ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.2 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:Chirasmarane-Niranjana.pdf/೫೫ 104 12874 320288 256669 2026-05-16T08:46:19Z Pragathi. BH 7585 /* Validated */ 320288 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=೫೬|right=ಚಿರಸ್ಮರಣೆ}} {{gap}}ತನ್ನ ಪ್ರಶ್ನೆಯ ಅರ್ಥ ಅಪುವಿಗೆ ಹೇಗೆ ಆಗಬೇಕು?-ಅಜ್ಜಿ ನಕ್ಕಳು. {{gap}}ಅಪ್ಪುವಿನ ತಾಯಿ ಹೊರಗೆ ತಲೆ ಹಾಕಿ ಕೇಳಿದಳು: {{gap}}"ಮದ್ಯಾಹ್ನ ಊಟ ಮಾಡಿದ್ಯೆನೊ?" {{gap}}"ಹೂಂ..ಊಟ ಮಾಡದೆ ಇರ್ತಾರಾ ಯಾರಾದರೂ?" {{gap}}ತಂದೆ ಗೊಣಗಿದ: {{gap}}"ಮಹಾ ಅಧಿಕಪ್ರಸಂಗಿ,ಹೇಳಿದ್ದಕ್ಕೆಲಾ ಮರುಪ್ರಶ್ನೆ ಕೇಳದೆ ಇರೋದಿಲ್ಲ." {{gap}}"ಎಲ್ಲಿ ಮಾಡಿದೆ?" {{gap}}ಎಂದು ತಾಯಿ ಇನ್ನೊಂದು ಪ್ರಶ್ನೆ ಕೇಳಿದಳು. {{gap}}"ಚರ್ವತ್ತೂರಲ್ಲೇ.ಈಗ ನಿಮ್ಮದೆಲ್ಲಾ ಆಯ್ತೋ ಇಲ್ಲವೋ?" {{gap}}ಅಜ್ಜಿಗೆ ರೇಗಿತು;< {{gap}}"ಫಟಿಂಗ! ನೋಡು.. ಅವನು ಪ್ರಶ್ನೆ ಕೇಳೋ ರೀತಿ... ಹುಂ.ಹುಡುಗರೆಲ್ಲ ಮನೆಗೆ ಬರದೆ ದೊಡ್ಡೋರು ಊಟ ಮಾಡ್ತಾರೇನೋ?"</br> {{gap}}ಅಪ್ಪು ಸುಮ್ಮನಾದ. {{gap}}"ಹೋಗು ಕಂಬದ ಹಾಗೆ ನಿಂತ್ಕೋಬೇಡ. ಕೈಕಾಲು ತೊಳಕೋ.." ಎಂದು ತಂದೆ, ಎದು ಕುಳಿತುಕೊಳ್ಳುತ್ತ ಹೇಳಿದ. {{gap}}...ಅಲ್ಲೇ ಬಾಗಿಲು ಮರೆಮಾಡಿ, ಅಜ್ಜಿಯೂ ಮಗನೂ ಮೊಮ್ಮಗನೂ ಊಟಕ್ಕೆ ಕುಳಿತರು, ಅಪುವಿನ ತಾಯಿ ಆ ಮೂವರಿಗೂ ಬಡಿಸಿದಳು, ದಣಿದಿದ್ದ ಆತನಿಗೆ ಚೆನಾಗಿ ಹಸಿವೆಯಾಗಿತ್ತು, ಉಣ್ಣುತ್ತಲಿದ್ದಂತೆ, ಮಧಾಹ್ನ ಮಾಡಿದ ಊಟದ ಚಿತ್ರ ಆತನ ಕಣ್ಣಮುಂದೆ ಕಟ್ಟಿತು. ಅಲ್ಲಿ ಊಟದ ವೇಳೆಯಲ್ಲಿ ನಡೆದ ಮಾತುಕತೆ ಮತ್ತೆ ನೆನಪಿಗೆ ಬಂತು. ಆ ನೆನಪನ್ನು ಸವಿಯುತ್ತಿದ್ದ ಅಪ್ಪುವಿಗೆ ತಾಯಿ ತನ್ನ ಮುಂದೆಯೆ ನಿಂತಿದ್ದುದೂ ಕಾಣಿಸಲಿಲ್ಲ. {{gap}}"ಸಾರು ಬೇಕೇನೋ?" {{gap}}ಮಗನಿಂದ ಉತ್ತರ ಬರಲಿಲ್ಲವೆಂದು ಆಕೆ ಮತ್ತೊಮ್ಮೆ ಕೇಳಿದಳು: {{gap}}"ಬೇಕೇನೋ ಸಾರು" {{gap}}ಅಪು. ಬೆಚ್ಚಿಬಿದ್ದವನಂತೆ ತಲೆ ಎತ್ತಿದ. ತಾಯಿಯ ಮುಖವನ್ನು ಕಂಡು ನಕ್ಕು ಹೇಳಿದ:"ಬೇಡ." {{gap}}ಅಜ್ಜಿ ಮೊಮ್ಮಗನನ್ನು ನೋಡುತ್ತ ಕೇಳಿದಳು: {{gap}}"ಅದೇನು ಯೋಚ್ನೆ ಮಾಡ್ತಿದ್ದೆ?" {{gap}}"ಏನೂ ಇಲ್ಲಜ್ಜಿ"</br><noinclude></noinclude> 0f1y9scb62lpmoff0p9qcuq67lvm790 320289 320288 2026-05-16T08:46:50Z Pragathi. BH 7585 320289 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=೫೬|right=ಚಿರಸ್ಮರಣೆ}} {{gap}}ತನ್ನ ಪ್ರಶ್ನೆಯ ಅರ್ಥ ಅಪುವಿಗೆ ಹೇಗೆ ಆಗಬೇಕು?-ಅಜ್ಜಿ ನಕ್ಕಳು. {{gap}}ಅಪ್ಪುವಿನ ತಾಯಿ ಹೊರಗೆ ತಲೆ ಹಾಕಿ ಕೇಳಿದಳು: {{gap}}"ಮದ್ಯಾಹ್ನ ಊಟ ಮಾಡಿದ್ಯೆನೊ?" {{gap}}"ಹೂಂ..ಊಟ ಮಾಡದೆ ಇರ್ತಾರಾ ಯಾರಾದರೂ?" {{gap}}ತಂದೆ ಗೊಣಗಿದ: {{gap}}"ಮಹಾ ಅಧಿಕಪ್ರಸಂಗಿ,ಹೇಳಿದ್ದಕ್ಕೆಲಾ ಮರುಪ್ರಶ್ನೆ ಕೇಳದೆ ಇರೋದಿಲ್ಲ." {{gap}}"ಎಲ್ಲಿ ಮಾಡಿದೆ?" {{gap}}ಎಂದು ತಾಯಿ ಇನ್ನೊಂದು ಪ್ರಶ್ನೆ ಕೇಳಿದಳು. {{gap}}"ಚರ್ವತ್ತೂರಲ್ಲೇ.ಈಗ ನಿಮ್ಮದೆಲ್ಲಾ ಆಯ್ತೋ ಇಲ್ಲವೋ?" {{gap}}ಅಜ್ಜಿಗೆ ರೇಗಿತು; {{gap}}"ಫಟಿಂಗ! ನೋಡು.. ಅವನು ಪ್ರಶ್ನೆ ಕೇಳೋ ರೀತಿ... ಹುಂ.ಹುಡುಗರೆಲ್ಲ ಮನೆಗೆ ಬರದೆ ದೊಡ್ಡೋರು ಊಟ ಮಾಡ್ತಾರೇನೋ?" {{gap}}ಅಪ್ಪು ಸುಮ್ಮನಾದ. {{gap}}"ಹೋಗು ಕಂಬದ ಹಾಗೆ ನಿಂತ್ಕೋಬೇಡ. ಕೈಕಾಲು ತೊಳಕೋ.." ಎಂದು ತಂದೆ, ಎದು ಕುಳಿತುಕೊಳ್ಳುತ್ತ ಹೇಳಿದ. {{gap}}...ಅಲ್ಲೇ ಬಾಗಿಲು ಮರೆಮಾಡಿ, ಅಜ್ಜಿಯೂ ಮಗನೂ ಮೊಮ್ಮಗನೂ ಊಟಕ್ಕೆ ಕುಳಿತರು, ಅಪುವಿನ ತಾಯಿ ಆ ಮೂವರಿಗೂ ಬಡಿಸಿದಳು, ದಣಿದಿದ್ದ ಆತನಿಗೆ ಚೆನಾಗಿ ಹಸಿವೆಯಾಗಿತ್ತು, ಉಣ್ಣುತ್ತಲಿದ್ದಂತೆ, ಮಧಾಹ್ನ ಮಾಡಿದ ಊಟದ ಚಿತ್ರ ಆತನ ಕಣ್ಣಮುಂದೆ ಕಟ್ಟಿತು. ಅಲ್ಲಿ ಊಟದ ವೇಳೆಯಲ್ಲಿ ನಡೆದ ಮಾತುಕತೆ ಮತ್ತೆ ನೆನಪಿಗೆ ಬಂತು. ಆ ನೆನಪನ್ನು ಸವಿಯುತ್ತಿದ್ದ ಅಪ್ಪುವಿಗೆ ತಾಯಿ ತನ್ನ ಮುಂದೆಯೆ ನಿಂತಿದ್ದುದೂ ಕಾಣಿಸಲಿಲ್ಲ. {{gap}}"ಸಾರು ಬೇಕೇನೋ?" {{gap}}ಮಗನಿಂದ ಉತ್ತರ ಬರಲಿಲ್ಲವೆಂದು ಆಕೆ ಮತ್ತೊಮ್ಮೆ ಕೇಳಿದಳು: {{gap}}"ಬೇಕೇನೋ ಸಾರು" {{gap}}ಅಪು. ಬೆಚ್ಚಿಬಿದ್ದವನಂತೆ ತಲೆ ಎತ್ತಿದ. ತಾಯಿಯ ಮುಖವನ್ನು ಕಂಡು ನಕ್ಕು ಹೇಳಿದ:"ಬೇಡ." {{gap}}ಅಜ್ಜಿ ಮೊಮ್ಮಗನನ್ನು ನೋಡುತ್ತ ಕೇಳಿದಳು: {{gap}}"ಅದೇನು ಯೋಚ್ನೆ ಮಾಡ್ತಿದ್ದೆ?" {{gap}}"ಏನೂ ಇಲ್ಲಜ್ಜಿ"</br><noinclude></noinclude> 8kyy6gcpsy3eftszzwaolgbhuyqxqxh ಪುಟ:Chirasmarane-Niranjana.pdf/೫೬ 104 12875 320290 256357 2026-05-16T08:54:00Z Pragathi. BH 7585 /* Validated */ 320290 proofread-page text/x-wiki <noinclude><pagequality level="4" user="Pragathi. BH" />{{rh|left=ಚಿರಸ್ಮರಣೆ|right=೫೭}}</noinclude> {{gap}}"ಸುಳ್ಳು ಹೇಳ್ತೀಯಾ?" {{gap}} ಯಾವ ಸುಳ್ಳನ್ನು ಹೇಗೆ ಹೇಳಬೇಕೆಂದು ಯೋಚಿಸುತ್ತ ಅಪ್ಪುವೆಂದ: {{gap}}"ಮಾಸ್ತರು ಶಾಲೆ ವಿಷಯ ಅದೇನೋ ಹೇಳಿದ್ರು, ಅದು ನೆನಪಾಯ್ತ್ತು," {{gap}}"ಯಾವಾಗ ನೋಡಿದ್ರೂ ಮಾಸ್ತರು ಮಾಸ್ತರು: ಮಾಸ್ತರು ಅಂದ್ರೆ ಅದ್ಯಾಕೆ ಹೀಗೆ ಸಾಯ್ತೀರೋ?"-ತಂದೆ ಹೇಳಿದ. {{gap}}ತನ್ನ ಮಗನ ಮಾತನ್ನು ತಿದ್ದುವುದಕ್ಕೋ ಎಂಬಂತೆ ಅಜ್ಜಿ ಅಂದಳು: {{gap}}"ಒಳ್ಳೆಯವರು–ಪಾಪ!" {{gap}}ಅಪ್ಪುವಿನ ತಾಯಿ ಕೆಲವು ದಿವಸಗಳಿಂದ ತನ್ನ ಮನಸ್ಸನ್ನು ಕಾಡುತ್ತಿದ್ದೊಂದು ವಿಷಯ ಪ್ರಸ್ತಾಪಿಸಿದಳು; {{gap}}"ಮಾಸ್ತರು ಮೊನ್ನೆ, ಕುಟ್ಟಿಯನ್ನೂ ಶಾಲೆಗೆ ಕರಕೊಂಡ್ಬಾ; ಅಂತ ಚಿಕ್ಕವನ ಕೈಲಿ ಹೇಳಿದ್ರಂತೆ." {{gap}}ಕುಟ್ಟಿ ಅಪ್ಪುವಿನ ಕಿರಿಯ ತಮ್ಮ-ಅವರ ಬಳಗದಲ್ಲಿ ಮೂರನೆಯವನು. ತಾಯಿಯ ಮಾತಿಗೆ ತಂದೆ ಏನು ಹೇಳುವರೋ ಎಂದು ಕುತೂಹಲದಿಂದ ಅಪ್ಪು ಆತನ ಮುಖವನ್ನು ನೋಡಿದ. {{gap}}ಆಶ್ಚರ್ಯಪಡುವಂತಹ ಉತ್ತರವೇನೂ ಆತನಿಂದ ಬರಲಿಲ್ಲ. {{gap}}“ಕುಟ್ಟಿ ಈಗ್ಲೇ ಶಾಲೆಗೆ ಹೋಗಿ ಏನಂತೆ ಮಾಡೋದು? ಅವನಿಗಿನ್ನೂ ಆರು ವರ್ಷ. ಇಲ್ಲೇ ಇದ್ದರೆ ಹೋರಿಗಳನ್ನಾದರೂ ಒಂದಿಷ್ಟು ನೋಡ್ಕೊಬಹುದು. ಹುಡುಗರನ್ನೆಲ್ಲಾ ಕಳಿಸ್ಕೊಟ್ರೆ, ಇಲ್ಲಿ ಹೊಲದ ಕೆಲಸ ಮಾಡೋರು ಯಾರು? ಮಾಸ್ತರು ಮಾಡ್ತಾರೇನು ಬಂದು?" {{gap}}ಮಾಸ್ತರ ವಿಷಯದಲ್ಲಿ ತಂದೆ ಸಾಕಷ್ಟು ಅದರ ತೋರುತ್ತಲಿಲ್ಲ ಎಂದು ಅಪ್ಪುವಿನ ಮನಸ್ಸು ನೊಂದಿತು. ಅವನು ಅಸಹನೆಯಿಂದಲೇ ಅಂದ: {{gap}}"ಮಾಸ್ತರು ಯಾಕ್ಮಾಡ್ತಾರೆ ನಮ್ಮನೇ ಕೆಲಸ?" {{gap}}"ಮತ್ತೆ!" {{gap}}"ಕುಟ್ಟಿ ಶಾಲೆಗೆ ಹೋಗ್ಲಿ, ಇಲ್ಲಿ ನೋಡೊಳ್ಕೊದಕ್ಕೆ ನಾನಿದ್ದೇನಲ್ಲ?" {{gap}}ಆಗಲೇ ಕುಟ್ಟಿಯನ್ನು ಕಳುಹಿಸಿಕೊಡಲು ತಾಯಿಗೆ ಇಷ್ಟವಿರಲಿಲ್ಲವಾದರೂ ಅಪ್ಪು ಜವಾಬ್ದಾರಿಯ ಮಾತನ್ನಾಡಿದನೆಂದು ಆಕೆಗೆ ಸಂತೋಷವಾಯಿತು. {{gap}}ಆದರೆ ತಂದೆಗೆ ಹಾಗನಿಸಲಿಲ್ಲ, {{gap}}"ಓಹೋಹೋ.ಭಾರೀ ನೋಡ್ಕೋತಿದ್ದೀಯಾ ನೀನು. ಇವತ್ತೆಲ್ಲ ನೋಡ್ಕೊಂಡೇ ಇದ್ದೆ, ಅಲ್ಲ?"<noinclude></noinclude> quvoo70nue13zlvv3h5a1d0fdi3ickn ಪುಟ:Chirasmarane-Niranjana.pdf/೫೭ 104 12876 320291 256631 2026-05-16T08:54:44Z Pragathi. BH 7585 320291 proofread-page text/x-wiki <noinclude><pagequality level="3" user="Vinoda mamatharai" /></noinclude>೫೮ ಚಿರಸ್ಮರಣೆ {{gap}}ಅಪ್ಪು ಮಾತಾಡಲಿಲ್ಲ. ಆ ದಿನವೆಲ್ಲ ತಾನು ಮಾಡಿದ ಕೆಲಸಗಳು ಮತ್ತೆ ನೆನಪಿಗೆ ಬಂದು, ಆತ ಮೌನ ತಳೆದ. {{gap}}ಸ್ವಲ್ಪ ಹೊತ್ತಿನಲ್ಲಿ ಎಲ್ಲರ ಊಟವು ಮುಗಿಯಿತು.ಸೀಮೆಎಣ್ಣೆ ಖರ್ಚಾಗುತ್ತದೆಂದು ದೀಪ ಆರಿಸಿ ಎಲ್ಲರೂ ಮಲಗಿಕೊಂಡರು. {{gap}}ತ್ರಿಕರಪುರದಲ್ಲಿನ ತನ್ನ ಇನ್ನೊಬ್ಬಳು ಅಜ್ಜಿಯ ವಿಷಯ ಈ ಅಜ್ಜಿ ಪ್ರಾಸ್ತಾಪಿಸುವಳೇನೋ ಎಂದು ಅಪ್ಪು ನಿರೀಕ್ಷಿಸಿದ್ದ.ತನ್ನ ಅಮ್ಮನ ಅಮ್ಮನೂ ಅಪ್ಪನ ಅಮ್ಮನೂ ಸಣ್ಣಸಣ್ಣ ವಿಷಯಗಳನ್ನೆತ್ತಿಕೊಂಡು ಜಗಳಾಡುತ್ತಾರೆ ಎಂದು, ತನ್ನ ತಾಯಿ ಬೇಸರದಿಂದ ಒಮ್ಮೆ ಹೇಳಿದಿದ್ದು ಅಪ್ಪುವಿಗೆ ನೆನಪಿತ್ತು.ಅಲ್ಲದೆ, ಈ ಅಜ್ಜಿಯ ಜತೆಯಲ್ಲಿ ತಾನೂ ಒಮ್ಮೆ ತ್ರಿಕರಪುರಕ್ಕೆ ಹೋಗಿದ್ದಾಗ,ಅಂತಹ ಜಗಳವಾಗಿದ್ದುದನ್ನು ಆತ ಕಂಡಿದ್ದ. ಈ ಸಲವೂ ವಿರಸದ ಮಾತುಗಳಾಗಿ ಅಜ್ಜಿ ಬೇಗನೆ ಅಲ್ಲಿಂದ ಹೋರಟುಬಂದಿರಬಹುದೆ?ಎಂದು ತಿಳಿಯಲು ಅಪ್ಪು ಕುತೂಹಲಿಯಾಗಿದ್ದ. ಎಳೆಯ ಮಕ್ಕಳ ಹಾಗೆ ವಯಸ್ಸಾದವರೂ ಆಡಿಕೊಳ್ಳುವ ಜಗಳ ತಮಾಷೆಯಾಗಿರುತ್ತಿತ್ತು. ಆದರೆ ಅಜ್ಜಿ ಮೌನವಾಗಿಯೆ ಇದ್ದುದನ್ನು ಕಂಡು ಅಪ್ಪುವಿಗೆ ನಿರಾಸೆಯಾಯಿತು. ಈಗಾಗಲೇ ಒಮ್ಮೆ ತನ್ನ ತಂದೆಗೂ ತಾಯಿಗೂ ಎಲ್ಲ ವಿಷಯಗಳನ್ನೂ ಅಜ್ಜಿ ಹೇಳಿರಬೇಕು;ಪುನಃ ಅದನ್ನೇ ಈಗ ಹೇಳಲಾರಳು: ನಾಳೆ ಹಗಲುಹೊತ್ತು ಆಕೆಯೊಬ್ಬಳೊಡನೆಯೇ ಹರಟೆ ಹೊಡೆಯುತ್ತ ಆ ಊರಿನ ಸಮಾಚಾರ ತಿಳಿಯಬೇಕು-ಎಂದು ಲೆಕ್ಕಹಾಕಿದ.ಆದರೆ ಒಂದು ವಿಷಯವನ್ನು ಮಾತ್ರ ಈಗಲೇ ಪ್ರಾಸ್ತಾಪಿಸಬೇಕೆನ್ನಿಸಿತು.ಅದು , ತ್ರಿಕರಪುರದಲ್ಲಿ ಆತನಿಗಿದ್ದ ಒಬ್ಬನೇ ಸ್ನೇಹಿತನೂ ಓರಗೆಯ ಸಂಬಂಧಿಕನೂ ಆದ ಚಂದುವಿನ ವಿಷಯ, {{gap}}"ಅಜ್ಜೀ..." ಅಜ್ಜಿಗೆ ನಿದ್ದೆ ಬಂದಿರಲಿಲ್ಲ, ಸಮೀಪದಲ್ಲೇ ಇದ್ದ ಆಕೆ ಮಗ್ಗಲು ಹೊರಳಿ ಕೇಳಿದಳು: "ಏನೋ ? ನಿದ್ದೆ ಬಂದಿಲ್ವೇನೋ?" "ಇಲ್ಲ ಅಜ್ಜೀ.." "ಹೆದರಿಕೆಯಾಗ್ತದೇನೋ?ನನ್ನ ಹತ್ತಿರ ಮಲಕೋತ್ಯಾ? "ಅಪ್ಪುವಿಗೆ ನಗು ಬಂತು.ಅಜ್ಜಿಯ ದೃಷ್ಟಿಯಲ್ಲಿ ತಾನಿನ್ನೂ ಎಳೆಯ ಕೂಸೇ. "ಊಹು೦.. ಅದಲ್ಲ ಅಜ್ಜಿ, ಚಂದೂನ ನೋಡಿದ್ಯಾ?" ಮೊಮ್ಮಗ ಹತ್ತಿರ ಬರಲಿಲ್ಲವೆಂದು ಬೇಸರಗೊಂಡರೂ ವೃದ್ಧೆ ಹೇಳಿದಳು: "ಹೂ೦ ಕಣೋ, ಚೆನ್ನಾಗಿದ್ದಾನೆ."<noinclude></noinclude> omikrjgkr1q9ateusljalqzuusn01er 320292 320291 2026-05-16T08:57:17Z Pragathi. BH 7585 /* Validated */ 320292 proofread-page text/x-wiki <noinclude><pagequality level="4" user="Pragathi. BH" />{{rh|left=೫೮|right=ಚಿರಸ್ಮರಣೆ}}</noinclude> {{gap}}ಅಪ್ಪು ಮಾತಾಡಲಿಲ್ಲ. ಆ ದಿನವೆಲ್ಲ ತಾನು ಮಾಡಿದ ಕೆಲಸಗಳು ಮತ್ತೆ ನೆನಪಿಗೆ ಬಂದು, ಆತ ಮೌನ ತಳೆದ. {{gap}}ಸ್ವಲ್ಪ ಹೊತ್ತಿನಲ್ಲಿ ಎಲ್ಲರ ಊಟವು ಮುಗಿಯಿತು.ಸೀಮೆಎಣ್ಣೆ ಖರ್ಚಾಗುತ್ತದೆಂದು ದೀಪ ಆರಿಸಿ ಎಲ್ಲರೂ ಮಲಗಿಕೊಂಡರು. {{gap}}ತ್ರಿಕರಪುರದಲ್ಲಿನ ತನ್ನ ಇನ್ನೊಬ್ಬಳು ಅಜ್ಜಿಯ ವಿಷಯ ಈ ಅಜ್ಜಿ ಪ್ರಾಸ್ತಾಪಿಸುವಳೇನೋ ಎಂದು ಅಪ್ಪು ನಿರೀಕ್ಷಿಸಿದ್ದ.ತನ್ನ ಅಮ್ಮನ ಅಮ್ಮನೂ ಅಪ್ಪನ ಅಮ್ಮನೂ ಸಣ್ಣಸಣ್ಣ ವಿಷಯಗಳನ್ನೆತ್ತಿಕೊಂಡು ಜಗಳಾಡುತ್ತಾರೆ ಎಂದು, ತನ್ನ ತಾಯಿ ಬೇಸರದಿಂದ ಒಮ್ಮೆ ಹೇಳಿದಿದ್ದು ಅಪ್ಪುವಿಗೆ ನೆನಪಿತ್ತು.ಅಲ್ಲದೆ, ಈ ಅಜ್ಜಿಯ ಜತೆಯಲ್ಲಿ ತಾನೂ ಒಮ್ಮೆ ತ್ರಿಕರಪುರಕ್ಕೆ ಹೋಗಿದ್ದಾಗ,ಅಂತಹ ಜಗಳವಾಗಿದ್ದುದನ್ನು ಆತ ಕಂಡಿದ್ದ. ಈ ಸಲವೂ ವಿರಸದ ಮಾತುಗಳಾಗಿ ಅಜ್ಜಿ ಬೇಗನೆ ಅಲ್ಲಿಂದ ಹೋರಟುಬಂದಿರಬಹುದೆ?ಎಂದು ತಿಳಿಯಲು ಅಪ್ಪು ಕುತೂಹಲಿಯಾಗಿದ್ದ. ಎಳೆಯ ಮಕ್ಕಳ ಹಾಗೆ ವಯಸ್ಸಾದವರೂ ಆಡಿಕೊಳ್ಳುವ ಜಗಳ ತಮಾಷೆಯಾಗಿರುತ್ತಿತ್ತು. ಆದರೆ ಅಜ್ಜಿ ಮೌನವಾಗಿಯೆ ಇದ್ದುದನ್ನು ಕಂಡು ಅಪ್ಪುವಿಗೆ ನಿರಾಸೆಯಾಯಿತು. ಈಗಾಗಲೇ ಒಮ್ಮೆ ತನ್ನ ತಂದೆಗೂ ತಾಯಿಗೂ ಎಲ್ಲ ವಿಷಯಗಳನ್ನೂ ಅಜ್ಜಿ ಹೇಳಿರಬೇಕು;ಪುನಃ ಅದನ್ನೇ ಈಗ ಹೇಳಲಾರಳು: ನಾಳೆ ಹಗಲುಹೊತ್ತು ಆಕೆಯೊಬ್ಬಳೊಡನೆಯೇ ಹರಟೆ ಹೊಡೆಯುತ್ತ ಆ ಊರಿನ ಸಮಾಚಾರ ತಿಳಿಯಬೇಕು-ಎಂದು ಲೆಕ್ಕಹಾಕಿದ.ಆದರೆ ಒಂದು ವಿಷಯವನ್ನು ಮಾತ್ರ ಈಗಲೇ ಪ್ರಾಸ್ತಾಪಿಸಬೇಕೆನ್ನಿಸಿತು.ಅದು , ತ್ರಿಕರಪುರದಲ್ಲಿ ಆತನಿಗಿದ್ದ ಒಬ್ಬನೇ ಸ್ನೇಹಿತನೂ ಓರಗೆಯ ಸಂಬಂಧಿಕನೂ ಆದ ಚಂದುವಿನ ವಿಷಯ, {{gap}}"ಅಜ್ಜೀ..." {{gap}}ಅಜ್ಜಿಗೆ ನಿದ್ದೆ ಬಂದಿರಲಿಲ್ಲ, ಸಮೀಪದಲ್ಲೇ ಇದ್ದ ಆಕೆ ಮಗ್ಗಲು ಹೊರಳಿ ಕೇಳಿದಳು: {{gap}}"ಏನೋ ? ನಿದ್ದೆ ಬಂದಿಲ್ವೇನೋ?" {{gap}}"ಇಲ್ಲ ಅಜ್ಜೀ.." {{gap}}"ಹೆದರಿಕೆಯಾಗ್ತದೇನೋ?ನನ್ನ ಹತ್ತಿರ ಮಲಕೋತ್ಯಾ? {{gap}}"ಅಪ್ಪುವಿಗೆ ನಗು ಬಂತು.ಅಜ್ಜಿಯ ದೃಷ್ಟಿಯಲ್ಲಿ ತಾನಿನ್ನೂ ಎಳೆಯ ಕೂಸೇ. {{gap}}"ಊಹುಂ.. ಅದಲ್ಲ ಅಜ್ಜಿ, ಚಂದೂನ ನೋಡಿದ್ಯಾ?" ಮೊಮ್ಮಗ ಹತ್ತಿರ ಬರಲಿಲ್ಲವೆಂದು ಬೇಸರಗೊಂಡರೂ ವೃದ್ಧೆ ಹೇಳಿದಳು: {{gap}}"ಹೂಂ ಕಣೋ, ಚೆನ್ನಾಗಿದ್ದಾನೆ."<noinclude></noinclude> ajxub3wwbxho6secduyvrip88x62wwr ಪುಟ:Chirasmarane-Niranjana.pdf/೫೮ 104 12877 320293 256632 2026-05-16T08:59:31Z Pragathi. BH 7585 /* Validated */ 320293 proofread-page text/x-wiki <noinclude><pagequality level="4" user="Pragathi. BH" />{{rh|left=ಚಿರಸ್ಮರಣೆ|right=೫೯}}</noinclude> {{gap}}"ನನ್ನ ವಿಷಯ ಏನಾದರೂ ಕೇಳಿದ್ನಾ?" {{gap}}"ನಿನ್ನ ವಿಷಯ ಹೇಳೋಕೆ ಕೇಳೋಕೆ ಅಂಥಾದೇನೋ ಇರೋದು?" {{gap}}ವಿಷಯಗಳೆಷ್ಟೋ ಇದ್ದುವು.ಅಜ್ಜಿಗೆ ಗೊತ್ತಿರಲಿಲ್ಲ,ಅಷ್ಟೆ.ಆಕೆಯ ಅಜ್ಞಾನಕ್ಕಾಗಿ ಕನಿಕರಿಸಿ ಅಪ್ಪು ಸಣ್ಣಗೆ ನಕ್ಕ. {{gap}}ಮೊಮ್ಮಗ ಸುಮ್ಮನಿದ್ದುದನ್ನು ಕಂಡು ಅಜ್ಜಿಯೇ ಹೇಳಿದಳು: {{gap}}"ಚಂದು ಈಗ ಬೀಡಿಯಂಗಡಿ ಇಟ್ಟಿದ್ದಾನೆ. ದಿನಕ್ಕೆ ಎರಡಾಣೆ ಮೂರಾಣೆ ಸಂಪಾದನೆಯಾಗ್ತದೆ." {{gap}}"ಓ!" ಎಂದು ಅಪ್ಪು ಉದ್ಗಾರವೆತ್ತಿದ. {{gap}}ಈ ಸಂಭಾಷಣೆಯೊಂದು ಇಷ್ಟವಾಗದೆ ಆತನ ತಂದೆಯೆಂದ: {{gap}}"ಸಾಕು ಮಾತಾಡಿದ್ದು, ಮಲಕ್ಕೊಳ್ಳಿ!" {{gap}}ಮತ್ತೆ ಅಪ್ಪು ಮಾತನಾಡಲಿಲ್ಲ.ಅಜ್ಜಿಯೂ ಮುಂದುವರಿಯಲಿಲ್ಲ. {{gap}}ಚಂದುವಿನ ಬಗೆಗೆ ಅಜ್ಜಿ ಕೊಟ್ಟ,ಸುದ್ದಿಯನ್ನು ಅಪ್ಪು ಮೆಲುಕುಹಾಕಿದ.ಆತನ ನೆನಪಿನ ಚಿತ್ರಶಾಲೆಯೊಳಗೆ ನುಸುಳಿಬಿಟ್ಟಿದ್ದ,ಚಂದು.ಒಮ್ಮೆಲೆ ಅಪ್ಪುವಿಗೆ, ಚಂದುವನ್ನು ಕಾಣಬೇಕೆಂಬ ಬಯಕೆಯಾಯಿತು. ಆತನೊಡನೆ ಮಾತನಾಡುವುದು ಸುಲಭ. ಅವನು ಚಿರುಕಂಡನ ಹಾಗಲ್ಲ. ತನ್ನ ಈಗಿನ ಅನುಭವಗಳನ್ನೆಲ್ಲ, ತಲೆಯೊಳಗೆ ಸುತ್ತುತ್ತಿದ್ದ ವಿಚಾರಗಳನ್ನೆಲ್ಲ ಚಂದುಗೆ ಹೇಳಿದರೆ,ಆತ ಎಲ್ಲವನ್ನೂ ಕೇಳಿ ಬೆಕ್ಕಸಬೆರಗಾಗುವುದು ಖಂಡಿತ.ತಾನು ಆತನ ದೃಷ್ಟಿಯಲ್ಲಿ ಪ್ರಮುಖನಾಗಿ ತೋರುವುದರಲ್ಲಿ ಸಂದೇಹವಿಲ್ಲ. {{gap}}ಆ ಬೆಳಗ್ಗೆ ಬೇಗನೆ ಏಳಬೇಕೆಂದು ಹಿಂದಿನ ರಾತ್ರೆ ಚಿರುಕಂಡ ಹೇಳಿದ್ದರೂ ಏಳುವೆನೆಂದು ತಾನು ಮಾತುಕೊಟ್ಟಿದ್ದರೂ ಅಪ್ಪುವಿಗೆ ಎಚ್ಚರವಾಗಿರಲಿಲ್ಲ, ಚಿರುಕಂಡನೇ ಬಂದು ಎಬ್ಬಿಸಿದ್ದ. ತಾಯಿ, ಬೇಯಿಸಿದ ನೇಂದ್ರಬಾಳೆಯ ಹಣ್ಣುಗಳನ್ನು ತಮಗೆ ಕೊಟ್ಟಿದ್ದಳು. ಆಲ್ಲಿಂದ ಅವರಿಬ್ಬರೂ ಹೊರಟಿದ್ದರು. ಯಾವುದೋ ದೇಶಕ್ಕೆ ಯಾತ್ರೆ ಹೋದಹಾಗೆ, ನದಿ ದಾಟಿದುದು, ಚಹದಂಗಡಿ ರಾಮುಣ್ಣಿ, ಧಾಂಡಿಗ-ಬಳಿಕ ತಾವು ಕಂಡ ನಾಯಕ ಪಂಡಿತರು, ಜಮೀನ್ದಾರರ ಬಂಟನೊಬ್ಬ ಕೆಮ್ಮುತ್ತ ಬಂದುದು,ಆ ಊಟ,ಪಂಡಿತರು, ನಡೆಸಿದ ಸಭೆ.... ಒಂದೊಂದೂ ಎಂತಹ ಅನುಭವವಾಗಿತ್ತು! ಈ ದಿನವೇ ಬೆಳಗ್ಗಿನಿಂದ ಹಿಡಿದು ಸಂಜೆಯೊಳಗೆ ಇಷ್ಟೆಲ್ಲ ಆಯಿತೆ? ಎಂಬುದನ್ನು ನಂಬುವಂತೆಯೇ ಇರಲಿಲ್ಲ.ಆದರೂ ಅದು ನಿಜವಾಗಿತ್ತು.ಜನರ ಸಂಘಟನೆ,ಹೋರಾಟ,ಕ್ರಾಂತಿ,ದೇಶದ ಸ್ವಾತಂತ್ರ್ಯ.... ಪಂಡಿತರ ವಾತ್ಸಲ್ಯಪೂರ್ಣ ದೃಷ್ಟಿ.... ಆ ಧಾಂಡಿಗ...<noinclude></noinclude> 62ltu9rbzfdx6snwxkuvtulf4see2ur ಪುಟ:Chirasmarane-Niranjana.pdf/೫೯ 104 12878 320294 256633 2026-05-16T09:02:47Z Pragathi. BH 7585 320294 proofread-page text/x-wiki <noinclude><pagequality level="3" user="Vinoda mamatharai" />{{rh|left=೬೦|right=ಚಿರಸ್ಮರಣೆ}}</noinclude> {{gap}}ಧಾಂಡಿಗನ ಯೋಚನೆ ಬಂದಾಗ ಅಪ್ಪು ಸದ್ದು ಮಾಡದೆ ಕತ್ತಲಲ್ಲೆ ನಕ್ಕ. ನೋಡಲು ಭಯೋತ್ಪಾದಕ. ಮನಸ್ಸು ಮಗುವಿನ ಹಾಗೆ. ಆಡುತ್ತಿದ್ದುದೆಲ್ಲ ಪರಿಹಾಸ್ಯದ ಮಾತು. ಒಂದೊಂದನ್ನು ಕೇಳಿದಾಗಲೂ ನಗುಬರುತ್ತಿತ್ತು. {{gap}}ಅಪ್ಪು ಈಗ ನಕ್ಕಾಗ ಸದ್ದಾಗಿರಲಿಲ್ಲ, ನಿಜ. ಆದರೆ ದೇಹ ಕುಲುಕಿ ಮಿಸುಕಿದ ಹಾಗಾಯಿತು. {{gap}}ಹೊರಗಿನ ಬೆಳದಿಂಗಳು ಒಳಗೆ ತೂರಿ ಉಂಟಾದ ಮಬ್ಬು ಬೆಳಕಿನಲ್ಲಿ ಆ ಸೂಕ್ಷ್ಮ ಚಲನವನ್ನು ಇನ್ನೂ ಎಚ್ಚರವಿದ್ದ ಆತನ ತಂದೆ ಗಮನಿಸಿ ಹೇಳಿದ: {{gap}}"ಅಪ್ಪು, ನಿದ್ದೆ ಬಂದಿಲ್ವೇನೋ?" {{gap}}ಅಪ್ಪು ಉಸಿರು ಬಿಗಿಹಿಡಿದ. ಮಾತನಾಡಲಿಲ್ಲ, ಹುಡುಗ ನಿದ್ದೆಹೋಗಿರಬೇಕು, ಎಂದುಕೊಂಡ ತಂದೆ. {{gap}}ಆದರೆ ಅಜ್ಜಿ ತನ್ನ ಮಗನನ್ನು ಕೇಳಿದಳು: {{gap}}"ನಿನಗೆ ನಿದ್ದೆ ಬಂದಿಲ್ವ ಇನ್ನೂ?" {{gap}}"ಇಲ್ಲ..." ಎಂದ ತಂದೆ ಕ್ಷೀಣಸ್ವರದಲ್ಲಿ. {{gap}}"ಏನು ಯೋಚಿಸ್ತಿದ್ದೀಯಾ?" {{gap}}"ಏನೂ ಇಲ್ಲ." {{gap}}ಹಾಗೆ ಹೇಳಿದಮೇಲೆ ಒಂದು ನಿಮಿಷ ಸುಮ್ಮನಿದ್ದು ತಂದೆಯೇ ಅಂದ: {{gap}}"ಏನಾದರೂ ಮಾಡಿ ಅಪ್ಪೂನ ನೀಲೇಶ್ವರದ ಹೈಸ್ಕೂಲಿಗೆ ಕಳಿಸ್ಬೇಕಾಗಿತ್ತಮ್ಮ. ಮೆಟ್ರಕ್ಕು ಮಾಡ್ಕೊಂಡಿದ್ರೆ ಮಾಸ್ತರ ಕೆಲಸ ಸುಲಭವಾಗಿ ಸಿಗ್ತಾ ಇತ್ತು. ಈ ಗೇಣಿ ಹೊಲ ನೆಚ್ಕೊಂಡು ಎಷ್ಟು ಜನ ಇರೋಕಾಗ್ತದೆ?" {{gap}}ಮಗನ ಮಾತು ನಿಜವೆಂದು ತಿಳಿದಿದ್ದ ಅಜ್ಜಿ ಮರುಮಾತನಾಡಲಿಲ್ಲ. ತಂದೆಯೇ ಮುಂದುವರಿಸಿದ: {{gap}}"ಈಗೇನೂ ಮಾಡೋಹಾಗಿಲ್ಲ. ಹೊಲಕ್ಕಾದರೂ ಅವನನ್ನು ದಿನಾ ಕರಕೊಂಡು ಹೋಗ್ಬೇಕು. ಇಲ್ದಿದ್ರೆ ಮೈಗಳ್ಳನಾಗ್ತಾನೆ. ಪೋಲಿ ಸಹವಾಸಕ್ಕೆ ಬಿದ್ದು ಕೆಟ್ಟ್ ಹೋಗ್ತಾನೆ...." {{gap}}ಅಜ್ಜಿಯೆಂದಳು:"ಹಾಗೇ ಮಾಡಿದರಾಯ್ತು. ಈಗ ಅದೆಲ್ಲಾ ಯೋಚ್ನೆ ಮಾಡ್ದೆ ಸುಮ್ನೆ ಮಲಕೋ ನೀನು." {{gap}}ಮತ್ತೆ ಮೌನ ನೆಲಸಿತು. ತಂದೆಯ ಮಾತುಗಳನ್ನು ಕೇಳಿ ಅಪ್ಪುವಿನ ಹೃದಯದಲ್ಲಿ ವಿವಿಧ ಭಾವನೆಗಳು ಮೂಡಿದುವು. ತನ್ನ ಬಗೆಗೆ, ಭವಿತವ್ಯದ ಬಗೆಗೆ, ತಂದೆ ಅಷ್ಟೊಂದು ಆಳವಾಗಿ ಯೋಚಿಸುತ್ತಿದ್ದನೆಂಬ ವಿಷಯವೇ ಆತನಿಗೆ<noinclude></noinclude> 7cwfqsmqdmfrjr84ei84rmv5swonntp 320295 320294 2026-05-16T09:03:51Z Pragathi. BH 7585 /* Validated */ 320295 proofread-page text/x-wiki <noinclude><pagequality level="4" user="Pragathi. BH" />{{rh|left=೬೦|right=ಚಿರಸ್ಮರಣೆ}}</noinclude> {{gap}}ಧಾಂಡಿಗನ ಯೋಚನೆ ಬಂದಾಗ ಅಪ್ಪು ಸದ್ದು ಮಾಡದೆ ಕತ್ತಲಲ್ಲೆ ನಕ್ಕ. ನೋಡಲು ಭಯೋತ್ಪಾದಕ. ಮನಸ್ಸು ಮಗುವಿನ ಹಾಗೆ. ಆಡುತ್ತಿದ್ದುದೆಲ್ಲ ಪರಿಹಾಸ್ಯದ ಮಾತು. ಒಂದೊಂದನ್ನು ಕೇಳಿದಾಗಲೂ ನಗುಬರುತ್ತಿತ್ತು. {{gap}}ಅಪ್ಪು ಈಗ ನಕ್ಕಾಗ ಸದ್ದಾಗಿರಲಿಲ್ಲ, ನಿಜ. ಆದರೆ ದೇಹ ಕುಲುಕಿ ಮಿಸುಕಿದ ಹಾಗಾಯಿತು. {{gap}}ಹೊರಗಿನ ಬೆಳದಿಂಗಳು ಒಳಗೆ ತೂರಿ ಉಂಟಾದ ಮಬ್ಬು ಬೆಳಕಿನಲ್ಲಿ ಆ ಸೂಕ್ಷ್ಮ ಚಲನವನ್ನು ಇನ್ನೂ ಎಚ್ಚರವಿದ್ದ ಆತನ ತಂದೆ ಗಮನಿಸಿ ಹೇಳಿದ: {{gap}}"ಅಪ್ಪು, ನಿದ್ದೆ ಬಂದಿಲ್ವೇನೋ?" {{gap}}ಅಪ್ಪು ಉಸಿರು ಬಿಗಿಹಿಡಿದ. ಮಾತನಾಡಲಿಲ್ಲ, ಹುಡುಗ ನಿದ್ದೆಹೋಗಿರಬೇಕು, ಎಂದುಕೊಂಡ ತಂದೆ. {{gap}}ಆದರೆ ಅಜ್ಜಿ ತನ್ನ ಮಗನನ್ನು ಕೇಳಿದಳು: {{gap}}"ನಿನಗೆ ನಿದ್ದೆ ಬಂದಿಲ್ವ ಇನ್ನೂ?" {{gap}}"ಇಲ್ಲ..." ಎಂದ ತಂದೆ ಕ್ಷೀಣಸ್ವರದಲ್ಲಿ. {{gap}}"ಏನು ಯೋಚಿಸ್ತಿದ್ದೀಯಾ?" {{gap}}"ಏನೂ ಇಲ್ಲ." {{gap}}ಹಾಗೆ ಹೇಳಿದಮೇಲೆ ಒಂದು ನಿಮಿಷ ಸುಮ್ಮನಿದ್ದು ತಂದೆಯೇ ಅಂದ: {{gap}}"ಏನಾದರೂ ಮಾಡಿ ಅಪ್ಪೂನ ನೀಲೇಶ್ವರದ ಹೈಸ್ಕೂಲಿಗೆ ಕಳಿಸ್ಬೇಕಾಗಿತ್ತಮ್ಮ. ಮೆಟ್ರಕ್ಕು ಮಾಡ್ಕೊಂಡಿದ್ರೆ ಮಾಸ್ತರ ಕೆಲಸ ಸುಲಭವಾಗಿ ಸಿಗ್ತಾ ಇತ್ತು. ಈ ಗೇಣಿ ಹೊಲ ನೆಚ್ಕೊಂಡು ಎಷ್ಟು ಜನ ಇರೋಕಾಗ್ತದೆ?" {{gap}}ಮಗನ ಮಾತು ನಿಜವೆಂದು ತಿಳಿದಿದ್ದ ಅಜ್ಜಿ ಮರುಮಾತನಾಡಲಿಲ್ಲ. ತಂದೆಯೇ ಮುಂದುವರಿಸಿದ: {{gap}}"ಈಗೇನೂ ಮಾಡೋಹಾಗಿಲ್ಲ. ಹೊಲಕ್ಕಾದರೂ ಅವನನ್ನು ದಿನಾ ಕರಕೊಂಡು ಹೋಗ್ಬೇಕು. ಇಲ್ದಿದ್ರೆ ಮೈಗಳ್ಳನಾಗ್ತಾನೆ. ಪೋಲಿ ಸಹವಾಸಕ್ಕೆ ಬಿದ್ದು ಕೆಟ್ಟ್ ಹೋಗ್ತಾನೆ...." {{gap}}ಅಜ್ಜಿಯೆಂದಳು:"ಹಾಗೇ ಮಾಡಿದರಾಯ್ತು. ಈಗ ಅದೆಲ್ಲಾ ಯೋಚ್ನೆ ಮಾಡ್ದೆ ಸುಮ್ನೆ ಮಲಕೋ ನೀನು." {{gap}}ಮತ್ತೆ ಮೌನ ನೆಲಸಿತು. ತಂದೆಯ ಮಾತುಗಳನ್ನು ಕೇಳಿ ಅಪ್ಪುವಿನ ಹೃದಯದಲ್ಲಿ ವಿವಿಧ ಭಾವನೆಗಳು ಮೂಡಿದುವು. ತನ್ನ ಬಗೆಗೆ, ಭವಿತವ್ಯದ ಬಗೆಗೆ, ತಂದೆ ಅಷ್ಟೊಂದು ಆಳವಾಗಿ ಯೋಚಿಸುತ್ತಿದ್ದನೆಂಬ ವಿಷಯವೇ ಆತನಿಗೆ<noinclude></noinclude> 2luzyhaj3f5p3exe5zft8icq5brwps0 ಪುಟ:Chirasmarane-Niranjana.pdf/೬೦ 104 12879 320296 256637 2026-05-16T09:05:04Z Pragathi. BH 7585 /* Validated */ 320296 proofread-page text/x-wiki <noinclude><pagequality level="4" user="Pragathi. BH" /></noinclude>ಚಿರಸ್ಮರಣೆ ೬೧ ತಿಳಿದಿರಲಿಲ್ಲ. ಈ ರಾತ್ರಿಯೂ, ತನಗೆ ಎಚ್ಚರವಿದ್ದುದು ಗೊತ್ತಿದ್ದರೆ ಆತ ಮಾತನಾಡುತ್ತಲೇ ಇರಲ್ಲಿವೇನೋ..ಹೈಸ್ಕೂಲಿಗೆ ಕಳಿಸದೇ ಇದ್ದುದು ತಪ್ಪು ಎನ್ನುತ್ತಾನೆ ತಂದೆ. ಹಾಗೆ ಆತ ಹೇಳಿದುದೇ ಎಷ್ಟೋ ಸಮಾಧಾನದ ವಿಷಯ. ತಾನು ಮತ್ತು ಉಪಾಧ್ಯಾಯ ವೃತ್ತಿ !ತಮ್ಮ ಪ್ರೀತಿಪಾತ್ರ ಮಾಸ್ತರರ ಹಾಗೆ ತಾನೂ ಹುಡುಗರಿಗೆ ಪಾಠ ಹೇಳಿಕೊಡುವುದು. ಆ ಯೋಚನೆ ಸಾರಸ್ಯಕರವಾಗಿತ್ತು. ಆ ಬಳಿಕ ತಂದೆ ವ್ಯಕ್ತಪಡಿಸಿದ ಭೀತಿ -ತಾನು ಮೈಗಳ್ಳನಾಗುವುದು ಇಲ್ಲವೆ ಪೋಲಿ ಸಹವಾಸಕ್ಕೆ ಬಿದ್ದು ಕೆಟ್ಟುಹೋಗುವುದು. ತಾನು ಮತ್ತು ಮೈಗಳ್ಳತನ-ಪೋಲಿ ಸಹವಾಸ... ತಂದೆ ಹಾಗೆ ಹೇಳಿದನೆಂದು ಅಪ್ಪುವಿಗೆ ಕೆಡುಕೆನಿಸಿತು. ಆದರೆ ತಾನು ಪೋಲಿಯಾಗುವುದನ್ನು ಚಿತ್ರಿಸಿಕೊಂಡು ನಗುಬಂತು.. ಮಿಂಚಿಹೋದುದಕ್ಕೆ ಚಿಂತಿಸಿ ಫಲವಿಲ್ಲ-ಎನ್ನುವಂತೆ ತಂದೆ ಮಾತನಾಡಿದ. ಅರ್ಥವಿಲ್ಲದ ಮಾತು. ಏನೂ ಮಿಂಚಿಹೋಗಿರಲಿಲ್ಲ, ಪ್ರತಿಯೊಂದು ಇದೇ ಈಗ ಆರಂಭವಾಗಿತ್ತು. ಇದೇ ಈಗ. {{gap}}ತನ್ನ ಮನಸ್ಸಿನಲ್ಲಿದುದನ್ನೆಲ್ಲ ತನ್ನ ಯೋಚನೆಗಳನ್ನೆಲ್ಲ, ತಂದೆಗೆ ಹೇಳಬೇಕೆಂದು ಅಪ್ಪುವಿಗೆ ಆಸೆಯಾಯಿತು. ಆದರೆ ಆ ಆಸೆಯ ಜತೆಯಲ್ಲೆ, ಆತ ತನಗೆ ಅಡ್ಡಿ ಒಡ್ಡಬಹುದೆಂಬ ಭಯ ಮೂಡಿತು. {{gap}}ಅಪ್ಪು ನಿಧಾನವಾಗಿ ಯೋಚಿಸಿದ; {{gap}}ತನ್ನ ಪಾಲಿಗೆ ಶಾಲೆಯ ಓದು ಇನ್ನಿಲ್ಲವಾದರೂ ತಾನು ಓದಬೇಕು; ತುಂಬಾ ಓದಬೇಕು. ತಾನು ದುಡಿಯಬೇಕು; ತುಂಬಾ ದುಡಿಯಬೇಕು. ತನ್ನ ಮನೆಗೋಸ್ಕರ ಮಾತ್ರವಲ್ಲ, ಜನರಿಗೋಸ್ಕರ-ರಾಷ್ಟಕ್ಕೋಸ್ಕರ ದುಡಿಯಬೇಕು. ಸಾಹಸದ ಕೆಲಸಗಳನ್ನು ಮಾಡಿ ತಾನು ಒಳ್ಳೆಯವನಾಗಿ ಪ್ರಸಿದ್ಧಿಗೆ ಬರಬೇಕು-ಮಾಸ್ತರರ ಹಾಗೆ. ಪಂಡಿತರ ಹಾಗೆ, ಅವರು ಹೇಳಿದ ಎಷ್ಟೋ ವೀರರ ಹಾಗೆ. ಪೋಲಿ! ಪೋಲಿಯಲ್ಲ - ಕ್ರಾಂತಿಕಾರಿ ತಾನು...! {{gap}}...ತಣ್ಣನೆ ಗಾಳಿ... ಹಸುರು ಬಯಲು... ತುಂಬಿ ಹರಿಯುವ ನದಿ. ಬಾಣದಂತೆ ಅದನ್ನು ಸೀಳಿ ದಾಟುತ್ತಿದ್ದ ಪುಟ್ಟ ದೋಣಿ... ಅದರಲ್ಲಿ ಸಾಹಸಿಯಾದ ತಾನು -ತಾನೊಬ್ಬನೆ-ಅಪ್ಪುವೊಬ್ಬನೇ... {{gap}}ತಿಳಿವು, ಕಲ್ಪನೆ ಭ್ರಮೆಗಳೊಡನೆ ಬೆರೆತು ಕರಗಿ ಮಾಯವಾಯಿತು. ಅರಿವು, ತೂಗುಸೇತುವೆಯಲ್ಲಿ ಜೋಲಿ ಹೊಡೆಯುತ್ತ ಮರೆವಿನೊಡನೆ ಸೇರಿಕೊಂಡಿತು. {{gap}}ಅಪ್ಪುವಿಗೆ ನಿದ್ದೆ ಬಂತು.<noinclude></noinclude> cw6ic1npqw74ddgimm84isnks6ogeah ಪುಟ:Chirasmarane-Niranjana.pdf/೬೧ 104 12880 320297 256638 2026-05-16T09:08:00Z Pragathi. BH 7585 /* Validated */ 320297 proofread-page text/x-wiki <noinclude><pagequality level="4" user="Pragathi. BH" /></noinclude>{{center|೫}} ಅಪು, ನಿದ್ದೆಹೋದ ಹೊತ್ತಿಗಿನ್ನೂ ಚಿರುಕಂಡ ಎಚ್ಚರವಾಗಿಯೆ ಇದ್ದ, ದೀಪ ವಿರಲಿಲ್ಲ, ಮಲಗಿದ್ದರು ನಿಜ. ಆದರೂ ಚಿರುಕಂಡನ ತಾಯಿ ತಂದೆ ಇಳಿಸ್ವರದಲ್ಲಿ ಮಾತುಕತೆ ನಡೆಸಿಯೇ ಇದ್ದರು. ಆತ ಅದನ್ನು ಕೇಳುತ್ತಲೇ ಇದ್ದ, {{gap}}... ಚಿರುಕಂಡ ಗುಡಿಸಲು ಸಮೀಪಿಸಿದಾಗ ಅಲ್ಲಿ ಬೆಳಕು ಇರಲಿಲ್ಲ, ಆತನ ಎದೆ ಚುಳ್ಳೆಂದಿತು. ಹಿಂದಿನ ರಾತ್ರೆಯೇ ಮುಗಿದುಹೋಗಿತ್ತು ಸೀಮೆಎಣ್ಣೆ, ಉಣ್ಣುತ್ತಿದ್ದಾಗಲೇ ದೀಪ ಕಣ್ಣುಮುಚ್ಚಿತು, ಹಗಲು ಹೊತ್ತು ಅಂಗಡಿಯಿಂದ ಚಿರುಕಂಡ ಎಣ್ಣೆ ತರಬೇಕಾಗಿತ್ತು, ಆದರೆ ಈ ಹಗಲೆಲ್ಲ ಆತ ಮನೆಯಲ್ಲೆ ಇರಲಿಲ್ಲ... ಹೀಗಾಗಿ ಗುಡಿಸಲಲ್ಲಿ ದೀಪವಿರಲಿಲ್ಲ, {{gap}}ತಾಯಿಯನ್ನು ಹೇಗೆ ಇದಿರಿಸಬೇಕೆಂದು ತಿಳಿಯದೆ ಚಿರುಕಂಡನಿಗೆ ಭಯವಾಯಿತು. ಅಳುಕುತ್ತ, ಅತ ಮನೆಯ ಬಳಿ ಸಾರಿದ . {{gap}}ಒಲೆಯ ಬೆಂಕಿಯ ಬೆಳಕಿನೆದುರು ಕುಳಿತಿದ್ದ ತಾಯಿ, ಕಳ್ಳಹೆಜ್ಜೆಯ ಕಾಲ ಸಪ್ಪಳದಿಂದಲೇ ಮಗ ಬಂದನೆಂದು ತಿಳಿದು, ಎದ್ದು ನಿಂತಳು. {{gap}}ಕತ್ತಲೆಯನ್ನೂ ಮಗನನ್ನೂ ಜತೆಯಲ್ಲೆ ಇರಿಸುವ ಸ್ವರ ಕೇಳಿಸಿತು: {{gap}}"ಬಂದಿಯಾ ಪಾಪಿ!" {{gap}}ಚಿರುಕಂಡ ಎರಡು ಅಪರಾಧಗಳನ್ನು ಮಾಡಿದ್ದ, ಒಂದು, ತಡವಾಗಿ ಬಂದುದು. ಇನ್ನೊಂದು, ಸೀಮೆಎಣ್ಣೆ ತಂದುಕೊಡದೆ ಮನೆ ಕತ್ತಲಲ್ಲೆ ಇರುವಂತೆ ಮಾಡಿದುದು. ಎರಡಕ್ಕೂ ದೊರೆಯಬೇಕಾದ ಉಗ್ರದಂಡನೆ ಎಂದರೆ ಬೆತ್ತದ ಛಡಿ ಏಟು.ತಾಯಿ ಹೊಡೆಯಲು ಬಂದರೆ ಕತ್ತಲೆಯಲ್ಲಿದ್ದರೂ ಚಿರುಕಂಡ ತಪ್ಪಿಸಿಕೊಳ್ಳುವವನಲ್ಲ, ಒಂದು ವರ್ಷವಾಗಿತ್ತು ಆತ ಬೆತ್ತದ ಏಟಿನ ರುಚಿ ನೋಡಿ. ಆದರೆ ಈ ದಿನ, ತನ್ನ ಪಾಲಿಗೆ ಸ್ಮರಣೀಯವಾದ ಈ ದಿನ, ಅಂತಹ ಏಟು ತಿನ್ನುವ ಸಂದರ್ಭ ಬಂತಲ್ಲ ಎಂದು ಅವಮಾನವೆನಿಸಿ,ದುಃಖ ತಡೆಯದೆ ಹೋಯಿತು {{gap}}ತಾಯಿ ತನ್ನನ್ನು ಹಿಡಿಯಲು ಬರದೆ ಮುಂದುವರಿಯದೆ ನಿಂತಲ್ಲೆ ನಿಂತುದನ್ನು ಕಂಡು, ಚಿರುಕಂಡ ಆಶ್ಚರ್ಯಗೊಂಡ. {{gap}}ಬೈಗಳಾದರೂ ಬರಬಹುದು ಎಂದು ಆತ ನಿರೀಕ್ಷಿಸಿದ.ಆ ನಿರೀಕ್ಷೆಯೂ ಸಫಲವಾಗದಿದ್ದಾಗ, ಚಿರುಕಂಡನಿಗೆ ಸಮಾಧಾನವೇನೂ ಆಗಲಿಲ್ಲ, ಬದಲು 'ಏನೋ ಅನಾಹುತವಾಗಿರಬೇಕು' ಎಂದು ಗಾಬರಿಯಾಯಿತು. {{gap}}ಆ ವಿಷಯ ನೇರವಾಗಿ ಪ್ರಶ್ನಿಸಲಾಗದೆ ಆತ ಕೇಳಿದ:<noinclude></noinclude> bo732xh8g9ee2zz9rjpjmk5cnob8r4j ಪುಟ:Chirasmarane-Niranjana.pdf/೬೨ 104 12881 320298 256640 2026-05-16T09:13:19Z Pragathi. BH 7585 /* Validated */ 320298 proofread-page text/x-wiki <noinclude><pagequality level="4" user="Pragathi. BH" />{{rh|center=|left=ಚಿರಸ್ಮರಣೆ|right=೯೩}}</noinclude> {{gap}}"ಬೇಗ್ನೆ ಹೋಗಿ ಸೀಮೆಎಣ್ಣೆ ತಂದುಬಿಡ್ಲಾ, ಅಮ್ಮಾ?" {{gap}} {{gap}}ಪ್ರತಿ ಸಲವೂ ತರುತ್ತಿದ್ದುದು ಆರುಕಾಸಿನ ಸೀಮೆಎಣ್ಣೆ, ಸಿಗರೇಟಿನ ಒಂದು ಡಬ್ಬದಲ್ಲಿ, ಹತ್ತು ದಿನಗಳವರೆಗೂ ಅದು ಸಾಕಾಗುತ್ತಿತ್ತು. {{gap}}"ಬೇಗ್ನೆ ಹೋಗಿ ಸೀಮೆಎಣ್ಣೆ ತರ್ತಾನಂತೆ, ಸೀಮೆಎಣ್ಣೆ..."ಎಂದು ತಾಯಿ ಅಣಕದ ಧ್ವನಿಯಲ್ಲಿ ಸಿಡಿಮಿಡಿಗುಟ್ಟುತ್ತ ಅಂದಳು. ಅಣಕಿಸಿದುದು ಆದಮೇಲೆ,ಪ್ರಶ್ನೆಗೆ ಉತ್ತರವಿತ್ತಳು; {{gap}}"ಬೇಡ! ಇವತ್ತೂ ಒಂದು ರಾತ್ರೆ ಹೀಗೇ ಕಳೆದೋಗ್ಲಿ." {{gap}}"ಎಣ್ಣೆ ಮುಗಿದದು ನೆನಪಾಗ್ಲೆ ಇಲ್ಲ" ಎಂದು ನಿಜ ಸಂಗತಿಯನ್ನೆ ಚಿರುಕಂಡ ಹೇಳಿದ. {{gap}}"ಎಲ್ಲಿಗೋಗಿದ್ದೆ ಬೇಡ್ಕೊಂಡು?" ಉಳಿದ ನಿಜಸಂಗತಿಯನ್ನು ಹೇಳಿ ಹಿರಿಯರ ಮನಸ್ಸನ್ನು ಎಂದಾದರೂ ಒಲಿಸುವುದು ಸಾಧ್ಯವೆ?-ಎಂದು ಚಿರುಕಂಡನ ಮನಸ್ಸು ಚಿಂತಿಸಿತು. ಪ್ರಶ್ನೆಗೆ ಉತ್ತರವಾಗಿ, ಅಪ್ಪುವಿನ ಜತೆಯಲ್ಲಿ ಗೊತ್ತುಮಾಡಿದುದನ್ನೇ ಚಿರುಕಂಡನೂ ಹೇಳಿದ. ಮಾಸ್ತರರ ಹೆಸರಿನ ಮರೆಯಲ್ಲಿ ಪಡೆದ ರಕ್ಷಣೆ ಯಶಸ್ವಿಯಾಯಿತು. ಮಾಸ್ತರರ ಹೆಸರು ಕೇಳಿದ ಮೇಲೆ, ಸದ್ಯ, ಕೆಟ್ಟವರ ಸಂಗದಲ್ಲಿ ಹುಡುಗ ಇರಲಿಲ್ಲವಲ್ಲ ಎಂದು ಸಮಾಧಾನವೆನಿಸಿತು ಹೆತ್ತ ಕರುಳಿಗೆ. {{gap}}ಆದರೂ ಅದನ್ನು ತೋರಿಸದೆ ತಾಯಿ ಅಂದಳು; {{gap}}"ಇನ್ನೊಂದ್ನಲ ಹೀಗೆಲ್ಲ ಬಿಟ್ಟಿ ಚಾಕರಿ ಮಾಡೋದಕ್ಕೆ ಹೋಗು, ನಿನ್ನ ಬೆನ್ನಿನ ಚರ್ಮ ಸುಲೀತೇನೆ." {{gap}}ಅದು ತಾಯಿ ಕೊಟ್ಟ ಎಚ್ಚರಿಕೆ. ಆದರೆ ಅಂಥ ಸಂದರ್ಭಗಳಲ್ಲಿ ಇರಬೇಕಾದಷ್ಟು ಭೀಷಣವಾಗಿರಲಿಲ್ಲ, ಆಕೆಯ ಧ್ವನಿ. ಆ ಮಾತಿನಲ್ಲಿ ತೀವ್ರತೆ ಇರಲಿಲ್ಲ, ಅದನ್ನು ಕಂಡು, ಮನೇಲಿ ಏನೋ ಆಗಿದೆ'ಎಂಬ ಚಿರುಕಂಡನ ಸಂದೇಹ ಬಲವಾಯಿತು. {{gap}}ತಂದೆ ಮನೆಯಲ್ಲಿಲ್ಲವೆಂಬುದಂತೂ ಆಗಲೆ ಸ್ಪಷ್ಟವಾಗಿತ್ತು, ಈಗ ಹೊಸತಾದ ಸಂಕಷ್ಟವೇನಾದರೂಬ ಒದಗಿಬಂತೇ? ಎಂದು ಆತನಿಗೆ ದಿಗಿಲಾಯಿತು. {{gap}}ಚಿರುಕಂಡ, ಕಾತರವನ್ನು ತಡೆಹಿಡಿಯಲಾರದೆ ತಾಯಿಯನ್ನು ಕೇಳಿದ: {{gap}}"ಅಪ್ಪ ಬಂದಿಲ್ವ?" {{gap}}ಆಕೆ ಕೊಟ್ಟದ್ದು ಚುಟುಕು ಉತ್ತರ: "ಇಲ್ಲ." {{gap}} ಆ ಉತ್ತರದಿಂದೇನೂ ಸಂದೇಹ ನಿವಾರಣೆಯಾಗುವಂತಿರಲಿಲ್ಲ,<noinclude></noinclude> h9zyjd1i8nv3se3j81lw9on5a4ydab8 ಪುಟ:Mrutyunjaya.pdf/೧೯೨ 104 21678 320145 61281 2026-05-15T13:47:06Z Pragathi. BH 7585 /* Validated */ 320145 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೧೭೯}}</noinclude> {{gap}}“ಯಾರನ್ನು ಕಾಣಬೇಕು?” {{gap}}“ಪ್ರಾಂತದ ನಾಯಕರನ್ನು.” {{gap}}“ನಮನ್ನು ಅನುಸರಿಸಿ ರಾಜಗೃಹಕ್ಕೆ ಬನ್ನಿ. ಇನ್ನೆರಡು ತಾಸು ಬಿಟ್ಟು ನಾಯಕರು ಅಲ್ಲಿಗೆ ಬರ್ತಾರೆ.” {{gap}}ದೂತ ನಸುನಕ್ಕ. ಸಶಸ್ತ್ರ ಭಟರು ಭುಜ ಕುಣಿಸಿದರು. {{gap}}"ಆಗಬಹುದು. ಮುಂದೆ ನಡೀರಿ." {{gap}}ಖೈಮ್ ಹೊಟೆಪ್ బంದು ತಿಳಿಸಿದಾಗ ಮೆನೆಒಟಾ ತನ್ನ ನೇಗಿಲ ಮೊನೆಯನ್ನು ಮೊನೆಯನ್ನು ಸರಿಪಡಿಸುತ್ತ ಕುಳಿತಿದ್ದ. ಕೆಲಸವನ್ನು ಮುಂದುವರಿಸುತ್ತ ಅವನೆಂದ ; {{gap}}"ಪೆರೊనింది ಸಂದೇಶ ತಂದಿರಬಹುದು." {{gap}}ನೆಫಿಸಳ ಮುಖದ ಮೇಲೆ ಕಾತರದ ಭಾವನೆ. {{gap}}ಮೆನೆಪ್ಟಾ ಅಸಾಧಾರಣವಾದುದೇನೂ ನಡೆದಿಲ್ಲ ಎನ್ನುವಂತೆ, ಶಾಂತ ಸ್ವರದಲ್ಲಿ ಅಂದ : {{gap}}"ವರ್ತಕ ಕೆಫ್ಟು, ಕಾರ್ಯಜಾಣ." {{gap}}“ಖ್ನೆಮ್ ನುಡಿದ : {{gap}}"ಮಾತು ಕೊಟ್ಟಂತೆ ಬಂದೇ ಬರ್‍ತಾನೆ. ಶಸ್ತ್ರಾಸ್ತ್ರಗಳನ್ನು ತರ್‍ತಾನೆ-ಅನಿಸ್ತದೆ" {{gap}}"ಹೂಂ. ಹೂಂ." {{gap}}ನೆಫಿಸಳ ಕಣ್ಣಿಗೆ ಕಟ್ಟಿತು, ಆಬ್ಟು ಬೆಟ್ಟದ ಮೇಲೆ ಮೆರವಣಿಗೆಯಲ್ಲಿ ತಾನು ಕಂಡಿದ್ದ ಪೆರೋನ ಚಿತ್ರ. ಭೂಮಿಯ ಮೇಲಣ ದೇವಪ್ರತಿನಿಧಿ. ಆತ ನಿಂದ ತನ್ನ ಪತಿಗೆ ಸಂದೇಶ. ಬೆಸ್ ದೇವತೆಯನ್ನು ಆಕೆ ಸ್ಮರಿಸಿದಳು. ಗಂಡಾಂತರಗಳನ್ನು ದೂರ ಮಾಡು ಎಂದು ಮನಸ್ಸಿನಲ್ಲೇ ಪಾರ್ಥನೆ ಸಲ್ಲಿಸಿದಳು. {{gap}}“ಸ್ನೊಫ್ರು, ಸೆಬೆಕ್ಖು; ಹಿರಿಯರನ್ನೆಲ್ಲ ರಾಜಗೃಹಕ್ಕೆ ಬರಹೇಳು," ಎಂದು ಮೆನೆಪ್ಟಾ ಖ್ನೆಮ್ಗೆ. {{gap}}ಖೈಮ್ ಹೊಟೆಪ್ ಹೊರಟು ಹೋದ ಸ್ವಲ್ಪ ಹೊತ್ತಿನಲ್ಲೇ ರಾಮೆರಿಪ್<noinclude></noinclude> t7ar05bsqgg6o6r334qu3i1tuv1z3ov ಪುಟ:Mrutyunjaya.pdf/೧೯೩ 104 21679 320146 153127 2026-05-15T13:50:43Z Pragathi. BH 7585 /* Validated */ 320146 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೧೮೦}}</noinclude> ಟಾ ರಾಜಗೃಹದಿಂದ బందా. {{gap}}“ಇವತ್ತಿಗೆ ಪಾಠ ಇಷ್‍ಟು ಸಾಕು, ಅಂದ್ರು ಗುರುಗಳು. ಮೆಂಫಿಸ್ ನಿಂದ ಯಾರೋ ಬಂದಿದ್ದಾರೆ. ರಾಜದೂತ ಅಂತೆ. ಕತ್ತಿನಲ್ಲಿ ಎರಡು ಸರಗಳಿವೆ. ಬಂಗಾರದ ಸರ ಅಂತ ಚಿನಿವಾರರ ಹುಡುಗ ರಾನೋಫರ್ ಹೇಳ್ದ. ಕೈಯಲ್ಲಿ ಬಟ್ಟೆಯಲ್ಲಿ ಸುತ್ತಿದ ಒಂದು ಲಿಪಿ ಸುರುಳಿಯೂ ಇದೆ," ಎಂದು ಹುಡುಗ, ಹೆತ್ತವರೊಡನೆ. {{gap}}ರಾಜಕಾರ್ಯ, ಮರಳಿ ಬರುವುದು ತಡವಾಗಲೂಬಹುದು........ ನೆಫಿಸ್ ಒಂದು ರೊಟ್ಟಿ ಹೆಚ್ಚಾಗಿಯೇ ಬಡಿಸಿದಳು. {{gap}}ಗಂಡನೂ ಮಗನೂ ಉಣುವುದನ್ನು ನೋಡುತ್ತ, ಸುಮ್ಮನಿರಲು ಆಗದೆ “ನನ್ನ ಗುಂಡಿಗೆ ಯಾಕೋ ಡವಡವ ಅಸ್ತಿದೆ” ಎಂದಳು ನೆಫಿಸ್. {{gap}}ಮೆನೆಪ್ಟಾ ಮುಗುಳುನಕ್ಕ. ರಾಮೆರಿಪ್ಟಾನೆಂದ : {{gap}}“ಏನು? ಹೆದರ್ಕೇನಾ ಅಮ್ಮ?” {{gap}}“ಏನಿಲ್ಲವಪ್ಪ,” ಎಂದು ಹೇಳಿ, ನೆಫಿಸ್ ಸುಮ್ಮನಾದಳು. {{gap}}ಮೆನೆಪ ಟಾ ರಾಜಗೃಹ ತಲಪುವಷ್ಟ ರಲ್ಲಿ ಉಳಿದವರು ಬಂದಿದ್ದರು. ಖೈಮ್ ಹೊಟೆಪ್ ಸೂಚಿಸಿದೊಡನೆಯೋ ರಾಜದೂತ ವೇದಿಕೆಯ ಬಳಿ ಸಾರಿ, ನಾಯಕನಿಗೆ ನಮಿಸಿದ: ಸುರುಳಿಯ ಓಲೆಯನ್ನು ಮೆನೆಪಟಾನ ಕೈಗಿತ್ತ, {{gap}}ಪೀಠಗಳತ್ತ ದೃಷ್ಟಿಬೀರಿ, "ಕುಳಿತುಕೋಬಹುದು," ಎಂದ ನಾಯಕ. {{gap}}ದೂತ ನಿಂತೇ ಇದ್ದ. ಅವನೆಂದ: {{gap}}"ಓದಿ ಹೇಳಬೇಕೆ?" {{gap}}ನಾಯಕನಿಗೆ ಚೇಳು ಕುಟುಕಿದಂತಾಯಿತು. ತನಗೆ ಓದು ಬರದು ಎಂದೆ ಆ ಪ್ರಶ್ನೆ? {{gap}}“ಅಗತ್‍ಯವಿಲ್ಲ, " ಎಂದು ಆತ. ಇಪ್ಪ್ಯುವರ್ ನನ್ನು ಕರೆದು, ಓಲೆಯನ್ನು ಆತನಿಗಿತ್ತು, ಓದುವಂತೆ ಸನ್ನೆ ಮಾಡಿದ. {{gap}}ಸುರುಳಿಯ ಮೇಲಣ ರಾಜಮುದ್ರೆಯನ್ನು ಇಪವರ್ ಒಡೆದ. {{gap}}“ಪೆರೋ ಬರೆಸಿದ್ದು, ಅಮಾತ್ಯ ಆಮೆರಬ್ ಅಂಕಿತ ಹಾಕಿದ್ದಾರೆ.” ಎಂಬ ಪೀಠಿಕೆಯ ಬಳಿಕ ಆತ ಓದಿದ :<noinclude></noinclude> 85cbfq0e84ym2zenl3toekrthip2ivg 320147 320146 2026-05-15T13:51:14Z Pragathi. BH 7585 320147 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೧೮೦|right=}}</noinclude> ಟಾ ರಾಜಗೃಹದಿಂದ బందా. {{gap}}“ಇವತ್ತಿಗೆ ಪಾಠ ಇಷ್‍ಟು ಸಾಕು, ಅಂದ್ರು ಗುರುಗಳು. ಮೆಂಫಿಸ್ ನಿಂದ ಯಾರೋ ಬಂದಿದ್ದಾರೆ. ರಾಜದೂತ ಅಂತೆ. ಕತ್ತಿನಲ್ಲಿ ಎರಡು ಸರಗಳಿವೆ. ಬಂಗಾರದ ಸರ ಅಂತ ಚಿನಿವಾರರ ಹುಡುಗ ರಾನೋಫರ್ ಹೇಳ್ದ. ಕೈಯಲ್ಲಿ ಬಟ್ಟೆಯಲ್ಲಿ ಸುತ್ತಿದ ಒಂದು ಲಿಪಿ ಸುರುಳಿಯೂ ಇದೆ," ಎಂದು ಹುಡುಗ, ಹೆತ್ತವರೊಡನೆ. {{gap}}ರಾಜಕಾರ್ಯ, ಮರಳಿ ಬರುವುದು ತಡವಾಗಲೂಬಹುದು........ ನೆಫಿಸ್ ಒಂದು ರೊಟ್ಟಿ ಹೆಚ್ಚಾಗಿಯೇ ಬಡಿಸಿದಳು. {{gap}}ಗಂಡನೂ ಮಗನೂ ಉಣುವುದನ್ನು ನೋಡುತ್ತ, ಸುಮ್ಮನಿರಲು ಆಗದೆ “ನನ್ನ ಗುಂಡಿಗೆ ಯಾಕೋ ಡವಡವ ಅಸ್ತಿದೆ” ಎಂದಳು ನೆಫಿಸ್. {{gap}}ಮೆನೆಪ್ಟಾ ಮುಗುಳುನಕ್ಕ. ರಾಮೆರಿಪ್ಟಾನೆಂದ : {{gap}}“ಏನು? ಹೆದರ್ಕೇನಾ ಅಮ್ಮ?” {{gap}}“ಏನಿಲ್ಲವಪ್ಪ,” ಎಂದು ಹೇಳಿ, ನೆಫಿಸ್ ಸುಮ್ಮನಾದಳು. {{gap}}ಮೆನೆಪ ಟಾ ರಾಜಗೃಹ ತಲಪುವಷ್ಟ ರಲ್ಲಿ ಉಳಿದವರು ಬಂದಿದ್ದರು. ಖೈಮ್ ಹೊಟೆಪ್ ಸೂಚಿಸಿದೊಡನೆಯೋ ರಾಜದೂತ ವೇದಿಕೆಯ ಬಳಿ ಸಾರಿ, ನಾಯಕನಿಗೆ ನಮಿಸಿದ: ಸುರುಳಿಯ ಓಲೆಯನ್ನು ಮೆನೆಪಟಾನ ಕೈಗಿತ್ತ, {{gap}}ಪೀಠಗಳತ್ತ ದೃಷ್ಟಿಬೀರಿ, "ಕುಳಿತುಕೋಬಹುದು," ಎಂದ ನಾಯಕ. {{gap}}ದೂತ ನಿಂತೇ ಇದ್ದ. ಅವನೆಂದ: {{gap}}"ಓದಿ ಹೇಳಬೇಕೆ?" {{gap}}ನಾಯಕನಿಗೆ ಚೇಳು ಕುಟುಕಿದಂತಾಯಿತು. ತನಗೆ ಓದು ಬರದು ಎಂದೆ ಆ ಪ್ರಶ್ನೆ? {{gap}}“ಅಗತ್‍ಯವಿಲ್ಲ, " ಎಂದು ಆತ. ಇಪ್ಪ್ಯುವರ್ ನನ್ನು ಕರೆದು, ಓಲೆಯನ್ನು ಆತನಿಗಿತ್ತು, ಓದುವಂತೆ ಸನ್ನೆ ಮಾಡಿದ. {{gap}}ಸುರುಳಿಯ ಮೇಲಣ ರಾಜಮುದ್ರೆಯನ್ನು ಇಪವರ್ ಒಡೆದ. {{gap}}“ಪೆರೋ ಬರೆಸಿದ್ದು, ಅಮಾತ್ಯ ಆಮೆರಬ್ ಅಂಕಿತ ಹಾಕಿದ್ದಾರೆ.” ಎಂಬ ಪೀಠಿಕೆಯ ಬಳಿಕ ಆತ ಓದಿದ :<noinclude></noinclude> nvlp6tuc3wns5z49ekboepdx1a1cfrc ಪುಟ:Mrutyunjaya.pdf/೧೯೪ 104 21680 320148 61269 2026-05-15T14:28:39Z Shreelatha.Halemane 7642 /* Validated */ 320148 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೮೧}} {{gap}}“ತಮ್ಮ ಅರುವತ್ತನೆಯ ವಯಸ್ಸಿಗೆ ಬೀಳುವ ಎರಡನೆಯ ಸೆಡ್ ಉತ್ಸವವನ್ನು ಹತ್ತು ವರ್ಷಕ್ಕೆ ಮುಂಚೆ-ಅಂದರೆ ಐವತ್ತನೆಯ ವಯಸ್ಸಿನಲ್ಲೇ —విజృంభಣೆಯಿಂದ ಆಚರಿಸಲು, ಹೋರಸ್ ಸಮಾನರಾದ ಐಗುಪ್ತದ ದೊರೆ ಪೆರೋ ಪೇಪಿಯವರು ನಿರ್ಧರಿಸಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ನಡೆ యువ ఈ ಉತ್ಸವಕ್ಕೆ ಹತ್ತು ದಿನ ಮುಂಚಿತವಾಗಿಯೇ ರಾಜಧಾನಿಗೆ ಬರ ಬೇಕೆಂದು ఎల్ల ಪ್ರಾಂತಪಾಲರಿಗೂ ಕರೆ ಕಳುಹಿಸಲಾಗಿದೆ. ನೀರಾನೆ ಪ್ರಾಂತದ ನಾಯಕ ಮೆನೆಪ್ಟಾ ಕೂಡಾ ಈ ಉತ್ಸವದಲ್ಲಿ ಭಾಗವಹಿಸ ಬೇಕೆಂದು ಈ ಆದೇಶ ನೀಡಲಾಗಿದೆ." {{gap}}ನೀರವ ಕ್ಷಣಗಳು. {{gap}}ಆ ಮೌನವನ್ನು ಛೇದಿಸಿ ನಾಯಕ ಕೇಳಿದ : {{gap}}“ಅಮಾತ್ಯರು ಇನ್ನೇನಾದರೂ ಹೇಳಿದಾರೊ?” {{gap}}ದೂತನೆಂದ . {{gap}}ಯಾವ ಕಸಿವಿಸಿಯೂ ಇಲ್ಲದೆ బರಲಿ, ತಿಳಿಸಿಬಿಡಿ—ಅಂದ್ರು." {{gap}}ದಳಪತಿಯತ್ತ ತಿರುಗಿ ನಾಯಕ ನುಡಿದ: {{gap}}“ಖೈಮ, ಇವರ ಭೋಜನ, ವಿಶಾಂತಿಗೆ ವ್ಯವಸ್ಥೆ ಮಾಡಬೇಕಲ್ಲ?” ಖ್ನೆಮ್, ಹೊಟೆಪ್ ಉತ್ತರಿಸಿದ : {{gap}}.. ನಮ್ಮ ಮನೆಗೆ ಕರಕೊಂಡು ಹೋಗ್ತೇನೆ.” {{gap}}ದೂತನೂ ಭಟರೂ ವೇದಿಕೆಗೆ ನಮಿಸಿದರು. {{gap}}“ಅಪ್ಪಣೆಯಾದರೆ ಇವತ್ತು ಸಂಜೆ ವಾಪಸು ಹೊರಡ್ತೇವೆ.” {{gap}}"ಹಾಗೇ ಆಗಲಿ ಇವತ್ತು ಉತ್ತರವನ್ನು ದಳಪತಿಯ ಮನೆಗೆ ಕಳಿಸ್ತೇವೆ.” {{gap}}ಬೆರಗುಗೊಳಿಸುವ ಲೋಕಕ್ಕೆ ಬಂದಂತಾಗಿತ್ತು ದೂತನಿಗೆ, ಭಟರಿಗೆ. ಪುనాః ಗೌರವದಿಂದ ವಂದಿಸಿ, ಖೈಮ್ ಹೊಟೆಪನ ಹಿಂದೆ ಅವರು ಹೊರಟರು. ಬರುತ್ತ ಕಂಡಿದ್ದ ಒಕ್ಕಣ್ಣಿನ ಸಿಂಹವನ್ನು ಮತ್ತೊಮ್ಮೇ ನೋಡಿದರು. {{gap}}ಅದಕ್ಕೆ ಇಟ್ಟಿದ್ದ ಹೆಸರನ್ನು ఓది ರಾಜದೂತ ನಕ್ಕ. {{gap}}ಸ್ನೊಫ಼್ರ, ಸೆಬೆಕ್ಖುರೊಡನೆ, ಹಿರಿಯರೊಡನೆ ಮೆನೆಪ್ ಟಾ ಸಮಾ<noinclude></noinclude> 1z465urb5pasy2tu7t657k9fsw2hyed ಪುಟ:Mrutyunjaya.pdf/೧೯೫ 104 21681 320149 61270 2026-05-15T14:32:42Z Shreelatha.Halemane 7642 /* Validated */ 320149 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೮೨|right=}} ಲೋಚನೆ ನಡೆಸಿದ. {{gap}}"ಆದೇಶ್ ನೀಡಲಾಗಿದೆ." ಹೋಗಬೇಕೆ, ಬೇಡವೆ? {{gap}}ವಿವಿಧ ಅಭಿಪ್ರಾಯಗಳು : 'ಆತುರ ಸಲ್ಲದು;' 'ಪೆರೋ ನಮ್ಮ ವಿಷಯದಲ್ಲಿ ಪ್ರೀತಿ ತೋರಿಸೋದಾದ್ರೆ ಅದು ಸ್ವಾಗತಾರ್ಹ ;' ಏನಾದರೂ ಮೋಸ ಇದ್ದೀತು; 'ಮೋಸದ ಮಾತಾದರೆ ಒಂಭತ್ತು ತಿಂಗಳು ಮೀರಿ ಕಾಯಬೇಕಾಗಿತ್ತೆ?;' 'ಮುಚ್ಚುಮರೆಯ ಅಕೃತ್ಯ ನಾವೇನೂ ಮಾಡಿಲ್ಲವಲ್ಲ;'ಜತನದಿಂದ ಇದ್ದರೆ ಸರಿ." {{gap}}ಮೆನೆಪ್ಟಾ ಟನೆಂದ: {{gap}}" ನಮ್ಮದು ಋಜುಮಾರ್ಗ. ಈವರೆಗೂ ಅಷ್ಟೆ. ಮುಂದೆಯೂ ಅಷ್ಟೆ. ಭಯ ಲೋಕದ ಭ್ರಮಣದಿಂದ ಏನೂ ಹಿತವಿಲ್ಲ. ನಮ್ಮ ಮಾಟ ನಮ್ಮನು ಕಾಯ್ತದೆ. ಹೋಗಿ ಬರ್‍ತೇನೆ." {{gap}}ಸೆಬೆಕ್ಖು ಹೇಳಿದ: {{gap}}" ಖೈಮ ಜೊತೆಗಿರಲಿ.” {{gap}}ಮೆನೆಪ್ಟಾ ಒಪ್ಪಲಿಲ್ಲ! {{gap}}"ಬೇಡ. ಪ್ರಾಂತದ ರಕ್ಷಣೆ ಅವನ ಹೊಣೆ.ನನ್ನನ್ನು ಬಟಾ ಬಿಟ್ಟು ಬರ್‍ತಾನೆ {{gap}}ನೀನೆಲ್ಲದ ವೇಳೆಯಲ್ಲಿ ఇల్లి ?" {{gap}}“ ಯಾಕೆ? ಸ್ನೋಫ್ರು ಇಲ್ಲವೆ? ಸೆಬೆಕ್ಖು ಇಲ್ಲವೆ? ಇಬ್ಬರಲ್ಲೊಬ್ಬರು ದಿನವೂ ರಾಜಗೃಹಕ್ಕೆ ಬಂದರಾಯ್ತು, ನಾನಿಲ್ಲ ಅಂತ ಆಡಳಿತ ನಿಲ್ಲಬೇಕೆ? ಹೆಚ್ಚೆಂದರೆ ಒಂದು ತಿಂಗಲು ಅದಷ್ಟು ಬೇಗ ಬಂದ್ಬಿಡ್ತೇನೆ." {{gap}}ಇಫ್‍ಯುವರ್ ಉತ್ತರ ಸಿದ್ದಗೊಳಿಸಿದ: {{gap}}" ಹೋರಸ್ ಸಮಾನರಾದ ಐಗುಪ್ತದ ಪೆರೋ ಮಹಾಶಯರ ಸನ್ನಿಧಿ యుల్లి ನೀರಾನೆ ಪ್ರಾಂತದ నాಯಕ ಮೆನೆಪ್ಟ ವಿಜ್ಞಾಪನೆಗಳು. ತಮ್ಮ ಸೆಡ್ ಮಹೋತ್ಸವದ ಕರೆಯೋಲೆ ತಲಪಿದೆ. ಕೃತಜ್ಞ ನಾಗಿದ್ದೇನೆ. ತಾವು ನೀಡಿರುವ ಆದೇಶದಂತೆ ರಾಜಧಾನಿಗೆ ಬರುತ್ತೇನೆ.” {{gap}}"ಕರೆಯೋಲೆಯೋ ಆದೇಶ. ಆದೇಶವೇ ಕರೆಯೋಲೆ. ಸರಿ, ಸರಿ," ಎಂದ ಮೆನೆಪ್ಟಾ.<noinclude></noinclude> 5yxgwzfpwmg03s4w6wv93xi8zhna3aa ಪುಟ:Mrutyunjaya.pdf/೧೯೬ 104 21682 320154 61271 2026-05-15T14:45:18Z Shreelatha.Halemane 7642 /* Validated */ 320154 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೮೩}} {{gap}}ಅವನ ಸಹಿ ಒಂದು ಸಾಧನೆ. ಇಪ್‍ಯುವರ್ ಬರೆದ ಕೊಟ್ಟ ಸಂಕೇತ ರೂಪವನ್ನು ಅನುಕರಿಸಿ, ಮೆನೆಪ್ಟಾ ತನ್ನ ಅಂಕಿತವನ್ನು ಹಾಕಿದ. ಸುರುಳಿ ಯನ್ನು ಸುತ್ತಿ ಸೆಣಬಿನ ನಾರಿನಿಂದ ಬಿಗಿದರು, ಬಟಾ ಅದನ್ನು ಖೈಮ್ ಹೊಟೆಪನ ಮನೆಗೆ ఒయ్నే ಮುಟ್ಟಿಸಿದ. * * * * * * {{gap}}ಅಯನ ಸಂಕ್ರಮಣ ಬಿಂದುವನ್ನು ಸೂರ್ಯ ತಲಪಿದ್ದ, ಅದು ದೀರ್ಘ ಹಗಲು. ಇನ್ನು ಉತ್ತರಕ್ಕೆ ಪಯಣ. {{gap}}ರಾಜದೂತರು ಮರಳಿ ಹೋದ ಮಾರನೆಯ ದಿನ, ಅದು. ಅಂದು ಡಂಗುರ : "ಕೇಳಿರಿ ! ಕೇಳಿರಿ ! ನಮ್ಮ ನಾಯಕ ಮೆನೆಪ್ಟಾ ಪೆರೋನ ಆಮಂತ್ರಣ ಸ್ವೀಕರಿಸಿ ಸೆಡ್ ಮಹೋತ್ಸವದಲ್ಲಿ ಭಾಗಿಯಾಗುವುದಕ್ಕಾಗಿ, ಮೆಂಫಿಸ್ಗೆ ಹೋಗಲಿದ್ದಾರೆ!” {{gap}}ತನಗೆ ತಿಳಿದಿದ್ದ ವಿಶಯವೇ. ಆದರು ನೆಫಿಸ್ ಅರೆತೆರೆದ ಭಾಗಿಲಿನೆಡೆ ಯಿಂದ ಡಂಗುರದವನ ಧನಿಯನ್ನು ಅಲಿಸಿ, ಗೋಡಗೊರಗಿ ನಿಂತಳು. ಭೇರಿ ಮಗ್‍ಲುಲು ಬೀದಿಗೆ ಹೋಮೇಲೆ, ಮೂರು ಮನೆಯಾಚೆಗಿನ ಹುಡುಗರ ತಂಡ ಅಣಕುಧ್ವನಿಯಲ್ಲಿ ಡಂಗುರವನ್ನು ಮತ್ತೆ ಸಾರಿತು : “ "ಕೇಳಿರಿ ! ಕೀಳಿರಿ !........." {{gap}}ಪೆರೋಗೆ ಕಾಣಿಕೆ ಒಯ್ಯಬೇಕೆ ಬೇಡವೆ? ಮುಖಂಡರಲ್ಲಿ ಚರ್ಚೆ ನಡೆಯಿತು. ಅವರೊಂದು ತೀರ್ಮಾನಕ್ಕೆ ಬಂದರು : ಕಾಣಿಕೆ ಕಪ್ಪವಲ್ಲ; ಶಿಷ್ಟಾಚಾರದಂತೆ ಏನನಾದರೂ ಒಪ್ಪಿಸಿದರೆ ಅದರಿಂದ ನಾಡಿನ ಸಾತಂತ್ರ್ಯಕ್ಕೆ ಚ್ಯುತಿ ಇಲ್ಲ. {{gap}}ಕೊಡುವುದು ಏನನ್ನು ? {{gap}}“ ಕೆಫ್‍ಟುವಿನ ಕಾಣಿಕೆಗಳಲ್ಲಿ ಯಾವುದಾದರೂ ಒಂದು ?” {{gap}}“ ಛೆ ! ಸರಿಯಲ್ಲ ! " {{gap}}ಸೆತಾನನ್ನು ಕರೆದು ಅಭಿಪ್ರಾಯ ಕೇಳಿದರು. {{gap}}" ಬೇಕಾದರೆ ಆ ಗಡಯಾರ ಕೊಟ್ಟುರು ಬಿಡಿ. ಕೆಫ್‍ಟು ಗೋಸ್ಕರ ಮಾಡ್ತಾ ಇದೇನಲ್ಲ. ಅದರಲ್ಲೊಂದು ಇಲ್ಲಿಡ್ತೇನೆ," ಎಂದು ಆತ.<noinclude></noinclude> 14ywgt76pg20r4060ms9lj8xhpco59f ಪುಟ:Mrutyunjaya.pdf/೧೯೭ 104 21683 320156 61272 2026-05-15T14:48:21Z Shreelatha.Halemane 7642 /* Validated */ 320156 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=}} {{gap}}"ಒಳ್ಳೇ ಸಲಹೆ." {{gap}}ಸೆತ್ನಾ ಮತ್ತೆ ಮೆರುಗೆಣ್ಣೆ ಲೇಪಿಸಿ ಗಡಿಯಾರ ಥಳಥಳಿಸುವಂತೆ ಮಾಡಿದ. ಅದನೊಯ್ಯಲು ಸಣ್ಣ ಪಟ್ಟ ಚಿತ್ತಾರಗಳಿದ್ದ ಗಾತ್ರದ ಪೆಟಾರಿ ಸಿದ್ಧವಾಯಿತು. {{gap}}ಹೆಮ್ಟಿಯಿಂದ ಯೋಧತರಬೇತಿ ಪಡೆಯುತ್ತಿದ್ದವರಲ್ಲಿ ಅತ್ಯಂತ ದಕ್ಷರಾದ ಇಬ್ಬರು—ಔಟ ಮತ್ತು ಬೆಕ್, ಐವತ್ತು ಯೋಧರ ಮುಖ್‍ಯಸ್‍ಥರು. ಅವರು ಮೆನೆಪ್ಟಾನ ಅನುಚರರಾಗಿ ರಾಜಧಾನಿಗೆ ಹೋಗಬೇಕೆಂದು ಗೊತ್ತಾಯಿತು. {{gap}}ಕೆಫ್‍ಟು ಬಂದು ಹೋದ ಮೇಲೆ ಬಟಾ ತನ್ನ ದೋಣಿಗೆ ಹೊಸದಾಗಿ ಮರದೆಣ್ಣೆ ಬಳೆದಿದ್ದ ಅವನೋಡನೆ ఆಬ್ಟು ಯಾತ್ರೆಗೆ బందిದ್ದ ನಾಲ್ವರು ರಾಜಧಾನಿಯ ಪ್ರಯಾಣಕ್ಕೆ ಅಣಿಯಾದರು. {{gap}}ಹೊರಡಲು ಮೂರು ದಿನ ಉಳಿಯಿತು.... {{gap}}ಅಸೆಟ್ ನಾಯಕನನ್ನು ಕಾణలు బంದ. {{gap}}"ಸೆರೋ ಆಮಂತ್ರಣ ಕಳಿಸಿದ್ದಾರೆ ಅಂತ ಕೇಳಿ ಸಂತೋಷವಾಯ್ತು.” {{gap}}"ಉಗ್ರಾಣ ವಸತಿಗಳ ಕಟ್ಟಡ ಕೆಲಸ ಮುಗಿಯುತ್ತ ಬಂತು, ಅಲ್ಲವಾ?” {{gap}}" ಹೌದು.ನಿಮ್ಮನ್ನು ನೋಡಿ ಮಹಾಅರ್ಚಕರಿಗೆ ಆನಂದವಾಗ್ತದೆ.” {{gap}}"ಏನೋ___ಗೋತ್ತಿಲ್ಲ." {{gap}}" ಪಯಣ ನಡೆಸುವ ದಿವಸ ಬೆಳಿಗ್ಗೆ-” {{gap}}" ದೇವದರ್ಶನಕ್ಕೆ ಬರ್‍ತೇನೆ.” {{gap}}ಇನ್ನು ಎರಡು ದಿನ........ {{gap}}ಹಿರಿಯರ ಸಮಿತಿ ದಿನವು ಸಭೆ ಸೇರಿತು. {{gap}}'ಒಳ್ಳೆಯ ನೀಲ' ಸಂವತ್ಸರ ಎಂಬ ಆಧಾರದ ಮೇಲೆ ಮುಂದಿನ ಕಂದಾಯ ವನ್ನು ಇಪ್ಪವರ್ ಲೆಕ್ಕಹಾಕಿದ್ದ {{gap}}"ಆಂದಾಜು ಹಾಕೋದು ಯಾವಾಗಲೂ ಒಳ್ಳೆದು. ಖಚಿತ ಕಂದಾ ಯುದ ನಿಷ್ಕರ್ಷೆ ಮಾತ್ರ ಕುಯಿಲು ಆದಮೇಲೆ,” ಎಂದು ಮೆನೆಪ್ಟಾ ಮತ್ತೆ ನೆನಪು ಮಾಡಿಕೊಟ್ಟ. {{gap}}ಹಿಂದಿನ ದಿನ......... {{gap}}ಜನರಿಗೆ ಮೆನೆಪ್ಟಾನನ್ನು ಕಂಡು ಶುಭಕೋರುವ ತವಕ. ಒಬ್ಬೊಬ್ಬ ರಾಗಿ ಒಂದಷ್‍ಟು ಜನ ಬಂದರು.<noinclude></noinclude> 9oosruwok4hc6hs9aa0dvewl86psbev ಪುಟ:Mrutyunjaya.pdf/೧೯೯ 104 21685 320162 61308 2026-05-15T14:56:30Z Shreelatha.Halemane 7642 /* Validated */ 320162 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೮೬ |right=}} ನಿನ್ನ ಕೆಲಸದ ಗೊತ್ತುಗುರಿ ನನಗೀಗ ಚೆನ್ನಾಗಿ ಅರ್ಥವಾಗ್ತದೆ, ಪ್ಟಾ..” {{gap}}ಊಟಾ ಮುಗಿದು--- {{gap}}ಮೆನೆಪ್ಟಾ ಪತ್ನಿಯನ್ನು ಅಪ್ಪಿಕೊಂಡ, ತನ್ನ ಮೈ ಆಕೆಯ ಒಡಲನ್ನು ಒತ್ತದಂತೆ. {{gap}}“ ನಾನು ಸುಖಿ, ನೆಫಿ.” {{gap}}“ ನಾನೂ.. ಅಲ್ಲಿ ಹುಷಾರಾಗಿರು.. ಅಪಾಯ ಇರಬಹುದು.” {{gap}}"ಹೂಂ" {{gap}}"ಪ್ರತಿ ದಿನ ನನ್ನನ್ನು ಜ್ಞಾಪಿಸ್ಕೋತೀಯಾ?" {{gap}}"ಪ್ರತಿ ರಾತ್ರೆ.” {{gap}}ಚುಂಬನ,ಮರುಚುಂಬನ.. {{gap}}"ಒಂದು ಕೆಲಸ ಬಾಕಿ ಉಳೀತು." {{gap}}“ ಯಾವುದು ನೆಫಿ ?” {{gap}}"ಚಿಕ್ಕಮ್ಮನ ಹಳ್ಳಗೆ ಹೋಗಿಬರೋದು." {{gap}}“ ನಾನು ವಾಪಸಾದ್ಮೇಲೆ, ಕುಯಿಲು ಮುಗಿಸಿ, ಹೋಗೋಣ.” {{gap}}" ಹೂಂ.ಪ್ಟಾ.ನೀನಿನ್ನು ಮಲಕೋ.ನಿದ್ದೆ ಬೇಡವಾ? ವಿಶ್ರಂತಿ ಬೇಡವಾ?" {{gap}}" ನಿದ್ದೆ ವಿಶ್ರಾಂತಿ ನಿಮಗೂ ಬೇಕು--–ನಮ್ಮಿಬ್ಬರಿಗೂ....” {{gap}}" ಹುಂ." {{gap}}"ಸ್ವಲ್ಪ ಅಳ್ತೀಯಾ ?” {{gap}}ನೆಫಿಸ್ ನಕ್ಕಳು. {{gap}}" ಇವತ್ತು ನಿನ್ನ ತೋಳೇ ನನಗೆ ದಿಂಬು, ಪ್ಟಾ. ಕಣ್ಣೀರಿನಿಂದ ತೋಯಿಸೋದಿಲ್ಲ, ಜೊಲ್ಲು ಸುರಿಸಿ ಒದ್ದೆ ಮಾಡತ್ತೇನೆ.” {{gap}}ಕುಳಿತಲ್ಲೇ ನಿದ್ದೆ. ಮೈ ಚಾಚಿಕೊಂಡು ನಿದ್ದೆ.... {{gap}}ಬೆಳಗಾಯಿತು... {{gap}}ಮಂದಿರಕ್ಕೆ ಹೋಗಿ ಬರುವುದರೋಳಗೆ ನಾಲ್ಕು ಕಡೆಗಳಿಂದ ರಾತ್ರೆಯೇ ಎದ್ದು ನಡೆದು ಬಂದಿದ್ದವರೊಡನೆ ಊರವರೂ ಸೇರಿದರು,ಒಟ್ಟು ನಾಲ್ವತ್ತು.<noinclude></noinclude> h761n4oyth4aqcakpx6d6u0dfzd7j1q ಪುಟ:Mrutyunjaya.pdf/೨೦೧ 104 21687 320163 215319 2026-05-15T14:58:23Z Shreelatha.Halemane 7642 /* Validated */ 320163 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೮೮|right=}} ಗಳಿಗೆ ಕೊಡಬೇಕಾದೀತು."</br> {{gap}}ಖ್ನೆಮ್ ಹೊಟೆಪ್ ನಿರ್ಧಾರ ಕೈಗೊಂಡ.</br> {{gap}}" ಇನ್ನು ಒಬ್ಬೊಬ್ಬರದು ಒಂದೊಂದು ಹಿಡಿ ಮಾತ್ರ.”</br> {{gap}}ಯಾರೋ ನಗುತ್ತ ಕೇಳಿದಳು :</br> {{gap}}" ನಿನ್ನ ಅತ್ತೆ ಬರ್ತಿದ್ದಾರೆ. ಬುತ್ತಿ ತರ್ತಿದ್ದಾರೆ !”</br> {{gap}}ಖ್ನೆಮ್ ದೃಢವಾಗಿ ಅಂದ :</br> {{gap}}" ಎಲ್ಲರಿಗೂ ಒಂದೇ ನಿಯಮ "</br> {{gap}}ಸಂಜೆ ರಾ ಮುಳುಗಲು ಇನ್ನೂ ಒಂದು ತಾಸಿದೆ ಎನ್ನುವಾಗ ರಾಜಗೃಹ</br> ದಿಂದ ಒಂದು ಮೆರವಣಿಗೆ ಹೊರಟಿತು. ಎಡ ಬಲಗಳಲ್ಲಿ ಸಾಲುಗಟ್ಟಿದ ಜನರು.</br> ಖ್ನೆಮ್ ಹೊಟೆಪನ ಶಿಸ್ತು, ನಡುವೆ ಹೂಮಾಲೆಗಳು ಕೊರಳನ್ನು ಬಳಸಿದ್ದ,</br> ಜೊಂಡಿನ ಪಾದರಕ್ಷೆ ಮೆಟ್ಟಿದ್ದ, ನೆಫಿಸ್ ಬಾಚಿದ್ದ ತಲೆಗೂದಲನ್ನು ಭುಜಗಳ</br> ತನಕ ಇಳಿಬಿಟ್ಟಿದ್ದ ಮೆನೆಪ್ಟಾ. ಅವನನ್ನು ಸುತ್ತುವರಿದವರು ಸ್ನೊಫ್ರು,</br> ಸೆಬೆಕ್ಖು, ಸೆಮ ಮತ್ತಿತರ ಹಿರಿಯರು ಅವರ ಹಿಂದಿನಿಂದ ಇಪ್ಯುವರ್, ಔಟ,</br> ಬೆಕ್. (ಗರ್ಭಿಣಿ ತಾಯಿಯೊಡನೆ ರಾಮೆರಿಪ್ಟಾ ದೋಣಿಕಟ್ಟೆಗೆ ಮೊದಲೇ</br> ಸಾಗಿದ್ದ ) ಹರ್ಷೋತ್ಸಾಹದ ಬುಗ್ಗೆಗಳು ಮಾತಾಗಿ ಕಲರವವಾಗಿ ಚಿಮ್ಮು</br> ತ್ತಿದುವು. ನಡುನಡುವೆ ಜಯಘೋಷ: “ಓ! ಮೆನೆಪ್ಟಾ! ಓ!</br> ಮೆನೆಪ್ ಟಾ ! "</br> {{gap}}ದೋಣಿಕಟ್ಟೆಯನ್ನು ತಲಪಿದ್ದ ನೂರಾರು ತೊರೆಗಳನ್ನು ಮೆರವಣಿಗೆಯ</br> ಪ್ರವಾಹವೂ ಕೂಡಿಕೊಂಡಿತು. ಅಸ್ವಸ್ಥರು ಮತ್ತು ತೊಟ್ಟಿಲ ಕೂಸುಗಳನ್ನು</br> ಬಿಟ್ಟು ಮುಖ್ಯ ಪಟ್ಟಣದ ಜನರೆಲ್ಲ ಅಲ್ಲಿ ನೆರೆದಿದ್ದರು. ಅವರೊಂದಿಗೆ ಪ್ರಾಂತದ</br> ಬೇರೆ ಬೇರೆ ಹಳ್ಳಿಗಳಿಂದ ಬಂದವರೂ ಇದ್ದರು.</br> {{gap}}ಬಟಾನ ದೋಣಿ ಸಿದ್ಧವಾಗಿತ್ತು, ಅದನ್ನು ಹಿಂಬಾಲಿಸಿ ಒಂದಷ್ಟು,</br> ದೂರ ಹೋಗುವ ಆಸೆಯಿಂದ ಹಲವು ಪೆಪೈರಸ್ ದೋಣಿಗಳೂ ನೀರಿಗೆ ಇಳಿ</br> ದಿದ್ದುವು.</br> {{gap}}ದೋಣಿಕಟ್ಟೆಯ ವೇದಿಕೆಗೆ ಮೆನೆಪ್ಟಾನನ್ನು ಖೈಮ್ ಹೊಟೆಪ್</br> ಹತ್ತಿಸಿ, “ ಅಣ್ಣ ಏನಾದರೂ ಹೇಳಿ,” ಎಂದ.</br><noinclude></noinclude> alzu57mg794krnykh2bk985lzi20apl ಪುಟ:Mrutyunjaya.pdf/೨೦೩ 104 21689 320164 200916 2026-05-15T15:00:13Z Shreelatha.Halemane 7642 /* Validated */ 320164 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|right=|left=೧೯೦}} {{gap}}“ ಹೊರಡೋಣ ಬಟಾ.” (ತಾನೇ ಹೇಳಿದೆ, ಅಲ್ಲವೆ ?)</br> {{gap}}ಕಟ್ಟೆಯ ಗೂಟಕ್ಕೆ ದೋಣಿಯನ್ನು ಕಟ್ಟಿದ್ದ ಹಗ್ಗವನ್ನು ಬಿಟಾ ಬಿಚ್ಚಿದ.</br> ದೋಣಿಯನ್ನು ತುಸು ತಳ್ಳಿ, ಚಂಗನೆ ಒಳಕ್ಕೆ ಹಾರಿ, ಚುಕ್ಕಾಣಿ ಮೂಲೆ</br>ಯಲ್ಲಿ ನಿಂತು. ಹುಟ್ಟು ಹಾಕುವವರಿಗೆ ಸನ್ನೆ ಮಾಡಿದ.</br> {{gap}}ನಾವೆ ಚಲಿಸತೊಡಗಿತು. ಕೆಳಗಿದ್ದ ಹಲವು ಪುಟ್ಟದೋಣಿಗಳೂ ಜೀವ</br>ತಳೆದುವು. (ಮಹಾಪೂರ ಇಳಿದು ಮತ್ತೆ ನಿರ್ಮಲವಾಗಿದ್ದ ನೀಲನದಿ, ಮೊದಲು</br>ಅದರ ಮಧ್ಯಕ್ಕೆ. ಅನಂತರ ಉತ್ತರಾಭಿಮುಖವಾಗಿ——ನೀರು ಹರಿಯುತ್ತಿದ್ದ</br>ದಿಕ್ಕಿಗೆ.) {{gap}}ಮುಗಿಲೆತ್ತರಕ್ಕೆ ಮುಟ್ಟುತ್ತಿದ್ದ ಕಲರವ, ಜಯಘೋಷ.</br> {{gap}}" ಓ! ಮೆನೆಪ್ ಟ ! ಓ! ಮೆನೆಪ್ ಟ ! "</br> {{gap}}ನಾಯಕ ಕಣ್ಣೆವೆಗಳನ್ನು ಎರಡು ಮೂರು ಬಾರಿ ಒತ್ತಿ ತೆರೆದ. ದೋಣಿ</br>ಕಟ್ಟಿ ಈಗ ನಿಚ್ಚಳವಾಗಿ ಕಂಡಿತು. ಸಹಸ್ರಾರು ತೋಳುಗಳು ಬೀಸಿ ವಿದಾಯ</br>ನುಡಿಯುತ್ತಿದ್ದುವು.</br> {{gap}}ಚಿಕ್ಕ ದೋಣಿಗಳಲ್ಲಿ ಜನ ಯಾಕೆ ಬರಬೇಕು ? ಇದು ಕಾಲಹರಣ</br>ವಲ್ಲದೆ ಇನ್ನೇನು ? ಇನ್ನೊಂದು ಮೆರವಣಿಗೆ—ಈ ನದಿಯಲ್ಲಿ ?</br> {{gap}}" ಓ ಮೆನೆಪ್ಟಾ ! ಓ ಮೆನೆಪ್ಟಾ ! "</br> {{gap}}ದೋಣಿಕಟ್ಟೆಯ ದೃಶ್ಯ ಮಬ್ಬಾಗುತ್ತಿದೆ. ಘೋಷದ ಅಲೆಗಳು ಮಾತ್ರ</br>ತೇಲಿ ಬರುತ್ತಿವೆ.</br> {{gap}}ಒಂದು ಕಿರು ದೋಣಿಯಲ್ಲಿ ಖ್ನೆಮ್ ಹೊಟೆಪ್ !{{gap}}ತಾನು ಚುಕ್ಕಾಣಿ</br>ತಿರುವುತ್ತ ಇತರರಿಗೆ ಆತ ಆಜ್ಞಾಪಿಸುತ್ತಿದ್ದಾನೆ :</br> {{gap}}" ಇನ್ನು ಸಾಕು ! ಹೊರಳಿ !”</br> {{gap}}ಮೆನೆಪ್ಟಾನ ದೋಣಿಯ ಕಡೆಗೂ ಬಂತು ಅವನ ಧ್ವನಿ :</br> {{gap}}" ಔಟ ! ಬೆಕ್ ! ಜೋಪಾನ ! "</br> {{gap}}ಆದೇಶ ತನಗಲ್ಲ, ಅನುಚರರಿಗೆ (ಅಂಗರಕ್ಷಕರಿಗೆ)....</br> {{gap}}ಮೆನೆಪ್ಟಾ ನೀಲನದಿಯುದ್ದಕ್ಕೂ ನೋಡಿ, ಉಸಿರೆಳೆದುಕೊಂಡ.<noinclude></noinclude> 7o2e2i2i5vabws5b8bugpbglhmhrlf5 ಪುಟ:Mrutyunjaya.pdf/೨೫೦ 104 21736 320246 61030 2026-05-15T17:08:16Z Pragathi. BH 7585 /* Validated */ 320246 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೨೩೭}}</noinclude> {{gap}}ಇರಲಿ—ಎನ್ನಲು ಹೊರಟ ಬಟಾ, ಪದವನ್ನು ನುಂಗಿ, ನಾಯಕನೆಡೆಗೆ ದೃಷ್ಟಿಹರಿಸಿದ. ನಗೆಯನ್ನು ಹತ್ತಿಕ್ಕಿ ಮೆನೆಪಟಾ, "ನೀರಿದೆಯಲ್ಲ ?" ಎಂದ. “ಹಾಲು-ಹಾಲು ಕಳಿಸ್ತೇನೆ," ಎನ್ನುತ್ತ ಅಧಿಕಾರಿ ಭೋಜನದ ಉಸ್ತುವಾರಿಗೆ ನಡೆದ. ಬಟಾ ತಲೆ ಚಚ್ಚಿಕೊಂಡು ಅಂದ : “ನನ್ನ ತಾಯಿ ಈಗ ಇದ್ದಿದ್ರೆ ಸಂತೋಷಪಡ್ತಿದ್ಲು !” * * * * ಉಟ ಮುಗಿಸಿ ವಿಶ್ರಾಂತಿಯ ಕೊಠಡಿಯಲ್ಲಿ ಬಟಾ ಒಬ್ಬನೇ ಇದ್ದಾಗ ಮೆನೆಪ್ಟಾ ತಾನು ಅರ್ಥಮಾಡಿಕೊಂಡ ರಾಜಧಾನಿಯ ರಾಜಕಾರಣವನ್ನು ಗೆಳೆಯರಿಗೆ ವಿವರಿಸಿದ. ''ದೇಶದ ರಾಜಕಾರಣದಲ್ಲಿ ಮೂರು ಶಕ್ತಿಗಳಿವೆ. ಪೆರೋನದು. ಮಹಾ ಅರ್ಚಕರದು, ಭೂಮಾಲಿಕರದು. ಪೆರೋ ಪ್ರಾಂತಪಾಲರನ್ನು ನೇಮಿಸಿದ್ದರಿಂದ ಭೂಮಾಲಿಕರ ಪ್ರಾಬಲ್ಯ ಸ್ವಲ್ಪ ಕುಗ್ಗಿತಲ್ಲ? ಅವರೀಗ ಮಹಾ ಅರ್ಚಕರ ಆಸರೆ ಪಡೆಯೋ ಹಾಗೆ ಕಾಣ್ತದೆ. ಆಗ ಅವರಿಬ್ಬರ ಶಕ್ತಿ ಪೆರೋನ ಶಕ್ತಿಗಿಂತ ಹೆಚ್ಚಾಗ್ರದೆ; ಮಹಾ ಅರ್ಚಕರಿಗೆ ಅಧೀನವಾಗಿ ಪೆರೋ ಇರಬೇಕಾಗ್ರದೆ.” “ಆಶ್ಚರ್ಯ! ಅರ್ಚಕರ ಮಾತು ಪೆರೋ ಕೇಳೋದೆ?” “ತೋರಿಕೆಗೆ ಪೆರೋನದೇ ಪ್ರಭುತ್ವ; ಆದರೆ ವಾಸ್ತವವಾಗಿ, ಸೂತ್ರ ಗಳೆಲ್ಲ ಮಹಾ ಅರ್ಚಕರ ಕೈಲಿ. ಇದೇ ರಾಜಕೀಯದ ಮಹಾರಹಸ್ಯ. ಸಾಮಾನ್ಯ ಪ್ರಜೆಗಳಿಗೆ ಇದೊಂದೂ ಅರ್ಥವಾಗೋದಿಲ್ಲ.” “ನಾವು ಆದಷ್ಟು ಬೇಗ ನಮ್ಮ ಪ್ರಾಂತಕ್ಕೆ ವಾಪಸಾಗೋಣ." “ಪೆರೋಗೆ ನಮ್ಮ ಪ್ರಂತದ ಸ್ನೇಹ ಬೇಕು, ನಿಷ್ಠೆ ಬೇಕು.” “ಮಹಾ ಆರ್ಚಕರ ಬಲ ಕುಗ್ಗಿದ ಮೇಲೆ ಇವರು ನಮ್ಮನ್ನು ಅರೀತಾರೆ." "ಭಲೆ ! ತಿಳ್ಕೊಂಡ್ಬಿಟ್ಟಿ!ಆದರೆ ಸ್ವತಃ ನಾವು ಬಲಿಷ್ಟರಾಗಿದ್ರೆ;<noinclude></noinclude> t22fhyr98jj44hjvl4mjm7p47bjy5xa 320247 320246 2026-05-15T17:09:54Z Pragathi. BH 7585 320247 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೨೩೭}}</noinclude> {{gap}}ಇರಲಿ—ಎನ್ನಲು ಹೊರಟ ಬಟಾ, ಪದವನ್ನು ನುಂಗಿ, ನಾಯಕನೆಡೆಗೆ ದೃಷ್ಟಿಹರಿಸಿದ. {{gap}}ನಗೆಯನ್ನು ಹತ್ತಿಕ್ಕಿ ಮೆನೆಪಟಾ, "ನೀರಿದೆಯಲ್ಲ ?" ಎಂದ. {{gap}}“ಹಾಲು-ಹಾಲು ಕಳಿಸ್ತೇನೆ," ಎನ್ನುತ್ತ ಅಧಿಕಾರಿ ಭೋಜನದ ಉಸ್ತುವಾರಿಗೆ ನಡೆದ. {{gap}}ಬಟಾ ತಲೆ ಚಚ್ಚಿಕೊಂಡು ಅಂದ : {{gap}}“ನನ್ನ ತಾಯಿ ಈಗ ಇದ್ದಿದ್ರೆ ಸಂತೋಷಪಡ್ತಿದ್ಲು !” * * * * ಉಟ ಮುಗಿಸಿ ವಿಶ್ರಾಂತಿಯ ಕೊಠಡಿಯಲ್ಲಿ ಬಟಾ ಒಬ್ಬನೇ ಇದ್ದಾಗ ಮೆನೆಪ್ಟಾ ತಾನು ಅರ್ಥಮಾಡಿಕೊಂಡ ರಾಜಧಾನಿಯ ರಾಜಕಾರಣವನ್ನು ಗೆಳೆಯರಿಗೆ ವಿವರಿಸಿದ. ''ದೇಶದ ರಾಜಕಾರಣದಲ್ಲಿ ಮೂರು ಶಕ್ತಿಗಳಿವೆ. ಪೆರೋನದು. ಮಹಾ ಅರ್ಚಕರದು, ಭೂಮಾಲಿಕರದು. ಪೆರೋ ಪ್ರಾಂತಪಾಲರನ್ನು ನೇಮಿಸಿದ್ದರಿಂದ ಭೂಮಾಲಿಕರ ಪ್ರಾಬಲ್ಯ ಸ್ವಲ್ಪ ಕುಗ್ಗಿತಲ್ಲ? ಅವರೀಗ ಮಹಾ ಅರ್ಚಕರ ಆಸರೆ ಪಡೆಯೋ ಹಾಗೆ ಕಾಣ್ತದೆ. ಆಗ ಅವರಿಬ್ಬರ ಶಕ್ತಿ ಪೆರೋನ ಶಕ್ತಿಗಿಂತ ಹೆಚ್ಚಾಗ್ರದೆ; ಮಹಾ ಅರ್ಚಕರಿಗೆ ಅಧೀನವಾಗಿ ಪೆರೋ ಇರಬೇಕಾಗ್ರದೆ.” “ಆಶ್ಚರ್ಯ! ಅರ್ಚಕರ ಮಾತು ಪೆರೋ ಕೇಳೋದೆ?” “ತೋರಿಕೆಗೆ ಪೆರೋನದೇ ಪ್ರಭುತ್ವ; ಆದರೆ ವಾಸ್ತವವಾಗಿ, ಸೂತ್ರ ಗಳೆಲ್ಲ ಮಹಾ ಅರ್ಚಕರ ಕೈಲಿ. ಇದೇ ರಾಜಕೀಯದ ಮಹಾರಹಸ್ಯ. ಸಾಮಾನ್ಯ ಪ್ರಜೆಗಳಿಗೆ ಇದೊಂದೂ ಅರ್ಥವಾಗೋದಿಲ್ಲ.” “ನಾವು ಆದಷ್ಟು ಬೇಗ ನಮ್ಮ ಪ್ರಾಂತಕ್ಕೆ ವಾಪಸಾಗೋಣ." “ಪೆರೋಗೆ ನಮ್ಮ ಪ್ರಂತದ ಸ್ನೇಹ ಬೇಕು, ನಿಷ್ಠೆ ಬೇಕು.” “ಮಹಾ ಆರ್ಚಕರ ಬಲ ಕುಗ್ಗಿದ ಮೇಲೆ ಇವರು ನಮ್ಮನ್ನು ಅರೀತಾರೆ." "ಭಲೆ ! ತಿಳ್ಕೊಂಡ್ಬಿಟ್ಟಿ!ಆದರೆ ಸ್ವತಃ ನಾವು ಬಲಿಷ್ಟರಾಗಿದ್ರೆ;<noinclude></noinclude> mmmic2lw3m7gflduw02asqt2svy23t9 320248 320247 2026-05-15T17:11:56Z Pragathi. BH 7585 320248 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೨೩೭}}</noinclude> {{gap}}ಇರಲಿ—ಎನ್ನಲು ಹೊರಟ ಬಟಾ, ಪದವನ್ನು ನುಂಗಿ, ನಾಯಕನೆಡೆಗೆ ದೃಷ್ಟಿಹರಿಸಿದ. {{gap}}ನಗೆಯನ್ನು ಹತ್ತಿಕ್ಕಿ ಮೆನೆಪಟಾ, "ನೀರಿದೆಯಲ್ಲ ?" ಎಂದ. {{gap}}“ಹಾಲು-ಹಾಲು ಕಳಿಸ್ತೇನೆ," ಎನ್ನುತ್ತ ಅಧಿಕಾರಿ ಭೋಜನದ ಉಸ್ತುವಾರಿಗೆ ನಡೆದ. {{gap}}ಬಟಾ ತಲೆ ಚಚ್ಚಿಕೊಂಡು ಅಂದ : {{gap}}“ನನ್ನ ತಾಯಿ ಈಗ ಇದ್ದಿದ್ರೆ ಸಂತೋಷಪಡ್ತಿದ್ಲು !” {{rh|center= * * * * }} {{gap}}ಊಟ ಮುಗಿಸಿ ವಿಶ್ರಾಂತಿಯ ಕೊಠಡಿಯಲ್ಲಿ ಬಟಾ ಒಬ್ಬನೇ ಇದ್ದಾಗ ಮೆನೆಪ್ಟಾ ತಾನು ಅರ್ಥಮಾಡಿಕೊಂಡ ರಾಜಧಾನಿಯ ರಾಜಕಾರಣವನ್ನು ಗೆಳೆಯರಿಗೆ ವಿವರಿಸಿದ. {{gap}}''ದೇಶದ ರಾಜಕಾರಣದಲ್ಲಿ ಮೂರು ಶಕ್ತಿಗಳಿವೆ. ಪೆರೋನದು. ಮಹಾ ಅರ್ಚಕರದು, ಭೂಮಾಲಿಕರದು. ಪೆರೋ ಪ್ರಾಂತಪಾಲರನ್ನು ನೇಮಿಸಿದ್ದರಿಂದ ಭೂಮಾಲಿಕರ ಪ್ರಾಬಲ್ಯ ಸ್ವಲ್ಪ ಕುಗ್ಗಿತಲ್ಲ? ಅವರೀಗ ಮಹಾ ಅರ್ಚಕರ ಆಸರೆ ಪಡೆಯೋ ಹಾಗೆ ಕಾಣ್ತದೆ. ಆಗ ಅವರಿಬ್ಬರ ಶಕ್ತಿ ಪೆರೋನ ಶಕ್ತಿಗಿಂತ ಹೆಚ್ಚಾಗ್ರದೆ; ಮಹಾ ಅರ್ಚಕರಿಗೆ ಅಧೀನವಾಗಿ ಪೆರೋ ಇರಬೇಕಾಗ್ರದೆ.” {{gap}}“ಆಶ್ಚರ್ಯ! ಅರ್ಚಕರ ಮಾತು ಪೆರೋ ಕೇಳೋದೆ?” {{gap}}“ತೋರಿಕೆಗೆ ಪೆರೋನದೇ ಪ್ರಭುತ್ವ; ಆದರೆ ವಾಸ್ತವವಾಗಿ, ಸೂತ್ರ ಗಳೆಲ್ಲ ಮಹಾ ಅರ್ಚಕರ ಕೈಲಿ. ಇದೇ ರಾಜಕೀಯದ ಮಹಾರಹಸ್ಯ. ಸಾಮಾನ್ಯ ಪ್ರಜೆಗಳಿಗೆ ಇದೊಂದೂ ಅರ್ಥವಾಗೋದಿಲ್ಲ.” {{gap}}“ನಾವು ಆದಷ್ಟು ಬೇಗ ನಮ್ಮ ಪ್ರಾಂತಕ್ಕೆ ವಾಪಸಾಗೋಣ." {{gap}}“ಪೆರೋಗೆ ನಮ್ಮ ಪ್ರಂತದ ಸ್ನೇಹ ಬೇಕು, ನಿಷ್ಠೆ ಬೇಕು.” {{gap}}“ಮಹಾ ಆರ್ಚಕರ ಬಲ ಕುಗ್ಗಿದ ಮೇಲೆ ಇವರು ನಮ್ಮನ್ನು ಅರೀತಾರೆ." {{gap}}"ಭಲೆ ! ತಿಳ್ಕೊಂಡ್ಬಿಟ್ಟಿ!ಆದರೆ ಸ್ವತಃ ನಾವು ಬಲಿಷ್ಟರಾಗಿದ್ರೆ;<noinclude></noinclude> ccyoqvjzqnrow4gze465oky8zh3ewcq ಪುಟ:Mrutyunjaya.pdf/೨೫೧ 104 21738 320249 61046 2026-05-15T17:15:01Z Pragathi. BH 7585 /* Validated */ 320249 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೨೩೮|right=}}</noinclude> {{gap}}ಸ್ವಾವಲಂಬಿಗಳಾಗಿದ್ರೆ, ನಮ್ಮನ್ನು ಯಾರೂ ಏನೂ ಮಾಡೋದಕ್ಕೂ ಆಗೋದಿಲ್ಲ್." {{gap}}"ಈ ಪಾಠ ಕಲಿಯೋದಕ್ಕೆ ಇಷ್ಟು ದೂರ ಬರಬೇಕಾಯ್ತೆ ?...ಹೂಂ... ఆ ಮಂದಿರದ ಆರ್ಚಕ ಬಂದಾಗ ನಿನ್ನೆ ರಾತ್ರೆಯ ಕನಸಿನ ಅರ್ಥ ಕೇಳೋಣ.” {{gap}}“ಅವರು ಸಾಮಾನ್ಯ ಅರ್ಚಕ ಅಂತ ಅನಿಸೋದಿಲ್ಲ ಬಟಾ. ಇವತ್ತೇ ಅಮಾತ್ಯರ ಭೇಟಗೆ ಬರೇವೆ ಅಂತ ಹೇಳಿಕಳ್ಸಿದ್ಸು, ಬಿಡುವಿಲ್ಲ ಅಂದ್ರು ಅಮಾತ್ಯರು. ಏನಾದರೂ ಸುದ್ದಿ ಸಿಗುತ್ತೊ ಅಂತ ಇಲ್ಲಿಗೇ ಬಲ್ತಿ ದಾರೇನೋ ?” {{gap}}ಎಷ್ಟೆಂದರೂ ಅಪೆಟ್ ಜಾತಿ !" {{gap}}ಹೊರಗೆ ದಪ್ಪ ಗಂಟಲು ಕೇಳಿಸಿತು: {{gap}}"ಮಲಕ್ಕೊಂಡಿದ್ರೆ ಆಮೇಲೆ ಬರ್ತೇನೆ. ಎಬ್ಬಿಸೋದು ಬೇಡ." {{gap}}ಔಟನ ಧ್ವನಿ : {{gap}}“ಇಲ್ಲ, ನಿದ್ದೆ ಮಾಡಿಲ್ಲ, ಬರಬಾದು.” {{gap}}ಮೆನೆಪ್ಟಾ ಮತ್ತು ಬಟಾ ಹೊರಬಂದರು. ಇವರನ್ನು ಕಂಡೊಡನೆ ಆಶೀರ್ವದಿಸುವ ಭಂಗಿಯಲ್ಲಿ ಲಾಂಛನ ಕೋಲು ಹಿಡಿದಿದ್ದ ಬಲಗೈಯನ್ನು ಎತ್ತಿ ಅರ್ಚಕ ಒಳಕ್ಕೆ ಕಾಲಿರಿಸಿದ. ಆ ಹಿರಿಯ ದೇವಸೇವಕನಿಗೆ ಇಬ್ಬರೊ ಬಾಗಿ ನಮಿಸಿದರು. {{gap}}ಪಡಸಾಲೆಯಲ್ಲಿ ಎಲ್ಲರೂ ಕುಳಿತಾಗ, ಇನೇನಿ ಅಂದ : {{gap}}"ಸುಮ್ಮನೆ ನೋಡಿ ಹೋಗೋಣ ಅಂತ ಬಂದೆ. ನಿಮ್ಮನ್ನು ರಾಜ ಧಾನಿಗೆ ಕರೆಸಬೇಕೂಂತ ಮಹಾ ಅರ್ಚಕರು ಹೇಳ್ತಾನೇ ಇದ್ರು.” {{gap}}ಇನೇನಿ ಮಾಡತೊಡಗಿದ್ದು ಅವನ ಪಾಲಿನ ಕರ್ತವ್ಯ. {{gap}}ಮೆನೆಪ್ ಟಾಗೆ ಅನಿಸಿತು: ಇಲ್ಲಿ ಎಲ್ಲರೂ ರಾಜಕೀಯ ಪಟುಗಳೇ. {{gap}}ಅವನೆಂದ : {{gap}}"ಮಹಾಅರ್ಚಕರು ಆನ್ ನಗರಿಯಲ್ಲಿದ್ದಾ ರೇಂತ ಕೇಳ್ದೆ.” {{gap}}అల్లి ಮಹತ್ವದ ಧಾರ್ಮಿಕ ಜಿಜ್ಞಾಸೆ ನಡೀತಿದೆ.” {{gap}}“ರಾಜಧಾನಿಗೆ ವಾಪಸಾಗುವ ಕಾರ್ಯಕ್ರಮ?”<noinclude></noinclude> 0l7tx4jmoa5phix8dgf2vor3vpm4a72 ಪುಟ:Mrutyunjaya.pdf/೨೫೨ 104 21739 320250 61049 2026-05-15T17:19:02Z Pragathi. BH 7585 /* Validated */ 320250 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೨೩೯}}</noinclude> {{gap}}“ ಈಗಂತೂ ಮಹಾ ಅರ್ಚಕರಿದ್ದಲ್ಲೇ ರಾಜಧಾನಿ, ಸೆಡ್ ಮಹೋತ್ಸ ವದ ವಿಷಯ ನೀವು ಕೇಳೋದಾದರೆ, ಸದ್ಯದಲ್ಲಿ ಅದು ನಡೀಲಾರದು. ಎರಡು ಮೂರು ತಿಂಗಳ ಕಾಲ ನಿಮ್ಮ ವಸತಿ ಇಲ್ಲಿಯೇ ! ಇಷ್ಟರ ಮೇಲೆ ಮಹಾ ಅರ್ಚಕರ ಮರ್ಜಿ, ಅಮಾತ್ಯರು ಈ ವಿಷಯ ಏನಾದರೂ ಹೇಳಿದರಾ ?” {{gap}}"ಹೆಚ್ಚು ಮಾತಾಡಲು ಆಗಲಿಲ್ಲ. ಬಹಳ ಜನ ಸಂದರ್ಶಕರಿದ್ರು.” {{gap}}“ ಸಂದರ್ಶಕರಿಗೇನು ಬರಗಾಲ ? ಅಮಾತ್ಯ ಸ್ಥಾನದಲ್ಲಿ ಅವರಿದ್ರೂ, ಬರಾರೆ, ನಾವಿದನ್ನೂ ಬರ್ತಾರೆ. ಅಂದ ಹಾಗೆ, ಟೆಹುಟ ನಿಮ್ಮ ವಿಷಯದಲ್ಲಿ ನಿಷ್ಟುರವಾಗಿ ನಡಕೊಂಡ್ರು ಅಂತ ಕೇಳ್ದೆ." {{gap}}“ ಹಾಗೇಂತ ಹೇಳ್ಲಾರೆ. ಅವರು ತಮ್ಮ ಮಾಟನಂತೆ ನಡಕೊಂಡ್ರು {{gap}}” ಸರಿಯಾದ ದೃಷ್ಟಿ. ಸ್ವತಃ ಟಿಹುಟಯೇ ನೀರಾನೆ ಪ್ರಾಂತದ ನಾಯಕನ ಬಗೆಗೆ ಅಭಿಪ್ರಾಯ ಬದಲಿಸಬಹುದು..ನಾಳೆ ಪೆರೋನನ್ನು ನೀವು ಕಾಣ್ತೀರಂತೆ.” {{gap}}“ ನಿಮಗೆ ಎಲ್ಲಾ ಸಂಗತಿಗಳೂ ಗೊತ್ತಾಗ್ತವೆ” {{gap}}ಮಂದಿರದ ಅರ್ಚಕ ನಾನು. ಜನರಿಗೆ ನನ್ನಲ್ಲಿ ಭಕ್ತಿ.” {{gap}}ಮಾತುಗಳ ನಡುವಿನ ಮಾನವನ್ನು ಉಪಯೋಗಿಸಿಕೊಂಡು ಬಟಾನೆಂದ: “ {{gap}}ನಮ್ಮ ನಾಯಕರಿಗೆ ನಿನ್ನೆ ರಾತ್ರೆ ಒಂದು ಭಾರೀ ಕನಸು ಬಿತ್ತು ಅಯ್ಯ.” {{gap}}ಮೆನೆಪ್ಟಾನತ್ತ ನೋಡಿ ಇನೇನಿ ಅಂದ : {{gap}}ಹೌದಾ? ಏನು ಕಂಡಿರಿ ?" {{gap}}ನಾಯಕ ತಾನು ಕಂಡ ಕನಸನ್ನು ಇದ್ದುದು ಇದ್ದಂತೆ ಬಣ್ಣಿಸಿದ. {{gap}}ವಿಸ್ತರಿಸಿದ್ದ ತನ್ನ ಹೊಟ್ಟೆಗೆ ಅಡ್ಡವಾಗಿ ಇನೇನಿ ಅಂಗೈಗಾಳನ್ನು ಇರಿಸಿ, ಒಂದು ತೋರು ಬೆರಳಿನಿಂದ ಇನ್ನೊಂದನ್ನು ತಟ್ಟುತ್ತ, ಯೋಚಿಸುವವನಂತೆ ಸ್ವಲ್ಪ ಹೊತ್ತು ಸುಮ್ಮನಿದ್ದು, ಅಂದ : {{gap}}ಪಾಪಿಗಳಾ!! ಹೋಯ್ತು! ಕಸದ ಜತೆ ರಸವೂ ಹೋಯ್ತು ! ಅರ್ಥ ಪೂರ್ಣ-ಅರ್ಥಪೂರ್ಣ! ನಾಯಕ ಮೆನೆಪ್ಟಾ, ನೀವು ಅದೃಷ್ಟಶಾಲಿ. ನೀವು ಬಂಗಾರದ ಗಣಿಯ ಒಡೆಯರಾಸ್ತೀರಿ. ಅಂದರೆ, ಅತುಳೈಶ್ವರ್ಯ ನಿಮ್ಮ ದಾಗ್ತದೆ. ರಾ, ಪ್ಟಾ, ಅಮನ್, ಈ ಮೂವರು ದೇವರ ಅನುಗ್ರಹವನ್ನೂ<noinclude></noinclude> 3hm6ic3q8hppz3ud3l9eledqph3umt6 ಪುಟ:Mrutyunjaya.pdf/೨೫೩ 104 21740 320251 61065 2026-05-15T17:21:50Z Pragathi. BH 7585 /* Validated */ 320251 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೨೪೦|right=}}</noinclude> ನೀವು ಸಂಪಾದಿಸ್ತೀರಿ. ಮಹಾ ಅರ್ಚಕರ ಕೃಪಾಕಟಾಕ್ಷಕ್ಕೆ ಪಾತ್ರರಾಗ್ತೀರಿ.” {{gap}}ಇಷ್ಟು ಸಾಕು ಎನಿಸಿ ಇನೇನಿ ನಾಯಕನ ಮುಖವನ್ನು ನೋಡಿದ. {{gap}}ಯಾವ ಭಾವನೆಯನ್ನೂ ಅದು ತೋರ್ಪಡಿಸಲಿಲ್ಲ. ಬಟಾನೆಂದ : {{gap}}“ ಈ ಅರ್ಥವಿವರಣೆ ಕೇಳಿ ಕೃತಾರ್ಥರಾದ್ವಿ.” ಇನೇನಿ ಎದ್ದ . {{gap}}" ಒಳ್ಳೇದು, ಬರ್ತೇನೆ. ಹೇಗೂ ಇಲ್ಲೇ ಇರ್ತೀರಲ್ಲ. ಭೇಟಿಯಾಗ್ತಿ ರೋಣ. ದೈವಭಕ್ತರನ್ನು ಕಂಡರೆ ನನಗೆಷ್ಟೋ ಸಂತೋಷ.” {{gap}}ಎದ್ದು ನಿಂತವನು, ಕೂದಲು ಬೋಳಿಸಿದ್ದ ತಲೆಯನ್ನೊಮ್ಮೆ ಸವರಿ, "ಹ್ಞ . ಒಂದು ವಿಷಯ ನಿಮಗೆ ಹೇಳೋದು ವಾಸಿ. ” ಎಂದು ನುಡಿದು, ಮತ್ತೆ ಕುಳಿತು, ಮಾತು ಮುಂದುವರಿಸಿದ : {{gap}}" ಮೆನ್ನ-ಹುಚ್ಚ ಮೆನ್ನ-ಇಲ್ಲಿ ನದೀತಟದಲ್ಲಿ ನಿಮಗೆ ಸಿಕ್ಕಿದ್ನಂತೆ. ಅವನಿಗೆ ಸಲಿಗೆ ಕೊಡ್ಬೇಡಿ. ದಂಡೆಯ ದ್ವಾರಪಾಲಕರು ನಿಮಗೆ ಹೇಳಿರ್ಬಹುದು. ಅವನು ಒಂದು ರೀತಿಯ ದೈವದ್ರೋಹಿ .ನಮ್ಮ ನುಹಾ ಅರ್ಚಕರು ಕರುಣಾ ಶಾಲಿಯಾದ್ದರಿಂದ ಆತ ಉಳಿದುಕೊಂಡಿದ್ದಾನೆ....” {{gap}}ಅರ್ಚಕನ ಜತೆ ತಾನೂ ಎದ್ದಿದ್ದ ಬಟಾ ನಿಂತಲ್ಲಿಂದಲೇ. ಎಷ್ಟು ಸಮಯದಿಂದ ಹೀಗೆ?” ಎಂದು ಕೇಳಿದ. ತನ್ನ ತಲೆಯ ಬಳಿ ಬೆರಳುಗಳನ್ನುಆಡಿಸಿ. {{gap}}“ ಈ ಮೆನ್ನ ಬಹಳ ವರ್ಷ ವೃತ್ತಿಯಲ್ಲಿದ್ದು ತೀರಿಕೊಂಡು ಒಬ್ಬ ದೇವಿ ಸೇವಕನ ಮಗ ; ಹತ್ತು ವರ್ಷದ ತಬ್ಬಲಿ ಬಾಲಕನನ್ನು ಮಹಾ ಅರ್ಚಕರು ಸ್ವೀಕರಿಸಿದ್ರು. ಸ್ವೀಕರಿಸಿದು ಸ್ವತಃ ತಾವೇ ಶಿಕ್ಷಣ ಕೊಟ್ರು. ಹುಡುಗ ಆರೇಳು ವರ್ಷ ಅವರ ಕೊಠಡೀಲೇ ಮಲಗ್ತಿದ್ದ. ಅದೃಷ್ಟವಂತ. ಮಹಾ ಅರ್ಚಕರ ನಿತ್ಯ ಸಾನ್ನಿಧ್ಯ ಭಾಗ್ಯ ಅವನಿಗಿತ್ತು . ಮುಂದೆ ಮಹಾಮಂದಿರದಲ್ಲಿ ದೇವಸೇವಕರ ಸಂಖ್ಯೆ ಬೆಳೆಯಿತು. ದೇವಸೇವಿಕೆಯರ ತಂಡವು ಸಿದ್ಧವಾಯ್ತು. ಮೆನ್ನನಿಗೆ ಮಹಾಅರ್ಚಕರು ಕಿರಿಯ ದೇವಸೇವಕನ ಕೆಲಸ ಕೊಟ್ಟು ದೂರ ಇಟ್ಟು. ಕ್ರಮೇಣ ಮೆನ್ನನಿಗೆ ಮಹಾ ಅರ್ಚಕರಲ್ಲಿ ನಿಷ್ಠೆ ಕಡಿಮೆಯಾಯ್ತು. ದೇವರಲ್ಲಿ ಭಕ್ತಿ ಕುಗ್ಗಿತು. ಇಪ್ಪತ್ತನೆಯ ವರ್ಷದಲ್ಲಿ ಅವನಿಗೆ ಭಡ್ತಿ ಸಿಗಬೇಕಾಗಿತ್ತು. ಆದರೆ...” {{rh|center=* * ‌ * * * }}<noinclude></noinclude> qvjwchvusbttmvcw1rg3nsrn48a410l ಪುಟ:Mrutyunjaya.pdf/೨೫೪ 104 21741 320252 247029 2026-05-15T17:25:01Z Pragathi. BH 7585 /* Validated */ 320252 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೨೪೧}}</noinclude> {{gap}}ಒಬ್ಬ ದೇವಸೇವಿಕೆ ಒಮ್ಮೆ ಮಹಾ ಅರ್ಚಕನಿಗೆ ದೂರು ಕೊಟ್ಟಳು. {{gap}}ಹಿಂದಿನ ಮುಂಚ್ಚಜೆ ದೇವಸೇವಿಕೆಯರ ವಸತಿಯ ಬಳಿ ಮೆನ್ನ ಸುಳಿಯುತ್ತಿದ್ದನ೦ತೆ; ಹೋಗು ಎಂದರೂ ಹೋಗಲಿಲ್ಲವ೦ತೆ. {{gap}}ಮಹಾ ಅರ್ಚಕ ಮೆನ್ನ ನನ್ನು ಕರೆಸಿ ಗದರಿಸಿದ: {{gap}}" ಯಾಕೊ ?" {{gap}}ನೀವು ಆ ಕಡೆಗೆ ಹೋದದ್ದನ್ನ ನೋಡಿದೆ; ಅಯ್ಯ ಯಾವಾಗಲೂ ಸ್ವಲ್ಪ ಹೊತ್ನಲ್ಲೇ ವಾಪಸು ಬರ್‍ತಿದ್ರಿ. ನಿನ್ನೆ ಮಾತ್ರ ಬರಲಿಲ್ಲ. ನಿಮಗೇನಾಯಿತೋ ಅಂತ ನಿಮ್ಮನ್ನು ಹುಡುಕ್ಕೊಂಡು ಅತ್ತ ಹೋದೆ. ಒಬ್ಬಿಬ್ರು ನನ್ನನ್ನು ಒಳಗೆ ಕರೆದ್ರು. ಆದ್ರೆ ನಾನು ಹೋಗ್ಲಿಲ್ಲ...." {{gap}}"ಮೂರ್ಖ ! ಮಾಡೋದಕ್ಕೆ ಬೇರೇನೂ ಕೆಲಸ ಇಲ್ದಿದ್ರೆ ಗರ್ಭಗುಡಿ ಮುಂದೆ ಕೂತಿರ್‍ಬೇಕು.” {{gap}}"ದೇವಸೇವಿಕೇರು ಗರ್ಭಗುಡಿಯೊಳಗೂ ಬಚ್ಚಿಟ್ಕೋತಾರೆ, ಅಯ್ಯ.” {{gap}}"ಅಪವಿತ್ರ ಮಾತನ್ನಾಡಿದ್ರೆ ನಾಲಿಗೆ ಬಿದ್ದು ಹೋದೀತು, ಮರುಳೆ!” {{gap}}"ಯಾವುದು ಪವಿತ್ರ, ಯಾವುದು ಅಪವಿತ್ರ ಅಯ್ಯ?" {{gap}}"ಹೋಗು ಮಹಾಮಂದಿರದ ಮುಖ್ಯ ಅರ್ಚಕನನ್ನು ಕೇಳು." {{gap}}ದೂರು ಕೊಡಲು ಬಂದಿದ್ದ ದೇವಸೇವಿಕೆ ನಗುತ್ತ ಹೊರಟು ಹೋದಳು. {{gap}}ಮೆನ್ನ ಮಹಾ ಅರ್ಚಕನ ಪಾದದ ಬಳಿ ಮುದುರಿ ಕುಳಿತು ಗೋಗರೆದ: {{gap}}"ಇನ್ನು ನಾನು ನಿಮ್ಮ ಸೇವೆಗೆ ಬರೋದು ಬೇಡವೆ, ಅಯ್ಯ?" {{gap}}"ಎಲ್ಲರೂ ಅವರವರ ಸ್ಥಾನದಲ್ಲಿದ್ಕೊಂಡು ಮಾಡೋ ಕೆಲಸವೂ ನನ್ನ ಸೇವೆಯೇ." {{gap}}"....ಅಯ್ಯ, ಶಂಕೆ ಸಂದೇಹಗಳು ನನ್ನನ್ನು ಬಾಧಿಸ್ತವೆ." {{gap}}"ಹುಚ್ಚಪ್ಪ! ಮದುವೆ ಮಾಡ್ಕೊಂಡು ನಿಮ್ಮ ತಂದೇ ತರಹ ಗೃಹಸ್ಠ ಅರ್ಚಕನಾಗು. ಮೂರು ತಿಂಗಳು ಮನೇಲಿರು; ಒಂದು ತಿಂಗಳು ಪರಿಶುದ್ಧವಾಗಿದ್ಕೊಂಡು ಮಂದಿರದಲ್ಲಿ ದುಡಿ.” {{gap}}" ಮದುವೆ ! ನಾನೊಲ್ಲೆ, ನಾನೊಲ್ಲೆ!” {{gap}}"ಹಾಗಾದರೆ ಹಾಳಾಗಿ ಹೋಗು !" {{gap}}"....ಅಯ್ಯ, ದೇವಸೇವಿಕೇರೂ ಮದುವೆ ಮಾಡ್ಕೊಂಡು ಮೂರು {{gap}} ೧೬<noinclude></noinclude> 5uaczbznug6gub2cfth69z9exrz53ot ಪುಟ:Mrutyunjaya.pdf/೨೯೦ 104 21778 320253 61535 2026-05-15T17:28:12Z Pragathi. BH 7585 /* Validated */ 320253 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೨೭೭}}</noinclude>ಗಾರನಿಗೆ ರಾಜಾತಿಥ್ಯವೆ? ಛೆ!" 'ಬೇರೇನೋ ಇರಬೇಕು' 'ಏನೂ ಇಲ್ಲ ನಾಳೆ ಅವನನ್ನೇ ಪ್ರಾಂತಪಾಲ ಮಾಡ್ತಾರೆ'. 'ಹಾಗಾದರೆ ఇಲ್ಲಿಗೇ ಬರಲಿ, ಈಗಲೇ ಬರಲಿ.') {{gap}}ಸೆಡ್ ಉತ್ಸವಕ್ಕೆ ಇನ್ನೂ ದಿನ ಗೊತ್ತಾಗಿಲ್ಲ ಎಂದು ಪ್ರಾಂತಪಾಲರಿಗೆ ವಿಸ್ಮಯ. {{gap}}"ಒಂದು ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ರಾಜಧಾನಿಯಲ್ಲೇ ಇರಬೇಕಾಗುತ್ತದೆ." ಎಂದು ಯಾರೋ ಒಬ್ಬರು ಗುಟ್ಟಿನ ಸುದ್ದಿ ಹಂಚಿದರು. {{gap}}"ಸಪತ್ನೀಕರಾಗಿ ಬನ್ನಿ ಅಂತ ಪೆರೋ ತಿಳಿಸಿದ್ದರೆ ಚೆನ್ನಾಗಿತ್ತು," ಎಂದು ಅಸಮಾಧಾನ ವ್ಯಕ್ತಪಡಿಸಿದವರು ಕೆಲವರೇ. ಉಳಿದವರಿಗೆಲ್ಲ ಅದು ಸ್ವಾಗ ತಾರ್ಹ ಬದಲಾವಣೆ. ಇಲ್ಲಿ ಇತಿಮಿತಿ ಇಲ್ಲದ ಆಮೋದ ಪ್ರಮೋದಗಳು. ಆಡಳಿತದ ಸಮಸ್ಯೆಗಳ ತಲೆನೋವೂ ಇಲ್ಲ. ಲಂಗುಲಗಾಮಿಲ್ಲದ ಹರಟೆ ('ಅವರು ಹಾಗಂತೆ' 'ಇವರು ಹೀಗಂತೆ' 'ನನಗೆ ಗೊತ್ತಪ್ಪ, ಸ್ವತಃ ಅವರೇ ನನಗೆ ಹೇಳಿದ್ದು' 'ಮಹಾರಾಣಿ ತಲೆಗೂದಲು ಕತ್ತರಿಸಿ, ಕೃತಕ ಕೇಶಕವಚ ಇಟ್ಟು, ಅದರ ಮೇಲೆ ಕಿರೀಟ ಧರಿಸ್ತಾರಂತೆ.' 'ಯಾವಾಗ?' 'ಮಹಾಪ್ರಭು ಕೇಶಮುಂಡನ ಮಾಡಿಸ್ಕೊಂಡ್ಮೇಲೆ' 'ಪಾಪ ! ಯಾಕೆ ಈ ಬುದ್ಧಿ ?' 'ಷೋಕಿ. ಗಂಡಸು ಕೃತಕ ಕೇಶ ಧರಿಸಿದರೆ, ತುಂಬಾ ಕೂದಲಿದೆ ಅಂತ ತೋರಿಸ್ಕೋಬೌದು. ನರೆತ ಕೂದಲಿಗೆ ಕಪ್ಪು ಹಚ್ಚಬೇಕಾದ ಪ್ರಮೇಯವೂ ಇಲ್ಲ.' 'ಹೆಂಗಸರು?' 'ಐಗುಪ್ತದ ದೇಶದಲ್ಲಿ ಗಂಡಸರಿಗಿಂತ ಯಾವುದರಲ್ಲಿ ಕಮ್ಮಿ ಹೆಂಗಸರು?' 'ಹೆಚ್ಚು ತೂಕದ ದೊಡ್ಡ ಸ್ವರ್ಣ ಕಿರೀಟ' 'ಸರಿ, ಸರಿ!') {{gap}}ವಯಸ್ಸು ಬೇರೆ ಬೇರೆ. ಅಭಿರುಚಿಗಳು ಕೂಡಾ.ಅವರ ನಡುವೆ ಅಸೂಯೆಯೂ ಸುಳಿಯುತ್ತಿತ್ತು. ರಾಜಧನಿಯಲ್ಲಿ ಮಿತ್ರರಿದ್ದರು.ಎಲ್ಲರೂ ಇಲ್ಲಿ ನೇಮಕಗೊಂಡೇ ಪ್ರಾಂತಗಳಿಗೆ ಹೋದವರು. ಮಿತ್ರರ ಒಡನಾಟದಲ್ಲಿ ಕಾಲಹರಣ. {{gap}}ಒಮ್ಮೊಮ್ಮೆ ಗಭೀರ ಹರಟೆ. ('ಮಹಾ ಅರ್ಚಕರ ಧೋರಣೆ ಹ್ಯಾಗೆ ಸರಿ? ಪ್ರಾಚೀನ ನಡವಳಿಕೆಗೆ ಇದು ವಿರುದ್ಧ ಅಲ್ವಾ?' 'ದೇಶದಲ್ಲಿ ಬಿಗಿ<noinclude></noinclude> st9jeni402jqode7bpdmigvcbg0dt84 ಪುಟ:Mrutyunjaya.pdf/೨೯೧ 104 21779 320254 61536 2026-05-15T17:29:31Z Pragathi. BH 7585 /* Validated */ 320254 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೨೭೮|right=}}</noinclude>ಆಡಳಿತ ಬೇಕೂಂತ ತಾನೇ ಹೇಪಾಟ ಕೇಳೋದು. ಅದರಲ್ಲಿ ತಪ್ಪೇನಿದೆ?' 'ಅವರ ದೃಷ್ಟೀಲಿ ಬಿಗಿ ಆಡಳಿತ ಅಂದರೆ ದೇವಮಂದಿರಕ್ಕೆ ಹೆಚ್ಚು ಕಂದಾಯ ಹೆಚ್ಛು ಸಂಪತ್ತು, ಹೆಚ್ಛು ದಾಸದಾಸಿಯರು.' 'ಭೂಮಾಲಿಕರಿಗೆ ನಮ್ಮ ಮೇಲೆ ಸಿಟ್ಟು ಮೊದಲಿದ್ದ ಹಾಗೆ ನಾವೇ ಆಳ್ತೇವೆ; ನಾವೇ ಕಂದಾಯ ಸಂಗ್ರಹಿಸಿ ಕೊಡ್ತೇವೆ: ರಾಜಧಾನಿಯಿಂದ ಪ್ರಾಂತಪಾಲರನ್ನು ಕಳಿಸೋದು ಬೇಡ_ಅನ್ತಿದಾರೆ?' 'ಅಂಕುಶ ಅವರಿಗಿಷ್ಟವಿಲ್ಲ.' 'ಅದಕ್ಕೇ ರಹಸ್ಯವಾಗಿ ಮಹಾಅರ್ಚಕರ ಪಕ್ಷ ವಹಿಸ್ತಿದ್ದಾರೆ.') {{gap}}ಎಲ್ಲರಿಗಿಂತ ಅರಮನೆಗೆ ಹೆಚ್ಛು ಹತ್ತಿರದವನು ಗೇಬು. ಮೆನೆಪ್‍ಟಾಗೆ ಆಮಂತ್ರಣ ಹೋದಾಗ, ತಾನೂ ರಾಜಧಾನಿಯಲ್ಲಿಯೇ ಇರಬೇಕಾಗುತ್ತದೇನೋ ಎಂದುಕೊಂಡಿದ್ದ. ಅದು ಅನಗತ್ಯ ಎಂದು ಅರಿತಾಗ, ಆತ ಲಿಷ್ಟ್‌‍ಗೆ ತೆರಳಿದ. ಅವನಲ್ಲದಿದ್ದರೂ, ಅವನ ಬಗೆಗೆ ಮಾತು ನೂತನ ಅತಿಥಿ ಭವನದಲ್ಲಿ ಮತ್ತೆ ಮತ್ತೆ ಕೇಳಿಸಿತು. ('ಮೆನೆಪ್‍ಟಾ ಬಂದಾಗ ಸ್ವತಃ ಗೇಬು ಅವನನ್ನು ಇದಿರ್ಗೊಂಡನಂತೆ'; 'ರಾಜಿ ಪ್ರಯತ್ನ ?'; 'ಪಾಪ, ಗೇಬು ! ಸಮಾಧಾನಪಡಿಸೋಣ ಅಂದರೆ ಅವನೇ ಇಲ್ವಲ್ಲ'; 'ಅದರ ಅಗತ್ಯ ಕಾಣ್ಲಿಲ್ಲ. ಅವನು ಖುಷಿಯಾಗಿಯೇ ಇದ್ದಾನಂತೆ'; 'ಮೊದಲ್ನಿಂದಲೂ ಹಾಗೆಯೇ ಅವನು'; 'ಹುಟ್ಟಿನಿಂದಲೇ ಶ್ರೀಮಂತರಾದವರಿಗೆ ಉತ್ಕರ್ಷ ಸಾಧಿಸೋದರಲ್ಲಿ ಆಸಕ್ತಿ ಕಮ್ಮಿ'; 'ಗೇಬು ಹೆಂಡತಿ ಸನ್ನಿಧಿಗೆ ತೀರಾ ಹತ್ತಿರ ಅನ್ತಿದ್ರು' ಈಗ ಅಂಥದೇನೂ ಇಲ್ಲ.' 'ಎಷ್ಟು ವರ್ಷ ಹತ್ತಿರ ಇರೋಕಾಗ್ತದೆ. ದೂರವಿರಿ ಅಂತಲೇ ಗೇಬೂನ ನೀರಾನೆ ಪ್ರಾಂತಕ್ಕೆ ಕಳಿಸಿದರಂತೆ.' 'ಅವನಿಗೆ ಒಳ್ಳೇ ಫಜೀತಿ.') {{gap}}ಇಬ್ಬರು ಭವನದ ಮಹಡಿಯ ವಿಶಾಲ ಮುಖಮಂಟಪದಲ್ಲಿ, ನಡು ಉಡುಪು ಧರಿಸಿದ್ದ ದಾಸಿ ತಂದಿಟ್ಟ ದ್ರಾಕ್ಷಾಸುರೆ ಸವಿಯುತ್ತ ಬಹಳ ಗುಟ್ಟಾಗಿ ತಮ್ಮೊಳಗೆ ಮಾತನಾಡಿಕೊಂಡರು : {{gap}}“ಅಂತಃಪುರದಲ್ಲಿ ಈಗ ಹೆರಿಗೆ ಕಡಿಮೆಯಂತೆ!” {{gap}}“ಇಷ್ಟು ಬೇಗ ಸೆಡ್ ಉತ್ಸವ ಮಾಡಿಕೊಳ್ಳೋದೇ ಅದಕ್ಕೆ !” {{gap}}“ಅಂದರೆ ಮುಂದಿನ ವರ್ಷ ಈ ಹೊತ್ನಲ್ಲಿ ಅಂತಃಪುರ ತುಂಬಾ ಮೊಲೆ ಚೀಪೋ ಮಕ್ಕಳೇ ಇರ್ತವೆ ಅನ್ನು.”<noinclude></noinclude> h6jlyf7hm8dgn192gtrs3ztvlrfpsnp ಪುಟ:Mrutyunjaya.pdf/೨೯೨ 104 21780 320255 61537 2026-05-15T17:32:08Z Pragathi. BH 7585 /* Validated */ 320255 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೨೭೯}}</noinclude>{{gap}}“ಈಗ ಬಂದಳಲ್ಲ ಇವಳು ಹೇಗೆ?” {{gap}}“ಸೆಡ್ ಉತ್ಸವ ಆಗೋವರೆಗೆ ನೀನಿಟ್ಕೋ.” {{gap}}“ಮಹಾ ಅರ್ಚಕನ ಆ ಚಟುವಟಿಕೆಗೆ ಮೇರೆ ವಿಾರಿದೆಯಂತಲ್ಲ?” {{gap}}“ನೋಡ್ಕೋ. ಅವನದ್ದೇನಾದರೂ ಮೇಲುಗೈ ಆದರೆ, ರಾಣೀವಾಸಕ್ಕೆ ಹತ್ತಿರವಾಗಿ ಗುರುವಸತಿ ಕಟ್ಟಿಸ್ಕೊಂಡ್ಬಿಡ್ತಾನೆ!” {{gap}}“ಆಗ ಅವನ್ನು ದುರ್ದೈವಿ ಅನ್ನೋಣವೋ? ಭಾಗ್ಯಶಾಲಿ ಅಂತ ಕರೆಯೋಣವೊ?" {{gap}}“ಕಡೆಗೆ ಮಹಾ ಅರ್ಚಕನೂ ಸೆಡ್ ಉತ್ಸವ ಮಾಡಿಸ್ಕೊಳ್ಬೇಕಾಗ್ತದೆ!" {{rh|center=* * * * }} {{gap}}ಪ್ರಾಂತಪಾಲರ ಆ ವೃತ್ತಕ್ಕಿಂತ ದೂರವಾಗಿ, ನದೀತಟದ ತಂಗುಮನೆಗಳಲ್ಲಿ ಭೋಜನಗೃಹ_ಪಾನಮಂದಿರಗಳಲ್ಲಿ ಸುಖವನ್ನು ಕೊಂಡು ಅನುಭವಿಸುವುದರಲ್ಲೇ ಕಾಲಯಾಪನೆ ಮಾಡುತ್ತಿದ್ದರು, ಕೆಲವು ಪ್ರಾಂತಗಳ ಭೂಮಾಲಿಕರು. ಅವರು ಸೆಡ್ ಉತ್ಸವಕ್ಕೆಂದೇನೂ ಬಂದವರಲ್ಲ. ರಾಜಧಾನಿಗೆ ಬರಲು ಯಾರ ಆಮಂತ್ರಣವೂ ಅವರಿಗೆ ಅಗತ್ಯವಿರಲಿಲ್ಲ. ವಿಹಾರ ನೌಕೆಗಳಲ್ಲಿ ಯಾನ ಮಾಡುತ್ತ, ಯಾವ ಊರನ್ನು ಯಾವಾಗ ಬೇಕಾದರೂ ಸಂದರ್ಶಿಸುತ್ತ, ವರ್ಷವಿಡೀ ಅಲೆಮಾರಿಗಳಾಗಿ ದಿನಗಳೆಯುವ ಶಕ್ತಿ ಅವರಿಗಿತ್ತು. {{gap}}ಅಂಥವರಲ್ಲೊಬ್ಬ ನೀರಾನೆ ಪ್ರಾಂತದ ನುಟ್‍ಮೋಸ್‍. {{gap}}ವರ್ಷಕ್ಕೆ ಎರಡು ಮೂರು ಸಲ ಅವನು ರಾಜಧಾನಿಗೆ ಹೋಗಿ ಬರುತ್ತಿದ್ದ. ಅಲ್ಲಿ ಅರಮನೆಯ ಸಣ್ಣ ಪುಟ್ಟ ನೌಕರರೆದುರು ಧಾರಾಳಿಯಾಗಿ ಆಬ್ಟು ಯಾತ್ರೆಯಲ್ಲಿ ಪೆರೋನ ಬೋಯಿಯಾಗುವ ಅವಕಾಶ ದೊರಕಿಸಿಕೊಂಡ. ಆದರೆ ಪ್ರಾಂತದಲ್ಲಿ ಬಂಡಾಯವಾದ ಮೇಲೆ ತನ್ನ ಹೊಣೆಗೆಟ್ಟ ಬದುಕಿಗೆ ಒಂದು ಖಚಿತ ರೂಪ ಕೊಡುವುದು ಅಗತ್ಯವೆನಿಸಿತು. ಅದು ಸಾಧ್ಯವಾದದ್ದು, ಮೆಚ್ಚಿನ ದಾಸಿಯನ್ನು ಕರೆಸಿಕೊಂಡ ಮೇಲೆ. ಬಾಳಬೇಕಾದರೆ, ಆಡಳಿತಗಾರರ ಕುಶಲಕಲೆಗಳಲ್ಲಿ ಕೆಲವನ್ನಾದರೂ ಕರಗತ ಮಾಡಿಕೊಳ್ಳುವುದು ಅವಶ್ಯ ಎಂದು ಅವನು ಮನಗಂಡ. ಗೇಬು ಹೇಗೂ ಅವನ ಮಿತ್ರ. ಟೆಹುಟಯ ಸ್ನೇಹವನ್ನೂ ಸಂಪಾದಿಸಿದ. ಮೇಲು ಮಟ್ಟದ ಆತಿಥ್ಯ ಯಾರಿಗೆ<noinclude></noinclude> c9l5x3bxpf3rh7lxh0j9l5lnck1sdmn ಪುಟ:Mrutyunjaya.pdf/೨೯೩ 104 21781 320256 61538 2026-05-15T17:35:04Z Pragathi. BH 7585 /* Validated */ 320256 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೨೮೦|right=}}</noinclude>ತಾನೇ ಇಷ್ಟವಿಲ್ಲ? ಅರಮನೆಯ ಬೇರೆ ಕೆಲ ಅಧಿಕಾರಿಗಳಿಗೂ ಅವನು ಪರಿಚಿತನಾದ. {{gap}}ನಡಳಿತದ ಚೌಕಮಣೆಯ ಕಾಯಿಗಳನ್ನೇನೋ ಗುರುತಿಸಿದ್ದ. ಹೇಗಾದರೂ ಮಾಡಿ ಅವನ್ನು ಸರಿಸಲು ಶಕ್ತನಾದೆನೆಂದರೆ ತನ್ನ ಉನ್ನತಿ ಖಚಿತ_ ಎಂದುಕೊಂಡ. {{gap}}ಆ ಆಟದ ನಿಯಮಗಳನ್ನು ಅವನು ಕಲಿತುದು ಅಮಾತ್ಯನ ಹಿರಿಯ ಲಿಪಿಕಾರ ಸೆನೆಬ್‍ನಿಂದ. ನುಟ್‍ಮೊಸ್‍ಗೆ ಅಮಾತ್ಯರ ಭೇಟಿ ಲಭಿಸಿದ್ದೂ ಅವನ ಪ್ರಯತ್ನದಿಂದಲೇ. ಅಮಾತ್ಯನೊಡನೆ ಆತ ಸೆನೆಬ್ ಹೇಳಿಕೊಟ್ಟಂತೆಯೇ ವರ್ತಿಸಿದ. {{gap}}ಅಮಾತ್ಯ: "ಈ ಕಾಣಿಕೆಗಳನ್ನೆಲ್ಲ ಯಾಕೆ ತಂದಿರಿ?" {{gap}}ನುಟ್‍ಮೋಸ್‍: {{gap}}"ನನ್ನ ಕಥೆ ಮುಗಿಯೋದಕ್ಕೆ ಮುಂಚೆ ಈ ಅಲ್ಪ ಕಾಣಿಕೆ_" {{gap}}"ಕಥೆ?" {{gap}}"ಇನ್ನೇನು, ನಮ್ಮ ಆಸ್ತಿಪಾಸ್ತಿ ಎಲ್ಲ ಹೋಯ್ತಲ್ಲ?" {{gap}}"ನೀವು ನೀರಾನೆ ಪ್ರಾಂತಕ್ಕೆ ವಾಪ್ಸು ಯಾಕೆ ಹೋಗ್ಬಾರ್ದು?" {{gap}}"ಅಲ್ಲಿ ನನ್ನನ್ನು ಜೀವದಿಂದ ಬಿಡ್ತಾರಾ? ಸ್ವತಃ ತಾವೇ ಬಂದರೂ_" {{gap}}"ಜೀವದಿಂದ ಬಿಡೋದಿಲ್ಲ, ಅಲ್ಲವೆ?....ಬಂಡಾಯಕ್ಕೆ ಕಾರಣ ಏನು?" {{gap}}"ನಾನು ಆಬ್ಟು ಯಾತ್ರೆಗೆ ಹೋಗಿದ್ದೆ." {{gap}}"ಗೊತ್ತಿದೆ. ಪೆರೋನ ಬೋಯಿಯಾಗಿದ್ರಿ." {{gap}}"ಹೆಹ್ಹೆ!.... ಆದರೆ ನಾನು ರಾಜಧಾನಿಗೆ ವಾಪಸು ಬರೋದರೊಳಗೆ ಅಲ್ಲಿ ಬಂಡಾಯವಾಯ್ತು." {{gap}}"ಯಾಕೆ ಆಯ್ತೂಂತ?" {{gap}}"ಯಾಕೆ ಅಂದರೆ_ (ಸೆನೆಬ್ ಹೇಳಿಕೊಟ್ಟುದನ್ನು ಸ್ಮರಿಸಿಕೊಳ್ಳುತ್ತ ) ಹಿರಿಯ ಅಧಿಕಾರಿ ಟೆಹುಟ ಸ್ವಲ್ಪ ಖಾರವಾಗಿ ಮಾತಾಡಿದ್ರು. ಈಗಾಗಲೇ ಗೇಬು ಅವರಿಂದ ಈ ವಿಷಯ ನಿಮಗೆ ತಿಳಿದಿರಬೌದು. ಸ್ವಲ್ಪ ನಯವಾಗಿ ವರ್ತಿಸಿದ್ದರೆ_" {{gap}}"ಪರಿಸ್ಥಿತಿ ವಿಕೋಪಕ್ಕೆ ಹೋಗ್ತಿರಲಿಲ್ಲ. ಗೇಬು ಅದನ್ನೂ ಹೇಳಿದ್ದಾರೆ.”<noinclude></noinclude> cr4n2hsa6mmqmcttrahwaxx98ejttlx ಪುಟ:Mrutyunjaya.pdf/೩೦೬ 104 21795 320242 61369 2026-05-15T16:51:50Z Pragathi. BH 7585 /* Validated */ 320242 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೨೯೩}}</noinclude> {{gap}}ರಾಜಧಾನಿಯ ಸುದ್ದಿ ಮಹಾ ಅರ್ಚಕನಿಗೆ ತಿಳಿಯಬಾರದೆಂದು ಸ್ವಲ್ಪ ಮಂದ ಬುದ್ದಿ ದೂತನನ್ನೇ ಅಮಾತ್ಯ ಕಳುಹಿಸಿದ್ದ. 'ಮುಂదిನ ಸల ಸಮರ್ಥ ಬೇಹುಗಾರನನ್ನು ಕಳಿಸ್ಬೇಕು—ಎಂದು ಕೊಂಡ. {{gap}}(ಆದರೆ ಆನ್ ನಗರದಲ್ಲಿ ನಡೆಯುತ್ತಿದ್ಧುದು రాಜధానిಯಿಂದ బంದ ಸಮರ್ಥ ಬೇಹುಗಾರನಿಗೂ ತಿಳಿಯುತ್ತಿತ್ತೊ ಇಲ್ಲವೋ. ಅಷ್ಟು ರಹಸ್ಯ ವಾಗಿತ್ತು ಮಹಾ ಅರ್ಚಕನ ಕಾರ್ಯಾಚರಣೆ. ಆರು ದಿನಗಳ ಅಖಂಡ ಅರ್ಚನೆಯಯೊಂದನ್ನು ಆ ಮೊದಲೇ ಅವನು ನೆರವೇರಿಸಿದ್ದ. ಅಂಥ ಪೂಜೆಯ ಸುದ್ದಿಯನ್ನು ಹೊರಗೆ ಹಬ್ಬಿಸಿ, ಗುಟ್ಟಿನಲ್ಲಿ ಆತ ಐಗುಪ್ತದ ಈಶಾನ್ಯ ಗಡಿಗೆ ಹೋಗಿ ಬಂದಿದ್ದ. ಕೇವಲ ಐದು ನೂರು ಜನ ಇದ್ದ ಕಾವಲು ಪಡೆ. ಐಗುಪ್ತದ ಸೇನಾಬಲವೇ ಅಷ್ಟು. ಆ ದಂಡಿನ ಅಧಿಪತಿಗೆ ಧಾರ್ಮಿಕ ಮಹಾ ಗುರು బంದರೆಂದು ಸಂಭ್ರಮ....) {{gap}}ಮಹಾ ಅರ್ಚಕ ನೀಡಿದ್ದ ಉತ್ತರ ಓದಿ ಅಮಾತ್ಯನಿಗೆ ಸಂತೋಷವಾಗ ಲಿಲ್ಲವೆಂದು ದೂತನಿಗೆ ಬೇಸರ. ಪಾಯಶಃ ಬಹುಮಾನ ಸಿಗಲಾರದು ಎಂದು ಮೂಡಿದ್ದ ಶಂಕೆ ಆ ಕ್ಷಣದಲ್ಲೇ ಸತ್ಯ ಸಂಗತಿಯಾಯಿತು. {{gap}}“ ಹೋಗು, ” ಎಂದುಬಿಟ್ಟ ಅಮಾತ್ಯ. ಬೇಡವಾದುದನ್ನು ದೂರ ಸರಿಸುವವನಂತೆ ಕೈ ಆಡಿಸಿ. {{rh|center=* * * *}} {{gap}}ಸರು ಅಧಿವೇಶನ ಮತ್ತು ಪೆರೋನ ಔತಣ-ಒಂದೇ ದಿನ. {{gap}}ಅಮಾತ್ಯ ಭವನದ ಹಿರಿಯ ಲಿಪಿಕಾರ ಸೆನೆಬ್ ಅತಿಥಿಗೃಹಕ್ಕೆ బంದು ಕುಳಿತು,ಗೊಂದಲಕ್ಕೀಡಾದವನಂತೆ ಮೆನೆಪ್ ಟಾನೆಡೆಗೆ ನೆಟ್ಟನೋಟ ಬೀರುತ್ತ, ಸಿಕ್ಕುಗಂಟು ಬಿಡಿಸುವವನ ತಲ್ಲೀನತೆಯಿಂದ ಒಂದೊಂದೇ ಎಳೆಯನ್ನು ಜಗ್ಗಿದ: {{gap}}“ ಒಂದು ತಿಂಗಳ ಹಿಂದೆ ಈ ಔತಣ ಏರ್ಪಡಿಸಿದ್ದರೆ ಅದು ನೀರಾನೆ ಪ್ರಾಂತದ ನಾಯಕನ ಗೌರವಾರ್ಥ ಆಂತ ಧೈರ್ಯವಾಗಿ ಹೇಳಬಹುದಿತ್ತು. ಅವತ್ತು ಔತಣದ ಪ್ರಸ್ತಾಪ ಪೆರೋ ಮಾಡಿದ್ದೇ ಆ ದೃಷ್ಟಿಯಿಂದ. ಆದರೆ, ದಂಗೆ ಎದ್ದವರಿಗೆ ಔತಣ అంದರೆ ಲೋಕ ಏನೆಂದೀತು? ಅದಕ್ಕೇ ಗೇಬು<noinclude></noinclude> qtuf2s7qp3p7u7b61lo39ay20mfxi3v ಪುಟ:Mrutyunjaya.pdf/೩೦೭ 104 21796 320243 61407 2026-05-15T16:55:55Z Pragathi. BH 7585 /* Validated */ 320243 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೨೯೪|right=}}</noinclude> ದಂಪತೀನ ಔತಣಕ್ಕೆ ಅರಮನೆಗೆ ಕರೆಸಿ ಅಂದ್ರು, ನಾಳೆಯ ಔತಣದಲ್ಲಾ ದರೋ ಸರು ಸದಸ್ಯರಿರುತಾರೆ,ಗೇಬು ದಂಪತಿಯೂ ಇರ‍್ತಾರೆ, ಜತೆಗೆ ನೀವೂ ಇರ‍್ತೀರಿ—ಅಷ್ಟೆ.” {{gap}}ಮೆನೆಪ್ ಟಾ ಕೇಳಿದ: {{gap}}“ಮಹಾ ಅರ್ಚಕರ ಉತ್ತರ ಬಂದ ಮೇಲೆ ಈ ಸರು ಅಧಿವೇಶನ ಕರೆದಿರಬೇಕು." {{gap}}“ಹೌದು. ಆ ಉತ್ತರ ನಾನು ನೋಡಿದ್ದೇನೆ. ಬಹಳ ಸ್ಪಷ್ಟ. ಅನುಕೂಲವಾದಾಗ ಬರ‍್ತೇವೆ-అంದಿದ್ದಾರೆ." {{gap}}“ಮಹತ್ವದ ಸಮಸ್ಯೆ ಉದ್ಭವಿಸಿದಾಗ ಹಿరి ಸಲಹೆಗಾರರ ಮಹಾ ಮಂಡಲಿಯ ಅಧಿವೇಶನ ಸೇರ‍್ತದೆ, ಅಲ್ಲವಾ ?” {{gap}}“ಸರಿ. ಆದರೆ ನಿಮ್ಮ ಪ್ರಾಂತದಲ್ಲಿ ಬಂಡಾಯವಾದಾಗ ಅಧಿವೇಶನ ಕರೆದಿರ್ಲಿಲ್ಲ !" {{gap}}“ಬಹುಶಃ ಅದು ಮಹತ್ವದ ಪ್ರಶ್ನೆಯಲ್ಲ!” {{gap}}"ಹಾಗೆ ತಿಳ್ಕೊಬೇಡಿ. ಆ ವೇಳೆಗೆ ಪ್ರಭುತ್ವದ ಚೌಕಮಣೆ ಆಟ ಶುರುವಾಗ್ಬಿಟ್ಟಿತ್ತು ಇವತ್ತು ಐಗುಪ್ತದಲ್ಲಿ ಯಾವ ಸಮಸ್ಯೆ ಇದ್ದರೂ ಅದು ఆ ಚೌಕಮಣೆ ಅಟದ ಒಂದಂಗವಾಗಲೇಬೇಕು. ” {{gap}}“ಸ್ವಾರಸ್ಯವಾಗಿದೆ.” {{gap}}"ఇంಥ ಸ್ವಾರಸ್ಯ ఇರೋದ್ರಿಂದಲೇ ರಾಜಧಾನಿಯ ಜೀವನ ಸಹ್ಯ. ఇಲ್ದೇ ಹೋಗಿದ್ರೆ, ಬಂದದ್ದಿಷ್ಟು ಹೋದದ್ದಿಷ್ಟು ಉಳಿದದ್ದಿಷ್ಟು ಅಂತ ಬರೆ ದಿಡೋ ಲೆಕ್ಕಿಗರದೇ ಬಹುಸಂಖ್ಯೆಯಾಗಿ, ಬೇರೆಯವರಿಗೆ ಜಾಗವೇ ಇರುತ್ತಿರಲಿಲ್ಲ.” {{gap}}“ಸರು ಅಧಿವೇಶನ ಈ ಮೊದಲು ನೀವು ನೋಡಿದ್ದುಂಟೆ?” {{gap}}"ಓಹೋ ! ಎರಡು ಮೂರು ಸಲ ನೋಡಿದ್ದೇನೆ. ನಾಳೆಯದೇನೋ ಗೋಪ್ಯವಂತೆ. ನಾವು ಯಾರೂ ಬರಬಾರದಂತೆ." {{gap}}"ಹಾಗಾ?" {{gap}}“ಗೋಪ್ಯ ಅನ್ನೋದು ಒಂದು ತಮಾಷೆ. ಅರಮನೆಯಲ್ಲಿ ಕಿವಿಯಿಲ್ಲದ ಗೋಡೆ ಇಲ್ಲ.” {{gap}}ಸಂಭಾಷಣೆಯನ್ನು ಮೌನವಾಗಿ ಕೇಳುತ್ತ నింತಿದ್ದ ಬಟಾ ಅಂದ :<noinclude></noinclude> oz1zp7u3ft0ts5cvktl64pfrq9paz4w ಪುಟ:Mrutyunjaya.pdf/೩೦೮ 104 21797 320244 61408 2026-05-15T16:58:26Z Pragathi. BH 7585 /* Validated */ 320244 proofread-page text/x-wiki <noinclude><pagequality level="4" user="Pragathi. BH" />{{rh|center=|left=|right=}}</noinclude> {{gap}}“ಲಿಪಿಕಾರಯ್ಯ ಇವತ್ತು ಬಹಳ ವಿರಾಮವಾಗಿದ್ದಾರೆ ಅಂತ ಕಾಣ್ತದೆ.” {{gap}}ಬಟಾನೆಡೆಗೆ ತೀಕ್ಷ್ಮನೋಟ ಬೀರಿ ಸೆನೆಬ್ ನುಡಿದ: {{gap}}“ಅಮಾತ್ಯರು ಇವತ್ತು ಭವನಕ್ಕೆ ಬರೋದಿಲ್ಲ. (ಮೆನೆಪ್ ಟಾನೆಡೆಗೆ ತಿರುಗಿ) ಮಹಾ ಪ್ರಭುವಿನ ಸನ್ನಿಧಿಗೆ ಆಪ್ತಾಲೋಚನೆಗೆ ಹೋಗಿದ್ದಾರೆ.” ಮೆನೆಪ್ ಟಾ ಕೇಳಿದ : {{gap}}“ಸರು ಅಧಿವೇಶನದಲ್ಲಿ ಪೆರೋ ಭಾಗವಹಿಸ್ತಾರಾ?” {{gap}}“ಇಲ್ಲ, ಅಮಾತ್ಯರದೇ ಅಧ್ಯಕ್ಷತೆ. ಮಾತುಕೂಡಾ ಅವರದೇ ಜಾಸ್ತಿ. ಹಿರಿಯ ಸಲಹೆಗಾರರಲ್ಲಿ ಒಬ್ಬಿಬ್ರ ತುಟಿ ತೆರೆದರೆ ಹೆಚ್ಚು. ಎಲ್ಲರೂ ದೈವ ಭೀರುಗಳು. ತಮ್ಮ ತಮ್ಮ ಕ್ಷೇತ್ರದಲ್ಲಿ ಉನ್ನತಿ ಸಾಧಿಸಿದವರು.” {{gap}}ಬಟಾನೆಂದ : {{gap}}“ನಮ್ಮಲ್ಲೂ, ಹಿರಿಯರ ಸಮಿತಿ ಇದೆ ." {{gap}}“ಹ್ಞ, ಪೂರ್ವಕಾಲದ ಪದ್ಧತಿ.” {{gap}}“ಲಿಪಿಕಾರಯ್ಯ, ನಾಳೆ ಸಂಜೆ ನಾಯಕರು ఔತಣ ಕೂಟಕ್ಕೆ ಹೋದ್ಮೆಲೇ ನಮ್ಮ ಗತಿ ? ನೀವು ವಿಚಾರಿಸ್ಕೋಬೇಕಪ್ಪ ನಮ್ಮನು." “ಹ್ಞ, ನೆನಪಾಯ್ತು (ನಾಯಕನಿಗೆ) ಔತಣದ ವಿಷಯ ನಿಮಗಿಷ್ಟು ಪೂರ್ವ ಮಾಹಿತಿ ಕೊಡ್ಬೇಕು. ದೊಡ್ಡವರ ಕೂಟ. ಎಲ್ಲರೂ ಸರಗಿರ ಹಾಕ್ಕೋಂಡು ಅಲಂಕೃತರಾಗಿ ಬರ‍್ತಾರೆ, ಸುಗಂಧದ್ರವ್ಯ ಇತ್ಯಾದಿ ಸಾಮಗ್ರಿ ಗಳನ್ನು ತಂದು ಕೊಡೋದಕ್ಕೆ ಅಧಿಕಾರಿಗಳಿಗೆ ಹೇಳ್ತೀನೆ. ಅಲ್ಲಿ ಪಾದರಕ್ಷೆ ಕಳಚೋದು ಬೇಡ...ಉಳಿದ ಶಿಷ್ಟಾಚಾರ ನಿಮಗೆ ಗೊತ್ತಿದೆಯಲ್ಲ?” {{gap}}ಬಟಾ ದುಂಬಾಲು ಬಿದ್ದ. {{gap}}“ನನಗೆ ಈಗಾಗಲೇ ನಾಲಿಗೆಯಲ್ಲಿ ನೀರೂತ್ತಿದೆ. ಪ್ರವೇಶವಿಲ್ಲದ ಸ್ಥಳ ನೀವು ಹೇಳೋದನ್ನಾದರೂ ಕೇಳಿ ಸಂತೋಷಪಡ್ತೇನೆ. ಹಳಿ ಲಿಪಿ ಕಾರಯ್ಯ.” {{gap}}“ಇಂಥ ಸಂದರ್ಭಗಳಲ್ಲಿ ಹೇಗೆ ವರ್ತಿಸ್ಬೇಕೂಂತ ಪ್ರಾಚೀನ ಹೆತನುಡಿಗಳೇ ಇವೆ. ఇరి. ಜ್ಞಾಪಿಸ್ಕೊಂಡು ಹೇಳ್ತೇನೆ. ನಿನಗಿಂತ ಶ್ರೇಷ್ಟನಾದವನ ಜತೆ ಉಣ್ಣಲು ಕುಳಿತಿದ್ದರೆ, ನಿನ್ನ ಮೂಗಿನ ಮುಂದೆ ಇಟ್ಟಿದ್ದರಲ್ಲಿ ಏನನ್ನು ಆತ ನಿನಗೆ ಕೊಡ್ತಾನೋ ಅದನ್ನು ಸ್ವೀಕರಿಸು... ನಿನ್ನ ಎದುರು ಇರೋದರ<noinclude></noinclude> 3yah7qyutjsypmtuebei0xwukgfbpkr ಪುಟ:Mrutyunjaya.pdf/೩೦೯ 104 21798 320245 153142 2026-05-15T17:02:57Z Pragathi. BH 7585 /* Validated */ 320245 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೨೯೬|right=}}</noinclude> ಕಡೆಗೆ ನೀನು ಬಿರುನೋಟ ಬೀರಬಾರದು. ಆತನನ್ನು ಪದೇ ಪದೇ ದಿಟ್ಟಿಸ್ಬಾರದು. ಅದರಿಂದ ಅವನು ಅಸಹ್ಯಪಟ್ಕೋತಾನೆ. ಆತನಾಗಿಯೇ ನಿನ್ನನ್ನು ಮಾತನಾಡಿಸುವವರೆಗೆ ತಲೆ ತಗ್ಗಿಸಿ ಕುಳಿತುಕೊ. ಅವನು ನಿನ್ನನ್ನು ಮಾತ ನಾಡಿಸಿದಾಗ ಮಾತ್ರ ನೀನು ಉತ್ತರವೀಯಬೇಕು...ಅವನು ನಕ್ಕಮೇಲೆ ನೀನು ನಗಬೇಕು. ಆದುದರಿಂದ ಅವನ ಹೃದಯಕ್ಕೆ ಆನಂದವಾಗ್ತದೆ.... ಏನೋ... ನೆನಪಾಯ್ತೂಂತ ಇಷ್ಟು ಹೇಳ್ಬಿಟ್ಟೆ. ನಿಜ అంದರೆ, ನಾಯಕರಾದ ನಿಮಗೆ ఇంಥ ಹಿತನುಡಿಯ ಅಗತ್ಯವೇ ఇల్ల....భాರೀ ಔತಣ್ ನಲ್ವತ್ತೆಂಟು ಬಗೆಯ ಬೇಯಿಸಿದ ಮಾಂಸ, ನಲ್ವತ್ತು ವಿಧದ ರೊಟ್ಟಿ; ಇಪ್ಪತ್ತನಾಲ್ಕು ರೀತಿಯ ಪಾನೀಯಗಳು (ಬಾಯಿ ಚಪ್ಪರಿಸಿದ ಬಟಾನನ್ನು ನೋಡಿ ನಕ್ಕು) ಹನ್ನೊಂದು ವಿಧದ ಹಣ್ಣು ಗಳು..ಇವತ್ತು ಹೊಟ್ಟೆ ಬಿರಿಯೋ ಹಾಗೆ ತಿಂದ್ಬಿಡಿ. ನಾಳೇದು ನಾಳೆ ನೋಡ್ಕೋಳ್ಳೋಣ ........ ಆದರೆ ಪೆರೋ ಮಾತ್ರ–” {{gap}}ಬಟಾ ಕೇಳಿದ: {{gap}}“ಏನು?" {{gap}}“ನೀವು ಉಣೋದನ್ನು ನೋಡ್ತಾ ಕೂತಿರುತ್ತಾರೆ. ಅವರದು ಯಾವಾಗಲೂ ಮಿತ ಆಹಾರ. ಪ್ರತಿಯೊಂದೂ ಕ್ರಮಬದ್ಧ. ಪೆರೋ ಆರೋಗ್ಯ ಕೆಟ್ಟು ಪ್ರಜೆಗಳು ಗೋಳಾಡೋ ಹಾಗೆ ಆಗಬಾರದಲ್ಲ ?” {{gap}}“ಲಿಪಿಕಾರಯ್ಯ ನಾನು ತಮಾಷೆ ಮನುಷ್ಯ. ಹೇಳ್ಬಿಡ್ತೇನೆ. ನನಗೆ ಯಾರಾದರೂ ಪೆರೋ ಪದವಿ ಕೊಡ್ತೇವೆ ಅಂದರೆ, ದಮ್ಮಯ್ಯ ಬೇಡ ಅನ್ತೇನೆ !” {{gap}}ಸೆನೆಟ್ ಎದ್ದು ಮೆನೆಪ್ ಟಾಗೆ ನಮಿಸಿ, “ನಾಳೆ ನೆಮ್ಮನ್ನು ಕರಕೊಂಡು ಬರೋದಕ್ಕೆ ಯಾರನ್ನು ಕಳಿಸ್ತಾರೋ ತಿಳೀದು. ಅಂತೂ ಮುಚ್ಚಂಜೆ ಹೊತ್ತಿಗೆ ಸಿದ್ದವಾಗಿರಿ," ಎಂದು ಹೇಳಿ, ಹೊರಬಿದ್ದ. {{rh|center= * * * * }} {{gap}}ಅಂದು ಬೆಳಗಿನಿಂದಲೇ ಅರಮನೆಯಲ್ಲಿ ನಿತ್ಯಕ್ಕಿಂತ ಹೆಚ್ಚು ಗದ್ದಲ. ಒಂದೊಂದಾಗಿ ಹಲವಾರು ಪಲ್ಲಕಿಗಳು ಬಂದುವು. ಅವುಗಳಲ್ಲಿ ಕುಳಿತಿದ್ದವರು<noinclude></noinclude> 71gbu63fewwg12usvuwulu8zqju35cn ಪುಟ:Mrutyunjaya.pdf/೩೪೬ 104 21835 320262 61420 2026-05-16T05:16:34Z Pragathi. BH 7585 /* Validated */ 320262 proofread-page text/x-wiki <noinclude><pagequality level="4" user="Pragathi. BH" /></noinclude> ಮೃತ್ಯುಂಜಯ ೩೩೩ ವಿದ್ಯೆ ಕಲಿತ ಯಾರು ಬೇಕಾದರೂ ಮಂದಿರ ಸೇವೆಗೆ ಹೋಗ್ಬಹುದು. ಆದರೆ ವಾಸ್ತವದಲ್ಲಿ, ಅರ್ಚಕರ ಮಕ್ಕಳಷ್ಟೇ ಅರ್ಚಕರಾಗ್ತಾರೆ.” ಬಟಾ : "ಆಡುವವರ ಮಕ್ಕಳು ಆಡ್ತಾರೆ !” ಮೆನೆಪ್ ಟಾ :"ಕುಯಿಲಿನ ಸಿದ್ಧತೆ ಮುಗಿದಿರಬೇಕು ನಮ್ಮಲ್ಲಿ." ಬಟಾ :ಈ ಸಲ ಕುಯಿಲಿನ ಹಬ್ಬವನ್ನ ಬಹಳ ಅದ್ದೂರಿಯಿಂದ-" ಮೆನೆಪ್ ಟಾ:ಖಿವವ ಕಾಲುವೆಯಾಗಿ ಹರಿದು ನೀಲನದಿ ಸೇರ ಬೇಕೇನೋ ?" ಬಟಾ : ಒಂದೊಂದ್ಸಲ ಇಡೀ ನದಿಯ ನೀರೇ ಖಿವವ ಆದರೆ ಎಷು ಮಜ ಅಂದ್ಕೋತೇನೆ." ಮೆನೆಪ್ ಟಾ : “ಒಂದು ದಿವಸ ಕುಡಿದು ಆಮಲೇರಿದಾಗ ನಿಜವಾದ ನೀರಾನೆಯೇ ಬಂದು ನಿನಗೆ ಗುಮ್ತದೆ ನೋಡ್ಕೋ." ಬಟಾ: “ನೀರಾನೆ ನಮ್ಮ ಪ್ರಾಂತದ ಜನರ ಕುಲದೈವ. ಅದೇ ಮುನಿದರೆ ಬಡ ಮನುಷ್ಯ ನಾನೇನು ಮಾಡೇನು ?” ಮೆನೆಪ್ ಟಾ: "........" ಬಟಾ : "ನಮ್ಮ ಲಿಪಿಕಾರ ಇಪ್ಯುವರ್ ಗೆ ರಾಜಧಾನಿಯವರು ಒಮ್ಮೆ ತನ್ನ ಹಸ್ತಾಕ್ಷರ ನೋಡ್ಬೇಕೂಂತ ಆಸೆ.” ಮೆನೆಪ್ ಟಾ : “ಸಾಧು. ಅವತ್ತು ಟೆಹುಟಿ ಬಂದಾಗ ನಾನು ಮಾತನಾಡಿದೆ ನೋಡು. ” ಬಟಾ : "ಬಂಡಾಯ ?" ಮೆನೆಪ್ ಟಾ : “ಅದನ್ನೆಲ್ಲ ಇಪ್ಯುವರ್ ಬರೆದಿಟ್ಟಿದ್ದಾನೆ. ಜಾಡಿ ಯೊಳಕ್ಕೆ ಸೇರಿಸಿ ಭದ್ರವಾಗಿ ಮುಚ್ಚಿಟ್ಟಿದ್ದಾನೆ.” ಬಟಾ : “ವಾಪ್ಸು ಬಂದ್ಮೇಲೆ ನಾನು ಪೆರೋನ ಗೋರಿ ನೋಡ್ಟೋ ದಕ್ಕೆ ಹೋಗ್ಬೇಕು. ಅಣ್ಣ, ನಿನ್ನ ಗೋರಿ ಕಟ್ಟಿಸುವಾಗ ಒಳಗಡೆ ಗೋಡೆ ಮೇಲೆ ನಮ್ಮ ಅಬ್ಟು ಯಾತ್ರೆಯ ಚಿತ್ರ ಬರೆಸ್ಬೇಕು. ಅಮರಲೋಕದ ನಿವಾಸಿಯಾದ್ಮೇಲೂ ವರ್ಷಕ್ಕೊಮ್ಮೆ ಅಬ್ಟು, ಯಾತ್ರೆಗೆ ನೀನು ಹೋಗೋದು ಬೇಡವಾ! ನನ್ನ ದೋಣಿ ಇಲ್ದೆ, ನಾನಿಲ್ದೆ, ಹ್ಯಾಗೆ ಯಾತ್ರೆ ಹೋಗ್ತೀಯಾ?” ಮೆನೆಪ್ ಟಾ : “ತಮಾಷೆ ಸಾಕು. ನಮಗೆ ಆಡಂಬರದ ಬದುಕೂ.<noinclude></noinclude> hi0yvt03tfsvqgrl5en3aem9tpup027 320266 320262 2026-05-16T05:57:13Z Pragathi. BH 7585 320266 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೩೩೩}}</noinclude> ವಿದ್ಯೆ ಕಲಿತ ಯಾರು ಬೇಕಾದರೂ ಮಂದಿರ ಸೇವೆಗೆ ಹೋಗ್ಬಹುದು. ಆದರೆ ವಾಸ್ತವದಲ್ಲಿ, ಅರ್ಚಕರ ಮಕ್ಕಳಷ್ಟೇ ಅರ್ಚಕರಾಗ್ತಾರೆ.” {{gap}}ಬಟಾ : "ಆಡುವವರ ಮಕ್ಕಳು ಆಡ್ತಾರೆ !” {{gap}}ಮೆನೆಪ್ ಟಾ :"ಕುಯಿಲಿನ ಸಿದ್ಧತೆ ಮುಗಿದಿರಬೇಕು ನಮ್ಮಲ್ಲಿ." {{gap}}ಬಟಾ :ಈ ಸಲ ಕುಯಿಲಿನ ಹಬ್ಬವನ್ನ ಬಹಳ ಅದ್ದೂರಿಯಿಂದ-" {{gap}}ಮೆನೆಪ್ ಟಾ:ಖಿವವ ಕಾಲುವೆಯಾಗಿ ಹರಿದು ನೀಲನದಿ ಸೇರ ಬೇಕೇನೋ ?" {{gap}}ಬಟಾ : ಒಂದೊಂದ್ಸಲ ಇಡೀ ನದಿಯ ನೀರೇ ಖಿವವ ಆದರೆ ಎಷು ಮಜ ಅಂದ್ಕೋತೇನೆ." {{gap}}ಮೆನೆಪ್ ಟಾ : “ಒಂದು ದಿವಸ ಕುಡಿದು ಆಮಲೇರಿದಾಗ ನಿಜವಾದ ನೀರಾನೆಯೇ ಬಂದು ನಿನಗೆ ಗುಮ್ತದೆ ನೋಡ್ಕೋ." {{gap}}ಬಟಾ: “ನೀರಾನೆ ನಮ್ಮ ಪ್ರಾಂತದ ಜನರ ಕುಲದೈವ. ಅದೇ ಮುನಿದರೆ ಬಡ ಮನುಷ್ಯ ನಾನೇನು ಮಾಡೇನು ?” {{gap}}ಮೆನೆಪ್ ಟಾ: "........" {{gap}}ಬಟಾ : "ನಮ್ಮ ಲಿಪಿಕಾರ ಇಪ್ಯುವರ್ ಗೆ ರಾಜಧಾನಿಯವರು ಒಮ್ಮೆ ತನ್ನ ಹಸ್ತಾಕ್ಷರ ನೋಡ್ಬೇಕೂಂತ ಆಸೆ.” {{gap}}ಮೆನೆಪ್ ಟಾ : “ಸಾಧು. ಅವತ್ತು ಟೆಹುಟಿ ಬಂದಾಗ ನಾನು ಮಾತನಾಡಿದೆ ನೋಡು. ” {{gap}}ಬಟಾ : "ಬಂಡಾಯ ?" {{gap}}ಮೆನೆಪ್ ಟಾ : “ಅದನ್ನೆಲ್ಲ ಇಪ್ಯುವರ್ ಬರೆದಿಟ್ಟಿದ್ದಾನೆ. ಜಾಡಿ ಯೊಳಕ್ಕೆ ಸೇರಿಸಿ ಭದ್ರವಾಗಿ ಮುಚ್ಚಿಟ್ಟಿದ್ದಾನೆ.” {{gap}}ಬಟಾ : “ವಾಪ್ಸು ಬಂದ್ಮೇಲೆ ನಾನು ಪೆರೋನ ಗೋರಿ ನೋಡ್ಟೋ ದಕ್ಕೆ ಹೋಗ್ಬೇಕು. ಅಣ್ಣ, ನಿನ್ನ ಗೋರಿ ಕಟ್ಟಿಸುವಾಗ ಒಳಗಡೆ ಗೋಡೆ ಮೇಲೆ ನಮ್ಮ ಅಬ್ಟು ಯಾತ್ರೆಯ ಚಿತ್ರ ಬರೆಸ್ಬೇಕು. ಅಮರಲೋಕದ ನಿವಾಸಿಯಾದ್ಮೇಲೂ ವರ್ಷಕ್ಕೊಮ್ಮೆ ಅಬ್ಟು, ಯಾತ್ರೆಗೆ ನೀನು ಹೋಗೋದು ಬೇಡವಾ! ನನ್ನ ದೋಣಿ ಇಲ್ದೆ, ನಾನಿಲ್ದೆ, ಹ್ಯಾಗೆ ಯಾತ್ರೆ ಹೋಗ್ತೀಯಾ?” {{gap}}ಮೆನೆಪ್ ಟಾ : “ತಮಾಷೆ ಸಾಕು. ನಮಗೆ ಆಡಂಬರದ ಬದುಕೂ.<noinclude></noinclude> 00311lvqvc8j3jfdfs50firmjki04xj ಪುಟ:Mrutyunjaya.pdf/೩೪೭ 104 21836 320267 61421 2026-05-16T06:01:15Z Pragathi. BH 7585 /* Validated */ 320267 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೩೩೪|right=}}</noinclude> ಬೇಡ ; ಆಡಂಬರದ ಸಾವೂ ಬೇಡ.” {{gap}}ಬಟಾ : “ನೀನು ಬೇಡ ಅಂದರೂ ಜನ ಕೇಳಬೇಕಲ್ಲ? ಕನಸಿನಲ್ಲಿ ಇನ್ನೂ ಎತ್ತರವಾಗಿ ಕಾಣಿಸಿದೆ ಅಂತ ಮೆನ್ನ ಹೇಳ್ಳಿಲ್ಲವಾ?” {{gap}}ಮೆನೆಪ್ ಟಾ: “ನನಗೆ ನಿದ್ದೆ ಬರ್ತಿದೆ.” (ಕಪಟದ ಗೊರಕೆ ಸದ್ದು.) {{gap}}ಬಟಾ “ಅದು ನನ್ನ ಗೊರಕೆ. ನಿನ್ನದು ಅಷ್ಟು ಜೋರಾಗಿರೋದಿಲ್ಲ. ಶಬ್ದ ಕಮ್ಮಿ ಮಾಡು.” {{gap}}ಮೆನೆಪ್ಟಾ : (ಸಣ್ಣನೆ ನಕ್ಕು) “ನಾನು ಕಣ್ಮುಚ್ಕೊಂಡಿದ್ದೇನೆ. ಇನ್ನು ನಿದ್ದೆ ಬಂದೇ ಬಿಡ್ತದೆ.” {{gap}}ಬಟಾ : ಹೊಂ. ನಾನು ಮುಚ್ಕೊಂಡೆ. ಮಾತಿಲ್ಲ ಇನ್ನು." {{rh|center=* * * * }} {{gap}}ಆ ದಿನ ಬೆಳಿಗ್ಗೆ ದೊಣಿಕಟ್ಟೆಯಲ್ಲಿ ಹೆಚ್ಚು ಗದ್ದಲವಿರಲಿಲ್ಲ, ಬಟಾನ ಉದ್ಯೋಗಿಗಳು ದೋಣಿಯನ್ನು ಕಟ್ಟೆಗೆ ತಂದು ನಿಲ್ಲಿಸಿದರು. ಮೆಟ್ಟಲು ಗಳನ್ನಿಳಿದು ಬಟಾ ದೋಣಿಯತ್ತ ಸಾಗುತ್ತಿದ್ದಂತೆ ಒಬ್ಬ ಕಾವಲು ಭಟ ಗಟ್ಟಿಯಾಗಿ ಅಂದ : {{gap}}" ಗೂಡಾರಕ್ಕೆ ಬನ್ನಿ ಕಟ್ಟೆ ಅಧಿಕಾರಿ ಕರೀತಿದ್ದಾರೆ.” {{gap}}ಎದ್ದು ಬರಲಿಲ್ಲ, ಕರೆಕಳಿಸಿದ್ದಾನೆ. ನನಗೆ ತಿಳೀದಾ ಇದರ ಮರ್ಮ' ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತ ಬಟಾ ಮತ್ತೆ ಮೆಟ್ಟಲುಗಳನ್ನೇರಿ, ಗೂಡಾರದೊಳಕ್ಕೆ ನಡೆದ. {{gap}}ಅಧಿಕಾರಿ ಕುಳಿತಲ್ಲಿಂದಲೆ ತುಸು ತಲೆ ಎತ್ತಿ ಬಟಾನನ್ನು ನೋಡಿದ. {{gap}}“ ನೀವಾ ? ಯಾವುದೋ ದೋಣಿ ಹೊರಡ್ತಿದೆ ಅಂದ್ರು. ಕಟ್ಟೆಯ ಅಧಿಕಾರಿಗೆ ತಿಳಿಸದೆ ರಾಜಧಾನಿಯಿಂದ ಹೊರಡೋ ದೋಣಿ ಯಾವುದಪ್ಪ ಅಂದ್ಕೊಂಡೆ." {{gap}}ಬಟಾನ ತುಟಿಗಳು ಬೀಗಿದವು : {{gap}}“ ನಾವು ಸೆಡ್ ಉತ್ಸವಕ್ಕೆ ಬಂದವರು." {{gap}} "ಪ್ರಾಂತಪಾಲರ ದೋಣಿಗಳೆಲ್ಲ ಇಲ್ಲೇ ಬಿದ್ದಿವೆ. ನನಗೆ ಗೊತ್ತಿಲ್ಲವಾ?” {{gap}}ಅಷ್ಟರಲ್ಲಿ ಒಬ್ಬ ಕಾವಲುಭಟ ಓಡಿಬಂದ, {{gap}}"ಹೆಖ್ವೆಟ್ರ ಪಲ್ಲಕ್ಕಿ ಬಂತು," ಎಂದ.<noinclude></noinclude> 3qwkwujkfkgkaukjgv8tvsufq1k7zl5 ಪುಟ:Mrutyunjaya.pdf/೩೪೮ 104 21837 320268 61422 2026-05-16T06:05:19Z Pragathi. BH 7585 /* Validated */ 320268 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೩೩೫|right=}}</noinclude> {{gap}}ಅಧಿಕಾರಿ ನಿಧಾನವಾಗಿ ಎದ್ದು, “ನೀವು ಹೊರಡ್ಬೌದು” ಎಂದು ನುಡಿದು ಬಟಾನತ್ತ ಕೈಬೀಸಿ.. ಕೈಯಲ್ಲಿ ಪದವಿ ದಂಡ ಹಿಡಿದು ಅರಮನೆಯ ಪಲ್ಲಕಿಯಿಂದ ಇಳಿಯುತ್ತಿದ್ದ ಹೆಖ್ವೆಟ್ನನ್ನು ಸ್ವಾಗತಿಸಲು ಹೊರಕ್ಕೆ ನಡೆದ. {{gap}}ಕೆಳಗೆ ಕಾವಲು ಭಟನೊಬ್ಬ ಕೂಗಿ ಹೇಳುತ್ತಿದ್ದ: {{gap}}“ ಏ ದೋಣಿ ! ಹೊರಡು ! ರಾಜನಾವೆಗೆ ಜಾಗ ಮಾಡು !” {{gap}}ಬಟಾನ ಉದ್ಯೋಗಿಗಳು ಮಿಸುಕಲಿಲ್ಲ {{gap}}ಆ ಕಾವಲುಭಟ ಕಿರಿಚಿದ: {{gap}}"ಏಯ್! ಯಾರಿಗೆ ಹೇಳಿದ್ದು ?" {{gap}}ಅಷ್ಟರಲ್ಲಿ ಬಟಾ ಅಲ್ಲಿಗೆ ಬಂದ. ಕ್ಷಣಮಾತ್ರ ಹೆಖ್ವೆಟ್ ನತ್ತ ದೃಷ್ಟಿ ಹಾಯಿಸಿ, ಕಟ್ಟೆಯನ್ನು ಸಮೀಪಿಸುತ್ತಿದ್ದ ರಾಜನಾವೆಯನ್ನೊಮ್ಮೆ ನೋಡಿ, ಥಳ ಥಳಿಸುತ್ತಿದ್ದ ಬೆಳಗಿನ :ಸೂರ್ಯನಿಗೆ ನಮಸ್ಕರಿಸಿ, ತನ್ನ ದೋಣಿಗಿಳಿದ. ಅಂಬಿ ಗರು ಹುಟ್ಟು ಹುಟ್ಟು ಹಾಕಿದರು. ************************************** {{gap}}ಹೆಖ್ವೆಟ್ ಬೋಯಿಗಳನ್ನು ಬೇಳ್ಕೊಟ್ಟು, ಕಟ್ಟೆಯ ಅಧಿಕಾರಿಯ ವಂದನೆ ಸ್ವೀಕರಿಸಿ. ನಾವೆಯನ್ನೇರಿದ. ಅವನ ಜತೆಯಲ್ಲಿ ಇಬ್ಬರಿದ್ದರು : ಎಳೆಯ ಲಿಪಿಕಾರನೊಬ್ಬ. ಹೇಳಿದುದನ್ನು ಬರೆದುಕೊಳ್ಳಳು ಮತ್ತು ಒಬ್ಬ ಆಪ್ತಸೇವಕ, ಆತನ ವೈಯಕ್ತಿಕ ಅನುಕೂಲಗಳನ್ನು ನೋಡಿಕೊಳ್ಳಲು. {{gap}}ನಾವೆಯ ಹಿಂಭಾಗದಲ್ಲಿ ಛಾವಣಿಯ ಕೆಳಗಿದ್ದ ಪೀಠದ ಮೇಲೆ ಕುಳಿತು, ತನ್ನ ಹೊಟ್ಟೆಯನ್ನು ಅಂಗೈಯಿಂದ ಹಲವು ಬಾರಿ ಹೆಖ್ವೆಟ್ ಸವರಿದ. ಜಠರ ದಲ್ಲಿದ್ದ ವಾಯು ತೆವಳುತ್ತ ತಪ್ಪಿಸಿಕೊಂಡು ಹೊರಹೋಯಿತು; ತುಸು ಹಾಯೆನಿಸಿತು. {{gap}}ಇನ್ನೂ ಸ್ವಲ್ಪ ತಡವಾಗಿ ಏಳಬಹುದಿತ್ತು. ಆದರೆ ಬೆಳಕು ಹರಿಯುವ ಹೊತ್ತಿಗೆ ಆಮಾತ್ಯ ಬಂದುಬಿಟ್ಟಿದ್ದ. ತನ್ನನ್ನು ಎಬ್ಬಿಸಿದ ದಾಸಿಯ ಮೇಲೆ ಹೆಖ್ವೆಟ್ ರೇಗಿದ. "ಅವನಿಗೆ ಬುದ್ಧಿ ಇಲ್ಲಾಂತ ನಿನಗೂ ಇಲ್ಲವಾ ?” ಎಂದು ಗುಡುಗಿದ. “ ಈ ಆಮೆರಬ್ ಸರಿಯಾಗಿ ನಿದ್ದೆ ಕೂಡಾ ಮಾಡೋದಿಲ್ಲಾನ್ತಾನೆ," ಎಂದು ಗೊಣಗಿದ.<noinclude></noinclude> robo7gm79xpum868dx0hph6cdmoo5s4 320269 320268 2026-05-16T06:06:05Z Pragathi. BH 7585 320269 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೩೩೫|right=}}</noinclude> {{gap}}ಅಧಿಕಾರಿ ನಿಧಾನವಾಗಿ ಎದ್ದು, “ನೀವು ಹೊರಡ್ಬೌದು” ಎಂದು ನುಡಿದು ಬಟಾನತ್ತ ಕೈಬೀಸಿ.. ಕೈಯಲ್ಲಿ ಪದವಿ ದಂಡ ಹಿಡಿದು ಅರಮನೆಯ ಪಲ್ಲಕಿಯಿಂದ ಇಳಿಯುತ್ತಿದ್ದ ಹೆಖ್ವೆಟ್ನನ್ನು ಸ್ವಾಗತಿಸಲು ಹೊರಕ್ಕೆ ನಡೆದ. {{gap}}ಕೆಳಗೆ ಕಾವಲು ಭಟನೊಬ್ಬ ಕೂಗಿ ಹೇಳುತ್ತಿದ್ದ: {{gap}}“ ಏ ದೋಣಿ ! ಹೊರಡು ! ರಾಜನಾವೆಗೆ ಜಾಗ ಮಾಡು !” {{gap}}ಬಟಾನ ಉದ್ಯೋಗಿಗಳು ಮಿಸುಕಲಿಲ್ಲ {{gap}}ಆ ಕಾವಲುಭಟ ಕಿರಿಚಿದ: {{gap}}"ಏಯ್! ಯಾರಿಗೆ ಹೇಳಿದ್ದು ?" {{gap}}ಅಷ್ಟರಲ್ಲಿ ಬಟಾ ಅಲ್ಲಿಗೆ ಬಂದ. ಕ್ಷಣಮಾತ್ರ ಹೆಖ್ವೆಟ್ ನತ್ತ ದೃಷ್ಟಿ ಹಾಯಿಸಿ, ಕಟ್ಟೆಯನ್ನು ಸಮೀಪಿಸುತ್ತಿದ್ದ ರಾಜನಾವೆಯನ್ನೊಮ್ಮೆ ನೋಡಿ, ಥಳ ಥಳಿಸುತ್ತಿದ್ದ ಬೆಳಗಿನ :ಸೂರ್ಯನಿಗೆ ನಮಸ್ಕರಿಸಿ, ತನ್ನ ದೋಣಿಗಿಳಿದ. ಅಂಬಿ ಗರು ಹುಟ್ಟು ಹುಟ್ಟು ಹಾಕಿದರು. {{rh|center= * * * * }} {{gap}}ಹೆಖ್ವೆಟ್ ಬೋಯಿಗಳನ್ನು ಬೇಳ್ಕೊಟ್ಟು, ಕಟ್ಟೆಯ ಅಧಿಕಾರಿಯ ವಂದನೆ ಸ್ವೀಕರಿಸಿ. ನಾವೆಯನ್ನೇರಿದ. ಅವನ ಜತೆಯಲ್ಲಿ ಇಬ್ಬರಿದ್ದರು : ಎಳೆಯ ಲಿಪಿಕಾರನೊಬ್ಬ. ಹೇಳಿದುದನ್ನು ಬರೆದುಕೊಳ್ಳಳು ಮತ್ತು ಒಬ್ಬ ಆಪ್ತಸೇವಕ, ಆತನ ವೈಯಕ್ತಿಕ ಅನುಕೂಲಗಳನ್ನು ನೋಡಿಕೊಳ್ಳಲು. {{gap}}ನಾವೆಯ ಹಿಂಭಾಗದಲ್ಲಿ ಛಾವಣಿಯ ಕೆಳಗಿದ್ದ ಪೀಠದ ಮೇಲೆ ಕುಳಿತು, ತನ್ನ ಹೊಟ್ಟೆಯನ್ನು ಅಂಗೈಯಿಂದ ಹಲವು ಬಾರಿ ಹೆಖ್ವೆಟ್ ಸವರಿದ. ಜಠರ ದಲ್ಲಿದ್ದ ವಾಯು ತೆವಳುತ್ತ ತಪ್ಪಿಸಿಕೊಂಡು ಹೊರಹೋಯಿತು; ತುಸು ಹಾಯೆನಿಸಿತು. {{gap}}ಇನ್ನೂ ಸ್ವಲ್ಪ ತಡವಾಗಿ ಏಳಬಹುದಿತ್ತು. ಆದರೆ ಬೆಳಕು ಹರಿಯುವ ಹೊತ್ತಿಗೆ ಆಮಾತ್ಯ ಬಂದುಬಿಟ್ಟಿದ್ದ. ತನ್ನನ್ನು ಎಬ್ಬಿಸಿದ ದಾಸಿಯ ಮೇಲೆ ಹೆಖ್ವೆಟ್ ರೇಗಿದ. "ಅವನಿಗೆ ಬುದ್ಧಿ ಇಲ್ಲಾಂತ ನಿನಗೂ ಇಲ್ಲವಾ ?” ಎಂದು ಗುಡುಗಿದ. “ ಈ ಆಮೆರಬ್ ಸರಿಯಾಗಿ ನಿದ್ದೆ ಕೂಡಾ ಮಾಡೋದಿಲ್ಲಾನ್ತಾನೆ," ಎಂದು ಗೊಣಗಿದ.<noinclude></noinclude> mhcofk6kkx5jut6xdszvh5tm7nf1smg ಪುಟ:Mrutyunjaya.pdf/೩೪೯ 104 21838 320270 61423 2026-05-16T06:06:26Z Pragathi. BH 7585 /* Validated */ 320270 proofread-page text/x-wiki <noinclude><pagequality level="4" user="Pragathi. BH" /></noinclude>೩೩೬ ಮೃತ್ಯುಂಜಯ ಅಮಾತ್ಯ ನೇರವಾಗಿ, ಶಯಾಗಾರಕ್ಕೇ ಬಂದ. ಮಂಚದ ಮಗ್ಗುಲದಲ್ಲಿದ್ದ ಪೀಠದ ಮೇಲೆ ಕುಳಿತು, “ ನಿನ್ನನ್ನು ಕಂಡರೆ ನನಗೆ ಅಸೂಯೆ ಹೆಖ್ವೆಟ್: ಯಾವ ಚಿಂತೆಯನೂ ಇಲ್ಲದ ಪರಮ ಸುಖಿ ನೀನು.” ಎಂದ. ಹೆಖ್ವೆಟ್ ಮಾತನಾಡಲಿಲ್ಲ. ಮುಖಮಾಜನಕ್ಕೆಂದು ಪ್ರಾತರ್ವಿಧಿ ಗಳಿಗೆಂದು, ಬಚ್ಚಲು ಕೊಠಡಿಗೆ ನಡೆದ. ಆಮೆರಬ್ಗೆ ಶೌಚಗೃಹದಿಂದ ಸದ್ದುಗಳು ಕೇಳಿಸಿದುವು. ಮುದುಕ ಬೇಕೆಂದೇ ತಡಮಾಡುತ್ತಿದ್ದಾನೆ ಎನಿಸಿತು. ಅನ್ಯ ಗತಿ ಇಲ್ಲದೆ ಕಿತಕಿಯಿಂದ ಹೊರನೋಡುತ್ತ ಆಮೆರಬ್ ಕುಳಿತ. ಮನೆಯ ಕಿರಿಯರು ದೊಡ್ಡವರು ದೂರದಿಂದ ಇಣಕಿ ನೋಡಿ ಹೋಗುತ್ತಿದ್ದರು. ಎಂದಾದರೊಮ್ಮೆ ಬರುವ ಅಮಾತ್ಯನನ್ನು ಹತ್ತಿರದಿಂದ ಮಾತನಾಡಿಸುವ ಧೈರ್ಯ ಅವರಿಗಿರಲಿಲ್ಲ. ಶಯ್ಯಾಗೃಹಕ್ಕೆ ಮರಳಿದ ಹೆಖ್ವೆಟ್ ಅಮಾತ್ಯನನ್ನು ಕೇಳಿದ: “ ಏನು ತಗೊಳ್ತೀಯಾ?” “ ಏನೂ ಬೇಡ. ನಾನು ಮಹಾಮನೆಗೆ ಹೋಗ್ಬೇಕು. ನೀನು ಆದಷ್ಟು ಬೇಗ ಹೊರಡು. ಮುಚ್ಚಂಜೆಯ ಹೊತ್ತಿಗಾದರೂ ಆನ್ ತಲಪಿದರೆ ಚೆನ್ನಾಗಿರ್ತದೆ. ನನ್ನ ಪರವಾಗಿ ಆನ್ನ ನಗರಾಹಧಿಕಾರಿಗೆ ಎಚ್ಚರಿಕೆ ಕೊಡು.. ವುಹಾ ಅರ್ಚಕನ ಚಟುವಟಿಕೆಯ ವಿಷಯ ಆತನಿಂದ ವಿವರವಾದ ವರದಿ ಬಂದಿಲ್ಲ. ಅಮಾತ್ಯರಿಗೆ ಇದರಿಂದ ಆಶ್ಚರ್ಯವಾಗಿದೇಂತ ಹೇಳು." ... ಎಚ್ಚರಿಕೆ ಅವನೊಬ್ಬನಿಗೆ ಮಾತ್ರ ಸಾಕೊ ?...ಮಹಾ ಅರ್ಚಕನ ಹತ್ತಿರ ಯಾವ ಧ್ವನಿಯಲ್ಲಿ ಮಾತನಾದಬೇಕೂಂತ ನೀನು ಹೇಳಿಯೇ ಇಲ್ಲ." “ ಅದು ನಿನಗೆ ತಿಳೀದೆ ಹೆಖ್ವೆಟ್ ? ನನಗಿಂತ ಎಷ್ಟೋ ವರ್ಷ ಮೊದಲು ನೀನೇ ಅಮಾತ್ಯನಾಗಬೇಕಿತ್ತು. ಎಲ್ಲಿಯೋ ಎಳೆ ತಪ್ತು. ನನ್ನ ದುರದೃಷ್ಟ." "ಮಹಾ ಅರ್ಚಕನ ಪೀಕಲಾಟ ಇಲ್ಲದೇ ಇರ್ತಿದ್ರೆ, ದುರದೃಷ್ಟ ಅನ್ನೋ ಪದ ನಿನ್ನ ಬಾಯಿಯಿಂದ ಬರ್ತಿತ್ತೆ? ಸೋಗಲಾಡಿತನ ನನಗೆ ಹಿಡಿಸೋದಿಲ್ಲ." ಅಮಾತ್ಯ ನೋಡಿದ: ಹೆಖ್ವೆಟ್ನ ತಲೆ ಹಿಂದಕ್ಕೂ ಮುಂದಕ್ಕೂ ಆಡುತಿತ್ತು. ತುಟಿ ತೆರೆದಾಗ ಗಟ್ಟಿ ಹಲ್ಲುಗಳು ಕಾಣಿಸಿದುವು. ಬಿದ್ದು ಹೋಗಿದ್ದುದು ಕೆಲವೇ ಕೆಲವು.........<noinclude></noinclude> 5j5yf1gkpv5gfe9n0dqv5tk5yh7826m ಪುಟ:Mrutyunjaya.pdf/೩೫೦ 104 21839 320274 246921 2026-05-16T07:07:06Z Pragathi. BH 7585 /* Validated */ 320274 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೩೩೭}}</noinclude> {{gap}}ಪೆರೋ ಖೂಫು ಆಗಿನ ಮಹಾ ಅರ್ಚಕನಿಗೆ ಬುದ್ಧಿ ಕಲಿಸಿದ ಅಂತ ನಾವೂ ಅದೇ ಮಾರ್ಗ ಅನುಸರಿಸಬೇಕಾಗಿಲ್ಲ. ಮಂದಿರಗಳು ಈಗ ಬಲಿಷ್ಠವಾಗಿವೆ. ಈ ಪರಿಸ್ಥಿತೀಲಿ ಆ ರೀತಿಯ ಘರ್ಷಣೆ ಸಾಧ್ಯವೂ ಇಲ್ಲ. ಪೆರೋರಾನ ಅವತಾರವಲ್ಲ ಅನ್ನೋ ಹಾಗೆ ಮಹಾ ಅರ್ಚಕ ವರ್ತಿಸಿದರೆ, ದೇವಮಂದಿರಗಳಲ್ಲಿ ಜನರ ನಿಷ್ಠೆ ಉಳಿದೀತಾ ? ಅದನ್ನು ಅವನಿಗೆ ಬಿಂಬಿಸಿ ಹೇಳು.” {{gap}}« ಹೇಪಾಟಗೆ ನಿನ್ನ ಮೇಲೆ ಸಿಟ್ಟಿದೆ.” {{gap}}“ ನಾನು ಅವನ ಆಟದ ಬುಗರಿಯಾಗಲಿಲ್ಲ ಅಂತಲೋ ?” {{gap}}"ಹ್ಞ. ಇವನ ಎಂಟೆದೆಗೆ ಏನು ಕಾರಣ ಆಮೆರಬ್ ?” {{gap}}"ಮಂದಿರದೊಳಗಿನ ದೇವರು ತನ್ನ ಅಧೀನ ಅನ್ನೋ ನಂಬುಗೆ ?” {{gap}}ಅಲ್ಲ. ಮಂದಿರದೊಳಗಿನ ಸಂಪತ್ತನ್ನು ಆಧರಿಸಿದ ಅಹಂಕಾರ.” {{gap}}ಅಮಾತ್ಯ ಎದ್ದ. {{gap}}"ನಾನು ಬರ್ತೇನೆ, ಹೆಖ್ವೆಟ್, ಸರು ಅಧಿವೇಶನದಲ್ಲಿ ಅವರೆಲ್ಲರ ಎದುರು ನಿನ್ನ ಜತೆ ಹೀಗೆ ಮಾತಾಡೋದಕ್ಕೆ ಆಗ್ಲಿಲ್ಲ. ಹೇಗಾದರೂ ಮಾಡಿ ಮಹಾ ಅರ್ಚಕನನ್ನು ಕರಕೊಂಡು ಬರೋ ಜವಾಬ್ದಾರಿ ನಿನ್ನದು. ಇದು ಐಗುಪ್ತಕ್ಕೆ ನೀನು ಸಲ್ಲಿಸಬಹುದಾದ ಬಹಳ ದೊಡ್ಡ ಸೇವೆ.” {{gap}}" ಇದಾದ ಮೇಲೆ ಹೆಖ್ಬೆಟ್ ಮರಣ ಬಂದರೂ ಸರಿ, ಅನ್ನು. ಶಿಲ್ಪಿ ಹೇಳ್ತಿದ್ದ-ಗೋರಿಯ ಒಳಗೋಡೆಗಳು ಬೋಳಾಗಿ ಕಾಣ್ತವೆ, ಚಿತ್ರಮಾಲಿಕೆಗಳು ಸಾಲದು ಅಂತ.” {{gap}}" ಸರು ಆಧಿವೇಶನದಲ್ಲಿ ನಿನ್ನ ಪಾತ್ರ. ಅರಮನೆ ಔತಣ, ಆನ್‌ಗೆ ನಿನ್ನ ಪ್ರಯಾಣ. ಮಹಾ ಅರ್ಚಕನ ಜತೆ ನೀನು ರಾಜಧಾನಿಗೆ ವಾಪಸಾ ಗೋದು ಇದನ್ನೆಲ್ಲ ಚಿತ್ರಿಸಬೇಕೂಂತ ಚಿತ್ರಕಾರನಿಗೆ ಆದೇಶ ಕಳಿಸ್ತೇನೆ.” {{gap}}« ಸಾಟಿ ಇಲ್ಲದ ಔದಾರ್ಯ, ಪೆರೋನ ಗೋರಿಯಲ್ಲಿ ಬಿಡಿಸಬೇಕಾದ ಚಿತ್ರಗಳು ಯಾವುವು ಅನ್ನೋದು ನಿಷ್ಕರ್ಷೆ ಆಗಿದೆಯಂತಲ್ಲ ? ಕೆಲಸವೂ ಶುರುವಾಗಿದೆ. ಅಂತ ಕೇಳ್ದೆ, ಪೆರೋನ ಪರಿವಾರದ ಚಿತ್ರಮಾಲಿಕೆಯಲ್ಲಿ ಮಹಾ ಪ್ರಭುವಿನ ದಾಸ ಈ ಸಣಕಲ ಹೆಖ್ವೆಟ್‍ನನ್ನೂ ಸೇರಿಸು ನೋಡೋಣ.” {{gap}}ಆಗಲಿ,ಹೆಖ್ವೆಟ್‍. ಪೆರೋನ ಜತೆ ನೀನೂ ಚಿರಾಯುವಾಗ್ತೀಯ.... ಮಹಾಪ್ರಭು ಖಂಡಿತ ಬೇಡ ಅನ್ನಲಾರರು. ಬರ್ತೇನೆ. ನೀನು ಸಿದ್ಧವಾಗೋದ ೨೨<noinclude></noinclude> sj3ynpu3nleycyuqh8tju7ouod6w391 320275 320274 2026-05-16T07:07:26Z Pragathi. BH 7585 320275 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೩೩೭}}</noinclude> {{gap}}ಪೆರೋ ಖೂಫು ಆಗಿನ ಮಹಾ ಅರ್ಚಕನಿಗೆ ಬುದ್ಧಿ ಕಲಿಸಿದ ಅಂತ ನಾವೂ ಅದೇ ಮಾರ್ಗ ಅನುಸರಿಸಬೇಕಾಗಿಲ್ಲ. ಮಂದಿರಗಳು ಈಗ ಬಲಿಷ್ಠವಾಗಿವೆ. ಈ ಪರಿಸ್ಥಿತೀಲಿ ಆ ರೀತಿಯ ಘರ್ಷಣೆ ಸಾಧ್ಯವೂ ಇಲ್ಲ. ಪೆರೋರಾನ ಅವತಾರವಲ್ಲ ಅನ್ನೋ ಹಾಗೆ ಮಹಾ ಅರ್ಚಕ ವರ್ತಿಸಿದರೆ, ದೇವಮಂದಿರಗಳಲ್ಲಿ ಜನರ ನಿಷ್ಠೆ ಉಳಿದೀತಾ ? ಅದನ್ನು ಅವನಿಗೆ ಬಿಂಬಿಸಿ ಹೇಳು.” {{gap}}« ಹೇಪಾಟಗೆ ನಿನ್ನ ಮೇಲೆ ಸಿಟ್ಟಿದೆ.” {{gap}}“ ನಾನು ಅವನ ಆಟದ ಬುಗರಿಯಾಗಲಿಲ್ಲ ಅಂತಲೋ ?” {{gap}}"ಹ್ಞ. ಇವನ ಎಂಟೆದೆಗೆ ಏನು ಕಾರಣ ಆಮೆರಬ್ ?” {{gap}}"ಮಂದಿರದೊಳಗಿನ ದೇವರು ತನ್ನ ಅಧೀನ ಅನ್ನೋ ನಂಬುಗೆ ?” {{gap}}ಅಲ್ಲ. ಮಂದಿರದೊಳಗಿನ ಸಂಪತ್ತನ್ನು ಆಧರಿಸಿದ ಅಹಂಕಾರ.” {{gap}}ಅಮಾತ್ಯ ಎದ್ದ. {{gap}}"ನಾನು ಬರ್ತೇನೆ, ಹೆಖ್ವೆಟ್, ಸರು ಅಧಿವೇಶನದಲ್ಲಿ ಅವರೆಲ್ಲರ ಎದುರು ನಿನ್ನ ಜತೆ ಹೀಗೆ ಮಾತಾಡೋದಕ್ಕೆ ಆಗ್ಲಿಲ್ಲ. ಹೇಗಾದರೂ ಮಾಡಿ ಮಹಾ ಅರ್ಚಕನನ್ನು ಕರಕೊಂಡು ಬರೋ ಜವಾಬ್ದಾರಿ ನಿನ್ನದು. ಇದು ಐಗುಪ್ತಕ್ಕೆ ನೀನು ಸಲ್ಲಿಸಬಹುದಾದ ಬಹಳ ದೊಡ್ಡ ಸೇವೆ.” {{gap}}" ಇದಾದ ಮೇಲೆ ಹೆಖ್ಬೆಟ್ ಮರಣ ಬಂದರೂ ಸರಿ, ಅನ್ನು. ಶಿಲ್ಪಿ ಹೇಳ್ತಿದ್ದ-ಗೋರಿಯ ಒಳಗೋಡೆಗಳು ಬೋಳಾಗಿ ಕಾಣ್ತವೆ, ಚಿತ್ರಮಾಲಿಕೆಗಳು ಸಾಲದು ಅಂತ.” {{gap}}" ಸರು ಆಧಿವೇಶನದಲ್ಲಿ ನಿನ್ನ ಪಾತ್ರ. ಅರಮನೆ ಔತಣ, ಆನ್‌ಗೆ ನಿನ್ನ ಪ್ರಯಾಣ. ಮಹಾ ಅರ್ಚಕನ ಜತೆ ನೀನು ರಾಜಧಾನಿಗೆ ವಾಪಸಾ ಗೋದು ಇದನ್ನೆಲ್ಲ ಚಿತ್ರಿಸಬೇಕೂಂತ ಚಿತ್ರಕಾರನಿಗೆ ಆದೇಶ ಕಳಿಸ್ತೇನೆ.” {{gap}}« ಸಾಟಿ ಇಲ್ಲದ ಔದಾರ್ಯ, ಪೆರೋನ ಗೋರಿಯಲ್ಲಿ ಬಿಡಿಸಬೇಕಾದ ಚಿತ್ರಗಳು ಯಾವುವು ಅನ್ನೋದು ನಿಷ್ಕರ್ಷೆ ಆಗಿದೆಯಂತಲ್ಲ ? ಕೆಲಸವೂ ಶುರುವಾಗಿದೆ. ಅಂತ ಕೇಳ್ದೆ, ಪೆರೋನ ಪರಿವಾರದ ಚಿತ್ರಮಾಲಿಕೆಯಲ್ಲಿ ಮಹಾ ಪ್ರಭುವಿನ ದಾಸ ಈ ಸಣಕಲ ಹೆಖ್ವೆಟ್‍ನನ್ನೂ ಸೇರಿಸು ನೋಡೋಣ.” {{gap}}ಆಗಲಿ,ಹೆಖ್ವೆಟ್‍. ಪೆರೋನ ಜತೆ ನೀನೂ ಚಿರಾಯುವಾಗ್ತೀಯ.... ಮಹಾಪ್ರಭು ಖಂಡಿತ ಬೇಡ ಅನ್ನಲಾರರು. ಬರ್ತೇನೆ. ನೀನು ಸಿದ್ಧವಾಗೋದ {{gap}}೨೨<noinclude></noinclude> gyhpjkywdw7pta16vjf2or7rj848wov ಪುಟ:Mrutyunjaya.pdf/೩೫೧ 104 21840 320276 246947 2026-05-16T07:09:14Z Pragathi. BH 7585 /* Validated */ 320276 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೩೩೮|right=}}</noinclude> ರೊಳಗೆ ಅರಮನೆಯ ಪಲ್ಲಕಿ ಇಲ್ಲಿಗೆ ಬರ್ತದೆ. ನಿನ್ನ ಪ್ರಯಾಣ ಸುಖಕರವಾಗಲಿ. ಪೆರೋನ ಆಯುರಾರೋಗ್ಯ ವರ್ಧಿಸಲಿ !” {{gap}}ಪ್ರತಿಯಾಗಿ ಹೆಖ್ವೆಟನೂ ಆಂದ: {{gap}}“ಪೆರೋನ ಆಯುರಾರೋಗ್ಯ ವರ್ಧಿಸಲಿ.ಮಹಡಿಯ ಬಾಗಿಲು ಜೋಪಾನ.ತಲೆ ತಗಲೀತು.” {{gap}}ಹಾಯಿ ಬಿಚ್ಚದೆಯೇ ಅಳಿವೆಯ ದಿಕ್ಕಿಗೆ ಪಯಣ.ಹರಿಯುತ್ತಿದ್ದ ನದಿಯ ಮಂದಗತಿಗೆ ಅನುಗುಣವಾಗಿ ದೋಣಿಯ ಚಲನೆ.ಅರಮನೆಯ ಪ್ರದೇಶದ ಪ್ರಕಾರ ಮುಗಿಯಿತು. ಹಳ್ಳಿ .ಗುಡಿಸಲುಗಳು, ಹೊಲಗಳು ಆ ಕಡೆ ಈ ಕಡೆ ಉದ್ದಕ್ಕೂ ಹಸುರು. ('ಕಣ್ಣಿಗೆ ಈ ಬಣ್ಣ ಒಳ್ಳೇದು....ನೆಫರ್ ಟೀಮ್ ಮೊನ್ನೆ ಕಣ್ಣುಗಳಿಗೆ ಹಸುರು ಬಳಕೊಂಡಿದ್ಲು.' 'ಇಷ್ಟು ನಿಧಾನವಾಗಿ ಹೋದರೆ ಆನ್ ತಲಪೋದು ಯಾವಾಗ? ಅಮಾತ್ಯ ಹೇಳಿದ ಹಾಗೆ ಮುಚ್ಚಂಜೆಯ ಹೊತ್ತಿಗಾದರೂ ಊರು ಸೇರಬೇಕು. ಮಹಾ ಅರ್ಚಕ ಅಲ್ಲಿ ಏನು ಕಿತಾಪತಿ ನಡೆಸಿದಾನೊ ? ಕತ್ತಲಲ್ಲಿ ಅಪಾಯಗಳಿರ ಬಹುದು. {{gap}}ದೋಣಿಕಾರನನ್ನು ಉದ್ದೇಸಶಿಸಿ ಹೆಖ್ವೆಟ್ ಅಂದ : {{gap}}“ರಾಜನಾವೆ ಕತ್ತೆ ಕೆಟ್ಟುಹೋಯ್ತು? ಊಟ ಮಾಡಿಲ್ಲವಾ ನಿನ್ನ ಅಂಬಿಗರು.ಹುಟ್ಟು ಹಾಕೋದಕ್ಕೆ ಹೇಳು." {{gap}}ಅಪ್ಪಣೆ ಎನ್ನುವಂತೆ ದೋಣಿಕಾರ ತಲೆ ಅಲುಗಿಸಿದ.ಅಂಬಿಗರು ಹುಟ್ಟುಗಳಿಗೆ ಕೈ ಹಾಕಿದೊಡನೆ ದೋಣಿ ಒಮ್ಮೆ ಅಲುಗಿತು. ಚಲನೆಯ ಗತಿ ಕ್ರಮೇಣ ತೀವ್ರಗೊಂಡಿತು. {{gap}}"ನನಗಿಂತ ಎಷ್ಟೋ ಮೊದಲು ನೀನೇ ಅಮಾತ್ಯನಾಗಬೇಕಿತ್ತು. ಎಲ್ಲಿಯೋ ಎಳೆ ತಪ್ಪು” {{gap}}ಹೆಖ್ವೆಟ್ ಯೋಚಿಸಿದ : {{gap}}ನಿರ್ವಹಿಸಬೇಕಾದ ಹೊಣೆಯ ಭಾರ ದುಸ್ಸಾಹಸ ಆಮೆರಬ್ ಆ ಮಾತನ್ನು ಆಡಿದ. నిజ.ಜೀವನಪ್ರವಾಹ ತಮ್ಮಿಬ್ಬರದೂ ఒంದೇ బಗೆ. (ಆದರೆ ಕೆಲ ವರ್ಷಗಳ ಅಂತರದಲ್ಲಿ.) ಅರಮನೆಯ ಉಗ್ರಾಣದ ಅಧಿಕಾರ; ಗೋರಿಗಳ ಪ್ರದೇಶದ ಉಸ್ತುವಾರಿ; ಕಲ್ಲುಗಳನ್ನು ಕಡಿದು ಅವುಗಳ ಸಾರಿಗೆ.<noinclude></noinclude> 78bs2tjga8ogh3goy3gdwxq61s7gy6s ಪುಟ:Mrutyunjaya.pdf/೩೫೨ 104 21841 320150 246991 2026-05-15T14:39:16Z Pragathi. BH 7585 /* Validated */ 320150 proofread-page text/x-wiki <noinclude><pagequality level="4" user="Pragathi. BH" /></noinclude> ಮೃತ್ಯುಂಜಯ ೩೩೯ ಮುಂದೆ ನ್ಯಾಯಾಧೀಶನಾಗಬೇಕಿತ್ತು. ಅಮಾತ್ಯನಾಗಬೇಕಿತ್ತು .ಬದಲು ಸರುಸಭೆಯ ಹಿರಿಯ ಸಲಹೆಗಾರನಾದೆ. ಅಷ್ಟಕ್ಕೇ ತೃಪ್ತನಾಗಬೇಕಾಯಿತು. ತನಗಿಂತ ಕಿರಿಯವನಾದ ಆಮೆರಬ್ ಮೇಲೇರಿದ, ದಕ್ಷನೆಂದು ಹೆಸರು ಗಳಿಸಿದ, ಮೆರೆದ. ಆತ ಅಮಾತ್ಯನಾದ ಸಮಯದಲ್ಲಿ ಹೇಪಾಟ್ ಗೆ ತನ್ನ ಬಲದ ಅರಿವಿರಲಿಲ್ಲ. ಆಗ ಅವನು ಶಕ್ತಿಶಾಲಿಯಾಗಿದ್ದು , ಅವನ ಮೈತ್ರಿ ತನಗೆ ಲಭ್ಯ ವಾಗಿದ್ದರೆ ಅಮಾತ್ಯ ಪದವಿ ತನ್ನದಾಗುತ್ತಿತ್ತು. ಸೆಣಸಾಟದಲ್ಲಿ ಪೆರೋ ಶಕ್ತಿಹೀನನಾಗಿ ಆಮೆರಬ್ ಪದವಿ ಕಳೆದುಕೊಂಡರೆ?ಆ ಸ್ಥಾನವೇನೂ ತನ್ನದಾಗುವುದಿಲ್ಲ.ಟೆಹುಟಿ ಅಧಿಕಾರಕ್ಕೆ ಬರುತ್ತಾನೆ. ಜೇನು ಕುಡಿದ ಕರಡಿ.ನೀಲನದಿಗೇ ಬೆಂಕಿ ಇಡಲು ಹೊರಡುವ ಮೂರ್ಖ. ಅವನೆದುರಲ್ಲಿ ತಾನು ಮೂಲೆಗುಂಪಾಗುತ್ತೇನೆ. ಆಗ. ಶಾಶ್ವತ ಭವನಕ್ಕೆ-ಗೋರಿಗೆ-ತಡ ಮಾಡದೆ ತಾನು ಸಾಗಬಹುದು. ಮಾಗಿ ಕಳೆದ ಮೇಲೆ ಗಾಳಿಯಲ್ಲಿ ಕುಳಿರಿನ ಸೋಂಕಿಲ್ಲ. ಬಿಸಿಲಿನಲ್ಲಿ ಅದು ಚುರುಕು. ಆಪ್ತ ಸೇವಕ ಕೇಳಿದ: “ಪಾನೀಯ ಏನಾದರೂ ?” "ತಾ.” ಅರಮನೆಯ ಔತಣದಲ್ಲಿ ತಾನು ಕುಡಿದ ದ್ರಾಕ್ಷಾಸುರೆ ಚೆನಾಗಿತ್ತು. ಅಮಾತ್ಯನಿಗೆ ಅರಸನ ಉಗ್ರಾಣದಿಂದ ಉದಾರ ಸರಬರಾಜು .ಸರು ಸದಸ್ಯರಿಗೆ-ಅವರಲ್ಲಿ ಅತ್ಯಂತ ಹಿರಿಯನಾದ ತನಗೂ-ನಿಗದಿಯಾದಷ್ಟು ಮಾತ್ರ. ವಿಸ್ತಾರ ಹೊಲಗಳೂ ಹೇರಳ ರಾಸುಗಳೂ ಇರುವುದರಿಂದ, ಅಭಾವದ ಅನುಭವವಾಗುತ್ತಿಲ್ಲ. ಒಬ್ಬನೇ ಮಗ. ಅವನಿಗೆ ಮಧ್ಯವಯಸ್ಸು ಸಮೀಪಿಸುತ್ತಿದೆ. ತನ್ನ ಸಿಡುಕು ಮೊಂಡುತನ ಅವನವಾದುವು. ಬುದ್ದಿ ಮಾತ್ರ ಅದೆಲ್ಲಿ ಕರಗಿ ಹೋಯಿತೋ? ಒಬ್ಬ ಪ್ರಾಂತಪಾಲನ ಹುದ್ದೆಯನಾದರೂ ಅವನಿಗೆ ಕೊಡಿಸುವ ಆಸೆ. ಸಾಧ್ಯವಾಗುತ್ತದೊ, ಇಲ್ಲವೊ? ಹಗುರವಾದ ಸಣ್ಣ ಹೂಜೆಯಲ್ಲಿ ದ್ರಾಕ್ಷಾಸುರೆ. ದೋಣಿ ಅಲುಗಿದರೂ ಒಂದು ಹನಿಯೂ ಚೆಲ್ಲದು. ಒಂದೊಂದೆ ಗುಟುಕು. ಹೀಗಿಯೇ ದೂರ,ದೂರ.<noinclude></noinclude> 69qb219a3b74puhtxox41v7qsq49qb0 320151 320150 2026-05-15T14:41:23Z Pragathi. BH 7585 320151 proofread-page text/x-wiki <noinclude><pagequality level="4" user="Pragathi. BH" />{{rh|center=|ಮೃತ್ಯುಂಜಯleft=೩೩೯|right=}}</noinclude> ಮುಂದೆ ನ್ಯಾಯಾಧೀಶನಾಗಬೇಕಿತ್ತು. ಅಮಾತ್ಯನಾಗಬೇಕಿತ್ತು .ಬದಲು ಸರುಸಭೆಯ ಹಿರಿಯ ಸಲಹೆಗಾರನಾದೆ. ಅಷ್ಟಕ್ಕೇ ತೃಪ್ತನಾಗಬೇಕಾಯಿತು. ತನಗಿಂತ ಕಿರಿಯವನಾದ ಆಮೆರಬ್ ಮೇಲೇರಿದ, ದಕ್ಷನೆಂದು ಹೆಸರು ಗಳಿಸಿದ, ಮೆರೆದ. ಆತ ಅಮಾತ್ಯನಾದ ಸಮಯದಲ್ಲಿ ಹೇಪಾಟ್ ಗೆ ತನ್ನ ಬಲದ ಅರಿವಿರಲಿಲ್ಲ. ಆಗ ಅವನು ಶಕ್ತಿಶಾಲಿಯಾಗಿದ್ದು , ಅವನ ಮೈತ್ರಿ ತನಗೆ ಲಭ್ಯ ವಾಗಿದ್ದರೆ ಅಮಾತ್ಯ ಪದವಿ ತನ್ನದಾಗುತ್ತಿತ್ತು. {{gap}}ಸೆಣಸಾಟದಲ್ಲಿ ಪೆರೋ ಶಕ್ತಿಹೀನನಾಗಿ ಆಮೆರಬ್ ಪದವಿ ಕಳೆದುಕೊಂಡರೆ?ಆ ಸ್ಥಾನವೇನೂ ತನ್ನದಾಗುವುದಿಲ್ಲ.ಟೆಹುಟಿ ಅಧಿಕಾರಕ್ಕೆ ಬರುತ್ತಾನೆ. ಜೇನು ಕುಡಿದ ಕರಡಿ.ನೀಲನದಿಗೇ ಬೆಂಕಿ ಇಡಲು ಹೊರಡುವ ಮೂರ್ಖ. ಅವನೆದುರಲ್ಲಿ ತಾನು ಮೂಲೆಗುಂಪಾಗುತ್ತೇನೆ. ಆಗ. ಶಾಶ್ವತ ಭವನಕ್ಕೆ-ಗೋರಿಗೆ-ತಡ ಮಾಡದೆ ತಾನು ಸಾಗಬಹುದು. {{gap}}ಮಾಗಿ ಕಳೆದ ಮೇಲೆ ಗಾಳಿಯಲ್ಲಿ ಕುಳಿರಿನ ಸೋಂಕಿಲ್ಲ. ಬಿಸಿಲಿನಲ್ಲಿ ಅದು ಚುರುಕು. {{gap}}ಆಪ್ತ ಸೇವಕ ಕೇಳಿದ: {{gap}}“ಪಾನೀಯ ಏನಾದರೂ ?” {{gap}}"ತಾ.” {{gap}}ಅರಮನೆಯ ಔತಣದಲ್ಲಿ ತಾನು ಕುಡಿದ ದ್ರಾಕ್ಷಾಸುರೆ ಚೆನಾಗಿತ್ತು. ಅಮಾತ್ಯನಿಗೆ ಅರಸನ ಉಗ್ರಾಣದಿಂದ ಉದಾರ ಸರಬರಾಜು .ಸರು ಸದಸ್ಯರಿಗೆ-ಅವರಲ್ಲಿ ಅತ್ಯಂತ ಹಿರಿಯನಾದ ತನಗೂ-ನಿಗದಿಯಾದಷ್ಟು ಮಾತ್ರ. ವಿಸ್ತಾರ ಹೊಲಗಳೂ ಹೇರಳ ರಾಸುಗಳೂ ಇರುವುದರಿಂದ, ಅಭಾವದ ಅನುಭವವಾಗುತ್ತಿಲ್ಲ. ಒಬ್ಬನೇ ಮಗ. ಅವನಿಗೆ ಮಧ್ಯವಯಸ್ಸು ಸಮೀಪಿಸುತ್ತಿದೆ. ತನ್ನ ಸಿಡುಕು ಮೊಂಡುತನ ಅವನವಾದುವು. ಬುದ್ದಿ ಮಾತ್ರ ಅದೆಲ್ಲಿ ಕರಗಿ ಹೋಯಿತೋ? ಒಬ್ಬ ಪ್ರಾಂತಪಾಲನ ಹುದ್ದೆಯನಾದರೂ ಅವನಿಗೆ ಕೊಡಿಸುವ ಆಸೆ. ಸಾಧ್ಯವಾಗುತ್ತದೊ, ಇಲ್ಲವೊ? {{gap}}ಹಗುರವಾದ ಸಣ್ಣ ಹೂಜೆಯಲ್ಲಿ ದ್ರಾಕ್ಷಾಸುರೆ. ದೋಣಿ ಅಲುಗಿದರೂ ಒಂದು ಹನಿಯೂ ಚೆಲ್ಲದು. ಒಂದೊಂದೆ ಗುಟುಕು. ಹೀಗಿಯೇ ದೂರ,ದೂರ.<noinclude></noinclude> m6f7urxsz55fb366pq8xgkq0qv1f7jk ಪುಟ:Mrutyunjaya.pdf/೩೫೩ 104 21842 320152 246999 2026-05-15T14:43:25Z Pragathi. BH 7585 /* Validated */ 320152 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೩೪೦|right=}}</noinclude> {{gap}}ಎಡದಂಡೆಯುದ್ದಕ್ಕೂ ದೃಷ್ಟಿ ಬಳಲುವವರೆಗೂ ಗೋರಿಗಳು.ದೊಡ್ಡವು,ಚಿಕ್ಕವು. {{gap}}ತನ್ನ ಆ ಲೋಕದ ವಾಸಕ್ಕಾಗಿ ತಾನು ನಿರ್ಮಿಸುತ್ತಿರುವ ಗೋರಿ ಭವ್ಯ ವಾದದ್ದು. ನೋಡಿದ ಪ್ರತಿಷ್ಟ ತರೆಲ್ಲ ಅದನ್ನು ಮೆಚ್ಚಿದರು. (ಕತ್ತೆಗಳು ! ಕರುಬಿದರು...) ಆ ಗೋರಿಯ ನಿರ್ಮಾಣಕ್ಕೆ ಆಧಾರ-ಪೆರೋನ ಶಿಲ್ಪಿಯೇ ತನ್ನ ಬಿಡುವಿನ ವೇಳೆಯಲ್ಲಿ ರಚಿಸಿದ್ದ ನಕಾಶೆ. 'ಗೋರಿಯ ಒಳಗೋಡೆಗಳು ಬೋಳಾಗಿ ಕಾಣ್ತಿವೆ.' ಸುಳ್ಳೆ! ಶಿಲ್ಪಿ ಹಾಗೆ ಹೇಳಿದ್ದೇ ఇల్ల, ತನ್ನ ಈಗಿನ ಮಹತ್ಸಾಧನೆಗಳೂ ದಾಖಲಾಗುವಂತೆ ಮಾಡಲು ತಾನು ಹಾಗೆಂದೆ. ಕಲಾವಿದರು ಈಗಾಗಲೇ ರಚಿಸಿರುವ ಚಿತ್ರಮಾಲಿಕೆ ಅಪೂರ್ವ ಕಲಾಸೃಷ್ಟಿ. ತಾನು ನಾವೆಯಲ್ಲಿ ವಿಹಾರ ಹೋಗುತ್ತಿರುವ ಚಿತ್ರ, ಕಾಡು ಬಾತುಕೋಳಿಯ ಬೇಟೆ.ಹೆಂಡತಿ ಮಕ್ಕಳ ಜತೆ ಭೋಜನ ;ಇನ್ನೊಂದು ಸಾಲಿನಲ್ಲಿ-ತನ ಸೇವಕರಿಂದ ಹೊಲದ ಉಳುಮೆ; ನಾಟಿ; ಬೆಳೆಯ ಕುಯಿಲು; ಕಾಳೊಕ್ಕುವುದು; ರೊಟ್ಟಿ ತಟ್ಟುವುದು;ಮತ್ತೊಂದು ಸಾಲಿನಲ್ಲಿ-ಹಸುವನ್ನು ಏರಿರುವ ಹೋರಿ;ಹಸು ಈಯುವುದು; ವಯಸ್ಸಾದ ರಾಸು ಕಸಾಯಿಯವನ ಬಳಿ; ಅದನ್ನು ಕಡಿದು ಮಾಂಸ ಸಿದ್ಧಪಡಿಸುವುದು; ಬೇಯಿಸಿದ ಬಿಸಿಮಾಂಸವನ್ನು ಪಾತ್ರೆಯಿಂದೆತ್ತಿ ತನ್ನ ತಾಟಿಗೆ ಬಡಿಸುವುದು...ಚಿತ್ರಗಳಾದರೆ ಸಾಕೆ? ತಾನು ಈಗ ಬಳಸುವ ಎಲ್ಲ ಸಾಮಗ್ರಿಗಳ ಪ್ರತಿರೂಪಗಳನ್ನೂ ಮೂಡಿಸಬೇಕು– ಗೋರಿಯಲ್ಲಿಡುವುದಕ್ಕೋಸ್ಕರ. ಒಳ್ಳೆಯ ಒಂದು ಮಂಚ, ಉತ್ತಮ ಪೀಠ ಪಲ್ಲಕಿ. ನೂರಾರು ದಾಸದಾಸಿಯರ ಪುಟ್ಟಿ ಪ್ರತಿರೂಪಗಳು....ಸಾಯುವುದಕ್ಕೆ ಮುನ್ನ ತಾನು ಮಾಡಿ ಮುಗಿಸಬೇಕಾದ ಕೆಲಸಗಳು ಇನ್ನೂ ಎಷ್ಟೊಂದಿವೆ! ('ಎಲಾ! ಈ ಹೂಜೆಯಲ್ಲಿ ಸುರೆಯೇ ಇಲ್ಲವಲ್ಲ. ತಳ ಮೇಲಕ್ಕೆ ಎತ್ತಿದರೂ ಬೀಳ್ತಾ ಇಲ್ಲ !').... {{gap}}ಸೇವಕ ತನ್ನ ಒಡೆಯ ಪಡುತ್ತಿದ್ದ ಪಾಡು ನೋಡಿ, ತಲೆ ತಗ್ಗಿಸಿಕೊಂಡು ಮನಸ್ಸಿನೊಳಗೇ ನಕ್ಕು, ಮತ್ತಷ್ಟು ಸುರೆಯನ್ನು ತಂದು ಹೂಜೆಗೆ ಸುರಿದ. (ಮನೆಯಲ್ಲಾಗಿದ್ದರೆ ಸೇವಕ ಚಾಮರ ಬೀಸುವ ಹೊತ್ತು. ನದಿಯ ಅಲೆ ಗಳನ್ನು ಸೀಳುತ್ತ ಹೋಗುವಾಗ ಆ ದುಡಿಮೆ ಅನಗತ್ಯ.)<noinclude></noinclude> if9tn5pkhec3f1hsuqpr9o2cni8qlfk ಪುಟ:Mrutyunjaya.pdf/೩೫೪ 104 21843 320153 247007 2026-05-15T14:44:49Z Pragathi. BH 7585 /* Validated */ 320153 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೩೪೧}}</noinclude> {{gap}}ನೂರು బుಟ್ಟಿ ಹಣ್ಣುಗಳು. ಅದು ಹೆಖ್ವೆಟ್ ನ ಬಯಕೆ. అಷ್ಟು ಬುಟ್ಟಿಗಳನ್ನು ಗೋರಿಯೊಳಗಿಡಬೇಕು-ಆಗರ್ಭ ಶ್ರೀಮಂತರು ಮಾಡುವ ಹಾಗೆ. ಇಷ್ಟನ್ನು ಕೊಳ್ಳಲು ಅಪಾರ ಸಂಪತ್ತೇನೂ ಬೇಡ. ಆದರೆ ಮಂಚಕ್ಕೂ ಪೀಠ ಪಲ್ಲಕಿಗೂ ಒಂದಿಷ್ಟು ಬಂಗಾರದ ತಗಡು ? ಬದುಕಿದಾಗ, ಆ ಸುಖ ಇರಲಿಲ್ಲ. ಸತ್ತಮೇಲೆ ಯಾಕಿರಬಾರದು ? {{gap}}'ಬೆಳಕಿಗೆ ಆಗಮನ' ಪುಸ್ತಕ ಬೇಕು. ಲಿಪಿಗಳ ಮೇಲೆ ಬಂಗಾರದ ಪುಡಿ ಉದುರಿಸಿ ಮಾಡಿದ ಕೆಲವು ಪುಸ್ತಕಗಳು ಮಹಾ ಮಂದಿರದಲ್ಲಿ ಇವೆಯಂತೆ. ಆ ಅಮೂಲ್ಯ ದಾಸ್ತಾನಿನಿಂದ ಒಂದನ್ನು ತಾನು ಪಡೆಯಬೇಕು. {{gap}}ಇಷ್ಟಾದರೆ ಆಯಿತೆ? (ದೋಣಿ ಎದ್ದಕ್ಕಿದ್ದಂತೆ ಜೋರಾಗಿ ಅಲು ಗಾಡಿತು.ಹೆಖ್ವೆಟ್ ಎಡ ಅಂಗೈಯಿಂದ ಪೀಠದ ಕೈಯನ್ನು ಭದ್ರವಾಗಿ ಹಿಡಿದುಕೊಂಡ. ಬಲಗೈಯಲ್ಲಿದ್ದ ಮದಿರೆಯ ಹೂಜೆಯನ್ನು ಎದೆಗೆ ಆತು ಹಿಡಿದ. ಗಟ್ಟಿಯಾಗಿ ಕೂಗಿ ಕೇಳಿದ : “ಏನು ಮಾಡ್ತಿದೀರೋ ? ಏನ್ರೊ ಅದು ?” ಆಸ್ಪಷ್ಟ ಪದಗಳು. “ಏನಿಲ್ಲ ಸಾಮಿ, ನೀರ ಕೆಳಗಿನ ಮರಳ ದಿಬ್ಬ" ಎಂದು ನುಡಿದು ದೋಣಿಕಾರ ತನ್ನ ಅಂಬಿಗರಿಗೆ ಛೀಮಾರಿ ಹಾಕಿದ:"ಕುಡಿದಿ ದೀರೇನ್ರೋ? ಕತ್ತೆಗಳ್ರಾ! ನೋಡ್ಕೋಂಡು ಹುಟ್ಟ ಹಾಕ್ರೋ....”) ನದೀ ಪ್ರವಾಸದಲ್ಲಿ ಸಾವು ಒಳ್ಳೆಯದಲ.ಒಂದು ರೀತಿಯ ಅಪಮೃತ್ಯು. ನೀರು ತುಂಬಿ ಮೈ ಊದಿಕೊಳ್ತದೆ. ('ಸ್ವಲ್ಪ ಮಾತ್ರ ಊದಿಕೊಂಡರೆ ನೋಡೋದಕ್ಕೆ ಚೆನಾಗಿದ್ದೀತು.') ಶವರಕ್ಷಣೆಯ ವಿಷಯದಲ್ಲಿ ಮಾತ್ರ ಲೆಕ್ಕಾಚಾರ ಮಾಡಬೇಡ ಅಂತ ಮಗನಿಗೆ ಹೇಳಬೇಕು. ಪೆರೋ ಸತ್ತಾಗ ಯಾವ ಲೇಪನ ಸಾಮಗ್ರಿ ಬಳಸುತ್ತಾರೋ ಅದೇ ತನಗೂ. ಮೂಗಿನ ಹೊಳ್ಳೆಗಳ ಒಳಕ್ಕೆ ತಾಮ್ರದ ಕೊಕ್ಕೆ ಹಾಕಿ, ಮೆದುಳನ್ನು ಹೊರಗೆ ತೆಗೀತಾರೆ (ಹೇಗಿತ್ತದೋ ತನ್ನ ತೀಕ್ಷ್ಣ ಬದ್ಧಿಯ ಮೆದುಳು ?) ಪಾರ್ಶ್ವದಲ್ಲಿ ಚೂಪು ಗಲ್ಲಿನಿಂದ ಗೀರು ಹಾಕಿ ಕುಯ್ದು ಕರುಳುಗಳನ್ನು ಹೊರಕ್ಕೆ ಎಳೀತಾರೆ. ಒಳ ಭಾಗವನ್ನು ತಾಳೆ ಸುರೆಯಿಂದ ತೊಳೆದು,ಸುಗಂಧ ದ್ರವ್ಯ ತುಂಬಿ ಹೊಲೀತಾರೆ.ಹೊರತೆಗೆದ ಮೆದುಳಿಗೊಂದು ಜಾಡಿ,ಕರುಳಿಗೊಂದು ಜಾಡಿ.ಆ ಮೇಲೆ ಇಡೀ ಶರೀರವನ್ನು ಲೇಪನ ರಸಾಯನದಲ್ಲಿ ಎಪ್ಪತ್ತು ದಿನ ಅದುತ್ತಾರೆ. ಆ ಅವಧಿ ಮುಗಿದೆಲೆ ಶರೀರವನ್ನು ತೆಗೆದು, ಸೆಣಬಿನ ಪಟ್ಟಿಯಿಂದ ಗೋಂದು<noinclude></noinclude> oginuf3wlqmiga6d8jpx0tmj8xl6wjk ಪುಟ:Mrutyunjaya.pdf/೩೫೫ 104 21844 320155 247014 2026-05-15T14:46:53Z Pragathi. BH 7585 /* Validated */ 320155 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೩೪೨|right=}}</noinclude> ಹಾಕಿ ಸುತ್ತುತ್ತಾರೆ. ರಕ್ಷಿತ ಶವ. ನೆಟ್ಟಿಗೆ ನಿಲ್ಲಿಸ್ತಾರೆ. ಅಂತಿವ ಯಾತ್ರೆಗೆ ಸಿದ್ಧತೆ.ಅರ್ಚಕ ತುಟಿಗಳ ನಡುವೆ ಗೀರು ಹಾಕಿ ಬಾಯಿಯ ಸಂದಿ ಬಿಡಿಸುತ್ತಾನೆ. {{gap}}ಬಹಳ ಜನ ಅಳಬೇಕು, ಬಹಳ ಜನ. ಸಾವಿರಾರು ಶೋಕ ಸ್ತ್ರೀಯರನ್ನು ನೇಮಿಸ್ಬೇಕು. ಸ್ತ್ರೀಯರಿಂದ ಶೋಕರೋದನ. ಅರ್ಚಕನಿಂದ ಶೋಕ ನರ್ತನ. ಮಂತ್ರ ಪಠಣ. {{gap}}ಎಷ್ಟು ಸೊಗಸಾದ ಭೋಜನ ಏರ್ಪಡಿಸ್ಬೇಕು ಅಂದರೆ, ಉಣ್ಣುತ್ತ ಎಲ್ಲರೂ “ಮಹಾಪುರುಷ” ಎಂದು ತನ್ನನ್ನು ಕೊಂಡಾಡಬೇಕು. {{gap}}...ಆದರೆ, ತಾನು ಸತ್ತ ಅನಂತರದ ಈ ಕೆಲಸಗಳನ್ನೆಲ್ಲ ಸಮರ್ಪಕವಾಗಿ ಮಾಡಿಸುವವರು ಯಾರು ? ತನ್ನ ಸುಪುತ್ರ. ಆ ಪುತ್ರ ಅದೆಷ್ಟು ಮಾಡಿಸ್ತಾನೊ ? ಅದೆಷ್ಟು ಬಿಡ್ತಾನೋ? {{gap}}ಎಲ್ಲದಕ್ಕಿಂತ ದೊಡ್ಡ ಸಮಸ್ಯೆ ಉದ್ಭವವಾಗುವುದು ಗೋರಿಯ ಬಾಗಿಲು ಮುಚ್ಚಿದ ಮೇಲೆ.ಅದು ಭದ್ರವಾಗಿರಬೇಕು.ಗೋರಿ ಕಳ್ಳರಿಂದ ರಕ್ಷಣೆ.... ಇಂಥ ಕಲ್ಲನ್ನು ಹೀಗೆ ಸರಿಸಿದರೆ ಒಳ ಪ್ರವೇಶ-ಅಂತ ಕಲ್ಲು ಕೆಲಸಗಾರರೇ ಚೋರರಿಗೆ ಸುಳಿವು ಕೊಟ್ಟರೆ ? ಈ ವಿಧಾನದಿಂದಲೇ ಅಲ್ಲವೇ ಹಲವು ಗೋರಿಗಳನ್ನು ದರೋಡೆಗಾರರು ಲೂಟಿ ಮಾಡಿರುವುದು ? ಗೋರಿಪ್ರದೇಶಕ್ಕೆ ರಕ್ಷಣೆ ಒದಗಿಸಬೇಕು ಪೆರೋ.ನಿತ್ಯ ಕಾವಲು.ಯಾರೂ ಹೊಲಸು ಮಾಡಿ ಗೋರಿಯನ್ನು ಅಪವಿತ್ರಗೊಳಿಸಬಾರದು. ವರ್ಷಕ್ಕೊಮ್ಮೆ ಪೂಜೆ. ಸತ್ತ ಮೇಲೂ ದೇವರ ರಕ್ಷಣೆ ಬೇಡವೆ? ಅಂಥ ರಕ್ಷಣೆ ಇದ್ದರಲ್ಲವೆ ಕರೆ ಬಂದಾಗ ಸತ್ತವನು ಎದ್ದು ಬರುವ ಸಾಧ್ಯತೆ ? ಈ ವೆಚ್ಚಕ್ಕೆ ಹಣ ? {{gap}}_ಒಂದಷ್ಟು ಹೊಲಗಳನ್ನೂ ರಾಸುಗಳನ್ನೂ ದೇವಮಂದಿರಕ್ಕೆ ಉಂಬಳಿಯಾಗಿ ಬಿಡಬೇಕು. ನಾನೇನೋ ಬಿಡಬಹುದು. ಆದರೆ ಮಗ ಅದನ್ನು ಮುಂದುವರಿಸಿಕೊಂಡು ಹೋಗುವವನೋ ಇಲ್ಲವೋ. ಅಥವಾ, ಮಂದಿರದವರೇ ಈ ಹೊಲಗಳನ್ನೂ ರಾಸುಗಳನ್ನೂ ಬಳಸಿ,ಸೋಮಾರಿಗಳಾಗಿ ತನ್ನನ್ನು ಮರೆತರೆ? {{gap}}'ಇವರೆಲ್ಲ ನನ್ನನ್ನು ಮರೆತರೆ?' {{gap}}ಒಂದು ಹನಿ ಕಣ್ಣೀರು....<noinclude></noinclude> 13hbhenzgakmrnz2o87k2oozhsq6486 ಪುಟ:Mrutyunjaya.pdf/೩೫೬ 104 21845 320157 247022 2026-05-15T14:50:26Z Pragathi. BH 7585 /* Validated */ 320157 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೩೪೩}}</noinclude> {{gap}}ಹೂಜೆಯು ಕೈಯಿಂದ ಕೆಳಕ್ಕೆ...(ಸೇವಕ ಅದನ್ನುಹಿಡಿದುಕೊಂಡ.... ಕಣ್ಣೆವೆಗಳು ಮುಚ್ಚಿಕೊಳ್ಳುತ್ತಿವೆ.) {{gap}}ಸಾವು ? 'ಥೂ ಮರುಳೆ ! ಇದು నిದ್ದೆ'.... {{gap}}...ಎಷ್ಟೋ ಹೊತ್ತಿನ ಬಳಿಕ ಗಡಬಡಿಸಿ ಎದು ಹೆಖ್ವೆಟ್ ಕೂಗಾಡಿದ : “ಏನ್ರೋ ಅದು ? ಸಾಯಿಸ್ತೀರೇನ್ರೋ.” {{gap}}ಎಳೆಯ ಲಿಪಿಕಾರ ಅಂದ: {{gap}}" ಡಿಕ್ಕಿ ಹೊಡೆದದ್ದಲ್ಲ-ದಂಡೆ ಮುಟ್ಟಿದ್ದು. ಅರ್ಧದಾರಿ ಆಯ್ತು. ಮರಗಳಿವೆ,ನೆರಳೀದೆ.ಊಟ ಮುಗಿಸಿ ಮುಂದಕ್ಕೆ ಪ್ರಯಾಣ.” {{gap}}ಹೆಖ್ವೆಟ್ ಕಣ್ಣು ಗಳನ್ನು ಮುಚ್ಚುತ್ತ ತೆರೆಯುತ್ತ, ಮುಚ್ಚುತ್ತ ತೆರೆಯುತ್ತ, ರಣರಣ ಬಿಸಿಲನ್ನು ನೋಡಿದ.ಪೀಠದಿಂದ ನಿಧಾನವಾಗಿ ಎದ್ದು, ಅಡಿ ತಪ್ಪದಂತೆ ಎಚ್ಚರ ವಹಿಸುತ್ತ, ದೋಣಿಕಾರ ನೀಡಿದ ಕೈಯನ್ನು ಆಧರಿಸಿ, ನದಿಯ ಅಂಚಿನ ಒದ್ದೆ ಮರಳಿನ ಮೇಲೆ ಪಾದರಕ್ಷೆಯನ್ನು ಊರಿದ. * * * * * {{gap}}ಪಶ್ಚಿಮ ದಿಕ್ಕಿಗೆ ಧಾವಿಸುತ್ತಿದ್ದ ರಾ ನ ಕಿರಣಗಳು ತಣ್ಣಗಾಗುವುದಕ್ಕೆ ಮೊದಲೆ ರಾಜನಾವೆ ಆನ್ ನಗರಿಯ ದೋಣಿಕಟ್ಟೆಯನ್ನು ತಲಪಿತು.ಸಣ್ಣ ಕಟ್ಟೆ. ದೂರದಲ್ಲಿ ಮಹಾ ಅರ್ಚಕನ ನಾವೆಯನ್ನು ಕಟ್ಟಿತ್ತು.ಒಂದೆರಡು ಹೇರು ದೋಣಿಗಳೂ ಇದ್ದುವು. {{gap}}ಹೆಖ್ವೆಟ್ ದೋಣಿಯಿಂದ ಇಳಿಯಲಿಲ್ಲ. {{gap}}ಎಳೆಯ ಲಿಪಿಕಾರ ಕಾವಲು ಭಟರಿಗೆ ತಿಳಿಯ ಹೇಳಿದ: {{gap}}“ ಇವರು ಪೆರೋನ ಹಿರಿಯ ಸಲಹೆಗಾರರು-ಹೆಖ್ವೆಟ್. ಓಡಿಹೋಗಿ ಆನ್ ನಗರಾಧಿಕಾರಿಗೆ ತಿಳಿಸಿ ಬಿಡಿ. ಆತ ಪಲ್ಲಕಿ ತಗೊಂಡು ಬರಲಿ." {{gap}}ಎರಡು ಮೂರು ವರ್ಷ ಹಿಂದೆ ಹೆಖ್ವೆಟ್ ಅಲ್ಲಿಗೆ ಬಂದಿದ್ದ.ಸಕುಟುಂಬವಾಗಿ, ಯಾತ್ರಾರ್ಥಿಯಾಗಿ ಇಳಿದು ನಡೆದೇ ರಾಜಗೃಹಕ್ಕೆ ಹೊಗಬಹುದು. ಆದರೆ ರಾಜ ಪ್ರತಿನಿಧಿ ಹಾಗೆ ಮಾಡಿದರೆ ಆತನ ಬಗೆಗೆ ಏನು ಗೌರವ ಉಳಿದೀತು? {{gap}}ಮೂಲೆಯಲ್ಲಿ ನಿಂತಿದ್ದ ಹೆಖ್ವೆಟ್ ನ ಜತೆ ಬಂದಿದ್ದ ಎಳೆಯ ಲಿಪಿಕಾರ<noinclude></noinclude> 3osnuasllwx9kkuwp1eto6gnro2ob3d 320158 320157 2026-05-15T14:51:10Z Pragathi. BH 7585 320158 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೩೪೩}}</noinclude> {{gap}}ಹೂಜೆಯು ಕೈಯಿಂದ ಕೆಳಕ್ಕೆ...(ಸೇವಕ ಅದನ್ನುಹಿಡಿದುಕೊಂಡ.... ಕಣ್ಣೆವೆಗಳು ಮುಚ್ಚಿಕೊಳ್ಳುತ್ತಿವೆ.) {{gap}}ಸಾವು ? 'ಥೂ ಮರುಳೆ ! ಇದು నిದ್ದೆ'.... {{gap}}...ಎಷ್ಟೋ ಹೊತ್ತಿನ ಬಳಿಕ ಗಡಬಡಿಸಿ ಎದು ಹೆಖ್ವೆಟ್ ಕೂಗಾಡಿದ : “ಏನ್ರೋ ಅದು ? ಸಾಯಿಸ್ತೀರೇನ್ರೋ.” {{gap}}ಎಳೆಯ ಲಿಪಿಕಾರ ಅಂದ: {{gap}}" ಡಿಕ್ಕಿ ಹೊಡೆದದ್ದಲ್ಲ-ದಂಡೆ ಮುಟ್ಟಿದ್ದು. ಅರ್ಧದಾರಿ ಆಯ್ತು. ಮರಗಳಿವೆ,ನೆರಳೀದೆ.ಊಟ ಮುಗಿಸಿ ಮುಂದಕ್ಕೆ ಪ್ರಯಾಣ.” {{gap}}ಹೆಖ್ವೆಟ್ ಕಣ್ಣು ಗಳನ್ನು ಮುಚ್ಚುತ್ತ ತೆರೆಯುತ್ತ, ಮುಚ್ಚುತ್ತ ತೆರೆಯುತ್ತ, ರಣರಣ ಬಿಸಿಲನ್ನು ನೋಡಿದ.ಪೀಠದಿಂದ ನಿಧಾನವಾಗಿ ಎದ್ದು, ಅಡಿ ತಪ್ಪದಂತೆ ಎಚ್ಚರ ವಹಿಸುತ್ತ, ದೋಣಿಕಾರ ನೀಡಿದ ಕೈಯನ್ನು ಆಧರಿಸಿ, ನದಿಯ ಅಂಚಿನ ಒದ್ದೆ ಮರಳಿನ ಮೇಲೆ ಪಾದರಕ್ಷೆಯನ್ನು ಊರಿದ. * * * * * {{gap}}ಪಶ್ಚಿಮ ದಿಕ್ಕಿಗೆ ಧಾವಿಸುತ್ತಿದ್ದ ರಾ ನ ಕಿರಣಗಳು ತಣ್ಣಗಾಗುವುದಕ್ಕೆ ಮೊದಲೆ ರಾಜನಾವೆ ಆನ್ ನಗರಿಯ ದೋಣಿಕಟ್ಟೆಯನ್ನು ತಲಪಿತು.ಸಣ್ಣ ಕಟ್ಟೆ. ದೂರದಲ್ಲಿ ಮಹಾ ಅರ್ಚಕನ ನಾವೆಯನ್ನು ಕಟ್ಟಿತ್ತು.ಒಂದೆರಡು ಹೇರು ದೋಣಿಗಳೂ ಇದ್ದುವು. {{gap}}ಹೆಖ್ವೆಟ್ ದೋಣಿಯಿಂದ ಇಳಿಯಲಿಲ್ಲ. {{gap}}ಎಳೆಯ ಲಿಪಿಕಾರ ಕಾವಲು ಭಟರಿಗೆ ತಿಳಿಯ ಹೇಳಿದ: {{gap}}“ ಇವರು ಪೆರೋನ ಹಿರಿಯ ಸಲಹೆಗಾರರು-ಹೆಖ್ವೆಟ್. ಓಡಿಹೋಗಿ ಆನ್ ನಗರಾಧಿಕಾರಿಗೆ ತಿಳಿಸಿ ಬಿಡಿ. ಆತ ಪಲ್ಲಕಿ ತಗೊಂಡು ಬರಲಿ." {{gap}}ಎರಡು ಮೂರು ವರ್ಷ ಹಿಂದೆ ಹೆಖ್ವೆಟ್ ಅಲ್ಲಿಗೆ ಬಂದಿದ್ದ.ಸಕುಟುಂಬವಾಗಿ, ಯಾತ್ರಾರ್ಥಿಯಾಗಿ ಇಳಿದು ನಡೆದೇ ರಾಜಗೃಹಕ್ಕೆ ಹೊಗಬಹುದು. ಆದರೆ ರಾಜ ಪ್ರತಿನಿಧಿ ಹಾಗೆ ಮಾಡಿದರೆ ಆತನ ಬಗೆಗೆ ಏನು ಗೌರವ ಉಳಿದೀತು? {{gap}}ಮೂಲೆಯಲ್ಲಿ ನಿಂತಿದ್ದ ಹೆಖ್ವೆಟ್ ನ ಜತೆ ಬಂದಿದ್ದ ಎಳೆಯ ಲಿಪಿಕಾರ<noinclude></noinclude> jy1no2tl13q8xqr5ycyriq15lcr5imb 320159 320158 2026-05-15T14:52:11Z Pragathi. BH 7585 320159 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೩೪೩}}</noinclude> {{gap}}ಹೂಜೆಯು ಕೈಯಿಂದ ಕೆಳಕ್ಕೆ...(ಸೇವಕ ಅದನ್ನುಹಿಡಿದುಕೊಂಡ.... ಕಣ್ಣೆವೆಗಳು ಮುಚ್ಚಿಕೊಳ್ಳುತ್ತಿವೆ.) {{gap}}ಸಾವು ? 'ಥೂ ಮರುಳೆ ! ಇದು నిದ್ದೆ'.... {{gap}}...ಎಷ್ಟೋ ಹೊತ್ತಿನ ಬಳಿಕ ಗಡಬಡಿಸಿ ಎದು ಹೆಖ್ವೆಟ್ ಕೂಗಾಡಿದ : “ಏನ್ರೋ ಅದು ? ಸಾಯಿಸ್ತೀರೇನ್ರೋ.” {{gap}}ಎಳೆಯ ಲಿಪಿಕಾರ ಅಂದ: {{gap}}" ಡಿಕ್ಕಿ ಹೊಡೆದದ್ದಲ್ಲ-ದಂಡೆ ಮುಟ್ಟಿದ್ದು. ಅರ್ಧದಾರಿ ಆಯ್ತು. ಮರಗಳಿವೆ,ನೆರಳೀದೆ.ಊಟ ಮುಗಿಸಿ ಮುಂದಕ್ಕೆ ಪ್ರಯಾಣ.” {{gap}}ಹೆಖ್ವೆಟ್ ಕಣ್ಣು ಗಳನ್ನು ಮುಚ್ಚುತ್ತ ತೆರೆಯುತ್ತ, ಮುಚ್ಚುತ್ತ ತೆರೆಯುತ್ತ, ರಣರಣ ಬಿಸಿಲನ್ನು ನೋಡಿದ.ಪೀಠದಿಂದ ನಿಧಾನವಾಗಿ ಎದ್ದು, ಅಡಿ ತಪ್ಪದಂತೆ ಎಚ್ಚರ ವಹಿಸುತ್ತ, ದೋಣಿಕಾರ ನೀಡಿದ ಕೈಯನ್ನು ಆಧರಿಸಿ, ನದಿಯ ಅಂಚಿನ ಒದ್ದೆ ಮರಳಿನ ಮೇಲೆ ಪಾದರಕ್ಷೆಯನ್ನು ಊರಿದ. {{rh|center= * * * * }} {{gap}}ಪಶ್ಚಿಮ ದಿಕ್ಕಿಗೆ ಧಾವಿಸುತ್ತಿದ್ದ ರಾ ನ ಕಿರಣಗಳು ತಣ್ಣಗಾಗುವುದಕ್ಕೆ ಮೊದಲೆ ರಾಜನಾವೆ ಆನ್ ನಗರಿಯ ದೋಣಿಕಟ್ಟೆಯನ್ನು ತಲಪಿತು.ಸಣ್ಣ ಕಟ್ಟೆ. ದೂರದಲ್ಲಿ ಮಹಾ ಅರ್ಚಕನ ನಾವೆಯನ್ನು ಕಟ್ಟಿತ್ತು.ಒಂದೆರಡು ಹೇರು ದೋಣಿಗಳೂ ಇದ್ದುವು. {{gap}}ಹೆಖ್ವೆಟ್ ದೋಣಿಯಿಂದ ಇಳಿಯಲಿಲ್ಲ. {{gap}}ಎಳೆಯ ಲಿಪಿಕಾರ ಕಾವಲು ಭಟರಿಗೆ ತಿಳಿಯ ಹೇಳಿದ: {{gap}}“ ಇವರು ಪೆರೋನ ಹಿರಿಯ ಸಲಹೆಗಾರರು-ಹೆಖ್ವೆಟ್. ಓಡಿಹೋಗಿ ಆನ್ ನಗರಾಧಿಕಾರಿಗೆ ತಿಳಿಸಿ ಬಿಡಿ. ಆತ ಪಲ್ಲಕಿ ತಗೊಂಡು ಬರಲಿ." {{gap}}ಎರಡು ಮೂರು ವರ್ಷ ಹಿಂದೆ ಹೆಖ್ವೆಟ್ ಅಲ್ಲಿಗೆ ಬಂದಿದ್ದ.ಸಕುಟುಂಬವಾಗಿ, ಯಾತ್ರಾರ್ಥಿಯಾಗಿ ಇಳಿದು ನಡೆದೇ ರಾಜಗೃಹಕ್ಕೆ ಹೊಗಬಹುದು. ಆದರೆ ರಾಜ ಪ್ರತಿನಿಧಿ ಹಾಗೆ ಮಾಡಿದರೆ ಆತನ ಬಗೆಗೆ ಏನು ಗೌರವ ಉಳಿದೀತು? {{gap}}ಮೂಲೆಯಲ್ಲಿ ನಿಂತಿದ್ದ ಹೆಖ್ವೆಟ್ ನ ಜತೆ ಬಂದಿದ್ದ ಎಳೆಯ ಲಿಪಿಕಾರ<noinclude></noinclude> 8e1xvwjzpriox7b3xhhyw2noa8qj2j4 ಪುಟ:Mrutyunjaya.pdf/೩೫೭ 104 21846 320160 247037 2026-05-15T14:52:27Z Pragathi. BH 7585 /* Validated */ 320160 proofread-page text/x-wiki <noinclude><pagequality level="4" user="Pragathi. BH" /></noinclude>೩೪೪ ಮೃತ್ಯುಂಜಯ ಕಿರು ಯೌವನಕ್ಕೆ ಕಾಲಿರಿಸಿದ್ದ ದೇವಸೇವಕನೊಬ್ಬ ಕಟ್ಟೆಯ ಕಡೆಗೆ ಬರುತ್ತಿದ್ದುದನ್ನು ಕಂಡ. 'ಇವನು ಯಾವನೋ ಪರಿಚಿತ' ಎನಿಸಿತು. ಇನ್ನೂ ಹತ್ತಿರ ಬಂದಾಗ, ಗುರುತು ಹಿಡಿದ. ರಾಜಧಾನಿಯವನು. ದೇವಸೇವಕನಾಗುವುದಕ್ಕೆ ಮುಂಚೆ ಮಹಾಮಂದಿರದ ಶಾಲೆಯಲ್ಲಿ ಅವನ ಸಹಪಾಠಿಯಾಗಿದ್ದವನು. "ಎಲ್ಲಾ,ಇಲ್ಲಿಗೆ ಯಾಕೆ ಬಂದೆ ?” -ಈತ ಕೇಳಿದ. " ಅಸ್ವಸ್ಥ ಸಂಬಂಧಿಕನನ್ನು ಕಾಣೋದಕ್ಕೆ...” _ಎಂದ ಆತ. “ ನಿನಗೆ ಯಾವ ಸಂಬಂಧಿಕ ಈ ಊರಲ್ಲಿ ?” “ ಅದನ್ನೆಲ್ಲ ಕೇಳಬಾರದು. ಹೇಳಿದ್ದನ್ನು ನಂಬಿ ಸುಮ್ಮನಿದ್ದರೆ ಯಾರಿಗೂ ತೊಂದರೆಯಾಗೋದಿಲ್ಲ." ದೇವಸೇವಕ ಕುತೂಹಲದಿಂದ ಹೆಖ್ವೆಟ್ ನನ್ನು ನೋಡಿದ. ಲಿಪಿಕಾರ, “ಅವರು ಹೆಖ್ವೆಟ್” ಎಂದ. " ಗೊತ್ತು.” "ಹ್ಯಾಗೆ?" “ ಮಹಾಮಂದಿರಕ್ಕೆ ಅವರು ಬಂದಾಗ ನೋಡಿದ್ದು.” ಹೆಖ್ವೆಟ್ ಥಟ್ಟನೆ ತಿರುಗಿ ಆ ದೇವಸೇಕನನ್ನು ನೋಡಿ, ಬಾ ಇಲ್ಲಿ," ಎಂದ. ಸ್ನೇಹಿತರಿಬ್ಬರಿಗೂ ಅಚ್ಚರಿ. ಮುದುಕನಿಗೆ ತಮ್ಮ ಸಂಭಾಷಣೆ ಕೇಳಿಸಲಾರದು ಎಂದು ಕೊಂಡಿದ್ದರು. ಈಗ.... ಎಳೆಯ ಲಿಪಿಕಾರ ಹೆಖ್ವೆಟ್ ನ ಬಳಿ ಸರಿದ. " ಅವನನ್ನು ಕರಿ,” ಎಂದ ಹೆಖ್ವೆಟ್. ಇನ್ನೊಬ್ಬ ಹತ್ತಿರ ಬಂದಾಗ ಆತ ಕೇಳಿದ: " ಮಹಾ ಅರ್ಚಕರನ್ನು ನೋಡೋಕೆ ಈ ಊರಿಗೆ ಬಂದಿದ್ದೆಯಾ? " ದೇವಸೇವಕನಿಗೆ ಗಾಬರಿ. ಹೆಖ್ವೆಟ್ ನಾವೆಯ ಒಡಲಿನಿಂದ ಎತ್ತಿ ಹಿಡಿದಿದ್ದ ತನ್ನ ಪದವಿ ದಂಡದ ಕಡೆಗೊಮ್ಮೆ ನೋಡಿ, ಗುಡುಗಿದ: “ ನಾನು ಯಾರು ಗೊತ್ತಲ್ಲ?” "ಗೊತ್ತು,ಸ್ವಾಮಿ.ಮಂದಿರದ ಕೆಲಸ.ಮೊನ್ನೆ ರಾತ್ರಿ<noinclude></noinclude> 3350vw5ip1x6kt1ra79kc5qprnzo5km 320217 320160 2026-05-15T16:31:34Z Pragathi. BH 7585 320217 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೩೪೪|right=}}</noinclude> ಕಿರು ಯೌವನಕ್ಕೆ ಕಾಲಿರಿಸಿದ್ದ ದೇವಸೇವಕನೊಬ್ಬ ಕಟ್ಟೆಯ ಕಡೆಗೆ ಬರುತ್ತಿದ್ದುದನ್ನು ಕಂಡ. 'ಇವನು ಯಾವನೋ ಪರಿಚಿತ' ಎನಿಸಿತು. ಇನ್ನೂ ಹತ್ತಿರ ಬಂದಾಗ, ಗುರುತು ಹಿಡಿದ. ರಾಜಧಾನಿಯವನು. ದೇವಸೇವಕನಾಗುವುದಕ್ಕೆ ಮುಂಚೆ ಮಹಾಮಂದಿರದ ಶಾಲೆಯಲ್ಲಿ ಅವನ ಸಹಪಾಠಿಯಾಗಿದ್ದವನು. {{gap}}"ಎಲ್ಲಾ,ಇಲ್ಲಿಗೆ ಯಾಕೆ ಬಂದೆ ?” -ಈತ ಕೇಳಿದ. {{gap}}" ಅಸ್ವಸ್ಥ ಸಂಬಂಧಿಕನನ್ನು ಕಾಣೋದಕ್ಕೆ...” _ಎಂದ ಆತ. {{gap}}“ ನಿನಗೆ ಯಾವ ಸಂಬಂಧಿಕ ಈ ಊರಲ್ಲಿ ?” “ ಅದನ್ನೆಲ್ಲ ಕೇಳಬಾರದು. ಹೇಳಿದ್ದನ್ನು ನಂಬಿ ಸುಮ್ಮನಿದ್ದರೆ ಯಾರಿಗೂ ತೊಂದರೆಯಾಗೋದಿಲ್ಲ." {{gap}}ದೇವಸೇವಕ ಕುತೂಹಲದಿಂದ ಹೆಖ್ವೆಟ್ ನನ್ನು ನೋಡಿದ. {{gap}}ಲಿಪಿಕಾರ, “ಅವರು ಹೆಖ್ವೆಟ್” ಎಂದ. {{gap}}" ಗೊತ್ತು.” {{gap}}"ಹ್ಯಾಗೆ?" {{gap}}“ ಮಹಾಮಂದಿರಕ್ಕೆ ಅವರು ಬಂದಾಗ ನೋಡಿದ್ದು.” ಹೆಖ್ವೆಟ್ ಥಟ್ಟನೆ ತಿರುಗಿ ಆ ದೇವಸೇಕನನ್ನು ನೋಡಿ, ಬಾ ಇಲ್ಲಿ," ಎಂದ. ಸ್ನೇಹಿತರಿಬ್ಬರಿಗೂ ಅಚ್ಚರಿ. ಮುದುಕನಿಗೆ ತಮ್ಮ ಸಂಭಾಷಣೆ ಕೇಳಿಸಲಾರದು ಎಂದು ಕೊಂಡಿದ್ದರು. ಈಗ... {{gap}}ಎಳೆಯ ಲಿಪಿಕಾರ ಹೆಖ್ವೆಟ್ ನ ಬಳಿ ಸರಿದ. {{gap}}" ಅವನನ್ನು ಕರಿ,” ಎಂದ ಹೆಖ್ವೆಟ್. {{gap}}ಇನ್ನೊಬ್ಬ ಹತ್ತಿರ ಬಂದಾಗ ಆತ ಕೇಳಿದ: {{gap}}" ಮಹಾ ಅರ್ಚಕರನ್ನು ನೋಡೋಕೆ ಈ ಊರಿಗೆ ಬಂದಿದ್ದೆಯಾ? {{gap}}" ದೇವಸೇವಕನಿಗೆ ಗಾಬರಿ. ಹೆಖ್ವೆಟ್ ನಾವೆಯ ಒಡಲಿನಿಂದ ಎತ್ತಿ ಹಿಡಿದಿದ್ದ ತನ್ನ ಪದವಿ ದಂಡದ ಕಡೆಗೊಮ್ಮೆ ನೋಡಿ, ಗುಡುಗಿದ: {{gap}}“ ನಾನು ಯಾರು ಗೊತ್ತಲ್ಲ?” {{gap}}"ಗೊತ್ತು,ಸ್ವಾಮಿ.ಮಂದಿರದ ಕೆಲಸ.ಮೊನ್ನೆ ರಾತ್ರಿ<noinclude></noinclude> b1qbhfoapw211dbx1rz6gue57y0yseh 320220 320217 2026-05-15T16:32:05Z Pragathi. BH 7585 320220 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೩೪೪|right=}}</noinclude> ಕಿರು ಯೌವನಕ್ಕೆ ಕಾಲಿರಿಸಿದ್ದ ದೇವಸೇವಕನೊಬ್ಬ ಕಟ್ಟೆಯ ಕಡೆಗೆ ಬರುತ್ತಿದ್ದುದನ್ನು ಕಂಡ. 'ಇವನು ಯಾವನೋ ಪರಿಚಿತ' ಎನಿಸಿತು. ಇನ್ನೂ ಹತ್ತಿರ ಬಂದಾಗ, ಗುರುತು ಹಿಡಿದ. ರಾಜಧಾನಿಯವನು. ದೇವಸೇವಕನಾಗುವುದಕ್ಕೆ ಮುಂಚೆ ಮಹಾಮಂದಿರದ ಶಾಲೆಯಲ್ಲಿ ಅವನ ಸಹಪಾಠಿಯಾಗಿದ್ದವನು. {{gap}}"ಎಲ್ಲಾ,ಇಲ್ಲಿಗೆ ಯಾಕೆ ಬಂದೆ ?” -ಈತ ಕೇಳಿದ. {{gap}}" ಅಸ್ವಸ್ಥ ಸಂಬಂಧಿಕನನ್ನು ಕಾಣೋದಕ್ಕೆ...” _ಎಂದ ಆತ. {{gap}}“ ನಿನಗೆ ಯಾವ ಸಂಬಂಧಿಕ ಈ ಊರಲ್ಲಿ ?” “ ಅದನ್ನೆಲ್ಲ ಕೇಳಬಾರದು. ಹೇಳಿದ್ದನ್ನು ನಂಬಿ ಸುಮ್ಮನಿದ್ದರೆ ಯಾರಿಗೂ ತೊಂದರೆಯಾಗೋದಿಲ್ಲ." {{gap}}ದೇವಸೇವಕ ಕುತೂಹಲದಿಂದ ಹೆಖ್ವೆಟ್ ನನ್ನು ನೋಡಿದ. {{gap}}ಲಿಪಿಕಾರ, “ಅವರು ಹೆಖ್ವೆಟ್” ಎಂದ. {{gap}}" ಗೊತ್ತು.” {{gap}}"ಹ್ಯಾಗೆ?" {{gap}}“ ಮಹಾಮಂದಿರಕ್ಕೆ ಅವರು ಬಂದಾಗ ನೋಡಿದ್ದು.” ಹೆಖ್ವೆಟ್ ಥಟ್ಟನೆ ತಿರುಗಿ ಆ ದೇವಸೇಕನನ್ನು ನೋಡಿ, ಬಾ ಇಲ್ಲಿ," ಎಂದ. ಸ್ನೇಹಿತರಿಬ್ಬರಿಗೂ ಅಚ್ಚರಿ. ಮುದುಕನಿಗೆ ತಮ್ಮ ಸಂಭಾಷಣೆ ಕೇಳಿಸಲಾರದು ಎಂದು ಕೊಂಡಿದ್ದರು. ಈಗ... {{gap}}ಎಳೆಯ ಲಿಪಿಕಾರ ಹೆಖ್ವೆಟ್ ನ ಬಳಿ ಸರಿದ. {{gap}}" ಅವನನ್ನು ಕರಿ,” ಎಂದ ಹೆಖ್ವೆಟ್. {{gap}}ಇನ್ನೊಬ್ಬ ಹತ್ತಿರ ಬಂದಾಗ ಆತ ಕೇಳಿದ: {{gap}}" ಮಹಾ ಅರ್ಚಕರನ್ನು ನೋಡೋಕೆ ಈ ಊರಿಗೆ ಬಂದಿದ್ದೆಯಾ? {{gap}}" ದೇವಸೇವಕನಿಗೆ ಗಾಬರಿ. ಹೆಖ್ವೆಟ್ ನಾವೆಯ ಒಡಲಿನಿಂದ ಎತ್ತಿ ಹಿಡಿದಿದ್ದ ತನ್ನ ಪದವಿ ದಂಡದ ಕಡೆಗೊಮ್ಮೆ ನೋಡಿ, ಗುಡುಗಿದ: {{gap}}“ ನಾನು ಯಾರು ಗೊತ್ತಲ್ಲ?” {{gap}}"ಗೊತ್ತು,ಸ್ವಾಮಿ.ಮಂದಿರದ ಕೆಲಸ.ಮೊನ್ನೆ ರಾತ್ರಿ<noinclude></noinclude> pd3xlhwb0y5mxdphlqbx48rus1ydiuy ಪುಟ:Mrutyunjaya.pdf/೩೫೮ 104 21847 320161 247041 2026-05-15T14:52:40Z Pragathi. BH 7585 /* Validated */ 320161 proofread-page text/x-wiki <noinclude><pagequality level="4" user="Pragathi. BH" /></noinclude>ಮೃತ್ಯುಂಜಯ ೩೪೫ "ಮಹಾಮಂದಿರದಿಂದ ಕಳಿಸಿದ್ರು,ಬಂದೆ. నిನ್ನೆ ರಾತ್ರಿಯೇ ವಾಪಸು ಹೋಗ್ಬೇಕಾಗಿತ್ತು. ದೋಣಿ ಸಿಗಲಿಲ್ಲ. ಈಗ ಹೊರಟಿದ್ದೇನೆ." " ಹಾಗಾದರೆ ಇಲ್ಲಿ ಇಲ್ಲದ ಸಂಬಂಧಿಕನನ್ನು ಯಾಕೆ ಹುಟ್ಟಿಸ್ಕೊಂಡೆ ? " " ಅದು ಹಿರಿಯ ದೇವಸೇವಕರ ನಿರ್ದೇಶ, ಸ್ವಾಮೀ.” "ಭೇ‍‌ಷ್.ನಾನು ನಿನ್ನೆ ‌‌ ಬೆಳಿಗ್ಗೆಯೇ ಹೊರಟಿದ್ದರೂ ನನ್ನ ಪ್ರಯಾಣದ ಸುದ್ದಿ ಮಹಾ ಅರ್ಚಕರಿಗೆ ಗೊತ್ತಿರ್‍ತಿತ್ತು. ಅಲ್ಲ ?" "ಈಗ ನೀವು ಹೇಳಿದ್ದೆಲ್ಲ ನಿಮ್ಮ ಊಹೆ. ನಾನು ಏನೂ ಹೇಳಿಲ್ಲ. ಅಸ್ವಸ್ಥ ಸಂಬಂಧಿಕನನ್ನು ನೋಡೋದಕ್ಕೆ ಅಂತಲೇ ನಾನು ಬಂದದ್ದು. ನೋಡಿಯಾಯ್ತು. ಹೋಗ್ತಿದ್ದೇನೆ." ಹೆಖ್ವೇಟ್ ತನ್ನ ಪರಿವಾರದ ಲಿಪಿಕಾರನತ್ತ ಹೊರಳಿ, " ಅಸಾಧಾರಣ ಕುಳ ಕಣಯ್ಯ, నిನ್ನ ಸ್ನೇಹಿತ. ಮುಂದೆ ಒಂದು ದಿವಸ ಇವನು ಮಹಾ ಅರ್ಚಕನಾಗಲೂ ಬಹುದು," ಎಂದ. ದೂತನಾಗಿ ಬಂದಿದ್ದ ದೇವಸೇವಕ ಹಲ್ಲುಕಿರಿದ. ಅಷ್ಟರಲ್ಲಿ ಪೀಠಪಲ್ಲಕಿ ಬಂತು. ಸ್ವರ್ಣಖಚಿತ ಆಸನವಲ್ಲ; ಆದರೂ ಸಾಕಷ್ಟು ಚೆನ್ನಾಗಿತ್ತು. ಅದು ತಲುಪಿದ ಕೆಲ ಕ್ಷಣಗಳಲ್ಲಿ ನಗರಾಧಿಕಾರಿ ಸೆರ್ಕೆಟ್ ಏದುಸಿರು ಬಿಡುತ್ತ ಬಂದ. ಅವನೆಂದ: " ಕ್ಷಮಿಸ್ಬೇಕು. ಸರುಸಭೆಯ ಹಿರಿಯ ಸಲಹೆಗಾರರು ಆನ್ ನಗರಿಗೆ ಬರೋದು ನನಗೆ ತಿಳಿದಿರಲಿಲ್ಲ." " ಅಧಿಕೃತವಾಗಿ ಯಾರೂ ತಿಳಿಸಿರಲಿಲ್ಲ, ಅಲ್ಲವಾ ?" ಎಂದು ಹೆಖ್ವೇಟ್ ಕೇಳಿದ. ನಗರಾಧಿಕಾರಿ ತಬ್ಬಿಬಾದ. "ಹೌದು,ತಿಳಿಸಿರಲಿಲ್ಲ,"ಎಂದು ತೊದಲಿದ. ದೇವಸೇವಕನಿಗಾಗಿ ಹೆಖ್ವೆಟ್ ಅತ್ತಿತ್ತ ದೃಷ್ಟಿ ಹರಿಸಿದ.ಹುಡುಗ ಕಾಣಿಸಲಿಲ್ಲ. "ಸೆರ್ಕೆಟ್! ಅಧಿಕೃತವಾಗಿ ತಿಳಿಸದೆ ಇದ್ದರೇನು? ಬೇರೆ ರೀತಿಯ ಸುದ್ದಿಗಳು ಬರೋದೇ ಇಲ್ಲವೆ?" "ಒಮ್ಮೊಮ್ಮೆ ಬರ್‍ತವೆ...."<noinclude></noinclude> sfc1krkqohw4ewc6l45dt89syuv9lno 320238 320161 2026-05-15T16:43:08Z Pragathi. BH 7585 320238 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೩೪೫}}</noinclude> "ಮಹಾಮಂದಿರದಿಂದ ಕಳಿಸಿದ್ರು,ಬಂದೆ. నిನ್ನೆ ರಾತ್ರಿಯೇ ವಾಪಸು ಹೋಗ್ಬೇಕಾಗಿತ್ತು. ದೋಣಿ ಸಿಗಲಿಲ್ಲ. ಈಗ ಹೊರಟಿದ್ದೇನೆ." {{gap}}" ಹಾಗಾದರೆ ಇಲ್ಲಿ ಇಲ್ಲದ ಸಂಬಂಧಿಕನನ್ನು ಯಾಕೆ ಹುಟ್ಟಿಸ್ಕೊಂಡೆ ? " {{gap}}" ಅದು ಹಿರಿಯ ದೇವಸೇವಕರ ನಿರ್ದೇಶ, ಸ್ವಾಮೀ.” {{gap}}"ಭೇ‍‌ಷ್.ನಾನು ನಿನ್ನೆ ‌‌ ಬೆಳಿಗ್ಗೆಯೇ ಹೊರಟಿದ್ದರೂ ನನ್ನ ಪ್ರಯಾಣದ ಸುದ್ದಿ ಮಹಾ ಅರ್ಚಕರಿಗೆ ಗೊತ್ತಿರ್‍ತಿತ್ತು. ಅಲ್ಲ ?" {{gap}}"ಈಗ ನೀವು ಹೇಳಿದ್ದೆಲ್ಲ ನಿಮ್ಮ ಊಹೆ. ನಾನು ಏನೂ ಹೇಳಿಲ್ಲ. ಅಸ್ವಸ್ಥ ಸಂಬಂಧಿಕನನ್ನು ನೋಡೋದಕ್ಕೆ ಅಂತಲೇ ನಾನು ಬಂದದ್ದು. ನೋಡಿಯಾಯ್ತು. ಹೋಗ್ತಿದ್ದೇನೆ." {{gap}}ಹೆಖ್ವೇಟ್ ತನ್ನ ಪರಿವಾರದ ಲಿಪಿಕಾರನತ್ತ ಹೊರಳಿ, " ಅಸಾಧಾರಣ ಕುಳ ಕಣಯ್ಯ, నిನ್ನ ಸ್ನೇಹಿತ. ಮುಂದೆ ಒಂದು ದಿವಸ ಇವನು ಮಹಾ ಅರ್ಚಕನಾಗಲೂ ಬಹುದು," ಎಂದ. {{gap}}ದೂತನಾಗಿ ಬಂದಿದ್ದ ದೇವಸೇವಕ ಹಲ್ಲುಕಿರಿದ. {{gap}}ಅಷ್ಟರಲ್ಲಿ ಪೀಠಪಲ್ಲಕಿ ಬಂತು. ಸ್ವರ್ಣಖಚಿತ ಆಸನವಲ್ಲ; ಆದರೂ ಸಾಕಷ್ಟು ಚೆನ್ನಾಗಿತ್ತು. ಅದು ತಲುಪಿದ ಕೆಲ ಕ್ಷಣಗಳಲ್ಲಿ ನಗರಾಧಿಕಾರಿ ಸೆರ್ಕೆಟ್ ಏದುಸಿರು ಬಿಡುತ್ತ ಬಂದ. ಅವನೆಂದ: {{gap}}" ಕ್ಷಮಿಸ್ಬೇಕು. ಸರುಸಭೆಯ ಹಿರಿಯ ಸಲಹೆಗಾರರು ಆನ್ ನಗರಿಗೆ ಬರೋದು ನನಗೆ ತಿಳಿದಿರಲಿಲ್ಲ." {{gap}}" ಅಧಿಕೃತವಾಗಿ ಯಾರೂ ತಿಳಿಸಿರಲಿಲ್ಲ, ಅಲ್ಲವಾ ?" ಎಂದು ಹೆಖ್ವೇಟ್ ಕೇಳಿದ. {{gap}}ನಗರಾಧಿಕಾರಿ ತಬ್ಬಿಬಾದ. {{gap}}"ಹೌದು,ತಿಳಿಸಿರಲಿಲ್ಲ,"ಎಂದು ತೊದಲಿದ. {{gap}}ದೇವಸೇವಕನಿಗಾಗಿ ಹೆಖ್ವೆಟ್ ಅತ್ತಿತ್ತ ದೃಷ್ಟಿ ಹರಿಸಿದ.ಹುಡುಗ ಕಾಣಿಸಲಿಲ್ಲ. {{gap}}"ಸೆರ್ಕೆಟ್! ಅಧಿಕೃತವಾಗಿ ತಿಳಿಸದೆ ಇದ್ದರೇನು? ಬೇರೆ ರೀತಿಯ ಸುದ್ದಿಗಳು ಬರೋದೇ ಇಲ್ಲವೆ?" {{gap}}"ಒಮ್ಮೊಮ್ಮೆ ಬರ್‍ತವೆ...."<noinclude></noinclude> j3ozot5o39w50gxuzuxupuclhv6bvev ಪುಟ:Mrutyunjaya.pdf/೩೫೯ 104 21848 320239 247045 2026-05-15T16:43:36Z Pragathi. BH 7585 /* Validated */ 320239 proofread-page text/x-wiki <noinclude><pagequality level="4" user="Pragathi. BH" /></noinclude>೩೪೮ ಮೃತ್ಯುಂಜಯ ವಿಜಯಿಯ ಮಂದಹಾಸವನ್ನು ಸೂಸುತ್ತ ಹೆಖ್ವೆಟ್ ಎದ್ದು, ದೋಣಿ ಕಾರನ ನೆರವು ಸ್ವೀಕರಿಸಿ, ಪದವಿ ದಂಡದೊಡನೆ ನಾವೆಯಿಂದ ಇಳಿದು ಪಲ್ಲಕಿ ಯತ್ತ ಸಾಗಿದ. ರಾಜಗೃಹ ತಲಪಿದೊಡನೆ ಹೆಖ್ವೆಟ್ ಮಹಾ ಅರ್ಚಕನ ಭೇಟಿಗೆ ಹೋಗಬಹುದು ಎಂದು ನಗರಾಧಿಕಾರಿ ಸೆರ್ಕೆಟ್ ಭಾವಿಸಿದ್ದ. ಆದರೆ ಮುದುಕ ಅಂಥ ಆತುರ ತೋರಲಿಲ್ಲ. ಬದಲು, ಶೌಚಗೃಹವನ್ನು ಸಂದರ್ಶಿಸಿ ಬಂದು,ರಾಜಗೃಹದ ಪಡಸಾಲೆಯಲ್ಲಿ ಸುಖಾಸೀನನಾಗಿ, ಸೆರ್ಕೆಟ್ ನನ್ನು ಹತ್ತಿರಕ್ಕೆ ಕರೆದ. "ರಾ ಮಂದಿರದಲ್ಲಿ ಭಾರೀ ಧಾರ್ಮಿಕ ಜಿಜ್ಞಾಸೆ ನಡಿತೀದೆ-ಅಲ್ಲವಾ?" "ಹ್ಞ. ಮಹಾ ಅರ್ಚಕರು ಬಂದಾಗಿನಿಂದ-ಸುಮಾರು ನಾಲ್ಕು ತಿಂಗಳಿಂದ-ಈ ನಗರಿಗೆ ಬರಹೋಗುವವರ ಸಂಖ್ಯೆ ಹೆಚ್ಚಿದೆ.” "ಧಾರ್ಮಿಕ ಜಿಜ್ಞಾಸೆಗೆ ಬರೇ ದೇವಸೇವಕರೇ ಬರಬೇಕೆಂಬನಿಯಮ, ಇಲ್ಲ.” “ ಹಾಗೇನೂ ఇల్ల..." " ಬಂದವರಿಗೆಲ್ಲ ರಾಜಗೃಹದಲ್ಲಿ ವಸತಿ ಏರ್ಪಾಟು ಮಾಡಿ ಮಾಡಿ ದಣಿದಿದ್ದೀಯೇನೊ ?” " ಸ್ವಾಮಿ, ಮಹಾ ಅರ್ಚಕರು ಒಮ್ಮೆ ರಾಜಧಾನಿಗೆ ವಾಪಸಾದರೆ ಸಾಕು అనిಸಿ ಬಿಟ್ಟಿದೆ.” " ಮುಖ್ಯ ಪಟ್ಟಣದಿಂದ ಮಹಾ ಅರ್ಚಕನ ಭೇಟಿಗೇಂತ ಪ್ರಾಂತಪಾಲ ಇಲ್ಲಿಗೆ ಬರಲಿಲ್ಲವಾ? " “ ಇಲ್ಲ.” “ ಇಲ್ಲಿ ನಡೆಯೋದನ್ನೆಲ್ಲ ರಾಜಧಾನಿಗೆ ನೀನು ವರದಿ ಮಾಡಿಲ್ಲವಂತೆ.” "ನನ್ನ ಲಿಪಿಕಾರ ಏನು ಬರೆದುಕೊಟ್ಟರೂ ಮಂದಿರದಲ್ಲಿ ಇರುವವರಿಗೆಲ್ಲ ಗೊತ್ತಾಗ್ತದೆ.ಅಲ್ದೆ, ಏನು ಬರೀಬೇಕು ಏನು ಬರೀಬಾರ್‍ದು ಅನ್ನೋದೂ ನನಗೆ ತಿಳೀದು....ಮೇಲಿನವರಿಗೆ ಸಂಬಂಧಪಟ್ಟದ್ದು. ನಾನು ಕೈಹಾಕೋದು ಸರೀಯಾ?" ರಾಜಗೃಹದ ಪಡಸಾಲೆಯನ್ನೂ ಜಗಲಿಯನ್ನೂ ನೋಡಿ ಹೆಖ್ವೆಟ್ ಅಂದ: " ಇವತ್ತಷ್ಟೇ ತೊಳೆಯೋದು ಬಳೆಯೋದು ಮಾಡಿದ್ದೀರಿ. ನಿನ್ನೆ ರಾತ್ರೆ<noinclude></noinclude> dkz44wz10kpaw8gksvypg0kvqzh5bbu 320240 320239 2026-05-15T16:45:42Z Pragathi. BH 7585 320240 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೩೪೬|right=}}</noinclude>೩೪೮ ಮೃತ್ಯುಂಜಯ {{gap}}ವಿಜಯಿಯ ಮಂದಹಾಸವನ್ನು ಸೂಸುತ್ತ ಹೆಖ್ವೆಟ್ ಎದ್ದು, ದೋಣಿ ಕಾರನ ನೆರವು ಸ್ವೀಕರಿಸಿ, ಪದವಿ ದಂಡದೊಡನೆ ನಾವೆಯಿಂದ ಇಳಿದು ಪಲ್ಲಕಿ ಯತ್ತ ಸಾಗಿದ. {{gap}}ರಾಜಗೃಹ ತಲಪಿದೊಡನೆ ಹೆಖ್ವೆಟ್ ಮಹಾ ಅರ್ಚಕನ ಭೇಟಿಗೆ ಹೋಗಬಹುದು ಎಂದು ನಗರಾಧಿಕಾರಿ ಸೆರ್ಕೆಟ್ ಭಾವಿಸಿದ್ದ. ಆದರೆ ಮುದುಕ ಅಂಥ ಆತುರ ತೋರಲಿಲ್ಲ. ಬದಲು, ಶೌಚಗೃಹವನ್ನು ಸಂದರ್ಶಿಸಿ ಬಂದು,ರಾಜಗೃಹದ ಪಡಸಾಲೆಯಲ್ಲಿ ಸುಖಾಸೀನನಾಗಿ, ಸೆರ್ಕೆಟ್ ನನ್ನು ಹತ್ತಿರಕ್ಕೆ ಕರೆದ. {{gap}}"ರಾ ಮಂದಿರದಲ್ಲಿ ಭಾರೀ ಧಾರ್ಮಿಕ ಜಿಜ್ಞಾಸೆ ನಡಿತೀದೆ-ಅಲ್ಲವಾ?" {{gap}}"ಹ್ಞ. ಮಹಾ ಅರ್ಚಕರು ಬಂದಾಗಿನಿಂದ-ಸುಮಾರು ನಾಲ್ಕು ತಿಂಗಳಿಂದ-ಈ ನಗರಿಗೆ ಬರಹೋಗುವವರ ಸಂಖ್ಯೆ ಹೆಚ್ಚಿದೆ.” {{gap}}"ಧಾರ್ಮಿಕ ಜಿಜ್ಞಾಸೆಗೆ ಬರೇ ದೇವಸೇವಕರೇ ಬರಬೇಕೆಂಬನಿಯಮ, ಇಲ್ಲ.” {{gap}}“ ಹಾಗೇನೂ ఇల్ల..." {{gap}}" ಬಂದವರಿಗೆಲ್ಲ ರಾಜಗೃಹದಲ್ಲಿ ವಸತಿ ಏರ್ಪಾಟು ಮಾಡಿ ಮಾಡಿ ದಣಿದಿದ್ದೀಯೇನೊ ?” {{gap}}" ಸ್ವಾಮಿ, ಮಹಾ ಅರ್ಚಕರು ಒಮ್ಮೆ ರಾಜಧಾನಿಗೆ ವಾಪಸಾದರೆ ಸಾಕು అనిಸಿ ಬಿಟ್ಟಿದೆ.” {{gap}}" ಮುಖ್ಯ ಪಟ್ಟಣದಿಂದ ಮಹಾ ಅರ್ಚಕನ ಭೇಟಿಗೇಂತ ಪ್ರಾಂತಪಾಲ ಇಲ್ಲಿಗೆ ಬರಲಿಲ್ಲವಾ? " {{gap}}“ ಇಲ್ಲ.” {{gap}}“ ಇಲ್ಲಿ ನಡೆಯೋದನ್ನೆಲ್ಲ ರಾಜಧಾನಿಗೆ ನೀನು ವರದಿ ಮಾಡಿಲ್ಲವಂತೆ.” {{gap}}"ನನ್ನ ಲಿಪಿಕಾರ ಏನು ಬರೆದುಕೊಟ್ಟರೂ ಮಂದಿರದಲ್ಲಿ ಇರುವವರಿಗೆಲ್ಲ ಗೊತ್ತಾಗ್ತದೆ.ಅಲ್ದೆ, ಏನು ಬರೀಬೇಕು ಏನು ಬರೀಬಾರ್‍ದು ಅನ್ನೋದೂ ನನಗೆ ತಿಳೀದು....ಮೇಲಿನವರಿಗೆ ಸಂಬಂಧಪಟ್ಟದ್ದು. ನಾನು ಕೈಹಾಕೋದು ಸರೀಯಾ?" {{gap}}ರಾಜಗೃಹದ ಪಡಸಾಲೆಯನ್ನೂ ಜಗಲಿಯನ್ನೂ ನೋಡಿ ಹೆಖ್ವೆಟ್ ಅಂದ: {{gap}}" ಇವತ್ತಷ್ಟೇ ತೊಳೆಯೋದು ಬಳೆಯೋದು ಮಾಡಿದ್ದೀರಿ. ನಿನ್ನೆ ರಾತ್ರೆ<noinclude></noinclude> thypvmp8kfm8ns7rvy590np3y99lm14 320241 320240 2026-05-15T16:46:04Z Pragathi. BH 7585 320241 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೩೪೬|right=}}</noinclude> {{gap}}ವಿಜಯಿಯ ಮಂದಹಾಸವನ್ನು ಸೂಸುತ್ತ ಹೆಖ್ವೆಟ್ ಎದ್ದು, ದೋಣಿ ಕಾರನ ನೆರವು ಸ್ವೀಕರಿಸಿ, ಪದವಿ ದಂಡದೊಡನೆ ನಾವೆಯಿಂದ ಇಳಿದು ಪಲ್ಲಕಿ ಯತ್ತ ಸಾಗಿದ. {{gap}}ರಾಜಗೃಹ ತಲಪಿದೊಡನೆ ಹೆಖ್ವೆಟ್ ಮಹಾ ಅರ್ಚಕನ ಭೇಟಿಗೆ ಹೋಗಬಹುದು ಎಂದು ನಗರಾಧಿಕಾರಿ ಸೆರ್ಕೆಟ್ ಭಾವಿಸಿದ್ದ. ಆದರೆ ಮುದುಕ ಅಂಥ ಆತುರ ತೋರಲಿಲ್ಲ. ಬದಲು, ಶೌಚಗೃಹವನ್ನು ಸಂದರ್ಶಿಸಿ ಬಂದು,ರಾಜಗೃಹದ ಪಡಸಾಲೆಯಲ್ಲಿ ಸುಖಾಸೀನನಾಗಿ, ಸೆರ್ಕೆಟ್ ನನ್ನು ಹತ್ತಿರಕ್ಕೆ ಕರೆದ. {{gap}}"ರಾ ಮಂದಿರದಲ್ಲಿ ಭಾರೀ ಧಾರ್ಮಿಕ ಜಿಜ್ಞಾಸೆ ನಡಿತೀದೆ-ಅಲ್ಲವಾ?" {{gap}}"ಹ್ಞ. ಮಹಾ ಅರ್ಚಕರು ಬಂದಾಗಿನಿಂದ-ಸುಮಾರು ನಾಲ್ಕು ತಿಂಗಳಿಂದ-ಈ ನಗರಿಗೆ ಬರಹೋಗುವವರ ಸಂಖ್ಯೆ ಹೆಚ್ಚಿದೆ.” {{gap}}"ಧಾರ್ಮಿಕ ಜಿಜ್ಞಾಸೆಗೆ ಬರೇ ದೇವಸೇವಕರೇ ಬರಬೇಕೆಂಬನಿಯಮ, ಇಲ್ಲ.” {{gap}}“ ಹಾಗೇನೂ ఇల్ల..." {{gap}}" ಬಂದವರಿಗೆಲ್ಲ ರಾಜಗೃಹದಲ್ಲಿ ವಸತಿ ಏರ್ಪಾಟು ಮಾಡಿ ಮಾಡಿ ದಣಿದಿದ್ದೀಯೇನೊ ?” {{gap}}" ಸ್ವಾಮಿ, ಮಹಾ ಅರ್ಚಕರು ಒಮ್ಮೆ ರಾಜಧಾನಿಗೆ ವಾಪಸಾದರೆ ಸಾಕು అనిಸಿ ಬಿಟ್ಟಿದೆ.” {{gap}}" ಮುಖ್ಯ ಪಟ್ಟಣದಿಂದ ಮಹಾ ಅರ್ಚಕನ ಭೇಟಿಗೇಂತ ಪ್ರಾಂತಪಾಲ ಇಲ್ಲಿಗೆ ಬರಲಿಲ್ಲವಾ? " {{gap}}“ ಇಲ್ಲ.” {{gap}}“ ಇಲ್ಲಿ ನಡೆಯೋದನ್ನೆಲ್ಲ ರಾಜಧಾನಿಗೆ ನೀನು ವರದಿ ಮಾಡಿಲ್ಲವಂತೆ.” {{gap}}"ನನ್ನ ಲಿಪಿಕಾರ ಏನು ಬರೆದುಕೊಟ್ಟರೂ ಮಂದಿರದಲ್ಲಿ ಇರುವವರಿಗೆಲ್ಲ ಗೊತ್ತಾಗ್ತದೆ.ಅಲ್ದೆ, ಏನು ಬರೀಬೇಕು ಏನು ಬರೀಬಾರ್‍ದು ಅನ್ನೋದೂ ನನಗೆ ತಿಳೀದು....ಮೇಲಿನವರಿಗೆ ಸಂಬಂಧಪಟ್ಟದ್ದು. ನಾನು ಕೈಹಾಕೋದು ಸರೀಯಾ?" {{gap}}ರಾಜಗೃಹದ ಪಡಸಾಲೆಯನ್ನೂ ಜಗಲಿಯನ್ನೂ ನೋಡಿ ಹೆಖ್ವೆಟ್ ಅಂದ: {{gap}}" ಇವತ್ತಷ್ಟೇ ತೊಳೆಯೋದು ಬಳೆಯೋದು ಮಾಡಿದ್ದೀರಿ. ನಿನ್ನೆ ರಾತ್ರೆ<noinclude></noinclude> k48i7148spy6cid2arojypa48veu6j2 ಪುಟ:Mrutyunjaya.pdf/೫೮೯ 104 22078 320282 319831 2026-05-16T08:05:10Z Pragathi. BH 7585 320282 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೫೭೬|right=}}</noinclude> {{gap}}“ ಹೂಂ. ಕಮ್ಮಿ ಮೌಲ್ಯ ಕೊಟ್ಟು ಲೇಪನ ಸಾಮಗ್ರಿ ತಗೊಂಡು ಹೋದರೆ ಸತ್ತವನಿಗೆ ಒಳ್ಳೀದಲ್ಲ.” {{gap}}ఆಹುರಾ ಮಗುವನ್ನು ಗಂಡನ ಹೆಗಲಿಗೆ ವರ್ಗಾಯಿಸಿದ . ಸರಗಳನ್ನು ಬಿಚ್ಚಿ ಕೊಟ್ಟಳು. ಬರಿದಾದ ವಕ್ಶಸ್ಧಲವನ್ನು ಅಪೋಫಿಸ್ ಒಮ್ಮೆ ದಿಟ್ಟಿಸಿ , ವಿನಿಮಯಕ್ಕೆ ಎಂದು ದೊರೆತ ಸಾಮಗ್ರಿಗಳನ್ನು ಎರಡೂ ಕೈಗಳಲ್ಲಿ ಬಾಚಿ ఒಳಗಿಂಸಿದ. {{gap}}అಹೂರಾ ಕೀಳಿದಳು: {{gap}}“ಸ್ವಲ್ಪ ಸುಗಂಧ ದ್ರವ್ಯ ಕೂಡಿ, ಅಯ್ಯ. ದೇವರಿಗೆ ಸಂತೋಷ ವಾಗ್ರದೆ.” {{gap}}ಅಪೋಫಿಸ್ ಗೊಣಗಿದ. ಪೆಪ್ಟೆರಸ್ ಎಲೆಯಲ್ಲಿ ಕಟ್ಟಿದ ಧೂಪದ ಪುಡಿಯ ಪೊಟ್ಟಣವನ್ನು ಎತ್ತಿ ಕೊಟ್ಟ. {{gap}}“ನಿನ್ನ ಅಣ್ಣ ಹ್ಯಾಗೆ ಸತ್ತ ?” {{gap}}ಕಣ್ಣುಗಳನ್ನು ಭದ್ರವಾಗಿ ಮುಚ್ಚಿ ಅಹೂರಾ ಉತ್ತರವಿತ್ತಳು : ವೂಸಳೆ ಕಡೀತು." {{gap}}ವೊಸಳೇನ ಕೂಂದಿರಾ ? " {{gap}}*ಹ್ಜ್ನ ಹ್ಜ್ನ {{gap}}ಎನು ಅವನು ಹೆಸರು ? {{gap}}“ಏನು ಅವನ ಹೆಸರು ?” {{gap}}ಈ ಪ್ರಶ್ನೆಯನ್ನು ಅಹೂರಾ ನಿರೀಕಿಸಿರೆಲಿಲ್ಲ. ಕణ ಅ ಕಿದರೂ ಗಂಟಲು ಸರಿಪಡಿಸಿ ಅಂದಳು : {{gap}}“ಹುಟ್ಟಿದವನಿಗೊಂದು ಹೆಸರು. ದೇವರದೇ, ಪ್ ಟಾಹೊಟಿಪ್ ಅಂತ.” {{gap}}“ಪ್ ಟಾಹೊಟಿಪ್. ಸತ್ತವನ ನಾಮೋಚ್ಚಾರ ಮಾಡಿದರೆ ಅವನು ಮತ್ತೆ ಜೀವಂತವಾಗಾನೆ. ಈ ದೇವವಾಕ್ಯ ಕೀಳಿದೀರಾ ? * {{gap}}“ಇಲ್ಲ ಅಯ್ಯ” {{gap}}"ಕಲಿತ್ಕೊಳ್ಳಿ." {{gap}}“ಕೈಚೀಲ ಕೊಡಿ ಅಯ್ಯ." - {{gap}}“ಇಲ್ಲ! ಆಗಿರೋ ನಷ್ಟ ಸಾಲದೆ? ನಿಮ್ಮ ಚೀಲದಲ್ಲೇ ಹಾಕ್ಕೊಳ್ಳಿ!” ವಿನಿಮಯ ವಸ್ತು ಗಳನ್ನು ಕೊಟ್ಟ ಮೇಲೆ ಬರಿದಾಗಿದ್ದ ದೊಡ್ಡ ಚೀಲ )<noinclude></noinclude> 9sjfbimwh3sg8m9z4i9rul75w6snlg7 ಪುಟ:Mrutyunjaya.pdf/೫೯೦ 104 22079 320283 65743 2026-05-16T08:24:41Z Pragathi. BH 7585 /* Validated */ 320283 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೫೭೭}}</noinclude> ದಲ್ಲಿ ಲೇಪನ ಸಾಮಗ್ರಿಗಳನ್ನಿಟ್ಟು, ಅಹೂರಾ ಆ ಚೀಲವನ್ನೆತ್ತಿ ಕೊಂಡಳು. {{gap}}"ಬರ್ತೇವೆ, ಅಯ್ಯ." {{gap}}“ ಹ್ಯಾಗ್ಟಂದ್ರಿ? ಕತ್ತೆಗಳ ಮೇಲೊ? ದೋಣೀಲೊ?” {{gap}}ನಮ್ಮದು ಒಳನಾಡು.. ಕತ್ತೆಗಳ ಮೇಲೆ ಬಂದೆವು. ಸಾರಿಗೆ ಕಟ್ಟೀలి ಕಟ್ಟಿದ್ದೇವೆ. {{gap}}" ನನ್ನ ಅಂಗಡಿ ಇಲ್ಲಿರೋದು ಯಾರು ಹೇಳಿದ್ರು ತಾಯಿ ನಿಮಗೆ ? " {{gap}}“ ಅದೃಷ್ಟದ ಬೀದಿಗೆ ಹೋಗೀಂತ ಕಟ್ಟೆಯೋರು ಹೇಳದ್ರು.” {{gap}}"ಸರಿ! ಅಂತೂ ನನ್ನ, ನಿದ್ದೆ ಹೋಯ್ತು, ಹೊರಡಿ ಇನ್ನು ನೀನು ಏನೂ ಚಿಂತಿಸ್ಬೇಡ ತಾಯಿ. ನಿನ್ನಣ್ಣ ಒಸೈರಿಸ್ ರಾಜ್ಯಕ್ಕೆ ಹೋಗ್ತಾನೆ .” {{gap}}ಗದ್ಗದಿತಳಾಗಿ ಅಹೂರಾ ಅಂದಳು : {{gap}}“ ಹೂ೦. ಅಯ್ಯ...." {{gap}}[ಅಹೂರಾ ಗಂಡನೋಡನೆ ಹೊರಟಳು..... {{gap}}ಅಪೋಫಿಸ್ ಕದವಿಕ್ಕಿ, ವಿನಿಮಯವಾಗಿ ಪಡೆದ ವಸ್ತುಗಳನ್ನು ಮತ್ತೊಮ್ಮೆ ನೋಡಿ. ಪರಮ ಸಂತುಷ್ಟನಾಗಿ ದೀಪ ಆರಿಸಿ, ಹೆಂಡತಿ ಮಲಗಿ ದ್ದೆಡೆಗೆ ಸಾಗಿದ. ಅವಳಿಗೆ ಗಾಢನಿದ್ದೆ, ಈತ ಕಣ್ಣೆವೆಗಳನ್ನು ಗಟ್ಟಿಯಾಗಿ ಮುಚ್ಚಿದ. 'ಪ್ ಟಾ ಹೊಟೆಪ' ಎಂದ, ಮನಸ್ಸಿನಲ್ಲೇ. {{gap}}ಇದ್ದಕ್ಕಿದಂತೆ ನೀರಾನೆ ಪ್ರಾಂತದ ದೋಣಿಕಾರನ ನೆನಪಾಯಿತು. ದೇವತಾಮೂರ್ತಿಗಳನ್ನು ಆ ಕಳ್ಳ ತರಲೇ ಇಲ್ಲ. ಅವನ ನಾಯಕನ ವಧೆ ಯಾಯಿತು ಇವತ್ತು, ಸತ್ತವನು ಮೊಸಳೆಗೆ ಆಹಾರವಾಗ್ಗಾನೆ. {{gap}}ಆತ ಪಟಾಹೊಟೆಪ್ ಅಲ್ಲ-ಮೆನೆಪ್ ಟಾ.. ಈ ಶವಲೇಪನ ಸಾಮಗ್ರಿ? ಛೆ!ಛೆ! ಅದಕ್ಕೂ ಇದಕ್ಕೂ ಇದಕ್ಕೂ ಖಂಡಿತ ಸಂಭಂಧವಿರದು... {{gap}}ನಿದ್ದೆ ಬರಲೆಂದು ಮನಸ್ಸಿನಲ್ಲೇ ಆತ ಸ್ತೋತ್ರ ಆರಂಭಿಸಿದ: ' ಜಗ ದ್ರಕ್ಷಕ ಪ್ ಟಾ ಸರ್ವಜನಪೂಜಿತ ಪ್ ಟಾ {{gap}}ಏನೇ ಇರಲಿ, ಬೆಳಿಗ್ಗೆ ಬೇಗನೆ ಮಹಾಮಂದಿರಕ್ಕೆ ಹೋಗಿ, ರಾತ್ರಿ ಯಾವಳೋ ಹೆಂಗಸು ಬಂದು ಶವಲೇಪನ ಸಾಮಗ್ರಿ ಖರೀದಿ ಮಾಡಿದಳು ಅಂತ ಮಹಾ ಅರ್ಚಕರಿಗೆ ತಿಳಿಸಬೇಕು-ಎಂದುಕೊಂಡ..] {{rh|center=* * * *}} {{gap}}೩೭<noinclude></noinclude> 0wjcyewq40bg1p32cg50kuw278m74hb ಪುಟ:Mrutyunjaya.pdf/೫೯೧ 104 22080 320284 65756 2026-05-16T08:28:55Z Pragathi. BH 7585 /* Validated */ 320284 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೫೭೮|right=}}</noinclude> {{gap}}ఒಂದು ಕೆಲಸ ಆಯಿತು ಎಂದು ಬಟಾನಿಗೆ ಸಮಾಧಾನ. ಅವರು ದೋಣಿ ತಲಪಿದರು. ಕೊಂಡು ತಂದ ಸಾಮಗ್ರಿಗಳನ್ನು ದೋಣಿಯೊಳಗಿನ ಅಮನ್ ದೇವರ ಮೂಲೆಯಲ್ಲಿ ಇರಿಸಿದಾಯಿತು. {{gap}}ಮುಂದಿನ ಕೆಲಸ ಇನ್ನು {{gap}}ಸಣ್ಣ ಬುತ್ತಿಯನ್ನೂ ಸ್ವಲ್ಪ ಖಿವವ ಉಳಿದಿದ್ದ ಚೀಲವನ್ನೂ ಅಹೂರಾ ಎತ್ತಿಕೊಂಡಳು. ದೋಣಿಯ ಹೇರುಮೂಲೆಯಲ್ಲಿ ಹಳೆಯದಾದ ಸೆಣಬಿನ ಹಾಯಿ ಹಗ್ಗವೂ ತುಂಡು ದಾರಗಳೂ ಇದುವು. ಅವನ್ನೂ ಬರಿದಾಗಿದ್ದ ಸೆಣಬಿನ ದೊಡ್ಡ ಚೀಲವನ್ನೂ ತನ್ನ ಬದಲಿ ನಡುವಸ್ತ್ರವನ್ನೂ ಬಟಾ ಕಂಕುಳಿ ಗೇರಿಸಿದ. {{gap}}ತನ್ನ ಅಂಬಿಗರಲ್ಲಿ ಇಬ್ಬರನ್ನು ಕರೆದು ಅವನು ಹೇಳಿದ: {{gap}}"ನಮ್ಮ ಹಿಂದೆಯೀ ಬನ್ನಿ. ಇದೋ ಒಂದು ಹಗ್ಗ, ಬೀದಿಯಿಂದ ಯಾವುದಾದರೂ ಕತ್ತೇನ ಹಿಡಕೊಂಡು ಅರಮನೆ ಹತ್ತಿ ರಕ್ಕೆ ತನ್ನಿ. » {{gap}}ಅಹೂರಾ ಮಹಾದ್ವಾರದ ಬಳಿಗೆ ಬಂದಾಗ ಪ್ರಾಕಾರದ ದೀಪಗಳು ಎಣ್ಣೆ ತೀರಿ ಆರತೊಡಗಿದ್ದವು, ಒಂದೊಂದಾಗಿ, ಬಳಲಿದ್ದ ಕಾವಲು ಭಟರು ಈಟಿಗಳನ್ನು ಗೋಡೆಗೆ ಆನಿಸಿ ತಾವು ಕೆಳಗೆ ಕುಳಿತಿದ್ದರು, ಗೋಡೆಗೊರಗಿ. {{gap}}బಟಾ, ಬೆಕ್, ಔಟರ ದೃಷ್ತಿ ತನ್ನ ನೆಟ್ಟಂತಿದೆ, ಇನ್ನ ತಡ ಮಾಡಕೂಡದು ಎಂದುಕೊಂಡಳು ಆಹೂರಾ. ತುಟಿಗಳನ್ನು ಬಿಗಿದಳ್ಳು ದೇವರನ್ನು ನೆನೆದಳು. ದೃಢ ಹೆಜ್ಜೆಗಳನ್ನಿಟ್ಟು ಭಾಟರ బಳಿ ಸಾರಿದಳು {{gap}}ತೂಗಾಡುತ್ತಿದ್ದ ಶವ ಮೇಲ್ಗ ಡೆ, ಎದುರಿಗೆ ಸ್ತ್ರೀ • ಇಬ್ಬರು ಭಟರೂ ತೂಕಡಿಕೆಯನ್ನು ಕೊಡವಿದರು. {{gap}}" ಅಣಾ..... » {{gap}}(ಕಂಠಮಾಧುರ್ಯ) {{gap}}" ಆಣ್ಣ ತಂಗಿ ಯಾರವ್ವ ನೀನು? ಹೆಣದ ಹೆದರಿಕೆಯೂ ఇಲ್ವ ನಿನಗೆ?” {{gap}}"ಸತ್ತೊರೇನ್ಮಾಡ್ತಾರೆ? ಬದಿಕಿರೋವರದೇ ಭಯ ನನಗೆ.” {{gap}}"ಮಾಟವಾಗಿದ್ದೀ ಅಂತಲೋ ಭಯ? ಯಾವೂರಾಯ್ತು?” {{gap}}"ಹತ್ತಿರ ಹಳ್ಳಿ, ಸೆಡ್ ಉತ್ಸವಕ್ಕೇಂತ ಬಂದೆ.”<noinclude></noinclude> lo3uuusfxz25le7bj7dnz1iymcrkx0t 320285 320284 2026-05-16T08:29:37Z Pragathi. BH 7585 320285 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೫೭೮|right=}}</noinclude> {{gap}}ఒಂದು ಕೆಲಸ ಆಯಿತು ಎಂದು ಬಟಾನಿಗೆ ಸಮಾಧಾನ. ಅವರು ದೋಣಿ ತಲಪಿದರು. ಕೊಂಡು ತಂದ ಸಾಮಗ್ರಿಗಳನ್ನು ದೋಣಿಯೊಳಗಿನ ಅಮನ್ ದೇವರ ಮೂಲೆಯಲ್ಲಿ ಇರಿಸಿದಾಯಿತು. {{gap}}ಮುಂದಿನ ಕೆಲಸ ಇನ್ನು {{gap}}ಸಣ್ಣ ಬುತ್ತಿಯನ್ನೂ ಸ್ವಲ್ಪ ಖಿವವ ಉಳಿದಿದ್ದ ಚೀಲವನ್ನೂ ಅಹೂರಾ ಎತ್ತಿಕೊಂಡಳು. ದೋಣಿಯ ಹೇರುಮೂಲೆಯಲ್ಲಿ ಹಳೆಯದಾದ ಸೆಣಬಿನ ಹಾಯಿ ಹಗ್ಗವೂ ತುಂಡು ದಾರಗಳೂ ಇದುವು. ಅವನ್ನೂ ಬರಿದಾಗಿದ್ದ ಸೆಣಬಿನ ದೊಡ್ಡ ಚೀಲವನ್ನೂ ತನ್ನ ಬದಲಿ ನಡುವಸ್ತ್ರವನ್ನೂ ಬಟಾ ಕಂಕುಳಿ ಗೇರಿಸಿದ. {{gap}}ತನ್ನ ಅಂಬಿಗರಲ್ಲಿ ಇಬ್ಬರನ್ನು ಕರೆದು ಅವನು ಹೇಳಿದ: {{gap}}"ನಮ್ಮ ಹಿಂದೆಯೀ ಬನ್ನಿ. ಇದೋ ಒಂದು ಹಗ್ಗ, ಬೀದಿಯಿಂದ ಯಾವುದಾದರೂ ಕತ್ತೇನ ಹಿಡಕೊಂಡು ಅರಮನೆ ಹತ್ತಿ ರಕ್ಕೆ ತನ್ನಿ. » {{gap}}ಅಹೂರಾ ಮಹಾದ್ವಾರದ ಬಳಿಗೆ ಬಂದಾಗ ಪ್ರಾಕಾರದ ದೀಪಗಳು ಎಣ್ಣೆ ತೀರಿ ಆರತೊಡಗಿದ್ದವು, ಒಂದೊಂದಾಗಿ, ಬಳಲಿದ್ದ ಕಾವಲು ಭಟರು ಈಟಿಗಳನ್ನು ಗೋಡೆಗೆ ಆನಿಸಿ ತಾವು ಕೆಳಗೆ ಕುಳಿತಿದ್ದರು, ಗೋಡೆಗೊರಗಿ. {{gap}}బಟಾ, ಬೆಕ್, ಔಟರ ದೃಷ್ತಿ ತನ್ನ ನೆಟ್ಟಂತಿದೆ, ಇನ್ನ ತಡ ಮಾಡಕೂಡದು ಎಂದುಕೊಂಡಳು ಆಹೂರಾ. ತುಟಿಗಳನ್ನು ಬಿಗಿದಳ್ಳು ದೇವರನ್ನು ನೆನೆದಳು. ದೃಢ ಹೆಜ್ಜೆಗಳನ್ನಿಟ್ಟು ಭಾಟರ బಳಿ ಸಾರಿದಳು {{gap}}ತೂಗಾಡುತ್ತಿದ್ದ ಶವ ಮೇಲ್ಗ ಡೆ, ಎದುರಿಗೆ ಸ್ತ್ರೀ • ಇಬ್ಬರು ಭಟರೂ ತೂಕಡಿಕೆಯನ್ನು ಕೊಡವಿದರು. {{gap}}" ಅಣ್ಣಾ..... » {{gap}}(ಕಂಠಮಾಧುರ್ಯ) {{gap}}" ಅಣ್ಣ_ ತಂಗಿ ಯಾರವ್ವ ನೀನು? ಹೆಣದ ಹೆದರಿಕೆಯೂ ఇಲ್ವ ನಿನಗೆ?” {{gap}}"ಸತ್ತೊರೇನ್ಮಾಡ್ತಾರೆ? ಬದಿಕಿರೋವರದೇ ಭಯ ನನಗೆ.” {{gap}}"ಮಾಟವಾಗಿದ್ದೀ ಅಂತಲೋ ಭಯ? ಯಾವೂರಾಯ್ತು?” {{gap}}"ಹತ್ತಿರ ಹಳ್ಳಿ, ಸೆಡ್ ಉತ್ಸವಕ್ಕೇಂತ ಬಂದೆ.”<noinclude></noinclude> mqx3g9wkr3i5pbjmknmrfnnjtdjxppc ಪುಟ:Mrutyunjaya.pdf/೫೯೨ 104 22081 320286 65758 2026-05-16T08:35:09Z Pragathi. BH 7585 /* Validated */ 320286 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೫೭೯}}</noinclude> {{gap}}" ಉತ್ಸವ ಮುಗಿದಮೇಲೂ ಇಲ್ಲಿಯೇ ಟಳಾಯಿಸ್ತಾ ಇದೀಯಲ್ಲ. ಯಾಕೆ ?” {{gap}}“ ಇ ಹ್ಹಿ ಹ್ಹಿ!” {{gap}}"ಮಕ್ಕಳಿಲ್ಲವಾ 2 ” {{gap}}“ಎರಡಿವೆ. ನಿದ್ದೆ ಹೋಗಿದಾವೆ. ಊಟ ಆಯ್ತಾ ಅಣ್ಣ?” {{gap}}ಇನ್ನೊಬ್ಬ ಭಟ ದಪ್ಪ ಗಂಟಲಲ್ಲಿ ಅಂದ: {{gap}}“ ಎಲ್ಲೀದು ಊಟ ? ಮಧಾಹ್ನದಿಂದ ಇಲ್ಲಿ ಸಾಯ್ತಾ ಇದ್ದೇವೆ. ಆ ನಾಯಕ ಸತ್ತು ಬಿಡುಗಡೆ ಪಡೆದ ನಾವು ಬದುಕಿದ್ದೇವೆ-ನಮಗೆ ಬಂಧನ.” {{gap}}ಆಹೂರಾ ರಾಗವೆಳೆದಳು : {{gap}}"ಒಂದಿಷ್ತು ಬುತ್ತಿ-ಚೀಲದಲ್ಲಿ ಸ್ವಲ್ಪ ಖಿವವ-ಉಳಿದಿವೆ. ಬೇಕಾ?” ವೊದಲಿನ ಭಟನೆಂದ : {{gap}}"ಬಿಟ್ಟಿ ಕೊಡ್ರೀಯಾ ?” {{gap}}“ ನಾನು ರೈತ ಹೆಂಗಸು. ತಿನ್ನೋದಕ್ಕೆ ಕುಡಿಯೋದಕ್ಕೆ ಯಾರಿ ಗಾದರೂ ಕೊಟ್ರೆ ವಿನಿಮಯಕ್ಕೆ ಏನೂ ತಗೊಳೋದಿಲ್ಲ-ಪಟ್ಟಣದವರ ಹಾಗೆ” - {{gap}}“ ಓಹೋಹೋ! ತಗೊಂಡ್ಬಾ, ಎಲ್ಲಿಟ್ಟಿದೀಯಾ ?” {{gap}}"ಓ అల్లి........" {{gap}}“ ಕಿಸಪಿಸ ಮಾತು ಕೇಳ್ತದಲಾ ? ಬೇರೆಯವರೂ ಯಾರೋ ఇದ್ದಂಗಿದೆ." {{gap}}"ನಮ್ಮ ಪಕ್ಕದ ಹಳ್ಳಿದು ಒಂದೆರಡು ಸಂಸಾರ,” ಎಂದು ನುಡಿದು ಅಹೂರಾ ಬುತ್ತಿ ತರಲು ಹೋದಳು. {{gap}}ದಪ್ಪ ಗಂಟಲಿನ ಭಟನೆಂದ: {{gap}}“ ಏನು ಯೋಚೈ? {{gap}}“ಪಸಂದಾಗಿದಾಳೆ.” {{gap}}"ಹೆಣ ಕಾಯೋದು ಬಿಟ್ಟಟ್ಟು -------- » {{gap}}“ಅದೆಲ್ಲಿಗೆ ಹೋಗ್ರದೆ? ದಳಪತಿಗೆ ಗೊತ್ತಾಗಬಾರದು, ಅಷ್ಟೆ. » {{gap}}"ಸರಿ...ಊಟ ಬರ್ಲಿ ಮೊದಲು.”<noinclude></noinclude> l5q8xz4lq0sbhcykx81q2x5m214wvsn ಪುಟ:Mrutyunjaya.pdf/೫೯೩ 104 22082 320287 65761 2026-05-16T08:40:36Z Pragathi. BH 7585 /* Validated */ 320287 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೫೮೦|right=}}</noinclude> {{gap}}ಅಹೂರಾ ಬಂದಳು. {{gap}}ಭಟರು ಉಣ್ಣಲು ಕುಡಿಯಲು ತೊಡಗಿದರು. {{gap}}ಮೊದಲ ಭಟ ಅಹೂರಾಳತ್ತ ನೋಡಿ ಅಂದ : {{gap}}" ಕೂತ್ಕೋ ಈ ಖಿವವ ವೈನಾಗಿದೆ. ನಮ್ಮತೆ ನೀನೂ ತೆಗೋ.” {{gap}}"ನೀವು ತಗೊಳ್ಳಿ. ನಮ್ಮೂರಲ್ಲಿ ಖಿವವದ ಕೊಳವೇ ಇದೆ,” ಎಂದಳು ಅಹೂರಾ ಅವರೆದುರು ಕುಳಿತುಕೊಳ್ಳುತ್ತ...” {{gap}}“ಆಹಾ! ನಿಮೂರಲ್ಲಿ ಬೇರೆ ಹೆಂಗಸ್ತೂ ನಿನ್ನ ಹಾಗೆ ಇದಾರಾ?" {{gap}}" ಅದನ್ನು ನಾನು ಹ್ಯಾಗೆ ಹೇಳ್ಳಿ?” {{gap}}ಆಷ್ತು ಹೊತ್ತಿಗೆ ಕುಡಿದವರಂತೆ ನಟಿಸುತ್ತ, ತೂರಾಡಿಕೊಂಡು), ಔಟಿ ಮತ್ತು ಬೆಕ್ ಅಲ್ಲಿಗೆ ಬಂದರು {{gap}}ఔಟನೆಂದ : {{gap}}" ಮೆಮಜಾ ಮಾಡ್ತಾ ಇದ್ದೀರಾ ?” {{gap}}ಕತ್ತಲು ಮುಖ ಕಾಣಿಸುತ್ತಿರಲಿಲ್ಲ ಆದರೂ ದಷಟ್ ಗಂಟಲಿನ ಕಾವಲು ಗಾರನಿಗೆ ಈ ಧ್ವನಿಯನ್ನೆಲ್ಲೋ ಕೇಳಿದ್ದೇನೆ ಎನಿಸಿತು.” {{gap}}ಅವನೆಂದ: “ಏಯ! ತೆಪ್ಪಗೆ ಹೊರಟೋಗ್ರಿ ! ಮೇಲೆ ನೋಡಿದ್ರೋ ಇಲ್ಲೋ?” {{gap}}" ಅಯ್ಯಯ್ಯಪ್ಪ ಹೆಣ!” ಎಂದ ಬೆಕ್ ಗಾಬರಿಯ ಧ್ವನಿಯಲ್ಲಿ. ಭಟರಿಬ್ಬರೂ “ ಹೊಹೊಹೊ " ಎಂದು ನಕ್ಕರು {{gap}}ನಗು ಮುಗಿಯುವುದರೊಳಗೆ ಬೆಕ್ ಮತ್ತು ಔಟ ಒಬ್ಬೊಬ್ಬ ಭಟನ ಹಿಂದಿನಿಂದ ಬಂದು, ತೋಳು ಹಾಕಿ ಕತ್ತನ್ನು ಬಳಸಿ ಒತ್ತಿದರು. ಉಸಿರು ಕಟ್ಟಿದಂತೆ, ನಗೆ ಚಡಪಡಿಸುವ ಗೊಗ್ಗರ ಸಪ್ಪಳವಾಗಿ ಮಾರ್ಪಟ್ಟಿತು. {{gap}}ಬಟಾ ಮತ್ತು ಒಬ್ಬ ಅಂಬಿಗ ಧಾವಿಸಿ ಬಂದರು. ಬಾಯಿಗಳಿಗೆ ಚಿಂದಿ ಬಟ್ಟೆ, ತುರುಕಿದರು. ಕಣ್ಣ ಗಳು ಕಾಣಿಸದಂತೆ ಪಟ್ಟಿ ಬಿಗಿದರು. ಬೆನ್ನ ಹಿಂದೆ ಎರಡೂ ಕೈಗಳನ್ನು ಕಟ್ಟಿದರು. ಕಾಲುಗಳಿಗೂ ಹಗ್ಗ ಸಂಕೋಲೆ ಯಾಯಿತು {{gap}}ನೆಲದಮೇಲೆ ಬಿದ್ದಿದ್ದವರ ಕತ್ತು ಕುಯ್ಯಬಹುದು; ఇల్లವೆ ತಿವಿದು ಕೊಲ್ಲಬಹುದು. ಆದರೆ ಅವರು ಬಡಪಾಯಿಗಳು. ಅಮಾತ್ಯನಲ್ಲ, ಮಹಾ<noinclude></noinclude> rka7jr63hf779dauqlzjlvsxmqw9gey ಪುಟ:Mrutyunjaya.pdf/೫೯೪ 104 22083 320299 65760 2026-05-16T09:18:03Z Pragathi. BH 7585 /* Validated */ 320299 proofread-page text/x-wiki <noinclude><pagequality level="4" user="Pragathi. BH" />{{rh|center=|left=|right=}}</noinclude> ಅರ್ಚಕ ಮಹಾಪ್ರಬುವಲ್ಲ. ಬಟಾ ಅಂದುಕೊಂಡ : ಎಚ್ಚರವಿರುತ್ತಿದ್ದರೆ ಮೆನೆಪ್ಟಾ ಅಣ್ಣ ಹೇಳುತ್ತಿದ್ದ : {{gap}}“ ಅವರಿಗೇನೂ ಮಾಡ್ಬೇಡಿ.” {{gap}}ಅಸಹಾಯರಾಗಿ ಭಟ್ಟರು ನೆಲದಮೇಲಿದುದನ್ನು ನೋಡುತ್ತ “ಬೇಗ! ಬೇಗ! " ఎంದ బಟಾ. {{gap}}ತಂಡದವರು ಆರೆಂಟು ಜನ ರಸ್ತೆಯ ಈ ಮಗುಲಿಗೆ బంದರು.ಬಟಾನ ನಿರ್ದೆಶದಂತೆ, ಬಿದ್ದಿದ್ದವರನ್ನು ಎತ್ತಿ ತುಸು ದೂರ ಒಯ್ದು ಕತ್ತಲಲ್ಲಿ ಎಸೆದು ಮರಳಿದರು. {{gap}}“ ಬೇಗ ! ಬೇಗ !” ಎಂದ ಬಟಾ, ಪುನಃ ಪುನಃ. {{gap}}ಔಟ ಮತ್ತು ಬೆಕ್ ಆಗಲೇ ಮಹಾದ್ವಾರದ ಗೋಪುರವನ್ನೇರಿದ್ದರು. ಬೇರೆ ಕೆಲವರು ಪ್ರಾಕಾರರನ್ನು ಹತಿ ನಿಂತರು. {{gap}}ಶಿರಸ್ಸು ಮೊದಲು ಕೆಳಕ್ಕೆಳಿಯಿತು. ಅಹೂರಾ ಅದನ್ನು ಎದೆಗೆ ಅನಚಿ ಕೊಂಡಳು. {{gap}}"ಖಿವವ ಚೀಲದೊಳಗಿಡು" ಎಂದ ಬಟಾ. {{gap}}ಮೆನಪಟಾನ ಶವದ ಪಾದಗಳಿಗೆ ಹಾಕಿದ್ದ ಕುಣಿಕೆಯನ್ನು ತಪ್ಪಿಸಿದರು. ಇಬ್ಬರೂ ಕೆಳಕ್ಕೆ ಸರಿಸಿದ ಮುಂಡವನ್ನು ಪಾಕಾರದ ಮೇಲಿದ್ದವರು ಸ್ವೀಕರಿಸಿ ದರು. ಅವರ ಕೈಗಳಿಂದ ನೆಲದಲ್ಲಿದ್ದವರು ಅದನ್ನು ಪಡೆದರು. ಬಟಾ ತಂದಿದ್ದ ಸೆಣಬಿನ ಚೀಲವನ್ನು ಮುಂಡ ಸೇರಿತು. {{gap}}ಇನ್ನೊಬ್ಬ ಆಂಬಿಗನಾಗಲೇ ಕತ್ತೆಯನ್ನು ಅಲ್ಲಿಗೆ ತಂದಿದ್ದ. ಅದರ ಮೇಲೆ ಎರಡೂ ಚೀಲಗಳನ್ನಿರಿಸಿ ಹಗ್ಗಗಳಿಂದ ಬಿಗಿದರು. {{gap}}ಬಟಾ ನಿರ್ದೆಶವಿತ್ತ : {{gap}}“ ಹೊರಡಿ! ನಿಶ್ಯಬ್ದ!” {{gap}}ತಂಡದವನೊಬ್ಬ ಎರಡು ಈಟಿಗಳನ್ನೂ ಎತ್ತಿಕೊಂಡ. {{gap}}ತಂಡದವರು ನದೀ ತಟದತ್ತ ಸಾಗತೊಡಗಿದ ಮೇಲೆ, ಕತ್ತೆಯ ಕತ್ತಿನ ಹಗ್ಗವನ್ನು ಹಿಡಿದು ಬಟಾ ತುಸು ಎಳೆದ, ಹೇರಿನ ಸ್ಪರ್ಶವಾದೊಡನೆಯೇ ಹೊರಡಲು ಅದು ಸಿದ್ಧವಾಗಿತ್ತು. ಈಗ ಚಲಿಸತೊಡಗಿತು. {{gap}}ಮಗುವನ್ನೆತ್ತಿಕೊಂಡಿದ್ದ ಅಹೂರಾಳ ಗಂಡ, ಅತ್ತೆಯ ಕೈಹಿಡಿದು, ನೀರಿನ ಆಳದಲ್ಲಿ ಉಸಿರಾಟವಿಲ್ಲದೆ ಈಸುತ್ತಿದ್ದವನಂತೆ ನಡೆಯುತ್ತಿದ್ದ ರಾಮೆ<noinclude></noinclude> hohioik146i0oocjwl7t8vlm6htdbkc 320300 320299 2026-05-16T09:18:44Z Pragathi. BH 7585 320300 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೫೮೧}}</noinclude> ಅರ್ಚಕ ಮಹಾಪ್ರಬುವಲ್ಲ. ಬಟಾ ಅಂದುಕೊಂಡ : ಎಚ್ಚರವಿರುತ್ತಿದ್ದರೆ ಮೆನೆಪ್ಟಾ ಅಣ್ಣ ಹೇಳುತ್ತಿದ್ದ : {{gap}}“ ಅವರಿಗೇನೂ ಮಾಡ್ಬೇಡಿ.” {{gap}}ಅಸಹಾಯರಾಗಿ ಭಟ್ಟರು ನೆಲದಮೇಲಿದುದನ್ನು ನೋಡುತ್ತ “ಬೇಗ! ಬೇಗ! " ఎంದ బಟಾ. {{gap}}ತಂಡದವರು ಆರೆಂಟು ಜನ ರಸ್ತೆಯ ಈ ಮಗುಲಿಗೆ బంದರು.ಬಟಾನ ನಿರ್ದೆಶದಂತೆ, ಬಿದ್ದಿದ್ದವರನ್ನು ಎತ್ತಿ ತುಸು ದೂರ ಒಯ್ದು ಕತ್ತಲಲ್ಲಿ ಎಸೆದು ಮರಳಿದರು. {{gap}}“ ಬೇಗ ! ಬೇಗ !” ಎಂದ ಬಟಾ, ಪುನಃ ಪುನಃ. {{gap}}ಔಟ ಮತ್ತು ಬೆಕ್ ಆಗಲೇ ಮಹಾದ್ವಾರದ ಗೋಪುರವನ್ನೇರಿದ್ದರು. ಬೇರೆ ಕೆಲವರು ಪ್ರಾಕಾರರನ್ನು ಹತಿ ನಿಂತರು. {{gap}}ಶಿರಸ್ಸು ಮೊದಲು ಕೆಳಕ್ಕೆಳಿಯಿತು. ಅಹೂರಾ ಅದನ್ನು ಎದೆಗೆ ಅನಚಿ ಕೊಂಡಳು. {{gap}}"ಖಿವವ ಚೀಲದೊಳಗಿಡು" ಎಂದ ಬಟಾ. {{gap}}ಮೆನಪಟಾನ ಶವದ ಪಾದಗಳಿಗೆ ಹಾಕಿದ್ದ ಕುಣಿಕೆಯನ್ನು ತಪ್ಪಿಸಿದರು. ಇಬ್ಬರೂ ಕೆಳಕ್ಕೆ ಸರಿಸಿದ ಮುಂಡವನ್ನು ಪಾಕಾರದ ಮೇಲಿದ್ದವರು ಸ್ವೀಕರಿಸಿ ದರು. ಅವರ ಕೈಗಳಿಂದ ನೆಲದಲ್ಲಿದ್ದವರು ಅದನ್ನು ಪಡೆದರು. ಬಟಾ ತಂದಿದ್ದ ಸೆಣಬಿನ ಚೀಲವನ್ನು ಮುಂಡ ಸೇರಿತು. {{gap}}ಇನ್ನೊಬ್ಬ ಆಂಬಿಗನಾಗಲೇ ಕತ್ತೆಯನ್ನು ಅಲ್ಲಿಗೆ ತಂದಿದ್ದ. ಅದರ ಮೇಲೆ ಎರಡೂ ಚೀಲಗಳನ್ನಿರಿಸಿ ಹಗ್ಗಗಳಿಂದ ಬಿಗಿದರು. {{gap}}ಬಟಾ ನಿರ್ದೆಶವಿತ್ತ : {{gap}}“ ಹೊರಡಿ! ನಿಶ್ಯಬ್ದ!” {{gap}}ತಂಡದವನೊಬ್ಬ ಎರಡು ಈಟಿಗಳನ್ನೂ ಎತ್ತಿಕೊಂಡ. {{gap}}ತಂಡದವರು ನದೀ ತಟದತ್ತ ಸಾಗತೊಡಗಿದ ಮೇಲೆ, ಕತ್ತೆಯ ಕತ್ತಿನ ಹಗ್ಗವನ್ನು ಹಿಡಿದು ಬಟಾ ತುಸು ಎಳೆದ, ಹೇರಿನ ಸ್ಪರ್ಶವಾದೊಡನೆಯೇ ಹೊರಡಲು ಅದು ಸಿದ್ಧವಾಗಿತ್ತು. ಈಗ ಚಲಿಸತೊಡಗಿತು. {{gap}}ಮಗುವನ್ನೆತ್ತಿಕೊಂಡಿದ್ದ ಅಹೂರಾಳ ಗಂಡ, ಅತ್ತೆಯ ಕೈಹಿಡಿದು, ನೀರಿನ ಆಳದಲ್ಲಿ ಉಸಿರಾಟವಿಲ್ಲದೆ ಈಸುತ್ತಿದ್ದವನಂತೆ ನಡೆಯುತ್ತಿದ್ದ ರಾಮೆ<noinclude></noinclude> ad0m839nwl49sxnbh7m408wneit2h0l ಪುಟ:Mrutyunjaya.pdf/೫೯೫ 104 22084 320301 65759 2026-05-16T09:19:05Z Pragathi. BH 7585 /* Validated */ 320301 proofread-page text/x-wiki <noinclude><pagequality level="4" user="Pragathi. BH" /></noinclude>೫೮೨ ಮೃತ್ಯುಂಜಯ ರಿಪ್ಟಾ, ಅವರನ್ನು ಹಿಂಬಾಲಿಸಿ ಕತ್ತೆ, ಅದರ ಮಗ್ಗುಲಲ್ಲಿ బಟಾ. ಹಿಂಬದಿ ಯಲ್ಲಿ ಔಟ, ಬೆಕ್........ ನಡಿಗೆ ನಿದಾನವಯಿತು ಎಂದು ಬಟಾನಿಗೆ ಕಸಿವಿಸಿ. ಹೇರನ್ನು ತಾವೇ ತಲೆಯ ಮೇಲೆ ಹೊತ್ತು ಓಡಿದರೊ? ಆಗ ಸಜ್ಜನರ ದೃಷ್ಟೀಯಲ್ಲಿ ತಾವು ಕಳ್ಳರಾದೇವು. ಅವರೇ ತಮ್ಮನ್ನು ಹಿಡಿಯಬಹುದು. ಈ నిದಾನ ನದಿಗೆಯೇ ಸರಿ. ಒಳನಾಡಿನ ಹಾದಿ ಪ್ರವಾಸಿಗರು ತಾವು..... ತನ್ನ ಮನಸ್ಸು ಛಿದ್ರಛಿದ್ರವಾದ, ಅದು ಗರಿಮೋಡವಾದ, ಆ ಮೋಡ ವನ್ನು ತಾನು ಅಮುಕಿ ಅಂಗೈಯಲ್ಲಿ ಹಿದಿದ ಅನುಭವ ಬಟಾನಿಗೆ. ಒಂದಾನೊಂದು ಕಾಲದಲ್ಲಿ ಈ ಬೀದಿಯಲ್ಲೋ ಮಗ್ಗುಲು ಬೀದಿ ಯಲ್ಲೋ ತಾನು ನಡೆದು ಹೋಗಿದ್ದೆ, ಕತ್ತೆಯ ಜತೆ. ಅದರ ಮೇಲಿತ್ತು, ನೀರಾನೆ ಪ್ರಾಂತದ ಕಾಣಿಕೆಯ ಗಡಿಯಾರವಿದ್ದ ಪೆಟಾರಿ ಮತ್ತು ನಾಯಕರ ಗಂಟುಗದಡಿ. ಈಗ ಕತ್ತೆಯ ಮೇಲಿರುವುದು ತಮ್ಮ ಬುಡಕಟ್ಟಿನ ಜನರ ಸರ್ವಸ್ವ, ಅದನ್ನು ಹೊತ್ತ ಪ್ರಾಣಿಯ ಮಗುಲಲ್ಲೆಯೊಂದು జంತು, ತಾನು. ಔಟ, ಬೆಕ್ ಏನನ್ನೂ ಯೋಚಿಸುತ್ತಿರಲಿಲ್ಲ, ಅವರೀಗ ಉಸಿರಾಡುತ್ತ ಚಲಿಸುವ ಮರದ ಮೂರ್ತಿಗಳು. ಮುಂದೆ ಹೊರಟಿದ್ದ ತಂಡದವರು ನಡಿಗೆಯನ್ನು ನಿಧಾನಗೊಳಿಸಿದ್ದರು. ಈಟ ಕಣ್ಣಗಳು ತಿರುತಿರುಗಿ ನೋಡುತ್ತಿದುವು. ಯಾರಾದರೂ ತಡೆದು ನಿಲ್ಲಿಸಿದರೆ-ತಮ್ಮ ನೆರವು ಅಗತ್ಯವಾದರೆ..... ಮಧ್ಯರಾತ್ರೆಯ ಅನಂತರದ ಗಾಢನಿದ್ದೆ ನಾಗರಿಕಗೆ, ಎಲ್ಲೋ ಕೆಲವೆಡೆ ಕುಳಿತಿದ್ದ ಕಾವಲುಭಟರಿಗೆ ಮಂಸರು. ಆದರೂ, ದೋಣಿ ಕಟ್ಟೆಯನ್ನು ಬಳಸಿ ಸಾಗುತ್ತಿದ್ದಂತೆ ಒಬ್ಬ ಕಾವಲು ಗಾರ ದೂರದಿಂದ ಕೇಳಿದ : “ ಯಾಕ್ರಪ್ಪೋ, ಶಬ್ದ ಮಾಡ್ಡೆ ಹೋಗ್ರಿದೀರಾ?” ತಂಡವನ್ನು ಸಮಾಸಿಸಿದ ಬಟಾನೆಂದ : “ ಅಲ್ಲಿ ಸಿಕ್ಸ ಕಾವಲ್ನೋರು ಒಬ್ರೂ, ಗಲಾಟೆಮಾಡ್ಲೆ ಹೋಗಿ - ಅಂದ್ರು. ನೀವು ಮಾಡು ಅಂದರೆ ಮಾಡ್ತೇವೆ.”<noinclude></noinclude> 0s1sfb30q7vsbd50xfdi5zcoprdxhln 320303 320301 2026-05-16T11:38:29Z Pragathi. BH 7585 320303 proofread-page text/x-wiki <noinclude><pagequality level="4" user="Pragathi. BH" />{{rh|center=|left=|right=}}</noinclude> ರಿಪ್ಟಾ, ಅವರನ್ನು ಹಿಂಬಾಲಿಸಿ ಕತ್ತೆ, ಅದರ ಮಗ್ಗುಲಲ್ಲಿ బಟಾ. ಹಿಂಬದಿ ಯಲ್ಲಿ ಔಟ, ಬೆಕ್........ {{gap}}ನಡಿಗೆ ನಿದಾನವಯಿತು ಎಂದು ಬಟಾನಿಗೆ ಕಸಿವಿಸಿ. ಹೇರನ್ನು ತಾವೇ ತಲೆಯ ಮೇಲೆ ಹೊತ್ತು ಓಡಿದರೊ? ಆಗ ಸಜ್ಜನರ ದೃಷ್ಟೀಯಲ್ಲಿ ತಾವು ಕಳ್ಳರಾದೇವು. ಅವರೇ ತಮ್ಮನ್ನು ಹಿಡಿಯಬಹುದು. ಈ నిದಾನ ನದಿಗೆಯೇ ಸರಿ. ಒಳನಾಡಿನ ಹಾದಿ ಪ್ರವಾಸಿಗರು ತಾವು..... {{gap}}ತನ್ನ ಮನಸ್ಸು ಛಿದ್ರಛಿದ್ರವಾದ, ಅದು ಗರಿಮೋಡವಾದ, ಆ ಮೋಡ ವನ್ನು ತಾನು ಅಮುಕಿ ಅಂಗೈಯಲ್ಲಿ ಹಿದಿದ ಅನುಭವ ಬಟಾನಿಗೆ. {{gap}}ಒಂದಾನೊಂದು ಕಾಲದಲ್ಲಿ ಈ ಬೀದಿಯಲ್ಲೋ ಮಗ್ಗುಲು ಬೀದಿ ಯಲ್ಲೋ ತಾನು ನಡೆದು ಹೋಗಿದ್ದೆ, ಕತ್ತೆಯ ಜತೆ. ಅದರ ಮೇಲಿತ್ತು, ನೀರಾನೆ ಪ್ರಾಂತದ ಕಾಣಿಕೆಯ ಗಡಿಯಾರವಿದ್ದ ಪೆಟಾರಿ ಮತ್ತು ನಾಯಕರ ಗಂಟುಗದಡಿ. ಈಗ ಕತ್ತೆಯ ಮೇಲಿರುವುದು ತಮ್ಮ ಬುಡಕಟ್ಟಿನ ಜನರ ಸರ್ವಸ್ವ, ಅದನ್ನು ಹೊತ್ತ ಪ್ರಾಣಿಯ ಮಗುಲಲ್ಲೆಯೊಂದು జంತು, ತಾನು. {{gap}}ಔಟ, ಬೆಕ್ ಏನನ್ನೂ ಯೋಚಿಸುತ್ತಿರಲಿಲ್ಲ, ಅವರೀಗ ಉಸಿರಾಡುತ್ತ ಚಲಿಸುವ ಮರದ ಮೂರ್ತಿಗಳು. {{gap}}ಮುಂದೆ ಹೊರಟಿದ್ದ ತಂಡದವರು ನಡಿಗೆಯನ್ನು ನಿಧಾನಗೊಳಿಸಿದ್ದರು. ಈಟ ಕಣ್ಣಗಳು ತಿರುತಿರುಗಿ ನೋಡುತ್ತಿದುವು. ಯಾರಾದರೂ ತಡೆದು ನಿಲ್ಲಿಸಿದರೆ-ತಮ್ಮ ನೆರವು ಅಗತ್ಯವಾದರೆ..... {{gap}}ಮಧ್ಯರಾತ್ರೆಯ ಅನಂತರದ ಗಾಢನಿದ್ದೆ ನಾಗರಿಕಗೆ, ಎಲ್ಲೋ ಕೆಲವೆಡೆ ಕುಳಿತಿದ್ದ ಕಾವಲುಭಟರಿಗೆ ಮಂಸರು. {{gap}}ಆದರೂ, ದೋಣಿ ಕಟ್ಟೆಯನ್ನು ಬಳಸಿ ಸಾಗುತ್ತಿದ್ದಂತೆ ಒಬ್ಬ ಕಾವಲು ಗಾರ ದೂರದಿಂದ ಕೇಳಿದ : {{gap}}“ ಯಾಕ್ರಪ್ಪೋ, ಶಬ್ದ ಮಾಡ್ಡೆ ಹೋಗ್ರಿದೀರಾ?” {{gap}}ತಂಡವನ್ನು ಸಮಾಸಿಸಿದ ಬಟಾನೆಂದ : {{gap}}“ ಅಲ್ಲಿ ಸಿಕ್ಸ ಕಾವಲ್ನೋರು ಒಬ್ರೂ, ಗಲಾಟೆಮಾಡ್ಲೆ ಹೋಗಿ - ಅಂದ್ರು. ನೀವು ಮಾಡು ಅಂದರೆ ಮಾಡ್ತೇವೆ.”<noinclude></noinclude> ajtxryvm8n29l0xzcrswntzoiqbbf0v 320309 320303 2026-05-16T11:52:41Z Pragathi. BH 7585 320309 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೫೮೨|right=}}</noinclude> ರಿಪ್ಟಾ, ಅವರನ್ನು ಹಿಂಬಾಲಿಸಿ ಕತ್ತೆ, ಅದರ ಮಗ್ಗುಲಲ್ಲಿ బಟಾ. ಹಿಂಬದಿ ಯಲ್ಲಿ ಔಟ, ಬೆಕ್........ {{gap}}ನಡಿಗೆ ನಿದಾನವಯಿತು ಎಂದು ಬಟಾನಿಗೆ ಕಸಿವಿಸಿ. ಹೇರನ್ನು ತಾವೇ ತಲೆಯ ಮೇಲೆ ಹೊತ್ತು ಓಡಿದರೊ? ಆಗ ಸಜ್ಜನರ ದೃಷ್ಟೀಯಲ್ಲಿ ತಾವು ಕಳ್ಳರಾದೇವು. ಅವರೇ ತಮ್ಮನ್ನು ಹಿಡಿಯಬಹುದು. ಈ నిದಾನ ನದಿಗೆಯೇ ಸರಿ. ಒಳನಾಡಿನ ಹಾದಿ ಪ್ರವಾಸಿಗರು ತಾವು..... {{gap}}ತನ್ನ ಮನಸ್ಸು ಛಿದ್ರಛಿದ್ರವಾದ, ಅದು ಗರಿಮೋಡವಾದ, ಆ ಮೋಡ ವನ್ನು ತಾನು ಅಮುಕಿ ಅಂಗೈಯಲ್ಲಿ ಹಿದಿದ ಅನುಭವ ಬಟಾನಿಗೆ. {{gap}}ಒಂದಾನೊಂದು ಕಾಲದಲ್ಲಿ ಈ ಬೀದಿಯಲ್ಲೋ ಮಗ್ಗುಲು ಬೀದಿ ಯಲ್ಲೋ ತಾನು ನಡೆದು ಹೋಗಿದ್ದೆ, ಕತ್ತೆಯ ಜತೆ. ಅದರ ಮೇಲಿತ್ತು, ನೀರಾನೆ ಪ್ರಾಂತದ ಕಾಣಿಕೆಯ ಗಡಿಯಾರವಿದ್ದ ಪೆಟಾರಿ ಮತ್ತು ನಾಯಕರ ಗಂಟುಗದಡಿ. ಈಗ ಕತ್ತೆಯ ಮೇಲಿರುವುದು ತಮ್ಮ ಬುಡಕಟ್ಟಿನ ಜನರ ಸರ್ವಸ್ವ, ಅದನ್ನು ಹೊತ್ತ ಪ್ರಾಣಿಯ ಮಗುಲಲ್ಲೆಯೊಂದು జంತು, ತಾನು. {{gap}}ಔಟ, ಬೆಕ್ ಏನನ್ನೂ ಯೋಚಿಸುತ್ತಿರಲಿಲ್ಲ, ಅವರೀಗ ಉಸಿರಾಡುತ್ತ ಚಲಿಸುವ ಮರದ ಮೂರ್ತಿಗಳು. {{gap}}ಮುಂದೆ ಹೊರಟಿದ್ದ ತಂಡದವರು ನಡಿಗೆಯನ್ನು ನಿಧಾನಗೊಳಿಸಿದ್ದರು. ಈಟ ಕಣ್ಣಗಳು ತಿರುತಿರುಗಿ ನೋಡುತ್ತಿದುವು. ಯಾರಾದರೂ ತಡೆದು ನಿಲ್ಲಿಸಿದರೆ-ತಮ್ಮ ನೆರವು ಅಗತ್ಯವಾದರೆ..... {{gap}}ಮಧ್ಯರಾತ್ರೆಯ ಅನಂತರದ ಗಾಢನಿದ್ದೆ ನಾಗರಿಕಗೆ, ಎಲ್ಲೋ ಕೆಲವೆಡೆ ಕುಳಿತಿದ್ದ ಕಾವಲುಭಟರಿಗೆ ಮಂಸರು. {{gap}}ಆದರೂ, ದೋಣಿ ಕಟ್ಟೆಯನ್ನು ಬಳಸಿ ಸಾಗುತ್ತಿದ್ದಂತೆ ಒಬ್ಬ ಕಾವಲು ಗಾರ ದೂರದಿಂದ ಕೇಳಿದ : {{gap}}“ ಯಾಕ್ರಪ್ಪೋ, ಶಬ್ದ ಮಾಡ್ಡೆ ಹೋಗ್ರಿದೀರಾ?” {{gap}}ತಂಡವನ್ನು ಸಮಾಸಿಸಿದ ಬಟಾನೆಂದ : {{gap}}“ ಅಲ್ಲಿ ಸಿಕ್ಸ ಕಾವಲ್ನೋರು ಒಬ್ರೂ, ಗಲಾಟೆಮಾಡ್ಲೆ ಹೋಗಿ - ಅಂದ್ರು. ನೀವು ಮಾಡು ಅಂದರೆ ಮಾಡ್ತೇವೆ.”<noinclude></noinclude> teb1wt2l719vbstkowz8kdn255qrcab ಪುಟ:Mrutyunjaya.pdf/೫೯೬ 104 22085 320302 65762 2026-05-16T09:19:16Z Pragathi. BH 7585 /* Validated */ 320302 proofread-page text/x-wiki <noinclude><pagequality level="4" user="Pragathi. BH" /></noinclude> ಮೃತ್ಯುಂಜಯ ೫೮೩ [ಬಟಾನಿಗೆ ಸಮಾಧಾನ, ತಾನೇ ಅಲ್ಲವೆ ಈ ಮಾತನ್ನು ಆಡಿದ್ದು? ತಾನೇ ಅಲ್ಲವೆ.?] ಕಾವಲುಗಾರ ಗದರಿದ : "ನಡಿರಿ ಹೇಗೇನೇ" ಹಾಗೆಯೇ ನ್ದೆದು ಅವರು ದೋಣಿ ತಲಪಿದರು. ತಣ್ಣಗಾಗಿದ್ದ ಮರಳು. ಸ್ತಬ್ದವಾಗಿದ್ದ ನದಿ, ಜೀವ ತಳೆದ ಅಂಬಿಗರು ಅಂಜೂರ ವೃಕ್ಷದಡಿಯಿಂದ ಮೆನ್ನ ಎದು ಬಂದ. ಕತ್ತೆ ಬಿಡುಗಡೆ ಪಡೆದು ನಿಜವಾದ ಒಡೆಯನನ್ನು ಹುಡುಕುತ್ತ ಹೋಯಿತು. ನೀರಾನೆ ಪ್ರಾಂತದ ಸರ್ವಸ್ವ ದೋಣಿಯ ಒಡಲಿನಲ್ಲಿ ರಕ್ಷಣೆ ಪಡೆಯಿತು. "ಬೇಗ ! ಬೇಗ! " ఎంದ బಟಾ. ಅವರೆಲ್ಲ ನೀರಿಗೆ ತಳ್ಳಿದ ದೋಣಿ ನೋಡನೋಡುತ್ತಿದ್ದಂತೆಯೇ ತುಂಬಿದ ಪಾತ್ರೆಯಾಯಿತು. ಹೊರಮೈಯ ಅರ್ಧಕ್ಕೂ ಹೆಚ್ಚು ಭಾಗವನ್ನು ನೀರು ಮುಚ್ಚಿತು. ಅಂಬಿಗರು ಹುಟ್ಟು ಹಾಕಿದಂತೆ ದೋಣಿ ದಕ್ಷಿಣಾಭಿ ಮುಖವಾಗಿ ಚಲಿಸತೊಡಗಿತು. ತೆರೆದ ಹಾಯಿಯಲ್ಲಿ ಗಾಳಿ ತುಂಬಿಕೊಂಡು ದೋಣಿಯ ಚಲನೆಯ ಗತಿ ಹೆಚ್ಚಿತು. ಈಗ ಬಟಾ ದೋಣಿಕಾರ. ಕಾಲದ, ದೂರದ, ವೇಗದ ಪ್ರಜ್ಞೆಯುಳ್ಳ ವನು. ಮನಸ್ಸಿನಲ್ಲೇ ಅವನು ಪ್ರಾರ್ಥಿಸಿದ : “ ಓ ಅಮನ್ ! ಅಪೂರ್ವ ಯಾನ ಕೈಕೊಂಡಿದ್ದೇನೆ. ಲೋಕದಲ್ಲಿ ಅತ್ಯಂತ ಅಮೂಲ್ಯವಾದ ಸರಕನ್ನು ಸಾಗಿಸ್ತಿದ್ದೆನೆ. ನನ್ನ ಬಾಹುಗಳಿಗೆ ಅಧಿಕ ಬಲ ಕೊಡು. ದೋಣಿಗೆ ಬಾಣದ ವೇಗವನ್ನು ನೀಡು, ಓ ಅಮನ್ ! ನನ ಯಾನ ಸುರಕ್ಷಿತವಾಗಲಿ! ಯಾನ ಸುರಕ್ಷಿತವಾಗಲಿ !” ೧೪ ಹಿಂದೆ ಮೆನೆಪಟಾನ ಜತೆ ರಾಜಧಾನಿಗೆ ಹೋಗುವ ಅವಕಾಶ ದೊರೆ<noinclude></noinclude> ss9gwjwwilxztzwwvbgnl69esn46bcr 320305 320302 2026-05-16T11:41:52Z Pragathi. BH 7585 320305 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೫೮೩}}</noinclude> {{gap}}[ಬಟಾನಿಗೆ ಸಮಾಧಾನ, ತಾನೇ ಅಲ್ಲವೆ ಈ ಮಾತನ್ನು ಆಡಿದ್ದು? ತಾನೇ ಅಲ್ಲವೆ.?] {{gap}}ಕಾವಲುಗಾರ ಗದರಿದ : {{gap}}"ನಡಿರಿ ಹೇಗೇನೇ" {{gap}}ಹಾಗೆಯೇ ನ್ದೆದು ಅವರು ದೋಣಿ ತಲಪಿದರು. {{gap}}ತಣ್ಣಗಾಗಿದ್ದ ಮರಳು. ಸ್ತಬ್ದವಾಗಿದ್ದ ನದಿ, ಜೀವ ತಳೆದ ಅಂಬಿಗರು ಅಂಜೂರ ವೃಕ್ಷದಡಿಯಿಂದ ಮೆನ್ನ ಎದು ಬಂದ. {{gap}}ಕತ್ತೆ ಬಿಡುಗಡೆ ಪಡೆದು ನಿಜವಾದ ಒಡೆಯನನ್ನು ಹುಡುಕುತ್ತ ಹೋಯಿತು. ನೀರಾನೆ ಪ್ರಾಂತದ ಸರ್ವಸ್ವ ದೋಣಿಯ ಒಡಲಿನಲ್ಲಿ ರಕ್ಷಣೆ ಪಡೆಯಿತು. {{gap}}"ಬೇಗ ! ಬೇಗ! " ఎంದ బಟಾ. {{gap}}ಅವರೆಲ್ಲ ನೀರಿಗೆ ತಳ್ಳಿದ ದೋಣಿ ನೋಡನೋಡುತ್ತಿದ್ದಂತೆಯೇ ತುಂಬಿದ ಪಾತ್ರೆಯಾಯಿತು. ಹೊರಮೈಯ ಅರ್ಧಕ್ಕೂ ಹೆಚ್ಚು ಭಾಗವನ್ನು ನೀರು ಮುಚ್ಚಿತು. ಅಂಬಿಗರು ಹುಟ್ಟು ಹಾಕಿದಂತೆ ದೋಣಿ ದಕ್ಷಿಣಾಭಿ ಮುಖವಾಗಿ ಚಲಿಸತೊಡಗಿತು. ತೆರೆದ ಹಾಯಿಯಲ್ಲಿ ಗಾಳಿ ತುಂಬಿಕೊಂಡು ದೋಣಿಯ ಚಲನೆಯ ಗತಿ ಹೆಚ್ಚಿತು. {{gap}}ಈಗ ಬಟಾ ದೋಣಿಕಾರ. ಕಾಲದ, ದೂರದ, ವೇಗದ ಪ್ರಜ್ಞೆಯುಳ್ಳ ವನು. {{gap}}ಮನಸ್ಸಿನಲ್ಲೇ ಅವನು ಪ್ರಾರ್ಥಿಸಿದ : {{gap}}“ ಓ ಅಮನ್ ! ಅಪೂರ್ವ ಯಾನ ಕೈಕೊಂಡಿದ್ದೇನೆ. ಲೋಕದಲ್ಲಿ ಅತ್ಯಂತ ಅಮೂಲ್ಯವಾದ ಸರಕನ್ನು ಸಾಗಿಸ್ತಿದ್ದೆನೆ. ನನ್ನ ಬಾಹುಗಳಿಗೆ ಅಧಿಕ ಬಲ ಕೊಡು. ದೋಣಿಗೆ ಬಾಣದ ವೇಗವನ್ನು ನೀಡು, ಓ ಅಮನ್ ! ನನ ಯಾನ ಸುರಕ್ಷಿತವಾಗಲಿ! ಯಾನ ಸುರಕ್ಷಿತವಾಗಲಿ !” {{center|೧೪}} {{gap}}ಹಿಂದೆ ಮೆನೆಪಟಾನ ಜತೆ ರಾಜಧಾನಿಗೆ ಹೋಗುವ ಅವಕಾಶ ದೊರೆ<noinclude></noinclude> 0fh865e07io9y0yvitzm7p77x676ecu ಪುಟ:Mrutyunjaya.pdf/೫೯೭ 104 22086 320304 65764 2026-05-16T11:39:05Z Pragathi. BH 7585 /* Validated */ 320304 proofread-page text/x-wiki <noinclude><pagequality level="4" user="Pragathi. BH" /></noinclude>584 ಮೃತ್ಯುಂಜಯ ಯದೆ ಇದ್ದಾಗ, “ಅಲ್ಲಿಂದ ಕರೆಕೊಂಡು ಬರೋದಂತೂ ನಾವೇ” ಎಂದಿದ್ದರು. ಅಬ್ಟು ಯಾತ್ರಿಕರು. ಈಗ ಅಲ್ಲಿಂದ ಕರೆದುಕೊಂಡು ಬರುತ್ತಲಿದ್ದವರು ಅವರೇ. ಆದರೆ, ಆದರೆ..... ತನ್ನೆದುರಿನ ಇರುಳನ್ನೂ ನೀರನ್ನೂ ನೋಡುತ್ತ ಹಾಯಿಕಂಬಕ್ಕೊರಗಿ ಕುಳಿತು ಅದುಮಿ ಹಿಡಿದಿದ್ದ ಸಂಕಟದ ಕಟ್ಟುಗಳನ್ನೆಲ್ಲ ಬಟಾ ಕಡಿದ. ಕಂಬನಿ ಧಾರೆಗಟ್ಟಿತು. ಅದೆಷ್ಟು ಹೊತ್ತು ಹಾಗೆ ಸದ್ದಿಲ್ಲದೆ ಅತ್ತನೋ? ಕಣ್ಣೀರಿನಿಂದ ಮಬ್ಬಾದ ದೃಷ್ಟಿಗೆ ಆಸ್ಪೆಷ್ಟ ಆಕೃತಿಗಳು ಕಾಣಿಸುತ್ತಿದುವು. ಸದುಗಳು ಅಯಾಚಿತವಾಗಿ ಕೇಳಿಸುತ್ತಿದ್ದುವು. ದಕ್ಷಿಣಾಭಿಮುಖವಾಗಿ ಸಾಗುತ್ತಿದ್ದ ಬೇರೆ ದೋಣಿಗಳು ನದಿಯಲ್ಲಿ. ಅವನ್ನು ಹಿಂದಿಕ್ಕಿ ತನ್ನ ದೋಣಿ ಮುಂದು ವರಿಯುತ್ತಿತ್ತು ಎದುರು ದಿಕ್ಕಿನಿಂದ ಬರುತ್ತಿದ್ದ ದೋಣಿಗಳೂ ಆಗೊಮ್ಮೆ ಈಗೊಮ್ಮೆ ಸಿಗುತ್ತಿದ್ದವು. ಅಂಥ ಸಂದರ್ಭಗಳಲ್ಲಿ ತನ್ನ ಅಂಬಿಗರು “ಹೋ ಹೋ ಹೋ” ಎನ್ನುತ್ತಿದ್ದರು. ಢಿಕ್ಕಿಯಾಗದಂತೆ ವಹಿಸುವ ಎಚ್ಚರ. ಬಟಾನ ನಿರ್ದೆಶಗಳಿಲ್ಲದೆ ಹಾಸೋಕ್ತಿ ಚಾಟಿಯೋಕ್ತಿಗಳಿಲ್ಲದೆ ಆತನ ದೋಣಿಯಲ್ಲಿ ಯಾನ ಸಾಧ್ಯವೆಂದು ಯಾರು ನಂಬಿದ್ದರು. ಈ ಸಲ ಅವನ ಸೂಚನೆಗಳ ಸಂಜ್ಞೆ ಗಳ ಯಾವ ಅಗತ್ಯವೂ ಇರಲಿಲ್ಲ, ಅಂಬಿಗರ, ಯಾತ್ರಿಕರ ಜಾಗೃತ ಪ್ರಜ್ಞೆಯೇ ಆ ದೋಣಿಗೆ ದಿಕ್ಸೋಚಿಯಾಗಿತ್ತು, ನೂಕು ಒಲವಾಗಿತ್ತು. ಕಣ್ಣಿನ ಕೊಳಗಳು ಬರಿದಾದಂತೆ ಅನಿಸಿದಾಗ, ದೋಣಿಯಲ್ಲಿದ್ದ ಎಲ್ಲರ ಮುಖ ಗಳನ್ನೂ ದಿಟ್ಟಿಸಲು, ಕತ್ತಲಲ್ಲವೂ ಒಬ್ಬೊಬ್ಬರಾಗಿ ಅವರನ್ನು ಗುರು ತಿಸಲು ಬಟಾ ಯತ್ನಿಸಿದ. ತನ್ನ ಅವಸ್ಸೆಯೇ ಉಳಿದೆಲ್ಲರಿಗೂ? ತಮಗೆ ಬೀಕಾದವರು ಮಡಿದಾಗಿ ಅಳುವುದೂ ದುಸ್ಸಾಧ್ಯವಾದ ಪರಿಸ್ಟಿತಿ ಇದೆಂಥದು? ಹಿಂದೆ ತಾನು ಹೇಳಿದ್ದೆ: 'ನನ್ನ ಸಂಕಟ ಹೇಳಲಾ ಅಣ್ಣ ? ಎಷ್ಟು ದಿವಸ ಅಂತ ನನ್ನಲ್ಲೇ ಮುಚ್ಚಿಟ್ಕೊಳ್ಳಿ ? ನಾನು ಹೋಗ್ರಿರೋದು ನಮ್ಮವರನ್ನು ಕರಕೊಂಡು ಬರೋದಕ್ಕೆ. ನಾವಿಷ್ಟೇ ಜನ ನಿನ್ನ ಜತೆ ಇದ್ದು ಏನಾದರೂ ಅಚಾತುರ್ಯ ಆದರೆ, ನಾನು ನಮ್ಮ ಜನರಿಗೆ ಹಾಗೆ ಮುಖ ತೋರಿಸಲಿ? ಏನೂಂತ ಹೇಳಲಿ?' ತಮ್ಮವರನ್ನೇನೋ ಕರಕೊಂಡು ಬ್ಂದುದಾಯಿತು. ಆದರೆ, ಆದ ಪ್ರಯೋಜನ? ಪ್ರಮಾದ ನಡೆದೇಬಿಟ್ಟಿತಲ್ಲ? ತನಗೆ ಸರಿ<noinclude></noinclude> 22jw58lq3oc7gl2slxyy28ovv7ztx93 320306 320304 2026-05-16T11:43:36Z Pragathi. BH 7585 320306 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೫೮೪|right=}}</noinclude> ಯದೆ ಇದ್ದಾಗ, “ಅಲ್ಲಿಂದ ಕರೆಕೊಂಡು ಬರೋದಂತೂ ನಾವೇ” ಎಂದಿದ್ದರು. ಅಬ್ಟು ಯಾತ್ರಿಕರು. {{gap}}ಈಗ ಅಲ್ಲಿಂದ ಕರೆದುಕೊಂಡು ಬರುತ್ತಲಿದ್ದವರು ಅವರೇ. ಆದರೆ, ಆದರೆ..... {{gap}}ತನ್ನೆದುರಿನ ಇರುಳನ್ನೂ ನೀರನ್ನೂ ನೋಡುತ್ತ ಹಾಯಿಕಂಬಕ್ಕೊರಗಿ ಕುಳಿತು ಅದುಮಿ ಹಿಡಿದಿದ್ದ ಸಂಕಟದ ಕಟ್ಟುಗಳನ್ನೆಲ್ಲ ಬಟಾ ಕಡಿದ. ಕಂಬನಿ ಧಾರೆಗಟ್ಟಿತು. ಅದೆಷ್ಟು ಹೊತ್ತು ಹಾಗೆ ಸದ್ದಿಲ್ಲದೆ ಅತ್ತನೋ? ಕಣ್ಣೀರಿನಿಂದ ಮಬ್ಬಾದ ದೃಷ್ಟಿಗೆ ಆಸ್ಪೆಷ್ಟ ಆಕೃತಿಗಳು ಕಾಣಿಸುತ್ತಿದುವು. ಸದುಗಳು ಅಯಾಚಿತವಾಗಿ ಕೇಳಿಸುತ್ತಿದ್ದುವು. ದಕ್ಷಿಣಾಭಿಮುಖವಾಗಿ ಸಾಗುತ್ತಿದ್ದ ಬೇರೆ ದೋಣಿಗಳು ನದಿಯಲ್ಲಿ. ಅವನ್ನು ಹಿಂದಿಕ್ಕಿ ತನ್ನ ದೋಣಿ ಮುಂದು ವರಿಯುತ್ತಿತ್ತು ಎದುರು ದಿಕ್ಕಿನಿಂದ ಬರುತ್ತಿದ್ದ ದೋಣಿಗಳೂ ಆಗೊಮ್ಮೆ ಈಗೊಮ್ಮೆ ಸಿಗುತ್ತಿದ್ದವು. ಅಂಥ ಸಂದರ್ಭಗಳಲ್ಲಿ ತನ್ನ ಅಂಬಿಗರು “ಹೋ ಹೋ ಹೋ” ಎನ್ನುತ್ತಿದ್ದರು. ಢಿಕ್ಕಿಯಾಗದಂತೆ ವಹಿಸುವ ಎಚ್ಚರ. ಬಟಾನ ನಿರ್ದೆಶಗಳಿಲ್ಲದೆ ಹಾಸೋಕ್ತಿ ಚಾಟಿಯೋಕ್ತಿಗಳಿಲ್ಲದೆ ಆತನ ದೋಣಿಯಲ್ಲಿ ಯಾನ ಸಾಧ್ಯವೆಂದು ಯಾರು ನಂಬಿದ್ದರು. ಈ ಸಲ ಅವನ ಸೂಚನೆಗಳ ಸಂಜ್ಞೆ ಗಳ ಯಾವ ಅಗತ್ಯವೂ ಇರಲಿಲ್ಲ, ಅಂಬಿಗರ, ಯಾತ್ರಿಕರ ಜಾಗೃತ ಪ್ರಜ್ಞೆಯೇ ಆ ದೋಣಿಗೆ ದಿಕ್ಸೋಚಿಯಾಗಿತ್ತು, ನೂಕು ಒಲವಾಗಿತ್ತು. ಕಣ್ಣಿನ ಕೊಳಗಳು ಬರಿದಾದಂತೆ ಅನಿಸಿದಾಗ, ದೋಣಿಯಲ್ಲಿದ್ದ ಎಲ್ಲರ ಮುಖ ಗಳನ್ನೂ ದಿಟ್ಟಿಸಲು, ಕತ್ತಲಲ್ಲವೂ ಒಬ್ಬೊಬ್ಬರಾಗಿ ಅವರನ್ನು ಗುರು ತಿಸಲು ಬಟಾ ಯತ್ನಿಸಿದ. ತನ್ನ ಅವಸ್ಸೆಯೇ ಉಳಿದೆಲ್ಲರಿಗೂ? ತಮಗೆ ಬೀಕಾದವರು ಮಡಿದಾಗಿ ಅಳುವುದೂ ದುಸ್ಸಾಧ್ಯವಾದ ಪರಿಸ್ಟಿತಿ ಇದೆಂಥದು? ಹಿಂದೆ ತಾನು ಹೇಳಿದ್ದೆ: 'ನನ್ನ ಸಂಕಟ ಹೇಳಲಾ ಅಣ್ಣ ? ಎಷ್ಟು ದಿವಸ ಅಂತ ನನ್ನಲ್ಲೇ ಮುಚ್ಚಿಟ್ಕೊಳ್ಳಿ ? ನಾನು ಹೋಗ್ರಿರೋದು ನಮ್ಮವರನ್ನು ಕರಕೊಂಡು ಬರೋದಕ್ಕೆ. ನಾವಿಷ್ಟೇ ಜನ ನಿನ್ನ ಜತೆ ಇದ್ದು ಏನಾದರೂ ಅಚಾತುರ್ಯ ಆದರೆ, ನಾನು ನಮ್ಮ ಜನರಿಗೆ ಹಾಗೆ ಮುಖ ತೋರಿಸಲಿ? ಏನೂಂತ ಹೇಳಲಿ?' ತಮ್ಮವರನ್ನೇನೋ ಕರಕೊಂಡು ಬ್ಂದುದಾಯಿತು. ಆದರೆ, ಆದ ಪ್ರಯೋಜನ? ಪ್ರಮಾದ ನಡೆದೇಬಿಟ್ಟಿತಲ್ಲ? ತನಗೆ ಸರಿ<noinclude></noinclude> m2cyb4xf6ocdwp1ss41fzvrcb0cxq1m ಪುಟ:Mrutyunjaya.pdf/೫೯೮ 104 22087 320307 65768 2026-05-16T11:45:26Z Pragathi. BH 7585 /* Validated */ 320307 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೫೮೫}}</noinclude> ಎಂದು ಕಂದ ದಾರಿ ಬಿಟ್ಟು, ಅಣ್ಣ ಒಂದಿಷ್ಟೂ ಚಲಿಸಲಿಲ್ಲ, ಈಗ ಊರಿನಲ್ಲಿ ತಾನು ಮುಖ ತೋರಿಸುವುದು ಹೇಗೆ? ಹೇಳುವುದು ಏನನ್ನು?.... {{gap}}ಬಟಾನ ಅಲೆಯುವ ದೃಷ್ಟಿ ದಿವ್ಯಾತ್ಮ, ಮೆನ್ನನನ್ನು ಹುಡುಕಿತು. ನೀಳ ವಾಗಿ ಮಲಗಿಸಿದ್ದ ಚೀಲಗಳು. ಅವುಗಳ ಪಕ್ಕದಲ್ಲಿ ಅಂಗಾತ ಬಿದ್ದಿರುವ ದೇಹ? ತನಗೆ ಕನಸು. ಚೀಲಗಳಿಂದ ಹೊರಬಿದ್ದು ಅಣ್ಣ ಜೀವ ತಳೆದಿರ ಬಹುದೆ? ಎಂಥ ಹುಚ್ಚು ! ಮಲಗಿ ನಿದ್ದೆ ಹೋಗಿರುವವನು ಮೆನ್ನ, ಶವದ ಪಕ್ಕದಲ್ಲಿ. ಒಂದು ವಿಮುಕ್ತ ಜೀವ ಹೀಗೂ ಇರುವುದು ಸಾಧ್ಯವೆ? {{gap}}ಇವರೆಲ್ಲ ತುಸು ತೊನೆದಾಡುವ ಪ್ರತಿಮೆಗಳಾಗಿದ್ದಾರೆ, ಪರಸ್ಪರ ಅಂಟಿ ಕೊಂಡು ಏಕಜೀವವಾಗಿದ್ದಾರೆ. ಮನ ದಣಿಯುವಷ್ಟು ಕಣ್ಣೀರು ಸಾನ. ಬಳಿಕ ಮೌನ ತಪ್ತ ಮೆದುಳು. ಜಡ ಹೃದಯ ಸಣ್ಣನೆ ಬೀಸುತ್ತಿರುವ ತಣ್ಣನೆಯ ಗಾಳಿಗೆ ಇವರೆಲ್ಲ నిದ್ದೆ ಹೋಗಬಹುದು, నిದ್ದೆ ಹೋಗಬೇಕು. {{gap}}ರಾಮೆರಿಪ್ ಟಾಗೆ ನಿದ್ದೆ ಬಂದಿರಬಹುದೆ? ಬಟಾ ಬಲಕ್ಕೆ ನೋಡಿದ. ಎಡಕ್ಕೆ ನೋಡಿದ. ಅಲ್ಲಿ ಮೂಲೆಯಲ್ಲಿದ್ದಳು ಅಹೂರಾ, ಅವಳ ಮಗುಲಲ್ಲಿ ಮಗು ಮಲಗಿದೆ. ಅವಳ ತೋಳಿಗೊರಗಿ ರಾಮೆರಿಪ್ಟಾ ಕುಳಿತಿದ್ದ, ಈತ ಈಗ ಹುಡುಗನಲ್ಲ. ಒಂದೇ ದಿನದ ಅವಧಿಯಲ್ಲಿ ಪ್ರಬುದ್ಡನಾಗಿದ್ದಾನೆ. ತೂಕಡಿಸುತ್ತಿಲ್ಲ, ಕತ್ತಲಲ್ಲಿ ಹೊಳೆಯುವ ಕಣ್ಣುಗಳು. ಬಟಾನಿಗೆನಿಸಿತು: 'ರಾಮೇರಿ ನನ್ನನ್ನೇ ನೋಡುತ್ತಿ ದಾನೆ.' ರಾಮೇರಿಯನ್ನು ದಿಟ್ಟಿಸುತ್ತ, ಅವನ ತಾಯಿ ನೆಫಿಸ್ಳನ್ನು ನೆನೆಯುತ್ತ, ಬಟಾನ ಕಣ್ಣುಗಳಲ್ಲಿ ಮತ್ತೆ ನೀರು జిమ్మిలేు. {{gap}}ತಾನು ಮೂರ್ಖ, ಅಣ್ಣನನ್ನು ಬಿಟ್ಟು ಊರಿಗೆ ಮರಳಿದ್ದೇ ತಪ್ಪಾ ಯಿತು. ಅವನ ಪಕ್ಕದಲ್ಲೇ ಇದ್ದಿದ್ದರೆ ಬಹುಶಃ ಹೀಗಾಗುತ್ತಿರಲಿಲ್ಲ; ಅಣ್ಣ ನನ್ನು ಗಂಡಾಂತರದಿಂದ ಪಾರು ಮಾಡುವುದು ಸಾಧ್ಯವಿರುತ್ತಿತ್ತು.....ಅಥವಾ, ಅಥವಾ..ತಾನು ಇದ್ದಿದ್ದರೂ ಹೀಗೆಯೇ ಆಗುತ್ತಿತ್ತೇನೋ? ಅವನು ಹಟ ಮಾರಿ. ಕಾರಾಗೃಹದಿಂದ ತಪ್ಪಿಸಿಕೊಳ್ಳುವುದು ಶಕ್ಕವಿದಾಗಲೂ ನಿರಾ ಕರಿಸಿದನಲ್ಲ.... {{gap}}'ಅಣ್ಣ, ಅಣ್ಣ. ನೀನೇನು ಮಾಡಿಬಿಟ್ಟೆ ?' {{gap}}ಕಳೆದ ಅಬ್ಟು ಯಾತ್ರೆಯಿಂದ ಮೊದಲ್ಲೊಂಡು ಬೇರೆಯೇ ದಾರಿ ಹಿಡಿ<noinclude></noinclude> e4007siwmbi5tj4c1qjlkdqpbhh6y7b ಪುಟ:Mrutyunjaya.pdf/೫೯೯ 104 22088 320308 246960 2026-05-16T11:48:58Z Pragathi. BH 7585 /* Validated */ 320308 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೫೮೬|right=}} ಯಿತು. ತಮ್ಮೆಲರ ಬದುಕು. ಅದು ಬ೦ಗಾರದ ಬಣ್ಣದಿ೦ದ ಹೊಳೆಯಿತು. ಈಗ ಇದ್ದಕ್ಕಿದ್ದ೦ತೆ__ {{gap}}'ಅಣ್ಣ,ಅಣ್ಣ,ರಾಜಧಾನಿಗೆ ನಾವು ಬಂದದ್ದು ತಪ್ಪಾಯಿತು.' {{gap}}ಹೀಗೆ ಆಗುತ್ತದೆ ಎಂದು ಜನ್ಮನಕ್ಷತ್ರ ಫಲದಲ್ಲಿ ಹೇಳಿತ್ತೆ ? {{gap}}'ನೀನು ಜನನಾಯಕನಾಗಲೆ೦ದೇ ಹುಟ್ಟದೇ; జನನಾಯಕನ೦ತೆಯೇ ಬಾಳಿದೆ....ಜನನಾಯಕನ೦ತೆಯೇ.....ಆವಸಾನವೂ? ಯಾವಾಗಲೂ ಹೀಗೆಯೇ ಏನು ?' {{gap}}....బల ದ೦ಡೆಯಲ್ಲಿ ಆರಿಸದೆ ಉಳಿದಿರುವ ಹತ್ತಿಪ್ಪತ್ತು ಮನೆ ದೀಪಗಳು. {{gap}}ಕೈ ಹಿಡಿದು ತೊಟ್ಟಿಲಾಡಿಸಿದ ಗೇಬು. ಅಯ್ಯೋ ! ಎಂಥ ಮೋಸ ! {{gap}}....ಪಟ್ಟಣವನ್ನು ದಾಟಿ ಪಯಣ. ಅನುಕೂಲ ಪವನ ಜೋರಾಗಿ ಬೀಸುತ್ತಿದೆ. ಗಾಳಿ ಕಡಿಮೆಯಾದಾಗ ತಿರುವುಗಳಲ್ಲಿ ಹುಟ್ಟುಹಾಕುತ್ತಾರೆ. ಈ ವೇಗ ಉಳಿಸಿಕೊ೦ಡದೆ ಒ೦ದು ದಿನ ಮು೦ಚಿತವಾಗಿಯೇ ಊರು ಸೇರಬಹುದು. {{gap}}ಇದು ಮುಂಜಾವದ ತಣುಪು ಗಾಳಿ, ಅಣ್ಣನಿಗೆ ಚಳಿಯಾಗುತ್ತಿದೆಯೇನೋ ! {{gap}}'ಅಣ್ಣ ! ಅಣ್ಣ ! ಒಮ್ಮೆ ಬಟಾ ಅಂತ ಕರೀಬಾರದೆ ಅಣ್ಣ ? ಅಣ್ಣ ! ನಾನು ಮೂಖ೯ ಅಣ್ಣ!' {{gap}}ಹಿಂದಿಕ್ಕುವ ದೋಣಿಗಳ ಸಂಖ್ಯೆ ಕಡಿಮೆಯಾಗಿದೆ. ಇವರೆಲ್ಲ ತಡವಾಗಿ ಮೆಫಿಸಿನಿ೦ದ ಹೊರಟವರು. ಅಣ್ಣ ದೇಹಾಂತ ಶಿಕ್ಷೆಗೆ ಒಳಗಾದೊಡನೆ. ಅಥವಾ ನಾಯಮೂರ್ತಿ ತೀಪು೯ ಕೊಟ್ಟೂಡನೆ, ಇಲ್ಲವೆ ಇನ್ನೂ ಮು೦ಚೆ, ಸೆಡ್ ಉತ್ಸವ ಮುಗಿಸಿ ರಾಜಧಾನಿ ಬಿಟ್ಟವದೆಲ್ಲ ತಮ್ಮ ಊರುಗಳನ್ನು ಈ ವೇಳೆಗೆ ತಲಸಿರಬಹುದು, ಇಲ್ಲವೆ ಸಮೀಸಿಸುತ್ತಿರಬಹುದು. {{gap}}"ಹೋ ! ಹೋ ! ಹೋ !" {{gap}}ಬರುತ್ತಿರುವ ಎದುರು ನಾವೆಯಿ೦ದಲೂ ಧ್ವನಿ. {{gap}}ತಮ್ಮ ದೋಣಿಯೊಳಗಿಒದ ಚೀತ್ಕಾರ. ಬಟಾ ಗಾಬರಿಗೋ೦ಡು ಅತ್ತಿತ್ತ ನೋಡಿದ. ಮೆನ್ನ ಗಡಬಡಿಸಿ ಏಳುತ್ತಿದ್ದುದನ್ನು ಕ೦ಡ. 'ಚಿಟಾರನೆ<noinclude></noinclude> 5g2m0qnghlnnkrrmgag6kln06wv073u ಪುಟ:ಅರಮನೆ.pdf/೨೩ 104 77109 320175 311947 2026-05-15T15:11:56Z Shreesha Sharma 7840 /* Validated */ 320175 proofread-page text/x-wiki <noinclude><pagequality level="4" user="Shreesha Sharma" /></noinclude>{{Right|xxiii}} {{center|'''ಬೇಲ್ದಾರನ ಭಿನ್ನಹ'''}} {{Right|ಕುಂವೀ}} {{gap}}ಅರಮನೆ ಐತಿಹಾಸಿಕಮೋ, ಪೌರಾಣಿಕಮೋ, ಸಾಮಾಜಿಕಮೋ ನನಗಿನ್ನು ಸ್ಪಷ್ಟವಾಗಿಲ್ಲ. ಆದರೆ ಒಂದಂತೂ ನಿಜ ಈ ಮೂರರ ಹೊರತಾಗಿ ನಾಲ್ಕನೆಯ ಆಯಾಮಮೂಉಂಟು. ಅದು ಇನ್ನೂ ನನ್ನ ಅರಿವಿಗೆ ನಿಲುಕಿಲ್ಲ. ಬಾಣಂತಿಯ ಹೆರಿಗೆ ನೋವು ಕೂಸಿನ ಸಮಕ್ಷಮ ಗೌಣ.. ಆದರೂ ನಾಲ್ಕು ಮಾತುಗಳನ್ನು ಪೀಠಿಕಾ ರೂಪದಲ್ಲಿ ಹೇಳಿ ಕೊಂಡಲ್ಲಿ ಕಾದಂಬರಿಯ ಗ್ರಹಿಕೆ ಸರಳವಾದೀತು. {{gap}}ನಾನು ಸ್ವಭಾವತಃ ಇತಿಹಾಸದ ವಿದ್ಯಾರ್ಥಿ, ಇತಿಹಾಸಕ್ಕೆ ಸಂಬಂಧಿಸಿದ್ದೆಲ್ಲವನ್ನೂ ಓದುತ್ತ ಬಂದಿರುವೆನು. ಜೊತೆಗೆ ಕೋಟೆ, ಗುಡಿ, ಗುಂಡಾರ, ಶಾಸನ, ವೀರಗಲ್ಲು, ಮಾಸ್ತಿಗಲ್ಲುಗಳನ್ನು ನೋಡುವ ಸಲುವಾಗಿ ಅನೇಕ ಊರುಗಳನ್ನು ಸುತ್ತಿರುವೆನು, ಅರಮನೆ ಎಂಬ ನಾಲ್ಕಕ್ಷರದ ಮಾಯಾವಿನಿ ಶಬ್ದದಿಂದ ಪರವಶ ಗೊಂಡಿರುವೆನು. ಅರಮನೆ ಒಳಹೊರಗಿನ ವಿದ್ಯಾಮಾನಗಳನ್ನು ಸೃಜನಶೀಲವಾಗಿ ಕಲ್ಪಿಸಿಕೊಳ್ಳುವುದೇ ಒಂದು ಸೊಗಸು.ಕಲ್ಪನೆ ಜ್ಞಾನಕ್ಕಿಂತ ಶಕ್ತಿಶಾಲಿ ಎಂಬ ಮಾತು ಅಕ್ಷರಶಃ ನಿಜ. ಅಸ್ತಿತ್ವದಲ್ಲಿರುವ ನಯನ ಮನೋಹರವಾದ ಅರಮನೆಗಳಿಗಿಂತ ಅಂತರ್ಧಾನವಾಗಿರುವ ಚಿಕ್ಕಪುಟ್ಟ ಪಾಳ್ಯಪಟ್ಟುಗಳ ಅಗೋಚರ ಅರಮನೆಗಳ ಹೆಚ್ಚು ಸುಂದರ. ಇಂಥ ಅರಮನೆಗಳ ಕುರುಹುಗಳು ಜರಿಮಲೆ, ಗುಡೇಕೋಟೆ, ರಾಯದುರ್ಗ, ಹರಪನಹಳ್ಳಿ ಸೇರಿದಂತೆ ಅನೇಕ ಕಡೆ ಇರುವವು. ಅವುಗಳನ್ನು ನೋಡುವುದು, ಅವುಗಳಿದ್ದ ಕುರುಹುಗಳ ಮೇಲೆ ತಿರುಗಾಡುವುದು ದಯನೀಯ ಸ್ಥಿತಿಯಲ್ಲಿರುವ ಅವುಗಳ ವಾರಸುದಾರರೊಂದಿಗೆ ಮಾತಾಡುವುದು ರೋಮಾಂಚನದ ಸಂಗತಿ, ಹೇಳುವುದನ್ನೆಲ್ಲ ಹೇಳಿಯಾದ ಮೇಲೆ ಕೇಳುವುದನ್ನೆಲ್ಲ ಕೇಳಿಯಾದ ಮೇಲೆ ಕೇವಲ ಪುಡಿ ಕಾಸಿಗಾಗಿ ಕೈ ಚಾಚುವ ಅವರನ್ನು ನೋಡಿದರೆ ಎಂಥವರಿಗೂ ಮರುಕ ಹುಟ್ಟದೆ ಇರದು. ಕೂಲಿ ಕುಂಬಳಿ ಮಾಡಿ ಹೊಟ್ಟೆ ಹೊರೆಯುತ್ತಿದ್ದರೂ ಕೆಲವು ರಾಜವಂಶಸ್ಥರು ರಾಜರ ಗತ್ತು ಗೈರತ್ತು ಬಿಟ್ಟಿಲ್ಲ. ಇದಕ್ಕೆ ಉದಾಹರಣೆ ಜರಿಮಲೆ ರಾಜರನ್ನೇ ತೆಗೆದುಕೊಳ್ಳೋಣ. ಈಗವರು ಇರುವುದು ಗುಡಿಸಿಲು, ಮಣ್ಣಿನ ಮನೆಗಳಲ್ಲಿ, ಭೂಮಿಹೀನರಾದ ಅವರೀಗ<noinclude><references/></noinclude> iigmnmaoqdcsyq8pqh8mgm1n1b99q4d ಪುಟ:ಅರಮನೆ.pdf/೬೭ 104 77152 320166 169861 2026-05-15T15:03:35Z Shreelatha.Halemane 7642 /* Proofread */ 320166 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|center=|left=೩೬|right=ಅರಮನೆ}} ಮೆತ್ತನ್ನ ಮೆದೆಗಳ್ಳನಾಗಿರಲೂ ಬೌದೇ? ತನ್ನೊಳಗೆ ಸಾಂಬವಿಯಿರುವಳೆಂಬುದಕ ಖಾತರಿಯೇನು? ಸಾಕ್ಷ್ಯಾಧಾರಗಳು ಯಲ್ಲವೆ? {{gap}}ಅರಮನೆ ತಿನಮಾಡಿದ ವುಷ್ಟು ಅವರನ್ನು ಅಡ್ಡಡ್ಡ ಯೋಚಿಸುವಂತೆ ಮಾಡಿತು. ಅಲ್ಲದೆ ಅವರು ಕಾಟಯ್ಯನ ವುಗುಳನ್ನು ಯಂದೂ ದಾಟಿದವರಲ್ಲ... ವಂದಲ್ಲಾ ವಂದಿನ ಆತನು ರಾಜ್ಯಭಾರ ಮಾಡೇ ಮಾಡುತ್ತಾನೆ ಯಂದು ನಂಬಿದ್ದರು. {{gap}}ಮೋಬಯ್ಯನನ್ನು ಧರಗುಟ್ಟಿಳಕೊಂಡು ಬರುವಂಥ ಶಕ್ತಿಶಾಲಿಗಳು ತಮ್ಮ ವಳಿತದೊಳಗ ಯಾರವರೆ ಯಂದು ಪಟ್ಟಿ ಮಾಡುತಾಯಿರುವಾಗ್ಗೆ ಚಿಗ್ಯಾಟಿಯಂಬ ಮಾವುಸ ಪರುವತವು ಮಾತಿನ ಗುಂಟ ತೇಲಿ ಬಂತು. ಆತ ಯಂಥವನೆಂದರೆ.. ನಾಕು ತುತ್ತಿಗೆ ವಂದು ಟಗರನ್ನು ಯರಡು ತುತ್ತಿಗೆ ಎಂದು ಕೋಳಿಯನ್ನೂ ತಿಂಬುತ್ತಿದ್ದಂಥವನು. ಬಿಚ್ಚುಗತ್ತಿಯನ್ನು ಆ ಕೂಡಲೆ ಆತನಿದ್ದಲ್ಲಿಗೆ ಕಳುವಿ ಆ ಸ್ಥಾನಕ್ಕೆ ಕರೆ ಕಳಿಸಿಕೊಂಡು ಯಿಂಥಾದ್ದು ಯೀ ಕೂಡಲೇ ಮಾಡಬೇಕೆಂದು ಹೇಳಿದರು. ವಪ್ಪಲು ಮಿಜಿ ಮಿಜಿ ಮಾಡಿದನು. ಯಲ್ಲು ಟಗರು, ನಾಕು ಕೋಳಿ ಮತ್ತು ಮಸಾಲೆ ದಿನಿಸಿಗಂತ ವಂದು ಬೆಳ್ಳಿ ರೂಪಾಯಿ ಕೊಡುವುದಾಗಿ ಹೇಳಲು ಆತನು, “ಸಾಂಬವಿ ನಮ್ಮ ಕುಲ ದ್ಯಾವತೆ ಅಯ್ಯಾಳ ತಂದೆಗೋಳಾ.. ನೀವು ಹತ್ತು ಸಾವ್ರಹೊನ್ನು ಕೊಟೂನಾನು ಮೋಬಯ್ಯನ ತಂಟ್ಯಾಕ ಹೋಗೋದಿಲ್ಲ” ಯಂದು ಹೇಳಿ ಹೋದನು. ಯಿನ್ಯಾರವರೆ ಯಂದು ಯೋಚಿಸಿ ಯೋಚಿಸಿ ಕೆಂಧೂಡಿಯನ್ನು ಕರೆಯಿಸಿಕೊಂಡರೆ ಆತನು ನೀವು ನೂರುಕೂರಿಗೆ ಹೊಲಾ ಕೊಟ್ರೋನಾನು ಮೋಬಯ್ಯನ ಸರೀರದ ತಂಟ್ಯಾಕ ಹೋಗಲಾರೆ” ಯಂದು ಖಡಾಖಂಡಿತವಾಗಿ ಹೇಳಿದನು. ಹಿಂಗೆ ಕರೆಸಿಕೊಂಡವರೆಲ್ಲ ಅರಮನೆಯಂಬ ನಾಕಕ್ಕರದ ಘನವಾದ ಸಬುದಕ್ಕೆ ಕವುಡೆ ಕಿಮ್ಮತ್ತು ಕೊಡಲಿಲ್ಲ. ನಾಯಕನು ಕಟಕಟನೆ ಹಲ್ಲು ಕಡಿಯುತ್ತಿರುವಾಗ್ಗೆ ಆತನೆಡಕಿದ್ದ ವ್ಯಕ್ತಿಯ ಜನುಮನಾಮ ಗುಡ್ಡನೆಂಬುದಾಗಿತ್ತು, ನಾಯಕನಿಟ್ಟ ಹೆಸರು ಕಳವಳ ಯಂಬುದಾಗಿತ್ತು, ಆತನು 'ದೊರೆಯೇ.. ಮೋಬಯ್ಯನ ಸರೀರದೊಳಗೆ ಮೋಬಯ್ಯನಿಲ್ಲ, ಆತನನಂದಾಡಿ ಯೇನು ಪ್ರಯೋಜನ?” ಯಂದು ಬುದ್ದಿವಾದ ಹೇಳಿದರೆ, ಬಲಕಿದ್ದ ವ್ಯಕ್ತಿಯ ಜನುಮನಾಮ ಕೋಲ ಯಂಬುದಾಗಿತ್ತು, ಕಾಟಯ್ಯನಿಟ್ಟ ಅಡ್ಡ ನಾಮ ಗಂಧೂಡಿಯಂಬುದಾಗಿತ್ತು ಅತನು 'ದೊರೆಯೇ.. ಮೋಬಯ್ಯನ ಸರೀರದೊಳಗೆ ಸಾಯಿರ ಗುಗ್ಗುಳಗಳಿಗೆ ಸಮಾನವಾದ ಕಾವಯ್ತಿ.. ಅದರ ತಂಟೆಗೆ ಹೋಗಬ್ಯಾಡೂರಿ” ಯಂದು ಬುದ್ಧಿ<noinclude><references/></noinclude> f20levantctuxn096s0gp2ojgljk5w9 320173 320166 2026-05-15T15:11:07Z Shreesha Sharma 7840 /* Validated */ 320173 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=೩೬|right=ಅರಮನೆ}} ಮೆತ್ತನ್ನ ಮೆದೆಗಳ್ಳನಾಗಿರಲೂ ಬೌದೇ? ತನ್ನೊಳಗೆ ಸಾಂಬವಿಯಿರುವಳೆಂಬುದಕ ಖಾತರಿಯೇನು? ಸಾಕ್ಷ್ಯಾಧಾರಗಳು ಯಲ್ಲವೆ? {{gap}}ಅರಮನೆ ತಿನಮಾಡಿದ ವುಷ್ಟು ಅವರನ್ನು ಅಡ್ಡಡ್ಡ ಯೋಚಿಸುವಂತೆ ಮಾಡಿತು. ಅಲ್ಲದೆ ಅವರು ಕಾಟಯ್ಯನ ವುಗುಳನ್ನು ಯಂದೂ ದಾಟಿದವರಲ್ಲ... ವಂದಲ್ಲಾ ವಂದಿನ ಆತನು ರಾಜ್ಯಭಾರ ಮಾಡೇ ಮಾಡುತ್ತಾನೆ ಯಂದು ನಂಬಿದ್ದರು. {{gap}}ಮೋಬಯ್ಯನನ್ನು ಧರಗುಟ್ಟಿಳಕೊಂಡು ಬರುವಂಥ ಶಕ್ತಿಶಾಲಿಗಳು ತಮ್ಮ ವಳಿತದೊಳಗ ಯಾರವರೆ ಯಂದು ಪಟ್ಟಿ ಮಾಡುತಾಯಿರುವಾಗ್ಗೆ ಚಿಗ್ಯಾಟಿಯಂಬ ಮಾವುಸ ಪರುವತವು ಮಾತಿನ ಗುಂಟ ತೇಲಿ ಬಂತು. ಆತ ಯಂಥವನೆಂದರೆ.. ನಾಕು ತುತ್ತಿಗೆ ವಂದು ಟಗರನ್ನು ಯರಡು ತುತ್ತಿಗೆ ಎಂದು ಕೋಳಿಯನ್ನೂ ತಿಂಬುತ್ತಿದ್ದಂಥವನು. ಬಿಚ್ಚುಗತ್ತಿಯನ್ನು ಆ ಕೂಡಲೆ ಆತನಿದ್ದಲ್ಲಿಗೆ ಕಳುವಿ ಆ ಸ್ಥಾನಕ್ಕೆ ಕರೆ ಕಳಿಸಿಕೊಂಡು ಯಿಂಥಾದ್ದು ಯೀ ಕೂಡಲೇ ಮಾಡಬೇಕೆಂದು ಹೇಳಿದರು. ವಪ್ಪಲು ಮಿಜಿ ಮಿಜಿ ಮಾಡಿದನು. ಯಲ್ಲು ಟಗರು, ನಾಕು ಕೋಳಿ ಮತ್ತು ಮಸಾಲೆ ದಿನಿಸಿಗಂತ ವಂದು ಬೆಳ್ಳಿ ರೂಪಾಯಿ ಕೊಡುವುದಾಗಿ ಹೇಳಲು ಆತನು, “ಸಾಂಬವಿ ನಮ್ಮ ಕುಲ ದ್ಯಾವತೆ ಅಯ್ಯಾಳ ತಂದೆಗೋಳಾ.. ನೀವು ಹತ್ತು ಸಾವ್ರಹೊನ್ನು ಕೊಟೂನಾನು ಮೋಬಯ್ಯನ ತಂಟ್ಯಾಕ ಹೋಗೋದಿಲ್ಲ” ಯಂದು ಹೇಳಿ ಹೋದನು. ಯಿನ್ಯಾರವರೆ ಯಂದು ಯೋಚಿಸಿ ಯೋಚಿಸಿ ಕೆಂಧೂಡಿಯನ್ನು ಕರೆಯಿಸಿಕೊಂಡರೆ ಆತನು ನೀವು ನೂರುಕೂರಿಗೆ ಹೊಲಾ ಕೊಟ್ರೋನಾನು ಮೋಬಯ್ಯನ ಸರೀರದ ತಂಟ್ಯಾಕ ಹೋಗಲಾರೆ” ಯಂದು ಖಡಾಖಂಡಿತವಾಗಿ ಹೇಳಿದನು. ಹಿಂಗೆ ಕರೆಸಿಕೊಂಡವರೆಲ್ಲ ಅರಮನೆಯಂಬ ನಾಕಕ್ಕರದ ಘನವಾದ ಸಬುದಕ್ಕೆ ಕವುಡೆ ಕಿಮ್ಮತ್ತು ಕೊಡಲಿಲ್ಲ. ನಾಯಕನು ಕಟಕಟನೆ ಹಲ್ಲು ಕಡಿಯುತ್ತಿರುವಾಗ್ಗೆ ಆತನೆಡಕಿದ್ದ ವ್ಯಕ್ತಿಯ ಜನುಮನಾಮ ಗುಡ್ಡನೆಂಬುದಾಗಿತ್ತು, ನಾಯಕನಿಟ್ಟ ಹೆಸರು ಕಳವಳ ಯಂಬುದಾಗಿತ್ತು, ಆತನು 'ದೊರೆಯೇ.. ಮೋಬಯ್ಯನ ಸರೀರದೊಳಗೆ ಮೋಬಯ್ಯನಿಲ್ಲ, ಆತನನಂದಾಡಿ ಯೇನು ಪ್ರಯೋಜನ?” ಯಂದು ಬುದ್ದಿವಾದ ಹೇಳಿದರೆ, ಬಲಕಿದ್ದ ವ್ಯಕ್ತಿಯ ಜನುಮನಾಮ ಕೋಲ ಯಂಬುದಾಗಿತ್ತು, ಕಾಟಯ್ಯನಿಟ್ಟ ಅಡ್ಡ ನಾಮ ಗಂಧೂಡಿಯಂಬುದಾಗಿತ್ತು ಅತನು 'ದೊರೆಯೇ.. ಮೋಬಯ್ಯನ ಸರೀರದೊಳಗೆ ಸಾಯಿರ ಗುಗ್ಗುಳಗಳಿಗೆ ಸಮಾನವಾದ ಕಾವಯ್ತಿ.. ಅದರ ತಂಟೆಗೆ ಹೋಗಬ್ಯಾಡೂರಿ” ಯಂದು ಬುದ್ಧಿ<noinclude><references/></noinclude> sc1xil238f4e9drtob7yq65t9iglgd4 ಪುಟ:ಅರಮನೆ.pdf/೬೮ 104 77153 320167 169862 2026-05-15T15:04:35Z Shreelatha.Halemane 7642 /* Proofread */ 320167 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|center=|left=ಅರಮನೆ|right=೩೭}} ವಾದ ಹೇಳಿದನು. ಅರಮನೆಯವರು ಸಂದಾಯ ಮಾಡುತ್ತಿದ್ದ ಗವುರವ ಧನದೊಳಗೆ ಯಿಡೀ ಕುಟುಂಬವಡಗುವುದು ಅಸಾಧ್ಯವಾಗಿದ್ದುದರಿಂದಾಗಿ ಅವರೀರರು ಅಲ್ಲಿಂದ ತೊಲಗಲು ಮಾನಸಿಕವಾಗಿ ಸಂಸಿದ್ದರಾಗಿದು ದೊರೆಗೆ ಬುದ್ದಿವಾದ ಹೇಳುವ ಧಯ್ರ ಮಾಡಿದ್ದರು. ಮುನಿದು ಕಾಟನಾಯಕನು ತಮ್ಮನ್ನು ಅರಮನೆಯಿಂದ ಹೊರಹಾಕಬೌದೆಂದು ನಿರೀಕ್ಷೆ ಮಾಡಿದ್ದ ಅವರು ಅವನತಮುಖಿಗಳಾಗಲು ನಾಯಕ ಅಸಹಾಯಕತೆಯಿಂದ ಅವುಡುಗಚ್ಚಿ ತನ್ನ ದವಡೆಗಳ ಬಿಗುವನ್ನು ಸಣ್ಣ ಮಾಡಿಕೊಂಡನು... {{gap}}ಅಸಾಹಯಕತೆಯನ್ನೊಳಗೊಂಡ ಅಳುಕಿನಿಂದಾತನು ಹೇಳಿದ್ದೇನೆಂದರೆ “ಅಯ್ಯಾ, ಸೇವಾಸಕ್ತರೇ, ಯಿದು ಬಲವಂತದಿಂದ ಜರುಗೋ ಕೆಲಸವಲ್ಲ.. ಬುದ್ದಿವಂತಿಕೆಯಿಂದ ಮಾಡಬೇಕದೆ.. ಅದಕ್ಕೇನೇನು ಮಾಡಬೇಕೆಂದರೆ...” {{gap}}ಥಾಮಸು ಮನೋ ಸಾಹೇಬನು ಪುಲಿವೆಂದಲದಲ್ಲಿ ನಾಮಕರಣ ಕಾರ ಮುಗಿಸಿಕೊಂಡು ಜನರ ಸುಖದುಕ್ಕಗಳನ್ನಾಲಿಸಿ ಕಡಪ ಹಾದಿ ಹಿಡಿದಿರುವಾಗ್ಗೆ, ಹತ್ತಾರು ಮಂದಿ ಕೊಡ ಬಿಂದಿಗೆಗಳನ್ನು ತಮ್ಮ ತಮ್ಮ ಹೆಗಲು ಬಗಲುಗಳಲ್ಲಿಟ್ಟುಕೊಂಡು ದೇಕುತ್ತ ನಡೆಯುತ್ತಿದ್ದುದನ್ನು ಕಂಡನು. ಅವರ ಪಯ್ಕೆ ಹಿರೀಕನಿದ್ದ ಮುದೇತನು "ರಾಯಲ ಸೀಮಾನು ರತುನಾಲ ಸೀಮ ಅಂಟಾರು... ತಾಗಡಾನಿಕಿ ಗುಕ್ಕಿಡು ನೀಳ್ಳುಲೇದು” ಯಂದು ಮುಂತಾಗಿ ಪದ ಹಾಡು ತ್ತಿದ್ದುದನ್ನು ಕೇಳಿಸಿಕೊಂಡನು. ಆಗ ಆ ಮುದೇತನನ್ನು ಹತ್ತಿರ ಕರೆದು ನಿಮ್ಮ ಕಷ್ಟಗಳೇನು ಯಂದು ಯಿಚಾರಿಸಲು ಆತನಿದ್ದು “ಯೇ ರಾಜನು ಹೋಗಿ ಆ ರಾಜ ಬಂದ್ರೂನಮ್ಮೆ ಕುಡಿಲಕ ನೀರಿಲ್ಲ.. ನಮ್ಮುಚ್ಚನ ನಾವ್ ಕುಡುಕಂಡು ಬದುಕದೀವಿ” ಯಂದು ಹೇಳಿದನು. ಅದನ್ನು ಕೇಳಿ ಮಮ್ಮಲನ ಮರುಗುತ್ತಲೇ ಕಡಪ ಸೇರಿಕೊಂಡ ಮನೋ ಸಾಹೇಬನು ತನ್ನ ಅಧಿಕಾರಿಗಳನ್ನು ಆಸ್ಥಾನಕ್ಕೆ ಬರಮಾಡಿಕೊಂಡು ರಾಯಲಸೀಮದೊಳಗೆ ನೀರಿನ ಸ್ಥಾವರ ಯಲ್ಲಲ್ಲುಂಟು ಯಂಬುದನ್ನು ಪತ್ತೆ ಹಚ್ಚಬೇಕೆಂದೂ.. ವಂದೊಂದು ಗ್ರಾಮ ದೊಳಗ ಬಾವಿಗಳನ್ನು ತೋಡಿಸಬೇಕೆಂದೂ.. ಆದ್ರೆ ಮಾಡುತ್ತಿರುವಾಗ್ಗೆ.... {{gap}}ಅತ್ತ ಜರುಮಲಿ ರಾಜನು ತಾನು ದಂಡು ದವಲತ್ತು ಸಮೇತ ದಂಡೆತ್ತಿ ಬರಬೇಕೆಂದಿರು ವನೆಂದೂ, ಯೇಳು ದಿವಸದೊಳಾಗಿ ಕಪ್ಪ ಕಾಣಿಕೆ ತಂದು ಸರಣಾಗಿ ಪ್ರಾಣ ವುಳಿಸಿಕೊಳ್ಳ ಬೇಕೆಂದೂ ನಿಚ್ಚಾಪುರದ ರಾಜನಿಗೆ ಪರಮಾನು ಕಳಿಸುತ್ತಿರು ವಾಗ್ಗೆ.. ಮದ್ದಿಕೇರಿಯ ಸಂತರಸ್ತರ ಪಯ್ಕೆ ಗಂಡಸರು<noinclude><references/></noinclude> mlq89h10wcqoesvkzyxow3rr1863fae 320172 320167 2026-05-15T15:10:49Z Shreesha Sharma 7840 /* Validated */ 320172 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=ಅರಮನೆ|right=೩೭}} ವಾದ ಹೇಳಿದನು. ಅರಮನೆಯವರು ಸಂದಾಯ ಮಾಡುತ್ತಿದ್ದ ಗವುರವ ಧನದೊಳಗೆ ಯಿಡೀ ಕುಟುಂಬವಡಗುವುದು ಅಸಾಧ್ಯವಾಗಿದ್ದುದರಿಂದಾಗಿ ಅವರೀರರು ಅಲ್ಲಿಂದ ತೊಲಗಲು ಮಾನಸಿಕವಾಗಿ ಸಂಸಿದ್ದರಾಗಿದು ದೊರೆಗೆ ಬುದ್ದಿವಾದ ಹೇಳುವ ಧಯ್ರ ಮಾಡಿದ್ದರು. ಮುನಿದು ಕಾಟನಾಯಕನು ತಮ್ಮನ್ನು ಅರಮನೆಯಿಂದ ಹೊರಹಾಕಬೌದೆಂದು ನಿರೀಕ್ಷೆ ಮಾಡಿದ್ದ ಅವರು ಅವನತಮುಖಿಗಳಾಗಲು ನಾಯಕ ಅಸಹಾಯಕತೆಯಿಂದ ಅವುಡುಗಚ್ಚಿ ತನ್ನ ದವಡೆಗಳ ಬಿಗುವನ್ನು ಸಣ್ಣ ಮಾಡಿಕೊಂಡನು... {{gap}}ಅಸಾಹಯಕತೆಯನ್ನೊಳಗೊಂಡ ಅಳುಕಿನಿಂದಾತನು ಹೇಳಿದ್ದೇನೆಂದರೆ “ಅಯ್ಯಾ, ಸೇವಾಸಕ್ತರೇ, ಯಿದು ಬಲವಂತದಿಂದ ಜರುಗೋ ಕೆಲಸವಲ್ಲ.. ಬುದ್ದಿವಂತಿಕೆಯಿಂದ ಮಾಡಬೇಕದೆ.. ಅದಕ್ಕೇನೇನು ಮಾಡಬೇಕೆಂದರೆ...” {{gap}}ಥಾಮಸು ಮನೋ ಸಾಹೇಬನು ಪುಲಿವೆಂದಲದಲ್ಲಿ ನಾಮಕರಣ ಕಾರ ಮುಗಿಸಿಕೊಂಡು ಜನರ ಸುಖದುಕ್ಕಗಳನ್ನಾಲಿಸಿ ಕಡಪ ಹಾದಿ ಹಿಡಿದಿರುವಾಗ್ಗೆ, ಹತ್ತಾರು ಮಂದಿ ಕೊಡ ಬಿಂದಿಗೆಗಳನ್ನು ತಮ್ಮ ತಮ್ಮ ಹೆಗಲು ಬಗಲುಗಳಲ್ಲಿಟ್ಟುಕೊಂಡು ದೇಕುತ್ತ ನಡೆಯುತ್ತಿದ್ದುದನ್ನು ಕಂಡನು. ಅವರ ಪಯ್ಕೆ ಹಿರೀಕನಿದ್ದ ಮುದೇತನು "ರಾಯಲ ಸೀಮಾನು ರತುನಾಲ ಸೀಮ ಅಂಟಾರು... ತಾಗಡಾನಿಕಿ ಗುಕ್ಕಿಡು ನೀಳ್ಳುಲೇದು” ಯಂದು ಮುಂತಾಗಿ ಪದ ಹಾಡು ತ್ತಿದ್ದುದನ್ನು ಕೇಳಿಸಿಕೊಂಡನು. ಆಗ ಆ ಮುದೇತನನ್ನು ಹತ್ತಿರ ಕರೆದು ನಿಮ್ಮ ಕಷ್ಟಗಳೇನು ಯಂದು ಯಿಚಾರಿಸಲು ಆತನಿದ್ದು “ಯೇ ರಾಜನು ಹೋಗಿ ಆ ರಾಜ ಬಂದ್ರೂನಮ್ಮೆ ಕುಡಿಲಕ ನೀರಿಲ್ಲ.. ನಮ್ಮುಚ್ಚನ ನಾವ್ ಕುಡುಕಂಡು ಬದುಕದೀವಿ” ಯಂದು ಹೇಳಿದನು. ಅದನ್ನು ಕೇಳಿ ಮಮ್ಮಲನ ಮರುಗುತ್ತಲೇ ಕಡಪ ಸೇರಿಕೊಂಡ ಮನೋ ಸಾಹೇಬನು ತನ್ನ ಅಧಿಕಾರಿಗಳನ್ನು ಆಸ್ಥಾನಕ್ಕೆ ಬರಮಾಡಿಕೊಂಡು ರಾಯಲಸೀಮದೊಳಗೆ ನೀರಿನ ಸ್ಥಾವರ ಯಲ್ಲಲ್ಲುಂಟು ಯಂಬುದನ್ನು ಪತ್ತೆ ಹಚ್ಚಬೇಕೆಂದೂ.. ವಂದೊಂದು ಗ್ರಾಮ ದೊಳಗ ಬಾವಿಗಳನ್ನು ತೋಡಿಸಬೇಕೆಂದೂ.. ಆದ್ರೆ ಮಾಡುತ್ತಿರುವಾಗ್ಗೆ.... {{gap}}ಅತ್ತ ಜರುಮಲಿ ರಾಜನು ತಾನು ದಂಡು ದವಲತ್ತು ಸಮೇತ ದಂಡೆತ್ತಿ ಬರಬೇಕೆಂದಿರು ವನೆಂದೂ, ಯೇಳು ದಿವಸದೊಳಾಗಿ ಕಪ್ಪ ಕಾಣಿಕೆ ತಂದು ಸರಣಾಗಿ ಪ್ರಾಣ ವುಳಿಸಿಕೊಳ್ಳ ಬೇಕೆಂದೂ ನಿಚ್ಚಾಪುರದ ರಾಜನಿಗೆ ಪರಮಾನು ಕಳಿಸುತ್ತಿರು ವಾಗ್ಗೆ.. ಮದ್ದಿಕೇರಿಯ ಸಂತರಸ್ತರ ಪಯ್ಕೆ ಗಂಡಸರು<noinclude><references/></noinclude> 8m3n5dff8xcic3ze037r41bpototi6n ಪುಟ:ಅರಮನೆ.pdf/೬೯ 104 77154 320168 169863 2026-05-15T15:06:01Z Shreelatha.Halemane 7642 /* Proofread */ 320168 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|center=|left=೩೮|right=ಅರಮನೆ}} ಜೊನ್ನಗಿರಿಯೊಳಗ ರಾಜ ಪರಿವಾರದ ನಾನಾ ನಮೂನಿಯ ಮೊಳಿಗ ಮಾಡುತ್ತಿರುವಾಗ್ಗೆ.... {{gap}}ಯಿತ್ತ ಕುದುರೆಡವು ಪಟ್ಟಣದೊಳಗೆ ಯಿದ್ದಂಥ ಥಳಗೇರಿಯಲ್ಲಿ ಮೋಬಯ್ಯನ ಸರೀರಕ್ಕೆ ಸಂಬಂಧಿಸಿದಂತೆ ನಾನಾ ರೀತಿವಳಗೆ ಯಿದ್ಯಮಾನಗಳು ಜರುಗಾಡುತ್ತಿದ್ದವು. ವಂದು ಹಸ್ತಕ್ಕಂಟಿಕೊಂಡಿರೋ ಬೊಟ್ಟುಗಳು ಯಾವ ರೀತಿ ಸರಿಸಮಾನವಾಗಿರುವುದಿಲ್ಲವೋ ಹಂಗೆ ಜನರ ನಂಬಿಕೆಯೂ ಯಿಯಿಧ ತೆರನಾಗಿದ್ದಿತು. ಯಲ್ಲಡಗಿ ಕೊಂಡಿರಬೌದು ತಾಯಿ? ಯಾವ ರೀತಿಯಿರಬೌದು ತಾಯಿ? ಯಿದ್ದ ಪಕ್ಷದಲ್ಲಿ ಆಕೆ ವಂದಾದರೂ ಪವಾಡ ತೋರಬೌದಿತ್ತಲ್ಲ.. ಮದಾದರೂ ಮಯ್ಕೆ ಪ್ರಕಟಮಾಡಬೌದಿತ್ತಲ್ಲ ಯಂದು ಆ ಸರೀರವನ್ನು ತಿಬ್ಬಳಿಸಿ ನೋಡುತಾ ನೋಡುತಾ ಹೊದರೊಳಗೆಂಥಾದ್ದು ಯಿದ್ದಂಗಿಲ್ಲ ಎಂದು ನಿರಾಶರಾಗಿ ಹೋಗುತಿದ್ದವರ ಮಂದಿ? ಯಿರಬೌದು ಅಥವಾ ಯಿಲ್ಲದೆಯಿರಬೌದು ತಮಗ್ಯಾಕಿದರ ವುಸಾಬರಿ ಯಂದು ದೂರ ಜರುಗುತ್ತಿದ್ದವರೆಷ್ಟೋ ಮಂದಿ? ಅರೀದ ಮಳ್ಳನಂಗಿದ್ದ ಮೋಬಯ್ಯ ಆರಂಭ ಮಾಡಿರೋ ಆಟ ಯಿದು ಯಂದು ನಗು ನಗಾಡುತ ಹೋಗುತ್ತಿದ್ದವರೆಷ್ಟೋ ಮಂದಿ? ಮೋಬಯ್ಯನ ಸರೀರದೊಳಗೆ ಮೋಬಯ್ಯ ನಷ್ಟಗೊಂಡಿದ್ದಾನ.. ಯೀತನ ಸರೀರವು ಅನೇಕ ಅಲವುಕಿಕ ಲಕ್ಷಣಗಳನ್ನು ಪ್ರಕಟಮಾಡುತ್ತಿರುವುದು. ಸಾಂಬವಿಯು ತನ ಸರೀರದೊಳಗಿನ ಯಿನ್ಯಾಸವನ್ನು ತಾನು ಪರಿಚಯ ಮಾಡಿಕೊಳ್ಳೋದರಲ್ಲಿ ಮಗ್ನಳಾಗಿದ್ದಿರಬೌದು. ಸರೀರದ ಪಂಚೇಂದ್ರಿಯಗಳೊಂದಿಗೆ ತಾಲೀಮು ನಡೆಸುತ್ತಿರಬೌದು, ಸರೀರದ ಚುಕ್ಕಾಣಿ ತಾನು ಹಿಡಿಯಲಕ ರನ್ವಂತ ಕಾಲ ಹಿಡೀತದ.. ಆಟದೊಳಗ ತಮ್ಮ ಸಮಸ್ತ ಆಸ್ತಿಕ ಭಾವವನ್ನು ಧಾರೆಯೆರೆಯಬೇಕೆಂದು ಹಪಹಪಿಸುತ್ತಿದ್ದವರೆಷ್ಟೋ ಮಂದಿ? oಾವ ಬಾವನ ಕ ಸಲ್ಲದಿದ್ದ ಅನೇಕ ಮಂದಿ ಮಾತಾಡಿಸಿಕೊಂಡುಹೋಗುತಲಿದ್ದ. ಬರಲಕಂದರ ನಮ್ಮನೆ ಯಿಲ್ಲೇನವ್ವಾ ಯಂದೆನಲುತ್ತಿದ್ದ, ಯಿರಲಕಂದರ ನಮ್ಮನೆ ಯಿರಲಿಲ್ಲೇನವಾ ಯಂದನಲುತ್ತಿದ್ದ.... ಗಂಡ ವುಂಡು ಬಿಟ್ಟೆಲೆ ತಾನು, ಗಂಡ ನಮಲಗೆದುಗುಳಿರೋ ತೊಂಬದುಂಡೆ ತಾನು, ಕರೆದಲ್ಲೆಲ್ಲ ಬರಲಕಾಗಲೀ, ಯಿರಲಕಾಗಲೀ, ಯೋಗ್ಯಳಲ್ಲ ಕನರಪ್ಪಾ.. ಲೋಕಯೇನೆಂದು ಕೊಂಡೀತು ಕನರವ್ಯಾ. ಯಿದ್ದರೆ ತಾನು ತನ್ನ ಗಂಡನ ವುಸುರಳತೆ ದೂರದಲ್ಲಿರುತೀನಿ.. ಸತ್ತರೆ ತಾನು ತನ ಗಂಡನ ಕಣ್ಣಳತೆ ದೂರದಲ್ಲಿ ಸಾಯತೀನಿ.. ತನಗೆ ಮುತ್ತಯ್ದೆ ಸಾವು ಯವತ್ತಲ್ಲ<noinclude><references/></noinclude> nw90ej13l083z918evagrezgkqjcgb2 320171 320168 2026-05-15T15:10:38Z Shreesha Sharma 7840 /* Validated */ 320171 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=೩೮|right=ಅರಮನೆ}} ಜೊನ್ನಗಿರಿಯೊಳಗ ರಾಜ ಪರಿವಾರದ ನಾನಾ ನಮೂನಿಯ ಮೊಳಿಗ ಮಾಡುತ್ತಿರುವಾಗ್ಗೆ.... {{gap}}ಯಿತ್ತ ಕುದುರೆಡವು ಪಟ್ಟಣದೊಳಗೆ ಯಿದ್ದಂಥ ಥಳಗೇರಿಯಲ್ಲಿ ಮೋಬಯ್ಯನ ಸರೀರಕ್ಕೆ ಸಂಬಂಧಿಸಿದಂತೆ ನಾನಾ ರೀತಿವಳಗೆ ಯಿದ್ಯಮಾನಗಳು ಜರುಗಾಡುತ್ತಿದ್ದವು. ವಂದು ಹಸ್ತಕ್ಕಂಟಿಕೊಂಡಿರೋ ಬೊಟ್ಟುಗಳು ಯಾವ ರೀತಿ ಸರಿಸಮಾನವಾಗಿರುವುದಿಲ್ಲವೋ ಹಂಗೆ ಜನರ ನಂಬಿಕೆಯೂ ಯಿಯಿಧ ತೆರನಾಗಿದ್ದಿತು. ಯಲ್ಲಡಗಿ ಕೊಂಡಿರಬೌದು ತಾಯಿ? ಯಾವ ರೀತಿಯಿರಬೌದು ತಾಯಿ? ಯಿದ್ದ ಪಕ್ಷದಲ್ಲಿ ಆಕೆ ವಂದಾದರೂ ಪವಾಡ ತೋರಬೌದಿತ್ತಲ್ಲ.. ಮದಾದರೂ ಮಯ್ಕೆ ಪ್ರಕಟಮಾಡಬೌದಿತ್ತಲ್ಲ ಯಂದು ಆ ಸರೀರವನ್ನು ತಿಬ್ಬಳಿಸಿ ನೋಡುತಾ ನೋಡುತಾ ಹೊದರೊಳಗೆಂಥಾದ್ದು ಯಿದ್ದಂಗಿಲ್ಲ ಎಂದು ನಿರಾಶರಾಗಿ ಹೋಗುತಿದ್ದವರ ಮಂದಿ? ಯಿರಬೌದು ಅಥವಾ ಯಿಲ್ಲದೆಯಿರಬೌದು ತಮಗ್ಯಾಕಿದರ ವುಸಾಬರಿ ಯಂದು ದೂರ ಜರುಗುತ್ತಿದ್ದವರೆಷ್ಟೋ ಮಂದಿ? ಅರೀದ ಮಳ್ಳನಂಗಿದ್ದ ಮೋಬಯ್ಯ ಆರಂಭ ಮಾಡಿರೋ ಆಟ ಯಿದು ಯಂದು ನಗು ನಗಾಡುತ ಹೋಗುತ್ತಿದ್ದವರೆಷ್ಟೋ ಮಂದಿ? ಮೋಬಯ್ಯನ ಸರೀರದೊಳಗೆ ಮೋಬಯ್ಯ ನಷ್ಟಗೊಂಡಿದ್ದಾನ.. ಯೀತನ ಸರೀರವು ಅನೇಕ ಅಲವುಕಿಕ ಲಕ್ಷಣಗಳನ್ನು ಪ್ರಕಟಮಾಡುತ್ತಿರುವುದು. ಸಾಂಬವಿಯು ತನ ಸರೀರದೊಳಗಿನ ಯಿನ್ಯಾಸವನ್ನು ತಾನು ಪರಿಚಯ ಮಾಡಿಕೊಳ್ಳೋದರಲ್ಲಿ ಮಗ್ನಳಾಗಿದ್ದಿರಬೌದು. ಸರೀರದ ಪಂಚೇಂದ್ರಿಯಗಳೊಂದಿಗೆ ತಾಲೀಮು ನಡೆಸುತ್ತಿರಬೌದು, ಸರೀರದ ಚುಕ್ಕಾಣಿ ತಾನು ಹಿಡಿಯಲಕ ರನ್ವಂತ ಕಾಲ ಹಿಡೀತದ.. ಆಟದೊಳಗ ತಮ್ಮ ಸಮಸ್ತ ಆಸ್ತಿಕ ಭಾವವನ್ನು ಧಾರೆಯೆರೆಯಬೇಕೆಂದು ಹಪಹಪಿಸುತ್ತಿದ್ದವರೆಷ್ಟೋ ಮಂದಿ? oಾವ ಬಾವನ ಕ ಸಲ್ಲದಿದ್ದ ಅನೇಕ ಮಂದಿ ಮಾತಾಡಿಸಿಕೊಂಡುಹೋಗುತಲಿದ್ದ. ಬರಲಕಂದರ ನಮ್ಮನೆ ಯಿಲ್ಲೇನವ್ವಾ ಯಂದೆನಲುತ್ತಿದ್ದ, ಯಿರಲಕಂದರ ನಮ್ಮನೆ ಯಿರಲಿಲ್ಲೇನವಾ ಯಂದನಲುತ್ತಿದ್ದ.... {{gap}}ಗಂಡ ವುಂಡು ಬಿಟ್ಟೆಲೆ ತಾನು, ಗಂಡ ನಮಲಗೆದುಗುಳಿರೋ ತೊಂಬದುಂಡೆ ತಾನು, ಕರೆದಲ್ಲೆಲ್ಲ ಬರಲಕಾಗಲೀ, ಯಿರಲಕಾಗಲೀ, ಯೋಗ್ಯಳಲ್ಲ ಕನರಪ್ಪಾ.. ಲೋಕಯೇನೆಂದು ಕೊಂಡೀತು ಕನರವ್ಯಾ. ಯಿದ್ದರೆ ತಾನು ತನ್ನ ಗಂಡನ ವುಸುರಳತೆ ದೂರದಲ್ಲಿರುತೀನಿ.. ಸತ್ತರೆ ತಾನು ತನ ಗಂಡನ ಕಣ್ಣಳತೆ ದೂರದಲ್ಲಿ ಸಾಯತೀನಿ.. ತನಗೆ ಮುತ್ತಯ್ದೆ ಸಾವು ಯವತ್ತಲ್ಲ<noinclude><references/></noinclude> mu85uy8b8z50md0equc9pxlvcyz8yka ಪುಟ:ಅರಮನೆ.pdf/೭೦ 104 77155 320169 169864 2026-05-15T15:07:04Z Shreelatha.Halemane 7642 /* Proofread */ 320169 proofread-page text/x-wiki <noinclude><pagequality level="3" user="Shreelatha.Halemane" /></noinclude> {{rh|center=|left=ಅರಮನೆ|right=೩೯}} ನಾಳೆ ಬರದೆ ಯಿರಾಕಿಲ್ಲ.. ಯಂದನಕಂತ.. ಯೇನುಂಬುತೀಯವ್ವಾ.. ಟ್ಯೂನು ಕುಡಿದು ಬದುಕುತೀಯವ್ವಾ. ಯಂದು ಕೇಳಿದ್ದಕ್ಕೆ ಸಟಕ್ಕಂತ, ಹಂಗಾರ ಬೀಗ ಸದ್ಯಕ್ಕೆ ನೀನು ಯಲ್ಲಿ ವಸ್ತಿಯಿರುತೀ ತಾಯಿ ಯಂದು ಮಂದಿ ಅಂದುದಕ ವುತ್ತರವಾಗಿ ಆ ಪರಮ ಸಾದ್ವಿ ಪಡುವಲಕ ನೋಡಲಲ್ಲಿ.... {{gap}}ಅಲ್ಲೇ ಅಂದರೆ ಅಲ್ಲೇ, ವುಂಡು ಬಾಯಿ ಮುಕ್ಕಳಿಸಿ ವುಗುಳಿದರೆ ನೀರುಯಷ್ಟು ದೂರ ಹೋತದೋ ಅಷ್ಟು ದೂರದಲ್ಲಿ ನಲಮುಗುಲಿಗೇಕಾಗಿ, ಯಡ ಬಲಕಿದ್ದ ಹಿಂದಲಕ ಮುಂದಲಕಿದ್ದ ಬಯಲನ್ನು ತನ್ನ ತೆಕ್ಕೆಗೆ ತಕ್ಕೊಂಡು, ನೂರಾರು ಧರುವ ಛತ್ರಗಳಂತಿದ್ದ ತನ್ನ ನೂರಾರು ರೆಂಬೆ ಕೊಂಬೆಗಳಲ್ಲಿ ಹತ್ತಾರು ಯಿಧದ ಪಕ್ಷಿಗಳು ತಮ್ಮ ತಮ್ಮ ಸಮುಸಾರ ಸಮೇತ ನೆಲಹಲಕ ಅನುವು ಮಾಡಿಕೊಟ್ಟಿದ್ದಂಥ.. ಯಳೆಕಂದಮ್ಮ ಬಿಡುವ ವುಸುರಿಗೆ ತಲೆದೂಗುತಲಿದ್ದ.. ಸದಾ ಹಸಿರು ಮುಕ್ಕಳಿಸುತಲಿದ್ದ ಅಗಾಧ ಗಾತುರದ ಬೇಯಿನ ಮರವು ಗೋಚರ ಮಾಡಿತು. ತಾನೀ ತೂರಿಗೆ ಕಾಲಿಟ್ಟ ಗಳಿಗೇಲಿ ಮುಂದ ದಣಿವವರಿಗೆ ನೆಳ್ಳು ನೀಡಲಂತ, ತೂಕಡಿಸೋರು ವಂಚಾವತ್ತು ಮಲಕ್ಕಂಡು ನಿದ್ದೆ ಮಾಡಲಂತ, ಪಚ್ಚಿಗಳು ಅದರ ತುಂಬೆಲ್ಲ ನೆಲಸಲಂತಲ್ಲವಾ ತಾನು ತನ್ನ ತವರೂರಿನಿಂದ ತಂದಿದ್ದ ಸಸಿಯನ್ನಲ್ಲಿ ನೆಟ್ಟಿದ್ದು. ದಿನಾಲು ವಂದೊಂದು ಕೊಡ ನೀರೆರೆಯುತ್ತಿದ್ದುದು, ಅದೆಲ್ಲ ಯದ ಮಟ ಬೆಳೆಯೋವರೆಗೆ, ಆ ಮ್ಯಾಲ ತಾನು ತನ್ನ ಗಂಡ, ಬಾಳೇವು, ಬದುಕಿನ ದ್ಯಾಸದಲ್ಲಿ ಅದರ ಯೇಕರಿಕೆ ದೇಕರಿಕೇನ ತಾನು ನೋಡಿಕೊಂಡುದ್ದುಂಟಾ? {{gap}}ಯೇಟೆತ್ತರ ಬೆಳೆದಂತ್ತಲ್ಲಾ ತನ್ನ ತವರೂರಿನ ಕುಡಿ.. ಮಾತ್ರುವಾತ್ಸಲ್ಯದಿಂದ ಅದನ್ನು ಕಣ್ಣ ಹೆಡಿಗೇಲಿ ತುಂಬಿಕೊಂಡಳು. “ನಾನಿದ್ದೀನಿ ಕನವ್ವಾ” ಯಂದದು ಮಯ್ಯ ತೊನೆದು ಕರದಂಗಾತು.. ಬಟ್ಟೆ ಬರೆ ಗಂಟು ಕಟ್ಟಿಕೊಂಡು ಅದರ ಸನೀಕ ಹೋದಳು. ಅದರ ನೆಳಲ್ಲಿ ನಿಂತು ಕುಂತು ದಣುವಾರಿಸಿಕೊಂಡಳು. ಯಷ್ಟೋ ನೆಮ್ಮದಿ ಅನ್ನುಸುತು ಜೀವಕ್ಕೆ.. {{gap}}ಬುಡತಂಕ ಬಂದಿದ್ದ ಆಕೆ ದೊಡ್ಡ ಮುಟ್ಟಿ ಸಣುಮಾಡಿ “ಯವ್ವಾ. ಮರದವ್ವಾ, ಚೋಟುದ್ದ ಯಿದ್ದಾಕಿ ತಲೆದೂಗೋ ಹಂಗ ಬೆಳಕಂಡಿರುವಿ... ೦ಟಿದ್ದರೂ ನೀನು ಮಿಚೇರಿ ಮಡ್ಕೊಳಗ ಮೊಳತಾಕಿ.. ಕಣ್ಣು ಕಿಸರಾಗಂಗದೀ.. ಸಾವುರಾರು ಪಚ್ಚಿಗಳು ವಾಸ ಮಾಡಲಕ ಅನುವು ಮಾಡಿಕೊಟ್ಟಿದ್ದೀ.. ದಣಕೊಂಡು ಬಂದೋರಿಗೆ ನೆಳ್ಳೆಂಬುವ ತಣ್ಣೀರು ಕೊಟ್ಟು ಆಯಾಸಾನ ಪತ್ಕಾರ ಮಾಡ್ತಿದ್ದೀ... ನಿನ್ನ ತಂದಿಲ್ಲಿ ನೆಟ್ಟಿದ್ದಕ್ಕೆ ನನ್ನೊಡಲು<noinclude><references/></noinclude> kvug35ro93aegk1bjekp2zk9ivqfixz 320170 320169 2026-05-15T15:10:21Z Shreesha Sharma 7840 /* Validated */ 320170 proofread-page text/x-wiki <noinclude><pagequality level="4" user="Shreesha Sharma" /></noinclude> {{rh|center=|left=ಅರಮನೆ|right=೩೯}} ನಾಳೆ ಬರದೆ ಯಿರಾಕಿಲ್ಲ.. ಯಂದನಕಂತ.. ಯೇನುಂಬುತೀಯವ್ವಾ.. ಟ್ಯೂನು ಕುಡಿದು ಬದುಕುತೀಯವ್ವಾ. ಯಂದು ಕೇಳಿದ್ದಕ್ಕೆ ಸಟಕ್ಕಂತ, ಹಂಗಾರ ಬೀಗ ಸದ್ಯಕ್ಕೆ ನೀನು ಯಲ್ಲಿ ವಸ್ತಿಯಿರುತೀ ತಾಯಿ ಯಂದು ಮಂದಿ ಅಂದುದಕ ವುತ್ತರವಾಗಿ ಆ ಪರಮ ಸಾದ್ವಿ ಪಡುವಲಕ ನೋಡಲಲ್ಲಿ.... {{gap}}ಅಲ್ಲೇ ಅಂದರೆ ಅಲ್ಲೇ, ವುಂಡು ಬಾಯಿ ಮುಕ್ಕಳಿಸಿ ವುಗುಳಿದರೆ ನೀರುಯಷ್ಟು ದೂರ ಹೋತದೋ ಅಷ್ಟು ದೂರದಲ್ಲಿ ನಲಮುಗುಲಿಗೇಕಾಗಿ, ಯಡ ಬಲಕಿದ್ದ ಹಿಂದಲಕ ಮುಂದಲಕಿದ್ದ ಬಯಲನ್ನು ತನ್ನ ತೆಕ್ಕೆಗೆ ತಕ್ಕೊಂಡು, ನೂರಾರು ಧರುವ ಛತ್ರಗಳಂತಿದ್ದ ತನ್ನ ನೂರಾರು ರೆಂಬೆ ಕೊಂಬೆಗಳಲ್ಲಿ ಹತ್ತಾರು ಯಿಧದ ಪಕ್ಷಿಗಳು ತಮ್ಮ ತಮ್ಮ ಸಮುಸಾರ ಸಮೇತ ನೆಲಹಲಕ ಅನುವು ಮಾಡಿಕೊಟ್ಟಿದ್ದಂಥ.. ಯಳೆಕಂದಮ್ಮ ಬಿಡುವ ವುಸುರಿಗೆ ತಲೆದೂಗುತಲಿದ್ದ.. ಸದಾ ಹಸಿರು ಮುಕ್ಕಳಿಸುತಲಿದ್ದ ಅಗಾಧ ಗಾತುರದ ಬೇಯಿನ ಮರವು ಗೋಚರ ಮಾಡಿತು. ತಾನೀ ತೂರಿಗೆ ಕಾಲಿಟ್ಟ ಗಳಿಗೇಲಿ ಮುಂದ ದಣಿವವರಿಗೆ ನೆಳ್ಳು ನೀಡಲಂತ, ತೂಕಡಿಸೋರು ವಂಚಾವತ್ತು ಮಲಕ್ಕಂಡು ನಿದ್ದೆ ಮಾಡಲಂತ, ಪಚ್ಚಿಗಳು ಅದರ ತುಂಬೆಲ್ಲ ನೆಲಸಲಂತಲ್ಲವಾ ತಾನು ತನ್ನ ತವರೂರಿನಿಂದ ತಂದಿದ್ದ ಸಸಿಯನ್ನಲ್ಲಿ ನೆಟ್ಟಿದ್ದು. ದಿನಾಲು ವಂದೊಂದು ಕೊಡ ನೀರೆರೆಯುತ್ತಿದ್ದುದು, ಅದೆಲ್ಲ ಯದ ಮಟ ಬೆಳೆಯೋವರೆಗೆ, ಆ ಮ್ಯಾಲ ತಾನು ತನ್ನ ಗಂಡ, ಬಾಳೇವು, ಬದುಕಿನ ದ್ಯಾಸದಲ್ಲಿ ಅದರ ಯೇಕರಿಕೆ ದೇಕರಿಕೇನ ತಾನು ನೋಡಿಕೊಂಡುದ್ದುಂಟಾ? {{gap}}ಯೇಟೆತ್ತರ ಬೆಳೆದಂತ್ತಲ್ಲಾ ತನ್ನ ತವರೂರಿನ ಕುಡಿ.. ಮಾತ್ರುವಾತ್ಸಲ್ಯದಿಂದ ಅದನ್ನು ಕಣ್ಣ ಹೆಡಿಗೇಲಿ ತುಂಬಿಕೊಂಡಳು. “ನಾನಿದ್ದೀನಿ ಕನವ್ವಾ” ಯಂದದು ಮಯ್ಯ ತೊನೆದು ಕರದಂಗಾತು.. ಬಟ್ಟೆ ಬರೆ ಗಂಟು ಕಟ್ಟಿಕೊಂಡು ಅದರ ಸನೀಕ ಹೋದಳು. ಅದರ ನೆಳಲ್ಲಿ ನಿಂತು ಕುಂತು ದಣುವಾರಿಸಿಕೊಂಡಳು. ಯಷ್ಟೋ ನೆಮ್ಮದಿ ಅನ್ನುಸುತು ಜೀವಕ್ಕೆ.. {{gap}}ಬುಡತಂಕ ಬಂದಿದ್ದ ಆಕೆ ದೊಡ್ಡ ಮುಟ್ಟಿ ಸಣುಮಾಡಿ “ಯವ್ವಾ. ಮರದವ್ವಾ, ಚೋಟುದ್ದ ಯಿದ್ದಾಕಿ ತಲೆದೂಗೋ ಹಂಗ ಬೆಳಕಂಡಿರುವಿ... ೦ಟಿದ್ದರೂ ನೀನು ಮಿಚೇರಿ ಮಡ್ಕೊಳಗ ಮೊಳತಾಕಿ.. ಕಣ್ಣು ಕಿಸರಾಗಂಗದೀ.. ಸಾವುರಾರು ಪಚ್ಚಿಗಳು ವಾಸ ಮಾಡಲಕ ಅನುವು ಮಾಡಿಕೊಟ್ಟಿದ್ದೀ.. ದಣಕೊಂಡು ಬಂದೋರಿಗೆ ನೆಳ್ಳೆಂಬುವ ತಣ್ಣೀರು ಕೊಟ್ಟು ಆಯಾಸಾನ ಪತ್ಕಾರ ಮಾಡ್ತಿದ್ದೀ... ನಿನ್ನ ತಂದಿಲ್ಲಿ ನೆಟ್ಟಿದ್ದಕ್ಕೆ ನನ್ನೊಡಲು<noinclude><references/></noinclude> i1fodxhax7ekokviecl5dbg7pluoq10 ಪುಟ:ಅರಮನೆ.pdf/೨೦೬ 104 77296 320165 170089 2026-05-15T15:02:13Z Shreelatha.Halemane 7642 /* Proofread */ 320165 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|center=|left=ಅರಮನೆ|right=೭೫}} ತರುತ್ತಿರುವರು? ಅವನನ್ನು ಜೀವ ಸಹಿತ ಹಿಡಿದು ಕೊಟ್ಟವರಿಗೆ ಯರಡು ಸಾವಿರ ರೂಪಾಯಿ, ಕೊಂದವರಿಗೆ ಸಾವುರದಯೂರು ರೂಪಾಯಿ, ಸುಳುವು ನೀಡಿದವರಿಗೆ ಸಾವುರ ರೂಪಾಯಿ ಯಿನಾಮು ನೀಡುವುದಾಗಿ ಪ್ರಚಾರ ಮಾಡುತ್ತಿರುವರು. ಮಾಡೋ ಕೆಲಸ ಬದುಕು ಮಸ್ತು ಯಿದ್ದರೂ ಸಿಪಾಯಿಗಳು ಕೋವಿ ಹಿಡಕೊಂಡು ಕಾಡುಮೇಡುಗಳಲ್ಲಿ ಯಾಕ ಅಂಡಲೆಯುತಲಿರುವರು. ಯೇಸಗೀಸ ಹಾಕಿಕೊಂಡ್ಯಾಕ ನಿಗಾಯಿರಿಸಿರುವರು. ಯಿದು ನ್ಯಾಯವಾ ಯಂದು ಕಲೆಟ್ಟರಾದ ತಾನು ನಮ್ಮೆ ಕೇಳಿದ್ದಕ್ಕೆ ಮಾರೋನು ಎಂದು ಪತ್ರವನ್ನು ತನ್ನ ಮುಂದೆ ಹಿಡಿದನು. ಅದರಲ್ಲಿ ತನ್ನನ್ನು ನಾಯಿಯಂದು ಕರೆದಿರುವುದಾಗಿ, ಕುಂಪಣಿ ಸರಕಾರವನ್ನು ಹೀನಾಯವಾಗಿ ಜರೆದಿರುವುದಾಗಿ ಅನುವಾದ ಮಾಡಿದನು. ಕಾನೂನು ಕಟ್ಟಳೆಗಳನ್ನು ತನ್ನ ಕಾಲಕಸ ಮಾಡಿಕೊಂಡಿರುವ ರೆಡ್ಡಿಯು ಮುಂದೊಂದಿವಸ ತಮ್ಮ ಸರಕಾರದ ಯಿರುದ್ಧ ದಂಗೆ ರಬ್ಬಿಸಬಹುದೆಂದೂ ಹೇಳಿದನು. ಅದಕ್ಕಾಗ ಮನೋಗೆ ಜವಾಬು ಕೊಡಲಾಗಿರಲಿಲ್ಲ. ಅದೆಲ್ಲವನ್ನು, ಯಿದೆಲ್ಲವನ್ನು ಯೋಚನೆ ಮಾಡೀ ಮಾಡೀ ಆತನು ಹನ್ನೊಂದನೆ ಸಲಕ್ಕೆ ನಿಟ್ಟುಸಿರು ಬಿಡುತ್ತಿರುವಾಗ್ಗೆ, ಆತನು ಬಿಟ್ಟ ನಿಟ್ಟುಸಿರುಗಳು ವಂದಕ್ಕೊಂದು ತಳಕು ಹಾಕಿಕೊಂಡು ಸುಂಟುರು ಗಾಳಿಯೋಪಾದಿಯಲ್ಲಿ ಸಂಚರಿಸುತ.. ಸಂಚರಿಸುತss ಅಲ್ಲಿಗೆ ಹರದಾರಿ ದೂರದ ಗುಬ್ಬಿಗುಡ್ಡದ ರಣಗವಿಯೊಳಗೆ ತನ್ನ ಸಹಚರರೊಂದಿಗೆ ತನ ಬರನದಲ್ಲಿ ತೊಡಗಿದ್ದ ಬೊಬ್ಬಿಲಿ ನಾಗಿರೆಡ್ಡಿಯದುರು ಪ್ರತ್ಯಕ್ಷವಾದಾಗ್ಗೆ.. {{gap}}ಯಿತ್ತ ಹರಪನಹಳ್ಳಿ ಪ್ರಾಂತದ ಅರಸೀಕೆರೆಗೆ ಕಳ್ಳ ಅರಸೀಕೆರೆ ಯಂಬ, ಸುಳುವಾಯಿಗೆ ಸುಳ್ಳು ಸುಳುವಾಯಿ ಯಂಬ, ತಡಬಗೆರೆಗೆ ತಾರಾತಿಗಡಿಯೋರ ತಡಬಗರೆ ಯಂಬ ಬಿರುದುಗಳು ಯಾದ್ರುಚ್ಛಿಕವಾಗಿ ಪ್ರಾಪ್ತಗೊಂಡಿದ್ದವು. ಅಲ್ಲೆಲ್ಲಾ ಸುಳ್ಳುತನ, ಕಳ್ಳತನ, ತಾರಾತಿಗಡಿತನ, ದಗಲುಬಾಜಿತನಗಳೆಲ್ಲ ಸಾಮಾಜಿಕ ಮವುಲ್ಯಗಳಾಗಿಬಿಟ್ಟಿದ್ದವು. ಮೋಸದ ಯಿಯಿದ ಆಯಾಮಗಳ ಕುರಿತ ವಬ್ಬೊಬ್ಬರು ವಂದೊಂದು ದವಾಗಿ ಚತ್ಸೆ ಮಾಡುತಲಿದ್ದರು. ಗಂಡನಾದವ ಹೆಂಡತಿಗೆ, ಹೆಂಡತಿಯಾದವಳು ಗಂಡಂಗೆ, ಮಕ್ಕಳಾದೊವು ತಮ್ಮ ತಂದೆ ತಾಯಿಗಳಿಗೆ, ತಂದೆ ತಾಯಿಗಳಾಗಿದ್ದವರು ತಮ್ಮ ಮಕ್ಕಳಿಗೆ, ಶಿಷ್ಯರಾದವರು ಗುರುಗಳಿಗೆ, ಗುರುಗಳಾಗಿದ್ದವರು ತಮ್ಮ ಶಿಷ್ಯರುಗಳಿಗೆ ಮೋಸ ಮಾಡಲಾರಂಭಿಸಿದ್ದರು. ಸುಳ್ಳಿನ ಸೂನ್ಯ ಸಿಮ್ಮಾಸನದ ಮ್ಯಾಲ ಹರಿಶ್ಚಂದ್ರನನ್ನೂ,<noinclude><references/></noinclude> bqxkr6qmadbe6aigvepg3kd6ml9iz99 320174 320165 2026-05-15T15:11:32Z Shreesha Sharma 7840 /* Validated */ 320174 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=ಅರಮನೆ|right=೭೫}} ತರುತ್ತಿರುವರು? ಅವನನ್ನು ಜೀವ ಸಹಿತ ಹಿಡಿದು ಕೊಟ್ಟವರಿಗೆ ಯರಡು ಸಾವಿರ ರೂಪಾಯಿ, ಕೊಂದವರಿಗೆ ಸಾವುರದಯೂರು ರೂಪಾಯಿ, ಸುಳುವು ನೀಡಿದವರಿಗೆ ಸಾವುರ ರೂಪಾಯಿ ಯಿನಾಮು ನೀಡುವುದಾಗಿ ಪ್ರಚಾರ ಮಾಡುತ್ತಿರುವರು. ಮಾಡೋ ಕೆಲಸ ಬದುಕು ಮಸ್ತು ಯಿದ್ದರೂ ಸಿಪಾಯಿಗಳು ಕೋವಿ ಹಿಡಕೊಂಡು ಕಾಡುಮೇಡುಗಳಲ್ಲಿ ಯಾಕ ಅಂಡಲೆಯುತಲಿರುವರು. ಯೇಸಗೀಸ ಹಾಕಿಕೊಂಡ್ಯಾಕ ನಿಗಾಯಿರಿಸಿರುವರು. ಯಿದು ನ್ಯಾಯವಾ ಯಂದು ಕಲೆಟ್ಟರಾದ ತಾನು ನಮ್ಮೆ ಕೇಳಿದ್ದಕ್ಕೆ ಮಾರೋನು ಎಂದು ಪತ್ರವನ್ನು ತನ್ನ ಮುಂದೆ ಹಿಡಿದನು. ಅದರಲ್ಲಿ ತನ್ನನ್ನು ನಾಯಿಯಂದು ಕರೆದಿರುವುದಾಗಿ, ಕುಂಪಣಿ ಸರಕಾರವನ್ನು ಹೀನಾಯವಾಗಿ ಜರೆದಿರುವುದಾಗಿ ಅನುವಾದ ಮಾಡಿದನು. ಕಾನೂನು ಕಟ್ಟಳೆಗಳನ್ನು ತನ್ನ ಕಾಲಕಸ ಮಾಡಿಕೊಂಡಿರುವ ರೆಡ್ಡಿಯು ಮುಂದೊಂದಿವಸ ತಮ್ಮ ಸರಕಾರದ ಯಿರುದ್ಧ ದಂಗೆ ರಬ್ಬಿಸಬಹುದೆಂದೂ ಹೇಳಿದನು. ಅದಕ್ಕಾಗ ಮನೋಗೆ ಜವಾಬು ಕೊಡಲಾಗಿರಲಿಲ್ಲ. ಅದೆಲ್ಲವನ್ನು, ಯಿದೆಲ್ಲವನ್ನು ಯೋಚನೆ ಮಾಡೀ ಮಾಡೀ ಆತನು ಹನ್ನೊಂದನೆ ಸಲಕ್ಕೆ ನಿಟ್ಟುಸಿರು ಬಿಡುತ್ತಿರುವಾಗ್ಗೆ, ಆತನು ಬಿಟ್ಟ ನಿಟ್ಟುಸಿರುಗಳು ವಂದಕ್ಕೊಂದು ತಳಕು ಹಾಕಿಕೊಂಡು ಸುಂಟುರು ಗಾಳಿಯೋಪಾದಿಯಲ್ಲಿ ಸಂಚರಿಸುತ.. ಸಂಚರಿಸುತss ಅಲ್ಲಿಗೆ ಹರದಾರಿ ದೂರದ ಗುಬ್ಬಿಗುಡ್ಡದ ರಣಗವಿಯೊಳಗೆ ತನ್ನ ಸಹಚರರೊಂದಿಗೆ ತನ ಬರನದಲ್ಲಿ ತೊಡಗಿದ್ದ ಬೊಬ್ಬಿಲಿ ನಾಗಿರೆಡ್ಡಿಯದುರು ಪ್ರತ್ಯಕ್ಷವಾದಾಗ್ಗೆ.. {{gap}}ಯಿತ್ತ ಹರಪನಹಳ್ಳಿ ಪ್ರಾಂತದ ಅರಸೀಕೆರೆಗೆ ಕಳ್ಳ ಅರಸೀಕೆರೆ ಯಂಬ, ಸುಳುವಾಯಿಗೆ ಸುಳ್ಳು ಸುಳುವಾಯಿ ಯಂಬ, ತಡಬಗೆರೆಗೆ ತಾರಾತಿಗಡಿಯೋರ ತಡಬಗರೆ ಯಂಬ ಬಿರುದುಗಳು ಯಾದ್ರುಚ್ಛಿಕವಾಗಿ ಪ್ರಾಪ್ತಗೊಂಡಿದ್ದವು. ಅಲ್ಲೆಲ್ಲಾ ಸುಳ್ಳುತನ, ಕಳ್ಳತನ, ತಾರಾತಿಗಡಿತನ, ದಗಲುಬಾಜಿತನಗಳೆಲ್ಲ ಸಾಮಾಜಿಕ ಮವುಲ್ಯಗಳಾಗಿಬಿಟ್ಟಿದ್ದವು. ಮೋಸದ ಯಿಯಿದ ಆಯಾಮಗಳ ಕುರಿತ ವಬ್ಬೊಬ್ಬರು ವಂದೊಂದು ದವಾಗಿ ಚತ್ಸೆ ಮಾಡುತಲಿದ್ದರು. ಗಂಡನಾದವ ಹೆಂಡತಿಗೆ, ಹೆಂಡತಿಯಾದವಳು ಗಂಡಂಗೆ, ಮಕ್ಕಳಾದೊವು ತಮ್ಮ ತಂದೆ ತಾಯಿಗಳಿಗೆ, ತಂದೆ ತಾಯಿಗಳಾಗಿದ್ದವರು ತಮ್ಮ ಮಕ್ಕಳಿಗೆ, ಶಿಷ್ಯರಾದವರು ಗುರುಗಳಿಗೆ, ಗುರುಗಳಾಗಿದ್ದವರು ತಮ್ಮ ಶಿಷ್ಯರುಗಳಿಗೆ ಮೋಸ ಮಾಡಲಾರಂಭಿಸಿದ್ದರು. ಸುಳ್ಳಿನ ಸೂನ್ಯ ಸಿಮ್ಮಾಸನದ ಮ್ಯಾಲ ಹರಿಶ್ಚಂದ್ರನನ್ನೂ,<noinclude><references/></noinclude> 0i8mr5hnpebzjy142sh2e0m3w70v44x ಪುಟ:ಅರಮನೆ.pdf/೩೪೯ 104 86509 320178 275254 2026-05-15T16:12:36Z Shreesha Sharma 7840 320178 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=೩೧೮|right=ಅರಮನೆ}} ಬಲು ವನ್ಯಾಲಕೇರಿರುವುದು.. ಆರುತಲೆ ಬೆಳಕಿನೊಳಗ ಅಂತಾನವಾಗಲಿರುವುದು.. ಅಲ್ಲೊಂದು ಕಾಗೆಂರು ಯಿ೦ಪಾಗಿ ಕೂಗುತಲಿರುವುದು.. ಯಿಲ್ಲೊಂದು ಕೋಗಿಲೆ ಕಲ್ಮಶವಾಗಿ ಅರಚುತಲಿರುವುದು.. ಯಲ್ಲೋ ಎಂದು ನಾಯಿ ಗವ್ವನೆ ಮಾಡುತಲಿರುವುದು, ಅಲ್ಲೆಲ್ಲೋ ಬೆಳಕು ಕೆ೦ಪೆರಡಾಣೆ ಗಾತುರ ದ ವಡಣದ ಗುಡುಲೆಳ ಗಿ೦ದ ಯಿಣುಕುತಲಿರುವುದು..... <br> {{gap}}ಬಾತರೂಮಿಗೆ ಹೋಗಿ ಮನಸೋಯಿಚ್ಚೆ ಸಾಣಾನ ಮಾಡಿಯೇ ಮಾಡಿದ.. ನೀರು ಸಂಕಟಪಡುತ್ತಲೇ ಅವಯ್ಯನ ಸರೀರದ ಮಾಲ ಹತ್ತಿ ಯಿಳಿದು ಹರಿಯಿತು.. ಅದೂ ದಣಿಯಿತು.. ತಾನು ದಣಿದನು.. ದಿರಿಸುಗಳೆದುರು ನಿಂತುಕೊಂಡ ಬೆತ್ತಲೆಯಾಗಿ.. ವಂದಲ್ಲ ಹತ್ತು ಬಗೆಯ ದಿರಿಸುಗಳು.. ಅಂಗಲಾಚುತ್ತಿರುವ ದಿರಿಸುಗಳು... ಮುಟ್ಟಿ ಮಯ್ಲಿಗಿ ಮಾಡಬೇಡ ಯಂದು ದಯನಾಸ ಪಡುತ್ತಿರುವ ದಿರಿಸುಗಳು.. ಅದನ್ನು ತೊಟ್ಟುಕೊಂಡು ಬಿಸಾಡಿದ.. ಯಿದನು ತೊಟ್ಟುಕೊಂಡು ಬಿಸಾಡಿದ. ಮನೆಲ್ಲವನ್ನು ತೊಟ್ಟುಕೊಂಡು ಬಿಸಾಡಿದ.. ನಗ್ನನಾಗಿಯೇ ರೆಡ್ಡಿ ಯದುರು ಕಾಣಿಸಿಕೊಂಡು ಬಿಡಬೇಕೆಂದೆನಿಸಿತು ವಂದು ಛಣ..ಛೇ... ಛೇ.. ಆ ಯಲ್ಲ ದಿರಿಸುಗಳ ನಡುವೆ.. ಹದಿನಾರು ಮೊಳದುದ್ದದ ದೋತರ.. ಬಾದಾಮಿ ಬಣ್ಣದ ನಿಲುವಂಗಿ.. ಆರು ಮೊಳದುದ್ದದ ಪೇಟ ಮೋಡೋಡಿ ಬಂದು ಮೂಡಿತು. ಗೋಚರವಾಯಿತು.. ನಿನ್ನೊಳಗಿನ ಕೇವಲ ಸೈಲಟನ್ನಿಗೆ ನನ್ನನ್ಯಾಕ ತೊಡಿಸಬಾರದೆಂದು ಪೀಡಿಸಲಾರಂಭಿಸಿತು. ಅರೆ! ಯಿದು ರೆಡ್ಡಿಂ ವುಡುಪಾಗಿರುವುದಲ್ಲಾ... ಯಲ್ಲೋ ಯಿದ್ದದ್ದು ಯಿಲ್ಲಿಂಗ ಬಂತು..? ಯಾರು ತಂದಿಟ್ಟರು ಯಿದನಿಲ್ಲಿ? ಮುಟ್ಟಿದರ ತಾನೆಲ್ಲಿ ಸುಟ್ಟುಕರಕಿಟ್ಟು ಹೋಗುವೆನೋ? ಅದಾವ ಸಂಚು ಅಡಗಿರಬವುದು ಯಿದರೊಳಗ..? ತನಗ್ಯಾವ ಪರೀಕ್ಷೆ ಕಾದಿರುವುದೋ..? <br> {{gap}}ಅದರ ಸನೀಕ ಹೋಗುವುದು ದೂರ ಸರಿಯುವುದು ಮಾಡಿದ ಮೂರು ನಾಲಕು ಸಲ.. ಬ್ಯಾಡ ಅಂದರೂ ಅದು ಬಿಡಬೇಕಲ್ಲ! ಸೂಜಿಗಲ್ಲಿನಂತೆ ಸೆಳೆಯಿತು.. ಕುಟಿಲೋಪಾಯದಿಂದ ಹೆಡೆ ಚಾಚಿತು.. ಅದರ ನೊಸಲೊಳಗ ರತುನ ಪ್ರಾಯದ ರಾಜಕಾರಣ ಥಳಥಳ ಹೊಳೆಯಿತು.. ಯೇನೇ ಆಗಲಿ.. ಬಂದದ್ದು ಬರಲಿ.. ಬಹುರೂಪಿ ಕಲೆಯನ್ನು ಕರಗತ ಮಾಡಿಕೊಂಡಿದ್ದ ಆ ಸರವಂಟನು ಮನದೊಳಗ ಯಲ್ಲೋ ಮಸುಕು ಮಸುಕಾಗಿ ಯಿರುವ<noinclude></noinclude> 9o3kt22sdwx7p0zeompc0kyd5rwzz02 320188 320178 2026-05-15T16:21:44Z Shreesha Sharma 7840 /* Proofread */ 320188 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೩೧೮|right=ಅರಮನೆ}} ಬಲು ವನ್ಯಾಲಕೇರಿರುವುದು.. ಆರುತಲೆ ಬೆಳಕಿನೊಳಗ ಅಂತಾನವಾಗಲಿರುವುದು.. ಅಲ್ಲೊಂದು ಕಾಗೆಂರು ಯಿ೦ಪಾಗಿ ಕೂಗುತಲಿರುವುದು.. ಯಿಲ್ಲೊಂದು ಕೋಗಿಲೆ ಕಲ್ಮಶವಾಗಿ ಅರಚುತಲಿರುವುದು.. ಯಲ್ಲೋ ಎಂದು ನಾಯಿ ಗವ್ವನೆ ಮಾಡುತಲಿರುವುದು, ಅಲ್ಲೆಲ್ಲೋ ಬೆಳಕು ಕೆ೦ಪೆರಡಾಣೆ ಗಾತುರ ದ ವಡಣದ ಗುಡುಲೆಳ ಗಿ೦ದ ಯಿಣುಕುತಲಿರುವುದು..... <br> {{gap}}ಬಾತರೂಮಿಗೆ ಹೋಗಿ ಮನಸೋಯಿಚ್ಚೆ ಸಾಣಾನ ಮಾಡಿಯೇ ಮಾಡಿದ.. ನೀರು ಸಂಕಟಪಡುತ್ತಲೇ ಅವಯ್ಯನ ಸರೀರದ ಮಾಲ ಹತ್ತಿ ಯಿಳಿದು ಹರಿಯಿತು.. ಅದೂ ದಣಿಯಿತು.. ತಾನು ದಣಿದನು.. ದಿರಿಸುಗಳೆದುರು ನಿಂತುಕೊಂಡ ಬೆತ್ತಲೆಯಾಗಿ.. ವಂದಲ್ಲ ಹತ್ತು ಬಗೆಯ ದಿರಿಸುಗಳು.. ಅಂಗಲಾಚುತ್ತಿರುವ ದಿರಿಸುಗಳು... ಮುಟ್ಟಿ ಮಯ್ಲಿಗಿ ಮಾಡಬೇಡ ಯಂದು ದಯನಾಸ ಪಡುತ್ತಿರುವ ದಿರಿಸುಗಳು.. ಅದನ್ನು ತೊಟ್ಟುಕೊಂಡು ಬಿಸಾಡಿದ.. ಯಿದನು ತೊಟ್ಟುಕೊಂಡು ಬಿಸಾಡಿದ. ಮನೆಲ್ಲವನ್ನು ತೊಟ್ಟುಕೊಂಡು ಬಿಸಾಡಿದ.. ನಗ್ನನಾಗಿಯೇ ರೆಡ್ಡಿ ಯದುರು ಕಾಣಿಸಿಕೊಂಡು ಬಿಡಬೇಕೆಂದೆನಿಸಿತು ವಂದು ಛಣ..ಛೇ... ಛೇ.. ಆ ಯಲ್ಲ ದಿರಿಸುಗಳ ನಡುವೆ.. ಹದಿನಾರು ಮೊಳದುದ್ದದ ದೋತರ.. ಬಾದಾಮಿ ಬಣ್ಣದ ನಿಲುವಂಗಿ.. ಆರು ಮೊಳದುದ್ದದ ಪೇಟ ಮೋಡೋಡಿ ಬಂದು ಮೂಡಿತು. ಗೋಚರವಾಯಿತು.. ನಿನ್ನೊಳಗಿನ ಕೇವಲ ಸೈಲಟನ್ನಿಗೆ ನನ್ನನ್ಯಾಕ ತೊಡಿಸಬಾರದೆಂದು ಪೀಡಿಸಲಾರಂಭಿಸಿತು. ಅರೆ! ಯಿದು ರೆಡ್ಡಿಂ ವುಡುಪಾಗಿರುವುದಲ್ಲಾ... ಯಲ್ಲೋ ಯಿದ್ದದ್ದು ಯಿಲ್ಲಿಂಗ ಬಂತು..? ಯಾರು ತಂದಿಟ್ಟರು ಯಿದನಿಲ್ಲಿ? ಮುಟ್ಟಿದರ ತಾನೆಲ್ಲಿ ಸುಟ್ಟುಕರಕಿಟ್ಟು ಹೋಗುವೆನೋ? ಅದಾವ ಸಂಚು ಅಡಗಿರಬವುದು ಯಿದರೊಳಗ..? ತನಗ್ಯಾವ ಪರೀಕ್ಷೆ ಕಾದಿರುವುದೋ..? <br> {{gap}}ಅದರ ಸನೀಕ ಹೋಗುವುದು ದೂರ ಸರಿಯುವುದು ಮಾಡಿದ ಮೂರು ನಾಲಕು ಸಲ.. ಬ್ಯಾಡ ಅಂದರೂ ಅದು ಬಿಡಬೇಕಲ್ಲ! ಸೂಜಿಗಲ್ಲಿನಂತೆ ಸೆಳೆಯಿತು.. ಕುಟಿಲೋಪಾಯದಿಂದ ಹೆಡೆ ಚಾಚಿತು.. ಅದರ ನೊಸಲೊಳಗ ರತುನ ಪ್ರಾಯದ ರಾಜಕಾರಣ ಥಳಥಳ ಹೊಳೆಯಿತು.. ಯೇನೇ ಆಗಲಿ.. ಬಂದದ್ದು ಬರಲಿ.. ಬಹುರೂಪಿ ಕಲೆಯನ್ನು ಕರಗತ ಮಾಡಿಕೊಂಡಿದ್ದ ಆ ಸರವಂಟನು ಮನದೊಳಗ ಯಲ್ಲೋ ಮಸುಕು ಮಸುಕಾಗಿ ಯಿರುವ<noinclude></noinclude> engjcckrm0itwifr1q28vakoyp0fnaf 320198 320188 2026-05-15T16:24:02Z Shreelatha.Halemane 7642 /* Validated */ 320198 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೩೧೮|right=ಅರಮನೆ}} ಬಲು ವನ್ಯಾಲಕೇರಿರುವುದು.. ಆರುತಲೆ ಬೆಳಕಿನೊಳಗ ಅಂತಾನವಾಗಲಿರುವುದು.. ಅಲ್ಲೊಂದು ಕಾಗೆಂರು ಯಿ೦ಪಾಗಿ ಕೂಗುತಲಿರುವುದು.. ಯಿಲ್ಲೊಂದು ಕೋಗಿಲೆ ಕಲ್ಮಶವಾಗಿ ಅರಚುತಲಿರುವುದು.. ಯಲ್ಲೋ ಎಂದು ನಾಯಿ ಗವ್ವನೆ ಮಾಡುತಲಿರುವುದು, ಅಲ್ಲೆಲ್ಲೋ ಬೆಳಕು ಕೆ೦ಪೆರಡಾಣೆ ಗಾತುರ ದ ವಡಣದ ಗುಡುಲೆಳ ಗಿ೦ದ ಯಿಣುಕುತಲಿರುವುದು..... <br> {{gap}}ಬಾತರೂಮಿಗೆ ಹೋಗಿ ಮನಸೋಯಿಚ್ಚೆ ಸಾಣಾನ ಮಾಡಿಯೇ ಮಾಡಿದ.. ನೀರು ಸಂಕಟಪಡುತ್ತಲೇ ಅವಯ್ಯನ ಸರೀರದ ಮಾಲ ಹತ್ತಿ ಯಿಳಿದು ಹರಿಯಿತು.. ಅದೂ ದಣಿಯಿತು.. ತಾನು ದಣಿದನು.. ದಿರಿಸುಗಳೆದುರು ನಿಂತುಕೊಂಡ ಬೆತ್ತಲೆಯಾಗಿ.. ವಂದಲ್ಲ ಹತ್ತು ಬಗೆಯ ದಿರಿಸುಗಳು.. ಅಂಗಲಾಚುತ್ತಿರುವ ದಿರಿಸುಗಳು... ಮುಟ್ಟಿ ಮಯ್ಲಿಗಿ ಮಾಡಬೇಡ ಯಂದು ದಯನಾಸ ಪಡುತ್ತಿರುವ ದಿರಿಸುಗಳು.. ಅದನ್ನು ತೊಟ್ಟುಕೊಂಡು ಬಿಸಾಡಿದ.. ಯಿದನು ತೊಟ್ಟುಕೊಂಡು ಬಿಸಾಡಿದ. ಮನೆಲ್ಲವನ್ನು ತೊಟ್ಟುಕೊಂಡು ಬಿಸಾಡಿದ.. ನಗ್ನನಾಗಿಯೇ ರೆಡ್ಡಿ ಯದುರು ಕಾಣಿಸಿಕೊಂಡು ಬಿಡಬೇಕೆಂದೆನಿಸಿತು ವಂದು ಛಣ..ಛೇ... ಛೇ.. ಆ ಯಲ್ಲ ದಿರಿಸುಗಳ ನಡುವೆ.. ಹದಿನಾರು ಮೊಳದುದ್ದದ ದೋತರ.. ಬಾದಾಮಿ ಬಣ್ಣದ ನಿಲುವಂಗಿ.. ಆರು ಮೊಳದುದ್ದದ ಪೇಟ ಮೋಡೋಡಿ ಬಂದು ಮೂಡಿತು. ಗೋಚರವಾಯಿತು.. ನಿನ್ನೊಳಗಿನ ಕೇವಲ ಸೈಲಟನ್ನಿಗೆ ನನ್ನನ್ಯಾಕ ತೊಡಿಸಬಾರದೆಂದು ಪೀಡಿಸಲಾರಂಭಿಸಿತು. ಅರೆ! ಯಿದು ರೆಡ್ಡಿಂ ವುಡುಪಾಗಿರುವುದಲ್ಲಾ... ಯಲ್ಲೋ ಯಿದ್ದದ್ದು ಯಿಲ್ಲಿಂಗ ಬಂತು..? ಯಾರು ತಂದಿಟ್ಟರು ಯಿದನಿಲ್ಲಿ? ಮುಟ್ಟಿದರ ತಾನೆಲ್ಲಿ ಸುಟ್ಟುಕರಕಿಟ್ಟು ಹೋಗುವೆನೋ? ಅದಾವ ಸಂಚು ಅಡಗಿರಬವುದು ಯಿದರೊಳಗ..? ತನಗ್ಯಾವ ಪರೀಕ್ಷೆ ಕಾದಿರುವುದೋ..? <br> {{gap}}ಅದರ ಸನೀಕ ಹೋಗುವುದು ದೂರ ಸರಿಯುವುದು ಮಾಡಿದ ಮೂರು ನಾಲಕು ಸಲ.. ಬ್ಯಾಡ ಅಂದರೂ ಅದು ಬಿಡಬೇಕಲ್ಲ! ಸೂಜಿಗಲ್ಲಿನಂತೆ ಸೆಳೆಯಿತು.. ಕುಟಿಲೋಪಾಯದಿಂದ ಹೆಡೆ ಚಾಚಿತು.. ಅದರ ನೊಸಲೊಳಗ ರತುನ ಪ್ರಾಯದ ರಾಜಕಾರಣ ಥಳಥಳ ಹೊಳೆಯಿತು.. ಯೇನೇ ಆಗಲಿ.. ಬಂದದ್ದು ಬರಲಿ.. ಬಹುರೂಪಿ ಕಲೆಯನ್ನು ಕರಗತ ಮಾಡಿಕೊಂಡಿದ್ದ ಆ ಸರವಂಟನು ಮನದೊಳಗ ಯಲ್ಲೋ ಮಸುಕು ಮಸುಕಾಗಿ ಯಿರುವ<noinclude></noinclude> nk90a8be9gimyd52wrf1epq8001ldug ಪುಟ:ಅರಮನೆ.pdf/೩೫೨ 104 86510 320181 204080 2026-05-15T16:15:05Z Shreesha Sharma 7840 320181 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=ಅರಮನೆ|right=೩೨೧}} ಯಾದಾರ ಗಾಳಿ ಸವುಡೇನಾರ ತಮ್ಮ ಪಟ್ಟಣದೊಳಗ ಬಿಡಾರ ಹೂಡಯ್ಯಾ ಹೆಂಗೆ? ಹೂಡಿದ್ದರೆ ಅದನು ತಮಣಿ ಮಾಡುವ ಬಗೆ ಯೇನು? ಯಂದು ಮುಂತಾಗಿ ಯಸನ ಮಾಡುತ ಹಿರೀಕ ಮಂದಿ ಅಗ್ಗಲು ಮಗ್ಗುಲಿದ್ದ ಅಗ್ರಹಾರಗಳಿಗೆ ಹೋಗಿ ದುಪ್ಪಟ್ಟು ದಕ್ಷಿಣ ಚಾಜಯಿಟ್ಟು ಪಟ್ಟಣಕ್ಕೆ ವದಗಿರುವ ಪಜೀತಿಯನ್ನು ಹೇಳಿಕೊಂಡರು. ತಾರೆ ಕರಣ ಯೋಗಗಳಲ್ಲಿ ನಿಷ್ಣಾತರಾದ ಜೋತಿಷಿಗಳು ಹೊತ್ತಿಗೆ ತೆಗೆದು ನೋಡಲಾಗಿ, ಕವಡೆ ಚೆಲ್ಲಿ ಪರಿಸೀಲನ ಮಾಡಲಾಗಿ, ಪಟ್ಟಣದ ವಾಸ್ತುವನ್ನು ಕಣ್ಣಳತೆಗೆ ಯಳಕೊಂಡು ತತ್ತೆ ಮಾಡಲಾಗಿ ಸುಕ್ರನು ತನ್ನ ಜಾಗ ಖಾಲಿ ಮಾಡಿರುವ ಸಂಗತಿ ಬೆಳಕಿಗೆ ಬಂತು. ನವಗ್ರಹ ಪೂಜೆ ಮಾಡಿದರು. ಸಂಯವರಾದವರು ಸ೦ಬುಲಿಂಗನ ರೈತ ಮಾಡಬೇಕೆಂದೂ, ವಯಷ್ಣವರಾದವರು ಸತ್ಯನಾರಾಯಣ ರೈತ ಮಾಡಬೇಕೆಂದೂ, ಯರಡೂ ಅಲ್ಲದಿದ್ದವರು ದಾನ, ಧರುಮ ಮಾಡಬೇಕೆಂದೂ ಕರೆಕೊಟ್ಟರು.. ಯೀ ಯಲ್ಲಾ ಸಾಂತಿ ಪ್ರಕ್ರಿಯೆಗಳು ಅವರವರ ಯೋಗ್ಯತಾನುಸಾರ ಸಕ್ರಮವಾಗಿ ನಡೆಯಲಾರಂಭಿಸಿದವರಾದರೂ ತಿಕ್ಕಡಿ ಕಡಿಮೆಯಾಗಲಿಲ್ಲ.. ಯೇನಿದ್ದೀತು ಯಾತಕಿದ್ದೀತು ಯಂದು ಮುಂತಾಗಿ ಸಿವನೇ... ತಮಗೆ ಯತ್ತತ್ತಲಾಗೋ ಆದಂಗ ಆಗತಯ್ಕೆ ಯಂದು ನರಳುತಲಿದ್ದ ಯಿರಹಿಗಳ ಪಯ್ಕೆ ಮೋಲ್ಡನೂ, ವಂಕದಾರಿ ಗೋಯಿಂದಯ್ಯ ಸ್ನೇಷಿ«ಗಳ ಮೇಕಮಾತ್ರಪುತ್ರನೂ, ನಿನ್ನೆ ಮೊನ್ನೆ ಯವ್ವನದ ಸೀಮಂಯೊಳಗ ಯಡಗಾಲನ್ನಿರಿಸಿದ್ದಂಥವನೂ ಆದ ಸುಬ್ಬರಮಣ್ಯ ವುರುಫ್ ಸುಬ್ಬಣ್ಣನು ಸುಕ್ರನು ಫಲಾನ ಯಿಂಥವರೊಂದಿಗೆ ಹೋಗಿರುವನೆಂದು ಪತ್ತೆ ಮಾಡಿ ಕುತಕ್ರುತ್ಯನಾದನು. ತನ್ನ ತಲೆ ಯಂಬ ಗುಂಡಾಲೊಳಗ ಮೇದಸ್ಸು ತುಳುಕಾಡುತಲಿತ್ತಲ್ಲ ಅದಕ್ಕ.... ಆ ಜಿಡ್ಡಿನೊಳಗ ಮೆದುಳು ಪರಮ ಸುಖ ಅನುಭವಿಸುತಲಿತ್ತಲ್ಲ ಅದಕ್ಕ.. ಯಿರಹ ಗೊತಾರೂಢರಾಗಿದ್ದ ಯಿಯಿಧ ವಯೋಮಾನದ ಮಂದಿ ಹೋಗುವುದೋ? ಬ್ಯಾಡಮೋ ಯಂಬ ಅಂಜಿಕೆಯಿಂದಲೇ ಹೋದರು. ಫಲಾನ ಮನೆಯು ಸಾವುರ ಕಡೇಲಿಂದ ನಿಟ್ಟುಸುರು ಬಿಡುತಲಿತ್ತು.. ಯೇಕರಿಕೆ ದೇಕರಿಕೆ ನೋಡುತಲಿದ್ದ ಆಳು ಕಾಳು ಮಂದಿಯ ಮುಖ ಮಾರಿಗಳಂತೂ ಭಣಭಣಗುಟ್ಟುತಲಿದ್ದವು.. ಸಪ್ತ ಲೋಹದ ಪಂಜರದೊಳಗಿದ್ದ ಅರಗಿಳಿಯು ಮಾಡುತಲಿದ್ದ ಅರಣ್ಯರೋಧನ ಸದರಿ ಯರಡು ಭವಂತಿ ಮನೆಯ ಬಿಗುಮಾನಕ್ಕೆ<noinclude></noinclude> h352n8rjc2xj2zpgl5aeij5rusx3xvr 320192 320181 2026-05-15T16:22:28Z Shreesha Sharma 7840 /* Proofread */ 320192 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೨೧}} ಯಾದಾರ ಗಾಳಿ ಸವುಡೇನಾರ ತಮ್ಮ ಪಟ್ಟಣದೊಳಗ ಬಿಡಾರ ಹೂಡಯ್ಯಾ ಹೆಂಗೆ? ಹೂಡಿದ್ದರೆ ಅದನು ತಮಣಿ ಮಾಡುವ ಬಗೆ ಯೇನು? ಯಂದು ಮುಂತಾಗಿ ಯಸನ ಮಾಡುತ ಹಿರೀಕ ಮಂದಿ ಅಗ್ಗಲು ಮಗ್ಗುಲಿದ್ದ ಅಗ್ರಹಾರಗಳಿಗೆ ಹೋಗಿ ದುಪ್ಪಟ್ಟು ದಕ್ಷಿಣ ಚಾಜಯಿಟ್ಟು ಪಟ್ಟಣಕ್ಕೆ ವದಗಿರುವ ಪಜೀತಿಯನ್ನು ಹೇಳಿಕೊಂಡರು. ತಾರೆ ಕರಣ ಯೋಗಗಳಲ್ಲಿ ನಿಷ್ಣಾತರಾದ ಜೋತಿಷಿಗಳು ಹೊತ್ತಿಗೆ ತೆಗೆದು ನೋಡಲಾಗಿ, ಕವಡೆ ಚೆಲ್ಲಿ ಪರಿಸೀಲನ ಮಾಡಲಾಗಿ, ಪಟ್ಟಣದ ವಾಸ್ತುವನ್ನು ಕಣ್ಣಳತೆಗೆ ಯಳಕೊಂಡು ತತ್ತೆ ಮಾಡಲಾಗಿ ಸುಕ್ರನು ತನ್ನ ಜಾಗ ಖಾಲಿ ಮಾಡಿರುವ ಸಂಗತಿ ಬೆಳಕಿಗೆ ಬಂತು. ನವಗ್ರಹ ಪೂಜೆ ಮಾಡಿದರು. ಸಂಯವರಾದವರು ಸ೦ಬುಲಿಂಗನ ರೈತ ಮಾಡಬೇಕೆಂದೂ, ವಯಷ್ಣವರಾದವರು ಸತ್ಯನಾರಾಯಣ ರೈತ ಮಾಡಬೇಕೆಂದೂ, ಯರಡೂ ಅಲ್ಲದಿದ್ದವರು ದಾನ, ಧರುಮ ಮಾಡಬೇಕೆಂದೂ ಕರೆಕೊಟ್ಟರು.. ಯೀ ಯಲ್ಲಾ ಸಾಂತಿ ಪ್ರಕ್ರಿಯೆಗಳು ಅವರವರ ಯೋಗ್ಯತಾನುಸಾರ ಸಕ್ರಮವಾಗಿ ನಡೆಯಲಾರಂಭಿಸಿದವರಾದರೂ ತಿಕ್ಕಡಿ ಕಡಿಮೆಯಾಗಲಿಲ್ಲ.. ಯೇನಿದ್ದೀತು ಯಾತಕಿದ್ದೀತು ಯಂದು ಮುಂತಾಗಿ ಸಿವನೇ... ತಮಗೆ ಯತ್ತತ್ತಲಾಗೋ ಆದಂಗ ಆಗತಯ್ಕೆ ಯಂದು ನರಳುತಲಿದ್ದ ಯಿರಹಿಗಳ ಪಯ್ಕೆ ಮೋಲ್ಡನೂ, ವಂಕದಾರಿ ಗೋಯಿಂದಯ್ಯ ಸ್ನೇಷಿ«ಗಳ ಮೇಕಮಾತ್ರಪುತ್ರನೂ, ನಿನ್ನೆ ಮೊನ್ನೆ ಯವ್ವನದ ಸೀಮಂಯೊಳಗ ಯಡಗಾಲನ್ನಿರಿಸಿದ್ದಂಥವನೂ ಆದ ಸುಬ್ಬರಮಣ್ಯ ವುರುಫ್ ಸುಬ್ಬಣ್ಣನು ಸುಕ್ರನು ಫಲಾನ ಯಿಂಥವರೊಂದಿಗೆ ಹೋಗಿರುವನೆಂದು ಪತ್ತೆ ಮಾಡಿ ಕುತಕ್ರುತ್ಯನಾದನು. ತನ್ನ ತಲೆ ಯಂಬ ಗುಂಡಾಲೊಳಗ ಮೇದಸ್ಸು ತುಳುಕಾಡುತಲಿತ್ತಲ್ಲ ಅದಕ್ಕ.... ಆ ಜಿಡ್ಡಿನೊಳಗ ಮೆದುಳು ಪರಮ ಸುಖ ಅನುಭವಿಸುತಲಿತ್ತಲ್ಲ ಅದಕ್ಕ.. ಯಿರಹ ಗೊತಾರೂಢರಾಗಿದ್ದ ಯಿಯಿಧ ವಯೋಮಾನದ ಮಂದಿ ಹೋಗುವುದೋ? ಬ್ಯಾಡಮೋ ಯಂಬ ಅಂಜಿಕೆಯಿಂದಲೇ ಹೋದರು. ಫಲಾನ ಮನೆಯು ಸಾವುರ ಕಡೇಲಿಂದ ನಿಟ್ಟುಸುರು ಬಿಡುತಲಿತ್ತು.. ಯೇಕರಿಕೆ ದೇಕರಿಕೆ ನೋಡುತಲಿದ್ದ ಆಳು ಕಾಳು ಮಂದಿಯ ಮುಖ ಮಾರಿಗಳಂತೂ ಭಣಭಣಗುಟ್ಟುತಲಿದ್ದವು.. ಸಪ್ತ ಲೋಹದ ಪಂಜರದೊಳಗಿದ್ದ ಅರಗಿಳಿಯು ಮಾಡುತಲಿದ್ದ ಅರಣ್ಯರೋಧನ ಸದರಿ ಯರಡು ಭವಂತಿ ಮನೆಯ ಬಿಗುಮಾನಕ್ಕೆ<noinclude></noinclude> 5kjdb9jf6cykvs8bp6ml66g1c9ubesn 320200 320192 2026-05-15T16:26:04Z Shreelatha.Halemane 7642 /* Validated */ 320200 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೨೧}} ಯಾದಾರ ಗಾಳಿ ಸವುಡೇನಾರ ತಮ್ಮ ಪಟ್ಟಣದೊಳಗ ಬಿಡಾರ ಹೂಡಯ್ಯಾ ಹೆಂಗೆ? ಹೂಡಿದ್ದರೆ ಅದನು ತಮಣಿ ಮಾಡುವ ಬಗೆ ಯೇನು? ಯಂದು ಮುಂತಾಗಿ ಯಸನ ಮಾಡುತ ಹಿರೀಕ ಮಂದಿ ಅಗ್ಗಲು ಮಗ್ಗುಲಿದ್ದ ಅಗ್ರಹಾರಗಳಿಗೆ ಹೋಗಿ ದುಪ್ಪಟ್ಟು ದಕ್ಷಿಣ ಚಾಜಯಿಟ್ಟು ಪಟ್ಟಣಕ್ಕೆ ವದಗಿರುವ ಪಜೀತಿಯನ್ನು ಹೇಳಿಕೊಂಡರು. ತಾರೆ ಕರಣ ಯೋಗಗಳಲ್ಲಿ ನಿಷ್ಣಾತರಾದ ಜೋತಿಷಿಗಳು ಹೊತ್ತಿಗೆ ತೆಗೆದು ನೋಡಲಾಗಿ, ಕವಡೆ ಚೆಲ್ಲಿ ಪರಿಸೀಲನ ಮಾಡಲಾಗಿ, ಪಟ್ಟಣದ ವಾಸ್ತುವನ್ನು ಕಣ್ಣಳತೆಗೆ ಯಳಕೊಂಡು ತತ್ತೆ ಮಾಡಲಾಗಿ ಸುಕ್ರನು ತನ್ನ ಜಾಗ ಖಾಲಿ ಮಾಡಿರುವ ಸಂಗತಿ ಬೆಳಕಿಗೆ ಬಂತು. ನವಗ್ರಹ ಪೂಜೆ ಮಾಡಿದರು. ಸಂಯವರಾದವರು ಸ೦ಬುಲಿಂಗನ ರೈತ ಮಾಡಬೇಕೆಂದೂ, ವಯಷ್ಣವರಾದವರು ಸತ್ಯನಾರಾಯಣ ರೈತ ಮಾಡಬೇಕೆಂದೂ, ಯರಡೂ ಅಲ್ಲದಿದ್ದವರು ದಾನ, ಧರುಮ ಮಾಡಬೇಕೆಂದೂ ಕರೆಕೊಟ್ಟರು.. ಯೀ ಯಲ್ಲಾ ಸಾಂತಿ ಪ್ರಕ್ರಿಯೆಗಳು ಅವರವರ ಯೋಗ್ಯತಾನುಸಾರ ಸಕ್ರಮವಾಗಿ ನಡೆಯಲಾರಂಭಿಸಿದವರಾದರೂ ತಿಕ್ಕಡಿ ಕಡಿಮೆಯಾಗಲಿಲ್ಲ.. ಯೇನಿದ್ದೀತು ಯಾತಕಿದ್ದೀತು ಯಂದು ಮುಂತಾಗಿ ಸಿವನೇ... {{gap}}ತಮಗೆ ಯತ್ತತ್ತಲಾಗೋ ಆದಂಗ ಆಗತಯ್ಕೆ ಯಂದು ನರಳುತಲಿದ್ದ ಯಿರಹಿಗಳ ಪಯ್ಕೆ ಮೋಲ್ಡನೂ, ವಂಕದಾರಿ ಗೋಯಿಂದಯ್ಯ ಸ್ನೇಷಿ«ಗಳ ಮೇಕಮಾತ್ರಪುತ್ರನೂ, ನಿನ್ನೆ ಮೊನ್ನೆ ಯವ್ವನದ ಸೀಮಂಯೊಳಗ ಯಡಗಾಲನ್ನಿರಿಸಿದ್ದಂಥವನೂ ಆದ ಸುಬ್ಬರಮಣ್ಯ ವುರುಫ್ ಸುಬ್ಬಣ್ಣನು ಸುಕ್ರನು ಫಲಾನ ಯಿಂಥವರೊಂದಿಗೆ ಹೋಗಿರುವನೆಂದು ಪತ್ತೆ ಮಾಡಿ ಕುತಕ್ರುತ್ಯನಾದನು. ತನ್ನ ತಲೆ ಯಂಬ ಗುಂಡಾಲೊಳಗ ಮೇದಸ್ಸು ತುಳುಕಾಡುತಲಿತ್ತಲ್ಲ ಅದಕ್ಕ.... ಆ ಜಿಡ್ಡಿನೊಳಗ ಮೆದುಳು ಪರಮ ಸುಖ ಅನುಭವಿಸುತಲಿತ್ತಲ್ಲ ಅದಕ್ಕ.. ಯಿರಹ ಗೊತಾರೂಢರಾಗಿದ್ದ ಯಿಯಿಧ ವಯೋಮಾನದ ಮಂದಿ ಹೋಗುವುದೋ? ಬ್ಯಾಡಮೋ ಯಂಬ ಅಂಜಿಕೆಯಿಂದಲೇ ಹೋದರು. ಫಲಾನ ಮನೆಯು ಸಾವುರ ಕಡೇಲಿಂದ ನಿಟ್ಟುಸುರು ಬಿಡುತಲಿತ್ತು.. ಯೇಕರಿಕೆ ದೇಕರಿಕೆ ನೋಡುತಲಿದ್ದ ಆಳು ಕಾಳು ಮಂದಿಯ ಮುಖ ಮಾರಿಗಳಂತೂ ಭಣಭಣಗುಟ್ಟುತಲಿದ್ದವು.. ಸಪ್ತ ಲೋಹದ ಪಂಜರದೊಳಗಿದ್ದ ಅರಗಿಳಿಯು ಮಾಡುತಲಿದ್ದ ಅರಣ್ಯರೋಧನ ಸದರಿ ಯರಡು ಭವಂತಿ ಮನೆಯ ಬಿಗುಮಾನಕ್ಕೆ<noinclude></noinclude> o3f3d53clov0acfykwhbk4yo9qhur7o ಪುಟ:ಅರಮನೆ.pdf/೩೭೦ 104 86524 320231 204098 2026-05-15T16:37:33Z Shreesha Sharma 7840 /* Proofread */ 320231 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೩೯}} mದರಿಂದ ವುತ್ತೇಜಿತಗೊಂಡ ರಾಯನು ವಂದು ಯಿಶೇಷ ಕಾಗ್ಯಾಚರಣೆ ಪಡೆಯನ್ನು ರಚನೆ ಮಾಡಿ ಅದಕ 'ಸವುಭಾಗ್ಯ' ಯಂಬ ಶಿಕ್ಷಿಕೆಯನ್ನು ಮುಡುಸಿದನು. ಅದಕ ಮುರಾರಿರಾವ್ ಯಂಬ ಪತ್ತೆದಾರನನ್ನು ಮುಖ್ಯಸ್ಥನನ್ನಾಗಿ ನೇಮಿಸಿದನು. ಕೂದಲನ್ನು ಸೀಳಿ ಯರಡು ಹೋಳು ಮಾಡುವುದರಲ್ಲಿ ನಿಷ್ಣಾತನಾದ ಅವಯ್ಯನು ಆ ಕ್ಷಣದಿಂದ ತನಗೆ ಅನುಮಾನ ಬಂದವರ ಮನೆಗಳಿಗೆ ನುಗ್ಗಲಾರಂಭಿಸಿದನು. ಗುಮಾನಿಯಿಂದ ಹಲವರನ್ನು ಬಂಧಿಸಿ ಯಳದು ತಂದು ಪ್ರಶ್ನೆಗಳ ಮಳೆ ಕರೆಯತೊಡಗಿದನು.. ಸವುಭಾಗ್ಯದ ಆ ಯರಡು ನಮೂನೆಗಳನ್ನು ಅಪಹರಣ ಮಾಡಿರಬವುದು, ಅವೆರಡರ ಪಯ್ಕೆ ವಂದನ್ನು ಧಾರಣವಾಗಿ ಕೊಲೆ ಮಾಡಿರಬವುದೆಂಬ ಅನುಮಾನಕ್ಕೆ ಮೊದಲಿಗೆ ಬಂದನು. ಅದರ ಪರಿಣಾಮವಾಗಿ ಸುಬ್ಬಣ್ಣ ನೇತ್ರುತ್ವದ ತರುಣರು ಬಗೆಬಗೆಯ ಹಿಂಸೆಗೆ ತುತ್ತಾದರು.. ಯಷ್ಟೋ ಮಂದಿ ಅಯ್ದಗೇಡಿಗಳು ತಾತ್ಕಾಲಿಕವಾಗಿ ಪಟ್ಟಣವನ್ನು ವದಲಿ ಅಕ್ಕಪಕ್ಕದ ಕುರುಚಲು ಕಾಡುಗಳಲ್ಲಿ ವಾಸ ಮಾಡತೊಡಗಿದರು. ವುಳಿದವರ ಅವಸ್ಥೆಯಂತೂ ಹರಹರ ಮಾದೇವ ಆಗಿಬಿಟ್ಟಿತು.... {{gap}}ಸವುಭಾಗ್ಯ ಪಡೆಯ ಸಿಪಾಯಿಗಳು ಮಾರು ವೇಷದಲ್ಲಿ ಅನತಿ ದೂರದ ಕಂದಗಲ್ಲು ಗ್ರಾಮದಿಂದ ಬುಗುಡಿ ನೀಲಕಂಠಪ್ಪನನ್ನು ಬಂಧಿಸಿ ಯಳ ತಂದು ತಮ್ಮ ಮುಖಂಡನೆದುರು ಹಾಜರು ಮಾಡಿದರು. ತಾಯಕ್ಕಳನ್ನು ಕೊಲೆ ಮಾಡಿದ್ಯಾಕೆ? ಮಾಡಿ ಹೆಣವನ್ನು ಯಲ್ಲಿ ಗಾಯಬ್ ಮಾಡಿರುವಿ? ಆಕೆಯ ಮಗಳಾದ ಚಿನ್ನಾಸಾನಿಯನ್ನು ಯಾವ ದೇಶಕ್ಕೆ ಸಾಗಿಸಿರುವಿ ಯಂಬಂಥ ಪ್ರಶ್ನೆಗಳನ್ನು ಮುಖಕ್ಕೆ ರಾಚಿದಂತೆ ಕೇಳಿ ಮುರಾರಿರಾವ್ ತನ್ನ ಗಿರಿಜಾಮೀಸೆ ತಿರುವಿದನು. ವಾಗ್ ಬಾಣಗಳಿಂದ ಘಾಸಿಗೊಂಡನು ಬುಗುಡಿಯು. ತಾನು ತನ್ನ ಪತ್ನಿಯನ್ನು. ತಾನು ತನ್ನ ಕುವರಿಯನ್ನು!! ಯೇನೆಲ್ಲ ಹೇಳಲುಪಕ್ರಮಿಸಿದನು. ಆದರದೆಲ್ಲ ರಾವ್‌ನ ಕಿವಿ ಮ್ಯಾಲ ಬಿದ್ದರ ತಾನೆ! {{gap}}ನಿಜಕ್ಕೂ ತಾಂರಕ್ಕಳ ಯೀ ಕ್ರುತ್ಯದಿಂದ ತಾನೇ ಸೋತುಂ ಅಡಲ್ಲಾಗಿಬಿಟ್ಟಿದ್ದನು. ಕಳೆದ ರಾತ್ರಿಯಷ್ಟೋ ಹೊತ್ತಿನ ತನಕ ನಕ್ಕೋತ ಕೆಲಕೋತ ತಾಯಿ ಮಗಳೊಂದಿಗೆ ಯಿದ್ದು ಬಂದಿದ್ದನು. ಬರುವಾಗ್ಗೆ ಮುಂದಿನ ದಿನಚರಿಯನ್ನು ರೂಪಿಸಿರದೆ ಯಿರಲಿಲ್ಲ. ಆದರಂತೆ ಮಾರನೆ ದಿನ ಮುಂಜಾನೆ ಬಂದು ನೋಡುತ್ತಾನೆ.. ಬಿಕೋ ಬಿಕೋ.. ಆಳುಕಾಳುಮಂದಿಯನ್ನು ಕೇಳಿ<noinclude></noinclude> 7ds2a6h5zwtl07vsv9n6u9fg11x3wcu 320237 320231 2026-05-15T16:39:47Z Shreelatha.Halemane 7642 /* Validated */ 320237 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೩೯}} ಇದರಿಂದ ವುತ್ತೇಜಿತಗೊಂಡ ರಾಯನು ವಂದು ಯಿಶೇಷ ಕಾಗ್ಯಾಚರಣೆ ಪಡೆಯನ್ನು ರಚನೆ ಮಾಡಿ ಅದಕ 'ಸವುಭಾಗ್ಯ' ಯಂಬ ಶಿಕ್ಷಿಕೆಯನ್ನು ಮುಡುಸಿದನು. ಅದಕ ಮುರಾರಿರಾವ್ ಯಂಬ ಪತ್ತೆದಾರನನ್ನು ಮುಖ್ಯಸ್ಥನನ್ನಾಗಿ ನೇಮಿಸಿದನು. ಕೂದಲನ್ನು ಸೀಳಿ ಯರಡು ಹೋಳು ಮಾಡುವುದರಲ್ಲಿ ನಿಷ್ಣಾತನಾದ ಅವಯ್ಯನು ಆ ಕ್ಷಣದಿಂದ ತನಗೆ ಅನುಮಾನ ಬಂದವರ ಮನೆಗಳಿಗೆ ನುಗ್ಗಲಾರಂಭಿಸಿದನು. ಗುಮಾನಿಯಿಂದ ಹಲವರನ್ನು ಬಂಧಿಸಿ ಯಳದು ತಂದು ಪ್ರಶ್ನೆಗಳ ಮಳೆ ಕರೆಯತೊಡಗಿದನು.. ಸವುಭಾಗ್ಯದ ಆ ಯರಡು ನಮೂನೆಗಳನ್ನು ಅಪಹರಣ ಮಾಡಿರಬವುದು, ಅವೆರಡರ ಪಯ್ಕೆ ವಂದನ್ನು ಧಾರಣವಾಗಿ ಕೊಲೆ ಮಾಡಿರಬವುದೆಂಬ ಅನುಮಾನಕ್ಕೆ ಮೊದಲಿಗೆ ಬಂದನು. ಅದರ ಪರಿಣಾಮವಾಗಿ ಸುಬ್ಬಣ್ಣ ನೇತ್ರುತ್ವದ ತರುಣರು ಬಗೆಬಗೆಯ ಹಿಂಸೆಗೆ ತುತ್ತಾದರು.. ಯಷ್ಟೋ ಮಂದಿ ಅಯ್ದಗೇಡಿಗಳು ತಾತ್ಕಾಲಿಕವಾಗಿ ಪಟ್ಟಣವನ್ನು ವದಲಿ ಅಕ್ಕಪಕ್ಕದ ಕುರುಚಲು ಕಾಡುಗಳಲ್ಲಿ ವಾಸ ಮಾಡತೊಡಗಿದರು. ವುಳಿದವರ ಅವಸ್ಥೆಯಂತೂ ಹರಹರ ಮಾದೇವ ಆಗಿಬಿಟ್ಟಿತು.... {{gap}}ಸವುಭಾಗ್ಯ ಪಡೆಯ ಸಿಪಾಯಿಗಳು ಮಾರು ವೇಷದಲ್ಲಿ ಅನತಿ ದೂರದ ಕಂದಗಲ್ಲು ಗ್ರಾಮದಿಂದ ಬುಗುಡಿ ನೀಲಕಂಠಪ್ಪನನ್ನು ಬಂಧಿಸಿ ಯಳ ತಂದು ತಮ್ಮ ಮುಖಂಡನೆದುರು ಹಾಜರು ಮಾಡಿದರು. ತಾಯಕ್ಕಳನ್ನು ಕೊಲೆ ಮಾಡಿದ್ಯಾಕೆ? ಮಾಡಿ ಹೆಣವನ್ನು ಯಲ್ಲಿ ಗಾಯಬ್ ಮಾಡಿರುವಿ? ಆಕೆಯ ಮಗಳಾದ ಚಿನ್ನಾಸಾನಿಯನ್ನು ಯಾವ ದೇಶಕ್ಕೆ ಸಾಗಿಸಿರುವಿ ಯಂಬಂಥ ಪ್ರಶ್ನೆಗಳನ್ನು ಮುಖಕ್ಕೆ ರಾಚಿದಂತೆ ಕೇಳಿ ಮುರಾರಿರಾವ್ ತನ್ನ ಗಿರಿಜಾಮೀಸೆ ತಿರುವಿದನು. ವಾಗ್ ಬಾಣಗಳಿಂದ ಘಾಸಿಗೊಂಡನು ಬುಗುಡಿಯು. ತಾನು ತನ್ನ ಪತ್ನಿಯನ್ನು. ತಾನು ತನ್ನ ಕುವರಿಯನ್ನು!! ಯೇನೆಲ್ಲ ಹೇಳಲುಪಕ್ರಮಿಸಿದನು. ಆದರದೆಲ್ಲ ರಾವ್‌ನ ಕಿವಿ ಮ್ಯಾಲ ಬಿದ್ದರ ತಾನೆ! {{gap}}ನಿಜಕ್ಕೂ ತಾಂರಕ್ಕಳ ಯೀ ಕ್ರುತ್ಯದಿಂದ ತಾನೇ ಸೋತುಂ ಅಡಲ್ಲಾಗಿಬಿಟ್ಟಿದ್ದನು. ಕಳೆದ ರಾತ್ರಿಯಷ್ಟೋ ಹೊತ್ತಿನ ತನಕ ನಕ್ಕೋತ ಕೆಲಕೋತ ತಾಯಿ ಮಗಳೊಂದಿಗೆ ಯಿದ್ದು ಬಂದಿದ್ದನು. ಬರುವಾಗ್ಗೆ ಮುಂದಿನ ದಿನಚರಿಯನ್ನು ರೂಪಿಸಿರದೆ ಯಿರಲಿಲ್ಲ. ಆದರಂತೆ ಮಾರನೆ ದಿನ ಮುಂಜಾನೆ ಬಂದು ನೋಡುತ್ತಾನೆ.. ಬಿಕೋ ಬಿಕೋ.. ಆಳುಕಾಳುಮಂದಿಯನ್ನು ಕೇಳಿ<noinclude></noinclude> 2rd7c7iphaoyid9t5x7pketpuby4zud ಪುಟ:ಅರಮನೆ.pdf/೩೫೭ 104 86548 320203 204129 2026-05-15T16:26:53Z Shreesha Sharma 7840 /* Proofread */ 320203 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೩೨೬|right=ಅರಮನೆ}} ಸಂಕಷ್ಟದಲ್ಲಿರುವಂತಿರುವುದು. ನಾನೀಗಲೇ ಹೊರಟು ಆ ಮಾತೆಯ ಯದುರು ಹಾಜರಿರಬೇಕಿರುವುದು. ನಿನ್ನ ಕಾಮತ್ರುಷೆಯನ್ನು ತಮಣಿ ಮಾಡಲಾಗದಿದ್ದುದಕೆ ಕ್ಷಮೆ ಯಾಚಿಸುವೆನು” ಯಂದು ಕೇಳಿಕೊಂಡನು. ಅದಕಿದ್ದು ಸರಸಿಯು “ನಿನ್ನ ಮಾತ್ರುಭಕ್ಕಿಂರು ಅಸದಳವಾದುದು. ಹೀಗಿಂದೀಗಲೇ ಹೋಗಿ ಬರುವಂತವನಾಗು.. ನೀನು ಮರಳಿ ಬರುವವರೆಗೆ ನಾವ್ಯಾರೂ ವಂದು ಹಿಡಿ ಹುಲ್ಲಾಗಲೀ, ವಂದು ಗುಟುಕು ನೀರನ್ನಾಗಲೀ ಮುಟ್ಟುವುದಿಲ್ಲ” ಯಂದು ಹೇಳಿ ಕಾಳಿ, ಮಾಳಿ, ಗಂಗಿ, ತುಂಗಿ, ರಂಗಿ, ಸಂಗಿ ಗೋಯಿಂದಿಯರೇ ಮೊದಲಾದ ಮಹಿಷಿಕಾ ಸುಂದರಿಯರು ತಮ್ಮ ಪ್ರಿಯತಮನನ್ನು ಬೀಳ್ಕೊಟ್ಟರು. {{gap}}ಅವರಿಂದ ಬೀಳುಕೊಂಡ ಸೂರನು ಪಂಚಕಲ್ಯಾಣಿ ಕುದುರೆಯಂತೆ ಪಟ್ಟಣ ಪ್ರವೇಶ ಮಾಡಿದನು. ಅಗೋ ಅಲ್ಲಿ ದುಕ್ಕದಿಂದ ಬಳಲಿ ಅರೆ ಮೂರೈ ಹೋಗಿರುವ ಮಾತ್ತುಮೂರಿಯು. ವಂದೊಂದು ಹೆಜ್ಜೆಯನಿಕ್ಕುತ ಬಳಿಸಾರು ಅಪ್ಯಾಯಮಾನತೆಯಿಂದ ಮುಖ ನೆಕ್ಕಿ 'ತಾಯೇ... ನನ್ನನ್ನು ಕೂಗಿ ಕರೆದ ಕಾರಣ ಯೇನು?” ಯಂದು ಗೊರಗುಟ್ಟಿದನು. ಆಕೆ ಆತನ ಕೊರಳನ್ನು ಬರಸೆಳೆದು ಅಪ್ಪಿಕೊಂಡು ಲೊಚಲೊಚ ಮುದ್ದಿಸಿದಳು. ಸೂರಾ.. ಸೂರಾss.. ನನಕಂದಾ..... ಯಂದುದ್ಧಾರ ಮಾಡಿದಳು. ಪಸು ಪಚ್ಚೆಗಳಷ್ಟೆ ಅರಮಾಡಿಕೊಳ್ಳಬವುದಾದ ಸಂಭಾಷಣೆ ಅವರೀಶ್ವರ ನಡುವೆ ನಡೆಯಿತು. ಅದು ಯಾವ ಪ್ರಕಾರ ನಡೆಯಿತೆಂದರೆ ಯೀ ಪ್ರಕಾರವಾಗಿ ನಡೆಯಿತು.... {{gap}}ತಾಯಿಯ ಮಾತನ್ನು ಆ ಕಂದಯ್ಯನು ಬಿಲ್‌ಕುಲ್ ವಪ್ಪಲಿಲ್ಲ. “ನಿನ್ನಂಥ ವೀರವನಿತೆ ಆಡೋ ಮಾತೇನು ತಾಯಿ..... ಹೆದರಿ ಪಲಾಯನ ಮಾಡಿದಲ್ಲಿ ಪ್ರಜೆಗಳು ಹೇಡಿಯಂದು ಆಡಿಕೊಳ್ಳುವು ದಿಲ್ಲವೇನು? ಮಿಂಚೇರಿಗೆ ಕೆಟ್ಟ ಹೆಸರು ತಗುಲುವುದಿಲ್ಲವೇನು? ಯಿಲ್ಲೇಯಿದ್ದು ಬಂದುದನ್ನು ಧಮ್ರದಿಂದ ಯದುರಿಸೋಣ.. ಸಮಯ ಬಂದಲ್ಲಿ ಪಟ್ಟಣದ ಕಲ್ಯಾಣಾರ್ಥವಾಗಿ ಮೀರ ಮರಣವನ್ನು ಅಪ್ಪಲಕ ಸಿದ್ದನಿರುವೆನು. ಬಲಿಗೊಂಡಲ್ಲಿ ಅಚಂದ್ರಾರವಾಗಿ ವುಳಿಯುವ ಯೀರಗಲ್ಲು.. ಯಿಲ್ಲದಿದ್ದಲ್ಲಿ ಮಾಮೂಲು ಲವುಕಿಕ ಜೀವನವು.. ನನ್ನಂಥ ಚತುಷ್ಪಾದಿಯ ಸಲುವಾಗಿ ನೀನೀ ಪರಿ ದುಕ್ಕಿಸುವುದು ಸರಿಯಲ್ಲ... ಧಯರದಿಂದಿರು ತಾಯೇ” ಯಂದು ಹೇಳಿದ್ದಕ್ಕೆ ಆ ತಾಯಿಯು ನಿನಗಿರುವಷ್ಟು ಗ್ರಾನ ನನಗಿಲ್ಲ ಕನಪ್ಪಾ.. ನೀನೇ ನನಗ ದಿಕ್ಕೂ ಬಂಧೂ ಬಳಗ ಯಲ್ಲಾವು... ನಿನ್ನ ಕಳಕೊಂಡು ನಾನು ಎಂದು ಛಣ ಬದುಕಿರಾಕಿಲ್ಲ... ನಿನ್ನ ಪರಾಕ್ರಮದ<noinclude></noinclude> s935tqaetvrseat3asunqxarsmq9nq6 320216 320203 2026-05-15T16:31:26Z Shreelatha.Halemane 7642 /* Validated */ 320216 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೩೨೬|right=ಅರಮನೆ}} ಸಂಕಷ್ಟದಲ್ಲಿರುವಂತಿರುವುದು. ನಾನೀಗಲೇ ಹೊರಟು ಆ ಮಾತೆಯ ಯದುರು ಹಾಜರಿರಬೇಕಿರುವುದು. ನಿನ್ನ ಕಾಮತ್ರುಷೆಯನ್ನು ತಮಣಿ ಮಾಡಲಾಗದಿದ್ದುದಕೆ ಕ್ಷಮೆ ಯಾಚಿಸುವೆನು” ಯಂದು ಕೇಳಿಕೊಂಡನು. ಅದಕಿದ್ದು ಸರಸಿಯು “ನಿನ್ನ ಮಾತ್ರುಭಕ್ಕಿಂರು ಅಸದಳವಾದುದು. ಹೀಗಿಂದೀಗಲೇ ಹೋಗಿ ಬರುವಂತವನಾಗು.. ನೀನು ಮರಳಿ ಬರುವವರೆಗೆ ನಾವ್ಯಾರೂ ವಂದು ಹಿಡಿ ಹುಲ್ಲಾಗಲೀ, ವಂದು ಗುಟುಕು ನೀರನ್ನಾಗಲೀ ಮುಟ್ಟುವುದಿಲ್ಲ” ಯಂದು ಹೇಳಿ ಕಾಳಿ, ಮಾಳಿ, ಗಂಗಿ, ತುಂಗಿ, ರಂಗಿ, ಸಂಗಿ ಗೋಯಿಂದಿಯರೇ ಮೊದಲಾದ ಮಹಿಷಿಕಾ ಸುಂದರಿಯರು ತಮ್ಮ ಪ್ರಿಯತಮನನ್ನು ಬೀಳ್ಕೊಟ್ಟರು. {{gap}}ಅವರಿಂದ ಬೀಳುಕೊಂಡ ಸೂರನು ಪಂಚಕಲ್ಯಾಣಿ ಕುದುರೆಯಂತೆ ಪಟ್ಟಣ ಪ್ರವೇಶ ಮಾಡಿದನು. ಅಗೋ ಅಲ್ಲಿ ದುಕ್ಕದಿಂದ ಬಳಲಿ ಅರೆ ಮೂರೈ ಹೋಗಿರುವ ಮಾತ್ತುಮೂರಿಯು. ವಂದೊಂದು ಹೆಜ್ಜೆಯನಿಕ್ಕುತ ಬಳಿಸಾರು ಅಪ್ಯಾಯಮಾನತೆಯಿಂದ ಮುಖ ನೆಕ್ಕಿ 'ತಾಯೇ... ನನ್ನನ್ನು ಕೂಗಿ ಕರೆದ ಕಾರಣ ಯೇನು?” ಯಂದು ಗೊರಗುಟ್ಟಿದನು. ಆಕೆ ಆತನ ಕೊರಳನ್ನು ಬರಸೆಳೆದು ಅಪ್ಪಿಕೊಂಡು ಲೊಚಲೊಚ ಮುದ್ದಿಸಿದಳು. ಸೂರಾ.. ಸೂರಾss.. ನನಕಂದಾ..... ಯಂದುದ್ಧಾರ ಮಾಡಿದಳು. ಪಸು ಪಚ್ಚೆಗಳಷ್ಟೆ ಅರಮಾಡಿಕೊಳ್ಳಬವುದಾದ ಸಂಭಾಷಣೆ ಅವರೀಶ್ವರ ನಡುವೆ ನಡೆಯಿತು. ಅದು ಯಾವ ಪ್ರಕಾರ ನಡೆಯಿತೆಂದರೆ ಯೀ ಪ್ರಕಾರವಾಗಿ ನಡೆಯಿತು.... {{gap}}ತಾಯಿಯ ಮಾತನ್ನು ಆ ಕಂದಯ್ಯನು ಬಿಲ್‌ಕುಲ್ ವಪ್ಪಲಿಲ್ಲ. “ನಿನ್ನಂಥ ವೀರವನಿತೆ ಆಡೋ ಮಾತೇನು ತಾಯಿ..... ಹೆದರಿ ಪಲಾಯನ ಮಾಡಿದಲ್ಲಿ ಪ್ರಜೆಗಳು ಹೇಡಿಯಂದು ಆಡಿಕೊಳ್ಳುವು ದಿಲ್ಲವೇನು? ಮಿಂಚೇರಿಗೆ ಕೆಟ್ಟ ಹೆಸರು ತಗುಲುವುದಿಲ್ಲವೇನು? ಯಿಲ್ಲೇಯಿದ್ದು ಬಂದುದನ್ನು ಧಮ್ರದಿಂದ ಯದುರಿಸೋಣ.. ಸಮಯ ಬಂದಲ್ಲಿ ಪಟ್ಟಣದ ಕಲ್ಯಾಣಾರ್ಥವಾಗಿ ಮೀರ ಮರಣವನ್ನು ಅಪ್ಪಲಕ ಸಿದ್ದನಿರುವೆನು. ಬಲಿಗೊಂಡಲ್ಲಿ ಅಚಂದ್ರಾರವಾಗಿ ವುಳಿಯುವ ಯೀರಗಲ್ಲು.. ಯಿಲ್ಲದಿದ್ದಲ್ಲಿ ಮಾಮೂಲು ಲವುಕಿಕ ಜೀವನವು.. ನನ್ನಂಥ ಚತುಷ್ಪಾದಿಯ ಸಲುವಾಗಿ ನೀನೀ ಪರಿ ದುಕ್ಕಿಸುವುದು ಸರಿಯಲ್ಲ... ಧಯರದಿಂದಿರು ತಾಯೇ” ಯಂದು ಹೇಳಿದ್ದಕ್ಕೆ ಆ ತಾಯಿಯು ನಿನಗಿರುವಷ್ಟು ಗ್ರಾನ ನನಗಿಲ್ಲ ಕನಪ್ಪಾ.. ನೀನೇ ನನಗ ದಿಕ್ಕೂ ಬಂಧೂ ಬಳಗ ಯಲ್ಲಾವು... ನಿನ್ನ ಕಳಕೊಂಡು ನಾನು ಎಂದು ಛಣ ಬದುಕಿರಾಕಿಲ್ಲ... ನಿನ್ನ ಪರಾಕ್ರಮದ<noinclude></noinclude> puycpbx4edfs86gnfx3t5qomg6evr5f ಪುಟ:ಅರಮನೆ.pdf/೩೪೬ 104 86722 320184 275235 2026-05-15T16:19:17Z Shreesha Sharma 7840 /* Proofread */ 320184 proofread-page text/x-wiki <noinclude><pagequality level="3" user="Shreesha Sharma" /></noinclude>________________ ಅರಮನೆ ೩೧೫ {{gap}} ತಮ್ಮ ತಮ್ಮ ಪಾಲಿನ ಕೆಲಸ ಬೊಗಸೆಗಳನ್ನು ಮಾಡುತಲಿದ್ದರು. ದ್ವಾಪರಯುಗದಲ್ಲಿ ಭೀಮಸೇನನಿಂದ ಸ್ಥಾಪಿತಗೊಂಡಿರುವಂಥ ಭೀಮಲಿಂಗೇಶ್ವರಸ್ವಾಮಿಯ ರಥೋತ್ಸವ ಯಾವ ಕಾರಣಕ್ಕೂ ನಿಂತುದುದಿಲ್ಲ. ಯಂಥೆಂಥೋ ಪವಾಡ ತೋರಿಸಿರುವ ತಮ್ಮ ಸ್ವಾಮಿ ನಾಗಿರೆಡ್ಡಿ ಯಿಷಯದಲ್ಲಿ ತಾಚ್ಚಾರ ಮಾಡಲಾರನು. ತನ್ನ ಮಗನ ಯೋಗಕ್ಷೇಮ ನೋಡಿಕೊಳ್ಳುವುದು ಪಿತ್ರುಸ್ಥಾನದಲ್ಲಿರುವಾತನ ಕರವ್ಯವು..... <br> {{gap}}ಅತ್ತ ಹರಪನಹಳ್ಳಿ ಪ್ರಾಂತದೊಳಗ ಕೀರಿಸೇಷ ಸೋಮಶೇಖರ ನಾಯಕ ಫವುಜು ಭರಮನ ಗವುಡನ ನೇತ್ರುತ್ವದಲ್ಲಿ ಭಲೇ ಕ್ರಿಯಾಶೀಲವಾಗಿತ್ತು. ಕಮಾಂಡರು ಸ್ಕೂವರನು ಆ ಸೊಯಂ ಘೋಷಿತ ಪವುಜಿನ ಮ್ಯಾಲ ನಿಗಾ ಯಿಟ್ಟೇ ಹರಪನಹಳ್ಳಿ ವಳಗ ಮೊಕ್ಕಾಂ ಹೂಡಿದ್ದನು. ಅವನ ಗೂಢಾಚಾರರು ವಂದಲ್ಲಾವಂದು ಸುದ್ದಿಯನ್ನು ತಂದು ಅವಯ್ಯನ ಕೆಂಗೂದಲ ಕಿವಿಯೊಳಗ ವುಸುರುತಲಿದ್ದರು. ಬಿಟ್ಟುದ ಬಿಟ್ಟು ಬಂದು ತನ್ನೆದುರು ಹಾಜರಾಗುವಂತೆ ಗವುಡಗೆ ಬುಲಾವು ಕಳಿಸಿದನು. ಮ್ಯಾಗಳಗೇರಿಯನ್ನು ಅದೇ ಯಿನ್ನು ಕಬ್ಬಾ ಮಾಡಿಕೊಂಡು ಅದರ ವುಸ್ತುವಾರಿಯನ್ನು ಹಂಪರಸಪ್ಪಯ್ಯನ ಸಲಹೆ ಮೇರೆಗೆ ದೂದಯ್ಯನಿಗೆ ವಹಿಸಿ ಗ್ರಾಮದ ಹಿರಿಯ ವತನದಾರ ಬಲವಂತಪ್ಪನ ಮನೆಯೊಳಗೆ ಮಿಶ್ರಾಂತಿ ಪಡಕೊಳ್ಳುತಲಿದ್ದ ಭರಮನಗವುಡನು ಯೀಗ ತನಗೆ ಪುರುಸೊತ್ತಿಲ್ಲ ಯಂದು ಹೇಳಿ ಕಳುವಿದ್ದನು. ಮುಂದುರುಗಿ, ಡಂಬಳ, ಕೊಂಬಳಿ, ಕುರವತ್ತಿ ಮೊದಲಾದ ಕಡೇಲೆಲ್ಲ ಕುಂಪಣಿ ಸರಕಾರದ ಯಿರುದ್ದದ ದಂಗೆಗಳನ್ನು ನಿಲ್ದಾಕ್ಷಿಣ್ಯವಾಗಿ, ಕ್ರೂರವಾಗಿ ಅಡಗಿಸಿ ಕುಖ್ಯಾತನಾಗಿದ್ದ ಸ್ಕೂವರನಾದರೋ ಯದುರಾಳಿಗಳ ಮೂಗು ಹಿಡಿದು ಬಾಯಿ ತೆರೆಯುವಂತೆ ಮಾಡಬಲ್ಲ ಚಾಣಾಕ್ಷನು.. ಗವುಡನ ಜವಾಬನ್ನು ವುದ್ದಟತನವೆಂದೇ ಭಾವಿಸಿದನು. ಪುಣೆಯ ಕಾಳಗದಲ್ಲಿ ಕುಂಪಣಿ ಸರಕಾರದ ಪರ ಸಂಚು ರೂಪಿಸಿದ್ದಂಥ, ಬೊಜ್ಞಾನೂ, ಸೂರ ಸಿಪಾಯಿಯು ಆಗಿದ್ದ ದಂಡೋಜಿ ನೇತ್ರುತ್ವದಲ್ಲಿ ಹತ್ತು ಮಂದಿ ಸಿಪಾಯಿಗಳನ್ನು ಬಂಧಿಸಿ ತರಲೆಂದು ಕಳುವಿದನು. ಅಷ್ಟು ಹೊತ್ತಿಗೆ ಮಾಗಳಗೇರಿಯಿಂದ ಕಂಚಿಕೇರಿಗೆ ಮೊಕ್ಕಾಂ ಬದಲಾಯಿಸಿದ್ದ ಗವುಡನು ದಂಡೋಜಿ ಮತ್ತವನ ಸಿಪಾಯಿಗಳನ್ನು ಪ್ರೀತಿಯಿಂದ ಬರಮಾಡಿಕೊಂಡನಲ್ಲದೆ ಹೋಳಿಗೆ ಮೊಟ ಮಾಡಿಸಿ ಮಿಶ್ರಾಂತಿಗೆ ಬಿಡದಿ ಯೇರುಪಾಟು ಮಾಡಿದನು. ಆತಿಥ್ಯದಿಂದ ಅಲ್ಲ ಬಲ ಕಳಕೊಂಡಿದ್ದ ದಂಡೋಜಿಯು ಸ್ಕೂವರ್<noinclude></noinclude> quk4e3iu6u8uoowygi6b30zps8oqzjg 320187 320184 2026-05-15T16:21:24Z Shreelatha.Halemane 7642 /* Validated */ 320187 proofread-page text/x-wiki <noinclude><pagequality level="4" user="Shreelatha.Halemane" /></noinclude>________________ ಅರಮನೆ ೩೧೫ {{gap}} ತಮ್ಮ ತಮ್ಮ ಪಾಲಿನ ಕೆಲಸ ಬೊಗಸೆಗಳನ್ನು ಮಾಡುತಲಿದ್ದರು. ದ್ವಾಪರಯುಗದಲ್ಲಿ ಭೀಮಸೇನನಿಂದ ಸ್ಥಾಪಿತಗೊಂಡಿರುವಂಥ ಭೀಮಲಿಂಗೇಶ್ವರಸ್ವಾಮಿಯ ರಥೋತ್ಸವ ಯಾವ ಕಾರಣಕ್ಕೂ ನಿಂತುದುದಿಲ್ಲ. ಯಂಥೆಂಥೋ ಪವಾಡ ತೋರಿಸಿರುವ ತಮ್ಮ ಸ್ವಾಮಿ ನಾಗಿರೆಡ್ಡಿ ಯಿಷಯದಲ್ಲಿ ತಾಚ್ಚಾರ ಮಾಡಲಾರನು. ತನ್ನ ಮಗನ ಯೋಗಕ್ಷೇಮ ನೋಡಿಕೊಳ್ಳುವುದು ಪಿತ್ರುಸ್ಥಾನದಲ್ಲಿರುವಾತನ ಕರ್ತವ್ಯ ವು..... {{gap}}ಅತ್ತ ಹರಪನಹಳ್ಳಿ ಪ್ರಾಂತದೊಳಗ ಕೀರಿಸೇಷ ಸೋಮಶೇಖರ ನಾಯಕ ಫವುಜು ಭರಮನ ಗವುಡನ ನೇತ್ರುತ್ವದಲ್ಲಿ ಭಲೇ ಕ್ರಿಯಾಶೀಲವಾಗಿತ್ತು. ಕಮಾಂಡರು ಸ್ಕೂವರನು ಆ ಸೊಯಂ ಘೋಷಿತ ಪವುಜಿನ ಮ್ಯಾಲ ನಿಗಾ ಯಿಟ್ಟೇ ಹರಪನಹಳ್ಳಿ ವಳಗ ಮೊಕ್ಕಾಂ ಹೂಡಿದ್ದನು. ಅವನ ಗೂಢಾಚಾರರು ವಂದಲ್ಲಾವಂದು ಸುದ್ದಿಯನ್ನು ತಂದು ಅವಯ್ಯನ ಕೆಂಗೂದಲ ಕಿವಿಯೊಳಗ ವುಸುರುತಲಿದ್ದರು. ಬಿಟ್ಟುದ ಬಿಟ್ಟು ಬಂದು ತನ್ನೆದುರು ಹಾಜರಾಗುವಂತೆ ಗವುಡಗೆ ಬುಲಾವು ಕಳಿಸಿದನು. ಮ್ಯಾಗಳಗೇರಿಯನ್ನು ಅದೇ ಯಿನ್ನು ಕಬ್ಬಾ ಮಾಡಿಕೊಂಡು ಅದರ ವುಸ್ತುವಾರಿಯನ್ನು ಹಂಪರಸಪ್ಪಯ್ಯನ ಸಲಹೆ ಮೇರೆಗೆ ದೂದಯ್ಯನಿಗೆ ವಹಿಸಿ ಗ್ರಾಮದ ಹಿರಿಯ ವತನದಾರ ಬಲವಂತಪ್ಪನ ಮನೆಯೊಳಗೆ ಮಿಶ್ರಾಂತಿ ಪಡಕೊಳ್ಳುತಲಿದ್ದ ಭರಮನಗವುಡನು ಯೀಗ ತನಗೆ ಪುರುಸೊತ್ತಿಲ್ಲ ಯಂದು ಹೇಳಿ ಕಳುವಿದ್ದನು. ಮುಂದುರುಗಿ, ಡಂಬಳ, ಕೊಂಬಳಿ, ಕುರವತ್ತಿ ಮೊದಲಾದ ಕಡೇಲೆಲ್ಲ ಕುಂಪಣಿ ಸರಕಾರದ ಯಿರುದ್ದದ ದಂಗೆಗಳನ್ನು ನಿಲ್ದಾಕ್ಷಿಣ್ಯವಾಗಿ, ಕ್ರೂರವಾಗಿ ಅಡಗಿಸಿ ಕುಖ್ಯಾತನಾಗಿದ್ದ ಸ್ಕೂವರನಾದರೋ ಯದುರಾಳಿಗಳ ಮೂಗು ಹಿಡಿದು ಬಾಯಿ ತೆರೆಯುವಂತೆ ಮಾಡಬಲ್ಲ ಚಾಣಾಕ್ಷನು.. ಗವುಡನ ಜವಾಬನ್ನು ವುದ್ದಟತನವೆಂದೇ ಭಾವಿಸಿದನು. ಪುಣೆಯ ಕಾಳಗದಲ್ಲಿ ಕುಂಪಣಿ ಸರಕಾರದ ಪರ ಸಂಚು ರೂಪಿಸಿದ್ದಂಥ, ಬೊಜ್ಞಾನೂ, ಸೂರ ಸಿಪಾಯಿಯು ಆಗಿದ್ದ ದಂಡೋಜಿ ನೇತ್ರುತ್ವದಲ್ಲಿ ಹತ್ತು ಮಂದಿ ಸಿಪಾಯಿಗಳನ್ನು ಬಂಧಿಸಿ ತರಲೆಂದು ಕಳುವಿದನು. ಅಷ್ಟು ಹೊತ್ತಿಗೆ ಮಾಗಳಗೇರಿಯಿಂದ ಕಂಚಿಕೇರಿಗೆ ಮೊಕ್ಕಾಂ ಬದಲಾಯಿಸಿದ್ದ ಗವುಡನು ದಂಡೋಜಿ ಮತ್ತವನ ಸಿಪಾಯಿಗಳನ್ನು ಪ್ರೀತಿಯಿಂದ ಬರಮಾಡಿಕೊಂಡನಲ್ಲದೆ ಹೋಳಿಗೆ ಮೊಟ ಮಾಡಿಸಿ ಮಿಶ್ರಾಂತಿಗೆ ಬಿಡದಿ ಯೇರುಪಾಟು ಮಾಡಿದನು. ಆತಿಥ್ಯದಿಂದ ಅಲ್ಲ ಬಲ ಕಳಕೊಂಡಿದ್ದ ದಂಡೋಜಿಯು ಸ್ಕೂವರ್<noinclude></noinclude> 3ask7w2kvlef2mk6gmo0xlust4i7nw7 ಪುಟ:ಅರಮನೆ.pdf/೩೪೮ 104 86724 320177 275249 2026-05-15T16:11:57Z Shreesha Sharma 7840 320177 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=ಅರಮನೆ|right=೩೧೭}} {{gap}}ಬಳ್ಳಾರಿ ಪಟ್ಟಣದ ಸರಹದ್ದಿನೊಳಗೆ ಕಾಲಿರಿಸಿದ್ದೇ ತಡ ಮನೋಗೆ ಬಿಕ್ಕಳಿಕೆ ಸುರುವಾಗಿದ್ದವು. ದಾರಿವುದ್ದಕ್ಕೂ ಬಾಯಿ ಪಸೆ ಆರುತ್ತಲೇ ಯಿತ್ತು. ತನ್ನಂತರಂಗದಲ್ಲೋ ತಪ್ಪು ಸರಿಗಳ ಗೊಂದಲ.. ಯದುರಿಗೋ ಯಿತಿಹಾಸಕ್ಕೆ ಸೇರಲೆಂದು ಹಾತೊರೆಯುತ್ತಿರುವ ಮುಂಬರುವ ದಿನಗಳು... ಆ ದಿನಗಳಲ್ಲಿ ತಾನು... ದೇವರೇ... ನಾಗಿರೆಡ್ಡಿ ಯಂಬ ಸಬುಧವು ಕೆಲಕಾಲ ಕಿವಿಗೆ ಬೀಳದಂತೆ ನಿಗಾ ವಹಿಸು ಯಂದು ಬೇಡಿಕೊಂಡೇ ತಾನು ಸರಹದ್ದು ಪ್ರವೇಶ ಮಾಡಿದ್ದು... ಆದರೆ ಥತ್! ಆ ಥ್ಯಾಕರೆ ಜಾಯಮಾನದ ಹೆವದರಿ ಬಿಟ್ಟನಲ್ಲ... ಅವನು ವುಚ್ಚರಿಸಿದ ಯರಡು ವಾಕ್ಯಗಳಲ್ಲಿ ನಾಗಿರೆಡ್ಡಿಯಂಬ ಅಯ್ದು ಭಯಾನಕ ಸಬುಧಗಳಿದ್ದವು ಯಂದರೆ.. ಯಿನ್ನು ವುಳಿದವರು.. ಮನೋ ಸರಸರ ಬಂದವನೆ ಅತಿಥಿಗ್ರಹ ಪ್ರವೇಶಿಸಿ ತನ್ನನ್ನು ತಾನೇ ಗ್ರುಹ ಬಂಧನದಲ್ಲಿ ಯಿರಿಸಿಕೊಂಡುಬಿಟ್ಟಿದ್ದನು.ತನಗೂ ಅಂತಃಕರಣಯಿರುವುದೆಂಬ ಸುಳಿವು ಯಿತರರಿಗೆ ತಿಳಿಯದಿರಲೆಂದು.... ಪಯಣದ ದಣುವು ಯಂಬುದನ್ನು ಮುಂದೆ ಬಿಟ್ಟಿದ್ದನು.. <br> {{gap}}ಆತನೆಂಜಲನು ವುಂಡಿರುವ ನನ್ನೊಳಗ ಆತನೋ, ನನ್ನೆಂಜಲನು ವುಂಡಿರುವ ಆತನೊಳಗ ನಾನೋ! ವಂದಗ್ಗದಲ್ಲಿ ನಾನೇ ಸೆರೆಮನೆಯೊಳಗ ಯಿರುವುದು.. ಯಿನ್ನೊಂದರದಲ್ಲಿ ಅವನೇ ಯಲ್ಲಿರುವುದು. ಮೋ ಮಮ್ ಗಾಡ್.. ಕುಂಪಣಿ ಸರಕಾರದ ಸೇವೆಯಲ್ಲಿರುವವರ ಚರುವ ದಪ್ಪಯಿರಬೇಕೆಂದೂ, ತನ್ನ ಮನದೊಳಗ ಸೂಕ್ಷ್ಮ ಭಾವನೆಗಳನು ಬಿಟ್ಟುಕೊಳ್ಳಕೂಡದು ಯಂದೂ ಮೊದಲಾಗಿ ಗ್ರಹಾಂ ಹೇಳಿದ್ದ ಮಾತುಗಳನ್ನು ನೆನಪಿಸಿಕೊಳ್ಳುತ್ತ.. ಯಾಕೆ ತಾನಿಷ್ಟು ಸೆಂಟಿಮೆಂಟಾಗುತ್ತಿರುವೆನು ತಂದೆಯೇ..? <br> {{gap}}ವಂದು ಹಗಲು, ವಂದು ರಾತ್ರಿ ಕಳೆದು ಯರಡನೇ ಹಗಲು ಮೂಡಿತು.. ತಾನೀಗ ನಿನ್ನೆ ದಿವಸದ ಭಾವನೆಗಳನ್ನು ಅನುಭೋಗಿಸಕೂಡದು. ನಿನ್ನದು ನಿನ್ನೆಗೇ.. ಯವತ್ತಿಂದು ಯವತ್ತಿಗೇ, ತನ್ನೊಳಗ ಮಾನವನು ಪಾವಲಿ ಭಾಗ ಅದಾನ, ಯಂತ್ರಮೂರು ಪಾವಲಿ ಭಾಗ ಅದ.. ತಾನು ಹೇಳಿ, ಕೇಳಿ ಕುಂಪಣಿ ಗವರುಮೆಂಟಿನ ಸರವಂಟನು.... {{gap}}ಯಿಡೀ ರಾತಿರಿ ಪಲ್ಯಂತ ನಿದುರೆಯಿಲ್ಲದೆ ಕನವರಿಸಿದ.. ಮಗ್ಗುಲು ಮ್ಯಾಲ ಮಗ್ಗುಲು ಬದಲಾಯಿಸುತ್ತ ವುರುಳಾಡಿದ.. ಮನೋ ಸಾಹೇಬನು ಯದ್ದು ಕುರುಬರ ಲೆಕ್ಕಾಚಾರದಲ್ಲಿ ಮೂಡಲ ಕಡೇಕ ನೋಡಿದ.. ಬೆಳ್ಳಿ ಚುಕ್ಕಿ<noinclude></noinclude> bp4x5ganxm8408phs6v7vnjv7u3py4b 320186 320177 2026-05-15T16:20:55Z Shreesha Sharma 7840 /* Proofread */ 320186 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೧೭}} ಬಳ್ಳಾರಿ ಪಟ್ಟಣದ ಸರಹದ್ದಿನೊಳಗೆ ಕಾಲಿರಿಸಿದ್ದೇ ತಡ ಮನೋಗೆ ಬಿಕ್ಕಳಿಕೆ ಸುರುವಾಗಿದ್ದವು. ದಾರಿವುದ್ದಕ್ಕೂ ಬಾಯಿ ಪಸೆ ಆರುತ್ತಲೇ ಯಿತ್ತು. ತನ್ನಂತರಂಗದಲ್ಲೋ ತಪ್ಪು ಸರಿಗಳ ಗೊಂದಲ.. ಯದುರಿಗೋ ಯಿತಿಹಾಸಕ್ಕೆ ಸೇರಲೆಂದು ಹಾತೊರೆಯುತ್ತಿರುವ ಮುಂಬರುವ ದಿನಗಳು... ಆ ದಿನಗಳಲ್ಲಿ ತಾನು... ದೇವರೇ... ನಾಗಿರೆಡ್ಡಿ ಯಂಬ ಸಬುಧವು ಕೆಲಕಾಲ ಕಿವಿಗೆ ಬೀಳದಂತೆ ನಿಗಾ ವಹಿಸು ಯಂದು ಬೇಡಿಕೊಂಡೇ ತಾನು ಸರಹದ್ದು ಪ್ರವೇಶ ಮಾಡಿದ್ದು... ಆದರೆ ಥತ್! ಆ ಥ್ಯಾಕರೆ ಜಾಯಮಾನದ ಹೆವದರಿ ಬಿಟ್ಟನಲ್ಲ... ಅವನು ವುಚ್ಚರಿಸಿದ ಯರಡು ವಾಕ್ಯಗಳಲ್ಲಿ ನಾಗಿರೆಡ್ಡಿಯಂಬ ಅಯ್ದು ಭಯಾನಕ ಸಬುಧಗಳಿದ್ದವು ಯಂದರೆ.. ಯಿನ್ನು ವುಳಿದವರು.. ಮನೋ ಸರಸರ ಬಂದವನೆ ಅತಿಥಿಗ್ರಹ ಪ್ರವೇಶಿಸಿ ತನ್ನನ್ನು ತಾನೇ ಗ್ರುಹ ಬಂಧನದಲ್ಲಿ ಯಿರಿಸಿಕೊಂಡುಬಿಟ್ಟಿದ್ದನು.ತನಗೂ ಅಂತಃಕರಣಯಿರುವುದೆಂಬ ಸುಳಿವು ಯಿತರರಿಗೆ ತಿಳಿಯದಿರಲೆಂದು.... ಪಯಣದ ದಣುವು ಯಂಬುದನ್ನು ಮುಂದೆ ಬಿಟ್ಟಿದ್ದನು.. {{gap}}ಆತನೆಂಜಲನು ವುಂಡಿರುವ ನನ್ನೊಳಗ ಆತನೋ, ನನ್ನೆಂಜಲನು ವುಂಡಿರುವ ಆತನೊಳಗ ನಾನೋ! ವಂದಗ್ಗದಲ್ಲಿ ನಾನೇ ಸೆರೆಮನೆಯೊಳಗ ಯಿರುವುದು.. ಯಿನ್ನೊಂದರದಲ್ಲಿ ಅವನೇ ಯಲ್ಲಿರುವುದು. ಮೋ ಮಮ್ ಗಾಡ್.. ಕುಂಪಣಿ ಸರಕಾರದ ಸೇವೆಯಲ್ಲಿರುವವರ ಚರುವ ದಪ್ಪಯಿರಬೇಕೆಂದೂ, ತನ್ನ ಮನದೊಳಗ ಸೂಕ್ಷ್ಮ ಭಾವನೆಗಳನು ಬಿಟ್ಟುಕೊಳ್ಳಕೂಡದು ಯಂದೂ ಮೊದಲಾಗಿ ಗ್ರಹಾಂ ಹೇಳಿದ್ದ ಮಾತುಗಳನ್ನು ನೆನಪಿಸಿಕೊಳ್ಳುತ್ತ.. ಯಾಕೆ ತಾನಿಷ್ಟು ಸೆಂಟಿಮೆಂಟಾಗುತ್ತಿರುವೆನು ತಂದೆಯೇ..? {{gap}}ವಂದು ಹಗಲು, ವಂದು ರಾತ್ರಿ ಕಳೆದು ಯರಡನೇ ಹಗಲು ಮೂಡಿತು.. ತಾನೀಗ ನಿನ್ನೆ ದಿವಸದ ಭಾವನೆಗಳನ್ನು ಅನುಭೋಗಿಸಕೂಡದು. ನಿನ್ನದು ನಿನ್ನೆಗೇ.. ಯವತ್ತಿಂದು ಯವತ್ತಿಗೇ, ತನ್ನೊಳಗ ಮಾನವನು ಪಾವಲಿ ಭಾಗ ಅದಾನ, ಯಂತ್ರಮೂರು ಪಾವಲಿ ಭಾಗ ಅದ.. ತಾನು ಹೇಳಿ, ಕೇಳಿ ಕುಂಪಣಿ ಗವರುಮೆಂಟಿನ ಸರವಂಟನು.... {{gap}}ಯಿಡೀ ರಾತಿರಿ ಪಲ್ಯಂತ ನಿದುರೆಯಿಲ್ಲದೆ ಕನವರಿಸಿದ.. ಮಗ್ಗುಲು ಮ್ಯಾಲ ಮಗ್ಗುಲು ಬದಲಾಯಿಸುತ್ತ ವುರುಳಾಡಿದ.. ಮನೋ ಸಾಹೇಬನು ಯದ್ದು ಕುರುಬರ ಲೆಕ್ಕಾಚಾರದಲ್ಲಿ ಮೂಡಲ ಕಡೇಕ ನೋಡಿದ.. ಬೆಳ್ಳಿ ಚುಕ್ಕಿ<noinclude></noinclude> grfkeyzl6e61ee34e9x101golqsbxxg 320193 320186 2026-05-15T16:22:31Z Shreelatha.Halemane 7642 /* Validated */ 320193 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೧೭}} ಬಳ್ಳಾರಿ ಪಟ್ಟಣದ ಸರಹದ್ದಿನೊಳಗೆ ಕಾಲಿರಿಸಿದ್ದೇ ತಡ ಮನೋಗೆ ಬಿಕ್ಕಳಿಕೆ ಸುರುವಾಗಿದ್ದವು. ದಾರಿವುದ್ದಕ್ಕೂ ಬಾಯಿ ಪಸೆ ಆರುತ್ತಲೇ ಯಿತ್ತು. ತನ್ನಂತರಂಗದಲ್ಲೋ ತಪ್ಪು ಸರಿಗಳ ಗೊಂದಲ.. ಯದುರಿಗೋ ಯಿತಿಹಾಸಕ್ಕೆ ಸೇರಲೆಂದು ಹಾತೊರೆಯುತ್ತಿರುವ ಮುಂಬರುವ ದಿನಗಳು... ಆ ದಿನಗಳಲ್ಲಿ ತಾನು... ದೇವರೇ... ನಾಗಿರೆಡ್ಡಿ ಯಂಬ ಸಬುಧವು ಕೆಲಕಾಲ ಕಿವಿಗೆ ಬೀಳದಂತೆ ನಿಗಾ ವಹಿಸು ಯಂದು ಬೇಡಿಕೊಂಡೇ ತಾನು ಸರಹದ್ದು ಪ್ರವೇಶ ಮಾಡಿದ್ದು... ಆದರೆ ಥತ್! ಆ ಥ್ಯಾಕರೆ ಜಾಯಮಾನದ ಹೆವದರಿ ಬಿಟ್ಟನಲ್ಲ... ಅವನು ವುಚ್ಚರಿಸಿದ ಯರಡು ವಾಕ್ಯಗಳಲ್ಲಿ ನಾಗಿರೆಡ್ಡಿಯಂಬ ಅಯ್ದು ಭಯಾನಕ ಸಬುಧಗಳಿದ್ದವು ಯಂದರೆ.. ಯಿನ್ನು ವುಳಿದವರು.. ಮನೋ ಸರಸರ ಬಂದವನೆ ಅತಿಥಿಗ್ರಹ ಪ್ರವೇಶಿಸಿ ತನ್ನನ್ನು ತಾನೇ ಗ್ರುಹ ಬಂಧನದಲ್ಲಿ ಯಿರಿಸಿಕೊಂಡುಬಿಟ್ಟಿದ್ದನು.ತನಗೂ ಅಂತಃಕರಣಯಿರುವುದೆಂಬ ಸುಳಿವು ಯಿತರರಿಗೆ ತಿಳಿಯದಿರಲೆಂದು.... ಪಯಣದ ದಣುವು ಯಂಬುದನ್ನು ಮುಂದೆ ಬಿಟ್ಟಿದ್ದನು.. {{gap}}ಆತನೆಂಜಲನು ವುಂಡಿರುವ ನನ್ನೊಳಗ ಆತನೋ, ನನ್ನೆಂಜಲನು ವುಂಡಿರುವ ಆತನೊಳಗ ನಾನೋ! ವಂದಗ್ಗದಲ್ಲಿ ನಾನೇ ಸೆರೆಮನೆಯೊಳಗ ಯಿರುವುದು.. ಯಿನ್ನೊಂದರದಲ್ಲಿ ಅವನೇ ಯಲ್ಲಿರುವುದು. ಮೋ ಮಮ್ ಗಾಡ್.. ಕುಂಪಣಿ ಸರಕಾರದ ಸೇವೆಯಲ್ಲಿರುವವರ ಚರುವ ದಪ್ಪಯಿರಬೇಕೆಂದೂ, ತನ್ನ ಮನದೊಳಗ ಸೂಕ್ಷ್ಮ ಭಾವನೆಗಳನು ಬಿಟ್ಟುಕೊಳ್ಳಕೂಡದು ಯಂದೂ ಮೊದಲಾಗಿ ಗ್ರಹಾಂ ಹೇಳಿದ್ದ ಮಾತುಗಳನ್ನು ನೆನಪಿಸಿಕೊಳ್ಳುತ್ತ.. ಯಾಕೆ ತಾನಿಷ್ಟು ಸೆಂಟಿಮೆಂಟಾಗುತ್ತಿರುವೆನು ತಂದೆಯೇ..? {{gap}}ವಂದು ಹಗಲು, ವಂದು ರಾತ್ರಿ ಕಳೆದು ಯರಡನೇ ಹಗಲು ಮೂಡಿತು.. ತಾನೀಗ ನಿನ್ನೆ ದಿವಸದ ಭಾವನೆಗಳನ್ನು ಅನುಭೋಗಿಸಕೂಡದು. ನಿನ್ನದು ನಿನ್ನೆಗೇ.. ಯವತ್ತಿಂದು ಯವತ್ತಿಗೇ, ತನ್ನೊಳಗ ಮಾನವನು ಪಾವಲಿ ಭಾಗ ಅದಾನ, ಯಂತ್ರಮೂರು ಪಾವಲಿ ಭಾಗ ಅದ.. ತಾನು ಹೇಳಿ, ಕೇಳಿ ಕುಂಪಣಿ ಗವರುಮೆಂಟಿನ ಸರವಂಟನು.... {{gap}}ಯಿಡೀ ರಾತಿರಿ ಪಲ್ಯಂತ ನಿದುರೆಯಿಲ್ಲದೆ ಕನವರಿಸಿದ.. ಮಗ್ಗುಲು ಮ್ಯಾಲ ಮಗ್ಗುಲು ಬದಲಾಯಿಸುತ್ತ ವುರುಳಾಡಿದ.. ಮನೋ ಸಾಹೇಬನು ಯದ್ದು ಕುರುಬರ ಲೆಕ್ಕಾಚಾರದಲ್ಲಿ ಮೂಡಲ ಕಡೇಕ ನೋಡಿದ.. ಬೆಳ್ಳಿ ಚುಕ್ಕಿ<noinclude></noinclude> cvtsg9zbdw06x3lcqgjmqsq0l77algn 320196 320193 2026-05-15T16:23:11Z Shreelatha.Halemane 7642 320196 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೧೭}} ಬಳ್ಳಾರಿ ಪಟ್ಟಣದ ಸರಹದ್ದಿನೊಳಗೆ ಕಾಲಿರಿಸಿದ್ದೇ ತಡ ಮನೋಗೆ ಬಿಕ್ಕಳಿಕೆ ಸುರುವಾಗಿದ್ದವು. ದಾರಿವುದ್ದಕ್ಕೂ ಬಾಯಿ ಪಸೆ ಆರುತ್ತಲೇ ಯಿತ್ತು. ತನ್ನಂತರಂಗದಲ್ಲೋ ತಪ್ಪು ಸರಿಗಳ ಗೊಂದಲ.. ಯದುರಿಗೋ ಯಿತಿಹಾಸಕ್ಕೆ ಸೇರಲೆಂದು ಹಾತೊರೆಯುತ್ತಿರುವ ಮುಂಬರುವ ದಿನಗಳು... ಆ ದಿನಗಳಲ್ಲಿ ತಾನು... ದೇವರೇ... ನಾಗಿರೆಡ್ಡಿ ಯಂಬ ಸಬುಧವು ಕೆಲಕಾಲ ಕಿವಿಗೆ ಬೀಳದಂತೆ ನಿಗಾ ವಹಿಸು ಯಂದು ಬೇಡಿಕೊಂಡೇ ತಾನು ಸರಹದ್ದು ಪ್ರವೇಶ ಮಾಡಿದ್ದು... ಆದರೆ ಥತ್! ಆ ಥ್ಯಾಕರೆ ಜಾಯಮಾನದ ಹೆವದರಿ ಬಿಟ್ಟನಲ್ಲ... ಅವನು ವುಚ್ಚರಿಸಿದ ಯರಡು ವಾಕ್ಯಗಳಲ್ಲಿ ನಾಗಿರೆಡ್ಡಿಯಂಬ ಅಯ್ದು ಭಯಾನಕ ಸಬುಧಗಳಿದ್ದವು ಯಂದರೆ.. ಯಿನ್ನು ವುಳಿದವರು.. ಮನೋ ಸರಸರ ಬಂದವನೆ ಅತಿಥಿಗ್ರಹ ಪ್ರವೇಶಿಸಿ ತನ್ನನ್ನು ತಾನೇ ಗ್ರುಹ ಬಂಧನದಲ್ಲಿ ಯಿರಿಸಿಕೊಂಡುಬಿಟ್ಟಿದ್ದನು.ತನಗೂ ಅಂತಃಕರಣಯಿರುವುದೆಂಬ ಸುಳಿವು ಯಿತರರಿಗೆ ತಿಳಿಯದಿರಲೆಂದು.... ಪಯಣದ ದಣುವು ಯಂಬುದನ್ನು ಮುಂದೆ ಬಿಟ್ಟಿದ್ದನು.. {{gap}}ಆತನೆಂಜಲನು ವುಂಡಿರುವ ನನ್ನೊಳಗ ಆತನೋ, ನನ್ನೆಂಜಲನು ವುಂಡಿರುವ ಆತನೊಳಗ ನಾನೋ! ವಂದಗ್ಗದಲ್ಲಿ ನಾನೇ ಸೆರೆಮನೆಯೊಳಗ ಯಿರುವುದು.. ಯಿನ್ನೊಂದರದಲ್ಲಿ ಅವನೇ ಯಲ್ಲಿರುವುದು. ಮೋ ಮಮ್ ಗಾಡ್.. ಕುಂಪಣಿ ಸರಕಾರದ ಸೇವೆಯಲ್ಲಿರುವವರ ಚರುವ ದಪ್ಪಯಿರಬೇಕೆಂದೂ, ತನ್ನ ಮನದೊಳಗ ಸೂಕ್ಷ್ಮ ಭಾವನೆಗಳನು ಬಿಟ್ಟುಕೊಳ್ಳಕೂಡದು ಯಂದೂ ಮೊದಲಾಗಿ ಗ್ರಹಾಂ ಹೇಳಿದ್ದ ಮಾತುಗಳನ್ನು ನೆನಪಿಸಿಕೊಳ್ಳುತ್ತ.. ಯಾಕೆ ತಾನಿಷ್ಟು ಸೆಂಟಿಮೆಂಟಾಗುತ್ತಿರುವೆನು ತಂದೆಯೇ..? {{gap}}ವಂದು ಹಗಲು, ವಂದು ರಾತ್ರಿ ಕಳೆದು ಯರಡನೇ ಹಗಲು ಮೂಡಿತು.. ತಾನೀಗ ನಿನ್ನೆ ದಿವಸದ ಭಾವನೆಗಳನ್ನು ಅನುಭೋಗಿಸಕೂಡದು. ನಿನ್ನದು ನಿನ್ನೆಗೇ.. ಯವತ್ತಿಂದು ಯವತ್ತಿಗೇ, ತನ್ನೊಳಗ ಮಾನವನು ಪಾವಲಿ ಭಾಗ ಅದಾನ, ಯಂತ್ರಮೂರು ಪಾವಲಿ ಭಾಗ ಅದ.. ತಾನು ಹೇಳಿ, ಕೇಳಿ ಕುಂಪಣಿ ಗವರುಮೆಂಟಿನ ಸರವಂಟನು.... {{gap}}ಯಿಡೀ ರಾತಿರಿ ಪರ್ಯಂತ ನಿದುರೆಯಿಲ್ಲದೆ ಕನವರಿಸಿದ.. ಮಗ್ಗುಲು ಮ್ಯಾಲ ಮಗ್ಗುಲು ಬದಲಾಯಿಸುತ್ತ ವುರುಳಾಡಿದ.. ಮನೋ ಸಾಹೇಬನು ಯದ್ದು ಕುರುಬರ ಲೆಕ್ಕಾಚಾರದಲ್ಲಿ ಮೂಡಲ ಕಡೇಕ ನೋಡಿದ.. ಬೆಳ್ಳಿ ಚುಕ್ಕಿ<noinclude></noinclude> munnls2ef3h4tspf6bldtwcv9eoqtzo ಪುಟ:ಅರಮನೆ.pdf/೩೪೭ 104 86725 320176 275241 2026-05-15T16:10:38Z Shreesha Sharma 7840 320176 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=೩೧೬|right=ಅರಮನೆ}} ಸಾಹೇಬನನ್ನು ಕಂಡು ಯಿಚಾರ ಯಿನಿಮಯ ಮಾಡಿಕೊಳ್ಳಬೇಕೆಂದೂ, ಯಾವುದೇ ಕ್ರುತ್ಯ ಕುಂಪಣಿ ಸರಕಾರದ ಯಿರುದ್ಧ ಅಲ್ಲವೆಂಬುದನು ಆತಗೆ ಮನವರಿಕೆ ಮಾಡಿಕೊಡಬೇಕೆಂದು ಗೆಳೆಯನಂತೆ ಸಲಹೆ ನೀಡಿದನು.. ಹಂಪರಸಪ್ಪಯ್ಯನೊಂದಿಗೆ ಗವುಡ ಪ್ರತ್ಯೇಕವಾಗಿ ಸಮಾಲೋಚನೆ ಮಾಡಿದನು. ಸ್ಕೂವರನ ಮರ್ಮ ತಮ್ಮಿಲ್ವರಿಗೆ ಗೊತ್ತಿಲ್ಲದಿಲ್ಲ. ತಾನೋಲ್ಡನೆ ಹೋಗುವುದಾಗಿ ದಿವಾನನೂ, ತಾನೋವ್ವನೇ ಹೋಗುವುದಾಗಿ ಗವುಡನೂ ವಾದಿಸಿದರು. ಬುದ್ದಿಬಲದಲ್ಲಿ ದಿವಾಣಜಿ ಮುಂದಿದ್ದರೆ, ಬಾಹುಬಲದಲ್ಲಿ ಗವುಡನು ಮುಂದಿದ್ದನು. ಬಾಹುಬಲ ಅಂಗಸಾಧನೆಯಿಂದ ಲಭ್ಯವಾಗುವಂಥಾದ್ದು.. ಆದರೆ ಬುದ್ದಿಬಲ!.. ತನ್ನಂಥ ನೂರಾರು ಮಂದಿ ಶೂರರನ್ನು ರೂಪಿಸುವ, ಸಂಘಟಿಸುವ ತಾಕತ್ತು ಯಿರುವ ಹಂಪರಸಪ್ಪಯ್ಯನನ್ನು ಬಲಿಪೀಠದ ಕಡೆ ಕಳುವಲಕ ಗವುಡ ಸುತಾರಾಂ ಸಮ್ಮತಿಸಲಿಲ್ಲ.. ಸಾವುರಾರು ಮಂದಿ ತರುಣರೊಳಗ ಸಮರೋತ್ಸಾಹವನ್ನು ತುಂಬಬಲ್ಲಂಥ ಗವುಡನನ್ನು ಕಳುವಲಕ ದಿವಾಣಜಿ ಸುತಾರಾಂ ಸಮ್ಮತಿಸಲಿಲ್ಲ.. ಯಿಬ್ಬರೂ ಹೋಗಬೇಕಂದರ ಬುದ್ದಿಬಲ, ಬಾಹುಬಲ ಯರಡೂ ನಷ್ಟ ಹೊಂದುವವು.. ಮತ್ತೆ ಅವರ ನಡುವೆ ಯಾವ ಮಾತುಕತೆ ನಡೆಯಿತೋ ಯೇನೋ.. ಗವುಡನನ್ನು ಹರಪನಹಳ್ಳಿಗೆ ಫಲಾನ ದಿವಸದಂದು ಕಳುವಲು.. <br> {{gap}}ಅತ್ತ ನಿನ್ನೆ ದಿವಸವೇ ಥಾಮಸು ಮನೋ ಬಳ್ಳಾರಿ ಪಟ್ಟಣವನ್ನು ತಲುಪಿದ್ದು... ಮಿನ್ನೇನು ಬಂದ ನಾಗಿರೆಡ್ಡಿಯ ಯಿಚಾರಣೆ ಮಾಡಲು ಪ್ರತ್ಯೇಕ ನ್ಯಾಯಾಲಯ ಸ್ಥಾಪನೆಗೆ ಹುಕುಂ ಮಾಡುವನು, ಗೋಲ್ಡಿಂಗ್ ಹ್ಯಾಂ ಅಥವಾ ಮ್ಯಾಕ್‌ರವರ ಪಯ್ಕೆ ವಬ್ಬರನ್ನು ನ್ಯಾಯಪೀಠದ ಸ್ಥಾನಕ್ಕೆ ಆಯ್ಕೆ ಮಾಡುವನೆಂದೇ ಭಾವಿಸಿದ್ದ ಕ್ಯಾಂಪ್‌ಬೆಲ್ ಮತ್ತಿತರ ಹಿರಿಯ ಅಧಿಕಾರಿಗಳಿಗೆ ಕಲೆಟ್ಟರನ ವರನೆಯಿಂದ ಬಲು ಬ್ಯಾಸರಾತು. ಅವರೆಲ್ಲರ ಮಜುರೆ ಸ್ವೀಕರಿಸಿದ ನಂತರವಾದರೂ ರೆಡ್ಡಿಯನ್ನು ಕಾಣುವ ಕ್ರಿಯಾ ತೋರಿಸಬೇಕಿತ್ತಲ್ಲವೆ? ಯೇನು ಮಾಡಿದಿರಿ? ಯೇನು ಬಿಟ್ಟಿರಿ? ರೆಡ್ಡಿಂರು ಬ೦ಧನಾ ನಂತರದ ಸಾಧಕಬಾಧಕಗಳೇನು? ಯಂದು ಮುಂತಾಗಿ ಯಿಚಾರಿಸಬೇಕಿತ್ತಲ್ಲವೇ? ಯೀ ಕ್ರಿಯಾಕಟ್ಟಳೆಗಳನ್ನೆಲ್ಲ ಬಿಟ್ಟು ತಾನು ಸೀದ ಬಂಗಲೆಯೊಳಗೆ ಸೇರಿಕೊಂಡು ಬಿಡುವುದೆಂದರೇನು? ಮುಚ್ಚಿದ ಬಾಗಿಲು ಮುಚ್ಚಿದಂಗೇ ಯಿರುವುದು, ಮುಚ್ಚಿದ ಕಿಟಕಿ ಮುಚ್ಚಿದಂಗೇ ಯಿರುವುದು? ವಳಗ ತಾನೋಗ್ರನೇ......<noinclude></noinclude> 7iz0lk5au78r7tb5ckjnkg5r9ysx2kz 320185 320176 2026-05-15T16:19:29Z Shreesha Sharma 7840 /* Proofread */ 320185 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೩೧೬|right=ಅರಮನೆ}} ಸಾಹೇಬನನ್ನು ಕಂಡು ಯಿಚಾರ ಯಿನಿಮಯ ಮಾಡಿಕೊಳ್ಳಬೇಕೆಂದೂ, ಯಾವುದೇ ಕ್ರುತ್ಯ ಕುಂಪಣಿ ಸರಕಾರದ ಯಿರುದ್ಧ ಅಲ್ಲವೆಂಬುದನು ಆತಗೆ ಮನವರಿಕೆ ಮಾಡಿಕೊಡಬೇಕೆಂದು ಗೆಳೆಯನಂತೆ ಸಲಹೆ ನೀಡಿದನು.. ಹಂಪರಸಪ್ಪಯ್ಯನೊಂದಿಗೆ ಗವುಡ ಪ್ರತ್ಯೇಕವಾಗಿ ಸಮಾಲೋಚನೆ ಮಾಡಿದನು. ಸ್ಕೂವರನ ಮರ್ಮ ತಮ್ಮಿಲ್ವರಿಗೆ ಗೊತ್ತಿಲ್ಲದಿಲ್ಲ. ತಾನೋಲ್ಡನೆ ಹೋಗುವುದಾಗಿ ದಿವಾನನೂ, ತಾನೋವ್ವನೇ ಹೋಗುವುದಾಗಿ ಗವುಡನೂ ವಾದಿಸಿದರು. ಬುದ್ದಿಬಲದಲ್ಲಿ ದಿವಾಣಜಿ ಮುಂದಿದ್ದರೆ, ಬಾಹುಬಲದಲ್ಲಿ ಗವುಡನು ಮುಂದಿದ್ದನು. ಬಾಹುಬಲ ಅಂಗಸಾಧನೆಯಿಂದ ಲಭ್ಯವಾಗುವಂಥಾದ್ದು.. ಆದರೆ ಬುದ್ದಿಬಲ!.. ತನ್ನಂಥ ನೂರಾರು ಮಂದಿ ಶೂರರನ್ನು ರೂಪಿಸುವ, ಸಂಘಟಿಸುವ ತಾಕತ್ತು ಯಿರುವ ಹಂಪರಸಪ್ಪಯ್ಯನನ್ನು ಬಲಿಪೀಠದ ಕಡೆ ಕಳುವಲಕ ಗವುಡ ಸುತಾರಾಂ ಸಮ್ಮತಿಸಲಿಲ್ಲ.. ಸಾವುರಾರು ಮಂದಿ ತರುಣರೊಳಗ ಸಮರೋತ್ಸಾಹವನ್ನು ತುಂಬಬಲ್ಲಂಥ ಗವುಡನನ್ನು ಕಳುವಲಕ ದಿವಾಣಜಿ ಸುತಾರಾಂ ಸಮ್ಮತಿಸಲಿಲ್ಲ.. ಯಿಬ್ಬರೂ ಹೋಗಬೇಕಂದರ ಬುದ್ದಿಬಲ, ಬಾಹುಬಲ ಯರಡೂ ನಷ್ಟ ಹೊಂದುವವು.. ಮತ್ತೆ ಅವರ ನಡುವೆ ಯಾವ ಮಾತುಕತೆ ನಡೆಯಿತೋ ಯೇನೋ.. ಗವುಡನನ್ನು ಹರಪನಹಳ್ಳಿಗೆ ಫಲಾನ ದಿವಸದಂದು ಕಳುವಲು.. <br> {{gap}}ಅತ್ತ ನಿನ್ನೆ ದಿವಸವೇ ಥಾಮಸು ಮನೋ ಬಳ್ಳಾರಿ ಪಟ್ಟಣವನ್ನು ತಲುಪಿದ್ದು... ಮಿನ್ನೇನು ಬಂದ ನಾಗಿರೆಡ್ಡಿಯ ಯಿಚಾರಣೆ ಮಾಡಲು ಪ್ರತ್ಯೇಕ ನ್ಯಾಯಾಲಯ ಸ್ಥಾಪನೆಗೆ ಹುಕುಂ ಮಾಡುವನು, ಗೋಲ್ಡಿಂಗ್ ಹ್ಯಾಂ ಅಥವಾ ಮ್ಯಾಕ್‌ರವರ ಪಯ್ಕೆ ವಬ್ಬರನ್ನು ನ್ಯಾಯಪೀಠದ ಸ್ಥಾನಕ್ಕೆ ಆಯ್ಕೆ ಮಾಡುವನೆಂದೇ ಭಾವಿಸಿದ್ದ ಕ್ಯಾಂಪ್‌ಬೆಲ್ ಮತ್ತಿತರ ಹಿರಿಯ ಅಧಿಕಾರಿಗಳಿಗೆ ಕಲೆಟ್ಟರನ ವರನೆಯಿಂದ ಬಲು ಬ್ಯಾಸರಾತು. ಅವರೆಲ್ಲರ ಮಜುರೆ ಸ್ವೀಕರಿಸಿದ ನಂತರವಾದರೂ ರೆಡ್ಡಿಯನ್ನು ಕಾಣುವ ಕ್ರಿಯಾ ತೋರಿಸಬೇಕಿತ್ತಲ್ಲವೆ? ಯೇನು ಮಾಡಿದಿರಿ? ಯೇನು ಬಿಟ್ಟಿರಿ? ರೆಡ್ಡಿಂರು ಬ೦ಧನಾ ನಂತರದ ಸಾಧಕಬಾಧಕಗಳೇನು? ಯಂದು ಮುಂತಾಗಿ ಯಿಚಾರಿಸಬೇಕಿತ್ತಲ್ಲವೇ? ಯೀ ಕ್ರಿಯಾಕಟ್ಟಳೆಗಳನ್ನೆಲ್ಲ ಬಿಟ್ಟು ತಾನು ಸೀದ ಬಂಗಲೆಯೊಳಗೆ ಸೇರಿಕೊಂಡು ಬಿಡುವುದೆಂದರೇನು? ಮುಚ್ಚಿದ ಬಾಗಿಲು ಮುಚ್ಚಿದಂಗೇ ಯಿರುವುದು, ಮುಚ್ಚಿದ ಕಿಟಕಿ ಮುಚ್ಚಿದಂಗೇ ಯಿರುವುದು? ವಳಗ ತಾನೋಗ್ರನೇ......<noinclude></noinclude> 2rjg6dmx31t70mln6by9zjpvzdzfy1e 320189 320185 2026-05-15T16:21:53Z Shreelatha.Halemane 7642 /* Validated */ 320189 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೩೧೬|right=ಅರಮನೆ}} ಸಾಹೇಬನನ್ನು ಕಂಡು ಯಿಚಾರ ಯಿನಿಮಯ ಮಾಡಿಕೊಳ್ಳಬೇಕೆಂದೂ, ಯಾವುದೇ ಕ್ರುತ್ಯ ಕುಂಪಣಿ ಸರಕಾರದ ಯಿರುದ್ಧ ಅಲ್ಲವೆಂಬುದನು ಆತಗೆ ಮನವರಿಕೆ ಮಾಡಿಕೊಡಬೇಕೆಂದು ಗೆಳೆಯನಂತೆ ಸಲಹೆ ನೀಡಿದನು.. ಹಂಪರಸಪ್ಪಯ್ಯನೊಂದಿಗೆ ಗವುಡ ಪ್ರತ್ಯೇಕವಾಗಿ ಸಮಾಲೋಚನೆ ಮಾಡಿದನು. ಸ್ಕೂವರನ ಮರ್ಮ ತಮ್ಮಿಲ್ವರಿಗೆ ಗೊತ್ತಿಲ್ಲದಿಲ್ಲ. ತಾನೋಲ್ಡನೆ ಹೋಗುವುದಾಗಿ ದಿವಾನನೂ, ತಾನೋವ್ವನೇ ಹೋಗುವುದಾಗಿ ಗವುಡನೂ ವಾದಿಸಿದರು. ಬುದ್ದಿಬಲದಲ್ಲಿ ದಿವಾಣಜಿ ಮುಂದಿದ್ದರೆ, ಬಾಹುಬಲದಲ್ಲಿ ಗವುಡನು ಮುಂದಿದ್ದನು. ಬಾಹುಬಲ ಅಂಗಸಾಧನೆಯಿಂದ ಲಭ್ಯವಾಗುವಂಥಾದ್ದು.. ಆದರೆ ಬುದ್ದಿಬಲ!.. ತನ್ನಂಥ ನೂರಾರು ಮಂದಿ ಶೂರರನ್ನು ರೂಪಿಸುವ, ಸಂಘಟಿಸುವ ತಾಕತ್ತು ಯಿರುವ ಹಂಪರಸಪ್ಪಯ್ಯನನ್ನು ಬಲಿಪೀಠದ ಕಡೆ ಕಳುವಲಕ ಗವುಡ ಸುತಾರಾಂ ಸಮ್ಮತಿಸಲಿಲ್ಲ.. ಸಾವುರಾರು ಮಂದಿ ತರುಣರೊಳಗ ಸಮರೋತ್ಸಾಹವನ್ನು ತುಂಬಬಲ್ಲಂಥ ಗವುಡನನ್ನು ಕಳುವಲಕ ದಿವಾಣಜಿ ಸುತಾರಾಂ ಸಮ್ಮತಿಸಲಿಲ್ಲ.. ಯಿಬ್ಬರೂ ಹೋಗಬೇಕಂದರ ಬುದ್ದಿಬಲ, ಬಾಹುಬಲ ಯರಡೂ ನಷ್ಟ ಹೊಂದುವವು.. ಮತ್ತೆ ಅವರ ನಡುವೆ ಯಾವ ಮಾತುಕತೆ ನಡೆಯಿತೋ ಯೇನೋ.. ಗವುಡನನ್ನು ಹರಪನಹಳ್ಳಿಗೆ ಫಲಾನ ದಿವಸದಂದು ಕಳುವಲು.. <br> {{gap}}ಅತ್ತ ನಿನ್ನೆ ದಿವಸವೇ ಥಾಮಸು ಮನೋ ಬಳ್ಳಾರಿ ಪಟ್ಟಣವನ್ನು ತಲುಪಿದ್ದು... ಮಿನ್ನೇನು ಬಂದ ನಾಗಿರೆಡ್ಡಿಯ ಯಿಚಾರಣೆ ಮಾಡಲು ಪ್ರತ್ಯೇಕ ನ್ಯಾಯಾಲಯ ಸ್ಥಾಪನೆಗೆ ಹುಕುಂ ಮಾಡುವನು, ಗೋಲ್ಡಿಂಗ್ ಹ್ಯಾಂ ಅಥವಾ ಮ್ಯಾಕ್‌ರವರ ಪಯ್ಕೆ ವಬ್ಬರನ್ನು ನ್ಯಾಯಪೀಠದ ಸ್ಥಾನಕ್ಕೆ ಆಯ್ಕೆ ಮಾಡುವನೆಂದೇ ಭಾವಿಸಿದ್ದ ಕ್ಯಾಂಪ್‌ಬೆಲ್ ಮತ್ತಿತರ ಹಿರಿಯ ಅಧಿಕಾರಿಗಳಿಗೆ ಕಲೆಟ್ಟರನ ವರನೆಯಿಂದ ಬಲು ಬ್ಯಾಸರಾತು. ಅವರೆಲ್ಲರ ಮಜುರೆ ಸ್ವೀಕರಿಸಿದ ನಂತರವಾದರೂ ರೆಡ್ಡಿಯನ್ನು ಕಾಣುವ ಕ್ರಿಯಾ ತೋರಿಸಬೇಕಿತ್ತಲ್ಲವೆ? ಯೇನು ಮಾಡಿದಿರಿ? ಯೇನು ಬಿಟ್ಟಿರಿ? ರೆಡ್ಡಿಂರು ಬ೦ಧನಾ ನಂತರದ ಸಾಧಕಬಾಧಕಗಳೇನು? ಯಂದು ಮುಂತಾಗಿ ಯಿಚಾರಿಸಬೇಕಿತ್ತಲ್ಲವೇ? ಯೀ ಕ್ರಿಯಾಕಟ್ಟಳೆಗಳನ್ನೆಲ್ಲ ಬಿಟ್ಟು ತಾನು ಸೀದ ಬಂಗಲೆಯೊಳಗೆ ಸೇರಿಕೊಂಡು ಬಿಡುವುದೆಂದರೇನು? ಮುಚ್ಚಿದ ಬಾಗಿಲು ಮುಚ್ಚಿದಂಗೇ ಯಿರುವುದು, ಮುಚ್ಚಿದ ಕಿಟಕಿ ಮುಚ್ಚಿದಂಗೇ ಯಿರುವುದು? ವಳಗ ತಾನೋಗ್ರನೇ......<noinclude></noinclude> hrmz3e7kkbz9echrisqt9bfing0wlkz ಪುಟ:ಅರಮನೆ.pdf/೩೫೧ 104 86726 320180 205986 2026-05-15T16:14:34Z Shreesha Sharma 7840 320180 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=೩೨೦|right=ಅರಮನೆ}} ಪಟುಕೊಳ್ಳಿ.. ಆತ ಯೇನು ಮಾಡುತಲಿದ್ದನೋ.. ಅದನೇ ಕಾಯಿದೆ ಸೀರ ನಾನೇ ಮಾಡುತೇನಿ.” ಯಂದು ಮುಂತಾಗಿ ಹೇಳಿ ಪರವಸಗೊಳಿಸಿದ್ದು ತಡ ಆಗಲಿಲ್ಲ... ಅಲ್ಲಿಂದ ಆತನು ಯರಡೂ ಪಾತ್ರಗಳನ ವಟ್ಟಿಗೆ ಅಭಿನಯಿಸುತ್ತ ಮುಗುತಾಯದ ಹಂತದಲ್ಲಿದ್ದ ಕೇಂದ್ರಕಾರಾಗ್ರಹವನ್ನು ಪ್ರವೇಶ ಮಾಡಿದನು. ಯಲ್ಲಿ ನನ್ನ ಸಹೋದರ..? ಯಲ್ಲಿ ಬಡವರ ಬಂಧು..? ಯಲ್ಲಿ ರೆಡ್ಡಿ ಲೋ ರೆಡ್ಡಿ, ಬಂಗಾರದ ಕಡ್ಡಿ? ಯಂದು ಹಂಬಲಿಕೆಯನ್ನು ಅಭಿನಯಿಸುತ್ತ ಸೀದ ಮೂರು ಮೊಳ ಅಗಲ ಆರು ಮೊಳ ವುದ್ದಯಿದ್ದ ಕೋಣೆ ತಲುಪಿದನು. ತನ್ನ ಕಣ್ಣೆಳಗಿನ ನೀರ ಮೂಲಕ ರೆಡ್ಡಿಂಯ ಬದ್ದಬ್ರುಕುಟಿಯನ್ನು ಸಣ್ಣ ಮಾಡುತ “ಸಹೋದರ, ಯೇನಿದು ನಿ ಅವಸ್ಥೆಯು.. ನೀನು ಅಚಂದ್ರಾರವಾಗಿ ನಾಯಕನಾಗಿ ವುಳಿಯಬೇಕೆಂದೇ....” ಯಂದು ಹೇಳುತ್ತಾ ಹೇಳುತ್ತಾ ಹೋಗಿ ನಾಗಿರೆಡ್ಡಿಯನ್ನು ಆಲಿಂಗಿಸಿ ಕೊಂಡನಂಬಲ್ಲಿಗೆ ಸಿವಸಂಕರ ಮಾದೇವಃs.... {{gap}}ಅತ್ತ ಕೂಡ್ಲಿಗಿ ಪಟ್ಟಣದೊಳಗ.... ಮದ್ಯಾಣದ ಸೂರಾಮ ಮೂಡಣ ದಿಕ್ಕಿನಲ್ಲಿ ಮುಡುಮುಡನೆ ಮೂಡುತ್ತಲೇ ಸೆಕೆಯ ಬಿತ್ತಾವಣೆ ಮಾಡತೊಡಗಿದ. ಯಾವತ್ತು ಮಂದಿ ಯೇಳುಯೇಳುತ್ತಲೆ ಜಲಜಲನೆ ಬೆವೆಯಲಾರಂಭಿಸಿದರು.. ಬೀಸಣಿಕೆಗಳಿಗಾಗಿ ಹಂಬಲಿಸತೊಡಗಿದರು.. ಸುಂಟರುಗಾಳಿಗಳು ಸುಯ್ಯಂತ ಸುತ್ತಲಾರಂಭಿಸಿದ್ದೇನು? ಭರಂತ ಬಿರುಗಾಳಿಗಳು ಬೀಸಲಾರಂಭಿಸಿದ್ದೇನು? ಮಂದಿಯಂಭೋ ಮಂದಿ ಮನೆ ವಳಗ ಯಿರಲಿಕ್ಕಾಗದೆ.. ಹೊರಗ ಯಿರಲಿಕಾಗದೆ.. ಲಿಬಿಲಿಬಿ ವದ್ದಾಡಲಾರಂಭಿಸಿದ್ದೇನು? ನೀರೊಳಗ ನೀರುತನ ಯಿಲ್ಲದಂಗಾಗಿ.. ಆಹಾರದೊಳಗ ಆಹಾರತನ ಯಿಲ್ಲದಂಗಾಗಿ ಹಸಿವು ಶ್ರುಷೆಗಳಿಂದ ತತ್ತರಿಸಲಾರಂಭಿಸಿದ್ದೇನು? ಹೆಂಡತಿಯೊಳಗ ಹೆಂಡತಿತನ ಯಿಲ್ಲದಂಗಾಗಿ.. ಗಂಡನೊಳಗೆ ಗಂಡನ ತನ ಯಿಲ್ಲದಂಗಾಗಿ.. ದಾಂಪತ್ಯಗಳೊಳಗ ತರಾವರಿ ಬಿರುಕುಗಳು ನಿಚ್ಚಳವಾಗಿ ಕಾಣಿಸಿಕೊಂಡಿದ್ದೇನು? ಕೂಸು ಕಂದಮ್ಮಗಳು ಅವುಡುಗಚ್ಚಿ ತಮ್ಮ ತಮ್ಮ ಮೊಲೆಗುಂಡಿಗಳನ್ನು ಕಚ್ಚಿದ್ದಕ್ಕೆ ತಾಯಂದಿರು ಹಾ...... ಯಂದು ಮುದ್ರಿಸಿದ್ದೇನು? ಮನೆ ಮುತ್ತಲಲ್ಲಿದ್ದ ಹಿತ್ತಲಲ್ಲಿದ್ದ ಗಿಡಗಂಟೆಗಳು ಬಾಡಲಾರಂಭಿಸಿದ್ದೇನು? ಅರಳಿದೊಡನೆ ಹುಲ್ಲುಗಳು ಪಕಳೆಗಳುದುರಿ ಬೋಡಮ್ಮಗಳಾದುದೇನು? ವಟ್ಟಿನಲ್ಲಿ ಯಿಡೀ ಪಟ್ಟಣವು ನಿಂತ ನಿಲುವಿಕಲೆ, ಕುಂತ ಕುಲುವಿಕಲೆ ಸುಖ ನೆಮ್ಮದಿಯಿಲ್ಲದ ಬಿಕೋ ಅನ್ನಲಾರಂಭಿಸಿತು. ಯಾಕ ಹಿಂಗಾತು? ನಿನ್ನೆ ರಾತಿರಿ ಮಟ ಪಾಡಿತ್ತಲ್ಲ.<noinclude></noinclude> 96z904zzh5pinbwa3527ytfih1x984w 320191 320180 2026-05-15T16:22:12Z Shreesha Sharma 7840 /* Proofread */ 320191 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೩೨೦|right=ಅರಮನೆ}} ಪಟುಕೊಳ್ಳಿ.. ಆತ ಯೇನು ಮಾಡುತಲಿದ್ದನೋ.. ಅದನೇ ಕಾಯಿದೆ ಸೀರ ನಾನೇ ಮಾಡುತೇನಿ.” ಯಂದು ಮುಂತಾಗಿ ಹೇಳಿ ಪರವಸಗೊಳಿಸಿದ್ದು ತಡ ಆಗಲಿಲ್ಲ... ಅಲ್ಲಿಂದ ಆತನು ಯರಡೂ ಪಾತ್ರಗಳನ ವಟ್ಟಿಗೆ ಅಭಿನಯಿಸುತ್ತ ಮುಗುತಾಯದ ಹಂತದಲ್ಲಿದ್ದ ಕೇಂದ್ರಕಾರಾಗ್ರಹವನ್ನು ಪ್ರವೇಶ ಮಾಡಿದನು. ಯಲ್ಲಿ ನನ್ನ ಸಹೋದರ..? ಯಲ್ಲಿ ಬಡವರ ಬಂಧು..? ಯಲ್ಲಿ ರೆಡ್ಡಿ ಲೋ ರೆಡ್ಡಿ, ಬಂಗಾರದ ಕಡ್ಡಿ? ಯಂದು ಹಂಬಲಿಕೆಯನ್ನು ಅಭಿನಯಿಸುತ್ತ ಸೀದ ಮೂರು ಮೊಳ ಅಗಲ ಆರು ಮೊಳ ವುದ್ದಯಿದ್ದ ಕೋಣೆ ತಲುಪಿದನು. ತನ್ನ ಕಣ್ಣೆಳಗಿನ ನೀರ ಮೂಲಕ ರೆಡ್ಡಿಂಯ ಬದ್ದಬ್ರುಕುಟಿಯನ್ನು ಸಣ್ಣ ಮಾಡುತ “ಸಹೋದರ, ಯೇನಿದು ನಿ ಅವಸ್ಥೆಯು.. ನೀನು ಅಚಂದ್ರಾರವಾಗಿ ನಾಯಕನಾಗಿ ವುಳಿಯಬೇಕೆಂದೇ....” ಯಂದು ಹೇಳುತ್ತಾ ಹೇಳುತ್ತಾ ಹೋಗಿ ನಾಗಿರೆಡ್ಡಿಯನ್ನು ಆಲಿಂಗಿಸಿ ಕೊಂಡನಂಬಲ್ಲಿಗೆ ಸಿವಸಂಕರ ಮಾದೇವಃs.... {{gap}}ಅತ್ತ ಕೂಡ್ಲಿಗಿ ಪಟ್ಟಣದೊಳಗ.... ಮದ್ಯಾಣದ ಸೂರಾಮ ಮೂಡಣ ದಿಕ್ಕಿನಲ್ಲಿ ಮುಡುಮುಡನೆ ಮೂಡುತ್ತಲೇ ಸೆಕೆಯ ಬಿತ್ತಾವಣೆ ಮಾಡತೊಡಗಿದ. ಯಾವತ್ತು ಮಂದಿ ಯೇಳುಯೇಳುತ್ತಲೆ ಜಲಜಲನೆ ಬೆವೆಯಲಾರಂಭಿಸಿದರು.. ಬೀಸಣಿಕೆಗಳಿಗಾಗಿ ಹಂಬಲಿಸತೊಡಗಿದರು.. ಸುಂಟರುಗಾಳಿಗಳು ಸುಯ್ಯಂತ ಸುತ್ತಲಾರಂಭಿಸಿದ್ದೇನು? ಭರಂತ ಬಿರುಗಾಳಿಗಳು ಬೀಸಲಾರಂಭಿಸಿದ್ದೇನು? ಮಂದಿಯಂಭೋ ಮಂದಿ ಮನೆ ವಳಗ ಯಿರಲಿಕ್ಕಾಗದೆ.. ಹೊರಗ ಯಿರಲಿಕಾಗದೆ.. ಲಿಬಿಲಿಬಿ ವದ್ದಾಡಲಾರಂಭಿಸಿದ್ದೇನು? ನೀರೊಳಗ ನೀರುತನ ಯಿಲ್ಲದಂಗಾಗಿ.. ಆಹಾರದೊಳಗ ಆಹಾರತನ ಯಿಲ್ಲದಂಗಾಗಿ ಹಸಿವು ಶ್ರುಷೆಗಳಿಂದ ತತ್ತರಿಸಲಾರಂಭಿಸಿದ್ದೇನು? ಹೆಂಡತಿಯೊಳಗ ಹೆಂಡತಿತನ ಯಿಲ್ಲದಂಗಾಗಿ.. ಗಂಡನೊಳಗೆ ಗಂಡನ ತನ ಯಿಲ್ಲದಂಗಾಗಿ.. ದಾಂಪತ್ಯಗಳೊಳಗ ತರಾವರಿ ಬಿರುಕುಗಳು ನಿಚ್ಚಳವಾಗಿ ಕಾಣಿಸಿಕೊಂಡಿದ್ದೇನು? ಕೂಸು ಕಂದಮ್ಮಗಳು ಅವುಡುಗಚ್ಚಿ ತಮ್ಮ ತಮ್ಮ ಮೊಲೆಗುಂಡಿಗಳನ್ನು ಕಚ್ಚಿದ್ದಕ್ಕೆ ತಾಯಂದಿರು ಹಾ...... ಯಂದು ಮುದ್ರಿಸಿದ್ದೇನು? ಮನೆ ಮುತ್ತಲಲ್ಲಿದ್ದ ಹಿತ್ತಲಲ್ಲಿದ್ದ ಗಿಡಗಂಟೆಗಳು ಬಾಡಲಾರಂಭಿಸಿದ್ದೇನು? ಅರಳಿದೊಡನೆ ಹುಲ್ಲುಗಳು ಪಕಳೆಗಳುದುರಿ ಬೋಡಮ್ಮಗಳಾದುದೇನು? ವಟ್ಟಿನಲ್ಲಿ ಯಿಡೀ ಪಟ್ಟಣವು ನಿಂತ ನಿಲುವಿಕಲೆ, ಕುಂತ ಕುಲುವಿಕಲೆ ಸುಖ ನೆಮ್ಮದಿಯಿಲ್ಲದ ಬಿಕೋ ಅನ್ನಲಾರಂಭಿಸಿತು. ಯಾಕ ಹಿಂಗಾತು? ನಿನ್ನೆ ರಾತಿರಿ ಮಟ ಪಾಡಿತ್ತಲ್ಲ.<noinclude></noinclude> bqjrhknaem65lzoq58bbtfzetd1llg3 320199 320191 2026-05-15T16:25:26Z Shreelatha.Halemane 7642 /* Validated */ 320199 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೩೨೦|right=ಅರಮನೆ}} ಪಟುಕೊಳ್ಳಿ.. ಆತ ಯೇನು ಮಾಡುತಲಿದ್ದನೋ.. ಅದನೇ ಕಾಯಿದೆ ಸೀರ ನಾನೇ ಮಾಡುತೇನಿ.” ಯಂದು ಮುಂತಾಗಿ ಹೇಳಿ ಪರವಸಗೊಳಿಸಿದ್ದು ತಡ ಆಗಲಿಲ್ಲ... ಅಲ್ಲಿಂದ ಆತನು ಯರಡೂ ಪಾತ್ರಗಳನ ವಟ್ಟಿಗೆ ಅಭಿನಯಿಸುತ್ತ ಮುಗುತಾಯದ ಹಂತದಲ್ಲಿದ್ದ ಕೇಂದ್ರಕಾರಾಗ್ರಹವನ್ನು ಪ್ರವೇಶ ಮಾಡಿದನು. ಯಲ್ಲಿ ನನ್ನ ಸಹೋದರ..? ಯಲ್ಲಿ ಬಡವರ ಬಂಧು..? ಯಲ್ಲಿ ರೆಡ್ಡಿ ಲೋ ರೆಡ್ಡಿ, ಬಂಗಾರದ ಕಡ್ಡಿ? ಯಂದು ಹಂಬಲಿಕೆಯನ್ನು ಅಭಿನಯಿಸುತ್ತ ಸೀದ ಮೂರು ಮೊಳ ಅಗಲ ಆರು ಮೊಳ ವುದ್ದಯಿದ್ದ ಕೋಣೆ ತಲುಪಿದನು. ತನ್ನ ಕಣ್ಣೆಳಗಿನ ನೀರ ಮೂಲಕ ರೆಡ್ಡಿಂಯ ಬದ್ದಬ್ರುಕುಟಿಯನ್ನು ಸಣ್ಣ ಮಾಡುತ “ಸಹೋದರ, ಯೇನಿದು ನಿ ಅವಸ್ಥೆಯು.. ನೀನು ಅಚಂದ್ರಾರವಾಗಿ ನಾಯಕನಾಗಿ ವುಳಿಯಬೇಕೆಂದೇ....” ಯಂದು ಹೇಳುತ್ತಾ ಹೇಳುತ್ತಾ ಹೋಗಿ ನಾಗಿರೆಡ್ಡಿಯನ್ನು ಆಲಿಂಗಿಸಿ ಕೊಂಡನಂಬಲ್ಲಿಗೆ ಸಿವಸಂಕರ ಮಾದೇವಃs.... {{gap}}ಅತ್ತ ಕೂಡ್ಲಿಗಿ ಪಟ್ಟಣದೊಳಗ.... ಮದ್ಯಾಣದ ಸೂರಾಮ ಮೂಡಣ ದಿಕ್ಕಿನಲ್ಲಿ ಮುಡುಮುಡನೆ ಮೂಡುತ್ತಲೇ ಸೆಕೆಯ ಬಿತ್ತಾವಣೆ ಮಾಡತೊಡಗಿದ. ಯಾವತ್ತು ಮಂದಿ ಯೇಳುಯೇಳುತ್ತಲೆ ಜಲಜಲನೆ ಬೆವೆಯಲಾರಂಭಿಸಿದರು.. ಬೀಸಣಿಕೆಗಳಿಗಾಗಿ ಹಂಬಲಿಸತೊಡಗಿದರು.. ಸುಂಟರುಗಾಳಿಗಳು ಸುಯ್ಯಂತ ಸುತ್ತಲಾರಂಭಿಸಿದ್ದೇನು? ಭರಂತ ಬಿರುಗಾಳಿಗಳು ಬೀಸಲಾರಂಭಿಸಿದ್ದೇನು? ಮಂದಿಯಂಭೋ ಮಂದಿ ಮನೆ ವಳಗ ಯಿರಲಿಕ್ಕಾಗದೆ.. ಹೊರಗ ಯಿರಲಿಕಾಗದೆ.. ಲಿಬಿಲಿಬಿ ವದ್ದಾಡಲಾರಂಭಿಸಿದ್ದೇನು? ನೀರೊಳಗ ನೀರುತನ ಯಿಲ್ಲದಂಗಾಗಿ.. ಆಹಾರದೊಳಗ ಆಹಾರತನ ಯಿಲ್ಲದಂಗಾಗಿ ಹಸಿವು ಶ್ರುಷೆಗಳಿಂದ ತತ್ತರಿಸಲಾರಂಭಿಸಿದ್ದೇನು? ಹೆಂಡತಿಯೊಳಗ ಹೆಂಡತಿತನ ಯಿಲ್ಲದಂಗಾಗಿ.. ಗಂಡನೊಳಗೆ ಗಂಡನ ತನ ಯಿಲ್ಲದಂಗಾಗಿ.. ದಾಂಪತ್ಯಗಳೊಳಗ ತರಾವರಿ ಬಿರುಕುಗಳು ನಿಚ್ಚಳವಾಗಿ ಕಾಣಿಸಿಕೊಂಡಿದ್ದೇನು? ಕೂಸು ಕಂದಮ್ಮಗಳು ಅವುಡುಗಚ್ಚಿ ತಮ್ಮ ತಮ್ಮ ಮೊಲೆಗುಂಡಿಗಳನ್ನು ಕಚ್ಚಿದ್ದಕ್ಕೆ ತಾಯಂದಿರು ಹಾ...... ಯಂದು ಮುದ್ರಿಸಿದ್ದೇನು? ಮನೆ ಮುತ್ತಲಲ್ಲಿದ್ದ ಹಿತ್ತಲಲ್ಲಿದ್ದ ಗಿಡಗಂಟೆಗಳು ಬಾಡಲಾರಂಭಿಸಿದ್ದೇನು? ಅರಳಿದೊಡನೆ ಹುಲ್ಲುಗಳು ಪಕಳೆಗಳುದುರಿ ಬೋಡಮ್ಮಗಳಾದುದೇನು? ವಟ್ಟಿನಲ್ಲಿ ಯಿಡೀ ಪಟ್ಟಣವು ನಿಂತ ನಿಲುವಿಕಲೆ, ಕುಂತ ಕುಲುವಿಕಲೆ ಸುಖ ನೆಮ್ಮದಿಯಿಲ್ಲದ ಬಿಕೋ ಅನ್ನಲಾರಂಭಿಸಿತು. ಯಾಕ ಹಿಂಗಾತು? ನಿನ್ನೆ ರಾತಿರಿ ಮಟ ಪಾಡಿತ್ತಲ್ಲ.<noinclude></noinclude> pqnr6n5vixqrq525h8umdlm60at7oy0 ಪುಟ:ಅರಮನೆ.pdf/೩೫೦ 104 86727 320179 205987 2026-05-15T16:13:35Z Shreesha Sharma 7840 320179 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=ಅರಮನೆ|right=೩೧೯}} ಬಂಕಿಂಗುಹ್ಯಾಮು ಅರಮನೆಯನ್ನು ಧ್ಯಾನಿಸುತ್ತ.. ಅದರ ಮ್ಯಾಲ ಭಾರ ಹಾಕುತ್ತ ನಖಶಿಖಾಂತ ಧಾರಣ ಮಾಡಿಕೊಂಡನು. ಅಷ್ಟು ಹೊತ್ತಿಗಾಗಲೆ ಬೆಳಕಿನ ಹಳ್ಳ ವಳ ಹೊರಗೆಲ್ಲ ಜುಳುಜುಳು ಹರಿಯಲಾರಂಭಿಸಿತ್ತು. ಕವಾಯತಿನ ಸದ್ದು ಅಂಬೆಗಾಲಿಡ ಲಾರಂಭಿಸಿತ್ತು ವಳಗೆಲ್ಲ.. ನಿಲುಗನ್ನಡಿ ಬಯಲಾಟದ ಸಾರಥಿಯಂತೆ ಬಂದೆದುರು ನಿಂತು (ಯಲಮ್ ನೀನಾರು? ನಿನ್ನ ನಾಮಾಂಕಿತ ಯೇನು?” ಯಂದು ಪ್ರಶ್ನೆ ಹಾಕಿತು. ಅದರೊಳಗ ನಖಶಿಖಾಂತ ಯಿಣುಕಿದ. ತಾನೀಗ ಕಲೆಟ್ಟರು ಸಾಹೇಬನೋ ಅಥವಾ... ಅಲ್ಲ... ಅಲ್ಲ... ಅಲ್ಲವೇ ಅಲ್ಲ. ತಾನೀಗ ಬೊಬ್ಬಿಲಿ ನಾಗಿರೆಡ್ಡಿಯ ಪಡಿಯಚ್ಚು.. ಅಲ್ಲ ಅಲ್ಲ... ಅಲ್ಲವೇ ಅಲ್ಲ... ತಾನೀಗ ನಾಗಿರೆಡ್ಡಿಯ ವೇಷದಲ್ಲಿರುವ ಕೊಲೆಗಡುಕನು.. ನಯವಂಚಕನು.. ತನ್ನನ್ನೇ ತಾನು ವಧಾಸ್ಥಾನಕ್ಕೆ... ಕರೆಗಂಟೆ ಭಾರಿಸಿದ... ಯಾರಲ್ಲಿ ಯಂದು ಗುಟುರು ಹಾಕಿದ.. ಪತ್ತಿಕೊಂಡದಲ್ಲಿ ತನ್ನನ್ನು ಯಂಜಲೆಲೆಗೆ ಹೋಲಿಕೆ ಮಾಡಿದ ಯಲ್ಲಮ್ಮಾಯಿ ಯಂಬ ತಿಪ್ಪೆಗಾತುರದ ಮುಪ್ಪಾನು ಮುದುಕಿ ಯದೆಯೊಳಗಿಂದ ಮೂಡಿ ಬಂದು ಪಕ ಪಕ ನಗಾಡುತ್ತಿರುವಂತೆ ಭಾಸವಾಯಿತು.. ಹು.. ತಾನು ಯಂಜಲೆಲೆ. ಯಂಜಲೆಲೆಯೊಳಗ ಅಳಿದುಳಿದಿರುವ ಅಗುಳು.. ಯೇನೀಗ ಬಾಗಿಲು ಕಿರುಗುಟ್ಟಿ ತೆರಕಂತು.... ಸೆರೆಮನೆಯ ಅಧಿಕಾರಿ ಮೆಕೆನೋ.. ಯಿಶೇಷ ನ್ಯಾಯಾಲಯ ಶಾಬ್ಲಿಕ ನಕ್ಷೆಯನ್ನು ನಾಲಗೆ ಮ್ಯಾಲ ಯಿಟುಕೊಂಡಿದ್ದ ನ್ಯಾಯಾಧೀಶರಾದ ಹ್ಯಾಮು, ಮಾಕು, ಕ್ಯಾಂಪಬೆಲ್ಲು.. ಹೆಮೊದಲಾದವರು ಯಿಣುಕಿ ನೋಡಿ “ಅರೆ!” ಯಂದು ವುದ್ದಾರ ತೆಗೆದರು. ಮರಣದಂಡನೆಗೆ ವಳಗಾಗಲಿರುವ ಯ್ಯಕ್ತಿ 'ಮೋ ಮಮ್ ಗಾಡ್' ಯಂದು ಮೂಗಿನ ಮ್ಯಾಲ ಬೊಟ್ಟಿಟ್ಟುಕೊಂಡರು.. - ಮುಗುಳುನಗೆ ಮೂಲಕ ತಾನು ಥಾಮಸುಮನೋ ಸಾಹೇಬನೆಂದು ಗುರುತು ಮಾಡಿದ ಕಲೆಟ್ಟರನು.. ಸೆರೆಮನೆ ವಳಗೆ ಯಿಶೇಷ ನ್ಯಾಯಾಲಯ ಸ್ಥಾಪನೆಗೆ ಹುಕುಂ ಮಾಡಿದ್ದು ತಡಾ ಆಗಲಿಲ್ಲ. ಅದಕ ಗೋಲ್ಡಿಂಗ್ ಹ್ಯಾಮರವರನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿದ್ದೂ ತಡ ಆಗಲಿಲ್ಲ. ತನಗ ಧಿಕ್ಕಾರ ಕೂಗಲಕ ಯಂದು ಗುಂತಕಲ್ಲು ಸೀಮೆಕಡೇಲಿಂದ ಬಂದಿದ್ದ ಮಂದಿಯನ್ನುದ್ದೇಶಿಸಿ “ನೋಡಿರಯ್ಯಾ. ನನ್ನೊಳಗ ನಿಮ್ಮ ನಾಗಿರೆಡ್ಡಿ ಜೀವಂತ ಅದಾನ.. ನನ್ನ ನೋಡಿ ಸಮಾಧಾನ<noinclude></noinclude> qqrjnyqb99jrg1ddyikc1l8yvkmypct 320190 320179 2026-05-15T16:21:57Z Shreesha Sharma 7840 /* Proofread */ 320190 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೧೯}} ಬಂಕಿಂಗುಹ್ಯಾಮು ಅರಮನೆಯನ್ನು ಧ್ಯಾನಿಸುತ್ತ.. ಅದರ ಮ್ಯಾಲ ಭಾರ ಹಾಕುತ್ತ ನಖಶಿಖಾಂತ ಧಾರಣ ಮಾಡಿಕೊಂಡನು. ಅಷ್ಟು ಹೊತ್ತಿಗಾಗಲೆ ಬೆಳಕಿನ ಹಳ್ಳ ವಳ ಹೊರಗೆಲ್ಲ ಜುಳುಜುಳು ಹರಿಯಲಾರಂಭಿಸಿತ್ತು. ಕವಾಯತಿನ ಸದ್ದು ಅಂಬೆಗಾಲಿಡ ಲಾರಂಭಿಸಿತ್ತು ವಳಗೆಲ್ಲ.. ನಿಲುಗನ್ನಡಿ ಬಯಲಾಟದ ಸಾರಥಿಯಂತೆ ಬಂದೆದುರು ನಿಂತು (ಯಲಮ್ ನೀನಾರು? ನಿನ್ನ ನಾಮಾಂಕಿತ ಯೇನು?” ಯಂದು ಪ್ರಶ್ನೆ ಹಾಕಿತು. ಅದರೊಳಗ ನಖಶಿಖಾಂತ ಯಿಣುಕಿದ. ತಾನೀಗ ಕಲೆಟ್ಟರು ಸಾಹೇಬನೋ ಅಥವಾ... ಅಲ್ಲ... ಅಲ್ಲ... ಅಲ್ಲವೇ ಅಲ್ಲ. ತಾನೀಗ ಬೊಬ್ಬಿಲಿ ನಾಗಿರೆಡ್ಡಿಯ ಪಡಿಯಚ್ಚು.. ಅಲ್ಲ ಅಲ್ಲ... ಅಲ್ಲವೇ ಅಲ್ಲ... ತಾನೀಗ ನಾಗಿರೆಡ್ಡಿಯ ವೇಷದಲ್ಲಿರುವ ಕೊಲೆಗಡುಕನು.. ನಯವಂಚಕನು.. ತನ್ನನ್ನೇ ತಾನು ವಧಾಸ್ಥಾನಕ್ಕೆ... ಕರೆಗಂಟೆ ಭಾರಿಸಿದ... ಯಾರಲ್ಲಿ ಯಂದು ಗುಟುರು ಹಾಕಿದ.. ಪತ್ತಿಕೊಂಡದಲ್ಲಿ ತನ್ನನ್ನು ಯಂಜಲೆಲೆಗೆ ಹೋಲಿಕೆ ಮಾಡಿದ ಯಲ್ಲಮ್ಮಾಯಿ ಯಂಬ ತಿಪ್ಪೆಗಾತುರದ ಮುಪ್ಪಾನು ಮುದುಕಿ ಯದೆಯೊಳಗಿಂದ ಮೂಡಿ ಬಂದು ಪಕ ಪಕ ನಗಾಡುತ್ತಿರುವಂತೆ ಭಾಸವಾಯಿತು.. ಹು.. ತಾನು ಯಂಜಲೆಲೆ. ಯಂಜಲೆಲೆಯೊಳಗ ಅಳಿದುಳಿದಿರುವ ಅಗುಳು.. ಯೇನೀಗ ಬಾಗಿಲು ಕಿರುಗುಟ್ಟಿ ತೆರಕಂತು.... ಸೆರೆಮನೆಯ ಅಧಿಕಾರಿ ಮೆಕೆನೋ.. ಯಿಶೇಷ ನ್ಯಾಯಾಲಯ ಶಾಬ್ಲಿಕ ನಕ್ಷೆಯನ್ನು ನಾಲಗೆ ಮ್ಯಾಲ ಯಿಟುಕೊಂಡಿದ್ದ ನ್ಯಾಯಾಧೀಶರಾದ ಹ್ಯಾಮು, ಮಾಕು, ಕ್ಯಾಂಪಬೆಲ್ಲು.. ಹೆಮೊದಲಾದವರು ಯಿಣುಕಿ ನೋಡಿ “ಅರೆ!” ಯಂದು ವುದ್ದಾರ ತೆಗೆದರು. ಮರಣದಂಡನೆಗೆ ವಳಗಾಗಲಿರುವ ಯ್ಯಕ್ತಿ 'ಮೋ ಮಮ್ ಗಾಡ್' ಯಂದು ಮೂಗಿನ ಮ್ಯಾಲ ಬೊಟ್ಟಿಟ್ಟುಕೊಂಡರು.. - ಮುಗುಳುನಗೆ ಮೂಲಕ ತಾನು ಥಾಮಸುಮನೋ ಸಾಹೇಬನೆಂದು ಗುರುತು ಮಾಡಿದ ಕಲೆಟ್ಟರನು.. ಸೆರೆಮನೆ ವಳಗೆ ಯಿಶೇಷ ನ್ಯಾಯಾಲಯ ಸ್ಥಾಪನೆಗೆ ಹುಕುಂ ಮಾಡಿದ್ದು ತಡಾ ಆಗಲಿಲ್ಲ. ಅದಕ ಗೋಲ್ಡಿಂಗ್ ಹ್ಯಾಮರವರನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿದ್ದೂ ತಡ ಆಗಲಿಲ್ಲ. ತನಗ ಧಿಕ್ಕಾರ ಕೂಗಲಕ ಯಂದು ಗುಂತಕಲ್ಲು ಸೀಮೆಕಡೇಲಿಂದ ಬಂದಿದ್ದ ಮಂದಿಯನ್ನುದ್ದೇಶಿಸಿ “ನೋಡಿರಯ್ಯಾ. ನನ್ನೊಳಗ ನಿಮ್ಮ ನಾಗಿರೆಡ್ಡಿ ಜೀವಂತ ಅದಾನ.. ನನ್ನ ನೋಡಿ ಸಮಾಧಾನ<noinclude></noinclude> esqthdpankuj2y4xqmn00bwcz8rc781 320202 320190 2026-05-15T16:26:46Z Shreelatha.Halemane 7642 /* Validated */ 320202 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೧೯}} ಬಂಕಿಂಗುಹ್ಯಾಮು ಅರಮನೆಯನ್ನು ಧ್ಯಾನಿಸುತ್ತ.. ಅದರ ಮ್ಯಾಲ ಭಾರ ಹಾಕುತ್ತ ನಖಶಿಖಾಂತ ಧಾರಣ ಮಾಡಿಕೊಂಡನು. ಅಷ್ಟು ಹೊತ್ತಿಗಾಗಲೆ ಬೆಳಕಿನ ಹಳ್ಳ ವಳ ಹೊರಗೆಲ್ಲ ಜುಳುಜುಳು ಹರಿಯಲಾರಂಭಿಸಿತ್ತು. ಕವಾಯತಿನ ಸದ್ದು ಅಂಬೆಗಾಲಿಡ ಲಾರಂಭಿಸಿತ್ತು ವಳಗೆಲ್ಲ.. ನಿಲುಗನ್ನಡಿ ಬಯಲಾಟದ ಸಾರಥಿಯಂತೆ ಬಂದೆದುರು ನಿಂತು (ಯಲಮ್ ನೀನಾರು? ನಿನ್ನ ನಾಮಾಂಕಿತ ಯೇನು?” ಯಂದು ಪ್ರಶ್ನೆ ಹಾಕಿತು. ಅದರೊಳಗ ನಖಶಿಖಾಂತ ಯಿಣುಕಿದ. ತಾನೀಗ ಕಲೆಟ್ಟರು ಸಾಹೇಬನೋ ಅಥವಾ... ಅಲ್ಲ... ಅಲ್ಲ... ಅಲ್ಲವೇ ಅಲ್ಲ. ತಾನೀಗ ಬೊಬ್ಬಿಲಿ ನಾಗಿರೆಡ್ಡಿಯ ಪಡಿಯಚ್ಚು.. ಅಲ್ಲ ಅಲ್ಲ... ಅಲ್ಲವೇ ಅಲ್ಲ... ತಾನೀಗ ನಾಗಿರೆಡ್ಡಿಯ ವೇಷದಲ್ಲಿರುವ ಕೊಲೆಗಡುಕನು.. ನಯವಂಚಕನು.. ತನ್ನನ್ನೇ ತಾನು ವಧಾಸ್ಥಾನಕ್ಕೆ... {{gap}}ಕರೆಗಂಟೆ ಭಾರಿಸಿದ... ಯಾರಲ್ಲಿ ಯಂದು ಗುಟುರು ಹಾಕಿದ.. ಪತ್ತಿಕೊಂಡದಲ್ಲಿ ತನ್ನನ್ನು ಯಂಜಲೆಲೆಗೆ ಹೋಲಿಕೆ ಮಾಡಿದ ಯಲ್ಲಮ್ಮಾಯಿ ಯಂಬ ತಿಪ್ಪೆಗಾತುರದ ಮುಪ್ಪಾನು ಮುದುಕಿ ಯದೆಯೊಳಗಿಂದ ಮೂಡಿ ಬಂದು ಪಕ ಪಕ ನಗಾಡುತ್ತಿರುವಂತೆ ಭಾಸವಾಯಿತು.. ಹು.. ತಾನು ಯಂಜಲೆಲೆ. ಯಂಜಲೆಲೆಯೊಳಗ ಅಳಿದುಳಿದಿರುವ ಅಗುಳು.. ಯೇನೀಗ ಬಾಗಿಲು ಕಿರುಗುಟ್ಟಿ ತೆರಕಂತು.... {{gap}}ಸೆರೆಮನೆಯ ಅಧಿಕಾರಿ ಮೆಕೆನೋ.. ಯಿಶೇಷ ನ್ಯಾಯಾಲಯ ಶಾಬ್ಲಿಕ ನಕ್ಷೆಯನ್ನು ನಾಲಗೆ ಮ್ಯಾಲ ಯಿಟುಕೊಂಡಿದ್ದ ನ್ಯಾಯಾಧೀಶರಾದ ಹ್ಯಾಮು, ಮಾಕು, ಕ್ಯಾಂಪಬೆಲ್ಲು.. ಹೆಮೊದಲಾದವರು ಯಿಣುಕಿ ನೋಡಿ “ಅರೆ!” ಯಂದು ವುದ್ದಾರ ತೆಗೆದರು. ಮರಣದಂಡನೆಗೆ ವಳಗಾಗಲಿರುವ ಯ್ಯಕ್ತಿ 'ಮೋ ಮಮ್ ಗಾಡ್' ಯಂದು ಮೂಗಿನ ಮ್ಯಾಲ ಬೊಟ್ಟಿಟ್ಟುಕೊಂಡರು.. - ಮುಗುಳುನಗೆ ಮೂಲಕ ತಾನು ಥಾಮಸುಮನೋ ಸಾಹೇಬನೆಂದು ಗುರುತು ಮಾಡಿದ ಕಲೆಟ್ಟರನು.. {{gap}}ಸೆರೆಮನೆ ವಳಗೆ ಯಿಶೇಷ ನ್ಯಾಯಾಲಯ ಸ್ಥಾಪನೆಗೆ ಹುಕುಂ ಮಾಡಿದ್ದು ತಡಾ ಆಗಲಿಲ್ಲ. ಅದಕ ಗೋಲ್ಡಿಂಗ್ ಹ್ಯಾಮರವರನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿದ್ದೂ ತಡ ಆಗಲಿಲ್ಲ. ತನಗ ಧಿಕ್ಕಾರ ಕೂಗಲಕ ಯಂದು ಗುಂತಕಲ್ಲು ಸೀಮೆಕಡೇಲಿಂದ ಬಂದಿದ್ದ ಮಂದಿಯನ್ನುದ್ದೇಶಿಸಿ “ನೋಡಿರಯ್ಯಾ. ನನ್ನೊಳಗ ನಿಮ್ಮ ನಾಗಿರೆಡ್ಡಿ ಜೀವಂತ ಅದಾನ.. ನನ್ನ ನೋಡಿ ಸಮಾಧಾನ<noinclude></noinclude> 6m5xfkp5yrs2vuzat4dvps8xguwybok ಪುಟ:ಅರಮನೆ.pdf/೩೫೩ 104 86728 320182 205990 2026-05-15T16:15:49Z Shreesha Sharma 7840 320182 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=೩೨೨|right=ಅರಮನೆ}} ಭಾಷ್ಯ ಬರೆಯುತಲಿತ್ತು.. ವಸ್ತುಸ್ಥಿತಿ ಅಗ್ಗವಾಗಲು ಅಯ್ಯೋ ಯಂದು ಅಳಲಾರಂಭಿಸಿದೊಡನೆ ಸದರಿ ಪಟ್ಟಣದ ಯಾತ್ತು ಮಂದಿಯು.... ಅವುದು.. ತಿಲ್ಲಾನ ತಾಯಕ್ಕ ತನ್ನ ಮಗಳನ್ನು ಹಿ೦ದಲ ರಾತಿರಿ ಎಂದು ಹೊತ್ತಿನಲ್ಲಿ ಯಿದ್ದಕ್ಕಿದ್ದಂತೆ ರುಬ್ಬಿಸಿ 'ಮಗಳೇ ಗುಣಸಾಗರದ ಯೇಣುಗೋಪಾಲಸ್ವಾಮಿಯು ಸೋಲುಪ ಹೊತ್ತಿನಲ್ಲಿ ಕಣಸೊಳಗ ಮೂಡಿ ಬೆಳಗಿನ ಪೂಜೆ ಹೊತ್ತಿಗೆ ಬಂದು ದರುಸನ ಪಡಕೋ ಯಂದು ಆಗ್ನ ಮಾಡಿದನವ್ವಾ.. ಅದಕ ಹೊಂಡು” ಯಂದು ಹೇಳಿದಳು. ಆ ದೇವರ ಮೂಲ ಸ್ವಾಸ್ಥಿ ಹಂಪಿಯೊಳಗಿತ್ತು. ಕುಷ್ಣದೇವರಾಯನ ದ್ವಿತೀಯ ಪತ್ನಿ ಚೆನ್ನಾಂಬಿಕೆಯು ಅದನ್ನು ತ್ರಿಕಾಲ ಪೂಜೆ ಮಾಡುತಲಿದ್ದಳು. ರಕ್ಕಸತಂಗಡಗಿ ಯುದ್ದ ನಂತರ ಯಿಜಯನಗರ ಸಾಮ್ರಾಜ್ಯದಲ್ಲಿದ್ದ ಯಾವತ್ತು ವಯಷ್ಣವ ದೇವರುಗಳು ಅವರಿವರ ಹೆಗಲೇರಿಯೋ, ಬಗಲೊಳಗವಿಚಿಟ್ಟುಕೊಂಡೋ ಸುತ್ತನ್ನಾಕಡೆ ವಲಸೆ ಹೊಂಟವು.. ಮಂಟೇಸ್ವರ ಸ್ವಾಮಿಯು ಹರಪನಹಳ್ಳಿ ಸಮೀಪದ ತಿಮ್ಮಲಾಪುರದೊಳಗೂ, ಸೀ ಕುಷ್ಣನು ಮಲಸೀಮೆಯ ಆನಂದಾಪುರದೊಳಗೂ, ಯಜಂ ಯಿಠಲಸ್ವಾಮಿಂುು ಯಿಠಲಾಪುರ ದೊಳಗ, ಯೇಣುಗೋಪಾಲಸ್ವಾಮಿಯು ಸಿಂಧವಾಡಿ ಪ್ರಾಂತದ ಗುಣಸಾಗರದೊಳಗೂ... {{gap}}ಬುದ್ದಿ ಮೊಳೆದಾಗಿನಿಂದ ಯಲ್ಲೂ ಯಾವತ್ತೂ ಹೋಗಿರದಾಕೆಯಾಗಿದ್ದ ಚಿನ್ನಸಾನಿ ಹೊತ್ತು ಗೊತ್ತು ನೋಡದೆ ಬಲು ಸಂಭ್ರಮದಿಂದಲೇ ಸಜ್ಜಾಗಿ ಸಾರೋಟು ಯೇರಿದ್ದಳು. ಯೇಳೆಂಟು ಮಂದಿ ಪಯಿಲುವಾನರು ಹಿಂದ ಮುಂದ ಕಾಪಲು ಮಾಡುತಲಿದ್ದುದರಿಂದ ಭಯಪಡುವ ಅಗತ್ಯಯಿರಲಿಲ್ಲ.. ಮೊದ ಮೊದಲಿಗೆ ಸಾರೋಟೇನೋ ತೆಂಕಣ ದಿಕ್ಕಿನಲ್ಲಿದ್ದ ಗುಣಸಾಗರದ ದಾರಿಯನ್ನೇನೋ ಹಿಡಿದಿತ್ತು. ಆದರೆ ಸಿರುಬಿ ದಾಟಿ ಸೋಲದೇವರ ಹಳ್ಳಿ ಬರುತ್ತಲೇ ಬೇರೊಂದು ದಾರಿ ಹಿಡಿದುಬಿಟ್ಟಿತು. ಆ ದಾರಿ ಯಲ್ಲಿಗೆ ಹೋತದೆ ಯಂಬುದು ಸಾರಥಿಯಾದ ಮುಕುಂದನಿಗೆ ವತ್ತಟ್ಟಿಗಿರಲಿ ಖುದ್ದ ತಾಯಕ್ಕನೇ ತಿಳಿದಿರಲಿಲ್ಲ. ತನ್ನ ಪಾಡಿಗೆ ತಾನೇ ಹೋತೂsss ಹೋತೂ ಹೋಗೇ ಹೋತು.. ಹೋಗಿ ಅದು ತಲುಪಿದ್ದಲ್ಲಿ ಅಂದರ.. ಗೋರಖನಾಥರು ಸಾಯಿರದಾವಂದು ವರುಷಗಳ ಪಲ್ಯಂತ ವಂಟಿಗಾಲೀಲೆ ನಿಂತು ತಪಸ್ಸು ಮಾಡಿದ್ದಂಥ ಮಾನ್ಯರ ಮಸಲವಾಡ ಯಂಬ ಹೆಸರಿನ ಪುಣ್ಯಸಂಚಿತ ಗ್ರಾಮವನ್ನ.. ಅಂಗುಲಂಗುಲವಾಗಿ ತಾಯಕ್ಕಗ ಅದರ<noinclude></noinclude> irrcvpgvfj5ifdzu2ikt2ftwb6m7opx 320194 320182 2026-05-15T16:22:46Z Shreesha Sharma 7840 /* Proofread */ 320194 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೩೨೨|right=ಅರಮನೆ}} ಭಾಷ್ಯ ಬರೆಯುತಲಿತ್ತು.. ವಸ್ತುಸ್ಥಿತಿ ಅಗ್ಗವಾಗಲು ಅಯ್ಯೋ ಯಂದು ಅಳಲಾರಂಭಿಸಿದೊಡನೆ ಸದರಿ ಪಟ್ಟಣದ ಯಾತ್ತು ಮಂದಿಯು.... ಅವುದು.. ತಿಲ್ಲಾನ ತಾಯಕ್ಕ ತನ್ನ ಮಗಳನ್ನು ಹಿ೦ದಲ ರಾತಿರಿ ಎಂದು ಹೊತ್ತಿನಲ್ಲಿ ಯಿದ್ದಕ್ಕಿದ್ದಂತೆ ರುಬ್ಬಿಸಿ 'ಮಗಳೇ ಗುಣಸಾಗರದ ಯೇಣುಗೋಪಾಲಸ್ವಾಮಿಯು ಸೋಲುಪ ಹೊತ್ತಿನಲ್ಲಿ ಕಣಸೊಳಗ ಮೂಡಿ ಬೆಳಗಿನ ಪೂಜೆ ಹೊತ್ತಿಗೆ ಬಂದು ದರುಸನ ಪಡಕೋ ಯಂದು ಆಗ್ನ ಮಾಡಿದನವ್ವಾ.. ಅದಕ ಹೊಂಡು” ಯಂದು ಹೇಳಿದಳು. ಆ ದೇವರ ಮೂಲ ಸ್ವಾಸ್ಥಿ ಹಂಪಿಯೊಳಗಿತ್ತು. ಕುಷ್ಣದೇವರಾಯನ ದ್ವಿತೀಯ ಪತ್ನಿ ಚೆನ್ನಾಂಬಿಕೆಯು ಅದನ್ನು ತ್ರಿಕಾಲ ಪೂಜೆ ಮಾಡುತಲಿದ್ದಳು. ರಕ್ಕಸತಂಗಡಗಿ ಯುದ್ದ ನಂತರ ಯಿಜಯನಗರ ಸಾಮ್ರಾಜ್ಯದಲ್ಲಿದ್ದ ಯಾವತ್ತು ವಯಷ್ಣವ ದೇವರುಗಳು ಅವರಿವರ ಹೆಗಲೇರಿಯೋ, ಬಗಲೊಳಗವಿಚಿಟ್ಟುಕೊಂಡೋ ಸುತ್ತನ್ನಾಕಡೆ ವಲಸೆ ಹೊಂಟವು.. ಮಂಟೇಸ್ವರ ಸ್ವಾಮಿಯು ಹರಪನಹಳ್ಳಿ ಸಮೀಪದ ತಿಮ್ಮಲಾಪುರದೊಳಗೂ, ಸೀ ಕುಷ್ಣನು ಮಲಸೀಮೆಯ ಆನಂದಾಪುರದೊಳಗೂ, ಯಜಂ ಯಿಠಲಸ್ವಾಮಿಂುು ಯಿಠಲಾಪುರ ದೊಳಗ, ಯೇಣುಗೋಪಾಲಸ್ವಾಮಿಯು ಸಿಂಧವಾಡಿ ಪ್ರಾಂತದ ಗುಣಸಾಗರದೊಳಗೂ... {{gap}}ಬುದ್ದಿ ಮೊಳೆದಾಗಿನಿಂದ ಯಲ್ಲೂ ಯಾವತ್ತೂ ಹೋಗಿರದಾಕೆಯಾಗಿದ್ದ ಚಿನ್ನಸಾನಿ ಹೊತ್ತು ಗೊತ್ತು ನೋಡದೆ ಬಲು ಸಂಭ್ರಮದಿಂದಲೇ ಸಜ್ಜಾಗಿ ಸಾರೋಟು ಯೇರಿದ್ದಳು. ಯೇಳೆಂಟು ಮಂದಿ ಪಯಿಲುವಾನರು ಹಿಂದ ಮುಂದ ಕಾಪಲು ಮಾಡುತಲಿದ್ದುದರಿಂದ ಭಯಪಡುವ ಅಗತ್ಯಯಿರಲಿಲ್ಲ.. ಮೊದ ಮೊದಲಿಗೆ ಸಾರೋಟೇನೋ ತೆಂಕಣ ದಿಕ್ಕಿನಲ್ಲಿದ್ದ ಗುಣಸಾಗರದ ದಾರಿಯನ್ನೇನೋ ಹಿಡಿದಿತ್ತು. ಆದರೆ ಸಿರುಬಿ ದಾಟಿ ಸೋಲದೇವರ ಹಳ್ಳಿ ಬರುತ್ತಲೇ ಬೇರೊಂದು ದಾರಿ ಹಿಡಿದುಬಿಟ್ಟಿತು. ಆ ದಾರಿ ಯಲ್ಲಿಗೆ ಹೋತದೆ ಯಂಬುದು ಸಾರಥಿಯಾದ ಮುಕುಂದನಿಗೆ ವತ್ತಟ್ಟಿಗಿರಲಿ ಖುದ್ದ ತಾಯಕ್ಕನೇ ತಿಳಿದಿರಲಿಲ್ಲ. ತನ್ನ ಪಾಡಿಗೆ ತಾನೇ ಹೋತೂsss ಹೋತೂ ಹೋಗೇ ಹೋತು.. ಹೋಗಿ ಅದು ತಲುಪಿದ್ದಲ್ಲಿ ಅಂದರ.. ಗೋರಖನಾಥರು ಸಾಯಿರದಾವಂದು ವರುಷಗಳ ಪಲ್ಯಂತ ವಂಟಿಗಾಲೀಲೆ ನಿಂತು ತಪಸ್ಸು ಮಾಡಿದ್ದಂಥ ಮಾನ್ಯರ ಮಸಲವಾಡ ಯಂಬ ಹೆಸರಿನ ಪುಣ್ಯಸಂಚಿತ ಗ್ರಾಮವನ್ನ.. ಅಂಗುಲಂಗುಲವಾಗಿ ತಾಯಕ್ಕಗ ಅದರ<noinclude></noinclude> cpdo3e3jvys48tcw4b7mtxlwrx506x3 320205 320194 2026-05-15T16:27:38Z Shreelatha.Halemane 7642 /* Validated */ 320205 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೩೨೨|right=ಅರಮನೆ}} ಭಾಷ್ಯ ಬರೆಯುತಲಿತ್ತು.. ವಸ್ತುಸ್ಥಿತಿ ಅಗ್ಗವಾಗಲು ಅಯ್ಯೋ ಯಂದು ಅಳಲಾರಂಭಿಸಿದೊಡನೆ ಸದರಿ ಪಟ್ಟಣದ ಯಾತ್ತು ಮಂದಿಯು.... {{gap}}ಅವುದು.. ತಿಲ್ಲಾನ ತಾಯಕ್ಕ ತನ್ನ ಮಗಳನ್ನು ಹಿ೦ದಲ ರಾತಿರಿ ಎಂದು ಹೊತ್ತಿನಲ್ಲಿ ಯಿದ್ದಕ್ಕಿದ್ದಂತೆ ರುಬ್ಬಿಸಿ 'ಮಗಳೇ ಗುಣಸಾಗರದ ಯೇಣುಗೋಪಾಲಸ್ವಾಮಿಯು ಸೋಲುಪ ಹೊತ್ತಿನಲ್ಲಿ ಕಣಸೊಳಗ ಮೂಡಿ ಬೆಳಗಿನ ಪೂಜೆ ಹೊತ್ತಿಗೆ ಬಂದು ದರುಸನ ಪಡಕೋ ಯಂದು ಆಗ್ನ ಮಾಡಿದನವ್ವಾ.. ಅದಕ ಹೊಂಡು” ಯಂದು ಹೇಳಿದಳು. ಆ ದೇವರ ಮೂಲ ಸ್ವಾಸ್ಥಿ ಹಂಪಿಯೊಳಗಿತ್ತು. ಕುಷ್ಣದೇವರಾಯನ ದ್ವಿತೀಯ ಪತ್ನಿ ಚೆನ್ನಾಂಬಿಕೆಯು ಅದನ್ನು ತ್ರಿಕಾಲ ಪೂಜೆ ಮಾಡುತಲಿದ್ದಳು. ರಕ್ಕಸತಂಗಡಗಿ ಯುದ್ದ ನಂತರ ಯಿಜಯನಗರ ಸಾಮ್ರಾಜ್ಯದಲ್ಲಿದ್ದ ಯಾವತ್ತು ವಯಷ್ಣವ ದೇವರುಗಳು ಅವರಿವರ ಹೆಗಲೇರಿಯೋ, ಬಗಲೊಳಗವಿಚಿಟ್ಟುಕೊಂಡೋ ಸುತ್ತನ್ನಾಕಡೆ ವಲಸೆ ಹೊಂಟವು.. ಮಂಟೇಸ್ವರ ಸ್ವಾಮಿಯು ಹರಪನಹಳ್ಳಿ ಸಮೀಪದ ತಿಮ್ಮಲಾಪುರದೊಳಗೂ, ಸೀ ಕುಷ್ಣನು ಮಲಸೀಮೆಯ ಆನಂದಾಪುರದೊಳಗೂ, ಯಜಂ ಯಿಠಲಸ್ವಾಮಿಂುು ಯಿಠಲಾಪುರ ದೊಳಗ, ಯೇಣುಗೋಪಾಲಸ್ವಾಮಿಯು ಸಿಂಧವಾಡಿ ಪ್ರಾಂತದ ಗುಣಸಾಗರದೊಳಗೂ... {{gap}}ಬುದ್ದಿ ಮೊಳೆದಾಗಿನಿಂದ ಯಲ್ಲೂ ಯಾವತ್ತೂ ಹೋಗಿರದಾಕೆಯಾಗಿದ್ದ ಚಿನ್ನಸಾನಿ ಹೊತ್ತು ಗೊತ್ತು ನೋಡದೆ ಬಲು ಸಂಭ್ರಮದಿಂದಲೇ ಸಜ್ಜಾಗಿ ಸಾರೋಟು ಯೇರಿದ್ದಳು. ಯೇಳೆಂಟು ಮಂದಿ ಪಯಿಲುವಾನರು ಹಿಂದ ಮುಂದ ಕಾಪಲು ಮಾಡುತಲಿದ್ದುದರಿಂದ ಭಯಪಡುವ ಅಗತ್ಯಯಿರಲಿಲ್ಲ.. ಮೊದ ಮೊದಲಿಗೆ ಸಾರೋಟೇನೋ ತೆಂಕಣ ದಿಕ್ಕಿನಲ್ಲಿದ್ದ ಗುಣಸಾಗರದ ದಾರಿಯನ್ನೇನೋ ಹಿಡಿದಿತ್ತು. ಆದರೆ ಸಿರುಬಿ ದಾಟಿ ಸೋಲದೇವರ ಹಳ್ಳಿ ಬರುತ್ತಲೇ ಬೇರೊಂದು ದಾರಿ ಹಿಡಿದುಬಿಟ್ಟಿತು. ಆ ದಾರಿ ಯಲ್ಲಿಗೆ ಹೋತದೆ ಯಂಬುದು ಸಾರಥಿಯಾದ ಮುಕುಂದನಿಗೆ ವತ್ತಟ್ಟಿಗಿರಲಿ ಖುದ್ದ ತಾಯಕ್ಕನೇ ತಿಳಿದಿರಲಿಲ್ಲ. ತನ್ನ ಪಾಡಿಗೆ ತಾನೇ ಹೋತೂsss ಹೋತೂ ಹೋಗೇ ಹೋತು.. ಹೋಗಿ ಅದು ತಲುಪಿದ್ದಲ್ಲಿ ಅಂದರ.. {{gap}}ಗೋರಖನಾಥರು ಸಾಯಿರದಾವಂದು ವರುಷಗಳ ಪಲ್ಯಂತ ವಂಟಿಗಾಲೀಲೆ ನಿಂತು ತಪಸ್ಸು ಮಾಡಿದ್ದಂಥ ಮಾನ್ಯರ ಮಸಲವಾಡ ಯಂಬ ಹೆಸರಿನ ಪುಣ್ಯಸಂಚಿತ ಗ್ರಾಮವನ್ನ.. ಅಂಗುಲಂಗುಲವಾಗಿ ತಾಯಕ್ಕಗ ಅದರ<noinclude></noinclude> 61m1hoe0o6io5cfaxuurexj4p0btjrf ಪುಟ:ಅರಮನೆ.pdf/೩೫೫ 104 86729 320197 205991 2026-05-15T16:23:55Z Shreesha Sharma 7840 /* Proofread */ 320197 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೩೨೪|right=ಅರಮನೆ}} ಬಾಯಿ ಮುಕ್ಕಳಿಸಲಿಲ್ಲ.. ರೆಪ್ಪೆಗೆ ರೆಪ್ಪೆ ಅಂಟಿಸಿ ವಂದಃ ವಂದು ಜಾಮು ನಿದುರೆ ಮಾಡಲಿಲ್ಲ... ವಂದ... ವಂದು ಬಾರಿ ಮಮ್ಮ ಲಟಲಟಾಂತ ಮುರೀಲಿಲ್ಲ.. ಸೂರಾss ಸೂರಾ ಯಂಬ ಮಂತರವನ್ನು ಜಪ ಮಾಡದೆ ಯಿರಲಿಲ್ಲ.. ನೋಡಿದವರಿಗೆ ಸುಬ್ರಸಾಗರದಂಗ ಗೋಚರ ಮಾಡುತಲಿದ್ದ ತಾನು ಅಂತರಂಗಿಕವಾಗಿ ಅಂಡಾವರನಾಗಿಬಿಟ್ಟಿದ್ದಳು. ಆಕೆಯು ಮಾಡಿದ ಬಾಣಂತನದ ರುಣದಲ್ಲಿದ್ದಂತವರು ಆಕೆಯನ್ನು ನಿಂತ ನಿಲುವುಕೀಲೆ ತರುಬಿ ವಂದಃ ವಂದು ತುತ್ತುಣ್ಣವ್ವಾ ಯಂದು ಬಗೆಬಗೆಯಿಂದ ಪೀಡಿಸಿ ನಿರಾಶರಾದರು.. ಆಕೆಯಿಂದ ವಂದಲ್ಲಾ ಎಂದು ಯಿಧದ ಸಾಯ ಪಡದಿದ್ದಂಥೋರು ವಂದವಂದು ಬೊಗುಸೆ ನೀರು ಕುಡಿಯವ್ವಾ ಯಂದು ಆಕೆಯನ್ನು ಕುಂತ ಕುಲುವು ಕೀಲೆ ತರುಬಿ ಪೀಡಿಸಿ ನಿರಾಶರಾದರು.. ಆಕೆಯ ಹಡದಪ್ಪನಾದ ಅಂತಾಡೆಪ್ಪನೂ ಮಸ್ತು ಹೇಳದೆ ಯಿರಲಿಲ್ಲ. ಆಕೆಯ ಯದೆಯೊಳಗೆ ದುಕ್ಕ ಯಂಬುದು ಜಲಪಾತ ದೋಪಾದಿಯಲ್ಲಿ ದುಮ್ಮಿಕ್ಕಲಾರಂಭಿಸಿತ್ತು.. ಆಕೆಯ ಅರಣ್ಯರೋಧನದಿಂದಾಗಿ ಭೂತಬಿಲ್ಲೆ ದ್ಯಾಮಯ್ಯನ ವಸ್ತಿಯು ಬರು ಬಲವಂತೆಪ್ಪನ ಬಿಡದಿ ಮನೆಗೆ ವಾವಣೆಗೊಂಡು ಬಿಟ್ಟಿತ್ತು. ಅಳಿದುಳಿದಿದ್ದ ದುಕ್ಕದಲ್ಲಿ ಬೇಯಿನ ಮರದವ್ವ ಯಂಥ ಬಿರುಗಾಳಿಗೂ ವಂದಃ ವಂದು ಯಲೆ ಅಲಗಾಡಿಸದೆ ಆಕೆಯ ದುಕ್ಕದಲ್ಲಿ ಮಿಂದುಪಡಕೊಂಡಿತ್ತು. ಮರದ ಮ್ಯಾಲಿದ್ದ ಬಾನಾಡಿಗಳಾದರೂ ಅಷ್ಟೇಯಾ?.... {{gap}}ದುಕ್ಕ ಮತ್ತು ಕ್ರೋಧಗಳೆಂಬ ನದಿಗಳ ಸಂಗಮರೂಪಿಯಾಗಿ ಆಕೆ ಪಡುವಲ ಕಡೆ ಮುಖ ಮಾಡಿ “ಯಲಾಂಯ್ ಸೂಯ್ಯಾಮನೇ.. ನನ್ನೆದಿ ಸಂಕಟ ನಿನಗ ಅರ ಆಗುವಲ್ಲದೇನು? ಮುಳುಗಾ ಮುಳುಗು ” ಯಂದು ಗದರಿಸಿದೇಟಿಗೆ ನಾಕು ಮಾರು ಯತ್ತರದಲ್ಲಿದ್ದ ದಿನಕರನು ದುಬುಕ್ಕಂತ ಮುಳುಗಿಬಿಡಲು ಕತ್ತಲ ಸಾರಣೆಯಾತು. ಆಗಸದ ತುಂಬ ಯಲ್ಲಂದರಲ್ಲಿ ಚುಕ್ಕಿಗಳು ತಮ್ಮ ತಮ್ಮ ಕಣ್ಣುಗಳನುಜ್ಜಿಕೊಳ್ಳುತ್ತ ಕಾಣಿಸಿಕೊಂಡವು.. ನಾಯಿ ರೂಪದಲ್ಲಿದ್ದ ಸಿವಸರಣೆ ಚನ್ನವ್ವ ಯಲಾಯ್ ತಾರೆ ನಿಹಾರಿಕೆಗಳಿರಾss ಮಾಸತಿಯಾದ ಜಗಲೂರೆವ್ವ ದುಕ್ಕ ಯಂಬ ನೋಂಪಿಯನ್ನು ಆಚರಣೆ ಮಾಡುತಲಿದ್ದಾಳೆ.. ನೀವೆಲ್ಲ....' ಯಂದು ಆಗ್ಗೆ ಮಾಡಿದೊಡನೆ ಅವೆಲ್ಲ ಕಾವಳದ ಕಂಬಳಿಯನ್ನು ಹೊದ್ದು ಮರೆಯಾದವು. ವಂದಾರ ಚುಕ್ಕಿಯಿಲ್ಲುದುದನು ಕಂಡು ಚಂದ್ರಾಮ ಯಲಾಯ್ ಬೆಳ್ಳಿ ಯಲಾಯ್ ಮಂಗಳೀ.. ಯಲಾಯ್ ಬುಧ<noinclude></noinclude> 1shbhfh6nfxf3w8c6rxafw6hq2w2nxx 320209 320197 2026-05-15T16:29:08Z Shreelatha.Halemane 7642 /* Validated */ 320209 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೩೨೪|right=ಅರಮನೆ}} ಬಾಯಿ ಮುಕ್ಕಳಿಸಲಿಲ್ಲ.. ರೆಪ್ಪೆಗೆ ರೆಪ್ಪೆ ಅಂಟಿಸಿ ವಂದಃ ವಂದು ಜಾಮು ನಿದುರೆ ಮಾಡಲಿಲ್ಲ... ವಂದ... ವಂದು ಬಾರಿ ಮಮ್ಮ ಲಟಲಟಾಂತ ಮುರೀಲಿಲ್ಲ.. ಸೂರಾss ಸೂರಾ ಯಂಬ ಮಂತರವನ್ನು ಜಪ ಮಾಡದೆ ಯಿರಲಿಲ್ಲ.. ನೋಡಿದವರಿಗೆ ಸುಬ್ರಸಾಗರದಂಗ ಗೋಚರ ಮಾಡುತಲಿದ್ದ ತಾನು ಅಂತರಂಗಿಕವಾಗಿ ಅಂಡಾವರನಾಗಿಬಿಟ್ಟಿದ್ದಳು. ಆಕೆಯು ಮಾಡಿದ ಬಾಣಂತನದ ರುಣದಲ್ಲಿದ್ದಂತವರು ಆಕೆಯನ್ನು ನಿಂತ ನಿಲುವುಕೀಲೆ ತರುಬಿ ವಂದಃ ವಂದು ತುತ್ತುಣ್ಣವ್ವಾ ಯಂದು ಬಗೆಬಗೆಯಿಂದ ಪೀಡಿಸಿ ನಿರಾಶರಾದರು.. ಆಕೆಯಿಂದ ವಂದಲ್ಲಾ ಎಂದು ಯಿಧದ ಸಾಯ ಪಡದಿದ್ದಂಥೋರು ವಂದವಂದು ಬೊಗುಸೆ ನೀರು ಕುಡಿಯವ್ವಾ ಯಂದು ಆಕೆಯನ್ನು ಕುಂತ ಕುಲುವು ಕೀಲೆ ತರುಬಿ ಪೀಡಿಸಿ ನಿರಾಶರಾದರು.. ಆಕೆಯ ಹಡದಪ್ಪನಾದ ಅಂತಾಡೆಪ್ಪನೂ ಮಸ್ತು ಹೇಳದೆ ಯಿರಲಿಲ್ಲ. ಆಕೆಯ ಯದೆಯೊಳಗೆ ದುಕ್ಕ ಯಂಬುದು ಜಲಪಾತ ದೋಪಾದಿಯಲ್ಲಿ ದುಮ್ಮಿಕ್ಕಲಾರಂಭಿಸಿತ್ತು.. ಆಕೆಯ ಅರಣ್ಯರೋಧನದಿಂದಾಗಿ ಭೂತಬಿಲ್ಲೆ ದ್ಯಾಮಯ್ಯನ ವಸ್ತಿಯು ಬರು ಬಲವಂತೆಪ್ಪನ ಬಿಡದಿ ಮನೆಗೆ ವಾವಣೆಗೊಂಡು ಬಿಟ್ಟಿತ್ತು. ಅಳಿದುಳಿದಿದ್ದ ದುಕ್ಕದಲ್ಲಿ ಬೇಯಿನ ಮರದವ್ವ ಯಂಥ ಬಿರುಗಾಳಿಗೂ ವಂದಃ ವಂದು ಯಲೆ ಅಲಗಾಡಿಸದೆ ಆಕೆಯ ದುಕ್ಕದಲ್ಲಿ ಮಿಂದುಪಡಕೊಂಡಿತ್ತು. ಮರದ ಮ್ಯಾಲಿದ್ದ ಬಾನಾಡಿಗಳಾದರೂ ಅಷ್ಟೇಯಾ?.... {{gap}}ದುಕ್ಕ ಮತ್ತು ಕ್ರೋಧಗಳೆಂಬ ನದಿಗಳ ಸಂಗಮರೂಪಿಯಾಗಿ ಆಕೆ ಪಡುವಲ ಕಡೆ ಮುಖ ಮಾಡಿ “ಯಲಾಂಯ್ ಸೂಯ್ಯಾಮನೇ.. ನನ್ನೆದಿ ಸಂಕಟ ನಿನಗ ಅರ ಆಗುವಲ್ಲದೇನು? ಮುಳುಗಾ ಮುಳುಗು ” ಯಂದು ಗದರಿಸಿದೇಟಿಗೆ ನಾಕು ಮಾರು ಯತ್ತರದಲ್ಲಿದ್ದ ದಿನಕರನು ದುಬುಕ್ಕಂತ ಮುಳುಗಿಬಿಡಲು ಕತ್ತಲ ಸಾರಣೆಯಾತು. ಆಗಸದ ತುಂಬ ಯಲ್ಲಂದರಲ್ಲಿ ಚುಕ್ಕಿಗಳು ತಮ್ಮ ತಮ್ಮ ಕಣ್ಣುಗಳನುಜ್ಜಿಕೊಳ್ಳುತ್ತ ಕಾಣಿಸಿಕೊಂಡವು.. ನಾಯಿ ರೂಪದಲ್ಲಿದ್ದ ಸಿವಸರಣೆ ಚನ್ನವ್ವ ಯಲಾಯ್ ತಾರೆ ನಿಹಾರಿಕೆಗಳಿರಾss ಮಾಸತಿಯಾದ ಜಗಲೂರೆವ್ವ ದುಕ್ಕ ಯಂಬ ನೋಂಪಿಯನ್ನು ಆಚರಣೆ ಮಾಡುತಲಿದ್ದಾಳೆ.. ನೀವೆಲ್ಲ....' ಯಂದು ಆಗ್ಗೆ ಮಾಡಿದೊಡನೆ ಅವೆಲ್ಲ ಕಾವಳದ ಕಂಬಳಿಯನ್ನು ಹೊದ್ದು ಮರೆಯಾದವು. ವಂದಾರ ಚುಕ್ಕಿಯಿಲ್ಲುದುದನು ಕಂಡು ಚಂದ್ರಾಮ ಯಲಾಯ್ ಬೆಳ್ಳಿ ಯಲಾಯ್ ಮಂಗಳೀ.. ಯಲಾಯ್ ಬುಧ<noinclude></noinclude> mgy8s2yj4bbhmxywvg3yz23ntlivigk ಪುಟ:ಅರಮನೆ.pdf/೩೫೪ 104 86730 320183 205992 2026-05-15T16:17:24Z Shreesha Sharma 7840 320183 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=ಅರಮನೆ|right=೩೨೩}} ಗುರುತು ಹತ್ತಿತ್ತು. ವಂದು ಛಣ ಕಣ್ಣುಗಳಿಗೆ ಮಂಪರಡರಿದಂಗಾತು.. ಬೆಮತು ವುಟ್ಟ ಬಟ್ಟೆ ವದ್ದೆ ಆದಂಗಾತು.. ವರಮಾನ ಕಾಲ ಯಂಬ ತಿಪ್ಪೆ ಅಡಿಯಿಂದ ಭೂತಕಾಲ ಮಾಲಕೆದ್ದು ಬಂತು..ಹಾ.. ಅಗೋ.. ಅದೇ ಮಂಟಪ!.. ಹಾ... ಅಗೋ ಅದೇ ಪುಷ್ಕರಣಿ!.... ಹಾ... ಅಗೋ ಅಲ್ಲಿ ಎಂದು ದೇವದಾರು ರುಕ್ಷ ಯಿತ್ತಲ್ಲಾ.. ಪ್ಲಾ.. ಯಗೋ ಯಿಲ್ಲಿ.. ಮತ್ತಾವುದೋ ಯಿತ್ತಲ್ಲಾ! {{gap}}- “ಹಾಯ್.. ಯೇಣುಗೋಪಾಲಸ್ವಾಮಿ ಯೇನಿದಪ್ಪಾ ನಿನ್ನೀ ಮಾಯೇ.. ನೀನು ಕಣಸೂಳಗ ಮೂಡಿ ಅಪ್ಪಣೆ ಮಾಡಿದ್ದೇನು? ನೀನು ಯಾಕ ಹಾದಿ ತಪ್ಪಿಸಿದಿಯಪ್ಪಾ? ಯಿಲ್ಲಿಗೆ ಯಾಕ ಕರಕೊಂಡು ಬಂದು ಬಿಟ್ಟಿಯಪ್ಪಾ. ನೆನಪುಗಳ ಬೆರಣಿ ವಟ್ಟಿ ನನ್ನ ಸುಡಬೇಕಂತ ಮಾಡಿಯಾ ಹೆಂಗ?” ಯಂದನಕಂತ ತಾಯಕ್ಕ ಬಾಯಿಗಡ್ಡ ಸೀರೆ ಸೆರಗನ ಯಿಟ್ಟುಕೊಂಡಳು. {{gap}}ಹಾಯ್.. ಭೂತ ಭುಜಂಗನಾಥನೇ...! {{gap}}ಅಲ್ಲೇ ವಂದು ದರುಮ ಛತ್ರಯಿತ್ತಲ್ಲ.. ಅದರ ಮೇಲ್ವಿಚಾರಕ ದಯಾನಾಥ ಯಂಬಾತ ಯಿದ್ದನಲ್ಲ. ಆತ ಅದಾವ ಪ್ರೇರಣೆಯಿಂದಲೋ ಬಂದು ಅವರನ್ನು ಕರೆಯೊಯ್ದು ಛತ್ರದೊಳಗೆ ವಸತಿ ಯಿತರೆ ಸವುಲಭ್ಯಗಳನ್ನು ಕಲ್ಪಿಸಿಕೊಟ್ಟ “ಯಿದೇನವ್ವಾ.. ಯಿದಾವುದೋ ಗೊತ್ತು ಗುರಿಯಿಲ್ಲದ ದೇಸಕ್ಕೆ ಯಾಕ ಕರಕೊಂಡು ಬಂದಿ” ಯಂದು ಕೇಳುತ ಚಿನ್ನಾಸಾಮಿ ಆಕಳಿಸಿದಳು, “ಯೇನೋ ಮಗಳೇ ಆ ಭೂತ ಭುಜಂಗನಾಥಂದೇ” ಯಿದೆಲ್ಲ ಜವಾಬು ನೀಡುತಾ ತಾನೂ ಪ್ಲಾ.. ಯಂದಾಕಳಿಸಿದಳು ತಾಯ... {{gap}}ರಾತಿರಿ ವಂದು ಹೊತ್ತಿನಲ್ಲಿ.. ಯಿಷ್ಟಗಲ ಅಷ್ಟುದ್ದದ ವಂದು ಕಣಸು ಬಿತ್ತು.. ಅದರೊಳಗೆ ಸನ್ಯಾಸಿಯೋಲ್ವ ಯೀಶಾನ್ಯ ದಿಕ್ಕಿನಿಂದ ನಡಕೋತ ಬಂದ, ಬಡಿದು ತಾಯಕ್ಕನನ್ನು ಯಬ್ಬಿಸಿದ.. ಯಾರಿರಬವುದಂತ ತಿಬ್ಬಳಿಸಿ ನೋಡಿದಳು... ಅರೆ! ಭೂತಭುಜಂಗನಾಥರು.. ಯಷ್ಟು ವರುಷಂಗಳ ನಂತರ ತಾನಿವರನ್ನು ನೋಡುತ್ತಿರುವುದು..“ಸ್ವಾಮಿ...” ಅಡಿಗಳಿಗೆರಗಿದಳು. ನಾಥರು ತಬ್ಬಿಕೊಂಡರು. “ಪ್ರಿಯೇ.. ನಮಗೆ ನಮ್ಮ ಪ್ರೀತಿಯ ಕುವರಿಯನ್ನು ನೋಡುವ ಆಸೆ ಆಯಿತು ಅದಕ್ಕೆ....” ಅತ್ತ ಕುದುರೆಡವು ಪಟ್ಟಣದೊಳಗ ಆ ಸುದ್ದಿ. ಅಂದರೆ ಅದು ಸುದ್ದಿ ಕಿವಿಗೆ ಬಿದಲಾಗಾಯ್ತು ಮಾತ್ರುಮೂರಿಯಾದ ಜಗಲೂರೆವ್ವ ಎಂದು ಎಂದು ಅಗುಳು ಬಾನ ಮುಟ್ಟಲಿಲ್ಲ.. ವಂದಃ ಎಂದು ಸೆರೆಮುಕ್ತ ನೀರನ್ನು ಹಾಕ್ಕೊಂಡು<noinclude></noinclude> efhkof1nioh5jmg3co1h9hs3ph2te10 320195 320183 2026-05-15T16:23:08Z Shreesha Sharma 7840 /* Proofread */ 320195 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೨೩}} ಗುರುತು ಹತ್ತಿತ್ತು. ವಂದು ಛಣ ಕಣ್ಣುಗಳಿಗೆ ಮಂಪರಡರಿದಂಗಾತು.. ಬೆಮತು ವುಟ್ಟ ಬಟ್ಟೆ ವದ್ದೆ ಆದಂಗಾತು.. ವರಮಾನ ಕಾಲ ಯಂಬ ತಿಪ್ಪೆ ಅಡಿಯಿಂದ ಭೂತಕಾಲ ಮಾಲಕೆದ್ದು ಬಂತು..ಹಾ.. ಅಗೋ.. ಅದೇ ಮಂಟಪ!.. ಹಾ... ಅಗೋ ಅದೇ ಪುಷ್ಕರಣಿ!.... ಹಾ... ಅಗೋ ಅಲ್ಲಿ ಎಂದು ದೇವದಾರು ರುಕ್ಷ ಯಿತ್ತಲ್ಲಾ.. ಪ್ಲಾ.. ಯಗೋ ಯಿಲ್ಲಿ.. ಮತ್ತಾವುದೋ ಯಿತ್ತಲ್ಲಾ! {{gap}}- “ಹಾಯ್.. ಯೇಣುಗೋಪಾಲಸ್ವಾಮಿ ಯೇನಿದಪ್ಪಾ ನಿನ್ನೀ ಮಾಯೇ.. ನೀನು ಕಣಸೂಳಗ ಮೂಡಿ ಅಪ್ಪಣೆ ಮಾಡಿದ್ದೇನು? ನೀನು ಯಾಕ ಹಾದಿ ತಪ್ಪಿಸಿದಿಯಪ್ಪಾ? ಯಿಲ್ಲಿಗೆ ಯಾಕ ಕರಕೊಂಡು ಬಂದು ಬಿಟ್ಟಿಯಪ್ಪಾ. ನೆನಪುಗಳ ಬೆರಣಿ ವಟ್ಟಿ ನನ್ನ ಸುಡಬೇಕಂತ ಮಾಡಿಯಾ ಹೆಂಗ?” ಯಂದನಕಂತ ತಾಯಕ್ಕ ಬಾಯಿಗಡ್ಡ ಸೀರೆ ಸೆರಗನ ಯಿಟ್ಟುಕೊಂಡಳು. {{gap}}ಹಾಯ್.. ಭೂತ ಭುಜಂಗನಾಥನೇ...! {{gap}}ಅಲ್ಲೇ ವಂದು ದರುಮ ಛತ್ರಯಿತ್ತಲ್ಲ.. ಅದರ ಮೇಲ್ವಿಚಾರಕ ದಯಾನಾಥ ಯಂಬಾತ ಯಿದ್ದನಲ್ಲ. ಆತ ಅದಾವ ಪ್ರೇರಣೆಯಿಂದಲೋ ಬಂದು ಅವರನ್ನು ಕರೆಯೊಯ್ದು ಛತ್ರದೊಳಗೆ ವಸತಿ ಯಿತರೆ ಸವುಲಭ್ಯಗಳನ್ನು ಕಲ್ಪಿಸಿಕೊಟ್ಟ “ಯಿದೇನವ್ವಾ.. ಯಿದಾವುದೋ ಗೊತ್ತು ಗುರಿಯಿಲ್ಲದ ದೇಸಕ್ಕೆ ಯಾಕ ಕರಕೊಂಡು ಬಂದಿ” ಯಂದು ಕೇಳುತ ಚಿನ್ನಾಸಾಮಿ ಆಕಳಿಸಿದಳು, “ಯೇನೋ ಮಗಳೇ ಆ ಭೂತ ಭುಜಂಗನಾಥಂದೇ” ಯಿದೆಲ್ಲ ಜವಾಬು ನೀಡುತಾ ತಾನೂ ಪ್ಲಾ.. ಯಂದಾಕಳಿಸಿದಳು ತಾಯ... {{gap}}ರಾತಿರಿ ವಂದು ಹೊತ್ತಿನಲ್ಲಿ.. ಯಿಷ್ಟಗಲ ಅಷ್ಟುದ್ದದ ವಂದು ಕಣಸು ಬಿತ್ತು.. ಅದರೊಳಗೆ ಸನ್ಯಾಸಿಯೋಲ್ವ ಯೀಶಾನ್ಯ ದಿಕ್ಕಿನಿಂದ ನಡಕೋತ ಬಂದ, ಬಡಿದು ತಾಯಕ್ಕನನ್ನು ಯಬ್ಬಿಸಿದ.. ಯಾರಿರಬವುದಂತ ತಿಬ್ಬಳಿಸಿ ನೋಡಿದಳು... ಅರೆ! ಭೂತಭುಜಂಗನಾಥರು.. ಯಷ್ಟು ವರುಷಂಗಳ ನಂತರ ತಾನಿವರನ್ನು ನೋಡುತ್ತಿರುವುದು..“ಸ್ವಾಮಿ...” ಅಡಿಗಳಿಗೆರಗಿದಳು. ನಾಥರು ತಬ್ಬಿಕೊಂಡರು. “ಪ್ರಿಯೇ.. ನಮಗೆ ನಮ್ಮ ಪ್ರೀತಿಯ ಕುವರಿಯನ್ನು ನೋಡುವ ಆಸೆ ಆಯಿತು ಅದಕ್ಕೆ....” ಅತ್ತ ಕುದುರೆಡವು ಪಟ್ಟಣದೊಳಗ ಆ ಸುದ್ದಿ. ಅಂದರೆ ಅದು ಸುದ್ದಿ ಕಿವಿಗೆ ಬಿದಲಾಗಾಯ್ತು ಮಾತ್ರುಮೂರಿಯಾದ ಜಗಲೂರೆವ್ವ ಎಂದು ಎಂದು ಅಗುಳು ಬಾನ ಮುಟ್ಟಲಿಲ್ಲ.. ವಂದಃ ಎಂದು ಸೆರೆಮುಕ್ತ ನೀರನ್ನು ಹಾಕ್ಕೊಂಡು<noinclude></noinclude> ekrv10ehfimsdelsma6befob4xq3y71 320207 320195 2026-05-15T16:28:22Z Shreelatha.Halemane 7642 /* Validated */ 320207 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೨೩}} ಗುರುತು ಹತ್ತಿತ್ತು. ವಂದು ಛಣ ಕಣ್ಣುಗಳಿಗೆ ಮಂಪರಡರಿದಂಗಾತು.. ಬೆಮತು ವುಟ್ಟ ಬಟ್ಟೆ ವದ್ದೆ ಆದಂಗಾತು.. ವರಮಾನ ಕಾಲ ಯಂಬ ತಿಪ್ಪೆ ಅಡಿಯಿಂದ ಭೂತಕಾಲ ಮಾಲಕೆದ್ದು ಬಂತು..ಹಾ.. ಅಗೋ.. ಅದೇ ಮಂಟಪ!.. ಹಾ... ಅಗೋ ಅದೇ ಪುಷ್ಕರಣಿ!.... ಹಾ... ಅಗೋ ಅಲ್ಲಿ ಎಂದು ದೇವದಾರು ರುಕ್ಷ ಯಿತ್ತಲ್ಲಾ.. ಪ್ಲಾ.. ಯಗೋ ಯಿಲ್ಲಿ.. ಮತ್ತಾವುದೋ ಯಿತ್ತಲ್ಲಾ! {{gap}}- “ಹಾಯ್.. ಯೇಣುಗೋಪಾಲಸ್ವಾಮಿ ಯೇನಿದಪ್ಪಾ ನಿನ್ನೀ ಮಾಯೇ.. ನೀನು ಕಣಸೂಳಗ ಮೂಡಿ ಅಪ್ಪಣೆ ಮಾಡಿದ್ದೇನು? ನೀನು ಯಾಕ ಹಾದಿ ತಪ್ಪಿಸಿದಿಯಪ್ಪಾ? ಯಿಲ್ಲಿಗೆ ಯಾಕ ಕರಕೊಂಡು ಬಂದು ಬಿಟ್ಟಿಯಪ್ಪಾ. ನೆನಪುಗಳ ಬೆರಣಿ ವಟ್ಟಿ ನನ್ನ ಸುಡಬೇಕಂತ ಮಾಡಿಯಾ ಹೆಂಗ?” ಯಂದನಕಂತ ತಾಯಕ್ಕ ಬಾಯಿಗಡ್ಡ ಸೀರೆ ಸೆರಗನ ಯಿಟ್ಟುಕೊಂಡಳು. {{gap}}ಹಾಯ್.. ಭೂತ ಭುಜಂಗನಾಥನೇ...! {{gap}}ಅಲ್ಲೇ ವಂದು ದರುಮ ಛತ್ರಯಿತ್ತಲ್ಲ.. ಅದರ ಮೇಲ್ವಿಚಾರಕ ದಯಾನಾಥ ಯಂಬಾತ ಯಿದ್ದನಲ್ಲ. ಆತ ಅದಾವ ಪ್ರೇರಣೆಯಿಂದಲೋ ಬಂದು ಅವರನ್ನು ಕರೆಯೊಯ್ದು ಛತ್ರದೊಳಗೆ ವಸತಿ ಯಿತರೆ ಸವುಲಭ್ಯಗಳನ್ನು ಕಲ್ಪಿಸಿಕೊಟ್ಟ “ಯಿದೇನವ್ವಾ.. ಯಿದಾವುದೋ ಗೊತ್ತು ಗುರಿಯಿಲ್ಲದ ದೇಸಕ್ಕೆ ಯಾಕ ಕರಕೊಂಡು ಬಂದಿ” ಯಂದು ಕೇಳುತ ಚಿನ್ನಾಸಾಮಿ ಆಕಳಿಸಿದಳು, “ಯೇನೋ ಮಗಳೇ ಆ ಭೂತ ಭುಜಂಗನಾಥಂದೇ” ಯಿದೆಲ್ಲ ಜವಾಬು ನೀಡುತಾ ತಾನೂ ಪ್ಲಾ.. ಯಂದಾಕಳಿಸಿದಳು ತಾಯ... {{gap}}ರಾತಿರಿ ವಂದು ಹೊತ್ತಿನಲ್ಲಿ.. ಯಿಷ್ಟಗಲ ಅಷ್ಟುದ್ದದ ವಂದು ಕಣಸು ಬಿತ್ತು.. ಅದರೊಳಗೆ ಸನ್ಯಾಸಿಯೋಲ್ವ ಯೀಶಾನ್ಯ ದಿಕ್ಕಿನಿಂದ ನಡಕೋತ ಬಂದ, ಬಡಿದು ತಾಯಕ್ಕನನ್ನು ಯಬ್ಬಿಸಿದ.. ಯಾರಿರಬವುದಂತ ತಿಬ್ಬಳಿಸಿ ನೋಡಿದಳು... ಅರೆ! ಭೂತಭುಜಂಗನಾಥರು.. ಯಷ್ಟು ವರುಷಂಗಳ ನಂತರ ತಾನಿವರನ್ನು ನೋಡುತ್ತಿರುವುದು..“ಸ್ವಾಮಿ...” ಅಡಿಗಳಿಗೆರಗಿದಳು. ನಾಥರು ತಬ್ಬಿಕೊಂಡರು. “ಪ್ರಿಯೇ.. ನಮಗೆ ನಮ್ಮ ಪ್ರೀತಿಯ ಕುವರಿಯನ್ನು ನೋಡುವ ಆಸೆ ಆಯಿತು ಅದಕ್ಕೆ....” {{gap}}ಅತ್ತ ಕುದುರೆಡವು ಪಟ್ಟಣದೊಳಗ ಆ ಸುದ್ದಿ. ಅಂದರೆ ಅದು ಸುದ್ದಿ ಕಿವಿಗೆ ಬಿದಲಾಗಾಯ್ತು ಮಾತ್ರುಮೂರಿಯಾದ ಜಗಲೂರೆವ್ವ ಎಂದು ಎಂದು ಅಗುಳು ಬಾನ ಮುಟ್ಟಲಿಲ್ಲ.. ವಂದಃ ಎಂದು ಸೆರೆಮುಕ್ತ ನೀರನ್ನು ಹಾಕ್ಕೊಂಡು<noinclude></noinclude> agtdp1758n122jr7fr0iipjlwdpw99r ಪುಟ:ಅರಮನೆ.pdf/೩೫೬ 104 86731 320201 205993 2026-05-15T16:26:14Z Shreesha Sharma 7840 /* Proofread */ 320201 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೨೫}} ಯಂದು ತನ್ನ ವಬ್ಬೊಬ್ಬ ಪ್ರಿಯತಮೆಯಂದಿರ ಹೆಸರು ಹಿಡಿದು ಕೂಗುತ ಕಾಣಿಸಿಕೊಂಡ.. ಆಕೆ ಅವನತ್ತ ಮುಖ ಮಾಡಿ ಯಲಾಯ್ ಚಂದ್ರಾಮನೇ.. ನನ್ನ ಹಸುಗಂದಮ್ಮನಾದ ಸೂರನು ಜೀವನ್ಮರಣ ಹೋರಾಟವನ್ನು ಆರಂಭಿಸಲಿರುವನು ಆದ್ದರಿಂದ ನೀನು ಯಾವ ಕಾರಣಕ್ಕೂ ದುಂಡಗಾಗದಿರು' ಯಂದು ಆಗ್ಗೆ ಮಾಡಲು ಆ ಶಶಿಕರನು ಆಯ್ತಾ ಆಯಿತು...” ಯಂದು ಸಮ್ಮತಿಯನ್ನು ಸೂಚಿಸಿ ಬೆಳದಿಂಗಳ ಪಯ್ಕೆ ಮೂರು ಪಾವಲಿ ಭಾಗವನ್ನು ವುಪಸಮ್ಮರಿಸಿಕೊಂಡುಬಿಟ್ಟನು. {{gap}}ಯೀ ಪ್ರಕಾರವಾಗಿ ಯಲ್ಲಂದರಲ್ಲಿ ಕತ್ತಲಾವರಿಕೆಯಾಗಲು ಪಟ್ಟಣದ ತುಂಬೆಲ್ಲ ಬೆಳಕಡಗಿತು. ಕುಂತ ನೆಲವನ್ನೇ ಸೂನ್ಯಸಿವಾಸನವನ್ನಾಗಿ ಮಾಡಿಕೊಂಡು ಯಿಡೀ ಪಟ್ಟಣವನ್ನೇ ದುರುಗಟ್ಟಿ ನೋಡಿದ ಆ ಮಾಸಾದ್ವಿಯು ಕೂದಲನ್ನು ಹಾ... ಹಾ... ಅಂತ ಚೆಲ್ಲೊಡೆದು ಪ್ರಭಾವಳಿ ರಚನೆ ಮಾಡಿಕೊಂಡಳು... “ಯಮೋ ಸೂರನೇ” ಯಂದಾಕೆ ಕೂಗಿದೊಡನೆ.... {{gap}}ಪಟ್ಟಣದೊಳಗಿನ ಸಮಸ್ತ ಗಂಡಸರ ಯಡಗಣ್ಣು, ಹೆಂಗಸರ ಬಲಗಣ್ಣು ಕುಣಿಯಲಾರಂಭಿಸಿದ ವೆಂದ ಮ್ಯಾಲ, ವುಂಡ ಕೂಳು ವಡಲೊಳಗಿಂದ ತೊಳಸಿ ಗಂಟಲಿಗೆ ಬಂದಾಂಗಾಗತೊಡಗಿತೆಂದ ಮ್ಯಾಲ.. ಮೂಡೋ ಕಡೇಲೊಂದು, ಮುಣುಗೋ ಕಡೇಲೊಂದು ಕಡಗೋಲಿನಂಥ ಬಾಲದ ಚುಕ್ಕಿಗಳು ಮೂಡಿ ಕಡೇಲೊಂದು, ಮುಣುಗೋ ಕಡೇಲೊಂದು ಮೂಡಿ ಮರೆಯಾದವೆಂದ ಮಾಲ, ಸಕಲಿದ ಕುರುಚಲು ಕಾಡೊಳಗಿಂದ ತೋಳನರಿಗಳು ಮುಗುಲಿಗೆ ಮುಖ ಮಾಡಿ ಹೋಮ್ ಅಂತ ಹೂಳಿಡಲಾರಂಭಿಸಿದವೆಂದ ಮ್ಯಾಲ.. {{gap}}ಬಗೆಬಗೆ ರುಕ್ಷರಾಜಿಗಳಿಂದಲೂ, ಹರಿವ ಹಳ್ಳತೊರೆಗಳಿಂದಲೂ ಬಲು ಸೋಭಾಯ ಮಾನವಾಗಿದ್ದ ಬಯಲೊಳಗ ಸುರಸುಂದರ ಮಣಕಗಳ ನಡುವೆ ಸುರತ ಸಂಕಥಾಯಿನೋದದಿಂದ ಸೋಭನ ಪ್ರಸ್ತದಲ್ಲಿ ನಿರತನಾಗಿದ್ದ ಸೂರನ ಕುಂಡಲಗಳಿದ್ದ ಕಲ್ಲಗಳಿಗೆ ತಾಯಿಯ ಕೂಗು ಬರಸಿಡಿಲಿನಂತೆರಗಿತು. ಕೂಡಲೆ ತನ್ನ ಮೊಳದುದ್ದದ ಸಿಸ್ಕವನ್ನು ವುಪಸಮ್ಮರಿಸಿಕೊಂಡನು. ತನ್ನ ಡುಬ್ಬದ ಮ್ಯಾಲಿಂದ ಯಿಳಿದು ಯಿರಮಿಸಿಕೊಂಡುದಲ್ಲದೆ ನಖಸಿಖಾಂತ ಜಲಜಲನೆ ಬೆಮೆತ ತನ್ನ ಪ್ರಿಯತಮನನ್ನು ನೋಡಿ ಯಾಕುಂದೇ ತುಷಾರದ ಸರಸತಿಯು “ಯಾಕೆ ಪ್ರಿಯಾ ನಿನಗಾದ ಬ್ಯಾಸರಯೇನು?” ಯಂದು ಯಿಚಾರ ಮಾಡಲು ಅದಕಿದ್ದು ಸೂರನು “ನನ್ನ ಪ್ರಾಣಪದಕಳಾದ ಸರಸಿಯೇ.. ನನ್ನ ತಾಯಿ ಜಗಲೂರೆವ್ವ<noinclude></noinclude> 7j641f42csueul224382fzow8n00gh7 320214 320201 2026-05-15T16:30:47Z Shreelatha.Halemane 7642 /* Validated */ 320214 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೨೫}} ಯಂದು ತನ್ನ ವಬ್ಬೊಬ್ಬ ಪ್ರಿಯತಮೆಯಂದಿರ ಹೆಸರು ಹಿಡಿದು ಕೂಗುತ ಕಾಣಿಸಿಕೊಂಡ.. ಆಕೆ ಅವನತ್ತ ಮುಖ ಮಾಡಿ ಯಲಾಯ್ ಚಂದ್ರಾಮನೇ.. ನನ್ನ ಹಸುಗಂದಮ್ಮನಾದ ಸೂರನು ಜೀವನ್ಮರಣ ಹೋರಾಟವನ್ನು ಆರಂಭಿಸಲಿರುವನು ಆದ್ದರಿಂದ ನೀನು ಯಾವ ಕಾರಣಕ್ಕೂ ದುಂಡಗಾಗದಿರು' ಯಂದು ಆಗ್ಗೆ ಮಾಡಲು ಆ ಶಶಿಕರನು ಆಯ್ತಾ ಆಯಿತು...” ಯಂದು ಸಮ್ಮತಿಯನ್ನು ಸೂಚಿಸಿ ಬೆಳದಿಂಗಳ ಪಯ್ಕೆ ಮೂರು ಪಾವಲಿ ಭಾಗವನ್ನು ವುಪಸಮ್ಮರಿಸಿಕೊಂಡುಬಿಟ್ಟನು. {{gap}}ಯೀ ಪ್ರಕಾರವಾಗಿ ಯಲ್ಲಂದರಲ್ಲಿ ಕತ್ತಲಾವರಿಕೆಯಾಗಲು ಪಟ್ಟಣದ ತುಂಬೆಲ್ಲ ಬೆಳಕಡಗಿತು. ಕುಂತ ನೆಲವನ್ನೇ ಸೂನ್ಯಸಿವಾಸನವನ್ನಾಗಿ ಮಾಡಿಕೊಂಡು ಯಿಡೀ ಪಟ್ಟಣವನ್ನೇ ದುರುಗಟ್ಟಿ ನೋಡಿದ ಆ ಮಾಸಾದ್ವಿಯು ಕೂದಲನ್ನು ಹಾ... ಹಾ... ಅಂತ ಚೆಲ್ಲೊಡೆದು ಪ್ರಭಾವಳಿ ರಚನೆ ಮಾಡಿಕೊಂಡಳು... “ಯಮೋ ಸೂರನೇ” ಯಂದಾಕೆ ಕೂಗಿದೊಡನೆ.... {{gap}}ಪಟ್ಟಣದೊಳಗಿನ ಸಮಸ್ತ ಗಂಡಸರ ಯಡಗಣ್ಣು, ಹೆಂಗಸರ ಬಲಗಣ್ಣು ಕುಣಿಯಲಾರಂಭಿಸಿದ ವೆಂದ ಮ್ಯಾಲ, ವುಂಡ ಕೂಳು ವಡಲೊಳಗಿಂದ ತೊಳಸಿ ಗಂಟಲಿಗೆ ಬಂದಾಂಗಾಗತೊಡಗಿತೆಂದ ಮ್ಯಾಲ.. ಮೂಡೋ ಕಡೇಲೊಂದು, ಮುಣುಗೋ ಕಡೇಲೊಂದು ಕಡಗೋಲಿನಂಥ ಬಾಲದ ಚುಕ್ಕಿಗಳು ಮೂಡಿ ಕಡೇಲೊಂದು, ಮುಣುಗೋ ಕಡೇಲೊಂದು ಮೂಡಿ ಮರೆಯಾದವೆಂದ ಮಾಲ, ಸಕಲಿದ ಕುರುಚಲು ಕಾಡೊಳಗಿಂದ ತೋಳನರಿಗಳು ಮುಗುಲಿಗೆ ಮುಖ ಮಾಡಿ ಹೋಮ್ ಅಂತ ಹೂಳಿಡಲಾರಂಭಿಸಿದವೆಂದ ಮ್ಯಾಲ.. {{gap}}ಬಗೆಬಗೆ ರುಕ್ಷರಾಜಿಗಳಿಂದಲೂ, ಹರಿವ ಹಳ್ಳತೊರೆಗಳಿಂದಲೂ ಬಲು ಸೋಭಾಯ ಮಾನವಾಗಿದ್ದ ಬಯಲೊಳಗ ಸುರಸುಂದರ ಮಣಕಗಳ ನಡುವೆ ಸುರತ ಸಂಕಥಾಯಿನೋದದಿಂದ ಸೋಭನ ಪ್ರಸ್ತದಲ್ಲಿ ನಿರತನಾಗಿದ್ದ ಸೂರನ ಕುಂಡಲಗಳಿದ್ದ ಕಲ್ಲಗಳಿಗೆ ತಾಯಿಯ ಕೂಗು ಬರಸಿಡಿಲಿನಂತೆರಗಿತು. ಕೂಡಲೆ ತನ್ನ ಮೊಳದುದ್ದದ ಸಿಸ್ಕವನ್ನು ವುಪಸಮ್ಮರಿಸಿಕೊಂಡನು. ತನ್ನ ಡುಬ್ಬದ ಮ್ಯಾಲಿಂದ ಯಿಳಿದು ಯಿರಮಿಸಿಕೊಂಡುದಲ್ಲದೆ ನಖಸಿಖಾಂತ ಜಲಜಲನೆ ಬೆಮೆತ ತನ್ನ ಪ್ರಿಯತಮನನ್ನು ನೋಡಿ ಯಾಕುಂದೇ ತುಷಾರದ ಸರಸತಿಯು “ಯಾಕೆ ಪ್ರಿಯಾ ನಿನಗಾದ ಬ್ಯಾಸರಯೇನು?” ಯಂದು ಯಿಚಾರ ಮಾಡಲು ಅದಕಿದ್ದು ಸೂರನು “ನನ್ನ ಪ್ರಾಣಪದಕಳಾದ ಸರಸಿಯೇ.. ನನ್ನ ತಾಯಿ ಜಗಲೂರೆವ್ವ<noinclude></noinclude> 01rb28pf2puf4v973npxlwbbvemwfaf ಪುಟ:ಅರಮನೆ.pdf/೩೫೮ 104 86732 320204 205994 2026-05-15T16:27:20Z Shreesha Sharma 7840 /* Proofread */ 320204 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೨೭}} ಮ್ಯಾಲ ನನಗ ನಂಬುಕೆ ಅದss.. ನೀನು ಮಾತ್ರ ಯಾರ ಕಯೂ ಸಿಕ್ಕೋದು ಬ್ಯಾಡ.. ಮಯ್ಯ ಮ್ಯಾಲ ಖಬುರಿರಲಿ. ಹುಷಾರು..” ಯಂದು ನಾಕಾರು ಬುದ್ದಿವಾದದ ಮಾತಾಡಿದಳು. ಅದಕಿದ್ದು ಸೂರನು ಆಗಲಿ ತಾಯಿ...” 0ರಂದನು. ನಾಲಗೆ ಚಾಚಿ ಆಕೆಯ ಕಣ್ಣಾಲಿಗಳ ತುದಿಯಲ್ಲಿದ್ದ ಅಸ್ತುಬಿಂದುಗಳನ್ನು ಆಸನಗೊಂಡನು. ಆಕೆ ಬ್ಯಾಡಾಂದರೂ ಕೇಳದೆ ಪಟ್ಟಣದ ರಾಜಬೀದಿಯನ್ನು ಪ್ರವೇಶ ಮಾಡಿದನು. ಗಂಡಸರಿದ್ದಲ್ಲಿ ತನ್ನನ್ನು ಹಿಡಿಯಬವುದು ಯಂದು ಅಡ್ಡ ಬರುವ ರೀತಿಯಲ್ಲಿ ಹತ್ತು ಹೆಜ್ಜೆಗೊಂದೊಂದು ಸಲ ಗರನೆ ಹಾಕುತ, ಸಿಮಾವಲೋಕನ ಮಾಡುತ ಮೋಡೋಣಿಗಳಲ್ಲೆಲ್ಲ ಸುಂಟರುಗಾಳಿಯೋ ಪಾದಿಯಲ್ಲಿ ಸುಳುಸುಳಿದಾಡಿದನು.. ತನಗೆ ಗೊತ್ತು ಬಲ್ಲಂಥ ವಂದೊಂದು ಮನೆಯದುರು ನಿಂತು ಯಲಾಂಯ್ ಜಲಜಾ.. ಯಲಾಯ್ ರುಕ್ಕೂ......... ಯಲಾಮ್ ಸುಂದರೀ.. ಯಲಾಯ್ ರಂಭಾSS.. ಯಲಾಯ್ ಯಿಲೋತ್ತಮೇ.. ಯಂದು ಕೂಗಿ ಕರೆಯದಿರಲಿಲ್ಲ ತಾನು.. ತಮ್ಮ ಮನುಮಥನ ಕರೆ ಕೇಳಿಸಿಕೊಂಡ ಆ ಮಹಿಷ ಸಾನಿಯರು ತಾವಿದ್ದ ಕೊಟ್ಟಿಗೆಗಳೆಂಬ ಅಂತಃಪುರಗಳಿಂದ ಮುಕ್ತರಾಗಿ ಮೋಡೋಡಿ ಬಂದು ಆ ಚಿರಜವ್ವನಿಗನ ಹಿಂದ ಮುಂದ ಸೇರದ ಯಿರಲಿಲ್ಲ.. ಯಿದರಿಂದಾಗಿ ಮೋಣು ಮೋಣಿಯಿಂದ ಆ ಸಯ್ಯವು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ.. ಅವುಗಳ ಮೋಡಾಟವೇನು? ಅವುಗಳ ಖುರಪುಟದ ಸದ್ದೇನು? ಸದರಿ ಪಟ್ಟಣವನ್ನಾವರಿಕೆ ಮಾಡಿದ ಧೂಳೇನು? ಅವೆಲ್ಲವುಗಳನ್ನು ಮೋಡಾಡಿಸಿಕೊಂಡು ನಡೆಯುತ್ತ ಸಾಗಿದ ಅವನು ಸೀದ ಸಿಡೇಗಲ್ಲ ಕರಗಲ್ಲ ಬಳಿಗೆ ಬರುತಾನೆ.. ಆ ಮಹಿಷಾ ಸ್ತ್ರೀ ಸಮೂಹದ ವಡೆಯನು ಪ್ರತಿಯೊಬ್ಬರ ಕಡೆಗೆ ನೀವೆಷ್ಟು ಗಡುತರದವರು' ಯಂಬಂತೆ ನೋಡುತ್ತಾನೆ. ವಸ್ತಿಂರನ್ನು ಸಮೀಪಿಸುತ್ತಾನೆ..ಮೂರು ಸಲ ಪರದಕ್ಷಿಣೆ ಹಾಕುತ್ತಾನೆ.. ಅದರ ವಂದೊಂದು ಭಾಗವನ್ನು ನೆಕ್ಕಿ ಸ್ವಾಮಿ ನಿಷ« ಮೆರೆಯುತ್ತಾನೆ.. “ನನ್ನ ಸ್ವಾಮಿಯ ಸರೀರದೊಳಗಡೆ ನೀನು ಅಡಗಿ ಕುಂತಿರುವೆ ಅಂತಲ್ಲಾ.. ಯಿದು ನಿಜವಾಗಿದ್ದ ಪಕ್ಷದಲ್ಲಿ ಹೊರಗಡೆ ಬಂದು ನನ್ನೊಡನೆ ಸೆಣಸಿ ಬಲಿ ತಗೋ..” ಯಂದು ಸಾಂಬವಿಗೇ ಸವಾಲೆಸೆಯುತ್ತಾನೆ. ತನ್ನನ್ನು ಬಲಿ ತಗೊಳ್ಳುವುದೆಂದರ ಮಹಿಷಾಸುರನನ್ನು ಸಮ್ಮಾರ ಮಾಡಿದಷ್ಟು ಸುಲಭವೆಂದು ತಿಳಿಯದಿರು ಯಂದು ತನ್ನ ಪರಾಕ್ರಮದ ಸುಳಿವು ನೀಡುತ್ತಾನೆ. ಅದಕ ವಸ್ತಿಯು ಮುಗುಳು ನಗುವುದು.<noinclude></noinclude> oou6gi7v8qectecbz9swb5lju4x2tr3 320222 320204 2026-05-15T16:33:04Z Shreelatha.Halemane 7642 /* Validated */ 320222 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೨೭}} ಮ್ಯಾಲ ನನಗ ನಂಬುಕೆ ಅದss.. ನೀನು ಮಾತ್ರ ಯಾರ ಕೈಯೂ ಸಿಕ್ಕೋದು ಬ್ಯಾಡ.. ಮಯ್ಯ ಮ್ಯಾಲ ಖಬುರಿರಲಿ. ಹುಷಾರು..” ಯಂದು ನಾಕಾರು ಬುದ್ದಿವಾದದ ಮಾತಾಡಿದಳು. ಅದಕಿದ್ದು ಸೂರನು ಆಗಲಿ ತಾಯಿ...” ಯಂದನು. ನಾಲಗೆ ಚಾಚಿ ಆಕೆಯ ಕಣ್ಣಾಲಿಗಳ ತುದಿಯಲ್ಲಿದ್ದ ಅಸ್ತುಬಿಂದುಗಳನ್ನು ಆಸನಗೊಂಡನು. ಆಕೆ ಬ್ಯಾಡಾಂದರೂ ಕೇಳದೆ ಪಟ್ಟಣದ ರಾಜಬೀದಿಯನ್ನು ಪ್ರವೇಶ ಮಾಡಿದನು. ಗಂಡಸರಿದ್ದಲ್ಲಿ ತನ್ನನ್ನು ಹಿಡಿಯಬವುದು ಯಂದು ಅಡ್ಡ ಬರುವ ರೀತಿಯಲ್ಲಿ ಹತ್ತು ಹೆಜ್ಜೆಗೊಂದೊಂದು ಸಲ ಗರನೆ ಹಾಕುತ, ಸಿಮಾವಲೋಕನ ಮಾಡುತ ಮೋಡೋಣಿಗಳಲ್ಲೆಲ್ಲ ಸುಂಟರುಗಾಳಿಯೋ ಪಾದಿಯಲ್ಲಿ ಸುಳುಸುಳಿದಾಡಿದನು.. ತನಗೆ ಗೊತ್ತು ಬಲ್ಲಂಥ ವಂದೊಂದು ಮನೆಯದುರು ನಿಂತು ಯಲಾಂಯ್ ಜಲಜಾ.. ಯಲಾಯ್ ರುಕ್ಕೂ......... ಯಲಾಮ್ ಸುಂದರೀ.. ಯಲಾಯ್ ರಂಭಾSS.. ಯಲಾಯ್ ಯಿಲೋತ್ತಮೇ.. ಯಂದು ಕೂಗಿ ಕರೆಯದಿರಲಿಲ್ಲ ತಾನು.. ತಮ್ಮ ಮನುಮಥನ ಕರೆ ಕೇಳಿಸಿಕೊಂಡ ಆ ಮಹಿಷ ಸಾನಿಯರು ತಾವಿದ್ದ ಕೊಟ್ಟಿಗೆಗಳೆಂಬ ಅಂತಃಪುರಗಳಿಂದ ಮುಕ್ತರಾಗಿ ಮೋಡೋಡಿ ಬಂದು ಆ ಚಿರಜವ್ವನಿಗನ ಹಿಂದ ಮುಂದ ಸೇರದ ಯಿರಲಿಲ್ಲ.. ಯಿದರಿಂದಾಗಿ ಮೋಣು ಮೋಣಿಯಿಂದ ಆ ಸಯ್ಯವು ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ.. ಅವುಗಳ ಮೋಡಾಟವೇನು? ಅವುಗಳ ಖುರಪುಟದ ಸದ್ದೇನು? ಸದರಿ ಪಟ್ಟಣವನ್ನಾವರಿಕೆ ಮಾಡಿದ ಧೂಳೇನು? ಅವೆಲ್ಲವುಗಳನ್ನು ಮೋಡಾಡಿಸಿಕೊಂಡು ನಡೆಯುತ್ತ ಸಾಗಿದ ಅವನು ಸೀದ ಸಿಡೇಗಲ್ಲ ಕರಗಲ್ಲ ಬಳಿಗೆ ಬರುತಾನೆ.. ಆ ಮಹಿಷಾ ಸ್ತ್ರೀ ಸಮೂಹದ ವಡೆಯನು ಪ್ರತಿಯೊಬ್ಬರ ಕಡೆಗೆ ನೀವೆಷ್ಟು ಗಡುತರದವರು' ಯಂಬಂತೆ ನೋಡುತ್ತಾನೆ. ವಸ್ತಿಂರನ್ನು ಸಮೀಪಿಸುತ್ತಾನೆ..ಮೂರು ಸಲ ಪರದಕ್ಷಿಣೆ ಹಾಕುತ್ತಾನೆ.. ಅದರ ವಂದೊಂದು ಭಾಗವನ್ನು ನೆಕ್ಕಿ ಸ್ವಾಮಿ ನಿಷ« ಮೆರೆಯುತ್ತಾನೆ.. “ನನ್ನ ಸ್ವಾಮಿಯ ಸರೀರದೊಳಗಡೆ ನೀನು ಅಡಗಿ ಕುಂತಿರುವೆ ಅಂತಲ್ಲಾ.. ಯಿದು ನಿಜವಾಗಿದ್ದ ಪಕ್ಷದಲ್ಲಿ ಹೊರಗಡೆ ಬಂದು ನನ್ನೊಡನೆ ಸೆಣಸಿ ಬಲಿ ತಗೋ..” ಯಂದು ಸಾಂಬವಿಗೇ ಸವಾಲೆಸೆಯುತ್ತಾನೆ. ತನ್ನನ್ನು ಬಲಿ ತಗೊಳ್ಳುವುದೆಂದರ ಮಹಿಷಾಸುರನನ್ನು ಸಮ್ಮಾರ ಮಾಡಿದಷ್ಟು ಸುಲಭವೆಂದು ತಿಳಿಯದಿರು ಯಂದು ತನ್ನ ಪರಾಕ್ರಮದ ಸುಳಿವು ನೀಡುತ್ತಾನೆ. ಅದಕ ವಸ್ತಿಯು ಮುಗುಳು ನಗುವುದು.<noinclude></noinclude> kkfv9a064vr31yddqqz97ylmu709p0d ಪುಟ:ಅರಮನೆ.pdf/೩೬೪ 104 86733 320218 205995 2026-05-15T16:31:39Z Shreesha Sharma 7840 /* Proofread */ 320218 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೩೩}} ಸರಕಾರ ಯಂದರೆ ಯಾರು? ಅದಕ್ಕೊಂದು ಸಂವಿಧಾನ, ಶಿಕ್ಷಾಸಂಹಿತೆ ರೀತಿ ರಿವಾಜು ಯಿರುವುದೇ? ಸರಕಾರ ಯೇಕಮುಖವಾಗಿ ಆಪಾದಿತನ ಯಿರುದ್ದ ಅಪರಾಧಗಳ ಜಾಬಿತ ಸಲ್ಲಿಸಿರುವುದು ಯಷ್ಟರ ಮಟ್ಟಿಗೆ ಸರಿ? ಆಪಾದಿತನು ಮಾಡಿರುವ ಗುರುತರ ಅಪರಾಧಗಳು ಯಾವುವು? ಸಾಕ್ಷಿ ಪುರಾವೆಗಳು ವಂದಾದರು ಯಿರುವವಾ? ಯಿಂಥ ನಿರಂಕುಶ ಯಿಚಾರಣೆಯಿಂದ ನಾಗರಿಕನೋಗ್ರನ ಸಾಧ್ವಜನಿಕ ಜೀವನದ ಮಾಲ ಹಲ್ಲೆ ನಡೆಸಿದಂತೆ ಆಗುವುದಿಲ್ಲವೆ? ಯಂದು ಮುಂತಾಗಿ ನಿರರಳವಾಗಿ ವಾದ ಮಂಡಿಸುತ್ತಿರುವ ಶಾಸ್ತ್ರಿಗಳು.. ಯೀ ಕೂಡಲೆ ತಮ್ಮ ಕಕ್ಷಿದಾರನನ್ನು ಬಿಡುಗಡೆ ಮಾಡಬೇಕೆಂದೂ, ಕ್ಷಮೆ ಕೋರುವುದರ ಮೂಲಕ ಸರಕಾರ ತನ್ನ ಘನತೆಯನ್ನು ಕಾಪಾಡಿಕೊಳ್ಳಬೇಕೆಂದೂ ಮನವಿ ಮಾಡಿಕೊಂಡರೆಂಬಲ್ಲಿಗೆ.... {{gap}}ಬ್ಯಾರಿಸ್ಟರ್ ಪದವಿಯ ಕನಸು ಕಾಣುತಲಿದ್ದ ನೀಲಕಂಠರಾಯರಲ್ಲಿ ಪ್ರಾಣ ಯಿರಲಿಲ್ಲ. ನ್ಯಾಯಾಲಯ ಪ್ರವೇಶ ಮಾಡಿದೊಡನೆ, ಆಪಾದಿತನ ಮುಖ ನೋಡಿದೊಡನೆ ನಿತ್ರಾಣ ಗೊಂಡಿದ್ದರು. ನಾಲಗೆಯನ್ನು ತೇವ ಮಾಡಿಕೊಳ್ಳಲೋಸುಗ ಜಾವ ಜಾವಕೊಂದೊಂದು ಸಲ ನೀರು ಕುಡಿಯುತಲಿದ್ದರು. ತಾವು ಯಲ್ಲೋ ಯಿರುವ ಗವರರು ಜನರಲ್ಲನ, ಕಲೆಟ್ಟರ ಸಾಹೇಬನ ಗಮನಕ್ಕೆ ಬೀಳಬೇಕೆಂಬ ವುದ್ದಿಶ್ಯದಿಂದ ಸದರಿ ಆಪಾದಿತನು ಕಾನೂನನ್ನು ತನ್ನ ಕಯ್ ತಗೊಂಡು ಗುರುತರ ಅಪರಾಧ ಯಸಗಿರುವನಂದೂ, ಸಾಕ್ಷಿ ಪುರಾವೆಗಳಿಲ್ಲ ಯಂದ ಮಾತ್ರಕ್ಕೆ ಕ್ಷಮಿಸಬಾರದೆಂದೂ, ಮರಣದಂಡನೆಯನ್ನು ಯಿಧಿಸಬೇಕೆಂದೂ ವಾದ ಮಂಡಿಸದೆ ಯಿರಲಿಲ್ಲ.. {{gap}}ಯೋ ಪ್ರಕಾರವಾಗಿ ವಾದ ಪ್ರತಿವಾದ ಬಹಳ ಹೊತ್ತಿನ ತನಕ ನಡೆಯಿತು... ಯೀ ಹಿಂದೆಯೇ ಬರೆದಿಟ್ಟುಕೊಂಡಿದ್ದ ಅದನ್ನು ಪುನರ್ ಪರಿಸೀಲಿಸಿ ಥಾಮಸು ಮನೋ ಅಂಗೀಕಾರ ಮುದ್ರೆವತ್ತಿದ್ದ, ಯಲ್ಲಾ ಧರ ಗ್ರಂಥಗಳ ಆಶಯಗಳಿಗೆ ಯಿರುದ್ದ ಯಿದ್ದಂಥ ತೀರನ್ನು ಪಠಣ ಮಾಡುವಾಗ ಹ್ಯಾಂ ಸಾಹೇಬರು “ದೇವರೇss ಖಂಡಿತ ನೀನು ನನ್ನನ್ನು ಕ್ಷಮಿಸುವುದಿಲ್ಲ.” ಯಂದು ಮನದೊಳಗೆ ಅಂದುಕೊಂಡರು. ಹಲವು ಪುಟಗಳಿದ್ದ ಅದನ್ನು ಮೋದುವಾಗ್ಗೆ ಅವರ ದ್ವನಿಯ ಕಂಪನಗೊಳ್ಳದೆ ಯಿರಲಿಲ್ಲ. ಮೋದಿದರೂ.. ಮೋದಿದರೂ.. ಮೋದುತ್ತಲೇ ಹೋದರು. ಕೇವಲ ಯರಡು ವಾಕ್ಯಗಳು ಮಾತ್ರ ಬಾಕಿ ವುಳಿದವು... ಮೆಲ್ಲಗ ತಲೆಯೆತ್ತಿ ಆಪಾದಿತನ ಮುಖ ನೋಡಿದರು.. “ರೆಡ್ಡಿಗಾರು.. ನೀವು<noinclude></noinclude> dx2kp48ii2sf5dy8dptg3g3dgurhjup 320219 320218 2026-05-15T16:31:53Z Shreesha Sharma 7840 320219 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೩೩}} {{gap}}ಸರಕಾರ ಯಂದರೆ ಯಾರು? ಅದಕ್ಕೊಂದು ಸಂವಿಧಾನ, ಶಿಕ್ಷಾಸಂಹಿತೆ ರೀತಿ ರಿವಾಜು ಯಿರುವುದೇ? ಸರಕಾರ ಯೇಕಮುಖವಾಗಿ ಆಪಾದಿತನ ಯಿರುದ್ದ ಅಪರಾಧಗಳ ಜಾಬಿತ ಸಲ್ಲಿಸಿರುವುದು ಯಷ್ಟರ ಮಟ್ಟಿಗೆ ಸರಿ? ಆಪಾದಿತನು ಮಾಡಿರುವ ಗುರುತರ ಅಪರಾಧಗಳು ಯಾವುವು? ಸಾಕ್ಷಿ ಪುರಾವೆಗಳು ವಂದಾದರು ಯಿರುವವಾ? ಯಿಂಥ ನಿರಂಕುಶ ಯಿಚಾರಣೆಯಿಂದ ನಾಗರಿಕನೋಗ್ರನ ಸಾಧ್ವಜನಿಕ ಜೀವನದ ಮಾಲ ಹಲ್ಲೆ ನಡೆಸಿದಂತೆ ಆಗುವುದಿಲ್ಲವೆ? ಯಂದು ಮುಂತಾಗಿ ನಿರರಳವಾಗಿ ವಾದ ಮಂಡಿಸುತ್ತಿರುವ ಶಾಸ್ತ್ರಿಗಳು.. ಯೀ ಕೂಡಲೆ ತಮ್ಮ ಕಕ್ಷಿದಾರನನ್ನು ಬಿಡುಗಡೆ ಮಾಡಬೇಕೆಂದೂ, ಕ್ಷಮೆ ಕೋರುವುದರ ಮೂಲಕ ಸರಕಾರ ತನ್ನ ಘನತೆಯನ್ನು ಕಾಪಾಡಿಕೊಳ್ಳಬೇಕೆಂದೂ ಮನವಿ ಮಾಡಿಕೊಂಡರೆಂಬಲ್ಲಿಗೆ.... {{gap}}ಬ್ಯಾರಿಸ್ಟರ್ ಪದವಿಯ ಕನಸು ಕಾಣುತಲಿದ್ದ ನೀಲಕಂಠರಾಯರಲ್ಲಿ ಪ್ರಾಣ ಯಿರಲಿಲ್ಲ. ನ್ಯಾಯಾಲಯ ಪ್ರವೇಶ ಮಾಡಿದೊಡನೆ, ಆಪಾದಿತನ ಮುಖ ನೋಡಿದೊಡನೆ ನಿತ್ರಾಣ ಗೊಂಡಿದ್ದರು. ನಾಲಗೆಯನ್ನು ತೇವ ಮಾಡಿಕೊಳ್ಳಲೋಸುಗ ಜಾವ ಜಾವಕೊಂದೊಂದು ಸಲ ನೀರು ಕುಡಿಯುತಲಿದ್ದರು. ತಾವು ಯಲ್ಲೋ ಯಿರುವ ಗವರರು ಜನರಲ್ಲನ, ಕಲೆಟ್ಟರ ಸಾಹೇಬನ ಗಮನಕ್ಕೆ ಬೀಳಬೇಕೆಂಬ ವುದ್ದಿಶ್ಯದಿಂದ ಸದರಿ ಆಪಾದಿತನು ಕಾನೂನನ್ನು ತನ್ನ ಕಯ್ ತಗೊಂಡು ಗುರುತರ ಅಪರಾಧ ಯಸಗಿರುವನಂದೂ, ಸಾಕ್ಷಿ ಪುರಾವೆಗಳಿಲ್ಲ ಯಂದ ಮಾತ್ರಕ್ಕೆ ಕ್ಷಮಿಸಬಾರದೆಂದೂ, ಮರಣದಂಡನೆಯನ್ನು ಯಿಧಿಸಬೇಕೆಂದೂ ವಾದ ಮಂಡಿಸದೆ ಯಿರಲಿಲ್ಲ.. {{gap}}ಯೋ ಪ್ರಕಾರವಾಗಿ ವಾದ ಪ್ರತಿವಾದ ಬಹಳ ಹೊತ್ತಿನ ತನಕ ನಡೆಯಿತು... ಯೀ ಹಿಂದೆಯೇ ಬರೆದಿಟ್ಟುಕೊಂಡಿದ್ದ ಅದನ್ನು ಪುನರ್ ಪರಿಸೀಲಿಸಿ ಥಾಮಸು ಮನೋ ಅಂಗೀಕಾರ ಮುದ್ರೆವತ್ತಿದ್ದ, ಯಲ್ಲಾ ಧರ ಗ್ರಂಥಗಳ ಆಶಯಗಳಿಗೆ ಯಿರುದ್ದ ಯಿದ್ದಂಥ ತೀರನ್ನು ಪಠಣ ಮಾಡುವಾಗ ಹ್ಯಾಂ ಸಾಹೇಬರು “ದೇವರೇss ಖಂಡಿತ ನೀನು ನನ್ನನ್ನು ಕ್ಷಮಿಸುವುದಿಲ್ಲ.” ಯಂದು ಮನದೊಳಗೆ ಅಂದುಕೊಂಡರು. ಹಲವು ಪುಟಗಳಿದ್ದ ಅದನ್ನು ಮೋದುವಾಗ್ಗೆ ಅವರ ದ್ವನಿಯ ಕಂಪನಗೊಳ್ಳದೆ ಯಿರಲಿಲ್ಲ. ಮೋದಿದರೂ.. ಮೋದಿದರೂ.. ಮೋದುತ್ತಲೇ ಹೋದರು. ಕೇವಲ ಯರಡು ವಾಕ್ಯಗಳು ಮಾತ್ರ ಬಾಕಿ ವುಳಿದವು... ಮೆಲ್ಲಗ ತಲೆಯೆತ್ತಿ ಆಪಾದಿತನ ಮುಖ ನೋಡಿದರು.. “ರೆಡ್ಡಿಗಾರು.. ನೀವು<noinclude></noinclude> 0e1nyw08n9ysqmlk54ledqim96xlnxv 320229 320219 2026-05-15T16:36:14Z Shreelatha.Halemane 7642 /* Validated */ 320229 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೩೩}} {{gap}}ಸರಕಾರ ಯಂದರೆ ಯಾರು? ಅದಕ್ಕೊಂದು ಸಂವಿಧಾನ, ಶಿಕ್ಷಾಸಂಹಿತೆ ರೀತಿ ರಿವಾಜು ಯಿರುವುದೇ? ಸರಕಾರ ಯೇಕಮುಖವಾಗಿ ಆಪಾದಿತನ ಯಿರುದ್ದ ಅಪರಾಧಗಳ ಜಾಬಿತ ಸಲ್ಲಿಸಿರುವುದು ಯಷ್ಟರ ಮಟ್ಟಿಗೆ ಸರಿ? ಆಪಾದಿತನು ಮಾಡಿರುವ ಗುರುತರ ಅಪರಾಧಗಳು ಯಾವುವು? ಸಾಕ್ಷಿ ಪುರಾವೆಗಳು ವಂದಾದರು ಯಿರುವವಾ? ಯಿಂಥ ನಿರಂಕುಶ ಯಿಚಾರಣೆಯಿಂದ ನಾಗರಿಕನೋಗ್ರನ ಸಾಧ್ವಜನಿಕ ಜೀವನದ ಮಾಲ ಹಲ್ಲೆ ನಡೆಸಿದಂತೆ ಆಗುವುದಿಲ್ಲವೆ? ಯಂದು ಮುಂತಾಗಿ ನಿರರಳವಾಗಿ ವಾದ ಮಂಡಿಸುತ್ತಿರುವ ಶಾಸ್ತ್ರಿಗಳು.. ಯೀ ಕೂಡಲೆ ತಮ್ಮ ಕಕ್ಷಿದಾರನನ್ನು ಬಿಡುಗಡೆ ಮಾಡಬೇಕೆಂದೂ, ಕ್ಷಮೆ ಕೋರುವುದರ ಮೂಲಕ ಸರಕಾರ ತನ್ನ ಘನತೆಯನ್ನು ಕಾಪಾಡಿಕೊಳ್ಳಬೇಕೆಂದೂ ಮನವಿ ಮಾಡಿಕೊಂಡರೆಂಬಲ್ಲಿಗೆ.... {{gap}}ಬ್ಯಾರಿಸ್ಟರ್ ಪದವಿಯ ಕನಸು ಕಾಣುತಲಿದ್ದ ನೀಲಕಂಠರಾಯರಲ್ಲಿ ಪ್ರಾಣ ಯಿರಲಿಲ್ಲ. ನ್ಯಾಯಾಲಯ ಪ್ರವೇಶ ಮಾಡಿದೊಡನೆ, ಆಪಾದಿತನ ಮುಖ ನೋಡಿದೊಡನೆ ನಿತ್ರಾಣ ಗೊಂಡಿದ್ದರು. ನಾಲಗೆಯನ್ನು ತೇವ ಮಾಡಿಕೊಳ್ಳಲೋಸುಗ ಜಾವ ಜಾವಕೊಂದೊಂದು ಸಲ ನೀರು ಕುಡಿಯುತಲಿದ್ದರು. ತಾವು ಯಲ್ಲೋ ಯಿರುವ ಗವರರು ಜನರಲ್ಲನ, ಕಲೆಟ್ಟರ ಸಾಹೇಬನ ಗಮನಕ್ಕೆ ಬೀಳಬೇಕೆಂಬ ವುದ್ದಿಶ್ಯದಿಂದ ಸದರಿ ಆಪಾದಿತನು ಕಾನೂನನ್ನು ತನ್ನ ಕಯ್ ತಗೊಂಡು ಗುರುತರ ಅಪರಾಧ ಯಸಗಿರುವನಂದೂ, ಸಾಕ್ಷಿ ಪುರಾವೆಗಳಿಲ್ಲ ಯಂದ ಮಾತ್ರಕ್ಕೆ ಕ್ಷಮಿಸಬಾರದೆಂದೂ, ಮರಣದಂಡನೆಯನ್ನು ಯಿಧಿಸಬೇಕೆಂದೂ ವಾದ ಮಂಡಿಸದೆ ಯಿರಲಿಲ್ಲ.. {{gap}}ಯೋ ಪ್ರಕಾರವಾಗಿ ವಾದ ಪ್ರತಿವಾದ ಬಹಳ ಹೊತ್ತಿನ ತನಕ ನಡೆಯಿತು... ಯೀ ಹಿಂದೆಯೇ ಬರೆದಿಟ್ಟುಕೊಂಡಿದ್ದ ಅದನ್ನು ಪುನರ್ ಪರಿಸೀಲಿಸಿ ಥಾಮಸು ಮನೋ ಅಂಗೀಕಾರ ಮುದ್ರೆವತ್ತಿದ್ದ, ಯಲ್ಲಾ ಧರ ಗ್ರಂಥಗಳ ಆಶಯಗಳಿಗೆ ಯಿರುದ್ದ ಯಿದ್ದಂಥ ತೀರನ್ನು ಪಠಣ ಮಾಡುವಾಗ ಹ್ಯಾಂ ಸಾಹೇಬರು “ದೇವರೇss ಖಂಡಿತ ನೀನು ನನ್ನನ್ನು ಕ್ಷಮಿಸುವುದಿಲ್ಲ.” ಯಂದು ಮನದೊಳಗೆ ಅಂದುಕೊಂಡರು. ಹಲವು ಪುಟಗಳಿದ್ದ ಅದನ್ನು ಮೋದುವಾಗ್ಗೆ ಅವರ ದ್ವನಿಯ ಕಂಪನಗೊಳ್ಳದೆ ಯಿರಲಿಲ್ಲ. ಮೋದಿದರೂ.. ಮೋದಿದರೂ.. ಮೋದುತ್ತಲೇ ಹೋದರು. ಕೇವಲ ಯರಡು ವಾಕ್ಯಗಳು ಮಾತ್ರ ಬಾಕಿ ವುಳಿದವು... ಮೆಲ್ಲಗ ತಲೆಯೆತ್ತಿ ಆಪಾದಿತನ ಮುಖ ನೋಡಿದರು.. “ರೆಡ್ಡಿಗಾರು.. ನೀವು<noinclude></noinclude> hswx2cxvbl1v6inr4r2mkfijm544rjf ಪುಟ:ಅರಮನೆ.pdf/೩೬೦ 104 86734 320208 205996 2026-05-15T16:28:49Z Shreesha Sharma 7840 /* Proofread */ 320208 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೨೯}} ಬಾರೆವ್ವಾ ಯಂದು ಗೋಗರೆಯದೆ ಯಿರಲಿಲ್ಲ. ಆದರ ಸತಿ ಕಂಕಣ ಮುಂಗಾಲಿಗೆ ಕಟ್ಟಿಕೊಂಡಿದ್ದ ಸಮಯ ವದಗಿದಲ್ಲಿ ಸೂರನೊಡನೆ ಸಹಗಮನ ಮಾಡಲು ಸಜ್ಜುಗೊಂಡಿದ್ದ ಅವು ಸ್ವಾಮಿನಿಷೆ« ಮೆರೆಯದೆಯಿರಲಿಲ್ಲ.. ಕಜ್ಜಿಪುಳ್ಳೆ ಕಂದಮ್ಮಗಳಾಗಿದ್ದಲ್ಲಿ ಹೊಡೆದು ಬಡದು ಯಳಕೊಂಡು ಬರಬವುದಿತ್ತು. ಆದರ ಅವು ಯಿರುವುದು ಸೂರ ಯಂಬ ಯೇಳು ಸುತ್ತಿನ ಕ್ವಾಟೆ ಸುಪದ್ದಿಯಲ್ಲಿ.. ತಮಗುಳಿದಿರುವ ದಾರಿ ಅಂದರ ಸೂರನನ್ನು ಹಿಡಿಸುವುದು.. ಸರೆ! ಅವರೆಲ್ಲ ಬಂದು ಪಟ್ಟಣಸ್ವಾಮಿ, ದಯವಸ್ಥ ಹಿರೀಕರನ್ನು ಕಂಡು ಫಲಾನ ಹಿಂಗಿಂಗೇ ಯಂದು ಅಳಲು ತೋಡಿಕೊಂಡೊಡನ..... {{gap}}ಫಲಾನ ಜಗೇವಳಗಿರುವ ಮಾಬಲಿಯನ್ನು ಹಿಡಿದೆಳತರುವಂತೆ ಆಗ್ಗೆ ಮಾಡಲು ತೊಲೆ ತುಂಡಿನಂಥವರು ಯಾಕಾಗಬಾರದೆಂದು ಹೋದರು.. ಆದರ ಸೂರನ ತೀಕ್ಷದ್ರುಸ್ಟಿಯನ್ನು ಯದುರಿಸಲಾಗದೆ ವಾಪಾಸು ಬಂದು ತಮ್ಮ ಕಯ್ಯಾಗಲ್ಲ ಯಂದರು. ತರುವಾಯ ಹೋದ ಹದಿನಝಿಪ್ಪತ್ತು ಮಂದಿ ಅದರ ಬಾಲದೇಟಿಗೆ ತತ್ತರಿಸಿ ಮರಳಿದರು.. ತರುವಾಯ ಹೋದ ಮುವ್ವತ್ತು ನಲವತ್ತು ಮಂದಿಯನ್ನು ಸೂರನು ಕೋಡಿನಿದ ತಿವಿದು ಮೋಡೋಡುವಂತೆ ಮಾಡಿದನು.. ಹೆಂಗಪ್ಪಾ ಅದನ್ನು ಹಿಡಿಯುವುದೆಂಬ ಯಸನ ತಗುಲಿಕೊಂಡು ದಯವಸ್ಥೆ ಮಂದಿ ಮಾಬಲಿಯನ್ನು ಹಿಡಿದೆಳೆದು ತಂದವರಿಗೆ ಕೂರಿಗೆ ಹೊಲವನ್ನು ಯಿನಾಮು ರೂಪದಲ್ಲಿ ಕೊಡುವುದಾಗಿ ಟಾಮುಟಾಮು ಹಾಕಿಸಿದರು. ಆದರ ಸಿಮ್ಲದೊಂದಿಗೆ ಹೋರಾಡಿದವರಿಗಾಗಲಿಲ್ಲ... ಹುಲಿಯೊಂದಿಗೆ ಹೋರಾಡಿದವರಿಗಾಗಲಿಲ್ಲ. ಕರಡಿಗಳೊಂದಿಗೆ ಕುಸ್ತಿ ಆಡಿ ಗೆದ್ದವರಿಗೂ ಆಗಲಿಲ್ಲ. ಹೋದವರೆಲ್ಲ ತಮ್ಮ ತಮ್ಮ ಮಯ್ಯಗಳನ ಮುಪ್ಪು ಮಾಡಿಕೊಂಡು ಬಂದರು. ಹೆಳವರಾಗಿ ಬಂದರು. ಅದು ಸಾಮಾನ್ಯ ಕೋಣವಲ್ಲ ತಂದೆಗೋಳಾ.. ಅಷ್ಟ ದಿಗ್ಗಜಗಳಿರುವುದು ವಂದೇಯಾ... ಅದೊಂದೆ ಯಿರುವುದು ವಂದೇಯಾ.. ಅದರ ಸರೀರದೊಳಗ ನೂರು ಮಂದಿ ರಾಕ್ಷಸರಿದ್ದಂಗದಾರ.. ತ್ರಿಮೂರಿಗಳಿದ್ದಂಗದಾರ.. ಸಪ್ತ ರುಷಿಗಳದಂಗದಾರ.. ಯಿನಾಮಿನಾಸೆಗೆ ಅದನ್ನು ಹಿಡಿಯಲು ಪ್ರಯತ್ನಿಸಿ ತಾವು ಪಾಪ ಮಾಡಿದೆವಲ್ಲಾ.. ಯಂದು ಕೆಲವರು ಹಲುಬೂತ ಮತಿಭ್ರಮಿತರಾದರೆ.. ಕೆಲವರು ಬೋಧ ಪಡೆಯಲೋಸುಗ ಅವಧೂತರನ್ನು ಹುಡುಕಿಕೊಂಡು ಅಲೆಯಲಾರಂಭಿಸಿದರೆಂಬಲ್ಲಿಗೆ ಸಿವಸಂಕರ ಮಾದೇವss<noinclude></noinclude> ajd2kvtrova2yi1bsvivsoopqca6cr7 320210 320208 2026-05-15T16:29:40Z Shreelatha.Halemane 7642 /* Validated */ 320210 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೨೯}} ಬಾರೆವ್ವಾ ಯಂದು ಗೋಗರೆಯದೆ ಯಿರಲಿಲ್ಲ. ಆದರ ಸತಿ ಕಂಕಣ ಮುಂಗಾಲಿಗೆ ಕಟ್ಟಿಕೊಂಡಿದ್ದ ಸಮಯ ವದಗಿದಲ್ಲಿ ಸೂರನೊಡನೆ ಸಹಗಮನ ಮಾಡಲು ಸಜ್ಜುಗೊಂಡಿದ್ದ ಅವು ಸ್ವಾಮಿನಿಷೆ« ಮೆರೆಯದೆಯಿರಲಿಲ್ಲ.. ಕಜ್ಜಿಪುಳ್ಳೆ ಕಂದಮ್ಮಗಳಾಗಿದ್ದಲ್ಲಿ ಹೊಡೆದು ಬಡದು ಯಳಕೊಂಡು ಬರಬವುದಿತ್ತು. ಆದರ ಅವು ಯಿರುವುದು ಸೂರ ಯಂಬ ಯೇಳು ಸುತ್ತಿನ ಕ್ವಾಟೆ ಸುಪದ್ದಿಯಲ್ಲಿ.. ತಮಗುಳಿದಿರುವ ದಾರಿ ಅಂದರ ಸೂರನನ್ನು ಹಿಡಿಸುವುದು.. ಸರೆ! ಅವರೆಲ್ಲ ಬಂದು ಪಟ್ಟಣಸ್ವಾಮಿ, ದಯವಸ್ಥ ಹಿರೀಕರನ್ನು ಕಂಡು ಫಲಾನ ಹಿಂಗಿಂಗೇ ಯಂದು ಅಳಲು ತೋಡಿಕೊಂಡೊಡನ..... {{gap}}ಫಲಾನ ಜಗೇವಳಗಿರುವ ಮಾಬಲಿಯನ್ನು ಹಿಡಿದೆಳತರುವಂತೆ ಆಗ್ಗೆ ಮಾಡಲು ತೊಲೆ ತುಂಡಿನಂಥವರು ಯಾಕಾಗಬಾರದೆಂದು ಹೋದರು.. ಆದರ ಸೂರನ ತೀಕ್ಷದ್ರುಸ್ಟಿಯನ್ನು ಯದುರಿಸಲಾಗದೆ ವಾಪಾಸು ಬಂದು ತಮ್ಮ ಕಯ್ಯಾಗಲ್ಲ ಯಂದರು. ತರುವಾಯ ಹೋದ ಹದಿನಝಿಪ್ಪತ್ತು ಮಂದಿ ಅದರ ಬಾಲದೇಟಿಗೆ ತತ್ತರಿಸಿ ಮರಳಿದರು.. ತರುವಾಯ ಹೋದ ಮುವ್ವತ್ತು ನಲವತ್ತು ಮಂದಿಯನ್ನು ಸೂರನು ಕೋಡಿನಿದ ತಿವಿದು ಮೋಡೋಡುವಂತೆ ಮಾಡಿದನು.. ಹೆಂಗಪ್ಪಾ ಅದನ್ನು ಹಿಡಿಯುವುದೆಂಬ ಯಸನ ತಗುಲಿಕೊಂಡು ದಯವಸ್ಥೆ ಮಂದಿ ಮಾಬಲಿಯನ್ನು ಹಿಡಿದೆಳೆದು ತಂದವರಿಗೆ ಕೂರಿಗೆ ಹೊಲವನ್ನು ಯಿನಾಮು ರೂಪದಲ್ಲಿ ಕೊಡುವುದಾಗಿ ಟಾಮುಟಾಮು ಹಾಕಿಸಿದರು. ಆದರ ಸಿಮ್ಲದೊಂದಿಗೆ ಹೋರಾಡಿದವರಿಗಾಗಲಿಲ್ಲ... ಹುಲಿಯೊಂದಿಗೆ ಹೋರಾಡಿದವರಿಗಾಗಲಿಲ್ಲ. ಕರಡಿಗಳೊಂದಿಗೆ ಕುಸ್ತಿ ಆಡಿ ಗೆದ್ದವರಿಗೂ ಆಗಲಿಲ್ಲ. ಹೋದವರೆಲ್ಲ ತಮ್ಮ ತಮ್ಮ ಮಯ್ಯಗಳನ ಮುಪ್ಪು ಮಾಡಿಕೊಂಡು ಬಂದರು. ಹೆಳವರಾಗಿ ಬಂದರು. ಅದು ಸಾಮಾನ್ಯ ಕೋಣವಲ್ಲ ತಂದೆಗೋಳಾ.. ಅಷ್ಟ ದಿಗ್ಗಜಗಳಿರುವುದು ವಂದೇಯಾ... ಅದೊಂದೆ ಯಿರುವುದು ವಂದೇಯಾ.. ಅದರ ಸರೀರದೊಳಗ ನೂರು ಮಂದಿ ರಾಕ್ಷಸರಿದ್ದಂಗದಾರ.. ತ್ರಿಮೂರಿಗಳಿದ್ದಂಗದಾರ.. ಸಪ್ತ ರುಷಿಗಳದಂಗದಾರ.. ಯಿನಾಮಿನಾಸೆಗೆ ಅದನ್ನು ಹಿಡಿಯಲು ಪ್ರಯತ್ನಿಸಿ ತಾವು ಪಾಪ ಮಾಡಿದೆವಲ್ಲಾ.. ಯಂದು ಕೆಲವರು ಹಲುಬೂತ ಮತಿಭ್ರಮಿತರಾದರೆ.. ಕೆಲವರು ಬೋಧ ಪಡೆಯಲೋಸುಗ ಅವಧೂತರನ್ನು ಹುಡುಕಿಕೊಂಡು ಅಲೆಯಲಾರಂಭಿಸಿದರೆಂಬಲ್ಲಿಗೆ ಸಿವಸಂಕರ ಮಾದೇವss<noinclude></noinclude> 8qps17jrhwuw7vmoqwc0ldwva25taow ಪುಟ:ಅರಮನೆ.pdf/೩೬೧ 104 86736 320211 205998 2026-05-15T16:29:44Z Shreesha Sharma 7840 /* Proofread */ 320211 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೩೩೦|right=ಅರಮನೆ}} ಹಂಗಂತ ಸುಮಕ ಬಿಡಲಕ ಅಯ್ತದಾ.. ದಯವಸ್ಥ ಮಂದಿ ಅದನು ಬಂಧಿಸುವ ಯಿಷಯದಲ್ಲಿ ಮಸ್ತು ಯತ್ನ ಪ್ರಯತ್ನಗಳನ್ನು ಮುಂದುವರಿಸದೆ ಯಿರಲಿಲ್ಲ.. ಸಾಂಬವಿ ತಮಗ ವಡ್ಡಿರುವ ಪರೀಕ್ಷೆಗಳಲ್ಲಿ ಯಿದೂ ಎಂದು ಯಂದು ಭಾವನೆ ಮೂಡಿತು. ಅದರ ಫಲವಾಗಿ ಖಡುಗ, ಭಲ್ಲೆ, ಗುರಾಣಿ ಹಿಡಕೊಂಡು ಹೋಗಿ ಮತ್ತು ಹುಣಸೆಹಣ್ಣು ಮಾಡಿಕೊಂಡು ವಾಪಾಸಾದವರೆಷ್ಟೋ? ಹೆಂಡ ಕುಡಿಸಲು ಹೋಗಿ ವದೆ ತಿಂದವರೆಷ್ಟೋ? ಸೂರ ಯಂಬುದು ಪ್ರಸ್ಮಾರಕ ಚಿನ್ನೆಯಾಗೇ ವುಳಿಯಿತೆಂಬಲ್ಲಿಗೆ.. ಅದಕ ಜವಾಬು ಅಲ್ಲುಂಟಾ? ಯಿಲ್ಲುಂಟಾ? ಯಲ್ಲುಂಟು? ಯಂಬಲ್ಲಿಗೆ.... {{gap}}ಅನಂತಪುರದ ಕಡೇಕ ಹೊರಡುವ ಮೊದಲು ತನ್ನ ಸರೀರದ ಮ್ಯಾಲಿಂದ ಬೊಬ್ಬಿಲಿ ನಾಗಿರೆಡ್ಡಿಯ ದಿರಿಸನ್ನು ವುತಾರ ಮಾಡಲು ನಾನಾ ರೀತಿಯಲ್ಲಿ ಮನೋ ಸಾಹೇಬ ಪ್ರಯತ್ನವ ಮಾಡದೆ ಯಿರಲಿಲ್ಲ.. ಆದರದು ಬಡಪೆಟ್ಟಿಗೆ ವುತಾರಾಗಲಿಲ್ಲ... ಬಲು ತ್ರಾಸು ಕೊಟ್ಟಿತು.. ಅದೆಂಗ ಳುವುತೀರೋ ಯಳುವು ಯಂದು ಸವಾಲು ಹಾಕಿದಂತೆ, ಬಿಚ್ಚಲಕ ಹೋದಾಗ ಚರುಮ ಅದರೊಟ್ಟಿಗೆ ಕಿತ್ತುಕೊಂಡು ಬಂದಂತೆ ಭಾಸವಾಯಿತು.. ಕೊನೆಗೂ ಸರೀರದಿಂದ ಕಳಚುವಲ್ಲಿ ತಾನು ಸಫಲಗೊಂಡಿದ್ದುಂಟು.. ಆ ದಿರಿಸು ಅಂಗಲಾಚಿದಂತೆ, ಹಂಗಿಸಿದಂತೆ, 'ಅದೆಂಗ ಹೋತೀಯೋ ಹೋಗು' ಯಂದು ಯಚ್ಚರಿಸಿದಂತೆ ಭಾಸವಾಯಿತು. ಯದರೊಳಗ ತನ್ನದೇನು ತಪ್ಪಿಲ್ಲ... ಅವಯ್ಯ ಮಾಮೂಲು ಮನುಷ್ಯನಂತೆ, ಯಿತಿಹಾಸದೊಳಗ ನಷ್ಟವಾಗದಂತೆ ನೋಡಿಕೊಳ್ಳಬೇಕೆಂಬ ವುದ್ದಿಶ್ಯದಿಂದಾಗಿಯೇ ತಾನು ಯಂಥ ಕುತ್ಯ ಯಸಗಬೇಕಾಯಿತೆಂದೂ, ಹುತಾತುಮ ಪಟ್ಟ ಯೇರದ ಯಾರೊಬ್ಬರನ್ನೂ ಯಿತಿಹಾಸ ತನ್ನೊಳಗೆ ಅನುವು ಮಾಡಿಕೊಟ್ಟಿಲ್ಲವೆಂದೂ ಆ ದಿರಿಸಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದನು. ನಾಗಿರೆಡ್ಡಿಗೆ ಲಭಿಸಲಿರುವುದು ಮರಣದಂಡನೆಯಲ್ಲ. ಅದೊಂದು ಅನೂಹ್ಯ ಬಲಿದಾನ.. ಯಂಜಲು ಅದಲು ಬದಲು ಮಾಡಿಕೊಂಡ ನಂತರ ಅವಯ್ಯ ನಿರಮ್ಮಳತೆಯಿಂದ ಯಿದ್ದದ್ದು ತನಗೆ ಸರಿ ಕಾಣಲಿಲ್ಲ. ತನ್ನ ಯಿರುದ್ಧ, ಕುಂಪಣಿ ಸರಕಾರದ ಯಿರುದ್ಧ ಹೋರಾಡಬೇಕಿತ್ತು.. ಹೋರಾಟವೇ ಹುತಾತುಮ ಮಟ್ಟದ ಪ್ರಥಮ ಸೋಪಾನ ಯಂದು ತಿಳಿಯಬೇಕಿತ್ತು. ಸದರಿ ರೂರಲ್ಲಿಂಡಿಯಾ ಮಂದಿಯೇ ಯಿಷ್ಟು.. ಹಿಂದು ಮುಂದು ಆಲೋಚನೆ ಮಾಡದೆ ಕೆರಳುವುದು,<noinclude></noinclude> ge3rkibnrsi637mtkn23isgu8xz4fcm 320224 320211 2026-05-15T16:33:49Z Shreelatha.Halemane 7642 /* Validated */ 320224 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೩೩೦|right=ಅರಮನೆ}} {{gap}}ಹಂಗಂತ ಸುಮಕ ಬಿಡಲಕ ಅಯ್ತದಾ.. ದಯವಸ್ಥ ಮಂದಿ ಅದನು ಬಂಧಿಸುವ ಯಿಷಯದಲ್ಲಿ ಮಸ್ತು ಯತ್ನ ಪ್ರಯತ್ನಗಳನ್ನು ಮುಂದುವರಿಸದೆ ಯಿರಲಿಲ್ಲ.. ಸಾಂಬವಿ ತಮಗ ವಡ್ಡಿರುವ ಪರೀಕ್ಷೆಗಳಲ್ಲಿ ಯಿದೂ ಎಂದು ಯಂದು ಭಾವನೆ ಮೂಡಿತು. ಅದರ ಫಲವಾಗಿ ಖಡುಗ, ಭಲ್ಲೆ, ಗುರಾಣಿ ಹಿಡಕೊಂಡು ಹೋಗಿ ಮತ್ತು ಹುಣಸೆಹಣ್ಣು ಮಾಡಿಕೊಂಡು ವಾಪಾಸಾದವರೆಷ್ಟೋ? ಹೆಂಡ ಕುಡಿಸಲು ಹೋಗಿ ವದೆ ತಿಂದವರೆಷ್ಟೋ? ಸೂರ ಯಂಬುದು ಪ್ರಸ್ಮಾರಕ ಚಿನ್ನೆಯಾಗೇ ವುಳಿಯಿತೆಂಬಲ್ಲಿಗೆ.. ಅದಕ ಜವಾಬು ಅಲ್ಲುಂಟಾ? ಯಿಲ್ಲುಂಟಾ? ಯಲ್ಲುಂಟು? ಯಂಬಲ್ಲಿಗೆ.... {{gap}}ಅನಂತಪುರದ ಕಡೇಕ ಹೊರಡುವ ಮೊದಲು ತನ್ನ ಸರೀರದ ಮ್ಯಾಲಿಂದ ಬೊಬ್ಬಿಲಿ ನಾಗಿರೆಡ್ಡಿಯ ದಿರಿಸನ್ನು ವುತಾರ ಮಾಡಲು ನಾನಾ ರೀತಿಯಲ್ಲಿ ಮನೋ ಸಾಹೇಬ ಪ್ರಯತ್ನವ ಮಾಡದೆ ಯಿರಲಿಲ್ಲ.. ಆದರದು ಬಡಪೆಟ್ಟಿಗೆ ವುತಾರಾಗಲಿಲ್ಲ... ಬಲು ತ್ರಾಸು ಕೊಟ್ಟಿತು.. ಅದೆಂಗ ಳುವುತೀರೋ ಯಳುವು ಯಂದು ಸವಾಲು ಹಾಕಿದಂತೆ, ಬಿಚ್ಚಲಕ ಹೋದಾಗ ಚರುಮ ಅದರೊಟ್ಟಿಗೆ ಕಿತ್ತುಕೊಂಡು ಬಂದಂತೆ ಭಾಸವಾಯಿತು.. ಕೊನೆಗೂ ಸರೀರದಿಂದ ಕಳಚುವಲ್ಲಿ ತಾನು ಸಫಲಗೊಂಡಿದ್ದುಂಟು.. ಆ ದಿರಿಸು ಅಂಗಲಾಚಿದಂತೆ, ಹಂಗಿಸಿದಂತೆ, 'ಅದೆಂಗ ಹೋತೀಯೋ ಹೋಗು' ಯಂದು ಯಚ್ಚರಿಸಿದಂತೆ ಭಾಸವಾಯಿತು. ಯದರೊಳಗ ತನ್ನದೇನು ತಪ್ಪಿಲ್ಲ... ಅವಯ್ಯ ಮಾಮೂಲು ಮನುಷ್ಯನಂತೆ, ಯಿತಿಹಾಸದೊಳಗ ನಷ್ಟವಾಗದಂತೆ ನೋಡಿಕೊಳ್ಳಬೇಕೆಂಬ ವುದ್ದಿಶ್ಯದಿಂದಾಗಿಯೇ ತಾನು ಯಂಥ ಕುತ್ಯ ಯಸಗಬೇಕಾಯಿತೆಂದೂ, ಹುತಾತುಮ ಪಟ್ಟ ಯೇರದ ಯಾರೊಬ್ಬರನ್ನೂ ಯಿತಿಹಾಸ ತನ್ನೊಳಗೆ ಅನುವು ಮಾಡಿಕೊಟ್ಟಿಲ್ಲವೆಂದೂ ಆ ದಿರಿಸಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದನು. ನಾಗಿರೆಡ್ಡಿಗೆ ಲಭಿಸಲಿರುವುದು ಮರಣದಂಡನೆಯಲ್ಲ. ಅದೊಂದು ಅನೂಹ್ಯ ಬಲಿದಾನ.. ಯಂಜಲು ಅದಲು ಬದಲು ಮಾಡಿಕೊಂಡ ನಂತರ ಅವಯ್ಯ ನಿರಮ್ಮಳತೆಯಿಂದ ಯಿದ್ದದ್ದು ತನಗೆ ಸರಿ ಕಾಣಲಿಲ್ಲ. ತನ್ನ ಯಿರುದ್ಧ, ಕುಂಪಣಿ ಸರಕಾರದ ಯಿರುದ್ಧ ಹೋರಾಡಬೇಕಿತ್ತು.. ಹೋರಾಟವೇ ಹುತಾತುಮ ಮಟ್ಟದ ಪ್ರಥಮ ಸೋಪಾನ ಯಂದು ತಿಳಿಯಬೇಕಿತ್ತು. ಸದರಿ ರೂರಲ್ಲಿಂಡಿಯಾ ಮಂದಿಯೇ ಯಿಷ್ಟು.. ಹಿಂದು ಮುಂದು ಆಲೋಚನೆ ಮಾಡದೆ ಕೆರಳುವುದು,<noinclude></noinclude> svfortfi7vofa31u53jekum3v2tksao ಪುಟ:ಅರಮನೆ.pdf/೩೬೭ 104 86737 320225 205999 2026-05-15T16:35:03Z Shreesha Sharma 7840 /* Proofread */ 320225 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೩೩೬|right=ಅರಮನೆ}} ವುದ್ದರಿಸುತ್ತ ತನ್ನ ಕಣ್ಣುಗಳನ್ನು ಕೆಂಜಗ ಮಾಡಿಕೊಂಡನು. ಯೇ ಜವಾಬು ಯಿದ್ರೋಹದ ಸುಳಿವು ನೀಡುವುದೆಂದೂ, ಯದನ್ನು ವಾಪಾಸು ತಕ್ಕೊಂಡು ತನ್ನ ಚಾವಡಗಳನ್ನು ಮುಟ್ಟಿ ಕ್ಷಮೆ ಯಾಚಿಸಬೇಕೆಂದೂ ಹುಕುಂ ಮಾಡಿದನು. ಅದನ್ನು ಕೇಳಿದೊಡನೆ ನಿಂತ ನಿಲುವಿಕೀಲೆ ಧಗ ಧಗಾಂತ ವುರಿದ ಗವುಡನು ಅಂಥ ಗುರುತರ ಅಪರಾಧ ತಾನು ಮಾಡಿಲ್ಲವೆಂದೂ, ಪ್ರತಿಯೊಂದು ಕ್ರಿಯಾಕಟ್ಟಲೆಗೆ ಪರವಾನಿಗಿ ಪಡೆಯಬೇಕೆಂದರ ಹೆಂಗಾದೀತು ಯಂದು ಹೇಳುತ್ತ ಯದೆಸೆಟೆಸಿದನು. ಸ್ಕೂವರನು ತಾನಿದ್ದಲ್ಲಿಂದ ಯದ್ದು ಬಂದು ಅವಯ್ಯನ ಸುತ್ತ ವಂದು ಪರದಕ್ಷಿಣೆ ಹಾಕಿ, ಮುಖದಲ್ಲಿ ಮುಖಯಿಟ್ಟು ತೀಕ್ಷವಾಗಿ ದಿಟ್ಟಿಸಿ “ಹುಲಿಯನ್ನು ಕೊಂದು ಹುಲಿ ನಾಮನ್ನೂ, ಕರಡಿಯನ್ನು ಕೊಂಡು ಕರಡಿ ಯಿನಾಮನ್ನೂ ಪಡಕೊಂಡಿರುವಿಯಂತಲ್ಲಾ ಯಿದು ನಿಜವೇನು?” ಯಂದು ಯ್ಯಂಗ್ಯದಿಂದ ಪ್ರಶ್ನಿಸಿದನು. ಅದಕೆ ಗವುಡ “ಹೂ..' ಯಂದಷ್ಟೆ ಹೇಳಿದನು. ಸದರಿ ನೆಲದ ಗುಣವೇ ಯಿಂಥಾದ್ದು. ಯಿಲ್ಲಿ ಬೆಕ್ಕೂ ಹುಲಿಯಂತೆ ಘರನೆ ಮಾಡುವುದು ಯಂಬುದಕ್ಕೆ ಯೀ ಸೂರನೇ ನಿದರನ.. ಯಂದಂದುಕೊಂಡ ಸ್ಕೂವರನಲ್ಲಿದ್ದ ಎಂದು ಯಿಶೇಷ ಸಂಗತಿಯೆಂದರೆ ತನ್ನ ಪ್ರಯಾಣದ ಕಾಲದಲ್ಲಿ ಆಯಾಯಾ ಸೀಮೆಯ ಯಿತಿಹಾಸದ ಪುಟಗಳನ್ನು ತಿರುವಿಹಾಕುವುದು.. ಅದರಂತೆ ತಾನಿಲ್ಲಿಗೆ ಬರುವ ಮೊದಲು ಹರಪನಹಳ್ಳಿಯ ನೂರಿನ್ನೂರು ವರುಷಂಗಳ ಚರಿತ್ರೆಯನ್ನು ವಂದಕ್ಕರ ಬಿಡದಾಂಗ ಬಾಯಿಪಾಠ ಮಾಡಿಕೊಂಡಿದ್ದನು. ಯಿದರಿಂದಾಗಿ ಭರಮನ ಗವುಡಗೆ ಸಂಬಂಧಿಸಿದ ಪ್ರತಿಯೊಂದು ಯಿವರನೂಸದರಿ ಅಧಿಕಾರಿಯ ತುದಿ ನಾಲಗೆ ಮ್ಯಾಲ ಯಿತ್ತು. ನಿನ್ನೆ ಮೊನ್ನೆ ಅಯಿವತ್ತನ್ನು ದಾಟಿದ್ದಿರಬವುದಾದ ಗೌಡನಿಗೆ “ಚಾವುಡ ಚುಂಬಿಸಿ ನೀನು ನಿನ್ನ ಯಿನಾಮುಗಳನ್ನು ಕಾಪಾಡಿಕೊಂಡು ಹೆಂಡರು, ಮಕ್ಕಳು, ಮೊಮ್ಮಕ್ಕಳೊಂದಿಗೆ ಸುಖವಾಗಿರು” ಯಂದು ಮರು ಯಚ್ಚರಿಕೆಯನ್ನು ನೀಡಿದನು. ಅದಕ್ಕಿದ್ದು ಗವುಡನು “ತಾನಿಂಥ ಹೀನ ಕ್ರುತ್ಯ ಯಸಗಿ ನೂರು ವರುಷಂಗಳ ಪಲ್ಯಂತ ಬದುಕಲು ಯಿಷ್ಟ ಪಡುವುದಿಲ್ಲ” ಯಂದು ಖಡಾಖಂಡಿತವಾಗಿ ಜವಾಬು ನೀಡಿದನು. ಅಧಿಕಾರಿಯ ಪಾಳೆಯದಲ್ಲಿದ್ದ ಕೆಲವರು “ಚುಂಬಿಸಿದಲ್ಲಿ ತುಟಿ ಸವೆತಾವೇನು? ಸಣು ಮಾಡಿದಲ್ಲಿ ಕಯ್ಯ ಮೊಂಡಾಗುತಾವೇನು? ಕ್ಷಮಾ ಕೇಳಿದಲ್ಲಿ ಬಾಯಿ ವಣಗುತಾದೇನು? ಹೇಳಿಧಾಂಗ ಕೇಳಿಬಿಡಯ್ಯಾ ಕೇಳಿಬಿಡು” ಯಂದು ಮೂರೂ ಬಿಟ್ಟಿದ್ದವರಂತೆ ವಬ್ಬರ ಹಿಂದ<noinclude></noinclude> ktpykalaw36ku9ylz17ntacgm6oadz9 320234 320225 2026-05-15T16:38:28Z Shreelatha.Halemane 7642 /* Validated */ 320234 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೩೩೬|right=ಅರಮನೆ}} ವುದ್ದರಿಸುತ್ತ ತನ್ನ ಕಣ್ಣುಗಳನ್ನು ಕೆಂಜಗ ಮಾಡಿಕೊಂಡನು. ಯೇ ಜವಾಬು ಯಿದ್ರೋಹದ ಸುಳಿವು ನೀಡುವುದೆಂದೂ, ಯದನ್ನು ವಾಪಾಸು ತಕ್ಕೊಂಡು ತನ್ನ ಚಾವಡಗಳನ್ನು ಮುಟ್ಟಿ ಕ್ಷಮೆ ಯಾಚಿಸಬೇಕೆಂದೂ ಹುಕುಂ ಮಾಡಿದನು. ಅದನ್ನು ಕೇಳಿದೊಡನೆ ನಿಂತ ನಿಲುವಿಕೀಲೆ ಧಗ ಧಗಾಂತ ವುರಿದ ಗವುಡನು ಅಂಥ ಗುರುತರ ಅಪರಾಧ ತಾನು ಮಾಡಿಲ್ಲವೆಂದೂ, ಪ್ರತಿಯೊಂದು ಕ್ರಿಯಾಕಟ್ಟಲೆಗೆ ಪರವಾನಿಗಿ ಪಡೆಯಬೇಕೆಂದರ ಹೆಂಗಾದೀತು ಯಂದು ಹೇಳುತ್ತ ಯದೆಸೆಟೆಸಿದನು. ಸ್ಕೂವರನು ತಾನಿದ್ದಲ್ಲಿಂದ ಯದ್ದು ಬಂದು ಅವಯ್ಯನ ಸುತ್ತ ವಂದು ಪರದಕ್ಷಿಣೆ ಹಾಕಿ, ಮುಖದಲ್ಲಿ ಮುಖಯಿಟ್ಟು ತೀಕ್ಷವಾಗಿ ದಿಟ್ಟಿಸಿ “ಹುಲಿಯನ್ನು ಕೊಂದು ಹುಲಿ ನಾಮನ್ನೂ, ಕರಡಿಯನ್ನು ಕೊಂಡು ಕರಡಿ ಯಿನಾಮನ್ನೂ ಪಡಕೊಂಡಿರುವಿಯಂತಲ್ಲಾ ಯಿದು ನಿಜವೇನು?” ಯಂದು ಯ್ಯಂಗ್ಯದಿಂದ ಪ್ರಶ್ನಿಸಿದನು. ಅದಕೆ ಗವುಡ “ಹೂ..' ಯಂದಷ್ಟೆ ಹೇಳಿದನು. ಸದರಿ ನೆಲದ ಗುಣವೇ ಯಿಂಥಾದ್ದು. ಯಿಲ್ಲಿ ಬೆಕ್ಕೂ ಹುಲಿಯಂತೆ ಘರನೆ ಮಾಡುವುದು ಯಂಬುದಕ್ಕೆ ಯೀ ಸೂರನೇ ನಿದರನ.. ಯಂದಂದುಕೊಂಡ ಸ್ಕೂವರನಲ್ಲಿದ್ದ ಎಂದು ಯಿಶೇಷ ಸಂಗತಿಯೆಂದರೆ ತನ್ನ ಪ್ರಯಾಣದ ಕಾಲದಲ್ಲಿ ಆಯಾಯಾ ಸೀಮೆಯ ಯಿತಿಹಾಸದ ಪುಟಗಳನ್ನು ತಿರುವಿಹಾಕುವುದು.. ಅದರಂತೆ ತಾನಿಲ್ಲಿಗೆ ಬರುವ ಮೊದಲು ಹರಪನಹಳ್ಳಿಯ ನೂರಿನ್ನೂರು ವರುಷಂಗಳ ಚರಿತ್ರೆಯನ್ನು ವಂದಕ್ಕರ ಬಿಡದಾಂಗ ಬಾಯಿಪಾಠ ಮಾಡಿಕೊಂಡಿದ್ದನು. ಯಿದರಿಂದಾಗಿ ಭರಮನ ಗವುಡಗೆ ಸಂಬಂಧಿಸಿದ ಪ್ರತಿಯೊಂದು ಯಿವರನೂಸದರಿ ಅಧಿಕಾರಿಯ ತುದಿ ನಾಲಗೆ ಮ್ಯಾಲ ಯಿತ್ತು. ನಿನ್ನೆ ಮೊನ್ನೆ ಅಯಿವತ್ತನ್ನು ದಾಟಿದ್ದಿರಬವುದಾದ ಗೌಡನಿಗೆ “ಚಾವುಡ ಚುಂಬಿಸಿ ನೀನು ನಿನ್ನ ಯಿನಾಮುಗಳನ್ನು ಕಾಪಾಡಿಕೊಂಡು ಹೆಂಡರು, ಮಕ್ಕಳು, ಮೊಮ್ಮಕ್ಕಳೊಂದಿಗೆ ಸುಖವಾಗಿರು” ಯಂದು ಮರು ಯಚ್ಚರಿಕೆಯನ್ನು ನೀಡಿದನು. ಅದಕ್ಕಿದ್ದು ಗವುಡನು “ತಾನಿಂಥ ಹೀನ ಕ್ರುತ್ಯ ಯಸಗಿ ನೂರು ವರುಷಂಗಳ ಪಲ್ಯಂತ ಬದುಕಲು ಯಿಷ್ಟ ಪಡುವುದಿಲ್ಲ” ಯಂದು ಖಡಾಖಂಡಿತವಾಗಿ ಜವಾಬು ನೀಡಿದನು. ಅಧಿಕಾರಿಯ ಪಾಳೆಯದಲ್ಲಿದ್ದ ಕೆಲವರು “ಚುಂಬಿಸಿದಲ್ಲಿ ತುಟಿ ಸವೆತಾವೇನು? ಸಣು ಮಾಡಿದಲ್ಲಿ ಕಯ್ಯ ಮೊಂಡಾಗುತಾವೇನು? ಕ್ಷಮಾ ಕೇಳಿದಲ್ಲಿ ಬಾಯಿ ವಣಗುತಾದೇನು? ಹೇಳಿಧಾಂಗ ಕೇಳಿಬಿಡಯ್ಯಾ ಕೇಳಿಬಿಡು” ಯಂದು ಮೂರೂ ಬಿಟ್ಟಿದ್ದವರಂತೆ ವಬ್ಬರ ಹಿಂದ<noinclude></noinclude> b50eyg4g96djfr8jvvcll47vtokly58 ಪುಟ:ಅರಮನೆ.pdf/೩೬೮ 104 86738 320228 206000 2026-05-15T16:36:01Z Shreesha Sharma 7840 /* Proofread */ 320228 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೩೭}} ವಬ್ಬರಂತೆ ಸಲಹೆ ನೀಡಿದರು. ಅವರ ಪಯ್ಲಿ ಬಹುಪಾಲು ಮಂದಿ ನಾಯಕರ ಮಳಿಗದಲ್ಲಿದ್ದವರು. ಕೊನೆ ಗಳಿಗೇಲಿ ಯರಡು ಬಗೆದವರು, ವಂದು ಕಾಲದಲ್ಲಿ ತನ್ನ ಅಂಗಾಲನ್ನು ನೆಕ್ಕಲು ತುದಿಗಾಲಲ್ಲಿ ನಿಂತಿದ್ದಂಥವರು.. ಗವುಡ ಅವರತ್ತ ನೋಡಿದ. ಹೂ ಅಂದ, ಛೀ ಅಂದ.... {{gap}}ಮುಂದ ಯೇನಾಯಿತಪ್ಪಾ ಅಂದರ.. ಅದು ಆತು.. {{gap}}ಸತ್ರುವಿನ ಜನಪ್ರಿಯತೆಯನ್ನ ಮೊಹಿಸಿ ಸ್ಕೂವರನು ಗವುಡನಿಗೆ ಕುಂಚೂರು ಸೆರೆಮನೆಯಲ್ಲಿ ವಾಸ್ತವ್ಯ ಕಲ್ಪಿಸಿದ. ಅವನಿಗೆ ಸಂದಿದ್ದ ಯಿನಾಮು ಭೂಮಿಗಳನ್ನು ಸರಕಾರದ ಪರವಾಗಿ ಮುಟ್ಟುಗೋಲು ಹಾಕಿಕೊಂಡ. ಯೀ ಸಂಚಿನ ರೂವಾರಿಯನಿಸಿದ್ದ ಹಂಪರಸಪ್ಪಯ್ಯನನ್ನು ಕರೆಕಳಿಸಿಕೊಂಡು ಕುಂಪಣಿ ಸರಕಾರ ಕಛೇರಿಯ ಪ್ರಧಾನ ಕಾರಖನ ಪದವಿಯನ್ನು ನೀಡಿ ಆದೇಸ ಹೊಂಡಿಸಿದ. ಯಿಮ್ಮಡಿ ಸೋಮಶೇಖರನಾಯಕ ಫವುಜು ಮಾತ್ರಕುಂಪಣಿ ಸರಕಾರದ ಸಿಪಾಯಿಗಳ ಕಯ್ಯಗೆ ದೊರಕದೆ ತಲೆಮರೆಸಿಕೊಂಡಿತು. ಅದು ತೆರೆಮರೆಯಲ್ಲಿ ತನ್ನ ಕಾಠ್ಯ ಚಟುವಟಿಕೆಯನ್ನು ಆರಂಭ ಮಾಡದೆ ಯಿರಲಿಲ್ಲ. ಅದು ಕೂಲಿ ಕಾರಿಕರ ಯೇಷದಲ್ಲಿ ಕುಂಚೂರು ಕಡೇಕ ಪಾದ ಬೆಳೆಸಿತೆಂಬಲ್ಲಿಗೆ.. ಅವರಿಗೆ ಯಲ್ಲಾಪ್ರಕೊರಚರಟ್ಟಿಯ ಮೋಲಾರಮ್ಮನ ಕ್ರುಪೆಯಿತ್ತೆಂಬಲ್ಲಿಗೆ ಸಿವಸಂಕರ ಮಾದೇವss {{gap}}ತಮ್ಮ ಪಟ್ಟಣದ ಸವುಭಾಗ್ಯವು ಯಾಕ ಹೋಗಯೇ? ಮಲ್ಲಿಗೆ ಹೋಗಯ್ಕೆ? ಯಂಬ ತುರಿಕೆಯು ಅತ್ತ ಕೂಡ್ಲಿಗಿ ಪಟ್ಟಣದ ಮಯ್ಯತುಂಬ ಹಬ್ಬಿಬಿಟ್ಟಿತ್ತಷ್ಟೆ, ಯಸನ ಮಾಡುತ ಮಂದಿ ನೀನು ನೋಡಿದ್ಯಾ? ತಾನು ನೋಡಿದ್ಯಾ? ಯಂದು ಅವರಿವರನ್ನು ಯಿಚಾರಿಸಿ ನೋಡಿದರು. ಹಾದಿಗಳಲ್ಲಿದ್ದ ಹೆಜ್ಜೆ ಗುರುತುಗಳನ್ನು ಪರಾಂಬರಿಸಿದರು. ಹಾದಿಗಳ ಹಿಕ್ಕೆಲದಲ್ಲಿದ್ದ ಗಿಡಗಂಟೆಗಳನ್ನು ಕೇಳಿದರು, ಹಾರಾಡುತಲಿದ್ದ ಪಕ್ಷಿಗಳನ್ನು ಅಂಗಲಾಚಿದರು. ಕಲ್ಲು ಗುಂಡುಗಳನ್ನು, ಪಂಚಭೂತಗಳನು ಕೇಳಿ ನೋಡಿದರು. ಆದರೆ ಅವಾವುದರಿಂದಲೂ ಸರಿಯಾದ ಸಮಾಚಾರ ಲಭ್ಯವಾಗಲಿಲ್ಲ. ಯಲ್ಲಂತ ಹುಡುಕುವುದಪ್ಪಾ ತಮ್ಮ ಸಮುದಾಯದ ಸವುಭಾಗ್ಯವನ್ನು? ಫಜೀತಿಗಿಟ್ಟುಕೊಂಡಿತು.. ಸುಬ್ಬಣ್ಣನ ನೇತ್ರುತ್ವದಲ್ಲಿ ಯುವಕರ ತಂಡವೊಂದು ನಿರಸನ ಆರಂಭಿಸಿದರೆ, ಗುಂಡೂರಾಯನ ನೇತ್ರುತ್ವದಲ್ಲಿ ನಡು ವಯಸ್ಕರ ತಂಡವೊಂದು ಪಟ್ಟಣದಾಚೆಯಿದ್ದ ದಿಬ್ಬಗಳನ್ನೇರಿ ಹುಬ್ಬುಗಳ ಮ್ಯಾಲ ತಮ<noinclude></noinclude> t7o9oldqqa4ze1jr6i5a7su8qslc4py 320235 320228 2026-05-15T16:38:53Z Shreelatha.Halemane 7642 /* Validated */ 320235 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೩೭}} ವಬ್ಬರಂತೆ ಸಲಹೆ ನೀಡಿದರು. ಅವರ ಪಯ್ಲಿ ಬಹುಪಾಲು ಮಂದಿ ನಾಯಕರ ಮಳಿಗದಲ್ಲಿದ್ದವರು. ಕೊನೆ ಗಳಿಗೇಲಿ ಯರಡು ಬಗೆದವರು, ವಂದು ಕಾಲದಲ್ಲಿ ತನ್ನ ಅಂಗಾಲನ್ನು ನೆಕ್ಕಲು ತುದಿಗಾಲಲ್ಲಿ ನಿಂತಿದ್ದಂಥವರು.. ಗವುಡ ಅವರತ್ತ ನೋಡಿದ. ಹೂ ಅಂದ, ಛೀ ಅಂದ.... {{gap}}ಮುಂದ ಯೇನಾಯಿತಪ್ಪಾ ಅಂದರ.. ಅದು ಆತು.. {{gap}}ಸತ್ರುವಿನ ಜನಪ್ರಿಯತೆಯನ್ನ ಮೊಹಿಸಿ ಸ್ಕೂವರನು ಗವುಡನಿಗೆ ಕುಂಚೂರು ಸೆರೆಮನೆಯಲ್ಲಿ ವಾಸ್ತವ್ಯ ಕಲ್ಪಿಸಿದ. ಅವನಿಗೆ ಸಂದಿದ್ದ ಯಿನಾಮು ಭೂಮಿಗಳನ್ನು ಸರಕಾರದ ಪರವಾಗಿ ಮುಟ್ಟುಗೋಲು ಹಾಕಿಕೊಂಡ. ಯೀ ಸಂಚಿನ ರೂವಾರಿಯನಿಸಿದ್ದ ಹಂಪರಸಪ್ಪಯ್ಯನನ್ನು ಕರೆಕಳಿಸಿಕೊಂಡು ಕುಂಪಣಿ ಸರಕಾರ ಕಛೇರಿಯ ಪ್ರಧಾನ ಕಾರಖನ ಪದವಿಯನ್ನು ನೀಡಿ ಆದೇಸ ಹೊಂಡಿಸಿದ. ಯಿಮ್ಮಡಿ ಸೋಮಶೇಖರನಾಯಕ ಫವುಜು ಮಾತ್ರಕುಂಪಣಿ ಸರಕಾರದ ಸಿಪಾಯಿಗಳ ಕಯ್ಯಗೆ ದೊರಕದೆ ತಲೆಮರೆಸಿಕೊಂಡಿತು. ಅದು ತೆರೆಮರೆಯಲ್ಲಿ ತನ್ನ ಕಾಠ್ಯ ಚಟುವಟಿಕೆಯನ್ನು ಆರಂಭ ಮಾಡದೆ ಯಿರಲಿಲ್ಲ. ಅದು ಕೂಲಿ ಕಾರಿಕರ ಯೇಷದಲ್ಲಿ ಕುಂಚೂರು ಕಡೇಕ ಪಾದ ಬೆಳೆಸಿತೆಂಬಲ್ಲಿಗೆ.. ಅವರಿಗೆ ಯಲ್ಲಾಪ್ರಕೊರಚರಟ್ಟಿಯ ಮೋಲಾರಮ್ಮನ ಕ್ರುಪೆಯಿತ್ತೆಂಬಲ್ಲಿಗೆ ಸಿವಸಂಕರ ಮಾದೇವss {{gap}}ತಮ್ಮ ಪಟ್ಟಣದ ಸವುಭಾಗ್ಯವು ಯಾಕ ಹೋಗಯೇ? ಮಲ್ಲಿಗೆ ಹೋಗಯ್ಕೆ? ಯಂಬ ತುರಿಕೆಯು ಅತ್ತ ಕೂಡ್ಲಿಗಿ ಪಟ್ಟಣದ ಮಯ್ಯತುಂಬ ಹಬ್ಬಿಬಿಟ್ಟಿತ್ತಷ್ಟೆ, ಯಸನ ಮಾಡುತ ಮಂದಿ ನೀನು ನೋಡಿದ್ಯಾ? ತಾನು ನೋಡಿದ್ಯಾ? ಯಂದು ಅವರಿವರನ್ನು ಯಿಚಾರಿಸಿ ನೋಡಿದರು. ಹಾದಿಗಳಲ್ಲಿದ್ದ ಹೆಜ್ಜೆ ಗುರುತುಗಳನ್ನು ಪರಾಂಬರಿಸಿದರು. ಹಾದಿಗಳ ಹಿಕ್ಕೆಲದಲ್ಲಿದ್ದ ಗಿಡಗಂಟೆಗಳನ್ನು ಕೇಳಿದರು, ಹಾರಾಡುತಲಿದ್ದ ಪಕ್ಷಿಗಳನ್ನು ಅಂಗಲಾಚಿದರು. ಕಲ್ಲು ಗುಂಡುಗಳನ್ನು, ಪಂಚಭೂತಗಳನು ಕೇಳಿ ನೋಡಿದರು. ಆದರೆ ಅವಾವುದರಿಂದಲೂ ಸರಿಯಾದ ಸಮಾಚಾರ ಲಭ್ಯವಾಗಲಿಲ್ಲ. ಯಲ್ಲಂತ ಹುಡುಕುವುದಪ್ಪಾ ತಮ್ಮ ಸಮುದಾಯದ ಸವುಭಾಗ್ಯವನ್ನು? ಫಜೀತಿಗಿಟ್ಟುಕೊಂಡಿತು.. ಸುಬ್ಬಣ್ಣನ ನೇತ್ರುತ್ವದಲ್ಲಿ ಯುವಕರ ತಂಡವೊಂದು ನಿರಸನ ಆರಂಭಿಸಿದರೆ, ಗುಂಡೂರಾಯನ ನೇತ್ರುತ್ವದಲ್ಲಿ ನಡು ವಯಸ್ಕರ ತಂಡವೊಂದು ಪಟ್ಟಣದಾಚೆಯಿದ್ದ ದಿಬ್ಬಗಳನ್ನೇರಿ ಹುಬ್ಬುಗಳ ಮ್ಯಾಲ ತಮ<noinclude></noinclude> d4i3qsgjkd0q3ujd46aiv3dimp83ly1 ಪುಟ:ಅರಮನೆ.pdf/೩೫೯ 104 86739 320206 206001 2026-05-15T16:28:19Z Shreesha Sharma 7840 /* Proofread */ 320206 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೩೨೮|right=ಅರಮನೆ}} ಯೀ ಪ್ರಕಾರವಾಗಿ ಅಲ್ಲೆಲ್ಲ ಅಲಾಯಿ ಆಡಿದ ಸೂರನು ಹಂಪಜ್ಜ ಅಡುವಯ್ಯ, ಬೀರಯ್ಯ, ಪಾಲಯ್ಯ, ಬೋರಯ್ಯ ಮೊದಲಾದ ಹಿರೀಕರು ದುರುಗುಟ್ಟಿ ಅಲ್ಲಿಂದ ಸೀದ ನಡೆದು ಅರಮನೆಯ ಹಿತ್ತಲಗೋಡೆಯನ್ನು ಡಿಕ್ಕಿ ಹೊಡೆದು ಬೀಳಿಸಿದನು.. ನೆಲಗೆದರಿ ಧೂಳೆಬ್ಬಿಸಿ ಅರಗಳಿಗೆ ಅರಮನೆಯನ್ನು ಮಂಗಮಾಯ ಮಾಡಿದನು. ಅಲ್ಲಿಂದ ಸೀದ ನಡೆದು ರಣದಿಬ್ಬವನ್ನೇರಿ ಪಟ್ಟಣವನ್ನು ಸಿಮಾವಲೋಕನ ಮಾಡಿ ಯಿಳಿದನು. ತರುವಾಯ ಮಹಿಷಿಕಾ ಸಾನಿಯರೊಂದಿಗೆ ಯೇಕಾಸೂರಿಯ ಗುಡ್ಡದ ತಪ್ಪಲ ಕಡೇಕ... {{gap}}ಅರರೆ ಯಿದೇನಿದು? ಅಯ್ತಾವತದೋಪಾದಿಯಲ್ಲಿ ಮಾಬಲಿ ಯಿಲ್ಲೆಲ್ಲ ಅಡ್ಡಾಡಿ ಹೋದಂಗಾತಲ್ಲಾ, ತಮಗಾವಾಗ್ಗೆ ಮಯ್ಯೋಳಗ ಕಸುವಿಲ್ಲದಂಗಾಗಿತ್ತಲ್ಲ. ಯಂದನ ಕಂತ ಪ್ರತಿಯೊಬ್ಬರು ಕ್ರಮಕ್ರಮವಾಗಿ ಸಹಜ ಸ್ಥಿತಿಗೆ ಮರಳಲಾರಂಭಿಸಿದರು. {{gap}}ಯಾವತ್ತೂ ಕವಿದಿರದಿದ್ದ ಮಾಯಾದ ನಿದ್ದೆ ಅಂಬುದು ಸದರಿ ಕುದುರೆಡವು ಪಟ್ಟಣವನ್ನು ಕವಿದು ಸೋಲುಪ ಹೊತ್ತು ಅಳ್ಳಾಡಿಸಿಬಿಟ್ಟಿತ್ತು.. ಯಾವತ್ತು ಹೊತ್ತು ಮುಳುಗಿತ್ತೋ? ಯಾವತ್ತು ಬೆಳಗಾತೋ? ತಾವು ಮಲಗಿದ್ದೆವೋ? ಯಚ್ಚರಿದ್ದೆವೋ? ನಿದ್ದೆಯಚ್ಚರಗಳ ನಡುವೆ ಜುವ್ವಾಲೆ ಆಡುತಲಿದ್ದೆವೋ..? ನೀನೇ ಹಿಂಗ ಮಲಿಕ್ಕಂಡಿದ್ದರ ಹೆಂಗಪ್ಪಾ.? ತಾನೇ ಹಿಂಗ ಮಯ್ಯ ಮರತರ ಹೆಂಗಪ್ಪಾ.? ಅವರನ್ನಿವರು, ಯಿವರನ್ನವರು ಹೇಳೋದು, ಕೇಳೋದು ಮಾಡುತಲಿದ್ದರು ಸಿವನss ಯಿಲ್ಲೊಂದ ಅಲ್ಲ. ಅಲ್ಲೊಂದ ಅಲ್ಲ... ಸಮಸ್ತ ಪಟ್ಟಣದ ತುಂಬೆಲ್ಲ ಸಿವನೇ.. ಸಂಪೂಗ್ಲ ಯಚ್ಚರಾಣ ಆಗೋರಾಗಿ ತಮ್ಮ ತಮ್ಮ ಮನೆಗಳಿಂದ ಹೊರಬಂದು ನೋಡುತಾರ.. ಕಣ್ಣೆದುರುಗೇ ತಮ ತಮ್ಮ ಮಣಕಗಳು ಹೋದುವಲ್ಲ... ಅವುಗಳನ್ನು ತರುಬುವ ತಾಕತ್ತು ತಮ್ಮಲ್ಲಿ ವುಡುಗಿತ್ತಲ್ಲ.. ಯಾಕ ಹಂಗಾತು? ಯಾಕ ಹಿಂಗಾತು? {{gap}}ಯಿದಕೆಲ್ಲ ಜಗಲೂರೆವ್ವನ ಕೋಣವೇ ಕಾರಣ ಯಂಬ ನಿರಣಯಕ ಸಮಸ್ತ ಪಟ್ಟಣವು ಯಷ್ಟೋ ಹೊತ್ತಿನ ಮ್ಯಾಲ ಬಂತು.. ಮೂಲಿಂಟಿ ನಾಗಯ್ಯ ನಡುಲಿಂಟಿ ನಗಾರಯ್ಯ, ಕುಂಬಾರ ಅಳ್ಳೆಪ್ಪ, ಜೋಡಿಗರ ಬಾಲಯ್ಯ, ಮದೇಟಿ ಬಂದೆವ್ವ ಯವರೇ ಮೊದಲಾದ ನೂರಾರು ಮಂದಿ ತಮ್ಮ ತಮ್ಮ ಮಣಕಗಳಿಗಾಗಿ ಹುಡುಕ್ಕೋತ ಹುಡುಕ್ಕೋತ ಯೇಕಾಸೂರಿ ಗುಡ್ಡವ ತಲುಪದೆ ಯಿರಲಿಲ್ಲ. ತಮ್ಮ ತಮ್ಮ ರಾಸುಗಳನ ಗುರುತಿಸದೆ ಯಿರಲಿಲ್ಲ... ಬರೆವ್ವಾ..<noinclude></noinclude> lefjwtxzo11l4ze98x5xge89zg91c8e 320212 320206 2026-05-15T16:30:14Z Shreelatha.Halemane 7642 /* Validated */ 320212 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೩೨೮|right=ಅರಮನೆ}} ಯೀ ಪ್ರಕಾರವಾಗಿ ಅಲ್ಲೆಲ್ಲ ಅಲಾಯಿ ಆಡಿದ ಸೂರನು ಹಂಪಜ್ಜ ಅಡುವಯ್ಯ, ಬೀರಯ್ಯ, ಪಾಲಯ್ಯ, ಬೋರಯ್ಯ ಮೊದಲಾದ ಹಿರೀಕರು ದುರುಗುಟ್ಟಿ ಅಲ್ಲಿಂದ ಸೀದ ನಡೆದು ಅರಮನೆಯ ಹಿತ್ತಲಗೋಡೆಯನ್ನು ಡಿಕ್ಕಿ ಹೊಡೆದು ಬೀಳಿಸಿದನು.. ನೆಲಗೆದರಿ ಧೂಳೆಬ್ಬಿಸಿ ಅರಗಳಿಗೆ ಅರಮನೆಯನ್ನು ಮಂಗಮಾಯ ಮಾಡಿದನು. ಅಲ್ಲಿಂದ ಸೀದ ನಡೆದು ರಣದಿಬ್ಬವನ್ನೇರಿ ಪಟ್ಟಣವನ್ನು ಸಿಮಾವಲೋಕನ ಮಾಡಿ ಯಿಳಿದನು. ತರುವಾಯ ಮಹಿಷಿಕಾ ಸಾನಿಯರೊಂದಿಗೆ ಯೇಕಾಸೂರಿಯ ಗುಡ್ಡದ ತಪ್ಪಲ ಕಡೇಕ... {{gap}}ಅರರೆ ಯಿದೇನಿದು? ಅಯ್ತಾವತದೋಪಾದಿಯಲ್ಲಿ ಮಾಬಲಿ ಯಿಲ್ಲೆಲ್ಲ ಅಡ್ಡಾಡಿ ಹೋದಂಗಾತಲ್ಲಾ, ತಮಗಾವಾಗ್ಗೆ ಮಯ್ಯೋಳಗ ಕಸುವಿಲ್ಲದಂಗಾಗಿತ್ತಲ್ಲ. ಯಂದನ ಕಂತ ಪ್ರತಿಯೊಬ್ಬರು ಕ್ರಮಕ್ರಮವಾಗಿ ಸಹಜ ಸ್ಥಿತಿಗೆ ಮರಳಲಾರಂಭಿಸಿದರು. {{gap}}ಯಾವತ್ತೂ ಕವಿದಿರದಿದ್ದ ಮಾಯಾದ ನಿದ್ದೆ ಅಂಬುದು ಸದರಿ ಕುದುರೆಡವು ಪಟ್ಟಣವನ್ನು ಕವಿದು ಸೋಲುಪ ಹೊತ್ತು ಅಳ್ಳಾಡಿಸಿಬಿಟ್ಟಿತ್ತು.. ಯಾವತ್ತು ಹೊತ್ತು ಮುಳುಗಿತ್ತೋ? ಯಾವತ್ತು ಬೆಳಗಾತೋ? ತಾವು ಮಲಗಿದ್ದೆವೋ? ಯಚ್ಚರಿದ್ದೆವೋ? ನಿದ್ದೆಯಚ್ಚರಗಳ ನಡುವೆ ಜುವ್ವಾಲೆ ಆಡುತಲಿದ್ದೆವೋ..? ನೀನೇ ಹಿಂಗ ಮಲಿಕ್ಕಂಡಿದ್ದರ ಹೆಂಗಪ್ಪಾ.? ತಾನೇ ಹಿಂಗ ಮಯ್ಯ ಮರತರ ಹೆಂಗಪ್ಪಾ.? ಅವರನ್ನಿವರು, ಯಿವರನ್ನವರು ಹೇಳೋದು, ಕೇಳೋದು ಮಾಡುತಲಿದ್ದರು ಸಿವನss ಯಿಲ್ಲೊಂದ ಅಲ್ಲ. ಅಲ್ಲೊಂದ ಅಲ್ಲ... ಸಮಸ್ತ ಪಟ್ಟಣದ ತುಂಬೆಲ್ಲ ಸಿವನೇ.. ಸಂಪೂಗ್ಲ ಯಚ್ಚರಾಣ ಆಗೋರಾಗಿ ತಮ್ಮ ತಮ್ಮ ಮನೆಗಳಿಂದ ಹೊರಬಂದು ನೋಡುತಾರ.. ಕಣ್ಣೆದುರುಗೇ ತಮ ತಮ್ಮ ಮಣಕಗಳು ಹೋದುವಲ್ಲ... ಅವುಗಳನ್ನು ತರುಬುವ ತಾಕತ್ತು ತಮ್ಮಲ್ಲಿ ವುಡುಗಿತ್ತಲ್ಲ.. ಯಾಕ ಹಂಗಾತು? ಯಾಕ ಹಿಂಗಾತು? {{gap}}ಯಿದಕೆಲ್ಲ ಜಗಲೂರೆವ್ವನ ಕೋಣವೇ ಕಾರಣ ಯಂಬ ನಿರಣಯಕ ಸಮಸ್ತ ಪಟ್ಟಣವು ಯಷ್ಟೋ ಹೊತ್ತಿನ ಮ್ಯಾಲ ಬಂತು.. ಮೂಲಿಂಟಿ ನಾಗಯ್ಯ ನಡುಲಿಂಟಿ ನಗಾರಯ್ಯ, ಕುಂಬಾರ ಅಳ್ಳೆಪ್ಪ, ಜೋಡಿಗರ ಬಾಲಯ್ಯ, ಮದೇಟಿ ಬಂದೆವ್ವ ಯವರೇ ಮೊದಲಾದ ನೂರಾರು ಮಂದಿ ತಮ್ಮ ತಮ್ಮ ಮಣಕಗಳಿಗಾಗಿ ಹುಡುಕ್ಕೋತ ಹುಡುಕ್ಕೋತ ಯೇಕಾಸೂರಿ ಗುಡ್ಡವ ತಲುಪದೆ ಯಿರಲಿಲ್ಲ. ತಮ್ಮ ತಮ್ಮ ರಾಸುಗಳನ ಗುರುತಿಸದೆ ಯಿರಲಿಲ್ಲ... ಬರೆವ್ವಾ..<noinclude></noinclude> scy5b1k16lqk7l9441hbmfizhekr73b ಪುಟ:ಅರಮನೆ.pdf/೩೬೨ 104 86740 320213 206002 2026-05-15T16:30:17Z Shreesha Sharma 7840 /* Proofread */ 320213 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೩೧}} ವುದ್ವಿಗ್ನರಾಗುವುದು, ಭಾವಪರವಸರಾಗುವುದು ಯಿವರ ದವುರುಬಲ್ಯವು.. ಯಾಕಾದರು ತಾನು ಸಿರಿವಂತರ ಬಡವರ ನಡುವೆ ಅಂತರವನ್ನು ಸರಿಪಡಿಸಬೇಕಿತ್ತು.. ಕಾಯಿದೆ ಕಾನೂನುಗಳನ್ನು ತನ್ನ ಕಯ್ದೆ ತೆಗೆದುಕೊಳ್ಳಬೇಕಿತ್ತು.. ತಾನೇ ಎಂದು ಸರಕಾರವೆಂಬ ಭ್ರಮೆಯನ್ನುಂಟು ಮಾಡಬೇಕಿತ್ತು. ಆತನಿಗೆ ವಾಸ್ತವದ ಅರಿವಿತ್ತಾ? ವಬ್ಬರ ಸ್ಥಿತಿ ಸುಧಾರಿಸಲಾಗಿ ಯಿನ್ನೊಬ್ಬರನ್ನು ಬಡವರನ್ನಾಗಿ ಪರಿವರ್ತಿಸಿದ್ದು ನ್ಯಾಯವಾ? ಯಿಂಥವರಿಗೆ ಪುರಾಣ ಮುಖ್ಯವಾಗುತ್ತದೆಯೇ ಹೊರತು ವರಮಾನವಲ್ಲ. ಯಂಥವರು ಪುರಾಣದ ನಾಯಕರಾಗಲು ಹಾತೊರೆಯುತ್ತಾರೇ ವಿನಾ ಜನಸಮುದಾಯದ ನಾಯಕರಾಗಲು ಅಲ್ಲ... ತಾನು ಮಾಡಿದ್ದೇ ಸರಿ. ತಾನೀ ನಿಲ್ಲಯ ತಗೊಂಡಿದ್ದು ಯಿದ್ದಕ್ಕಿದ್ದಂತೆ ಅಲ್ಲ.. ಹಲವು ದಿನಗಳ ಕಾಲ ಕೂಲಂಕಷ ಯೋಚನೆ ಮಾಡಿದ ನಂತರವೇ.. ಮಿಷೆಲ್ಲ ಯೋಚಿಸುವ ತಾನೂ ವುದ್ವಿಗ್ನಗೊಳ್ಳದೆಯಿರಲಿಲ್ಲ.. ತಾನು ನಿರಾಪರಾಧಿಯಂದು ಸಾಬೀತು ಮಾಡುವ ಪ್ರಮೇಯ ಯೇನಿತ್ತು? ಮನೋ ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳುತ್ತ.. ನಾಗಿರೆಡ್ಡಿಯಿಂದ ಬಿಡುಗಡೆ ಪಡೆಯಲು ಸರಥಾ ಯತ್ನಿಸುತ್ತೆ. ಅವನನ್ನು ಮರೆಯಲೋಸುಗ ತನ್ನ ಸ್ವಾಟೆಂಡು, ತನ್ನ ಗ್ಲಾಸೋವಾಗಳೇನೆಲ್ಲವನ್ನೂ ನೆನಪಿಸಿಕೊಳ್ಳುತ್ತ ಅವಸರ ಬವಸರದಿಂದ ಬಳ್ಳಾರಿ ನಗರವನ್ನು ಯರಡು ದಿನಗಳ ಹಿಂದೆಯೇ ವದಲಿದ್ದ ಕಾರಸೂಚಿಯಂತೆ ತಾನು ಯೀ ದಿನ ವದಲಬೇಕಿತ್ತು. ಆದರೆ ಮೂರುವ ನಿಲ್ದಾರಿತ ನ್ಯಾಯ ಯಿಚಾರಣೆಯನ್ನು ಕೂತಲ್ಲಿಂದಲೇ ಮೊಹಿಸಿಕೊಳ್ಳುವ ಹಿಂಸೆಯ ಭಯ ಕಾಡಿತ್ತು. ಆತನ ಕಳೇಬರದ ಮ್ಯಾಲ ಪುಷ್ಪಗುಚ್ಚ ಯಿರಿಸುವಾಗ ತಾನು ಚಿಕ್ಕ ಮಗುವಿನಂತೆ ಅಳುವ ಸಾಧ್ಯತೆ ಯಿಲ್ಲದಿರಲಿಲ್ಲ.. ಆದರ ತನ್ನೆದೆಯೊಳಗಿನ ನ್ಯಾಯಾಲಯವಿನ್ನೂ ಬರಖಾಸ್ತಾಗಿಲ್ಲವಲ್ಲ...ತನ್ನೆದೆಯ ಕಟಕಟೆಯೊಳಗ ರೆಡ್ಡಿಯು ಧೀರೋದಾತ್ತ ನಿಲುವಿನಿಂದ ನಿಂತಿರುವನಲ್ಲಾ... ಯಿದು ಮನೋನ ಕುಟಿಲೋಪಾಯ ಯಂದು ಸಾರಿ ಸಾರಿ ಹೇಳುತ್ತಿರುವನಲ್ಲಾ... ತೀರನ್ನು ಮನಸ್ಸಿನೊಳಗ ಯಿಟ್ಟುಕೊಂಡಿರುವ ನ್ಯಾಯಾದೀಶ ಗೋಲ್ಡಿಂಗ್ ಹ್ಯಾಂ ಶ್ರವಣೇಂದ್ರಿಯದ ಸಹಾಯವಿಲ್ಲದೆ ಹೇಳಿಕೆಯನ್ನು ಆಲಿಸುತ್ತಿರುವನಲ್ಲ.. ಓಹ್ ಗೋಲ್ಡಿಂಗ್ ಹ್ಯಾಂ! ಓಹ್ ಸ್ವೀಡನ್ನಿನ ಸತ್ಪ್ರಜೆಯೇ.. ಓಹ್ ಧರುಮ ಪ್ರಚಾರಕನಾಗಲೆಂದೇ ಯಿಂಡಿಯಾಕ್ಕೆ ಬಂದವನು ಗವನ್ನರನ ಸಲಹೆಗೆ ಮನ್ನಣೆ ಕೊಟ್ಟು ನ್ಯಾಯಾಧೀಶನಾದವನೇ! ಯಿಂಥದೊಂದು ಯಿವೇಚನಾ ರಹಿತ ತೀರು ಕೊಡಲು ಆತ ಮೊದ ಮೊದಲು ವಪ್ಪಲಿಲ್ಲ...<noinclude></noinclude> jb1ugm87gcaniujd7k9p18ck7l5k8gg 320226 320213 2026-05-15T16:35:09Z Shreelatha.Halemane 7642 /* Validated */ 320226 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೩೧}} ವುದ್ವಿಗ್ನರಾಗುವುದು, ಭಾವಪರವಸರಾಗುವುದು ಯಿವರ ದವುರುಬಲ್ಯವು.. ಯಾಕಾದರು ತಾನು ಸಿರಿವಂತರ ಬಡವರ ನಡುವೆ ಅಂತರವನ್ನು ಸರಿಪಡಿಸಬೇಕಿತ್ತು.. ಕಾಯಿದೆ ಕಾನೂನುಗಳನ್ನು ತನ್ನ ಕಯ್ಗೆ ತಗೊಳ್ಬೇಕಿತ.. ತ್ತಿ ತಾನೇ ಎಂದು ಸರಕಾರವೆಂಬ ಭ್ರಮೆಯನ್ನುಂಟು ಮಾಡಬೇಕಿತ್ತು. ಆತನಿಗೆ ವಾಸ್ತವದ ಅರಿವಿತ್ತಾ? ವಬ್ಬರ ಸ್ಥಿತಿ ಸುಧಾರಿಸಲಾಗಿ ಯಿನ್ನೊಬ್ಬರನ್ನು ಬಡವರನ್ನಾಗಿ ಪರಿವರ್ತಿಸಿದ್ದು ನ್ಯಾಯವಾ? ಯಿಂಥವರಿಗೆ ಪುರಾಣ ಮುಖ್ಯವಾಗುತ್ತದೆಯೇ ಹೊರತು ವರಮಾನವಲ್ಲ. ಯಂಥವರು ಪುರಾಣದ ನಾಯಕರಾಗಲು ಹಾತೊರೆಯುತ್ತಾರೇ ವಿನಾ ಜನಸಮುದಾಯದ ನಾಯಕರಾಗಲು ಅಲ್ಲ... ತಾನು ಮಾಡಿದ್ದೇ ಸರಿ. ತಾನೀ ನಿಲ್ಲಯ ತಗೊಂಡಿದ್ದು ಯಿದ್ದಕ್ಕಿದ್ದಂತೆ ಅಲ್ಲ.. ಹಲವು ದಿನಗಳ ಕಾಲ ಕೂಲಂಕಷ ಯೋಚನೆ ಮಾಡಿದ ನಂತರವೇ.. ಮಿಷೆಲ್ಲ ಯೋಚಿಸುವ ತಾನೂ ವುದ್ವಿಗ್ನಗೊಳ್ಳದೆಯಿರಲಿಲ್ಲ.. ತಾನು ನಿರಾಪರಾಧಿಯಂದು ಸಾಬೀತು ಮಾಡುವ ಪ್ರಮೇಯ ಯೇನಿತ್ತು? ಮನೋ ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳುತ್ತ.. ನಾಗಿರೆಡ್ಡಿಯಿಂದ ಬಿಡುಗಡೆ ಪಡೆಯಲು ಸರಥಾ ಯತ್ನಿಸುತ್ತೆ. ಅವನನ್ನು ಮರೆಯಲೋಸುಗ ತನ್ನ ಸ್ವಾಟೆಂಡು, ತನ್ನ ಗ್ಲಾಸೋವಾಗಳೇನೆಲ್ಲವನ್ನೂ ನೆನಪಿಸಿಕೊಳ್ಳುತ್ತ ಅವಸರ ಬವಸರದಿಂದ ಬಳ್ಳಾರಿ ನಗರವನ್ನು ಯರಡು ದಿನಗಳ ಹಿಂದೆಯೇ ವದಲಿದ್ದ ಕಾರಸೂಚಿಯಂತೆ ತಾನು ಯೀ ದಿನ ವದಲಬೇಕಿತ್ತು. ಆದರೆ ಮೂರುವ ನಿಲ್ದಾರಿತ ನ್ಯಾಯ ಯಿಚಾರಣೆಯನ್ನು ಕೂತಲ್ಲಿಂದಲೇ ಮೊಹಿಸಿಕೊಳ್ಳುವ ಹಿಂಸೆಯ ಭಯ ಕಾಡಿತ್ತು. ಆತನ ಕಳೇಬರದ ಮ್ಯಾಲ ಪುಷ್ಪಗುಚ್ಚ ಯಿರಿಸುವಾಗ ತಾನು ಚಿಕ್ಕ ಮಗುವಿನಂತೆ ಅಳುವ ಸಾಧ್ಯತೆ ಯಿಲ್ಲದಿರಲಿಲ್ಲ.. ಆದರ ತನ್ನೆದೆಯೊಳಗಿನ ನ್ಯಾಯಾಲಯವಿನ್ನೂ ಬರಖಾಸ್ತಾಗಿಲ್ಲವಲ್ಲ...ತನ್ನೆದೆಯ ಕಟಕಟೆಯೊಳಗ ರೆಡ್ಡಿಯು ಧೀರೋದಾತ್ತ ನಿಲುವಿನಿಂದ ನಿಂತಿರುವನಲ್ಲಾ... ಯಿದು ಮನೋನ ಕುಟಿಲೋಪಾಯ ಯಂದು ಸಾರಿ ಸಾರಿ ಹೇಳುತ್ತಿರುವನಲ್ಲಾ... ತೀರನ್ನು ಮನಸ್ಸಿನೊಳಗ ಯಿಟ್ಟುಕೊಂಡಿರುವ ನ್ಯಾಯಾದೀಶ ಗೋಲ್ಡಿಂಗ್ ಹ್ಯಾಂ ಶ್ರವಣೇಂದ್ರಿಯದ ಸಹಾಯವಿಲ್ಲದೆ ಹೇಳಿಕೆಯನ್ನು ಆಲಿಸುತ್ತಿರುವನಲ್ಲ.. ಓಹ್ ಗೋಲ್ಡಿಂಗ್ ಹ್ಯಾಂ! ಓಹ್ ಸ್ವೀಡನ್ನಿನ ಸತ್ಪ್ರಜೆಯೇ.. ಓಹ್ ಧರುಮ ಪ್ರಚಾರಕನಾಗಲೆಂದೇ ಯಿಂಡಿಯಾಕ್ಕೆ ಬಂದವನು ಗವನ್ನರನ ಸಲಹೆಗೆ ಮನ್ನಣೆ ಕೊಟ್ಟು ನ್ಯಾಯಾಧೀಶನಾದವನೇ! ಯಿಂಥದೊಂದು ಯಿವೇಚನಾ ರಹಿತ ತೀರು ಕೊಡಲು ಆತ ಮೊದ ಮೊದಲು ವಪ್ಪಲಿಲ್ಲ...<noinclude></noinclude> 577czsiswz2ky20jfcr17vkqfisjdua ಪುಟ:ಅರಮನೆ.pdf/೩೬೩ 104 86741 320215 206003 2026-05-15T16:30:51Z Shreesha Sharma 7840 /* Proofread */ 320215 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೩೩೨|right=ಅರಮನೆ}} ನ್ಯಾಯಾದೀಶನೇ ಕೊಲೆಗಾರನಾಗಬೇಕೆ? ಯಂದು ಸಂದೇಹಿಸಿದ, 'ನೋಡಿ ಹ್ಯಾಂ.. ವಿಚಾರಣೆ ಸಂದಶ್ಚದಲ್ಲಿ ಯಾವ ಕಾರಣಕ್ಕೂ ಬಗ್ಗಲ್ಲನ್ನು ನೆನಪಿಸಿಕೊಳ್ಳಬೇಡಿ... ಯಿದು ಸರಕಾರದ ಯಿಚ್ಛೆಯೂ ಹವುದು' ಯಂದು ಪಿಸುಗುಟ್ಟಿದ್ದು ಯಷ್ಟು ಅರದೂರ? ಆದರೂ ಹ್ಯಾಂನ ಸೋಲುಪ ಅಗಲ ಯನ್ನಬವುದಾದ ಮುಖವು ತಿಳಿಗೊಂಡಿರಲಿಲ್ಲ.. ಪ್ರಾಯಶಃ ಹ್ಯಾಂ ಮಹಾಶಯ ತಾನು ಕಟಕಟೆಯೊಳಗೂ... ನಾಗಿರೆಡ್ಡಿಯು ನ್ಯಾಯಾಧೀಶನ ಪೀಠದ ಮ್ಯಾಲೂ.. ಓಹ್ ಮಮ್ ಗಾಡ್! ಬೆವರೊರೆಸಿಕೊಂಡ ಕರವಸ್ತರದಿಂದ.. {{gap}}ತಾನು ಅನಂತಪುರಕ್ಕೆ ಸಮೀಪಿಸಿರಬಹುದೇ? ಗುತ್ತಿಯ ಚರಸಾಲಕ್ಕೆ ತಾನು ಯೀ ಹಿಂದೆಯೇ ಭೆಟ್ಟಿ ಕೊಡಬೇಕಿತ್ತು. ಯೀಗ ಯಾರನ್ನೂ ನೋಡುವುದು ಸರಿಯಲ್ಲ. ತನ್ನೊಳಗೀಗ ವಿಚಾರಣೆ ನಡೆಯುತ್ತಿದೆ. ಪ್ರೇಕ್ಷಕರ ಮೊಗಸಾಲೆಯಲ್ಲಿ ಯಾರಾರು ಕೂತಿರಬಹುದು...! ಛೇ.. ಮತ್ತೆ ತಾನು!.. ಅಗೋ ಅಲ್ಲಿ ಕವುಕುಂಟ್ಲ.. ಅಲ್ಲಿಗೆ ಹೋಗುವುದು ಬೇಡ.. ಯಿಲ್ಲಿ ಯಾವುದೋ ಹಳ್ಳ ಹರಿಯುತ್ತಿರುವಂತಿದೆ.. ಪಕ್ಕದಲ್ಲಿ ಮೊಸುಂಬಿ ತೋಟ.. ತಾನಲ್ಲಿ ತುಸು ಹೊತ್ತು ಯಿಸ್ರಮಿಸಿಕೊಳ್ಳುವುದೇ ಲೇಸೆಂಬ ನಿಲ್ಲಯಕ್ಕೆ ಬಂದ.. ಹೇಳಿದೊಡನೆ ಪರಿಚಾರಕರು ಬಿಡಾರ ಯವಸ್ಥೆ ಮಾಡಿದರು. ಬಿಡಾರದೊಳಗೆ ಯಂದಿನಂತೆ ಯೇಸುಪ್ರಭುವಿನ ಚಿತ್ರಪಟ ಯಿರಿಸಿದರು. ಮನೋ ಸಮವಸ್ತರ ಕಳಚಿದ.. ಮುಂಬತ್ತಿಯನ್ನು ಪ್ರಭುವಿನೆದುರು ಬೆಳಗಿಸಿ ಮಂಡಮೂರಿ ಕಣ್ಮುಚ್ಚಿ ಕುಳಿತನೆಂಬಲ್ಲಿಗೆ.... {{gap}}ಅತ್ತ ಬಳ್ಳಾರಿಯ ಕೇಂದ್ರ ಕಾರಾಗ್ರಹದೊಳಗೆ ಯಿಶೇಷ ನ್ಯಾಯಾಲಯದ ಏರುಪಾಡಾಗಿತ್ತಷ್ಟೆ. ಕಟಕಟೆಯೊಳಗೆ ನಾಗಿರೆಡ್ಡಿಯ ಧೀರೋದಾತ್ತ ನಿಲುವು.. ಜಾವ ಜಾವಕ್ಕೊಂದೊಂದು ಸಲ ಬೆವರೊರೆಸಿಕೊಳ್ಳುತ್ತಿರುವ ನ್ಯಾಯಾಧೀಶ ಗೋಲ್ಡಿಂಗ್ ಹ್ಯಾಂ ಸಾಹೇಬ.. ತನ್ನೊಳಗೆ ಯಾರೋ ಮಾಡುತ್ತಿರುವ ಬಯಬಲ್ಲಿನ ಪಠಣ, ಕ್ಷಮೆಯನ್ನು ಎತ್ತಿ ಹೇಳುತ್ತಿರುವ ಪ್ರತಿಯೊಂದು ಪುಟಗಳು. ಪ್ರೇಕ್ಷಕರ ಮೊಗಸಾಲೆಯಲ್ಲಿ ಮುನುಸೋಬಯ್ಯ ಮತ್ತಿತರರು.. ಅವರೆಲ್ಲರ ಮುಖಗಳ ಮ್ಯಾಲ ಆತಂಕದ ಕರಿ ನೆರಳು.. ಅಪರಾಧಿಯ ಪರ ವಾದಿಸಲು ಕರೋಲಿನಿಂದ ಬಂದಿರುವ ಕೋನೇಟಿ ಶ್ರೀನಿವಾಸಶಾಸ್ತ್ರಿ .. ಸರಕಾರದ ಪರ ವಕೀಲ ಯಾರಿದ್ದರಪಾ ಅಂದರ ನಿಡುಸಾಲೆ ನೀಲಕಂಠರಾಯ ಯಂಬಾತನು. ಯಾಂತ್ರಿಕ ರೀತಿಯಲ್ಲಿ ವಾದ, ಪ್ರತಿವಾದ..<noinclude></noinclude> m3y0y23oflm3zul0besdbm0qtotm5it 320227 320215 2026-05-15T16:35:42Z Shreelatha.Halemane 7642 /* Validated */ 320227 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೩೩೨|right=ಅರಮನೆ}} ನ್ಯಾಯಾದೀಶನೇ ಕೊಲೆಗಾರನಾಗಬೇಕೆ? ಯಂದು ಸಂದೇಹಿಸಿದ, 'ನೋಡಿ ಹ್ಯಾಂ.. ವಿಚಾರಣೆ ಸಂದಶ್ಚದಲ್ಲಿ ಯಾವ ಕಾರಣಕ್ಕೂ ಬಗ್ಗಲ್ಲನ್ನು ನೆನಪಿಸಿಕೊಳ್ಳಬೇಡಿ... ಯಿದು ಸರಕಾರದ ಯಿಚ್ಛೆಯೂ ಹವುದು' ಯಂದು ಪಿಸುಗುಟ್ಟಿದ್ದು ಯಷ್ಟು ಅರದೂರ? ಆದರೂ ಹ್ಯಾಂನ ಸೋಲುಪ ಅಗಲ ಯನ್ನಬವುದಾದ ಮುಖವು ತಿಳಿಗೊಂಡಿರಲಿಲ್ಲ.. ಪ್ರಾಯಶಃ ಹ್ಯಾಂ ಮಹಾಶಯ ತಾನು ಕಟಕಟೆಯೊಳಗೂ... ನಾಗಿರೆಡ್ಡಿಯು ನ್ಯಾಯಾಧೀಶನ ಪೀಠದ ಮ್ಯಾಲೂ.. ಓಹ್ ಮಮ್ ಗಾಡ್! ಬೆವರೊರೆಸಿಕೊಂಡ ಕರವಸ್ತರದಿಂದ.. {{gap}}ತಾನು ಅನಂತಪುರಕ್ಕೆ ಸಮೀಪಿಸಿರಬಹುದೇ? ಗುತ್ತಿಯ ಚರಸಾಲಕ್ಕೆ ತಾನು ಯೀ ಹಿಂದೆಯೇ ಭೆಟ್ಟಿ ಕೊಡಬೇಕಿತ್ತು. ಯೀಗ ಯಾರನ್ನೂ ನೋಡುವುದು ಸರಿಯಲ್ಲ. ತನ್ನೊಳಗೀಗ ವಿಚಾರಣೆ ನಡೆಯುತ್ತಿದೆ. ಪ್ರೇಕ್ಷಕರ ಮೊಗಸಾಲೆಯಲ್ಲಿ ಯಾರಾರು ಕೂತಿರಬಹುದು...! ಛೇ.. ಮತ್ತೆ ತಾನು!.. ಅಗೋ ಅಲ್ಲಿ ಕವುಕುಂಟ್ಲ.. ಅಲ್ಲಿಗೆ ಹೋಗುವುದು ಬೇಡ.. ಯಿಲ್ಲಿ ಯಾವುದೋ ಹಳ್ಳ ಹರಿಯುತ್ತಿರುವಂತಿದೆ.. ಪಕ್ಕದಲ್ಲಿ ಮೊಸುಂಬಿ ತೋಟ.. ತಾನಲ್ಲಿ ತುಸು ಹೊತ್ತು ಯಿಸ್ರಮಿಸಿಕೊಳ್ಳುವುದೇ ಲೇಸೆಂಬ ನಿಲ್ಲಯಕ್ಕೆ ಬಂದ.. ಹೇಳಿದೊಡನೆ ಪರಿಚಾರಕರು ಬಿಡಾರ ಯವಸ್ಥೆ ಮಾಡಿದರು. ಬಿಡಾರದೊಳಗೆ ಯಂದಿನಂತೆ ಯೇಸುಪ್ರಭುವಿನ ಚಿತ್ರಪಟ ಯಿರಿಸಿದರು. ಮನೋ ಸಮವಸ್ತರ ಕಳಚಿದ.. ಮುಂಬತ್ತಿಯನ್ನು ಪ್ರಭುವಿನೆದುರು ಬೆಳಗಿಸಿ ಮಂಡಮೂರಿ ಕಣ್ಮುಚ್ಚಿ ಕುಳಿತನೆಂಬಲ್ಲಿಗೆ.... {{gap}}ಅತ್ತ ಬಳ್ಳಾರಿಯ ಕೇಂದ್ರ ಕಾರಾಗ್ರಹದೊಳಗೆ ಯಿಶೇಷ ನ್ಯಾಯಾಲಯದ ಏರುಪಾಡಾಗಿತ್ತಷ್ಟೆ. ಕಟಕಟೆಯೊಳಗೆ ನಾಗಿರೆಡ್ಡಿಯ ಧೀರೋದಾತ್ತ ನಿಲುವು.. ಜಾವ ಜಾವಕ್ಕೊಂದೊಂದು ಸಲ ಬೆವರೊರೆಸಿಕೊಳ್ಳುತ್ತಿರುವ ನ್ಯಾಯಾಧೀಶ ಗೋಲ್ಡಿಂಗ್ ಹ್ಯಾಂ ಸಾಹೇಬ.. ತನ್ನೊಳಗೆ ಯಾರೋ ಮಾಡುತ್ತಿರುವ ಬಯಬಲ್ಲಿನ ಪಠಣ, ಕ್ಷಮೆಯನ್ನು ಎತ್ತಿ ಹೇಳುತ್ತಿರುವ ಪ್ರತಿಯೊಂದು ಪುಟಗಳು. ಪ್ರೇಕ್ಷಕರ ಮೊಗಸಾಲೆಯಲ್ಲಿ ಮುನುಸೋಬಯ್ಯ ಮತ್ತಿತರರು.. ಅವರೆಲ್ಲರ ಮುಖಗಳ ಮ್ಯಾಲ ಆತಂಕದ ಕರಿ ನೆರಳು.. ಅಪರಾಧಿಯ ಪರ ವಾದಿಸಲು ಕರೋಲಿನಿಂದ ಬಂದಿರುವ ಕೋನೇಟಿ ಶ್ರೀನಿವಾಸಶಾಸ್ತ್ರಿ .. ಸರಕಾರದ ಪರ ವಕೀಲ ಯಾರಿದ್ದರಪಾ ಅಂದರ ನಿಡುಸಾಲೆ ನೀಲಕಂಠರಾಯ ಯಂಬಾತನು. ಯಾಂತ್ರಿಕ ರೀತಿಯಲ್ಲಿ ವಾದ, ಪ್ರತಿವಾದ..<noinclude></noinclude> hfafjja886nm6wckkt8fmjj0uv81oq8 ಪುಟ:ಅರಮನೆ.pdf/೩೬೬ 104 86742 320223 206004 2026-05-15T16:33:35Z Shreesha Sharma 7840 /* Proofread */ 320223 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೩೩೫}} ಮಾದೇವss {{gap}}ಅತ್ತ ಯಿಮ್ಮಡಿ ಸೋಮಶೇಕರ ಮಾರಾಜನ ಕಯ್ಯಂದ ಪಾರಿತೋಷಕ ಪಡೆವು. ಬಾಯಿಯಿಂದ ರಣಭಯಂಕರ ಯಂದು ಹೊಗಳಿಸಿಕೊಂಡಿದ್ದಂಥ ಭರಮನಗೌಡನು ಸೂರ ಸಿಪಾಯಿ ದಂಡೋಜಿ ಜೊತೆ ಅದು ಯಿದು ಮಾತಾಡುತ್ತಾ ಮಾತಾಡುತ್ತಾ ಫಲಾನ ದಿವಸದಂದು ಹರಪನಳ್ಳಿಯ ಬಿಡದಿ ಮನೆಯಲ್ಲಿ ಕಳೆದೆರಡು ದಿವಸಗಳಿಂದ ಸ್ಕೂವರನ ಕರೆಗಾಗಿ ಯದುರು ನೋಡುತಲಿದ್ದನು. ಅಲ್ಲಿ ಆತನು ಯಾರೊಂದಿಗೂ ಕಲೆಯುವಂತಿರಲಿಲ್ಲ... ಪಟ್ಟಣದ ಯಾವ ಕಡೆಗೂ ಹೋಗುವಂತಿರಲಿಲ್ಲ.. ತನ್ನ ಬಳಿಗೆ ಬಂದು ಹೋಗುತ್ತಿದ್ದಂಥವರು ಸೂಜಿಗೆ ಮುದ್ದು ಕೊಟ್ಟಂತೆ ಅಗಾಧವಾಗಿ ಮಾತಾಡುತಲಿದ್ದರು. ಕ್ರಮೇಣ ಅವಯ್ಯಗೆ ಅದ್ಧವಾದದ್ದೇನೆಂದರೆ ತನ್ನನ್ನು ಗುಹಬಂಧನದಲ್ಲಿ ಯಿರಿಸಲಾಗಿದೆ ಯಂಬ ಸಂಗತಿಯು.. ಪಲಾಯನ ಮಾಡಬೇಕೆಂದರೆ. ಅದೂ ಆಗುತ್ತಿಲ್ಲ.. ಯೇನು ಮಾಡುವುದಪ್ಪಾ ಯಂದು ಗವುಡನು ಯಸನ ಮಾಡುತ್ತಿರಬೇಕಾದರ ವಂದಿಬ್ಬರು ಸಿಪಾಯಿಗಳು ಬಂದು ಕರದೊಯ್ದು ಸ್ಕೂವರನೆದುರು ಹಾಜರುಪಡಿಸಿದರು. ಅದೇ ಮೊದಲ ಸಲಕ್ಕೆ ತಾವಿಬ್ಬರು ಪರಸ್ಪರ ಭೆಟ್ಟಿಯಾದದ್ದು. ವಟ್ಟೆ ಖಡುಗದಂತಿರುವನು ಗವುಡ ಯಂದು ಕುಂಪಣಿ ಅಧಿಕಾರಿಯೂ, ವಳ್ಳಿ ಮೀಟಿ ಯಿದ್ದಂತಿರುವನು ಸ್ಕೂವರು ಯಂದು ಗವುಡನೂ ಅಂದುಕೊಂಡರು. ಸ್ಕೂವರನು ತರುವಾಯ ವಂದರ ಮಾಲ ವಂದರಂತೆ ಪ್ರಶ್ನೆಗಳನ್ನು ಹಾಕುತ್ತ ಹೋದನು. ಅದಕ ಗವುಡನು ಪ್ರತಿಯೊಂದಕ್ಕೂ ಸಮಚಿತ್ತದಿಂದ ಜವಾಬು ಕೊಡುತ್ತ ಹೋದನು. ತಾನು ಕುಂಪಣಿ ಸರಕಾರದ ಯಿರುದ್ಧ ಯಾವುದೇ ಮೂರನ್ನು ಯತ್ತಿ ಕಟ್ಟುತ್ತಿಲ್ಲವೆಂದೂ, ಫಲಾನರುಗಳಲ್ಲಿ ತಲೆದೋರಿರುವ ಅರಾಜಕತೆಯನ್ನು ಹೋಗಲಾಡಿಸುವ ಸಲುವಾಗಿ, ಸುಖ ನೆಮ್ಮದಿ ನೆಲೆಗೊಳ್ಳುವಂತೆ ಮಾಡುವ ಸಲುವಾಗಿ ಸಂಚಾರ ಮಾಡುತ್ತಿರುವುದಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದನು. ಅದಕ್ಕಿದ್ದು ಅಧಿಕಾರಿಯು ಯಿದಕ್ಕೆ ಸರಕಾರದ ಪರವಾನಿಗೆ ಪಡೆಯಬೇಕಿತ್ತಲ್ಲಾ ಯಂದು ಕೇಳಿದ್ದಕ್ಕೆ ಆ ರಣ ಭಯಂಕರ ಬಿರುದಾಂಕಿತನು ಯಾವ ಸರಕಾರ? ಯಾಕ ಪಡೆಯಬೇಕು? ಯಂದು ತುಟಿ ಜಾರಿ ನುಡಿದು ಯಿರುಕಿನಲ್ಲಿ ಸಿಕ್ಕುಕೊಂಡನು. ಅಂಥದೇ ಜವಾಬಿಗಾಗಿ ಯದುರು ನೋಡುತಲಿದ್ದ ಅಧಿಕಾರಿಯು “ಹಾ.. ಯಾವ ಸರಕಾರ? ಯಾಕ ಪರವಾನಿಗಿ?” ಯಂದು<noinclude></noinclude> qlhcwpayh4fzxvlz9po8o96rx1b43a1 320233 320223 2026-05-15T16:38:10Z Shreelatha.Halemane 7642 /* Validated */ 320233 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಅರಮನೆ|right=೩೩೫}} ಮಾದೇವss {{gap}}ಅತ್ತ ಯಿಮ್ಮಡಿ ಸೋಮಶೇಕರ ಮಾರಾಜನ ಕಯ್ಯಂದ ಪಾರಿತೋಷಕ ಪಡೆವು. ಬಾಯಿಯಿಂದ ರಣಭಯಂಕರ ಯಂದು ಹೊಗಳಿಸಿಕೊಂಡಿದ್ದಂಥ ಭರಮನಗೌಡನು ಸೂರ ಸಿಪಾಯಿ ದಂಡೋಜಿ ಜೊತೆ ಅದು ಯಿದು ಮಾತಾಡುತ್ತಾ ಮಾತಾಡುತ್ತಾ ಫಲಾನ ದಿವಸದಂದು ಹರಪನಳ್ಳಿಯ ಬಿಡದಿ ಮನೆಯಲ್ಲಿ ಕಳೆದೆರಡು ದಿವಸಗಳಿಂದ ಸ್ಕೂವರನ ಕರೆಗಾಗಿ ಯದುರು ನೋಡುತಲಿದ್ದನು. ಅಲ್ಲಿ ಆತನು ಯಾರೊಂದಿಗೂ ಕಲೆಯುವಂತಿರಲಿಲ್ಲ... ಪಟ್ಟಣದ ಯಾವ ಕಡೆಗೂ ಹೋಗುವಂತಿರಲಿಲ್ಲ.. ತನ್ನ ಬಳಿಗೆ ಬಂದು ಹೋಗುತ್ತಿದ್ದಂಥವರು ಸೂಜಿಗೆ ಮುದ್ದು ಕೊಟ್ಟಂತೆ ಅಗಾಧವಾಗಿ ಮಾತಾಡುತಲಿದ್ದರು. ಕ್ರಮೇಣ ಅವಯ್ಯಗೆ ಅದ್ಧವಾದದ್ದೇನೆಂದರೆ ತನ್ನನ್ನು ಗುಹಬಂಧನದಲ್ಲಿ ಯಿರಿಸಲಾಗಿದೆ ಯಂಬ ಸಂಗತಿಯು.. ಪಲಾಯನ ಮಾಡಬೇಕೆಂದರೆ. ಅದೂ ಆಗುತ್ತಿಲ್ಲ.. ಯೇನು ಮಾಡುವುದಪ್ಪಾ ಯಂದು ಗವುಡನು ಯಸನ ಮಾಡುತ್ತಿರಬೇಕಾದರ ವಂದಿಬ್ಬರು ಸಿಪಾಯಿಗಳು ಬಂದು ಕರದೊಯ್ದು ಸ್ಕೂವರನೆದುರು ಹಾಜರುಪಡಿಸಿದರು. ಅದೇ ಮೊದಲ ಸಲಕ್ಕೆ ತಾವಿಬ್ಬರು ಪರಸ್ಪರ ಭೆಟ್ಟಿಯಾದದ್ದು. ವಟ್ಟೆ ಖಡುಗದಂತಿರುವನು ಗವುಡ ಯಂದು ಕುಂಪಣಿ ಅಧಿಕಾರಿಯೂ, ವಳ್ಳಿ ಮೀಟಿ ಯಿದ್ದಂತಿರುವನು ಸ್ಕೂವರು ಯಂದು ಗವುಡನೂ ಅಂದುಕೊಂಡರು. ಸ್ಕೂವರನು ತರುವಾಯ ವಂದರ ಮಾಲ ವಂದರಂತೆ ಪ್ರಶ್ನೆಗಳನ್ನು ಹಾಕುತ್ತ ಹೋದನು. ಅದಕ ಗವುಡನು ಪ್ರತಿಯೊಂದಕ್ಕೂ ಸಮಚಿತ್ತದಿಂದ ಜವಾಬು ಕೊಡುತ್ತ ಹೋದನು. ತಾನು ಕುಂಪಣಿ ಸರಕಾರದ ಯಿರುದ್ಧ ಯಾವುದೇ ಮೂರನ್ನು ಯತ್ತಿ ಕಟ್ಟುತ್ತಿಲ್ಲವೆಂದೂ, ಫಲಾನರುಗಳಲ್ಲಿ ತಲೆದೋರಿರುವ ಅರಾಜಕತೆಯನ್ನು ಹೋಗಲಾಡಿಸುವ ಸಲುವಾಗಿ, ಸುಖ ನೆಮ್ಮದಿ ನೆಲೆಗೊಳ್ಳುವಂತೆ ಮಾಡುವ ಸಲುವಾಗಿ ಸಂಚಾರ ಮಾಡುತ್ತಿರುವುದಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದನು. ಅದಕ್ಕಿದ್ದು ಅಧಿಕಾರಿಯು ಯಿದಕ್ಕೆ ಸರಕಾರದ ಪರವಾನಿಗೆ ಪಡೆಯಬೇಕಿತ್ತಲ್ಲಾ ಯಂದು ಕೇಳಿದ್ದಕ್ಕೆ ಆ ರಣ ಭಯಂಕರ ಬಿರುದಾಂಕಿತನು ಯಾವ ಸರಕಾರ? ಯಾಕ ಪಡೆಯಬೇಕು? ಯಂದು ತುಟಿ ಜಾರಿ ನುಡಿದು ಯಿರುಕಿನಲ್ಲಿ ಸಿಕ್ಕುಕೊಂಡನು. ಅಂಥದೇ ಜವಾಬಿಗಾಗಿ ಯದುರು ನೋಡುತಲಿದ್ದ ಅಧಿಕಾರಿಯು “ಹಾ.. ಯಾವ ಸರಕಾರ? ಯಾಕ ಪರವಾನಿಗಿ?” ಯಂದು<noinclude></noinclude> j89ohryr8fv4vyjecnz556jz902uq0v ಪುಟ:ಅರಮನೆ.pdf/೩೬೫ 104 86743 320221 206005 2026-05-15T16:32:41Z Shreesha Sharma 7840 /* Proofread */ 320221 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೩೩೪|right=ಅರಮನೆ}} ಯೇನಾದರು ಹೇಳಲು ಯಿಚ್ಚಿಸುವಿರಾ?” ಯಂದು ಕೇಳಿದರು. ಅದಕ್ಕೆ ಯೇನು ತಾನೆ ಹೇಳಿಯಾನು ರೆಡ್ಡಿ... ಕೃತಜ್ಞತಾಪೂರೈಕವಾಗಿ ತನ್ನ ಪರ ವಾದ ಮಂಡಿಸಿದ ಶಾಸ್ತ್ರಿಗಳ ಕಡೆ ನೋಡಿದ.. ಅವರ ಕಣ್ಣೆಳಗಿನ ಯರಡು ಹನಿಗಳಲ್ಲಿ ತನ್ನ ಪ್ರತಿಬಿಂಬ ಯಿರುವುದು ನೆಮ್ಮದಿಯ ಸಂಗತಿ.. ತನ್ನೆರಡೂ ಕಣ್ಣುಗಳನ್ನು ಕಯ್ಯಗಳೆಂದು ಭಾವಿಸಿ ಜೋಡಿಸಿ ತೆರೆದ.. ತರುವಾಯ ಸರಕಾರದ ಪರ ವಕೀಲ ನೀಲಕಂಠರಾಯರ ಕಡೆ ನೋಡಿದ.. ಆತನ ತಂದೆ ತಾಯಿಗಳು ತನಗೆ ಗೊತ್ತಿಲ್ಲದಿಲ್ಲ... ಅವನ ಮೋದಿನ ಖಡ್ಡಿನೊಳಗ ತನ್ನ ಮಿಸ್ಸೆವುಂಟು. ನೀಲಕಂಠರಾಯ ನೀನು ಚಿರಾಯುವಾಗು''ಯಂದು ಮನದೊಳಗ ಹಾರಯಿಸಿದನು.... {{gap}}ತಾನಿನ್ನೇನು ಹೇಳುವುದಿದೆ? ವಕೀಲರಿಬ್ಬರು ಹೇಳುವುದನ್ನು ಹೇಳಿ ಮುಗಿಸಿರುವಾಗ.. ನ್ಯಾಯಾಧೀಶನ ಯದೆಯೊಳಗ ಯಿರುವ ತೀನ್ನು ತನಗೆ ಗೊತ್ತುಂಟು ಯಂದು ಹೇಳಲೇ? ಕ್ಷಮಿಸಿರೆಂದು ಹೇಳಿ ಬದುಕಿದ್ದು ಸಾಯಲೇ? ಭೀಮಲಿಂಗೇಶ್ವರ ಸ್ವಾಮಿಯ ರಥದ ಮಿಣಿಗೆ ಕನ್ನ ಹಚ್ಚಲಕ ಅವಕಾಶ ಬೇಡಲೇ? ಥಾಮಸು ಮನೋ ಬ್ರಾಝುತ್ವ ಯಂಬ ಪಯಿತ್ರಸಬುಧಕ್ಕೆ ಯರಡು ಬಗೆದನೆಂದು ಹೇಳಲೇ? {{gap}}ಮವುನವಾಗಿ ಹ್ಯಾಮರತ್ತ ದಿಟ್ಟಿಸಿದ. ಹೇಳುವುದೇನೂ ಯಿಲ್ಲವೆಂದು ತಲೆಯನ್ನು ಅಲ್ಲಾಡಿಸಿದ. ಆಯ್ದ ಪ್ರೇಕ್ಷಕರ ಪಯ್ಲಿ ತಾನೋಗ್ಯನಾಗಿದ್ದ ಮುನಸೋಬಯ್ಯ ಯದ್ದು ನಾಗಿರೆಡ್ಡಿ ನಿರಾಪರಾಧಿಯಂದೂ, ಭೇಷರತ್ತಿನ ಮ್ಯಾಲ ಬಿಡುಗಡೆ ಮಾಡಬೇಕೆಂದೂ ಮನವಿ ಸಲ್ಲಿಸಿದ, ನ್ಯಾಯಾಲಯದ ಹುನ್ನಾರು ತನಗೆ ತಿಳಿದಿದ್ದರೂನೂವೆ.... {{gap}}ಕಟ್ಟಿದ ಕಂಠವನ್ನು ಸಡಿಲ ಮಾಡಿ ಹ್ಯಾಂ ರೆಡ್ಡಿಗೆ ಮರಣದಂಡನೆಯನ್ನು ಯಿಧಿಸಿದರು. ಅದೂ ಭೀಮಲಿಂಗೇಶ್ವರ ಸ್ವಾಮಿಯ ರಥೋತ್ಸವದಂದೇ ಶಿಕ್ಷೆಯನ್ನು ಜಾರಿಗೊಳಿಸಬೇಕೆಂದು ಹೇಳಿ ಅಲ್ಲಿಂದ ನಿರಮನ ಮಾಡಿದರು ಸಿಸಿವss {{gap}}ಯಿದು ಅನ್ಯಾಯವೆಂದು ಕೂಗಿದ ಮುನುಸೋಬಯ್ಯ, ಮತ್ತವನ ಸಂಗಡಿಗರನ್ನು ಸಿಪಾಯಿಗಳು ಬಲವಂತವಾಗಿ ಯಳದೊಯ್ದು ಹೊರಗೆ ದೂಡಿದರು... {{gap}}ಮುಂದೇನಾಯಿತಪ್ಪಾ ಅಂದರ.. ಅದೇ ಆಯಿತೆಂಬಲ್ಲಿಗೆ ಸಿವಸಂಕರ<noinclude></noinclude> pk1loi9bdboquecvo4u7k1lifj7b92x 320232 320221 2026-05-15T16:37:47Z Shreelatha.Halemane 7642 /* Validated */ 320232 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೩೩೪|right=ಅರಮನೆ}} ಯೇನಾದರು ಹೇಳಲು ಯಿಚ್ಚಿಸುವಿರಾ?” ಯಂದು ಕೇಳಿದರು. ಅದಕ್ಕೆ ಯೇನು ತಾನೆ ಹೇಳಿಯಾನು ರೆಡ್ಡಿ... ಕೃತಜ್ಞತಾಪೂರೈಕವಾಗಿ ತನ್ನ ಪರ ವಾದ ಮಂಡಿಸಿದ ಶಾಸ್ತ್ರಿಗಳ ಕಡೆ ನೋಡಿದ.. ಅವರ ಕಣ್ಣೆಳಗಿನ ಯರಡು ಹನಿಗಳಲ್ಲಿ ತನ್ನ ಪ್ರತಿಬಿಂಬ ಯಿರುವುದು ನೆಮ್ಮದಿಯ ಸಂಗತಿ.. ತನ್ನೆರಡೂ ಕಣ್ಣುಗಳನ್ನು ಕಯ್ಯಗಳೆಂದು ಭಾವಿಸಿ ಜೋಡಿಸಿ ತೆರೆದ.. ತರುವಾಯ ಸರಕಾರದ ಪರ ವಕೀಲ ನೀಲಕಂಠರಾಯರ ಕಡೆ ನೋಡಿದ.. ಆತನ ತಂದೆ ತಾಯಿಗಳು ತನಗೆ ಗೊತ್ತಿಲ್ಲದಿಲ್ಲ... ಅವನ ಮೋದಿನ ಖಡ್ಡಿನೊಳಗ ತನ್ನ ಮಿಸ್ಸೆವುಂಟು. ನೀಲಕಂಠರಾಯ ನೀನು ಚಿರಾಯುವಾಗು''ಯಂದು ಮನದೊಳಗ ಹಾರಯಿಸಿದನು.... {{gap}}ತಾನಿನ್ನೇನು ಹೇಳುವುದಿದೆ? ವಕೀಲರಿಬ್ಬರು ಹೇಳುವುದನ್ನು ಹೇಳಿ ಮುಗಿಸಿರುವಾಗ.. ನ್ಯಾಯಾಧೀಶನ ಯದೆಯೊಳಗ ಯಿರುವ ತೀನ್ನು ತನಗೆ ಗೊತ್ತುಂಟು ಯಂದು ಹೇಳಲೇ? ಕ್ಷಮಿಸಿರೆಂದು ಹೇಳಿ ಬದುಕಿದ್ದು ಸಾಯಲೇ? ಭೀಮಲಿಂಗೇಶ್ವರ ಸ್ವಾಮಿಯ ರಥದ ಮಿಣಿಗೆ ಕನ್ನ ಹಚ್ಚಲಕ ಅವಕಾಶ ಬೇಡಲೇ? ಥಾಮಸು ಮನೋ ಬ್ರಾಝುತ್ವ ಯಂಬ ಪಯಿತ್ರಸಬುಧಕ್ಕೆ ಯರಡು ಬಗೆದನೆಂದು ಹೇಳಲೇ? {{gap}}ಮವುನವಾಗಿ ಹ್ಯಾಮರತ್ತ ದಿಟ್ಟಿಸಿದ. ಹೇಳುವುದೇನೂ ಯಿಲ್ಲವೆಂದು ತಲೆಯನ್ನು ಅಲ್ಲಾಡಿಸಿದ. ಆಯ್ದ ಪ್ರೇಕ್ಷಕರ ಪಯ್ಲಿ ತಾನೋಗ್ಯನಾಗಿದ್ದ ಮುನಸೋಬಯ್ಯ ಯದ್ದು ನಾಗಿರೆಡ್ಡಿ ನಿರಾಪರಾಧಿಯಂದೂ, ಭೇಷರತ್ತಿನ ಮ್ಯಾಲ ಬಿಡುಗಡೆ ಮಾಡಬೇಕೆಂದೂ ಮನವಿ ಸಲ್ಲಿಸಿದ, ನ್ಯಾಯಾಲಯದ ಹುನ್ನಾರು ತನಗೆ ತಿಳಿದಿದ್ದರೂನೂವೆ.... {{gap}}ಕಟ್ಟಿದ ಕಂಠವನ್ನು ಸಡಿಲ ಮಾಡಿ ಹ್ಯಾಂ ರೆಡ್ಡಿಗೆ ಮರಣದಂಡನೆಯನ್ನು ಯಿಧಿಸಿದರು. ಅದೂ ಭೀಮಲಿಂಗೇಶ್ವರ ಸ್ವಾಮಿಯ ರಥೋತ್ಸವದಂದೇ ಶಿಕ್ಷೆಯನ್ನು ಜಾರಿಗೊಳಿಸಬೇಕೆಂದು ಹೇಳಿ ಅಲ್ಲಿಂದ ನಿರಮನ ಮಾಡಿದರು ಸಿಸಿವss {{gap}}ಯಿದು ಅನ್ಯಾಯವೆಂದು ಕೂಗಿದ ಮುನುಸೋಬಯ್ಯ, ಮತ್ತವನ ಸಂಗಡಿಗರನ್ನು ಸಿಪಾಯಿಗಳು ಬಲವಂತವಾಗಿ ಯಳದೊಯ್ದು ಹೊರಗೆ ದೂಡಿದರು... {{gap}}ಮುಂದೇನಾಯಿತಪ್ಪಾ ಅಂದರ.. ಅದೇ ಆಯಿತೆಂಬಲ್ಲಿಗೆ ಸಿವಸಂಕರ<noinclude></noinclude> hk7nk0vyzzg02vzbogc8hexa4qn7yet ಪುಟ:ಅರಮನೆ.pdf/೩೬೯ 104 86762 320230 206080 2026-05-15T16:36:51Z Shreesha Sharma 7840 /* Proofread */ 320230 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೩೩೮|right=ಅರಮನೆ}} ಅಂಗಯ್ಯಗಳನ್ನು ಅಡ್ಡಯಿಟ್ಟುಕೊಂಡಿತು. ನಡುಲಿಂಟಿ ನರಸಿಮ್ಮನ ನೇತ್ರುತ್ವದಲ್ಲಿ ಯಿಧುರರ ತಂಡವೊಂದು ಕಾಡುಹುವುಗಳ ಆಳಕ್ಕಿಣುಕಿ ಚಿನ್ನಾ ಯಂದು ಬೆದಕಲಾರಂಭಿಸಿತು. {{gap}}ಸವುಭಾಗ್ಯದ ಗುಹಾಜರಿಯ ತಿಕ್ಕಡಿ ಕುಂಪಣಿ ಸರಕಾರದ ಪರಿಚಾರಕರನ್ನೂ ತಗುಲದೆ ಯಿರಲಿಲ್ಲ.. ಕಾರಖನರು ಯೇನೋ ಬರೆಯಲು ಹೋಗಿ ಯೇನೋ ಬರೆಯತೊಡಗಿದರ, ಸೂರ ಸಿಪಾಯಿಗಳಂತೂ ಸೂತಕ ಮುಖ ಹೊತ್ತು ತಿಕ್ಕಲು ತಿಕ್ಕಲಾಗಿ ವರಿಸಲಾರಂಭಿಸಿದರು. ಗಾಯತ್ರಿಜಪದ ಮಮ್ಮೆಯಿಂದ ತನ್ನ ಮನಸ್ಸಿನ ಮ್ಯಾಲ ಹತೋಟಿ ಸಾಧಿಸಿದ್ದ ಮುಖ್ಯ ಸಚೇತಕ ರಾಂಯನು ಮಾತ್ರಯಃಕಶ್ಚಿತ್ ವಂದು ಹೆಣ್ಣಿಗಾಗಿ.. ಯಂದು ಅಪೂರ್ ವಾಕ್ಯಗಳನ್ನು ವುದ್ದಾರ ಮಾಡುತ್ತ ಅಯ್ಯೋ ರಾಮ ರಾಮಾ ಯೇನಿದೇನಿದು ಯನ್ನುತಲಿದ್ದನು. ತಿಕ್ಕಡಿ ತನ್ನನ್ನೂ ಕಾಡಿರದೆ ಯಿರಲಿಲ್ಲ. ರೆಪ್ಪೆಗೆ ರೆಪ್ಪೆ ಅಂಟಿದ್ದೊಂದೇ ತಡ ತಾಯಕ್ಕಳ ದಿವ್ಯರೂಪ ತಾಂಡವ ಆಡುತಲಿದ್ದಿತು. ಕಿವಿಯೊಳಗ ಆಕೆಯ ಮಾತುಗಳೇನು? ಗಾಯನ ದರಬಾರೇನು? ಮೂಟ ಬಡಿಸುತಲಿದ್ದ ತನ್ನ ಧುಮಪತ್ನಿಗೆ ತಾಯಿ ಅಂದುಬಿಟ್ಟನೆಂದ ಮ್ಯಾಲ... ಸಯನ ಗ್ರಹದಲ್ಲಿ ತಾಯಿ ಯಂಬ ಸಬುಧವನ್ನುಚ್ಚಾರಮಾಡಿ ತನ್ನ ಧರುಮ ಪತ್ನಿಯ ಕಾಮಾವೇಶವನ್ನು ಸರಂತ ಯಿಳಿಸಿದನೆಂದ ಮ್ಯಾಲ.. “ನಿಮ್ಮ ತಲೆಯೊಳಗ ಯಾವುದೋ ಬೊಮ್ಮ ಪಿಚಾಚಿ ಹೊಕ್ಕೊಂಡಂಗಯ್ತಿ ಕಿ. ಮೊದಲದನು ಯಿಳುವಿ ಬಂದು ನನ್ ಕೂಡೆ ಸಮುಸಾರ ಮಾಡಿರಿ” ಯಂದು ಖುದ್ದ ತನ್ನ ಧರುಮಪತ್ನಿಯೇ ಸುಗ್ರೀವಾಗ್ನಿಯನ್ನು ಮಿಧಿಸಿದಳೆಂದ ಮ್ಯಾಲ.. ತನ್ನ ಕರುಳಿನ ಕಂದಮ್ಮಗಳೇ ತನ್ನತ್ತ ಪ್ರಸ್ಮಾರಕ ಚಿನ್ನೆಂತುಂಬಂತೆ ನೋಡತೊಡಗಿದವೆಂದ ಮ್ಯಾಲ.. {{gap}}ತನ್ನ ಸೊಗ್ರುಹದೊಳಗ ಅಪಮವುಲ್ಯಗೊಂಡಿರುವ ತಾನು ಸಾಮಾಜಿಕವಾಗಿ ಅಪಮೌಲ್ಯಗೊಳ್ಳುವ ಮೊದಲೇ.. ರಾಯನು ಆ ಕ್ಷಣದಿಂದ ಕನ್ನ ಕಟ್ಟಿ ಕುಂಡಲಿಲ್ಲ... ಪಟ್ಟಣದ ಸವುಭಾಗ್ಯ ಯಲ್ಲಿಗೆ ಹೋಗಯ್ತಿ! ಯದಕ ಹೋಗಯ್ತಿ! ಅದನ್ನು ಪತ್ತೆಹಚ್ಚಿ ಕರೆತರುವ ಸಲುವಾಗಿ ಸರಕಾರಿ ಆಡಳಿತ ಯಂತ್ರವನ್ನು ಬಳಸಿಕೊಳ್ಳಬೇಕೆಂದು ನಿರರಿಸಿದನು. ಸವುಭಾಗ್ಯ ಯಂಬ ಮಾರಿಕ ಸಬುಧದ ಅಗ್ಗವನ್ನು ಬೇರೊಂದು ಬಗೆಯಲ್ಲಿ ಅರಯಿಸಿಕೊಂಡವನಾದ ಯಡ್ಡವರು ರಾಯನ ಕ್ರಿಯಾ ಕಟ್ಟಳೆಗೆ ಹಸಿರು ನಿಶಾನೆ ತೋರಿಸಿದನು.<noinclude></noinclude> r7e8dq44mhbphbuzunhxp0o1hydfl2j 320236 320230 2026-05-15T16:39:12Z Shreelatha.Halemane 7642 /* Validated */ 320236 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೩೩೮|right=ಅರಮನೆ}} ಅಂಗಯ್ಯಗಳನ್ನು ಅಡ್ಡಯಿಟ್ಟುಕೊಂಡಿತು. ನಡುಲಿಂಟಿ ನರಸಿಮ್ಮನ ನೇತ್ರುತ್ವದಲ್ಲಿ ಯಿಧುರರ ತಂಡವೊಂದು ಕಾಡುಹುವುಗಳ ಆಳಕ್ಕಿಣುಕಿ ಚಿನ್ನಾ ಯಂದು ಬೆದಕಲಾರಂಭಿಸಿತು. {{gap}}ಸವುಭಾಗ್ಯದ ಗುಹಾಜರಿಯ ತಿಕ್ಕಡಿ ಕುಂಪಣಿ ಸರಕಾರದ ಪರಿಚಾರಕರನ್ನೂ ತಗುಲದೆ ಯಿರಲಿಲ್ಲ.. ಕಾರಖನರು ಯೇನೋ ಬರೆಯಲು ಹೋಗಿ ಯೇನೋ ಬರೆಯತೊಡಗಿದರ, ಸೂರ ಸಿಪಾಯಿಗಳಂತೂ ಸೂತಕ ಮುಖ ಹೊತ್ತು ತಿಕ್ಕಲು ತಿಕ್ಕಲಾಗಿ ವರಿಸಲಾರಂಭಿಸಿದರು. ಗಾಯತ್ರಿಜಪದ ಮಮ್ಮೆಯಿಂದ ತನ್ನ ಮನಸ್ಸಿನ ಮ್ಯಾಲ ಹತೋಟಿ ಸಾಧಿಸಿದ್ದ ಮುಖ್ಯ ಸಚೇತಕ ರಾಂಯನು ಮಾತ್ರಯಃಕಶ್ಚಿತ್ ವಂದು ಹೆಣ್ಣಿಗಾಗಿ.. ಯಂದು ಅಪೂರ್ ವಾಕ್ಯಗಳನ್ನು ವುದ್ದಾರ ಮಾಡುತ್ತ ಅಯ್ಯೋ ರಾಮ ರಾಮಾ ಯೇನಿದೇನಿದು ಯನ್ನುತಲಿದ್ದನು. ತಿಕ್ಕಡಿ ತನ್ನನ್ನೂ ಕಾಡಿರದೆ ಯಿರಲಿಲ್ಲ. ರೆಪ್ಪೆಗೆ ರೆಪ್ಪೆ ಅಂಟಿದ್ದೊಂದೇ ತಡ ತಾಯಕ್ಕಳ ದಿವ್ಯರೂಪ ತಾಂಡವ ಆಡುತಲಿದ್ದಿತು. ಕಿವಿಯೊಳಗ ಆಕೆಯ ಮಾತುಗಳೇನು? ಗಾಯನ ದರಬಾರೇನು? ಮೂಟ ಬಡಿಸುತಲಿದ್ದ ತನ್ನ ಧುಮಪತ್ನಿಗೆ ತಾಯಿ ಅಂದುಬಿಟ್ಟನೆಂದ ಮ್ಯಾಲ... ಸಯನ ಗ್ರಹದಲ್ಲಿ ತಾಯಿ ಯಂಬ ಸಬುಧವನ್ನುಚ್ಚಾರಮಾಡಿ ತನ್ನ ಧರುಮ ಪತ್ನಿಯ ಕಾಮಾವೇಶವನ್ನು ಸರಂತ ಯಿಳಿಸಿದನೆಂದ ಮ್ಯಾಲ.. “ನಿಮ್ಮ ತಲೆಯೊಳಗ ಯಾವುದೋ ಬೊಮ್ಮ ಪಿಚಾಚಿ ಹೊಕ್ಕೊಂಡಂಗಯ್ತಿ ಕಿ. ಮೊದಲದನು ಯಿಳುವಿ ಬಂದು ನನ್ ಕೂಡೆ ಸಮುಸಾರ ಮಾಡಿರಿ” ಯಂದು ಖುದ್ದ ತನ್ನ ಧರುಮಪತ್ನಿಯೇ ಸುಗ್ರೀವಾಗ್ನಿಯನ್ನು ಮಿಧಿಸಿದಳೆಂದ ಮ್ಯಾಲ.. ತನ್ನ ಕರುಳಿನ ಕಂದಮ್ಮಗಳೇ ತನ್ನತ್ತ ಪ್ರಸ್ಮಾರಕ ಚಿನ್ನೆಂತುಂಬಂತೆ ನೋಡತೊಡಗಿದವೆಂದ ಮ್ಯಾಲ.. {{gap}}ತನ್ನ ಸೊಗ್ರುಹದೊಳಗ ಅಪಮವುಲ್ಯಗೊಂಡಿರುವ ತಾನು ಸಾಮಾಜಿಕವಾಗಿ ಅಪಮೌಲ್ಯಗೊಳ್ಳುವ ಮೊದಲೇ.. ರಾಯನು ಆ ಕ್ಷಣದಿಂದ ಕನ್ನ ಕಟ್ಟಿ ಕುಂಡಲಿಲ್ಲ... ಪಟ್ಟಣದ ಸವುಭಾಗ್ಯ ಯಲ್ಲಿಗೆ ಹೋಗಯ್ತಿ! ಯದಕ ಹೋಗಯ್ತಿ! ಅದನ್ನು ಪತ್ತೆಹಚ್ಚಿ ಕರೆತರುವ ಸಲುವಾಗಿ ಸರಕಾರಿ ಆಡಳಿತ ಯಂತ್ರವನ್ನು ಬಳಸಿಕೊಳ್ಳಬೇಕೆಂದು ನಿರರಿಸಿದನು. ಸವುಭಾಗ್ಯ ಯಂಬ ಮಾರಿಕ ಸಬುಧದ ಅಗ್ಗವನ್ನು ಬೇರೊಂದು ಬಗೆಯಲ್ಲಿ ಅರಯಿಸಿಕೊಂಡವನಾದ ಯಡ್ಡವರು ರಾಯನ ಕ್ರಿಯಾ ಕಟ್ಟಳೆಗೆ ಹಸಿರು ನಿಶಾನೆ ತೋರಿಸಿದನು.<noinclude></noinclude> ogyh6lpaq8cfdyrivhbhbhx4tn8s0jv ಪುಟ:Sankeerana vachanasamputa 14.pdf/೧೯೭ 104 101008 320258 283327 2026-05-16T05:12:10Z Hariprasad Shetty10 7490 320258 proofread-page text/x-wiki <noinclude><pagequality level="1" user="Pragathi. BH" />{{Right|}}೧೩೯ {{Left|}}ವೀರಸಂಗಯ್ಯನ ವಚನ</noinclude> ೧೬೩ ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ ನಿಲುಕದು ಸಂಗನ ಶರಣಸ್ಥಲ. ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ? ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ? ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ..... ಫಲ ನಿಫಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ || ೧೬೪ ಮಲಿನವುಂಟೆ ಮಹಾಸಮುದ್ರಕ್ಕೆ ? ಅರಸಲುಕೋಲೆ ಹಗೆ ಉಂಟೆ ಸರ್ವ ಜೀವದಯಾಳಂಗೆ ? ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ? ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲ ಭೇದವುಂಟ ಅಗ್ರಿ ಆಪೋಷಣಕೆ ? ನಿದ್ರರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯ ಆಧಾರ ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೩ | | ೧೬೫ ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯ ಗೊತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . * ಲಯ್ಯ || ೩೪ || ೧೬೬ ' ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಘಾವದ ಸತಿಯನೆತ್ತಬಲ್ಲರಯ್ಯ ? ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ? ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ ||<noinclude></noinclude> ib81ed0r5z0g8v9peuqzwtwzz2hqf4x 320259 320258 2026-05-16T05:12:24Z Hariprasad Shetty10 7490 320259 proofread-page text/x-wiki <noinclude><pagequality level="1" user="Pragathi. BH" />{{Right|೧೩೯}} {{Left|}}ವೀರಸಂಗಯ್ಯನ ವಚನ</noinclude> ೧೬೩ ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ ನಿಲುಕದು ಸಂಗನ ಶರಣಸ್ಥಲ. ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ? ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ? ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ..... ಫಲ ನಿಫಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ || ೧೬೪ ಮಲಿನವುಂಟೆ ಮಹಾಸಮುದ್ರಕ್ಕೆ ? ಅರಸಲುಕೋಲೆ ಹಗೆ ಉಂಟೆ ಸರ್ವ ಜೀವದಯಾಳಂಗೆ ? ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ? ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲ ಭೇದವುಂಟ ಅಗ್ರಿ ಆಪೋಷಣಕೆ ? ನಿದ್ರರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯ ಆಧಾರ ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೩ | | ೧೬೫ ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯ ಗೊತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . * ಲಯ್ಯ || ೩೪ || ೧೬೬ ' ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಘಾವದ ಸತಿಯನೆತ್ತಬಲ್ಲರಯ್ಯ ? ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ? ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ ||<noinclude></noinclude> dn1iw8z274te5oh3sjgpp14g8gud858 320260 320259 2026-05-16T05:13:29Z Hariprasad Shetty10 7490 320260 proofread-page text/x-wiki <noinclude><pagequality level="1" user="Pragathi. BH" />{{Right|೧೩೯}} {{Left|}}ವೀರಸಂಗಯ್ಯನ ವಚನ</noinclude> ೧೬೩ ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ ನಿಲುಕದು ಸಂಗನ ಶರಣಸ್ಥಲ. ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ? ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ? ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ..... ಫಲ ನಿಫಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೨ || ೧೬೪ ಮಲಿನವುಂಟೆ ಮಹಾಸಮುದ್ರಕ್ಕೆ ? ಅರಸಲುಕೋಲೆ ಹಗೆ ಉಂಟೆ ಸರ್ವ ಜೀವದಯಾಳಂಗೆ ? ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ? ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲ ಭೇದವುಂಟ ಅಗ್ರಿ ಆಪೋಷಣಕೆ ? ನಿದ್ರರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯ ಆಧಾರ ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೩ | | ೧೬೫ ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯ ಗೊತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . * ಲಯ್ಯ || ೩೪ || ೧೬೬ ' ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಘಾವದ ಸತಿಯನೆತ್ತಬಲ್ಲರಯ್ಯ ? ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ? ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ ||<noinclude></noinclude> 7ywo0bgo4gsd0c04z4f034ytrg9lqu6 320261 320260 2026-05-16T05:14:15Z Hariprasad Shetty10 7490 320261 proofread-page text/x-wiki <noinclude><pagequality level="1" user="Pragathi. BH" />{{Right|೧೩೯}} {{Left|}}ವೀರಸಂಗಯ್ಯನ ವಚನ</noinclude> {{center|೧೬೩}} ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ<br /> ನಿಲುಕದು ಸಂಗನ ಶರಣಸ್ಥಲ.<br /> ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ?<br /> ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ?<br /> ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ.....<br /> ಫಲ ನಿಫಲ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೨ || ೧೬೪ ಮಲಿನವುಂಟೆ ಮಹಾಸಮುದ್ರಕ್ಕೆ ? ಅರಸಲುಕೋಲೆ ಹಗೆ ಉಂಟೆ ಸರ್ವ ಜೀವದಯಾಳಂಗೆ ? ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ? ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲ ಭೇದವುಂಟ ಅಗ್ರಿ ಆಪೋಷಣಕೆ ? ನಿದ್ರರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯ ಆಧಾರ ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೩ | | ೧೬೫ ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯ ಗೊತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . * ಲಯ್ಯ || ೩೪ || ೧೬೬ ' ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಘಾವದ ಸತಿಯನೆತ್ತಬಲ್ಲರಯ್ಯ ? ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ? ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ ||<noinclude></noinclude> qru2iihsb99tb1ijopjq64b5pbfgqb5 320263 320261 2026-05-16T05:19:09Z Hariprasad Shetty10 7490 320263 proofread-page text/x-wiki <noinclude><pagequality level="1" user="Pragathi. BH" />{{Right|೧೩೯}} {{Left|}}ವೀರಸಂಗಯ್ಯನ ವಚನ</noinclude> {{Left|೧೬೩}} ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ<br /> ನಿಲುಕದು ಸಂಗನ ಶರಣಸ್ಥಲ.<br /> ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ?<br /> ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ?<br /> ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ.....<br /> ಫಲ ನಿಫಲ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೨ || ೧೬೪ ಮಲಿನವುಂಟೆ ಮಹಾಸಮುದ್ರಕ್ಕೆ ? ಅರಸಲುಕೋಲೆ ಹಗೆ ಉಂಟೆ ಸರ್ವ ಜೀವದಯಾಳಂಗೆ ? ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ? ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲ ಭೇದವುಂಟ ಅಗ್ರಿ ಆಪೋಷಣಕೆ ? ನಿದ್ರರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯ ಆಧಾರ ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೩ | | ೧೬೫ ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯ ಗೊತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . * ಲಯ್ಯ || ೩೪ || ೧೬೬ ' ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಘಾವದ ಸತಿಯನೆತ್ತಬಲ್ಲರಯ್ಯ ? ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ? ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ ||<noinclude></noinclude> s7emuxa36qqj6juugu9mco77xwqvb75 320264 320263 2026-05-16T05:19:31Z Hariprasad Shetty10 7490 320264 proofread-page text/x-wiki <noinclude><pagequality level="1" user="Pragathi. BH" />{{Right|೧೩೯}} {{Left|}}ವೀರಸಂಗಯ್ಯನ ವಚನ</noinclude> {{Left|೧೬೩}} {{gap}}ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ<br /> ನಿಲುಕದು ಸಂಗನ ಶರಣಸ್ಥಲ.<br /> ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ?<br /> ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ?<br /> ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ.....<br /> ಫಲ ನಿಫಲ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೨ || ೧೬೪ ಮಲಿನವುಂಟೆ ಮಹಾಸಮುದ್ರಕ್ಕೆ ? ಅರಸಲುಕೋಲೆ ಹಗೆ ಉಂಟೆ ಸರ್ವ ಜೀವದಯಾಳಂಗೆ ? ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ? ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲ ಭೇದವುಂಟ ಅಗ್ರಿ ಆಪೋಷಣಕೆ ? ನಿದ್ರರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯ ಆಧಾರ ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೩ | | ೧೬೫ ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯ ಗೊತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . * ಲಯ್ಯ || ೩೪ || ೧೬೬ ' ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಘಾವದ ಸತಿಯನೆತ್ತಬಲ್ಲರಯ್ಯ ? ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ? ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ ||<noinclude></noinclude> 93zu0bp3in31pxi1meoc1pxyf6t600w 320265 320264 2026-05-16T05:23:11Z Hariprasad Shetty10 7490 320265 proofread-page text/x-wiki <noinclude><pagequality level="1" user="Pragathi. BH" />{{Right|೧೩೯}} {{Left|}}ವೀರಸಂಗಯ್ಯನ ವಚನ</noinclude> {{Left|೧೬೩}} {{gap}}ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ<br /> ನಿಲುಕದು ಸಂಗನ ಶರಣಸ್ಥಲ.<br /> ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ?<br /> ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ?<br /> ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ.....<br /> ಫಲ ನಿಫಲ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೨ || {{Left|೧೬೪}} {{gap}}ಮಲಿನವುಂಟೆ ಮಹಾಸಮುದ್ರಕ್ಕೆ ?<br /> ಅರಸಲು ಕೊಲೆ ಹಗೆ ಉಂಟೆ ಸರ್ವ ಜೀವದಯಾಳ್ದಂಗೆ ?<br /> ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ?<br /> ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲು? ಭೇದವುಂಟೆ ಅಗ್ನಿ ಆಪೋಷಣಕೆ ?<br /> ನಿದ್ದರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯೆ ಆಧಾರ<br /> ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. || ೩೩ | | ೧೬೫ ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯ ಗೊತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . * ಲಯ್ಯ || ೩೪ || ೧೬೬ ' ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಘಾವದ ಸತಿಯನೆತ್ತಬಲ್ಲರಯ್ಯ ? ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ? ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ ||<noinclude></noinclude> kn99fjboddmb8l3o5ypn296slbgd5g7 320277 320265 2026-05-16T07:13:21Z Pragathi. BH 7585 /* Proofread */ 320277 proofread-page text/x-wiki <noinclude><pagequality level="3" user="Pragathi. BH" /> {{rh|center=|left=ವೀರಸಂಗಯ್ಯನ ವಚನ|right=೧೩೯}}</noinclude> {{Left|೧೬೩}} {{gap}}ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ<br /> ನಿಲುಕದು ಸಂಗನ ಶರಣಸ್ಥಲ.<br /> ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ?<br /> ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ?<br /> ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ.....<br /> ಫಲ ನಿಫಲ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೨ || {{Left|೧೬೪}} {{gap}}ಮಲಿನವುಂಟೆ ಮಹಾಸಮುದ್ರಕ್ಕೆ ?<br /> ಅರಸಲು ಕೊಲೆ ಹಗೆ ಉಂಟೆ ಸರ್ವ ಜೀವದಯಾಳ್ದಂಗೆ ?<br /> ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ?<br /> ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲು? ಭೇದವುಂಟೆ ಅಗ್ನಿ ಆಪೋಷಣಕೆ ?<br /> ನಿದ್ದರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯೆ ಆಧಾರ<br /> ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. || ೩೩ | | ೧೬೫ ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯ ಗೊತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . * ಲಯ್ಯ || ೩೪ || ೧೬೬ ' ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಘಾವದ ಸತಿಯನೆತ್ತಬಲ್ಲರಯ್ಯ ? ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ? ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ ||<noinclude></noinclude> if1p72zfgrz9m0hs5kcgwwgq0fvkgwm 320278 320277 2026-05-16T07:14:07Z Pragathi. BH 7585 320278 proofread-page text/x-wiki <noinclude><pagequality level="3" user="Pragathi. BH" /> {{rh|center=|left=ವೀರಸಂಗಯ್ಯನ ವಚನ|right=೧೩೯}}</noinclude> <poem> {{Left|೧೬೩}} {{gap}}ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ<br /> ನಿಲುಕದು ಸಂಗನ ಶರಣಸ್ಥಲ.<br /> ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ?<br /> ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ?<br /> ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ.....<br /> ಫಲ ನಿಫಲ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೨ || {{Left|೧೬೪}} {{gap}}ಮಲಿನವುಂಟೆ ಮಹಾಸಮುದ್ರಕ್ಕೆ ?<br /> ಅರಸಲು ಕೊಲೆ ಹಗೆ ಉಂಟೆ ಸರ್ವ ಜೀವದಯಾಳ್ದಂಗೆ ?<br /> ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ?<br /> ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲು? ಭೇದವುಂಟೆ ಅಗ್ನಿ ಆಪೋಷಣಕೆ ?<br /> ನಿದ್ದರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯೆ ಆಧಾರ<br /> ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. || ೩೩ | | ೧೬೫ ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯ ಗೊತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . * ಲಯ್ಯ || ೩೪ || ೧೬೬ ' ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಘಾವದ ಸತಿಯನೆತ್ತಬಲ್ಲರಯ್ಯ ? ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ? ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ || </poem><noinclude></noinclude> 0olog5ujv6oucqwaxqawb9febjsqnvp 320279 320278 2026-05-16T07:14:35Z Pragathi. BH 7585 320279 proofread-page text/x-wiki <noinclude><pagequality level="3" user="Pragathi. BH" /> {{rh|center=|left=ವೀರಸಂಗಯ್ಯನ ವಚನ|right=೧೩೯}}</noinclude> {{Left|೧೬೩}} {{gap}}ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ<br /> ನಿಲುಕದು ಸಂಗನ ಶರಣಸ್ಥಲ.<br /> ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ?<br /> ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ?<br /> ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ.....<br /> ಫಲ ನಿಫಲ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೨ || {{Left|೧೬೪}} {{gap}}ಮಲಿನವುಂಟೆ ಮಹಾಸಮುದ್ರಕ್ಕೆ ?<br /> ಅರಸಲು ಕೊಲೆ ಹಗೆ ಉಂಟೆ ಸರ್ವ ಜೀವದಯಾಳ್ದಂಗೆ ?<br /> ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ?<br /> ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲು? ಭೇದವುಂಟೆ ಅಗ್ನಿ ಆಪೋಷಣಕೆ ?<br /> ನಿದ್ದರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯೆ ಆಧಾರ<br /> ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. || ೩೩ | | ೧೬೫ ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯ ಗೊತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . * ಲಯ್ಯ || ೩೪ || ೧೬೬ ' ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಘಾವದ ಸತಿಯನೆತ್ತಬಲ್ಲರಯ್ಯ ? ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ? ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ ||<noinclude></noinclude> if1p72zfgrz9m0hs5kcgwwgq0fvkgwm 320280 320279 2026-05-16T07:15:35Z Pragathi. BH 7585 320280 proofread-page text/x-wiki <noinclude><pagequality level="3" user="Pragathi. BH" /> {{rh|center=|left=ವೀರಸಂಗಯ್ಯನ ವಚನ|right=೧೩೯}}</noinclude> {{Left|೧೬೩}} {{gap}}ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ<br /> ನಿಲುಕದು ಸಂಗನ ಶರಣಸ್ಥಲ.<br /> ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ?<br /> ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ?<br /> ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ.....<br /> ಫಲ ನಿಫಲ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೨ || {{Left|೧೬೪}} {{gap}}ಮಲಿನವುಂಟೆ ಮಹಾಸಮುದ್ರಕ್ಕೆ ?<br /> ಅರಸಲು ಕೊಲೆ ಹಗೆ ಉಂಟೆ ಸರ್ವ ಜೀವದಯಾಳ್ದಂಗೆ ?<br /> ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ?<br /> ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲು? ಭೇದವುಂಟೆ ಅಗ್ನಿ ಆಪೋಷಣಕೆ ?<br /> ನಿದ್ದರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯೆ ಆಧಾರ<br /> ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. || ೩೩ | | {{center|೧೬೫}} ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯ ಗೊತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . * ಲಯ್ಯ || ೩೪ || {{center|೧೬೬}} ' ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಘಾವದ ಸತಿಯನೆತ್ತಬಲ್ಲರಯ್ಯ ? ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ? ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ ||<noinclude></noinclude> 4md448rfqxqran4c270r69ret9y1629 320281 320280 2026-05-16T07:23:25Z Pragathi. BH 7585 320281 proofread-page text/x-wiki <noinclude><pagequality level="3" user="Pragathi. BH" /> {{rh|center=|left=ವೀರಸಂಗಯ್ಯನ ವಚನ|right=೧೩೯}}</noinclude> {{Left|೧೬೩}} {{gap}}ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ<br /> ನಿಲುಕದು ಸಂಗನ ಶರಣಸ್ಥಲ.<br /> ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ?<br /> ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ?<br /> ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ.....<br /> ಫಲ ನಿಫಲ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೨ || {{Left|೧೬೪}} {{gap}}ಮಲಿನವುಂಟೆ ಮಹಾಸಮುದ್ರಕ್ಕೆ ?<br /> ಅರಸಲು ಕೊಲೆ ಹಗೆ ಉಂಟೆ ಸರ್ವ ಜೀವದಯಾಳ್ದಂಗೆ ?<br /> ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ?<br /> ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲು? ಭೇದವುಂಟೆ ಅಗ್ನಿ ಆಪೋಷಣಕೆ ?<br /> ನಿದ್ದರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯೆ ಆಧಾರ<br /> ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. || ೩೩ | | {{center|೧೬೫}} {{gap}}ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ.<br /> ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ<br /> ಘತಘತಯ ಗೊತ್ರ ಅಜಾತಜಂಗಮಹಿತ<br /> ಅನಾದಿ ಗೊಹೇಶ್ವರಲಿಂಗಕ್ಕೆ<br /> ಆಗಮವಿಲ್ಲ ನಿಗಮವಿಲ್ಲ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೪ ||<br /> {{center|೧೬೬}} {{gap}}' ಯದ್ಭಾವಂ ತದ್ಭವತಿ' ಎಂಬರಲ್ಲದೆ<br /> ತದ್ಘಾವದ ಸತಿಯನೆತ್ತಬಲ್ಲರಯ್ಯ ?<br /> ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ?<br /> ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ?<br /> ಯದ್ಭಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ ||<noinclude></noinclude> m90ziglmqr9c29r5n35gcbwwefsyl0g ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 320257 319790 2026-05-16T01:06:04Z A826 6806 320257 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 36530<br><small>ದತ್ತಾಂಶ ಪಡೆದ ಸಮಯ: 2026-05-16 01:03:58 UTC / 2026-05-16 06:33:58 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Pragathi. BH|Pragathi. BH]] || 0 || 0 || 8505 (9077) || 0 || 0 || 7983 || 123 (246) || 378 (1134) || 8933 || '''9077''' |- | 2 || [[Special:Contributions/Shreelatha.Halemane|Shreelatha.Halemane]] || 0 || 0 || 6558 (8835) || 0 || 0 || 4890 || 800 (1600) || 811 (2433) || 6934 || '''8835''' |- | 3 || [[Special:Contributions/Shreesha Sharma|Shreesha Sharma]] || 0 || 0 || 3177 (4148) || 0 || 0 || 2097 || 358 (716) || 324 (972) || 3700 || '''4148''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 528 (1254) || 0 || 0 || 70 || 63 (126) || 390 (1170) || 654 || '''1254''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/A826|A826]] || 10740 || 1 || 190 (236) || 26 || 0 || 4 || 4 (8) || 27 (81) || 10970 || '''260''' |- | 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150''' |- | 10 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109''' |- | 11 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 12 || [[Special:Contributions/Hariprasad Shetty10|Hariprasad Shetty10]] || 0 || 0 || 46 (88) || 0 || 0 || 0 || 17 (34) || 15 (45) || 206 || '''88''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] 4xdtyfs96lns49rchedf1skljyqkant ಪುಟ:ನಿತ್ಯ ನೇಮಾವಲಿ.pdf/೧೩೭ 104 101986 320271 284359 2026-05-16T06:07:14Z Hariprasad Shetty10 7490 320271 proofread-page text/x-wiki <noinclude><pagequality level="1" user="Shreesha Sharma" />{{center|ನಿತ್ಯನೇಮಾವಲಿ}}</noinclude>ಶಬ್ದಾತೀತ. ಸದ್ಗುರು ಹೇಳಿದ ಸಾಧನೆಯನ್ನು ಶ್ರದ್ಧೆಯಿಂದ ಮಾಡಿದರೆ ಸಾಕ್ಷಾತ್ಕಾರವು ಖಂಡಿತ. ಇದು ರಾಮೀರಾಮದಾಸರ ಅನುಭವ. {{center|(2)}} ಪಂಚಪ್ರಾಣವೆಂಬ ಆರತಿ ಮಾಡಿರಿ ಪಂಚತತ್ವವೆಂಬ ಬತ್ತಿ ಹಚ್ಚಿರಿ ಚಂಚಲವೃತ್ತಿಯೆಂಬ ಧೃತವನ್ಹಾಕಿರಿ ಪಂಚಕರ್ಮೇಂದ್ರಿಯಗಳ ದಹನ ಮಾಡಿರಿ || ೧ || ಜಯದೇವ ಜಯದೇವ ಜಯಪರಮಹಂಸಾ, ಗುರುಪರಮಹಂಸಾ ದಯಮಾಡಿದಯ್ಯಾ ನೀ ಎನಗೆ ಸರ್ವಶಾ|| ಜಯದೇವ ಜಯದೇವ || ಪ || ಆದರ ಪರಸಿ ಆರು ಚಕ್ರಾ ಮೀರಿಸಿದಿ ವೇದಕ ನಿಲುಕದ ನಿಜಗುಣರತ್ನಾ ತೋರಿಸಿದಿ ಆದಿನಾಥನಲ್ಲಿ ಲಕ್ಷವಿಡಿಸಿದಿ ನಾದದ ಮೂಲ ಓಂಕಾರದೊಳುಬೆರಿಸಿದಿಗೆ ಜಯದೇವ ಜಯದೇವ || ೨ || ತಂದೆಮಲ್ಲ ನೀ ಸದ್ಗುರುನಾಥಾ ಕಂದಗೆ ಜ್ಞಾನದ ವಸ್ತು ಕೊಟ್ಟಂಥ ದಾತಾ| ಸಂದೇಹ ಬಿಡಿಸಿ ಎನಗೆ ಮಾಡಿದ ಪ್ರಖ್ಯಾತಾ ಛಂದದಿ ಭಜಿಸುವ ನಾ ನಿನಗೆ ಅವಧೂತಾ|| ಜಯದೇವ ಜಯದೇವ || ೩ || {{center|(೪)}} ಆರತೀ ಕರಾ ಹೋ ಸಜ್ಜನ ದೈತಭಾವ ಟಾಕ್ಸನ || ೪ || ವಿವೇಕ ಸದ್ಭುದ್ಧಿ ಸದ್ಭುದ್ಧಿ! ಲಕ್ಷ ಲಾವುನೀ ಪದೀ ಅಂತುಕರಣ ಮನಶುದ್ಧಿ| {{center|೧೩೬}}<noinclude></noinclude> jel82rukryjdnjejgapewj2ha4veuwd 320272 320271 2026-05-16T06:10:25Z Hariprasad Shetty10 7490 320272 proofread-page text/x-wiki <noinclude><pagequality level="1" user="Shreesha Sharma" />{{center|ನಿತ್ಯನೇಮಾವಲಿ}}</noinclude>ಶಬ್ದಾತೀತ. ಸದ್ಗುರು ಹೇಳಿದ ಸಾಧನೆಯನ್ನು ಶ್ರದ್ಧೆಯಿಂದ ಮಾಡಿದರೆ ಸಾಕ್ಷಾತ್ಕಾರವು ಖಂಡಿತ. ಇದು ರಾಮೀರಾಮದಾಸರ ಅನುಭವ. {{center|(2)}} ಪಂಚಪ್ರಾಣವೆಂಬ ಆರತಿ ಮಾಡಿರಿ ಪಂಚತತ್ವವೆಂಬ ಬತ್ತಿ ಹಚ್ಚಿರಿ ಚಂಚಲವೃತ್ತಿಯೆಂಬ ಘೃತವನ್ಹಾಕಿರಿ| ಪಂಚಕರ್ಮೇಂದ್ರಿಯಗಳ ದಹನ ಮಾಡಿರಿ || ೧ || ಜಯದೇವ ಜಯದೇವ ಜಯಪರಮಹಂಸಾ, ಗುರುಪರಮಹಂಸಾ ದಯಮಾಡಿದಯ್ಯಾ ನೀ ಎನಗೆ ಸರ್ವೇಶಾ|| ಜಯದೇವ ಜಯದೇವ || ಪ || ಆದರ ಪರಸಿ ಆರು ಚಕ್ರಾ ಮೀರಿಸಿದಿ| ವೇದಕೆ ನಿಲುಕದ ನಿಜಗುಣರತ್ನಾ ತೋರಿಸಿದಿ| ಆದಿನಾಥನಲ್ಲಿ ಲಕ್ಷವಿಡಿಸಿದಿ| ನಾದದ ಮೂಲ ಓಂಕಾರದೊಳುಬೆರಿಸಿದಿ|| ಜಯದೇವ ಜಯದೇವ || ೨ || ತಂದೆತ್ರಿಮಲ್ಲ ನೀ ಸದ್ಗುರುನಾಥಾ | ಕಂದಗೆ ಜ್ಞಾನದ ವಸ್ತು ಕೊಟ್ಟಂಥ ದಾತಾ| ಸಂದೇಹ ಬಿಡಿಸಿ ಎನಗೆ ಮಾಡಿದಿ ಪ್ರಖ್ಯಾತಾ| ಛಂದದಿ ಭಜಿಸುವೆ ನಾ ನಿನಗೆ ಅವಧೂತಾ|| ಜಯದೇವ ಜಯದೇವ || ೩ || {{center|(೪)}} ಆರತೀ ಕರಾ ಹೋ ಸಜ್ಜನ ದೈತಭಾವ ಟಾಕೂನ || ಧೃ || ವಿವೇಕ ಸದ್ಭುದ್ಧಿ ! ಸದ್ಭುದ್ಧಿ! ಲಕ್ಷ ಲಾವುನೀ ಪದೀ | ಅಂತುಕರಣ ಮನಶುದ್ಧಿ| {{center|೧೩೬}}<noinclude></noinclude> 0av2vltysqqz06i9e58apz5kyfp7y8v 320273 320272 2026-05-16T06:10:33Z Hariprasad Shetty10 7490 /* Proofread */ 320273 proofread-page text/x-wiki <noinclude><pagequality level="3" user="Hariprasad Shetty10" />{{center|ನಿತ್ಯನೇಮಾವಲಿ}}</noinclude>ಶಬ್ದಾತೀತ. ಸದ್ಗುರು ಹೇಳಿದ ಸಾಧನೆಯನ್ನು ಶ್ರದ್ಧೆಯಿಂದ ಮಾಡಿದರೆ ಸಾಕ್ಷಾತ್ಕಾರವು ಖಂಡಿತ. ಇದು ರಾಮೀರಾಮದಾಸರ ಅನುಭವ. {{center|(2)}} ಪಂಚಪ್ರಾಣವೆಂಬ ಆರತಿ ಮಾಡಿರಿ ಪಂಚತತ್ವವೆಂಬ ಬತ್ತಿ ಹಚ್ಚಿರಿ ಚಂಚಲವೃತ್ತಿಯೆಂಬ ಘೃತವನ್ಹಾಕಿರಿ| ಪಂಚಕರ್ಮೇಂದ್ರಿಯಗಳ ದಹನ ಮಾಡಿರಿ || ೧ || ಜಯದೇವ ಜಯದೇವ ಜಯಪರಮಹಂಸಾ, ಗುರುಪರಮಹಂಸಾ ದಯಮಾಡಿದಯ್ಯಾ ನೀ ಎನಗೆ ಸರ್ವೇಶಾ|| ಜಯದೇವ ಜಯದೇವ || ಪ || ಆದರ ಪರಸಿ ಆರು ಚಕ್ರಾ ಮೀರಿಸಿದಿ| ವೇದಕೆ ನಿಲುಕದ ನಿಜಗುಣರತ್ನಾ ತೋರಿಸಿದಿ| ಆದಿನಾಥನಲ್ಲಿ ಲಕ್ಷವಿಡಿಸಿದಿ| ನಾದದ ಮೂಲ ಓಂಕಾರದೊಳುಬೆರಿಸಿದಿ|| ಜಯದೇವ ಜಯದೇವ || ೨ || ತಂದೆತ್ರಿಮಲ್ಲ ನೀ ಸದ್ಗುರುನಾಥಾ | ಕಂದಗೆ ಜ್ಞಾನದ ವಸ್ತು ಕೊಟ್ಟಂಥ ದಾತಾ| ಸಂದೇಹ ಬಿಡಿಸಿ ಎನಗೆ ಮಾಡಿದಿ ಪ್ರಖ್ಯಾತಾ| ಛಂದದಿ ಭಜಿಸುವೆ ನಾ ನಿನಗೆ ಅವಧೂತಾ|| ಜಯದೇವ ಜಯದೇವ || ೩ || {{center|(೪)}} ಆರತೀ ಕರಾ ಹೋ ಸಜ್ಜನ ದೈತಭಾವ ಟಾಕೂನ || ಧೃ || ವಿವೇಕ ಸದ್ಭುದ್ಧಿ ! ಸದ್ಭುದ್ಧಿ! ಲಕ್ಷ ಲಾವುನೀ ಪದೀ | ಅಂತುಕರಣ ಮನಶುದ್ಧಿ| {{center|೧೩೬}}<noinclude></noinclude> ckqnybkd6j9aoqqww3u572ezjd80ol7