬ್ರಿಟನ್ಗೆ ಪರಿಚಯಿಸಲ್ಪಟ್ಟಿತು ಹಾಗೂ ತಂದೂರಿ ಮತ್ತು ಟಿಕ್ಕಾ ಚಿಕನ್ಗಳು ಜನಪ್ರಿಯ ಭಕ್ಷ್ಯಗಳೆನಿಸಿಕೊಂಡವು; ಚಿಕನ್ ಟಿಕ್ಕಾ ಮಸಾಲಾ ಭಕ್ಷ್ಯವನ್ನು ಗ್ಲಾಸ್ಗೊದಲ್ಲಿ ಆವಿಷ್ಕರಿಸಲಾಯಿತು ಎಂದು ಹೇಳಲಾಗುತ್ತದೆ.
ಲಘುವಾಗಿರುವೆಡೆಗೆ ಒಲವು ತೋರುವ ಉತ್ತರ ಭಾರತೀಯ ಮೂಲದ ಭಕ್ಷ್ಯಗಳ ಜೊತೆಯಲ್ಲಿ, ಭಿನ್ನವಾಗಿರುವ ಕ್ಷಮತೆಗಳೊಂದಿಗಿನ ಇತರ ಭಕ್ಷ್ಯಗಳನ್ನು ಸಾದರಪಡಿಸಬಹುದು. ಬೆಣ್ಣೆ ಚಿಕನ್ ಇದಕ್ಕೊಂದು ನಿದರ್ಶನವಾಗಿದೆ; ಇದೇ ರೀತಿಯಲ್ಲಿ ಖಾರವಾಗಿರುವುದರೆಡೆಗೆ ಒಲವು ತೋರುವ ದಕ್ಷಿಣ ಭಾರತದ ಪಾಕವಿಧಾನಗಳನ್ನೂ ಪ್ರಸ್ತುತಪಡಿಸಬಹುದು.
==== ಬಾಲ್ಟಿ ಮೇಲೋಗರಗಳು ====
{{Main|Balti (food)}}
[[ಚಿತ್ರ:Balti gosht.jpg|thumb|right|ಪಾಕಿಸ್ತಾನಿ-ಶೈಲಿಯ ಒಂದು ಬಾಲ್ಟಿ ಮೇಲೋಗರ]]
ಬಾಲ್ಟಿಗಳು ಎಂದು ಕರೆಯಲ್ಪಡುವ ಮೇಲೋಗರದ ಒಂದು ಶೈಲಿಯು ಇಂಗ್ಲೆಂಡ್ನ<ref>{{Cite web |url=http://oed.com/bbcwordhunt/list.html#balti |title=Wordhunt appeal list - Balderdash Wordhunt - Oxford English Dictionary |publisher=Oed.com |date= |accessdate=2009-06-08 |archive-date=9 ಜುಲೈ 2009 |archive-url=https://web.archive.org/web/20090709215254/http://www.oed.com/bbcwordhunt/list.html#balti |url-status=dead }}</ref> ಬರ್ಮಿಂಗ್ಹ್ಯಾಂನಲ್ಲಿ ಅಭಿವೃದ್ಧಿಪಡಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ. ಬಾಲ್ಟಿ ಮೇಲೋಗರಗಳು ಇತರ ಪಾಶ್ಚಾತ್ಯ ದೇಶಗಳಿಗೂ ಹರಡಿಕೊಂಡಿವೆ ಹಾಗೂ ಅವನ್ನು ವಿಶಿಷ್ಟವಾಗಿ ಎರಕಹೊಯ್ಯಲಾಗಿರುವ ಕಬ್ಬಿಣದ ಮಡಿಕೆಯಲ್ಲಿ ಸಾಂಪ್ರದಾಯಿಕವಾಗಿ ಬೇಯಿಸಲಾಗುತ್ತದೆ ಮತ್ತು ಬಡಿಸಲಾಗುತ್ತದೆ. ಅವುಗಳ ಮೂಲವು ಪಾಕಿಸ್ತಾನದ ಬಾಲ್ಟಿಸ್ತಾನ್ ಪ್ರದೇಶದಲ್ಲಿದೆ ಎಂಬುದು ನಂಬಲಾಗಿದ್ದು, ಅಲ್ಲಿಂದ ಅವನ್ನು ದಕ್ಷಿಣ ಏಷ್ಯಾದ ವಲಸೆಗಾರರು UKಗೆ ತಂದರು ಹಾಗೂ ಪ್ರವರ್ತನಗೊಳಿಸಿದರು.
==== ಮನೆಯಲ್ಲಿನ ಮೇಲೋಗರ ಗೃಹದ ಪಾಕಪದ್ಧತಿ ====
ಆಧಾರಪೂರ್ವಕವಾದ ಭಾರತೀಯ ಪಾಕಪದ್ಧತಿಗೆ ಪ್ರತಿಯಾಗಿ, ಮೇಲೋಗರ ಗೃಹದ ಪಾಕಪದ್ಧತಿಯನ್ನು ಮನೆಯಲ್ಲಿ ಹೇಗೆ ಮರುಸೃಷ್ಟಿಸಬಹುದು ಎಂಬುದನ್ನು ತೋರಿಸುವೆಡೆಗೆ ಗುರಿಯಿಟ್ಟುಕೊಂಡಿರುವ ಹಲವಾರು ಪ್ರಕಟಣೆಗಳನ್ನು, ಬ್ರಿಟನ್ನಲ್ಲಿ ದಾಖಲಾದ ಮೇಲೋಗರ ಗೃಹಗಳ ಜನಪ್ರಿಯತೆಯು ಉತ್ತೇಜಿಸಿದೆ. ಅಂಥ ಗಮನಾರ್ಹ ಪ್ರಕಟಣೆಗಳಲ್ಲಿ ಕ್ರಿಸ್ ಧಿಲ್ಲೋನ್ ಎಂಬಾಕೆಯ ''ದಿ ಕರಿ ಸೀಕ್ರೆಟ್'' ಎಂಬ ಪುಸ್ತಕವು ಸೇರಿದೆ. 1989ರಲ್ಲಿ ಈ ಪುಸ್ತಕವು ಮೊದಲು ಪ್ರಕಟಿಸಲ್ಪಟ್ಟಿತಾದರೂ, ತೀರ ಇತ್ತೀಚೆಗೆ 2008ರಲ್ಲಿ ಅದು ಮರುಮುದ್ರಣಗೊಂಡಿತು.<ref>{{Cite book| last = Dhillon | first = Kris | title = The Curry Secret | publisher = Right Way | isbn = 978-0716021919}}</ref> ಸದರಿ ಪುಸ್ತಕವನ್ನು ಪ್ರಕಟಿಸುವುದಕ್ಕೆ ಮುಂಚಿತವಾಗಿ ತನ್ನದೇ ಆದ ಭಾರತೀಯ-ಶೈಲಿಯ ಭೋಜನ ಮಂದಿರದಲ್ಲಿ ಕೆಲಸಮಾಡಿ ಅನುಭವ ಪಡೆದುಕೊಂಡಿದ್ದನ್ನು ಧಿಲ್ಲೋನ್ ವಿವರಿಸುತ್ತಾಳೆ.<ref>
{{Cite web| last = Dhillon | first = Kris | title = About Kris Dhillon | url = http://www.thecurrysecret.co.uk/About%20kris%20Dhillon/index.html | accessdate = 5 April 2010 }}</ref> ಅದಕ್ಕೆ ಪ್ರತಿಯಾಗಿ, ಬ್ರೂಸ್ ಎಡ್ವರ್ಡ್ಸ್ ಎಂಬಾತ 1990ರಲ್ಲಿ ಲೇಖನಗಳ ಒಂದು ಕಿರು ಸರಣಿಯನ್ನು ಪ್ರಕಟಿಸಿದ. ಭೋಜನ ಮಂದಿರದ ಓರ್ವ ಗ್ರಾಹಕನಾಗಿ ತನ್ನ ಅನುಭವಗಳನ್ನು ಮರುಸೃಷ್ಟಿಸುವುದಕ್ಕೆ ಪ್ರಯತ್ನಿಸುವಲ್ಲಿನ ಕಾರಣಪೂರ್ವಕ ಊಹನ ಮತ್ತು ಪ್ರಯೋಗಗಳ ಮೇಲೆ ಈ ಲೇಖನಗಳು ಬಹುತೇಕವಾಗಿ ಆಧರಿಸಿದ್ದವು. ಕರಿ ಕ್ಲಬ್ ಮ್ಯಾಗಜೀನ್ ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಲ್ಪಟ್ಟ ಮೂರು ಲೇಖನಗಳನ್ನು ಈ ಸರಣಿಯು ಒಳಗೊಂಡಿತ್ತು.<ref>{{Cite news| last = Edwards | first = Bruce | title = Curry House Cookery | work = Curry Club Magazine, Winter issue 1990 }}</ref> ತಿಂಡಿಯನ್ನು ಬೇರೆಡೆಗೆ ಕಟ್ಟಿಕೊಡುವ ಭಾರತೀಯ ಭೋಜನ ಮಂದಿರವೊಂದರ ತೆರೆಯ ಮರೆಯ ನೋಟದಿಂದ ತಾನು ಅರಿತಿದ್ದ ಮಾಹಿತಿಗಳನ್ನು ಬಳಸಿಕೊಂಡು, ಮೂರು ವರ್ಷಗಳ ನಂತರ ಅದೇ ನಿಯತಕಾಲಿಕದಲ್ಲಿ ಒಂದು ಮುಂಬರಿಕೆ ಸರಣಿಯನ್ನು ಎಡ್ವರ್ಡ್ಸ್ ಪ್ರಕಟಿಸಿದ.<ref>{{Cite news| last = Edwards | first = Bruce | title = Curry House Cookery | work = Curry Club Magazine, first issue of 1993 }}</ref> ಎಡ್ವರ್ಡ್ಸ್ನ ಲೇಖನಗಳು ಈಗಲೂ ಸಹ ಒಂದು ಉಲ್ಲೇಖವಾಗಿ "ಕರಿ ರಿಸೈಪ್ಸ್ ಆನ್ಲೈನ್" ಎಂಬ ಆನ್ಲೈನ್ ವೇದಿಕೆಯ ಸದಸ್ಯರಿಂದ ಬಳಸಲ್ಪಡುತ್ತಿದ್ದು, ಅಲ್ಲಿ ಆತ ಮತ್ತಷ್ಟು ಮುಂಬರಿಕೆಗಳ ಕುರಿತಾದ ಒಂದು ಸಂಕ್ಷಿಪ್ತ ವಿವರವನ್ನು ಔಪಚಾರಿಕವಾಗಿ ಪ್ರಕಟಿಸಿದ್ದಾನೆ.<ref>{{Cite web | last = Edwards | first = Bruce | title = Comments received from Bruce Edwards 14 October 2008 | url = http://cr0.co.uk/curry/index.php?topic=3074.0 | accessdate = 5 April 2010 | archive-date = 14 ಆಗಸ್ಟ್ 2011 | archive-url = https://web.archive.org/web/20110814012604/http://cr0.co.uk/curry/index.php?topic=3074.0 | url-status = dead }}</ref>
=== ವೆಸ್ಟ್ ಇಂಡೀಸ್ ===
ವೆಸ್ಟ್ ಇಂಡೀಸ್ನಲ್ಲಿ ಮೇಲೋಗರವು ಒಂದು ಅತ್ಯಂತ ಜನಪ್ರಿಯ ಭಕ್ಷ್ಯವಾಗಿದೆ. ಐರೋಪ್ಯ ವಲಯದ ವಿಭಿನ್ನ ಅಧಿಕಾರ-ಶಕ್ತಿಗಳು ಕರೆತಂದ ಭಾರತೀಯರಾದ ಕರಾರಿಗೆ ಒಳಪಟ್ಟಿರುವ ಸೇವಕರು ಈ ಭಕ್ಷ್ಯವನ್ನಷ್ಟೇ ಅಲ್ಲದೇ ತಮ್ಮ ಸಂಸ್ಕೃತಿಯನ್ನು ವೆಸ್ಟ್ ಇಂಡೀಸ್ಗೆ ಪರಿಚಯಿಸಿದರು. ಜಮೈಕ ಮತ್ತು ಟ್ರಿನಿಡಾಡ್ನಲ್ಲಿ, ಮಸಾಲೆಯುಕ್ತವಾದ ಮೇಕೆಯನ್ನು ಪ್ರಧಾನವಾಗಿ ಸಾದರಪಡಿಸಲಾಗುತ್ತದೆ. ಅಗ್ಗದ ಮತ್ತು ಮೇಲ್ಮಟ್ಟದ ಕೆರಿಬಿಯನ್ ಭೋಜನ ಮಂದಿರಗಳೆರಡರಲ್ಲೂ ಮೇಲೋಗರವನ್ನು ಕಾಣಬಹುದಾಗಿದೆ. ಚಿಕನ್ ಅಥವಾ ತರಕಾರಿಗಳಿಂದ ಮೊದಲ್ಗೊಂಡು ಇಂಚಾಕ ಮತ್ತು ಇಚ್ಚಿಪ್ಪು ಮೀನುಗಳಂಥ ಚಿಪ್ಪುಮೀನುಗಳವರೆಗೆ ಭಕ್ಷ್ಯದ ಶ್ರೇಣಿಯನ್ನು ಇಲ್ಲಿ ಕಾಣಬಹುದಾಗಿದೆ. ವೆಸ್ಟ್ ಇಂಡೀಸ್ನಲ್ಲಿ ಕಂಡುಬರುವ ಮೇಲೋಗರಗಳ ಉದಾಹರಣೆಗಳಲ್ಲಿ ಇವು ಸೇರಿವೆ:
* ಜಮೈಕ: ವಿಶೇಷವಾಗಿ ಮಸಾಲೆ ಹಾಕಲ್ಪಟ್ಟ ಚಿಕನ್, ಮೇಕೆ, ಮೀನು ಮತ್ತು ಇಂಚಾಕ
* ಟ್ರಿನಿಡಾಡ್ ಮತ್ತು ಟೊಬ್ಯಾಗೊ: ಅತ್ಯಂತ ಗಮನಾರ್ಹವಾಗಿ ಮಸಾಲೆ ಹಾಕಲ್ಪಟ್ಟ ಚಿಕನ್, ಮೇಕೆ, ಇಂಚಾಕ, ಮತ್ತು ಮೇಲೋಗರ ಆಲೂ
* ಗಯಾನ: ಚಿಕನ್ ಮೇಲೋಗರ, ಮೇಕೆಯ ಮೇಲೋಗರ, ಬಾತುಕೋಳಿಯ ಮೇಲೋಗರ, ಇಂಚಾಕದ ಮೇಲೋಗರ, ದನದ ಮಾಂಸದ ಮೇಲೋಗರ (ಮುಸ್ಲಿಮರು ಇದನ್ನು ಸೇವಿಸುತ್ತಾರೆ), ಆಲೂ ಮೇಲೋಗರ, ಮೀನುಗಳ (ಮೀನಿನ ವಿಭಿನ್ನ ವೈವಿಧ್ಯಗಳು) ಮೇಲೋಗರ, ಇತ್ಯಾದಿ.
== ಮಸಾಲೆ ಪುಡಿ ಅಥವಾ ಮೇಲೋಗರದ ಪುಡಿ ==
{{Main| Curry powder}}
ಮಸಾಲೆ ಪುಡಿ ಅಥವಾ ಮೇಲೋಗರದ ಪುಡಿಯು, ವ್ಯಾಪಕವಾಗಿ ಭಿನ್ನವಾಗಿರುವ ಸಂಯೋಜನೆಯ ಒಂದು ಮಸಾಲೆ ಮಿಶ್ರಣವಾಗಿದ್ದು, ಮನೆಯಲ್ಲಿ ಭಾರತೀಯ ಪಾಕಪದ್ಧತಿಯ ರುಚಿಯ ಸಮೀಪಕ್ಕೆ ಬರುವ ಒಂದು ವಿಧಾನವಾಗಿ ಇದು ''ಬ್ರಿಟಿಷರ ಆಳ್ವಿಕೆ'' ಯ ಅವಧಿಯಲ್ಲಿ ಬ್ರಿಟಿಷರಿಂದ ಅಭಿವೃದ್ಧಿಪಡಿಸಲ್ಪಟ್ಟಿತು. ಮಸಾಲಾ ಎಂಬ ಹೆಸರು ಮಸಾಲೆಗಳಿಗೆ ಉಲ್ಲೇಖಿಸಲ್ಪಡುತ್ತದೆ. ತುಪ್ಪ (ಶೋಧಿಸಿದ ಬೆಣ್ಣೆ), ಬೆಣ್ಣೆ, ತಾಳೆ ಎಣ್ಣೆ ಅಥವಾ ತೆಂಗಿನಕಾಯಿ ಹಾಲಿನೊಂದಿಗಿನ ಮಸಾಲೆಗಳ ಒಂದು ಮಿಶ್ರಣದ ಮೇಲೆ ಆಧರಿತವಾಗಿರುವ ದಪ್ಪನಾದ ಮತ್ತು ಜಲಪಿಷ್ಟದಂಥ ವ್ಯಂಜನಕ್ಕೆ ಈ ಹೆಸರು ನೀಡಲ್ಪಟ್ಟಿದೆ. ಬ್ರಿಟನ್, U.S. ಮತ್ತು ಕೆನಡಾಗಳಲ್ಲಿ ಲಭ್ಯವಿರುವ ಬಹುತೇಕ ವಾಣಿಜ್ಯ ಮಸಾಲೆ ಪುಡಿಗಳು, ಬೀಸಿದ ಅರಿಶಿನದ ಮೇಲೆ ಅತೀವವಾಗಿ ಅವಲಂಬಿಸುತ್ತವೆ. ಇದರಿಂದಾಗಿ ಅತ್ಯಂತ ಹಳದಿ ಬಣ್ಣದ ವ್ಯಂಜನವು ರೂಪುಗೊಳ್ಳುತ್ತದೆ. ಪಾಶ್ಚಾತ್ಯರ ಈ ಹಳದಿ ಮಸಾಲೆ ಪುಡಿಗಳಲ್ಲಿರುವ ಕಡಿಮೆ ಪ್ರಮಾಣದ ಘಟಕವಸ್ತುಗಳಲ್ಲಿ ಧನಿಯಾ, ಜೀರಿಗೆ, [[ಮೆಂತೆ|ಮೆಂತ್ಯ]], ಸಾಸಿವೆ, ಮೆಣಸಿನಕಾಯಿ, ಕರಿಮೆಣಸು ಮತ್ತು ಉಪ್ಪು ಸೇರಿವೆ. ಭಾರತದಲ್ಲಿ ತಯಾರಿಸಲ್ಪಡುವ ಮತ್ತು ಸೇವಿಸಲ್ಪಡುವ ಮಸಾಲೆ ಪುಡಿಗಳು ಮತ್ತು ಜಲಪಿಷ್ಟಗಳು ಅತೀವವಾಗಿ ಭಿನ್ನವಾಗಿರುತ್ತವೆ ಎಂಬ ಅಂಶವನ್ನು ಇಲ್ಲಿ ಪುನರುಚ್ಚರಿಸುವುದು ಅಗತ್ಯ: ಕೆಲವು ಕೆಂಪಗಿದ್ದರೆ, ಕೆಲವು ಹಳದಿ ಬಣ್ಣದಲ್ಲಿ, ಇನ್ನು ಕೆಲವು ಕಂದು ಬಣ್ಣದಲ್ಲಿರುತ್ತವೆ; ಕೆಲವೊಂದು ಮಸಾಲೆಪುಡಿಗಳು ಐದು ಮಸಾಲೆಗಳನ್ನು ಹೊಂದಿದ್ದರೆ, ಮತ್ತೆ ಕೆಲವು 20 ಅಥವಾ ಅದಕ್ಕಿಂತ ಹೆಚ್ಚಿನ ಮಸಾಲೆಗಳನ್ನು ಹೊಂದಿರುತ್ತವೆ. ಈ ಹಿಂದೆ ಉಲ್ಲೇಖಿಸಲ್ಪಟ್ಟ ಮಸಾಲೆಗಳ ಜೊತೆಗೆ, ಭಾರತದಲ್ಲಿನ ವಿಭಿನ್ನ ಮಸಾಲೆ ಪುಡಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಇತರ ಮಸಾಲೆಗಳೆಂದರೆ: ಪಿಮೆಂಟೊ ಮೆಣಸು, ಬಿಳಿ ಮೆಣಸಿನಕಾಳು, ಪುಡಿಮಾಡಿದ/ರುಬ್ಬಿದ ಸಾಸಿವೆ, ಪುಡಿಮಾಡಿದ/ರುಬ್ಬಿದ ಶುಂಠಿ, ದಾಲ್ಚಿನ್ನಿ ಚಕ್ಕೆ, ಹುರಿದ ಜೀರಿಗೆ, ಲವಂಗಗಳು, ಜಾಯಿಕಾಯಿ, ಜಾಯಿಪತ್ರೆ, ಹಸಿರು ಏಲಕ್ಕಿ ಬೀಜಗಳು ಅಥವಾ ಕರಿಯ ಏಲಕ್ಕಿ ಬೀಜಕೋಶಗಳು, ಬೇ ಎಲೆಗಳು ಮತ್ತು ಧನಿಯಾ ಬೀಜಗಳು.
== ಆರೋಗ್ಯದ ಪ್ರಯೋಜನಗಳು ==
ಮೇಲೋಗರದಲ್ಲಿರುವ ಘಟಕವಸ್ತುಗಳು, ದೊಡ್ಡ ಕರುಳಿನ ಕ್ಯಾನ್ಸರ್ ಮತ್ತು ಆಲ್ಜೈಮರ್ನ ಕಾಯಿಲೆಗಳನ್ನು ಒಳಗೊಂಡಂತೆ ನಿರ್ದಿಷ್ಟ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ನೆರವಾಗಬಹುದು ಎಂಬುದನ್ನು ಕೆಲವೊಂದು ಅಧ್ಯಯನಗಳು ತೋರಿಸಿವೆ.<ref>{{Cite news|url=http://news.bbc.co.uk/2/hi/health/597525.stm |title=HEALTH | "Curry is cancer fighter" |publisher=BBC News |date=2000-01-10 |accessdate=2009-06-08 | location=London}}</ref><ref>{{Cite news|url=http://news.bbc.co.uk/2/hi/health/1668932.stm |title=HEALTH | Curry "may slow Alzheimer's" |publisher=BBC News |date=2001-11-21 |accessdate=2009-06-08 | location=London}}</ref>
ಮೇಲೋಗರಗಳಲ್ಲಿ ಕಂಡುಬರುವ ಖಾರದ ಘಟಕವಸ್ತುಗಳಿಗೆ ನೋವಿನ ಗ್ರಾಹಿಗಳು ತೋರಿಸುವ ಪ್ರತಿಕ್ರಿಯೆಯು, ದೇಹದಿಂದ ಎಂಡಾರ್ಫಿನ್ಗಳು ಬಿಡುಗಡೆಯಾಗುವುದಕ್ಕೆ ಕಾರಣವಾಗುತ್ತದೆ ಎಂಬ ಅಂಶವನ್ನು ಹಲವಾರು ಅಧ್ಯಯನಗಳು ಸಮರ್ಥಿಸಿವೆ; ಮೇಲೋಗರವು ಅವಶ್ಯವಾಗಿ ಅತ್ಯಂತ ಶಕ್ತಿಯುತ ಕಾಮೋತ್ತೇಜಕಗಳ ಪೈಕಿ ಒಂದೆನಿಸಿದೆ.<ref>{{cite web|url=http://www.metro.co.uk/weird/808411-chocolate-curry-launched-for-valentine-s-day|title=Chocolate curry launched for Valentine’s Day|publisher=Metro.co.uk|accessdate=2 April 2011|archive-date=2 ಸೆಪ್ಟೆಂಬರ್ 2011|archive-url=https://web.archive.org/web/20110902061148/http://www.metro.co.uk/weird/808411-chocolate-curry-launched-for-valentine-s-day|url-status=dead}}</ref> ವೈವಿಧ್ಯಮಯವಾಗಿರುವ ಮಸಾಲೆಗಳು ಮತ್ತು ಪರಿಮಳಗಳೆಡೆಗೆ ವ್ಯಕ್ತವಾಗುವ ಸಂವೇದನದ ಸಂಕೀರ್ಣ ಪ್ರತಿಕ್ರಿಯೆಯಿಂದಾಗಿ ಒಂದು ಸ್ವಾಭಾವಿಕವಾದ ನಶೆಯ-ನೆಮ್ಮದಿಯು ಸಾಧಿಸಲ್ಪಡುತ್ತದೆ. ಅದು ತರುವಾಯದ ಹಾತೊರೆತಗಳನ್ನು ಉಂಟುಮಾಡುವುದರ ಜೊತೆಗೆ, ಖಾರದ ಮೇಲೋಗರಗಳ ಕಡೆಗೆ ಸಾಗುವ ಒಂದು ಬಯಕೆಯನ್ನು ಅನೇಕವೇಳೆ ಸೃಷ್ಟಿಸುತ್ತದೆ. ಕೆಲವರು ಇದನ್ನು ವ್ಯಸನ ಎಂಬುದಾಗಿ ಉಲ್ಲೇಖಿಸುತ್ತಾರಾದರೂ, ಈ ನಿದರ್ಶನದಲ್ಲಿ "ವ್ಯಸನ" ಎಂಬ ಪದವನ್ನು ಬಳಸುವುದಕ್ಕೆ ಇತರ ಸಂಶೋಧಕರು ವಿರೋಧಿಸುತ್ತಾರೆ.<ref>BBC ನ್ಯೂಸ್. [http://news.bbc.co.uk/1/hi/health/989256.stm ಬ್ರಿಟಿಷ್ "ಅಡಿಕ್ಟೆಡ್ ಟು ಕರಿ"]</ref>
== ಇವನ್ನೂ ಗಮನಿಸಿ ==
* ಅನ್ನ ಮತ್ತು ಮೇಲೋಗರ
* ದಿ ಕರಿ ಕ್ಲಬ್
* ಮೇಲೋಗರದ ಚಿಕನ್
* ಟ್ರಿನಿಡಾಡ್ ಮತ್ತು ಟೊಬ್ಯಾಗೊದ ಪಾಕಪದ್ಧತಿ
* ಸುತ್ತು ರೋಟಿ
* ದಕ್ಷಿಣ ಏಷ್ಯಾದ ಪಾಕಪದ್ಧತಿ
* ಭಾರತೀಯ ಪಾಕಪದ್ಧತಿ
== ಉಲ್ಲೇಖಗಳು ==
{{Reflist|2}}
== ಹೆಚ್ಚಿನ ಓದಿಗಾಗಿ ==
{{cookbook|Curry}}
{{Commons category|Curry}}
* ''ಕರಿ ಕ್ಲಬ್ ಇಂಡಿಯನ್ ರೆಸ್ಟೋರೆಂಟ್ ಕುಕ್ಬುಕ್'', ಪಿಯಾಟ್ಕಸ್, ಲಂಡನ್ — ISBN 0-86188-378-0 & ISBN 0-86188-488-4 (1984ರಿಂದ 2009ರವರೆಗೆ)
* K.T. ಆಚಾರ್ಯ. ''ಎ ಹಿಸ್ಟಾರಿಕಲ್ ಡಿಕ್ಷ್ನರಿ ಆಫ್ ಇಂದಿಯನ್ ಫುಡ್'' ([[ದೆಹಲಿ]]: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್) 1998
* ಪ್ಯಾಟ್ ಚಾಪ್ಮನ್ ''ಇಂಡಿಯ: ಫುಡ್ & ಕುಕಿಂಗ್'', ನ್ಯೂ ಹಾಲೆಂಡ್, ಲಂಡನ್ — ISBN 978-1-84537-619-2 (2007)
* ''ಇಂಡಿಯನ್ ಫುಡ್: ಎ ಹಿಸ್ಟಾರಿಕಲ್ ಕಂಪ್ಯಾನಿಯನ್]''. (ದೆಹಲಿ: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್) 1994
* ''ನ್ಯೂ ಕರಿ ಬೈಬಲ್'', ಜಾನ್ ಬ್ಲೇಕ್ ಪಬ್ಲಿಷರ್ಸ್ ವತಿಯಿಂದ ಮರುಪ್ರಕಟಿಸಲ್ಪಟ್ಟಿತು ISBN 978-1-84358-159-8 (2005)
* ಡೇವಿಡ್ ಬರ್ಟನ್. ''ದಿ ರಾಜ್ ಅಟ್ ಟೇಬಲ್'' ([[ಲಂಡನ್|ಲಂಡನ್]]: ಫೇಬರ್ & ಫೇಬರ್) 1993
* ''ಪ್ಯಾಟ್ ಚಾಪ್ಮನ್’ಸ್ ಕರಿ ಬೈಬಲ್'', ಹಾಡರ್ & ಎಸ್ಟಿ — ISBN 0-340-68037-7 & ISBN 0-340-68037-7 & ISBN 0340 68562 X & ISBN 0-340-68562-X (1997)
* E.M. ಕಾಲಿಂಗ್ಹ್ಯಾಮ್. ''ಕರಿ: ಎ ಬಯಾಗ್ರಫಿ'' (ಲಂಡನ್: ಚಾಟೊ & ವಿಂಡಸ್) 2005
* ಮಧುರ್ ಜಾಫ್ರಿ. ''ಆನ್ ಇನ್ವಿಟೇಷನ್ ಟು ಇಂಡಿಯನ್ ಕುಕಿಂಗ್'' (ಲಂಡನ್: ಪೆಂಗ್ವಿನ್) 1975
* ''ಪೆಟಿಟ್ ಪ್ಲಾಟ್ಸ್ ಕರಿ'', ಹ್ಯಾಚೆಟ್ ಮೊರಬೌಟ್, ಪ್ಯಾರಿಸ್ — ISBN 2-501-03308-6 (2000)
{{Interwikineeded}}
[[ವರ್ಗ:ಮೇಲೋಗರ]]
[[ವರ್ಗ:ಪಾಕಿಸ್ತಾನಿ ಪಾಕಪದ್ಧತಿ]]
[[ವರ್ಗ:ಪಂಜಾಬಿ ಪಾಕಪದ್ದತಿ]]
[[ವರ್ಗ:ಭಾರತೀಯ ಪಾಕಪದ್ಧತಿ]]
[[ವರ್ಗ:ಇಂಡೋನೇಷಿಯಾದ ಪಾಕಪದ್ಧತಿ]]
[[ವರ್ಗ:ಜಪಾನಿನ ಪಾಕಪದ್ಧತಿ]]
[[ವರ್ಗ:ವಿಯೆಟ್ನಾಮಿಯರ ಪಾಕಪದ್ಧತಿ]]
[[ವರ್ಗ:ಬಂಗಾಳಿ ಪಾಕಪದ್ದತಿ]]
[[ವರ್ಗ:ಥಾಯ್ ಪಾಕಪದ್ಧತಿ]]
[[ವರ್ಗ:ಮಲೇಷಿಯಾದ ಪಾಕಪದ್ಧತಿ]]
[[ವರ್ಗ:ಮಲಯದ ಪಾಕಪದ್ಧತಿ]]
[[ವರ್ಗ:ಕರ್ನಾಟಕದ ಪಾಕಪದ್ಧತಿ]]
[[ವರ್ಗ:ತಮಿಳು ಪಾಕಪದ್ಧತಿ]]
[[ವರ್ಗ:ಶ್ರೀಲಂಕಾದ ಪಾಕಪದ್ಧತಿ]]
[[ವರ್ಗ:ಇಂಗ್ಲಿಷ್ ಪಾಕಪದ್ಧತಿ]]
[[ವರ್ಗ:ತಮಿಳು ಪದಗಳು ಮತ್ತು ಪದಗುಚ್ಛಗಳು]]
[[ವರ್ಗ:ಆಹಾರ]]
nv1g7a1q5dwedvax4xpxes7jn6m5hk1
ಮಂತ್ರಾಲಯಂ ಶ್ರೀ ರಾಘವೇಂದ್ರಸ್ವಾಮಿ ಮಠ, ಜೋಗೇಶ್ವರಿ, ಮುಂಬೈ
0
59198
1384601
1370537
2026-08-29T08:20:56Z
~2026-47019-35
101413
Digital of years changed from English numerals to kannada.
1384601
wikitext
text/x-wiki
[[ಚಿತ್ರ:Mutt.jpg|thumb|right|300px|'ಜೋಗೇಶ್ವರಿಯ ರಾಘವೇಂದ್ರಸ್ವಾಮಿ ಮಠ ನಿರ್ಮಾಣವಾದ ಬಳಿಕ ಕಾಣುವ ರೀತಿ']]
ಶ್ರೀ ರಾಘವೇಂದ್ರ ಸ್ವಾಮಿಗಳ (೧೫೯೫–1671 CE), ಬಾಲ್ಯದ ಹೆಸರು ವೆಂಕಣ್ಣಭಟ್ಟರೆಂದು. ಮುಂದೆ ಯತಿಗಳಾಗಿ ಸಿದ್ಧಿಪಡೆದು ಶ್ರೀರಾಘವೆಂದ್ರ ಸ್ವಾಮಿಗಳೆಂದು ಜಗದ್ವಿಖ್ಯಾತರಾದರು. ಅವರು ಸ್ಥಾಪಿಸಿದ ಶ್ರೀಮಠವು, ಆಂಧ್ರಪ್ರದೇಶದ ಮಂತ್ರಾಲಯಂ ರೋಡ್ ರೈಲ್ವೆ ನಿಲ್ದಾಣಕ್ಕೆ ೮ ಕಿ.ಮೀ.ದೂರದಲ್ಲಿದೆ. ಮುಂಬಯಿನ ಉಪನಗರ, ಜೋಗೇಶ್ವರಿಯಲ್ಲಿ ೧೯೭೧ ರಲ್ಲಿ,'ಶ್ರೀ ರಾಘವೇಂದ್ರ ಸ್ವಾಮಿಮಠ'ವನ್ನು ಸ್ಥಾಪಿಸಲಾಯಿತು. ಈಗ ಆ ಮಠವನ್ನು 'ಅಭಿನವ ಮಂತ್ರಾಲಯ' <ref>[http://www.shreevaartha.org/srs-mutt-jogeshwari/abhinava-mantralaya/ Abhinava Mantralaya]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}</ref> ವೆಂಬ ಹೆಸರಿನಲ್ಲಿ ಅಭಿವೃದ್ಧಿಗೊಳಿಸಲು ಸಕಲ ಸಿದ್ಧತೆಗಳೂ ನಡೆಯುತ್ತಿವೆ. ಜೋಗೇಶ್ವರಿ ಮಠವು, ಆಂಧ್ರಪ್ರದೇಶದ ಮಂತ್ರಾಲಯ ಕ್ಷೇತ್ರದಲ್ಲಿರುವ ರಾಘವೇಂದ್ರಸ್ವಾಮಿಗಳ ಮಠದ ಒಂದು ಶಾಖೆಯಾಗಿದೆ.<ref>{{Cite web |url=http://www.boloji.com/index.cfm?md=Content&sd=Articles&ArticleID=10259 |title=The Life and Times of Sri Raghavendra Swamy, Mantralaya by G. Venkatesh |access-date=2014-07-01 |archive-date=2014-07-02 |archive-url=https://web.archive.org/web/20140702034628/http://www.boloji.com/index.cfm?md=Content&sd=Articles&ArticleID=10259 |url-status=dead }}</ref> ಬೃಹದ್ ಯೋಜನೆಯ ಕರಡು ಪ್ರತಿ ಸಿದ್ಧವಾಗಿದ್ದು, ಅದನ್ನು ಕಾರ್ಯಾನ್ವಯಮಾಡಲು ಸದ್ಭಕ್ತರೆಲ್ಲಾ ನಿಷ್ಠೆಯಿಂದ ಮಠದ ಪುನರ್ನಿರ್ಮಾಣ ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ. ಧನಸಂಗ್ರಣೆಯ ಕಾರ್ಯದಲ್ಲಿ ತೊಡಗಿದ್ದಾರೆ.<ref>[http://kannada.oneindia.in/column/gv/2010/0501-n-raghavendra-rao-mysuru.html 'ಆಯಕರ ತಜ್ಞ, ವರಿಷ್ಠ ನ್ಯಾಯಾಲಯದ ನ್ಯಾಯವಾದಿ, ಸಮಾಜಸೇವಕ, ಎನ್.ಆರ್.ರಾವ್ ಮಠಕ್ಕೆ ಬಹುದೊಡ್ಡ ದಾನಿ']{{Dead link|date=ಆಗಸ್ಟ್ 2025 |bot=InternetArchiveBot |fix-attempted=yes }}</ref> ಮಂತ್ರಾಲಯದ ಯತಿವರ್ಯರಾದ ಸುಮತೀಂದ್ರ ತೀರ್ಥ ಸ್ವಾಮಿಜಿ, ಮತ್ತು ಶ್ರಿ. ಸುಶಮೀಂದ್ರತೀರ್ಥ ಸ್ವಾಮಿಜಿಯವರು ಈ ಅಭಿಯಾನಕ್ಕೆ ತಮ್ಮ ಅನುಗ್ರಹವನ್ನು ನೀಡಿ ಹರಸಿದ್ದಾರೆ. ಅಭಿನವ ಮಂತ್ರಾಲಯ ಯೋಜನೆ : ಇದರ ಬಗ್ಗೆ ರಚಿಸಿರುವ ವೆಬ್ ಸೈಟ್ ನಲ್ಲಿ ಸರ್ವವೂ (ಯೋಜನೆಯ ಎಲ್ಲಾ ವಿವರಗಳೂ) ಉಪಲಭ್ದವಿದೆ. [http://www.shreevaartha.org/] {{Webarchive|url=https://web.archive.org/web/20140221084322/http://www.shreevaartha.org/ |date=2014-02-21 }}
[[File:Rayara matha, Jogeshwari, Mumbai.JPG|thumb|right|300px|'೪೫ ವರ್ಷ ಹಳೆಯ ಜೋಗೇಶ್ವರಿಯ ರಾಯರ ಮಠದ ಬೃಂದಾವನ']]
===ಜೋಗೇಶ್ವರಿ ಮಠದ ಜಾಗ===
ಮುಂಬಯಿ ಉಪನಗರ ಜೋಗೇಶ್ವರಿಯಲ್ಲಿರುವ ಶ್ರೀಮಠವಿರುವ ಜಾಗದಲ್ಲಿ ನೆಲೆಸಿದ್ದ, ಶ್ರೀ.ಸಿಂಗ್, ರಾಘವೇಂದ್ರ ಸ್ವಾಮಿಗಳ ಪರಮಭಕ್ತರು. ನಾರಾಯಣನ ಪೂಜೆಯಲ್ಲಿ ಸದಾ ಆಸಕ್ತರು. ಆಗಾಗ ಮಂತ್ರಾಲಯಕ್ಕೆ ಸೇವಾರ್ಥವಾಗಿ ಹೋಗಿಬರುತ್ತಿದ್ದರು. ಒಮ್ಮೆ ೧೯೬೦ ರಲ್ಲಿ ಜಮೀನಿನ ಮಾಲಿಕ ಶ್ರೀ.ಸಿಂಗ್ ಮಂತ್ರಾಲಯಕ್ಕೆ ಭೆಟ್ಟಿನೀಡಲು ಕಾತುರರಾಗಿದ್ದರು. ಸ್ವಪ್ನದಲ್ಲಿ ರಾಘವೇಂದ್ರ ಸ್ವಾಮಿಗಳು ಪ್ರತ್ಯಕ್ಷರಾಗಿ, ಮಂತ್ರಾಲಯಕ್ಕೆ ಬರುವ ಕಷ್ಟ ತೆಗೆದುಕೊಳ್ಳಬೇಡ. ನಿನ್ನ ಮನೆಯಿರುವ ಜಾಗದಲ್ಲೇ ನಾನಿದ್ದೇನೆ ಎಂದು ಹೇಳಿದರಂತೆ.{{Citation needed}} ಇದನ್ನು ಕೇಳಿದ ಸಿಂಗ್, ತಮ್ಮ ಮನೆ ಯ ಹತ್ತಿರವಿದ್ದ ಹೆಚ್ಚುವರಿ ಜಾಗವನ್ನು ಆಶ್ರಮಕ್ಕೆ ಕೊಟ್ಟರು. ನಂತರ 'ಮ್ಹಾಡ' ದವರು ಇದನ್ನು ತಮ್ಮ ವಶಕ್ಕೆ ತೆಗೆದುಕೊಂಡು ಈಗಿನ ದೇವಸ್ಥಾನ ನಿರ್ಮಾಣಕ್ಕೆ 'ಲೀಸ್' ಮೇಲೆ ತೆರೆವುಮಾಡಿಕೊಟ್ಟರು ೧೯೭೧ ರಲ್ಲಿ ಬೃಂದಾವನವನ್ನು ನಿರ್ಮಿಸಿದರು. ೩೩೦ ವರ್ಷದ ಬಳಿಕ, ರಾಯರ ಸಮಕಾಲೀನರಾದ 'ಶ್ರೀ ಅಪ್ಪಣಾ ಚಾರ್ಯರು' ೩೩ ಶ್ಲೋಕಗಳನ್ನು ವಿರಚಿಸಿದ್ದಾರೆ. ಇದನ್ನು ಮುಸಲ್ಮಾನ್ ಭಕ್ತನೊಬ್ಬನಿಂದ ಕನ್ನಡ ಭಾಷೆಯಲ್ಲಿ ಬರೆಸಲ್ಪಟ್ಟ ಶ್ಲೋಕಗಳನ್ನು ರಚಿಸಿದ ಫಲಕವನ್ನು ವೃಂದಾವನದ ಗೋಡೆಯಮೇಲೆ ಸ್ಥಾಪನೆ ಮಾಡಿದ್ದಾರೆ. 'ಪಂ.ಹುಸೇನಿ ಸಾಬ್' ಎನ್ನುವ ಹಿಂದೂಸ್ತಾನಿ ಹಾಡುಗಾರ, ಆಗಾಗ ತಮ್ಮ ಪಕ್ಕವಾದ್ಯದವರೊಂದಿಗೆ ಇಲ್ಲಿಗೆ ಬಂದು ತಮ್ಮ, ಸಂಗೀತ ಕಾರ್ಯಕ್ರಮವನ್ನು ಕೊಡುತ್ತಿದ್ದಾರೆ.೧೬೪೨ ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಶ್ರೀಗಳನ್ನು 'ಕೊಲ್ಹಾಪುರ'ಕ್ಕೆ, ಕರೆಸಿಕೊಂಡಿದ್ದರು.
===ಮಂತ್ರಾಲಯದ ಮಠ===
೧೭ ನೆಯ ಶತಮಾನದ ಯತಿವರ್ಯ, ಮಧ್ವಾಚಾರ್ಯರ ಅನುಯಾಯಿಯಾಗಿ, ಮಧ್ವ ಮತದ ದ್ವೈತ ಸಿದ್ಧಾಂತ ಪ್ರತಿಪಾದಕ, ವೀಣಾವಾದ್ಯ ವಿಶಾರದ, ಶ್ರೀ ರಾಘವೇಂದ್ರ ಸ್ವಾಮಿಗಳು,<ref>{{Cite web |url=http://www.gururaghavendra.in/lifestory.htm |title=Life Story of Guru Raghavendra Swamy {{!}} More Details |access-date=2014-07-02 |archive-date=2015-09-20 |archive-url=https://web.archive.org/web/20150920064136/http://www.gururaghavendra.in/lifestory.htm |url-status=dead }}</ref> ಒಟ್ಟಾರೆ ೪೨ ಗ್ರಂಥಗಳ ಕರ್ತೃ. ಅವರ ಬಾಲ್ಯದ ಹೆಸರು 'ವೆಂಕಟನಾಥ'. ೧೬೨೧ ರಲ್ಲಿ ಸನ್ಯಾಸಾಶ್ರಮ ಸ್ವೀಕರಿಸಿದರು. ರಾಘವೇಂದ್ರಯತಿ, ಸುಧೀಂದ್ರತೀರ್ಥರ ತರುವಾಯ ೧೬೨೩ರಲ್ಲಿ ಶ್ರೀರಾಘವೇಂದ್ರತೀರ್ಥರೆಂಬ ಹೆಸರಿನಲ್ಲಿ ಮಂಚಾಲಿಯಲ್ಲಿ ಮಠ ಸ್ಥಾಪಿಸಿದರು. ಹೈದರಾಬಾದಿನ ನವಾಬ, ಅವರಿಗೆ ಬಳುವಳಿಯಾಗಿ ಕೊಟ್ಟ ಈಗಿನ 'ಮಂತ್ರಾಲಯಂ ಗ್ರಾಮ', ಪ್ರಖ್ಯಾತ ವಾಗಿದೆ. ಇದು, ಮಂತ್ರಾಲಯಂ ರೋಡ್ ರೈಲ್ವೆ ನಿಲ್ದಾಣ, ದಿಂದ ೮ ಕಿ.ಮಿ, 'ಗುಂತಕಲ್-ಬೆಂಗಳೂರು ರೈಲುದಾರಿ'ಯಲ್ಲಿದೆ. 'ಮದ್ರಾಸ್ ಗೆಝೆಟಿಯರ್' ನಲ್ಲಿ ಉಲ್ಲೇಖಿಸಿದಂತೆ, ಮಂಚಾಲಿ ಗ್ರಾಮವನ್ನು ತಮ್ಮ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳಲು, 'ಬ್ರಿಟಿಷ್ ಸರಕಾರದ ರೆವಿನ್ಯೂ ಅಧಿಕಾರಿ, ಮಿ.ಥಾಮಸ್ ಮುನ್ರೋ' ಹವಣಿಸಿ, ಮಂಚಾಲಿ ಗ್ರಾಮವನ್ನು ಸರ್ಕಾರದ ವ್ಯಾಪ್ತಿಗೆ ಸೇರಿಸಿ ಕೊಳ್ಳಲು ಕಾಗದ ಪತ್ರ ಜೋಡಿಸುತ್ತಿದ್ದ. ಸರಕಾರದಿಂದ ಶ್ರೀಮಠಕ್ಕೆ ಬರುತ್ತಿದ್ದ ರಿಯಾಯಿತಿಯನ್ನು ತಪ್ಪಿಸಲು ಮುಂದಾಗಿದ್ದ. ಆತ ಬಂದು ಮಠದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ರಾತ್ರಿ ಅವನ ಕನಸಿನಲ್ಲಿ ರಾಯರು ಪ್ರತ್ಯಕ್ಷವಾಗಿ ಶ್ರೀಮಠಕ್ಕೆ ಮಂಚಾಲಿಗ್ರಾಮವನ್ನು ಒಪ್ಪಿಸ ಬೇಕೆಂದು ಅಪ್ಪಣೆ ಕೊಡಿಸಿದ್ದರಿಂದ, ಅವನ ನಿರ್ಣಯ ಬದಲಾಯಿತು.
==ಶ್ರೀ.ಸುಬುಧೇಂದ್ರ ತೀರ್ಥಸ್ವಾಮಿಗಳ ಬೇಟಿ==
<ref>{{Cite web |url=http://www.shreevaartha.org/sri-subhudendra-thirtharu-peetadipathi-of-mantralayam-visits-jogeshwari-mutt-photos/ |title='ಟೆಂಪಲ್ ಕಾಂಪ್ಲೆಕ್ಸ್ ಆಗಿ ಹೊರಹೊಮ್ಮಲಿದೆ' ಎಂದು 'ಮುಂಬಯಿಯ ಜೋಗೇಶ್ವರಿ ಮಠದ ಅಭಿನವ ಮಂತ್ರಾಲಯ'ಕ್ಕೆ ಭೇಟಿನೀಡಿದ ಶ್ರೀ.ಸುಬುಧೇಂದ್ರ ತೀರ್ಥಸ್ವಾಮಿಗಳು ನುಡಿದರು. |access-date=2016-05-12 |archive-date=2016-04-11 |archive-url=https://web.archive.org/web/20160411034957/http://www.shreevaartha.org/sri-subhudendra-thirtharu-peetadipathi-of-mantralayam-visits-jogeshwari-mutt-photos/ |url-status=dead }}</ref> ಅಭಿನವ ಮಂತ್ರಾಲಯದ ನೂತನ ಯೋಜನೆಯ ಉದ್ಘಾಟನೆಯನ್ನು ಮಾಡಿದ ಸ್ವಾಮಿಗಳು <ref>[http://kannada.oneindia.com/news/2013/05/26/districts-coronation-ceremony-sri-sudhindra-tirtha-srs-mutt-074325.html, ಮಂತ್ರಾಲಯ ರಾಯರ ಮಠ ಹೊಸ ಉತ್ತರಾಧಿಕಾರಿ Sunday, May 26, 2013]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಶ್ರೀ.ಸುಬುಧೇಂದ್ರ ತೀರ್ಥಸ್ವಾಮಿಗಳು, ಹೊಸ ಕಟ್ಟಡದ ಬೆಳವಣಿಗೆಗಳನ್ನು ಅವಲೋಕಿಸಿ ಸೂಕ್ತ ಸಲಹೆಕೊಡುವುದಲ್ಲದೆ, ನೆರವನ್ನೂ ಅನುಗ್ರಹಿಸಿರುತ್ತಾರೆ. <ref>[http://www.karnatakamalla.com/Details.aspx?id=13982&boxid=12561 'ಕಾರ್ನಾಟಕ ಮಲ್ಲ', ೧೬-೦೫-೨೦೧೬, ಪುಟ-೭, "ಅಭಿನವ ಮಂತ್ರಾಲಯ ಮುಂಬಯಿ-ಜೋಗೇಶ್ವರಿಯಲ್ಲಿ ಸಾಕಾರಗೊಳ್ಳುತ್ತಿದೆ". ಲೇಖನ ಸುಪ್ರಸಿದ್ಧ ಅಂಕಣಕಾರ, ಡಾ. ಜಿ.ವಿ.ಕುಲಕರ್ಣಿಯವರಿಂದ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
===ದೇವಾಲಯ ನಿರ್ಮಾಣದಲ್ಲಿ===
* ಆರ್.ಜೆ.ಆಶರ್ ಅಂಡ್ ಕಂ ಮುಂಬಯಿ<ref>[https://www.facebook.com/1209073034/posts/10209648764235104/?pnref=story ಕಾರ್ನಾಟಕ ಮಲ್ಲ ದಿನಪತ್ರಿಕೆ,ಪು.೭, 'ಅಭಿನವ ಮಂತ್ರಾಲಯ' ಮುಂಬಯಿಯ ಜೋಗೇಶ್ವರಿಯಲ್ಲಿ, ಸಾಕಾರಗೊಳ್ಳುತ್ತಿದೆ-೨-'ಜೀವನ ಮತ್ತು ಸಾಹಿತ್ಯ ಅಂಕಣ'. ಡಾ.ಜಿ.ವಿ.ಕುಲಕರ್ಣಿ]</ref>
==ನೂತನ ಅಭಿನವ ಮಂತ್ರಾಲಯದ ಲೋಕಾರ್ಪಣಾ ಮಹೋತ್ಸವ==
೨೦೧೭ ರ ಮಾರ್ಚ್, ೨೦,ಸೋಮವಾರದಂದು ಹಳೆ ಮಠದ ಪರಿಸರದಲ್ಲಿಯೇ ನೂತನ ಮಠವನ್ನು ನಿರ್ಮಿಸಲಾಗಿದ್ದು, ಅದರ ಉದ್ಘಾಟನಾ ಮಹೋತ್ಸವವನ್ನು ಶ್ರೀ.ಸುಬುಧೇಂದ್ರ ತೀರ್ಥರು ನೆರೆವೇರಿಸಿ, ಭಕ್ತಾದಿಗಳನ್ನು ಆಶೀರ್ವದಿಸಿದರು. <ref>[http://epaper.udayavani.com/home.php?edition=Mumbai&date=2017-03-21&pageno=12&pid=UVANI_MUM ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠ,ಜೋಗೇಶ್ವರಿ ಶಾಖೆಯಲ್ಲಿ ಅಭಿನವ ಮಂತ್ರಾಲಯ ಲೋಕಾರ್ಪಣೆ, ಬೃಂದಾವನ ಪುನಃಪ್ರತಿಷ್ಠಾಪನೆ.ಉದಯವಾಣಿ ಪತ್ರಿಕೆ, ೨೧,ಮಾರ್ಚ್,೨೦೧೭,ಮಂಗಳವಾರ]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref> ಮಂತ್ರಾಲಯದ ಮೂಲ ಸಂಸ್ಥಾನದ ಪೀಠಾಧಿಪತಿ ೧೯೭೧ ರಲ್ಲಿ ಶ್ರೀ ಸುಜಯೀಂದ್ರ ತೀರ್ಥರು ಭಕ್ತರನ್ನು ಆಶೀರ್ವದಿಸಿ ಬೃಂದಾವನ ಸ್ಥಾಪಿಸಿದ್ದರು. ಮಂತ್ರಾಕ್ಷತೆಯ ಗಾತ್ರದ ಮೂಲ ವೃತ್ತಿಕೆಯನ್ನು ಬೃಂದಾವನದಲ್ಲಿ ಆಗ ಅಳವಡಿಸಿದ್ದರು. ಮುಂದಿನ ವರ್ಷಗಳಲ್ಲಿ ಶ್ರೀಶುಷ್ಮೀಂದ್ರ ತೀರ್ಥರು,ಹಾಗೂ ಸುಯತೀಂದ್ರ ತೀರ್ಥರು ಆಗಮಿಸಿ ಆಶೀರ್ವಚನ ನೀಡಿದ್ದರು. ಈಗ, ಶ್ರೀಸುಬುಧೇಂದ್ರ ತೀರ್ಥಸ್ವಾಮಿಗಳು, ಆ ಕಾರ್ಯವನ್ನು ಮುಂದುವರೆಸಿ, ನೂತನ ಕಟ್ಟಡವನ್ನು ಭಕ್ತಾದಿಗಳು ಹಾಗೂ ಶ್ರದ್ಧಾಳುಗಳ ನೆರವಿನಿಂದ ಸಂಪೂರ್ಣಗೊಳಿಸಿದ್ದಾರೆ. ವೆಂಕಟೇಶ ವಿಗ್ರಹ, ಮುಖ್ಯಪ್ರಾಣದೇವರು,ರುದ್ರದೇವರು,ಮಂಚಾಲಮ್ಮ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಶಂಖತೀರ್ಥ,ತುಪ್ಪ-ಗಂಧ-ಫಲಾದಿಗಳ ಅರ್ಪಣೆಗಳೊಂದಿಗೆ ಪೂಜಾ ವಿಧಿ-ವಿಧಾನಗಳನ್ನು ಸಂಪನ್ನಗೊಳಿಸಿದ್ದಾರೆ.
===ದೇವಸ್ಥಾನ ಶಿಲ್ಪಿಗಳು===
ಶ್ರೀ ದಕ್ಷಿಣಾ ಮೂರ್ತಿ, ಶ್ರೀ ಗಣೇಶ್ ಮೂರ್ತಿ,
ವಿವೇಕ್ ವೈದಿಕ್ ಆರ್ಕಿಟೆಕ್ಟ್ಸ್, ಚೆನ್ನೈ
==ಉಲ್ಲೇಖಗಳು==
<References />
==ಬಾಹ್ಯ ಸಂಪರ್ಕಗಳು==
# [http://www.karnatakamalla.com/Details.aspx?id=15516&boxid=13185 ಕರ್ನಾಟಕ ಮಲ್ಲ, ೨೯,ಆಗಸ್ಟ್, ೨೦೧೬,ಜೀವನ ಮತ್ತು ಸಾಹಿತ್ಯ, ಡಾ.ಜಿ.ವಿ.ಕುಲಕರ್ಣಿ, ರಾಘವೇಂದ್ರಸ್ವಾಮಿಗಳ ೩೪೫ ನೇ ಆರಾಧನಾ ಮಹೋತ್ಸವ. ಪುಟ.೭]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}
# [VID-20170323-WA0004.mp4 ಯೂಟ್ಯೂಬ್, Mumbai news]
# [https://srsmatha.org/latestnews.php ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯ - ಸುದ್ದಿ]
{{Interwikineeded}}
[[ವರ್ಗ:ಮಠಾಧಿಪತಿಗಳು]]
qzx7i0s8w27418hd0m5za3c5fr87hhz
ದಿವ್ಯಾವತಾರ ಶ್ರೀನಿತ್ಯನಂದ
0
73232
1384589
1350585
2026-08-28T19:54:35Z
~2026-47060-43
101407
corrected birth year
1384589
wikitext
text/x-wiki
{{Infobox Hindu leader
|name=ಭಗವಾನ್ ನಿತ್ಯಾನಂದ
|image= Youngnityananda.jpg
|caption= ಭಗವಾನ್ ನಿತ್ಯಾನಂದ
|image-size =150px
|birth_date=೧೮೭೯
|birth_place=[[ತುನೇರಿ]], ಕೊಯೊಲ್ಯಾಂಡಿ, [[ಕೇರಳ]], [[ಭಾರತ]]
|birth_name=
|death_date=೧೯೬೧ ಆಗಸ್ಟ್, ೮
|death_place=[[ಗನೇಶ್ಪುರಿ]], [[ಮಹಾರಾಷ್ಟ್ರ]], [[ಭಾರತ]]
|guru=
|philosophy=
|honors=
|quote=
|footnotes=
}}
ಭಗವಾನ್ ನಿತ್ಯಾನಂದ (ನವೆಂಬರ್/ಡಿಸೆಂಬರ್ 1879 - ೧೯೬೧ ಆಗಸ್ಟ್ ೮) ಒಬ್ಬ ಭಾರತದ ಗುರುವಾಗಿದ್ದರು. ಅವನ ಬೋಧನೆಗಳನ್ನು "ಚಿದಕಾಶ್ ಗೀತಾ"ದಲ್ಲಿ ಪ್ರಕಟಗೊಂಡಿತ್ತು.<ref>{{Cite web |url=http://www.bhagawannityananda.org/chidakasha.html |title=ಆರ್ಕೈವ್ ನಕಲು |access-date=2015-11-19 |archive-date=2015-10-29 |archive-url=https://web.archive.org/web/20151029034215/http://www.bhagawannityananda.org/chidakasha.html |url-status=dead }}</ref> ನಿತ್ಯಾನಂದ ಕೊಯೊಲ್ಯಾಂಡಿ, ಕೇರಳ, ದಕ್ಷಿಣ ಭಾರತದಲ್ಲಿ ಜನಿಸಿದರು.<ref>http://www.siddhayoga.org/bhagavan-nityananda</ref> bb
ದಿವ್ಯಾವತಾರ ಶ್ರೀನಿತ್ಯನಂದ ಲೋಕ ಕಲ್ಯಾಣಕ್ಕಾಗಿ, ಸಜ್ಜನರ ಉದ್ಧೇಶದಿಂದ ಭಗವಂತ ಬೂಮಿಯಲ್ಲಿ ಅವತರಿಸುತ್ತಿರುತ್ತಾನೆ. ಆತನ ಅವತಾರವು ಅತಿಮಾನುಷವಾಗಿ ಹೋರ ಹೊಮ್ಮಿದಾಗ ಸಜ್ಜನರು ಭಗವಂತನನ್ನು ಗುರುತಿಸುವರು. ಶ್ರೀನಿತ್ಯನಂದ ಸ್ವಾಮಿಯವರು ಕಲಿಯುಗಕ್ಕೆ ಮಾರ್ಗದರ್ಶನ ನೀಡುವ ಅವತಾರವು ಅವತರಿಸಿದರು. ಅವರು ಸ್ವಾನಂದಾಮೃತದ ತನ್ಮಯದ ಸ್ಥಿತಿಯನ್ನು ಅಜ್ಞಾನಿಗಳು ಭ್ರಾಂತರಾಗಿ ಕಂಡರು. ನಿತ್ಯನಂದ ಜನ್ಮದಾತರ ವಿವರ ಸಿಗುವುದಿಲ್ಲ.
==ಬಾಲ್ಯ==
ಉನ್ನಿಅಮ್ಮ ಮತ್ತು ಚತುನಾಯರ್ ಎನ್ನುವ ಬಡಕೂಲಿ ಕಾರ್ಮಕರಿಗೆ ಕ್ಯೊಲಾಂಡಿ ಅಯ್ಯಪ್ಪ ದೇಗುಲದ ಬಳಿ ಶ್ರೀನಿತ್ಯನಂದರು ದೊರಕಿದರು. ಬಳಿಕ ಕೋಜೆಕೋಡ್ ಜಿಲ್ಲೆಯ ಪ್ರಸಿದ್ಧ ವಕಿಲರಾದ ಈಶ್ವರ ಅಯ್ಯರ್ರೆನ್ನುವ ಬ್ರಾಹ್ಮಣರ ಮನೆಯಲ್ಲಿ "ರಾಮನ್" ಎಂಬ ಹೆಸರಿನ್ನಲ್ಲಿ ವಕೀಲರ ಸ್ವಂತ ಮಗುವಿನಂತೆ ಬೆಳೆದರು. ಇದು ಇಪ್ಪತ್ತನೆ ಶತಮಾನದ ಆದಿಯಲ್ಲಿ(೧೯೦೫-೧೯೦೬) ಭಾರತಾಂಬೆಯು ಕಂಡ ದರ್ಶನ. ಬಾಲ್ಯ ಲೀಲೆಗಳೆಂಬ ಅಮಾನುಷ ವ್ಯಕ್ತಿತ್ವದ ಪರಿಚೆಯವು ಅಯ್ಯರರಿಗೆ ಆಗುತ್ತಿದ್ದಂತೆ ರಾಮನನ್ನು ಅತೀವ ಭಕ್ತಿಯಿಂದ ನೋಡಿಕೊಂಡರು. ಈಶ್ವರ ಅಯ್ಯರರು ಸೂರ್ಯದೇವರ ಉಪಾಸಕರು. ಅವರು ಸೂರ್ಯನನ್ನು ಸುರ್ಯನಾರಾಯಣ ರೂಪದಿಂದ ನೋಡಬೇಕೆಂಬ ಆಸೆಯನ್ನು ಬಾಲಕ ರಾಮನಲ್ಲಿ ಕೇಳುವರು. ಆಗ ಅಸಾದೃಶ ಆನಂದದೊಂದಿಗೆ ಸೂರ್ಯನಾರಾಯಣ ದಿವ್ಯದರ್ಶವನ್ನು ಅಯ್ಯರರು ಪಡೆದರು. ಇದ್ದನ್ನು ಕರುಣಿಸಿದ "ರಾಮನ್"ನ ಹೆಸರು "ನಿತ್ಯಾನಂದ"ನಾಗಿರು ಎಂದು ಹೇಳಿದರು.ಅವಧೂತ ನಿತ್ಯಾನಂದರಿಗೆ ಸೃಷ್ಟಿಯ ಎಲ್ಲದರ ಸಂರಕ್ಷಣೆಯ ಹೊರೆ ಇತ್ತು. ಹಾವು, ಹುಲಿ, ಸಿಂಹಗಳಲ್ಲದೇ ಹಲವು ಪಂಚಭೂತಾತ್ಮಕ ಜಿವಾತ್ಮಗಳನ್ನು ತನ್ನದೇ ವಿಶೇಷ ಕರುಣೆಯಲ್ಲಿ ಉದ್ಧರಿಸುತ್ತಿದ್ದರು. ನಿತ್ಯಾನಂದರಿಗೆ ಗೋವುಗಳೆಂದರೆ ಅತೀವ ಮಮತೆ. ಬಾಲಕನಾಗಿದ್ದಾಗ ಗೋವುಗಳನ್ನು ದೂರದ ಬೇಟ್ಟಗಳಿಗೆ ಕರೆದುಕೊಂಡು ಹೋಗಿ ಹುಲ್ಲು ಮೇಯಿಸುತ್ತಿದ್ದರು.ತಮ್ಮ ಅವಧೂತ ಸ್ಥಿತಿಯ ಸಂಚಾರದಲ್ಲಿ ಅವರ ಅಹಾರ ಕೇವಲ "ಗಂಜಲ". ಹುಬ್ಬಳಿಯಲ್ಲಿ ಮುಂಜಾನೆಯ ಸಮಯದಲ್ಲಿ ರಸ್ತೆಗಳಲ್ಲಿ ಗೋವುಗಳ ಗಂಜಲು ಭೂಮಿಗೆ ಸ್ಪರ್ಶಿಸುವ ಮೋದಲೇ ಎರಡು ಕೈಗಳಿಂದ ಹಿಡಿದು ಸ್ವೀಕರಿಸುತ್ತಿದ್ದರು.<ref>http://www.nityanandatradition.org/nityananda/about.html</ref>
==ಶ್ರೀನಿತ್ಯನಂದರ ಪವಾಡಗಳು==
[https://kn.wikipedia.org/s/xng ಪಾತಂಜಲಿಯ] ಯೋಗ ಶಾಸ್ತ್ರದಲ್ಲಿವಿವರಿಸಿದ ಎಲ್ಲಾ ಯೋಗಿಗಳ ಲಕ್ಷಣವನ್ನು ನಿತ್ಯಾನಂದರು ತೋರುತ್ತಿದ್ದರು. ಅಷ್ಟ ಸಿದ್ಧಿಗಳನ್ನು ಕರಗತ ಮಾಡಿಕೊಂಡು ಹಲವು ಪವಾಡಗಳನ್ನು ತೋರಿಸಿದ್ದಲ್ಲದೆ. ಅವುಗಳನ್ನು ಸಾಕ್ಷಿಯಾಗಿ ಮುಂದಿನ ಜನಾಂಗಕ್ಕೆ ನೀಡಿರುವರು. ವೇಗವಾಗಿ ಬರುತ್ತಿರುವ ರೈಲನ್ನು ನಿಲ್ಲಿಸಿರುವುದು, ಒಮ್ಮೆಗೆ ಹಲವು ಕಡೆಗಳಲ್ಲಿ ಕಾಣಿಸುಕೋಳ್ಳುವುದು, ಗಂಗೆಯ ಮೇಲೆ ನಡೆದುಕೊಂಡು ಹೋಗುವುದು, ಕ್ಷಣ ಮಾತ್ರದಲ್ಲಿ ಎತ್ತರವಾದ ವೃಕ್ಷಗಳ ಗೆಲ್ಲುಗಳಲ್ಲಿ ಸೂಕ್ಷ್ಮ ಶರೀರದಿಂದ ಮಲಗುವುದು. ವೃಕ್ಷದ ಮೇಲೆ ನಿಂತು ಅದರ ಎಲೆಗಳನ್ನು ಕೆಲಗೆ ನಿಂತು ಪ್ರಾರ್ಥಿಸಿದ ಭಕ್ತರಿಗೆ ಕೊಟ್ಟು ಅವರ ಇಷ್ಟಾರ್ಥಗಳನ್ನು ಈಡೇರಿಸುವುದು. ದೃಷ್ಟಿ ಕಳದುಕೊಂಡ ಭಕ್ತನಿಗೆ ತನ್ನ ಹಸ್ತದ ಸ್ಪರ್ಶದಿಂದ ಕಣ್ಣುಗಳನ್ನು ಅನುಗ್ರಹಿಸಿರುವುದು. ಮೃತಗೊಂಡ ವ್ಯಕ್ತಿಯನ್ನು ಜೀವಂತನನ್ನಾಗಿ ಮಾಡಿರುವುದು. ಲಂಗೋಟಿಯಿಂದ ಒಸ ರುಪಾಯಿ ನೋಟುಗಳನ್ನು, ವಸ್ತುಗಳನ್ನು ತೆಗೆದುಕೋಡುವುದು. ಬರಿಗೈಯಿಂದ ಮಕ್ಕಳಿಗೆ ಸಿಹಿತಿಂಡಿಗಳನ್ನು ಹಂಚುತ್ತಿದ್ದರು. ಇತ್ಯಾದಿ ಲೆಕ್ಕವಿಲ್ಲದಷ್ಟು ಪವಾಡಗಳು ಮಾಡಿ ತೋರಿಸಿರುವರು. ಗಣೇಶಪುರಿಯಲ್ಲಿ ೩೬೦ ಬಿಸಿನೀರ ಕುಂಡಗಳಿವೆ. ಈ ಬಿಸಿನೀರ ಕುಂಡಗಳಿಗೆ ಹಿಂದೆ ವಶಿಷ್ಟರು ನಡೆಸಿದ ಮಹಾಯಜ್ಞದಲ್ಲಿ ಯೋಗಿಗಳು ಸ್ನಾನ ಮಾಡಿದ ತೀರ್ಥವೆಂಬ ಮಹಿಮೆ ಇದೆ. ಇವುಗಲ್ಲಿನ ಸ್ನಾನವು ಪಾಪ ಹಾರಕ, ರೋಗ ನಿವಾರಕ. ಹಲವು ಪವಾಡಗಳನ್ನು ನಿತ್ಯಾನಂದರು ಈ ಬಿಸಿನೀರ ಕುಂಡಗಳ ಬಳಿ ಭಕ್ತರಿಗೆ ತೋರಿಸಿರುವರು. ಗಣೇಶಪುರಿಯಲ್ಲಿ ಬಿಸಿನೀರ ಕುಂಡ ಸ್ನಾನ ಪಾಪನಾಶಕವಾದರೆ ಕಾಂಞಂಗಾಡಿನ ಗುರುಮನದಲ್ಲಿ ಪಾಪನಾಶಿನಿ ಗಂಗೆಯು ಪಾಪ, ರೋಗಗಳ ನಾಶಾಕ, ಇವೆರಡು ಶ್ರೀ ಸದ್ಗುರುವಿನ ಕರುಣೆಯ ನಿರಂತರ ಧಾರೆಯಾಗಿ ಭಕ್ತರನ್ನು ಉದ್ಧರಿಸುತ್ತಲಿವೆ.
==ವಿದೇಶದ ಪ್ರವಾಸಗಳು==
ನಿತ್ಯನಂದರು ನಿರ್ಲ್ಲಿಪ್ತ ಪರಿವ್ರಾಜಕರಾಗಿ ಜೀವನ ಸಂಚಾರದಲ್ಲಿ ದೇಶವಿಡಿ ತಿರುಗಿದ್ದರು. [https://kn.wikipedia.org/s/oa ಶ್ರೀಲಂಕ] ಮತ್ತು ಬರ್ಮಾದೇಶಗಳಿಗೂ ಹೋಗಿದ್ದರು. ಬರ್ಮದಲ್ಲಿ ಸಾರ್ವಜನಿಕರಿಗೆ ಶುಚಿತ್ವದ ಕಡೆ ಗಮನವಿರಿಸಿಕೊಳ್ಳಲು ಕಲಿಸುತ್ತಿದ್ದರು. ಅವರೆ ಸ್ವತಃ ರಸ್ತೆ, ಶೌಚಾಲಯವನ್ನು ಸ್ವಚ್ಛಗೋಳಿಸಿ ತೋರಿಸುತ್ತಿದ್ದರು. ಶ್ರೀಲಂಕಾದ ಜನರು ನಿಸ್ವಾರ್ಥ ಸೇವೆಯಲಿ ತೊಡಗಿಸಿಕೊಂಡು ನಿತ್ಯಾನಂದರ ದೈವಿಕ ತೇಜಸ್ಸನ್ನು ಗುರುತಿಸತೋಡಗಿದರು.
==ಬ್ರಿಟಿಷರ ಆಡಲಿತದಲ್ಲಿ==
ಆ ಕಾಳದ ಪ್ರಸಿದ್ಧ ವ್ಯಕ್ತಿಗಳಾದ, [https://kn.wikipedia.org/s/kp ಮಹಾತ್ಮಾ ಗಾಂಧಿ],ಚೆನ್ಮಯಾನಂದ, ಬ್ರಿಟಿಷ್ ಗವರ್ನರ್ಗಳು, ತ್ರಿಮಠಾಧಿಪತಿಗಳು, ಶೈವ, ವೈಷ್ಣವ, ಶರಣರಲ್ಲದೆ, ನಾಥಪಂಥದವರು, ದಾಸವರೇಣ್ಯರು ಮಹಿಮರಾದ ಬ್ರಹ್ಮ ಶ್ರೀ ನಾರಾಯಣ ಗುರುಗಳು, ಪುಟ್ಟಪರ್ತಿಯ ಶ್ರೀ ಸತ್ಯಸಾಯಿಬಾಬಾ, ಶ್ರೀ ಶಿವಾನಂದ ಅವಧೂತರು, ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಹೀಗೆ ದೇಶ-ವಿದೇಶದಲ್ಲಿ ಎಲ್ಲರೂ ಶ್ರೀ ನಿತ್ಯಾನಂದರ ಸಂದರ್ಶನದಿಂದ ಪ್ರಭಾವಿತರಾಗಿದ್ದರು.
ನಿತ್ಯನಂದರು ನಿರ್ಭಯರಾಗಿ ಬ್ರಿಟಿಷರ ಅಧಿಕಾರವಧಿಯಲ್ಲಿ ಮಾಡುತ್ತಿರುವ ಕೆಲಸವನ್ನು ನೋಡಿ ಅದರ ವಿರುದ್ಧ ಸರಕಾರಕ್ಕೆ ದೂರು ಕೋಡಲಾಗಿತ್ತು. ಆಗಿನ ಬ್ರಿಟಿಷ್ ಜಿಲ್ಲಾಧಿಕಾರಿ ಗೋನ್ ಎನ್ನುವವರು ಬಂದು ಪರಿಶೀಲಿಸಿ ನಿತ್ಯನಂದರ ಮಹಿಮೆಗೆ ಆಕರ್ಷಿತವಾಗಿ ಇವರೊಬ್ಬ ಮಹಾತ್ಮ ಯಾರು ತೊಂದರೆ ಕೊಡಬೇಡಿ ಎಂದು ಹೇಳಿ ಕಾಂಞಂಗಾಡಿನ ಜಾಗವನ್ನು ಆಶ್ರಮಕ್ಕೆ ನೀಡಿದರು ಆತನು ಪುನಃ ಹಿಂತಿರುಗುವಾಗ ಆಶ್ರಮಕ್ಕೆ ನಿತ್ಯಾನಂದರು ಮಾಡಿರುವ ರಸ್ತೆಗೆ ಗೋನ್ ರಸ್ತೆ ಎನ್ನುವ ಫಲಕವು ವಿಸ್ಮಯ ರೀತಿಯಲ್ಲಿ ಕಾಣಿಸಿಕೊಂಡಿತ್ತು.
==ಆಶ್ರಮದ ಸೇವೆಗಳು==
ಶ್ರೀ ನಿತ್ಯಾನಂದರು [https://en.wikipedia.org/wiki/Bhagawan_Nityananda ಮುಂಬಯಿಯ ಗಣೇಶಪುರಿಯಲ್ಲಿ] ಸುಮಾರು ೨೫ ವರ್ಷವಿದ್ದು ಅಲ್ಲಿನ ಆಶ್ರಮ ಮತ್ತು ವಜ್ರೇಶ್ವರಿಯನ್ನು ಸಮೃದ್ಧಗೊಳಿಸಿದರು. ಶಾಲೆ, ಆಸ್ಪತ್ರೆ, ಮಂದಿರ, ರಸ್ತೆಗಳನ್ನು ಅಬಿವೃದ್ಧಿಗೊಳಿಸಿದರು. ದೇಶ ವಿದೇಶಗಳಿಂದ ಬರುವ ಭಕ್ತರ ಅನುಕೂಲಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಸಿದ್ದರು. ಇವರಿಗೆ ಮಕ್ಕಳೆಂದರೆ ಬಲುಪ್ರೀತಿ. ಮಕ್ಕಳಿಗಾಗಿ ನಿತ್ಯ ಅನ್ನಸಂತರ್ಪಣೆಯ "ಬಾಲಭೋಜನ"ದ ವ್ಯವಸ್ಥೆಯನ್ನು ಆಶ್ರಮದಲ್ಲಿ ಮಾಡಿರುತ್ತಾರೆ. ಬಡವರಿಗೆ ಅನ್ನಸಂತರ್ಪಣೆ ಮಾಡಲು ಭಕ್ತರನ್ನು ಪ್ರೋತ್ಸಾಹಿಸುತ್ತಿದ್ದರು. ತಮ್ಮ ಸಂಚಾರದಲ್ಲಿ ಹಲವು ಕ್ಷೇತ್ರಗಳಲ್ಲಿ ಈಗಲೂ ಸಾಧುಮಠವು ನಿತ್ಯಾನಂದರು ಪ್ರಾರಂಭಿಸಿದ ಅನ್ನದಾನವನ್ನು ಮುಂದುವರಿಸುತ್ತಿದ್ದಾರೆ. ಶ್ರೀ ನಿತ್ಯಾನಂದರಂತೆ ಸಂತರಾಗಿ ಆಶ್ರಮಗಳನ್ನು ನಡೆಸಿಕೊಂಡು ಬಂದು ಈಗಲೂ ಹಲವರಿಗೆ ಮಾರ್ಗದರ್ಶಕರಾಗಿ ನಿಂತಿದ್ದಾರೆ.
==ಬೋಧನೆ==
ಶ್ರೀ ನಿತ್ಯಾನಂದರು ಮಂಗಳೂರಿನಲ್ಲಿ ಸಂಚರಿಸುತ್ತಿದ್ದಾಗ ಅಲ್ಲಿನ ಭಕ್ತೆ, ಶ್ರೀ ತುಳಸೀ ಅಮ್ಮನವರಿಗೆ ಅನುಗ್ರಹಿಸಿದ ತತ್ವಗಳ "ಚಿದಾಕಾಶ ಗೀತಾ" ಎಂದು ಪ್ರಖ್ಯಾತವಾಗಿದೆ.<ref>http://bhagawannityananda.org/</ref> ಇದರಲ್ಲಿ ಜನರ ಆಡುಭಾಷೆಯಲ್ಲಿ ಅರ್ಥವಾಗುವಂತೆ ಆಧ್ಯಾತ್ಯದ ವಿಚಾರಗಳನ್ನು ಹೇಳಲಾಗಿದೆ. ಮುಖ್ಯವಾಗಿ ವ್ಯಕ್ತಿ ತನ್ನ ಬಾಹ್ಯಜಗತ್ತಿನ ಆಸಕ್ತಿಗಳಿಗಿಂತಲೂ ಆಂತರಿಕವಾದ ಆತ್ಮಜ್ಞಾನದ ಕಡೆ ಒಲವು ಅರಿಸಬೇಕೆಂದು ಹೇಳುತ್ತಿದ್ದರು. "ಶುದ್ಧಭಾವನೆಯನ್ನು" ವೃದ್ಧಿಸಿಕೋಳ್ಳಲು ನಾಮನ್ಮರಣೆಗೆ ಒತ್ತುಕೊಟ್ಟಿರುವರು. ಸಾಧಕರಿಗೆ ಪ್ರಾಣಾಯಾಮದ ಓಂಕಾರದ ಧ್ಯಾನದಿಂದ ಆತ್ಮಜಾಗೃತಿಗೋಳಿಸುವ ರಾಜಯೋಗವನ್ನು ಬೋದಿಸಿರುವರು.
ಯಾರಿಂದಲೂ ಎನನ್ನೂ ಪಡೆದುಕೊಳ್ಳದೇ ತನ್ನಿಂದಲೇ ಎಲ್ಲರಿಗೂ ಕೊಡುತ್ತಿರುವ ಅಮೋಘ ಮಹಾತ್ಮ ನಿತ್ಯಾನಂದರ ಚರಿತೆಯಲ್ಲಿದೆ. ಅತಿ ಸರಳರಾಗಿ ಲಂಗೋಟಿಯಲ್ಲಿ ಇದ್ದು ಪಂಭೂತಾತ್ಮಕವಾದ ಜಗತ್ತಿನಿಂದ ಅತೀತವಾದ ಆನಂದ ಪ್ರಜ್ಞೆಯಲ್ಲಿ ನೆಲನಿಂತ ಮಹಾನ್ ಸದ್ಗುರು ನಿತ್ಯಾನಂದರ ಆರಾಧನಾ ಸ್ವರ್ಣ ಮಹೋತ್ಸವದಲ್ಲಿ ಬಾಗಿಗಳಾಗಿ ಧನ್ಯರಾಗೋಣ.
ಅಂತಹ ಅವಧೂತ ನಿತ್ಯಾನಂದರು '''೮ ಆಗಸ್ಟ್ ೧೯೬೧''' ರಲ್ಲಿ ಸಮಾದಿ ಸ್ವೀಕರಿಸಿದರು.
'''ಓಂ ನಮೊ: ಭಗವತೇ ನಿತ್ಯಾನಂದಾಯ'''
==ಹೊರಗಿನ ಸಂಪರ್ಕಗಳು==
*http://www.namonithyananda.org/moreessays.html {{Webarchive|url=https://web.archive.org/web/20150911215229/http://www.namonithyananda.org/moreessays.html |date=2015-09-11 }}
*http://www.siddhayoga.org/bhagavan-nityananda
*http://www.bhagawannityananda.org/thelineage.html {{Webarchive|url=https://web.archive.org/web/20151119063411/http://www.bhagawannityananda.org/thelineage.html |date=2015-11-19 }}
==ವೀಡಿಯೊ ಕೊಂಡಿಗಳು==
*[https://www.youtube.com/watch?feature=player_embedded&v=xNO_4AHsIts ಬಾಬಾ ನಿತ್ಯಾನಂದ ಜನ್ಮದ ಕಥೆ]
*[https://www.youtube.com/watch?feature=player_embedded&v=MzK8sHn8hl ನಿತ್ಯಾನಂದ ಕಳೆದ ಕೋನೆಯ ಗುರುಪೂರ್ಣಿಮಾ ಮತ್ತು ಮಹಾಸಮಾದಿ]
==ಉಲ್ಲೇಖಗಳು==
{{ಉಲ್ಲೇಖಗಳು}}
Hatengdi, M.U. (1990). ನಿತ್ಯಾನಂದ: ಡಿವೈನ್ ಇರುವಿಕೆ. ರುದ್ರ ಪ್ರೆಸ್ [೧]
ದಿವ್ಯಾವತಾರ ಶ್ರೀನಿತ್ಯನಂದ-ಪ್ರಾಯೋಜನ: ಶ್ರೀ ನಿತ್ಯಾನಂದ ಸ್ವಾಮೀ ಚರಣದಾಸ
1. Jump up↑ http://www.questebook.org/1zyocx.pdf {{Webarchive|url=https://web.archive.org/web/20160305050625/http://www.questebook.org/1zyocx.pdf |date=2016-03-05 }}
{{Interwikineeded}}
[[ವರ್ಗ:ಆಧ್ಯಾತ್ಮಿಕ ವ್ಯಕ್ತಿಗಳು]]
1mclehnyjyf8we7oumq4e9fxvr21uzr
ಸುನೇತ್ರ ಗುಪ್ತ
0
78937
1384595
1367456
2026-08-28T23:39:55Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384595
wikitext
text/x-wiki
{{Infobox scientist
| name = ಸುನೇತ್ರ ಗುಪ್ತ
| image = <!--(filename only)-->
| image_size =
| alt =
| caption =
| birth_date = {{Birth year and age|1965}}
| birth_place = [[ಕಲ್ಕತ್ತಾ]]
| death_date = <!-- {{Death date and age|YYYY|MM|DD|YYYY|MM|DD}} (death date then birth date) -->
| death_place =
| resting_place =
| resting_place_coordinates = <!-- {{Coord|LAT|LONG|type:landmark|display=inline,title}} -->
| residence =
| citizenship =
| nationality =
| fields =
| workplaces = ಆಕ್ಸ್ಫರ್ಡ್ ವಿಶ್ವವಿದ್ಯಾಲಯ<br>ಲಂಡನ್ ವಿಶ್ವವಿದ್ಯಾಲಯದ<br>ಪ್ರಿನ್ಸ್ಟನ್ ವಿಶ್ವವಿದ್ಯಾಲಯ
| alma_mater =
| thesis_title = ಹೆಟ್ರೋಜೆನೆಟಿ ಅಂಡ್ ದಿ ಟ್ರಾಂಸ್ಮಿಶಂನ್ ಡೈನಾಮಿಕ್ಸ್ ಆಫ್ ಇನ್ಫೆಕ್ಷಿಸ್ ಡಿಸೀಸಸ್
| thesis_url = http://ethos.bl.uk/OrderDetails.do?uin=uk.bl.ethos.309107
| thesis_year = ೧೯೯೨
| doctoral_advisor =
| academic_advisors =
| doctoral_students =
| notable_students =
| known_for =
| author_abbrev_bot =
| author_abbrev_zoo =
| influences =
| influenced =
| awards = ರೋಸಲಿಂಡ್ ಫ್ರ್ಯಾಂಕ್ಲಿನ್ ಪ್ರಶಸ್ತಿ<br>ಸಾಹಿತ್ಯ ಅಕಾಡೆಮಿ ಪ್ರಶಸ್ತಿ
| signature = <!--(filename only)-->
| signature_alt =
| website = {{URL|http://www.sunetragupta.com}}<br>{{URL|http://www.zoo.ox.ac.uk/people/view/gupta_s.htm}}
| footnotes =
| spouse =
| module = {{Listen |embed= yes |filename= Prof_Sunetra_Gupta_BBC_Radio4_The_Life_Scientific_25_Sept_2012_b01mw2d6.flac |title= ಸುನೇತ್ರ ಗುಪ್ತರವರ ದ್ವನಿ |type= speech |description= ಬಿಬಿಸಿ ಕಾರ್ಯಕ್ರಮ, ೨೫ ಸೆಪ್ಟೆಂಬರ್ ೨೦೧೨.
}}
}}
'''ಸುನೇತ್ರ ಗುಪ್ತ''' ೧೫ ಮಾರ್ಚ್ ೧೯೬೫ ರಂದು [[ಕಲ್ಕತ್ತಾ]]ದಲ್ಲಿ ಜನಿಸಿದರು. ಇವರು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸೈದ್ಧಾಂತಿಕ ರೋಗದ ಪ್ರೊಫೆಸರಾಗಿದ್ದಾರೆ.<ref>{{cite web|url=https://literature.britishcouncil.org/writer/sunetra-gupta|title=ಸುನೇತ್ರ ಗುಪ್ತ}}</ref> [[ಮಲೇರಿಯಾ]], [[ಎಚ್.ಐ.ವಿ.]], ಇನ್ಫ್ಲುಯೆನ್ಸ ಮತ್ತು ಇತರ ಸಾಂಕ್ರಾಮಿಕ ರೋಗ ಹರಡಬಲ್ಲ ಎಜೆಂಟ್ಗಳ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿದ್ದಾರೆ. ಇವರು ತಮ್ಮ ಮೊದಲ ಕೃತಿಯನ್ನು ಬೆಂಗಾಳದಲ್ಲಿ ರಚಿಸಿದ್ದಾರೆ. ಪ್ರಾಧ್ಯಾಪಕ '''ಆಡ್ರಿಯನ್ ವಿ.ಎಸ್ ಹಿಲ್''' ವಿವಾಹವಾಗಿದ್ದಾರೆ.<ref>{{cite web|url=http://www.magd.ox.ac.uk/member-of-staff/adrian-hill/|title=ಆಡ್ರಿಯನ್ ವಿ.ಎಸ್ ಹಿಲ್|access-date=2016-03-12|archive-date=2016-04-17|archive-url=https://web.archive.org/web/20160417030230/http://www.magd.ox.ac.uk/member-of-staff/adrian-hill/|url-status=dead}}</ref>
==ಬಾಲ್ಯ==
ಸುನೇತ್ರ ಗುಪ್ತರವರ ಬಾಲ್ಯ ಮತ್ತು ಅವರ ಕುಟುಂಬದ ವ್ಯವಹಾರಗಳು ಇವರ ಭವಿಷ್ಯದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಅವರ ಬಾಲ್ಯದ ದಿನಗಳನ್ನು [[ಇಥಿಯೋಪಿಯ]], ಜಾಂಬಿಯ, [[ಇಂಗ್ಲೆಂಡ್]] ದೇಶಗಳಲ್ಲಿ ಕಳೆದರು.<ref>{{cite web|url=http://www.sunetragupta.com/biography.asp|title=ಸುನೇತ್ರ ಗುಪ್ತರ ಬಾಲ್ಯ ಜೀವನ|access-date=2016-03-12|archive-date=2013-12-08|archive-url=https://web.archive.org/web/20131208101646/http://sunetragupta.com/biography.asp|url-status=dead}}</ref> ಇವರಿಗೆ ೧೧ ವರ್ಷವಿದ್ದಾಗ ಕುಟುಂಬದವರು ಮತ್ತೆ [[ಕಲ್ಕತ್ತಾ]]ಗೆ ಮರಳಿದರು. ಇಲ್ಲಿ ಈ ನಗರವು ಅವಳಿಗೆ ಬರೆಯುವುದಕ್ಕೆ ಪ್ರೇರೆಪಿಸಿತು.
ತಂದೆ ದ್ರುಬ ಗುಪ್ತ (೧೯೩೪-೨೦೦೪) ಇವರ ಜೀವನದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದರು. ಸುನೇತ್ರಳ ಪ್ರತಿಯೊಂದು ಚಿಂತನೆಗಳ ಮೇಲೆ ಆಳವಾದ ಪ್ರಭಾವವನ್ನು ಹೊಂದಿದ್ದರು. [[ಕಲ್ಕತ್ತ ವಿಶ್ವವಿದ್ಯಾಲಯ]]ದಲ್ಲಿ [[ಆಫ್ರಿಕಾ]]ದ ಇತಿಹಾಸವನ್ನು ಉಪನ್ಯಾಸ ಮಾಡುತ್ತಿದ್ದರು. ಅಲ್ಲದೆ ಬರೆಯುವುದು ಮತ್ತು ಸಿನಿಮಾ ಬಗ್ಗೆ ಭಾಷಣ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದರು. ಅವರು ಎಷ್ಟೋ ವಿಷಯಗಳ ಬಗ್ಗೆ ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ಪ್ರಬಂಧಗಳನ್ನು ಬರೆಯುತ್ತಿದ್ದರು. ವಿಮರ್ಶೆಯಲ್ಲಿ - ಹೇಗೆ ಕಲೆ ಸ್ವೀಕರಿಸಬೇಕು ಎಂಬುದರಲ್ಲಿ ಸುನೇತ್ರಳಿಗೆ ಶಿಕ್ಷಣ ನೀಡಿದರು. ಇವರಿಗೆ ಸುನೇತ್ರ ವಿಜ್ಞಾನಿಯಾಗುವುದರಲ್ಲಿ ಸ್ವಲ್ಪವೂ ಆಸಕ್ತಿಯಿರಲಿಲ್ಲ.
==ಶಿಕ್ಷಣ==
*ಜೀವಶಾಸ್ತ್ರದ ತರಬೇತಿ
*ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಸ್ನಾತಕ ಪದವಿ <ref>{{cite web|url=http://press.princeton.edu/europe/content/pages/advisory_board.html|title=ಪ್ರಿನ್ಸ್ಟನ್ ವಿಶ್ವವಿದ್ಯಾಲಯದ|access-date=2016-03-12|archive-date=2016-04-04|archive-url=https://web.archive.org/web/20160404171739/http://press.princeton.edu/europe/content/pages/advisory_board.html|url-status=dead}}</ref>
*ಲಂಡನ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ.<ref>{{cite web|url=http://ethos.bl.uk/OrderDetails.do?uin=uk.bl.ethos.309107|title=ಹೆಟ್ರೋಜೆನೆಟಿ ಅಂಡ್ ದಿ ಟ್ರಾಂಸ್ಮಿಶಂನ್ ಡೈನಾಮಿಕ್ಸ್ ಆಫ್ ಇನ್ಫೆಕ್ಷಿಸ್ ಡಿಸೀಸಸ್|access-date=2016-03-12|archive-date=2016-01-29|archive-url=https://web.archive.org/web/20160129195054/http://ethos.bl.uk/OrderDetails.do?uin=uk.bl.ethos.309107|url-status=dead}}</ref>
==ವಿಜ್ಞಾನದಲ್ಲಿ ಸಾಧನೆಗಳು==
ಗುಪ್ತಾ ಪ್ರಸ್ತುತ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿಶಾಸ್ತ್ರದ ಇಲಾಖೆಯಲ್ಲಿ ಸೈದ್ಧಾಂತಿಕ ರೋಗದ ಪ್ರೊಫೆಸರಾಗಿ ಕೆಲಸ ಮಾಡುತಿದ್ದಾರೆ. ಪ್ರಿನ್ಸ್ಟನ್ ಯೂನಿವರ್ಸಿಟಿ ಪ್ರೆಸ್ನ ಯುರೋಪಿಯನ್ ಮಂಡಳಿಯಲ್ಲಿ ಸಲಹಾಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.<ref>{{cite web|url=http://press.princeton.edu/about_pup/european_advisory_board.html|title=ಪ್ರಿನ್ಸ್ಟನ್ ಯೂನಿವರ್ಸಿಟಿ ಪ್ರೆಸ್|access-date=2016-03-12|archive-date=2011-06-08|archive-url=https://web.archive.org/web/20110608160559/http://press.princeton.edu/about_pup/european_advisory_board.html|url-status=dead}}</ref>
ಝೂಲಾಜಿಕಲ್ ಸೊಸೈಟಿ ಆಫ್ ಲಂಡನ್ನಿಂದ ವೈಜ್ಞಾನಿಕ ಪದಕ ನೀಡಲಾಗಿದೆ ಮತ್ತು ವೈಜ್ಞಾನಿಕ [[ಸಂಶೋಧನೆ]]ಗೆ ರಾಯಲ್ ಸೊಸೈಟಿ ರೋಸಲಿಂಡ್ ಫ್ರ್ಯಾಂಕ್ಲಿನ್ ಪ್ರಶಸ್ತಿ ದೊರಕಿದೆ. ಅವರ ಕಾದಂಬರಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ದಕ್ಷಿಣ ಆರ್ಟ್ಸ್ ಸಾಹಿತ್ಯ ಪ್ರಶಸ್ತಿ, ಕ್ರಾಸ್ವರ್ಡ್ ಪ್ರಶಸ್ತಿಗೆ ಮತ್ತು ಆರೆಂಜ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಜುಲೈ ೨೦೧೩ರಲ್ಲಿ ನಡೆದ ರಾಯಲ್ ಸೊಸೈಟಿಯ ಬೇಸಿಗೆ ವಿಜ್ಞಾನ ಪ್ರದರ್ಶನದ ಸಂದರ್ಭದಲ್ಲಿ ಪ್ರಮುಖ ಮಹಿಳಾ ವಿಜ್ಞಾನಿಗಳಾದ [[ಮೇರಿ ಕ್ಯೂರಿ|ಮೇಡಮ್ ಕ್ಯೂರಿ]] ಮುಂತಾದವರ ಭಾವಚಿತ್ರಗಳ ಜೊತೆಗೆ ಗುಪ್ತರವರ ಭಾವಚಿತ್ರವು ಪ್ರದರ್ಶನಗೊಂಡಿತ್ತು.<ref>{{cite web|url=http://timesofindia.indiatimes.com/nri/nri-achievers/Indian-woman-scientists-portrait-to-be-exhibited-in-Britain/articleshow/21216983.cms?referral=PM|title=ಭಾರತೀಯ ಮಹಿಳಾ ವಿಜ್ಞಾನಿಗಳ ಭಾವಚಿತ್ರ ಬ್ರಿಟನ್ನಲ್ಲಿ ಪ್ರದರ್ಶನಕ್ಕೆ}}</ref>
==ಬರಹಗಾರರಾಗಿ ಸಾಧನೆ==
ಗುಪ್ತಾ ತನ್ನ ಮೊದಲ ಕೃತಿಗಯನ್ನು [[ಬಂಗಾಳಿ ಭಾಷೆ|ಬಂಗಾಳಿಯಲ್ಲಿ]] ಬರೆದಿದ್ದಾರೆ. ಅನುವಾದಕರಾಗಿ [[ರವೀಂದ್ರನಾಥ ಠಾಗೋರ್]] ಕಾವ್ಯಗಳನ್ನು ಅನುವಾದಿಸಿದ್ದಾರೆ. ಇವರು [[ಆಂಗ್ಲ|ಇಂಗ್ಲೀಷ್]] ಭಾಷೆಯಲ್ಲಿ ಹಲವಾರು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅಕ್ಟೋಬರ್ ೨೦೧೨ರಲ್ಲಿ ಇವರ ೫ನೇ ಕಾದಂಬರಿಯಾದ '''ಸೋ ಗುಡ್ ಇನ್ ಬ್ಲ್ಯಾಕ್''' ಡಿಎಸ್ಸಿ ಪ್ರಶಸ್ತಿ [[ದಕ್ಷಿಣ ಏಷ್ಯಾ]] ಸಾಹಿತ್ಯಕ್ಕೆ ಆಯ್ಕೆಯಾಗಿತ್ತು.
===ಕಾದಂಬರಿಗಳು===
*ಮೆಮೊರೀಸ್ ಆಫ್ ರೇನ್, ಪೆಂಗ್ವಿನ್ ಬುಕ್ಸ್ ಇಂಡಿಯ, ನವ ದೆಹಲಿ (೧೯೯೨)<ref>{{cite web|url=http://www.sunetragupta.com/novels.asp|title=ಸುನೇತ್ರ ಗುಪ್ತರ ಕಾದಂಬರಿಗಳು|access-date=2016-03-12|archive-date=2016-04-22|archive-url=https://web.archive.org/web/20160422090502/http://www.sunetragupta.com/novels.asp|url-status=dead}}</ref>
*ದಿ ಗ್ಲ್ಯಾಸ್ಬ್ಲೊವರ್ಸ್ ಬ್ರೆಥ್ (೧೯೯೩)
*ಮೂನ್ಲೈಟ್ ಇನ್ ಮರ್ಜಿಪಾನ್(೧೯೯೫)
*ಎ ಸಿನ್ ಆಫ್ ಕಲ್ಲರ್(೧೯೯೯)
*ಸೋ ಗುಡ್ ಇನ್ ಬ್ಲ್ಯಾಕ್(೨೦೦೯)
===ಸಣ್ಣ ಕಥೆಗಳು===
*ಸ್ವೀಟ್ ಲವ್
===ಪ್ರಬಂಧಗಳು===
*ದಿ ವಿಕ್ಟಿಮ್ ಆಫ್ ಟ್ರೂತ್<ref>{{cite web|url=http://www.sunetragupta.com/essays.asp|title=ಸುನೇತ್ರ ಗುಪ್ತ ಬರೆದಿರುವ ಪ್ರಬಂಧಗಳು|access-date=2016-03-12|archive-date=2016-04-23|archive-url=https://web.archive.org/web/20160423191109/http://www.sunetragupta.com/essays.asp|url-status=dead}}</ref>
*ಕಲ್ಕತ್ತ
*ದಿ ರಿಲೇಶನ್ ಬಿಟ್ವೀನ್ ಲ್ಯಾಂಗ್ವೇಜ್ ಅಂಡ್ ಥಾಟ್
*ಇಯರ್ ಟೂ ಆರ್ ಸೆಮೆಟೆರೀಸ್, ಫೇಮ್ ಆಂಡ್ ಸ್ನೋ
*ಆವಾಯ್ಡಿಂಗ್ ಅಮ್ಬಿಗ್ವಿಟಿ: ಮ್ಯಥೆಮ್ಯಾಟಿಕ್ಸ್ ಅಂದ್ ದಿ ಇಲ್ಲೂಶನ್ ಆಫ್ ಸರ್ಟೆನಿಟಿ
==ಪ್ರಶಸ್ತಿಗಳು==
*ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೯೭)<ref>{{cite web|url=http://sahitya-akademi.gov.in/sahitya-akademi/awards/akademi%20samman_suchi.jsp#ENGLISH|title=ಆಂಗ್ಲಾ ಭಾಷೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ|access-date=2016-03-12|archive-date=2016-03-04|archive-url=https://web.archive.org/web/20160304084937/http://sahitya-akademi.gov.in/sahitya-akademi/awards/akademi%20samman_suchi.jsp#ENGLISH|url-status=dead}}</ref>
* ಕ್ರಾಸ್ವರ್ಡ್ ಪ್ರಶಸ್ತಿ(೧೯೯೯)
*ದಕ್ಷಿಣ ಏಷ್ಯಾ ಸಾಹಿತ್ಯ ಪ್ರಶಸ್ತಿ ಆಯ್ಕೆ(೨೦೦೦)
*ರೋಸಲಿಂಡ್ ಫ್ರ್ಯಾಂಕ್ಲಿನ್ ಪ್ರಶಸ್ತಿ(೨೦೦೯)<ref>{{cite web|url=https://docs.google.com/spreadsheets/d/1dsunM9ukGLgaW3HdG9cvJ_QKd7pWjGI0qi_fCb1ROD4/pubhtml?gid=1516032557&single=true|title=ರೋಸಲಿಂಡ್ ಫ್ರ್ಯಾಂಕ್ಲಿನ್ ಪ್ರಶಸ್ತಿ ವಿಜೇತರ ಪಟ್ಟಿ}}</ref>
*ಆರೆಂಜ್ ಪ್ರಶಸ್ತಿಗೆ ಆಯ್ಕೆ(೨೦೦೦)
==ಉಲ್ಲೇಖಗಳು==
<references/>
{{Interwikineeded}}
[[ವರ್ಗ:ವಿಜ್ಞಾನಿಗಳು]]
[[ವರ್ಗ:ಲೇಖಕಿಯರು]]
[[ವರ್ಗ:೧೯೬೫ ಜನನ]]
[[ವರ್ಗ:ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೫-೧೬]]
[[ವರ್ಗ:ವಿಕಿಕ್ಲಬ್ ಕ್ರೈಸ್ಟ್ ಯೂನಿವರ್ಸಿಟಿ ರಚಿಸಿದ ಲೇಖನಗಳು]]
3fw9kuvoi4if5fiymvxousi33m1nv97
ರಾಣಿ ಕಿ ವಾವ್
0
78979
1384573
1361483
2026-08-28T14:45:09Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384573
wikitext
text/x-wiki
{{Infobox World Heritage Site
| WHS = Rani-ki-vav (the Queen's Stepwell) at Patan, Gujarat
| image = Rani ki vav 02.jpg
| caption = Rani-ki-Vav
| Type = ಸಾಂಸ್ಕೃತಿಕl
| Criteria = (i)(iv)
| ID = 922
| Region = [[List of World Heritage Sites in Asia and Australasia|Asia-Pacific]]
| Year = 2014
| Session = 38th
| Link = http://whc.unesco.org/en/list/922
<!--| Architecture = Maru-Gurjara architecture-->
| coordinates = {{coord|23|51|32|N|72|6|6|E|region:IN-GJ_type:landmark|format=dms|display=inline,title}}
| locmapin = India
| map_caption = Location in [[Patan, Gujarat|Patan]], [[Gujarat]], India
}}
[[File:Rani Ki Vav, Above View.JPG|thumb|upright|Rani Ki Vav, view from the top]]
'''ರಾಣಿ ಕಿ ವಾವ್''' ಭಾರತದ [[ಗುಜರಾತ್]] ನ ಪಟಾನ್ ಪಟ್ಟಣದಲ್ಲಿರುವ ಒಂದು ಸಂಕೀರ್ಣ ನಿರ್ಮಿಸಿದ ಮೆಟ್ಟಿಲುಬಾವಿಯ ಆಗಿದೆ. ಇದು [[ಸರಸ್ವತಿ ನದಿ]] ದಡದ ಮೇಲೆ ಇದೆ. ರಾಣಿ ಕಿ ವಾವ್ ಒಂದು ೧೧ ನೇ ಶತಮಾನದ ರಾಜನಿಗೆ ನೆನಪಿನ ಸ್ಮಾರಕವಾಗಿ ನಿರ್ಮಿಸಲಾಯಿತು. ೨೨ [[ಯುನೆಸ್ಕೋ ವಿಶ್ವ ಪರಂಪರೆಯ ತಾಣ]]ಗಳ ಪಟ್ಟಿಯಲ್ಲಿ ಜೂನ್ ೨೦೧೪ ಸೇರಿಸಲಾಯಿತು ಮೂರನೇ ನಿರ್ಮಿಸಲಾಗಿದೆ ಎಂದು ಮೆಟ್ಟಿಲುಬಾವಿಯ, ಒಂದು ನೆಲದಡಿಯ ಜಲ ಸಂಪನ್ಮೂಲ ಮತ್ತು ಶೇಖರಣಾ ವ್ಯವಸ್ಥೆ. ರಾಣಿ ಕಿ ವಾವ್ ತಲೆಕೆಳಗಾದ ದೇವಸ್ಥಾನ ಮತ್ತು ಮೆಟ್ಟಿಲುಗಳ ಏಳು ಹಂತದಲ್ಲಿ ಸಂಕೀರ್ಣ ಮಾರು-ಗುರ್ಜರಾ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಯಿತು ೫೦೦ ತತ್ವ ಶಿಲ್ಪಗಳು ಹೊಂದಿರುತ್ತದೆ. ಪ್ರಖ್ಯಾತ ತೆಲುಗು ಸ್ಟಾರ್ ಮಹೇಶ್ ಬಾಬು ಚಿತ್ರ Dookudu ಒಂದು ದೊಡ್ಡಪ್ರಮಾಣದ ಪ್ರಚಂಡ ಈ ಸ್ಥಳ ಚಿತ್ರೀಕರಿಸಿದಾರೆ.
==ಇತಿಹಾಸ==
ರಾಣಿ ಕಿ ವಾವ್, ಅಥವಾ ರ್ಯಾನ್-ಕಿ ವಾವ್ (ಕ್ವೀನ್ಸ್ ವೆಲ್) ಸೋಲಂಕಿ ಸಾಮ್ರಾಜ್ಯದ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಗಿತ್ತು.
ಸಾಮಾನ್ಯವಾಗಿ ಅದು ತನ್ನ ಒಂಟಿಯಾದ ರಾಣಿ ಉದಯಮತಿ ಮೂಲಕ ಭೀಮದೇವನಿಂದ ನಾನು (೧೦೬೩ ಕ್ರಿ.ಶ. ೧೦೨೨), ಮುಲರಾಜ ಮಗನಾದ ಅನ್ಣಾರ ಪಠಾಣ್ ಬಗ್ಗೆ ೧೦೫೦ ಕ್ರಿ.ಶ. ಯ ಸೋಲಂಕಿ ಸಾಮ್ರಾಜ್ಯದ ಸಂಸ್ಥಾಪಕ ನೆನಪಿಗಾಗಿ ನಿರ್ಮಿಸಲಾಯಿತು ಮತ್ತು ಬಹುಶಃ ಉದಯಮತಿ ಮತ್ತು ಕರಂದೆವ್ ಮುಗಿಸಿದ ಊಹಿಸಲಾಗಿದೆ ಅವನ ಸಾವಿನ ನಂತರ. ಸ್ಮಾರಕ ನಿರ್ಮಿಸಲು ಯದಯಮತಿ ಉಲ್ಲೇಖವು ೧೩೦೨ ಕ್ರಿ.ಶ. ರಲ್ಲಿ ಜೈನ ಸನ್ಯಾಸಿ ಮೆರುಂಗ ಸೂರಿ ಸಂಯೋಜಿಸಿದ ಪ್ರಬಂಧ ಚಿಂತಾಮಣಿ ಆಗಿದೆ.
ಮೆಟ್ಟಿಲುಬಾವಿಯ ನಂತರ ಹತ್ತಿರದ ಸರಸ್ವತಿ ನದಿ ಪ್ರವಾಹಕ್ಕೆ ಮತ್ತು [[೧೯೮೦]] ರವರೆಗೆ ಮೇಲೆ ಹೂಳು ತುಂಬಿಕೊಂಡಂತೆ ಮಾಡಲಾಯಿತು. ಇದು ಭಾರತದ ಪುರಾತತ್ವ ಇಲಾಖೆ ಉತ್ಖನನ ಮಾಡಿದಾಗ, ಕೆತ್ತನೆಗಳು ಮೂಲರೂಪ ಸ್ಥಿತಿಯಲ್ಲಿ ಕಂಡುಬಂದಿಲ್ಲ
==ವಾಸ್ತುಶಿಲ್ಪ==
[[File:Rani ki Vav Vishnu.jpg|thumb|Vishnu sculpture inside Rani ki Vav]]
[[File:Rani ki vav 08.jpg|thumb|Carved pillars inside Rani ki Vav]]
ಸುಮಾರು ೬೪ ಮಿ ದೀರ್ಘ ಈ ಭವ್ಯವಾದ ಪೂರ್ವ ದಿಕ್ಕಿನ ಹಂತದ ಕ್ರಮಗಳು, ೨೦ಮಿ ವಿಶಾಲ ಮತ್ತು ೨೭ ಮಿ ಆಳವಾದ. ಮಂಟಪಗಳು ಕಂಬಗಳ ನಿಯಮಿತ ಮೆಟ್ಟಿಲುಗಳ ಕಾರಿಡಾರ್ ವಿಭಾಗದ ಒಂದು ಅನನ್ಯ ಲಕ್ಷಣವಾಗಿದೆ. ಇದು ದೊಡ್ಡ ಒಂದು ಬಗೆಯ ವ್ಯವಸ್ಥೆಗಳಲ್ಲಿ ಅತ್ಯಂತ ರುಚಿಕರವಾದ ರಚನೆಗಳು ಆಗಿತ್ತು. ಇದು ಹೂಳು ತುಂಬಿಕೊಂಡಂತೆ ಆಯಿತು ಮತ್ತು ಅದರ ಹೆಚ್ಚು ಗೋಚರಿಸುವುದಿಲ್ಲ ಹಾಗೂ ವೃತ್ತಾಕಾರದ ಭಾಗದಲ್ಲಿ ಕೆತ್ತನೆಯ ಫಲಕಗಳು ಕೆಲವು ಸಾಲುಗಳನ್ನು ಹೊರತುಪಡಿಸಿ, ಈಗ. ಅದರ ಅವಶೇಷಗಳು ನಡುವೆ ಒಂದು ಕಂಬ ಇನ್ನೂ ವಿನ್ಯಾಸ ಈ ಕಾಲದ ಒಂದು ಅತ್ಯುತ್ತಮ ಉದಾಹರಣೆ ನಿಂತಿದೆ. ಗೋಡೆಯ ಇಟ್ಟಿಗೆಯ ಹಬ್ಬಿದ್ದ ಮತ್ತು ಕಲ್ಲಿನ ಎದುರಿಸಿದರು ಕಾಣಿಸಿಕೊಳ್ಳುವ ಮಾತ್ರ ಪಶ್ಚಿಮ ಹಾಗೂ ಒಂದು ಭಾಗ ಇದು ಚಾಲ್ತಿಯಲ್ಲಿದೆ. ಚೆನ್ನಾಗಿ ಶಾಫ್ಟ್ ವಿವಿಧ ಗ್ಯಾಲರಿಗಳಲ್ಲಿ ಸರಿಯಾದ ಬೆಂಬಲ ಈ ಗೋಡೆಯ ಯೋಜನೆಯ ಜೋಡಿಯಾಗಿ ಲಂಬ ಆವರಣ, ಗೆ. ಸೇರಿಸುವ ಶ್ರೇಣಿಗಳಾಗಿ ವ್ಯವಸ್ಥೆ ಇದೆ ಮತ್ತು ಸಮೃದ್ಧವಾಗಿ ಕೆತ್ತಲಾಗಿದೆ. ಈ ವಾವ್ ಸೂಕ್ಷ್ಮ ಮತ್ತು ಸೊಗಸಾದ ಕೆತ್ತನೆ ರೀತಿಯ ಅತ್ಯುತ್ತಮ ಮಾದರಿಗಳು ಒಂದಾಗಿದೆ. ತನ್ನ ಹೆಸರನ್ನು ಯೋಗ್ಯ, ರಾಣಿ-ಕಿ-ವಾವ್ ಈಗ ಭಾರತದ ಹೆಜ್ಜೆ ಬಾವಿಗಳು ನಡುವೆ ರಾಣಿ ಎಂದು ಪರಿಗಣಿಸಲಾಗಿದೆ.
ಚೆನ್ನಾಗಿ ಹಂತದ ಕೊನೆಯ ಹಂತದ ಕೆಳಗೆ ಒಂದು ಸಣ್ಣ ಗೇಟ್, ಸಿಧ್ಪುರ್ ಪಟ್ಟಣದ ಪಠಾಣ್ ಬಳಿ ಕಾರಣವಾಗುತ್ತದೆ ೩೦ ಕಿಲೋಮೀಟರ್ ಸುರಂಗ, ಪ್ರಸ್ತುತ ಕಲ್ಲುಗಳು ಮತ್ತು ಮಣ್ಣು ನಿರ್ಬಂಧಿಸಲಾಗಿದೆ) ಜೊತೆ ಸಹ ಇದೆ. ಇದು ಸೋಲಿನ ಕಾಲದಲ್ಲಿ ಚೆನ್ನಾಗಿ ಹಂತದ ನಿರ್ಮಿಸಿದ ರಾಜ, ಒಂದು ಪಾರು ಗೇಟ್ವೇ ಬಳಸಲಾಗುತ್ತಿತ್ತು.
==ಬಾಹ್ಯ ಸಂಪರ್ಕಗಳು==
* [http://jatinchhabra.com/rani-ki-vav-stepwell/ Rani Ki Vav – A picturesque stepwell] {{Webarchive|url=https://web.archive.org/web/20170226124255/http://jatinchhabra.com/rani-ki-vav-stepwell/ |date=2017-02-26 }}
* [http://www.ranikivav.org/ranikivav/what-ranikivav.html Rani Ki Vav – Photos and information] {{Webarchive|url=https://web.archive.org/web/20160809144558/http://www.ranikivav.org/ranikivav/what-ranikivav.html |date=2016-08-09 }}
* [http://www.panoramio.com/photo/82662854 Rani Ki Vav – Detail]
* [http://www.indiasinvitation.com/stepwells_of_gujarat/ Stepwells in Gujarat – Photos and information]
* [http://www.cyark.org/projects/rani-ki-vav 3D Model]
* [https://www.youtube.com/watch?v=XX0V2Y1Ydiw] Rani Ki Vav - Amazing Fusion
{{Commons category|Rani ki vav}}
{{Unreferenced}}
{{Interwikineeded}}
[[ವರ್ಗ:ವಿಶ್ವ ಪರಂಪರೆಯ ತಾಣಗಳು]]
[[ವರ್ಗ:ವಾಸ್ತು ಶಿಲ್ಪ]]
[[ವರ್ಗ:ಗುಜರಾತ್]]
[[ವರ್ಗ:ಭಾರತದ ಪ್ರವಾಸಿ ತಾಣಗಳು]]
ayot28mmbutwedlq29xi9acqrmsdqx7
ಜಗನ್ನಾಥ ದೇವಾಲಯ
0
82945
1384608
1346986
2026-08-29T10:15:29Z
Ajay S Naidu
101416
1384608
wikitext
text/x-wiki
[[File:PURI JAGANATHA TEMPLE, PURI, ORISSA, INDIA, ASIA.jpg|thumb|ಪುರಿ ಜಗನ್ನಾಥ ಟೆಂಪಲ್, ಪುರಿ, ಒಡಿಶಾ, ಇಂಡಿಯಾ, ಏಷ್ಯಾ]]
[[ಪುರಿ]]ಯ '''ಶ್ರೀ ಜಗನ್ನಾಥ ದೇವಾಲಯವು''' ಭಾರತದ ಪೂರ್ವ ಕರಾವಳಿಯ [[ಒಡಿಶಾ]] ರಾಜ್ಯದ ಪುರಿಯಲ್ಲಿ [[ವಿಷ್ಣು]]ವಿನ ಒಂದು ರೂಪವಾದ ಜಗನ್ನಾಥನಿಗೆ ಸಮರ್ಪಿತವಾದ ಪ್ರಮುಖ ಹಿಂದೂ [[ದೇವಾಲಯ]]ವಾಗಿದೆ. ಪ್ರಸ್ತುತ ದೇವಾಲಯವನ್ನು 10 ನೇ ಶತಮಾನದಿಂದ ಹಿಂದಿನ ದೇವಾಲಯದ ಸ್ಥಳದಲ್ಲಿ ಪುನರ್ನಿರ್ಮಿಸಲಾಯಿತು ಮತ್ತು ಪೂರ್ವ ಗಂಗಾ ರಾಜವಂಶದ ಮೊದಲನೆಯ ರಾಜ ಅನಂತವರ್ಮನ್ ಚೋಡಗಂಗ ದೇವನಿಂದ ಪ್ರಾರಂಭಿಸಲಾಯಿತು.<ref>[Cesarone, Bernard (2012). "Bernard Cesarone: Pata-chitras of Odisha". asianart.com. Retrieved 2 July 2012. This temple was built in approximately 1135-1150 by Codaganga, a king of the Eastern Ganga dynasty]</ref>
*ಪುರಿ [[ದೇವಾಲಯ]]ವು ವಾರ್ಷಿಕ ರಥಯಾತ್ರೆ ಅಥವಾ ರಥ ಉತ್ಸವಕ್ಕೆ ಹೆಸರುವಾಸಿಯಾಗಿದೆ, ಇದರಲ್ಲಿ ಮೂರು ಪ್ರಮುಖ ದೇವತೆಗಳನ್ನು ಬೃಹತ್ ಮತ್ತು ವಿಸ್ತಾರವಾಗಿ ಅಲಂಕರಿಸಿದ ದೇವಾಲಯದ ರಥಗಳ ಮೇಲೆ ಎಳೆಯಲಾಗುತ್ತದೆ. ಇವು "ಜಗ್ಗರ್ನಾಟ್" ಎಂಬ ಇಂಗ್ಲಿಷ್ ಪದಕ್ಕೆ ತಮ್ಮ ಹೆಸರನ್ನು ನೀಡಿವೆ. ಹೆಚ್ಚಿನ ಹಿಂದೂ ದೇವಾಲಯಗಳಲ್ಲಿ ಕಂಡುಬರುವ ಕಲ್ಲು ಮತ್ತು ಲೋಹದ ಪ್ರತಿಮೆಗಳಿಗಿಂತ ಭಿನ್ನವಾಗಿ, ಜಗನ್ನಾಥನ ಮೂರ್ತಿಯು ಮರದಿಂದ ಮಾಡಲ್ಪಟ್ಟಿದೆ ಮತ್ತು ಪ್ರತಿ ಹನ್ನೆರಡು ಅಥವಾ ಹತ್ತೊಂಬತ್ತು ವರ್ಷಗಳಿಗೊಮ್ಮೆ ಶಾಸ್ತ್ರೋಕ್ತವಾದ ಆಚರಣೆಯಿಂದ ನಿಖರವಾದ ಪ್ರತಿಕೃತಿಯಿಂದ ಬದಲಾಯಿಸಲಾಗುತ್ತದೆ. ಇದು ಚಾರ್ಧಾಮ್ನಲ್ಲಿ ಒಂದಾಗಿದೆ.<ref>[ Nugteren, Albertina (2010). "Weaving Nature Into Myth: Continuing Narratives Of Wood, Trees, And Forests In The Ritual Fabric Around The God Jagannath In Puri".]
</ref>
*ಈ ವಿಧ್ಯುಕ್ತ ಸಂಪ್ರದಾಯದ ಹಿಂದಿನ ಕಾರಣ ರಹಸ್ಯವಾದದ್ದು "ನವಕಲೆವರ" ('ಹೊಸ ದೇಹ' ಅಥವಾ 'ಹೊಸ ಸಾಕಾರ'), ಸಮಾರಂಭದಲ್ಲಿ ಆಚರಣೆಗಳನ್ನು ಜಟಿಲ ಸೆಟ್ ಮರದ ಪ್ರತಿಮೆಗಳು ನವೀಕರಣವಾದದ್ದು. ದೇವಾಲಯವು ಅದರ ವಾರ್ಷಿಕ ರಥ ಯಾತ್ರೆ, ಅಥವಾ ರಥೋತ್ಸವಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯವು ವೈಷ್ಣವ ಸಂಪ್ರದಾಯಗಳಿಗೆ ಮತ್ತು ದೇವಾಲಯಕ್ಕೆ ಸಂಬಂಧಿಸಿದ ಸಂತ ರಮಾನಂದರಿಗೆ ಪವಿತ್ರವಾದದ್ದು. ಜಗನ್ನಾಥ ದೇವರನ್ನು [[ವಿಷ್ಣು]] ಅಥವಾ [[ನಾರಾಯಣನ]] ಅಥವಾ [[ಕೃಷ್ಣ]] ಎಮದು ಪೂಜಿಸಲಾಗುತ್ತದೆ. ವಿಷ್ಣುವಿನ ಅಣ್ಣನಾದ ([[ಬಲರಾಮ]]),ಮತ್ತು ಸುಭದ್ರೆ ಮತ್ತು ಜಗನ್ನಾಥ [[ವಿಷ್ಣು]] ಎಂದು ಆರಾಧಿಸಲಾಗುತ್ತದೆ.
[[ಚಿತ್ರ:The Lion Gateway (Singha Dwara) of the Jagannatha Temple, Puri.jpg|thumb|ಪುರಿಯ ಜಗನ್ನಾಥ ದೇವಾಲಯದ ಸಿಂಹ ದ್ವಾರ]]
*[[ಮಧ್ವಾಚಾರ್ಯ]]ರು ಸೇರಿದಂತೆ ಹೆಸರಾಂತ ಅಚಾರ್ಯರೆಲ್ಲಾ ಈ ಕ್ಷೇತ್ರಕ್ಕೆ ಭೇಟಿ ನಿಡುತಿದ್ದರು ಎಂದು ತಿಳಿದುಬಂದಿದೆ. [[ಆದಿ ಶಂಕರ]] ಇಲ್ಲಿ ತನ್ನ ಗೋವರ್ಧನ ಮಠ ಸ್ಥಾಪಿಸಿದರು. [[ಗುರು ನಾನಕ್]], [[ಕಬೀರ್]], [[ತುಳಸಿದಾಸ್|ತುಲಸಿದಾಸರು]], [[ರಾಮಾನುಜಾಚಾರ್ಯ]]ರು, ಮತ್ತು ನಿಂರ್ಬಕಚಾರ್ಯರು ಈ ಸ್ಥಳಕ್ಕೆ ಭೇಟಿ ನಿಡುತಿದ್ದರೆಂಭ ಸಾಕ್ಷ್ಯಾಧಾರಗಳಿವೆ.ಗೌಡಿಯಾದ ವೈಷ್ಣವ ಶ್ರೀ ಚೈತನ್ಯ ಮಹಾಪ್ರಭು ಇಲ್ಲೆ ೨೪ ವರ್ಷಗಳ ಕಾಲ ತಂಗಿ,ಹರೇ ಕೃಷ್ಣ ಮಂತ್ರವನ್ನು ಪಠಿಸುವ ಮೂಲಕ ದೇವರ ಪ್ರೀತಿಯನ್ನು ಗಳಿಸಬಹುದೆಂಬುದನ್ನು ಸಾರುತ್ತಿದರು.
*ಪವಿತ್ರ ದೇವಾಲಯಗಳೆಂದು ಪ್ರಸಿದ್ದಗೊಂಡ ರಾಮೇಶ್ವರಂ, ಬದರಿನಾಥ, ಪುರಿ ಮತ್ತು ದ್ವಾರಕಾ ದೇವಾಲಯಗಳ ಪೈಕಿ ಜಗನ್ನಾಥ ದೇವಾಲಯವು ಒಂದು.ದೊಡ್ಡ ದೇವಾಲಯದ ಸಂಕೀರ್ಣ ೪೦೦೦೦೦ ಚದರ ಅಡಿ (೩೭೦೦೦ ಮೀ ೨) ನಷ್ಟು ಪ್ರದೇಶವನ್ನು ಒಳಗೊಂಡಿದೆ.ದೇವಾಲಯ ಎಲ್ಲಾ ದಿಕ್ಕುಗಳಲ್ಲಿ ೪ ಪ್ರವೇಶಗಳನ್ನು ಹೊಂದಿದೆ.ದೇವಾಲಯವು ಬೆಳ್ಳಗೆ ೫ ಗಂಟೆಯಿಂದ ಮಧ್ಯರಾತ್ರಿ ೧೨ರವರಗೆ ತೆರೆದಿರುತ್ತದೆ.
==ದೇವತೆಗಳು==
*'ಜಗನ್ನಾಥ(ಕೃಷ್ಣ), ಬಲಭದ್ರ(ಬಲರಾಮ) ಮತ್ತು ಸುಭದ್ರಾ' ಇವು ದೇವಾಲಯದಲ್ಲಿ ಪೂಜಿಸುವ ಮೂವರು ದೇವತೆಗಳು. ಅಣ್ಣ ಬಲರಾಮ, ತಂಗಿ ಸುಭದ್ರೆಯೊಡನೆ ಜಗನ್ನಾಥ ಈ ಮೂರು ದೇವರುಗಳ ಪ್ರತಿಮೆಗಳು ದೇವಾಲಯದ ಒಳ ಗರ್ಭಗುಡಿಯಲ್ಲಿ ಇವೆ, ಇದನ್ನು ದಾರು ಎಂದು ಕರೆಯಲ್ಪಡುವ ಪವಿತ್ರ ಬೇವಿನ ಮರದ ತುಂಡುಗಳಿಂದ ಕೆತ್ತಲಾಗಿದೆ, ಇದನ್ನು ರತ್ನಖಚಿತ ಆಸನದ ಅಥವಾ ರತ್ನವೇದಿ ಮೇಲೆ ಕೂರಿಸಲಾಗುತ್ತದೆ, ಜೊತೆಗೆ ಸುದರ್ಶನ ಚಕ್ರ, ಮದನ್ಮೋಹನ್, ಶ್ರೀದೇವಿ ಮತ್ತು ವಿಶ್ವಾಧತ್ರಿ ಪ್ರತಿಮೆಗಳಿವೆ. ಋತುವಿಗೆ ಅನುಗುಣವಾಗಿ ದೇವತೆಗಳನ್ನು ವಿವಿಧ ಬಟ್ಟೆ ಮತ್ತು ಆಭರಣಗಳಿಂದ ಅಲಂಕರಿಸಲಾಗುವುದು.<ref>[http://www.jagannathtemplepuri.com/article/id/711/deities-in-lord-jagannath-temple Deities in Lord Jagannath Temple]</ref><ref>[http://www.kamat.com/kalranga/nindia/orissa/jaganath.htm Juggernaut of Puri]</ref>
*ಪುರಿಯ ಜಗನ್ನಾಥ ಒರಿಯಾ ಜನರ ಆರಾಧ್ಯ ದೈವ ಮತ್ತು ಅವರ ಆತ್ಮ ಬಂಧು. ಅಲ್ಲಿ ಜಗನ್ನಾಥ (ಕೃಷ್ಣ- ವಿಷ್ಣು) ತನ್ನ ಪತ್ನಿ ಲಕ್ಷ್ಮಿಯೊಡನೆ ಅಲ್ಲ, ಅದರ ಬದಲಿಗೆ ಅಣ್ಣ ಬಲರಾಮ, ಮತ್ತು ತನ್ನ ತಂಗಿ ಸುಭದ್ರೆಯೊಡನೆ ಪ್ರತಿಷ್ಠಾಪಿತನಾಗಿದ್ದಾನೆ. ಇವರ ಪ್ರತಿಮೆ ಮರದಿಂದ ಮಾಡಿದ್ದು; ಇವು ಕಿವಿ- ಕಾಲಿಲ್ಲದ, ಕಣ್ಣಿನ ಜಾಗದಲ್ಲಿ ದೊಡ್ಡ ವರ್ತುಲ ಮತ್ತು ಮುರಿದ ಕೈಗಳ ಮೂರ್ತಿಗಳು. ಆದರೆ, ಜನರಿಗೆ ಕರೆದಾಗ ಕಾಲಿಲ್ಲದಿದ್ದರೂ ಓಡಿಬರುವ, ಕಿವಿಯಿಲ್ಲದಿದ್ದರೂ ಆಲಿಸುವ, ಮುರಿದ ಕೈಯಿಂದಲೇ ಅಭಯ ನೀಡುವ, ಆರಾಧ್ಯ ದೈವ. ಜಗನ್ನಾಥನೆಂದರೆ ಭಕ್ತರಿಗೆ ಬಹಳ ಭಕ್ತಿ ಮತ್ತು ಪ್ರೀತಿ.<ref>[https://www.prajavani.net/artculture/article-features/puri-jagannath-house-arrest-736267.html ಜಗನ್ನಾಥನ ಗೃಹಬಂಧನ!;ಡಾ.ಕೆ.ಎಸ್.ಚೈತ್ರಾ Updated: 14 ಜೂನ್ 2020,]</ref>
*ಈ ದೇವಾಲಯವು [[ರಾಮೇಶ್ವರಮ್|ರಾಮೇಶ್ವರ]], [[ಕೇದಾರನಾಥ|ಬದ್ರಿನಾಥ್]], [[ಪುರಿ]] ಮತ್ತು [[ದ್ವಾರಕಾ]]ಗಳನ್ನು ಒಳಗೊಂಡಿರುವ ಪವಿತ್ರ ವೈಷ್ಣವ ಹಿಂದೂ ಚಾರ್ ಧಾಮ್ (ನಾಲ್ಕು ದೈವಿಕ ತಾಣಗಳು) ತಾಣಗಳಲ್ಲಿ ಒಂದಾಗಿದೆ.
*ದೇವತೆಗಳ ಸುಂದರ ಚಿತ್ರ:[https://www.prajavani.net/sites/pv/files/article_images/2020/06/13/puri-jagannath-11592064111.jpg] {{Webarchive|url=https://web.archive.org/web/20200614131957/https://www.prajavani.net/sites/pv/files/article_images/2020/06/13/puri-jagannath-11592064111.jpg |date=2020-06-14 }}
[[ಚಿತ್ರ:Statue of mother and child, Jagannatha Temple, Puri.jpg|thumb|ಜಗನ್ನಾಥ ಮಂದಿರದಲ್ಲಿ ತಾಯಿ ಮತ್ತು ಮಗು ಪ್ರತಿಮೆ]]
===ದೇವತೆಗಳ ರಹಸ್ಯ ಬಂಧನ===
*ಬೇಸಿಗೆಯಲ್ಲಿ ಮೂರೂ ದೇವರಿಗೆ ತಣ್ಣೀರು ಸ್ನಾನ, ಮಾವಿಹಣ್ಣಿನ ನೇವೇದ್ಯ ಮಾಡುವರು. ಮಾನವರಿಗೆ ಬರುವಂತೆ ಈ ಸ್ನಾನದಿಂದ ಮೂರು ದೇವತೆಗಳಿಗೂ ತೀವ್ರವಾದ ಜ್ವರ, ನೆಗಡಿ ಬರುತ್ತದೆ ಎಂಬುದು ಜನರ ನಂಬಿಕೆ. ಹೀಗಾಗಿ ಜ್ವರ ಮತ್ತು ನೆಗಡಿ ಇರುವ ಮೂವರು ದೇವರನ್ನು, ಜನರಿಂದ ಹದಿನೈದು ದಿನಗಳ ಮಟ್ಟಿಗೆ ರಹಸ್ಯ ಸ್ಥಾನದಲ್ಲಿ ದೂರವಿರಿಸುತ್ತಾರೆ. ಆ ಸಮಯದಲ್ಲಿ ಜನರಿಗೆ ದೇವರ ದರ್ಶನವಿಲ್ಲ.
*ಜನಜಂಗುಳಿಯಿರುವ ದೇಗುಲದಿಂದ ದೇವರನ್ನು ದೂರ ಕರೆದೊಯ್ದು "ಅಜ್ಞಾತವಾದ ಅನಾಸಾರ(ರಹಸ್ಯ) ಗೃಹದಲ್ಲಿ" ಪ್ರತ್ಯೇಕವಾಗಿ ಇಡಲಾಗುತ್ತದೆ. ಈ ಕೋಣೆಗೆ ನಿಗದಿತ ಪೂಜಾರಿಗಳಿಗೆ ಮಾತ್ರ ಪ್ರವೇಶವಿರುತ್ತದೆ. ಅಲ್ಲದೇ, ದೇಗುಲದ ವೈದ್ಯರು ಈ "ದೇವ ರೋಗಿಗಳ" ಶುಶ್ರೂಷೆ ಮಾಡುತ್ತಾನೆ.
*ದೇವರ ಆಹಾರದ ವಿಷಯದಲ್ಲಿ ವೈದ್ಯರು ಬಹಳ ಕಟ್ಟುನಿಟ್ಟಾದ ಪಥ್ಯ ಮಾಡಿಸುವರು. ಬೇಯಿಸಿದ, ಕರಿದ ಆಹಾರವನ್ನು (ಅನ್ನ, ಮಸಾಲೆ, ಸಿಹಿ, ಹುಳಿ) ದೇವರಿಗೆ ಈ ಸಮಯದಲ್ಲಿ ನೈವೇದ್ಯಕ್ಕೆ ಇಡುವುದಿಲ್ಲ. ಅದರ ಬದಲು ನೀರು, ಗೊತ್ತಾದ ಹಣ್ಣುಗಳು ಮತ್ತು ಕಾಳು ಮೆಣಸು, ಲವಂಗ, ಸೋಂಪಿನ ಕಷಾಯ ಮಾತ್ರ ನೇವೇದ್ಯಮಾಡುವರು. ಎಳ್ಳೆಣ್ಣೆಗೆ ಶ್ರೀಗಂಧ, ಕರ್ಪೂರ, ಕೇತಕಿ-ಮಲ್ಲಿಗೆ ಹೂವು ಮತ್ತು ಔಷಧೀಯ ನಾರು- ಬೇರು ಸೇರಿಸಿ ‘ಫುಲುರಿ ತೇಲ’ ಎಂಬ ಮುಲಾಮನ್ನು ದೇವರಿಗೆ ಲೇಪಿಸಲಾಗುತ್ತದೆ. (ವೈಜ್ಞಾನಿಕವಾಗಿ ಇದು ಮರದ ಮೂರ್ತಿಗಳನ್ನು ಕೀಟಗಳಿಂದ ರಕ್ಷಿಸುತ್ತದೆ.) ಈ ಬಗೆಯ ಪಥ್ಯ ಮತ್ತು ಲೇಪನದ ನಂತರ ಕೊನೆಯಲ್ಲಿ ದೇವರ ಸಂಪೂರ್ಣ ಚೇತರಿಕೆಗೆ ನೆರವಾಗಲು ಔಷಧೀಯ ‘ದಶಮುಲಮೋದಕ’ಗಳನ್ನು ರಾಜವೈದ್ಯರು ನೀಡುತ್ತಾರೆ.
*ಈ ಹದಿನೈದು ದಿನಗಳ "ಅನಾಸಾರದ" ನಂತರ ಆಷಾಢ ಅಮಾವಾಸ್ಯೆ ಕಳೆದಮೇಲೆ ಮೂವರೂ ದೇವರುಗಳು ಆರೋಗ್ಯವಂತರಾಗಿ ಮರಳಿ ಪುರಿಗೆ ಬರುತ್ತಾರೆ. ಆಗ ಭಕ್ತಾದಿಗಳಿಗೆ ‘ನವಜೌಬನ್’ ದರ್ಶನದ ಭಾಗ್ಯ! ಅಲ್ಲಿಯವರೆಗೆ ಪುರಿಯ ದೇವಸ್ಥಾನದಲ್ಲಿ ಪಟದ ಚಿತ್ರಗಳನ್ನು ಇಟ್ಟು ಪೂಜಿಸಲಾಗುತ್ತದೆ. ನೂರಾರು ವರ್ಷಗಳಿಂದ ನಡೆದು ಬಂದಿದೆ. ಈ ಸಂಪ್ರದಾಯವನ್ನು ಚಾಚೂತಪ್ಪದೇ ಒರಿಯಾ ಜನರು ನಂಬುತ್ತಾರೆ ಮತ್ತು ಪಾಲಿಸುತ್ತಾರೆ.<ref>[೫]</ref>
==ದೇವಾಲಯದ ನಿರ್ಮಾಣದ ಇತಿಹಾಸ==
*ಕ್ರಿ.ಶ 12 ನೇ ಶತಮಾನದಲ್ಲಿ ಗಂಗಾ ರಾಜವಂಶದ ರಾಜ ಅನಂತವರ್ಮನ್ ಚೋಡಗಂಗ ಈ ದೇವಾಲಯವನ್ನು ನಿರ್ಮಿಸಿದನು, ಅವನ ವಂಶಸ್ಥ ನರಸಿಂಹದೇವ II ರ ಕೆಂಡುಪಟ್ನ ತಾಮ್ರ ಫಲಕದ ಶಾಸನವು ಸೂಚಿಸಿದಂತೆ. ಅನಂತವರ್ಮನ್ ಮೂಲತಃ ಶೈವನಾಗಿದ್ದನು ಮತ್ತು ಕ್ರಿ.ಶ 1112 ರಲ್ಲಿ ಉತ್ಕಲಾ ಪ್ರದೇಶವನ್ನು (ದೇವಾಲಯವು ಇದೆ) ವಶಪಡಿಸಿಕೊಂಡ ನಂತರ ಸ್ವಲ್ಪ ಸಮಯದ ನಂತರ ವೈಷ್ಣವನಾದನು. 1134–1135 ಸಿಇ ಶಾಸನವೊಂದು ದೇವಾಲಯಕ್ಕೆ ನೀಡಿದ ದೇಣಿಗೆಯನ್ನು ದಾಖಲಿಸುತ್ತದೆ. ಆದ್ದರಿಂದ, ದೇವಾಲಯದ ನಿರ್ಮಾಣವು ಕ್ರಿ.ಶ 1112 ರ ನಂತರ ಪ್ರಾರಂಭವಾಗಿರಬೇಕು.
*ದೇವಾಲಯದ ವೃತ್ತಾಂತಗಳಲ್ಲಿನ ಒಂದು ಕಥೆಯ ಪ್ರಕಾರ, ಇದನ್ನು 'ಅನಂಗಭಿಮಾ-ದೇವಾನ II' ನು ಸ್ಥಾಪಿಸಿದರನು: ವಿಭಿನ್ನ ವೃತ್ತಾಂತಗಳು ನಿರ್ಮಾಣದ ವರ್ಷವನ್ನು 1196, 1197, 1205, 1216, ಅಥವಾ 1226 ಎಂದು ಉಲ್ಲೇಖಿಸುತ್ತವೆ. ಆಗ ದೇವಾಲಯದ ನಿರ್ಮಾಣ ಪೂರ್ಣಗೊಂಡಿದೆ ಅಥವಾ ಅನಂತವರ್ಮನ ಮಗ ಅನಂಗಭಿಮಾ ಆಳ್ವಿಕೆಯಲ್ಲಿ ದೇವಾಲಯವನ್ನು ನವೀಕರಿಸಲಾಗಿದೆ ಎಂದು ಇದು ಸೂಚಿಸುತ್ತದೆ. ಗಂಗಾ ರಾಜವಂಶ ಮತ್ತು ಸೂರ್ಯವಂಶಿ (ಗಜಪತಿ) ರಾಜವಂಶವನ್ನು ಒಳಗೊಂಡಂತೆ ನಂತರದ ರಾಜರ ಆಳ್ವಿಕೆಯಲ್ಲಿ ದೇವಾಲಯ ಸಂಕೀರ್ಣವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಯಿತು.<ref>Suryanarayan Das 2010, "Lord Jagannath:</ref>
==ಸ್ಥಳಪುರಾಣ==
===ದೇವಾಲಯ ಮೂಲದ ದಂತಕಥೆ===
*ದಂತಕಥೆಯ ಪ್ರಕಾರ, ಮೊದಲ ಜಗನ್ನಾಥ ದೇವಾಲಯದ ನಿರ್ಮಾಣವನ್ನು ಭರತ ಮತ್ತು ಸುನಂದನ ಮಗ ರಾಜ ಇಂದ್ರದ್ಯುಮ್ನ ಮತ್ತು ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾದ ಮಾಳವ ರಾಜನು ನಿರ್ಮಿಸಿದನು. [10]
*ಸ್ಕಂದ-ಪುರಾಣ, ಬ್ರಹ್ಮ ಪುರಾಣ ಮತ್ತು ಇತರ ಪುರಾಣಗಳಲ್ಲಿ ಮತ್ತು ನಂತರದ ಓಡಿಯಾ ಕೃತಿಗಳಲ್ಲಿ ಕಂಡುಬರುವ ಪೌರಾಣಿಕ ವೃತ್ತಾಂತವು, ಭಗವಾನ್ ಜಗನ್ನಾಥನನ್ನು ಮೂಲತಃ ಭಗವಾನ್ ನೀಲಾ ಮಾಧವ ಎಂದು ಪೂಜಿಸಲಾಗಿದ್ದು, ವಿಶ್ವವಾಸು ಎಂಬ ಸಾವರ್ ರಾಜನು (ಬುಡಕಟ್ಟು ಮುಖ್ಯಸ್ಥ) ದೇವತೆಯನ್ನು ಪೂಜಿಸುವ ಬಗ್ಗೆ ಕೇಳಿದ ರಾಜ ಇಂದ್ರದ್ಯುಮ್ನನು ದೇವಿಯನ್ನು ಪತ್ತೆ ಹಚ್ಚಲು ವಿದ್ಯಾಪತಿ ಎಂಬ ಬ್ರಾಹ್ಮಣ ಪುರೋಹಿತನನ್ನು ಕಳುಹಿಸಿದನು. ವಿಶ್ವಾವಸು ದಟ್ಟ ಕಾಡಿನಲ್ಲಿ ರಹಸ್ಯವಾಗಿ ಜಗನ್ನಾಥನನ್ನು ಪೂಜಿಸುತ್ತಿದ್ದನು. ವಿದ್ಯಾಪತಿ ತನ್ನ ಅತ್ಯುತ್ತಮ ಪ್ರಯತ್ನ ಮಾಡಿದರೂ ಸ್ಥಳವನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಕೊನೆಗೆ ಅವನು ವಿಶ್ವವಾಸುವಿನ ಮಗಳು ಲಲಿತಾಳನ್ನು ಮದುವೆಯಾಗಲು ಯಶಸ್ವಿಯಾದರು. ಅಳಿಯ ವಿದ್ಯಾಪತಿಯ ಪುನರಾವರ್ತಿತ ಕೋರಿಕೆಯ ಮೇರೆಗೆ ವಿಶ್ವಾವಸು ತನ್ನ ಅಳಿಯನನ್ನು ಕಣ್ನಿಗೆ ಬಟ್ಟೆಕಟ್ಟಿ ದಾರಿಕಾಣದಂತೆ ಗುಹೆಯೊಂದಕ್ಕೆ ಕರೆದೊಯ್ದು ಭಗವಾನ್ ನೀಲಾ ಮಾಧಾಬನನ್ನು ಪೂಜಿಸುತ್ತಿದ್ದ ಸ್ಥಳಕ್ಕೆ ಕರೆದೊಯ್ದನು.
*ವಿದ್ಯಾಪತಿ ಬಹಳ ಬುದ್ಧಿವಂತ. ಅವನು ಅಲ್ಲಿಗೆ ಹೋಗುವಾಗ ಸಾಸಿವೆ ಬೀಜಗಳನ್ನು ದಾರಿಯಲ್ಲಿ ನೆಲದ ಮೇಲೆ ಬೀಳಿಸಿದ್ದನು. ಕೆಲವು ದಿನಗಳ ನಂತರ ಬೀಜಗಳು ಮೊಳಕೆಯೊಡೆದವು, ನಂತರ ಗುಹೆಯನ್ನು ಕಂಡುಹಿಡಿಯಲು ಅವನಿಗೆ ಸಾಧ್ಯವಾಯಿತು. ಅವನ ಮಾತು ಕೇಳಿದ ರಾಜ ಇಂದ್ರದ್ಯುಮ್ನನು ದೇವತೆಯನ್ನು ನೋಡಲು ಮತ್ತು ಪೂಜಿಸಲು ತೀರ್ಥಯಾತ್ರೆಯಲ್ಲಿ ತಕ್ಷಣ ಓಡ್ರಾ ದೇಶಕ್ಕೆ (ಒಡಿಶಾ) ತೆರಳಿದನು. ಆದರೆ ದೇವತೆ ಕಣ್ಮರೆಯಾಯಿತು. ರಾಜನು ನಿರಾಶೆಗೊಂಡನು. ದೇವತೆಯನ್ನು ಮರಳಿನಲ್ಲಿ ಮರೆಮಾಡಲಾಗಿತ್ತು. ದೇವತೆಯ ದರ್ಶನವಿಲ್ಲದೆ ಹಿಂದಿರುಗಬಾರದೆಂದು ರಾಜನು ದೃಢವಾಗಿ ನಿಶ್ಚಯಿಸಿದನು ಮತ್ತು ನೀಲ ಪರ್ವತದಲ್ಲಿ ಸಾಯುವವರೆಗೆ ಉಪವಾಸವನ್ನು ಆಚರಿಸಿದನು, ಆಗ ಒಂದು ಆಕಾಶವಾಣಿಯು 'ನೀನು ಅವನನ್ನು ನೋಡಬಲ್ಲೆ' ಎಂದು ಕೂಗಿತು. ನಂತರ ರಾಜನು ಅಶ್ವಮೇದ ಯಜ್ಞವನ್ನು ಮಾಡಿ ವಿಷ್ಣುವಿಗೆ ಭವ್ಯವಾದ ದೇವಾಲಯವನ್ನು ನಿರ್ಮಿಸಿದನು. ನಾರದರು ತಂದ ಶ್ರೀ ನರಸಿಂಹ ಮೂರ್ತಿಯನ್ನು ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು. ನಿದ್ರೆಯ ಸಮಯದಲ್ಲಿ ರಾಜನಿಗೆ ಭಗವಾನ್ ಜಗನ್ನಾಥನ ದರ್ಶನವಿತ್ತು. ಕಡಲತೀರದ ಪರಿಮಳಯುಕ್ತ ಮರವನ್ನು ಸ್ವೀಕರಿಸಲು ಮತ್ತು ಅದರಿಂದ ವಿಗ್ರಹಗಳನ್ನು ತಯಾರಿಸಲು ಆಕಾಶವಾಣಿಯ ಧ್ವನಿಯೊಂದು ಅವನಿಗೆ ನಿರ್ದೇಶನ ನೀಡಿತು. ಅದರಂತೆ ರಾಜನು ದೈವಿಕ ಮರದ ಮರದಿಂದ ಮಾಡಿದ ಭಗವಾನ್ ಜಗನ್ನಾಥ, ಬಾಲಭದ್ರ, ಸುಭದ್ರಾ ಮತ್ತು ಸುದರ್ಶನ ಚಕ್ರವನ್ನು ಪಡೆದುಕೊಂಡು ದೇವಾಲಯದಲ್ಲಿ ಸ್ಥಾಪಿಸಿದನು.<ref>Amalananda Ghosh (December 1990). An Encyclopaedia of Indian Archaeology</ref>
===ಭಗವಾನ್ ಬ್ರಹ್ಮನಿಗೆ ಇಂದ್ರದ್ಯುಮ್ನನ ಪ್ರಾರ್ಥನೆ===
*ರಾಜ ಇಂದ್ರದ್ಯುಮ್ನನು ಜಗನ್ನಾಥನಿಗೆ ವಿಶ್ವದ ಅತಿ ಎತ್ತರದ ಸ್ಮಾರಕವನ್ನು ನಿರ್ಮಿಸಿದನು. ಅದು 1,000 ಮೊಳ ಎತ್ತರವಾಗಿತ್ತು. ಅವನು ವಿಶ್ವ ಸೃಷ್ಟಿಕರ್ತ ಭಗವಾನ್ ಬ್ರಹ್ಮನನ್ನು ದೇವಾಲಯ ಮತ್ತು ಮೂರ್ತಿಗಳನ್ನು ಪವಿತ್ರಗೊಳಿಸಲು ಪಾರ್ಥಿಸಿದನು. ಈ ಉದ್ದೇಶಕ್ಕಾಗಿ ಬ್ರಹ್ಮನು ಸ್ವರ್ಗದಿಂದ ಬಂದನು. ದೇವಾಲಯವನ್ನು ನೋಡಿದಾಗ ಅವನಿಗೆ ಅಪಾರ ಸಂತೋಷವಾಯಿತು. ವಿಷ್ಣುವಿಗೆ ಅತ್ಯಂತ ಸುಂದರವಾದ ದೇವಾಲಯವನ್ನು ನಿರ್ಮಿಸಿದ್ದಕ್ಕಾಗಿ ಅವನಿಗೆ (ಬ್ರಹ್ಮ) ಯಾವ ರೀತಿಯಲ್ಲಿ ರಾಜನ ಆಸೆಯನ್ನು ಈಡೇರಿಸಬಹುದು ಎಂದು ಬ್ರಹ್ಮ ಇಂದ್ರದ್ಯುಮ್ನನನ್ನು ಕೇಳಿದನು. ಮಡಿಸಿದ ಕೈಗಳಿಂದ, ಇಂದ್ರದ್ಯುಮ್ನ, "ನನ್ನ ಪ್ರಭು, ನೀವು ನಿಜವಾಗಿಯೂ ನನ್ನ ಬಗ್ಗೆ ಸಂತಸಪಟ್ಟರೆ, ದಯೆಯಿಂದ ನನ್ನನ್ನು ಒಂದು ವಿಷಯದಿಂದ ಆಶೀರ್ವದಿಸಿರಿ, ಮತ್ತು ನಾನು ಸಮಸ್ಯೆಯಿಲ್ಲದವನಾಗಿರಬೇಕು ಮತ್ತು ನನ್ನ ಕುಟುಂಬದ ಕೊನೆಯ ಸದಸ್ಯನಾಗಿರಬೇಕು" ಎಂದು ಹೇಳಿದರು. ಅವನ ನಂತರ ಯಾರಾದರೂ ಜೀವಂತವಾಗಿ ಉಳಿದಿದ್ದರೆ, ಅವರು ದೇವಾಲಯದ ಮುಖ್ಯಸ್ಥರಾಗಿ ಮಾತ್ರ ಹೆಮ್ಮೆ ಪಡುವವರಾಗಬೇಕು ಮತ್ತು ಸಮಾಜಿಕ ಕೆಲಸ ಮಾಡುವವರಾಗಬಾರು.<ref>"Sri Jagannath Puri Dham Information - Jagannath".ಅಂತರಜಾಲ</ref>
===ದೇವಾಲಯದ ಮೂಲದ ಸುತ್ತಲಿನ ದಂತಕಥೆ===
*ಭಗವಾನ್ ಜಗನ್ನಾಥ ದೇವಾಲಯದ ಉಗಮಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಕಥೆ ಏನೆಂದರೆ, ತ್ರೇತಾಯುಗದ ಕೊನೆಯಲ್ಲಿ ಜಗನ್ನಾಥನ (ವಿಷ್ಣುವಿನ ದೇವ ರೂಪ) ಮೂಲ ಚಿತ್ರವು ಆಲದ ಮರದ ಬಳಿ, ಕಡಲತೀರದ ಬಳಿ ಇಂದ್ರನೀಲ ಮಣಿ ಅಥವಾ ನೀಲಿಹರಳಿನ ರೂಪದಲ್ಲಿ ವ್ಯಕ್ತವಾಗಿತ್ತು. ಅದು ತ್ವರಿತವಾಗಿ ಮೋಕ್ಷವನ್ನು ನೀಡುವಷ್ಟು ಪ್ರಕಾಶಮಾನವಾಗಿತ್ತು. ಆದ್ದರಿಂದ ದೇವ ಧರ್ಮನು ಅಥವಾ ಯಮಧರ್ಮನು ಅದನ್ನು ಭೂಮಿಯ ಅಡಿಯಲ್ಲಿ ಮರೆಮಾಡಲು ಬಯಸಿದನು ಮತ್ತು ಯಶಸ್ವಿಯಾದನು. ದ್ವಾಪರ ಯುಗದಲ್ಲಿ ಮಾಲ್ವಾದ ರಾಜ ಇಂದ್ರದ್ಯುಮ್ನನು ಆ ಅದ್ಭುತ ನೀಲವನ್ನು ಕಂಡುಹಿಡಿಯಲು ಬಯಸಿದನು; ಹಾಗೆ ಮಾಡಲು ಮತ್ತು ಅವನು ತನ್ನು ಗುರಿಯನ್ನು ಪಡೆಯಲು ಕಠಿಣ ತಪಸ್ಸು ಮಾಡಿದನು. ನಂತರ ವಿಷ್ಣುವು ಪ್ರ್ಯಕ್ಷನಾಗಿ ಅವನಿಗೆ ಪುರಿ ಸಮುದ್ರ ತೀರಕ್ಕೆ ಹೋಗಿ ಅಲ್ಲಿ ತೇಲುವ ಮರದ ಕಾಂಡವನ್ನು ಹುಡುಕುವಂತೆ ಮತ್ತು ಅದರಿಂದ ಒಂದು ಮೂರ್ತಿಯನ್ನು ಮಾಡಲು ಸೂಚಿಸಿದನು.
*ರಾಜನು ಮರದ ತುಂಡನ್ನು ಕಂಡುಕೊಂಡನು. ಅವನು ಒಂದು ಯಜ್ಞವನ್ನು ಮಾಡಿದನು, ಆ ಯಜ್ಞದಿಂದ ನೃಸಿಂಹನು ದೇವನು ಕಾಣಿಸಿಕೊಂಡನು ಮತ್ತು ಅವನು ನಾರಾಯಣನ ನಾಲ್ಕು ವಿಭಾಗವಾಗಿ ವಿಸ್ತರಿಸಬೇಕೆಂದು ಸೂಚಿಸಿದನು, ಅಂದರೆ ಪರಮಾತ್ಮನು ವಾಸುದೇವನಾಗಿ, ಅವನ ವ್ಯೂಹವು ಸಂಕರ್ಷಣನಾಗಿ, ಯೋಗಮಾಯೆಯನ್ನು ಸುಭದ್ರಾಳಂತೆ, ಮತ್ತು ಅವನ ವೈಭವವನ್ನು(ಆಯುಧ) ಸುದರ್ಶನವಾಗಿ ವಿಸ್ತರಿಸಿ ಮೂರ್ತಿಗಳನ್ನು ಮಾಡಲು ಸೂಚಿಸಿದನು. ವಿಶ್ವಕರ್ಮನು ಕುಶಲಕರ್ಮಿಯ ರೂಪದಲ್ಲಿ ಕಾಣಿಸಿಕೊಂಡರು ಮತ್ತು ಆ ಮರದಿಂದ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ಅವರ ಮೂರ್ತಿಗಳನ್ನು ಸಿದ್ಧಪಡಿಸಿದರು.<ref name="Jagannath Temple at Puri">[http://www.templenet.com/Orissa/puri.html Jagannath Temple at Puri]</ref>
====ಮತ್ತೊಂದು ಕಥೆ====
*ಪುರಿ ಸಮುದ್ರ ತೀರದಲ್ಲಿ ಆಮರದ ತುಂಡು ಪ್ರಕಾಶದೊಂದಿಗೆ ಸಮುದ್ರದಲ್ಲಿ ತೇಲುತ್ತಿರುವುದನ್ನು ನಾರದನು ಕಂಡಾಗ, ಅವನು ರಾಜನಿಗೆ ಅದರಿಂದ ಮೂರು ವಿಗ್ರಹಗಳನ್ನು ತಯಾರಿಸಿ ದೇವಾಲಯದ ಮಂಟಪದಲ್ಲಿ ಇಡುವಂತೆ ಹೇಳಿದನು. ವಿಗ್ರಹಗಳನ್ನು ನಿರ್ಮಿಸಲು ಭವ್ಯವಾದ ದೇವಾಲಯವನ್ನು ನಿರ್ಮಿಸಲು ದೇವತೆಗಳ ವಾಸ್ತುಶಿಲ್ಪಿ ವಿಶ್ವಕರ್ಮನನ್ನು ಇಂದ್ರದ್ಯುಮ್ನನು ಕರೆಸಿದನು. ವಿಷ್ಣುವು ಸ್ವತಃ ಕಮ್ಮಾರನ (ಮರಗೆಲಸದ ಬಡಗಿ)ವೇಷದಲ್ಲಿ ಬಂದು ವಿಗ್ರಹಗಳನ್ನು ತಯಾರಿಸಲು ಒಪ್ಪಿದನು. ಆದರೆ ಅವನು ತನ್ನ ಮೂರ್ತಿಗಳನ್ನು ಮಾಡುವ ಕೆಲಸ ಮುಗಿಯುವವರೆಗೂ ಆತನನ್ನು ಯಾರೂ ದೇವಾಲಯದಲ್ಲಿ ಪ್ರವೇಶಿಸಿ ಕೆಲಸಕ್ಕೆ ಭಂಗತರಬಾರದು ಎಂಬ ನಿಯಮ ವಿಧಿಸಿದನು.
*ಆದರೆ ಎರಡು ವಾರಗಳ ನಂತರ, ರಾಣಿ ತುಂಬಾ ಆತಂಕಕ್ಕೊಳಗಾದಳು. ದೇವಾಲಯದಿಂದ ಯಾವುದೇ ಶಬ್ದ ಬರದ ಕಾರಣ ಅವಳು ಬಡಗಿ ಸತ್ತಿದ್ದಾನೆ ಎಂದು ಭಾವಿಸಿದಳು. ಆದ್ದರಿಂದ, ಅವಳು ದೇವಾಲಯದ ಬಾಗಿಲು ತೆರೆಯುವಂತೆ ರಾಜನನ್ನು ವಿನಂತಿಸಿದಳು. ಹೀಗಾಗಿ, ಅವರು 'ಬಡಗಿಯನ್ನು (ವಿಷ್ಣುವನ್ನು) ಕೆಲಸದಲ್ಲಿ ತೊಡಗಿರುವನೋ ಇಲ್ಲವೋ, ಏನಾದನೋ' ಎಂದು ನೋಡಲು ಹೋದರು. ಅವರು ಕೆಲಸದ ಮಧ್ಯೆ ಮಾತಿಗೆ ತಪ್ಪಿ ಬಂದುದರಿಂದ ವಿಷ್ಣುದೇವನು ಮೂರ್ತಿಯ ಕೆಲಸವನ್ನು ಅಪೂರ್ಣವಾಗಿ ಬಿಟ್ಟು ಹೋದನು.. ವಿಗ್ರಹಗಳ ಕೈಗಳ ಹಸ್ತಗಳೇ ಇರಲಿಲ್ಲ. ಆದರೆ ದೈವಿಕ ಧ್ವನಿಯೊಂದು ಇಂದ್ರದ್ಯುಮ್ನನಿಗೆ ದೇವಾಲಯದಲ್ಲಿ ಆ ಮೂರ್ತಿಗಳನ್ನು ಸ್ಥಾಪಿಸುವಂತೆ ಹೇಳಿತು. ವಿಗ್ರಹವು ಕೈಗಳಿಲ್ಲದಿದ್ದರೂ, ಅದು ಪ್ರಪಂಚವನ್ನು ಗಮನಿಸಬಹುದು ಮತ್ತು ಅದರ ಅಧಿಪತಿಯಾಗಬಹುದು ಎಂದು ವ್ಯಾಪಕವಾಗಿ ನಂಬಲಾಗಿದೆ. ಹೀಗೆ ಮೂರ್ತಿ ಸಾಂಕೇತಿಕವಾಗಿದೆ.<ref name="Jagannath Temple at Puri"/>
==ದೇವಾಲಯದ ಮೇಲೆ ಆಕ್ರಮಣಗಳು ಮತ್ತು ಅಪವಿತ್ರಗೊಳಿಸುವಿಕೆ==
*ಪುರಿಯ ಜಗನ್ನಾಥ ದೇವಾಲಯವನ್ನು ಹದಿನೆಂಟು ಬಾರಿ ಆಕ್ರಮಿಸಿ ಲೂಟಿ ಮಾಡಲಾಗಿದೆ ಎಂದು ದೇವಾಲಯದ ವಾರ್ಷಿಕೋತ್ಸವಗಳು, ಮಾದಲ ಪಂಜಿ ದಾಖಲೆಗಳು ಹೇಳುತ್ತವೆ. 1692 ರಲ್ಲಿ, ಮೊಘಲ್ ಚಕ್ರವರ್ತಿ ಔರಂಗಜೇಬ್ನು ದೇವಾಲಯವನ್ನು ತಾನು ಮತ್ತೆ ತೆರೆಯಲು ಬಯಸುವವರೆಗೂ ಅದನ್ನು ಮುಚ್ಚುವಂತೆ ಆದೇಶಿಸಿದನು, ಇಲ್ಲದಿದ್ದರೆ ಅದನ್ನು ನೆಲಸಮ ಮಾಡಲಾಗುವುದು ಎಂದನು. ಈ ಕೆಲಸವನ್ನು ನಿರ್ವಹಿಸಲು ಬಂದ ಸ್ಥಳೀಯ ಮೊಘಲ್ ಅಧಿಕಾರಿಗಳನ್ನು ಸ್ಥಳೀಯರು ನಾಶಮಾಡದಂತೆ ಕೋರಿದರು ಮತ್ತು ದೇವಾಲಯವನ್ನು ಮುಚ್ಚಲಾಯಿತು. 1707 ರಲ್ಲಿ ಔರಂಗಜೇಬನ ಮರಣದ ನಂತರವೇ ಅದನ್ನು ಪುನಃ ತೆರೆಯಲಾಯಿತು<ref>[ Dash, Abhimanyu (July 2011). "Invasions on the Temple of Lord Jagannath, Puri" (PDF). Orissa Review: 82–89. Archived from the original (PDF) on 14 July 2014. Retrieved 4 July 2014.]</ref>
==ಜಾತ್ರೆ==
*ಜಗನ್ನಾಥ ತ್ರಿಮೂರ್ತಿಗಳನ್ನು ಸಾಮಾನ್ಯವಾಗಿ ಪುರಿಯಲ್ಲಿರುವ ದೇವಾಲಯದ ಗರ್ಭಗೃಹದಲ್ಲಿ ಪೂಜಿಸಲಾಗುತ್ತದೆ. ಆದರೆ ಒಮ್ಮೆ ಆಷಾಢಮಾಸದಲ್ಲಿ (ಒರಿಸ್ಸಾದ ಮಳೆಗಾಲ, ಸಾಮಾನ್ಯವಾಗಿ ಜೂನ್ ಅಥವಾ ಜುಲೈ ತಿಂಗಳಲ್ಲಿ ಬೀಳುತ್ತದೆ), ಅವುಗಳನ್ನು ಬಡಾ ದಂಡ ಎಂದು ಪುರಿಯ ಕರೆಯುವ ಮುಖ್ಯ ಬೀದಿಯಲ್ಲಿ ರಥದ ಯಾತ್ರೆ ನೆಡೆದು 3 ಕಿ.ಮೀ. ದೂರದ ಶ್ರೀ ಗುಂಡಿಚಾ ದೇವಸ್ಥಾನಕ್ಕೆ ಬೃಹತ್ ರಥಗಳಲ್ಲಿ ಪ್ರಯಾಣಿಸಿ, ಸಾರ್ವಜನಿಕರಿಗೆ ದರ್ಶನ (ಪವಿತ್ರ ನೋಟ) ಹೊಂದಲು ಅನುವು ಮಾಡಿಕೊಡುತ್ತದೆ. ಈ ಹಬ್ಬವನ್ನು ರಥಯಾತ್ರೆ ಎಂದು ಕರೆಯಲಾಗುತ್ತದೆ, ಇದರರ್ಥ ರಥಗಳ ಪ್ರಯಾಣ (ಯಾತ್ರೆ). ರಥಗಳು ಬೃಹತ್ ಚಕ್ರದ ಮರದ ರಚನೆಗಳಾಗಿವೆ, ಇವುಗಳನ್ನು ಪ್ರತಿವರ್ಷ ಹೊಸದಾಗಿ ನಿರ್ಮಿಸಲಾಗುತ್ತದೆ ಮತ್ತು ಅವಯಗಳನ್ನು ಭಕ್ತರು ಎಳೆಯುತ್ತಾರೆ. ಜಗನ್ನಾಥನ ರಥವು ಸರಿಸುಮಾರು 45 ಅಡಿ ಎತ್ತರ ಮತ್ತು 35 ಚದರಅಡಿಯ ನಿರ್ಮಾನ. ಅದರ ನಿರ್ಮಾಣಕ್ಕೆ ಸುಮಾರು 2 ತಿಂಗಳು ತೆಗೆದುಕೊಳ್ಳುತ್ತದೆ. ಪುರಿಯ ಕಲಾವಿದರು ಮತ್ತು ವರ್ಣಚಿತ್ರಕಾರರು ರಥಗಳನ್ನು ಅಲಂಕರಿಸುತ್ತಾರೆ ಮತ್ತು ಚಕ್ರದ ಮೇಲೆ ಹೂವಿನ ದಳಗಳು ಮತ್ತು ಇತರ ವಿನ್ಯಾಸಗಳನ್ನು ಚಿತ್ರಿಸುತ್ತಾರೆ, ಮರದಿಂದ ಕೆತ್ತಿದ ರಥ ಮತ್ತು ಕುದುರೆಗಳು ಮತ್ತು ಸಿಂಹಾಸನದ ಹಿಂಭಾಗದ ಗೋಡೆಯ ಮೇಲೆ ತಲೆಕೆಳಗಾದ ಕಮಲಗಳನ್ನು ರಚಿಸುವರು. ರಥಯಾತ್ರೆಯಲ್ಲಿ ಎಳೆದ ಜಗನ್ನಾಥನ ಬೃಹತ್ ರಥಗಳು ಜಗ್ಗರ್ನೌಟ್ (ಒಂದು ದೊಡ್ಡದು, ಶಕ್ತಿಯುತ ಮತ್ತು ಅಗಾಧ ಶಕ್ತಿ.)ಎಂಬ ಇಂಗ್ಲಿಷ್ ಪದದ ವ್ಯುತ್ಪತ್ತಿಯ ಮೂಲವಾಗಿದೆ. ರಥ-ಯಾತ್ರೆಯನ್ನು ಶ್ರೀ ಗುಂಡಿಚ ಯಾತ್ರೆ ಎಂದೂ ಕರೆಯುತ್ತಾರೆ.<ref>["Festivals of Lord Sri Jagannath". nilachakra.org. 2010. Archived from the original on 22 October 2012.]</ref>
===2020 ರ ರಥಯಾತ್ರೆಗೆ ‘ಸುಪ್ರೀಂ’ ತಡೆ===
*‘ಕೋವಿಡ್-19 ವ್ಯಾಪಿಸಿರುವ ಇಂತಹ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುವುದಕ್ಕೆ ಅವಕಾಶ ನೀಡಿದರೆ ಜಗನ್ನಾಥ ದೇವರು ಸಹ ನಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಹೇಳಿ, 2020ರ ಪುರಿ ಜಾತ್ರೆಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಬೊಬಡೆ ಜಾತ್ರೆಗೆ ತಡೆ ನೀಡಿದರು. ಈ 2020 ವರ್ಷದ ರಥಯಾತ್ರೆಯನ್ನು ರದ್ದುಪಡಿಸಬೇಕು ಇಲ್ಲವೇ ಮುಂದೂಡುವಂತೆ ನಿರ್ದೇಶನ ನೀಡುವಂತೆ ಕೋರಿ ಸ್ವಯಂ ಸೇವಾ ಸಂಸ್ಥೆಯೊಂದು ಸುಪ್ರೀಂಕೋರ್ಟ್ಗೆ ಪಿಐಎಲ್ ಸಲ್ಲಿಸಿತ್ತು<ref>[https://www.prajavani.net/stories/national/sc-stays-this-years-historic-puris-rath-yatra-due-to-covid19-pandemic-737576.htmlಪುರಿ ರಥಯಾತ್ರೆಗೆ ‘ಸುಪ್ರೀಂ’ ತಡೆ;ಪಿಟಿಐ Updated: 18 ಜೂನ್ 2020,]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
*ಹಿಂದಿನಜಾತ್ರೆ [https://www.prajavani.net/sites/pv/files/article_images/2020/06/22/file762pnx4ky784k1759zn1592810522.jpg] {{Webarchive|url=https://web.archive.org/web/20200626093548/https://www.prajavani.net/sites/pv/files/article_images/2020/06/22/file762pnx4ky784k1759zn1592810522.jpg |date=2020-06-26 }}
===‘ಸುಪ್ರೀಂ’ ತಡೆಗೆ ತೆರವು; ರಥಯಾತ್ರೆಗೆ ಷರತ್ತುಬದ್ಧ ಅನುಮತಿ===
ಕೊರೊನಾವೈರಸ್ ಸೋಂಕು ಹರಡುವಿಕೆಯ ನಡುವೆಯೂ ಜಗತ್ಪ್ರಸಿದ್ಧವಾಗಿರುವ ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ನಡೆಸುವುದಕ್ಕೆ 2020 ಜೂನ್.22ರಂದು ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತು. ಪುರಿಯ ಜಗನ್ನಾಥ ಮಂದಿರದಲ್ಲಿ ಮಾತ್ರ ರಥ ಯಾತ್ರೆ ನಡೆಸಲು ಅನುಮತಿ ನೀಡಿರುವ ಸುಪ್ರೀಂಕೋರ್ಟ್, ರಾಜ್ಯದ ಬೇರೆಲ್ಲೂ ರಥಯಾತ್ರೆ ನಡೆಸುವಂತಿಲ್ಲ ಎಂದು ಆದೇಶಿಸಿತು.
*ಷರತ್ತು: ರಥಯಾತ್ರೆಯ ಸಂದರ್ಭದಲ್ಲಿ 500ಕ್ಕಿಂತ ಹೆಚ್ಚು ಭಕ್ತರಿಗೆ ಅವಕಾಶ ನೀಡುವಂತಿಲ್ಲ. ಎರಡು ರಥಯಾತ್ರೆಯ ಮಧ್ಯೆ ಕನಿಷ್ಠ 1 ಗಂಟೆ ಅಂತರ ಇರಬೇಕು. ರಥ ಎಳೆಯಲು ಬರುವ ಪ್ರತಿಯೊಬ್ಬ ಭಕ್ತರಿಗೂ ಕೊರೊನಾವೈರಸ್ ಪರೀಕ್ಷೆ ನಡೆಸಿರಬೇಕು. ಸಾಮಾಜಿಕ ಅಂತರ ಪಾಲನೆಯಾಗುವುದು ಕಡ್ಡಾಯ ಎಂದು ಕೋರ್ಟ್ ತಿಳಿಸಿತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ನೀಡಿತು.:<ref>[https://kannada.oneindia.com/news/bhubaneswar/supreme-court-allow-puri-jagannath-rath-yatra-permitting-only-500-persons-195164.html ಒಡಿಶಾದ ಪುರಿ ಜಗನ್ನಾಥ ರಥಯಾತ್ರೆಯಲ್ಲಿ 500 ಭಕ್ತರಿಗಷ್ಟೇ ಅವಕಾಶ! By Rajashekhar Myageri | Updated: Tuesday, June 23, 2020,]</ref> ಸ್ನಾನ ಯಾತ್ರೆಯು ಪೂರ್ಣ ಹುಣ್ಣಿಮೆಯ ದಿನ ಪ್ರತಿವರ್ಷವೂ ನಡೆಯುತ್ತದೆ..<ref>https://kannada.oneindia.com/news/bhubaneswar/jagannath-rath-yatra-2020-193866.htmlarticlecontent-pf159897-193866.html?utm_source=/news/bhubaneswar/jagannath-rath-yatra-2020-193866.html&utm_medium=search_page&utm_campaign=elastic_search ಜಗನ್ನಾಥ ರಥ ಯಾತ್ರೆ 2020: ದೇವಸ್ನಾನ ಪೂರ್ಣಿಮೆಯ ವಿಶೇಷತೆಯೇನು? June 5, 2020</ref>
*ಇದರ ಹಿಂದೆಯೇ, ಜಗನ್ನಾಥ ಸಂಸ್ಕೃತಿ ಜನ ಜಾಗರಣ ಮಂಚ್ ಸೇರಿದಂತೆ ಹಲವರು ಆದೇಶದ ಮಾರ್ಪಾಡು ಕೋರಿ ಅರ್ಜಿ ಸಲ್ಲಿಸಿದ್ದರು. ರಥಯಾತ್ರೆಯು 10 ರಿಂದ 12 ದಿನ ನಡೆಯಲಿದ್ದು, ಜೂನ್ 23ರಿಂದ ಜುಲೈ 1ರವರೆಗೆ ನಡೆಸಲು ನಿಗದಿಯಾಗಿತ್ತು. ಅಫ್ತಾಬ್ ಹೊಸೆನ್ ಎಂಬವರು ಅರ್ಜಿ ಸಲ್ಲಿಸಿ, ‘ಸಂಪ್ರದಾಯದ ಅನುಸಾರ ಜಗನ್ನಾಥ ಯಾತ್ರೆ ನಡೆಯಬೇಕು. ಪ್ರತಿ ವರ್ಷ ಇದು ನಡೆಯಲಿದೆ. '''ಒಂದು ವರ್ಷ ನಿಲ್ಲಿಸಿದರೆ, ಮುಂದಿನ 12 ವರ್ಷ ಇದನ್ನು ನಡೆಸಲಾಗದು’''' ಎಂದು ಪ್ರತಿಪಾದಿಸಿದ್ದರು. 1736ರಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ವಾರ್ಷಿಕ ಪುರಿ ಜಗನ್ನಾಥ ಯಾತ್ರೆಯ ಸಂಪ್ರದಾಯ <ref>[https://www.prajavani.net/stories/national/cji-led-bench-to-hear-pleas-seeking-nod-for-puri-rath-yatra-without-public-participation-738690.html ಪುರಿ ಜಗನ್ನಾಥ ಯಾತ್ರೆ: ಆದೇಶ ಮಾರ್ಪಾಡು? ಪಿಟಿಐ Updated: 22 ಜೂನ್ 2020]</ref>
===ಜಾತ್ರೆಯ ನೋಟ===
[[File:Rath Yatra Puri 07-11027.jpg|thumb|520px|center|ರಥಯಾತ್ರೆ ಪುರಿ07-11027]]
===ಜಗನ್ನಾಥನ ಸ್ನಾನಯಾತ್ರೆ===
{{multiple image
| align = center
| image1 =
| width1 = 280
| alt1 =
| caption1 =
| image2 =
| width2 = 280
| alt2 =
| caption2 =
| footer = ಎಡ: ಜಗನ್ನಾಥ್ ಸ್ನಾನ ಯಾತ್ರೆ, ಬಲ: ಸ್ನಾನ ಸಮಾರಂಭದ ನಂತರ ಉಡುಗೆ; ಬಲಭದ್ರ, ಸುಭದ್ರೆ, ಜಗನ್ನಾಥ, ಮೂವರೂ ಇದ್ದಾರೆ.}}
==ಹೊರಸಂಪರ್ಕ==
*http://jagannathtemplepuri.com/
*http://jagannath.nic.in/?q=node/158
==ಉಲ್ಲೇಖನಗಳು==
{{reflist| 2}}
{{Interwikineeded}}
[[ವರ್ಗ:ದೇವಾಲಯಗಳು]]
[[ವರ್ಗ:ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೬-೧೭]]
8yvqwlyls7udsnzthr18j0sqcqor6v5
ಮೊರ್ಡೆಕೈ ಪಾಲ್ಡಿಯೆಲ್
0
84375
1384567
1360310
2026-08-28T12:51:33Z
InternetArchiveBot
69876
Rescuing 0 sources and tagging 1 as dead.) #IABot (v2.0.9.5
1384567
wikitext
text/x-wiki
{{Infobox person
| name = ಮೊರ್ಡೆಕೈ ಪಾಲ್ಡಿಯೆಲ್
| image = Mordecai Paldiel (cropped).jpg
| caption = ೨೦೧೯ ರಲ್ಲಿ, ಪಾಲ್ಡಿಯೆಲ್ರವರು.
| native_name = ಮಾರ್ಕಸ್ ವಾಜ್ಫೆಲ್ಡ್
| birth_date = {{Birth date and age|1937|3|10}}
| birth_place = [[:en:Antwerp|ಆಂಟ್ವರ್ಪ್]], ಬೆಲ್ಜಿಯಂ
| alma_mater = [[:en:Hebrew University|ಹೀಬ್ರೂ ವಿಶ್ವವಿದ್ಯಾಲಯ
]] ([[:en:Bachelor of Arts|ಬಿಎ]])<br />[[:en:Temple University|ಟೆಂಪಲ್ ವಿಶ್ವವಿದ್ಯಾಲಯ]] ([[:en:Master of Arts|ಎಮ್ಎ]], [[:en:Doctor of Psychology|ಪಿಎಚ್ಡಿ]])
| spouse = {{marriage|Rachel Mizrahi|1966}}
| children = ೩, ಸೇರಿದಂತೆ [[:en:Siggy Flicker|ಸಿಗ್ಗಿ ಫ್ಲಿಕರ್]]
}}
'''ಮೊರ್ಡೆಕೈ ಪಾಲ್ಡಿಯೆಲ್''' (ಜನನ ಮಾರ್ಕಸ್ ವಾಜ್ಫೆಲ್ಡ್, ಮಾರ್ಚ್ ೧೦, ೧೯೩೭) ಇವರು ಸ್ಟರ್ನ್ ಕಾಲೇಜ್ ([[:en:Yeshiva University|ಯೆಶಿವಾ ವಿಶ್ವವಿದ್ಯಾಲಯ]])<ref>{{cite web |url=http://www.cjh.org/portugal/ |title=Portugal and the Jewish Refugee Crisis of World War II |publisher=Center for Jewish History |work=Notes on lecturers |date=November 3, 2013 |accessdate=June 1, 2014}}</ref> ಮತ್ತು [[ನ್ಯೂ ಯಾರ್ಕ್|ನ್ಯೂಯಾರ್ಕ್ನ]] [[ :en:Queens College|ಕ್ವೀನ್ಸ್ ಕಾಲೇಜಿನಲ್ಲಿ]] ಉಪನ್ಯಾಸಕರಾಗಿದ್ದಾರೆ.
==ಆರಂಭಿಕ ಜೀವನ ಮತ್ತು ಶಿಕ್ಷಣ==
ಪಾಲ್ಡಿಯೆಲ್ರವರು ಸ್ಜ್ಲೋಮೊ ವಾಜ್ಸ್ಫೆಲ್ಡ್ನ [[ :en:Hasidic|ಹಸಿಡಿಕ್]] ಕುಟುಂಬದಲ್ಲಿ ಜನಿಸಿದರು. ಅವರು ಮೂಲತಃ ಕ್ರಾಕೋವ್ ಬಳಿಯ [[ :en:Miechów|ಮೈಚೌವ್ನಿಂದ]] ವಜ್ರದ ವ್ಯಾಪಾರಿ ಮತ್ತು ಹಿಂಡೆ ([[:en:née|ನೀ]] ಲ್ಯಾಬಿನ್) [[:en:Uhnów|ಉಹ್ನೋವ್ನಿಂದ]] (ಈಗ [[ಉಕ್ರೇನ್]]) ವಿಶ್ವ ಸಮರ II ರ ಮೊದಲು ಅವರ ಐದು ಮಕ್ಕಳಲ್ಲಿ ಒಬ್ಬರಾಗಿದ್ದರು.<ref>{{cite web |url=http://www.jfr.org/pages/education/for-teachers/speakers-bureau/mordecai-paldiel |title=Mordecai Paldiel |publisher=The Jewish Foundation for the Righteous, New York, NY |work=Stories of Rescue |year=2014 |accessdate=June 1, 2014 |author=J.F.R. }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref> ಕ್ಯಾಥೋಲಿಕ್ ಪಾದ್ರಿಯೊಬ್ಬರು ಅವರಿಗೆ ಗಡಿಯುದ್ದಕ್ಕೂ ಕಳ್ಳಸಾಗಣೆ ಮಾಡಲು ಸಾಧ್ಯವಾದ ಕಾರಣಕ್ಕೆ ಧನ್ಯವಾದ ಹೇಳಿದರು.<ref>{{cite web |url=http://digitalassets.ushmm.org/photoarchives/detail.aspx?id=1144302 |title=Markus Wajsfeld, now Mordechai Paldiel: Portrait of a Jewish refugee child from Belgium |publisher=United States Holocaust Memorial Museum |work=Photo Archives |year=2014 |accessdate=June 1, 2014 |author=Credit: courtesy of Dr. Mordechai Paldiel}}</ref> ಕುಟುಂಬವು ೧೯೪೦ ರಲ್ಲಿ, ಅವರು ೩ ವರ್ಷದವರಾಗಿದ್ದಾಗ ನಾಜಿ ಆಕ್ರಮಿತ [[ಬೆಲ್ಜಿಯಂ|ಬೆಲ್ಜಿಯಂನಿಂದ]] [[ಫ್ರಾನ್ಸ್]] ಮೂಲಕ [[ಸ್ವಿಟ್ಜರ್ಲೆಂಡ್|ಸ್ವಿಟ್ಜರ್ಲೆಂಡ್ಗೆ]] ಪಲಾಯನ ಮಾಡಿದರು. ಯುದ್ಧದ ನಂತರ, ಕುಟುಂಬವು [[ನ್ಯೂ ಯಾರ್ಕ್|ನ್ಯೂಯಾರ್ಕ್ಗೆ]] ವಲಸೆ ಬಂದಿತು.<ref>{{cite web | url=http://isurvived.org/4Debates/MORDECAI-folder/mordecai_paldiel_bio.html | title=Mordecai Paldiel, mini Bio | publisher=NatureQuest Publications, I survived.org | work=Holocaust Survivors and Remembrance Project | accessdate=June 1, 2014}}</ref>
ಅವರು [[:en:Hebrew University|ಹೀಬ್ರೂ ವಿಶ್ವವಿದ್ಯಾಲಯದಿಂದ]] ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು [[ಫಿಲಡೆಲ್ಫಿಯಾ|ಫಿಲಡೆಲ್ಫಿಯಾದ]] [[ :en:Temple University|ಟೆಂಪಲ್ ವಿಶ್ವವಿದ್ಯಾಲಯದಿಂದ]] [[ಧರ್ಮ]] ಮತ್ತು ಹತ್ಯಾಕಾಂಡ ಅಧ್ಯಯನಗಳಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಮತ್ತು ಪಿಎಚ್ಡಿ ಪಡೆದರು. ಪಾಲ್ಡಿಯೆಲ್ರವರು ಜೆರುಸಲೇಂನ [[:en: Yad Vashem|ಯಾದ್ ವಾಶೆಮ್ನಲ್ಲಿರುವ]] [[:en: Righteous Among the Nations |ರಾಷ್ಟ್ರಗಳ ನಡುವೆ ನೀತಿವಂತರ]] ಇಲಾಖೆಯ ಮಾಜಿ ನಿರ್ದೇಶಕರಾಗಿದ್ದಾರೆ (೧೯೮೪-೨೦೦೭). [[:en:KTAV Publishing House|ಕೆಟಿಎವಿ ಪಬ್ಲಿಷಿಂಗ್ ಹೌಸ್]] ೧೯೯೩ ರಲ್ಲಿ, ಪ್ರಕಟಿಸಿದ ಹತ್ಯಾಕಾಂಡದ ಸಮಯದಲ್ಲಿ ಯಹೂದಿಗಳ ಪಥ ಸೇರಿದಂತೆ ಈ ವಿಷಯಕ್ಕೆ ಮೀಸಲಾಗಿರುವ ಹಲವಾರು ಪುಸ್ತಕಗಳನ್ನು ಅವರು ಬರೆದಿದ್ದಾರೆ.<ref>{{Cite web |last=Yudelson |first=Larry |title=Jewish rescuers during the Holocaust |url=https://jewishstandard.timesofisrael.com/jewish-rescuers-during-the-holocaust/ |access-date=2023-02-26 |website=jewishstandard.timesofisrael.com |language=en-US}}</ref>
==ವೈಯಕ್ತಿಕ ಜೀವನ==
ಪಾಲ್ಡಿಯೆಲ್ರವರು ೧೯೬೬ ರಲ್ಲಿ, [[ಇಸ್ರೇಲ್|ಇಸ್ರೇಲ್ನಲ್ಲಿ]] ರಾಚೆಲ್ ಮಿಜ್ರಾಹಿ ಅವರನ್ನು ವಿವಾಹವಾದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮಗ ಎಲಿ ಮತ್ತು ಪುತ್ರಿಯರಾದ ಸಿಗಲಿಟ್ "ಸಿಗ್ಗಿ" ಮತ್ತು ಐರಿಸ್.
ಅವರ ಹಿರಿಯ ಮಗಳು [[:en:Siggy Flicker|ಸಿಗ್ಗಿ ಫ್ಲಿಕರ್]] ಸಂಬಂಧ ತಜ್ಞ ಮತ್ತು ದೂರದರ್ಶನ ವ್ಯಕ್ತಿತ್ವ ಹೊಂದಿದ್ದು, ೨೦೧೬ ರಿಂದ ೨೦೧೮ ರವರೆಗೆ ಬ್ರಾವೋ ರಿಯಾಲಿಟಿ ಟೆಲಿವಿಷನ್ ಸರಣಿ [[:en: The Real Housewives of New Jersey|''ದಿ ರಿಯಲ್ ಹೌಸ್ ವೈವ್ಸ್ ಆಫ್ ನ್ಯೂಜೆರ್ಸಿಯಲ್ಲಿ'']] ಕಾಣಿಸಿಕೊಂಡರು.
==ಪ್ರಕಟಣೆಗಳು==
* ಮೊರ್ಡೆಕೈ ಪಾಲ್ಡಿಯೆಲ್ (೧೯೮೨), ''ಸೆಕ್ಯುಲರ್ ಡ್ಯುಯಲಿಸಂ: ದಿ 'ರೆಲಿಜಿಯಸ್' ನೇಚರ್ ಆಫ್ ಹಿಟ್ಲರ್ಸ್ ಆಂಟಿಸೆಮಿಟಿಸಂ'', [[:en:Temple University|ಟೆಂಪಲ್ ಯೂನಿವರ್ಸಿಟಿ]]
* ಮೊರ್ಡೆಕೈ ಪಾಲ್ಡಿಯೆಲ್ (೧೯೯೨), כל המקיים נפש אחת: חסידי אומות העולם וייחות [[:en:University of Michigan|ಮಿಚಿಗನ್ ಯೂನಿವರ್ಸಿಟಿ]]
* ಮೊರ್ಡೆಕೈ ಪಾಲ್ಡಿಯೆಲ್ (೧೯೯೩), ''ದಿ ಪಾಥ್ ಆಫ್ ದಿ ರೈಟಿಸ್: ಜೆಂಟೈಲ್ ರೆಸ್ಕ್ಯೂವರ್ಸ್ ಆಫ್ ಜೆವ್ಸ್''..., [[:en:ISBN 0881253766|ಐಎಸ್ಬಿಎನ್ ೦೮೮೧೨೫೩೭೬೬]]
* ಮೊರ್ಡೆಕೈ ಪಾಲ್ಡಿಯೆಲ್ (೧೯೯೬), ''ಶೆಲ್ಟರಿಂಗ್ ದಿ ಜೆವ್ಸ್: ಸ್ಟೋರೀಸ್ ಆಫ್ ಹೊಲೋಕಾಸ್ಟ್ ರೆಸ್ಕ್ಯೂಸ್'', [[ :en:ISBN 0800628977|ಐಎಸ್ಬಿಎನ್ ೦೮೦೦೬೨೮೯೭೭]]
* ಮೊರ್ಡೆಕೈ ಪಾಲ್ಡಿಯೆಲ್ (೨೦೦೬), ''ಚರ್ಚಸ್ ಆಂಡ್ ದಿ ಹೊಲೋಕಾಸ್ಟ್: ಅನ್ಹೊಲಿ ಟೀಚಿಂಗ್''.., [[:en:ISBN 088125908X|ಐಎಸ್ಬಿಎನ್ ೦೮೮೧೨೫೯೦೮ಎಕ್ಸ್]]
* ಮೊರ್ಡೆಕೈ ಪಾಲ್ಡಿಯೆಲ್ (೨೦೦೭), ''ಡಿಪ್ಲೊಮಾಟ್ ಹೀರೋಸ್ ಆಫ್ ದಿ ಹೊಲೋಕಾಸ್ಟ್'', [[:en:ISBN 0881259098|ಐಎಸ್ಬಿಎನ್ ೦೮೮೧೨೫೯೦೯೮]]
* ಮೊರ್ಡೆಕೈ ಪಾಲ್ಡಿಯೆಲ್ (೨೦೦೭), ''ದಿ ರೈಟಸ್ ಅಮಂಗ್ ದಿ ನೇಷನ್ಸ್'', [[:en:ISBN 0061151122|ಐಎಸ್ಬಿಎನ್ ೦೬೬೧೧೫೧೧೨೨]]
* ಮೊರ್ಡೆಕೈ ಪಾಲ್ಡಿಯೆಲ್ (೨೦೧೧), ''ಸೇವಿಂಗ್ ದಿ ಜೆವ್ಸ್: ಮೆನ್ ಆಂಡ್ ವುಮೆನ್ ಹು ಡೆಫೈಡ್ ದಿ ಫೈನಲ್ ಸೊಲ್ಯುಷನ್'', [[:en:ISBN 1589797345|ಐಎಸ್ಬಿಎನ್ ೧೫೮೯೭೯೭೩೪೫]]
* ಮೊರ್ಡೆಕೈ ಪಾಲ್ಡಿಯೆಲ್ (೨೦೧೭), ''ಸೇವಿಂಗ್ ಒನ್ಸ್ ಓನ್: ಜೆವಿಶ್ ರೆಸ್ಕ್ಯೂಸ್ ಡ್ಯುರಿಂಗ್ ದಿ ಹೊಲೋಕಾಸ್ಟ್'', [[ :en:ISBN 0827612974|ಐಎಸ್ಬಿಎನ್ ೦೮೨೭೬೧೨೯೭೪]]<ref>{{cite web |year=2014 |title=In author: Mordecai Paldiel |url=https://www.google.ca/search?tbo=p&tbm=bks&q=inauthor:%22Mordecai+Paldiel%22 |accessdate=June 1, 2014}}</ref>
==ಉಲ್ಲೇಖಗಳು==
{{Interwikineeded}}
[[ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ]]
n052aj8ckx5tgn9pzxq6mgmvpkv2iff
ಮೈಕೆಲ್ ಕಿರ್ಬಿ (ನ್ಯಾಯಾಧೀಶರು)
0
145802
1384566
1380758
2026-08-28T12:20:08Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384566
wikitext
text/x-wiki
{{Infobox ಸರ್ಕಾರಿ ಅಧ್ಯಕ್ಷ|name=ಮೈಕೆಲ್ ಕಿರ್ಬಿ|image=The Hon Michael D. Kirby AC CMG (cropped).jpg|term_start=೬ ಫೆಬ್ರವರಿ ೧೯೯೬|term_end=೨ ಫೆಬ್ರವರಿ ೨೦೦೯|predecessor=ವಿಲಿಯಂ ಡೀನ್ಡೀನ್|successor=ವರ್ಜೀನಿಯಾ ಬೆಲ್ (ನ್ಯಾಯಾಧೀಶರು)|predecessor1=ಪರ್ಸಿ ಪಾರ್ಟ್ರಿಡ್ಜ್|successor1=ಟಿಮ್ ಬೆಸ್ಲಿ (ಸಾರ್ವಜನಿಕ ಸೇವಕ)|birth_date={{birth date and age|df=yes|1939|03|18}}|birth_place=ಸಿಡ್ನಿ, ನ್ಯೂ ಸೌತ್ ವೇಲ್ಸ್, ಆಸ್ಟ್ರೇಲಿಯಾ|spouse=ಜೋಹಾನ್ ವ್ಯಾನ್ ವ್ಲೋಟೆನ್}}
'''ಮೈಕೆಲ್ ಡೊನಾಲ್ಡ್ ಕಿರ್ಬಿ''' ಎಸಿ ಸಿಎಮ್ಜಿ (ಜನನ ೧೮ ಮಾರ್ಚ್ ೧೯೩೯) ಒಬ್ಬ ಆಸ್ಟ್ರೇಲಿಯಾದ ನ್ಯಾಯಶಾಸ್ತ್ರಜ್ಞ ಮತ್ತು ಶಿಕ್ಷಣತಜ್ಞರಾಗಿದ್ದು, ಅವರು ಆಸ್ಟ್ರೇಲಿಯಾದ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿಯಾಗಿದ್ದಾರೆ. ೧೯೯೬ ರಿಂದ <ref>{{Cite web|url=https://www.alrc.gov.au/about/president/past-presidents/hon-michael-kirby-ac-cmg/|title=Hon Michael Kirby AC CMG|website=ALRC|language=en-AU|access-date=2020-10-09}}</ref> ರವರೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನಿವೃತ್ತಿಯಲ್ಲಿ ಸಕ್ರಿಯರಾಗಿದ್ದಾರೆ. ಮೇ ೨೦೧೩ ರಲ್ಲಿ ಅವರನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಉತ್ತರ ಕೊರಿಯಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ತನಿಖೆಯನ್ನು ಮುನ್ನಡೆಸಲು ನೇಮಿಸಿತು. ಇದು [[ಫೆಬ್ರವರಿ]] ೨೦೧೪ ರಲ್ಲಿ ವರದಿಯಾಗಿದೆ.
== ಆರಂಭಿಕ [[ಜೀವನ]] ಮತ್ತು [[ಶಿಕ್ಷಣ]] ==
ಮೈಕೆಲ್ ಡೊನಾಲ್ಡ್ ಕಿರ್ಬಿ ೧೮ [[ಮಾರ್ಚ್]] ೧೯೩೯ ರಂದು ಕ್ರೌನ್ ಸ್ಟ್ರೀಟ್ ಮಹಿಳಾ ಆಸ್ಪತ್ರೆಯಲ್ಲಿ ಡೊನಾಲ್ಡ್ ಮತ್ತು ಜೀನ್ ಲ್ಯಾಂಗ್ಮೋರ್ (ನೀ ನೋಲ್ಸ್) ಕಿರ್ಬಿಗೆ ಜನಿಸಿದರು. ಅವರು ಐದು ಒಡಹುಟ್ಟಿದವರಲ್ಲಿ ಹಿರಿಯರಾಗಿದ್ದರು, ನಂತರ ಅವಳಿಗಳಾದ ಡೊನಾಲ್ಡ್ ವಿಲಿಯಂ ಮತ್ತು ಡೇವಿಡ್ ಚಾರ್ಲ್ಸ್ (ನಂತರದವರು ನ್ಯುಮೋನಿಯಾದಿಂದ ೧೮ ತಿಂಗಳುಗಳಲ್ಲಿ ನಿಧನರಾದರು), ಡೇವಿಡ್ ಮತ್ತು ಡಯಾನಾ ಮಾರ್ಗರೇಟ್.<ref>{{Cite book|title=Michael Kirby: Paradoxes and Principles|url=https://archive.org/details/michaelkirbypara0000brow|last=Brown|first=A.J.|publisher=Federation Press|year=2011|isbn=978-1862876507|location=Leichhardt}}</ref> ೧೯೪೩ ರಲ್ಲಿ ಅವರ ಅಜ್ಜಿ ನಾರ್ಮಾ ಗ್ರೇ ಮರುಮದುವೆಯಾದರು ಮತ್ತು ಅವರ ಎರಡನೇ ಪತಿ ಆಸ್ಟ್ರೇಲಿಯನ್ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ಖಜಾಂಚಿಯಾದ ಜ್ಯಾಕ್ ಸಿಂಪ್ಸನ್. ಕಿರ್ಬಿ ಸಿಂಪ್ಸನ್ ಅವರನ್ನು ಮೆಚ್ಚಿಸಲು ಬಂದರೂ, ಅವರು ಅಥವಾ ಅವರ ಹತ್ತಿರದ ಕುಟುಂಬವು ಸಿದ್ಧಾಂತವನ್ನು ಸ್ವೀಕರಿಸಲಿಲ್ಲ. ಅವರ ತಂದೆ ಆಸ್ಟ್ರೇಲಿಯನ್ ಲೇಬರ್ ಪಾರ್ಟಿಯನ್ನು ಬೆಂಬಲಿಸಿದರು. ಆದರೆ ಎಂದಿಗೂ ಸದಸ್ಯನಾಗಲಿಲ್ಲ. ಅವರ ತಾಯಿ, ಶ್ರೀ ಮೆನ್ಜೀಸ್ (ಲಿಬರಲ್ ಪಾರ್ಟಿ) ಗೆ ಮತ ಹಾಕಿದ್ದಾರೆ ಎಂದು ನಂಬಲಾಗಿದೆ.
ಕಿರ್ಬಿ ನಾರ್ತ್ ಸ್ಟ್ರಾತ್ಫೀಲ್ಡ್ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಾರಂಭವಾದ ರಾಜ್ಯ ಶಾಲೆಗಳಲ್ಲಿ ವ್ಯಾಸಂಗ ಮಾಡಿದರು. ನಂತರ ಸಮ್ಮರ್ ಹಿಲ್ ಪಬ್ಲಿಕ್ ಸ್ಕೂಲ್ ಫಾರ್ ಆಪರ್ಚುನಿಟಿ ಕ್ಲಾಸ್ಗಳು ಮತ್ತು ನಂತರ ಸಿಡ್ನಿಯ ಫೋರ್ಟ್ ಸ್ಟ್ರೀಟ್ ಹೈಸ್ಕೂಲ್ (ಆಗ ಫೋರ್ಟ್ ಸ್ಟ್ರೀಟ್ ಬಾಯ್ಸ್ ಹೈಸ್ಕೂಲ್).<ref name="Brown 2011">{{Cite book|title=Michael Kirby: Paradoxes and Principles|url=https://archive.org/details/michaelkirbypara0000brow|last=Brown|first=A.J.|publisher=Federation Press|year=2011|isbn=978-1862876507|location=Leichhardt}}<cite class="citation book cs1" data-ve-ignore="true" id="CITEREFBrown2011">Brown, A.J. (2011). ''Michael Kirby: Paradoxes and Principles''. Leichhardt: Federation Press. [[ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ|ISBN]] [[ವಿಶೇಷ:ಪುಸ್ತಕ ಮೂಲಗಳು/978-1862876507|<bdi>978-1862876507</bdi>]].</cite></ref>
ಪ್ರೌಢಶಾಲೆಯಿಂದ ಪದವಿ ಪಡೆದ ನಂತರ, ಕಿರ್ಬಿ ನಂತರ ಸಿಡ್ನಿ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ಅಲ್ಲಿ ಅವರು ಬ್ಯಾಚುಲರ್ ಆಫ್ ಆರ್ಟ್ಸ್ (೧೯೫೯), ಬ್ಯಾಚುಲರ್ ಆಫ್ ಲಾಸ್ (೧೯೬೨), ಬ್ಯಾಚುಲರ್ ಆಫ್ ಎಕನಾಮಿಕ್ಸ್ (೧೯೬೫) ಮತ್ತು ಮಾಸ್ಟರ್ ಆಫ್ ಲಾಸ್ ( ಪ್ರಥಮ ದರ್ಜೆಯ ಗೌರವಗಳು ) ಗಳಿಸಿದರು. ೧೯೬೭). ವಿಶ್ವವಿದ್ಯಾನಿಲಯದಲ್ಲಿ, ಕಿರ್ಬಿ ಅವರು ಸಿಡ್ನಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪ್ರತಿನಿಧಿ ಮಂಡಳಿಯ ಅಧ್ಯಕ್ಷರಾಗಿ (೧೯೬೨-೧೯೬೩) ಮತ್ತು ಸಿಡ್ನಿ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿ (೧೯೬೫) ಆಯ್ಕೆಯಾದರು.<ref>[http://www.hcourt.gov.au/assets/publications/speeches/former-justices/kirbyj/kirbyjbio.html Biography: Hon. Justice Michael Kirby AC CMG]</ref><ref>{{Cite web|url=http://sydney.edu.au/news/84.html?newsstoryid=3089|title=Transcript of Michael Kirby's talk|last=Punjabi|first=Ruchir|date=28 February 2009|publisher=The University of Sydney}}</ref>
== ವೃತ್ತಿ ==
ಕಿರ್ಬಿ ಸಣ್ಣ ಸಿಡ್ನಿ ಸಂಸ್ಥೆಯ ಎಮ್ಎ ಸೈಮನ್ ಮತ್ತು ಕಂನಲ್ಲಿ ರಾಮನ್ ಬರ್ಕ್ಗೆ ಲೇಖನದ ಗುಮಾಸ್ತರಾಗಿ ತಮ್ಮ ಕಾನೂನು ವೃತ್ತಿಯನ್ನು ಪ್ರಾರಂಭಿಸಿದರು. ಫಿರ್ಯಾದಿಗಳಿಗೆ ಪರಿಹಾರ ಆಯೋಗದ ಪ್ರಕರಣಗಳಿಗೆ ಸಹಾಯ ಮಾಡಿದರು. ಸಂಸ್ಥೆಯು ಎರಡು ಪ್ರಮುಖರನ್ನು ಹೊಂದಿತ್ತು. ಮಾರಿಸ್ ಆರ್ಥರ್ ಸೈಮನ್ ಮತ್ತು ರಾಮನ್ ಬರ್ಕ್, ನಂತರ ನ್ಯೂ ಸೌತ್ ವೇಲ್ಸ್ನ ಪರಿಹಾರ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು.<ref>{{Cite web|url=http://www.michaelkirby.com.au/images/stories/speeches/1990s/vol43/1999/1588-LESSONS_AS_A_SOLICITOR_-_LAW_SOCIETY_JOURNAL.doc|title=Lessons as a Solicitor|last=Kirby|first=Michael|date=1999|website=Law Society of New South Wales Journal}}</ref><ref>{{Cite web|url=http://www.michaelkirby.com.au/images/stories/speeches/2000s/vol60/2006/2140-UWA_BLACKSTONE_SOCIETY_10_PARABLES_NOV_2006.doc|title=Ten Parables for Freshly-Minted Lawyers|last=Kirby|first=Michael|publisher=The University of Western Australia Blackstone Law Society}}</ref> ಪದವಿಯ ನಂತರ, ಅವರು ಹಿಕ್ಸನ್, ಲೇಕ್ಮನ್ ಮತ್ತು ಹಾಲ್ಕೊಂಬೆಗೆ (ಈಗ ಹಿಕ್ಸನ್ಸ್ ವಕೀಲರು) ವಕೀಲರಾಗಿ, ವಿಮಾ ದಾವೆ ಮತ್ತು ಆಸ್ತಿ ವಿವಾದಗಳಲ್ಲಿ ಅಭ್ಯಾಸ ಮಾಡಿದರು. ಅವರು ೧೯೬೩ ರಿಂದ ೧೯೬೭ ರವರೆಗೆ ಸಂಸ್ಥೆಯ ಪಾಲುದಾರರಾಗಿದ್ದರು.<ref>{{Cite web|url=http://www.hcourt.gov.au/assets/publications/speeches/former-justices/kirbyj/kirbyj_award.htm|title=Law firms and justice in Australia|last=Kirby|first=Michael|website=High Court of Australia|access-date=5 May 2019}}</ref><ref>{{Cite web|url=http://www.hcourt.gov.au/assets/publications/speeches/former-justices/kirbyj/kirbyj_hicksons.htm|title=Memories of Hicksons|last=Kirby|first=Michael|website=High Court of Australia|access-date=5 May 2019}}</ref>
ಕಿರ್ಬಿಯನ್ನು ೧೯೬೭ <ref>{{Cite web|url=http://www.hcourt.gov.au/assets/publications/speeches/former-justices/kirbyj/kirbyjbio.html|title=Biography: Hon. Justice Michael Kirby AC CMG|publisher=High Court of Australia}}</ref> ನ್ಯೂ ಸೌತ್ ವೇಲ್ಸ್ ಬಾರ್ಗೆ ಸೇರಿಸಲಾಯಿತು.
== ನ್ಯಾಯಾಂಗ ನೇಮಕಾತಿ ==
೧೯೭೫ ರಲ್ಲಿ ಫೆಡರಲ್ ನ್ಯಾಯಾಂಗ ಕಚೇರಿಗೆ ನೇಮಕಗೊಂಡ ಕಿರ್ಬಿ ಕಿರಿಯ ವ್ಯಕ್ತಿಯಾದರು. ಅವರು ಆಸ್ಟ್ರೇಲಿಯನ್ ಸಮನ್ವಯ ಮತ್ತು ಮಧ್ಯಸ್ಥಿಕೆ ಆಯೋಗದ ಉಪ ಅಧ್ಯಕ್ಷರಾಗಿ ನೇಮಕಗೊಂಡಾಗ, ಕಾರ್ಮಿಕ ವಿವಾದಗಳನ್ನು ನಿರ್ಣಯಿಸುವ ನ್ಯಾಯಮಂಡಳಿ ಅವರನ್ನು ಸ್ವೀಕರಿಸಿತು.<ref>{{Cite web|url=http://www.hcourt.gov.au/assets/publications/speeches/former-justices/kirbyj/kirbyjbio.html|title=Biography: Hon. Justice Michael Kirby AC CMG|publisher=High Court of Australia}}<cite class="citation web cs1" data-ve-ignore="true">[http://www.hcourt.gov.au/assets/publications/speeches/former-justices/kirbyj/kirbyjbio.html "Biography: Hon. Justice Michael Kirby AC CMG"]. High Court of Australia.</cite></ref> ನಂತರ ೧೯೮೪ ರಲ್ಲಿ, ಗೌರವಾನ್ವಿತ ಪೀಟರ್ ಗ್ರೇ ಕಿರ್ಬಿಯ ನಿಲುವಂಗಿಯನ್ನು ೨೯ ನೇ ವಯಸ್ಸಿನಲ್ಲಿ ಫೆಡರಲ್ ನ್ಯಾಯಾಂಗ ಕಚೇರಿಗೆ ನೇಮಿಸಿದ ಕಿರಿಯ ವ್ಯಕ್ತಿಯಾಗಿ ತೆಗೆದುಕೊಂಡರು.<ref>{{Cite web|url=http://www.australiancompetitionlaw.org/judges/gray-peter.html|title=Australian Competition Law|website=www.australiancompetitionlaw.org|access-date=2021-04-23}}</ref>
೧೯೮೩ ರಲ್ಲಿ, ಕಿರ್ಬಿಯನ್ನು ಆಸ್ಟ್ರೇಲಿಯದ ಫೆಡರಲ್ ಕೋರ್ಟ್ನಲ್ಲಿ ನ್ಯಾಯಾಧೀಶರಾಗಿ ನೇಮಿಸಲಾಯಿತು. ೧೯೮೪ ರಲ್ಲಿ ಆ ರಾಜ್ಯದ ಕಾನೂನು ವ್ಯವಸ್ಥೆಯಲ್ಲಿನ ಉನ್ನತ ನ್ಯಾಯಾಲಯವಾದ ನ್ಯೂ ಸೌತ್ ವೇಲ್ಸ್ ಕೋರ್ಟ್ ಆಫ್ ಅಪೀಲ್ನ ಅಧ್ಯಕ್ಷರಾಗಿ ನೇಮಕಗೊಳ್ಳುವ ಮೊದಲು. ಆ ಅವಧಿಯಲ್ಲಿ, ಅವರು ೧೯೯೫ ರಿಂದ <ref>Susan Boyd (2003), "Australian judges at work internationally", ''[[Australian Law Journal]]'', vol. 77, p. 303 at 305.</ref> ರವರೆಗೆ ಸೊಲೊಮನ್ ದ್ವೀಪಗಳ ಮೇಲ್ಮನವಿ ನ್ಯಾಯಾಲಯದ ಅಧ್ಯಕ್ಷರೂ ಆಗಿದ್ದರು.
೧೯೮೪ ರಿಂದ ೧೯೯೩ ರವರೆಗೆ, ಕಿರ್ಬಿ ಮ್ಯಾಕ್ವಾರಿ ವಿಶ್ವವಿದ್ಯಾಲಯದಲ್ಲಿ ಕುಲಪತಿ ಸ್ಥಾನವನ್ನು ಹೊಂದಿದ್ದರು.<ref>[http://www.hcourt.gov.au/speeches/kirbyj/kirbyjbio.html High Court Bibliography] {{Webarchive|url=https://web.archive.org/web/20100304120650/http://www.hcourt.gov.au/speeches/kirbyj/kirbyjbio.html |date=4 ಮಾರ್ಚ್ 2010 }}. Retrieved 22 January 2010.</ref>
[[ಫೆಬ್ರವರಿ]] ೧೯೯೬ ರಲ್ಲಿ, ಕಿರ್ಬಿಯನ್ನು ಆಸ್ಟ್ರೇಲಿಯಾದ ಹೈಕೋರ್ಟ್ಗೆ ನೇಮಿಸಲಾಯಿತು.<ref>{{Cite web|url=https://www.alrc.gov.au/about/president/past-presidents/hon-michael-kirby-ac-cmg/|title=Hon Michael Kirby AC CMG|website=ALRC|language=en-AU|access-date=2020-10-09}}<cite class="citation web cs1" data-ve-ignore="true">[https://www.alrc.gov.au/about/president/past-presidents/hon-michael-kirby-ac-cmg/ "Hon Michael Kirby AC CMG"]. ''ALRC''<span class="reference-accessdate">. Retrieved <span class="nowrap">9 October</span> 2020</span>.</cite></ref> ಅವರು ಅನೇಕ ಇತರ ಮಂಡಳಿಗಳು ಮತ್ತು ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಆಸ್ಟ್ರೇಲಿಯಾದ ಕಾನೂನು ಸುಧಾರಣಾ ಆಯೋಗ (ಎಎಲ್ಆರ್ಸಿ) ಮತ್ತು ಸಿಎಸ್ಐಆರ್ಒ ನಡೆಸಿದರು. ಅವರು [[ಫ್ರೆಂಡ್ಸ್]] ಆಫ್ ಲೈಬ್ರರೀಸ್ ಆಸ್ಟ್ರೇಲಿಯಾ (ಎಫ್ಒಎಲ್ಎ) ಮತ್ತು ಇತರ ಹಲವು ಸಂಸ್ಥೆಗಳ ಪೋಷಕರಾಗಿದ್ದಾರೆ.
=== ಭಿನ್ನಾಭಿಪ್ರಾಯ ದರ ===
ಕಿರ್ಬಿ ಗ್ಲೀಸನ್ ಹೈಕೋರ್ಟ್ನಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ಆಗಾಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರು ಮತ್ತು ಕೆಲವೊಮ್ಮೆ ಏಕೈಕ ಭಿನ್ನಮತೀಯನಾಗಿರುತ್ತಾನೆ.<ref>{{Cite web|url=http://www.smh.com.au/news/national/kirby-swims-against-tide-as-other-judges-go-with-flow/2007/02/15/1171405374612.html|title=Kirby swims against tide as other judges go with flow|last=Dick|first=Tim|date=16 February 2007|website=The Sydney Morning Herald|publisher=Fairfax Media}}</ref><ref>{{Cite web|url=http://www.theage.com.au/national/kirbys-last-dissent-my-fellow-judges-racially-biased-20090202-7vr7.html|title=Kirby's last dissent: my fellow judges racially biased|last=Shanahan|first=Leo|last2=Jackson|first2=Andra|date=3 February 2009|website=The Age|publisher=Fairfax Media|access-date=9 ಅಕ್ಟೋಬರ್ 2022|archive-date=12 ಏಪ್ರಿಲ್ 2014|archive-url=https://web.archive.org/web/20140412074316/http://www.theage.com.au/national/kirbys-last-dissent-my-fellow-judges-racially-biased-20090202-7vr7.html|url-status=dead}}</ref> ೨೦೦೪ ರಲ್ಲಿ, ಅವರು ಭಾಗವಹಿಸಿದ ಸುಮಾರು ೪೦% ವಿಷಯಗಳ ಬಗ್ಗೆ ಅವರು ಭಿನ್ನಾಭಿಪ್ರಾಯದ ಅಭಿಪ್ರಾಯವನ್ನು ನೀಡಿದರು. ಅವರ ಯಾವುದೇ ಹೈಕೋರ್ಟ್ ಸಹೋದ್ಯೋಗಿಗಳಿಗಿಂತ ಎರಡು ಪಟ್ಟು ಹೆಚ್ಚು ಸಾಂವಿಧಾನಿಕ ಪ್ರಕರಣಗಳಲ್ಲಿ, ಅವರ ಭಿನ್ನಾಭಿಪ್ರಾಯದ ಪ್ರಮಾಣವು ೫೦% ಕ್ಕಿಂತ ಹೆಚ್ಚಿತ್ತು.<ref>{{Cite web|url=http://www.theaustralian.com.au/news/features/its-unanimous-kirby-still-the-great-dissenter/story-e6frg6z6-1111113002018|title=It's unanimous: Kirby still the great dissenter|last=Merritt|first=Chris|date=16 February 2007|website=The Australian}}</ref> ಅವರ ಗಮನಾರ್ಹ ಭಿನ್ನಾಭಿಪ್ರಾಯವು ಅವರಿಗೆ "ಗ್ರೇಟ್ ಡಿಸೆಂಟರ್" ಎಂಬ ಅಡ್ಡಹೆಸರನ್ನು ತಂದುಕೊಟ್ಟಿದೆ.<ref>{{Cite web|url=http://www.heraldsun.com.au/news/kirby-set-to-retire/story-e6frf7jo-1111118723839|title=Kirby set to retire|date=1 February 2009|website=Herald Sun}}</ref> ಶೀರ್ಷಿಕೆಗಾಗಿ ವಿವಾದದಲ್ಲಿ ಪರಿಗಣಿಸಲಾದ ಭವಿಷ್ಯದ ಹೈಕೋರ್ಟ್ ನ್ಯಾಯಮೂರ್ತಿಗಳು ಡೈಸನ್ ಹೇಡನ್ ಮತ್ತು ಪ್ಯಾಟ್ರಿಕ್ ಕೀನ್ ಅವರನ್ನು ಒಳಗೊಂಡಿರುತ್ತಾರೆ. ಆದರೂ ಕಿರ್ಬಿಯಷ್ಟು ಭಿನ್ನಾಭಿಪ್ರಾಯವನ್ನು ಹೊಂದಿರುವುದಿಲ್ಲ.<ref>{{Cite web|url=http://www.abc.net.au/news/2013-03-05/byrne-high-court-judges/4553626|title=Justice Keane completes the new-look High Court|last=Byrne|first=Elizabeth|date=5 March 2013|website=The Drum|publisher=ABC}}</ref><ref>{{Cite web|url=http://www.timebase.com.au/news/2011/AT388-article.html|title=Justice Heydon triples his dissent rate for 2011|date=12 August 2011|website=Legal Research|publisher=TimeBase}}</ref>
ಕಾನೂನು ಸಂಶೋಧಕರಾದ ಆಂಡ್ರ್ಯೂ ಲಿಂಚ್ ಮತ್ತು ಜಾರ್ಜ್ ವಿಲಿಯಮ್ಸ್ ಗಮನಿಸಿದಂತೆ "೨೦೦೪ ರಲ್ಲಿ ಕಿರ್ಬಿ ತನ್ನ ಬಹುಪಾಲು ಸಹೋದ್ಯೋಗಿಗಳೊಂದಿಗೆ ನಿರ್ದಿಷ್ಟವಾಗಿ ಹೆಚ್ಚಿನ ಮಟ್ಟದ ಸ್ಪಷ್ಟ ಭಿನ್ನಾಭಿಪ್ರಾಯವನ್ನು ಹೊಂದಿದ್ದ ವರ್ಷವಾಗಿಯೂ ಸಹ, ಅವನ ಭಿನ್ನಾಭಿಪ್ರಾಯದ ಆವರ್ತನದಲ್ಲಿ ಹೇಳುವುದು ಅಕಾಲಿಕ ಅಥವಾ ಅನ್ಯಾಯವಲ್ಲ. ಅವರ ಗೌರವವು ನ್ಯಾಯಾಲಯದ ಇತಿಹಾಸದಲ್ಲಿ ಯಾವುದೇ ಇತರ ನ್ಯಾಯಾಧೀಶರನ್ನು ಬಹಳ ಹಿಂದೆಯೇ ಮರೆಮಾಡಿದೆ. ನ್ಯಾಯಾಲಯದಲ್ಲಿ ಹೊರಗಿನವರ ಸ್ಥಾನವನ್ನು ಪಡೆಯಲು ಒಡೆದುಹೋದರು. ಅದು ಭವಿಷ್ಯದ ವರ್ಷಗಳಲ್ಲಿ ಹಾದುಹೋಗುವ ಸಾಧ್ಯತೆಯಿಲ್ಲ ಎಂದು ತೋರುತ್ತದೆ".<ref>{{Cite web|url=http://www.gtcentre.unsw.edu.au/news/docs/HighCourtStatistics_2004.doc|title=News {{!}} Gilbert + Tobin Centre of Public Law|website=www.gtcentre.unsw.edu.au|access-date=2019-04-12|archive-date=2022-03-24|archive-url=https://web.archive.org/web/20220324140730/http://www.gtcentre.unsw.edu.au/news/docs/HighCourtStatistics_2004.doc|url-status=dead}}</ref>
ಕಿರ್ಬಿ ಪ್ರತಿಕ್ರಿಯಿಸಿ, "ತಮ್ಮದೇ ಆದ ಮೇಲೆ, ಅಂಕಿಅಂಶಗಳು ಸ್ವಲ್ಪ ಹೇಳುತ್ತವೆ". ಕಿರ್ಬಿಯ ಭಿನ್ನಾಭಿಪ್ರಾಯದ ದರವನ್ನು ಅರ್ಥಮಾಡಿಕೊಳ್ಳಲು, ಅವನ ಭಿನ್ನಾಭಿಪ್ರಾಯಗಳು ''ಏನೆಂಬುದನ್ನು'' ಪರಿಶೀಲಿಸುವುದು ಮತ್ತು ಅವನು ಯಾರಿಂದ ಭಿನ್ನಾಭಿಪ್ರಾಯ ''ವ್ಯಕ್ತಪಡಿಸಿದ್ದಾನೆ'' ಎಂಬುದನ್ನು ಪರಿಗಣಿಸುವುದು ಅವಶ್ಯಕ ಎಂದು ಕಿರ್ಬಿ ವಿವರಿಸುತ್ತಾರೆ. "ಯಾವಾಗಲೂ ವಿಭಾಗಗಳು ಇದ್ದವು, ವಿಭಿನ್ನ ತತ್ತ್ವಚಿಂತನೆಗಳು ಮತ್ತು ಪದಾಧಿಕಾರಿಗಳ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತವೆ" ಮತ್ತು ಹೈಕೋರ್ಟ್ನ ಇತಿಹಾಸದುದ್ದಕ್ಕೂ, ಅನೇಕ ಭಿನ್ನಾಭಿಪ್ರಾಯದ ಅಭಿಪ್ರಾಯಗಳನ್ನು ಅಂತಿಮವಾಗಿ ಉತ್ತಮ ಕಾನೂನಾಗಿ ಸ್ವೀಕರಿಸಲಾಗಿದೆ. ಇದಲ್ಲದೆ, ಭಿನ್ನಾಭಿಪ್ರಾಯದ ಪ್ರಮಾಣವು ಅದರ ಸನ್ನಿವೇಶದಲ್ಲಿ ನೋಡಿದರೆ ತುಲನಾತ್ಮಕವಾಗಿ ಚಿಕ್ಕದಾಗಿದೆ ಎಂದು ಕಿರ್ಬಿ ವಾದಿಸುತ್ತಾರೆ. ಹೈಕೋರ್ಟ್ನ ಪೂರ್ಣ ಪೀಠದ ಮುಂದೆ ವಿಚಾರಣೆಗೆ ಒಳಗಾದ ಪ್ರಕರಣಗಳು ಕೆಳ ನ್ಯಾಯಾಲಯಗಳ ಸರಣಿ ಮತ್ತು ವಿಶೇಷ ರಜೆ ವಿಚಾರಣೆಗಳ ಮೂಲಕ ಮುಂದುವರೆದಿದೆ. ಹೀಗಾಗಿ ಅವರು ಅಸ್ತಿತ್ವದಲ್ಲಿರುವ ಕಾನೂನಿನ ಗಡಿಗಳನ್ನು ಪರೀಕ್ಷಿಸುವ ಸಾಧ್ಯತೆಯಿದೆ ಮತ್ತು ಕಾನೂನಿನ ಬಗ್ಗೆ ಕಡಿಮೆ ಮಾನ್ಯತೆ ಇಲ್ಲದಿದ್ದರೂ ವಿರುದ್ಧವಾದ ಅಭಿಪ್ರಾಯಗಳನ್ನು ಎತ್ತುತ್ತಾರೆ.<ref>
{{Cite episode|title=Bold Enough: Justice Michael Kirby|date=2 December 2007|url=http://www.abc.net.au/sundayprofile/stories/s2106109.htm}}
</ref>
=== ನಿವೃತ್ತಿ ಮತ್ತು ನಿವೃತ್ತಿಯ ನಂತರದ ಜೀವನ ===
ಕಿರ್ಬಿ ೨೦೦೯ ರ ಫೆಬ್ರುವರಿ ೨ ರಂದು ಉಚ್ಚ ನ್ಯಾಯಾಲಯದಿಂದ ನಿವೃತ್ತರಾದರು. ಸಾಂವಿಧಾನಿಕವಾಗಿ ಕಡ್ಡಾಯ ನಿವೃತ್ತಿ ವಯಸ್ಸು ೭೦ ಅನ್ನು ತಲುಪುವ ಸ್ವಲ್ಪ ಮೊದಲು,<ref>[[Constitution of Australia]], section 72.</ref> ಮತ್ತು ವರ್ಜೀನಿಯಾ ಬೆಲ್ ಅವರು ಉತ್ತರಾಧಿಕಾರಿಯಾದರು.<ref>[http://www.smh.com.au/news/national/high-court-gets-fourth-woman/2008/12/15/1229189518021.html High Court gets fourth woman]. Retrieved 15 December 2008.</ref>
ಅವರ ನಿವೃತ್ತಿಯ ನಂತರ, ಕಿರ್ಬಿಯನ್ನು [[ಆಸ್ಟ್ರೇಲಿಯ|ಆಸ್ಟ್ರೇಲಿಯಾದ]] ವಿಶ್ವವಿದ್ಯಾಲಯಗಳಲ್ಲಿ ಹಲವಾರು ಗೌರವ ಶೈಕ್ಷಣಿಕ ಪಾತ್ರಗಳಿಗೆ ನೇಮಿಸಲಾಯಿತು. ಇವುಗಳು ನೇಮಕಾತಿಗಳನ್ನು ಒಳಗೊಂಡಿವೆ: ಕ್ಯಾನ್ಬೆರಾದಲ್ಲಿನ ಆಸ್ಟ್ರೇಲಿಯನ್ ನ್ಯಾಶನಲ್ ಯೂನಿವರ್ಸಿಟಿ (ಎಎನ್ಯು), ಫೆಬ್ರವರಿ ೨೦೦೯ ರಲ್ಲಿ ವಿಸಿಟಿಂಗ್ ಫೆಲೋ ಆಗಿ <ref>{{Cite news|url=http://news.smh.com.au/breaking-news-national/kirby-takes-on-new-job-at-anu-law-school-20090209-81mu.html|title=Kirby takes on new job at ANU law school|last=Australian Associated Press|date=9 February 2009|work=Sydney Morning Herald|access-date=9 February 2009}}</ref> ಯೂನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್ ಫ್ಯಾಕಲ್ಟಿ ಆಫ್ ಲಾ ಮಾರ್ಚ್ ೨೦೦೯ ರಲ್ಲಿ ಸಂದರ್ಶಕ ಪ್ರೊಫೆಸರಿಯಲ್ ಫೆಲೋ ಆಗಿ <ref>[http://newsroom.unsw.edu.au/news/business-law/michael-kirby-joins-unsw news@unsw Michael Kirby joins UNSW | UNSW Newsroom]</ref> ಜುಲೈ ೨೦೦೯ ರಲ್ಲಿ ಟ್ಯಾಸ್ಮೆನಿಯಾ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು [[ವಿಕ್ಟೋರಿಯಾ ಸ್ಮಾರಕ|ವಿಕ್ಟೋರಿಯಾ]] ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿ. ಅವರನ್ನು ೧೨ ವಿಶ್ವವಿದ್ಯಾಲಯಗಳು [[ಗೌರವ]] ಸಂದರ್ಶಕ ಪ್ರಾಧ್ಯಾಪಕರಾಗಿ ನೇಮಿಸಿವೆ.
== ನ್ಯಾಯಶಾಸ್ತ್ರ ==
[[ನವೆಂಬರ್]] ೨೦೦೩ ರಲ್ಲಿ, ಎಕ್ಸೆಟರ್ ವಿಶ್ವವಿದ್ಯಾನಿಲಯದಲ್ಲಿ ಕಿರ್ಬಿ ನ್ಯಾಯಾಂಗ ಕ್ರಿಯಾವಾದದ ವಿಷಯದ ಮೇಲೆ ಹ್ಯಾಮ್ಲಿನ್ ಉಪನ್ಯಾಸಗಳನ್ನು ನೀಡಿದರು. ಕಟ್ಟುನಿಟ್ಟಾದ ನಿರ್ಮಾಣದ ಸಿದ್ಧಾಂತವನ್ನು ತಿರಸ್ಕರಿಸಿದ ಕಿರ್ಬಿ ಹೀಗೆ ಘೋಷಿಸಿದರು:<blockquote>ಒಬ್ಬ ನ್ಯಾಯಾಧೀಶರು ವೈಯಕ್ತಿಕ ನೀತಿಯ ಕಾರ್ಯಸೂಚಿಯನ್ನು ಅನುಸರಿಸಲು ಹೊರಟು ಕಾನೂನನ್ನು ನೇಣು ಹಾಕುವುದು ತಪ್ಪಾಗುತ್ತದೆ. ಆದಾಗ್ಯೂ, ನ್ಯಾಯಾಧೀಶರು ಇಂದು ಕಾನೂನಿನ ಎಲ್ಲಾ ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರಗಳನ್ನು ಅವಿವಾದಿಸಲಾಗದ ಸ್ಪಷ್ಟ ಮತ್ತು ಅನ್ವಯವಾಗುವ ಪಠ್ಯಗಳಿಂದ ಪರಿಹರಿಸಲಾಗುವುದಿಲ್ಲ ಎಂದು ನಟಿಸುವುದು ತಪ್ಪು ಮತ್ತು ನಿಷ್ಪ್ರಯೋಜಕವಾಗಿದೆ ಮತ್ತು ಹಿಂದಿನ ಕಾಲದಲ್ಲಿ ನ್ಯಾಯಾಧೀಶರು ಅವರು ಎದುರಿಸಿದ ಸಮಸ್ಯೆಗಳ ಬಗ್ಗೆ ಬರೆದ ಪದಗಳಿಗೆ ಕಟ್ಟುನಿಟ್ಟಾದ ತರ್ಕ. ಪುರಾಣಕ್ಕೆ ವಿರುದ್ಧವಾಗಿ, ನ್ಯಾಯಾಧೀಶರು ಕಾನೂನನ್ನು ಸರಳವಾಗಿ ಅನ್ವಯಿಸುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತಾರೆ. ಅದನ್ನು ಮಾಡುವಲ್ಲಿ ಅವರ ಪಾತ್ರವಿದೆ ಮತ್ತು ಯಾವಾಗಲೂ ಇರುತ್ತದೆ.</blockquote>ಈ ಉಪನ್ಯಾಸಗಳು ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದವು. ಯುನೈಟೆಡ್ ಸ್ಟೇಟ್ಸ್ನಲ್ಲಿ ನಡೆಯುತ್ತಿರುವ ಚರ್ಚೆಯನ್ನು ಪ್ರತಿಧ್ವನಿಸಿತು, ನ್ಯಾಯಾಧೀಶರು ಕಾನೂನನ್ನು ಅದರ ಉದ್ದೇಶ ಮತ್ತು ನೈಸರ್ಗಿಕ ಕಾನೂನಿನ ಪರಿಗಣನೆಗಳ ಬೆಳಕಿನಲ್ಲಿ ಅರ್ಥೈಸುವ ಹಕ್ಕನ್ನು ಹೊಂದಿದ್ದಾರೆಯೇ ಅಥವಾ ನ್ಯಾಯಾಧೀಶರು ಸರಳವಾಗಿ ಮಾಡಬೇಕೇ (ಅಥವಾ ಮಾಡಬಹುದು) ಕಾನೂನಿನ ಪತ್ರವನ್ನು ಅನುಸರಿಸಿ, ಅದರ ಉದ್ದೇಶ ಮತ್ತು ಆಧಾರವಾಗಿರುವ ತತ್ವಗಳ ಪ್ರಶ್ನೆಗಳನ್ನು ಚುನಾಯಿತ ಪ್ರತಿನಿಧಿಗಳಿಗೆ ಬಿಟ್ಟುಬಿಡುತ್ತದೆ.
೧೯೯೦ ರ ದಶಕದ ಉತ್ತರಾರ್ಧದಲ್ಲಿ 'ಕಾರ್ಯಕರ್ತ' ಎಂಬ ಹೈಕೋರ್ಟ್ ತೀರ್ಪುಗಳ ಸಾರ್ವಜನಿಕ ಪರಿಶೀಲನೆ ಮತ್ತು ಗುಣಲಕ್ಷಣಗಳ ನಂತರ, ನ್ಯಾಯಾಲಯದ ಹಲವಾರು ಸದಸ್ಯರು ೧೯೯೮ ರ ಸಾಕ್ಷ್ಯಚಿತ್ರ ''ದಿ ಹೈಯೆಸ್ಟ್ ಕೋರ್ಟ್'' ನಲ್ಲಿ ಸಂದರ್ಶನಗಳನ್ನು ನೀಡಲು ಒಪ್ಪಿಕೊಂಡರು. ಭಾಗವಹಿಸದ ನ್ಯಾಯಾಲಯದ ಕೆಲವೇ ಸದಸ್ಯರಲ್ಲಿ ಕಿರ್ಬಿ ಒಬ್ಬರು.<ref>{{Cite web|url=https://www.filmartmedia.com/projects/the-highest-court/|title=The Highest Court|website=Film Art Media|language=en-AU|access-date=2021-04-23}}</ref><ref>{{Citation|title=The Highest Court (1998) - Documentary on the High Court of Australia|url=https://www.youtube.com/watch?v=xQUH1NpidoA|language=en|access-date=2021-04-23}}</ref> ಕಿರ್ಬಿಯ ನ್ಯಾಯಶಾಸ್ತ್ರ ಮತ್ತು ನ್ಯಾಯಾಂಗ ಶೈಲಿಯ ಒಳನೋಟವನ್ನು ''ಕ್ರುಗರ್ ವಿ ಕಾಮನ್ವೆಲ್ತ್ನಲ್ಲಿ ಗೇವಿನ್ ಗ್ರಿಫಿತ್ ಕ್ಯೂಸಿ ಅವರೊಂದಿಗಿನ ನಿಶ್ಚಿತಾರ್ಥದಲ್ಲಿ ಕಾಣಬಹುದು,'' ಇದು ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿದೆ.
ಅವರು ೧೯೯೭ ರಲ್ಲಿ ಬಾರ್ ಅಸೋಸಿಯೇಶನ್ ಆಫ್ ಇಂಡಿಯಾಕ್ಕೆ ಮಾಡಿದ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಇದರಲ್ಲಿ ಅವರು "ಸಾಮಾನ್ಯ ನಾಗರಿಕರ ಆಳವಾದ ಭಾವನೆಗಳಿಗೆ ಹೊಂದಿಕೆಯಾಗುವ ಒಂದು ರೀತಿಯ 'ನ್ಯಾಯಾಂಗ ಕ್ರಿಯಾಶೀಲತೆ'ಯನ್ನು ಅನುಮೋದಿಸಿ ಮಾತನಾಡಿದರು. ಅದೇನೇ ಇದ್ದರೂ, ಕಿರ್ಬಿ "[[ನ್ಯಾಯಾಂಗ]] ಕ್ರಿಯಾಶೀಲತೆ" ಎಂಬ ಪದವನ್ನು "ಕೋಡ್ ಭಾಷೆ" ಎಂದು ಬಳಸಿದಾಗ ಅದನ್ನು ಟೀಕಿಸುತ್ತಾನೆ. ಇದನ್ನು ಮುಖ್ಯವಾಗಿ ಸಂಪ್ರದಾಯವಾದಿ ವ್ಯಾಖ್ಯಾನಕಾರರು ವೀಕ್ಷಣೆಗಳು ಮತ್ತು ಅವರು ಒಪ್ಪದ ಜನರಿಗೆ ಅನ್ವಯಿಸುತ್ತಾರೆ.<ref>{{Cite episode|title=The Great Dissenter: Justice Michael Kirby|date=25 November 2007|url=http://www.abc.net.au/sundayprofile/stories/s2100123.htm|access-date=2 December 2007|accessdate=28 November 2007}}</ref>
== ಉತ್ತರ ಕೊರಿಯಾದ ಮಾನವ ಹಕ್ಕುಗಳ ದುರುಪಯೋಗಗಳ ಕುರಿತು ಯುಎನ್ ವರದಿ ==
[[ಚಿತ್ರ:Michael_Kirby,_Chairman_of_the_UN_Commission_of_Inquiry_on_the_DPRK.jpg|link=//upload.wikimedia.org/wikipedia/commons/thumb/1/17/Michael_Kirby%2C_Chairman_of_the_UN_Commission_of_Inquiry_on_the_DPRK.jpg/220px-Michael_Kirby%2C_Chairman_of_the_UN_Commission_of_Inquiry_on_the_DPRK.jpg|thumb| ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಉತ್ತರ ಕೊರಿಯಾದ ನಾಯಕತ್ವವನ್ನು ವಿಚಾರಣೆಗೆ ಒಳಪಡಿಸುವಂತೆ ಕಿರ್ಬಿ ಅಧ್ಯಕ್ಷತೆಯ ತನಿಖಾ ಆಯೋಗವು ಶಿಫಾರಸು ಮಾಡಿದೆ.]]
ಮೇ ೨೦೧೩ ರಲ್ಲಿ, ಯುನೈಟೆಡ್ ನೇಷನ್ಸ್ ಹ್ಯೂಮನ್ ರೈಟ್ಸ್ ಕೌನ್ಸಿಲ್ [[ಉತ್ತರ ಕೊರಿಯಾ|ಉತ್ತರ ಕೊರಿಯಾದಲ್ಲಿ]] ಮಾನವ ಹಕ್ಕುಗಳ ಉಲ್ಲಂಘನೆಯ ತನಿಖೆಯ ಆಯೋಗವನ್ನು ಮುನ್ನಡೆಸಲು ಕಿರ್ಬಿಯನ್ನು ನೇಮಿಸಿತು. ಸೋಂಜಾ ಬಿಸೆರ್ಕೊ ಮತ್ತು ಮರ್ಜುಕಿ ದಾರುಸ್ಮಾನ್ ಅವರೊಂದಿಗೆ.<ref>[http://www.ohchr.org/EN/NewsEvents/Pages/DisplayNews.aspx?NewsID=13301&LangID=E Council President appoints Members of Commission of Inquiry on the Democratic People’s Republic in Korea] Retrieved 8 May 2013</ref><ref>{{Cite web|url=http://www.smh.com.au/national/un-appoints-kirby-to-head-inquiry-into-rights-abuses-in-north-korea-20130508-2j82r.html|title=UN appoints Kirby to head inquiry into human rights abuses in North Korea|date=9 May 2013|website=Sydney Morning Herald|access-date=9 May 2013}}</ref> ವರದಿ ದಿನಾಂಕ ೭ ಫೆಬ್ರವರಿ ೨೦೧೪. ಇದು ರಾಜಕೀಯ ಜೈಲು ಶಿಬಿರಗಳಲ್ಲಿ "ಹೇಳಲಾಗದ ದೌರ್ಜನ್ಯಗಳು" ಸೇರಿದಂತೆ "ನಿರಂಕುಶ ರಾಜ್ಯ" ದಿಂದ "[ಗಳು] ವ್ಯವಸ್ಥಿತ, ವ್ಯಾಪಕ ಮತ್ತು ಸಮಗ್ರ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು" ಗುರುತಿಸುತ್ತದೆ. ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ನಲ್ಲಿ ಅಥವಾ ತಾತ್ಕಾಲಿಕ ಅಂತರಾಷ್ಟ್ರೀಯ ನ್ಯಾಯಮಂಡಳಿಯ ಮುಂದೆ ಉತ್ತರ ಕೊರಿಯಾದ ನಾಯಕತ್ವದ [[ಕಾನೂನು]] ಕ್ರಮ ಸೇರಿದಂತೆ ಆಂತರಿಕ ಸುಧಾರಣೆ ಮತ್ತು [[ಅಂತರರಾಷ್ಟ್ರೀಯ ವ್ಯಾಪಾರ|ಅಂತರಾಷ್ಟ್ರೀಯ]] ಕ್ರಮಕ್ಕಾಗಿ ಇದು ಅನೇಕ ಶಿಫಾರಸುಗಳನ್ನು ಮಾಡುತ್ತದೆ.<ref>{{Cite web|url=http://www.ohchr.org/EN/HRBodies/HRC/CoIDPRK/Pages/ReportoftheCommissionofInquiryDPRK.aspx|title=Report of the Commission of Inquiry on Human Rights in the Democratic People's Republic of Korea|date=7 February 2014|publisher=United Nations High Commissioner for Human Rights|access-date=20 February 2014}}</ref> ಉತ್ತರ ಕೊರಿಯಾ ವಿಚಾರಣೆಗೆ ಎಲ್ಲಾ ಸಹಕಾರವನ್ನು ನಿರಾಕರಿಸಿತು ಮತ್ತು ವರದಿಯನ್ನು ಪ್ರಾರಂಭಿಸುವ ಮೊದಲು, ಅದು "ನಕಲಿ" ವಸ್ತುಗಳನ್ನು ಆಧರಿಸಿದೆ ಎಂದು ಹೇಳಿಕೆಯನ್ನು ನೀಡಿತು.<ref>{{Cite web|url=http://www.smh.com.au/world/north-korea-says-un-report-based-on-faked-material-20140217-hvcrs.html|title=North Korea says UN report based on 'faked' material|date=18 February 2014|website=Sydney Morning Herald|access-date=20 February 2014}}</ref>
ವರದಿಯನ್ನು ಅಂತಿಮಗೊಳಿಸುತ್ತಿದ್ದಂತೆ, ೨೦ ಜನವರಿ ೨೦೧೪ ರಂದು ಕಿರ್ಬಿ ಉತ್ತರ ಕೊರಿಯಾದ ಸರ್ವೋಚ್ಚ ನಾಯಕ [[ಕಿಮ್ ಜೋಂಗ್ ಅನ್|ಕಿಮ್ ಜೊಂಗ್-ಉನ್]] ಅವರಿಗೆ ಪತ್ರ ಬರೆದರು. ಉತ್ತರ ಕೊರಿಯಾದಲ್ಲಿನ ಪರಿಸ್ಥಿತಿಯನ್ನು ಔಪಚಾರಿಕವಾಗಿ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ಗೆ ಉಲ್ಲೇಖಿಸಲು [[ಸಂಯುಕ್ತ ರಾಷ್ಟ್ರ ಸಂಸ್ಥೆ|ವಿಶ್ವಸಂಸ್ಥೆಗೆ]] ಸಲಹೆ ನೀಡುವುದಾಗಿ ತಿಳಿಸಿದರು. ಅಲ್ಲಿ ಕಿಮ್ ರಾಷ್ಟ್ರದ ಮುಖ್ಯಸ್ಥ ಮತ್ತು ಮಿಲಿಟರಿ ನಾಯಕನಾಗಿ ಅವರ ವೈಯಕ್ತಿಕ ಅಪರಾಧಕ್ಕಾಗಿ ಪ್ರಯತ್ನಿಸಬಹುದು. ಆದರೆ ಉತ್ತರ ಕೊರಿಯಾದ ಸರ್ಕಾರದೊಂದಿಗೆ ಸಮಸ್ಯೆಗಳನ್ನು ಚರ್ಚಿಸಲು ಆಯೋಗವು [[ಪ್ಯೊನ್ಗ್ಯಾಂಗ್|ಪ್ಯೊಂಗ್ಯಾಂಗ್ಗೆ]] ಬರಬೇಕೆಂದು ಪ್ರಸ್ತಾಪಿಸುತ್ತದೆ.<ref>{{Cite web|url=https://www.theguardian.com/world/2014/feb/17/north-korea-human-rights-abuses-united-nations|title=UN panel accuses North Korea of human rights abuses resembling Nazis|last=Walker|first=Peter|date=18 February 2014|website=The Guardian|access-date=18 February 2014}} The letter is appended to the report; there was no reply.</ref><ref>[https://www.theguardian.com/world/interactive/2014/feb/17/united-nations-letter-north-korea-human-rights UN inquiry chairman's letter to Kim Jong-un on North Korean rights abuses]</ref> ೧೭ ಫೆಬ್ರವರಿ ೨೦೧೪ ರಂದು ವರದಿಯನ್ನು ಪ್ರಾರಂಭಿಸಲು ಪತ್ರಿಕಾಗೋಷ್ಠಿಯಲ್ಲಿ, ಕಿರ್ಬಿ ಅವರು ಕೇಳಿದ ಪುರಾವೆಗಳು ಮತ್ತು ಎರಡನೆಯ ಮಹಾಯುದ್ಧದಲ್ಲಿ ನಾಜಿಗಳು ಮತ್ತು ಅವರ ಮಿತ್ರರು ಮಾಡಿದ ಅಪರಾಧಗಳ ನಡುವೆ "ಅನೇಕ ಸಮಾನಾಂತರಗಳಿವೆ" ಎಂದು ಹೇಳಿದರು.<ref>{{Cite web|url=http://www.smh.com.au/world/north-korea-crimes-evoke-nazi-era-un-inquiry-finds-20140218-hvcsm.html|title=North Korea crimes evoke Nazi era, UN inquiry finds|last=Nebehay|first=Stephanie|date=18 February 2014|website=Sydney Morning Herald|access-date=18 February 2014}}</ref> ೨೨ ಏಪ್ರಿಲ್ ೨೦೧೪ ರಂದು ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆ, ಕೆಸಿಎನ್ಎ, "ಫ್ಯಾಬ್ರಿಕೇಶನ್ಗಳು" " [[ಉತ್ತರ ಕೊರಿಯಾ|ಡಿಪಿಆರ್ಕೆ]] ಯ ಸಿದ್ಧಾಂತ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಲು" ಉದ್ದೇಶಿಸಲಾಗಿದೆ ಎಂದು ಹೇಳಿಕೊಂಡಿದೆ.<ref>{{Cite web|url=http://www.kcna.co.jp/item/2014/201404/news22/20140422-02ee.html|title=KCNA Commentary Slams Artifice by Political Swindlers|date=22 April 2014|website=Korean Central News Agency|archive-url=https://web.archive.org/web/20140729025304/http://www.kcna.co.jp/item/2014/201404/news22/20140422-02ee.html|archive-date=29 July 2014}}</ref> ಕೆಸಿಎನ್ಎ ಕಿರ್ಬಿಯನ್ನು ಸಲಿಂಗಕಾಮಿ ಎಂದು ಟೀಕಿಸಿದೆ: "ಅಂತಹ ಸಲಿಂಗಕಾಮಿಗಳಿಗೆ ಇದು ಹಾಸ್ಯಾಸ್ಪದವಾಗಿದೆ. ಇತರರ ಮಾನವ ಹಕ್ಕುಗಳ ಸಮಸ್ಯೆಯೊಂದಿಗೆ ವ್ಯವಹರಿಸುವುದನ್ನು ಪ್ರಾಯೋಜಿಸಲು".<ref>{{Cite news|url=https://www.washingtonpost.com/blogs/worldviews/wp/2014/04/22/north-korean-state-media-slams-u-n-human-rights-report-because-it-was-led-by-a-gay-man/|title=North Korea slams U.N. human rights report because it was led by gay man|last=Taylor|first=Adam|date=2014-04-22|work=Washington Post|access-date=2014-04-23}}</ref><ref>{{Cite web|url=http://www.kcna.co.jp/item/2014/201404/news22/20140422-02ee.html|title=KCNA Commentary Slams Artifice by Political Swindlers|date=22 April 2014|website=kcna.co.jp|publisher=the Korean Central News Agency (KCNA)|archive-url=https://web.archive.org/web/20140729025304/http://www.kcna.co.jp/item/2014/201404/news22/20140422-02ee.html|archive-date=29 July 2014|access-date=17 August 2015}}</ref>
ಕಿರ್ಬಿ [[ಉತ್ತರ]] ಕೊರಿಯಾದಲ್ಲಿ ಮಾನವ ಹಕ್ಕುಗಳ ಸಮಸ್ಯೆಗಳು ಮತ್ತು ಜಪಾನಿನ ನಾಗರಿಕರ ಅಪಹರಣದ ಬಗ್ಗೆ ವಕಾಲತ್ತು ವಹಿಸಿದರು, ಜಪಾನೀಸ್ ಸರ್ಕಾರವು ಜಿನೀವಾದಲ್ಲಿ (ಸೆಪ್ಟೆಂಬರ್ ೨೦೧೪) ಯುಎನ್ ಮಾನವ ಹಕ್ಕುಗಳ ಮಂಡಳಿಯೊಂದಿಗೆ ಮತ್ತು ಟೋಕಿಯೊದಲ್ಲಿ (ಡಿಸೆಂಬರ್ ೨೦೧೫) ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು. ಮೇ ೨೦೧೭ ರಲ್ಲಿ,<ref>{{Cite journal|title=Reception in honour of the Hon. Michael Kirby AC CMG|volume=52|issue=2|page=3|date=October 2017|url=https://www.sydney.au.emb-japan.go.jp/document/english/japan_reports/JR52-2/JR%20Vol%2052-2%20p.3.pdf|journal=The Consulate-General of Japan in Sydney's Quarterly Newsletter|access-date=2022-10-09|archive-date=2022-08-08|archive-url=https://web.archive.org/web/20220808132655/https://www.sydney.au.emb-japan.go.jp/document/english/japan_reports/JR52-2/JR%20Vol%2052-2%20p.3.pdf|url-status=dead}}</ref> ಅವರಿಗೆ ಆರ್ಡರ್ ಆಫ್ ದಿ ರೈಸಿಂಗ್ ಸನ್, ಗೋಲ್ಡ್ ಅಂಡ್ ಸಿಲ್ವರ್ ಸ್ಟಾರ್ ಪ್ರಶಸ್ತಿಯನ್ನು ನೀಡಲಾಯಿತು. "ಅಪಹರಣಗಳ ವಿಷಯ ಸೇರಿದಂತೆ ಅಂತರಾಷ್ಟ್ರೀಯ ಸಮಾಜದಲ್ಲಿ ಉತ್ತರ ಕೊರಿಯಾದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯ ತಿಳುವಳಿಕೆಯನ್ನು ಉತ್ತೇಜಿಸಲು ಅವರ ಕೊಡುಗೆಯನ್ನು ಗುರುತಿಸಿ. ಜಪಾನಿನ ಪ್ರಜೆಗಳ".<ref>{{Cite web|url=https://www.sydney.au.emb-japan.go.jp/document/english/annex.pdf|title=The Hon. Mr. Michael Kirby AC CMG – The Order of the Rising Sun, Gold and Silver Star|publisher=Consulate-General of Japan in Sydney|access-date=2022-10-09|archive-date=2022-08-08|archive-url=https://web.archive.org/web/20220808133110/https://www.sydney.au.emb-japan.go.jp/document/english/annex.pdf|url-status=dead}}</ref> ಈ ಗೌರವವನ್ನು ಜಪಾನಿನ ಪ್ರಧಾನ ಮಂತ್ರಿ [[ಶಿಂಜೋ ಅಬೆ]] ಅವರು ನೀಡಿದರು ಮತ್ತು ಕಿರ್ಬಿ ಅವರು ಟೋಕಿಯೊದ ಇಂಪೀರಿಯಲ್ ಪ್ಯಾಲೇಸ್ನಲ್ಲಿ ಜಪಾನಿನ ಚಕ್ರವರ್ತಿ [[ಅಕಿಹಿಟೊ]] ಅವರೊಂದಿಗೆ ಸಭಿಕರ ಹೆಚ್ಚುವರಿ ಗೌರವವನ್ನು ಪಡೆದರು.<ref>{{Cite journal|title=2017 Spring Imperial Decorations: the Hon. Michael Kirby AC CMG|url=https://www.sydney.au.emb-japan.go.jp/document/english/japan_reports/JR52-1/JReports%20Vol%2052-1%20p.2.pdf|volume=52|issue=1|date=July 2017|page=2|journal=The Consulate-General of Japan in Sydney's Quarterly Newsletter|first=Michael|last=Kirby|access-date=2022-10-09|archive-date=2023-06-05|archive-url=https://web.archive.org/web/20230605164546/https://www.sydney.au.emb-japan.go.jp/document/english/japan_reports/JR52-1/JReports%20Vol%2052-1%20p.2.pdf|url-status=dead}}</ref> ಕಿರ್ಬಿ ತನಗೆ ಮತ್ತು ವಿಶ್ವಸಂಸ್ಥೆಯ ಮಾಜಿ ವಿಶೇಷ ವರದಿಗಾರ ಮರ್ಜುಕಿ ದಾರುಸ್ಮಾನ್ <ref>{{Cite news|url=https://www.smh.com.au/world/michael-kirby-calls-for-peaceful-initiatives-on-north-korea-after-decoration-20170517-gw6sxr.html|title=Finding Megumi: Michael Kirby calls for 'peaceful initiatives' on North Korea|last=Hurst|first=Daniel|date=21 May 2017|work=[[The Sydney Morning Herald]]|access-date=12 February 2017}}</ref> ಅವರಿಗೆ ಗೌರವವನ್ನು ನೀಡುವುದನ್ನು ವಿವರಿಸಿದರು "ಅಂತರರಾಷ್ಟ್ರೀಯ ಸಮುದಾಯ ಮತ್ತು ಇತರ ಅಪಹರಣಗಳಲ್ಲಿ ಭಾಗಿಯಾಗಿರುವ ಮಾನವೀಯತೆಯ ವಿರುದ್ಧದ ಅಪರಾಧವನ್ನು ಮುಂದುವರಿಸುವ ತನ್ನ ನಿರ್ಣಯವನ್ನು ಜಪಾನ್ ಸರ್ಕಾರವು ಕೈಬಿಟ್ಟಿಲ್ಲ ಎಂಬ ಸ್ಪಷ್ಟ ಸಂಕೇತವಾಗಿದೆ. ನಮ್ಮ ವರದಿಯಲ್ಲಿ ಅಪರಾಧಗಳು ಬಹಿರಂಗವಾಗಿವೆ.
[[ಜನವರಿ]] ೨೦೧೫ ರಲ್ಲಿ, ಕಿರ್ಬಿಯ ವಿಚಾರಣೆಯ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾದ ಶಿನ್ ಡಾಂಗ್ ಹ್ಯುಕ್ ಅವರು ಸುಳ್ಳು ಸಾಕ್ಷ್ಯವನ್ನು ನೀಡಿದ್ದಾರೆ ಎಂದು ಒಪ್ಪಿಕೊಂಡರು. ಕುಖ್ಯಾತ ಕ್ಯಾಂಪ್ ೧೪ ರಲ್ಲಿ ತನ್ನ ಬಾಲ್ಯವನ್ನು ಸಂಪೂರ್ಣವಾಗಿ ಕಳೆದಿದ್ದೇನೆ ಎಂದು [[ಪ್ರತಿಜ್ಞೆ]] ಮಾಡಿದ ನಂತರ, ಅವನು ತನ್ನ ಆರನೇ ವಯಸ್ಸಿನಲ್ಲಿ ಹತ್ತಿರದ ಕ್ಯಾಂಪ್ <ref>North Korea defector admits falsehoods in prison camp story, https://www.ft.com/content/00894c3e-9fc5-11e4-aa89-00144feab7de</ref> ಗೆ ವರ್ಗಾಯಿಸಲ್ಪಟ್ಟಿದ್ದಾನೆ ಎಂದು ತನ್ನ ಕಥೆಯನ್ನು ಬದಲಾಯಿಸಿದನು. ದೂರದರ್ಶನದಲ್ಲಿ ತನ್ನ ತಂದೆಯನ್ನು (ಸತ್ತಿದ್ದಾನೆಂದು ಭಾವಿಸಿದ್ದ) ನೋಡಿದ ನಂತರ ತನ್ನ ಕಥೆಯನ್ನು ಬದಲಾಯಿಸಿದೆ ಎಂದು ಅವರು ಹೇಳಿದರು. ಶಿನ್ ಕ್ಷಮೆಯಾಚಿಸಿದರು ಆದರೆ ಕೆಲವು ವಿವರಗಳನ್ನು ನೀಡಿದರು.<ref>{{Cite news|url=https://www.theguardian.com/world/2015/jan/19/north-korea-defector-change-story-shin-dong-hyuk|title=North Korean defector changes story after seeing father in video|last=Reuters|date=2015-01-19|work=The Guardian|access-date=2019-04-12|language=en-GB|issn=0261-3077}}</ref>
== ಸಾರ್ವಜನಿಕ ಜೀವನ ==
ಮೈಕೆಲ್ ಕಿರ್ಬಿ ೧೯೯೯ ರ ಗಣರಾಜ್ಯ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಾಂವಿಧಾನಿಕ ರಾಜಪ್ರಭುತ್ವದ ಆಸ್ಟ್ರೇಲಿಯನ್ನರ ಸಂಸ್ಥಾಪಕರಲ್ಲಿ ಸೇರಿದ್ದಾರೆ.
ಕಿರ್ಬಿ ಅವರು ನಿರರ್ಗಳ ಮತ್ತು ಶಕ್ತಿಯುತ ವಾಗ್ಮಿ ಎಂದು ಖ್ಯಾತಿಯನ್ನು ಹೊಂದಿದ್ದಾರೆ. ವೈವಿಧ್ಯಮಯ ವಿಷಯಗಳ ಕುರಿತು ತಮ್ಮ ವೃತ್ತಿಜೀವನದಲ್ಲಿ ಹೆಚ್ಚಿನ ಸಂಖ್ಯೆಯ ಭಾಷಣಗಳನ್ನು ನೀಡಿದ್ದಾರೆ.<ref>[http://www.hcourt.gov.au/publications_05.html#MichaelKirby High Court of Australia – Publications – Speeches]</ref>
ವಾರ್ಷಿಕ ಮೈಕೆಲ್ ಕಿರ್ಬಿ ಉಪನ್ಯಾಸ ಮತ್ತು <ref>"School of Law and Justice Annual Michael Kirby Lecture Series" < http://scu.edu.au/law-justice/index.php/57 {{Webarchive|url=https://web.archive.org/web/20171030044200/http://scu.edu.au/law-justice/index.php/57 |date=2017-10-30 }} ></ref> ಕಾನೂನು ಮತ್ತು ನ್ಯಾಯ ವಿಭಾಗ, ಸದರ್ನ್ ಕ್ರಾಸ್ ವಿಶ್ವವಿದ್ಯಾನಿಲಯವು ೨೦೦೭ ರಿಂದ ನಡೆಸುತ್ತಿದೆ.
Kirby is a fellow of the Hastings Center, an independent bioethics research institution in the United States. In 2006, he was elected an Honorary Bencher of the Inner Temple in London. In the same year, the Australian Academy of the Humanities elected him an Honorary Fellow.<ref>{{Cite web|url=https://www.humanities.org.au/fellows/fellows/|title=Fellows|website=Australian Academy of the Humanities|language=en-AU|access-date=2020-10-06|archive-date=2018-07-19|archive-url=https://web.archive.org/web/20180719233504/https://www.humanities.org.au/fellows/fellows/|url-status=dead}}</ref>
ಜುಲೈ ೨೦೦೯ ರಲ್ಲಿ, ಕಿರ್ಬಿ ಅವರು ಟ್ಯಾಸ್ಮೆನಿಯಾ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸ್ಥಾನ ಪಡೆದರು. ಅವರು ಅಧ್ಯಾಪಕರು ಪ್ರಕಟಿಸಿದ ''[http://www.jlisjournal.org ಕಾನೂನು, ಮಾಹಿತಿ ಮತ್ತು ವಿಜ್ಞಾನದ ಜರ್ನಲ್ನ] {{Webarchive|url=https://web.archive.org/web/20221009091940/http://www.jlisjournal.org/ |date=2022-10-09 }}'' ಸಂಪಾದಕೀಯ ಮಂಡಳಿಯ (ಸ್ಥಾಪಕ) ಅಧ್ಯಕ್ಷರೂ ಆಗಿದ್ದಾರೆ; ಅವರು ೧೯೮೧ ರಿಂದ ಈ ಸ್ಥಾನವನ್ನು ಹೊಂದಿದ್ದಾರೆ.<ref>See "Contributions to the JLIS by Hon. Prof Michael Krby AC CMG." < http://www.jlisjournal.org/briefs/kirbypapers.html {{Webarchive|url=https://web.archive.org/web/20211025081806/http://www.jlisjournal.org/Briefs/KirbyPapers.html |date=2021-10-25 }} ></ref>
Since 2010, Kirby has been one of the 11 members of the Eminent Persons Group set up to advise on reform of the [[ಕಾಮನ್ವೆಲ್ತ್ ರಾಷ್ಟ್ರಗಳು|Commonwealth of Nations]].<ref>{{Cite web|url=http://www.thecommonwealth.org/Internal/228488/228492/whos_in_the_epg/|title=Who's in the EPG?|last=Commonwealth (of Nations) Secretariat|year=2011|archive-url=https://web.archive.org/web/20130522091357/http://www.thecommonwealth.org/Internal/228488/228492/whos_in_the_epg/|archive-date=22 May 2013|access-date=28 October 2011}}</ref>
2011 ರಲ್ಲಿ, ಕಿರ್ಬಿ, "ಜಗತ್ತಿನಲ್ಲಿ ಅಂತಹ ಶಕ್ತಿಯುತವಾದ ಯಾವುದೂ ಇಲ್ಲ, ಅವರ ಸಮಯ ಬಂದಿದೆ ಮತ್ತು ಪ್ರಾಣಿಗಳ ರಕ್ಷಣೆಯು ಅಂತಹ ಕಲ್ಪನೆಯಾಗಿದೆ" ಎಂದು ಸಲಹೆ ನೀಡಿದರು, ಪ್ರಾಣಿ ಸಂರಕ್ಷಣಾ ಸಂಸ್ಥೆಯಾದ ಧ್ವನಿರಹಿತ ಸಂಸ್ಥೆಯ ಪೋಷಕರಾದರು.<ref>{{Cite web|url=https://www.voiceless.org.au/who-we-are/michael-kirby|title=Voiceless, the animal protection institute}}</ref>
ಕಿರ್ಬಿ ಕಲೆಯ ಕಟ್ಟಾ ಬೆಂಬಲಿಗ. ಅವರು ೨೦೦೪ ರಿಂದ ಎರಡು ಬಾರಿ ''ಕ್ವೀನ್ಸ್ಲ್ಯಾಂಡ್ ಕಾನೂನು ರೆವ್ಯೂ ವಿಶ್ವವಿದ್ಯಾಲಯದಲ್ಲಿ'' ಕಾಣಿಸಿಕೊಂಡಿದ್ದಾರೆ. ಮೇ ೨೦೦೭ ರಲ್ಲಿ, ಅವರು ಮೆಲ್ಬೋರ್ನ್ನಲ್ಲಿ ಹಿಪ್-ಹಾಪ್ ಇಂಪ್ರೆಸಾರಿಯೊ ಎಲ್ಫ್ ಟ್ರಾಂಜ್ಪೋರ್ಟರ್ ಜೊತೆಗೆ ವಿಕ್ಟೋರಿಯನ್ ಆರ್ಟ್ಸ್ ಲಾ ವೀಕ್ನ ಪ್ರಾರಂಭದಲ್ಲಿ [[ವಿಲಿಯಂ ಬಟ್ಲರ್ ಯೀಟ್ಸ್|ಡಬ್ಲ್ಯೂಬಿ ಯೀಟ್ಸ್]] ಅವರ ಕವನದ ರಾಪ್ ಅನ್ನು ಪ್ರದರ್ಶಿಸಿದರು. ಆಗಸ್ಟ್ ೨೦೧೪ ರಲ್ಲಿ ಅವರು ಸಿಡ್ನಿ ಲಾ ರೆವ್ಯೂ ಅವರ ಅಂತಿಮ ಪ್ರದರ್ಶನದಲ್ಲಿ ಕಾಣಿಸಿಕೊಂಡರು, ಕ್ರಿಸ್ಟಿನಾ ಅಗುಲೆರಾ ಅವರ " ಡರ್ಟಿ " ಗೆ ನೃತ್ಯ ಮತ್ತು ಹಾಡುವ ಸಂಖ್ಯೆಯನ್ನು 'ಕಿರ್ಬಿ' ಎಂದು ಮರುನಾಮಕರಣ ಮಾಡಿದರು.<ref>{{Cite web|url=http://www.theage.com.au/news/national/judge-jerry-gives-artists-the-word/2007/05/07/1178390232082.html|title='Judge Jerry' gives artists the word|last=Nguyen|first=Kenneth|date=8 May 2007|website=The Age|publisher=Fairfax Media}}</ref><ref>{{Cite web|url=http://blogs.smh.com.au/sit/archives/2007/05/performances_top_judge_beats_r.html|title=Performances: Top judge beats rap|date=8 May 2007|website=The Sydney Morning Herald|publisher=Fairfax Media|access-date=9 ಅಕ್ಟೋಬರ್ 2022|archive-date=4 ಮಾರ್ಚ್ 2016|archive-url=https://web.archive.org/web/20160304043321/http://blogs.smh.com.au/sit/archives/2007/05/performances_top_judge_beats_r.html|url-status=dead}}</ref>
== ವೈಯಕ್ತಿಕ ಜೀವನ ==
ಕಿರ್ಬಿ ಸುಮಾರು ೧೯೮೪ ರಿಂದ ಬಹಿರಂಗವಾಗಿ ಸಲಿಂಗಕಾಮಿಯಾಗಿದ್ದಾಳೆ. ಅವರು ೧೯೬೩ ರಲ್ಲಿ [[ನೆದರ್ಲ್ಯಾಂಡ್ಸ್|ನೆದರ್ಲ್ಯಾಂಡ್ಸ್ನಿಂದ]] ಆಸ್ಟ್ರೇಲಿಯಾಕ್ಕೆ ವಲಸೆ ಬಂದ ಜೋಹಾನ್ ವ್ಯಾನ್ ವ್ಲೋಟೆನ್ ಅವರೊಂದಿಗೆ ೧೯೬೯ ರಿಂದ ವಾಸಿಸುತ್ತಿದ್ದಾರೆ ಮತ್ತು ೧೯೯೯ ರಲ್ಲಿ ಕಿರ್ಬಿ ಅವರನ್ನು ''ಹೂಸ್ ಹೂ ಇನ್ ಆಸ್ಟ್ರೇಲಿಯಾದಲ್ಲಿ ಅವರ'' ದೀರ್ಘಾವಧಿಯ ಪಾಲುದಾರ ಎಂದು ಪಟ್ಟಿ ಮಾಡಿದರು. ವ್ಯಾನ್ ವ್ಲೋಟೆನ್ ಅವರು ಎಚ್ಐವಿ ಯೊಂದಿಗೆ ವಾಸಿಸುವ ಜನರಿಗೆ ಸಹಾಯ ಮಾಡಿದರು ಮತ್ತು ಕಿರ್ಬಿ ಆಸ್ಟ್ರೇಲಿಯಾದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸಮಸ್ಯೆಯಲ್ಲಿ ತೊಡಗಿಸಿಕೊಂಡರು. ಕಿರ್ಬಿ ಸಾಮಾನ್ಯವಾಗಿ ಸಲಿಂಗಕಾಮಿ ಹಕ್ಕುಗಳನ್ನು ಬೆಂಬಲಿಸಿ ಸಾರ್ವಜನಿಕವಾಗಿ ಮಾತನಾಡಿದ್ದಾರೆ.<ref>{{Cite news|url=http://www.abc.net.au/news/newsitems/200608/s1718903.htm|title=Kirby calls for united effort on gay rights|last=Australian Broadcasting Corporation News|date=19 August 2006|access-date=14 October 2006|archive-url=https://web.archive.org/web/20060823023622/http://www.abc.net.au/news/newsitems/200608/s1718903.htm|archive-date=23 August 2006}}
</ref> ಇಂಟರ್ನ್ಯಾಷನಲ್ ಕಮಿಷನ್ ಆಫ್ ಜ್ಯೂರಿಸ್ಟ್ನ ಅಧ್ಯಕ್ಷರಾಗಿದ್ದಾಗ ಅವರು ಮಾನವ ಹಕ್ಕುಗಳ ಒಂದು ಅಂಶವಾಗಿ ಮಾನವ ಲೈಂಗಿಕತೆಗೆ ಹೆಚ್ಚಿನ ಪರಿಗಣನೆಯನ್ನು ನೀಡುವಂತೆ ಆ ಸಂಸ್ಥೆಯನ್ನು ಪ್ರೋತ್ಸಾಹಿಸಿದರು.<ref>{{Cite interview|date=4 March 2004|archivedate=20 August 2006}}</ref> ಮತ್ತು ಆಂಗ್ಲಿಕನ್ ಆಗಿ ಅವರು ಸಲಿಂಗಕಾಮಿ ಹಕ್ಕುಗಳ ಬಗ್ಗೆ ತಮ್ಮ ಚರ್ಚ್ನ ನಿಲುವಿನ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.<ref>{{Cite interview|date=16 November 2003|archivedate=20 August 2006}}</ref> ೨೦೦೨ ರಲ್ಲಿ, ಸಿಡ್ನಿ ಗೇ ಗೇಮ್ಸ್ ೬ ನಲ್ಲಿ, ಕಿರ್ಬಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿದ್ದರು. "ಸಮಾನತೆಗಾಗಿ ಚಳುವಳಿ ತಡೆಯಲಾಗದು. ಅದರ ಸಂದೇಶವು ಅಂತಿಮವಾಗಿ ಪ್ರಪಂಚದ ನಾಲ್ಕು ಮೂಲೆಗಳನ್ನು ತಲುಪುತ್ತದೆ" ಎಂದು ಅವರು ೩೫,೦೦೦ ಜನರ ಗುಂಪಿಗೆ ಹೇಳಿದರು.<ref>{{Cite news|url=http://www.ssonet.com.au/archives/display.asp?ArticleID=1969|title=Kirby Courage|last=Margo Kingston|date=5 November 2002|access-date=17 February 2009|archive-url=https://web.archive.org/web/20071218100105/http://www.ssonet.com.au/archives/display.asp?ArticleID=1969|archive-date=18 December 2007}}</ref><ref>{{Cite news|url=http://www.smh.com.au/articles/2002/11/09/1036308532773.html|title=Thanks for having us Sydney, say gays|last=Andrew West|date=10 November 2002|work=The Sydney Morning Herald|access-date=17 February 2009|publisher=Sydney Morning Herald}}</ref> ೨೦೦೬ ರಲ್ಲಿ, ಅವರು ಮಾಂಟ್ರಿಯಲ್ನಲ್ಲಿ ನಡೆದ ಎಲ್ಜಿಬಿಟಿ ಮಾನವ ಹಕ್ಕುಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದರು, ಏಷ್ಯಾ-ಪೆಸಿಫಿಕ್ ಪ್ಲೀನರಿಯ ಅಧ್ಯಕ್ಷತೆ ವಹಿಸಿದ್ದರು.
ಕಿರ್ಬಿ [[ಧಾರ್ಮಿಕ ಗ್ರಂಥಗಳು|ಧಾರ್ಮಿಕ]], ತನ್ನನ್ನು ತಾನು "ಪ್ರೊಟೆಸ್ಟಂಟ್ ಆಂಗ್ಲಿಕನ್ ಕ್ರಿಶ್ಚಿಯನ್" ಎಂದು ವಿವರಿಸುತ್ತಾನೆ ಮತ್ತು ಸಲಿಂಗಕಾಮಕ್ಕೆ ಕ್ಲೆರಿಕಲ್ ವಿರೋಧವನ್ನು ಟೀಕಿಸುತ್ತಾನೆ: "ಫ್ರಾಕ್ನಲ್ಲಿರುವ ಯಾವುದೇ ಹಳೆಯ ಜೆಂಟ್ ನನ್ನ ಧರ್ಮವನ್ನು ನನ್ನಿಂದ ತೆಗೆದುಕೊಳ್ಳಬಾರದು ಮತ್ತು ಅದು ನನ್ನ ಜೀವನದ ಪ್ರಮುಖ ಅಂಶವಾಗಿದೆ".<ref>{{Cite news|url=http://www.gaystarnews.com/article/high-court-judge-michael-kirby-talks-about-religion-and-sexuality150612/|title=High Court judge Michael Kirby talks about religion and sexuality|last=Leach|first=Anna|date=15 June 2012|publisher=Gay Star News|access-date=9 ಅಕ್ಟೋಬರ್ 2022|archive-date=24 ಮಾರ್ಚ್ 2022|archive-url=https://web.archive.org/web/20220324140729/https://www.gaystarnews.com/article/high-court-judge-michael-kirby-talks-about-religion-and-sexuality150612/|url-status=dead}}</ref> ನವೆಂಬರ್ ೨೦೦೭ ರಲ್ಲಿ, ಅವರು ಸಿಡ್ನಿಯ ಆಂಗ್ಲಿಕನ್ ಮತ್ತು ಕ್ಯಾಥೋಲಿಕ್ ಆರ್ಚ್ಬಿಷಪ್ಗಳು ಕ್ರಮವಾಗಿ ಪೀಟರ್ ಜೆನ್ಸನ್ ಮತ್ತು ಜಾರ್ಜ್ ಪೆಲ್ ಅವರು ಆಸ್ಟ್ರೇಲಿಯನ್ ಸಮಾಜದಲ್ಲಿ ಸಲಿಂಗಕಾಮಿಗಳ ಸ್ವೀಕಾರಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿದರು. ಹೋಮೋಫೋಬಿಯಾವು "ಇಂದಿಗೂ ಧಾರ್ಮಿಕ ಸೂಚನೆಯ ಮೂಲಕ ಬಲಗೊಳ್ಳುತ್ತದೆ, ಮತ್ತು ಅದು ಮಾಡಬೇಕು. ಸಿಡ್ನಿಯ ಇಬ್ಬರು ಆರ್ಚ್ಬಿಷಪ್ಗಳಿಂದ ಧಾರ್ಮಿಕ ಸೂಚನೆ ಎಂದು ಹೇಳಬಹುದು".<ref>{{Cite news|url=http://archive.globalgayz.com/oceania/australia/gay-australia-news-and-reports-4/|title=Archbishops fuel homophobia says gay judge|last=Pritchard|first=Gemma|date=27 November 2007|work=Pink News}}</ref> ಕಿರ್ಬಿ ಅವರು ತಮ್ಮ ಆಸ್ಟ್ರೇಲಿಯಾದ ಹೈಕೋರ್ಟಿನ ಸಹೋದ್ಯೋಗಿಗಳಲ್ಲಿ ತಮ್ಮ "ಮೈನಾರಿಟಿ ಆಫ್ ಒನ್" ಸ್ಥಾನಮಾನದ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿದರು ಮತ್ತು "ಕೆಲವು ನ್ಯಾಯಮೂರ್ತಿಗಳು ಬಹುಶಃ ನನಗಿಂತ ಕಡಿಮೆ ಉದಾರ ದೃಷ್ಟಿಕೋನಗಳನ್ನು ಹೊಂದಿದ್ದಾರೆ" ಎಂದು ಒಪ್ಪಿಕೊಂಡರು.
೨೦೦೭ ರಿಂದ ೨೦೧೦ ರವರೆಗೆ ಈ ಟ್ಟಿಯನ್ನು ಪ್ರಕಟಿಸಿದ ಪ್ರತಿ ವರ್ಷ ೨೫ ಅತ್ಯಂತ ಪ್ರಭಾವಿ ಸಲಿಂಗಕಾಮಿ ಅಥವಾ ಲೆಸ್ಬಿಯನ್ ಆಸ್ಟ್ರೇಲಿಯನ್ನರಲ್ಲಿ ಕಿರ್ಬಿಯನ್ನು samesame.com.au ನ ಓದುಗರು ಆಯ್ಕೆ ಮಾಡಿದ್ದಾರೆ.<ref>{{Cite web|url=http://www.samesame.com.au/25/2007/|title=Samesame 25|publisher=samesame|archive-url=https://web.archive.org/web/20141129114250/http://www.samesame.com.au/25/2007/|archive-date=29 November 2014|access-date=22 November 2014}}</ref><ref>{{Cite web|url=http://www.samesame.com.au/25/2010/|title=Samesame 25|publisher=samesame|archive-url=https://web.archive.org/web/20110402172118/http://www.samesame.com.au/25/2010/|archive-date=2 April 2011|access-date=31 March 2011}}</ref>
ಕಿರ್ಬಿ ಮತ್ತು ವ್ಯಾನ್ ವ್ಲೋಟೆನ್ ೧೧ ಫೆಬ್ರವರಿ ೨೦೧೯ ರಂದು ವಿವಾಹವಾದರು, ಅವರ ಮೊದಲ ಭೇಟಿಯ ೫೦ ನೇ ವಾರ್ಷಿಕೋತ್ಸವ.<ref>{{Cite news|url=https://www.abc.net.au/news/2019-02-11/michael-kirby-marries-partner-50-years-after-first-meeting/10800442|title=Michael Kirby marries partner Johan van Vloten on 50th anniversary of first meeting|last=Bellinda Kontominas|date=11 February 2019|access-date=11 February 2019|publisher=Australian Broadcasting Corporation}}</ref><ref>{{Cite news|url=https://www.smh.com.au/national/justice-michael-kirby-weds-50-years-after-that-summer-of-69-20190211-p50x2q.html|title=Justice Michael Kirby weds 50 years after that summer of '69|last=Pitt|first=Helen|date=11 February 2019|work=Sydney Morning Herald|access-date=12 February 2019}}</ref>
=== ಕುಟುಂಬ ===
ಕಿರ್ಬಿಯ [[ತಂದೆ]], ಡೊನಾಲ್ಡ್, ಅಲ್ಮಾ ಕ್ಯಾರೋಲಿನ್ (ನಾರ್ಮಾ) ಗ್ರೇ ಅವರ ಏಕೈಕ ಮಗುವಾಗಿದ್ದರು. ಅವರು ಇಂಗ್ಲಿಷ್-ಐರಿಶ್ ಮೂಲದ ಏಕೈಕ ಉದ್ಯೋಗಿ ತಾಯಿ. ನಾರ್ಮಾ ೧೫ ನೇ ವಯಸ್ಸಿನಲ್ಲಿ ಡೊನಾಲ್ಡ್ ಕಿರ್ಬಿ <ref name="Brown 2011"/> ರೊಂದಿಗೆ ಗರ್ಭಿಣಿಯಾದರು. ಆಗ ೧೭ ವರ್ಷ ವಯಸ್ಸಿನ ವಿಕ್ಟರ್ ಕಿರ್ಬಿ, ಮಹಾ ಕ್ಷಾಮದ ನಂತರ ಆಗಮಿಸಿದ ಕ್ಯಾಥೋಲಿಕ್ ಜೊತೆ ಸಂಬಂಧ ಹೊಂದಿದ್ದರು. ನಾರ್ಮಾ ಅವರ ಪೋಷಕರು ಜಾನ್ ಎಮ್ಯಾನುಯೆಲ್ ಗ್ರೇ, [[ಇಂಗ್ಲಿಷ್]] ಇಟ್ಟಿಗೆ ಮತ್ತು ಬಾಯ್ಲರ್ ತಯಾರಕ ಮತ್ತು ಅನ್ನಿ ಲಿಯಾನ್ಸ್. ಅನ್ನಿಯ ತಂದೆ, ಹ್ಯಾರಿ ಲಿಯಾನ್ಸ್, ೧೮೫೦ ರ ದಶಕದಲ್ಲಿ ಡಬ್ಲಿನ್ನಿಂದ ಸಿಡ್ನಿಗೆ ವಲಸೆ ಹೋಗಿದ್ದರು ಮತ್ತು ಅವರ ತಾಯಿಯ ಹೆಸರು ಮೇರಿ.
ಅವರ [[ತಾಯಿ]], ಜೀನ್ ಲ್ಯಾಂಗ್ಮೋರ್ ನೋಲ್ಸ್, ವಿಕ್ಟೋರಿಯಾದ ಬರ್ವಿಕ್ನಲ್ಲಿ ಬಲ್ಲಿಮೆನಾದಿಂದ ಅಲ್ಸ್ಟರ್ ಸ್ಕಾಟ್ ವಿಲಿಯಂ ನೋಲ್ಸ್ ಮತ್ತು ಮಾರ್ಗರೆಟ್ ದಂಪತಿಗೆ ನಾಲ್ಕು ಹೆಣ್ಣುಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು.<ref name="Brown 2011"/> ಜೀನ್ ಸಿಡ್ನಿ ಗರ್ಲ್ಸ್ ಹೈಸ್ಕೂಲ್ನಿಂದ ಪದವೀಧರರಾಗಿದ್ದರು. ಲೀವಿಂಗ್ ಸರ್ಟಿಫಿಕೇಟ್ ಅನ್ನು ಪಡೆದರು, ಆ ಸಮಯದಲ್ಲಿ ಮಹಿಳೆಗೆ ಅಪರೂಪವಾಗಿತ್ತು ಮತ್ತು ಅವರ ಸ್ವಂತ ಯಶಸ್ಸು ಮತ್ತು ಸಾಮರ್ಥ್ಯದ ಮೂಲಕ ಹಲವಾರು ಸಂಬಳದ ಉದ್ಯೋಗಗಳಲ್ಲಿ ಕೆಲಸ ಮಾಡಿದರು. ಡೊನಾಲ್ಡ್ ಕಿರ್ಬಿ, ೧೬ ವರ್ಷ ವಯಸ್ಸಿನವರು ಮತ್ತು ಜೀನ್ ನೋಲ್ಸ್ ಅವರು ಕೆನ್ಸಿಂಗ್ಟನ್ನ ಸೇಂಟ್ ಮಾರ್ಟಿನ್ ಆಂಗ್ಲಿಕನ್ ಚರ್ಚ್ನಲ್ಲಿ ಮೊದಲು ಭೇಟಿಯಾದರು. ಡೊನಾಲ್ಡ್ ಅಲ್ಟಿಮೊದಲ್ಲಿನ ಸಿಡ್ನಿ ತಾಂತ್ರಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದರು ಮತ್ತು ನಂತರ ಹಾರ್ಡ್ವೇರ್ ಸಂಸ್ಥೆಯಲ್ಲಿ ಸಾಮಾನ್ಯ ಸಹಾಯಕರಾಗಿ, ನಂತರ ಉಪಕರಣಗಳು ಮತ್ತು ಯಂತ್ರೋಪಕರಣಗಳ ಮಾರಾಟಗಾರರಾಗಿ ಕೆಲಸ ಮಾಡಿದರು. ಜೀನ್ನ ೨೧ನೇ ಹುಟ್ಟುಹಬ್ಬದಂದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಡೊನಾಲ್ಡ್ಗೆ ೨೧ ವರ್ಷ ತುಂಬಿದ ಒಂದು ತಿಂಗಳ ನಂತರ ಮಾರ್ಚ್ ೧೯೩೭ರಲ್ಲಿ ವಿವಾಹವಾದರು; ಅವರ ಮೊದಲ ಮನೆ ದಕ್ಷಿಣ ಕೂಗೀಯ ಬ್ಲೂಮ್ಫೀಲ್ಡ್ ಸ್ಟ್ರೀಟ್ನಲ್ಲಿತ್ತು.
ಮೈಕೆಲ್ ಕಿರ್ಬಿಯ ಸಹೋದರರು ಸಹ ವಕೀಲರಾಗಿದ್ದರು: ಡೇವಿಡ್ ನ್ಯೂ ಸೌತ್ ವೇಲ್ಸ್ನ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿದ್ದರು. ೨೦೧೧ ರಲ್ಲಿ ನಿವೃತ್ತರಾದರು; ಡೊನಾಲ್ಡ್ ಅವರು ೨೦೦೬ <ref>{{Cite news|url=http://www.smh.com.au/national/obituaries/extraordinary-impacts-of-a-family-mans-ordinary-life-20111117-1nl0f.html|title=Extraordinary impacts of a family man's 'ordinary' life|last=A. J. Brown|date=18 November 2011|work=Sydney Morning Herald|access-date=12 February 2013}}</ref> ನಿವೃತ್ತರಾಗುವವರೆಗೂ ವಕೀಲರಾಗಿದ್ದರು. ಸಿಸ್ಟರ್ ಡಯಾನಾ ಅವರು ಸಿಡ್ನಿಯ ರಾಯಲ್ ಪ್ರಿನ್ಸ್ ಆಲ್ಫ್ರೆಡ್ ಆಸ್ಪತ್ರೆಯ ಕೊಲೊರೆಕ್ಟಲ್ ಘಟಕದಲ್ಲಿ ನರ್ಸ್ ಆಗಿದ್ದರು, ೨೦೧೧ ರಂದು <ref>{{Cite web|url=http://www.hcourt.gov.au/assets/publications/speeches/former-justices/kirbyj/kirbyj_2feb09.pdf|title=Judicial Farewell: The Hon. Justice Michael Kirby AC CMG, Justice of the High Court of Australia|last=Michael Kirby|date=2 February 2009|publisher=Michael Kirby|access-date=12 February 2013}}</ref> ನಿವೃತ್ತರಾದರು.
== ಬಿರುದುಗಳು ==
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಯಾಗಿ, ಆಸ್ಟ್ರೇಲಿಯನ್ ಪ್ರೋಟೋಕಾಲ್ ಪ್ರಕಾರ ಕಿರ್ಬಿಯನ್ನು ಜೀವನಕ್ಕಾಗಿ " ಗೌರವಾನ್ವಿತ " ಎಂದು ವಿನ್ಯಾಸಗೊಳಿಸಲಾಗಿದೆ.
* [[ಚಿತ್ರ:AUS Order of Australia (civil) BAR.svg|60x60px]] ೧೯೯೧ ರಲ್ಲಿ ಆರ್ಡರ್ ಆಫ್ ಆಸ್ಟ್ರೇಲಿಯಾ (ಎಸಿ) ಕಂಪ್ಯಾನಿಯನ್; ಉಲ್ಲೇಖ: " ''ಕಾನೂನಿಗೆ ಸೇವೆಗಾಗಿ, ಕಾನೂನು ಸುಧಾರಣೆ, ಕಲಿಕೆ ಮತ್ತು ಸಮುದಾಯಕ್ಕೆ'' ".<ref>[http://www.itsanhonour.gov.au/honours/honour_roll/search.cfm?aus_award_id=882348&search_type=quick&showInd=true Companion of the Order of Australia] {{Webarchive|url=https://web.archive.org/web/20160304062447/http://www.itsanhonour.gov.au/honours/honour_roll/search.cfm?aus_award_id=882348&search_type=quick&showInd=true |date=2016-03-04 }}, CMG, 26 January 1991, itsanhonour.gov.au</ref>
* [[ಚಿತ್ರ:UK_Order_St-Michael_St-George_ribbon.svg|60x60px]] ೧೯೮೨ ರಲ್ಲಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಸೇಂಟ್ ಮೈಕೆಲ್ ಮತ್ತು ಸೇಂಟ್ ಜಾರ್ಜ್ (ಸಿಎಮ್ಜಿ); ಉಲ್ಲೇಖ: " ''ಕಾನೂನಿಗೆ ಸೇವೆಗಳು'' ".<ref>[http://www.itsanhonour.gov.au/honours/honour_roll/search.cfm?aus_award_id=1066397&search_type=quick&showInd=true Companion of the Order of St Michael and St George]{{Dead link|date=ಅಕ್ಟೋಬರ್ 2022 |bot=InternetArchiveBot |fix-attempted=yes }}, CMG, 31 December 1982, itsanhonour.gov.au</ref>
* [[ಚಿತ್ರ:Queen_Elizabeth_II_Silver_Jubilee_Medal_ribbon.png|60x60px]] ೧೯೭೭ ರಲ್ಲಿ ರಾಣಿ ಎಲಿಜಬೆತ್ ೨ ರಜತ ಮಹೋತ್ಸವದ [[ಪದಕ]].
* [[ಚಿತ್ರ:AUS_Centenary_Medal_ribbon.svg|60x60px]] ೨೦೦೧ ರಲ್ಲಿ ಶತಮಾನೋತ್ಸವದ ಪದಕ.<ref>[http://www.itsanhonour.gov.au/honours/honour_roll/search.cfm?aus_award_id=1128216&search_type=quick&showInd=true Centenary Medal] {{Webarchive|url=https://web.archive.org/web/20160304043804/http://www.itsanhonour.gov.au/honours/honour_roll/search.cfm?aus_award_id=1128216&search_type=quick&showInd=true |date=2016-03-04 }}, 1 January 2001, itsanhonour.gov.au<br />'''Citation:''' ''For service to law reform and as a Justice of the High Court of Australia''.</ref>
* [[ಚಿತ್ರ:JPN_Kyokujitsu-sho_2Class_BAR.svg|alt=ribbon bar|60x60px|ರಿಬ್ಬನ್ ಬಾರ್]] ಆರ್ಡರ್ ಆಫ್ ದಿ ರೈಸಿಂಗ್ ಸನ್ ೨ ನೇ ತರಗತಿ, ೨೦೧೭ ರಲ್ಲಿ [[ಚಿನ್ನ]] ಮತ್ತು [[ಬೆಳ್ಳಿ]] [[ನಕ್ಷತ್ರ]] ; ಉಲ್ಲೇಖ: "ಜಪಾನಿನ ಪ್ರಜೆಗಳ ಅಪಹರಣಗಳ ವಿಷಯ ಸೇರಿದಂತೆ ಅಂತರಾಷ್ಟ್ರೀಯ ಸಮಾಜದಲ್ಲಿ ಉತ್ತರ ಕೊರಿಯಾದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯ ತಿಳುವಳಿಕೆಯನ್ನು ಉತ್ತೇಜಿಸಲು ಅವರ ಕೊಡುಗೆಯನ್ನು ಗುರುತಿಸಿ" <ref>{{Cite web|url=https://www.sydney.au.emb-japan.go.jp/document/english/annex.pdf|title=The Hon. Mr. Michael Kirby AC CMG – The Order of the Rising Sun, Gold and Silver Star|publisher=Consulate-General of Japan in Sydney|access-date=2022-10-09|archive-date=2022-08-08|archive-url=https://web.archive.org/web/20220808133110/https://www.sydney.au.emb-japan.go.jp/document/english/annex.pdf|url-status=dead}}<cite class="citation web cs1" data-ve-ignore="true">[https://www.sydney.au.emb-japan.go.jp/document/english/annex.pdf "The Hon. Mr. Michael Kirby AC CMG – The Order of the Rising Sun, Gold and Silver Star"] {{Webarchive|url=https://web.archive.org/web/20220808133110/https://www.sydney.au.emb-japan.go.jp/document/english/annex.pdf |date=2022-08-08 }} <span class="cs1-format">(PDF)</span>. Consulate-General of Japan in Sydney.</cite></ref> – ಅದೇ ಸಮಯದಲ್ಲಿ ಮಾಜಿ ಯುಎನ್ ವಿಶೇಷ ವರದಿಗಾರ ಮರ್ಜುಕಿ ದಾರುಸ್ಮಾನ್ ಅವರಿಗೆ ನೀಡಲಾಯಿತು.<ref>{{Cite journal|title=2017 Spring Imperial Decorations: the Hon. Michael Kirby AC CMG|url=https://www.sydney.au.emb-japan.go.jp/document/english/japan_reports/JR52-1/JReports%20Vol%2052-1%20p.2.pdf|volume=52|issue=1|date=July 2017|page=2|journal=The Consulate-General of Japan in Sydney's Quarterly Newsletter|first=Michael|last=Kirby|access-date=2022-10-09|archive-date=2023-06-05|archive-url=https://web.archive.org/web/20230605164546/https://www.sydney.au.emb-japan.go.jp/document/english/japan_reports/JR52-1/JReports%20Vol%2052-1%20p.2.pdf|url-status=dead}}<cite class="citation journal cs1" data-ve-ignore="true" id="CITEREFKirby2017">Kirby, Michael (July 2017). [https://www.sydney.au.emb-japan.go.jp/document/english/japan_reports/JR52-1/JReports%20Vol%2052-1%20p.2.pdf "2017 Spring Imperial Decorations: the Hon. Michael Kirby AC CMG"] {{Webarchive|url=https://web.archive.org/web/20230605164546/https://www.sydney.au.emb-japan.go.jp/document/english/japan_reports/JR52-1/JReports%20Vol%2052-1%20p.2.pdf |date=2023-06-05 }} <span class="cs1-format">(PDF)</span>. ''The Consulate-General of Japan in Sydney's Quarterly Newsletter''. '''52''' (1): 2.</cite></ref><ref>{{Cite news|url=https://www.smh.com.au/world/michael-kirby-calls-for-peaceful-initiatives-on-north-korea-after-decoration-20170517-gw6sxr.html|title=Finding Megumi: Michael Kirby calls for 'peaceful initiatives' on North Korea|last=Hurst|first=Daniel|date=21 May 2017|work=[[The Sydney Morning Herald]]|access-date=12 February 2017}}<cite class="citation news cs1" data-ve-ignore="true" id="CITEREFHurst2017">Hurst, Daniel (21 May 2017). [https://www.smh.com.au/world/michael-kirby-calls-for-peaceful-initiatives-on-north-korea-after-decoration-20170517-gw6sxr.html "Finding Megumi: Michael Kirby calls for 'peaceful initiatives' on North Korea"]. ''[[ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್|The Sydney Morning Herald]]''<span class="reference-accessdate">. Retrieved <span class="nowrap">12 February</span> 2017</span>.</cite></ref>
* ೨೦೧೦ ರಲ್ಲಿ ನ್ಯಾಯಕ್ಕಾಗಿ ಗ್ರೂಬರ್ ಪ್ರಶಸ್ತಿ.
* ೧೯೯೧ ರಲ್ಲಿ ಮಾನವ ಹಕ್ಕುಗಳ ಪದಕ.
* ೧೯೯೭ ರಲ್ಲಿ ನ್ಯಾಷನಲ್ ಟ್ರಸ್ಟ್ ಆಸ್ಟ್ರೇಲಿಯನ್ ಲಿವಿಂಗ್ ಟ್ರೆಷರ್.<ref>{{Cite web |url=http://www.findem.com.au/resources/displayResourcesArticle.php?id=14 |title=Financial Demographics – Population, Financial and Investment News from Australia – ageing fertility birth rates life expectancy taxes bracket creep age profiles wealth incomes house prices society and culture migration pensions economic research actuary superannuation survival longevity marriage divorce |access-date=2022-10-09 |archive-date=2022-10-11 |archive-url=https://web.archive.org/web/20221011211127/https://www.findem.com.au/resources/displayResourcesArticle.php?id=14 |url-status=dead }}</ref>
ಆಗಸ್ಟ್ ೨೦೦೮ ರಲ್ಲಿ, ಸೆನೆಟರ್ ಜಾನ್ ಫಾಲ್ಕ್ನರ್ ಮತ್ತು ಆಸ್ಟ್ರೇಲಿಯನ್ ಗೌಪ್ಯತೆ ಕಮಿಷನರ್ ಕರೆನ್ ಕರ್ಟಿಸ್ ಅವರು ಆರಂಭಿಕ ಆಸ್ಟ್ರೇಲಿಯನ್ ಗೌಪ್ಯತೆ ಪದಕವನ್ನು ಕಿರ್ಬಿಗೆ ನೀಡಿದರು.<ref>[http://www.privacy.gov.au/news/media/2008_25.html Media Release: Justice Michael Kirby wins inaugural Australian Privacy Medal] {{Webarchive|url=https://web.archive.org/web/20090604025055/http://www.privacy.gov.au/news/media/2008_25.html |date=2009-06-04 }}. Retrieved 9 February 2009.</ref>
ಮ್ಯಾಕ್ವಾರಿ ವಿಶ್ವವಿದ್ಯಾನಿಲಯದಲ್ಲಿ ಹೊಸ ಕಾನೂನು ಶಾಲೆಯ ಕಟ್ಟಡವನ್ನು ೨೦೨೨ ರಲ್ಲಿ ತೆರೆಯಲಾಗುವುದು, ಇದನ್ನು ಮೈಕೆಲ್ ಕಿರ್ಬಿ ಬಿಲ್ಡಿಂಗ್ ಎಂದು ಹೆಸರಿಸಲಾಗುವುದು.<ref>{{Cite web|url=https://www.mq.edu.au/thisweek/2017/11/13/launch-of-exciting-new-law-school-plans/?mkt_tok=eyJpIjoiTkdGaU0yTTBOakZpTkdVMCIsInQiOiIxZGdkVWYyZVNEYmFnZWxKbXNmN0hweU0xMExSMWc3dVZZeFNFdmx4TkQzSWNVVnc1dGJ5d2ZVQmdNS0VJcHhRZ2NnMmRnOTVZSmJUT01oak5EMys4dHk1Z3RxaFlMWXU3M3cwNXc5ZDNqRFFxZ2pXeXd6TFY0cFhoRHNxQ3lET2UyV2hkYjc4dU5mMUhtc2tiR0dOQ1E9PSJ9#.WgtnJLaB0Ql|title=Launch of exciting new Law School|date=15 November 2017|website=Macquarie University|access-date=15 November 2017}}</ref>
=== ಗೌರವ ಪದವಿಗಳು ===
* {{Flagicon|South Australia}} ಅಡಿಲೇಡ್ ವಿಶ್ವವಿದ್ಯಾಲಯ (D.Univ.) ೨೦೧೭ ರಲ್ಲಿ
* {{Flagicon|Tasmania}} ಟ್ಯಾಸ್ಮೆನಿಯಾ ವಿಶ್ವವಿದ್ಯಾಲಯ (LL.D.) ೨೦೧೭ ರಲ್ಲಿ
* {{Flagicon|India}} ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಒಡಿಶಾ (D.Univ.) ೨೦೧೯ ರಲ್ಲಿ
== ಉಲ್ಲೇಖಗಳು ==
{{Reflist|2}}
== ಬಾಹ್ಯ ಕೊಂಡಿಗಳು ==
* [http://michaelkirby.com.au/index.php?option=com_content&view=article&id=72&Itemid=9 Catalogue of Michael Kirby's public speeches]
* [http://www.themonthly.com.au/tm/node/1494 Video: Michael Kirby on his career of public engagement] {{Webarchive|url=https://web.archive.org/web/20090404041038/http://www.themonthly.com.au/tm/node/1494 |date=2009-04-04 }} March 2009 at Sydney University
* [http://www.filmartmedia.com DVD Biography ''Michael Kirby: Don't Forget The Justice Bit''] {{S-start}}
{{S-legal}}
{{s-new}}
{{s-ttl|title=[[Australian Law Reform Commission|Chairman of the Australian Law Reform Commission]]|years=1975–1984}}
{{S-aft|after=[[Murray Wilcox]]}}
{{S-bef|before=[[Robert Ellicott]]}}
{{s-ttl|title=[[List of judges of the Federal Court of Australia|Judge of the Federal Court of Australia]]|years=1983–1984}}
{{S-aft|after=[[Bill Pincus]]}}
{{S-bef|before=[[Athol Moffitt]]}}
{{s-ttl|title=[[President of the New South Wales Court of Appeal]]|years=1984–1996}}
{{S-aft|after=[[Dennis Mahoney (judge)|Dennis Mahoney]]}}
{{S-bef|before=[[William Deane|Sir William Deane]]}}
{{s-ttl|title=[[List of Justices of the High Court of Australia|Puisne Justice of the High Court of Australia]]|years=1996–2009}}
{{S-aft|after=[[Virginia Bell (judge)|Virginia Bell]]}}
{{S-aca}}
{{S-bef|before=Percy Partridge}}
{{s-ttl|title=[[Chancellor (education)|Chancellor]] of [[Macquarie University]]|years=1984–1993}}
{{S-aft|after=[[Tim Besley (public servant)|Tim Besley]]}}
{{s-end}}
{{Interwikineeded}}
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ]]
n8pqsw1j5a1lpwlgtctlmjnmqh76jx4
ನವೋದಯ
0
148034
1384587
1381884
2026-08-28T18:19:24Z
Vysotsky
35517
/* ಸ್ವಯಂ ಅರಿವು */ +/- ಚಿತ್ರ
1384587
wikitext
text/x-wiki
[[ಚಿತ್ರ:Badia_fiorentina,_campanile,_veduta_da,_duomo_01.jpg|thumb| ಫ್ಲಾರೆನ್ಸ್, ಯುರೋಪಿಯನ್ ನವೋದಯದ ಜನ್ಮಸ್ಥಳ. ವಾಸ್ತುಶಿಲ್ಪದ ದೃಷ್ಟಿಕೋನ, ಆಧುನಿಕ ವ್ಯವಸ್ಥೆಗಳು, [[ಬ್ಯಾಂಕ್|ಬ್ಯಾಂಕಿಂಗ್]] ಮತ್ತು [[ಲೆಕ್ಕಪತ್ರ ನಿರ್ವಹಣೆ|ಲೆಕ್ಕಪತ್ರದ]] ಕ್ಷೇತ್ರಗಳನ್ನು ಆ ಸಮಯದಲ್ಲಿ ಪರಿಚಯಿಸಲಾಯಿತು.]]
'''ನವೋದಯ''' ಯುರೋಪಿನ ಇತಿಹಾಸದಲ್ಲಿ ಮಧ್ಯಯುಗದಿಂದ ಆಧುನಿಕತೆಗೆ ಪರಿವರ್ತನೆಯನ್ನು ಗುರುತಿಸುತ್ತದೆ. ೧೫ ಮತ್ತು ೧೬ ನೇ ಶತಮಾನಗಳನ್ನು ಒಳಗೊಂಡಿದೆ. ಇದು ಶಾಸ್ತ್ರೀಯ ಪ್ರಾಚೀನತೆ ಆಲೋಚನೆಗಳು ಮತ್ತು ಸಾಧನೆಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಮೀರಿಸುವ ಪ್ರಯತ್ನದಿಂದ ನಿರೂಪಿಸಲ್ಪಟ್ಟಿದೆ. ಇದು ಮಧ್ಯಯುಗದ ಅಂತ್ಯದ ಬಿಕ್ಕಟ್ಟಿನ ನಂತರ ಸಂಭವಿಸಿತು ಮತ್ತು ದೊಡ್ಡ ಸಾಮಾಜಿಕ ಬದಲಾವಣೆಯೊಂದಿಗೆ ಸಂಬಂಧಿಸಿದೆ. ಪ್ರಮಾಣಿತ ಅವಧಿಯ ಜೊತೆಗೆ, "ದೀರ್ಘ ಪುನರುಜ್ಜೀವನ" ದ ಪ್ರತಿಪಾದಕರು ೧೪ ನೇ ಶತಮಾನದಲ್ಲಿ ಅದರ ಆರಂಭವನ್ನು ಮತ್ತು ೧೭ ನೇ ಶತಮಾನದಲ್ಲಿ ಅದರ ಅಂತ್ಯವನ್ನು ಹಾಕಬಹುದು.
ಸಾಂಪ್ರದಾಯಿಕ ದೃಷ್ಟಿಕೋನವು ನವೋದಯದ ಆರಂಭಿಕ ಆಧುನಿಕ ಅಂಶಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತದೆ. ಇದು ಹಿಂದಿನ ಕಾಲದಿಂದ ವಿರಾಮ ಎಂದು ವಾದಿಸುತ್ತದೆ, ಆದರೆ ಇಂದು ಅನೇಕ ಇತಿಹಾಸಕಾರರು ಅದರ ಮಧ್ಯಕಾಲೀನ ಅಂಶಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ ಮತ್ತು ಇದು ಮಧ್ಯಯುಗದ ವಿಸ್ತರಣೆ ಎಂದು ವಾದಿಸುತ್ತಾರೆ.<ref>{{Cite book|url=https://books.google.com/books?id=NCKoDQAAQBAJ&pg=PP14|title=Renaissance Humanism, from the Middle Ages to Modern Times|last=Monfasani|first=John|publisher=Taylor & Francis|year=2016|isbn=978-1-351-90439-1}}</ref><ref>{{Cite book|url=https://books.google.com/books?id=bdIBlQXSKi8C&pg=PA63|title=Forever Young: A Cultural History of Longevity|last=Boia|first=Lucian|publisher=Reaktion Books|year=2004|isbn=978-1-86189-154-9}}</ref> ಆದಾಗ್ಯೂ, ಅವಧಿಯ ಆರಂಭಗಳು - ೧೫ ನೇ ಶತಮಾನದ ಆರಂಭಿಕ ಪುನರುಜ್ಜೀವನ ಮತ್ತು ಸುಮಾರು ೧೨೫೦ ಅಥವಾ ೧೩೦೦ ರಿಂದ ಇಟಾಲಿಯನ್ ಪ್ರೊಟೊ-ನವೋದಯ - ಸಾಂಪ್ರದಾಯಿಕವಾಗಿ ಮಧ್ಯಯುಗದ ಅಂತ್ಯದೊಂದಿಗೆ ಗಣನೀಯವಾಗಿ ಅತಿಕ್ರಮಿಸುತ್ತದೆ. ಶ. ೧೨೫೦-೧೫೦೦, ಮತ್ತು ಮಧ್ಯಯುಗವು ಆಧುನಿಕ ಯುಗದಂತೆ ಕ್ರಮೇಣ ಬದಲಾವಣೆಗಳಿಂದ ತುಂಬಿದ ದೀರ್ಘ ಅವಧಿಯಾಗಿದೆ. ಎರಡರ ನಡುವಿನ ಪರಿವರ್ತನೆಯ ಅವಧಿಯಾಗಿ, ನವೋದಯವು ಎರಡಕ್ಕೂ ನಿಕಟ ಹೋಲಿಕೆಯನ್ನು ಹೊಂದಿದೆ. ವಿಶೇಷವಾಗಿ ಕೊನೆಯಲ್ಲಿ ಮತ್ತು ಆರಂಭಿಕ ಉಪ-ಅವಧಿಗಳು.
ನವೋದಯದ ಬೌದ್ಧಿಕ ಆಧಾರವು ಅದರ ಮಾನವತಾವಾದದ ಆವೃತ್ತಿಯಾಗಿದೆ. ಇದು ರೋಮನ್ ''ಮಾನವತಾವಾದದ'' ಪರಿಕಲ್ಪನೆಯಿಂದ ಮತ್ತು ಶಾಸ್ತ್ರೀಯ ಗ್ರೀಕ್ ತತ್ವಶಾಸ್ತ್ರದ ಮರುಶೋಧನೆಯಿಂದ ಹುಟ್ಟಿಕೊಂಡಿತು. ಉದಾಹರಣೆಗೆ ಪ್ರೊಟಾಗೋರಸ್, "ಮನುಷ್ಯನು ಎಲ್ಲದರ ಅಳತೆ" ಎಂದು ಹೇಳಿದನು. ಈ ಹೊಸ ಚಿಂತನೆಯು ಕಲೆ, [[ವಾಸ್ತುಶಿಲ್ಪ]], ರಾಜಕೀಯ, [[ವಿಜ್ಞಾನ]] ಮತ್ತು ಸಾಹಿತ್ಯದಲ್ಲಿ ಪ್ರಕಟವಾಯಿತು. [[ಎಣ್ಣೆ ಚಿತ್ರಕಲೆ|ತೈಲ ವರ್ಣಚಿತ್ರದಲ್ಲಿ]] ದೃಷ್ಟಿಕೋನದ ಬೆಳವಣಿಗೆ ಮತ್ತು [[ಕಾಂಕ್ರೀಟ್]] ಅನ್ನು ಹೇಗೆ ತಯಾರಿಸಬೇಕೆಂಬುದರ ಪುನಶ್ಚೇತನದ ಜ್ಞಾನವು ಆರಂಭಿಕ ಉದಾಹರಣೆಗಳಾಗಿವೆ. ಲೋಹದ ಚಲಿಸಬಲ್ಲ ಪ್ರಕಾರದ ಆವಿಷ್ಕಾರವು ೧೫ ನೇ ಶತಮಾನದ ನಂತರದ ಆಲೋಚನೆಗಳ ಪ್ರಸರಣವನ್ನು ವೇಗಗೊಳಿಸಿದರೂ, ನವೋದಯದ ಬದಲಾವಣೆಗಳು ಯುರೋಪಿನಾದ್ಯಂತ ಏಕರೂಪವಾಗಿರಲಿಲ್ಲ: ಮೊದಲ ಕುರುಹುಗಳು ೧೩ ನೇ ಶತಮಾನದ ಉತ್ತರಾರ್ಧದಲ್ಲಿ ನಿರ್ದಿಷ್ಟವಾಗಿ ಡಾಂಟೆಯ ಬರಹಗಳೊಂದಿಗೆ ಮತ್ತು ಜಿಯೊಟ್ಟೊ ಅವರ ವರ್ಣಚಿತ್ರಗಳೊಂದಿಗೆ ಇಟಲಿಯಲ್ಲಿ ಕಾಣಿಸಿಕೊಂಡವು.
ಸಾಂಸ್ಕೃತಿಕ ಆಂದೋಲನವಾಗಿ, ನವೋದಯವು [[ಲ್ಯಾಟಿನ್]] ಮತ್ತು ದೇಶೀಯ ಸಾಹಿತ್ಯಗಳ ನವೀನ ಹೂಬಿಡುವಿಕೆಯನ್ನು ಒಳಗೊಳ್ಳುತ್ತದೆ. ಇದು ೧೪ ನೇ ಶತಮಾನದ ಶಾಸ್ತ್ರೀಯ ಮೂಲಗಳ ಆಧಾರದ ಮೇಲೆ ಕಲಿಕೆಯ ಪುನರುಜ್ಜೀವನದೊಂದಿಗೆ ಪ್ರಾರಂಭವಾಯಿತು. ಇದನ್ನು ಸಮಕಾಲೀನರು ಪೆಟ್ರಾಕ್ಗೆ ಸಲ್ಲುತ್ತಾರೆ. ರೇಖಾತ್ಮಕ ದೃಷ್ಟಿಕೋನ ಮತ್ತು [[ಚಿತ್ರಕಲೆ|ಚಿತ್ರಕಲೆಯಲ್ಲಿ]] ಹೆಚ್ಚು ನೈಸರ್ಗಿಕ ವಾಸ್ತವತೆಯನ್ನು ನಿರೂಪಿಸುವ ಇತರ ತಂತ್ರಗಳ ಅಭಿವೃದ್ಧಿ; ಮತ್ತು ಕ್ರಮೇಣ ಆದರೆ ವ್ಯಾಪಕವಾದ ಶೈಕ್ಷಣಿಕ ಸುಧಾರಣೆ. ರಾಜಕೀಯದಲ್ಲಿ, ನವೋದಯವು [[ರಾಜತಾಂತ್ರಿಕತೆ|ರಾಜತಾಂತ್ರಿಕತೆಯ]] ಸಂಪ್ರದಾಯಗಳು ಮತ್ತು ಸಂಪ್ರದಾಯಗಳ ಬೆಳವಣಿಗೆಗೆ ಕೊಡುಗೆ ನೀಡಿತು ಮತ್ತು ವಿಜ್ಞಾನದಲ್ಲಿ ವೀಕ್ಷಣೆ ಮತ್ತು ಅನುಗಮನದ ತಾರ್ಕಿಕತೆಯ ಮೇಲೆ ಹೆಚ್ಚಿನ ಅವಲಂಬನೆಯನ್ನು ನೀಡಿತು. ನವೋದಯವು ಅನೇಕ ಬೌದ್ಧಿಕ ಮತ್ತು [[ಸಮಾಜ ವಿಜ್ಞಾನ|ಸಾಮಾಜಿಕ ವೈಜ್ಞಾನಿಕ]] ಅನ್ವೇಷಣೆಗಳಲ್ಲಿ ಕ್ರಾಂತಿಗಳನ್ನು ಕಂಡರೂ, ಹಾಗೆಯೇ ಆಧುನಿಕ [[ಬ್ಯಾಂಕ್|ಬ್ಯಾಂಕಿಂಗ್]] ಮತ್ತು [[ಲೆಕ್ಕಪತ್ರ ನಿರ್ವಹಣೆ|ಲೆಕ್ಕಪರಿಶೋಧಕ]] ಕ್ಷೇತ್ರವನ್ನು ಪರಿಚಯಿಸಿತು.<ref name="jkdiwan">{{Cite book|title=Accounting Concepts & Theories|last=Diwan|first=Jaswith|publisher=Morre|location=London|pages=1–2|id=id# 94452}}</ref> ಇದು ಬಹುಶಃ ತನ್ನ ಕಲಾತ್ಮಕ ಬೆಳವಣಿಗೆಗಳು ಮತ್ತು [[ಲಿಯನಾರ್ಡೊ ಡ ವಿಂಚಿ|ಲಿಯೊನಾರ್ಡೊ ಡಾ ವಿನ್ಸಿ]] ಮತ್ತು ಅಂತಹ ಬಹುಶ್ರುತಿಗಳ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ. [[ಮೈಕೆಲ್ಯಾಂಜೆಲೊ]], "ನವೋದಯ ಮಾನವ" ಎಂಬ ಪದವನ್ನು ಪ್ರೇರೇಪಿಸಿದರು.<ref>BBC Science and Nature, ''[https://www.bbc.co.uk/science/leonardo/ Leonardo da Vinci]'' Retrieved May 12, 2007</ref><ref>BBC History, ''[https://www.bbc.co.uk/history/historic_figures/michelangelo.shtml Michelangelo]'' Retrieved May 12, 2007</ref>
ಪುನರುಜ್ಜೀವನವು [[ಇಟಲಿ|ಇಟಲಿಯ]] ಅನೇಕ ರಾಜ್ಯಗಳಲ್ಲಿ ಒಂದಾದ ಫ್ಲಾರೆನ್ಸ್ ಗಣರಾಜ್ಯದಲ್ಲಿ ಪ್ರಾರಂಭವಾಯಿತು.<ref>Burke, P., ''The European Renaissance: Centre and Peripheries'' 1998</ref> ಆ ಸಮಯದಲ್ಲಿ ಫ್ಲಾರೆನ್ಸ್ನ ಸಾಮಾಜಿಕ ಮತ್ತು ನಾಗರಿಕ ವಿಶಿಷ್ಟತೆಗಳನ್ನು ಒಳಗೊಂಡಂತೆ ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸುವ ಅದರ ಮೂಲ ಮತ್ತು ಗುಣಲಕ್ಷಣಗಳನ್ನು ಪರಿಗಣಿಸಲು ವಿವಿಧ ಸಿದ್ಧಾಂತಗಳನ್ನು ಪ್ರಸ್ತಾಪಿಸಲಾಗಿದೆ. ಅದರ ರಾಜಕೀಯ ರಚನೆ, ಅದರ ಪ್ರಬಲ ಕುಟುಂಬವಾದ ಮೆಡಿಸಿ,<ref name="strathern">Strathern, Paul ''The Medici: Godfathers of the Renaissance'' (2003)</ref> ಮತ್ತು ಗ್ರೀಕ್ ವಿದ್ವಾಂಸರ ವಲಸೆ ಮತ್ತು ಅವರ ಪಠ್ಯಗಳು ಇಟಲಿಗೆ ಕಾನ್ಸ್ಟಾಂಟಿನೋಪಲ್ ಪತನದ ನಂತರ ಒಟ್ಟೋಮನ್ ಟರ್ಕ್ಸ್ಗೆ.<ref name="Britannica1">''Encyclopædia Britannica'', "Renaissance", 2008, O.Ed.</ref> ಇತರ ಪ್ರಮುಖ ಕೇಂದ್ರಗಳೆಂದರೆ ಉತ್ತರ ಇಟಾಲಿಯನ್ ನಗರ-ರಾಜ್ಯಗಳಾದ ವೆನಿಸ್, ಜಿನೋವಾ, ಮಿಲನ್, ಬೊಲೊಗ್ನಾ, [[ರೋಮ್]] ನವೋದಯ ಪಪಾಸಿ ಮತ್ತು ನೇಪಲ್ಸ್. ಇಟಲಿಯಿಂದ, ನವೋದಯವು ಯುರೋಪಿನಾದ್ಯಂತ ಫ್ಲಾಂಡರ್ಸ್, ಫ್ರಾನ್ಸ್, ಬ್ರಿಟನ್, ಐರ್ಲೆಂಡ್, ಸ್ಪೇನ್, ಪೋರ್ಚುಗಲ್, ಜರ್ಮನಿ, ಪೋಲೆಂಡ್, ಹಂಗೇರಿ ( ನೇಪಲ್ಸ್ನ ಬೀಟ್ರಿಸ್ನೊಂದಿಗೆ ) ಮತ್ತು ಇತರೆಡೆಗಳಲ್ಲಿ ಹರಡಿತು.
ನವೋದಯವು ಸುದೀರ್ಘ ಮತ್ತು ಸಂಕೀರ್ಣವಾದ ಇತಿಹಾಸಶಾಸ್ತ್ರವನ್ನು ಹೊಂದಿದೆ ಮತ್ತು ಪ್ರತ್ಯೇಕವಾದ ಅವಧಿಗಳ ಸಾಮಾನ್ಯ ಸಂದೇಹಕ್ಕೆ ಅನುಗುಣವಾಗಿ, ೧೯ ನೇ ಶತಮಾನದ "ನವೋದಯ" ಮತ್ತು ವೈಯಕ್ತಿಕ ಸಾಂಸ್ಕೃತಿಕ ವೀರರನ್ನು "ನವೋದಯ ಪುರುಷರು" ಎಂದು ವೈಭವೀಕರಿಸಲು ಇತಿಹಾಸಕಾರರಲ್ಲಿ ಹೆಚ್ಚಿನ ಚರ್ಚೆಗಳು ನಡೆದಿವೆ. ಒಂದು ಪದವಾಗಿ ಮತ್ತು ಐತಿಹಾಸಿಕ ಚಿತ್ರಣವಾಗಿ ''ನವೋದಯದ'' ಉಪಯುಕ್ತತೆ. ಕೆಲವು ವೀಕ್ಷಕರು ನವೋದಯವು ಮಧ್ಯಯುಗದಿಂದ ಸಾಂಸ್ಕೃತಿಕ "ಮುಂದುವರಿಯಿತು" ಎಂದು ಪ್ರಶ್ನಿಸಿದ್ದಾರೆ. ಬದಲಿಗೆ ಇದನ್ನು ನಿರಾಶಾವಾದ ಮತ್ತು ಶಾಸ್ತ್ರೀಯ ಪ್ರಾಚೀನತೆಯ ಬಗೆಗಿನ ಗೃಹವಿರಹದ ಅವಧಿಯಾಗಿ ನೋಡಿದ್ದಾರೆ.<ref name="huizinga">[[Johan Huizinga|Huizanga, Johan]], ''[[The Waning of the Middle Ages]]'' (1919, trans. 1924)</ref> ಆದರೆ ಸಾಮಾಜಿಕ ಮತ್ತು ಆರ್ಥಿಕ ಇತಿಹಾಸಕಾರರು, ವಿಶೇಷವಾಗಿ ''ಲಾಂಗ್ಯೂ ಡ್ಯೂರಿ'' ಬದಲಿಗೆ ಎರಡು [[ಯುಗ|ಯುಗಗಳ]] ನಡುವಿನ ನಿರಂತರತೆಯ ಮೇಲೆ ಕೇಂದ್ರೀಕರಿಸಿದೆ.<ref>{{Cite journal|last=Starn, Randolph|jstor=2650779|title=Renaissance Redux|url=https://archive.org/details/sim_american-historical-review_1998-02_103_1/page/122|journal=The American Historical Review|volume=103|issue=1|year=1998|pages=122–124|doi=10.2307/2650779}}</ref> ಇವುಗಳು "ಸಾವಿರ ಸಂಬಂಧಗಳಿಂದ" ಪನೋಫ್ಸ್ಕಿ ಗಮನಿಸಿದಂತೆ ಲಿಂಕ್ ಮಾಡಲ್ಪಟ್ಟಿವೆ.<ref>Panofsky 1969:6.</ref>
''ರಿನಾಸ್ಕಿತಾ'' ('ಪುನರ್ಜನ್ಮ') ಎಂಬ ಪದವು ಮೊದಲು ಕಾಣಿಸಿಕೊಂಡಿದ್ದು ಜಾರ್ಜಿಯೋ ವಸಾರಿಯವರ ''ಲೈವ್ಸ್ ಆಫ್ ದಿ ಆರ್ಟಿಸ್ಟ್ಸ್'' (ಶ. ೧೫೫೦), ೧೮೩೦ ರ ದಶಕದಲ್ಲಿ ''ನವೋದಯ'' ಎಂದು ಆಂಗ್ಲೀಕರಿಸಲಾಗಿದೆ.<ref>''The [[Oxford English Dictionary]]'' cites W Dyce and C H Wilson’s ''Letter to Lord Meadowbank'' (1837): "A style possessing many points of rude resemblance with the more elegant and refined character of the art of the renaissance in Italy." And the following year in ''Civil Engineer & Architect's Journal'': "Not that we consider the style of the Renaissance to be either pure or good per se." See: Oxford English Dictionary, "Renaissance"</ref> ಈ ಪದವನ್ನು ಕ್ಯಾರೊಲಿಂಗಿಯನ್ ನವೋದಯ (೮ ಮತ್ತು ೯ ನೇ ಶತಮಾನಗಳು), ಒಟ್ಟೋನಿಯನ್ ನವೋದಯ (೧೦ ನೇ ಮತ್ತು ೧೧ ನೇ ಶತಮಾನ), ಮತ್ತು ೧೨ ನೇ ಶತಮಾನದ ಪುನರುಜ್ಜೀವನದಂತಹ ಇತರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಚಳುವಳಿಗಳಿಗೆ ವಿಸ್ತರಿಸಲಾಗಿದೆ.
== ಅವಲೋಕನ ==
ನವೋದಯವು ಒಂದು ಸಾಂಸ್ಕೃತಿಕ ಆಂದೋಲನವಾಗಿದ್ದು, ಆಧುನಿಕ ಕಾಲದ ಆರಂಭದಲ್ಲಿ ಯುರೋಪಿಯನ್ ಬೌದ್ಧಿಕ ಜೀವನವನ್ನು ಗಾಢವಾಗಿ ಪ್ರಭಾವಿಸಿತು. ಇಟಲಿಯಲ್ಲಿ ಪ್ರಾರಂಭವಾಗಿ, ೧೬ನೇ ಶತಮಾನದ ವೇಳೆಗೆ ಯುರೋಪಿನ ಉಳಿದ ಭಾಗಗಳಿಗೆ ಹರಡಿತು, ಅದರ ಪ್ರಭಾವವು [[ಕಲೆ]], [[ವಾಸ್ತುಶಿಲ್ಪ]], [[ತತ್ವಶಾಸ್ತ್ರ]], [[ಸಾಹಿತ್ಯ]], [[ಸಂಗೀತ]], [[ವಿಜ್ಞಾನ]], [[ತಂತ್ರಜ್ಞಾನ]], ರಾಜಕೀಯ, ಧರ್ಮ ಮತ್ತು ಬೌದ್ಧಿಕ ವಿಚಾರಣೆಯ ಇತರ ಅಂಶಗಳಲ್ಲಿ ಕಂಡುಬಂದಿದೆ. ನವೋದಯ ವಿದ್ವಾಂಸರು ಅಧ್ಯಯನದಲ್ಲಿ ಮಾನವತಾವಾದದ ವಿಧಾನವನ್ನು ಬಳಸಿದರು ಮತ್ತು ಕಲೆಯಲ್ಲಿ ನೈಜತೆ ಮತ್ತು ಮಾನವ ಭಾವನೆಗಳನ್ನು ಹುಡುಕಿದರು.<ref name="perry-humanities">Perry, M. [http://college.hmco.com/humanities/perry/humanities/1e/students/summaries/ch13.html Humanities in the Western Tradition] {{Webarchive|url=https://web.archive.org/web/20090429045555/http://college.hmco.com/humanities/perry/humanities/1e/students/summaries/ch13.html |date=2009-04-29 }}, Ch. 13</ref>
ಪೊಗ್ಗಿಯೊ ಬ್ರಾಸಿಯೋಲಿನಿಯಂತಹ ನವೋದಯ ಮಾನವತಾವಾದಿಗಳು ಯುರೋಪಿನ ಸನ್ಯಾಸಿಗಳ ಗ್ರಂಥಾಲಯಗಳಲ್ಲಿ ಪ್ರಾಚೀನ ಕಾಲದ ಲ್ಯಾಟಿನ್ ಸಾಹಿತ್ಯ, ಐತಿಹಾಸಿಕ ಮತ್ತು ವಾಗ್ಮಿ ಗ್ರಂಥಗಳನ್ನು ಹುಡುಕಿದರು. ಆದರೆ ಕಾನ್ಸ್ಟಾಂಟಿನೋಪಲ್ (೧೪೫೩) ಪತನವು ವಲಸಿಗ ಗ್ರೀಕ್ ವಿದ್ವಾಂಸರ ಅಲೆಯನ್ನು ಹುಟ್ಟುಹಾಕಿತು. ಪ್ರಾಚೀನ ಗ್ರೀಕ್ ಭಾಷೆಯಲ್ಲಿ ಅಮೂಲ್ಯವಾದ ಹಸ್ತಪ್ರತಿಗಳನ್ನು ತಂದಿತು. ಪಶ್ಚಿಮದಲ್ಲಿ ಅಸ್ಪಷ್ಟತೆಗೆ ಬಿದ್ದಿತು. ಸಾಹಿತ್ಯಿಕ ಮತ್ತು ಐತಿಹಾಸಿಕ ಪಠ್ಯಗಳ ಮೇಲಿನ ಅವರ ಹೊಸ ಗಮನದಲ್ಲಿ ನವೋದಯ ವಿದ್ವಾಂಸರು 12 ನೇ ಶತಮಾನದ ನವೋದಯದ ಮಧ್ಯಕಾಲೀನ ವಿದ್ವಾಂಸರಿಂದ ಗಮನಾರ್ಹವಾಗಿ ಭಿನ್ನರಾಗಿದ್ದಾರೆ, ಅವರು ನೈಸರ್ಗಿಕ ವಿಜ್ಞಾನಗಳು, ತತ್ವಶಾಸ್ತ್ರ ಮತ್ತು ಗಣಿತದ [[ಗ್ರೀಕ್ ಭಾಷೆ|ಗ್ರೀಕ್]] ಮತ್ತು [[ಅರಬ್ಬೀ ಭಾಷೆ|ಅರೇಬಿಕ್]] ಕೃತಿಗಳನ್ನು ಅಧ್ಯಯನ ಮಾಡಲು ಗಮನಹರಿಸಿದರು.
[[ಚಿತ್ರ:Sandro_Botticelli_-_Idealized_Portrait_of_a_Lady_(Portrait_of_Simonetta_Vespucci_as_Nymph)_-_Google_Art_Project.jpg|left|thumb| ಸ್ಯಾಂಡ್ರೊ ಬೊಟಿಸೆಲ್ಲಿ ಅವರಿಂದ ''ಯುವತಿಯ ಭಾವಚಿತ್ರ'' (ಶ. ೧೪೮೦–೮೫) ( ಸಿಮೊನೆಟ್ಟಾ ವೆಸ್ಪುಸಿ )]]
ನಿಯೋಪ್ಲಾಟೋನಿಸಂನ ಪುನರುಜ್ಜೀವನದಲ್ಲಿ ನವೋದಯ ಮಾನವತಾವಾದಿಗಳು [[ಕ್ರೈಸ್ತ ಧರ್ಮ|ಕ್ರಿಶ್ಚಿಯನ್ ಧರ್ಮವನ್ನು]] ತಿರಸ್ಕರಿಸಲಿಲ್ಲ. ಇದಕ್ಕೆ ತದ್ವಿರುದ್ಧವಾಗಿ, ನವೋದಯದ ಅನೇಕ ಶ್ರೇಷ್ಠ ಕೃತಿಗಳು ಅದಕ್ಕೆ ಮೀಸಲಾಗಿವೆ ಮತ್ತು ಚರ್ಚ್ ನವೋದಯ ಕಲೆಯ ಅನೇಕ ಕೃತಿಗಳನ್ನು ಪೋಷಿಸಿತು. ಆದಾಗ್ಯೂ, ಬುದ್ಧಿಜೀವಿಗಳು ಧರ್ಮವನ್ನು ಸಮೀಪಿಸುವ ರೀತಿಯಲ್ಲಿ ಒಂದು ಸೂಕ್ಷ್ಮ ಬದಲಾವಣೆಯು ನಡೆಯಿತು. ಅದು ಸಾಂಸ್ಕೃತಿಕ ಜೀವನದ ಇತರ ಹಲವು ಕ್ಷೇತ್ರಗಳಲ್ಲಿ ಪ್ರತಿಫಲಿಸುತ್ತದೆ.<ref name="openuni">Open University, ''[http://www.open.ac.uk/Arts/renaissance2/religion.htm Looking at the Renaissance: Religious Context in the Renaissance]'' (Retrieved May 10, 2007)</ref> ಇದರ ಜೊತೆಗೆ, ಗ್ರೀಕ್ ಹೊಸ ಒಡಂಬಡಿಕೆಯನ್ನು ಒಳಗೊಂಡಂತೆ ಅನೇಕ ಗ್ರೀಕ್ ಕ್ರಿಶ್ಚಿಯನ್ ಕೃತಿಗಳನ್ನು ಬೈಜಾಂಟಿಯಮ್ನಿಂದ ಪಶ್ಚಿಮ ಯುರೋಪ್ಗೆ ತರಲಾಯಿತು. ಪ್ರಾಚೀನ ಕಾಲದ ನಂತರ ಮೊದಲ ಬಾರಿಗೆ ಪಾಶ್ಚಿಮಾತ್ಯ ವಿದ್ವಾಂಸರನ್ನು ತೊಡಗಿಸಿಕೊಂಡಿತು. ಗ್ರೀಕ್ ಕ್ರಿಶ್ಚಿಯನ್ ಕೃತಿಗಳೊಂದಿಗಿನ ಈ ಹೊಸ ನಿಶ್ಚಿತಾರ್ಥ, ಮತ್ತು ವಿಶೇಷವಾಗಿ ಮಾನವತಾವಾದಿಗಳಾದ ಲೊರೆಂಜೊ ವಲ್ಲಾ ಮತ್ತು ಎರಾಸ್ಮಸ್ ಅವರು ಉತ್ತೇಜಿಸಿದ ಹೊಸ ಒಡಂಬಡಿಕೆಯ ಮೂಲ ಗ್ರೀಕ್ಗೆ ಹಿಂತಿರುಗುವುದು ಸುಧಾರಣೆಗೆ ದಾರಿ ಮಾಡಿಕೊಡಲು ಸಹಾಯ ಮಾಡುತ್ತದೆ.
ನಿಕೋಲಾ ಪಿಸಾನೊ ಅವರ ಶಿಲ್ಪದಲ್ಲಿ ಕ್ಲಾಸಿಸಿಸಂಗೆ ಮೊದಲ ಕಲಾತ್ಮಕ ಹಿಂದಿರುಗಿದ ನಂತರ, ಮಸಾಸಿಯೊ ನೇತೃತ್ವದ ಫ್ಲೋರೆಂಟೈನ್ ವರ್ಣಚಿತ್ರಕಾರರು ಮಾನವ ರೂಪವನ್ನು ನೈಜವಾಗಿ ಚಿತ್ರಿಸಲು ಶ್ರಮಿಸಿದರು. ದೃಷ್ಟಿಕೋನ ಮತ್ತು ಬೆಳಕನ್ನು ಹೆಚ್ಚು ನೈಸರ್ಗಿಕವಾಗಿ ನಿರೂಪಿಸುವ ತಂತ್ರಗಳನ್ನು ಅಭಿವೃದ್ಧಿಪಡಿಸಿದರು. ರಾಜಕೀಯ ದಾರ್ಶನಿಕರು, ಅತ್ಯಂತ ಪ್ರಸಿದ್ಧವಾದ ನಿಕೊಲೊ ಮ್ಯಾಕಿಯಾವೆಲ್ಲಿ, ರಾಜಕೀಯ ಜೀವನವನ್ನು ಅದು ನಿಜವಾಗಿಯೂ ಇದ್ದಂತೆ ವಿವರಿಸಲು ಪ್ರಯತ್ನಿಸಿದರು, ಅಂದರೆ ಅದನ್ನು ತರ್ಕಬದ್ಧವಾಗಿ ಅರ್ಥಮಾಡಿಕೊಳ್ಳಲು. ಇಟಾಲಿಯನ್ ನವೋದಯ ಮಾನವತಾವಾದಕ್ಕೆ ವಿಮರ್ಶಾತ್ಮಕ ಕೊಡುಗೆ, ಜಿಯೋವಾನಿ ಪಿಕೊ ಡೆಲ್ಲಾ ಮಿರಾಂಡೋಲಾ ಪ್ರಸಿದ್ಧ ಪಠ್ಯ ''ಡಿ ಹೋಮಿನಿಸ್ ಡಿಗ್ನಿಟೇಟ್'' ( ''ಒರೇಶನ್ ಆನ್ ದಿ ಡಿಗ್ನಿಟಿ ಆಫ್ ಮ್ಯಾನ್'', ೧೪೮೬) ಅನ್ನು ಬರೆದರು. ಇದು ತತ್ವಶಾಸ್ತ್ರ, ನೈಸರ್ಗಿಕ ಚಿಂತನೆ, ನಂಬಿಕೆ ಮತ್ತು ಮಾಂತ್ರಿಕತೆಯ ಕಾರಣದ ಆಧಾರದ ಮೇಲೆ ಎದುರಾಳಿ ಬಗ್ಗೆ ಪ್ರಬಂಧಗಳ ಸರಣಿಯನ್ನು ಒಳಗೊಂಡಿದೆ. ಶಾಸ್ತ್ರೀಯ ಲ್ಯಾಟಿನ್ ಮತ್ತು ಗ್ರೀಕ್ ಅನ್ನು ಅಧ್ಯಯನ ಮಾಡುವುದರ ಜೊತೆಗೆ, ನವೋದಯ ಲೇಖಕರು ಸಹ ಸ್ಥಳೀಯ ಭಾಷೆಗಳನ್ನು ಬಳಸಲು ಪ್ರಾರಂಭಿಸಿದರು. [[ಮುದ್ರಣ ಯಂತ್ರ|ಪ್ರಿಂಟಿಂಗ್ ಪ್ರೆಸ್ನ]] ಪರಿಚಯದೊಂದಿಗೆ, ಇದು ಇನ್ನೂ ಹೆಚ್ಚಿನ ಜನರಿಗೆ ಪುಸ್ತಕಗಳನ್ನು, ವಿಶೇಷವಾಗಿ ಬೈಬಲ್ ಅನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.<ref>Open University, [http://www.open.ac.uk/Arts/renaissance2/economic.htm#urban ''Looking at the Renaissance: Urban economy and government''] (Retrieved May 15, 2007)</ref>
ಒಟ್ಟಾರೆಯಾಗಿ, ನವೋದಯವನ್ನು ಪ್ರಾಚೀನ ಕಾಲದ ಕಲ್ಪನೆಗಳ ಪುನರುಜ್ಜೀವನದ ಮೂಲಕ ಮತ್ತು ಚಿಂತನೆಗೆ ನವೀನ ವಿಧಾನಗಳ ಮೂಲಕ ಜಾತ್ಯತೀತ ಮತ್ತು ಲೌಕಿಕವನ್ನು ಅಧ್ಯಯನ ಮಾಡಲು ಮತ್ತು ಸುಧಾರಿಸಲು ಬುದ್ಧಿಜೀವಿಗಳ ಪ್ರಯತ್ನವಾಗಿ ವೀಕ್ಷಿಸಬಹುದು. ಕೆಲವು ವಿದ್ವಾಂಸರು, ಉದಾಹರಣೆಗೆ ರಾಡ್ನಿ ಸ್ಟಾರ್ಕ್,<ref>Stark, Rodney, ''The Victory of Reason'', Random House, NY: 2005</ref> ಇಟಾಲಿಯನ್ ನಗರ-ರಾಜ್ಯಗಳ ಹಿಂದಿನ ಆವಿಷ್ಕಾರಗಳ ಪರವಾಗಿ ಪುನರುಜ್ಜೀವನವನ್ನು ಕಡಿಮೆಮಾಡುತ್ತಾರೆ. ಇದು ಪ್ರತಿಕ್ರಿಯಾಶೀಲ ಸರ್ಕಾರ, ಕ್ರಿಶ್ಚಿಯನ್ ಧರ್ಮ ಮತ್ತು [[ಬಂಡವಾಳಶಾಹಿ|ಬಂಡವಾಳಶಾಹಿಯ]] ಜನ್ಮವನ್ನು ವಿವಾಹವಾಯಿತು. ಮಹಾನ್ ಯುರೋಪಿಯನ್ ರಾಜ್ಯಗಳು (ಫ್ರಾನ್ಸ್ ಮತ್ತು ಸ್ಪೇನ್) ಸಂಪೂರ್ಣ ರಾಜಪ್ರಭುತ್ವಗಳಾಗಿದ್ದರೆ ಮತ್ತು ಇತರರು ನೇರ ಚರ್ಚ್ ನಿಯಂತ್ರಣದಲ್ಲಿದ್ದರೆ, ಇಟಲಿಯ ಸ್ವತಂತ್ರ ನಗರ-ಗಣರಾಜ್ಯಗಳು ಸನ್ಯಾಸಿಗಳ ಎಸ್ಟೇಟ್ಗಳ ಮೇಲೆ ಆವಿಷ್ಕರಿಸಿದ ನವೋದಯಕ್ಕೆ ಮುಂಚಿನ ಮತ್ತು ಹಣಕಾಸು ಒದಗಿಸಿದ ವಾಣಿಜ್ಯ ಕ್ರಾಂತಿ ಬಂಡವಾಳಶಾಹಿ ತತ್ವಗಳನ್ನು ಸ್ವಾಧೀನಪಡಿಸಿಕೊಂಡವು ಮತ್ತು ಅಭೂತಪೂರ್ವವಾಗಿ ಸ್ಥಾಪಿಸಿದವು ಎಂದು ಈ ವಿಶ್ಲೇಷಣೆ ವಾದಿಸುತ್ತದೆ.
== ಮೂಲಗಳು ==
[[ಚಿತ್ರ:Sunset_over_florence_1.jpg|thumb|ಫ್ಲಾರೆನ್ಸ್ ನ ನೋಟ, ನವೋದಯದ ಜನ್ಮಸ್ಥಳ]]
ನವೋದಯವನ್ನು ನಿರೂಪಿಸುವ ಕಲ್ಪನೆಗಳು ೧೩ ಮತ್ತು ೧೪ ನೇ ಶತಮಾನದ ತಿರುವಿನಲ್ಲಿ ಫ್ಲಾರೆನ್ಸ್ನಲ್ಲಿ ತಮ್ಮ ಮೂಲವನ್ನು ಹೊಂದಿದ್ದವು ಎಂದು ಹಲವರು ವಾದಿಸುತ್ತಾರೆ. ನಿರ್ದಿಷ್ಟವಾಗಿ ಡಾಂಟೆ ಅಲಿಘೇರಿ (೧೨೬೫-೧೩೨೧) ಮತ್ತು ಪೆಟ್ರಾರ್ಕ್ (೧೩೦೪-೧೩೭೪), ಜೊತೆಗೆ ವರ್ಣಚಿತ್ರಗಳು ಜಿಯೊಟ್ಟೊ ಡಿ ಬೊಂಡೋನ್ (೧೨೬೭–೧೩೩೭). ಕೆಲವು ಬರಹಗಾರರು ಪುನರುಜ್ಜೀವನದ ದಿನಾಂಕವನ್ನು ಸಾಕಷ್ಟು ನಿಖರವಾಗಿ ಹೇಳುತ್ತಾರೆ. ಪ್ರತಿಸ್ಪರ್ಧಿ ಪ್ರತಿಭೆಗಳಾದ ಲೊರೆಂಜೊ ಘಿಬರ್ಟಿ ಮತ್ತು ಫಿಲಿಪ್ಪೊ ಬ್ರೂನೆಲ್ಲೆಸ್ಚಿ ಅವರು ಫ್ಲಾರೆನ್ಸ್ ಕ್ಯಾಥೆಡ್ರಲ್ನ ಬ್ಯಾಪ್ಟಿಸ್ಟರಿಗಾಗಿ ಕಂಚಿನ ಬಾಗಿಲುಗಳನ್ನು ನಿರ್ಮಿಸುವ ಒಪ್ಪಂದಕ್ಕೆ ಸ್ಪರ್ಧಿಸಿದಾಗ ೧೪೦೧ ರ ಪ್ರಸ್ತಾವಿತ ಆರಂಭಿಕ ಹಂತವಾಗಿದೆ (ಘಿಬರ್ಟಿ ನಂತರ ಗೆದ್ದರು).<ref>Walker, Paul Robert, ''The Feud that sparked the Renaissance: How Brunelleschi and Ghiberti Changed the Art World'' (New York, Perennial-Harper Collins, 2003)</ref> ಇತರರು ಕಲಾವಿದರು ಮತ್ತು ಬಹುಶ್ರುತರಾದ ಬ್ರೂನೆಲ್ಲೆಸ್ಚಿ, ಘಿಬರ್ಟಿ, [[ಡಾನಟೆಲೊ|ಡೊನಾಟೆಲ್ಲೊ]] ಮತ್ತು ಮಸಾಸಿಯೊಗಳ ನಡುವಿನ ಹೆಚ್ಚು ಸಾಮಾನ್ಯ ಸ್ಪರ್ಧೆಯನ್ನು ನವೋದಯದ ಸೃಜನಶೀಲತೆಯನ್ನು ಪ್ರಚೋದಿಸುವಂತೆ ಕಲಾತ್ಮಕ ಆಯೋಗಗಳಿಗಾಗಿ ನೋಡುತ್ತಾರೆ. ಆದರೂ ಇಟಲಿಯಲ್ಲಿ ನವೋದಯ ಏಕೆ ಪ್ರಾರಂಭವಾಯಿತು ಮತ್ತು ಅದು ಏಕೆ ಪ್ರಾರಂಭವಾಯಿತು ಎಂಬುದು ಹೆಚ್ಚು ಚರ್ಚೆಯಾಗಿ ಉಳಿದಿದೆ. ಅಂತೆಯೇ, ಅದರ ಮೂಲವನ್ನು ವಿವರಿಸಲು ಹಲವಾರು ಸಿದ್ಧಾಂತಗಳನ್ನು ಮುಂದಿಡಲಾಗಿದೆ.
ನವೋದಯದ ಸಮಯದಲ್ಲಿ, ಹಣ ಮತ್ತು ಕಲೆ ಪರಸ್ಪರ ಕೈಜೋಡಿಸಿದವು. ಕಲಾವಿದರು ಸಂಪೂರ್ಣವಾಗಿ ಪೋಷಕರ ಮೇಲೆ ಅವಲಂಬಿತರಾಗಿದ್ದರು, ಆದರೆ ಕಲಾತ್ಮಕ ಪ್ರತಿಭೆಯನ್ನು ಬೆಳೆಸಲು ಪೋಷಕರಿಗೆ ಹಣದ ಅಗತ್ಯವಿತ್ತು. ೧೪, ೧೫ ಮತ್ತು ೧೬ ನೇ ಶತಮಾನಗಳಲ್ಲಿ ಏಷ್ಯಾ ಮತ್ತು ಯುರೋಪ್ಗೆ ವ್ಯಾಪಾರವನ್ನು ವಿಸ್ತರಿಸುವ ಮೂಲಕ ಸಂಪತ್ತನ್ನು ಇಟಲಿಗೆ ತರಲಾಯಿತು. ಟೈರೋಲ್ನಲ್ಲಿ ಬೆಳ್ಳಿ ಗಣಿಗಾರಿಕೆ ಹಣದ ಹರಿವನ್ನು ಹೆಚ್ಚಿಸಿತು. ಕ್ರುಸೇಡ್ಗಳ ಸಮಯದಲ್ಲಿ ಮನೆಗೆ ತಂದ ಮುಸ್ಲಿಂ ಪ್ರಪಂಚದ ಐಷಾರಾಮಿಗಳು ಜಿನೋವಾ ಮತ್ತು ವೆನಿಸ್ನ ಸಮೃದ್ಧಿಯನ್ನು ಹೆಚ್ಚಿಸಿದವು.<ref name="National Geographic Society">{{Cite book|url=https://archive.org/details/renaissancemaker00sett|title=The Renaissance – Maker of Modern Man|last=Severy|first=Merle|last2=Thomas B Allen|last3=Ross Bennett|last4=Jules B Billard|last5=Russell Bourne|last6=Edward Lanoutte|last7=David F Robinson|last8=Verla Lee Smith|publisher=National Geographic Society|year=1970|isbn=978-0-87044-091-5}}</ref>
ಜೂಲ್ಸ್ ಮೈಕೆಲೆಟ್ ಫ್ರಾನ್ಸ್ನಲ್ಲಿ ೧೬ ನೇ ಶತಮಾನದ ಪುನರುಜ್ಜೀವನವನ್ನು ಯುರೋಪಿನ ಸಾಂಸ್ಕೃತಿಕ ಇತಿಹಾಸದಲ್ಲಿ ಮಧ್ಯಯುಗದಿಂದ ವಿರಾಮವನ್ನು ಪ್ರತಿನಿಧಿಸುವ ಅವಧಿ ಎಂದು ವ್ಯಾಖ್ಯಾನಿಸಿದ್ದಾರೆ. ಮಾನವೀಯತೆ ಮತ್ತು ಜಗತ್ತಿನಲ್ಲಿ ಅದರ ಸ್ಥಾನದ ಬಗ್ಗೆ ಆಧುನಿಕ ತಿಳುವಳಿಕೆಯನ್ನು ಸೃಷ್ಟಿಸಿದರು.<ref>{{Cite book|title=The Renaissance Bazaar|url=https://archive.org/details/renaissancebazaa0000brot|last=Brotton|first=Jerry|publisher=Oxford University Press|year=2002|pages=[https://archive.org/details/renaissancebazaa0000brot/page/n34 21]–22|author-link=Jerry Brotton}}</ref>
=== ನವೋದಯ ಮಾನವತಾವಾದದ ಲ್ಯಾಟಿನ್ ಮತ್ತು ಗ್ರೀಕ್ ಹಂತಗಳು ===
[[ಚಿತ್ರ:Salutati.jpg|left|thumb| ಕೊಲುಸಿಯೊ ಸಲುತಾಟಿ]]
ಹೈ ಮಧ್ಯಯುಗಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ, ಲ್ಯಾಟಿನ್ ವಿದ್ವಾಂಸರು ಗ್ರೀಕ್ ಮತ್ತು ಅರೇಬಿಕ್ ನೈಸರ್ಗಿಕ ವಿಜ್ಞಾನ, ತತ್ವಶಾಸ್ತ್ರ ಮತ್ತು ಗಣಿತದ ಕೃತಿಗಳ ಅಧ್ಯಯನದ ಮೇಲೆ ಸಂಪೂರ್ಣವಾಗಿ ಗಮನಹರಿಸಿದಾಗ,<ref>For information on this earlier, very different approach to a different set of ancient texts (scientific texts rather than cultural texts) see [[Latin translations of the 12th century]], and [[Islamic contributions to Medieval Europe]].</ref> ನವೋದಯ ವಿದ್ವಾಂಸರು ಲ್ಯಾಟಿನ್ ಮತ್ತು ಗ್ರೀಕ್ ಸಾಹಿತ್ಯಿಕ, ಐತಿಹಾಸಿಕ ಮತ್ತು ವಾಕ್ಚಾತುರ್ಯವನ್ನು ಚೇತರಿಸಿಕೊಳ್ಳಲು ಮತ್ತು ಅಧ್ಯಯನ ಮಾಡಲು ಹೆಚ್ಚು ಆಸಕ್ತಿ ಹೊಂದಿದ್ದರು. ಸ್ಥೂಲವಾಗಿ ಹೇಳುವುದಾದರೆ, ಇದು ೧೪ ನೇ ಶತಮಾನದಲ್ಲಿ ಲ್ಯಾಟಿನ್ ಹಂತದೊಂದಿಗೆ ಪ್ರಾರಂಭವಾಯಿತು. ಪುನರುಜ್ಜೀವನದ ವಿದ್ವಾಂಸರಾದ ಪೆಟ್ರಾಕ್, ಕೊಲುಸಿಯೊ ಸಲುಟಾಟಿ (೧೩೩೧-೧೦೬), ನಿಕೊಲೊ ಡಿ' ನಿಕೊಲಿ (೧೩೬೪-೧೪೩೭), ಮತ್ತು ಪೊಗ್ಗಿಯೊ ಬ್ರಾಸಿಯೊಲಿನಿ (೧೩೮೦-೧೪೫೯) ಗ್ರಂಥಾಲಯಗಳನ್ನು ಸ್ಕ್ರಾರ್ ಮಾಡಿದಾಗ. ಸಿಸೆರೊ, ಲುಕ್ರೆಟಿಯಸ್, ಲಿವಿ ಮತ್ತು ಸೆನೆಕಾ ಅವರಂತಹ ಲ್ಯಾಟಿನ್ ಲೇಖಕರ ಕೃತಿಗಳ ಹುಡುಕಾಟದಲ್ಲಿ ಯುರೋಪ್.<ref>Reynolds and Wilson, pp. 113–123.</ref> ೧೫ ನೇ ಶತಮಾನದ ಆರಂಭದ ವೇಳೆಗೆ, ಉಳಿದಿರುವ ಅಂತಹ ಲ್ಯಾಟಿನ್ ಸಾಹಿತ್ಯದ ಬಹುಭಾಗವನ್ನು ಮರುಪಡೆಯಲಾಯಿತು. ಪಾಶ್ಚಿಮಾತ್ಯ ಯುರೋಪಿಯನ್ ವಿದ್ವಾಂಸರು ಪ್ರಾಚೀನ ಗ್ರೀಕ್ ಸಾಹಿತ್ಯಿಕ, ಐತಿಹಾಸಿಕ, ವಾಗ್ಮಿ ಮತ್ತು ದೇವತಾಶಾಸ್ತ್ರದ ಪಠ್ಯಗಳನ್ನು ಮರುಪಡೆಯಲು ತಿರುಗಿದಂತೆ ನವೋದಯ ಮಾನವತಾವಾದದ ಗ್ರೀಕ್ ಹಂತವು ನಡೆಯುತ್ತಿದೆ.<ref>Reynolds and Wilson, pp. 123, 130–137.</ref>
ಪ್ರಾಚೀನ ಕಾಲದಿಂದಲೂ ಪಶ್ಚಿಮ ಯುರೋಪಿನಲ್ಲಿ ಸಂರಕ್ಷಿಸಲ್ಪಟ್ಟ ಮತ್ತು ಅಧ್ಯಯನ ಮಾಡಲಾದ ಲ್ಯಾಟಿನ್ ಪಠ್ಯಗಳಿಗಿಂತ ಭಿನ್ನವಾಗಿ, ಪ್ರಾಚೀನ ಗ್ರೀಕ್ ಪಠ್ಯಗಳ ಅಧ್ಯಯನವು ಮಧ್ಯಕಾಲೀನ ಪಶ್ಚಿಮ ಯುರೋಪ್ನಲ್ಲಿ ಬಹಳ ಸೀಮಿತವಾಗಿತ್ತು. ವಿಜ್ಞಾನ, ಗಣಿತ ಮತ್ತು ತತ್ತ್ವಶಾಸ್ತ್ರದ ಮೇಲಿನ ಪ್ರಾಚೀನ ಗ್ರೀಕ್ ಕೃತಿಗಳನ್ನು ಪಶ್ಚಿಮ ಯುರೋಪ್ನಲ್ಲಿ ಮತ್ತು ಇಸ್ಲಾಮಿಕ್ ಸುವರ್ಣ ಯುಗದಲ್ಲಿ (ಸಾಮಾನ್ಯವಾಗಿ ಅನುವಾದದಲ್ಲಿ) ಉನ್ನತ ಮಧ್ಯಯುಗದಿಂದ ಅಧ್ಯಯನ ಮಾಡಲಾಗಿದೆ, ಆದರೆ ಗ್ರೀಕ್ ಸಾಹಿತ್ಯಿಕ, ವಾಗ್ಮಿ ಮತ್ತು ಐತಿಹಾಸಿಕ ಕೃತಿಗಳು (ಉದಾಹರಣೆಗೆ [[ಹೋಮರ್]], ಗ್ರೀಕ್ ನಾಟಕಕಾರರು, ಡೆಮೊಸ್ತನೀಸ್ ಮತ್ತು ಥುಸಿಡೈಡ್ಸ್ ) ಲ್ಯಾಟಿನ್ ಅಥವಾ ಮಧ್ಯಕಾಲೀನ ಇಸ್ಲಾಮಿಕ್ ಪ್ರಪಂಚಗಳಲ್ಲಿ ಅಧ್ಯಯನ ಮಾಡಲಾಗಿಲ್ಲ. ಮಧ್ಯಯುಗದಲ್ಲಿ ಈ ರೀತಿಯ ಪಠ್ಯಗಳನ್ನು ಬೈಜಾಂಟೈನ್ ವಿದ್ವಾಂಸರು ಮಾತ್ರ ಅಧ್ಯಯನ ಮಾಡಿದರು. ಸಮರ್ಕಂಡ್ ಮತ್ತು ಹೆರಾತ್ನಲ್ಲಿನ ತೈಮುರಿಡ್ ಪುನರುಜ್ಜೀವನವು ಫ್ಲಾರೆನ್ಸ್ನೊಂದಿಗೆ ಸಾಂಸ್ಕೃತಿಕ ಪುನರ್ಜನ್ಮದ ಕೇಂದ್ರವಾಗಿದೆ.<ref>Periods of World History: A Latin American Perspective - Page 129</ref><ref>The Empire of the Steppes: A History of Central Asia - Page 465</ref> [[ಆಟೋಮನ್ ಚಕ್ರಾಧಿಪತ್ಯ|ಒಟ್ಟೋಮನ್ ಸಾಮ್ರಾಜ್ಯಕ್ಕೆ]] ಸಂಬಂಧಿಸಿದೆ ಎಂದು ಕೆಲವರು ವಾದಿಸುತ್ತಾರೆ, ಅವರ ವಿಜಯಗಳು ಗ್ರೀಕ್ ವಿದ್ವಾಂಸರು ಇಟಾಲಿಯನ್ ನಗರಗಳಿಗೆ ವಲಸೆ ಹೋಗುವುದಕ್ಕೆ ಕಾರಣವಾಯಿತು.<ref name="Britannica1" /> <ref>''The Connoisseur'', Volume 219, p. 128.</ref> <ref>''Europe in the second millennium: a hegemony achieved?'', p. 58</ref> ಪುನರುಜ್ಜೀವನದ ವಿದ್ವಾಂಸರ ಒಂದು ಶ್ರೇಷ್ಠ ಸಾಧನೆಯೆಂದರೆ ಈ ಸಂಪೂರ್ಣ ವರ್ಗದ ಗ್ರೀಕ್ ಸಾಂಸ್ಕೃತಿಕ ಕೃತಿಗಳನ್ನು ಪ್ರಾಚೀನ ಕಾಲದ ನಂತರ ಮೊದಲ ಬಾರಿಗೆ ಪಶ್ಚಿಮ ಯುರೋಪ್ಗೆ ಮರಳಿ ತರುವುದಾಗಿದೆ.
[[ಮುಸ್ಲಿಮ್|ಮುಸ್ಲಿಂ]] ತರ್ಕಶಾಸ್ತ್ರಜ್ಞರು, ಮುಖ್ಯವಾಗಿ [[ಅವಿಸೆನ್ನ|ಅವಿಸೆನ್ನಾ]] ಮತ್ತು [[ಅವಿರೊಯಿಜ್|ಅವೆರೋಸ್]], ಅವರು [[ಈಜಿಪ್ಟ್]] ಮತ್ತು ಲೆವಂಟ್ ಅನ್ನು ಆಕ್ರಮಿಸಿ ವಶಪಡಿಸಿಕೊಂಡ ನಂತರ ಗ್ರೀಕ್ ಕಲ್ಪನೆಗಳನ್ನು ಆನುವಂಶಿಕವಾಗಿ ಪಡೆದರು. ಈ ವಿಚಾರಗಳ ಮೇಲಿನ ಅವರ ಭಾಷಾಂತರಗಳು ಮತ್ತು ವ್ಯಾಖ್ಯಾನಗಳು ಅರಬ್ ಪಶ್ಚಿಮದ ಮೂಲಕ ಐಬೇರಿಯಾ ಮತ್ತು ಸಿಸಿಲಿಯಲ್ಲಿ ಕಾರ್ಯನಿರ್ವಹಿಸಿದವು. ಇದು ಈ ವಿಚಾರಗಳ ಪ್ರಸಾರಕ್ಕೆ ಪ್ರಮುಖ ಕೇಂದ್ರವಾಯಿತು. ೧೧ ರಿಂದ ೧೩ ನೇ ಶತಮಾನದವರೆಗೆ, ಶಾಸ್ತ್ರೀಯ ಅರೇಬಿಕ್ನಿಂದ ಮಧ್ಯಕಾಲೀನ ಲ್ಯಾಟಿನ್ಗೆ ತಾತ್ವಿಕ ಮತ್ತು ವೈಜ್ಞಾನಿಕ ಕೃತಿಗಳ ಅನುವಾದಕ್ಕೆ ಮೀಸಲಾದ ಅನೇಕ ಶಾಲೆಗಳನ್ನು ಐಬೇರಿಯಾದಲ್ಲಿ ಸ್ಥಾಪಿಸಲಾಯಿತು, ಅದರಲ್ಲೂ ಮುಖ್ಯವಾಗಿ ಟೊಲೆಡೊ ಸ್ಕೂಲ್ ಆಫ್ ಟ್ರಾನ್ಸ್ಲೇಟರ್ಸ್. ಇಸ್ಲಾಮಿಕ್ ಸಂಸ್ಕೃತಿಯಿಂದ ಅನುವಾದದ ಈ ಕೆಲಸವು ಬಹುಮಟ್ಟಿಗೆ ಯೋಜಿತವಲ್ಲದ ಮತ್ತು ಅಸ್ತವ್ಯಸ್ತವಾಗಿದ್ದರೂ, ಇತಿಹಾಸದಲ್ಲಿ ಕಲ್ಪನೆಗಳ ಶ್ರೇಷ್ಠ ಪ್ರಸರಣಗಳಲ್ಲಿ ಒಂದಾಗಿದೆ.<ref name="MP">[https://books.google.com/books?id=kKGgoNo4un0C&pg=PA261&lpg=PA261 ''Western Civilization: Ideas, Politics, and Society''], Marvin Perry, Myrna Chase, Margaret C. Jacob, James R. Jacob, 2008, pp. 261–262.</ref>
ಫ್ಲಾರೆನ್ಸ್ನಲ್ಲಿ ಗ್ರೀಕ್ ಸಾಹಿತ್ಯಿಕ, ಐತಿಹಾಸಿಕ, ವಾಗ್ಮಿ ಮತ್ತು ದೇವತಾಶಾಸ್ತ್ರದ ಪಠ್ಯಗಳ ನಿಯಮಿತ ಅಧ್ಯಯನವನ್ನು ಮತ್ತೆ ಪಾಶ್ಚಿಮಾತ್ಯ ಯುರೋಪಿಯನ್ ಪಠ್ಯಕ್ರಮಕ್ಕೆ ಮರುಸಂಯೋಜಿಸುವ ಚಳುವಳಿಯು ಸಾಮಾನ್ಯವಾಗಿ ಕೊಲುಸಿಯೊ ಸಲುಟಾಟಿಯಿಂದ ಬೈಜಾಂಟೈನ್ ರಾಜತಾಂತ್ರಿಕ ಮತ್ತು ವಿದ್ವಾಂಸ ಮ್ಯಾನುಯೆಲ್ ಕ್ರಿಸೊಲೊರಾಸ್ (ಶ. ೧೩೫೫-೧೪೧೫) ಅವರಿಗೆ ಕಲಿಸಲು ೧೩೯೬ ರ ಆಹ್ವಾನಕ್ಕೆ ದಿನಾಂಕವಾಗಿದೆ.<ref>Reynolds and Wilson, pp. 119, 131.</ref> ಈ ಪರಂಪರೆಯನ್ನು ಹಲವಾರು ದೇಶಭ್ರಷ್ಟ ಗ್ರೀಕ್ ವಿದ್ವಾಂಸರು ಬೆಸಿಲಿಯೊಸ್ ಬೆಸ್ಸಾರಿಯನ್ನಿಂದ ಲಿಯೊ ಅಲಾಟಿಯಸ್ವರೆಗೆ ಮುಂದುವರಿಸಿದರು.
=== ಇಟಲಿಯಲ್ಲಿ ಸಾಮಾಜಿಕ ಮತ್ತು ರಾಜಕೀಯ ರಚನೆಗಳು ===
[[ಚಿತ್ರ:Italy_1494_AD.png|thumb|ಇಟಾಲಿಯನ್ ಪೆನಿನ್ಸುಲಾ ಸಿರ್ಕಾ ೧೪೯೪ ರ ರಾಜಕೀಯ ನಕ್ಷೆ]]
ಮಧ್ಯಯುಗಗಳ ಕೊನೆಯಲ್ಲಿ [[ಇಟಲಿ|ಇಟಲಿಯ]] ವಿಶಿಷ್ಟ ರಾಜಕೀಯ ರಚನೆಗಳು ಅದರ ಅಸಾಮಾನ್ಯ ಸಾಮಾಜಿಕ ವಾತಾವರಣವು ಅಪರೂಪದ ಸಾಂಸ್ಕೃತಿಕ ಪುಷ್ಪಗುಚ್ಛದ ಹೊರಹೊಮ್ಮುವಿಕೆಗೆ ಅವಕಾಶ ಮಾಡಿಕೊಟ್ಟಿತು ಎಂದು ಕೆಲವರು ಸಿದ್ಧಾಂತಕ್ಕೆ ಕಾರಣವಾಯಿತು. ಆಧುನಿಕ ಕಾಲದ ಆರಂಭದಲ್ಲಿ ಇಟಲಿಯು ರಾಜಕೀಯ ಘಟಕವಾಗಿ ಅಸ್ತಿತ್ವದಲ್ಲಿಲ್ಲ. ಬದಲಾಗಿ, ಇದನ್ನು ಸಣ್ಣ ನಗರ-ರಾಜ್ಯಗಳು ಮತ್ತು ಪ್ರಾಂತ್ಯಗಳಾಗಿ ವಿಂಗಡಿಸಲಾಗಿದೆ: ನೇಪಲ್ಸ್ ಸಾಮ್ರಾಜ್ಯವು ದಕ್ಷಿಣವನ್ನು, ಫ್ಲಾರೆನ್ಸ್ ಗಣರಾಜ್ಯ ಮತ್ತು ಪಾಪಲ್ ರಾಜ್ಯಗಳನ್ನು ಮಧ್ಯದಲ್ಲಿ, ಮಿಲನೀಸ್ ಮತ್ತು ಜಿನೋಯಿಸ್ ಕ್ರಮವಾಗಿ ಉತ್ತರ ಮತ್ತು ಪಶ್ಚಿಮಕ್ಕೆ ಮತ್ತು ಪೂರ್ವದ ವೆನೆಷಿಯನ್ನರನ್ನು ಹೊಂದಿದೆ. ಹದಿನೈದನೆಯ ಶತಮಾನದ ಇಟಲಿ ಯುರೋಪ್ನಲ್ಲಿ ಅತ್ಯಂತ ನಗರೀಕರಣಗೊಂಡ ಪ್ರದೇಶಗಳಲ್ಲಿ ಒಂದಾಗಿದೆ.<ref>Kirshner, Julius, ''Family and Marriage: A socio-legal perspective'', [https://books.google.com/books?id=x9grA0fWpDMC&pg=PA89 ''Italy in the Age of the Renaissance: 1300–1550''], ed. John M. Najemy (Oxford University Press, 2004) p. 89 (Retrieved May 10, 2007)</ref> ಅದರ ಅನೇಕ ನಗರಗಳು ಪ್ರಾಚೀನ ರೋಮನ್ ಕಟ್ಟಡಗಳ ಅವಶೇಷಗಳ ನಡುವೆ ನಿಂತಿವೆ; ನವೋದಯದ ಶಾಸ್ತ್ರೀಯ ಸ್ವಭಾವವು ರೋಮನ್ ಸಾಮ್ರಾಜ್ಯದ ಹೃದಯಭಾಗದಲ್ಲಿ ಅದರ ಮೂಲದೊಂದಿಗೆ ಸಂಬಂಧ ಹೊಂದಿದೆ ಎಂದು ತೋರುತ್ತದೆ.<ref>Burckhardt, Jacob, ''The Revival of Antiquity'', [http://www.boisestate.edu/courses/hy309/docs/burckhardt/3-2.html ''The Civilization of the Renaissance in Italy''] {{Webarchive|url=https://web.archive.org/web/20120204054712/http://www.boisestate.edu/courses/hy309/docs/burckhardt/3-2.html |date=ಫೆಬ್ರವರಿ 4, 2012 }} (trans. by S.G.C. Middlemore, 1878)</ref>
ಇತಿಹಾಸಕಾರ ಮತ್ತು ರಾಜಕೀಯ ತತ್ವಜ್ಞಾನಿ ಕ್ವೆಂಟಿನ್ ಸ್ಕಿನ್ನರ್ ಅವರು ೧೨ ನೇ ಶತಮಾನದಲ್ಲಿ ಉತ್ತರ ಇಟಲಿಗೆ ಭೇಟಿ ನೀಡಿದ ಜರ್ಮನ್ ಬಿಷಪ್ ಒಟ್ಟೋ ಆಫ್ ಫ್ರೈಸಿಂಗ್ (ಶ. ೧೧೧೪-೧೧೫೮), ರಾಜಕೀಯ ಮತ್ತು ಸಾಮಾಜಿಕ ಸಂಘಟನೆಯ ವ್ಯಾಪಕವಾದ ಹೊಸ ಸ್ವರೂಪವನ್ನು ಗಮನಿಸಿದರು. [[ಊಳಿಗಮಾನ ಪದ್ಧತಿ|ಊಳಿಗಮಾನ್ಯ ಪದ್ಧತಿಯು]] ಅದರ ಸಮಾಜವು ವ್ಯಾಪಾರಿಗಳು ಮತ್ತು ವಾಣಿಜ್ಯವನ್ನು ಆಧರಿಸಿದೆ. ಇದರೊಂದಿಗೆ ಸಂಬಂಧಿಸಿರುವುದು ರಾಜಪ್ರಭುತ್ವದ-ವಿರೋಧಿ ಚಿಂತನೆಯಾಗಿದ್ದು, ಪ್ರಸಿದ್ಧ ಆರಂಭಿಕ ನವೋದಯ ಫ್ರೆಸ್ಕೊ ಸೈಕಲ್ನಲ್ಲಿ ಪ್ರತಿನಿಧಿಸಲಾದ ಆಂಬ್ರೋಗಿಯೊ ಲೊರೆನ್ಜೆಟ್ಟಿ (೧೩೩೮-೧೩೪೦ ಚಿತ್ರಿಸಲಾಗಿದೆ) ಅವರ ''ಉತ್ತಮ ಮತ್ತು ಕೆಟ್ಟ ಸರ್ಕಾರದ'' ನ್ಯಾಯ, ನ್ಯಾಯ, ಗಣರಾಜ್ಯ ಮತ್ತು ಉತ್ತಮ ಆಡಳಿತದ ಸದ್ಗುಣಗಳ ಬಗ್ಗೆ ಅಲೆಗೊರಿ ಅವರ ಬಲವಾದ ಸಂದೇಶವಿದೆ. ಕೊಲ್ಲಿಯಲ್ಲಿ ಚರ್ಚ್ ಮತ್ತು ಸಾಮ್ರಾಜ್ಯ ಎರಡನ್ನೂ ಹಿಡಿದಿಟ್ಟುಕೊಂಡು, ಈ ನಗರ ಗಣರಾಜ್ಯಗಳು ಸ್ವಾತಂತ್ರ್ಯದ ಕಲ್ಪನೆಗಳಿಗೆ ಮೀಸಲಾಗಿವೆ. ಕಲೆ, ಶಿಲ್ಪಕಲೆ ಮತ್ತು ವಾಸ್ತುಶಿಲ್ಪದಲ್ಲಿ ಮಾತ್ರವಲ್ಲದೆ ಫ್ಲಾರೆಂಟೈನ್ ಪ್ರತಿಭೆಯ ಮ್ಯಾಟಿಯೊ ಪಾಲ್ಮಿಯೆರಿ (೧೪೦೬-೧೪೭೫) ಆಚರಣೆಯಂತಹ ಸ್ವಾತಂತ್ರ್ಯದ ಅನೇಕ ರಕ್ಷಣೆಗಳು ಇದ್ದವು ಎಂದು ಸ್ಕಿನ್ನರ್ ವರದಿ ಮಾಡಿದ್ದಾರೆ. ಆದರೆ " ಅದೇ ಸಮಯದಲ್ಲಿ ಫ್ಲಾರೆನ್ಸ್ನಲ್ಲಿ ಸಂಭವಿಸಿದ ನೈತಿಕ, ಸಾಮಾಜಿಕ ಮತ್ತು ರಾಜಕೀಯ ತತ್ತ್ವಶಾಸ್ತ್ರದ ಪುಷ್ಪಮಂಜರಿ ಗಮನಾರ್ಹವಾಗಿತ್ತು".<ref name="Skinner, Quentin p. 69">Skinner, Quentin, ''The Foundations of Modern Political Thought'', vol I: ''The Renaissance''; vol II: ''The Age of Reformation'', Cambridge University Press, p. 69</ref>
ಈ ಸಮಯದಲ್ಲಿ ಫ್ಲಾರೆನ್ಸ್ ಗಣರಾಜ್ಯದಂತಹ ಮಧ್ಯ ಇಟಲಿಯ ಆಚೆಗಿನ ನಗರಗಳು ಮತ್ತು ರಾಜ್ಯಗಳು ಸಹ ತಮ್ಮ ವ್ಯಾಪಾರಿ ಗಣರಾಜ್ಯಗಳಿಗೆ ವಿಶೇಷವಾಗಿ ವೆನಿಸ್ ಗಣರಾಜ್ಯಕ್ಕೆ ಗಮನಾರ್ಹವಾಗಿವೆ. ಆಚರಣೆಯಲ್ಲಿ ಇವುಗಳು ಒಲಿಗಾರ್ಚಿಕಲ್ ಆಗಿದ್ದರೂ ಮತ್ತು ಆಧುನಿಕ [[ಪ್ರಜಾಪ್ರಭುತ್ವ|ಪ್ರಜಾಪ್ರಭುತ್ವಕ್ಕೆ]] ಸ್ವಲ್ಪ ಹೋಲಿಕೆಯನ್ನು ಹೊಂದಿದ್ದರೂ ಅವು ಪ್ರಜಾಪ್ರಭುತ್ವದ ಲಕ್ಷಣಗಳನ್ನು ಹೊಂದಿದ್ದವು ಮತ್ತು ಆಡಳಿತದಲ್ಲಿ ಭಾಗವಹಿಸುವಿಕೆ ಮತ್ತು ಸ್ವಾತಂತ್ರ್ಯದಲ್ಲಿ ನಂಬಿಕೆಯ ಸ್ವರೂಪಗಳೊಂದಿಗೆ ಸ್ಪಂದಿಸುವ ರಾಜ್ಯಗಳಾಗಿವೆ.<ref name="Skinner, Quentin p. 69" /><ref>Stark, Rodney, ''The Victory of Reason'', New York, Random House, 2005</ref><ref>Martin, J. and Romano, D., ''Venice Reconsidered'', Baltimore, Johns Hopkins University, 2000</ref> ಅವರು ನೀಡಿದ ಸಾಪೇಕ್ಷ ರಾಜಕೀಯ ಸ್ವಾತಂತ್ರ್ಯವು ಶೈಕ್ಷಣಿಕ ಮತ್ತು ಕಲಾತ್ಮಕ ಪ್ರಗತಿಗೆ ಅನುಕೂಲಕರವಾಗಿತ್ತು.<ref name="burckhardt-republics">Burckhardt, Jacob, ''The Republics: Venice and Florence'', ''[http://www.boisestate.edu/courses/hy309/docs/burckhardt/1-7.html The Civilization of the Renaissance in Italy] {{Webarchive|url=https://web.archive.org/web/20120204054748/http://www.boisestate.edu/courses/hy309/docs/burckhardt/1-7.html |date=ಫೆಬ್ರವರಿ 4, 2012 }}'', translated by S.G.C. Middlemore, 1878.</ref> ಅಂತೆಯೇ, ವೆನಿಸ್ನಂತಹ ಇಟಾಲಿಯನ್ ನಗರಗಳ ಸ್ಥಾನವು ದೊಡ್ಡ ವ್ಯಾಪಾರ ಕೇಂದ್ರಗಳಾಗಿ ಅವುಗಳನ್ನು ಬೌದ್ಧಿಕ ಅಡ್ಡಹಾದಿಯನ್ನಾಗಿ ಮಾಡಿತು. ವ್ಯಾಪಾರಿಗಳು ತಮ್ಮೊಂದಿಗೆ ಜಗತ್ತಿನ ದೂರದ ಮೂಲೆಗಳಿಂದ, ವಿಶೇಷವಾಗಿ ಲೆವಂಟ್ನಿಂದ ಕಲ್ಪನೆಗಳನ್ನು ತಂದರು. ವೆನಿಸ್ ಪೂರ್ವದೊಂದಿಗೆ ವ್ಯಾಪಾರ ಮಾಡಲು ಯುರೋಪಿನ ಗೇಟ್ವೇ ಆಗಿತ್ತು ಮತ್ತು ಉತ್ತಮ ಗಾಜಿನ ಉತ್ಪಾದಕವಾಗಿತ್ತು. ಆದರೆ ಫ್ಲಾರೆನ್ಸ್ ಜವಳಿಗಳ ರಾಜಧಾನಿಯಾಗಿತ್ತು. ಇಟಲಿಗೆ ತಂದ ಸಂಪತ್ತು ಎಂದರೆ ದೊಡ್ಡ ಸಾರ್ವಜನಿಕ ಮತ್ತು ಖಾಸಗಿ ಕಲಾತ್ಮಕ ಯೋಜನೆಗಳನ್ನು ನಿಯೋಜಿಸಬಹುದು ಮತ್ತು ವ್ಯಕ್ತಿಗಳು ಅಧ್ಯಯನಕ್ಕಾಗಿ ಹೆಚ್ಚು ಬಿಡುವಿನ ಸಮಯವನ್ನು ಹೊಂದಿದ್ದರು.<ref name="burckhardt-republics" />
=== ಕಪ್ಪು ಸಾವು ===
[[ಚಿತ್ರ:The_Triumph_of_Death_P001393.jpg|thumb|ಪೀಟರ್ ಬ್ರೂಗೆಲ್ ಅವರ ''ದಿ ಟ್ರಯಂಫ್ ಆಫ್ ಡೆತ್'' (ಶ. ೧೫೬೨) ಮಧ್ಯಕಾಲೀನ ಯುರೋಪ್ ಅನ್ನು ಧ್ವಂಸಗೊಳಿಸಿದ ಪ್ಲೇಗ್ ಅನ್ನು ಅನುಸರಿಸಿದ ಸಾಮಾಜಿಕ ಕ್ರಾಂತಿ ಮತ್ತು ಭಯೋತ್ಪಾದನೆಯನ್ನು ಪ್ರತಿಬಿಂಬಿಸುತ್ತದೆ.]]
೧೩೪೮ ಮತ್ತು ೧೩೫೦ ರ ನಡುವೆ ಯುರೋಪ್ಗೆ ಅಪ್ಪಳಿಸಿದ ಬ್ಲ್ಯಾಕ್ ಡೆತ್ನಿಂದ ಉಂಟಾದ ಫ್ಲಾರೆನ್ಸ್ನಲ್ಲಿನ ವಿನಾಶವು ೧೪ ನೇ ಶತಮಾನದ ಇಟಲಿಯಲ್ಲಿ ಜನರ ವಿಶ್ವ ದೃಷ್ಟಿಕೋನದಲ್ಲಿ ಬದಲಾವಣೆಗೆ ಕಾರಣವಾಯಿತು ಎಂಬುದು ಮುಂದುವರಿದ ಒಂದು ಸಿದ್ಧಾಂತವಾಗಿದೆ. ಇಟಲಿಯು ವಿಶೇಷವಾಗಿ ಪ್ಲೇಗ್ನಿಂದ ಕೆಟ್ಟದಾಗಿ ಹಾನಿಗೊಳಗಾಯಿತು. ಸಾವಿನೊಂದಿಗೆ ಉಂಟಾಗುವ ಪರಿಚಿತತೆಯು ಚಿಂತಕರು [[ಅಧ್ಯಾತ್ಮ|ಆಧ್ಯಾತ್ಮಿಕತೆ]] ಮತ್ತು ಮರಣಾನಂತರದ ಜೀವನಕ್ಕಿಂತ ಹೆಚ್ಚಾಗಿ ಭೂಮಿಯ ಮೇಲಿನ ತಮ್ಮ ಜೀವನದ ಮೇಲೆ ಹೆಚ್ಚು ವಾಸಿಸಲು ಕಾರಣವಾಯಿತು ಎಂದು ಊಹಿಸಲಾಗಿದೆ. ಬ್ಲ್ಯಾಕ್ ಡೆತ್ ಧಾರ್ಮಿಕ ಕಲಾಕೃತಿಗಳ ಪ್ರಾಯೋಜಕತ್ವದಲ್ಲಿ ಪ್ರಕಟವಾದ ಧಾರ್ಮಿಕತೆಯ ಹೊಸ ಅಲೆಯನ್ನು ಪ್ರೇರೇಪಿಸಿತು ಎಂದು ವಾದಿಸಲಾಗಿದೆ.<ref>[https://www.ucalgary.ca/applied_history/tutor/endmiddle/bluedot/blackdeath.html The End of Europe's Middle Ages: The Black Death] {{Webarchive|url=https://web.archive.org/web/20130309162102/http://www.ucalgary.ca/applied_history/tutor/endmiddle/bluedot/blackdeath.html |date=ಮಾರ್ಚ್ 9, 2013 }} University of Calgary website. (Retrieved April 5, 2007)</ref> ಆದಾಗ್ಯೂ, ೧೪ ನೇ ಶತಮಾನದಲ್ಲಿ ಇಟಲಿಯಲ್ಲಿ ನವೋದಯವು ಏಕೆ ಸಂಭವಿಸಿತು ಎಂಬುದನ್ನು ಇದು ಸಂಪೂರ್ಣವಾಗಿ ವಿವರಿಸುವುದಿಲ್ಲ. ಬ್ಲ್ಯಾಕ್ ಡೆತ್ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇಟಲಿ ಮಾತ್ರವಲ್ಲದೆ ಎಲ್ಲಾ ಯುರೋಪ್ ಅನ್ನು ವಿವರಿಸಿದ ರೀತಿಯಲ್ಲಿ ಪರಿಣಾಮ ಬೀರಿತು. ಇಟಲಿಯಲ್ಲಿ ನವೋದಯದ ಹೊರಹೊಮ್ಮುವಿಕೆಯು ಮೇಲಿನ ಅಂಶಗಳ ಸಂಕೀರ್ಣ ಪರಸ್ಪರ ಕ್ರಿಯೆಯ ಫಲಿತಾಂಶವಾಗಿದೆ.
ಏಷ್ಯಾದ ಬಂದರುಗಳಿಂದ ಹಿಂದಿರುಗಿದ ನೌಕಾಯಾನ ಹಡಗುಗಳಲ್ಲಿ ಚಿಗಟಗಳಿಂದ ಪ್ಲೇಗ್ ಅನ್ನು ಸಾಗಿಸಲಾಯಿತು. ಸರಿಯಾದ ನೈರ್ಮಲ್ಯದ ಕೊರತೆಯಿಂದಾಗಿ ತ್ವರಿತವಾಗಿ ಹರಡಿತು. ಇಂಗ್ಲೆಂಡ್ನ ಜನಸಂಖ್ಯೆಯು, ಆಗ ಸುಮಾರು ೪.೨ ಮಿಲಿಯನ್, ಬುಬೊನಿಕ್ ಪ್ಲೇಗ್ಗೆ ೧.೪ ಮಿಲಿಯನ್ ಜನರನ್ನು ಕಳೆದುಕೊಂಡಿತು. ೧೩೪೭ ರಲ್ಲಿ ಫ್ಲಾರೆನ್ಸ್ನ ಜನಸಂಖ್ಯೆಯು ಅರ್ಧದಷ್ಟು ಕಡಿಮೆಯಾಯಿತು. ಜನಸಂಖ್ಯೆಯಲ್ಲಿನ ಅವನತಿಯ ಪರಿಣಾಮವಾಗಿ ಕಾರ್ಮಿಕ ವರ್ಗದ ಮೌಲ್ಯವು ಹೆಚ್ಚಾಯಿತು ಮತ್ತು ಸಾಮಾನ್ಯರು ಹೆಚ್ಚು ಸ್ವಾತಂತ್ರ್ಯವನ್ನು ಅನುಭವಿಸಿದರು. ಕಾರ್ಮಿಕರ ಹೆಚ್ಚಿದ ಅಗತ್ಯಕ್ಕೆ ಉತ್ತರಿಸಲು ಕಾರ್ಮಿಕರು ಆರ್ಥಿಕವಾಗಿ ಅತ್ಯಂತ ಅನುಕೂಲಕರ ಸ್ಥಾನವನ್ನು ಹುಡುಕುತ್ತಾ ಪ್ರಯಾಣಿಸಿದರು.<ref>Netzley, Patricia D. ''Life During the Renaissance''. San Diego: Lucent Books, Inc., 1998.</ref>
ಪ್ಲೇಗ್ನಿಂದಾಗಿ ಜನಸಂಖ್ಯಾ ಕುಸಿತವು ಆರ್ಥಿಕ ಪರಿಣಾಮಗಳನ್ನು ಉಂಟುಮಾಡಿತು. ೧೩೫೦ ಮತ್ತು ೧೪೦೦ <ref>Hause, S. & Maltby, W. (2001). ''A History of European Society. Essentials of Western Civilization'' (Vol. 2, p. 217). Belmont, CA: Thomson Learning, Inc.</ref> ನಡುವೆ ಯುರೋಪ್ನ ಹೆಚ್ಚಿನ ಭಾಗಗಳಲ್ಲಿ ಆಹಾರದ ಬೆಲೆಗಳು ಕುಸಿಯಿತು. ಭೂಮಿಯ ಮೌಲ್ಯಗಳು ೩೦-೪೦% ರಷ್ಟು ಕುಸಿದವು. ಭೂಮಾಲೀಕರು ದೊಡ್ಡ ನಷ್ಟವನ್ನು ಎದುರಿಸಿದರು. ಆದರೆ ಸಾಮಾನ್ಯ ಪುರುಷರು ಮತ್ತು ಮಹಿಳೆಯರಿಗೆ ಇದು ಗಾಳಿ ಬೀಸಿತು. ಪ್ಲೇಗ್ನಿಂದ ಬದುಕುಳಿದವರು ಆಹಾರದ ಬೆಲೆಗಳು ಅಗ್ಗವಾಗಿರುವುದನ್ನು ಕಂಡುಕೊಂಡರು. ಆದರೆ ಭೂಮಿಗಳು ಹೆಚ್ಚು ಹೇರಳವಾಗಿವೆ ಮತ್ತು ಅವರಲ್ಲಿ ಅನೇಕರು ತಮ್ಮ ಸತ್ತ ಸಂಬಂಧಿಕರಿಂದ ಆಸ್ತಿಯನ್ನು ಪಡೆದರು.
ಬಡತನದ ಪ್ರದೇಶಗಳಲ್ಲಿ ರೋಗದ ಹರಡುವಿಕೆಯು ಗಮನಾರ್ಹವಾಗಿ ಹೆಚ್ಚು ಅತಿರೇಕವಾಗಿತ್ತು. ಸಾಂಕ್ರಾಮಿಕ ರೋಗಗಳು ನಗರಗಳನ್ನು, ವಿಶೇಷವಾಗಿ ಮಕ್ಕಳನ್ನು ಧ್ವಂಸಗೊಳಿಸಿದವು. ಪರೋಪಜೀವಿಗಳು, ಅಶುಚಿಯಾದ ಕುಡಿಯುವ ನೀರು, ಸೇನೆಗಳು ಅಥವಾ ಕಳಪೆ ನೈರ್ಮಲ್ಯದಿಂದ ಪ್ಲೇಗ್ಗಳು ಸುಲಭವಾಗಿ ಹರಡುತ್ತವೆ. ಟೈಫಸ್ ಮತ್ತು ಜನ್ಮಜಾತ ಸಿಫಿಲಿಸ್ನಂತಹ ಅನೇಕ ರೋಗಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಚಿಕ್ಕ ಮಕ್ಕಳನ್ನು ಹೋರಾಡುವ ಅವಕಾಶವಿಲ್ಲದೆ ಬಿಡುವುದರಿಂದ ಮಕ್ಕಳು ಹೆಚ್ಚು ಹಾನಿಗೊಳಗಾಗುತ್ತಾರೆ. ಶ್ರೀಮಂತರ ಮಕ್ಕಳಿಗಿಂತ ನಗರದ ವಾಸಸ್ಥಳಗಳಲ್ಲಿನ ಮಕ್ಕಳು ರೋಗ ಹರಡುವಿಕೆಯಿಂದ ಹೆಚ್ಚು ಪ್ರಭಾವಿತರಾಗಿದ್ದಾರೆ.<ref>"Renaissance And Reformation France" Mack P. Holt pp. 30, 39, 69, 166</ref>
ಬ್ಲ್ಯಾಕ್ ಡೆತ್ ಫ್ಲಾರೆನ್ಸ್ನ ಸಾಮಾಜಿಕ ಮತ್ತು ರಾಜಕೀಯ ರಚನೆಯಲ್ಲಿ ನಂತರದ ಸಾಂಕ್ರಾಮಿಕ ರೋಗಗಳಿಗಿಂತ ಹೆಚ್ಚಿನ ಕ್ರಾಂತಿಯನ್ನು ಉಂಟುಮಾಡಿತು. ಆಡಳಿತ ವರ್ಗಗಳ ಸದಸ್ಯರಲ್ಲಿ ಗಮನಾರ್ಹ ಸಂಖ್ಯೆಯ ಸಾವುಗಳ ಹೊರತಾಗಿಯೂ, ಫ್ಲಾರೆನ್ಸ್ ಸರ್ಕಾರವು ಈ ಅವಧಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿತು. ನಗರದಲ್ಲಿನ ಅಸ್ತವ್ಯಸ್ತವಾಗಿರುವ ಪರಿಸ್ಥಿತಿಗಳಿಂದಾಗಿ ಸಾಂಕ್ರಾಮಿಕ ರೋಗದ ಉತ್ತುಂಗದಲ್ಲಿ ಚುನಾಯಿತ ಪ್ರತಿನಿಧಿಗಳ ಔಪಚಾರಿಕ ಸಭೆಗಳನ್ನು ಅಮಾನತುಗೊಳಿಸಲಾಯಿತು. ಆದರೆ ನಗರದ ವ್ಯವಹಾರಗಳನ್ನು ನಡೆಸಲು ಅಧಿಕಾರಿಗಳ ಸಣ್ಣ ಗುಂಪನ್ನು ನೇಮಿಸಲಾಯಿತು. ಇದು ಸರ್ಕಾರದ ನಿರಂತರತೆಯನ್ನು ಖಚಿತಪಡಿಸಿತು.<ref>{{Cite book|url=https://books.google.com/books?id=V0yJQXmGODgC&pg=PA89|title=Disordered Body: Epidemic Disease and Cultural Transformation|last=Hatty|first=Suzanne E.|last2=Hatty|first2=James|publisher=SUNY Press|year=1999|isbn=9780791443651|page=89}}</ref>
=== ಫ್ಲಾರೆನ್ಸ್ನಲ್ಲಿನ ಸಾಂಸ್ಕೃತಿಕ ಪರಿಸ್ಥಿತಿಗಳು ===
[[ಚಿತ್ರ:Vasari-Lorenzo.jpg|thumb|ಲೊರೆಂಜೊ ಡಿ ಮೆಡಿಸಿ, ಫ್ಲಾರೆನ್ಸ್ನ ಆಡಳಿತಗಾರ ಮತ್ತು ಕಲೆಗಳ ಪೋಷಕ ( ವಸಾರಿಯವರ ಭಾವಚಿತ್ರ)]]
ಪುನರುಜ್ಜೀವನವು ಫ್ಲಾರೆನ್ಸ್ನಲ್ಲಿ ಏಕೆ ಪ್ರಾರಂಭವಾಯಿತು ಮತ್ತು ಇಟಲಿಯಲ್ಲಿ ಬೇರೆಡೆ ಅಲ್ಲ ಎಂಬುದು ಬಹಳ ಹಿಂದಿನಿಂದಲೂ ಚರ್ಚೆಯ ವಿಷಯವಾಗಿದೆ. ವಿದ್ವಾಂಸರು ಫ್ಲೋರೆಂಟೈನ್ ಸಾಂಸ್ಕೃತಿಕ ಜೀವನಕ್ಕೆ ವಿಶಿಷ್ಟವಾದ ಹಲವಾರು ವೈಶಿಷ್ಟ್ಯಗಳನ್ನು ಗಮನಿಸಿದ್ದಾರೆ. ಅದು ಅಂತಹ ಸಾಂಸ್ಕೃತಿಕ ಚಳುವಳಿಗೆ ಕಾರಣವಾಗಬಹುದು. ಬ್ಯಾಂಕಿಂಗ್ ಕುಟುಂಬ ಮತ್ತು ನಂತರದ ಡ್ಯೂಕಲ್ ಆಡಳಿತ ಮನೆಯಾದ ಮೆಡಿಸಿಯು ಕಲೆಗಳನ್ನು ಪೋಷಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ವಹಿಸಿದ ಪಾತ್ರವನ್ನು ಅನೇಕರು ಒತ್ತಿಹೇಳಿದ್ದಾರೆ. ಲೊರೆಂಜೊ ಡಿ ಮೆಡಿಸಿ (೧೪೪೯-೧೪೯೨) ಅಪಾರ ಪ್ರಮಾಣದ ಕಲೆಗಳ ಪ್ರೋತ್ಸಾಹಕ್ಕೆ ವೇಗವರ್ಧಕರಾಗಿದ್ದರು. [[ಲಿಯನಾರ್ಡೊ ಡ ವಿಂಚಿ|ಲಿಯೊನಾರ್ಡೊ ಡಾ ವಿನ್ಸಿ]], ಸ್ಯಾಂಡ್ರೊ ಬೊಟಿಸೆಲ್ಲಿ ಮತ್ತು [[ಮೈಕೆಲ್ಯಾಂಜೆಲೊ|ಮೈಕೆಲ್ಯಾಂಜೆಲೊ ಬ್ಯೂನಾರೊಟಿ]] ಸೇರಿದಂತೆ ಫ್ಲಾರೆನ್ಸ್ನ ಪ್ರಮುಖ ಕಲಾವಿದರಿಂದ ಕೃತಿಗಳನ್ನು ನಿಯೋಜಿಸಲು ತನ್ನ ದೇಶವಾಸಿಗಳನ್ನು ಉತ್ತೇಜಿಸಿದರು.<ref name="strathern" /> ನೆರಿ ಡಿ ಬಿಕ್ಕಿ, ಬೊಟಿಸೆಲ್ಲಿ, ಡಾ ವಿನ್ಸಿ ಮತ್ತು ಫಿಲಿಪ್ಪಿನೋ ಲಿಪ್ಪಿ ಅವರ ಕೃತಿಗಳನ್ನು ಫ್ಲಾರೆನ್ಸ್ನ ಸ್ಕೋಪೆಟೊದಲ್ಲಿರುವ ಸ್ಯಾನ್ ಡೊನಾಟೊ ಕಾನ್ವೆಂಟ್ ಹೆಚ್ಚುವರಿಯಾಗಿ ನಿಯೋಜಿಸಿದೆ.<ref>Guido Carocci, I dintorni di Firenze, Vol. II, Galletti e Cocci, Firenze, 1907, pp. 336–337</ref>
ಲೊರೆಂಜೊ ಡಿ ಮೆಡಿಸಿ ಅಧಿಕಾರಕ್ಕೆ ಬರುವ ಮೊದಲು ಪುನರುಜ್ಜೀವನವು ಖಂಡಿತವಾಗಿಯೂ ನಡೆಯುತ್ತಿತ್ತು - ವಾಸ್ತವವಾಗಿ, ಮೆಡಿಸಿ ಕುಟುಂಬವು ಫ್ಲೋರೆಂಟೈನ್ ಸಮಾಜದಲ್ಲಿ ಪ್ರಾಬಲ್ಯವನ್ನು ಸಾಧಿಸುವ ಮೊದಲು ಪುನರುಜ್ಜೀವನವು ನಡೆಯುತ್ತಿತ್ತು. ಅದೃಷ್ಟದ ಫಲವಾಗಿ ಫ್ಲಾರೆನ್ಸ್ ನವೋದಯದ ಜನ್ಮಸ್ಥಳವಾಗಿದೆ ಎಂದು ಕೆಲವು ಇತಿಹಾಸಕಾರರು ಪ್ರತಿಪಾದಿಸಿದ್ದಾರೆ. ಅಂದರೆ " ಮಹಾಪುರುಷರು " ಆಕಸ್ಮಿಕವಾಗಿ ಅಲ್ಲಿ ಜನಿಸಿದರು.<ref name="burckhardt-individual">Burckhardt, Jacob, ''The Development of the Individual'', ''[http://www.boisestate.edu/courses/hy309/docs/burckhardt/2-1.html The Civilization of the Renaissance in Italy] {{Webarchive|url=https://web.archive.org/web/20120204054554/http://www.boisestate.edu/courses/hy309/docs/burckhardt/2-1.html |date=ಫೆಬ್ರವರಿ 4, 2012 }}'', translated by S.G.C. Middlemore, 1878.</ref> ಲಿಯೊನಾರ್ಡೊ ಡಾ ವಿನ್ಸಿ, ಬೊಟಿಸೆಲ್ಲಿ ಮತ್ತು ಮೈಕೆಲ್ಯಾಂಜೆಲೊ ಎಲ್ಲರೂ ಟಸ್ಕನಿಯಲ್ಲಿ ಜನಿಸಿದರು. ಅಂತಹ ಅವಕಾಶವು ಅಸಂಭವವೆಂದು ತೋರುತ್ತದೆ ಎಂದು ವಾದಿಸುತ್ತಾ, ಇತರ ಇತಿಹಾಸಕಾರರು ಆ ಸಮಯದಲ್ಲಿ ಚಾಲ್ತಿಯಲ್ಲಿರುವ ಸಾಂಸ್ಕೃತಿಕ ಪರಿಸ್ಥಿತಿಗಳಿಂದಾಗಿ ಈ "ಮಹಾಪುರುಷರು" ಮಾತ್ರ ಪ್ರಾಮುಖ್ಯತೆಗೆ ಏರಲು ಸಾಧ್ಯವಾಯಿತು ಎಂದು ವಾದಿಸಿದ್ದಾರೆ.<ref>Stephens, J., ''Individualism and the cult of creative personality'', ''The Italian Renaissance'', New York, 1990 p. 121.</ref>
== ಗುಣಲಕ್ಷಣಗಳು ==
=== ಮಾನವತಾವಾದ ===
ಕೆಲವು ರೀತಿಯಲ್ಲಿ, ನವೋದಯ ಮಾನವತಾವಾದವು ಒಂದು ತತ್ವಶಾಸ್ತ್ರವಲ್ಲ ಆದರೆ ಕಲಿಕೆಯ ವಿಧಾನವಾಗಿತ್ತು. ಲೇಖಕರ ನಡುವಿನ ವಿರೋಧಾಭಾಸಗಳನ್ನು ಪರಿಹರಿಸುವಲ್ಲಿ ಕೇಂದ್ರೀಕರಿಸಿದ ಮಧ್ಯಕಾಲೀನ ಸ್ಕಾಲಸ್ಟಿಕ್ ಮೋಡ್ಗೆ ವಿರುದ್ಧವಾಗಿ, ನವೋದಯ ಮಾನವತಾವಾದಿಗಳು ಪ್ರಾಚೀನ ಪಠ್ಯಗಳನ್ನು ಮೂಲದಲ್ಲಿ ಅಧ್ಯಯನ ಮಾಡುತ್ತಾರೆ ಮತ್ತು ತಾರ್ಕಿಕ ಮತ್ತು ಪ್ರಾಯೋಗಿಕ ಪುರಾವೆಗಳ ಸಂಯೋಜನೆಯ ಮೂಲಕ ಅವುಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಮಾನವತಾವಾದಿ ಶಿಕ್ಷಣವು ''ಸ್ಟುಡಿಯಾ ಹ್ಯುಮಾನಿಟಾಟಿಸ್'' ಕಾರ್ಯಕ್ರಮವನ್ನು ಆಧರಿಸಿದೆ, ಐದು ಮಾನವಿಕತೆಗಳ ಅಧ್ಯಯನ: [[ಕವನ|ಕಾವ್ಯ]], [[ವ್ಯಾಕರಣ]], [[ಇತಿಹಾಸ]], ನೈತಿಕ ತತ್ವಶಾಸ್ತ್ರ ಮತ್ತು ವಾಕ್ಚಾತುರ್ಯ. ಇತಿಹಾಸಕಾರರು ಕೆಲವೊಮ್ಮೆ ಮಾನವತಾವಾದವನ್ನು ನಿಖರವಾಗಿ ವ್ಯಾಖ್ಯಾನಿಸಲು ಹೆಣಗಾಡುತ್ತಿದ್ದರೂ, ಹೆಚ್ಚಿನವರು "ಮಾರ್ಗದ ಮಧ್ಯಭಾಗದ ವ್ಯಾಖ್ಯಾನ- ಪ್ರಾಚೀನ ಗ್ರೀಸ್ ಮತ್ತು ರೋಮ್ನ ಭಾಷೆ, ಸಾಹಿತ್ಯ, ಕಲಿಕೆ ಮತ್ತು ಮೌಲ್ಯಗಳನ್ನು ಚೇತರಿಸಿಕೊಳ್ಳಲು, ಅರ್ಥೈಸಲು ಮತ್ತು ಸಂಯೋಜಿಸಲು ಚಳುವಳಿ" ಯಲ್ಲಿ ನೆಲೆಸಿದ್ದಾರೆ.<ref>Burke, P., "The spread of Italian humanism", in ''The Impact of Humanism on Western Europe'', ed. A. Goodman and A. MacKay, London, 1990, p. 2.</ref> ಎಲ್ಲಕ್ಕಿಂತ ಹೆಚ್ಚಾಗಿ, ಮಾನವತಾವಾದಿಗಳು "ಮನುಷ್ಯನ ಪ್ರತಿಭೆ ಮಾನವ ಮನಸ್ಸಿನ ವಿಶಿಷ್ಟ ಮತ್ತು ಅಸಾಧಾರಣ ಸಾಮರ್ಥ್ಯ" ಎಂದು ಪ್ರತಿಪಾದಿಸಿದರು..<ref>As asserted by Gianozzo Manetti in ''On the Dignity and Excellence of Man'', cited in Clare, J., ''Italian Renaissance''.</ref>
[[ಚಿತ್ರ:Pico1.jpg|thumb| ಜಿಯೋವಾನಿ ಪಿಕೊ ಡೆಲ್ಲಾ ಮಿರಾಂಡೋಲಾ, ಪ್ರಖ್ಯಾತ ''ಓರೇಶನ್ ಆನ್ ದಿ ಡಿಗ್ನಿಟಿ ಆಫ್ ಮ್ಯಾನ್'' ಅನ್ನು ಬರೆದಿದ್ದಾರೆ. ಇದನ್ನು "ನವೋದಯದ ಮ್ಯಾನಿಫೆಸ್ಟೋ" ಎಂದು ಕರೆಯಲಾಗುತ್ತದೆ.<ref>''Oration on the Dignity of Man'' (1486) [http://www.wsu.edu:8080/~wldciv/world_civ_reader/world_civ_reader_1/pico.html wsu.edu] {{Webarchive|date=January 4, 2011}}</ref>]]
ಮಾನವತಾವಾದಿ ವಿದ್ವಾಂಸರು ಆಧುನಿಕ ಅವಧಿಯ ಆರಂಭದಲ್ಲಿ ಬೌದ್ಧಿಕ ಭೂದೃಶ್ಯವನ್ನು ರೂಪಿಸಿದರು. ನಿಕೊಲೊ ಮ್ಯಾಕಿಯಾವೆಲ್ಲಿ ಮತ್ತು ಥಾಮಸ್ ಮೋರ್ ಅವರಂತಹ ರಾಜಕೀಯ ತತ್ವಜ್ಞಾನಿಗಳು ಗ್ರೀಕ್ ಮತ್ತು ರೋಮನ್ ಚಿಂತಕರ ಕಲ್ಪನೆಗಳನ್ನು ಪುನರುಜ್ಜೀವನಗೊಳಿಸಿದರು. ಇಬ್ನ್ ಖಾಲ್ಡೂನ್ ಅವರ ಇಸ್ಲಾಮಿಕ್ ಹೆಜ್ಜೆಗಳನ್ನು ಅನುಸರಿಸಿ ಸಮಕಾಲೀನ ಸರ್ಕಾರದ ವಿಮರ್ಶೆಗಳಲ್ಲಿ ಅವುಗಳನ್ನು ಅನ್ವಯಿಸಿದರು.<ref>{{Cite book|url=http://worldcat.org/oclc/11117374|title=Ibn Khaldun and Machiavelli : an examination of paradigms|last=H.|first=Miller, John|oclc=11117374}}</ref><ref>Religion and Political Development
Some Comparative Ideas on Ibn Khaldun and Machiavelli by Barbara Freyer Stowasser</ref> ಪಿಕೊ ಡೆಲ್ಲಾ ಮಿರಾಂಡೋಲಾ ಅವರು ಪುನರುಜ್ಜೀವನದ "ಮ್ಯಾನಿಫೆಸ್ಟೋ" ಅನ್ನು ಬರೆದರು''. ಮನುಷ್ಯನ ಘನತೆಯ ಬಗ್ಗೆ ಭಾಷಣ'', ಚಿಂತನೆಯ ರೋಮಾಂಚಕ ರಕ್ಷಣೆ. ಮತ್ತೊಬ್ಬ ಮಾನವತಾವಾದಿ ಮ್ಯಾಟಿಯೊ ಪಾಲ್ಮಿಯೆರಿ (೧೪೦೬–೧೪೭೫), ''ಡೆಲ್ಲಾ ವಿಟಾ ಸಿವಿಲ್'' ("ಆನ್ ಸಿವಿಕ್ ಲೈಫ್"; ಮುದ್ರಿತ ೧೫೨೮) ಕೃತಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಇದು ನಾಗರಿಕ ಮಾನವತಾವಾದವನ್ನು ಪ್ರತಿಪಾದಿಸಿತು. ಟಸ್ಕನ್ ಸ್ಥಳೀಯ ಭಾಷೆಯನ್ನು ಅದೇ ಮಟ್ಟಕ್ಕೆ ಪರಿಷ್ಕರಿಸುವಲ್ಲಿ ಲ್ಯಾಟಿನಂತೆಯೇ ಅವರನ್ನು ಪ್ರಭಾವಿಸಿತು. ಪಾಲ್ಮಿಯೆರಿ ರೋಮನ್ ತತ್ವಜ್ಞಾನಿಗಳು ಮತ್ತು ಸಿದ್ಧಾಂತಿಗಳನ್ನು ಸೆಳೆದರು. ವಿಶೇಷವಾಗಿ ಸಿಸೆರೊ, ಅವರು ಪಾಲ್ಮಿಯೆರಿಯಂತೆ ನಾಗರಿಕ ಮತ್ತು ಅಧಿಕಾರಿಯಾಗಿ ಸಕ್ರಿಯ ಸಾರ್ವಜನಿಕ ಜೀವನವನ್ನು ನಡೆಸಿದರು. ಹಾಗೆಯೇ ಸಿದ್ಧಾಂತಿ ಮತ್ತು ತತ್ವಜ್ಞಾನಿ ಮತ್ತು ಕ್ವಿಂಟಿಲಿಯನ್ ಬಹುಶಃ ಮಾನವತಾವಾದದ ಮೇಲಿನ ಅವರ ದೃಷ್ಟಿಕೋನದ ಅತ್ಯಂತ ಸಂಕ್ಷಿಪ್ತ ಅಭಿವ್ಯಕ್ತಿ ೧೪೬೫ ರ ಕಾವ್ಯಾತ್ಮಕ ಕೃತಿ ''ಲಾ ಸಿಟ್ಟಾ ಡಿ ವಿಟಾ'', ಆದರೆ ಹಿಂದಿನ ಕೃತಿ ''ಡೆಲ್ಲಾ ವಿಟಾ ಸಿವಿಲ್'' ಹೆಚ್ಚು ವ್ಯಾಪಕವಾಗಿದೆ. ೧೪೩೦ ರ ಪ್ಲೇಗ್ ಸಮಯದಲ್ಲಿ ಫ್ಲಾರೆನ್ಸ್ನ ಹೊರಗಿನ ಮುಗೆಲ್ಲೊ ಗ್ರಾಮಾಂತರದಲ್ಲಿ ಹಳ್ಳಿಗಾಡಿನ ಮನೆಯೊಂದರಲ್ಲಿ ಸಂವಾದಗಳ ಸರಣಿಯಾಗಿ ಸಂಯೋಜಿಸಲ್ಪಟ್ಟಿದೆ, ಪಾಲ್ಮೀರಿ ಆದರ್ಶ ನಾಗರಿಕನ ಗುಣಗಳನ್ನು ವಿವರಿಸುತ್ತದೆ. ಸಂವಾದಗಳಲ್ಲಿ ಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೇಗೆ ಅಭಿವೃದ್ಧಿ ಹೊಂದುತ್ತಾರೆ. ನಾಗರಿಕರು ಹೇಗೆ ನೈತಿಕವಾಗಿ ನಡೆದುಕೊಳ್ಳಬಹುದು. ನಾಗರಿಕರು ಮತ್ತು ರಾಜ್ಯಗಳು ಸಾರ್ವಜನಿಕ ಜೀವನದಲ್ಲಿ ಹೇಗೆ ಪ್ರಾಬಿಟಿಯನ್ನು ಖಾತ್ರಿಪಡಿಸಿಕೊಳ್ಳಬಹುದು ಮತ್ತು ಪ್ರಾಯೋಗಿಕವಾಗಿ ಉಪಯುಕ್ತವಾದ ಮತ್ತು ಪ್ರಾಮಾಣಿಕವಾದವುಗಳ ನಡುವಿನ ವ್ಯತ್ಯಾಸದ ಕುರಿತು ಪ್ರಮುಖ ಚರ್ಚೆಯನ್ನು ಒಳಗೊಂಡಿದೆ.
ಮಾನವತಾವಾದಿಗಳು ಪರಿಪೂರ್ಣ ಮನಸ್ಸು ಮತ್ತು ದೇಹದೊಂದಿಗೆ ಮರಣಾನಂತರದ ಜೀವನಕ್ಕೆ ಹೋಗುವುದು ಮುಖ್ಯ ಎಂದು ನಂಬಿದ್ದರು, ಅದನ್ನು ಶಿಕ್ಷಣದಿಂದ ಸಾಧಿಸಬಹುದು. ಮಾನವತಾವಾದದ ಉದ್ದೇಶವು ಸಾರ್ವತ್ರಿಕ ಮನುಷ್ಯನನ್ನು ಸೃಷ್ಟಿಸುವುದು, ಅವರ ವ್ಯಕ್ತಿಯು ಬೌದ್ಧಿಕ ಮತ್ತು ದೈಹಿಕ ಶ್ರೇಷ್ಠತೆಯನ್ನು ಸಂಯೋಜಿಸಿದ ಮತ್ತು ವಾಸ್ತವಿಕವಾಗಿ ಯಾವುದೇ ಪರಿಸ್ಥಿತಿಯಲ್ಲಿ ಗೌರವಯುತವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದನು.<ref>Hause, S. & Maltby, W. (2001). ''A History of European Society. Essentials of Western Civilization'' (Vol. 2, pp. 245–246). Belmont, CA: Thomson Learning, Inc.</ref> ಈ ಸಿದ್ಧಾಂತವನ್ನು ಪ್ರಾಚೀನ ಗ್ರೀಕೋ-ರೋಮನ್ ಆದರ್ಶವಾದ ''ಸಾರ್ವತ್ರಿಕ ಮನುಷ್ಯ'' ಎಂದು ಉಲ್ಲೇಖಿಸಲಾಗಿದೆ. ನವೋದಯದ ಸಮಯದಲ್ಲಿ ಶಿಕ್ಷಣವು ಮುಖ್ಯವಾಗಿ ಪ್ರಾಚೀನ ಸಾಹಿತ್ಯ ಮತ್ತು ಇತಿಹಾಸವನ್ನು ಒಳಗೊಂಡಿತ್ತು. ಏಕೆಂದರೆ ಕ್ಲಾಸಿಕ್ಗಳು ನೈತಿಕ ಸೂಚನೆ ಮತ್ತು ಮಾನವ ನಡವಳಿಕೆಯ ಬಗ್ಗೆ ತೀವ್ರವಾದ ತಿಳುವಳಿಕೆಯನ್ನು ನೀಡುತ್ತವೆ ಎಂದು ಭಾವಿಸಲಾಗಿದೆ.
=== ಮಾನವತಾವಾದ ಮತ್ತು ಗ್ರಂಥಾಲಯಗಳು ===
ಕೆಲವು ನವೋದಯ ಗ್ರಂಥಾಲಯಗಳ ವಿಶಿಷ್ಟ ಲಕ್ಷಣವೆಂದರೆ ಅವು ಸಾರ್ವಜನಿಕರಿಗೆ ತೆರೆದಿರುತ್ತವೆ. ಈ ಗ್ರಂಥಾಲಯಗಳು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವ ಸ್ಥಳಗಳಾಗಿವೆ ಮತ್ತು ಅಲ್ಲಿ ಪಾಂಡಿತ್ಯ ಮತ್ತು ಓದುವಿಕೆಯನ್ನು ಮನಸ್ಸಿಗೆ ಮತ್ತು ಆತ್ಮಕ್ಕೆ ಆಹ್ಲಾದಕರ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಸ್ವತಂತ್ರ ಚಿಂತನೆಯು ವಯಸ್ಸಿನ ವಿಶಿಷ್ಟ ಲಕ್ಷಣವಾಗಿರುವುದರಿಂದ, ಅನೇಕ ಗ್ರಂಥಾಲಯಗಳು ವ್ಯಾಪಕ ಶ್ರೇಣಿಯ ಬರಹಗಾರರನ್ನು ಒಳಗೊಂಡಿವೆ. ಮಾನವತಾವಾದಿ ಬರಹಗಳ ಜೊತೆಗೆ ಶಾಸ್ತ್ರೀಯ ಪಠ್ಯಗಳನ್ನು ಕಾಣಬಹುದು. ಬುದ್ಧಿಜೀವಿಗಳ ಈ ಅನೌಪಚಾರಿಕ ಸಂಘಗಳು ನವೋದಯ ಸಂಸ್ಕೃತಿಯನ್ನು ಗಾಢವಾಗಿ ಪ್ರಭಾವಿಸಿದವು. ಕೆಲವು ಶ್ರೀಮಂತ "ಗ್ರಂಥಾಭಿಮಾನಿಗಳು" ಗ್ರಂಥಾಲಯಗಳನ್ನು ಪುಸ್ತಕಗಳು ಮತ್ತು ಜ್ಞಾನದ ದೇವಾಲಯಗಳಾಗಿ ನಿರ್ಮಿಸಿದರು. ಪುಸ್ತಕಗಳ ಪ್ರೀತಿಯೊಂದಿಗೆ ಅಪಾರ ಸಂಪತ್ತಿನ ದ್ಯೋತಕವಾಗಿ ಹಲವಾರು ಗ್ರಂಥಾಲಯಗಳು ಕಾಣಿಸಿಕೊಂಡವು. ಕೆಲವು ಸಂದರ್ಭಗಳಲ್ಲಿ, ಬೆಳೆಸಿದ ಲೈಬ್ರರಿ ಬಿಲ್ಡರ್ಗಳು ತಮ್ಮ ಸಂಗ್ರಹಗಳನ್ನು ಬಳಸುವ ಅವಕಾಶವನ್ನು ಇತರರಿಗೆ ನೀಡಲು ಬದ್ಧರಾಗಿದ್ದರು. ಚರ್ಚ್ನ ಪ್ರಮುಖ ಶ್ರೀಮಂತರು ಮತ್ತು ರಾಜಕುಮಾರರು ತಮ್ಮ ನ್ಯಾಯಾಲಯಗಳ ಬಳಕೆಗಾಗಿ "ಕೋರ್ಟ್ ಲೈಬ್ರರಿಗಳು" ಎಂದು ಕರೆಯಲ್ಪಡುವ ದೊಡ್ಡ ಗ್ರಂಥಾಲಯಗಳನ್ನು ರಚಿಸಿದರು ಮತ್ತು ಅಲಂಕೃತವಾದ ಮರಗೆಲಸದಿಂದ ಅಲಂಕರಿಸಲ್ಪಟ್ಟ ಅದ್ದೂರಿಯಾಗಿ ವಿನ್ಯಾಸಗೊಳಿಸಲಾದ ಸ್ಮಾರಕ ಕಟ್ಟಡಗಳಲ್ಲಿ ಮತ್ತು ಗೋಡೆಗಳನ್ನು ಹಸಿಚಿತ್ರಗಳಿಂದ ಅಲಂಕರಿಸಲಾಗಿತ್ತು (ಮುರ್ರೆ, ಸ್ಟುವರ್ಟ್ ಎಪಿ ).
=== ಕಲೆ ===
ನವೋದಯದ ಕಲೆಯು ಮಧ್ಯಯುಗದ ಕೊನೆಯಲ್ಲಿ ಮತ್ತು ಆಧುನಿಕ ಪ್ರಪಂಚದ ಉದಯದಲ್ಲಿ ಸಾಂಸ್ಕೃತಿಕ ಪುನರ್ಜನ್ಮವನ್ನು ಸೂಚಿಸುತ್ತದೆ. ನವೋದಯ ಕಲೆಯ ಒಂದು ವಿಶಿಷ್ಟ ಲಕ್ಷಣವೆಂದರೆ ಅದರ ಅತ್ಯಂತ ವಾಸ್ತವಿಕ ರೇಖಾತ್ಮಕ ದೃಷ್ಟಿಕೋನದ ಬೆಳವಣಿಗೆಯಾಗಿದೆ. ಜಿಯೊಟ್ಟೊ ಡಿ ಬೊಂಡೋನ್ (೧೨೬೭-೧೩೩೭) ಮೊದಲು ವರ್ಣಚಿತ್ರವನ್ನು ಬಾಹ್ಯಾಕಾಶಕ್ಕೆ ಕಿಟಕಿಯಾಗಿ ಪರಿಗಣಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಆದರೆ ಇದು ವಾಸ್ತುಶಿಲ್ಪಿ ಫಿಲಿಪ್ಪೊ ಬ್ರೂನೆಲ್ಲೆಸ್ಚಿ (೧೩೭೭-೧೪೪೬) ಮತ್ತು [[ಆಲ್ಬರ್ಟ ಲಿಅನ್ ಬ್ಯಾಟಿಸ್ಟ|ಲಿಯಾನ್ ಬಟಿಸ್ಟಾ ಆಲ್ಬರ್ಟಿಯ]] ನಂತರದ ಬರಹಗಳವರೆಗೆ (೧೪೦೪-೧೪೭೨) ಆ ದೃಷ್ಟಿಕೋನವನ್ನು ಕಲಾತ್ಮಕ ತಂತ್ರವಾಗಿ ಔಪಚಾರಿಕಗೊಳಿಸಲಾಯಿತು.<ref>Clare, John D. & Millen, Alan, ''Italian Renaissance'', London, 1994, p. 14.</ref>
[[ಚಿತ್ರ:Da_Vinci_Vitruve_Luc_Viatour.jpg|left|thumb| [[ಲಿಯನಾರ್ಡೊ ಡ ವಿಂಚಿ|ಲಿಯೊನಾರ್ಡೊ ಡಾ ವಿನ್ಸಿಯ]] ''ವಿಟ್ರುವಿಯನ್ ಮ್ಯಾನ್'' (ಶ. ೧೪೯೦) ಆಂಟಿಕ್ವಿಟಿಯ ಬರಹಗಾರರು ನವೋದಯ ಚಿಂತಕರ ಮೇಲೆ ಬೀರಿದ ಪರಿಣಾಮವನ್ನು ಪ್ರದರ್ಶಿಸುತ್ತದೆ. ವಿಟ್ರುವಿಯಸ್ ''ಡಿ ಆರ್ಕಿಟೆಕ್ಚುರಾ'' (ಕ್ರಿ.ಪೂ ೧ ನೇ ಶತಮಾನ ) ದಲ್ಲಿನ ವಿಶೇಷಣಗಳ ಆಧಾರದ ಮೇಲೆ, ಲಿಯೊನಾರ್ಡೊ ಸಂಪೂರ್ಣವಾಗಿ ಅನುಪಾತದ ಮನುಷ್ಯನನ್ನು ಸೆಳೆಯಲು ಪ್ರಯತ್ನಿಸಿದರು. (ಮ್ಯೂಸಿಯಂ ಗ್ಯಾಲರಿ ಡೆಲ್ ಅಕಾಡೆಮಿಯಾ, [[ವೆನಿಸ್|ವೆನಿಸ್]] )]]
ದೃಷ್ಟಿಕೋನದ ಬೆಳವಣಿಗೆಯು ಕಲೆಯಲ್ಲಿ ವಾಸ್ತವಿಕತೆಯ ಕಡೆಗೆ ವ್ಯಾಪಕವಾದ ಪ್ರವೃತ್ತಿಯ ಭಾಗವಾಗಿತ್ತು.<ref>Stork, David G. ''[http://sirl.stanford.edu/~bob/teaching/pdf/arth202/Stork_SciAm04.pdf Optics and Realism in Renaissance Art] {{Webarchive|url=https://web.archive.org/web/20160304123242/http://sirl.stanford.edu/~bob/teaching/pdf/arth202/Stork_SciAm04.pdf |date=ಮಾರ್ಚ್ 4, 2016 }}'' (Retrieved May 10, 2007)</ref> ವರ್ಣಚಿತ್ರಕಾರರು ಇತರ ತಂತ್ರಗಳನ್ನು ಅಭಿವೃದ್ಧಿಪಡಿಸಿದರು, ಬೆಳಕು, ನೆರಳು ಮತ್ತು [[ಲಿಯನಾರ್ಡೊ ಡ ವಿಂಚಿ|ಲಿಯೊನಾರ್ಡೊ ಡಾ ವಿನ್ಸಿಯ]] ಸಂದರ್ಭದಲ್ಲಿ ಪ್ರಸಿದ್ಧವಾಗಿ [[ಮಾನವ ಶರೀರ|ಮಾನವ ಅಂಗರಚನಾಶಾಸ್ತ್ರವನ್ನು]] ಅಧ್ಯಯನ ಮಾಡಿದರು. ಕಲಾತ್ಮಕ ವಿಧಾನದಲ್ಲಿನ ಈ ಬದಲಾವಣೆಗಳ ಆಧಾರವು ನಿಸರ್ಗದ ಸೌಂದರ್ಯವನ್ನು ಚಿತ್ರಿಸುವ ಮತ್ತು [[ಸೌಂದರ್ಯಶಾಸ್ತ್ರ|ಸೌಂದರ್ಯಶಾಸ್ತ್ರದ]] ಮೂಲತತ್ವಗಳನ್ನು ಬಿಚ್ಚಿಡುವ ನವೀಕೃತ ಬಯಕೆಯಾಗಿದೆ. ಲಿಯೊನಾರ್ಡೊ, [[ಮೈಕೆಲ್ಯಾಂಜೆಲೊ]] ಮತ್ತು ರಾಫೆಲ್ ಅವರ ಕೃತಿಗಳು ಇತರ ಕಲಾವಿದರಿಂದ ಹೆಚ್ಚು ಅನುಕರಿಸಲ್ಪಟ್ಟ ಕಲಾತ್ಮಕ ಪರಾಕಾಷ್ಠೆಗಳನ್ನು ಪ್ರತಿನಿಧಿಸುತ್ತವೆ. ಇತರ ಗಮನಾರ್ಹ ಕಲಾವಿದರಲ್ಲಿ ಸ್ಯಾಂಡ್ರೊ ಬೊಟಿಸೆಲ್ಲಿ, ಫ್ಲಾರೆನ್ಸ್ನಲ್ಲಿರುವ ಮೆಡಿಸಿ, [[ಡಾನಟೆಲೊ|ಡೊನಾಟೆಲ್ಲೋ]], ಮತ್ತೊಂದು ಫ್ಲೋರೆಂಟೈನ್ ಮತ್ತು ವೆನಿಸ್ನ [[ಟಿಷನ್|ಟಿಟಿಯನ್ಗೆ]] ಕೆಲಸ ಮಾಡುತ್ತಿದ್ದಾರೆ.
[[ನೆದರ್ಲ್ಯಾಂಡ್ಸ್|ನೆದರ್ಲ್ಯಾಂಡ್ಸ್ನಲ್ಲಿ]], ವಿಶೇಷವಾಗಿ ರೋಮಾಂಚಕ ಕಲಾತ್ಮಕ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲಾಯಿತು. ಹ್ಯೂಗೋ ವ್ಯಾನ್ ಡೆರ್ ಗೋಸ್ ಮತ್ತು ಜಾನ್ ವ್ಯಾನ್ ಐಕ್ ಅವರ ಕೆಲಸವು ಇಟಲಿಯಲ್ಲಿ ಚಿತ್ರಕಲೆಯ ಅಭಿವೃದ್ಧಿಯ ಮೇಲೆ ವಿಶೇಷವಾಗಿ ಪ್ರಭಾವ ಬೀರಿತು. ಎರಡೂ ತಾಂತ್ರಿಕವಾಗಿ ತೈಲವರ್ಣ ಮತ್ತು ಕ್ಯಾನ್ವಾಸ್ನ ಪರಿಚಯದೊಂದಿಗೆ ಮತ್ತು ಪ್ರಾತಿನಿಧ್ಯದಲ್ಲಿ ನೈಸರ್ಗಿಕತೆಯ ಪರಿಭಾಷೆಯಲ್ಲಿ ಶೈಲಿಯಲ್ಲಿ ಪ್ರಭಾವ ಬೀರಿತು. ನಂತರ, ಪೀಟರ್ ಬ್ರೂಗೆಲ್ ದಿ ಎಲ್ಡರ್ ಅವರ ಕೆಲಸವು ದೈನಂದಿನ ಜೀವನದ ವಿಷಯಗಳನ್ನು ಚಿತ್ರಿಸಲು ಕಲಾವಿದರನ್ನು ಪ್ರೇರೇಪಿಸುತ್ತದೆ.<ref>''[http://www.wga.hu/frames-e.html?/bio/b/bruegel/pieter_e/biograph.html Peter Brueghel Biography]'', Web Gallery of Art (Retrieved May 10, 2007)</ref>
ವಾಸ್ತುಶಿಲ್ಪದಲ್ಲಿ, ಪ್ರಾಚೀನ ಶಾಸ್ತ್ರೀಯ ಕಟ್ಟಡಗಳ ಅವಶೇಷಗಳನ್ನು ಅಧ್ಯಯನ ಮಾಡುವಲ್ಲಿ ಫಿಲಿಪ್ಪೊ ಬ್ರೂನೆಲ್ಲೆಸ್ಚಿ ಅಗ್ರಗಣ್ಯರಾಗಿದ್ದರು. ೧ನೇ ಶತಮಾನದ ಬರಹಗಾರ ವಿಟ್ರುವಿಯಸ್ನಿಂದ ಮರುಶೋಧಿಸಲ್ಪಟ್ಟ ಜ್ಞಾನ ಮತ್ತು ಗಣಿತಶಾಸ್ತ್ರದ ಪ್ರವರ್ಧಮಾನದ ಶಿಸ್ತು, ಬ್ರೂನೆಲ್ಲೆಸ್ಚಿಯು ನವೋದಯ ಶೈಲಿಯನ್ನು ರೂಪಿಸಿದರು, ಅದು ಶಾಸ್ತ್ರೀಯ ರೂಪಗಳನ್ನು ಅನುಕರಿಸುತ್ತದೆ ಮತ್ತು ಸುಧಾರಿಸಿತು. ಫ್ಲಾರೆನ್ಸ್ ಕ್ಯಾಥೆಡ್ರಲ್ನ ಗುಮ್ಮಟವನ್ನು ನಿರ್ಮಿಸುವುದು ಅವರ ಎಂಜಿನಿಯರಿಂಗ್ನ ಪ್ರಮುಖ ಸಾಧನೆಯಾಗಿದೆ.<ref>Hooker, Richard, ''[http://www.cartage.org.lb/en/themes/arts/Architec/RenaissanceArchitecture/ArchitectureandPublicSpace/ArchitectureandPublicSpace.htm Architecture and Public Space] {{Webarchive|url=https://web.archive.org/web/20120112202049/http://www.cartage.org.lb/en/themes/arts/Architec/RenaissanceArchitecture/ArchitectureandPublicSpace/ArchitectureandPublicSpace.htm |date=ಜನವರಿ 12, 2012 }}'' (Retrieved May 10, 2007)</ref> ಈ ಶೈಲಿಯನ್ನು ಪ್ರದರ್ಶಿಸುವ ಮತ್ತೊಂದು ಕಟ್ಟಡವೆಂದರೆ ಮಾಂಟುವಾದಲ್ಲಿನ ಸೇಂಟ್ ಆಂಡ್ರ್ಯೂ ಚರ್ಚ್, ಇದನ್ನು ಆಲ್ಬರ್ಟಿ ನಿರ್ಮಿಸಿದ್ದಾರೆ. ಉನ್ನತ ನವೋದಯದ ಮಹೋನ್ನತ ವಾಸ್ತುಶಿಲ್ಪದ ಕೆಲಸವೆಂದರೆ ಸೇಂಟ್ ಪೀಟರ್ಸ್ ಬೆಸಿಲಿಕಾದ ಪುನರ್ನಿರ್ಮಾಣವಾಗಿದ್ದು, ಬ್ರಮಾಂಟೆ, [[ಮೈಕೆಲ್ಯಾಂಜೆಲೊ]], ರಾಫೆಲ್, ಸಾಂಗಲ್ಲೊ ಮತ್ತು ಮಡೆರ್ನೊ ಅವರ ಕೌಶಲ್ಯಗಳನ್ನು ಸಂಯೋಜಿಸುತ್ತದೆ.
ನವೋದಯದ ಸಮಯದಲ್ಲಿ, ವಾಸ್ತುಶಿಲ್ಪಿಗಳು ಕಾಲಮ್ಗಳು, ಪೈಲಸ್ಟರ್ಗಳು ಮತ್ತು ಎಂಟ್ಯಾಬ್ಲೇಚರ್ಗಳನ್ನು ಸಮಗ್ರ ವ್ಯವಸ್ಥೆಯಾಗಿ ಬಳಸುವ ಗುರಿಯನ್ನು ಹೊಂದಿದ್ದರು. ರೋಮನ್ ಆದೇಶದ ಪ್ರಕಾರದ ಟಸ್ಕನ್ ಮತ್ತು ಕಾಂಪೋಸಿಟ್ ಕಾಲಮ್ಗಳನ್ನು ಬಳಸಲಾಗುತ್ತದೆ. ಇವುಗಳು ರಚನಾತ್ಮಕವಾಗಿರಬಹುದು, ಆರ್ಕೇಡ್ ಅಥವಾ ಆರ್ಕಿಟ್ರೇವ್ ಅನ್ನು ಬೆಂಬಲಿಸಬಹುದು ಅಥವಾ ಸಂಪೂರ್ಣವಾಗಿ ಅಲಂಕಾರಿಕವಾಗಿರಬಹುದ. ಪೈಲಸ್ಟರ್ಗಳ ರೂಪದಲ್ಲಿ ಗೋಡೆಯ ವಿರುದ್ಧ ಹೊಂದಿಸಲಾಗಿದೆ. ಪಿಲಾಸ್ಟರ್ಗಳನ್ನು ಸಮಗ್ರ ವ್ಯವಸ್ಥೆಯಾಗಿ ಬಳಸಿದ ಮೊದಲ ಕಟ್ಟಡವೆಂದರೆ ಬ್ರೂನೆಲ್ಲೆಸ್ಚಿಯಿಂದ ಓಲ್ಡ್ ಸ್ಯಾಕ್ರಿಸ್ಟಿ (೧೪೨೧-೧೪೪೦).<ref>{{Cite book|title=Filippo Brunelleschi: The Buildings|url=https://archive.org/details/filippobrunelles0000saal|last=Saalman|first=Howard|publisher=Zwemmer|year=1993|isbn=978-0-271-01067-0}}</ref> ಕಮಾನುಗಳು, ಅರೆ-ವೃತ್ತಾಕಾರದ ಅಥವಾ ( ಮ್ಯಾನರಿಸ್ಟ್ ಶೈಲಿಯಲ್ಲಿ) ಸೆಗ್ಮೆಂಟಲ್, ಸಾಮಾನ್ಯವಾಗಿ ಆರ್ಕೇಡ್ಗಳಲ್ಲಿ ಬಳಸಲಾಗುತ್ತದೆ. ಪಿಯರ್ಗಳು ಅಥವಾ ಕಾಲಮ್ಗಳ ಮೇಲೆ ಬಂಡವಾಳವನ್ನು ಬೆಂಬಲಿಸಲಾಗುತ್ತದೆ. ರಾಜಧಾನಿ ಮತ್ತು ಕಮಾನಿನ ಸ್ಪ್ರಿಂಗ್ಗಳ ನಡುವೆ ಎಂಟಾಬ್ಲೇಚರ್ನ ವಿಭಾಗವಿರಬಹುದು. ಸ್ಮಾರಕದ ಮೇಲೆ ಕಮಾನು ಬಳಸಿದವರಲ್ಲಿ ಆಲ್ಬರ್ಟಿ ಮೊದಲಿಗರಾಗಿದ್ದರು. ನವೋದಯ ಕಮಾನುಗಳು ಪಕ್ಕೆಲುಬುಗಳನ್ನು ಹೊಂದಿಲ್ಲ; ಅವು ಅರ್ಧವೃತ್ತಾಕಾರದ ಅಥವಾ ಸೆಗ್ಮೆಂಟಲ್ ಆಗಿರುತ್ತವೆ ಮತ್ತು ಗೋಥಿಕ್ ವಾಲ್ಟ್ನಂತಲ್ಲದೆ, ಆಗಾಗ್ಗೆ ಆಯತಾಕಾರದ ಆಕಾರದಲ್ಲಿರುತ್ತವೆ.
ನವೋದಯ ಕಲಾವಿದರು ಪೇಗನ್ ಆಗಿರಲಿಲ್ಲ. ಆದರೂ ಅವರು ಪ್ರಾಚೀನತೆಯನ್ನು ಮೆಚ್ಚಿದರು ಮತ್ತು ಮಧ್ಯಕಾಲೀನ ಗತಕಾಲದ ಕೆಲವು ವಿಚಾರಗಳು ಮತ್ತು ಚಿಹ್ನೆಗಳನ್ನು ಇಟ್ಟುಕೊಂಡಿದ್ದರು. ನಿಕೋಲಾ ಪಿಸಾನೊ (ಶ. ೧೨೨೦ - ಶ. ೧೨೭೮) ಬೈಬಲ್ನಿಂದ ದೃಶ್ಯಗಳನ್ನು ಚಿತ್ರಿಸುವ ಮೂಲಕ ಶಾಸ್ತ್ರೀಯ ರೂಪಗಳನ್ನು ಅನುಕರಿಸಿದರು. ಪಿಸಾದಲ್ಲಿನ ಬ್ಯಾಪ್ಟಿಸ್ಟ್ರಿಯಿಂದ ಅವರ ''ಅನನ್ಸಿಯೇಷನ್'', ನವೋದಯವು ಸಾಹಿತ್ಯಿಕ ಚಳುವಳಿಯಾಗಿ ಬೇರೂರುವ ಮೊದಲು ಶಾಸ್ತ್ರೀಯ ಮಾದರಿಗಳು ಇಟಾಲಿಯನ್ ಕಲೆಯ ಮೇಲೆ ಪ್ರಭಾವ ಬೀರಿದೆ ಎಂದು ತೋರಿಸುತ್ತದೆ.<ref>Hause, S. & Maltby, W. (2001). ''A History of European Society. Essentials of Western Civilization'' (Vol. 2, pp. 250–251). Belmont, CA: Thomson Learning, Inc.</ref>
=== ವಿಜ್ಞಾನ ===
[[ಚಿತ್ರ:Nikolaus_Kopernikus.jpg|thumb| [[ನಿಕೋಲಸ್ ಕೋಪರ್ನಿಕಸ್]] ಅವರ ಅನಾಮಧೇಯ ಭಾವಚಿತ್ರ (ಶ. ೧೫೮೦)]]
[[ಚಿತ್ರ:Pacioli.jpg|thumb| ''ಲುಕಾ ಪ್ಯಾಸಿಯೋಲಿಯ ಭಾವಚಿತ್ರ,'' ಲೆಕ್ಕಶಾಸ್ತ್ರದ ಪಿತಾಮಹ, ಜಾಕೋಪೊ ಡಿ ಬಾರ್ಬರಿಯಿಂದ ಚಿತ್ರಿಸಲ್ಪಟ್ಟಿದೆ.<ref>{{cite journal |doi=10.2307/3619717 |title=The Portrait of Fra Luca Pacioli |url=https://archive.org/details/sim_mathematical-gazette_1993-07_77_479/page/143 |journal=[[The Mathematical Gazette]] |volume=77 |issue=479 |page=143 |year=1993 |last1=MacKinnon |first1=Nick|jstor=3619717 |s2cid=195006163 }}</ref> ೧೪೯೫, ( ಮ್ಯೂಸಿಯೊ ಡಿ ಕಾಪೊಡಿಮೊಂಟೆ ).]]
ಅನ್ವಯಿಕ ನಾವೀನ್ಯತೆಯನ್ನು ವಾಣಿಜ್ಯಕ್ಕೆ ವಿಸ್ತರಿಸಲಾಗಿದೆ. ೧೫ ನೇ ಶತಮಾನದ ಕೊನೆಯಲ್ಲಿ, ಲುಕಾ ಪ್ಯಾಸಿಯೋಲಿ ಅವರು [[ಲೆಕ್ಕ ಬರಹ (ಬುಕ್ ಕೀಪಿಂಗ್)|ಲೆಕ್ಕಪತ್ರ]] [[ಲೆಕ್ಕಪತ್ರ ನಿರ್ವಹಣೆ|ನಿರ್ವಹಣೆಯ]] ಮೊದಲ ಕೃತಿಯನ್ನು ಪ್ರಕಟಿಸಿದರು.<ref name="jkdiwan"/>
ಪುರಾತನ ಗ್ರಂಥಗಳ ಮರುಶೋಧನೆ ಮತ್ತು [[ಮುದ್ರಣ ಯಂತ್ರ|ಮುದ್ರಣ ಯಂತ್ರದ]] ಆವಿಷ್ಕಾರವು ಸುಮಾರು ೧೪೪೦ ರಲ್ಲಿ ಪ್ರಜಾಪ್ರಭುತ್ವದ ಕಲಿಕೆ ಮತ್ತು ಹೆಚ್ಚು ವ್ಯಾಪಕವಾಗಿ ವಿತರಿಸಲಾದ ವಿಚಾರಗಳ ವೇಗದ ಪ್ರಚಾರಕ್ಕೆ ಅವಕಾಶ ಮಾಡಿಕೊಟ್ಟಿತು. ಇಟಾಲಿಯನ್ ಪುನರುಜ್ಜೀವನದ ಮೊದಲ ಅವಧಿಯಲ್ಲಿ, ಮಾನವತಾವಾದಿಗಳು ನೈಸರ್ಗಿಕ ತತ್ತ್ವಶಾಸ್ತ್ರ ಅಥವಾ ಅನ್ವಯಿಕ ಗಣಿತಶಾಸ್ತ್ರದ ಮೇಲೆ ಮಾನವಿಕತೆಯ ಅಧ್ಯಯನಕ್ಕೆ ಒಲವು ತೋರಿದರು. ಶಾಸ್ತ್ರೀಯ ಮೂಲಗಳಿಗೆ ಅವರ ಗೌರವವು ಬ್ರಹ್ಮಾಂಡದ [[ಅರಿಸ್ಟಾಟಲ್|ಅರಿಸ್ಟಾಟಲ್]] ಮತ್ತು [[ಕ್ಲಾಡಿಯಸ್ ಟಾಲೆಮಿ|ಟಾಲೆಮಿಕ್]] ದೃಷ್ಟಿಕೋನಗಳನ್ನು ಮತ್ತಷ್ಟು ಪ್ರತಿಪಾದಿಸಿತು. ೧೪೫೦ ರ ಸುಮಾರಿಗೆ ಬರೆಯುತ್ತಾ, ನಿಕೋಲಸ್ ಕುಸಾನಸ್ [[ನಿಕೋಲಸ್ ಕೋಪರ್ನಿಕಸ್|ಕೋಪರ್ನಿಕಸ್ನ]] ತಾತ್ವಿಕ ಶೈಲಿಯಲ್ಲಿ ಸೂರ್ಯಕೇಂದ್ರಿತ ವಿಶ್ವ ದೃಷ್ಟಿಕೋನವನ್ನು ನಿರೀಕ್ಷಿಸಿದನು.
ಆರಂಭಿಕ ನವೋದಯದಲ್ಲಿ ವಿಜ್ಞಾನ ಮತ್ತು ಕಲೆಯು ಬೆರೆತುಕೊಂಡಿತ್ತು, ಲಿಯೊನಾರ್ಡೊ ಡಾ ವಿನ್ಸಿಯಂತಹ ಪಾಲಿಮಾಥ್ ಕಲಾವಿದರು ಅಂಗರಚನಾಶಾಸ್ತ್ರ ಮತ್ತು ಪ್ರಕೃತಿಯ ವೀಕ್ಷಣಾ ರೇಖಾಚಿತ್ರಗಳನ್ನು ಮಾಡಿದರು. ಡಾ ವಿನ್ಸಿ ಅವರು ನೀರಿನ ಹರಿವು, ವೈದ್ಯಕೀಯ ಛೇದನ ಮತ್ತು ಚಲನೆ ಮತ್ತು ವಾಯುಬಲವಿಜ್ಞಾನದ ವ್ಯವಸ್ಥಿತ ಅಧ್ಯಯನದಲ್ಲಿ ನಿಯಂತ್ರಿತ ಪ್ರಯೋಗಗಳನ್ನು ಸ್ಥಾಪಿಸಿದರು ಮತ್ತು ಫ್ರಿಟ್ಜೋಫ್ ಕ್ಯಾಪ್ರಾ ಅವರನ್ನು "ಆಧುನಿಕ ವಿಜ್ಞಾನದ ಪಿತಾಮಹ" ಎಂದು ವರ್ಗೀಕರಿಸಲು ಕಾರಣವಾದ ಸಂಶೋಧನಾ ವಿಧಾನದ ತತ್ವಗಳನ್ನು ರೂಪಿಸಿದರು.<ref>Capra, Fritjof, ''The Science of Leonardo; Inside the Mind of the Great Genius of the Renaissance'', New York, Doubleday, 2007. Exhaustive 2007 study by Fritjof Capra shows that Leonardo was a much greater scientist than previously thought, and not just an inventor. Leonardo was innovative in science theory and in conducting actual science practice. In Capra's detailed assessment of many surviving manuscripts, Leonardo's science in tune with holistic non-mechanistic and non-reductive approaches to science, which are becoming popular today.</ref> ಈ ಅವಧಿಯಲ್ಲಿ ಡಾ ವಿನ್ಸಿಯ ಕೊಡುಗೆಯ ಇತರ ಉದಾಹರಣೆಗಳೆಂದರೆ ಗೋಲಿಗಳನ್ನು ಮತ್ತು ಏಕಶಿಲೆಗಳನ್ನು ಎತ್ತುವಂತೆ ವಿನ್ಯಾಸಗೊಳಿಸಿದ ಯಂತ್ರಗಳು ಮತ್ತು ಅಕೌಸ್ಟಿಕ್ಸ್, ಸಸ್ಯಶಾಸ್ತ್ರ, ಭೂವಿಜ್ಞಾನ, ಅಂಗರಚನಾಶಾಸ್ತ್ರ ಮತ್ತು ಯಂತ್ರಶಾಸ್ತ್ರದಲ್ಲಿ ಹೊಸ ಆವಿಷ್ಕಾರಗಳು.
ಶಾಸ್ತ್ರೀಯ ವೈಜ್ಞಾನಿಕ ಸಿದ್ಧಾಂತವನ್ನು ಪ್ರಶ್ನಿಸಲು ಸೂಕ್ತವಾದ ವಾತಾವರಣವನ್ನು ಅಭಿವೃದ್ಧಿಪಡಿಸಲಾಯಿತು. [[ಕ್ರಿಸ್ಟೊಫರ್ ಕೊಲಂಬಸ್|ಕ್ರಿಸ್ಟೋಫರ್ ಕೊಲಂಬಸ್]] ಅವರಿಂದ ೧೪೯೨ ರಲ್ಲಿ ಹೊಸ ಪ್ರಪಂಚದ ಆವಿಷ್ಕಾರವು ಶಾಸ್ತ್ರೀಯ ವಿಶ್ವ ದೃಷ್ಟಿಕೋನವನ್ನು ಪ್ರಶ್ನಿಸಿತು. [[ಕ್ಲಾಡಿಯಸ್ ಟಾಲೆಮಿ|ಟಾಲೆಮಿ]] (ಭೂಗೋಳದಲ್ಲಿ) ಮತ್ತು [[ಗೇಲೆನ್|ಗ್ಯಾಲೆನ್]] (ವೈದ್ಯಕೀಯದಲ್ಲಿ) ಅವರ ಕೃತಿಗಳು ಯಾವಾಗಲೂ ದೈನಂದಿನ ಅವಲೋಕನಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಕಂಡುಬಂದಿದೆ. ಸುಧಾರಣೆ ಮತ್ತು ಪ್ರತಿ-ಸುಧಾರಣೆ ಘರ್ಷಣೆಯಾಗಿ, ಉತ್ತರ ನವೋದಯವು ಅರಿಸ್ಟಾಟಿಲಿಯನ್ ನೈಸರ್ಗಿಕ ತತ್ತ್ವಶಾಸ್ತ್ರದಿಂದ ರಸಾಯನಶಾಸ್ತ್ರ ಮತ್ತು ಜೈವಿಕ ವಿಜ್ಞಾನಗಳಿಗೆ (ಸಸ್ಯಶಾಸ್ತ್ರ, ಅಂಗರಚನಾಶಾಸ್ತ್ರ ಮತ್ತು ವೈದ್ಯಕೀಯ) ಗಮನದಲ್ಲಿ ನಿರ್ಣಾಯಕ ಬದಲಾವಣೆಯನ್ನು ತೋರಿಸಿತು.<ref>[[Allen Debus]], ''Man and Nature in the Renaissance'' (Cambridge: Cambridge University Press, 1978).</ref> ಹಿಂದೆ ನಡೆದ ಸತ್ಯಗಳನ್ನು ಪ್ರಶ್ನಿಸುವ ಮತ್ತು ಹೊಸ ಉತ್ತರಗಳನ್ನು ಹುಡುಕುವ ಇಚ್ಛೆಯು ಪ್ರಮುಖ ವೈಜ್ಞಾನಿಕ ಪ್ರಗತಿಯ ಅವಧಿಗೆ ಕಾರಣವಾಯಿತು.
ಕೆಲವರು ಇದನ್ನು " [[ವೈಜ್ಞಾನಿಕ ಕ್ರಾಂತಿ]] " ಎಂದು ಪರಿಗಣಿಸುತ್ತಾರೆ, ಇದು ಆಧುನಿಕ ಯುಗದ ಆರಂಭವನ್ನು ಸೂಚಿಸುತ್ತದೆ.<ref>Butterfield, Herbert, ''The Origins of Modern Science, 1300–1800'', p. viii</ref> ಇತರರು ಪ್ರಾಚೀನ ಪ್ರಪಂಚದಿಂದ ಇಂದಿನವರೆಗೆ ನಿರಂತರ ಪ್ರಕ್ರಿಯೆಯ ವೇಗವರ್ಧನೆ ಎಂದು ಪರಿಗಣಿಸುತ್ತಾರೆ.<ref>Shapin, Steven. ''The Scientific Revolution'', Chicago: University of Chicago Press, 1996, p. 1.</ref> ಈ ಸಮಯದಲ್ಲಿ [[ಗೆಲಿಲಿಯೋ ಗೆಲಿಲಿ]], ಟೈಕೋ ಬ್ರಾಹೆ ಮತ್ತು [[ಜೊಹಾನ್ಸ್ ಕೆಪ್ಲರ್|ಜೋಹಾನ್ಸ್ ಕೆಪ್ಲರ್]] ಅವರು ಗಮನಾರ್ಹವಾದ ವೈಜ್ಞಾನಿಕ ಪ್ರಗತಿಯನ್ನು ಮಾಡಿದರು.<ref>"Scientific Revolution" in ''[[Encarta]]''. 2007.</ref> ಕೋಪರ್ನಿಕಸ್, ''ಡಿ ಕ್ರಾಂತಿಯ ಆರ್ಬಿಯಮ್ ಕೋಲೆಸ್ಟಿಯಮ್'' ( ''ಆನ್ ದಿ ರೆವಲ್ಯೂಷನ್ಸ್ ಆಫ್ ದಿ ಹೆವೆನ್ಲಿ ಸ್ಪಿಯರ್ಸ್'' ) ನಲ್ಲಿ ಭೂಮಿಯು ಸೂರ್ಯನ ಸುತ್ತ ಚಲಿಸುತ್ತದೆ ಎಂದು ಪ್ರತಿಪಾದಿಸಿದರು. ಆಂಡ್ರಿಯಾಸ್ ವೆಸಲಿಯಸ್ ಅವರ ''ಡಿ ಹ್ಯೂಮಾನಿ ಕಾರ್ಪೊರಿಸ್ ಫ್ಯಾಬ್ರಿಕಾ'' ( ''ಮಾನವ ದೇಹದ ಕಾರ್ಯಗಳ ಮೇಲೆ'' ) ಛೇದನ, ವೀಕ್ಷಣೆ ಮತ್ತು ಅಂಗರಚನಾಶಾಸ್ತ್ರದ ಯಾಂತ್ರಿಕ ದೃಷ್ಟಿಕೋನದ ಪಾತ್ರಕ್ಕೆ ಹೊಸ ವಿಶ್ವಾಸವನ್ನು ನೀಡಿದರು.
ಮತ್ತೊಂದು ಪ್ರಮುಖ ಬೆಳವಣಿಗೆಯು ಆವಿಷ್ಕಾರದ ''ಪ್ರಕ್ರಿಯೆಯಲ್ಲಿತ್ತು'', [[ವೈಜ್ಞಾನಿಕ ವಿಧಾನ]], ಪ್ರಾಯೋಗಿಕ ಪುರಾವೆ ಮತ್ತು [[ಗಣಿತ|ಗಣಿತದ]] ಪ್ರಾಮುಖ್ಯತೆಯ ಮೇಲೆ ಕೇಂದ್ರೀಕರಿಸುತ್ತದೆ. ಆದರೆ ಹೆಚ್ಚಿನ ಅರಿಸ್ಟಾಟಲ್ ವಿಜ್ಞಾನವನ್ನು ತಿರಸ್ಕರಿಸುತ್ತದೆ. ಈ ವಿಚಾರಗಳ ಆರಂಭಿಕ ಮತ್ತು ಪ್ರಭಾವಶಾಲಿ ಪ್ರತಿಪಾದಕರಲ್ಲಿ ಕೋಪರ್ನಿಕಸ್, ಗೆಲಿಲಿಯೋ ಮತ್ತು [[ಫ್ರಾನ್ಸಿಸ್ ಬೆಕನ್|ಫ್ರಾನ್ಸಿಸ್ ಬೇಕನ್]] ಸೇರಿದ್ದಾರೆ. ಹೊಸ ವೈಜ್ಞಾನಿಕ ವಿಧಾನವು ಖಗೋಳಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಅಂಗರಚನಾಶಾಸ್ತ್ರದ ಕ್ಷೇತ್ರಗಳಲ್ಲಿ ಉತ್ತಮ ಕೊಡುಗೆಗಳನ್ನು ನೀಡಿತು.<ref>{{Cite book|url=https://books.google.com/books?id=07lchJbdWGgC|title=Controversy in marketing theory: for reason, realism, truth, and objectivity|last=Hunt|first=Shelby D.|publisher=M.E. Sharpe|year=2003|isbn=978-0-7656-0932-8|page=18}}</ref>
=== ಸಂಚರಣೆ ಮತ್ತು ಭೌಗೋಳಿಕತೆ ===
[[ಚಿತ್ರ:PietroCoppo.jpg|thumb|ಪಿಯೆಟ್ರೊ ಕೊಪ್ಪೊ, ವೆನಿಸ್, ೧೫೨೦ ರ ವಿಶ್ವ ನಕ್ಷೆ]]
೧೪೫೦ ರಿಂದ ೧೬೫೦ ರವರೆಗಿನ ಪುನರುಜ್ಜೀವನದ ಅವಧಿಯಲ್ಲಿ,<ref>{{Cite book|title=The History of Cartography, Volume Three: Cartography in the European Renaissance|last=Woodward|first=David|date=2007|publisher=University of Chicago Press|isbn=978-0-226-90733-8|location=Chicago and London}}</ref> ಪ್ರತಿ ಖಂಡಕ್ಕೂ ಭೇಟಿ ನೀಡಲಾಯಿತು ಮತ್ತು ಹೆಚ್ಚಾಗಿ ಯುರೋಪಿಯನ್ನರು ಮ್ಯಾಪ್ ಮಾಡಿದರು. ಈಗ [[ಅಂಟಾರ್ಕ್ಟಿಕ|ಅಂಟಾರ್ಕ್ಟಿಕಾ]] ಎಂದು ಕರೆಯಲ್ಪಡುವ ದಕ್ಷಿಣ ಧ್ರುವ ಖಂಡವನ್ನು ಹೊರತುಪಡಿಸಿ. ಈ ಬೆಳವಣಿಗೆಯನ್ನು ೧೬೪೮ ರಲ್ಲಿ ವೆಸ್ಟ್ಫಾಲಿಯಾ ಶಾಂತಿಯ ನೆನಪಿಗಾಗಿ ಡಚ್ ಕಾರ್ಟೋಗ್ರಾಫರ್ ಜೋನ್ ಬ್ಲೇಯು ಮಾಡಿದ ದೊಡ್ಡ ವಿಶ್ವ ನಕ್ಷೆ ''ನೋವಾ ಟೋಟಿಯಸ್ ಟೆರರಮ್ ಆರ್ಬಿಸ್ ಟಬುಲಾದಲ್ಲಿ'' ಚಿತ್ರಿಸಲಾಗಿದೆ.
೧೪೯೨ ರಲ್ಲಿ, [[ಕ್ರಿಸ್ಟೊಫರ್ ಕೊಲಂಬಸ್|ಕ್ರಿಸ್ಟೋಫರ್ ಕೊಲಂಬಸ್]] [[ದೆಹಲಿ ಸುಲ್ತಾನರು|ದೆಹಲಿ ಸುಲ್ತಾನರ]] ಭಾರತಕ್ಕೆ ನೇರ ಮಾರ್ಗವನ್ನು ಹುಡುಕಲು ಸ್ಪೇನ್ನಿಂದ ಅಟ್ಲಾಂಟಿಕ್ ಸಾಗರದಾದ್ಯಂತ ಪ್ರಯಾಣ ಬೆಳೆಸಿದರು. ಅವರು ಆಕಸ್ಮಿಕವಾಗಿ ಅಮೆರಿಕದ ಮೇಲೆ ಎಡವಿದರು. ಆದರೆ ಅವರು ಈಸ್ಟ್ ಇಂಡೀಸ್ ತಲುಪಿದ್ದಾರೆಂದು ನಂಬಿದ್ದರು.
೧೬೦೬ ರಲ್ಲಿ, ಡಚ್ ನ್ಯಾವಿಗೇಟರ್ ವಿಲ್ಲೆಮ್ ಜಾನ್ಸೂನ್ ಈಸ್ಟ್ ಇಂಡೀಸ್ನಿಂದ ಹಡಗಿನ ವಿಒಸಿ ಡ್ಯುಫ್ಕೆನ್ನಲ್ಲಿ ಪ್ರಯಾಣಿಸಿ [[ಆಸ್ಟ್ರೇಲಿಯ|ಆಸ್ಟ್ರೇಲಿಯಾಕ್ಕೆ]] ಬಂದಿಳಿದರು. ಅವರು ಸುಮಾರು ೩೦೦ ಅನ್ನು ಪಟ್ಟಿ ಮಾಡಿದರು. ಕ್ವೀನ್ಸ್ಲ್ಯಾಂಡ್ನ ಕೇಪ್ ಯಾರ್ಕ್ ಪೆನಿನ್ಸುಲಾದ ಪಶ್ಚಿಮ ಕರಾವಳಿಯ ಕಿ.ಮೀ. ಮೂವತ್ತಕ್ಕೂ ಹೆಚ್ಚು ಡಚ್ ದಂಡಯಾತ್ರೆಗಳನ್ನು ಅನುಸರಿಸಿ ಉತ್ತರ, ಪಶ್ಚಿಮ ಮತ್ತು ದಕ್ಷಿಣ ಕರಾವಳಿಯ ವಿಭಾಗಗಳನ್ನು ಮ್ಯಾಪಿಂಗ್ ಮಾಡಲಾಯಿತು. ೧೬೪೨-೧೬೪೩ ರಲ್ಲಿ, [[ಏಬೆಲ್ ಯಾನ್ಸನ್ ಟಾಸ್ಮಾನ್|ಅಬೆಲ್ ಟ್ಯಾಸ್ಮನ್]] ಖಂಡವನ್ನು ಸುತ್ತಿದರು, ಇದು ಕಲ್ಪನೆಯ ದಕ್ಷಿಣ ಧ್ರುವ ಖಂಡಕ್ಕೆ ಸೇರಿಲ್ಲ ಎಂದು ಸಾಬೀತುಪಡಿಸಿತು.
೧೬೫೦ ರ ಹೊತ್ತಿಗೆ, ಡಚ್ ಕಾರ್ಟೋಗ್ರಾಫರ್ಗಳು ಖಂಡದ ಹೆಚ್ಚಿನ ಕರಾವಳಿಯನ್ನು ಮ್ಯಾಪ್ ಮಾಡಿದರು, ಅವರು ನ್ಯೂ ಹಾಲೆಂಡ್ ಎಂದು ಹೆಸರಿಸಿದರು, ಪೂರ್ವ ಕರಾವಳಿಯನ್ನು ಹೊರತುಪಡಿಸಿ ೧೭೭೦ ರಲ್ಲಿ ಜೇಮ್ಸ್ ಕುಕ್ ಅವರು ಪಟ್ಟಿ ಮಾಡಿದರು.
ದೀರ್ಘ-ಕಲ್ಪಿತ ದಕ್ಷಿಣ ಧ್ರುವ ಖಂಡವು ಅಂತಿಮವಾಗಿ ೧೮೨೦ ರಲ್ಲಿ ಕಾಣಿಸಿಕೊಂಡಿತು. ನವೋದಯದ ಉದ್ದಕ್ಕೂ ಇದನ್ನು ಟೆರ್ರಾ ಆಸ್ಟ್ರೇಲಿಸ್ ಅಥವಾ ಸಂಕ್ಷಿಪ್ತವಾಗಿ 'ಆಸ್ಟ್ರೇಲಿಯಾ' ಎಂದು ಕರೆಯಲಾಗುತ್ತಿತ್ತು. ಆದಾಗ್ಯೂ, ಹತ್ತೊಂಬತ್ತನೇ ಶತಮಾನದಲ್ಲಿ ಆ ಹೆಸರನ್ನು ನ್ಯೂ ಹಾಲೆಂಡ್ಗೆ ವರ್ಗಾಯಿಸಿದ ನಂತರ, ದಕ್ಷಿಣ ಧ್ರುವ ಖಂಡಕ್ಕೆ 'ಅಂಟಾರ್ಕ್ಟಿಕಾ' ಎಂಬ ಹೊಸ ಹೆಸರನ್ನು ನೀಡಲಾಯಿತು.<ref>{{Cite book|title=Lying for the Admiralty: Captain Cook's Endeavour Voyage|last=Cameron-Ash|first=M.|date=2018|publisher=Rosenberg|isbn=978-0-6480439-6-6|location=Sydney|pages=19–20}}</ref>
=== ಸಂಗೀತ ===
ಈ ಬದಲಾಗುತ್ತಿರುವ ಸಮಾಜದಿಂದ ಒಂದು ಸಾಮಾನ್ಯ, ಏಕೀಕರಿಸುವ ಸಂಗೀತ ಭಾಷೆ ನಿರ್ದಿಷ್ಟವಾಗಿ ಫ್ರಾಂಕೊ-ಫ್ಲೆಮಿಶ್ ಶಾಲೆಯ ಪಾಲಿಫೋನಿಕ್ ಶೈಲಿಯಲ್ಲಿ ಹೊರಹೊಮ್ಮಿತು. [[ಮುದ್ರಣ ಯಂತ್ರ|ಮುದ್ರಣದ]] ಅಭಿವೃದ್ಧಿಯು ಸಂಗೀತದ ವಿತರಣೆಯನ್ನು ವ್ಯಾಪಕ ಪ್ರಮಾಣದಲ್ಲಿ ಸಾಧ್ಯವಾಗಿಸಿತು. ಬೂರ್ಜ್ವಾ ವರ್ಗದ ಹೊರಹೊಮ್ಮುವಿಕೆಯೊಂದಿಗೆ ವಿದ್ಯಾವಂತ ಹವ್ಯಾಸಿಗಳಿಗೆ ಮನರಂಜನೆಯಾಗಿ ಮತ್ತು ಚಟುವಟಿಕೆಯಾಗಿ ಸಂಗೀತಕ್ಕೆ ಬೇಡಿಕೆ ಹೆಚ್ಚಾಯಿತು. ಯುರೋಪಿನಾದ್ಯಂತ ಚಾನ್ಸನ್ಗಳು, ಮೋಟೆಟ್ಗಳು ಮತ್ತು ಸಮೂಹಗಳ ಪ್ರಸರಣವು ಪಾಲಿಫೋನಿಕ್ ಅಭ್ಯಾಸವನ್ನು ದ್ರವ ಶೈಲಿಯಲ್ಲಿ ಏಕೀಕರಿಸುವುದರೊಂದಿಗೆ ಹೊಂದಿಕೆಯಾಯಿತು, ಇದು ಹದಿನಾರನೇ ಶತಮಾನದ ದ್ವಿತೀಯಾರ್ಧದಲ್ಲಿ ಪ್ಯಾಲೆಸ್ಟ್ರಿನಾ, ಲಾಸಸ್, ವಿಕ್ಟೋರಿಯಾ ಮತ್ತು ವಿಲಿಯಂ ಬೈರ್ಡ್ನಂತಹ ಸಂಯೋಜಕರ ಕೆಲಸದಲ್ಲಿ ಉತ್ತುಂಗಕ್ಕೇರಿತು.
=== ಧರ್ಮ ===
[[ಚಿತ್ರ:Pope_Alexander_Vi.jpg|left|thumb| ಅಲೆಕ್ಸಾಂಡರ್ VI, ಬೋರ್ಗಿಯಾ ಪೋಪ್ ತನ್ನ ಭ್ರಷ್ಟಾಚಾರಕ್ಕೆ ಕುಖ್ಯಾತ]]
ಮಾನವತಾವಾದದ ಹೊಸ ಆದರ್ಶಗಳು, ಕೆಲವು ಅಂಶಗಳಲ್ಲಿ ಹೆಚ್ಚು ಜಾತ್ಯತೀತವಾಗಿದ್ದರೂ, ಕ್ರಿಶ್ಚಿಯನ್ ಹಿನ್ನೆಲೆಯ ವಿರುದ್ಧ ವಿಶೇಷವಾಗಿ ಉತ್ತರದ ನವೋದಯದಲ್ಲಿ ಅಭಿವೃದ್ಧಿಗೊಂಡವು. ಹೆಚ್ಚಿನವು ಅಲ್ಲದಿದ್ದರೂ, ಹೊಸ ಕಲೆಯನ್ನು [[ಕ್ಯಾಥೋಲಿಕ್ ಚರ್ಚ್|ಚರ್ಚ್ನಿಂದ]] ಅಥವಾ ಸಮರ್ಪಿತವಾಗಿ ನಿಯೋಜಿಸಲಾಗಿದೆ.<ref name="openuni"/> ಆದಾಗ್ಯೂ, ನವೋದಯವು ಸಮಕಾಲೀನ [[ದೇವತಾಶಾಸ್ತ್ರ|ದೇವತಾಶಾಸ್ತ್ರದ]] ಮೇಲೆ ಆಳವಾದ ಪರಿಣಾಮವನ್ನು ಬೀರಿತು. ವಿಶೇಷವಾಗಿ ಜನರು ಮನುಷ್ಯ ಮತ್ತು ದೇವರ ನಡುವಿನ ಸಂಬಂಧವನ್ನು ಗ್ರಹಿಸಿದ ರೀತಿಯಲ್ಲಿ ಪ್ರಭಾವ ಬೀರಿತು.<ref name="openuni" /> ಎರಾಸ್ಮಸ್, ಜ್ವಿಂಗ್ಲಿ, ಥಾಮಸ್ ಮೋರ್, [[ಮಾರ್ಟಿನ್ ಲೂಥರ್]] ಮತ್ತು [[ಜಾನ್ ಕ್ಯಾಲ್ವಿನ್]] ಸೇರಿದಂತೆ ಅನೇಕ ಕಾಲದ ಪ್ರಮುಖ ದೇವತಾಶಾಸ್ತ್ರಜ್ಞರು ಮಾನವತಾವಾದಿ ವಿಧಾನದ ಅನುಯಾಯಿಗಳಾಗಿದ್ದರು.
[[ಚಿತ್ರ:Clovio_magi.jpg|thumb|ಗಿಯುಲಿಯೊ ಕ್ಲೋವಿಯೊ ಅವರಿಂದ ''ಶೆಬಾ ರಾಣಿಯಿಂದ ಆರಾಧಿಸಲ್ಪಟ್ಟ'' ''ಮ್ಯಾಗಿ ಮತ್ತು ಸೊಲೊಮನ್ನ ಆರಾಧನೆಯು'' ''ಫಾರ್ನೀಸ್ ಅವರ್ಸ್'' (೧೫೪೬) ನಿಂದ ಇಟಾಲಿಯನ್ ನವೋದಯವು ''ಇಂಡೆಕ್ಸ್ ಲಿಬ್ರೊರಮ್ ಪ್ರೊಹಿಬಿಟೋರಮ್'' ಜೊತೆಗೆ ಪ್ರಕಾಶಿತ ಹಸ್ತಪ್ರತಿಯ ಅಂತ್ಯವನ್ನು ಸೂಚಿಸುತ್ತದೆ.]]
ಧಾರ್ಮಿಕ ಪ್ರಕ್ಷುಬ್ಧತೆಯ ಕಾಲದಲ್ಲಿ ನವೋದಯ ಪ್ರಾರಂಭವಾಯಿತು. ಮಧ್ಯಯುಗಗಳ [[ಪೋಪ್|ಅಂತ್ಯವು ಪೋಪಸಿಯನ್ನು]] ಸುತ್ತುವರೆದಿರುವ ರಾಜಕೀಯ ಒಳಸಂಚುಗಳ ಅವಧಿಯಾಗಿದ್ದು, ಪಾಶ್ಚಿಮಾತ್ಯ ಭಿನ್ನಾಭಿಪ್ರಾಯದಲ್ಲಿ ಕೊನೆಗೊಂಡಿತು. ಇದರಲ್ಲಿ ಮೂವರು ಪುರುಷರು ಏಕಕಾಲದಲ್ಲಿ ರೋಮ್ನ ನಿಜವಾದ ಬಿಷಪ್ ಎಂದು ಹೇಳಿಕೊಂಡರು.<ref>[[Catholic Encyclopedia]], ''[http://www.newadvent.org/cathen/13539a.htm Western Schism]'' (Retrieved May 10, 2007)</ref> ಕೌನ್ಸಿಲ್ ಆಫ್ ಕಾನ್ಸ್ಟನ್ಸ್ (೧೪೧೪) ಮೂಲಕ ಭಿನ್ನಾಭಿಪ್ರಾಯವನ್ನು ಪರಿಹರಿಸಿದಾಗ, ಕಾನ್ಸಿಲಿಯರಿಸಂ ಎಂದು ಕರೆಯಲ್ಪಡುವ ಸುಧಾರಣಾ ಚಳವಳಿಯು ಪೋಪ್ನ ಅಧಿಕಾರವನ್ನು ಮಿತಿಗೊಳಿಸಲು ಪ್ರಯತ್ನಿಸಿತು. ಲ್ಯಾಟರನ್ನ ಐದನೇ ಕೌನ್ಸಿಲ್ (೧೫೧೧) ಮೂಲಕ ಚರ್ಚ್ ವಿಷಯಗಳಲ್ಲಿ ಅಂತಿಮವಾಗಿ ಪೋಪ್ ಅಧಿಕಾರವು ಸರ್ವೋಚ್ಚವಾಗಿ ಹೊರಹೊಮ್ಮಿದರೂ ಭ್ರಷ್ಟಾಚಾರದ ನಿರಂತರ ಆರೋಪಗಳಿಂದ ಅದು ನಲುಗಿತು, ಅತ್ಯಂತ ಪ್ರಸಿದ್ಧವಾದ ಪೋಪ್ ಅಲೆಕ್ಸಾಂಡರ್ VI ರ ವ್ಯಕ್ತಿಯಲ್ಲಿ ಸಿಮೋನಿ, ಸ್ವಜನಪಕ್ಷಪಾತ ಮತ್ತು ಪಿತೃತ್ವದ ಕಾರ್ಡಿನಲ್ ಆಗಿರುವಾಗ ಮಕ್ಕಳು (ಅವರಲ್ಲಿ ಹೆಚ್ಚಿನವರು ವಿವಾಹವಾದರು, ಪ್ರಾಯಶಃ ಅಧಿಕಾರದ ಬಲವರ್ಧನೆಗಾಗಿ) ವಿವಿಧ ಆರೋಪಗಳನ್ನು ಮಾಡಿದರು <ref>[[Catholic Encyclopedia]], ''[http://www.newadvent.org/cathen/01289a.htm Alexander VI]'' (Retrieved May 10, 2007)</ref>
ಎರಾಸ್ಮಸ್ ಮತ್ತು ಲೂಥರ್ನಂತಹ ಚರ್ಚ್ಮೆನ್ಗಳು ಚರ್ಚ್ಗೆ ಸುಧಾರಣೆಯನ್ನು ಪ್ರಸ್ತಾಪಿಸಿದರು, ಆಗಾಗ್ಗೆ [[ಹೊಸ ಒಡಂಬಡಿಕೆ|ಹೊಸ ಒಡಂಬಡಿಕೆಯ]] ಮಾನವತಾವಾದಿ [[ಗ್ರಂಥ ಸಂಪಾದನೆ|ಪಠ್ಯ ವಿಮರ್ಶೆಯನ್ನು]] ಆಧರಿಸಿದೆ.<ref name="openuni"/> ಅಕ್ಟೋಬರ್ ೧೫೧೭ ರಲ್ಲಿ ಲೂಥರ್ ''ತೊಂಬತ್ತೈದು'' ಪ್ರಬಂಧಗಳನ್ನು ಪ್ರಕಟಿಸಿದರು. ಪಾಪಲ್ ಅಧಿಕಾರವನ್ನು ಸವಾಲು ಮಾಡಿದರು ಮತ್ತು ಅದರ ಗ್ರಹಿಸಿದ ಭ್ರಷ್ಟಾಚಾರವನ್ನು ಟೀಕಿಸಿದರು, ವಿಶೇಷವಾಗಿ ಮಾರಾಟವಾದ ಭೋಗದ ನಿದರ್ಶನಗಳಿಗೆ ಸಂಬಂಧಿಸಿದಂತೆ. ೯೫ ಪ್ರಬಂಧಗಳು ಸುಧಾರಣೆಗೆ ಕಾರಣವಾಯಿತು. ಇದು ಹಿಂದೆ [[ಪಶ್ಚಿಮ ಯುರೋಪ್|ಪಶ್ಚಿಮ ಯೂರೋಪ್ನಲ್ಲಿ]] ಪ್ರಾಬಲ್ಯವನ್ನು ಹೊಂದಿದ್ದ ರೋಮನ್ ಕ್ಯಾಥೋಲಿಕ್ ಚರ್ಚ್ನೊಂದಿಗೆ ಮುರಿದುಬಿತ್ತು. ಆದ್ದರಿಂದ ಮಾನವತಾವಾದ ಮತ್ತು ನವೋದಯವು ಸುಧಾರಣೆಯನ್ನು ಹುಟ್ಟುಹಾಕುವಲ್ಲಿ ಮತ್ತು ಅನೇಕ ಇತರ ಸಮಕಾಲೀನ ಧಾರ್ಮಿಕ ಚರ್ಚೆಗಳು ಮತ್ತು ಸಂಘರ್ಷಗಳಲ್ಲಿ ನೇರವಾದ ಪಾತ್ರವನ್ನು ವಹಿಸಿದೆ.
೧೫೨೭ ರಲ್ಲಿ ರೋಮ್ ಅನ್ನು ವಜಾಗೊಳಿಸಿದ ನಂತರ ಪೋಪ್ ಪಾಲ್ III ಪೋಪ್ ಸಿಂಹಾಸನಕ್ಕೆ ಬಂದರು (೧೫೩೪-೧೫೪೯), ಪ್ರೊಟೆಸ್ಟಂಟ್ ಸುಧಾರಣೆಯ ನಂತರ ಕ್ಯಾಥೋಲಿಕ್ ಚರ್ಚ್ನಲ್ಲಿ ಅನಿಶ್ಚಿತತೆಗಳು ಪ್ರಚಲಿತವಾಗಿದ್ದವು. ನಿಕೋಲಸ್ ಕೋಪರ್ನಿಕಸ್ ಅವರು [[ಟಿಷನ್|ಟಿಟಿಯನ್]], [[ಮೈಕೆಲ್ಯಾಂಜೆಲೊ]] ಮತ್ತು ರಾಫೆಲ್ ಅವರ ವರ್ಣಚಿತ್ರಗಳನ್ನು ಹೊಂದಿದ್ದ ಅಲೆಸ್ಸಾಂಡ್ರೊ ಫರ್ನೀಸ್ ಅವರ ಅಜ್ಜನಾದ ಪಾಲ್ III ಗೆ ''ಡಿ ಕ್ರಾಂತಿಯಬಸ್ ಆರ್ಬಿಯಮ್ ಕೋಲೆಸ್ಟಿಯಮ್'' (ಆನ್ ದಿ ರೆವಲ್ಯೂಷನ್ಸ್ ಆಫ್ ದಿ ಸೆಲೆಸ್ಟಿಯಲ್ ಸ್ಪಿಯರ್ಸ್) ಅನ್ನು ಸಮರ್ಪಿಸಿದರು. ಗಿಯುಲಿಯೊ ಕ್ಲೋವಿಯೊ ಅವರ ಮೇರುಕೃತಿಯನ್ನು ನಿಯೋಜಿಸಲಾಗಿದೆ. ವಾದಯೋಗ್ಯವಾಗಿ ಕೊನೆಯ ಪ್ರಮುಖ ಪ್ರಕಾಶಿತ ಹಸ್ತಪ್ರತಿ, ''ಫರ್ನೀಸ್ ಅವರ್ಸ್''.
=== ಸ್ವಯಂ ಅರಿವು ===
[[ಚಿತ್ರ:Walker Art Gallery, Leonard Bruni.jpg|thumb|ಲಿಯೊನಾರ್ಡೊ ಬ್ರೂನಿ]]
೧೫ ನೇ ಶತಮಾನದ ವೇಳೆಗೆ, ಇಟಲಿಯಲ್ಲಿ ಬರಹಗಾರರು, ಕಲಾವಿದರು ಮತ್ತು ವಾಸ್ತುಶಿಲ್ಪಿಗಳು ನಡೆಯುತ್ತಿರುವ ರೂಪಾಂತರಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರು. ''ಮೋದಿ ಆಂಟಿಚಿ'' (ಪ್ರಾಚೀನರು ಪ್ರಾಚೀನ ರೀತಿಯಲ್ಲಿ) ಅಥವಾ ''ಅಲ್ಲೆ ರೊಮಾನಾ ಎಟ್ ಅಲ್ಲಾ ಆಂಟಿಕಾ'' (ರೋಮನ್ನರ ರೀತಿಯಲ್ಲಿ) ಅವರ ಕೆಲಸವನ್ನು ವಿವರಿಸಲು ಪದಗುಚ್ಛಗಳನ್ನು ಬಳಸುತ್ತಿದ್ದರು. ೧೩೩೦ ರ ದಶಕದಲ್ಲಿ ಪೆಟ್ರಾರ್ಕ್ ಕ್ರಿಶ್ಚಿಯನ್ ಪೂರ್ವದ ಕಾಲವನ್ನು ''ಪುರಾತನ'' (ಪ್ರಾಚೀನ) ಮತ್ತು ಕ್ರಿಶ್ಚಿಯನ್ ಅವಧಿಯನ್ನು ''ನೋವಾ'' (ಹೊಸ) ಎಂದು ಉಲ್ಲೇಖಿಸಿದ್ದಾರೆ.<ref name="mommsen">{{Cite journal|last=Mommsen|first=Theodore E.|authorlink=Theodor Ernst Mommsen|title=Petrarch's Conception of the 'Dark Ages'|url=https://archive.org/details/sim_speculum_1942-04_17_2/page/226|journal=[[Speculum (journal)|Speculum]]|volume=17|issue=2|pages=226–242|year=1942|doi=10.2307/2856364|jstor=2856364}}</ref> ಪೆಟ್ರಾಕ್ನ ಇಟಾಲಿಯನ್ ದೃಷ್ಟಿಕೋನದಿಂದ, ಈ ಹೊಸ ಅವಧಿಯು (ಅವನ ಸ್ವಂತ ಸಮಯವನ್ನು ಒಳಗೊಂಡಿತ್ತು) ರಾಷ್ಟ್ರೀಯ ಗ್ರಹಣದ ಯುಗವಾಗಿತ್ತು.<ref name="mommsen" /> ಲಿಯೊನಾರ್ಡೊ ಬ್ರೂನಿ ಅವರ ''ಹಿಸ್ಟರಿ ಆಫ್ ದಿ ಫ್ಲೋರೆಂಟೈನ್ ಪೀಪಲ್'' (೧೪೪೨) ನಲ್ಲಿ ತ್ರಿಪಕ್ಷೀಯ ಅವಧಿಯನ್ನು ಬಳಸಿದ ಮೊದಲ ವ್ಯಕ್ತಿ.<ref name="Hankins">Leonardo Bruni, James Hankins, ''History of the Florentine people'', Volume 1, Books 1–4 (2001), p. xvii.</ref> ಬ್ರೂನಿಯ ಮೊದಲ ಎರಡು ಅವಧಿಗಳು ಪೆಟ್ರಾಕ್ನ ಅವಧಿಯನ್ನು ಆಧರಿಸಿವೆ, ಆದರೆ ಅವರು ಮೂರನೇ ಅವಧಿಯನ್ನು ಸೇರಿಸಿದರು ಏಕೆಂದರೆ ಇಟಲಿಯು ಇನ್ನು ಮುಂದೆ ಅವನತಿಯ ಸ್ಥಿತಿಯಲ್ಲಿಲ್ಲ ಎಂದು ಅವರು ನಂಬಿದ್ದರು. ಫ್ಲೇವಿಯೊ ಬಯೊಂಡೋ ''ರೋಮನ್ ಸಾಮ್ರಾಜ್ಯದ ಅವನತಿಯಿಂದ (೧೪೩೯-೧೪೫೩) ದಶಕಗಳ ಇತಿಹಾಸದಲ್ಲಿ'' ಇದೇ ರೀತಿಯ ಚೌಕಟ್ಟನ್ನು ಬಳಸಿದರು.
ಮಾನವತಾವಾದಿ ಇತಿಹಾಸಕಾರರು ಸಮಕಾಲೀನ ಪಾಂಡಿತ್ಯವು ಶಾಸ್ತ್ರೀಯ ಅವಧಿಗೆ ನೇರ ಸಂಪರ್ಕಗಳನ್ನು ಪುನಃಸ್ಥಾಪಿಸುತ್ತದೆ ಎಂದು ವಾದಿಸಿದರು, ಹೀಗಾಗಿ ಮಧ್ಯಕಾಲೀನ ಅವಧಿಯನ್ನು ಬೈಪಾಸ್ ಮಾಡಿದರು. ನಂತರ ಅವರು ಮೊದಲ ಬಾರಿಗೆ "ಮಧ್ಯಯುಗ" ಎಂದು ಹೆಸರಿಸಿದರು. ಈ ಪದವು ಮೊದಲು ಲ್ಯಾಟಿನ್ ಭಾಷೆಯಲ್ಲಿ ೧೪೬೯ ರಲ್ಲಿ ''ಮಾಧ್ಯಮ ಟೆಂಪೆಸ್ಟಾಸ್'' (ಮಧ್ಯಕಾಲ) ಎಂದು ಕಾಣಿಸಿಕೊಂಡಿತು. ''ರಿನಾಸ್ಕಿಟಾ'' (ಪುನರ್ಜನ್ಮ) ಎಂಬ ಪದವು ಮೊದಲು ಕಾಣಿಸಿಕೊಂಡಿತು, ಆದಾಗ್ಯೂ, ಅದರ ವಿಶಾಲ ಅರ್ಥದಲ್ಲಿ ಜಾರ್ಜಿಯೊ ವಸಾರಿ ಅವರ ''ಲೈವ್ಸ್ ಆಫ್ ದಿ ಆರ್ಟಿಸ್ಟ್ಸ್'', ೧೫೫೦ ಪರಿಷ್ಕೃತರು ೧೫೬೮ ರಲ್ಲಿ <ref name="panofsky">[[Erwin Panofsky|Panofsky, Erwin]]. ''Renaissance and Renascences in Western Art'', New York: Harper and Row, 1960.</ref><ref>The Open University Guide to the Renaissance, ''[http://www.open.ac.uk/Arts/renaissance/defining.htm Defining the Renaissance] {{Webarchive|url=https://web.archive.org/web/20121014034252/http://www.open.ac.uk/Arts/renaissance/defining.htm |date=ಅಕ್ಟೋಬರ್ 14, 2012 }}'' (Retrieved May 10, 2007)</ref> ವಸಾರಿಯು ವಯಸ್ಸನ್ನು ಮೂರು ಹಂತಗಳಾಗಿ ವಿಭಜಿಸುತ್ತದೆ. ಮೊದಲ ಹಂತದಲ್ಲಿ ಸಿಮಾಬ್ಯೂ, ಜಿಯೊಟ್ಟೊ, ಮತ್ತು ಅರ್ನಾಲ್ಫೊ ಡಿ ಕ್ಯಾಂಬಿಯೊ ; ಎರಡನೇ ಹಂತವು ಮಸಾಸಿಯೊ, ಬ್ರೂನೆಲ್ಲೆಸ್ಚಿ ಮತ್ತು [[ಡಾನಟೆಲೊ|ಡೊನಾಟೆಲ್ಲೊಗಳನ್ನು]] ಒಳಗೊಂಡಿದೆ; ಮೂರನೆಯದು [[ಲಿಯನಾರ್ಡೊ ಡ ವಿಂಚಿ|ಲಿಯೊನಾರ್ಡೊ ಡಾ ವಿನ್ಸಿಯ]] ಮೇಲೆ ಕೇಂದ್ರೀಕರಿಸುತ್ತದೆ ಮತ್ತು [[ಮೈಕೆಲ್ಯಾಂಜೆಲೊ|ಮೈಕೆಲ್ಯಾಂಜೆಲೊನೊಂದಿಗೆ]] ಕೊನೆಗೊಳ್ಳುತ್ತದೆ. ವಸಾರಿಯವರ ಪ್ರಕಾರ ಶಾಸ್ತ್ರೀಯ ಪ್ರಾಚೀನತೆಯ ಬಗ್ಗೆ ಹೆಚ್ಚುತ್ತಿರುವ ಅರಿವು ಈ ಬೆಳವಣಿಗೆಗೆ ಕಾರಣವಾಯಿತು. ಆದರೆ ಪ್ರಕೃತಿಯನ್ನು ಅಧ್ಯಯನ ಮಾಡುವ ಮತ್ತು ಅನುಕರಿಸುವ ಬಯಕೆಯು ಬೆಳೆಯುತ್ತಿದೆ.
== ಹರಡುವಿಕೆ ==
೧೫ ನೇ ಶತಮಾನದಲ್ಲಿ, ನವೋದಯವು ತನ್ನ ಜನ್ಮಸ್ಥಳವಾದ ಫ್ಲಾರೆನ್ಸ್ನಿಂದ ಇಟಲಿಯ ಉಳಿದ ಭಾಗಗಳಿಗೆ ಮತ್ತು ಶೀಘ್ರದಲ್ಲೇ ಯುರೋಪಿನ ಉಳಿದ ಭಾಗಗಳಿಗೆ ವೇಗವಾಗಿ ಹರಡಿತು. ಜರ್ಮನ್ ಮುದ್ರಕ [[ಯೋಹಾನ್ ಗೂಟೆನ್ಬರ್ಗ್|ಜೋಹಾನ್ಸ್ ಗುಟೆನ್ಬರ್ಗ್ನಿಂದ]] [[ಮುದ್ರಣ ಯಂತ್ರ|ಮುದ್ರಣ ಯಂತ್ರದ]] ಆವಿಷ್ಕಾರವು ಈ ಹೊಸ ಆಲೋಚನೆಗಳ ತ್ವರಿತ ಪ್ರಸರಣಕ್ಕೆ ಅವಕಾಶ ಮಾಡಿಕೊಟ್ಟಿತು. ಅದು ಹರಡುತ್ತಿದ್ದಂತೆ, ಅದರ ಕಲ್ಪನೆಗಳು ವೈವಿಧ್ಯಮಯವಾಗಿವೆ ಮತ್ತು ಬದಲಾಗುತ್ತವೆ, ಸ್ಥಳೀಯ ಸಂಸ್ಕೃತಿಗೆ ಹೊಂದಿಕೊಳ್ಳುತ್ತವೆ. ೨೦ನೇ ಶತಮಾನದಲ್ಲಿ, ವಿದ್ವಾಂಸರು ಪುನರುಜ್ಜೀವನವನ್ನು ಪ್ರಾದೇಶಿಕ ಮತ್ತು ರಾಷ್ಟ್ರೀಯ ಚಳುವಳಿಗಳಾಗಿ ಒಡೆಯಲು ಪ್ರಾರಂಭಿಸಿದರು.
[[ಚಿತ್ರ:Shakespeare.jpg|thumb| "ಒಬ್ಬ ಮನುಷ್ಯನು ಎಂತಹ ಕೆಲಸ, ವಿವೇಚನೆಯಲ್ಲಿ ಎಷ್ಟು ಉದಾತ್ತ, ಅಧ್ಯಾಪಕತೆಗಳಲ್ಲಿ ಎಷ್ಟು ಅಪರಿಮಿತ, ರೂಪ ಮತ್ತು ಚಲನೆಯಲ್ಲಿ ಎಷ್ಟು ವ್ಯಕ್ತಪಡಿಸುತ್ತಾನೆ ಮತ್ತು ಶ್ಲಾಘನೀಯ, ಕ್ರಿಯೆಯಲ್ಲಿ ಹೇಗೆ ದೇವತೆಯಂತೆ, ಭಯದಲ್ಲಿ ದೇವರಂತೆ!" – [[ವಿಲಿಯಂ ಷೇಕ್ಸ್ಪಿಯರ್|ವಿಲಿಯಂ ಷೇಕ್ಸ್ಪಿಯರ್ನ]] ''[[ಹ್ಯಾಮ್ಲೆಟ್|ಹ್ಯಾಮ್ಲೆಟ್ನಿಂದ]]''.]]
=== ಇಂಗ್ಲೆಂಡ್ ===
ಇಂಗ್ಲೆಂಡಿನಲ್ಲಿ, ಹದಿನಾರನೇ ಶತಮಾನವು ಬರಹಗಾರರಾದ [[ವಿಲಿಯಂ ಷೇಕ್ಸ್ಪಿಯರ್]] (೧೫೬೪-೧೬೧೬), ಕ್ರಿಸ್ಟೋಫರ್ ಮಾರ್ಲೋ (೧೫೬೪ - ೧೫೯೩), [[ಎಡ್ಮ್ಂಡ್ ಸ್ಪೆನ್ಸರ್|ಎಡ್ಮಂಡ್ ಸ್ಪೆನ್ಸರ್]] (೧೫೫೨/೧೫೫೩ - ೧೫೯೯), ಸರ್ ಥಾಮಸ್ ಮೋರ್ (೧೪೭೮ - ೧೫೩೫) ಅವರ ಕೃತಿಗಳೊಂದಿಗೆ ಇಂಗ್ಲಿಷ್ ನವೋದಯದ ಆರಂಭವನ್ನು ಗುರುತಿಸಿತು. [[ಫ್ರಾನ್ಸಿಸ್ ಬೆಕನ್|ಫ್ರಾನ್ಸಿಸ್ ಬೇಕನ್]] (೧೫೬೧ - ೧೬೨೬), [[ಫಿಲಿಪ್ ಸಿಡ್ನಿ|ಸರ್ ಫಿಲಿಪ್ ಸಿಡ್ನಿ]] (೧೫೫೪ - ೧೫೮೬), ವಾಸ್ತುಶಿಲ್ಪಿಗಳು (ಉದಾಹರಣೆಗೆ ಇನಿಗೊ ಜೋನ್ಸ್ (೧೫೭೩ - ೧೬೫೨), ಇಟಾಲಿಯನ್ ವಾಸ್ತುಶಿಲ್ಪವನ್ನು ಇಂಗ್ಲೆಂಡ್ಗೆ ಪರಿಚಯಿಸಿದವರು) ಮತ್ತು ಸಂಯೋಜಕರು ಥಾಮಸ್ ಟ್ಯಾಲಿಸ್ (೧೫೦೫ - ೧೫೮೫) ), [[ಜಾನ್ ಟ್ಯಾವೆರ್ನರ್|ಜಾನ್ ಟಾವೆರ್ನರ್]] (ಶ. ೧೪೯೦ - ೧೫೪೫), ಮತ್ತು ವಿಲಿಯಂ ಬೈರ್ಡ್ (ಶ.೧೫೩೯/೪೦ ಅಥವಾ ೧೫೪೩ - ೧೬೨೩).
=== ಫ್ರಾನ್ಸ್ ===
[[ಚಿತ್ರ:Chateau_de_chambord.jpg|left|thumb| ಚ್ಯಾಟೊ ಡಿ ಚೇಂಬರ್ಡ್ (೧೫೧೯-೧೫೪೭), ನವೋದಯ ವಾಸ್ತುಶಿಲ್ಪದ ಅತ್ಯಂತ ಪ್ರಸಿದ್ಧ ಉದಾಹರಣೆಗಳಲ್ಲಿ ಒಂದಾಗಿದೆ.]]
"ನವೋದಯ" ಎಂಬ ಪದವನ್ನು ಫ್ರೆಂಚ್ ಭಾಷೆಯಿಂದ ಎರವಲು ಪಡೆಯಲಾಗಿದೆ. ಇದರರ್ಥ "ಪುನರ್ ಜನ್ಮ". ಇದನ್ನು ಮೊದಲು ಹದಿನೆಂಟನೇ ಶತಮಾನದಲ್ಲಿ ಬಳಸಲಾಯಿತು. ನಂತರ ಫ್ರೆಂಚ್ ಇತಿಹಾಸಕಾರ ಜೂಲ್ಸ್ ಮೈಕೆಲೆಟ್ (೧೭೯೮-೧೮೭೪) ಅವರ ೧೮೫೫ ರ ಕೃತಿಯಾದ ''ಹಿಸ್ಟೊಯಿರ್ ಡಿ ಫ್ರಾನ್ಸ್'' (ಫ್ರಾನ್ಸ್ ಇತಿಹಾಸ) ನಲ್ಲಿ ಜನಪ್ರಿಯಗೊಳಿಸಿದರು.<ref name="Michelet, Jules 1847">Michelet, Jules. ''History of France'', trans. G.H. Smith (New York: D. Appleton, 1847)</ref><ref name="Cronin2011">{{Cite book|url=https://books.google.com/books?id=aU8z-Sge6WgC|title=The Florentine Renaissance|last=Vincent Cronin|date=June 30, 2011|publisher=Random House|isbn=978-1-4464-6654-4}}</ref>
೧೪೯೫ ರಲ್ಲಿ ಇಟಾಲಿಯನ್ ನವೋದಯವು ಫ್ರಾನ್ಸ್ಗೆ ಆಗಮಿಸಿತು. ಇಟಲಿಯ ಆಕ್ರಮಣದ ನಂತರ ಕಿಂಗ್ ಚಾರ್ಲ್ಸ್ VIII ಆಮದು ಮಾಡಿಕೊಂಡರು. ಜಾತ್ಯತೀತತೆಯ ಹರಡುವಿಕೆಯನ್ನು ಉತ್ತೇಜಿಸಿದ ಅಂಶವೆಂದರೆ ಕಪ್ಪು ಸಾವಿನ ವಿರುದ್ಧ ಸಹಾಯವನ್ನು ನೀಡಲು ಚರ್ಚ್ನ ಅಸಮರ್ಥತೆ. ಫ್ರಾನ್ಸಿಸ್ I [[ಲಿಯನಾರ್ಡೊ ಡ ವಿಂಚಿ|ಲಿಯೊನಾರ್ಡೊ ಡಾ ವಿನ್ಸಿ]] ಸೇರಿದಂತೆ ಇಟಾಲಿಯನ್ ಕಲೆ ಮತ್ತು ಕಲಾವಿದರನ್ನು ಆಮದು ಮಾಡಿಕೊಂಡರು ಮತ್ತು ಹೆಚ್ಚಿನ ವೆಚ್ಚದಲ್ಲಿ ಅಲಂಕೃತ ಅರಮನೆಗಳನ್ನು ನಿರ್ಮಿಸಿದರು. ಫ್ರಾಂಕೋಯಿಸ್ ರಾಬೆಲೈಸ್, ಪಿಯರೆ ಡಿ ರೊನ್ಸಾರ್ಡ್, ಜೋಕಿಮ್ ಡು ಬೆಲ್ಲೆ ಮತ್ತು ಮೈಕೆಲ್ ಡಿ ಮೊಂಟೇಗ್ನೆ ಮುಂತಾದ ಬರಹಗಾರರು, ಜೀನ್ ಕ್ಲೌಟ್ನಂತಹ ವರ್ಣಚಿತ್ರಕಾರರು ಮತ್ತು ಜೀನ್ ಮೌಟನ್ನಂತಹ ಸಂಗೀತಗಾರರು ಸಹ ನವೋದಯದ ಉತ್ಸಾಹದಿಂದ ಎರವಲು ಪಡೆದರು.
೧೫೩೩ ರಲ್ಲಿ, ಹದಿನಾಲ್ಕು ವರ್ಷದ ಕ್ಯಾಟೆರಿನಾ ಡಿ ಮೆಡಿಸಿ (೧೫೧೯-೧೫೮೯), ಫ್ಲಾರೆನ್ಸ್ನಲ್ಲಿ ಡ್ಯೂಕ್ ಆಫ್ ಉರ್ಬಿನೊ ಮತ್ತು ಮೆಡೆಲೀನ್ ಡೆ ಲಾ ಟೂರ್ ಡಿ ಆವೆರ್ಗ್ನೆಗೆ ಲೊರೆಂಜೊ ಡಿ ಮೆಡಿಸಿ ಜನಿಸಿದರು. ಫ್ರಾನ್ಸ್ನ ಎರಡನೇ ಮಗ ಹೆನ್ರಿ II ರನ್ನು ವಿವಾಹವಾದರು. ಫ್ರಾನ್ಸಿಸ್ I ಮತ್ತು ಕ್ವೀನ್ ಕ್ಲೌಡ್. ಫ್ರಾನ್ಸ್ನ ಧಾರ್ಮಿಕ ಯುದ್ಧಗಳಲ್ಲಿನ ಪಾತ್ರಕ್ಕಾಗಿ ಅವಳು ಪ್ರಸಿದ್ಧ ಮತ್ತು ಕುಖ್ಯಾತಳಾಗಿದ್ದರೂ, ಕಲೆ, ವಿಜ್ಞಾನ ಮತ್ತು ಸಂಗೀತವನ್ನು ( ಬ್ಯಾಲೆಟ್ನ ಮೂಲವನ್ನು ಒಳಗೊಂಡಂತೆ) ತನ್ನ ಸ್ಥಳೀಯ ಫ್ಲಾರೆನ್ಸ್ನಿಂದ ಫ್ರೆಂಚ್ ನ್ಯಾಯಾಲಯಕ್ಕೆ ತರುವಲ್ಲಿ ನೇರ ಕೊಡುಗೆಯನ್ನು ನೀಡಿದಳು.
=== ಜರ್ಮನಿ ===
[[ಚಿತ್ರ:Maximilian_I,_Holy_Roman_Emperor.jpg|thumb| ''ಚಕ್ರವರ್ತಿ ಮ್ಯಾಕ್ಸಿಮಿಲಿಯನ್ I ರ ಭಾವಚಿತ್ರ,'' [[ಅಲ್ಬ್ರೆಕ್ಟ್ ಡ್ಯೂರೆರ್|ಆಲ್ಬ್ರೆಕ್ಟ್ ಡ್ಯೂರರ್]] ಅವರಿಂದ, ೧೫೧೯]]
೧೫ ನೇ ಶತಮಾನದ ದ್ವಿತೀಯಾರ್ಧದಲ್ಲಿ, ಪುನರುಜ್ಜೀವನದ ಮನೋಭಾವವು [[ಜರ್ಮನಿ]] ಮತ್ತು ತಗ್ಗು ದೇಶಗಳಿಗೆ ಹರಡಿತು. ಅಲ್ಲಿ ಪ್ರಿಂಟಿಂಗ್ ಪ್ರೆಸ್ (ಸುಮಾರು ೧೪೫೦) ಮತ್ತು ನವೋದಯ ಕಲಾವಿದರಾದ [[ಅಲ್ಬ್ರೆಕ್ಟ್ ಡ್ಯೂರೆರ್|ಆಲ್ಬ್ರೆಕ್ಟ್ ಡ್ಯೂರೆರ್]] (೧೪೭೧-೧೫೨೮) ಇಟಲಿಯಿಂದ ಪ್ರಭಾವಕ್ಕೆ ಮುಂಚೆಯೇ ಅಭಿವೃದ್ಧಿ ಹೊಂದಿತು. ದೇಶದ ಆರಂಭಿಕ ಪ್ರೊಟೆಸ್ಟಂಟ್ ಪ್ರದೇಶಗಳಲ್ಲಿ, ಪ್ರೊಟೆಸ್ಟಂಟ್ ಸುಧಾರಣೆಯ ಪ್ರಕ್ಷುಬ್ಧತೆಗೆ ಮಾನವತಾವಾದವು ನಿಕಟವಾಗಿ ಸಂಬಂಧಿಸಿದೆ. ಜರ್ಮನ್ ನವೋದಯದ ಕಲೆ ಮತ್ತು ಬರವಣಿಗೆಯು ಆಗಾಗ್ಗೆ ಈ ವಿವಾದವನ್ನು ಪ್ರತಿಬಿಂಬಿಸುತ್ತದೆ.<ref>{{Cite journal|jstor=560776|year=1965|title=The Religious Renaissance of the German Humanists|url=https://archive.org/details/sim_english-historical-review_1965-01_80_314/page/156|last=Strauss, Gerald|journal=English Historical Review|volume=80|issue=314|pages=156–157|doi=10.1093/ehr/LXXX.CCCXIV.156}}</ref> ಆದಾಗ್ಯೂ, ಗೋಥಿಕ್ ಶೈಲಿ ಮತ್ತು ಮಧ್ಯಕಾಲೀನ ಪಾಂಡಿತ್ಯಪೂರ್ಣ ತತ್ತ್ವಶಾಸ್ತ್ರವು ೧೬ ನೇ ಶತಮಾನದ ಆರಂಭದವರೆಗೂ ಪ್ರತ್ಯೇಕವಾಗಿ ಉಳಿಯಿತು. ಹ್ಯಾಬ್ಸ್ಬರ್ಗ್ನ ಚಕ್ರವರ್ತಿ ಮ್ಯಾಕ್ಸಿಮಿಲಿಯನ್ I (ಆಡಳಿತ ೧೪೯೩-೧೫೧೯) ಪವಿತ್ರ ರೋಮನ್ ಸಾಮ್ರಾಜ್ಯದ ಮೊದಲ ನಿಜವಾದ ನವೋದಯ ದೊರೆ.
=== ಹಂಗೇರಿ ===
ಇಟಲಿಯ ನಂತರ ನವೋದಯವು ಕಾಣಿಸಿಕೊಂಡ ಮೊದಲ ಯುರೋಪಿಯನ್ ದೇಶ ಹಂಗೇರಿಯಾಗಿದೆ.<ref>{{Cite book|url=https://books.google.com/books?id=l-OKuQAACAAJ|title=Italy & Hungary: Humanism and Art in the Early Renaissance|last=Louis A. Waldman|last2=Péter Farbaky|last3=Louis Alexander Waldman|publisher=Villa I Tatti|year=2011|isbn=978-0-674-06346-4}}</ref> ನವೋದಯ ಶೈಲಿಯು ಇಟಲಿಯಿಂದ ನೇರವಾಗಿ ಕ್ವಾಟ್ರೊಸೆಂಟೊದ ಸಮಯದಲ್ಲಿ ಹಂಗೇರಿಗೆ ಮಧ್ಯ ಯುರೋಪಿಯನ್ ಪ್ರದೇಶದಲ್ಲಿ ಮೊದಲ ಬಾರಿಗೆ ಬಂದಿತು. ಆರಂಭಿಕ ಹಂಗೇರಿಯನ್-ಇಟಾಲಿಯನ್ ಸಂಬಂಧಗಳ ಬೆಳವಣಿಗೆಗೆ ರಾಜವಂಶದ ಸಂಪರ್ಕಗಳಲ್ಲಿ ಮಾತ್ರವಲ್ಲದೆ ೧೪ ನೇ ಶತಮಾನದ ಸಾಂಸ್ಕೃತಿಕ, ಮಾನವೀಯ ಮತ್ತು ವಾಣಿಜ್ಯ ಸಂಬಂಧಗಳಲ್ಲಿಯೂ ಸಹ ಬಲವಾಗಿ ಬೆಳೆಯುತ್ತಿದೆ. ಹಂಗೇರಿಯನ್ ಮತ್ತು ಇಟಾಲಿಯನ್ ಗೋಥಿಕ್ ಶೈಲಿಗಳ ನಡುವಿನ ಸಂಬಂಧವು ಎರಡನೆಯ ಕಾರಣವಾಗಿತ್ತು - ಗೋಡೆಗಳ ಉತ್ಪ್ರೇಕ್ಷಿತ ಪ್ರಗತಿಯನ್ನು ತಪ್ಪಿಸಲಾಗುತ್ತದೆ. ಸ್ವಚ್ಛ ಮತ್ತು ಹಗುರವಾದ ರಚನೆಗಳಿಗೆ ಆದ್ಯತೆ ನೀಡುತ್ತದೆ. ದೊಡ್ಡ-ಪ್ರಮಾಣದ ಕಟ್ಟಡ ಯೋಜನೆಗಳು ಕಲಾವಿದರಿಗೆ ಸಾಕಷ್ಟು ಮತ್ತು ದೀರ್ಘಾವಧಿಯ ಕೆಲಸವನ್ನು ಒದಗಿಸಿದವು. ಉದಾಹರಣೆಗೆ, ಬುಡಾದಲ್ಲಿನ ಫ್ರಿಸ್ (ಹೊಸ) ಕೋಟೆಯ ಕಟ್ಟಡ, ವಿಸೆಗ್ರಾಡ್, ಟಾಟಾ ಮತ್ತು ವರ್ಪಲೋಟಾ ಕೋಟೆಗಳು. ಸಿಗಿಸ್ಮಂಡ್ನ ಆಸ್ಥಾನದಲ್ಲಿ ಫ್ಲಾರೆನ್ಸ್ನ ಸ್ಕೊಲಾರಿ ಕುಟುಂಬದ ವಂಶಸ್ಥರಾದ ಪಿಪೊ ಸ್ಪಾನೊ ಅವರಂತಹ ಪೋಷಕರು ಇದ್ದರು, ಅವರು ಮಾನೆಟ್ಟೊ ಅಮ್ಮನಾಟಿನಿ ಮತ್ತು ಮಸೊಲಿನೊ ಡಾ ಪನ್ನಿಕಾಲೆ ಅವರನ್ನು ಹಂಗೇರಿಗೆ ಆಹ್ವಾನಿಸಿದರು.
ಹೊಸ ಇಟಾಲಿಯನ್ ಪ್ರವೃತ್ತಿಯು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಸಂಪ್ರದಾಯಗಳೊಂದಿಗೆ ಒಂದು ನಿರ್ದಿಷ್ಟ ಸ್ಥಳೀಯ ನವೋದಯ ಕಲೆಯನ್ನು ರಚಿಸಲು ಸಂಯೋಜಿಸಲ್ಪಟ್ಟಿದೆ. ದೇಶದಲ್ಲಿ ಮಾನವತಾವಾದಿ ಚಿಂತನೆಯ ನಿರಂತರ ಆಗಮನದಿಂದ ನವೋದಯ ಕಲೆಯ ಸ್ವೀಕಾರವು ಮುಂದುವರೆದಿದೆ. ಇಟಾಲಿಯನ್ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ಅನೇಕ ಯುವ ಹಂಗೇರಿಯನ್ನರು ಫ್ಲಾರೆಂಟೈನ ಮಾನವತಾವಾದಿ ಕೇಂದ್ರಕ್ಕೆ ಹತ್ತಿರವಾದರು. ಆದ್ದರಿಂದ ಫ್ಲಾರೆನ್ಸ್ನೊಂದಿಗೆ ನೇರ ಸಂಪರ್ಕವು ವಿಕಸನಗೊಂಡಿತು. ಹೆಚ್ಚುತ್ತಿರುವ ಇಟಾಲಿಯನ್ ವ್ಯಾಪಾರಿಗಳು ಹಂಗೇರಿಗೆ, ವಿಶೇಷವಾಗಿ ಬುಡಾಗೆ ತೆರಳುತ್ತಿರುವುದು ಈ ಪ್ರಕ್ರಿಯೆಗೆ ಸಹಾಯ ಮಾಡಿತು. ಹೊಸ ಆಲೋಚನೆಗಳನ್ನು ಮಾನವತಾವಾದಿ ಪೀಠಾಧಿಪತಿಗಳು ನಡೆಸಿದರು, ಅವರಲ್ಲಿ ಹಂಗೇರಿಯನ್ ಮಾನವತಾವಾದದ ಸಂಸ್ಥಾಪಕರಲ್ಲಿ ಒಬ್ಬರಾದ ಎಸ್ಜೆಟರ್ಗಾಮ್ನ ಆರ್ಚ್ಬಿಷಪ್ ವಿಟೆಜ್ ಜಾನೋಸ್.<ref>{{Cite web|url=http://www.fondazione-delbianco.org/inglese/relaz00_01/mester.htm|title=the influences of the florentine renaissance in hungary|publisher=Fondazione-delbianco.org|archive-url=https://web.archive.org/web/20090321190654/http://www.fondazione-delbianco.org/inglese/relaz00_01/mester.htm|archive-date=March 21, 2009|access-date=July 31, 2009}}</ref> ಲಕ್ಸೆಂಬರ್ಗ್ನ ಚಕ್ರವರ್ತಿ ಸಿಗಿಸ್ಮಂಡ್ನ ಸುದೀರ್ಘ ಆಳ್ವಿಕೆಯಲ್ಲಿ ಬುಡಾದ ರಾಯಲ್ ಕ್ಯಾಸಲ್ ಬಹುಶಃ ಮಧ್ಯಯುಗದ ಉತ್ತರಾರ್ಧದ ಅತಿದೊಡ್ಡ ಗೋಥಿಕ್ ಅರಮನೆಯಾಗಿದೆ. ರಾಜ ಮಥಿಯಾಸ್ ಕೊರ್ವಿನಸ್ (r. ೧೪೫೮-೧೪೯೦) ಆರಂಭಿಕ ನವೋದಯ ಶೈಲಿಯಲ್ಲಿ ಅರಮನೆಯನ್ನು ಪುನರ್ನಿರ್ಮಿಸಿದನು ಮತ್ತು ಅದನ್ನು ಮತ್ತಷ್ಟು ವಿಸ್ತರಿಸಿದನು.<ref>History section: Miklós Horler: Budapest műemlékei I, Bp: 1955, pp. 259–307</ref><ref>Post-war reconstruction: László Gerő: A helyreállított budai vár, Bp, 1980, pp. 11–60.</ref>
೧೪೭೬ ರಲ್ಲಿ ಕಿಂಗ್ ಮ್ಯಾಥಿಯಾಸ್ ನೇಪಲ್ಸ್ನ ಬೀಟ್ರಿಸ್ಗೆ ಮದುವೆಯಾದ ನಂತರ ಬುಡಾ [[ಆಲ್ಪ್ಸ್|ಆಲ್ಪ್ಸ್ನ]] ಉತ್ತರದ ನವೋದಯದ ಪ್ರಮುಖ ಕಲಾತ್ಮಕ ಕೇಂದ್ರಗಳಲ್ಲಿ ಒಂದಾಯಿತು.<ref name="czigany">Czigány, Lóránt, ''A History of Hungarian Literature'', "[http://mek.oszk.hu/02000/02042/html/5.html The Renaissance in Hungary]" (Retrieved May 10, 2007)</ref> ಮಥಿಯಾಸ್ ಆಸ್ಥಾನದಲ್ಲಿ ವಾಸಿಸುತ್ತಿದ್ದ ಪ್ರಮುಖ ಮಾನವತಾವಾದಿಗಳು ಆಂಟೋನಿಯೊ ಬೊನ್ಫಿನಿ ಮತ್ತು ಪ್ರಸಿದ್ಧ ಹಂಗೇರಿಯನ್ ಕವಿ ಜಾನಸ್ ಪನ್ನೋನಿಯಸ್.<ref name="czigany" /> ಆಂಡ್ರಾಸ್ ಹೆಸ್ ೧೪೭೨ ರಲ್ಲಿ ಬುಡಾದಲ್ಲಿ ಮುದ್ರಣಾಲಯವನ್ನು ಸ್ಥಾಪಿಸಿದರು. ಮಥಿಯಾಸ್ ಕೊರ್ವಿನಸ್ ಅವರ ಗ್ರಂಥಾಲಯ, ಬಿಬ್ಲಿಯೊಥೆಕಾ ಕೊರ್ವಿನಿಯಾನಾ, ಯುರೋಪಿನ ಶ್ರೇಷ್ಠ ಜಾತ್ಯತೀತ ಪುಸ್ತಕಗಳ ಸಂಗ್ರಹವಾಗಿದೆ. ಐತಿಹಾಸಿಕ ವೃತ್ತಾಂತಗಳು, ೧೫ ನೇ ಶತಮಾನದಲ್ಲಿ ತಾತ್ವಿಕ ಮತ್ತು ವೈಜ್ಞಾನಿಕ ಕೃತಿಗಳು. ಅವರ ಗ್ರಂಥಾಲಯವು ವ್ಯಾಟಿಕನ್ ಗ್ರಂಥಾಲಯದ ಗಾತ್ರದಲ್ಲಿ ಎರಡನೆಯದು. (ಆದಾಗ್ಯೂ, ವ್ಯಾಟಿಕನ್ ಲೈಬ್ರರಿಯು ಮುಖ್ಯವಾಗಿ ಬೈಬಲ್ಗಳು ಮತ್ತು ಧಾರ್ಮಿಕ ಸಾಮಗ್ರಿಗಳನ್ನು ಒಳಗೊಂಡಿತ್ತು. ) <ref>Marcus Tanner, The Raven King: Matthias Corvinus and the Fate of his Lost Library (New Haven: Yale U.P., 2008)</ref> ೧೪೮೯ ರಲ್ಲಿ, ಲೊರೆಂಜೊ ಡಿ ಮೆಡಿಸಿ ಹಂಗೇರಿಯನ್ ರಾಜನ ಉದಾಹರಣೆಯಿಂದ ಪ್ರೋತ್ಸಾಹಿಸಲ್ಪಟ್ಟ ತನ್ನದೇ ಆದ ಗ್ರೀಕ್-ಲ್ಯಾಟಿನ್ ಗ್ರಂಥಾಲಯವನ್ನು ಸ್ಥಾಪಿಸಿದ ಎಂದು ಫ್ಲಾರೆನ್ಸ್ನ ಬಾರ್ಟೋಲೋಮಿಯೊ ಡೆಲ್ಲಾ ಫಾಂಟೆ ಬರೆದರು. ಕೊರ್ವಿನಸ್ ಗ್ರಂಥಾಲಯವು ಯುನೆಸ್ಕೋ ವಿಶ್ವ ಪರಂಪರೆಯ ಭಾಗವಾಗಿದೆ.<ref>[https://web.archive.org/web/20051105150132/http://portal.unesco.org/ci/en/ev.php-URL_ID%3D15976%26URL_DO%3DDO_TOPIC%26URL_SECTION%3D201.html Documentary heritage concerning Hungary and recommended for inclusion in the Memory of the World International Register]. portal.unesco.org</ref>
ಮಥಿಯಾಸ್ ಕನಿಷ್ಠ ಎರಡು ಪ್ರಮುಖ ಕಟ್ಟಡ ಯೋಜನೆಗಳನ್ನು ಪ್ರಾರಂಭಿಸಿದರು. {{Sfn|E. Kovács|1990|pp=177, 180–181}} ಬುಡಾ ಮತ್ತು ವಿಸೆಗ್ರಾಡ್ನಲ್ಲಿನ ಕೆಲಸಗಳು ಸುಮಾರು ೧೪೭೯ ರಲ್ಲಿ ಪ್ರಾರಂಭವಾಯಿತು. {{Sfn|Engel|2001|p=319}} ಬುಡಾದ ರಾಜ ಕೋಟೆಯಲ್ಲಿ ಎರಡು ಹೊಸ ರೆಕ್ಕೆಗಳು ಮತ್ತು ನೇತಾಡುವ ಉದ್ಯಾನವನ್ನು ನಿರ್ಮಿಸಲಾಯಿತು ಮತ್ತು ವಿಸೆಗ್ರಾಡ್ನಲ್ಲಿರುವ ಅರಮನೆಯನ್ನು ನವೋದಯ ಶೈಲಿಯಲ್ಲಿ ಪುನರ್ನಿರ್ಮಿಸಲಾಯಿತು. {{Sfn|Engel|2001|p=319}} {{Sfn|E. Kovács|1990|pp=180–181}} ಈ ಯೋಜನೆಗಳನ್ನು ನಿರ್ದೇಶಿಸಲು ಮಥಿಯಾಸ್ ಇಟಾಲಿಯನ್ ಚಿಮೆಂಟಿ ಕ್ಯಾಮಿಸಿಯಾ ಮತ್ತು ಡಾಲ್ಮೇಷಿಯನ್ ಜಿಯೋವನ್ನಿ ಡಾಲ್ಮಾಟಾ ಅವರನ್ನು ನೇಮಿಸಿದರು. {{Sfn|Engel|2001|p=319}} ಮಥಿಯಾಸ್ ತನ್ನ ವಯಸ್ಸಿನ ಪ್ರಮುಖ ಇಟಾಲಿಯನ್ ಕಲಾವಿದರನ್ನು ತನ್ನ ಅರಮನೆಗಳನ್ನು ಅಲಂಕರಿಸಲು ನಿಯೋಜಿಸಿದನು. ಉದಾಹರಣೆಗೆ, ಶಿಲ್ಪಿ ಬೆನೆಡೆಟ್ಟೊ ಡ ಮಜಾನೊ ಮತ್ತು ವರ್ಣಚಿತ್ರಕಾರರಾದ ಫಿಲಿಪ್ಪಿನೋ ಲಿಪ್ಪಿ ಮತ್ತು ಆಂಡ್ರಿಯಾ ಮಾಂಟೆಗ್ನಾ ಅವರಿಗೆ ಕೆಲಸ ಮಾಡಿದರು. {{Sfn|Kubinyi|2008|pp=171–172}} ಮಾಂಟೆಗ್ನಾ ಅವರ ಮಥಿಯಾಸ್ನ ಭಾವಚಿತ್ರದ ಪ್ರತಿ ಉಳಿದುಕೊಂಡಿದೆ. {{Sfn|Kubinyi|2008|p=172}} ದಕ್ಷಿಣದ ಗಡಿಯಲ್ಲಿ ಕೋಟೆಗಳ ಪುನರ್ನಿರ್ಮಾಣವನ್ನು ನಿರ್ದೇಶಿಸಲು ಇಟಾಲಿಯನ್ ಮಿಲಿಟರಿ ಎಂಜಿನಿಯರ್ ಅರಿಸ್ಟಾಟಲ್ ಫಿಯೊರಾವಂತಿಯನ್ನು ಮಥಿಯಾಸ್ ನೇಮಿಸಿಕೊಂಡರು. {{Sfn|E. Kovács|1990|p=181}} ಅವರು ಕೊಲೊಜ್ಸ್ವರ್, ಸ್ಜೆಡ್ ಮತ್ತು ಹುನ್ಯಾಡ್ನಲ್ಲಿ ಫ್ರಾನ್ಸಿಸ್ಕನ್ಗಳಿಗಾಗಿ ಮತ್ತು ಫೆಜೆರೆಗಿಹಾಜಾದಲ್ಲಿ ಪಾಲಿನ್ಸ್ಗಾಗಿ ಲೇಟ್ ಗೋಥಿಕ್ ಶೈಲಿಯಲ್ಲಿ ಹೊಸ ಮಠಗಳನ್ನು ನಿರ್ಮಿಸಿದರು. {{Sfn|Klaniczay|1992|p=168}} {{Sfn|Kubinyi|2008|p=183}} ೧೪೮೫ ರ ವಸಂತ ಋತುವಿನಲ್ಲಿ, [[ಲಿಯನಾರ್ಡೊ ಡ ವಿಂಚಿ|ಲಿಯೊನಾರ್ಡೊ ಡಾ ವಿನ್ಸಿ]] ಸ್ಫೋರ್ಜಾ ಪರವಾಗಿ ಹಂಗೇರಿಗೆ ರಾಜ ಮ್ಯಾಥಿಯಾಸ್ ಕೊರ್ವಿನಸ್ನನ್ನು ಭೇಟಿಯಾಗಲು ಪ್ರಯಾಣಿಸಿದರು ಮತ್ತು ಅವರು ಮಡೋನಾವನ್ನು ಚಿತ್ರಿಸಲು ನಿಯೋಜಿಸಿದರು.<ref>{{interlanguage link|Franz-Joachim Verspohl|de}}, ''Michelangelo Buonarroti und Leonardo Da Vinci: Republikanischer Alltag und Künstlerkonkurrenz in Florenz zwischen 1501 und 1505'' (Wallstein Verlag, 2007), p. 151.</ref>
ಮಥಿಯಾಸ್ ಮಾನವತಾವಾದಿಗಳ ಸಹವಾಸವನ್ನು ಆನಂದಿಸಿದರು ಮತ್ತು ಅವರೊಂದಿಗೆ ವಿವಿಧ ವಿಷಯಗಳ ಕುರಿತು ಉತ್ಸಾಹಭರಿತ ಚರ್ಚೆಗಳನ್ನು ನಡೆಸಿದರು. {{Sfn|Klaniczay|1992|p=166}} ಅವರ ಉದಾತ್ತತೆಯ ಖ್ಯಾತಿಯು ಅನೇಕ ವಿದ್ವಾಂಸರನ್ನು {{Em dash}} ಹೆಚ್ಚಾಗಿ ಇಟಾಲಿಯನ್ {{Em dash}} ಬುಡಾದಲ್ಲಿ ನೆಲೆಸಲು ಪ್ರೋತ್ಸಾಹಿಸಿತು. {{Sfn|Cartledge|2011|p=67}} ಆಂಟೋನಿಯೊ ಬೊನ್ಫಿನಿ, ಪಿಯೆಟ್ರೊ ರಾಂಜಾನೊ, ಬಾರ್ಟೊಲೊಮಿಯೊ ಫೊಂಜಿಯೊ ಮತ್ತು ಫ್ರಾನ್ಸೆಸ್ಕೊ ಬಾಂಡಿನಿ ಮಥಿಯಾಸ್ನ ಆಸ್ಥಾನದಲ್ಲಿ ಹಲವು ವರ್ಷಗಳ ಕಾಲ ಕಳೆದರು. {{Sfn|E. Kovács|1990|p=185}} {{Sfn|Klaniczay|1992|p=166}} ಈ ವಿದ್ಯಾವಂತ ಪುರುಷರ ವಲಯವು ಹಂಗೇರಿಗೆ ನಿಯೋಪ್ಲಾಟೋನಿಸಂನ ಕಲ್ಪನೆಗಳನ್ನು ಪರಿಚಯಿಸಿತು. {{Sfn|Klaniczay|1992|p=167}} {{Sfn|Engel|2001|p=321}} ತನ್ನ ವಯಸ್ಸಿನ ಎಲ್ಲಾ ಬುದ್ಧಿಜೀವಿಗಳಂತೆ, ನಕ್ಷತ್ರಗಳು ಮತ್ತು ಗ್ರಹಗಳ ಚಲನೆಗಳು ಮತ್ತು ಸಂಯೋಜನೆಗಳು ವ್ಯಕ್ತಿಗಳ ಜೀವನ ಮತ್ತು ರಾಷ್ಟ್ರಗಳ ಇತಿಹಾಸದ ಮೇಲೆ ಪ್ರಭಾವ ಬೀರುತ್ತವೆ ಎಂದು ಮಥಿಯಾಸ್ ಮನವರಿಕೆ ಮಾಡಿದರು. {{Sfn|Hendrix|2013|p=59}} ಗ್ಯಾಲಿಯೊಟ್ಟೊ ಮಾರ್ಜಿಯೊ ಅವರನ್ನು "ರಾಜ ಮತ್ತು ಜ್ಯೋತಿಷಿ" ಎಂದು ಬಣ್ಣಿಸಿದರು, ಮತ್ತು ಆಂಟೋನಿಯೊ ಬೊನ್ಫಿನಿ ಮ್ಯಾಥಿಯಾಸ್ "ನಕ್ಷತ್ರಗಳನ್ನು ಸಂಪರ್ಕಿಸದೆ ಏನನ್ನೂ ಮಾಡಲಿಲ್ಲ" ಎಂದು ಹೇಳಿದರು. {{Sfn|Hendrix|2013|pp=63, 65}} ಅವರ ಕೋರಿಕೆಯ ಮೇರೆಗೆ, ಯುಗದ ಪ್ರಸಿದ್ಧ ಖಗೋಳಶಾಸ್ತ್ರಜ್ಞರಾದ ಜೋಹಾನ್ಸ್ ರೆಜಿಯೊಮೊಂಟನಸ್ ಮತ್ತು ಮಾರ್ಸಿನ್ ಬೈಲಿಕಾ ಅವರು ಬುಡಾದಲ್ಲಿ ವೀಕ್ಷಣಾಲಯವನ್ನು ಸ್ಥಾಪಿಸಿದರು ಮತ್ತು ಅದನ್ನು ಆಸ್ಟ್ರೋಲೇಬ್ಗಳು ಮತ್ತು [[ಆಕಾಶ]] ಗೋಳಗಳೊಂದಿಗೆ ಸ್ಥಾಪಿಸಿದರು. {{Sfn|Tanner|2009|p=99}} [[ಕ್ರಿಸ್ಟೊಫರ್ ಕೊಲಂಬಸ್|ಕ್ರಿಸ್ಟೋಫರ್ ಕೊಲಂಬಸ್]] ಅವರು ಮಥಿಯಾಸ್ಗೆ ಬಳಸಿದ ನ್ಯಾವಿಗೇಷನ್ ಕುರಿತಾದ ತಮ್ಮ ಪುಸ್ತಕವನ್ನು ರೆಜಿಯೊಮೊಂಟನಸ್ ಅರ್ಪಿಸಿದರು. {{Sfn|Cartledge|2011|p=67}}
ಹಂಗೇರಿಯನ್ ಪುನರುಜ್ಜೀವನದ ಇತರ ಪ್ರಮುಖ ವ್ಯಕ್ತಿಗಳೆಂದರೆ ಬ್ಯಾಲಿಂಟ್ ಬಲಾಸ್ಸಿ (ಕವಿ), ಸೆಬೆಸ್ಟಿಯನ್ ಟಿನೋಡಿ ಲ್ಯಾಂಟೋಸ್ (ಕವಿ), ಬಾಲಿಂಟ್ ಬಕ್ಫಾರ್ಕ್ (ಸಂಯೋಜಕ ಮತ್ತು ಲುಟೆನಿಸ್ಟ್), ಮತ್ತು ಮಾಸ್ಟರ್ ಎಂಎಸ್ (ಫ್ರೆಸ್ಕೊ ಪೇಂಟರ್).
=== ಕಡಿಮೆ ದೇಶಗಳಲ್ಲಿ ನವೋದಯ ===
[[ಚಿತ್ರ:Holbein-erasmus.jpg|thumb|೧೫೨೩ ರಲ್ಲಿ ರೋಟರ್ಡ್ಯಾಮ್ನ ಎರಾಸ್ಮಸ್, ಹ್ಯಾನ್ಸ್ ಹೋಲ್ಬೀನ್ ದಿ ಯಂಗರ್ನಿಂದ ಚಿತ್ರಿಸಲಾಗಿದೆ]]
೧೫ ನೇ ಶತಮಾನದ ಕೊನೆಯಲ್ಲಿ ನೆದರ್ಲ್ಯಾಂಡ್ಸ್ನಲ್ಲಿನ ಸಂಸ್ಕೃತಿಯು ಬ್ರೂಗ್ಸ್ ಮೂಲಕ ವ್ಯಾಪಾರದ ಮೂಲಕ ಇಟಾಲಿಯನ್ ನವೋದಯದಿಂದ ಪ್ರಭಾವಿತವಾಯಿತು. ಇದು ಫ್ಲಾಂಡರ್ಸ್ ಅನ್ನು ಶ್ರೀಮಂತರನ್ನಾಗಿ ಮಾಡಿತು. ಅದರ ಗಣ್ಯರು ಯುರೋಪಿನಾದ್ಯಂತ ಪ್ರಸಿದ್ಧರಾದ ಕಲಾವಿದರನ್ನು ನಿಯೋಜಿಸಿದರು.<ref name="Heughebaert">{{Cite book|title=Artistieke opvoeding|last=Heughebaert|first=H.|last2=Defoort, A.|last3=Van Der Donck, R.|publisher=Den Gulden Engel bvba.|year=1998|isbn=978-90-5035-222-2|location=Wommelgem, Belgium}}</ref> ವಿಜ್ಞಾನದಲ್ಲಿ, [[ಅಂಗರಚನಾವಿಜ್ಞಾನ|ಅಂಗರಚನಾಶಾಸ್ತ್ರಜ್ಞ]] ಆಂಡ್ರಿಯಾಸ್ ವೆಸಾಲಿಯಸ್ ದಾರಿ ತೋರಿದರು. ಕಾರ್ಟೋಗ್ರಫಿಯಲ್ಲಿ, ಗೆರಾರ್ಡಸ್ ಮರ್ಕೇಟರ್ ನ ನಕ್ಷೆಯು ಅನ್ವೇಷಕರು ಮತ್ತು ನ್ಯಾವಿಗೇಟರ್ಗಳಿಗೆ ಸಹಾಯ ಮಾಡಿತು. ಕಲೆಯಲ್ಲಿ, ಡಚ್ ಮತ್ತು ಫ್ಲೆಮಿಶ್ ಪುನರುಜ್ಜೀವನದ ವರ್ಣಚಿತ್ರವು ಹೈರೋನಿಮಸ್ ಬಾಷ್ <ref name="Janson">{{Cite book|url=http://www.abramsbooks.com|title=History of Art|last=Janson|first=H.W.|last2=Janson, Anthony F.|publisher=[[Harry N. Abrams, Inc.]]|year=1997|isbn=978-0-8109-3442-9|edition=5th, rev.|location=New York}}</ref> ನ ವಿಚಿತ್ರ ಕೆಲಸದಿಂದ ಹಿಡಿದು ಪೀಟರ್ ಬ್ರೂಗಲ್ ದಿ ಎಲ್ಡರ್ ಅವರ ದೈನಂದಿನ ಜೀವನ ಚಿತ್ರಣಗಳವರೆಗೆ ಇರುತ್ತದೆ.<ref name="Heughebaert" />
=== ಉತ್ತರ ಯುರೋಪ್ ===
ಉತ್ತರ ಯುರೋಪ್ನಲ್ಲಿನ ಪುನರುಜ್ಜೀವನವನ್ನು "ಉತ್ತರ ಪುನರುಜ್ಜೀವನ" ಎಂದು ಕರೆಯಲಾಗುತ್ತದೆ. ನವೋದಯ ಕಲ್ಪನೆಗಳು ಇಟಲಿಯಿಂದ ಉತ್ತರಕ್ಕೆ ಚಲಿಸುತ್ತಿರುವಾಗ, ಕೆಲವು ನವೀನ ಕ್ಷೇತ್ರಗಳ ವಿಶೇಷವಾಗಿ ಸಂಗೀತದಲ್ಲಿ ಏಕಕಾಲದಲ್ಲಿ ದಕ್ಷಿಣಕ್ಕೆ ಹರಡಿತು.<ref name="musical-quarterly">{{Cite journal|last=Láng, Paul Henry|jstor=738699|title=The So Called Netherlands Schools|url=https://archive.org/details/sim_musical-quarterly_1939-01_25_1/page/48|journal=The Musical Quarterly|volume=25|issue=1|year=1939|pages=48–59|doi=10.1093/mq/xxv.1.48}}</ref> ೧೫ ನೇ ಶತಮಾನದ ಬರ್ಗುಂಡಿಯನ್ ಶಾಲೆಯ ಸಂಗೀತವು ಸಂಗೀತದಲ್ಲಿ ಪುನರುಜ್ಜೀವನದ ಆರಂಭವನ್ನು ವ್ಯಾಖ್ಯಾನಿಸಿತು, ಮತ್ತು ನೆದರ್ಲ್ಯಾಂಡ್ನವರ ಪಾಲಿಫೋನಿ, ಇದು ಸಂಗೀತಗಾರರೊಂದಿಗೆ ಸ್ವತಃ ಇಟಲಿಗೆ ಸ್ಥಳಾಂತರಗೊಂಡಾಗ, ಪ್ರಮಾಣೀಕರಣದ ನಂತರ [[ಸಂಗೀತ|ಸಂಗೀತದಲ್ಲಿ]] ಮೊದಲ ನಿಜವಾದ ಅಂತರರಾಷ್ಟ್ರೀಯ ಶೈಲಿಯ ತಿರುಳನ್ನು ರೂಪಿಸಿತು. ೯ ನೇ ಶತಮಾನದಲ್ಲಿ ಗ್ರೆಗೋರಿಯನ್ ಚಾಂಟ್.<ref name="musical-quarterly" /> ನೆದರ್ಲ್ಯಾಂಡ್ ಶಾಲೆಯ ಪರಾಕಾಷ್ಠೆಯು ಇಟಾಲಿಯನ್ ಸಂಯೋಜಕ ಪ್ಯಾಲೆಸ್ಟ್ರೀನಾ ಅವರ ಸಂಗೀತದಲ್ಲಿದೆ. ೧೬ ನೇ ಶತಮಾನದ ಕೊನೆಯಲ್ಲಿ ಇಟಲಿಯು ವೆನೆಷಿಯನ್ ಶಾಲೆಯ ಬಹುವಿಧದ ಶೈಲಿಯ ಅಭಿವೃದ್ಧಿಯೊಂದಿಗೆ ಮತ್ತೆ ಸಂಗೀತದ ನಾವೀನ್ಯತೆಯ ಕೇಂದ್ರವಾಯಿತು. ಇದು ೧೬೦೦ ರ ಸುಮಾರಿಗೆ ಜರ್ಮನಿಗೆ ಉತ್ತರಕ್ಕೆ ಹರಡಿತು.
ಇಟಾಲಿಯನ್ ನವೋದಯದ ವರ್ಣಚಿತ್ರಗಳು ಉತ್ತರದ ನವೋದಯದಿಂದ ಭಿನ್ನವಾಗಿವೆ. ಇಟಾಲಿಯನ್ ನವೋದಯ ಕಲಾವಿದರು ಮಧ್ಯಕಾಲೀನ ವರ್ಣಚಿತ್ರಕಾರರ ಸಂಪೂರ್ಣವಾಗಿ ಧಾರ್ಮಿಕ ಕಲೆಯಿಂದ ದೂರವಿದ್ದು, ಜಾತ್ಯತೀತ ದೃಶ್ಯಗಳನ್ನು ಚಿತ್ರಿಸಿದವರಲ್ಲಿ ಮೊದಲಿಗರಾಗಿದ್ದರು. ಉತ್ತರದ ನವೋದಯ ಕಲಾವಿದರು ಆರಂಭದಲ್ಲಿ ಧಾರ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸಿದರು, ಉದಾಹರಣೆಗೆ [[ಅಲ್ಬ್ರೆಕ್ಟ್ ಡ್ಯೂರೆರ್|ಆಲ್ಬ್ರೆಕ್ಟ್ ಡ್ಯೂರರ್]] ಚಿತ್ರಿಸಿದ ಸಮಕಾಲೀನ ಧಾರ್ಮಿಕ ಕ್ರಾಂತಿ. ನಂತರ, ಪೀಟರ್ ಬ್ರೂಗೆಲ್ ಅವರ ಕೃತಿಗಳು ಧಾರ್ಮಿಕ ಅಥವಾ ಶಾಸ್ತ್ರೀಯ ವಿಷಯಗಳಿಗಿಂತ ಹೆಚ್ಚಾಗಿ ದೈನಂದಿನ ಜೀವನದ ದೃಶ್ಯಗಳನ್ನು ಚಿತ್ರಿಸಲು ಕಲಾವಿದರನ್ನು ಪ್ರಭಾವಿಸಿತು. ಉತ್ತರದ ಪುನರುಜ್ಜೀವನದ ಸಮಯದಲ್ಲಿ ಫ್ಲೆಮಿಶ್ ಸಹೋದರರಾದ ಹಬರ್ಟ್ ಮತ್ತು ಜಾನ್ ವ್ಯಾನ್ ಐಕ್ [[ಎಣ್ಣೆ ಚಿತ್ರಕಲೆ|ತೈಲ ವರ್ಣಚಿತ್ರ]] ತಂತ್ರವನ್ನು ಪರಿಪೂರ್ಣಗೊಳಿಸಿದರು. ಇದು ಶತಮಾನಗಳವರೆಗೆ ಬದುಕಬಲ್ಲ ಗಟ್ಟಿಯಾದ ಮೇಲ್ಮೈಯಲ್ಲಿ ಬಲವಾದ ಬಣ್ಣಗಳನ್ನು ಉತ್ಪಾದಿಸಲು ಕಲಾವಿದರಿಗೆ ಅನುವು ಮಾಡಿಕೊಟ್ಟಿತು.<ref>''[http://www.metmuseum.org/toah/hd/optg/hd_optg.htm Painting in Oil in the Low Countries and Its Spread to Southern Europe]'', [[Metropolitan Museum of Art]] website. (Retrieved April 5, 2007)</ref> ಉತ್ತರದ ಪುನರುಜ್ಜೀವನದ ವೈಶಿಷ್ಟ್ಯವೆಂದರೆ ಲ್ಯಾಟಿನ್ ಅಥವಾ ಗ್ರೀಕ್ ಬದಲಿಗೆ ಸ್ಥಳೀಯ ಭಾಷೆಯ ಬಳಕೆಯಾಗಿದೆ, ಇದು ಹೆಚ್ಚಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಮತಿಸಿತು. ಈ ಆಂದೋಲನವು ಇಟಲಿಯಲ್ಲಿ ಸ್ಥಳೀಯ ಭಾಷೆಗಳ ಬೆಳವಣಿಗೆಯ ಮೇಲೆ ಡಾಂಟೆ ಅಲಿಘೇರಿಯ ನಿರ್ಣಾಯಕ ಪ್ರಭಾವದಿಂದ ಪ್ರಾರಂಭವಾಯಿತು; ವಾಸ್ತವವಾಗಿ ಇಟಾಲಿಯನ್ ಭಾಷೆಯಲ್ಲಿ ಬರೆಯುವ ಗಮನವು ಲ್ಯಾಟಿನ್ ಭಾಷೆಯಲ್ಲಿ ವ್ಯಕ್ತಪಡಿಸಿದ ಫ್ಲೋರೆಂಟೈನ್ ವಿಚಾರಗಳ ಪ್ರಮುಖ ಮೂಲವನ್ನು ನಿರ್ಲಕ್ಷಿಸಿದೆ.<ref>Celenza, Christopher (2004), ''The Lost Italian Renaissance: Humanists, Historians, and Latin's Legacy''. Baltimore, Johns Hopkins University Press</ref> ಪ್ರಿಂಟಿಂಗ್ ಪ್ರೆಸ್ ತಂತ್ರಜ್ಞಾನದ ಹರಡುವಿಕೆಯು ಉತ್ತರ ಯುರೋಪ್ನಲ್ಲಿ ಇತರೆಡೆಗಳಂತೆ ನವೋದಯವನ್ನು ಉತ್ತೇಜಿಸಿತು, ವೆನಿಸ್ ಮುದ್ರಣದ ವಿಶ್ವ ಕೇಂದ್ರವಾಯಿತು.
=== ಪೋಲೆಂಡ್ ===
<div class="thumb tmulti tright"><div class="thumbinner multiimageinner" style="width:283px;max-width:283px"><div class="trow"><div class="tsingle" style="width:127px;max-width:127px"><div class="thumbimage">[[File:Wawel-kaplica1.jpg|alt=Sigismund Chapel|199x199px]]</div></div><div class="tsingle" style="width:152px;max-width:152px"><div class="thumbimage">[[File:Nagrobek_Zygmunta_Starego_i_Zygmunta_Augusta.jpg|alt=Tombstone|200x200px]]</div></div></div><div class="trow" style="display:flex"><div class="thumbcaption"> ಪೋಲೆಂಡ್ನ ಕ್ರಾಕೋವ್ನಲ್ಲಿರುವ ಸಿಗಿಸ್ಮಂಡ್ ಚಾಪೆಲ್ನಲ್ಲಿರುವ ಪೋಲಿಷ್ ರಾಜರ ೧೬ ನೇ ಶತಮಾನದ ನವೋದಯ ಸಮಾಧಿಯ ಕಲ್ಲು. ಗೋಲ್ಡನ್-ಗುಮ್ಮಟದ ಪ್ರಾರ್ಥನಾ ಮಂದಿರವನ್ನು ಬಾರ್ಟೊಲೊಮಿಯೊ ಬೆರೆಕ್ಕಿ ವಿನ್ಯಾಸಗೊಳಿಸಿದ್ದಾರೆ.</div></div></div></div>೧೫ ನೇ ಶತಮಾನದ ಮಧ್ಯಭಾಗದಲ್ಲಿ ಪೋಲೆಂಡ್ಗೆ ಬಂದ ಆರಂಭಿಕ ಇಟಾಲಿಯನ್ ಮಾನವತಾವಾದಿ ಫಿಲಿಪ್ಪೋ ಬುನಾಕೊರ್ಸಿ. ೧೫೧೮ <ref>[http://en.poland.gov.pl/Bona,Sforza,%281494,%E2%80%93,1557%29,1958.html Bona Sforza (1494–1557)] {{Webarchive|url=https://web.archive.org/web/20140506203103/http://en.poland.gov.pl/Bona,Sforza,(1494,%E2%80%93,1557),1958.html |date=ಮೇ 6, 2014 }}. poland.gov.pl (Retrieved April 4, 2007)</ref> ಕಿಂಗ್ ಸಿಗಿಸ್ಮಂಡ್ I ರನ್ನು ವಿವಾಹವಾದಾಗ ಮಿಲನ್ನ ಬೋನಾ ಸ್ಫೋರ್ಜಾ ಅವರೊಂದಿಗೆ ಅನೇಕ ಇಟಾಲಿಯನ್ ಕಲಾವಿದರು ಪೋಲೆಂಡ್ಗೆ ಬಂದರು. ಇದನ್ನು ಎರಡೂ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಬಲಪಡಿಸಿದ ರಾಜಪ್ರಭುತ್ವಗಳು ಮತ್ತು ಹೊಸದಾಗಿ ಸ್ಥಾಪಿಸಲಾದ ವಿಶ್ವವಿದ್ಯಾಲಯಗಳು ಬೆಂಬಲಿಸಿದವು. ಪೋಲಿಷ್ ನವೋದಯವು ೧೫ ನೇ ಶತಮಾನದ ಉತ್ತರಾರ್ಧದಿಂದ ೧೬ ನೇ ಶತಮಾನದ ಅಂತ್ಯದವರೆಗೆ ನಡೆಯಿತು ಮತ್ತು ಪೋಲಿಷ್ ಸಂಸ್ಕೃತಿಯ ಸುವರ್ಣಯುಗವಾಗಿತ್ತು. ಜಾಗಿಲೋನಿಯನ್ ರಾಜವಂಶದಿಂದ ಆಳಲ್ಪಟ್ಟ ಪೋಲೆಂಡ್ ಸಾಮ್ರಾಜ್ಯ (೧೫೬೯ ರಿಂದ ಪೋಲಿಷ್-ಲಿಥುವೇನಿಯನ್ ಕಾಮನ್ವೆಲ್ತ್ ಎಂದು ಕರೆಯಲ್ಪಡುತ್ತದೆ) ವಿಶಾಲ ಯುರೋಪಿಯನ್ ನವೋದಯದಲ್ಲಿ ಸಕ್ರಿಯವಾಗಿ ಭಾಗವಹಿಸಿತು. ಬಹು-ರಾಷ್ಟ್ರೀಯ ಪೋಲಿಷ್ ರಾಜ್ಯವು ಸಾಂಸ್ಕೃತಿಕ ಬೆಳವಣಿಗೆಯ ಗಣನೀಯ ಅವಧಿಯನ್ನು ಅನುಭವಿಸಿತು, ಒಂದು ಶತಮಾನದವರೆಗೆ ಪ್ರಮುಖ ಯುದ್ಧಗಳಿಲ್ಲದೆ - ವಿರಳ ಜನಸಂಖ್ಯೆಯ ಪೂರ್ವ ಮತ್ತು ದಕ್ಷಿಣದ ಗಡಿಪ್ರದೇಶಗಳಲ್ಲಿನ ಘರ್ಷಣೆಗಳನ್ನು ಹೊರತುಪಡಿಸಿ. ಸುಧಾರಣೆಯು ದೇಶದಾದ್ಯಂತ ಶಾಂತಿಯುತವಾಗಿ ಹರಡಿತು ( ಪೋಲಿಷ್ ಸಹೋದರರನ್ನು ಹುಟ್ಟುಹಾಕಿತು). ಆದರೆ ಜೀವನ ಪರಿಸ್ಥಿತಿಗಳು ಸುಧಾರಿಸಿದವು, ನಗರಗಳು ಬೆಳೆದವು ಮತ್ತು ಕೃಷಿ ಉತ್ಪನ್ನಗಳ ರಫ್ತು ಜನಸಂಖ್ಯೆಯನ್ನು ಶ್ರೀಮಂತಗೊಳಿಸಿತು, ವಿಶೇಷವಾಗಿ ಗೋಲ್ಡನ್ ಲಿಬರ್ಟಿಯ ಹೊಸ ರಾಜಕೀಯ ವ್ಯವಸ್ಥೆಯಲ್ಲಿ ಪ್ರಾಬಲ್ಯವನ್ನು ಗಳಿಸಿದ ಶ್ರೀಮಂತರು ( ''ಸ್ಜ್ಲಾಚ್ಟಾ'' ).. ಪೋಲಿಷ್ ನವೋದಯ ವಾಸ್ತುಶಿಲ್ಪವು ಮೂರು ಅವಧಿಗಳ ಅಭಿವೃದ್ಧಿಯನ್ನು ಹೊಂದಿದೆ.
ಹಿಂದಿನ ಡಚಿ ಆಫ್ ಪೊಮೆರೇನಿಯಾದ ಪ್ರದೇಶದಲ್ಲಿ ಈ ಶೈಲಿಯ ಶ್ರೇಷ್ಠ ಸ್ಮಾರಕವೆಂದರೆ ಸ್ಜೆಸಿನ್ನಲ್ಲಿರುವ ಡ್ಯುಕಲ್ ಕ್ಯಾಸಲ್.
=== ಪೋರ್ಚುಗಲ್ ===
ಇಟಾಲಿಯನ್ ನವೋದಯವು ಪೋರ್ಚುಗೀಸ್ ಕಲೆಗಳಲ್ಲಿ ಸಾಧಾರಣ ಪ್ರಭಾವವನ್ನು ಹೊಂದಿದ್ದರೂ, ಯುರೋಪಿಯನ್ ವಿಶ್ವ ದೃಷ್ಟಿಕೋನವನ್ನು ವಿಸ್ತರಿಸುವಲ್ಲಿ ಪೋರ್ಚುಗಲ್ ಪ್ರಭಾವಶಾಲಿಯಾಗಿದೆ,<ref>{{Cite web|url=http://www.brown.edu/Facilities/John_Carter_Brown_Library/Portugal/Overseas.html|title=Portuguese Overseas Travels and European Readers|last=University|first=Brown, The John Carter Brown Library|website=Portugal and Renaissance Europe|publisher=JCB Exhibitions|access-date=July 19, 2011|archive-date=ಜೂನ್ 12, 2010|archive-url=https://web.archive.org/web/20100612133657/http://www.brown.edu/Facilities/John_Carter_Brown_Library/Portugal/Overseas.html|url-status=dead}}</ref> ಮಾನವತಾವಾದಿ ವಿಚಾರಣೆಯನ್ನು ಉತ್ತೇಜಿಸಿತು. ನವೋದಯವು ಶ್ರೀಮಂತ ಇಟಾಲಿಯನ್ ಮತ್ತು ಫ್ಲೆಮಿಶ್ ವ್ಯಾಪಾರಿಗಳ ಪ್ರಭಾವದ ಮೂಲಕ ಆಗಮಿಸಿತು, ಅವರು ಸಾಗರೋತ್ತರ ಲಾಭದಾಯಕ ವಾಣಿಜ್ಯದಲ್ಲಿ ಹೂಡಿಕೆ ಮಾಡಿದರು. ಯುರೋಪಿಯನ್ ಪರಿಶೋಧನೆಯ ಪ್ರವರ್ತಕ ಪ್ರಧಾನ ಕಛೇರಿಯಾಗಿ, [[ಲಿಸ್ಬನ್]] ೧೫ ನೇ ಶತಮಾನದ ಅಂತ್ಯದಲ್ಲಿ ಪ್ರವರ್ಧಮಾನಕ್ಕೆ ಬಂದಿತು, ಪೆಡ್ರೊ ನ್ಯೂನ್ಸ್, ಜೊವೊ ಡಿ ಕ್ಯಾಸ್ಟ್ರೊ, ಅಬ್ರಹಾಂ ಝಾಕುಟೊ ಮತ್ತು ಮಾರ್ಟಿನ್ ಬೆಹೈಮ್ ಸೇರಿದಂತೆ ಗಣಿತ, ಖಗೋಳಶಾಸ್ತ್ರ ಮತ್ತು ನೌಕಾ ತಂತ್ರಜ್ಞಾನದಲ್ಲಿ ಹಲವಾರು ಪ್ರಗತಿಯನ್ನು ಮಾಡಿದ ತಜ್ಞರನ್ನು ಆಕರ್ಷಿಸಿತು. ಕಾರ್ಟೋಗ್ರಾಫರ್ಗಳಾದ ಪೆಡ್ರೊ ರೀನೆಲ್, ಲೋಪೊ ಹೋಮೆಮ್, ಎಸ್ಟೇವೊ ಗೋಮ್ಸ್ ಮತ್ತು ಡಿಯೊಗೊ ರಿಬೇರೊ ಅವರು ಪ್ರಪಂಚದ ಮ್ಯಾಪಿಂಗ್ನಲ್ಲಿ ನಿರ್ಣಾಯಕ ಪ್ರಗತಿಯನ್ನು ಸಾಧಿಸಿದ್ದಾರೆ. ಅಪೊಥೆಕರಿ ಟೊಮೆ ಪೈರ್ಸ್ ಮತ್ತು ವೈದ್ಯರು ಗಾರ್ಸಿಯಾ ಡಿ ಒರ್ಟಾ ಮತ್ತು ಕ್ರಿಸ್ಟೋವೊ ಡಾ ಕೋಸ್ಟಾ ಅವರು ಸಸ್ಯಗಳು ಮತ್ತು ಔಷಧಿಗಳ ಮೇಲಿನ ಕೃತಿಗಳನ್ನು ಸಂಗ್ರಹಿಸಿ ಪ್ರಕಟಿಸಿದರು, ಶೀಘ್ರದಲ್ಲೇ ಫ್ಲೆಮಿಶ್ ಪ್ರವರ್ತಕ ಸಸ್ಯಶಾಸ್ತ್ರಜ್ಞ ಕ್ಯಾರೊಲಸ್ ಕ್ಲೂಸಿಯಸ್ ಅನುವಾದಿಸಿದರು.
[[ಚಿತ್ರ:São_Pedro_(c._1529)_-_Grão_Vasco_(Museu_Nacional_Grão_Vasco).png|left|thumb| ''ಸಾವೊ ಪೆಡ್ರೊ ಪಾಪಾ'', ೧೫೩೦–೧೫೩೫, ಗ್ರೊ ವಾಸ್ಕೋ ಫೆರ್ನಾಂಡಿಸ್ ಅವರಿಂದ. ಪೋರ್ಚುಗೀಸ್ ಪುನರುಜ್ಜೀವನವು ಸಾಕಷ್ಟು ಬಾಹ್ಯ ಪ್ರಭಾವವನ್ನು ಹೊಂದಿದ್ದಾಗ ಒಂದು ಪಿನಾಕಲ್ ತುಣುಕು.]]
ವಾಸ್ತುಶಿಲ್ಪದಲ್ಲಿ, [[ಸ್ಪೈಸ್ ಟ್ರೇಡ್|ಮಸಾಲೆ ವ್ಯಾಪಾರದ]] ಬೃಹತ್ ಲಾಭವು ೧೬ ನೇ ಶತಮಾನದ ಮೊದಲ ದಶಕಗಳಲ್ಲಿ ಮ್ಯಾನ್ಯುಲೈನ್ ಸಮುದ್ರದ ಅಂಶಗಳನ್ನು ಒಳಗೊಂಡಿರುವ ಒಂದು ಅದ್ದೂರಿ ಸಂಯೋಜಿತ ಶೈಲಿಗೆ ಹಣಕಾಸು ಒದಗಿಸಿತು.<ref>{{Cite book|url=https://books.google.com/books?id=VOb4hIp7EE8C&pg=PP1|title=Encyclopedia of the Renaissance and the Reformation|publisher=Infobase Publishing|year=2004|isbn=978-0-8160-5451-0|editor-last=Bergin|editor-first=Thomas G.|editor-link=Thomas G. Bergin|editor-last2=Speake|editor-first2=Jennifer|editor-link2=Jennifer Speake}}</ref> ಪ್ರಾಥಮಿಕ ವರ್ಣಚಿತ್ರಕಾರರು ನುನೊ ಗೊನ್ಸಾಲ್ವೆಸ್, ಗ್ರೆಗೊರಿಯೊ ಲೋಪೆಸ್ ಮತ್ತು ವಾಸ್ಕೋ ಫೆರ್ನಾಂಡಿಸ್. ಸಂಗೀತದಲ್ಲಿ, ಪೆಡ್ರೊ ಡಿ ಎಸ್ಕೋಬಾರ್ ಮತ್ತು ಡುವಾರ್ಟೆ ಲೋಬೊ ನಾಲ್ಕು ಹಾಡುಪುಸ್ತಕಗಳನ್ನು ನಿರ್ಮಿಸಿದರು, ಇದರಲ್ಲಿ ಕ್ಯಾನ್ಸಿಯೊನೈರೊ ಡಿ ಎಲ್ವಾಸ್. ಸಾಹಿತ್ಯದಲ್ಲಿ,ಸಾ ಡಿ ಮಿರಾಂಡಾ ಪದ್ಯದ ಇಟಾಲಿಯನ್ ರೂಪಗಳನ್ನು ಪರಿಚಯಿಸಿದರು. ಬರ್ನಾರ್ಡಿಮ್ ರಿಬೇರೊ ಗ್ರಾಮೀಣ ಪ್ರಣಯವನ್ನು ಅಭಿವೃದ್ಧಿಪಡಿಸಿದರು. ಗಿಲ್ ವಿಸೆಂಟೆಯ ನಾಟಕಗಳು ಅದನ್ನು ಜನಪ್ರಿಯ ಸಂಸ್ಕೃತಿಯೊಂದಿಗೆ ಬೆಸೆಯುತ್ತವೆ. ಬದಲಾಗುತ್ತಿರುವ ಸಮಯವನ್ನು ವರದಿ ಮಾಡುತ್ತವೆ ಮತ್ತು [[ಲೂಯಿಸ್ ಡ ಕಮೋಯೆನ್ಜ್|ಲೂಯಿಸ್ ಡಿ ಕ್ಯಾಮೊಸ್]] ಸಾಗರೋತ್ತರ ಪೋರ್ಚುಗೀಸ್ ಸಾಹಸಗಳನ್ನು ಮಹಾಕಾವ್ಯದ ''ಓಸ್ ಲೂಸಿಯಾದಾಸ್ನಲ್ಲಿ ಕೆತ್ತಿದ್ದಾರೆ''. [[ಪ್ರವಾಸ ಸಾಹಿತ್ಯ|ಪ್ರವಾಸ ಸಾಹಿತ್ಯವು]] ವಿಶೇಷವಾಗಿ ಪ್ರವರ್ಧಮಾನಕ್ಕೆ ಬಂದಿತು. ಜೊವೊ ಡಿ ಬ್ಯಾರೊಸ್, ಕ್ಯಾಸ್ಟಾನ್ಹೆಡಾ, ಆಂಟೋನಿಯೊ ಗಾಲ್ವಾವೊ, ಗ್ಯಾಸ್ಪರ್ ಕೊರೆಯಾ, ಡುವಾರ್ಟೆ ಬಾರ್ಬೋಸಾ ಮತ್ತು ಫೆರ್ನಾವೊ ಮೆಂಡೆಸ್ ಪಿಂಟೊ, ಇತರರಲ್ಲಿ ಹೊಸ ಭೂಮಿಯನ್ನು ವಿವರಿಸಿದರು ಮತ್ತು ಹೊಸ ಮುದ್ರಣಾಲಯದೊಂದಿಗೆ ಭಾಷಾಂತರಿಸಿದರು ಮತ್ತು ಹರಡಿದರು.<ref name="JCBL">{{Cite web|url=http://www.brown.edu/Facilities/John_Carter_Brown_Library/Portugal/Overseas.html|title=Portuguese Overseas Travels and European Readers|last=University|first=Brown, The John Carter Brown Library|website=Portugal and Renaissance Europe|publisher=JCB Exhibitions|access-date=July 19, 2011|archive-date=ಜೂನ್ 12, 2010|archive-url=https://web.archive.org/web/20100612133657/http://www.brown.edu/Facilities/John_Carter_Brown_Library/Portugal/Overseas.html|url-status=dead}}<cite class="citation web cs1" data-ve-ignore="true" id="CITEREFUniversity">University, Brown, The John Carter Brown Library. [http://www.brown.edu/Facilities/John_Carter_Brown_Library/Portugal/Overseas.html "Portuguese Overseas Travels and European Readers"] {{Webarchive|url=https://web.archive.org/web/20100612133657/http://www.brown.edu/Facilities/John_Carter_Brown_Library/Portugal/Overseas.html |date=2010-06-12 }}. ''Portugal and Renaissance Europe''. JCB Exhibitions<span class="reference-accessdate">. Retrieved <span class="nowrap">July 19,</span> 2011</span>.</cite></ref> ೧೫೦೦ ರಲ್ಲಿ ಬ್ರೆಜಿಲ್ನ ಪೋರ್ಚುಗೀಸ್ ಪರಿಶೋಧನೆಗೆ ಸೇರಿದ ನಂತರ, [[ಅಮೇರಿಗೊ ವೆಸ್ಪುಚಿ|ಅಮೆರಿಗೊ ವೆಸ್ಪುಸಿ]] ಅವರು ಲೊರೆಂಜೊ ಡಿ ಪಿಯರ್ಫ್ರಾನ್ಸ್ಕೊ ಡಿ ಮೆಡಿಸಿಗೆ ಬರೆದ ಪತ್ರಗಳಲ್ಲಿ ನ್ಯೂ ವರ್ಲ್ಡ್ <ref name="Bergin">{{Cite book|url=https://books.google.com/books?id=VOb4hIp7EE8C&pg=PP490|title=Encyclopedia of the Renaissance and the Reformation|last=Bergin|first=Speake, Jennifer and Thomas G.|publisher=Infobase Publishing|year=2004|isbn=978-0-8160-5451-0|page=490}}</ref> ಪದವನ್ನು ಸೃಷ್ಟಿಸಿದರು.
ತೀವ್ರವಾದ ಅಂತರಾಷ್ಟ್ರೀಯ ವಿನಿಮಯವು ಹಲವಾರು ಕಾಸ್ಮೋಪಾಲಿಟನ್ ಮಾನವತಾವಾದಿ ವಿದ್ವಾಂಸರನ್ನು ತಯಾರಿಸಿತು. ಇದರಲ್ಲಿ ಫ್ರಾನ್ಸಿಸ್ಕೊ ಡೆ ಹೊಲಾಂಡಾ, ಆಂಡ್ರೆ ಡಿ ರೆಸೆಂಡೆ ಮತ್ತು ಡಾಮಿಯೊ ಡಿ ಗೊಯಿಸ್, ಎರಾಸ್ಮಸ್ನ ಸ್ನೇಹಿತ ಕಿಂಗ್ ಮ್ಯಾನುಯೆಲ್ I ರ ಆಳ್ವಿಕೆಯಲ್ಲಿ ಅಪರೂಪದ ಸ್ವಾತಂತ್ರ್ಯದೊಂದಿಗೆ ಬರೆದರು. ಡಿಯೊಗೊ ಮತ್ತು ಆಂಡ್ರೆ ಡಿ ಗೌವಿಯಾ ಫ್ರಾನ್ಸ್ ಮೂಲಕ ಸಂಬಂಧಿತ ಬೋಧನಾ ಸುಧಾರಣೆಗಳನ್ನು ಮಾಡಿದರು. [[ಆಂಟ್ವರ್ಪ್|ಆಂಟ್ವರ್ಪ್ನಲ್ಲಿರುವ]] ಪೋರ್ಚುಗೀಸ್ ಕಾರ್ಖಾನೆಯಲ್ಲಿನ ವಿದೇಶಿ ಸುದ್ದಿಗಳು ಮತ್ತು ಉತ್ಪನ್ನಗಳು ಥಾಮಸ್ ಮೋರ್ <ref name="Bietenholz">{{Cite book|url=https://books.google.com/books?id=hruQ386SfFcC&pg=RA1-PA22|title=Contemporaries of Erasmus: a biographical register of the Renaissance and Reformation, Volumes 1–3|last=Bietenholz|first=Peter G.|last2=Deutscher|first2=Thomas Brian|publisher=University of Toronto Press|year=2003|isbn=978-0-8020-8577-1|page=22}}</ref> ಮತ್ತು ಆಲ್ಬ್ರೆಕ್ಟ್ ಡ್ಯೂರರ್ರ ಆಸಕ್ತಿಯನ್ನು ವಿಶಾಲ ಜಗತ್ತಿನಲ್ಲಿ ಆಕರ್ಷಿಸಿದವು.<ref>{{Cite book|url=https://books.google.com/books?id=hhE3sPY78s0C&pg=PA6|title=Asia in the making of Europe: A century of wonder. The literary arts. The scholarly disciplines|last=Lach|first=Donald Frederick|year=1994|isbn=978-0-226-46733-7|edition=University of Chicago Press, 1994|access-date=July 15, 2011}}</ref> ಅಲ್ಲಿ, ಲಾಭಗಳು ಮತ್ತು ಜ್ಞಾನವು ಡಚ್ ನವೋದಯ ಮತ್ತು ಸುವರ್ಣ ಯುಗವನ್ನು ಪೋಷಿಸಲು ಸಹಾಯ ಮಾಡಿತು. ವಿಶೇಷವಾಗಿ ಪೋರ್ಚುಗಲ್ನಿಂದ ಹೊರಹಾಕಲ್ಪಟ್ಟ ಶ್ರೀಮಂತ ಸುಸಂಸ್ಕೃತ ಯಹೂದಿ ಸಮುದಾಯದ ಆಗಮನದ ನಂತರ.
=== ರಷ್ಯಾ ===
ಪದದ ಮೂಲ ಅರ್ಥದಲ್ಲಿ ರಷ್ಯಾದಲ್ಲಿ ನವೋದಯ ಇರಲಿಲ್ಲ.<ref>[[Gary Saul Morson]]: Russian Literature article of the Encyclopedia Britannica LINK:</ref>
[[ಚಿತ್ರ:MoscowKremlin_FacetsPalace_S22.jpg|thumb|ಮಾಸ್ಕೋ ಕ್ರೆಮ್ಲಿನ್ನ ಕ್ಯಾಥೆಡ್ರಲ್ ಚೌಕದಲ್ಲಿರುವ ಪ್ಯಾಲೇಸ್ ಆಫ್ ಫೆಸೆಟ್ಸ್]]
[[ಚಿತ್ರ:Karp_Zolotaryov_Theotokos_Late_17th_century.jpg|thumb| ''ಥಿಯೋಟೊಕೋಸ್ ಮತ್ತು [[ಯೇಸು ಕ್ರಿಸ್ತ|ದಿ ಚೈಲ್ಡ್]]'', ಕಾರ್ಪ್ ಝೊಲೊಟಾರಿಯೊವ್ ಅವರ ೧೭ ನೇ ಶತಮಾನದ ಉತ್ತರಾರ್ಧದ ರಷ್ಯನ್ ಐಕಾನ್, ಮುಖಗಳು ಮತ್ತು ಬಟ್ಟೆಗಳ ವಾಸ್ತವಿಕ ಚಿತ್ರಣದೊಂದಿಗೆ.]]
ಇಟಲಿ ಮತ್ತು ಮಧ್ಯ ಯುರೋಪಿನ ನವೋದಯ ಪ್ರವೃತ್ತಿಗಳು ರಷ್ಯಾವನ್ನು ಹಲವು ವಿಧಗಳಲ್ಲಿ ಪ್ರಭಾವಿಸಿದವು. ಆದಾಗ್ಯೂ, ರಷ್ಯಾ ಮತ್ತು ಪ್ರಮುಖ ಯುರೋಪಿಯನ್ ಸಾಂಸ್ಕೃತಿಕ ಕೇಂದ್ರಗಳ ನಡುವಿನ ದೊಡ್ಡ ಅಂತರ ಮತ್ತು ರಷ್ಯನ್ನರು ತಮ್ಮ ಸಾಂಪ್ರದಾಯಿಕ ಸಂಪ್ರದಾಯಗಳು ಮತ್ತು ಬೈಜಾಂಟೈನ್ ಪರಂಪರೆಗೆ ಬಲವಾದ ಅನುಸರಣೆಯಿಂದಾಗಿ ಅವರ ಪ್ರಭಾವವು ಸೀಮಿತವಾಗಿತ್ತು.
ಪ್ರಿನ್ಸ್ ಇವಾನ್ III [[ಇಟಲಿ|ಇಟಲಿಯಿಂದ]] ಹಲವಾರು ವಾಸ್ತುಶಿಲ್ಪಿಗಳನ್ನು ಆಹ್ವಾನಿಸುವ ಮೂಲಕ [[ರಷ್ಯಾ|ರಷ್ಯಾಕ್ಕೆ]] ನವೋದಯ ವಾಸ್ತುಶಿಲ್ಪವನ್ನು ಪರಿಚಯಿಸಿದರು. ಅವರು ಹೊಸ ನಿರ್ಮಾಣ ತಂತ್ರಗಳನ್ನು ಮತ್ತು ಕೆಲವು ನವೋದಯ ಶೈಲಿಯ ಅಂಶಗಳನ್ನು ತಮ್ಮೊಂದಿಗೆ ತಂದರು, ಸಾಮಾನ್ಯವಾಗಿ ರಷ್ಯಾದ ವಾಸ್ತುಶಿಲ್ಪದ ಸಾಂಪ್ರದಾಯಿಕ ವಿನ್ಯಾಸಗಳನ್ನು ಅನುಸರಿಸುತ್ತಾರೆ. ೧೪೭೫ ರಲ್ಲಿ ಬೊಲೊಗ್ನೀಸ್ ವಾಸ್ತುಶಿಲ್ಪಿ ಅರಿಸ್ಟಾಟೆಲ್ ಫಿಯೊರಾವಂತಿ ಭೂಕಂಪದಲ್ಲಿ ಹಾನಿಗೊಳಗಾದ ಮಾಸ್ಕೋ ಕ್ರೆಮ್ಲಿನ್ನಲ್ಲಿರುವ ಕ್ಯಾಥೆಡ್ರಲ್ ಆಫ್ ಡಾರ್ಮಿಷನ್ ಅನ್ನು ಪುನರ್ನಿರ್ಮಿಸಲು ಬಂದರು. ಫಿಯೊರಾವಂತಿಗೆ ೧೨ ನೇ ಶತಮಾನದ ವ್ಲಾಡಿಮಿರ್ ಕ್ಯಾಥೆಡ್ರಲ್ ಅನ್ನು ಮಾದರಿಯಾಗಿ ನೀಡಲಾಯಿತು. ಮತ್ತು ಅವರು ವಿಶಾಲತೆ, ಪ್ರಮಾಣ ಮತ್ತು ಸಮ್ಮಿತಿಯ ನವೋದಯ ಪ್ರಜ್ಞೆಯೊಂದಿಗೆ ಸಾಂಪ್ರದಾಯಿಕ ರಷ್ಯನ್ ಶೈಲಿಯನ್ನು ಸಂಯೋಜಿಸುವ ವಿನ್ಯಾಸವನ್ನು ನಿರ್ಮಿಸಿದರು.
೧೪೮೫ ರಲ್ಲಿ ಇವಾನ್ III ಕ್ರೆಮ್ಲಿನ್ನಲ್ಲಿ ರಾಜಮನೆತನದ ಟೆರೆಮ್ ಪ್ಯಾಲೇಸ್ನ ಕಟ್ಟಡವನ್ನು ನಿಯೋಜಿಸಿದನು. ಅಲೋಸಿಯೊ ಡಾ ಮಿಲಾನೊ ಮೊದಲ ಮೂರು ಮಹಡಿಗಳ ವಾಸ್ತುಶಿಲ್ಪಿ. ಅವರು ಮತ್ತು ಇತರ ಇಟಾಲಿಯನ್ ವಾಸ್ತುಶಿಲ್ಪಿಗಳು ಕ್ರೆಮ್ಲಿನ್ ಗೋಡೆಗಳು ಮತ್ತು ಗೋಪುರಗಳ ನಿರ್ಮಾಣಕ್ಕೆ ಕೊಡುಗೆ ನೀಡಿದರು. ರಷ್ಯಾದ ತ್ಸಾರ್ಗಳ ಸಣ್ಣ ಔತಣಕೂಟ ಸಭಾಂಗಣವನ್ನು ಪ್ಯಾಲೇಸ್ ಆಫ್ ಫ್ಯಾಸೆಟ್ಸ್ ಎಂದು ಕರೆಯಲಾಗುತ್ತದೆ. ಏಕೆಂದರೆ ಅದರ ಮುಖದ ಮೇಲಿನ ಕಥೆಯು ಮಾರ್ಕೊ ರುಫೊ ಮತ್ತು ಪಿಯೆಟ್ರೊ ಸೊಲಾರಿಯೊ ಎಂಬ ಇಬ್ಬರು ಇಟಾಲಿಯನ್ನರ ಕೆಲಸವಾಗಿದೆ ಮತ್ತು ಹೆಚ್ಚು ಇಟಾಲಿಯನ್ ಶೈಲಿಯನ್ನು ತೋರಿಸುತ್ತದೆ. ೧೫೦೫ ರಲ್ಲಿ, ರಷ್ಯಾದಲ್ಲಿ ಅಲೆವಿಜ್ ನೋವಿ ಅಥವಾ ಅಲೆವಿಜ್ ಫ್ರಯಾಜಿನ್ ಎಂದು ಕರೆಯಲ್ಪಡುವ ಇಟಾಲಿಯನ್ ಮಾಸ್ಕೋಗೆ ಬಂದರು. ಅವನು ವೆನೆಷಿಯನ್ ಶಿಲ್ಪಿ ಅಲೆವಿಸಿಯೊ ಲ್ಯಾಂಬರ್ಟಿ ಡ ಮೊಂಟೇನ್ ಆಗಿರಬಹುದು. ಅವರು ಇವಾನ್ III ಗಾಗಿ ಹನ್ನೆರಡು ಚರ್ಚುಗಳನ್ನು ನಿರ್ಮಿಸಿದರು, ಇದರಲ್ಲಿ ಕ್ಯಾಥೆಡ್ರಲ್ ಆಫ್ ದಿ ಆರ್ಚಾಂಗೆಲ್, ರಷ್ಯಾದ ಸಂಪ್ರದಾಯ, ಸಾಂಪ್ರದಾಯಿಕ ಅವಶ್ಯಕತೆಗಳು ಮತ್ತು ನವೋದಯ ಶೈಲಿಯ ಯಶಸ್ವಿ ಮಿಶ್ರಣಕ್ಕೆ ಗಮನಾರ್ಹವಾದ ಕಟ್ಟಡವಾಗಿದೆ. ಅಲೆವಿಜ್ ನೊವಿಯ ಮತ್ತೊಂದು ಕೃತಿಯಾದ ವೈಸೊಕೊಪೆಟ್ರೋವ್ಸ್ಕಿ ಮೊನಾಸ್ಟರಿಯಲ್ಲಿರುವ ಮೆಟ್ರೋಪಾಲಿಟನ್ ಪೀಟರ್ ಕ್ಯಾಥೆಡ್ರಲ್ ನಂತರ ೧೭ ನೇ ಶತಮಾನದ ಉತ್ತರಾರ್ಧದ ಮಾಸ್ಕೋ ಬರೊಕ್ನಲ್ಲಿ ''ಆಕ್ಟಾಗನ್-ಆನ್-ಟೆಟ್ರಾಗನ್'' ಆರ್ಕಿಟೆಕ್ಚರಲ್ ರೂಪಕ್ಕೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸಿತು ಎಂದು ನಂಬಲಾಗಿದೆ.
೧೬ ನೇ ಶತಮಾನದ ಆರಂಭ ಮತ್ತು ೧೭ ನೇ ಶತಮಾನದ ಅಂತ್ಯದ ನಡುವೆ, ರಷ್ಯಾದಲ್ಲಿ ಕಲ್ಲಿನ ಟೆಂಟ್ ಛಾವಣಿಯ ವಾಸ್ತುಶಿಲ್ಪದ ಮೂಲ ಸಂಪ್ರದಾಯವನ್ನು ಅಭಿವೃದ್ಧಿಪಡಿಸಲಾಯಿತು. ಇದು ಯುರೋಪಿನ ಬೇರೆಡೆ ಸಮಕಾಲೀನ ನವೋದಯ ವಾಸ್ತುಶೈಲಿಯಿಂದ ಸಾಕಷ್ಟು ವಿಶಿಷ್ಟವಾಗಿದೆ ಮತ್ತು ವಿಭಿನ್ನವಾಗಿದೆ, ಆದರೂ ಕೆಲವು ಸಂಶೋಧನೆಯು 'ರಷ್ಯನ್ ಗೋಥಿಕ್' ಶೈಲಿಯನ್ನು ಉಲ್ಲೇಖಿಸುತ್ತದೆ ಮತ್ತು ಹಿಂದಿನ ಅವಧಿಯ ಯುರೋಪಿಯನ್ ಗೋಥಿಕ್ ವಾಸ್ತುಶಿಲ್ಪದೊಂದಿಗೆ ಹೋಲಿಸುತ್ತದೆ. ಇಟಾಲಿಯನ್ನರು, ತಮ್ಮ ಮುಂದುವರಿದ ತಂತ್ರಜ್ಞಾನದೊಂದಿಗೆ, ಕಲ್ಲಿನ ಟೆಂಟ್ ಛಾವಣಿಯ ಆವಿಷ್ಕಾರದ ಮೇಲೆ ಪ್ರಭಾವ ಬೀರಿರಬಹುದು (ಮರದ ಡೇರೆಗಳು ರಷ್ಯಾ ಮತ್ತು ಯುರೋಪ್ನಲ್ಲಿ ಬಹಳ ಹಿಂದೆಯೇ ತಿಳಿದಿದ್ದವು). ಒಂದು ಊಹೆಯ ಪ್ರಕಾರ, ಪೆಟ್ರೋಕ್ ಮಾಲಿ ಎಂಬ ಇಟಾಲಿಯನ್ ವಾಸ್ತುಶಿಲ್ಪಿ ಕೊಲೊಮೆನ್ಸ್ಕೊಯ್ನಲ್ಲಿರುವ ಅಸೆನ್ಶನ್ ಚರ್ಚ್ನ ಲೇಖಕರಾಗಿರಬಹುದು. ಇದು ಆರಂಭಿಕ ಮತ್ತು ಪ್ರಮುಖವಾದ ಟೆಂಟ್ ರೂಫ್ ಚರ್ಚುಗಳಲ್ಲಿ ಒಂದಾಗಿದೆ.
೧೭ ನೇ ಶತಮಾನದ ವೇಳೆಗೆ ನವೋದಯ ವರ್ಣಚಿತ್ರದ ಪ್ರಭಾವವು ರಷ್ಯಾದ ಐಕಾನ್ಗಳು ಸ್ವಲ್ಪ ಹೆಚ್ಚು ವಾಸ್ತವಿಕವಾಗಲು ಕಾರಣವಾಯಿತು, ಆದರೆ ಇನ್ನೂ ಹೆಚ್ಚಿನ ಹಳೆಯ ಐಕಾನ್ ಪೇಂಟಿಂಗ್ ನಿಯಮಗಳ ಪ್ರಕಾರ, ಬೊಗ್ಡಾನ್ ಸಾಲ್ಟಾನೋವ್, ಸೈಮನ್ ಉಶಕೋವ್, ಗುರಿ ನಿಕಿಟಿನ್, ಕಾರ್ಪ್ ಜೊಲೊಟರಿಯೊವ್ ಮತ್ತು ಇತರ ರಷ್ಯನ್ ಕೃತಿಗಳಲ್ಲಿ ಕಂಡುಬರುತ್ತದೆ. ಯುಗದ ಕಲಾವಿದರು. ಕ್ರಮೇಣ ಹೊಸ ಪ್ರಕಾರದ ಸೆಕ್ಯುಲರ್ ಭಾವಚಿತ್ರ ಚಿತ್ರಕಲೆ ಕಾಣಿಸಿಕೊಂಡಿತು, ಇದನ್ನು ''ಪಾರ್ಸುನಾ'' ("ವ್ಯಕ್ತಿ" - ವ್ಯಕ್ತಿಯಿಂದ) ಎಂದು ಕರೆಯಲಾಯಿತು, ಇದು ಅಮೂರ್ತ ಪ್ರತಿಮಾಶಾಸ್ತ್ರ ಮತ್ತು ನೈಜ ವರ್ಣಚಿತ್ರಗಳ ನಡುವಿನ ಪರಿವರ್ತನೆಯ ಶೈಲಿಯಾಗಿದೆ.
೧೬ ನೇ ಶತಮಾನದ ಮಧ್ಯದಲ್ಲಿ ರಷ್ಯನ್ನರು ಮಧ್ಯ ಯುರೋಪ್ನಿಂದ [[ಮುದ್ರಣ|ಮುದ್ರಣವನ್ನು]] ಅಳವಡಿಸಿಕೊಂಡರು, ಇವಾನ್ ಫ್ಯೋಡೋರೊವ್ ಮೊದಲ ರಷ್ಯಾದ ಮುದ್ರಕರಾಗಿದ್ದಾರೆ. ೧೭ ನೇ ಶತಮಾನದಲ್ಲಿ ಮುದ್ರಣವು ವ್ಯಾಪಕವಾಗಿ ಹರಡಿತು ಮತ್ತು ಮರಗೆಲಸಗಳು ವಿಶೇಷವಾಗಿ ಜನಪ್ರಿಯವಾಯಿತು. ಅದು ಲುಬೊಕ್ ಪ್ರಿಂಟಿಂಗ್ ಎಂದು ಕರೆಯಲ್ಪಡುವ ಜಾನಪದ ಕಲೆಯ ವಿಶೇಷ ರೂಪದ ಬೆಳವಣಿಗೆಗೆ ಕಾರಣವಾಯಿತು. ಇದು ರಷ್ಯಾದಲ್ಲಿ ೧೯ ನೇ ಶತಮಾನದವರೆಗೂ ಮುಂದುವರೆಯಿತು.
ಯುರೋಪಿಯನ್ ನವೋದಯ ಅವಧಿಯ ಹಲವಾರು ತಂತ್ರಜ್ಞಾನಗಳನ್ನು ರಷ್ಯಾವು ಮುಂಚೆಯೇ ಅಳವಡಿಸಿಕೊಂಡಿತು ಮತ್ತು ನಂತರ ಬಲವಾದ ದೇಶೀಯ ಸಂಪ್ರದಾಯದ ಭಾಗವಾಗಲು ಪರಿಪೂರ್ಣವಾಯಿತು. ಹೆಚ್ಚಾಗಿ ಇವುಗಳು ಮಿಲಿಟರಿ ತಂತ್ರಜ್ಞಾನಗಳಾಗಿದ್ದು, ಕನಿಷ್ಠ ೧೫ ನೇ ಶತಮಾನದಲ್ಲಿ ಅಳವಡಿಸಿಕೊಂಡ [[ಫಿರಂಗಿ]] ಎರಕದಂತಹವು. ಕ್ಯಾಲಿಬರ್ ಪ್ರಕಾರ ವಿಶ್ವದ ಅತಿದೊಡ್ಡ ಬಾಂಬ್ ಸ್ಫೋಟವಾಗಿರುವ ತ್ಸಾರ್ ಕ್ಯಾನನ್ ರಷ್ಯಾದ ಫಿರಂಗಿ ತಯಾರಿಕೆಯ ಮೇರುಕೃತಿಯಾಗಿದೆ. ಇದನ್ನು ೧೫೮೬ ರಲ್ಲಿ ಆಂಡ್ರೆ ಚೋಕೊವ್ ಅವರು ಬಿತ್ತರಿಸಿದರು ಮತ್ತು ಅದರ ಶ್ರೀಮಂತ, ಅಲಂಕಾರಿಕ ಪರಿಹಾರಕ್ಕಾಗಿ ಗಮನಾರ್ಹವಾಗಿದೆ. ಮತ್ತೊಂದು ತಂತ್ರಜ್ಞಾನ, ಒಂದು ಊಹೆಯ ಪ್ರಕಾರ ಮೂಲತಃ ಇಟಾಲಿಯನ್ನರು ಯುರೋಪ್ನಿಂದ ತಂದರು, ಇದು ರಷ್ಯಾದ ರಾಷ್ಟ್ರೀಯ ಪಾನೀಯವಾದ ವೋಡ್ಕಾವನ್ನು ಅಭಿವೃದ್ಧಿಪಡಿಸಲು ಕಾರಣವಾಯಿತು. ೧೩೮೬ ರಷ್ಟು ಹಿಂದೆಯೇ ಜಿನೋಯಿಸ್ ರಾಯಭಾರಿಗಳು [[ಮಾಸ್ಕೋ|ಮಾಸ್ಕೋಗೆ]] ಮೊದಲ ಆಕ್ವಾ ವಿಟೇ ("ಜೀವನದ ನೀರು") ಅನ್ನು ತಂದರು ಮತ್ತು ಅದನ್ನು ಗ್ರ್ಯಾಂಡ್ ಡ್ಯೂಕ್ ಡಿಮಿಟ್ರಿ ಡಾನ್ಸ್ಕೊಯ್ಗೆ ನೀಡಿದರು. [[ದ್ರಾಕ್ಷಿ|ದ್ರಾಕ್ಷಿಯನ್ನು]] [[ಆಲ್ಕೋಹಾಲ್]] ಆಗಿ ಪರಿವರ್ತಿಸಲು ಅರಬ್ -ಆವಿಷ್ಕರಿಸಿದ ಬಟ್ಟಿ ಇಳಿಸುವ ಉಪಕರಣವನ್ನು ಬಳಸಿದ ಪ್ರೊವೆನ್ಸ್ನ [[ರಸವಿದ್ಯೆ|ಆಲ್ಕೆಮಿಸ್ಟ್ಗಳ]] ಸಹಾಯದಿಂದ [[ಈಥೈಲ್ ಆಲ್ಕೋಹಾಲ್|ಜಿನೋಯೀಸ್]] ಬಹುಶಃ ಈ ಪಾನೀಯವನ್ನು ಅಭಿವೃದ್ಧಿಪಡಿಸಿದ್ದಾರೆ. ಇಸಿಡೋರ್ ಎಂಬ ಮಾಸ್ಕೋವೈಟ್ ಸನ್ಯಾಸಿ ಈ ತಂತ್ರಜ್ಞಾನವನ್ನು ಮೊದಲ ಮೂಲ ರಷ್ಯನ್ ವೋಡ್ಕಾವನ್ನು ಉತ್ಪಾದಿಸಲು ಬಳಸಿದರು. 1430.<ref name="pohlebkin_history">{{Cite book|url=http://vkus.narod.ru/vodka/vodka_00.htm|title=The history of vodka / История водки|last=[[Pokhlebkin|Pokhlebkin V.V.]] / Похлёбкин В.В.|publisher=Tsentrpoligraph / Центрполиграф|year=2007|isbn=978-5-9524-1895-0|location=Moscow|page=272}}</ref>
=== ಸ್ಪೇನ್ ===
[[ಚಿತ್ರ:Vista_aerea_del_Monasterio_de_El_Escorial.jpg|right|thumb| ದಿ ರಾಯಲ್ ಮೊನಾಸ್ಟರಿ ಆಫ್ ಸ್ಯಾನ್ ಲೊರೆಂಜೊ ಡೆಲ್ ಎಸ್ಕೊರಿಯಲ್, ಜುವಾನ್ ಡಿ ಹೆರೆರಾ ಮತ್ತು ಜುವಾನ್ ಬಟಿಸ್ಟಾ ಡಿ ಟೊಲೆಡೊ ಅವರಿಂದ]]
ನವೋದಯವು ಅರಗೊನೀಸ್ ಕ್ರೌನ್ ಮತ್ತು ವೇಲೆನ್ಸಿಯಾ ನಗರದ ಮೆಡಿಟರೇನಿಯನ್ ಆಸ್ತಿಗಳ ಮೂಲಕ ಐಬೇರಿಯನ್ ಪರ್ಯಾಯ ದ್ವೀಪಕ್ಕೆ ಆಗಮಿಸಿತು. ಅನೇಕ ಆರಂಭಿಕ ಸ್ಪ್ಯಾನಿಷ್ ನವೋದಯ ಬರಹಗಾರರು ಆಸಿಯಸ್ ಮಾರ್ಚ್ ಮತ್ತು ಜೋನೋಟ್ ಮಾರ್ಟೊರೆಲ್ ಸೇರಿದಂತೆ ಅರಾಗೊನ್ ಸಾಮ್ರಾಜ್ಯದಿಂದ ಬಂದವರು. ಕ್ಯಾಸ್ಟೈಲ್ ಸಾಮ್ರಾಜ್ಯದಲ್ಲಿ, ಆರಂಭಿಕ ನವೋದಯವು ಇಟಾಲಿಯನ್ ಮಾನವತಾವಾದದಿಂದ ಹೆಚ್ಚು ಪ್ರಭಾವಿತವಾಗಿತ್ತು. ೧೫ ನೇ ಶತಮಾನದ ಆರಂಭದಲ್ಲಿ ಸ್ಪೇನ್ಗೆ ಹೊಸ ಇಟಾಲಿಯನ್ ಕಾವ್ಯವನ್ನು ಪರಿಚಯಿಸಿದ ಮಾರ್ಕ್ವಿಸ್ ಆಫ್ ಸ್ಯಾಂಟಿಲಾನಾ ಅವರಂತಹ ಬರಹಗಾರರು ಮತ್ತು ಕವಿಗಳಿಂದ ಪ್ರಾರಂಭವಾಯಿತು. ಜಾರ್ಜ್ ಮನ್ರಿಕ್, ಫರ್ನಾಂಡೋ ಡಿ ರೋಜಾಸ್, ಜುವಾನ್ ಡೆಲ್ ಎನ್ಸಿನಾ, ಜುವಾನ್ ಬೋಸ್ಕಾನ್ ಅಲ್ಮೊಗಾವರ್ ಮತ್ತು ಗಾರ್ಸಿಲಾಸೊ ಡೆ ಲಾ ವೇಗಾ ಮುಂತಾದ ಇತರ ಬರಹಗಾರರು ಇಟಾಲಿಯನ್ ಕ್ಯಾನನ್ಗೆ ನಿಕಟ ಹೋಲಿಕೆಯನ್ನು ಹೊಂದಿದ್ದಾರೆ. ಮಿಗುಯೆಲ್ ಡಿ ಸರ್ವಾಂಟೆಸ್ ಅವರ [[ಮೇರುಕೃತಿ]] ''ಡಾನ್ ಕ್ವಿಕ್ಸೋಟ್'' ಮೊದಲ ಪಾಶ್ಚಿಮಾತ್ಯ ಕಾದಂಬರಿ ಎಂದು ಮನ್ನಣೆ ಪಡೆದಿದೆ. ನವೋದಯ ಮಾನವತಾವಾದವು ೧೬ ನೇ ಶತಮಾನದ ಆರಂಭದಲ್ಲಿ ಪ್ರವರ್ಧಮಾನಕ್ಕೆ ಬಂದಿತು, ತತ್ವಜ್ಞಾನಿ ಜುವಾನ್ ಲೂಯಿಸ್ ವೈವ್ಸ್, ವ್ಯಾಕರಣಕಾರ ಆಂಟೋನಿಯೊ ಡಿ ನೆಬ್ರಿಜಾ ಮತ್ತು ನೈಸರ್ಗಿಕ ಇತಿಹಾಸಕಾರ ಪೆಡ್ರೊ ಡಿ ಮೆಕ್ಸಿಯಾ ಅವರಂತಹ ಪ್ರಭಾವಶಾಲಿ ಬರಹಗಾರರು.
ನಂತರ ಸ್ಪ್ಯಾನಿಷ್ ನವೋದಯವು ಧಾರ್ಮಿಕ ವಿಷಯಗಳು ಮತ್ತು ಅತೀಂದ್ರಿಯತೆಯ ಕಡೆಗೆ ಒಲವು ತೋರಿತು, ಕವಿಗಳಾದ ಲೂಯಿಸ್ ಡಿ ಲಿಯಾನ್, ತೆರೇಸಾ ಆಫ್ ಅವಿಲಾ ಮತ್ತು ಜಾನ್ ಆಫ್ ದಿ ಕ್ರಾಸ್, ಮತ್ತು ಹೊಸ ಪ್ರಪಂಚದ ಪರಿಶೋಧನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಇಂಕಾ ಗಾರ್ಸಿಲಾಸೊ ಡೆ ಲಾ ಅವರಂತಹ ಚರಿತ್ರಕಾರರು ಮತ್ತು ಬರಹಗಾರರೊಂದಿಗೆ ಪರಿಗಣಿಸಿದರು. ವೆಗಾ ಮತ್ತು ಬಾರ್ಟೋಲೋಮ್ ಡೆ ಲಾಸ್ ಕಾಸಾಸ್, ಈಗ ಸ್ಪ್ಯಾನಿಷ್ ನವೋದಯ ಸಾಹಿತ್ಯ ಎಂದು ಕರೆಯಲ್ಪಡುವ ಒಂದು ಕೆಲಸದ ರಚನೆಗೆ ಕಾರಣವಾಯಿತು. ಸ್ಪೇನ್ನಲ್ಲಿನ ನವೋದಯವು ಎಲ್ ಗ್ರೆಕೊ ಅವರಂತಹ ಕಲಾವಿದರನ್ನು ಮತ್ತು ಟೊಮಾಸ್ ಲೂಯಿಸ್ ಡಿ ವಿಕ್ಟೋರಿಯಾ ಮತ್ತು ಆಂಟೋನಿಯೊ ಡಿ ಕ್ಯಾಬೆಜಾನ್ನಂತಹ ಸಂಯೋಜಕರನ್ನು ನಿರ್ಮಿಸಿತು.
=== ಮತ್ತಷ್ಟು ದೇಶಗಳು ===
* ಕ್ರೊಯೇಷಿಯಾದಲ್ಲಿ ನವೋದಯ
* ಸ್ಕಾಟ್ಲೆಂಡ್ನಲ್ಲಿ ನವೋದಯ
== ಇತಿಹಾಸಶಾಸ್ತ್ರ ==
=== ಕಲ್ಪನಾ ===
[[ಚಿತ್ರ:Vite.jpg|thumb|ಜಾರ್ಜಿಯೊ ವಸಾರಿಯವರಿಂದ ''ಕಲಾವಿದರ ಜೀವನದ'' ಕವರ್]]
ಇಟಾಲಿಯನ್ ಕಲಾವಿದ ಮತ್ತು ವಿಮರ್ಶಕ ಜಾರ್ಜಿಯೊ ವಸಾರಿ (೧೫೧೧-೧೫೭೪) ತನ್ನ ಪುಸ್ತಕ ''ದಿ ಲೈವ್ಸ್ ಆಫ್ ದಿ ಆರ್ಟಿಸ್ಟ್ಸ್'' (೧೫೫೦ ರಲ್ಲಿ ಪ್ರಕಟಿತ) ನಲ್ಲಿ ''ರಿನಾಸ್ಕಿಟಾ'' ಎಂಬ ಪದವನ್ನು ಮೊದಲು ಬಳಸಿದರು. ಪುಸ್ತಕದಲ್ಲಿ ವಸಾರಿ ಅವರು [[ಗಾತಿಕ್ ಕಲೆ|ಗೋಥಿಕ್ ಕಲೆಯ]] ಅನಾಗರಿಕತೆಗಳೊಂದಿಗೆ ವಿರಾಮ ಎಂದು ವಿವರಿಸಲು ಪ್ರಯತ್ನಿಸಿದರು: ಕಲೆಗಳು (ಅವರು ಹಿಡಿದಿದ್ದರು) [[ರೋಮನ್ ಸಾಮ್ರಾಜ್ಯ|ರೋಮನ್ ಸಾಮ್ರಾಜ್ಯದ]] ಪತನದೊಂದಿಗೆ ಶಿಥಿಲಗೊಂಡವು ಮತ್ತು ಟಸ್ಕನ್ ಕಲಾವಿದರು ಮಾತ್ರ ಸಿಮಾಬ್ಯೂ (೧೨೪೦-೧೩೦೧) ನಿಂದ ಪ್ರಾರಂಭವಾಯಿತು. ) ಮತ್ತು ಜಿಯೊಟ್ಟೊ (೧೨೬೭-೧೩೩೭) ಕಲೆಗಳಲ್ಲಿನ ಈ ಕುಸಿತವನ್ನು ಹಿಮ್ಮೆಟ್ಟಿಸಲು ಪ್ರಾರಂಭಿಸಿದರು. ವಸಾರಿ ಪ್ರಾಚೀನ ಕಲೆಯನ್ನು ಇಟಾಲಿಯನ್ ಕಲೆಯ ಪುನರ್ಜನ್ಮದ ಕೇಂದ್ರವಾಗಿ ನೋಡಿದರು.<ref>{{Cite web|url=http://www.open.ac.uk/Arts/renaissance2/defining.htm|title=Defining the Renaissance, Open University|publisher=Open.ac.uk|access-date=July 31, 2009}}</ref>
ಆದಾಗ್ಯೂ, ೧೯ ನೇ ಶತಮಾನದಲ್ಲಿ ಮಾತ್ರ ಫ್ರೆಂಚ್ ಪದ ''ಪುನರುಜ್ಜೀವನವು'' ೧೩ ನೇ ಶತಮಾನದ ಅಂತ್ಯದಲ್ಲಿ ಪ್ರಾರಂಭವಾದ ರೋಮನ್ ಮಾದರಿಗಳ ಪುನರುಜ್ಜೀವನದ ಆಧಾರದ ಮೇಲೆ ಸ್ವಯಂ-ಪ್ರಜ್ಞೆಯ ಸಾಂಸ್ಕೃತಿಕ ಚಳುವಳಿಯನ್ನು ವಿವರಿಸುವಲ್ಲಿ ಜನಪ್ರಿಯತೆಯನ್ನು ಗಳಿಸಿತು. ಫ್ರೆಂಚ್ ಇತಿಹಾಸಕಾರ ಜೂಲ್ಸ್ ಮೈಕೆಲೆಟ್ (೧೭೯೮-೧೮೭೪) ತನ್ನ ೧೮೫೫ ರ ಕೃತಿ ''ಹಿಸ್ಟೊಯಿರ್ ಡಿ ಫ್ರಾನ್ಸ್ನಲ್ಲಿ'' "ದಿ ರಿನೈಸಾನ್ಸ್" ಅನ್ನು ಸಂಪೂರ್ಣ ಐತಿಹಾಸಿಕ ಅವಧಿ ಎಂದು ವ್ಯಾಖ್ಯಾನಿಸಿದ್ದಾರೆ. ಆದರೆ ಹಿಂದೆ ಇದನ್ನು ಹೆಚ್ಚು ಸೀಮಿತ ಅರ್ಥದಲ್ಲಿ ಬಳಸಲಾಗುತ್ತಿತ್ತು. ಮೈಕೆಲೆಟ್ಗೆ, ನವೋದಯವು ಕಲೆ ಮತ್ತು ಸಂಸ್ಕೃತಿಗಿಂತ ವಿಜ್ಞಾನದಲ್ಲಿ ಹೆಚ್ಚು ಅಭಿವೃದ್ಧಿಯಾಗಿತ್ತು. ಇದು [[ಕ್ರಿಸ್ಟೊಫರ್ ಕೊಲಂಬಸ್|ಕೊಲಂಬಸ್ನಿಂದ]] [[ನಿಕೋಲಸ್ ಕೋಪರ್ನಿಕಸ್|ಕೋಪರ್ನಿಕಸ್ನಿಂದ]] [[ಗೆಲಿಲಿಯೋ ಗೆಲಿಲಿ|ಗೆಲಿಲಿಯೋವರೆಗಿನ]] ಅವಧಿಯನ್ನು ವ್ಯಾಪಿಸಿದೆ ಎಂದು ಅವರು ಪ್ರತಿಪಾದಿಸಿದರು. ಅಂದರೆ ೧೫ ನೇ ಶತಮಾನದ ಅಂತ್ಯದಿಂದ ೧೭ನೇ ಶತಮಾನದ ಮಧ್ಯಭಾಗದವರೆಗೆ.<ref name="Michelet, Jules 1847" /> ಇದಲ್ಲದೆ, ಮೈಕೆಲೆಟ್ ಅವರು ಮಧ್ಯಯುಗದ "ವಿಲಕ್ಷಣ ಮತ್ತು ದೈತ್ಯಾಕಾರದ" ಗುಣಮಟ್ಟ ಮತ್ತು ಗಾಯನ ರಿಪಬ್ಲಿಕನ್ ಆಗಿ, ಅದರ ಪಾತ್ರದಲ್ಲಿ ನೋಡಲು ಆಯ್ಕೆಮಾಡಿದ [[ಪ್ರಜಾಪ್ರಭುತ್ವ|ಪ್ರಜಾಪ್ರಭುತ್ವದ]] ಮೌಲ್ಯಗಳ ನಡುವೆ ವ್ಯತ್ಯಾಸವನ್ನು ತೋರಿಸಿದರು. ಫ್ರೆಂಚ್ ರಾಷ್ಟ್ರೀಯತಾವಾದಿ, ಮೈಕೆಲೆಟ್ ನವೋದಯವನ್ನು ಫ್ರೆಂಚ್ ಚಳುವಳಿ ಎಂದು ಹೇಳಿಕೊಳ್ಳಲು ಪ್ರಯತ್ನಿಸಿದರು.
[[ಸ್ವಿಟ್ಜರ್ಲ್ಯಾಂಡ್|ಸ್ವಿಸ್]] ಇತಿಹಾಸಕಾರ ಜಾಕೋಬ್ ಬರ್ಕ್ಹಾರ್ಡ್ಟ್ (೧೮೧೮-೧೮೯೭) ತನ್ನ ''ದಿ ಸಿವಿಲೈಸೇಶನ್ ಆಫ್ ದಿ ರಿನೈಸಾನ್ಸ್ ಇನ್ ಇಟಲಿಯಲ್ಲಿ'' (೧೮೬೦), ಇದಕ್ಕೆ ವಿರುದ್ಧವಾಗಿ, ನವೋದಯವನ್ನು ಇಟಲಿಯಲ್ಲಿ ಜಿಯೊಟ್ಟೊ ಮತ್ತು [[ಮೈಕೆಲ್ಯಾಂಜೆಲೊ]] ನಡುವಿನ ಅವಧಿ ಎಂದು ವ್ಯಾಖ್ಯಾನಿಸಿದ್ದಾರೆ, ಅಂದರೆ ೧೪ ರಿಂದ ೧೬ ನೇ ಶತಮಾನದ ಮಧ್ಯದವರೆಗೆ. ಅವರು ನವೋದಯದಲ್ಲಿ ಮಧ್ಯಯುಗವು ನಿಗ್ರಹಿಸಿದ ಪ್ರತ್ಯೇಕತೆಯ ಆಧುನಿಕ ಮನೋಭಾವದ ಹೊರಹೊಮ್ಮುವಿಕೆಯನ್ನು ಕಂಡರು.<ref>Burckhardt, Jacob. ''[http://www.boisestate.edu/courses/hy309/docs/burckhardt/burckhardt.html The Civilization of the Renaissance in Italy] {{Webarchive|url=https://web.archive.org/web/20120204054344/http://www.boisestate.edu/courses/hy309/docs/burckhardt/burckhardt.html |date=ಫೆಬ್ರವರಿ 4, 2012 }}'' (trans. S.G.C. Middlemore, London, 1878)</ref> ಅವರ ಪುಸ್ತಕವನ್ನು ವ್ಯಾಪಕವಾಗಿ ಓದಲಾಯಿತು ಮತ್ತು ಇಟಾಲಿಯನ್ ನವೋದಯದ ಆಧುನಿಕ ವ್ಯಾಖ್ಯಾನದ ಬೆಳವಣಿಗೆಯಲ್ಲಿ ಪ್ರಭಾವಶಾಲಿಯಾಯಿತು.<ref>Gay, Peter, ''Style in History'', New York: Basic Books, 1974.</ref> ಆದಾಗ್ಯೂ, ಬಕ್ಹಾರ್ಡ್ ಆರೋಪಿಸಿದ್ದಾರೆ ನವೋದಯವನ್ನು ಆಧುನಿಕ ಪ್ರಪಂಚದ ಮೂಲವಾಗಿ ನೋಡುವಲ್ಲಿ ಇತಿಹಾಸದ ರೇಖಾತ್ಮಕ ವಿಗ್ಗಿಶ್ ದೃಷ್ಟಿಕೋನವನ್ನು ರೂಪಿಸುವುದು.<ref name="starn">{{Cite journal|last=Starn, Randolph|jstor=2650779|title=Renaissance Redux|url=https://archive.org/details/sim_american-historical-review_1998-02_103_1/page/122|journal=The American Historical Review|volume=103|issue=1|year=1998|pages=122–124|doi=10.2307/2650779}}<cite class="citation journal cs1" data-ve-ignore="true" id="CITEREFStarn,_Randolph1998">Starn, Randolph (1998). "Renaissance Redux". ''The American Historical Review''. '''103''' (1): 122–124. [[Doi (ಗುರುತಿಸುವಿಕೆ)|doi]]:[[doi:10.2307/2650779|10.2307/2650779]]. [[JSTOR (ಗುರುತಿಸುವಿಕೆ)|JSTOR]] [//www.jstor.org/stable/2650779 2650779].</cite></ref>
ತೀರಾ ಇತ್ತೀಚೆಗೆ, ಕೆಲವು ಇತಿಹಾಸಕಾರರು ನವೋದಯವನ್ನು ಐತಿಹಾಸಿಕ ಯುಗವೆಂದು ಅಥವಾ ಸುಸಂಬದ್ಧವಾದ ಸಾಂಸ್ಕೃತಿಕ ಚಳುವಳಿ ಎಂದು ವ್ಯಾಖ್ಯಾನಿಸಲು ಕಡಿಮೆ ಉತ್ಸುಕರಾಗಿದ್ದಾರೆ. ಕ್ಯಾಲಿಫೋರ್ನಿಯಾ ಬರ್ಕ್ಲಿ ವಿಶ್ವವಿದ್ಯಾಲಯದ ಇತಿಹಾಸಕಾರ ರಾಂಡೋಲ್ಫ್ ಸ್ಟಾರ್ನ್, ೧೯೯೮ ರಲ್ಲಿ ಹೀಗೆ ಹೇಳಿದ್ದಾರೆ:
ನಿರ್ಣಾಯಕ ಆರಂಭಗಳು ಮತ್ತು ಅಂತ್ಯಗಳು ಮತ್ತು ನಡುವೆ ಸ್ಥಿರವಾದ ವಿಷಯವನ್ನು ಹೊಂದಿರುವ ಅವಧಿಗಿಂತ ಹೆಚ್ಚಾಗಿ, ಪುನರುಜ್ಜೀವನವು ಆಚರಣೆಗಳು ಮತ್ತು ಆಲೋಚನೆಗಳ ಚಲನೆಯಾಗಿ ಕಂಡುಬರುತ್ತದೆ (ಮತ್ತು ಸಾಂದರ್ಭಿಕವಾಗಿ ಕಂಡುಬಂದಿದೆ). ನಿರ್ದಿಷ್ಟ ಗುಂಪುಗಳು ಮತ್ತು ಗುರುತಿಸಬಹುದಾದ ವ್ಯಕ್ತಿಗಳು ವಿಭಿನ್ನ ಸಮಯ ಮತ್ತು ಸ್ಥಳಗಳಲ್ಲಿ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಈ ಅರ್ಥದಲ್ಲಿ ಇದು ವೈವಿಧ್ಯಮಯವಾದ, ಕೆಲವೊಮ್ಮೆ ಒಮ್ಮುಖವಾಗುವ, ಕೆಲವೊಮ್ಮೆ ಸಂಘರ್ಷದ ಸಂಸ್ಕೃತಿಗಳ ಜಾಲವಾಗಿದೆ, ಒಂದೇ, ಸಮಯಕ್ಕೆ ಸೀಮಿತವಾದ ಸಂಸ್ಕೃತಿಯಲ್ಲ.
=== ಪ್ರಗತಿಯ ಬಗ್ಗೆ ಚರ್ಚೆಗಳು ===
ಮಧ್ಯಯುಗದ ಸಂಸ್ಕೃತಿಯಲ್ಲಿ ನವೋದಯವು ಎಷ್ಟರ ಮಟ್ಟಿಗೆ ಸುಧಾರಿಸಿತು ಎಂಬುದರ ಕುರಿತು ಚರ್ಚೆ ಇದೆ. ಮೈಕೆಲೆಟ್ ಮತ್ತು ಬರ್ಕ್ಹಾರ್ಡ್ಟ್ ಇಬ್ಬರೂ ನವೋದಯದಲ್ಲಿ ಆಧುನಿಕ ಯುಗದ ಕಡೆಗೆ ಮಾಡಿದ ಪ್ರಗತಿಯನ್ನು ವಿವರಿಸಲು ಉತ್ಸುಕರಾಗಿದ್ದರು. ಬರ್ಕ್ಹಾರ್ಡ್ ಈ ಬದಲಾವಣೆಯನ್ನು ಮನುಷ್ಯನ ಕಣ್ಣುಗಳಿಂದ ಮುಸುಕನ್ನು ತೆಗೆದುಹಾಕುವುದಕ್ಕೆ ಹೋಲಿಸಿದನು, ಅದು ಅವನಿಗೆ ಸ್ಪಷ್ಟವಾಗಿ ನೋಡಲು ಅನುವು ಮಾಡಿಕೊಡುತ್ತದೆ.<ref name="burckhardt-individual"/>
ಮಧ್ಯಯುಗದಲ್ಲಿ, ಮಾನವ ಪ್ರಜ್ಞೆಯ ಎರಡೂ ಬದಿಗಳು - ಒಳಗೆ ತಿರುಗಿದಂತೆ ತಿರುಗಿದವು - ಸಾಮಾನ್ಯ ಮುಸುಕಿನ ಕೆಳಗೆ ಕನಸು ಅಥವಾ ಅರ್ಧ ಎಚ್ಚರವಾಗಿತ್ತು. ಮುಸುಕನ್ನು ನಂಬಿಕೆ, ಭ್ರಮೆ ಮತ್ತು ಬಾಲಿಶ ಪೂರ್ವಾಗ್ರಹದಿಂದ ನೇಯಲಾಯಿತು, ಅದರ ಮೂಲಕ ಜಗತ್ತು ಮತ್ತು ಇತಿಹಾಸವು ವಿಚಿತ್ರವಾದ ವರ್ಣಗಳಲ್ಲಿ ಧರಿಸಲ್ಪಟ್ಟಿದೆ.
[[ಚಿತ್ರ:La_masacre_de_San_Bartolomé,_por_François_Dubois.jpg|left|thumb| ಫ್ರಾಂಕೋಯಿಸ್ ಡುಬೊಯಿಸ್ ಅವರಿಂದ ಫ್ರೆಂಚ್ ವಾರ್ಸ್ ಆಫ್ ರಿಲಿಜನ್ನಲ್ಲಿನ ಘಟನೆಯಾದ ಸೇಂಟ್ ಬಾರ್ತಲೋಮೆವ್ಸ್ ಡೇ ಹತ್ಯಾಕಾಂಡದ ಚಿತ್ರಕಲೆ]]
ಮತ್ತೊಂದೆಡೆ, ಅನೇಕ ಇತಿಹಾಸಕಾರರು ಈಗ ಮಧ್ಯಕಾಲೀನ ಅವಧಿಯೊಂದಿಗೆ ಜನಪ್ರಿಯವಾಗಿ ಸಂಬಂಧಿಸಿರುವ ಹೆಚ್ಚಿನ ನಕಾರಾತ್ಮಕ ಸಾಮಾಜಿಕ ಅಂಶಗಳು-ಬಡತನ, ಯುದ್ಧ, ಧಾರ್ಮಿಕ ಮತ್ತು ರಾಜಕೀಯ ಕಿರುಕುಳ, ಉದಾಹರಣೆಗೆ ಈ ಯುಗದಲ್ಲಿ ಹದಗೆಟ್ಟಿದೆ ಎಂದು ತೋರುತ್ತದೆ, ಇದು ಮ್ಯಾಕಿಯಾವೆಲಿಯನ್ನ ಉದಯವನ್ನು ಕಂಡಿತು. ರಾಜಕೀಯ, ಧರ್ಮದ ಯುದ್ಧಗಳು, ಭ್ರಷ್ಟ ಬೋರ್ಗಿಯಾ ಪೋಪ್ಸ್ ಮತ್ತು ೧೬ ನೇ ಶತಮಾನದ ತೀವ್ರಗೊಂಡ ಮಾಟಗಾತಿ ಬೇಟೆಗಳು. ಪುನರುಜ್ಜೀವನದ ಸಮಯದಲ್ಲಿ ವಾಸಿಸುತ್ತಿದ್ದ ಅನೇಕ ಜನರು ಇದನ್ನು ೧೯ ನೇ ಶತಮಾನದ ಕೆಲವು ಲೇಖಕರು ಕಲ್ಪಿಸಿದ " [[ಸ್ವರ್ಣಯುಗ|ಸುವರ್ಣಯುಗ]] " ಎಂದು ಪರಿಗಣಿಸಲಿಲ್ಲ. ಆದರೆ ಈ ಸಾಮಾಜಿಕ ಕಾಯಿಲೆಗಳಿಂದ ಕಾಳಜಿ ವಹಿಸಿದರು.<ref>[[Savonarola]]'s popularity is a prime example of the manifestation of such concerns. Other examples include [[Philip II of Spain]]'s censorship of Florentine paintings, noted by Edward L. Goldberg, "Spanish Values and Tuscan Painting", ''Renaissance Quarterly'' (1998) p. 914</ref> ಗಮನಾರ್ಹವಾಗಿ, ಆದಾಗ್ಯೂ, ಕಲಾವಿದರು, ಬರಹಗಾರರು ಮತ್ತು ಪ್ರಶ್ನಾರ್ಹ ಸಾಂಸ್ಕೃತಿಕ ಚಳುವಳಿಗಳಲ್ಲಿ ತೊಡಗಿಸಿಕೊಂಡಿರುವ ಪೋಷಕರು ಮಧ್ಯಯುಗದಿಂದ ಶುದ್ಧವಾದ ವಿರಾಮವಾಗಿರುವ ಹೊಸ ಯುಗದಲ್ಲಿ ವಾಸಿಸುತ್ತಿದ್ದಾರೆಂದು ನಂಬಿದ್ದರು.<ref name="panofsky" /> ಕೆಲವು ಮಾರ್ಕ್ಸ್ವಾದಿ ಇತಿಹಾಸಕಾರರು ನವೋದಯವನ್ನು ಭೌತಿಕ ಪರಿಭಾಷೆಯಲ್ಲಿ ವಿವರಿಸಲು ಬಯಸುತ್ತಾರೆ, ಕಲೆ, ಸಾಹಿತ್ಯ ಮತ್ತು ತತ್ತ್ವಶಾಸ್ತ್ರದಲ್ಲಿನ ಬದಲಾವಣೆಗಳು [[ಊಳಿಗಮಾನ ಪದ್ಧತಿ|ಊಳಿಗಮಾನ್ಯ]] ಪದ್ಧತಿಯಿಂದ [[ಬಂಡವಾಳಶಾಹಿ|ಬಂಡವಾಳಶಾಹಿಯೆಡೆಗಿನ]] ಸಾಮಾನ್ಯ ಆರ್ಥಿಕ ಪ್ರವೃತ್ತಿಯ ಭಾಗವಾಗಿದೆ. ಇದರ ಪರಿಣಾಮವಾಗಿ ಬೂರ್ಜ್ವಾ ವರ್ಗವು ಕಲೆಗಳಿಗೆ ವಿನಿಯೋಗಿಸಲು ಬಿಡುವಿನ ಸಮಯವನ್ನು ನೀಡುತ್ತದೆ..<ref>[http://www.hull.ac.uk/renforum/v2no2/siar.htm Renaissance Forum] {{Webarchive|url=https://web.archive.org/web/20120614012823/http://www.hull.ac.uk/renforum/v2no2/siar.htm |date=2012-06-14 }} at [[Hull University]], Autumn 1997 (Retrieved May 10, 2007)</ref>
ಜೋಹಾನ್ ಹುಯಿಜಿಂಗಾ (೧೮೭೨-೧೯೪೫) ನವೋದಯದ ಅಸ್ತಿತ್ವವನ್ನು ಒಪ್ಪಿಕೊಂಡರು ಆದರೆ ಇದು ಧನಾತ್ಮಕ ಬದಲಾವಣೆಯೇ ಎಂದು ಪ್ರಶ್ನಿಸಿದರು. ಅವರ ಪುಸ್ತಕ ''ದಿ ಶರತ್ಕಾಲ ಮಧ್ಯಯುಗದಲ್ಲಿ'', ಅವರು ನವೋದಯವು ಉನ್ನತ ಮಧ್ಯಯುಗದಿಂದ ಅವನತಿಯ ಅವಧಿಯಾಗಿದೆ ಎಂದು ವಾದಿಸಿದರು. ಅದು ಮುಖ್ಯವಾದುದನ್ನು ನಾಶಪಡಿಸಿತು.<ref name="huizinga" /> [[ಲ್ಯಾಟಿನ್|ಲ್ಯಾಟಿನ್ ಭಾಷೆ]], ಉದಾಹರಣೆಗೆ, ಶಾಸ್ತ್ರೀಯ ಅವಧಿಯಿಂದ ಹೆಚ್ಚು ವಿಕಸನಗೊಂಡಿತು ಮತ್ತು ಚರ್ಚ್ ಮತ್ತು ಇತರೆಡೆಗಳಲ್ಲಿ ಬಳಸಲಾಗುವ ಜೀವಂತ ಭಾಷೆಯಾಗಿದೆ. ಶಾಸ್ತ್ರೀಯ ಶುದ್ಧತೆಯೊಂದಿಗಿನ ನವೋದಯ ಗೀಳು ಅದರ ಮುಂದಿನ ವಿಕಾಸವನ್ನು ನಿಲ್ಲಿಸಿತು ಮತ್ತು ಲ್ಯಾಟಿನ್ ತನ್ನ ಶಾಸ್ತ್ರೀಯ ರೂಪಕ್ಕೆ ಮರಳಿತು. ಇದು ಆಳವಾದ ಆರ್ಥಿಕ ಹಿಂಜರಿತದ ಅವಧಿ ಎಂದು ರಾಬರ್ಟ್ ಎಸ್. ಲೋಪೆಜ್ ವಾದಿಸಿದ್ದಾರೆ.<ref>{{Cite journal|last=Lopez, Robert S.|last2=Miskimin, Harry A.|title=The Economic Depression of the Renaissance|url=https://archive.org/details/economic-history-review_1962_14_3/page/408|journal=Economic History Review|jstor=2591885|volume=14|year=1962|pages=408–426|doi=10.1111/j.1468-0289.1962.tb00059.x|issue=3}}</ref> ಏತನ್ಮಧ್ಯೆ, ಜಾರ್ಜ್ ಸಾರ್ಟನ್ ಮತ್ತು ಲಿನ್ ಥಾರ್ನ್ಡೈಕ್ ಇಬ್ಬರೂ [[ವಿಜ್ಞಾನ|ವೈಜ್ಞಾನಿಕ]] ಪ್ರಗತಿಯು ಸಾಂಪ್ರದಾಯಿಕವಾಗಿ ಊಹಿಸಿದ್ದಕ್ಕಿಂತ ಕಡಿಮೆ ಮೂಲವಾಗಿದೆ ಎಂದು ವಾದಿಸಿದ್ದಾರೆ.<ref>{{Cite journal|authorlink=Lynn Thorndike|last=Thorndike, Lynn|year=1943|title=Some Remarks on the Question of the Originality of the Renaissance|url=https://archive.org/details/sim_journal-of-the-history-of-ideas_1943-01_4_1/page/49|pages=49–74|journal=Journal of the History of Ideas|jstor=2707236|volume=4|issue=1|doi=10.2307/2707236|last2=Johnson|first2=F.R.|last3=Kristeller|first3=P. O.|last4=Lockwood|first4=D.P.|last5=Thorndike|first5=L.}}</ref> ಅಂತಿಮವಾಗಿ, ಜೋನ್ ಕೆಲ್ಲಿ ನವೋದಯವು ಹೆಚ್ಚಿನ ಲಿಂಗ ದ್ವಿಗುಣಕ್ಕೆ ಕಾರಣವಾಯಿತು ಎಂದು ವಾದಿಸಿದರು, ಮಧ್ಯಯುಗದಲ್ಲಿ ಮಹಿಳೆಯರು ಹೊಂದಿದ್ದ ಏಜೆನ್ಸಿಯನ್ನು ಕಡಿಮೆ ಮಾಡಿದರು.<ref>Kelly-Gadol, Joan. "Did Women Have a Renaissance?" ''Becoming Visible: Women in European History''. Edited by Renate Bridenthal and Claudia Koonz. Boston: Houghton Mifflin, 1977.</ref>
ಕೆಲವು ಇತಿಹಾಸಕಾರರು ''ನವೋದಯ'' ಎಂಬ ಪದವನ್ನು ಅನಗತ್ಯವಾಗಿ ಲೋಡ್ ಮಾಡಲಾಗಿದೆ ಎಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ, ಇದು ಹೆಚ್ಚು ಪ್ರಾಚೀನವಾದ " [[ಅಂಧಕಾರಯುಗ|ಡಾರ್ಕ್ ಏಜ್", ಮಧ್ಯಯುಗಗಳಿಂದ]] ನಿಸ್ಸಂದಿಗ್ಧವಾಗಿ ಸಕಾರಾತ್ಮಕ ಪುನರ್ಜನ್ಮವನ್ನು ಸೂಚಿಸುತ್ತದೆ. ಹೆಚ್ಚಿನ ಇತಿಹಾಸಕಾರರು ಈಗ ಈ ಅವಧಿಗೆ " ಆಧುನಿಕ ಆರಂಭಿಕ " ಎಂಬ ಪದವನ್ನು ಬಳಸಲು ಬಯಸುತ್ತಾರೆ, ಇದು ಮಧ್ಯಯುಗ ಮತ್ತು ಆಧುನಿಕ ಯುಗದ ನಡುವಿನ ಪರಿವರ್ತನೆಯ ಅವಧಿಯನ್ನು ಎತ್ತಿ ತೋರಿಸುವ ಹೆಚ್ಚು ತಟಸ್ಥ ಪದನಾಮವಾಗಿದೆ.<ref>[[Stephen Greenblatt]] ''Renaissance Self-Fashioning: From More to Shakespeare'', [[University of Chicago Press]], 1980.</ref> ರೋಜರ್ ಓಸ್ಬೋರ್ನ್ ಅವರಂತಹ ಇತರರು ಇಟಾಲಿಯನ್ ನವೋದಯವನ್ನು ಸಾಮಾನ್ಯವಾಗಿ ಪಾಶ್ಚಿಮಾತ್ಯ ಇತಿಹಾಸದ ಪುರಾಣಗಳು ಮತ್ತು ಆದರ್ಶಗಳ ಭಂಡಾರವೆಂದು ಪರಿಗಣಿಸಿದ್ದಾರೆ ಮತ್ತು ಪ್ರಾಚೀನ ವಿಚಾರಗಳ ಪುನರ್ಜನ್ಮದ ಬದಲಿಗೆ ಮಹಾನ್ ನಾವೀನ್ಯತೆಯ ಅವಧಿಯಾಗಿದೆ.<ref>{{Cite book|url=https://archive.org/details/00book2095698803|title=Civilization: a new history of the Western world|last=Osborne, Roger|date=November 1, 2006|publisher=Pegasus Books|isbn=978-1-933648-19-4|pages=[https://archive.org/details/00book2095698803/page/180 180]–|access-date=December 10, 2011|url-access=registration}}</ref>
ಕಲಾ ಇತಿಹಾಸಕಾರ ಎರ್ವಿನ್ ಪನೋಫ್ಸ್ಕಿ "ನವೋದಯ" ಪರಿಕಲ್ಪನೆಗೆ ಈ ಪ್ರತಿರೋಧವನ್ನು ಗಮನಿಸಿದರು:<blockquote>ನಾಗರಿಕತೆಯ ಸೌಂದರ್ಯದ ಅಂಶಗಳಲ್ಲಿ ವೃತ್ತಿಪರ ಆಸಕ್ತಿಯನ್ನು ಹೊಂದಲು ನಿರ್ಬಂಧವಿಲ್ಲದವರು - ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗಳು, ರಾಜಕೀಯ ಮತ್ತು ಧಾರ್ಮಿಕ ಸನ್ನಿವೇಶಗಳ ಇತಿಹಾಸಕಾರರು ಮತ್ತು ಹೆಚ್ಚಿನವರು ಇಟಾಲಿಯನ್ ನವೋದಯದ ವಾಸ್ತವತೆಯನ್ನು ಅತ್ಯಂತ ತೀವ್ರವಾಗಿ ಪ್ರಶ್ನಿಸಿರುವುದು ಆಕಸ್ಮಿಕವಲ್ಲ. ನಿರ್ದಿಷ್ಟವಾಗಿ, ನೈಸರ್ಗಿಕ ವಿಜ್ಞಾನ - ಆದರೆ ಅಸಾಧಾರಣವಾಗಿ ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಕಲೆಯ ಇತಿಹಾಸಕಾರರಿಂದ ಮಾತ್ರ.<ref>Panofsky, ''Renaissance and Renascences in Western Art'' 1969:38; Panofsky's chapter "'Renaissance – self-definition or self-deception?" succinctly introduces the historiographical debate, with copious footnotes to the literature.</ref></blockquote>
== ಇತರ ನವೋದಯಗಳು ==
''ನವೋದಯ'' ಎಂಬ ಪದವನ್ನು ೧೫ ಮತ್ತು ೧೬ ನೇ ಶತಮಾನದ ಹೊರಗಿನ ಅವಧಿಗಳನ್ನು ವ್ಯಾಖ್ಯಾನಿಸಲು ಸಹ ಬಳಸಲಾಗುತ್ತದೆ. ಉದಾಹರಣೆಗೆ, ಚಾರ್ಲ್ಸ್ ಎಚ್. ಹ್ಯಾಸ್ಕಿನ್ಸ್ (೧೮೭೦-೧೯೩೭), ೧೨ ನೇ ಶತಮಾನದ ಪುನರುಜ್ಜೀವನಕ್ಕೆ ಒಂದು ಪ್ರಕರಣವನ್ನು ಮಾಡಿದರು. ಇತರ ಇತಿಹಾಸಕಾರರು ೯ ನೇ ಮತ್ತು ೯ ನೇ ಶತಮಾನಗಳಲ್ಲಿ ಕ್ಯಾರೊಲಿಂಗಿಯನ್ ನವೋದಯ, ೧೦ ನೇ ಶತಮಾನದಲ್ಲಿ ಒಟ್ಟೋನಿಯನ್ ನವೋದಯ ಮತ್ತು ೧೪ ನೇ ಶತಮಾನದ ತೈಮುರಿಡ್ ಪುನರುಜ್ಜೀವನಕ್ಕಾಗಿ ವಾದಿಸಿದ್ದಾರೆ. ಇಸ್ಲಾಮಿಕ್ ಸುವರ್ಣಯುಗವನ್ನು ಕೆಲವೊಮ್ಮೆ ಇಸ್ಲಾಮಿಕ್ ನವೋದಯ ಎಂದು ಕರೆಯಲಾಗುತ್ತದೆ.<ref>Hubert, Jean, ''L'Empire carolingien'' (English: ''The Carolingian Renaissance'', translated by James Emmons, New York: G. Braziller, 1970).</ref>
ಸಾಂಸ್ಕೃತಿಕ ಪುನರ್ಜನ್ಮದ ಇತರ ಅವಧಿಗಳನ್ನು "ನವೋದಯ" ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಬಂಗಾಳ ನವೋದಯ, ತಮಿಳು ನವೋದಯ, ನೇಪಾಳ ಭಾಸಾ ಪುನರುಜ್ಜೀವನ, ಅಲ್-ನಹ್ದಾ ಅಥವಾ ಹಾರ್ಲೆಮ್ ನವೋದಯ. ಈ ಪದವನ್ನು ಸಿನಿಮಾದಲ್ಲಿಯೂ ಬಳಸಬಹುದು. ಅನಿಮೇಶನ್ನಲ್ಲಿ, ಡಿಸ್ನಿ ಪುನರುಜ್ಜೀವನವು ೧೯೮೯ ರಿಂದ ೧೯೯೯ ರವರೆಗಿನ ವರ್ಷಗಳಲ್ಲಿ ವ್ಯಾಪಿಸಿರುವ ಒಂದು ಅವಧಿಯಾಗಿದ್ದು, ಸ್ಟುಡಿಯೊವು ತಮ್ಮ ಸುವರ್ಣಯುಗವಾದ ಬಂಗಾರದ ಯುಗದಿಂದ ಸಾಕ್ಷಿಯಾಗದ ಗುಣಮಟ್ಟಕ್ಕೆ ಮರಳಿತು. ಸ್ಯಾನ್ ಫ್ರಾನ್ಸಿಸ್ಕೊ ನವೋದಯವು ೨೦ ನೇ ಶತಮಾನದ ಮಧ್ಯಭಾಗದಲ್ಲಿ ಆ ನಗರದಲ್ಲಿ ಪರಿಶೋಧನಾ ಕಾವ್ಯ ಮತ್ತು ಕಾಲ್ಪನಿಕ ಬರವಣಿಗೆಯ ರೋಮಾಂಚಕ ಅವಧಿಯಾಗಿದೆ.
*
== ಉಲ್ಲೇಖಗಳು ==
{{Reflist}}
{{Interwikineeded}}
[[ವರ್ಗ:ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ]]
r5163hqrhfj0i0xlm48rzf7py76gkbv
ಚರ್ಚೆಪುಟ:ಮೈಲಾರ ಮಹಾದೇವಪ್ಪ
1
149634
1384585
1191123
2026-08-28T17:06:33Z
~2026-47057-67
101404
/* ಜಿವನ ಚರಿತ್ರೆ */ ಹೊಸ ವಿಭಾಗ
1384585
wikitext
text/x-wiki
== ನಮ್ಮ ಹೇಮ್ಮೆ ==
ಮಹಾದೇವ ಮೈಲಾರ ಅವ್ರು ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ಜನಿಸಿದರು ಅನೋದೆ ನಮ್ಮ ಹೇಮ್ಮೆ [[ಸದಸ್ಯ:Praveen Masur|Praveen Masur]] ([[ಸದಸ್ಯರ ಚರ್ಚೆಪುಟ:Praveen Masur|ಚರ್ಚೆ]]) ೧೯:೧೨, ೧ ಏಪ್ರಿಲ್ ೨೦೨೩ (IST)
== Meilar mahadeva avar jivan chariter ==
meilar mahadevarvar jivan chiritere [[ವಿಶೇಷ:Contributions/2401:4900:3367:8EE0:1:0:3AB:969E|2401:4900:3367:8EE0:1:0:3AB:969E]] ೧೯:೧೬, ೧೯ ಅಕ್ಟೋಬರ್ ೨೦೨೩ (IST)
== ಜಿವನ ಚರಿತ್ರೆ ==
ಸ್ವಾತಂತ್ಯ ಹೂರಟದ ಬಗೆ [[ವಿಶೇಷ:Contributions/~2026-47057-67|~2026-47057-67]] ([[ಸದಸ್ಯರ ಚರ್ಚೆಪುಟ:~2026-47057-67|talk]]) ೨೨:೩೬, ೨೮ ಆಗಸ್ಟ್ ೨೦೨೬ (IST)
de0qcrgvt3ji17qqzy8t16pchzsp8xl
ಷಣ್ಮುಖ ಪ್ರಿಯಾ
0
154945
1384593
1365668
2026-08-28T21:14:04Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384593
wikitext
text/x-wiki
+{{Infobox musical artist|name=Shanmukha Priya|image=|alt=|caption=|native_name=|birth_date={{Birth date and age|2002|11|02|df=y}}|birth_place=[[Visakhapatnam]], [[Andhra Pradesh]], India|genre={{hlist|[[Carnatic music]]|Pop|[[Jazz]]|[[Yodeling]]}}|occupation=Singer|instrument={{hlist|Vocals}}|years_active=2008–present}}
'''ಷಣ್ಮುಖ ಪ್ರಿಯಾ''' (ಜನನ ೨ ನವೆಂಬರ್ ೨೦೦೨) ಒಬ್ಬ ಭಾರತೀಯ ಗಾಯಕಿ, ಇವರು [[ಕರ್ನಾಟಕ ಸಂಗೀತ]], [[ಜಾಝ್ ಸಂಗೀತ|ಜಾಝ್]], ರಾಕ್, ಪಾಪ್ ಮತ್ತು ಯೋಡೆಲಿಂಗ್ನಲ್ಲಿ ಪರಿಣತಿ ಹೊಂದಿದ್ದಾರೆ. <ref>{{Cite web |date=25 March 2021 |title=Shanmukhapriya FINALLY breaks her silence on participating in Indian Idol 12 despite winning other singing reality shows |url=https://www.bollywoodlife.com/tv/shanmukhapriya-finally-breaks-her-silence-on-participating-in-indian-idol-12-despite-winning-other-singing-reality-shows-1800066/ |access-date=8 July 2021 |website=Bollywood Life |language=en}}</ref> ಅವರು <nowiki><i id="mwEw">ಪಡುತಾ ತೀಯಾಗ ಎಸ್ 6</i></nowiki> (೨೦೧೩), ''ಸಾ ರೆ ಗಮಾ ಪಾ ಎಲ್'ಇಲ್ ಚಾಂಪ್ಸ್ ೨೦೧೭'' (೨೦೧೭) ಮತ್ತು <nowiki><i id="mwFw">ಇಂಡಿಯನ್ ಐಡಲ್ ೧೨</i></nowiki>(೨೦೨೦-೨೦೨೧) ಸೇರಿದಂತೆ ಹಲವಾರು ಜನಪ್ರಿಯ ರಿಯಾಲಿಟಿ ಟೆಲಿವಿಷನ್ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. <ref>{{Cite web |title=Indian Idol 12 contestant Shanmukha Priya Biography: Age, Education, Life, Family, Videos and Photos |url=https://www.jagrantv.com/show/shanmukha-priya-biography-age-education-life-family-videos-and-photos-biography-age-education-life-family-videos-and-photos-rc1016406 |access-date=8 July 2021 |website=[[Jagran Prakashan Limited|Jagran TV]] |language=en}}</ref>
== ಆರಂಭಿಕ ಜೀವನ ಮತ್ತು ವೃತ್ತಿಜೀವನ ==
ಷಣ್ಮುಖ ಪ್ರಿಯಾ ಅವರು ಭಾರತದ [[ವಿಶಾಖಪಟ್ನಂ|ವಿಶಾಖಪಟ್ಟಣಂನಲ್ಲಿ]] [[ತೆಲುಗು]] ಮಾತನಾಡುವ ಕುಟುಂಬದಲ್ಲಿ ಜನಿಸಿದರು. <ref>{{Cite web |date=20 May 2021 |title=From Revanth to Shanmukha Priya, list of 10 amazing playback singers from Vizag |url=https://www.yovizag.com/list-of-10-playback-singers-from-vizag/ |access-date=8 July 2021 |website=Vizag |language=en-US}}</ref> ಅವರ ತಾಯಿ ರತ್ನಮಾಲಾ ಸಂಗೀತ ಶಿಕ್ಷಕಿ ಮತ್ತು ಅವರ ತಂದೆ ಶ್ರೀನಿವಾಸ್ ಕುಮಾರ್ ಅವರು [[ವೀಣೆ|ವೀಣಾ]], ಪಿಟೀಲು, ಗಿಟಾರ್, [[ಮ್ಯಾಂಡೊಲಿನ್|ಮ್ಯಾಂಡೋಲಿನ್]] ಮತ್ತು ಕೀಬೋರ್ಡ್ ವಾದ್ಯ ವಾದಕರು. <ref>{{Cite web |title=Indian Idol contestant Shanmukha Priya father interview Veena Srinivas face to face |url=https://www.ap7am.com/lv-343745-indian-idol-contestant-shanmukha-priya-father-interview-veena-srinivas-face-to-face |access-date=8 July 2021 |website=ap7am.com |language=en |archive-date=9 ಜುಲೈ 2021 |archive-url=https://web.archive.org/web/20210709185342/https://www.ap7am.com/lv-343745-indian-idol-contestant-shanmukha-priya-father-interview-veena-srinivas-face-to-face |url-status=dead }}</ref> ಆಕೆ ಮೂರು ವರ್ಷದವಳಿದ್ದಾಗ ಆಕೆಯ ತಂದೆ ಮೊದಲು ಅಲಾರಾಂ ಗಡಿಯಾರದಲ್ಲಿ ನುಡಿಸುವ ರಾಗಕ್ಕೆ ಅವಳು ಗುನುಗುವುದನ್ನು ಕೇಳಿದರು ಎಂದು ''[[ದಿ ಹಿಂದೂ]]'' ವರದಿ ಮಾಡಿದೆ. ಅವನು ತಕ್ಷಣವೇ ವೀಣೆಯನ್ನು ಹೊರತೆಗೆದು ಅವಳಿಗೆ ಟಿಪ್ಪಣಿ ಮತ್ತು ಲಯವನ್ನು ಕೊಟ್ಟನು. <ref>{{Cite news |last=Ganguly |first=Nivedita |date=22 July 2017 |title=Vizag's young singing sensation rocks the nation with her talent |language=en-IN |work=[[The Hindu]] |url=https://www.thehindu.com/news/national/andhra-pradesh/vizags-young-singing-sensation-rocks-the-nation-with-her-talent/article19327500.ece |access-date=8 July 2021 |issn=0971-751X}}</ref> ಅವರು ತಮ್ಮ ಗಾಯನದಿಂದ ಉತ್ತಮ ಪ್ರದರ್ಶನ ನೀಡಿದರು ಮತ್ತು ನಂತರ ಕರ್ನಾಟಕ ಸಂಗೀತದಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. <ref>{{Cite web |date=26 March 2021 |title=Shanmukhapriya on Her Indian Idol 12 Journey, Anushka Sharma Shares a Glimpse of Vamika |url=https://www.news18.com/news/movies/shanmukhapriya-on-her-indian-idol-12-journey-anushka-sharma-shares-a-glimpse-of-vamika-3574274.html |access-date=8 July 2021 |website=News18 |language=en}}</ref>
೬ನೇ ವಯಸ್ಸಿನಲ್ಲಿ, ಅವರು ೨೦೦೮ ರಲ್ಲಿ ಜೀ ತೆಲುಗಿನ ಟಿವಿ ಶೋ <nowiki><i id="mwLQ">ಸಾ ರೆ ಗಮಾ ಪಾ ಎಲ್'ಇಲ್ ಚಾಂಪ್ಸ್ 2008</i></nowiki> ರೊಂದಿಗೆ ರಿಯಾಲಿಟಿ ಸಿಂಗಿಂಗ್ಗೆ ಪಾದಾರ್ಪಣೆ ಮಾಡಿದರು. <ref>{{Cite web |title=Indian Idol 12 Contestant Shanmukha Priya is a Fabulous Singer, Check Out Interesting Facts About Her |url=https://www.india.com/photos/entertainment/indian-idol-12-contestant-shanmukha-priya-is-a-fabulous-singer-check-out-interesting-facts-about-her-203766/ |access-date=8 July 2021 |website=www.india.com |language=en}}</ref> [[ಎಸ್.ಪಿ.ಬಾಲಸುಬ್ರಹ್ಮಣ್ಯಂ|ಎಸ್ಪಿ ಬಾಲಸುಬ್ರಹ್ಮಣ್ಯಂ]] ತೀರ್ಪುಗಾರರಾಗಿದ್ದ ಅವರ ಮುಂದಿನ ಶೋ ''ಪಡುತಾ ತೀಯಾಗ'' ಅವರ ಪ್ರಮುಖ ಪ್ರಗತಿಯಾಗಿದೆ. <ref>{{Cite web |title=Did you know? These Indian Idol 12 contestants have participated in other reality shows before |url=https://www.tellychakkar.com/tv/tv-news/did-you-know-these-indian-idol-12-contestants-have-participated-other-reality-shows |access-date=8 July 2021 |website=Tellychakkar.com |language=en}}</ref> ದೂರದರ್ಶನದಲ್ಲಿ ಯಶಸ್ಸಿನ ನಂತರ, ಅವರು ಹಿನ್ನೆಲೆ ಗಾಯಕಿಯಾದರು ಮತ್ತು ೨೦೧೦ ರ ತೆಲುಗು ಚಿತ್ರ ''ತೇಜಮ್ಗಾಗಿ'' ಹಾಡನ್ನು ರೆಕಾರ್ಡ್ ಮಾಡಿದರು. <ref>{{Cite web |title=Tejam 2010 Telugu Movie Songs, Tejam Music Director Lyrics Videos Singers & Lyricists |url=https://moviegq.com/movie/tejam-8798/songs |access-date=8 July 2021 |website=MovieGQ |language=en |archive-date=9 ಜುಲೈ 2021 |archive-url=https://web.archive.org/web/20210709190111/https://moviegq.com/movie/tejam-8798/songs |url-status=dead }}</ref>
ನಂತರ, ಅವರು ಐದು ದೂರದರ್ಶನ ಗಾಯನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು, ಅದರಲ್ಲಿ ಎರಡು ತೆಲುಗು, ಎರಡು ಹಿಂದಿ ಮತ್ತು ಒಂದು ತಮಿಳು. <ref>{{Cite web |title=Interview: I will miss 'The Voice India Kids', says ShanmukhaPriya, who recently got eliminated |url=http://www.merinews.com/mobile/article/Entertainment/2016/9/4/interview-i-will-miss-the-voice-india-kids-says-shanmukhapriya-who-recently-got-eliminated/15919985 |access-date=8 July 2021 |website=www.merinews.com |archive-date=9 ಜುಲೈ 2021 |archive-url=https://web.archive.org/web/20210709192205/http://www.merinews.com/mobile/article/Entertainment/2016/9/4/interview-i-will-miss-the-voice-india-kids-says-shanmukhapriya-who-recently-got-eliminated/15919985 |url-status=dead }}</ref> <ref>{{Cite web |date=30 October 2017 |title=Sa Re Ga Ma Pa Li'l Champs 2017: Shreyan Bhattacharya, Anjali Gaikwad emerge winners |url=https://www.hindustantimes.com/tv/sa-re-ga-ma-pa-li-l-champs-2017-shreyan-bhattacharya-anjali-gaikwad-emerge-winners/story-4vTF3xkaNVSkW0Lh0Jlh1M.html |access-date=8 July 2021 |website=[[Hindustan Times]] |language=en}}</ref> <nowiki><i id="mwPw">ಇಂಡಿಯನ್ ಐಡಲ್ ೧೨</i></nowiki> ರಲ್ಲಿ ಅವರ ಅಭಿನಯವು ಅವಳನ್ನು ವ್ಯಾಪಕವಾಗಿ ಜನಪ್ರಿಯಗೊಳಿಸಿತು. <ref>{{Cite web |title=Indian Idol 12 contestant Shanmukha Priya makes judges groove on her song 'Mera naam chin chin chu' |url=https://www.pinkvilla.com/tv/news-gossip/indian-idol-12-contestant-shanmukha-priya-makes-judges-groove-her-song-mera-naam-chin-chin-chu-790894 |access-date=8 July 2021 |website=[[Pinkvilla]] |language=en |archive-date=9 ಜುಲೈ 2021 |archive-url=https://web.archive.org/web/20210709191405/https://www.pinkvilla.com/tv/news-gossip/indian-idol-12-contestant-shanmukha-priya-makes-judges-groove-her-song-mera-naam-chin-chin-chu-790894 |url-status=dead }}</ref> <ref>{{Cite web |title=Shanmukhapriya's performance made the team of Scam 1992 mesmerized |url=https://www.tellychakkar.com/tv/tv-news/shanmukhapriya-s-performance-made-the-team-of-scam-1992-mesmerized-201224 |access-date=8 July 2021 |website=Tellychakkar.com |language=en}}</ref> ''ಜಾನೇ ತೂ'' ಚಿತ್ರದ "ಜಾನೆ ತೂ ಮೇರಾ ಕ್ಯಾ ಹೈ" ಹಾಡಿಗೆ ಆಕೆಯ [[ಜಾಝ್ ಸಂಗೀತ|ಜಾಝ್]] ಶೈಲಿಯ ಅಭಿನಯವನ್ನು ವೀಕ್ಷಿಸಿದ ನಂತರ... ''ಯಾ ಜಾನೆ ನಾ'' (೨೦೦೮) ಕಾರ್ಯಕ್ರಮದಲ್ಲಿ, [[ಎ. ಆರ್. ರಹಮಾನ್|AR ರೆಹಮಾನ್]] ಅವಳನ್ನು ಹೊಗಳಿದರು ಮತ್ತು ಮುಂದಿನ 'ಜಾಜ್ ಸ್ಟಾರ್ ಆಫ್ ಇಂಡಿಯಾ' ಎಂದು ಕರೆದರು. <ref>{{Cite web |date=7 April 2021 |title=Indian Idol 12: Shanmukhapriya is completely mesmerised as AR Rahman backs her performance with his piano piece |url=https://www.bollywoodlife.com/photos/indian-idol-12-shanmukhapriya-is-completely-mesmerised-as-ar-rahman-backs-her-performance-with-his-piano-piece-1807113/ |access-date=8 July 2021 |website=www.bollywoodlife.com |language=en}}</ref> <ref>{{Cite web |date=7 April 2021 |title=A.R. Rahman plays piano during Shanmukhapriya's performance on Indian Idol Season 12 |url=https://www.bollywoodhungama.com/news/features/r-rahman-plays-piano-shanmukhapriyas-performance-indian-idol-season-12/ |access-date=8 July 2021 |website=[[Bollywood Hungama]] |language=en}}</ref> <ref>{{Cite web |date=7 April 2021 |title=Watch: AR Rahman is all praise for Shanmukhapriya in Indian Idol 12 |url=https://www.yovizag.com/ar-rahman-praises-shanmukhapriya-indian-idol-12/ |access-date=8 July 2021 |website=Vizag |language=en-US}}</ref> ಇದಕ್ಕೆ ವ್ಯತಿರಿಕ್ತವಾಗಿ, ಆಕೆಯ ಯೋಡೆಲಿಂಗ್ ಶೈಲಿಯು ಸಾಮಾನ್ಯವಾಗಿ ಪ್ರೇಕ್ಷಕರಿಂದ ಟೀಕೆಗೆ ಒಳಗಾಗುತ್ತದೆ ಮತ್ತು ಟ್ರೋಲ್ ಮಾಡಲ್ಪಡುತ್ತದೆ. <ref>{{Cite web |date=26 May 2021 |title=Indian Idol 12's contestant Shanmukha Priya responds to trolling: 'I take it with a pinch of salt' |url=https://indianexpress.com/article/entertainment/television/indian-idol-12-contestant-shanmukha-priya-responds-to-trolls-7329657/ |access-date=8 July 2021 |website=The Indian Express |language=en}}</ref> <ref>{{Cite web |date=26 May 2021 |title=Indian Idol 12: Shanmukha Priya Breaks Silence on People Demanding Her Eviction |url=https://www.india.com/entertainment/tv-news-indian-idol-12-shanmukha-priya-breaks-silence-on-people-demanding-her-eviction-indian-idol-controversy-update-4691859/ |access-date=8 July 2021 |website=India.com |language=en}}</ref> <ref>{{Cite web |date=25 May 2021 |title='Indian Idol 12': Shanmukhapriya On Being Trolled, Says, "Even Michael Jackson Had To Endure Criticism |url=https://tellydrama.com/indian-idol-12-shanmukhapriya-on-being-trolled-says-even-michael-jackson-had-to-endure-criticism/ |access-date=8 July 2021 |website=Telly Drama {{!}} Web-Series {{!}} Television {{!}} Big Boss 14 |language=en-US |archive-date=12 ಡಿಸೆಂಬರ್ 2023 |archive-url=https://web.archive.org/web/20231212043303/https://tellydrama.com/indian-idol-12-shanmukhapriya-on-being-trolled-says-even-michael-jackson-had-to-endure-criticism/ |url-status=dead }}</ref> ಈ ಟೀಕೆ ಹೆಚ್ಚಾಗಿ ''ಇಂಡಿಯನ್ ಐಡಲ್ ೧೨'' ರಲ್ಲಿ ತನ್ನದೇ ಆದ ಶೈಲಿಯ ವಿವಿಧ ಹಾಡುಗಳನ್ನು ಹಾಡಿದೆ <ref>{{Cite news |date=23 May 2021 |title=Indian Idol 12: Netizens slam contestant Shanmukhapriya for 'ruining' a classic song; say she should be evicted – Times of India |language=en |work=[[The Times of India]] |url=https://timesofindia.indiatimes.com/tv/news/hindi/indian-idol-12-netizens-slam-contestant-shanmukhapriya-for-ruining-a-classic-song-say-she-should-be-evicted/articleshow/82878583.cms |access-date=8 July 2021}}</ref>
=== ಹಿನ್ನೆಲೆ ಗಾಯಕಿಯಾಗಿ ===
{| class="wikitable"
|+ರೆಕಾರ್ಡ್ ಮಾಡಿದ ಹಾಡುಗಳ ಪಟ್ಟಿ
! ವರ್ಷ
! ಚಲನಚಿತ್ರ
! ಹಾಡು
! ಸಂಯೋಜಕ
! ಗೀತರಚನೆಕಾರ
! ಸಹ ಗಾಯಕ
! ಭಾಷೆ
|-
|೨೦೧೦
| ''ತೇಜಮ್''
| "ಇಸ್ಕೊನ್ ಲೋನಾ ಕೃಷ್ಣುಡಿಕೈನಾ"
| ಗಣ
| ರಾಜೇಶ್ ಖನ್ನಾ
| –
| ತೆಲುಗು
|-
|೨೦೧೯
| ''ಆಶಿ ಹಾಯ್ ಆಶಿಕಿ''
| "ಸಂಜೆ ಕ್ಯಾ"
| ಸಚಿನ್ ಪಿಲ್ಗಾಂವ್ಕರ್
| ಅಭಿಷೇಕ್ ಖಾಂಕರ್
| [[ಸೋನು ನಿಗಮ್]]
| ಮರಾಠಿ
|-
|೨೦೨೧
| ''ಅಡವಿ ಡೊಂಗ''
| "ಅತ್ತ ಸುದ್ದೋಯ್"
| ವಿನೋದ್ ಯಜಮಾನ್ಯ
| ರಾಂಬಾಬು ಗೋಸಾಲ
| ವಿನೋದ್ ಯಜಮಾನ್ಯ
| rowspan="5" | ತೆಲುಗು
|-
| rowspan="4" |೨೦೨೨
| ''ಮಲ್ಲಿ ಮೊದಲಿಂದಿ''
| "ಅಲೋನ್ ಅಲೋನ್ (ಸ್ತ್ರೀ ಆವೃತ್ತಿ)"
| ಅನುಪ್ ರೂಬೆನ್ಸ್
|
| –
|-
| ''ಬೂದು'' <ref>{{Cite web |last=Vadlmudi |first=Raghu |date=2022-02-14 |title=గ్రే చిత్రం నుండి ఇండియన్ ఐడల్ ఫేమ్ షణ్ముఖ ప్రియ పాడిన పాట విడుదల చేసిన ఎస్ తమన్ |url=https://telugustop.com/indian-idol-fame-shanmukha-priya-sings-a-song-from-the-movie-gray-%e0%b0%97%e0%b1%8d%e0%b0%b0%e0%b1%87 |access-date=2022-02-15 |website=TeluguStop.com |language=te |archive-date=2022-02-15 |archive-url=https://web.archive.org/web/20220215050149/https://telugustop.com/indian-idol-fame-shanmukha-priya-sings-a-song-from-the-movie-gray-%E0%B0%97%E0%B1%8D%E0%B0%B0%E0%B1%87 |url-status=dead }}</ref>
| "ನನ್ನನ್ನು ಪ್ರೀತಿಸಿದ ಸ್ಪೈ"
| ನಾಗರಾಜು ತಲ್ಲೂರಿ
| ಕಿಟ್ಟು ವಿಸ್ಸಾಪ್ರಗಡ
| –
|-
| ''ಧರ್ಮಸ್ಥಳಿ''
| "ಕೊಡಿ ಕತ್ತಿ"
| ವಿನೋದ್ ಯಜಮಾನ್ಯ
| ರಾಂಬಾಬು ಗೋಸಾಲ
| ವಿನೋದ್ ಯಜಮಾನ್ಯ
|-
| <nowiki><i id="mwnw">ಲಿಗರ್</i></nowiki> <ref>{{Cite news |date=7 September 2021 |title=Vijay Deverakonda fulfils promise to Shanmukha Priya: Indian Idol singer roped in for Liger - Times of India |language=en |work=The Times of India |url=https://timesofindia.indiatimes.com/entertainment/telugu/movies/news/vijay-deverakonda-fulfils-promise-to-shanmukha-priya-indian-idol-singer-roped-in-for-liger/articleshow/86000158.cms |access-date=2021-11-25}}</ref>
| "ಮಂಚಲಿ"
| ತನಿಷ್ಕ್ ಬಾಗ್ಚಿ
| –
| –
|}
== ಚಿತ್ರಕಥೆ ==
=== ದೂರದರ್ಶನ ===
{| class="wikitable"
|+
!ವರ್ಷ
! ಕೆಲಸ
! ಚಾನಲ್
! ಭಾಷೆ
! ಟಿಪ್ಪಣಿಗಳು
|-
|೨೦೦೮
| <nowiki><i id="mwtg">ಸಾ ರೆ ಗಮಾ ಪಾ ಎಲ್'ಇಲ್ ಚಾಂಪ್ಸ್ ೨೦೦೮</i></nowiki>
| ಜೀ ತೆಲುಗು
| ತೆಲುಗು
|
|-
| rowspan="3" |೨೦೧೩
| ''ಪಡುತಾ ತೀಯಾಗ''
| ETV
| ತೆಲುಗು
|
|-
| <nowiki><i id="mwxw">ಸೂಪರ್ ಸಿಂಗರ್ ೪</i></nowiki>
| MAA ಟಿವಿ
| ತೆಲುಗು
|
|-
| ''ಸೂಪರ್ ಸಿಂಗರ್ ಜೂನಿಯರ್''
| ವಿಜಯ ಟಿವಿ
| ತಮಿಳು
|
|-
|೨೦೧೫
| <nowiki><i id="mw2A">ಸೂಪರ್ ಸಿಂಗರ್ ೯</i></nowiki>
| ಸ್ಟಾರ್ ಮಾ
| ತೆಲುಗು
|
|-
|೨೦೧೬
| <nowiki><i id="mw4Q">ವಾಯ್ಸ್ ಇಂಡಿಯಾ ಕಿಡ್ಸ್ S೧</i></nowiki>
| &amp;ಟಿವಿ
| ಹಿಂದಿ
| ಅಂತಿಮ ವಾರದಲ್ಲಿ ತೆಗೆದುಹಾಕಲಾಗಿದೆ <ref>{{Cite web |title='The Voice Kids' eliminated contestants Shanmukha and Ridipta return to studies |url=http://www.radioandmusic.com/entertainment/editorial/news/161003-voice-kids-eliminated-contestants-shanmukha |access-date=8 July 2021 |website=www.radioandmusic.com |language=en}}</ref>
|-
|೨೦೧೭
| ''ಸಾ ರೆ ಗಮಾ ಪಾ ಎಲ್'ಇಲ್ ಚಾಂಪ್ಸ್ ೨೦೧೭''
| ಜೀ ಟಿವಿ
| ಹಿಂದಿ
|
|-
|೨೦೨೦-೨೧
| <nowiki><i id="mw9Q">ಭಾರತೀಯ ವಿಗ್ರಹ ೧೨</i></nowiki>
| ಭಾರತವನ್ನು ಹೊಂದಿಸಿ
| ಹಿಂದಿ
| 5ನೇ ರನ್ನರ್ ಅಪ್
|-
|೨೦೨೦
| ''ಕಪಿಲ್ ಶರ್ಮಾ ಶೋ''
| ಭಾರತವನ್ನು ಹೊಂದಿಸಿ
| ಹಿಂದಿ
| ಅತಿಥಿಯಾಗಿ <ref>{{Cite web |date=20 November 2020 |title=Kapil Sharma pokes fun at Aditya Narayan for announcing marriage after Neha Kakkar's wedding |url=https://www.dnaindia.com/television/report-the-kapil-sharma-show-promo-kapil-sharma-pokes-fun-at-aditya-narayan-for-announcing-marriage-after-neha-kakkar-s-wedding-2857628/amp |access-date=20 November 2020 |website=Daily News & Analysis}}</ref>
|-
| rowspan="2" |೨೦೨೧
| ''ಸೂಪರ್ ಡ್ಯಾನ್ಸರ್''
| ಭಾರತವನ್ನು ಹೊಂದಿಸಿ
| ಹಿಂದಿ
| ಅತಿಥಿಯಾಗಿ
|-
| ''ಶ್ರೀದೇವಿ ನಾಟಕ ಕಂಪನಿ''
| ETV
| ತೆಲುಗು
| ಒಂದು ಸಂಚಿಕೆಯಲ್ಲಿ ಲೈವ್ ಕೆಲವು ಹಾಡುಗಳನ್ನು ಪ್ರದರ್ಶಿಸಲಾಯಿತು <ref>{{Cite web |title=Sridevi Drama Company latest promo - Shanmukha Priya entertains; emotional tributes to Puneeth Raj Kumar |url=https://www.ap7am.com/lv-356189-sridevi-drama-company-latest-promo-shanmukha-priya-entertains-emotional-tributes-to-puneeth-raj-kumar |access-date=2021-11-25 |website=ap7am.com |language=en |archive-date=2021-11-25 |archive-url=https://web.archive.org/web/20211125133627/https://www.ap7am.com/lv-356189-sridevi-drama-company-latest-promo-shanmukha-priya-entertains-emotional-tributes-to-puneeth-raj-kumar |url-status=dead }}</ref>
|}
== ಉಲ್ಲೇಖಗಳು ==
{{ಉಲ್ಲೇಖಗಳು}}
{{Interwikineeded}}
[[ವರ್ಗ:ಜೀವಂತ ವ್ಯಕ್ತಿಗಳು]]
42q48lodlfhj94fk8hqp2b06868jbkd
ಹಿಮಾಲಯನ್ ಹೈಸ್
0
155945
1384597
1369350
2026-08-29T02:10:16Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384597
wikitext
text/x-wiki
[[ಟಿವಿಎಸ್ ಮೋಟಾರ್ ಕಂಪೆನಿ|ಟಿವಿಎಸ್ ಮೋಟಾರ್ ಕಂಪನಿ]]ಯು '''ಹಿಮಾಲಯನ್ ಹೈಸ್''' ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮವು ಮಹಿಳಾ ಸವಾರರಿಗೆ ಸ್ಕೂಟಿ ಜೆಸ್ಟ್ 110 ನಲ್ಲಿ ದೀರ್ಘ ಪ್ರಯಾಣವನ್ನು ಕೈಗೊಳ್ಳುವ ಅವಕಾಶ ಮಾಡಿಕೊಟ್ಟಿತು. 2015 ರಲ್ಲಿ ಭಾರತದ ಅತ್ಯಂತ ಕಿರಿಯ ಮಹಿಳಾ ಸಾಹಸಿ ಸವಾರಿ ಅನಮ್ ಹಾಶಿಮ್ <ref>{{Cite web |date=2016-11-16 |title=This 21-Year-Old Is India's Youngest Female Stunt Rider & She's Scaled The Khardung La Pass Twice |url=https://www.scoopwhoop.com/indias-youngest-female-stunt-rider/#.y4yiigd2y |publisher=[[ScoopWhoop]] |access-date=2024-03-16 |archive-date=2022-06-27 |archive-url=https://web.archive.org/web/20220627031050/https://www.scoopwhoop.com/indias-youngest-female-stunt-rider/#.y4yiigd2y |url-status=dead }}</ref> ಟಿವಿಎಸ್ ಸ್ಕೂಟಿ 110 ಯಲ್ಲಿ [[ಹಿಮಾಲಯ]] ಪರ್ವತ ಪಾಸ್ ಖರ್ದುಂಗ್ ಲಾ ಪ್ರವಾಸವನ್ನು ಪೂರ್ಣಗೊಳಿಸಿದಾಗ ಈ ಕಾರ್ಯಕ್ರಮವು ಖ್ಯಾತಿಯನ್ನು ಗಳಿಸಿತು. <ref>{{Cite web |date=2016-08-30 |title=TVS Himalayan Highs Season 2 Enters India Book of Records |url=http://www.business-standard.com/article/companies/tvs-himalayan-highs-season-2-enters-india-book-of-records-116083000319_1.html |publisher=[[Business Standard]]}}</ref> ಈ ಮಾರ್ಗವನ್ನು ವಿಶ್ವದ ಅತೀ ಎತ್ತರದ ಮೋಟಾರು ಮಾರ್ಗವೆಂದು ಪರಿಗಣಿಸಲಾಗಿದೆ. ಆನಮ್ ಅವರ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿಸಲಾಗಿದೆ.
<ref>{{Cite web |date=2016-08-30 |title=TVS Himalayan Highs Season 2 concludes, enters Indian Book of Records |url=http://www.financialexpress.com/auto/bike-news/tvs-himalayan-highs-season-2-concludes-enters-indian-book-of-records/361958/ |publisher=Financial Express}}</ref> '''ಹಿಮಾಲಯನ್ ಹೈಸ್''' ಎರಡನೇ ಆವೃತ್ತಿಯಲ್ಲಿ ೧೦ ಮಹಿಳೆಯರ ಕಿರುಪಟ್ಟಿಯನ್ನು ಮಾಡಿದ್ದರು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತದಾದ್ಯಂತದ 2000 ಮಹಿಳೆಯರು ಭಾಗವಹಿಸಿದ್ದರು. ಪ್ರತಿ ಮಹಿಳೆಗೆ ಅವರ ಆಯ್ಕೆಯ ಬಣ್ಣದ ಟಿವಿಎಸ್ ಸ್ಕೂಟಿ ಜೆಸ್ಟ್ 110 ನೀಡಲಾಯಿತು, ಆದರೆ ಆನಮ್ ಹಾಶಿಮ್ ಹಿಮಾಲಯನ್ ಹೈಸ್ ವಿಶೇಷ ಆವೃತ್ತಿಯಲ್ಲಿ ಸವಾರಿ ಮಾಡುವ ಮೂಲಕ ತಂಡವನ್ನು ಮುನ್ನಡೆಸಿದರು. ಹಿಮಾಲಯನ್ ಹೈಸ್ ಸೀಸನ್ 2 ಆಗಸ್ಟ್ 11,2016 ರಂದು ಪ್ರಾರಂಭವಾಗಿ, ಆಗಸ್ಟ್ 21,2016 ರಂದು ಮುಕ್ತಾಯಗೊಂಡಿತು. <ref>{{Cite web |date=2016-08-30 |title=TVS Himalayan Highs Season 2 enters India Book of Records |url=http://auto.economictimes.indiatimes.com/news/two-wheelers/scooters-mopeds/tvs-himalayan-highs-season-2-enters-india-book-of-records/53926009 |publisher=[[ET Auto|The Economic Times]]}}</ref> ಆನಮ್ ಹಾಶಿಮ್ ನಾಯಕತ್ವದ ಮೊದಲ ಮಹಿಳಾ ಸವಾರರ ತಂಡವು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಸ್ಥಾನವನ್ನು ಗಳಿಸಿತು.
== ಉಲ್ಲೇಖಗಳು ==
{{ಉಲ್ಲೇಖಗಳು|2}}
{{Interwikineeded}}
[[ವರ್ಗ:ಭಾರತದಲ್ಲಿ ಮಹಿಳೆಯರು]]
addmydk1upgo7eji85gnqyfpyfbppre
ಸರ್ಕ್ಯೂಟ್ ಡಿ ಸ್ಪಾ-ಫ್ರಾಂಕೋರ್ಚಾಂಪ್ಸ್
0
177589
1384594
1376656
2026-08-28T22:17:25Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384594
wikitext
text/x-wiki
ಸರ್ಕ್ಯೂಟ್ ಡಿ ಸ್ಪಾ-ಫ್ರಾಂಕೋರ್ಚಾಂಪ್ಸ್ (ಫ್ರೆಂಚ್ ಉಚ್ಚಾರಣೆ: [siʁkɥi də spa fʁɑ̃kɔʁʃɑ̃]), ಅನೌಪಚಾರಿಕವಾಗಿ ಸ್ಪಾ ಎಂದು ಕರೆಯಲ್ಪಡುತ್ತದೆ, <ref>https://www.formula1.com/en/latest/article/fp2-verstappen-tops-second-practice-at-spa-before-triggering-red-flag-with.56wcPqGbXKKCSupr7pheRT</ref><ref>https://www.nbcsports.com/motor-sports/news/w-series-crash-spa-six-female-drivers</ref> ಇದು ಬೆಲ್ಜಿಯಂನ ವಾಲ್ಲೋನಿಯಾದ ಸ್ಟಾವೆಲೋಟ್ನ ಫ್ರಾಂಕೋರ್ಚಾಂಪ್ಸ್ನಲ್ಲಿ ಸ್ಪಾದ ಆಗ್ನೇಯಕ್ಕೆ ಸುಮಾರು 8 ಕಿಮೀ (5.0 ಮೈ) ದೂರದಲ್ಲಿರುವ 7.004 ಕಿಮೀ (4.352 ಮೈ) ಮೋಟಾರ್-ರೇಸಿಂಗ್ ಸರ್ಕ್ಯೂಟ್ ಆಗಿದೆ. ಇದು ಫಾರ್ಮುಲಾ ಒನ್ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ನ ಪ್ರಸ್ತುತ ಸ್ಥಳವಾಗಿದೆ, 1925 ರಲ್ಲಿ ತನ್ನ ಮೊದಲ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಆಯೋಜಿಸುತ್ತಿದೆ, 1950 ರ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ನೊಂದಿಗೆ ಮೊದಲ F1 ಋತುವಿನಲ್ಲಿ F1 ರೇಸ್ ಅನ್ನು ಸಹ ಆಯೋಜಿಸುತ್ತದೆ ಮತ್ತು 2003 ಮತ್ತು 2006 ಹೊರತುಪಡಿಸಿ 1985 ರಿಂದ ಪ್ರತಿ ವರ್ಷ ಗ್ರ್ಯಾಂಡ್ ಪ್ರಿಕ್ಸ್ ಅನ್ನು ನಡೆಸುತ್ತಿದೆ.
ಸ್ಪಾ 24 ಅವರ್ಸ್ ಆಫ್ ಸ್ಪಾ ಮತ್ತು ವರ್ಲ್ಡ್ ಎಂಡ್ಯೂರೆನ್ಸ್ ಚಾಂಪಿಯನ್ಶಿಪ್ 6 ಅವರ್ಸ್ ಆಫ್ ಸ್ಪಾ-ಫ್ರಾಂಕೋರ್ಚಾಂಪ್ಸ್ ಸೇರಿದಂತೆ ಹಲವಾರು ಇತರ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತದೆ. ಇದು ವಿಶ್ವದ ಅತಿ ಉದ್ದದ ಮೋಟಾರ್ ರೇಸ್ಗಳಲ್ಲಿ ಒಂದಾದ ಯುನಿರಾಯಲ್ ಫನ್ ಕಪ್ 25 ಅವರ್ಸ್ ಆಫ್ ಸ್ಪಾದ ಆತಿಥೇಯವೂ ಆಗಿದೆ.
ಈ ಸರ್ಕ್ಯೂಟ್ ತನ್ನ ಇತಿಹಾಸದುದ್ದಕ್ಕೂ ಹಲವಾರು ಮರುವಿನ್ಯಾಸಗಳಿಗೆ ಒಳಗಾಗಿದೆ, 1979 ರಲ್ಲಿ ಹಳೆಯ ಸರ್ಕ್ಯೂಟ್ನ ಸುರಕ್ಷತಾ ಕಾಳಜಿಯಿಂದಾಗಿ ಸಾರ್ವಜನಿಕ ರಸ್ತೆಗಳನ್ನು ಬಳಸುವ 14.120 ಕಿಮೀ (8.774 ಮೈಲಿ) ಸರ್ಕ್ಯೂಟ್ನಿಂದ ಟ್ರ್ಯಾಕ್ ಅನ್ನು ಮಾರ್ಪಡಿಸಲಾಯಿತು ಮತ್ತು 6.947 ಕಿಮೀ (4.317 ಮೈಲಿ) ಶಾಶ್ವತ ಸರ್ಕ್ಯೂಟ್ಗೆ ಕಡಿಮೆ ಮಾಡಲಾಯಿತು. <ref>https://www.racingcircuits.info/europe/belgium/spa-francorchamps.html#.Xkzr3ihKiUk</ref>
==ಟ್ರ್ಯಾಕ್ ಕಾನ್ಫಿಗರೇಶನ್ಗಳು==
1918 ರಲ್ಲಿ, ಜರ್ಮನ್ ಪ್ರಧಾನ ಕಛೇರಿಯು ಸ್ಪಾದಲ್ಲಿತ್ತು, ಮತ್ತು 1919 ರಲ್ಲಿ, ವರ್ಸೈಲ್ಸ್ ಒಪ್ಪಂದವು ಯುಪೆನ್-ಮಾಲ್ಮೆಡಿ ಪ್ರದೇಶವನ್ನು ಪ್ರಶ್ಯ ಮತ್ತು ಜರ್ಮನ್ ಸಾಮ್ರಾಜ್ಯದಿಂದ ಬೇರ್ಪಡಿಸಿತು. ಜನವರಿ ಮತ್ತು ಜೂನ್ 1920 ರ ನಡುವೆ, ರಹಸ್ಯ ಮತದಾನವಿಲ್ಲದೆ ಮತ್ತು ಇತರ ಪ್ರಶ್ನಾರ್ಹ ಸಂದರ್ಭಗಳಲ್ಲಿ ಜನಾಭಿಪ್ರಾಯ ಸಂಗ್ರಹಣೆಯನ್ನು ನಡೆಸಲಾಯಿತು. ಇದರ ಪರಿಣಾಮವಾಗಿ, ಪರಿವರ್ತನಾ ಸರ್ಕಾರವು ಜೂನ್ 1925 ರಲ್ಲಿ ಬೆಲ್ಜಿಯಂನೊಂದಿಗೆ ಯುಪೆನ್-ಮಾಲ್ಮೆಡಿಯನ್ನು ಏಕೀಕರಣಗೊಳಿಸಲು ಸಿದ್ಧತೆ ನಡೆಸಿತು.
ಲೀಜ್ ಪತ್ರಿಕೆ ಲಾ ಮ್ಯೂಸ್ನ ಮಾಲೀಕರಾದ ಜೂಲ್ಸ್ ಡಿ ಥಿಯರ್, ಓಟವನ್ನು ಆಯೋಜಿಸಲು ಸ್ಥಳವನ್ನು ಹುಡುಕುತ್ತಿದ್ದರು, ಮತ್ತು ಫ್ರಾಂಕೋರ್ಚಾಂಪ್ಸ್ನ ಹೋಟೆಲ್ ಡೆಸ್ ಬ್ರೂಯೆರೆಸ್ನಲ್ಲಿ ಬರ್ಗೋಮಾಸ್ಟರ್ ಜೋಸೆಫ್ ಡಿ ಕ್ರಾಹೆಜ್ ಮತ್ತು ರೇಸಿಂಗ್-ಕಾರ್ ಚಾಲಕ ಹೆನ್ರಿ ಲ್ಯಾಂಗ್ಲೋಯಿಸ್ ವ್ಯಾನ್ ಓಫೆಮ್ ಅವರೊಂದಿಗೆ ನಡೆದ ಸಭೆಯ ನಂತರ, ಸ್ಪಾ-ಫ್ರಾಂಕೋರ್ಚಾಂಪ್ಸ್ನಿಂದ ಹಿಂದಿನ ಜರ್ಮನ್ ಮಾಲ್ಮೆಡಿಗೆ, ಸ್ಟಾವೆಲಾಟ್ಗೆ ಮತ್ತು ಫ್ರಾಂಕೋರ್ಚಾಂಪ್ಸ್ ಕಡೆಗೆ ಹಿಂತಿರುಗುವ ರಸ್ತೆಗಳು ಕೆಲವು ಬಿಗಿಯಾದ ಮೂಲೆಗಳು ಮತ್ತು ಉದ್ದವಾದ ವೇಗದ ವಿಭಾಗಗಳೊಂದಿಗೆ ಆದರ್ಶ ತ್ರಿಕೋನ ಆಕಾರದ ಸರ್ಕ್ಯೂಟ್ ಅನ್ನು ರೂಪಿಸುತ್ತವೆ ಎಂದು ನಿರ್ಧರಿಸಲಾಯಿತು. <ref>https://web.archive.org/web/20120509041346/http://www.spa-francorchamps.be/en/circuit-history.php</ref> ಯೂ ರೂಜ್ ಕ್ರೀಕ್ ಬೆಲ್ಜಿಯಂ-ಜರ್ಮನ್ ಸಾಮ್ರಾಜ್ಯದ ಗಡಿಯಾಗಿತ್ತು <ref>https://web.archive.org/web/20110719105514/http://greif.uni-greifswald.de/geogreif/geogreif-content/upload/mtbl/5501Buernenville1893Kopie.jpg</ref><ref>{{Cite web |url=https://susudata.de/messtisch/tk25.html?lat=50.45&lng=5.9167&zoom=12&marker=5501+B%C3%BCrnenville+%281894%29 |title=ಆರ್ಕೈವ್ ನಕಲು |access-date=2026-01-16 |archive-date=2023-08-16 |archive-url=https://web.archive.org/web/20230816025808/https://susudata.de/messtisch/tk25.html?lat=50.45&lng=5.9167&zoom=12&marker=5501+B%C3%BCrnenville+(1894) |url-status=dead }}</ref> 1920 ರವರೆಗೆ, ಆನ್ಸಿಯೆನ್ ಡೌನೆ ಕಸ್ಟಮ್ಸ್ ಕಚೇರಿ ಪ್ರಾಚೀನಕ್ಕಿಂತ ಇತ್ತೀಚಿನದಾಗಿತ್ತು. ಹಿಂದಿನ ಜರ್ಮನ್ ಬರ್ನೆನ್ವಿಲ್ಲೆ ಮೂಲಕ ಹಾದುಹೋದ ನಂತರ, ಮಾಲ್ಮೆಡಿ ಮತ್ತು ಸ್ಟಾವೆಲಾಟ್ ನಡುವಿನ ರಸ್ತೆಯಲ್ಲಿ, ಮೀಜ್ ರಸ್ತೆಯ ಜಂಕ್ಷನ್ನಲ್ಲಿ, ಟ್ರ್ಯಾಕ್ ಮತ್ತೆ ಹಿಂದಿನ ಗಡಿಯನ್ನು ದಾಟಿತು. ಸ್ಟಾವೆಲಾಟ್ನಲ್ಲಿ, ತೀಕ್ಷ್ಣವಾದ ಬಲಗೈ ಇತ್ತು, ನಂತರ ಅದನ್ನು ವ್ಯಾಪಕ ಬೈಪಾಸ್ನೊಂದಿಗೆ ಬದಲಾಯಿಸಲಾಯಿತು.
ಟ್ರ್ಯಾಕ್ನ ಉದ್ಘಾಟನಾ ಓಟವನ್ನು ಆಗಸ್ಟ್ 1921 ರಲ್ಲಿ ಯೋಜಿಸಲಾಗಿತ್ತು, ಆದರೆ ಒಬ್ಬ ಚಾಲಕ ಮಾತ್ರ ಪ್ರವೇಶಿಸಿದಾಗ ಅದನ್ನು ರದ್ದುಗೊಳಿಸಲಾಯಿತು. ಮೊದಲ ಕಾರು ಓಟವನ್ನು 1922 ರಲ್ಲಿ ಸರ್ಕ್ಯೂಟ್ನಲ್ಲಿ ನಡೆಸಲಾಯಿತು, ಮತ್ತು 1924 ರಲ್ಲಿ ಈಗ ಪ್ರಸಿದ್ಧವಾಗಿರುವ 24 ಗಂಟೆಗಳ ಫ್ರಾಂಕೋರ್ಚಾಂಪ್ಸ್ ಓಟದ ಮೊದಲ ಓಟವನ್ನು ಕಂಡಿತು. ಈ ಸರ್ಕ್ಯೂಟ್ ಅನ್ನು ಮೊದಲು 1925 ರಲ್ಲಿ ಗ್ರ್ಯಾಂಡ್ ಪ್ರಿಕ್ಸ್ ರೇಸಿಂಗ್ಗಾಗಿ ಬಳಸಲಾಯಿತು.
ಮೂಲ ಸ್ಪಾ-ಫ್ರಾಂಕೋರ್ಚಾಂಪ್ಸ್ ಸರ್ಕ್ಯೂಟ್ ಮೂಲಭೂತವಾಗಿ ವೇಗದ ಕೋರ್ಸ್ ಆಗಿತ್ತು, ಚಾಲಕರು ಇತರ ರಸ್ತೆ ರೇಸ್ ಟ್ರ್ಯಾಕ್ಗಳಿಗಿಂತ ಹೆಚ್ಚಿನ ಸರಾಸರಿ ವೇಗವನ್ನು ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ, ಬೆಲ್ಜಿಯನ್ನರು ಅತಿ ವೇಗದ ಸರ್ಕ್ಯೂಟ್ ಅನ್ನು ಹೊಂದುವ ಬಗ್ಗೆ ಹೆಮ್ಮೆಪಡುತ್ತಿದ್ದರು ಮತ್ತು ಸರಾಸರಿ ವೇಗವನ್ನು ಸುಧಾರಿಸಲು, 1939 ರಲ್ಲಿ ಹಿಂದಿನ ಆನ್ಸಿಯೆನ್ ಡೌನೆ ನಿಧಾನಗತಿಯ ಹತ್ತುವಿಕೆ ಯು-ಟರ್ನ್ ಅನ್ನು ಯೂ ರೂಜ್ ಕ್ರೀಕ್ ಕಣಿವೆಯ ಕೆಳಭಾಗದ ನಂತರ ರೈಡಿಲ್ಲನ್ ಎಂದು ಕರೆಯಲ್ಪಡುವ ಬೆಟ್ಟದ ಮೇಲೆ ವೇಗವಾಗಿ ಚಲಿಸುವ ಮೂಲಕ ಕಡಿತಗೊಳಿಸಲಾಯಿತು. 2000 ರವರೆಗೆ ಸಾರ್ವಜನಿಕ ಸಂಚಾರದಲ್ಲಿ, ಯೂ ರೂಜ್ನಲ್ಲಿ, ದಕ್ಷಿಣಕ್ಕೆ ಹೋಗುವ ಸಂಚಾರವು ಪ್ರಸಿದ್ಧ ಹತ್ತುವಿಕೆ ಮೂಲೆಯನ್ನು ಬಳಸಲು ಅನುಮತಿಸಲಾಗಿತ್ತು, ಆದರೆ ವಿರುದ್ಧ ಇಳಿಜಾರಿನ ಸಂಚಾರವು ಹಳೆಯ ರಸ್ತೆ ಮತ್ತು ಗ್ರ್ಯಾಂಡ್ಸ್ಟ್ಯಾಂಡ್ಗಳ ಹಿಂದೆ ಇರುವ ಯು-ಟರ್ನ್ ಅನ್ನು ಬಳಸಬೇಕಾಗಿತ್ತು, ಇದು ಯೂ ರೂಜ್ನ ಕೆಳಭಾಗದಲ್ಲಿರುವ ರೇಸ್ ಟ್ರ್ಯಾಕ್ಗೆ ಮತ್ತೆ ಸೇರುತ್ತದೆ. 2001 ರ ಸುಮಾರಿಗೆ, ಪೂರ್ವಕ್ಕೆ ಹೊಸ ಬೈಪಾಸ್ ರಸ್ತೆ N62c ಅನ್ನು ನಿರ್ಮಿಸಲಾಯಿತು ಮತ್ತು ಸ್ಟಾವೆಲಾಟ್ನಿಂದ ಬ್ಲಾಂಚಿಮಾಂಟ್ಗೆ ಹೋಗುವ ರಸ್ತೆಯು ಕಲ್-ಡಿ-ಸ್ಯಾಕ್ ಆಗಿ ಮಾರ್ಪಟ್ಟ ಕಾರಣ ಟ್ರ್ಯಾಕ್ ಅನ್ನು ಸಾರ್ವಜನಿಕರಿಗೆ ಮುಚ್ಚಲಾಯಿತು.
ಹಳೆಯ ರೇಸ್ ಟ್ರ್ಯಾಕ್ ಕೆಮ್ಮೆಲ್ ವಕ್ರಾಕೃತಿಗಳ ಮೂಲಕ (1979 ರಲ್ಲಿ ನೇರಗೊಳಿಸಲಾಯಿತು) ಟ್ರ್ಯಾಕ್ನ ಅತ್ಯುನ್ನತ ಭಾಗಕ್ಕೆ (102.2 ಮೀ (335 ಅಡಿ) ಮುಂದುವರಿಯಿತು, ನಂತರ ಬರ್ನೆನ್ವಿಲ್ಲೆ ಕಡೆಗೆ ವೇಗವಾಗಿ, ಸ್ವಲ್ಪ ದಂಡೆಯ ಮೇಲೆ ಇಳಿಜಾರಾದ ಎಡ ಮೂಲೆಯಾದ ಲೆಸ್ ಕೊಂಬೆಸ್ಗೆ ಇಳಿಯಿತು, ಈ ಹಳ್ಳಿಯನ್ನು ವೇಗದ ಬಲಗೈ ಸ್ವೀಪ್ನಲ್ಲಿ ಹಾದುಹೋಗಿತು. ಮಾಲ್ಮೆಡಿ ಬಳಿ, ಮಾಸ್ತಾ ನೇರವು ಪ್ರಾರಂಭವಾಯಿತು, ಇದು ಸ್ಟಾವೆಲೋಟ್ ಪಟ್ಟಣವನ್ನು ತಲುಪುವ ಮೊದಲು ಫಾರ್ಮ್ ಮನೆಗಳ ನಡುವೆ ಮಾಸ್ತಾ ಕಿಂಕ್ನಿಂದ ಮಾತ್ರ ಅಡ್ಡಿಪಡಿಸಲ್ಪಟ್ಟಿತು. ನಂತರ, ಟ್ರ್ಯಾಕ್ ಲಾ ಕ್ಯಾರಿಯರ್ ಎಂಬ ಕೆಲವು ಬಾಗುವಿಕೆಗಳನ್ನು ಹೊಂದಿರುವ ಹತ್ತುವಿಕೆ ನೇರ ವಿಭಾಗದ ಮೂಲಕ ಮುಂದುವರಿಯಿತು, ಎರಡು ಹೈ-ಸ್ಪೀಡ್ ತಿರುವುಗಳ ಮೂಲಕ (ಹಿಂದಿನದು ಹೆಸರಿಸದ ಬಲಗೈ ತಿರುವು, ಮತ್ತು ಎರಡನೆಯದು ಬ್ಲಾಂಚಿಮಾಂಟ್ ಎಂದು ಕರೆಯಲ್ಪಟ್ಟಿತು) ಲಾ ಸೋರ್ಸ್ ಹೇರ್ಪಿನ್ಗಾಗಿ ತುಂಬಾ ಬಲವಾಗಿ ಬ್ರೇಕ್ ಮಾಡುವ ಮೊದಲು, ಅದು ಇಳಿಜಾರಿನ ಪ್ರಾರಂಭದ ಮುಕ್ತಾಯ ವಿಭಾಗವನ್ನು ಮತ್ತೆ ಸೇರಿಕೊಂಡಿತು (ಇಂದಿನದಕ್ಕೆ ವಿರುದ್ಧವಾಗಿ, ಲಾ ಸೋರ್ಸ್ಗಿಂತ ಮೊದಲು ಪ್ರಾರಂಭ-ಮುಕ್ತಾಯ ವಿಭಾಗವಿದೆ).
ಸ್ಪಾ ಬೆಲ್ಜಿಯಂನ ಆರ್ಡೆನ್ನೆಸ್ ಗ್ರಾಮಾಂತರದಲ್ಲಿದೆ, ಮತ್ತು ಹಳೆಯ ಸರ್ಕ್ಯೂಟ್ ಅನ್ನು ಇಂದಿಗೂ ಮತ್ತು ಹೆಚ್ಚಿನ ಭಾಗಗಳಲ್ಲಿ ದೈನಂದಿನ ಸಾರ್ವಜನಿಕ ರಸ್ತೆಯಾಗಿ ಬಳಸಲಾಗುತ್ತಿದೆ, ಮತ್ತು ಮನೆಗಳು, ಮರಗಳು, ವಿದ್ಯುತ್ ಕಂಬಗಳು, ಹೊಲಗಳು ಮತ್ತು ಟ್ರ್ಯಾಕ್ ಪಕ್ಕದಲ್ಲಿಯೇ ಇತರ ಅಡೆತಡೆಗಳು ಇದ್ದವು. 1970 ರ ಮೊದಲು, ಸರ್ಕ್ಯೂಟ್ಗೆ ಯಾವುದೇ ರೀತಿಯ ಸುರಕ್ಷತಾ ಮಾರ್ಪಾಡುಗಳನ್ನು ಮಾಡಲಾಗಿಲ್ಲ ಮತ್ತು ಸರ್ಕ್ಯೂಟ್ನ ಪರಿಸ್ಥಿತಿಗಳು, ಕೆಲವು ಒಣಹುಲ್ಲಿನ ಬೇಲ್ಗಳನ್ನು ಹೊರತುಪಡಿಸಿ, ದೈನಂದಿನ ನಾಗರಿಕ ಬಳಕೆಗೆ ವಾಸ್ತವಿಕವಾಗಿ ಹೋಲುತ್ತವೆ. ಮಾಜಿ ಫಾರ್ಮುಲಾ ಒನ್ ರೇಸಿಂಗ್ ಚಾಲಕ ಮತ್ತು ತಂಡದ ಮಾಲೀಕ ಜಾಕಿ ಆಲಿವರ್ "ನೀವು ರಸ್ತೆಯಿಂದ ಹೊರಟರೆ, ನೀವು ಏನನ್ನು ಹೊಡೆಯಲಿದ್ದೀರಿ ಎಂದು ನಿಮಗೆ ತಿಳಿದಿರಲಿಲ್ಲ" ಎಂದು ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.<ref>https://www.youtube.com/watch?v=_VtQ9Uc062M</ref>
1979 ರ ಬದಲಾವಣೆಗಳ ಮೊದಲು, ಸ್ಪಾ-ಫ್ರಾಂಕೋರ್ಚಾಂಪ್ಸ್ ಯುರೋಪ್ನಲ್ಲಿ ಅತ್ಯಂತ ವೇಗದ ರಸ್ತೆ ಸರ್ಕ್ಯೂಟ್ ಆಗಿತ್ತು, <ref>https://www.motorsportmagazine.com/articles/motorcycles/135-067mph-the-fastest-gp-of-all-time/</ref> ಮತ್ತು ಇದು ಅಪಾಯಕಾರಿ ಮತ್ತು ಅತ್ಯಂತ ವೇಗದ ರಸ್ತೆ ಸರ್ಕ್ಯೂಟ್ ಎಂದು ಖ್ಯಾತಿಯನ್ನು ಹೊಂದಿತ್ತು - ಇದು ಚಾಲಕರಿಂದ ಶಾಂತತೆಯನ್ನು ಬಯಸಿತು, ಮತ್ತು ಹೆಚ್ಚಿನವರು ಅದಕ್ಕೆ ಹೆದರುತ್ತಿದ್ದರು. ಹಳೆಯ ಸ್ಪಾ ಸರ್ಕ್ಯೂಟ್ ವಿಶಿಷ್ಟವಾಗಿತ್ತು ಏಕೆಂದರೆ ವೇಗವು ಸ್ಥಿರವಾಗಿ ಹೆಚ್ಚಿತ್ತು ಮತ್ತು ಮೂರರಿಂದ ನಾಲ್ಕು ನಿಮಿಷಗಳವರೆಗೆ ಯಾವುದೇ ಇಳಿಕೆ ಇರಲಿಲ್ಲ. ಇದು ಅಸಾಧಾರಣವಾಗಿ ಕಷ್ಟಕರವಾದ ಮಾನಸಿಕ ಸವಾಲಾಗಿತ್ತು, ಏಕೆಂದರೆ ಹೆಚ್ಚಿನ ತಿರುವುಗಳನ್ನು ಗಂಟೆಗೆ 290 ಕಿಮೀ (180 ಮೈಲುಗಳು) ಗಿಂತ ಹೆಚ್ಚು ತೆಗೆದುಕೊಳ್ಳಲಾಯಿತು ಮತ್ತು ಸಾಕಷ್ಟು ಸಮತಟ್ಟಾಗಿರಲಿಲ್ಲ - ಪ್ರತಿಯೊಂದು ಮೂಲೆಯೂ ಅದರ ಹಿಂದಿನ ಒಂದರಷ್ಟೇ ಮುಖ್ಯವಾಗಿತ್ತು. ಚಾಲಕನು ನಿರೀಕ್ಷೆಗಿಂತ ಹೆಚ್ಚು ಥ್ರೊಟಲ್ ಅನ್ನು ಎತ್ತಿದರೆ, ಹತ್ತನೇ ಒಂದು ಭಾಗದಲ್ಲ, ಸಂಪೂರ್ಣ ಸೆಕೆಂಡುಗಳು ಕಳೆದುಹೋಗುತ್ತವೆ. ಯಾವುದೇ ರೀತಿಯ ಸಣ್ಣ ದೋಷವು ಬಹು ಕಠಿಣ ಪರಿಣಾಮಗಳನ್ನು ಉಂಟುಮಾಡಿತು, ಆದರೆ ಇದು ವಿಲೋಮವಾಗಿಯೂ ಕೆಲಸ ಮಾಡಿತು: ಚಾಲಕನು ತಿರುವಿನಿಂದ ಸ್ವಲ್ಪ ವೇಗವಾಗಿ ಹೊರಬಂದರೆ ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು.
ಸಾರ್ವಜನಿಕ ರಸ್ತೆಗಳಲ್ಲಿ ಓಡುತ್ತಿದ್ದ ಲೆ ಮ್ಯಾನ್ಸ್ ಸರ್ಕ್ಯೂಟ್ನಂತೆಯೇ, ಸ್ಪಾ ಕೂಡ ಮಾರಕ ಅಪಘಾತಗಳಿಗೆ ಕುಖ್ಯಾತವಾಯಿತು. 1960 ರ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ, ಕ್ರಿಸ್ ಬ್ರಿಸ್ಟೋ ಮತ್ತು ಅಲನ್ ಸ್ಟೇಸಿ ಎಂಬ ಇಬ್ಬರು ಚಾಲಕರು 15 ನಿಮಿಷಗಳಲ್ಲಿ ಸಾವನ್ನಪ್ಪಿದರು (ಸ್ಟೇಸಿಯ ಅಪಘಾತವು ಹಕ್ಕಿಯ ಮುಖಕ್ಕೆ ಡಿಕ್ಕಿ ಹೊಡೆದ ಕಾರಣ ಸಂಭವಿಸಿದೆ) ಮತ್ತು ಸ್ಟಿರ್ಲಿಂಗ್ ಮಾಸ್ ಅಭ್ಯಾಸದ ಸಮಯದಲ್ಲಿ ಬರ್ನೆನ್ವಿಲ್ಲೆಯಲ್ಲಿ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದರು. 1970 ರಲ್ಲಿ ಆರ್ಮ್ಕೊ ಕ್ರ್ಯಾಶ್ ಬ್ಯಾರಿಯರ್ಗಳನ್ನು ಟ್ರ್ಯಾಕ್ಗೆ ಸೇರಿಸಿದಾಗ, ಸಾವುಗಳು ಕಡಿಮೆಯಾಗುತ್ತಿದ್ದವು, ಆದರೆ ಟ್ರ್ಯಾಕ್ ಇನ್ನೂ ಇತರ ಅಂಶಗಳಿಗೆ ಕುಖ್ಯಾತವಾಗಿತ್ತು. ಆರ್ಡೆನ್ನೆಸ್ ಅರಣ್ಯವು ತುಂಬಾ ಅನಿರೀಕ್ಷಿತ ಹವಾಮಾನವನ್ನು ಹೊಂದಿತ್ತು, ಕೆಲವು ಪ್ರದೇಶಗಳು ಭಾರೀ ಮಳೆಯನ್ನು ಅನುಭವಿಸುತ್ತಿದ್ದರೆ ಇತರ ಪ್ರದೇಶಗಳು ಸ್ಪಷ್ಟ ಆಕಾಶವನ್ನು ಹೊಂದಿದ್ದವು. ಈ ಅಂಶವು ದೀರ್ಘ ಸರ್ಕ್ಯೂಟ್ಗಳಲ್ಲಿ ಸಾಮಾನ್ಯವಾಗಿದೆ, ಆದರೆ ಸ್ಪಾದಲ್ಲಿನ ಅನಿರೀಕ್ಷಿತ ಹವಾಮಾನವು ಒಂದು ಮೂಲೆಯನ್ನು ಹೊರತುಪಡಿಸಿ ಉಳಿದೆಲ್ಲವೂ ಅತಿ ವೇಗದ್ದಾಗಿರುವುದರಿಂದ, ಇದು ವಿಶ್ವದ ಅತ್ಯಂತ ಅಪಾಯಕಾರಿ ರೇಸ್ ಟ್ರ್ಯಾಕ್ಗಳಲ್ಲಿ ಒಂದಲ್ಲ, ಆದರೆ ಅತ್ಯಂತ ಅಪಾಯಕಾರಿ ರೇಸ್ ಟ್ರ್ಯಾಕ್ಗಳಲ್ಲಿ ಒಂದಾಗಿದೆ.ಪರಿಣಾಮವಾಗಿ, ಫಾರ್ಮುಲಾ 1 ಮತ್ತು ಮೋಟಾರ್ಸೈಕಲ್ ಗ್ರ್ಯಾಂಡ್ ಪ್ರಿಕ್ಸ್ ಮತ್ತು 1000 ಕಿಮೀ ಸ್ಪೋರ್ಟ್ಸ್ಕಾರ್ ರೇಸ್ಗಳು ಸ್ಪಾದಲ್ಲಿ ಸಾಮಾನ್ಯ ಕ್ಷೇತ್ರಗಳಿಗಿಂತ ಚಿಕ್ಕದಾಗಿ ಕಂಡುಬಂದವು ಏಕೆಂದರೆ ಹೆಚ್ಚಿನ ಚಾಲಕರು ಮತ್ತು ಸವಾರರು ಸರ್ಕ್ಯೂಟ್ಗೆ ಹೆದರುತ್ತಿದ್ದರು ಮತ್ತು ಅಲ್ಲಿ ರೇಸಿಂಗ್ ಮಾಡಲು ಇಷ್ಟಪಡಲಿಲ್ಲ. 1973 ಮತ್ತು 1975 ರ 24 ಗಂಟೆಗಳ ಸ್ಪಾ ಟೂರಿಂಗ್ ಕಾರ್ ರೇಸ್ಗಳಲ್ಲಿ ಬಹು ಸಾವುಗಳು ಹೆಚ್ಚು ಕಡಿಮೆ ಹಳೆಯ ಸರ್ಕ್ಯೂಟ್ನ ಭವಿಷ್ಯವನ್ನು ಮುದ್ರೆ ಮಾಡಿದವು, ಮತ್ತು 1978 ರ ಹೊತ್ತಿಗೆ, ಕಳೆದ ವರ್ಷ ಸ್ಪಾ ಅದರ ಮೂಲ ರೂಪದಲ್ಲಿತ್ತು, ಅಲ್ಲಿ ನಡೆದ ಏಕೈಕ ಪ್ರಮುಖ ರೇಸ್ಗಳು ಬೆಲ್ಜಿಯನ್ ಮೋಟಾರ್ಸೈಕಲ್ ಗ್ರ್ಯಾಂಡ್ ಪ್ರಿಕ್ಸ್ ಮತ್ತು ಸ್ಪಾ 24 ಗಂಟೆಗಳ ಟೂರಿಂಗ್ ಕಾರ್ ರೇಸ್; 1000 ಕಿಮೀ ವರ್ಲ್ಡ್ ಸ್ಪೋರ್ಟ್ಸ್ಕಾರ್ ಚಾಂಪಿಯನ್ಶಿಪ್ ರೇಸ್ 1975 ರ ನಂತರ ನಡೆಯಲಿಲ್ಲ ಮತ್ತು 1982 ರವರೆಗೆ ಹಿಂತಿರುಗಲಿಲ್ಲ.<ref>https://www.fiawec.com/en/news/did-you-know-fun-facts-about-spa-francorchamps/6303</ref>
೧೯೬೯ ರಲ್ಲಿ, ಫಾರ್ಮುಲಾ ಒನ್ ಚಾಲಕರು ತೀವ್ರ ಅಪಾಯದ ಕಾರಣ ಬೆಲ್ಜಿಯಂ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಬಹಿಷ್ಕರಿಸಿದರು. ೧೯೬೦ ರ ದಶಕದಲ್ಲಿ ಟ್ರ್ಯಾಕ್ನಲ್ಲಿ ಒಟ್ಟು ಹತ್ತು ಕಾರು ರೇಸಿಂಗ್ ಸಾವುಗಳು ಸಂಭವಿಸಿದ್ದವು, ಅವುಗಳಲ್ಲಿ ಐದು ಕಳೆದ ಎರಡು ವರ್ಷಗಳಲ್ಲಿ ಬಂದವು. ಚಾಲಕರು ಸ್ಪಾಗೆ ಬದಲಾವಣೆಗಳನ್ನು ಮಾಡಬೇಕೆಂದು ಒತ್ತಾಯಿಸಿದರು, ಆದರೆ ಅಲ್ಪಾವಧಿಯಲ್ಲಿ ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ ಆ ವರ್ಷ ಬೆಲ್ಜಿಯಂ ಗ್ರ್ಯಾಂಡ್ ಪ್ರಿಕ್ಸ್ ಅನ್ನು ಕೈಬಿಡಲಾಯಿತು. ಆರ್ಮ್ಕೊ ತಡೆಗೋಡೆಗಳನ್ನು ಟ್ರ್ಯಾಕ್ಗೆ ಸೇರಿಸಲಾಯಿತು ಮತ್ತು ಅದರ ವಿಭಾಗಗಳನ್ನು ಸುಧಾರಿಸಲಾಯಿತು (ವಿಶೇಷವಾಗಿ ಸ್ಟಾವೆಲೋಟ್ ಮತ್ತು ಹಾಲೊವೆಲ್ ವಿಭಾಗಗಳು), ೧೯೬೯ ರ ಲೆ ಮ್ಯಾನ್ಸ್ ರೇಸ್ಗಾಗಿ ಅವುಗಳನ್ನು ಸೇರಿಸಿದಂತೆಯೇ. ಸುಧಾರಿತ ಟ್ರ್ಯಾಕ್ನಲ್ಲಿ ಮುಂದಿನ ವರ್ಷ ನಡೆದ ಕೊನೆಯ ಓಟವು ಸುರಕ್ಷತೆಯ ದೃಷ್ಟಿಯಿಂದ ಚಾಲಕರಿಗೆ ಸಾಕಷ್ಟು ತೃಪ್ತಿಕರವಾಗಿರಲಿಲ್ಲ (ಮಾಲ್ಮೆಡಿಯಲ್ಲಿ ಆ ರೇಸ್ಗಾಗಿ ತಾತ್ಕಾಲಿಕ ಚಿಕೇನ್ ಅನ್ನು ಸೇರಿಸಿದ ನಂತರವೂ ಸಹ), ಮತ್ತು ಚಿಕೇನ್ನೊಂದಿಗೆ ಸಹ, ಚಾಲಕರು ಓಟದ ಸಮಯದಲ್ಲಿ ಸರಾಸರಿ ೨೪೦ ಕಿಮೀ/ಗಂ (೧೫೦ ಮೈಲಿ) ಗಿಂತ ಹೆಚ್ಚು. ೧೯೭೧ ರ ರೇಸ್ಗಾಗಿ, ಟ್ರ್ಯಾಕ್ ಮಾಲೀಕರು ಮತ್ತು ಅಧಿಕಾರಿಗಳು ಕಡ್ಡಾಯ ಸುರಕ್ಷತಾ ಕ್ರಮಗಳೊಂದಿಗೆ ಟ್ರ್ಯಾಕ್ ಅನ್ನು ನವೀಕರಿಸಲಿಲ್ಲ ಮತ್ತು ರೇಸ್ ಅನ್ನು ರದ್ದುಗೊಳಿಸಲಾಯಿತು. ಫಾರ್ಮುಲಾ ಒನ್ 1983 ರವರೆಗೆ ಆಧುನಿಕ ಟ್ರ್ಯಾಕ್ನಲ್ಲಿ ಸ್ಪಾಗೆ ಹಿಂತಿರುಗಲಿಲ್ಲ.
==ಮಸ್ತ ಕಿಂಕ್==
ಆ ಸಮಯದಲ್ಲಿ F1 ಚಾಲಕರಾಗಿದ್ದ ಜಾಕಿ ಸ್ಟೀವರ್ಟ್ ಅವರ ಪ್ರಕಾರ, ಮಸ್ತಾ ಕಿಂಕ್ "ವಿಶ್ವದ ಅತ್ಯಂತ ಕಷ್ಟಕರವಾದ ಮೂಲೆಯಾಗಿತ್ತು". <ref>https://www.youtube.com/watch?v=7_Y2r3SFH9Q</ref> ಮಾಲ್ಮೆಡಿಯಿಂದ ದೀರ್ಘ ಓಟದ ನಂತರ, ಕಾರುಗಳು ಹೆಚ್ಚಿನ ವೇಗವನ್ನು ತಲುಪುವ ಮೊದಲು ಎಡ-ಬಲಕ್ಕೆ ಹೆಚ್ಚಿನ ವೇಗದ ಚಿಕೇನ್ ಆಗಿರುವ ಮಸ್ತಾವನ್ನು ತಲುಪುತ್ತಿದ್ದವು ಮತ್ತು ಉತ್ತಮ ನಿರ್ಗಮನ ವೇಗವು ಅತ್ಯಗತ್ಯವಾಗಿತ್ತು ಏಕೆಂದರೆ ಅದರ ನಂತರ ಸ್ಟಾವೆಲಾಟ್ಗೆ ಮತ್ತೊಂದು ದೀರ್ಘ ನೇರ ಓಟವಿತ್ತು. ಇದು ವೇಗವಾದ ಮತ್ತು ಅಪಾಯಕಾರಿ ಮೂಲೆಯಾಗಿತ್ತು, ಏಕೆಂದರೆ ಇದು ಎರಡು ಉದ್ದವಾದ ಮುರಿಯದ ನೇರ ಮಾರ್ಗಗಳ ಮಧ್ಯದಲ್ಲಿದೆ, ಎರಡೂ ಸುಮಾರು 1.5 ಮೈಲಿ (2.4 ಕಿಮೀ) ಉದ್ದವಿತ್ತು. ಈ ವಲಯದಲ್ಲಿನ ವೇಗವು ಗಂಟೆಗೆ 298 ಕಿಮೀ (185 ಮೈಲಿ) ತಲುಪಬಹುದು. <ref>https://speedcafe.com/masta-kink-the-story-of-motorsports-most-dangerous-corner/</ref>
1970 ರ ಋತುವಿನ ನಂತರ ಮಸ್ತಾ ಅವರನ್ನು F1 ರೇಸಿಂಗ್ ನಿಂದ ತೆಗೆದುಹಾಕಲಾಯಿತು. 1966 ರಲ್ಲಿ ಅವರ BRM ಕಾರ್ ಅಪಘಾತದಲ್ಲಿ ತಲೆಕೆಳಗಾಗಿ ಮೂಲೆಯ ಹೊರಭಾಗದಲ್ಲಿರುವ ತೋಟದ ಮನೆಯ ಬಳಿಯ ಹಳ್ಳದಲ್ಲಿ ಬಿದ್ದು, ಇಂಧನವು ಟ್ಯಾಂಕ್ ನಿಂದ ಹೊರಬಂದು ಸ್ಟೀವರ್ಟ್ ಮೇಲೆ ಚಿಮ್ಮಿತು, ಅವರ ಪಕ್ಕೆಲುಬುಗಳು ಮುರಿದಿದ್ದವು. ಈ ಹಂತದಲ್ಲಿ, ಫಾರ್ಮುಲಾ ಒನ್ ಚಾಲಕರಲ್ಲಿ ಅನೇಕರು ಸ್ಪಾವನ್ನು ಇಷ್ಟಪಡಲಿಲ್ಲ (ಸ್ಟೀವರ್ಟ್ ಮತ್ತು ಜಿಮ್ ಕ್ಲಾರ್ಕ್, ಅವರು ಟ್ರ್ಯಾಕ್ ನಲ್ಲಿ ನಿರಂತರವಾಗಿ ಅಗಾಧ ವೇಗವನ್ನು ಹೊಂದಿದ್ದರು). 1972 ರ 12 ಅವರ್ಸ್ ಆಫ್ ಸೆಬ್ರಿಂಗ್ ನಲ್ಲಿ ಅವರು ವೀಕ್ಷಿಸುತ್ತಿದ್ದಾಗ, ಸ್ಟೀವರ್ಟ್ ಆ ವರ್ಷ ಸ್ಪಾ 1000 ಕಿಮೀ ಓಟವನ್ನು ಬಹಿಷ್ಕರಿಸಲು ಪ್ರಯತ್ನಿಸಿದರು, ಈ ನಡೆಯನ್ನು ಅನೇಕ ಚಾಲಕರು ಗೌರವಿಸಲಿಲ್ಲ, ಏಕೆಂದರೆ ಸ್ಪಾ ಇನ್ನೂ ಫಾರ್ಮುಲಾ ಒನ್ ಹೊರಗಿನ ರೇಸಿಂಗ್ ಚಾಲಕರಲ್ಲಿ ಜನಪ್ರಿಯವಾಗಿತ್ತು. ನಂತರ ಸ್ಟೀವರ್ಟ್ 1986 ರಲ್ಲಿ ಹಳೆಯ ಸ್ಪಾ ಸರ್ಕ್ಯೂಟ್ ಅನ್ನು "ಹುಲಿಯಷ್ಟು ಉಗ್ರ" ಎಂದು ಬಣ್ಣಿಸಿದರು, ಮತ್ತು ನಂತರ ಅವರು 2011 ರಲ್ಲಿ ನೀಡಿದ ಸಂದರ್ಶನದಲ್ಲಿ ಮಸ್ತಾ ಅವರನ್ನು ತಮ್ಮ ವೃತ್ತಿಜೀವನದಲ್ಲಿ ಓಟದ ಟ್ರ್ಯಾಕ್ನಲ್ಲಿ ಬಹುಶಃ ಅತ್ಯಂತ ಕಠಿಣವಾದ ಮೂಲೆ ಎಂದು ಬಣ್ಣಿಸಿದರು; ಇದು ಯೂ ರೂಜ್ಗಿಂತಲೂ ಹೆಚ್ಚು.<ref>https://www.youtube.com/watch?v=ISOEXQG5vOo</ref>
೧೯೭೨ ರ ೨೪-ಗಂಟೆಗಳ ಟೂರಿಂಗ್ ಕಾರ್ ರೇಸ್ ನಲ್ಲಿ, ರಾತ್ರಿಯ ತನ್ನ ಪಿಟ್ ಸ್ಟಾಪ್ ಗಳಲ್ಲಿ ಒಂದರಲ್ಲಿ, ಹ್ಯಾನ್ಸ್-ಜೋಕಿಮ್ ಸ್ಟಕ್ ತನ್ನ ಸಹ-ಚಾಲಕ ಜೋಚೆನ್ ಮಾಸ್ ಗೆ ಕಾರುಗಳ ಶಬ್ದದ ಬಗ್ಗೆ ಕೂಗುತ್ತಾ "ಮಸ್ತಾ ಕಿಂಕ್ ನಲ್ಲಿ ದೇಹದ ಭಾಗಗಳನ್ನು ನೋಡಿಕೊಳ್ಳಬೇಕು" ಎಂದು ಹೇಳಿದನು. ರಸ್ತೆಯಾದ್ಯಂತ ಕಾರುಗಳ ತುಣುಕುಗಳನ್ನು ನೋಡುವ ನಿರೀಕ್ಷೆಯಿಂದ ಮಾಸ್ ಅಲ್ಲಿಗೆ ಬಂದರು, ಆದರೆ ಅದು ಮಾರ್ಷಲ್ ಲಿಯಾನ್ ಗ್ರಿಸಾರ್ಡ್ ಅವರ ಅವಶೇಷ ಎಂದು ಕಂಡುಹಿಡಿದರು, ಅವರನ್ನು ಟ್ರ್ಯಾಕ್ ಪರಿಶೀಲಿಸುವಾಗ ವಾಲ್ಟರ್ ಬ್ರೂನ್ ಡಿಕ್ಕಿ ಹೊಡೆದರು. <ref>http://www.motorsportmemorial.org/focus.php?db=ct&n=3586</ref><ref>https://www.grandprix.com/gpe/cir-070.html</ref>
ಮಸ್ತಾ ನಂತರ, ಮತ್ತು ನಂತರದ ಹಾಲೋವೆಲ್ ಸ್ಟ್ರೈಟ್ ನ ಕೊನೆಯಲ್ಲಿ, ಪಟ್ಟಣದ ಪ್ರವೇಶದ್ವಾರದಲ್ಲಿ ಒಂದು ಚೂಪಾದ ಹೇರ್ ಪಿನ್ ಇತ್ತು, ಅದನ್ನು ನಂತರ ವೇಗವಾದ, ದಂಡೆಯ ಬಲ ಮೂಲೆಯಿಂದ ಬೈಪಾಸ್ ಮಾಡಲಾಯಿತು. ಕಾಡಿನಲ್ಲಿ ರಸ್ತೆಯ ಮತ್ತೊಂದು ವೇಗದ ವಿಭಾಗವು ಬ್ಲಾಂಚಿಮಾಂಟ್ ಗೆ ಕಾರಣವಾಗುತ್ತದೆ. ಇಲ್ಲಿ, ೧೯೭೯ ರ ಹೊಸ ಸಣ್ಣ ಗ್ರ್ಯಾಂಡ್ ಪ್ರಿಕ್ಸ್ ಟ್ರ್ಯಾಕ್ ಹಳೆಯ ವಿನ್ಯಾಸವನ್ನು ಸೇರುತ್ತದೆ.<ref>https://www.circuitsofthepast.com/lap-old-spa-francorchamps/</ref>
==ಹೊಸ ಲೇಔಟ್==
ವರ್ಷಗಳಲ್ಲಿ, ಸ್ಪಾ ಕೋರ್ಸ್ ಅನ್ನು ಹಲವಾರು ಬಾರಿ ಮಾರ್ಪಡಿಸಲಾಗಿದೆ. ಟ್ರ್ಯಾಕ್ ಮೂಲತಃ 14.982 ಕಿಮೀ (9.309 ಮೈಲಿ) ಉದ್ದವಿತ್ತು, ಆದರೆ ಎರಡನೇ ಮಹಾಯುದ್ಧದ ನಂತರ, ಟ್ರ್ಯಾಕ್ ಕೆಲವು ಬದಲಾವಣೆಗಳಿಗೆ ಒಳಗಾಯಿತು. 1930 ರಲ್ಲಿ, ಮಾಲ್ಮೆಡಿಯಲ್ಲಿನ ಚಿಕೇನ್ ಅನ್ನು ತೆಗೆದುಹಾಕಲಾಯಿತು ಮತ್ತು ಬೈಪಾಸ್ ಮಾಡಲಾಯಿತು, ಇದು ಕೋರ್ಸ್ ಅನ್ನು ಇನ್ನಷ್ಟು ವೇಗಗೊಳಿಸಿತು, ಆದರೆ ಚಿಕೇನ್ ಅನ್ನು 1935 ರಲ್ಲಿ ಪುನಃ ಸ್ಥಾಪಿಸಲಾಯಿತು, ಆದರೂ ಸ್ವಲ್ಪ ವಿಭಿನ್ನವಾಗಿತ್ತು. 1939 ರಲ್ಲಿ, "ವಿರಾಜ್ ಡಿ ಎಲ್'ಆನ್ಸಿಯೆನ್ ಡೌನೆ" ಅನ್ನು ತೆಗೆದುಹಾಕಲಾಯಿತು ಮತ್ತು ಮೊಟಕುಗೊಳಿಸಲಾಯಿತು, ಹೀಗಾಗಿ ಹತ್ತುವಿಕೆ ರೈಡಿಲ್ಲೊನ್ ಡಿ ಎಲ್'ಯೂ ರೂಜ್ ಸ್ವೀಪಿಂಗ್ ಕಾರ್ನರ್ ಅನ್ನು ರಚಿಸಲಾಯಿತು. 1947 ರಲ್ಲಿ, ಮಾಲ್ಮೆಡಿಯಲ್ಲಿನ ಚಿಕೇನ್ ಅನ್ನು ಮತ್ತೆ ತೆಗೆದುಹಾಕಲಾಯಿತು ಮತ್ತು ಬೈಪಾಸ್ ಮಾಡಲಾಯಿತು ಮತ್ತು ಮಸ್ತಾ ಸ್ಟ್ರೈಟ್ನ ಭಾಗವಾಗಿ ಮಾಡಲಾಯಿತು. ಮೂಲತಃ ಹಾಲೋವೆಲ್ (ಎರಡನೇ ಮಸ್ತಾ ಸ್ಟ್ರೈಟ್ ನಂತರ ಸ್ಟೇವೆಲೋಟ್ಗೆ ಮೊದಲು ಮೂಲೆ) ಆಗಿದ್ದ ಸ್ವಲ್ಪ ಬಲಗೈ ಆಟಗಾರನನ್ನು ತೆಗೆದುಹಾಕಲಾಯಿತು. ಸ್ಟಾವೆಲಾಟ್ ಪಟ್ಟಣಕ್ಕೆ ಹೋಗುವ ಸ್ವಲ್ಪ ಎಡಗೈ ಆಟಗಾರ ಮತ್ತು ಸ್ಟಾವೆಲಾಟ್ನಲ್ಲಿ ರಸ್ತೆ ಜಂಕ್ಷನ್ನಲ್ಲಿ ಚೂಪಾದ ಬಲಗೈ ಆಟಗಾರನ ಮೂಲಕ ಹೋಗುವ ಬದಲು, ಸ್ಟಾವೆಲಾಟ್ ಅನ್ನು ಬೈಪಾಸ್ ಮಾಡುವ ಅತ್ಯಂತ ವೇಗದ, ಅಗಲವಾದ ಬಲಗೈ ತಿರುವು ಪಡೆಯುವ ಶಾರ್ಟ್ಕಟ್ ಅನ್ನು ನಿರ್ಮಿಸಲಾಯಿತು.ಈ ಎಲ್ಲಾ ಬದಲಾವಣೆಗಳು ಹಳೆಯ ಸ್ಪಾ ಸರ್ಕ್ಯೂಟ್ನ ಅಂತಿಮ ಸಂರಚನೆಯನ್ನು 14.100 ಕಿಮೀ (8.761 ಮೈಲಿ) ಉದ್ದವನ್ನಾಗಿ ಮಾಡಿತು ಮತ್ತು ಸ್ಪಾವನ್ನು ವಿಶ್ವದ ಅತ್ಯಂತ ವೇಗದ ಮುಕ್ತ ರಸ್ತೆ ಸರ್ಕ್ಯೂಟ್ ಆಗಿ ಮಾಡಿತು. ಹಳೆಯ ಸರ್ಕ್ಯೂಟ್ನ ಅಂತಿಮ ವರ್ಷಗಳಲ್ಲಿ, ಚಾಲಕರು ಸರಾಸರಿ 240 ಕಿಮೀ/ಗಂ (150 ಮೈಲಿ) ವೇಗವನ್ನು ಹೊಂದಿದ್ದರು. ಆದಾಗ್ಯೂ, ಅತಿದೊಡ್ಡ ಬದಲಾವಣೆಯೆಂದರೆ, ಸರ್ಕ್ಯೂಟ್ ಅನ್ನು 1979 ರಲ್ಲಿ 14.100 ರಿಂದ 6.947 ಕಿಮೀ (8.761 ರಿಂದ 4.317 ಮೈಲಿ) ಗೆ ಕಡಿಮೆ ಮಾಡಲಾಯಿತು. ಮೂಲತಃ ಯೂ ರೂಜ್ಗಿಂತ ಮೊದಲು ಇಳಿಜಾರಿನಲ್ಲಿದ್ದ ಪ್ರಾರಂಭ/ಮುಕ್ತಾಯ ರೇಖೆಯನ್ನು 1981 ರಲ್ಲಿ ಲಾ ಸೋರ್ಸ್ ಹೇರ್ಪಿನ್ಗಿಂತ ಮೊದಲು ನೇರಕ್ಕೆ ಸ್ಥಳಾಂತರಿಸಲಾಯಿತು. ಅದರ ಪೂರ್ವವರ್ತಿಯಂತೆ, ಹೊಸ ವಿನ್ಯಾಸವು ಇನ್ನೂ ಆರ್ಡೆನ್ನೆಸ್ ಮೂಲಕ ವೇಗವಾದ ಮತ್ತು ಗುಡ್ಡಗಾಡು ಮಾರ್ಗವಾಗಿದ್ದು, ಅಲ್ಲಿ ಗಂಟೆಗೆ 330 ಕಿಮೀ (210 ಮೈಲಿ) ಗಿಂತ ಹೆಚ್ಚಿನ ವೇಗವನ್ನು ತಲುಪಬಹುದು. ಅದರ ಆರಂಭದಿಂದಲೂ, ಈ ಸ್ಥಳವು ಅದರ ಅನಿರೀಕ್ಷಿತ ಹವಾಮಾನಕ್ಕೆ ಹೆಸರುವಾಸಿಯಾಗಿದೆ, ಅಲ್ಲಿ ಚಾಲಕರು ಕೋರ್ಸ್ನ ಒಂದು ಭಾಗವು ಸ್ಪಷ್ಟ ಮತ್ತು ಪ್ರಕಾಶಮಾನವಾಗಿರುತ್ತದೆ ಮತ್ತು ಇನ್ನೊಂದು ಭಾಗವು ಮಳೆ ಮತ್ತು ಜಾರು ಆಗಿರುತ್ತದೆ.
==ರೈಡಿಲ್ಲೊನ್ ಡಿ ಎಲ್'ಯೂ ರೂಜ್==
ಸರ್ಕ್ಯೂಟ್ನ ಅತ್ಯಂತ ಪ್ರಸಿದ್ಧ ಭಾಗವೆಂದರೆ ರೈಡಿಲ್ಲನ್ ಡಿ ಎಲ್'ಯೂ ರೂಜ್ ಸಂಯೋಜನೆ. ಲಾ ಸೋರ್ಸ್ ಹೇರ್ಪಿನ್ ಅನ್ನು ಬಳಸಿದ ನಂತರ, ಚಾಲಕರು ಟ್ರ್ಯಾಕ್ ಮೊದಲ ಬಾರಿಗೆ ಯೂ ರೂಜ್ ಸ್ಟ್ರೀಮ್ ಅನ್ನು ದಾಟುವ ಹಂತಕ್ಕೆ ನೇರವಾಗಿ ಓಡುತ್ತಾರೆ, ನಂತರ ಕಡಿದಾದ ಹತ್ತುವಿಕೆಯಿಂದ ಎಡ-ಬಲ-ಎಡ ಮೂಲೆಗಳ ಸರಣಿಯಲ್ಲಿ ಕುರುಡು ಶಿಖರದೊಂದಿಗೆ ಚಲಿಸುತ್ತಾರೆ. ಯೂ ರೂಜ್ ಮೂಲೆಯು ಕೆಳಭಾಗದಲ್ಲಿ ಎಡಗೈ ಆಟಗಾರನಾಗಿದ್ದು, ಇದು ಆನ್ಸಿಯೆನ್ ಡೌನೆ ಹೇರ್ಪಿನ್ಗೆ ಕಾರಣವಾಯಿತು. ಈ ಸಂಯೋಜನೆಯು ಚಾಲಕರಿಂದ ಸ್ವಲ್ಪ ಕೌಶಲ್ಯವನ್ನು ಹೊಂದಿದ್ದು, ಮುಂದೆ ಇರುವ ಉದ್ದವಾದ ಕೆಮ್ಮೆಲ್ ಮುಂದಿನ "ಲೆಸ್ ಕೊಂಬೆಸ್" ಮೂಲೆಯಲ್ಲಿ ಚಾಲಕರಿಗೆ ಹಿಂದಿಕ್ಕುವ ಅವಕಾಶಗಳನ್ನು ನೀಡುತ್ತದೆ. 1970 ರ ಮೊದಲು ಮೂಲೆಯು ಬಿಗಿಯಾಗಿ ಮತ್ತು ಕಿರಿದಾಗಿತ್ತು, ಇದು ಚಾಲಕರು ತಿರುವುಗಳನ್ನು ವೇಗವಾಗಿ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು.
ಎರಡು ಬಾರಿಯ F1 ವಿಶ್ವ ಚಾಂಪಿಯನ್ ಫರ್ನಾಂಡೊ ಅಲೋನ್ಸೊ ವಿವರಿಸಿದರು:
...ನೀವು ಕೆಳಮುಖ ಮೂಲೆಗೆ ಬರುತ್ತೀರಿ, ಕೆಳಭಾಗದಲ್ಲಿ ಹಠಾತ್ ದಿಕ್ಕನ್ನು ಬದಲಾಯಿಸುತ್ತೀರಿ ಮತ್ತು ನಂತರ ತುಂಬಾ ಕಡಿದಾದ ಹತ್ತುವಿಕೆಗೆ ಹೋಗುತ್ತೀರಿ. ಕಾಕ್ಪಿಟ್ನಿಂದ, ನೀವು ನಿರ್ಗಮನವನ್ನು ನೋಡಲಾಗುವುದಿಲ್ಲ ಮತ್ತು ನೀವು ಕ್ರೆಸ್ಟ್ ಅನ್ನು ದಾಟಿದಾಗ, ನೀವು ಎಲ್ಲಿ ಇಳಿಯುತ್ತೀರಿ ಎಂದು ನಿಮಗೆ ತಿಳಿದಿರುವುದಿಲ್ಲ. ಇದು ಸಮಯಕ್ಕೆ ನಿಗದಿಪಡಿಸಿದ ಲ್ಯಾಪ್ಗೆ ನಿರ್ಣಾಯಕ ಮೂಲೆಯಾಗಿದೆ, ಮತ್ತು ಓಟದಲ್ಲಿಯೂ ಸಹ, ಏಕೆಂದರೆ ನೀವು ನಂತರ ನೇರವಾಗಿ ದೀರ್ಘ ಹತ್ತುವಿಕೆಯನ್ನು ಹೊಂದಿರುತ್ತೀರಿ, ಅಲ್ಲಿ ನೀವು ತಪ್ಪು ಮಾಡಿದರೆ ನೀವು ಬಹಳಷ್ಟು ಸಮಯವನ್ನು ಕಳೆದುಕೊಳ್ಳಬಹುದು. ಆದರೆ ಇದು ಚಾಲಕನ ಭಾವನೆಗೆ ಒಂದು ಪ್ರಮುಖ ಮೂಲೆಯಾಗಿದೆ. ಇದು ಪ್ರತಿ ಲ್ಯಾಪ್ನಲ್ಲಿ ವಿಶೇಷ ಪ್ರಭಾವ ಬೀರುತ್ತದೆ, ಏಕೆಂದರೆ ನೀವು ಮೂಲೆಯ ಕೆಳಭಾಗದಲ್ಲಿ ಹೋಗುವಾಗ ನಿಮ್ಮ ದೇಹದಲ್ಲಿ ಸಂಕೋಚನವೂ ಇರುತ್ತದೆ. ಇದು ತುಂಬಾ ವಿಚಿತ್ರವಾಗಿದೆ - ಆದರೆ ಉತ್ತಮ ಮೋಜಿನ ಸಂಗತಿಯೂ ಆಗಿದೆ.<ref>https://web.archive.org/web/20131017080654/http://www.formula1.com/news/headlines/2004/8/2097.html</ref>
ರೈಡಿಲ್ಲನ್ ಡಿ ಎಲ್'ಯೂಜ್ ಅನ್ನು ಸಂಪೂರ್ಣವಾಗಿ ಓಡಿಸುವುದು ಚಾಲಕರಿಗೆ ದೀರ್ಘಕಾಲದ ಸವಾಲಾಗಿದೆ. ಟೂರಿಂಗ್ ಕಾರುಗಳು 160–180 ಕಿಮೀ/ಗಂ (99–112 ಮೈಲು) ವೇಗದಲ್ಲಿ ತಿರುವು ಪಡೆಯಬಹುದು, ಮತ್ತು ಫಾರ್ಮುಲಾ ಒನ್ ಕಾರುಗಳು ಹೆಚ್ಚಿನ ಡೌನ್ಫೋರ್ಸ್ನಿಂದಾಗಿ 300 ಕಿಮೀ/ಗಂ (190 ಮೈಲು) ವೇಗದಲ್ಲಿ ತಿರುವು ಪಡೆಯಬಹುದು. <ref>https://atlasf1.autosport.com/2000/bel/preview/bellap.jpg</ref> ವಿಶ್ವ ಚಾಂಪಿಯನ್ ಜಾಕ್ವೆಸ್ ವಿಲ್ಲೆನ್ಯೂವ್ ಒಮ್ಮೆ ಡೌನ್ಫೋರ್ಸ್ನ ಪರಿಣಾಮಗಳ ಬಗ್ಗೆ ಮಾತನಾಡುತ್ತಾ, ತಿರುವು ಮೂಲಕ ಹೋಗಲು ಚಾಲಕರು ವೇಗವಾಗಿ ಓಡಿಸಬೇಕು, ಏಕೆಂದರೆ ರೇಸ್ ಕಾರು ವೇಗವಾಗಿ ಹೋದಂತೆ ಡೌನ್ಫೋರ್ಸ್ ಹೆಚ್ಚಾಗುತ್ತದೆ ಎಂದು ಹೇಳಿದರು. ಯೂ ರೂಜ್ ಮೂಲಕ ಥ್ರೊಟಲ್ ಅನ್ನು ಎತ್ತದೆ, ಕಾರು ಲಾ ಸೋರ್ಸ್ನಿಂದ ಕೆಮ್ಮೆಲ್ ಉದ್ದಕ್ಕೂ ನೇರವಾಗಿ ಲೆಸ್ ಕೊಂಬೆಸ್ಗೆ ಸಮತಟ್ಟಾಗುತ್ತದೆ, ಒಟ್ಟು 2.015 ಕಿಮೀ (1.252 ಮೈಲಿ).
ಈ ವಿಭಾಗದ ಮೂಲಕ ನಿಯಂತ್ರಣ ಕಳೆದುಕೊಳ್ಳುವುದು ಸಾಮಾನ್ಯವಾಗಿ ಭಾರೀ ಶಂಟ್ಗೆ ಕಾರಣವಾಗಬಹುದು, ಏಕೆಂದರೆ ಸಾಮಾನ್ಯವಾಗಿ ಕಾರಿನ ಹಿಂಭಾಗವು ಕಳೆದುಹೋಗುತ್ತದೆ ಮತ್ತು ಪರಿಣಾಮವಾಗಿ ಉಂಟಾಗುವ ಡಿಕ್ಕಿಯು ಹೆಚ್ಚಾಗಿ ಪಾರ್ಶ್ವವಾಗಿರುತ್ತದೆ. ಹಲವಾರು ಪ್ರಸಿದ್ಧ ರೇಸಿಂಗ್ ಚಾಲಕರು ರೈಡಿಲ್ಲನ್ ಡಿ ಎಲ್'ಯೂಜ್ ಮೂಲಕ ಚಾಲನೆ ಮಾಡುವಾಗ ಅಪಘಾತಕ್ಕೀಡಾಗಿದ್ದಾರೆ, ಪೋರ್ಷೆ ಸ್ಪೋರ್ಟ್ಸ್ಕಾರ್ನಲ್ಲಿ ಸ್ಟೀಫನ್ ಬೆಲ್ಲೋಫ್ ಮಾರಕವಾಗಿ ಸಾವನ್ನಪ್ಪಿದ್ದಾರೆ, ಟೊಯೋಟಾ ಕೊರೊಲ್ಲಾ ಜಿಟಿಯಲ್ಲಿ 1990 ರ 24 ಗಂಟೆಗಳ ಸ್ಪಾ-ಫ್ರಾಂಕೋರ್ಚಾಂಪ್ಸ್ನಲ್ಲಿ ಗೈ ರೆನಾರ್ಡ್ ಮತ್ತು ಲೋಟಸ್ನಲ್ಲಿ 1993 ರ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ನ ಅಭ್ಯಾಸ ಅವಧಿಯಲ್ಲಿ ಋತುವಿನ ಅಂತ್ಯದ ಅಪಘಾತದಲ್ಲಿ ಅಲೆಕ್ಸ್ ಜನಾರ್ಡಿ ಸೇರಿದಂತೆ. 1999 ರ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಅರ್ಹತಾ ಸುತ್ತಿನಲ್ಲಿ ಜಾಕ್ವೆಸ್ ವಿಲ್ಲೆನ್ಯೂವ್ ರೈಡಿಲ್ಲನ್ ಡಿ ಎಲ್'ಯು ರೂಜ್ನ ಮೇಲ್ಭಾಗದಲ್ಲಿ ಭಾರೀ ಅಪಘಾತಕ್ಕೀಡಾದರು, ಇದನ್ನು ಅವರು "ನನ್ನ ಅತ್ಯುತ್ತಮ ಅಪಘಾತ" ಎಂದು ಬಣ್ಣಿಸಿದರು. ಅವರ ತಂಡದ ಸಹ ಆಟಗಾರ ರಿಕಾರ್ಡೊ ಜೊಂಟಾ ನಂತರ ಅಭ್ಯಾಸದಲ್ಲಿ ಇದೇ ರೀತಿಯ ಅಪಘಾತವನ್ನು ಅನುಭವಿಸಿದರು, ಇದರಿಂದಾಗಿ ವ್ಯಂಗ್ಯಚಿತ್ರಕಾರ ಜಿಮ್ ಬ್ಯಾಂಬರ್ BAR ಬಾಸ್ ಕ್ರೇಗ್ ಪೊಲಾಕ್ ಜೊಂಟಾಗೆ ಹೀಗೆ ಹೇಳುವುದನ್ನು ತೋರಿಸಿದರು: "ಜಾಕ್ವೆಸ್ ಯೂ ರೂಜ್ ಮೂಲಕ ವೇಗವಾಗಿ ಹೋಗುತ್ತಾನೆ, ಆದ್ದರಿಂದ ಅಲ್ಲಿಗೆ ಹೋಗಿ ಜಾಕ್ವೆಸ್ ಮಾಡುವುದನ್ನು ನಿಖರವಾಗಿ ಮಾಡಿ..." ವಿಲ್ಲೆನ್ಯೂವ್ ಮತ್ತು ಜೊಂಟಾ ಇಬ್ಬರೂ ಮೂಲೆಯನ್ನು ಸಮತಟ್ಟಾಗಿ ತೆಗೆದುಕೊಳ್ಳಬಹುದೇ ಎಂದು ನೋಡಲು ವೈಯಕ್ತಿಕ ಪಂತವನ್ನು ಹೊಂದಿದ್ದರು ಎಂದು ನಂತರ ಬಹಿರಂಗವಾಯಿತು.<ref>https://web.archive.org/web/20180216213051/https://www.wtf1.com/post/villeneuve-zonta-spa-99/</ref>
೧೯೯೪ ರಲ್ಲಿ ಇಮೋಲಾದಲ್ಲಿ ರೋಲ್ಯಾಂಡ್ ರಾಟ್ಜೆನ್ಬರ್ಗರ್ ಮತ್ತು ಐರ್ಟನ್ ಸೆನ್ನಾ ಅವರ ಮರಣದ ನಂತರ, ಮುಂದಿನ ಎಫ್ ೧ ರೇಸ್ಗಳಲ್ಲಿ ಜೋಡಿಸಲಾದ ಟೈರ್ಗಳಿಂದ ಮಾಡಲ್ಪಟ್ಟ ಚಿಕೇನ್ಗಳನ್ನು ಪರಿಚಯಿಸಲಾಯಿತು. ೧೯೯೪ ರಲ್ಲಿ ರೈಡಿಲ್ಲೊನ್ ಡಿ ಎಲ್'ಯು ರೂಜ್ಗೆ ಪ್ರವೇಶವನ್ನು ಆ ರೀತಿಯಲ್ಲಿ ತಡೆಯಲಾಯಿತು, ಆದಾಗ್ಯೂ ಅದನ್ನು ಮುಂದಿನ ವರ್ಷ ಅದರ ಹಿಂದಿನ ಸಂರಚನೆಗೆ ಹಿಂತಿರುಗಿಸಲಾಯಿತು. ೨೦೦೨ ರ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ಗಾಗಿ ಮೂಲೆಯನ್ನು ಸ್ವಲ್ಪ ಮಾರ್ಪಡಿಸಲಾಯಿತು.
೨೦೦೫ ರ ಟರ್ಕಿಶ್ ಗ್ರ್ಯಾಂಡ್ ಪ್ರಿಕ್ಸ್ನ ವಾರಾಂತ್ಯದ ಆರಂಭದಲ್ಲಿ ಅಭಿಮಾನಿಗಳು ಮೊದಲು ಕೋರ್ಸ್ ಸಂರಚನೆಯನ್ನು ನೋಡಿದಾಗ, ಹಿಂಭಾಗದಲ್ಲಿ ನೇರವಾದ ಹತ್ತುವಿಕೆ ರೈಡಿಲ್ಲೊನ್ ಡಿ ಎಲ್'ಯು ರೂಜ್ನಂತೆಯೇ ಇದೆ ಎಂದು ಅವರು ಗಮನಿಸಿದರು; ಆದ್ದರಿಂದ ಕಿಂಕ್ ಅನ್ನು ತಮಾಷೆಯಾಗಿ "ಫಾಕ್ಸ್ ರೂಜ್" ಎಂದು ಕರೆಯಲಾಯಿತು (ಫ್ರೆಂಚ್ ಪದ "ನಕಲಿ" ಬಳಸಿ ಮೂಲ ಸ್ಪಾ ಮೂಲೆಯ ಹೆಸರಿನ ಮೇಲಿನ ಶ್ಲೇಷೆ, ಅಂದರೆ "ಸುಳ್ಳು").<ref>http://www.racingcircuits.info/asia/turkey/istanbul-park.html</ref>
==ಬ್ಲಾಂಚಿಮಾಂಟ್==
ಹಳೆಯ 14.100 ಕಿಮೀ (8.761 ಮೈಲಿ) ಸರ್ಕ್ಯೂಟ್ ಮತ್ತು ಹೊಸ, ಚಿಕ್ಕದಾದ, 7.004 ಕಿಮೀ (4.352 ಮೈಲಿ) ಟ್ರ್ಯಾಕ್ ಎರಡರಲ್ಲೂ ಇರುವ ಬ್ಲಾಂಚಿಮಾಂಟ್ ಹೈ-ಸ್ಪೀಡ್ ಎಡಗೈ ತಿರುವು, ಚಿಕೇನ್ ಮೊದಲು ಟ್ರ್ಯಾಕ್ನ ಅಂತಿಮ ಸ್ವೀಪಿಂಗ್ ಮೂಲೆಯಾಗಿದೆ, ಇದು ಪಿಟ್ ನೇರಕ್ಕೆ ಕಾರಣವಾಗುತ್ತದೆ.
ಈ ತಿರುವು ಮತ್ತು ಅದರ ಸಮೀಪಿಸುವಿಕೆಯು ಕಾಲಾನಂತರದಲ್ಲಿ ತೀವ್ರ ಅಪಘಾತಗಳ ದೃಶ್ಯವಾಗಿದೆ, ತೀರಾ ಇತ್ತೀಚಿನದು 2001 ರಲ್ಲಿ, ಎಡ್ಡಿ ಇರ್ವಿನ್ ಅವರ ಜಾಗ್ವಾರ್ ಜೊತೆಗಿನ ಘರ್ಷಣೆಯಿಂದಾಗಿ ಲೂಸಿಯಾನೊ ಬರ್ಟಿ ತನ್ನ ಪ್ರಾಸ್ಟ್ನ ಮುಂಭಾಗದ ರೆಕ್ಕೆಯನ್ನು ಕಳೆದುಕೊಂಡರು, ಮುಂಭಾಗದ ಡೌನ್ಫೋರ್ಸ್ ಮತ್ತು ಸ್ಟೀರಿಂಗ್ ಅನ್ನು ಕಳೆದುಕೊಂಡರು, 298 ಕಿಮೀ/ಗಂ (185 ಮೈಲಿ) ವೇಗದಲ್ಲಿ ಟ್ರ್ಯಾಕ್ ಅನ್ನು ಬಿಟ್ಟು ಟೈರ್ ಗೋಡೆಗೆ ಡಿಕ್ಕಿ ಹೊಡೆದರು, ಡಿಕ್ಕಿಯು ಅವರನ್ನು ಹೊರಗೆ ತಳ್ಳಿ ಕಾರನ್ನು ಟೈರ್ಗಳ ದಿಬ್ಬದಲ್ಲಿ ಹೂತುಹಾಕಿತು. ಕೆಳವರ್ಗದ ರೇಸಿಂಗ್ಗಳಲ್ಲಿಯೂ ಸಮಸ್ಯೆಗಳು ಸಂಭವಿಸಿವೆ. 1997 ರಲ್ಲಿ ಟಾಮ್ ಕ್ರಿಸ್ಟೆನ್ಸನ್ ಫಾರ್ಮುಲಾ 3000 ಕಾರಿನಲ್ಲಿ ಬ್ಲಾಂಚಿಮಾಂಟ್ ತಿರುವಿನಲ್ಲಿ ವೇಗವಾಗಿ ಓಡಿ ಗೋಡೆಗೆ ಡಿಕ್ಕಿ ಹೊಡೆದು, ಮಾನೋಕಾಕ್ ಅನ್ನು ಟ್ರ್ಯಾಕ್ನ ಮಧ್ಯದಲ್ಲಿ ಹಿಂದಕ್ಕೆ ಎಸೆಯಲಾಯಿತು. ಅಲ್ಲಿ ಅದು ಹಲವಾರು ಕಾರುಗಳಿಗೆ ಡಿಕ್ಕಿ ಹೊಡೆದು ಸಂಪೂರ್ಣವಾಗಿ ನಿಂತಿತು. <ref>https://au.motorsport.com/f3000/news/spa-francorchamps-results-and-notes/1690279/</ref>
ಈ ವೇಗದಲ್ಲಿ ತೆಗೆದುಕೊಳ್ಳುವ ಇತರ ತಿರುವುಗಳಿಗಿಂತ ರನ್-ಆಫ್ ಪ್ರದೇಶವು ಕಿರಿದಾಗಿದೆ ಮತ್ತು ರಕ್ಷಣಾತ್ಮಕ ತಡೆಗೋಡೆಗಳ ಹಿಂದೆ 7–8 ಮೀಟರ್ ಇಳಿತವಿದೆ. ಹೊಸ ಟ್ರ್ಯಾಕ್ ಹಳೆಯ 14.100 ಕಿಮೀ (8.761 ಮೈಲಿ) ಟ್ರ್ಯಾಕ್ನ ಮಾರ್ಗವನ್ನು ಮತ್ತೆ ಸೇರಿದ ನಂತರ ಕಾರುಗಳು ತೆಗೆದುಕೊಳ್ಳುವ ಮೊದಲ ತಿರುವು ಇದಾಗಿದೆ. 1992 ರಲ್ಲಿ ಶುಕ್ರವಾರದ ಅವಧಿಯಲ್ಲಿ ಎರಿಕ್ ಕೋಮಾಸ್ ಭಾರೀ ಅಪಘಾತಕ್ಕೀಡಾದ ನಂತರ ಬ್ಲಾಂಚಿಮಾಂಟ್ ಕೂಡ ದೃಶ್ಯವಾಗಿತ್ತು; ಐರ್ಟನ್ ಸೆನ್ನಾ ನಿಲ್ಲಿಸಿ, ತನ್ನ ಕಾರನ್ನು ಇಳಿಸಿ ಗಾಯಗೊಂಡ ಚಾಲಕನಿಗೆ ಸಹಾಯ ಮಾಡಲು ವೇಗವಾಗಿ ಓಡಿದರು, ಇತರ ಕಾರುಗಳು ರೇಸಿಂಗ್ ವೇಗದಲ್ಲಿ ಚಲಿಸುತ್ತಿದ್ದವು.
==ಜಾಕಿ ಇಕ್ಸ್ ಕಾರ್ನರ್==
2018 ರ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ ಟರ್ನ್ 11 ರಿಂದ ಅವರ ವೃತ್ತಿಜೀವನಕ್ಕೆ ಗೌರವವಾಗಿ ಜಾಕಿ ಇಕ್ಸ್ ಕಾರ್ನರ್ ಎಂದು ಕರೆಯಲ್ಪಡುತ್ತಿದೆ. <ref>https://franceracing.fr/f1/spa-francorchamps-reserve-une-surprise-a-jacky-ickx/</ref> ಈ ಕಾರ್ನರ್ ಅನ್ನು ಹಿಂದೆ ಹೆಚ್ಚಿನ ಚಾಲಕರು "ಸ್ಪೀಕರ್ಸ್ ಕಾರ್ನರ್" ಎಂದು ಕರೆಯುತ್ತಿದ್ದರು ಏಕೆಂದರೆ ಕಾರುಗಳು ರೈಡಿಲ್ಲನ್ ಡಿ ಎಲ್'ಯು ರೂಜ್ ಹಿಂದೆ ಕಾಡಿನೊಳಗೆ ಕಣ್ಮರೆಯಾದ ನಂತರ ಸರ್ಕ್ಯೂಟ್ನ ಸಾರ್ವಜನಿಕ ವಿಳಾಸ ಉದ್ಘೋಷಕರು ಮೊದಲ ಬಾರಿಗೆ ಕಾರುಗಳನ್ನು ನೋಡಬಹುದು, ಅಥವಾ ಸರಳವಾಗಿ "ಹೆಸರಿಲ್ಲದ ಕಾರ್ನರ್". 2022 ರ ಹೊತ್ತಿಗೆ ಜಾಕಿ ಇಕ್ಸ್ನ ಎರಡು ಆವೃತ್ತಿಗಳಿವೆ, ಇದು ಕಾರುಗಳಿಗೆ ಪ್ರಾಥಮಿಕ ಮೂಲೆಯಾಗಿದೆ ಮತ್ತು ಮೋಟಾರ್ಸೈಕಲ್ಗಳಿಗೆ ಚಿಕ್ಕದಾದ ಮೂಲೆಯಾಗಿದೆ.
=ತೊಂದರೆಗಳು ಮತ್ತು ನವೀಕರಣಗಳು=
1989 ರ ಟೆಲಿವಿಷನ್ ವಿಥೌಟ್ ಫ್ರಾಂಟಿಯರ್ಸ್ ಡೈರೆಕ್ಟಿವ್ (ಟೆಲಿವಿಷನ್ ವಿಥೌಟ್ ಫ್ರಾಂಟಿಯರ್ಸ್ ಡೈರೆಕ್ಟಿವ್) ಪರಿಚಯದಿಂದಾಗಿ,<ref>http://eur-lex.europa.eu/legal-content/EN/TXT/?uri=uriserv:l24101</ref> 1991 ರಿಂದ ಯುರೋಪಿಯನ್ ಒಕ್ಕೂಟದಲ್ಲಿ ತಂಬಾಕು ಜಾಹೀರಾತು ಮತ್ತು ದೂರದರ್ಶನದಲ್ಲಿ ಪ್ರಾಯೋಜಕತ್ವವನ್ನು ನಿಷೇಧಿಸಲಾಯಿತು, ಇದರಿಂದಾಗಿ ಫಾರ್ಮುಲಾ ಒನ್ ಯುರೋಪಿನಲ್ಲಿ ರೇಸ್ಗಳಿಗೆ ಸಂಬಂಧಿಸಿದಂತೆ ಪ್ರಮುಖ ಬೆದರಿಕೆಯನ್ನು ಎದುರಿಸಬೇಕಾಯಿತು. ಈ ರಾಜಕೀಯ ಮತ್ತು ಶಾಸಕಾಂಗ ಸಂದರ್ಭಗಳಿಂದಾಗಿ, ಬೆಲ್ಜಿಯಂನಲ್ಲಿನ ಆಂತರಿಕ ತಂಬಾಕು ಶಾಸನಕ್ಕೆ ಪ್ರತಿಕ್ರಿಯೆಯಾಗಿ ಸ್ಪಾದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಅನ್ನು 2003 ರ ಕ್ಯಾಲೆಂಡರ್ನಿಂದ ಹೊರಗಿಡಲಾಯಿತು. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸೆನೆಟ್ನಲ್ಲಿ ವಿಶ್ವ ದರ್ಜೆಯ ಕಾರ್ಯಕ್ರಮವೆಂದು ಟ್ಯಾಗ್ ಮಾಡಲಾಯಿತು ಮತ್ತು ಆದ್ದರಿಂದ ಇದನ್ನು 2004 ರ ಫಾರ್ಮುಲಾ ಒನ್ ಸೀಸನ್ಗಾಗಿ ಉಳಿಸಲಾಯಿತು. ಅಂತಿಮ ಬಸ್ ಸ್ಟಾಪ್ ಚಿಕೇನ್ ಅನ್ನು 2004 ಕ್ಕೆ ಮರುರೂಪಿಸಲಾಯಿತು ಮತ್ತು ಬಲಕ್ಕೆ ಹೆಚ್ಚುವರಿ ಸ್ವೀಪ್ ಮಾಡಲಾಯಿತು.
2006 ರಲ್ಲಿ ಫಾರ್ಮುಲಾ ಒನ್ ಕ್ಯಾಲೆಂಡರ್ನಿಂದ ಸ್ಪಾವನ್ನು ಕೈಬಿಡಲಾಯಿತು. 2005 ರ ಕೊನೆಯಲ್ಲಿ ಈವೆಂಟ್ನ ಆಯೋಜಕರು ದಿವಾಳಿಯಾದರು, ಮತ್ತು ಆದ್ದರಿಂದ ರೇಸ್ ಟ್ರ್ಯಾಕ್ ಮತ್ತು ಪ್ಯಾಡಾಕ್ಗೆ ಯೋಜಿತ ಸುಧಾರಣೆಗಳನ್ನು ಇನ್ನೂ ಮಾಡಲಾಗಿಲ್ಲ. ವಾಲೋನಿಯಾ ಸರ್ಕಾರ ಮಧ್ಯಪ್ರವೇಶಿಸಿ ಅಗತ್ಯ ಹಣವನ್ನು ಒದಗಿಸಿತು, ಆದರೆ 2006 ರ ರೇಸ್ ನಡೆಯಲು ತುಂಬಾ ತಡವಾಯಿತು.
2007 ರ ಋತುವಿಗಾಗಿ ಪುನರಾಭಿವೃದ್ಧಿ
ಹೊಸ ಆರ್ಥಿಕ ಬೆಂಬಲದೊಂದಿಗೆ, ನವೀಕರಣವು ನವೆಂಬರ್ 6, 2006 ರಂದು ಪ್ರಾರಂಭವಾಯಿತು ಮತ್ತು ಮೇ 2007 ರಲ್ಲಿ ಪೂರ್ಣಗೊಂಡಿತು, ಇದರ ವೆಚ್ಚ ಸುಮಾರು €19 ಮಿಲಿಯನ್.<ref>http://www.f1technical.net/news/3515</ref> ಫಾರ್ಮುಲಾ 1 ಅನ್ನು ಮಾರ್ಪಡಿಸಿದ ಟ್ರ್ಯಾಕ್ ವಿನ್ಯಾಸದೊಂದಿಗೆ 2007 ರಲ್ಲಿ ಸ್ಪಾಗೆ ಮರಳಲಾಯಿತು. ಬಸ್ ನಿಲ್ದಾಣದ ಚಿಕೇನ್ ಅನ್ನು ಬ್ಲಾಂಚಿಮಾಂಟ್ ಕಡೆಗೆ ಹಿಂದಕ್ಕೆ ಸರಿಸಲಾಗಿದೆ ಮತ್ತು ಲಾ ಸೋರ್ಸ್ ಹೇರ್ಪಿನ್ ಅನ್ನು ಮುಂದಕ್ಕೆ ಸರಿಸಲಾಗಿದೆ. ಇದು ಹೊಸ ಪಿಟ್ ಲೇನ್ಗೆ ಹೆಚ್ಚಿನ ಸ್ಥಳಾವಕಾಶವನ್ನು ನೀಡಿತು ಮತ್ತು ನೇರ ಆರಂಭ/ಮುಕ್ತಾಯವನ್ನು ನೀಡಿತು.
ಮಾರ್ಪಾಡುಗಳು
ಇತರ ಫಾರ್ಮುಲಾ ಒನ್ ಸರ್ಕ್ಯೂಟ್ಗಳಲ್ಲಿ ಚಾಲ್ತಿಯಲ್ಲಿರುವ ಪ್ರವೃತ್ತಿಗಳಿಗೆ ಅನುಗುಣವಾಗಿ, 2010 ರ ಓಟಕ್ಕಾಗಿ ಲೆಸ್ ಕೊಂಬೆಸ್ನ ಒಳಗೆ ಮತ್ತು ಹೊರಗೆ ಹೊಸ ಆಸ್ಫಾಲ್ಟ್ ಹರಿವನ್ನು ಸೇರಿಸಲಾಯಿತು. 2013 ರ ಓಟದ ಮೊದಲು, ಒಳಚರಂಡಿ ಚಡಿಗಳನ್ನು ಮೊದಲ 11 ಗ್ರಿಡ್ ಸ್ಲಾಟ್ಗಳ ಕೆಳಗೆ, ಪ್ರಾರಂಭ-ಮುಕ್ತಾಯ ನೇರದಲ್ಲಿ ಡಾಂಬರಿಗೆ ಕತ್ತರಿಸಲಾಯಿತು. ಇದು ಆರಂಭದಲ್ಲಿ ಆರಂಭದಲ್ಲಿ ಹಿಡಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಚಾಲಕರು ಕಳವಳ ವ್ಯಕ್ತಪಡಿಸಿದರು.<ref>https://www.grandprix247.com/2013/08/22/spa-drainage-grooves-on-the-grid-are-a-concern-for-vettel/</ref>
ರೈಡಿಲ್ಲನ್ ಡಿ ಎಲ್'ಯು ರೂಜ್ ಸುರಕ್ಷತಾ ಕಾಳಜಿಗಳು
2000 ರಲ್ಲಿ ಸಾರ್ವಜನಿಕ ರಸ್ತೆ ಜಾಲದಿಂದ ತೆಗೆದುಹಾಕಲ್ಪಟ್ಟ ನಂತರ, ಸ್ಪಾ ಫ್ರಾಂಕೋರ್ಚಾಂಪ್ಸ್ನ ಶಾಶ್ವತ ರೇಸಿಂಗ್ ಸೌಲಭ್ಯದ ಅವಧಿಯಲ್ಲಿ, ರೈಡಿಲ್ಲನ್ ಡಿ ಎಲ್'ಯು ರೂಜ್ ಸಂಯೋಜನೆಯಲ್ಲಿ ಹಲವಾರು ಅಪಘಾತಗಳು ಸಂಭವಿಸಿವೆ. ರೇಸಿಂಗ್ ಸಂಸ್ಥೆಗಳು ಮತ್ತು ಫೆಡರೇಷನ್ ಇಂಟರ್ನ್ಯಾಷನೇಲ್ ಡಿ ಎಲ್'ಯುಮೋಬೈಲ್ನಂತಹ ಆಡಳಿತ ಮಂಡಳಿಗಳಿಗೆ ಚಾಲಕ ಸುರಕ್ಷತೆಯು ಅತ್ಯುನ್ನತವಾಗಿರುವುದರಿಂದ, ಈ ಅಪಘಾತಗಳು ರೈಡಿಲ್ಲನ್ ಡಿ ಎಲ್'ಯು ರೂಜ್ ಸಂಯೋಜನೆಯನ್ನು ಅಸುರಕ್ಷಿತವೆಂದು ಪರಿಗಣಿಸಲಾಗಿದೆಯೇ ಎಂಬ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾಂದಿ ಹಾಡಿದವು. ನಿಯಂತ್ರಣ ತಪ್ಪಿದ ಕಾರುಗಳನ್ನು ಸಂಗ್ರಹಿಸುವ ಬದಲು ಟ್ರ್ಯಾಕ್ಗೆ ಹಿಂತಿರುಗಿಸುವ ಪ್ರವೃತ್ತಿಯನ್ನು ಹೊಂದಿರುವ ರೈಡಿಲ್ಲನ್ ಡಿ ಎಲ್'ಯು ರೂಜ್ನ ಟೈರ್ ತಡೆಗೋಡೆ ಮತ್ತು ರನ್-ಆಫ್ ಪ್ರದೇಶದ ಸ್ವರೂಪದ ಸುತ್ತ ಟೀಕೆಗಳು ಕೇಂದ್ರೀಕೃತವಾಗಿದ್ದವು. <ref>https://www.thedrive.com/accelerator/42758/spas-most-dangerous-corner-is-finally-being-made-safer</ref>
ಅಕ್ಟೋಬರ್ 2020 ರಲ್ಲಿ ಲಾ ಸೋರ್ಸ್, ರೈಡಿಲ್ಲನ್ ಡಿ ಎಲ್'ಯು ರೂಜ್, ಬ್ಲಾಂಚಿಮಾಂಟ್, ಲೆಸ್ ಕೊಂಬೆಸ್ ಮತ್ತು ಸ್ಟಾವೆಲಾಟ್ನಲ್ಲಿ ಜಲ್ಲಿ ಬಲೆಗಳನ್ನು ಇರಿಸಲಾಗುವುದು ಎಂದು ಸರ್ಕ್ಯೂಟ್ ಘೋಷಿಸಿತು. ರೈಡಿಲ್ಲನ್ ಸೇರಿದಂತೆ ಕೆಲವು ಮೂಲೆಗಳ ರನ್ಆಫ್ ಪ್ರದೇಶಗಳನ್ನು ವಿಸ್ತರಿಸಲಾಗುವುದು. ಇದು ಮೋಟಾರ್ಸೈಕಲ್ ರೇಸ್ಗಳನ್ನು ನಡೆಸಲು ಸಾಧ್ಯವಾಗುವಂತೆ ಸರ್ಕ್ಯೂಟ್ಗೆ €80 ಮಿಲಿಯನ್ ವೆಚ್ಚದ ಅಪ್ಗ್ರೇಡ್ನ ಭಾಗವಾಗಿತ್ತು. ಈ ಅಪ್ಗ್ರೇಡ್ ರೈಡಿಲ್ಲನ್ ಡಿ ಎಲ್'ಯೂಜ್ ಬೆಟ್ಟದ ತುದಿಯಲ್ಲಿ ಗ್ರ್ಯಾಂಡ್ಸ್ಟ್ಯಾಂಡ್ ಅನ್ನು ಸಹ ಒಳಗೊಂಡಿರುತ್ತದೆ. ಜೂನ್ನಲ್ಲಿ ನಡೆದ FIM ಎಂಡ್ಯೂರೆನ್ಸ್ ವರ್ಲ್ಡ್ ಚಾಂಪಿಯನ್ಶಿಪ್ ರೇಸ್ಗಾಗಿ ಸಿದ್ಧವಾಗಿ, ನವೀಕರಣಗಳನ್ನು ಮಾರ್ಚ್ 2022 ರಲ್ಲಿ ಪೂರ್ಣಗೊಳಿಸಲಾಯಿತು. ಸರ್ಕ್ಯೂಟ್ ಅನ್ನು 6.985 ಕಿಮೀ (4.340 ಮೈಲಿ) ಗೆ ಕಡಿಮೆ ಮಾಡಲಾಯಿತು, ಏಕೆಂದರೆ ಜಾಕಿ ಇಕ್ಸ್ ಮೂಲೆಯನ್ನು ಬೈಪಾಸ್ ಮಾಡಲಾಗಿದ್ದು ಮೋಟಾರ್ಸೈಕಲ್ಗಳಿಗೆ ಹೆಚ್ಚಿನ ರನ್ಆಫ್ನೊಂದಿಗೆ ಕಡಿಮೆ ವಿಭಾಗವನ್ನು ರಚಿಸಲಾಗಿದೆ.<ref>https://www.msn.com/en-gb/sport/formula1/f1-drivers-support-return-of-gravel-to-spa-francorchamps/ar-BB1a7o0c</ref><ref>https://www.autosport.com/other/news/152669/spa-unveils-plans-for-80million-renovation-project</ref>
2019 ರಲ್ಲಿ ಫಾರ್ಮುಲಾ 2 ಚಾಲಕ ಆಂಥೋಯಿನ್ ಹ್ಯೂಬರ್ಟ್ ಅವರ ಮಾರಕ ಅಪಘಾತ
ಆಗಸ್ಟ್ ಅಂತ್ಯದಲ್ಲಿ ಫಾರ್ಮುಲಾ 2 ಫೀಚರ್ ರೇಸ್ ಸಮಯದಲ್ಲಿ, ಕೆಮ್ಮೆಲ್ ಸ್ಟ್ರೈಟ್ನಲ್ಲಿ ರೈಡಿಲ್ಲನ್ನ ಸ್ವಲ್ಪ ಸಮಯದ ನಂತರ ಆಂಥೋಯಿನ್ ಹ್ಯೂಬರ್ಟ್ ಮತ್ತು ಜುವಾನ್ ಮ್ಯಾನುಯೆಲ್ ಕೊರಿಯಾ ನಡುವೆ ಗಂಭೀರ ಘಟನೆ ಸಂಭವಿಸಿದೆ. ಎರಡನೇ ಲ್ಯಾಪ್ ಪ್ರಾರಂಭವಾಗುತ್ತಿದ್ದಂತೆ, ಟ್ರೈಡೆಂಟ್ ಚಾಲಕ ಗಿಯುಲಿಯಾನೊ ಅಲೆಸಿ ರೈಡಿಲ್ಲನ್ ಡಿ ಎಲ್'ಯು ರೂಜ್ ವಕ್ರಾಕೃತಿಗಳನ್ನು ಹತ್ತುವಾಗ ತನ್ನ ಕಾರಿನ ನಿಯಂತ್ರಣವನ್ನು ಕಳೆದುಕೊಂಡರು, ಇದರಿಂದಾಗಿ ಅವನಿಗೆ ಮೊದಲು ಬಂದ ಪಂಕ್ಚರ್ನಿಂದಾಗಿ ಅವನ ಕಾರು ತಿರುಗಿ ಸರ್ಕ್ಯೂಟ್ನ ಎಡ ಗೋಡೆಗೆ ಡಿಕ್ಕಿ ಹೊಡೆದು, ಅವನ ಹಿಂಭಾಗದ ರೆಕ್ಕೆ ಹರಿದು ಟ್ರ್ಯಾಕ್ನಲ್ಲಿ ಶಿಲಾಖಂಡರಾಶಿಗಳು ಹರಡಿದವು. ಇನ್ನೊಬ್ಬ ಟ್ರೈಡೆಂಟ್ ಚಾಲಕನಾಗಿ, ರಾಲ್ಫ್ ಬೋಶುಂಗ್ ರೈಡಿಲ್ಲನ್ ಡಿ ಎಲ್'ಯು ರೂಜ್ನ ಶಿಖರವನ್ನು ತಲುಪಿದ ನಂತರ, ಅವನು ವೇಗವನ್ನು ಕಡಿಮೆ ಮಾಡಿ ಅಲೆಸಿಯ ಹಾನಿಗೊಳಗಾದ ಕಾರು ಮತ್ತು ಶಿಲಾಖಂಡರಾಶಿಗಳ ಕ್ಷೇತ್ರವನ್ನು ತಪ್ಪಿಸಲು ರನ್-ಆಫ್ ಪ್ರದೇಶದ ಕಡೆಗೆ ಚಲಿಸಿದನು. ಬೋಶುಂಗ್ ಅನ್ನು ಹತ್ತಿರದಿಂದ ಹಿಂಬಾಲಿಸುತ್ತಿದ್ದ ಮತ್ತು ಅಲೆಸಿಗೆ ಏನಾಯಿತು ಎಂಬುದರ ಬಗ್ಗೆ ಯಾವುದೇ ನೋಟವಿಲ್ಲದ ಹ್ಯೂಬರ್ಟ್, ಬೋಶುಂಗ್ನ ನಿಧಾನಗತಿಯ ಕಾರನ್ನು ತಪ್ಪಿಸಲು ಬಲಕ್ಕೆ ಚಲಿಸಿದನು, ಬೋಶುಂಗ್ನ ಬಲ ಹಿಂಭಾಗದ ಚಕ್ರವನ್ನು ತನ್ನ ಮುಂಭಾಗದ ರೆಕ್ಕೆಯಿಂದ ಕ್ಲಿಪ್ ಮಾಡಿದನು. ಹ್ಯೂಬರ್ಟ್ ಅವರ ಕಾರು ಕೆಮ್ಮೆಲ್ ಉದ್ದಕ್ಕೂ ಹಳಿಯ ಬಲಭಾಗದಲ್ಲಿರುವ ಟೈರ್ ತಡೆಗೋಡೆಗೆ ತೀವ್ರ ಕೋನದಲ್ಲಿ ಡಿಕ್ಕಿ ಹೊಡೆದು, ಪಕ್ಕಕ್ಕೆ ತಿರುಗಿ ಚಾರೋಜ್ ಚಾಲಕ ಜುವಾನ್ ಮ್ಯಾನುಯೆಲ್ ಕೊರಿಯಾ ಅವರ ಹಾದಿಗೆ ಬಿದ್ದರು, ಅವರು ಚಾಲಕ ಸೀಟಿನ ಪ್ರದೇಶದಲ್ಲಿ ಎಡಭಾಗಕ್ಕೆ ಡಿಕ್ಕಿ ಹೊಡೆದರು.<ref>https://thejudge13.com/2019/09/02/serious-questions-need-answers-new-analysis-on-how-it-happened/</ref>
ಈ ಘಟನೆಯು ಹ್ಯೂಬರ್ಟ್ ಸಾವಿಗೆ ಮತ್ತು ಕೊರಿಯಾಗೆ ಗಂಭೀರ ಗಾಯಕ್ಕೆ ಕಾರಣವಾಯಿತು, ಫೀಚರ್ ರೇಸ್ ಅನ್ನು ಕೈಬಿಡಲಾಯಿತು ಮತ್ತು ಒಂದು ದಿನದ ನಂತರ ನಿಗದಿತ ಸ್ಪ್ರಿಂಟ್ ರೇಸ್ ಅನ್ನು ಸಹ ರದ್ದುಗೊಳಿಸಲಾಯಿತು, ಆದರೆ ಫಾರ್ಮುಲಾ 1 ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ ಮುಂದುವರೆಯಿತು.
2021 W ಸರಣಿ ಮತ್ತು ಫಾರ್ಮುಲಾ ಒನ್ ಘಟನೆಗಳು
W ಸರಣಿಯ ಅರ್ಹತಾ ಅವಧಿಯಲ್ಲಿ, ಮಳೆ ಬೀಳಲು ಪ್ರಾರಂಭಿಸಿತು, ಇದು ಹಿಡಿತದ ಮೇಲೆ ಪರಿಣಾಮ ಬೀರಿತು. ಇದರಿಂದಾಗಿ ಆರು ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಘಟನೆ ಸಂಭವಿಸಿತು. ರೈಡಿಲ್ಲನ್ ಡಿ ಎಲ್'ಯೂಜ್ನಲ್ಲಿರುವ ತಡೆಗೋಡೆಗೆ ತಿರುಗುತ್ತಾ ತನ್ನ ಕಾರಿನ ನಿಯಂತ್ರಣ ಕಳೆದುಕೊಂಡ ಮೊದಲ ಚಾಲಕಿ ಸಾರಾ ಮೂರ್. ಅಬ್ಬಿ ಈಟನ್ ಕೂಡ ಕಾರನ್ನು ಕಳೆದುಕೊಂಡು ಅದೇ ತಡೆಗೋಡೆಗೆ ತಿರುಗಿದಳು. ಅವಳು ಕಡಿಮೆ ವೇಗದಲ್ಲಿ ಮೂರ್ಗೆ ಪುಟಿದಳು. ಬೀಟ್ಸ್ಕೆ ವಿಸ್ಸರ್ ಹಿಂಭಾಗವನ್ನು ಕಳೆದುಕೊಂಡು, ತಿರುಗಿ ನೇರವಾಗಿ ಈಟನ್ ಮತ್ತು ಮೂರ್ಗೆ ಹೋದಳು, ಇದರಿಂದಾಗಿ ಈಟನ್ ವಾಯುಗಾಮಿಯಾದಳು. ಐಲಾ ಆಗ್ರೆನ್ ವಿಸ್ಸರ್ನಂತೆಯೇ ಮಾಡಿದಳು, ತಿರುಗುತ್ತಾ ಮೂರ್ ಮತ್ತು ವಾಯುಗಾಮಿ ಈಟನ್ಗೆ ಓಡಿಹೋದಳು. ನಂತರ ಬೆಲೆನ್ ಗಾರ್ಸಿಯಾ ಎಲ್ಲಾ ನಾಲ್ಕು ಕಾರುಗಳನ್ನು ಡಿಕ್ಕಿ ಹೊಡೆದಳು, ಇದರಿಂದಾಗಿ ವಿಸ್ಸರ್ ವಾಯುಗಾಮಿಯಾದಳು ಮತ್ತು ಟೈರ್ ತಡೆಗೋಡೆಯನ್ನು ಆರೋಹಿಸಿದಳು. ನಂತರ ಫ್ಯಾಬಿಯೆನ್ ವೊಲ್ವೆಂಡ್ನ ಅಂತಿಮ ಕಾರು ಬೀಟ್ಸ್ಕೆ ವಿಸ್ಸರ್ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿತು, ಇದರಿಂದಾಗಿ ವಿಸ್ಸರ್ ಟ್ರ್ಯಾಕ್ನಾದ್ಯಂತ ತಿರುಗಿ ಉರುಳಿತು.<ref>https://www.marca.com/en/f1/2021/08/28/612a1c5d46163fc6868b4585.html</ref><ref>https://www.grandprix247.com/2021/08/27/two-w-series-drivers-hospitalised-after-bi-crash-at-spa-visser/</ref> ಈ ಘಟನೆಯು ಕಾರುಗಳು ಟ್ರ್ಯಾಕ್ನಾದ್ಯಂತ ಹರಡಿ ಪ್ರದೇಶಗಳಿಂದ ಓಡಿಹೋಯಿತು. ಮುನ್ನೆಚ್ಚರಿಕೆಯಾಗಿ ಎಲ್ಲಾ ಚಾಲಕರನ್ನು ಪರೀಕ್ಷಿಸಲಾಯಿತು, ಮತ್ತು ವಿಸ್ಸರ್ ಮತ್ತು ಅಗ್ರೆನ್ ಅವರನ್ನು ಎಕ್ಸ್-ರೇ ಮತ್ತು ಹೆಚ್ಚಿನ ತಪಾಸಣೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು.<ref>https://www.planetf1.com/news/two-hospitalised-w-series-crash-spa/</ref> ಅಂತಿಮವಾಗಿ, ಎಲ್ಲಾ ಚಾಲಕರನ್ನು ತೆರವುಗೊಳಿಸಲಾಯಿತು ಮತ್ತು ಯಾವುದೇ ಹಾನಿಯಾಗದಂತೆ ಮಾಡಲಾಯಿತು.<ref>https://www.bbc.co.uk/sport/motorsport/58362065</ref>
W ಸೀರೀಸ್ ಅಪಘಾತದ ಒಂದು ದಿನದ ನಂತರ, ಫಾರ್ಮುಲಾ ಒನ್ ತನ್ನ ಅರ್ಹತಾ ಅವಧಿಯನ್ನು ಭಾರೀ ಮಳೆಯಲ್ಲಿ ನಡೆಸಿತು. ಅರ್ಹತಾ ಹಂತದ ಮೂರನೇ ವಿಭಾಗದಲ್ಲಿ, ಅನೇಕ ಚಾಲಕರು ಪರಿಸ್ಥಿತಿಗಳು ಸುರಕ್ಷಿತವಾಗಿಲ್ಲ ಮತ್ತು ಅವಧಿಯನ್ನು ವಿಳಂಬಗೊಳಿಸಬೇಕು ಅಥವಾ ಕೆಂಪು ಧ್ವಜ ಹಾರಿಸಬೇಕು ಎಂದು ದೂರುತ್ತಿದ್ದರು. ನಂತರ ಲ್ಯಾಂಡೊ ನಾರ್ರಿಸ್ ಓವರ್ಸ್ಟಿಯರ್ ಅನ್ನು ಸ್ನ್ಯಾಪ್ ಮಾಡಿದರು, ಮತ್ತು ನಂತರ ಸರಿಪಡಿಸಿದರು, ಆದರೆ ನಂತರ ರೈಡಿಲ್ಲನ್ ಡಿ ಎಲ್'ಯೂಜ್ನಲ್ಲಿ ಟೈರ್ ತಡೆಗೋಡೆಗೆ ಅಕ್ವಾಪ್ಲೇನ್ ಮಾಡಿದರು. ನಂತರ ಅವರ ಮೆಕ್ಲಾರೆನ್ ರೇಸಿಂಗ್ ಲೈನ್ ಅನ್ನು ದಾಟುವಾಗ ಟ್ರ್ಯಾಕ್ಗೆ ತಿರುಗಿದರು.<ref>https://www.formula1.com/en/latest/article.watch-norris-walks-away-after-dramatic-eau-rouge-raidillon-crash-in-belgian.J5Q3gJmjlW8wcDSAYJEvI.html</ref><ref>{{Cite web |url=https://racer.com/2021/08/28/big-norris-crash-at-eau-rouge-red-flags-qualifying/ |title=ಆರ್ಕೈವ್ ನಕಲು |access-date=2026-01-18 |archive-date=2021-08-31 |archive-url=https://web.archive.org/web/20210831135919/https://racer.com/2021/08/28/big-norris-crash-at-eau-rouge-red-flags-qualifying/ |url-status=dead }}</ref> ನಾರ್ರಿಸ್ ಅವರನ್ನು ಎಕ್ಸ್-ರೇಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಮರುದಿನ ರೇಸ್ ಮಾಡಲು ಅನುಮತಿ ನೀಡಲಾಯಿತು.<ref>https://www.autosport.com/f1/news/norris-cleared-to-race-in-f1-belgian-gp-after-eau-rouge-q3-crash/6655854/</ref>
ಈ ಅಪಘಾತ ಮತ್ತು ಕೇವಲ ಒಂದು ದಿನದ ಮೊದಲು ನಡೆದ W ಸರಣಿಯ ಘಟನೆಯ ನಂತರ, ಎಲ್ಲಾ ಸರಣಿಯ ಚಾಲಕರು ಸಾಮಾಜಿಕ ಮಾಧ್ಯಮ ಮತ್ತು ಸಂದರ್ಶನಗಳಲ್ಲಿ ಟ್ರ್ಯಾಕ್ನ ಆ ವಿಭಾಗದಲ್ಲಿ ಬದಲಾವಣೆಗಳನ್ನು ಮಾಡುವಂತೆ ಒತ್ತಾಯಿಸುತ್ತಿದ್ದರು, ಅವರಲ್ಲಿ ಜ್ಯಾಕ್ ಐಟ್ಕೆನ್ ಸೇರಿದ್ದಾರೆ, ಒಂದು ತಿಂಗಳ ಹಿಂದೆ 2021 ರ 24 ಅವರ್ಸ್ ಆಫ್ ಸ್ಪಾದಲ್ಲಿ ರೈಡಿಲ್ಲನ್ ಡಿ ಎಲ್'ಯೂಜ್ನಲ್ಲಿ ಸಂಭವಿಸಿದ ಅಪಘಾತದ ನಂತರ ಅವರ ಕಾಲರ್ಬೋನ್ ಮುರಿದು ಕಶೇರುಖಂಡ ಮುರಿದಿತ್ತು, <ref>https://twitter.com/jaitkenracer/status/1431284938561757190</ref> ಝೌ ಗುವಾನ್ಯು,<ref>https://twitter.com/gyzhou_33/status/1431283377651470344</ref> ಪಿಯೆಟ್ರೊ ಫಿಟ್ಟಿಪಾಲ್ಡಿ, <ref>https://twitter.com/pifitti/status/1431273014549692422</ref> ಕಾರ್ಲೋಸ್ ಸೈನ್ಜ್ ಜೂನಿಯರ್, <ref>https://www.gpfans.com/en/f1-news/68994/sainz-adds-to-growing-concern-over-eau-rouge-raidillon-after-norris-crash/</ref> ಸಚಾ ಫೆನೆಸ್ಟ್ರಾಜ್,<ref>https://www.racefans.net/2021/08/28/drivers-urge-changes-to-eau-rouge-and-raidillon-after-huge-w-series-crash/</ref> ಜೇಕ್ ಹ್ಯೂಸ್, <ref>https://web.archive.org/web/20210828103949/https://www.wtf1.com/post/drivers-call-for-changes-to-eau-rouge-raidillon-after-horror-w-series-crash/</ref> ಡೇನಿಯಲ್ ರಿಕಿಯಾರ್ಡೊ, <ref>https://f1i.com/news/416022-ricciardo-supports-eau-rouge-changes-after-norris-crash.html</ref> ಮತ್ತು ಟೊಟೊ ವೋಲ್ಫ್, <ref>https://www.gpfans.com/en/f1-news/69045/wolff-on-rain-delay-racing-too-dangerous-through-eau-rouge-and-raidillon/</ref> ಎಲ್ಲರೂ ಸರ್ಕ್ಯೂಟ್ ಅನ್ನು ಸುರಕ್ಷಿತವಾಗಿಸಲು ತಕ್ಷಣವೇ ಬದಲಾವಣೆಗಳನ್ನು ಮಾಡಬೇಕಾಗಿದೆ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡರು.
ಇತರ ಘಟನೆಗಳು
ಸರ್ಕ್ಯೂಟ್ನ ರೈಡಿಲ್ಲನ್ ಡಿ ಎಲ್'ಯೂ ರೂಜ್ ವಿಭಾಗದಲ್ಲಿ ಹಲವಾರು ಇತರ ಘಟನೆಗಳು ನಡೆದಿವೆ. ಇವುಗಳಲ್ಲಿ 2016 ರಲ್ಲಿ ಕೆವಿನ್ ಮ್ಯಾಗ್ನುಸ್ಸೆನ್ ಅಪಘಾತಕ್ಕೀಡಾಗಿದ್ದರು, ಅಲ್ಲಿ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಕೇವಲ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು;<ref>https://www.formula1.com/en/latest/headlines/2016/8/belgian-race-red-flagged-after-huge-magnussen-crash.html</ref> 2018 ರಲ್ಲಿ ಪಿಯೆಟ್ರೊ ಫಿಟ್ಟಿಪಾಲ್ಡಿ ಅವರ ಕಾಲು ಮುರಿದಿತ್ತು,<ref>https://www.motorsport.com/wec/video/pietro-fittipaldi-crash-spa-2018-109212/319345/</ref> ಮತ್ತು 2021 ರಲ್ಲಿ ಜ್ಯಾಕ್ ಐಟ್ಕೆನ್ ಅವರ ಕಾಲರ್ಬೋನ್ ಮುರಿದಿತ್ತು,<ref>https://www.planetf1.com/news/jack-aitken-eau-rouge-change/</ref> ಮತ್ತು 2023 ರಲ್ಲಿ ಡಿಲಾನೊ ವ್ಯಾಂಟ್ ಹಾಫ್ ಅವರ ಮಾರಕ ಅಪಘಾತ ಸೇರಿವೆ.
2022 ರ ಋತುವಿಗಾಗಿ ಪುನರಾಭಿವೃದ್ಧಿ
2022 ರ FIM EWC 24H ಸ್ಪಾ EWC ಮೋಟೋಸ್ ರೇಸ್ ಮತ್ತು 2022 F1 ಗ್ರ್ಯಾಂಡ್ ಪ್ರಿಕ್ಸ್ಗೆ ಮುಂಚಿತವಾಗಿ, ಸರ್ಕ್ಯೂಟ್ 2020 ರಿಂದ ಯೋಜಿಸಲಾಗಿದ್ದ ಪ್ರಮುಖ ಸೌಲಭ್ಯ ಮತ್ತು ಸುರಕ್ಷತಾ ಸೌಲಭ್ಯದ ಪುನರಾಭಿವೃದ್ಧಿಗೆ ಒಳಗಾಯಿತು. ರೈಡಿಲ್ಲನ್ ಡಿ ಎಲ್'ಯೂಜ್ ಕೋರ್ಸ್ ಭಾಗಕ್ಕೆ ಹೆಚ್ಚುವರಿ ರನ್-ಆಫ್ ಅನ್ನು ಸೇರಿಸಲಾಯಿತು - ಇತ್ತೀಚಿನ ವರ್ಷಗಳಲ್ಲಿ ಟ್ರ್ಯಾಕ್ನ ಆ ವಿಭಾಗದಲ್ಲಿ ಹಲವಾರು ದೊಡ್ಡ ಅಪಘಾತಗಳಿಗೆ ಪ್ರತಿಕ್ರಿಯೆಯಾಗಿ ಬದಲಾವಣೆಗಳನ್ನು ಮಾಡಲಾಯಿತು, ಇದರಲ್ಲಿ 2019 ರ ಸ್ಪಾ-ಫ್ರಾಂಕೋರ್ಚಾಂಪ್ಸ್ ಫಾರ್ಮುಲಾ 2 ಸುತ್ತಿನಲ್ಲಿ ಆಂಥೋಯಿನ್ ಹ್ಯೂಬರ್ಟ್ ಅವರ ಮಾರಕ ಅಪಘಾತವೂ ಸೇರಿದೆ.<ref>https://web.archive.org/web/20220719233458/https://wtf1.com/post/spa-francorchamps-reveals-new-look-ahead-of-2022-belgian-gp/</ref> ಇದರ ಜೊತೆಗೆ, ಸರ್ಕ್ಯೂಟ್ನ ಸುತ್ತಲಿನ ವಿವಿಧ ಮೂಲೆಗಳಲ್ಲಿ ಜಲ್ಲಿ ಬಲೆಗಳನ್ನು ಸೇರಿಸಲಾಯಿತು ಮತ್ತು ಮಾರ್ಪಡಿಸಲಾಯಿತು, ಅವುಗಳೆಂದರೆ: ಲಾ ಸೋರ್ಸ್, ಲೆಸ್ ಕೊಂಬೆಸ್, ಸ್ಪೀಕರ್ಸ್ ಕಾರ್ನರ್, ಪೌಹಾನ್ (ಅಥವಾ ಡಬಲ್ ಗೌಚೆ), ಸ್ಟಾವೆಲಾಟ್ ಮತ್ತು ಬ್ಲಾಂಚಿಮಾಂಟ್.<ref>https://www.motorsport.com/f1/news/spa-80million-euro-revamp-gravel-traps/4888499/</ref><ref>https://www.planetf1.com/news/spa-francorchamps-revamp-gravel/</ref>
ಈ ವರ್ಷದ ಈವೆಂಟ್ಗಾಗಿ ಟ್ರ್ಯಾಕ್ ಅನ್ನು ಮತ್ತೆ ಅಲಂಕರಿಸಲಾಗಿದೆ, ಟ್ರ್ಯಾಕ್ ಹಿಡಿತದ ಮಟ್ಟವನ್ನು ಬದಲಾಯಿಸಲಾಗುತ್ತಿದೆ, ಮ್ಯಾಕ್ಸ್ ವರ್ಸ್ಟಪ್ಪೆನ್ ನವೀಕರಿಸಿದ ಸರ್ಕ್ಯೂಟ್ನಲ್ಲಿ ಫಾರ್ಮುಲಾ ಒನ್ ಕಾರನ್ನು ಓಡಿಸಿದ ಮೊದಲ ಚಾಲಕರಾಗಿದ್ದಾರೆ, ರೆಡ್ ಬುಲ್ RB7 ನಲ್ಲಿ.<ref>https://www.racefans.net/2022/08/23/verstappen-first-to-test-f1-car-at-renovated-spa-circuit/</ref> ನವೀಕರಣಗಳನ್ನು ನಿರ್ವಹಿಸಿದ ಕಂಪನಿಯಾದ ಡ್ರೊಮೊ ಸರ್ಕ್ಯೂಟ್ ಡಿಸೈನ್ನ ಮುಖ್ಯಸ್ಥ ಜಾರ್ನೊ ಜಫೆಲ್ಲಿ, ಯೂ ರೂಜ್ನ ಇಪ್ಪತ್ತು ಸಂಭಾವ್ಯ ವಿಭಿನ್ನ ಪುನರಾವರ್ತನೆಗಳನ್ನು ಮೌಲ್ಯಮಾಪನ ಮಾಡಲಾಗಿದೆ ಎಂದು ಬಹಿರಂಗಪಡಿಸಿದರು, ಆಯ್ದ ಪುನರಾವರ್ತನೆಯನ್ನು ಮಾಜಿ-ಫಾರ್ಮುಲಾ ಒನ್ ಚಾಲಕರಾದ ಥಿಯೆರ್ರಿ ಬೌಟ್ಸೆನ್ ಮತ್ತು ಎಮ್ಯಾನುಯೆಲ್ ಪಿರೊ ಅವರ ಸಹಾಯದಿಂದ ಆಯ್ಕೆ ಮಾಡಲಾಗಿದೆ ಮತ್ತು ಫಾರ್ಮುಲಾ ಒನ್ ಮತ್ತು ಜಿಟಿ ಕಾರುಗಳಿಗೆ ಸಿಮ್ಯುಲೇಶನ್ಗಳೊಂದಿಗೆ ಉತ್ತಮವಾಗಿ ಟ್ಯೂನ್ ಮಾಡಲಾಗಿದೆ.<ref>https://www.planetf1.com/news/circuit-designers-went-through-20-different-layouts-for-eau-rouge/</ref>
ಸ್ಪಾ-ಫ್ರಾಂಕೋರ್ಚಾಂಪ್ಸ್ 2023 ರ ಫಾರ್ಮುಲಾ 1 ಕ್ಯಾಲೆಂಡರ್ನ ಭಾಗವಾಗಿದೆ,<ref>https://www.formula1.com/en/latest/article/spa-to-form-part-of-2023-f1-calendar-following-agreement-to-extend.7FeUki5B2tpV6LC1NKvgI1</ref> ಮತ್ತು ಅದರ ಒಪ್ಪಂದವನ್ನು ಅಕ್ಟೋಬರ್ 2023 ರಲ್ಲಿ 2025 ರವರೆಗೆ ವಿಸ್ತರಿಸಲಾಯಿತು.<ref>https://www.formula1.com/en/latest/article.formula-1-to-race-in-belgium-until-2025-under-new-deal.1ABwI4lboaaHs6CmjEKrsv.html</ref>
=ಇತರ ರೇಸಿಂಗ್ ಸರಣಿಗಳು=
ಫಾರ್ಮುಲಾ 1 ಜೊತೆಗೆ ವಿವಿಧ ಮೋಟಾರ್ಸ್ಪೋರ್ಟ್ಸ್ ತರಗತಿಗಳಲ್ಲಿನ ಇತರ ರೇಸ್ಗಳನ್ನು ಸ್ಪಾ-ಫ್ರಾಂಕೋರ್ಚಾಂಪ್ಸ್ನಲ್ಲಿ ಆಯೋಜಿಸಲಾಗುತ್ತದೆ. ಅತ್ಯಂತ ಗಮನಾರ್ಹವಾದವುಗಳೆಂದರೆ FIA ವರ್ಲ್ಡ್ ಎಂಡ್ಯೂರೆನ್ಸ್ ಚಾಂಪಿಯನ್ಶಿಪ್, FIM ಎಂಡ್ಯೂರೆನ್ಸ್ ವರ್ಲ್ಡ್ ಚಾಂಪಿಯನ್ಶಿಪ್, ಯುರೋಪಿಯನ್ ಲೆ ಮ್ಯಾನ್ಸ್ ಸರಣಿ, ಇಂಟರ್ಕಾಂಟಿನೆಂಟಲ್ GT ಚಾಲೆಂಜ್, GT ವರ್ಲ್ಡ್ ಚಾಲೆಂಜ್ ಯುರೋಪ್, FIA ಫಾರ್ಮುಲಾ 2 ಚಾಂಪಿಯನ್ಶಿಪ್, FIA ಫಾರ್ಮುಲಾ 3 ಚಾಂಪಿಯನ್ಶಿಪ್, FIM ಎಂಡ್ಯೂರೆನ್ಸ್ ವರ್ಲ್ಡ್ ಚಾಂಪಿಯನ್ಶಿಪ್, ಇಂಟರ್ನ್ಯಾಷನಲ್ GT ಓಪನ್, ADAC GT ಮಾಸ್ಟರ್ಸ್ ಮತ್ತು ಈ ಹಿಂದೆ FIA ವರ್ಲ್ಡ್ ರ್ಯಾಲಿಕ್ರಾಸ್ ಚಾಂಪಿಯನ್ಶಿಪ್, ಸೈಡ್ಕಾರ್ ವರ್ಲ್ಡ್ ಚಾಂಪಿಯನ್ಶಿಪ್, DTM ಮತ್ತು WTCC. ಅತ್ಯಂತ ಪ್ರಸಿದ್ಧವಾದ ದೀರ್ಘ-ದೂರ ಮತ್ತು ಸ್ಪೋರ್ಟ್ಸ್ ಕಾರ್ ರೇಸ್ಗಳು ಸ್ಪಾ 24 ಅವರ್ಸ್ ಮತ್ತು 6 ಅವರ್ಸ್ ಆಫ್ ಸ್ಪಾ-ಫ್ರಾಂಕೋರ್ಚಾಂಪ್ಸ್. ಸರ್ಕ್ಯೂಟ್ ಸಿಟ್ರೊಯೆನ್ 2CV ಕಾರುಗಳಿಗಾಗಿ 25-ಗಂಟೆ ಮತ್ತು 24-ಗಂಟೆಗಳ ರೇಸ್ಗಳನ್ನು ಸಹ ಆಯೋಜಿಸುತ್ತದೆ. <ref>http://www.24h2cv.be/</ref>
ಏಪ್ರಿಲ್ 16–19: 24H ಸರಣಿ 12 ಗಂಟೆಗಳ ಸ್ಪಾ-ಫ್ರಾಂಕೋರ್ಚಾಂಪ್ಸ್, ರಾಡಿಕಲ್ ಕಪ್ ಯುರೋಪ್, TCR ಯುರೋಪ್ ಟೂರಿಂಗ್ ಕಾರ್ ಸರಣಿ ಕಪ್
23–26 ಏಪ್ರಿಲ್: ಸ್ಪಾ ಸಮ್ಮರ್ ಕ್ಲಾಸಿಕ್
1–2 ಮೇ: ಫನ್ ಕಪ್ ಫ್ರಾಂಕೊ ಫನ್ ಫೆಸ್ಟಿವಲ್
7–9 ಮೇ: FIA ವರ್ಲ್ಡ್ ಎಂಡ್ಯೂರೆನ್ಸ್ ಚಾಂಪಿಯನ್ಶಿಪ್ 6 ಗಂಟೆಗಳ ಸ್ಪಾ-ಫ್ರಾಂಕೋರ್ಚಾಂಪ್ಸ್, ಪೋರ್ಷೆ ಕ್ಯಾರೆರಾ ಕಪ್ ಬೆನೆಲಕ್ಸ್, ಲೆಜೆಂಡ್ಸ್ ಆಫ್ ಲೆ ಮ್ಯಾನ್ಸ್
15–17 ಮೇ: ಅಂತರರಾಷ್ಟ್ರೀಯ GT ಓಪನ್, TCR ಯುರೋಪ್ ಟೂರಿಂಗ್ ಕಾರ್ ಸರಣಿ, ಯೂರೋಫಾರ್ಮುಲಾ ಓಪನ್ ಚಾಂಪಿಯನ್ಶಿಪ್, GT ಕಪ್ ಓಪನ್ ಯುರೋಪ್, ಪೋರ್ಷೆ ಕ್ಯಾರೆರಾ ಕಪ್ ಜರ್ಮನಿ
22–24 ಮೇ: ಕ್ಲಾಸಿಕ್ ಎಂಡ್ಯೂರೆನ್ಸ್ ರೇಸಿಂಗ್ ಸ್ಪಾ ಕ್ಲಾಸಿಕ್ [fr], GT3 ರಿವೈವಲ್ ಸರಣಿ
28–31 ಮೇ: ಸೂಪರ್ಕಾರ್ ಚಾಲೆಂಜ್ ಸ್ಪಾ ಯುರೋ ರೇಸ್, ಫಾರ್ಮುಲಾ ಪ್ರಾದೇಶಿಕ ಯುರೋಪಿಯನ್ ಚಾಂಪಿಯನ್ಶಿಪ್, GB3 ಚಾಂಪಿಯನ್ಶಿಪ್
5–6 ಜೂನ್: FIM ಎಂಡ್ಯೂರೆನ್ಸ್ ವರ್ಲ್ಡ್ ಚಾಂಪಿಯನ್ಶಿಪ್ 8 ಗಂಟೆಗಳ ಸ್ಪಾ ಮೋಟೋಸ್
19–21 ಜೂನ್: GT2 ಯುರೋಪಿಯನ್ ಸರಣಿ SRO ಸ್ಪೀಡ್ವೀಕ್, ಬ್ರಿಟಿಷ್ GT ಚಾಂಪಿಯನ್ಶಿಪ್, FFSA GT ಚಾಂಪಿಯನ್ಶಿಪ್, ಪೋರ್ಷೆ ಕ್ಯಾರೆರಾ ಕಪ್ ಫ್ರಾನ್ಸ್, ಫ್ರೆಂಚ್ F4 ಚಾಂಪಿಯನ್ಶಿಪ್, ಆಲ್ಪೈನ್ ಕಪ್ ಸರಣಿ, TC ಫ್ರಾನ್ಸ್ ಸರಣಿ
ಜೂನ್ 25–28: ಇಂಟರ್ಕಾಂಟಿನೆಂಟಲ್ ಜಿಟಿ ಚಾಲೆಂಜ್ / ಜಿಟಿ ವರ್ಲ್ಡ್ ಚಾಲೆಂಜ್ ಯುರೋಪ್ ಸ್ಪಾ 24 ಅವರ್ಸ್, ಜಿಟಿ4 ಯುರೋಪಿಯನ್ ಸರಣಿ, ಲಂಬೋರ್ಘಿನಿ ಸೂಪರ್ ಟ್ರೋಫಿಯೊ ಯುರೋಪ್, ಮೆಕ್ಲಾರೆನ್ ಟ್ರೋಫಿ ಯುರೋಪ್
2–5 ಜುಲೈ: ಫನ್ ಕಪ್ 25 ಅವರ್ಸ್ ಆಫ್ ಸ್ಪಾ, ಬೆಲ್ಕಾರ್
17–19 ಜುಲೈ: ಫಾರ್ಮುಲಾ ಒನ್ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್, ಎಫ್ಐಎ ಫಾರ್ಮುಲಾ 2 ಚಾಂಪಿಯನ್ಶಿಪ್ ಸ್ಪಾ-ಫ್ರಾಂಕೋರ್ಚಾಂಪ್ಸ್ ಫಾರ್ಮುಲಾ 2 ರೌಂಡ್, ಎಫ್ಐಎ ಫಾರ್ಮುಲಾ 3 ಚಾಂಪಿಯನ್ಶಿಪ್, ಪೋರ್ಷೆ ಸೂಪರ್ಕಪ್
21–23 ಆಗಸ್ಟ್: ಯುರೋಪಿಯನ್ ಲೆ ಮ್ಯಾನ್ಸ್ ಸರಣಿ 4 ಅವರ್ಸ್ ಆಫ್ ಸ್ಪಾ, ಲೆ ಮ್ಯಾನ್ಸ್ ಕಪ್, ಲಿಗಿಯರ್ ಯುರೋಪಿಯನ್ ಸರಣಿ
28–30 ಆಗಸ್ಟ್: ಪೋರ್ಷೆ ಸ್ಪೋರ್ಟ್ಸ್ ಕಪ್ ಡಾಯ್ಚ್ಲ್ಯಾಂಡ್ [ಡಿ] ಎಡಿಎಸಿ ರೇಸಿಂಗ್ ವೀಕೆಂಡ್ ಸ್ಪಾ, ಜಿಟಿ ಸಮ್ಮರ್ ಸರಣಿ
4–5 ಸೆಪ್ಟೆಂಬರ್: 992 ಎಂಡ್ಯೂರೆನ್ಸ್ ಕಪ್, 7 ರೇಸಿಂಗ್ ಯೂರೋಕಪ್
17–20 ಸೆಪ್ಟೆಂಬರ್: ಅಲ್ಟಿಮೇಟ್ ಕಪ್ ಸರಣಿ
24–27 ಸೆಪ್ಟೆಂಬರ್: ಸ್ಪಾ ಸಿಕ್ಸ್ ಅವರ್ಸ್, ಪೋರ್ಷೆ ಸ್ಪ್ರಿಂಟ್ ಚಾಲೆಂಜ್ ಬೆನೆಲಕ್ಸ್
ಹಿಂದಿನ ಘಟನೆಗಳು
ADAC ಫಾರ್ಮೆಲ್ ಮಾಸ್ಟರ್ಸ್ (2011, 2013)
ADAC ಫಾರ್ಮುಲಾ 4 (2015, 2022)
ADAC GT ಮಾಸ್ಟರ್ಸ್ (2013, 2015, 2024)
ATS ಫಾರ್ಮೆಲ್ 3 ಕಪ್ (2011–2013)
ಆಟೋ ಜಿಪಿ (2002–2004, 2006–2008, 2010)
BOSS GP (2003, 2008–2011, 2020)
BPR ಗ್ಲೋಬಲ್ GT ಸರಣಿ (1994, 1996)
ಬ್ರಿಟಿಷ್ ಫಾರ್ಮುಲಾ 3 ಅಂತಾರಾಷ್ಟ್ರೀಯ ಸರಣಿ (1984–1988, 1997–2000, 2003–2004, 2006–2014)
ಡಾಯ್ಚ ಟೌರೆನ್ವ್ಯಾಗನ್ ಮಾಸ್ಟರ್ಸ್ (2005, 2020, 2022)
DTM ಟ್ರೋಫಿ (2020, 2022)
EFDA ನೇಷನ್ಸ್ ಕಪ್ (1990)
ಯೂರೋಕಪ್-3 (2023–2025)
ಯೂರೋಕಪ್ ಕ್ಲಿಯೊ (2011–2013)
ಯೂರೋಕಪ್ ಮೆಗಾನೆ ಟ್ರೋಫಿ (2008–2013)
ಯೂರೋಪಿಯನ್ ಫಾರ್ಮುಲಾ ಟು ಚಾಂಪಿಯನ್ಶಿಪ್ (1981–1982)
ಯುರೋಪಿಯನ್ ಟೂರಿಂಗ್ ಕಾರ್ ಚಾಂಪಿಯನ್ಶಿಪ್ (1966–1973, 1976, 1982–1986, 1988, 2002–2004)
ಯುರೋಪಿಯನ್ ಟೂರಿಂಗ್ ಕಾರ್ ಕಪ್ (2014)
ಫೆರಾರಿ ಚಾಲೆಂಜ್ ಯುರೋಪ್ (1997–2007, 2011–2012, 2018, 2020–2021, 2023, 2025)
ಫೆರಾರಿ ಚಾಲೆಂಜ್ ಯುಕೆ (2023)
F4 ಸ್ಪ್ಯಾನಿಷ್ ಚಾಂಪಿಯನ್ಶಿಪ್ (2021–2023)
FIA ಯುರೋಪಿಯನ್ ಫಾರ್ಮುಲಾ 3 ಕಪ್ (2004)
FIA ಯುರೋಪಿಯನ್ ರ್ಯಾಲಿಕ್ರಾಸ್ ಚಾಂಪಿಯನ್ಶಿಪ್ (2019, 2021–2022)
FIA ಫಾರ್ಮುಲಾ 3 ಯುರೋಪಿಯನ್ ಚಾಂಪಿಯನ್ಶಿಪ್ (2012, 2014–2018)
FIA ಫಾರ್ಮುಲಾ 3 ಅಂತರರಾಷ್ಟ್ರೀಯ ಟ್ರೋಫಿ (2011)
FIA GT ಚಾಂಪಿಯನ್ಶಿಪ್ (1997, 2001–2009)
FIA GT1 ವಿಶ್ವ ಚಾಂಪಿಯನ್ಶಿಪ್ (2010)
FIA GT3 ಯುರೋಪಿಯನ್ ಚಾಂಪಿಯನ್ಶಿಪ್ (2006)
FIA ಸ್ಪೋರ್ಟ್ಸ್ಕಾರ್ ಚಾಂಪಿಯನ್ಶಿಪ್ (1999–2003)
FIA ವಿಶ್ವ ರ್ಯಾಲಿಕ್ರಾಸ್ ಚಾಂಪಿಯನ್ಶಿಪ್
ವರ್ಲ್ಡ್ RX ಆಫ್ ಬೆನೆಲಕ್ಸ್ (2019, 2021–2022)
ಫಾರ್ಮುಲಾ 3 ಯುರೋ ಸರಣಿ (2005)
ಫಾರ್ಮುಲಾ ಅಬಾರ್ತ್ (2011)
ಫಾರ್ಮುಲಾ BMW ADAC (2005)
ಫಾರ್ಮುಲಾ BMW ಯುರೋಪ್ (2008–2010)
ಫಾರ್ಮುಲಾ ಪಾಮರ್ ಆಡಿ (2000, 2003–2006, 2008)
ಫಾರ್ಮುಲಾ ರೆನಾಲ್ಟ್ 2.0 ಆಲ್ಪ್ಸ್ (2011–2015)
ಫಾರ್ಮುಲಾ ರೆನಾಲ್ಟ್ 2.0 ವೆಸ್ಟ್ ಯುರೋಪಿಯನ್ ಕಪ್ (1999, 2008–2009)
ಫಾರ್ಮುಲಾ ರೆನಾಲ್ಟ್ ಯೂರೋಕಪ್ (1993–1995, 1997–2000, 2002, 2004, 2008–2020)
ಫಾರ್ಮುಲಾ ರೆನಾಲ್ಟ್ ನಾರ್ದರ್ನ್ ಯುರೋಪಿಯನ್ ಕಪ್ (2006–2018)
ಫಾರ್ಮುಲಾ ರೆನಾಲ್ಟ್ V6 ಯೂರೋಕಪ್ (2003–2004)
ಫ್ರೆಂಚ್ ಫಾರ್ಮುಲಾ ತ್ರೀ ಚಾಂಪಿಯನ್ಶಿಪ್ (2000–2001)
ಫ್ರೆಂಚ್ ಸೂಪರ್ಟೂರಿಂಗ್ ಚಾಂಪಿಯನ್ಶಿಪ್ (2000–2001)
GP2 ಸರಣಿ
ಸ್ಪಾ-ಫ್ರಾಂಕೋರ್ಚಾಂಪ್ಸ್ GP2 ಸುತ್ತು (2005, 2007–2016)
GP3 ಸರಣಿ (2010–2018)
ಗ್ರ್ಯಾಂಡ್ ಪ್ರಿಕ್ಸ್ ಮೋಟಾರ್ಸೈಕಲ್ ರೇಸಿಂಗ್
ಬೆಲ್ಜಿಯಂ ಮೋಟಾರ್ಸೈಕಲ್ ಗ್ರ್ಯಾಂಡ್ ಪ್ರಿಕ್ಸ್ (1949–1979, 1981–1986, 1988–1990)
GT4 ಸ್ಕ್ಯಾಂಡಿನೇವಿಯಾ (2022–2023)
ಅಂತರರಾಷ್ಟ್ರೀಯ ಫಾರ್ಮುಲಾ 3000 (1985–1987, 1989, 1991–2002, 2004)
ಅಂತರರಾಷ್ಟ್ರೀಯ ಫಾರ್ಮುಲಾ ಮಾಸ್ಟರ್ (2005, 2009)
ಅಂತರರಾಷ್ಟ್ರೀಯ GTSprint ಸರಣಿ (2011–2012)
ಇಟಾಲಿಯನ್ F4 ಚಾಂಪಿಯನ್ಶಿಪ್ (2022–2023)
ಇಟಾಲಿಯನ್ ಫಾರ್ಮುಲಾ ರೆನಾಲ್ಟ್ ಚಾಂಪಿಯನ್ಶಿಪ್ (2002–2009)
ಇಟಾಲಿಯನ್ ಫಾರ್ಮುಲಾ ತ್ರೀ ಚಾಂಪಿಯನ್ಶಿಪ್ (2011)
ರೇಸ್ಕಾರ್ ಯುರೋ ಸರಣಿ (2012)
ಪೋರ್ಷೆ ಕ್ಯಾರೆರಾ ಕಪ್ ಗ್ರೇಟ್ ಬ್ರಿಟನ್ (2015)
ಪೋರ್ಷೆ ಕ್ಯಾರೆರಾ ಕಪ್ ಇಟಾಲಿಯಾ [it] (2008, 2015)
ಪ್ರೋಟೋಟೈಪ್ ಕಪ್ ಜರ್ಮನಿ (2022, 2024–2025)
ರೆನಾಲ್ಟ್ ಸ್ಪೋರ್ಟ್ ಟ್ರೋಫಿ (2015–2016)
ಸೀಟ್ ಲಿಯಾನ್ ಯೂರೋಕಪ್ (2014)
ಸೈಡ್ಕಾರ್ ವರ್ಲ್ಡ್ ಚಾಂಪಿಯನ್ಶಿಪ್ (1949–1979, 1981–1990, 2022–2023)
ಸೂಪರ್ ಟೂರೆನ್ವ್ಯಾಗನ್ ಕಪ್ (1994–1995)
ಸೂಪರ್ಬೈಕ್ ವಿಶ್ವ ಚಾಂಪಿಯನ್ಶಿಪ್ (1992)
ಸೂಪರ್ಸ್ಟಾರ್ಸ್ ಸರಣಿ (2011–2012)
TCR ಅಂತರರಾಷ್ಟ್ರೀಯ ಸರಣಿ (2016–2017)
TCR ಯುಕೆ ಟೂರಿಂಗ್ ಕಾರ್ ಚಾಂಪಿಯನ್ಶಿಪ್ (2019)
TCR ವರ್ಲ್ಡ್ ಟೂರ್ (2023)
ಟ್ರೋಫಿಯೊ ಮಾಸೆರಾಟಿ (2004–2006, 2014)
ವಿಶ್ವ ಸರಣಿ ಫಾರ್ಮುಲಾ V8 3.5 (2006–2017)
ವಿಶ್ವ ಸ್ಪೋರ್ಟ್ಸ್ಕಾರ್ ಚಾಂಪಿಯನ್ಶಿಪ್ (1953, 1963–1975, 1981–1990)
ವಿಶ್ವ ಟೂರಿಂಗ್ ಕಾರ್ ಚಾಂಪಿಯನ್ಶಿಪ್
ಬೆಲ್ಜಿಯಂನ WTCC ರೇಸ್ (1987, 2005, 2014)
W ಸರಣಿ (2021)
=ಲ್ಯಾಪ್ ದಾಖಲೆಗಳು=
ಓಟದ ವಾರಾಂತ್ಯದಲ್ಲಿ ಸ್ಥಾಪಿಸಲಾದ ಅನಧಿಕೃತ ಸಾರ್ವಕಾಲಿಕ ಟ್ರ್ಯಾಕ್ ದಾಖಲೆಯು 1:40.510 ಆಗಿದ್ದು, ಇದನ್ನು ಆಸ್ಕರ್ ಪಿಯಾಸ್ಟ್ರಿ ಅವರು 2025 ರ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ಗೆ ಅರ್ಹತೆ ಪಡೆಯುವ ಸ್ಪ್ರಿಂಟ್ ಸಮಯದಲ್ಲಿ ಮೆಕ್ಲಾರೆನ್ MCL39 ನಲ್ಲಿ ಸ್ಥಾಪಿಸಿದ್ದಾರೆ. ಪ್ರಸ್ತುತ ಸರ್ಕ್ಯೂಟ್ ವಿನ್ಯಾಸದ ಅಧಿಕೃತ ಲ್ಯಾಪ್ ದಾಖಲೆಯು 1:44.701 ಆಗಿದ್ದು, ಇದನ್ನು 2024 ರ ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ ಸಮಯದಲ್ಲಿ ರೆಡ್ ಬುಲ್ ರೇಸಿಂಗ್ RB20 ನಲ್ಲಿ ಸೆರ್ಗಿಯೊ ಪೆರೆಜ್ ಸ್ಥಾಪಿಸಿದ್ದಾರೆ. ಸೆಪ್ಟೆಂಬರ್ 2025 ರ ಹೊತ್ತಿಗೆ, ಹಲವಾರು ಉನ್ನತ ಸರಣಿಗಳಿಗಾಗಿ ಆಧುನಿಕ ಸ್ಪಾ-ಫ್ರಾಂಕೋರ್ಚಾಂಪ್ಸ್ ಸರ್ಕ್ಯೂಟ್ನ ವೇಗದ ಅಧಿಕೃತ ರೇಸ್ ಲ್ಯಾಪ್ ದಾಖಲೆಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ:<ref>https://web.archive.org/web/20230315215400/https://www.driverdb.com/circuits/fastestlaps/spa-francorchamps/</ref>
=ಜನಪ್ರಿಯ ಸಂಸ್ಕೃತಿಯಲ್ಲಿ=
ಬೆಲ್ಜಿಯನ್ ಗ್ರ್ಯಾಂಡ್ ಪ್ರಿಕ್ಸ್ನ ದೀರ್ಘಕಾಲೀನ ನೆಲೆಯಾಗಿ ಮತ್ತು ಆರ್ಡೆನ್ನೆಸ್ ಕಾಡುಗಳೊಳಗೆ ಅದರ ಸ್ಥಳವಾಗಿ, ಇದು ಕಾಮಿಕ್ಸ್ ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವುದರಿಂದ ಹಿಡಿದು,<ref>https://en.wikipedia.org/wiki/Circuit_de_Spa-Francorchamps#cite_note-167</ref> 1980 ರ ದಶಕದ ಹಿಂದಿನ ವೀಡಿಯೊ ಗೇಮ್ಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವವರೆಗೆ ಎಲ್ಲಾ ರೀತಿಯ ಕಾಲ್ಪನಿಕ ಮಾಧ್ಯಮಗಳಿಗೆ ಜನಪ್ರಿಯ ಹಿನ್ನೆಲೆಯಾಗಿದೆ.
=ಟೂರ್ ಡೆ ಫ್ರಾನ್ಸ್=
ಟೂರ್ ಡಿ ಫ್ರಾನ್ಸ್ ಸೈಕ್ಲಿಂಗ್ ರೇಸ್ನಲ್ಲಿ ಈ ಸರ್ಕ್ಯೂಟ್ ಅನ್ನು ಹಲವಾರು ಬಾರಿ ಬಳಸಲಾಗಿದೆ. 1980 ರಲ್ಲಿ, ಸರ್ಕ್ಯೂಟ್ ವೈಯಕ್ತಿಕ ಸಮಯ ಪ್ರಯೋಗ ಹಂತದ ಭಾಗವಾಗಿತ್ತು, ಇದನ್ನು ಬರ್ನಾರ್ಡ್ ಹಿನಾಲ್ಟ್ (ರೆನಾಲ್ಟ್–ಗಿಟೇನ್) ಗೆದ್ದರು; ಆದರೆ 1989 ರಲ್ಲಿ, ಮೂರನೇ ಹಂತದ ಅಂತ್ಯದ ಮೊದಲು ಸರ್ಕ್ಯೂಟ್ನ ಹಲವಾರು ಲ್ಯಾಪ್ಗಳನ್ನು ಪೂರ್ಣಗೊಳಿಸಲಾಯಿತು, <ref>{{Cite web |url=http://hemeroteca.mundodeportivo.com/preview/1989/07/03/pagina-42/1199635/pdf.html#&mode=fullScreen |title=ಆರ್ಕೈವ್ ನಕಲು |access-date=2026-01-18 |archive-date=2017-05-10 |archive-url=https://web.archive.org/web/20170510165259/http://hemeroteca.mundodeportivo.com/preview/1989/07/03/pagina-42/1199635/pdf.html#&mode=fullScreen |url-status=dead }}</ref> ಇದನ್ನು ಪಿಡಿಎಂ–ಅಲ್ಟಿಮಾ–ಕಾನ್ಕಾರ್ಡ್ನ ರೌಲ್ ಅಲ್ಕಾಲಾ ಗೆದ್ದರು. 2017 ರಲ್ಲಿ, ಸರ್ಕ್ಯೂಟ್ ಅನ್ನು ಮೂರನೇ ಹಂತದ ಭಾಗವಾಗಿ ಬಳಸಲಾಯಿತು, ಇದು ಬೆಲ್ಜಿಯಂನ ವರ್ವಿಯರ್ಸ್ನಲ್ಲಿ ಪ್ರಾರಂಭವಾಗಿ ಫ್ರಾನ್ಸ್ನ ಲಾಂಗ್ವಿಯಲ್ಲಿ ಕೊನೆಗೊಳ್ಳುತ್ತದೆ.<ref>https://web.archive.org/web/20170707135534/http://www.letour.com/le-tour/2017/us/stage-3.html</ref>
=ಹವಾಮಾನ=
ಸ್ಪಾ-ಫ್ರಾಂಕೋರ್ಚಾಂಪ್ಸ್ ಪ್ರದೇಶವು ಸಾಮಾನ್ಯವಾಗಿ ಮಳೆಯಿಂದ ಕೂಡಿರುತ್ತದೆ ಅಥವಾ ತಂಪಾದ ಗಾಳಿಯ ಉಷ್ಣತೆಯನ್ನು ಹೊಂದಿರುತ್ತದೆ, ಇದು ಫಾರ್ಮುಲಾ ಒನ್ ಈವೆಂಟ್ಗಳಿಗೆ ಕಾರಣವಾಗಿದೆ, ಉದಾಹರಣೆಗೆ 1998 ರ 14-ಕಾರುಗಳ ನೀರು ತುಂಬಿದ ಟ್ರ್ಯಾಕ್ನಲ್ಲಿ ಜೋಡಣೆ ಮತ್ತು 2008 ರ ಈವೆಂಟ್ಗೆ ಮುಕ್ತಾಯ, ಸಂಪೂರ್ಣ ಶುಷ್ಕ ಓಟದ ನಂತರ ಕೊನೆಯ ಕೆಲವು ಸುತ್ತುಗಳಲ್ಲಿ ಮಳೆ ಬಿದ್ದಿತು. ರಾಯಲ್ ಹವಾಮಾನ ಸಂಸ್ಥೆಯು ಸ್ಟಾವೆಲೋಟ್ ಮತ್ತು ಮಾಲ್ಮೆಡಿ ಎರಡರಲ್ಲೂ ಹವಾಮಾನ ಕೇಂದ್ರಗಳನ್ನು ನಡೆಸುತ್ತದೆ, ಇವೆರಡೂ ಕೆಲವು ಆಂತರಿಕ ಪ್ರಭಾವದೊಂದಿಗೆ ಒಂದೇ ರೀತಿಯ ಸಾಗರ ಹವಾಮಾನವನ್ನು ತೋರಿಸುತ್ತವೆ.
ಚಳಿಗಾಲದಲ್ಲಿ ಸಾಮಾನ್ಯವಾಗಿ ತಾಪಮಾನವು ಘನೀಕರಣಕ್ಕಿಂತ ಹೆಚ್ಚಿದ್ದರೂ, ಹಿಮಪಾತವು ಸಾಮಾನ್ಯವಾಗಿದೆ. ಬೇಸಿಗೆಯಲ್ಲಿ, ತಾಪಮಾನವು ಹೆಚ್ಚಾಗಿ 20 ಡಿಗ್ರಿ ಸೆಲ್ಸಿಯಸ್ನಲ್ಲಿ ಉಳಿಯುತ್ತದೆ, ಆಗಾಗ್ಗೆ ಮೋಡ ಕವಿದ ವಾತಾವರಣ ಮತ್ತು ಮಳೆಯಾಗುತ್ತದೆ. ವಸಂತಕಾಲದಲ್ಲಿ ವರ್ಲ್ಡ್ ಎಂಡ್ಯೂರೆನ್ಸ್ ರೇಸ್ ಮತ್ತು ಬೇಸಿಗೆಯ ಕೊನೆಯಲ್ಲಿ ಫಾರ್ಮುಲಾ ಒನ್ ರೇಸ್ ನಡೆಯುವುದರಿಂದ, ಹೈ-ಪ್ರೊಫೈಲ್ ಈವೆಂಟ್ಗಳ ಸಮಯದಲ್ಲಿ ಬಿಸಿಯಾದ ತಾಪಮಾನವು ಅಪರೂಪ. ಹಾಗಿದ್ದರೂ, ವಾರ್ಷಿಕ ಅತ್ಯಂತ ಬೆಚ್ಚಗಿನ ತಾಪಮಾನವು ಸರಾಸರಿ 31 °C (88 °F) ಗಿಂತ ಹೆಚ್ಚಿರುತ್ತದೆ. <ref>https://www.infoclimat.fr/climatologie/normales-records/1991-2020/spa/valeurs/06490.html</ref> ಅಧಿಕೃತ ಸ್ಪಾ ಹವಾಮಾನ ಕೇಂದ್ರವು ರೇಸ್ ಟ್ರ್ಯಾಕ್ನಂತೆಯೇ ಕೆಲವು ಮೈಲುಗಳಷ್ಟು ಉತ್ತರಕ್ಕೆ ಇದೆ ಮತ್ತು ಸ್ಟಾವೆಲಾಟ್ ಮತ್ತು ಮಾಲ್ಮೆಡಿ ನಿಲ್ದಾಣಗಳಿಗೆ ಹೋಲುವ ಪರಿಸ್ಥಿತಿಗಳನ್ನು ನೀಡುತ್ತದೆ. ಬೇಸಿಗೆಯ ಮೇ ರಾತ್ರಿಗಳು ಸ್ವಲ್ಪ ಚಳಿಯಿಂದ ಕೂಡಿರಬಹುದು, ಆದರೆ ಸರ್ಕ್ಯೂಟ್ಗೆ ಅವಿಭಾಜ್ಯ ಋತುವಿನಲ್ಲಿ ಹಿಮಕ್ಕಿಂತ ಮೇಲಿರುತ್ತವೆ.
==ಉಲ್ಲೇಖಗಳು==
{{Interwikineeded}}
[[ವರ್ಗ:ಕ್ರೀಡಾ ಮೈದಾನಗಳು]]
9p0o5586uw9dgzt1qyeufna4byu46o4
ವಾಂಗ್ ಯಾಪಿಂಗ್
0
178466
1384586
1363204
2026-08-28T17:08:45Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384586
wikitext
text/x-wiki
{{Interwikineeded}}
[[ವರ್ಗ:ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೬ ಸ್ಪರ್ಧಾ ಲೇಖನ]]
{{Family name hatnote|ವಾಂಗ್|lang=Chinese}}
{{Infobox astronaut
| name = ವಾಂಗ್ ಯಾಪಿಂಗ್
| native_name = {{nobold|王亚平}}
| image = Wang Yaping in 2021.jpg
| caption =
| type = ಪೀಪಲ್ಸ್ ಲಿಬರೇಶನ್ ಆರ್ಮಿ ಗಗನಯಾತ್ರಿ ದಳ(PLAAC) ತೈಕೋನಾಟ್
| status = ಸಕ್ರಿಯ
| birth_date = 1980/01<ref>{{cite web|url=https://www.cmse.gov.cn/art/2013/6/27/art_1498_23278.html|title=中国首位进行太空授课的女航天员|publisher=China Manned Space|language=zh|accessdate=2022-01-10|archive-date=2022-01-10|archive-url=https://web.archive.org/web/20220110110503/http://www.cmse.gov.cn/art/2013/6/27/art_1498_23278.html|url-status=dead}}</ref>
| birth_place = ಯಾಂತೈ, ಶಾಂಡಾಂಗ್, [[ಚೀನಾ]]
| spouse = Zhao Peng
| children = 1
| previous_occupation = ಸೈನಿಕ ಸಾರಿಗೆ ಪೈಲಟ್, ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ ಫೋರ್ಸ್/PLAAF
| alma_mater = PLA ವಾಯುಪಡೆಯ ವಾಯುಯಾನ ವಿಶ್ವವಿದ್ಯಾಲಯ/ಚಾಂಗ್ಚುನ್ ವಿಮಾನ ಕಾಲೇಜು
| ಶ್ರೇಣಿ = [[ಕ್ಸಿಯಾವೋ (ಶ್ರೇಣಿ)|ಹಿರಿಯ ಕರ್ನಲ್]], [[ಪೀಪಲ್ಸ್ ಲಿಬರೇಶನ್ ಆರ್ಮಿ ಸ್ಟ್ರಾಟೆಜಿಕ್ ಸಪೋರ್ಟ್ ಫೋರ್ಸ್|PLASSF]]
| selection = ಆಯ್ಕೆಯ ಪ್ರಕಾರ ಗಗನಯಾತ್ರಿಗಳ ಪಟ್ಟಿ/ ಚೈನೀಸ್ ಗುಂಪು 2<ref>{{cite news |url = http://news.xinhuanet.com/english2010/china/2011-10/31/c_131222216.htm |archive-url = https://web.archive.org/web/20111101094823/http://news.xinhuanet.com/english2010/china/2011-10/31/c_131222216.htm |url-status = dead |archive-date = 1 November 2011 |title = China mulls over sending female "taikonauts" into space |date = 2011-10-31 |agency = [[Xinhua News Agency|Xinhua]] }}</ref>
| time = 197 ದಿನಗಳು ಮತ್ತು 1 ನಿಮಿಷ
| evas = 1
| eva_time = 6 hours, 25 minutes<ref name="xinhua211107"/>
| mission = ಶೆಂಝೌ 10, ಶೆಂಜೌ 13
| module = {{Infobox Chinese|child=yes
|s = 王亚平
|t = 王亞平
|p = Wáng Yàpíng
}}
}}
[[File:Wang Yaping at Shenzhou-13 launch.jpg|thumb|ಅಕ್ಟೋಬರ್ 2021 ರಲ್ಲಿ ಶೆನ್ಝೌ 13 ಉಡಾವಣಾ ಸಮಾರಂಭದಲ್ಲಿ ವಾಂಗ್]]
'''ವಾಂಗ್ ಯಾಪಿಂಗ್''' (ಜನವರಿ 1980ರಲ್ಲಿ ಜನನ) ಚೀನಾದ ಸೈನಿಕ ಸಾರಿಗೆ ಪೈಲಟ್ ಹಾಗೂ ಟೈಕೋನಾಟ್ ಆಗಿದ್ದಾರೆ.<ref>{{cite journal |language=zh |author1=Si Tong ({{lang|zh|思童}}) |author2=Chen Lan ({{lang|zh|陈蓝}})|script-title=zh:最美太空老师王亚平:因热爱而执着,因梦想而坚持 |trans-title=The most beautiful space teacher Wang Yaping: persistent because of love, persistent because of dreams |pages=8–11 |volume=469 |journal=Modern Youth |location=Haikou, Hainan |publisher=Modern Youth Press |year=2022 |issn=1004-2555}}</ref>
ಅವರು ಪೀಪಲ್ಸ್ ಲಿಬರೇಶನ್ ಆರ್ಮಿ ಗಗನಯಾತ್ರಿ ದಳಗೆ ಆಯ್ಕೆಯಾದ ಎರಡನೇ ಮಹಿಳಾ ತೈಕೋನಾಟ್, ಬಾಹ್ಯಾಕಾಶಕ್ಕೆ ತೆರಳಿದ ಎರಡನೇ ಚೀನೀ ಮಹಿಳೆ ಮತ್ತು ಬಾಹ್ಯಾಕಾಶ ನಡಿಗೆ (spacewalk) ನಡೆಸಿದ ಮೊದಲ ಚೀನೀ ಮಹಿಳೆ.<ref name=spacecom7nov21 />
2022ರ ಏಪ್ರಿಲ್ನಲ್ಲಿ, ಒಟ್ಟು 197 ದಿನಗಳ ಬಾಹ್ಯಾಕಾಶ ವಾಸದ ಮೂಲಕ ಚೀನಾದ ಮಹಿಳಾ ಅಂತರಿಕ್ಷಯಾತ್ರಿಗಳಲ್ಲಿ ಅತ್ಯಧಿಕ ಕಾಲ ಬಾಹ್ಯಾಕಾಶದಲ್ಲಿ ಕಳೆದ ದಾಖಲೆ ಸ್ಥಾಪಿಸಿದರು.
== ಪ್ರಾರಂಭಿಕ ಜೀವನ ==
ವಾಂಗ್ ಅವರು ಯಂತೈ, ಶಾಂಡಾಂಗ್ ಪ್ರಾಂತ್ಯದಲ್ಲಿ ಜನಿಸಿದರು. ಅವರ ತಂದೆ-ತಾಯಿ ರೈತರಾಗಿದ್ದರು.<ref name=nsf2010>{{Cite web|last=Quine|first=Tony|date=2010-11-14|title={{sic|nolink=y|reason=error in source|Indentity}} of one of the Chinese female taikonaut candidates revealed|url=https://www.nasaspaceflight.com/2010/11/indentity-chinese-female-taikonaut-candidate-revealed/|access-date=2021-11-11|website=NASASpaceFlight.com|language=en-US}}</ref>
1997ರಲ್ಲಿ ಅವರು ವಾಯುಪಡೆಯ ವಾಯುಯಾನ ವಿಶ್ವವಿದ್ಯಾಲಯ/ಚಾಂಗ್ಚುನ್ ವಿಮಾನ ಕಾಲೇಜಿಗೆ ಸೇರಿದರು.
== ವಾಯುಪಡೆ ವೃತ್ತಿಜೀವನ ==
1997ರ ಆಗಸ್ಟ್ನಲ್ಲಿ ಅವರು ವಾಯುಪಡೆಗೆ ಸೇರಿದರು. 2001ರಲ್ಲಿ ಪ್ರಥಮ ಲೆಫ್ಟಿನೆಂಟ್ ಹುದ್ದೆಯಲ್ಲಿ ಪದವಿ ಪಡೆದರು.<ref name=nsf2010 />
2008ರ [[ಬೀಜಿಂಗ್]] ಒಲಿಂಪಿಕ್ ಕ್ರೀಡೆ ಸಂದರ್ಭದಲ್ಲಿನ ಹವಾಮಾನ ನಿಯಂತ್ರಣ ಕಾರ್ಯಗಳಲ್ಲಿ ಭಾಗವಹಿಸಿದರು.
2010ರಲ್ಲಿ ಅವರು ಅಧಿಕೃತವಾಗಿ ಚೀನಾದ ಎರಡನೇ ಮಹಿಳಾ ಅಂತರಿಕ್ಷಯಾತ್ರಿಯಾಗಿ ಆಯ್ಕೆಯಾದರು.<ref name="spacefacts">{{cite web|url=https://www.spacefacts.de/bios/international/english/wang_yaping.htm|title=Taikonaut (yuhangyuan) Biography: Wang Yaping|first=Joachim|last=Becker|website=Spacefacts.de|access-date=11 April 2018}}</ref>
== ಬಾಹ್ಯಾಕಾಶ ವೃತ್ತಿಜೀವನ ==
=== ಶೆನ್ಝೌ 10 ===
2013ರ ಜೂನ್ನಲ್ಲಿ ಶೆನ್ಝೌ 10 ಮಿಷನ್ನ ಭಾಗವಾಗಿ ಅವರು ಭೂಮಿಯನ್ನು ಪರಿಕ್ರಮಿಸಿದರು.<ref>{{cite news |author=Harwood |first=William |date=June 25, 2013 |title=Chinese astronauts complete space mission, return to Earth |url=https://www.cbsnews.com/news/chinese-astronauts-complete-space-mission-return-to-earth/ |newspaper=[[CBS News]]}}</ref>
ಅವರು ಟಿಯಾಂಗಾಂಗ್-1 ಬಾಹ್ಯಾಕಾಶ ನಿಲ್ದಾಣದಲ್ಲಿದ್ದು ವಿಜ್ಞಾನ ಪ್ರಯೋಗಗಳು ನಡೆಸಿದರು ಮತ್ತು ಚೀನೀ ವಿದ್ಯಾರ್ಥಿಗಳಿಗೆ ನೇರ ದೂರದರ್ಶನದ ಮೂಲಕ ಭೌತಶಾಸ್ತ್ರ ಪಾಠ ಬೋಧಿಸಿದರು.<ref>{{cite news |first=Stephen |last=Clark |publisher=Spaceflight Now |title=Successful start for China's fifth human spaceflight |url=https://www.spaceflightnow.com/china/shenzhou10/130611launch/}}</ref>
=== ಶೆನ್ಝೌ 13 ===
2021ರಲ್ಲಿ ಅವರು ಶೆನ್ಝೌ 13 ಮಿಷನ್ಗೆ ಆಯ್ಕೆಯಾದರು.<ref name="crew">{{cite web |date=2021-10-14 |title=China unveils Shenzhou-13 crew for six-month space station mission |url=https://www.ecns.cn/news/sci-tech/2021-10-14/detail-iharvwpk8244746.shtml |website=www.ecns.cn}}</ref>
2021ರ ನವೆಂಬರ್ 7ರಂದು ಅವರು '''ಝೈ ಝಿಗಾಂಗ್''' ಜೊತೆ ಬಾಹ್ಯಾಕಾಶ ನಡಿಗೆ ನಡೆಸಿದರು ಮತ್ತು ಚೀನಾದ ಮೊದಲ ಮಹಿಳಾ ಬಾಹ್ಯಾಕಾಶ ನಡಿಗರಾದರು.<ref name="spacecom7nov21">{{Cite web |last=Jones |first=Andrew |date=2021-11-07 |title=China's Shenzhou 13 crew takes its first spacewalk, the country's 1st by a female astronaut |url=https://www.space.com/china-shenzhou-13-first-female-spacewalk |website=Space.com}}</ref>
ಈ ಕಾರ್ಯಾಚರಣೆ 6 ಗಂಟೆ 25 ನಿಮಿಷಗಳ ಕಾಲ ನಡೆಯಿತು.<ref name="xinhua211107">{{cite news |title=China's Shenzhou-13 taikonauts complete first extravehicular mission |url=http://www.news.cn/english/2021-11/08/c_1310296779.htm |agency=Xinhua News |date=7 November 2021 |access-date=23 ಫೆಬ್ರವರಿ 2026 |archive-date=8 ನವೆಂಬರ್ 2021 |archive-url=https://web.archive.org/web/20211108164615/http://www.news.cn/english/2021-11/08/c_1310296779.htm |url-status=dead }}</ref>
== ವೈಯಕ್ತಿಕ ಜೀವನ ==
ವಾಂಗ್ ಅವರು '''ಝಾವೋ ಪೆಂಗ್''' ಎಂಬ ಪೈಲಟ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಒಬ್ಬ ಪುತ್ರಿ ಇದ್ದಾಳೆ.<ref>{{cite web|url=https://inf.news/en/aviation/0d013e4edaab7ccf9313a0fc05ad4dea.html|title=When Wang Yaping went into space, her daughter asked the teacher aggrievedly: I miss my mother, can I hug you?|access-date=25 November 2022|archive-date=17 ಏಪ್ರಿಲ್ 2022|archive-url=https://web.archive.org/web/20220417031436/https://inf.news/en/aviation/0d013e4edaab7ccf9313a0fc05ad4dea.html|url-status=dead}}</ref>
ಅವರು ಪೀಕಿಂಗ್ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನದಲ್ಲಿ ಡಾಕ್ಟರೇಟ್ ಅಧ್ಯಯನ ಮಾಡುತ್ತಿದ್ದಾರೆ.<ref>{{cite web |date=18 October 2021 |title=Quem é Wang Yaping, chinesa que vai fazer história no espaço |url=https://chinaterradomeio.blogfolha.uol.com.br/2021/10/18/quem-e-wang-yaping-chinesa-que-vai-fazer-historia-no-espaco/}}</ref>
== ಉಲ್ಲೇಖಗಳು ==
{{Reflist}}
[[Category:1980 births]]
[[Category:Living people]]
[[Category:Chinese astronauts]]
[[Category:Women astronauts]]
2l85y61bj48zx0nepdg80c03bvi1fmc
ಸದಸ್ಯ:ಗಣೇಶ್ ಎಂ/ನನ್ನ ಪ್ರಯೋಗಪುಟ
2
179308
1384613
1382154
2026-08-29T11:48:39Z
ಗಣೇಶ್ ಎಂ
88310
1384613
wikitext
text/x-wiki
ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ ಸುಮಾರು 150 ರಿಂದ 200 ವರ್ಷಗಳ ಹಿಂದೆ ಕದ್ರಿ ಗ್ರಾಮದ ಬಾರೆಬೈಲ್ ಪ್ರದೇಶದಲ್ಲಿ ಕೋಟಿ ಮೂಲ್ಯ ಎಂಬವರು ತಮ್ಮ ಅಪಾರವಾದ ಕೃಷಿ ಭೂಮಿಯಲ್ಲಿ ಕುಂಬಾರಿಕೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದರು. ಇವರು ಬಹಳ ಪ್ರಾಮಾಣಿಕರಾಗಿದ್ದು ತುಂಬಾ ಜನಾನುರಾಗಿಗಳಾಗಿದ್ದರು. ಕೋಟಿ ಮೂಲ್ಯರು ಕೂಡುಕುಟುಂಬದ ಮುಖ್ಯಸ್ಥರಾಗಿದ್ದರು. ಕುಟುಂಬದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಕುಟುಂಬದಲ್ಲಿ ಐದು ಜನ ಹೆಣ್ಣು ಮಕ್ಕಳು, ಎಲ್ಲರೂ ಕುಂಬಾರಿಕೆ ಮತ್ತು ಕ್ರಷಿಯನ್ನು ಅವಲಂಬಿತವಾಗಿದ್ದರು. ಕದ್ರಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಕೋಟಿ ಮೂಲ್ಯ ಕುಟುಂಬದಿಂದಲೇ ಹಣತೆ ಹೋಗಬೇಕು ಹಾಗೂ ಮೊದಲ ದೀಪವನ್ನು ಕೋಟಿ ಮೂಲ್ಯ ಕುಟುಂಬದವರೇ ದೀಪ ಹಚ್ಚ ಬೇಕೆಂದು ಶ್ರೀ ಮಂಜುನಾಥ ಸ್ವಾಮಿಯ ಅಭಯ ಇದೆ ಎಂಬ ಪ್ರತೀತಿ ಉಂಟು. ಈಗಲೂ ಕೂಡ ಕೋಟಿ ಮೂಲ್ಯ ಕುಟುಂಬಸ್ಥರಿಗೆ ಮೊದಲ ದೀಪ ಹಚ್ಚುವ ಪ್ರಾಧಾನ್ಯತೆ ಇದೆ. ಈಗ ಬಾರೆಬೈಲ್ ಬಂಜನ್ ಕುಟುಂಬದ ಭಾಸ್ಕರ್ ಪಾಣೆಮಂಗಳೂರು ದೀಪೊತ್ಸವದ ದಿನ, ದೀಪ ಹಚ್ಚುವ ಕೋಟಿ ಮೂಲ್ಯ ಕುಟುಂಬದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೋಟಿ ಮೂಲ್ಯ ಅಪಾರ ದೈವ ಭಕ್ತರಾಗಿದ್ದು ತನ್ನ ಕುಟುಂಬದ ದೈವಗಳಾದ ಮಹಿಷಾಂದಾಯ, ಮರುಳ ಧೂಮಾವತಿ, ಕಲ್ಲುರ್ಟಿ, ಪಂಜುರ್ಲಿ, ಜುಮಾದಿ, ಬಂಟ, ರಾಹು ಗುಲಿಗ ಹಾಗೂ ಮನೆಯೊಳಗೆನೇ ಆರಾಧಿಸುವಂತಹ ಕೊರತಿಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು.
ಶ್ರೀ ಕ್ಷೇತ್ರ ಕದ್ರಿ ಹಾಗೂ ಕೋಟಿ ಮೂಲ್ಯ ಕುಟಂಬದ ನಡುವೆ ಅವಿನಾಭಾವ ಸಂಬಂಧವಿದೆ, ಪ್ರತಿ ವರ್ಷ ದೇವಸ್ಥಾನದ ಜಾತ್ರೋತ್ಸವಕ್ಕೆ ಕ್ಲಪ್ತ ಸಮಯದಲ್ಲಿ ಹಣತೆಗಳನ್ನು ಮನೆಯಲ್ಲಿಯೇ ತಯಾರಿಸಿ ದೇವಸ್ಥಾನಕ್ಕೆ ಒದಗಿಸುವಂತಹ ಗೌರವ ಈ ಕುಟುಂಬಕಿತ್ತು. ಒಂದು ದಿನ ಜಾತ್ರೋತ್ಸವದ ಸಮಯದಲ್ಲಿ ದೇವರ ಬಳಿ ಸೇವೆಗೆ ಸಾಯಂಕಾಲದ ಮೊದಲು ಅಣತೆಗಳನ್ನು ದೇವಸ್ಥಾನಕ್ಕೆ ತಲುಪಿಸುವ ತರಾತುರಿಯಲ್ಲಿದ್ದರು. ಮನೆಯಲ್ಲಿ ಸಾಯಂಕಾಲದ ತಿಂಡಿಗೆ ಅಕ್ಕಿ ಕಡೆದು ಕಡುಬು ಮಾಡಿ ಒಲೆಯಲ್ಲಿಟ್ಟಿದ್ದರು, ಆದರೆ ಕಡಬು ಬೇಯಿಸುವಷ್ಟು ಸಮಯ ಇಲ್ಲದ ಕಾರಣ ತಂದೆ ತಾಯಿ ಮನೆಯವರೆಲ್ಲರೂ ಅರ್ಧ ಬೆಂದ ಕಡಬನ್ನು ತಿಂದು, ಹಣತೆಗಳನ್ನು ಬುಟ್ಟಿಯಲ್ಲಿ ಹೊತ್ತುಕೊಂಡು 10 ರಿಂದ 15 km ನಡೆದು ಸಾಯಂಕಾಲದ ಹೊತ್ತಿಗೆ ಹಣತೆಗಳನ್ನು ದೇವಸ್ಥಾನದ ಪ್ರಾಂಗಣದ ಸುತ್ತಲಿಟ್ಟು, ಕತ್ತಲಾಗುತ್ತಲೇ ದೇವಸ್ಥಾನ ಪೂರ್ತಿ ಹಚ್ಚಿದ ಹಣತೆ ಗಳಿಂದ ಕಂಗೊಳಿಸಲ್ಪಟ್ಟಿತ್ತು. ಇವರ ಈ ಪ್ರಾಮಾಣಿಕ ನಿಷ್ಕಲ್ಮಶ ಸೇವೆಗೆ ಶ್ರೀ ಮಂಜುನಾಥ ಸ್ವಾಮಿಯು ಪ್ರಸನ್ನರಾಗಿ ಕೋಟಿಮೂಲ್ಯ ಸಂಸಾರವನ್ನು ದೇವರ ಬಲಿಸೇವೆಯ ಸಮಯದಲ್ಲಿ ಕರೆದು, ಈ ರೀತಿ ಅಭಯ ನೀಡುತ್ತಾರೆ "ಅವಸರವಸರವಾಗಿ ಅರ್ಧ ಬೆಂದ ಕಡಬನ್ನು ತಿಂದು ತನ್ನ ಸೇವೆಗೆ ಒಂದಿಷ್ಟು ಚುತಿ ಬಾರದ ರೀತಿಯಲ್ಲಿ ಸೇವೆ ಮಾಡಿದ ಕೋಟಿ ಮೂಲ್ಯ ಕುಟುಂಬದ ಹೆಣ್ಣು ಸಂಸಾರವು ಕದ್ರಿಬಂಜನ್ ಎಂಬ ಬರಿಯಿಂದ ಪ್ರಖ್ಯಾತಿ ಪಡೆಯಲಿ" ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಅಭಯ ನೀಡಿದ ಕಾರಣ ಅಂದಿನಿಂದ ಕದ್ರಿಬಂಜನ್ ಎಂಬ ಬರಿಯಿಂದ ಪ್ರಚಲಿತಕ್ಕೆ ಬಂತು. ಕಾಲಕ್ರಮೇಣದಲ್ಲಿ ಈ 4 ಮಂದಿ ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಊರಿಗೆ ಮದುವೆಯಾದಾಗ ಆಯಾ ಊರಿನ ಹೆಸರಿನೊಂದಿಗೆ ಬಂಜನ್ ಸೇರಿಸಿ ತಮ್ಮ ಬರಿಯನ್ನು ಇಟ್ಟುಕೊಂಡರು. ಒಬ್ಬ ಮಗಳು ತವರು ಮನೆಯಲ್ಲಿ ಅಂದರೆ ಬಾರಬೈಲಿನಲ್ಲಿ ಉಳಿದು ಬಾರಬೈಲ್ ಕದ್ರಿ ಬಂಜನ್ ಸಂಸಾರವು ಅವಳಿಂದ ಮುಂದುವರಿತು.
ಕೋಟಿ ಮೂಲ್ಯರು ಅಪರಿಮಿತ ದೈವಭಕ್ತ, ಪ್ರಾಮಾಣಿಕ ಹಾಗೂ ಜನಾನುರಾಗಿಗಳಾಗಿದ್ದರೂ, ಅವರಲ್ಲಿ ಅತೀವ ಶೇಂದಿ ಕುಡಿಯುವಂತಹ ದೌರ್ಬಲ್ಯವು ಆವರಿಸಿಕೊಂಡಿತ್ತು. ಭೂಮಿಯ ವಾತಾವರಣದ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ, ಕೃಷಿ ಹಾಗೂ ಕುಂಬಾರಿಕೆಯಲ್ಲಿ ಸಂಪಾದನೆ ಕಡಿಮೆಯಾದಾಗ ತಮ್ಮ ಕುಡಿಯುವ ಚಟಕ್ಕಾಗಿ ಸ್ವಲ್ಪ ಸ್ವಲ್ಪವೇ ಆಸ್ತಿಯನ್ನು ಯಾವೊಂದು ಕಾಗದ ರುಜುವಾತು ಇಲ್ಲದೆ ಅಡಮಾನವಿಡಲು ಶುರುಮಾಡಿದರು. ಕಾಲಕ್ರಮೇಣ ತಮ್ಮ ಆಸ್ತಿಯನ್ನು ವಾಪಸ್ ಅಡಮಾನದಿಂದ ಬಿಡಿಸಿಕೊಳ್ಳಲು ಆಗದ ಪರಿಸ್ಥಿತಿಗೆ ತಲುಪಿದರು. ಸಾಲಕೊಟ್ಟ ಬಲಿಷ್ಠ ಸಮುದಾಯದ ಹಣ ತೀರಿಸಲು ತಮ್ಮ ಮನೆ, ದೈವಸ್ಥಾನ ಹಾಗೂ ನಾಗಬನ ಆದಿಮೂಲಸ್ಥಾನಗಳ ಎಲ್ಲಾ ಆಸ್ತಿಯನ್ನು ಮಾರಿದರು ದೈವಗಳ ಮೊಗ ಕಟ್ಸಲೆ ಹಾಗೂ ಎಲ್ಲಾ ಪರಿಕರಗಳನ್ನು ಆಸ್ತಿ ಪಡಕೊಂಡರು ಬಾರೆಬೈಲ್ ಪರಿಸರದಲ್ಲಿರುವ ಬಾವಿಗೆ ಹಾಕಿದರು. ಹಾಗೂ ಆ ಜಾಗದಲ್ಲಿ ಅವರಿಗೆ ಬೇಕಾದ ಆ ಕಾಲದ ಭವ್ಯ ಮನೆಗಳನ್ನು ಕಟ್ಟಿಸಿದರು. ಮನೆಯಲ್ಲಿದ್ದ ಕೋಟಿ ಮೂಲ್ಯ ಸಂತಾನದವರು ಬೀದಿ ಪಾಲಾದರು. ತದ ನಂತರ ಬಾರೆಬೈಲ್ ಬಂಜನ್ ಕುಟುಂಬಸ್ಥರು ಬಾರೆಬೈಲ್ ನ ಅನಂತಾಚಾರ್ಯರವರ ಪೂರ್ವಜರ ಬನದಲ್ಲಿ ನಾಗನ ಕಲ್ಲು ಹಾಕಿ ನಾಗನನ್ನು ಆರಾದಿಸಿಕೊಂಡು ಬರುತ್ತಿದ್ದರು. ಕೋಟಿಮೂಲ್ಯ ಬಂಜನ್ ಕುಟುಂಬಸ್ಥರು ಬಾರೆಬೈಲ್ ಪರಿಸರದಲ್ಲಿ ಧನಿಕರ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ಕೂಲಿ ಮಾಡಿಕೊಂಡು ಜೀವನ ಸಾಗಿಸಿಕೊಂಡು ಬಂದರು. ಕೋಟಿ ಮೂಲ್ಯರು ಎಲ್ಲಾ ಕಳೆದುಕೊಂಡು ಹತಾಶರಾಗಿ ಜೀವನದ ಕೊನೆ ಉಸಿರೆಳೆದರು. ಕೊರತಿ ಎನ್ನುವ ದೈವ ಮಾತ್ರ ಕದ್ರಿ ಬಂಜನ್ ಕುಟುಂಬದ ಒಬ್ಬ ಹೆಣ್ಣು ಮಗಳ ಬಾಡಿಗೆ ಮನೆಯಲ್ಲಿ ಅವರೊಂದಿಗೆ ಸಂಸಾರದಲ್ಲಿ ಒಂದಾಗಿ ಇತ್ತು. ಪ್ರತಿಯೊಂದು ಕೆಲಸಕ್ಕೆ ಆ ತಾಯಿ ಕೊರತಿಯಪ್ಪೆಯನ್ನು ನೆನೆದು ಕೆಲಸ ಮಾಡುತ್ತಿದ್ದರು. ಔತಣವಿರಲಿ ಸಂಭ್ರಮವಿರಲಿ ಸುಖ ದುಃಖದಲ್ಲಿ ಈ ಅಗೋಚರ ಶಕ್ತಿಯಾದ ಕೊರತೆಯಪ್ಪೆ ಸುಖ ಶಾಂತಿ ನೆಮ್ಮದಿಯನ್ನು ಆ ಕುಟುಂಬಕ್ಕೆ ನೀಡುತ್ತಿದ್ದಳು. ತಲೆಮಾರುಗಳು ಉರುಳಿದಾಗ ಕೆಲವರು ಸ್ಥಿತಿವಂತರಾದರು, ಕೆಲವರು ದಿನ ಕೂಲಿ ಮಾಡಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು.
ಕೋಟಿ ಮೂಲ್ಯ ಕುಟುಂಬದ ಮೂವರು ಅಕ್ಕ ತಂಗಿಯರಾದ ಕೂಸಮ್ಮ (ಸಚ್ಚಿದಾನಂದರ ತಾಯಿಯಾದ ಕೂಸಮ್ಮರ ಅಜ್ಜಿ), ಮಮ್ಮಲೇ ಮತ್ತು ಪೂವಮ್ಮ ಬಾರೆಬೈಲ್ ಸಮೀಪದಲ್ಲೇ ವಾಸಿಸುತ್ತಿದ್ದರು. ಹಿರಿಯ ಪಾಲಿನ ಕೂಸಮ್ಮರ ಮಕ್ಕಳು, ಗಂಗು ಮೂಲ್ಯೆದಿ, ಮಮ್ಮಲೇ ಮತ್ತು ಬಾಬು
ಒಂದನೇ ಪಾಲಿನ ಗಂಗು ಮೂಲ್ಯೆದಿ ಮಕ್ಕಳು - ಕೂಸಮ್ಮ (ಸಚ್ಚಿದಾನಂದರ ತಾಯಿ), ವೆಂಕಮ್ಮ (ಪೂಣೆ ಎಸ್ಆರ್ ಬಂಜನ್ರ ತಾಯಿ) ಮತ್ತು ಕಲ್ಯಾಣಿ
ಮಮ್ಮುಲೇ ಯವರ ಮಕ್ಕಳು - ಕೇಶವ, ಈಶ್ವರ, ಗೌರಿ, ಲೀಲಾ ಮತ್ತು ಚಂದ್ರಶೇಖರ
ಎರಡನೇ ಪಾಲಿನ ಪೂವಮ್ಮರ ಮಕ್ಕಳು - ದೇಯಿ ಮೂಲ್ಯೆದಿ ಮತ್ತು ಕಮಲ
ದೇಯಿ ಮೂಲ್ಯೆದಿ ಮಕ್ಕಳು - ಗೋಪಿ, ಜಯಂತಿ, ಯಶೋಧ ಮತ್ತು ನಾಗಪ್ಪ
ಕಮಲರ ಮಕ್ಕಳು - ಸುಂದರಿ, ಬಾಗಿ, ಇಂದಿರಾ ಮತ್ತು ಮೋನಪ್ಪ
ಮೂರನೇ ಪಾಲಿನ ಮಮ್ಮಲೇ ಮಕ್ಕಳು - ಕನಪಾಯಿ ಮತ್ತು ಯಮುನಾ
ಕನಪಾಯಿಯ ಮಗಳು - ಸೀತಮ್ಮ,
ಯಮುನನ ಮಕ್ಕಳು - ಶೇಖರ, ಸಂಜೀವ, ರತ್ನ, (ಭಾಸ್ಕರ್ ಪಾಣೆಮಂಗಳೂರು ರವರ ತಾಯಿ) ಭವಾನಿ, ಸುಂದರ ಮತ್ತು ಆನಂದ. ಈ ಮೇಲಿನ ಎಲ್ಲಾ ವಿವರಗಳನ್ನು 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ನಡೆದ ಅಷ್ಟಮಂಗಳ ಪ್ರಶ್ನೆಯ ಸಮಯದಲ್ಲಿ ಕುಟುಂಬಿಕರು ಒಪ್ಪಿಕೊಂಡ ಸತ್ಯ.
ತಕ್ಕಮಟ್ಟಿಗೆ ಸ್ಥಿತಿವಂತರಾಗಿದ್ದ ಗಂಗು ಮೂಲ್ಯದಿಯವರ (ಕೂಸಮ್ಮರವರ ತಾಯಿ, ಬಾರಬೈಲ್ ಕುಟುಂಬದ ಮುಖ್ಯಸ್ದರಾದ ಸಚ್ಚಿದಾನಂದರ ಅಜ್ಜಿ) ಅಮ್ಮನ ಮನೆಯಲ್ಲಿ ಕೊರತೆಯಪ್ಪೆಯನ್ನು ಆರಾಧಿಸಿಕೊಂಡು ಬರುತ್ತಿದ್ದರು. ಗಂಗು ಮೂಲ್ಯದಿಯವರು ಮೂರು ಜನ ಮಕ್ಕಳು, ಎರಡು ಹೆಣ್ಣು ಒಂದು ಗಂಡು. ಇವರ ಅಪ್ಪ ಹಿರಿಯ ಮಗಳಾದ ಮಮ್ಮಲೇಯವರನ್ನು (ಗಂಗು ಮೂಲ್ಯದಿಯ ಅಕ್ಕ) ಬೇರೆ ಊರಿನ ತಕ್ಕಮಟ್ಟಿನ ಸ್ಥಿತಿವಂತನಿಗೆ ಮದುವೆ ಮಾಡಿಕೊಟ್ಟರು. ಕಿರಿಯ ಮಗಳಾದ ಗಂಗು ಮೂಲ್ಯದಿಯನ್ನು ಕೆಂಪು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವ ಕದ್ರಿ ಬಾರೆಬೈಲ್ ಪರಿಸರದ ಹುಡುಗನಿಗೆ ಮದುವೆ ಮಾಡಿಕೊಡುತ್ತಾರೆ. ಕಿರಿಯವನಾದ ಬಾಬು ಮಂಗಳೂರಿನ ಕೋರ್ಟ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಾ ಅತ್ತಾವರದ ಬಾಬುಗುಡ್ಡೆಯಲ್ಲಿ ವಾಸಿಸುತ್ತಾರೆ. ಕೊರತಿಯಪ್ಪೆ ಕಿರಿಯ ಮಗಳೊಂದಿಗೆ ಉಳಿದುಕೊಳ್ಳುತ್ತದೆ. ಇವರು ಬಾರಬೈಲ್ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಇವರ ಗಂಡನಿಗೆ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುವಾಗ ಕಾಲಿನ ಮೇಲೆ ಕಲ್ಲು ಬಿದ್ದು, ತದನಂತರ ಶ್ರಮದಾಯಕ ಕೆಲಸ ಮಾಡಲು ಆಗದೆ ಗಂಡ ಹೆಂಡತಿ ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂರು ಹೆಣ್ಣು ಮಕ್ಕಳನ್ನು ಸಾಕಿದರು. ಅವರಲ್ಲಿ ಹಿರಿಯ ಮಗಳು ವೆಂಕಮ್ಮರನ್ನು ಬಾಳ ಕಳವಾರಿನ ಕೃಷಿಕರಾದ ರಾಮ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳದ ಬಿರ್ಮನ ಬಂಗೇರರಿಗೆ ಮದುವೆ ಮಾಡಿ ಕೊಡುತ್ತಾರೆ.ಕಿರಿಯ ಮಗಳಾದ ಕಲ್ಯಾಣಿಯನ್ನು ಮುಂಬಾಯಿಯ (ಆಗಿನ ಬೊಂಬಾಯಿ) ಐತಪ್ಪ ಮೂಲ್ಯರಿಗೆ ಮದುವೆ ಮಾಡಿ ಕೊಡುತ್ತಾರೆ. ಎರಡನೇ ಮಗಳಾದ ಕೂಸಮ್ಮರನ್ನು ಬಂಟ್ವಾಳಕ್ಕೆ ಮದುವೆ ಮಾಡಿಕೊಟ್ಟರೂ ಗಂಡ ಹೆಂಡತಿ ಇಬ್ಬರೂ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದರಿಂದ ಬಾರಬೈಲ್ ಪರಿಸರದ ಒಂದು ಪ್ರತಿಷಿತ ಬ್ರಾಹ್ಮಣರ ಮನೆಯ ಬಾಡಿಗೆ ಮನೆಯಲ್ಲಿ ಇರುತ್ತಾರೆ. ಮನೆದೈವ ಕೊರತಿಯಪ್ಪೆಯನ್ನು ಕೂಡ ಬಾಡಿಗೆ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಬಾಡಿಗೆ ಮನೆ ಬದಲಿಸುವಾಗ ಅವರೊಂದಿಗೆ ಕೊರತಿಯಪ್ಪೆಯನ್ನು ಕೂಡ ಕೊಂಡುಹೊಗುತ್ತಿದ್ದರು. ಕೂಸಮ್ಮರ ಹಿರಿಯ ಮಗಳಾದ ಗಿರಿಜಳನ್ನು ಮದುವೆ ಮಾಡಿ ಕೊಟ್ಟ ಮೇಲೆ ಕೂಸಮ್ಮದಂಪತಿಗಳು 1962ರಲ್ಲಿ ಬಾರಬೈಲ್ ನ ತೋಮಸ್ ಗಾರ್ಡನ್ನಲ್ಲಿರುವ ಒಂದು ಬಾಡಿಗೆ ಮನೆಯಲ್ಲಿ ತಮ್ಮ ತುಂಬು ಸಂಸಾರದೊಂದಿಗೆ ಬಂದು ನೆಲೆಸಿದರು. ಕೊರತಿಯಪ್ಪೆಯನ್ನು ಕೂಡಾ ಅದೇ ಮನೆಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದರು. ಕೋಟಿ ಮೂಲ್ಯ ಕುಟುಂಬದ ನಾಗಬನ ಆದಿಮೂಲಸ್ಥಾನ ಅಜೀರ್ಣಾವಸ್ಥೆಯಲ್ಲಿ ಅನ್ಯರ ವಶದಲ್ಲಿ ಇದ್ದ ಕಾರಣ ಅನಂತಾಚಾರ್ಯರ ಬನದಲ್ಲಿ ಬಾರಬೈಲ್ ಬಂಜನ್ ಕುಟುಂಬದ ಪೂರ್ವಜರು ಹಾಕಿದ ನಾಗನನ್ನು ಆರಾಧಿಸಿಕೊಂಡು ಬರುತ್ತಿದ್ದರು.
ಬಾರಬೈಲಿನ ಕೂಸಮ್ಮನವರು ತಮ್ಮ ಅಕ್ಕ ತಂಗಿಯರು ಹಾಗೂ ಕೋಟಿ ಮೂಲ್ಯ ಕುಟುಂಬದ ಇತರ ಸಹೋದರರ ಸಹೋದರಿಯರ ಜೊತೆ ತಮ್ಮ ಮನೆಯೊಳಗೆ ಕೊರತೆಯನ್ನು ಆರಾಧಿಸುತ್ತಾ ಬಾರೆಬೈಲಿನ ಅನಂತಾಚಾರ್ಯರ ಬನದಲ್ಲಿರುವ ನಾಗದೇವರನ್ನು ಪೂಜಿಸುತ್ತಾ ಬರುತ್ತಿದ್ದರು. ವರ್ಷಗಳು ಕಳೆದಂತೆ ಕೂಸಮ್ಮರ ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆಯಾಗಿ, ಗಂಡು ಮಕ್ಕಳೆಲ್ಲಾ ಪರ ಊರಿಗೆ ಉದ್ಯೋಗ ನಿಮಿತ್ತ ಹೋದಾಗ ಕಿರಿ ಮಗ ಸಚ್ಚಿದಾನಂದರು ಊರಿನಲ್ಲಿಯೇ ವ್ರತ್ತಿ ಜೀವನ ಸಾಗಿಸಿಕೊಂಡು, ಮನೆಯಲ್ಲಿಯೇ ಇದ್ದು ತಾಯಿಯೊಂದಿಗೆ ಕೊರತಿಯಪ್ಪೆ ಹಾಗೂ ಬಾರೆಬೈಲಿನ ಅನಂತಾಚಾರ್ರವರ ಬನದ ನಾಗದೇವರನ್ನು ಆರಾಧಿಸಿಕೊಂಡು ಬರುತ್ತಿದ್ದರು. ಸುಮಾರು 1978-79ರ ಹೊತ್ತಿಗೆ ಬೇರೆ ಬೇರೆ ಪ್ರದೇಶದಲ್ಲಿರುವ ಬಂಜನ್ ಕುಟುಂಬದವರಿಗೆ ಕಷ್ಟ ಸಮಸ್ಯೆಗಳು ಬಂದಾಗ ಅವರು ಜ್ಯೋತಿಷ್ಯರನ್ನು ಇಲ್ಲವೇ ತಂತ್ರಿವರೇಣ್ಯರನ್ನು ಸಂಪರ್ಕಿಸಿದಾಗ ಅವರ ಮುಖಾಂತರ ಕಂಡುಕೊಂಡ ಪರಿಹಾರ ಅಂದರೆ "ನೀವು ನಿಮ್ಮ ಬಂಜನ್ ಆದಿಮೂಲಕ್ಕೆ ಹೋಗಬೇಕು ಅಲ್ಲಿ ಒಂದು ಕುಟುಂಬ ಈಗ ಕೂಡ ಕೋಟಿ ಮೂಲ್ಯ ಸಂಸಾರದ ದೈವವನ್ನು ಆರಾಧಿಸಿಕೊಂಡು ಹಾಗೂ ನಾಗರಪಂಚಮಿಯ ದಿವಸ ನಾಗನಿಗೆ ತಂಬಿಲ ಹಾಲಾಭಿಷೇಕ ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು" ಆ ಪ್ರಕಾರ ಹಲವು ಮಂದಿ ಕೋಟಿ ಮೂಲ್ಯ ಬಂಜನ್ ಕುಟುಂಬಸ್ಥರು ಕೂಸಮ್ಮನವರನ್ನು ಹುಡುಕಿಕೊಂಡು ಬಾರೆಬೈಲಿಗೆ ಬರುತ್ತಿದ್ದರು. ನಾಗರ ಪಂಚಮಿಯ ದಿವಸ ನಾಗದೇವರಿಗೆ ಹಾಲೆರೆದು ಕೂಸಮ್ಮನವರ ಮನೆಗೆ ಬಂದು ಮನೆಯಲ್ಲಿ ಇದ್ದಿದ್ದನ್ನು ಹಂಚಿಕೊಂಡು ತಿನ್ನುತ್ತಿದ್ದರು. ವರುಷಗಳ ಕಳೆದಂತೆ ಹೆಚ್ಚು ಹೆಚ್ಚು ಬಂಜನ್ ಕಟುಂಬಸ್ಥರು ಬರಲು ಪ್ರಾರಂಬಿಸಿದರು.
1998 ರಲ್ಲಿ ನಡೆದ ಒಂದು ಘಟನೆ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರ ಪುನರ್ಪ್ರತಿಸ್ಥಾಪನೆಗೆ ನಾಂದಿ ಹಾಡಿತು. ಬಾರೆಬೈಲಿನ ಬಿಲ್ಲವ ಸಮಾಜದ ಕುಟುಂಬಸ್ಥರಿಗೆ ತಮ್ಮ ಕುಟುಂಬದ ಜುಮಾದಿ ದೈವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ ಅನೇಕ ಅಡಚಣೆ ಹಾಗೂ ಸಮಸ್ಯೆಗಳು ಕಂಡು ಬಂದವು. ನಾಗರಹಾವು ಪ್ರತಿದಿನ ಬಂದು ಆ ಪ್ರದೇಶದಲ್ಲಿ ಸುತ್ತುವರಿಯುವುದರಿಂದ ಆತಂಕಗೊಂಡ ಬಿಲ್ಲವ ಕುಟುಂಬಸ್ಥರು, ಸ್ಥಳ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯ ಏನೆಂದರೆ, ಈ ಪ್ರದೇಶದಲ್ಲಿ ಸುಮಾರು 150 ರಿಂದ 200 ವರ್ಷಗಳ ಹಿಂದಿನ ನಾಗಬನ ಆದಿ ಮೂಲಸ್ಥಾನ ಪೂಜೆ ಪುರಸ್ಕಾರ ಇಲ್ಲದೆ ಪಾಳುಬಿದ್ದಿದೆ. ಇದರಿಂದ ನಿಮ್ಮ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಈ ತರದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ನೀವು ಆ ಪಾಳುಬಿದ್ದ ನಾಗಬನದ ಕುಟುಂಬದ ಹಿರಿಯರನ್ನು ಇಲ್ಲವೇ ಸದಸ್ಯರನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸ್ಥಳ ಪ್ರಶ್ನೆ ಇಟ್ಟ ಸದಾಶಿವರು ತಿಳಿಸಿದರು. ಆ ಪಾಲು ಬಿದ್ದ ನಾಗಬನ ಆದಿ ಮೂಲಸ್ಥಾನ ಯಾರದ್ದು ಎಂದು ಬಿಲ್ಲವ ಮುಖಂಡರು ವಿಚಾರಿಸಿದಾಗ, ಅದು ಕೋಟಿ ಮೂಲ್ಯ ಸಂತಾನದವರದ್ದೆಂದು ತಿಳಿದು ಬಂತು. ಹಾಗಾಗಿ ಅವರು ಸಚ್ಚಿದಾನಂದರನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ಪರಿಹಾರ ಮಾಡುವಂತೆ ವಿನಂತಿಸಿ ಕೊಂಡರು. ನಾಗಬನ ಹಾಗೂ ಅದರ ಸುತ್ತಮುತ್ತಲು ಇರುವ ದೈವಸ್ಥಾನದ ಜಾಗವು ಅನ್ಯರ ಕೈಯಲ್ಲಿ ಇರುವುದರಿಂದ, ಅವರು ಮುಂಬೈಯಲ್ಲಿ ನೆಲೆಸಿರುವುದರಿಂದ ಹಾಗೂ ಖರೀದಿಸಲು ಅಪಾರ ಹಣ ಬೇಕಾಗಿರುವುದರಿಂದ, ಪರಿಹಾರ ಕಷ್ಟ ಸಾಧ್ಯವೆಂದು ಸಚ್ಚಿದಾನಂದರು ಅವರಿಗೆ ತಿಳಿಸಿದರು. ಆದರೂ ಊರಿನವರ ಒತ್ತಾಸೆಯ ಮೇರೆಗೆ ಪ್ರಯತ್ನವೆಂಬಂತೆ ಪರಿಹಾರಕ್ಕಾಗಿ ನಾಗದರ್ಶನವನ್ನು ಮಾಡಲು ಊರಿನ ಹಿರಿಯರು, ಹಿತೈಷಿಗಳು, ಬಂಜನ್ ಕುಟುಂಬದ ಎಲ್ಲಾ ಹಿರಿಯ ಕಿರಿಯ ಸದಸ್ಯರು ಹಾಗೂ ಮುಖ್ಯಸ್ಥರು ನಿರ್ಧರಿಸಿದರು. ಸುರತ್ಕಲ್ ನ ಜೋತಿಷಿ ಶ್ರೀ ನರಸಿಂಹ ಭಟ್ರ ನಿರ್ದೇಶನದಂತೆ ನಾಗಪಾತ್ರಿ ಶ್ರೀ ನಾಗೇಶ್ ಬಾಯಾರ್ ರನ್ನು ಸಂಪರ್ಕಿಸಿ ನಾಗದರ್ಶನಕ್ಕೆ ವಿನಂತಿಸಿದರು. ಸಚ್ಚಿದಾನಂದರ ಅಧ್ಯಕ್ಷತೆಯಲ್ಲಿ ಬಾರೆಬೈಲ್ ಬಂಜನ್ ಕುಟುಂಬಸ್ಥರು, ಊರಿನವರು, ಬಾರೆಬೈಲ್ ಪರಿಸರದ ಎಲ್ಲಾ ಹಿಂದು ಬಾಂದವರು ತನುಮನಧನಗಳ ಸಹಕಾರದಿಂದ ನಾಗದರ್ಶನವನ್ನು ಪಾಳುಬಿದ್ದ ನಾಗಬನದ ಹತ್ತಿರವಿರುವ ಜಾಗದಲ್ಲಿ ನಡೆಸಲಾಯಿತು. ದರ್ಶನದ ಸಮಯದಲ್ಲಿ ನಾಗದೇವರು ಹೇಳಿದ ಮಾತೆಂದರೆ "ನಾನು 150 ವರ್ಷಗಳಿಂದ ಪೂಜೆ ಪುರಸ್ಕಾರ ಇಲ್ಲದೆ ನಿಸ್ತೇಜನಾಗಿದ್ದೆ ಈಗ ಪುನರ್ಪ್ರತಿಸ್ಥಾಪನೆ ಮಾಡುವ ಕಾಲ ಕೂಡಿ ಬಂದಿದೆ ಸಚ್ಚಿದಾನಂದ, ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡಬೇಡ, ನಿನ್ನ ಬೆನ್ನಿನ ಹಿಂದೆ ನಾನಿದ್ದೇನೆ ಎಲ್ಲಾ ಎಡರುತೊಡರುಗಳು ನಿವಾರಣೆಯಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ" ಎಂಬ ಅಭಯವನ್ನು ನಾಗ ದೇವರು ನೀಡಿದರು. ಅಂದಿನಿಂದ ಕೋಟಿ ಮೂಲ್ಯ ಕುಟುಂಬಸ್ಥರು ಆದಿ ಮೂಲಸ್ಥಾನ ಶ್ರೀ ನಾಗ ಬ್ರಹ್ಮ ಕ್ಷೇತ್ರದ ಪುನರ್ಪ್ರತಿಸ್ಥಾಪನೆಗೆ ಪಣತೊಟ್ಟರು.
ಮೊದಲಿಗೆ ಕುಟುಂಬಸ್ಥರ ಸಮಿತಿ ಮಾಡಲಾಯಿತು. ಆ ಸಮಿತಿಗೆ ಹಿರಿಯರಾದ ಸುಬ್ಬಯ್ಯ ಕುಂಪಲರವರನ್ನು ಅಧ್ಯಕ್ಷರಾಗಿ, ಸಚ್ಚಿದಾನಂದರನ್ನು ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆರಿಸಲಾಯಿತು. ಆದಿಮೂಲಸ್ಥಾನದ ಜಾಗವನ್ನು ವಾರೀಸುದಾರರಿಂದ ಖರೀದಿಸಲು ಹಣ ಕ್ರೋಡೀಕರಿಸಲು ಸಮಿತಿ ರಚಿಸಲಾಯಿತು. ಜಾಗವನ್ನು ಖರೀದಿಸುವ ಮೊದಲು ಅಷ್ಟಮಂಗಳ ಪ್ರಶ್ನೆ ಇಡಲು ಸಮಿತಿಯಲ್ಲಿ ನಿರ್ಧರಿಸಲಾಯಿತು. ಶ್ರೀ ಗಿರೀಶ್ ಪೊದುವಾಳ್ ನೇತ್ರತ್ವದಲ್ಲಿ, ವೇದಮೂರ್ತಿ ಶ್ರೀ ವಿಟ್ಠಲದಾಸ ತಂತ್ರಿಯವರ ಉಪಸ್ಥಿತಿಯಲ್ಲಿ ತಾ. 16.05.2001 ರಿಂದ 18.05.2001 ವರೆಗೆ 3 ದಿನಗಳ ಕಾಲ ಅಷ್ಟಮಂಗಳ ಪ್ರಶ್ನೆ ಇಡಲಾಯಿತು.
ಪ್ರಶ್ನೆಯಲ್ಲಿ ಕಂಡು ಬಂದಂತಹ ಎಲ್ಲಾ ದೋಷಗಳಿಗೆ ಪರಿಹಾರ ಪ್ರಾಯಶ್ಚಿತ್ತಗಳನ್ನು ವಿಧಿವತ್ತಾಗಿ ಮಾಡಲಾಯಿತ್ತು. ಕದ್ರಿ ಬಂಜನ್ ಎಲ್ಲಾ ಕುಟುಂಬಗಳ ಸದಸ್ಯರನ್ನು ಒಳಗೊಂಡ ಜೀರ್ಣೋದ್ಧಾರ ಸಮಿತಿಯನ್ನು ರಚಸಲಾಯಿತ್ತು. ಅಧ್ಯಕ್ಷರಾಗಿ ಸುಬ್ಬಯ್ಯ ಕುಂಪಲರವರನ್ನು, ಕಾರ್ಯದರ್ಶಿಯಾಗಿ ಸಚ್ಚಿದಾನಂದರನ್ನು ಮುಂದುವರಿಸಲಾಯಿತ್ತು. ಸ್ಥಳ ಖರೀದಿಸಲು, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಸಲು ಕನಿಷ್ಠ 20 ಲಕ್ಷದ ಅಂದಾಜು ವೆಚ್ಚದ ರೂಪರೇಷೆ ತಯಾರಿಸಿ ಜೀರ್ಣೋದ್ಧಾರ ಸಮಿತಿಯು ನಿಧಿ ಸಂಗ್ರಹ ಕಾರ್ಯರೂಪಕ್ಕೆ ಇಳಿಯಿತು. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡಲು ವಿನಂತಿಸಲಾಯಿತು. ಸ್ಥಿತಿವಂತರು, ದಾನಿಗಳು ಮತ್ತು ಭಕ್ತಾದಿಗಳು ತಮ್ಮ ಶಕ್ತಿಮೀರಿ ದೇಣಿಗೆ ನೀಡಲು ಮುಂದಾದರು.
ಈ ನಡುವೆ 2002ರಲ್ಲಿ ಅಧ್ಯಕ್ಷರಾದ ಸುಬ್ಬಯ್ಯ ಕುಂಪಲರವರು ಆರೋಗ್ಯ ಸರಿ ಇಲ್ಲದ್ದಿದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ವಿನಂತಿಸಿದ್ದರು. ಆ ಕಾರಣದಿಂದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೊಸ ಅಧ್ಯಕ್ಷರು ನಿಧಿ ಸಂಗ್ರಹಿಸಲು ಅವಿರತವಾಗಿ ಕೆಲಸ ಮಾಡಿದರು. ಬ್ಯಾಂಕಿನಿಂದ ಸಾಲ ಪಡೆಯಲು ಕಮಿಟಿ ನಿರ್ಧರಿಸಿತು. ಕಮಿಟಿಯ ಉಪಾಧ್ಯಕ್ಷರಾದ ಪೂವಪ್ಪ ಕಡಂಬಾರ್ ರವರು ತಮ್ಮ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಆದಿಮೂಲಸ್ಥಾನದ ಸ್ಥಳವನ್ನು ಮುಂಬಾಯಿ ನಿವಾಸಿಯಾದ ಶ್ರೀಮತಿ ಮರ್ಲಿನ್ ಕೊನ್ಸೆಸೊರಿಂದ ಸರಿಯಾದ ಸಮಯದಲ್ಲಿ ಖರೀದಿಸಲು ಸಹಕರಿಸಿದರು.(ಕಮಿಟಿಯು ಮುಂದಕ್ಕೆ ಬ್ಯಾಂಕ್ ಸಾಲ ತೀರಿಸಿ ಅವರ ಆಸ್ತಿಯನ್ನು ಅಡಮಾನದಿಂದ ಬಿಡಿಸಿತು). ಕದ್ರಿ ಬಂಜನ್ ಆದಿ ಮೂಲಸ್ಥಾನದ ಒಂದೊಂದು ಕುಟುಂಬದವರು ಒಂದೊಂದು ಕೆಲಸ ಕಾರ್ಯಗಳನ್ನು ವಹಿಸಿಕೊಂಡರು ದೈವಸ್ಥಾನದ ಗುಡಿ, ಚಾವಡಿ ಮನೆ, ನಾಗಬನದ ಕಟ್ಟೆ, ತೀರ್ಥಬಾವಿ ಶುಧ್ಧೀಕರಣ, ನವೀಕರಣ ಇತ್ಯಾದಿ. ಎಲ್ಲರೂ ತಮ್ಮ ಶಕ್ತಿ ಮೀರಿ ತನು ಮನ ಧನ ಗಳಿಂದ ಸಹಕರಿಸಿದರೂ, ಆರ್ಥಿಕವಾಗಿ ಹೆಚ್ಚಿನ ಸಹಾಯ ನೀಡಿದವರಲ್ಲಿ ಶ್ರೀ ಬಿ ರಾಜ ಗಣೇಶ್ ಪ್ರಸಾದ್ (ಅಧ್ಯಕ್ಷರು), ಶ್ರೀ ಎಸ್ ಆರ್ ಬಂಜನ್ ಪುಣೆ, ಶ್ರೀ ದಿವಾಕರ್ ಬಂಜನ್ ಸೂರತ್ ಹಾಗೂ ಶ್ರೀ ಪೂವಪ್ಪ ಕಡಂಬಾರು ಮೊದಲಿಗರು. ಎಲ್ಲರ ಪರಿಶ್ರಮ ಹಾಗೂ ದೈವ ಪ್ರೇರಣೆಯಿಂದ ಶತಮಾನಗಳಿಂದ ಪಾಳುಬಿದ್ದಿದ್ದ ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರವು ತಾರೀಕು 17.06.2003. ರಂದು ಪ್ರತಿಷ್ಠಾಪನೆಗೊಂದಿತು. ವೈಧಿಕ ವಿಧಿ ವಿಧಾನಗಳು, ದೇವತಾ ಕಾರ್ಯಗಳು ಹಾಗೂ ಬ್ರಹ್ಮಕಲಶೋತ್ಸವು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು. ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಪುನರ್ಪ್ರತಿಷ್ಠಾ ನಂತರ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಲಾಯಿತು.
ಅಂದಿನಿಂದ ಪ್ರತೀ ವರ್ಷ ಪ್ರತಿಷ್ಠಾಪನೆಯ ದಿನದಂದು ಚಾವಡಿ ಮನೆಯಲ್ಲಿ ಗಣಹೋಮ,ನಾಗಬನದಲ್ಲಿ ಅಶ್ಲೇಶ ಬಲಿಸೇವೆ, ದೈವಗಳಗೆ ಪರ್ವ ಸೇವೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣದ ದಿನ ನಾಗದೇವರಿಗೆ ಕ್ಷೀರಾಭಿಷೇಕ ಸಿಹಿಯಾಳಾಭಿಷೇಕ ಪಂಚಾಮೃತಾಭಿಷೇಕ ದೈವಗಳಗೆ ಸಂಕ್ರಮಣ ಸೇವೆ ನಡೆಯುತ್ತದೆ. ತುಳಸಿ ಪೂಜೆಯ ಸಂದರ್ಭದಲ್ಲಿ ದೈವಗಳಿಗೆ ಚೌತಿಪರ್ವ ನಡೆಯುತ್ತದೆ. ಏಪ್ರಿಲ್ ತಿಂಗಳಲ್ಲಿ ಬಾರೆಬೈಲ್ ಕುಟುಂಬಸ್ಥರ ಬೂತಕ್ಕೆ ಆಗುವ ಸಂದರ್ಭ ದಲ್ಲಿ, ನಾಗದೇವರಿಗೆ ತಂಬಿಲಸೇವೆ, ವೆಂಕಟರಮಣ ಮುಡಿಪು ಪೂಜೆ, ಅದಾದ ನಂತರ ರಾಜನ್ ದೈವಗಳಿಗೆ ಪರ್ವಸೇವೆ ಸಂಜೆ ಹೊತ್ತಿಗೆ ಕುಟುಂಬದ ದೈವಗಳಗೆ ಕುರಿತಂಬಿಲ ಸೇವೆ ನಡೆಯುತ್ತದೆ. ನಾಗರ ಪಂಚಮಿಯ ದಿವಸ ನಾಗದೇವರಿಗೆ ಕ್ಷೀರಾಭಿಷೇಕ, ಸಿಹಿಯಾಳಾಭಿಷೇಕ, ಪಂಚಾಮೃತಾಭಿಷೇಕ, ತಂಬಿಲ ಸೇವೆ, ಹೋಮ, ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರಗುತ್ತದೆ.
2012 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ ರಾಜ ಗಣೇಶ್ ಪ್ರಸಾದ್ ನಿಧನದ ನಂತರ ಆಡಳಿತ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶ್ರೀ ಸದಾಶಿವ ಬಂಜನ್ ಪುಣೆ ಮತ್ತು ಶ್ರೀ ರಾಧಾಕೃಷ್ಣ ಬಂಜನ್ ಬೆಂಗಳೂರು, ಅಧ್ಯಕ್ಷರಾಗಿ ಶ್ರೀ ಪೂವಪ್ಪ ಕಡಂಬಾರು, ಉಪಾಧ್ಯಕ್ಷರಾಗಿ ಶ್ರೀ ಎನ್.ಜಿ.ಮೂಲ್ಯ ಮತ್ತು ಶ್ರೀ ಆನಂದ್ ಎ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವೆಂಕಪ್ಪ ಎನ್ ಬಂಜನ್, ಜೊತೆ ಕಾರ್ಯದರ್ಶಿಯಾಗಿ ಶ್ರೀ ರವಿಚಂದ್ರ ಬಂಜನ್, ಕೋಶಾಧಿಕಾರಿಯಾಗಿ ಶ್ರೀ ಜಯರಾಮ ಕುಲಾಲ್, ರಾಜನ್ ದೈವಗಳ ಅರ್ಚಕರಾಗಿ ಶ್ರೀ ಸಚ್ಚಿದಾನಂದ ಬಾರೆಬೈಲ್ ಹಾಗೂ ಜೊತೆ ಪೂಜಾ ಸಹಾಯಕರಾಗಿ ಶ್ರೀ ಶಿವರಾಮ ಬಂಜನ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕದ್ರಿ ಬಂಜನ್ ಆದಿ ಮೂಲಸ್ಥಾನ ಮತ್ತು ನಾಗಬ್ರಹ್ಮ ಕ್ಷೇತ್ರ ಪ್ರತಿಷ್ಠಾಪನೆಗೊಂಡು 12 ವರ್ಷಗಳಲ್ಲಿ ಅಧ್ಯಕ್ಷರಾದ ಶ್ರೀ ಪೂವಪ್ಪ ಕಡಂಬಾರು ಹಾಗೂ ಕಾರ್ಯದರ್ಶಿ ಶ್ರೀ ವೆಂಕಪ್ಪ ಬಂಜನ್ ಕುಂಪಲ ಇವರ ನೇತೃತ್ವದಲ್ಲಿ ನಾಗಾಬನ ಕಟ್ಟೆಯನ್ನು ಪುನರ್ ನವೀಕರಿಸಿ, ನೂತನ ಅನ್ನಛತ್ರ ಹಾಗೂ ಚಾವಡಿ ಸಭಾ ಭವನವನ್ನು ನಿರ್ಮಿಸಿದರು. 2016ರ ಫೆಬ್ರವರಿ ತಿಂಗಳ 26ರಂದು ನವೀಕರಣ ಬ್ರಹ್ಮಕಲೋತ್ಸವವನ್ನು ಕ್ಷೇತ್ರದ ತಂತ್ರಿವರೇಣ್ಯರಾದ ವೇದ ವಿದ್ಯಾಭೂಷಣ ಬ್ರಹ್ಮಶ್ರೀ, ಅಘೋರ ತಾಂತ್ರಿಕ್ ವೇದಮೂರ್ತಿ ಶ್ರೀ ವಿಠಲದಾಸ ತಂತ್ರಿ ದೇರೆಬೈಲ್ ಇವರ ನೇತ್ರತ್ವದಲ್ಲಿ ನಡೆಸಲಾಯಿತು.ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು, ವಿವಿಧ ಕ್ಷೇತ್ರದ ಧಾರ್ಮಿಕ ಮುಖಂಡರುಗಳು, ಊರಿನ ಪ್ರತಿಷ್ಥಿತ ವ್ಯಕ್ತಿಗಳು, ದಾನಿಗಳು ಮತ್ತು ಎಲ್ಲಾ ಕದ್ರಿ ಬಂಜನ್ ಕುಟುಂಬಿಕರು ಸಾರ್ವಜನಿಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ 2ದಿನ ರಾಜನ್ ದೈವಗಳಾದ ಮೈಸಂದಾಯ, ಮರಳ ದೂಮಾವತಿ, ಚಾವಡಿ ದೈವಗಳಾಗಿ ಕೊರತಿಯಪ್ಪೆ, ಕಲ್ಲುರ್ಟಿ, ಪಂಜುರ್ಲಿ, ಪರಿವಾರದ ದೈವಗಳಾಗಿ ಬಂಟ ಹಾಗೂ ರಾಹುಗಳಿಗ ದೇವಗಳಿಗೆ ನೇಮ ಕೋಲೊತ್ಸವ ನೀಡಿಲಾಯಿತು. ಕುಟುಂಬದ ಸುಖ, ಶಾಂತಿ, ನೆಮ್ಮದಿ ಹಾಗೂ ಅಭಿವ್ರಧ್ದಿಗೆ ಪ್ರಾರ್ಥಿಸಿದ ಎಲ್ಲಾರೂ ದ್ಷೆವಗಳಿಂದ ಅಭಯ ಪ್ರಾಸಾದ ಪಡೆದರು.
ಖುಷಿಯಿಂದ ಓಡಿದೆನು
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಖುಷಿಯಿಂದ ಓಡಿದೆನು ಅಂದು ನಾನು
ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು,
ನೋಡುವಿರಿ ಸಾಕೆನಗೆ ಅದುವೆ ಬಹುಮಾನ
ಇಂದು ನಾ ಓಡಿದರೆ ಅಂದಿನಂತೆಯೆ ಇತ್ತು,
ನೋಡುವಿರಿ ಸಾಕೆನಗೆ ಅದುವೆ ಬಹುಮಾನ
ಓಡುವ ಹಕ್ಕಿಗೆ ಬೇಕೆ ssssss ಬಿರುದು ಸನ್ಮಾನ?
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ
ಓಡುವುದು ಅನಿವಾರ್ಯ ಕರ್ಮ ನನಗೆ
ಎಲ್ಲ ನೋಡಲಿ ಎಂದು ನಾನು ಓಡುವುದಿಲ್ಲ
ಓಡುವುದು ಅನಿವಾರ್ಯ ಕರ್ಮ ನನಗೆ
ನೋಡುವವರಿಹರೆಂದು ನಾ ಬಲ್ಲೆ ಅದರಿಂದ
ಓಡುವುದು ಮೈ ದುಂಬಿ ಎಂದಿನಂತೆ
ಯಾರು ಏನು ಹೇಳಿದರೂ
ಯಾರು ಏನು ಹೇಳಿದರೂ
ನನಗಿಲ್ಲ ಚಿಂತೆ
ಖುಷಿಯಿಂದ ಓಡಿದೆನು ಅಂದು ನಾನು
ಎವೆಯಿಕ್ಕಿ ನೋಡಿದಿರಿ ಅಲ್ಲಿ ನೀವು
ಗಣೇಶ್.ಎಂ
(ಮೂಲ ಕವಿತೆ ಪ್ರೊ.ಜಿ.ಎಸ್.ಶಿವರುದ್ರಪ್ಪ)
ನಿವ್ರತ್ತಿ
ನೌಕರಿ ಅಧಿಕಾರ ಬಡ್ತಿ ಸವಲತ್ತು ಪಡೆದೆ ನಾ ಆವತ್ತು
ಪುರುಸೊತ್ತು ಇಲ್ಲದ ಜೀವನದಲ್ಲಿ ಕಳೆದೆ ನಾ ಅರುವತ್ತು
ವ್ರತ್ತಿಯಿಂದ ವಿವ್ರತ್ತಿ ಜೀವನದ ಸಮಸ್ಯೆ ಅಲ್ಲಾ
ಹವ್ಯಾಸದಿಂದ ಮನಸಂತ್ರಪ್ತಿ ನೀಡುವುದು ಎಲ್ಲಾ
ನಿವ್ರತಿಯ ದಿನ ಹತ್ತಿರ ಬಂದಾಗ, ಮುಂದೇನು ಅನ್ನುವ ಆತಂಕ
ಬಯಸಿದ ಕೆಲಸ ಇಷ್ಟ ಪಟ್ಟು ಮಾಡಿದರೆ, ಜೀವನ ನಿರಾತಂಕ
ನಿವ್ರತ್ತಿಯ ನಂತರ ಜಗದ ಪ್ರಶ್ನೆ, ಈಗೇನು ಮಾಡುತ್ತೀರಿ ಎಂದು
ಉತ್ತರಿಸುವೆನು, ಸ್ವಯಂ ಪ್ರೇರಣೆಯಿಂದ ಮಾಡುವ ಕೆಲಸಗಳು ಬಹಳಷ್ಟಿವೆ ಎಂದು
ವ್ರತ್ತಿ ಜೀವನದಲ್ಲಿ, ದುಷ್ಚಟಗಳಿಂದ ದೂರವಿದ್ದು ಕಾಪಾಡಿದ ಆರೋಗ್ಯ
ನೀಡುವುದು ವಿಶ್ರಾಂತ ಜೀವನದಲ್ಲಿ, ನೆಮ್ಮದಿ ನಿಟ್ಟುಸಿರಿನ ಸ್ವಾಸ್ಥ್ಯ
ವ್ರತ್ತಿ ಬದುಕಿನಿಂದ ನಿವ್ರತ್ತಿ, ಜೀವನದ ಒಂದು ಘಟ್ಟ
ಮುಂದೆ ಸಾಗುತ್ತಾಲೇ ಇರಬೇಕು ನಗುತ್ತಲಿ, ಜೀವನದ ಅಂತಿಮ ಘಟ್ಟ
ಗಣೇಶ್ ಎಂ
(ಎಂ.ಆರ್.ಪಿ.ಎಲ್ ನಿವ್ರತ್ತ ಮುಖ್ಯ ಪ್ರಬಂದಕ)
"ಮಧುರ" ಮನೆ ನಂಬ್ರ ೧-೫೦/೬, ಮಾದರಿಬೆಟ್ಟು ರೋಡು,
ಕಾನ ಕಡಂಬೋಡಿ, ಸುರತ್ಕಲ್-೫೭೫೦೧೪
ಮೊಬೈಲ್ ನಂ. ೯೪೪೯೩೯೦೪೭೬
ರೋಟರಿ ನಾ ಕಂಡಂತೆ
ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ,
ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥
ಮೇಲು-ಕೀಳು ಜಗಳವಿಲ್ಲ, ಇಲ್ಲಿ ಎಲ್ಲಾ ಸಮಾನರು,
ದುರ್ಬಲರ ಸೇವೆಗೆಂದು, ಹೃದಯ ಬಿಚ್ಚಿದಾತರು ॥
ವಾರ-ವಾರ ಸಭೆಗಳಲ್ಲಿ, ಪರಾಮರ್ಶೆ ನಿರಂತರ,
ಸಮಾಜ-ಪರ ಚಿಂತನೆ, ಸ್ಪಂದನೆ ತದನಂತರ ॥
ಅಂತಾರಾಷ್ಟ್ರೀಯ ಸಂಸ್ಥೆ ಇದು, ಗಡಿ ಅನ್ವಯವಿಲ್ಲ,
ಸೇವಾ ಧರ್ಮ ನಡೆಯಲೆಂದೇ, ಸ್ನೇಹ- ಸಂಯಮವೆಲ್ಲ ॥
ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜಕ್ಕೆ ಮೀಸಲು
ಸಮಾನಮನಸ್ಕರೆಲ್ಲಾ ಇಲ್ಲಿ ಮಾನವ ಸೇವೆ ಮಾಡಲು ॥
ಚತುರ್ವಿಧ ಪರೀಕ್ಷೆ, ಬದ್ಧರಾದ ಜನರಲಿ,
ದತ್ತಿ ನಿಧಿ ನಿರೀಕ್ಷೆ, ಸಿದ್ಧಮನ ಸದಸ್ಯರಲಿ ॥
ಸ್ನೇಹಕ್ಕೊಂದು ಹೆಸರು, ಇದು ನಮ್ಮ ರೋಟರಿ,
ಜಾತಿ ಪಂಥ ಬೇಧವಿಲ್ಲ, ವಿಶ್ವಕ್ಕಿದು ಮಾದರಿ ॥
ಗಣೇಶ್.ಎಂ
ನಮ್ಮ ಸತೀಷ
ಪೆಟ್ರೋಲ್ ತಯಾರಿಕ ಘಟಕದಲ್ಲಿ ದುಡಿದ ನಮ್ಮ ಸತೀಷ,
ತಿಳಿದಿದೆ ಅವರಿಗೆ ಹೈಡ್ರೋಕಾರ್ಬನ್ ನ ಕಣಕಣದ ವಿಶೇಷ.
ಕೆಲಸದಲ್ಲಿ ಸುರಕ್ಷತೆ ಕೊಡುವರಿವರು ಮೊದಲ ಆದ್ಯತೆ,
ಉತ್ಪಾದಕತೆಗೆ ನೀಡುವರಿವರು ಹಗಲಿರುಳು ಬದ್ಧತೆ.
ಶಿಷ್ಯಾರ್ಥಿಗಳಿಗೆ ನೀಡುವರು ಉತ್ತಮ ಮಾರ್ಗದರ್ಶನ,
ಸಹೋದ್ಯೋಗಿಗಳಿಗೆ ಕೊಡುವರು ಸೌಹಾರ್ದತೆಯ ನಿರ್ದೇಶನ.
ತುತ್ತಿನ ಕೆಲಸದೊಂದಿಗೆ ಸಂಬ್ರಮಿಸಿದಿರಿ ಜೀವಾನಾನಂದ,
ಮಕ್ಕಳಿಬ್ಬರ ಜೊತೆ ಸತಿಯೊಂದಿಗೆ ಅಮಿತಾನಂದ.
ಸತೀಷನಿಲ್ಲದಿದ್ದರೆ ಸಂತೋಷಕೂಟದಲ್ಲಿರುವುದು ನಿರ್ವಾತಾ,
ಉಪಸ್ಥಿತಿಗೆ ಅಂಬಲಿಸುವರು ಮಿತ್ರರೆಲ್ಲರು ಅಸಂಖ್ಯಾತಾ.
ನಗುತ್ತಾ ನಗಿಸುತ್ತಾ ಬಾಳಿ ನೂರು ವರುಷಾ,
ನಿಮ್ಮ ಮೇಲಿರಲಿ ಭಗವಂತನ ಕ್ರಪಾಕಟಾಕ್ಷಾ.
ಗಣೇಶ್ ಎಂ
ಆಧ್ಯಕ್ಷ ರೋಟೇರಿಯನ್ ದಿನೇಶ್
ರೋಟರಿ ವರ್ಷ ಆದಿಯಲ್ಲಿ ಅಧ್ಯಕ್ಷರಾದ ರೋಟೇರಿಯನ್ ದಿನೇಶ
ಸಾಧನೆಗಳ ಹಿರಿಮೆಯೊಂದಿಗೆ ಅಂತ್ಯಗೊಂಡ ಗೆಲುವಿನ ವರುಷ
ರೋಟರಿ ಮಿತ್ರರ ಸಲಹೆಗಳೇ ಅಧ್ಯಕ್ಷರಿಗೆ ಸ್ಪೂರ್ತಿ
ಪ್ರಭುಗಳ ಆಶಿರ್ವಾದದಿಂದ ಸಿಕ್ಕಿದೆ ಪ್ರಶಸ್ತಿಗಳ ಕೀರ್ತಿ
ಸಹನೆ ಸಂಯಮ ಕಾರ್ಯವೈಕರಿ ಎಲ್ಲರಿಗೂ ಮಾದರಿ
ಸಂತೋಷದಿಂದ ಕಳೆದ ವರ್ಷಕ್ಕೆ ನಾವೆಲ್ಲರೂ ನಿಮಗೆ ಅಭಾರಿ
ಸಮಾಜ ಸೇವೆಯ ನಿಮ್ಮ ಅಂಬಲಕ್ಕೆ ಇಡೀ ಕುಟುಂಬದ ಬೆಂಬಲ
ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದ ರೀತಿ ವರ್ಣಿಸಲಸದಲ
ಯಶಸ್ವೀ ರೋಟರಿ ವರ್ಷ ನಿಮ್ಮ ಜೀವನದ ಕಿರೀಟಕ್ಕೊಂದು ಚಿನ್ನದ ಗರಿ
ಸರ್ವೇಸ್ವರನ ಕ್ರಪೆಯಿಂದ ದೊರೆಯಲಿ ಸುಖ ಶಾಂತಿ ನೆಮ್ಮದಿಯ ಐಸಿರಿ
ಅಪರೇಷನ್ ವಿಜಯ
ಅಪರೇಷನ್ ವಿಜಯ ಭಾರತಮಾತೆಯ ಯೋಧರ ಕದರ್
ತಲೆಕೆಳಗಾಯಿತು ನರಿ ಬುದ್ಧಿ ಮಾತಿನ ಆಪರೇಷನ್ ಬದ್ರ್.
ವರ್ಣಿಸಲಸದಲ ಕಾರ್ಗಿಲ್ ವಿಜಯ ಕಥಾ ವರ್ಣ
ಬಾನಾಡಿ ಹಾರಿದ ನಿತ್ಯ ಚೇತನ ನಮ್ಮ ತ್ರಿವರ್ಣ
ಅಪರೇಷನ್ ವಿಜಯದ ರೂವಾರಿ ಕ್ಯಾಪ್ಟನ್ ವಿಕ್ರಂ ಬಾತ್ರ
ಟೈಗರ್ ಹಿಲ್ಸ್ ನಲ್ಲಿ ನಟಿಸಿದರು ಜೀವನದ ಕೊನೆಯ ಪಾತ್ರ.
ಕಂಡರು ಶಿಖರದ ತುದಿಯಲ್ಲಿ ತ್ರಿವರ್ಣದ ನಡುವೆ ಅಶೋಕ ಚಕ್ರ,
ಮರಣೋತ್ತರವಾಗಿ ಪಡೆದರು ವಿಕ್ರಂ ಗೆಲುವಿನ ಪರಮ ವೀರ ಚಕ್ರ.
ಜಾವಲಿನ್ ಚಾಂಪಿಯನ್
ವರ್ಲ್ಡ್ ಮಾಸ್ಟರ್ಸ್ ನ ಜಾವಲಿನ್ ಚಾಂಪಿಯನ್
ನಮ್ಮ ಮಂಗಳೂರಿನ ಶ್ರೀ ಗಿರಿಧರ್ ಸಾಲಿಯಾನ್
ಪರಿಶ್ರಮಕ್ಕೆ ಸಂದ ಗೌರವ, ಭಾರತ ರತ್ನ ಸಮ್ಮಾನ
ತೈಪೆಯಲ್ಲೂ ಬಂಗಾರ ಮಿಂಚು ನೀವೊಬ್ಬ ಮಹಾನ್
ಕ್ರೀಡಾಂಗಣದಲ್ಲಿ ನೀವೊಬ್ಬ ಅದ್ಭುತ ಜಾವಲಿನ್ ಎಸೆತಗಾರ
ಮಾತಿಗಿಳಿದರೆ ನೀವೊಬ್ಬ ಪ್ರಬುದ್ಧ ಮಾತುಗಾರ
ವಿದ್ಯಾರ್ಥಿಗಳಿಗೆ ನೀವೊಬ್ಬ ಬೋಧನಾ ತರಬೇತುದಾರ
ಕ್ರೀಡಾಳುಗಳಿಗೆ ನೀವೊಬ್ಬ ನೆಚ್ಚಿನ ಸಲಹೆಗಾರ
ನಾವು ಕಂಡೆವು ನಿಮ್ಮಲ್ಲಿ ಸಂಘಟನಾ ಕೌಶಲ್ಯತೆ
ಅಪೇಕ್ಷಿಸುವೆವು ನಾವೆಲ್ಲರೂ, ವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷತೆ.
ಮೇಸ್ಟ್ರು ಸುಭಾಶ್ಚಂದ್ರ ರೈ
ಬಾಳಿಲ ಗ್ರಾಮದ ನಿವೃತ್ತ ಶಿಕ್ಷಕ ಶ್ರೀ ಸುಭಾಶ್ಚಂದ್ರ ರೈ
ಎಲ್ಲಾ ಕ್ರೀಡೆಗಳ ಅಪ್ರತಿಮ ಸಾಧನೆಗೆ ನೀವೊಬ್ಬರು ಎತ್ತಿದ ಕೈ
ಮಾಸ್ಟರ್ಸ್ ಕ್ರೀಡಾಕೂಟಕ್ಕೆ ನೀವು ಸ್ಫೂರ್ತಿಯ ಚಿಲುಮೆ
ಕ್ರೀಡಾಸಕ್ತರಿಗೆ ಸಿಗುವುದು ನಿಮ್ಮಿಂದ ಪ್ರೀತಿಯ ಒಲುಮೆ
ಅತಿಥಿ ಸತ್ಕಾರಕ್ಕೆ ನಿಮ್ಮ ಹೃದಯ ವೈಶಾಲ್ಯವೇ ಸಾಕ್ಷಿ
ಧನ್ಯತಾ ಭಾವದಿಂದ ತುಂಬಿ ಬಂತು ನಮ್ಮೆಲ್ಲರ ಅಕ್ಷಿ.
ಸುಧಾಕರ ಪೂಂಜ
ಬೈಕಂಪಾಡಿ ರೋಟರಿಯ ಮಾಜಿ ಅಧ್ಯಕ್ಷರು,
ನಮ್ಮೆಲ್ಲರ ಪ್ರೀತಿಯ ಅಚ್ಚುಮೆಚ್ಚಿನ ಸುಧಾಕರ ಪೂಂಜರು.
ಕಠಣ ಪರಿಶ್ರಮದಿಂದ ಉದ್ಯಮದಲ್ಲಿ ನೀವು ಬೆಳೆದು ಬಂದ ದಾರಿ,
ಉದಯೋನ್ಮುಕ ಯುವ ಉದ್ಯಮದಾರರಿಗೆ ನೀವೊಬ್ಬರು ಮಾದರಿ.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಂಟರ ಸಂಘದ ನೇತಾರರು,
ತಾರತಮ್ಯವಿಲ್ಲದೆ ಜನಸೇವೆಯಲ್ಲಿ ನೀವೇ ಅಗ್ರಗಣ್ಯರು.
ರೋಟರಿ ಮಿತ್ರರ ಸಮ್ಮುಖದಲ್ಲಿ ಆಚರಿಸಿದ ನಿಮ್ಮ ಜನ್ಮದಿನದ ಷಷ್ಠ್ಯಬ್ದಿ
ನಂಬಿದ ದೈವಗಳ ಕ್ರಪೆಯಿಂದ ಆಚರಿಸುವಂತಾಗಳಲಿ ಜನ್ಮದಿನದ ಶತಾಬ್ದಿ.
ಮಿತ್ರರೆಲ್ಲರ ಸಮ್ಮುಖದಲ್ಲಿ ನಿಮಗಿದೋ ಜನ್ಮದಿನದ ಶುಭಾಶಯಗಳು
ಕಟೀಲಮ್ಮನ ಕ್ರಪೆಯಿಂದ ದೊರಕಲಿ ಸುಖಸಂತೋಷದ ನೂರು ವಸಂತಗಳು
ಸುಧಾಕರ ಪೂಂಜೆರ್
ಬೈಕಂಪಾಡಿ ರೋಟರಿದ ಪಿರಾಕ್ ದ ರಡ್ಡನೆ ಗುರಿಕಾರೆರ್,
ನಮ್ಮ ಮಾತ ಮೊಕೆದ ಅರ್ತಿ ಪಿರ್ತಿದ ಸುಧಾಕರ ಪೂಂಜರ್
ಕಷ್ಟೊಡು ಬೆಗರ್ ಸೀಂಟ್ ದ್ ಉದ್ಯಮೊಡು ಬುಲೆದ್ ಬತ್ತಿನ ಸಾದಿ
ಉದ್ಯಮದ ಬಗ್ಯೆ ಜಕ್ ಜವನಿಯೆರೆಗ್ ಕೊರ್ಪೆರ್ ಅಲ್ಂಬೇಗ್ ದ ಬುದ್ಧಿ.
ಜಿಲ್ಲಾ ರಾಜ್ಯೋತ್ಸವ ಮಾನಾದಿಗೆ ಪಡೆತಿನ ಬಂಟರ ಸಂಘದ ಪೆರ್ಮೆದ ಗುರ್ಕಾರ್ಲು
ಬೇದದಾಂತಿ ಇರ್ನ ಜನಸೇವೆನ್ ತೂಯರೆ ಬಾರಿ ಪೊರ್ಲು
ರೋಟರಿ ಸಂಸಾರ ಬೊಕ್ಕ ದೊಸ್ತಿನಕ್ಲ್ನನ ಸಮುಕೊಡು ಇರ್ನ ಪುಟ್ಟು ಪರ್ಬದ ಷಷ್ಠ್ಯಬ್ದಿ
ಈರ್ ನಂಬುದಿನ ದೈವದೇವೆರೆನ ದಯೆಟ್ ಯಂಕ್ಲೆಗ್ ತಿಕ್ಕಡ್ ಇರ್ನ ಜನ್ಮ ಶತಾಬ್ದಿ.
ದೋಸ್ತಿನಕುಲೆನ ಮೋಕೆದ ಸಂಸಾರದ ನಡುಟು ಇರೆಗ್ ಪುಟ್ಟು ಪರ್ಬದ ಎಡ್ಡೆಪ್ಪುಲು
ಕಟೀಲಪ್ಪೆನ ದಯೆಟ್ ತಿಕ್ಕಡ್ ಇರೆಗ್ ಸುಖ ಸಂತೋಸದ ನೂದು ಬಿಸು ಪರ್ಬೊಲು
ಆನ್ಲೈನ್ ಸ್ಪರ್ಧೆಗೆ ನನ್ನ ಕಥೆ
ಜಯರಾಮನು ಹುಟ್ಟಿದ್ದು ಉಳ್ಳಾಲ ನೇತ್ರಾವತಿ ದಕ್ಷಿಣಕ್ಕಿರುವ ಕೇರಳ ಗಡಿ ಭಾಗಕ್ಕೆ ತಾಗಿಕೊಂಡಿರುವ ಒಂದು ಪುಟ್ಟ ಗ್ರಾಮದಲ್ಲಿ. ಹಿಂದುಳಿದ ಬಡ ಕುಟುಂಬದಲ್ಲಿ ಜಯರಾಮನು ಹುಟ್ಟಿದಾಗ, ಮಂಗಳೂರು ಕೇರಳ ಸಂಪರ್ಕಿಸುವ ನೇತ್ರಾವತಿ ಸೇತುವೆ ಪ್ರಾರಂಭವಾಗಿ ಎರಡು ವರ್ಷ ಆಗಿತ್ತು. ಅದಕ್ಕಿಂತ ಮೊದಲು ಮಂಗಳೂರಿನಿಂದ ತೊಕ್ಕೋಟ್ಟಿಗೆ ಬರಬೇಕಾಗಿದ್ದರೆ, ಜಪ್ಪು ಮೋರ್ಗನ್ ಗೇಟಿನಿಂದ ಕಲ್ಲಾಪಿನ ತನಕ ದೋಣಿಯಲ್ಲಿ ಬಂದು ಆಮೇಲೆ ನಡೆದುಕೊಂಡು ಬರಬೇಕಾಗಿತ್ತು. ಇಲ್ಲವೇ ರೈಲ್ವೆ ಹಳ್ಳಿಯ ಪಕ್ಕದಲ್ಲೇ ಮಂಗಳೂರಿನಿಂದ ತೊಕ್ಕೋಟಿಗೆ ನಡೆದುಕೊಂಡು ಬರುತ್ತಿದ್ದರು. ಜಯರಾಮನು ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲಿ ಅವನ ತಂದೆಯ ಮೂವರು ಮಾವಂದಿರು ಅಜ್ಜಿ ಹಾಗೂ ಇಬ್ಬರು ಚಿಕ್ಕಮ್ಮಂದಿರು ಆ ಮನೆಯಲ್ಲಿ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು. ಜಯರಾಮನು ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಆರೋಗ್ಯವಾಗಿ ಹಾಗೂ ಸದೃಢವಾಗಿ ಇದ್ದ. ಸುಮಾರು ಎರಡು- ಎರಡುವರೆ ವರ್ಷದವನಿದ್ದಾಗ, ಒಂದು ದಿನ ಅವರ ಕುಟುಂಬದಲ್ಲಿ ಜಯರಾಮನ ತಂದೆಯ ಮಾವನ ಮಕ್ಕಳಿಗೆ ವಿಪರೀತ ಜ್ವರ ಬಂದು, ಒಂದು ಮಗು ಕೈಕಾಲು ಸ್ವಾಧೀನವಿಲ್ಲದೆ ತೀರಿಕೊಂಡಿತು. ಎರಡು ವಾರ ಆಗುವಷ್ಟರಲ್ಲಿ ಇನ್ನಿಬ್ಬರು ಮಕ್ಕಳು ಅದೇ ರೀತಿ ಕೈಕಾಲು ಬಲ ಇಲ್ಲದೆ ತೀರಿಕೊಂಡವು. ಮಕ್ಕಳು ಜ್ವರದಿಂದ ನರಳುತ್ತಿದ್ದಾಗ, ಕೈಕಾಲಿನಲ್ಲಿ ಬಲ ಇಲ್ಲದಾಗ, ಮಂತ್ರವಾದಿ ಹಾಗೂ ಗಿಡಮೂಲಿಕೆ ಪಂಡಿತರ ಮೊರೆ ಹೋದರೇ ವಿನಹ: ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಈ ಮಹಾಮಾರಿ ಯಾವುದೆಂದು ತಿಳಿಯುವ, ಮದ್ದು ಮಾಡುವ ಇಲ್ಲವೇ ಮನೆಯಲ್ಲಿ ಇರುವ ಇನ್ನುಳಿದ ಮಕ್ಕಳಿಗೆ ರೋಗ ಬರದಂತೆ ರೋಗ ನಿರೋಧಕವನ್ನು ಕೊಡುವ ಗೋಜಿಗೆ ಹೋಗಲಿಲ್ಲ. ಇದಾಗಿ ಒಂದು ತಿಂಗಳು ಆಗುವಷ್ಟರಲ್ಲಿ ಒಂದು ದಿನ ಜಯರಾಮನು ಬೆಳಿಗ್ಗೆ ಎದ್ದಾಗ ಎಡಕೈ ಹಾಗೂ ಎಡಕಾಲು ಬಲವಿಲ್ಲದೆ ಮಗುವಿಗೆ ನಿಲ್ಲಲು ಆಗುತ್ತಿರಲಿಲ್ಲ ಇಡೀ ಮೈ ಬಿಸಿಯಾಗಿತ್ತು. ಕೂಡಲೇ ಜಯರಾಮನ ತಂದೆ ತಾಯಿ ಮಗುವನ್ನು ಎತ್ತಿಕೊಂಡು ಹತ್ತಿರದಲ್ಲಿರುವ ಆಲೋಪತಿ ಡಾಕ್ಟರ್ ಹತ್ತಿರ ಹೋಗಿ ತೋರಿಸಿ, ಮನೆಯಲ್ಲಿ ನಡೆದ ಎಲ್ಲಾ ಅನಾಹುತಗಳ ಬಗ್ಗೆ ಅವರಿಗೆ ತಿಳಿಸಿದಾಗ ಡಾಕ್ಟರ್ ಹೇಳಿದರು ಭಾಗಶಃ ನಿಮ್ಮ ಮಗುವಿಗೆ ಪೋಲಿಯೋ ಅಟ್ಯಾಕ್ ಆಗಿದೆ, ತಡ ಮಾಡದೆ ಮಂಗಳೂರಿನ ಹಾಸ್ಪಿಟಲ್ ಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಿ ಎಂದು ತಿಳಿಸಿದರು. ಆ ಊರಲ್ಲಿ ಅದೇ ವರ್ಷದಲ್ಲಿ ಹಲವಾರು ಪೋಲಿಯೋ ಪ್ರಕರಣಗಳು ಕಂಡುಬಂದಿದ್ದವು. ಜಯರಾಮನ ತಂದೆ ತಾಯಿಗಳು ತಡ ಮಾಡದೆ ಮಗುವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಎತ್ತಿಕೊಂಡು ಹೋದರು. ಡಾಕ್ಟರುಗಳು ಮಗುವನ್ನು ಪರೀಕ್ಷಿಸಿ, ಮಗುವಿಗೆ ಭಾಗಶಃ ಪೋಲಿ ಅಟ್ಯಾಕ್ ಆಗಿದೆ, ನಿಮ್ಮ ಹಾಗೂ ಮಗುವಿನ ಅದೃಷ್ಟ ಚೆನ್ನಾಗಿದ್ದರೆ ಅವನು ಮುಂಚಿನಂತೆ ಆಗಲೂಬಹುದು, ಮಾಂಸಖಂಡಗಳ ಮೇಲೆ ವೈರಸ್ ದಾಳಿಯಾಗಿದ್ದರೆ ಅದನ್ನು ಸರಿ ಮಾಡಲು ಬರುವುದಿಲ್ಲ, ಜೀವನಪರ್ಯಂತ ಅಂಗ ಹೀನತೆಯೊಂದಿಗೆ ಬದುಕಬೇಕಾಗುತ್ತದೆ. ಈ ಮೊದಲೇ ಪೋಲಿಯೋ ಲಸಿಕೆ ನೀಡುತ್ತಿದ್ದರೆ ಮಗುವಿಗೇನು ಆಗುತಿರಲಿಲ್ಲ. ಈಗ ಮಗುವಿನ ಜೀವಕ್ಕೆ ಏನೂ ಅಪಾಯವಿಲ್ಲವೆಂದು ಹೇಳಿ ಆಸ್ಪತ್ರೆಯಲ್ಲಿ ಒಂದು ವಾರ ಒಳ ರೋಗಿಯಾಗಿ ದಾಖಲಿಸಿಕೊಂಡರು.
ಮಗುವಿಗೆ ಎಡಗೈಗೆ ಹಾಗೂ ಎಡ ಕಾಲಿಗೆ ಪೂರ್ತಿಯಾಗಿ ಪ್ಲಾಸ್ಟರ್ ಆಪ್ ಪ್ಯಾರೀಸ್ ನಿಂದ ಬ್ಯಾಂಡೇಜ್ ಹಾಕಿದರು. ಬ್ಯಾಂಡೇಜ್ ತೆಗೆಯುವ 21 ದಿನಗಳ ಕಾಲ, ಜಯರಾಮನ ತಂದೆ ತಾಯಿಗಳ ಪಾಡು ಹೇಳುತೀರದು. ಅವರ ಕೈಯ ತೋಳಿನ ಹಾಗೂ ಕಾಲಿನ ತೊಡೆ ಭಾಗದ ಚರ್ಮ ಮಗುವನ್ನು ಎತ್ತಿ ಕೊಂಡಾಗ ಹಾಗೂ ಮಗುವನ್ನು ಸಮಾಧಾನ ಮಾಡಿಸುವಾಗ ಬ್ಯಾಂಡೇಜ್ ಉಜ್ಜಿ ಚರ್ಮ ಕಿತ್ತು ಬಂದು ಗಾಯಗಳಾಗಿತ್ತು. 21 ದಿನಗಳ ನಂತರ ಬ್ಯಾಂಡೇಜ್ ತೆಗೆದಾಗ ಎಡ ಕಾಲು ವೈರಸ್ ಅಟ್ಯಾಕ್ ಆಗದೆ ಸರಿಯಾಗಿತ್ತು ಆದರೆ ಎಡಗೈ ಭುಜದ ಮೇಲಿನ ಮಾಂಸಖಂಡದ ಮೇಲೆ ವೈರಸ್ ದಾಳಿ ಮಾಡಿದರಿಂದ, ಎಡಗೈ ಮನಗಂಟಿನಿಂದ ಭುಜದವರೆಗೆ ಮಾಂಸಖಂಡಗಳು ಕರಗಿ ಎಡಗೈ ಭಾಗಶಃ ತನ್ನ ಬಲವನ್ನು ಕಳಕೊಂಡಿತ್ತು.
ಜಯರಾಮನಿಗೆ 5 ವರ್ಷ ಆದ ನಂತರ ಆ ಪರಿಸರದಲ್ಲಿರುವ ಕ್ರಿಶ್ಚಿಯನ್ ಶಾಲೆಗೆ ಸೇರಿಸಲಾಯಿತು. ಅಂಗಿ ಹಾಕಿದಾಗ ಭುಜದ ನ್ಯೂನತೆ ಯಾರಿಗೂ ಗೊತ್ತಾಗುತ್ತಿರಲಿಲ್ಲ ಆದರೆ ಬಲಗೈಯಲ್ಲಿರುವಷ್ಟು ಬಲ, ಎಡಗೈಯಲ್ಲಿ ಇರಲಿಲ್ಲ. ಎಡ ಕೈಯನ್ನು ಮೇಲೆ ಎತ್ತಿದ ಕೂಡಲೇ ಕಳಗೆ ಬೀಳುತ್ತಿತ್ತು. ಭಾರವನ್ನು ಎಡಗೈ ಒಂದರಲ್ಲೇ ಮೇಲೆತ್ತಲು ಆಗುತಿರಲಿಲ್ಲ, ಎರಡು ಕೈ ಜೋಡಿಸಿದಾಗ ಭಾರವನ್ನು ಮೇಲೆತ್ತಲು ಆಗುತ್ತಿತ್ತು. ಅವನಿಗೆ ಭುಜದ ತನಕ ಭಾರ ಎತ್ತಲಿಕ್ಕೆ ಆಗುತ್ತಿತ್ತು. ಬಾವಿಯಿಂದ ಎಲ್ಲರ ಹಾಗೆ ನೀರು ಸೇರುತ್ತಿದ್ದ. ಬುಜದ ಮೇಲಕ್ಕೆ ಮಾತ್ರ ಎಡಗೈ ಒಂದರಲ್ಲೇ ಬಾರ ಎತ್ತಲಿಕ್ಕೆ ಆಗುತ್ತಿರಲಿಲ್ಲ. ಒಂದು ದಿನ ಶಾಲಾ ವಾರ್ಷಿಕೋತ್ಸವಕ್ಕೆ ಮರದ ಡಂಬಲ್ಸ್ ಹಿಡಿದು ವ್ಯಾಯಾಮ ಮಾಡುವ ಪ್ರದರ್ಶನ ಕಾರ್ಯಕ್ರಮವಿತ್ತು. ಜಯರಾಮನು ಕೂಡ ಆ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಲು ಸೇರಿಕೊಂಡ. ಡಂಬಲ್ಸ್ನೊಂದಿಗೆ ವ್ಯಾಯಾಮ ಮಾಡುವಾಗ ಎಡಗೈಯಲ್ಲಿ, ಭಜದ ಮೇಲಕ್ಕೆ ಡಂಬಲ್ಸ್ ಎತ್ತಲಿಕ್ಕೆ ಆಗಲಿಲ್ಲ, ಆಗ ಶಾಲೆಯ ದೈಹಿಕ ಶಿಕ್ಷಕರು ನಾಗರಬೆತ್ತದಿಂದ ಜಯರಾಮನಿಗೆ ಹೊಡೆದು ನಿನಗೆ ಆಗುವುದಿಲ್ಲ ಎಂದಾದರೆ ಯಾಕೆ ಬಂದು ಸೇರುತ್ತೀಯ ಎಂದು ಎಲ್ಲರೆದುರಿಗೆ ಅವಮಾನ ಮಾಡಿದರು. ವ್ಯಾಯಾಮದ ಅವಧಿ ಮುಗಿಯುವವರೆಗೆ ಮೈದಾನದಲ್ಲಿ ಒಬ್ಬನನ್ನೇ ಬಿಸಿಲಿನಲ್ಲೇ ಕೂರಿಸಿದ್ದಾರೆ. ಜಯರಾಮನಿಗೆ ಯಕ್ಷಗಾನದಲ್ಲಿ ಕೂಡ ತುಂಬಾ ಆಸಕ್ತಿ ಇತ್ತು, ಆದರೆ ಯಕ್ಷಗಾನದ ನೃತ್ಯ ಮಾಡಲು ಎಡಗೈಯಿಂದ ಆಗದ ಕಾರಣ ಯಕ್ಷಗಾನದ ಮೇಲಿನ ಆಸಕ್ತಿಯನ್ನೇ ಕಳೆದುಕೊಂಡ. ಜಯರಾಮನಿಗೆ ದೈನಂದಿನ ಚಟುವಟಿಕೆಗಳಲ್ಲಿ ಸಮಸ್ಯೆ ಏನೂ ಆಗುತಿರಲಿಲ್ಲ. ಅವನ ಮನೋಬಲ ಎಷ್ಟು ಗಟ್ಟಿಯಾಗಿತ್ತೆಂದರೆ ಎಲ್ಲಾ ಕ್ರೀಡೆಗಳನ್ನು ಜಯರಾಮನು ಲೀಲಜಾಲವಾಗಿ ಆಡುತ್ತಿದ್ದನು. ಕೆಲವೂಂದು ಕ್ರೀಡೆಗಳಾದ ವಾಲಿಬಾಲ್ನಲ್ಲಿ ಚೆಂಡನ್ನು ಮೇಲಕ್ಕೆ ಎತ್ತಿಕೊಡಲು ಸಮಸ್ಯೆ ಆಗುತ್ತಿತ್ತು ಹಾಗೆನೇ ಕ್ರಿಕೆಟ್ನಲ್ಲಿ ಮೇಲಿಂದ ಬರುವ ಬಾಲ್ಗಳನ್ನು ಎರಡು ಕೈ ಮೇಲಕ್ಕೆತ್ತಿ ಕ್ಯಾಚ್ ಹಿಡಿಯಲು ಕಷ್ಟವಾಗುತ್ತಿತ್ತು. ತನ್ನ ನ್ಯೂನ್ಯತೆಯಿಂದ ತಂಡ ಸೋಲಬಾರದೆಂಬ ದೃಷ್ಟಿಯಿಂದ ಇಂತಹ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರಲಿಲ್ಲ, ಆದರೆ ವೈಯಕ್ತಿಕ ಸ್ಪರ್ಧೆಗಳಾದ ಓಟ, ಊದ್ಧ ಜಿಗಿತ, ಎತ್ತರ ಜಿಗಿತ ಮತ್ತು ಶಟಲ್ ಬ್ಯಾಡ್ಮಿಂಟನ್ ಈ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ. ಓಟ ಆಗು ಎತ್ತರ ಜಿಗಿತದಲ್ಲಿ ಪ್ರಶಸ್ತಿಗಳನ್ನು ಕೂಡ ಪಡೆಯುತ್ತಿದ್ದ.
ಕಲಿಕೆಯಲ್ಲಿಯೂ ಕೂಡ ಉತ್ತಮ ಅಂಕಗಳನ್ನು ಪಡೆಯುತ್ತಿದ್ದನು. ಎಸ್ ಎಸ್ ಎಲ್ ಸಿ ಯಲ್ಲಿ ಆಗಿನ ಕಾಲದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಮಂಗಳೂರಿನ ಕರ್ನಾಟಕ ಪಾಲಿಟೆಕ್ಟಿಕ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಪಡೆದು, ಖಾಸಗಿ ಸಂಸ್ಥೆ ಗಳಲ್ಲಿ ದುಡಿದು, ತದನಂತರ ಭಾರತ ಸರಕಾರದ ಅಧೀನಕ್ಕೆ ಒಳಪಟ್ಟ ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಯಾವೊಂದು ಮೀಸಲಾತಿಯ ಲಾಭ ಪಡೆಯದೆ ಕೇವಲ ತನ್ನ ತಾಂತ್ರಿಕ ಕೌಶಲ್ಯ ಹಾಗೂ ಅನುಭವದಿಂದ ಉದ್ಯೋಗ ಪಡೆದನು. ಸಾರ್ವಜನಿಕ ರಂಗದ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಸಮಯದ ಕೊರತೆ, ಕೆಲಸದ ಒತ್ತಡ ಹಾಗೂ ಸಂಸಾರದ ಜಂಜಾಟಗಳಿಂದಾಗಿ ಕ್ರೀಡೆಗಳಿಂದ ದೂರವಾದ. ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ದುಡಿಯುವ ಉದ್ಯೋಗಿಗಳು ತಮ್ಮ ವಯಸ್ಸು 40 ವರ್ಷ ಆದ ಮೇಲೆ, ಪ್ರತಿವರ್ಷ ಆರೋಗ್ಯ ತಪಾಸಣೆ ಮಾಡಬೇಕು. ಜಯರಾಮನು ಕೂಡ 40 ರ ನಂತರ ಆರೋಗ್ಯ ತಪಾಸಣೆ ಮಾಡಿಸಬೇಕಾಯಿತು. ರಕ್ತದ ಪರೀಕ್ಷೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಜಾಸ್ತಿ ಇದೆ ಎಂದು ತಿಳಿದು ಬಂತು. ತಪಾಸಣೆ ನಡೆಸಿದ ವೈದ್ಯರು 2 ಆಯ್ಕೆಗಳನ್ನು ನೀಡಿದರು. ಮೊದಲನೆಯದು ಪ್ರತಿದಿನ ಮಾತ್ರೆ ಸೇವಿಸುವುದು ಎರಡನೆಯದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು. ಮಾತ್ರೆಗಳಿಂದ ದೂರವಿದ್ದು ನಿಯಮಿತ ವ್ಯಾಯಾಮ ಹಾಗೂ ಕ್ರೀಡೆಗಳನ್ನು ಜಯರಾಮನು ಆಯ್ಕೆ ಮಾಡಿಕೊಂಡ.
ಜಯರಾಮನ ಕಂಪನಿಯಲ್ಲಿ, ಆ ಸಮಯದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಕಾರಿಯೊಬ್ಬರು ಪ್ರತಿದಿನ ಸುಮಾರು 5 ರಿಂದ 10 ಕಿ.ಮೀ ಓಡುತ್ತಿದ್ದರು, ಅವರು ಸದ್ರಡ ಮತ್ತು ಆರೋಗ್ಯವಾಗಿದ್ದರು. ಅವರು ತಮ್ಮ ತೂಕವನ್ನು ಸುಮಾರು 100 ಕೆಜಿಯಿಂದ 75 ಕೆಜಿಗೆ ಇಳಿಸಿಕೊಂಡಿದ್ದರು. ಜಯರಾಮನು ಅವರಿಂದ ಸ್ಫೂರ್ತಿ ಪಡೆದು ಪ್ರತಿದಿನ ಒಂದು ಕಿ.ಮೀ ಓಡಲು ಮತ್ತು ದಿನಕ್ಕೆ 200 ಮೀಟರ್ ಹೆಚ್ಚಿಸಲು ತನ್ನೊಳಗೆಯೇ ಯೋಜನೆ ಹಾಕಿಕೊಂಡ. ಅವನು ಯೋಜನೆ ಹಾಕಿಕೊಂಡ ಹಾಗೆ ಆಗಲಿಲ್ಲ. ಆ ಮೊದಲ ದಿನದ ಓಟವನ್ನು ತನ್ನ ಮಿತ್ರರೊಂದಿಗೆ ಹೀಗೆ ಹಂಚಿಕೊಂಡಿದ್ದಾನೆ "ಮೊದಲ ದಿನದ ಓಟ ತುಂಬಾ ಆಯಾಸಕರವಾಗಿತ್ತು, ಅರ್ಧ ಕಿ.ಮೀ ಓಡಲು ಸಹ ಸಾಧ್ಯವಾಗಲಿಲ್ಲ, ಉಸಿರುಗಟ್ಟುತ್ತಿತ್ತು ಮತ್ತು ತುಂಬಾ ಬೆವರುತ್ತಿತ್ತು ಓಟವನ್ನು ಅರ್ಧದಲ್ಲೇ ನಿಲ್ಲಿಸಿ ಮನೆಗೆ ನಿಧಾನವಾಗಿ ನಡೆದು ಬಂದಾಗ, ಸಹ-ಓಟಗಾರರು ಸಾಧ್ಯವಾದಷ್ಟು ಓಡುವುದನ್ನು ಮುಂದುವರಿಸಲು ಪ್ರೋತ್ಸಾಹಿಸಿದರು. ಛಲ ಬಿಡದ ತ್ರಿವಿಕ್ರಮನ ಹಾಗೆ ಓಡುವುದನ್ನು ಮುಂದುವರಿಸಿದೆ. ಎರಡನೇ ದಿನವೂ ಉತ್ತಮವಾಗಿರಲಿಲ್ಲ, ಆದರೆ ಒಂದು ವಾರದ ನಂತರ ಉಸಿರಾಟ ನಿಧಾನವಾಗಿ ಸುಧಾರಿಸಿತು ಮತ್ತು ಕಾಲುಗಳು ಓಡಲು ಒಗ್ಗಿಕೊಂಡವು" ಎಂದು ಹೇಳುತ್ತಾನೆ. ದಿನಾಲೂ ಓಡುವುದನ್ನು ನೋಡಿ ಜಯರಾಮನ ಸಹೋದ್ಯೊಗಿಯೊಬ್ಬರು ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ನ ವತಿಯಿಂದ ನಡೆಯುವ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಲಹೆ ನೀಡಿದರು. ಜಯರಾಮನು ಸಲಹೆಯನ್ನು ಸ್ವೀಕರಿಸಿ ಪ್ರತಿದಿನ 500 ಮೀಟರ್ಗಳನ್ನು ಹೆಚ್ಚಿಸುವ ಮೂಲಕ 5000 ಮೀಟರ್ಗಳ ನಿರಂತರ ಓಟದ ಕಠಿಣ ಗುರಿಯ ಅಭ್ಯಾಸ ಮಾಡಲು ಪ್ರಾರಂಬಿಸಿದ. ಹೆಂಡತಿಯೂ ಅವನ ಗುರಿಯನ್ನು ಸಾಧಿಸಲು ಬೆಂಬಲ ನೀಡಿದಳು, ಅವನು ಓಡುತ್ತಿದ್ದ ಅದೇ ಸಮಯದಲ್ಲಿ ಅವಳೂ ಅವನ್ನೊಂದಿಗೆ ಮೈದಾನಕ್ಕೆ ಬಂದು ಜಯರಾಮ ಓಡುವಾಗ, ಅವಳು ನಡೆದು ಅವನನ್ನು ಪ್ರೋತ್ಸಾಹಿಸುತ್ತಿದ್ದಳು. ಅವನ ಮಕ್ಕಳು ಕೂಡ ಅವನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದರು. ಸುಮಾರು ಒಂದು ತಿಂಗಳ ನಂತರ ಜಯರಾಮನು ತನ್ನ 5000 ಮೀಟರ್ ನಿರಂತರ ಓಟದ ಗುರಿಯನ್ನು (13 ಸುತ್ತುಗಳು, ಒಂದು ಸುತ್ತು 400 ಮೀಟರ್) ತಲುಪಿದ ಮತ್ತು ಅದೇ ಸಮಯದಲ್ಲಿ, ಅವನ ಹೆಂಡತಿ 7 ಸುತ್ತುಗಳ ನಡಿಗೆಯನ್ನು ಪೂರ್ಣಗೊಳಿಸಿದಳು. ನಂತರ ಜಯರಾಮನು ಜಿಲ್ಲಾ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಮೀಟ್ನಲ್ಲಿ ಮತ್ತು ಮ್ಯಾರಥಾನ್ನಲ್ಲಿಯೂ ಭಾಗವಹಿಸಿದ. ಮೊದಲ 2 ವರ್ಷಗಳಲ್ಲಿ ಅವನಿಗೆ ಪೋಡಿಯಂ ಫಿನಿಷ್ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವನ ಶ್ರೇಯಾಂಕ 5 ಅಥವಾ 6 ನೇ ಸ್ಥಾನದಲ್ಲಿರುತ್ತಿತ್ತು, ಆದರೆ ನಿಯಮಿತ ಅಭ್ಯಾಸ ಮಾಡುವುದನ್ನು ಬಿಡದೆ ಮುಂದುವರಿಸಿದ ಮತ್ತು ವಾರದಿಂದ ವಾರಕ್ಕೆ ಅರ್ಧ ಕಿ.ಮೀ. ಓಟವನ್ನು ಹಾಗೂ ವೇಗವನ್ನು ಹೆಚ್ಚಿಸಿಕೊಂಡ. ಅವನ ಓಟದ ಗುರಿಯನ್ನು 5 ಕಿ.ಮೀ. ಸೌಕರ್ಯ ವಲಯದಿಂದ 10 ಕಿ.ಮೀ.ಗೆ ಹೆಚ್ಚಿಸಿದ.
2012 ರಲ್ಲಿ, ಜಯರಾಮನು ಮೊದಲ ಬಾರಿಗೆ ಸ್ವಾತಂತ್ರ್ಯ ದಿನದ ಮ್ಯಾರಥಾನ್ (13.2 ಕಿ.ಮೀ) ಓಟದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡ, ನಂತರ ಅವನು ಎಂದಿಗೂ ಹಿಂತಿರುಗಿ ನೋಡಲಿಲ್ಲ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಮೀಟ್ಗಳಲ್ಲಿ ಮತ್ತು ಮ್ಯಾರಥಾನ್ಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದಾನೆ. 2019 ರಲ್ಲಿ ಹಿರಿಯ ವಯಸ್ಸಿನ ವಿಭಾಗದಲ್ಲಿ ದೆಹಲಿ ಮ್ಯಾರಥಾನ್ 10K ಓಟದಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡ. ನೂರಕ್ಕೂ ಮಿಕ್ಕಿ ಮ್ಯಾರಥಾನ್ಗಳಲ್ಲಿ ಭಾಗವಹಿಸಿ 70ಕ್ಕೂ ಅಧಿಕ ಪೋಡಿಯಂ ಫಿನಿಷ್ ಬಹುಮಾನಗಳನ್ನು ಪಡೆದಿದ್ದಾನೆ. ಪ್ರೌಢ ಶಾಲೆಯಲ್ಲಿರುವಾಗ ಯಾವ ದೈಹಿಕ ಶಿಕ್ಷಕರಿಂದ ಅವಮಾನಿಸಲ್ಪಟ್ಟಿದ್ದಾನಾ, ಅದೇ ಶಿಕ್ಷಕರಿಂದ ಅದೇ ಶಾಲೆಯಲ್ಲಿ ಕ್ರೀಡಾ ಸಾಧನೆಗಾಗಿ ಸನ್ಮಾನ ಸ್ವೀಕರಿಸಿದ್ದನು.
ಜಯರಾಮನು ಹಿಂದುಳಿದ ಬಡ ಕುಟುಂಬದಲ್ಲಿ ಜನಿಸಿದರೂ ಯಾವತ್ತೂ ಮೀಸಲಾತಿ ಇಲ್ಲವೇ ಅನುಕಂಪದ ಆಧಾರದಲ್ಲಿ ಏನನ್ನೂ ಪಡೆದವನಲ್ಲ. ಸಂಸ್ಥೆಗೆ ಸೇರಿದ ಮೇಲೆ ಸಂಸ್ಥೆಯ ಅಭಿವೃದ್ಧಿಗೋಸ್ಕರ ಹಗಲಿರುಳು ದುಡಿದ. ಸೃಜನಶೀಲ ಚಿಂತನೆ, ಸಮಸ್ಯೆಗಳಿಗೆ ಪರಿಹಾರ ಆಧುನಿಕ ತಂತ್ರಜ್ಞಾನ ಅಳವಡಿಕೆ ಈ ಎಲ್ಲ ಕೆಲಸಗಳಿಂದ ಮೇಲಾಧಿಕಾರಿಗಳ ಪ್ರಶಂಸೆ ಗಿಟ್ಟಿಸಿಕೊಂಡು, ಒಂದು ವಿಭಾಗದ ಮುಖ್ಯಸ್ಥನಾಗಿ ಬಡ್ತಿ ಪಡೆದ. ಅನ್ನ ನೀಡುವ ಉದ್ಯೋಗ ಹಾಗೂ ಸಂಸಾರಕ್ಕೆ ಮೊದಲ ಪ್ರಾಶಸ್ತ್ಯ ನೀಡಿ, ಕ್ರೀಡಾ ಚಟುವಟಿಕೆಗಳೊಂದಿಗೆ ಸಮಾಜ ಸೇವೆಯಲ್ಲಿ ಕೂಡಾ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ತನ್ನ ದುಡಿಮೆಯಲ್ಲಿ ಸ್ವಲ್ಪ ಹಣ ಸಮಾಜ ಸೇವೆಗೆ ಮೀಸಲಿಟ್ಟಿದ್ದಾನೆ. ಪೋಲಿಯೋ ನಿರ್ಮೂಲನೆ ಮಾಡುವ ಅಂತರಾಷ್ಟ್ರೀಯ ಸೇ ವಾ ಸಂಸ್ಥೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು 5 ವರ್ಷದಿಂದ ಕೆಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದಾನೆ. 2014ರಲ್ಲಿ ನಮ್ಮ ಸರ್ಕಾರವು ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಿಸಿದಾಗ, ಅತ್ಯಂತ ಕುಶಿ ಪಟ್ಟ ವ್ಯಕ್ತಿ ಗಳಲ್ಲಿ ಜಯರಾಮನೂ ಒಬ್ಬ. ಈಗ ಸಾರ್ವಜನಿಕರಂಗದ ಉದ್ಯೊಗದಿಂದ ನಿವ್ರತ್ತಿ ಹೊಂದಿ ಮ್ಯಾರಥಾನ್ ಜೊತೆ ಅವನ ಮನಸ್ಸಿಗೆ ಸರಿಹೊಂದುವ ಹವ್ಯಾಸಗಳು ಹಾಗೂ ಸಮಾಜ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಅವನು ಯಾವಾಗಲೂ ತನ್ನ ಮಿತ್ರರಿಗೆ, ಕಿರಿಯರಿಗೆ ಹಾಗೂ ಹಿತೈಸಿಗಳಿಗೆ ಹೇಳುವ ಮಾತು "ನೀವು ಕಳೆದುಕೊಂಡದ್ದರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ ಮತ್ತು ನಿಮ್ಮ ಬಳಿ ಇನ್ನೂ ಏನಿದೆಯೋ ಅದರ ಮೇಲೆ ಗಮನ ಹರಿಸಿ" ಚಕ್ಕಂದಿನಿಂದಲೂ ತನ್ನ ಅಂಗಹೀನತೆಯಿಂದ ಕ್ರೀಡೆಯಲ್ಲಿ ಟೀಕೆ ನಿಂದನೆ ನೋವುಗಳನ್ನು ಅನುಭವಿಸಿ ತನ್ನ ಮನೋಬಲದಿಂದ ಉದ್ಯೋಗ ಹಾಗೂ ಕ್ರೀಡೆಗಳಲ್ಲಿ ಯಶಸ್ಸು ಸಾಧಿಸಿದ ಜಯರಾಮನ ಜೀವನದ ಜಯದ ಕಥೆ.
1.ಉಪ್ಪಡ್ - ಗ್ರೀಷ್ಮ ಪ್ರಕಾಶ್
2.ತಿಮರೆದ ,ಕೊಳ್ಳತರು ಚಟ್ನಿ,- ಸುಪ್ರೀತಾ ಮಹೇಶ್
ಕುಡುತ ಚಟ್ನಿ, ಪೂಂಬೆ ಚಟ್ನಿ,
3.ತೋಜಂಕ್ ಪೆಲತಾರಿ
4.ಉಪ್ಪಡ್ ಪಚ್ಚಿರ್ - ದೀಪ್ತಿ ರಾಜು
5. ಮೆಂತೆ ಗಂಜಿ - ಕವಿತಾ ಪುಷ್ಪಾರಾಜ್
6. ಮಂಜಲ್ದಾ ಇರೆತ ಅಡ್ಯೆ - ಕವಿತಾ ಗಣೇಶ್
7. ಪೆಲಕಾಯಿ ಅಡ್ಯೆ - ನಂದನ ಹರೀಶ್
8. ಪತ್ರೊಡೆ - ಪ್ರಜ್ಞಾ ಪ್ರಭು
5. ಅರೆಪು ಪುಂಡಿ - ಮಮತಾ ಗಂಗಾಧರ್
9. ಮರುವಾಯಿ ಪಲ್ಯ ಜ್ಯೋತಿ ಪ್ರವೀಣ್ /ಅಂಜನಾ ಶಶಿಧರ್
10. ಬುತಾಯಿ ಪುಳಿಮುಂಚಿ - ಪ್ರೀತಿ ವಿನೀತ್
11. ಸಾರ್ನಡ್ದೆ ಪಾಯಸ - ಕೇಸರಿ ಪೂಂಜ / ನೂತನ್ ಶ್ರೀಕಾಂತ್
12. ಕಡ್ಲೆ ಸಲಾಯಿ ಪಾಯಸ ಪೂರ್ಣಿಮ ಹೆಗ್ಡೆ / ಅಕ್ಷಿತಾ ಗಣೇಶ ಪ್ರಸಾದ್
13. ಕುಡುತ್ತ ಸಾರ್ - ದೀಪ್ತಿ
14. ಎಟ್ಟಿ ಚಟ್ನಿ - ಶಿಪ್ರಾ ಲೊಕನಾಥ್
15. ಗಂಜಿ - ಅನುಶ್ರೀ
16. ಪದೆಂಗಿ ಅಂಬಡೆ ಕಜಿಪು - ಶರ್ಮಿಳಾ ಭರತ್
17. ತೆಟ್ಲಾ ಅಂಬಡೆ - ಕೇಸರಿ ಪೂಂಜ
18. ಮಣ್ಣಿ - ಲತಾ ಹರೀಶ್ ಸನಿಲ್
19. ಎಡ್ಡೆಮುಂಚಿ ಕಷಾಯ - ಪ್ರಜ್ಞಾ
. ಕುಡು ಅರಿ
20. ಮಾವಿನ ಚಟ್ನಿ - ಪ್ರಿಯಾಂಕಾ ಶಿವಪ್ರಸಾದ್
21. ಪೆಜಕಾಯಿ ಚಟ್ನಿ - ಅಮಿತಾ ಸತೀಶ್
22. ಕೊಂಕಣಿತೊವೆ - ಉಷಾ ಯೋಗೀಶ
23. ಚಿಕನ್ ಸುಕ್ಕ - ರೇಷ್ಮಾ ಶಬರಿ ಶಂಕರ್/ ಜಯಲಕ್ಷ್ಮಿ ಶಶಿಕುಮಾರ್
24. ಮಾವಿನಕಾಯಿ ಚಟ್ನಿ- ಗ್ರೀಷ್ಮ
25 ತೋಜಂಕ್ ಅಂಬಡೇ- ಕನ್ನಿಕಾ
26 . ಮಸಾಲಾ ಮಜ್ಜಿಗೆ- ಕನ್ನಿಕಾ
27. ನೀರ್ ದೋಸೆ- ಕಾಜಲ್ ನವೀನ್
28. ಎಟ್ಟಿ ಸುಕ್ಕ - ಪ್ರಿಯಾಂಕಾ ಶಿವಪ್ರಸಾದ್
29. ಅರಿತ ಪಾಯಸಾ - ಪ್ರೀತಾ ದಿನೇಶ್
30. ಸೇಮೆದ ಅಡ್ಯ ಬೊಕ್ಕ ಪೇರ್- ಜ್ಯೋತಿ ಶೆಟ್ಟಿ
31. ಕಡ್ಲೆ ಬಲ್ಯಾರ್ ಸುಕ್ಕ- ಅಕ್ಷ ಆಶ್ರಯ
32. ಪುಂಡಿ , ನುಂಗೆಲ್ ಅಂಬಡೆ ಕಜಿಪು - ಆಶಾ ಜಗನ್ನಾಥ್
ತುಳುನಾಡ್ದ್ ಪದ ನಲಿಕೆ
ಓದುವುದು ಒಂದು ಪೂಜೆ
ಕಾಲವೊಂದಿತ್ತು ಉತ್ತುಂಗದಲ್ಲಿ, ಓದುವುದು ಒಂದು ಪೂಜೆಯಾಗಿ
ಬೇಡಿಕೊಳ್ಳಬೇಕು ಪರಿಪರಿಯಾಗಿ ಇಂದು ಪುಸ್ತಕ ಓದಿಗಾಗಿ.
ನಿಯತಕಾಲಿಕಕ್ಕೆ ಹಾತೊರೆಯುತ್ತಿತ್ತು ಆ ಕಾಲದಲ್ಲಿ ಮನಸ್ಸು
ಪತ್ರಿಕಾ ರಂಗದ ಸಾಹಿತಿಗಳಿಗೆ ಸಿಗುತ್ತಿತ್ತು ಓದುಗರಿಂದ ಯಶಸ್ಸು.
ಸಪ್ತಾಯಿಕಗಳಲ್ಲಿ ಬರುವ ದಾರವಾಹಿಗಳನ್ನು ತಪ್ಪದೇ ಓದುವ ತವಕ
ಮುಗಿಯದ ಕಾತರ ದಾರವಾಹಿಗಳು ಕೊನೆಗೊಳ್ಳುವ ತನಕ.
ಪತ್ರಿಕಾ ಸಪ್ತಾಹಿಕಗಳಲ್ಲಿ ಬರುವ ವಿಷಯಗಳು ಚಿಂತನ ಮಂಥನ
ಸಾಹಿತ್ಯದ ಉನ್ನತಿಗೆ ದೊರೆಯುತಿತ್ತು ವಿಮರ್ಶರಿಂದ ಅವಲೋಕನ.
ಎಪ್ಪತ್ತರ ದಶಕದಲ್ಲಿ ಇರುತ್ತಿತ್ತು ಮಕ್ಕಳ ಕೈಯಲ್ಲಿ ಚಂದಮಾಮ
ವಾರ್ಷಿಕ ಚಂದಾದಾರರಾಗಳು ಸಿಗುತ್ತಿತ್ತು ಹೆತ್ತವರಿಂದ ಮಮ.
ದಿನ ವಾರ ಮಾಸ ಪತ್ರಿಕೆಗಳನ್ನು ಓದುವ ಹವ್ಯಾಸ
ಜ್ಞಾನ ಹೆಚ್ಚಿಸಿಕೊಳ್ಳುವ ಸಂಸ್ಕೃತಿಯೊಂದಿಗೆ ಪುಸ್ತಕ ಪ್ರೇಮಿಗಳ ಸಹವಾಸ.
ಓದುವುದು ಒಂದು ಪೂಜೆಯಾಗಿ ಇರಲಿ ಸದಾ ಜನರಲ್ಲಿ
ತಪ್ಪು ನೀತಿ ತಿದ್ದಿಕೊಂಡು ಬಾಳು ಬೆಳಗಲಿ ಜಗದಲ್ಲಿ.
ಕಣ್ಣೀರ್
ರೋಟರಿ ಕ್ಲಬ್ ಬೈಕಂಪಾಡಿದ ನಾಲ್ಕನೇ ಪೆರ್ಮೆದ ಗುರ್ಕಾಲಾದಿತ್ಯೆರ್ ಲಿಂಗಪಣ್ಣೆ
ಜನಸೇವೆಗ್ ಯಾಪಲಾ ಎದುರು ಬತ್ದ್ ಉಂತೊಂದಿತ್ತೆರಣ್ಣೆ
ಯಕ್ಷಗಾನ ತಾಳಮದ್ದಲೆದ ಮಿತ್ತ್ ಬಾರೀ ಮೋಕೆ
ಐತ ಬುಲೆಚ್ಚಿಲ್ ಗ್ ಸಾಥ್ ಕೊರೊಂದಿತ್ತೆರ್ ಅರ್ನ ಇಲ್ಲದ ಅಕ್ಕೆ
ಕೇರಂ ಚೆಸ್ ದ ಗೊಬ್ಬುಡು ಲಿಂಗಪ್ಪಣ್ಣೆ ಇತ್ತೆರ್ಂಡ ಏರ್ಲಾ ಬೊಡ್ಚಿ,
ಚರ್ಚೆಗೆ ಶುರುಮಂತೆರ್ಂಡ ಅರೆನ ಎದುರು ಏರ್ಲಾ ಇಜ್ಜಿ
ಕಂಡದ ಕೆಲಸೊಗು ಜತ್ತೆರ್ಂಡಾ ಬೆರಿ ಬಗ್ಗಾದ್ ಬೆನ್ನಿ ಬೆನೊಂದಿತ್ತೆರ್
ಮಜಗಾಂವ್ ಡಾಕ್ಡ್ ಆರ್ ಇಂಜಿನಿಯರ್ ಆದ್ ಕೆಲಸ ಮನ್ತೊಂದಿತ್ತೆರ್
ಸೀತಾದೇವ್ ಅರೆನ ಭಾರೀ ಮೋಕೆದ ಪುದರ್ ರ್ಪೋಯಿ ಕಂಪನಿ
ಯಜಮಾನದಾಂತೆ ದುಃಖೊಡು ಬುಲ್ತೊಂದುಲ್ಲೆರ್ ದಾದ ಪಂನ್ಪಿನಿ
ಬದುಕ್ ಪನ್ಪಿನ ಮೂಜಿ ದಿನದ ಬಾಲ್ವೆಡ್ ಬಾರಿ ಪೊರ್ಲು ನಲ್ತೆರ್
ಇತ್ತೆ ನಮನ್ ಪೂರ ಬುಡ್ದ್ ದೇವರ ಪಾದ ಸೇರಿಯೆರ್.
ರೋಟೇರಿಯನ್ ಲಿಂಗಪ್ಪಣ್ಣರಿಗೆ ಅಶ್ರುತರ್ಪಣ
ಗಡ್ಡದಾಯೆ?
ಬೈಕಂಪಾಡಿ ಕ್ಲಬ್ ಗ್ ಅಪಗ ಅಪಗ ಬತ್ತ್ ಪೋಪೆ, ಏರ್ ಆಯೆ,
ಆಯೆನೇ ನಮ್ಮ ಬಾರೀ ಎಡ್ಡೆ ಜನ ಮೋಕೆದ ಗಡ್ಡದಾಯೆ.
ಬೈಕಂಪಾಡಿಗೆ ಸ್ಪಾನ್ಸರ್ ಮಂತೀನ್ ಏರಪ್ಪ ಆ ಮಹಾಶಯರ್,
ತೆರಿದ್ ಬತ್ಂಡ್ ಪೊಸಬೆರೆಗ್, ಆರೇ ನಮ್ಮ ಪೆರ್ಮೆದ ಸತೀಶೆರ್.
ಪಿಕ್ನಿಕ್ ಟೋರ್ ಗ್ ಪೊನಗ ಗಡ್ಡದಾಯೆ ನಡುಟು ಬರಂದೆ ಇಜ್ಜಿ
ಆ ಪೊರ್ತುಗ್ ಆಯನ ಪುದರ್ ಪನ್ಂಡ ಏರೆಗ್ಲಾ ಬೇಜಾರ್ ಇಜ್ಜಿ
ಬೈಕಂಪಾಡಿದ ರೋಟರಿ ದೋಸ್ತುಲು ಗಡ್ಡದಾಯನ ವಿಷಯ ಪಾತೆರುವೆರ್
ಗೊತ್ತುದಾಂತಿನಕುಲು ಏರಾಂಡಲಾ ಕೇನಿಯೆರ್ಂಡ ಬಾಯಿನಿಲಿಕೆ ತೆಲಿಪುವೆರ್
ಹೋಟೆಲ್ ಡ್ ಗಡ್ಡದಾಯನ ವಿಷಯ ಬತ್ಂಡ ಸಪ್ಲಯೆರ್ನಕುಲು ತೂಪೆರ್ ಗಡ್ಡದಕುಲೆನ ಮೊನೆ,
ಗೊತ್ತುಜ್ಜಿ ಪಾಪ ಅಕ್ಲೆಗ್ ಅಯೆಲಾ ಯಂಕ್ಲೆ ಒಟ್ಟಿಗೆ ಒಂಜಾದ್ ಉಲ್ಲೆ ಪನ್ಪಿನ ಗೇನೆ.
ಯೆನ್ನ ದೊಸ್ತಿಗ್ ಗಡ್ಡದಾಯನ ಪರಿಚಯ ಆಂಡ್ ಕ್ಲಬ್ ಗ್ ಬತ್ತುಪ್ಪುನಗ
ಇತ್ತೆ ತೆನ್ಕಾಯಿಡ್ಲಾ ಉಲ್ಲೆ ಪಂಡ್ದ್ ಗೊತ್ತಾಂಡ್ ಯಾನ್ ಸೋಮೇಶ್ವರಗ್ ಪೋದುಪ್ಪುನಗ
ಸತೀಷೆರಡ ಕೇನ್ಲೇ ಬೋಡಂಡ ಪುರುಷೋತು ಉಪ್ಪುನಗ ಗಡ್ಡದಾಯನ ಮಹಿಮೆ,
ಬಾರೀ ಪೊರ್ಲುಡು ತೆರಿಪಾದ್ ಕೊರ್ಪೆರ್ ಗಡ್ಡದಾಯನ ಹಿರಿಮೆ ಗರಿಮೆ
ao877hh7w168oisypxq0icth4d7nsqg
ಶ್ವೇತ ಮೋಹನ್
0
180107
1384592
1379455
2026-08-28T21:13:49Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384592
wikitext
text/x-wiki
{{databox}}
{{Infobox person
| name = ಶ್ವೇತಾ ಮೋಹನ್
| image = Shweta Mohan.jpg
| caption =
| birth_date = {{birth date and age|df=yes|1985|11|19}}
| birth_place = ಮದ್ರಾಸ್, ತಮಿಳುನಾಡು, ಭಾರತ
| education = ಸ್ಟೆಲ್ಲಾ ಮಾರಿಸ್ ಕಾಲೇಜು, ಚೆನ್ನೈ
| occupation = {{hlist|ಗಾಯಕಿ|ಸಂಗೀತ ನಿರ್ಮಾಪಕಿ}}
| years_active = 2003–ಪ್ರಸ್ತುತ
| mother = [[ಸುಜಾತಾ ಮೋಹನ್]]
| relatives = ಪರಾವೂರು ಟಿ. ಕೆ. ನಾರಾಯಣ ಪಿಳ್ಳೈ (ಮುತ್ತಜ್ಜ)
ಜಿ. ವೇಣುಗೋಪಾಲ್ (ಚಿಕ್ಕಪ್ಪ)
ರಾಧಿಕಾ ತಿಲಕ್ (ಚಿಕ್ಕಮ್ಮ)
| children = 1<ref name=mathrubhumi/>
| module = {{Infobox musical artist|embed=yes
| background = person
| genre = {{flatlist|
* ಚಲನಚಿತ್ರ ಸಂಗೀತ
* ಪಾಪ್
* ಘಝಲ್
* ಭಾರತೀಯ ಶಾಸ್ತ್ರೀಯ ಸಂಗೀತ
* ಭಜನೆ
}}
| instrument = ಗಾಯನ
| label = ಸ್ವತಂತ್ರ ಕಲಾವಿದೆ
}}
| website = {{URL|shwetamohan.com}}
}}
'''ಶ್ವೇತಾ ಮೋಹನ್''' (ಜನನ ೧೯ ನವೆಂಬರ್ ೧೯೮೫)<ref>{{cite news |url=https://timesofindia.indiatimes.com/topic/Shweta-Mohan |title=Shweta Mohan Playback singer |work=The Times of India |date=13 August 2020}}</ref> ಭಾರತೀಯ ಹಿನ್ನೆಲೆ ಗಾಯಕಿ ಮತ್ತು ಸಂಗೀತ ನಿರ್ಮಾಪಕಿ.<ref>{{cite news |url=https://timesofindia.indiatimes.com/entertainment/hindi/music/news/Shweta-Mohan-is-happy/etarticleshow/5513702.cms|archive-url=https://web.archive.org/web/20110811062128/http://articles.timesofindia.indiatimes.com/2010-01-30/news-and-interviews/28126139_1_awards-galore-ashwin-music|url-status=live|archive-date=11 August 2011 |title=Shweta Mohan is happy |date=30 January 2010 |work=[[The Times of India]] |access-date=7 May 2010 |first1=Sindhu |last1=Vijayakumar}}</ref> ಅವರು ನಾಲ್ಕು ದಕ್ಷಿಣ ಭಾರತೀಯ ಚಿತ್ರರಂಗಗಳಾದ ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಸೇರಿದಂತೆ ಕೆಲವು ಹಿಂದಿ ಚಿತ್ರಗಳು ಮತ್ತು ಬೆಂಗಾಲಿ ಭಾಷೆಯ ಆಲ್ಬಂಗಳಿಗೆ ಚಿತ್ರಗಳು ಮತ್ತು ಆಲ್ಬಂಗಳಿಗೆ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.
ಹಿನ್ನೆಲೆ ಗಾಯಕಿ ಸುಜಾತಾ ಮೋಹನ್ ಮತ್ತು ಕೃಷ್ಣ ಮೋಹನ್ ಅವರ ಪುತ್ರಿಯಾಗಿ ಜನಿಸಿದ ಶ್ವೇತಾ ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಆರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು (ದಕ್ಷಿಣ), ಒಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಒಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ೨೦೨೩ ರಲ್ಲಿ ತಮಿಳುನಾಡು ಸರ್ಕಾರದಿಂದ ಆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕಲೈಮಾಮಣಿ ಪ್ರಶಸ್ತಿಯನ್ನು ಸಹ ಅವರು ಗೌರವಿಸಲ್ಪಟ್ಟಿದ್ದಾರೆ.<ref>{{cite web|url=https://timesofindia.indiatimes.com/entertainment/tamil/movies/news/kalaimamani-awards-anirudh-kj-yesudas-manikandan-and-others-selected-ceremomy-scheduled-for-next-month/articleshow/124084043.cms|title=Kalaimamani Awards: Anirudh, KJ Yesudas, Manikandan, and others selected; Ceremony scheduled for next month|website=TimesofIndia.com|date=24 September 2025}}</ref>
ಹಿನ್ನೆಲೆ ಗಾಯನದ ಜೊತೆಗೆ, ಶ್ವೇತಾ ಅವರು ಹಲವಾರು ದೂರದರ್ಶನ ರಿಯಾಲಿಟಿ ಶೋಗಳಲ್ಲಿ ಮತ್ತು ಸಂಗೀತ ವೀಡಿಯೊಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಅವರು ಹಲವಾರು ಕಲಾವಿದರೊಂದಿಗೆ ಸಹಕರಿಸಿದ್ದಾರೆ ಮತ್ತು ಸ್ವತಂತ್ರ ಸಿಂಗಲ್ಗಳನ್ನು ನಿರ್ಮಿಸಿದ್ದಾರೆ.<ref>{{cite web|url=https://www.thehindu.com/entertainment/music/shweta-mohan-on-her-first-indie-song/article24278207.ece|title=Shweta Mohan releases her first indie song|work=TheHindu.com|date=28 June 2018}}</ref>
{{TOC limit|2}}
== ಆರಂಭಿಕ ಜೀವನ ==
ಶ್ವೇತಾ ಮೋಹನ್ ಅವರು ೧೯ ನವೆಂಬರ್ ೧೯೮೫ ರಂದು ತಮಿಳುನಾಡಿನ ಚೆನ್ನೈನಲ್ಲಿ ಮಲಯಾಳಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ, ವಿ. ಕೃಷ್ಣ ಮೋಹನ್ ಅವರು ಶಿಶುವೈದ್ಯರು ಮತ್ತು ಸಂಗೀತ ಉತ್ಸಾಹಿಯೂ ಆಗಿದ್ದು, ಸಾಂದರ್ಭಿಕವಾಗಿ ಸಂಗೀತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ,<ref>{{cite web|url=https://timesofindia.indiatimes.com/entertainment/malayalam/music/shweta-mohans-dad-turns-singer-to-wish-mohanlal-on-his-birthday/articleshow/75865548.cms|title=Shweta Mohan's dad turns singer to wish Mohanlal on his birthday|work=TheTimesofIndia.com|date=21 May 2020}}</ref> ಮತ್ತು ಅವರ ತಾಯಿ, ಸುಜಾತಾ ಮೋಹನ್, ಅವರು ಪ್ರತಿಭಾವಂತ ಹಿನ್ನೆಲೆ ಗಾಯಕಿ.<ref>{{cite web|url=https://www.newindianexpress.com/entertainment/malayalam/2013/Apr/16/to-mom-with-love-shweta-mohan-468642.html|title=To mom with love: Shweta Mohan|work=TheNewIndianExpress.com|date=16 April 2013}}</ref> ಅವರು ಗುಡ್ ಶೆಫರ್ಡ್ ಕಾನ್ವೆಂಟ್, ಚೆನ್ನೈನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಸ್ಟೆಲ್ಲಾ ಮಾರಿಸ್ ಕಾಲೇಜು, ಚೆನ್ನೈನಿಂದ ಪದವಿ ಪಡೆದರು.<ref name=newindianexpress>[https://www.newindianexpress.com/cities/kochi/2012/jun/25/a-timeless-melody-380408.html A timeless melody].</ref>
ಸಂಗೀತದಲ್ಲಿ ಆಸಕ್ತಿ ಹೊಂದಿದ್ದರೂ, ತನ್ನ ಧ್ವನಿಯು ಹಿನ್ನೆಲೆ ಗಾಯನಕ್ಕೆ ಸಾಕಷ್ಟು ಉತ್ತಮವಾಗಿಲ್ಲ ಎಂದು ಪರಿಗಣಿಸಿ ಶ್ವೇತಾ ಅವರು ಆರಂಭದಲ್ಲಿ ಹಾಡುವ ಬಗ್ಗೆ ಹಿಂಜರಿಕೆ ವ್ಯಕ್ತಪಡಿಸಿದರು. ಅವರ 10 ನೇ ತರಗತಿಯ ಸಮಯದಲ್ಲಿ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ, ಗಾಯಕ-ಸಂಗೀತ ನಿರ್ದೇಶಕರಾದ ಭವತಾರಿಣಿ ಅವರು ನಿರ್ಣಯಿಸಿದ ಏಕವ್ಯಕ್ತಿ ಸುತ್ತಿನಲ್ಲಿ ಅವರು ಚಿತ್ರದ "ಬೋಲೆ ರೆ ಪಪಿಹಾರ" ಹಾಡನ್ನು ಹಾಡಿದರು.<ref>{{cite web|url=https://timesofindia.indiatimes.com/entertainment/malayalam/movies/news/shweta-mohan-mourns-the-demise-of-bhavatharini/articleshow/107168519.cms|title=Shweta Mohan mourns the demise of Bhavatharini: She told my mum that I sang well and that I must train in music|work=TheTimesofIndia.com|date=26 January 2024}}</ref> ಅವರು ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗೆದ್ದರು ಮತ್ತು ಭವತಾರಿಣಿ ಅವರು ಹಾಡನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಈ ಪ್ರೋತ್ಸಾಹ ಮತ್ತು ಮಾನ್ಯತೆಯು ಹಾಡುವ ಬಗ್ಗೆ ಅವರ ಉತ್ಸಾಹವನ್ನು ಹುಟ್ಟುಹಾಕಿತು ಮತ್ತು ಸಂಗೀತವನ್ನು ತಮ್ಮ ವೃತ್ತಿಯಾಗಿ ತೆಗೆದುಕೊಳ್ಳುವಂತೆ ಮಾಡಿತು.
ಒಂಬತ್ತನೇ ವಯಸ್ಸಿನಲ್ಲಿ, ಶ್ವೇತಾ ಅವರು ಶಾಸ್ತ್ರೀಯ ಸಂಗೀತದಲ್ಲಿ ಔಪಚಾರಿಕ ತರಬೇತಿಯನ್ನು ಪ್ರಾರಂಭಿಸಿದರು. ನಂತರ, ಅವರು ಗಾಯಕಿ ಬಿನ್ನಿ ಕೃಷ್ಣಕುಮಾರ್ ಅವರಿಂದ ತರಬೇತಿ ಪಡೆದು ಕಾರ್ನಾಟಿಕ್ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತಮ್ಮ ಪಾಠಗಳನ್ನು ಪ್ರಾರಂಭಿಸಿದರು,<ref>{{cite news |url=http://www.thehindu.com/features/friday-review/music/and-quiet-flows-the-karamana-two-of-a-kind/article3968866.ece |title=And Quiet Flows The Karamana: Two of a kind |date=5 October 2012 |work=[[The Hindu]]}}</ref><ref>{{cite web|url=https://www.indulgexpress.com/culture/music/2023/Apr/13/my-amma-is-my-idolsays-singer-shweta-mohan-48288.html|title='My Amma is my idol,' says singer Shweta Mohan|website=Indulgexpress.com|date=13 April 2023}}</ref> ಮತ್ತು ಆಗಸ್ಟೀನ್ ಪಾಲ್ ಅವರ ಅಡಿಯಲ್ಲಿ ಪಾಶ್ಚಾತ್ಯ ಗಾಯನ ಮತ್ತು ಪಿಯಾನೋವನ್ನು ಕಲಿತರು.<ref>{{cite web|url=https://www.indulgexpress.com/culture/music/2018/Oct/26/swetha-mohan--augustine-paul-an-interaction-about-their-personal-journeys-collaborations-and-fut-10795.html|title=Singer Shweta Mohan and music director Augustine Paul an interaction about their personal journeys, collaborations and future projects|work=Indulgexpress.com|date=26 October 2018}}</ref> ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರೊಂದಿಗಿನ ಹಾಡಿನ ರೆಕಾರ್ಡಿಂಗ್ಗಳಿಗಾಗಿ ತಮ್ಮ ತಾಯಿಯೊಂದಿಗಿನ ಒಂದು ಪಾಲ್ಗೊಳ್ಳುವಿಕೆಯ ಸಮಯದಲ್ಲಿ, ಅವರ "ಕುಚಿ ಕುಚಿ ರಕ್ಕಮ್ಮ" (ಬಾಂಬೆ, 1995) ಮತ್ತು "ಅಚ್ಚಮ್ ಅಚ್ಚಮ್ ಇಲ್ಲೈ" (ಇಂದಿರಾ, 1995) ಹಾಡುಗಳಿಗಾಗಿ ಮಕ್ಕಳ ಗಾಯಕ ತಂಡದ ಭಾಗವಾಗಲು ಕೇಳಲಾಯಿತು.<ref>{{cite web|url=https://timesofindia.indiatimes.com/entertainment/malayalam/movies/news/shweta-mohan-on-ar-rahmans-birthday-you-are-special-because-you-spread-magic-everywhere-with-the-wand-of-your-music/articleshow/88728257.cms|title=Shweta Mohan on AR Rahman's birthday: You are special because you spread magic everywhere with the wand of your music|work=TheTimesofIndia.com|date=6 January 2022}}</ref>
== ವೃತ್ತಿ ==
===ಹಿನ್ನೆಲೆ ಗಾಯನ===
====2003–2010: ಪ್ರಾರಂಭ, ಪ್ರಗತಿ ಮತ್ತು ಪ್ರಶಸ್ತಿಗಳು====
2003 ರಲ್ಲಿ ಶ್ವೇತಾ ಅವರು 11 ನೇ ತರಗತಿಯಲ್ಲಿದ್ದಾಗ, ನವರಾತ್ರಿ ಹಬ್ಬದ ಸಂದರ್ಭದಲ್ಲಿ ತಮ್ಮ ಮಗಳು ಭವತಾರಿಣಿ ಅವರ ಆಹ್ವಾನದ ಮೇರೆಗೆ ಸಂಗೀತ ನಿರ್ದೇಶಕ ಇಳಯರಾಜ ಅವರ ಮನೆಗೆ ಭೇಟಿ ನೀಡಿದರು. ಅಲ್ಲಿ, ಅವರು ಇಳಯರಾಜ ಅವರ ಹಿರಿಯ ಮಗ ಮತ್ತು ಸಂಗೀತ ನಿರ್ದೇಶಕ ಕಾರ್ತಿಕ್ ರಾಜ ಅವರನ್ನು ಎದುರಿಸಿದರು, ಅವರು ತಾವು ಗಾಯಕಿ ಸುಜಾತಾ ಅವರ ಪುತ್ರಿ ಎಂದು ತಿಳಿದ ನಂತರ, ಚಿತ್ರದಲ್ಲಿ ಎರಡು ಹಾಡುಗಳಿಗೆ ತಮ್ಮ ಧ್ವನಿಯನ್ನು ರೆಕಾರ್ಡ್ ಮಾಡಲು ಅವಕಾಶ ನೀಡಿದರು.<ref>{{cite web|url=https://www.thehindu.com/features/friday-review/music/On-the-same-wavelength/article11642286.ece|title=On the same wavelength|work=Hindu.com|date=13 August 2010}}</ref> ಎರಡೂ ಹಾಡುಗಳು, "ಮೆಯ್ಯನಾಧ" ಮತ್ತು "ಸೆವ್ವೈ ದೇಸಂ" ಗಾಯಕ ಕಾರ್ತಿಕ್ ಅವರೊಂದಿಗಿನ ಯುಗಳ ಗೀತೆಗಳಾಗಿವೆ. ಇದರ ನಂತರ, ಅವರು ತಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ ಮರಳಿದರು ಮತ್ತು ತಮ್ಮ 12 ನೇ ತರಗತಿಯನ್ನು ಮುಗಿಸಿ ಪದವಿ ಪ್ರಾರಂಭಿಸಿದರು. 2005 ರಲ್ಲಿ, ಸಂಗೀತ ನಿರ್ದೇಶಕ ಪ್ರವೀಣ್ ಮಣಿ ಅವರು ತಮ್ಮ ಮಲಯಾಳಂ ಚಿತ್ರಕ್ಕಾಗಿ ಬ್ಯಾಂಡ್ S5 ನೊಂದಿಗೆ ಸಹಕರಿಸಿದರು. ಶ್ವೇತಾ ಅವರನ್ನು ಬ್ಯಾಂಡ್ನೊಂದಿಗೆ ಸಹಕರಿಸಲು ಮತ್ತು ಚಿತ್ರದ ಎಲ್ಲಾ ಹಾಡುಗಳನ್ನು ಹಾಡಲು ಕರೆಯಲಾಯಿತು, ಇದರಿಂದಾಗಿ ಅವರ ಮಲಯಾಳಂ ಚೊಚ್ಚಲ ಪ್ರವೇಶವನ್ನು ಗುರುತಿಸಲಾಯಿತು. ಶೀಘ್ರದಲ್ಲೇ, ಕಾರ್ತಿಕ್ ರಾಜ ಮತ್ತು ಭವತಾರಿಣಿ ಅವರ ಕಿರಿಯ ಸಹೋದರ ಯುವನ್ ಶಂಕರ್ ರಾಜಾ ಅವರು ತಮ್ಮ ತೆಲುಗು ಸಂಯೋಜನೆಗಳಿಗಾಗಿ ರಾಮ್ (2006), ಆದವಾರಿ ಮಾಟಲಾಕು ಅರ್ಥಾಲೆ ವೇರುಲೆ (2007) ಮತ್ತು ತಮಿಳು ಸಂಯೋಜನೆಗಳಿಗಾಗಿ ಪಟ್ಟಿಯಾಲ್ (2006) ಮತ್ತು ಕಣ್ಣಮೂಚಿ ಯೇನಾಡ (2007) ಚಿತ್ರಗಳಿಗೆ ಹಾಡಲು ಕರೆದರು. ಅವರು ಮಲಯಾಳಂ ಚಿತ್ರ ವಿನೋದಯಾತ್ರ (2007) ಗಾಗಿ ಇಳಯರಾಜ ಅವರೊಂದಿಗೆ ಮತ್ತು ಕನ್ನಡ ಚಿತ್ರ ಸಜಿನಿ (2007) ಗಾಗಿ ಎ. ಆರ್. ರೆಹಮಾನ್ ಅವರೊಂದಿಗೆ ತಮ್ಮ ಮೊದಲ ಹಾಡನ್ನು ರೆಕಾರ್ಡ್ ಮಾಡಿದರು.
[[File:SwethaMohan.jpg|thumb|right|upright|200px|alt=Shwetha during her beginning career stage|ಶ್ವೇತಾ ಅವರ ಆರಂಭಿಕ ವೃತ್ತಿ ಹಂತದಲ್ಲಿ]]
ಅವರ ಅತಿದೊಡ್ಡ ಪ್ರಗತಿಯು ಜಿ. ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಚಿತ್ರ ಕಿರೀಡಂ (2007) ನಲ್ಲಿ ಸೋನು ನಿಗಮ್ ಅವರೊಂದಿಗಿನ "ವಿಳಿಯಿಲ್ ಉನ್ ವಿಳಿಯಿಲ್" ಎಂಬ ಯುಗಳ ಗೀತೆ ಮತ್ತು ಮಣಿ ಶರ್ಮಾ ಅವರ ಸಂಯೋಜನೆಯ ಚಿತ್ರ ಪೊಕ್ಕಿರಿಗಾಗಿ "ನೀ ಮುತ್ತಂ ಒಂದ್ರು" ಹಾಡುಗಳೊಂದಿಗೆ ಬಂದಿತು. 2007 ರ ವರ್ಷವು ಸಂಗೀತ ನಿರ್ದೇಶಕ ಎಂ. ಜಯಚಂದ್ರನ್ ಅವರೊಂದಿಗಿನ ಅವರ ಸಹವಾಸವನ್ನು ಸಹ ಗುರುತಿಸಿತು, ಅವರು ಚಿತ್ರ ನಿವೇದ್ಯಂನಲ್ಲಿ ಮೂರು ಹಾಡುಗಳನ್ನು ನೀಡಿದರು. "ಕೊಲಕ್ಕುಳಲ್ ವಿಳಿ ಕೇಟ್ಟೋ" ಹಾಡು 2007 ರ ವರ್ಷಕ್ಕೆ ಅತ್ಯುತ್ತಮ ಗಾಯಕಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು.<ref>{{cite web|url=https://www.news18.com/news/movies/on-shweta-mohans-birthday-a-look-at-her-award-winning-songs-6412219.html|title=Happy Birthday Shweta Mohan: Award-Winning Songs of Shweta|work=News18.com|date=19 November 2022}}</ref> ಚಿತ್ರ ನಾವೆಲ್ (2008) ಗಾಗಿ ಅವರ ಮುಂದಿನ ಸಹಯೋಗವು "ಕುಯಿಲೆ" ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು. ಇದರ ನಂತರ 2008 ರಲ್ಲಿ ಚಿತ್ರ ಓರೆ ಕಡಲ್ನಿಂದ ಔಸೇಪ್ಪಚನ್ ಸಂಯೋಜಿಸಿದ "ಯಮುನಾ ವೇರುಥೆ" ಹಾಡಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗಳ ದಕ್ಷಿಣದಲ್ಲಿ ಅವರ ಮೊದಲ ಗೆಲುವು ಬಂದಿತು.<ref>{{cite web|url=https://timesofindia.indiatimes.com/topic/Shweta-Mohan/awards|title=List of awards and nominations received by Shweta Mohan|work=TheTimesofIndia.com|accessdate=23 October 2025}}</ref> ಸಂಗೀತ ನಿರ್ದೇಶಕ ವಿದ್ಯಾಸಾಗರ್ ಅವರೊಂದಿಗಿನ ಅವರ ಸಹವಾಸವು ಚಿತ್ರ ಗೋಲ್ (2007) ನ "ಎಂತಾನಿನ್ನೆನ್ನೋಡೊನ್ನುಂ" ಜನಪ್ರಿಯ ಹಾಡಿನೊಂದಿಗೆ ಪ್ರಾರಂಭವಾಯಿತು ಮತ್ತು ಚಿತ್ರ ಪಿರಿವೋಮ್ ಸಂಧಿಪೋಮ್ (2008) ನ "ಕಂಡೇನ್ ಕಂಡೇನ್" ಹಾಡಿಗೆ ಫಿಲ್ಮ್ಫೇರ್ ಪ್ರಶಸ್ತಿ ನಾಮನಿರ್ದೇಶನವನ್ನು ಗಳಿಸಿದರು. ಸಂಗೀತ ನಿರ್ದೇಶಕ ಗುರುಕಿರಣ್ ಅವರು ಚಿತ್ರ ಅರಮನೆ (2008) ನ "ಪಾತ್ರ ಬರೇಯಾಲ" ಜನಪ್ರಿಯ ಹಾಡಿನ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಅವಕಾಶ ನೀಡಿದರು. ಅವರು ತಮಿಳಿನಲ್ಲಿ ಶಿವ ಮನಸುಲ ಶಕ್ತಿ, ಆನಂದ ತಾಂಡವಂ ಮತ್ತು ಗುರು ಎನ್ ಆಳು, ಮಲಯಾಳಂನಲ್ಲಿ ರಾಬಿನ್ಹುಡ್, ಡ್ಯಾಡಿ ಕೂಲ್ ಮತ್ತು ಭಾಗ್ಯದೇವತಾ, ತೆಲುಗು ಚಿತ್ರರಂಗದಲ್ಲಿ ರೆಚಿಪೋ ಮತ್ತು ಸಾರೈ ವೀರ್ರಾಜು ಮುಂತಾದ ದೊಡ್ಡ ನಿರ್ಮಾಣದ ಚಿತ್ರಗಳಿಗೆ ಹಾಡುವುದನ್ನು ಮುಂದುವರಿಸಿದರು.
2010 ರಲ್ಲಿ, ಅವರು ಎಸ್. ಶಂಕರ್ ಅವರ ಅತ್ಯಂತ ನಿರೀಕ್ಷಿತ ವಿಜ್ಞಾನ ಕಾಲ್ಪನಿಕ ಚಿತ್ರ ಎಂತಿರನ್ಗಾಗಿ ಎ. ಆರ್. ರೆಹಮಾನ್ ಅವರೊಂದಿಗೆ ಸಹಕರಿಸಿದರು. "ಬೂಮ್ ಬೂಮ್ ರೋಬೋಟ್ ಡಾ" ಹಾಡು ಅವರ ಸಹ-ಗಾಯಕರಾದ ಯೋಗಿ ಬಿ, ಕೀರ್ತಿ ಸಾಗಥಿಯಾ ಮತ್ತು ತನ್ವಿ ಷಾ ಅವರೊಂದಿಗೆ ಪ್ರಮುಖವಾಗಿ ಅವರ ಗಾಯನವನ್ನು ಒಳಗೊಂಡಿತ್ತು. ಧ್ವನಿಪಥವು ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಬಿಡುಗಡೆಯಾದ ಎರಡನೇ ದಿನದಂದು, ಆಲ್ಬಮ್ US ಐಟ್ಯೂನ್ಸ್ ಟಾಪ್ 10 ವರ್ಲ್ಡ್ ಆಲ್ಬಮ್ಸ್ ಚಾರ್ಟ್ನಲ್ಲಿ ಅಗ್ರಸ್ಥಾನದಲ್ಲಿತ್ತು, ಇದು ಸ್ಥಾನವನ್ನು ತಲುಪಿದ ಮೊದಲ ಭಾರತೀಯ ಆಲ್ಬಮ್ ಆಗಿದೆ.<ref>{{cite web|author= Indiaglitz|year=2010|title='Endhiran' tops Apple list|website=IndiaGlitz|access-date=3 August 2010|url=http://www.indiaglitz.com/channels/tamil/article/59090.html|archive-url=https://web.archive.org/web/20100804005527/http://www.indiaglitz.com/channels/tamil/article/59090.html|url-status=dead|archive-date=4 August 2010}}</ref> ಮೂಲ ತಮಿಳು ಹಾಡಿನ ಜೊತೆಗೆ, ಅವರು ತೆಲುಗು ಡಬ್ ಮಾಡಿದ ಆವೃತ್ತಿಗೂ ಗಾಯನ ನೀಡಿದರು. ಅವರ ಮುಂದಿನ ಜನಪ್ರಿಯ ಹಾಡು "ಓ ಮಹಾ ಝೀಯಾ", ಹರಿಹರನ್ ಅವರೊಂದಿಗಿನ ಯುಗಳ ಗೀತೆ, ಚಿತ್ರ ತಮಿಳ್ ಪದಂನಿಂದ, ಇದು ಕಣ್ಣನ್ ಅವರ ಸಂಗೀತವನ್ನು ಹೊಂದಿತ್ತು. ಹಾಡು ಹಿಂದಿನ ಕೆಲವು ಜನಪ್ರಿಯ ತಮಿಳು ಹಾಡುಗಳಿಂದ ಪಡೆದ ಹಲವಾರು ಅಸ್ಪಷ್ಟ ಪದಗಳನ್ನು ಒಳಗೊಂಡಿತ್ತು.<ref>{{Cite web |last=Rao |first=Subha J |date=21 June 2018 |title=CS Amudhan Interview: 'I Don't Dream Of Directing Big Stars And Moving To The Next Level' |url=https://silverscreenindia.com/movies/interviews/cs-amudhan-interview-i-dont-dream-of-directing-big-stars-and-moving-to-the-next-level/ |url-status=live |archive-url=https://archive.today/20250912014517/https://silverscreenindia.com/movies/interviews/cs-amudhan-interview-i-dont-dream-of-directing-big-stars-and-moving-to-the-next-level/ |archive-date=2025-09-12 |access-date=2025-09-12 |website=Silverscreen India |language=en}}</ref> ಎಂ. ಜಿ. ಶ್ರೀಕುಮಾರ್ ಸಂಯೋಜಿಸಿದ ಚಿತ್ರ ಒರು ನಾಳ್ ವರುಮ್ನ ಮಲಯಾಳಂ ಹಾಡು "ಮಾವಿನ್ ಚೋಟ್ಟಿಲೆ" ಅವರಿಗೆ ಏಷ್ಯಾವಿಷನ್ ಪ್ರಶಸ್ತಿ ಮತ್ತು ಜೈಹಿಂದ್ ಟಿವಿ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಆಗಾಥನ್, ಫೋರ್ ಫ್ರೆಂಡ್ಸ್, ಕಧಾ ತುಡರುನ್ನು, ಸಕುಡುಂಬಂ ಶ್ಯಾಮಲ ಮತ್ತು ಎಲ್ಸಮ್ಮಾ ಎನ್ನ ಆಂಕುಟ್ಟಿ ಮುಂತಾದ ಮಲಯಾಳಂ ಚಿತ್ರಗಳಲ್ಲಿನ ಅವರ ಹಾಡುಗಳು ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದುಕೊಟ್ಟವು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿದವು. ಎ. ಆರ್. ರೆಹಮಾನ್ ಸಂಯೋಜಿಸಿದ ಚಿತ್ರ ಪುಳಿ (2010) ಗಾಗಿನ ತೆಲುಗು ಹಾಡು "ಅಮ್ಮ ಥಲ್ಲೆ" ಅನ್ನು ಸಾಹಿತ್ಯವನ್ನು ವೇಗವಾಗಿ ಓಡಿಸಲು ಒಂದು ತಂತ್ರವನ್ನು ಬಳಸಿ ರೆಕಾರ್ಡ್ ಮಾಡಲಾಯಿತು. 2011 ರ ವರ್ಷಕ್ಕೆ ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ದಕ್ಷಿಣದಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಅವರು ಗೆದ್ದರು. ಪ್ರಿಥ್ವಿ (2010) ನ ಕನ್ನಡ ಹಾಡುಗಳು "ಹೆಜ್ಜೆಗೊಂಡು ಹೆಜ್ಜೆ" ಮತ್ತು ಎನೋ ಒಂತಾರ (2010) ನ "ದಿಲ್ ಕುಶ್" ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿದ್ದವು ಮತ್ತು ಮಾಧ್ಯಮಗಳಲ್ಲಿ ಪದೇ ಪದೇ ಪ್ರಸಾರವಾಗುತ್ತಿದ್ದವು.
====2011–2020: ಯಶಸ್ವಿ ಸಹಯೋಗಗಳು ಮತ್ತು ಹೆಚ್ಚಿನ ಮಾನ್ಯತೆ====
2011 ರ ವರ್ಷವು ಶ್ವೇತಾ ಅವರ ಸಂಗೀತ ನಿರ್ದೇಶಕ ಶರ್ರೆತ್ ಅವರೊಂದಿಗಿನ ಸಹವಾಸದ ಪ್ರಾರಂಭವನ್ನು ತಮಿಳು-ತೆಲುಗು ದ್ವಿಭಾಷಾ ಚಿತ್ರ 180 ಮೂಲಕ ಗುರುತಿಸಿತು. ಧ್ವನಿಪಥವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು, ವಿಶೇಷವಾಗಿ ಕಾರ್ತಿಕ್ ಅವರೊಂದಿಗಿನ ಅವರ ಯುಗಳ ಗೀತೆ "ನೀ ಕೋರಿನಾಲ್" 59 ನೇ ಫಿಲ್ಮ್ಫೇರ್ ಅವಾರ್ಡ್ಸ್ ದಕ್ಷಿಣದಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ನಾಮನಿರ್ದೇಶನವನ್ನು ಪಡೆಯಿತು.<ref>{{Cite web |url=http://www.filmfare.com/news/59th-idea-filmfare-awards-south-winners-list-809.html |title=59th Idea Filmfare Awards South (Winners list) |date=9 July 2012 |website=[[Filmfare]] |url-status=live |archive-url=https://web.archive.org/web/20150811102950/http://www.filmfare.com/news/59th-idea-filmfare-awards-south-winners-list-809.html |archive-date=11 August 2015 |access-date=11 August 2015}}</ref><ref>{{Cite news |url=http://timesofindia.indiatimes.com/entertainment/tamil/movies/news/The-59th-Idea-Filmfare-Awards-2011South/articleshow/14742576.cms |title=The 59th Idea Filmfare Awards 2011(South) |date=8 July 2012 |work=The Times of India |access-date=11 August 2015 |url-status=live |archive-url=https://web.archive.org/web/20150811103446/http://timesofindia.indiatimes.com/entertainment/tamil/movies/news/The-59th-Idea-Filmfare-Awards-2011South/articleshow/14742576.cms |archive-date=11 August 2015}}</ref> ಹಾಡು ಮಿರ್ಚಿ ಮ್ಯೂಸಿಕ್ ಅವಾರ್ಡ್ಸ್ ದಕ್ಷಿಣದಲ್ಲಿ ಶ್ರೋತೃಗಳ ಆಯ್ಕೆ ಪ್ರಶಸ್ತಿಯನ್ನು ಗೆದ್ದುಕೊಂಡಿತು.<ref>{{Cite web |url=http://www.radiomirchi.com/mma2011/tamil/listners_choice.html |title=Mirchi Music Awards Listener's Choice |publisher=Radio Mirchi |url-status=live |archive-url=https://web.archive.org/web/20150811131053/http://www.radiomirchi.com/mma2011/tamil/listners_choice.html |archive-date=11 August 2015 |access-date=11 August 2015}}</ref> ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಅವರೊಂದಿಗಿನ ಅವರ ಸಹವಾಸವು ಕೊ ಮತ್ತು 7 ಆಮ್ ಅರಿವು ಚಿತ್ರಗಳೊಂದಿಗೆ ಪ್ರಾರಂಭವಾಯಿತು. 2011 ರ ವರ್ಷದಲ್ಲಿ ಅವರು ತಮಿಳಿನಲ್ಲಿ ಅನೇಕ ಜನಪ್ರಿಯ ಹಾಡುಗಳನ್ನು ಹೊಂದಿದ್ದರು ಮತ್ತು ಕಾವಲನ್, ವೆಟ್ಟೈ, ತಂಬಿಕೋಟ್ಟೈ, ವೆಪ್ಪಂ ಮತ್ತು ವಿತಗನ್ ಸೇರಿದಂತೆ ಅನೇಕ ಚಿತ್ರಗಳಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಪಡೆದರು.<ref>{{cite news|url=http://www.thehindu.com/entertainment/movies/tn-govt-announces-tamil-film-awards-for-six-years/article19273078.ece|title=TN Govt. announces Tamil Film Awards for six years|work=[[The Hindu]]|accessdate=2017-07-14|location=Chennai, India|date=2017-07-14|archive-url=https://archive.today/20231110140448/https://www.thehindu.com/entertainment/movies/tn-govt-announces-tamil-film-awards-for-six-years/article19273078.ece|archive-date=10 November 2023}}</ref> ಮಲಯಾಳಂನಲ್ಲಿ, ಅವರು ಚಿತ್ರ ಉರುಮಿಗಾಗಿ ದೀಪಕ್ ದೇವ್ ಸಂಯೋಜಿಸಿದ "ಆರೋ ನೀ ಆರೋ" ಯುಗಳ ಗೀತೆಯೊಂದಿಗೆ ಪ್ರಶಂಸಿತ ಗಾಯಕ ಕೆ. ಜೆ. ಯೇಸುದಾಸ್ ಅವರೊಂದಿಗೆ ಮೊದಲ ಬಾರಿಗೆ ಸಹಕರಿಸಿದರು. 2011 ರ ವರ್ಷದ ಇತರ ಜನಪ್ರಿಯ ಮಲಯಾಳಂ ಹಾಡುಗಳು ಕ್ರಿಶ್ಚಿಯನ್ ಬ್ರದರ್ಸ್, ಮೂರು ಕಿಂಗ್ಸ್, ಬ್ಯಾಂಕಾಕ್ ಸಮ್ಮರ್ ಮತ್ತು ಸ್ನೇಹವೀಡು ಚಿತ್ರಗಳ ಮೂಲಕ ಬಂದವು. ಇಳಯರಾಜ ಸಂಗೀತ ಸಂಯೋಜಿಸಿದ ಮಹಾಕಾವ್ಯದ ಭಕ್ತಿ ತೆಲುಗು ಚಿತ್ರ ಶ್ರೀ ರಾಮ ರಾಜ್ಯಂ ಮೂಲ ಮತ್ತು ಡಬ್ ಮಾಡಿದ ಆವೃತ್ತಿಗಳಲ್ಲಿ ಶ್ವೇತಾ ಅವರು ಅನೇಕ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.<ref>{{Cite web |last=Rajamani |first=Radhika |date=2011-11-16 |title=Ramayana magic recreated in Telugu |url=https://www.rediff.com/movies/slide-show/slide-show-1-ramayana-magic-to-be-recreated-in-telugu/20111116.htm |url-status=live |archive-url=https://web.archive.org/web/20111118040741/https://www.rediff.com/movies/slide-show/slide-show-1-ramayana-magic-to-be-recreated-in-telugu/20111116.htm |archive-date=2011-11-18 |access-date=2025-02-20 |website=[[Rediff.com]] |language=en}}</ref> ತೆಲುಗು ಚಿತ್ರ 100% ಲವ್ ಅವರ ಧ್ವನಿಯಲ್ಲಿ ಎರಡು ಜನಪ್ರಿಯ ಹಾಡುಗಳನ್ನು ಒಳಗೊಂಡಿತ್ತು.
2012 ರ ವರ್ಷವು ತಮಿಳು ಚಿತ್ರ 3 ಮೂಲಕ "ಹೊಸ-ಪೀಳಿಗೆಯ" ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರೊಂದಿಗಿನ ಶ್ವೇತಾ ಅವರ ಸಹವಾಸದ ಪ್ರಾರಂಭವನ್ನು ಗುರುತಿಸಿತು. ವಿಜಯ್ ಯೇಸುದಾಸ್ ಅವರೊಂದಿಗಿನ "ನೀ ಪಾರ್ಥ ವಿಳಿಗಲ್" ಪ್ರಣಯ ಯುಗಳ ಗೀತೆಯು ಬಿಡುಗಡೆಯಾದಾಗ ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿತ್ತು.<ref>{{Cite web|title=Review: 3's music is more than Kolaveri Di|url=https://www.rediff.com/movies/review/music-review-three/20111226.htm|website=Rediff|language=en|access-date=2019-09-28|df=dmy-all}}</ref> ಔಸೇಪ್ಪಚನ್ ಸಂಯೋಜಿಸಿದ ಅರಿಕೆ ಚಿತ್ರದ ಮಲಯಾಳಂ ಹಾಡು "ಶ್ಯಾಮ ಹರೇ" ಅವರ ಹಾಡುವಿಕೆಗೆ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು ಮತ್ತು ಅತ್ಯುತ್ತಮ ಗಾಯಕಿಗಾಗಿ ಎರಡನೇ ಫಿಲ್ಮ್ಫೇರ್ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು.<ref>[http://ibnlive.in.com/news/filmfare-awards-south-dhanush-eega-win-big-awards/408186-71-177.html Filmfare Awards (South): The complete list of Winners<!-- Bot generated title -->] {{webarchive|url=https://web.archive.org/web/20150510051756/http://ibnlive.in.com/news/filmfare-awards-south-dhanush-eega-win-big-awards/408186-71-177.html |date=10 May 2015 }}</ref> "ನೀ ಪಾರ್ಥ" ಮತ್ತು "ಶ್ಯಾಮ ಹರೇ" ಎರಡೂ ಅವರ ಹಿನ್ನೆಲೆ ಗಾಯನಕ್ಕಾಗಿ 2 ನೇ SIIMA ಪ್ರಶಸ್ತಿಗಳಲ್ಲಿ ಮೊದಲ ನಾಮನಿರ್ದೇಶನಗಳನ್ನು ಗಳಿಸಿದವು.<ref>{{cite web |url=http://www.thehindu.com/features/cinema/stars-in-sharjah/article5128642.ece |title=Stars in Sharjah |work=The Hindu |access-date=15 September 2013 |author=Sudish Kamath |archive-date=19 February 2014 |archive-url=https://web.archive.org/web/20140219131946/http://www.thehindu.com/features/cinema/stars-in-sharjah/article5128642.ece |url-status=live }}</ref> 2013 ರಲ್ಲಿ, ಸಂಗೀತ ನಿರ್ದೇಶಕರಾದ ದೇವಿ ಶ್ರೀ ಪ್ರಸಾದ್, ಘಿಬ್ರಾನ್, ಜೇಮ್ಸ್ ವಸಂತನ್, ಎಸ್. ಎ. ರಾಜ್ಕುಮಾರ್, ಶಹಬಾಜ್ ಅಮನ್, ಅಲೆಕ್ಸ್ ಪಾಲ್, ಪ್ರಶಾಂತ್ ಪಿಳ್ಳೈ ಮತ್ತು ರಮಣ ಗೋಗುಲಾ ಅವರೊಂದಿಗಿನ ಅವರ ಸಹಯೋಗವು ಅವರ ಸಂಯೋಜನೆಗಳಲ್ಲಿ ಅವರಿಗೆ ಹಾಡುಗಳನ್ನು ನೀಡುವ ಮೂಲಕ ವಿಸ್ತರಿಸಿತು. ಭರತ್ ಬಾಲ ನಿರ್ದೇಶಿಸಿದ ಬದುಕುಳಿಯುವ ನಾಟಕ ಚಿತ್ರ ಮರಿಯನ್ ಎ. ಆರ್. ರೆಹಮಾನ್ ಸಂಯೋಜಿಸಿದ ಮತ್ತು ವಿಜಯ್ ಪ್ರಕಾಶ್ ಅವರೊಂದಿಗೆ ಸಹ-ಗಾಯನದ "ಇನ್ನುಂ ಕೊಂಜಂ ನೇರಂ" ಹಾಡಿನೊಂದಿಗೆ ಅವರ ಹಾಡುವ ವೃತ್ತಿಯನ್ನು ಮತ್ತಷ್ಟು ಹೆಚ್ಚಿಸಿತು. ಹಾಡು ಅದರ ಬಿಡುಗಡೆಯ ಒಂದು ತಿಂಗಳ ನಂತರವೂ ರೇಡಿಯೋ ಮಿರ್ಚಿ ಸೌತ್ ಟಾಪ್ 20 ಚಾರ್ಟ್ನಲ್ಲಿ 18 ನೇ ಸ್ಥಾನದಲ್ಲಿ ಉತ್ತಮ ಸ್ಥಾನವನ್ನು ಪಡೆಯಿತು.<ref>{{cite web |url=http://www.radiomirchi.com/chennai/countdown/tamil-top-20|title=TAMIL TOP 20 – Radio Mirchi|publisher=radiomirchi.com|date=19 June 2013|access-date=19 June 2013}}</ref><ref>{{cite tweet|user=bharatbala|author=Bharatbala Ganapathy|number=342940705922101250|date=7 June 2013|title=Maryan song Kadal Rasa no #1 on RadioMirchi top 20.}}</ref> ಅವರು 8 ನೇ ವಿಜಯ್ ಪ್ರಶಸ್ತಿಗಳು ಮತ್ತು 3 ನೇ SIIMA ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿ ಸಮಾರಂಭಗಳಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ವಿಭಾಗದಲ್ಲಿ ನಾಮನಿರ್ದೇಶನಗೊಂಡರು.<ref>{{cite web|title=And-the-SIIMA-Awards-go-to|url=http://timesofindia.indiatimes.com/entertainment/kannada/movies/news/And-the-SIIMA-Awards-go-to-/articleshow/42532423.cms|website=indiatimes|date=16 September 2014 |publisher=timesofindia|access-date=12 October 2015|archive-date=19 September 2014|archive-url=https://web.archive.org/web/20140919095812/http://timesofindia.indiatimes.com/entertainment/kannada/movies/news/And-the-SIIMA-Awards-go-to-/articleshow/42532423.cms|url-status=live}}</ref> ಅವರು ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರ ಡೇವಿಡ್ನಲ್ಲಿ "ಯುನ್ ಹಿ ರೆ" ಹಾಡಿನೊಂದಿಗೆ ತಮ್ಮ ಬಾಲಿವುಡ್ ಚೊಚ್ಚಲ ಪ್ರವೇಶವನ್ನು ಮಾಡಿದರು. 2014 ರಲ್ಲಿ, ಅವರ ಅತಿದೊಡ್ಡ ಯಶಸ್ಸುಗಳಲ್ಲಿ ಎ. ಆರ್. ರೆಹಮಾನ್ ಸಂಗೀತ ಚಿತ್ರ ಕಾವಿಯ ತಲೈವನ್ ನಿಂದ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಪಡೆದ "ಯಾರುಮಿಲ್ಲ" ಮತ್ತು ಚಿತ್ರ ಒಟ್ಟಮಂದರಂನಿಂದ "ಒನ್ನನಾಂ ಕೊಂಬಾತೆ" ಸೇರಿವೆ. ಈ ಎರಡೂ ಹಾಡುಗಳು ವಿವಿಧ ಪ್ರಶಸ್ತಿ ಸಮಾರಂಭಗಳಲ್ಲಿ ಹಲವಾರು ನಾಮನಿರ್ದೇಶನಗಳು ಮತ್ತು ಪ್ರಶಸ್ತಿಗಳನ್ನು ಅವರಿಗೆ ತಂದುಕೊಟ್ಟವು.
2015 ರಲ್ಲಿ ಬಿಡುಗಡೆಯಾದ ಚಿತ್ರ ತಂಗ ಮಗನ್ ಅನಿರುದ್ಧ್ ರವಿಚಂದರ್ ಸಂಯೋಜಿಸಿದ ಅವರ ಏಕವ್ಯಕ್ತಿ ಹಾಡು "ಎನ್ನ ಸೊಲ್ಲ" ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಮೂರನೇ ಫಿಲ್ಮ್ಫೇರ್ ಪ್ರಶಸ್ತಿಯನ್ನು ಮತ್ತು ಮೊದಲ SIIMA ಪ್ರಶಸ್ತಿಯನ್ನು ಗೆದ್ದುಕೊಳ್ಳುವ ಮೂಲಕ ಶ್ವೇತಾ ಅವರ ಹಿನ್ನೆಲೆ ಗಾಯನ ವೃತ್ತಿಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಬೀತುಪಡಿಸಿತು.<ref>{{Cite web |date=18 June 2016 |title=Winners of the 63rd Britannia Filmfare Awards (South) |url=https://www.filmfare.com/news/winners-of-the-63rd-britannia-filmfare-awards-south-13996.html |url-status=live |archive-url=https://web.archive.org/web/20250919185059/https://www.filmfare.com/news/winners-of-the-63rd-britannia-filmfare-awards-south-13996.html |archive-date=19 September 2025 |access-date=30 September 2025 |website=[[Filmfare]] |language=en}}</ref> ಅವರು ಬಾಹುಬಲಿ: ದಿ ಬಿಗಿನಿಂಗ್ನ ಮಲಯಾಳಂ ಡಬ್ ಮಾಡಿದ ಆವೃತ್ತಿಯಲ್ಲಿ ಹಾಡುಗಳನ್ನು ಹಾಡಲು ಅವಕಾಶ ಪಡೆದರು. ಆ ವರ್ಷದ ಅವರ ಇತರ ಮಲಯಾಳಂ ಯಶಸ್ಸುಗಳು ಭಾಸ್ಕರ್ ದಿ ರಾಸ್ಕಲ್ ಮತ್ತು ಅನಾರ್ಕಲಿ ಚಿತ್ರಗಳಿಂದ ಬಂದವು. ಜಯಂತ್ ಕೈಕಿನಿ ಬರೆದ ಮತ್ತು ವಿ. ಹರಿಕೃಷ್ಣ ಸಂಯೋಜಿಸಿದ ಚಿತ್ರ ಕೆಂದಸಂಪಿಗೆಗಾಗಿ ಕನ್ನಡ ಹಾಡು "ಕನಸಲಿ ನಡೆಸು" ಬಿಡುಗಡೆಯಾದಾಗ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು. 2016 ರ ವರ್ಷವು ಸಂತೋಷ್ ನಾರಾಯಣನ್ ಅವರೊಂದಿಗಿನ ಅವರ ಮೊದಲ ಸಹಯೋಗದೊಂದಿಗೆ ಕಬಾಲಿ ಮತ್ತು ಕೋಡಿ ಚಿತ್ರಗಳೊಂದಿಗೆ ಪ್ರಾರಂಭವಾಯಿತು. ಮೊದಲನೆಯದು ರಜಿನೀಕಾಂತ್ ಅಭಿನಯದ ಚಿತ್ರವಾಗಿದ್ದು, "ಮಾಯಾ ನಾಧಿ" ಹಾಡು ಅತ್ಯುತ್ತಮ ಗಾಯಕಿಗಾಗಿ ನಾಲ್ಕನೇ ಫಿಲ್ಮ್ಫೇರ್ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು.<ref>{{Cite web|url=https://www.filmfare.com/awards/filmfare-awards-south-2017/tamil/nominations|title=Filmfare Awards South 2017 Tamil Nominations {{!}} Filmfare|website=filmfare.com|language=en|access-date=2019-09-28}}</ref><ref>{{Cite web|url=https://www.filmfare.com/news/winners-of-the-64th-jio-filmfare-awards-south-21594.html|archive-url=https://web.archive.org/web/20180617113606/https://www.filmfare.com/news/winners-of-the-64th-jio-filmfare-awards-south-21594.html|url-status=dead|archive-date=2018-06-17|title=Winners of the 64th Jio Filmfare Awards (South) {{!}} filmfare.com|date=2018-06-17|access-date=2019-09-28}}</ref> ಈ ವರ್ಷ ಶ್ವೇತಾ ಅವರು ನೇನು ಸೈಲಜ, ಜನತಾ ಗ್ಯಾರೇಜ್ ನಂತಹ ದೊಡ್ಡ ತೆಲುಗು ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಮತ್ತು ವೈಟ್, ತೋಪ್ಪಿಲ್ ಜೋಪ್ಪನ್ ಮತ್ತು ಆಕ್ಷನ್ ಹೀರೋ ಬಿಜು ನಂತಹ ಮಲಯಾಳಂ ಚಿತ್ರಗಳಲ್ಲಿ ಸಹವಾಸ ಹೊಂದಿದ್ದರು. ಬಿಜಿಬಾಲ್ ಸಂಯೋಜಿಸಿದ ಮಲಯಾಳಂ ಚಿತ್ರ ಮುಂತಿರಿವಳ್ಳಿಕಲ್ ತಾಳಿರ್ಕ್ಕುಂಬೋಲ್ (2017) ನ "ಒರು ಪುಳಯಾರಿಕಿಲ್" ಹಾಡು ಅವರಿಗೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಎ. ಆರ್. ರೆಹಮಾನ್ ಸಂಯೋಜಿಸಿದ ಮೆರ್ಸಲ್ (2017) ನ "ಮಾಚೋ ಎನ್ನಾಚೋ" ಹಾಡು ಗಾಯಕ ಸಿದ್ ಶ್ರೀರಾಮ್ ಅವರೊಂದಿಗಿನ ಅವರ ಮೊದಲ ಯುಗಳ ಗೀತೆಯನ್ನು ನೀಡಿತು ಮತ್ತು ಫಿಲ್ಮ್ಫೇರ್ ಪ್ರಶಸ್ತಿ ನಾಮನಿರ್ದೇಶನವನ್ನು ಸಹ ಗಳಿಸಿತು.<ref>{{cite web|date=4 June 2018|title=Nominations for the 65th Jio Filmfare Awards (South) 2018|url=https://www.filmfare.com/features/nominations-for-the-65th-jio-filmfare-awards-south-2018_-28652-1.html|url-status=live|work=[[Filmfare]]|accessdate=4 June 2018|archiveurl=https://web.archive.org/web/20180604163156/https://www.filmfare.com/features/nominations-for-the-65th-jio-filmfare-awards-south-2018_-28652.html|archivedate=4 June 2018}}</ref><ref>{{cite news|date=17 June 2018|title=Winners: 65th Jio Filmfare Awards (South) 2018|work=[[The Times of India]]|url=https://timesofindia.indiatimes.com/entertainment/tamil/movies/news/winners-65th-jio-filmfare-awards-south-2018/articleshow/64617904.cms|url-status=live|accessdate=17 June 2018|archiveurl=https://web.archive.org/web/20180617071126/https://timesofindia.indiatimes.com/entertainment/tamil/movies/news/winners-65th-jio-filmfare-awards-south-2018/articleshow/64617904.cms|archivedate=17 June 2018}}</ref> ಸಂತೋಷ್ ನಾರಾಯಣನ್ ಅವರು ತಮಿಳು ಚಿತ್ರ ಕಾಲ (2018) ನ ತೆಲುಗು ಮತ್ತು ಹಿಂದಿ ಡಬ್ ಮಾಡಿದ ಆವೃತ್ತಿಯ ಹಾಡುಗಳನ್ನು ಹಾಡಲು ಅವರನ್ನು ಕರೆದರು. 2019 ರಲ್ಲಿ, ಅವರು ತೆಲುಗು ಚಿತ್ರ ಸಾಹೋಗಾಗಿ ಬಾಲಿವುಡ್ ಸಂಯೋಜಕರಾದ ಶಂಕರ್-ಮಹಾದೇವನ್-ಲೋಯ್ ಅವರೊಂದಿಗೆ ಸಹಕರಿಸಿದರು. ಅವರ ಹಾಡುಗಳು "ಏಥೋ ಮಝಯಿಲ್" (ಮಲಯಾಳಂ ಚಿತ್ರ ವಿಜಯ್ ಸೂಪರಮ್ ಪೌರ್ಣಮಿಯಮ್) ಮತ್ತು "ಝುಮ್ಮಾ ಝುಮ್ಮಾ" (ಕನ್ನಡ ಚಿತ್ರ ಕುರುಕ್ಷೇತ್ರ) ಅದೇ ವರ್ಷದಲ್ಲಿ ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿದ್ದವು. ಅವರು 2020 ರಲ್ಲಿ ಆಲ್ ಮಲ್ಲು, ವರಣೆ ಅವಶ್ಯಮುಂಡ್, ಕಪ್ಪೇಲ ಮತ್ತು ನಾಡೋಡಿಗಲ್ 2 ಸೇರಿದಂತೆ ಮಲಯಾಳಂ ಮತ್ತು ತಮಿಳು ಚಿತ್ರಗಳಿಗೆ ಜನಪ್ರಿಯ ಹಾಡುಗಳನ್ನು ಹಾಡುವುದನ್ನು ಮುಂದುವರಿಸಿದರು.
====2021–ಪ್ರಸ್ತುತ: ಬಹುಭಾಷಾ ಹಾಡುಗಳು ಮತ್ತು ವೃತ್ತಿ ವಿಸ್ತರಣೆಗಳು====
2021 ರಲ್ಲಿ, ಶ್ವೇತಾ ಅವರು ಎರಡು ಬಹುಭಾಷಾ ಚಿತ್ರಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದರು: ಮರಕ್ಕರ್ - ಅರಬಿಕ್ಕಡಲಿಂಟೆ ಸಿಂಹಂ ಮತ್ತು 99 ಸಾಂಗ್ಸ್. ಮೊದಲಿನ ಹಾಡು ರೋನಿ ರಾಫೆಲ್ ಸಂಯೋಜಿಸಿದ್ದು, ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅವರ ಧ್ವನಿಯನ್ನು ಒಳಗೊಂಡಿತ್ತು. ಎರಡನೆಯದು, ಎ. ಆರ್. ರೆಹಮಾನ್ ನಿರ್ಮಿಸಿ ಸಂಯೋಜಿಸಿದ್ದು, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ರೆಕಾರ್ಡ್ ಮಾಡಲಾಯಿತು. ಇದರ ನಂತರ 2022 ರಲ್ಲಿ ಚಿತ್ರ ಮಲಯಂಕುಂಜುಗಾಗಿ ರೆಹಮಾನ್ ಅವರ ಮತ್ತೊಂದು ಸಂಯೋಜನೆಯು ಬಂದಿತು. "ಮನ್ನುಂ ನಿರಂಜೆ" ಹಾಡು ಶ್ವೇತಾ ಅವರ ಧ್ವನಿಯಲ್ಲಿ ಇತರ ವಿವಿಧ ಭಾಷೆಗಳಲ್ಲಿ ರೆಕಾರ್ಡ್ ಮಾಡಲಾಯಿತು.
2023 ರಲ್ಲಿ, ಶ್ವೇತಾ ಅವರು ತಮ್ಮ ತಮಿಳು-ತೆಲುಗು ದ್ವಿಭಾಷಾ ಚಿತ್ರ ವಾಥಿಗಾಗಿ ಧನುಷ್ ಮತ್ತು ಜಿ. ವಿ. ಪ್ರಕಾಶ್ ಕುಮಾರ್ ಅವರೊಂದಿಗೆ ಮತ್ತೆ ಜೊತೆಯಾದರು. "ವಾ ವಾಥಿ" (ತೆಲುಗಿನಲ್ಲಿ "ಮಸ್ತಾರು ಮಸ್ತಾರು") ಹಾಡು ಶ್ವೇತಾ ಅವರಿಗೆ ಆನಂದ ವಿಕಟನ್ ಸಿನೆಮಾ ಪ್ರಶಸ್ತಿಗಳು<ref>{{Cite web |date=21 May 2024 |title=Ananda Vikatan Cinema Awards 2023 |url=https://awards.vikatan.com/cinema-awards |url-status=live |archive-url=https://web.archive.org/web/20240521163957/https://awards.vikatan.com/cinema-awards |archive-date=21 May 2024 |access-date=23 August 2024 |publisher=[[Ananda Vikatan Cinema Awards]]}}</ref> ಮತ್ತು ಫಿಲ್ಮ್ಫೇರ್ ಪ್ರಶಸ್ತಿ ದಕ್ಷಿಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಟ್ಟಿತು.<ref>{{Cite news |date=4 August 2024 |title=69th Sobha Filmfare Awards South 2024: Check out the winners |url=https://timesofindia.indiatimes.com/entertainment/tamil/movies/news/69th-sobha-filmfare-awards-south-2024-check-out-the-winners/articleshow/112251936.cms |url-status=live |archive-url=https://web.archive.org/web/20240804052432/https://timesofindia.indiatimes.com/entertainment/tamil/movies/news/69th-sobha-filmfare-awards-south-2024-check-out-the-winners/articleshow/112251936.cms |archive-date=4 August 2024 |access-date=23 August 2024 |work=[[The Times of India]] |issn=0971-8257}}</ref> ಅವರು IIFA ಉತ್ಸವಂ ಮತ್ತು SIIMA ಪ್ರಶಸ್ತಿಗಳಲ್ಲಿ (ತಮಿಳು ಮತ್ತು ತೆಲುಗು ಹಾಡುಗಳಿಗೆ) ನಾಮನಿರ್ದೇಶನಗೊಂಡರು.<ref>{{Cite web |date=16 September 2024 |title=SIIMA Awards 2024 Tamil complete winners list: Jailer named Best Film; Vikram, Nayanthara, Aishwarya Rai win Best Actor awards |url=https://indianexpress.com/article/entertainment/tamil/siima-awards-2024-tamil-complete-winners-list-jailer-best-film-vikram-nayanthara-aishwarya-rai-best-actor-awards-9570253/ |url-status=live |archive-url=https://web.archive.org/web/20240921070446/https://indianexpress.com/article/entertainment/tamil/siima-awards-2024-tamil-complete-winners-list-jailer-best-film-vikram-nayanthara-aishwarya-rai-best-actor-awards-9570253/ |archive-date=21 September 2024 |access-date=17 October 2024 |website=[[The Indian Express]]}}</ref> ಅವರು ಪೊನ್ನಿಯಿನ್ ಸೆಲ್ವನ್: II, ಆದಿಪುರುಷ್, ಲಕ್ಕಿ ಬಾಸ್ಕರ್, ಶಾಕುಂತಲಂ ಮತ್ತು ವಲತ್ತಿ ನಂತಹ ಪ್ಯಾನ್-ಇಂಡಿಯನ್ ಚಿತ್ರಗಳಲ್ಲಿ ವಿವಿಧ ಹಾಡುಗಳನ್ನು ರೆಕಾರ್ಡ್ ಮಾಡುವುದನ್ನು ಮುಂದುವರಿಸಿದರು.
"ವಾಟರ್ ಪ್ಯಾಕೆಟ್" (ರಾಯನ್, ಎ. ಆರ್. ರೆಹಮಾನ್ ಸಂಯೋಜಿಸಿದ) ಮತ್ತು "ಹೇ ಮಿನ್ನಾಲೆ" (ಅಮರನ್, ಜಿ. ವಿ. ಪ್ರಕಾಶ್ ಕುಮಾರ್ ಸಂಯೋಜಿಸಿದ) ಹಾಡುಗಳು 2024 ರಲ್ಲಿ ಸಂಗೀತ ಚಾರ್ಟ್ಗಳಲ್ಲಿ ಅಗ್ರಸ್ಥಾನದಲ್ಲಿದ್ದವು. ಅವರ ಜಿ. ವಿ. ಪ್ರಕಾಶ್ ಕುಮಾರ್ ಅವರೊಂದಿಗಿನ ಸಹಯೋಗವು 2025 ರಲ್ಲಿ "ಕಲ್ಲೂರುಂ" (ವೀರ ಧೀರ ಸೂರನ್: ಭಾಗ 2) ಮತ್ತು "ಎನ್ನ ಸುಗಮ್" (ಇಡ್ಲಿ ಕಡೈ) ನಂತಹ ಜನಪ್ರಿಯ ಹಾಡುಗಳನ್ನು ಮತ್ತಷ್ಟು ನಿರ್ಮಿಸಿತು. ಅವರು ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಅವರೊಂದಿಗೆ ತಮ್ಮ ಸ್ವಂತ ಮಲಯಾಳಂ ಹಾಡಾದ "ಪೊಟ್ಟು ತೋಟ್ಟ ಪೌರ್ಣಮಿ" ಯ ತಮಿಳು ಆವೃತ್ತಿಗಾಗಿ ಚಿತ್ರ ಮಾಮನ್ ನಲ್ಲಿ ಸಹಕರಿಸಿದರು.
===ಸ್ವತಂತ್ರ ಸಿಂಗಲ್ಗಳು ಮತ್ತು ವೇದಿಕೆ ಪ್ರದರ್ಶನಗಳು===
[[File:SwethaMohan performs.jpg|thumb|right|upright|250px|alt=Shwetha performing on stage|ಶ್ವೇತಾ ಅವರು ಸಂಗೀತ ಕಚೇರಿಯೊಂದರಲ್ಲಿ ಪ್ರದರ್ಶನ ನೀಡುತ್ತಿದ್ದಾರೆ]]
ಚಲನಚಿತ್ರ ಹಿನ್ನೆಲೆ ಗಾಯನದ ಜೊತೆಗೆ, ಶ್ವೇತಾ ಅವರು ಸ್ವತಂತ್ರ ಪಾಪ್ ಸಿಂಗಲ್ಗಳನ್ನು ಸಕ್ರಿಯವಾಗಿ ಪ್ರದರ್ಶಿಸುತ್ತಿದ್ದಾರೆ ಮತ್ತು ನಿರ್ಮಿಸುತ್ತಿದ್ದಾರೆ.<ref>{{cite web|url=https://indianexpress.com/article/entertainment/tamil/singer-shweta-mohan-on-yaavum-enadhe-single-5246791/|title=The independent music scene is a blessing for musicians and music lovers: Shweta Mohan|work=IndianExpress.com|date=5 July 2018}}</ref> ಅವರ ಮೊದಲ ಸಿಂಗಲ್ 2018 ರಲ್ಲಿ ಬಿಡುಗಡೆಯಾದ ತಮಿಳು-ಹಿಂದಿ ದ್ವಿಭಾಷಾ "ಯಾವುಂ ಎನಾಧೆ"/"ಸಬ್ ಮೇರಾ ಹೈ" ಆಗಿದ್ದು, ಗಿಟಾರ್ ವಾದಕ ಬೆನೆಟ್ ರೋಲ್ಯಾಂಡ್ ಸಂಯೋಜಿಸಿದ್ದಾರೆ, ಅವರೊಂದಿಗೆ ಅವರು ದೀರ್ಘಕಾಲದ ಸಹವಾಸವನ್ನು ಹೊಂದಿದ್ದರು ಮತ್ತು ಹಲವಾರು ಬಾರಿ ಜಾಮ್ ಸೆಷನ್ಗಳನ್ನು ನಡೆಸಿದ್ದರು.<ref>{{cite web|url=https://www.thenewsminute.com/flix/i-m-happy-space-now-shweta-mohan-releases-her-first-indie-single-yaavum-enadhe-83836|title='I'm in a happy space now': Shweta Mohan releases her first indie single 'Yaavum Enadhe'|work=TheNewsMinute.com|date=28 June 2018}}</ref> ಅವರ ಮುಂದಿನ ಸಿಂಗಲ್, "ಅಮ್ಮ" ಅನ್ನು 2023 ರಲ್ಲಿ ತಮ್ಮ ತಾಯಿ ಸುಜಾತಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದ್ದಕ್ಕೆ ಸಮರ್ಪಣೆಯಾಗಿ ಬಿಡುಗಡೆ ಮಾಡಲಾಯಿತು. 2025 ರಲ್ಲಿ, ಅವರು ಸಂಗೀತ ನಿರ್ದೇಶಕ ವಿದ್ಯಾಸಾಗರ್ ಅವರೊಂದಿಗೆ ತಮ್ಮ ಮುಂದಿನ ಸಿಂಗಲ್ "ಮಾತೆಯ್" ಅನ್ನು ಸಂಯೋಜಿಸಲು ಸಹಕರಿಸಿದರು, ಇದರಲ್ಲಿ ಸುಜಾತಾ ಮೋಹನ್ ಅವರು ಕಾಣಿಸಿಕೊಂಡಿದ್ದಾರೆ.<ref>{{cite web|url=https://english.mathrubhumi.com/movies-music/news/sujatha-shweta-pearle-on-husbands-being-their-biggest-support-ad2c7191|title='He slept on the studio floor for me': Sujatha Mohan reveals 3 men behind her success|work=Mathrubhumi.com|date=14 April 2025}}</ref> ನಂತರ, ಅದೇ ವರ್ಷ, ಅವರು ತಮ್ಮ ಮುಂದಿನ ತಮಿಳು-ಹಿಂದಿ ದ್ವಿಭಾಷಾ ಸಿಂಗಲ್ ಅನ್ನು "ಐ ಲವ್ ಯು ಸೊಲ್ಲಡ" (ತಮಿಳು) /"ಐ ಲವ್ ಯು ಲವ್ ಯು ರೆ" (ಹಿಂದಿ) ಎಂದು ಸಂಯೋಜಿಸಿ ಹಾಡಿದರು.
ಶ್ವೇತಾ ಅವರು ಲೈವ್ ಸಂಗೀತ ಕಚೇರಿಗಳಲ್ಲಿ ವ್ಯಾಪಕವಾಗಿ ಪ್ರದರ್ಶನ ನೀಡುತ್ತಿದ್ದಾರೆ, ವಿಶೇಷವಾಗಿ ಸಂಗೀತ ನಿರ್ದೇಶಕರಾದ ಎ. ಆರ್. ರೆಹಮಾನ್, ಇಳಯರಾಜ ಮತ್ತು ವಿದ್ಯಾಸಾಗರ್ ಅವರೊಂದಿಗೆ ವಿಶ್ವ ಪ್ರವಾಸ ಮಾಡುತ್ತಿದ್ದಾರೆ.<ref>{{cite web|url=https://www.indiatoday.in/movies/regional-cinema/story/singer-shweta-mohan-on-ar-rahman-concert-does-he-deserve-perpetrators-2434590-2023-09-12|title=Singer Shweta Mohan on AR Rahman concert|work=Indiatoday.com|date=12 September 2023}}</ref> ಅವರು ತಮ್ಮ ಕಲಾತ್ಮಕ ಅಭಿವ್ಯಕ್ತಿಯ "ಹೃದಯ ಬಡಿತ" ಎಂದು ಲೈವ್ ಪ್ರದರ್ಶನಗಳನ್ನು ವಿವರಿಸಿದ್ದಾರೆ, ಪ್ರೇಕ್ಷಕರೊಂದಿಗಿನ ಶಕ್ತಿ ಮತ್ತು ಸಂಪರ್ಕವನ್ನು ಒತ್ತಿಹೇಳಿದ್ದಾರೆ, ಆದಾಗ್ಯೂ ಅವರು ಸ್ಟುಡಿಯೊದಲ್ಲಿ ವಿರುದ್ಧವಾಗಿ ಕೆಲವು ಹಾಡುಗಳನ್ನು ಲೈವ್ ಪ್ರದರ್ಶಿಸುವ ಬಗ್ಗೆ ಹಿಂಜರಿಕೆಯನ್ನು ವ್ಯಕ್ತಪಡಿಸಿದ್ದಾರೆ.<ref>{{cite web|url=https://www.thehindu.com/features/metroplus/going-live-and-solo/article3938770.ece|title=Going 'live' and solo|work=TheHindu.com|date=26 September 2012}}</ref>
==ವೈಯಕ್ತಿಕ ಜೀವನ==
ಶ್ವೇತಾ ಅವರು ತಮ್ಮ ದೀರ್ಘಕಾಲದ ಸ್ನೇಹಿತ ಮತ್ತು ಸಾಫ್ಟ್ವೇರ್ ಎಂಜಿನಿಯರ್-ಉದ್ಯಮಿ ಆಶ್ವಿನ್ ಶಶಿ ಅವರನ್ನು 16 ಜನವರಿ 2011 ರಂದು ವಿವಾಹವಾದರು.<ref>{{cite web|url=https://timesofindia.indiatimes.com/entertainment/regional/movie-details/news-interviews/shweta-mohan-ties-the-knot/articleshow/7310563.cms|title=Shweta Mohan ties the knot|work=TheTimesofIndia.com|date=18 January 2011}}</ref><ref>[https://web.archive.org/web/20140116160801/http://www.newindianexpress.com/cities/kochi/article550048.ece A Timeless Melody], ''The New Indian Express'' (25 June 2012). Retrieved on 25 August 2019.</ref> ಈ ದಂಪತಿಗೆ ಒಬ್ಬ ಪುತ್ರಿಯಿದ್ದಾರೆ.<ref name=mathrubhumi>[http://english.mathrubhumi.com/movies-music/movie-news/singer-shweta-mohan-blessed-with-a-baby-girl-1.2427172 Singer Shweta Mohan blessed with a baby n girl named Sreshta] {{Webarchive|url=https://web.archive.org/web/20180521122805/http://english.mathrubhumi.com/movies-music/movie-news/singer-shweta-mohan-blessed-with-a-baby-girl-1.2427172 |date=21 May 2018 }}. English.mathrubhumi.com (1 December 2017). Retrieved on 2019-08-25.</ref>
==ಧ್ವನಿಮುದ್ರಿಕೆ==
=== ಶ್ವೇತಾ ಮೋಹನ್ ಅವರು ರೆಕಾರ್ಡ್ ಮಾಡಿದ ಕನ್ನಡ ಹಾಡುಗಳ ಪಟ್ಟಿ ===
[[File:SwethaMohan.jpg|thumb|200px|ಶ್ವೇತಾ ಮೋಹನ್]]
'''ಶ್ವೇತಾ ಮೋಹನ್''' (ಜನನ 19 ನವೆಂಬರ್ 1985) ಭಾರತೀಯ ಹಿನ್ನೆಲೆ ಗಾಯಕಿ. ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿಗಳನ್ನು (ದಕ್ಷಿಣ), ಒಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ, ಮತ್ತು ಒಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಲನಚಿತ್ರ ಸಂಗೀತ ಮತ್ತು ಆಲ್ಬಂಗಳಿಗೆ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಅವರ ಸ್ಫೂರ್ತಿಗಳಲ್ಲಿ ಸುಜಾತಾ ಮೋಹನ್ (ಅವರ ತಾಯಿ), ಅಲ್ಕಾ ಯಾಗ್ನಿಕ್ ಮತ್ತು ಕೆ.ಎಸ್. ಚಿತ್ರಾ ಸೇರಿದ್ದಾರೆ.<ref>{{cite news|url=https://timesofindia.indiatimes.com/entertainment/hindi/music/news/Shweta-Mohan-is-happy/etarticleshow/5513702.cms|archive-url=https://web.archive.org/web/20110811062128/http://articles.timesofindia.indiatimes.com/2010-01-30/news-and-interviews/28126139_1_awards-galore-ashwin-music|url-status=live|archive-date=11 August 2011|title=Shweta Mohan is happy|date=30 January 2010|work=[[The Times of India]]|access-date=7 May 2010|first1=Sindhu|last1=Vijayakumar}}</ref>
{{TOC limit|2}}
== ಚಲನಚಿತ್ರ ಹಾಡುಗಳು ==
===2007===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಸಜಿನಿ''
|1
| "ಲವ್ಲಿ ಲಂಡನ್"
|ಎ. ಆರ್. ರೆಹಮಾನ್
|ಬೆಲ್ಲೂರಿ ರಾಮಮೂರ್ತಿ
|
|-
!''ರೈಟ್ ಆದ್ರೆ''
|2
| "ಗುಸು ಗುಸು"
|ನೀಲ್
|ಮಯೂರ
|ನರೇಶ್ ಅಯ್ಯರ್
|}
===2008===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಅರಮನೆ''
|3
| "ಪಾತ್ರ ಬರೇಯಾಲ"
|ಗುರುಕಿರಣ್
|rowspan="2"|ಕವಿರಾಜ್
|rowspan="3"|ಕಾರ್ತಿಕ್
|-
! rowspan="2" |''ಪುಕ್''
|4
| "ನಾವಿರುವಾಡು ಹೀಗೆ"
|rowspan="2"|ಜೆ ರವಿರಾಜ್
|-
|5
| "ಯೆಡಯೆಂತ"
|ಹಂಸಲೇಖ
|-
!''ಅಂಜದಿರು''
|6
| "ಮನಸ್ಸಾಲು ಮನಸ್ಸಾಲು"
|ಸುಂದರ್ ಸಿ ಬಾಬು
|ಪಂಚ ಜನ್ಯ
|
|-
!''ನನ್ನುಸಿರೆ''
|7
| "ನನ್ನುಸಿರೆ"
|ಪ್ರೇಮ್ಜಿ ಗಂಗೈ ಅಮರನ್
|ಹೃದಯ ಶಿವ
|ನವೀನ್
|}
===2010===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
! rowspan="2" |''ಪ್ರಿಥ್ವಿ''
|8
| "ಹೆಜ್ಜೆಗೊಂಡು ಹೆಜ್ಜೆ"
|rowspan="2"|ಮಣಿಕಾಂತ್ ಕದ್ರಿ
|rowspan="3"|ಕವಿರಾಜ್
|rowspan="2"|ಕ್ಲಿಂಟನ್ ಸೆರೆಜೊ, ಬೆನ್ನಿ ದಯಾಲ್
|-
|9
| "ಹೆಜ್ಜೆಗೊಂಡು ಹೆಜ್ಜೆ (ರೀಮಿಕ್ಸ್)"
|-
!''ಗಾಣ ಬಜಾಣ''
|10
| "ಹೊಸದೊಂದು ಹೆಸರಿಡು"
|ಜೋಶುವಾ ಶ್ರೀಧರ್
|ಕಾರ್ತಿಕ್
|-
!''ಏನೋ ಒಂತಾರ''
|11
| "ದಿಲ್ಕುಶ್"
|ವಿ. ಹರಿಕೃಷ್ಣ
|ಜಯಂತ್ ಕೈಕಿನಿ
|ಸೋನು ನಿಗಮ್
|-
!''ಪರೋಲ್''
|12
| "ಜಡುವಾಗಿ"
|ಬಾಲಾಜಿ ಕೆ ಮಿತ್ರನ್
|ಎಸ್. ಬಹುಬಲಿ
|ರಾಜೇಶ್ ಕೃಷ್ಣನ್
|-
!''ಜಮಾನ''
|13
| "ಏಳು ಏಳು ಜನ್ಮಕು"
|ಕಾರ್ತಿಕ್ ರಾಜ
|ಸುದರ್ಶನ್
|ಇಳಯರಾಜ
|}
===2011===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಡಬಲ್ ಡೆಕ್ಕರ್''
|14
| "ಕನಸೆ ನನ್ನ"
|ಜಯಪಾಲ್
|ರಾಮ್ ನಾರಾಯಣ್
|ಅನುರಾಧಾ ಶ್ರೀರಾಮ್
|-
! rowspan="2" |''ದೇವದಾಸ್''
|15
| "ಸಯ್ಯಾರೆ ಸಯ್ಯಾರೆ"
|rowspan="2"|ಜೋಶುವಾ ಶ್ರೀಧರ್
|rowspan="2"|ವಿ. ನಾಗೇಂದ್ರ ಪ್ರಸಾದ್
|rowspan="2"|ಕಾರ್ತಿಕ್
|-
|16
| "ಕೋ ಕೋ"
|}
===2012===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
! rowspan="2" |''ಗಾಡ್ಫಾದರ್''
|17
| "ಸಂಚಾರಿ ಮನಸು"
|rowspan="2"|ಎ ಆರ್ ರೆಹಮಾನ್
|rowspan="2"|ಕೆ. ಕಲ್ಯಾಣ್
|ನಿವಾಸ್
|-
|18
| "ಸರಿಗಮ ಸಂಗಮವೆ"
| ಮೇಘಾ
|-
!''ಅಜಂತ''
|19
| "ಹಕ್ಕ ಬಾ ಒಂದು"
|ಇಳಯರಾಜ
|ಕವಿರಾಜ್
|ತಿಪ್ಪು
|-
!''ನೀನೇನ ಭಗವಂತ''
|20
| "ಚಂದಮಾಮ"
|ಗಿರಿಧರ್ ದಿವಾನ್
|ಪ್ರೀತಮ್ ಸಾಗರ್
|ರಾಜೇಶ್ ಕೃಷ್ಣನ್
|}
===2013===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಆಂಥರಾಯ''
|21
| "ಏ ನಶೇಯು"
| rowspan="2" |ಗಿರಿಧರ್
|ವಿ. ನಾಗೇಂದ್ರ ಪ್ರಸಾದ್
|ಉದಿತ್ ನಾರಾಯಣ್
|-
!''ಜಿದ್ದಿ''
|22
|"ಒಲವದೆ ನೀನು"
|
|
|-
!''ಸಿಹಿಗಲಿ''
|23
| "ನಿನ್ನ ನೆನದಾರೆ"
|ಟಿ ರವಿರಾಜ್
|ಜಿ ಆರ್ ಶಂಕರ್
|ಸರಸ್ವತಿ ನಾಯ್ಡು
|}
===2014===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಬ್ರಹ್ಮ''
|24
| "ತುಂತ ತುಂತ"
|ಗುರುಕಿರಣ್
|ಕವಿರಾಜ್
|
|-
!''ಕಾ''
|25
|"ಶುರುವಾಯಿತು"(ಮಹಿಳಾ)
|ಆರ್ ಎಸ್ ಗಣೇಶ್ ನಾರಾಯಣ್
|
|
|}
===2015===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ದಕ್ಷ''
|26
|"ಮಮ್ಮಿ ಡ್ಯಾಡಿ"
|ಎಸ್. ನಾರಾಯಣ್
|
|ಹರಿಚರಣ್
|-
!''ಕೆಂದಸಂಪಿಗೆ''
|27
| "ಕನಸಲಿ ನಡೆಸು"
|ವಿ. ಹರಿಕೃಷ್ಣ
|ಜಯಂತ್ ಕೈಕಿನಿ
|ಸ್ವತಂತ್ರ
|-
!''ಕಟ್ಟೆ''
|28
|"ಸನಿಹಕೆ"
|ಎಸ್. ಎ. ರಾಜ್ಕುಮಾರ್
|ನಾಗೇಂದ್ರ ಪ್ರಸಾದ್
|ಉದಿತ್ ನಾರಾಯಣ್
|}
===2016===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಅಪೂರ್ವ''
|29
|"ಪ್ರಪಂಚವು"(ಯುಗಳ)
| colspan="2" |ವಿ ರವಿಚಂದ್ರನ್
|
|-
!''ದೊಡ್ಡಮನೆ ಹುಡ್ಗ''
|30
| "ಕನಸಿವನೆ ನೂರಾರು"
|ವಿ. ಹರಿಕೃಷ್ಣ
|ಜಯಂತ್ ಕೈಕಿನಿ
|ಕಾರ್ತಿಕ್
|}
===2017===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಸಾಹೇಬ''
|31
| "ಸಾಹೇಬ"
|ವಿ. ಹರಿಕೃಷ್ಣ
|rowspan="2"|ಕವಿರಾಜ್
|rowspan="2"|ಕಾರ್ತಿಕ್
|-
!''ಮಾರ್ಚ್ 22''
|32
| "ಎಂದಾರು"
|ಮಣಿಕಾಂತ್ ಕದ್ರಿ
|-
!''ಕಾಲೇಜ್ ಕುಮಾರ್''
|33
| "ಹಸಿ ಬಿಸಿ"
|ಅರ್ಜುನ್ ಜನ್ಯ
|ಜಯಂತ್ ಕೈಕಿನಿ
|ಸ್ವತಂತ್ರ
|-
!''ಜಾನಿ''
|34
| "ಎಲ್ಲೆಲು ನೀನೆ ನೀನೆ"
|ಜಾಸ್ಸಿ ಗಿಫ್ಟ್
|ಶಿವನಂಜೆ ಗೌಡ
|ಉದಿತ್ ನಾರಾಯಣ್
|}
===2018===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
! rowspan="2" |''ಧ್ವಜ''
|35
| "ಅಗಲೆ ಎಷ್ಟೋ"
|rowspan="2"|ಸಂತೋಷ್ ನಾರಾಯಣನ್
|ಕವಿರಾಜ್
|ಸೋನು ನಿಗಮ್
|-
|36
| "ಜೋಗಾಲುವೆ ಜೋಗಾಲುವೆ"
|ಕೆ. ಕಲ್ಯಾಣ್
|
|-
!''ಭೈರವ ಗೀತ''
|37
| "ಮೊದಲ ಮೊದಲ"
|ರವಿ ಶಂಕರ್
|ಅಜ್ಞಾತ
|ವಿಜಯ್ ಪ್ರಕಾಶ್
|-
!''ಎಡಕಲ್ಲು ಗುಡ್ಡದ ಮೇಲೆ''
|38
| "ಬೆಳಕಾಗಿದೆ"
|ಅಶಿಕ್ ಅರುಣ್
|ಗುರುಕಿರಣ್
|
|}
=== 2019 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಕುರುಕ್ಷೇತ್ರ''
|39
| "ಝುಮ್ಮ ಝುಮ್ಮ"
| ವಿ. ಹರಿಕೃಷ್ಣ
| rowspan="3" | ವಿ. ನಾಗೇಂದ್ರ ಪ್ರಸಾದ್
| ಅನುರಾಧಾ ಭಟ್
|-
! rowspan="2" |''ರಂಧಾವ''
|40
|"ಯೆಲ್ಲಿ ನೋಡಲಲ್ಲೆಲ್ಲ"(ಮಹಿಳಾ)
| rowspan="2" |ಶಶಾಂಕ್ ಶೇಷಗಿರಿ
|
|-
|41
|"ಯೆಲ್ಲಿ ನೋಡಲಲ್ಲೆಲ್ಲ"(ಯುಗಳ)
|ಶಶಾಂಕ್ ಶೇಷಗಿರಿ
|-
!''ನನ್ನ ಪ್ರಕಾರ''
|42
| "ನಾ ಆಕರ್ಷಿತಳಾಗಿರುವೆ"
| ಅರ್ಜುನ್ ರಾಮು
|ಕವಿರಾಜ್
| ಸಂತೋಷ್ ವೆಂಕಿ
|-
!''ಲುಂಗಿ''
|43
| "ನಾಗಬೇಡ ಅಂದೆ ನಾನು"
| ಅರ್ಜುನ್ ಲೆವಿಸ್
|
| ಅರ್ಮಾನ್ ಮಲಿಕ್
|}
=== 2021 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ಸೀತಾಯನ''
| 44
|"ಸಂಜೆ ಗಗನ"
|ಪದ್ಮನಾಭ ಭಾರದ್ವಾಜ್
|ಕವಿರಾಜ್
| rowspan="2" |
|-
!''ಟಾಮ್ ಅಂಡ್ ಜೆರ್ರಿ''
|45
|"ಕಾಧಲ್"
|ಮ್ಯಾಥ್ಯೂಸ್ ಮನು
|ಅಥನ್ಯ ರಚನ
|}
=== 2023 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
! scope="col" width=18% | ಟಿಪ್ಪಣಿ(ಗಳು)
|-
!''ಶಾಕುಂತಲಂ''
| 46
|"ಮಧುರ ಗಾಥ ಬಾ"
|ಮಣಿ ಶರ್ಮಾ
|ವರದರಾಜ್ ಚಿಕ್ಕಬಳ್ಳಾಪುರ
|ಸತ್ಯ ಪ್ರಕಾಶ್
|rowspan="3"|ಡಬ್ ಮಾಡಿದ ಆವೃತ್ತಿ
|-
!''ಆದಿಪುರುಷ್''
|47
|"ನಿನ್ನ ಅರಸೋ ನನಗೆ"
|ಅಜಯ್-ಅತುಲ್
|ಪ್ರಮೋದ್ ಮರವಂತೆ
|ಕಾರ್ತಿಕ್
|-
!''ವಲತ್ತಿ''
|48
|"ಸನಿಹ"
|ವರುಣ್ ಸುನಿಲ್
|ಕಿರಣ್ ಕಾವೇರಪ್ಪ
|ಅಯ್ರಾನ್
|-
!''ಬರೀ 10% ಬಡ್ಡಿ''
|49
|"ನಾನು ಮೈಸೂರು ಮಲ್ಲಿಗೆ"
|ಡಾ. ನಾರಾಯಣ್ ಸ್ವಾಮಿ
|ಡಾ. ನಾರಾಯಣ್ ಸ್ವಾಮಿ
|
|-
|}
=== 2024 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ರೋನಿ-ದಿ ರೂಲರ್''
| 50
|"ಸುಗುಣ ಸುಗುಣ"
|ಕದ್ರಿ ಮಣಿಕಾಂತ್
|ಪ್ರಮೋದ್ ಮರವಂತೆ
|
|-
!''ರುದ್ರ ಗರುಡ ಪುರಾಣ''
| 51`
|"ಕಣ್ಣ ಮುಂದೆ ಬಂದು"
|ಕೃಷ್ಣ ಪ್ರಸಾದ್
|ಚಿನ್ಮಯ್ ಭಾವಿಕೇರಿ
|ಕಪಿಲ್ ಕಪಿಲನ್
|-
|}
=== 2025 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ರುದ್ರ ಗರುಡ ಪುರಾಣ''
| 52
|"ಕಣ್ಣ ಮುಂದೆ ಬಂದು"
|ಕೆಪಿ
|ಚಿನ್ಮಯ್ ಭಾವಿಕೇರಿ
|ಕಪಿಲ್ ಕಪಿಲನ್
|-
|}
=== 2026 ===
{| class="wikitable plainrowheaders" width="100%"
|-
! scope="col" width=21% | ಚಿತ್ರ
! ಸಂ.
! scope="col" width=23% | ಹಾಡು
! scope="col" width=20% | ಸಂಗೀತ ನಿರ್ದೇಶಕ(ರು)
! scope="col" width=17% | ಸಾಹಿತ್ಯಕಾರ(ರು)
! scope="col" width=18% | ಸಹ-ಗಾಯಕ(ರು)
|-
!''ರಣಬಾಳಿ'' (ಡಿ)
|53
|"ಏನಯ್ಯ ಸಾಮಿ"
|ಅಜಯ್-ಅತುಲ್
|ವರದರಾಜ್ ಚಿಕ್ಕಬಳ್ಳಾಪುರ
|ಕಾರ್ತಿಕ್
|-
!''ಲೈಫ್ ಟುಡೇ''
|54
|"ನೀನೆ ನೀನೆ"
|ಶ್ರೀಧರ್ ವಿ ಸಂಭ್ರಮ್
|ಕವಿರಾಜ್
|
|-
|}
== ಉಲ್ಲೇಖಗಳು ==
<references />
== ಬಾಹ್ಯ ಕೊಂಡಿಗಳು ==
* [https://www.raaga.com/kannada/singer/Shweta-Mohan ರಾಗದಲ್ಲಿ ಶ್ವೇತಾ ಮೋಹನ್ ಕನ್ನಡ ಹಾಡುಗಳು] {{Webarchive|url=https://web.archive.org/web/20260808211149/https://www.raaga.com/kannada/singer/Shweta-Mohan |date=2026-08-08 }}
[[Category:ಶ್ವೇತಾ ಮೋಹನ್ ರೆಕಾರ್ಡ್ ಮಾಡಿದ ಹಾಡುಗಳ ಪಟ್ಟಿಗಳು|ಕನ್ನಡ]]
[[Category:ಕನ್ನಡ ಭಾಷೆಯ ಹಾಡುಗಳು|ಮೋಹನ್, ಶ್ವೇತಾ]]
== ದೂರದರ್ಶನ ==
{| class="wikitable sortable"
|+ ದೂರದರ್ಶನ ಕಾರ್ಯಕ್ರಮಗಳ ಪಟ್ಟಿ
|-
! scope="col" | ವರ್ಷ
! scope="col" | ಶೀರ್ಷಿಕೆ
! scope="col" | ಪಾತ್ರ
! scope="col" | ಚಾನೆಲ್
! scope="col" class="unsortable" |ಟಿಪ್ಪಣಿಗಳು
|-
|2011–2014
|''ಬಡೆ ಅಚ್ಛೆ ಲಗ್ತೇ ಹೈನ್''
|ಗಾಯಕಿ
|ಸೋನಿ ಟೆಲಿವಿಷನ್
|ತಮಿಳಿನಲ್ಲಿ ಶೀರ್ಷಿಕೆ ಗೀತೆ ಹಾಡಿದ್ದಾರೆ
|-
| rowspan="2" | 2015
|''ಮ್ಯೂಸಿಕ್ ಇಂಡಿಯಾ''
| style="text-align:center;" | ತೀರ್ಪುಗಾರ
|ಏಷ್ಯಾನೆಟ್
|ಗೋಪಿ ಸುಂದರ್, ದೀಪಕ್ ದೇವ್ ಅವರೊಂದಿಗೆ ಕಾರ್ಯಕ್ರಮದ ಸೆಮಿಫೈನಲ್ ಮತ್ತು ಫೈನಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
|-
|''ಬೋಲ್ ಬೇಬಿ ಬೋಲ್''
| style="text-align:center;" | ತೀರ್ಪುಗಾರ
|ಸೂರ್ಯ ಟಿವಿ
|ಗೋಪಿ ಸುಂದರ್ ಅವರೊಂದಿಗೆ
|-
| rowspan="1" | 2018
|''ಸೂಪರ್ ಸಿಂಗರ್ 6''
| style="text-align:center;" |ತೀರ್ಪುಗಾರ
|ವಿಜಯ್ ಟಿವಿ
|ಪಿ. ಉನ್ನಿಕೃಷ್ಣನ್, ಅನುರಾಧಾ ಶ್ರೀರಾಮ್ ಮತ್ತು ಬೆನ್ನಿ ದಯಾಲ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
| rowspan="1" |2019
|''ಸೂಪರ್ ಸಿಂಗರ್ 7''
|ತೀರ್ಪುಗಾರ
|ವಿಜಯ್ ಟಿವಿ
|ಪಿ. ಉನ್ನಿಕೃಷ್ಣನ್, ಅನುರಾಧಾ ಶ್ರೀರಾಮ್ ಮತ್ತು ಬೆನ್ನಿ ದಯಾಲ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
| rowspan="1" |2020
|ಸೂಪರ್ ಸಿಂಗರ್ ಚಾಂಪಿಯನ್ ಆಫ್ ಚಾಂಪಿಯನ್ಸ್
|ತೀರ್ಪುಗಾರ
|ಸ್ಟಾರ್ ವಿಜಯ್
|
|-
|2021
|''ಸೂಪರ್ ಸಿಂಗರ್ 8''
|ತೀರ್ಪುಗಾರ
|ವಿಜಯ್ ಟಿವಿ
|ಪಿ. ಉನ್ನಿಕೃಷ್ಣನ್, ಅನುರಾಧಾ ಶ್ರೀರಾಮ್ ಮತ್ತು ಬೆನ್ನಿ ದಯಾಲ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2022–2023
|''ಸೂಪರ್ ಸಿಂಗರ್ 9''
|ತೀರ್ಪುಗಾರ
|ವಿಜಯ್ ಟಿವಿ
|ಪಿ. ಉನ್ನಿಕೃಷ್ಣನ್, ಅನುರಾಧಾ ಶ್ರೀರಾಮ್ ಮತ್ತು ಬೆನ್ನಿ ದಯಾಲ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2023
|ಸೂಪರ್ ಸಿಂಗರ್ 3 (ತೆಲುಗು)
|ತೀರ್ಪುಗಾರ
|ಸ್ಟಾರ್ ಮಾ
|ರಾಹುಲ್ ಸಿಪ್ಲಿಗುಂಜ್, ಅನಂತ ಶ್ರೀರಾಮ್ ಮತ್ತು ಮಂಗ್ಲಿ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2024
|''ಸೂಪರ್ ಸಿಂಗರ್ 10''
|ಅತಿಥಿ
|ಸ್ಟಾರ್ ವಿಜಯ್
|ತಮ್ಮ ತಾಯಿ ಸುಜಾತಾ ಮೋಹನ್ ಅವರ ಜನ್ಮದಿನವನ್ನು ಆಚರಿಸಲು.
|-
|2024
|''ಸಾ ರೇ ಗಾ ಮಾ ಪಾ ಸೀನಿಯರ್ಸ್ 4''
|ಅತಿಥಿ ತೀರ್ಪುಗಾರ
|ಜೀ ತಮಿಳು
|ಮೆಗಾ ಆಡಿಷನ್ಗಳಿಗಾಗಿ ಕೆ. ಎಸ್. ರವಿಕುಮಾರ್ ಅವರೊಂದಿಗೆ ಅತಿಥಿ ತೀರ್ಪುಗಾರ
|-
|2024
|''ಸಾ ರೇ ಗಾ ಮಾ ಪಾ ಲಿಲ್ ಚಾಂಪ್ಸ್ 4''
| rowspan="2" |ತೀರ್ಪುಗಾರ
| rowspan="2" |ಜೀ ತಮಿಳು
|ಶ್ರೀನಿವಾಸ್, ಎಸ್. ಪಿ. ಚರಣ್ ಮತ್ತು ಸೈಂಧವಿ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2025
|''ಸಾ ರೇ ಗಾ ಮಾ ಪಾ ಸೀನಿಯರ್ಸ್ 5''
|ಶ್ರೀನಿವಾಸ್, ವಿಜಯ್ ಪ್ರಕಾಶ್, ಕಾರ್ತಿಕ್, ಸೈಂಧವಿ ಮತ್ತು ಎಸ್. ಪಿ. ಚರಣ್ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|-
|2025
|''ಸಾ ರೇ ಗಾ ಮಾ ಪಾ ಕೇರಳಂ ಸೀಸನ್ 3''
| ಅತಿಥಿ
| ಜೀ ಕೇರಳಂ
|
|-
|2025
|''ಸಾ ರೇ ಗಾ ಮಾ ಪಾ ಲಿಲ್ ಚಾಂಪ್ಸ್ 5''
|ತೀರ್ಪುಗಾರ
|ಜೀ ತಮಿಳು
|ಶ್ರೀನಿವಾಸ್, ಎಸ್. ಪಿ. ಚರಣ್ ಮತ್ತು ಸೈಂಧವಿ ಅವರೊಂದಿಗೆ ತೀರ್ಪುಗಾರರಲ್ಲಿ ಒಬ್ಬರು
|}
==ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು==
# ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ – ತಮಿಳು 2018, 2017, 2016 & 2025
# ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ – ಮಲಯಾಳಂ 2018, 2017, 2016.
# ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ವಿಜಯ್ ಪ್ರಶಸ್ತಿ 2014, 2012, 2009.
# ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ IIFA ಉತ್ಸವಂ ಪ್ರಶಸ್ತಿ ಕನ್ನಡ 2016.
# ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ (2023)
=== ಪ್ರಶಸ್ತಿಗಳ ಸಂಪೂರ್ಣ ಪಟ್ಟಿ ===
'''ಶ್ವೇತಾ ಮೋಹನ್''' (ಜನನ 19 ನವೆಂಬರ್ 1985) ಭಾರತೀಯ ಹಿನ್ನೆಲೆ ಗಾಯಕಿ. ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಐದು ಫಿಲ್ಮ್ಫೇರ್ ಪ್ರಶಸ್ತಿಗಳನ್ನು (ದಕ್ಷಿಣ), ಒಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಒಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಚಲನಚಿತ್ರ ಸಂಗೀತ ಮತ್ತು ಆಲ್ಬಂಗಳಿಗೆ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಪ್ರಮುಖ ಹಿನ್ನೆಲೆ ಗಾಯಕಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. ಅವರ ಸ್ಫೂರ್ತಿಗಳಲ್ಲಿ ಸುಜಾತಾ ಮೋಹನ್ (ಅವರ ತಾಯಿ), ಶ್ರೇಯಾ ಘೋಷಾಲ್, ಅಲ್ಕಾ ಯಾಗ್ನಿಕ್, ಸಾಧನಾ ಸರ್ಗಮ್ ಮತ್ತು ಕೆ.ಎಸ್. ಚಿತ್ರಾ ಸೇರಿದ್ದಾರೆ.<ref>{{cite news|url=https://timesofindia.indiatimes.com/entertainment/hindi/music/news/Shweta-Mohan-is-happy/etarticleshow/5513702.cms|archive-url=https://web.archive.org/web/20110811062128/http://articles.timesofindia.indiatimes.com/2010-01-30/news-and-interviews/28126139_1_awards-galore-ashwin-music|url-status=live|archive-date=11 August 2011|title=Shweta Mohan is happy|date=30 January 2010|work=[[The Times of India]]|access-date=7 May 2010|first1=Sindhu|last1=Vijayakumar}}</ref>
==== ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ====
'''[[ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ]]'''ಗಳು [[ಕೇರಳದ ಚಲನಚಿತ್ರ|ಕೇರಳದಲ್ಲಿ ನಿರ್ಮಿಸಲಾದ ಚಲನಚಿತ್ರಕ್ಕಾಗಿ]] ನೀಡುವ ಚಲನಚಿತ್ರ ಪ್ರಶಸ್ತಿಗಳಾಗಿವೆ. ಪ್ರಶಸ್ತಿಗಳನ್ನು 1998 ರಿಂದ [[ಕೇರಳ ರಾಜ್ಯ ಚಲಚಿತ್ರ ಅಕಾಡೆಮಿ]]ಯು ಭಾರತದ ಕೇರಳ ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಪರವಾಗಿ ನೀಡುತ್ತದೆ. ಶ್ವೇತಾ ಅವರು ಒಂದು ಪ್ರಶಸ್ತಿಯನ್ನು ಪಡೆದಿದ್ದಾರೆ.
{| class="wikitable plainrowheaders" width="100%"
! scope="col" width=5% | ವರ್ಷ
! scope="col" width=39% | ಚಿತ್ರ
! scope="col" width=39% | ನಾಮನಿರ್ದೇಶನಗೊಂಡ ಹಾಡು
! scope="col" width=15% | ಫಲಿತಾಂಶ
! scope="col" width=2% | ಉಲ್ಲೇಖ
|-
! scope="row"| 2007
|''ನಿವೇದ್ಯಂ''
| "ಕೊಲಕ್ಕುಳಲ್ ವಿಳಿ ಕೇಟ್ಟೋ"
| {{won}}
|
|}
==== ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು ====
'''[[ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ]]'''ಗಳು ಭಾರತದಲ್ಲಿ [[ತಮಿಳು ಚಿತ್ರಗಳಿಗೆ]] ನೀಡಲಾಗುವ ಅತ್ಯಂತ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿಗಳಾಗಿವೆ. ಅವುಗಳನ್ನು ಪ್ರತಿವರ್ಷ ಪ್ರತಿಭೆಗಳನ್ನು ಗೌರವಿಸಲು ಮತ್ತು [[ದಕ್ಷಿಣ ಭಾರತೀಯ]] [[ಚಲನಚಿತ್ರೋದ್ಯಮ]]ಕ್ಕೆ ಪ್ರೋತ್ಸಾಹ ಮತ್ತು ಪ್ರೇರಣೆಯನ್ನು ನೀಡಲು '''[[ತಮಿಳುನಾಡು ಸರ್ಕಾರ]]'''ವು ನೀಡುತ್ತದೆ. ಶ್ವೇತಾ ಅವರು ಒಂದು ಪ್ರಶಸ್ತಿಯನ್ನು ಪಡೆದಿದ್ದಾರೆ.
{| class="wikitable plainrowheaders" width="100%"
! scope="col" width=5% | ವರ್ಷ
! scope="col" width=39% | ಚಿತ್ರ
! scope="col" width=39% | ನಾಮನಿರ್ದೇಶನಗೊಂಡ ಹಾಡು
! scope="col" width=15% | ಫಲಿತಾಂಶ
! scope="col" width=2% | ಉಲ್ಲೇಖ
|-
! scope="row"|2011
| '' ಬಹು ಚಿತ್ರಗಳು''
| " ವಿವಿಧ ಹಾಡುಗಳು "
| {{won}}
|
|}
==== ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ====
'''[[ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ]]'''ವು ವಾರ್ಷಿಕ '''[[ಫಿಲ್ಮ್ಫೇರ್ ಪ್ರಶಸ್ತಿ]]'''ಗಳ [[ದಕ್ಷಿಣ ಭಾರತ]] ವಿಭಾಗವಾಗಿದ್ದು, '''[[ದಿ ಟೈಮ್ಸ್ ಗ್ರೂಪ್]]''' ಸಂಸ್ಥೆಯು [[ದಕ್ಷಿಣ ಭಾರತೀಯ ಚಲನಚಿತ್ರೋದ್ಯಮ]]ದ ವೃತ್ತಿಪರರ ಕಲಾತ್ಮಕ ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸಲು ಪ್ರಸ್ತುತಪಡಿಸುತ್ತದೆ. ಶ್ವೇತಾ ಅವರು ಫಿಲ್ಮ್ಫೇರ್ ದಕ್ಷಿಣದಿಂದ ಪ್ರಶಸ್ತಿ ಪಡೆದ ಮತ್ತು ನಾಮನಿರ್ದೇಶನಗೊಂಡ ಗಾಯಕಿಯಾಗಿದ್ದು, 3 ಭಾಷೆಗಳಲ್ಲಿ 20 ನಾಮನಿರ್ದೇಶನಗಳಿಂದ 6 ಪ್ರಶಸ್ತಿಗಳನ್ನು ಪಡೆದಿದ್ದಾರೆ.
{| class="wikitable plainrowheaders" width="100%"
! scope="col" width=5% | ವರ್ಷ
! scope="col" width=39% | ಭಾಷೆ
! scope="col" width=39% | ಚಿತ್ರ
! scope="col" width=39% | ನಾಮನಿರ್ದೇಶನಗೊಂಡ ಹಾಡು
! scope="col" width=15% | ಫಲಿತಾಂಶ
! scope="col" width=2% | ಉಲ್ಲೇಖ
|-
! scope="row" |''2008''
|ಮಲಯಾಳಂ
|''ಓರೆ ಕಡಲ್''
|"ಯಮುನಾ ವೇರುಥೆ"
| {{Won}}
|
|-
! scope="row" |''2009''
|ತಮಿಳು
|''ಪಿರಿವೋಮ್ ಸಂಧಿಪೋಮ್''
|"ಕಂಡೇನ್ ಕಂಡೇನ್"
| rowspan="5" {{Nominated}}
|
|-
! scope="row" rowspan="2"|''2010''
|rowspan="3"| ಮಲಯಾಳಂ
|''ಮೋಜ್ & ಕ್ಯಾಟ್''
|"ತೊಟ್ಟಾಲ್ ಪೂಕ್ಕುಂ"
|
|-
|''ರಾಬಿನ್ಹುಡ್''
|"ಪ್ರಿಯಾನು ಮಾತ್ರಂ"
|
|-
! scope="row" |''2011''
|''ಒರು ನಾಳ್ ವರುಂ''
|"ಮಾವಿನ್ ಚೋಟ್ಟಿಲೆ"
|
|-
! scope="row" |''2012''
|ತಮಿಳು
|''180''
|"ನೀ ಕೂರಿನಾಲ್"
|
|-
! scope="row" |''2013''
|rowspan="2"| ಮಲಯಾಳಂ
|''ಅರಿಕೆ''
|"ಶ್ಯಾಮ ಹರೇ"
| {{Won}}
|
|-
! scope="row" rowspan="2" |''2015''
|''ಒಟ್ಟಮಂದರಂ''
|"ಒನ್ನನಾಂ ಕೊಂಬಾತೆ"
| rowspan="3" {{Nominated}}
|
|-
|ತಮಿಳು
|''ಕಾವಿಯ ತಲೈವನ್''
|"ಯಾರುಮಿಲ್ಲ "
|
|-
! scope="row" rowspan="2" |''2016''
|ಮಲಯಾಳಂ
|''ಸು ಸು ಸುಧಿ ವಾತ್ಮೀಕಂ''
|"ಕಯಾಂಬೂ ನಿರಮಾಯಿ"
|
|-
|ತಮಿಳು
|''ತಂಗಮಗನ್''
|"ಎನ್ನ ಸೊಲ್ಲ"
| {{Won}}
|
|-
! scope="row" rowspan="2" |''2017''
|ಮಲಯಾಳಂ
|''ವೈಟ್''
|"ಒರುವೇಳ ವೀಂಡುಮೀ"
| {{Nominated}}
|
|-
|ತಮಿಳು
|''ಕಬಾಲಿ''
|"ಮಾಯನಾಧಿ"
| {{Won}}
|
|-
! scope="row" rowspan="2" |''2018''
|ಮಲಯಾಳಂ
|''ಮುಂತಿರಿವಳ್ಳಿಕಲ್ ತಾಳಿರ್ಕ್ಕುಂಬೋಲ್''
|"ಒರು ಪುಳಯಾರಿಕಿಲ್"
|rowspan="4" {{Nominated}}
|
|-
|ತಮಿಳು
|''ಮೆರ್ಸಲ್''
|"ಮಾಚೋ"
|
|-
! scope="row" |''2022''
|ಮಲಯಾಳಂ
|''ವರಣೆ ಅವಶ್ಯಮುಂಡ್''
|"ಮುತ್ತುನ್ನೆ ಕಣ್ಣುಕಳಿಲ್"
|
|-
! scope="row" |''2023''
|ಮಲಯಾಳಂ
|''ಮಲಯಂಕುಂಜು''
|"ಮನ್ನುಂ ನಿರಂಜೆ"
|
|-
! scope="row" |''2024''
|ತೆಲುಗು
|''ಸರ್''
|"ಮಸ್ತಾರು ಮಸ್ತಾರು"
|{{won}}
|
|-
! scope="row" rowspan ="2"|''2025''
|ತಮಿಳು
|''ಅಮರನ್''
|"ಹೇ ಮಿನ್ನಾಲೆ"
|{{won}}
|
|-
|ಮಲಯಾಳಂ
|''ರೈಫಲ್ ಕ್ಲಬ್''
|"ಗಂಧರ್ವ ಗಾನಂ"
|{{Nominated}}
|
|}
==== ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ====
'''[[ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]'''ಗಳು, SIIMA ಪ್ರಶಸ್ತಿಗಳು ಎಂದೂ ಕರೆಯಲ್ಪಡುತ್ತವೆ, ಇದು 2012 ರಲ್ಲಿ ಪ್ರಾರಂಭವಾಯಿತು, ಇದು [[ದಕ್ಷಿಣ ಭಾರತೀಯ ಚಲನಚಿತ್ರೋದ್ಯಮ]]ದ ಕಲಾತ್ಮಕ ಮತ್ತು ತಾಂತ್ರಿಕ ಸಾಧನೆಗಳಿಗೆ ಪ್ರಶಸ್ತಿಗಳನ್ನು ನೀಡುತ್ತದೆ. ಶ್ವೇತಾ ಅವರು 21 ನಾಮನಿರ್ದೇಶನಗಳಿಂದ ಒಂದು ಪ್ರಶಸ್ತಿಯನ್ನು ಪಡೆದಿದ್ದಾರೆ.
{| class="wikitable plainrowheaders" width="100%"
! scope="col" width=5% | ವರ್ಷ
! scope="col" width=39% | ಭಾಷೆ
! scope="col" width=39% | ಚಿತ್ರ
! scope="col" width=39% | ನಾಮನಿರ್ದೇಶನಗೊಂಡ ಹಾಡು
! scope="col" width=15% | ಫಲಿತಾಂಶ
! scope="col" width=2% | ಉಲ್ಲೇಖ
|-
! scope="row" rowspan="2" | 2013
|ಮಲಯಾಳಂ
|''ಅರಿಕೆ''
|"ಶ್ಯಾಮ ಹರೇ"
| rowspan="8" {{nom}}
|
|-
|ತಮಿಳು
|''3''
|"ನೀ ಪಾರ್ಥ"
|
|-
! scope="row" rowspan="2 | 2014
|ಮಲಯಾಳಂ
|''ಕಧಾವೀಡು''
|"ಕಟ್ಟಿಲೆ ಪೂಮನಂ"
|
|-
|ತಮಿಳು
|''ಮರಿಯನ್''
|"ಇನ್ನುಂ ಕೊಂಜಂ"
|
|-
! scope="row" rowspan="2" | 2015
|ಮಲಯಾಳಂ
|''ಒಟ್ಟಮಂದರಂ''
|"ಒನ್ನನಾಂ ಕೊಂಬಾತೆ"
|
|-
|ತಮಿಳು
|''ಕಾವಿಯ ತಲೈವನ್''
|"ಯಾರುಮಿಲ್ಲ"
|
|-
! scope="row" rowspan="3" | 2016
|ಮಲಯಾಳಂ
|''ಅನಾರ್ಕಲಿ''
|"ಏ ತನುಥ"
|
|-
|ಕನ್ನಡ
|''ಕೆಂದಸಂಪಿಗೆ''
|"ಕನಸಲಿ ನಡೆಸು"
|
|-
|ತಮಿಳು
|''ತಂಗಮಗನ್''
|"ಎನ್ನ ಸೊಲ್ಲ"
|{{won}}
|
|-
! scope="row" | 2017
|ಮಲಯಾಳಂ
|''ವೈಟ್''
|"ಒರುವೇಳ ವೀಂಡುಮೀ"
| rowspan="12" {{nom}}
|
|-
! scope="row" rowspan="2" | 2018
|ಮಲಯಾಳಂ
|''ಒರು ಸಿನೆಮಕ್ಕಾರನ್''
|"ಒಳುಕಿ ಒಳುಕಿ"
|
|-
|rowspan="2" |ತಮಿಳು
|''ಪಾ. ಪಾಂಡಿ''
|"ಪಾರ್ಥೇನ್"
|
|-
! scope="row" rowspan="1" | 2019
|''ನಿಮಿರ್''
|"ಪೂವುಕ್ಕು"
|
|-
! scope="row" rowspan="2" | 2021
| rowspan="4" | ಮಲಯಾಳಂ
|''ವಿಜಯ್ ಸೂಪರಮ್ ಪೌರ್ಣಮಿಯಮ್''
|"ಏಥೋ ಮಝಯಿಲ್"
|
|-
|''ಕಪ್ಪೇಲ''
|"ಕಣ್ಣಿಲ್"
|
|-
! scope="row" rowspan="1" | 2022
|''ಚತುರ್ ಮುಖಂ''
|"ಮಾಯಕೊಂಡು"
|
|-
! scope="row" rowspan="1" | 2023
|''ಮಲಯಂಕುಂಜು''
|"ಮನ್ನುಂ ನಿರಂಜೆ"
|
|-
! scope="row" rowspan="2" | 2024
|ತಮಿಳು
|''ವಾಥಿ''
|"ವ ವಾಥಿ"
|
|-
|ತೆಲುಗು
|''ಸರ್''
|"ಮಸ್ತಾರು ಮಸ್ತಾರು"
|
|-
! scope="row" rowspan="2" | 2025
|ತಮಿಳು
|''ಅಮರನ್''
|"ಹೇ ಮಿನ್ನಾಲೆ"
|
|-
|ತೆಲುಗು
|''ಲಕ್ಕಿ ಬಾಸ್ಕರ್''
|"ಶ್ರೀಮತಿ ಗಾರು"
|
|-
|}
==== ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು ====
'''[[ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿ]]'''ಯು [[ಮಲಯಾಳಂ ಚಿತ್ರಗಳಿಗೆ]] '''[[ಏಷ್ಯಾನೆಟ್ (ಟಿವಿ ಚಾನೆಲ್)|ಏಷ್ಯಾನೆಟ್]]''' ಪ್ರತಿವರ್ಷ ನೀಡುವ ಪ್ರಶಸ್ತಿ ಸಮಾರಂಭವಾಗಿದೆ, ಇದು [[ಕೇರಳ]] ರಾಜ್ಯದ [[ದಕ್ಷಿಣ ಭಾರತ|ದಕ್ಷಿಣ-ಭಾರತೀಯ]] [[ಮಲಯಾಳಂ]]-ಭಾಷೆಯ ದೂರದರ್ಶನ ಜಾಲವಾಗಿದೆ. ಶ್ವೇತಾ ಅವರು ಮೂರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2008
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ನಾವೆಲ್
|ಕುಯಿಲೆ
|rowspan="3"{{won}}
|-
|2014
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಒಟ್ಟಮಂದರಂ
|ಒನ್ನನಾಂ ಕೊಂಬಾತೆ
|-
|2017
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಮುಂತಿರಿವಳ್ಳಿಕಲ್ ತಾಳಿರ್ಕ್ಕುಂಬೋಲ್
|ಒರು ಪುಳಯಾರಿಕಿಲ್
|}
==== ವನಿತಾ ಚಲನಚಿತ್ರ ಪ್ರಶಸ್ತಿಗಳು ====
'''ವನಿತಾ ಚಲನಚಿತ್ರ ಪ್ರಶಸ್ತಿ'''ಗಳನ್ನು [[ಭಾರತ]]ದ [[ಮಲಯಾಳ ಮನೋರಮ]] ಗುಂಪಿನ ''[[ವನಿತಾ]]'' ನಿಯತಕಾಲಿಕೆಯು [[ಕೇರಳ]] ರಾಜ್ಯದಲ್ಲಿ ಪ್ರತಿವರ್ಷ ಪ್ರದಾನ ಮಾಡುತ್ತದೆ.<ref>{{Cite news|url=http://english.manoramaonline.com/entertainment/entertainment-news/vanitha-film-awards-mohanlal-manju-warrier-win.html|title=Vanitha-Cera film awards 2017: Mohanlal, Manju Warrier win top honors|newspaper=OnManorama|access-date=2017-02-08}}</ref> [[ಮಲಯಾಳಂ ಭಾಷೆ]] ಚಲನಚಿತ್ರೋದ್ಯಮದಲ್ಲಿ ಕಲಾತ್ಮಕ ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸಲು ಪ್ರಶಸ್ತಿ ಸಮಾರಂಭವನ್ನು ಸ್ಥಾಪಿಸಲಾಗಿದೆ. 1998 ರಿಂದ ಪ್ರತಿವರ್ಷ ನಡೆಯುತ್ತದೆ ಮತ್ತು ಪ್ರಸಾರವಾಗುತ್ತದೆ. [[ಶ್ವೇತಾ ಮೋಹನ್]] ಅವರು ಎರಡು ವಿಭಿನ್ನ ಹಾಡುಗಳಿಗೆ ಒಂದು ಪ್ರಶಸ್ತಿಯನ್ನು ಗೆದ್ದಿದ್ದಾರೆ.
{| class="wikitable sortable"
!ವರ್ಷ
!ವರ್ಗ
!ಚಿತ್ರ(ಗಳು)
!ಹಾಡು(ಗಳು)
!ಫಲಿತಾಂಶ
|-
|row rowspan="2"|2017
|row rowspan="2"|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಬಾಹುಬಲಿ 2: ದಿ ಕನ್ಕ್ಲೂಷನ್
|ಕಣ್ಣ ನೀ ಉರಂಗೇಡ
|rowspan="2"{{won}}
|-
|ಮುಂತಿರಿವಳ್ಳಿಕಲ್ ತಾಳಿರ್ಕ್ಕುಂಬೋಲ್
|ಒರು ಪುಳಯಾರಿಕಿಲ್
|}
==== ಅಮೃತ ಟಿವಿ ಚಾನೆಲ್ ಪ್ರಶಸ್ತಿ ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2007
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ನಿವೇದ್ಯಂ
|ಕೊಲಕ್ಕುಳಲ್
| {{won}}
|}
==== ವಿ4 ಮನರಂಜಕರ ಪ್ರಶಸ್ತಿ ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2014
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಕಾವಿಯ ತಲೈವನ್
| ಯಾರುಮಿಲ್ಲ ತನಿ
| {{won}}
|}
==== ಜೈಹಿಂದ್ ಟಿವಿ ಚಲನಚಿತ್ರ ಪ್ರಶಸ್ತಿಗಳು ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2010
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಒರು ನಾಳ್ ವರುಂ
| ಮಾವಿನ್ ಚೋಟ್ಟಿಲೆ
| {{won}}
|}
==== ಏಷ್ಯಾವಿಷನ್ ಚಲನಚಿತ್ರ ಪ್ರಶಸ್ತಿಗಳು ====
'''[[ಏಷ್ಯಾವಿಷನ್ ಪ್ರಶಸ್ತಿಗಳು|ಏಷ್ಯಾವಿಷನ್ ಚಲನಚಿತ್ರ ಪ್ರಶಸ್ತಿ]]'''ಗಳು [[ದಕ್ಷಿಣ ಭಾರತೀಯ ಚಲನಚಿತ್ರ]]ದ ಕಲಾವಿದರು ಮತ್ತು ತಂತ್ರಜ್ಞರನ್ನು ಗೌರವಿಸಲು 2006 ರಿಂದ ಪ್ರತಿವರ್ಷ ನಡೆಯುತ್ತವೆ. ಶ್ವೇತಾ ಅವರು ಒಂದು ಪ್ರಶಸ್ತಿಯನ್ನು ಪಡೆದಿದ್ದಾರೆ.
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2010
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಒರು ನಾಳ್ ವರುಂ
| ಮಾವಿನ್ ಚೋಟ್ಟಿಲೆ
|{{won}}
|}
==== ಮಿರ್ಚಿ ಮ್ಯೂಸಿಕ್ ಪ್ರಶಸ್ತಿಗಳು ದಕ್ಷಿಣ ====
'''[[ಮಿರ್ಚಿ ಮ್ಯೂಸಿಕ್ ಪ್ರಶಸ್ತಿಗಳು ದಕ್ಷಿಣ]]'''ವು ವಾರ್ಷಿಕ '''[[ಮಿರ್ಚಿ ಮ್ಯೂಸಿಕ್ ಪ್ರಶಸ್ತಿ]]'''ಗಳ ದಕ್ಷಿಣ ಭಾರತ ವಿಭಾಗವಾಗಿದ್ದು, [[ದಕ್ಷಿಣ ಭಾರತೀಯ ಸಂಗೀತೋದ್ಯಮ]]ದ ವೃತ್ತಿಪರರ ಕಲಾತ್ಮಕ ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸಲು 2010 ರಲ್ಲಿ '''[[ರೇಡಿಯೋ ಮಿರ್ಚಿ]]''' ಪ್ರಾರಂಭಿಸಿತು.
{| class="wikitable sortable"
!ವರ್ಷ
!ವರ್ಗ
!ಭಾಷೆ
!ಚಿತ್ರ
!ಹಾಡು
!ಫಲಿತಾಂಶ
|-
|2011
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ತೆಲುಗು
|ಕೋಮರಂ ಪುಳಿ
| ಅಮ್ಮ ಥಲ್ಲೆ
| {{won}}
|}
==== ವಿಜಯ್ ಮ್ಯೂಸಿಕ್ ಪ್ರಶಸ್ತಿಗಳು ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2011
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|180
| ನೀ ಕೂರಿನಾಲ್
| {{won}}
|}
==== ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿಗಳು ====
'''[[ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿ]]'''ಯು, ತಮಿಳು ಚಲನಚಿತ್ರ ವಿಭಾಗವಾಗಿದ್ದು, ವಾರ್ಷಿಕ '''[[ಅಂತರರಾಷ್ಟ್ರೀಯ ತಮಿಳು ಚಲನಚಿತ್ರ ಪ್ರಶಸ್ತಿ]]'''ಯು, ತಮಿಳು ಭಾರತೀಯ ಸಂಗೀತೋದ್ಯಮದ ವೃತ್ತಿಪರರ ಕಲಾತ್ಮಕ ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸುತ್ತದೆ.
{| class="wikitable sortable"
!ವರ್ಷ
!ವರ್ಗ
!ಫಲಿತಾಂಶ
|-
|2012
| ಮಹಿಳಾ ಹಿನ್ನೆಲೆ ಗಾಯಕಿ ತೀರ್ಪುಗಾರರ ಪ್ರಶಸ್ತಿ
| {{won}}<ref>{{cite news|url=http://timesofindia.indiatimes.com/entertainment/hindi/music/news/Shweta-Mohan-bags-award/articleshow/12145168.cms|title=Shweta Mohan bags award|work=[[The Times of India]]}}</ref>
|}
==== ದಕ್ಷಿಣ ಭಾರತೀಯ ಛಾಯಾಗ್ರಾಹಕರ ಸಂಘ ಪ್ರಶಸ್ತಿಗಳು ====
{| class="wikitable sortable"
!ವರ್ಷ
!ವರ್ಗ
!ಚಿತ್ರ
!ಹಾಡು
!ಫಲಿತಾಂಶ
|-
|2014
|ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ
|ಕಾವಿಯ ತಲೈವನ್
| ಯಾರುಮಿಲ್ಲ ತನಿ
| {{won}}
|}
== ಇತರ ಪ್ರಮುಖ ಗೌರವಗಳು ಮತ್ತು ಮಾನ್ಯತೆಗಳು ==
* 2007: ದೂರದರ್ಶನದ ಯುವ ಪ್ರಶಸ್ತಿ "ಕೊಲಕುಳಲ್ ವಿಳಿ ಕೇಟ್ಟೋ ರಾಧೇ" ನಿವೇದ್ಯಂ (ಮಲಯಾಳಂ)
* 2007: ಸನ್ಫೀಸ್ಟ್ ಇಸೈ ಅರುವಿ ಪ್ರಶಸ್ತಿ
* 2007: ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಚಲನಚಿತ್ರ ವಿಮರ್ಶಕರ ಪ್ರಶಸ್ತಿ
* 2011: ಬಿಗ್ ತಮಿಳು ಮೆಲೋಡಿ ಪ್ರಶಸ್ತಿಗಳು ಅತ್ಯುತ್ತಮ ಮಧುರ ಮಹಿಳಾ ಹಿನ್ನೆಲೆ ಗಾಯಕಿ - "ನೀ ಕೂರಿನಾಲ್" (180)
* 2012: BIG FM ನಲ್ಲಿ ಅತಿ ಹೆಚ್ಚು ಪ್ರಸಾರಗಳಿಗಾಗಿ ಪ್ರಶಸ್ತಿ - "ನೀ ಪಾರ್ಥ ವಿಳಿಗಲ್"(3) (ವಿಜಯ್ ಯೇಸುದಾಸ್ ಅವರೊಂದಿಗೆ)
* 2014: ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ತಿಕ್ಕುರಿಸ್ಸಿ ಚಲನಚಿತ್ರ ಪ್ರಶಸ್ತಿ 2014 - ' 'ಒಟ್ಟಮಂದರಂ' ' (ಸುಜಾತಾ ಮೋಹನ್ ಅವರೊಂದಿಗೆ ಹಂಚಿಕೊಂಡಿದ್ದಾರೆ)
* 2014: ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ SICA ಪ್ರಶಸ್ತಿ 2014 - "ಯಾರುಮಿಲ್ಲ"
==ಉಲ್ಲೇಖಗಳು==
{{reflist}}
==ಬಾಹ್ಯ ಕೊಂಡಿಗಳು==
* {{IMDb name|2895650}}
* {{Facebook|shwetamohanofficial|ಶ್ವೇತಾ ಮೋಹನ್}}
* {{Twitter|_shwetamohan_|ಶ್ವೇತಾ ಮೋಹನ್}}
{{DEFAULTSORT:ಮೋಹನ್, ಶ್ವೇತಾ}}
[[Category:1985 ಜನನಗಳು]]
[[Category:21ನೇ ಶತಮಾನದ ಭಾರತೀಯ ಮಹಿಳಾ ಗಾಯಕಿಯರು]]
[[Category:ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ವಿಜೇತರು]]
[[Category:ಭಾರತೀಯ ಪಾಪ್ ಗಾಯಕಿಯರು]]
[[Category:ಭಾರತೀಯ ಮಹಿಳಾ ಹಿನ್ನೆಲೆ ಗಾಯಕಿಯರು]]
[[Category:ಭಾರತೀಯ ಮಹಿಳಾ ಪಾಪ್ ಗಾಯಕಿಯರು]]
[[Category:ಕನ್ನಡ ಭಾಷೆಯ ಹಿನ್ನೆಲೆ ಗಾಯಕಿಯರು]]
[[Category:ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರು]]
[[Category:ಜೀವಂತ ವ್ಯಕ್ತಿಗಳು]]
[[Category:ಮಲಯಾಳಂ ಭಾಷೆಯ ಹಿನ್ನೆಲೆ ಗಾಯಕಿಯರು]]
[[Category:ಚೆನ್ನೈನ ಗಾಯಕಿಯರು]]
[[Category:ಸ್ಟೆಲ್ಲಾ ಮಾರಿಸ್ ಕಾಲೇಜು, ಚೆನ್ನೈ ಹಳೆಯ ವಿದ್ಯಾರ್ಥಿಗಳು]]
[[Category:ತಮಿಳು ಭಾಷೆಯ ಹಿನ್ನೆಲೆ ಗಾಯಕಿಯರು]]
[[Category:ತಮಿಳುನಾಡಿನ ಮಹಿಳಾ ಸಂಗೀತಗಾರರು]]
[[Category:ಭಾರತೀಯ ಸಂಗೀತಗಾರ ಪಡೆದ ಪ್ರಶಸ್ತಿಗಳ ಪಟ್ಟಿಗಳು|ಮೋಹನ್, ಶ್ವೇತಾ]]
[[Category:ಶ್ವೇತಾ ಮೋಹನ್|ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು]]
[[Category:ಶ್ವೇತಾ ಮೋಹನ್| ]]
hsoaqrl41k074qy77u4urotdm9puto7
ವಿಕಿಪೀಡಿಯ:ಗಡಿಯಾಚೆಯ ಪರಂಪರೆ - ಭಾರತದ ಮತ್ತು ಉಕ್ರೇನ್ನ ವಿಕಿಪೀಡಿಯ ಸಂಪಾದನಾ ಅಭಿಯಾನ
4
180187
1384603
1384213
2026-08-29T09:53:24Z
Santhosh Notagar99
82732
1384603
wikitext
text/x-wiki
{| class=wikitable style="text-align:center; vertical-align:middle; background-color: #EEDEC5; color: #474747;"
|-
|[[File:India_Ukrain_Kannada_Ediathon.jpg|550px]]
|
{| class=wikitable style="background-color: #EEDEC5; color: #474747; margin: auto; font-size:20px; width:100%"
|-
| style="text-align:center; vertical-align:middle; padding:10px 15px; width:20%;" | [[File:Google Calendar icon (2015-2020).svg|32px|alt=|link=]]<br />'''ಅವಧಿ'''<hr />15–24 ಆಗಸ್ಟ್ 2026<br /> (9 ದಿನಗಳು)
| style="text-align:center; vertical-align:middle; padding:10px 15px; width:20%;" | [[File:WP25 Wikipedia Globe - blue.svg|32px|alt=|link=]]<br />'''ಭಾಷೆಗಳು'''<hr />ಭಾರತೀಯ ಮತ್ತು <br />ಉಕ್ರೇನಿಯನ್ ಭಾಷೆಯ <br />ವಿಕಿಪೀಡಿಯಗಳು
| style="text-align:center; vertical-align:middle; padding:10px 15px; width:20%;" | [[File:Noun Project Museum Icon 598061.svg|32px|alt=|link=]]<br />'''ವಿಷಯ'''<hr />ಯುನೆಸ್ಕೋ ವಿಶ್ವ ಪರಂಪರೆ
| style="text-align:center; vertical-align:middle; padding:10px 15px; width:20%;" | [[File:Community group icon.svg|32px|alt=|link=]]<br />'''ಭಾಗವಹಿಸುವವರು'''<hr />ಭಾರತೀಯ ಮತ್ತು <br />ಉಕ್ರೇನಿಯನ್ <br />ಸಮುದಾಯಗಳು
| style="text-align:center; vertical-align:middle; padding:10px 15px; width:20%;" | [[File:Plain scarlet arrow icons 4.png|32px|alt=|link=]]<br />'''ಮನ್ನಣೆ'''<hr />ಪ್ರಮಾಣಪತ್ರಗಳು, <br />ಉಡುಗೊರೆಗಳು ಮತ್ತು <br />ಗುರುತಿಸುವಿಕೆ
|}
'''ಗಡಿಯಾಚೆಯ ಪರಂಪರೆ''' ( Heritage Across Borders) ಎಂಬುದು ಭಾರತದ ಮತ್ತು ಉಕ್ರೇನ್ನ ವಿಕಿಮೀಡಿಯ ಸಮುದಾಯಗಳನ್ನು ಒಂದೆಡೆ ಸೇರಿಸುವ ಬಹುಭಾಷಾ ವಿಕಿಪೀಡಿಯ ಸಂಪಾದನಾ ಅಭಿಯಾನವಾಗಿದೆ. ಸಾಂಸ್ಕೃತಿಕ ಪರಂಪರೆಯ ಬಗ್ಗೆ ಎರಡೂ ದೇಶಗಳ ಸಮುದಾಯಗಳಲ್ಲಿರುವ ಸಾಮಾನ್ಯ ಆಸಕ್ತಿ ಮತ್ತು ಮೆಚ್ಚುಗೆಯನ್ನು ಆಚರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.<br>
ಈ ಅಭಿಯಾನವು '''15 ಆಗಸ್ಟ್ 2026'''ರಂದು, '''ಭಾರತದ ಸ್ವಾತಂತ್ರ್ಯ ದಿನ'''ದಂದು ಆರಂಭವಾಗಿ, '''24 ಆಗಸ್ಟ್ 2026'''ರಂದು, '''ಉಕ್ರೇನ್ನ ಸ್ವಾತಂತ್ರ್ಯ ದಿನ'''ದಂದು ಮುಕ್ತಾಯಗೊಳ್ಳಲಿದೆ. ವಿವಿಧ ಭಾಷೆಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ಭಾಷಾ ಸಮುದಾಯಗಳು ಉಕ್ರೇನ್ನ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ವಿಕಿಪೀಡಿಯ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಅದೇ ರೀತಿ, ಉಕ್ರೇನ್ನ ವಿಕಿಮೀಡಿಯ ಸಮುದಾಯವು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಲ್ಲಿ (Worklist) ಸೇರಿಸಲಾದ ಇತರ ಅರ್ಹ ವಿಷಯಗಳ ಕುರಿತೂ ಸಂಪಾದನೆಗಳನ್ನು ಮಾಡಬಹುದು.
|-
| colspan=2 style="text-align:left;"|
== ಭಾಗವಹಿಸುವುದು ಹೇಗೆ ==
# ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಿಂದ ಒಂದು ವಿಷಯವನ್ನು ಆಯ್ಕೆ ಮಾಡಬಹುದು.
# [https://meta.wikimedia.org/w/index.php?title=Special:EventDetails/4246&tab=WorklistPanel ಅಭಿಯಾನದ ಕಾರ್ಯಪಟ್ಟಿಯನ್ನು ತೆರೆಯಿರಿ →]
ಕಾರ್ಯಪಟ್ಟಿಯಲ್ಲಿ ಭಾರತ ಮತ್ತು ಉಕ್ರೇನ್ನ UNESCO ಪರಂಪರೆ ತಾಣಗಳಿಗೆ ಸಂಬಂಧಿಸಿದ ಸೂಚಿಸಲಾದ ಲೇಖನಗಳು ಇರುತ್ತವೆ.
# 15ರಿಂದ 24 ಆಗಸ್ಟ್ 2026ರ ನಡುವೆ ಲೇಖನವನ್ನು ರಚಿಸಿ ಅಥವಾ ಸುಧಾರಿಸಿ.
== ಅಂಕಗಳ ವ್ಯವಸ್ಥೆ ==
ಅಭಿಯಾನದ ಅವಧಿಯಲ್ಲಿ ಅರ್ಹ ಕೊಡುಗೆಗಳನ್ನು ನೀಡುವ ಭಾಗವಹಿಸುವವರಿಗೆ ಅಂಕಗಳನ್ನು ನೀಡಲಾಗುತ್ತದೆ:
# ಅರ್ಹವಾದ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಕಿಪೀಡಿಯ ಲೇಖನಕ್ಕೆ ಪ್ರತಿ 200 ಪದಗಳ ವಿಷಯ ಸೇರ್ಪಡೆಗೆ +1 ಅಂಕ.
# ಗಣನೀಯವಾಗಿ ಸುಧಾರಿಸಿದ ಪ್ರತಿಯೊಂದು ಲೇಖನಕ್ಕೆ +2 ಅಂಕಗಳು.
ಗಣನೀಯ ಸುಧಾರಣೆ ಎಂದರೆ ಮೂಲಾಧಾರಗಳೊಂದಿಗೆ ಸಾಕಷ್ಟು ವಿಶ್ವಕೋಶೀಯ ಮಾಹಿತಿಯನ್ನು ಸೇರಿಸುವುದು, ಲೇಖನದ ರಚನೆ ಅಥವಾ ಓದಲು ಸುಲಭವಾಗುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುವುದು, ಪ್ರಮುಖವಾಗಿ ಕಾಣೆಯಾಗಿದ್ದ ಮಾಹಿತಿಯನ್ನು ಸೇರಿಸುವುದು ಅಥವಾ ಅದಕ್ಕೆ ಸಮಾನವಾದ ಮಹತ್ವದ ಸುಧಾರಣೆಯನ್ನು ಮಾಡುವುದು.
== ಅಂಕಗಳಿಗೆ ಅರ್ಹತೆ ಪಡೆಯಲು ==
# ಹೊಸದಾಗಿ ರಚಿಸಲಾದ ಲೇಖನವು ಕನಿಷ್ಠ 500 ಪದಗಳ ಓದಲು ಯೋಗ್ಯವಾದ ಮತ್ತು ಅರ್ಥಪೂರ್ಣ ವಿಷಯವನ್ನು ಹೊಂದಿರಬೇಕು.
# ಅಸ್ತಿತ್ವದಲ್ಲಿರುವ ಲೇಖನದ ಸುಧಾರಣೆಗೆ ಕನಿಷ್ಠ 300 ಪದಗಳ ಹೊಸ ಮತ್ತು ಅರ್ಥಪೂರ್ಣ ವಿಷಯವನ್ನು ಸೇರಿಸಬೇಕು. ಆದರೆ ಸುಧಾರಣೆಯು ಮುಖ್ಯವಾಗಿ ಗಮನಾರ್ಹ ಪುನರ್ರಚನೆ, ಭಾಷಾ ಸಂಪಾದನೆ, ಮೂಲಗಳ ಸೇರ್ಪಡೆ ಅಥವಾ ಸ್ಪಷ್ಟವಾಗಿ ಪ್ರದರ್ಶಿಸಬಹುದಾದ ಇತರ ಮಹತ್ವದ ಸುಧಾರಣೆಯನ್ನು ಒಳಗೊಂಡಿದ್ದರೆ ಈ ನಿಯಮದಿಂದ ವಿನಾಯಿತಿ ಇರಬಹುದು.
# ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳಿಗೆ ವಿಶ್ವಾಸಾರ್ಹ ಮೂಲಗಳ ಆಧಾರ ಇರಬೇಕು.
# ಎಲ್ಲಾ ಕೊಡುಗೆಗಳು ಸಂಬಂಧಿತ ಭಾಷೆಯ ವಿಕಿಪೀಡಿಯದ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.
# ಸಣ್ಣಪುಟ್ಟ ಸಂಪಾದನೆಗಳು — ಉದಾಹರಣೆಗೆ ಅಕ್ಷರದೋಷ ಸರಿಪಡಿಸುವುದು, ವಿನ್ಯಾಸ ಬದಲಾವಣೆ, ವರ್ಗಗಳನ್ನು ಸೇರಿಸುವುದು ಅಥವಾ ಪ್ರತ್ಯೇಕ ಲಿಂಕ್ಗಳನ್ನು ಸೇರಿಸುವುದು — ಇವುಗಳನ್ನು ಮಾತ್ರ ಆಧರಿಸಿ ಗಣನೀಯ ಸುಧಾರಣೆಯಾಗಿ ಪರಿಗಣಿಸಲಾಗುವುದಿಲ್ಲ.
== ಬಹುಮಾನಗಳು ಮತ್ತು ಗೌರವ ==
ಅಭಿಯಾನದ ನಿಯಮಗಳನ್ನು ಪೂರೈಸುವ ಭಾಗವಹಿಸುವವರು ಕೆಳಗಿನ ಗೌರವಗಳಿಗೆ ಅರ್ಹರಾಗಿರುತ್ತಾರೆ:
# ಅರ್ಹತೆ ಪಡೆದ ಎಲ್ಲಾ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣಪತ್ರಗಳು.
# ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ಭಾಗವಹಿಸುವವರಿಗೆ ಆನ್ಲೈನ್ ಶಾಪಿಂಗ್ ವೌಚರ್ಗಳು. ಭಾರತೀಯ ಮತ್ತು ಉಕ್ರೇನಿಯನ್ ಸಮುದಾಯಗಳಿಗೆ ಪ್ರತ್ಯೇಕ ಶ್ರೇಯಾಂಕಗಳನ್ನು ಪರಿಗಣಿಸಲಾಗುತ್ತದೆ:
#* 1ನೇ ಸ್ಥಾನ — $100 / ₹10,000
#* 2ನೇ ಸ್ಥಾನ — $50 / ₹5,000
#* 3ನೇ ಸ್ಥಾನ — $30 / ₹3,000
ಅಭಿಯಾನದ ಫಲಿತಾಂಶಗಳನ್ನು ಪರಿಶೀಲಿಸಿ ದೃಢಪಡಿಸಿದ ನಂತರ, ಅರ್ಹ ಭಾಗವಹಿಸುವವರನ್ನು ಆಯೋಜಕರು ಸಂಪರ್ಕಿಸುತ್ತಾರೆ.
== ಮೆಟಾ ಪುಟದ ಲಿಂಕ್ ==
[[meta:Event:Heritage_Across_Borders]]
== ಆಯೋಜಕರು ==
ಸಂತೋಷ್ ನೋಟಗಾರ್ ([[User:Santhosh Notagar99|Santhosh Notagar]])
== ಉಕ್ರೇನ್ ಕುರಿತ ಲೇಖನಗಳ ಪಟ್ಟಿ ==
https://meta.wikimedia.org/wiki/Event:Heritage_Across_Borders/Article_List
== ನಿಮ್ಮ ಲೇಖನಗಳನ್ನು ಇಲ್ಲಿ ಸೇರಿಸಿ ==
https://wikieval.toolforge.org/contests/3
== ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) ==
# [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೪:೫೪, ೧೧ ಆಗಸ್ಟ್ ೨೦೨೬ (IST)
#[[ಸದಸ್ಯ:Hariprasad Shetty10|Hariprasad Shetty10]] ([[ಸದಸ್ಯರ ಚರ್ಚೆಪುಟ:Hariprasad Shetty10|ಚರ್ಚೆ]]) ೧೪:೫೮, ೧೧ ಆಗಸ್ಟ್ ೨೦೨೬ (IST)
# [[ಸದಸ್ಯ:Mahaveer Indra|ಮಹಾವೀರ ಇಂದ್ರ]] ([[ಸದಸ್ಯರ ಚರ್ಚೆಪುಟ:Mahaveer Indra|ಚರ್ಚೆ]]) ೦೫:೫೯, ೧೫ ಆಗಸ್ಟ್ ೨೦೨೬ (IST)
# [[User:Mallikarjunasj|Mallikarjunasj]] ([[User talk:Mallikarjunasj|talk]]) ೦೮:೩೮, ೧೫ ಆಗಸ್ಟ್ ೨೦೨೬ (IST)
#--[[ಸದಸ್ಯ:Ashwini Rai K|Ashwini Rai K]] ([[ಸದಸ್ಯರ ಚರ್ಚೆಪುಟ:Ashwini Rai K|ಚರ್ಚೆ]]) ೧೪:೪೮, ೧೬ ಆಗಸ್ಟ್ ೨೦೨೬ (IST)
# [[ಸದಸ್ಯ:Joyce Muriel|Joyce Muriel]] ([[ಸದಸ್ಯರ ಚರ್ಚೆಪುಟ:Joyce Muriel|ಚರ್ಚೆ]]) ೧೨:೦೬, ೧೭ ಆಗಸ್ಟ್ ೨೦೨೬ (IST)
# --[[ಸದಸ್ಯ:Prath20|Prath20]] ([[ಸದಸ್ಯರ ಚರ್ಚೆಪುಟ:Prath20|ಚರ್ಚೆ]]) ೨೨:೨೧, ೧೭ ಆಗಸ್ಟ್ ೨೦೨೬ (IST)
# --[[ಸದಸ್ಯ:Pragathi. BH|Pragathi. BH]] ([[ಸದಸ್ಯರ ಚರ್ಚೆಪುಟ:Pragathi. BH|ಚರ್ಚೆ]]) ೨೩:೦೯, ೧೭ ಆಗಸ್ಟ್ ೨೦೨೬ (IST)
#--[[ಸದಸ್ಯ:Mouna Changappa|Mouna Changappa]] ([[ಸದಸ್ಯರ ಚರ್ಚೆಪುಟ:Mouna Changappa|ಚರ್ಚೆ]]) ೦೦:೦೫, ೧೮ ಆಗಸ್ಟ್ ೨೦೨೬ (IST)
# [[ಸದಸ್ಯ:VASANTH S.N.|VASANTH S.N.]] ([[ಸದಸ್ಯರ ಚರ್ಚೆಪುಟ:VASANTH S.N.|ಚರ್ಚೆ]]) ೧೮:೦೦, ೧೮ ಆಗಸ್ಟ್ ೨೦೨೬ (IST)
# [[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೨೧:೨೬, ೧೮ ಆಗಸ್ಟ್ ೨೦೨೬ (IST)
#--[[ಸದಸ್ಯ:Shreelatha.Halemane|Shreelatha.Halemane]] ([[ಸದಸ್ಯರ ಚರ್ಚೆಪುಟ:Shreelatha.Halemane|ಚರ್ಚೆ]]) ೧೧:೦೫, ೧೯ ಆಗಸ್ಟ್ ೨೦೨೬ (IST)
#--[[ಸದಸ್ಯ:Sannidhishetty|Sannidhishetty]] ([[ಸದಸ್ಯರ ಚರ್ಚೆಪುಟ:Sannidhishetty|ಚರ್ಚೆ]]) ೨೨:೨೬, ೨೦ ಆಗಸ್ಟ್ ೨೦೨೬ (IST)
#--[[ಸದಸ್ಯ:Sathyaprasad Pai|Sathyaprasad Pai]] ([[ಸದಸ್ಯರ ಚರ್ಚೆಪುಟ:Sathyaprasad Pai|ಚರ್ಚೆ]]) ೨೨:೩೬, ೨೦ ಆಗಸ್ಟ್ ೨೦೨೬ (IST)
#--[[ಸದಸ್ಯ:PrathikRamesh11|PrathikRamesh11]] ([[ಸದಸ್ಯರ ಚರ್ಚೆಪುಟ:PrathikRamesh11|ಚರ್ಚೆ]]) ೧೫:೧೦, ೨೧ ಆಗಸ್ಟ್ ೨೦೨೬ (IST)
#--[[ಸದಸ್ಯ:Mona Mendonca|Mona Mendonca]] ([[ಸದಸ್ಯರ ಚರ್ಚೆಪುಟ:Mona Mendonca|ಚರ್ಚೆ]]) ೧೨:೦೯, ೨೪ ಆಗಸ್ಟ್ ೨೦೨೬ (IST)
== ಫಲಿತ ==
{| class="wikitable sortable" style="width:100%; text-align:center; border:2px solid #2a4b8d; font-size:95%;"
! style="background:#2a4b8d; color:white; width:10%;" | ಸ್ಥಾನ
! style="background:#2a4b8d; color:white; text-align:left;" | ಪುದರ್
! style="background:#2a4b8d; color:white; width:20%;" | ಲೇಕೊನದ ಸಂಖ್ಯೆ
! style="background:#2a4b8d; color:white; width:20%;" |ಅಂಕೊಲು
|-
! style="background:#FFD700; color:#000; font-size:120%;" | 🥇 1
| style="background:#FFF8DC; text-align:left;" | '''Sathyaprasad Pai'''
| style="background:#FFF8DC;" | '''50'''
| style="background:#FFF8DC; color:#B8860B; font-size:110%;" | '''500'''
|-
! style="background:#C0C0C0; color:#000; font-size:120%;" | 🥈 2
| style="background:#F5F5F5; text-align:left;" | '''Santhosh Notagar99 '''
| style="background:#F5F5F5;" | '''25'''
| style="background:#F5F5F5; color:#666; font-size:110%;" | '''250'''
|-
! style="background:#CD7F32; color:#fff; font-size:120%;" | 🥉 3
| style="background:#FFF0E6; text-align:left;" |'''Prath20'''
| style="background:#FFF0E6;" | '''18'''
| style="background:#FFF0E6; color:#A0522D; font-size:110%;" | '''180'''
|-
! style="background:#E8F1FF; color:#2a4b8d;" | 4
| style="text-align:left;" | '''Mouna Changappa'''
| 16
| style="color:#2a4b8d; font-weight:bold;" | 160
|-
! style="background:#E8F1FF; color:#2a4b8d;" | 5
| style="background:#F8FBFF; text-align:left;" | '''Reema Jalihal'''
| style="background:#F8FBFF;" | 15
| style="background:#F8FBFF; color:#2a4b8d; font-weight:bold;" | 150
|-
! style="background:#E8F1FF; color:#2a4b8d;" | 6
| style="text-align:left;" | '''Ashwini Rai K'''
| 9
| style="color:#2a4b8d; font-weight:bold;" | 78
|-
! style="background:#E8F1FF; color:#2a4b8d;" | 7
| style="background:#F8FBFF; text-align:left;" | '''Pragathi. BH'''
| style="background:#F8FBFF;" | 6
| style="background:#F8FBFF; color:#2a4b8d; font-weight:bold;" | 60
|-
! style="background:#E8E8E8; color:#666;" | 8
| style="text-align:left;" | '''Shreelatha.Halemane'''
| 4
| style="color:#777;" | 38
|-
! style="background:#E8E8E8; color:#666;" | 9
| style="text-align:left;" | '''Hariprasad Shetty10'''
| 3
| style="color:#777;" | 30
|-
! style="background:#E8E8E8; color:#666;" | 10
| style="text-align:left;" | '''Mahaveer Indra'''
| 3
| style="color:#777;" | 30
|-
! style="background:#E8E8E8; color:#666;" | 11
| style="text-align:left;" | '''Vaishnu Pilar'''
| 10
| style="color:#777;" | 30
|-
! style="background:#E8E8E8; color:#666;" | 12
| style="text-align:left;" | '''Sannidhishetty'''
| 2
| style="color:#777;" | 20
|-
! style="background:#E8E8E8; color:#666;" | 13
| style="text-align:left;" | '''A826'''
| 1
| style="color:#777;" | -
|-
! style="background:#E8E8E8; color:#666;" | 14
| style="text-align:left;" | '''VASANTH S.N.'''
| 1
| style="color:#777;" | -
|}
== ಸಹಾಯ ಮತ್ತು ಪ್ರಶ್ನೆಗಳು ==
ಅಭಿಯಾನಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಭಿಯಾನದ ಚರ್ಚಾ ಪುಟ ಅನ್ನು ಬಳಸಿ.
|}
g7qs49bhou0nbq92t0xc8ka5dshvt4p
1384604
1384603
2026-08-29T09:56:32Z
Santhosh Notagar99
82732
/* ಫಲಿತ */
1384604
wikitext
text/x-wiki
{| class=wikitable style="text-align:center; vertical-align:middle; background-color: #EEDEC5; color: #474747;"
|-
|[[File:India_Ukrain_Kannada_Ediathon.jpg|550px]]
|
{| class=wikitable style="background-color: #EEDEC5; color: #474747; margin: auto; font-size:20px; width:100%"
|-
| style="text-align:center; vertical-align:middle; padding:10px 15px; width:20%;" | [[File:Google Calendar icon (2015-2020).svg|32px|alt=|link=]]<br />'''ಅವಧಿ'''<hr />15–24 ಆಗಸ್ಟ್ 2026<br /> (9 ದಿನಗಳು)
| style="text-align:center; vertical-align:middle; padding:10px 15px; width:20%;" | [[File:WP25 Wikipedia Globe - blue.svg|32px|alt=|link=]]<br />'''ಭಾಷೆಗಳು'''<hr />ಭಾರತೀಯ ಮತ್ತು <br />ಉಕ್ರೇನಿಯನ್ ಭಾಷೆಯ <br />ವಿಕಿಪೀಡಿಯಗಳು
| style="text-align:center; vertical-align:middle; padding:10px 15px; width:20%;" | [[File:Noun Project Museum Icon 598061.svg|32px|alt=|link=]]<br />'''ವಿಷಯ'''<hr />ಯುನೆಸ್ಕೋ ವಿಶ್ವ ಪರಂಪರೆ
| style="text-align:center; vertical-align:middle; padding:10px 15px; width:20%;" | [[File:Community group icon.svg|32px|alt=|link=]]<br />'''ಭಾಗವಹಿಸುವವರು'''<hr />ಭಾರತೀಯ ಮತ್ತು <br />ಉಕ್ರೇನಿಯನ್ <br />ಸಮುದಾಯಗಳು
| style="text-align:center; vertical-align:middle; padding:10px 15px; width:20%;" | [[File:Plain scarlet arrow icons 4.png|32px|alt=|link=]]<br />'''ಮನ್ನಣೆ'''<hr />ಪ್ರಮಾಣಪತ್ರಗಳು, <br />ಉಡುಗೊರೆಗಳು ಮತ್ತು <br />ಗುರುತಿಸುವಿಕೆ
|}
'''ಗಡಿಯಾಚೆಯ ಪರಂಪರೆ''' ( Heritage Across Borders) ಎಂಬುದು ಭಾರತದ ಮತ್ತು ಉಕ್ರೇನ್ನ ವಿಕಿಮೀಡಿಯ ಸಮುದಾಯಗಳನ್ನು ಒಂದೆಡೆ ಸೇರಿಸುವ ಬಹುಭಾಷಾ ವಿಕಿಪೀಡಿಯ ಸಂಪಾದನಾ ಅಭಿಯಾನವಾಗಿದೆ. ಸಾಂಸ್ಕೃತಿಕ ಪರಂಪರೆಯ ಬಗ್ಗೆ ಎರಡೂ ದೇಶಗಳ ಸಮುದಾಯಗಳಲ್ಲಿರುವ ಸಾಮಾನ್ಯ ಆಸಕ್ತಿ ಮತ್ತು ಮೆಚ್ಚುಗೆಯನ್ನು ಆಚರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.<br>
ಈ ಅಭಿಯಾನವು '''15 ಆಗಸ್ಟ್ 2026'''ರಂದು, '''ಭಾರತದ ಸ್ವಾತಂತ್ರ್ಯ ದಿನ'''ದಂದು ಆರಂಭವಾಗಿ, '''24 ಆಗಸ್ಟ್ 2026'''ರಂದು, '''ಉಕ್ರೇನ್ನ ಸ್ವಾತಂತ್ರ್ಯ ದಿನ'''ದಂದು ಮುಕ್ತಾಯಗೊಳ್ಳಲಿದೆ. ವಿವಿಧ ಭಾಷೆಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ಭಾಷಾ ಸಮುದಾಯಗಳು ಉಕ್ರೇನ್ನ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ವಿಕಿಪೀಡಿಯ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಅದೇ ರೀತಿ, ಉಕ್ರೇನ್ನ ವಿಕಿಮೀಡಿಯ ಸಮುದಾಯವು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಲ್ಲಿ (Worklist) ಸೇರಿಸಲಾದ ಇತರ ಅರ್ಹ ವಿಷಯಗಳ ಕುರಿತೂ ಸಂಪಾದನೆಗಳನ್ನು ಮಾಡಬಹುದು.
|-
| colspan=2 style="text-align:left;"|
== ಭಾಗವಹಿಸುವುದು ಹೇಗೆ ==
# ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಿಂದ ಒಂದು ವಿಷಯವನ್ನು ಆಯ್ಕೆ ಮಾಡಬಹುದು.
# [https://meta.wikimedia.org/w/index.php?title=Special:EventDetails/4246&tab=WorklistPanel ಅಭಿಯಾನದ ಕಾರ್ಯಪಟ್ಟಿಯನ್ನು ತೆರೆಯಿರಿ →]
ಕಾರ್ಯಪಟ್ಟಿಯಲ್ಲಿ ಭಾರತ ಮತ್ತು ಉಕ್ರೇನ್ನ UNESCO ಪರಂಪರೆ ತಾಣಗಳಿಗೆ ಸಂಬಂಧಿಸಿದ ಸೂಚಿಸಲಾದ ಲೇಖನಗಳು ಇರುತ್ತವೆ.
# 15ರಿಂದ 24 ಆಗಸ್ಟ್ 2026ರ ನಡುವೆ ಲೇಖನವನ್ನು ರಚಿಸಿ ಅಥವಾ ಸುಧಾರಿಸಿ.
== ಅಂಕಗಳ ವ್ಯವಸ್ಥೆ ==
ಅಭಿಯಾನದ ಅವಧಿಯಲ್ಲಿ ಅರ್ಹ ಕೊಡುಗೆಗಳನ್ನು ನೀಡುವ ಭಾಗವಹಿಸುವವರಿಗೆ ಅಂಕಗಳನ್ನು ನೀಡಲಾಗುತ್ತದೆ:
# ಅರ್ಹವಾದ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಕಿಪೀಡಿಯ ಲೇಖನಕ್ಕೆ ಪ್ರತಿ 200 ಪದಗಳ ವಿಷಯ ಸೇರ್ಪಡೆಗೆ +1 ಅಂಕ.
# ಗಣನೀಯವಾಗಿ ಸುಧಾರಿಸಿದ ಪ್ರತಿಯೊಂದು ಲೇಖನಕ್ಕೆ +2 ಅಂಕಗಳು.
ಗಣನೀಯ ಸುಧಾರಣೆ ಎಂದರೆ ಮೂಲಾಧಾರಗಳೊಂದಿಗೆ ಸಾಕಷ್ಟು ವಿಶ್ವಕೋಶೀಯ ಮಾಹಿತಿಯನ್ನು ಸೇರಿಸುವುದು, ಲೇಖನದ ರಚನೆ ಅಥವಾ ಓದಲು ಸುಲಭವಾಗುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುವುದು, ಪ್ರಮುಖವಾಗಿ ಕಾಣೆಯಾಗಿದ್ದ ಮಾಹಿತಿಯನ್ನು ಸೇರಿಸುವುದು ಅಥವಾ ಅದಕ್ಕೆ ಸಮಾನವಾದ ಮಹತ್ವದ ಸುಧಾರಣೆಯನ್ನು ಮಾಡುವುದು.
== ಅಂಕಗಳಿಗೆ ಅರ್ಹತೆ ಪಡೆಯಲು ==
# ಹೊಸದಾಗಿ ರಚಿಸಲಾದ ಲೇಖನವು ಕನಿಷ್ಠ 500 ಪದಗಳ ಓದಲು ಯೋಗ್ಯವಾದ ಮತ್ತು ಅರ್ಥಪೂರ್ಣ ವಿಷಯವನ್ನು ಹೊಂದಿರಬೇಕು.
# ಅಸ್ತಿತ್ವದಲ್ಲಿರುವ ಲೇಖನದ ಸುಧಾರಣೆಗೆ ಕನಿಷ್ಠ 300 ಪದಗಳ ಹೊಸ ಮತ್ತು ಅರ್ಥಪೂರ್ಣ ವಿಷಯವನ್ನು ಸೇರಿಸಬೇಕು. ಆದರೆ ಸುಧಾರಣೆಯು ಮುಖ್ಯವಾಗಿ ಗಮನಾರ್ಹ ಪುನರ್ರಚನೆ, ಭಾಷಾ ಸಂಪಾದನೆ, ಮೂಲಗಳ ಸೇರ್ಪಡೆ ಅಥವಾ ಸ್ಪಷ್ಟವಾಗಿ ಪ್ರದರ್ಶಿಸಬಹುದಾದ ಇತರ ಮಹತ್ವದ ಸುಧಾರಣೆಯನ್ನು ಒಳಗೊಂಡಿದ್ದರೆ ಈ ನಿಯಮದಿಂದ ವಿನಾಯಿತಿ ಇರಬಹುದು.
# ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳಿಗೆ ವಿಶ್ವಾಸಾರ್ಹ ಮೂಲಗಳ ಆಧಾರ ಇರಬೇಕು.
# ಎಲ್ಲಾ ಕೊಡುಗೆಗಳು ಸಂಬಂಧಿತ ಭಾಷೆಯ ವಿಕಿಪೀಡಿಯದ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.
# ಸಣ್ಣಪುಟ್ಟ ಸಂಪಾದನೆಗಳು — ಉದಾಹರಣೆಗೆ ಅಕ್ಷರದೋಷ ಸರಿಪಡಿಸುವುದು, ವಿನ್ಯಾಸ ಬದಲಾವಣೆ, ವರ್ಗಗಳನ್ನು ಸೇರಿಸುವುದು ಅಥವಾ ಪ್ರತ್ಯೇಕ ಲಿಂಕ್ಗಳನ್ನು ಸೇರಿಸುವುದು — ಇವುಗಳನ್ನು ಮಾತ್ರ ಆಧರಿಸಿ ಗಣನೀಯ ಸುಧಾರಣೆಯಾಗಿ ಪರಿಗಣಿಸಲಾಗುವುದಿಲ್ಲ.
== ಬಹುಮಾನಗಳು ಮತ್ತು ಗೌರವ ==
ಅಭಿಯಾನದ ನಿಯಮಗಳನ್ನು ಪೂರೈಸುವ ಭಾಗವಹಿಸುವವರು ಕೆಳಗಿನ ಗೌರವಗಳಿಗೆ ಅರ್ಹರಾಗಿರುತ್ತಾರೆ:
# ಅರ್ಹತೆ ಪಡೆದ ಎಲ್ಲಾ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣಪತ್ರಗಳು.
# ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ಭಾಗವಹಿಸುವವರಿಗೆ ಆನ್ಲೈನ್ ಶಾಪಿಂಗ್ ವೌಚರ್ಗಳು. ಭಾರತೀಯ ಮತ್ತು ಉಕ್ರೇನಿಯನ್ ಸಮುದಾಯಗಳಿಗೆ ಪ್ರತ್ಯೇಕ ಶ್ರೇಯಾಂಕಗಳನ್ನು ಪರಿಗಣಿಸಲಾಗುತ್ತದೆ:
#* 1ನೇ ಸ್ಥಾನ — $100 / ₹10,000
#* 2ನೇ ಸ್ಥಾನ — $50 / ₹5,000
#* 3ನೇ ಸ್ಥಾನ — $30 / ₹3,000
ಅಭಿಯಾನದ ಫಲಿತಾಂಶಗಳನ್ನು ಪರಿಶೀಲಿಸಿ ದೃಢಪಡಿಸಿದ ನಂತರ, ಅರ್ಹ ಭಾಗವಹಿಸುವವರನ್ನು ಆಯೋಜಕರು ಸಂಪರ್ಕಿಸುತ್ತಾರೆ.
== ಮೆಟಾ ಪುಟದ ಲಿಂಕ್ ==
[[meta:Event:Heritage_Across_Borders]]
== ಆಯೋಜಕರು ==
ಸಂತೋಷ್ ನೋಟಗಾರ್ ([[User:Santhosh Notagar99|Santhosh Notagar]])
== ಉಕ್ರೇನ್ ಕುರಿತ ಲೇಖನಗಳ ಪಟ್ಟಿ ==
https://meta.wikimedia.org/wiki/Event:Heritage_Across_Borders/Article_List
== ನಿಮ್ಮ ಲೇಖನಗಳನ್ನು ಇಲ್ಲಿ ಸೇರಿಸಿ ==
https://wikieval.toolforge.org/contests/3
== ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) ==
# [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೪:೫೪, ೧೧ ಆಗಸ್ಟ್ ೨೦೨೬ (IST)
#[[ಸದಸ್ಯ:Hariprasad Shetty10|Hariprasad Shetty10]] ([[ಸದಸ್ಯರ ಚರ್ಚೆಪುಟ:Hariprasad Shetty10|ಚರ್ಚೆ]]) ೧೪:೫೮, ೧೧ ಆಗಸ್ಟ್ ೨೦೨೬ (IST)
# [[ಸದಸ್ಯ:Mahaveer Indra|ಮಹಾವೀರ ಇಂದ್ರ]] ([[ಸದಸ್ಯರ ಚರ್ಚೆಪುಟ:Mahaveer Indra|ಚರ್ಚೆ]]) ೦೫:೫೯, ೧೫ ಆಗಸ್ಟ್ ೨೦೨೬ (IST)
# [[User:Mallikarjunasj|Mallikarjunasj]] ([[User talk:Mallikarjunasj|talk]]) ೦೮:೩೮, ೧೫ ಆಗಸ್ಟ್ ೨೦೨೬ (IST)
#--[[ಸದಸ್ಯ:Ashwini Rai K|Ashwini Rai K]] ([[ಸದಸ್ಯರ ಚರ್ಚೆಪುಟ:Ashwini Rai K|ಚರ್ಚೆ]]) ೧೪:೪೮, ೧೬ ಆಗಸ್ಟ್ ೨೦೨೬ (IST)
# [[ಸದಸ್ಯ:Joyce Muriel|Joyce Muriel]] ([[ಸದಸ್ಯರ ಚರ್ಚೆಪುಟ:Joyce Muriel|ಚರ್ಚೆ]]) ೧೨:೦೬, ೧೭ ಆಗಸ್ಟ್ ೨೦೨೬ (IST)
# --[[ಸದಸ್ಯ:Prath20|Prath20]] ([[ಸದಸ್ಯರ ಚರ್ಚೆಪುಟ:Prath20|ಚರ್ಚೆ]]) ೨೨:೨೧, ೧೭ ಆಗಸ್ಟ್ ೨೦೨೬ (IST)
# --[[ಸದಸ್ಯ:Pragathi. BH|Pragathi. BH]] ([[ಸದಸ್ಯರ ಚರ್ಚೆಪುಟ:Pragathi. BH|ಚರ್ಚೆ]]) ೨೩:೦೯, ೧೭ ಆಗಸ್ಟ್ ೨೦೨೬ (IST)
#--[[ಸದಸ್ಯ:Mouna Changappa|Mouna Changappa]] ([[ಸದಸ್ಯರ ಚರ್ಚೆಪುಟ:Mouna Changappa|ಚರ್ಚೆ]]) ೦೦:೦೫, ೧೮ ಆಗಸ್ಟ್ ೨೦೨೬ (IST)
# [[ಸದಸ್ಯ:VASANTH S.N.|VASANTH S.N.]] ([[ಸದಸ್ಯರ ಚರ್ಚೆಪುಟ:VASANTH S.N.|ಚರ್ಚೆ]]) ೧೮:೦೦, ೧೮ ಆಗಸ್ಟ್ ೨೦೨೬ (IST)
# [[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೨೧:೨೬, ೧೮ ಆಗಸ್ಟ್ ೨೦೨೬ (IST)
#--[[ಸದಸ್ಯ:Shreelatha.Halemane|Shreelatha.Halemane]] ([[ಸದಸ್ಯರ ಚರ್ಚೆಪುಟ:Shreelatha.Halemane|ಚರ್ಚೆ]]) ೧೧:೦೫, ೧೯ ಆಗಸ್ಟ್ ೨೦೨೬ (IST)
#--[[ಸದಸ್ಯ:Sannidhishetty|Sannidhishetty]] ([[ಸದಸ್ಯರ ಚರ್ಚೆಪುಟ:Sannidhishetty|ಚರ್ಚೆ]]) ೨೨:೨೬, ೨೦ ಆಗಸ್ಟ್ ೨೦೨೬ (IST)
#--[[ಸದಸ್ಯ:Sathyaprasad Pai|Sathyaprasad Pai]] ([[ಸದಸ್ಯರ ಚರ್ಚೆಪುಟ:Sathyaprasad Pai|ಚರ್ಚೆ]]) ೨೨:೩೬, ೨೦ ಆಗಸ್ಟ್ ೨೦೨೬ (IST)
#--[[ಸದಸ್ಯ:PrathikRamesh11|PrathikRamesh11]] ([[ಸದಸ್ಯರ ಚರ್ಚೆಪುಟ:PrathikRamesh11|ಚರ್ಚೆ]]) ೧೫:೧೦, ೨೧ ಆಗಸ್ಟ್ ೨೦೨೬ (IST)
#--[[ಸದಸ್ಯ:Mona Mendonca|Mona Mendonca]] ([[ಸದಸ್ಯರ ಚರ್ಚೆಪುಟ:Mona Mendonca|ಚರ್ಚೆ]]) ೧೨:೦೯, ೨೪ ಆಗಸ್ಟ್ ೨೦೨೬ (IST)
== ಫಲಿತ ==
{| class="wikitable sortable" style="width:100%; text-align:center; border:2px solid #2a4b8d; font-size:95%;"
! style="background:#2a4b8d; color:white; width:10%;" | ಸ್ಥಾನ
! style="background:#2a4b8d; color:white; text-align:left;" | ಹೆಸರು
! style="background:#2a4b8d; color:white; width:20%;" | ಲೇಖನಗಳ ಸಂಖ್ಯೆ
! style="background:#2a4b8d; color:white; width:20%;" | ಅಂಕಗಳು
|-
! style="background:#FFD700; color:#000; font-size:120%;" | 🥇 1
| style="background:#FFF8DC; text-align:left;" | '''Sathyaprasad Pai'''
| style="background:#FFF8DC;" | '''50'''
| style="background:#FFF8DC; color:#B8860B; font-size:110%;" | '''500'''
|-
! style="background:#C0C0C0; color:#000; font-size:120%;" | 🥈 2
| style="background:#F5F5F5; text-align:left;" | '''Santhosh Notagar99 '''
| style="background:#F5F5F5;" | '''25'''
| style="background:#F5F5F5; color:#666; font-size:110%;" | '''250'''
|-
! style="background:#CD7F32; color:#fff; font-size:120%;" | 🥉 3
| style="background:#FFF0E6; text-align:left;" |'''Prath20'''
| style="background:#FFF0E6;" | '''18'''
| style="background:#FFF0E6; color:#A0522D; font-size:110%;" | '''180'''
|-
! style="background:#E8F1FF; color:#2a4b8d;" | 4
| style="text-align:left;" | '''Mouna Changappa'''
| 16
| style="color:#2a4b8d; font-weight:bold;" | 160
|-
! style="background:#E8F1FF; color:#2a4b8d;" | 5
| style="background:#F8FBFF; text-align:left;" | '''Reema Jalihal'''
| style="background:#F8FBFF;" | 15
| style="background:#F8FBFF; color:#2a4b8d; font-weight:bold;" | 150
|-
! style="background:#E8F1FF; color:#2a4b8d;" | 6
| style="text-align:left;" | '''Ashwini Rai K'''
| 9
| style="color:#2a4b8d; font-weight:bold;" | 78
|-
! style="background:#E8F1FF; color:#2a4b8d;" | 7
| style="background:#F8FBFF; text-align:left;" | '''Pragathi. BH'''
| style="background:#F8FBFF;" | 6
| style="background:#F8FBFF; color:#2a4b8d; font-weight:bold;" | 60
|-
! style="background:#E8E8E8; color:#666;" | 8
| style="text-align:left;" | '''Shreelatha.Halemane'''
| 4
| style="color:#777;" | 38
|-
! style="background:#E8E8E8; color:#666;" | 9
| style="text-align:left;" | '''Hariprasad Shetty10'''
| 3
| style="color:#777;" | 30
|-
! style="background:#E8E8E8; color:#666;" | 10
| style="text-align:left;" | '''Mahaveer Indra'''
| 3
| style="color:#777;" | 30
|-
! style="background:#E8E8E8; color:#666;" | 11
| style="text-align:left;" | '''Vaishnu Pilar'''
| 10
| style="color:#777;" | 30
|-
! style="background:#E8E8E8; color:#666;" | 12
| style="text-align:left;" | '''Sannidhishetty'''
| 2
| style="color:#777;" | 20
|-
! style="background:#E8E8E8; color:#666;" | 13
| style="text-align:left;" | '''A826'''
| 1
| style="color:#777;" | -
|-
! style="background:#E8E8E8; color:#666;" | 14
| style="text-align:left;" | '''VASANTH S.N.'''
| 1
| style="color:#777;" | -
|}
== ಸಹಾಯ ಮತ್ತು ಪ್ರಶ್ನೆಗಳು ==
ಅಭಿಯಾನಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಭಿಯಾನದ ಚರ್ಚಾ ಪುಟ ಅನ್ನು ಬಳಸಿ.
|}
13zd61ke1vu33s1xrpiehrc83ohpbs7
1384605
1384604
2026-08-29T09:58:19Z
Santhosh Notagar99
82732
/* ಫಲಿತ */
1384605
wikitext
text/x-wiki
{| class=wikitable style="text-align:center; vertical-align:middle; background-color: #EEDEC5; color: #474747;"
|-
|[[File:India_Ukrain_Kannada_Ediathon.jpg|550px]]
|
{| class=wikitable style="background-color: #EEDEC5; color: #474747; margin: auto; font-size:20px; width:100%"
|-
| style="text-align:center; vertical-align:middle; padding:10px 15px; width:20%;" | [[File:Google Calendar icon (2015-2020).svg|32px|alt=|link=]]<br />'''ಅವಧಿ'''<hr />15–24 ಆಗಸ್ಟ್ 2026<br /> (9 ದಿನಗಳು)
| style="text-align:center; vertical-align:middle; padding:10px 15px; width:20%;" | [[File:WP25 Wikipedia Globe - blue.svg|32px|alt=|link=]]<br />'''ಭಾಷೆಗಳು'''<hr />ಭಾರತೀಯ ಮತ್ತು <br />ಉಕ್ರೇನಿಯನ್ ಭಾಷೆಯ <br />ವಿಕಿಪೀಡಿಯಗಳು
| style="text-align:center; vertical-align:middle; padding:10px 15px; width:20%;" | [[File:Noun Project Museum Icon 598061.svg|32px|alt=|link=]]<br />'''ವಿಷಯ'''<hr />ಯುನೆಸ್ಕೋ ವಿಶ್ವ ಪರಂಪರೆ
| style="text-align:center; vertical-align:middle; padding:10px 15px; width:20%;" | [[File:Community group icon.svg|32px|alt=|link=]]<br />'''ಭಾಗವಹಿಸುವವರು'''<hr />ಭಾರತೀಯ ಮತ್ತು <br />ಉಕ್ರೇನಿಯನ್ <br />ಸಮುದಾಯಗಳು
| style="text-align:center; vertical-align:middle; padding:10px 15px; width:20%;" | [[File:Plain scarlet arrow icons 4.png|32px|alt=|link=]]<br />'''ಮನ್ನಣೆ'''<hr />ಪ್ರಮಾಣಪತ್ರಗಳು, <br />ಉಡುಗೊರೆಗಳು ಮತ್ತು <br />ಗುರುತಿಸುವಿಕೆ
|}
'''ಗಡಿಯಾಚೆಯ ಪರಂಪರೆ''' ( Heritage Across Borders) ಎಂಬುದು ಭಾರತದ ಮತ್ತು ಉಕ್ರೇನ್ನ ವಿಕಿಮೀಡಿಯ ಸಮುದಾಯಗಳನ್ನು ಒಂದೆಡೆ ಸೇರಿಸುವ ಬಹುಭಾಷಾ ವಿಕಿಪೀಡಿಯ ಸಂಪಾದನಾ ಅಭಿಯಾನವಾಗಿದೆ. ಸಾಂಸ್ಕೃತಿಕ ಪರಂಪರೆಯ ಬಗ್ಗೆ ಎರಡೂ ದೇಶಗಳ ಸಮುದಾಯಗಳಲ್ಲಿರುವ ಸಾಮಾನ್ಯ ಆಸಕ್ತಿ ಮತ್ತು ಮೆಚ್ಚುಗೆಯನ್ನು ಆಚರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.<br>
ಈ ಅಭಿಯಾನವು '''15 ಆಗಸ್ಟ್ 2026'''ರಂದು, '''ಭಾರತದ ಸ್ವಾತಂತ್ರ್ಯ ದಿನ'''ದಂದು ಆರಂಭವಾಗಿ, '''24 ಆಗಸ್ಟ್ 2026'''ರಂದು, '''ಉಕ್ರೇನ್ನ ಸ್ವಾತಂತ್ರ್ಯ ದಿನ'''ದಂದು ಮುಕ್ತಾಯಗೊಳ್ಳಲಿದೆ. ವಿವಿಧ ಭಾಷೆಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ಭಾಷಾ ಸಮುದಾಯಗಳು ಉಕ್ರೇನ್ನ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ವಿಕಿಪೀಡಿಯ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಅದೇ ರೀತಿ, ಉಕ್ರೇನ್ನ ವಿಕಿಮೀಡಿಯ ಸಮುದಾಯವು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಲ್ಲಿ (Worklist) ಸೇರಿಸಲಾದ ಇತರ ಅರ್ಹ ವಿಷಯಗಳ ಕುರಿತೂ ಸಂಪಾದನೆಗಳನ್ನು ಮಾಡಬಹುದು.
|-
| colspan=2 style="text-align:left;"|
== ಭಾಗವಹಿಸುವುದು ಹೇಗೆ ==
# ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಿಂದ ಒಂದು ವಿಷಯವನ್ನು ಆಯ್ಕೆ ಮಾಡಬಹುದು.
# [https://meta.wikimedia.org/w/index.php?title=Special:EventDetails/4246&tab=WorklistPanel ಅಭಿಯಾನದ ಕಾರ್ಯಪಟ್ಟಿಯನ್ನು ತೆರೆಯಿರಿ →]
ಕಾರ್ಯಪಟ್ಟಿಯಲ್ಲಿ ಭಾರತ ಮತ್ತು ಉಕ್ರೇನ್ನ UNESCO ಪರಂಪರೆ ತಾಣಗಳಿಗೆ ಸಂಬಂಧಿಸಿದ ಸೂಚಿಸಲಾದ ಲೇಖನಗಳು ಇರುತ್ತವೆ.
# 15ರಿಂದ 24 ಆಗಸ್ಟ್ 2026ರ ನಡುವೆ ಲೇಖನವನ್ನು ರಚಿಸಿ ಅಥವಾ ಸುಧಾರಿಸಿ.
== ಅಂಕಗಳ ವ್ಯವಸ್ಥೆ ==
ಅಭಿಯಾನದ ಅವಧಿಯಲ್ಲಿ ಅರ್ಹ ಕೊಡುಗೆಗಳನ್ನು ನೀಡುವ ಭಾಗವಹಿಸುವವರಿಗೆ ಅಂಕಗಳನ್ನು ನೀಡಲಾಗುತ್ತದೆ:
# ಅರ್ಹವಾದ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಕಿಪೀಡಿಯ ಲೇಖನಕ್ಕೆ ಪ್ರತಿ 200 ಪದಗಳ ವಿಷಯ ಸೇರ್ಪಡೆಗೆ +1 ಅಂಕ.
# ಗಣನೀಯವಾಗಿ ಸುಧಾರಿಸಿದ ಪ್ರತಿಯೊಂದು ಲೇಖನಕ್ಕೆ +2 ಅಂಕಗಳು.
ಗಣನೀಯ ಸುಧಾರಣೆ ಎಂದರೆ ಮೂಲಾಧಾರಗಳೊಂದಿಗೆ ಸಾಕಷ್ಟು ವಿಶ್ವಕೋಶೀಯ ಮಾಹಿತಿಯನ್ನು ಸೇರಿಸುವುದು, ಲೇಖನದ ರಚನೆ ಅಥವಾ ಓದಲು ಸುಲಭವಾಗುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುವುದು, ಪ್ರಮುಖವಾಗಿ ಕಾಣೆಯಾಗಿದ್ದ ಮಾಹಿತಿಯನ್ನು ಸೇರಿಸುವುದು ಅಥವಾ ಅದಕ್ಕೆ ಸಮಾನವಾದ ಮಹತ್ವದ ಸುಧಾರಣೆಯನ್ನು ಮಾಡುವುದು.
== ಅಂಕಗಳಿಗೆ ಅರ್ಹತೆ ಪಡೆಯಲು ==
# ಹೊಸದಾಗಿ ರಚಿಸಲಾದ ಲೇಖನವು ಕನಿಷ್ಠ 500 ಪದಗಳ ಓದಲು ಯೋಗ್ಯವಾದ ಮತ್ತು ಅರ್ಥಪೂರ್ಣ ವಿಷಯವನ್ನು ಹೊಂದಿರಬೇಕು.
# ಅಸ್ತಿತ್ವದಲ್ಲಿರುವ ಲೇಖನದ ಸುಧಾರಣೆಗೆ ಕನಿಷ್ಠ 300 ಪದಗಳ ಹೊಸ ಮತ್ತು ಅರ್ಥಪೂರ್ಣ ವಿಷಯವನ್ನು ಸೇರಿಸಬೇಕು. ಆದರೆ ಸುಧಾರಣೆಯು ಮುಖ್ಯವಾಗಿ ಗಮನಾರ್ಹ ಪುನರ್ರಚನೆ, ಭಾಷಾ ಸಂಪಾದನೆ, ಮೂಲಗಳ ಸೇರ್ಪಡೆ ಅಥವಾ ಸ್ಪಷ್ಟವಾಗಿ ಪ್ರದರ್ಶಿಸಬಹುದಾದ ಇತರ ಮಹತ್ವದ ಸುಧಾರಣೆಯನ್ನು ಒಳಗೊಂಡಿದ್ದರೆ ಈ ನಿಯಮದಿಂದ ವಿನಾಯಿತಿ ಇರಬಹುದು.
# ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳಿಗೆ ವಿಶ್ವಾಸಾರ್ಹ ಮೂಲಗಳ ಆಧಾರ ಇರಬೇಕು.
# ಎಲ್ಲಾ ಕೊಡುಗೆಗಳು ಸಂಬಂಧಿತ ಭಾಷೆಯ ವಿಕಿಪೀಡಿಯದ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.
# ಸಣ್ಣಪುಟ್ಟ ಸಂಪಾದನೆಗಳು — ಉದಾಹರಣೆಗೆ ಅಕ್ಷರದೋಷ ಸರಿಪಡಿಸುವುದು, ವಿನ್ಯಾಸ ಬದಲಾವಣೆ, ವರ್ಗಗಳನ್ನು ಸೇರಿಸುವುದು ಅಥವಾ ಪ್ರತ್ಯೇಕ ಲಿಂಕ್ಗಳನ್ನು ಸೇರಿಸುವುದು — ಇವುಗಳನ್ನು ಮಾತ್ರ ಆಧರಿಸಿ ಗಣನೀಯ ಸುಧಾರಣೆಯಾಗಿ ಪರಿಗಣಿಸಲಾಗುವುದಿಲ್ಲ.
== ಬಹುಮಾನಗಳು ಮತ್ತು ಗೌರವ ==
ಅಭಿಯಾನದ ನಿಯಮಗಳನ್ನು ಪೂರೈಸುವ ಭಾಗವಹಿಸುವವರು ಕೆಳಗಿನ ಗೌರವಗಳಿಗೆ ಅರ್ಹರಾಗಿರುತ್ತಾರೆ:
# ಅರ್ಹತೆ ಪಡೆದ ಎಲ್ಲಾ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣಪತ್ರಗಳು.
# ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ಭಾಗವಹಿಸುವವರಿಗೆ ಆನ್ಲೈನ್ ಶಾಪಿಂಗ್ ವೌಚರ್ಗಳು. ಭಾರತೀಯ ಮತ್ತು ಉಕ್ರೇನಿಯನ್ ಸಮುದಾಯಗಳಿಗೆ ಪ್ರತ್ಯೇಕ ಶ್ರೇಯಾಂಕಗಳನ್ನು ಪರಿಗಣಿಸಲಾಗುತ್ತದೆ:
#* 1ನೇ ಸ್ಥಾನ — $100 / ₹10,000
#* 2ನೇ ಸ್ಥಾನ — $50 / ₹5,000
#* 3ನೇ ಸ್ಥಾನ — $30 / ₹3,000
ಅಭಿಯಾನದ ಫಲಿತಾಂಶಗಳನ್ನು ಪರಿಶೀಲಿಸಿ ದೃಢಪಡಿಸಿದ ನಂತರ, ಅರ್ಹ ಭಾಗವಹಿಸುವವರನ್ನು ಆಯೋಜಕರು ಸಂಪರ್ಕಿಸುತ್ತಾರೆ.
== ಮೆಟಾ ಪುಟದ ಲಿಂಕ್ ==
[[meta:Event:Heritage_Across_Borders]]
== ಆಯೋಜಕರು ==
ಸಂತೋಷ್ ನೋಟಗಾರ್ ([[User:Santhosh Notagar99|Santhosh Notagar]])
== ಉಕ್ರೇನ್ ಕುರಿತ ಲೇಖನಗಳ ಪಟ್ಟಿ ==
https://meta.wikimedia.org/wiki/Event:Heritage_Across_Borders/Article_List
== ನಿಮ್ಮ ಲೇಖನಗಳನ್ನು ಇಲ್ಲಿ ಸೇರಿಸಿ ==
https://wikieval.toolforge.org/contests/3
== ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) ==
# [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೪:೫೪, ೧೧ ಆಗಸ್ಟ್ ೨೦೨೬ (IST)
#[[ಸದಸ್ಯ:Hariprasad Shetty10|Hariprasad Shetty10]] ([[ಸದಸ್ಯರ ಚರ್ಚೆಪುಟ:Hariprasad Shetty10|ಚರ್ಚೆ]]) ೧೪:೫೮, ೧೧ ಆಗಸ್ಟ್ ೨೦೨೬ (IST)
# [[ಸದಸ್ಯ:Mahaveer Indra|ಮಹಾವೀರ ಇಂದ್ರ]] ([[ಸದಸ್ಯರ ಚರ್ಚೆಪುಟ:Mahaveer Indra|ಚರ್ಚೆ]]) ೦೫:೫೯, ೧೫ ಆಗಸ್ಟ್ ೨೦೨೬ (IST)
# [[User:Mallikarjunasj|Mallikarjunasj]] ([[User talk:Mallikarjunasj|talk]]) ೦೮:೩೮, ೧೫ ಆಗಸ್ಟ್ ೨೦೨೬ (IST)
#--[[ಸದಸ್ಯ:Ashwini Rai K|Ashwini Rai K]] ([[ಸದಸ್ಯರ ಚರ್ಚೆಪುಟ:Ashwini Rai K|ಚರ್ಚೆ]]) ೧೪:೪೮, ೧೬ ಆಗಸ್ಟ್ ೨೦೨೬ (IST)
# [[ಸದಸ್ಯ:Joyce Muriel|Joyce Muriel]] ([[ಸದಸ್ಯರ ಚರ್ಚೆಪುಟ:Joyce Muriel|ಚರ್ಚೆ]]) ೧೨:೦೬, ೧೭ ಆಗಸ್ಟ್ ೨೦೨೬ (IST)
# --[[ಸದಸ್ಯ:Prath20|Prath20]] ([[ಸದಸ್ಯರ ಚರ್ಚೆಪುಟ:Prath20|ಚರ್ಚೆ]]) ೨೨:೨೧, ೧೭ ಆಗಸ್ಟ್ ೨೦೨೬ (IST)
# --[[ಸದಸ್ಯ:Pragathi. BH|Pragathi. BH]] ([[ಸದಸ್ಯರ ಚರ್ಚೆಪುಟ:Pragathi. BH|ಚರ್ಚೆ]]) ೨೩:೦೯, ೧೭ ಆಗಸ್ಟ್ ೨೦೨೬ (IST)
#--[[ಸದಸ್ಯ:Mouna Changappa|Mouna Changappa]] ([[ಸದಸ್ಯರ ಚರ್ಚೆಪುಟ:Mouna Changappa|ಚರ್ಚೆ]]) ೦೦:೦೫, ೧೮ ಆಗಸ್ಟ್ ೨೦೨೬ (IST)
# [[ಸದಸ್ಯ:VASANTH S.N.|VASANTH S.N.]] ([[ಸದಸ್ಯರ ಚರ್ಚೆಪುಟ:VASANTH S.N.|ಚರ್ಚೆ]]) ೧೮:೦೦, ೧೮ ಆಗಸ್ಟ್ ೨೦೨೬ (IST)
# [[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೨೧:೨೬, ೧೮ ಆಗಸ್ಟ್ ೨೦೨೬ (IST)
#--[[ಸದಸ್ಯ:Shreelatha.Halemane|Shreelatha.Halemane]] ([[ಸದಸ್ಯರ ಚರ್ಚೆಪುಟ:Shreelatha.Halemane|ಚರ್ಚೆ]]) ೧೧:೦೫, ೧೯ ಆಗಸ್ಟ್ ೨೦೨೬ (IST)
#--[[ಸದಸ್ಯ:Sannidhishetty|Sannidhishetty]] ([[ಸದಸ್ಯರ ಚರ್ಚೆಪುಟ:Sannidhishetty|ಚರ್ಚೆ]]) ೨೨:೨೬, ೨೦ ಆಗಸ್ಟ್ ೨೦೨೬ (IST)
#--[[ಸದಸ್ಯ:Sathyaprasad Pai|Sathyaprasad Pai]] ([[ಸದಸ್ಯರ ಚರ್ಚೆಪುಟ:Sathyaprasad Pai|ಚರ್ಚೆ]]) ೨೨:೩೬, ೨೦ ಆಗಸ್ಟ್ ೨೦೨೬ (IST)
#--[[ಸದಸ್ಯ:PrathikRamesh11|PrathikRamesh11]] ([[ಸದಸ್ಯರ ಚರ್ಚೆಪುಟ:PrathikRamesh11|ಚರ್ಚೆ]]) ೧೫:೧೦, ೨೧ ಆಗಸ್ಟ್ ೨೦೨೬ (IST)
#--[[ಸದಸ್ಯ:Mona Mendonca|Mona Mendonca]] ([[ಸದಸ್ಯರ ಚರ್ಚೆಪುಟ:Mona Mendonca|ಚರ್ಚೆ]]) ೧೨:೦೯, ೨೪ ಆಗಸ್ಟ್ ೨೦೨೬ (IST)
== ಫಲಿತಾಂಶ ==
{| class="wikitable sortable" style="width:100%; text-align:center; border:2px solid #2a4b8d; font-size:95%;"
! style="background:#2a4b8d; color:white; width:10%;" | ಸ್ಥಾನ
! style="background:#2a4b8d; color:white; text-align:left;" | ಹೆಸರು
! style="background:#2a4b8d; color:white; width:20%;" | ಲೇಖನಗಳ ಸಂಖ್ಯೆ
! style="background:#2a4b8d; color:white; width:20%;" | ಅಂಕಗಳು
|-
! style="background:#FFD700; color:#000; font-size:120%;" | 🥇 1
| style="background:#FFF8DC; text-align:left;" | '''Sathyaprasad Pai'''
| style="background:#FFF8DC;" | '''50'''
| style="background:#FFF8DC; color:#B8860B; font-size:110%;" | '''500'''
|-
! style="background:#C0C0C0; color:#000; font-size:120%;" | 🥈 2
| style="background:#F5F5F5; text-align:left;" | '''Santhosh Notagar99 '''
| style="background:#F5F5F5;" | '''25'''
| style="background:#F5F5F5; color:#666; font-size:110%;" | '''250'''
|-
! style="background:#CD7F32; color:#fff; font-size:120%;" | 🥉 3
| style="background:#FFF0E6; text-align:left;" |'''Prath20'''
| style="background:#FFF0E6;" | '''18'''
| style="background:#FFF0E6; color:#A0522D; font-size:110%;" | '''180'''
|-
! style="background:#E8F1FF; color:#2a4b8d;" | 4
| style="text-align:left;" | '''Mouna Changappa'''
| 16
| style="color:#2a4b8d; font-weight:bold;" | 160
|-
! style="background:#E8F1FF; color:#2a4b8d;" | 5
| style="background:#F8FBFF; text-align:left;" | '''Reema Jalihal'''
| style="background:#F8FBFF;" | 15
| style="background:#F8FBFF; color:#2a4b8d; font-weight:bold;" | 150
|-
! style="background:#E8F1FF; color:#2a4b8d;" | 6
| style="text-align:left;" | '''Ashwini Rai K'''
| 9
| style="color:#2a4b8d; font-weight:bold;" | 78
|-
! style="background:#E8F1FF; color:#2a4b8d;" | 7
| style="background:#F8FBFF; text-align:left;" | '''Pragathi. BH'''
| style="background:#F8FBFF;" | 6
| style="background:#F8FBFF; color:#2a4b8d; font-weight:bold;" | 60
|-
! style="background:#E8E8E8; color:#666;" | 8
| style="text-align:left;" | '''Shreelatha.Halemane'''
| 4
| style="color:#777;" | 38
|-
! style="background:#E8E8E8; color:#666;" | 9
| style="text-align:left;" | '''Hariprasad Shetty10'''
| 3
| style="color:#777;" | 30
|-
! style="background:#E8E8E8; color:#666;" | 10
| style="text-align:left;" | '''Mahaveer Indra'''
| 3
| style="color:#777;" | 30
|-
! style="background:#E8E8E8; color:#666;" | 11
| style="text-align:left;" | '''Vaishnu Pilar'''
| 10
| style="color:#777;" | 30
|-
! style="background:#E8E8E8; color:#666;" | 12
| style="text-align:left;" | '''Sannidhishetty'''
| 2
| style="color:#777;" | 20
|-
! style="background:#E8E8E8; color:#666;" | 13
| style="text-align:left;" | '''A826'''
| 1
| style="color:#777;" | -
|-
! style="background:#E8E8E8; color:#666;" | 14
| style="text-align:left;" | '''VASANTH S.N.'''
| 1
| style="color:#777;" | -
|}
== ಸಹಾಯ ಮತ್ತು ಪ್ರಶ್ನೆಗಳು ==
ಅಭಿಯಾನಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಭಿಯಾನದ ಚರ್ಚಾ ಪುಟ ಅನ್ನು ಬಳಸಿ.
|}
nv8f36b11cl1xvw31wg1qfi9gg60vow
1384606
1384605
2026-08-29T09:59:02Z
Santhosh Notagar99
82732
1384606
wikitext
text/x-wiki
{| class=wikitable style="text-align:center; vertical-align:middle; background-color: #EEDEC5; color: #474747;"
|-
|[[File:India_Ukrain_Kannada_Ediathon.jpg|550px]]
|
{| class=wikitable style="background-color: #EEDEC5; color: #474747; margin: auto; font-size:20px; width:100%"
|-
| style="text-align:center; vertical-align:middle; padding:10px 15px; width:20%;" | [[File:Google Calendar icon (2015-2020).svg|32px|alt=|link=]]<br />'''ಅವಧಿ'''<hr />15–24 ಆಗಸ್ಟ್ 2026<br /> (9 ದಿನಗಳು)
| style="text-align:center; vertical-align:middle; padding:10px 15px; width:20%;" | [[File:WP25 Wikipedia Globe - blue.svg|32px|alt=|link=]]<br />'''ಭಾಷೆಗಳು'''<hr />ಭಾರತೀಯ ಮತ್ತು <br />ಉಕ್ರೇನಿಯನ್ ಭಾಷೆಯ <br />ವಿಕಿಪೀಡಿಯಗಳು
| style="text-align:center; vertical-align:middle; padding:10px 15px; width:20%;" | [[File:Noun Project Museum Icon 598061.svg|32px|alt=|link=]]<br />'''ವಿಷಯ'''<hr />ಯುನೆಸ್ಕೋ ವಿಶ್ವ ಪರಂಪರೆ
| style="text-align:center; vertical-align:middle; padding:10px 15px; width:20%;" | [[File:Community group icon.svg|32px|alt=|link=]]<br />'''ಭಾಗವಹಿಸುವವರು'''<hr />ಭಾರತೀಯ ಮತ್ತು <br />ಉಕ್ರೇನಿಯನ್ <br />ಸಮುದಾಯಗಳು
| style="text-align:center; vertical-align:middle; padding:10px 15px; width:20%;" | [[File:Plain scarlet arrow icons 4.png|32px|alt=|link=]]<br />'''ಮನ್ನಣೆ'''<hr />ಪ್ರಮಾಣಪತ್ರಗಳು, <br />ಉಡುಗೊರೆಗಳು ಮತ್ತು <br />ಗುರುತಿಸುವಿಕೆ
|}
'''ಗಡಿಯಾಚೆಯ ಪರಂಪರೆ''' ( Heritage Across Borders) ಎಂಬುದು ಭಾರತದ ಮತ್ತು ಉಕ್ರೇನ್ನ ವಿಕಿಮೀಡಿಯ ಸಮುದಾಯಗಳನ್ನು ಒಂದೆಡೆ ಸೇರಿಸುವ ಬಹುಭಾಷಾ ವಿಕಿಪೀಡಿಯ ಸಂಪಾದನಾ ಅಭಿಯಾನವಾಗಿದೆ. ಸಾಂಸ್ಕೃತಿಕ ಪರಂಪರೆಯ ಬಗ್ಗೆ ಎರಡೂ ದೇಶಗಳ ಸಮುದಾಯಗಳಲ್ಲಿರುವ ಸಾಮಾನ್ಯ ಆಸಕ್ತಿ ಮತ್ತು ಮೆಚ್ಚುಗೆಯನ್ನು ಆಚರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.<br>
ಈ ಅಭಿಯಾನವು '''15 ಆಗಸ್ಟ್ 2026'''ರಂದು, '''ಭಾರತದ ಸ್ವಾತಂತ್ರ್ಯ ದಿನ'''ದಂದು ಆರಂಭವಾಗಿ, '''24 ಆಗಸ್ಟ್ 2026'''ರಂದು, '''ಉಕ್ರೇನ್ನ ಸ್ವಾತಂತ್ರ್ಯ ದಿನ'''ದಂದು ಮುಕ್ತಾಯಗೊಳ್ಳಲಿದೆ. ವಿವಿಧ ಭಾಷೆಗಳ ನಡುವೆ ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಭಾರತೀಯ ಭಾಷಾ ಸಮುದಾಯಗಳು ಉಕ್ರೇನ್ನ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ವಿಕಿಪೀಡಿಯ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಅದೇ ರೀತಿ, ಉಕ್ರೇನ್ನ ವಿಕಿಮೀಡಿಯ ಸಮುದಾಯವು ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತ ಲೇಖನಗಳನ್ನು ರಚಿಸಲು ಮತ್ತು ಸುಧಾರಿಸಲು ಪ್ರೋತ್ಸಾಹಿಸಲಾಗುತ್ತದೆ. ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಲ್ಲಿ (Worklist) ಸೇರಿಸಲಾದ ಇತರ ಅರ್ಹ ವಿಷಯಗಳ ಕುರಿತೂ ಸಂಪಾದನೆಗಳನ್ನು ಮಾಡಬಹುದು.
|-
| colspan=2 style="text-align:left;"|
== ಭಾಗವಹಿಸುವುದು ಹೇಗೆ ==
# ಭಾಗವಹಿಸುವವರು ಅಭಿಯಾನದ ಕಾರ್ಯಪಟ್ಟಿಯಿಂದ ಒಂದು ವಿಷಯವನ್ನು ಆಯ್ಕೆ ಮಾಡಬಹುದು.
# [https://meta.wikimedia.org/w/index.php?title=Special:EventDetails/4246&tab=WorklistPanel ಅಭಿಯಾನದ ಕಾರ್ಯಪಟ್ಟಿಯನ್ನು ತೆರೆಯಿರಿ →]
ಕಾರ್ಯಪಟ್ಟಿಯಲ್ಲಿ ಭಾರತ ಮತ್ತು ಉಕ್ರೇನ್ನ UNESCO ಪರಂಪರೆ ತಾಣಗಳಿಗೆ ಸಂಬಂಧಿಸಿದ ಸೂಚಿಸಲಾದ ಲೇಖನಗಳು ಇರುತ್ತವೆ.
# 15ರಿಂದ 24 ಆಗಸ್ಟ್ 2026ರ ನಡುವೆ ಲೇಖನವನ್ನು ರಚಿಸಿ ಅಥವಾ ಸುಧಾರಿಸಿ.
== ಅಂಕಗಳ ವ್ಯವಸ್ಥೆ ==
ಅಭಿಯಾನದ ಅವಧಿಯಲ್ಲಿ ಅರ್ಹ ಕೊಡುಗೆಗಳನ್ನು ನೀಡುವ ಭಾಗವಹಿಸುವವರಿಗೆ ಅಂಕಗಳನ್ನು ನೀಡಲಾಗುತ್ತದೆ:
# ಅರ್ಹವಾದ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಕಿಪೀಡಿಯ ಲೇಖನಕ್ಕೆ ಪ್ರತಿ 200 ಪದಗಳ ವಿಷಯ ಸೇರ್ಪಡೆಗೆ +1 ಅಂಕ.
# ಗಣನೀಯವಾಗಿ ಸುಧಾರಿಸಿದ ಪ್ರತಿಯೊಂದು ಲೇಖನಕ್ಕೆ +2 ಅಂಕಗಳು.
ಗಣನೀಯ ಸುಧಾರಣೆ ಎಂದರೆ ಮೂಲಾಧಾರಗಳೊಂದಿಗೆ ಸಾಕಷ್ಟು ವಿಶ್ವಕೋಶೀಯ ಮಾಹಿತಿಯನ್ನು ಸೇರಿಸುವುದು, ಲೇಖನದ ರಚನೆ ಅಥವಾ ಓದಲು ಸುಲಭವಾಗುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುವುದು, ಪ್ರಮುಖವಾಗಿ ಕಾಣೆಯಾಗಿದ್ದ ಮಾಹಿತಿಯನ್ನು ಸೇರಿಸುವುದು ಅಥವಾ ಅದಕ್ಕೆ ಸಮಾನವಾದ ಮಹತ್ವದ ಸುಧಾರಣೆಯನ್ನು ಮಾಡುವುದು.
== ಅಂಕಗಳಿಗೆ ಅರ್ಹತೆ ಪಡೆಯಲು ==
# ಹೊಸದಾಗಿ ರಚಿಸಲಾದ ಲೇಖನವು ಕನಿಷ್ಠ 500 ಪದಗಳ ಓದಲು ಯೋಗ್ಯವಾದ ಮತ್ತು ಅರ್ಥಪೂರ್ಣ ವಿಷಯವನ್ನು ಹೊಂದಿರಬೇಕು.
# ಅಸ್ತಿತ್ವದಲ್ಲಿರುವ ಲೇಖನದ ಸುಧಾರಣೆಗೆ ಕನಿಷ್ಠ 300 ಪದಗಳ ಹೊಸ ಮತ್ತು ಅರ್ಥಪೂರ್ಣ ವಿಷಯವನ್ನು ಸೇರಿಸಬೇಕು. ಆದರೆ ಸುಧಾರಣೆಯು ಮುಖ್ಯವಾಗಿ ಗಮನಾರ್ಹ ಪುನರ್ರಚನೆ, ಭಾಷಾ ಸಂಪಾದನೆ, ಮೂಲಗಳ ಸೇರ್ಪಡೆ ಅಥವಾ ಸ್ಪಷ್ಟವಾಗಿ ಪ್ರದರ್ಶಿಸಬಹುದಾದ ಇತರ ಮಹತ್ವದ ಸುಧಾರಣೆಯನ್ನು ಒಳಗೊಂಡಿದ್ದರೆ ಈ ನಿಯಮದಿಂದ ವಿನಾಯಿತಿ ಇರಬಹುದು.
# ಅಗತ್ಯವಿರುವ ಎಲ್ಲಾ ಪ್ರಮುಖ ಮಾಹಿತಿಗಳಿಗೆ ವಿಶ್ವಾಸಾರ್ಹ ಮೂಲಗಳ ಆಧಾರ ಇರಬೇಕು.
# ಎಲ್ಲಾ ಕೊಡುಗೆಗಳು ಸಂಬಂಧಿತ ಭಾಷೆಯ ವಿಕಿಪೀಡಿಯದ ನೀತಿಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿರಬೇಕು.
# ಸಣ್ಣಪುಟ್ಟ ಸಂಪಾದನೆಗಳು — ಉದಾಹರಣೆಗೆ ಅಕ್ಷರದೋಷ ಸರಿಪಡಿಸುವುದು, ವಿನ್ಯಾಸ ಬದಲಾವಣೆ, ವರ್ಗಗಳನ್ನು ಸೇರಿಸುವುದು ಅಥವಾ ಪ್ರತ್ಯೇಕ ಲಿಂಕ್ಗಳನ್ನು ಸೇರಿಸುವುದು — ಇವುಗಳನ್ನು ಮಾತ್ರ ಆಧರಿಸಿ ಗಣನೀಯ ಸುಧಾರಣೆಯಾಗಿ ಪರಿಗಣಿಸಲಾಗುವುದಿಲ್ಲ.
== ಬಹುಮಾನಗಳು ಮತ್ತು ಗೌರವ ==
ಅಭಿಯಾನದ ನಿಯಮಗಳನ್ನು ಪೂರೈಸುವ ಭಾಗವಹಿಸುವವರು ಕೆಳಗಿನ ಗೌರವಗಳಿಗೆ ಅರ್ಹರಾಗಿರುತ್ತಾರೆ:
# ಅರ್ಹತೆ ಪಡೆದ ಎಲ್ಲಾ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣಪತ್ರಗಳು.
# ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೂರು ಭಾಗವಹಿಸುವವರಿಗೆ ಆನ್ಲೈನ್ ಶಾಪಿಂಗ್ ವೌಚರ್ಗಳು. ಭಾರತೀಯ ಮತ್ತು ಉಕ್ರೇನಿಯನ್ ಸಮುದಾಯಗಳಿಗೆ ಪ್ರತ್ಯೇಕ ಶ್ರೇಯಾಂಕಗಳನ್ನು ಪರಿಗಣಿಸಲಾಗುತ್ತದೆ:
#* 1ನೇ ಸ್ಥಾನ — $100 / ₹10,000
#* 2ನೇ ಸ್ಥಾನ — $50 / ₹5,000
#* 3ನೇ ಸ್ಥಾನ — $30 / ₹3,000
ಅಭಿಯಾನದ ಫಲಿತಾಂಶಗಳನ್ನು ಪರಿಶೀಲಿಸಿ ದೃಢಪಡಿಸಿದ ನಂತರ, ಅರ್ಹ ಭಾಗವಹಿಸುವವರನ್ನು ಆಯೋಜಕರು ಸಂಪರ್ಕಿಸುತ್ತಾರೆ.
== ಮೆಟಾ ಪುಟದ ಲಿಂಕ್ ==
[[meta:Event:Heritage_Across_Borders]]
== ಆಯೋಜಕರು ==
ಸಂತೋಷ್ ನೋಟಗಾರ್ ([[User:Santhosh Notagar99|Santhosh Notagar]])
== ಉಕ್ರೇನ್ ಕುರಿತ ಲೇಖನಗಳ ಪಟ್ಟಿ ==
https://meta.wikimedia.org/wiki/Event:Heritage_Across_Borders/Article_List
== ನಿಮ್ಮ ಲೇಖನಗಳನ್ನು ಇಲ್ಲಿ ಸೇರಿಸಿ ==
https://wikieval.toolforge.org/contests/3
== ಭಾಗವಹಿಸುವವರು (ದಯವಿಟ್ಟು ಕೆಳಗೆ ಸಹಿ ಮಾಡಿ) ==
# [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೪:೫೪, ೧೧ ಆಗಸ್ಟ್ ೨೦೨೬ (IST)
#[[ಸದಸ್ಯ:Hariprasad Shetty10|Hariprasad Shetty10]] ([[ಸದಸ್ಯರ ಚರ್ಚೆಪುಟ:Hariprasad Shetty10|ಚರ್ಚೆ]]) ೧೪:೫೮, ೧೧ ಆಗಸ್ಟ್ ೨೦೨೬ (IST)
# [[ಸದಸ್ಯ:Mahaveer Indra|ಮಹಾವೀರ ಇಂದ್ರ]] ([[ಸದಸ್ಯರ ಚರ್ಚೆಪುಟ:Mahaveer Indra|ಚರ್ಚೆ]]) ೦೫:೫೯, ೧೫ ಆಗಸ್ಟ್ ೨೦೨೬ (IST)
# [[User:Mallikarjunasj|Mallikarjunasj]] ([[User talk:Mallikarjunasj|talk]]) ೦೮:೩೮, ೧೫ ಆಗಸ್ಟ್ ೨೦೨೬ (IST)
#--[[ಸದಸ್ಯ:Ashwini Rai K|Ashwini Rai K]] ([[ಸದಸ್ಯರ ಚರ್ಚೆಪುಟ:Ashwini Rai K|ಚರ್ಚೆ]]) ೧೪:೪೮, ೧೬ ಆಗಸ್ಟ್ ೨೦೨೬ (IST)
# [[ಸದಸ್ಯ:Joyce Muriel|Joyce Muriel]] ([[ಸದಸ್ಯರ ಚರ್ಚೆಪುಟ:Joyce Muriel|ಚರ್ಚೆ]]) ೧೨:೦೬, ೧೭ ಆಗಸ್ಟ್ ೨೦೨೬ (IST)
# --[[ಸದಸ್ಯ:Prath20|Prath20]] ([[ಸದಸ್ಯರ ಚರ್ಚೆಪುಟ:Prath20|ಚರ್ಚೆ]]) ೨೨:೨೧, ೧೭ ಆಗಸ್ಟ್ ೨೦೨೬ (IST)
# --[[ಸದಸ್ಯ:Pragathi. BH|Pragathi. BH]] ([[ಸದಸ್ಯರ ಚರ್ಚೆಪುಟ:Pragathi. BH|ಚರ್ಚೆ]]) ೨೩:೦೯, ೧೭ ಆಗಸ್ಟ್ ೨೦೨೬ (IST)
#--[[ಸದಸ್ಯ:Mouna Changappa|Mouna Changappa]] ([[ಸದಸ್ಯರ ಚರ್ಚೆಪುಟ:Mouna Changappa|ಚರ್ಚೆ]]) ೦೦:೦೫, ೧೮ ಆಗಸ್ಟ್ ೨೦೨೬ (IST)
# [[ಸದಸ್ಯ:VASANTH S.N.|VASANTH S.N.]] ([[ಸದಸ್ಯರ ಚರ್ಚೆಪುಟ:VASANTH S.N.|ಚರ್ಚೆ]]) ೧೮:೦೦, ೧೮ ಆಗಸ್ಟ್ ೨೦೨೬ (IST)
# [[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೨೧:೨೬, ೧೮ ಆಗಸ್ಟ್ ೨೦೨೬ (IST)
#--[[ಸದಸ್ಯ:Shreelatha.Halemane|Shreelatha.Halemane]] ([[ಸದಸ್ಯರ ಚರ್ಚೆಪುಟ:Shreelatha.Halemane|ಚರ್ಚೆ]]) ೧೧:೦೫, ೧೯ ಆಗಸ್ಟ್ ೨೦೨೬ (IST)
#--[[ಸದಸ್ಯ:Sannidhishetty|Sannidhishetty]] ([[ಸದಸ್ಯರ ಚರ್ಚೆಪುಟ:Sannidhishetty|ಚರ್ಚೆ]]) ೨೨:೨೬, ೨೦ ಆಗಸ್ಟ್ ೨೦೨೬ (IST)
#--[[ಸದಸ್ಯ:Sathyaprasad Pai|Sathyaprasad Pai]] ([[ಸದಸ್ಯರ ಚರ್ಚೆಪುಟ:Sathyaprasad Pai|ಚರ್ಚೆ]]) ೨೨:೩೬, ೨೦ ಆಗಸ್ಟ್ ೨೦೨೬ (IST)
#--[[ಸದಸ್ಯ:PrathikRamesh11|PrathikRamesh11]] ([[ಸದಸ್ಯರ ಚರ್ಚೆಪುಟ:PrathikRamesh11|ಚರ್ಚೆ]]) ೧೫:೧೦, ೨೧ ಆಗಸ್ಟ್ ೨೦೨೬ (IST)
#--[[ಸದಸ್ಯ:Mona Mendonca|Mona Mendonca]] ([[ಸದಸ್ಯರ ಚರ್ಚೆಪುಟ:Mona Mendonca|ಚರ್ಚೆ]]) ೧೨:೦೯, ೨೪ ಆಗಸ್ಟ್ ೨೦೨೬ (IST)
== ಫಲಿತಾಂಶ ==
{| class="wikitable sortable" style="width:100%; text-align:center; border:2px solid #2a4b8d; font-size:95%;"
! style="background:#2a4b8d; color:white; width:10%;" | ಸ್ಥಾನ
! style="background:#2a4b8d; color:white; text-align:left;" | ಹೆಸರು
! style="background:#2a4b8d; color:white; width:20%;" | ಲೇಖನಗಳ ಸಂಖ್ಯೆ
! style="background:#2a4b8d; color:white; width:20%;" | ಅಂಕಗಳು
|-
! style="background:#FFD700; color:#000; font-size:120%;" | 🥇 1
| style="background:#FFF8DC; text-align:left;" | '''Sathyaprasad Pai'''
| style="background:#FFF8DC;" | '''50'''
| style="background:#FFF8DC; color:#B8860B; font-size:110%;" | '''500'''
|-
! style="background:#C0C0C0; color:#000; font-size:120%;" | 🥈 2
| style="background:#F5F5F5; text-align:left;" | '''Santhosh Notagar99 '''
| style="background:#F5F5F5;" | '''25'''
| style="background:#F5F5F5; color:#666; font-size:110%;" | '''250'''
|-
! style="background:#CD7F32; color:#fff; font-size:120%;" | 🥉 3
| style="background:#FFF0E6; text-align:left;" |'''Prath20'''
| style="background:#FFF0E6;" | '''18'''
| style="background:#FFF0E6; color:#A0522D; font-size:110%;" | '''180'''
|-
! style="background:#E8F1FF; color:#2a4b8d;" | 4
| style="text-align:left;" | '''Mouna Changappa'''
| 16
| style="color:#2a4b8d; font-weight:bold;" | 160
|-
! style="background:#E8F1FF; color:#2a4b8d;" | 5
| style="background:#F8FBFF; text-align:left;" | '''Reema Jalihal'''
| style="background:#F8FBFF;" | 15
| style="background:#F8FBFF; color:#2a4b8d; font-weight:bold;" | 150
|-
! style="background:#E8F1FF; color:#2a4b8d;" | 6
| style="text-align:left;" | '''Ashwini Rai K'''
| 9
| style="color:#2a4b8d; font-weight:bold;" | 78
|-
! style="background:#E8F1FF; color:#2a4b8d;" | 7
| style="background:#F8FBFF; text-align:left;" | '''Pragathi. BH'''
| style="background:#F8FBFF;" | 6
| style="background:#F8FBFF; color:#2a4b8d; font-weight:bold;" | 60
|-
! style="background:#E8E8E8; color:#666;" | 8
| style="text-align:left;" | '''Shreelatha.Halemane'''
| 4
| style="color:#777;" | 38
|-
! style="background:#E8E8E8; color:#666;" | 9
| style="text-align:left;" | '''Hariprasad Shetty10'''
| 3
| style="color:#777;" | 30
|-
! style="background:#E8E8E8; color:#666;" | 10
| style="text-align:left;" | '''Mahaveer Indra'''
| 3
| style="color:#777;" | 30
|-
! style="background:#E8E8E8; color:#666;" | 11
| style="text-align:left;" | '''Vaishnu Pilar'''
| 10
| style="color:#777;" | 30
|-
! style="background:#E8E8E8; color:#666;" | 12
| style="text-align:left;" | '''Sannidhishetty'''
| 2
| style="color:#777;" | 20
|-
! style="background:#E8E8E8; color:#666;" | 13
| style="text-align:left;" | '''A826'''
| 1
| style="color:#777;" | -
|-
! style="background:#E8E8E8; color:#666;" | 14
| style="text-align:left;" | '''VASANTH S.N.'''
| 1
| style="color:#777;" | -
|}
== ಸಹಾಯ ಮತ್ತು ಪ್ರಶ್ನೆಗಳು ==
ಅಭಿಯಾನಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು ಅಥವಾ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಭಿಯಾನದ ಚರ್ಚಾ ಪುಟ ಅನ್ನು ಬಳಸಿ.
|}
p1c4fee2espx3o18b62m0soxcl22zau
ಲಿವಾಡಿಯಾ ಅರಮನೆ
0
180529
1384584
1383650
2026-08-28T16:46:02Z
InternetArchiveBot
69876
Rescuing 1 sources and tagging 1 as dead.) #IABot (v2.0.9.5
1384584
wikitext
text/x-wiki
{{Short description|Museum in Livadiya, Crimea}}
{{Infobox building
| name = ಲಿವಾಡಿಯಾ ಅರಮನೆ
| native_name = Ливадийский дворец
| native_name_lang = ru
| logo =
| logo_size =
| logo_alt =
| logo_caption =
| image = Лівадійський палацовий комплекс7.jpg
| image_size =
| image_alt = <!-- or | alt = -->
| image_caption = ಲಿವಾಡಿಯಾ ಅರಮನೆಯ ಮುಂಭಾಗ
| pushpin_map = ಕ್ರಿಮಿಯಾ
| pushpin_alt =
| map_caption =
| pushpin_map_size =
| pushpin_label =
| pushpin_mark =
| pushpin_relief =
| former_names =
| alternate_names =
| etymology =
| status =
| cancelled =
| topped_out =
| building_type = ಅರಮನೆ
| architectural_style =
| classification =
| location =
| address =
| location_city = ಲಿವಾಡಿಯಾ, ಕ್ರಿಮಿಯಾ
| location_country =
| coordinates = {{coord|44|28|04|N|34|08|36|E|type:landmark|display=title, inline}}
| altitude =
| current_tenants =
| namesake =
| groundbreaking_date =
| construction_start_date =
| construction_stop_date =
| est_completion =
| topped_out_date =
| completion_date =
| opened_date =
| inauguration_date =
| relocated_date =
| renovation_date =
| closing_date =
| demolished_date =
| cost =
| ren_cost =
| client =
| owner =
| landlord =
| affiliation =
| height =
| architectural = Neo-Renaissance
| tip =
| antenna_spire =
| roof =
| top_floor =
| observatory =
| diameter =
| circumference =
| weight =
| other_dimensions =
| structural_system =
| material = ಬಿಳಿ ಕ್ರಿಮಿಯನ್ ಸುಣ್ಣದ ಕಲ್ಲು
| size =
| floor_count =
| floor_area =
| elevator_count =
| grounds_area =
| architect =
| architecture_firm =
| developer =
| engineer =
| structural_engineer =
| services_engineer =
| civil_engineer =
| other_designers =
| quantity_surveyor =
| main_contractor =
| awards =
| designations =
| known_for =
| ren_architect =
| ren_firm =
| ren_engineer =
| ren_str_engineer =
| ren_serv_engineer =
| ren_civ_engineer =
| ren_oth_designers =
| ren_qty_surveyor =
| ren_contractor =
| ren_awards =
| number_of_rooms = 116
| parking =
| website = [https://xn----7sbfcibirdakblh1d6aj3h.xn--p1ai/ Official site of the Livadia Palace]
| embed =
| embedded = {{Infobox historic site
|embed = yes
|designation1 = ಉಕ್ರೇನ್ ಪ್ರಜೆ
|designation1_offname = {{Lang|uk|Комплекс споруд палацу}} (''Building complex of the palace'')
|designation1_type = ವಾಸ್ತುಶಿಲ್ಪ
|designation1_number = 0100115
}}
| references =
| footnotes =
}}
[[Image:Внутренний дворик дворца.jpg|thumb|200px|
ಲಿವಾಡಿಯಾ ಅರಮನೆಯ ಇಟಾಲಿಯನ್ ಶೈಲಿಯ ಅಂಗಳ]]
[[Image:Yalta-livadiya-crimea-palace-chapel-1.jpg|thumb|200px|
ಚಾಪೆಲ್]]
'''ಲಿವಾಡಿಯಾ ಅರಮನೆ''' (ರಷ್ಯನ್: Ливадийский дворец; ಉಕ್ರೇನಿಯನ್: Лівадійський палац) ಎಂಬುದು ರಷ್ಯಾದ ಕೊನೆಯ ತ್ಸಾರ್ ನಿಕೋಲಸ್ II ಮತ್ತು ಅವರ ಕುಟುಂಬದ ಬೇಸಿಗೆ ವಿಶ್ರಾಂತಿ ನಿವಾಸವಾಗಿದ್ದ ಐತಿಹಾಸಿಕ ಅರಮನೆಯಾಗಿದೆ. ಇದು ಕ್ರಿಮಿಯಾದ ಲಿವಾಡಿಯಾದಲ್ಲಿ ಇದೆ. 1945ರಲ್ಲಿ ನಡೆದ ಪ್ರಸಿದ್ಧ ಯಾಲ್ಟಾ ಸಮ್ಮೇಳನ ಇದೇ ಅರಮನೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಅರಮನೆಯಲ್ಲಿ ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಮತ್ತು ಅಮೆರಿಕದ ಇತರ ಪ್ರತಿನಿಧಿಗಳ ವಸತಿ ವ್ಯವಸ್ಥೆ ಮಾಡಲಾಗಿತ್ತು. ಸೋವಿಯತ್ ಪ್ರತಿನಿಧಿಗಳು ಯುಸುಪೋವ್ ಅರಮನೆಯಲ್ಲಿ ಹಾಗೂ ಬ್ರಿಟಿಷ್ ಪ್ರತಿನಿಧಿಗಳು ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ವೊರೊಂಟ್ಸೊವ್ ಅರಮನೆಯಲ್ಲಿ ವಾಸ್ತವ್ಯ ಹೂಡಿದ್ದರು.<ref>{{cite web |title=Декрет Совета народных комиссаров РСФСР от 21.12.1920 «Об использовании Крыма для лечения трудящихся» |url=https://krym.rusarchives.ru/dokumenty/dekret-soveta-narodnyh-komissarov-rsfsr-ob-ispolzovanii-kryma-dlya-lecheniya |website=Государственный архив Республики Крым |publisher=Российский государственный архив социально-политической истории |access-date=13 August 2025 |language=ru |archive-date=20 ಮೇ 2024 |archive-url=https://web.archive.org/web/20240520040202/https://krym.rusarchives.ru/dokumenty/dekret-soveta-narodnyh-komissarov-rsfsr-ob-ispolzovanii-kryma-dlya-lecheniya |url-status=dead }}</ref>
ಪ್ರಸ್ತುತ ಲಿವಾಡಿಯಾ ಅರಮನೆಯಲ್ಲಿ ವಸ್ತುಸಂಗ್ರಹಾಲಯವಿದ್ದು, ಕೆಲವೊಮ್ಮೆ ಅಂತರರಾಷ್ಟ್ರೀಯ ಶೃಂಗಸಭೆಗಳು ಮತ್ತು ಇತರ ಪ್ರಮುಖ ಕಾರ್ಯಕ್ರಮಗಳಿಗೂ ಬಳಸಲಾಗುತ್ತದೆ.
== ಇತಿಹಾಸ ==
ಲಿವಾಡಿಯಾ ಎಸ್ಟೇಟ್ನ್ನು ಆರಂಭದಲ್ಲಿ ಲ್ಯಾಂಬ್ರೋಸ್ ಕಟ್ಸೋನಿಸ್ ಅವರಿಗೆ ನೀಡಲಾಗಿತ್ತು. ನಂತರ ಅದು ಪೊಟೊಕಿ ಕುಟುಂಬದ ಸ್ವಾಮ್ಯಕ್ಕೆ ಸೇರಿತು. 1860ರ ದಶಕದಲ್ಲಿ ಈ ಪ್ರದೇಶವು ರಷ್ಯಾದ ಸಾಮ್ರಾಜ್ಯ ಕುಟುಂಬದ ಬೇಸಿಗೆ ನಿವಾಸವಾಯಿತು. ವಾಸ್ತುಶಿಲ್ಪಿ ಇಪ್ಪೊಲಿಟೊ ಮೊನಿಘೆಟ್ಟಿ ಇಲ್ಲಿ ಒಂದು ದೊಡ್ಡ ಅರಮನೆ, ಒಂದು ಸಣ್ಣ ಅರಮನೆ ಮತ್ತು ಒಂದು ಚರ್ಚ್ ನಿರ್ಮಿಸಿದರು.<ref>{{cite web |title=Historical Note |url=https://livadiapalace.crimea.ua/historical-note |website=Livadia Palace–Park Museum |publisher=Ministry of Culture of the Republic of Crimea |access-date=13 August 2025 }}{{Dead link|date=ಆಗಸ್ಟ್ 2026 |bot=InternetArchiveBot |fix-attempted=yes }}</ref><ref>{{cite web |title=Ливадия. Санаторий |url=https://prlib.ru/item/421067 |website=Presidential Library |publisher=Russian State Library |access-date=13 August 2025 |language=ru}}</ref>
ರಷ್ಯಾದ ಚಕ್ರವರ್ತಿ ಅಲೆಕ್ಸಾಂಡರ್ II ಈ ನಿವಾಸಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಅವರ ಉತ್ತರಾಧಿಕಾರಿ ಅಲೆಕ್ಸಾಂಡರ್ III ಸಣ್ಣ ಅರಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಅಲ್ಲಿಯೇ ನಿಧನರಾದರು. ನಂತರ ಅವರ ಪುತ್ರ ನಿಕೋಲಸ್ II ದೊಡ್ಡ ಅರಮನೆಯನ್ನು ಕೆಡವಿ ಅದರ ಬದಲಿಗೆ ಇನ್ನಷ್ಟು ವಿಶಾಲವಾದ ಅರಮನೆಯನ್ನು ನಿರ್ಮಿಸಲು ನಿರ್ಧರಿಸಿದರು. ಅಲೆಕ್ಸಾಂಡರ್ III ನಿಧನರಾದ ಸ್ಥಳವೆಂಬ ಕಾರಣದಿಂದ ಸಣ್ಣ ಅರಮನೆಯನ್ನು ಉಳಿಸಿಕೊಳ್ಳಲಾಯಿತು. ಆದರೆ ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಅದು ನಾಶವಾಯಿತು.<ref>{{cite book |last=Starks |first=Tricia |title=The Body Soviet: Propaganda, Hygiene, and the Revolutionary State |location=Madison |publisher=University of Wisconsin Press |year=2008 |isbn=9780299229641}}</ref>
ಸುಮಾರು 1909ರಲ್ಲಿ ಯಾಲ್ಟಾದ ಪ್ರಸಿದ್ಧ ವಾಸ್ತುಶಿಲ್ಪಿ ನಿಕೊಲಾಯ್ ಕ್ರಾಸ್ನೋವ್ ಅವರಿಗೆ ಹೊಸ ಸಾಮ್ರಾಜ್ಯ ಅರಮನೆಯ ವಿನ್ಯಾಸ ಸಿದ್ಧಪಡಿಸುವ ಜವಾಬ್ದಾರಿ ನೀಡಲಾಯಿತು. ಅರಮನೆಯ ನಾಲ್ಕೂ ಮುಂಭಾಗಗಳು ವಿಭಿನ್ನವಾಗಿ ಕಾಣುವಂತೆ ವಿನ್ಯಾಸಗೊಳಿಸಲು ನಿರ್ಧರಿಸಲಾಯಿತು. ಸುಮಾರು 17 ತಿಂಗಳ ನಿರ್ಮಾಣದ ನಂತರ ಹೊಸ ಅರಮನೆ 1911ರ ಸೆಪ್ಟೆಂಬರ್ 11ರಂದು ಉದ್ಘಾಟಿಸಲಾಯಿತು. ಅದೇ ವರ್ಷ ನವೆಂಬರ್ನಲ್ಲಿ ಗ್ರ್ಯಾಂಡ್ ಡಚೆಸ್ ಓಲ್ಗಾ ನಿಕೋಲಾಯೆವ್ನಾ ಅವರು ತಮ್ಮ 16ನೇ ಜನ್ಮದಿನವನ್ನು ಲಿವಾಡಿಯಾದಲ್ಲಿ ಆಚರಿಸಿದರು.
== ರಷ್ಯಾದ ಕ್ರಾಂತಿಯ ನಂತರ ==
1917ರ ಫೆಬ್ರವರಿ ಕ್ರಾಂತಿಯ ನಂತರ ನಿಕೋಲಸ್ II ಅವರ ತಾಯಿ ಡೊವೇಜರ್ ಸಾಮ್ರಾಜ್ಞಿ ಮಾರಿಯಾ ಫಿಯೋಡೊರೊವ್ನಾ ಮತ್ತು ಸಾಮ್ರಾಜ್ಯ ಕುಟುಂಬದ ಕೆಲವು ಸದಸ್ಯರು ಲಿವಾಡಿಯಾಗೆ ಆಶ್ರಯ ಪಡೆದರು. ನಂತರ ಅವರನ್ನು ಬ್ರಿಟಿಷ್ ನೌಕೆ HMS Marlborough ಮೂಲಕ ಅಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈ ನೌಕೆಯನ್ನು ಡೊವೇಜರ್ ಸಾಮ್ರಾಜ್ಞಿಯ ಸೋದರಳಿಯ ಮತ್ತು ಬ್ರಿಟನ್ನ ರಾಜ ಜಾರ್ಜ್ V ಕಳುಹಿಸಿದ್ದರು.<ref>Book: Author: Erich von Manstein. Titel: [[Verlorene Siege]]. 2000. 16 Auflage. Bonn. pp. 283–85</ref>
1917ರ ರಷ್ಯಾದ ಕ್ರಾಂತಿಯ ನಂತರ ಅರಮನೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. 1920ರ ಡಿಸೆಂಬರ್ 21ರಂದು ವ್ಲಾದಿಮಿರ್ ಲೆನಿನ್ ಸಹಿ ಮಾಡಿದ ಆದೇಶದ ಅನ್ವಯ, ಕ್ರಿಮಿಯಾವನ್ನು ಕಾರ್ಮಿಕರ ಚಿಕಿತ್ಸೆಗೆ ಬಳಸುವ ಉದ್ದೇಶದಿಂದ ಅರಮನೆಯನ್ನು ಕಾರ್ಮಿಕರಿಗಾಗಿ ಆರೋಗ್ಯಧಾಮವಾಗಿ ಪರಿವರ್ತಿಸಲಾಯಿತು.<ref>{{cite web |url=http://www.tden.ru/articles/024175/ |title=Sofia Rotaru decided to take Livadia Palace in charge |work=Твой День |access-date=2007-12-28 |archive-url=https://web.archive.org/web/20080511075849/http://www.tden.ru/articles/024175/ |archive-date=2008-05-11 |url-status=dead}}</ref>
1925ರಿಂದ 1931ರವರೆಗೆ ಇದು ಆರೋಗ್ಯದ ಜನ ಆಯುಕ್ತಾಲಯದ ರೈತ ಸ್ಯಾನಿಟೋರಿಯಂ ಆಗಿ ಕಾರ್ಯನಿರ್ವಹಿಸಿತು. ಇಲ್ಲಿ ಕ್ಷಯರೋಗ ಸೇರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. 1931ರಿಂದ 1941ರವರೆಗೆ ಇದು ಹವಾಮಾನಾಧಾರಿತ ಚಿಕಿತ್ಸಾ ಮತ್ತು ಆರೋಗ್ಯಧಾಮ ಸಂಕೀರ್ಣವಾಗಿ ಕಾರ್ಯನಿರ್ವಹಿಸಿತು.<ref>{{cite web |url=http://www.livadia-palace.crimea.com/publishing.htm |title=Ливадийский дворец-музей. Издательская деятельность |website=www.livadia-palace.crimea.com |access-date=12 January 2022 |archive-url=https://web.archive.org/web/20130522133112/http://www.livadia-palace.crimea.com/publishing.htm |archive-date=22 May 2013 |url-status=dead}}</ref> Visitors are particularly interested in the events of 1945.<ref>{{Cite web|url=http://krim-konference.at.ua/index/conference_yalta_45_13/0-5|title = КРЫМСКАЯ КОНФЕРЕНЦИЯ 1945 г. (альманах) - Conference "YALTA-45/13"}}</ref>
ಯುದ್ಧಕಾಲದ ಆಕ್ರಮಣ ಮತ್ತು ಹಾನಿಯ ನಂತರ ಅರಮನೆಯನ್ನು ಪುನರ್ನಿರ್ಮಿಸಲಾಯಿತು ಮತ್ತು ಮತ್ತೆ ಆರೋಗ್ಯಧಾಮವಾಗಿ ಬಳಸಲಾಯಿತು. 1974ರಲ್ಲಿ ಕಟ್ಟಡದ ಕೆಲವು ಭಾಗಗಳನ್ನು ಸಾರ್ವಜನಿಕರಿಗೆ ತೆರೆಯಲಾಯಿತು. ಪ್ರಸ್ತುತ ಇದು ವಸ್ತುಸಂಗ್ರಹಾಲಯವಾಗಿ ಕಾರ್ಯನಿರ್ವಹಿಸುತ್ತಿದೆ. ಅರಮನೆಯನ್ನು ಮಾನಸಿಕ ಚಿಕಿತ್ಸಾ ಆಸ್ಪತ್ರೆಯಾಗಿ ಬಳಸಲಾಗಿತ್ತು ಎಂಬ ಕೆಲವು ಆಧುನಿಕ ಹೇಳಿಕೆಗಳಿಗೆ ಯಾವುದೇ ದಾಖಲೆ ಆಧಾರವಿಲ್ಲ.
== ಎರಡನೇ ವಿಶ್ವಯುದ್ಧ ಮತ್ತು ಯಾಲ್ಟಾ ಸಮ್ಮೇಳನ ==
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ 1942ರ ಜುಲೈ 6ರಂದು ಲಿವಾಡಿಯಾ ಅರಮನೆಯ ಉದ್ಯಾನದಲ್ಲಿ ಜರ್ಮನ್ ಸೇನೆಯ ಕ್ರಿಮಿಯಾ ಕಾರ್ಯಾಚರಣೆಯ ಯಶಸ್ಸನ್ನು ಗುರುತಿಸುವ ಸಮಾರಂಭ ನಡೆಯಿತು. ಸೆವಾಸ್ಟೊಪೋಲ್ ವಶಪಡಿಸಿಕೊಂಡ ನಂತರ ಜರ್ಮನ್ 11ನೇ ಸೇನೆಯ ಮುಖ್ಯಸ್ಥ ಎರಿಕ್ ಫಾನ್ ಮಾನ್ಸ್ಟೈನ್ ಅವರಿಗೆ ಜನರಲ್ಫೆಲ್ಡ್ಮಾರ್ಷಲ್ ಹುದ್ದೆಗೆ ಬಡ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಜರ್ಮನ್ ಸೈನಿಕರಿಗೆ ನೈಟ್ಸ್ ಕ್ರಾಸ್ ಮತ್ತು ಜರ್ಮನ್ ಕ್ರಾಸ್ ಇನ್ ಗೋಲ್ಡ್ ಪ್ರಶಸ್ತಿಗಳನ್ನು ನೀಡಲಾಯಿತು.
ಅರಮನೆಯ ಅತ್ಯಂತ ಮಹತ್ವದ ಐತಿಹಾಸಿಕ ಘಟನೆಯೆಂದರೆ 1945ರ ಯಾಲ್ಟಾ ಸಮ್ಮೇಳನ. ಎರಡನೇ ವಿಶ್ವಯುದ್ಧದ ಅಂತ್ಯದ ಹಂತದಲ್ಲಿ ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್, ಬ್ರಿಟನ್ನ ಪ್ರಧಾನಮಂತ್ರಿ ವಿನ್ಸ್ಟನ್ ಚರ್ಚಿಲ್ ಮತ್ತು ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್ ಸೇರಿದಂತೆ ಪ್ರಮುಖ ನಾಯಕರು ಯುದ್ಧಾನಂತರದ ಜಗತ್ತಿನ ವ್ಯವಸ್ಥೆ ಕುರಿತು ಚರ್ಚಿಸಿದರು. ಈ ಸಮ್ಮೇಳನದ ಪ್ರಮುಖ ಸ್ಥಳಗಳಲ್ಲಿ ಲಿವಾಡಿಯಾ ಅರಮನೆಯೂ ಒಂದಾಗಿತ್ತು.
== ವಸ್ತುಸಂಗ್ರಹಾಲಯ ಮತ್ತು ಆಧುನಿಕ ಕಾಲ ==
ನಂತರ ಲಿವಾಡಿಯಾ ಅರಮನೆಯನ್ನು ಐತಿಹಾಸಿಕ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಯಿತು. ಅರಮನೆಯ ಮೂಲ ಐತಿಹಾಸಿಕ ಪೀಠೋಪಕರಣಗಳ ಬಹುಪಾಲು ಕಾಲಕ್ರಮೇಣ ಕಳೆದುಹೋಗಿದ್ದರೂ, ಉಳಿದಿರುವ ಅಥವಾ ಪುನಃ ಸಂಗ್ರಹಿಸಲಾದ ವಸ್ತುಗಳನ್ನು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತದೆ.
2007ರ ಆಗಸ್ಟ್ನಲ್ಲಿ Seven Wonders of Ukraine ಯೋಜನೆಯಡಿ ಲಿವಾಡಿಯಾ ಅರಮನೆಯನ್ನು ಆಧುನಿಕ ಇತಿಹಾಸದ ಪ್ರಮುಖ ಸ್ಮಾರಕವೆಂದು ಗುರುತಿಸಲಾಯಿತು. ಉಕ್ರೇನಿಯನ್ ಪಾಪ್ ಗಾಯಕಿ ಸೋಫಿಯಾ ರೊಟಾರು ಅವರು ತಮ್ಮ 60ನೇ ಜನ್ಮದಿನವನ್ನು ಅರಮನೆಯಲ್ಲಿ ರಷ್ಯಾ, ಉಕ್ರೇನ್ ಮತ್ತು ಮೊಲ್ಡೊವಾ ದೇಶಗಳ ಅಧ್ಯಕ್ಷರ ಸಮ್ಮುಖದಲ್ಲಿ ಆಚರಿಸಿದರು. ಯಾಲ್ಟಾ ಸಮ್ಮೇಳನದ ನಂತರ ಈ ರೀತಿಯ ಮತ್ತೊಂದು ಉನ್ನತ ಮಟ್ಟದ ಸಭೆಯೂ ಇಲ್ಲಿ ನಡೆಯಿತು. 2008ರಲ್ಲಿ ರೊಟಾರು ಅವರು ಲಿವಾಡಿಯಾ ಅರಮನೆಯ ಪುನರ್ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದರು.
ಅರಮನೆಯಲ್ಲಿ ಅನೇಕ ಶೈಕ್ಷಣಿಕ ಸಮ್ಮೇಳನಗಳು ನಡೆದಿವೆ. ಅರಮನೆಯ ಸಿಬ್ಬಂದಿ ಅದರ ಇತಿಹಾಸದ ಕುರಿತು ಸಂಶೋಧನಾ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ. ವಿಶೇಷವಾಗಿ 1945ರ ಯಾಲ್ಟಾ ಸಮ್ಮೇಳನಕ್ಕೆ ಸಂಬಂಧಿಸಿದ ಘಟನೆಗಳು ಪ್ರವಾಸಿಗರಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿವೆ.
2017ರ ನವೆಂಬರ್ 18ರಂದು ತ್ಸಾರ್ ಅಲೆಕ್ಸಾಂಡರ್ III ಅವರ ಸಮಾಧಿಯ 123ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಲಿವಾಡಿಯಾ ಅರಮನೆಯ ಆವರಣದಲ್ಲಿ ಅಲೆಕ್ಸಾಂಡರ್ III ಅವರ ಸ್ಮಾರಕವನ್ನು ಅನಾವರಣಗೊಳಿಸಿದರು.
== ವಾಸ್ತುಶಿಲ್ಪ ==
ಲಿವಾಡಿಯಾ ಅರಮನೆಯನ್ನು ಕ್ರಿಮಿಯಾದ ಬಿಳಿ ಸುಣ್ಣಕಲ್ಲಿನಿಂದ ನಿರ್ಮಿಸಲಾಗಿದ್ದು, ಇದು ನವ-ಪುನರುಜ್ಜೀವನ ಶೈಲಿ (Neo-Renaissance)ಯ ಅತ್ಯುತ್ತಮ ಉದಾಹರಣೆಯಾಗಿದೆ. ಅರಮನೆಯ ವಿನ್ಯಾಸದಲ್ಲಿ ಯುರೋಪಿನ ವಿವಿಧ ವಾಸ್ತುಶಿಲ್ಪ ಪರಂಪರೆಗಳ ಪ್ರಭಾವವನ್ನು ಕಾಣಬಹುದು.
ಅರಮನೆಯ ಪ್ರಮುಖ ವೈಶಿಷ್ಟ್ಯಗಳಲ್ಲಿ ಕ್ಯಾರಾರಾ ಅಮೃತಶಿಲೆಯಿಂದ ನಿರ್ಮಿಸಲಾದ ಕಮಾನುಬದ್ಧ ಪ್ರವೇಶ ಮಂಟಪ, ವಿಶಾಲವಾದ ಅರೇಬಿಕ್ ಒಳಾಂಗಣ, ಇಟಾಲಿಯನ್ ಒಳಾಂಗಣ, ಫ್ಲಾರೆನ್ಸ್ ಶೈಲಿಯ ಗೋಪುರ, ಅಲಂಕೃತ ಬ್ರಮಾಂಟೆಸ್ಕ್ ಕಿಟಕಿಗಳು, ಬಾಲ್ಕನಿ-ಬೆಲ್ವೆಡೀರ್ ಮತ್ತು ಜ್ಯಾಸ್ಪರ್ ಕಲ್ಲಿನ ಹೂದಾನಿಗಳನ್ನು ಹೊಂದಿರುವ ವಿವಿಧ ಮುಂಭಾಗಗಳು ಸೇರಿವೆ.
ಒಂದು ಗ್ಯಾಲರಿಯು ಅರಮನೆಯನ್ನು 1866ರಲ್ಲಿ ಇಪ್ಪೊಲಿಟೊ ಮೊನಿಘೆಟ್ಟಿ ನಿರ್ಮಿಸಿದ ಕ್ರಾಸ್ನ ಉದಾತ್ತೀಕರಣದ ನವ-ಬೈಜಾಂಟೈನ್ ಚರ್ಚ್ನೊಂದಿಗೆ ಸಂಪರ್ಕಿಸುತ್ತದೆ.
ಅರಮನೆಯಲ್ಲಿ ಒಟ್ಟು 116 ಕೊಠಡಿಗಳಿದ್ದು, ಅವುಗಳ ಒಳಾಂಗಣಗಳನ್ನು ವಿವಿಧ ವಾಸ್ತುಶಿಲ್ಪ ಮತ್ತು ಅಲಂಕಾರಿಕ ಶೈಲಿಗಳಲ್ಲಿ ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲಿ ಪಾಂಪಿಯನ್ ಶೈಲಿಯ ಪ್ರವೇಶ ಮಂಟಪ, ಇಂಗ್ಲಿಷ್ ಬಿಲಿಯರ್ಡ್ ಕೊಠಡಿ, ನವ-ಬರೋಕ್ ಶೈಲಿಯ ಊಟದ ಕೋಣೆ ಮತ್ತು ಮ್ಯಾಪಲ್ ಮರದಿಂದ ನಿರ್ಮಿಸಲಾದ ಜಾಕೋಬ್ ಶೈಲಿಯ ಅಧ್ಯಯನ ಕೊಠಡಿ ಪ್ರಮುಖವಾಗಿವೆ.
ವಿಶೇಷವಾಗಿ ನಿಕೋಲಸ್ II ಅವರು ಮ್ಯಾಪಲ್ ಮರದಿಂದ ಅಲಂಕರಿಸಲಾದ ಜಾಕೋಬ್ ಶೈಲಿಯ ಅಧ್ಯಯನ ಕೊಠಡಿಯನ್ನು ಬಹಳ ಮೆಚ್ಚಿಕೊಂಡಿದ್ದರು. ಒಟ್ಟಾರೆಯಾಗಿ, ಲಿವಾಡಿಯಾ ಅರಮನೆಯು ರಷ್ಯಾದ ಸಾಮ್ರಾಜ್ಯಶಾಹಿ ಇತಿಹಾಸ, ಯುರೋಪಿಯನ್ ವಾಸ್ತುಶಿಲ್ಪ ಮತ್ತು 20ನೇ ಶತಮಾನದ ಅಂತರರಾಷ್ಟ್ರೀಯ ರಾಜಕೀಯ ಇತಿಹಾಸವನ್ನು ಪ್ರತಿಬಿಂಬಿಸುವ ಪ್ರಮುಖ ಐತಿಹಾಸಿಕ ಕಟ್ಟಡವಾಗಿದೆ.
=ಉಲ್ಲೇಖಗಳು=
k6yi07k4rhwd874w4jax3opz7c9rdqk
ಸೇಂಟ್ ಜಾರ್ಜ್ ಚರ್ಚ್, ಡ್ರೊಹೋಬಿಚ್
0
180550
1384596
1383859
2026-08-28T23:59:54Z
InternetArchiveBot
69876
Rescuing 3 sources and tagging 0 as dead.) #IABot (v2.0.9.5
1384596
wikitext
text/x-wiki
ಡ್ರೊಹೋಬಿಚ್ನಲ್ಲಿರುವ '''ಸೇಂಟ್ ಜಾರ್ಜ್ ಚರ್ಚ್''' ಗಲಿಷಿಯಾದ ಅತ್ಯಂತ ಹಳೆಯ ಮತ್ತು ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಮರದ ಚರ್ಚುಗಳಲ್ಲಿ ಒಂದಾಗಿದೆ. ಈ ಚರ್ಚ್ 15 ನೇ ಶತಮಾನದ ಉತ್ತರಾರ್ಧ - 16 ನೇ ಶತಮಾನದ ಆರಂಭದ ಗ್ಯಾಲಿಶಿಯನ್ ಮರದ ವಾಸ್ತುಶಿಲ್ಪದ ಸ್ಮಾರಕವಾಗಿದೆ, ಇದು ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟ ಮತ್ತು ಪ್ರಾಚೀನ ಉಕ್ರೇನಿಯನ್ ಪವಿತ್ರ ವಾಸ್ತುಶಿಲ್ಪದ ಅತ್ಯುತ್ತಮ ಸ್ಮಾರಕಗಳಲ್ಲಿ ಒಂದಾಗಿದೆ. 15 ನೇ ಶತಮಾನದಲ್ಲಿ ನಿರ್ಮಿಸಲಾದ ಇದನ್ನು ಹಲವಾರು ಬಾರಿ ಪುನರ್ನಿರ್ಮಿಸಲಾಯಿತು ಮತ್ತು ಡ್ರೊಹೋಬಿಚ್ನ ಪ್ರತಿಭಾನ್ವಿತ ಉಕ್ರೇನಿಯನ್ ವಾಸ್ತುಶಿಲ್ಪಿ ಹ್ರೈಹೋರಿ ಟೆಸ್ಲಾ ಅವರಿಂದ ಅಂತಿಮ ವಾಸ್ತುಶಿಲ್ಪದ ರೂಪಗಳನ್ನು ನೀಡಲಾಗಿದೆ. <ref>{{Citation |title=Contributors |date=2003 |volume=66 |pages=xv–xvii |series=Vitamins & Hormones |publisher=Elsevier |doi=10.1016/s0083-6729(03)09002-2 |isbn=9780127098661}}</ref> ಈ ಚರ್ಚ್ ಡ್ರೊಹೋಬಿಚ್ ಪ್ರದೇಶದ ವಸ್ತುಸಂಗ್ರಹಾಲಯದ ಮರದ ವಾಸ್ತುಶಿಲ್ಪ ವಿಭಾಗದ ಭಾಗವಾಗಿದೆ.
ಚರ್ಚ್ ಮೂರು ಭಾಗಗಳನ್ನು ಒಳಗೊಂಡಿದೆ. ಕೇಂದ್ರ ಬ್ಲಾಕ್ ಚೌಕಾಕಾರದಲ್ಲಿದ್ದು, ನೇವ್ ಅನ್ನು ಒಳಗೊಂಡಿದೆ. ಇತರ ಎರಡು ಬ್ಲಾಕ್ಗಳು ಡಬಲ್ ಆಪ್ಸ್ ಮತ್ತು ನಾರ್ಥೆಕ್ಸ್ ಅನ್ನು ಒಳಗೊಂಡಿರುತ್ತವೆ. ೧೬೭೮ ಮತ್ತು ೧೭೧೧ ರ ನಡುವೆ, ಚರ್ಚ್ ಅನ್ನು ನವೀಕರಿಸಲಾಯಿತು: ಒಳಭಾಗವನ್ನು ಹಸಿಚಿತ್ರಗಳಿಂದ ಅಲಂಕರಿಸಲಾಯಿತು, ಅಷ್ಟಭುಜಾಕೃತಿಯ ರಚನೆಗಳನ್ನು ನಿರ್ಮಿಸಲಾಯಿತು ಮತ್ತು ಹೊಸ ಬೆಲ್ಫ್ರಿ ಕಾಣಿಸಿಕೊಂಡಿತು.
ಪೋಲೆಂಡ್ ಮತ್ತು ಉಕ್ರೇನ್ನಲ್ಲಿರುವ ಕಾರ್ಪಾಥಿಯನ್ ಪ್ರದೇಶದ ಮರದ <nowiki><i id="mwHA">ತ್ಸೆರ್ಕ್ವಾಸ್</i></nowiki> ಎಂಬ [[ವಿಶ್ವ ಪರಂಪರೆಯ ತಾಣ|ವಿಶ್ವ ಪರಂಪರೆಯ ತಾಣವನ್ನು]] ಒಳಗೊಂಡಿರುವ 16 ಚರ್ಚುಗಳಲ್ಲಿ ಇದು ಒಂದಾಗಿದೆ.
ಪಶ್ಚಿಮ ಉಕ್ರೇನ್ನಾದ್ಯಂತ ಪ್ರಯಾಣಿಸುವಾಗ, ನೀವು ಉತ್ತಮ ನೂರು ಮರದ ಚರ್ಚುಗಳನ್ನು ನೋಡಬಹುದು. ಮತ್ತು ಅವುಗಳಲ್ಲಿ ಪ್ರತಿಯೊಂದೂ ತನ್ನದೇ ಆದ ರೀತಿಯಲ್ಲಿ ಆಸಕ್ತಿದಾಯಕವಾಗಿದೆ. ಆದಾಗ್ಯೂ, ಈ ಪಟ್ಟಿಯಲ್ಲಿ, ಡ್ರೊಹೋಬಿಚ್ನಲ್ಲಿರುವ ಸೇಂಟ್ ಜಾರ್ಜ್ ಚರ್ಚ್ XV ನೇ ಶತಮಾನದ ಉತ್ತರಾರ್ಧದ - XVI ಶತಮಾನದ ಆರಂಭದ ಗ್ಯಾಲಿಶಿಯನ್ ಮರದ ವಾಸ್ತುಶಿಲ್ಪದ ಸ್ಮಾರಕವಾಗಿ ಎದ್ದು ಕಾಣುತ್ತದೆ, ಇದು ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟ ಮತ್ತು ಪ್ರಾಚೀನ ಉಕ್ರೇನಿಯನ್ ಪವಿತ್ರ ವಾಸ್ತುಶಿಲ್ಪದ ಅತ್ಯುತ್ತಮ ಸ್ಮಾರಕಗಳಲ್ಲಿ ಒಂದಾಗಿದೆ. ಇದನ್ನು ಹದಿನೈದನೇ ಶತಮಾನದಲ್ಲಿ ನಿರ್ಮಿಸಲಾಯಿತು, ಹಲವಾರು ಬಾರಿ ಪುನರ್ನಿರ್ಮಿಸಲಾಯಿತು ಮತ್ತು ಡ್ರೊಹೋಬಿಚ್ನಿಂದ ಪ್ರತಿಭಾನ್ವಿತ ಉಕ್ರೇನಿಯನ್ ಬಿಲ್ಡರ್ ಹ್ರೈಹೋರಿ ಟೆಸ್ಲಿಯಾ ಅವರು ಅದರ ಅಂತಿಮ ವಾಸ್ತುಶಿಲ್ಪದ ರೂಪವನ್ನು ನೀಡಿದರು. ಇದು ಡ್ರೊಹೋಬಿಚಿನಾ ವಸ್ತುಸಂಗ್ರಹಾಲಯದ ಮರದ ವಾಸ್ತುಶಿಲ್ಪ ವಿಭಾಗದ ಒಂದು ಭಾಗವಾಗಿದೆ.
1657 ರಲ್ಲಿ, ಡೋಲಿನಾ ಬಳಿಯ ನಾಡಿಐವ್ ಗ್ರಾಮದಿಂದ ಹಳೆಯ ಚರ್ಚ್ ಅನ್ನು ಸಾಗಿಸಲಾಯಿತು ಮತ್ತು ಅಸ್ತಿತ್ವದಲ್ಲಿರುವ ಚರ್ಚ್ ಅನ್ನು ಅದರ ವಸ್ತುಗಳೊಂದಿಗೆ ಪೂರ್ಣಗೊಳಿಸಲಾಯಿತು, ಬಲಿಪೀಠದ ದಿಮ್ಮಿಯಿಂದ ನಿರ್ಮಿಸಲಾದ ಬೇಬಿನೆಟ್ಗಳು ಮತ್ತು ಹೊಸ ವಸ್ತುಗಳಿಂದ ಮಾಡಲ್ಪಟ್ಟ ಬಲಿಪೀಠದೊಂದಿಗೆ. ಚರ್ಚ್ ಅನ್ನು ಉಪ್ಪಿಗೆ ವಿನಿಮಯ ಮಾಡಿಕೊಳ್ಳಲಾಯಿತು, ಕಿತ್ತುಹಾಕಲಾಯಿತು ಮತ್ತು ಎತ್ತುಗಳ ಮೇಲೆ ಡ್ರೊಹೋಬಿಚ್ಗೆ ಸಾಗಿಸಲಾಯಿತು. ಇದನ್ನು ಹಿಂದಿನ ಚರ್ಚ್ ಸುಟ್ಟುಹೋದ ಸ್ಥಳದಲ್ಲಿ ನಿರ್ಮಿಸಲಾಯಿತು ಮತ್ತು 1678 ರಲ್ಲಿ ಹತ್ತಿರದಲ್ಲಿ ಗಂಟೆ ಗೋಪುರವನ್ನು ನಿರ್ಮಿಸಲಾಯಿತು. ಆದರೆ, ವಾಸ್ತವವಾಗಿ, ಡ್ರೊಹೋಬಿಚ್ ಚರ್ಚ್ ಅನ್ನು ಸಾಮಾನ್ಯವಾಗಿ ಗುರುತಿಸಲ್ಪಟ್ಟಂತೆ ಆಮದು ಮಾಡಿಕೊಳ್ಳಲಾಗಿಲ್ಲ, ಆದರೆ ಅದರ 1/3 ಭಾಗವನ್ನು ಮಾತ್ರ (ನಾರ್ಥೆಕ್ಸ್ ಮತ್ತು ವ್ವೆಡೆನ್ಸ್ಕಿ ಚಾಪೆಲ್) ನದಿವ್ಕಾ ಮರದಿಂದ ನಿರ್ಮಿಸಲಾಗಿದೆ, ಇದು ಸ್ಮಾರಕವು ಸಂಪೂರ್ಣವಾಗಿ ಸ್ಥಳೀಯ ಮೂಲದ್ದಾಗಿದೆ ಎಂದು ಸೂಚಿಸುತ್ತದೆ. "ಚರ್ಚ್ ಅನ್ನು ತರುವುದರ" ಬಗ್ಗೆ ಬಹಳಷ್ಟು ಸಾಮಾನ್ಯ ಮಾಹಿತಿ ಇದೆ: ಡ್ರೊಹೋಬಿಚ್ ನಿವಾಸಿ ಆಂಡ್ರೆಜ್ ಹ್ಸಿಯುಕ್ ಅವರ ವಾದದಲ್ಲಿ ಅದನ್ನು ಕೆಡವಲಾಯಿತು ಮತ್ತು ಕೈವ್ನಿಂದ ತರಲಾಯಿತು ಎಂದು ನಾವು ಓದಬಹುದು
ಸಾಂಸ್ಕೃತಿಕ ಮಹತ್ವ
ಈ ಚರ್ಚ್ ಪ್ರಾಚೀನ ಉಕ್ರೇನಿಯನ್ ಸ್ಯಾಕ್ರಲ್ ವಾಸ್ತುಶಿಲ್ಪ ಮತ್ತು ಗ್ಯಾಲಿಶಿಯನ್ ಮರದ ಕಟ್ಟಡ ಸಂಪ್ರದಾಯಗಳ ಅತ್ಯುತ್ತಮ ಉಳಿದಿರುವ ಉದಾಹರಣೆಗಳಲ್ಲಿ ಒಂದಾಗಿದೆ. ಇದರ ಸಂರಕ್ಷಣೆಯು ವಿದ್ವಾಂಸರು ಮತ್ತು ಸಂದರ್ಶಕರಿಗೆ ಮಧ್ಯಕಾಲೀನ ಮರದ ನಿರ್ಮಾಣ ತಂತ್ರಗಳು ಮತ್ತು ಧಾರ್ಮಿಕ ಪ್ರಾದೇಶಿಕ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಸೇಂಟ್ ಜಾರ್ಜ್ ಚರ್ಚ್ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಪೋಲೆಂಡ್ ಮತ್ತು ಉಕ್ರೇನ್ನಲ್ಲಿರುವ ಕಾರ್ಪಾಥಿಯನ್ ಪ್ರದೇಶದ ವುಡನ್ ತ್ಸೆರ್ಕ್ವಾಸ್ ಎಂಬ ಸಾಮೂಹಿಕ ಹೆಸರಿನಲ್ಲಿ ಗೊತ್ತುಪಡಿಸಿದ 16 ಚರ್ಚುಗಳಲ್ಲಿ ಒಂದಾಗಿದೆ - ಅದರ ಭರಿಸಲಾಗದ ಸಾಂಸ್ಕೃತಿಕ ಮೌಲ್ಯದ ಗುರುತಿಸುವಿಕೆ.
ಇತಿಹಾಸ
15 ನೇ ಶತಮಾನದಲ್ಲಿ ನಿರ್ಮಿಸಲಾದ ಚರ್ಚ್, ನಂತರದ ಪೀಳಿಗೆಗಳಲ್ಲಿ ಗಮನಾರ್ಹ ರೂಪಾಂತರಕ್ಕೆ ಒಳಗಾಯಿತು. 1678 ಮತ್ತು 1711 ರ ನಡುವೆ, ಒಂದು ಪ್ರಮುಖ ನವೀಕರಣ ಅಭಿಯಾನವು ಅದರ ಪಾತ್ರವನ್ನು ಮೂಲಭೂತವಾಗಿ ಹೆಚ್ಚಿಸಿತು. ಒಳಾಂಗಣವು ವಿಸ್ತಾರವಾದ ಹಸಿಚಿತ್ರಗಳನ್ನು ಪಡೆಯಿತು, ಅಷ್ಟಭುಜಾಕೃತಿಯ ರಚನೆಗಳನ್ನು ನಿರ್ಮಿಸಲಾಯಿತು ಮತ್ತು ಹೊಸ ಗಂಟೆಯ ಗೋಪುರವನ್ನು ನಿರ್ಮಿಸಲಾಯಿತು.
ಚರ್ಚ್ನ ಅಂತಿಮ ವಾಸ್ತುಶಿಲ್ಪದ ರೂಪವು ಡ್ರೊಹೊಬಿಚ್ನ ಪ್ರತಿಭಾನ್ವಿತ ಉಕ್ರೇನಿಯನ್ ವಾಸ್ತುಶಿಲ್ಪಿ ಹ್ರೈಹೋರಿ ಟೆಸ್ಲಾ ಅವರ ದೃಷ್ಟಿಕೋನದ ಮೂಲಕ ಬಂದಿತು, ಅವರ ಹಸ್ತಕ್ಷೇಪಗಳು ಇದನ್ನು ಪ್ರಾದೇಶಿಕ ಮಹತ್ವದ ಸ್ಮಾರಕವಾಗಿ ಸ್ಥಾಪಿಸಲು ಸಹಾಯ ಮಾಡಿದವು.
== ಗ್ಯಾಲರಿ ==
<gallery>
ಚಿತ್ರ:2017_-_Дрогобич_-_церква_Св._Юрія.jpg|alt=General view| ಸಾಮಾನ್ಯ ನೋಟ
ಚಿತ್ರ:Inbound11167247726347225.jpg|alt=Bell tower| ಗಂಟೆ ಗೋಪುರ
ಚಿತ್ರ:46-106-0001_Купол_Святоюрської_церкви.jpg|alt=Cupola| ಕುಪೋಲಾ
ಚಿತ್ರ:Церква_Святого_Юра,_фрагмент,_м._Дрогобич,_Львівська_обл.,_Україна.jpg
ಚಿತ್ರ:Написи_на_стінах_церкви.jpg|alt=Writing on walls| ಗೋಡೆಗಳ ಮೇಲೆ ಬರೆಯುವುದು
ಚಿತ್ರ:2017_-_Дрогобич_-_церква_Св._Юрія_-_інтер'єр_-_2.jpg|alt=Interior| ಇಂಟೀರಿಯರ್
ಚಿತ್ರ:46-106-0001_Drogobycz_DSC_4962.jpg
ಚಿತ್ರ:Tserkva-sviatoho-yura-drohobych-05.JPG
ಚಿತ್ರ:Tserkva-sviatoho-yura-drohobych-07.JPG
ಚಿತ್ರ:Tserkva-sviatoho-yura-drohobych-03.JPG
ಚಿತ್ರ:Дрогобич_.Церква_святого_Юра.Вівтар.JPG|alt=Iconostasis| ಐಕಾನೊಸ್ಟಾಸಿಸ್
ಚಿತ್ರ:Церква_Святого_Юра,_інтер'єр,_м._Дрогобич,_Львівська_обл.,_Україна.7.jpg|alt=Ceiling| ಸೀಲಿಂಗ್
ಚಿತ್ರ:Церква_Юра_Дрогобич_DJI_0225.jpg|alt=Aerial view| ವೈಮಾನಿಕ ನೋಟ
</gallery>
== ಸಹ ನೋಡಿ ==
* ಉಕ್ರೇನ್ನ ಮರದ ಚರ್ಚುಗಳು
* ಭಕ್ತಿಗಳು, ಸಂಪ್ರದಾಯಗಳು ಮತ್ತು ಪ್ರಾರ್ಥನೆಗಳಲ್ಲಿ ಸಂತ ಜಾರ್ಜ್
== ಉಲ್ಲೇಖಗಳು ==
{{ಉಲ್ಲೇಖಗಳು}}
== ಮೂಲಗಳು ==
* ಪಮ್ಯಾಟ್ನಿಕಿ ಗ್ರ್ಯಾಡೋಸ್ಟ್ರೊಯಿಟೆಲ್ಸ್ಟ್ವಾ ಮತ್ತು ಆರ್ಹಿಟೆಕ್ಟುರಿ ಆಕ್ರೈನ್ಸ್ಕೊಯ್ ಸ್ಟಾಪ್. ಕೀವ್: ಬುಡಿವೆಲ್ನಿಕ್, 1983–1986. ಟಾಮ್ 3, ಸೆ. 98.
* [http://en.uartlib.org/books/lev-skop-st-georges-church-drohobych/ ಲೆವ್ ಸ್ಕೋಪ್.] {{Webarchive|url=https://web.archive.org/web/20260610180705/https://en.uartlib.org/books/lev-skop-st-georges-church-drohobych/ |date=2026-06-10 }} [http://en.uartlib.org/books/lev-skop-st-georges-church-drohobych/ ಸೇಂಟ್ ಜಾರ್ಜ್ ಚರ್ಚ್.] {{Webarchive|url=https://web.archive.org/web/20260610180705/https://en.uartlib.org/books/lev-skop-st-georges-church-drohobych/ |date=2026-06-10 }} [http://en.uartlib.org/books/lev-skop-st-georges-church-drohobych/ ಡ್ರೊಹೋಬಿಚ್, 2012.] {{Webarchive|url=https://web.archive.org/web/20260610180705/https://en.uartlib.org/books/lev-skop-st-georges-church-drohobych/ |date=2026-06-10 }}
[[ವರ್ಗ:ಉಕ್ರೇನ್]]
b34k1wdjxdp708mkwkrois8a4q5vr8u
ಜಾಣಗೆರೆ ವೆಂಕಟರಾಮಯ್ಯ
0
180728
1384571
1384421
2026-08-28T14:38:18Z
Gnaneswaratn
13058
1384571
wikitext
text/x-wiki
ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳೆರಡರಲ್ಲೂ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆ ವೆಂಕಟರಾಮಯ್ಯನವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮುಂತಾದ ಪ್ರಕಾರಗಳಲ್ಲಿ 41 ಕೃತಿಗಳನ್ನು ರಚಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆವಾಸ ಅನುಭವಿಸಿದ್ದಾರೆ. ಜಾಣಗೆರೆ ವೆಂಕಟರಾಮಯ್ಯನವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿಯ ಜಾಣಗೆರೆಯಲ್ಲಿ ವೆಂಕಟಪ್ಪ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳ ಮಗನಾಗಿ 5 ಜೂನ್ 1949ರಲ್ಲಿ ಜನಿಸಿದರು. ಜಾಣಗೆರೆ ವೆಂಕಟರಾಮಯ್ಯನವರು ಬಿ.ಕಾಂ. ಪದವೀಧರರಾಗಿದ್ದಾರೆ. ಪ್ರಸ್ತುತ ಜಾಣಗೆರೆ ಅವರು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಪತ್ರಿಕೋದ್ಯಮದಲ್ಲಿ ==
=== ಸಹಾಯಕ ಸಂಪಾದಕರಾಗಿ ===
* ರೂಪಲೇಖಾ
* ರೂಪಶಿಲ್ಪಿ
* ಲಂಕೇಶ್ ಪತ್ರಿಕೆ
* ನಮ್ಮ ನಾಡು
=== ಸಂಪಾದಕರಾಗಿ ===
* ಅಭಿಮಾನಿ
* ಅರಗಿಣಿ
* ಸಂಚು
* ಮಾರ್ದನಿ
* ಜಾಣಗೆರೆ ಪತ್ರಿಕೆ
* ಅಭಿಮಾನ
* ಈ ಸಂಜೆ
* ಕರುನಾಡ ಸಂಜೆ
== ಸಾಹಿತ್ಯ ಕೃಷಿ ==
=== ಕಥಾ ಸಂಕಲನಗಳು ===
# ಪ್ರಪಾತ
# ನನ್ನ ನೆಲ ನನ್ನ ಜನ
# ಕಪ್ಪು ನ್ಯಾಯ
# ಕತೆ ಮುಗಿಸಿದ ನಾಯಕ
# ರಹೀಮನ ಪ್ರಣಯ ಪ್ರಸಂಗ
# ಜಾಣಗೆರೆ ದಲಿತ ಕತೆಗಳು
# ಜಾಣಗೆರೆ ಸಮಗ್ರ ಕತೆಗಳು-50
=== ಕಾದಂಬರಿಗಳು ===
# ದಡ
# ನೆಲೆ
# ಗರ
# ಮಹಾನದಿ
# ಅವತಾರ ಪುರುಷ
# ಸುನಾಮಿ (3 ಕಿರು ಕಾದಂಬರಿಗಳು)
# ಮಹಾಯಾನ
# ಜೀವಜಲ
# ಮರಳಿ ಬಂದ ಬುದ್ಧ
# ಜಲಯುದ್ಧ
# ಭೂಮ್ತಾಯಿ
# ಅನ್ನದಾತ
=== ಇತಿಹಾಸ ===
# ಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡ
# ಕನ್ನಡ ಚಳವಳಿ ಇತಿಹಾಸ
=== ಪ್ರವಾಸ ಕಥನ ===
# ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು
=== ವ್ಯಕ್ತಿಚಿತ್ರ ===
# ನುಡಿಗೋಲು
# ನುಡಿಗೋಲು-2
# ನುಡಿಗೋಲು-3
# ಕರುಣಾಳು
# ವಿಚಾರವಾದಿ ನಾಯಕ ಜೆ.ಎಚ್. ಪಟೇಲ್
=== ವಿಚಾರ ===
# ಕಾಲಮಾನ
# ನೆಲದ ಋಣ
# ನಮ್ಮ ಕಾಲ ನಮ್ಮ ಜನ
# ಸೋರುತಿಹುದು ಮನೆಯ ಮಾಳಿಗೆ
=== ಜೀವನ ಸಂಕಥನ ===
# ಸವೆಯದ ಹಾದಿ
# ಮೂರು ಹಗಲು ಮೂರು ರಾತ್ರಿ
# ಬೆಂಕಿ ಮತ್ತು ಬೆಳಕು
# ಏಳು-ಬೀಳು
# ಹೆತ್ತೂರು
=== ಆತ್ಮಕಥನ ===
# ಅರ್ಥವಾಗದ ಲೋಕ
ʼಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡʼ ಕೃತಿಯು ಹಲವು ಮುದ್ರಣಗಳನ್ನು ಕಂಡಿರುವುದಲ್ಲದೆ, ರೇಡಿಯೋ ರೂಪಕವಾಗಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ 20 ಕಂತುಗಳಲ್ಲಿ ಪ್ರಸಾರವಾಗಿದೆ. ಅಲ್ಲದೆ ಇದೇ ಕೃತಿಯನ್ನು ಆಧರಿಸಿ ʼಕೆಂಪಾಂಬುಧಿʼ ಹೆಸರಿನ ಚಲನಚಿತ್ರ ನಿರ್ಮಾಣವಾಗುತ್ತಿದೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಹೋರಾಟಗಾರರಾಗಿ ==
* ಕನ್ನಡ ಆಡಳಿತ ಭಾಷೆ, ಕನ್ನಡ ಚಿತ್ರ ಪ್ರದರ್ಶನ ಹಾಗೂ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಹೋರಾಟ
* ಗೋಕಾಕ್ ಚಳವಳಿ, ಡಾ. ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ಮಹಾಜನ್ ವರದಿ ಜಾರಿಗೆ ಹೋರಾಟ
* ಕಾವೇರಿ, ಕೃಷ್ಣಾ, ಮಹಾದಾಯಿ ನ್ಯಾಯಕ್ಕಾಗಿ ಹೋರಾಟ
* ಅಧ್ಯಕ್ಷರು, ಕನ್ನಡಿಗರ ಹೋರಾಟ ರಂಗ
* ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
== ಬಂಧನ-ಸೆರೆವಾಸ ==
ಪತ್ರಿಕಾ ಬರಹಗಳ ಮೇಲಿನ ಮಾನನಷ್ಟ ಮೊಕದ್ದಮೆ ನಾಡಪರ ಹೋರಾಟಗಳಿಗಾಗಿ ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಕಲಬುರಗಿ ಜೈಲು ವಾಸ
== ಪ್ರಶಸ್ತಿ ==
# 2012ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
# ʼಮಹಾನದಿʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ʼಮಹಾಯಾನʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ಕನ್ನಡ ಪುಸ್ತಕ ಪ್ರಾಧಿಕಾರದಿಂದ ʼಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿʼ
# ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ
# ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ ʼಎಚ್. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿʼ
# ʼಮಹಾನದಿʼ ಕಾದಂಬರಿಗೆ ತುಮಕೂರಿನ ʼವೀಚಿ ಸಾಹಿತ್ಯ ಪ್ರಶಸ್ತಿʼ
# ʼಜೀವಜಲʼ ಕಾದಂಬರಿಗೆ ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ ʼಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿʼ
# ʼಜಲಯುದ್ಧʼ ಕಾದಂಬರಿಗೆ ʼಸ್ವಾಭಿಮಾನಿ ಪುಸ್ತಕ ಪ್ರಶಸ್ತಿʼ
# ಬೆಂಗಳೂರಿನ ಕನ್ನಡ ಜನಶಕ್ತಿ ಸಂಘಟನೆಯಿಂದ ʼಶಾಂತವೇರಿ ಗೋಪಾಲಗೌಡ ಪ್ರಶಸ್ತಿʼ
# ಅರಸು ವಿಚಾರ ವೇದಿಕೆಯಿಂದ ʼಅರಸುಶ್ರೀ ಪ್ರಶಸ್ತಿʼ
# ಕಟ್ಟೆ ಬಳಗದಿಂದ ʼಕನ್ನಡ ಕಟ್ಟೆ ಪ್ರಶಸ್ತಿʼ
# ಮಂಡ್ಯದ ʼಇಂಡವಾಳು ಎಚ್. ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿʼ
# ಬಿಎಂಶ್ರೀ ಪ್ರತಿಷ್ಠಾನದಿಂದ ʼವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿʼ
# ಕನ್ನಡ ಸಾಹಿತ್ಯ ಪರಿಷತ್ತಿನಿಂದ ʼಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿʼ
# ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ʼಕರ್ನಾಟಕ ಚೂಡಾಮಣಿ ಪ್ರಶಸ್ತಿʼ
# ಕುವೆಂಪು ಕಲಾನಿಕೇತನದಿಂದ ʼನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿʼ
== ಉಲ್ಲೇಖಗಳು ==
pendsizffs4epvfahfl5m93wlq6bpd2
1384574
1384571
2026-08-28T14:54:20Z
Gnaneswaratn
13058
/* ಕಥಾ ಸಂಕಲನಗಳು */
1384574
wikitext
text/x-wiki
ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳೆರಡರಲ್ಲೂ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆ ವೆಂಕಟರಾಮಯ್ಯನವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮುಂತಾದ ಪ್ರಕಾರಗಳಲ್ಲಿ 41 ಕೃತಿಗಳನ್ನು ರಚಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆವಾಸ ಅನುಭವಿಸಿದ್ದಾರೆ. ಜಾಣಗೆರೆ ವೆಂಕಟರಾಮಯ್ಯನವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿಯ ಜಾಣಗೆರೆಯಲ್ಲಿ ವೆಂಕಟಪ್ಪ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳ ಮಗನಾಗಿ 5 ಜೂನ್ 1949ರಲ್ಲಿ ಜನಿಸಿದರು. ಜಾಣಗೆರೆ ವೆಂಕಟರಾಮಯ್ಯನವರು ಬಿ.ಕಾಂ. ಪದವೀಧರರಾಗಿದ್ದಾರೆ. ಪ್ರಸ್ತುತ ಜಾಣಗೆರೆ ಅವರು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಪತ್ರಿಕೋದ್ಯಮದಲ್ಲಿ ==
=== ಸಹಾಯಕ ಸಂಪಾದಕರಾಗಿ ===
* ರೂಪಲೇಖಾ
* ರೂಪಶಿಲ್ಪಿ
* ಲಂಕೇಶ್ ಪತ್ರಿಕೆ
* ನಮ್ಮ ನಾಡು
=== ಸಂಪಾದಕರಾಗಿ ===
* ಅಭಿಮಾನಿ
* ಅರಗಿಣಿ
* ಸಂಚು
* ಮಾರ್ದನಿ
* ಜಾಣಗೆರೆ ಪತ್ರಿಕೆ
* ಅಭಿಮಾನ
* ಈ ಸಂಜೆ
* ಕರುನಾಡ ಸಂಜೆ
== ಸಾಹಿತ್ಯ ಕೃಷಿ ==
=== ಕಥಾ ಸಂಕಲನಗಳು ===
# ಪ್ರಪಾತ
# ನನ್ನ ನೆಲ ನನ್ನ ಜನ
# ಕಪ್ಪು ನ್ಯಾಯ
# ಕತೆ ಮುಗಿಸಿದ ನಾಯಕ
# ರಹೀಮನ ಪ್ರಣಯ ಪ್ರಸಂಗ
# ಜಾಣಗೆರೆ ದಲಿತ ಕತೆಗಳು
# ಜಾಣಗೆರೆ 50 ಕತೆಗಳು (ಸಮಗ್ರ ಕತೆಗಳ ಸಂಕಲನ)
=== ಕಾದಂಬರಿಗಳು ===
# ದಡ
# ನೆಲೆ
# ಗರ
# ಮಹಾನದಿ
# ಅವತಾರ ಪುರುಷ
# ಸುನಾಮಿ (3 ಕಿರು ಕಾದಂಬರಿಗಳು)
# ಮಹಾಯಾನ
# ಜೀವಜಲ
# ಮರಳಿ ಬಂದ ಬುದ್ಧ
# ಜಲಯುದ್ಧ
# ಭೂಮ್ತಾಯಿ
# ಅನ್ನದಾತ
=== ಇತಿಹಾಸ ===
# ಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡ
# ಕನ್ನಡ ಚಳವಳಿ ಇತಿಹಾಸ
=== ಪ್ರವಾಸ ಕಥನ ===
# ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು
=== ವ್ಯಕ್ತಿಚಿತ್ರ ===
# ನುಡಿಗೋಲು
# ನುಡಿಗೋಲು-2
# ನುಡಿಗೋಲು-3
# ಕರುಣಾಳು
# ವಿಚಾರವಾದಿ ನಾಯಕ ಜೆ.ಎಚ್. ಪಟೇಲ್
=== ವಿಚಾರ ===
# ಕಾಲಮಾನ
# ನೆಲದ ಋಣ
# ನಮ್ಮ ಕಾಲ ನಮ್ಮ ಜನ
# ಸೋರುತಿಹುದು ಮನೆಯ ಮಾಳಿಗೆ
=== ಜೀವನ ಸಂಕಥನ ===
# ಸವೆಯದ ಹಾದಿ
# ಮೂರು ಹಗಲು ಮೂರು ರಾತ್ರಿ
# ಬೆಂಕಿ ಮತ್ತು ಬೆಳಕು
# ಏಳು-ಬೀಳು
# ಹೆತ್ತೂರು
=== ಆತ್ಮಕಥನ ===
# ಅರ್ಥವಾಗದ ಲೋಕ
ʼಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡʼ ಕೃತಿಯು ಹಲವು ಮುದ್ರಣಗಳನ್ನು ಕಂಡಿರುವುದಲ್ಲದೆ, ರೇಡಿಯೋ ರೂಪಕವಾಗಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ 20 ಕಂತುಗಳಲ್ಲಿ ಪ್ರಸಾರವಾಗಿದೆ. ಅಲ್ಲದೆ ಇದೇ ಕೃತಿಯನ್ನು ಆಧರಿಸಿ ʼಕೆಂಪಾಂಬುಧಿʼ ಹೆಸರಿನ ಚಲನಚಿತ್ರ ನಿರ್ಮಾಣವಾಗುತ್ತಿದೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಹೋರಾಟಗಾರರಾಗಿ ==
* ಕನ್ನಡ ಆಡಳಿತ ಭಾಷೆ, ಕನ್ನಡ ಚಿತ್ರ ಪ್ರದರ್ಶನ ಹಾಗೂ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಹೋರಾಟ
* ಗೋಕಾಕ್ ಚಳವಳಿ, ಡಾ. ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ಮಹಾಜನ್ ವರದಿ ಜಾರಿಗೆ ಹೋರಾಟ
* ಕಾವೇರಿ, ಕೃಷ್ಣಾ, ಮಹಾದಾಯಿ ನ್ಯಾಯಕ್ಕಾಗಿ ಹೋರಾಟ
* ಅಧ್ಯಕ್ಷರು, ಕನ್ನಡಿಗರ ಹೋರಾಟ ರಂಗ
* ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
== ಬಂಧನ-ಸೆರೆವಾಸ ==
ಪತ್ರಿಕಾ ಬರಹಗಳ ಮೇಲಿನ ಮಾನನಷ್ಟ ಮೊಕದ್ದಮೆ ನಾಡಪರ ಹೋರಾಟಗಳಿಗಾಗಿ ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಕಲಬುರಗಿ ಜೈಲು ವಾಸ
== ಪ್ರಶಸ್ತಿ ==
# 2012ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
# ʼಮಹಾನದಿʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ʼಮಹಾಯಾನʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ಕನ್ನಡ ಪುಸ್ತಕ ಪ್ರಾಧಿಕಾರದಿಂದ ʼಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿʼ
# ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ
# ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ ʼಎಚ್. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿʼ
# ʼಮಹಾನದಿʼ ಕಾದಂಬರಿಗೆ ತುಮಕೂರಿನ ʼವೀಚಿ ಸಾಹಿತ್ಯ ಪ್ರಶಸ್ತಿʼ
# ʼಜೀವಜಲʼ ಕಾದಂಬರಿಗೆ ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ ʼಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿʼ
# ʼಜಲಯುದ್ಧʼ ಕಾದಂಬರಿಗೆ ʼಸ್ವಾಭಿಮಾನಿ ಪುಸ್ತಕ ಪ್ರಶಸ್ತಿʼ
# ಬೆಂಗಳೂರಿನ ಕನ್ನಡ ಜನಶಕ್ತಿ ಸಂಘಟನೆಯಿಂದ ʼಶಾಂತವೇರಿ ಗೋಪಾಲಗೌಡ ಪ್ರಶಸ್ತಿʼ
# ಅರಸು ವಿಚಾರ ವೇದಿಕೆಯಿಂದ ʼಅರಸುಶ್ರೀ ಪ್ರಶಸ್ತಿʼ
# ಕಟ್ಟೆ ಬಳಗದಿಂದ ʼಕನ್ನಡ ಕಟ್ಟೆ ಪ್ರಶಸ್ತಿʼ
# ಮಂಡ್ಯದ ʼಇಂಡವಾಳು ಎಚ್. ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿʼ
# ಬಿಎಂಶ್ರೀ ಪ್ರತಿಷ್ಠಾನದಿಂದ ʼವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿʼ
# ಕನ್ನಡ ಸಾಹಿತ್ಯ ಪರಿಷತ್ತಿನಿಂದ ʼಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿʼ
# ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ʼಕರ್ನಾಟಕ ಚೂಡಾಮಣಿ ಪ್ರಶಸ್ತಿʼ
# ಕುವೆಂಪು ಕಲಾನಿಕೇತನದಿಂದ ʼನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿʼ
== ಉಲ್ಲೇಖಗಳು ==
gjln3qscnwu8gv0kklqj9rkudnt2zkz
1384575
1384574
2026-08-28T14:55:33Z
Gnaneswaratn
13058
/* ಆತ್ಮಕಥನ */
1384575
wikitext
text/x-wiki
ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳೆರಡರಲ್ಲೂ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆ ವೆಂಕಟರಾಮಯ್ಯನವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮುಂತಾದ ಪ್ರಕಾರಗಳಲ್ಲಿ 41 ಕೃತಿಗಳನ್ನು ರಚಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆವಾಸ ಅನುಭವಿಸಿದ್ದಾರೆ. ಜಾಣಗೆರೆ ವೆಂಕಟರಾಮಯ್ಯನವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿಯ ಜಾಣಗೆರೆಯಲ್ಲಿ ವೆಂಕಟಪ್ಪ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳ ಮಗನಾಗಿ 5 ಜೂನ್ 1949ರಲ್ಲಿ ಜನಿಸಿದರು. ಜಾಣಗೆರೆ ವೆಂಕಟರಾಮಯ್ಯನವರು ಬಿ.ಕಾಂ. ಪದವೀಧರರಾಗಿದ್ದಾರೆ. ಪ್ರಸ್ತುತ ಜಾಣಗೆರೆ ಅವರು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಪತ್ರಿಕೋದ್ಯಮದಲ್ಲಿ ==
=== ಸಹಾಯಕ ಸಂಪಾದಕರಾಗಿ ===
* ರೂಪಲೇಖಾ
* ರೂಪಶಿಲ್ಪಿ
* ಲಂಕೇಶ್ ಪತ್ರಿಕೆ
* ನಮ್ಮ ನಾಡು
=== ಸಂಪಾದಕರಾಗಿ ===
* ಅಭಿಮಾನಿ
* ಅರಗಿಣಿ
* ಸಂಚು
* ಮಾರ್ದನಿ
* ಜಾಣಗೆರೆ ಪತ್ರಿಕೆ
* ಅಭಿಮಾನ
* ಈ ಸಂಜೆ
* ಕರುನಾಡ ಸಂಜೆ
== ಸಾಹಿತ್ಯ ಕೃಷಿ ==
=== ಕಥಾ ಸಂಕಲನಗಳು ===
# ಪ್ರಪಾತ
# ನನ್ನ ನೆಲ ನನ್ನ ಜನ
# ಕಪ್ಪು ನ್ಯಾಯ
# ಕತೆ ಮುಗಿಸಿದ ನಾಯಕ
# ರಹೀಮನ ಪ್ರಣಯ ಪ್ರಸಂಗ
# ಜಾಣಗೆರೆ ದಲಿತ ಕತೆಗಳು
# ಜಾಣಗೆರೆ 50 ಕತೆಗಳು (ಸಮಗ್ರ ಕತೆಗಳ ಸಂಕಲನ)
=== ಕಾದಂಬರಿಗಳು ===
# ದಡ
# ನೆಲೆ
# ಗರ
# ಮಹಾನದಿ
# ಅವತಾರ ಪುರುಷ
# ಸುನಾಮಿ (3 ಕಿರು ಕಾದಂಬರಿಗಳು)
# ಮಹಾಯಾನ
# ಜೀವಜಲ
# ಮರಳಿ ಬಂದ ಬುದ್ಧ
# ಜಲಯುದ್ಧ
# ಭೂಮ್ತಾಯಿ
# ಅನ್ನದಾತ
=== ಇತಿಹಾಸ ===
# ಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡ
# ಕನ್ನಡ ಚಳವಳಿ ಇತಿಹಾಸ
=== ಪ್ರವಾಸ ಕಥನ ===
# ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು
=== ವ್ಯಕ್ತಿಚಿತ್ರ ===
# ನುಡಿಗೋಲು
# ನುಡಿಗೋಲು-2
# ನುಡಿಗೋಲು-3
# ಕರುಣಾಳು
# ವಿಚಾರವಾದಿ ನಾಯಕ ಜೆ.ಎಚ್. ಪಟೇಲ್
=== ವಿಚಾರ ===
# ಕಾಲಮಾನ
# ನೆಲದ ಋಣ
# ನಮ್ಮ ಕಾಲ ನಮ್ಮ ಜನ
# ಸೋರುತಿಹುದು ಮನೆಯ ಮಾಳಿಗೆ
=== ಜೀವನ ಸಂಕಥನ ===
# ಸವೆಯದ ಹಾದಿ
# ಮೂರು ಹಗಲು ಮೂರು ರಾತ್ರಿ
# ಬೆಂಕಿ ಮತ್ತು ಬೆಳಕು
# ಏಳು-ಬೀಳು
# ಹೆತ್ತೂರು
=== ಆತ್ಮಕಥನ ===
# ಅರ್ಥವಾಗದ ಲೋಕ (2026)
ʼಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡʼ ಕೃತಿಯು ಹಲವು ಮುದ್ರಣಗಳನ್ನು ಕಂಡಿರುವುದಲ್ಲದೆ, ರೇಡಿಯೋ ರೂಪಕವಾಗಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ 20 ಕಂತುಗಳಲ್ಲಿ ಪ್ರಸಾರವಾಗಿದೆ. ಅಲ್ಲದೆ ಇದೇ ಕೃತಿಯನ್ನು ಆಧರಿಸಿ ʼಕೆಂಪಾಂಬುಧಿʼ ಹೆಸರಿನ ಚಲನಚಿತ್ರ ನಿರ್ಮಾಣವಾಗುತ್ತಿದೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಹೋರಾಟಗಾರರಾಗಿ ==
* ಕನ್ನಡ ಆಡಳಿತ ಭಾಷೆ, ಕನ್ನಡ ಚಿತ್ರ ಪ್ರದರ್ಶನ ಹಾಗೂ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಹೋರಾಟ
* ಗೋಕಾಕ್ ಚಳವಳಿ, ಡಾ. ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ಮಹಾಜನ್ ವರದಿ ಜಾರಿಗೆ ಹೋರಾಟ
* ಕಾವೇರಿ, ಕೃಷ್ಣಾ, ಮಹಾದಾಯಿ ನ್ಯಾಯಕ್ಕಾಗಿ ಹೋರಾಟ
* ಅಧ್ಯಕ್ಷರು, ಕನ್ನಡಿಗರ ಹೋರಾಟ ರಂಗ
* ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
== ಬಂಧನ-ಸೆರೆವಾಸ ==
ಪತ್ರಿಕಾ ಬರಹಗಳ ಮೇಲಿನ ಮಾನನಷ್ಟ ಮೊಕದ್ದಮೆ ನಾಡಪರ ಹೋರಾಟಗಳಿಗಾಗಿ ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಕಲಬುರಗಿ ಜೈಲು ವಾಸ
== ಪ್ರಶಸ್ತಿ ==
# 2012ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
# ʼಮಹಾನದಿʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ʼಮಹಾಯಾನʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ಕನ್ನಡ ಪುಸ್ತಕ ಪ್ರಾಧಿಕಾರದಿಂದ ʼಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿʼ
# ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ
# ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ ʼಎಚ್. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿʼ
# ʼಮಹಾನದಿʼ ಕಾದಂಬರಿಗೆ ತುಮಕೂರಿನ ʼವೀಚಿ ಸಾಹಿತ್ಯ ಪ್ರಶಸ್ತಿʼ
# ʼಜೀವಜಲʼ ಕಾದಂಬರಿಗೆ ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ ʼಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿʼ
# ʼಜಲಯುದ್ಧʼ ಕಾದಂಬರಿಗೆ ʼಸ್ವಾಭಿಮಾನಿ ಪುಸ್ತಕ ಪ್ರಶಸ್ತಿʼ
# ಬೆಂಗಳೂರಿನ ಕನ್ನಡ ಜನಶಕ್ತಿ ಸಂಘಟನೆಯಿಂದ ʼಶಾಂತವೇರಿ ಗೋಪಾಲಗೌಡ ಪ್ರಶಸ್ತಿʼ
# ಅರಸು ವಿಚಾರ ವೇದಿಕೆಯಿಂದ ʼಅರಸುಶ್ರೀ ಪ್ರಶಸ್ತಿʼ
# ಕಟ್ಟೆ ಬಳಗದಿಂದ ʼಕನ್ನಡ ಕಟ್ಟೆ ಪ್ರಶಸ್ತಿʼ
# ಮಂಡ್ಯದ ʼಇಂಡವಾಳು ಎಚ್. ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿʼ
# ಬಿಎಂಶ್ರೀ ಪ್ರತಿಷ್ಠಾನದಿಂದ ʼವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿʼ
# ಕನ್ನಡ ಸಾಹಿತ್ಯ ಪರಿಷತ್ತಿನಿಂದ ʼಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿʼ
# ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ʼಕರ್ನಾಟಕ ಚೂಡಾಮಣಿ ಪ್ರಶಸ್ತಿʼ
# ಕುವೆಂಪು ಕಲಾನಿಕೇತನದಿಂದ ʼನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿʼ
== ಉಲ್ಲೇಖಗಳು ==
mg6h7gsryafmwiq6uvxvg7upqh4j136
1384577
1384575
2026-08-28T14:58:37Z
Gnaneswaratn
13058
/* ಪ್ರಶಸ್ತಿ */
1384577
wikitext
text/x-wiki
ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳೆರಡರಲ್ಲೂ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆ ವೆಂಕಟರಾಮಯ್ಯನವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮುಂತಾದ ಪ್ರಕಾರಗಳಲ್ಲಿ 41 ಕೃತಿಗಳನ್ನು ರಚಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆವಾಸ ಅನುಭವಿಸಿದ್ದಾರೆ. ಜಾಣಗೆರೆ ವೆಂಕಟರಾಮಯ್ಯನವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿಯ ಜಾಣಗೆರೆಯಲ್ಲಿ ವೆಂಕಟಪ್ಪ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳ ಮಗನಾಗಿ 5 ಜೂನ್ 1949ರಲ್ಲಿ ಜನಿಸಿದರು. ಜಾಣಗೆರೆ ವೆಂಕಟರಾಮಯ್ಯನವರು ಬಿ.ಕಾಂ. ಪದವೀಧರರಾಗಿದ್ದಾರೆ. ಪ್ರಸ್ತುತ ಜಾಣಗೆರೆ ಅವರು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಪತ್ರಿಕೋದ್ಯಮದಲ್ಲಿ ==
=== ಸಹಾಯಕ ಸಂಪಾದಕರಾಗಿ ===
* ರೂಪಲೇಖಾ
* ರೂಪಶಿಲ್ಪಿ
* ಲಂಕೇಶ್ ಪತ್ರಿಕೆ
* ನಮ್ಮ ನಾಡು
=== ಸಂಪಾದಕರಾಗಿ ===
* ಅಭಿಮಾನಿ
* ಅರಗಿಣಿ
* ಸಂಚು
* ಮಾರ್ದನಿ
* ಜಾಣಗೆರೆ ಪತ್ರಿಕೆ
* ಅಭಿಮಾನ
* ಈ ಸಂಜೆ
* ಕರುನಾಡ ಸಂಜೆ
== ಸಾಹಿತ್ಯ ಕೃಷಿ ==
=== ಕಥಾ ಸಂಕಲನಗಳು ===
# ಪ್ರಪಾತ
# ನನ್ನ ನೆಲ ನನ್ನ ಜನ
# ಕಪ್ಪು ನ್ಯಾಯ
# ಕತೆ ಮುಗಿಸಿದ ನಾಯಕ
# ರಹೀಮನ ಪ್ರಣಯ ಪ್ರಸಂಗ
# ಜಾಣಗೆರೆ ದಲಿತ ಕತೆಗಳು
# ಜಾಣಗೆರೆ 50 ಕತೆಗಳು (ಸಮಗ್ರ ಕತೆಗಳ ಸಂಕಲನ)
=== ಕಾದಂಬರಿಗಳು ===
# ದಡ
# ನೆಲೆ
# ಗರ
# ಮಹಾನದಿ
# ಅವತಾರ ಪುರುಷ
# ಸುನಾಮಿ (3 ಕಿರು ಕಾದಂಬರಿಗಳು)
# ಮಹಾಯಾನ
# ಜೀವಜಲ
# ಮರಳಿ ಬಂದ ಬುದ್ಧ
# ಜಲಯುದ್ಧ
# ಭೂಮ್ತಾಯಿ
# ಅನ್ನದಾತ
=== ಇತಿಹಾಸ ===
# ಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡ
# ಕನ್ನಡ ಚಳವಳಿ ಇತಿಹಾಸ
=== ಪ್ರವಾಸ ಕಥನ ===
# ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು
=== ವ್ಯಕ್ತಿಚಿತ್ರ ===
# ನುಡಿಗೋಲು
# ನುಡಿಗೋಲು-2
# ನುಡಿಗೋಲು-3
# ಕರುಣಾಳು
# ವಿಚಾರವಾದಿ ನಾಯಕ ಜೆ.ಎಚ್. ಪಟೇಲ್
=== ವಿಚಾರ ===
# ಕಾಲಮಾನ
# ನೆಲದ ಋಣ
# ನಮ್ಮ ಕಾಲ ನಮ್ಮ ಜನ
# ಸೋರುತಿಹುದು ಮನೆಯ ಮಾಳಿಗೆ
=== ಜೀವನ ಸಂಕಥನ ===
# ಸವೆಯದ ಹಾದಿ
# ಮೂರು ಹಗಲು ಮೂರು ರಾತ್ರಿ
# ಬೆಂಕಿ ಮತ್ತು ಬೆಳಕು
# ಏಳು-ಬೀಳು
# ಹೆತ್ತೂರು
=== ಆತ್ಮಕಥನ ===
# ಅರ್ಥವಾಗದ ಲೋಕ (2026)
ʼಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡʼ ಕೃತಿಯು ಹಲವು ಮುದ್ರಣಗಳನ್ನು ಕಂಡಿರುವುದಲ್ಲದೆ, ರೇಡಿಯೋ ರೂಪಕವಾಗಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ 20 ಕಂತುಗಳಲ್ಲಿ ಪ್ರಸಾರವಾಗಿದೆ. ಅಲ್ಲದೆ ಇದೇ ಕೃತಿಯನ್ನು ಆಧರಿಸಿ ʼಕೆಂಪಾಂಬುಧಿʼ ಹೆಸರಿನ ಚಲನಚಿತ್ರ ನಿರ್ಮಾಣವಾಗುತ್ತಿದೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಹೋರಾಟಗಾರರಾಗಿ ==
* ಕನ್ನಡ ಆಡಳಿತ ಭಾಷೆ, ಕನ್ನಡ ಚಿತ್ರ ಪ್ರದರ್ಶನ ಹಾಗೂ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಹೋರಾಟ
* ಗೋಕಾಕ್ ಚಳವಳಿ, ಡಾ. ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ಮಹಾಜನ್ ವರದಿ ಜಾರಿಗೆ ಹೋರಾಟ
* ಕಾವೇರಿ, ಕೃಷ್ಣಾ, ಮಹಾದಾಯಿ ನ್ಯಾಯಕ್ಕಾಗಿ ಹೋರಾಟ
* ಅಧ್ಯಕ್ಷರು, ಕನ್ನಡಿಗರ ಹೋರಾಟ ರಂಗ
* ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
== ಬಂಧನ-ಸೆರೆವಾಸ ==
ಪತ್ರಿಕಾ ಬರಹಗಳ ಮೇಲಿನ ಮಾನನಷ್ಟ ಮೊಕದ್ದಮೆ ನಾಡಪರ ಹೋರಾಟಗಳಿಗಾಗಿ ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಕಲಬುರಗಿ ಜೈಲು ವಾಸ
== ಪ್ರಶಸ್ತಿ ==
# 2012ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
# ʼಮಹಾನದಿʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ʼಮಹಾಯಾನʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ಕನ್ನಡ ಪುಸ್ತಕ ಪ್ರಾಧಿಕಾರದಿಂದ ʼಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿʼ
# ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ
# ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ ʼಎಚ್. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿʼ
# ʼಮಹಾನದಿʼ ಕಾದಂಬರಿಗೆ ತುಮಕೂರಿನ ʼವೀಚಿ ಸಾಹಿತ್ಯ ಪ್ರಶಸ್ತಿʼ
# ʼಜೀವಜಲʼ ಕಾದಂಬರಿಗೆ ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ ʼಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿʼ
# ʼಜಲಯುದ್ಧʼ ಕಾದಂಬರಿಗೆ ʼಸ್ವಾಭಿಮಾನಿ ಪುಸ್ತಕ ಪ್ರಶಸ್ತಿʼ
# ಬೆಂಗಳೂರಿನ ಕನ್ನಡ ಜನಶಕ್ತಿ ಸಂಘಟನೆಯಿಂದ ʼಶಾಂತವೇರಿ ಗೋಪಾಲಗೌಡ ಪ್ರಶಸ್ತಿʼ
# ಅರಸು ವಿಚಾರ ವೇದಿಕೆಯಿಂದ ʼಅರಸುಶ್ರೀ ಪ್ರಶಸ್ತಿʼ
# ಕಟ್ಟೆ ಬಳಗದಿಂದ ʼಕನ್ನಡ ಕಟ್ಟೆ ಪ್ರಶಸ್ತಿʼ
# ಮಂಡ್ಯದ ʼಇಂಡುವಾಳು ಎಚ್. ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿʼ
# ಬಿಎಂಶ್ರೀ ಪ್ರತಿಷ್ಠಾನದಿಂದ ʼವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿʼ
# ಕನ್ನಡ ಸಾಹಿತ್ಯ ಪರಿಷತ್ತಿನಿಂದ ʼಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿʼ
# ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ʼಕರ್ನಾಟಕ ಚೂಡಾಮಣಿ ಪ್ರಶಸ್ತಿʼ
# ಕುವೆಂಪು ಕಲಾನಿಕೇತನದಿಂದ ʼನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿʼ
== ಉಲ್ಲೇಖಗಳು ==
h0le3y1c6wk55alob8gv0cndwssuub9
1384578
1384577
2026-08-28T15:08:26Z
Gnaneswaratn
13058
/* ಪ್ರಶಸ್ತಿ */
1384578
wikitext
text/x-wiki
ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳೆರಡರಲ್ಲೂ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆ ವೆಂಕಟರಾಮಯ್ಯನವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮುಂತಾದ ಪ್ರಕಾರಗಳಲ್ಲಿ 41 ಕೃತಿಗಳನ್ನು ರಚಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆವಾಸ ಅನುಭವಿಸಿದ್ದಾರೆ. ಜಾಣಗೆರೆ ವೆಂಕಟರಾಮಯ್ಯನವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿಯ ಜಾಣಗೆರೆಯಲ್ಲಿ ವೆಂಕಟಪ್ಪ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳ ಮಗನಾಗಿ 5 ಜೂನ್ 1949ರಲ್ಲಿ ಜನಿಸಿದರು. ಜಾಣಗೆರೆ ವೆಂಕಟರಾಮಯ್ಯನವರು ಬಿ.ಕಾಂ. ಪದವೀಧರರಾಗಿದ್ದಾರೆ. ಪ್ರಸ್ತುತ ಜಾಣಗೆರೆ ಅವರು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಪತ್ರಿಕೋದ್ಯಮದಲ್ಲಿ ==
=== ಸಹಾಯಕ ಸಂಪಾದಕರಾಗಿ ===
* ರೂಪಲೇಖಾ
* ರೂಪಶಿಲ್ಪಿ
* ಲಂಕೇಶ್ ಪತ್ರಿಕೆ
* ನಮ್ಮ ನಾಡು
=== ಸಂಪಾದಕರಾಗಿ ===
* ಅಭಿಮಾನಿ
* ಅರಗಿಣಿ
* ಸಂಚು
* ಮಾರ್ದನಿ
* ಜಾಣಗೆರೆ ಪತ್ರಿಕೆ
* ಅಭಿಮಾನ
* ಈ ಸಂಜೆ
* ಕರುನಾಡ ಸಂಜೆ
== ಸಾಹಿತ್ಯ ಕೃಷಿ ==
=== ಕಥಾ ಸಂಕಲನಗಳು ===
# ಪ್ರಪಾತ
# ನನ್ನ ನೆಲ ನನ್ನ ಜನ
# ಕಪ್ಪು ನ್ಯಾಯ
# ಕತೆ ಮುಗಿಸಿದ ನಾಯಕ
# ರಹೀಮನ ಪ್ರಣಯ ಪ್ರಸಂಗ
# ಜಾಣಗೆರೆ ದಲಿತ ಕತೆಗಳು
# ಜಾಣಗೆರೆ 50 ಕತೆಗಳು (ಸಮಗ್ರ ಕತೆಗಳ ಸಂಕಲನ)
=== ಕಾದಂಬರಿಗಳು ===
# ದಡ
# ನೆಲೆ
# ಗರ
# ಮಹಾನದಿ
# ಅವತಾರ ಪುರುಷ
# ಸುನಾಮಿ (3 ಕಿರು ಕಾದಂಬರಿಗಳು)
# ಮಹಾಯಾನ
# ಜೀವಜಲ
# ಮರಳಿ ಬಂದ ಬುದ್ಧ
# ಜಲಯುದ್ಧ
# ಭೂಮ್ತಾಯಿ
# ಅನ್ನದಾತ
=== ಇತಿಹಾಸ ===
# ಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡ
# ಕನ್ನಡ ಚಳವಳಿ ಇತಿಹಾಸ
=== ಪ್ರವಾಸ ಕಥನ ===
# ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು
=== ವ್ಯಕ್ತಿಚಿತ್ರ ===
# ನುಡಿಗೋಲು
# ನುಡಿಗೋಲು-2
# ನುಡಿಗೋಲು-3
# ಕರುಣಾಳು
# ವಿಚಾರವಾದಿ ನಾಯಕ ಜೆ.ಎಚ್. ಪಟೇಲ್
=== ವಿಚಾರ ===
# ಕಾಲಮಾನ
# ನೆಲದ ಋಣ
# ನಮ್ಮ ಕಾಲ ನಮ್ಮ ಜನ
# ಸೋರುತಿಹುದು ಮನೆಯ ಮಾಳಿಗೆ
=== ಜೀವನ ಸಂಕಥನ ===
# ಸವೆಯದ ಹಾದಿ
# ಮೂರು ಹಗಲು ಮೂರು ರಾತ್ರಿ
# ಬೆಂಕಿ ಮತ್ತು ಬೆಳಕು
# ಏಳು-ಬೀಳು
# ಹೆತ್ತೂರು
=== ಆತ್ಮಕಥನ ===
# ಅರ್ಥವಾಗದ ಲೋಕ (2026)
ʼಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡʼ ಕೃತಿಯು ಹಲವು ಮುದ್ರಣಗಳನ್ನು ಕಂಡಿರುವುದಲ್ಲದೆ, ರೇಡಿಯೋ ರೂಪಕವಾಗಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ 20 ಕಂತುಗಳಲ್ಲಿ ಪ್ರಸಾರವಾಗಿದೆ. ಅಲ್ಲದೆ ಇದೇ ಕೃತಿಯನ್ನು ಆಧರಿಸಿ ʼಕೆಂಪಾಂಬುಧಿʼ ಹೆಸರಿನ ಚಲನಚಿತ್ರ ನಿರ್ಮಾಣವಾಗುತ್ತಿದೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಹೋರಾಟಗಾರರಾಗಿ ==
* ಕನ್ನಡ ಆಡಳಿತ ಭಾಷೆ, ಕನ್ನಡ ಚಿತ್ರ ಪ್ರದರ್ಶನ ಹಾಗೂ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಹೋರಾಟ
* ಗೋಕಾಕ್ ಚಳವಳಿ, ಡಾ. ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ಮಹಾಜನ್ ವರದಿ ಜಾರಿಗೆ ಹೋರಾಟ
* ಕಾವೇರಿ, ಕೃಷ್ಣಾ, ಮಹಾದಾಯಿ ನ್ಯಾಯಕ್ಕಾಗಿ ಹೋರಾಟ
* ಅಧ್ಯಕ್ಷರು, ಕನ್ನಡಿಗರ ಹೋರಾಟ ರಂಗ
* ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
== ಬಂಧನ-ಸೆರೆವಾಸ ==
ಪತ್ರಿಕಾ ಬರಹಗಳ ಮೇಲಿನ ಮಾನನಷ್ಟ ಮೊಕದ್ದಮೆ ನಾಡಪರ ಹೋರಾಟಗಳಿಗಾಗಿ ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಕಲಬುರಗಿ ಜೈಲು ವಾಸ
== ಪ್ರಶಸ್ತಿ ==
# 2012ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
# ʼಮಹಾನದಿʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ʼಮಹಾಯಾನʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ಕನ್ನಡ ಪುಸ್ತಕ ಪ್ರಾಧಿಕಾರದಿಂದ ʼಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿʼ
# ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ
# ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ ʼಎಚ್. ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿʼ
# ʼಮಹಾನದಿʼ ಕಾದಂಬರಿಗೆ ತುಮಕೂರಿನ ʼವೀಚಿ ಸಾಹಿತ್ಯ ಪ್ರಶಸ್ತಿʼ
# ʼಜೀವಜಲʼ ಕಾದಂಬರಿಗೆ ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ ʼಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿʼ
# ʼಜಲಯುದ್ಧʼ ಕಾದಂಬರಿಗೆ ʼಸ್ವಾಭಿಮಾನಿ ಪುಸ್ತಕ ಪ್ರಶಸ್ತಿʼ
# ಬೆಂಗಳೂರಿನ ಕನ್ನಡ ಜನಶಕ್ತಿ ಸಂಘಟನೆಯಿಂದ ʼಶಾಂತವೇರಿ ಗೋಪಾಲಗೌಡ ಪ್ರಶಸ್ತಿʼ
# ಅರಸು ವಿಚಾರ ವೇದಿಕೆಯಿಂದ ʼಅರಸುಶ್ರೀ ಪ್ರಶಸ್ತಿʼ
# ಕಟ್ಟೆ ಬಳಗದಿಂದ ʼಕನ್ನಡ ಕಟ್ಟೆ ಪ್ರಶಸ್ತಿʼ
# ಮಂಡ್ಯದ ʼಇಂಡುವಾಳು ಎಚ್. ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿʼ
# ಬಿಎಂಶ್ರೀ ಪ್ರತಿಷ್ಠಾನದಿಂದ ʼವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿʼ
# ಕನ್ನಡ ಸಾಹಿತ್ಯ ಪರಿಷತ್ತಿನಿಂದ ʼಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿʼ
# ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ʼಕರ್ನಾಟಕ ಚೂಡಾಮಣಿ ಪ್ರಶಸ್ತಿʼ
# ಕುವೆಂಪು ಕಲಾನಿಕೇತನದಿಂದ ʼನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿʼ
== ಉಲ್ಲೇಖಗಳು ==
e4xokc4px7govje62pkb4ldmdyl8xlw
1384579
1384578
2026-08-28T15:09:10Z
Gnaneswaratn
13058
/* ವ್ಯಕ್ತಿಚಿತ್ರ */
1384579
wikitext
text/x-wiki
ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳೆರಡರಲ್ಲೂ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆ ವೆಂಕಟರಾಮಯ್ಯನವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮುಂತಾದ ಪ್ರಕಾರಗಳಲ್ಲಿ 41 ಕೃತಿಗಳನ್ನು ರಚಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆವಾಸ ಅನುಭವಿಸಿದ್ದಾರೆ. ಜಾಣಗೆರೆ ವೆಂಕಟರಾಮಯ್ಯನವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿಯ ಜಾಣಗೆರೆಯಲ್ಲಿ ವೆಂಕಟಪ್ಪ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳ ಮಗನಾಗಿ 5 ಜೂನ್ 1949ರಲ್ಲಿ ಜನಿಸಿದರು. ಜಾಣಗೆರೆ ವೆಂಕಟರಾಮಯ್ಯನವರು ಬಿ.ಕಾಂ. ಪದವೀಧರರಾಗಿದ್ದಾರೆ. ಪ್ರಸ್ತುತ ಜಾಣಗೆರೆ ಅವರು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಪತ್ರಿಕೋದ್ಯಮದಲ್ಲಿ ==
=== ಸಹಾಯಕ ಸಂಪಾದಕರಾಗಿ ===
* ರೂಪಲೇಖಾ
* ರೂಪಶಿಲ್ಪಿ
* ಲಂಕೇಶ್ ಪತ್ರಿಕೆ
* ನಮ್ಮ ನಾಡು
=== ಸಂಪಾದಕರಾಗಿ ===
* ಅಭಿಮಾನಿ
* ಅರಗಿಣಿ
* ಸಂಚು
* ಮಾರ್ದನಿ
* ಜಾಣಗೆರೆ ಪತ್ರಿಕೆ
* ಅಭಿಮಾನ
* ಈ ಸಂಜೆ
* ಕರುನಾಡ ಸಂಜೆ
== ಸಾಹಿತ್ಯ ಕೃಷಿ ==
=== ಕಥಾ ಸಂಕಲನಗಳು ===
# ಪ್ರಪಾತ
# ನನ್ನ ನೆಲ ನನ್ನ ಜನ
# ಕಪ್ಪು ನ್ಯಾಯ
# ಕತೆ ಮುಗಿಸಿದ ನಾಯಕ
# ರಹೀಮನ ಪ್ರಣಯ ಪ್ರಸಂಗ
# ಜಾಣಗೆರೆ ದಲಿತ ಕತೆಗಳು
# ಜಾಣಗೆರೆ 50 ಕತೆಗಳು (ಸಮಗ್ರ ಕತೆಗಳ ಸಂಕಲನ)
=== ಕಾದಂಬರಿಗಳು ===
# ದಡ
# ನೆಲೆ
# ಗರ
# ಮಹಾನದಿ
# ಅವತಾರ ಪುರುಷ
# ಸುನಾಮಿ (3 ಕಿರು ಕಾದಂಬರಿಗಳು)
# ಮಹಾಯಾನ
# ಜೀವಜಲ
# ಮರಳಿ ಬಂದ ಬುದ್ಧ
# ಜಲಯುದ್ಧ
# ಭೂಮ್ತಾಯಿ
# ಅನ್ನದಾತ
=== ಇತಿಹಾಸ ===
# ಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡ
# ಕನ್ನಡ ಚಳವಳಿ ಇತಿಹಾಸ
=== ಪ್ರವಾಸ ಕಥನ ===
# ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು
=== ವ್ಯಕ್ತಿಚಿತ್ರ ===
# ನುಡಿಗೋಲು
# ನುಡಿಗೋಲು-2
# ನುಡಿಗೋಲು-3 (2025)
# ಕರುಣಾಳು
# ವಿಚಾರವಾದಿ ನಾಯಕ ಜೆ.ಎಚ್. ಪಟೇಲ್
=== ವಿಚಾರ ===
# ಕಾಲಮಾನ
# ನೆಲದ ಋಣ
# ನಮ್ಮ ಕಾಲ ನಮ್ಮ ಜನ
# ಸೋರುತಿಹುದು ಮನೆಯ ಮಾಳಿಗೆ
=== ಜೀವನ ಸಂಕಥನ ===
# ಸವೆಯದ ಹಾದಿ
# ಮೂರು ಹಗಲು ಮೂರು ರಾತ್ರಿ
# ಬೆಂಕಿ ಮತ್ತು ಬೆಳಕು
# ಏಳು-ಬೀಳು
# ಹೆತ್ತೂರು
=== ಆತ್ಮಕಥನ ===
# ಅರ್ಥವಾಗದ ಲೋಕ (2026)
ʼಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡʼ ಕೃತಿಯು ಹಲವು ಮುದ್ರಣಗಳನ್ನು ಕಂಡಿರುವುದಲ್ಲದೆ, ರೇಡಿಯೋ ರೂಪಕವಾಗಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ 20 ಕಂತುಗಳಲ್ಲಿ ಪ್ರಸಾರವಾಗಿದೆ. ಅಲ್ಲದೆ ಇದೇ ಕೃತಿಯನ್ನು ಆಧರಿಸಿ ʼಕೆಂಪಾಂಬುಧಿʼ ಹೆಸರಿನ ಚಲನಚಿತ್ರ ನಿರ್ಮಾಣವಾಗುತ್ತಿದೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಹೋರಾಟಗಾರರಾಗಿ ==
* ಕನ್ನಡ ಆಡಳಿತ ಭಾಷೆ, ಕನ್ನಡ ಚಿತ್ರ ಪ್ರದರ್ಶನ ಹಾಗೂ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಹೋರಾಟ
* ಗೋಕಾಕ್ ಚಳವಳಿ, ಡಾ. ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ಮಹಾಜನ್ ವರದಿ ಜಾರಿಗೆ ಹೋರಾಟ
* ಕಾವೇರಿ, ಕೃಷ್ಣಾ, ಮಹಾದಾಯಿ ನ್ಯಾಯಕ್ಕಾಗಿ ಹೋರಾಟ
* ಅಧ್ಯಕ್ಷರು, ಕನ್ನಡಿಗರ ಹೋರಾಟ ರಂಗ
* ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
== ಬಂಧನ-ಸೆರೆವಾಸ ==
ಪತ್ರಿಕಾ ಬರಹಗಳ ಮೇಲಿನ ಮಾನನಷ್ಟ ಮೊಕದ್ದಮೆ ನಾಡಪರ ಹೋರಾಟಗಳಿಗಾಗಿ ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಕಲಬುರಗಿ ಜೈಲು ವಾಸ
== ಪ್ರಶಸ್ತಿ ==
# 2012ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
# ʼಮಹಾನದಿʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ʼಮಹಾಯಾನʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ಕನ್ನಡ ಪುಸ್ತಕ ಪ್ರಾಧಿಕಾರದಿಂದ ʼಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿʼ
# ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ
# ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ ʼಎಚ್. ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿʼ
# ʼಮಹಾನದಿʼ ಕಾದಂಬರಿಗೆ ತುಮಕೂರಿನ ʼವೀಚಿ ಸಾಹಿತ್ಯ ಪ್ರಶಸ್ತಿʼ
# ʼಜೀವಜಲʼ ಕಾದಂಬರಿಗೆ ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ ʼಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿʼ
# ʼಜಲಯುದ್ಧʼ ಕಾದಂಬರಿಗೆ ʼಸ್ವಾಭಿಮಾನಿ ಪುಸ್ತಕ ಪ್ರಶಸ್ತಿʼ
# ಬೆಂಗಳೂರಿನ ಕನ್ನಡ ಜನಶಕ್ತಿ ಸಂಘಟನೆಯಿಂದ ʼಶಾಂತವೇರಿ ಗೋಪಾಲಗೌಡ ಪ್ರಶಸ್ತಿʼ
# ಅರಸು ವಿಚಾರ ವೇದಿಕೆಯಿಂದ ʼಅರಸುಶ್ರೀ ಪ್ರಶಸ್ತಿʼ
# ಕಟ್ಟೆ ಬಳಗದಿಂದ ʼಕನ್ನಡ ಕಟ್ಟೆ ಪ್ರಶಸ್ತಿʼ
# ಮಂಡ್ಯದ ʼಇಂಡುವಾಳು ಎಚ್. ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿʼ
# ಬಿಎಂಶ್ರೀ ಪ್ರತಿಷ್ಠಾನದಿಂದ ʼವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿʼ
# ಕನ್ನಡ ಸಾಹಿತ್ಯ ಪರಿಷತ್ತಿನಿಂದ ʼಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿʼ
# ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ʼಕರ್ನಾಟಕ ಚೂಡಾಮಣಿ ಪ್ರಶಸ್ತಿʼ
# ಕುವೆಂಪು ಕಲಾನಿಕೇತನದಿಂದ ʼನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿʼ
== ಉಲ್ಲೇಖಗಳು ==
5e4jnqhndyf03iwqwmuj7ateqxnirdi
1384580
1384579
2026-08-28T15:10:18Z
Gnaneswaratn
13058
/* ವ್ಯಕ್ತಿಚಿತ್ರ */
1384580
wikitext
text/x-wiki
ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳೆರಡರಲ್ಲೂ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆ ವೆಂಕಟರಾಮಯ್ಯನವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮುಂತಾದ ಪ್ರಕಾರಗಳಲ್ಲಿ 41 ಕೃತಿಗಳನ್ನು ರಚಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆವಾಸ ಅನುಭವಿಸಿದ್ದಾರೆ. ಜಾಣಗೆರೆ ವೆಂಕಟರಾಮಯ್ಯನವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿಯ ಜಾಣಗೆರೆಯಲ್ಲಿ ವೆಂಕಟಪ್ಪ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳ ಮಗನಾಗಿ 5 ಜೂನ್ 1949ರಲ್ಲಿ ಜನಿಸಿದರು. ಜಾಣಗೆರೆ ವೆಂಕಟರಾಮಯ್ಯನವರು ಬಿ.ಕಾಂ. ಪದವೀಧರರಾಗಿದ್ದಾರೆ. ಪ್ರಸ್ತುತ ಜಾಣಗೆರೆ ಅವರು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಪತ್ರಿಕೋದ್ಯಮದಲ್ಲಿ ==
=== ಸಹಾಯಕ ಸಂಪಾದಕರಾಗಿ ===
* ರೂಪಲೇಖಾ
* ರೂಪಶಿಲ್ಪಿ
* ಲಂಕೇಶ್ ಪತ್ರಿಕೆ
* ನಮ್ಮ ನಾಡು
=== ಸಂಪಾದಕರಾಗಿ ===
* ಅಭಿಮಾನಿ
* ಅರಗಿಣಿ
* ಸಂಚು
* ಮಾರ್ದನಿ
* ಜಾಣಗೆರೆ ಪತ್ರಿಕೆ
* ಅಭಿಮಾನ
* ಈ ಸಂಜೆ
* ಕರುನಾಡ ಸಂಜೆ
== ಸಾಹಿತ್ಯ ಕೃಷಿ ==
=== ಕಥಾ ಸಂಕಲನಗಳು ===
# ಪ್ರಪಾತ
# ನನ್ನ ನೆಲ ನನ್ನ ಜನ
# ಕಪ್ಪು ನ್ಯಾಯ
# ಕತೆ ಮುಗಿಸಿದ ನಾಯಕ
# ರಹೀಮನ ಪ್ರಣಯ ಪ್ರಸಂಗ
# ಜಾಣಗೆರೆ ದಲಿತ ಕತೆಗಳು
# ಜಾಣಗೆರೆ 50 ಕತೆಗಳು (ಸಮಗ್ರ ಕತೆಗಳ ಸಂಕಲನ)
=== ಕಾದಂಬರಿಗಳು ===
# ದಡ
# ನೆಲೆ
# ಗರ
# ಮಹಾನದಿ
# ಅವತಾರ ಪುರುಷ
# ಸುನಾಮಿ (3 ಕಿರು ಕಾದಂಬರಿಗಳು)
# ಮಹಾಯಾನ
# ಜೀವಜಲ
# ಮರಳಿ ಬಂದ ಬುದ್ಧ
# ಜಲಯುದ್ಧ
# ಭೂಮ್ತಾಯಿ
# ಅನ್ನದಾತ
=== ಇತಿಹಾಸ ===
# ಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡ
# ಕನ್ನಡ ಚಳವಳಿ ಇತಿಹಾಸ
=== ಪ್ರವಾಸ ಕಥನ ===
# ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು
=== ವ್ಯಕ್ತಿಚಿತ್ರ ===
# ನುಡಿಗೋಲು (2023)
# ನುಡಿಗೋಲು-2 (2025)
# ನುಡಿಗೋಲು-3 (2025)
# ಕರುಣಾಳು
# ವಿಚಾರವಾದಿ ನಾಯಕ ಜೆ.ಎಚ್. ಪಟೇಲ್
=== ವಿಚಾರ ===
# ಕಾಲಮಾನ
# ನೆಲದ ಋಣ
# ನಮ್ಮ ಕಾಲ ನಮ್ಮ ಜನ
# ಸೋರುತಿಹುದು ಮನೆಯ ಮಾಳಿಗೆ
=== ಜೀವನ ಸಂಕಥನ ===
# ಸವೆಯದ ಹಾದಿ
# ಮೂರು ಹಗಲು ಮೂರು ರಾತ್ರಿ
# ಬೆಂಕಿ ಮತ್ತು ಬೆಳಕು
# ಏಳು-ಬೀಳು
# ಹೆತ್ತೂರು
=== ಆತ್ಮಕಥನ ===
# ಅರ್ಥವಾಗದ ಲೋಕ (2026)
ʼಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡʼ ಕೃತಿಯು ಹಲವು ಮುದ್ರಣಗಳನ್ನು ಕಂಡಿರುವುದಲ್ಲದೆ, ರೇಡಿಯೋ ರೂಪಕವಾಗಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ 20 ಕಂತುಗಳಲ್ಲಿ ಪ್ರಸಾರವಾಗಿದೆ. ಅಲ್ಲದೆ ಇದೇ ಕೃತಿಯನ್ನು ಆಧರಿಸಿ ʼಕೆಂಪಾಂಬುಧಿʼ ಹೆಸರಿನ ಚಲನಚಿತ್ರ ನಿರ್ಮಾಣವಾಗುತ್ತಿದೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಹೋರಾಟಗಾರರಾಗಿ ==
* ಕನ್ನಡ ಆಡಳಿತ ಭಾಷೆ, ಕನ್ನಡ ಚಿತ್ರ ಪ್ರದರ್ಶನ ಹಾಗೂ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಹೋರಾಟ
* ಗೋಕಾಕ್ ಚಳವಳಿ, ಡಾ. ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ಮಹಾಜನ್ ವರದಿ ಜಾರಿಗೆ ಹೋರಾಟ
* ಕಾವೇರಿ, ಕೃಷ್ಣಾ, ಮಹಾದಾಯಿ ನ್ಯಾಯಕ್ಕಾಗಿ ಹೋರಾಟ
* ಅಧ್ಯಕ್ಷರು, ಕನ್ನಡಿಗರ ಹೋರಾಟ ರಂಗ
* ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
== ಬಂಧನ-ಸೆರೆವಾಸ ==
ಪತ್ರಿಕಾ ಬರಹಗಳ ಮೇಲಿನ ಮಾನನಷ್ಟ ಮೊಕದ್ದಮೆ ನಾಡಪರ ಹೋರಾಟಗಳಿಗಾಗಿ ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಕಲಬುರಗಿ ಜೈಲು ವಾಸ
== ಪ್ರಶಸ್ತಿ ==
# 2012ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
# ʼಮಹಾನದಿʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ʼಮಹಾಯಾನʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ಕನ್ನಡ ಪುಸ್ತಕ ಪ್ರಾಧಿಕಾರದಿಂದ ʼಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿʼ
# ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ
# ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ ʼಎಚ್. ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿʼ
# ʼಮಹಾನದಿʼ ಕಾದಂಬರಿಗೆ ತುಮಕೂರಿನ ʼವೀಚಿ ಸಾಹಿತ್ಯ ಪ್ರಶಸ್ತಿʼ
# ʼಜೀವಜಲʼ ಕಾದಂಬರಿಗೆ ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ ʼಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿʼ
# ʼಜಲಯುದ್ಧʼ ಕಾದಂಬರಿಗೆ ʼಸ್ವಾಭಿಮಾನಿ ಪುಸ್ತಕ ಪ್ರಶಸ್ತಿʼ
# ಬೆಂಗಳೂರಿನ ಕನ್ನಡ ಜನಶಕ್ತಿ ಸಂಘಟನೆಯಿಂದ ʼಶಾಂತವೇರಿ ಗೋಪಾಲಗೌಡ ಪ್ರಶಸ್ತಿʼ
# ಅರಸು ವಿಚಾರ ವೇದಿಕೆಯಿಂದ ʼಅರಸುಶ್ರೀ ಪ್ರಶಸ್ತಿʼ
# ಕಟ್ಟೆ ಬಳಗದಿಂದ ʼಕನ್ನಡ ಕಟ್ಟೆ ಪ್ರಶಸ್ತಿʼ
# ಮಂಡ್ಯದ ʼಇಂಡುವಾಳು ಎಚ್. ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿʼ
# ಬಿಎಂಶ್ರೀ ಪ್ರತಿಷ್ಠಾನದಿಂದ ʼವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿʼ
# ಕನ್ನಡ ಸಾಹಿತ್ಯ ಪರಿಷತ್ತಿನಿಂದ ʼಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿʼ
# ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ʼಕರ್ನಾಟಕ ಚೂಡಾಮಣಿ ಪ್ರಶಸ್ತಿʼ
# ಕುವೆಂಪು ಕಲಾನಿಕೇತನದಿಂದ ʼನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿʼ
== ಉಲ್ಲೇಖಗಳು ==
9c2g4vcqtj4x1gks6de4r3s31wgfl6q
1384581
1384580
2026-08-28T15:16:18Z
Gnaneswaratn
13058
/* ಕಥಾ ಸಂಕಲನಗಳು */
1384581
wikitext
text/x-wiki
ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳೆರಡರಲ್ಲೂ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆ ವೆಂಕಟರಾಮಯ್ಯನವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮುಂತಾದ ಪ್ರಕಾರಗಳಲ್ಲಿ 41 ಕೃತಿಗಳನ್ನು ರಚಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆವಾಸ ಅನುಭವಿಸಿದ್ದಾರೆ. ಜಾಣಗೆರೆ ವೆಂಕಟರಾಮಯ್ಯನವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿಯ ಜಾಣಗೆರೆಯಲ್ಲಿ ವೆಂಕಟಪ್ಪ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳ ಮಗನಾಗಿ 5 ಜೂನ್ 1949ರಲ್ಲಿ ಜನಿಸಿದರು. ಜಾಣಗೆರೆ ವೆಂಕಟರಾಮಯ್ಯನವರು ಬಿ.ಕಾಂ. ಪದವೀಧರರಾಗಿದ್ದಾರೆ. ಪ್ರಸ್ತುತ ಜಾಣಗೆರೆ ಅವರು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಪತ್ರಿಕೋದ್ಯಮದಲ್ಲಿ ==
=== ಸಹಾಯಕ ಸಂಪಾದಕರಾಗಿ ===
* ರೂಪಲೇಖಾ
* ರೂಪಶಿಲ್ಪಿ
* ಲಂಕೇಶ್ ಪತ್ರಿಕೆ
* ನಮ್ಮ ನಾಡು
=== ಸಂಪಾದಕರಾಗಿ ===
* ಅಭಿಮಾನಿ
* ಅರಗಿಣಿ
* ಸಂಚು
* ಮಾರ್ದನಿ
* ಜಾಣಗೆರೆ ಪತ್ರಿಕೆ
* ಅಭಿಮಾನ
* ಈ ಸಂಜೆ
* ಕರುನಾಡ ಸಂಜೆ
== ಸಾಹಿತ್ಯ ಕೃಷಿ ==
=== ಕಥಾ ಸಂಕಲನಗಳು ===
# ಪ್ರಪಾತ (1977)
# ನನ್ನ ನೆಲ ನನ್ನ ಜನ (1978)
# ಕಪ್ಪು ನ್ಯಾಯ (1984)
# ಜಾಣಗೆರೆಯವರ ಆಯ್ದ ಕತೆಗಳು (1990)
# ಕತೆ ಮುಗಿಸಿದ ನಾಯಕ (2004)
# ರಹೀಮನ ಪ್ರಣಯ ಪ್ರಸಂಗ (2007)
# ಜಾಣಗೆರೆ ದಲಿತ ಕತೆಗಳು (2010)
# ಜಾಣಗೆರೆ: 50 ಕತೆಗಳು (ಸಮಗ್ರ ಕತೆಗಳ ಸಂಕಲನ) (2022)
=== ಕಾದಂಬರಿಗಳು ===
# ದಡ
# ನೆಲೆ
# ಗರ
# ಮಹಾನದಿ
# ಅವತಾರ ಪುರುಷ
# ಸುನಾಮಿ (3 ಕಿರು ಕಾದಂಬರಿಗಳು)
# ಮಹಾಯಾನ
# ಜೀವಜಲ
# ಮರಳಿ ಬಂದ ಬುದ್ಧ
# ಜಲಯುದ್ಧ
# ಭೂಮ್ತಾಯಿ
# ಅನ್ನದಾತ
=== ಇತಿಹಾಸ ===
# ಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡ
# ಕನ್ನಡ ಚಳವಳಿ ಇತಿಹಾಸ
=== ಪ್ರವಾಸ ಕಥನ ===
# ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು
=== ವ್ಯಕ್ತಿಚಿತ್ರ ===
# ನುಡಿಗೋಲು (2023)
# ನುಡಿಗೋಲು-2 (2025)
# ನುಡಿಗೋಲು-3 (2025)
# ಕರುಣಾಳು
# ವಿಚಾರವಾದಿ ನಾಯಕ ಜೆ.ಎಚ್. ಪಟೇಲ್
=== ವಿಚಾರ ===
# ಕಾಲಮಾನ
# ನೆಲದ ಋಣ
# ನಮ್ಮ ಕಾಲ ನಮ್ಮ ಜನ
# ಸೋರುತಿಹುದು ಮನೆಯ ಮಾಳಿಗೆ
=== ಜೀವನ ಸಂಕಥನ ===
# ಸವೆಯದ ಹಾದಿ
# ಮೂರು ಹಗಲು ಮೂರು ರಾತ್ರಿ
# ಬೆಂಕಿ ಮತ್ತು ಬೆಳಕು
# ಏಳು-ಬೀಳು
# ಹೆತ್ತೂರು
=== ಆತ್ಮಕಥನ ===
# ಅರ್ಥವಾಗದ ಲೋಕ (2026)
ʼಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡʼ ಕೃತಿಯು ಹಲವು ಮುದ್ರಣಗಳನ್ನು ಕಂಡಿರುವುದಲ್ಲದೆ, ರೇಡಿಯೋ ರೂಪಕವಾಗಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ 20 ಕಂತುಗಳಲ್ಲಿ ಪ್ರಸಾರವಾಗಿದೆ. ಅಲ್ಲದೆ ಇದೇ ಕೃತಿಯನ್ನು ಆಧರಿಸಿ ʼಕೆಂಪಾಂಬುಧಿʼ ಹೆಸರಿನ ಚಲನಚಿತ್ರ ನಿರ್ಮಾಣವಾಗುತ್ತಿದೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಹೋರಾಟಗಾರರಾಗಿ ==
* ಕನ್ನಡ ಆಡಳಿತ ಭಾಷೆ, ಕನ್ನಡ ಚಿತ್ರ ಪ್ರದರ್ಶನ ಹಾಗೂ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಹೋರಾಟ
* ಗೋಕಾಕ್ ಚಳವಳಿ, ಡಾ. ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ಮಹಾಜನ್ ವರದಿ ಜಾರಿಗೆ ಹೋರಾಟ
* ಕಾವೇರಿ, ಕೃಷ್ಣಾ, ಮಹಾದಾಯಿ ನ್ಯಾಯಕ್ಕಾಗಿ ಹೋರಾಟ
* ಅಧ್ಯಕ್ಷರು, ಕನ್ನಡಿಗರ ಹೋರಾಟ ರಂಗ
* ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
== ಬಂಧನ-ಸೆರೆವಾಸ ==
ಪತ್ರಿಕಾ ಬರಹಗಳ ಮೇಲಿನ ಮಾನನಷ್ಟ ಮೊಕದ್ದಮೆ ನಾಡಪರ ಹೋರಾಟಗಳಿಗಾಗಿ ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಕಲಬುರಗಿ ಜೈಲು ವಾಸ
== ಪ್ರಶಸ್ತಿ ==
# 2012ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
# ʼಮಹಾನದಿʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ʼಮಹಾಯಾನʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ಕನ್ನಡ ಪುಸ್ತಕ ಪ್ರಾಧಿಕಾರದಿಂದ ʼಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿʼ
# ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ
# ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ ʼಎಚ್. ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿʼ
# ʼಮಹಾನದಿʼ ಕಾದಂಬರಿಗೆ ತುಮಕೂರಿನ ʼವೀಚಿ ಸಾಹಿತ್ಯ ಪ್ರಶಸ್ತಿʼ
# ʼಜೀವಜಲʼ ಕಾದಂಬರಿಗೆ ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ ʼಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿʼ
# ʼಜಲಯುದ್ಧʼ ಕಾದಂಬರಿಗೆ ʼಸ್ವಾಭಿಮಾನಿ ಪುಸ್ತಕ ಪ್ರಶಸ್ತಿʼ
# ಬೆಂಗಳೂರಿನ ಕನ್ನಡ ಜನಶಕ್ತಿ ಸಂಘಟನೆಯಿಂದ ʼಶಾಂತವೇರಿ ಗೋಪಾಲಗೌಡ ಪ್ರಶಸ್ತಿʼ
# ಅರಸು ವಿಚಾರ ವೇದಿಕೆಯಿಂದ ʼಅರಸುಶ್ರೀ ಪ್ರಶಸ್ತಿʼ
# ಕಟ್ಟೆ ಬಳಗದಿಂದ ʼಕನ್ನಡ ಕಟ್ಟೆ ಪ್ರಶಸ್ತಿʼ
# ಮಂಡ್ಯದ ʼಇಂಡುವಾಳು ಎಚ್. ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿʼ
# ಬಿಎಂಶ್ರೀ ಪ್ರತಿಷ್ಠಾನದಿಂದ ʼವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿʼ
# ಕನ್ನಡ ಸಾಹಿತ್ಯ ಪರಿಷತ್ತಿನಿಂದ ʼಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿʼ
# ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ʼಕರ್ನಾಟಕ ಚೂಡಾಮಣಿ ಪ್ರಶಸ್ತಿʼ
# ಕುವೆಂಪು ಕಲಾನಿಕೇತನದಿಂದ ʼನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿʼ
== ಉಲ್ಲೇಖಗಳು ==
3tmh3jsd8bovypts0kv4yxkdkezmhat
1384582
1384581
2026-08-28T15:16:37Z
Gnaneswaratn
13058
/* ಕಾದಂಬರಿಗಳು */
1384582
wikitext
text/x-wiki
ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳೆರಡರಲ್ಲೂ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆ ವೆಂಕಟರಾಮಯ್ಯನವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮುಂತಾದ ಪ್ರಕಾರಗಳಲ್ಲಿ 41 ಕೃತಿಗಳನ್ನು ರಚಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆವಾಸ ಅನುಭವಿಸಿದ್ದಾರೆ. ಜಾಣಗೆರೆ ವೆಂಕಟರಾಮಯ್ಯನವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿಯ ಜಾಣಗೆರೆಯಲ್ಲಿ ವೆಂಕಟಪ್ಪ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳ ಮಗನಾಗಿ 5 ಜೂನ್ 1949ರಲ್ಲಿ ಜನಿಸಿದರು. ಜಾಣಗೆರೆ ವೆಂಕಟರಾಮಯ್ಯನವರು ಬಿ.ಕಾಂ. ಪದವೀಧರರಾಗಿದ್ದಾರೆ. ಪ್ರಸ್ತುತ ಜಾಣಗೆರೆ ಅವರು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಪತ್ರಿಕೋದ್ಯಮದಲ್ಲಿ ==
=== ಸಹಾಯಕ ಸಂಪಾದಕರಾಗಿ ===
* ರೂಪಲೇಖಾ
* ರೂಪಶಿಲ್ಪಿ
* ಲಂಕೇಶ್ ಪತ್ರಿಕೆ
* ನಮ್ಮ ನಾಡು
=== ಸಂಪಾದಕರಾಗಿ ===
* ಅಭಿಮಾನಿ
* ಅರಗಿಣಿ
* ಸಂಚು
* ಮಾರ್ದನಿ
* ಜಾಣಗೆರೆ ಪತ್ರಿಕೆ
* ಅಭಿಮಾನ
* ಈ ಸಂಜೆ
* ಕರುನಾಡ ಸಂಜೆ
== ಸಾಹಿತ್ಯ ಕೃಷಿ ==
=== ಕಥಾ ಸಂಕಲನಗಳು ===
# ಪ್ರಪಾತ (1977)
# ನನ್ನ ನೆಲ ನನ್ನ ಜನ (1978)
# ಕಪ್ಪು ನ್ಯಾಯ (1984)
# ಜಾಣಗೆರೆಯವರ ಆಯ್ದ ಕತೆಗಳು (1990)
# ಕತೆ ಮುಗಿಸಿದ ನಾಯಕ (2004)
# ರಹೀಮನ ಪ್ರಣಯ ಪ್ರಸಂಗ (2007)
# ಜಾಣಗೆರೆ ದಲಿತ ಕತೆಗಳು (2010)
# ಜಾಣಗೆರೆ: 50 ಕತೆಗಳು (ಸಮಗ್ರ ಕತೆಗಳ ಸಂಕಲನ) (2022)
=== ಕಾದಂಬರಿಗಳು ===
# ದಡ
# ನೆಲೆ
# ಗರ
# ಮಹಾನದಿ
# ಅವತಾರ ಪುರುಷ
# ಸುನಾಮಿ (3 ಕಿರು ಕಾದಂಬರಿಗಳು)
# ಮಹಾಯಾನ
# ಜೀವಜಲ
# ಮರಳಿ ಬಂದ ಬುದ್ಧ
# ಜಲಯುದ್ಧ
# ಭೂಮ್ತಾಯಿ
# ಅನ್ನದಾತ
=== ಇತಿಹಾಸ ===
# ಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡ
# ಕನ್ನಡ ಚಳವಳಿ ಇತಿಹಾಸ
=== ಪ್ರವಾಸ ಕಥನ ===
# ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು
=== ವ್ಯಕ್ತಿಚಿತ್ರ ===
# ನುಡಿಗೋಲು (2023)
# ನುಡಿಗೋಲು-2 (2025)
# ನುಡಿಗೋಲು-3 (2025)
# ಕರುಣಾಳು
# ವಿಚಾರವಾದಿ ನಾಯಕ ಜೆ.ಎಚ್. ಪಟೇಲ್
=== ವಿಚಾರ ===
# ಕಾಲಮಾನ
# ನೆಲದ ಋಣ
# ನಮ್ಮ ಕಾಲ ನಮ್ಮ ಜನ
# ಸೋರುತಿಹುದು ಮನೆಯ ಮಾಳಿಗೆ
=== ಜೀವನ ಸಂಕಥನ ===
# ಸವೆಯದ ಹಾದಿ
# ಮೂರು ಹಗಲು ಮೂರು ರಾತ್ರಿ
# ಬೆಂಕಿ ಮತ್ತು ಬೆಳಕು
# ಏಳು-ಬೀಳು
# ಹೆತ್ತೂರು
=== ಆತ್ಮಕಥನ ===
# ಅರ್ಥವಾಗದ ಲೋಕ (2026)
ʼಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡʼ ಕೃತಿಯು ಹಲವು ಮುದ್ರಣಗಳನ್ನು ಕಂಡಿರುವುದಲ್ಲದೆ, ರೇಡಿಯೋ ರೂಪಕವಾಗಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ 20 ಕಂತುಗಳಲ್ಲಿ ಪ್ರಸಾರವಾಗಿದೆ. ಅಲ್ಲದೆ ಇದೇ ಕೃತಿಯನ್ನು ಆಧರಿಸಿ ʼಕೆಂಪಾಂಬುಧಿʼ ಹೆಸರಿನ ಚಲನಚಿತ್ರ ನಿರ್ಮಾಣವಾಗುತ್ತಿದೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಹೋರಾಟಗಾರರಾಗಿ ==
* ಕನ್ನಡ ಆಡಳಿತ ಭಾಷೆ, ಕನ್ನಡ ಚಿತ್ರ ಪ್ರದರ್ಶನ ಹಾಗೂ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಹೋರಾಟ
* ಗೋಕಾಕ್ ಚಳವಳಿ, ಡಾ. ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ಮಹಾಜನ್ ವರದಿ ಜಾರಿಗೆ ಹೋರಾಟ
* ಕಾವೇರಿ, ಕೃಷ್ಣಾ, ಮಹಾದಾಯಿ ನ್ಯಾಯಕ್ಕಾಗಿ ಹೋರಾಟ
* ಅಧ್ಯಕ್ಷರು, ಕನ್ನಡಿಗರ ಹೋರಾಟ ರಂಗ
* ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
== ಬಂಧನ-ಸೆರೆವಾಸ ==
ಪತ್ರಿಕಾ ಬರಹಗಳ ಮೇಲಿನ ಮಾನನಷ್ಟ ಮೊಕದ್ದಮೆ ನಾಡಪರ ಹೋರಾಟಗಳಿಗಾಗಿ ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಕಲಬುರಗಿ ಜೈಲು ವಾಸ
== ಪ್ರಶಸ್ತಿ ==
# 2012ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
# ʼಮಹಾನದಿʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ʼಮಹಾಯಾನʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ಕನ್ನಡ ಪುಸ್ತಕ ಪ್ರಾಧಿಕಾರದಿಂದ ʼಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿʼ
# ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ
# ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ ʼಎಚ್. ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿʼ
# ʼಮಹಾನದಿʼ ಕಾದಂಬರಿಗೆ ತುಮಕೂರಿನ ʼವೀಚಿ ಸಾಹಿತ್ಯ ಪ್ರಶಸ್ತಿʼ
# ʼಜೀವಜಲʼ ಕಾದಂಬರಿಗೆ ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ ʼಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿʼ
# ʼಜಲಯುದ್ಧʼ ಕಾದಂಬರಿಗೆ ʼಸ್ವಾಭಿಮಾನಿ ಪುಸ್ತಕ ಪ್ರಶಸ್ತಿʼ
# ಬೆಂಗಳೂರಿನ ಕನ್ನಡ ಜನಶಕ್ತಿ ಸಂಘಟನೆಯಿಂದ ʼಶಾಂತವೇರಿ ಗೋಪಾಲಗೌಡ ಪ್ರಶಸ್ತಿʼ
# ಅರಸು ವಿಚಾರ ವೇದಿಕೆಯಿಂದ ʼಅರಸುಶ್ರೀ ಪ್ರಶಸ್ತಿʼ
# ಕಟ್ಟೆ ಬಳಗದಿಂದ ʼಕನ್ನಡ ಕಟ್ಟೆ ಪ್ರಶಸ್ತಿʼ
# ಮಂಡ್ಯದ ʼಇಂಡುವಾಳು ಎಚ್. ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿʼ
# ಬಿಎಂಶ್ರೀ ಪ್ರತಿಷ್ಠಾನದಿಂದ ʼವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿʼ
# ಕನ್ನಡ ಸಾಹಿತ್ಯ ಪರಿಷತ್ತಿನಿಂದ ʼಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿʼ
# ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ʼಕರ್ನಾಟಕ ಚೂಡಾಮಣಿ ಪ್ರಶಸ್ತಿʼ
# ಕುವೆಂಪು ಕಲಾನಿಕೇತನದಿಂದ ʼನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿʼ
== ಉಲ್ಲೇಖಗಳು ==
62v6fk2us6f1ngjy7qvn82idibuy25u
1384583
1384582
2026-08-28T15:32:43Z
Gnaneswaratn
13058
/* ಸಾಹಿತ್ಯ ಕೃಷಿ */
1384583
wikitext
text/x-wiki
ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳೆರಡರಲ್ಲೂ ಕೃಷಿ ಮಾಡುತ್ತಾ ಬಂದಿರುವ ಜಾಣಗೆರೆ ವೆಂಕಟರಾಮಯ್ಯನವರು ಕತೆ, ಕಾದಂಬರಿ, ಇತಿಹಾಸ ಕಥನ, ಜೀವನ ಸಂಕಥನ, ಪ್ರವಾಸ ಕಥನ, ವಿಚಾರ ಮುಂತಾದ ಪ್ರಕಾರಗಳಲ್ಲಿ 41 ಕೃತಿಗಳನ್ನು ರಚಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿ ಅನೇಕ ಬಾರಿ ಸೆರೆವಾಸ ಅನುಭವಿಸಿದ್ದಾರೆ. ಜಾಣಗೆರೆ ವೆಂಕಟರಾಮಯ್ಯನವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಹೋಬಳಿಯ ಜಾಣಗೆರೆಯಲ್ಲಿ ವೆಂಕಟಪ್ಪ ಮತ್ತು ಕಲ್ಯಾಣಮ್ಮ ಎಂಬ ದಂಪತಿಗಳ ಮಗನಾಗಿ 5 ಜೂನ್ 1949ರಲ್ಲಿ ಜನಿಸಿದರು. ಜಾಣಗೆರೆ ವೆಂಕಟರಾಮಯ್ಯನವರು ಬಿ.ಕಾಂ. ಪದವೀಧರರಾಗಿದ್ದಾರೆ. ಪ್ರಸ್ತುತ ಜಾಣಗೆರೆ ಅವರು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಪತ್ರಿಕೋದ್ಯಮದಲ್ಲಿ ==
=== ಸಹಾಯಕ ಸಂಪಾದಕರಾಗಿ ===
* ರೂಪಲೇಖಾ
* ರೂಪಶಿಲ್ಪಿ
* ಲಂಕೇಶ್ ಪತ್ರಿಕೆ
* ನಮ್ಮ ನಾಡು
=== ಸಂಪಾದಕರಾಗಿ ===
* ಅಭಿಮಾನಿ
* ಅರಗಿಣಿ
* ಸಂಚು
* ಮಾರ್ದನಿ
* ಜಾಣಗೆರೆ ಪತ್ರಿಕೆ
* ಅಭಿಮಾನ
* ಈ ಸಂಜೆ
* ಕರುನಾಡ ಸಂಜೆ
== ಸಾಹಿತ್ಯ ಕೃಷಿ ==
=== ಕಥಾ ಸಂಕಲನಗಳು ===
# ಪ್ರಪಾತ (1977)
# ನನ್ನ ನೆಲ ನನ್ನ ಜನ (1978)
# ಕಪ್ಪು ನ್ಯಾಯ (1984)
# ಜಾಣಗೆರೆಯವರ ಆಯ್ದ ಕತೆಗಳು (1990)
# ಕತೆ ಮುಗಿಸಿದ ನಾಯಕ (2004)
# ರಹೀಮನ ಪ್ರಣಯ ಪ್ರಸಂಗ (2007)
# ಜಾಣಗೆರೆ ದಲಿತ ಕತೆಗಳು (2010)
# ಜಾಣಗೆರೆ: 50 ಕತೆಗಳು (ಸಮಗ್ರ ಕತೆಗಳ ಸಂಕಲನ) (2022)
=== ಕಾದಂಬರಿಗಳು ===
# ದಡ (1978)
# ನೆಲೆ (1979)
# ಗರ (1981)
# ಸುನಾಮಿ (3 ಕಿರು ಕಾದಂಬರಿಗಳು) (2005)
# ಮಹಾನದಿ (2006)
# ಅವತಾರ ಪುರುಷ (2008)
# ಮಹಾಯಾನ (2015)
# ಜೀವಜಲ (2018)
# ಮರಳಿ ಬಂದ ಬುದ್ಧ (2020)
# ಜಲಯುದ್ಧ (2020)
# ಭೂಮ್ತಾಯಿ (2021)
# ಅನ್ನದಾತ (2022)
=== ಇತಿಹಾಸ ===
# ಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡ (2005)
# ಕನ್ನಡ ಚಳವಳಿ ಇತಿಹಾಸ (2021)
=== ಪ್ರವಾಸ ಕಥನ ===
# ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು (1991)
=== ವ್ಯಕ್ತಿಚಿತ್ರ ===
# ನುಡಿಗೋಲು (2023)
# ನುಡಿಗೋಲು-2 (2025)
# ನುಡಿಗೋಲು-3 (2025)
# ಕರುಣಾಳು
# ವಿಚಾರವಾದಿ ನಾಯಕ ಜೆ.ಎಚ್. ಪಟೇಲ್
=== ಅಂಕಣ ಬರಹಗಳ ಸಂಕಲನ ===
# ಎದೆಯಾಳ (2005)
# ಸೀಳುನೋಟ (2008)
# ಕಾಲಮಾನ (2009)
# ನಮ್ಮ ಕಾಲ ನಮ್ಮ ಜನ (2010)
=== ವಿಚಾರ ಸಾಹಿತ್ಯ===
# ಪತ್ರಿಕೋದ್ಯಮ ಮತ್ತು ಚಳವಳಿ (2005)
# ನೆಲದ ಋಣ (2009)
# ಸೋರುತಿಹುದು ಮನೆಯ ಮಾಳಿಗೆ (2011)
=== ಜೀವನ ಸಂಕಥನ ===
# ಸವೆಯದ ಹಾದಿ (2004)
# ಮೂರು ಹಗಲು ಮೂರು ರಾತ್ರಿ (2005)
# ಬೆಂಕಿ ಮತ್ತು ಬೆಳಕು (2007)
# ಏಳುಬೀಳು (2014)
# ಹೆತ್ತೂರು (2018)
=== ಆತ್ಮಕಥನ ===
# ಅರ್ಥವಾಗದ ಲೋಕ (2026)
ʼಮಾಯಾನಗರಿಯ ಮಹಾಶಿಲ್ಪಿ ಬೆಂಗಳೂರು ಕೆಂಪೇಗೌಡʼ ಕೃತಿಯು ಹಲವು ಮುದ್ರಣಗಳನ್ನು ಕಂಡಿರುವುದಲ್ಲದೆ, ರೇಡಿಯೋ ರೂಪಕವಾಗಿ ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ 20 ಕಂತುಗಳಲ್ಲಿ ಪ್ರಸಾರವಾಗಿದೆ. ಅಲ್ಲದೆ ಇದೇ ಕೃತಿಯನ್ನು ಆಧರಿಸಿ ʼಕೆಂಪಾಂಬುಧಿʼ ಹೆಸರಿನ ಚಲನಚಿತ್ರ ನಿರ್ಮಾಣವಾಗುತ್ತಿದೆ.<ref>"ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಜಾಣಗೆರೆ". ಕಸ್ತೂರಿ ಪ್ರಭ. 14 (3): 1. ಆಗಸ್ಟ್, 2026.</ref>
== ಹೋರಾಟಗಾರರಾಗಿ ==
* ಕನ್ನಡ ಆಡಳಿತ ಭಾಷೆ, ಕನ್ನಡ ಚಿತ್ರ ಪ್ರದರ್ಶನ ಹಾಗೂ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಹೋರಾಟ
* ಗೋಕಾಕ್ ಚಳವಳಿ, ಡಾ. ಸರೋಜಿನಿ ಮಹಿಷಿ ವರದಿ ಜಾರಿ ಹಾಗೂ ಮಹಾಜನ್ ವರದಿ ಜಾರಿಗೆ ಹೋರಾಟ
* ಕಾವೇರಿ, ಕೃಷ್ಣಾ, ಮಹಾದಾಯಿ ನ್ಯಾಯಕ್ಕಾಗಿ ಹೋರಾಟ
* ಅಧ್ಯಕ್ಷರು, ಕನ್ನಡಿಗರ ಹೋರಾಟ ರಂಗ
* ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
== ಬಂಧನ-ಸೆರೆವಾಸ ==
ಪತ್ರಿಕಾ ಬರಹಗಳ ಮೇಲಿನ ಮಾನನಷ್ಟ ಮೊಕದ್ದಮೆ ನಾಡಪರ ಹೋರಾಟಗಳಿಗಾಗಿ ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಕಲಬುರಗಿ ಜೈಲು ವಾಸ
== ಪ್ರಶಸ್ತಿ ==
# 2012ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
# ʼಮಹಾನದಿʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ʼಮಹಾಯಾನʼ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾದಂಬರಿ ಬಹುಮಾನ
# ಕನ್ನಡ ಪುಸ್ತಕ ಪ್ರಾಧಿಕಾರದಿಂದ ʼಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿʼ
# ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ
# ಪತ್ರಿಕೋದ್ಯಮ ಕೃಷಿಗಾಗಿ ಮೈಸೂರಿನ ʼಎಚ್. ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿʼ
# ʼಮಹಾನದಿʼ ಕಾದಂಬರಿಗೆ ತುಮಕೂರಿನ ʼವೀಚಿ ಸಾಹಿತ್ಯ ಪ್ರಶಸ್ತಿʼ
# ʼಜೀವಜಲʼ ಕಾದಂಬರಿಗೆ ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ ʼಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿʼ
# ʼಜಲಯುದ್ಧʼ ಕಾದಂಬರಿಗೆ ʼಸ್ವಾಭಿಮಾನಿ ಪುಸ್ತಕ ಪ್ರಶಸ್ತಿʼ
# ಬೆಂಗಳೂರಿನ ಕನ್ನಡ ಜನಶಕ್ತಿ ಸಂಘಟನೆಯಿಂದ ʼಶಾಂತವೇರಿ ಗೋಪಾಲಗೌಡ ಪ್ರಶಸ್ತಿʼ
# ಅರಸು ವಿಚಾರ ವೇದಿಕೆಯಿಂದ ʼಅರಸುಶ್ರೀ ಪ್ರಶಸ್ತಿʼ
# ಕಟ್ಟೆ ಬಳಗದಿಂದ ʼಕನ್ನಡ ಕಟ್ಟೆ ಪ್ರಶಸ್ತಿʼ
# ಮಂಡ್ಯದ ʼಇಂಡುವಾಳು ಎಚ್. ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿʼ
# ಬಿಎಂಶ್ರೀ ಪ್ರತಿಷ್ಠಾನದಿಂದ ʼವಿ. ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿʼ
# ಕನ್ನಡ ಸಾಹಿತ್ಯ ಪರಿಷತ್ತಿನಿಂದ ʼಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿʼ
# ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ʼಕರ್ನಾಟಕ ಚೂಡಾಮಣಿ ಪ್ರಶಸ್ತಿʼ
# ಕುವೆಂಪು ಕಲಾನಿಕೇತನದಿಂದ ʼನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿʼ
== ಉಲ್ಲೇಖಗಳು ==
3sftbor2j1jnuzcm5zm49tmbnftrvuu
ಶಿವಸಾಗರ (ನಗರ)
0
180731
1384591
1384423
2026-08-28T20:28:59Z
InternetArchiveBot
69876
Rescuing 1 sources and tagging 0 as dead.) #IABot (v2.0.9.5
1384591
wikitext
text/x-wiki
==ಶಿವಸಾಗರ (ನಗರ)==
[[File:Sivasagar Night View.jpg|thumb|Assamese]]
ಶಿವಸಾಗರ್ (ಅಸ್ಸಾಮೀಸ್: [xi.βɔ.xaɡɔ(ɹ)]) ಭಾರತದ [[ಅಸ್ಸಾಂ]] ರಾಜ್ಯದ ಶಿವಸಾಗರ್ ಜಿಲ್ಲೆಯ ಒಂದು ನಗರ ಮತ್ತು ಪ್ರಧಾನ ಕಚೇರಿಯಾಗಿದೆ. ಶಿವಸಾಗರ್ [[ಅಹೋಮ್ ಲಿಪಿ|ಅಹೋಮ್]] ರಾಜವಂಶದ ಅರಮನೆಗಳು ಮತ್ತು ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಇದು ಅಸ್ಸಾಂನ ಪ್ರಮುಖ ಐತಿಹಾಸಿಕ ನಗರವಾಗಿದೆ. ಇಂದು, ಶಿವಸಾಗರ್ ಚಹಾ ಮತ್ತು ತೈಲ ಕೈಗಾರಿಕೆಗಳಿಗೆ ಪ್ರಮುಖ ಕೇಂದ್ರವಾಗಿದೆ.
[[File:Sivasagar.jpg|thumb|Sivasagar]]
==ಉತ್ಪತ್ತಿ==
[[File:Gamusa,Lakhimpur.jpg|thumb|Gamusa,Lakhimpur]]
ಶಿವಸಾಗರದ ಮೂಲ ಹೆಸರು 'ಕಲಾನ್ಸುಪರ್' ಎಂದು ಹೇಳಲಾಗುತ್ತದೆ. ಈ ಹೆಸರು 'ಕಲಾನ್ಸು ಗೋಹೈನ್' ಎಂಬ ವ್ಯಕ್ತಿಯ ಹೆಸರಿನಿಂದ ಬಂದಿದೆ ಎಂದು ನಂಬಲಾಗಿದೆ, ಅವರು ಪ್ರಸ್ತುತ ಶಿವಸಾಗರ ಟ್ಯಾಂಕ್ ಇರುವ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಶಿವಸಾಗರ ಎಂಬ ಪದದ ಅರ್ಥ 'ಶಿವನ ಸಮುದ್ರ' ಅಥವಾ 'ಶಿವನ ಸರೋವರ'. ಈ ಹೆಸರು ನಗರದ ಮಧ್ಯದಲ್ಲಿರುವ ದೊಡ್ಡ ಶಿವಸಾಗರ ಸರೋವರದಿಂದ ಬಂದಿದೆ.
1733 ರಲ್ಲಿ, ಅಹೋಮ್ ರಾಣಿ ಅಂಬಿಕಾ ದೇವಿ ಅಹೋಮ್ ರಾಜಧಾನಿ ರಂಗಪುರದಲ್ಲಿ 257 ಎಕರೆ ವಿಸ್ತೀರ್ಣದಲ್ಲಿ ಒಂದು ಕೊಳವನ್ನು ಅಗೆದರು. ಈ ಕೊಳದ ದಡದಲ್ಲಿ ನಿರ್ಮಿಸಲಾದ ದೊಡ್ಡ ಶಿವ ದೇವಾಲಯ (ಶಿವ ಧೋಲ್) ನೊಂದಿಗೆ ಅದರ ಸಂಬಂಧದಿಂದಾಗಿ ಈ ಸ್ಥಳವು ಶಿವಪೋರ್ ಎಂದು ಕರೆಯಲ್ಪಟ್ಟಿತು. ಕಾಲಾನಂತರದಲ್ಲಿ, ಈ ಹೆಸರು ಸಿಬ್ಸಾಗರ್ ಆಗಿ ವಿಕಸನಗೊಂಡಿತು.
==ಇತಿಹಾಸ==
ಶಿವಸಾಗರ್ ಅನ್ನು ಹಿಂದೆ ರಂಗಪುರ ಎಂದು ಕರೆಯಲಾಗುತ್ತಿತ್ತು. ಇದು 1699 ರಿಂದ 1788 ರವರೆಗೆ ಅಹೋಮ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅಹೋಮರು ಆರು ಶತಮಾನಗಳ ಕಾಲ ಅಸ್ಸಾಂ ಅನ್ನು ಆಳಿದರು. 1819 ರಲ್ಲಿ, ಅವರ ರಾಜ್ಯವು ಬರ್ಮೀಸ್ ಕೊನ್ಬಾಂಗ್ ರಾಜವಂಶದ ನಿಯಂತ್ರಣಕ್ಕೆ ಬಂದಿತು, ಅಹೋಮ್ ಆಳ್ವಿಕೆಯನ್ನು ಕೊನೆಗೊಳಿಸಿತು.ನಂತರ ಅವರ ಆಡಳಿತ ವರ್ಗವು ಸಂಪೂರ್ಣವಾಗಿ ಕಣ್ಮರೆಯಾಯಿತು. ಗೌರಿನಾಥ ಸಿಂಹ (1780–1795) ಆಳ್ವಿಕೆಯಲ್ಲಿ, ಶಿವಸಾಗರ್ ಟ್ಯಾಂಕ್ ಸುತ್ತಮುತ್ತಲಿನ ಪ್ರದೇಶದಲ್ಲಿ ಮೊವಾಮೋರಿಯಾ ಬಂಡುಕೋರರ ವಿರುದ್ಧ ಯುದ್ಧ ನಡೆಯಿತು.<ref>{{Cite web |url=https://argucom.assam.gov.in/frontimpotentdata/about-sivasagar |title=ಆರ್ಕೈವ್ ನಕಲು |access-date=2026-08-26 |archive-date=2022-12-16 |archive-url=https://web.archive.org/web/20221216193814/https://argucom.assam.gov.in/frontimpotentdata/about-sivasagar |url-status=dead }}</ref>
1825 ರಲ್ಲಿ, ಈ ಪ್ರದೇಶವನ್ನು ಬ್ರಿಟಿಷರು ವಶಪಡಿಸಿಕೊಂಡರು ಮತ್ತು 1826 ರಲ್ಲಿ ಇದನ್ನು ಸಂಪೂರ್ಣವಾಗಿ ಬ್ರಿಟಿಷ್ ಆಳ್ವಿಕೆಗೆ ಸೇರಿಸಲಾಯಿತು. ಆಡಳಿತಾತ್ಮಕ ಉದ್ದೇಶಗಳಿಗಾಗಿ, ಈ ಪ್ರದೇಶವನ್ನು ಮೂರು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ.
==ಭೂಗೋಳ==
[[File:India Assam location map.svg|thumb|India Assam location map]]
ಶಿವಸಾಗರ್ 26.9889° ಉತ್ತರ ಅಕ್ಷಾಂಶ ಮತ್ತು 94.639° ಪೂರ್ವ ರೇಖಾಂಶದಲ್ಲಿದೆ. ಶಿವಸಾಗರ್ ಸಮುದ್ರ ಮಟ್ಟದಿಂದ ಸರಾಸರಿ 86.6 ಮೀಟರ್ ಎತ್ತರದಲ್ಲಿದೆ.
==ಹವಾಮಾನ==
ಶಿವಸಾಗರ್ ಭಾರತದ "ರಾಷ್ಟ್ರೀಯ ಶುದ್ಧ ಗಾಳಿ ನಗರ" ವಿಭಾಗದಲ್ಲಿ, 3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ 27 ನೇ ಸ್ಥಾನದಲ್ಲಿದೆ.
==ಜನಸಂಖ್ಯಾಶಾಸ್ತ್ರ==
ಐತಿಹಾಸಿಕ ಜನಸಂಖ್ಯೆವರ್ಷದ ಜನಸಂಖ್ಯೆ. ±%<ref>https://www.citypopulation.de/en/india/assam/</ref>
1951 73,622 —
1961 1,06,967 +45.3%
1971 1,21,500 +13.6%
1981 1,97,980 +62.9%
ಮೂಲ: ಭಾರತದ ಜನಗಣತಿ1,991 −99.0%
239,237 2,001 +0.5%
270,579 2,011 +0.5%
283,190 2,021 +0.5%
293,871 —
2011 ರ ಜನಗಣತಿಯ ಪ್ರಕಾರ, ಶಿವಸಾಗರ್ ಜಿಲ್ಲೆಯು 11,51,050 ಜನಸಂಖ್ಯೆಯನ್ನು ಹೊಂದಿತ್ತು. ಜಿಲ್ಲೆಯ ಜನಸಂಖ್ಯಾ ಸಾಂದ್ರತೆಯು ಪ್ರತಿ ಚದರ ಕಿಲೋಮೀಟರಿಗೆ 720 ವ್ಯಕ್ತಿಗಳು.೨೦೦೧ ರಿಂದ ೨೦೧೧ ರ ದಶಕದಲ್ಲಿ ಜನಸಂಖ್ಯಾ ಬೆಳವಣಿಗೆಯ ದರವು ೭೭.೭% ಆಗಿತ್ತು.ಜಿಲ್ಲೆಯ ಲಿಂಗ ಅನುಪಾತವು ಪ್ರತಿ ೧೦೦೦ ಪುರುಷರಿಗೆ ೯೫೪ ಮಹಿಳೆಯರು. ಸಾಕ್ಷರತಾ ಪ್ರಮಾಣವು ೮೧.೩೬%.
ಶಿವಸಾಗರ್ ಜಿಲ್ಲೆಯಲ್ಲಿ ಧರ್ಮಗಳು (೨೦೧೧)
ಶಿವಸಾಗರ್ ಜಿಲ್ಲೆಯ ಭಾಷೆಗಳು (2011)
ಅಸ್ಸಾಮಿ (90.24%)
ಮಿಶಿಂಗ್ (2.78%)
ಹಿಂದಿ (1.96%)
ಬಂಗಾಳಿ (1.58%)
ಸದ್ರಿ (1.38%)
ಇತರರು (2.06%)
ಇದಲ್ಲದೆ, ಜಿಲ್ಲೆಯಲ್ಲಿ ಖಮ್ಯಾಂಗ್ ಮತ್ತು ತುರುಂಗ್ನಂತಹ ಬೌದ್ಧ ಬುಡಕಟ್ಟು ಗುಂಪುಗಳ ಕೆಲವು ಹಳ್ಳಿಗಳಿವೆ. ತಿವಾ, ಕೊನ್ಯಾಕ್, ಮೈಟೈ ಮತ್ತು ನೋಕ್ಟೆ ಸಮುದಾಯಗಳ ಜನರು ಸಹ ಜಿಲ್ಲೆಯ ಕೆಲವು ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಶಿವಸಾಗರ್ ನಗರವು ಹಲವಾರು ರಾಜಸ್ಥಾನಿ ಕುಟುಂಬಗಳಿಗೆ ನೆಲೆಯಾಗಿದೆ.
ಶಿವಸಾಗರ್ ಜಿಲ್ಲೆಯಲ್ಲಿ ಅಸ್ಸಾಮಿ ಭಾಷಿಕರು ಸ್ಪಷ್ಟ ಬಹುಸಂಖ್ಯಾತರಾಗಿದ್ದಾರೆ. 2011 ರ ಜನಗಣತಿಯ ಪ್ರಕಾರ, ಜನಸಂಖ್ಯೆಯ 90.24% ಜನರು ಅಸ್ಸಾಮಿ, 2.78% ಮಿಶಿಂಗ್, 1.96% ಹಿಂದಿ, 1.58% ಬಂಗಾಳಿ ಮತ್ತು 1.38% ಸದ್ರಿ ಭಾಷೆಯನ್ನು ತಮ್ಮ ಮಾತೃಭಾಷೆಯಾಗಿ ಮಾತನಾಡುತ್ತಾರೆ.
==ಜಿಲ್ಲಾ ನ್ಯಾಯಾಲಯ==
ಶಿವಸಾಗರ್ ಅನ್ನು 1984 ರಲ್ಲಿ ಪ್ರತ್ಯೇಕ ಸಿವಿಲ್ ಜಿಲ್ಲೆಯೆಂದು ಘೋಷಿಸಲಾಯಿತು. ತರುವಾಯ, 1985 ರಲ್ಲಿ ಜಿಲ್ಲಾ ನ್ಯಾಯಾಂಗವನ್ನು ಸ್ಥಾಪಿಸಲಾಯಿತು.1983 ರಲ್ಲಿ, ಶಿವಸಾಗರ್ನಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿ.ಜೆ.ಎಂ.) ನ್ಯಾಯಾಲಯವನ್ನು ಸ್ಥಾಪಿಸಲಾಯಿತು. ತರುವಾಯ, 1984 ರಲ್ಲಿ, ಚರೈಡಿಯೋ ಮತ್ತು ಸೋನಾರಿಯಲ್ಲಿ ಉಪ-ವಿಭಾಗೀಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳನ್ನು ಸ್ಥಾಪಿಸಲಾಯಿತು. 1987 ರಲ್ಲಿ, ಸಿವಿಲ್ ನ್ಯಾಯಾಧೀಶರು ಮತ್ತು ಸಹಾಯಕ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯ (ಅಥವಾ ಕಚೇರಿ) ಉದ್ಘಾಟಿಸಲಾಯಿತು ಮತ್ತು ಕಾರ್ಯನಿರ್ವಹಿಸಲು ಪ್ರಾರಂಭಿಸಿತು. 2001 ರಿಂದ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು (ಫಾಸ್ಟ್ ಟ್ರ್ಯಾಕ್ ಕೋರ್ಟ್) ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ನಾಸಿರಾದಲ್ಲಿರುವ ಉಪ-ವಿಭಾಗೀಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ (M) ಜುಲೈ 24, 2014 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಗೌರವಾನ್ವಿತ ಗುವಾಹಟಿ ಹೈಕೋರ್ಟ್ನ ಆದೇಶದಂತೆ, ಚರಿಡಿಯೊ ಮತ್ತು ಸೋನಾರಿಯಲ್ಲಿ ಹೊಸ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ನ್ಯಾಯಾಲಯಗಳು ಫೆಬ್ರವರಿ 9, 2018 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಫೆಬ್ರವರಿ 27, 2021 ರಂದು, ಚರಿಡಿಯೊದ ನ್ಯಾಯಾಂಗ ನ್ಯಾಯಾಲಯಗಳನ್ನು ಶಿವಸಾಗರ್ ಜಿಲ್ಲೆಯಿಂದ ಬೇರ್ಪಡಿಸಲಾಯಿತು. ಪ್ರಸ್ತುತ, ಶಿವಸಾಗರ್ ಜಿಲ್ಲೆಯಲ್ಲಿ ಹನ್ನೆರಡು ನ್ಯಾಯಾಂಗ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ
==ಸಾರಿಗೆ==
=ವಾಯು=
[[ಜೋರ್ಹತ್ ಜಿಲ್ಲೆ|ಜೋರ್ಹತ್]] ವಿಮಾನ ನಿಲ್ದಾಣವು ಶಿವಸಾಗರ್ನಿಂದ 75 ಕಿ.ಮೀ ದೂರದಲ್ಲಿರುವ ಜೋರ್ಹತ್ನಲ್ಲಿದೆ. ಶಿವಸಾಗರ್ ತಲುಪಲು ಇನ್ನೊಂದು ಮಾರ್ಗವೆಂದರೆ ನಗರದಿಂದ 95 ಕಿ.ಮೀ ದೂರದಲ್ಲಿರುವ ದಿಬ್ರುಗಢ ವಿಮಾನ ನಿಲ್ದಾಣದ ಮೂಲಕ
=ರೈಲು=
ಸಿಬ್ಸಾಗರ್ ಟೌನ್ ರೈಲು ನಿಲ್ದಾಣವು ನಗರಕ್ಕೆ ರೈಲು ಸಂಪರ್ಕವನ್ನು ಒದಗಿಸುತ್ತದೆ. ಈಶಾನ್ಯ ಗಡಿನಾಡು ರೈಲ್ವೆಯ ಲುಮ್ಡಿಂಗ್-ದಿಬ್ರುಗಢ ಮಾರ್ಗದಲ್ಲಿ ಹತ್ತಿರದ ರೈಲ್ವೆ ಜಂಕ್ಷನ್ ಸಿಮಲುಗುರಿ ಜಂಕ್ಷನ್ ಆಗಿದೆ. ಇದು ಶಿವಸಾಗರ್ನಿಂದ 16 ಕಿಲೋಮೀಟರ್ (9.9 ಮೈಲಿ) ದೂರದಲ್ಲಿದೆ.
ಸಿಮಲುಗುರಿಯಿಂದ ಶಿವಸಾಗರಕ್ಕೆ ನಿಯಮಿತ ಬಸ್ಸುಗಳು ಕಾರ್ಯನಿರ್ವಹಿಸುತ್ತವೆ. ಸಿಮಲುಗುರಿ ನಗರದಿಂದ ಬಸ್ ಮೂಲಕ ಶಿವಸಾಗರ ತಲುಪಲು ಸುಮಾರು ಅರ್ಧ ಗಂಟೆ ತೆಗೆದುಕೊಳ್ಳುತ್ತದೆ.
=ರಸ್ತೆ=
ಶಿವಸಾಗರವು ರಾಜ್ಯದ ಉಳಿದ ಭಾಗಗಳಿಗೆ ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ NH-37, ಅಥವಾ ಅಸ್ಸಾಂ ಟ್ರಂಕ್ ರಸ್ತೆ, ಜಿಲ್ಲೆಯ ಮೂಲಕ ಹಾದುಹೋಗುತ್ತದೆ. ಶಿವಸಾಗರದಲ್ಲಿರುವ ಅಸ್ಸಾಂ ರಾಜ್ಯ ಸಾರಿಗೆ ಸಂಸ್ಥೆ (ASTC) ಬಸ್ ನಿಲ್ದಾಣದಿಂದ ಗುವಾಹಟಿ, ದಿಬ್ರುಗಢ ಮತ್ತು ಜೋರ್ಹತ್ಗೆ ಸರ್ಕಾರಿ ಸ್ವಾಮ್ಯದ ಬಸ್ಸುಗಳು ಕಾರ್ಯನಿರ್ವಹಿಸುತ್ತವೆ. ಖಾಸಗಿ ಬಸ್ಗಳು ಸಹ ಲಭ್ಯವಿದೆ.
ಟ್ಯಾಕ್ಸಿಗಳು ಬಾಡಿಗೆಗೆ ಲಭ್ಯವಿದೆ. ಆಟೋರಿಕ್ಷಾಗಳು ಮತ್ತು ಇತರ ಸಾರಿಗೆ ವಿಧಾನಗಳು ನಗರ ಮತ್ತು ಸುತ್ತಮುತ್ತ ಲಭ್ಯವಿದೆ. ಟಾಟಾ ಮ್ಯಾಜಿಕ್ ಮತ್ತು ಟೆಂಪೊದಂತಹ ತುಲನಾತ್ಮಕವಾಗಿ ಅಗ್ಗದ ಸಾರಿಗೆ ವಿಧಾನಗಳು ನಾಸಿರಾ, ಮೇಚಗಢ ಮತ್ತು ಜಯಸಾಗರ ಮೂಲಕ ಶಿವಸಾಗರಕ್ಕೆ ಕಾರ್ಯನಿರ್ವಹಿಸುತ್ತವೆ.
==ಶಿಕ್ಷಣ==
ಶಿವಸಾಗರವು ಮೇಲಿನ [[ಅಸ್ಸಾಂ]]ನಲ್ಲಿ ಶಿಕ್ಷಣದ ಕೇಂದ್ರವಾಗಿದೆ. ಇದು ವಿವಿಧ ಕೋರ್ಸ್ಗಳನ್ನು ನೀಡುವ ಹಲವಾರು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ನೆಲೆಯಾಗಿದೆ.
==ಕಾಲೇಜುಗಳು==
ಶಿವಸಾಗರ್ ಕಾಲೇಜು
ಶಿವಸಾಗರ್ ಬಾಲಕಿಯರ ಕಾಲೇಜು
ಡೆಮೊ ಕಾಲೇಜು
ನಜೀರಾ ಕಾಲೇಜು
==ವಿಶ್ವವಿದ್ಯಾಲಯಗಳು==
ಶಿವಸಾಗರ್ ವಿಶ್ವವಿದ್ಯಾಲಯ
==ಉಪಕ್ರಮಗಳು==
ಶಿವಸಾಗರ್ನಲ್ಲಿ ಶಿಕ್ಷಣವನ್ನು ಸುಧಾರಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ಪ್ರಾರಂಭಿಸಿದೆ. ಇವುಗಳಲ್ಲಿ ಸರ್ವ ಶಿಕ್ಷಾ ಅಭಿಯಾನ (SSA) ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (RMSA) ಸೇರಿವೆ.
ಶಿವಸಾಗರ್ನಲ್ಲಿ ಶೈಕ್ಷಣಿಕ ಮೂಲಸೌಕರ್ಯವನ್ನು ಸುಧಾರಿಸುವುದು, ಶಿಕ್ಷಕರ ತರಬೇತಿಯನ್ನು ಬಲಪಡಿಸುವುದು ಮತ್ತು ವಿದ್ಯಾರ್ಥಿಗಳ ಫಲಿತಾಂಶಗಳನ್ನು ಸುಧಾರಿಸುವುದು ಈ ಯೋಜನೆಗಳ ಉದ್ದೇಶವಾಗಿದೆ.
==ರಾಜಕೀಯ==
ಶಿವಸಾಗರ್ ಜೋರ್ಹತ್ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಗೌರವ್ ಗೊಗೊಯ್ ಜೋರ್ಹತ್ ಲೋಕಸಭಾ ಕ್ಷೇತ್ರದ ಪ್ರಸ್ತುತ ಲೋಕಸಭಾ ಸದಸ್ಯರಾಗಿದ್ದಾರೆ.
ರೈಜೋರ್ ದಳ ಪಕ್ಷದ ಅಖಿಲ್ ಗೊಗೊಯ್ ಶಿವಸಾಗರ್ ವಿಧಾನಸಭಾ ಕ್ಷೇತ್ರದ ಪ್ರಸ್ತುತ ವಿಧಾನಸಭಾ ಸದಸ್ಯರಾಗಿದ್ದಾರೆ (ಶಾಸಕರು).
==ಗಮನಾರ್ಹ ವ್ಯಕ್ತಿಗಳು==
ದಿಪಾಲಿ ಬಾರ್ಥಕುರ್, ಅಸ್ಸಾಮಿ ಗಾಯಕಿ
ಜಾನು ಬರುವಾ, ಚಲನಚಿತ್ರ ನಿರ್ದೇಶಕರು
ಭೋಗೇಶ್ವರ ಬರುವಾ, ಮಾಜಿ ಅಥ್ಲೀಟ್ ಮತ್ತು ಕೋಚ್
ಪಾರ್ವತಿ ಪ್ರಸಾದ್ ಬರುವಾ, ಕವಿಗಳು
ದೇವಾನಂದ ಭಾರಾಳಿ, ಲೇಖಕರು
ದೇವೋಲೀನಾ ಭಟ್ಟಾಚಾರ್ಯ, ಭಾರತೀಯ ಟಿವಿ ನಟಿ
ನಕುಲ್ ಚಂದ್ರ ಭೂಯಾನ್, ಬರಹಗಾರರು
ಬಿಮಲಾ ಪ್ರಸಾದ್ ಚಾಲಿಹಾ, ಮಾಜಿ ಮುಖ್ಯಮಂತ್ರಿಗಳು
ಮಣಿರಾಮ್ ದಿವಾನ್, ಸ್ವಾತಂತ್ರ್ಯ ಹೋರಾಟಗಾರರು
ಜತೀಂದ್ರ ನಾಥ್ ದುವಾರಾ, ಅಸ್ಸಾಮಿ ಕವಿಗಳು
ಅಖಿಲ್ ಗೊಗೊಯ್, ಶಾಸಕ ಶಿವಸಾಗರ ಕ್ಷೇತ್ರ
ಅಮೃತಾ ಗೊಗೊಯ್, ಅಸ್ಸಾಮಿ ನಟಿ
ಲೀಲಾ ಗೊಗೊಯ್, ಇತಿಹಾಸಕಾರರು
ಪ್ರಣಬ್ ಕುಮಾರ್ ಗೊಗೋಯ್, ರಾಜಕಾರಣಿ
ಭಾಸ್ಕರ್ ಜ್ಯೋತಿ ಮಹಾಂತ, ಅಸ್ಸಾಂ ಪೊಲೀಸ್ ಡಿಜಿಪಿ
ದಿಂಬೇಶ್ವರ ನಿಯೋಗ್, ಬರಹಗಾರರು
ಮಹೇಶ್ವರ್ ನಿಯೋಗ್, ಬರಹಗಾರರು
ಮನಸ್ ರಾಬಿನ್, ಸಂಗೀತಗಾರರು
ಹಿತೇಶ್ವರ ಸೈಕಿಯಾ, ರಾಜಕಾರಣಿಗಳು
ಇಮ್ರಾನ್ ಶಾ, ಬರಹಗಾರರು
ಬೆನ್ನುಧರ್ ಶರ್ಮಾ, ಲೇಖಕರು
bohksifhon8kdqp6g26q9c0dghcm533
ವಿಕಿಪೀಡಿಯ:ಚೀನೀ ಸಾಂಸ್ಕೃತಿಕ ಪರಂಪರೆ - ವಿಕಿಪೀಡಿಯ ಸಂಪಾದನಾ ಅಭಿಯಾನ 2026
4
180747
1384602
1384546
2026-08-29T09:01:38Z
Santhosh Notagar99
82732
1384602
wikitext
text/x-wiki
== ಪರಿಚಯ ==
ಚೀನೀ ಸಾಂಸ್ಕೃತಿಕ ಪರಂಪರೆ ಸಂಪಾದನಾ ಮ್ಯಾರಥಾನ್ 2026 ಒಂದು ಆನ್ಲೈನ್ ಸಂಪಾದನಾ ಮ್ಯಾರಥಾನ್ (ಸಂಪಾದನಾ ಮ್ಯಾರಥಾನ್) ಆಗಿದ್ದು, ಇದನ್ನು ವಿಕಿಮೀಡಿಯನ್ನರ ಮುಖ್ಯಭೂಮಿ ಚೀನಾ ಗುಂಪು ಆಯೋಜಿಸುತ್ತಿದೆ. ಈ ಕಾರ್ಯಕ್ರಮವು 2026ರ ಆಗಸ್ಟ್ 15ರಿಂದ ಅಕ್ಟೋಬರ್ 15ರವರೆಗೆ ನಡೆಯಲಿದೆ. ಪ್ರಪಂಚದಾದ್ಯಂತದ ವಿಕಿಪೀಡಿಯ ಸಂಪಾದಕರು ಈ ಸಂಪಾದನಾ ಮ್ಯಾರಥಾನ್ನಲ್ಲಿ ಭಾಗವಹಿಸಲು ಸ್ವಾಗತಾರ್ಹರು.
ಚೀನಾದಲ್ಲಿ ಸ್ಮಾರಕಗಳ ಪ್ರೀತಿ 2026 (Wiki Loves Monuments in China 2026) ಕಾರ್ಯಕ್ರಮವು ಸೆಪ್ಟೆಂಬರ್ನಲ್ಲಿ ನಡೆಯಲಿದೆ. ಇದರ ಅಂಗವಾಗಿ ಚೀನಾದ ಮುಖ್ಯಭೂಮಿ ಮತ್ತು ಹಾಂಗ್ ಕಾಂಗ್ನಲ್ಲಿನ ಪ್ರಾದೇಶಿಕ ಸ್ಪರ್ಧೆಗಳು ಈ ಸಂಪಾದನಾ ಮ್ಯಾರಥಾನ್ನ ಕೊನೆಯ ಭಾಗದೊಂದಿಗೆ ಸಮಕಾಲಿಕವಾಗಿ ನಡೆಯಲಿವೆ.
ಎರಡೂ ಕಾರ್ಯಕ್ರಮಗಳು ಸಾಂಸ್ಕೃತಿಕ ಪರಂಪರೆ (ಸ್ಥಳಾಂತರಿಸಲಾಗದ ಸ್ಮಾರಕಗಳು) ಎಂಬ ವಿಷಯವನ್ನು ಕೇಂದ್ರೀಕರಿಸಿವೆ. ಆದ್ದರಿಂದ, ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ಲೇಖನಗಳನ್ನು ಸಂಪಾದಿಸುವ ಸಂಪಾದಕರು ಇದೇ ಸಂದರ್ಭದಲ್ಲಿ Wiki Loves Monuments ಚಿತ್ರ ಅಪ್ಲೋಡ್ ಚಟುವಟಿಕೆಯಲ್ಲಿಯೂ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ.
ಚೀನೀ ವಿಕಿಪೀಡಿಯಾದಲ್ಲಿ, Wiki Loves Monuments ಕಾರ್ಯಕ್ರಮದಲ್ಲಿ ಭಾಗವಹಿಸುವ ಕೃತಿಗಳಿಗೆ ಈ ಸಂಪಾದನಾ ಮ್ಯಾರಥಾನ್ನ ಸಂದರ್ಭದಲ್ಲಿ ಹೆಚ್ಚುವರಿ ಪ್ರೋತ್ಸಾಹಕ ಬಹುಮಾನಗಳು/ಪ್ರೋತ್ಸಾಹಧನಗಳನ್ನು ನೀಡಲಾಗುತ್ತದೆ.
== ಆಯೋಜಕರು ==
WikiProject China Cultural Heritage ಮತ್ತು ವಿಕಿಮೀಡಿಯನ್ನರ ಮುಖ್ಯಭೂಮಿ ಚೀನಾ ಗುಂಪು ಜಂಟಿಯಾಗಿ ಈ ಸಂಪಾದನಾ ಮ್ಯಾರಥಾನ್ ಅನ್ನು ಆಯೋಜಿಸುತ್ತಿವೆ. ಇದರ ಜೊತೆಗೆ, ESEAP Hub ಈ ಸಂಪಾದನಾ ಮ್ಯಾರಥಾನ್ಗೆ ಬಲವಾದ ಬೆಂಬಲವನ್ನು ನೀಡುತ್ತಿದೆ.
ಅಂತಾರಾಷ್ಟ್ರೀಯ ತಂಡವು ಸಂಪಾದನಾ ಮ್ಯಾರಥಾನ್ಗಳನ್ನು ಆಯೋಜಿಸಲು ಕೆಲವು ಸಂಪನ್ಮೂಲಗಳನ್ನು ಸಿದ್ಧಪಡಿಸಿದೆ. ಉದಾಹರಣೆಗೆ, ಆಮಂತ್ರಣ ಮಾದರಿಗಳು, ಬಾರ್ನ್ಸ್ಟಾರ್ಗಳು ಇತ್ಯಾದಿಗಳನ್ನು ಒಳಗೊಂಡಿವೆ. ನೀವು ಇವುಗಳನ್ನು ಮುಕ್ತವಾಗಿ ಬಳಸಬಹುದು.
== ಸ್ಥಳೀಯ ಆಯೋಜಕರು ==
ಸಂತೋಷ್ ನೋಟಗಾರ್ - Santhosh Notgaar
== ಮೆಟಾ ಪುಟದ ಲಿಂಕ್ ==
https://meta.wikimedia.org/wiki/%E4%B8%AD%E5%8D%8E%E6%96%87%E5%8C%96%E9%81%97%E4%BA%A7%E7%BC%96%E8%BE%91%E6%9D%BE/2026/en
== ಭಾಗವಹಿಸುವುದು ಹೇಗೆ ==
* ಭಾಗವಹಿಸುವವರು ಚೀನೀ ಸಾಂಸ್ಕೃತಿಕ ಪರಂಪರೆಗೆ ಸಂಬಂಧಿಸಿದ ಒಂದು ವಿಷಯವನ್ನು ಆಯ್ಕೆ ಮಾಡಬೇಕು.
* 28 ಆಗಸ್ಟ್ 2026 ರಿಂದ 27 ಸೆಪ್ಟೆಂಬರ್ 2026 ರವರೆಗೆ, ಒಂದು ಲೇಖನವನ್ನು ರಚಿಸಬೇಕು.
== ನಿಮ್ಮ ಲೇಖನಗಳನ್ನು ಸೇರಿಸಿ (Fountain Tool Link) ==
https://fountain.toolforge.org/editathons/cch-kn-2026
== ಭಾಗವಹಿಸುವವರು ==
# [[ಸದಸ್ಯ:Santhosh Notagar99|Santhosh Notagar99]] ([[ಸದಸ್ಯರ ಚರ್ಚೆಪುಟ:Santhosh Notagar99|ಚರ್ಚೆ]]) ೧೦:೩೯, ೨೮ ಆಗಸ್ಟ್ ೨೦೨೬ (IST)
#[[ಸದಸ್ಯ:Prath20|Prath20]] ([[ಸದಸ್ಯರ ಚರ್ಚೆಪುಟ:Prath20|ಚರ್ಚೆ]]) ೧೧:೦೭, ೨೮ ಆಗಸ್ಟ್ ೨೦೨೬ (IST)
#--[[ಸದಸ್ಯ:Sathyaprasad Pai|Sathyaprasad Pai]] ([[ಸದಸ್ಯರ ಚರ್ಚೆಪುಟ:Sathyaprasad Pai|ಚರ್ಚೆ]]) ೧೧:೦೧, ೨೮ ಆಗಸ್ಟ್ ೨೦೨೬ (IST)
stfdfqlreudlu85wccs96icq7l9ixln
ಅನಿಮೆ
0
180755
1384588
1384564
2026-08-28T18:58:13Z
Footy2000
69974
Created by translating the section "__LEAD_SECTION__" from the page "[[:en:Special:Redirect/revision/1371742391|Anime]]"
1384588
wikitext
text/x-wiki
[[ಚಿತ್ರ:TVアニメ「ヒロインたるもの!~嫌われヒロインと内緒のお仕事~」第2弾PV_-_4月7日(木)放送開始.webm|thumbtime=1:43|alt=A frame from an anime, showing a boy and a girl in track outfits, with the boy playfully pulling her along. The girl looks surprised, while the boy shows excitement.|thumb| ೨೦೨೨ ರ ಅನಿಮೆ ''ನಾಯಕಿಯಾಗಿ! ದ್ವೇಷಿಸಲ್ಪಟ್ಟ ನಾಯಕಿ ಮತ್ತು ಅವಳ ರಹಸ್ಯ ಕೆಲಸ'' ಟ್ರೇಲರ್]]
ಅನಿಮೆ ([[ಜಪಾನಿ ಭಾಷೆ]]: アニメ <span style="font-weight: normal"><phonos file="Ja-Anime.oga"></phonos>; ''ಆಂಗ್ಲಿಕ ಪದ 'ಅನಿಮೇಷನ್' ನ ಚೊಕ್ಕ ರೂಪದಿಂದ ಬಂದಿದೆ.'')</span> [[ಜಪಾನ್|ಜಪಾನ್]] ನಾಡಿನ ಮೂಲದ [[ಅನಿಮೇಷನ್]] ಆಗಿದೆ. ಜಪಾನ್ ಹೊರಗೆ ಮತ್ತು [[ಆಂಗ್ಲ ಭಾಷೆ|ಇಂಗ್ಲಿಷ್ನಲ್ಲಿ]], ಅನಿಮೆ ನಿರ್ದಿಷ್ಟವಾಗಿ ಜಪಾನ್ನಲ್ಲಿ ಉತ್ಪಾದಿಸಿದ ಅನಿಮೇಷನ್ ಅನ್ನು ತಿಳಿಸುತ್ತದೆ.<ref>{{Cite web |last=Ashcraft |first=Brian |date=2021-05-18 |title=What "Anime" Means |url=https://kotaku.com/what-anime-means-1689582070 |url-status=live |archive-url=https://web.archive.org/web/20220302020009/https://kotaku.com/what-anime-means-1689582070 |archive-date=March 2, 2022 |access-date=2022-03-02 |website=[[Kotaku]] |language=en}}</ref> ಆದರೆ, ಜಪಾನ್ ಮತ್ತು ಜಪಾನಿ ಭಾಷೆಗಳಲ್ಲಿ ಅನಿಮೆಯು, ಬಗೆಯ ಇಲ್ಲವೇ ಮೂಲವನ್ನು ಲೆಕ್ಕಿಸದೆ ಎಲ್ಲಾ ಅನಿಮೇಟೆಡ್ ಮಾಡಿಕೆಗಳನ್ನು ಅರುಹುತ್ತದೆ. ಜಪಾನೀಸ್ ಅನಿಮೇಷನ್ಗೆ ಹೋಲುವ ಬಗೆಯ ಹಲವು ಅನಿಮೇಷನ್ ಮಾಡಿಕೆಗಳು ಜಪಾನ್ನ ಹೊರಗೆ ಕೂಡ ಉತ್ಪಾದಿಸಿಗೊಳ್ಳುತ್ತವೆ. ವಿಡಿಯೋ ಗೇಮ್ಗಳು ಕೆಲವೊಮ್ಮೆ ಅನಿಮೆ ಎಂದು ಗುರುತು ಮಾಡಬಹುದಾದ ತಿರುಳುಗಳು ಮತ್ತು ಕೈವಾಡ ಬಗೆಗಳನ್ನು ಕೂಡ ಒಳಗೊಂಡಿರುತ್ತವೆ.
ಜಪಾನಿನ ಮೊದಲ ಬಂಡವಾಳ ಅನಿಮೇಷನ್ ೧೯೧೭ ರ ಹಿಂದಿನದು. ೧೯೬೦ ರ ದಶಕದಲ್ಲಿ ವ್ಯಂಗ್ಯಚಿತ್ರಕಾರ ಒಸಾಮು ತೇಜುಕಾ ಅವರ ಮಾಡಿಕೆಗಳೊಂದಿಗೆ ಒಂದು ವಿಶಿಷ್ಟ ಕಲಾ ಬಗೆಯ ಹೊರಹೊಮ್ಮಿತು ಮತ್ತು ನಂತರದ ದಶಕಗಳಲ್ಲಿ ಹರಡಿತು, ನಾಡಿನ ದೊಡ್ಡ ಪ್ರೇಕ್ಷಕರ ಗುಂಪು ಬೆಳೆಸಿತು. ಅನಿಮೆ ಅನ್ನು ನಾಟಕೀಯವಾಗಿ, ದೂರದರ್ಶನ ಪ್ರಸಾರಗಳ ಮೂಲಕ, ನೇರವಾಗಿ ಗೃಹ ಮಾಧ್ಯಮಗಳಿಗೆ ಮತ್ತು ಇಂಟರ್ನೆಟ್ ಮೂಲಕ ವಿತರಿಸಲಾಗುತ್ತದೆ. ಮೂಲ ಕೃತಿಗಳ ಜೊತೆಗೆ, ಅನಿಮೆ ಹೆಚ್ಚಾಗಿ ಜಪಾನೀಸ್ ಕಾಮಿಕ್ಸ್ ( [[ಮಂಗಾ]] ), ಲಘು ಕಾದಂಬರಿಗಳು ಅಥವಾ ವಿಡಿಯೋ ಗೇಮ್ಗಳ ರೂಪಾಂತರಗಳಾಗಿವೆ. ಇದನ್ನು ವಿವಿಧ ಮತ್ತು ವಿಶಿಷ್ಟ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಹಲವಾರು ಪ್ರಕಾರಗಳಾಗಿ ವರ್ಗೀಕರಿಸಲಾಗಿದೆ. <ref>{{Cite web |last=[[Ministry of Economy, Trade and Industry]] |date=2020 |title=Manga and Anime |url=https://artsandculture.google.com/story/0QXxgxls0jJ5Kg |url-status=live |archive-url=https://web.archive.org/web/20231027160025/https://artsandculture.google.com/story/0QXxgxls0jJ5Kg |archive-date=October 27, 2023 |access-date=October 27, 2023 |website=[[Google Arts and Culture]]}}</ref>
ಅನಿಮೆ ಎಂಬುದು ವೈವಿಧ್ಯಮಯ ಮಾಧ್ಯಮವಾಗಿದ್ದು, ವಿಶಿಷ್ಟ ಉತ್ಪಾದನಾ ವಿಧಾನಗಳನ್ನು ಹೊಂದಿದ್ದು, ಉದಯೋನ್ಮುಖ ತಂತ್ರಜ್ಞಾನಗಳಿಗೆ ಪ್ರತಿಕ್ರಿಯೆಯಾಗಿ ಅಳವಡಿಸಿಕೊಂಡಿದೆ. ಐತಿಹಾಸಿಕವಾಗಿ ಮತ್ತು ಪ್ರಧಾನವಾಗಿ ಕೈಯಿಂದ ಚಿತ್ರಿಸಲ್ಪಟ್ಟ ಅನಿಮೆ, ಗ್ರಾಫಿಕ್ ಕಲೆ, ಪಾತ್ರ ನಿರೂಪಣೆ, ಛಾಯಾಗ್ರಹಣ ಮತ್ತು ಇತರ ರೀತಿಯ ಕಲ್ಪನಾತ್ಮಕ ಮತ್ತು ವ್ಯಕ್ತಿಗತ ತಂತ್ರಗಳನ್ನು ಸಂಯೋಜಿಸುತ್ತದೆ. {{Sfn|Craig|2000|pp=139–140}} ಪಾಶ್ಚಾತ್ಯ ಅನಿಮೇಷನ್ಗೆ ಹೋಲಿಸಿದರೆ, ಅನಿಮೆ ನಿರ್ಮಾಣವು ಸಾಮಾನ್ಯವಾಗಿ ಚಲನೆಯ ಮೇಲೆ ಕಡಿಮೆ ಗಮನಹರಿಸುತ್ತದೆ ಮತ್ತು ಪ್ಯಾನಿಂಗ್, ಜೂಮಿಂಗ್ ಮತ್ತು ಆಂಗಲ್ ಶಾಟ್ಗಳಂತಹ "ಕ್ಯಾಮೆರಾ ಪರಿಣಾಮಗಳ" ಸೆಟ್ಟಿಂಗ್ಗಳು ಮತ್ತು ಬಳಕೆಯ ವಿವರಗಳ ಮೇಲೆ ಹೆಚ್ಚು ಗಮನಹರಿಸುತ್ತದೆ. {{Sfn|Craig|2000|pp=139–140}} ವೈವಿಧ್ಯಮಯ ಕಲಾ ಶೈಲಿಗಳನ್ನು ಬಳಸಲಾಗುತ್ತದೆ, ಮತ್ತು ಪಾತ್ರದ ಅನುಪಾತಗಳು ಮತ್ತು ವೈಶಿಷ್ಟ್ಯಗಳು ಸಾಕಷ್ಟು ವೈವಿಧ್ಯಮಯವಾಗಿರಬಹುದು, ಸಾಮಾನ್ಯ ವಿಶಿಷ್ಟ ಲಕ್ಷಣವೆಂದರೆ ದೊಡ್ಡ ಮತ್ತು ಭಾವನಾತ್ಮಕ ಕಣ್ಣುಗಳು. <ref>{{ಉಲ್ಲೇಖ ಸುದ್ದಿ |last=Ashcraft |first=Brian |date=21 September 2016 |title=A Serious Look at Big Anime Eyes |url=https://kotaku.com/a-serious-look-at-big-anime-eyes-1737751337 |url-status=live |archive-url=https://web.archive.org/web/20210204054308/https://kotaku.com/a-serious-look-at-big-anime-eyes-1737751337 |archive-date=February 4, 2021 |access-date=4 January 2020 |work=[[Kotaku]]}}</ref>
ಅನಿಮೆ ಉದ್ಯಮವು ೪೩೦ ಕ್ಕೂ ಹೆಚ್ಚು ಉತ್ಪಾದನೆಯ ಸಂಸ್ಥೆಗಳನ್ನು ಒಳಗೊಂಡಿದೆ, ಇದರಲ್ಲಿ ಸ್ಟುಡಿಯೋ ಘಿಬ್ಲಿ, ಕ್ಯೋಟೋ ಅನಿಮೇಷನ್, ಸನ್ರೈಸ್, ಬೋನ್ಸ್, ಯುಫೋಟೇಬಲ್, MAPPA, ವಿಟ್ ಸ್ಟುಡಿಯೋ, ಕೋಮಿಕ್ಸ್ ವೇವ್ ಫಿಲ್ಮ್ಸ್, ಮ್ಯಾಡ್ಹೌಸ್, ಇಂಕ್., ಟಿಎಂಎಸ್ ಎಂಟರ್ಟೈನ್ಮೆಂಟ್, ಸ್ಟುಡಿಯೋ ಪಿಯರೋಟ್, ಪ್ರೊಡಕ್ಷನ್ ಐಜಿ, ನಿಪ್ಪಾನ್ ಅನಿಮೇಷನ್ ಮತ್ತು ಟೋಯಿ ಅನಿಮೇಷನ್ನಂತಹ ಪ್ರಮುಖ ಸ್ಟುಡಿಯೋಗಳು ಸೇರಿವೆ . ೧೯೮೦ ರ ದಶಕದಿಂದಲೂ, ಹೊರನಾಡಿನ ಡಬ್ ಮತ್ತು ಉಪಶೀರ್ಷಿಕೆ ಕಾರ್ಯಕ್ರಮಗಳ ಏರಿಕೆಯೊಂದಿಗೆ ಈ ಮಾಧ್ಯಮವು ವ್ಯಾಪಕ ಅಂತರರಾಷ್ಟ್ರೀಯ ಯಶಸ್ಸನ್ನು ಕಂಡಿದೆ, ಮತ್ತು ೨೦೧೦ ರ ದಶಕದಿಂದಲೂ ಸ್ಟ್ರೀಮಿಂಗ್ ಸೇವೆಗಳ ಏರಿಕೆ ಮತ್ತು ಜಪಾನ್ ಮತ್ತು ವಿಶ್ವಾದ್ಯಂತ ಅನಿಮೆ ಸಂಸ್ಕೃತಿಯ ವ್ಯಾಪಕ ಜನಸಂಖ್ಯಾ ಅಪ್ಪಿಕೊಳ್ಳುವಿಕೆಯಿಂದಾಗಿ. <ref>{{Cite web |last=Brzeski |first=Patrick |date=16 May 2022 |title=How Japanese Anime Became the World's Most Bankable Genre |url=https://www.hollywoodreporter.com/business/business-news/cannes-japanese-anime-worlds-most-bankable-genre-1235146810/ |url-status=live |archive-url=https://web.archive.org/web/20221206221632/https://www.hollywoodreporter.com/business/business-news/japanese-anime-worlds-most-bankable-genre-1235146810/ |archive-date=Dec 6, 2022 |website=[[The Hollywood Reporter]]}}</ref> <ref>{{Cite web |date=October 3, 2022 |title=Decades of Growth, Rise of VOD and Streaming Trigger Anime Avalanche |url=https://www.vfxvoice.com/decades-of-growth-rise-of-vod-and-streaming-trigger-anime-avalanche/ |url-status=live |archive-url=https://web.archive.org/web/20240421201100/https://www.vfxvoice.com/decades-of-growth-rise-of-vod-and-streaming-trigger-anime-avalanche/ |archive-date=April 21, 2024 |access-date=August 26, 2024 |website=[[Visual Effects Society|vfxvoice]]}}</ref> ೨೦೧೬ ರ ಹೊತ್ತಿಗೆ ವಿಶ್ವದ ಅನಿಮೇಟೆಡ್ ದೂರದರ್ಶನ ಕಾರ್ಯಕ್ರಮಗಳಲ್ಲಿ ಜಪಾನಿನ ಅನಿಮೇಷನ್ ೬೦% ರಷ್ಟಿದೆ. <ref>{{ಉಲ್ಲೇಖ ಪುಸ್ತಕ |last=Napier |first=Susan J. |author-link=Susan J. Napier |url=https://books.google.com/books?id=UnuLCwAAQBAJ&pg=PR10 |title=Anime from Akira to Howl's Moving Castle: Experiencing Contemporary Japanese Animation |date=2016 |publisher=[[St. Martin's Press]] |isbn=9781250117724 |page=10 |access-date=February 14, 2019 |archive-url=https://web.archive.org/web/20230924132817/https://books.google.com/books?id=UnuLCwAAQBAJ&pg=PR10 |archive-date=September 24, 2023 |url-status=live}}</ref> ೨೦೨೨ ರ ಹೊತ್ತಿಗೆ, ಅನಿಮೆ ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ವಿಷಯ ಪ್ರಕಾರಗಳಲ್ಲಿ ಒಂದಾಗಿತ್ತು. <ref>{{Cite web |date=10 January 2022 |title=Anime becomes one of the fastest-growing content genres in the past two years |url=https://www.parrotanalytics.com/press/anime-becomes-one-of-the-fastest-growing-content-genres-in-the-past-two-years/ |url-status=live |archive-url=https://web.archive.org/web/20251119144322/https://www.parrotanalytics.com/press/anime-becomes-one-of-the-fastest-growing-content-genres-in-the-past-two-years/ |archive-date=November 19, 2025 |access-date=November 2, 2025 |website=Parrot Analytics}}</ref> ಜಪಾನೀಸ್-ನಿರ್ಮಿತ ಅನಿಮೇಷನ್ ಜಾಗತಿಕ ಮಟ್ಟದಲ್ಲಿ ಮಾಧ್ಯಮ ಮತ್ತು ಜನಪ್ರಿಯ ಸಂಸ್ಕೃತಿಯ ಮೇಲೆ ಪ್ರಭಾವ ಬೀರುವುದನ್ನು ಮತ್ತು ರೂಪಿಸುವುದನ್ನು ಮುಂದುವರೆಸುತ್ತಿರುವುದರಿಂದ, ಈ ಮಾಧ್ಯಮವು ಪ್ರಸ್ತುತ ಹೆಚ್ಚಿದ ಜಾಗತೀಕರಣ, ವಿಸ್ತಾರವಾದ ಅಂತರ್-ಸಾಂಸ್ಕೃತಿಕ ಸಹಯೋಗ ಮತ್ತು ಗಮನಾರ್ಹ ಬ್ರ್ಯಾಂಡ್ ಏಕೀಕರಣದಿಂದ ನಿರೂಪಿಸಲ್ಪಟ್ಟಿದೆ. <ref>{{Cite web |last=Jones |first=Nina |date=4 October 2024 |title=Anime's cultural clout |url=https://www.vml.com/insight/animes-cultural-clout |url-status=live |archive-url=https://web.archive.org/web/20251119233625/https://www.vml.com/insight/animes-cultural-clout |archive-date=November 19, 2025 |access-date=November 2, 2025 |website=[[VML (agency)|VML]]}}</ref>
== __LEAD_SECTION__ ==
[[File:TVアニメ「ヒロインたるもの!~嫌われヒロインと内緒のお仕事~」第2弾PV_-_4月7日(木)放送開始.webm|thumbtime=1:43|alt=A frame from an anime, showing a boy and a girl in track outfits, with the boy playfully pulling her along. The girl looks surprised, while the boy shows excitement.|thumb|2022 ರ ಅನಿಮೆ ''ಹೀರೋಯಿನ್ಸ್ ರನ್ ದಿ ಶೋನ'' ಟ್ರೇಲರ್]]
ಅನಿಮೆ (ಜಪಾನಿ ಭಾಷೆ: アニメ ⓘ; ಆಂಗ್ಲಿಕ ಪದ 'ಅನಿಮೇಷನ್' ನ ಚೊಕ್ಕ ರೂಪದಿಂದ ಬಂದಿದೆ.) ಜಪಾನ್ ನಾಡಿನ ಮೂಲದ ಅನಿಮೇಷನ್ ಆಗಿದೆ. ಜಪಾನ್ ಹೊರಗೆ ಮತ್ತು ಇಂಗ್ಲಿಷ್ನಲ್ಲಿ, ಅನಿಮೆ ನಿರ್ದಿಷ್ಟವಾಗಿ ಜಪಾನ್ನಲ್ಲಿ ಉತ್ಪಾದಿಸಿದ ಅನಿಮೇಷನ್ ಅನ್ನು ತಿಳಿಸುತ್ತದೆ. <ref>{{Cite web |last=Ashcraft |first=Brian |date=2021-05-18 |title=What "Anime" Means |url=https://kotaku.com/what-anime-means-1689582070 |url-status=live |archive-url=https://web.archive.org/web/20220302020009/https://kotaku.com/what-anime-means-1689582070 |archive-date=March 2, 2022 |access-date=2022-03-02 |website=[[Kotaku]] |language=en}}</ref>
<ref>{{Cite web |last=[[Ministry of Economy, Trade and Industry]] |date=2020 |title=Manga and Anime |url=https://artsandculture.google.com/story/0QXxgxls0jJ5Kg |url-status=live |archive-url=https://web.archive.org/web/20231027160025/https://artsandculture.google.com/story/0QXxgxls0jJ5Kg |archive-date=October 27, 2023 |access-date=October 27, 2023 |website=[[Google Arts and Culture]]}}</ref>
ಅನಿಮೆ ಎಂಬುದು ವೈವಿಧ್ಯಮಯ ಮಾಧ್ಯಮವಾಗಿದ್ದು, ವಿಶಿಷ್ಟ ಉತ್ಪಾದನಾ ವಿಧಾನಗಳನ್ನು ಹೊಂದಿದ್ದು, ಉದಯೋನ್ಮುಖ ತಂತ್ರಜ್ಞಾನಗಳಿಗೆ ಪ್ರತಿಕ್ರಿಯೆಯಾಗಿ ಅಳವಡಿಸಿಕೊಂಡಿದೆ. ಐತಿಹಾಸಿಕವಾಗಿ ಮತ್ತು ಪ್ರಧಾನವಾಗಿ ಕೈಯಿಂದ ಚಿತ್ರಿಸಲ್ಪಟ್ಟ ಅನಿಮೆ, ಗ್ರಾಫಿಕ್ ಕಲೆ, ಪಾತ್ರ ನಿರೂಪಣೆ, ಛಾಯಾಗ್ರಹಣ ಮತ್ತು ಇತರ ರೀತಿಯ ಕಲ್ಪನಾತ್ಮಕ ಮತ್ತು ವ್ಯಕ್ತಿಗತ ತಂತ್ರಗಳನ್ನು ಸಂಯೋಜಿಸುತ್ತದೆ. {{Sfn|Craig|2000|pp=139–140}}ಪಾಶ್ಚಾತ್ಯ ಅನಿಮೇಷನ್ಗೆ ಹೋಲಿಸಿದರೆ, ಅನಿಮೆ ನಿರ್ಮಾಣವು ಸಾಮಾನ್ಯವಾಗಿ ಚಲನೆಯ ಮೇಲೆ ಕಡಿಮೆ ಗಮನಹರಿಸುತ್ತದೆ ಮತ್ತು ಪ್ಯಾನಿಂಗ್, ಜೂಮಿಂಗ್ ಮತ್ತು ಆಂಗಲ್ ಶಾಟ್ಗಳಂತಹ "ಕ್ಯಾಮೆರಾ ಪರಿಣಾಮಗಳ" ಸೆಟ್ಟಿಂಗ್ಗಳು ಮತ್ತು ಬಳಕೆಯ ವಿವರಗಳ ಮೇಲೆ ಹೆಚ್ಚು ಗಮನಹರಿಸುತ್ತದೆ.{{Sfn|Craig|2000|pp=139–140}} ವೈವಿಧ್ಯಮಯ ಕಲಾ ಶೈಲಿಗಳನ್ನು ಬಳಸಲಾಗುತ್ತದೆ, ಮತ್ತು ಪಾತ್ರದ ಅನುಪಾತಗಳು ಮತ್ತು ವೈಶಿಷ್ಟ್ಯಗಳು ಸಾಕಷ್ಟು ವೈವಿಧ್ಯಮಯವಾಗಿರಬಹುದು, ಸಾಮಾನ್ಯ ವಿಶಿಷ್ಟ ಲಕ್ಷಣವೆಂದರೆ ದೊಡ್ಡ ಮತ್ತು ಭಾವನಾತ್ಮಕ ಕಣ್ಣುಗಳು.<ref>{{ಉಲ್ಲೇಖ ಸುದ್ದಿ |last=Ashcraft |first=Brian |date=21 September 2016 |title=A Serious Look at Big Anime Eyes |url=https://kotaku.com/a-serious-look-at-big-anime-eyes-1737751337 |url-status=live |archive-url=https://web.archive.org/web/20210204054308/https://kotaku.com/a-serious-look-at-big-anime-eyes-1737751337 |archive-date=February 4, 2021 |access-date=4 January 2020 |work=[[Kotaku]]}}</ref> ೨೦೨೨ ರ ಹೊತ್ತಿಗೆ, ಅನಿಮೆ ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ವಿಷಯ ಪ್ರಕಾರಗಳಲ್ಲಿ ಒಂದಾಗಿತ್ತು.
<ref>{{Cite web |last=Brzeski |first=Patrick |date=16 May 2022 |title=How Japanese Anime Became the World's Most Bankable Genre |url=https://www.hollywoodreporter.com/business/business-news/cannes-japanese-anime-worlds-most-bankable-genre-1235146810/ |url-status=live |archive-url=https://web.archive.org/web/20221206221632/https://www.hollywoodreporter.com/business/business-news/japanese-anime-worlds-most-bankable-genre-1235146810/ |archive-date=Dec 6, 2022 |website=[[The Hollywood Reporter]]}}</ref> <ref>{{Cite web |date=October 3, 2022 |title=Decades of Growth, Rise of VOD and Streaming Trigger Anime Avalanche |url=https://www.vfxvoice.com/decades-of-growth-rise-of-vod-and-streaming-trigger-anime-avalanche/ |url-status=live |archive-url=https://web.archive.org/web/20240421201100/https://www.vfxvoice.com/decades-of-growth-rise-of-vod-and-streaming-trigger-anime-avalanche/ |archive-date=April 21, 2024 |access-date=August 26, 2024 |website=[[Visual Effects Society|vfxvoice]]}}</ref> ೨೦೧೬ ರ ಹೊತ್ತಿಗೆ ವಿಶ್ವದ ಅನಿಮೇಟೆಡ್ ದೂರದರ್ಶನ ಕಾರ್ಯಕ್ರಮಗಳಲ್ಲಿ ಜಪಾನಿನ ಅನಿಮೇಷನ್ ೬೦% ರಷ್ಟಿದೆ. <ref>{{ಉಲ್ಲೇಖ ಪುಸ್ತಕ |last=Napier |first=Susan J. |author-link=Susan J. Napier |url=https://books.google.com/books?id=UnuLCwAAQBAJ&pg=PR10 |title=Anime from Akira to Howl's Moving Castle: Experiencing Contemporary Japanese Animation |date=2016 |publisher=[[St. Martin's Press]] |isbn=9781250117724 |page=10 |access-date=February 14, 2019 |archive-url=https://web.archive.org/web/20230924132817/https://books.google.com/books?id=UnuLCwAAQBAJ&pg=PR10 |archive-date=September 24, 2023 |url-status=live}}</ref> <ref>{{Cite web |date=10 January 2022 |title=Anime becomes one of the fastest-growing content genres in the past two years |url=https://www.parrotanalytics.com/press/anime-becomes-one-of-the-fastest-growing-content-genres-in-the-past-two-years/ |url-status=live |archive-url=https://web.archive.org/web/20251119144322/https://www.parrotanalytics.com/press/anime-becomes-one-of-the-fastest-growing-content-genres-in-the-past-two-years/ |archive-date=November 19, 2025 |access-date=November 2, 2025 |website=Parrot Analytics}}</ref> ಜಪಾನೀಸ್-ನಿರ್ಮಿತ ಅನಿಮೇಷನ್ ಜಾಗತಿಕ ಮಟ್ಟದಲ್ಲಿ ಮಾಧ್ಯಮ ಮತ್ತು ಜನಪ್ರಿಯ ಸಂಸ್ಕೃತಿಯ ಮೇಲೆ ಪ್ರಭಾವ ಜಪಾನೀಸ್-ನಿರ್ಮಿತ ಅನಿಮೇಷನ್ ಜಾಗತಿಕ ಮಟ್ಟದಲ್ಲಿ ಮಾಧ್ಯಮ ಮತ್ತು ಜನಪ್ರಿಯ ಸಂಸ್ಕೃತಿಯ ಮೇಲೆ ಪ್ರಭಾವ ಬೀರುವುದನ್ನು ಮತ್ತು ರೂಪಿಸುವುದನ್ನು ಮುಂದುವರೆಸುತ್ತಿರುವುದರಿಂದ, ಈ ಮಾಧ್ಯಮವು ಪ್ರಸ್ತುತ ಹೆಚ್ಚಿದ ಜಾಗತೀಕರಣ, ವಿಸ್ತಾರವಾದ ಅಂತರ್-ಸಾಂಸ್ಕೃತಿಕ ಸಹಯೋಗ ಮತ್ತು ಗಮನಾರ್ಹ ಬ್ರ್ಯಾಂಡ್ ಏಕೀಕರಣದಿಂದ ನಿರೂಪಿಸಲ್ಪಟ್ಟಿದೆ.ಬೀರುವುದನ್ನು ಮತ್ತು ರೂಪಿಸುವುದನ್ನು ಮುಂದುವರೆಸುತ್ತಿರುವುದರಿಂದ, ಈ ಮಾಧ್ಯಮವು ಪ್ರಸ್ತುತ ಹೆಚ್ಚಿದ ಜಾಗತೀಕರಣ, ವಿಸ್ತಾರವಾದ ಅಂತರ್-ಸಾಂಸ್ಕೃತಿಕ ಸಹಯೋಗ ಮತ್ತು ಗಮನಾರ್ಹ ಬ್ರ್ಯಾಂಡ್ ಏಕೀಕರಣದಿಂದ ನಿರೂಪಿಸಲ್ಪಟ್ಟಿದೆ. <ref>{{Cite web |last=Jones |first=Nina |date=4 October 2024 |title=Anime's cultural clout |url=https://www.vml.com/insight/animes-cultural-clout |url-status=live |archive-url=https://web.archive.org/web/20251119233625/https://www.vml.com/insight/animes-cultural-clout |archive-date=November 19, 2025 |access-date=November 2, 2025 |website=[[VML (agency)|VML]]}}</ref>
== ಉಲ್ಲೇಖಗಳು ==
[[ವರ್ಗ:ಅನಿಮೆ]]
h2vdpzpwzlw6k1xfla5ulcafj4x3d8h
ಸದಸ್ಯರ ಚರ್ಚೆಪುಟ:ಸಿದ್ದವ್ವನಹಳ್ಳಿ ವೀರೇಶ್ ಕುಮಾರ್
3
180757
1384570
2026-08-28T14:25:22Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384570
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=ಸಿದ್ದವ್ವನಹಳ್ಳಿ ವೀರೇಶ್ ಕುಮಾರ್}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೯:೫೫, ೨೮ ಆಗಸ್ಟ್ ೨೦೨೬ (IST)
ewxo60pz4tam3q8b0fqoe3iefk6fpdj
ಸದಸ್ಯ:ಸಿದ್ದವ್ವನಹಳ್ಳಿ ವೀರೇಶ್ ಕುಮಾರ್
2
180758
1384572
2026-08-28T14:40:38Z
ಸಿದ್ದವ್ವನಹಳ್ಳಿ ವೀರೇಶ್ ಕುಮಾರ್
101403
/* */
1384572
wikitext
text/x-wiki
ಸಿದ್ದವ್ವನಹಳ್ಳಿ ವೀರೇಶ್ ಕುಮಾರ್
ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವ್ವನಹಳ್ಳಿಯ ಸಾಹಿತಿ ಸಿದ್ಧವ್ವನಹಳ್ಳಿ ವೀರೇಶ್ ಕುಮಾರ್ ಹೊಳಲ್ಕೆರೆಯಲ್ಲಿ ವಾಸವಾಗಿದ್ದು,ಅದೇ ತಾಲೂಕಿನ ಎಂ.ಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರು. ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಆಡುತ್ತಾ ಕಲಿಯುವ ವ್ಯಾಕರಣ, ಚಂದದ ಛಂದೋವಿಜ್ಞಾನ, ಹಳೆಗನ್ನಡ ಕೈಪಿಡಿ, ಹೊಸ ಜನ್ಮ ಹೊಸ ನೆಲೆ ಮುಂತಾದ ಕೃತಿಗಳನ್ನು ರಚಿಸಿರುವುದಲ್ಲದೆ ಕನ್ನಡದ ಹಲವು ಪ್ರಸಿದ್ಧ ಪತ್ರಿಕೆಗಳಲ್ಲಿ ಇವರ ಲೇಖನ, ಕಥೆ,ಕವನಗಳು ಪ್ರಕಟಗೊಂಡಿವೆ.ಆಕಾಶವಾಣಿಯಲ್ಲಿ ಕನ್ನಡ ನಾಡು- ನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸ್ನಾತಕೋತ್ತರ ಪದವಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ರಾಂಕ್ ಪಡೆದಿರುತ್ತಾರೆ.ತಮ್ಮದೇ ಯುಟ್ಯೂಬ್ ಚಾನೆಲ್ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಬಿತ್ತರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.
ಇವರ ಸಾಧನೆಯನ್ನು ಗುರುತಿಸಿ ೨೦೨೪-೨೫ನೇ ಸಾಲಿನಲ್ಲಿ ಚಿತ್ರದುರ್ಗದ ಜಿಲ್ಲಾಡಳಿತವು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುತ್ತದೆ. ’ಕನ್ನಡ ಸಿರಿ ಪ್ರಶಸ್ತಿ’ ಹಾಗೂ ’ಅತ್ಯುತ್ತಮ ಕವನ ಪ್ರಶಸ್ತಿ’ ನೊಂದವರಿಗೆ ಸುಮಾರು ವರ್ಷಗಳಿಂದ ಹೆಗಲು ನೀಡಿರುವುದರಿಂದ 'ಆಶಾಕಿರಣ ರತ್ನ ಪ್ರಶಸ್ತಿ',ಜೊತೆಗೆ ಕಥೆ, ನಾಟಕ, ಕವನಗಳಲ್ಲೂ ನಿರಂತರ ಕೆಲಸ ಮಾಡುತ್ತಾ ಬರುತ್ತಿರುವ ಇವರು ನೂರಾರು ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿದ ಹಿನ್ನಲೆ ಹಲವು ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿರುತ್ತವೆ.
kogfiqq7rtt8grr36wz20dj1ihloaau
1384576
1384572
2026-08-28T14:57:34Z
ಸಿದ್ದವ್ವನಹಳ್ಳಿ ವೀರೇಶ್ ಕುಮಾರ್
101403
1384576
wikitext
text/x-wiki
'''ಸಿದ್ದವ್ವನಹಳ್ಳಿ ವೀರೇಶ್ ಕುಮಾರ್'''
ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವ್ವನಹಳ್ಳಿಯ ಸಾಹಿತಿ ಸಿದ್ಧವ್ವನಹಳ್ಳಿ ವೀರೇಶ್ ಕುಮಾರ್ ಹೊಳಲ್ಕೆರೆಯಲ್ಲಿ ವಾಸವಾಗಿದ್ದು,ಅದೇ ತಾಲೂಕಿನ ಎಂ.ಎಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರು. ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು '<nowiki/>'''ಆಡುತ್ತಾ ಕಲಿಯುವ ವ್ಯಾಕರಣ,' 'ಚಂದದ ಛಂದೋವಿಜ್ಞಾನ', 'ಹಳೆಗನ್ನಡ ಕೈಪಿಡಿ', 'ಹೊಸ ಜನ್ಮ ಹೊಸ ನೆಲೆ ', 'ನೀನೊಮ್ಮೆ ಬಂದು ಬಿಡು'''',ಮುಂತಾದ ಕೃತಿಗಳನ್ನು ರಚಿಸಿರುವುದಲ್ಲದೆ ಕನ್ನಡದ ಹಲವು ಪ್ರಸಿದ್ಧ ಪತ್ರಿಕೆಗಳಲ್ಲಿ ಇವರ ಲೇಖನ, ಕಥೆ,ಕವನಗಳು ಪ್ರಕಟಗೊಂಡಿವೆ.ಆಕಾಶವಾಣಿಯಲ್ಲಿ ಕನ್ನಡ ನಾಡು- ನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನೀಡಿದ್ದಾರೆ. '''ಪತ್ರಿಕೋದ್ಯಮ ಡಿಪ್ಲೋಮೋ ವಿಭಾಗದಲ್ಲಿ ಪ್ರಥಮ ರಾಂಕ್''' ಪಡೆದಿರುತ್ತಾರೆ.ತಮ್ಮದೇ ಯುಟ್ಯೂಬ್ ಚಾನೆಲ್ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಬಿತ್ತರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.
ಇವರ ಸಾಧನೆಯನ್ನು ಗುರುತಿಸಿ ೨೦೨೪-೨೫ನೇ ಸಾಲಿನಲ್ಲಿ ಚಿತ್ರದುರ್ಗದ ಜಿಲ್ಲಾಡಳಿತವು '<nowiki/>'''ಕನ್ನಡ ರಾಜ್ಯೋತ್ಸವ ಪ್ರಶಸ್ತಿ'''<nowiki/>', ನೀಡಿ ಗೌರವಿಸಿರುತ್ತದೆ. '''’ಕನ್ನಡ ಸಿರಿ ಪ್ರಶಸ್ತಿ'''’ , ’'''ಅತ್ಯುತ್ತಮ ಕವನ ಪ್ರಶಸ್ತಿ’''' ನೊಂದವರಿಗೆ ಸುಮಾರು ವರ್ಷಗಳಿಂದ ಹೆಗಲು ನೀಡಿರುವುದರಿಂದ '<nowiki/>'''ಆಶಾಕಿರಣ ರತ್ನ''' '''ಪ್ರಶಸ್ತಿ', 'ಜಿಲ್ಲಾ ವಿಶೇಷ ಶಿಕ್ಷಕ ಪ್ರಶಸ್ತಿ'''' ಜೊತೆಗೆ ಕಥೆ, ನಾಟಕ, ಕವನಗಳಲ್ಲೂ ನಿರಂತರ ಕೆಲಸ ಮಾಡುತ್ತಾ ಬರುತ್ತಿರುವ ಇವರು ನೂರಾರು ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿದ ಹಿನ್ನಲೆ ಹಲವು ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿರುತ್ತವೆ.
dbn9gf9hccrfg5uy8aolsf7dsqb0c27
ಸದಸ್ಯರ ಚರ್ಚೆಪುಟ:H0402135
3
180759
1384598
2026-08-29T03:46:56Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384598
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=H0402135}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೦೯:೧೬, ೨೯ ಆಗಸ್ಟ್ ೨೦೨೬ (IST)
q3pfdplophnsd597k3j29liph71yymv
ಸದಸ್ಯರ ಚರ್ಚೆಪುಟ:ಮಲ್ಲಿಕಾರ್ಜುನ್ ಭೀಮಶಂಕರ್
3
180760
1384599
2026-08-29T07:30:28Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384599
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=ಮಲ್ಲಿಕಾರ್ಜುನ್ ಭೀಮಶಂಕರ್}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೦೦, ೨೯ ಆಗಸ್ಟ್ ೨೦೨೬ (IST)
b558cflul41dyyy9qzlorl97hwt51g3
ಸದಸ್ಯರ ಚರ್ಚೆಪುಟ:Santy270589
3
180761
1384600
2026-08-29T07:56:40Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384600
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Santy270589}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೩:೨೬, ೨೯ ಆಗಸ್ಟ್ ೨೦೨೬ (IST)
e4gg70102st1dpbvhn3smd9lv9yrect
ಸದಸ್ಯರ ಚರ್ಚೆಪುಟ:Ajay S Naidu
3
180762
1384607
2026-08-29T10:11:02Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384607
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Ajay S Naidu}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೪೧, ೨೯ ಆಗಸ್ಟ್ ೨೦೨೬ (IST)
8pscv1c4hur6swq63gk3caew2aruiiz
ಸದಸ್ಯರ ಚರ್ಚೆಪುಟ:Maczstudy
3
180763
1384609
2026-08-29T10:25:40Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384609
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Maczstudy}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೫೫, ೨೯ ಆಗಸ್ಟ್ ೨೦೨೬ (IST)
o0yltlscnaugfjwm7vpr2mct1x24rmp
ಸದಸ್ಯರ ಚರ್ಚೆಪುಟ:Agorganica
3
180764
1384610
2026-08-29T10:26:35Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384610
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=Agorganica}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೫:೫೬, ೨೯ ಆಗಸ್ಟ್ ೨೦೨೬ (IST)
7yhuoymrke4mj3pdp9fizu41cgjp7bg
ಸದಸ್ಯರ ಚರ್ಚೆಪುಟ:KUMARMS9
3
180765
1384611
2026-08-29T11:45:06Z
ಕನ್ನಡ ವಿಕಿ ಸಮುದಾಯ
44987
ಹೊಸ ಬಳಕೆದಾರರ ಸ್ವಾಗತ
1384611
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=KUMARMS9}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೭:೧೫, ೨೯ ಆಗಸ್ಟ್ ೨೦೨೬ (IST)
bsddpdbjlmi94mqjnj636codrjcgzbl