ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.2
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:Abhaya.pdf/೨೮೭
104
9172
320706
251002
2026-05-19T04:30:13Z
Shreelatha.Halemane
7642
/* Validated */
320706
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=೨೮೨}}
{{gap}}ಅಷ್ಟರಲ್ಲಿ ಹುಡುಗಿಯೊಬ್ಬಳು ಜಿಲೇಬಿ ಬಡಿಸುತ್ತ ಬಂದಳು. ಆಗ<br>
ಜಲಜೆಗೆ ತುಂಗಮ್ಮನೆಂದಳು :<br>
{{gap}}"ನಿನ್ನ ಬಾಯಿ ತೆರೆ ಜಲಜ ಜಿಲೇಬಿ ತುರುಕ್ತೀನಿ ಅದರೊಳಕ್ಕೆ.<br>
ಆಗಲಾದರೂ ನೀನು ಮಾತಾಡೋದು ನಿಲ್ಲುತ್ತೆ"<br>
{{gap}}ಆದರೆ ತುಂಗಮ್ಮನ ಮುಖ ಅಷ್ಟರಲ್ಲಿ ಜಿಲೇಬಿಯಷ್ಟೆ ಕೆಂಪಗಾಗಿತ್ತು.<br>
ಆಸೆಯ ಅಭಿಮಾನದ ದೃಷ್ಟಿಯಿಂದ ಆ ಮುಖವನ್ನೆ ನೋಡುತ್ತ ಜಲಜ<br>
ಅ೦ದಳು :<br>
{{gap}}“ನಿನ್ನ ಮುಖವೇ ಜಿಲೇಬಿ ಹಾಗಿದೆಯಲ್ಲೇ ನನ್ನಕ್ಕ ! ನೀನು<br>
ಗಲಾಟೆ ಮಾಡ್ಡೆ ಇರೋ ಹಾಗಿದ್ರೆ ಅದನ್ನೆ ತಿಂತೀನಿ"<br>
{{gap}}"ಸಾಕು ಸಾಕೇ ” ಎ೦ ದ ರು ಸರಸಮ್ಮ; “ಹುಚ್ಚು ಮಾತು !<br>
ಎಷ್ಟೂಂತ ಅದನ್ನೇ-!"<br>
{{gap}}ಹಾಗೆ ಹೇಳಿ ಸರಸಮ್ಮ ಮೌನವಾದರು ಆದರೆ ಅವ್ಯಕ್ತವಾದೊಂದು<br>
ಭಯ ಅವರನ್ನು ಹಿಡಿದಲುಗಿಸಿತು. ತಾವು ಒಬ್ಬಂಟಿಗಳೇ ಎಂಬ ಭಾವನೆ<br>
ಅವರಿಗಾಯಿತು ಆದರೆ ಮರುಕ್ಷಣವೆ, 'ನಾನೂ ಸರಿಯೆ ! ಏನೋಮಾತು<br>
ಕೇಳಿ ಏನೋ ವಿಚಾರ' ಎಂದು ತಮ್ಮನ್ನು ತಾವೇ ಗದರಿಸಿಕೊಂಡು ನಿಶ್ಚಿಂತೆ<br>
ಯಾಗಿ ಊಟ ಮಾಡಿದರು.<br>
{{gap}}ದೀಪ ಆರಿಸಿ ಹುಡುಗಿಯರೆಲ್ಲ ಮಲಗಿಕೊಂಡಾಗ ಜಲಜ ಪಕ್ಕಕ್ಕೆ<br>
ಕೈಚಾಚಿ ತುಂಗಮ್ಮನ ಬೆರಳುಗಳನ್ನು ಮುಚ್ಚಿ ಅವುಗಳೊಡನೆ ಆಟ<br>
ವಾಡಿದಳು.<br>
{{gap}}"ಅಕ್ಕ, ಅವರು ಎಷ್ಟು ಚೆನ್ನಾಗಿದ್ದಾರೆ ನೋಡೋಕೆ, ಅಲ್ಲ ?”<br>
{{gap}}ಯಾರು- ಎನ್ನುವುದು ತಿಳಿದರೂ ತುಂಗಮ್ಮ ಕೇಳಿದಳು :<br>
{{gap}}"ಯಾರೇ ?"<br>
{{gap}}"ಸಾಕು ಜಂಭ ! ರಾಜಕುಮಾರ-ಇನ್ನು ಯಾರು ? ಬಂದು ನಿನ್ನ<br>
ಮೆಚ್ಚಿಕೊಂಡು ಏನೋ ಅ೦ದು ಹೋದ್ರಲ್ಲ”<br>
{{gap}}"ಸಾಕು ಸುಮ್ನಿರು!"<br>
{{gap}}"ರಾಜಕುಮಾರ-"<br><noinclude><references/></noinclude>
ko2177vwm52gdtqvehlvc0nss55c4xt
ಪುಟ:Abhaya.pdf/೨೮೦
104
9181
320700
250369
2026-05-19T04:16:08Z
Shreelatha.Halemane
7642
/* Validated */
320700
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|right=೨೭೫}}
{{gap}}"ಘನ ಶಾಮಸುಂದರಾ ಶ್ರೀಕರಾ ಅರುಣೋದಯ ಝೂಲ....”<br>
{{gap}}ಮಧುರ ಕಂಠದಿಂದ ಹಾಡುತಿದ್ದಳು ಪಾರ್ವತಿ, ಯಾರೂ ಹೇಳ<br>
ದೆಯೇ, 'ಹಾಡು - ಹಾಡು' ಎಂದು ಕೇಳದೆಯೇ.<br>
{{gap}}"ಆನಂದ ಕಂದಾ-"<br>
{{gap}}ನೈಸರ್ಗಿಕ ಶೋಭೆಗೆ ಮಾನವನಿರ್ಮಿತ ಸೌಂದರ್ಯ ಲೇಪನವಾದ<br>
ಹಾಗಾಯಿತು ವಾತಾವರಣ....<br>
{{gap}}"ಇಂಥ ಘಳಿಗೆಯಲ್ಲಿ ಲೋಕವೆಲ್ಲ ಸುಂದರವಾಗಿಯೇ ಇರತ್ತೆ ಅಂತ<br>
ಅನಿಸುತ್ತೆ ಅಲ್ವೆ ತುಂಗಾ ?”<br>
{{gap}}“ಹೌದು ದೊಡ್ಡಮ್ಮ ಈ ಸೌಂದರ್ಯ ಸದಾಕಾಲವೂ ಹೀಗೆಯೇ<br>
ಇರಲಿ ಅಂತಾನೂ ಅನಿಸುತ್ತೆ.<br>
{{gap}}-ಆ ಬಳಿಕ ಗಜಿಬಿಜಿ, ಗುಲ್ಲು, ಸದ್ದು.<br>
{{gap}}ದಿನ ನಿತ್ಯದ ಜೀವನ ಚಕ್ರ ತಿರುಗಲು ಆರಂಭ<br>
{{gap}}............. ..<br>
{{gap}}ನವರಾತ್ರಿ ಕಳೆದಿತ್ತು, ಸಣ್ಣ ಪುಟ್ಟ ಹಬ್ಬಗಳೆಷ್ಟೋ ಆಗಿ ಹೋಗಿ<br>
ದ್ದುವು.<br>
{{gap}}ಆದರೆ ಅಭಯಧಾಮವೇ ಇದಿರು ನೋಡಿದ ದೊಡ್ಡದೊಂದು ಹಬ್ಬ<br>
ವಿತ್ತು ಅದು ಅಭಯಧಾಮದ ವಾರ್ಷಿಕೋತ್ಸವ.<br>
{{gap}}ಡಿಸೆಂಬರ್ ಹತ್ತೊಂಭತ್ತರ ಆ ಉತ್ಸವದ ಸಿದ್ಧತೆ ಭರದಿಂದಲೆ<br>
ಸಾಗಿತು ಒಳಗಿನ ಗೋಡೆಗಳಿಗೆಲ್ಲ ಹುಡುಗಿಯರು ತಾವೇ ಸುಣ್ಣ ಬಳೆ<br>
ದರು. ಹೊರಗಿನ ಗೋಡೆಗಳನ್ನು ಕೂಲಿತೆತ್ತು ಬಿಳಿದುಗೊಳಿಸಿದ್ದಾಯಿತು.<br>
ಕಿಟಕಿ ಬಾಗಿಲುಗಳು ನಿರ್ಮಲವಾದುವು ಉದ್ಯಾನದ ಕಳೆ ನಾಶವಾಯಿತು.<br>
ಸರಸಮ್ಮ ಇಬ್ಬರು ಹುಡುಗಿಯರೊಡನೆ, ತುಂಗಮ್ಮ ಮತ್ತು ಜಲಜ<br>
ಬೇರೊಬ್ಬಳೊಡನೆ, ಲಲಿತ - ಸಾವಿತ್ರಿಯರು ಮತ್ತೊಬ್ಬಳೊಡನೆ-<br>
ಹೀಗೆ ಮೂರು ಗುಂಪುಗಳಾಗಿ, ಮೊದಲೇ ಸಿದ್ಧಗೊಳಿಸಿದ್ದ ಪಟ್ಟಿಯಂತೆ<br>
ಊರಿನ ಪ್ರಮುಖ ಅಂಗಡಿಗಳಿಗೆ ಹೋಗಿ, ಬಡ ಅನಾಥ ಹುಡುಗಿಯರ<br>
ಅಭಯಧಾಮಕ್ಕಾಗಿ ಸೀರೆ - ರವಕೆ ಕಣಗಳನ್ನು ಕೇಳಿ ತಂದರು. ಸಮಿತಿಗೇ<br>
ನೇರವಾಗಿ ಚಂದಾ ಕೊಡದೇ ಇದ್ದ ಕೆಲವರು ಶ್ರೀಮಂತರ ಮನೆಗಳಿಗೆ<br><noinclude><references/></noinclude>
tuwalf85a65l4g753gokiibs722gx0y
ಪುಟ:Abhaya.pdf/೨೬೮
104
9190
320687
250229
2026-05-19T03:11:23Z
Shreelatha.Halemane
7642
/* Validated */
320687
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=|right= ೨೬೩}}
{{gap}}“ಸಾಕು ಸುಮ್ನಿರಿ !”
{{gap}}ಲಲಿತೆಯ ಗದರಿಕೆಯಧ್ವನಿ ಕೇಳಿ ಆ ಮಹಾಬಲ ಗೊಳೋ ಎಂದು
ಅತ್ತ, ನಡುವೆ ಒಮ್ಮೆಲೆ ಅಳು ನಿಲ್ಲಿಸಿ ಕೇಳಿದ :
{{gap}}“ಹಾಗಾದರೆ ಇಲ್ಲಿಗೆ ಬರ್ಲಿಲ್ಲ ಅನ್ನಿ"
{{gap}}"ಇಲ್ಲ ಇಲ್ಲಿಗ್ಬರ್ಲಿಲ್ಲ"
{{gap}}“ಇನ್ನೇನಪ್ಪಾ ಗತಿ ನಂಗೆ ”
{{gap}}ಮತ್ತೆ ಏಕಪ್ರಕಾರವಾದ ಅಳು
{{gap}}“ಹೆಂಗಸರ ಹಾಗೆ ಅಳ್ತೀರಲ್ರೀ--"
{{gap}}ತನ್ನ ಜಾತಿಯನ್ನು ಹಾಗೆ ಮೂದಲಿಸುವ ಮನಸಿಲ್ಲದಿದ್ದರೂ ಲಲಿತ
ಬಳಕೆಯಲ್ಲಿದ್ದ ಆ ಮಾತನ್ನು ಅ೦ದಳು. ಆದರೆ ಆ ಮಹಾಬಲ ಹಾಗೆಲ್ಲ
ಅನ್ನಿಸಿಕೊಂಡು ನಾಚುವ ಆಸಾಮಿಯಾಗಿರಲಿಲ್ಲ.
{{gap}}“ನೀವು ಕನಕಂಗೆ ಹೊಡೆದು ಗಿಡದು ಏನಾದರೂ ಮಾಡಿದ್ರಾ ?”
{{gap}}“ಇಲ್ಲಪ್ಪಾ ಇಲ್ಲ. ದೇವರಹಾಗೆ ನೋಡ್ಕೊತಿದ್ದೆ.”
{{gap}}ಅವನು ಸುಳ್ಳು ಹೇಳುತ್ತಿರಲಿಲ್ಲ.ಮಾತಿನ ಸತ್ಯತೆಯನ್ನು ಆ
ಮುಖವೇ ಸಾರುತಿತ್ತು. ತುಂಗಮ್ಮನಿಗೆ ಇದರಿಂದ ದುಃಖವಾಯಿತು.
ಲಲಿತೆಗೂ ಕೂಡಾ. ಕನಕಲಕ್ಷಮ್ಮು ಓಡಿಯೇ ಹೋಗಿದ್ದಳು. ಅದರಲ್ಲಿ
ಸಂದೇಹವಿರಲಿಲ್ಲ ತುಂಗಮ್ಮ ಅಲ್ಲಿ ನೆರೆದಿದ್ದ ಒಬ್ಬೊಬ್ಬ ಹುಡುಗಿಯ
ಮುಖವನ್ನೂ ನೋಡಿದಳು. ಎಂದೆಂಥ ಭಾವನೆಗಳಿದ್ದುವು ಅಲ್ಲಿ ! ಮಹಾಬಲ
ನಿಗಾಗಿ ಮರುಕವೆ ? ತಿರಸ್ಕಾರವೆ? ಅಥವಾ....ಅಥವಾ.... ತಾವೂ
ಮದುವೆಯ ನೆಪದಲ್ಲಿ ಹೊರ ಹೋಗಿದ್ದರೆ ಓಡಿಹೋಗಬಹುದಾಗಿತ್ತು ಎಂಬ
ಭಾವನೆಯೆ ?
{{gap}}ಅಳುತಳುತ ಮಹಾಬಲ ನಡೆದುದನ್ನು ಹೇಳಿದ. ಹೇಳಲು
ಹೆಚ್ಚೇನೂ ಇರಲಿಲ್ಲ. ಹೀಗಾಗಿ ಆತ ಅದನ್ನೆ ಮತ್ತೆ ಮತ್ತೆ ಪಾಠ
ಒಪ್ಪಿಸಿದ.
{{gap}}“ನಿನ್ನೆ ಬೆಳಗಿನ ಜಾವದಲ್ಲೇ ನಾನು ಮನೆ ಬಿಟ್ಟೆ ಸಾಹೇಬರ ಜತೇಲಿ
ಸರ್ಕೀಟು ಹೋಗ್ಬೇಕಾಯ್ತು. ಇವತ್ತು ಮಧ್ಯಾಹ್ನ ವಾಪ್ಸು ಬಂದೆ.
ಮನೆಗೆ ಬೀಗ ಇಕ್ಕಿತ್ತು. ಅಂಗಡಿ ಬೀದಿಗೆ ಹೋಗಿದಾಳೇನೋ೦ತ ಹಾದಿ<noinclude><references/></noinclude>
66jukm9agd15qtr6j8hyb8ob83kzslg
ಪುಟ:Abhaya.pdf/೨೬೯
104
9191
320688
250214
2026-05-19T03:14:01Z
Shreelatha.Halemane
7642
/* Validated */
320688
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=೨೬೪|right=}}
ನೋಡ್ತಾ ನಿಂತೆ. ಪಕ್ಕದ್ಮನೆಯೋರು ಅವಳಿಲ್ಲಾ ಅಂದ್ರು ಶೇಷಾದ್ರಿ
ಪುರದಲ್ಲಿ ಅಕ್ಕನ್ಮನೆ ಇದೆ, ಅಲ್ಲಿಗೆ ಹೋಗ್ತಿನಿ ಅಂತ ಹೇಳಿ ನಿನ್ನೆಯೇ
ಹೊರಟೋದ್ಲಂತೆ. ಆದರೆ ನಂಗೆ ಗೊತ್ತಿಲ್ವಾ, ಅವಳಿಗೆ ಈ ಊರಲ್ಲಿ
ಯಾರೂ ಇಲ್ಲ ಅನ್ನೋ ವಿಷಯ ? ಯಾಕೋ ಸಂಶಯ ಬಂತು. ಅದೇ
ನಿದ್ರೂ ನಿಮ್ಮನ್ನೆಲ್ಲಾ ನೋಡೋಕೆ ಇಲ್ಲಿಗೇ ಬಂದಿರ್ಬೋದೂಂತ
ಅಂದ್ಕೊಂಡು ಓಡ್ಬಂದೆ.”
{{gap}}“ಒಳ್ಳೆ ಕೆಲಸ ಮಾಡ್ದೆ”
{{gap}}--ಎಂದಳು ಹುಡುಗಿಯೊಬ್ಬಳು.
{{gap}}“ಹಾಂ ? ಏನಂದ್ರಿ ?”
{{gap}}ತುಂಗಮ್ಮನೆಂದುಕೊಂಡಳು: ಬೆಪ್ಪು-ಶುದ್ಧ ಬೆಪ್ಪು, ಎಂತಹ ಅಚಾ
ತುರ್ಯವಾಗಿ ಹೋಯಿತು ! ಕನಕಲಕ್ಷಮ್ಮನ್ನ ಇವನಿಗೆ ಕೊಡಲೇ ಬಾರ
ದಾಗಿತ್ತೇನೋ, ಅನ್ಯಾಯವಾಗಿ ಆಕೆ ಬೀದಿ ಪಾಲಾದಳು. ಹುಚ್ಚಿ! ಹಾಗೂ
ಮಾಡಬೇಕಾಗಿತ್ತೆ ? ಅಭಯಧಾಮಕ್ಕೆ ವಾಪಸು ಬರಬಾರದಾಗಿತ್ತೆ ?
{{gap}}ಬೇಗನೆ ಒಮ್ಮೆ ದೊಡ್ಡಮ್ಮ ಬಂದರೆ--ಎನಿಸಿತು. ಏನಾದರೂ ಮಾಡಿ
ಕನಕಲಕ್ಷಮ್ಮನನ್ನು ಉಳಿಸಿಕೊಳ್ಳುವುದು ಸಾಧ್ಯವಿದ್ದರೆ ಅದು ಅವರಿಂದ
ಮಾತ್ರ. ಆದರೆ ಅವರು ಅಷ್ಟು ಬೇಗನೆ ಬರುವ ಲಕ್ಷಣವಿರಲಿಲ್ಲ.
{{gap}}ಮಳೆ ಮಾತ್ರ ಬಂತು. ಧೋ ಎಂದು ಸುರಿಯಿತು. ಹುಡುಗಿಯರು,
ತಮ್ಮ ಬಟ್ಟೆಬರೆಗಳು ತೋಯದಂತೆ ಮುನ್ನೆಚ್ಚರಿಕೆ ವಹಿಸಲು ಓಡಿಹೋದರು
ಅಡುಗೆ ಮನೆಯಲ್ಲಿ ರಾತ್ರೆಗೆ ಸಿದ್ಧತೆಯೂ ಆಗ ತೊಡಗಿತು.
{{gap}}ಹೊರಗೆ ಮಳೆ ನೀರು ಬೀಳತೊಡಗಿದ ಮೇಲೆ ಮಹಾಬಲನ ಆಳು
ನಿಂತಿತು. ಆತ ಬೆಂಚಿನ ಮೇಲೆ ಕಾಲುಗಳನ್ನಿರಿಸಿ, ಕೈಗಳಿಂದ ಸುತ್ತಿಕೊಂಡು,
ಹೃದಯದೊಳಗಿನ ಛಳಿಗಾಗಿ ಕುಟುಕುಟು ಹಲ್ಲುಕಡಿಯುತ್ತ ಕುಳಿತ.
ಮಳೆಯ ಕತ್ತಲೆಗಾಗಿ ತುಂಗಮ್ಮ ದೀಪಉರಿಸಿದಳು. ಆದರೆ ಮಳೆ ನಿಂತಾಗ
ನಿಜವಾಗಿಯೂ ಕತ್ತಲಾಗಿತ್ತು
{{gap}}ಆಮೇಲೆ ಸರಸಮ್ಮ ಜಲಜ-ಸಾವಿತ್ರಿಯರೊಡನೆ ಬಂದರು.
{{gap}}ಬಂದಾಗ ಅವರ ಮೈ ಮಾತ್ರ ತೋಯ್ದಿತ್ತು. ಆದರೆ ಮಹಾಬಲನ
ಗೋಳಿನ ಕತೆ ಕೇಳಿದ ಮೇಲೆ ಅವರ ಮನ ತೋಯ್ದು ಹೋಯಿತು.<noinclude><references/></noinclude>
pupkn1x1umivbr264cdb4zu73difm2j
ಪುಟ:Abhaya.pdf/೨೮೮
104
9205
320639
250340
2026-05-18T14:37:45Z
Shreesha Sharma
7840
/* Validated */
320639
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|center=ಆಭಯ|left=|right=೨೮೩}}
{{gap}}"ಮುಚ್ಚೇ ಬಾಯಿ !''
{{gap}}“ ಪಾರ್ವತಿಗೆ ಹೇಳ್ತೀನಿ ನಾಳೆ. ಮೇರೇದಿಲ್ ಟೂಟ್ ಗಯಾ ಅಂತ
ಹಾಡ್ತಾಳೆ.''
{{gap}}''ಹಾಗೇನಾದರೂ ಮಾಡಿದ್ರೆ ನೋಡು ನಿನ್ನ''
{{gap}}ಜಲಜ ನಕ್ಕು ಸುಮ್ಮನಾದಳು ನಿಜ, ಆದರೆ ತುಂಗಮ್ಮನ ಮನಸ್ಸು
ಸುಮ್ಮನಿರಲಿಲ್ಲ ಬಹಳ ಹೊತ್ತು ನಿದ್ದೆ ಬರಲಿಲ್ಲ ಅವಳಿಗೆ<noinclude><references/></noinclude>
38n99s7qtyx2dv56ckq4o3ebhrzf84c
ಪುಟ:Abhaya.pdf/೨೮೯
104
9218
320640
250287
2026-05-18T14:40:58Z
Shreesha Sharma
7840
/* Validated */
320640
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|'''೧೯'''}}
{{gap}}ಹೃಷ್ಟ ಪುಷ್ಪಳಾಗಿದ್ದ ಲಲಿತಾ ಕಾಹಿಲೆ ಬೀಳುವಳೆಂದು ಯಾರೂ ನಿರೀಕ್ಷಿಸಿರಲಿಲ್ಲ. ವರ್ಷಾಂತ್ಯದಲ್ಲಿ ತನಗೆ ದೊರೆತ ಕೊನೆಯ ಗಿರಾಕಿ
ಎಂದೋ ಏನೋ ವಿಷಮಜ್ವರ ಆಕೆಗೆ ಅಂಟಿಕೊಂಡಿತು. ಏಳನೆಯದಿನ, ಒಂದುರೂಪಾಯಿ ಫೀಸಿನ ಸಮೀಪದ ಡಾಕ್ಟರು ಬಂದು
ನೋಡಿದರು.
{{gap}}ಹೆರಿಗೆಯ ಕೊಠಡಿಯಲ್ಲಿ ಜ್ವರ ಪೀಡಿತಳಾಗಿದ್ದ ಲಲಿತೆಯನ್ನು ಮಲಗಿ
ಸಿದ್ದರು. ಆ ಕೊಠಡಿಯಿಂದ ಸರಸಮ್ಮನೊಡನೆ ಹೊರಬಂದ ಡಾಕ್ಟರು
ಗೋಡೆಯ ಮರೆಯಲ್ಲಿ ನಿಂತು ಹೇಳಿದರು :
{{gap}}"ಟೈಫಾಯ್ಡ್. ದುರ್ಲಕ್ಷ್ಯ ಮಾಡ್ಬೇಡಿ. ಇಲ್ಲಿ ಎಷ್ಟೆಂದರೂ ಆರೈಕೆ
ಸರಿಯಾಗೊಲ್ಲ. ಆಸ್ಪತ್ರೆಗೆ ಸೇರಿಸಿ"
{{gap}}ಅಷ್ಟುಹೇಳಿ, ಫೀಸು ತೆಗೆದುಕೊಳ್ಳದೆಯೇ ಡಾಕ್ಟರರು ಹೊರಟು
ಹೋದರು ಸರಸಮ್ಮ ತಡಮಾಡಲಿಲ್ಲ. ಕಾರ್ಯದರ್ಶನಿಯ ಮನೆಗೆ
ಹೋಗಿ ಬಂದರು. ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ಜನರಲ್ ವಾರ್ಡಿನಲ್ಲಿ
ಒಂದು ಬೆಡ್ ದೊರಕಿಸಿಕೊಂಡರು. ಆದರೆ ಆ ಹೊತ್ತಿಗೆ ಆಂಬ್ಯುಲೆನ್ಸ್
ಕಾರ್ ಸಿಗಲಿಲ್ಲ. ಕುಂಟುಕುದುರೆಯ ಜಟಕಾಗಾಡಿಯಲ್ಲಿ, ಜ್ವರದಗುಂಗಿನಲ್ಲಿ
ಏನೇನೋ ಒಂಟಿಪದದ ಮಾತುಗಳನ್ನಾಡುತ್ತಿದ್ದ ಲಲಿತೆಯನ್ನು ಆಸ್ಪತ್ರೆಗೆ
ಒಯ್ಯ ಬೇಕಾಯಿತು. ಸರಸಮ್ಮ, ತುಂಗಮ್ಮ ಮತ್ತು ಜಲಜ ಮೂವರೂ
ಆಸ್ಪತ್ರೆಯ ತನಕ ಹೋದರು.
{{gap}}ಅಭಯಧಾಮದ ಹುಡುಗಿ ತಾನೆ? ಚೆನ್ನಾಗಿ ದುಡ್ಡು ಖರ್ಚುಮಾಡ
ಬಲ್ಲವರಿಗೇ ಒಮ್ಮೊಮ್ಮೆ ಬೆಡ್ ಸಿಗದೇ ಹೋಗುವುದುಂಟು. ಅದರಲ್ಲಿ ಈ
ಹುಡುಗಿಗೆ?
{{gap}}ಅಂತೂ ದೊರಕಿತು, ಮಂಚದಮೇಲೂ ಕೆಳಗೆ ನೆಲದಲ್ಲೂ ರೋಗಿ<noinclude><references/></noinclude>
d9ju7nrhcr89r9d53zlsini1ujpj3x7
ಪುಟ:Abhaya.pdf/೨೯೦
104
9220
320641
250257
2026-05-18T14:43:09Z
Shreesha Sharma
7840
/* Validated */
320641
proofread-page
text/x-wiki
<noinclude><pagequality level="4" user="Shreesha Sharma" /></noinclude>
ಗಳು ಮಲಗಿದ್ದ ಒತ್ತಡವಿದ್ದ ವಾರ್ಡಿನಲ್ಲಿ ಹತ್ತಾರು ಬೆಡ್ಡುಗಳ ನಡುವೆ ಲಲಿತೆಗಾಗಿ ಒಂದುಮಂಚ.
{{gap}}ಅಲ್ಲಿ ಒಬ್ಬೊಬ್ಬ ರೋಗಿಯ ಪರವಾಗಿಯೂ ಅವರವರ ಸಂಬಂಧಿಕರು
ಅಲ್ಲಿಯೇ ವಾಸಮಾಡುತ್ತಿದ್ದಂತೆ ತೋರಿತು!
{{gap}}"ದೊಡ್ಡಮ್ಮ! ಎಷ್ಟೊಂದು ಗಲಾಟೆ ಇಲ್ಲಿ! ಲಲಿತಾನ ಒಳ್ಳೇಕಡೆ
ಮಲಗಿಸೋಕೆ ಆಗಲ್ವೆ?"
{{gap}}"ಹ್ಯಾಗಾಗುತ್ತೆ? ಸ್ಪೆಷಲ್ ವಾರ್ಡಿಗೆ ಎಲ್ಲಿಂದ ತರೋಣ ದುಡ್ಡು?"
{{gap}}ತುಂಗಮ್ಮನಿಗೆ ಉಸಿರುಕಟ್ಟಿತು. ತಮ್ಮಲ್ಲಿ ದುಡ್ಡಿಲ್ಲ, ತಾವು ಬಡವರು,
ಅಲ್ಲವೆ?
{{gap}}"ದೊಡ್ಡಮ್ಮ! ಒಂದು ಹೇಳ್ತೀನಿ ಏನೂತಪ್ಪು ತಿಳ್ಕೋಬೇಡಿ.
ನನ್ನ ಸಂಬಳಾನ__"
{{gap}}ಸರಸಮ್ಮನಿಗೆ ಗಂಟಲು ಒತ್ತರಿಸಿ ಬಂತು.
{{gap}}"ಅದಲ್ಲ ತುಂಗ. ಹೀಗೆ ಒಂದ್ಸಾರಿ ಮಾಡಿದ್ವಿ ಅಂದ್ರೆ ಪ್ರತಿಸಾರೇನೂ
ಮಾಡೋಕಾಗುತ್ತ ?"
{{gap}}ತಪ್ಪೇನು?- ಎಂದು ಕೇಳಬೇಕೆನ್ನಿಸಿತು ತುಂಗಮ್ಮನಿಗೆ. ಆದರೆ ದೊಡ್ಡಮ್ಮನ ಮಾತಿಗೆ ಪ್ರತಿಯಾಡಬಾರದೆನ್ನಿಸಿತು.
{{gap}}"ಇಲ್ಲೇ ಇದ್ದರೂ ಪರವಾಗಿಲ್ಲ ಅಲ್ವಾ ?"
{{gap}}ಇಷ್ಟೊಂದು ಜನ ಇಲ್ವೆ? ದೇವರದಯದಿಂದ ನಮ್ಮ ಲಲಿತಾಗೆ
ಏನೂ ಆಗಲ್ಲ. ದೇಹಬಲ ಚೆನ್ನಾಗಿದೆ ಸುಲಭವಾಗಿ ವಾರಾಗ್ತಾಳೆ."
{{gap}}ಲಲಿತೆಯನ್ನು ಮಲಗಿಸಿ ಹೊರಗೆ ಜಗಲಿಯಲ್ಲಿ ನಿಂತು, ಮಾರ್ಕೆಟಿನ ಜನಸಮರ್ದದತ್ತ ನೋಡುತಲಿದ್ದಾಗ, ಚಿಕ್ಕಮೋರೆ ಮಾಡಿ ಆವರೆಗೂ
ಮೌನವಾಗಿದ್ದ ಜಲಜ ಕೇಳಿದಳು:
{{gap}}"ರಾತ್ರೆ ಇಲ್ಲಿ ಯಾರಾರು ಇರ್ಬೇಕು ಅಲ್ವೆ ದೊಡ್ಡಮ್ಮ?"
{{gap}}"ಡಾಕ್ಟರನ್ನ ಕೇಳ್ತೀನಿ ನೋಡೋಣ, ಹಿಂದೆ ಎರಡು ಸಾರೇನೂ
ಯಾರೂ ಇರಬೇಕಾದ್ದಿಲ್ಲ ಅಂದಿದ್ರು."
{{gap}}"ಅವರು ಯಾವಾಗಲೂ ಹಾಗೆಯೇ ಅಂತಾರೆ, ಆದರೆ ನಾವು--<noinclude><references/></noinclude>
5er5tttqoem5xsshkduxamjop67b5xr
ಪುಟ:Abhaya.pdf/೨೭೫
104
9221
320694
249291
2026-05-19T03:54:46Z
Shreelatha.Halemane
7642
/* Validated */
320694
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''ಅಭಯ'''|left='''೨೭೦'''|right=''''''}}
{{gap}}ಯನ್ನುಟ್ಟು ಆಕೆ ಇನ್ನೊಬ್ಬ ಗಂಡಸಿನೊಡನೆ ಸರಸವಾಡುಬಹುದೆಂಬ ಕಲ್ಪನೆಯಿಂದ ಆತನಿಗೆ ನೋವಾಯಿತು. ನೋವನ್ನೆಲ್ಲ ಮರೆಯುವಂತೆ ಮಹಾಬಲ ಹಲ್ಲುಕಡಿದು, ಉಗುಳನ್ನು 'ಥೂ' ಎಂದು ಹೊರಕ್ಕೆ ಉಗುಳಿ ಕೊಳೆಯ ಮಾತು ಹೇಳಿದ:
{{gap}}"ಹೋಗು! ತೊಲಗಿ ಹೋಗು! ಹಾಳಾಗಿಹೋಗು!"
{{gap}}ಅವಳು ಸರಸನೆ ಹೊರಟೇ ಹೋದಳು. ಆಕೆಯ ಹಿಂದೆ ಓಡಿ ಹೋಗಿ ಕಾಲುಕಟ್ಟಿಕೊಂಡು ಬೇಡೋಣವೆನಿಸಿತು ಆತನಿಗೆ. ಆದರೆ ಕಾಲುಗಳು ಚಲಿಸಲು ನಿರಾಕರಿಸಿದುವು. ಆತೆ ಅಲ್ಲೆ ಆಟದ ಬಯಲಿನಲ್ಲಿ ಕುಸಿಕುಳಿತು, ಬಹಳ ಹೊತ್ತು ಮಗುವಿನಂತೆ ಅತ್ತ.
{{gap}}ಅದು ನಿನ್ನೆ. ಈದಿನ ಅದನ್ನು ಸರಸಮ್ಮ ಮತ್ತು ತುಂಗಮ್ಮನೆದುರು ವಿವರಿಸಿದಾಗ ಮಹಾಬಲ ಹೆಚ್ಚು ಕಡಿಮೆ ನಿರ್ವಿಕಾರನಾಗಿಯೇ ಇದ್ದ.
{{gap}}ವಿವರಣೆ ಮುಗಿದಮೇಲೆ ಆತ ಅಂದ:
{{gap}}"ಕನಕ ಹೊರಟೋಗಿದ್ರೂ ಪರವಾಇರಲ್ಲಿಲ್ಲ ಆದರೆ ಅವ್ಳು ಸುಳ್ಹೇಳಿದ್ಲು.ಸರ--ಬಳೆ ಕಳೆದ್ಹೋಯ್ತು ಅಂದ್ಲು !"
{{gap}}ಮಗಳು ಮಾಡಿದ್ದ ತಪ್ಪಿಗೆ ತಾಯಿಯೇ ಜವಾಬ್ದಾರಳಾದ ಹಾಗಿತ್ತು ಸರಸಮ್ಮನ ಪರಿಸ್ಥಿತಿ. ಆದರೂ ಸಂತೈಸುವ ಧ್ವನಿಯಲ್ಲಿ ಅವರು ಹೇಳಿದರು:
{{gap}}"ಬೇಜಾರು ಪಟ್ಕೋಬೇಡಿ. ಆದದ್ದು ಆಗ್ಹೋಯ್ತ. ಕನಕಲಕ್ಷಮ್ಮ ಹೀಗೆ ಮೋಸ ಮಾಡ್ಬಾಹುದಾಂತ ನಾವು ಭಾವಿಸಿರಲ್ಲಿಲ್ಲ. ನಮ್ಮ ದುರ್ದೈವ."
{{gap}}ಕನಕಲಕ್ಷಮ್ಮ ತಪ್ಪು ಮಾಡಿದಲಳೆಂದು ಸರಸಮ್ಮ ಒಪ್ಪಿಕೊಂಡುದರಿಂದ ಮಹಾಬಲನಿಗೆ ಒಂದು ರೀತಿಯ ಸಮಾಧಾನವಾಯಿತು. ತನ್ನನ್ನು ಕುರಿತು ತೋರಿದ ಸಹಾನುಭೂತಿ ಪ್ರಿಯವೆನಿಸಿತು.
{{gap}}ಮಹಾಬಲನ ಮನಸ್ಸು ಪ್ರಸನ್ನವಾಗಲೆಂದು ಸರಸಮ್ಮ ಕಾಫಿಯ ಮಾತನ್ನೆತ್ತಿದ್ದಳು.
{{gap}}"ಒಂದಿಷ್ಟು ಕಾಫಿ ಮಾಡಿಸ್ಲಾ ?"
{{gap}}"ಬೇಡ್ರಮ್ಮ, ಬೇಡಿ."<noinclude><references/></noinclude>
9podsvj1ryb7sh0q8ar3uemkkiokymn
320697
320694
2026-05-19T04:08:10Z
Shreelatha.Halemane
7642
320697
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''ಅಭಯ'''|left='''೨೭೦'''|right=''''''}}
{{gap}}ಯನ್ನುಟ್ಟು ಆಕೆ ಇನ್ನೊಬ್ಬ ಗಂಡಸಿನೊಡನೆ ಸರಸವಾಡುಬಹುದೆಂಬ ಕಲ್ಪನೆಯಿಂದ ಆತನಿಗೆ ನೋವಾಯಿತು. ನೋವನ್ನೆಲ್ಲ ಮರೆಯುವಂತೆ ಮಹಾಬಲ ಹಲ್ಲುಕಡಿದು, ಉಗುಳನ್ನು 'ಥೂ' ಎಂದು ಹೊರಕ್ಕೆ ಉಗುಳಿ ಕೊಳೆಯ ಮಾತು ಹೇಳಿದ:
{{gap}}"ಹೋಗು! ತೊಲಗಿ ಹೋಗು! ಹಾಳಾಗಿಹೋಗು!"
{{gap}}ಅವಳು ಸರಸನೆ ಹೊರಟೇ ಹೋದಳು. ಆಕೆಯ ಹಿಂದೆ ಓಡಿ ಹೋಗಿ ಕಾಲುಕಟ್ಟಿಕೊಂಡು ಬೇಡೋಣವೆನಿಸಿತು ಆತನಿಗೆ. ಆದರೆ ಕಾಲುಗಳು ಚಲಿಸಲು ನಿರಾಕರಿಸಿದುವು. ಆತೆ ಅಲ್ಲೆ ಆಟದ ಬಯಲಿನಲ್ಲಿ ಕುಸಿಕುಳಿತು, ಬಹಳ ಹೊತ್ತು ಮಗುವಿನಂತೆ ಅತ್ತ.
{{gap}}ಅದು ನಿನ್ನೆ. ಈದಿನ ಅದನ್ನು ಸರಸಮ್ಮ ಮತ್ತು ತುಂಗಮ್ಮನೆದುರು ವಿವರಿಸಿದಾಗ ಮಹಾಬಲ ಹೆಚ್ಚು ಕಡಿಮೆ ನಿರ್ವಿಕಾರನಾಗಿಯೇ ಇದ್ದ.
{{gap}}ವಿವರಣೆ ಮುಗಿದಮೇಲೆ ಆತ ಅಂದ:
{{gap}}"ಕನಕ ಹೊರಟೋಗಿದ್ರೂ ಪರವಾಇರಲ್ಲಿಲ್ಲ ಆದರೆ ಅವ್ಳು ಸುಳ್ಹೇಳಿದ್ಲು.ಸರ--ಬಳೆ ಕಳೆದ್ಹೋಯ್ತು ಅಂದ್ಲು !"
{{gap}}ಮಗಳು ಮಾಡಿದ್ದ ತಪ್ಪಿಗೆ ತಾಯಿಯೇ ಜವಾಬ್ದಾರಳಾದ ಹಾಗಿತ್ತು ಸರಸಮ್ಮನ ಪರಿಸ್ಥಿತಿ. ಆದರೂ ಸಂತೈಸುವ ಧ್ವನಿಯಲ್ಲಿ ಅವರು ಹೇಳಿದರು:
{{gap}}"ಬೇಜಾರು ಪಟ್ಕೋಬೇಡಿ. ಆದದ್ದು ಆಗ್ಹೋಯ್ತ. ಕನಕಲಕ್ಷಮ್ಮ ಹೀಗೆ ಮೋಸ ಮಾಡ್ಬಾಹುದಾಂತ ನಾವು ಭಾವಿಸಿರಲ್ಲಿಲ್ಲ. ನಮ್ಮ ದುರ್ದೈವ."
{{gap}}ಕನಕಲಕ್ಷಮ್ಮ ತಪ್ಪು ಮಾಡಿದಳೆಂದು ಸರಸಮ್ಮ ಒಪ್ಪಿಕೊಂಡುದರಿಂದ ಮಹಾಬಲನಿಗೆ ಒಂದು ರೀತಿಯ ಸಮಾಧಾನವಾಯಿತು. ತನ್ನನ್ನು ಕುರಿತು ತೋರಿದ ಸಹಾನುಭೂತಿ ಪ್ರಿಯವೆನಿಸಿತು.
{{gap}}ಮಹಾಬಲನ ಮನಸ್ಸು ಪ್ರಸನ್ನವಾಗಲೆಂದು ಸರಸಮ್ಮ ಕಾಫಿಯ ಮಾತನ್ನೆತ್ತಿದ್ದಳು.
{{gap}}"ಒಂದಿಷ್ಟು ಕಾಫಿ ಮಾಡಿಸ್ಲಾ ?"
{{gap}}"ಬೇಡ್ರಮ್ಮ, ಬೇಡಿ."<noinclude><references/></noinclude>
g9920hos36sfmbsf8j36zrx0oiggh9a
ಪುಟ:Abhaya.pdf/೨೭೭
104
9245
320696
249294
2026-05-19T03:59:43Z
Shreelatha.Halemane
7642
/* Validated */
320696
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''ಅಭಯ'''|left='''೨೭೨'''|right=''''''}}
{{gap}}ಎಂದು ತುಂಗಮ್ಮ , ನಗು ತಡೆಯಲಾರದೆ ಅಂದಳು,
{{gap}}ಮನಸ್ಸು ಮುದುಡಿಕೊಳ್ಳುವ ಆ ಪರಿಸ್ತಿತಿಯಲ್ಲೂ ಸರಸಮ್ಮಕೂಡಾ ನಕ್ಕರು.
{{gap}}ನಕ್ಕು ಮುಗಿದಮೇಲೆ ಅವರು ಮತ್ತೊಮ್ಮೆ ಸಪ್ಪಗಾದರು.
{{gap}}ಯಾಕೆ ಹೀಗಾಯಿತು?ಯಾಕೆ? ಮಹಾಬಲ ಒಳ್ಳೆಯವನಿರಬಹುದು.ಆದರ ಆತ ಮಹಾಮೂರ್ಖ.ಅಲ್ಲದೆ ಕನಕಲಕಮ್ಮನೇನು ಪರಮ ಸಾಧ್ವಿಯೆ? ಹಳೆಯ ಗೆಳೆಯನ ಆಕರ್ಷಣೆಗೆ ಆಕೆ ಬಲಿಯಾಗಿರಬಹುದು....ಮರಳಿ ಆ ಬದುಕಿಗೆ...ಎಂತಹ ಅನ್ಯಾಯ! ಇಷ್ಟುಕಾಲ ಅಭಯಧಾಮ ಆಕೆಗೆ ನೀಡಿದ ಶಿಕ್ಷಣವೆಲ್ಲ ವ್ಯರ್ಥ ವಾಯಿತಲ್ಲ!
{{gap}}__ಅಥವಾ , ಅಭಯಧಾಮದ ಈ ಜೀವನದಿಂದ ನಿಜವಾದ ಪ್ರಯೋಜನ ಏನೂ ಇಲ್ಲದೆ?
{{gap}}......ಸರಸಮ್ಮನ ಮೆದುಳು ಧೀಂಗುಡುತಿತ್ತು...ನಿರಾಸೆಯ ಅ ವಿಚಾರಗಳೆನ್ನೆಲ್ಲ ಅವರು ತುಂಗಮ್ಮನಿಗೆ ಹೇಳಲಿಲ್ಲ.ತಮ್ಮ ಮನಸ್ಸಿನಲ್ಲೆ ಬಚ್ಚಿಟ್ಟರು.<noinclude><references/></noinclude>
p6jm80nfv2fp78yum5cxxk8572mulkf
ಪುಟ:Abhaya.pdf/೨೭೮
104
9246
320698
249296
2026-05-19T04:10:50Z
Shreelatha.Halemane
7642
/* Validated */
320698
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''೧೮'''|left=''''''|right=''''''}}
{{gap}}ದಿನಗಳು ಕಳೆದು ಮಾಸಗಳಾದುವು.ಕಾಲ,ಋತುಮತಿಯಾಯಿತು.
{{gap}}ಮಂಜುಕವಿದಿದ್ದ ಆ ಮುಂಜಾವ!
{{gap}}ರಾತ್ರೆ ಮಲಗಿದಾಗ ಸರಸಮ್ಮ ಕಿಟಕಿ ಮುಚ್ಚಿದ್ದರು-ಗಾಳಿಮಳೆಯ ಅವಾಂತರದಿಂದ ನೀರು ಒಳಕ್ಕ ಹರಿಯದಿರಲೆಂದು ಕೊಠಡಿಯ ಬಾಗಿಲೇನೋ ತೆರೆದೇ ಇತ್ತು ಉಷಃಕಾಲದಲ್ಲೆ ಎಚ್ಚರಗೂಂಡಾಗ ಅವರಿಗೆ, ಬಾಗಿಲಿನೆಡೆಯಿಂದ ತಣ್ಣನೆ ಬೀಸುತಿದ್ದ ಗಾಳಿಯ ಸುಖಸ್ಪರ್ಶ ದ ಅನುಭವವಾಯಿತು.ಹೂದೆದಿದ್ದ ಕಂಬಳಿಯನ್ನು ಮತ್ತಷ್ಟು ಬೆಚ್ಚಗೆ ಅವರು ದೇಹಕ್ಕೆ ಅಂಟಿಸಿಕೂಂಡರು.ಅದರೆ ನಿದ್ದೆ ಓಡಿಯೇ ಹೋಯಿತು.ಬೆಳಗಾದರೂ ಅಗಿರಬಹುದು ಎನಿಸಿತು ಸರಸಮ್ಮನಿಗೆ, ಸರಿಯಾಗಿ ಕಣು ತೆರೆದು ಅವರು ಬಾಗಿಲಿನಾಚೆ ನೋಡಿದರು ಎನೂಕಾಣಿಸಲಿಲ್ಲ.ಮತ್ತೂಮ್ಮೆ ನಿದ್ದೆ ಹೋಗಲು ಅವರು ಮಾಡಿದ ಯತ್ನವೂ ವಿಫಲವಾಯಿತು.ಎದ್ದು ಕುಳಿತು,ಮಂಚದಿಂದ ಕೆಳಕ್ಕಿಳಿದು,ದೀಪಹಾಕಿ ಟೈಂಪೀಸಿನತ್ತ ನೋಡಿದರು.ಐದೂವರೆ!...ಅವರು ಕಿಟಕಿ ತೆರೆದರು ಏನೂ ಕಾಣಿಸಲಿಲ್ಲ ಹೂರಗೆ ನಸುಬೆಳಕೂ ಇಲ್ಲವೆಂದರೆ! ಇದು ಆಶ್ಚಯ ವೇ ಸರಿ.ಏನೋ ಹೊಳೆದು,ಅವರು ದೀಪ ಆರಿಸಿ ಕಿಟಕಿಯ ಬಳಿ ಬಂದು ನಿಂತರು.
{{gap}}ಆಹ್ ! ತಪ್ಪಾಗಿರಲಿಲ್ಲ ಅವರು ಊಹೆ!
{{gap}}ಕಳ್ಳ ಹೆಜ್ಜೆಯೊಡನೆ ಬೆಳಕು ಭೂಮಿಗಿಳಿದು ಬರುತಿತ್ತು-ಬೆಳ್ಳಿಯ ನವುರಾದ ಸೀರೆಯುಟ್ಡುಕೊಂಡು,ಮಂಜು, ತನ್ನ ಶೀತಲ ಅಪ್ಪುಗೆಯಿಂದ ಯಾರೂ ತಪ್ಪಿಸಿ ಕೊಳ್ಳಲಾರದಂತೆ,ಮನೆಮರಗಳನ್ನು ಗಿಡಹೂಗಳನ್ನು ಮುತ್ತಿಟ್ಟಿತ್ತು.
{{gap}}ನಿಸರ್ಗದ ಆ ಸುಂದರ ರಮಣೀಯತೆಯಲ್ಲಿ,ನಿದ್ದೆ ಹೋದ ಎಳೆಯ
18<noinclude><references/></noinclude>
hseomf4bfhf12rojxvdcr2rgfdtnk72
ಪುಟ:Abhaya.pdf/೨೭೬
104
9291
320695
249295
2026-05-19T03:57:15Z
Shreelatha.Halemane
7642
/* Validated */
320695
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''ಅಭಯ'''|left=''''''|right='''೨೭೧'''}}
{{gap}}ಆ ಕಾಫಿಯ ಪ್ರಸ್ತಾಪ, ಕನಕಲಕ್ಷಮ್ಮ ತಂದುಕೊಟ್ಟಿದ್ದ ಕಾಫಿಯ ನೆನಪು ಅವನಿಗೆ ಮರುಕಳಿಸಲು ಕಾರಣವಾಯಿತು. ಅಂತಹ ನೆನಪು ಆಸಹನೀಯವೇ ಆಗಿದ್ದ ಸಂಕಟ....
{{gap}}ಹಾಗೆ ಸ್ವಲ್ಪ ಹೊತ್ತು ಕುಳಿತಿದ್ದು, ಮಹಾಬಲ ಹೊರಟುನಿಂತ. ಸರಸಮ್ಮ ಅವನನ್ನು ಬೀಳ್ಕೊಡಲೆಂದು ಬಾಗಿಲವರೆಗೂ ಬಂದರು.
{{gap}}ಅಲ್ಲಿ ಒಮ್ಮೆಲೆ ಆತ ಅವರ ಪಾದಗಳನ್ನು ಹಿಡಿದುಕೊಂಡ.
{{gap}}"ಛೆ! ಛೆ! ಏಳಿ--ಏಳಿ!"
{{gap}}"ಅಮ್ಮಾ....ನಾನು ಹಾಳಾಗಿ ಹೋದೆ. ನನ್ನನ್ನು ಉದ್ಧಾರಮಾಡಿ."
{{gap}}"ಏನಪ್ಪಾ, ಏನುಬೇಕು ?"
{{gap}}"ಅಮ್ಮಾ....ನನಗೆ ಇನ್ನೊಂದು ಹೆಣ್ಣು ಕೊಡ್ಸಿ...."
{{gap}}"ಆ!"
{{gap}}ಸರಸಮ್ಮನ ತೆರೆದಬಾಯಿ ಮುಚ್ಚಿಕೊಳ್ಳಲ್ಲಿಲ್ಲ ಸ್ವಲ್ಪ ಹೊತ್ತು! ದಂಗು ಬಡೆದಹಾಗಾಯಿತು ಅವರಿಗೆ.
{{gap}}ತುಂಗಮ್ಮ ಮಹಾಬಲನ ಮಾತುಕೇಳಿ ಬೆರಗಾಗಿ ಬೆರಳುಗಳಿಂದ ಮೂಗನ್ನು ಒರೆಸಿಕೊಂಡಳು.
{{gap}}"ಏಳು, ಹೇಳ್ತೀನಿ"
{{gap}}--ಎಂದರು ಸರಸಮ್ಮ. ಬಹುವಚನದ ಸಂಬೋಧನೆ ಇನ್ನು ಅನಗತ್ಯವಾಗಿ ಅವರಿಗೆ ತೋರಿತು.
{{gap}}ಆತ ಎದ್ದುನಿಂತ. ಸರಸಮ್ಮನೂ ಆವನೊಡನೆ ಆಂಗಳಕ್ಕಿಳಿದಳು. ಅಲ್ಲಿ ಗಂಭೀರಧ್ವನಿಯಲ್ಲಿ ಒಂದೊಂದೇ ಪದವನ್ನು ಸ್ಪಷ್ಟವಾಗಿ ಆಡುತ್ತ ಅವರೆಂದರು:
{{gap}}"ನಾನು ಹೇಳೋದು ಕೇಳು ಮಹಾಬಲ ಈ ಅಭಯಧಾಮದ ಹುಡುಗೀರು ಒಳ್ಳೆಯೋರಲ್ಲ....ಇವರ ಯೊಚ್ನೆಬಿಟ್ಟಿಡು. ನಿಮ್ಮ ಹಳ್ಳಿಗೆ ಹೋಗಿಒಳ್ಳೆ ಹುಡುಗಿ ನೋಡ್ಕೊಂಡು ಬಂದು ಮದುವೆಯಾಗು."
{{gap}}ಅಂತೂ ನಿರಾಶನಾಗಿ ಮಹಾಬಲ ಹೊರಟುಹೋದ.
{{gap}}"ನೋಡಿ ಅವನ ಧೈರ್ಯ! ಇನ್ನೊಂದು ಹೆಣ್ಣು ಬೇಕಂತೆ!"<noinclude><references/></noinclude>
c78hrpk081xk6ytpe9n4k8623zb23tu
ಪುಟ:Abhaya.pdf/೨೮೧
104
9319
320701
250359
2026-05-19T04:20:28Z
Shreelatha.Halemane
7642
/* Validated */
320701
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=೨೭೬|right=}}
ಹೋಗಿ, ಅಷ್ಟಿಷ್ಟು ಹಣಸಹಾಯ ಪಡೆದು ತಂದರು. ಸರಸಮ್ಮ, ಅಭಯ
ಧಾಮದ ಕಾರ್ಯದರ್ಶಿನಿಯ ಜತೆಗೂಡಿ ಹೋಗಿ ಸಮಾರಂಭದ ಅಧ್ಯಕ್ಷ
ಸ್ಥಾನ ವಹಿಸುವಂತೆ ನಗರದ ಮೇಯರ'ರನ್ನು ಒಪ್ಪಿಸಿಬಂದರು. ಅಭಯ
ಧಾಮದೊಳಗೇ ಸಣ್ಣಪುಟ್ಟ ಸ್ಪರ್ಧೆಗಳು ನಡೆದುವು. ಕೆಲವು ಹುಡುಗಿಯರು
ಬಹುಮಾನಗಳಿಗೆ ಅರ್ಹರಾದರು.
{{gap}}ಉತ್ಸವದ ದಿನ ಬೆಳಿಗ್ಗೆ, ಮೇಲುಗಡೆ ಹೋದಿಕೆಯಿದ್ದ ಒಂದು ಲಾರಿ
ಯಲ್ಲಿ ಸುಂದ್ರಾಳನ್ನೂ ಒಳಗೊಂಡು ಎಲ್ಲ ಹುಡುಗಿಯರನ್ನು ಕುಳ್ಳಿರಿಸಿ
ಸರಸಮ್ಮ ನಗರದ ನಾಲ್ಕು ಮೂಲೆಗಳಲ್ಲಿ ಸುತ್ತಾಡಿಸಿ ಬಂದರು.
{{gap}}ಆಹ್ವಾನ ಪತ್ರಿಕೆಯನ್ನೇನೂ ಮುದ್ರಿಸಿರಲಿಲ್ಲ, ಅದರೂ ಬಾಯ್ದೆರೆ
ಯಾಗಿ, ಅವರೆಗೆ ಸಹಾಯಧನ ನೀಡಿದ್ದ ಆ ಊರಿನ ಪ್ರತಿಷ್ಟಿತರನ್ನೆಲ್ಲ
ಆಹ್ವಾನಿಸಿ ಬಂದುದಾಗಿತ್ತು.
{{gap}}ಸಂಜೆ ಆರುಘಂಟೆಯ ಹೊತ್ತಿಗೆ ಕೆಲವರು ಬಂದರು. ಸರಸಮ್ಮನ
ಆಫೀಸು ಕೊಠಡಿಯ ಮೇಜು ಬೆಂಚು ಕುರ್ಚಿ, ಹಜಾರಕ್ಕೆ ಸ್ಥಳಾಂತರ
ಹೊಂದಿ, ಪಕ್ಕದ ಮನೆಗಳಿಂದ ಎರವಲು ತಂದಿದ್ದ ಕುರ್ಚಿಗಳ ಜತೆಯಲ್ಲಿ
ಬಂದವರನ್ನು ಬಳಿಗೆ ಕರೆದುವು
{{gap}}ಹತ್ತು ನಿಮಿಷ ತಡವಾಗಿ ಬಂದ ಮೇಯರ್" ಐದು ನಿಮಿಷಗಳಲ್ಲೆ
ಅಭಯಧಾಮದ ಚಟುವಟಿಕೆಗಳನ್ನು ಈಕ್ಷಿಸಿದ್ದಾಯಿತು.
{{gap}}ಸರಸಮ್ಮನತ್ತ ತಿರುಗಿ ಮೇಯರ್ ಕೇಳಿದರು :
{{gap}}''ಎಲ್ಲಿ ಪ್ರಸ್ಸಿನವರ ಪತ್ತೇನೆ ಇಲ್ವಲ್ಲಾ!''
{{gap}}ಪ್ರೆಸ್ಸಿನವರು?''
{{gap}}ಪತ್ರಿಕೆಯವರು ಅಮ್ಮಾ,
{{gap}}ಓ |ನಾವು ಕರೀಲಿಲ್ಲ. ಖಾಸಗಿ ಕಾರ್ಯಕ್ರಮ ಅಂತ--*
{{gap}}“ಛೈ| ಛೆ! ಕರೀ ಬೇಕಾಗಿತ್ತು. ಪತ್ರಿಕೆಗಳಲ್ಲಿ ನಿಮ್ಮ ಅಭಯ
ಧಾಮದ ವಿಷಯ ಬಂದರೆ ನಿಮಗೇ ಅನುಕೂಲವಾಗುತ್ತೆ.''
{{gap}}" ಹೌದು ಸಾರ್. ನಮಗೆ ಹೊಳೀಲಿಲ್ಲ,
{{gap}}ಪರವಾಗಿಲ್ಲ. ಈ ಉತ್ಸವದ ವಿಷಯ ವರದಿ ಆಗೋ ಹಾಗೇ ನಾನು
ಮಾಡ್ತೀನಿ,<noinclude><references/></noinclude>
gt284pbeo1ndigglcry17cq2w7idr9p
ಪುಟ:Abhaya.pdf/೨೮೩
104
9376
320618
250358
2026-05-18T12:05:12Z
Shreelatha.Halemane
7642
/* Validated */
320618
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center= ಅಭಯ|left=೨೭೮ |right=}}
{{gap}}ಆ ಯೋಚನೆಯಲ್ಲಿ ತುಂಗಮ್ಮನ ಭಾಷಣ ಕೇಳುವುದನ್ನೆ ಸರಸಮ್ಮ
ಮರೆತು ಬಿಟ್ಟಿದ್ದರು. ನಿದ್ದೆಯಿಂದ ಎಚ್ಚತ್ತವರಂತೆ ಅವರು ತುಂಗಮ್ಮ,
ಓದುತಿದ್ದುದಕ್ಕೆ ಕಿವಿಗೊಟ್ಟರು
{{gap}}ಈ ವರ್ಷ, ನಮ್ಮ ಸೋದರಿಯರಲ್ಲಿ ಒಬ್ಬಳಾದ ಕನಕಲಕ್ಷಮ್ಮನಿಗೆ
ಮದುವೆಯಾಯಿತೆಂದು ತಿಳಿಸಲು ಸೆಂತೋಷಿಸುತ್ತೇವೆ"
{{gap}}ಕುಳಿತಿದ್ದ ಹುಡುಗಿಯರ ತುಟಿಗಳೆಲ್ಲ ಬಿಮ್ಮನೆ ಬಿಗಿದಿದ್ದರೂ ಕಣ್ಣು
ಗಳು ನಕ್ಚುವು. ಸರಸಮ್ಮನ ಉಸಿರು ಒಂದು ಕ್ಷಣ ತಡೆದು ನಿಂತಿತು.
ಕನಕಲಕ್ಷಮ್ಮನಿಗೆ ಮುಂದೇನಾಯಿತೆಂಬುದನ್ನು ಅವರು ಆ ಭಾಷಣದಲ್ಲಿ
ತಿಳಿಸಿರಲಿಲ್ಲ. ಮೇಯರ್ ಮತ್ತೊಮ್ಮೆ ಪಕ್ಕಕ್ಕೆ ಹೊರಳಿದರೆ ಕನಕ
ಲಕ್ಷಮ್ಮನ ವಿಷಯ ಅವರಿಗೆ ತಿಳಿದಿದೆಯೇನೋ ಎಂದು ಗಾಬರಿಯಾದರು
ಸರಸಮ್ಮ. ಆದರೆ ಮೇಯರ್ ಹೇಳಿದುದು ಬೇರೆಯೇ:
{{gap}}"ವರದಿವಾಚನ ಸ್ವಾಗತಭಾಷಣ ಎರಡನ್ನೂ ಒಂದರಲ್ಲೇ
ಸೇರಿಸ್ಟಿಟ್ಟದ್ದೀರಿ. ಒಳ್ಳೇದೇ ಆಯ್ತು !''
{{gap}}"ಬದುಕಿದೆ !---' ಎಂದು ಕೊಂಡರು ಸರಸನ್ಮು.
{{gap}}ಸ್ವಾಗತಭಾಷಣ ನಡೆದೇ ಇತ್ತು
{{gap}}ಕೊಡುವ ಸಹಾಯಧನವನ್ನು ಹೆಚ್ಚಿ ಸಬೇಕೆಂದು ಆಡಳಿತ ಸಮಿತಿ
ಯವರು ಈ ವರ್ಷವೂ ಸರಕಾರಕ್ಕೆ ಮನವಿಮಾಡಿದ್ದಾರೆ ಮಾನ್ಯಸಚಿವರು
ಈ ಸಾರೆಯೂ ಮನವಿಯನ್ನು ಪರಿಶೀಲಿಸುವುದಾಗಿ ಆಶ್ವಾಸನೆ
ಕೊಟ್ಟಿದ್ದಾರೆ...”
{{gap}}ಆ ಯುವಕ ಕಿಸಕ್ಕನೆ ನಕ್ಕ ತುಂಗಮ್ಮ ಅರೆಕ್ಷಣ ಭಾಷಣನಿಲ್ಲಿಸಿ
ಕಕ್ಕಾವಿಕ್ಕಿಯಾಗಿ ನೋಡಿದಳು. ಮೇಯರರೂ ಸಣ್ಣನೆ ನಕ್ಕರು. ತಾವು
ಬರೆದುದರಲ್ಲೆನೋ ಅಚಾತುರ್ಯವಾಗಿರಬೇಕೆಂದು ಸರಸಮ್ಮ ಯೋಚನೆಗೆ
ಒಳಗಾದರು. ....ಈ ವರ್ಷವೂ ಮಾಡಿರುವ ಮನವಿ...ಈ ಸಾರೆಯೂ
ದೊರೆತ ಆಶ್ವಾಸನೆ...ಓ! ಅದೊಂದು ರೀತಿಯ ವ್ಯಂಗ್ಯ. ಆತಪ್ಪನ್ನು
ತಮಗರಿಯದೆಯೇ! ಸರಸಮ್ಮ ಮಾಡಿದ್ದರು...ಈಗ ಎಂತಹ ಪ್ರಮಾದ!
{{gap}}ಆದರೆ ತುಂಗಮ್ಮ ಮುಂದಿನದನ್ನು ಅವಸರ ಅವಸರವಾಗಿಯೇ
ಓದಿದಳು.<noinclude><references/></noinclude>
kyszpr5dsvgne2ur1xrksowz0502bwc
ಪುಟ:Abhaya.pdf/೨೬೫
104
9377
320679
250329
2026-05-19T03:00:41Z
Shreelatha.Halemane
7642
/* Validated */
320679
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=೨೬೦}}
ಅಷ್ಟೇ. ತನ್ನ ಮಗೂನ ಬಿಟ್ಟು ಹೋಗೋಕೆ ಒಪ್ಪಲೇ ಇಲ್ಲ. ಆದರೆ ಮನೆ<br>
ತನದ ಗೌರವದ ಪ್ರಶ್ನೆ. ಒತಾಯಮಾಡಿ ಕರ್ಕೊಂಡು ಹೋದ್ರು....”<br>
{{gap}}“ಹೌದು ದೊಡ್ಡಮ್ಮ. ಮನುಷ್ಯರು ಅಂದ್ಮೇಲೆ ಒಳ್ಳೆಯವರೂ<br>
ಇದ್ದಾರೆ ಕೆಟ್ಟವರೂ ಇರ್ತಾರೆ."<br>
{{gap}}"ನಿಜ. ಆದರೆ, ಕೆಟ್ಟವರು ಒಳ್ಳೆಯವರಾಗೋಕೆ ಪ್ರಯತ್ನಿಸ್ಬೇಕು.<br>
ಒಳ್ಳೆಯವರು ಕೆಟ್ಟವರಾಗದಹಾಗೆ ಎಚ್ಚರವಾಗಿರ್ಬೇಕು. ಅಲ್ವಾ?”<br>
{{gap}}"ಹೂಂ, ಹೌದು.”<br><br>
{{gap}}ರಾತ್ರಿ ಮಲಗುವುದಕ್ಕೆ ಮುಂಚೆ ತುಂಗಮ್ಮ, ಪ್ರಭಾ ಎಂಬ ಹುಡುಗಿ<br>
ಬಂದು ಹೋದ ವಿಷಯ, ತಂದೆಗೆ ವಿವರವಾಗಿ ಕಾಗದ ಬರೆದಳು.<br>
{{gap}}ಬರೆದ ಬಳಿಕ ಆದ್ಯಂತವಾಗಿ ಓದಿದಳು. ಮನಸಿಗೆ ತೃಪ್ತಿಯಾಗಲಿಲ್ಲ.<br>
ಇದನ್ನು ತಂದೆಗಾದರೂ ಯಾಕೆ ಬರೆಯಬೇಕು ಎಂದು ಕೊಂಡಳು.<br>
{{gap}}ಕಾಗದ ಹರಿದು ಚೂರಾಯಿತು. ಬೆಳಿಗ್ಗೆ ಬಚ್ಚಲು ಒಲೆಗೆ ಹಾಕ<br>
ಲೆಂದು ಆ ಚೂರುಗಳನ್ನೆಲ್ಲ ಮುದುಡಿಸಿ ಮುದ್ದೆ ಮಾಡಿ ತನ್ನ ಚಾಪೆಯ<br>
ಕೆಳಗಿರಿಸಿದಳು.<br>
{{gap}}ಮನಸನ್ನು ಬೇಸರಕ್ಕೆ ಗುರಿಪಡಿಸಿದ ಯೋಚನೆಗಳನ್ನು ಓಡಿಸಲೆತ್ನಿ<br>
ಸುತ್ತಾ ದುಪಟ ಹೊದೆದುಕೊಂಡು ತುಂಗಮ್ಮ ನಿದ್ದೆಗೆ “ಬಾ ಬಾ ಬಾ”<br>
ಎಂದಳು. ಒಂದು, ಎರಡು, ಮೂರು, ಎಂದು ನೂರರ ತನಕ ಎಣಿಸ<br>
ಹೊರಟಳು. ಆ ಸಂಖ್ಯೆ ಅರುವತ್ತರ ಗಡಿ ದಾಟಿತೋ ಇಲ್ಲವೋ....<noinclude><references/></noinclude>
20a0lwnkkqjj9d45aoz0h8soq11iyxk
ಪುಟ:Abhaya.pdf/೨೮೪
104
9379
320703
250480
2026-05-19T04:25:25Z
Shreelatha.Halemane
7642
/* Validated */
320703
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=|right=೨೭೯}}
{{gap}}"ವೌರಸಭೆಯವರು ಕೊಡುತ್ತಿರುವ ಅಲ್ಪ ಸಹಾಯವನ್ನೂ ಹೆಚ್ಚಿಸ <br>
ಬೇಕೆಂದು ಕೇಳಿಕೊಳ್ಳಲಾಗಿದೆ ಈದಿನ ವೌರಸಭಾಧ್ಯಸಕ್ಷರೇ ನಮ್ಮ ವಾರ್ಷಿ <br>
ಕೋತ್ಸವದ ಅಧ್ಯಕ್ಷತೆಯನ್ನು ವಹಿಸಲು ಒಪ್ಪಿಕೊಂಡಿರುವುದು ನಮ್ಮ <br>
ಭಾಗ್ಯವೇ ಸರಿ.ಮತ್ತೊಮ್ಮೆ ನಾವು ತಮಗೆಲ್ಲಾ ಹೃತ್ಪೂರ್ವಕ ಸ್ವಾಗತ <br>
ಬಯಸುತ್ತೇವೆ" <br>
{{gap}}ತುಂಗಮ್ಮ ಭಾಷಣ ಮುಗಿಸಿ ಕೈ ಜೋಡಿಸಿ ಬಾಗಿ,ಎಲ್ಲರಿಗೂ <br>
ಎಂಬಂತೆ,ವಂದಿಸಿದಳು.ಆಕೆಯ ಕಂಕುಳುಗಳೆರಡೂ ಬೆವತು ರವಕೆ <br>
ಒದ್ದೆಯಾಗಿತ್ತು ಒಂದು ಹನಿ ಬೆವರು ಕತ್ತಿನ ಕೆಳಗಿಂದ ಹೊರಟು ಎದೆಯ <br>
ನಡುವಿನಿಂದಲೂ ಇನ್ನೊಂದು ಬೆನ್ನು ಹುರಿಯ ಮೇಲಿಂದಲೂ ಆಮೆಯ <br>
ನಡಿಗೆಯಿಂದ ಕೆಳಕ್ಕಿಳಿದುವು. <br>
{{gap}}ಕರತಾಡನವಾಯಿತು ತುಂಗಮ್ಮನ ಮುಖ ಕೆಂಪೇರಿತು.ಆಕೆ <br>
ಹಿಂಭಾಗಕ್ಕೆ ಬಂದು ಸರಸಮ್ಮನ ಪಕ್ಕದಲ್ಲಿ ನಿಂತಳು.<br>
{{gap}}ಆ ಬಳಿಕ ಕಾರ್ಯದರ್ಶಿನಿ ಕಮಲಮ್ಮನ ಭಾಷಣ.<br>
{{gap}}ಆದಾದಮೇಲೆ ಹಿತ ಚಿಂತಕರು....<br>
{{gap}}ಅಧ್ಯಕ್ಷತೆ ವಹಿಸಿದ್ದ ಮೇಯರ್,ತಮ್ಮ ಪಕ್ಕದಲ್ಲಿದ್ದ ಯುವಕನನ್ನು <br>
ಉದ್ದೇಶಿಸಿ ಕೇಳಿದರು: <br>
{{gap}}"ನೀವು ಮಾತಾಡ್ತಿರಾ ಮಿ.ಸೋಮಶೇಖರ್?" <br>
{{gap}}"ಬೇಡೀಪ್ಪಾ ಜಾಸ್ತಿ ಹಿಂಸೆ ಕೊಡಬಾರದು ಹುಡುಗೀರಿಗೆ." <br>
{{gap}}ಸುಂದರಮ್ಮ ಅನಂತರಾಮಯ್ಯ ಇಳಿಧ್ವನಿಯಲ್ಲಿ ಅಂದರು: <br>
{{gap}}"ಮಾತಾಡೋ ಸೋಮೂ." <br>
{{gap}}"ಬೇಡ ಅಕ್ಕಾ." <br>
{{gap}}ಅಕ್ಕ-ಹಾಗಾದರೆ ಈ ಯುವಕ ಸುಂದರಮ್ಮನ ಸಣ್ಣತಮ್ಮನಿರಬೇಕು <br>
ಎಂದು ಎಣಿಕೆ ಹಾಕಿದರು ಸರಸಮ್ಮ. <br>
{{gap}}ಬಹುಮಾನಗಳ ವಿನಿಯೋಗವಾಯಿತು ಮೇಯರರ ಪುಟ್ಟ ಭಾಷಣ <br>
ವಾಯಿತು. <br>
{{gap}}ನೆರೆದಿದ್ದ ಎಲ್ಲರಿಗೂ ಸರಸಮ್ಮ ಮನಃ ಪೂರ್ವಕವಾಗಿ ವಂದನಾರ್ಪಣೆ <br>
ಮಾಡಿದರು.<noinclude><references/></noinclude>
otfe1uu32c9v1q0y5vonvsigntjb7zw
ಪುಟ:Abhaya.pdf/೨೬೬
104
9383
320685
250331
2026-05-19T03:04:27Z
Shreelatha.Halemane
7642
/* Validated */
320685
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|೧೭}}
{{gap}}ಆ ಭಾನುನಾರ ಸಂಜೆ ಸರಸಮ್ಮ ಅಭಯಭಧಾಮದಲ್ಲಿರಲಿಲ್ಲ.
ಜಲಜ-ಸಾನಿತ್ರಿಯರನ್ನು. ಕರೆದುಕೊಂಡು ಸಾಮಾನುಕೊಳ್ಳಲೆಂದು
ಮಾರ್ಕೆಟಿಗೆ ಹೋಗಿದ್ದರು. ತುಂಗಮ್ಮ ಒಬ್ಬಳೇ ಕಿಟಕಿಯ ಎಡೆಯಿಂದ
ಹೊರ ನೋಡುತ್ತ ಕುಳಿತಿದ್ದಳು...
{{gap}}ಆಕಾಶ ಶುಭ್ರವಾಗಿರಲಿಲ್ಲ.. ಕರಿಯ ಮೋಡಗಳು ಕವಿದುಕೊಂಡಿ
ದ್ಹುವು. ಆ ಮೋಡಗಳನ್ನು ಚೆದುರಿಸಿ ಓಡಿಸುವಂತಹ ಬಲವಾದ ಗಾಳಿಯೂ
ಇರಲಿಲ್ಲ. ಮಳೆ ಬರುವ ಲಕ್ಷಣ.
{{gap}}"ಇವತ್ತು ಇವರೆಲ್ಲ ಒದ್ದೆಯಾಗದೆ ವಾಪಸು ಬರೊಲ್ಲ'
{{gap}}ಎಂದು ಮನಸಿನಲ್ಲೆ ತುಂಗಮ್ಮ ಅಂದುಕೊಂಡಳು.
{{gap}}ಅಷ್ಟರಲ್ಲಿ ಯಾರೋ ಅಭಯಧಾಮದತ್ತ ಬರುತಿದ್ದುದು ಕಂಡಿತು.
ಆತ ಸಮಿಪಿಸಿದಂತೆ, ಪರಿಚಯದ ವ್ಯಕ್ತಿ ಎನಿಸಿತು ತುಂಗಮ್ಮನಿಗೆ.
{{gap}}“ಮಹಾಬಲ''?
{{gap}}ಎಂದು ತುಂಗಮ್ಮನ ತುಟಗಳೆಡೆಯಿಂದ ಅಶ್ಚರ್ಯದ ಸ್ವರ ಹೊರ
ಟತು. ಸಂತೋಷವಾಯಿತು ಆಕೆಗೆ ಒಳಗೆ ಕುಳಿತು ಬೇಸರವಾಗಿ,
ಹರಟೆ ಹೊಡೆಯಲು ಹೊರಗಿನವರು ಯಾರಾದರೂ ದೊರೆತರೆ ಸಾಕು
ಎನ್ನುವಂತಹ ಮನೋಸ್ಥಿತಿ. ಬರುತಿದ್ದ ಮಹಾನುಭಾನನೋ, ಮನೆ
ಯಳಿಯ ! ತುಂಗಮ್ಮ ಲಗು ಬಗೆಯಿಂದ ಎದ್ದು ಬಾಗಿಲು ತೆರೆದಳು,
{{gap}}ಅತ ವೇಗವೇಗನಾಗಿ ಹೆಜ್ಜೆಗಳನ್ನಿರಿಸಿ ಬಾಗಿಲ ಬಳಿ ಬಂದ.
{{gap}}ಅಯ್ಯೊ! ಇದೇನೀವೇಷ? ಕೆದರಿದ ಕೂದಲು ಮಾಸಿದ ಬಟ್ಟೆ,
ವಿವರ್ಣವಾದ ಮುಖ...."ಕನಕಲಕ್ಷಮ್ಮ ಹೇಗಿದಾಳೆ?' ಎಂದು ಕೇಳಬೇ
ಕೆಂದು ತುಂಗಮ್ಮ ತೆರೆದಬಾಯಿ ಹಾಗೆಯೇ ಉಳಿಯಿತು.
{{gap}}ಅತ ಕಂಪಿಸುವ ಧ್ವನಿಯಲ್ಲಿ ಗಟ್ಟಿಯಾಗಿಯೆ ಕೇಳಿದ :<noinclude><references/></noinclude>
c2sbekeat4vh6585wstukw9uzif16p0
ಪುಟ:Abhaya.pdf/೨೯೧
104
9385
320642
250243
2026-05-18T14:47:45Z
Shreesha Sharma
7840
/* Validated */
320642
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|center=ಅಭಯ|left=೨೮೬|right=}}
{{gap}}ಹೃದಯ ನೋವು ಆಡಿಸಿದ್ದ ಆಂಧ ಮಾತನ್ನು ಜಲಜ ಪೂರ್ತಿ
ಗೊಳಿಸಲಿಲ್ಲ.
{{gap}}ಅಲ್ಲಿಯಾರೂ ಇರಬೇಕಾದ್ದಿಲ್ಲವೆಂದೇ ಡಾಕ್ಟರರೂ ಹೇಳಿದರು.
{{gap}}"ಇಲ್ಲಿ ಸ್ಟಾಫ್ ಇರೋದು ಯಾತಕ್ಕೆ? ನರ್ಸುಗಳುಯಾಕಿರೋದು?
ನಾವುಯಾಕೆ? ಏನೂತಿಳೀದವರಹಾಗೆ ಆಂತೀರಲ್ಲಮ್ಮ ನೀವು!"
{{gap}}ಆರೀತಿ ತಮ್ಮ ದೊಡ್ಡಮ್ಮನೊಡನೆ ಡಾಕ್ಟರು ಮಾತನಾಡಿದ್ದನ್ನು
ಕಂಡು ತುಂಗಮ್ಮ-ಜಲಜೆಯರಿಗೆ ಕೆಡುಕೆನಿಸಿತು,ಆವಮಾನಿತರಾದವರಂತೆ ಆವರು ಉಗುಳು ನುಂಗಿದರು.
{{gap}}"ಹಾಗಲ್ಲ ಡಾಕ್ಟರ್ ಯಾರಾದರೂ ಇಲ್ಲಿರ್ಬೇಕೂಂತ ನಾವೇ
ಹೇಳಿದ್ವಿ"
{{gap}}"ಓ!" ಎಂದರು ವಯಸ್ಸಾಗಿದ್ದ ಆ ಡಾಕ್ಟರಮ್ಮ ತುಂಗಮ್ಮನನ್ನು
ನೋಡಿ,"ಪೇಷಂಟು ನಿಮ್ಮ ಸ್ನೇಹಿತೇನೋ"
{{gap}}ಜಲಜ ಹೌದೆಂದು ತಲೆಯಾಡಿಸಿದಳು.
{{gap}}"ಏನೂ ಹೆದರ್ಕೋಬೇಡಿ ನಿಮ್ಮ ಸ್ನೇಹಿತೇನ ನಾವು ನೋಡ್ಕೋ
ತೀವಿ."
{{gap}}ಆ ಆಶ್ವಾಸನೆಯ ಸ್ವರ ವ್ರಮಾಣಿಕವಾಗಿತ್ತೆಂದು ತುಂಗಮ್ಮನಿಗೆ
ಆನಿಸಿತು,,,ಆ ಬಳಿಕ ಅವರು ಮೂವರೂ ಆಭಯಧಾಮದ ಹಾದಿ
ಹಿಡಿದರು.
{{gap}}ಮಾರನೆದಿನ ಬೆಳಿಗ್ಗೆ ಜಲಜ ಆಸ್ಪತ್ರೆಗೆ ಹೋಗಿ ಬಂದಳು; ಸಂಜೆಗೆ
ತುಂಗಮ್ಮ.
{{gap}}ಆದಾದ ಮರುದಿನ ಸರಸಮ್ಮನೇ ಬೆಳಗ್ಗೆ ಹೋದರು,ಸಂಜೆ ತುಂಗಮ್ಮ
ಹೊರಟಳು,
{{gap}}ಆಕೆ ಆಸ್ವತ್ರೆ ಸೇರಿದಾಗಲಿನ್ನೂ ಐದೂಕಾಲುಗಂಟೆ,ಸಂದರ್ಶಕರನ್ನು
ಒಳಕ್ಕೆ ಬಿಡಲು ಮತ್ತೂ ಹದಿನೈದು ನಿಮಿಷ ಬೇಕು ಮೆಟ್ಟಲೇರುವಲ್ಲೆ
ಪುಟ್ಟಗೇಟುಹಾಕಿ ವಾರ್ಡ್ ಬಾಯ್ ನಿಂತಿದ್ದ,ತುಂಗಮ್ಮ,ಎಲ್ಲರಹಿಂದೆಕಂಬಕ್ಕೊರಗಿ ನಿಂತಳು.
{{gap}}ಪ್ಯಾಂಟಿನ ಎಡಜೇಬಿನೂಳಕ್ಕೆ ಕೈ ಇಳಿಬಿಟ್ಟು ಉಣ್ಣೆಯ ಸೂಟು<noinclude><references/></noinclude>
i5vmcn7avkqwf4txk242xcx65i8nvm1
ಪುಟ:Abhaya.pdf/೨೮೨
104
9398
320702
250362
2026-05-19T04:23:56Z
Shreelatha.Halemane
7642
/* Validated */
320702
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ |left=|right=೨೭೭}}
{{gap}}“ ಅಷ್ಟು ಮಾಡಿದರೆ ತುಂಬ ಉಪಕಾರವಾಗುತ್ತೆ ಸಾರ್.”
{{gap}}ಸಂಗ್ರಹಿಸಿ ತಂದಿದ್ದ ಹೊಸಸೀರೆಗೆಳನ್ನು ಹಂಚಿ ಉಟ್ಟುಕೊಂಡು
ಅಲಂಕಾರವಾಗಿದ್ದರು ಹುಡುಗಿಯರೆಲ್ಲ. ಕುರುಡಿ ಸುಂದ್ರಾ ಮತ್ತು ಪಾರ್ವತಿ
ದೇವತಾಪ್ರಾರ್ಥನೆ ಮಾಡಿದರು. ಸರಸಮ್ಮನ ಪರವಾಗಿ ತುಂಗಮ್ಮ ಸ್ಟಾಗತ
ಭಾಷಣವನ್ನೋದಿದಳು
{{gap}}ನಿರಾಭರಣ ಸುಂದರಿ ಸೆರಗನ್ನು ಎಡೆಯ ಮೇಲೆ ಹಾಯಿಸಿ
ಇನ್ನೊಂದು ಕಡೆಯಿಂದ ಇಳಿಬಿಟ್ಟು ನಡುವಿಗೆ ಬಿಗಿದಿದ್ದಳು. ಎತ್ತರದ
ಮಾಟವಾದ ನಿಲುವು ಯಾವ ಕಂಪನವೂ ಇಲ್ಲದ ಉಚ್ಚಸರ. ಸ್ಪಷ್ಟ
ಪದೋಚ್ಚಾರಣೆ. ಆಕೆ ಆಡುತಿದ್ದ ಮಾತು, ಕುಳಿತಿದ್ದ ಹುಡುಗಿಯರ ತಲೆ
ಗಳನ್ನು ಹಾದು ಗೋಡೆಗೆ ಬಡಿದು ಇಂಪಾಗಿಯೇ ಪ್ರತಿಧ್ವನಿಸುವಂತಿತ್ತು.
{{gap}}ತಮ್ಮ ಹಿಂದೆ ನಿಂತಿದ್ದ ಸರಸಮ್ಮನನ್ನು ಉದ್ದೇಶಿಸಿ ಮೇಯರ್
ಕೇಳಿದರು:
{{gap}}“ ಇವರು ಯಾರು ?''
{{gap}}ತುಂಗಮ್ಮ ಅಂತ. ನನ್ನ ಸಹಾಯಿಕೆ.''
{{gap}}"I see."
{{gap}}“ ಮೊದಲು ಅಭಯಧಾಮಕ್ಕೆ ಬೇರೆ ಹುಡುಗಿಯರ ಹಾಗೆಯೇ
ಈಕೇನೂ ಬಂದಿದ್ರು.”
{{gap}}"ಓ!"
{{gap}}ಅಭಯಧಭಾಮದ ಹಿರಿಮೆಯ ಬಾವುಟ ತುಂಗಮ್ಮ, ಆರೀತಿ ಸರಸಮ್ಮ
ಹೇಳಿದುದು ಸರಿಯಾಗಿಯೇ ಇತ್ತಲ್ಲವೆ? ಆ ಅಭಿಮಾನಕ್ಷಮ್ಯವಲ್ಲವೆ?
{{gap}}ಮೇಯರ್ ಆಶ್ಚರ್ಯ ವ್ಯಕ್ತಪಡಿಸಿದುದನ್ನು ಕಂಡು ಸಂತೋಷ
ಗೊಂಡ ಸರಸಮ್ಮ ಹೆಮ್ಮೆಯಿಂದಲೇ ಅಧ್ಯಕ್ಷಪೀಟದ ಅಕ್ಕ ಪಕ್ಕದಲ್ಲಿದ್ದವ
ರನ್ನು ನೋಡಿದಳು. ತಮ್ಮನ್ನೇ ದಿಟ್ಟಿಸುತಿದ್ದ ಆ ಯುವಕ... ತಾವು ಆಡಿದ
ಮಾತುಗಳೂ ಅತನಿಗೆ ಕೇಳಿಸಿದವೋ....ಏನೋ....ಮುಖ ಮಾಟವಾಗಿತ್ತು.
ಮುಗುಳುನಗು. ಕುಣಿಯುತಿತ್ತು ತುಟಿಗಳಮೇಲೆ. ಯಾರೋ ಆತ?
ಆತನಪಕ್ಕದಲ್ಲೆ ಸುಂದರಮ್ಮಅನಂತರಾಮಯ್ಯ ಕುಳಿತಿದ್ದರು - ಆಡಳಿತ
ಸಮಿತಿಯ ಪ್ರಮುಖ ಸದಸ್ಯೆ. ಅವರ ಸಂಬಂಧಿಕನಿರಬಹುದೆ? ?<noinclude><references/></noinclude>
fv7kbzvab900i3lwnq9xxbf3nau7d66
ಪುಟ:Abhaya.pdf/೨೭೩
104
9401
320692
249289
2026-05-19T03:46:35Z
Shreelatha.Halemane
7642
/* Validated */
320692
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''ಅಭಯ'''|left='''೨೬೮'''|right=''''''}}
{{gap}}ಮಹಾಬಲ ಓಡಿ ಓಡಿ ಹೋಗಿ ಅವಳನ್ನು ತಡೆದು ನಿಲ್ಲಿಸಿದ. ಆಕೆ ಗಲಾಟೆಮಾಡಲಿಲ್ಲ.[ಹಾಗೆ ಕೂಗಾಡಿರೆ ಜನ ಸೇರುವರೆ೦ದು, ಫೋಲೀಸರು ಬರುವರೆ೦ದು, ಗ೦ಡನ ಜತೆಯಲ್ಲಿ ಕಳುಹಿಡುವರೆ೦ದು ಆಕೆಗೆ ಗೊತ್ತಿರಲಿಲ್ಲವೆ?]
{{gap}}ಯಾಚಿಸುವ ಧ್ವನಿಯಲ್ಲಿ ಮಹಾಬಲ ಕೇಳಿದ:
{{gap}}"ಕನಕ, ಯಾಕೆ ಹೀಗ್ಮಾಡ್ಡೆ? ಇದು ಸರೀನಾ? ಬಾ ಓಗಾನಾ ಮನೇಗೆ."
{{gap}}"ಊ ಹೊ೦"
{{gap}}"ನೀನು ಮಾಡಿದ್ದೆಲ್ಲಾ ಮರೆತ್ಬುಡ್ತೀನಿ.....ಎಂದ್ಕೋಬೇಡ."
{{gap}}"ಎದರ್ಕೆ!"
{{gap}}"ಯಾಕ್ನಗ್ತೀಯಾ? ಬಾ ನೆಡಿ. ಒಟ್ಲಾಗೆ ಕಾಫಿ ಕುಡಿಯಾನ."
{{gap}}"ನೀವು ಒ೦ಟೋಗಿ. ನಾನ್ಬರಾಕಿಲ್ಲ."
{{gap}}"ಯಾಕ?"
{{gap}}ಕನಕಲಕ್ಷಮ್ಮ ಮಾತ್ತನಾಡಲಿಲ್ಲ. ಅಲ್ಲೇಇದ್ದ ಆಟದ ಬಯಲಿನತ್ತ ಆಕೆಯನ್ನು ಕರೆದೊಯ್ಯತ್ತ ಮಹಾಬಲ ಆಳು ಬೆರೆತ ಧ್ವನಿಯಲ್ಲಿ ಹೇಳಿದ;
{{gap}}"ಅ೦ಗನ್ಬ್ಯಾಡ್ವೆ...ಬಾ ಮನೀಗೆ."
{{gap}}"ಅವಳು ಬರಲು ಒಪ್ಪಲೇ ಇಲ್ಲ"
{{gap}}"ಎಲ್ಲೋಗ್ತೀಯಾ ಈಗ? ನನ್ನೂ ಕಕ್ಕೊಂಡು ಓಗು.
{{gap}}"ಇಲ್ಲ! ನೀವು ಅಲ್ಲೆ ಬರಬಾರ್ದು."
{{gap}}"ಇ೦ಗ್ಮಾಡ್ಬವುದಾ ನೀನು?"
{{gap}}ಕನಕಲಕ್ಷಮ್ಮ ಒ೦ದುಕ್ಶಣ ಸುವ್ಮನಿದ್ದು ಅ೦ದಳು:
{{gap}}"ನೀವು ಒಳ್ಳಿಯೋರು. ನಾನು ತಪ್ಮಾಡಿದೀನಿ. ನನ್ನಕ್ಷಮಿಸ್ಬಿಡಿ. ಬೇರೆಮದುವೆ ಮಾಡಿಕ್ಕೊಳ್ಳಿ."
{{gap}}ಮಹಾಬಲನಿಗೆ ತಾನು ಅಸಹಾಯನೆ೦ದು ತೋರಿತು. ಮಾತ್ಯೇಹೊರಡಲಿಲ್ಲ....ಕಳೆದು ಹೋಗಿದ್ದ ಕನಕನನ್ನು ಆತ ಮತ್ತೆ ಕ೦ಡಿದ್ದ. ಆದರೂ ಕೈಗೆಟಕದ ಹಾಗೆ ಎಷ್ವೂ೦ದು ದೂರವಿದ್ದಳು ಆಕೆ!<noinclude><references/></noinclude>
goi9nhen82kqox7jbhn81zq7x1avgh8
ಪುಟ:Abhaya.pdf/೨೭೪
104
9409
320693
249290
2026-05-19T03:52:11Z
Shreelatha.Halemane
7642
/* Validated */
320693
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''ಅಭಯ'''|left=''''''|right='''೨೬೯'''}}
{{gap}}ಒಂದು ಉಪಾಯ ಹೊಳೆದು ಮಹಾಬಲ ಕೊನೇಯ ಯತ್ನವನ್ನು ಮಾಡಿದ :
{{gap}}"ಕನಕ, ದೊಡ್ಡಮ್ನಲ್ಲಿಗೆ ಓಗಿ ಬರಾನ ನಡಿ."
{{gap}}"ಯಾಕೊ?"
{{gap}}"ಅವ್ರು ನಿನ್ನ ಕರ್ಕೊ೦ಬಾ ಅ೦ದ್ರು."
{{gap}}"ಬ್ಯಾಡಪ್ಪ. ಅಲ್ಲಿಗ್ಬರಾಕೆ ನ೦ಗೆ ಎದ್ರಿಕೆ ಆಗೈತೆ
{{gap}}"ನೊಡ್ಡಾ! ಅ೦ಗನಬಾರದು.....ದೊಡ್ಡಮ್ಮ ಒಳ್ಳಿಯೋರಲ್ವಾ?"
{{gap}}"ಸಾಕು! ನಾನ್ಹೋಗ್ತೀನಿ!"
{{gap}}ಆಕೆ ಹೊರಟೇ ಹೋಗುವಳೆ೦ಬುದು ಮಹಾಬಲನಿಗೆ ಸ್ಪಷ್ಟವಾಯಿತು.
{{gap}}ನಿರಾಶೆಯ ಮಹಾಪೂರ ತನ್ನನ್ನು ತೇಲಿಸಕೊ೦ಡು ಹೋಗುತಿದ್ದ೦ತೆ ತೋರಿತು. ಬದುಕು, ಬಡತನ, ಭವಿಷ್ಯತ್ತುಗಳು ಅವನ ಮು೦ದೆ ಸುಳಿದಾಡಿದುವು. ಮಹಾಬಲ ಕನಕಲಕ್ಷ್ಮಮ್ಮನನ್ನೇ ನೋಡಿದ. ಕೊರಳಲ್ಲಿ ತಾನು ಕೊಟ್ಟಿದ್ದ ಸರವಿರಲಿಲ್ಲ. ಬಳೆಗಳರಲಿಲ್ಲ ಕೈಗಳಲ್ಲಿ. ಆಸೀರೆಯೂ ಬೇರೆಯೇ.
{{gap}}"ಸರ-ಬಳೆ ಏನ್ಮಾಡ್ದೆ?"
{{gap}}ತುಟಿಗಳ ನಡುವೆ ಎ೦ಜಲನ್ನು ಹೊರತ೦ದು ಒಳಕ್ಕೊಯ್ದು, ಕಣ್ಣುಗಳನ್ನು ಕಿರಿದು ಗೊಳಿಸಿ, ಆಕೆಯೆ೦ದಳು;
{{gap}}"ಕಳೆದೋಯ್ತು."
{{gap}}"ಸುಳ್ಳು! ಸುಳ್ಳು!"
{{gap}}ಅದು ಸುಳ್ಳೆ೦ಬ ವಿಷಯದಲ್ಲಿ ಸ೦ಶಯವಿರಲಿಲ್ಲ ಮಹಾಬಲನಿಗೆ. ತನ್ನಮನೆಗೆ ಬ೦ದ ಮೇಲೆ ಆಕೆ, ಅಬಯಧಾಮದಲ್ಲಿ ಏಳುತಿದ್ದ೦ತೆ ನಸುಕಿನಲ್ಲೀ ಏಳುತಿದ್ದುದು;ಮನೆಯನ್ನು ಗುಡಿಸಿ ಸಾರಿಸಿ ಚೊಕ್ಕಟವಾಗಿಡುತಿದ್ದುದು; ಬಚ್ಚಲಿಗೆ ಉರಿಹಾಕಿ ನೀರು ಬಿಸಿಮಾಡಿ ತನ್ನನ್ನು ಎಬ್ಬಿಸುತಿದ್ದುದು; ರಾತ್ರಿ ಆಕೆಯ ಯಾವನದ ಮೈ ತನಗೆ ಕೊಡುತಿದ್ದ ಸ್ಪರ್ಶ ಸುಖ; ಎಲ್ಲವನ್ನೂ ಆ ಕ್ಷಣವೇ ಮಹಾಬಲ ಮರೆತ. ಅವನೆದುರು ಹೊಳೆದುದೊ೦ದೇ ವಿಷಯ: 'ಈಕೆ ಕಳ್ಳಿ..! ಸುಳ್ಳಿ!'
{{gap}} ಸೀರೆ ಎಲ್ಲಿ ಎಂದೂ ಕೇಳಬಹುದಾಗಿತ್ತು. ಆದರೆ ಅಬಿಮಾನಿಯದ ಮಹಾಬಲ ಕೇಳಲಿಲ್ಲ. ಅದನ್ನು ಆತ ಮರೆಯಲೆತ್ನಿಸಿದರೂ ಆ ಸೀರೆ<noinclude><references/></noinclude>
jdwdmhi6ka2hkc1rond9kc80045yzuz
ಪುಟ:Abhaya.pdf/೨೭೧
104
9530
320690
249286
2026-05-19T03:40:20Z
Shreelatha.Halemane
7642
/* Validated */
320690
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''ಅಭಯ'''|left='''೨೬೬'''|right=''''''}}
{{gap}}ಆ ಸಂದರ್ಭದಲ್ಲಿ ಸರಸಮ್ಮ ಮಾತನಾಡಿದರು. ಅದು ಮಾಮೂಲಿನ ಭಾಷಣವಾಗಿರಲಿಲ್ಲ. ಸಂಕಟಪದುತಿದ್ದ ಹೃದಯದಿಂದ ಮಾತುಗಳು ಬಲು ಪ್ರಯಾಸದಿಂದಲೆ ಹೊರಬಂದವು.
{{gap}}"ಹುಡುಗೀರಾ...ಏನು ಹೇಳಬೇಕೋ ನನಗೆ ತಿಳೀದು....ಕನಕಲಕ್ಷಮ್ಮ ಹೀಗೆ ಮಾಡ್ತಾಳೆ ಅಂತ ಯಾರಿಗೆ ಗೊತ್ತಿತ್ತು? ಅಂತೂ ನಾವು ತಲೆ ಎತ್ತೋದು ಕಷ್ಟವಾಯಿತು, ಒಳ್ಳೆಯವರಾಗಿ ಗಂಡನ ಜತೆಯಲ್ಲಿ ಸಂಸಾರ ಮಾಡ್ಬೇಕೂಂತ ನಿಮಗೆ ಯಾರಿಗೂ ಆಸೆ ಇಲ್ವೆ? ಇನ್ನು, ವರ ಹುಡುಕೋದು ಎಷ್ಟು ಕಷ್ಟವಾಗ್ತದೆ ಗೊತ್ತಾ?...."
{{gap}}ತುಂಗಮ್ಮನನ್ನು ಕುರಿತು ಅಭಿನಂದಿಸಿ ಮಾತನಾಡಬೇಕಾಗಿದ್ದವರು, ಕನಕಲಕ್ಷಮ್ಮನ ವರ್ತನೆಯಿಂದ ಅಭಯಧಾಮಕ್ಕೆ ತಟ್ಟಿದ ಕಲಂಕದ ವಿಷಯವಾಗಿಯೇ ಮಾತನಾಡಿದರು ಮಾತನಾಡುತ್ತಾ ಒಮ್ಮೆಲೆ ಅದು ಅವರಿಗೆ ಅರಿವಾಯಿತೇನೋ!
{{gap}}"ಅಂದಹಾಗೆ, ನಾನು ಈ ಹಬ್ಬದೂಟದ ವಿಷಯ ಹೇಳಬೇಕು. ಏನೋ ಹೇಳಬೇಕಾಗಿದ್ದವಳು ಅದನ್ನು ಮರೆತು ಬೇರೇನೋ ಹೇಳ್ತಾ ಇದ್ದೇನೆ. ನಮ್ಮ ತುಂಗಮ್ಮ--"
{{gap}}ಅದು ತುಂಗಮ್ಮನ ಗುಣಗಾನ. ಮಾತನಾಡುತಿದ್ದಂತೆ, ಹುಡುಗಿಯರೆದುರು ಒಬ್ಬಳನ್ನೇ ಹೀಗೆ ಹೊಗಳುವುದು ಸರಿಯಲ್ಲವೆಂದು ಸರಸಮ್ಮನಿಗೆ ತೋರಿತು.
{{gap}}"ತುಂಗಮ್ಮನನ್ನು ನಾನು ಹೊಗಳುವಾಗ ನಿಮ್ಮೆಲ್ಲರನ್ನೂ ಹೊಗಳುತಿದ್ದೇನೆ ಎಂದು ನೀವು ಭಾವಿಸಬೇಕು. ಮನುಷ್ಯರು ಯಾರೂ ಇದ್ದ ಹಾಗೆ ಇರುವುದಿಲ್ಲ ಬದಲಾಗುತ್ತಾಲೇ ಇರುತ್ತಾರೆ. ಈ ಬದಲಾವಣೆ ಎರಡು ವಿಧ. ಕೆಲವರು ಬದಲಾಗುತ್ತಾ ಮತ್ತೂ ಒಳ್ಳೆಯವರಾಗುತ್ತಾರೆ. ಕೆಲವರು ಮತ್ತೂ ಕೆಟ್ಟವರಾಗುತ್ತಾರೆ. ನಾವು ಮೊದಲನೆಯವರಹಾಗೆ ದಿನಕಳೆಯುತ್ತ ಹೆಚ್ಚು ಹೆಚ್ಚು ಒಳ್ಳೆಯವರಾಗ ಬೇಕು. ಅಲ್ಲವಾ?...."
{{gap}}ಹೌದು--ಎಂದು ಯಾರೂ ಉತ್ತರಿಸಲಿಲ್ಲ. ಆದರೆ ಆ ಮೌನಕ್ಕಿದ್ದುದು ಅದೇ ಅರ್ಥ.
{{gap}}ಔತಣ ಹಾಗೆ ಕಳೆಯಿತು. ತುಂಗಮ್ಮ ಎಲ್ಲಿರಿಗಿಂತ ಹೆಚ್ಚು<noinclude><references/></noinclude>
pxe2fei220gfqtp83q6deehweuv5ns9
ಪುಟ:Abhaya.pdf/೨೭೨
104
9531
320691
249288
2026-05-19T03:42:18Z
Shreelatha.Halemane
7642
/* Validated */
320691
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''ಅಭಯ'''|left=''''''|right='''೨೬೭'''}}
ದುಃಖಿನಿಯಾಗಿದ್ದಳು. ಕುಲಾವಿ ಕಾಲು ಚೀಲಗಳಿಗಾಗಿ ಉಣ್ಣೆ ಕೊಂಡು ತಂದು ಕನಕಲಕ್ಷಮ್ಮನಿಗೆ ಆದಿನ ಕಳುಹಿಸಬೇಕೆಂಬುದು ಅವಳ ಅಪೇಕ್ಷೆಯಾಗಿತ್ತು. ಆದರೆ ಆ ಕನಕಲಕ್ಷಮ್ಮ__
{{gap}}....ಆದಿನ, ತನ್ನ ಸಂಪಾದನೆ ಕೈಗೆ ದೊರೆತ ಮೊದಲದಿನ, ತುಂಗಮ್ಮ ತನ್ನ ತಂದೆಗೆ ಕಾಗದ ಬರೆಯಲು ಕುಳಿತಳು. ಬರೆವಣಿಗೆ ಬಲು ಕಷ್ಟವಾಯಿತು. ಹೃದಯವನ್ನು ಯಾರೋ ಹಿಂಡಿದ ಹಾಗೆ ನೋವಾಯಿತು. ಕನಕಲಕ್ಷಮ್ಮನ ವಿಷಯ ಬರೆದು, ತನ್ನ ದುಃಖವನ್ನು ಮಾತುಗಳಲ್ಲಿ ಹರಿಯಗೊಡಬೇಕೆಂದು ತುಂಗಮ್ಮ ಯೋಚಿಸಿದಳು ಮರುಕ್ಷಣವೆ, ಛೆ! ಅಭಯಧಾಮ ಇಷ್ಟೇನೆ ಎಂದುಕೊಳ್ಳಬಹುದು ಅಣ್ಣಯ್ಯ. ಆತನಿಗೆ ಈ ವಿಷಯ ಏನನ್ನೂ ಬರೆಯ ಕೂಡದು, ಎಂದು ತೀರ್ಮಾನಿಸಿದಳು ಹಾಗೆ ಮಗಳು, ಒಲ್ಲದ ನಗೆಯನ್ನು ಮುಖದ ಮೇಲೆ ಬರಿಸಿಕೊಡು ತಂದೆಗೆ ಒಳ್ಳೆಯ ಕಾಗದ ಬರೆದಳು
{{gap}}ಆ ವಾರದಲ್ಲೆ ಮತ್ತೊಮ್ಮೆ ಮಹಾಬಲ ಬಂದ ಹತ್ತು ವರ್ಷಗಳಷ್ಟು ಮುಂದಕ್ಕೆ ಹಾರಿ ಹೋದ ಹಾಗಿತ್ತು ಅವನ ವಯಸ್ಸು ಗಲ್ಲಗಳು ಬತ್ತಿಹೋಗಿ ಕಣ್ಣುಗಳು ಗುಳಿ ಬಿದ್ದಿದ್ದುವು. ಸರಸಮ್ಮ ಮತ್ತು ತುಂಗಮ್ಮನೆದುರು, ನಡೆದುದೆಲ್ಲವನ್ನೂ ಆತ ಹೇಳಿದ.
{{gap}}ಕನಕಲಕ್ಷಮ್ಮ ಮನೆಯಿಂದ ಓಡಿ ಹೋದ ಮರುದಿನದಿಂದಲೆ ಮಹಾಬಲ ರಜಾಪಡೆದ. ಕಾಲು ಸ್ವಲ್ಪ ಕುಂಟುತಿದ್ದರೂ ಹುಚ್ಚನಂತೆ ಬೀದಿ ಬೀದಿ ಅಲೆದ 'ಅಕ್ಕನ ಮನೆ' ಎಂಬುದು ಸುಳ್ಳಾದರೂ, ಆ ಅವಸರದಲ್ಲಿ ಶೇಷಾದ್ರಿಪುರ ಎಂಬುದನ್ನಷ್ಟು ಸತ್ಯವಾಗಿಯೆ ಆಕೆ ಹೇಳಿರಬಹುದೆಂಬುದು ಮಹಾಬಲನ ಊಹೆಯಾಗಿತ್ತು. ಹೀಗಾಗಿ ಸಂಜೆಯ ಹೊತ್ತು ಶೇಷಾದ್ರಿಪುರದ ಬೀದಿಗಳಲ್ಲಿ ಎರಡನೆಯ ಬಾರಿ ಸುತ್ತಾಡಿದ.
{{gap}}ಹಾಗೆ ಸುತ್ತಾಡಿ ಬೇಸತ್ತು ಜೋಲುಮೋರೆ ಹಾಕಿಕೊಂಡು ಕಾಫಿಯನ್ನಾದರೂ ಕುಡಿಯೋಣವೆಂದು [ಕಾಫಿ ಎಂದ ಆತ; ಹೆಂಡವಿದ್ದರೂ ಇರಬಹುದು!] ಅಂಗಡಿಬೀದಿಗೆ ಬರುತಿದ್ದಾಗ ಆಕೆ ಕಾಣಸಿಕ್ಕಿದಳು. ಪಕ್ಕದ ಬೀದಿಯಲ್ಲಿ ಅವಸರ ಅವಸರವಾಗಿ ಹೋಗುತಿದ್ದಳು. ತಲೆಯ ಮೇಲೆ ಸೆರಗನ್ನು ಹೊದೆದುಕೊಂಡಿದ್ದಳು<noinclude><references/></noinclude>
fjwnups755z74w99q9gwkv3rs5ei3ag
ಪುಟ:Abhaya.pdf/೨೫೧
104
9539
320621
275441
2026-05-18T13:18:33Z
Shreelatha.Halemane
7642
320621
proofread-page
text/x-wiki
<noinclude><pagequality level="4" user="~aanzx" /></noinclude>{{rh|center=ಅಭಯ|left=೨೪೬}}
{{gap}}ತುಂಗಮ್ಮ ಅದೆಷ್ಟೋ ಬಾರಿ ಆ ಕಾಗದವನ್ನೋದಿದಳು<br>
{{gap}}ತನ್ನ ದೊಡ್ಡಮ್ಮನಬಳಿಗೆ ಒಯ್ದು ತುಂಗಮ್ಮ ಅದನ್ನು ತೋರಿಸಿದಳು:<br>
{{gap}}"ನಮ್ಮಣ್ಣ ಕಾಗದ ಬರೆದಿದಾರೆ. ಓದಿ ನೋಡಿ ದೊಡ್ಡಮ್ಮ"<br>
{{gap}}ಮುಖಬಾಗಿಸಿ, ಕನ್ನಡಕ ಮತ್ತು ಹುಬ್ಬುಗಳೆಡೆಯಿಂದ ತುಂಗಮ್ಮ<br>
ನನ್ನು ನೋಡಿ, ಮತ್ತೆ ತಲೆಯೆತ್ತಿ ಕತ್ತನ್ನು ಹಿಂದಕ್ಕೆ ಸರಿಸಿ ಸರಸಮ್ಮ<br />
ನೆಂದರು:<br>
{{gap}}"ನಿನಗೆ ಬಂದಿರೋ ಕಾಗದ ನಾನ್ಯಾಕೆ ಓದ್ಲೆ?"<br>
{{gap}}ದೊಡ್ಡಮ್ಮನ ನಗೆಯಮಾತಿಗೆ ನಗುತ್ತಲೆ ತುಂಗಮ್ಮ ಉತ್ತರ<br />
ವಿತ್ತಳು:<br />
{{gap}}"ಓ! ಇದೊಂದು ಹೊಸದು ಇಷ್ಟು ದಿವಸ ಓದ್ತಿರ್ಲಿಲ್ವೇನೊ?"<br />
{{gap}}"ಆ ದಿವಸ ಬೇರೆ. ಈಗಿನದು ಬೇರೆ"<br />
{{gap}}"ಹೂಂ ಗೊತ್ತು ಓದ್ನೋಡಿ ದಮ್ಮಯ್ಯ"<br />
{{gap}}ತುಂಗಮ್ಮನನ್ನು ತಮ್ಮ ಹಾಸಿಗೆಯ ಮೇಲೆ ಕೂತಿರ ಹೇಳಿ, ಸರಸಮ್ಮ<br />
ಆ ಕಾಗದವನ್ನೋದಿದರು. ಅವರ ತಂದೆಯಿಂದ ಎಂದೂ ಅಂತಹಕಾಗದ<br />
ಅವರಿಗೆ ಬಂದಿರಲಿಲ್ಲ ಬಾಲ್ಯದಲ್ಲಿ ಅವರಿಗೆ ಯಾರೂ ಅಷ್ಟು ಪ್ರೀತಿಯಿಂದ<br />
ಬರೆದಿರಲಿಲ್ಲ....ನಿವೃತ್ತ ಉಪಾಧ್ಯಾಯರ ಕೈಬರಹ ಅಕ್ಷರಗಳು ಏಕ<br />
ಪ್ರಕಾರವಾಗಿದ್ದುವು ಅವು ಮುದ್ದಾಗಿರಲಿಲ್ಲ ಆದರೆ ಬರೆದಿದ್ದ ವಿಷಯ<br />
ಮುದ್ದು ಮುದ್ದಾಗಿತ್ತು...ಒಂದು ಕಾಗದದಲ್ಲೆ ಅಷ್ಟೊಂದು ಒಲುಮೆ<br />
ನಲುಮೆಗಳನ್ನು ತುಂಬುವುದು ಸಾಧ್ಯ ಅಲ್ಲವೆ?<br />
{{gap}}ಓದುತಿದ್ದ ಸರಸಮ್ಮ ಹೃದಯದಲ್ಲಿ ಮೃದುಭಾವನೆಗಳ ಘರ್ಷಣೆ<br />
ನಡೆದುದರ ಫಲವಾಗಿ ಕಣ್ಣುಗಳು ಮಂಜಾದುವು ಕನ್ನಡಕ ಗಾಜಿಗೆ<br />
ಯಾರೋ ನೀರಿನ ಹನಿ ಸಿಂಪಡಿಸಿದಂತಾಯಿತು.<br />
{{gap}}ಓದಿ ಮುಗಿದಾಗ ಅವರು ಮಾತನಾಡಲಿಲ್ಲ. ಮಾತೃವಾತ್ಸಲ್ಯದಿಂದ<br />
ತುಂಗಮ್ಮನನ್ನು ನೋಡಿ ನಕ್ಕರು<br />
{{gap}}ತುಂಗಮ್ಮನೂ, 'ಕಾಗದ ಹೇಗಿದೆ?' ಎಂದು ಕೇಳಲಿಲ್ಲ ತನ್ನ<br />
ಅಮೂಲ್ಯ ಆಸ್ತಿ ಎಂಬಂತೆ ಅದನ್ನು ಮಡಚಿ, ಬೆರಳುಗಳ ಎಡೆಯಲ್ಲಿ ಮೃದು<br />
ವಾಗಿ ಹಿಡಿದು, ಕುಳಿತಲ್ಲಿಂದ ಎದ್ದಳು.<noinclude><references/></noinclude>
oypgwpdm2svx0qj4ujm5uss58obhjj8
ಪುಟ:Abhaya.pdf/೨೫೨
104
9540
320620
250049
2026-05-18T13:09:00Z
Shreelatha.Halemane
7642
/* Validated */
320620
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಅಭಯ|left=|right=೧೪೭}}</noinclude>{{gap}}ಆ ಮಧ್ಯಾಹ್ನ ಸರಸಮ್ಮನಿಗೆ ಕಾರ್ಯದರ್ಶಿನಿಯಿಂದ ಅವಸರದ</p> ಕರೆಬಂತು.
{{gap}}"ಆದಷ್ಟು ಜಲ್ದಿ ಬರ್ಬೇಕಂತೆ"</p>
{{gap}}ಎಂದ, ಕರೆಯಲು ಬಂದಿದ್ದ ದೂತ.</p>
{{gap}}ಏನೋ ವಿಶೇಷವಿರಬೇಕೆಂದು-ಎಂದುಕೊಂಡ ಸರಸಮ್ಮ. ತುಂಗಮ್ಮ<br>ನಿಗೂ ಹಾಗೆಯೇ ಹೇಳಿದರು.</p>
{{gap}}ಬೇಗ ಬೇಗನೆ ಊಟ ಮುಗಿಸಿಕೊಂಡು, ಅಭಯಧಾಮದ ಉಸ್ತು<br> ವಾರಿಯನ್ನು ತುಂಗಮ್ಮನಿಗೆ ಒಪ್ಪಿಸಿ, ಸರಸಮ್ಮ ಹೊರಹೋದರು.</p>
{{gap}}ಅವರು ಹಿಂತಿರುಗಿ ಬಂದಾಗ ಆಗಿನ್ನೂ ನಾಲ್ಕು ಘಂಟೆ. ಅಭಯಧಾಮ<br>ದಲ್ಲಿ ಸಂಗೀತದ ಪಾಠ ನಡೆಯುತಿತ್ತು ಬಾಗಿಲು ತೆರೆದು ಮುಚ್ಚಿದಬಳಿಕ<br> ದೊಡ್ಡಮ್ಮನೊಡನೆ ತುಂಗಮ್ಮನೂ ಆಫೀಸು ಕೊಠಡಿಗೆ ಬಂದಳು:</p>
{{gap}}"ಒಂದು ವಿಷಯ ಹೇಳ್ತೀನಿ ಗೋಪ್ಯವಾಗಿಡ್ಬೇಕು ತುಂಗ."</p>
{{gap}}"ಹೂಂ."</p>
{{gap}}"ಜಲಜ ಲಲಿತೆ ಯಾರಿಗೂ ಹೇಳ್ಕೂಡದು."</p>
{{gap}}ಕಾತರತುಂಬಿದ್ದ ಧ್ವನಿ.....ಆತ್ಮೀಯ ಗೆಳತಿಯರಿಂದಲೂ ಮರೆ<br> ಮಾಡುವ ಕೆಲಸ ಅದು ತನ್ನಿಂದ ಸಾಧ್ಯವೆ? ಸಾಧ್ಯವೊ ಅಲ್ಲವೊ. ಆದರೆ<br> ದೊಡ್ಡಮ್ಮ ಹೇಳುತಿದ್ದಾರೆ. ತಾನು ಹಾಗೆ ಮಾಡಬೇಕು...</p>
{{gap}}"ಹೂಂ. ದೊಡ್ಡಮ್ಮ."</p>
{{gap}}"ಒಬ್ಬಳು ಗರ್ಭಿಣಿ ಹುಡುಗೀನ ಇವತ್ತು ಇಲ್ಲಿಗೆ ತರ್ತಾರೆ ರಾತ್ರೆ <br>ಹೊತ್ತು. ಆಕೆ ಯಾರು ಏನು ಅನ್ನೋದು ಒಬ್ಬರಿಗೂ ತಿಳೀಕೂಡದು.<br> ಆಕೇನ ಮಾತಾಡ್ಸೋಕೆ ಹೋಗಿ ಯಾರೂ ತೊಂದರೆ ಕೊಡಕೂಡದು."</p>
{{gap}}ತುಂಗಮ್ಮನ ಎದೆ ಕ್ಷಣಕಾಲ ಗುಡುಗುಟ್ಟಿತು.</p>
{{gap}}"ಹೂಂ."</p>
{{gap}}"ದೊಡ್ಡ ಮನೆತನದ ಹುಡುಗಿ. ಏನೋ ಆಗ್ಬಿಟ್ಟಿದೆ. ಇಷ್ಟರವರೆಗೆ ಎಲ್ಲೋ ಇಟ್ಟಿದ್ರಂತೆ. ಇವತ್ತು ಇಲ್ಲಿಗೆ ಕರಕೊಂಡು ಬರ್ತಾರೆ."</p>
{{gap}}"ಯಾವೂರೋ?"</p><noinclude><references/></noinclude>
re48a8e4uol7cuhoxlneq6wkmb0kwii
ಪುಟ:Abhaya.pdf/೨೮೫
104
9586
320704
250554
2026-05-19T04:27:11Z
Shreelatha.Halemane
7642
/* Validated */
320704
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=೨೮೦}}
{{gap}}ಪಾರ್ವತಿ ಜನಗಣಮನ ಹಾಡಿದಳು.<br>
{{gap}}ಬಂದವರನ್ನು ಬೀಳ್ಕೊಡಲು ಸರಸಮ್ಮ, ತುಂಗಮ್ಮ, ಜಲಜ ಲಲಿತ,<br>
ಸಾವಿತ್ರಿಯರು ಬಾಗಿಲಹೊರಗೆ ಬಂದು ನಿಂತಂತೆ ಕಾರುಗಳು ಒಂದೊಂದಾಗಿ<br>
ಹೊರಟವು. ಕೊನೆಯದಾಗಿ ಉಳಿದ ಪುಟ್ಟ ಕಾರನ್ನು ಏರುವುದಕ್ಕೆ ಮುಂಚೆ<br>
ಆ ಯುವಕ - ಸೋಮಶೇಖರ್ - ಸರಸಮ್ಮನ ಬಳಿಗೆ ಬಂದ<br>
{{gap}}"ಅಮ್ಮ, ಈ ಅಭಯಧಾಮದ ಕೆಲಸಕಾರ್ಯಾಗಳ ಸ್ವರೂಪ ಪರಿಚಯ<br>
ನನಗಿಲ್ಲ. ನಮ್ಮಕ್ಕ ಒತ್ತಾಯಿಸಿ ಕರಕೊಂಡು ಬಂದ್ರು ಅಂತೂ<br>
ಈ ದಿವಸದ ಸಾಯಂಕಾಲ ನನ್ನ ಪಾಲಿನ ಒಂದು ಅಪೂರ್ವ ಅನುಭವ<br>
ವಾಗಿದೆ. ಸಮಾರಂಭಕ್ಕಾಗಿ-ಅದಕ್ಕಿಂತಲೂ ಹೆಚ್ಚು ನೀವು ಪಡುತ್ತಿರೋ<br>
ಶ್ರಮಕ್ಕಾಗಿ ಧನ್ಯವಾದಗಳು”<br>
{{gap}}ಅದೊಂದೂ ನಟನೆಯ ಕಪಟದ ಮಾತಾಗಿರಲಿಲ್ಲ. ತಮ್ಮ ದುಡಿಮೆ<br>
ಸಾರ್ಥಕವಾಯಿತೆಂದು ಸರಸಮ್ಮನಿಗೆ ಅನಿಸಿತು.<br>
{{gap}}ಆ ಯುವಕನೊ-ಸರಸಮ್ಮನಿಂದ ಸರಕ್ಕನೆ ತುಂಗಮ್ಮನತ್ತ ತಿರುಗಿದ :<br>
{{gap}}"ನಿಮ್ಮ ಸ್ವಾಗತ ಭಾಷಣ ಚೆನ್ನಾಗಿತ್ತು, ಧನ್ಯವಾದಗಳು !”<br>
{{gap}}ಅನಿರೀಕ್ಷಿತವಾಗಿದ್ದ ಮಾತುಕೇಳಿ ತುಂಗಮ್ಮನ ಗಂಟಲಿನಿಂದ ಸ್ವರ<br>
ಹೊರಡಲೇ ಇಲ್ಲ. ಮುಖಮಾತ್ರ ಕಿವಿಗಳವರೆಗೂ ಕೆಂಪೇರಿತು. ಅಷ್ಟು<br>
ಹೇಳಿ ಸೋಮಶೇಖರ್, ಉಳಿದ ಹುಡುಗಿಯರನ್ನೊಮ್ಮೆ ನೋಡಿ, ತನ್ನ<br>
ಅಕ್ಕ ಕುಳಿತಿದ್ದ ಕಾರಿನತ್ತ ಗಂಭೀರವಾದ-ಆದರೂ ಹಗುರವಾದ ಹೆಜ್ಜೆ<br>
ಗಳನ್ನಿಡುತ್ತ ಸಾಗಿದ.<br>
{{gap}}ಸರಸಮ್ಮನಿಗೆ ಆಶ್ಚರ್ಯವಾಯಿತು ತುಂಗಮ್ಮನನ್ನೊಮ್ಮೆ ಅವರು<br>
ನೋಡಿದರು. ಹಾಗೆ ನೋಡಿದಾಗ ಮೂಡಿದ ಮುಗುಳುನಗು ಹಾಗೆಯೇ<br>
ಬಹಳ ಹೊತ್ತು ಅಲ್ಲಿ ನಿಂತಿತು.<br>
{{gap}}ಆ ಕಾರು ಹೊರಟಾಗ ಸರಸಮ್ಮ, ಸುಂದರಮ್ಮ ಅನಂತರಾಮಯ್ಯ<br>
ನಿಗೆ ವಂದಿಸಿದಳು. ಎಡಗೈಯಿಂದ ತನ್ನ ಕ್ರಾಪು ತೀಡಿಕೊಳ್ಳುತ್ತ ನಗುತ್ತ<br>
ಲಿದ್ದ ಸೋಮಶೇಖರನೂ ಅಕ್ಕನ ಜತೆಯಲ್ಲಿ ಮರುವಂದನೆಮಾಡಿದ.<br>
{{gap}}ಬಂದಿದ್ದವರೆಲ್ಲ ಹೊರಟುಹೋದಮೇಲೂ ಸರಸಮ್ಮ ಆ ಹುಡುಗಿಯ<br>
ರೊಡನೆ ಐದು ನಿಮಿಷಗಳ ಕಾಲ ಹೊರಗೇ ನಿಂತರು.<noinclude><references/></noinclude>
qlrw7gci62dxbjrscu58rjjuxo6hz9m
ಪುಟ:Abhaya.pdf/೨೮೬
104
9587
320705
250399
2026-05-19T04:28:58Z
Shreelatha.Halemane
7642
/* Validated */
320705
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|right=೨೮೧}}
{{gap}}ಬೀದಿಯ ದೀಪಗಳು ಆಗಲೇ ಹತ್ತಿಕೊಂಡಿದ್ದುವು. ಸಮೀಪದ ಮನೆ<br>
ಗಳಿಂದ ಜನರು ಕಿಟಕಿಗಳ ಬಳಿನಿಂತು ಕುತೂಹಲದಿಂದ ಅಭಯಧಾಮದತ್ತ<br>
ನೋಡುತಿದ್ದರು.<br>
{{gap}}ರಾತ್ರಿ ಊಟ ತಡವಾಯಿತು ವಾರ್ಷಿಕೋತ್ಸವದ ವಿಶೇಷ<br>
ಅಡುಗೆ.<br>
{{gap}}ಗುಂಪುಗುಂಪಾಗಿ ಹುಡುಗಿಯರು, ಹರಟೆ ಹೊಡೆಯುತ್ತಲೊ ನಗೆ<br>
ಮಾತಾಡುತ್ತಲೊ ಹಾಡುತ್ತಲೊ ಹೊತ್ತು ಕಳೆದರು<br>
{{gap}}ಊಟಕ್ಕೆ ಕುಳಿತಾಗ ಸರನಮ್ಮನ ಪಕ್ಕದಲ್ಲೆ ತುಂಗಮ್ಮನಿದ್ದಳು ;<br>
ಆಕೆಯ ಬಲಕ್ಕೆ ಜಲಜ.<br>
{{gap}}ತುಂಗಮ್ಮನ ತಟ್ಟೆಯನ್ನು ನೋಡುತ್ತ ಸರಸಮ್ಮ ಅಂದರು :<br>
"ಹೇಗಾಗಿದೆ ನೋಡು ನಿನ್ನ ತಟ್ಟೇರೂಪ. ಬೇರೆ ಒಂದು ಕೊಂಡ್ಕೋ<br>
ಬೇಕಮ್ಮ."<br>
{{gap}}"ನಿಧಾನವಾಗಿ ಕೊಂಡುಕೊಂಡರಾಯಿತು.”<br>
{{gap}}"ಏನು, ಏನಂದಿರಿ ದೊಡ್ಡಮ್ಮ?"<br>
{{gap}}-ಎಂದು ಜಲಜ ಕತ್ತು ಚಾಚಿ ಕೇಳಿದಳು.<br>
{{gap}}"ತುಂಗಮ್ಮನ ತಟ್ಟೆ ಹಳೇದಾಯ್ತಲ್ಲಾ, ಅದಕ್ಕೆ ಅಂದೆ ”<br>
{{gap}}"ಆದರೆ ದೊಡ್ಡಮ್ಮ, ಅದು ಹ್ಯಾಗಾಗುತ್ತೆ ? ಯಾವತಟ್ಟೆನೋಡಿ<br>
ಅದು....!"<br>
{{gap}}"ಯಾವುದೇ ?"<br>
{{gap}}"ಭಾಗ್ಯದ ತಟ್ಟೆ ದೊಡ್ಡಮ್ಮ.”<br>
{{gap}}ಆ ತಟ್ಟೆಯ ವಿಷಯವಾಗಿ ಹುಡುಗಿಯರು ಕಟ್ಟಿದ್ದ ಕತೆ ಸರಸಮ್ಮನಿಗೆ<br>
ನೆನಪಾಗಿ ಅವರು ನಕ್ಕರು.<br>
{{gap}}"ಅದೇನೇ ಜಲಜ, ಎಲ್ರೂ ಸೇರಿ ತುಂಗನ್ನ ಕಳಿಸ್ಬಿಡ್ಬೇಕೂಂತ<br>
ಮಾಡಿದೀರೇನ್ರೆ ?”<br>
{{gap}}"ನಾವ್ಯಾಕೆ ಕಳಿಸ್ತೀವಿ ದೊಡ್ಡಮ್ಮ. ರಾಜಕುಮಾರ ಕರಕೊಂಡು<br>
ಹೋಗೋಕೆ ಬಂದ್ರೆ ಅವನೇನು ನಮ್ಮ ಒಪ್ಗೆ ಇಲ್ಲಾಂತ ಸುಮ್ಮೆ<br>
ಕೂತ್ಕೋತಾನೆ ???<noinclude><references/></noinclude>
ihlqbqso17fpso49am1kghuwk587v9u
ಪುಟ:Abhaya.pdf/೨೭೯
104
9616
320699
250126
2026-05-19T04:13:43Z
Shreelatha.Halemane
7642
/* Validated */
320699
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಅಭಯ|left=೨೭೪|right=}}</noinclude>ಮಗುವಿನಹಾಗೆ ನಿರ್ಮಲಮನಸಿನಿಂದ ಸರಸಮ್ಮ ತಲ್ಲೀನರಾದರು....ತಾವೂ
ಕರಗಿ ಆ ಹಿಮದೊಡನೆ ಲೀನವಾದ ಹಾಗೆ ಅವರಿಗೆ ಅನಿಸುತಿತ್ತು.
{{gap}}ಅದೆಷ್ಟು ಹೊತ್ತು ಅವರು ಹಾಗೆ ನಿಂತರೊ !
{{gap}}ಗಂಟೆ ಬಾರಿಸಿ ಹುಡುಗಿಯರನ್ನು ಎಬ್ಬಿಸಬೇಕು. ಆದರೆ ಲೋಕವೇ
ಮೈಮರೆತು ನಿದ್ದೆ ಹೋಗಿದ್ದಾಗ ಈ ಮಕ್ಕಳು ಮಾತ್ರ ಏಳಬೇಕೆನ್ನುವುದು
ಸರಿಯೇ? ಅಭಯಧಾಮದ ನಿಷ್ಠುರ ನಿಯಮಗಳೂ ಈ ಘಳಿಗೆಯಲ್ಲಿ ಸ್ವಲ್ಪ
ಹೊತ್ತು ಶಿಥಿಲವಾಗಬಾರದೇಕೆ ?
{{gap}}ಸರಸಮ್ಮ ಹೊರಬಂದು, ತುಂಗಮ್ಮ ಮಲಗಿದ್ದ ಜಾಗದತ್ತ ನಡೆದು,
ಮೆಲ್ಲನೆ ಮೈ ಮುಟ್ಟಿ "ತುಂಗಾ!" ಎಂದು ಪಿಸುಧ್ವನಿಯಲ್ಲಿ ಉಸುರಿ,
ಆಕೆಯನ್ನು ಎಬ್ಬಿಸಿದರು "ಬಾ"--ಎಂದು ಕೈಸನ್ನೆಯಿಂದ ಕರೆದರು.
ಆಕೆಯೊಡನೆ, ಕರಿಕತ್ತಲು ನಸುಬೆಳಕುಗಳ ಸಂಗಮ ನಡೆದಿದ್ದ ತಮ್ಮ
ಕೊಠಡಿಗೆ ಬಂದು, ತೆರೆದ ಕಿಟಕಿಯ ಬಳಿನಿಂತರು
{{gap}}"ನೋಡು ! ಮಂಜು ಹ್ಯಾಗೆ ಕವಿದಿದೆ!"
{{gap}}"ಹೌದಲ್ಲ ! ಅಯ್ಯ - ಎಷ್ಟು ಚೆನ್ನಾಗಿದೆ!"
{{gap}}"ಮಳೆಗಾಲ ಆಗೋಯ್ತು. ಇನ್ನು ಚಳಿಗಾಲ."
{{gap}}"ಹೌದು!"
{{gap}}ಬೆಳಗಾಗುತ್ತಲಿತ್ತು. ಅಲ್ಲಿ ಇಲ್ಲಿ ಯಾವುದೋ ವಸ್ತುವಿಗೆ ಜೀವ
ಬಂದು ಸದ್ದಾಗುತಿತ್ತು- ನಿಸರ್ಗತಾಯಿ ಮೈ ಕುಲುಕಿದ ಹಾಗೆ.
{{gap}}ತನ್ಮಯತೆಯ ಆ ಮನೋಸ್ಥಿಯಲ್ಲಿ ಮಾತನಾಡುವ ಅಂಶಗಳೇ
ಇರಲಿಲ್ಲ.
{{gap}}ಆರುಗಂಟೆಯೂ ದಾಟಿತೆಂದು ತಿಳಿದು ಸರಸಮ್ಮ ಮೆಲುಧ್ವನೆಯಲ್ಲಿ
ಅಂದರು :
{{gap}}"ಘಂಟೆ ಬಾರಿಸ್ತೀಯಾ ತುಂಗ?"
{{gap}}"ಹೂಂ...."
{{gap}}ಘಂಟೆಯ ನಾದ ಅಲೆಯಲೆಯಾಗಿ ನಸುಕಿನ ನೀರವತೆಯಲ್ಲಿ ಬಲು
ದೂರಕ್ಕೆ ತೇಲಿ ಹೋಯಿತು.
{{gap}}ಒಬ್ಬೊಬ್ಬರಾಗಿ ಹುಡುಗಿಯರು ಎದ್ದರು.<noinclude><references/></noinclude>
td0wolyjsmshbpm445qutenilkz5pu9
ಪುಟ:Abhaya.pdf/೨೭೦
104
9621
320689
249283
2026-05-19T03:16:32Z
Shreelatha.Halemane
7642
/* Validated */
320689
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''ಅಭಯ'''|left=''''''|right=೨೬೫}}
ಹಿಂದೆ ಎಂದೂ ಅವರಮುಖ ಅಷ್ಟೊಂದು ಕಪ್ಪಿಟ್ಟುದ್ದನ್ನು ತುಂಗಮ್ಮ ನೋಡಿರಲಿಲ್ಲ.ಇನ್ನೂ ಒಂದು ಹುಡುಗಿಯನ್ನು ಸಂಸಾರವಂದಿಗಳಾಗಿ ಮಾಡಿ ಧನ್ಯಳಾದೆ ಎಂದು ಸರಸಮ್ಮ ಭಾವಿಸಿಕೊಂಡಿದ್ದ ಸ್ವಲ್ಪ ಸಮಯದಲ್ಲೇ-
{{gap}}"ಪೋಲೀಸರಿಗೆ ತಿಳಿಸಿದ್ದೀರಾ?"
{{gap}}"ಇನ್ನೂ ಇಲ್ರಮ್ಮ.ತಿಳಿಸ್ಲಾ?"
{{gap}}"ಹೂಂ.ಈಗ್ಲೇ ತಿಳಿಸಿ."
{{gap}}ಅವರು ಮಾಡುವಂಥಾದ್ದೇನೊ ಉಳಿದಿರಲ್ಲಿಲ್ಲ. ಆದರೂ ಮಹಾಬಲ ಪೂರ್ತಿ ನಿರಾಸೆಗೊಳ್ಳಬಾರದೆಂದು ಅವರೆಂದರು:
{{gap}}"ನಾವೂ ಹುಡುಕ್ತೀವಿ.ಏನಾದರೂ ಗೊತ್ತಾದ್ರೆ ಹೇಳಿ ಕಳಿಸ್ತೀವಿ."
{{gap}}"ನಾನೇ ಬರ್ತಿನ್ರಮ್ಮ."
{{gap}}"ಬೇಡಿ.ಹ್ಯಾಗೂ ನಿಮ್ಮನೆ ಗೊತ್ತಿದೆಯಲ್ಲ...ನಾವೇ ಬಂದು ಹೇಳ್ತೀವಿ"
{{gap}}ಅಂತೂ ಮಹಬಾಲ ಹೊರಬಿದ್ದ.ಬೀದಿಗಿಳಿಯುವಲ್ಲಿ ನೀರು ನಿಂತು ಮಣ್ಣು ತೇವವಾಗಿ ಅಂಟುಅಂಟಾಗಿತ್ತು.ಮಹಾಬಲನ ಕಾಲು ಜಾರಿತು.ಬೇಗನೆ ಎದ್ದು ನಿಂತು,ಹಿಂತಿರುಗಿ ನೋಡಿದ.ಅಭಯಧಾಮದ ಬಾಗಿಲು ಮುಚ್ಚಿತ್ತು ಅದರಮೇಲೆ ಉರಿಯುತ್ತಿತ್ತು ದೀಪ.ಕಿಟಕಿಯಲ್ಲೂ ಯಾರೂ ಇರಲಿಲ್ಲ....ಕಾಲಿಗೆ ಸ್ವಲ್ಪ ನೋವಾಗಿದ್ದಂತೆ ತೋರಿತು ಮಹಾಬಲನಿಗೆ ಆತ ಕುಂಟುತ್ತ ತನ್ನ ಪ್ರದೇಶದ ಪೋಲೀಸ್ ಸ್ಟೇಷನಿನ ಹಾದಿಹಿಡಿದ
{{gap}}....ಆರಾತ್ರೆ, ನೊಂದಿದ್ದ ಸರಸಮ್ಮನನ್ನು ಮಾತನಾಡಿಸುವ ಧೈರ್ಯ ತುಂಗಮ್ಮನಿಗಾಗಲಿಲ್ಲ.
{{gap}}ಮಾರನೆದಿನೆ ಕನಕಲಕ್ಷಮ್ಮನ ವಿಷಯತಿಳಿದು ಅಭಯಧಾಮದ ಕಾರ್ಯದರ್ಶಿನಿಯೂ ಬಂದು ಹೋದರು.ಅವರೂ ನಿರಾಸೆಯಿಂದ ನಿಟ್ಟುಸಿರು ಬಿಟ್ಟರು.
{{gap}}ಮೂರನೆದಿನ,ತಿಂಗಳ ಸಂಬಳ ಬಂತು, ಒಂದು ವಾರದ ವೆಚ್ಚಕ್ಕೆ ಬೇಕಾದ ಹಣವೂಕೂಡಾ.
{{gap}}ತುಂಗಮ್ಮ ಕೊಡಬೇಕಾಗಿದ್ದ ಹಬ್ಬದೂಟವೇನೋ ಆಯಿತು.ಆದರೆ ಹೆಚ್ಚಿನವರು ಯಾರೂ ಸಂತೋಷದಿಂದಿರಲಿಲ್ಲ.<noinclude><references/></noinclude>
snhqdo3206s6d4aulcspmc6xr4s4bk1
ಪುಟ:Abhaya.pdf/೨೬೦
104
11016
320668
250272
2026-05-19T02:16:50Z
Pragathi. BH
7585
/* Validated */
320668
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಅಭಯ|right=೨೫೫}}
{{gap}}ಪ್ರಭಾ ಸೂಟ್ಕೇಸ್ ತೆರೆದು ಬ್ರಶ್ಶಿಗೆ ವೇಸ್ಟ್ ಅಂಟಿಸಿದಳು.<br>
ಸಾಬೂನಿನ ಪೆಟ್ಟಿಗೆಯನ್ನೂ ಬಿಳಿಯ ಅಂಗ ವಸ್ತ್ರವನ್ನೂ ತುಂಗಮ್ಮನ ಕೈಗೆ<br>
ಕೊಟ್ಟಳು.<br>
{{gap}}"ಸ್ವಲ್ಪ ಇದನ್ನ ಹಿಡಕೋ"<br>
{{gap}}ತುಂಗಮ್ಮ ಬೇಡವೆನ್ನಲಿಲ್ಲ.<br>
{{gap}}ಆದರೆ ಅವರಿಬ್ಬರೂ ಜಗಲಿಯಮೇಲಿಂದ ಹೋದಾಗ, ಸರಸಮ್ಮ<br>
ನೋಡಿದರು ; ಹುಡುಗಿಯರು ನೋಡಿದರು. ಕೆಲವರು ಗೊಳ್ಳೆಂದು<br>
ನಕ್ಕರು<br>
{{gap}}ಪ್ರಭಾಗೆ ಇದು ಅರ್ಥವಾಗಲೇ ಇಲ್ಲ !<br>
{{gap}}ಇದರ ಪುನರಾವೃತ್ತಿಯಾಗಬಾರದೆಂದು ಸರಸಮ್ಮ ಸ್ವಲ್ಪ ಹೊತ್ತಾದ<br>
ಮೇಲೆ ಪ್ರಭಾಳನ್ನು ಕಂಡರು.<br>
{{gap}}"ಕಾಫಿ ಜತೇಲಿ ನೀವೇನೂ ತಗೋತೀರಾ ಪ್ರಭಾ ?”<br>
{{gap}}"ಬ್ರೆಡ್ ಮತ್ತು ಬಟರ್ ಇದೆ ಬಿಸ್ಕತ್ತುಗಳೂ ಇವೆ ”<br>
{{gap}}“ಸರಿ. ಬೇರೇನಾದರೂ ಬೇಕಾದರೆ ನನ್ನ ಅಸಿಸ್ಟೆಂಟ್ ಇದಾರೆ<br>
ಅವರ್ನ ಕೇಳಿ. ”<br>
{{gap}}"ಹೂಂ. ಅವರು ಯಾರೋ ಗುರುತಿಲ್ಲವಲ್ಲ"<br>
{{gap}}"ತುಂಗಮ್ಮಾ ಇಲ್ಲಿಬನ್ನಿ"<br>
{{gap}}-ಎಂದು ಸರಸಮ್ಮ ಕರೆದರು ಈ ಬಹುವಚನದ ಸಂಶೋಧನೆಯ<br>
ಉದ್ದೇಶ ತುಂಗಮ್ಮನಿಗೆ ತಿಳಿಯದೆ ಹೋಗಲಿಲ್ಲ ಆಕೆ ಬಂದು ಪ್ರಭಾ<br>
ಎದುರು ನಿಂತಳು.<br>
{{gap}}ಒಂದು ನಿಮಿಷ ಉಸಿರು ಕಟ್ಟಿದ ಹಾಗಾಯಿತು ಆ ಪ್ರಭಾಗೆ !<br>
{{gap}}"ಇವರೇ ನನ್ನ ಸಹಾಯಿಕೆ.”<br>
{{gap}}ತುಂಗಮ್ಮನನ್ನು ನೋಡುತ್ತ ಪ್ರಭಾ ಅಂದಳು :<br>
{{gap}}"ಕ್ಷಮಿಸಿ ನನಗೆ ಗೊತ್ತಿರ್ಲಿಲ್ಲ. ಒರಟಾಗಿ ವರ್ತಿಸಿದೆ. ದಯವಿಟ್ಟು<br>
ಕ್ಷಮಿಸಿ. I am really sorry.”<br>
{{gap}}“ನಾವೆಲ್ರೂ ಒಂದೇ ಪ್ರಭಾದೇವಿ ಇಲ್ಲಿ ಒಬ್ಬರ್ನ ಇನ್ನೊಬ್ಬರು<br>
ಕೀಳಾಗಿ ಕಾಣೋದೇ ಇಲ್ಲ”<noinclude><references/></noinclude>
8oreuihg2z9rpmsvsziiy592hv6tkme
320673
320668
2026-05-19T02:24:08Z
Shreelatha.Halemane
7642
320673
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಅಭಯ|right=೨೫೫}}
{{gap}}ಪ್ರಭಾ ಸೂಟ್ಕೇಸ್ ತೆರೆದು ಬ್ರಶ್ಶಿಗೆ ಪೇಸ್ಟ್ ಅಂಟಿಸಿದಳು.<br>
ಸಾಬೂನಿನ ಪೆಟ್ಟಿಗೆಯನ್ನೂ ಬಿಳಿಯ ಅಂಗ ವಸ್ತ್ರವನ್ನೂ ತುಂಗಮ್ಮನ ಕೈಗೆ<br>
ಕೊಟ್ಟಳು.<br>
{{gap}}"ಸ್ವಲ್ಪ ಇದನ್ನ ಹಿಡಕೋ"<br>
{{gap}}ತುಂಗಮ್ಮ ಬೇಡವೆನ್ನಲಿಲ್ಲ.<br>
{{gap}}ಆದರೆ ಅವರಿಬ್ಬರೂ ಜಗಲಿಯಮೇಲಿಂದ ಹೋದಾಗ, ಸರಸಮ್ಮ<br>
ನೋಡಿದರು ; ಹುಡುಗಿಯರು ನೋಡಿದರು. ಕೆಲವರು ಗೊಳ್ಳೆಂದು<br>
ನಕ್ಕರು<br>
{{gap}}ಪ್ರಭಾಗೆ ಇದು ಅರ್ಥವಾಗಲೇ ಇಲ್ಲ !<br>
{{gap}}ಇದರ ಪುನರಾವೃತ್ತಿಯಾಗಬಾರದೆಂದು ಸರಸಮ್ಮ ಸ್ವಲ್ಪ ಹೊತ್ತಾದ<br>
ಮೇಲೆ ಪ್ರಭಾಳನ್ನು ಕಂಡರು.<br>
{{gap}}"ಕಾಫಿ ಜತೇಲಿ ನೀವೇನೂ ತಗೋತೀರಾ ಪ್ರಭಾ ?”<br>
{{gap}}"ಬ್ರೆಡ್ ಮತ್ತು ಬಟರ್ ಇದೆ ಬಿಸ್ಕತ್ತುಗಳೂ ಇವೆ ”<br>
{{gap}}“ಸರಿ. ಬೇರೇನಾದರೂ ಬೇಕಾದರೆ ನನ್ನ ಅಸಿಸ್ಟೆಂಟ್ ಇದಾರೆ<br>
ಅವರ್ನ ಕೇಳಿ. ”<br>
{{gap}}"ಹೂಂ. ಅವರು ಯಾರೋ ಗುರುತಿಲ್ಲವಲ್ಲ"<br>
{{gap}}"ತುಂಗಮ್ಮಾ ಇಲ್ಲಿಬನ್ನಿ"<br>
{{gap}}-ಎಂದು ಸರಸಮ್ಮ ಕರೆದರು ಈ ಬಹುವಚನದ ಸಂಶೋಧನೆಯ<br>
ಉದ್ದೇಶ ತುಂಗಮ್ಮನಿಗೆ ತಿಳಿಯದೆ ಹೋಗಲಿಲ್ಲ ಆಕೆ ಬಂದು ಪ್ರಭಾ<br>
ಎದುರು ನಿಂತಳು.<br>
{{gap}}ಒಂದು ನಿಮಿಷ ಉಸಿರು ಕಟ್ಟಿದ ಹಾಗಾಯಿತು ಆ ಪ್ರಭಾಗೆ !<br>
{{gap}}"ಇವರೇ ನನ್ನ ಸಹಾಯಿಕೆ.”<br>
{{gap}}ತುಂಗಮ್ಮನನ್ನು ನೋಡುತ್ತ ಪ್ರಭಾ ಅಂದಳು :<br>
{{gap}}"ಕ್ಷಮಿಸಿ ನನಗೆ ಗೊತ್ತಿರ್ಲಿಲ್ಲ. ಒರಟಾಗಿ ವರ್ತಿಸಿದೆ. ದಯವಿಟ್ಟು<br>
ಕ್ಷಮಿಸಿ. I am really sorry.”<br>
{{gap}}“ನಾವೆಲ್ರೂ ಒಂದೇ ಪ್ರಭಾದೇವಿ ಇಲ್ಲಿ ಒಬ್ಬರ್ನ ಇನ್ನೊಬ್ಬರು<br>
ಕೀಳಾಗಿ ಕಾಣೋದೇ ಇಲ್ಲ”<noinclude><references/></noinclude>
ex850myq4rskox1mnzgw7o5wgnm1ixg
320780
320673
2026-05-19T10:14:39Z
Pragathi. BH
7585
320780
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಅಭಯ|right=೨೫೫}}
{{gap}}ಪ್ರಭಾ ಸೂಟ್ಕೇಸ್ ತೆರೆದು ಬ್ರಶ್ಶಿಗೆ ಪೇಸ್ಟ್ ಅಂಟಿಸಿದಳು.
ಸಾಬೂನಿನ ಪೆಟ್ಟಿಗೆಯನ್ನೂ ಬಿಳಿಯ ಅಂಗ ವಸ್ತ್ರವನ್ನೂ ತುಂಗಮ್ಮನ ಕೈಗೆ
ಕೊಟ್ಟಳು.<br>
{{gap}}"ಸ್ವಲ್ಪ ಇದನ್ನ ಹಿಡಕೋ"<br>
{{gap}}ತುಂಗಮ್ಮ ಬೇಡವೆನ್ನಲಿಲ್ಲ.<br>
{{gap}}ಆದರೆ ಅವರಿಬ್ಬರೂ ಜಗಲಿಯಮೇಲಿಂದ ಹೋದಾಗ, ಸರಸಮ್ಮ
ನೋಡಿದರು ; ಹುಡುಗಿಯರು ನೋಡಿದರು. ಕೆಲವರು ಗೊಳ್ಳೆಂದು
ನಕ್ಕರು<br>
{{gap}}ಪ್ರಭಾಗೆ ಇದು ಅರ್ಥವಾಗಲೇ ಇಲ್ಲ !<br>
{{gap}}ಇದರ ಪುನರಾವೃತ್ತಿಯಾಗಬಾರದೆಂದು ಸರಸಮ್ಮ ಸ್ವಲ್ಪ ಹೊತ್ತಾದ
ಮೇಲೆ ಪ್ರಭಾಳನ್ನು ಕಂಡರು.<br>
{{gap}}"ಕಾಫಿ ಜತೇಲಿ ನೀವೇನೂ ತಗೋತೀರಾ ಪ್ರಭಾ ?”<br>
{{gap}}"ಬ್ರೆಡ್ ಮತ್ತು ಬಟರ್ ಇದೆ ಬಿಸ್ಕತ್ತುಗಳೂ ಇವೆ ”<br>
{{gap}}“ಸರಿ. ಬೇರೇನಾದರೂ ಬೇಕಾದರೆ ನನ್ನ ಅಸಿಸ್ಟೆಂಟ್ ಇದಾರೆ<br>
ಅವರ್ನ ಕೇಳಿ. ”<br>
{{gap}}"ಹೂಂ. ಅವರು ಯಾರೋ ಗುರುತಿಲ್ಲವಲ್ಲ"<br>
{{gap}}"ತುಂಗಮ್ಮಾ ಇಲ್ಲಿಬನ್ನಿ"<br>
{{gap}}-ಎಂದು ಸರಸಮ್ಮ ಕರೆದರು ಈ ಬಹುವಚನದ ಸಂಶೋಧನೆಯ
ಉದ್ದೇಶ ತುಂಗಮ್ಮನಿಗೆ ತಿಳಿಯದೆ ಹೋಗಲಿಲ್ಲ ಆಕೆ ಬಂದು ಪ್ರಭಾ
ಎದುರು ನಿಂತಳು.<br>
{{gap}}ಒಂದು ನಿಮಿಷ ಉಸಿರು ಕಟ್ಟಿದ ಹಾಗಾಯಿತು ಆ ಪ್ರಭಾಗೆ !<br>
{{gap}}"ಇವರೇ ನನ್ನ ಸಹಾಯಿಕೆ.”<br>
{{gap}}ತುಂಗಮ್ಮನನ್ನು ನೋಡುತ್ತ ಪ್ರಭಾ ಅಂದಳು :<br>
{{gap}}"ಕ್ಷಮಿಸಿ ನನಗೆ ಗೊತ್ತಿರ್ಲಿಲ್ಲ. ಒರಟಾಗಿ ವರ್ತಿಸಿದೆ. ದಯವಿಟ್ಟು
ಕ್ಷಮಿಸಿ. I am really sorry.”<br>
{{gap}}“ನಾವೆಲ್ರೂ ಒಂದೇ ಪ್ರಭಾದೇವಿ ಇಲ್ಲಿ ಒಬ್ಬರ್ನ ಇನ್ನೊಬ್ಬರು<br>
ಕೀಳಾಗಿ ಕಾಣೋದೇ ಇಲ್ಲ”<noinclude><references/></noinclude>
maywxda8622ny88ol1r6bt7qpb48kow
ಪುಟ:Abhaya.pdf/೨೫೬
104
11114
320665
150537
2026-05-19T02:15:32Z
Shreelatha.Halemane
7642
/* Validated */
320665
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಅಭಯ|left=|right=೨೫೧}}</noinclude>{{gap}}"ಏನು ಬೇಕಮ್ಮ ?"
{{gap}}ಎಂದು ಕೇಳಿದರು ಸರಸಮ್ಮ.
{{gap}}ಆ ಹೆಂಗಸು ತಮ್ಮ ಪುಟ್ಟ ಕೈ ಚೀಲವನ್ನು ತೆರೆದು,ಅದರಿಂದ ನೂರು ರೂಪಾಯಿಯ ಒಂದು ನೋಟನ್ನು ಹೊರೆತೆಗೆದು ಸರಸಮ್ಮನಿಗೆ ಕೊಡ ಬಂದರು.
{{gap}}"ಆಭಯಧಾಮಕ್ಕೆ ವಂತಿಗೆಕೊಡ್ತೀರಾ? ದಯವಿಟ್ಟು ಸೆಕ್ರೆಟರಿಯವರ ಕೈಗೇ ಕೊಡಿ"
{{gap}}"ಅದಲ್ಲ...ಇದು...ನಿಮಗೆ....?
{{gap}}ಸರಸಮ್ಮನಿಗೆ ಬೇಸರವಾಯಿತು.
{{gap}}"ಇದು ಆಸ್ಪತ್ರೆಯಲ್ಲವಮ್ಮ ನಾವುಯಾರು ಯಾವತ್ತು ಏನು ತಗೊಳೊಲ್ಲ ನಿಮ್ಮಲ್ಲೇ ಇಡ್ಕೊಂಡಿರಿ"
{{gap}}"ಅಲ್ಲ ನನ್ನ ಕಾಣಿಕೆ ಯಾವಾಗಲು ಕೊನೇಲಿ ತಗೋತೀವಮ್ಮ...."
{{gap}}"ನಮ್ಮ ಮಗೂಗೆ ಏನಾದರೆ ತಿಂಡಿ ತೀರ್ಥ....."
{{gap}}"ಅದೆಲ್ಲಾ ನಾವು ನೊಡ್ಕೋತೀವಿ ಯಾವ ಯೋಚ್ನೇನೂ ಬೇಡಿ ....ಸೆಕ್ರೆಟರಿಯವರು ಆಗಲೇ ಹೇಳಿದಾರೆ"
{{gap}}ಮನಸಿಲ್ಲದ ಮನಸಿನಿಂದ ಆ ಹೆಂಗಸು ನೋಟನ್ನು ಮತ್ತೆ ತಮ್ಮ ಕೈಚಿಲದೊಳೊಗೆಕ್ಕೆ ತುರುಕಿದರು
{{gap}}ಅಂತೂ ಕಾರು ಹೊರಟು ಹೋಯಿತು
{{gap}}ಹುಡುಗಿಯರು ಯಾರು ಕೊಠಡಿಯತ್ತ ಸುಳಿಲಿಲ್ಲ ಬಂದಿದ್ದವಳು ಬಾಗಿಲು ಓರೆ ಮಾಡಿಕೊಂಡು ಬಿಟ್ಟಳು
{{gap}}ಸ್ವಲ್ಪ ಹೊತ್ತಾದಮೇಲೆ ಸರಸಮ್ಮ ಹೆಸ್ರು ನೋಂದಾಯಿಸುವ ಪುಸ್ತಕದೊಡನೆ ತುಂಗಮ್ಮನ ಜತೆಗೂಡಿ ಆ ಕೊಠಡಿಗೆ ಬಂದರು.ಹುಡುಗಿ ಶೂನ್ಯ ಮನಸ್ಕಳಾಗಿ ಹಾಸಿಗೆಯಮೇಲೆ ಕುಳಿತು, ಬರುತ್ತ ತಂದಿದ್ದ ಬಣ್ಣದ ಬೀಸಣಿಕೆಯಿಂದ ಗಾಳಿ ಹಾಕಿಳ್ಳೊತಿದ್ದಳು.
{{gap}}ಒಳಕ್ಕೆ ಬಂದ ಹೆಂಗಸು ....ಕಾರ್ಯದರ್ಶಿನಿಯವರ ಆಚಾತುರ್ಯ.<noinclude><references/></noinclude>
dmf69k28nuqw9oywjwzy0l03u12mm4l
ಪುಟ:Abhaya.pdf/೨೪೩
104
11115
320632
150524
2026-05-18T13:56:19Z
Shreelatha.Halemane
7642
/* Validated */
320632
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಅಭಯ|left=೨೩೮|right=}}</noinclude>{{gap}}ಆದರೆ ಹಾಗೆ ಅಳುತಿದ್ದಾಗಲೂ ಕನಕಲಕ್ಷಮ್ಮನ ಹೃದಯ ತುಂಬಿಬಂದಿತ್ತು. 'ಇನ್ನೆಷ್ಟು ದಿವಸ ಹೇಗೆ ಮಾಡೀರಾ ?' ಎಂಬ ಕೊಂಕು ಆಹ್ವಾನ ಮನಸ್ಸಿನಲ್ಲಿ ಮೂಡಿತು. 'ಆ ಮಹಾರಾಯ ಬಂದವನು ಎಲ್ಲಿಯಾದರೂ ಒಪ್ಪಿಕೊಳ್ಳದೇ ಹೋದರೆ-' ಎಂಬ ಭೀತಿಯೂ ಆಕೆಯನ್ನು ಕಾಡಿ ಎದೆ ಡವಡವನೆ ಹೊಡೆದುಕೊಂಡಿತು.
{{gap}}....ಮಾರನೆದಿನ ಭಾನುವಾರ ತರಗತಿಗಳಿರಲಿಲ್ಲ ಊಟವಾದಮೇಲೆ ಬಿಸಿಲಲ್ಲೆ ಸರಸಮ್ಮ ಕಾರ್ಯದರ್ಶಿನಿಯ ಮನೆಗೆ ಹೋದರು. ಅವರ ಸಹಾಯಿಕೆ ತುಂಗಮ್ಮ, ಬೀಗದಕೈ ಗೊಂಚಲನ್ನು ಮಡಿಲಲ್ಲಿಟ್ಟು ಅಭಯಧಾಮದ ರಕ್ಷಣೆಯ ಭಾರ ಹೊತ್ತಳು.
{{gap}}ಸರಸಮ್ಮ ಹಿಂತಿರುಗಿ ಬಂದಾಗ ಚೆನ್ನಾಗಿ ಕತ್ತಲಾಗಿತ್ತು. ಬರುತ್ತ ಹಾದಿಯಲ್ಲಿ, ಅಭಯಧಾಮದಲ್ಲಿ ಏನಾಗಿದೆಯೋ ಎಂಬ ಭಯ ಅವರನ್ನು ಕಾಡಿಸದೆ ಇರಲಿಲ್ಲ.
{{gap}}ಆದರೆ ಎಲ್ಲವೂ ಎಂದಿನಂತೆಯೇ ಇದ್ದುವು ಆ ಅಭಯಧಾಮದಲ್ಲಿ. ಅವರು ಒಳಕ್ಕೆ ಕಾಲಿಟ್ಟಾಗ ಭಜನೆ ನಡೆಯುತಿತ್ತು.
{{gap}}'ಹೋದ ಕೆಲಸವಾಯಿತೆ?' ಎಂದು ಕೇಳಬೇಕೆಂದು ತುಂಗಮ್ಮ ಯೋಚಿಸುತಿದ್ದಾಗಲೇ, ಕುಳ್ಳಿ ದಮಯಂತಿ ಏದುತ್ತ ಬಂದಳು.
{{gap}}"ದೊಡ್ಡಮ್ಮ ! ಕನಕ ಕೇಳಿದಾಳೆ, ದಿನ ನಿಶ್ಚಯವಾಯ್ತೆ ಅಂತ."
{{gap}}ಅದೆಲ್ಲ ದಮಯಂತಿಯದೇ ಸೃಷ್ಟನೆ ಎಂಬುದು ಸ್ಪಷ್ಟವಾಗಿತ್ತು. ನಗುವನ್ನು ತಡೆದಿಟ್ಟು ಕೋಪವನ್ನು ನಟಸುತ್ತಾ ಸರಸಮ್ಮ ಅಂದರು:
{{gap}}"ತಾಳು! ನಿಶ್ಚಯಿಸ್ತೀನಿ ನಿಮಗೆ! ಭಜನೆ ಆಗ್ತಿದ್ದಾಗ ಎದ್ದು ಓಡಿ ಬಂದ್ಯಾ? ಹೋಗು ವಾಪ್ಸು !"
{{gap}}ದಮಯಂತಿ ಜೋಲುಮುಖ ಹಾಕಿಕೊಂಡು ಮತ್ತೆ ಹಜಾರದತ್ತ ನಡೆಯ ಹೊರಟಳು. ಆದರೆ ಅಷ್ಟರಲ್ಲೆ ಮಂಗಳ ಹಾಡು ಆರಂಭವಾಯ್ತು.
{{gap}}"ನೋಡಿದಿರಾ ದೊಡ್ಡಮ್ಮ, ಭಜನೆ ಆಗೋಯ್ತು."
{{gap}}-ಎಂದಳು ದಮಯಂತಿ. ತಾನುಸೋಲಲಿಲ್ಲ ಎಂಬ ಧ್ವನಿಯಿತ್ತು ಆ ಮಾತಿನಲ್ಲಿ.
{{gap}}"ಹೂಂ. ಅದಕ್ಕೆ?"<noinclude><references/></noinclude>
3patjh1kvfhv8of31bpk3i1780h83p7
ಪುಟ:Abhaya.pdf/೨೬೨
104
11125
320676
250301
2026-05-19T02:29:45Z
Shreelatha.Halemane
7642
/* Validated */
320676
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|right=೨೫೭}}
ಮುಟ್ಟಿದಾಗ ತೆರೆದು ಕೊಂಡಿತು ಬಾಗಿಲು, ಪ್ರಭಾಕೂಡಾ, ಕಿಟಕಿಯ<br>
ಎಡೆಯಿಂದ ನೀರ ಸಾಗರವನ್ನೆ ನೋಡುತ್ತ ನಿಂತಿದ್ದಳು.<br>
{{gap}}"ನೋಡೋಕೆ ಚೆನ್ನಾಗಿದೆ ಅಲ್ವೇನ್ರೀ?"<br>
{{gap}}-ಎಂದು ತುಂಗಮ್ಮ ಕೇಳಿದಳು.<br>
{{gap}}"ಹೌದು ”<br>
{{gap}}ಮಳೆಯನ್ನು ಕುರಿತಾದ ಚರ್ಚೆಯಲ್ಲಿ ಯಾವತೊಂದರೆಯೂ ಇರಲಿಲ್ಲ<br>
ಆದರೆ ಬೇರೆ ಮಾತುಗಳು ಬಂದಾಗ-<br>
{{gap}}ಒಮ್ಮೆ ಪ್ರಭಾ ಕೇಳಿದಳು :<br>
{{gap}}"ನೀವು ಎಷ್ಟು ಓದಿದೀರಾ ತುಂಗಮ್ಮ?”<br>
{{gap}}"ಹೆಚ್ಚೇನೂ ಇಲ್ಲ ಕಣ್ರೀ, ಹೈಸ್ಕೂಲು ಕೂಡ ಪೂರ್ತಿಯಾಗಲಿಲ್ಲ.”<br>
{{gap}}"ಓ ನೀವು ಗ್ರಾಜುಯೇಟೀನೋ ಅಂತಿದ್ದೆ"<br>
{{gap}}ಇಲ್ಲವಪ್ಪ - ಅದಕ್ಕೇ ನಾನು ಇಂಗ್ಲಿಷ್ ಅಷ್ಟಾಗಿ ಮಾತಾಡೊಲ್ಲ.”<br>
{{gap}}"ಮೇಟ್ರನ್ ಎಷ್ಟು ಓದಿದಾರೆ ?”<br>
{{gap}}ಆ ಪ್ರಭಾ 'ದೊಡ್ಡಮ್ಮ' ಎಂದು ಒಮ್ಮೆಯೂ ಅಂದಿರಲಿಲ್ಲ. ಆಕೆಯ<br>
ಪಾಲಿಗೆ ಸರಸಮ್ಮ ಮೇಟ್ರನ್ ಮಾತ್ರ. ಆ ಪ್ರಶ್ನೆಯ ಹಿಂದಿನ ಪ್ರವೃತ್ತಿ<br>
ತುಂಗಮ್ಮನಿಗೆ ಮೆಚ್ಚುಗೆ ಇರಲಿಲ್ಲ. ಅವಳು ಸುಳ್ಳಾಡಿದಳು.<br>
{{gap}}“ದೊಡ್ಡಮ್ಮ ಎಂ. ಎ. ಬಿ. ಟೀಂತ ಕಾಣುತ್ತೆ. ಸರಿಯಾಗಿ<br>
ಗೊತ್ತಿಲ್ಲ.”<br>
{{gap}}"I see."<br>
{{gap}}"ನೀವೆಷ್ಟು ಓದಿದೀರಾ ಮಿಸ್ ಪ್ರಭಾ ?”<br>
"ಈ ವರ್ಷ ಬಿ. ಎಸ್. ಸಿ. ಡಿಗ್ರಿ ಪರೀಕ್ಷೆಗೆ ಕೂತ್ಕೋಬೇಕಾಗಿತ್ತು.<br>
ಆಗ್ಲಿಲ್ಲ ನೋಡಿ....”<br>
{{gap}}ಇನ್ನೊಮ್ಮೆ ಬೇರೆಮಾತು ಬಂತು.<br>
{{gap}}"ತುಂಗಮ್ಮ, ನೀವು ಇಲ್ಲಿ ಹ್ಯಾಗೆ ಸೇರ್ಕೊಂಡ್ರಿ ಕೆಲಸಕ್ಕೆ ?”<br>
{{gap}}"ಮೂರುತಿಂಗಳ ಹಿಂದೆ ಒಂದುರಾತ್ರಿ ನಿಮ್ಮ ಹಾಗೇ ನಾನೂ ಬಂದೆ<br>
ಮಿಸ್ ಪ್ರಭಾ.”<br>
{{gap}}ಆ ಮಾತು ಪ್ರಭಾಳ ಮೇಲೆ ಪರಿಣಾಮ ಮಾಡದೆ ಇರಲಿಲ್ಲ.<br>
{{gap}} 17<noinclude><references/></noinclude>
buqfbhkopst057wrkfvk7mlkbx8rj9y
ಪುಟ:Abhaya.pdf/೨೫೭
104
11128
320669
150538
2026-05-19T02:18:46Z
Shreelatha.Halemane
7642
/* Validated */
320669
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಅಭಯ|left=೨೫೨|right=}}</noinclude>ದಿಂದ ಆ ಅಭಯಧಾಮದ ಮುಖ್ಯಸ್ಥೆಯರು ಎಂಬುದು ಹುಡುಗಿಗೆ ಗೊತ್ತಾಗಿರಲಿಲ್ಲ ಹೀಗಾಗಿ,ಬಂದವರನ್ನು ಕಕ್ಕಾವಿಕ್ಕಿಯಾಗಿಯೆ ನೋಡುತ್ತ
ಅವಳೆಂದಳು;
{{gap}}"ವಾರ್ಡನ್ ಅವರನ್ನ ಸ್ವಲ್ಪ ಕರೀತೀರಾ?"
{{gap}}"ಇಲ್ಲಿ ವಾರ್ಡನ್ ಇಲ್ಲ ಮೇಟ್ರನ್ ಅಂತಲೇ ಇರೋದು."
{{gap}}"ನನಗೆ ಗೊತ್ತಿರ್ಲಿಲ್ಲ ಎಲ್ಲಿದಾರೆ ಮೇಟ್ರನ್ ?"
{{gap}}"ನಾನೇ"
{{gap}}ಓ ! so sorry ! ನಮಸ್ತೆ"
{{gap}}ದೀರ್ಘಕಾಲದ ಅನುಭವದಿಂದ ರಕ್ತಗತವಾಗಿದ್ದ ಮೃದುತನದಿಂದಲೇ ಸರಸಮ್ಮ ಹೇಳಿದಳು;
{{gap}}"ನಮಸ್ತೆ ಹೊಸಬರು ಯಾರಾದರು ಬಂದಾಗ ಅವರ ಹೆಸರು ಬರಕೊಳ್ಳೊ ಬೇಕು?"
{{gap}}ವಯಸ್ಸಿನಲ್ಲಿ ತಮಗಿಂತ ಎಷ್ಟೆಷ್ಟೋ ಕಿರಿಯಳಾಗಿದ್ದ ಹುಡಿಗಿಯನ್ನು ಬಹುವಚನದಿಂದಲೆ ದೊಡ್ಡಮ್ಮ ಸಂಭೋಧಿಸಿದುದನ್ನು ಕಂಡಾಗ ತುಂಗಮ್ಮನಿಗೆ ಮತ್ತಷ್ಟು ಕೆಡುಕೆನಿಸಿತು
{{gap}}ಉತ್ತರಿಸಲು ಆಕೆ ತಡವರಿಸಿದಳು.
{{gap}}"ಮಮ್ಮಿ ಅಂದಿದ್ದರು...?"
{{gap}}"ನೀವು ಹೇಳ್ಲೇ ಬೇಕಾದ್ದಿಲ್ಲ ಆದರೆ ಇಲ್ಲಿ ಯಾವುದಾದ್ರೂ ಒಂದು ಹೆಸರು ಬರ್ಕೋತೀವಿ. ನೋಡಿ,-ಪ್ರಭಾವತಿ, ಅಂತ ಆಗಬಹುದೊ?"
{{gap}}ಇದು ತುಂಗಮ್ಮನಿಗೆ ಒಳ್ಳೆಯ ತಮಾಷೆಯಾಗಿ ತೋರಿತು.
{{gap}}"ಹೂಂ...ಪ್ರಭಾ ಅಂತ ಸಾಕು."
{{gap}}"ಆಗಲಿ ಪ್ರಭಾ..ನಾನಿರೋದು ಪಕ್ಕದ ಕೊಠಡೀಲೆ. ಏನಾದರೂ ಬೇಕಾದ್ರೆ ಬಂದು ಬಾಗಿಲು ತಟ್ಟಿ. ಬನ್ನಿ..ಬಚ್ಚಲು ಮನೆ ತೋರಿಸಿಕೊಡ್ತೀನಿ ಬೇರೇನಾದರೂ ಬೇಕೇ?"<noinclude><references/></noinclude>
ev8gb1mao589vx641tyahgydtv0bwt0
ಪುಟ:Abhaya.pdf/೨೬೪
104
11131
320678
159096
2026-05-19T02:59:24Z
Shreelatha.Halemane
7642
320678
proofread-page
text/x-wiki
<noinclude><pagequality level="4" user="Akasmita" /></noinclude>{{rh|center=ಅಭಯ|left=|right=೨೫೯}}
{{gap}}ಅಭಯಧಾಮದ ಮುಖವನ್ನೇ ಕಂಡಿರದ ಗಂಡಸೊಬ್ಬರು ಪ್ರಭಾಳ </p>
ತಂದೆ - ಅಭಯಧಾಮದ ಬೆಳವಣಿಗೆಯ ವೆಚ್ಚಕಾಗಿ ಐದು ಸಾವಿರ ರೂಪಾಯಿಗಳಿಗೆ ಒ೦ದು ಚೆಕ್ ಕಳುಹಿಸಿಕೊಟ್ಟರು.
{{gap}}ಆ ವಿಷಯವನ್ನು ಕಾರ್ಯದರ್ಶಿನಿಯಿಂದ ಕೇಳಿ ತಿಳಿದ ಬಳಿಕ</p>
ಸರಸಮ್ಮ ತುಂಗಮ್ಮನಿಗೆ ಹೇಳಿದರು.
{{gap}}"ನೋಡಿದಾ ತುಂಗ? ಹೀಗಿದೆ ಪ್ರಪಂಚ.” </p>
{{gap}}“ಹೂಂ ದೊಡ್ಡಮ್ಮ.” </p>
{{gap}}"ಈ ಹಣ ನಮಗೆ ಬೇಕೇ ಬೇಕು. ಬರೇ ಸರಕಾರದ ಒಂದಿಷ್ಟು </p>
ದಾನದಿ೦ದಲೇ ಸಂಸ್ಥೆ ನಡೆಸೋದು ಸಾಧ್ಯವೆ.”
{{gap}}"ಆದರೆ ಅವಳು ಪ್ರಭಾ-” </p>
{{gap}}"ಈಗ ಹೇಳ್ತೀನಿ ತುಂಗ. ಹುಡುಗರ ಜತೆ ಓಡಾಡೋದು ಅವಳಿಗೆ </p>
ಆಟವಾಗಿತ್ತ೦ತೆ ಏನೂ ಆಗಬಾರದೆ೦ದು ಮು೦ಜಾಗ್ರತೆ ವಹಿಸಿಕೊ೦ಡಿದ್ಲು. ಆದರೂ ಹೀಗಾಯ್ತು. ಇ೦ಥವನೇ೦ತ ಹೇಳೋದಕ್ಕೂ ಅವಳ ಕೈಲಿ ಆಗ್ಲಿಲ್ವಂತೆ... ಇನ್ನು ಆ ಮಗು ಅನಾಥಾಶ್ರಮದು, ಅದರ ವಾಲಿ ಗೆ ತಂದೆಯೂ ಇಲ್ಲ ತಾಯಿಯೂ ಇಲ್ಲ. ಇನ್ನು ಆ ಪ್ರಭಾನೋ, ಆಕೆಯ ಮನಸ್ಸಿನಲ್ಲಿ ಪಶ್ಚಾತ್ತಾಪದ ಭಾವನೆ ಇದೇಂತ ಯಾವ ಆಧಾರದ ಮೇಲೆ ಹೇಳೋಣ?”
{{gap}}ಆ ಮಾತು ನಿಜವಾಗಿತ್ತು.</p>
{{gap}}ಆ ಪ್ರಭಾ ತನ್ನ ಹಾಗೆ ಮೋಸಹೋಗಿರಲಿಲ್ಲ ಹಾಗಾದರೆ. </p>
{{gap}}"ಶ್ರೀಮಂತರು ಎಲ್ಲ ಹುಡುಗೀರೂ ಹೀಗೆಯೇ ಇರ್ತಾರ ದೊಡ್ಡಮ್ಮ?”</p>
{{gap}}"ಛೆ! ಛೆ! ಹಾಗಲ್ಲ ತುಂಗ, ಎಲ್ಲೋ ಕೆಲವರು ಹೀಗಿರಾರೆ ಅಷ್ಟೆ. </p>
ಇವರು ಬದುಕೋ ರೀತಿಯೇ ಇ೦ಥಾದ್ದು . ಹಿ೦ದೆ ಇಲ್ಲಿ ಸುಲೋಚನಾ೦ತ ಒಬ್ಬಳಿದ್ಲು. ಶ್ರೀಮಂತರ ಹುಡುಗಿಯೇ... ಆದರೆ ಇಲ್ಲಿಗೆ ಬಂದ್ಮೇಲೆ ಹ್ಯಾಗೆ ಬದಲಾದ್ಲೂ೦ತ! ಎಲ್ಲರ ಜತೇಲಿ ಅನ್ಯೋನ್ಯವಾಗಿದ್ದು, ಎಲ್ಲರ ಪ್ರಿತಿಗೂ ಪಾತ್ರಳಾದ್ಲು, ಈಗ ನೋಡು, ಈ ಪ್ರಭಾ ಹೋದಾಗ ನಮ್ಮ ಹುಡುಗೀರಿಗೆ ಏನಾದರೂ ಬೇಸರವಾಯ್ತೆ? ಸುಲೋಚನಾ ಹೋದಾಗ ಹಾಗಲ್ಲ.... ಅವಳೂ<noinclude><references/></noinclude>
jzay8zzogvgr39o248sudeg6fpg8ogt
ಪುಟ:Abhaya.pdf/೨೫೩
104
11134
320636
150534
2026-05-18T14:25:41Z
Shreesha Sharma
7840
/* Validated */
320636
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|center=ಅಭಯ|left=೨೪೮|right=}}
{{gap}}ಆ ಪ್ರಶ್ನೆಯನ್ನು ಕೇಳಬಾರದಾಗಿತ್ತೇನೋ ಅನಿಸಿತು ತುಂಗಮ್ಮನಿಗೆ.ಆದರೆ ವಾಸ್ತವವಾಗಿ ದೊಡ್ಡಮ್ಮನಿಗೇ ಅದು ತಿಳಿದಿರಲಿಲ್ಲ.
{{gap}}"ನಂಗೊತ್ತಿಲ್ಲ ಕಣೆ. ಅವರಾಗಿ ಹೇಳ್ಲಿಲ್ಲ. ನಾನು ಕೇಳ್ಲಿಲ್ಲ "
{{gap}}"ಕೊಠಡಿ ಖಾಲಿ ಮಾಡಿಸ್ಲಾ?"
{{gap}}"ಹೌದು; ಆಲ್ಲಿಂದ ಆ ತಂಬೂರಿ - ತಬಲ ಬೇರೇನೇನು ಸಾಮಾನು ಇದೆಯೊ ಅದನ್ನೆಲ್ಲಾ ಇಲ್ಲಿಗೆ ತಂದ್ಬಿಡಿ"
{{gap}}"ಆಗಲಿ ದೊಡ್ಡಮ್ಮ .ಹೆರಿಗೆ ಇಲ್ಲೇ ಆಗುತ್ತೋ?"
{{gap}}"ಹೌದುಮತ್ತೆ !ಆಸ್ಪತ್ರೆಗೆ ಕಳುಹಿಸೋಹಾಗೆ ಇಲ್ಲ ತುಂಗ "
{{gap}}"ಹಾಸಿಗೆ -"
{{gap}}ಆಮೇಲೆ ನೋಡೋಣ ಬಹಳಮಾಡಿ ಅದನ್ನೆಲ್ಲಾ ತಂದೆತರ್ತಾರೆ."
{{gap}}ತುಂಗಮ್ಮನ ಕುತೂಹಲ ಹೆಚ್ಚಿತು ತನ್ನ ಹಾಗೆಯೇ ದುರದೃಷ್ಟಶಾಲಿಯಾದ-ಆದರೆ ಶ್ರೀಮಂತಳಾದ -ಹುಡುಗಿಯನ್ನು ನೋಡಲು ಅವಳು ತವಕ ಗೊಂಡಳು
ಕೊಠಡಿ ಸಿದ್ದನಾಗುತಿದ್ದುದನ್ನು ಕಂಡು ಜಲಜ ಕೇಳದಿರಲಿಲ್ಲ.
{{gap}}"ಏನಕ್ಕ ? ಏನ್ಸಮಾಚಾರ ?"
{{gap}}"ಆದರೇನು ಇರೋಕೆ ಬರ್ತಾರೊ ಆದ್ವಾ-"
{{gap}}ಜಲಜೆಯಧ್ವನಿಯಲ್ಲಿ ಸೂಕ್ಷ್ಮವಾಗಿ ತಿಳಿದುಕೊಳ್ಳುವ ಸಾಮರ್ಥ್ಯವಿತ್ತು.
{{gap}}"ಅದೇನೊ ನಂಗೊತ್ತಿಲ್ಲಮ್ಮ."
{{gap}}ತುಂಗಮ್ಮನ ಆ ಉತ್ತರವನ್ನು ನಿಜವೆಂದು ಭಾವಿಸಲು ಜಲಜೆಯ ಮನಸ್ಸು ಒಪ್ಪಲಿಲ್ಲ ಆದರೆ.ತುಂಗಮ್ಮ ತನ್ನಿಂದ ಏನನ್ನಾದರೂ ಮರೆಮಾಚುತ್ತಿರಬಹುದೆಂದು ಭಾವಿಸುದಕಕ್ಕಂತೂ ಅವಳು ಸಿದ್ದಳಿರಲ್ಲೇ ಇಲ್ಲ.
{{gap}}"ನಂಗೊತ್ತಕ್ಕಾ.ಹೇಳ್ತೀನಿ ಕೇಳು."
{{gap}}ತುಂಗಮ್ಮನಿಗೆ ಆಶ್ಚರ್ಯವಾಯ್ತು
{{gap}}"ಏನು?"<noinclude><references/></noinclude>
nbic1nm207t312i6o3jon7onx22admi
ಪುಟ:Abhaya.pdf/೨೬೭
104
11138
320686
250321
2026-05-19T03:08:34Z
Shreelatha.Halemane
7642
/* Validated */
320686
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=೨೬೨|right=}}
{{gap}}"ನನ್ನ ಹೆ೦ಡ್ತಿ ಇಲ್ಲಿಗೆ ಬ೦ದವ್ಳಾ ?"
{{gap}}ತು೦ಗಮ್ಮನಿಗೆ ಆ ಪ್ರಶ್ನೆ ಕೇಳಿ ಸೋಜಿಗವೆನಿಸಿತು ಆಕೆ ಎ೦ದಳು:
{{gap}}“ಒಳಗ್ಬನ್ನಿ"
{{gap}}ಆತ ಒಳಕ್ಕೆ ಬ೦ದೊಡನೆ ಎ೦ದಿನ೦ತೆ ತು೦ಗಮ್ಮ ಬಾಗಿಲಿಗೆ ಬೀಗ ತಗಲಿಸದಳು.
{{gap}}“ಕನಕಲಕ್ಷಮ್ಮ ಇಲ್ಲಿಗೆ ಬಂದವ್ಳೇನ್ರಿ?”
{{gap}}"ಇಲ್ವಲ್ಲಾ!”
{{gap}}"ತಮಾಷೆ ಮಾಡ್ಬೇಡಿ. నిజ ಹೇಳಿ"
{{gap}}“ಇಲ್ಲ ಕಣ್ರಿ..!”
{{gap}}“ಅಯ್ಯೋ! ಇನ್ನೇನಪ್ಪಾ. ಗತಿ?"
{{gap}}–ಎನ್ನುತ್ತ ಮಹಾಬಲ ಒರಗು ಬೆಂಚಿನಲ್ಲಿ ಕುಸಿಕುಳಿತ.
{{gap}}ಗಂಡಸಿನ ಸ್ವರ ಕೇಳಿ ಹುಡುಗಿಯರು ಅತ್ತ ಬಂದರು ಮಹಾಬಲನನ್ನು ನೋಡಿ, ಆಫೀಸು ಕೊಠಡಿಯ ಬಾಗಿಲಲ್ಲೆ ಗುಂಪುಕಟ್ಟಿ ನಿಂತರು.
{{gap}}“ಅಮ್ಮ ಎಲ್ಲಿ ?"
{{gap}}"ಹೊರ ಹೋಗಿದಾರೆ.”
{{gap}}"అಯ್ಯೊ ಶಿವನೆ! ನನ್ನ ಗತಿ ಹೀಗಾಯ್ತುಲ್ಲಪೊ!”
{{gap}}ಲಲಿತೆಯೊಬ್ಬಳೇ ಹುಡುಗಿಯರ ಗುಂಪನ್ನು ದಾಟಿ ಒಳ ಬಂದಳು:
{{gap}}“ಏನ್ರಿ ಅದು? ಏನುಗಲಾಟೆ?"
{{gap}}"ನನ್ನ ಹೆ೦ಡ್ತಿ ಓಡ್ಹೋದ್ಲಪೋ ಓಡ್ಹೋದ್ಲು."
{{gap}}ಹುಡುಗಿಯರಲ್ಲಿ ನಾಲಾರು ಜನ ಮಾತ್ರ ನಕ್ಕರು ಉಳಿದವರ ಮುಖಗಳು ಕಪ್ಪಿಟ್ಟವು, ಕನಕಲಕ್ಷಮ್ಮ ಓಡಿ ಹೋಗುವುದೆಂದರೆ ಅಭಯ ಧಾಮಕ್ಕೇ ಅವಮಾನವಾದ ಹಾಗೆ...
{{gap}}ಗದರಿಸುವ ಧ್ವನಿಯಲ್ಲಿ ಲಲಿತ ಅ೦ದಳು:
{{gap}}"ಆಕೆ ಓಡ್ಹೋದ್ಲೂ?ನೀವೇ ಓಡ್ಸಿದ್ರೊ?"
{{gap}}"ಅಯ್ಯೊ! ಒ೦ದಳೆ ಸರ ಮಾಡಿಸಿಹಾಕಿದ್ದೆ...ಒ೦ದು ಜತೆ ಚಿನ್ನದ ಬಳೆಗ್ಳು...ರೇಷ್ಮೆಸೀರೆ...ಎಲ್ಲಾ ಹೊಡ್ಕೊ೦ಡು ಹೋದಳಲ್ಲಪ್ಪೋ ಭಗವಂತಾ!”<noinclude><references/></noinclude>
klf3t8hpxwtmis77qfp7zq4tv81jpoi
ಪುಟ:Abhaya.pdf/೨೩೮
104
11142
320619
250325
2026-05-18T13:04:46Z
Shreelatha.Halemane
7642
/* Validated */
320619
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=|right=೨೩೩}}
{{gap}}" ಅದೇನ್ರೀ ಅದು ? ಗಂಡಸರೆಲ್ಲ ಪರಿಶುದ್ಧವಾಗಿರ್ತಾರೊ ?"<br>
{{gap}}" ಹಾಗಲ್ಲ ಕೆಟ್ಟ ರೋಗ ಏನಾದ್ರೂ--”<br>
{{gap}}" ಪಾಪ! ಗಂಡಸ್ರಿಗೂ ಈ ರೋಗಕ್ಕೂ ಏನು ಸಂಬಂಧ ಇಲ್ಲ ಅಲ್ವೆ?”<br>
{{gap}}ಅವರು 'ರೋಗ' ಎನ್ನುವುದಕ್ಕೂ ಆ ಬಡಾವಣೆಯ ಲೇಡಿ ಡಾಕ್ಟರು -<br>
ಸಮಾಜದ ಸದಸ್ಯೆ - ಒಳಬರುವುದಕ್ಕೂ ಸರಿಹೋಯಿತು<br>
{{gap}}" ಆ ವಿಷಯ ಡಾಕ್ಟರನ್ನ ಕೇಳಿ ”<br>
{{gap}}--ಎಂದರು ಯಾರೋ ಒಬ್ಬರು<br>
{{gap}}ರೋಗದ ಹೆಸರು ತಿಳಿದು ಡಾಕ್ಟರಮ್ಮನಿಗೆ ತಮಾಷೆ ಎನ್ನಿಸಿತು<br>
{{gap}}" ನಾವಿರೋದು ಯಾತಕಪ್ಪ ಮತ್ತೆ ? ಏನೂ ಹೆದರ್ಕೋಬೇಡಿ ಎಂದ<br>
ರೋಗ ಇದ್ದರೂ ಗುಣಪಡಿಸ್ತೀನಿ "<br>
{{gap}}ಅಷ್ಟು ಹೇಳಿ ಆ ಡಾಕ್ಟರು ಸುಮ್ಮನಿರಲಿಲ್ಲ ತುಂಟನಗೆ ನಕ್ಕು,<br>
ಕುಳಿತಿದ್ದವರನ್ನೆಲ್ಲ ನಿಧಾನವಾಗಿ ನೋಡುತ್ತ ಅಂದರು :<br>
{{gap}}" ಈಗ ಹೇಳಿ ಯಾವಕಾಹಿಲೆ ? ಯಾರಿಗೆ ಏನಾಗಿದೆ ?"<br>
{{gap}}ಆ ಮಹಿಳಾ ಮಣಿಗಳ ಮುಖಗಳು ಕೆಂಪಗಾದುವು. ಅವರಲ್ಲೊಬ್ಬರು<br>
ನಸುನಕ್ಕು ಅಂದರು :<br>
{{gap}}" ಡಾಕ್ಟರ್ ! Dont be silly !”<br>
{{gap}}" ಅದೇನೊ ಅಭಯಧಾಮದಲ್ಲಿ ಒಳ್ಳೇ ಹುಡುಗೀರು ಸಿಗ್ತಾರಂತಲ್ಲೊ<br>
ಮಹಾಬಲ, ಮದುವೆ ಮಾಡ್ಕೊಂಬಿಡು. ಖರ್ಚೂ ಹೆಚ್ಚಾಗಲ್ಲ.”<br>
{{gap}}--ಎಂದು ಸಾಹೇಬರ ಹೆಂಡತಿ ಆ ರಾತ್ರೆ ತಮ್ಮ ಜವಾನನಿಗೆ<br>
ಹೇಳಿದರು.<br>
{{gap}}ಮಹಾಬಲ ಅಭಯಧಾಮವನ್ನು ಪತ್ತೆಹಚ್ಚಿ ಅದರ ಸುತ್ತು ಮುತ್ತು<br>
ಸುಳಿದುದೂ ಆಯಿತು. ಆದರೆ ಮುಂದುವರಿಯುವ ಕ್ರಮ ಅವನಿಗೆ<br>
ಗೊತ್ತಾಗಲಿಲ್ಲ ಮತ್ತೆ ಬಂದು 'ಅಮ್ಮಾವರನ್ನೇ' ಪೀಡಿಸಿದ.<br>
{{gap}}ಅವರು ಅಭಯಧಾಮದ ಕಾರ್ಯದರ್ಶಿನಿ ಕಮಲಮ್ಮನಿಗೆ ಕಾಗದ<br>
ಬರೆದು ಕೊಟ್ಟರು. ಅದಾದಮೇಲೆ ಒಂದು ತಿಂಗಳ ಅನಂತರ, ಡಿಸೆಂಬರ್ನಲ್ಲಿ<br>
ಜವಾನ ಮಹಾಬಲ 'ನವಜವಾನ' ನಾಗಿ ಅಭಯಧಾಮಕ್ಕೆ ಭೇಟಿಕೊಟ್ಟ.<noinclude><references/></noinclude>
7bvunnbgatd79zz503frp104h7t7kyz
ಪುಟ:Abhaya.pdf/೨೫೪
104
11145
320637
150535
2026-05-18T14:28:42Z
Shreesha Sharma
7840
/* Validated */
320637
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|center=ಅಭಯ|left=|right=೨೪೯}}
{{gap}}" ಕೊಠಡಿ ಪೂರ್ತಿಯಾಗಿ ಖಾಲಿಯಾಗ್ತಿದೆ ನನ್ನ ತುಂಗಕ್ಕನಿಗೂ ಇರದೇ ಇದ್ದ ಸಂಭ್ರಮ ಈಕೆಗೆ ! ಶ್ರೀಮಂತಳೇ ಇರಬೇಕು ಹಾಗಾದರೆ. ಭಾರಿ ಶ್ರೀಮಂತಳಿದ್ದರೂ ಇರಬಹುದು. ಆಕೆ ಬರಲಿ ನೋಡಿಹೇಳ್ತೀನಿ ಎಷ್ಟು ದಿವಸ ಇಲ್ಲಿ ಇರ್ತಾಳೇಂತ. ಅವಳ ಶ್ರೀಮಂತಿಕೇನೂ ಎಷ್ಟಿದೆ ಅಂತ ಸ್ವಲ್ಪ ನೋಡೇ ಬಿಡ್ರೀನಿ”
{{gap}}"ಹಾಗೆಲ್ಲ ಆನ್ಬಾರ್ದು ಜಲಜ"
{{gap}}" ಹೋಗಕ್ಕ, ನಿನಗೊಂದೂ ಗೊತ್ತಾಗೋಲ್ಲ"
{{gap}}ಅಷ್ಟು ಹೇಳಿ ಮಾತು ನಿಲ್ಲಿಸಿ ಬಿಟ್ಟಳು ಜಲಜಾ
{{gap}}ತುಂಗಮ್ಮ, ಮನಸಿನ ನೆಮ್ಮದಿ ಇಲ್ಲದೆ ಹೊತ್ತು ಕಳೆದಳು
{{gap}}ಕತ್ತಲಾದಮೇಲೆ, ಬರಬೇಕಾಗಿದ್ದವರ ಆಗಮನವನ್ನೂ ಸರಸಮ್ಮನೂ ಇದಿರುನೋಡಿದರು.
{{gap}}ಎಂಟುಗಂಟೆಯ ಹೊತ್ತಿಗೆ ದೆವ್ವದಂತಹ ಸುಭದ್ರವಾದೊ೦ದು ಕಾರು ಅಭಯಧಾಮದೆದುರು ಬಂದು ನಿಂತಿತು ಮೊದಲು ಕಾರ್ಯದರ್ಶಿನಿ ಇಳಿದರು.
{{gap}}"ಭದ್ರ! ಮೆತ್ತಗೆ ಇಳೀರಿ”
{{gap}}— ಎನ್ನುತ್ತ ಗರ್ಭಿಣಿಯಾಗಿದ್ದ ಹುಡುಗಿಯನ್ನು ಕೈಕೊಟ್ಟು ಅವರು ಕೆಳಕ್ಕೆ ಇಳಿಸಿದರು.
{{gap}}ಅವಳ ಹಿಂದೆ ವಯಸಾದ ಒಬ್ಬರು ಸ್ತ್ರೀ. ಎದುರು ಸೀಟಿನಿಂದ, ಬಣ್ಣದ ಚಿತ್ರಗಳಿದ್ದ ಬುಷ್ ಕೊಟು ಧರಿಸಿದ್ದ ಎತ್ತರದ ನಿಲುವಿನ ಒಬ್ಬ ಯುವಕ ಇಳಿದ..ಅವರೆಲ್ಲರೂ ಅಭಯಧಾಮದ ಒಳಕ್ಕೆ ಬಂದರು ಡ್ರೈವರ್, ಹೊಸಹಾಸಿಗೆಯನ್ನೂ ದೊಡ್ಡ ಸೂಟ್ ಕೇಸನ್ನೂ ಹೊತ್ತುಕೊಂಡು ಬಂದ.
{{gap}}ఆ ಹೆಂಗಸು,ಹುಡುಗಿಯ ತಾಯಿಯೆಂಬುದು ಸ್ವಷ್ಟವಾಗಿತ್ತು. ಆ ಯುವಕ ಆಕೆಯ ಅಣ್ಣನಾಗಿದ್ದ ಮುಟ್ಟಿದರೆ ಎಲ್ಲಿ ಮುದುಡುವುದೊ ಎಂಬಂತೆ ಕೆಂಪು ಕೆಂಪಗಾಗಿದ್ದ ಮೈ ಹೂವಿನ ಸುಪ್ಪತ್ತಿಗೆಯಲ್ಲೆ ಬೆಳೆದ ಸುಕೋಮಲ ದೇಹ ..
{{gap}}ಅತ್ಯಂತ ಗುಪ್ತವಾದುದೇನನ್ನೋ ಅವಸರ ಅವಸರವಾಗಿ ಮಾಡುವವರಂತೆ ಅವರೆಲ್ಲ ವರ್ತಿಸಿದರು.<noinclude><references/></noinclude>
b94kew1f9ayvibbb7923b08wdsdq2u7
ಪುಟ:Abhaya.pdf/೨೫೫
104
11147
320638
150536
2026-05-18T14:34:37Z
Shreesha Sharma
7840
/* Validated */
320638
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|center=ಅಭಯ|left=೨೫೦|right=}}
{{gap}}ಆ ಹುಡುಗಿಯನ್ನು ತಾಯಿ ಮತ್ತು ಅಣ್ಣನೊಡನೆ ಆ ಕೊಠಡಿಯಲ್ಲಿ ಬಿಟ್ಟು ಕಾರ್ಯರ್ಶಿನಿ ಆಫೀಸು ರೂಮಿಗೆ ಬಂದರು.
{{gap}}" ಹೆಸರು ಏನೂಂತ ಬರಕೊಳ್ಳೋಣ?”
{{gap}}–ಎ೦ದು ಕೇಳಿದರು ಸರಸಮ್ಮ.
{{gap}}"ಏನಾದರೊಂದು ಬರಕೊಂಡ್ಬಿಡೀಪ್ಪಾ. ಇದೊಳ್ಳೆ ಗೋಳು ! ಇದೊಳ್ಳೆ ಸಮಾಜಸೇವೆ! ಅಂತೂ ಬಾಡಿಗೆಮನೆ ಕೆಟ್ಟೋಯ್ತು ಈ ಅಭಯಧಾಮ."
{{gap}}ಎದುರಲ್ಲಿ ಅಷ್ಟೊಂದು ವಿನಯದಿಂದ ಅವರೊಡನೆ ವರ್ತಿಸುತಿದ್ದವರು, ಅವರಿಂದ ದೂರ ಉಳಿದಾಗ ಬೇಸರ ವ್ಯಕ್ತಪಡಿಸುತ್ತ ಮುಖ ಒರೆಸಿಕೊಂಡರು
{{gap}}ಸರನಮ್ಮನಿಗೂ ಅದು ತಿಳಿದಿತ್ತು, ಆದರೆ ಅದಕ್ಕೆಲ್ಲ ಒಪ್ಪದೆ ಬೇರೆ ಹಾದಿ ಇರಲಿಲ್ಲ, ಸಮಾಜದಲ್ಲಿನ ಪ್ರತಿಷ್ಠಿತರ ಹಣಸಹಾಯದ ಆಧಾರದ ಮೇಲೇಯೇ ಮುಖ್ಯವಾಗಿ ನಡೆದಿತ್ತು ಆ ಅಭಯಧಾಮ ಎಲ್ಲಾದರೂ ಒಂದೆಡೆ ಅಗೌರವವಾದರೂ ಸಾಕು,ಆಡಳಿತ ಸಮಿತಿ ಮುರಿದು ಮಣ್ಣುಪಾಲಾದ ಹಾಗೆಯೇ.
{{gap}}ಆ ಯುವಕ ಬಂದು ಹೇಳಿದ;
{{gap}}" ಇನ್ನು ಹೊರಡಬಹುದೇ ಅಂತ ಮಮ್ಮಿ ಕೇಳ್ತಾರೆ."
{{gap}}"ಕೊಠಡಿಯಲ್ಲಿ ಹುಡುಗಿ ತಾಯಿಯಮಡಿಲಲ್ಲಿ ಮುಖವಿಟ್ಟ ಅತ್ತಳು;
{{gap}}''ಮಮ್ಮೀ!ಮಮ್ಮೀ!'
{{gap}}"ಅಳಬೇಡ ಮಗೂ...ಆದಷ್ಟು ಬೇಗನೆ ಮನೆಗೆ ಕರಕೊಂಡು ಹೋಗ್ತೀವಿ”
{{gap}}" ಹಿ..ಹಿ .. ದಿಗಿಲಾಗುತ್ತಮ್ಮ ...”
{{gap}}" ಇಲ್ಲಿರೋ ಜನರಿಗೆ ಹೇಳ್ತೀನಿ ನಿನಗೇನೂ ಕೊರತೆ ಆಗದ ಹಾಗೆ ನೋಡೋತಾರೆ."
{{gap}}ಹುಡುಗಿ ಅಳು ನಿಲ್ಲಿಸಿದಳು.
{{gap}}ಡ್ರೈವರ್, ಕಾರ್ಯದರ್ಶಿನಿ ಮತ್ತು ಆ ಯುವಕ ಹೊರಗೆ ಅಂಗಳಕ್ಕಿಳಿದ ಮೇಲೆ, ಹುಡುಗಿಯ ತಾಯಿಯೊಬ್ಬರೇ ಸರಸಮ್ಮನೆಡೆಗೆ ನಡೆದು ಬಂದರು.<noinclude><references/></noinclude>
lzzrstnr5zlq64m8cys1xcfqjb0kgq0
ಪುಟ:Abhaya.pdf/೨೬೩
104
11165
320677
150544
2026-05-19T02:35:02Z
Shreelatha.Halemane
7642
/* Validated */
320677
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಅಭಯ|left=೨೫೮|right=}}</noinclude>{{gap}}"ಓ! ಆಮೇಲೆ ವಾಪ್ಸು ಹೋಗ್ಲೇ ಇಲ್ವೋ ?”
{{gap}}" ಇಲ್ಲ"
{{gap}}ತುಂಗಮ್ಮ ಕಾರಿನಲ್ಲಿ ಬಂದಿರಲಿಲ್ಲ ಮುಳ್ಳು ತುಳಿದು ನಡೆದು ಬಂದು, ಬಾಗಿಲುತಟ್ಟಿ, ಬಳಲಿ ಬವಳಿ ಬಂದು ಮೆಟ್ಟಗಲ್ಲ ಮೇಲೆ ಬಿದ್ದಿದ್ದಳು. ಅದನ್ನೆಲ್ಲ ಆಕೆ ಹೇಳಲಿಲ್ಲ ಅದನ್ನು ಪ್ರಭಾಗೆ ಹೇಳುವುದರಿಂದ ಯಾವ ಪ್ರಯೋಜನವೂ ಇದ್ದಂತೆ ತುಂಗಮ್ಮನಿಗೆ ತೋರಲಿಲ್ಲ, ಅಷ್ಟೇಅಲ್ಲ, ಬೇರೆಹುಡುಗಿಯರ ಜೀವನ ವೃತ್ತಾಂತಗಳನ್ನೂ ಅವಳು ತಿಳಿಸಲಿಲ್ಲ.
{{gap}}ಒಂದೇ ಕಟ್ಟಡದಲ್ಲಿದ್ದೂ ಬೇರೆಯಾಗಿ ಈ ಹುಡುಗಿ ಪ್ರಭಾ ಸಂಕಟ ಪಡುತ್ತಿರುವಳಲ್ಲಾ - ಎಂದು ಸರಸಮ್ಮನಿಗೆ ಕೆಡುಕೆನಿಸಿತು. ಆದ್ರೆ ಮುಂದೆ ಆ ವಿಚಾರವಾಗಿ ಹೆಚ್ಚಿನ ಯೋಚನೆ ಮಾಡುವ ಅಗತ್ಯ ಬೀಳಲಿಲ್ಲ.
{{gap}}ಪ್ರಭಾಗೆ ದಿನಗಳು ತುಂಬಿ ನೋವು ಕಾಣಿಸಿಕೊಂಡಿತು. ಆಕೆಯ ಊರಿನಿಂದ ಅಣ್ಣ ಬಂದ ನಿಷ್ಣಾತರಾದ ಸ್ತ್ರೀವೈದ್ಯರು ಬಂದರು.
{{gap}}ಸುಲಭವಾಗಿ ಹೆರಿಗೆಯಾಯಿತು ಮುದ್ದಾದ ಗಂಡು ಕೂಸು.
{{gap}}ತಾನು ಮಗುವಿಗೆ ಜನ್ಮ ಕೊಟ್ಟ ಸ್ವಲ್ಪ ಹೊತ್ತಾದ ಬಳಿಕ ಚೇತರಿಸಿ ಕೊಂಡು ಪ್ರಭಾ, ಮಗುವಿನ ಮುಖನೋಡಿ ಒಮ್ಮೆ ಮುಗುಳ್ನಕ್ಕರೂ, ಬಳಿಕ ಒಂದೇ ಸಮನೆ ಅತ್ತಳು – ತನಗೆ ಹಾಗಾಯಿತಲ್ಲಾ ಎಂದು.
{{gap}}"ಇದೊಂದು ವಿಚಿತ್ರ ಹುಡುಗಿ”
{{gap}}-ಎಂದು ಗೊಣಗುಟ್ಟಿದಳು. ತುಂಗಮ್ಮ.
{{gap}}ಕೆಲವು ದಿನಗಳಲ್ಲೆ ಪ್ರಭಾ ಎದ್ದು ನಡೆದಳು ಹಿಂದೊಮ್ಮೆ ಬಂದಿದ್ದ ಕಾರೇ ಮತ್ತೆ ಬಂದು ಅವಳನ್ನು ಕರೆದೊಯ್ದಿತು. ಹಿಂದೆಯೇ ಉಳಿಯಿತು ಮಗು.
{{gap}}ಒಂದು ಮಗುವನ್ನು ಹೊತ್ತು ಹೆತ್ತು ಆಡಿಸಿ ಕಳೆದುಕೊಂಡಿದ್ದ ಒಬ್ಬಳು ಈ ಮಗುವನ್ನೆತ್ತಿಕೊಂಡು ಅದರ ಬಾಯಿಗೆ ತನ್ನ ಸ್ತನವನ್ನು ನೀಡಿದಳು. ಮಗು ಚೀಪಿತು .ಹಾಲು ಬರಲಿಲ್ಲವೆಂದು ಅತ್ತಿತು.
{{gap}}ಮಾರನೆದಿನವೆ ಅನಾಥಾಶ್ರಮದವರು ಒಂದು ಟ್ಯಾಕ್ಸಿನಲ್ಲಿ ಬಂದು ಮಗುವನ್ನೊಯ್ದರು, ಆದನ್ನು ಸಾಕಲೆಂದು ಅವರಿಗೂ ಹಣ ದೊರೆತಿತ್ತು.<noinclude><references/></noinclude>
3bdepkpjtd0ortdt3zygpuo520s8c2q
ಪುಟ:Abhaya.pdf/೨೬೧
104
11166
320674
150542
2026-05-19T02:25:44Z
A826
6806
/* Validated */
320674
proofread-page
text/x-wiki
<noinclude><pagequality level="4" user="A826" /></noinclude>ಪ್ರಭಾಳನ್ನು ಪ್ರಭಾದೇವಿಯಾಗಿಮಾಡಿ ಜಾಣತನದಿಂದ ನಯವಾಗಿ ತುಂಗಮ್ಮ ಉತ್ತರವಿತ್ತುದನ್ನು ಕಂಡು ಸರಸಮ್ಮನಿಗೆ ಆನಂದವಾಯಿತು.
ಅದು ಅಭಯಧಾಮದಲ್ಲಿ ಕಲಿತ ಮೊದಲವಾಠ, ಪ್ರಭಾ ಬದಲಾಯಿ! ಸಿದಳು ನಿಜ, ಆದರೆ ಆ ಹುಡುಗಿಯರಲ್ಲಿ ಆಕೆ ಒಬ್ಬಳಾಗಲಿಲ್ಲ ಪಾಯಸ ದೂಟಕ್ಕೆ ಮುಂಚೆ "ಹುಡುಗೀರಾ" ಎಂದು ಸಂಬೋಧಿಸಿ ಸರಸಮ್ಮ ಭಾಷಣ ಮಾಡಲಿಲ್ಲ. ಇತರ ಹುಡುಗಿಯರ ವಂಗ್ರಿಯಲ್ಲಿ ಊಟಕ್ಕೆ ಕುಳಿತುಕೊಳ್ಳಲೇ ಇಲ್ಲ ಪ್ರಭಾ, ಅವಳ ಊಟ ಕೊಠಡಿಯಲ್ಲೇ ನಡೆಯಿತು. ಎಲ್ಲರ ದೃಷ್ಟಿಯಲ್ಲಿ ಆಕೆ ಅತಿಧಿಯಾದಳು. ಹೊಸ ತುಪ್ಪ, ವಿಶೇಷ ಉಪ್ಪಿನ ಕಾಯಿ ಮುತ್ತಿತರ ಸಾಮಗ್ರಿಗಳು ಹೊರಗಿನಿಂದಲೆ ಆಕೆಗೆ ಪೂರೈಕೆಯಾದುವು. ಅಗಸ ವಾರಕ್ಕೊಮ್ಮೆ ಬಟ್ಟೆ ಬರೆ ಒಗೆದು ತಂದ.
ಇ೦ತಹ ತರತಮ ನೀತಿ ಸರಸಮ್ಮನಿಗೆ ಇಷ್ಟವಿರಲಿಲ್ಲ, ಆದರೂ ಅವರು ಸಮಿತಿಯ ಪ್ರಮುಖರ ನಿರ್ದೇಶಕ್ಕೆ ಇದಿರಾಗಿ ಮಾತನಾಡು ವಂತಿರಲಿಲ್ಲ.
ನಗರದ ಸುಪ್ರಸಿದ್ಧರಾದ ಡಾಕ್ಟರೊಬ್ಬೊರು ದಿನಬಿಟ್ಟು ದಿನಬಂದು ಪ್ರಭಾಳನ್ನು ನೋಡಿಕೊಂಡು ಹೋದರು.
ಜಾತಿಯ ಪ್ರೆಶ್ನೆಯಿಂದಾಗಿ ಆಕೆ ಬೇರೆಯಾಗಿಯೆ ಉಳಿದಿರಲಿಲ್ಲ. ಅಂತಹ ಭಾವನೆಗಳು ಅಲ್ಲಿ ಕ್ಷಣಿಕವಾಗುತಿದ್ದುವು. 'ಕಾಲುಜಾರಿದ ತಾವೆಲ್ಲ ಒಂದೇ ಜಾತಿ - ಎನ್ನುವುದು ಅಭಯಧಾಮದ ಹುಡುಗಿಯರ ಧೋರಣೆ. ಆದರೆ ಪ್ರಭಾ, ವರ್ಗವ್ಯತ್ಯಾಸದಿಂದಾಗಿ ಬೇರೆಯಾಗಿದ್ದಳು. ಆಕೆ ಹುಟ್ಟಿದ ಬೆಳೆದ ವಾತಾವರಣವೆಲ್ಲ, ಆಕೆಯ ಓದು ಸಂಸಾರವೆಲ್ಲ, ಈ ಹುಡುಗಿಯರಿಗಿಂತ ಭಿನ್ನವಾಗಿತ್ತು.
ಮೊದಲು ಏಕಾಂತವನ್ನೇ ಬಯಸಿದಳು ಪ್ರಭಾ, ಆದರೆ ಕ್ರಮೇಣ ಅದು ಬೇಸರವಾಗಿ, ಒಬ್ಬಿಬ್ಬರು ಹುಡುಗಿಯರೊಡನೆ ಹೆಚ್ಚುಸಲಿಗೆಯಿಂದ ಇರತೊಡಗಿದಳು.
ಮಳೆ ಬಂದು ನಿಂತಿದ್ದ ಆ ಮುಂಜಾನೆ ತುಂಗಮ್ಮ ಮತ್ತು ಜಲಜ ಪ್ರಭಾಳ ಕೊಠಡಿಗೆ ಬಂದು ಬಾಗಿಲು ತಟ್ಟಿದರು. ಅಗಣಿ ಹಾಕಿರಲಿಲ್ಲ.<noinclude><references/></noinclude>
5jq5zr90oouk43a2qzbedsz31bg3cdf
320675
320674
2026-05-19T02:28:28Z
Shreelatha.Halemane
7642
320675
proofread-page
text/x-wiki
<noinclude><pagequality level="4" user="A826" />{{rh|center=ಅಭಯ|left=೨೫೯|right=}}</noinclude>{{gap}}ಪ್ರಭಾಳನ್ನು ಪ್ರಭಾದೇವಿಯಾಗಿಮಾಡಿ ಜಾಣತನದಿಂದ ನಯವಾಗಿ ತುಂಗಮ್ಮ ಉತ್ತರವಿತ್ತುದನ್ನು ಕಂಡು ಸರಸಮ್ಮನಿಗೆ ಆನಂದವಾಯಿತು.
{{gap}}ಅದು ಅಭಯಧಾಮದಲ್ಲಿ ಕಲಿತ ಮೊದಲವಾಠ, ಪ್ರಭಾ ಬದಲಾಯಿಸಿದಳು ನಿಜ, ಆದರೆ ಆ ಹುಡುಗಿಯರಲ್ಲಿ ಆಕೆ ಒಬ್ಬಳಾಗಲಿಲ್ಲ ಪಾಯಸ ದೂಟಕ್ಕೆ ಮುಂಚೆ "ಹುಡುಗೀರಾ" ಎಂದು ಸಂಬೋಧಿಸಿ ಸರಸಮ್ಮ ಭಾಷಣ ಮಾಡಲಿಲ್ಲ. ಇತರ ಹುಡುಗಿಯರ ವಂಗ್ತಿಯಲ್ಲಿ ಊಟಕ್ಕೆ ಕುಳಿತುಕೊಳ್ಳಲೇ ಇಲ್ಲ ಪ್ರಭಾ, ಅವಳ ಊಟ ಕೊಠಡಿಯಲ್ಲೇ ನಡೆಯಿತು. ಎಲ್ಲರ ದೃಷ್ಟಿಯಲ್ಲಿ ಆಕೆ ಅತಿಥಿಯಾದಳು. ಹೊಸ ತುಪ್ಪ, ವಿಶೇಷ ಉಪ್ಪಿನ ಕಾಯಿ ಮತ್ತಿತರ ಸಾಮಗ್ರಿಗಳು ಹೊರಗಿನಿಂದಲೆ ಆಕೆಗೆ ಪೂರೈಕೆಯಾದುವು. ಅಗಸ ವಾರಕ್ಕೊಮ್ಮೆ ಬಟ್ಟೆ ಬರೆ ಒಗೆದು ತಂದ.
{{gap}}ಇ೦ತಹ ತಾರತಮ ನೀತಿ ಸರಸಮ್ಮನಿಗೆ ಇಷ್ಟವಿರಲಿಲ್ಲ, ಆದರೂ ಅವರು ಸಮಿತಿಯ ಪ್ರಮುಖರ ನಿರ್ದೇಶಕ್ಕೆ ಇದಿರಾಗಿ ಮಾತನಾಡು ವಂತಿರಲಿಲ್ಲ.
{{gap}}ನಗರದ ಸುಪ್ರಸಿದ್ಧರಾದ ಡಾಕ್ಟರೊಬ್ಬೊರು ದಿನಬಿಟ್ಟು ದಿನಬಂದು ಪ್ರಭಾಳನ್ನು ನೋಡಿಕೊಂಡು ಹೋದರು.
{{gap}}ಜಾತಿಯ ಪ್ರೆಶ್ನೆಯಿಂದಾಗಿ ಆಕೆ ಬೇರೆಯಾಗಿಯೆ ಉಳಿದಿರಲಿಲ್ಲ. ಅಂತಹ ಭಾವನೆಗಳು ಅಲ್ಲಿ ಕ್ಷಣಿಕವಾಗುತಿದ್ದುವು. 'ಕಾಲುಜಾರಿದ ತಾವೆಲ್ಲ ಒಂದೇ ಜಾತಿ - ಎನ್ನುವುದು ಅಭಯಧಾಮದ ಹುಡುಗಿಯರ ಧೋರಣೆ. ಆದರೆ ಪ್ರಭಾ, ವರ್ಗವ್ಯತ್ಯಾಸದಿಂದಾಗಿ ಬೇರೆಯಾಗಿದ್ದಳು. ಆಕೆ ಹುಟ್ಟಿದ ಬೆಳೆದ ವಾತಾವರಣವೆಲ್ಲ, ಆಕೆಯ ಓದು ಸಂಸಾರವೆಲ್ಲ, ಈ ಹುಡುಗಿಯರಿಗಿಂತ ಭಿನ್ನವಾಗಿತ್ತು.
{{gap}}ಮೊದಲು ಏಕಾಂತವನ್ನೇ ಬಯಸಿದಳು ಪ್ರಭಾ, ಆದರೆ ಕ್ರಮೇಣ ಅದು ಬೇಸರವಾಗಿ, ಒಬ್ಬಿಬ್ಬರು ಹುಡುಗಿಯರೊಡನೆ ಹೆಚ್ಚುಸಲಿಗೆಯಿಂದ ಇರತೊಡಗಿದಳು.
{{gap}}ಮಳೆ ಬಂದು ನಿಂತಿದ್ದ ಆ ಮುಂಜಾನೆ ತುಂಗಮ್ಮ ಮತ್ತು ಜಲಜ ಪ್ರಭಾಳ ಕೊಠಡಿಗೆ ಬಂದು ಬಾಗಿಲು ತಟ್ಟಿದರು. ಅಗಣಿ ಹಾಕಿರಲಿಲ್ಲ.<noinclude><references/></noinclude>
rf8a6dfwwn4c2524kuxthefvnt2i4ph
ಪುಟ:Abhaya.pdf/೨೫೮
104
11171
320666
150539
2026-05-19T02:16:30Z
Pragathi. BH
7585
/* Validated */
320666
proofread-page
text/x-wiki
<noinclude><pagequality level="4" user="Pragathi. BH" /></noinclude>" ಏನೂ ಬೇಡಿ. "
" ಕುಡಿಯೋಕೆ ನೀರು ಕಳಿಸ್ತೀನಿ"
" ಹೌದು, ನೀರುಬೇಕು "
" ಈಗ ನನ್ಜತೇಲಿ ಬನ್ನಿ ಮಿಸ್ ಪ್ರಭಾ "
ಪ್ರಭಾ ಎದ್ದಳು ತುಂಗಮ್ಮ ಹಿಂದೆಯೇ ಉಳಿದಳು ಹೊರಹೋಗುತ್ತ ಸರಸಮ್ಮನೆಂದರು.
" ಈಗ ಅಸಾಧ್ಯ ಸೆಖೆ, ಇನ್ನು ನಾಲ್ಕೈದು ದಿವಸ ಆಮೇಲೆ ಮೇಲೆ ಷುರುವಾಗ್ಬಿಡುತ್ತೆ. ಆಗ ತಣ್ಣಗಿತ್ತದೆ”
ಪ್ರಭಾ ಅಭಯಧಾಮಕ್ಕೆ ಬಂದ ಒಂದು ವಾರದಲ್ಲಿಯೇ ಜೋರೋ ಎಂದು ಮುಂಗಾರು ಮಳೆ ಶುರುವಾಯಿತು ಜಗಲಿಯಲ್ಲಿ ಮಲಗಲಾರದೆ ಹುಡುಗಿಯರೆಲ್ಲ ಹಜಾರವನ್ನೂ ಸೇರಿದರು.
ಒಂದು ರಾತ್ರೆ ಹಾಗೆ ಚೆನಾಗಿ ಮಳೆ ಬಂದಮೇಲೆ, ಬೆಳಗು ಮುಂಜಾನೆ ಜಲಜ ತುಂಗಮ್ಮನನ್ನು ಎಬ್ಬಿಸಿ ಹಜಾರದ ಕಿಟಿಕಿಯ ಬಳಿ ನಿಂತು ಹೊರಗೆ ಬೊಟ್ಟ ಮಾಡಿದಳು:
" ನೋಡಿದಾ ಅಕ್ಕ? ಆವತ್ತು ಹೇಳಿದ್ದಿಲ್ಲಾ ನಾನು? ಸಮುದ್ರದ ಹಾಗೇ ಇಲ್ಲ ?"
ಹೌದೆಂದು ತುಂಗಮ್ಮ ತಲೆಯಡಿಸಿದಳು ಭಾಗದಲ್ಲಿ ಮಾತ್ರ ಭೂಮಿಗೆ ಅಂಟಿಕೊಂಡಿದ್ದ ಅರ್ಧದ್ವೀಪವಾಗಿತ್ತು. ಮೂಲೆಗಳಿಂದಲೂ ವಟಗುಟ್ಟತಿದ್ದುವು ಕಪ್ಪೆಗಳು
" ನೀನು ಚಿಕ್ಕವಳಿದಾಗ ಮಳೆಗಾಲದಲ್ಲಿ ಏನೇನು ಮಾಡ್ತಿದ್ದೆ ತುಂಗಕ್ಕ ?"
"ತಲೆಮೇಲೆ ಕೈ ಇಟ್ಟೊಂಡು ಲಂಗ ಎತ್ತಿಕೊಂಡು ಕುಣೀತಿದ್ದೆ. ಕಾಗ್ಧದ ದೋಣೀನ ಚರಂಡಿ ನೀಗ್ನಲ್ಲಿ ಬಿಟ್ಟ ಅದಗ್ಧತೇಲೆ ಓಡ್ರಿದ್ದೆ.”
ನಾನೂ ಹಂಗೇ ಮಡ್ಬೇಕೂಂತ ಓಡಾಡ್ತಿದ್ನಮ್ಮ, ಆದರೆ ಆದೊಡ್ಡ.<noinclude><references/></noinclude>
46pmj0rwh11mkhv8asp1c7wjjivt84r
320670
320666
2026-05-19T02:21:38Z
Shreelatha.Halemane
7642
320670
proofread-page
text/x-wiki
<noinclude><pagequality level="4" user="Pragathi. BH" />{{rh|center=ಅಭಯ|left=|right=೨೫೩}}</noinclude>{{gap}}" ಏನೂ ಬೇಡಿ. "
{{gap}}" ಕುಡಿಯೋಕೆ ನೀರು ಕಳಿಸ್ತೀನಿ"
{{gap}}" ಹೌದು, ನೀರುಬೇಕು "
{{gap}}" ಈಗ ನನ್ಜತೇಲಿ ಬನ್ನಿ ಮಿಸ್ ಪ್ರಭಾ "
{{gap}}ಪ್ರಭಾ ಎದ್ದಳು ತುಂಗಮ್ಮ ಹಿಂದೆಯೇ ಉಳಿದಳು ಹೊರಹೋಗುತ್ತ ಸರಸಮ್ಮನೆಂದರು.
{{gap}}" ಈಗ ಅಸಾಧ್ಯ ಸೆಖೆ, ಇನ್ನು ನಾಲ್ಕೈದು ದಿವಸ ಆಮೇಲೆ ಮೇಲೆ ಷುರುವಾಗ್ಬಿಡುತ್ತೆ. ಆಗ ತಣ್ಣಗಿತ್ತದೆ”
{{gap}}ಪ್ರಭಾ ಅಭಯಧಾಮಕ್ಕೆ ಬಂದ ಒಂದು ವಾರದಲ್ಲಿಯೇ ಜೋರೋ ಎಂದು ಮುಂಗಾರು ಮಳೆ ಶುರುವಾಯಿತು ಜಗಲಿಯಲ್ಲಿ ಮಲಗಲಾರದೆ ಹುಡುಗಿಯರೆಲ್ಲ ಹಜಾರವನ್ನೂ ಸೇರಿದರು.
{{gap}}ಒಂದು ರಾತ್ರೆ ಹಾಗೆ ಚೆನ್ನಾಗಿ ಮಳೆ ಬಂದಮೇಲೆ, ಬೆಳಗು ಮುಂಜಾನೆ ಜಲಜ ತುಂಗಮ್ಮನನ್ನು ಎಬ್ಬಿಸಿ ಹಜಾರದ ಕಿಟಿಕಿಯ ಬಳಿ ನಿಂತು ಹೊರಗೆ ಬೊಟ್ಟ ಮಾಡಿದಳು:
{{gap}}" ನೋಡಿದ್ಯಾ ಅಕ್ಕ? ಆವತ್ತು ಹೇಳಿದ್ದಿಲ್ಲಾ ನಾನು? ಸಮುದ್ರದ ಹಾಗೇ ಇಲ್ಲ ?"
{{gap}}ಹೌದೆಂದು ತುಂಗಮ್ಮ ತಲೆಯಡಿಸಿದಳು ಭಾಗದಲ್ಲಿ ಮಾತ್ರ ಭೂಮಿಗೆ ಅಂಟಿಕೊಂಡಿದ್ದ ಅರ್ಧದ್ವೀಪವಾಗಿತ್ತು. ಮೂಲೆಗಳಿಂದಲೂ ವಟಗುಟ್ಟತಿದ್ದುವು ಕಪ್ಪೆಗಳು
{{gap}}" ನೀನು ಚಿಕ್ಕವಳಿದಾಗ ಮಳೆಗಾಲದಲ್ಲಿ ಏನೇನು ಮಾಡ್ತಿದ್ದೆ ತುಂಗಕ್ಕ ?"
{{gap}}"ತಲೆಮೇಲೆ ಕೈ ಇಟ್ಟೊಂಡು ಲಂಗ ಎತ್ತಿಕೊಂಡು ಕುಣೀತಿದ್ದೆ. ಕಾಗ್ಧದ ದೋಣೀನ ಚರಂಡಿ ನೀರ್ನಲ್ಲಿ ಬಿಟ್ಟ ಅದರ್ಜತೇಲೆ ಓಡ್ತಿದ್ದೆ.”
{{gap}}ನಾನೂ ಹಂಗೇ ಮಡ್ಬೇಕೂಂತ ಓಡಾಡ್ತಿದ್ನಮ್ಮ, ಆದರೆ ಆದೊಡ್ಡ.<noinclude><references/></noinclude>
hjbpjyjtkwqs0z9iuq6ouo6lpf6aru1
ಪುಟ:Abhaya.pdf/೨೪೭
104
11184
320625
160597
2026-05-18T13:31:27Z
Shreelatha.Halemane
7642
/* Validated */
320625
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಅಭಯ|left=೨೪೨|right=}}</noinclude>{{gap}}" ಬಳ್ಳಾಪುರದ ಹತ್ತಿರ ಘಾಟಿ ಸುಬ್ರಹ್ಮಣ್ಯ ಇದೇ ನೋಡಿ, ಅಲ್ಲಿ”
{{gap}}" ಮದುವೆಖರ್ಚು ನೀವು ನೋಡ್ಕೋ ಬೇಕು ”
{{gap}}" ಅಂಥ ಖರ್ಚೆನೂ ಇಲ್ಲಾ ಅಂದ್ರಾ ಅಮ್ಮಾವ್ರು!”
{{gap}}“ಖರ್ಚು ಅಂದರೆ ಚಿಲ್ಲರೆ ಖರ್ಚು.ವಧೂ ಜತೇಲಿ ನಾನೂ ಇನ್ನೊಬ್ಬರೂ ಬರ್ತೀವಿ ನಮಗೆ ರೈಲು-ಬಸ್ಸು ಚಾರ್ಜು ಕೊಡ್ಬೇಕೋ ಬೇಡ್ವೋ? "
{{gap}}“ ಅದನ್ನ ಕೊಡದೆ ಉಂಟೆ? "
{{gap}}" ನಮ್ಮದು ಬಡವರ ಮನೆ. ನಿಮಗೆ ಗೊತ್ತೆ ಇದೆ. ಆದರೂ ವಧೂನ ಹೀಗೆಯೇ ಕಳಿಸೋದಾಗುತ್ತಾ ?"
{{gap}}ಸರಸಮ್ಮನಿಗೆ ರೇಗಿತು.
{{gap}}"ಇಲ್ಲ - ಸರಿ! ಆದರೆ ಅದಕ್ಕೆ ಏನಾಡ್ಬೇಕೂಂತ ಹೇಳಿ”
{{gap}}" ನೀವೇ ಹೇಳಿ.”
{{gap}}" ಸರ್ಹೋಯ್ತು! ಕೇಳಿ ಹಾಗಾದರೆ ವಧೂಗೆ ಒಳ್ಳೆ ಸೀರೆ ರವಕೆ ಕಣ ಒಂದಿಷ್ಟು ವಸ್ತು ಒಡವೆ ಕೊಂಡ್ಕೊಡಿ"
{{gap}}"ಅಗಲಿ ಮಾಡ್ತೀನಿ."
{{gap}}ಮಹಾಬಲನಿಗೆ ಒಮ್ಮೆಲೆ, ತನ್ನನ್ನು ಬಿಟ್ಟ ತವರುಮನೆಗೆ ಓಡಿಹೋದ.
ಹೆಂಡತಿಯ ನೆನಪಾಗಿ ಮೈಯುರಿದು ಹೋಯಿತು! ಹಿಂದೆ ಆಕೆಯೇ ತಂದದ್ದು, ತಾನು ಆ ಮೇಲೆ ಮಾಡಿಸಿದ್ದು, ಎಲ್ಲವನ್ನೂ ಹೊತ್ತುಕೊಂಡೇ ಅವಳು ಓಡಿಹೋಗಿದ್ದಳು.
{{gap}}ಆ ವಿಷಯವನ್ನು ಇಲ್ಲಿ ಹೇಳಬೇಕೆನಿಸಿತು ಮಹಾಬಲನಿಗೆ. ಆದರೆ,
ಸರಸಮ್ಮ ಏನೆನ್ನುವರೋ ಎಂಬ ಅಂಜಿಕೆಯಿಂದ ಅವನು ಸುಮ್ಮನಾದ.
{{gap}}"ಇನ್ನೂ ಒಂದು ವಿಷಯ ಇದೆ ."
{{gap}}" ಹು೦. ?”
{{gap}}" ಇಷ್ಟು ಕಾಲ ಅಭಯಧಾಮ ಕನಕನಿಗೆ ತಾಯ್ಮನೆಯಾಗಿತ್ತು. ಇನ್ನು ಮೇಲೆ ಎಲ್ಲಾ ಜವಾಬಾರೀನೂ ನಿಮ್ಗೆ”
{{gap}}" ಹೌದು."<noinclude><references/></noinclude>
ezn4hkkw965b15eljud77jba5ohvrao
ಪುಟ:Abhaya.pdf/೨೪೮
104
11187
320624
250173
2026-05-18T13:26:31Z
Shreelatha.Halemane
7642
/* Validated */
320624
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=೨೪೩}}
{{gap}}"ಅಭಯಧಾಮಾನ ನೀವು ಮರೀ ಕೊಡ್ದೂ ”<br>
{{gap}}"ಖಂಡಿತಾ ಮರೆಯೋಲ್ಲ.”<br>
{{gap}}"ಅದಕ್ಕೋಸ್ಕರ ಮದುವೆ ಸಮಯದಲ್ಲಿ ವಧೂವರರು ಅಭಯ<br>
ಧಾಮಕ್ಕೆ ಒಂದಿಷ್ಟು ಒಳ್ಳೆಯ ಕಾಣಿಕೆ ಕೊಡ್ಬೇಕು ”<br>
{{gap}}ಆ ಹೆಚ್ಚಿನ ಖರ್ಚಿನ ಅವಶ್ಯತೆಯನ್ನು ಕಂಡು ಮಹಾಬಲನ ತಲೆ<br>
ಗಿರ್ರೆಂದಿತು ಆದರೂ ತನ್ನ ಕೈ ಹಿಡಿಯಲೆಂದು ಬಂದು, ನಿಂತವಳ ಮುಂದೆ,<br>
ತಾನು ಬಡವನೆಂದು ತೋರಿಸಿಕೊಳ್ಳಲು ಆತ ಸಿದ್ಧನಿರಲಿಲ್ಲ<br>
{{gap}}"ಆಗಲಿ"<br>
{{gap}}-ಎಂದ ಮಹಾಬಲ ಆದರೆ ಸ್ವರ ಅಷ್ಟರಲ್ಲೆ ಕುಂಟಿತ್ತು<br>
{{gap}}"ಇಷ್ಟೆ ನೀವು ಹೋಗಬಹುದಿನ್ನು ”<br>
{{gap}}-ಎಂದರು ಸರಸಮ್ಮ.<br>
{{gap}}ಮಹಾಬಲ ಎದ್ದುನಿಂತ<br>
{{gap}}"ವರನಿಗೆ ನಮಸ್ಕಾರ ಮಾಡು ಮಗೂ”<br>
{{gap}}-ಎಂದು ಸರಸಮ್ಮ ಕನಕಲಕ್ಷಮ್ಮನಿಗೆ ಹೇಳಿದರು ಕನಕಲಕ್ಷಮ್ಮ<br>
ಮುಂದೆಬಂದು, ಬಾಗಿ, ಮಹಾಬಲನ ಪಾದಗಳಿಗೆ ವಂದಿಸಿದಳು.<br>
{{gap}}"ಛೆ!ಛೆ!"<br>
{{gap}}-ಎಂದು ಮಹಾಬಲ ಆ ಎರಡು ಭುಜಗಳನ್ನೂ ತನ್ನ ಕೈಗಳಿಂದ<br>
ಒತ್ತಿ ಆಕೆಯನ್ನೆತ್ತಿ ನಿಲ್ಲಿಸಬೇಕೆಂದು ಆತನಿಗೆ ಆಸೆಯಾಯಿತು ಆದರೆ,<br>
ಅಲ್ಲಿ ನಿಂತಿದ್ದ ಸರಸಮ್ಮನೆದುರು ಹಾಗೆ ಮಾಡಲು ಧೈರ್ಯಬರಲಿಲ್ಲ<br><br>
{{gap}}ಹಾಗೆ, ಕೆಲವೇ ದಿನಗಳಮೇಲೆ ಗುರುವಾರ ದಿನ ಶುಭ ಮುಹೂರ್ತ<br>
ದಲ್ಲಿ, ಕನಕಲಕ್ಷಮ್ಮ- ಮಹಾಬಲರ ಪಾಣಿಗ್ರಹಣ ಘಾಟಿ ಸುಬ್ರಹ್ಮಣ್ಯ<br>
ದೇವರ ಸನ್ನಿಧಿಯಲ್ಲಿ ನೆರವೇರಿತು.<br>
{{gap}}ಆದೇ ಸಂಜೆ ಹಿಂತಿರುಗಿದ ನೂತನ ದಂಪತಿಗಳನ್ನೂ ಅಭಯಧಾಮ<br>
ದಲ್ಲಿ ಸತ್ಕರಿಸಿದರು. ಸಮಿತಿಯಕಾರ್ಯದರ್ಶಿನಿ ತಮ್ಮ ಪರವಾಗಿ<br>
ಹದಿನೈದು ರೂಪಾಯಿ ಬೆಲೆಬಾಳುವ ಒಂದು ಸೀರೆಯನ್ನು ಓದಿಸಿದರು<br>
ಸರಸಮ್ಮ ಎರಡು ರವಕೆ ಕಣಗಳ ಉಡುಗೊರೆ ಕೊಟ್ಟರು.<noinclude><references/></noinclude>
3uv9p60zct8d2xfyfieddl8t5v7ufj9
ಪುಟ:Abhaya.pdf/೨೪೯
104
11191
320623
150530
2026-05-18T13:22:38Z
Shreelatha.Halemane
7642
/* Validated */
320623
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಅಭಯ|left=೨೪೪|right=}}</noinclude>{{gap}}ಅಭಯಧಾಮದ ಹುಡುಗಿಯರೆಲ್ಲ, ತುಂಗಮ್ಮ - ಜಲಜ - ಲಲಿತೆ
ಯರ ನೇತೃತ್ವದಲ್ಲಿ ಕನಕಲಕ್ಷಮ್ಮನನ್ನು ಬೀಳ್ಕೊಟ್ಟರು.
{{gap}}ಮದುವೆಯಾದ ಹುಡುಗಿ ಗಂಡನ ಮನೆ ಸೇರಿದಳು.
{{gap}}ಮದುವೆಗೆ ಸರಸಮ್ಮನ ಜತೆಯಲ್ಲಿ ಹೋಗಿದ್ದವಳು ಜಲಜ, ಆಕೆಯ ಸ್ವಾರಸ್ಯಪೂರ್ಣವರದಿಯನ್ನು ಕೇಳಿಹಿಡುಗಿಯರು ಬಿದ್ದು ಬಿದು ನಕ್ಕರು.
{{gap}}ಸಂತೋಷ ಚಿತ್ತಳಾಗಿದ್ದ ತುಂಗಮ್ಮನಿಗೆ ಆರಾತ್ರೆ ಬಹಳ ಹೊತ್ತು
ನಿದ್ದೆ ಬರಲಿಲ್ಲ, ಆಯಾಸದಿಂದ ಬಳಲಿದ್ದ ಸರಸಮ್ಮ ಮತ್ತು ಜಲಜ ಬಲು
ಬೇಗನೆ ನಿದ್ದೆ ಹೋದರು.
{{gap}}ಜಗಲಿದೀಪದ ಬೆಳಕಿನ ಕೆಳಗೆ ಕುಳಿತು ತುಂಗಮ್ಮ ತನ್ನ ತಂದೆ
ಗೊಂದು ಕಾಗದ ಬರೆದಳು.
{{gap}}ಆ ಒಂದು ವಾರವೆಲ್ಲ, ತಾನು ಉಪಾಧ್ಯಾಯಿನಿಯಾದ ಬಳಿಕ, ಆಕೆ
ಬರೆದೇ ಇರಲಿಲ್ಲ.
{{gap}}ಸಣ್ಣಪುಟ್ಟ ಘಟನೆಗಳೆಲ್ಲ ದೊಡ್ಡ ಆಕೃತಿ ತಳೆದುವು ಈಗ ವಾಕ್ಯಗಳು
ಬೆಳೆದು ಪುಟಸಂಖ್ಯೆ ಹೆಚ್ಚಾಯಿತು.
{{gap}}" ಇವತ್ತು ಕನಕಲಕ್ಷಮ್ಮ ಅಂತ ನಮ್ಮ ಒಬ್ಬಳು ಹುಡುಗಿಗೆ ಮದುವೆ
ಯಾಯ್ತು, ನಿರ್ಗತಿಕಳಾಗಿದ್ದ ಒಬ್ಬಳು ಹುಡುಗಿ ಈದಿನ ಗಂಡನ ಮನೆ
ಸೇರಿದಳು...ಮುದಿನ ತಿಂಗಳು ಸಂಬಳ ಬಂದಮೇಲೆ ಅವಳಿಗೊಂದು
ಉಡುಗೊರೆ ಕಳುಹಿಸಕೊಡಬೇಕೆಂದಿದ್ದೇನೆ. ಕೊಡಲೆ ಅಣ್ಣ?"<noinclude><references/></noinclude>
d95q72psldqk5cdyqd60iq3z793ke16
ಪುಟ:Abhaya.pdf/೨೫೦
104
11195
320622
150531
2026-05-18T13:20:41Z
Shreelatha.Halemane
7642
/* Validated */
320622
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|'''೧೬'''}}
{{gap}}ತಂದೆಯ ಉತ್ತರ ತುಂಗಮ್ಮನ ಕೈಸೇರಲು ಸ್ವಲ್ಪ ತಡವಾಯಿತು.
ಅದಕ್ಕೆ ಕಾರಣ, ತಂದೆ ತುಮಕೂರು ಬಿಡುವ ಗಡಿಬಿಡಿಯಲ್ಲಿದ್ದುದು. ಆದರೆ,
ಬೆಳಗಾಂವಿ ಸೇರಿದಮೇಲೆ ಅವರು ತಡಮಾಡಲಿಲ್ಲ.
{{gap}}ಈಗ ತುಂಗಮ್ಮನ ಪ್ರಕರಣ, ಅವರೊಬ್ಬರ ಹೃದಯದೊಳಗೆ
ಬಚ್ಚಿಟ್ಟದ ರಹಸ್ಯವಾಗಿರಲಿಲ್ಲ ದೊಡ್ಡ ಮಗಳಿಗೆ ಅದನ್ನು ಹೇಳಿಯಾಗಿತ್ತು.
ಅಳಿಯನಿಗೂ ಕೂಡಾ ಪುಟ್ಟಿ ತಮ್ಮನೂ ಅಷ್ಟಿಷ್ಟು ಊಹಿಸಿಕೊಂಡಿದ್ದ.
ಅವನಿಗೂ ತಿಳಿದಿತ್ತು -ಆಗಬಾರದ್ದು ಏನೋ ಆಗಿದೆ ಎಂದು ಅಳಿದು
ದೇವರಿಗೆ ತುಸು ಅಸಮಾಧಾನವೆನಿಸಿತು. ಆದರೆ ಯಾರೂ ತುಂಗಮ್ಮನನ್ನು
ಜರೆಯಲಿಲ್ಲ,ನಿಂದಿಸಲಿಲ್ಲ.ಬೇರೆ ಎಲ್ಲ ಭಾವನೆಗಳನ್ನೂ ವಾತ್ಸಲ್ಯ-ಮರುಕ
ಗೆದ್ದಿದ್ದುವು.ಅಷ್ಟು ಸಾಧ್ಯವಾಗಲು ಕಾರಣ, ತುಂಗಮ್ಮನ ಆಗಿನ ಇರುವಿಕೆ, ಆಕೆ ಆರಂಭಿಸಿದ್ದ ಬದುಕಿನ ಹೊಸ ಅಧ್ಯಾಯ.
{{gap}}ಹತ್ತಿರದಲ್ಲೆ ಕುಳಿತು ಮೈದಡವಿ ಮಾತನಾಡುವಂತೆ ಅವರು ಅದೆಲ್ಲ
ವನ್ನೂ ಬರೆದಿದ್ದರು.
{{gap}}“...ನನಗೆ ಗೊತ್ತಿದೆ ಮಗೂ.. ಬೇರೆ ಯಾರಾದರೂ ಆಗಿದ್ದರೆ ಏನೇನೋ
ಆಗುತಿತ್ತು .ಆದದ್ದು ಆಗಿ ಹೋಯಿತು. ಇನ್ನು ಆ ವಿಷಯ ಚಿಂತಿಸ
ಬಾರದು.. ತುಮಕೂರಿನ ನೀರಿನ ಋಣವೂ ಮುಗಿದ ಹಾಗಾಯಿತು.
ಪುಟ್ಟೂನ ಇಲ್ಲೇ ಹೈಸ್ಕೂಲಿಗೆ ಸೇರಿಸ್ತೀನಿ. ನಿನ್ನ ಈಗಿನ ವಿಷಯ ತಿಳಿದು
ಸಮಾಧಾನವೆನಿಸಿತು. ಶ್ರೀಮತಿ ಸರಸಮ್ಮನವರನ್ನು ನಾನು ಎಷ್ಟು
ಕೊಂಡಾಡಿದರೂ ಸಾಲದು. ಅವರು ನಮ್ಮ ಪಾಲಿನ ದೇವರಾಗಿ ಬಂದರು.
ಅವರು ದೊಡ್ಡಮ್ಮ ಎಂತಲೇ ತಿಳಿದುಕೊಂಡು, ಅವರಿಗೆ ವಿಧೇಯಳಾಗಿ ವರ್ತಿಸಿ ಪ್ರೀತಿ ಸಂಪಾದಿಸಿಕೋ."<noinclude><references/></noinclude>
h65s1xxyqhe4nxqtpoqhzrwnnyox33u
ಪುಟ:Chirasmarane-Niranjana.pdf/೪೬
104
12865
320708
256374
2026-05-19T05:54:48Z
Hariprasad Shetty10
7490
320708
proofread-page
text/x-wiki
<noinclude><pagequality level="3" user="Meghana venugopal" />{{rh|left=...ಚಿರಸ್ಮರಣೆ...|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:</br>
<p>“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."</p>
<p>ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.</p>
ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
“ಏನೇ ಅದು?"</br>
ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br>
<p>ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ
ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
<p>“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</p></br>
<p>ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</p></br>
ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
lv50fjflityrrbj6yhqtsiko1r0glss
320709
320708
2026-05-19T05:55:14Z
Hariprasad Shetty10
7490
320709
proofread-page
text/x-wiki
<noinclude><pagequality level="3" user="Meghana venugopal" />{{rh|left=''''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:</br>
<p>“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."</p>
<p>ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.</p>
ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
“ಏನೇ ಅದು?"</br>
ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br>
<p>ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ
ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
<p>“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</p></br>
<p>ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</p></br>
ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
0yle502rc3i886p79fus41iisw6ez5t
320710
320709
2026-05-19T05:55:27Z
Hariprasad Shetty10
7490
320710
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:</br>
<p>“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."</p>
<p>ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.</p>
ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
“ಏನೇ ಅದು?"</br>
ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br>
<p>ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ
ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
<p>“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</p></br>
<p>ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</p></br>
ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
9vkfmoocanckuo5a7ilbp3an7d1qxck
320711
320710
2026-05-19T06:00:18Z
Hariprasad Shetty10
7490
320711
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:
<p>“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."
<p>ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.
ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
“ಏನೇ ಅದು?"</br>
ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br>
<p>ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ
ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
<p>“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</p></br>
<p>ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</p></br>
ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
htk3115ekge0lu723xmcbt3336k48qx
320712
320711
2026-05-19T06:00:33Z
Hariprasad Shetty10
7490
320712
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:
“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."
<p>ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.
ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
“ಏನೇ ಅದು?"</br>
ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br>
<p>ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ
ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
<p>“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</p></br>
<p>ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</p></br>
ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
5w0mr0lmykgurc2d4cqbduvoaqg0m44
320713
320712
2026-05-19T06:00:47Z
Hariprasad Shetty10
7490
320713
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:<br />
“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."
<p>ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.
ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
“ಏನೇ ಅದು?"</br>
ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br>
<p>ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ
ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
<p>“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</p></br>
<p>ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</p></br>
ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
9jqvuufrbjp76akmaqm4ltx77epp267
320714
320713
2026-05-19T06:01:26Z
Hariprasad Shetty10
7490
320714
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:<br />
“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."<br />
ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.
ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
“ಏನೇ ಅದು?"</br>
ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br>
<p>ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ
ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
<p>“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</p></br>
<p>ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</p></br>
ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
knkivq6kzr3ty27gmwl85ie41d4za3v
320715
320714
2026-05-19T06:01:54Z
Hariprasad Shetty10
7490
320715
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:<br />
“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."<br />
ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.
ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
“ಏನೇ ಅದು?"</br>
ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br>
ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ
ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</p></br>
ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</p></br>
ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
8hbgnhk5f7o9u58gdrnki70rpj75kje
320716
320715
2026-05-19T06:02:34Z
Hariprasad Shetty10
7490
320716
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:<br />
“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."<br />
ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.
ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
“ಏನೇ ಅದು?"</br>
ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br>
ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ
ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</br>
ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</br>
ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
4027yrusbqjmkx6wngk8zod2vrhq173
320717
320716
2026-05-19T06:04:11Z
Hariprasad Shetty10
7490
320717
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:<br />
“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."<br />
{{gap}}ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.
{{gap}}ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
{{gap}}“ಏನೇ ಅದು?"</br>
{{gap}}ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br>
{{gap}}ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ
ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
{{gap}}“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</br>
{{gap}}ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
{{gap}}"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</br>
{{gap}}ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
{{gap}}ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
{{gap}}"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
{{gap}}ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
2v5ypvhun3fe4ri3zqivsav8zop4tt9
320718
320717
2026-05-19T06:04:50Z
Hariprasad Shetty10
7490
320718
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:<br />
“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."<br />
{{gap}}ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.
{{gap}}ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
{{gap}}“ಏನೇ ಅದು?"</br>
{{gap}}ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br>
{{gap}}ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ</br>ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
{{gap}}“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</br>
{{gap}}ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
{{gap}}"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</br>
{{gap}}ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
{{gap}}ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
{{gap}}"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
{{gap}}ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
608tfmz1fjd8mye1cxhf960e62k3q0x
320719
320718
2026-05-19T06:06:07Z
Hariprasad Shetty10
7490
320719
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:<br />
“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."<br />
{{gap}}ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.
{{gap}}ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
{{gap}}“ಏನೇ ಅದು?"</br>
{{gap}}ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br> {{gap}}ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ</br>ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
{{gap}}“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</br>
{{gap}}ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
{{gap}}"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</br>
{{gap}}ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
{{gap}}ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
{{gap}}"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
{{gap}}ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
b5fqzw9h2hz1njicd9k35zvrh2d6u8q
320720
320719
2026-05-19T06:06:29Z
Hariprasad Shetty10
7490
320720
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:<br />
“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."<br />
{{gap}}ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.
{{gap}}ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>
{{gap}}“ಏನೇ ಅದು?"</br>{{gap}}ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br> {{gap}}ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ</br>ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
{{gap}}“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</br>
{{gap}}ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
{{gap}}"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</br>
{{gap}}ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
{{gap}}ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
{{gap}}"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
{{gap}}ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
13doaqqj5ddxo5dqclyrpg6ou92x23h
320721
320720
2026-05-19T06:09:00Z
Hariprasad Shetty10
7490
320721
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:<br />
“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."<br />
{{gap}}ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.
{{gap}}ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>{{gap}}“ಏನೇ ಅದು?"</br>{{gap}}ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br> {{gap}}ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ</br>ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:</p>
{{gap}}“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</br>
{{gap}}ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
{{gap}}"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</br>
{{gap}}ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
{{gap}}ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
{{gap}}"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
{{gap}}ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
7h1n1gantxbk78e9egx8phv1njzzk0z
320722
320721
2026-05-19T06:09:35Z
Hariprasad Shetty10
7490
320722
proofread-page
text/x-wiki
<noinclude><pagequality level="3" user="Meghana venugopal" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:<br />
“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."<br />
{{gap}}ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.<br />
{{gap}}ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>{{gap}}“ಏನೇ ಅದು?"</br>{{gap}}ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br> {{gap}}ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ</br>ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:
{{gap}}“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</br>
{{gap}}ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
{{gap}}"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</br>
{{gap}}ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
{{gap}}ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
{{gap}}"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
{{gap}}ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
7lpulywa6wn8tvx40enor3e0563o7fw
320723
320722
2026-05-19T06:09:51Z
Hariprasad Shetty10
7490
/* Validated */
320723
proofread-page
text/x-wiki
<noinclude><pagequality level="4" user="Hariprasad Shetty10" />{{rh|left='''ಚಿರಸ್ಮರಣೆ'''|right=೪೭}}</noinclude>
ಪಂಡಿತರು ಆ ಎಳೆಯರನ್ನು ಹೆಮ್ಮೆಯಿಂದ ನೋಡುತ್ತ ಅಂದರು:<br />
“ನಮ್ಮ ಹುಡುಗರು ಯಾವಾಗಲೂ ಹೀಗೆಯೇ ಇರಬೇಕು-ಹೀಗೆಯೇ,
ನಮ್ಮಲ್ಲಿ, ಚಿರುಕಂಡನಲ್ಲಿರೋ ಹಾಗೆ ದೂರಾಲೋಚನೆಯೂ ಇರಬೇಕು;
ಅಪ್ಪುವಿನಲ್ಲಿರುವಂಥ ಧೈರ್ಯ ಉತ್ಸಾಹಗಳೂ ಇರಬೇಕು. ಅಂತಹ ಗುಣಗಳು
ಇದ್ದರೇನೇ ಮನುಷ್ಯ ಕ್ರಾಂತಿಕಾರಿಯಾಗ್ತಾನೆ."<br />
{{gap}}ಕ್ರಾಂತಿಕಾರಿ ಎಂಬ ಪದ ಕೇಳಿ ಅಪ್ಪುವಿಗೂ ಚಿರುಕಂಡನಿಗೂ ಮೈ ಪುಲಕ
ಗೊಂಡಿತು. ತಮ್ಮಲ್ಲಿ, ಕ್ರಾಂತಿಕಾರಿಗಳಿಗಿರಬೇಕಾದ ಒಳ್ಳೆಯ ಗುಣಗಳಿವೆ ಎಂದು
ತಿಳಿದು, ಅವರಿಗೆ ಆನಂದವಾಯಿತು.<br />
{{gap}}ಅಷ್ಟರಲ್ಲೇ ಕೇಳಪ್ಪನ ಏಳು ವರ್ಷದ ಮಗಳು ಓಡುತ್ತ ಬಂದಳು.</br>{{gap}}“ಏನೇ ಅದು?"</br>{{gap}}ತಂದೆ ಕೇಳಪ್ಪ ಮಗಳನ್ನು ಪ್ರಶ್ನಿಸಿದ.</br> {{gap}}ಅಷ್ಟೊಂದು ಜನ ಅಲ್ಲಿದ್ದರೆಂದು ಆ ಹುಡುಗಿ ಸಂಕೋಚಗೊಂಡು, ತಂದೆಯ</br>ಬಳಿ ಸಾರಿ, ಮಲ್ಲನೆ ಆದರೆ ಎಲ್ಲರಿಗೂ ಕೇಳಿಸುವಂತೆ ಹೇಳಿದಳು:
{{gap}}“ಅಮ್ಮ ಹೇಳಿದ್ದು ಅಡುಗೆ ತಯಾರಾಗಿದೆಯಂತೆ. ಊಟದ ಹೊತ್ತಾಗಿದ್ರೆ
ಎಲ್ಲೂ ಬರೆದಂತೆ. ಹೋಗಿ ಹೇಳು ಅಂದ್ಲು."</br>
{{gap}}ಕೇಳಪ್ಪ ಪಂಡಿತರ ಮುಖ ನೋಡಿದ. ಪಂಡಿತರದ್ದು, ಉಳಿದವರಿಗೆಲ್ಲ 'ಏಳಿ
ಎಂದರು. ಹುಡುಗಿಯ ಕೈಹಿಡಿದು, ಅವರು ಕೇಳಿದರು:</br>
{{gap}}"ಅದ್ಯಾತರದೆ ನಾಚಿಕೆ? ಹೋದಸಲ ನಿಮ್ಮನೆಗೆ ಬಂದಾಗ ನೀನು ಅಷ್ಟೊಂದು
ಮಾತಾಡಿದ್ದ. ಈಗಾಗ್ಲೆ ಮರೆತ್ಹೋಯ್ತ?"</br>
{{gap}}ಹುಡುಗಿ ನಾಚಿಕೊಂಡರೂ ಪಂಡಿತರ ಹಿಡಿತದಿಂದ ಬಿಡಿಸಿಕೊಳ್ಳಲಿಲ್ಲ. ಅವರ
ಜತೆಯಲ್ಲಿ ನಡೆದಳು.</br>
{{gap}}ಅಪ್ಪು ಮತ್ತು ಚಿರುಕಂಡ ಹಿಂದಿದ್ದುದನ್ನು ಕಂಡು ಪಂಡಿತರೆಂದರು:</br>
{{gap}}"ಎಲ್ಲಿ ಕಯೂರು ವೀರರು ಎದುರಿಗ್ಬನ್ನಿ, ಮೊದಲೇ ನಡೀರಿ."</br>
{{gap}}ತಮ್ಮನ್ನು ಕುರಿತು ಹಾಗೆ ಹೇಳಿದುದಕ್ಕಾಗಿ ಹುಡುಗರು ಹೆಮ್ಮೆಪಡುತ್ತ
ಕೇಳಪ್ಪನನ್ನನುಸರಿಸು ಮುಂದೆ ಸಾಗಿದರು.
....ಅವರಿಗಾಗಿ ಕಾದಿದ್ದುದು ಹಬ್ಬದ ಅಡುಗೆಯಲ್ಲ, ಬಡವರ ಹಟ್ಟಿಯ
ಸಾದಾ ಊಟ. ಅಪ್ಪುವಿನ ತಾಯಿಗೆ ಅದಕ್ಕಿಂತ ರುಚಿಕರವಾದ ಅಡುಗೆ ಮಾಡುವುದು
ಬರುತ್ತಿತ್ತು. ಆದರೆ ಅಪ್ಪು ಒಂದಕ್ಕೊಂದನ್ನು ಹೋಲಿಸ ಬಯಸಲಿಲ್ಲ.
ಚಿರುಕಂಡನಂತೂ ಊಟದಲ್ಲಿನ ತರತಮಗಳ ಯೋಚನೆಯನ್ನು ಎಂದೂ<noinclude></noinclude>
eub6soh03md16q8kqd9o7zuu8zojm6o
ಪುಟ:Chirasmarane-Niranjana.pdf/೪೭
104
12866
320741
256370
2026-05-19T07:31:58Z
Hariprasad Shetty10
7490
320741
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
<p> ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</p>
ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br>
"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br>
"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br>
ಎಂದ ಪ್ರಭು, ನಗುತ್ತ.</br>
ಪಂಡಿತರೂ ನಕ್ಕರು.</br>
"ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>
ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>
<p>ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:</p>
<p> "ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ
ಕಾದಿರ್ತೆನೆ. ನನಗೇನೂ ಅವಸರವಿಲ್ಲ."</p>
ಉಳಿದವರು ಆ ಮಾತು ಕೇಳಿ ನಕ್ಕರು.</br>
ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>
<p> ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ
ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ
ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.</p>
ಒಮ್ಮೆಲೆ ಪಂಡಿತರು ಕೇಳಿದರು:</br>
" ಬೇರೆ ಯಾರಾದರೂ ಬರ್ತಾರಾ?"</br>
ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
"ಶುರು ಮಾಡೋಣ್ವ ಇನ್ನು?"</br>
"ಹೂಂ."</br>
<p> ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು
ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ
ಹೋಗಿದ್ದಾಗ, ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
avf6f5e42151bst7dkj9670nk1yqae3
320742
320741
2026-05-19T07:35:02Z
Hariprasad Shetty10
7490
320742
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
<p> ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</p>
{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br>
{{gap}} "ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br>
{{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br>
{{gap}} ಎಂದ ಪ್ರಭು, ನಗುತ್ತ.</br>
{{gap}} ಪಂಡಿತರೂ ನಕ್ಕರು.</br>
{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>
{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>
{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:</p>
{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ
ಕಾದಿರ್ತೆನೆ. ನನಗೇನೂ ಅವಸರವಿಲ್ಲ."</p>
ಉಳಿದವರು ಆ ಮಾತು ಕೇಳಿ ನಕ್ಕರು.</br>
ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>
{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ
ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ
ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.</p>
ಒಮ್ಮೆಲೆ ಪಂಡಿತರು ಕೇಳಿದರು:</br>
" ಬೇರೆ ಯಾರಾದರೂ ಬರ್ತಾರಾ?"</br>
ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
"ಶುರು ಮಾಡೋಣ್ವ ಇನ್ನು?"</br>
"ಹೂಂ."</br>
<p> ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು
ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ
ಹೋಗಿದ್ದಾಗ, ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
4n2p4purkjk88qxe53tdqhx7f9sn6en
320743
320742
2026-05-19T07:35:16Z
Hariprasad Shetty10
7490
320743
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
<p> ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</p>
{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br>
{{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br>
{{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br>
{{gap}} ಎಂದ ಪ್ರಭು, ನಗುತ್ತ.</br>
{{gap}} ಪಂಡಿತರೂ ನಕ್ಕರು.</br>
{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>
{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>
{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:</p>
{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ
ಕಾದಿರ್ತೆನೆ. ನನಗೇನೂ ಅವಸರವಿಲ್ಲ."</p>
ಉಳಿದವರು ಆ ಮಾತು ಕೇಳಿ ನಕ್ಕರು.</br>
ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>
{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ
ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ
ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.</p>
ಒಮ್ಮೆಲೆ ಪಂಡಿತರು ಕೇಳಿದರು:</br>
" ಬೇರೆ ಯಾರಾದರೂ ಬರ್ತಾರಾ?"</br>
ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
"ಶುರು ಮಾಡೋಣ್ವ ಇನ್ನು?"</br>
"ಹೂಂ."</br>
<p> ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು
ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ
ಹೋಗಿದ್ದಾಗ, ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
ip1p4nugezra3bkgcmv2xlxhsbl1lxq
320744
320743
2026-05-19T07:35:47Z
Hariprasad Shetty10
7490
320744
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
<p> ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</p>
{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br>
{{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br>
{{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br>
{{gap}} ಎಂದ ಪ್ರಭು, ನಗುತ್ತ.</br>
{{gap}} ಪಂಡಿತರೂ ನಕ್ಕರು.</br>
{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>
{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>
{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:</p>
{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ
ಕಾದಿರ್ತೆನೆ. ನನಗೇನೂ ಅವಸರವಿಲ್ಲ."</p>
ಉಳಿದವರು ಆ ಮಾತು ಕೇಳಿ ನಕ್ಕರು.</br>
ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>
{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ
ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ
ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.</p>
ಒಮ್ಮೆಲೆ ಪಂಡಿತರು ಕೇಳಿದರು:</br>
" ಬೇರೆ ಯಾರಾದರೂ ಬರ್ತಾರಾ?"</br>
ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
"ಶುರು ಮಾಡೋಣ್ವ ಇನ್ನು?"</br>
"ಹೂಂ."</br>
<p> ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು
ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ
ಹೋಗಿದ್ದಾಗ, ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
ej2fh0rwfosymvt99052iwnldfi8ka1
320745
320744
2026-05-19T07:36:16Z
Hariprasad Shetty10
7490
320745
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</br>
{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br>
{{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br>
{{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br>
{{gap}} ಎಂದ ಪ್ರಭು, ನಗುತ್ತ.</br>
{{gap}} ಪಂಡಿತರೂ ನಕ್ಕರು.</br>
{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>
{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>
{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:</p>
{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ
ಕಾದಿರ್ತೆನೆ. ನನಗೇನೂ ಅವಸರವಿಲ್ಲ."</p>
ಉಳಿದವರು ಆ ಮಾತು ಕೇಳಿ ನಕ್ಕರು.</br>
ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>
{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ
ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ
ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.</p>
ಒಮ್ಮೆಲೆ ಪಂಡಿತರು ಕೇಳಿದರು:</br>
" ಬೇರೆ ಯಾರಾದರೂ ಬರ್ತಾರಾ?"</br>
ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
"ಶುರು ಮಾಡೋಣ್ವ ಇನ್ನು?"</br>
"ಹೂಂ."</br>
<p> ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು
ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ
ಹೋಗಿದ್ದಾಗ, ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
hev1ouls0oc7dluuyzqi6tod2xqhxxb
320747
320745
2026-05-19T07:38:08Z
Hariprasad Shetty10
7490
320747
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</br>
{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br>
{{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br>
{{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br>
{{gap}} ಎಂದ ಪ್ರಭು, ನಗುತ್ತ.</br>
{{gap}} ಪಂಡಿತರೂ ನಕ್ಕರು.</br>
{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>
{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:</p>
{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ
ಕಾದಿರ್ತೆನೆ. ನನಗೇನೂ ಅವಸರವಿಲ್ಲ."</p>
{{gap}}ಉಳಿದವರು ಆ ಮಾತು ಕೇಳಿ ನಕ್ಕರು.</br>
{{gap}}ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.</p>
{{gap}}ಒಮ್ಮೆಲೆ ಪಂಡಿತರು ಕೇಳಿದರು:</br>
{{gap}}" ಬೇರೆ ಯಾರಾದರೂ ಬರ್ತಾರಾ?"</br>
{{gap}}ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
{{gap}}"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
{{gap}}ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
{{gap}}ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
{{gap}}"ಶುರು ಮಾಡೋಣ್ವ ಇನ್ನು?"</br>
{{gap}}"ಹೂಂ."</br>
{{gap}}ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು
ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ
ಹೋಗಿದ್ದಾಗ, ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
2x5xqwxwp19wx6hi2li4tfz30jvfray
320748
320747
2026-05-19T07:38:54Z
Hariprasad Shetty10
7490
320748
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</br>
{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br>
{{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br>
{{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br>
{{gap}} ಎಂದ ಪ್ರಭು, ನಗುತ್ತ.</br>
{{gap}} ಪಂಡಿತರೂ ನಕ್ಕರು.</br>
{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:<br />{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ ಕಾದಿರ್ತೆನೆ.ನನಗೇನೂ ಅವಸರವಿಲ್ಲ."<br />
{{gap}}ಉಳಿದವರು ಆ ಮಾತು ಕೇಳಿ ನಕ್ಕರು.</br>
{{gap}}ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.</p>
{{gap}}ಒಮ್ಮೆಲೆ ಪಂಡಿತರು ಕೇಳಿದರು:</br>
{{gap}}" ಬೇರೆ ಯಾರಾದರೂ ಬರ್ತಾರಾ?"</br>
{{gap}}ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
{{gap}}"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
{{gap}}ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
{{gap}}ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
{{gap}}"ಶುರು ಮಾಡೋಣ್ವ ಇನ್ನು?"</br>
{{gap}}"ಹೂಂ."</br>
{{gap}}ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು
ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ
ಹೋಗಿದ್ದಾಗ, ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
kzpua9e2a9ycgrt5xrcw7dr9y8mntcx
320750
320748
2026-05-19T07:39:26Z
Hariprasad Shetty10
7490
320750
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</br>
{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br>
{{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br>
{{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br>
{{gap}} ಎಂದ ಪ್ರಭು, ನಗುತ್ತ.</br>
{{gap}} ಪಂಡಿತರೂ ನಕ್ಕರು.</br>
{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:<br />{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ ಕಾದಿರ್ತೆನೆ.ನನಗೇನೂ ಅವಸರವಿಲ್ಲ."<br />{{gap}}ಉಳಿದವರು ಆ ಮಾತು ಕೇಳಿ ನಕ್ಕರು.</br>{{gap}}ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.<br /></p>
{{gap}}ಒಮ್ಮೆಲೆ ಪಂಡಿತರು ಕೇಳಿದರು:</br>
{{gap}}" ಬೇರೆ ಯಾರಾದರೂ ಬರ್ತಾರಾ?"</br>
{{gap}}ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
{{gap}}"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
{{gap}}ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
{{gap}}ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
{{gap}}"ಶುರು ಮಾಡೋಣ್ವ ಇನ್ನು?"</br>
{{gap}}"ಹೂಂ."</br>
{{gap}}ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು
ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ
ಹೋಗಿದ್ದಾಗ, ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
l1gsof4wza7572kgcuvq0bvvrahturn
320751
320750
2026-05-19T07:40:04Z
Hariprasad Shetty10
7490
320751
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</br>
{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br>
{{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br>
{{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br> {{gap}} ಎಂದ ಪ್ರಭು, ನಗುತ್ತ.</br>{{gap}} ಪಂಡಿತರೂ ನಕ್ಕರು.</br>{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:<br />{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ ಕಾದಿರ್ತೆನೆ.ನನಗೇನೂ ಅವಸರವಿಲ್ಲ."<br />{{gap}}ಉಳಿದವರು ಆ ಮಾತು ಕೇಳಿ ನಕ್ಕರು.</br>{{gap}}ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.<br /></p>
{{gap}}ಒಮ್ಮೆಲೆ ಪಂಡಿತರು ಕೇಳಿದರು:</br>
{{gap}}" ಬೇರೆ ಯಾರಾದರೂ ಬರ್ತಾರಾ?"</br>
{{gap}}ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
{{gap}}"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
{{gap}}ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
{{gap}}ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
{{gap}}"ಶುರು ಮಾಡೋಣ್ವ ಇನ್ನು?"</br>
{{gap}}"ಹೂಂ."</br>
{{gap}}ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ ಹೋಗಿದ್ದಾಗ,ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
4onylmmpv0tvokruqe4vxqzv2aawj7c
320752
320751
2026-05-19T07:40:32Z
Hariprasad Shetty10
7490
320752
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</br>
{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br> {{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br> {{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br> {{gap}} ಎಂದ ಪ್ರಭು, ನಗುತ್ತ.</br>{{gap}} ಪಂಡಿತರೂ ನಕ್ಕರು.</br>{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:<br />{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ ಕಾದಿರ್ತೆನೆ.ನನಗೇನೂ ಅವಸರವಿಲ್ಲ."<br />{{gap}}ಉಳಿದವರು ಆ ಮಾತು ಕೇಳಿ ನಕ್ಕರು.</br>{{gap}}ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.<br /></p>
{{gap}}ಒಮ್ಮೆಲೆ ಪಂಡಿತರು ಕೇಳಿದರು:</br>
{{gap}}" ಬೇರೆ ಯಾರಾದರೂ ಬರ್ತಾರಾ?"</br>
{{gap}}ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
{{gap}}"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
{{gap}}ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
{{gap}}ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
{{gap}}"ಶುರು ಮಾಡೋಣ್ವ ಇನ್ನು?"</br>
{{gap}}"ಹೂಂ."</br>
{{gap}}ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ ಹೋಗಿದ್ದಾಗ,ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
3aja0atnyvj9nztm0bq2ocnlttzzv1u
320753
320752
2026-05-19T07:40:47Z
Hariprasad Shetty10
7490
320753
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</br>{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br> {{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br> {{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br> {{gap}} ಎಂದ ಪ್ರಭು, ನಗುತ್ತ.</br>{{gap}} ಪಂಡಿತರೂ ನಕ್ಕರು.</br>{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:<br />{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ ಕಾದಿರ್ತೆನೆ.ನನಗೇನೂ ಅವಸರವಿಲ್ಲ."<br />{{gap}}ಉಳಿದವರು ಆ ಮಾತು ಕೇಳಿ ನಕ್ಕರು.</br>{{gap}}ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.<br /></p>
{{gap}}ಒಮ್ಮೆಲೆ ಪಂಡಿತರು ಕೇಳಿದರು:</br>
{{gap}}" ಬೇರೆ ಯಾರಾದರೂ ಬರ್ತಾರಾ?"</br>
{{gap}}ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
{{gap}}"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
{{gap}}ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
{{gap}}ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
{{gap}}"ಶುರು ಮಾಡೋಣ್ವ ಇನ್ನು?"</br>
{{gap}}"ಹೂಂ."</br>
{{gap}}ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ ಹೋಗಿದ್ದಾಗ,ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
r9o4iww020itrlsj58e7ojieexdgccx
320755
320753
2026-05-19T07:41:30Z
Hariprasad Shetty10
7490
320755
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</br>{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br> {{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br> {{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br> {{gap}} ಎಂದ ಪ್ರಭು, ನಗುತ್ತ.</br>{{gap}} ಪಂಡಿತರೂ ನಕ್ಕರು.</br>{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:<br />{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ ಕಾದಿರ್ತೆನೆ.ನನಗೇನೂ ಅವಸರವಿಲ್ಲ."<br />{{gap}}ಉಳಿದವರು ಆ ಮಾತು ಕೇಳಿ ನಕ್ಕರು.</br>{{gap}}ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.<br />{{gap}}ಒಮ್ಮೆಲೆ ಪಂಡಿತರು ಕೇಳಿದರು:</br>
{{gap}}" ಬೇರೆ ಯಾರಾದರೂ ಬರ್ತಾರಾ?"</br>
{{gap}}ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
{{gap}}"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
{{gap}}ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
{{gap}}ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
{{gap}}"ಶುರು ಮಾಡೋಣ್ವ ಇನ್ನು?"</br>
{{gap}}"ಹೂಂ."</br>
{{gap}}ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ ಹೋಗಿದ್ದಾಗ,ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
t6ukygoee1ogme9ime7wjteoa4sepva
320756
320755
2026-05-19T07:41:51Z
Hariprasad Shetty10
7490
320756
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</br>{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br> {{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br> {{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br> {{gap}} ಎಂದ ಪ್ರಭು, ನಗುತ್ತ.</br>{{gap}} ಪಂಡಿತರೂ ನಕ್ಕರು.</br>{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:<br />{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ ಕಾದಿರ್ತೆನೆ.ನನಗೇನೂ ಅವಸರವಿಲ್ಲ."<br />{{gap}}ಉಳಿದವರು ಆ ಮಾತು ಕೇಳಿ ನಕ್ಕರು.</br>{{gap}}ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.<br />{{gap}}ಒಮ್ಮೆಲೆ ಪಂಡಿತರು ಕೇಳಿದರು:</br>
{{gap}}" ಬೇರೆ ಯಾರಾದರೂ ಬರ್ತಾರಾ?"</br>
{{gap}}ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br>
{{gap}}"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br>
{{gap}}ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br>
{{gap}}ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br>
{{gap}}"ಶುರು ಮಾಡೋಣ್ವ ಇನ್ನು?"</br>
{{gap}}"ಹೂಂ."</br> {{gap}}ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ ಹೋಗಿದ್ದಾಗ,ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
2i78fii9gqoa4c3gmh7eu5ll93xa6ff
320757
320756
2026-05-19T07:42:33Z
Hariprasad Shetty10
7490
320757
proofread-page
text/x-wiki
<noinclude><pagequality level="3" user="Meghana venugopal" /> {{rh|left=೪೮|right=ಚಿರಸ್ಮರಣೆ }}</noinclude>
ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</br>{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br> {{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br> {{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br> {{gap}} ಎಂದ ಪ್ರಭು, ನಗುತ್ತ.</br>{{gap}} ಪಂಡಿತರೂ ನಕ್ಕರು.</br>{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:<br />{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ ಕಾದಿರ್ತೆನೆ.ನನಗೇನೂ ಅವಸರವಿಲ್ಲ."<br />{{gap}}ಉಳಿದವರು ಆ ಮಾತು ಕೇಳಿ ನಕ್ಕರು.</br>{{gap}}ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.<br />{{gap}}ಒಮ್ಮೆಲೆ ಪಂಡಿತರು ಕೇಳಿದರು:</br>
{{gap}}" ಬೇರೆ ಯಾರಾದರೂ ಬರ್ತಾರಾ?"</br>{{gap}}ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br {{gap}}"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br> {{gap}}ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br> {{gap}}ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br> {{gap}}"ಶುರು ಮಾಡೋಣ್ವ ಇನ್ನು?"</br> {{gap}}"ಹೂಂ."</br> {{gap}}ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ ಹೋಗಿದ್ದಾಗ,ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
ldfyew2llrurukzv6ri3nohek3kga48
320758
320757
2026-05-19T07:42:45Z
Hariprasad Shetty10
7490
/* Validated */
320758
proofread-page
text/x-wiki
<noinclude><pagequality level="4" user="Hariprasad Shetty10" /> {{rh|left=೪೮|right=ಚಿರಸ್ಮರಣೆ }}</noinclude>
ಮಾಡಿದವನಲ್ಲ.... ಊಟಕ್ಕಿಂತಲೂ ಮುಖ್ಯವಾಗಿ, ಸ್ನೇಹದ ಬಾಂಧವ್ಯದ ವಾತಾವರಣ ಅವರೆಲ್ಲರನ್ನು ಹರ್ಷಚಿತ್ತರನ್ನಾಗಿ ಮಾಡಿತು.</br>{{gap}}ಕೇಳಪ್ಪನೇ ಅಳುಕುತ್ತ ಪ್ರಭುವನ್ನು ಕುರಿತು ಕೇಳಿದ:</br> {{gap}}"ಇಂಥ ಊಟ ನಿಮಗೆ ರುಚಿಸ್ತದೋ ಇಲ್ಲವೋ?"</br> {{gap}}"ನಮ್ಮ ಮನೆ ಅಡುಗೆಗೆಲ್ಲ್ ಈ ರುಚಿ ಎಲ್ಲಿಂದ ಬಂತು?"</br> {{gap}} ಎಂದ ಪ್ರಭು, ನಗುತ್ತ.</br>{{gap}} ಪಂಡಿತರೂ ನಕ್ಕರು.</br>{{gap}} "ಅಡುಗೆ ಚೆನ್ನಾಗಿ ಮಾಡಿದೀರಮ್ಮಾ"</br>{{gap}} ಎಂದು,ಮುಖವರಳಿಸಿ ನಿಂತಿದ್ದ ಮನೆಯಾಕೆಯನ್ನು ಅವರು ಹೊಗಳಿದರು.</br>{{gap}}ಆಕೆ ಮತ್ತೂ ಒಂದೆರಡು ಸೌಟು ಅನ್ನ್ ತಂದು ಧಾಂಡಿಗನಿಗೆ ಬಡಿಸಿದಳು. ಆತ ಗಂಭೀರವಾಗಿಯೇ ನುಡಿದ:<br />{{gap}}"ಇನ್ನು ಊಟ ಮಾಡಮ್ಮ ನೀನು. ಬೇಕಾದರೆ ನಿನ್ನ ಊಟ ಆಗೋವರೆಗೂ ಕಾದಿರ್ತೆನೆ.ನನಗೇನೂ ಅವಸರವಿಲ್ಲ."<br />{{gap}}ಉಳಿದವರು ಆ ಮಾತು ಕೇಳಿ ನಕ್ಕರು.</br>{{gap}}ಊಟ ಮುಗಿಯಿತು.ಕೆಲವರು ಮೀಳ್ಯ ಜಗಿದರು. ಕೆಲವರು ಬೀಡಿ ಸೇದಿದರು.</br>{{gap}} ಕೆಲವರು ಎರಡನ್ನೂ ಮಾಡಿದರು. ಪಂಡಿತರೊಬ್ಬರೆ ಹುಲ್ಲು ಹೊದಿಸಿದ್ದ ಛಾವಣಿಯ ಬಡಬೊಂಬುಗಳನ್ನೆಣಿಸುತ್ತ ಸುಮ್ಮನಿದ್ದರು.ಹುಡುಗರಿಬ್ಬರು, ಅವರ ಮೇಲೆ ತಾವು ನೆಟ್ಟ ದೃಷ್ಟಿಯನ್ನು ಕದಲಿಸಲಿಲ್ಲ.<br />{{gap}}ಒಮ್ಮೆಲೆ ಪಂಡಿತರು ಕೇಳಿದರು:</br>
{{gap}}" ಬೇರೆ ಯಾರಾದರೂ ಬರ್ತಾರಾ?"</br>{{gap}}ಹೆಚ್ಚಾಗಿ ಮೌನವಗಿಯೇ ಇರುತ್ತಿದ್ದ ವಯಸ್ಸಾದ ರೈತ ಹೇಳಿದ:</br {{gap}}"ಊಟ ಮಾಡ್ಕೊಂಡು ಹೇಳಿದೋರು ಇಬ್ಬರಿದ್ದಾರೆ."</br> {{gap}}ಸ್ವಲ್ಪ ಹೊತ್ತಿನಲ್ಲೆ ಆ ಇಬ್ಬರೂ ಒಬ್ಬೊಬ್ಬರಾಗಿ ಬಂದರು:</br> {{gap}}ಮಾಸ್ತರತ್ತ ನೋಡಿ ಪಂಡಿತರು ಕೇಳಿದರು:</br> {{gap}}"ಶುರು ಮಾಡೋಣ್ವ ಇನ್ನು?"</br> {{gap}}"ಹೂಂ."</br> {{gap}}ಅದೇನೆಂದು ಅಪ್ಪುವಿಗೆ ಅಥ೯ವಾಗಲಿಲ್ಲ. ಭಾಷಣವಿರಬಹುದು ಎಂದು ಚಿರುಕಂಡ ಭಾವಿಸಿದ. ಹಿಂದೊಮ್ಮೆ ತಂದೆಯ ಜತೆಯಲ್ಲಿ ನೀಲೇಶ್ವರದ ಪೇಟೆಗೆ ಹೋಗಿದ್ದಾಗ,ಬಿಳಿಯ ನೀಳ ಅಂಗಿ ತೊಟ್ಟಿದ್ದ, ತಲೆಯ ಮೇಲೆ ಬಿಳಿಯ ಟೋಪಿ</p><noinclude></noinclude>
9n2wjz69xy6c9925lf3yuoq3skk7dgz
ಪುಟ:Abhaya.pdf/೨೩೩
104
16766
320617
250026
2026-05-18T12:01:27Z
Shreelatha.Halemane
7642
/* Validated */
320617
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=೨೨೮ |right=}}
ಮತ್ತು ಇತರ ಹುಡುಗಿಯರು ನೇಯ್ಗೆಯ ಮಗ್ಗವಿದ್ದ ಮೂಲೆಯಲ್ಲಿ ಜಾಗ
ಹಿಡಿದರು.
{{gap}}ಜಲಜೆ - ಲಲಿತೆಯರಾದರೂ ತನ್ನ ಬಳಿಯಲ್ಲಿ ಇರುತಿದ್ದರೆ - ಎಂದು
ತುಂಗಮ್ಮ ಹಲುಬಿದಳು. ಆದರೆ ಅವರಿಬ್ಬರೂ ಆಗಲೆ ವಿದ್ಯಾವಂತೆಯರೆನ್ನಿಸಿ
ಕೊಂಡು ಕತೆ ವುಸ್ತಗಳನ್ನು ಓದತೊಡಗಿದ್ದವರು. ಅವರು ತುಂಗಮ್ಮನ
ತರಗತಿಗೆ ಬರುವ ಮಾತೇ ಇರಲಿಲ್ಲ.
{{gap}}ರಾಜಮ್ಮ ಮಾತ್ರ ಅಧಿಕಾರದ ಧ್ವನಿಯಲ್ಲಿ ಅಂದರು :
{{gap}}"ಏನಾದರೂ ತಿಳೀದೆ ಹೋದ್ರೆ ನನ್ನ ಕೇಳಿ.”
{{gap}}ಆ ಬಹುವಚನದ ಸಂಬೋಧನೆಯಲ್ಲಿ ವ್ಯಂಗ್ಯ ಬೆರೆತಿತ್ತು. ಆದರೆ
ತುಂಗಮ್ಮ ಆ ಅವಮಾನವನ್ನು ಗಮನಿಸಲಿಲ್ಲ.
{{gap}}ತುಂಗಮ್ಮ ತನ್ನ ವಿದ್ಯಾರ್ಥಿನಿಯರಿಗೆ ಎದುರಾಗಿ ಕುಳಿತಾಗ ಹುಡುಗಿ
ಯರೆಲ್ಲ ಮುಸು ಮುಸು ನಕ್ಕರು
{{gap}}ಸರಸಮ್ಮ, ತುಂಗಮ್ಮನ ನೆರವಿಗೆ ಬಂದರು
{{gap}}"ಎಲ್ಲರೂ ಏಳಿ !”
{{gap}}ತುಂಗಮ್ಮನನ್ನು ಒಳಗೊಂಡು ಎಲ್ಲ ಹುಡುಗಿಯರೂ ಎದ್ದು ನಿಂತರು.
ಒಬ್ಬರ ಕೈಯಲ್ಲಾದರೂ ಸ್ಲೇಟು ಕಡ್ಡಿ ಇರಲಿಲ್ಲ.
{{gap}}"ಯಾಕೆ ಬರಿಕೈಲಿದೀರಾ ?”
{{gap}}ಹುಡುಗಿಯರು ತೆಪ್ಪಗಿದ್ದರು ಆ ಮೌನಕ್ಕೆ ಅಪವಾದವಾಗಿ ಯಾರೋ
ಕಿಸಕ್ಕನೆ ನಕ್ಕರು. ಒಬ್ಬಳು ಉತ್ತರ ಕೊಡುವ ಸಾಹಸ ಮಾಡಿದಳು:
{{gap}}" ತುಂಗಮ್ನೋರ ಕ್ಲಾಸಿಗೆ ಸ್ಲೇಟುಕಡ್ಡಿ ಬೇಕಾಗುತ್ತೋ ಇಲ್ವೋಂತ
ತರ್ಲಿಲ್ಲ ದೊಡ್ಡಮ್ಮ"
{{gap}}ಗದರಿಸಬೇಕೋ ನಕ್ಕು ಸಮ್ಮನಾಗಬೇಕೊ ಎಂದು ಒಂದು ಕ್ಷಣ
ತಿಳಿಯದೆ ಸರಸಮ್ಮ ಮೌನವಾಗಿದ್ದರು. ಆ ಕ್ಷಣ ಮುಗಿದೊಡನೆ ಅವರು ನಕ್ಕು
ನುಡಿದರು :
{{gap}}" ಖಿಲಾಡಿಗಳು! ಹೋಗಿ! ಸ್ಲೇಟು-ಬಳಪ ತಗೊಂಡ್ಬನ್ನಿ ಎಲ್ರೂ !”
{{gap}}ಧಡಧಡನೆ ಹುಡುಗಿಯರು, ಚಾಪೆಗಳನ್ನು ಬಿಚ್ಚಿ ಇಟ್ಟಿದ್ದ ಜಾಗಕ್ಕೆ
ಹೋಗಿ ಸ್ಲೇಟುಗಳನ್ನೆತ್ತಿಕೊಂಡರು.<noinclude></noinclude>
8vbedeg33jruy2cprp9w4sz7us26d86
ಪುಟ:Abhaya.pdf/೨೩೪
104
16767
320616
250041
2026-05-18T11:59:05Z
Shreelatha.Halemane
7642
/* Validated */
320616
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=|right= ೨೨೯}}
{{gap}}ಆ ಬಳಿಕ ತರಗತಿಯ ಆರಂಭ.
{{gap}}ಗೋಡೆಗೆ ಒರಗಿಸಿದ್ದ ಮರದ ಕರಿಹಲಗೆಯ ಮೇಲೆ ಸುಣ್ಣದ ಕಡ್ಡಿ
ಯಲ್ಲಿ ಸರಸಮ್ಮನ ನಿರ್ದೇಶದಂತೆ ತುಂಗಮ್ಮ ಬರೆದಳು :
{{gap}}' ಓಂ ಶ್ರೀ ಗಣಪತಾಯೆ ನಮಃ '
{{gap}}ಆ ಬಳಿಕ ಅಕ್ಷರಮಾಲೆ ಒಂದೊಂದಾಗಿ.
{{gap}}ಹುಡುಗಿಯರೂ ಹಿಂದೆ ಎಷ್ಟೋ ಸಾರೆ ಬರೆದಿದ್ದುದನ್ನೇ ಸ್ಟೇಟಿನಮೇಲೆ
ಒಂದೊಂದಾಗಿ ಬರೆದು ಕೊಂಡರು - ತಪ್ಪಾಗಿಯೂ ಸರಿಯಾಗಿಯೂ. ಆ
ಬಳಿಕ ತಿದ್ದುವ ಕೆಲಸ...
{{gap}}ನೋಡುತ್ತಲೇ ನಿಂತಿದ್ದರು ಸರಸಮ್ಮ. ತುಂಗಮ್ಮನ ದಕ್ಷತೆಯ
ವಿಷಯದಲ್ಲಿ ಅವರಿಗೆ ಯಾವ ಸಂದೇಹವೂ ಇರಲಿಲ್ಲ.
{{gap}}ಅಭಯಧಾಮದಿಂದ ಏನುಪ್ರಯೋಜನವಾಗಿದೆ ? ಯಾರಾದರೂ
ಕೇಳಲಿ ಇನ್ನು ಆ ಪ್ರಶ್ನೆಯನ್ನು ! ಸರಸಮ್ಮ ಆಗ ಎದೆಯುಬ್ಬಿಸಿ ತುಂಗಮ್ಮ
ನನ್ನ ಬೊಟ್ಟು ಮಾಡಿ ಹೇಳುವರು :
{{gap}}" ನೋಡಿದಿರಾ ? ಈಕೆ - ಇವರು - ತುಂಗಮ್ಮ ಅಂತ. ನನ್ನ
ಸಹಾಯಿಕೆ. ಒಂದು ಕಾಲದಲ್ಲಿ ಅಭಯ ಯಾಚಿಸಿ ಇಲ್ಲಿಗೆ ಬಂದಿದ್ದರು !"
{{gap}}ಹಾಗೆ ಯೋಚಿಸುತ್ತಲಿದ್ದ ಸರಸಮ್ಮ ತರಗತಿಯತ್ತ ಗಮನ ಕೊಡು
ವುದನ್ನೇ ಮರೆತರು. ನಿಂತಲ್ಲಿಂದ ಚಲಿಸಿ ಆಕೆ ತಮ್ಮ ಕೊಠಡಿಯತ್ತ
ಬ೦ದರು....
{{gap}}....ಅಭಯಧಾಮದ ಆಡಳಿತ ಸಮಿತಿಗೆ ಹೊಸ ಕಾರ್ಯದರ್ಶಿನಿಯ
ಆಯ್ಕೆಯಾದ ಮೇಲೆ, ಸರಸಮ್ಮನ ಹಳೆಯ ಆಸೆಗಳು ಮತ್ತೊಮ್ಮೆ ಚೇತರಿಸಿ
ಕೊಂಡಿದ್ದುವು. ಹಣವನ್ನಾದರೊ ಸಮಾಜದ ಹಲವಾರು
ದಾನಶೀಲರಿಂದ ಕೇಳಿ ಬೇಡಿಕಾಡಿ ಪಡೆಯುವುದು ಸಾಧ್ಯವಿತ್ತು. ಆದರೆ
ಜನಸಂಪತ್ತು, ನಂಬುಗೆಯ ಪ್ರಾಮಾಣಿಕರಾದ ಉತ್ಸಾಹಿ ಕಾರ್ಯಕರ್ತರ
ಸಂಪತ್ತು, ಅವರಿಗಿರಲಿಲ್ಲ. ಆದುದರಿಂದ ಚೇತರಿಸಿಕೊಂಡಿದ್ದ ಆಸೆ
ಗಳನ್ನೂ ಅದುಮಿ ಹಿಡಿಯದೆ ಅನ್ಯಗತಿ ಇರಲಿಲ್ಲ.
{{gap}}ಈಗ ಮತ್ತೆ ಆಸೆಗಳು ತಲೆ ಎತ್ತಿದುವು.
{{gap}}ಅಭಯಧಾಮದ ಚಟುವಟಿಕೆಗಳನ್ನು ವಿಸ್ತರಿಸಬೇಕು. ಬಟ್ಟೆಗೆ ಬಣ್ಣ<noinclude></noinclude>
6syldvta7srpv6tkbrpc4rgzz9v19g5
ಪುಟ:Abhaya.pdf/೨೩೯
104
16771
320626
250133
2026-05-18T13:37:19Z
Shreelatha.Halemane
7642
/* Validated */
320626
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=೨೩೪ |right=}}
{{gap}}" ಈ ಸಲ ಸುಮ್ಮನೆ ನೋಡಿಕೊಂಡು ಹೋಗಿ, ಹುಡುಗಿಯರೂ
ನಿಮ್ಮನ್ನ ನೋಡಲಿ.”
{{gap}}" ಎಂದಿದ್ದರು ಸರಸಮ್ಮ
{{gap}}ತನ್ನ ಅಭಿಮಾನಕ್ಕೆ ಧಕ್ಕೆ ತಗಲಿದಂತಾಗಿ ಆತ ಕೇಳಿದ್ದ :
{{gap}}" ಹುಡುಗೀರು ನನ್ನ ನೋಡೋದಂದ್ರೇನಮ್ಮ? ನಾನು ನೋಡಿ
ಮೆಚ್ಕೊಂಡ್ರೆ ಸಾಲ್ದಾ ?"
{{gap}}ಸರಸಮ್ಮನಿಗೆ ನಗು ಬಂದಿತ್ತು. ಅಂತೂ ಉಪಾಯವಾಗಿ ಆದಿನ
ಅವನನ್ನು ಬೀಳ್ಕೊಟ್ಟಿದ್ದರು.
{{gap}}ಮತ್ತೆ ಈಗ ಈ ಕಾಗದ.
{{gap}}ಒಮ್ಮೆ ಅಂಟಿಕೊಂಡಮೇಲೆ ಅವನು ಬಿಟ್ಟು ಬಿಡುವ ಲಕ್ಷಣ
ತೋರಲಿಲ್ಲ. ಆದಿನ ಆತ ಬಂದು ಹೋದ ಬಳಿಕ ಆ ಭೇಟಿಯ ಉದ್ದೇಶ
ತಿಳಿದಾಗ, ಸಾಮಾನ್ಯವಾಗಿ ಎಲ್ಲ ಹುಡುಗಿಯರೂ ಅವನನ್ನು ಕುರಿತು ಗೇಲಿ
ಮಾಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು ಆದರೆ ಒಬ್ಬಳು-ಕನಕಲಕ್ಷಮ್ಮ-
ಇತರರಷ್ಟು ನಗದೆ ಮೌನವಾಗಿಯೇ ಇದ್ದಳೆನ್ನಬೇಕು. ಅದನ್ನು ಗಮನಿಸಿದ
ಹುಡುಗಿಯರು, ಕನಕಲಕ್ಷಮ್ಮನನ್ನು ನಗೆಚಾಟಿಯಿಂದ ಹೊಡೆದು ಬಡೆದು,
ಆಕೆಯನ್ನೆ ಜವಾನ ಮಹಾಬಲನ ಹೆಂಡತಿಯಾಗಿ ಘೋಷಿಸಿದ್ದರು.
{{gap}}ತನಗೆ ಅವಮಾನವಾಯಿತೆಂದು ಎಲ್ಲರೆದುರು ಆಗ ಕನಕಲಕ್ಷಮ್ಮ
ಅತ್ತಿದ್ದಳು.
{{gap}}ಆದರೆ ಅವಳ ದೃಷ್ಟಿಗೆ ಮಹಾಬಲ ಚೆನ್ನಾಗಿಯೇ ಕಂಡಿದ್ದ. ಆತ
ತನ್ನ ಗಂಡನೆಂದು ಹುಡುಗಿಯರು ಗೇಲಿ ಮಾಡಿದುದು ಹಿತಕರವಾಗಿಯೂ
ಅವಳಿಗೆ ತೋರಿತ್ತು.
{{gap}}ಸರಸಮ್ಮನ ಸೂಕ್ಷ್ಮದೃಷ್ಟಿಗೆ ಆ ಹುಡುಗಿಯ ಪರಿಸ್ಥಿತಿ ಗೋಚರ
ವಾಗದೆ ಹೋಗಿರಲಿಲ್ಲ.
{{gap}}ತಮ್ಮನ್ನೆ ನಂಬಿದ್ದ ಮಹಾಬಲನ ಕೈ ಬಿಡಲು ಸರಸಮ್ಮನಿಗೆ ಇಷ್ಟ
ವಾಗಲಿಲ್ಲ ! ಮದುವೆ ಕೂಡಿಸಿಕೊಡುವುದೆಂದರೆ ಯಾರಿಗೆ ತಾನೆ ಸಂತೋಷ
ವಾಗದೆ ಇದ್ದೀತು ? ಅದರಲ್ಲೂ ಅಭಯಧಾಮದ ಒಬ್ಬಳು ಹುಡುಗಿಗೇ<noinclude></noinclude>
6zrkq76h4gscjz0zvy2u6rqk28gbbvk
ಪುಟ:Abhaya.pdf/೨೪೦
104
16772
320627
250141
2026-05-18T13:43:11Z
Shreelatha.Halemane
7642
/* Validated */
320627
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ |left=|right=೨೩೫}}
ವರ ದೊರಕಿಸುವುದೆಂದರೆ, ಅವರಿಗೆ ಹೆಚ್ಚು ಸಂತೋಷವಾಗಲೇ
ಬೇಕಲ್ಲವೆ ?
{{gap}}ಆ ಸಂಜೆ ಸರಸಮ್ಮ ಕನಕಲಕ್ಷಮ್ಮನನ್ನು ಪ್ರತ್ಯೇಕವಾಗಿ ಕರೆದು
ಮಾತನಾಡಿದರು :
{{gap}}“ಆದಿನ ಬಂದಿದ್ರಲ್ಲಿ, ಮಹಾಬಲ ಅಂತ ನೆನಪಿದ್ಯಾ?"
{{gap}}ಆಕೆಗೆ ನೆನಪಿತ್ತು ಆದರೆ ಹಾಗೆಂದು ಒಪ್ಪಿಕೊಳ್ಳಲು ಅವಳಿಗೆ ನಾಚಿಕೆ
ಯಾಯಿತು.
{{gap}}ಯಾರು, ಯಾವಾಗ, ದೊಡ್ಡಮ್ಮ?”
{{gap}}" ಓ--ಮರೆತೇ ಹೋಯ್ತೇನೆ ? ಅಷ್ಟು ಬೇಗ ? ಹುಂ ........
ಹೋದ ಡಿಸೆಂಬರ್ನಲ್ಲಿ ಬಂದಿರ್ಲಿಲ್ವೆ ಒಬ್ರು-ಇನ್ಕಂಟ್ಯಾಕ್ಸ್ ಕಚೇರಿ
ಯವರು ?”
{{gap}}ಕನಕಲಕ್ಷಮ್ಮನ ಮುಖ ಲಜ್ಜೆಯಿ೦ದ ಕೆಂಪಗಾಯಿತು.
{{gap}}"ಹೂಂ."
{{gap}}" ನಾಡಿದ್ದು ತಿರ್ಗಾ ಬರ್ತಾರಂತೆ ”
{{gap}}ಅದಕ್ಕೆ ?-ಎಂದು ಪ್ರಶ್ನಿಸುವ ಅರ್ಧದಲ್ಲಿ ಕನಕಲಕ್ಷಮ್ಮ ಸರಸಮ್ಮನ
ಮುಖ ನೋಡಿದಳು
{{gap}}" ಏನು ಉತ್ತರ ಕೊಡೋಣ ?”
{{gap}}ತನ್ನನ್ನು ಯಾಕೆ ಕೇಳಿತಿದ್ದಾರೆಂದು ಕನಕಲಕ್ಷಮ್ಮನಿಗೆ ಆಶ್ಚರ್ಯ
ನಾದರೂ ತನ್ನನ್ನು ಒಬ್ಬಳನ್ನೇ ಕೇಳುತ್ತಿರುವರಲ್ಲಾ ಎಂಬ ಸಮಾಧಾನವೂ
ಆಯಿತು.
{{gap}}ಸರಸಮ್ಮ ಮೃದುವಾಗಿ ಆಕೆಯ ಭುಜಮುಟ್ಟಿ ಒರಗು ಬೆಂಚಿನ ಮೇಲೆ
ಕುಳ್ಳಿರಿಸಿದರು.
{{gap}}ಆದಾಯ ತೆರಿಗೆ ಕಚೇರಿಯವರು ಎಂದಿದ್ದರು ಸರಸಮ್ಮ- ಜವಾನ,
ಎಂದಿರಲಿಲ್ಲ. ಆದರೂ ಮಹಾಬಲನ ನಿಜವಾದ ಉದ್ಯೋಗವೇನೆಂಬುದು
ಕನಕಲಕ್ಷಮ್ಮನಿಗೆ ತಿಳಿದಿತ್ತು.
{{gap}}ಜಾತಿಯ ತೊಂದರೆ ಇರಲಿಲ್ಲ. ಒಂದೇ ಜಾತಿಯವರಾಗಿದ್ದರು ಅವ
ರಿಬ್ಬರೂ. ಯಾವುದರಲ್ಲಿ ಏನುಕಡಿಮೆ ಮಹಾಬಲನಿಗೆ ? ತಕ್ಕಷ್ಟು<noinclude></noinclude>
rcy9o5l5pjaa254hzw1xisg3lxep5qm
ಪುಟ:Abhaya.pdf/೨೪೧
104
16773
320628
250146
2026-05-18T13:45:19Z
Shreelatha.Halemane
7642
/* Validated */
320628
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center= ಅಭಯ|left=೨೩೬|right=}}
ವಿದ್ಯಾವಂತ, ಸಂಪಾದನೆಯೂ ತಕ್ಕಮಟ್ಟಿಗಿದೆ. ಏನೋ ವಿರಸವಾಗಿ
ಮೊದಲ ಹೆಂಡತಿ ಹೊರಟುಹೋದಳು. ಅವಳಿಗೆ ಭಾಗ್ಯವಿರಲಿಲ್ಲ ಈಗ ...
{{gap}}-ಹೀಗೆ ಬಲು ನಿಧಾನವಾಗಿ ಸರಸಮ್ಮ ವಿವರಿಸಿದರು.
{{gap}}ಎರಡು ವರ್ಷಗಳಿಗೆ ಹಿಂದೆ ಕಾಹಿಲೆಯ ಜೀವಿಯಾಗಿಯೆ ಕನಕ
ಲಕ್ಷಮ್ಮ ಅಭಯಧಾಮಕ್ಕೆ ಬಂದಿದ್ದಳು. ಅರಸೀಕೆರೆಯವಳು. ಛಿದ್ರವಾ
ದೊಂದು ರೈತ ಕುಟುಂಬಕ್ಕೆ ಸೇರಿದಾಕೆ. ಬಾಲ್ಯದಲ್ಲಿ ಆಕೆಗೆ ಮದುವೆ
ಯಾಗಿತ್ತು ಯಾವುದೋ ಸಣ್ಣ ಜಗಳ ದೊಡ್ಡದಾಗಿ ಮಾವನ ಮನೆಯವರ
ಮನಸ್ಸು ಕಹಿಯಾಯಿತು. ಸೊಸೆಯನ್ನು ಅವರು ಕರೆಸಿಕೊಳ್ಳಲೇ ಇಲ್ಲ.
ಹಾಗೆ ಹಿರಿಯರಿಗಾಗಿ ತನ್ನನ್ನು ಬಿಟ್ಟ ಆಗಂಡನಿಗೆ ಬೇರೊಂದು ಮದುವೆಯೂ
ಆಗಿಹೋಯಿತು. ಕನಕಲಕ್ಷಮ್ಮ ತನ್ನ ಮನೆ ಬಿಟ್ಟು ಹೋದಳು.
ಬೆಂಗಳೂರು ನಗರದಲ್ಲಿ ಕೂಲಿನಾಲಿ ಮಾಡಿ ಜೀವನ.... ಅಲ್ಲಿ ಆಕೆ ತುಳಿಯ
ಬೇಕಾಗಿ ಬಂದ ದಾರಿ....ಬೇರೆ ಜನ ಅದನ್ನು 'ಅಡ್ಡದಾರಿ' ಎಂದು
ಕರೆದಿದ್ದರು.
{{gap}}....ಸಂಕಟಪಡುತಿದ್ದ ಆಕೆಗೆ ಯಾರೋ ಅಭಯಧಾಮದತ್ತ ಬೊಟ್ಟು
ಮಾಡಿದ್ದರು. ತನ್ನ ಪರಿಚಿತರು ಯಾರೂ ಇಂಥದೇ ಎಂದು ಹೇಳಲಾಗದ
ಹುಣ್ಣುಗಳೊಡನೆ ಆಕೆ ಅಲ್ಲಿಗೆ ಬಂದಿದ್ದಳು
{{gap}}ಸರಸಮ್ಮ ಪೂರ್ಣ ಲಕ್ಷ್ಯದಿಂದ ಚಿಕಿತ್ಸೆಯ ಏರ್ಪಾಟು ಮಾಡಿದರು.
ಆರೆಂಟು ತಿಂಗಳಲ್ಲಿ ಕನಕಲಕ್ಷಮ್ಮ ಪೂರ್ತಿ ಗುಣ ಹೊಂದಿದಳು....
{{gap}}....ಈಗ ಆಕೆಯ ಮುಂದಿದ್ದುದು - ಬಾಳ್ವೆಯ ಮಹಾದುರ್ಗದೊಂದು
ತೆರೆದಿದ್ದ ಬಾಗಿಲು. ಒಳಹೋಗಲೆ? ಬೇಡವೆ? ಎಂದು ಶಂಕಿಸುತಿದ್ದಳಾಕೆ.
{{gap}}ಸರಿಯಾದ ನಿರ್ಧಾರಕ್ಕೆ ಬರಲು ನೆರವಾಗುವಂತೆ ಮಾತನಾಡಿದರು
ಸರಸಮ್ಮ:
{{gap}}"ನೋಡು ಮಗೂ, ಇದೀಗ ಪರಿಸ್ಥಿತಿ. ನನ್ನ ಕೇಳಿದರೆ ನೀನು
ಒಪ್ಪಿಕೊಳ್ಳೋದು ವಾಸಿ. ಎಷ್ಟು ದಿನ ಅಂತ ಹೀಗೇ ಇರ್ತೀಯಾ ?
ಯೋಚಿಸ್ನೋಡು.”<noinclude></noinclude>
pi3qur4z4vudwpqj3fvk3ea7vcvvw8u
ಪುಟ:Abhaya.pdf/೨೪೨
104
16774
320629
250155
2026-05-18T13:48:10Z
Shreelatha.Halemane
7642
/* Validated */
320629
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ |left=|right= ೨೩೭}}
{{gap}}ಮಾತನಾಡದೆಯೆ ಕುಳಿತಿದ್ದ ಕನಕಲಕ್ಷಮ್ಮ ಕೊನೆಗೆ ಅಂದಳು :
{{gap}}"ನೀವು ಹೇಳಿದ ಹಾಗೆ ಮಾಡ್ತೀನಿ ದೊಡ್ಡಮ್ಮ.”
{{gap}}"ಅಯ್ಯೋ ಹುಚ್ಚಿ ! ಮದುವೆ ಮಾಡ್ಕೊಳ್ಳೋದು ನೀನು ಕಣೇ
ನಾನಲ್ಲ."
{{gap}}".........."
{{gap}}“ ಹೋಗಲಿ ಈ ಸಂಬಂಧ ನಿನಗೆ ಒಪ್ಪಿಗೆಯೋ - ಅಷ್ಟು ಹೇಳು.”
{{gap}}" ಹೂಂ....”
{{gap}}ಹಾಗೆ ಹೇಳಿ, ಹೊತ್ತಿದ್ದ ದೊಡ್ಡ ಭಾರವನ್ನು ಕೆಳಕ್ಕೆ ಇಳಿಸಿದ
ಹಾಗಾಯಿತು ಕನಕಲಕ್ಷಮ್ಮನಿಗೆ.
{{gap}}ತಾವು ಸಂಪಾದಿಸಿದ ಯಶಸ್ಸಿನಿಂದ ಸರಸಮ್ಮನ ಹೃದಯ ಹಗುರ
ವಾಯಿತು.
{{gap}}ತುಂಗಮ್ಮನನ್ನು ಅವರು ಕರೆದು, ತಮಗೆ ಬಂದ ಕಾಗದದ ವಿಷಯ
ವನ್ನೂ ಕನಕಲಕ್ಷಮ್ಮ ವಿವಾಹಕ್ಕೆ ಒಪ್ಪಿರುವುದನ್ನೂ ತಿಳಿಸಿದರು.
{{gap}}"ಈ ವಿಷಯ ಎಲ್ಲರಿಗೂ ಹೇಳೋಣ್ವೇ ದೊಡ್ಡಮ್ಮ?”
{{gap}}"ಈಗ್ಲೆ ಬೇಡ ತುಂಗ. ಸುಮ್ಸುಮ್ನೆ ಗೋಳು ಹೊಯ್ಕೋತಾರೆ ಆ
ಹುಡುಗೀನ."
{{gap}}ಆದರೆ ಸರಸಮ್ಮನ ಅ೦ತಹ ಮುಂಜಾಗರೂಕತೆಯಿಂದ ಯಾವ
ಪ್ರಯೋಜನವೂ ಆಗಲಿಲ್ಲ. ದೊಡ್ಡಮ್ಮ ಏಕಾಂತದಲ್ಲಿ ಕನಕಲಕ್ಷಮ್ಮನೊಡನೆ
ಮಾತುಕತೆ ನಡೆಸಿದಾಗಲೇ ಉಹಾಪೋಹಗಳು ಆರಂಭವಾಗಿದ್ದುವು.
ಕನಕಲಕ್ಷಮ್ಮ ಹೊರಬಂದಮೇಲೆ ಅಡುಗೆ ಮನೆಗೆ ಅವಳನ್ನು ಪುಸಲಾಯಿಸಿ
ಒಯ್ದು ಹಲವು ಹುಡುಗಿಯರು ಆಕೆಯನ್ನು ಮುತ್ತಿಕೊಂಡರು.
{{gap}}"ಏನು ? ಅದೇನು ? ಹೇಳೆ - ಹೇಳು !”
{{gap}}-ಎಂದು ಒಂದೇ ಸಮನೆ ಪೀಡಿಸಿ ಆಕೆ ಅಳುವಂತೆ ಮಾಡಿದರು.
{{gap}}ಒಬ್ಬಳೆಂದಳು :
{{gap}}" ಗೊತ್ತಾಯ್ತು ಬಿಡು. ಮದುವೆ ! ಅದಕ್ಕೆ ಇಷ್ಟೊಂದು ಜಂಭ !”
{{gap}}“ಮಹಾಬಲಪ್ಪ ಬತ್ತವ್ನೆ - ಹುಯ್ ! ”
{{gap}}ಎಂದಳು ಇನ್ನೊಬ್ಬ ಹುಡುಗಿ.<noinclude></noinclude>
e2c2b6tmv3wmk9v8wqtyw49hfwmicib
ಪುಟ:Abhaya.pdf/೨೪೪
104
16775
320633
250202
2026-05-18T14:01:07Z
Shreelatha.Halemane
7642
/* Validated */
320633
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=|right=೨೩೯}}
{{gap}}"ಈಗ ಹೇಳ್ತೀರಾ ನನ್ನ ಪ್ರಶ್ನೆಗೆ ಉತ್ತರ ?”</p>
{{gap}}"ಹೋಗ್ತಿಯೋ, ಇಲ್ಲ ಹಿಂಡ್ಬೇಕೋ ಕಿವಿ ?”</p>
{{gap}}ದಮಯಂತಿ ನಗುತ್ತ ಓಡಿ ಹೋದಳು.<br>
{{gap}}"ಸೆಕ್ರೆಟರಿಯವರ್ನ ಒಪ್ಪಿಸಿ ಬಂದಿದೀನಮ್ಮ, ನಾಳೆ ಬರ್ತಾನೆ ಆತ -<br>
ಆ ಮಹಾಬಲ....ಅಂತೂ ಈ ಮದುವೆ ಸೀಸನ್ನಿನಲ್ಲಿ ನಮ್ಮದೂ ಒಂದು<br>
ಮದುವೆ ಆಗುತ್ತೆ !”<p>
{{gap}}--ಎಂದು ಸರನಮ್ಮ ತುಂಗಮ್ಮನೊಡನೆ ಅಂದರು</p>
{{gap}}...ಅದಾದ ಮರುದಿನ ಆತ ಬಂದ ಆದಿನ ರಜಾಪಡೆದೇ ಮಹಾಬಲ<br>
ಹೊರಟಿದ್ದ ಹೆಣ್ಣು ನೋಡಲು, ತಲೆಯ ಮೇಲೆ ವಕ್ರವಕ್ರವಾಗಿ ಕ್ರಾಪು<br>
ಬಿಡಿಸಿತ್ತು ಮಾಸಿದ ಖಾಕಿ ಪ್ಯಾಂಟು, ಬಿಳಿಯಷರಟು, ಯಾವುದೋ<br>
ಕಾಲದ ಯಾರೂ ಸಾಹೇಬರ ಉಣ್ಣೆಯ ಕೋಟೊಂದು, ಕಾಲಿಗೆ<br>
ಮೋಟಾರು ಟಯರಿನ ಚಪ್ಪಲಿ, ತನ್ನ ಬೆಪ್ಪುತನವನ್ನು ಮರೆಮಾಚಿ<br>
ಸೊಗಸುಗಾರನಾಗಿಯೇ ಕಾಣಿಸಿ ಕೊಳ್ಳಲು ಆತ ಮನಃ ಪೂರ್ವಕವಾಗಿ<br>
ಪ್ರಯತ್ನಿಸಿದ್ದ !</p>
{{gap}}ಆತ ಬಂದೊಡನೆ ಅಲ್ಲಿ ನಗೆಯ ಕೋಲಾಹಲವೇ ಆಗ ಬೇಕಿತ್ತು.<br>
ಆದರೆ ಗಲಾಟೆ ಮಾಡಕೂಡದು ! ಎಂದು ಮೊದಲೇ ಎಚ್ಚರಿಸಿದ್ದರು<br>
ಸರಸಮ್ಮ, ಮೌನವಾಗಿದ್ದರೂ ಹಲವು ಹುಡುಗಿಯರು ಒಬ್ಬೊಬ್ಬರಾಗಿ<br>
ಆಫೀಸು ಕೊಠಡಿಯ ಮುಂದೆ ಹಾದು ಹೋಗುತ್ತಿದ್ದರು ಹಾಗೆ ಕಳ್ಳ<br>
ನೋಟದಿಂದ ಮಹಾಬಲವನ್ನು ನೋಡಿ ಬಂದು ಅಡುಗೆ ಮನೆಯಲ್ಲಿ ಅಡಗಿ<br>
ನಿಂತಿದ್ದ ಕನಕಲಕ್ಷಮ್ಮನಿಗೆ ಬಣ್ಣಿಸುತ್ತಿದ್ದರು</p>
{{gap}}ಯಾವಳಾದರು ಹುಡುಗಿ ಬಾಗಿಲಿನತ್ತ ಸುಳಿದರೆ ಸಾಕು, ಇರುವೆ<br>
ಕಡಿದ ಹಾಗಾಗುತಿತ್ತು ಮಹಾಬಲನಿಗೆ</p>
{{gap}}ಸರಸಮ್ಮನೊಡನೆ ಆತ ಕೇಳಿದ:
{{gap}}"ನನ್ನ ಕಾಗದ ತಮಗೆ ತಲಪಿರ್ಬೇಕು."</p>
{{gap}}“ ಹೌದು. ಮೊನ್ನೇನೆ ಬಂತು"</p>
{{gap}}"ತಾವು- ಏನಾದ್ರೂ---....."</p>
{{gap}}ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಆ ಮನುಷ್ಯ.</p><noinclude></noinclude>
tm14t76gwvn792zq6t9sfk1okjvovcf
ಪುಟ:Abhaya.pdf/೨೪೫
104
16776
320631
250168
2026-05-18T13:54:04Z
Shreelatha.Halemane
7642
/* Validated */
320631
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=೨೪೦|right=}}
{{gap}}" ಏನಾದ್ರೂ ಮಾಡೋಣ ಆದರೆ ಯಾವಾಗ ಮದ್ವೆ ಮಾಡೋ
ಬೇಕೂ೦ತಿದೀರಿ ನೀವು ?”
{{gap}}''ಈಗ್ಲೇ - ಈ ಸೀಸನ್ನಲ್ಲೇ'' !
{{gap}}"ಓ!"
{{gap}}"ಮದ್ವೆ ಸೀಜನ್ ಷುರುವಾದಾಗ್ನಿಂದ ನಂಗೆ ಇದೇ ಯೋಚ್ನೆ
ಅತ್ಕೊಂಬಿಟ್ಟಿತ್ತು ನಮ್ಮ ಓಣೀಲೆ ಒಂದು ಮದ್ವೆ ಆಗೋಯ್ತು !”
{{gap}}"ಸರಿ, ಸರಿ...."
{{gap}}ಅಷ್ಟು ಮಾತನಾಡಿ ಮತ್ತೆ ಮೌನ ತಳೆದ ಭೂಪತಿ.
{{gap}}ಸರಸಮ್ಮನ ನಿರ್ದೇಶದಂತೆ ಕನಕಲಕ್ಷಮ್ಮ, ಅಭಯಧಾಮಕ್ಕೆ
ಬಂದ ಅತಿಥಿಗಾಗಿ ಒಂದು ಲೋಟ ಕಾಫಿ ಎತ್ತಿಕೊಂಡು ಬಂದಳು. ತಲೆ
ಸ್ವಲ್ಪ ಬಾಗಿತ್ತು. ಆದರೂ ಮಹಾಬಲನಮೇಲೆಯೇ ನೆಟ್ಟಿತ್ತು ದೃಷ್ಟಿ.
{{gap}}ಕಪ್ಪಗಿತ್ತು ಕಾಫಿ, ಆದರೆ ಕನಕಲಕ್ಷಮ್ಮ ಅದಕ್ಕಿಂತ ಬಿಳಿಯಾಗಿದ್ದಳು.
{{gap}}ಕಾಫಿಯ ಲೋಟವನ್ನು ಕನಕಲಕ್ಷಮ್ಮ ದೊಡ್ಡಮ್ಮನ ಮೇಜಿನ
ಮೇಲಿಟ್ಟಳು.
{{gap}}" ಕಾಫಿ ತಗೊಳ್ಳಿ ”
{{gap}}ಎಂದರು ಸರಸಮ್ಮ, ಹಾಗೆಯೇ ಕನಕನತ್ತತಿರುಗಿ ಅಂದರು.
{{gap}}“ ಹೋಗ್ಬೇಡ, ಇಲ್ಲೇ ಇರು ಕನಕಲಕ್ಷಮ್ಮ....”
{{gap}}ಕನಕಲಕ್ಷಮ್ಮ ಎಂದ ಹೆಸರನ್ನು ಮನಸ್ಸಿನಲ್ಲಿ ತೊದಲುತ್ತ ಮಹಾಬಲ
ಕಾಫಿಯ ಲೋಟವನ್ನೆತ್ತಿಕೊಂಡು, ಆ ಕರಿಯ ದ್ರಾವಕವನ್ನು ಗುಟುಕು
ಗುಟುಕಾಗಿ ಸದ್ದು ಮಾಡುತ್ತ ಹೀರಿದ.
{{gap}}ಹ್ಯಾಗಿದೆ ?”
{{gap}}-ಎಂದರು ದೊಡ್ಡಮ್ಮ, ಹುಡುಗಿಯ ವಿಷಯ ಕೇಳಿದರೋ
ಏನೆಂಬುದು ತಿಳಿಯದೆ ಮಹಾಬಲ ತಬ್ಬಿಬ್ಬಾದ.
{{gap}}"ಕಾಫಿ ಹ್ಯಾಗಿದೇರಿ ?”
{{gap}}ಚೆನ್ನಾಗಿದೆ.”
{{gap}}" ಹುಡುಗಿ ಹ್ಯಾಗಿದಾಳೆ ?”
{{gap}}" ಹುಂ ?"<noinclude></noinclude>
8r2rfwixtwzrj541p283u36fw50ats0
ಪುಟ:Abhaya.pdf/೨೪೬
104
16777
320630
250181
2026-05-18T13:51:04Z
Shreelatha.Halemane
7642
/* Validated */
320630
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಅಭಯ|left=|right=೨೪೧}}
{{gap}}" ಇವಳೇ - ಕನಕಲಕ್ಷಮ್ಮ - ಸರಿಯಾಗಿ ನೋಡಿ....ನೀನೂ ನೋಡು
ಮಗೂ.”
{{gap}}ಕನಕಲಕ್ಷಮ್ಮ ಮಹಾಬಲ ಇಬ್ಬರ ಮುಖಗಳೂ ಲಜ್ಜೆಯಿಂದ ಕೆಂಪ
ಗಾದುವು.
{{gap}}ಸರಸಮ್ಮ, ಕನಕನ ವಿಷಯವಾಗಿ ಚುಟುಕು ಪರಿಚಯಮಾಡಿ
ಕೊಟ್ಟರು ಅವರು ಸುಳ್ಳೇನನ್ನೂ ಹೇಳಲಿಲ್ಲ. ಆದರೆ ಮಾತು ಆಗಿನ
ಪರಿಸ್ಥಿತಿಯಲ್ಲಿ ಆಭಾಸವಾಗಿ ತೋರದಂತೆ ಎಚ್ಚರ ವಹಿಸಿದ್ದರು.
{{gap}}ಮಹಾಬಲ ಕದ್ದು ಕದ್ದು ಕನಕಲಕ್ಷಮ್ಮನನ್ನು ನೋಡಿದ. ಅಲ್ಲಿ
ನಿಂತಿದ್ದ ಜೀವ ತನ್ನ ಪಾಲಿನದಾಗುವುದೆಂದು ಆತ ಮೈಮರೆತ.
{{gap}}ಒಬ್ಬಳು ಹುಡುಗಿ ಅಭಯಧಾಮಕ್ಕೆ ಬಂದಾಗ, ಹಸುರು ಕೆಂಪು
ಚಿತ್ತಾರಗಳನ್ನು ಬರೆದಿದ್ದ ವಾಯಿಲ್ ಸೀರೆಯನ್ನುಟ್ಟಿದ್ದಳು ಅದನ್ನು ಈದಿನ
'ವಧು'ವಿಗೆ ಉಡಿಸಲಾಗಿತ್ತು. ಓರಣವಾಗಿ ತಲೆಬಾಚಿ ಹೆರಳು ಹಾಕಿದ್ದರು.
ಹೆರಳಿನ ಮುಡಿಯಮೇಲೆ ಅದೇ ಉದ್ಯಾನದ ಹೂಗಳ ಕಿರೀಟವಿತ್ತು.
ಮುಖಕ್ಕೆ ಪೌಡರನ್ನು ಒಂದಿಷ್ಟು ಹೆಚ್ಚಾಗಿಯೇ ಬಳೆದಿದ್ದರು.
{{gap}}ಮುಖ್ಯವಾಗಿ, ಯೌವನದ ಅಂಗ ಸೌಷ್ಟವ ಶೃಂಗಾರದ ನೆರವಿಗೆ
ನಿಂತು, ಮಹಾಬಲನ ಮೇಲೆ ಮೋಹದ ಬಲೆ ಬೀಸಿತು
{{gap}}" ಇವಳು ನಿಮಗೆ ಒಪ್ಪಿಗೆಯೇನಪ್ಪ ?”
{{gap}}"ನೀವು ಹೇಗಂತೀರೋ ಹಾಗೆ."
{{gap}}"- ಅದೆಂಥಾಮಾತು ! ಸ್ಪಷ್ಟವಾಗಿ ಹೇಳಿ ಇಷ್ಟು ಕೂಡಾ ಉತ್ತರ
ಕೊಡೋಕೆ ಆಗ್ದೇ ಇರೋರು ಯಾಕ್ಬರ್ತೀರ ಇಲ್ಲಿ ?”
{{gap}}ತನ್ನನ್ನೆಲ್ಲಿ ಹೊರಟು ಹೋಗಲು ಹೇಳುವರೋ ಎಂದು ಮಹಾಬಲನಿಗೆ
ಅಳುಕಿತು.
{{gap}}" ಒಪ್ಪಿಗೆ "
{{gap}}--ಎಂದು ಆತ ಅವಸರದಲ್ಲೇ ಹೇಳಿದ.
{{gap}}" ಸರಿ ಹಾಗಾದರೆ, ಮದುವೆದಿನ ಗೊತ್ಮಾಡಿ.”
{{gap}}" ಆಗ್ಲೆ ಮಾಡಿದೀನಿ ! ಮೇಲಿನ ಗುರುವಾರ ಒಳ್ಳೆಲಗ್ನ ಇದೆ.”
{{gap}}" ಮದುವೆ ಏರ್ಪಾಟು ಎಲ್ಲಿ ಮಾಡ್ಬೇಕೂಂತಿದೀರಾ ?”
16<noinclude></noinclude>
3866l0643ml4p0a1q4liw2bpk5mpfkj
ಪುಟ:Abhaya.pdf/೨೫೯
104
16778
320667
250236
2026-05-19T02:16:40Z
Pragathi. BH
7585
/* Validated */
320667
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಅಭಯ|left=೨೫೪}}
ಮನೆಯೋರು, 'ಚಿನ್ನಾ ನೆಗಡಿ ಆದೀತು, ಜ್ವರ ಬಂದೀತು' ಅಂತ ನನ್ನ<br>
ಹೊರಕ್ಕೆ ಬಿಡ್ತಿರ್ಲಿಲ್ಲ.”<br>
{{gap}}"ಆಮೇಲೆ, ನಿನ್ನ ಅವರು ಬಿಟ್ಬಿಟ್ಟಾಗ ?”<br>
{{gap}}"ಆಗ ಆಟ ಆಡೋ ಬಯಕೇನೇ ಹೊರಟೋಗಿತ್ತು"<br>
{{gap}}ಪ್ರಕೃತಿಯ ಹೊಸವೇಷದಲ್ಲೇ ತನ್ಮಯಳಾಗಿದ್ದ. ಜಲಜೆಯ ಮನಸ್ಸು<br>
ಅಂತರ್ಮುಖಿಯಾಗಿ ಗತಕಾಲವನ್ನು ಕುರಿತು ಚಿಂತಿಸುತಿತ್ತು ...ಬಾಲ್ಯದ<br>
ನೆನಪುಗಳು ...ಆದರೆ ಆ ಸ್ಮರಣೆಯೆಂದೂ ಮಧುರವಾಗಿರಲಿಲ್ಲ.<br>
{{gap}}ಅದನ್ನು ಚೆನ್ನಾಗಿ ತಿಳಿದಿದ್ದ ತುಂಗಮ್ಮ ಅಂದಳು :<br>
{{gap}}"ಬಾ ಹೋಗೋಣ. ಪ್ರಭಾನ ಎಬ್ಬಿಸೋಣ ”<br>
{{gap}}“ ಅಯ್ಯೋ - ಇರಲಿ ಬಿಡೇ ಬೇಕಾದಾಗ ಏಳ್ತಾಳೆ"<br>
{{gap}}"ಇಲ್ಲ ಜಲಜ ಈಗ ಜಂಭವೆಲ್ಲ ಇಳಿದ್ಬಿಟ್ಟಿದೆ ಬಾ."<br>
ಗೆಳತಿಯರಿಬ್ಬರೂ ಪ್ರಭಾಳ ಕೊಠಡಿಯತ್ತ ನಡೆದರು.<br><br>
{{gap}}ಪ್ರಭಾ ತಾನು ಬಂದ ಮರುದಿನ ಬೆಳಿಗ್ಗೆ ಎದ್ದವಳು, ಹೊಸಪರಿಸ್ಥಿತಿಗೆ<br>
ಹೊಂದಿಕೊಳ್ಳಲಾರದೆ ಬಲು ಕಷ್ಟಪಟ್ಟಳು.<br>
{{gap}}ತುಂಗಮ್ಮ ಬಾಗಿಲಬಳಿ ಸುಳಿದಾಗ ಪ್ರಭಾ ಕರೆದಳು :<br>
{{gap}}“ ಏ ಹುಡುಗಿ ಇಲ್ಲಿಗೆ ಬಾ ?<br>
{{gap}}ಇದೂ ಸರಿಯೆ - ಎಂದುಕೊಂಡ ತುಂಗಮ್ಮ ವಿನಮ್ರತೆಯ ಅಭಿನಯ<br>
ಮಾಡುತ್ತಾ ಪ್ರಭಾಳ ಎದುರುನಿಂತಳು :<br>
{{gap}}“ ಏನು ಬೇಕಮ್ಮ ?”<br>
{{gap}}"ನಿನ್ನ ಹೆಸರೇನೇ ?”<br>
{{gap}}"ತುಂಗ ಅಂತಾರೆ ”<br>
{{gap}}"ನನ್ನ ಸ್ವಲ್ಪ ಬಚ್ಚಲುಮನೆಗೆ ಕರಕೊಂಡು ಹೋಗ್ತೀಯಾ ?”<br>
{{gap}}"ರಾತ್ರೆ ನೋಡ್ಲಿಲ್ವೆ ?”<br>
{{gap}}ನೊಡಿದ್ದೆ. ಹಾದಿ ಮರೆತ್ಹೋಯ್ತು. ಒಬ್ಳಿಗೇ ಹೋಗಕ್ಕಾಗಲ್ಲ.<br>
ಮುಖ ತೊಳೀಬೇಕು."<br>
{{gap}}"ಆಗ್ಲಿ ನಡೀರಿ.”<br><noinclude></noinclude>
gummteoo4dml1h3oukjk7173sogdbip
320672
320667
2026-05-19T02:22:56Z
Shreelatha.Halemane
7642
320672
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಅಭಯ|left=೨೫೪}}
ಮನೆಯೋರು, 'ಚಿನ್ನಾ ನೆಗಡಿ ಆದೀತು, ಜ್ವರ ಬಂದೀತು' ಅಂತ ನನ್ನ<br>
ಹೊರಕ್ಕೆ ಬಿಡ್ತಿರ್ಲಿಲ್ಲ.”<br>
{{gap}}"ಆಮೇಲೆ, ನಿನ್ನ ಅವರು ಬಿಟ್ಬಿಟ್ಟಾಗ ?”<br>
{{gap}}"ಆಗ ಆಟ ಆಡೋ ಬಯಕೇನೇ ಹೊರಟೋಗಿತ್ತು"<br>
{{gap}}ಪ್ರಕೃತಿಯ ಹೊಸವೇಷದಲ್ಲೇ ತನ್ಮಯಳಾಗಿದ್ದ. ಜಲಜೆಯ ಮನಸ್ಸು<br>
ಅಂತರ್ಮುಖಿಯಾಗಿ ಗತಕಾಲವನ್ನು ಕುರಿತು ಚಿಂತಿಸುತಿತ್ತು ...ಬಾಲ್ಯದ<br>
ನೆನಪುಗಳು ...ಆದರೆ ಆ ಸ್ಮರಣೆಯೆಂದೂ ಮಧುರವಾಗಿರಲಿಲ್ಲ.<br>
{{gap}}ಅದನ್ನು ಚೆನ್ನಾಗಿ ತಿಳಿದಿದ್ದ ತುಂಗಮ್ಮ ಅಂದಳು :<br>
{{gap}}"ಬಾ ಹೋಗೋಣ. ಪ್ರಭಾನ ಎಬ್ಬಿಸೋಣ ”<br>
{{gap}}“ ಅಯ್ಯೋ - ಇರಲಿ ಬಿಡೇ ಬೇಕಾದಾಗ ಏಳ್ತಾಳೆ"<br>
{{gap}}"ಇಲ್ಲ ಜಲಜ ಈಗ ಜಂಭವೆಲ್ಲ ಇಳಿದ್ಬಿಟ್ಟಿದೆ ಬಾ."<br>
ಗೆಳತಿಯರಿಬ್ಬರೂ ಪ್ರಭಾಳ ಕೊಠಡಿಯತ್ತ ನಡೆದರು.<br><br>
{{gap}}ಪ್ರಭಾ ತಾನು ಬಂದ ಮರುದಿನ ಬೆಳಿಗ್ಗೆ ಎದ್ದವಳು, ಹೊಸಪರಿಸ್ಥಿತಿಗೆ<br>
ಹೊಂದಿಕೊಳ್ಳಲಾರದೆ ಬಲು ಕಷ್ಟಪಟ್ಟಳು.<br>
{{gap}}ತುಂಗಮ್ಮ ಬಾಗಿಲಬಳಿ ಸುಳಿದಾಗ ಪ್ರಭಾ ಕರೆದಳು :<br>
{{gap}}“ ಏ ಹುಡುಗಿ ಇಲ್ಲಿಗೆ ಬಾ ?<br>
{{gap}}ಇದೂ ಸರಿಯೆ - ಎಂದುಕೊಂಡ ತುಂಗಮ್ಮ ವಿನಮ್ರತೆಯ ಅಭಿನಯ<br>
ಮಾಡುತ್ತಾ ಪ್ರಭಾಳ ಎದುರುನಿಂತಳು :<br>
{{gap}}“ ಏನು ಬೇಕಮ್ಮ ?”<br>
{{gap}}"ನಿನ್ನ ಹೆಸರೇನೇ ?”<br>
{{gap}}"ತುಂಗ ಅಂತಾರೆ ”<br>
{{gap}}"ನನ್ನ ಸ್ವಲ್ಪ ಬಚ್ಚಲುಮನೆಗೆ ಕರಕೊಂಡು ಹೋಗ್ತೀಯಾ ?”<br>
{{gap}}"ರಾತ್ರೆ ನೋಡ್ಲಿಲ್ವೆ ?”<br>
{{gap}}ನೊಡಿದ್ದೆ. ಹಾದಿ ಮರೆತ್ಹೋಯ್ತು. ಒಬ್ಳಿಗೇ ಹೋಗಕ್ಕಾಗಲ್ಲ.<br>
ಮುಖ ತೊಳೀಬೇಕು."<br>
{{gap}}"ಆಗ್ಲಿ ನಡೀರಿ.”<br><noinclude></noinclude>
0s36mwcgxs3gtxafzxoet2dazen9t45
320781
320672
2026-05-19T10:16:23Z
Pragathi. BH
7585
320781
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಅಭಯ|left=೨೫೪}}
ಮನೆಯೋರು, 'ಚಿನ್ನಾ ನೆಗಡಿ ಆದೀತು, ಜ್ವರ ಬಂದೀತು' ಅಂತ ನನ್ನ
ಹೊರಕ್ಕೆ ಬಿಡ್ತಿರ್ಲಿಲ್ಲ.”<br>
{{gap}}"ಆಮೇಲೆ, ನಿನ್ನ ಅವರು ಬಿಟ್ಬಿಟ್ಟಾಗ ?”<br>
{{gap}}"ಆಗ ಆಟ ಆಡೋ ಬಯಕೇನೇ ಹೊರಟೋಗಿತ್ತು"<br>
{{gap}}ಪ್ರಕೃತಿಯ ಹೊಸವೇಷದಲ್ಲೇ ತನ್ಮಯಳಾಗಿದ್ದ. ಜಲಜೆಯ ಮನಸ್ಸು
ಅಂತರ್ಮುಖಿಯಾಗಿ ಗತಕಾಲವನ್ನು ಕುರಿತು ಚಿಂತಿಸುತಿತ್ತು ...ಬಾಲ್ಯದ
ನೆನಪುಗಳು ...ಆದರೆ ಆ ಸ್ಮರಣೆಯೆಂದೂ ಮಧುರವಾಗಿರಲಿಲ್ಲ.<br>
{{gap}}ಅದನ್ನು ಚೆನ್ನಾಗಿ ತಿಳಿದಿದ್ದ ತುಂಗಮ್ಮ ಅಂದಳು :<br>
{{gap}}"ಬಾ ಹೋಗೋಣ. ಪ್ರಭಾನ ಎಬ್ಬಿಸೋಣ ”<br>
{{gap}}“ ಅಯ್ಯೋ - ಇರಲಿ ಬಿಡೇ ಬೇಕಾದಾಗ ಏಳ್ತಾಳೆ"<br>
{{gap}}"ಇಲ್ಲ ಜಲಜ ಈಗ ಜಂಭವೆಲ್ಲ ಇಳಿದ್ಬಿಟ್ಟಿದೆ ಬಾ."
ಗೆಳತಿಯರಿಬ್ಬರೂ ಪ್ರಭಾಳ ಕೊಠಡಿಯತ್ತ ನಡೆದರು.<br>
{{gap}}ಪ್ರಭಾ ತಾನು ಬಂದ ಮರುದಿನ ಬೆಳಿಗ್ಗೆ ಎದ್ದವಳು, ಹೊಸಪರಿಸ್ಥಿತಿಗೆ
ಹೊಂದಿಕೊಳ್ಳಲಾರದೆ ಬಲು ಕಷ್ಟಪಟ್ಟಳು.<br>
{{gap}}ತುಂಗಮ್ಮ ಬಾಗಿಲಬಳಿ ಸುಳಿದಾಗ ಪ್ರಭಾ ಕರೆದಳು :<br>
{{gap}}“ ಏ ಹುಡುಗಿ ಇಲ್ಲಿಗೆ ಬಾ ?<br>
{{gap}}ಇದೂ ಸರಿಯೆ - ಎಂದುಕೊಂಡ ತುಂಗಮ್ಮ ವಿನಮ್ರತೆಯ ಅಭಿನಯ
ಮಾಡುತ್ತಾ ಪ್ರಭಾಳ ಎದುರುನಿಂತಳು :<br>
{{gap}}“ ಏನು ಬೇಕಮ್ಮ ?”<br>
{{gap}}"ನಿನ್ನ ಹೆಸರೇನೇ ?”<br>
{{gap}}"ತುಂಗ ಅಂತಾರೆ ”<br>
{{gap}}"ನನ್ನ ಸ್ವಲ್ಪ ಬಚ್ಚಲುಮನೆಗೆ ಕರಕೊಂಡು ಹೋಗ್ತೀಯಾ ?”<br>
{{gap}}"ರಾತ್ರೆ ನೋಡ್ಲಿಲ್ವೆ ?”<br>
{{gap}}ನೊಡಿದ್ದೆ. ಹಾದಿ ಮರೆತ್ಹೋಯ್ತು. ಒಬ್ಳಿಗೇ ಹೋಗಕ್ಕಾಗಲ್ಲ.
ಮುಖ ತೊಳೀಬೇಕು."<br>
{{gap}}"ಆಗ್ಲಿ ನಡೀರಿ.”<br><noinclude></noinclude>
rtf3pcwvvr781d55b1k6qum7bzc9jwh
ಪುಟ:ಮಿಂಚು.pdf/೨೧೬
104
20663
320782
248894
2026-05-19T10:17:54Z
Pragathi. BH
7585
/* Validated */
320782
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=210|right=ಮಿಂಚು}}
{{gap}}“ನಿಮ್ಮ ಕಾರ್ಯದರ್ಶಿಗೂ ಹೇಳಿ. ನಾಳೆ ಬೆಳಗ್ಗೆ ನನಗೆ ಫೋನ್ ಮಾಡಿದರೆ </br>
ಸಾಕು.” </br>
{{gap}}“ಹಣ ಎಷ್ಟು ಅನ್ನಲಿ ?” </br>
{{gap}}“ನೀವೇ ಹೇಳಿದಿರಲ್ಲ ?” </br>
{{gap}}“ಊಹೂಂ, ಎರಡು ಕೊಡ್ತಾರಂತೆ ಅನ್ತೀನಿ.” </br>
{{gap}}“ಕೋಟಿ ಅನ್ನೋದರ ಕಲ್ಪನೆ ನಿಮಗಿದೆಯ ದಂಡಪಾಣಿ ?” </br>
{{gap}}"ಇದರ ಸ್ಪಷ್ಟ ಕಲ್ಪನೆಯ ಆಧಾರದ ಮೇಲೆಯೇ ಸಮತಾಪಕ್ಷ ತನ್ನ ಸಿದ್ದಾಂತ </br>
ರೂಪಿಸಿದೆ." </br>
{{gap}}“ಯಾವುದಾದರೂ ನಿಗಮದ ಅಧ್ಯಕ್ಷತೆಗೆ ಒಪ್ತೀರಾ ? ಬೆಳಗ್ಗೆ ಉತ್ತರ </br>
ತಿಳಿಸ್ತೀರಾ ? ಫೋನ್ ಮಾಡಿ, ಮರೀದೆ. ವಾಪಸು ಪಕ್ಷದ ಕಚೇರಿ ಹತ್ತಿರ </br>
ಬಿಡೋಣವಾ ?” </br>
{{gap}}“ಬೇಡ, ನಡಕೊಂಡು ಹೋಗ್ತೀನಿ. ನೀವು ಮುಂದೆ ಹೋಗಿ ಬಲಕ್ಕೆ ತಿರುಗಿ, </br>
ಹೆದ್ದಾರಿ ಸಿಗ್ತದೆ.” </br>
{{***|3|10em}}
{{gap}}ಅಧ್ಯಕ್ಷತೆ ಖಾಲಿ ಇರುವ ನಿಗಮಗಳ ಪಟ್ಟಿಯ ಫೈಲು ಮುಖ್ಯಮಂತ್ರಿಯ </br>
ಮೇಜಿನ ಮೇಲೆಯೇ ಇತ್ತು. ಹೇಳಿದ ದಿನವೇ ಪಟ್ಟಿ ತಯಾರಿಸಿ ಕಳಿಸಿರಬೇಕು.... </br>
ಏನೇ ಆಗಲಿ, ಇದೊಳ್ಳೇ ಸಿಕ್ಕುಗಂಟಾಯಿತಲ್ಲ. ಪಾರಾಗಬೇಕು. ಮೊಸಳೆಗಳಿಂದ </br>
ಪಾರಾಗಿ ಆಚೆ ದಡ ಸೇರಬೇಕು....ನಿದ್ದೆ. ಎಲ್ಲಿಯ ನಿದ್ದೆ ? ಲೇಹ್ಯ ಸರಿ. ನಿದ್ದೆ </br>
ಮಾತ್ರೆಯನ್ನೂ ನುಂಗಬೇಕು.<noinclude></noinclude>
bn7lt1k97n8fyndmn10frhj64i8yk20
ಪುಟ:ಮಿಂಚು.pdf/೨೧೭
104
20664
320783
214820
2026-05-19T10:18:10Z
Pragathi. BH
7585
/* Validated */
320783
proofread-page
text/x-wiki
<noinclude><pagequality level="4" user="Pragathi. BH" /></noinclude>{{center|211}}
{{center|೨೨}}
{{gap}}ಇನ್ನೂ ಕಲಾಣನಗರ ಸೇರಬೇಕಾಗಿದ್ದ ಶಾಸಕರಿಗೆ ರೈಲುನಿಲ್ದಾಣದಲ್ಲಿ ಬಸ್</br> ನಿಲ್ದಾಣದಲ್ಲಿ ಪರಿಚಿತರಿಂದ ಸ್ವಾಗತ ದೊರೆಯಿತು. ಆದರೆ ಹೆಚ್ಚಿನವರು ಮುಖ್ಯ</br> ಮಂತ್ರಿಯ ನಿವಾಸಕ್ಕೆ ಕಾರು ಹತ್ತಿದರು. ಆದರೂ ವಿಶ್ವಂಭರನ ಪಟ್ಟಿಯ ಎಂಭತ್ತು </br>ಹೆಸರುಗಳಿಗೆ ಧಕ್ಕೆ ತಟ್ಟಲಿಲ್ಲ. ಕೆಲವರು ತಂತಿ ಮೂಲಕ ಸಹಿ ಕಳಿಸಿದ್ದರು, ಕೆಲವರು </br>ಫೋನ್ ಮೂಲಕ, ಮತ್ತೆ ಕೆಲವರದು ಎರಡೆರಡು ಸಹಿಗಳಿದ್ದುವು.</br>
{{gap}}ವಿದ್ಯಾಧರನ ಪಟ್ಟಿಯಲ್ಲೂ ಅದೇ ಅವಸ್ಥೆ. ಅಂತೂ ಪ್ರಚಾರದ ಭರಾಟೆ </br>ಯಲ್ಲಿ ೮೦ ಮತ್ತು ೭೫ ಎಂಬ ಸಂಖ್ಯೆಗಳು ಬಾವುಟ ಹಾರಿಸಿದ್ದುವು.</br>
{{gap}}ಇದು ಇಂದ್ರಜಾಲ ಎನಿಸಿತು ಸೌದಾಮಿನಿಗೆ.</br>
{{gap}}ಐ ಜಿ ಟಿ ಸಲಹೆ ಕೇಳಲು ಬಂದ, </br>
{{gap}}“ಇವತ್ತು ಮೆರವಣಿಗೆ, ಏನು ಮಾಡೋಣ ?"</br>
{{gap}}ನಾಲಗೆಯ ತುದಿಯವರೆಗೂ ಬ೦ತು ಸಲಹೆ : ಗುಂಡು ಹಾರಿಸಬೇಕು, ಗುರಿ</br> ಇಟ್ಟು:ಲಕ್ಷ್ಮೀಪತಿ ಮತ್ತು ವಿಶ್ವಂಭರ ಉರುಳಬೇಕು;ಅದು ಆಕಸ್ಮಿಕ ಮರಣ </br>ಎಂದು ಜಾಹೀರು ಮಾಡಬೇಕು:ಸಂಜೆ ಬಹಿರಂಗ ಶೋಕಸಭೆ : ಸತ್ತವರ ಗುಣ</br> ಗಾನ ಮಾಡಿ ತಾನು ಅಳಬೇಕು, ಅಳಬೇಕು.. (ಕರುಣಾಮಯಿ, ಮಾತಾಜಿ!) ನಾಲ</br> ಗೆಯ ತುದಿತನಕ ಬಂದರೂ ಸಲಹೆ ಧ್ವನಿ ಪಡೆಯಲಿಲ್ಲ.</br>
{{gap}}“ಪರಿಸ್ಥಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?”</br>
{{gap}}“ಮುಂಜಾಗರೂಕತಾ ಕ್ರಮವಾಗಿ ಐನೂರು ಜನರನ್ನು ಬಂಧಿಸಿದ್ದೇವೆ. </br>ಮಧಾಹ್ನ ಊಟ ಕೊಟ್ಟ ಬಿಟ್ಟುಬಿಡ್ತೇವೆ. ನಿನ್ನೆ ರಾತ್ರೆ ತಮ್ಮ ಅನುಮತಿ ಪಡೆಯ</br> ಬೇಕೂಂತ ಯತ್ನಿಸಿದೆ: ತಾವು ಸಿಗಲಿಲ್ಲ.”</br>
{{gap}}ಹೌದು.ಸ್ವಲ್ಪ busy ಯಾಗಿದ್ದೆ.ನೀವು ಕೈಕೊಂಡಿರೋ ಕ್ರಮಕ್ಕೆ ನನ್ನ</br> ಸಮ್ಮತಿ ಇದೆ. ಸೌದಾಮಿನಿಯದು ಪೋಲೀಸ್ ರಾಜ್ಯ ಅನ್ನೋ ದೂಷಣೆ ಬರ </br>ಬಾರದು. ಹಾಗೆ ವರ್ತಿಸಿ. ಮೆರವಣಿಗೆಯನ್ನು ನಿಷೇಧಿಸೋದು ಬೇಡ. ರಾಜಭವ</br>ನದ ತಿರುವಿನಲ್ಲಿ ಮೆರವಣಿಗೆ ನಿಲ್ಲಲಿ. ವಿಶ್ವಂಭರ ಮತ್ತು ಲಕ್ಷ್ಮೀಪತಿ ಇಬ್ಬರ</br> ನಿಯೋಗ ರಾಜ್ಯಪಾಲರನ್ನು ಭೇಟಿಯಾಗಲಿ. ಇಲ್ಲಿಂದ ನೇರವಾಗಿ ರಾಜ್ಯಪಾಲ</br>ರಲ್ಲಿಗೆ ಹೋಗಿ ಮನುಷ್ಯ ಏಳೋದು ತಡ, ಒಂದರ್ಧ ಗಂಟೆ ಕಾಯಬೇಕಾದೀತು</br>ಕಾರ್ಯಾಚರಣೆಯ ಯೋಜನೆ ತಿಳಿಸಿಬಿಡಿ."</br><noinclude></noinclude>
h5nljd1t4hlo7sloihrsvcpkhrwqpxg
ಪುಟ:ಮಿಂಚು.pdf/೨೧೮
104
20665
320784
214808
2026-05-19T10:21:09Z
Pragathi. BH
7585
/* Validated */
320784
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=212|right=ಮಿಂಚು}}
{{gap}}ಆ ಬೆಳಗ್ಗಿನ 'ಕಿಷ್ಕಿಂಧಾವಾಣಿ' ಮುಖಪುಟದಲ್ಲಿ ಅಂಗದ ವಿರಚಿತ ವ್ಯಂಗ್ಯಚಿತ್ರ ಒಂದಿತ್ತು.ದೊಡ್ಡ ಆಕಾರದ್ದು. ಮಧ್ಯದಲ್ಲಿ ಗಂಡುಡುಗೆಯ ಸೌದಾಮಿನಿ ಮುಖದ ಮಹಾವಾಧ. ಸುತ್ತಲೂ ವೃತ್ತ ರಚಿಸಿದ್ದರು, ಸಂಪುಟದ ಉಳಿದ ಆರು ಮಂತ್ರಿಗಳು ಸೀರೆಯುಟ್ಟುಕೊಂಡು. ಚಿತ್ರದ ಕೆಳಗೆ ಬರೆದಿತ್ತು:'ಕಿಷ್ಕಿಂಧೆ ಸಂಪುಟದ ಏಕಮಾತ್ರ ಗಂಡಸು..' ಪರಶುರಾಮ ಮಾತಾಜಿಗೆ ತೋರಿಸಬೇಕೊ ಬೇಡವೊ ಎಂಬ ಗೊಂದಲ ದಲ್ಲಿ ಮುಳುಗಿದ, ಸಂಪುಟದ ಏಕಮಾತ್ರ ಗಂಡಸು ಅಂದರೇನು ? ಈಗಿನ ಸ್ಥಿತಿಯಲ್ಲಿ ಇದು ಅಣಕವೊ? ಪ್ರಶಂಸೆಯೊ?... ಗಂಡಸ್ತನ ಎನ್ನುವುದು ಮೆಚ್ಚುಗೆಯ ಪದವಲ್ಲವೆ?</br>
{{gap}}ಪರಶುರಾಮ ಮತ್ತೂ ಯೋಚನಾ ಮಗ್ನನಾದಂತೆ, ಮುಖ್ಯಮಂತ್ರಿಯ</br> ಗಂಟಲು ಕೇಳಿಸಿತು.</br>
{{gap}}“ಪರಶು! ಇವತ್ತಿನ 'ಕಿಷ್ಟಿಂಧಾವಾಣಿ' ಎಲ್ಲಿ ?”</br>
{{gap}}“ತಂದೆ, ಮಾತಾಜಿ."</br>
{{gap}}ವ್ಯಂಗ್ಯ ಚಿತ್ರವನ್ನು ನೋಡಿ ಸೌದಾಮಿನಿಯ ಮುಖ ಅರಳಿತು. ಪರಶುರಾಮನ ಮುಖವೂ ಅಗಲವಾಯಿತು. ಪ್ರಶಂಸೆಯೇ. ರಾಷ್ಟ್ರಪಕ್ಷದೊಳಗಿನ ಜಗಳದ ವಿಷಯ ಆ ಸಂಚಿಕೆಯಲ್ಲೇನೂ ಇರಲಿಲ್ಲ. ಕಳೆದ ತಿಂಗಳಷ್ಟೇ 'ಕಿಷ್ಟಿಂಧಾವಾಣಿ'ಯ ಹೊಸ ಕಟ್ಟಡಕ್ಕಾಗಿ ವಿಶಾಲ ನಿವೇಶನ ಮಂಜೂರಾಗಿತ್ತು.</br>
{{gap}}ರಂಗಧಾಮನಿಂದ ಕರೆಬಂತು:</br>
{{gap}}“ಮಾತಾಜಿ, ಇವತ್ತಿನ 'ಕಿಪ್ಕಿಂಧಾವಾಣಿ'ಯ ವ್ಯಂಗ್ಯ ಚಿತ್ರ ಅವಮಾನದ ಪರಮಾವಧಿ.. ನಿಮ್ಮ ಸಂಪುಟದಲ್ಲಿ ನಾವಿರುವುದು ಸರಿಯಲ್ಲ."</br>
{{gap}}“ನಾವು ಅಂದರೆ ?”</br>
{{gap}}ಆರು ಜನ ಹೆಂಗಸರು,''</br>
{{gap}}“ರಂಗಧಾಮ್, ಬೆನ್ನಲ್ಲಿ ಇರಿಯೋ ಯೋಚನೇನೊ ?”</br>
{{gap}}“ಆರು ಜನರೂ ಇಲ್ಲಿಯೇ ಇದ್ದೇವೆ... ಮಾತಾಡಿ ಬಾಲಾಜಿ..”</br>
{{gap}}ಒಬೊಬ್ಬರಾಗಿ ಅವರೆಲ್ಲ ಒಂದೇ ಮಾತು ಅಂದರು :</br>
{{gap}}“ನನ್ನ ರಾಜಿನಾಮೆ ಸ್ವೀಕರಿಸಿ!” </br>
{{gap}}“ರಂಗಧಾಮ್, ಅವರಿಗೆಲ್ಲ ಹೇಳಪ್ಪ, ಆ ವ್ಯಂಗ್ಯಚಿತ್ರ ನೋಡಿ ನಿಮಗೆಷ್ಟು ಬೇಸರವಾಗಿದೆಯೊ ನನಗೂ ಅಷ್ಟೇ ಆಗಿದೆ, ಆ ಪತ್ರಿಕಾ ಮಾಲಿಕ ಕ್ಷಮೆಯಾಚಿಸೋ ಹಾಗೆ ಮಾಡೋಣ. ಸಹೋದ್ಯೋಗಿಗಳಿಗೆಲ್ಲ ತಿಳಿಸಪ್ಪ, ನಿಮಗೆ ಬೇಡವಾದರೆ ನಾನು ಹೋಗ್ತೀನಿ. ಆ ವಿಷಯ ಬೇರೆ. ಆದರೆ ಒಂದು ವ್ಯಂಗ್ಯ ಚಿತ್ರದಿಂದಾಗಿ ಕಿಷ್ಕಿಂಧಾ ಮಂತ್ರಿಮಂಡಲ ರಾಜಿನಾಮೆ ಕೊಟ್ಟಿತೂಂತ ರಾಷ್ಟ ನಗೋದಿಲ್ಲವೆ? ದಿಲ್ಲಿ ಏನು ಹೇಳಿತು ? ಜನತೆ ಏನಂದೀತು ?'</br>
{{gap}}ತುಸು ಕಾಲದ ನೀರವತೆಯ ಬಳಿಕ ರಂಗಧಾಮನ ಸ್ವರ ಬಂತು.</br><noinclude></noinclude>
ao2i757d5liebltcwx3vo1u7kqjc8st
ಪುಟ:ಮಿಂಚು.pdf/೨೧೯
104
20666
320785
248890
2026-05-19T10:21:20Z
Pragathi. BH
7585
/* Validated */
320785
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಿಂಚು|right=213}}
{{gap}}“ನಮಗೆ ಬಹುಮತ ಇದೇಂತ ನಾವು ಸಾಬೀತು ಮಾಡಲೇಬೇಕು. ರಾಷ್ಟ್ರ </br>
ಸಭೆಯ ಶಾಸಕಾಂಗ ಪಕ್ಷದ ತುರ್ತು ಸಭೆ ಕರೀರಿ.” </br>
{{gap}}“ಕರೆಯೋಣ. ಆ ವಿಶ್ವಂಭರ-ಲಕ್ಷ್ಮೀಪತಿ ಪ್ರಕೃತಿಗಳು ಇವತ್ತು ದಿಲ್ಲಿಗೆ </br>
ಹೋಗ್ತಾರೆ, ನಾಳೆಯೇ ವಾಪಸಾದಾರು. 'ಮನೆ ಮುರುಕರಾಗ್ಬೇಡಿ' ಅಂತ ಪ್ರಧಾನಿ </br>
ಅವರಿಗೆ ಛೀಮಾರಿ ಹಾಕಿದರೆ ತೆಪ್ಪಗಾಗ್ತಾರೆ.” </br>
{{gap}}“ಆದರೂ ತುರ್ತುಸಭೆಗೆ ನೋಟೀಸು ಕೊಟ್ಬಿಡಿ, ವಿಶ್ವಂಭರ__ಲಕ್ಷ್ಮೀಪತಿ </br>
ಬೇಸ್ತು ಬಿದ್ದರೆ ನಾವು ವಿಜಯೋತ್ಸವ ಆಚರಿಸೋಣ.” </br>
{{gap}}“ಅಗಲಿ ರಂಗಧಾಮ್, ನಿನ್ನ ಆಶೀರ್ವಾದ ಬಲದಿಂದ ನಮಗೇ ಜಯ </br>
ವಾಗುತ್ತೆ.” </br>
{{gap}}“ಅಷ್ಟರವರೆಗೆ ಪ್ರತಿಪಕ್ಷದವರ ಜತೆ ಸಮ್ಮಿಶ್ರ ಸರ್ಕಾರದ ಮಾತು ಆಡ್ಬೇಡಿ !” </br>
{{gap}}ಇದೆಲ್ಲ ವಿಶ್ವಂಭರನ ಕಾರಖಾನೆಯಲ್ಲಿ ತಯಾರಾದ ಸುಳ್ಳಿನ ಪಟಾಕಿ, ನೀವು </br>
ನಂಬಬಾರದು.” </br>
{{gap}}“ಹೋಗಲಿ ಬಿಡಿ, ಸೆರಗಿನಲ್ಲಿ ಕೆಂಡ ಕಟ್ಕೊಳ್ಳೋಕಾಗುತ್ತ ? ಸತ್ಯ ಹೊರಗೆ </br>
ಬಂದೇ ಬರುತ್ತೆ." </br>
{{gap}}...ಸಮತಾಪಕ್ಷದ ಕಾರ್ಯದರ್ಶಿ ಮಲ್ಲೇಶ್ನಿಂದ ಫೋನ್ ಬಂತು, </br>
{{gap}}“ಚೀಫ್ ಮಿನಿಸ್ಟರಾ? ನಿನ್ನೆ ರಾತ್ರಿ ದಂಡಪಾಣೀನ ಕಂಡು ವ್ಯವಹಾರ ಕುದುರಿ </br>
ಸೋಕೆ ನೋಡಿದಿರಂತೆ. ಇನ್ನೂ ರಾಜಕೀಯ ತಿಳೀದೆ ನಿಮಗೆ ? ನಮ್ಮ ಪಕ್ಷದಲ್ಲಿ </br>
ಕಾರ್ಯದರ್ಶಿ ಮುಖ್ಯ.” </br>
{{gap}}“ನಿಮ್ಮ ಕಚೇರಿಗೆ ಬಂದದ್ದು, ದಂಡಪಾಣಿ ಸಿಕ್ಕಿದರು. ನಿಮಗೆ ವರದಿ </br>
ಕೊಟ್ಟೇ ಕೊಡ್ತಾರೆ ಅಂತ ಅವರಿಗೆ ವಿಷಯ ತಿಳಿಸ್ದೆ. ಇಬ್ಬರೂ ಬನ್ನಿ, ಮಾತಾ </br>
ಡೋಣ.” </br>
{{gap}}“ಅದಕ್ಕೆ ಕೇಂದ್ರ ಸಮಿತಿಯ ಅನುಮತಿ ಬೇಕು.” </br>
{{gap}}“ನಮಗೆ ಬಹುಮತ ಇಲ್ಲಾಂತ ನಾನು ಈ ಮಾತುಕತೆ ನಡೆಸ್ತಿಲ್ಲ, ಎಲ್ಲ</br>
ಪಕ್ಷಗಳೂ ಇರುವ ರಾಷ್ಟ್ರೀಯ ಸಂಯುಕ್ತರಂಗ ನನ್ನ ಕನಸು ಮತ್ತು ಸಿದ್ಧಾಂತ. </br>
ಇವತ್ತು ಕಿಷ್ಕಿಂಧೆಯಲ್ಲಿ ಆದರೆ, ನಾಳೆ ರಾಷ್ಟ್ರವಾಪ್ತಿಯಲ್ಲಿ ಆಗ್ತದೆ... ಅಂದ ಹಾಗೆ </br>
ಮೆರವಣಿಗೆಗೆ ನಿಮ್ಮವರೂ ಸೇರಾರ ?” </br>
{{gap}}"ಇಲ್ಲ. ಬೇಡ ಅಂತ ತೀರ್ಮಾನಿಸಿದ್ದೇವೆ.” </br>
{{gap}}“ನಿಮ್ಮದು ಸಮರ್ಪಿತ ಬದುಕು. ಸಾರಾಸಾರಾ ವಿಚಾರ ಮಾಡಿಯೇ ನಾನು </br>
ಹೇಳಿದ್ದರ ಬಗ್ಗೆ ನಿರ್ಧಾರ ಕೈಗೊಳ್ತೀರಿ ಅಂತ ನಂಬಿದ್ದೇನೆ.” </br>
{{gap}}“ಮುಂದೆ ನಾನೇ ತಮಗೆ ಫೋನ್ ಮಾಡೇನೆ.” </br>
{{gap}}....ರಿಸೀವರ್ ಇಳ್ಕೊಡನೆ ಮತ್ತೆ ಫೋನ್ ಜೀವ ತಳೆಯಿತು, </br>
{{gap}} “ಎತ್ತು ಪರಶುರಾಮ್, ನಾಯಕ್ ಇರಬೇಕು,” ಎಂದಳು ಸೌದಾಮಿನಿ,<noinclude></noinclude>
pgxwd1qwo1ug0e990dkjjns4aswwzmq
320786
320785
2026-05-19T10:23:06Z
Pragathi. BH
7585
320786
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಿಂಚು|right=213}}
{{gap}}“ನಮಗೆ ಬಹುಮತ ಇದೇಂತ ನಾವು ಸಾಬೀತು ಮಾಡಲೇಬೇಕು. ರಾಷ್ಟ್ರ
ಸಭೆಯ ಶಾಸಕಾಂಗ ಪಕ್ಷದ ತುರ್ತು ಸಭೆ ಕರೀರಿ.” </br>
{{gap}}“ಕರೆಯೋಣ. ಆ ವಿಶ್ವಂಭರ-ಲಕ್ಷ್ಮೀಪತಿ ಪ್ರಕೃತಿಗಳು ಇವತ್ತು ದಿಲ್ಲಿಗೆ
ಹೋಗ್ತಾರೆ, ನಾಳೆಯೇ ವಾಪಸಾದಾರು. 'ಮನೆ ಮುರುಕರಾಗ್ಬೇಡಿ' ಅಂತ ಪ್ರಧಾನಿ
ಅವರಿಗೆ ಛೀಮಾರಿ ಹಾಕಿದರೆ ತೆಪ್ಪಗಾಗ್ತಾರೆ.” </br>
{{gap}}“ಆದರೂ ತುರ್ತುಸಭೆಗೆ ನೋಟೀಸು ಕೊಟ್ಬಿಡಿ, ವಿಶ್ವಂಭರ__ಲಕ್ಷ್ಮೀಪತಿ
ಬೇಸ್ತು ಬಿದ್ದರೆ ನಾವು ವಿಜಯೋತ್ಸವ ಆಚರಿಸೋಣ.” </br>
{{gap}}“ಅಗಲಿ ರಂಗಧಾಮ್, ನಿನ್ನ ಆಶೀರ್ವಾದ ಬಲದಿಂದ ನಮಗೇ ಜಯ
ವಾಗುತ್ತೆ.” </br>
{{gap}}“ಅಷ್ಟರವರೆಗೆ ಪ್ರತಿಪಕ್ಷದವರ ಜತೆ ಸಮ್ಮಿಶ್ರ ಸರ್ಕಾರದ ಮಾತು ಆಡ್ಬೇಡಿ !” </br>
{{gap}}ಇದೆಲ್ಲ ವಿಶ್ವಂಭರನ ಕಾರಖಾನೆಯಲ್ಲಿ ತಯಾರಾದ ಸುಳ್ಳಿನ ಪಟಾಕಿ, ನೀವು
ನಂಬಬಾರದು.” </br>
{{gap}}“ಹೋಗಲಿ ಬಿಡಿ, ಸೆರಗಿನಲ್ಲಿ ಕೆಂಡ ಕಟ್ಕೊಳ್ಳೋಕಾಗುತ್ತ ? ಸತ್ಯ ಹೊರಗೆ
ಬಂದೇ ಬರುತ್ತೆ." </br>
{{gap}}...ಸಮತಾಪಕ್ಷದ ಕಾರ್ಯದರ್ಶಿ ಮಲ್ಲೇಶ್ನಿಂದ ಫೋನ್ ಬಂತು, </br>
{{gap}}“ಚೀಫ್ ಮಿನಿಸ್ಟರಾ? ನಿನ್ನೆ ರಾತ್ರಿ ದಂಡಪಾಣೀನ ಕಂಡು ವ್ಯವಹಾರ ಕುದುರಿ
ಸೋಕೆ ನೋಡಿದಿರಂತೆ. ಇನ್ನೂ ರಾಜಕೀಯ ತಿಳೀದೆ ನಿಮಗೆ ? ನಮ್ಮ ಪಕ್ಷದಲ್ಲಿ
ಕಾರ್ಯದರ್ಶಿ ಮುಖ್ಯ.” </br>
{{gap}}“ನಿಮ್ಮ ಕಚೇರಿಗೆ ಬಂದದ್ದು, ದಂಡಪಾಣಿ ಸಿಕ್ಕಿದರು. ನಿಮಗೆ ವರದಿ
ಕೊಟ್ಟೇ ಕೊಡ್ತಾರೆ ಅಂತ ಅವರಿಗೆ ವಿಷಯ ತಿಳಿಸ್ದೆ. ಇಬ್ಬರೂ ಬನ್ನಿ, ಮಾತಾ
ಡೋಣ.” </br>
{{gap}}“ಅದಕ್ಕೆ ಕೇಂದ್ರ ಸಮಿತಿಯ ಅನುಮತಿ ಬೇಕು.” </br>
{{gap}}“ನಮಗೆ ಬಹುಮತ ಇಲ್ಲಾಂತ ನಾನು ಈ ಮಾತುಕತೆ ನಡೆಸ್ತಿಲ್ಲ, ಎಲ್ಲ
ಪಕ್ಷಗಳೂ ಇರುವ ರಾಷ್ಟ್ರೀಯ ಸಂಯುಕ್ತರಂಗ ನನ್ನ ಕನಸು ಮತ್ತು ಸಿದ್ಧಾಂತ.
ಇವತ್ತು ಕಿಷ್ಕಿಂಧೆಯಲ್ಲಿ ಆದರೆ, ನಾಳೆ ರಾಷ್ಟ್ರವಾಪ್ತಿಯಲ್ಲಿ ಆಗ್ತದೆ... ಅಂದ ಹಾಗೆ
ಮೆರವಣಿಗೆಗೆ ನಿಮ್ಮವರೂ ಸೇರಾರ ?” </br>
{{gap}}"ಇಲ್ಲ. ಬೇಡ ಅಂತ ತೀರ್ಮಾನಿಸಿದ್ದೇವೆ.” </br>
{{gap}}“ನಿಮ್ಮದು ಸಮರ್ಪಿತ ಬದುಕು. ಸಾರಾಸಾರಾ ವಿಚಾರ ಮಾಡಿಯೇ ನಾನು
ಹೇಳಿದ್ದರ ಬಗ್ಗೆ ನಿರ್ಧಾರ ಕೈಗೊಳ್ತೀರಿ ಅಂತ ನಂಬಿದ್ದೇನೆ.” </br>
{{gap}}“ಮುಂದೆ ನಾನೇ ತಮಗೆ ಫೋನ್ ಮಾಡೇನೆ.” </br>
{{gap}}....ರಿಸೀವರ್ ಇಳ್ಕೊಡನೆ ಮತ್ತೆ ಫೋನ್ ಜೀವ ತಳೆಯಿತು, </br>
{{gap}} “ಎತ್ತು ಪರಶುರಾಮ್, ನಾಯಕ್ ಇರಬೇಕು,” ಎಂದಳು ಸೌದಾಮಿನಿ,<noinclude></noinclude>
2zvcbpowxats1dhim4emgb7kemr502r
ಪುಟ:ಮಿಂಚು.pdf/೨೨೦
104
20667
320787
206814
2026-05-19T10:23:17Z
Pragathi. BH
7585
/* Validated */
320787
proofread-page
text/x-wiki
<noinclude><pagequality level="4" user="Pragathi. BH" /></noinclude>214 ಮಿಂಚು
ಹೌದು. ಪ್ರತಿ ಪಕ್ಷದ ನಾಯಕ. ಫೋನಿನ ಬಳಿ ಸಾರಿದಳು.
“ಮಾತಾಜಿಗೆ ಪ್ರಣಾಮ, ಯೋಗಾಸನ ಆಯ್ತು ?"
"ಏನು ತೀರ್ಮಾನಿಸಿದಿರಿ ?"
“ಅವಸರದಲ್ಲಿದೀರೀಂತ ಕಾಣುತ್ತೆ, ಸಹಜ. ಪಾಪ ! ತೀರ್ಮಾನ ನಿನ್ನೇದೆ.
ನೀನು ಪಟ್ಟದಿಂದ ಇಳೀಬೇಕು. ಹೆಚ್ಚೆಂದರೆ ನಿನಗೊಂದು ಮಂತ್ರಿಸ್ಥಾನ ಕೊಟ್ಟೇನು,
ಸಮಾಜ ಕಲ್ಯಾಣ ಖಾತೆ. ಆದೀತಾ ?"
ಸೌದಾಮಿನಿ ರಿಸೀವರನ್ನು ಕುಕ್ಕಿದಳು. ಅವಳ ಮನಸ್ಸು ಕಲ್ಲಾಯಿತು. ಶಾಂತಿ
ಮಾತುಕತೆ ಯಾರೊಂದಿಗೂ ಇಲ್ಲ. ಇನ್ನು ಸಮರ, ಸಮರವೊಂದೇ !
ಮುಖ್ಯ ಕಾರ್ಯದರ್ಶಿಯಿಂದ ಫೋನ್ ಬಂತು :
"ರಾಜ್ಯಪಾಲರು ಇವತ್ತು ಸಂಜೆ ದಿಲ್ಲಿಗೊಂದು ವರದಿ ಕಳಿಸ್ತಾರಂತೆ."
"ಅವನಿಗಿನ್ನೇನು ಕೆಲಸ ? ದೂತ ಬೇಕಾದರೆ ವಿಶ್ವಂಭರ ಇದ್ದಾನೆ. ಅವನ
ಕೈಲಿ ಕೊಟ್ಟರಾಯಿತು;"
"ಪರಿಸ್ಥಿತಿ ಬಿಗಡಾಯಿಸಿಲ್ಲ ಅಂತ ನನ್ನ ಅನಿಸಿಕೆ."
"ನನಗೂ ಹಾಗೇ ತೋರುತ್ತೆ.ಒಂದು ಕೆಲಸವಾಗಬೇಕಲ್ಲ ಚೌಗುಲೆ ಸಾಹಿಬ್....
ಕಿಷ್ಕಿಂಧಾವಾಣಿ ವ್ಯಂಗ್ಯ ಚಿತ್ರ__"
"ಸೊಗಸಾಗಿದೆ."
"ಅದರೆ ಸಂಪುಟದ ನನ್ನ ಆರು ಜನ ಮಂತ್ರಿಗಳಿಗೆ ಹಾಗೆ ಅನಿಸಿಲ್ಲ. ಇದು
ಅವಮಾನ ಅಂತ ಕೂಗಾಡಿದ್ರು. ಆ ಮಾಲಿಕನಿಗೆ ಸ್ವಲ್ಪ ತಿಳಿಯ ಹೇಳಿ. 'ವ್ಯಂಗ್ಯ
ಚಿತ್ರದಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇವೆ' ಬೇಡ_
'ಕ್ಷಮೆ ಕೋರುತ್ತೇವೆ' ಅಂತ ನಾಳೆಯ ಸಂಚಿಕೇಲಿ ಅಚ್ಚು ಹಾಕಲಿ. ಇದು ಬಹಳ
ಅಗತ್ಯ. ಹಾಗಲ್ಲ. 'ನಿನ್ನೆಯ ವ್ಯಂಗ್ಯ ಚಿತ್ರ ಕೆಲಮಂತ್ರಿಗಳಿಗೆ ನೋವುಂಟು ಮಾಡಿದೆ
ಎಂದು ತಿಳಿದು ಬಂದಿದೆ. ವ್ಯಂಗ್ಯ ಚಿತ್ರದಲ್ಲಿ ತಮಾಷೆಗೇ ಮಹತ್ವ: ಅಷ್ಟರಲ್ಲೂ
ಮನಸ್ಸಿಗೆ ನೋವಾಗಿದ್ದರೆ ನಿಶ್ಯರ್ತ ಕ್ಷಮೆ ಕೋರುತ್ತೇವೆ' ಎಂದು ಹಾಕಿಸಿ, ನುಣುಚಿ
ಕೊಂಡು ಪಾರಾಗೋದಕ್ಕೆ ಬಿಡಬೇಡಿ. ಮಂಜೂರಾಗಿರುವ ನಿವೇಶನವನ್ನು ಬೇಗನೆ
ಬಿಡುಗಡೆ ಮಾಡ್ತೇವೆ ಅನ್ನಿ,"
"ಅವರನ್ನು ಖಂಡಿತ ಒಪ್ಪಿಸ್ತೇನೆ."
ಮಾತಾಜಿ ಕಿಟಿಕಿಯ ಮೂಲಕ ಆಕಾಶ ನೋಡುತ್ತ ಯೋಚಿಸಿದಳು :
ಮಾನವ ಶಕ್ತಿಗಿಂತ ಮಿಗಿಲಾದದ್ದು ದೈವೀ ಶಕ್ತಿ, ಅದು ತನ್ನ ಪಾಲಿಗೆ ಹೇರಳ
ವಾಗಿದೆ. ಹೀಗಿರುತ್ತ ಮಾನವಶಕ್ತಿಯ ಕೈ ಮೇಲಾದೀತೆ ? ಇಷ್ಟರಲ್ಲೂ ಹುಲು
ಮಾನವರನ್ನು ಜಯಿಸಬಲ್ಲ ಶಕ್ತಿ ಇಲ್ಲವೆ ? ಇದೆ. ಯಾವುದು ? ಧನಶಕ್ತಿ.
ಭಾನುವಾರ ರಾಷ್ಟ್ರಪಕ್ಷದ ಶಾಸಕಾಂಗದ ಸಭೆ, ತಾನು ಅದರಲ್ಲಿ ಜಯಶೀಲೆ
ಯಾಗಲೇಬೇಕು. ಲಕ್ಷ್ಮೀಪತಿ_ವಿಶ್ವಂಭರರನ್ನು ಬಿಟ್ಟು, ಮಂತ್ರಿಗಳನ್ನೂ ಬಿಟ್ಟು,<noinclude></noinclude>
97ess06ybruxmpaijhkqyh612poimeb
320789
320787
2026-05-19T10:28:05Z
Pragathi. BH
7585
320789
proofread-page
text/x-wiki
<noinclude><pagequality level="4" user="Pragathi. BH" /></noinclude>214 ಮಿಂಚು
{{gap}}ಹೌದು. ಪ್ರತಿ ಪಕ್ಷದ ನಾಯಕ. ಫೋನಿನ ಬಳಿ ಸಾರಿದಳು<br />
{{gap}}“ಮಾತಾಜಿಗೆ ಪ್ರಣಾಮ, ಯೋಗಾಸನ ಆಯ್ತು ?"<br />
{{gap}}"ಏನು ತೀರ್ಮಾನಿಸಿದಿರಿ ?"<br />
{{gap}} “ಅವಸರದಲ್ಲಿದೀರೀಂತ ಕಾಣುತ್ತೆ, ಸಹಜ. ಪಾಪ ! ತೀರ್ಮಾನ ನಿನ್ನೇದೆ.
ನೀನು ಪಟ್ಟದಿಂದ ಇಳೀಬೇಕು. ಹೆಚ್ಚೆಂದರೆ ನಿನಗೊಂದು ಮಂತ್ರಿಸ್ಥಾನ ಕೊಟ್ಟೇನು,
ಸಮಾಜ ಕಲ್ಯಾಣ ಖಾತೆ. ಆದೀತಾ ?"{{gap}}
{{gap}}ಸೌದಾಮಿನಿ ರಿಸೀವರನ್ನು ಕುಕ್ಕಿದಳು. ಅವಳ ಮನಸ್ಸು ಕಲ್ಲಾಯಿತು. ಶಾಂತಿ
ಮಾತುಕತೆ ಯಾರೊಂದಿಗೂ ಇಲ್ಲ. ಇನ್ನು ಸಮರ, ಸಮರವೊಂದೇ !<br />
{{gap}}ಮುಖ್ಯ ಕಾರ್ಯದರ್ಶಿಯಿಂದ ಫೋನ್ ಬಂತು :<br />
{{gap}}"ರಾಜ್ಯಪಾಲರು ಇವತ್ತು ಸಂಜೆ ದಿಲ್ಲಿಗೊಂದು ವರದಿ ಕಳಿಸ್ತಾರಂತೆ."
{{gap}}"ಅವನಿಗಿನ್ನೇನು ಕೆಲಸ ? ದೂತ ಬೇಕಾದರೆ ವಿಶ್ವಂಭರ ಇದ್ದಾನೆ. ಅವನ
ಕೈಲಿ ಕೊಟ್ಟರಾಯಿತು;"<br />
{{gap}}"ಪರಿಸ್ಥಿತಿ ಬಿಗಡಾಯಿಸಿಲ್ಲ ಅಂತ ನನ್ನ ಅನಿಸಿಕೆ."<br />
{{gap}}"ನನಗೂ ಹಾಗೇ ತೋರುತ್ತೆ.ಒಂದು ಕೆಲಸವಾಗಬೇಕಲ್ಲ ಚೌಗುಲೆ ಸಾಹಿಬ್....
ಕಿಷ್ಕಿಂಧಾವಾಣಿ ವ್ಯಂಗ್ಯ ಚಿತ್ರ__"<br />
{{gap}}"ಸೊಗಸಾಗಿದೆ."<br />
{{gap}}"ಅದರೆ ಸಂಪುಟದ ನನ್ನ ಆರು ಜನ ಮಂತ್ರಿಗಳಿಗೆ ಹಾಗೆ ಅನಿಸಿಲ್ಲ. ಇದು
ಅವಮಾನ ಅಂತ ಕೂಗಾಡಿದ್ರು. ಆ ಮಾಲಿಕನಿಗೆ ಸ್ವಲ್ಪ ತಿಳಿಯ ಹೇಳಿ. 'ವ್ಯಂಗ್ಯ
ಚಿತ್ರದಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇವೆ' ಬೇಡ_
'ಕ್ಷಮೆ ಕೋರುತ್ತೇವೆ' ಅಂತ ನಾಳೆಯ ಸಂಚಿಕೇಲಿ ಅಚ್ಚು ಹಾಕಲಿ. ಇದು ಬಹಳ
ಅಗತ್ಯ. ಹಾಗಲ್ಲ. 'ನಿನ್ನೆಯ ವ್ಯಂಗ್ಯ ಚಿತ್ರ ಕೆಲಮಂತ್ರಿಗಳಿಗೆ ನೋವುಂಟು ಮಾಡಿದೆ
ಎಂದು ತಿಳಿದು ಬಂದಿದೆ. ವ್ಯಂಗ್ಯ ಚಿತ್ರದಲ್ಲಿ ತಮಾಷೆಗೇ ಮಹತ್ವ: ಅಷ್ಟರಲ್ಲೂ
ಮನಸ್ಸಿಗೆ ನೋವಾಗಿದ್ದರೆ ನಿಶ್ಯರ್ತ ಕ್ಷಮೆ ಕೋರುತ್ತೇವೆ' ಎಂದು ಹಾಕಿಸಿ, ನುಣುಚಿ
ಕೊಂಡು ಪಾರಾಗೋದಕ್ಕೆ ಬಿಡಬೇಡಿ. ಮಂಜೂರಾಗಿರುವ ನಿವೇಶನವನ್ನು ಬೇಗನೆ
ಬಿಡುಗಡೆ ಮಾಡ್ತೇವೆ ಅನ್ನಿ,"<br />
{{gap}}"ಅವರನ್ನು ಖಂಡಿತ ಒಪ್ಪಿಸ್ತೇನೆ."
{{gap}}ಮಾತಾಜಿ ಕಿಟಿಕಿಯ ಮೂಲಕ ಆಕಾಶ ನೋಡುತ್ತ ಯೋಚಿಸಿದಳು :<br />
{{gap}}ಮಾನವ ಶಕ್ತಿಗಿಂತ ಮಿಗಿಲಾದದ್ದು ದೈವೀ ಶಕ್ತಿ, ಅದು ತನ್ನ ಪಾಲಿಗೆ ಹೇರಳ
ವಾಗಿದೆ. ಹೀಗಿರುತ್ತ ಮಾನವಶಕ್ತಿಯ ಕೈ ಮೇಲಾದೀತೆ ? ಇಷ್ಟರಲ್ಲೂ ಹುಲು
ಮಾನವರನ್ನು ಜಯಿಸಬಲ್ಲ ಶಕ್ತಿ ಇಲ್ಲವೆ ? ಇದೆ. ಯಾವುದು ? ಧನಶಕ್ತಿ.<br />
{{gap}}ಭಾನುವಾರ ರಾಷ್ಟ್ರಪಕ್ಷದ ಶಾಸಕಾಂಗದ ಸಭೆ, ತಾನು ಅದರಲ್ಲಿ ಜಯಶೀಲೆ
ಯಾಗಲೇಬೇಕು. ಲಕ್ಷ್ಮೀಪತಿ_ವಿಶ್ವಂಭರರನ್ನು ಬಿಟ್ಟು, ಮಂತ್ರಿಗಳನ್ನೂ ಬಿಟ್ಟು,<noinclude></noinclude>
rffj00j0mizghrl8p9li9r5k1dbhxa2
ಪುಟ:ಮಿಂಚು.pdf/೨೨೧
104
20668
320790
206815
2026-05-19T10:28:23Z
Pragathi. BH
7585
/* Validated */
320790
proofread-page
text/x-wiki
<noinclude><pagequality level="4" user="Pragathi. BH" /></noinclude> ಮಿಂಚು 215
ತನ್ನ ಪಕ್ಷದ ಉಳಿದೆಲ್ಲ ಶಾಸಕರಿಗೆ, 'ಪ್ರಯಾಣ ವೆಚ್ಚ' ಎಂದು ಚೀಟಿ ಬರೆದು,
ಅದಕ್ಕೆ ಎರಡೆರಡು ಸಾವಿರ ಲಗ್ತೀಕರಿಸಿ ಲಕೋಟೆಗಳನ್ನು ನಸುಕಿನಲ್ಲೆ ತಲಪಿಸ
ಬೇಕು. ಚೀಟಿಯಲ್ಲಿ ತನ್ನ ಸಹಿ ? ಲಕೋಟಿ ವಿಶ್ವಂಭರನ ಶಿಬಿರದಿಂದ ಬಂದಿದೆ
ಎಂದು ಯಾರಾದರೂ ಭಾವಿಸಿದರೆ ? ಚೀಟಿಯಲ್ಲಿ ತನ್ನ ಸಹಿ ಇರುವುದೇ ಸರಿ.
ಪಕ್ಷದ ನಾಯಿಕೆಯಾಗಿ ತಾನು ಕೊಡುತ್ತಿರುವ ಪ್ರಯಾಣ ವೆಚ್ಚ. ಇದು ಲಂಚವಲ್ಲ.
ಎಂದಿನಂತೆ ಸೌದಾಮಿನಿ ಕಾರ್ಯಸೌಧಕ್ಕೆ ಹೋದಳು. ಹತ್ತಿರದಲ್ಲೆ ಇತ್ತು
ರಾಜಭವನ ರಸ್ತೆ. ಅತ್ತ ಬರುವ ಅವಕಾಶ ಯಾವುದಾದರೂ ಮೆರವಣಿಗೆಗೆ ಎಂದಾ
ದರೂ ಸಿಕ್ಕಿದರೆ,ಕಾರ್ಯಸೌಧದಿಂದ ಅದರ ವೀಕ್ಷಣೆ ಸಾಧ್ಯವಿತ್ತು. ಮೂಖ್ಯಮಂತ್ರಿಯ
ಚೇಂಬರ್ ಇರುವ ಮೊದಲ ಮಹಡಿಯಿಂದಂತೂ ಮೆರವಣಿಗೆಯ ಎಲ್ಲ ವಿವರಗಳೂ
-ಕೋಡು, ನಡು, ಬಾಲ ಎಲ್ಲ_ಕಾಣಿಸುತ್ತಿದ್ದುವು, ದುರ್ಬೀನಿನ ನೆರವು ಇಲ್ಲದೆಯೇ.
ಐ.ಜಿ.ಪಿ. ವಿಶ್ವಂಭರನೊಡನೆಯೂ ಚರ್ಚಿಸಿದ್ದ.
"ನಿಮ್ಮಿಂದ ಸ್ವಲ್ಪ ಸಹಾಯವಾಗಬೇಕಲ್ಲ ಐ.ಜಿ.ಪಿಯವರೆ...."
"ಪೋಲೀಸ್ ಬ್ಯಾಂಡ್ ಒಂದನ್ನು ಬಿಟ್ಟು ಬೇರೆ ಏನು ಬೇಕಾದರೂ ಕೇಳಿ,"
"ಹಹ್ಹ ! ನಮ್ಮದು ಸೆಂಟ್ ಪರ್ಸೆಂಟ್ ಅಹಿಂಸಾತ್ಮಕ. ನಿಮ್ಮವರು
ಮುಂದೆಯೂ ಹಿಂದೆಯೂ ಲೆಫ಼್ಟ್ ರೈಟ್ ನಡೆದರೆ ಸಾಕು,"
"ಬಾವುಟ ಯಾವುದು ?"
"ರಾಷ್ಟ್ರಧ್ವಜ."
"ಸ್ಲೋಗನ್ಸ್ ?"
"ರಾಷ್ಟ್ರಪಕ್ಷ ಜಿಂದಾಬಾದ್."
"ಆಮೇಲೆ .."
"ಸೌದಾಮಿನಿ ಸರಕಾರ ಮುರ್ದಾಬಾದ್."
ಐ.ಜಿ.ಪಿ. ಎರಡು ನಿಮಿಷ ಮೌನವಾಗಿದ್ದು, "ಅದೊಂದನ್ನು ಬಿಟ್ಟರಾಗದೆ?"
ಎಂದು ಕೇಳಿದ.
"ಅದು ಹೇಗೆ ಸಾಧ್ಯ ? ಜೀವಾಂಶವೇ ಆ ಸ್ಲೋಗನ್."
"ಏನೋಪ್ಪ...."
"ಏನೂ ಚಿಂತಿಸ್ಬೇಡಿ. ನಿಮ್ಮ ವರದಿ ಸರಕಾರಕ್ಕೆ ತಲಪೋ ಹೊತ್ತಿಗೆ....
ಇನ್ನೆರಡು ಮೂರು ದಿವಸ..ಹೊಸ ಗೃಹಮಂತ್ರಿ ಅಧಿಕಾರ ವಹಿಸ್ಕೊಂಡಿರ್ತಾರೆ."
"ನಿಮ್ಮಿಚ್ಛೆ. ಕಾರ್ಯಸೌಧದ ಮುಂದೆ ಶಾಂತವಾಗಿ ಹೋಗ್ಬೇಕು' ಸಿ.ಎಂ.ನ
ಚೇಂಬರ್ ಕಡೆ ನೋಡಿ ಕೂಗಾಡ್ಬಾರದು."
"ನೀವು ಕಿಷ್ಕಿಂಧೆಯ ಗಾಂಧೀ_ಐ ಜಿ ಪಿ."
"ಗೃಹಮಂತ್ರಿಯಾದ್ಮೇಲೆ ಏನು ಹೇಳ್ತೀರೋ ಪರಮಾತ್ಮನಿಗೇ ಗೊತ್ತು !"
.....ಘೋಷ ದೂರದಿಂದ ಕೇಳಿಸಿತು, ಹತ್ತಿರ ಬಂತು. ಸೌದಾಮಿನಿ<noinclude></noinclude>
4bgcxwt7aqy3vcvtdp6kahkbn7w5xhq
ಪುಟ:ಮಿಂಚು.pdf/೨೨೨
104
20669
320791
206816
2026-05-19T10:28:46Z
Pragathi. BH
7585
/* Validated */
320791
proofread-page
text/x-wiki
<noinclude><pagequality level="4" user="Pragathi. BH" /></noinclude> 216 ಮಿಂಚು
ಕುಳಿತಲ್ಲಿಂದ ಮಿಸುಕಲಿಲ್ಲ. ಫ಼ೈಲುಗಳನ್ನು ಒಂದೊಂದಾಗಿ ನೋಡುತ್ತ ಟಿಪ್ಪಣಿ
ಬರೆಯುತ್ತಲೋ ಸಹಿಹಾಕುತ್ತಲೋ ಕುಳಿತಳು. ಮುರ್ದಾಬಾದ್ ಹತ್ತಿರ ಬಂದಾಗ
ತನ್ನಷ್ಟಕ್ಕೆ ನಕ್ಕಳು.
ಮೆರವಣಿಗೆಯಲ್ಲಿದ್ದ ವಿಶ್ವಂಭರನೊಮ್ಮೆ ಆ ಕಡೆ ನೋಡಿದ. ತೆರೆದ ಕಿಟಿಕಿ
ಗಳಿಗೆ ಪರದೆ ಅಡ್ದವಾಗಿರಲಿಲ್ಲ. 'ವಿದ್ದರೆ ಎಲ್ಲಿ ಪೀಠ ಮಾಯವಾದೀತೊ ಅಂತ
ಭದ್ರವಾಗಿ ಕುಳಿತಿರಬೇಕು,' ಎಂದುಕೊಂಡ.
ರಾಜಭವನದ ತಿರುವಿನಲ್ಲಿ ಮೆರವಣಿಗೆ ನಿಂತಿತು, ಹೊರಟಾಗ ನೂರು, ದಾರಿ
ಯಲ್ಲಿ ಸೇರಿಕೊಂಡವರು ನೂರಿನ್ನೂರು. ಕಾಫ಼ಿ ತಿಂಡಿಗಾಗಿ ಬಂದ ಕಿರಿಯರು ನೂರು
ಮಂದಿ. ಬಿಸಿಲು ಚುರುಕ್ ಎಂದರೂ ಮೆರವಣಿಗೆಯ ಜನ ಜಿಂದಾಬಾದ್ ಮುರ್ದಾ
ಬಾದ್ ನಿಲ್ಲಿಸಲಿಲ್ಲ. ರಾಜಭವನದ ಮಹಾದ್ವಾರದ ಬಳಿ ಐಜಿಪಿಂರದ ನೆರವು
ದೊರೆಯಿತು. ಲಕ್ಷ್ಮೀಪತಿ_ವಿಶ್ವಂಭರ, ಅಥವಾ ವಿಶ್ವಂಭರ_ಲಕ್ಷ್ಮೀಪತಿ, ಒಳ
ನಡೆದರು.ಇಬ್ಬರ ಆ ನಾಯಕತ್ವವನ್ನು ರಾಜ್ಯಪಾಲರು ಗಾಂಭೀರ್ಯದಿಂದ ಸ್ವಾಗತಿಸಿ
ದರು, ತಮ್ಮ ಚೇಂಬರಿನಲ್ಲಿ. ತಮಗೆ ಹತ್ತಿರದಲ್ಲಿದ್ದ ವಿಶ್ವಂಭರನಿಗೆ "ವರದಿ ಕಳಿಸಿ
ದ್ದೇನೆ" ಎಂದರು. ಅದು ಹಳೆಯದು. ಇಂದಿನ ವರದಿ (ಜಿಂದಾಬಾದ್ ಮುರ್ದಾ
ಬಾದ್) ಸಂಜೆ.
"ನಿಮ್ಮ ಹಿಂಬಾಲಕರು ಬಿಸಿಲಲ್ಲಿ ಕಾಯ್ತಿದಾರೆ, ಹೋಗಿ ಬನ್ನಿ, ಒಳ್ಳೆಯ
ದಾಗಲಿ,"
__ಇಷ್ಟು ಹೇಳಿ ರಾಜ್ಯಪಾಲರು ವಿಶ್ವಂಭರನೆದಡೆಗೆ ನೋಡಿ ನಸುನಕ್ಕರು,
ನಿಯೋಗ ಹಿಂತಿರುಗುತ್ತಿದ್ದಂತೆ ಘೋಷ ತೀವ್ರವಾಯಿತು. ಈಗ ಜಿಂದಾ
ಬಾದ್ ಒಂದೇ. ಅದೂ ಬೇರೆ ರೀತಿಯಲ್ಲಿ.
__"ವಿಶ್ವಂಭರ ಜಿಂದಾಬಾದ್ !"
__"ಲಕ್ಷ್ಮೀಪತಯ್ಯ ಜಿಂದಾಬಾದ್ !"
ಮೆರವಣಿಗೆ ಚೆದರಿತು. ನಾಲ್ಕಾರು ದಾರಿಗಳಲ್ಲಿ , ಕಿರಿಯರು ಹತ್ತಿರದ
ದೊಡ್ಡ ಹೋಟೆಲನ್ನು ಹೊಕ್ಕರು, ಶಾಲೆ ತಪ್ಪಿಸಿಕೊಂಡು ಬಂದಿದ್ದ ಪುಟಾಣಿಗಳು
ಕೆಲವರು ಹೊಸ ಘೋಷಣೆಗಳನ್ನು ಕಂಠಪಾಠ ಮಾಡಿದರು,
__"ವಿಶ್ವಂಭರ ಜಿಂದಾಬಾದ್ !"
__"ಲಕ್ಷೀಪತಯ್ಯ ಜಿಂದಾಬಾದ್ !"
__ಅದಲು ಬದಲು ಆಟ ಇಷ್ಟವಿದ್ದ ಕೆಲ ಹುಡುಗರು "ವಿಶ್ವಂಭರ ಮುರ್ದಾ
ಬಾದ್" "ಸೌದಾಮಿನಿ ಜಿಂದಾಬಾದ್" ಎಂದರು. ರಸ್ತೆಯ ಅಂಚಿನಲ್ಲಿ ಡ್ಯೂಟಿ
ಮೇಲಿದ್ದ ಪೋಲೀಸನೊಬ್ಬ, "ಹಲ್ಕಾ ಮುಂಡೇವು, ಹೇಳೋರು ಕೇಳೋರು
ಯಾರೂ ಇಲ್ವ ನಿಮಗೆ ? ಸ್ಕೂಲಿಗೋ ಮನೆಗೋ ಹೊರಟೋಗ್ರೊ ಇಲ್ಲಿಂದ"
ಎಂದು, ಲಾಠಿ ತಿರುಗಿಸುತ್ತ ಬಯ್ದ. ಅಲ್ಲೊಂದು ಗಿಡ ಬೆಳೆದು ನಿಂತಿತ್ತು. ಸೊಕ್ಕಿ<noinclude></noinclude>
r34zm0w2707ntu2odne8fe6jcjwjzhh
320800
320791
2026-05-19T10:43:04Z
Pragathi. BH
7585
320800
proofread-page
text/x-wiki
<noinclude><pagequality level="4" user="Pragathi. BH" />{{rh|center=|left=216|right=ಮಿಂಚು}}</noinclude>
{{gap}}ಕುಳಿತಲ್ಲಿಂದ ಮಿಸುಕಲಿಲ್ಲ. ಫ಼ೈಲುಗಳನ್ನು ಒಂದೊಂದಾಗಿ ನೋಡುತ್ತ ಟಿಪ್ಪಣಿ
ಬರೆಯುತ್ತಲೋ ಸಹಿಹಾಕುತ್ತಲೋ ಕುಳಿತಳು. ಮುರ್ದಾಬಾದ್ ಹತ್ತಿರ ಬಂದಾಗ
ತನ್ನಷ್ಟಕ್ಕೆ ನಕ್ಕಳು.<br />
{{gap}}ಮೆರವಣಿಗೆಯಲ್ಲಿದ್ದ ವಿಶ್ವಂಭರನೊಮ್ಮೆ ಆ ಕಡೆ ನೋಡಿದ. ತೆರೆದ ಕಿಟಿಕಿ
ಗಳಿಗೆ ಪರದೆ ಅಡ್ದವಾಗಿರಲಿಲ್ಲ. 'ವಿದ್ದರೆ ಎಲ್ಲಿ ಪೀಠ ಮಾಯವಾದೀತೊ ಅಂತ
ಭದ್ರವಾಗಿ ಕುಳಿತಿರಬೇಕು,' ಎಂದುಕೊಂಡ.<br />
{{gap}}ರಾಜಭವನದ ತಿರುವಿನಲ್ಲಿ ಮೆರವಣಿಗೆ ನಿಂತಿತು, ಹೊರಟಾಗ ನೂರು, ದಾರಿ
ಯಲ್ಲಿ ಸೇರಿಕೊಂಡವರು ನೂರಿನ್ನೂರು. ಕಾಫ಼ಿ ತಿಂಡಿಗಾಗಿ ಬಂದ ಕಿರಿಯರು ನೂರು
ಮಂದಿ. ಬಿಸಿಲು ಚುರುಕ್ ಎಂದರೂ ಮೆರವಣಿಗೆಯ ಜನ ಜಿಂದಾಬಾದ್ ಮುರ್ದಾ
ಬಾದ್ ನಿಲ್ಲಿಸಲಿಲ್ಲ. ರಾಜಭವನದ ಮಹಾದ್ವಾರದ ಬಳಿ ಐಜಿಪಿಂರದ ನೆರವು
ದೊರೆಯಿತು. ಲಕ್ಷ್ಮೀಪತಿ_ವಿಶ್ವಂಭರ, ಅಥವಾ ವಿಶ್ವಂಭರ_ಲಕ್ಷ್ಮೀಪತಿ, ಒಳ
ನಡೆದರು.ಇಬ್ಬರ ಆ ನಾಯಕತ್ವವನ್ನು ರಾಜ್ಯಪಾಲರು ಗಾಂಭೀರ್ಯದಿಂದ ಸ್ವಾಗತಿಸಿ
ದರು, ತಮ್ಮ ಚೇಂಬರಿನಲ್ಲಿ. ತಮಗೆ ಹತ್ತಿರದಲ್ಲಿದ್ದ ವಿಶ್ವಂಭರನಿಗೆ "ವರದಿ ಕಳಿಸಿ
ದ್ದೇನೆ" ಎಂದರು. ಅದು ಹಳೆಯದು. ಇಂದಿನ ವರದಿ (ಜಿಂದಾಬಾದ್ ಮುರ್ದಾ
ಬಾದ್) ಸಂಜೆ.<br />
{{gap}}"ನಿಮ್ಮ ಹಿಂಬಾಲಕರು ಬಿಸಿಲಲ್ಲಿ ಕಾಯ್ತಿದಾರೆ, ಹೋಗಿ ಬನ್ನಿ, ಒಳ್ಳೆಯ
ದಾಗಲಿ,"
{{gap}} __ಇಷ್ಟು ಹೇಳಿ ರಾಜ್ಯಪಾಲರು ವಿಶ್ವಂಭರನೆದಡೆಗೆ ನೋಡಿ ನಸುನಕ್ಕರು,
{{gap}}ನಿಯೋಗ ಹಿಂತಿರುಗುತ್ತಿದ್ದಂತೆ ಘೋಷ ತೀವ್ರವಾಯಿತು. ಈಗ ಜಿಂದಾ
ಬಾದ್ ಒಂದೇ. ಅದೂ ಬೇರೆ ರೀತಿಯಲ್ಲಿ.<br />
{{Right|}}__"ವಿಶ್ವಂಭರ ಜಿಂದಾಬಾದ್ !"<br />
{{gap}} __"ಲಕ್ಷ್ಮೀಪತಯ್ಯ ಜಿಂದಾಬಾದ್ !"<br />
{{gap}}ಮೆರವಣಿಗೆ ಚೆದರಿತು. ನಾಲ್ಕಾರು ದಾರಿಗಳಲ್ಲಿ , ಕಿರಿಯರು ಹತ್ತಿರದ
ದೊಡ್ಡ ಹೋಟೆಲನ್ನು ಹೊಕ್ಕರು, ಶಾಲೆ ತಪ್ಪಿಸಿಕೊಂಡು ಬಂದಿದ್ದ ಪುಟಾಣಿಗಳು
ಕೆಲವರು ಹೊಸ ಘೋಷಣೆಗಳನ್ನು ಕಂಠಪಾಠ ಮಾಡಿದರು,
{{gap}}__"ವಿಶ್ವಂಭರ ಜಿಂದಾಬಾದ್ !"<br />
{{gap}}__"ಲಕ್ಷೀಪತಯ್ಯ ಜಿಂದಾಬಾದ್ !"<br />
{{gap}}__ಅದಲು ಬದಲು ಆಟ ಇಷ್ಟವಿದ್ದ ಕೆಲ ಹುಡುಗರು "ವಿಶ್ವಂಭರ ಮುರ್ದಾ
ಬಾದ್" "ಸೌದಾಮಿನಿ ಜಿಂದಾಬಾದ್" ಎಂದರು. ರಸ್ತೆಯ ಅಂಚಿನಲ್ಲಿ ಡ್ಯೂಟಿ
ಮೇಲಿದ್ದ ಪೋಲೀಸನೊಬ್ಬ, "ಹಲ್ಕಾ ಮುಂಡೇವು, ಹೇಳೋರು ಕೇಳೋರು
ಯಾರೂ ಇಲ್ವ ನಿಮಗೆ ? ಸ್ಕೂಲಿಗೋ ಮನೆಗೋ ಹೊರಟೋಗ್ರೊ ಇಲ್ಲಿಂದ"
ಎಂದು, ಲಾಠಿ ತಿರುಗಿಸುತ್ತ ಬಯ್ದ. ಅಲ್ಲೊಂದು ಗಿಡ ಬೆಳೆದು ನಿಂತಿತ್ತು. ಸೊಕ್ಕಿ<noinclude></noinclude>
5qamw0fhok07lq9901kv6owll5c0tf1
320801
320800
2026-05-19T10:43:44Z
Pragathi. BH
7585
320801
proofread-page
text/x-wiki
<noinclude><pagequality level="4" user="Pragathi. BH" />{{rh|center=|left=216|right=ಮಿಂಚು}}</noinclude>
{{gap}}ಕುಳಿತಲ್ಲಿಂದ ಮಿಸುಕಲಿಲ್ಲ. ಫ಼ೈಲುಗಳನ್ನು ಒಂದೊಂದಾಗಿ ನೋಡುತ್ತ ಟಿಪ್ಪಣಿ
ಬರೆಯುತ್ತಲೋ ಸಹಿಹಾಕುತ್ತಲೋ ಕುಳಿತಳು. ಮುರ್ದಾಬಾದ್ ಹತ್ತಿರ ಬಂದಾಗ
ತನ್ನಷ್ಟಕ್ಕೆ ನಕ್ಕಳು.<br />
{{gap}}ಮೆರವಣಿಗೆಯಲ್ಲಿದ್ದ ವಿಶ್ವಂಭರನೊಮ್ಮೆ ಆ ಕಡೆ ನೋಡಿದ. ತೆರೆದ ಕಿಟಿಕಿ
ಗಳಿಗೆ ಪರದೆ ಅಡ್ದವಾಗಿರಲಿಲ್ಲ. 'ವಿದ್ದರೆ ಎಲ್ಲಿ ಪೀಠ ಮಾಯವಾದೀತೊ ಅಂತ
ಭದ್ರವಾಗಿ ಕುಳಿತಿರಬೇಕು,' ಎಂದುಕೊಂಡ.<br />
{{gap}}ರಾಜಭವನದ ತಿರುವಿನಲ್ಲಿ ಮೆರವಣಿಗೆ ನಿಂತಿತು, ಹೊರಟಾಗ ನೂರು, ದಾರಿ
ಯಲ್ಲಿ ಸೇರಿಕೊಂಡವರು ನೂರಿನ್ನೂರು. ಕಾಫ಼ಿ ತಿಂಡಿಗಾಗಿ ಬಂದ ಕಿರಿಯರು ನೂರು
ಮಂದಿ. ಬಿಸಿಲು ಚುರುಕ್ ಎಂದರೂ ಮೆರವಣಿಗೆಯ ಜನ ಜಿಂದಾಬಾದ್ ಮುರ್ದಾ
ಬಾದ್ ನಿಲ್ಲಿಸಲಿಲ್ಲ. ರಾಜಭವನದ ಮಹಾದ್ವಾರದ ಬಳಿ ಐಜಿಪಿಂರದ ನೆರವು
ದೊರೆಯಿತು. ಲಕ್ಷ್ಮೀಪತಿ_ವಿಶ್ವಂಭರ, ಅಥವಾ ವಿಶ್ವಂಭರ_ಲಕ್ಷ್ಮೀಪತಿ, ಒಳ
ನಡೆದರು.ಇಬ್ಬರ ಆ ನಾಯಕತ್ವವನ್ನು ರಾಜ್ಯಪಾಲರು ಗಾಂಭೀರ್ಯದಿಂದ ಸ್ವಾಗತಿಸಿ
ದರು, ತಮ್ಮ ಚೇಂಬರಿನಲ್ಲಿ. ತಮಗೆ ಹತ್ತಿರದಲ್ಲಿದ್ದ ವಿಶ್ವಂಭರನಿಗೆ "ವರದಿ ಕಳಿಸಿ
ದ್ದೇನೆ" ಎಂದರು. ಅದು ಹಳೆಯದು. ಇಂದಿನ ವರದಿ (ಜಿಂದಾಬಾದ್ ಮುರ್ದಾ
ಬಾದ್) ಸಂಜೆ.<br />
{{gap}}"ನಿಮ್ಮ ಹಿಂಬಾಲಕರು ಬಿಸಿಲಲ್ಲಿ ಕಾಯ್ತಿದಾರೆ, ಹೋಗಿ ಬನ್ನಿ, ಒಳ್ಳೆಯ
ದಾಗಲಿ,"
{{gap}} __ಇಷ್ಟು ಹೇಳಿ ರಾಜ್ಯಪಾಲರು ವಿಶ್ವಂಭರನೆದಡೆಗೆ ನೋಡಿ ನಸುನಕ್ಕರು,
{{gap}}ನಿಯೋಗ ಹಿಂತಿರುಗುತ್ತಿದ್ದಂತೆ ಘೋಷ ತೀವ್ರವಾಯಿತು. ಈಗ ಜಿಂದಾ
ಬಾದ್ ಒಂದೇ. ಅದೂ ಬೇರೆ ರೀತಿಯಲ್ಲಿ.<br />
{{Right|}}__"ವಿಶ್ವಂಭರ ಜಿಂದಾಬಾದ್ !"<br />
{{gap}} __"ಲಕ್ಷ್ಮೀಪತಯ್ಯ ಜಿಂದಾಬಾದ್ !"<br />
{{gap}}ಮೆರವಣಿಗೆ ಚೆದರಿತು. ನಾಲ್ಕಾರು ದಾರಿಗಳಲ್ಲಿ , ಕಿರಿಯರು ಹತ್ತಿರದ
ದೊಡ್ಡ ಹೋಟೆಲನ್ನು ಹೊಕ್ಕರು, ಶಾಲೆ ತಪ್ಪಿಸಿಕೊಂಡು ಬಂದಿದ್ದ ಪುಟಾಣಿಗಳು
ಕೆಲವರು ಹೊಸ ಘೋಷಣೆಗಳನ್ನು ಕಂಠಪಾಠ ಮಾಡಿದರು,
{{gap}}__"ವಿಶ್ವಂಭರ ಜಿಂದಾಬಾದ್ !"<br />
{{gap}}__"ಲಕ್ಷೀಪತಯ್ಯ ಜಿಂದಾಬಾದ್ !"<br />
{{gap}}__ಅದಲು ಬದಲು ಆಟ ಇಷ್ಟವಿದ್ದ ಕೆಲ ಹುಡುಗರು "ವಿಶ್ವಂಭರ ಮುರ್ದಾ
ಬಾದ್" "ಸೌದಾಮಿನಿ ಜಿಂದಾಬಾದ್" ಎಂದರು. ರಸ್ತೆಯ ಅಂಚಿನಲ್ಲಿ ಡ್ಯೂಟಿ
ಮೇಲಿದ್ದ ಪೋಲೀಸನೊಬ್ಬ, "ಹಲ್ಕಾ ಮುಂಡೇವು, ಹೇಳೋರು ಕೇಳೋರು
ಯಾರೂ ಇಲ್ವ ನಿಮಗೆ ? ಸ್ಕೂಲಿಗೋ ಮನೆಗೋ ಹೊರಟೋಗ್ರೊ ಇಲ್ಲಿಂದ"
ಎಂದು, ಲಾಠಿ ತಿರುಗಿಸುತ್ತ ಬಯ್ದ. ಅಲ್ಲೊಂದು ಗಿಡ ಬೆಳೆದು ನಿಂತಿತ್ತು. ಸೊಕ್ಕಿ<noinclude></noinclude>
i2fwiztdxfnyvr726a8zxapheiu7tyo
ಪುಟ:ಮಿಂಚು.pdf/೨೨೩
104
20670
320795
206817
2026-05-19T10:34:01Z
Pragathi. BH
7585
/* Validated */
320795
proofread-page
text/x-wiki
<noinclude><pagequality level="4" user="Pragathi. BH" /></noinclude>ಮಿಂಚು 217
ಬಿರಿಯುತ್ತಿದ್ದ ಸೊಪ್ಪಿಗೆ ಅವನೊಂದು ಏಟುಕೊಟ್ಟ, ಅತ್ತ ಕಡೆ ಎಲೆ ಆರಿಸುತ್ತ
ಲಿದ್ದ ಒಂದು ಆಡು 'ಮೆಹೆ ಮೆಹೆ' ಎನ್ನುತ್ತ ಓಡಿಹೋಯಿತು. ಮೆರವಣಿಗೆಯ
ಕಾರಣದಿಂದ ಡೊಂಕು ದಾರಿ ಹಿಡಿದಿದ್ದ ಸಿಟಿ ಬಸ್ಸುಗಳು ಮತ್ತೆ ಆ ಮಾರ್ಗದಲ್ಲೇ
ಓಡಾಡತೊಡಗಿದುವು,
....ಅವತ್ತಿನ ಅಂಚೆಯಲ್ಲಿ 'ಖಾಸಗಿ' ಎಂದು ಮೇಲೆ ಬರೆದಿದ್ದ ಒಂದು
ಲಕೋಟೆ ಬಂತು.ಪರಶುರಾಮನಿಂದ ಅದನ್ನು ಪಡೆದು ಸ್ವತಃ ಸೌದಾಮಿನಿಯೇ
ಒಡೆದಳು. 'ಭಾರತ್ ಸತ್ತಾ' ದೈನಿಕದ ಮತ್ತು 'ಪ್ರೆಸೆಂಟ್' ಸಾಪ್ತಾಹಿಕದ ಪುಟ
ಗಳು. ಮೃದುಲಾಬೆನ್ ಮತ್ತು ಅವಳ ತಂಡ ಕಿಷ್ಟಿಂಧೆಗೆ ನೀಡಿದ ಭೇಟಿಯನ್ನು
ಕುರಿತು ಹಿಂದಿಯಲ್ಲಾ ಇಂಗ್ಲಿಷಿನಲ್ಲೂ ಲೇಖನಗಳಿದ್ದುವು.ಸಚಿತ್ರ,ಸೌದಾಮಿನಿಯ
ದೊಡ್ಡದಾದ ಒಂಟಿ ಚಿತ್ರವೂ ಇತ್ತು ಎರಡೂ ಲೇಖನಗಳಲ್ಲಿ, ಕಾಗದದಲ್ಲಿ
ಮೃದುಲಾಬೆನ್ ಬರೆದಿದ್ದಳು :
ಪ್ರೀತಿಯ ಸೌದಾ,
ಮುಂಬಯಿ ತಲಪಿದೊಡನೆ ಕಿಷ್ಕಿಂಧೆಯ ಮುಖ್ಯಮಂತ್ರಿಗೆ ನಾನು
ಬರೆದ ಔಪಚಾರಿಕ ಪತ್ರ ಆಗಲೇ ಕೈಸೇರಿರಬಹುದು. (ಸೇರಿತು) ಇದನ್ನು
బರೆಯುತ್ತಿರುವುದು ನನ್ನ ಆದರಣೀಯ ಗೆಳತಿ ಸೌದಾಗೆ, ಇನ್ನೊಂದು
ಹೆಸರಿನಿಂದಲೇ ಸಂಬೋಧಿಸಬಹುದಾಗಿತ್ತು, ಆದರೆ ಈಗಿನ ಪರಿಸ್ಥಿತಿಯಲ್ಲಿ
ಅದು ಸರಿಯಲ್ಲ (ಸೌದಾ : ಸ್ವಗತ—'ಈಗಿನ ಪರಿಸ್ಥಿತಿಯಲ್ಲಿ ಅದೇ ಸರಿ!')
ಎಷ್ಟೆ೦ದರೂ ನೀವು ಮುಖ್ಯಮಂತ್ರಿ, ನಾನು ಸಮಾಜ ಸೇವಿಕೆ. ನಿಮ್ಮದು
ಐಂದ್ರಜಾಲಿಕ ಸಾಧನೆ.ನನ್ನಿಂದ ಅಂಥದು ಕನಸಿನಲ್ಲಲೊ ಸಾಧ್ಯವಿಲ್ಲ.
ಈಗ ಇಲ್ಲಿ ಜಡಿಮಳೆ, ಮುಂಬಯಿ ಮಳೆ ನಿಮಗೆ ನೆನಪಿದ್ದೀತು.
ಬಾಲ್ಕನಿಗೆ ಹೋಗೋಣ ಎಂದರೆ ಇರಿಚಲು ಕಾಟ. ಆದರೂ ಹುಟ್ಟೂರಿನ
ಮಳೆ ಇಷ್ಟವಾದ್ದೇ ಅಲ್ಲವೆ ?
ವಿನೋದನಿಗೆ ಕಿಷ್ಟಿಂಧಾ ಯಾತ್ರೆಗೆ ಆಮಂತ್ರಣ ಬೇಕಂತೆ, ಸರಕಾರದ
ಅತಿಥಿಯಾಗಿ ಇಡೀ ರಾಜ್ಯ ಸುತ್ತಿ ಕಿಷ್ಕಿಂಧೆಯ ಮೇಲೆ ಒಂದು ಪುಸ್ತಕ
ಬರೀತಾನಂತೆ. ಅವನ ಗೆಳೆಯನೊಬ್ಬ ವಿಶ್ವವಿಖ್ಯಾತ ಪೇಂಟರ್__
ಪೋರ್ಟ್ರೇಯ್ಟ್ ಪೇಂಟರ್__, ನೀವು ಪರಸೊತ್ತು ಮಾಡಿಕೊಂಡು ಅವನಿಗೆ
ಸಿಟಿಂಗ್ಸ್ ಕೊಡಬೇಕಂತೆ__ಇನ್ನೊಬ್ಬ ಶಿಲ್ಪಿ ಅವನೂ ಮಿತ್ರನೇ, ಎದೆ
ಮಟ್ಟದ ಶಿಲ್ಪಕೃತಿ ರಚಿಸಿದರೆ ಹೇಗೆ-ಅಂತ ವಿನೋದ ಕೇಳ್ತೀದ್ದಾನೆ. ಈ
ಎಲ್ಲ ಕಾರ್ಯಕ್ರಮದಿಂದ ನಿಮ್ಮ ಬೊಕ್ಕಸ ಖಂಡಿತ ದಿವಾಳಿಯಾಗುವುದಿಲ್ಲ
ವಂತೆ,
ಈ ಲೇಖನಗಳನ್ನು ಬಹಳ ಹಿಂದೆಯೇ ಕಳಿಸಬೇಕಾಗಿತ್ತು, ಕ್ಷಮಿಸಿ,<noinclude></noinclude>
qa4g6iym6v94s5fyj8m31p9u7e29ihi
ಪುಟ:Mrutyunjaya.pdf/೧೧೯
104
21603
320680
317813
2026-05-19T03:01:04Z
Hariprasad Shetty10
7490
320680
proofread-page
text/x-wiki
<noinclude><pagequality level="3" user="Shreelatha.Halemane" />{{rh|center=ಮೃತ್ಯುಂಜಯ|Left=೧೦೬}}</noinclude>
{{gap}}"ಒಸೈರಿಸ್ ದೇವರ ರಾಜ್ಯವಾದ ಪರಲೋಕದ ಹೆಬ್ಬಾಗಿಲ బಳಿ <br>
ಮೃತನು ಈಗ ನಿ೦ತು ಹೀಗೆ ಪ್ರಾರ್ಥಿಸುತ್ತಾನೆ: ಉಘೇ! ಮಹಾದೇವನೆ ಸತ್ಯದ ಪ್ರಭುವೆ, ನ್ಯಾಯದ ಪ್ರಭುವೆ, ಉಘೇ! ನನ್ನೊಡೆಯ ನಿನ್ನೆದುರು బంದು ನಿ೦ತಿದೇನೆ ನಾನು. నిನ್ನ ಸೌಂದರ್ಯಾತಿಶಯವನ್ನು ಕಾಣಲೆ೦ದು ನನ್ನನ್ನುಇಲ್ಲಿಗೆ ಕರೆತಂದಿದ್ದಾರೆ. ನಾನು ದಿಟವಾಡುತ್ತಿದ್ದೇನೆ. ಮನುಜರಲ್ಲಿ ನಾನು ಭೇದ ಭಾವ ಎಣಿಸಿಲ್ಲ. ಬಡವರ ಸುಲಿಗೆ ಮಾಡಿಲ್ಲ ನಾನು. ಸ್ವತ೦ತ್ರವಾದ ಯಾವನನ್ನೂ ಅವನ ಇಚ್ಛೆಗಿಂತ ಹೆಚ್ಚಾಗಿ ನಾನು ದುಡಿಸಿಲ್ಲ. ಕರ್ತವ್ಯ ಲೋಪ ಎಸಗಿಲ್ಲ ನಾನು; ದೇವರಿಗೆ ಅಪ್ರಿಯವಾದುದೇನನ್ನೂ ಮಾಡಿಲ್ಲ. ಯಾವ ಯಜಮಾನನೂ ತನ್ನ ದಾಸನೊಡನೆ ಕೆಟ್ಟದಾಗಿ ನಡೆದುಕೊಳ್ಳಲು ನಾನು ಕಾರಣನಾಗಿಲ್ಲ. ನಾನು ಯಾವುದೇ ಮನುಷ್ಯನನ್ನು ಉಪವಾಸ ಕೆಡವಿಲ್ಲ. ಯಾರೂ ಅಳುವಂತೆ ಮಾಡಿಲ್ಲ. ಯಾರನ್ನೂ ನಾನು ಕೊಲೆಗೈದಿಲ್ಲ, ನಾನೆ೦ದೂ ರಾಜದ್ರೋಹ ಎಸಗಿಲ್ಲ. ದೇವಮಂದಿರಕ್ಕೆ ಯಾವ ಸರಬರಾಜನ್ನೂ ನಾನು ಕಡಿಮೆ ಮಾಡಿಲ್ಲ. ದೇವರ ನೈವೇದ್ಯವನ್ನೆ೦ದೂಕೆಡಿಸಿಲ್ಲ. ದೇವಮಂದಿರದ ಪವಿತ್ರ ಸ್ಥಳದಲ್ಲಿ ವಿಷಯಾಸಕ್ತನಾಗಿ ವರ್ತಿಸಿಲ್ಲ. ದೇವರನ್ನು ಧಿಕ್ಕರಿಸಿ ನಡೆದಿಲ್ಲ. ತಕ್ಕಡಿಯಲ್ಲಿ ಮೋಸ ಮಾಡಿಲ್ಲ, ಪಕ್ಕದ ಹೊಲಕ್ಕೆ ನೀರು ತಡೆಹಿಡಿದಿಲ್ಲ.ಎದೆಹಾಲಿನ ಮಕ್ಕಳ ಬಾಯಿ೦ದ ಹಾಲನ್ನು ಕಸಿದಿಲ್ಲ, ದೇವರ ಹಕ್ಕಿಗಳನ್ನು ಬಲೆಯಲ್ಲಿ ಸೆರೆಹಿಡಿದಿಲ್ಲ...ನಾನು ಪರಿಶುದ್ಧ...ನಾನು ಪರಿಶುದ್ಧ.”
{{gap}}ಸುತ್ತಲೂ ಇದ್ದವರನ್ನು ನೋಡಿ ಅಪೆಟ್,"ಹೇಳಿ ನಾನು ಪರಿಶುದ್ಧ ಅ೦ತ ಮೂರು ಸಲ ಹೇಳಿ," ಎ೦ದ.
{{gap}}ಮೆನೆಪ್ ಟಾನ ಆದಿಯಾಗಿ,ಅಪೆಟ್ ನ ಮಾತು ಕೇಳಿಸಿದವರೆಲ್ಲ ಅ೦ದರು:
{{gap}}“ನಾನು ಪರಿಶುದ್ಧ...ನಾನು ಪರಿಶುದ್ಧ.ನಾನು ಪರಿಶುದ್ಧ.”
{{gap}}ಹೊರಗೆ ನಿ೦ತಿದ್ದವರ ಕಿವಿಗೂ ಅದು ಬಿತ್ತು, ಅವರೂ ಅದನ್ನು ಪುನ
ರುಚ್ಚರಿಸಿದರು....
{{gap}}ತಾನು ಸೃಷ್ಟಿಸಿದ ವಾತಾವರಣ ಕ೦ಡು ಅಪೆಟ್ ಉಲ್ಲಾಸಗೊ೦ಡ.<noinclude></noinclude>
1s56fz8qjg9a8zzz275a352w7s2ug3d
320681
320680
2026-05-19T03:01:31Z
Hariprasad Shetty10
7490
320681
proofread-page
text/x-wiki
<noinclude><pagequality level="3" user="Shreelatha.Halemane" />{{rh|left=|೧೦೬center=ಮೃತ್ಯುಂಜಯ|right=}}</noinclude>
{{gap}}"ಒಸೈರಿಸ್ ದೇವರ ರಾಜ್ಯವಾದ ಪರಲೋಕದ ಹೆಬ್ಬಾಗಿಲ బಳಿ <br>
ಮೃತನು ಈಗ ನಿ೦ತು ಹೀಗೆ ಪ್ರಾರ್ಥಿಸುತ್ತಾನೆ: ಉಘೇ! ಮಹಾದೇವನೆ ಸತ್ಯದ ಪ್ರಭುವೆ, ನ್ಯಾಯದ ಪ್ರಭುವೆ, ಉಘೇ! ನನ್ನೊಡೆಯ ನಿನ್ನೆದುರು బంದು ನಿ೦ತಿದೇನೆ ನಾನು. నిನ್ನ ಸೌಂದರ್ಯಾತಿಶಯವನ್ನು ಕಾಣಲೆ೦ದು ನನ್ನನ್ನುಇಲ್ಲಿಗೆ ಕರೆತಂದಿದ್ದಾರೆ. ನಾನು ದಿಟವಾಡುತ್ತಿದ್ದೇನೆ. ಮನುಜರಲ್ಲಿ ನಾನು ಭೇದ ಭಾವ ಎಣಿಸಿಲ್ಲ. ಬಡವರ ಸುಲಿಗೆ ಮಾಡಿಲ್ಲ ನಾನು. ಸ್ವತ೦ತ್ರವಾದ ಯಾವನನ್ನೂ ಅವನ ಇಚ್ಛೆಗಿಂತ ಹೆಚ್ಚಾಗಿ ನಾನು ದುಡಿಸಿಲ್ಲ. ಕರ್ತವ್ಯ ಲೋಪ ಎಸಗಿಲ್ಲ ನಾನು; ದೇವರಿಗೆ ಅಪ್ರಿಯವಾದುದೇನನ್ನೂ ಮಾಡಿಲ್ಲ. ಯಾವ ಯಜಮಾನನೂ ತನ್ನ ದಾಸನೊಡನೆ ಕೆಟ್ಟದಾಗಿ ನಡೆದುಕೊಳ್ಳಲು ನಾನು ಕಾರಣನಾಗಿಲ್ಲ. ನಾನು ಯಾವುದೇ ಮನುಷ್ಯನನ್ನು ಉಪವಾಸ ಕೆಡವಿಲ್ಲ. ಯಾರೂ ಅಳುವಂತೆ ಮಾಡಿಲ್ಲ. ಯಾರನ್ನೂ ನಾನು ಕೊಲೆಗೈದಿಲ್ಲ, ನಾನೆ೦ದೂ ರಾಜದ್ರೋಹ ಎಸಗಿಲ್ಲ. ದೇವಮಂದಿರಕ್ಕೆ ಯಾವ ಸರಬರಾಜನ್ನೂ ನಾನು ಕಡಿಮೆ ಮಾಡಿಲ್ಲ. ದೇವರ ನೈವೇದ್ಯವನ್ನೆ೦ದೂಕೆಡಿಸಿಲ್ಲ. ದೇವಮಂದಿರದ ಪವಿತ್ರ ಸ್ಥಳದಲ್ಲಿ ವಿಷಯಾಸಕ್ತನಾಗಿ ವರ್ತಿಸಿಲ್ಲ. ದೇವರನ್ನು ಧಿಕ್ಕರಿಸಿ ನಡೆದಿಲ್ಲ. ತಕ್ಕಡಿಯಲ್ಲಿ ಮೋಸ ಮಾಡಿಲ್ಲ, ಪಕ್ಕದ ಹೊಲಕ್ಕೆ ನೀರು ತಡೆಹಿಡಿದಿಲ್ಲ.ಎದೆಹಾಲಿನ ಮಕ್ಕಳ ಬಾಯಿ೦ದ ಹಾಲನ್ನು ಕಸಿದಿಲ್ಲ, ದೇವರ ಹಕ್ಕಿಗಳನ್ನು ಬಲೆಯಲ್ಲಿ ಸೆರೆಹಿಡಿದಿಲ್ಲ...ನಾನು ಪರಿಶುದ್ಧ...ನಾನು ಪರಿಶುದ್ಧ.”
{{gap}}ಸುತ್ತಲೂ ಇದ್ದವರನ್ನು ನೋಡಿ ಅಪೆಟ್,"ಹೇಳಿ ನಾನು ಪರಿಶುದ್ಧ ಅ೦ತ ಮೂರು ಸಲ ಹೇಳಿ," ಎ೦ದ.
{{gap}}ಮೆನೆಪ್ ಟಾನ ಆದಿಯಾಗಿ,ಅಪೆಟ್ ನ ಮಾತು ಕೇಳಿಸಿದವರೆಲ್ಲ ಅ೦ದರು:
{{gap}}“ನಾನು ಪರಿಶುದ್ಧ...ನಾನು ಪರಿಶುದ್ಧ.ನಾನು ಪರಿಶುದ್ಧ.”
{{gap}}ಹೊರಗೆ ನಿ೦ತಿದ್ದವರ ಕಿವಿಗೂ ಅದು ಬಿತ್ತು, ಅವರೂ ಅದನ್ನು ಪುನ
ರುಚ್ಚರಿಸಿದರು....
{{gap}}ತಾನು ಸೃಷ್ಟಿಸಿದ ವಾತಾವರಣ ಕ೦ಡು ಅಪೆಟ್ ಉಲ್ಲಾಸಗೊ೦ಡ.<noinclude></noinclude>
msxm30julk3za2wr4nhhb7x43askbxf
320682
320681
2026-05-19T03:02:08Z
Hariprasad Shetty10
7490
320682
proofread-page
text/x-wiki
<noinclude><pagequality level="3" user="Shreelatha.Halemane" />{{rh|left=೧೦೬|center=ಮೃತ್ಯುಂಜಯ|right=}}</noinclude>
{{gap}}"ಒಸೈರಿಸ್ ದೇವರ ರಾಜ್ಯವಾದ ಪರಲೋಕದ ಹೆಬ್ಬಾಗಿಲ బಳಿ <br>
ಮೃತನು ಈಗ ನಿ೦ತು ಹೀಗೆ ಪ್ರಾರ್ಥಿಸುತ್ತಾನೆ: ಉಘೇ! ಮಹಾದೇವನೆ ಸತ್ಯದ ಪ್ರಭುವೆ, ನ್ಯಾಯದ ಪ್ರಭುವೆ, ಉಘೇ! ನನ್ನೊಡೆಯ ನಿನ್ನೆದುರು బంದು ನಿ೦ತಿದೇನೆ ನಾನು. నిನ್ನ ಸೌಂದರ್ಯಾತಿಶಯವನ್ನು ಕಾಣಲೆ೦ದು ನನ್ನನ್ನುಇಲ್ಲಿಗೆ ಕರೆತಂದಿದ್ದಾರೆ. ನಾನು ದಿಟವಾಡುತ್ತಿದ್ದೇನೆ. ಮನುಜರಲ್ಲಿ ನಾನು ಭೇದ ಭಾವ ಎಣಿಸಿಲ್ಲ. ಬಡವರ ಸುಲಿಗೆ ಮಾಡಿಲ್ಲ ನಾನು. ಸ್ವತ೦ತ್ರವಾದ ಯಾವನನ್ನೂ ಅವನ ಇಚ್ಛೆಗಿಂತ ಹೆಚ್ಚಾಗಿ ನಾನು ದುಡಿಸಿಲ್ಲ. ಕರ್ತವ್ಯ ಲೋಪ ಎಸಗಿಲ್ಲ ನಾನು; ದೇವರಿಗೆ ಅಪ್ರಿಯವಾದುದೇನನ್ನೂ ಮಾಡಿಲ್ಲ. ಯಾವ ಯಜಮಾನನೂ ತನ್ನ ದಾಸನೊಡನೆ ಕೆಟ್ಟದಾಗಿ ನಡೆದುಕೊಳ್ಳಲು ನಾನು ಕಾರಣನಾಗಿಲ್ಲ. ನಾನು ಯಾವುದೇ ಮನುಷ್ಯನನ್ನು ಉಪವಾಸ ಕೆಡವಿಲ್ಲ. ಯಾರೂ ಅಳುವಂತೆ ಮಾಡಿಲ್ಲ. ಯಾರನ್ನೂ ನಾನು ಕೊಲೆಗೈದಿಲ್ಲ, ನಾನೆ೦ದೂ ರಾಜದ್ರೋಹ ಎಸಗಿಲ್ಲ. ದೇವಮಂದಿರಕ್ಕೆ ಯಾವ ಸರಬರಾಜನ್ನೂ ನಾನು ಕಡಿಮೆ ಮಾಡಿಲ್ಲ. ದೇವರ ನೈವೇದ್ಯವನ್ನೆ೦ದೂಕೆಡಿಸಿಲ್ಲ. ದೇವಮಂದಿರದ ಪವಿತ್ರ ಸ್ಥಳದಲ್ಲಿ ವಿಷಯಾಸಕ್ತನಾಗಿ ವರ್ತಿಸಿಲ್ಲ. ದೇವರನ್ನು ಧಿಕ್ಕರಿಸಿ ನಡೆದಿಲ್ಲ. ತಕ್ಕಡಿಯಲ್ಲಿ ಮೋಸ ಮಾಡಿಲ್ಲ, ಪಕ್ಕದ ಹೊಲಕ್ಕೆ ನೀರು ತಡೆಹಿಡಿದಿಲ್ಲ.ಎದೆಹಾಲಿನ ಮಕ್ಕಳ ಬಾಯಿ೦ದ ಹಾಲನ್ನು ಕಸಿದಿಲ್ಲ, ದೇವರ ಹಕ್ಕಿಗಳನ್ನು ಬಲೆಯಲ್ಲಿ ಸೆರೆಹಿಡಿದಿಲ್ಲ...ನಾನು ಪರಿಶುದ್ಧ...ನಾನು ಪರಿಶುದ್ಧ.”
{{gap}}ಸುತ್ತಲೂ ಇದ್ದವರನ್ನು ನೋಡಿ ಅಪೆಟ್,"ಹೇಳಿ ನಾನು ಪರಿಶುದ್ಧ ಅ೦ತ ಮೂರು ಸಲ ಹೇಳಿ," ಎ೦ದ.
{{gap}}ಮೆನೆಪ್ ಟಾನ ಆದಿಯಾಗಿ,ಅಪೆಟ್ ನ ಮಾತು ಕೇಳಿಸಿದವರೆಲ್ಲ ಅ೦ದರು:
{{gap}}“ನಾನು ಪರಿಶುದ್ಧ...ನಾನು ಪರಿಶುದ್ಧ.ನಾನು ಪರಿಶುದ್ಧ.”
{{gap}}ಹೊರಗೆ ನಿ೦ತಿದ್ದವರ ಕಿವಿಗೂ ಅದು ಬಿತ್ತು, ಅವರೂ ಅದನ್ನು ಪುನ
ರುಚ್ಚರಿಸಿದರು....
{{gap}}ತಾನು ಸೃಷ್ಟಿಸಿದ ವಾತಾವರಣ ಕ೦ಡು ಅಪೆಟ್ ಉಲ್ಲಾಸಗೊ೦ಡ.<noinclude></noinclude>
99v5uker223t3vllnyh1s0rw7n15661
320683
320682
2026-05-19T03:02:44Z
Hariprasad Shetty10
7490
320683
proofread-page
text/x-wiki
<noinclude><pagequality level="3" user="Shreelatha.Halemane" />{{rh|left=೧೦೬|center=ಮೃತ್ಯುಂಜಯ|right=}}</noinclude>{{gap}}"ಒಸೈರಿಸ್ ದೇವರ ರಾಜ್ಯವಾದ ಪರಲೋಕದ ಹೆಬ್ಬಾಗಿಲ బಳಿ <br>
ಮೃತನು ಈಗ ನಿ೦ತು ಹೀಗೆ ಪ್ರಾರ್ಥಿಸುತ್ತಾನೆ: ಉಘೇ! ಮಹಾದೇವನೆ ಸತ್ಯದ ಪ್ರಭುವೆ, ನ್ಯಾಯದ ಪ್ರಭುವೆ, ಉಘೇ! ನನ್ನೊಡೆಯ ನಿನ್ನೆದುರು బంದು ನಿ೦ತಿದೇನೆ ನಾನು. నిನ್ನ ಸೌಂದರ್ಯಾತಿಶಯವನ್ನು ಕಾಣಲೆ೦ದು ನನ್ನನ್ನುಇಲ್ಲಿಗೆ ಕರೆತಂದಿದ್ದಾರೆ. ನಾನು ದಿಟವಾಡುತ್ತಿದ್ದೇನೆ. ಮನುಜರಲ್ಲಿ ನಾನು ಭೇದ ಭಾವ ಎಣಿಸಿಲ್ಲ. ಬಡವರ ಸುಲಿಗೆ ಮಾಡಿಲ್ಲ ನಾನು. ಸ್ವತ೦ತ್ರವಾದ ಯಾವನನ್ನೂ ಅವನ ಇಚ್ಛೆಗಿಂತ ಹೆಚ್ಚಾಗಿ ನಾನು ದುಡಿಸಿಲ್ಲ. ಕರ್ತವ್ಯ ಲೋಪ ಎಸಗಿಲ್ಲ ನಾನು; ದೇವರಿಗೆ ಅಪ್ರಿಯವಾದುದೇನನ್ನೂ ಮಾಡಿಲ್ಲ. ಯಾವ ಯಜಮಾನನೂ ತನ್ನ ದಾಸನೊಡನೆ ಕೆಟ್ಟದಾಗಿ ನಡೆದುಕೊಳ್ಳಲು ನಾನು ಕಾರಣನಾಗಿಲ್ಲ. ನಾನು ಯಾವುದೇ ಮನುಷ್ಯನನ್ನು ಉಪವಾಸ ಕೆಡವಿಲ್ಲ. ಯಾರೂ ಅಳುವಂತೆ ಮಾಡಿಲ್ಲ. ಯಾರನ್ನೂ ನಾನು ಕೊಲೆಗೈದಿಲ್ಲ, ನಾನೆ೦ದೂ ರಾಜದ್ರೋಹ ಎಸಗಿಲ್ಲ. ದೇವಮಂದಿರಕ್ಕೆ ಯಾವ ಸರಬರಾಜನ್ನೂ ನಾನು ಕಡಿಮೆ ಮಾಡಿಲ್ಲ. ದೇವರ ನೈವೇದ್ಯವನ್ನೆ೦ದೂಕೆಡಿಸಿಲ್ಲ. ದೇವಮಂದಿರದ ಪವಿತ್ರ ಸ್ಥಳದಲ್ಲಿ ವಿಷಯಾಸಕ್ತನಾಗಿ ವರ್ತಿಸಿಲ್ಲ. ದೇವರನ್ನು ಧಿಕ್ಕರಿಸಿ ನಡೆದಿಲ್ಲ. ತಕ್ಕಡಿಯಲ್ಲಿ ಮೋಸ ಮಾಡಿಲ್ಲ, ಪಕ್ಕದ ಹೊಲಕ್ಕೆ ನೀರು ತಡೆಹಿಡಿದಿಲ್ಲ.ಎದೆಹಾಲಿನ ಮಕ್ಕಳ ಬಾಯಿ೦ದ ಹಾಲನ್ನು ಕಸಿದಿಲ್ಲ, ದೇವರ ಹಕ್ಕಿಗಳನ್ನು ಬಲೆಯಲ್ಲಿ ಸೆರೆಹಿಡಿದಿಲ್ಲ...ನಾನು ಪರಿಶುದ್ಧ...ನಾನು ಪರಿಶುದ್ಧ....”
{{gap}}ಸುತ್ತಲೂ ಇದ್ದವರನ್ನು ನೋಡಿ ಅಪೆಟ್,"ಹೇಳಿ ನಾನು ಪರಿಶುದ್ಧ ಅ೦ತ ಮೂರು ಸಲ ಹೇಳಿ," ಎ೦ದ.
{{gap}}ಮೆನೆಪ್ ಟಾನ ಆದಿಯಾಗಿ,ಅಪೆಟ್ ನ ಮಾತು ಕೇಳಿಸಿದವರೆಲ್ಲ ಅ೦ದರು:
{{gap}}“ನಾನು ಪರಿಶುದ್ಧ...ನಾನು ಪರಿಶುದ್ಧ.ನಾನು ಪರಿಶುದ್ಧ.”
{{gap}}ಹೊರಗೆ ನಿ೦ತಿದ್ದವರ ಕಿವಿಗೂ ಅದು ಬಿತ್ತು, ಅವರೂ ಅದನ್ನು ಪುನ
ರುಚ್ಚರಿಸಿದರು....
{{gap}}ತಾನು ಸೃಷ್ಟಿಸಿದ ವಾತಾವರಣ ಕ೦ಡು ಅಪೆಟ್ ಉಲ್ಲಾಸಗೊ೦ಡ.<noinclude></noinclude>
sa5h23gx5cw2vlfdeqkuffrjea1x7ae
320684
320683
2026-05-19T03:03:11Z
Hariprasad Shetty10
7490
/* Validated */
320684
proofread-page
text/x-wiki
<noinclude><pagequality level="4" user="Hariprasad Shetty10" />{{rh|left=೧೦೬|center=ಮೃತ್ಯುಂಜಯ|right=}}</noinclude>{{gap}}"ಒಸೈರಿಸ್ ದೇವರ ರಾಜ್ಯವಾದ ಪರಲೋಕದ ಹೆಬ್ಬಾಗಿಲ బಳಿ <br>
ಮೃತನು ಈಗ ನಿ೦ತು ಹೀಗೆ ಪ್ರಾರ್ಥಿಸುತ್ತಾನೆ: ಉಘೇ! ಮಹಾದೇವನೆ ಸತ್ಯದ ಪ್ರಭುವೆ, ನ್ಯಾಯದ ಪ್ರಭುವೆ, ಉಘೇ! ನನ್ನೊಡೆಯ ನಿನ್ನೆದುರು బంದು ನಿ೦ತಿದೇನೆ ನಾನು. నిನ್ನ ಸೌಂದರ್ಯಾತಿಶಯವನ್ನು ಕಾಣಲೆ೦ದು ನನ್ನನ್ನುಇಲ್ಲಿಗೆ ಕರೆತಂದಿದ್ದಾರೆ. ನಾನು ದಿಟವಾಡುತ್ತಿದ್ದೇನೆ. ಮನುಜರಲ್ಲಿ ನಾನು ಭೇದ ಭಾವ ಎಣಿಸಿಲ್ಲ. ಬಡವರ ಸುಲಿಗೆ ಮಾಡಿಲ್ಲ ನಾನು. ಸ್ವತ೦ತ್ರವಾದ ಯಾವನನ್ನೂ ಅವನ ಇಚ್ಛೆಗಿಂತ ಹೆಚ್ಚಾಗಿ ನಾನು ದುಡಿಸಿಲ್ಲ. ಕರ್ತವ್ಯ ಲೋಪ ಎಸಗಿಲ್ಲ ನಾನು; ದೇವರಿಗೆ ಅಪ್ರಿಯವಾದುದೇನನ್ನೂ ಮಾಡಿಲ್ಲ. ಯಾವ ಯಜಮಾನನೂ ತನ್ನ ದಾಸನೊಡನೆ ಕೆಟ್ಟದಾಗಿ ನಡೆದುಕೊಳ್ಳಲು ನಾನು ಕಾರಣನಾಗಿಲ್ಲ. ನಾನು ಯಾವುದೇ ಮನುಷ್ಯನನ್ನು ಉಪವಾಸ ಕೆಡವಿಲ್ಲ. ಯಾರೂ ಅಳುವಂತೆ ಮಾಡಿಲ್ಲ. ಯಾರನ್ನೂ ನಾನು ಕೊಲೆಗೈದಿಲ್ಲ, ನಾನೆ೦ದೂ ರಾಜದ್ರೋಹ ಎಸಗಿಲ್ಲ. ದೇವಮಂದಿರಕ್ಕೆ ಯಾವ ಸರಬರಾಜನ್ನೂ ನಾನು ಕಡಿಮೆ ಮಾಡಿಲ್ಲ. ದೇವರ ನೈವೇದ್ಯವನ್ನೆ೦ದೂಕೆಡಿಸಿಲ್ಲ. ದೇವಮಂದಿರದ ಪವಿತ್ರ ಸ್ಥಳದಲ್ಲಿ ವಿಷಯಾಸಕ್ತನಾಗಿ ವರ್ತಿಸಿಲ್ಲ. ದೇವರನ್ನು ಧಿಕ್ಕರಿಸಿ ನಡೆದಿಲ್ಲ. ತಕ್ಕಡಿಯಲ್ಲಿ ಮೋಸ ಮಾಡಿಲ್ಲ, ಪಕ್ಕದ ಹೊಲಕ್ಕೆ ನೀರು ತಡೆಹಿಡಿದಿಲ್ಲ.ಎದೆಹಾಲಿನ ಮಕ್ಕಳ ಬಾಯಿ೦ದ ಹಾಲನ್ನು ಕಸಿದಿಲ್ಲ, ದೇವರ ಹಕ್ಕಿಗಳನ್ನು ಬಲೆಯಲ್ಲಿ ಸೆರೆಹಿಡಿದಿಲ್ಲ...ನಾನು ಪರಿಶುದ್ಧ...ನಾನು ಪರಿಶುದ್ಧ....”
{{gap}}ಸುತ್ತಲೂ ಇದ್ದವರನ್ನು ನೋಡಿ ಅಪೆಟ್,"ಹೇಳಿ ನಾನು ಪರಿಶುದ್ಧ ಅ೦ತ ಮೂರು ಸಲ ಹೇಳಿ," ಎ೦ದ.
{{gap}}ಮೆನೆಪ್ ಟಾನ ಆದಿಯಾಗಿ,ಅಪೆಟ್ ನ ಮಾತು ಕೇಳಿಸಿದವರೆಲ್ಲ ಅ೦ದರು:
{{gap}}“ನಾನು ಪರಿಶುದ್ಧ...ನಾನು ಪರಿಶುದ್ಧ.ನಾನು ಪರಿಶುದ್ಧ.”
{{gap}}ಹೊರಗೆ ನಿ೦ತಿದ್ದವರ ಕಿವಿಗೂ ಅದು ಬಿತ್ತು, ಅವರೂ ಅದನ್ನು ಪುನ
ರುಚ್ಚರಿಸಿದರು....
{{gap}}ತಾನು ಸೃಷ್ಟಿಸಿದ ವಾತಾವರಣ ಕ೦ಡು ಅಪೆಟ್ ಉಲ್ಲಾಸಗೊ೦ಡ.<noinclude></noinclude>
hfmvaflcb88folrard1ztrou4royf56
ಪುಟ:Mrutyunjaya.pdf/೧೨೪
104
21608
320736
319918
2026-05-19T07:19:35Z
Hariprasad Shetty10
7490
320736
proofread-page
text/x-wiki
<noinclude><pagequality level="3" user="Shreelatha.Halemane" />{{rh|center=ಮೃತ್ಯುಂಜಯ|left=|right=೧೧೧}}</noinclude>ಮತ್ತು ಹೆಮೊನ್__ಮುಖ್ಯ ಪಟ್ಟಣದಲ್ಲೇ ಇದ್ದರು. "ತೆರವಾಗಿರುವ ಸ್ಥಾನಕ್ಕೆ ನಿವೃತ್ತ ಸೈನಿಕ ಹೆಮ್ಟಿಯನ್ನು ನೇಮಿಸೋಣ." "ಒಳ್ಳೇ ವಿಚಾರ." "ಸಮಿತಿಯಿಂದ ದಿನನಿತ್ಯದ ಆಡಳಿತ ಸಾಧ್ಯವಿಲ್ಲ. ಹಿರಿಯರ ಸಮಿತಿ ತಿಂಗಳಿಗೊಮ್ಮೆ ಸೇರಲಿ. ಎಲ್ಲ ವಿಷಯಗಳನ್ನು ಪರಿಶೀಲಿಸಿಸಲಿ. ಪ್ರತಿದಿನದ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಬೇಕು. "ಮೆನೆಪ್ಟಾ, ನೀನು ಪ್ರಾಂತಪಾಲನಾಗು." "ಹೊಸ ವ್ಯವಸ್ಥೆಯಲ್ಲಿ ಪ್ರಾಂತಪಾಲನ ಸ್ಥಾನವೇ ಬೇಡ, ಸ್ನೊಫ್ರು." "ಸರಿ, ನಾಯಕ ಅನ್ನೋಣ." "ನಾನು__ನಾನು__.... ಯೋಚ್ನೆ ಮಾಡಿ." "ಸಾಕು ಯೋಚ್ನೆ ಮಾಡಿದ್ದು." "ಅಷ್ಟು ಖಡಾಖಂಡಿತವಾಗಿ ನೀವು ಹೇಳೊದಾದ್ರೆ...." "ಹೌದು. ಖಡಾಖಂಡಿತವಾಗಿ." "ನಾವು ಮೂವರೂ ಒಟ್ಟಿಗೆ__" "ಆಗೋದಿಲ್ಲ. ಒಬ್ಬನೇ ನಾಯಕ." "ನೀವು ಸಲಹೆಗಾರರಾಗಿ." "ಆಗಲಿ ನಾವು ಸಲಹೆಗಾರರು."
{{gap}}ತಾವು ಅಧಿಕಾರಕ್ಕೆ ಬರುವುದಕ್ಕೋಸ್ಕರ ಅವರನ್ನು ಓಡಿಸಿದ್ದಲ್ಲ. ಜನರಿಗೆ ಹಿತವಾಗಬೇಕು. ತೆರಿಗೆ__ಕಂದಾಯ ಅರ್ಧಕ್ಕೆ ಇಳಿಯಬೇಕು. "ನೀನು ರಾಜಗೃಹದಲ್ಲಿ ವಾಸಿಸ್ಬೇಕು, ಮೆನೆಪ್ಟಾ." "ಅದು ಮಾತ್ರ ಸಾಧ್ಯವಿಲ್ಲ. ದಿನವೂ ಅಲ್ಲಿಗೆ ಹೋಗಿ ಬರುತ್ತೇನೆ. ಆದರೆ ವಾಸ ಇಲ್ಲೇ." ನದೀ ದಂಡೆಯ ಕಾವಲು ಭಟರು, ಒಳನಾಡಿನ ಕಾವಲಿನವರು__ಇವರೆಲ್ಲರಿಗೂ ಮೇಲಣ ಅಧಿಕಾರಿ ಖ್ನೆಮ್ಹೊಟಿಪ್ ದಳಪತಿ. "ಮಾಡಿ. ಬೇಡ ಅನ್ನೋದಿಲ್ಲ. ಆದರೆ ನನ್ನ ಅಳಿಯನಿಗೆ ಮೂಗಿನ ತುದಿಯಲ್ಲೇ ಕೋಪ. ಮರೀಬೇಡಿ!" "ಜವಾಬುದಾರಿ ಇದ್ದರೆ ಯಾರೂ ಸುಮ್ಮಸುಮ್ಮನೆ ಸಿಟ್ಟಾಗೋದಿಲ್ಲ. "ದೇವ ಮಂದಿರಕ್ಕೆ...." "ಮಂದಿರದ ವೆಚ್ಚ ನಮ್ಮದು. ಅಪೆಟ್ ಚಿಂತಿಸಬೇಕಾಗಿಲ್ಲ. ಕಂದಾಯದ ಸಂಗ್ರಹ ಮಾತ್ರ ರಾಜಗೃಹದ ಕಣಜಗಳಲ್ಲಿ." "ಭೂ ಮಾಲಿಕರು ನಮ್ಮ ಜೊತೆ ಇರುತ್ತಾರೋ ಅಥವಾ ಓಡಿ ಹೋಗ್ತಾರೋ." "ನೋಡ್ಬೇಕು." "ಇಪ್ಯುವರ್ ರಾಜಗೃಹದಲ್ಲಿ ವಾಸ ಮಾಡ್ಲಿ. ಪ್ರಾಂತದ ಹಿರಿಯ ಲಿಪಿಕಾರನಾಗ್ಲಿ. ಬೊಕ್ಕಸದ ಲೆಕ್ಕವನ್ನು ಅವನೇ ಇಡ್ಲಿ...."
{{gap}}ತಮ್ಮ ಊಟ ಮುಗಿಸಿದ ನೆಫಿಸ್, ನೆಜಮುಟ್ ಕುಳಿತು ಕೇಳುತ್ತಿದ್ದರು.<noinclude></noinclude>
3qk4uw7zpba5qvcg8gmzkq9jdcnkqxr
320737
320736
2026-05-19T07:20:29Z
Hariprasad Shetty10
7490
320737
proofread-page
text/x-wiki
<noinclude><pagequality level="3" user="Shreelatha.Halemane" />{{rh|center=ಮೃತ್ಯುಂಜಯ|left=|right=೧೧೧}}</noinclude>ಮತ್ತು ಹೆಮೊನ್__ಮುಖ್ಯ ಪಟ್ಟಣದಲ್ಲೇ ಇದ್ದರು. "ತೆರವಾಗಿರುವ ಸ್ಥಾನಕ್ಕೆ ನಿವೃತ್ತ ಸೈನಿಕ ಹೆಮ್ಟಿಯನ್ನು ನೇಮಿಸೋಣ." "ಒಳ್ಳೇ ವಿಚಾರ." "ಸಮಿತಿಯಿಂದ ದಿನನಿತ್ಯದ ಆಡಳಿತ ಸಾಧ್ಯವಿಲ್ಲ. ಹಿರಿಯರ ಸಮಿತಿ ತಿಂಗಳಿಗೊಮ್ಮೆ ಸೇರಲಿ. ಎಲ್ಲ ವಿಷಯಗಳನ್ನು ಪರಿಶೀಲಿಸಿಸಲಿ. ಪ್ರತಿದಿನದ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಬೇಕು. "ಮೆನೆಪ್ಟಾ, ನೀನು ಪ್ರಾಂತಪಾಲನಾಗು." "ಹೊಸ ವ್ಯವಸ್ಥೆಯಲ್ಲಿ ಪ್ರಾಂತಪಾಲನ ಸ್ಥಾನವೇ ಬೇಡ, ಸ್ನೊಫ್ರು." "ಸರಿ, ನಾಯಕ ಅನ್ನೋಣ." "ನಾನು__ನಾನು__.... ಯೋಚ್ನೆ ಮಾಡಿ." "ಸಾಕು ಯೋಚ್ನೆ ಮಾಡಿದ್ದು." "ಅಷ್ಟು ಖಡಾಖಂಡಿತವಾಗಿ ನೀವು ಹೇಳೊದಾದ್ರೆ...." "ಹೌದು. ಖಡಾಖಂಡಿತವಾಗಿ." "ನಾವು ಮೂವರೂ ಒಟ್ಟಿಗೆ__" "ಆಗೋದಿಲ್ಲ. ಒಬ್ಬನೇ ನಾಯಕ." "ನೀವು ಸಲಹೆಗಾರರಾಗಿ." "ಆಗಲಿ ನಾವು ಸಲಹೆಗಾರರು."
{{gap}}ತಾವು ಅಧಿಕಾರಕ್ಕೆ ಬರುವುದಕ್ಕೋಸ್ಕರ ಅವರನ್ನು ಓಡಿಸಿದ್ದಲ್ಲ. ಜನರಿಗೆ ಹಿತವಾಗಬೇಕು. ತೆರಿಗೆ__ಕಂದಾಯ ಅರ್ಧಕ್ಕೆ ಇಳಿಯಬೇಕು. "ನೀನು ರಾಜಗೃಹದಲ್ಲಿ ವಾಸಿಸ್ಬೇಕು, ಮೆನೆಪ್ಟಾ." "ಅದು ಮಾತ್ರ ಸಾಧ್ಯವಿಲ್ಲ. ದಿನವೂ ಅಲ್ಲಿಗೆ ಹೋಗಿ ಬರುತ್ತೇನೆ. ಆದರೆ ವಾಸ ಇಲ್ಲೇ." ನದೀ ದಂಡೆಯ ಕಾವಲು ಭಟರು, ಒಳನಾಡಿನ ಕಾವಲಿನವರು__ಇವರೆಲ್ಲರಿಗೂ ಮೇಲಣ ಅಧಿಕಾರಿ ಖ್ನೆಮ್ಹೊಟಿಪ್ ದಳಪತಿ. "ಮಾಡಿ. ಬೇಡ ಅನ್ನೋದಿಲ್ಲ. ಆದರೆ ನನ್ನ ಅಳಿಯನಿಗೆ ಮೂಗಿನ ತುದಿಯಲ್ಲೇ ಕೋಪ. ಮರೀಬೇಡಿ!" "ಜವಾಬುದಾರಿ ಇದ್ದರೆ ಯಾರೂ ಸುಮ್ಮಸುಮ್ಮನೆ ಸಿಟ್ಟಾಗೋದಿಲ್ಲ. "ದೇವ ಮಂದಿರಕ್ಕೆ...." "ಮಂದಿರದ ವೆಚ್ಚ ನಮ್ಮದು. ಅಪೆಟ್ ಚಿಂತಿಸಬೇಕಾಗಿಲ್ಲ. ಕಂದಾಯದ ಸಂಗ್ರಹ ಮಾತ್ರ ರಾಜಗೃಹದ ಕಣಜಗಳಲ್ಲಿ." "ಭೂ ಮಾಲಿಕರು ನಮ್ಮ ಜೊತೆ ಇರುತ್ತಾರೋ ಅಥವಾ ಓಡಿ ಹೋಗ್ತಾರೋ." "ನೋಡ್ಬೇಕು." "ಇಪ್ಯುವರ್ ರಾಜಗೃಹದಲ್ಲಿ ವಾಸ ಮಾಡ್ಲಿ. ಪ್ರಾಂತದ ಹಿರಿಯ ಲಿಪಿಕಾರನಾಗ್ಲಿ. ಬೊಕ್ಕಸದ ಲೆಕ್ಕವನ್ನು ಅವನೇ ಇಡ್ಲಿ...."
{{gap}}ತಮ್ಮ ಊಟ ಮುಗಿಸಿದ ನೆಫಿಸ್, ನೆಜಮುಟ್ ಕುಳಿತು ಕೇಳುತ್ತಿದ್ದರು.<noinclude></noinclude>
rwxfxrebyttbuu6e5v6efbn1ue8j5ab
320738
320737
2026-05-19T07:30:10Z
Hariprasad Shetty10
7490
320738
proofread-page
text/x-wiki
<noinclude><pagequality level="3" user="Shreelatha.Halemane" />{{rh|center=ಮೃತ್ಯುಂಜಯ|left=|right=೧೧೧}}</noinclude>ಮತ್ತು ಹೆಮೊನ್__ಮುಖ್ಯ ಪಟ್ಟಣದಲ್ಲೇ ಇದ್ದರು. "ತೆರವಾಗಿರುವ ಸ್ಥಾನಕ್ಕೆ ನಿವೃತ್ತ ಸೈನಿಕ ಹೆಮ್ಟಿಯನ್ನು ನೇಮಿಸೋಣ." "ಒಳ್ಳೇ ವಿಚಾರ." "ಸಮಿತಿಯಿಂದ ದಿನನಿತ್ಯದ ಆಡಳಿತ ಸಾಧ್ಯವಿಲ್ಲ. ಹಿರಿಯರ ಸಮಿತಿ ತಿಂಗಳಿಗೊಮ್ಮೆ ಸೇರಲಿ. ಎಲ್ಲ ವಿಷಯಗಳನ್ನು ಪರಿಶೀಲಿಸಿಸಲಿ. ಪ್ರತಿದಿನದ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಬೇಕು. "ಮೆನೆಪ್ಟಾ, ನೀನು ಪ್ರಾಂತಪಾಲನಾಗು." "ಹೊಸ ವ್ಯವಸ್ಥೆಯಲ್ಲಿ ಪ್ರಾಂತಪಾಲನ ಸ್ಥಾನವೇ ಬೇಡ, ಸ್ನೊಫ್ರು." "ಸರಿ, ನಾಯಕ ಅನ್ನೋಣ." "ನಾನು__ನಾನು__.... ಯೋಚ್ನೆ ಮಾಡಿ." "ಸಾಕು ಯೋಚ್ನೆ ಮಾಡಿದ್ದು." "ಅಷ್ಟು ಖಡಾಖಂಡಿತವಾಗಿ ನೀವು ಹೇಳೊದಾದ್ರೆ...." "ಹೌದು. ಖಡಾಖಂಡಿತವಾಗಿ." "ನಾವು ಮೂವರೂ ಒಟ್ಟಿಗೆ__" "ಆಗೋದಿಲ್ಲ. ಒಬ್ಬನೇ ನಾಯಕ." "ನೀವು ಸಲಹೆಗಾರರಾಗಿ." "ಆಗಲಿ ನಾವು ಸಲಹೆಗಾರರು."
{{gap}}ತಾವು ಅಧಿಕಾರಕ್ಕೆ ಬರುವುದಕ್ಕೋಸ್ಕರ ಅವರನ್ನು ಓಡಿಸಿದ್ದಲ್ಲ. ಜನರಿಗೆ ಹಿತವಾಗಬೇಕು. ತೆರಿಗೆ__ಕಂದಾಯ ಅರ್ಧಕ್ಕೆ ಇಳಿಯಬೇಕು. "ನೀನು ರಾಜಗೃಹದಲ್ಲಿ ವಾಸಿಸ್ಬೇಕು, ಮೆನೆಪ್ಟಾ." "ಅದು ಮಾತ್ರ ಸಾಧ್ಯವಿಲ್ಲ. ದಿನವೂ ಅಲ್ಲಿಗೆ ಹೋಗಿ ಬರುತ್ತೇನೆ. ಆದರೆ ವಾಸ ಇಲ್ಲೇ." ನದೀ ದಂಡೆಯ ಕಾವಲು ಭಟರು, ಒಳನಾಡಿನ ಕಾವಲಿನವರು__ಇವರೆಲ್ಲರಿಗೂ ಮೇಲಣ ಅಧಿಕಾರಿ ಖ್ನೆಮ್ಹೊಟಿಪ್ ದಳಪತಿ. "ಮಾಡಿ. ಬೇಡ ಅನ್ನೋದಿಲ್ಲ. ಆದರೆ ನನ್ನ ಅಳಿಯನಿಗೆ ಮೂಗಿನ ತುದಿಯಲ್ಲೇ ಕೋಪ. ಮರೀಬೇಡಿ!" "ಜವಾಬುದಾರಿ ಇದ್ದರೆ ಯಾರೂ ಸುಮ್ಮಸುಮ್ಮನೆ ಸಿಟ್ಟಾಗೋದಿಲ್ಲ. "ದೇವ ಮಂದಿರಕ್ಕೆ...." "ಮಂದಿರದ ವೆಚ್ಚ ನಮ್ಮದು. ಅಪೆಟ್ ಚಿಂತಿಸಬೇಕಾಗಿಲ್ಲ. ಕಂದಾಯದ ಸಂಗ್ರಹ ಮಾತ್ರ ರಾಜಗೃಹದ ಕಣಜಗಳಲ್ಲಿ." "ಭೂ ಮಾಲಿಕರು ನಮ್ಮ ಜೊತೆ ಇರುತ್ತಾರೋ ಅಥವಾ ಓಡಿ ಹೋಗ್ತಾರೋ." "ನೋಡ್ಬೇಕು." "ಇಪ್ಯುವರ್ ರಾಜಗೃಹದಲ್ಲಿ ವಾಸ ಮಾಡ್ಲಿ. ಪ್ರಾಂತದ ಹಿರಿಯ ಲಿಪಿಕಾರನಾಗ್ಲಿ. ಬೊಕ್ಕಸದ ಲೆಕ್ಕವನ್ನು ಅವನೇ ಇಡ್ಲಿ...."
{{gap}}ತಮ್ಮ ಊಟ ಮುಗಿಸಿದ ನೆಫಿಸ್, ನೆಜಮುಟ್ ಕುಳಿತು ಕೇಳುತ್ತಿದ್ದರು.<noinclude></noinclude>
nyzjpv4hjvmi54x33s4zijhgn1jjzeq
320739
320738
2026-05-19T07:30:27Z
Hariprasad Shetty10
7490
320739
proofread-page
text/x-wiki
<noinclude><pagequality level="3" user="Shreelatha.Halemane" />{{rh|center=ಮೃತ್ಯುಂಜಯ|left=|right=೧೧೧}}</noinclude>ಮತ್ತು ಹೆಮೊನ್__ಮುಖ್ಯ ಪಟ್ಟಣದಲ್ಲೇ ಇದ್ದರು. "ತೆರವಾಗಿರುವ ಸ್ಥಾನಕ್ಕೆ ನಿವೃತ್ತ ಸೈನಿಕ ಹೆಮ್ಟಿಯನ್ನು ನೇಮಿಸೋಣ." "ಒಳ್ಳೇ ವಿಚಾರ." "ಸಮಿತಿಯಿಂದ ದಿನನಿತ್ಯದ ಆಡಳಿತ ಸಾಧ್ಯವಿಲ್ಲ. ಹಿರಿಯರ ಸಮಿತಿ ತಿಂಗಳಿಗೊಮ್ಮೆ ಸೇರಲಿ. ಎಲ್ಲ ವಿಷಯಗಳನ್ನು ಪರಿಶೀಲಿಸಿಸಲಿ. ಪ್ರತಿದಿನದ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಬೇಕು. "ಮೆನೆಪ್ಟಾ, ನೀನು ಪ್ರಾಂತಪಾಲನಾಗು." "ಹೊಸ ವ್ಯವಸ್ಥೆಯಲ್ಲಿ ಪ್ರಾಂತಪಾಲನ ಸ್ಥಾನವೇ ಬೇಡ, ಸ್ನೊಫ್ರು." "ಸರಿ, ನಾಯಕ ಅನ್ನೋಣ." "ನಾನು__ನಾನು__.... ಯೋಚ್ನೆ ಮಾಡಿ." "ಸಾಕು ಯೋಚ್ನೆ ಮಾಡಿದ್ದು." "ಅಷ್ಟು ಖಡಾಖಂಡಿತವಾಗಿ ನೀವು ಹೇಳೊದಾದ್ರೆ...." "ಹೌದು. ಖಡಾಖಂಡಿತವಾಗಿ." "ನಾವು ಮೂವರೂ ಒಟ್ಟಿಗೆ__" "ಆಗೋದಿಲ್ಲ. ಒಬ್ಬನೇ ನಾಯಕ." "ನೀವು ಸಲಹೆಗಾರರಾಗಿ." "ಆಗಲಿ ನಾವು ಸಲಹೆಗಾರರು."
{{gap}}ತಾವು ಅಧಿಕಾರಕ್ಕೆ ಬರುವುದಕ್ಕೋಸ್ಕರ ಅವರನ್ನು ಓಡಿಸಿದ್ದಲ್ಲ. ಜನರಿಗೆ ಹಿತವಾಗಬೇಕು. ತೆರಿಗೆ__ಕಂದಾಯ ಅರ್ಧಕ್ಕೆ ಇಳಿಯಬೇಕು. "ನೀನು ರಾಜಗೃಹದಲ್ಲಿ ವಾಸಿಸ್ಬೇಕು, ಮೆನೆಪ್ಟಾ." "ಅದು ಮಾತ್ರ ಸಾಧ್ಯವಿಲ್ಲ. ದಿನವೂ ಅಲ್ಲಿಗೆ ಹೋಗಿ ಬರುತ್ತೇನೆ. ಆದರೆ ವಾಸ ಇಲ್ಲೇ." ನದೀ ದಂಡೆಯ ಕಾವಲು ಭಟರು, ಒಳನಾಡಿನ ಕಾವಲಿನವರು__ಇವರೆಲ್ಲರಿಗೂ ಮೇಲಣ ಅಧಿಕಾರಿ ಖ್ನೆಮ್ಹೊಟಿಪ್ ದಳಪತಿ. "ಮಾಡಿ. ಬೇಡ ಅನ್ನೋದಿಲ್ಲ. ಆದರೆ ನನ್ನ ಅಳಿಯನಿಗೆ ಮೂಗಿನ ತುದಿಯಲ್ಲೇ ಕೋಪ. ಮರೀಬೇಡಿ!" "ಜವಾಬುದಾರಿ ಇದ್ದರೆ ಯಾರೂ ಸುಮ್ಮಸುಮ್ಮನೆ ಸಿಟ್ಟಾಗೋದಿಲ್ಲ. "ದೇವ ಮಂದಿರಕ್ಕೆ...." "ಮಂದಿರದ ವೆಚ್ಚ ನಮ್ಮದು. ಅಪೆಟ್ ಚಿಂತಿಸಬೇಕಾಗಿಲ್ಲ. ಕಂದಾಯದ ಸಂಗ್ರಹ ಮಾತ್ರ ರಾಜಗೃಹದ ಕಣಜಗಳಲ್ಲಿ." "ಭೂ ಮಾಲಿಕರು ನಮ್ಮ ಜೊತೆ ಇರುತ್ತಾರೋ ಅಥವಾ ಓಡಿ ಹೋಗ್ತಾರೋ." "ನೋಡ್ಬೇಕು." "ಇಪ್ಯುವರ್ ರಾಜಗೃಹದಲ್ಲಿ ವಾಸ ಮಾಡ್ಲಿ. ಪ್ರಾಂತದ ಹಿರಿಯ ಲಿಪಿಕಾರನಾಗ್ಲಿ. ಬೊಕ್ಕಸದ ಲೆಕ್ಕವನ್ನು ಅವನೇ ಇಡ್ಲಿ...."<br />
{{gap}}ತಮ್ಮ ಊಟ ಮುಗಿಸಿದ ನೆಫಿಸ್, ನೆಜಮುಟ್ ಕುಳಿತು ಕೇಳುತ್ತಿದ್ದರು.<noinclude></noinclude>
mbp2zmfrwx8wirfx0t3by0qwduznsyq
320740
320739
2026-05-19T07:30:45Z
Hariprasad Shetty10
7490
/* Validated */
320740
proofread-page
text/x-wiki
<noinclude><pagequality level="4" user="Hariprasad Shetty10" />{{rh|center=ಮೃತ್ಯುಂಜಯ|left=|right=೧೧೧}}</noinclude>ಮತ್ತು ಹೆಮೊನ್__ಮುಖ್ಯ ಪಟ್ಟಣದಲ್ಲೇ ಇದ್ದರು. "ತೆರವಾಗಿರುವ ಸ್ಥಾನಕ್ಕೆ ನಿವೃತ್ತ ಸೈನಿಕ ಹೆಮ್ಟಿಯನ್ನು ನೇಮಿಸೋಣ." "ಒಳ್ಳೇ ವಿಚಾರ." "ಸಮಿತಿಯಿಂದ ದಿನನಿತ್ಯದ ಆಡಳಿತ ಸಾಧ್ಯವಿಲ್ಲ. ಹಿರಿಯರ ಸಮಿತಿ ತಿಂಗಳಿಗೊಮ್ಮೆ ಸೇರಲಿ. ಎಲ್ಲ ವಿಷಯಗಳನ್ನು ಪರಿಶೀಲಿಸಿಸಲಿ. ಪ್ರತಿದಿನದ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಬೇಕು. "ಮೆನೆಪ್ಟಾ, ನೀನು ಪ್ರಾಂತಪಾಲನಾಗು." "ಹೊಸ ವ್ಯವಸ್ಥೆಯಲ್ಲಿ ಪ್ರಾಂತಪಾಲನ ಸ್ಥಾನವೇ ಬೇಡ, ಸ್ನೊಫ್ರು." "ಸರಿ, ನಾಯಕ ಅನ್ನೋಣ." "ನಾನು__ನಾನು__.... ಯೋಚ್ನೆ ಮಾಡಿ." "ಸಾಕು ಯೋಚ್ನೆ ಮಾಡಿದ್ದು." "ಅಷ್ಟು ಖಡಾಖಂಡಿತವಾಗಿ ನೀವು ಹೇಳೊದಾದ್ರೆ...." "ಹೌದು. ಖಡಾಖಂಡಿತವಾಗಿ." "ನಾವು ಮೂವರೂ ಒಟ್ಟಿಗೆ__" "ಆಗೋದಿಲ್ಲ. ಒಬ್ಬನೇ ನಾಯಕ." "ನೀವು ಸಲಹೆಗಾರರಾಗಿ." "ಆಗಲಿ ನಾವು ಸಲಹೆಗಾರರು."
{{gap}}ತಾವು ಅಧಿಕಾರಕ್ಕೆ ಬರುವುದಕ್ಕೋಸ್ಕರ ಅವರನ್ನು ಓಡಿಸಿದ್ದಲ್ಲ. ಜನರಿಗೆ ಹಿತವಾಗಬೇಕು. ತೆರಿಗೆ__ಕಂದಾಯ ಅರ್ಧಕ್ಕೆ ಇಳಿಯಬೇಕು. "ನೀನು ರಾಜಗೃಹದಲ್ಲಿ ವಾಸಿಸ್ಬೇಕು, ಮೆನೆಪ್ಟಾ." "ಅದು ಮಾತ್ರ ಸಾಧ್ಯವಿಲ್ಲ. ದಿನವೂ ಅಲ್ಲಿಗೆ ಹೋಗಿ ಬರುತ್ತೇನೆ. ಆದರೆ ವಾಸ ಇಲ್ಲೇ." ನದೀ ದಂಡೆಯ ಕಾವಲು ಭಟರು, ಒಳನಾಡಿನ ಕಾವಲಿನವರು__ಇವರೆಲ್ಲರಿಗೂ ಮೇಲಣ ಅಧಿಕಾರಿ ಖ್ನೆಮ್ಹೊಟಿಪ್ ದಳಪತಿ. "ಮಾಡಿ. ಬೇಡ ಅನ್ನೋದಿಲ್ಲ. ಆದರೆ ನನ್ನ ಅಳಿಯನಿಗೆ ಮೂಗಿನ ತುದಿಯಲ್ಲೇ ಕೋಪ. ಮರೀಬೇಡಿ!" "ಜವಾಬುದಾರಿ ಇದ್ದರೆ ಯಾರೂ ಸುಮ್ಮಸುಮ್ಮನೆ ಸಿಟ್ಟಾಗೋದಿಲ್ಲ. "ದೇವ ಮಂದಿರಕ್ಕೆ...." "ಮಂದಿರದ ವೆಚ್ಚ ನಮ್ಮದು. ಅಪೆಟ್ ಚಿಂತಿಸಬೇಕಾಗಿಲ್ಲ. ಕಂದಾಯದ ಸಂಗ್ರಹ ಮಾತ್ರ ರಾಜಗೃಹದ ಕಣಜಗಳಲ್ಲಿ." "ಭೂ ಮಾಲಿಕರು ನಮ್ಮ ಜೊತೆ ಇರುತ್ತಾರೋ ಅಥವಾ ಓಡಿ ಹೋಗ್ತಾರೋ." "ನೋಡ್ಬೇಕು." "ಇಪ್ಯುವರ್ ರಾಜಗೃಹದಲ್ಲಿ ವಾಸ ಮಾಡ್ಲಿ. ಪ್ರಾಂತದ ಹಿರಿಯ ಲಿಪಿಕಾರನಾಗ್ಲಿ. ಬೊಕ್ಕಸದ ಲೆಕ್ಕವನ್ನು ಅವನೇ ಇಡ್ಲಿ...."<br />
{{gap}}ತಮ್ಮ ಊಟ ಮುಗಿಸಿದ ನೆಫಿಸ್, ನೆಜಮುಟ್ ಕುಳಿತು ಕೇಳುತ್ತಿದ್ದರು.<noinclude></noinclude>
bnbiz6h8kvb4u429bfqer8bnntekgrh
ಪುಟ:Mrutyunjaya.pdf/೧೨೫
104
21609
320807
319919
2026-05-19T11:17:01Z
Shreesha Sharma
7840
/* Validated */
320807
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|center=ಮೃತ್ಯುಂಜಯ|left=೧೧೨|right=}}
ಹಿರಿಯರ ಮಾತಿಗೆ ಕಿವಿಗೊಡುತ್ತ, ಅದನ್ನು ಅರ್ಥಮಾಡಿಕೊಳ್ಳಲೆತ್ನಿಸುತ್ತ ತಾಯಿಯ ಬಳಿ ರಾಮೆರಿಪ್ಟಾ ನಿಂತಿದ್ದ. ಅವನನ್ನು ಮೆನೆಪ್ಟಾ ಕರೆದ.
"ರಾಮೆರಿ, ಹೋಗಿ ಖ್ನೆಮ್ಹೊಟಿಪ್ ಮಾವನನ್ನು ಕರೆದುಕೊಂಡು ಬಾ."
{{gap}}ಹುಡುಗ ಬಾಣದಂತೆ ಓಡಿದ.
{{gap}}ರಾಜಗೃಹದ ದಾಸದಾಸಿಯರ ಪ್ರಶ್ನೆ...." ಅವರಿಗೆಲ್ಲ ಸ್ವಾತಂತ್ರ್ಯ ಕೊಡ್ಬೇಕು. ಅವರು ಮುಕ್ತರು. ಎಲ್ಲಿಗೆ ಬೇಕಾದರೂ ಹೋಗಲಿ," ಎಂದ ಮೆನೆಪ್ಟಾ. ಸೆಬೆಕ್ಖು "ಭೂಮಾಲಿಕರ ದಾಸರ ಬಿಡುಗಡೆಯೂ ಸಾಧ್ಯವಾಗ್ಬೇಕು," ಎಂದ. "ಅದೆಷ್ಟು ಹೊತ್ತು? ಉದಿಸಿದ ರಾ ಮೇಲೆ ಬರದೆ ಇರುತ್ತಾನಾ?" ಎಂದು ಸ್ನೊಫ್ರು ನುಡಿದ.
{{gap}}ಬರಹೇಳಿದಾರೆ ಎಂದನಷ್ಟೇ ಹೊರತು, ಎನ್ನೇನನ್ನೂ ರಾಮೆರಿಪ್ಟಾ ಖ್ನೆಮ್ಹೊಟಿಪ್ಗೆ ತಿಳಿಸಲಿಲ್ಲ. ಖ್ನೆಮ್ ಬಿರುಸಾಗಿ ನಡೆದು ಬಂದು, ಹೊಸ್ತಿಲು ದಾಟಿದೊಡನೆಯೇ ನಿಂತು, ತುಸು ಗೋಣು ಆಡಿಸಿ "ವಂದನೆ" ಎಂದ. ಎಡಭುಜದಲ್ಲಿ ಬಿಲ್ಲು ಬಲಭುಜದಾಚೆ ಬೆನ್ನಲ್ಲಿ ಬತ್ತಳಿಕೆ ಇದ್ದುವು.
{{gap}}ಮೆನೆಪ್ಟಾನೆಂದ:
{{gap}}"ಖ್ನೆಮು, ನೀನಿನ್ನು ಪ್ರಾಂತದ ಕಾವಲು ಭಟರ ದಳಪತಿ. ಇನ್ನು ನಿನ್ನ ಲಾಂಛನ ಕಟಿಯಲ್ಲಿ ಕಠಾರಿ; ಕೈಯಲ್ಲಿ ನೀಳ ಕೋಲು."
{{gap}}ಭಾವೋದ್ವೇಗ ಖ್ನೆಮ್ಹೊಟಿಪ್ನನ್ನು ಬಾಧಿಸಿತು. ವಂದಿಸುವ ನೆಪದಲ್ಲಿ ಆತ ತಲೆಯನ್ನು ಸ್ವಲ್ಪ ಹೆಚ್ಚಾಗಿ ಬಾಗಿಸಿ, ಅಲ್ಲಿದ್ದ ಎಲ್ಲರ ನೋಟದಿಂದ ಮುಖವನ್ನು ಮರೆಮಾಡಿದ.
{{gap}}ಖ್ನೆಮ್ ಇತರ ತೀರ್ಮಾನಗಳ ವಿವರವನ್ನೂ ತಿಳಿದು ಸೆಮ, ಥಾನಿಸ್, ಹೆಮೊನ್ರನ್ನೂ ಹೆಮ್ಟಿಯನ್ನೂ ಕರೆತರಲು ಹೋದ....
{{gap}}ಬಂದವರಲ್ಲಿ ಹೆಮ್ಟಿ ಉತ್ಸುಕನಾಗಿದ್ದ. ಉಳಿದ ಮೂವರು ಯೋಚಿಸುತ್ತಿದಂತೆ ಕಂಡಿತು. ಸ್ನೊಫ್ರು ಬಹಳ ಒತ್ತಾಯಿಸಿದ ಮೇಲೆ ಸೆಮ ಮೆಲ್ಲನೆ ಅಂದ:
{{gap}}"ಹೀಗೆಲ್ಲ ಮಾಡೋದು ಸರಿಯೊ ತಪ್ಪೊ ಗೊತ್ತಾಗ್ತಾ ಎಲ್ಲ."<noinclude></noinclude>
6yeqfoig3v6731jsxi84ola0wjknezg
ಪುಟ:Mrutyunjaya.pdf/೧೨೬
104
21610
320808
317815
2026-05-19T11:17:22Z
Shreesha Sharma
7840
/* Validated */
320808
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|center=ಮೃತ್ಯುಂಜಯ|left=|right=೧೧೩.}}
{{gap}}ಒಲಿಸಿಕೊಲಳ್ಳುವ ದ್ವನಿಯಲ್ಲಿ ಮೆನೆಪ್ಟಾ ನುಡಿದ :
{{gap}}ಇದು ದೈವವಿರೋಧಿ ಕೆಲಸವಂತೂ ಅಲ್ಲ ಹಾಗೆ ನೋಡಿದರೆ ಪೆರೋಗೆ ಇದಿರಾಗಿಯೂ ನಾವೇನೂ ಮಾಡ್ತಾ ಇಲ್ಲ, ತನ್ನ ಮಕ್ಕಳು ನಾಯನಿಷ್ಟರಾಗಿದ್ದರೆ ತಂದೆ ಪೆರೋ ಸಂತೋಷ ಪಡಲೇಬೇಕು ಅಲ್ಲವಾ ?”
{{gap}}ಮತ್ತೂ ಸ್ವಲ್ಪ ಹೊತ್ತು ಯೋಚಿಸಿ ಸೆಮ ಉತ್ತರಿಸಿದ :
{{gap}}''ಈ ಪ್ರಾಂತದ ನಾವೆಲ್ಲ ಒಂದೇ ಬುಡಕಟ್ಟಿನವರು. ನಮ್ಮದು ಒಂದೇ ಪ್ರತೀಕ ನೀರಾನೆ ಏಕರೀತಿಯ ನಡಾವಳಿ.. ಈಗ, ಅಪೂರ್ವ ವಾದದ್ದನ್ನು ನಮ್ಮ ಜನ ಮಾಡಿದಾರೆ. ಆಗಲಿ ಎಲ್ಲರೂ ಒಟ್ಟಿಗೇ ಈಸೋಣ ಮುಳುಗಿದರೆ ಒಟ್ಟಿಗೇ ಮುಳುಗೊಣ."
{{gap}}ಇಂಥ ಮಾತು ತನಗೆ ಇಷ್ಟವಿಲ್ಲವೆಂದು ಹೇಳಲು ಹೋರಟ ಖ್ನಮ್ ಹೊಟಿಪ್ ಪದಗಳನ್ನು ಗಂಟಲಿನ ಆಳಕ್ಕೆ ತಳ್ಳಿದ. ಅಸಹನೆಯಿಂದ ಅವನ ಭುಜ ಚಿಮ್ಮಿತ್ತು. -
{{gap}}ಸ್ನೊಫ್ರುನೆಂದ .
{{gap}}“ಹಾಗೇ ಆಗಲಿ ಸೆಮ. ಹೆಜ್ಜೆ ಮುಂದಿಟ್ಟಿದ್ದೇನೆ. ಇನ್ನು ಹಿಂದಕ್ಕೆ ಸರಿಯೋ ಮಾತೇ ಇಲ್ಲ.”
{{gap}}''ಸಭೆಯ ಏಪಾ೯ಟಿಗಾಗಿ ನಾನು ರಾಜಗೃಹಕ್ಕೆ ಹೋಗ್ಟೇನೆ," ಎಂದು ಖೈಮ್ ಹೊಟೆಪ್, ಪ್ರತಿಕ್ರಿಯೆಗಾಗಿ ಕಾಯದೆ, ವಂದಿಸಿ ಹೊರಬಿದ್ದ.
{{gap}}..ರಾಮೆರಿಪ್ ಟಾ ತಾಯಿಯನ್ನು ಕಾಡಿದ:
{{gap}}''ಅಮ್ಮ, ನಾನು ಹೋಗ್ಲೇಬೇಕು. ನೀನೂ ಬಾ.”
{{gap}}ನೆಜಮುಟ್ ಅಂದಳು :
{{gap}}"ಏನಮ್ಮ ನೆಫಿಸ್-ನಾವೇ ಹೋಗ್ದೆ ಇದ್ದರೆ ಹ್ಯಾಗೆ ?"
{{gap}}ನೆಫಿಸ್ ಗಂಡಸರಿಗೆ ಕೇಳಿಸುವಂತೆ ಅಂದಳು :
{{gap}}... ರಾಜಗೃಹಕ್ಕೆ ನಾವೊ ಬರೋಣವೋ ?”
{{gap}}ಮೌನವಾಗಿದ್ದ ಮಿತ್ರರನ್ನು ಕಂಡು, ಮೆನೆಪ್ಟಾ ಅಂದ ;
{{gap}}''ಬೇಡ ಅನ್ನೋದಕ್ಕೆ ನಾವು ಯಾರು ? ನೀರಾನೆ ಪ್ರಾಂತದಲ್ಲಿ ಎಲ್ಲರೂ ಸ್ವತಂತ್ರರು.”
೮<noinclude></noinclude>
sudrg793584sgtsbqdia5gs1yfjs9kc
ಪುಟ:Mrutyunjaya.pdf/೩೬೮
104
21857
320769
320330
2026-05-19T09:05:25Z
Shreelatha.Halemane
7642
/* Validated */
320769
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right= ೩೫೫}}
{{gap}}“ಸೃಷ್ಟಿಕರ್ತ ರಾನ ಮಂದಿರದ ಚೌಕಟ್ಟಿಗಿನ್ನೂ ಬಂಗಾರದ ಲೇಪನವಿಲ್ಲ! ಛೆ! ಛೆ! ಹೀಗೂ ಉಂಟೆ? ಕಳೆದ ಸಲವೇ ನಾನು_"
{{gap}}“ಹೌದು. ಸ್ವರ್ಣಲೇಪನ ಬೇಕು ಅಂದಿದ್ದಿರಿ, ಆದರೆ ಸೃಷ್ಟಿಕರ್ತ ರಾ ಅಷ್ಟು ಶ್ರೀಮಂತನಲ್ಲ."
{{gap}}"ಗೊತ್ತು, ಗೊತ್ತು," ಎಂಬ ಹೆಖ್ವೆಟ್ ಗೋಣು ಆಡಿಸಿದ.
{{gap}}"ಒಳಗೆ ಬರೋಣವಾಗಲಿ."
{{gap}}“ಅಲ್ಲಿ ಕುಳಿತಿರೋದು ಮಹಾ ಆರ್ಚಕರಲ್ಲವಾ?”
{{gap}}“ಹೌದು. ಧ್ಯಾನ ಭಂಗ ಉಂಟಾಗಬಾರದು ಅಂದಿದ್ದಾರೆ.”
{{gap}}“ಒಳ್ಳೆದು, ಭಕ್ತನ ಕಣ್ಣಿಗೆ ದೇವರು ಎಲ್ಲಿದ್ದರೂ ಕಾಣಿಸಿಕೊಳ್ತಾನೆ. ಇಲ್ಲಿಂದಲೇ ಪ್ರಾರ್ಥನೆ ಸಲ್ಲಿಸ್ತೇವೆ.”
{{gap}}ಮುಖ್ಯ ಅರ್ಚಕ ಒಂದು ಕ್ಷಣ ವಿವಂಚನೆಗೊಳಗಾದ. (ಇವರ ಜಗಳದಲ್ಲಿ ನನಗೇನು ಆಪತ್ತು ಉಂಟಾಗ್ತದೋ?')
{{gap}}ಹೆಖ್ವೆಟ್ ಅಂಗಳದ ಹಾಸುಗಲ್ಲುಗಳ ಮೇಲೆ ಮಂಡಿಯೂರಿ, ಅಂಗೈ ಗಳನ್ನು ಮುಂದಕ್ಕೆ ಚಾಚಿದ. ಪರಿವಾರದವರೂ ಹಾಗೆಯೇ ಮಾಡಿದರು. ಸೆರ್ಕೆಟನೂ ಅವರನ್ನು ಅನುಸರಿಸಿದ.
{{gap}}ಗಟ್ಟಿಯಾಗಿ ಹೆಖ್ವೆಟ್ ಆಂದ:
{{gap}}"ಓ ಸೃಷ್ಟಿಕರ್ತ ರಾ, ಜಗತ್ತಿನ ಮೇಲೆ ನಿನ್ನೆ ಆಳ್ವಿಕೆ ಶಾಶ್ವತವಾಗಲಿ. ಐಗುಪ್ತದ ಸುಖ ಸಂಪತ್ತು ಹೆಚ್ಚಲಿ! ನೀಲನದಿ ಎಂದೂ ಬತ್ತದಿರಲಿ ! ರಾ ಪುತ್ರ ಪೆರೋ ನಿತ್ಯಯೌವನದಿಂದ ಮರೆಯಲಿ! ಈ ದೇಶದ ಎರಡು ಸಹಸ್ರ ದೇವತೆಗಳು ನಿನ್ನ ಪ್ರಜೆಗಳ ಕಲ್ಯಾಣ ಸಾಧಿಸಲಿ !”
{{gap}}ಪ್ರತಿಯೊಂದು ಪದವೂ ಸ್ಪಷ್ಟವಾಗಿ ಹೇಪಾಟ್ಗೆ ಕೇಳಿಸಿತು. ಆದರೆ ಅವನ ಶರೀರ ಒಂದಿನಿತೂ ಮಿಸುಕಲಿಲ್ಲ. ಮಂಡಿಯೂರಿದವರೆದು ಅಂಗೈ ಗಳನ್ನು ಜೋಡಿಸಿ ನಿಂತರು. ಆಗಲೇ ಒಳಹೋಗಿದ್ದ ಮುಖ್ಯ ಆರ್ಚಕ ಜೊಂಡಿನಿಂದ ಹೆಣೆದ ತಟ್ಟೆಯಲ್ಲಿ ಬೆಳಿಗ್ಗೆ ದೇವರಿಗೆ ಅರ್ಪಿಸಿದ್ದ ಅಂಜೂರ, ಖರ್ಜೂರ ಹಣ್ಣುಗಳೊಡನೆ ಮರಳಿದ. ಹೆಖ್ವೆಟ್ ಆದಿಯಾಗಿ ಎಲ್ಲರಿಗೂ
ಪ್ರಸಾದ ವಿತರಣೆ ಮಾಡಿದ.<noinclude></noinclude>
njjidmfu3tigzek05k5hlqh0lrzad7x
ಪುಟ:Mrutyunjaya.pdf/೩೭೬
104
21865
320770
246924
2026-05-19T09:09:22Z
Shreelatha.Halemane
7642
/* Validated */
320770
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೩೬೩}}
ಭಾವಿಸಿದ್ದ. ಕ್ರಮೇಣ ಪದೇ ಪದೇ ಕಿವಿಗೆ ಬಿದ್ದಾಗ, ಯಾಕಾಗಬಾರದು ?.... ಎನಿಸಿತು. ಮುಂದೆ, ತಾನು ನಿಜವಾಗಿಯೂ ఆ ಹುದ್ದೆಗೆ ಅರ್ಹ_ಎಂಬ ಭಾವನೆ ಅವನಲ್ಲಿ ಬಲವಾಯಿತು.<br/>
{{gap}}ಅಷ್ಟೇ ಅಲ್ಲ, “ನೀನು ಐಗುಪ್ತದ ಸೇನಾನಿಯಾಗೋದಕ್ಕೂ ಯೋಗ್ಯ,” ಎಂದ ಟೆಹುಟಿ, ಒಮ್ಮೆ.ಧುಮುಧುಮಿಸಿದ ಭಾವನೆಗಳನ್ನು ಹತ್ತಿಕ್ಕಲಾಗದೆ ಬಕಿಲನ ಒಂದು ಕಣ್ಣು ಅತ್ತಿತು.<br/>
{{gap}}ಅಂದಿನಿಂದ ಬಕಿಲ ಟೆಹುತಟಿಯ ಬೆನ್ನಿಗೆ ಅಂಟಿದ ನೆರಳಾದ.)<br/>
{{gap}}ಟೆಹುಟಿ ಒಳಬಂದೊಡನೆ ಹೇಪಾಟ್ ಕೇಳಿದ :<br/>
{{gap}}“ಎಲ್ಲಿ ಬಕಿಲ ?" <br/>
{{gap}}“ಹೊರಗಿದ್ದಾನೆ.”<br/>
{{gap}}"ಅವನನ್ನೂ ಕರಿ."<br/>
{{gap}}....ಅವರಿಬ್ಬರಿಗೂ ಮಹಾ ಆರ್ಚಕ ತಿಳಿಸಿದ : ಈಶಾನ್ಯ ಗಡಿಯ ಸೈನ್ಯಠಾಣ್ಯಕ್ಕೆ ಟೆಹುಟಿ ಹೋಗಬೇಕು. ಹೌದು, ಬಕಿಲನನ್ನು ಕರೆದು ಕೊಂಡು. ರಾಜಧಾನಿಯಿಂದ ಸಂದೇಶ ಬರುವ ತನಕ ಅಲ್ಲಿರಬೇಕು.<br/>
{{gap}}ಟೆಹುಟಿಗೆ ತಿಳಿಯುವ ಬಯಕೆ. ಯಾರ ಸಂದೇಶ ?<br/>
{{gap}}ಮಹಾ ಅರ್ಚಕ :<br/>
{{gap}}“ನನ್ನ ಸಂದೇಶ ಬಂದರೆ ಸೇನಾನಿ ಅಮೆನೊಮೆಪೆಟ್ ಎಲ್ಲ ದಂಡಿನೊಡನೆ ಹೊರಟು ಬರಲಿ. ನೀವೂ ಬನ್ನಿ. ಅಮಾತ್ಯನ ಸಂದೇಶ ಬಂದರೆ ಆತ ಎಷ್ಟು ಜನರನ್ನು ಕರೇತಾನೋ ಅವರು ಬರಲಿ.ಜತೆಯಲ್ಲಿ ನೀವೂ ಹೊರಟು ಬನ್ನಿ.”<br/>
{{gap}}ಟೆಹುಟಿ ಸ್ವರ ತಗ್ಗಿಸಿ ಕೇಳಿದ:<br/>
{{gap}}“ರಾಜಿ ಮಾತುಕತೆ ನಡೆಯೋ ಸಾಧ್ಯತೆ ಇದೆಯೆ ?”<br/>
{{gap}}“ಮಾತುಕತೆ ಯಶಸ್ವಿಯಾಗಲೂಬಹುದು, ವಿಫಲವಾಗಲೂ ಬಹುದು. ಒಡಂಬಡಿಕೆ ಏರ್ಪಟ್ಟರೂ-ನೆನಪಿಟ್ಕೊ-ಅದು ತಾತ್ಕಾಲಿಕ."<br/>
{{gap}}"ದಂಡು ?"<br/>
{{gap}}“ಟೆಹುಟಿ ನೀನಿನ್ನೂ ಎಳಸು. ಸದ್ಯಕ್ಕೆ ರಾಜಿ ಎಂದಾದರೆ ನೀರಾನೆ ಪ್ರಾಂತದ ಮೇಲೆ ಏರಿಹೋಗೋದಕ್ಕೆ ಕಡಿಮೆ ಜನರು ಸಾಕು. ಆ ಕೆಲಸ<br/><noinclude></noinclude>
32mtufsgf03tze2cmk2553eh6f8v6eu
ಪುಟ:Mrutyunjaya.pdf/೩೮೬
104
21875
320772
61512
2026-05-19T09:16:03Z
Shreelatha.Halemane
7642
/* Validated */
320772
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right= ೩೭೩}}
ತೆಂದು ತಿಳಿಯುವ ತವಕ ಅವನಿಗೆ. ಬಂದವನು ಹೆಖ್ವೆಟ್ನ ಮನೆಯಲ್ಲೇ
ಊಟಕ್ಕೆ నింತ.
{{gap}}ಹೇಪಾಟ್-ಹೆಖ್ವೆಟ್ರ ನಡುವೆ ನಡೆದ ಮಾತುಕತೆ ಪರಿಣಾಮಕಾರಿ ಯಾಗಿತ್ತು, ಆದರೆ ದೀರ್ಘವಾಗಿರಲಿಲ್ಲ.ತಾನು ಅಡಿದ್ದ ಬಣ್ಣದ ಮಾತುಗಳಿಗೆ ಮತ್ತಷ್ಟು ಮೆರುಗು ಕೊಟ್ಟು ಹೆಖ್ವೆಟ್ ವರದಿ ನೀಡಿದ. ಸೈನ್ಯ ಗಡಿಗೆ ಮಹಾ ಅರ್ಚಕ ನೀಡಿದ್ದ ರಹಸ್ಯ ಭೇಟೆಯ ವಿಷಯವನ್ನು ತಿಳಿಸಿದ.
{{gap}}“ನನಗೆ ಒಪ್ಪಿಸಿದ್ದು ಮಹಾ ಅರ್ಚಕನನ್ನು ಕರಕೊಂಡು ಬರೋ ಕೆಲಸ; ಅದನ್ನಂತೂ ನಿರ್ವಹಿಸಿದ್ದೇನೆ " ఎంದ,ಕೊನೆಯಲ್ಲಿ.
{{gap}}ಆಮೆರಬ್ ತಾನು ಹಾಕಿದ್ದ ಉರುಳನ್ನು ಜಗ್ಗ ತೊಡಗಿದ.
{{gap}}"ಮಹಾ ಅರ್ಚಕನನ್ನು ಅರಮನೆಗೆ ಯಾವಾಗಾ ಕರಿಯೋಣಾ ? "
{{gap}}“ ನಾಳೆ ಬೆಳಿಗ್ಗೆಯೇ ಕರೆಸು.. ಯಾರು ಬೇಡ ಅಂದೋರು?”
{{gap}}"ನೀನು ಮಹಾಮಂದಿರಕ್ಕೆ, ಹೋಗಿ-”
{{gap}}"ಅದು ಬೇರೆ ఇನ್ನು. ಸರಿ, ಸರಿ.....”
{{gap}}" ಹೆಖ್ವೆಟ್, ఇದು నిన్నింದಲೇ ಆಗಬೇಕಾದ್ದು. ಬಲು ಸೂಕ್ಷ್ಮ ಪರಿಸ್ಥಿತಿ ಅವನೇನಾದರೂ ಹಟತೊಟ್ಟು ಇವತ್ತು ನಾಳೆ ಅಂದರೆ ಅವಮಾನವಾಗ್ತದೆ. ಇಡೀ ರಾಜಧಾನಿಯೇ ಕುತೂಹಲದಿಂದ ನಮ್ಮ ಕಡೆ ನೋಡ್ತಿದೆ.”
{{gap}}“ ಈಗ ನೀನು ಇಲ್ಲಿಂದ ಮಹಾಮನೆಗೆ ಹೋಗ್ತೀಯೇನೊ?"
{{gap}}"ಹೌದು. ನಾನು నిನ್ನಲ್ಲಿಗೆ ಬಂದಿರೋದು ಸೆರೋಗೆ ತಿಳಿದಿದೆ. ಕಾಯ್ತಾ ಇರಾರೆ. ನಾಳೆ ಬೆಳಿಗ್ಗೆ ಹೇಪಾಟ ಜತೆ ಮಾತುಕತೆಗೆ ಏರ್ಪಾಟು ಮಾಡ್ಬೇಕು.”
{{gap}}"ಹೊರಡು ಹಾಗಾದರೆ."
{{gap}}" ಹೂಂ. ನೀನು ವಿಶ್ರಾಂತಿ ತಗೋ."
{{gap}}" ಮುದುಕ ಹೆಖ್ವೆಟ್ಗೆ ವಿಶ್ರಾಂತಿಯ ಆಗತ್ಯ ಇದೆ ಅಂತ ಈಗಲಾದರೂ ನಿನಗೆ ಹೊಳೀತಲ್ಲ!”
{{gap}}''ನಾಳೆ ಆದಷ್ಟು ಬೇಗ ಹೋಗು. ಪೂಜೆ ಗೀಜೆ ಅಂತ ಕೈಕೊಟ್ಟಾನು. ಅರಮನೆಯ ಪಲ್ಲಕಿಯಲ್ಲೇ ಹೋಗು. ಬೋಯಿಗಳ ಜತೆ ಭಟರೂ ದಳ ಪತಿಯೂ ಇರಲಿ. ಅವರೆಲ್ಲ ನಸುಕಿನಲ್ಲೇ ಇಲ್ಲಿಗೆ ಬಂದು ನಿನಗಾಗಿ ಕಾಯ್ತಾರೆ.”<noinclude></noinclude>
7o281tzm51a4esl5ekh6fxbmlc3pvk8
ಪುಟ:Mrutyunjaya.pdf/೩೮೭
104
21876
320773
61513
2026-05-19T09:20:06Z
Shreelatha.Halemane
7642
/* Validated */
320773
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center= ಮೃತ್ಯುಂಜಯ|left=೩೭೪|right=}}
{{gap}}"ನನ್ನ నిದ್ರೆಯ ಮೇಲೆ ನಿನಗೆ ಕಣ್ಣು!"
{{gap}}ಅಮೆರಬ್ ಎದ್ದ. ಹೆಖ್ವೆಟನ ತೋಳನ್ನು ಆತ್ಮೀಯತೆಯಿಂದ ಮುಟ್ಟಿದ. ಸ್ವರ ತಗೆಸಿ ಕೇಳಿದ:
{{gap}}"ಹೇಪಾಟ್ ಏನಾದರೂ ಶರತ ಹಾಕಬಹುದು ಅಂತೀಯಾ?”
{{gap}}ಹೆಖ್ವೆಟ್ ಎದ್ದು, ಹುಬ್ಬು ಹಾರಿಸಿ, ತಲೆಯನ್ನು ಹಿಂದಕ್ಕೂ ಮುಂದಕ್ಕೂ ಆಡಿಸುತ್ತ ಆಮೆರಬಾನ ಜತೆ ಬಾಗಿಲಿನತ್ತ ನಡೆಯುತ್ತ ಅಂದ :
{{gap}}"ದೇಶದ ಅಮಾತ್ಯ ನೀನು. ರಾಜಕೀಯ ಊಹೆ-ತರ್ಕ ನೀನೇ ಮಾಡ್ಬೇಕು.”
{{gap}}"ನನ್ನ ಮೇಲೆ ಇನ್ನೂ ಸಿಟ್ಟೆ?"
{{gap}}"ಸಿಟ್ಟೂ ಇಲ್ಲ, ಏನೂ ಇಲ್ಲ, ಇಲ್ಲದ್ದು ಹರಟ್ಬೇಡ. ಹೇಪಾಟ್ ಸುಲಭವಾಗಿ ಮಣಿಯೋದಿಲ್ಲ-ನೆನಸಿಟ್ಕೊ."
{{gap}}"ನಾಳೆ ಪೆರೋ ಭೇಟಿಗೆ ಹೇಷಾಟ್ನನ್ನು ಕರಕೊಂಡ್ಬಂದ್ಮೇಲೆ ನೀನು ಅಲ್ಲೇ ಇರ್ಬೆಕು...”
{{gap}}"ಸರಿಯಪ್ಪ, ಈ ವಿನಮ್ರ ಸೇವಕ ಆಗೋದಿಲ್ಲ ಅನ್ತಾನಾ?”
{{gap}}ಅಮಾತ್ಯ ದೀರ್ಘವಾಗಿ ಉಸಿರೆಳೆದುಕೊಂಡ.
{{gap}}ಮಹಾ ಅರ್ಚಕ ರಾಜಧಾನಿಗೆ ಮರಳಿದ ಸುದ್ದಿ ತಿಳಿದಾಗ ಪೆರೋ ಪೇಪಿ ಅಂತಃಪುರದಲ್ಲಿ ತನ್ನ ಅಚ್ಚುಮೆಚ್ಚಿನ ದಾಸಿಯೋಂದಿಗೆ ಚೌಕಮಣೆ ಆಟ ಆಡುತ್ತ ಕುಳಿತಿದ್ದ. ಆತ ಆಟ ನಿಲ್ಲಿಸಿ ಮೈ ಕೈ ಮುರಿದು, ಮುಖವರಳಿಸಿ, ದಾಸಿಯನ್ನು ಬರಸೆಳೆದು ತಬ್ಬಿಕೊಂಡ.
{{gap}}ಸ್ವಲ್ಪ ಹೊತ್ತಿನಲ್ಲಿ ಅಮಾತ್ಯನ ದೂತ ಬಂದ : “ಹೆಖ್ವೆಟರನ್ನು ಭೇಟಿ ಯಾಗಿ ವಿಷಯ ತಿಳಿದು ರಾತ್ರೆ ಸನ್ನಿಧಿಗೆ ಬರ್ತೆನೆ-ಅಂದ್ರು,” ಎಂದ.
{{gap}}ಮತ್ತೂ ಸ್ವಲ್ಪ ಹೊತ್ತಾದಾಗ ಒಬ್ಬಳು ಪರಿಚಾರಿಕೆ ಬಂದು ನುಡಿದಳು;
{{gap}}"ಮಹಾರಾಣಿಯವರು ಇಲ್ಲೇ ಹೊರಗೆ ಹೋಗಿ ಬರ್ತಾರಂತೆ.”
{{gap}}ಪೆರೋ ತನ್ನ ಪ್ರೀತಿಯ ದಾಸಿಯ ಕಡೆ ನೋಡಿದ. ನೋಟದಿಂದಲೇ ಇಂಗಿತವನ್ನು ಅರಿಯುವ ಆ ಜಾಣೆ ಪರಿಚಾರಿಕೆಗೆ ಆದೇಶವಿತ್ತಳು.<noinclude></noinclude>
837fn4qapq2smoill497op3wmfzz0ub
ಪುಟ:Mrutyunjaya.pdf/೩೮೮
104
21877
320774
61514
2026-05-19T09:23:45Z
Shreelatha.Halemane
7642
/* Validated */
320774
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೩೭೫}}
{{gap}}" ಬಾಗಿಲೆಳೆದುಕೋ. ದೂತರು ಯಾರಾದರೂ ಬಂದರೆ, ಮಹಾಪ್ರಭು ಹೊರಗೆ ಕಾಣಿಸಿಕೊಳ್ಳುವ ತನಕ ಕಾದಿರಲಿ."
{{gap}}ಪೆರೋನತ್ತ ತಿರುಗಿ ಆಕೆ ಕೇಳಿದಳು
{{gap}}" ಆಟ ? .
{{gap}}" ನನ್ನನ್ನು ನೀನು ಸೋಲಿಸಲಾರೆ."
{{gap}}" ಯಾವತ್ತಾದರೂ ನಾನು ಗೆದ್ದಿದೇನಾ ?”
{{gap}}ಅರಸ ನಕ್ಕು ಚೌಕಮಣೆಯ ಕಾಯಿಗಳನ್ನು ಅಂಗೈಯಿಂದ ಬದಿಗೆ ಸರಿಸಿ, ಎದ್ದು, ಪಲ್ಲಂಗದತ್ತ ನಡೆದ. ದಾಸಿ ಮದಿರೆ ತರಲು ಧಾವಿಸಿದಳು.
{{gap}}ಅಂತಃಪುರಕ್ಕೆ ಬಂದ ಪೆರೋ ತನ್ನ ಪ್ರೀತಿಪಾತ್ರ ದಾಸಿಯ ಬಳಿಗೆ ಹೋದುದು ತಿಳಿದೊಡನೆ, ಮಹಾರಾಣಿ ನೆಫರಟೀಮ್ ಅರಮನೆಯ ಮಂದಿರದ ಅರ್ಚಕ ಇನೇನಿಯನ್ನು ಕರೆಸಿದಳು. ಇಂಥ ಕರೆ ಇನೇನಿಗೆ ಹೊಸದಲ್ಲ. ಏನಾದರೂ ಸಮಾಲೋಚನೆಗಾಗಿ, ತಿಂಗಳಿಗೆ ಒಮ್ಮೆಯಾದರೂ ಅರಸಿ ಅವನನ್ನು ಬರಮಾಡಿಕೊಳ್ಳುತ್ತಿದ್ದಳು. ಒಮ್ಮೊಮ್ಮೆ ಆತ ತಾನಾಗಿಯೇ ರಾಣಿಯ ಭೇಟಿಗೆ ಹೋಗುವುದೂ ಇತ್ತು.
{{gap}}ಆಕೆ ಅಂದಳು :
{{gap}}"ಅಯ್ಯನವರು ಚೆನ್ನಾಗಿದ್ದೀರಾ? ನಿಮ್ಮನ್ನು ನೋಡಿ ಬಹಳ ದಿವಸ ఆಯ್ತು."
ಇನೇನಿ ನೆಲಕ್ಕೆ ಹಾಸಿದ್ದ ರತ್ನಗಂಬಳಿಯ ಮೇಲೆ ಕುಳಿತುಕೊಂಡು, ನಗುನಗುತ್ತ ಉತ್ತರವಿತ್ತ :
{{gap}}"ಮಹತ್ವದ ಘಟನೆಗಳು ಅರಮನೆಯಲ್ಲಿ ನಡೀತಿರುವಾಗ ಭೇಟಿಗೆ ಬಂದು ಸನ್ನಿಧಿಗೆ ತೊಂದರೆ ಕೊಡಬಾರದು ಅಂದ್ಕೊಂಡೆ."
{{gap}}" ನಿಮ್ಮ ಹುಚ್ಚಪ್ಪ ಹೇಗಿದ್ದಾನೆ?”
{{gap}}" ಮುಂಚಿನಷ್ಟು ಉಗ್ರವಾಗಿಲ್ಲ, ಮಹಾರಾಣಿ.”
{{gap}}" ಆ ನೀರಾನೆ ಪ್ರಾಂತದ ನಾಯಕನ ಜತೆ ಯಾರಾದರೂ ಇದ್ದಾರಾ?”
{{gap}}" ಯಾರೂ ಇಲ್ಲ, ಅಂದರೆ ಅಂಗರಕ್ಷಕರಿದ್ದಾರೆ, ಅನ್ನಿ.”
{{gap}}" ಹೊತ್ತು ಹೋಗೋದು ಕಷ್ಟವಾಗ್ರಿರಬೇಕು.”
{{gap}}" ಬಂಧನದಲ್ಲಿರೋ ವನ್ಯಮೃಗದ ಹಾಗೆ ಅತ್ತ ಇತ್ತ ನಡೀತಾ ಇರ್ತಾನೆ.”<noinclude></noinclude>
0t5wdk2flfv936n49ylebpnvfnurmmo
ಪುಟ:Mrutyunjaya.pdf/೩೮೯
104
21878
320775
61515
2026-05-19T09:27:48Z
Shreelatha.Halemane
7642
/* Validated */
320775
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center= ಮೃತ್ಯುಂಜಯ|left=೩೭೬|right=}}
{{gap}}(ಸೊಗಸಾಗಿ ಬಣ್ಣಿಸಿದೆನೆಂದು ಇನೇನಿಗೆ ಹಿಗ್ಗು.)
{{gap}}ಮಹಾರಾಣಿ ಕುಳಿತಿದ್ದ ಆಸನದ ಬಲಮಗ್ಗುಲಲ್ಲಿ ಮುಗ್ಗಾಲುಪೀಠದ ಮೇಲೆ ಬಂಗಾರದಲ್ಲಿ ಎರಕ ಹುಯ್ದಿದ್ದ ಸಿಂಹವಿತ್ತು. ಆಕೆ ಅದರ ಮೈ ದಡವಿದಳು.
{{gap}}" ಸೆಡ್ ಉತ್ಸವಕ್ಕೇಂತ ಬಂದವನಿಗೆ ಈ ಗತಿಯಾಯ್ತು. ನಿಮ್ಮದೇನು ಅಂಬೋಣ?” ಇವತ್ತೋ ನಾಳೆಯೋ ಮಹಾ ಅರ್ಚಕರು ಬಂದ್ದಿಡ್ತಾರೆ, ಅಲ್ಲವಾ?"
{{gap}}"ಅವರು ಬೇಗನೆ ಬರಲಿ ಅಂತ ದೇವರಿಗೆ ನಿತ್ಯಪ್ರಾರ್ಥನೆ ಸಲ್ಲಿಸ್ತಾ ಇದ್ದೇನೆ.”
{{gap}}ಆತ ಹಾಗೆ ಹೇಳುತ್ತಿದ್ದಂತೆಯೇ ಒಬ್ಬ ಪರಿಚಾರಿಕೆ ಅಲ್ಲಿಗೆ ಬಂದಳು.
{{gap}}ಮಹಾರಾಣಿಗೆ ನಮಿಸಿ, “ ಪೆರೋನ ಆಯುರಾರೋಗ್ಯ ವರ್ಧಿಸಲಿ.
ಮಹಾ ಅರ್ಚಕರು ರಾಜಧಾನಿಗೆ ಇದೇ ತಾನೇ ವಾಪಸಾದರೊಂತ ಹಿರಿಯ ಲಿಪಿ ಕಾರಯ್ಯ ಹೇಳಿ ಕಳಿಸಿದ್ದಾರೆ," ಎಂದಳು.
{{gap}}ಇನೇನಿಗೆ ಆಶ್ಚರ್ಯ. ಅವರು ಬೇಗನೆ ಬರಲಿ ಅಂತ ದೇವರಿಗೆ ನಿತ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸ್ತಾ ಇದ್ದೇನೆ' ಎಂದು ತಾನು ಸುಳ್ಳು ಹೇಳಿದಾಗಲೇ ಮಹಾ ಅರ್ಚಕರ ಆಗಮನದ ಸುದ್ದಿ ಬರಬೇಕೆ?
{{gap}}ಮಹಾರಾಣಿಗೆ ಹರ್ಷ.
{{gap}}" ನಿಮ್ಮ ಪ್ರಾರ್ಥನೆಯನ್ನು ದೇವರು ಈಡೇರಿಸಿಯೇ ಬಿಟ್ಟಿದಾನೆ ಅಯ್ಯ! " ಎಂದಳು, ಆಕೆ.
{{gap}}ಇನೇನಿ ನಕ್ಕು ಅಂದ:
{{gap}}" ಇನ್ನು, ಸೆಡ್ ಉತ್ಸವ ಬೇಗನೆ ನೆರವೇರುವಂತೆ ಮಾಡು-ಅಂತ ದೇವರನ್ನು ಕೇಳಿಕೋತೇನೆ!"
{{gap}}"ಅದಾದ ಮೇಲೆ ಇದಾಗದೆ ಇರತದಾ? ಆದರೂ ಅಯ್ಯ, ಮಹಾ ಅರ್ಚಕರು ಬಲು ಕೋಪಿಷ್ಟ ಅಲ್ಲವಾ?”
{{gap}}"ಹ ಮಹಾರಾಣಿ. ಅದು ನಿಜ."
{{gap}}"ಧರ್ಮರಕ್ಷೆ ಇಲ್ಲದೆ ಐಗುಪ್ತ ಉಳಿದೀತಾ. ಅಯ್ಯ? ಧರ್ಮಗುರುವಿನ ಕೋಪ ಶಮನಕ್ಕೆ ಏನು ಬಲಿ ಬೇಕಾಗ್ತದೊ?”<noinclude></noinclude>
3p2t9rctzwz7dit8uykrul75v6i30t5
ಪುಟ:Mrutyunjaya.pdf/೩೯೪
104
21883
320802
64348
2026-05-19T10:59:24Z
Shreesha Sharma
7840
/* Validated */
320802
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|left=|center=ಮೃತ್ಯುಂಜಯ|right=೩೮೧}} ೩೮೧
ಹೇಳಲುಆವನು ಆಸಮರ್ಥ.
{{gap}}ವಸತಿಯನ್ನು ಪ್ರವೇಶಿಸಿದವನು ಏಕಾಂತ ಕೊಠಡಿಗೆ ಹೋಗದೆ ಪಡಸಾಲೆ ಯಲ್ಲಿ ಆಸೀನನಾದ. ದೀಪಗಳನ್ನು ಹಚ್ಚಿದ್ದರು. ಕಣ್ಣೆವೆಗಳನ್ನು ಅರೆಮುಚ್ಚಿ ಕೊಂಡು ಹೇಪಾಟ್ ಧ್ಯನಮಗ್ನನಂತೆ ನಟಸಿದ.
{{gap}}ಆಪ್ತಸಹಾಯಕ ಓಡಿಬಂದು ''ಮಹಾರಾಣಿ ಇಲ್ಲಿಗೆ ಬರ್ತಿದ್ದಾರೆ,'' ಎಂದ.
ಮಹಾ ಅರ್ಚಕನ ಗೋಣು ತುಸು ಆಡಿದಂತೆ ಅವನಿಗೆ ಕಂಡಿತು.
{{gap}}ನೆಫರ್ಟೇಮ್ ಬಂದೇಬಿಟ್ಟಳು. ಅವಳನ್ನು ಹಿಂಬಾಲಿಸಿ ಬಂದು ದೂರ ನಿಂತಳು ಚಿರತೆಯ ಚರ್ಮದ ಸುರುಳಿ ಹೊತ್ತಿದ್ದ ದಾಸಿ.
{{gap}}ಬಂಗಾರದ ಸರಿಗೆಗಳಿಂದ ಬಂಧಿಸಿದ್ದ ಜೊಂಡಿನ ಮೆದು ಪಾದರಕ್ಷೆಯನ್ನು ಮಹಾರಾಣಿ ಕಳಚಿದಳು.ಚಿರತೆಯ ಚರ್ಮದ ಸುರುಳಿಯನ್ನು ತಾನು ಎತ್ತಿ ಕೊಂಡು, ಸದ್ದಾಗದಂತೆ ಹೆಜ್ಜೆ ಇಡುತ್ತ, ಮಹಾ ಅರ್ಚಕನನ್ನು ಸಮೀಪಿಸಿ ಸುರುಳಿಯನ್ನು ಕೆಳಗಿರಿಸಿ ಅವನೆದುರು ಮಂಡಿಯೂರಿದಳು. (ಮಹಾ ಅರ್ಚಕನ ಆಪ್ತಸಹಾಯಕ ವಿಸ್ಮಿತ. ಅಷ್ಟು ಹತ್ತಿರಕ್ಕೆ ಮಹಾರಾಣಿ ಹಿಂದೆಂದೂ ಹೋಗಿ ರಲಿಲ್ಲ ! ) ಬಾಹ್ಯನೋಟಕೆo ಮುಚ್ಚಿ ದಂತಿದ್ದರೂ ಧರ್ಮಗುರುವಿನ ಕಣ್ಣುಗಳು ಅರ್ಧ ತೆರೆದೇ ಇದುವು.. (ಅಸ್ತಮಿಸುತ್ತಿದ್ದ ರಾನಿಗೆ ಹೇಪಾಟ್ ವಂದನೆ ಸಲ್ಲಿಸುತ್ತಿದ್ದುದನ್ನು ಪೀಠಪಲ್ಲಕಿಯಿಂದ ಇಳಿಯುವುದಕ್ಕೆ ಮೊದಲೇ ನೆಫರ್ ಟೀಮ್ ಕಂಡಿದ್ದಳು. ಅಷ್ಟುಬೇಗನೆ ಧ್ಯನದಲ್ಲಿ ತಲ್ಲೀನನಾಗುವುದು ಸುಳ್ಳು ಅಲ್ಲಿ ನಿಂತಿದ್ದ ದೇವಸೇವಕ ಸುದ್ದಿ ತಿಳಿಸದೆ ಇರುತ್ತಾನೆಯೆ ?) ರಾಣಿ ಕಣ್ಣು ಮುಚ್ಚಿ; ಅದೇ ಭಂಗಿಯಲ್ಲಿ ಕಾದಳು.
{{gap}}ಹೇಪಾಟ್ ಎವೆಗಳ ಸಂದಿಯಿಂದಲೇ ಮಂಡಿ ಊರಿದ್ದವಳ ಸೊಬಗನ್ನು ಸವಿದ. ಪುನಃ ಕರಗುತ್ತಿದ್ದೇನೆ ಎಂದು ಕಸಿವಿಸಿ. “ಯಾರು ?” ಎನ್ನುತ್ತ ಕಣ್ಣು ತೆರೆದ.
{{gap}}ಕಣ್ಣು ಮುಚ್ಚಿಕೊಂಡೇ ಮಹಾರಾಣಿ ಅಂದಳು :
{{gap}}“ನಾನು ನೆಫರ್ಟೀಮ್.ಐಗುಪ್ತದ ರಾಜಕುಮಾರನ ತಶಯಿ.”
{{gap}}'' ಏಳಿ.'
{{gap}}ಅರಸಿ, ಧರ್ಮಗುರುವಿನ ಹಾವುಗೆಗಳನ್ನು ಚುಂಬಿಸುವವಳಂತೆ ಅವುಗಳ ಮೇಲೆ ಬಾಗಿದಳು. ಹೇಪಾಟ್ ಮತ್ತೊಮ್ಮೆ ''ಎಳಿ'' ಎಂದ. ಅವನ<noinclude></noinclude>
7keegzxf6j93mqsl0nsm9m82ow7nz0e
ಪುಟ:Mrutyunjaya.pdf/೩೯೫
104
21884
320803
64378
2026-05-19T11:06:13Z
Shreesha Sharma
7840
/* Validated */
320803
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|left=೩೮೨|center=ಮೃತ್ಯುಂಜಯ|right=}}
ಅಂಗೈಗಳು ಅವಳ ತೋಳುಗಳನ್ನು ಸೋಂಕಿದುವು, ನೆಫರಟೀಮ್ ಎದ್ದಳು.
{{gap}}“ಐಗುಪ್ತದ ಮಹಾರಾಣಿಗೆ ಒಂದು ಪೀಠ ತಂದ್ಕೊಡು.”
{{gap}}ದೇವಸೇವಕನಿಗೆ ಹೇಪಾಟ್ ಆಜ್ಞಾಪಿಸಿದ:
{{gap}}ಅರ್ಚಕನ ಆಸನಕ್ಕಿಂತಲೂ ತಗ್ಗಾದ ಒಂದು ಮುಗ್ಗಾಲು ಪೀಠವನ್ನು ಆ ದೇವಸೇವಕ ತಂದಿರಿಸಿದ, ಉಡುಪಿನ ನೆರಿಗೆಗಳು ಕೆಡದಂತೆ, ಹಿಂಭಾರದಿಂದ ತಾನು ಹಿಂದಕ್ಕೆ ಕುಸಿಯದಂತೆ, ಎಚ್ಚರ ವಹಿಸುತ್ತ ನೆಫರ್ ಟೀಮ್ ಅದರ ಮೇಲೆ ಕುಳಿತಳು. ಮಹಾ ಅರ್ಚಕನ ಕಣ್ಣುಗಳಲ್ಲಿ ಲಜ್ಜೆ ಇರಲಿಲ್ಲ, ಆದರೆ ಸಿಟ್ಟನ್ನು ಬಿಟ್ಟುಕೊಡಲಾರದ ಅವನ ದವಡೆಯ ಸ್ನಾಯುಗಳು ಮಿಸುಕಿದುವು.
{{gap}}ಮಹಾರಾಣಿಯೇ ಮಾತು ಆರಂಭಿಸಿದಳು;
{{gap}}''ನೀವು ಬಯಸುವ ಬಲಿ ಯಾವುದೂ ಅಂತ ತಿಳಿಯೋದಕ್ಕೆ ಬಂದಿದ್ದೇನೆ.”
{{gap}}ಅವಳ ಮೈಮೇಲೆ ದೃಷ್ಟಿಯನ್ನು ಹರಿಯಬಿಡುತ್ತ, ಸ್ವರವನ್ನು ಏರಿಸದೆಯೇ, ಹೇಪಾಟ್ ಕೇಳಿದ:
{{gap}}"ಎಂಥ ಬಲಿ? ಯಾವುದಕ್ಕೆ?''
{{gap}}ಆ ಪ್ರಶ್ನೆಗಳನ್ನು ಉತ್ತರಿಸದೆ ನೆಫರ್ ಟೀಮ್ ಮುಂದುವರಿಸಿದಳು:
{{gap}}“ಆಶ್ರಿತರಿಂದ ತಪ್ಪುಗಳಾಗಿದ್ದರೆ ತೋರಿಸಿಕೊಟ್ಟು, ತಿದ್ದಬೇಕೇ ಹೊರತು ಪರತಾಪದಿಂದ ದಹಿಸಿ ಬೂದಿಯಾಗೋ ಹಾಗೆ ಮಾಡೋದೆ?”
{{gap}}ಮನಸ್ಸಿಲ್ಲದ ಮನಸ್ಸಿನಿಂದ ಹೇಪಾಟ್ ನಕ್ಕ.
{{gap}}"ರಾಜನೀತಿಯಲ್ಲಿ ಮಹಾರಣಿ ಪಾರಂಗತರಾದಂತಿದೆ. ರಾಜ ಕುಮಾರನ ಶಿಕ್ಷಣದ ಹೊಣೆಯನ್ನು ನೀವೇ ಹೊತ್ತಿದ್ದೀರೊ?”
{{gap}}“ಆಳುವ ಮಹಾಪ್ರಭುವಿಗೆ ಅಂತಃಪುರವೇ ಜಗತ್ತು. ಪಿತೃಸಮಾನರಾದ ಧರ್ಮಗುರುವಿಗೆ ನಿರಾಸಕ್ತಿ, ನಾನೇ ಶಿಕ್ಷಣ ನೀಡದೆ ಇನ್ನೇನು ಮಾಡಲಿ?”
{{gap}}“ಸಿಂಹಾಸನದ ಉತ್ತರಾಧಿಕಾರಿ ಸಿದ್ಧನಾಗುತ್ತಿದ್ದಾನೆಂದೆ ಇದರ ಅರ್ಥ ?”
{{gap}}“ಅಲ್ಲವೆ?....ಆದರೆ, ಸಲಹಬೇಕಾದ ನೀವು-ತಂದೆ-ಸಿಂಹಾಸನದ ಮೇಲೆಯೇ ಯುದ್ಧ ಸಾರಿದ್ಧೀರಿ !”<noinclude></noinclude>
ne7ex9okpg26qoj38p949zb99yhp9yw
ಪುಟ:Mrutyunjaya.pdf/೩೯೬
104
21885
320804
64392
2026-05-19T11:10:19Z
Shreesha Sharma
7840
/* Validated */
320804
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|left=|center=ಮೃತ್ಯುಂಜಯ|right=೩೮೩}}
{{gap}}ಹೇಪಾಟ್ ಸಿಡಿನುಡಿದ :
{{gap}}"ಸುಳ್ಳು ! ಅಪ್ರಬುದ್ಧರ ವ್ಯವಹಾರದಿಂದ ಸಿಂಹಾಸನದ ಮೂಲೆ ಗುಂಪಾಗ್ತದಲ್ಲ ಅನ್ನೋದೆ ನನ್ನ ಕಾತರ.”
{{gap}}“ರಾಜಕುಮಾರ ಅಪ್ರಾಪ್ತ ವಯಸ್ಕ—ಒಪ್ತೇನೆ.”
{{gap}}“ರಾಜಕುಮಾರನದಲ್ಲ–ಅಪ್ರಬುದ್ಧತೆ ಸೆಡ್ ಉತ್ಸವಕ್ಕಾಗಿ ಹಾತೊರೆಯುತ್ತಿರೋ ಅರಸನದು.”
{{gap}}“ಪ್ರಾಚೀನ ಕಟ್ಟಳೆಗೆ ಅನುಗುಣವಾಗಿಲ್ಲವಾ ಸೆಡ್ ಉತ್ಸವ?”
{{gap}}"ಮಹಾ ಅರ್ಚಕರ ಸ್ಥಾನಮಾನಗಳ ವಿಷಯದಲ್ಲಿ ಪ್ರಾಚೀನ ಕಟ್ಟಳೆ ಏನು ಹೇಳ್ತದೆ ಮಹಾರಾಣಿ?”
{{gap}}“ಮಹಾ ಅರ್ಚಕರು ಕ್ಷಮಿಸ್ಬೇಕು. ಗುರುಮನೆಯ ವಿಷಯದಲ್ಲಿ ಅರಮನೆಯಿಂದ ಮುಂದೆ ಯಾವ ಅಪಚಾರವೂ ಆಗುವುದಿಲ್ಲ ಅಂತ ಭರವಸೆ ನೀಡ್ತೇನೆ.”
{{gap}}ಹೇಪಾಟ್ ಮಾನವಾಗಿ ಮಹಾರಾಣಿಯನ್ನು ಆಪಾದಮಸ್ತಕ ದಿಟ್ಟಿಸಿ ನೋಡಿದ. ನೆಫರ್ ಟೀಮಳೆ ಮುಖ ರಕ್ತರಂಜಿತವಾಯಿತು.
{{gap}}ಚಿರತೆ ಚರ್ಮದ ಸುರುಳಿ ಅಲ್ಲಿಯೇ ಇತ್ತು, ಮಹಾ ಅರ್ಚಕನ ದೃಷ್ಟಿ ಅದರ ಮೇಲೆ ತಂಗಿತು.
{{gap}}ನೆಫರ್ಟೀಮ್ ಆಂದಳು:
{{gap}}“ಪುಟ್ಟ ಕಾಣಿಕೆ ಸ್ವೀಕರಿಸ್ಬೇಕು. ನಿಮಗೆ ಇಷ್ಟವಾಗಬಹುದು.ಬಿಡಿಸಿ ತೋರಿಸಲೆ?”
{{gap}}"ಬೇಡ. ಅಲ್ಲೇ ಇರಲಿ. ಮಹಾರಾಣಿ ತಂದುದನ್ನು ಸ್ವೀಕರಿಸಿದ್ದೇನೆ.”
{{gap}}"ಇದರ ಸೊಬಗು ಅಪೂರ್ವವಾದದ್ದು. ಸೆಡ್ ಉತ್ಸವದ ಪೂಜೆಯ ವೇಳೆ ಮಹಾ ಅರ್ಚಕರು ಇದನ್ನು ಧರಿಸಿದರೆ ಈ ಭಕ್ತಿಗೆ ಪರಮ ಸಂತೋಷ ವಾಗ್ತದೆ. ನನ್ನ ಮೇಲೂ ರಾಜಕುಮಾರನ ಮೇಲೂ ಕರುಣೆ ತೋರಿದ್ದೀರಿ. ನಾನು ಆರಂಭದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ದಯೆಪಾಲಿಸಿಬಿಡಿ. ಹೊರಡ್ತೇನೆ.'<noinclude></noinclude>
1fmx3y1ro164l9cdq25j1xycivovzux
ಪುಟ:Mrutyunjaya.pdf/೩೯೭
104
21886
320805
64403
2026-05-19T11:13:16Z
Shreesha Sharma
7840
/* Validated */
320805
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|left=೩೮೪|center= ಮೃತ್ಯುಂಜಯ|right=}}
{{gap}}"ಯಾವ ಪ್ರಶ್ನೆ ಮಹಾರಾಣಿ ?”
{{gap}}“ನೀವು ಬಯಸುವ ಬಲಿ...."
{{gap}}ಹೇಪಾಟ್ ಎದ್ದು ನಿಂತ. ಮಹಾರಾಣಿಯೂ ಎದ್ದಳು. ವುಹಾ ಅರ್ಚಕನೆಂದ:
{{gap}}“ನಿಮ್ಮ ಪ್ರಶೆಗೆ ನಾಳೆ ಉತ್ತರ ಕೊಡ್ತೇನೆ.”
{{gap}}“ನಾಳೆ?”
{{gap}}"........."
{{gap}}“ಬೆಳಿಗ್ಗೆ ಪೂಜೆ ಮುಗಿಸಿ ಅರಮನೆಗೆ ಆಗಮಿಸಿ, ಮಧ್ಯಾಹ್ನ ಅಲ್ಲಿಯೇ ಭೋಜನ ಸ್ವೀಕರಿಸಬೇಕು. ಇದು ನನ್ನ ಪ್ರಾರ್ಥನೆ.”
{{gap}}“ಮಹಾರಾಣಿ....”
{{gap}}ನೆಫರ್ಟೀಮಳ ಕಿವಿಗೆ ಇಂಪಾಗಿ ಕೇಲಳಿಸಿದ ಸಂಬೋಧನೆ.
{{gap}}“ಹೇಳೋಣವಾಗಲಿ."
{{gap}}"ಬರಲಾ ? ನಾಳೆ ದಾರಿ ನೋಡ್ತೇನೆ "
{{gap}}ಹೇಪಾಟ್ ಆಶೀರ್ವದಿಸಲು ಕೈ ಎತ್ತಿದ. ಮಹಾರಾಣಿ ನಡುಬಾಗಿಸಿ ನಮಿಸಿ ಹೊರಟಳು. ನಿರ್ಗಮಿಸುತ್ತಿದ್ದ ಆಕೆ ದಾಸಿಯೊಡಗೂಡಿ ಬಾಗಿಲನ್ನು ದಾಟುವವರೆಗೂ ಮಹಾಅರ್ಚಕನ ದೃಷ್ಟಿ ಅವಳನ್ನು ಹಿಂಬಾಲಿಸಿತು.
{{gap}}ತನ್ನೆಡೆಗೆ ಬಂದ ದೇವಸೇವಕನಿಗೆ ಆತ ನುಡಿದ:
{{gap}}“ಸುರುಳಿಯನ್ನು ಬಿಚ್ಚು.”
{{gap}}ಐದು ಮೊಳ ಉದ್ದ. ದೇವಸೇವಕ ಅದನ್ನು ತನ್ ಮೈಗೆ ಅಡ್ಡವಾಗಿ ಹಿಡಿದ. ಹೇಪಾಟ್ ಒಂದು ಹೆಜ್ಜೆ ಮುಂದಿರಿಸಿ, ಚಿರತೆ ಚರ್ಮದ ಕತ್ತು ಬೆನ್ನುಗಳ ಮೇಲೆ ಕೈ ಆಡಿಸಿದ.
{{gap}}....ಪ್ಟಾ ದೇವನಿಗೆ ಪುಷ್ಪಗಳನ್ನರ್ಪಿಸಿ, ಪ್ರಸಾದ ಪಡೆದು, ನೆಫರ್ ಟೀಮ್ ಪಲ್ಲಕಿಯತ್ತ ಧಾವಿಸಿದಳು. ದೀವಟಿಗೆಯವರು ತಮ್ಮ ಪಂಜು ಗಳನ್ನು-ಸೆಣಬಿನ ಚಿಂದಿಗಳನ್ನು ಬಿಗಿದು ಕಟ್ಟಿ ನಾರಗಸೆ ಎಣ್ಣೆ ಯಿಂದ ತೋಯಿಸಿ ಮಾಡಿದ್ದ ಕಂಚಿನ ದೀಪಗಳನ್ನು-ಉರಿಸಿ ಈಗ ಮುಂಭಾ ಗದ ಅಂಗರಕ್ಷಕರ ಮುಂದುಗಡೆ ನಿಂತಿದ್ದರು.<noinclude></noinclude>
4hbxlkh0uuuujgy0v04lka8ojtyjhqg
ಪುಟ:Mrutyunjaya.pdf/೩೯೮
104
21887
320806
64422
2026-05-19T11:16:34Z
Shreesha Sharma
7840
/* Validated */
320806
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|left=|center=ಮೃತ್ಯುಂಜಯ|right=}}
{{gap}}ನೆಫರ್ಟೀಮ್ ಪಲ್ಲಕಿಯಲ್ಲಿ ಅರಮನೆಯ ೩೮೫ತ್ತ ಸಾಗುತ್ತ ಮಹಾ ಅರ್ಚಕ ನೊಡನೆ ತನ್ನ ಸಂವಾದವನ್ನು ಸ್ಮರಿಸಿಕೊಳ್ಳುತ್ತ, ಕತ್ತಲಿನ ರಕ್ಷಣೆಯಲ್ಲಿ ಆತ್ಮ ಸಂತೃಪ್ತಿಯಿಂದ ಮತ್ತೆ ಮತ್ತೆ ತನ್ನಷ್ಟಕ್ಕೆ ನಸುನಕ್ಕಳು.
* * * *
{{gap}}ಆ ರಾತ್ರೆ ಅಮಾತ್ಯ ತನ್ನ ಭೇಟಿಗೆ ಬರುವ ವೇಳೆಗೆ ಪೆರೋ, ಮೈ ದಣಿವು ನೀಗಲೆಂದು ನಸುಬಿಸಿ ಸಾನ ಮಾಡಿ, ಮೈಗೆ ಸುಗಂಧ ದ್ರನ್ಯ ಲೇಪಿಸಿ ಕೊಂಡು ಕುಳಿತಿದ್ದ, ಒಳಗೆ ಬಂದ ಆಮೆರಬ್ ನ ಹಸನ್ಮುಖ ಅವನ ಮನಸ್ಸಿಗೆ ಮುದ ನೀಡಿತು.
{{gap}}ಹೆಖ್ವೆಟ್ ನಡೆಸಿದ ಯಶಸ್ವಿ ರಾಯಭಾರದ ವಿವರ ತಿಳಿದಾಗ ಅವನು ಸಂತುಷ್ಟನಾದ.
{{gap}}“ಆಂತೂ ಪರವಾಗಿಲ್ಲ ಹೆಬ್ವೆಟ್.”
{{gap}}ಅಮಾತ್ಯನೆಂದ:
{{gap}}"ಆನ್ ನಗರಿಗೆ ಹೊರಡೋದಕ್ಕೆ ಮುಂಚೆಯೇ ಹೆಖ್ವೆಟ್ ಕೇಳಿದ್ದ- ಈ ರಾಯಭಾರದ ತನ್ನ ಕಥೇನ ಗೋರಿಯೊಳಗೆ ಚಿತ್ರಿಸೋದಕ್ಕೆ ಅವಕಾಶ ಕೊಡಬೇಕೊಂತ."
{{gap}}“ಆಗಲಿ, ಅದಕ್ಕೇನೀಗ?”
{{gap}}“ಮಹಾಪ್ರಭುಗಳ ಗೋರಿಯಲ್ಲೂ ಒಂದು ಕಡೆ ಆತನ ಚಿತ್ರ ಸೇರಿಸ್ಬೇಕಂತೆ.”
{{gap}}ಸೇರಿಸೋಣವೇ?
{{gap}}“ತಪ್ಪೇನೂ ಅಲ್ಲ.”
{{gap}}"ಸರಿ ಹಾಗಾದರೆ."
{{gap}}"ಒಪ್ಪಿಗೆ ನೀಡಿದ್ದೀರಿ- ಅಂತ ನಾಳೆ ಆತ ಬಂದಾಗ ಮಹಾಪ್ರಭುಗಳೇ ಒಂದು ಮಾತು ಹೇಳ್ಬೇಕು”
{{gap}}"ಹೂಂ. ಹೂಂ."
{{gap}}"ಅಂತೂ ಒಂದು ಘಟ್ಟ ಮುಟ್ಟಿದ ಹಾಗಾಯಿತು.”
೨೫<noinclude></noinclude>
cimrsrk6041hf7mz8u8zca6ce229vym
ಪುಟ:Mrutyunjaya.pdf/೪೫೧
104
21940
320771
201759
2026-05-19T09:11:40Z
Shreelatha.Halemane
7642
/* Validated */
320771
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|right=|left=೪೩೮}}
ಗೊತ್ತಾಯ್ತು.{{gap}} ಕಲ್ಲುಕುಟಿಗ ಹಪು ವಾಸಕ್ಕೆ ಜಾಗ ಕೊಟ್ಟಿದ್ದಾನೆ.{{gap}}ಅವನ</br>ಮಕ್ಕಳು ಹೇಳಿದ್ರು. ಸಂಜೆ ರಾಜಗೃಹಕ್ಕೆ ಬರ್ತೀರಿ ಅಂತಲೂ ತಿಳಿದು</br>ಬಂತು.”</br>
{{gap}}ಸೆಮ ರಾಗವೆಳೆದ:</br>
{{gap}}“ಈಗ ಸಭೆ ಇದೆಯಲ್ಲ....”</br>
{{gap}}“ಹಾಗಾದರೆ ರಾತ್ರೆ ಸಿಗ್ತೇನೆ. ಅಥವಾ ನಾಳೆ.”</br>
{{gap}}ಬಟಾನೆಂದ :</br>
{{gap}}"ನಾಳೆ ಬೆಳಿಗ್ಗೆ ಹಪು ಮನೆಗೆ ನಾನೇ ಬರ್ತೇನೆ.”</br>
{{gap}}"ನೀವೆ ಬರ್ತೀರಾ ? ಆಗಬಹುದು. ನಾನು ಕೆತ್ತಿರೋ ಸಣ್ಣ ಶಿಲಾ</br>ಮೂರ್ತಿಗಳು ಎರಡು ಮೂರು ಅಲ್ಲಿವೆ. ಬರ್ತಾ ತಂದದ್ದು.ತೋರಿಸ್ತೇನೆ.</br>ಹಿರಿಯರೆಲ್ಲ ನೋಡಿದ್ದಾರೆ.”</br>
{{gap}}“ಹೌದು, ಹೌದು," ಎಂದ ಸ್ನೊಫ್ರು.
{{gap}}“ಅದ್ಭುತ ಕೃತಿಗಳು,”</br>ಎಂದು ಮೆಚ್ಚುಗೆಯ ನುಡಿಯನ್ನೂ ಸೇರಿಸಿದ.</br>
{{gap}}ಶಿಲ್ಪಿ ಸಣ್ಣನೆ ನಕ್ಕ. ಎದ್ದು, “ನಾನು ಹೊರಟೆ. ಸಭೆಗೆ ಅಡ್ಡಿ</br>ಯಾಗೋದಿಲ್ಲ,” ಎಂದು ಬಟಾನ ಕಡೆ ನೋಡಿ ನುಡಿದು, ಒಳಬಂದಾಗಿನ</br>ಗಾಂಭೀರ್ಯದ ನಡಿಗೆಯಿಂದಲೇ ಉದ್ಯಾನದತ್ತ ಸಾಗಿದ.</br>
{{gap}}ಸ್ನೊಫ್ರುವೆಂದ :</br>
{{gap}}"ಬಹಳ ದೊಡ್ಡ ಮನುಷ್ಯ.
{{gap}}ಇವನು ಮುಟ್ಟಿದ ಕಲ್ಲು ಮೆದುವಾಗ್ತದೆ.</br>ಚಾಣ ತಗಲಿದಾಗ ಸೊಬಗಿನ ಮೂರ್ತಿಯಾಗ್ತದೆ. ಈಗ ಒಂದು ಮೊಳ</br>ಎತ್ತರದ ನೀರಾನೆ ಮಾಡ್ತಿದ್ದಾನೆ.”</br>
{{gap}}ಬಟಾನಿಗೆ ಕಚಗುಳಿ ಅನುಭವ.</br>
{{gap}}“ಮಾವ! ಮಾವ! ರಾಜಧಾನೀಲಿ ನಿಮ್ಮ ದೇವತಾ ಮೂರ್ತಿಗಳಿಗೆ</br>ಭಾರಿ ಬೇಡಿಕೆ. ಒಬ್ಬ ಅಂಗಡಿಕಾರ ಅಪೋಫಿಸ್ ಮತ್ತು ಅರಮನೆ ದೇವ</br>ಮಂದಿರದ ಅರ್ಚಕ ಇನೇನಿ—ಇಬ್ಬರೂ ಕೇಳಿದ್ದಾರೆ. ದೋಣಿ ತುಂಬ ದೇವ</br>ಶಿಲ್ಪ ಸ್ನೊಫ್ರು ಮಾಡಿದ ಮೂರ್ತಿಗಳನ್ನು ತರಬೇಕಂತೆ!"</br>
{{gap}}"ಕೆಫ್ಟು ಅಲ್ಲಿ ಕೊಟ್ಟು ಹೋಗಿರ್ಬೇಕು," ಎಂದ ಸ್ನೊಫ್ರು.</br>
{{gap}}“ಅವನೇ. ಒಮ್ಮೆ ಏನಾಯ್ತು ಗೊತ್ತಾ?”<noinclude></noinclude>
6fsk3lpb9lyktrsyimztv3ck43x1jpx
ಪುಟ:Mrutyunjaya.pdf/೫೦೪
104
21993
320764
63511
2026-05-19T08:14:23Z
Shreelatha.Halemane
7642
/* Validated */
320764
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೪೯೧}}
ದಾಗಲಿ."
{{gap}}"ಸೆಡ್ ಉತ್ಸವ ಆದ ಮೇಲೆ ಮಹಾಪ್ರಭು ಯುವಕರಂತೆ ಕಾಣಿಸ್ತಿ
ದ್ದಾರೆ ಅಲ್ಲವೆ?”
{{gap}}".........."
{{gap}}"ಸುಮ್ಮನಿದ್ಡೀಯಲ್ಲ. ಯುವಕರಂತೆ ಯುವಕರು ! ಬಳಲಿದ್ದಾರೆ.....!"
{{gap}}ಅಷ್ಟು ಹೇಳಿ ಮಹಾರಾಣಿ ಸಣ್ಣನೆ ನಕ್ಕಳು. ನೆಹನವೇಯ್ಟಳೂ
ಮುಗುಳುನಗೆ ಸೂಸಿದಳು.
{{gap}}ಮೆರವಣಿಗೆ ಬಂದದ್ಡು ತೊರೆಯಾಗಿ, ಮರಳಿದ್ಡು ಭೋರ್ಗರೆಯುವ
ನದಿಯಾಗಿ.
* * * * * *
{{gap}}ಬಳಸಿ ಬಳಸಿ ಗಾಳಿ ನುಸುಳಲು ಎಲ್ಲಿಯೋ ರಂಧ್ರವಿತ್ತು. ಸೂರ್ಯರಶ್ಮಿ
ಅದರಲ್ಲೆಲ್ಲೋ ಸಿಲುಕಿಕೊಂಡು, ಮುರಿದು, ಧೂಳಿಯಾಗಿ, ಗಾಳಿಯೊಡನೆ ಬೆರೆತು
ನೆಲಮಾಳಿಗೆಯಲ್ಲಿ ಪಸರುವ ನಸುಬೆಳಕಾಯಿತು.
{{gap}}ಮೆನೆಪಟಾ ಅಂದುಕೊಂಡ: ಹಗಲು ; ಸಂದೇಹವಿಲ್ಲ.......ಇದು
ಉತ್ಸವದ ಹಗಲು. ಸೂರ್ಯಾಸ್ತವಾಗಿ ಮತ್ತೆ ಬೆಳಕು ಹರಿಯುವವರೆಗೂ ಸದ್ದು
ಗದ್ದಲ ಹೊರಗೆ. ತನ್ನ ನೆನಪಾದರೂ ಅವರಿಗೆ ಆಗುವುದೊ ಇಲ್ಲವೊ? ಬಟಾ
ಈಗ ಬಂದರೆ ಅವನನ್ನೂ ಹಿಡಿಯಬಹುದು : ಅವನ ಜತೆ ಇರುವವರನ್ನೂ
ಬಂಧಿಸಿ ಸೆರೆಮನೆಗೆ ತಳ್ಳಬಹುದು. ಜತನದಿಂದಿರಬೇಕು,_ಬಲೆಗೆ ಬೀಳಬಾರದು_
ಎಂದು ಅವರಿಗೆ ತಿಳಿಸುವುದು ಹೇಗೆ ? ಮೆನ್ನ-ಮೆನ್ನ ಎಲ್ಲಿರುವನೊ ?
ಹಿಂದಿನ ದಿನದಿಂದ ಬಟಾನಿಗಾಗಿ ದೋಣಿಕಟ್ಟೆಯಲ್ಲಿ ಅವನು ಕಾಯುತ್ತಿದ್ದ.
ಅದು ಅಪಾಯದ ಸ್ಥಳ. ಅರಮನೆಯ ಗೂಢಚಾರರೂ ಅರ್ಚಕರ ಬೇಹಿನ
ವರೂ ಅಲ್ಲಿರುತ್ತಾರೆ. ಮೆನ್ನ ಬುದ್ಧಿವಂತ. ಖಂಡಿತ ಅಲ್ಲಿ ನಿಲ್ಲಲಾರ.
ದಂಡೆಯ ಉದ್ದಕ್ಕೂ ಮೇಲಕ್ಕೆ ಹೋಗಿರಬಹುದು.
{{gap}}ಅವನಿಂದಲೋ ಬಟಾನಿಂದಲೋ ಸಂದೇಶ ಬರಬಹುದೆ?
ತಪ್ಪಗ್ರಹಿಕೆಯಿಂದ ಹೀಗೆ ಆಗಿರುವ ಸಂಭವ ? ಅಮಾತ್ಯನ ಅರಿವಿಲ್ಲ
ದಯೇ ಈ ಬಂಧನ ನಡೆದಿರಬಹುದೆ ? ತಾನು ಅಮಾತ್ಯನನ್ನು ಕಾಣಬೇಕು.
ಇದೇನು_ಎಂದು ಕೇಳಬೇಕು. ಗೇಬು ಮತ್ತಿತರರ ಕೈವಾಡವೇನಾದರೂ<noinclude></noinclude>
kagzusyod6zwfghcy5th4aghe4jthu2
ಪುಟ:Mrutyunjaya.pdf/೫೦೫
104
21994
320765
64669
2026-05-19T08:46:40Z
Shreelatha.Halemane
7642
/* Validated */
320765
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೪೯೨|right=}}
ಇದರಲ್ಲಿ ಇದ್ದರೆ? ನೀರಾನೆ ಪ್ರಾಂತದ ಭೂಮಾಲಿಕರು ಏನಾದರೂ ಹೂಟ
ಹೂಡಿರಬಹುದೆ? ಆದರೆ ಅದಕ್ಕೆಲ್ಲ ಸೆನೆಬ್ ಸಹಕಾರ ಬೇಕು; ಅಮಾತ್ಯನ
ಒಪ್ಪಿಗೆ ಬೇಕು.
{{gap}}ಅಮ್ಮನ್, ಓ ಅಮನ್......ನನ್ನ ಪ್ರಾರ್ಥನೆಗಳೆಲ್ಲ ವ್ಯರ್ಥವಾದುವಲ್ಲ......
{{gap}}ಕಿರ್ರ್ ಸದ್ದು ಬಾಗಿಲಲ್ಲಿ. ಅಂಗೈ ಅಗಲದ ಕಿಂಡಿ ತೆರೆದುಕೊಂಡು, ಒಂದು
ಹಿಡಿ ಬೆಳಕು ಒಳ ಬಂತು. ಜತೆಯಲ್ಲಿ ಸ್ತ್ರೀಯ ಇಳಿದನಿ :
{{gap}}"ಅಣ್ಣ ! ಅಣ್ಣ !”
{{gap}}ಧ್ವನಿಯಲ್ಲಿ ಆತುರ.
{{gap}}ಕಿರ್ ಸಪ್ಪಳ ಕೇಳಿಸಿದಾಗಲೇಔಟ, ಬೆಕ್ ಇಬ್ಬರೂ ಏಕಕಾಲದಲ್ಲಿ ಅತ್ತ
ದೃಷ್ಟಿ ಹರಿಸಿದ್ದರು. “ ಅಣ್ಣ !” ಎಂಬ ಕರೆ ಬಂದಾಗ, ಏನನ್ನೋ ಗುರುತಿಸಿ
ದವನಂತೆ ಬೆಕ್ ತಟ್ಟನೆ ಎದು ಬಾಗಿಲಿನತ್ತ ಧಾವಿಸಿ ಬಗ್ಗಿ, ಕಿಂಡಿಯಿಂದ
ಹೊರನೋಡಿದ. ಮುಖ ಮಾತ್ರ ಕಾಣಿಸಿತು. ಅವಳೇನೇ. ಬೆಕ್ ಔಟನನ್ನೂ
ಬಳಿಗೆ ಕರೆದ.
{{gap}}ಹೊರಗಿನಿಂದ ಸ್ವರ ಕೇಳಿಸಿತು:
{{gap}}"ನಾನು ಶೀಬಾ. ಕಸಾಯಿ ಮನೆಯವಳು."
{{gap}}ಮಗು ಚೆನ್ನಾಗಿದೆಯಾ ? ಬಾತುಕೋಳಿ ಹೊರಗೆ ದಾಟಿಸಿ ಇನೇನಿಗೆ
ಮೂರ್ತಿ ಕೊಟ್ಟೆಯಾ ? ಗಂಡ ಊರಿಗೆ ಬಂದನಾ?..ಇನ್ನೂ ಹೀಗೆಯೇ
ಕೆಲವು ಪ್ರಶ್ನೆಗಳನ್ನು ಕೇಳಬೇಕೆನಿಸಿತು ಬೆಕ್ಗೆ. ಆದರೆ ಇರುವಿಕೆಯ ಕಠೋರತೆ
ಯಿಂದ ಗಂಟಲು ಒತ್ತರಿಸಿತು.
{{gap}}ಆಕೆಯೇ ಮತ್ತೆ ಕೇಳಿದಳು :
{{gap}}"ಅಣ್ಣ ಗುರುತು ಸಿಗ್ತಾ? (ಕಂಕುಳಲ್ಲಿದ್ದ ಮಗುವನ್ನು ಎತ್ತಿ ಹಿಡಿದು)
ಇದು ಅದೇ ಮಗ."
{{gap}}"ಹೂಂ. ಹೂಂ."
{{gap}}ಅವಳಿಗೆ ಸಂತಸ.
{{gap}}ಔಟ ಕೇಳಿದ:<noinclude></noinclude>
jw4z5ftweqq4jboiqy2bqrxqmh7mm1l
ಪುಟ:Mrutyunjaya.pdf/೫೦೬
104
21995
320766
64587
2026-05-19T08:51:20Z
Shreelatha.Halemane
7642
/* Validated */
320766
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೪೯೩}}
{{gap}}"ಕಾವಲುಗಾರರೆಲ್ಲಿ ?”
{{gap}}"ರಾತ್ರಿ ಕೈದಿಗಳನ್ನೆಲ್ಲ ಬಿಟ್ರಲ್ಲ? ಯಾರಿಗೂ ಈ ಕಡೆ ಆಸಕ್ತಿ ಇಲ್ಲ.
ಒಬ್ಬ ರೊಟ್ಟಿ ತಿನ್ನೋಕೆ ಹೋಗಿದ್ದಾನೆ. ಇನ್ನೊಬ್ಬ ಓ ಅಲ್ಲಿ ನಿಂತಿದ್ದಾನೆ.
ಇಬ್ಬರೂ ನನ್ನ ಗಂಡನ ಸ್ನೇಹಿತರು. ಅರ್ಧ ದಂಡು ಸೆಡ್ ಉತ್ಸವಕ್ಕೇಂತ
ಬಂದಿದೆ. ನನ್ನ ಗಂಡನೂ ಬಂದಿದ್ದಾನೆ. ಈಗ ಅವರೆಲ್ಲ ಮಹಾಮಂದಿರದಲ್ಲಿ
ದ್ದಾರೆ.”
{{gap}}“ನಮ್ಮ ನಾಯಕರನ್ನು ಎಲ್ಲಿಟ್ಟಿದ್ದಾರೆ, ಗೊತ್ತಾ?”
{{gap}}“ಯಾರೂ ಹೇಳಿಲ್ಲವಾ ? ನೆಲಮಾಳಿಗೇಲಿ. ಜಜ್ ಮಂಖ್ ಇದ್ನಲ್ಲ?
ಅಲ್ಲಿ ಬೇರೆ ಕಾವಲುಗಾರರು.”
{{gap}}ಕಿಟಕಿಗೆ ಏನೋ ಅಡ್ಡವಾದಂತೆ ಅನಿಸಿತು ಬೆಕ್ಗೆ. ಶೀಬಾ ಏನನ್ನೋ
ಒಳಕ್ಕೆ ತುರುಕುತ್ತಿದ್ದಳು. ಎರಡು ರೊಟ್ಟಿ.
{{gap}}"ತಗೊಳ್ಳಿ."
{{gap}}“ ನಮಗೆ ಬೇಡ, ನಾಯಕರಿಗೆ-”
{{gap}}"ಅದಕ್ಕೇನಾದರೂ ಮಾಡೋಣ. ಈಗ ಇದನ್ನು ತಗೊಂಡ್ಬಿಡಿ
ಬೇಗ."
{{gap}}ಬೆಕ್ ರೊಟ್ಟಿಗಳನ್ನುಒಳಕ್ಕೆಳೆದುಕೊಂಡ.
{{gap}}ಔಟನೆಂದ !
{{gap}}"ಮೆನ್ನ ನಿನಗೆ ಗೊತ್ತಾ? ಅರಮನೆ ಮಂದಿರದ ಕಿರಿಯ ಅರ್ಚಕ.
ಮೆನ್ನ ಹುಚ್ಚಯ್ಯ.”
{{gap}}"ಗೊತ್ತು ಅಣ್ಣ.”
{{gap}}"ನಮ್ಮೂರಿನಿಂದ ಬಟಾನೂ ಗೆಳೇರೂ ಬರ್ತಾರೆ”
{{gap}}"ಬಟಾ ನನಗೆ ಗುರುತಿಲ್ಲವಾ ? ಕೊಳಲು ಬಾರಿಸ್ತಾರೆ.”
{{gap}}"ಅವರೇ. ನಾಯಕರೂ ನಾವೂ ಇಲ್ಲಿರೋದು ಬಟಾಗೆ ಆದಷ್ಟು ಬೇಗ
ಗೊತ್ತಾಗ್ಬೇಕು."
{{gap}}ಮೆನ್ನ ದೋಣಿಕಟ್ಟೇಲೋ ಮೇಲ್ಗಡೇನೋ ಬಟಾನ ದಾರಿ ನೋಡ್ತಾ
ನಿಂತಿದ್ದಾರೆ. ಸ್ವಲ್ಪ ಹುಡುಕಿ ಅವರಿಗೆ ಸಂಗತಿ ತಿಳಿಸ್ತೀಯಾ ?”
{{gap}}“ ಹೂಂ ಅಣ್ಣ. ಈಗ್ಲೇ ಹೋಗ್ತೇನೆ. ಮೆನ್ನಯ್ಯನನ್ನು ಕಂಡು,<noinclude></noinclude>
3u5tag2z8xv8krrxj5enn610ussc0wr
ಪುಟ:Mrutyunjaya.pdf/೫೦೭
104
21996
320767
64627
2026-05-19T08:56:48Z
Shreelatha.Halemane
7642
/* Validated */
320767
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೪೯೪|right=}}
ನಾನು ಅಲ್ಲಿ ನಿಂತು, ಅವರನ್ನು ಇಲ್ಲಿಗೆ ಕಳಿಸ್ತೇನೆ. ಮಂದಿರದಿಂದ ಪ್ರಸಾದ
ತಂದಿದ್ದೇನೆ ಅಂತ ಮೆನ್ನಯ್ಯ ಹೇಳಿದರೆ ಕಾವಲಿನವರು ಬಿಡ್ತಾರೆ. ಮೆನ್ನಯ್ಯ
ನಾಯಕರನ್ನು ಕಾಣಬಹುದು.”
{{gap}}"ಆಗಲಿ, ಆಗಲಿ."
{{gap}}"ಇಗೋ ಹೊರಟೆ."
{{gap}}ಕಿಂಡಿ ಮುಚ್ಚಿಕೊಂಡಿತು. ಬಿರುಡೆ ತಿರುಗಿಸಿದ ಸಪ್ಪಳ
{{gap}}ಬೆಕ್ ನ ಮುಖ ಹಷದಿಂದ ಅರಳಿತು.
{{gap}}"ಆಮನ್ ದೇವರೇ ಕಳಿಸಿದ್ದಾನೆ ಇವಳನ್ನು," ಎಂದು ಹೇಳಿ ಬಟಾ
ಮಂಡಿಯೂರಿ, “ಓ ಅಮನ್, ನಮ್ಮ ನಾಯಕರನ್ನು ಕಾಪಾಡು, ಅವರಿಗೆ
ಯಾವ ಅಪಾಯವೂ ತಟ್ಟದಂತೆ ನೋಡಿಕೊ,” ಎಂದು ಒಡೆದ ಧ್ವನಿಯಲ್ಲಿ
ಪ್ರಾರ್ಥಿಸಿದ. ಬೆಕ್ ತಾನೂ ಔಟನ ಪಕ್ಕದಲ್ಲಿ ಬಾಗಿದ, ಅದೇ ಭಂಗಿಯಲ್ಲಿ.
{{gap}}ಶೀಬಾ ಮಗುವನ್ನೆತ್ತಿಕೊಂಡು ಅರಮನೆಯ ದೇವಮಂದಿರಕ್ಕೆ ಬಂದಳು.
ಬಾಗಿಲು ಹಾಕಿತ್ತು. ಇನೇನಿಯ ಬದಲು ಪೂಜಾರಿಯಾಗಿ ಬಂದಿದ್ದವನಾಗಲೀ
ಕಿರಿಯ ದೇವಸೇವಕರಾಗಲೀ ಕಾಣಿಸಲಿಲ್ಲ. ಚುಟುಕು ಪೂಜೆ ಮುಗಿಸಿ ಅವರೆಲ್ಲ
ಮಹಾಮಂದಿರಕ್ಕೆ ಧಾವಿಸಿರಬೇಕು ಎಂದುಕೊಂಡಳು. ಮುಚ್ಚಿದ ಬಾಗಿಲಿನ
ಮುಂದೆ ಶೀಬಾ ಮೊಣಕಾಲು ಊರಿ ಮನಸ್ಸಿನಲ್ಲೆ ' ಓ ದೇವಾ ನಾನು ತಪ್ಪು
ಮಾಡ್ತಾ ಇಲ್ಲ. ನನಗೆ ಸಹಾಯ ಮಾಡು. ನನಗೆ ಸಹಾಯ ಮಾಡು'
ಎಂದು ಪ್ರಾರ್ಥಿಸಿದಳು. ಅರ್ಥವಾಗದ ದುಗುಡ ಹೊರಬಿರಿದು ಕಣ್ಣೀ
ರಾಯಿತು. 'ಬಡವರಿಗೆ ಸತ್ಯವಂತರಿಗೆ ನೀನು ಕಷ್ಟ ಕೊಡಬಾರದು' ಎಂದಳು.
ನೆಲದ ಮೇಲೆ ಬಿಟ್ಟಿದ್ದ ಮಗುವಿನ ಹಣೆಯನ್ನು ಬಾಗಿಲ ಚೌಕಟ್ಟಿಗೆ ಮುಟ್ಟಿಸಿ
ದಳು. ತಾಯಿಯ ರೋದನ ಇಷ್ಟವಾಗದೆ ಮಗು ತಾನೂ ಅಳತೊಡಗಿತು.
ಅದನ್ನೆತ್ತಿಕೊಂಡು ಸಂತೈಸಿ, ಬಿರಬಿರನೆ ನಡೆದು ಕದವಿಕ್ಕಿದ್ದ ಅತಿಥಿಗೃಹವನ್ನು
ಹಾದು, ಮಗ್ಗಲು ಬಾಗಿಲಿಗೆ ಶೀಬಾ ಬಂದಳು.
{{gap}}ದ್ವಾರಪಾಲಕರು ತಡೆದರು.<noinclude></noinclude>
1o5p4dub16imlgp8ygbme3hf6uu58u7
ಪುಟ:Mrutyunjaya.pdf/೫೦೮
104
21997
320768
64650
2026-05-19T09:00:17Z
Shreelatha.Halemane
7642
/* Validated */
320768
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೪೯೫}}
{{gap}}"ನಿಲ್ಲು ! ಏನು ತಗೊಡು ಹೋಗ್ತಿದೀಯ ?" ಎಂದು ಒಬ್ಬ
ಕೇಳಿದ.
{{gap}}ಶೀಬಾ ನಸುನಕ್ಕಳು.
{{gap}}“ಏನಿಲ್ಲಣ್ಣ. ಗಂಡ ಮೆರವಣಿಗೇಲಿ ಬರ್ತಾನೆ. ಮಗೂಗೆ ಅವನ
ತಂದೇನ ತೋರ್ಸೋಣ ಅಂತ ಬಂದೆ."
{{gap}}"ಕೆಲಸಗಳ್ಳಿ!”
{{gap}}"ಎಲ್ಲ ಮುಗಿಸಿ ಬರ್ತಿದೇನಣ್ಣ. ಕಸಾಯಿಮನೆ ಅಧಿಕಾರೀನೇ ಅಂದ್ರು_
ಹೋಗು ಅಂತ."
{{gap}}"ಸರಿ, ಸರಿ. ನಮಗೇನು ? ಸರಿಯಾಗಿ ಕಾಣಿಸೋ ಜಾಗ ಹುಡುಕಿ
ನಿತ್ಕೊ. ಮೆರವಣಿಗೆ ವಾಪಸಾದ್ಮೇಲೆ ಕದ ಮುಚ್ತೇವೆ. ಬೇಗನೆ ಬರದೇ
ಇದ್ದರೆ ಔತಣ ಇಲ್ಲ."
{{gap}}"ಬಂದ್ಬಿಡ್ತೇನೆ.”
{{gap}}ಇನ್ನೊಬ್ಬ ದ್ವಾರಕಪಾಲಕ ನಕ್ಕು, "ನಡು ವಸ್ತ್ರದಲ್ಲಿ ಏನಾದರೂ
ಕಟ್ಕೊಂಡಿದೀಯೇನೋ ನೊಡ್ಬೇಕು," ಎನ್ನುತ್ತ ಅವಳ ಸೊಂಟಕ್ಕೆ ಕೈ
ಹಾಕಿದ.
{{gap}}ಬೀದಿಯಲ್ಲಿ ಹೋಗುತ್ತಿದ್ದ ಜನ ಬಾಗಿಲಿನೆದುರು ನಿಂತರು.
{{gap}}ತನ್ನ ಕೋಪವನ್ನು ಹತ್ತಿಕ್ಕಿ ಶೀಬಾ " ನಾಚ್ಕೆ ಇಲ್ಲಣ್ಣ ನಿನಗೆ," ಎಂದು
ಹೇಳಿ, ಹೊಸ್ತಿಲು ದಾಟಿದಳು.
{{gap}}ಮೊದಲು ದೋಣಿಕಟ್ಟಿಗೆ, ಅಲ್ಲಿಂದ ದಕ್ಷಿಣಾಭಿಮುಖವಾಗಿ ದಂಡೆ
ಯುದ್ದಕ್ಕೂ. ವಿಪರೀತ ನೂಕುನುಗ್ಗಲು. ತಾವು ಪ್ರಯಾಣ ಬೆಳೆಸಿ ಬಂದ
ಪೆಪೈರಸ್ ದೋಣಿಗಳನ್ನು ದಂಡೆಗೆಳೆದು ಮಗುಚಿ ಹಾಕಿ, ಮಹಾಮಂದಿರಕ್ಕೆ
ಹೋಗುವ ಬೀದಿಗುಂಟ ಜನ ಧಾವಿಸುತ್ತಿದ್ದರು. ದೊಡ್ಡ ದೋಣಿ
ಗಳನ್ನು ತುಸು ಮಾತ್ರವೇ ದಂಡೆಯ ಮೇಲಕ್ಕೆ ಎಳೆದು ನಿಲ್ಲಿಸಿದ್ದರು.
ಅವರೆಲ್ಲಾ ಒಂದು ಕಡೆಗೆ. ಇದಿರು ದಿಕ್ಕಿಗೆ, ಅತ್ತಿತ್ತ ನೋಡುತ್ತ,
ಹೋಗುತ್ತಿದ್ದವಳು ಶೀಬಾ ಒಬ್ಬಳೇ. ಮಗನೋ ಗಂಡನೋ ತಪ್ಪಿಸಿಕೊಂಡಿರ
ಬೇಕು, ಹುಡುಕುತ್ತಿದ್ದಾಳೆ_ಎಂದು ಭಾವಿಸುವವರೇ ಎಲ್ಲರೂ. (ಕೆಲವರು<noinclude></noinclude>
1kg8q2qy7ayq52pfv0qiqvi4omuucuz
ಪುಟ:Mrutyunjaya.pdf/೫೩೭
104
22026
320761
246998
2026-05-19T07:46:48Z
Shreelatha.Halemane
7642
/* Validated */
320761
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center= ಮೃತ್ಯುಂಜಯ|left=೫೨೪|right=}}
{{gap}}ಅವಳೂ ಇದ್ದಳು. ಆಕೆಯ ಗಂಡನೂ ಇದ್ದ.
{{gap}}('ಮೆರವಣಿಗೆ.')
{{gap}}ಅಮಾತ್ಯ ಭವನ ಕಾಣಿಸಿದೊಡನೆ ಛಟಿಲ್ ಛಟಿಲ್ ಎಂದವು ಯೋಧರ ಚಾವಟಿಗಳು.
{{gap}}“ನಡೀರಿ ನಿಮ್ಮ ನಿಮ್ಮ ಕೆಲಸಕ್ಕೆ !”
{{gap}}('ಏಟು ಅವರಿಗೆ, ನೋವು ನನಗೆ.')
{{gap}}ಪರಿಚಿತ ಮೆಟ್ಟಲುಗಳು. ಬರಿಗಾಲು. ( 'ಇದೇ ಸುಖ.') ( 'ಓ !</br>ಕಟಾಂಜನ. ಇಲ್ಲಿ ನಾನು ಆರೋಪಿ.')
{{gap}}ಕಟಾಂಜನದ ಹಿಂದೆ ಶಾಂತಮೂರ್ತಿ ಮೆನೆಪ್ಟಾ ನಿಂತ ಎಡಬಲಗಳಲ್ಲಿ,</br> ತೋಳುಗಳಿಗೆ ಬಿಗಿದ ಹಗ್ಗಗಳನ್ನು ಹಿಡಿದ ಯೋಧರು. ಮೆನೆಪ್ಟಾನ</br> ದೃಷ್ಟಿ ಆಮೆರಬ್ ನನ್ನು ಅರಸಿ ಅವನ ಮೇಲೆ ಒರಗಿತು. ('ಇವರೆಲ್ಲ ಪ್ರತಿಮೆ</br>ಗಳು. ಉಸಿರಾಟವೂ ನಿಂತಿದೆಯೇನೋ.')
{{gap}}ಒಮ್ಮೆಲೆ ಸುಸ್ಪಷ್ಟ ಸ್ವರದಲ್ಲಿ ಆತನೆಂದ:
{{gap}}“ನ್ಯಾಯಸ್ಥಾನಕ್ಕೆ ನಮಿಸ್ತೇನೆ.”
{{gap}}ಇದ್ದಕ್ಕಿದ್ದಂತೆ ಬಂದ ಆ ಧ್ವನಿ ಕೇಳಿ ಎಲ್ಲರೂ ಚಕಿತರಾದರು.
{{gap}}ನ್ಯಾಯಮೂರ್ತಿಯ ಹಿಂಬದಿಯಲ್ಲಿ ಎತ್ತರದ ವೇದಿಕೆಯನ್ನು ಬಿಳಿಯ</br> ಪರದೆ ಮರೆ ಮಾಡಿತ್ತು. ಅಲ್ಲಿ ಯಾರೂ ಇರಲಿಲ್ಲ. ಆಮೆರಬ್ ನ ಎಡ</br> ಪಾರ್ಶ್ವದ ಪೀಠವೂ ಹಲವು ಪೀಠಗಳೂ ಬರಿದಾಗಿದ್ದುವು. ಬಲಗಡೆಯಲ್ಲಿ ಭಾರೀ </br>ಗುಂಪು. ನಿರ್ವಿಕಾರ ಭಾವದಿಂದ ಅವರಲ್ಲಿ ಕೆಲವರನ್ನು ಮೆನೆಪ್ ಟಾ ಗುರುತಿಸಿದ. ಹೆಖ್ವೆಟ್ ('ಹೇಳು ಮಗು, ನಿಮ್ಮ ಬಂಡಾಯ ಇತ್ಯಾದಿ ಹೇಗೆ ಮಾಡಿದಿರಿ ಹೇಳು.') ಗೇಬು ('ಯಾವನಯ್ಯ ನೀನು ? ಏನು ಮಾತಾಡ್ಡೆ ! ಏನು ಮಾತಾಡ್ಡೆ! ಅಬ್ಟುಗೆ ಹೋದವನು ಬುದ್ಧೀನ ಕಾಣಿಕೆ ಕೊಟ್ಟು ಬಂದೆಯಾ?) ಅವನ ಪಕ್ಕದಲ್ಲಿರುವಾತ ಯಾರೋ ತಿಳಿಯದು. ಅಮೆನೆಮೊಪೆಟ್. ಮೆನೆಪ್ ಟಾಗೆ ಅಪರಿಚಿತ. ದಂಡನಾಯಕನ ಠೀವಿ ಇದೆ') ಟೆಹುಟಿ. ('ಚುಟುಕು ! ಚುಟುಕು! ಬಾಯಿಯಿಂದ ಹೊರಬಿದ್ದ ಮಾತು ಪಂಜರ ಬಿಟ್ಟ ಕುರುಡು ಹಕ್ಕಿಯ ಹಾಗೆ; ಯಾವುದಕ್ಕಾದರೂ ಬಡಿದು ರೆಕ್ಕೆ ಮುರಿದೀತು. ಎಚ್ಚರ!') ಬಕಿಲ-ಆಹಾ! ಬಕಿಲ....ಅತ್ತ ನಿಂತಿರುವ ಜನರೆಲ್ಲ<noinclude></noinclude>
o9p0rolacjujgz0awa90s3ps31aw5vq
ಪುಟ:Mrutyunjaya.pdf/೫೩೮
104
22027
320762
247012
2026-05-19T07:49:55Z
Shreelatha.Halemane
7642
/* Validated */
320762
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೫೨೫}}
ಇಲ್ಲಿ ಪ್ರೇಕ್ಷಕರು. ಇವತ್ತು ಇವರಿಗೆ ದುಡಿಮೆ ಇಲ್ಲವೇನೋ, ಕುತೂಹಲ ? </br>ಕನಿಕರ? ಆ ಮೂಲೆಯಲ್ಲಿ ಯಾರೊ ಬಚ್ಚಿಟ್ಟು ಕೊಂಡಿರುವನಲ್ಲ? ತಲೆಗೆ </br> ಸುತ್ತಿದ ಬಟ್ಟೆ. ತನ್ನನ್ನು ಕದ್ದು ನೋಡುತ್ತಿರುವಂತಿದೆ...ಆಹ್-ಮೆನ್ನ-ದಿವ್ಯ</br> ಜೀವ....ಯಾರೂ ಗುರುತು ಹಿಡಿಯಬಾರದೆಂದು ಎಚ್ಚರ ವಹಿಸುತ್ತಿದ್ದಾನೆ....</br> ಅವನ ಪಾಲಿನ ಹದ್ದು ಈ ಕಡೆಗಿದೆ. ಸೆನೆಬ್. (ಬಟಾ ಹೇಳಿದ್ದ : 'ಐಗುಪ್ತದ</br> ಆಡಳಿತ ಭಾರವೆಲ್ಲ ಇವನ ಮೇಲೆಯೇ ಇದೆ ಅಂದ್ಕೋಬೇಕು ಯಾರಾದರೂ.')</br> ಪಾರ್ಶ್ವ ದ್ವಾರದಿಂದ ಸೆನೆಬ್ ಓಡಿ ಬಂದು ಅಮಾತ್ಯನ ಕಿವಿಯಲ್ಲಿ ಏನನ್ನೋ </br>ಉಸುರಿದ. ಅಮಾತ್ಯ ತಲೆಯಾಡಿಸಿದ. ಹಿಂಬದಿಯ ಬಾಗಿಲಿನಿಂದ ಪೆರೋ </br>ಬರುತ್ತಿದ್ದಾರೆ ಎಂದೆ? ಬರುವುದು ತಡವಾಗುತ್ತದೆ ಎಂದೆ?
{{gap}}ತಡವಾಗಲಿಲ್ಲ. ಪಾರದರ್ಶಕ ಪರದೆಯೊಳಗಿಂದ ಕಿರೀಟಗಳ ಪ್ರಭೆ ಕಾಣಿಸಿತು. ಪೆರೋ, ಮಹಾರಾಣಿ, ರಾಜಕುಮಾರ ಮತ್ತು ಗೇಬುವಿನ ಪತ್ನಿ ನೆಹನವೇಯ್ಟ್.
{{gap}}ಸಭಾಭವನದಲ್ಲಿ ಕುಳಿತಿದ್ದವರೆಲ್ಲ ಎದ್ದರು.ಅಮಾತ್ಯ ಹಿಂದಕ್ಕೆ ಹೊರಳಿ</br> ನಮಿಸಿದ:
{{gap}}“ ದೇವಸಮಾನ ಪೆರೋನ ಆಯುರಾರೋಗ್ಯ ವರ್ಧಿಸಲಿ !"
{{gap}}ಎದ್ದವರು ಮತ್ತೆ ಕುಳಿತರು. ('ನಾನು ಹೀಗೆ ಮಾಡಬೇಕಾಗಿಲ್ಲ, ನಿಂತೇ ಇರಬಹುದು. ಸುಲಭ.')
{{gap}}ಪರದೆಯೊಳಗಿನ ವೇದಿಕೆಯ ಮೇಲೆ ಸೇವಕರ ದರ್ಶನ. ದೊರೆಗೆ ಚಾಮರ</br> ಸೇವೆ. ನವಯುವಕ ಪೆರೋಗೆ ಬಿಸಿಲೇರುವುದಕ್ಕೆ ಮೊದಲೇ ಸೆಖೆಯಾಗ್ತಿರಬೇಕು.
{{gap}}ಅರಸ ತನ್ನ ಬಳಿಯ ಮುಗ್ಗಾಲು ಪೀಠದ ಮೇಲಿನ ಹೊಳೆಯುವ ತಟ್ಟೆ</br>ಯಲ್ಲಿ ಏನನ್ನೋ ಇರಿಸಿದ. ('ಏನಿರಬಹುದು? ಆಂಖ್ ಲಾಂಛನ....')
{{gap}}ಯಾರ ದಾರಿ ನೋಡುತ್ತಿದ್ದಾರೆ ? ಆರಂಭಿಸುತ್ತಿಲ್ಲವಲ್ಲ. ಇನೇನಿ ಬಂದ.</br>ವಿನಯಪೂರ್ವಕವಾಗಿ ಎರಡು ಹೆಜ್ಜೆ ಇರಿಸಿ. ಓಡಿ ಬಂದ ಸೆನೆಬ್ ಗೆ ಏನನ್ನೋ</br>ಹೇಳಿ, ಪುನಃ ಉದ್ಯಾನಕ್ಕಿಳಿದ. ಸೆನೆಬ್ ನ್ಯಾಯಮೂರ್ತಿಯಲ್ಲಿಗೆ. ಅಲ್ಲಿಂದ</br>ಪೆರೋ__ಮಹಾರಾಣಿಯಠ ಸಮ್ಮುಖಕ್ಕೆ, ಮರಳಿ ನ್ಯಾಹುಮೂರ್ತಿಯಲ್ಲಿಗೆ, ಆಡಿದ ತಲೆಗಳು.
{{gap}}ಆ ಪೀಠದ ಮೇಲಿನ ಚಿರತೆ ಚರ್ಮ....ಮಹಾ ಅರ್ಚಕರು ಬರುವರೇನು?<noinclude></noinclude>
t6aujq0pmsi9fnw7pzokeuoyfquunn2
ಪುಟ:Mrutyunjaya.pdf/೫೩೯
104
22028
320763
247027
2026-05-19T07:53:54Z
Shreelatha.Halemane
7642
/* Validated */
320763
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center= ಮೃತ್ಯುಂಜಯ|left=|right=}}೫೨೬
ಐಗುಪ್ತದ ರಾಜಕೀಯ ಚೌಕಮಣೆ ಆಟದ ಪ್ರಧಾನ ಆಟಗಾರ. ಮಹಾ</br> ಅರ್ಚಕರಿಂದ ಸಣ್ಣ ಮನುಷ್ಯನೊಬ್ಬನ ವಿಚಾರಣೆಯ ವೀಕ್ಷಣೆ? ಆಶ್ಚರ್ಯ ! </br>ಹಾಗಾದರೆ ಆ ಬರಿದು ಪೀಠಗಳು ಮಹಾ ಅರ್ಚಕರ ಪರಿವಾರದವರಿಗೆ ?
{{gap}}ಪ್ರತಿಮೆಗಳು ಕುಳಿತಲ್ಲೇ ಮಿಸುಕುತ್ತಿವೆ. ಅಲ್ಲಲ್ಲಿ ತಲೆಗಳು ಪರಸ್ಪರ</br> ಹತ್ತಿರಕ್ಕೆ ಬಂದು ಪಿಸುನುಡಿಯುತ್ತಿವೆ.
{{gap}}ಹೊರಗೆ ಕಲರವ. ಬಂದರೇನೋ ?
{{gap}}ತಲೆಬಾಗಿಲ ಕಣ್ಣು ಹಾಯಿಸಿದ ದಳಪತಿ ನಿಂತಲ್ಲೆ ಕಂಬವಾದ.
{{gap}}ಮುಂದೆ ರೂಥ್ ಲಕಾಯ ಇನೇನಿ. ಹಿಂದಿನಿಂದ ಭವ್ಯತೆಯ ಸಾಕಾರ </br>ಮೂರ್ತಿ ಮಹಾ ಅರ್ಚಕ ಹೇಪಾಟ್. ('ಆಬ್ಟು ಯಾತ್ರಿಕನಾಗಿ ಐಗುಪ್ತದ</br> ಧರ್ಮಗುರವಿಗೆ ನಮಿಸಿದ್ದೆ. ದೈವಿಕವಾದ್ದದು ಏನಿದೆ ಈ ವ್ಯಕ್ತಿಯಲ್ಲಿ. ಈತನೂ </br>ಪ್ರತಿಷ್ಠೆ ಅಧಿಕಾರಗಳ ಘನರೂಪವಲ್ಲವೆ?')
{{gap}}ಅಮಾತ್ಯ ಮತ್ತಿತರ ಕೆಲವರಿಗೆ ಮಹಾ ಅರ್ಚಕನ ಹಿಂದಿನ ಇಬ್ಬರು </br>ಮೂವರ ಪರಿಚಯವಿತ್ತು. ಒಬ್ಬ ಮೆಂಫಿಸಿನ ಪ್ಟಾ ಮಂದಿರದ ಮುಖ್ಯ ಅರ್ಚಕ.</br>ಇನ್ನೊಬ್ಬ ಉತ್ತರದ ಆನ್ ನಗರಿಯ ರಾ ಮಂದಿರದ ಮುಖ್ಯ ಅರ್ಚಕ.</br> ಮೂರನೆಯವನು ದಕ್ಷಿಣದ ವೆಸಿನಗರಿಯ ಅಮನ್ ಮಂದಿರದ ಮುಖ್ಯ ಅರ್ಚಕ.</br>ಅವರ ಹಿಂದೆ ನಾಲ್ವರು ದೇವಸೇವಕರು. ('ಪೆರೋನ ಪರಿಚಾರಕರಿಗೆ ಸಮ ನಲ್ಲವೆ ಇವರು?')
{{gap}}ಆಮೆರಬ್ ಮತ್ತಿರರು ನಮಿಸಲು ಏಳುತ್ತಿದ್ದಂತೆ ಮಹಾ ಅರ್ಚಕ</br> ನ್ಯಾಯಮೂರ್ತಿಯ ವೇದಿಕೆಯ ಮೆಟ್ಟಲುಗಳನ್ನೇರಿ, ತನ್ನ ದೃಷ್ಟಿಯಿಂದ ತೆಳು</br> ಪರದೆಯನ್ನಿರಿದು ನೋಡುತ್ತ, “ಪೆರೋನ ಆಯುರಾರೋಗ್ಯ ವರ್ಧಿಸಲಿ!”</br> ಎಂದ.
{{gap}}ಪರದೆಗೆ ಬೆನ್ನು ಹಾಕಿ ಅಲ್ಲಿದ್ದವರನ್ನು ದಿಟ್ಟಿಸಿ, ಕಟಾ೦ಜನದ ಹಿಂದಿದ್ದ</br> ಮೆನೆಪ್ಟಾನನ್ನು ನೋಡಿ. ತನ್ನ ಪೀಠದಲ್ಲಿ ಮಹಾ ಅರ್ಚಕ ಆಸೀನನಾದ.</br> ಮುಖ್ಯ ಅರ್ಚಕರು ಮೂವರು ಕೆಳಗೆ ಸಾಲಾಗಿದ್ದ ಪೀಠಗಳಲ್ಲಿ ಕುಳಿತರು.</br> ಇನೇನಿ ಮಹಾ ಅರ್ಚಕನ ಹಿಂದೆ ತುಸು ದೂರದಲ್ಲಿ ನಿಂತ. ನ್ಯಾಯ</br> ಮೂರ್ತಿಯ ಹಿಂದೆ ಸೆನೆಬ್. ಮುಖ್ಯ ಅರ್ಚಕರ ಹಿಂದೆ, ಉಳಿದ ದೇವಸೇವಕರು</br> ನಿಂತುಕೊಂಡರು.<noinclude></noinclude>
oxzh3vaknf65ckqj1r9o4921q3q5rwq
ಪುಟ:Mrutyunjaya.pdf/೫೫೪
104
22043
320643
63194
2026-05-18T17:24:00Z
Pragathi. BH
7585
/* Validated */
320643
proofread-page
text/x-wiki
<noinclude><pagequality level="4" user="Pragathi. BH" /></noinclude> ಮ್ರತ್ಯುಂಜಯ ೫೪೧
ನ್ಯಾಯಮೂರ್ತಿಯ ಧ್ವನಿ :
"ಘೋರ ಆರೋಪಗಳಿಗೆ ಗುರಿಯಾಗಿರುವ ಅಪರಾಧಿ ಮೆನೆಪ್ಟಾ!
ನೀನು ಹೇಳುವಂಥದು ಏನಾದರೂ ಇದೆಯೊ ? ಇದ್ದರೆ, ನ್ಯಾಯವನ್ನು ಆಧರಿಸಿರುವ ಈ ಆಸ್ಥಾನ ಅವಕಾಶ ನೀಡ್ತದೆ."
ಮುಗುಳುನಗೆ ಸೂಸಿ ಮೆನೆಪ್ಟಾ ಅಂದ :
" ಇದೆ ಸ್ವಾಮಿ, ಹೇಳಬೇಕಾದ್ದು ಬಹಳ ಇದೆ.”
" ರಾ ಅಸ್ತಮಿಸುವ ಹೊತ್ತಿಗೆ ನ್ಯಾಯಸ್ಥಾನ ತನ್ನ ಕೆಲಸ ಮುಗಿಸ್ಬೇಕು ಅನ್ನೋದು ಗಮನದಲ್ಲಿರಲಿ, ಮುಖ್ಯಾಂಶಗಳನ್ನಷ್ಟೇ ಹೇಳು."
ಮೆನೆಪ್ಟಾ ಅಮಾತ್ಯನ ಹಾಗೂ ಮಹಾ ಅರ್ಚಕನ ಶೀತಲ ದೃಷ್ಟಿಗಳನ್ನು ಇದಿರಿಸಿದ. ಪರದೆಯೊಳಗಿದ್ದವರನ್ನೂ ನೋಡಿದ. ಉಚ್ಚ ಕಂಠದಲ್ಲಿ, ಸುಸ್ಪಷ್ಟವಾಗಿ ಅವನೆಂದ :
"ಕೈದಿಗೆ ಮಾತನಾಡುವ ಸ್ವಾತಂತ್ರ್ಯ ನೀಡಲಿಲ್ಲ ಅನ್ನೋ ಅಪವಾದಕ್ಕೆ ಗುರಿಯಾಗ್ತೀರಲ್ಲ ಸ್ವಾಮಿ. ಇದು ನ್ಯಾಯವನ್ನು ಆಧರಿಸಿರುವ ಅಸ್ಥನ !”
ಟೆಹುಟಿಗೆ ತೃಪ್ತಿ. ಹೀಗೆ ಮಾತನಾಡಿದವನನ್ನು ತಾನು ದಂಡಿಸಿದ್ದು ತಪ್ಪು ಎಂದು ಯಾರು ಹೇಳುತ್ತಾರೆ ಈಗ?
(ಪೆರೋ ಚಾಮರ ಬೀಸುತ್ತಿದ್ದ ದಾಸಿಯರಿಗೆ 'ಸಾಕು' ಎಂದು ಸನ್ನೆ ಮಾಡಿದ. ಅವನ ಕಿವಿ ಚುರುಕಾಯಿತು.)
ಸಿಟ್ಟನ್ನು ಅದುಮಿ ಹಿಡಿದು ಅಮೆರಬಾ ಅಂದ :
'ಇದು ನೀರಾನೆ ಪ್ರಾಂತದ ರೈತರ ಸಭೆಯಲ್ಲ. ಹುಷಾರಾಗಿ ಮಾತನಾಡು.”
"ನಯ ನಾಜೂಕು ನನಗೆ ತಿಳೀದು. ಉತ್ತನೆ ಬಿತ್ತನೆ ಗೊತ್ತು. ಮಹಾಪೂರದ ಸಮಯದಲ್ಲಿ ಕಲ್ಲು ಸೀಳಿದ್ದೇನೆ, ಕಟ್ಟಿದ್ದೇನೆ; ಮಂದಿರದ ಗೋಡೆ ಕಟ್ಟಿದ್ದೇನೆ. ಎರಡರ್ಥದ ನವುರು ಮಾತು ಕಲೀಲಿಲ್ಲ. ಕಂಡದ್ದನ್ನು ಕಂಡ ಹಾಗೆ ಹೇಳೋದೇ ಅಭ್ಯಾಸ. ಅಮಾತ್ಯವರ್ಯರೆ, ನಿಮ್ಮನ್ನು ಒಂದು ಮಾತು ಕೇಳಲೆ ?"
" ಏನದು ?"<noinclude></noinclude>
9vk6ssz6ixos98c0meb9tfpv05wv014
320644
320643
2026-05-18T17:29:17Z
Pragathi. BH
7585
320644
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರತ್ಯುಂಜಯ|left=|right=೫೪೧}}</noinclude>
ನ್ಯಾಯಮೂರ್ತಿಯ ಧ್ವನಿ :<br />
{{gap}}"ಘೋರ ಆರೋಪಗಳಿಗೆ ಗುರಿಯಾಗಿರುವ ಅಪರಾಧಿ ಮೆನೆಪ್ಟಾ!
ನೀನು ಹೇಳುವಂಥದು ಏನಾದರೂ ಇದೆಯೊ ? ಇದ್ದರೆ, ನ್ಯಾಯವನ್ನು ಆಧರಿಸಿರುವ ಈ ಆಸ್ಥಾನ ಅವಕಾಶ ನೀಡ್ತದೆ."<br />
{{gap}}ಮುಗುಳುನಗೆ ಸೂಸಿ ಮೆನೆಪ್ಟಾ ಅಂದ :<br />
{{gap}}" ಇದೆ ಸ್ವಾಮಿ, ಹೇಳಬೇಕಾದ್ದು ಬಹಳ ಇದೆ.” <br />
{{gap}}" ರಾ ಅಸ್ತಮಿಸುವ ಹೊತ್ತಿಗೆ ನ್ಯಾಯಸ್ಥಾನ ತನ್ನ ಕೆಲಸ ಮುಗಿಸ್ಬೇಕು ಅನ್ನೋದು ಗಮನದಲ್ಲಿರಲಿ, ಮುಖ್ಯಾಂಶಗಳನ್ನಷ್ಟೇ ಹೇಳು."<br />
{{gap}}ಮೆನೆಪ್ಟಾ ಅಮಾತ್ಯನ ಹಾಗೂ ಮಹಾ ಅರ್ಚಕನ ಶೀತಲ ದೃಷ್ಟಿಗಳನ್ನು ಇದಿರಿಸಿದ. ಪರದೆಯೊಳಗಿದ್ದವರನ್ನೂ ನೋಡಿದ. ಉಚ್ಚ ಕಂಠದಲ್ಲಿ, ಸುಸ್ಪಷ್ಟವಾಗಿ ಅವನೆಂದ :<br />
{{gap}}"ಕೈದಿಗೆ ಮಾತನಾಡುವ ಸ್ವಾತಂತ್ರ್ಯ ನೀಡಲಿಲ್ಲ ಅನ್ನೋ ಅಪವಾದಕ್ಕೆ ಗುರಿಯಾಗ್ತೀರಲ್ಲ ಸ್ವಾಮಿ. ಇದು ನ್ಯಾಯವನ್ನು ಆಧರಿಸಿರುವ ಆಸ್ಥಾನ !”<br />
{{gap}}ಟೆಹುಟಿಗೆ ತೃಪ್ತಿ. ಹೀಗೆ ಮಾತನಾಡಿದವನನ್ನು ತಾನು ದಂಡಿಸಿದ್ದು ತಪ್ಪು ಎಂದು ಯಾರು ಹೇಳುತ್ತಾರೆ ಈಗ?
{{gap}}(ಪೆರೋ ಚಾಮರ ಬೀಸುತ್ತಿದ್ದ ದಾಸಿಯರಿಗೆ 'ಸಾಕು' ಎಂದು ಸನ್ನೆ ಮಾಡಿದ. ಅವನ ಕಿವಿ ಚುರುಕಾಯಿತು.)
{{gap}}ಸಿಟ್ಟನ್ನು ಅದುಮಿ ಹಿಡಿದು ಅಮೆರಬಾ ಅಂದ :
{{gap}}'ಇದು ನೀರಾನೆ ಪ್ರಾಂತದ ರೈತರ ಸಭೆಯಲ್ಲ. ಹುಷಾರಾಗಿ ಮಾತನಾಡು.”<br />
{{gap}}"ನಯ ನಾಜೂಕು ನನಗೆ ತಿಳೀದು. ಉತ್ತನೆ ಬಿತ್ತನೆ ಗೊತ್ತು. ಮಹಾಪೂರದ ಸಮಯದಲ್ಲಿ ಕಲ್ಲು ಸೀಳಿದ್ದೇನೆ, ಕಟ್ಟಿದ್ದೇನೆ; ಮಂದಿರದ ಗೋಡೆ ಕಟ್ಟಿದ್ದೇನೆ. ಎರಡರ್ಥದ ನವುರು ಮಾತು ಕಲೀಲಿಲ್ಲ. ಕಂಡದ್ದನ್ನು ಕಂಡ ಹಾಗೆ ಹೇಳೋದೇ ಅಭ್ಯಾಸ. ಅಮಾತ್ಯವರ್ಯರೆ, ನಿಮ್ಮನ್ನು ಒಂದು ಮಾತು ಕೇಳಲೆ ?" <br />
{{gap}}" ಏನದು ?"<noinclude></noinclude>
3ebfy6z84xb8fa576499q652lvuus3d
320645
320644
2026-05-18T17:29:33Z
Pragathi. BH
7585
320645
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರತ್ಯುಂಜಯ|left=|right=೫೪೧}}</noinclude>
ನ್ಯಾಯಮೂರ್ತಿಯ ಧ್ವನಿ :<br />
{{gap}}"ಘೋರ ಆರೋಪಗಳಿಗೆ ಗುರಿಯಾಗಿರುವ ಅಪರಾಧಿ ಮೆನೆಪ್ಟಾ!
ನೀನು ಹೇಳುವಂಥದು ಏನಾದರೂ ಇದೆಯೊ ? ಇದ್ದರೆ, ನ್ಯಾಯವನ್ನು ಆಧರಿಸಿರುವ ಈ ಆಸ್ಥಾನ ಅವಕಾಶ ನೀಡ್ತದೆ."<br />
{{gap}}ಮುಗುಳುನಗೆ ಸೂಸಿ ಮೆನೆಪ್ಟಾ ಅಂದ :<br />
{{gap}}" ಇದೆ ಸ್ವಾಮಿ, ಹೇಳಬೇಕಾದ್ದು ಬಹಳ ಇದೆ.” <br />
{{gap}}" ರಾ ಅಸ್ತಮಿಸುವ ಹೊತ್ತಿಗೆ ನ್ಯಾಯಸ್ಥಾನ ತನ್ನ ಕೆಲಸ ಮುಗಿಸ್ಬೇಕು ಅನ್ನೋದು ಗಮನದಲ್ಲಿರಲಿ, ಮುಖ್ಯಾಂಶಗಳನ್ನಷ್ಟೇ ಹೇಳು."<br />
{{gap}}ಮೆನೆಪ್ಟಾ ಅಮಾತ್ಯನ ಹಾಗೂ ಮಹಾ ಅರ್ಚಕನ ಶೀತಲ ದೃಷ್ಟಿಗಳನ್ನು ಇದಿರಿಸಿದ. ಪರದೆಯೊಳಗಿದ್ದವರನ್ನೂ ನೋಡಿದ. ಉಚ್ಚ ಕಂಠದಲ್ಲಿ, ಸುಸ್ಪಷ್ಟವಾಗಿ ಅವನೆಂದ :<br />
{{gap}}"ಕೈದಿಗೆ ಮಾತನಾಡುವ ಸ್ವಾತಂತ್ರ್ಯ ನೀಡಲಿಲ್ಲ ಅನ್ನೋ ಅಪವಾದಕ್ಕೆ ಗುರಿಯಾಗ್ತೀರಲ್ಲ ಸ್ವಾಮಿ. ಇದು ನ್ಯಾಯವನ್ನು ಆಧರಿಸಿರುವ ಆಸ್ಥಾನ !”<br />
{{gap}}ಟೆಹುಟಿಗೆ ತೃಪ್ತಿ. ಹೀಗೆ ಮಾತನಾಡಿದವನನ್ನು ತಾನು ದಂಡಿಸಿದ್ದು ತಪ್ಪು ಎಂದು ಯಾರು ಹೇಳುತ್ತಾರೆ ಈಗ?
{{gap}}(ಪೆರೋ ಚಾಮರ ಬೀಸುತ್ತಿದ್ದ ದಾಸಿಯರಿಗೆ 'ಸಾಕು' ಎಂದು ಸನ್ನೆ ಮಾಡಿದ. ಅವನ ಕಿವಿ ಚುರುಕಾಯಿತು.)
{{gap}}ಸಿಟ್ಟನ್ನು ಅದುಮಿ ಹಿಡಿದು ಅಮೆರಬಾ ಅಂದ :
{{gap}}'ಇದು ನೀರಾನೆ ಪ್ರಾಂತದ ರೈತರ ಸಭೆಯಲ್ಲ. ಹುಷಾರಾಗಿ ಮಾತನಾಡು.”<br />
{{gap}}"ನಯ ನಾಜೂಕು ನನಗೆ ತಿಳೀದು. ಉತ್ತನೆ ಬಿತ್ತನೆ ಗೊತ್ತು. ಮಹಾಪೂರದ ಸಮಯದಲ್ಲಿ ಕಲ್ಲು ಸೀಳಿದ್ದೇನೆ, ಕಟ್ಟಿದ್ದೇನೆ; ಮಂದಿರದ ಗೋಡೆ ಕಟ್ಟಿದ್ದೇನೆ. ಎರಡರ್ಥದ ನವುರು ಮಾತು ಕಲೀಲಿಲ್ಲ. ಕಂಡದ್ದನ್ನು ಕಂಡ ಹಾಗೆ ಹೇಳೋದೇ ಅಭ್ಯಾಸ. ಅಮಾತ್ಯವರ್ಯರೆ, ನಿಮ್ಮನ್ನು ಒಂದು ಮಾತು ಕೇಳಲೆ ?" <br />
{{gap}}" ಏನದು ?"<noinclude></noinclude>
3ememw5zc6jkryy5oub0dbk2ajcvf8k
ಪುಟ:Mrutyunjaya.pdf/೫೫೫
104
22044
320646
185259
2026-05-18T17:29:44Z
Pragathi. BH
7585
/* Validated */
320646
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|right=|left=೫೪೨}}
{{gap}}"ಕೋಪಿಸ್ಕೋಬೇಡಿ, ಶಿಷ್ಟಾಚಾರಕ್ಕೆ ಸಂಬಂಧಿಸಿದ್ದು. ಎಪ್ಪತ್ತು</br> ದಿನಗಳಿಗೆ ಹಿಂದೆ ನಿಮ್ಮನ್ನು ನಾನು ಭೇಟಿಯಾದಾಗ, ಅತಿಥಿಗ್ರಹದಲ್ಲಿ ಎಲ್ಲ</br> ಅನುಕೂಲವಾಗಿದೆಯಾ?-ಅಂತ ಕೇಳಿದ್ದಿರಿ. ಕಾರಾಗೃಹದಲ್ಲಿ ಎಲ್ಲ </br>ಅನುಕೂಲವಾಗಿದೆಯಾ?-ಅಂತ ಇವತ್ತು ಕೇಳಲಿಲ್ಲವಲ್ಲ..."</br>
{{gap}}"ಮುಂದುವರಿಸು!" </br>
{{gap}}" ಸೆಡ್ ಉತ್ಸವಕ್ಕೆ ಹತ್ತು ದಿನ ಮುಂಚಿತವಾಗಿಯೇ ಬರಬೇಕೂಂತ</br> ಎಲ್ಲ ಪ್ರಾಂತಪಾಲರಿಗೂ ಕರೆ ಕಳಿಸಿದೆ; ನೀರಾನೆ ಪ್ರಾಂತದ ನಾಯಕ ಕೂಡ</br> ಈ ಉತ್ಸವದಲ್ಲಿ ಭಾಗವಹಿಸಬೇಕು-ಇದು ಮಹಾಪ್ರಭು ನನಗೆ ನೀಡಿದ</br> ಆದೇಶ. ಅಮಾತ್ಯರ ಮೂಲಕ. ಓ ಅಲ್ಲಿ ನಿಂತಿರೋ ರಾಜದೂತ ತಂದ್ಕೊಟ್ಟ.</br> ಹೊರಟು ಬಂದೆ. ಹತ್ತು ದಿವಸ ಅಲ್ಲ, ಎಪ್ಪತ್ತು ದಿವಸ ಕಾದೆ. ಉತ್ಸವ</br> ಮುಗೀತು. ಇವತ್ತು ನಾನು ಊರಿಗೆ ಹೊರಡಬೇಕಾದ, ನೀರಾನೆ ಪ್ರಾಂತದ</br> ನಾಯಕನಿಗೆ ನೀವು ವಿದಾಯ ನುಡಿಯಬೇಕಾದ, ದಿವಸ. ಯಾವ ಕಸಿ</br> ವಿಸಿಯೂ ಇಲ್ಲದೆ ಬರಲಿ ಅಂತ ಅಮಾತ್ಯರಾಗಿ ತಿಳಿಸಿದ್ದಿರಿ. ಯಾವ ಕಸಿ</br> ವಿಸಿಯೂ ಇಲ್ಲದೆ ಈ ಆಸ್ಥಾನದಲ್ಲಿ ನಾನೀಗ ನಿಂತಿದ್ದೇನೆ.</br>
{{gap}}"ನಮ್ಮ ಮಾಟ್ ನಮ್ಮನ್ನು ಕಾಯ್ತದೆ ಅನ್ನೋ ನಂಬಿಕೆಯಿಂದ ನಾವು</br> ಋಜುಮಾರ್ಗ ಹಿಡಿದೆವು. ನಮ್ಮ ಪ್ರಾಚೀನ ಕಟ್ಟಳೆ ಏನು ಹೇಳ್ತದೆ?</br>'ಬಡವರು ಮತ್ತು ದೊಡ್ಡ ಮನುಷ್ಯರು ಇಬ್ಬರಿಗೂ ಹಕ್ಕು ಇರಲೆಂದೇ ಮಹಾ</br> ಪ್ರವಾಹವನ್ನು ನಾನು ಸೃಷ್ಟಿಸಿದೆ' ಅಂತ ದೇವರು ಸಾರಿದ ಎಂದಲ್ಲವಾ ? ಲಿಪಿ</br> ಸುರುಳಿ ಏನು ಬೋಧಿಸ್ತದೆ? 'ಒಂದು ಮೊಳ ಬುನಿಗಾಗಿ ಆಸೆಬುರುಕನಾಗ</br> ದಿರು; ವಿಧವೆಯ ಹೊಲಕೆ ಅತಿಕ್ರಮಿಸಿ ನುಗ್ಗದಿರು. ಅತಿಕ್ರಮಣದಿಂದ</br> ಗಳಿಸುವ ಐದುನೂರು ಬಳ್ಳಕ್ಕಿಂತ ದೇವರು ನಿನಗೀನ ಒಂದು ಬಳ್ಳವೇ</br> ಮೇಲು,' ಹೀಗಲ್ಲವಾ? [ಮಹಾ ಅರ್ಚಕ ಇನೇನಿಯತ್ತ ನೋಡಿದ. ಆತ</br> ಭಯ ಭಕ್ತಿಯಿಂದ ಹತ್ತಿರಕ್ಕೆ ಬಾಗಿದಾಗ, ಏನನ್ನೋ ಉಸುರಿದ.] ಎಲ್ಲ ಕಡೆ</br> ಬೋಧನೆಗೆ ಮಾತ್ರ ಮೀಸಲಾಗಿರುವ ಈ ತತ್ವಗಳನ್ನು ನೀರಾನೆ ಪ್ರಾಂತದಲ್ಲಿ</br> ಅನುಷ್ಠಾನಕ್ಕೆ ತಂದಿದ್ದೇವೆ. ಅದು ತಪ್ಪೆ ಸ್ವಾಮಿ?"</br>
{{gap}}ಇನೇನಿ ಗಟ್ಟಯಾಗಿ ಅಂದ :</br>
{{gap}}"ಮಹಾ ಅರ್ಚಕರು ಅಪ್ಪಣೆ ಕೊಡಿಸಿದ್ದಾರೆ: ತೀರಾ ಕೆಳಮಟ್ಟದ ಈ</br><noinclude></noinclude>
gbfd9lnldcl2bl2y4cl4ydnbrhu3m28
320648
320646
2026-05-18T17:34:26Z
Pragathi. BH
7585
320648
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|right=|left=೫೪೨}}
{{gap}}"ಕೋಪಿಸ್ಕೋಬೇಡಿ, ಶಿಷ್ಟಾಚಾರಕ್ಕೆ ಸಂಬಂಧಿಸಿದ್ದು. ಎಪ್ಪತ್ತು ದಿನಗಳಿಗೆ ಹಿಂದೆ ನಿಮ್ಮನ್ನು ನಾನು ಭೇಟಿಯಾದಾಗ, ಅತಿಥಿಗ್ರಹದಲ್ಲಿ ಎಲ್ಲ ಅನುಕೂಲವಾಗಿದೆಯಾ?-ಅಂತ ಕೇಳಿದ್ದಿರಿ. ಕಾರಾಗೃಹದಲ್ಲಿ ಎಲ್ಲ ಅನುಕೂಲವಾಗಿದೆಯಾ?-ಅಂತ ಇವತ್ತು ಕೇಳಲಿಲ್ಲವಲ್ಲ..."</br>
{{gap}}"ಮುಂದುವರಿಸು!" </br>
{{gap}}" ಸೆಡ್ ಉತ್ಸವಕ್ಕೆ ಹತ್ತು ದಿನ ಮುಂಚಿತವಾಗಿಯೇ ಬರಬೇಕೂಂತ ಎಲ್ಲ ಪ್ರಾಂತಪಾಲರಿಗೂ ಕರೆ ಕಳಿಸಿದೆ; ನೀರಾನೆ ಪ್ರಾಂತದ ನಾಯಕ ಕೂಡ ಈ ಉತ್ಸವದಲ್ಲಿ ಭಾಗವಹಿಸಬೇಕು-ಇದು ಮಹಾಪ್ರಭು ನನಗೆ ನೀಡಿದ ಆದೇಶ. ಅಮಾತ್ಯರ ಮೂಲಕ. ಓ ಅಲ್ಲಿ ನಿಂತಿರೋ ರಾಜದೂತ ತಂದ್ಕೊಟ್ಟ. ಹೊರಟು ಬಂದೆ. ಹತ್ತು ದಿವಸ ಅಲ್ಲ, ಎಪ್ಪತ್ತು ದಿವಸ ಕಾದೆ. ಉತ್ಸವ ಮುಗೀತು. ಇವತ್ತು ನಾನು ಊರಿಗೆ ಹೊರಡಬೇಕಾದ, ನೀರಾನೆ ಪ್ರಾಂತದ ನಾಯಕನಿಗೆ ನೀವು ವಿದಾಯ ನುಡಿಯಬೇಕಾದ, ದಿವಸ. ಯಾವ ಕಸಿ ವಿಸಿಯೂ ಇಲ್ಲದೆ ಬರಲಿ ಅಂತ ಅಮಾತ್ಯರಾಗಿ ತಿಳಿಸಿದ್ದಿರಿ. ಯಾವ ಕಸಿ ವಿಸಿಯೂ ಇಲ್ಲದೆ ಈ ಆಸ್ಥಾನದಲ್ಲಿ ನಾನೀಗ ನಿಂತಿದ್ದೇನೆ.</br>
{{gap}}"ನಮ್ಮ ಮಾಟ್ ನಮ್ಮನ್ನು ಕಾಯ್ತದೆ ಅನ್ನೋ ನಂಬಿಕೆಯಿಂದ ನಾವು ಋಜುಮಾರ್ಗ ಹಿಡಿದೆವು. ನಮ್ಮ ಪ್ರಾಚೀನ ಕಟ್ಟಳೆ ಏನು ಹೇಳ್ತದೆ?'ಬಡವರು ಮತ್ತು ದೊಡ್ಡ ಮನುಷ್ಯರು ಇಬ್ಬರಿಗೂ ಹಕ್ಕು ಇರಲೆಂದೇ ಮಹಾ ಪ್ರವಾಹವನ್ನು ನಾನು ಸೃಷ್ಟಿಸಿದೆ' ಅಂತ ದೇವರು ಸಾರಿದ ಎಂದಲ್ಲವಾ ? ಲಿಪಿ ಸುರುಳಿ ಏನು ಬೋಧಿಸ್ತದೆ? 'ಒಂದು ಮೊಳ ಬುನಿಗಾಗಿ ಆಸೆಬುರುಕನಾಗ ದಿರು; ವಿಧವೆಯ ಹೊಲಕೆ ಅತಿಕ್ರಮಿಸಿ ನುಗ್ಗದಿರು. ಅತಿಕ್ರಮಣದಿಂದ ಗಳಿಸುವ ಐದುನೂರು ಬಳ್ಳಕ್ಕಿಂತ ದೇವರು ನಿನಗೀನ ಒಂದು ಬಳ್ಳವೇ ಮೇಲು,' ಹೀಗಲ್ಲವಾ? [ಮಹಾ ಅರ್ಚಕ ಇನೇನಿಯತ್ತ ನೋಡಿದ. ಆತ ಭಯ ಭಕ್ತಿಯಿಂದ ಹತ್ತಿರಕ್ಕೆ ಬಾಗಿದಾಗ, ಏನನ್ನೋ ಉಸುರಿದ.] ಎಲ್ಲ ಕಡೆ ಬೋಧನೆಗೆ ಮಾತ್ರ ಮೀಸಲಾಗಿರುವ ಈ ತತ್ವಗಳನ್ನು ನೀರಾನೆ ಪ್ರಾಂತದಲ್ಲಿ ಅನುಷ್ಠಾನಕ್ಕೆ ತಂದಿದ್ದೇವೆ. ಅದು ತಪ್ಪೆ ಸ್ವಾಮಿ?"</br>
{{gap}}ಇನೇನಿ ಗಟ್ಟಯಾಗಿ ಅಂದ :</br>
{{gap}}"ಮಹಾ ಅರ್ಚಕರು ಅಪ್ಪಣೆ ಕೊಡಿಸಿದ್ದಾರೆ: ತೀರಾ ಕೆಳಮಟ್ಟದ ಈ</br><noinclude></noinclude>
g1fh5319n1hbxpdbaon8f4jhtooahwb
ಪುಟ:Mrutyunjaya.pdf/೫೫೬
104
22045
320647
63311
2026-05-18T17:29:54Z
Pragathi. BH
7585
/* Validated */
320647
proofread-page
text/x-wiki
<noinclude><pagequality level="4" user="Pragathi. BH" /></noinclude> ಮ್ರತ್ಯುಂಜಯ ೫೪೩
ಮನುಷ್ಯನಿಗೆ ಪವಿತ್ರ ಕಟ್ಟಳೆಗಳನ್ನು ಉಚ್ಚರಿಸುವ ಹಕ್ಕಿಲ್ಲ !"
"ಮಹಾಪರಾಧವಾಯಿತಲ್ಲವಾ ನನ್ನಿಂದ? ತಿಳೀದೆ, ಅದಕ್ಕಿಂತಲೂ ದೊಡ್ಡ ಒಂದು ತಪ್ಪು ಮಾಡಿದ್ದೇನೆ. ನಮ್ಮ ನೇಕಾರ ಅನ್ನು ಟೆಹುಟಿಯ ಯೋಧರ ಬಾಣಕ್ಕೆ ಬಲಿಯಾದ. ಅವನನ್ನು ಮಣ್ಣು ಮಾಡೋದಕ್ಕೆ ಮುಂಚೆ ನಮ್ಮೂರಿನ ಅರ್ಚಕ ಅಪೆಟ್ ಕೈಲಿ 'ಬೆಳಕಿಗೆ ಆಗಮನ' ಗ್ರಂಥ ಓದಿಸಿದ್ದೇನೆ."
"ಬಡ ನೇಕಾರನ ಶವಸಂಸ್ಕಾರಕ್ಕೆ 'ಬೆಳಕಿಗೆ ಆಗಮನ' ಗ್ರಂಥ ವಚನ! ಇದು ದೈವದ್ರೋಹದ ಪರಮಾವಧಿ!”
"ದೊಡ್ಡವರೆಲ್ಲ ಸತ್ತ ಮೇಲೆ ಕತ್ತಲೆಯಿಂದ ಬೆಳಕಿಗೆ ಬರ್ತಾರೆ. ಹುತಾತು ನಾದ ಬಡ ಅನ್ಸುವಿಗೂ ಆ ಭಾಗ್ಯ ಇರೋದು ನಾಯಸಮ್ಮತ ಅಲ್ಲವಾ?"
"ಇದು ತಲೆಹರಟೆ!"
"ಈಗಲೆ ಕೇಳೋದು ಮೇಲು. ಅಯ್ಯ, ನಮ್ಮ ಅರ್ಚಕ ಅಪೆಟ್ ಸಲ್ಲಿಸಿದ ದೂರು ಅಂತ ಅದೇನೋ ಹೇಳಿದಿರಲ್ಲ? ಅದನ್ನು ಯಾರು ತಂದು ಕೊಟ್ರು ?"
"ಅದಕ್ಕೆಲ್ಲ ನಮ್ಮದೇ ವ್ಯವಸ್ಥೆ ಇದೆ.”
"ಬಲ್ಲೆ, ಐಗುಪ್ತದಲ್ಲಿ ಗೂಢಚರ್ಯೆ ಅರ್ಚಕ ವೃತ್ತಿಯ ವೈಶಿಷ್ಟ್ಯ."
"ಅಪರಾಧಿಯ ಅಂಬೋಣವೇನು ? ಈ ದೂರು ಸೃಷ್ಟನೆ ಅಂತಲೊ?"
"ಹೀಗೆಯೇ ಹೇಳು ಅಂತ ಮಹಾ ಅರ್ಚಕರು ಆಜ್ಞಾಪಿಸಿದರೆ ಅದನ್ನು ಪಾಲಿಸುವ ಮನುಷ್ಯನೇ ಅಪೆಟ್. ಅದರಲ್ಲಿ ಸಂದೇಹವಿಲ್ಲ. ಆದರೆ ತಾವಾಗಿ ಅವರು ಆ ದೂರು ಕಳಿಸಿದ್ರು ಅನ್ನೋದನ್ನು ನಂಬಲಾರೆ. ಹೇಳಿ, ಈ ದೂರು ಯಾವಾಗ ಬಂತು?"
ಇನೇನಿಯ ಧ್ವನಿ ಮತ್ತಷ್ಟು ಏರಿತು :
"ನೀರಾನೆ ಪ್ರಾಂತಕ್ಕೆ ಹೋಗಿದ್ದ ರಾಜದೂತ ತಂದುಕೊಟ್ಟ."
ಮೆನೆಪ್ಟಾ ಸರಕ್ಕನೆ ಪ್ರತಿಷ್ಟತರ ಸಾಲೆನ ಹಿಂದೆ ನಿಂತಿದ್ದ ರಾಜದೂತ ನತ್ತ ನೋಡಿ ಕೇಳಿದ :
"ರಾಜದೂತರೆ, ತಂದುಕೊಟ್ಟಿದು ನಿಜವಾ?"
ರಾಜದೂತ ತಬ್ಬಿಬ್ಬಾದರೂ ತಕ್ಷಣವೇ ಸುಧಾರಿಸಿಕೊಂಡು, ಕಣ್ಣು<noinclude></noinclude>
05cxhzz598qdnistzfe8awd34dh22iu
320649
320647
2026-05-18T17:38:06Z
Pragathi. BH
7585
320649
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರತ್ಯುಂಜಯ|left=|right=೫೪೩}}</noinclude>
ಮನುಷ್ಯನಿಗೆ ಪವಿತ್ರ ಕಟ್ಟಳೆಗಳನ್ನು ಉಚ್ಚರಿಸುವ ಹಕ್ಕಿಲ್ಲ !"<br />
{{gap}}"ಮಹಾಪರಾಧವಾಯಿತಲ್ಲವಾ ನನ್ನಿಂದ? ತಿಳೀದೆ, ಅದಕ್ಕಿಂತಲೂ ದೊಡ್ಡ ಒಂದು ತಪ್ಪು ಮಾಡಿದ್ದೇನೆ. ನಮ್ಮ ನೇಕಾರ ಅನ್ನು ಟೆಹುಟಿಯ ಯೋಧರ ಬಾಣಕ್ಕೆ ಬಲಿಯಾದ. ಅವನನ್ನು ಮಣ್ಣು ಮಾಡೋದಕ್ಕೆ ಮುಂಚೆ ನಮ್ಮೂರಿನ ಅರ್ಚಕ ಅಪೆಟ್ ಕೈಲಿ 'ಬೆಳಕಿಗೆ ಆಗಮನ' ಗ್ರಂಥ ಓದಿಸಿದ್ದೇನೆ."<br />
{{gap}}"ಬಡ ನೇಕಾರನ ಶವಸಂಸ್ಕಾರಕ್ಕೆ 'ಬೆಳಕಿಗೆ ಆಗಮನ' ಗ್ರಂಥ ವಚನ! ಇದು ದೈವದ್ರೋಹದ ಪರಮಾವಧಿ!”
{{gap}}"ದೊಡ್ಡವರೆಲ್ಲ ಸತ್ತ ಮೇಲೆ ಕತ್ತಲೆಯಿಂದ ಬೆಳಕಿಗೆ ಬರ್ತಾರೆ. ಹುತಾತು ನಾದ ಬಡ ಅನ್ಸುವಿಗೂ ಆ ಭಾಗ್ಯ ಇರೋದು ನಾಯಸಮ್ಮತ ಅಲ್ಲವಾ?"<br />
{{gap}}"ಇದು ತಲೆಹರಟೆ!"<br />
{{gap}}"ಈಗಲೆ ಕೇಳೋದು ಮೇಲು. ಅಯ್ಯ, ನಮ್ಮ ಅರ್ಚಕ ಅಪೆಟ್ ಸಲ್ಲಿಸಿದ ದೂರು ಅಂತ ಅದೇನೋ ಹೇಳಿದಿರಲ್ಲ? ಅದನ್ನು ಯಾರು ತಂದು ಕೊಟ್ರು ?"<br />
{{gap}}"ಅದಕ್ಕೆಲ್ಲ ನಮ್ಮದೇ ವ್ಯವಸ್ಥೆ ಇದೆ.”<br />
{{gap}}"ಬಲ್ಲೆ, ಐಗುಪ್ತದಲ್ಲಿ ಗೂಢಚರ್ಯೆ ಅರ್ಚಕ ವೃತ್ತಿಯ ವೈಶಿಷ್ಟ್ಯ."<br />
{{gap}}"ಅಪರಾಧಿಯ ಅಂಬೋಣವೇನು ? ಈ ದೂರು ಸೃಷ್ಟನೆ ಅಂತಲೊ?"<br />
{{gap}}"ಹೀಗೆಯೇ ಹೇಳು ಅಂತ ಮಹಾ ಅರ್ಚಕರು ಆಜ್ಞಾಪಿಸಿದರೆ ಅದನ್ನು ಪಾಲಿಸುವ ಮನುಷ್ಯನೇ ಅಪೆಟ್. ಅದರಲ್ಲಿ ಸಂದೇಹವಿಲ್ಲ. ಆದರೆ ತಾವಾಗಿ ಅವರು ಆ ದೂರು ಕಳಿಸಿದ್ರು ಅನ್ನೋದನ್ನು ನಂಬಲಾರೆ. ಹೇಳಿ, ಈ ದೂರು ಯಾವಾಗ ಬಂತು?"<br />
{{gap}}ಇನೇನಿಯ ಧ್ವನಿ ಮತ್ತಷ್ಟು ಏರಿತು :<br />
{{gap}}"ನೀರಾನೆ ಪ್ರಾಂತಕ್ಕೆ ಹೋಗಿದ್ದ ರಾಜದೂತ ತಂದುಕೊಟ್ಟ."<br />
{{gap}}ಮೆನೆಪ್ಟಾ ಸರಕ್ಕನೆ ಪ್ರತಿಷ್ಟತರ ಸಾಲೆನ ಹಿಂದೆ ನಿಂತಿದ್ದ ರಾಜದೂತ ನತ್ತ ನೋಡಿ ಕೇಳಿದ :<br />
{{gap}}"ರಾಜದೂತರೆ, ತಂದುಕೊಟ್ಟಿದು ನಿಜವಾ?"
ರಾಜದೂತ ತಬ್ಬಿಬ್ಬಾದರೂ ತಕ್ಷಣವೇ ಸುಧಾರಿಸಿಕೊಂಡು, ಕಣ್ಣು<noinclude></noinclude>
hk9lmzflp0wlzahtfublpjcu2uye0a0
ಪುಟ:Mrutyunjaya.pdf/೫೫೭
104
22046
320650
63342
2026-05-18T17:39:12Z
Pragathi. BH
7585
/* Validated */
320650
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರತ್ಯುಂಜಯ|left=೫೪೪|right=}}</noinclude>
ಗಳನ್ನು ಮುಚ್ಚಿ ಗಟ್ಟಿಯಾಗಿ ಅಂದ:<br />
{{gap}}"ಹೌದು."<br />
"ಏನಪ್ಪ ಎಲ್ಲರೂ ಸುಳ್ಳು ಹೇಳ್ತಾರೆ ಅಂತ ನೀವು ಕೂಡಾ-?
ಅವತ್ತು ನಮ್ಮ ದಳಪತಿ ಖೈಮಹೊಟೆಪ್ನ ಮನೇಲಿ ಊಟ ಮಾಡಿದಿರಿ, ವಿಶ್ರಾಂತಿ ಪಡೆದಿರಿ, ಸಾಯಂಕಾಲ ದೋಣಿ ಹತ್ತಿ ಮರುಪ್ರಯಾಣ ಬೆಳೆಸಿದಿರಿ. ಅರ್ಚಕ ನಿಮ್ಮನ್ನು ಕಾಣಲಿಲ್ಲ, ಯಾವ ದೂರನ್ನೂ ಒಪ್ಪಿಸಲಿಲ್ಲ. ನಿಜವಾ ?"
ರಾಜದೂತನ ಮುಖ ಕಪ್ಪಿಟ್ಟಿತು. ನ್ಯಾಯಮೂರ್ತಿ ಗದರಿದ:
"ಹೀಗೆಲ್ಲ ಪ್ರಶ್ನೆ ಕೇಳೋದಕ್ಕೆ ಅನುಮತಿ ಕೊಡೋದಿಲ್ಲ! ಮುಂದು ವರಿಸು!"
"ನ್ಯಾಯಮೂರ್ತಿಗಳೆ, ನೀವು ಅಮಾತ್ಯ ಪಾತ್ರದಲ್ಲಿದ್ದಾಗ, ನೀರಾನೆ ಪ್ರಾಂತದಿಂದ ಬಂದ ನನ್ನನ್ನು ಭೇಟಿಗೆ ಕರೆದಿದ್ದಿರಿ. ಮಹಾ ಅರ್ಚಕರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡ್ತಿದಾರೆ ಅಂತ ಸೂಚ್ಯವಾಗಿ ನನಗೆ ತಿಳಿಸಿದಿರಿ. ಆಗ ನಾನು 'ನಮ್ಮೂರಿನ ಅರ್ಚಕ ಅಪೆಟ್ ತನ್ನ ಕೆಲಸ ಎಷ್ಟೋ ಅಷ್ಟು ಮಾಡ್ಕೊಂಡು ಹೋಗ್ತಾರೆ. ಮಂದಿರದ ಖರ್ಚು ವೆಚ್ಚ ನಾವು ನೊಡ್ಕೊಳ್ತೇವೆ' ಅಂದೆ. ನೀವು, 'ಅಷ್ಟೇ ಸುಲಭವಾಗಿ ದೇಶದ ವ್ಯಾಪ್ತಿಯಲ್ಲೂ ಆ ಸಮಸ್ಯೇನ ಬಗೆಹರಿಸೋದು ಸಾಧ್ಯವಿದ್ದರೆ!' ಅಂತ ಉದ್ಗಾರ ತೆಗೆದಿರಿ. ಹೌದೆ?”
ಮಹಾ ಅರ್ಚಕ ಸುಟ್ಟುಬಿಡುವವನಂತೆ ಅಮಾತ್ಯನನ್ನು ದಿಟ್ಟಿಸಿದ. ಆಮೆರಬ್ ಹೇಪಾಟ್ನ ನೋಟವನ್ನು ಇದಿರಿಸಲು ಹೋಗಲಿಲ್ಲ. ಸಿಟ್ಟಾಗಿ ನುಡಿದ :
"ಏನು ನೀನು ಹೇಳ್ತೀರೋದು ? ಕಲ್ಪನೆಯ ನಾವೆಯಲ್ಲಿ ವಿಹಾರ ಮಾಡ್ತಿದ್ದೀಯಾ?"
"ನಿಜವಾದ ದೋಣಿಯಲ್ಲಿ ಐದು ಹಗಲು ಐದು ಇರುಳು ಪ್ರವಾಸ ಮಾಡಿ ಇಲ್ಲಿಗೆ ಬಂದೆ. ಇದಿರ್ಗೊಳ್ಳೋದಕ್ಕೆ ದೋಣಿಕಟ್ಟೆಗೆ, ನೀರಾನೆ ಪ್ರಾಂತದಿಂದ ಓಡಿ ಬಂದಿದ್ದ ಪ್ರಾಂತಪಾಲರನ್ನು ಅಮಾತ್ಯರು ಕಳಿಸಿದ್ರು. ರಾಜದ್ರೋಹಿಗೆ, ದೈವದ್ರೋಹಿಗೆ ಎಂಥ ಸ್ವಾಗತ! ಅವರು ನನ್ನ ಎರಡೂ<noinclude></noinclude>
1oa4jqgii0hu1t2t9zkztsfnnh3h5lj
320651
320650
2026-05-18T17:41:06Z
Pragathi. BH
7585
320651
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರತ್ಯುಂಜಯ|left=೫೪೪|right=}}</noinclude>
ಗಳನ್ನು ಮುಚ್ಚಿ ಗಟ್ಟಿಯಾಗಿ ಅಂದ:<br />
{{gap}}"ಹೌದು."<br />
{{gap}}"ಏನಪ್ಪ ಎಲ್ಲರೂ ಸುಳ್ಳು ಹೇಳ್ತಾರೆ ಅಂತ ನೀವು ಕೂಡಾ-?
ಅವತ್ತು ನಮ್ಮ ದಳಪತಿ ಖೈಮಹೊಟೆಪ್ನ ಮನೇಲಿ ಊಟ ಮಾಡಿದಿರಿ, ವಿಶ್ರಾಂತಿ ಪಡೆದಿರಿ, ಸಾಯಂಕಾಲ ದೋಣಿ ಹತ್ತಿ ಮರುಪ್ರಯಾಣ ಬೆಳೆಸಿದಿರಿ. ಅರ್ಚಕ ನಿಮ್ಮನ್ನು ಕಾಣಲಿಲ್ಲ, ಯಾವ ದೂರನ್ನೂ ಒಪ್ಪಿಸಲಿಲ್ಲ. ನಿಜವಾ ?"<br />
{{gap}}ರಾಜದೂತನ ಮುಖ ಕಪ್ಪಿಟ್ಟಿತು. ನ್ಯಾಯಮೂರ್ತಿ ಗದರಿದ:<br />
{{gap}}"ಹೀಗೆಲ್ಲ ಪ್ರಶ್ನೆ ಕೇಳೋದಕ್ಕೆ ಅನುಮತಿ ಕೊಡೋದಿಲ್ಲ! ಮುಂದು ವರಿಸು!"<br />
{{gap}}"ನ್ಯಾಯಮೂರ್ತಿಗಳೆ, ನೀವು ಅಮಾತ್ಯ ಪಾತ್ರದಲ್ಲಿದ್ದಾಗ, ನೀರಾನೆ ಪ್ರಾಂತದಿಂದ ಬಂದ ನನ್ನನ್ನು ಭೇಟಿಗೆ ಕರೆದಿದ್ದಿರಿ. ಮಹಾ ಅರ್ಚಕರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡ್ತಿದಾರೆ ಅಂತ ಸೂಚ್ಯವಾಗಿ ನನಗೆ ತಿಳಿಸಿದಿರಿ. ಆಗ ನಾನು 'ನಮ್ಮೂರಿನ ಅರ್ಚಕ ಅಪೆಟ್ ತನ್ನ ಕೆಲಸ ಎಷ್ಟೋ ಅಷ್ಟು ಮಾಡ್ಕೊಂಡು ಹೋಗ್ತಾರೆ. ಮಂದಿರದ ಖರ್ಚು ವೆಚ್ಚ ನಾವು ನೊಡ್ಕೊಳ್ತೇವೆ' ಅಂದೆ. ನೀವು, 'ಅಷ್ಟೇ ಸುಲಭವಾಗಿ ದೇಶದ ವ್ಯಾಪ್ತಿಯಲ್ಲೂ ಆ ಸಮಸ್ಯೇನ ಬಗೆಹರಿಸೋದು ಸಾಧ್ಯವಿದ್ದರೆ!' ಅಂತ ಉದ್ಗಾರ ತೆಗೆದಿರಿ. ಹೌದೆ?”<br />
{{gap}}ಮಹಾ ಅರ್ಚಕ ಸುಟ್ಟುಬಿಡುವವನಂತೆ ಅಮಾತ್ಯನನ್ನು ದಿಟ್ಟಿಸಿದ. ಆಮೆರಬ್ ಹೇಪಾಟ್ನ ನೋಟವನ್ನು ಇದಿರಿಸಲು ಹೋಗಲಿಲ್ಲ. ಸಿಟ್ಟಾಗಿ ನುಡಿದ :
{{gap}}"ಏನು ನೀನು ಹೇಳ್ತೀರೋದು ? ಕಲ್ಪನೆಯ ನಾವೆಯಲ್ಲಿ ವಿಹಾರ ಮಾಡ್ತಿದ್ದೀಯಾ?"<br />
{{gap}}"ನಿಜವಾದ ದೋಣಿಯಲ್ಲಿ ಐದು ಹಗಲು ಐದು ಇರುಳು ಪ್ರವಾಸ ಮಾಡಿ ಇಲ್ಲಿಗೆ ಬಂದೆ. ಇದಿರ್ಗೊಳ್ಳೋದಕ್ಕೆ ದೋಣಿಕಟ್ಟೆಗೆ, ನೀರಾನೆ ಪ್ರಾಂತದಿಂದ ಓಡಿ ಬಂದಿದ್ದ ಪ್ರಾಂತಪಾಲರನ್ನು ಅಮಾತ್ಯರು ಕಳಿಸಿದ್ರು. ರಾಜದ್ರೋಹಿಗೆ, ದೈವದ್ರೋಹಿಗೆ ಎಂಥ ಸ್ವಾಗತ! ಅವರು ನನ್ನ ಎರಡೂ<noinclude></noinclude>
i9ioufziulyeq9wc1vy219pylehwsxp
ಪುಟ:Mrutyunjaya.pdf/೫೫೮
104
22047
320652
63351
2026-05-18T17:43:19Z
Pragathi. BH
7585
/* Validated */
320652
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರತ್ಯುಂಜಯ|left=|right=೫೪೫}}</noinclude>
ಕೈ ಹಿಡಿದು ತೊಟ್ಟಲಾಡಿಸಿದ್ರು. 'ನಾನು ನಿಮ್ಮ ಬಂಧು. ನನ್ನ ಹೆಸರು ಹಿಡಿದು ಗೇಬು ಅಂತ ಕರೀರಿ' ಅಂದ್ರು. 'ನಮ್ಮೂರು ಲಿಷ್ಟ್ನಂಥ ಸುಂದರ ಪಟ್ಟಣ ಐಗುಪ್ತದಲ್ಲೇ ಬೇರೆ ಇಲ್ಲ. ಹುಣ್ಣಿಮೆ ರಾತ್ರೀಲಿ ನದೀಲಿದ್ಕೊಂಡು ಅದರ ಸೊಬಗು ನೋಡ್ಬೇಕು. ಮುಂದಿನ ಹುಣ್ಣಿಮೆಗೆ ಹೋಗ್ಬರೋಣ' ಅಂದ್ರು. (ಗೇಬುವಿನತ್ತ ಹೊರಳಿ) ಗೇಬು! ನಿಮ್ಮ ಸಂಸಾರದ ಎల్ల ಸಾಮಾನುಗಳನ್ನೂ ಎರಡು ದೊಡ್ಡ ಪೆಟಾರಿಗಳಲ್ಲಿ ಹಾಕಿ ಮುದ್ರೆ ಒತ್ತಿ, ಸುರಕ್ಷಿತವಾಗಿ ಇಟ್ಟಿದ್ದೇವೆ-ಅಂತ ನಾನು ಹೇಳಿದು ನೆನಪಿದೆಯಾ ?"<br />
{{gap}}ಅಮಾತ್ಯ : "ಇಂಥ ಅಡ್ಡ ಪ್ರಶ್ನೆಗಳಿಗೆ ಯಾರೂ ಉತ್ತರ ಕೊಡ ಬೇಕಾಗಿಲ್ಲ."<br />
{{gap}}ಮೆನೆಪ್ಟಾ: "ಏನು ಉತ್ತರ ಕೊಟ್ಟಾರು ಪಾಪ ! ಅಮಾತ್ಯರಿಗೆ ವಯಸ್ಸಾಯ್ತು, ಆಡಳಿತದ ಮೇಲಿನ ಬಿಗಿ ಸಡಿಲವಾಗಿದೆ ಅಂತ ಟೆಹುಟಿಯ ದೂರು; ಆಮೆರಬರನ್ನು ಮನೆಗೆ ಕಳುಹಿಸಿ ತಾನೇ ಅಮಾತ್ಯನಾಗಬೇಕು ಅನ್ನೋ(ಆಸೆ ಅವನಿಗೆ ; ಆಗಲೇ ಗುಟ್ಟಾಗಿ ಮಹಾ ಅರ್ಚಕರ ಪಕ್ಷ ವಹಿಸಿದ್ದಾನೆ-ಅಂತಲೂ ಹೇಳಿದ್ರು ನಮ್ಮ ಗೇಬು !.. [ತುಸು ತಡೆದು] ಅಮಾತ್ಯರು ಮಾಡಿದ ಏರ್ಪಾಟಿನಂತೆ ಮಹಾಪ್ರಭುವನ್ನೂ ನಾನು ಕಂಡೆ."<br />
{{gap}}ಅಮಾತ್ಯ : "ದೇವಸ್ವರೂಪನ ವಿಷಯ ನಾಯಸ್ಥಾನದಲ್ಲಿ ಪ್ರಸ್ತಾಪಿಸ ಬಾರದು."
ಮೆನೆಪ್ಟಾ : "ಪೆರೋನ ಆಯುರಾರೋಗ್ಯ ವರ್ಧಿಸಲಿ ! ರಾ ಪುತ್ರ ಅಪ್ಪಣೆ ಕೊಡಿಸಿದ್ರು: 'ತನ್ನ ಮಂದೆಯ ಸುಖದುಃಖ ಮಹಾಕುರುಬ ಚೆನಾಗಿ ಬಲ್ಲ. ದೊಡ್ಡ ಕುಟುಂಬ, ಸಣ್ಣಪುಟ್ಟು ವಿರಸ ಸ್ವಾಭಾವಿಕ. ಎಲ್ಲರ ತಂದೆಯ ಒಲವಿನ ಹೊನಲಿನಲ್ಲಿ ತಾಪಗಳು ಮಾಯವಾಗ್ತವೆ, ಗಾಯಗಳು ಮಾಯವಾಗ್ತವೆ, ಅಂತ. ಇನ್ನೂ ಒಂದು ಮಾತು ಅವರು ಹೇಳಿದ್ರು : ಜನರೊಡನೆ ಹೊಣೆಗೆಟ್ಟು ನರ್ತಿಸಿದವನು ಅರ್ಹ.' ಆ ವ್ಯಕ್ತಿ ಟೆಹುಟಿ ಅಂತ ನಾನು ತಿಳಿಕೊಂಡೆ."<br />
{{gap}}ಅಮಾತ್ಯ: "ನಿಲ್ಲಿಸು! ಪೆರೋ ಆಡಿದ ಮಾತುಗಳ ಬಗ್ಗೆ ನ್ಯಾಯ ಸ್ಥಾನದಲ್ಲಿ ಚರ್ಚೆ, ಟೀಕೆ ನಿಷ್ದ್ಧ...."<br />
{{gap}}ಮೆನೆಪ್ಟಾ : "ಸರು ಸದಸ್ಯರಿಗೆ ಔತಣ ಕೊಟ್ಟಿರಿ. ನನ್ನನ್ನೂ ಕರೆదిరి. ನಿಮ್ಮ ಹಿರಿಯ ಸದಸ್ಯ ಹೆಖ್ವೆಟ್ 'ಬಿರುಕು ಬಿರುಕೇ, ಸಕಾಲದಲ್ಲಿ<br />
{{gap}}೩೫<noinclude></noinclude>
crhqqbxwol79jfyw9nmnixgockd6qlj
320653
320652
2026-05-18T17:44:20Z
Pragathi. BH
7585
320653
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರತ್ಯುಂಜಯ|left=|right=೫೪೫}}</noinclude>
ಕೈ ಹಿಡಿದು ತೊಟ್ಟಲಾಡಿಸಿದ್ರು. 'ನಾನು ನಿಮ್ಮ ಬಂಧು. ನನ್ನ ಹೆಸರು ಹಿಡಿದು ಗೇಬು ಅಂತ ಕರೀರಿ' ಅಂದ್ರು. 'ನಮ್ಮೂರು ಲಿಷ್ಟ್ನಂಥ ಸುಂದರ ಪಟ್ಟಣ ಐಗುಪ್ತದಲ್ಲೇ ಬೇರೆ ಇಲ್ಲ. ಹುಣ್ಣಿಮೆ ರಾತ್ರೀಲಿ ನದೀಲಿದ್ಕೊಂಡು ಅದರ ಸೊಬಗು ನೋಡ್ಬೇಕು. ಮುಂದಿನ ಹುಣ್ಣಿಮೆಗೆ ಹೋಗ್ಬರೋಣ' ಅಂದ್ರು. (ಗೇಬುವಿನತ್ತ ಹೊರಳಿ) ಗೇಬು! ನಿಮ್ಮ ಸಂಸಾರದ ಎల్ల ಸಾಮಾನುಗಳನ್ನೂ ಎರಡು ದೊಡ್ಡ ಪೆಟಾರಿಗಳಲ್ಲಿ ಹಾಕಿ ಮುದ್ರೆ ಒತ್ತಿ, ಸುರಕ್ಷಿತವಾಗಿ ಇಟ್ಟಿದ್ದೇವೆ-ಅಂತ ನಾನು ಹೇಳಿದು ನೆನಪಿದೆಯಾ ?"<br />
{{gap}}ಅಮಾತ್ಯ : "ಇಂಥ ಅಡ್ಡ ಪ್ರಶ್ನೆಗಳಿಗೆ ಯಾರೂ ಉತ್ತರ ಕೊಡ ಬೇಕಾಗಿಲ್ಲ."<br />
{{gap}}ಮೆನೆಪ್ಟಾ: "ಏನು ಉತ್ತರ ಕೊಟ್ಟಾರು ಪಾಪ ! ಅಮಾತ್ಯರಿಗೆ ವಯಸ್ಸಾಯ್ತು, ಆಡಳಿತದ ಮೇಲಿನ ಬಿಗಿ ಸಡಿಲವಾಗಿದೆ ಅಂತ ಟೆಹುಟಿಯ ದೂರು; ಆಮೆರಬರನ್ನು ಮನೆಗೆ ಕಳುಹಿಸಿ ತಾನೇ ಅಮಾತ್ಯನಾಗಬೇಕು ಅನ್ನೋ(ಆಸೆ ಅವನಿಗೆ ; ಆಗಲೇ ಗುಟ್ಟಾಗಿ ಮಹಾ ಅರ್ಚಕರ ಪಕ್ಷ ವಹಿಸಿದ್ದಾನೆ-ಅಂತಲೂ ಹೇಳಿದ್ರು ನಮ್ಮ ಗೇಬು !.. [ತುಸು ತಡೆದು] ಅಮಾತ್ಯರು ಮಾಡಿದ ಏರ್ಪಾಟಿನಂತೆ ಮಹಾಪ್ರಭುವನ್ನೂ ನಾನು ಕಂಡೆ."<br />
{{gap}}ಅಮಾತ್ಯ : "ದೇವಸ್ವರೂಪನ ವಿಷಯ ನಾಯಸ್ಥಾನದಲ್ಲಿ ಪ್ರಸ್ತಾಪಿಸ ಬಾರದು."
ಮೆನೆಪ್ಟಾ : "ಪೆರೋನ ಆಯುರಾರೋಗ್ಯ ವರ್ಧಿಸಲಿ ! ರಾ ಪುತ್ರ ಅಪ್ಪಣೆ ಕೊಡಿಸಿದ್ರು: 'ತನ್ನ ಮಂದೆಯ ಸುಖದುಃಖ ಮಹಾಕುರುಬ ಚೆನಾಗಿ ಬಲ್ಲ. ದೊಡ್ಡ ಕುಟುಂಬ, ಸಣ್ಣಪುಟ್ಟು ವಿರಸ ಸ್ವಾಭಾವಿಕ. ಎಲ್ಲರ ತಂದೆಯ ಒಲವಿನ ಹೊನಲಿನಲ್ಲಿ ತಾಪಗಳು ಮಾಯವಾಗ್ತವೆ, ಗಾಯಗಳು ಮಾಯವಾಗ್ತವೆ, ಅಂತ. ಇನ್ನೂ ಒಂದು ಮಾತು ಅವರು ಹೇಳಿದ್ರು : ಜನರೊಡನೆ ಹೊಣೆಗೆಟ್ಟು ನರ್ತಿಸಿದವನು ಅರ್ಹ.' ಆ ವ್ಯಕ್ತಿ ಟೆಹುಟಿ ಅಂತ ನಾನು ತಿಳಿಕೊಂಡೆ."<br />
{{gap}}ಅಮಾತ್ಯ: "ನಿಲ್ಲಿಸು! ಪೆರೋ ಆಡಿದ ಮಾತುಗಳ ಬಗ್ಗೆ ನ್ಯಾಯ ಸ್ಥಾನದಲ್ಲಿ ಚರ್ಚೆ, ಟೀಕೆ ನಿಷ್ದ್ಧ...."<br />
{{gap}}ಮೆನೆಪ್ಟಾ : "ಸರು ಸದಸ್ಯರಿಗೆ ಔತಣ ಕೊಟ್ಟಿರಿ. ನನ್ನನ್ನೂ ಕರೆదిరి. ನಿಮ್ಮ ಹಿರಿಯ ಸದಸ್ಯ ಹೆಖ್ವೆಟ್ 'ಬಿರುಕು ಬಿರುಕೇ, ಸಕಾಲದಲ್ಲಿ<br />
{{gap}}೩೫<noinclude></noinclude>
k6giy5lv1o20a2sqth7788hqol08ozo
ಪುಟ:Mrutyunjaya.pdf/೫೫೯
104
22048
320654
64446
2026-05-18T17:46:29Z
Pragathi. BH
7585
/* Proofread */
320654
proofread-page
text/x-wiki
<noinclude><pagequality level="3" user="Pragathi. BH" /></noinclude>೫೪೬
ಮುಚ್ಚೋದು ಜಾಣತನ, ಶಾಂತಿ ಮುಖ್ಯ, ಶಾಂತಿ అంದ್ರು. ఒంದು ಪಕ್ಕದಲ್ಲಿ ಹೆಖ್ವೆಟ್, ಇನ್ನೊಂದು ಪಕ್ಕದಲ್ಲಿ ಗೇಬು. ಆಗ ನಾನು ನಿಮಗೆ ಬಹಳ ಸಮೀಪವಾಗಿದ್ದೆ, ಭಾರಿ ಔತಣ, ಸುರೆಯ ವಿಷಯದಲ್ಲಿ ಗೇಬು ಹೇಳಿದ್ರು: 'ಪೆರೋಗೆ ಅತ್ಯಂತ ಹಳೆಯ ಸುರೆಯೇ ಬೇಕು. ಪೂರ್ವಜರ ಕಾಲದ್ದು, ರಾ ಐಗುಪ್ತವನ್ನು ಆಳುತ್ತಿದ್ದಾಗಲೇ ಮಾಡಿದ ಸುರೆ! ಯಾವುದಕ್ಕೂ ఒంದು ಮಿತಿ ಬೇಡವೆ?'...."
ಅಮಾತ್ಯ : “ಇಲ್ಲ, ಇಲ್ಲ! ವೈಯಕ್ತಿಕವಾದದ್ದೇನೂ ಇಲ್ಲಿ ಮಾತಾಡಬಾರದು.”
ಮೆನೆಪ್ ಟಾ : “ನನ್ನ ಬಂಧು ಬಟಾನಿಗೆ ನಾನು ಹೇಳ್ದೆ :' ವೈಯಕ್ತಿಕನಾಗಿ ನನಗೆ ಏನು ಆಗ್ತದೆ ಅನ್ನೋದು ಮಹತ್ವದ್ದಲ್ಲ. ನೀರಾನೆ ಪ್ರಾಂತದ ಜನ ನೆಮ್ಮದಿಯಿಂದ ಬದುಕೋದು ಸಾಧ್ಯವಾಗಬೇಕು. ಇದಕ್ಕೆ ರಾಜಧಾನಿ ಆಸ್ಪದ ಇತ್ತರೆ ಎಲ್ಲರಿಗೂ ಹಿತ.”
ಅಮಾತ್ಯ : “ಇದು ಬೆದರಿಕೆಯ ಮಾತು! ನಿಮಗಿಷ್ಟ ಬಂದಂತೆ ಬಾಳೋದಕ್ಕೆ ಆಸ್ಸದನೀಯದಿದ್ದರೆ ಅನಾಹುತವಾದೀತು ಅಂತಲೊ?”
ಮೆನಪ್ ಟಾ : ಸರಳದ ಎರಡು ಪದಗಳಿಗೆ ನ್ಯಾಯಮೂರ್ತಿಯಣಾರು ವಿಸರೀತಾರ್ಥ ಕಲ್ಸಿದ್ದಾರೆ.”
ಅಮಾತ್ಯ: “ನ್ಯಾಯಸ್ಥಾನವನ್ನು ನಿಂದಿಸುವ ಎದೆಗಾರಿಕೆ ! ಮೆನೆಪ್ ಟಾ! ನಿನ್ನದು ವಿಪರೀತ బుದ್ಧಿ. ಪಶ್ಚಾತ್ತಾಪ ಪಡಬೇಕಾದೀತು. ಜೋಕೆ!"
ಮೆನೆಪ್ ಟಾ : “ಜೀವ ತೇದು ದುಡಿಯುವ ಜನರಿಗೆ ಅರೆಹೊಟ್ಟೆ, ಚಾಟಿ ಏಟು ; ಕೊಬ್ಬಿದ ಭೂಮಾಲಿಕರಿಗೆ ಅರಮನೆ ಪಲ್ಲಕಿ! ದರಿದ್ರರ ಶವಗಳ ಮೇಲೆ ತುಣುಕು ಬಟ್ಟೆಯೂ ಇಲ್ಲ; ಆದರೆ ಮಂದಿರದ ಸೋಮಾರಿ ಬೆಕ್ಕು ಸತ್ತಾಗ ಅದಕ್ಕೆ ಶವಲೇಪನ! ಅರ್ಚಕ ವರ್ಗದ ಕಾಮ ತೃಷೆಗೆ ದೇವ ಸೇವಿಕೆಯರ ಬಲಿ: ಮುದ್ದು ಮಕ್ಕಳ ತಾಯಂದಿರಾಗಬೇಕಾದ ಹೆಂಗೆಳೆಯರಿಗೆ ಮಂದಿರದ ಪವಿತ್ರ ಗೂಳಿ ಪವಿತ್ರ ಟಗರುಗಳ ಜತೆ ಕಡ್ಡಾಯ ಸಂಭೋಗ!”
ಅಮಾತ್ಯ : "ಅಶ್ಲೀಲ ಪದಗಳನ್ನು ಆಡ್ತೀಯಲ್ಲ. తెల్ ಕೆಟ್ಟಿದೆಯಾ?”
ಮೆನೆಪ್ ಟಾ : “ಕಂಡುದನ್ನು ಕಂಡಂತೆ ಹೇಳೋದು ತಪ್ಪೆ?"<noinclude></noinclude>
jv610z8ychst28vpxegsn3eeycwshgu
320707
320654
2026-05-19T04:32:48Z
Shreelatha.Halemane
7642
/* Validated */
320707
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮ್ರುತ್ಯುಂಜಯ|left=೫೪೬|right=}}
ಮುಚ್ಚೋದು ಜಾಣತನ, ಶಾಂತಿ ಮುಖ್ಯ, ಶಾಂತಿ అంದ್ರು. ఒంದು ಪಕ್ಕದಲ್ಲಿ ಹೆಖ್ವೆಟ್, ಇನ್ನೊಂದು ಪಕ್ಕದಲ್ಲಿ ಗೇಬು. ಆಗ ನಾನು ನಿಮಗೆ ಬಹಳ ಸಮೀಪವಾಗಿದ್ದೆ, ಭಾರಿ ಔತಣ, ಸುರೆಯ ವಿಷಯದಲ್ಲಿ ಗೇಬು ಹೇಳಿದ್ರು: 'ಪೆರೋಗೆ ಅತ್ಯಂತ ಹಳೆಯ ಸುರೆಯೇ ಬೇಕು. ಪೂರ್ವಜರ ಕಾಲದ್ದು, ರಾ ಐಗುಪ್ತವನ್ನು ಆಳುತ್ತಿದ್ದಾಗಲೇ ಮಾಡಿದ ಸುರೆ! ಯಾವುದಕ್ಕೂ ఒంದು ಮಿತಿ ಬೇಡವೆ?'...."
{{gap}}ಅಮಾತ್ಯ : “ಇಲ್ಲ, ಇಲ್ಲ! ವೈಯಕ್ತಿಕವಾದದ್ದೇನೂ ಇಲ್ಲಿ ಮಾತಾಡಬಾರದು.”
{{gap}}ಮೆನೆಪ್ ಟಾ : “ನನ್ನ ಬಂಧು ಬಟಾನಿಗೆ ನಾನು ಹೇಳ್ದೆ :' ವೈಯಕ್ತಿಕನಾಗಿ ನನಗೆ ಏನು ಆಗ್ತದೆ ಅನ್ನೋದು ಮಹತ್ವದ್ದಲ್ಲ. ನೀರಾನೆ ಪ್ರಾಂತದ ಜನ ನೆಮ್ಮದಿಯಿಂದ ಬದುಕೋದು ಸಾಧ್ಯವಾಗಬೇಕು. ಇದಕ್ಕೆ ರಾಜಧಾನಿ ಆಸ್ಪದ ಇತ್ತರೆ ಎಲ್ಲರಿಗೂ ಹಿತ.”
{{gap}}ಅಮಾತ್ಯ : “ಇದು ಬೆದರಿಕೆಯ ಮಾತು! ನಿಮಗಿಷ್ಟ ಬಂದಂತೆ ಬಾಳೋದಕ್ಕೆ ಆಸ್ಸದನೀಯದಿದ್ದರೆ ಅನಾಹುತವಾದೀತು ಅಂತಲೊ?”
{{gap}}ಮೆನಪ್ ಟಾ : ಸರಳದ ಎರಡು ಪದಗಳಿಗೆ ನ್ಯಾಯಮೂರ್ತಿಯಣಾರು ವಿಸರೀತಾರ್ಥ ಕಲ್ಸಿದ್ದಾರೆ.”
{{gap}}ಅಮಾತ್ಯ: “ನ್ಯಾಯಸ್ಥಾನವನ್ನು ನಿಂದಿಸುವ ಎದೆಗಾರಿಕೆ ! ಮೆನೆಪ್ ಟಾ! ನಿನ್ನದು ವಿಪರೀತ బుದ್ಧಿ. ಪಶ್ಚಾತ್ತಾಪ ಪಡಬೇಕಾದೀತು. ಜೋಕೆ!"
{{gap}}ಮೆನೆಪ್ ಟಾ : “ಜೀವ ತೇದು ದುಡಿಯುವ ಜನರಿಗೆ ಅರೆಹೊಟ್ಟೆ, ಚಾಟಿ ಏಟು ; ಕೊಬ್ಬಿದ ಭೂಮಾಲಿಕರಿಗೆ ಅರಮನೆ ಪಲ್ಲಕಿ! ದರಿದ್ರರ ಶವಗಳ ಮೇಲೆ ತುಣುಕು ಬಟ್ಟೆಯೂ ಇಲ್ಲ; ಆದರೆ ಮಂದಿರದ ಸೋಮಾರಿ ಬೆಕ್ಕು ಸತ್ತಾಗ ಅದಕ್ಕೆ ಶವಲೇಪನ! ಅರ್ಚಕ ವರ್ಗದ ಕಾಮ ತೃಷೆಗೆ ದೇವ ಸೇವಿಕೆಯರ ಬಲಿ: ಮುದ್ದು ಮಕ್ಕಳ ತಾಯಂದಿರಾಗಬೇಕಾದ ಹೆಂಗೆಳೆಯರಿಗೆ ಮಂದಿರದ ಪವಿತ್ರ ಗೂಳಿ ಪವಿತ್ರ ಟಗರುಗಳ ಜತೆ ಕಡ್ಡಾಯ ಸಂಭೋಗ!”
{{gap}}ಅಮಾತ್ಯ : "ಅಶ್ಲೀಲ ಪದಗಳನ್ನು ಆಡ್ತೀಯಲ್ಲ. తెల్ ಕೆಟ್ಟಿದೆಯಾ?”
{{gap}}ಮೆನೆಪ್ ಟಾ : “ಕಂಡುದನ್ನು ಕಂಡಂತೆ ಹೇಳೋದು ತಪ್ಪೆ?"<noinclude></noinclude>
o8qtnppg7b5emdz0cm30gg4sx3jdbuw
ಪುಟ:Mrutyunjaya.pdf/೫೬೦
104
22049
320655
64894
2026-05-18T17:48:21Z
Pragathi. BH
7585
/* Proofread */
320655
proofread-page
text/x-wiki
<noinclude><pagequality level="3" user="Pragathi. BH" /></noinclude>ಮ್ರುತ್ಯುಂಜಯ ೫೪೭
ಅಮಾತ್ಯ : “ಇದು ಖಂಡಿತವಾಗಿಯೂ ಹುಚ್ಚುಚ್ಚಾರ...”
ಮೆನೆಪ್ ಟಾ : నిಮಗೆ ಬೇಡದನರಿಗೆ ಹುಚ್ಚ ಅನ್ನೋ ಬಿರುದು ಕೊಡ್ತೀರಿ!”
ಬೆಳಕು ಕಡಿಮೆಯಾಗಿತ್ತು. ಇನ್ನು ಮುಚ್ಚಂಜೆ, ಅದಾದ ಮೇಲೆ
ఇರುಳು.
ಆಮೆರಬ್ ಗೆ ಚಿಂತೆ, ಸಿಡುಕು. ಈತ ನಿಲ್ಲಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲವಲ್ಲ...
అಮಾತ್ಯ : ಆಯಿತೋ, ಮಾತನಾಡಿ ? ಮಹಾ ಸಂಧಾ ಪೂಜೆಗೆ ತಡವಾಗ್ತದೆ.”
ಮೆನಪ್ ಟಾ : " ಪೂಜೆಗೆ ಅಡ್ಡಿಯಾಗಲಾರೆ. ಅವರು ಹೋಗಿ ಬರಲಿ.”
ಅಮಾತ್ಯ: “ನಿನ್ನಿಂದಾಗಿ ಮಹಾಪ್ರಭು ಮಹಾರಾಣಿ ಎಲ್ಲರಿಗೂ ತೊಂದರೆ.”
ನಾಯಸ್ಥಾನದಲ್ಲಿ ಪ್ರೇಕ್ಷಕರು ಗುಜುಗುಜು. ಸಾಮಾನ್ಯ ಪ್ರೇಕ್ಷಕರು ಜೀವ ತಳೆದು ತಮ್ಮೊಳಗೆ ಮಾತನಾಡತೊಡಗಿದರು. ಇಳಿದನಿಯಲ್ಲಿ ಆಮೆರಬ್ ಹೇಪಾಟ್ ವಿಚಾರ ವಿನಿಮಯ...ಸೆನೆಬ್ ಆಜ್ಞಪ್ತನಾಗಿ ಅತ್ತಿತ್ತ ಓಡಿದ.
ಧ್ವನಿ ಏರಿಸಿ ಆಮೆರಬ್ ಅಂದ :
“ಸದ್ದು! ಸದ್ದು! ಎಲ್ಲರೂ ನ್ಯಾಸ್ಥಾನದ ಪಾವಿತ್ರ್ಯ ಕಾಪಾಡ್ಬೇಕು. ದೀಪಗಳನ್ನು ಬೆಳಗೋದಕ್ಕೆ ಅನುಜ್ಞೆ ನೀಡಿದ್ದೇವೆ. ಅಪರಾಧಿ ಮುಂದುವರಿಸಿ ಬೇಗನೆ ಮುಗಿಸಲಿ."
ಮೆನೆಪ್ ಟಾ :
“ಉಸಕೃತನಾಗಿದ್ದೇನೆ. ఐಗುಪ್ತದು ಸಾಟಿ ಇಲ್ಲ ದ ಪ್ರಾಚೀನ ಸುಸಂಸ್ಕೃತ ನಾಗರೀಕತೆ. ನಮ್ಮ ಸಮಾಜ ವಿಸ್ತಾರ ಬುನಾದಿಯ ಮೇಲಿನ ಹತ್ತಾಳು ಎತ್ತರದ ಗೋರಿ. ಈ ಸೋಪಾನ ವ್ಯವಸ್ಥೆ ನಿಂತಿರೋದು ಸಹಸ್ರ ಸಹಸ್ರ ಶ್ರಮಜೀವಿಗಳ ಭುಜಗಳ ಮೇಲೆ ಎತ್ತರಕ್ಕೆ ಹೋಗ್ತಾ ಅಗಲ
ಕಿರಿದು. ದುಡಿಸುವ ಕಾಸೀರುಗಳು.ಭೂಮಾಲಿಖರು, ನರ್ತಕರು, ಸೈನ್ಯ,<noinclude></noinclude>
6iemw4kkv7zeghwibxfbc68yalbgf6a
320726
320655
2026-05-19T06:34:46Z
Shreelatha.Halemane
7642
/* Validated */
320726
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right= ೫೪೭}}
{{gap}}ಅಮಾತ್ಯ : “ಇದು ಖಂಡಿತವಾಗಿಯೂ ಹುಚ್ಚುಚ್ಚಾರ...”
{{gap}}ಮೆನೆಪ್ ಟಾ : నిಮಗೆ ಬೇಡದನರಿಗೆ ಹುಚ್ಚ ಅನ್ನೋ ಬಿರುದು ಕೊಡ್ತೀರಿ!”
{{gap}}ಬೆಳಕು ಕಡಿಮೆಯಾಗಿತ್ತು. ಇನ್ನು ಮುಚ್ಚಂಜೆ, ಅದಾದ ಮೇಲೆ
ఇರುಳು.
{{gap}}ಆಮೆರಬ್ ಗೆ ಚಿಂತೆ, ಸಿಡುಕು. ಈತ ನಿಲ್ಲಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲವಲ್ಲ...
{{gap}}ಅಮಾತ್ಯ : ಆಯಿತೋ, ಮಾತನಾಡಿ ? ಮಹಾ ಅರ್ಚಕರಿಗೆ ಸಂಧ್ಯಾ ಪೂಜೆಗೆ ತಡವಾಗ್ತದೆ.”
{{gap}}ಮೆನಪ್ ಟಾ : " ಪೂಜೆಗೆ ಅಡ್ಡಿಯಾಗಲಾರೆ. ಅವರು ಹೋಗಿ ಬರಲಿ.”
{{gap}}ಅಮಾತ್ಯ: “ನಿನ್ನಿಂದಾಗಿ ಮಹಾಪ್ರಭು ಮಹಾರಾಣಿ ಎಲ್ಲರಿಗೂ ತೊಂದರೆ.”
{{gap}}ನ್ಯಾಯಸ್ಥಾನದಲ್ಲಿ ಪ್ರೇಕ್ಷಕರು ಗುಜುಗುಜು. ಸಾಮಾನ್ಯ ಪ್ರೇಕ್ಷಕರು ಜೀವ ತಳೆದು ತಮ್ಮೊಳಗೆ ಮಾತನಾಡತೊಡಗಿದರು. ಇಳಿದನಿಯಲ್ಲಿ ಆಮೆರಬ್ ಹೇಪಾಟ್ ವಿಚಾರ ವಿನಿಮಯ...ಸೆನೆಬ್ ಆಜ್ಞಪ್ತನಾಗಿ ಅತ್ತಿತ್ತ ಓಡಿದ.
{{gap}}ಧ್ವನಿ ಏರಿಸಿ ಆಮೆರಬ್ ಅಂದ :
{{gap}}“ಸದ್ದು! ಸದ್ದು! ಎಲ್ಲರೂ ನ್ಯಾಯಸ್ಥಾನದ ಪಾವಿತ್ರ್ಯ ಕಾಪಾಡ್ಬೇಕು. ದೀಪಗಳನ್ನು ಬೆಳಗೋದಕ್ಕೆ ಅನುಜ್ಞೆ ನೀಡಿದ್ದೇವೆ. ಅಪರಾಧಿ ಮುಂದುವರಿಸಿ ಬೇಗನೆ ಮುಗಿಸಲಿ."
{{gap}}ಮೆನೆಪ್ ಟಾ :
{{gap}}“ಉಸಕೃತನಾಗಿದ್ದೇನೆ. ఐಗುಪ್ತದ ಸಾಟಿ ಇಲ್ಲ ದ ಪ್ರಾಚೀನ ಸುಸಂಸ್ಕೃತ ನಾಗರೀಕತೆ. ನಮ್ಮ ಸಮಾಜ ವಿಸ್ತಾರ ಬುನಾದಿಯ ಮೇಲಿನ ಹತ್ತಾಳು ಎತ್ತರದ ಗೋರಿ. ಈ ಸೋಪಾನ ವ್ಯವಸ್ಥೆ ನಿಂತಿರೋದು ಸಹಸ್ರ ಸಹಸ್ರ ಶ್ರಮಜೀವಿಗಳ ಭುಜಗಳ ಮೇಲೆ ಎತ್ತರಕ್ಕೆ ಹೋಗ್ತಾ ಅಗಲಕಿರಿದು. ದುಡಿಸುವ ಕಾಸೀರುಗಳು.ಭೂಮಾಲಿಖರು, ವರ್ತಕರು, ಸೈನ್ಯ,<noinclude></noinclude>
b20awlx1zznsogui1ma2zc85j97vftb
ಪುಟ:Mrutyunjaya.pdf/೫೬೧
104
22050
320656
64915
2026-05-18T17:50:33Z
Pragathi. BH
7585
/* Proofread */
320656
proofread-page
text/x-wiki
<noinclude><pagequality level="3" user="Pragathi. BH" /></noinclude>೫೪೮ ಮೃತ್ಯುಂಜಯ
ಆಡಳಿತಗಾರರು-ಅರ್ಚಕರು. ಸುಲಿಗೆಯ ಸೂತ್ರ ಈ ವ್ಯವಸ್ಥೆಯನ್ನು ಬಿಗಿದು ಕಟ್ಟಿದೆ.”
...ಕಂಚಿನ ದೀವಟಿಗೆಗಳು ಬರತೊಡಗಿದುವು. (ಹೊರಗೆ ಮಬ್ಬ ಗತ್ತಲು.) ದೀವಟಿಗೆಗಳನ್ನು ಇರಿಸುವ ಕೆಲಸ ಪೂರ್ಣವಾಗಲೆಂದು, ಮೆನೆಪ್ ಟಾ ಮಾತು ನಿಲ್ಲಿಸಿದ. ಎಷ್ಟೋ ವರ್ಷಗಳ ಹಿಂದೆ ಗಡಿಯಲ್ಲಿ ಯುದ್ಧವಾದಾಗ ದೀಪಗಳ ಬೆಳಕಿನಲ್ಲಿ ಅಮಾತ್ಯ ಕಾರ್ಯನಿರತನಾಗಿದ್ದ . ಕೆಲವರಿಗೆ ಅದರ ನೆನಪಿತ್ತು, ಆದರೆ ನ್ಯಾಯಸ್ಥಾನ ಆ ರೀತಿ ಕಾರ್ಯಕಲಾಪ ನಡೆಸಿದು ಅದೇ ಮೊದಲು.
ಆ ಬೆಳಕಿನಲ್ಲಿ ಅಲ್ಲಿದ್ದವರು ದಿಟ್ಟಿಸಿ, ಮುಂದುವರಿಸಲು ನ್ಯಾಯ ಮೂರ್ತಿ ಸೂಚನೆ ನೀಡುವುದಕ್ಕೆ ಮೊದಲೇ ಮೆನೆಪ್ ತಟಾ ಮುಗುಳುನಕ್ಕು ಮಾತನಾಡಿದ: -
“ಸುಲಿಗೆಯ ಸೂತ್ರ ಈ ವ್ಯವಸ್ಥೆಯನ್ನು ಬಿಗಿದು ಕಟ್ಟಿದೆ, ಅಂದೆ. ನಮ್ಮ ಪ್ರಾಚೀನರ ಮಾತಿನ್ಂತೆ,ಮುಂಗೈ ಜೋರಿನಿಂದ ಏನನ್ನೂ ಸಾಧಿಸಲು ಆಗುವುದಿಲ್ಲ, ಆದರೆ ನಮ್ಮ ನಡವಳಿಕೆ ಆ ಮಾತನ್ನು ಸುಳ್ಳು ಮಾಡಿದೆ. ಕಂದಾಯ ವಸೂಲಿ, ಗೋರಿ ನಿರ್ಮಾಣ, ಗಣಿ ಕೆಲಸ ಇವೆಲ್ಲ ಬಲಪ್ರಯೋಗ ದಿಂದಲೇ ನಡೀತವೆ. ದಾಸದಾಸಿಯರ ಬಲಾತ್ಕಾರದ ದುಡಿಮೆಯಿಂದ ನಮ್ಮಲ್ಲಿ ಸಂಪತ್ತು ಉತ್ಪನ್ನವಾಗ್ತದೆ. ఇದು ಸ್ವರ್ಣಪಿಶಾಚಿಗಳ ಸಮಾಜ... ಮನುಷ್ಯ ಜೀವಕ್ಕೆ ಇಲ್ಲಿ ಬೆಲೆ ಇಲ್ಲ, ಹೋರಾಟದಲ್ಲಿ ಸೆರೆಸಿಕ್ಕಿದವರು ನಮ್ಮ ವ್ಯವಸ್ಥೆಯ ಗುಲಾಮರಾಗಿದ್ದಾರೆ. ಅವರನ್ನು ಕೆಡವಿದಾಗ ಅವರ ಬಲಗೈಯನ್ನೋ ಯೋని ಯನ್ನೋ ಕತ್ತರಿಸಿ ನಮ್ಮ ವೀರಯೋಧರು ಅರಮನೆಯ ಲೆಕ್ಕಿಗನಿಗೆ ತೋರಿಸಿ ದಾಖಲೆ ಇಡಿಸೋದಕ್ಕೆ. ಆ ಸಾಧನೆಯ ಪ್ರಮಾಣಕ್ಕೆ ಅನು ಸಾರವಾಗಿ ಬಹುಮಾನ! ಇದಲ್ಲವಾ ನಾಗರಿಕತೆ?...”
ಅಮಾತ್ಯ ಸಿಟ್ಟು ಬೆ೦ಕಿಯಾಗಿ ಗುಡುಗಿದ :
“ಸಾಕು ಮಾಡು! ನೀನು ಹೇಳೋದಕ್ಕೂ ಈ ವಿಚಾರಣೆಗೂ ಸಂಬಂಧವಿಲ್ಲ !"
ಅದನ್ನು ಗಮನಿಸದೆ ಮೆನೆಪ್ ಟಾ ಮುಂದುವರಿದ:<noinclude></noinclude>
f0351dit4ykhyi4b7dmj66nyjhvykqo
320727
320656
2026-05-19T06:41:28Z
Shreelatha.Halemane
7642
/* Validated */
320727
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೫೪೮|right=}}
ಆಡಳಿತಗಾರರು-ಅರ್ಚಕರು. ಸುಲಿಗೆಯ ಸೂತ್ರ ಈ ವ್ಯವಸ್ಥೆಯನ್ನು ಬಿಗಿದು ಕಟ್ಟಿದೆ.”
{{gap}}...ಕಂಚಿನ ದೀವಟಿಗೆಗಳು ಬರತೊಡಗಿದುವು. (ಹೊರಗೆ ಮಬ್ಬ ಗತ್ತಲು.) ದೀವಟಿಗೆಗಳನ್ನು ಇರಿಸುವ ಕೆಲಸ ಪೂರ್ಣವಾಗಲೆಂದು, ಮೆನೆಪ್ ಟಾ ಮಾತು ನಿಲ್ಲಿಸಿದ. ಎಷ್ಟೋ ವರ್ಷಗಳ ಹಿಂದೆ ಗಡಿಯಲ್ಲಿ ಯುದ್ಧವಾದಾಗ ದೀಪಗಳ ಬೆಳಕಿನಲ್ಲಿ ಅಮಾತ್ಯ ಕಾರ್ಯನಿರತನಾಗಿದ್ದ . ಕೆಲವರಿಗೆ ಅದರ ನೆನಪಿತ್ತು, ಆದರೆ ನ್ಯಾಯಸ್ಥಾನ ಆ ರೀತಿ ಕಾರ್ಯಕಲಾಪ ನಡೆಸಿದ್ದು ಅದೇ ಮೊದಲು.
{{gap}}ಆ ಬೆಳಕಿನಲ್ಲಿ ಅಲ್ಲಿದ್ದವರು ದಿಟ್ಟಿಸಿ, ಮುಂದುವರಿಸಲು ನ್ಯಾಯ ಮೂರ್ತಿ ಸೂಚನೆ ನೀಡುವುದಕ್ಕೆ ಮೊದಲೇ ಮೆನೆಪ್ ಟಾ ಮುಗುಳುನಕ್ಕು ಮಾತನಾಡಿದ: -
{{gap}}“ಸುಲಿಗೆಯ ಸೂತ್ರ ಈ ವ್ಯವಸ್ಥೆಯನ್ನು ಬಿಗಿದು ಕಟ್ಟಿದೆ, ಅಂದೆ. ನಮ್ಮ ಪ್ರಾಚೀನರ ಮಾತಿನಂತೆ,ಮುಂಗೈ ಜೋರಿನಿಂದ ಏನನ್ನೂ ಸಾಧಿಸಲು ಆಗುವುದಿಲ್ಲ, ಆದರೆ ನಮ್ಮ ನಡವಳಿಕೆ ಆ ಮಾತನ್ನು ಸುಳ್ಳು ಮಾಡಿದೆ. ಕಂದಾಯ ವಸೂಲಿ, ಗೋರಿ ನಿರ್ಮಾಣ, ಗಣಿ ಕೆಲಸ ಇವೆಲ್ಲ ಬಲಪ್ರಯೋಗ ದಿಂದಲೇ ನಡೀತವೆ. ದಾಸದಾಸಿಯರ ಬಲಾತ್ಕಾರದ ದುಡಿಮೆಯಿಂದ ನಮ್ಮಲ್ಲಿ ಸಂಪತ್ತು ಉತ್ಪನ್ನವಾಗ್ತದೆ. ఇದು ಸ್ವರ್ಣಪಿಶಾಚಿಗಳ ಸಮಾಜ... ಮನುಷ್ಯ ಜೀವಕ್ಕೆ ಇಲ್ಲಿ ಬೆಲೆ ಇಲ್ಲ, ಹೋರಾಟದಲ್ಲಿ ಸೆರೆಸಿಕ್ಕಿದವರು ನಮ್ಮ ವ್ಯವಸ್ಥೆಯ ಗುಲಾಮರಾಗಿದ್ದಾರೆ. ಅವರನ್ನು ಕೆಡವಿದಾಗ ಅವರ ಬಲಗೈಯನ್ನೋ ಯೋని ಯನ್ನೋ ಕತ್ತರಿಸಿ ನಮ್ಮ ವೀರಯೋಧರು ಅರಮನೆಯ ಲೆಕ್ಕಿಗನಿಗೆ ತೋರಿಸಿ ದಾಖಲೆ ಇಡಿಸೋದಕ್ಕೆ. ಆ ಸಾಧನೆಯ ಪ್ರಮಾಣಕ್ಕೆ ಅನು ಸಾರವಾಗಿ ಬಹುಮಾನ! ಇದಲ್ಲವಾ ನಾಗರಿಕತೆ?...”
{{gap}}ಅಮಾತ್ಯ ಸಿಟ್ಟು ಬೆ೦ಕಿಯಾಗಿ ಗುಡುಗಿದ :
{{gap}}“ಸಾಕು ಮಾಡು! ನೀನು ಹೇಳೋದಕ್ಕೂ ಈ ವಿಚಾರಣೆಗೂ ಸಂಬಂಧವಿಲ್ಲ !"
{{gap}}ಅದನ್ನು ಗಮನಿಸದೆ ಮೆನೆಪ್ ಟಾ ಮುಂದುವರಿದ:<noinclude></noinclude>
pb6cu2q77pj9fcic0m8xhdw7dgxjck8
ಪುಟ:Mrutyunjaya.pdf/೬೦೮
104
22097
320728
220056
2026-05-19T06:43:37Z
Shreelatha.Halemane
7642
/* Validated */
320728
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೫೯೯}}
{{gap}}“ನೀನೂ ಬಾ ಅಣ್ಣ.”...</br>
{{gap}}ಅವರಿಬ್ಬರೂ ದೋಣಿಯನ್ನೇರಿ ಮೆನೆಪ್ ಟಾನ ರಕ್ಷಿತ ಶವದ ಪಕ್ಕದಲ್ಲಿ</br>
ಆ ಆಹಾರವನ್ನಿಟ್ಟರು.</br>
{{gap}}ಉಳಿದವರಿಗೆ ಅವಸರದ ಬುತ್ತಿಯೂಟ. ಎರಡೆರಡು ಗುಟುಕು ಖಿವವ</br>
ಪಾನೀಯ ಕೂಡಾ.</br>
{{gap}}ಇತರರ ಜತೆ ರಾಮರಿಪ್ಟಾನೂ ಈರುಳ್ಳಿ ಕಚ್ಚಿಕೊಂಡು ಎರಡು</br>
ಮೂರು ಚೂರು ರೊಟ್ಟಿ ತಿಂದ.</br>
{{gap}}{{gap}}*{{gap}}{{gap}}*{{gap}}{{gap}}*
{{gap}}ಹಾಯಿ ಮತ್ತೆ ಹರಡಿಕೊಂಡು ದೋಣಿಯನ್ನು ನೀರಾನೆ ಪ್ರಾಂತದತ್ತ</br>
ಸೆಳೆಯಿತು. ಅಂಬಿಗರಿಗೆ ಸ್ವಲ್ಪ ಹೊತ್ತು ವಿಶ್ರಾಂತಿ. ಆ ಪಯಣಿಗರಲ್ಲಿ</br>
ಹೆಚ್ಚಿನವರು ಹುಟ್ಟು ಹಾಕುವ ಅನುಭವವಿದ್ದವರೇ. ಅವರಲ್ಲಿ ನಾಲ್ವರು ಬದಲಿ</br>
ಅಂಬಿಗರಾದರು.</br>
{{gap}}ಇರುಳು. ವೇಗಕ್ಕೆ ಇದು ಅಡ್ಡಿಯಲ್ಲ. ಆದರೆ ಎಷ್ಟು ಹೊತ್ತಿಗೋ</br>
ಒಮ್ಮೆ ಎದುರುಗಡೆಯಿಂದ ಬರುವ ದೋಣಿಯ ಬಗೆಗೆ, ಕಾಣದ ಕತ್ತಲೆಯಲ್ಲಿ</br>
ಹೆಚ್ಚು ಎಚ್ಚರ ವಹಿಸಬೇಕು.</br>
{{gap}}ಈಗ ಸಂವೇದನೆ ವೈಯಕ್ತಿಕವಲ್ಲ, ಸಾಮುದಾಯಿಕ, ಎಲ್ಲರ ಯೋಚನೆ</br>
ವಿಚಾರಗಳೂ ಆತಂಕ ಕಾತರಗಳೂ ಒಂದೇ. ಮರುಹುಟ್ಟು ಪಡೆಯಲಿರುವ</br>
ಮೆನೆಪೇಟಾ ಅಣ್ಣನೊಡನೆ ಸುರಕ್ಷಿತವಾಗಿ, ಬೇಗನೆ, ತಾವು ಊರು ಸೇರ</br>
ಬೇಕು. ಅಲ್ಲಿ....ಅಲ್ಲಿ....</br>
{{gap}}ಬಟಾ ಅಂದ :</br>
{{gap}}“ ಮಹಾ ಅರ್ಚಕರ ತಂಡ__ದಂಡು ಈಗ ಲಿಷ್ಟ್ ತಲುಪಿರಬಹುದು.”</br>
{{gap}}"ಹ್ಜ."</br>
{{gap}}“ ನಮ್ಮನ್ನು ಅವರು ಹಿಂದಿಕ್ಕೋದು ಸಾಧ್ಯವಿಲ್ಲ. ಆದರೂ ಹಿಂದು</br>
ಗಡೆಗೂ ನಾವು ನೋಡ್ತಿರ್ಬೇಕು, ಸರದಿಯಲ್ಲಿ ಕಾವಲು ಕೂತ್ಕೊಬೇಕು.”</br>
{{gap}}“ ಹೌದು, ಬಟಾ ಅಣ್ಣ. ನಾನು ನಿನ್ನೆ ರಾತ್ರಿ ನಿದ್ದೆ ಮಾಡಿದೆ.</br>
ಇವತ್ತು ನಿಮ್ಮ ಸರದಿ. ನಾನು ಎಚ್ಚರವಿರ್ತೇನೆ. ಹುಟ್ಟು ಹಾಕುವವರನ್ನೂ</br><noinclude></noinclude>
84d6yki9dewesna6r36pxzk6o07m5tx
ಪುಟ:Mrutyunjaya.pdf/೬೦೯
104
22098
320729
65058
2026-05-19T06:46:07Z
Shreelatha.Halemane
7642
/* Validated */
320729
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೬೦೦|right=}}
ನನ್ನನ್ನೂ ಬಿಟ್ಟು ಉಳಿದವರೆಲ್ಲ ನಿದ್ದೆ ಮಾಡಿ....”
{{gap}}ಅಯ್ಯ, ದೋಣಿಕಾರ ನಾನು.”
{{gap}}“ ಅಲ್ಲ ಅಂದೆನೆ? ನಾನು ಕೇವಲ ಕಾವಲುಗಾರ, ನೀರಾನೆ ಪ್ರಾಂತದ ದೋಣಿ ಬರ್ತದೇನೋ ಅಂತ ಮೆಂಫಿಸಿನಲ್ಲಿ ರಾತ್ರೆ ಕಾದಿದ್ದೆ. ಹೌದಾ ?”
{{gap}}" ಸೋತೆ ಮೆನ್ನಯ್ಯ. ನೀವಂದಂತೆಯೇ ಆಗಲಿ. ಈ ರಾತ್ರೆಯ ಮಟ್ಟಿಗೆ ಒಪ್ದೆ. ನಾಳೆಯಿಂದ ಕತ್ತಲಲ್ಲಿ ಕಾಯೋದು-ಹುಟ್ಟು ಹಾಕೋದು ನನ್ನ ಕೆಲಸ."
{{gap}}ತಂಗಾಳಿಗೆ ಇತರರ ಎವೆಗಳು ಮುಚ್ಚಿಕೊಳ್ಳುತ್ತಿದ್ದಂತೆ, ಮೆನ್ನ ಆಕಾಶ ವನ್ನು ದಿಟ್ಟಿಸಿ ನಕ್ಷತ್ರಗಳನ್ನು ಗುರುತಿಸತೊಡಗಿದ. ನಕ್ಷತ್ರಗಳ ಬಗೆಗೆ ತನಗೆ ಗೊತ್ತಿರುವುದು ಬಹಳ ಸ್ವಲ್ಪ ಎನಿಸಿತು. ಅವುಗಳ ಎಣಿಕೆ ಆರಂಭಿಸಿದ ಅದೂ ಬೇಸರವಾಗಿ, ಹಿಂದಿನಿಂದಲೋ ಮುಂದಿನಿಂದಲೋ ದೋಣಿಗಳ ಸದ್ದಿಗೆ ಕಿವಿ ಗೊಟ್ಟ. ಮೆನೆಪ್ಟಾನ ಲೇಪಿತ ಶವ ನಕ್ಷತ್ರಗಳ ಬೆಳಕಿನಲ್ಲಿ ಬೆಳ್ಳಗೆ ಶುಭ್ರ ವಾಗಿ ಕಂಡಿತು. ನೀಲನದಿಯ ತಟದಲ್ಲಿ ನಾಯಕನನ್ನು ತಾನು ಮೊದಲ ಬಾರಿ ಕಂಡುದನ್ನು ನೆನೆದ. ಆ ರಾತ್ರೆ ಹಾಡುತ್ತ ಕುಳಿತಿದ್ದೆ. 'ಇಂದು ಯಾರೊಡನೆ ನಾ ಮಾತಾಡಲೀ...” ಮೆನೆಪ್ಟಾನನ್ನು ಕಂಡ ಮೇಲೆ, 'ಆ ಹಾಡು ಇನ್ನು ಬೇಡ' ಎನಿಸಿತು. ಮೆನೆಪ್ಟಾ ಹೋದ ಮೇಲೂ ಅದನ್ನು ಮತ್ತೆ ಹಾಡಬೇಕು ಎಂದು ತೋರುತ್ತಿಲ್ಲ, ರಾಜಧಾನಿಯಲ್ಲೇ ಉಳಿದಿದ್ದರೆ ಹಾಡುತ್ತಿದ್ದೆನೇನೋ, ಅಥವಾ ನೀಲನದಿಯ ಗರ್ಭಕ್ಕೆಇಳಿಯುತ್ತಿದ್ದೆನೇನೋ.... ಇನ್ನು....'ಯಾರೊಡನೆ ನಾ ಮಾತಾಡಲೀ...” ಎಂದು ಚಿಂತಿಸಬೇಕಾದುದಿಲ್ಲ. ಇವರೊಡನೆ ನಾನು ಮಾತನಾಡಬಹುದು. ನಾಯಕನ ಪ್ರಾಂತದ ಎಲ್ಲ ಜನರೊಡನೆ. ಅವರು ನನ್ನ, ಹೊಸ ನಾಡಿನ ಹೊಸ ಬೀಡಿನ ಬಂಧುಗಳು....
{{gap}}ರಾಮೆರಿಪ್ಟಾ ಸದ್ದಿಲ್ಲದೆ ಎದ್ದು, ಉದ್ದಕ್ಕೂ ನಡೆದು, ದೋಣಿಯ ತುದಿಯನ್ನು ಆಗಲೇ ತಲಪಿದ್ದ. ('ಎಳೆಯನಿಗೆ ನಿದ್ದೆ ಬರುತ್ತಿಲ್ಲ.') ಅಲ್ಲಿ ದೋಣಿಯ ಅಂಚಿಗೆ ಆತು ಅದೆಷ್ಟು ಹೊತ್ತು ನಿಂತನೊ..?
{{gap}}ಇದ್ದಕ್ಕಿದ್ದಂತೆ, ತುದಿಭಾಗದಿಂದ ಬಿಕ್ಕಿಬಿಕ್ಕಿ ಗಟ್ಟಿಯಾಗಿ ಆಳುವ ಸದ್ದು ಕೇಳಿಸಿತು ; ಆಳು ಬೇಗನೆ ನಿಲ್ಲುವ ಸೂಚನೆ ಕಾಣಿಸಲಿಲ್ಲ. ಆವರೆಗೂ ಅದುಮಿ ಹಿಡಿದಿದ್ದ ಎಳೆಯನ ದುಃಖ ಭೋರ್ಗರೆಯುವ ರೋದನವಾಯಿತು.<noinclude></noinclude>
37wk3wsb7r5m2ujqoltylgixwuwm61t
ಪುಟ:Mrutyunjaya.pdf/೬೨೭
104
22116
320724
65689
2026-05-19T06:24:40Z
Shreelatha.Halemane
7642
/* Validated */
320724
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೬೧೪|right=}}
{{gap}}ಅವರು ಅಳುತ್ತಳುತ್ತ ಉಚ್ಚರಿಸಿದರು.
{{gap}}"ಓ ಒಸೈರಿಸ್.... ಓ ಒಸೈರಿಸ್....."
"ಓ ಮೆನೆಪ್ ಟಾ.... ಓ ಮೆನೆಪ್ ಟಾ...."
"ಓ ಮೆನೆಪ್ ಟಾ.... ಓ ಮೆನೆಪ್ ಟಾ...."
{{gap}}ರಾಮೆರಿಪ್ ಟಾ ಹಿಂಗೈಯಿಂದ ಕಣ್ಣುಗಳನ್ನೊರೆಸಿಕೊಂಡ. ತುಂಬಿದ್ದ ಕಂಬನಿಯನ್ನು ತಲೆಯಲುಗಿಸಿ ಬಟಾ ಝಾಡಿಸಿದ.
{{gap}}ಮರದ ಕೆಳಗೆ ಮಲಗಿದ್ದ ಕಟ್ಟೆ ಕಾವಲಿನ ಹುಡುಗನಿಗೆ ಎಚ್ಚರವಾಯಿತು.
{{gap}}ಗಡಬಡಿಸಿ ಎದ್ದು ಅವನು ಓಡಿ ಬಂದ. ಅವನಿಗೆ ಅರ್ಥವಾದುದೊಂದೇ:
“ನಮ್ಮವರು ಬಂದಿದ್ದಾರೆ. ಬಂದ ದೋಣಿಗಾಗಿ ಲಿಪಿಹಾಳೆಯಲ್ಲಿ ಒಂದು ಗೆರೆ ಹಾಕಬೇಕು.'
{{gap}}ಆತನ ಮುಖ ಕಾಣುತ್ತಲೇ ಬಟಾನೆಂದ:
{{gap}}"ಓಡಪ್ಪ, ಓಡು. ದಳಪತಿಯವರನ್ನು ಕರಕೊಂಡ್ಬಾ.”
{{gap}}ಇವರೆಲ್ಲ ಅಳುತ್ತಿದ್ದಾರೆ; ಅಯ್ಯೋ ಏನಾಗಿದೆಯೋ ? ಹುಡುಗನಿಗೆ ಗಾಬರಿ. ಅವನು ತಕ್ಷಣವೆ ಹೊರಟ. ನಾಲ್ಕು ಹೆಜ್ಜೆಗಳನ್ನು ಬಿರಬಿರನೆ ಇಟ್ಟು ಬಳಿಕ ಓಡಿದ.
{{gap}}ವಾಸ್ತವವಾಗಿ ಖ್ನೆಮ್ ಹೊಟೆಪ್ ಹಿಂದಿನ ಎರಡು ಮೂರು ರಾತ್ರೆಗಳಂತೆ ಆ ರಾತ್ರೆಯೂ ನಡುವಿರುಳಿನವರೆಗೆ ಕಟ್ಟೆಯಲ್ಲೇ ಇದ್ದ. ಯಾವನಾದರೂ ದೋಣಿಕಾರ ಮೆಂಫಿಸಿನಿಂದ ಏನಾದರೂ ಸುದ್ದಿ ತಂದಾನು ಎಂಬ ಬಯಕೆ. ಪಹರೆಯವರು ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೇ ದಂಡೆಯವರೆಗೆ ಬಂದು ಮರಳಿದರು.
{{gap}}ಮೆನ್ನ ಹುಡುಗನತ್ತ ನೋಡಿ. "ನಾವಿನ್ನು ಇಳೀಬೇಕು ರಾಮೆರಿ,” ఎంದ. ಬಟಾನ ಕಡೆ ತಿರುಗಿ, "ದಳಪತಿಯವರು ಬರೋದರೊಳಗಾಗಿ ನಾಯಕರನ್ನು ಎತ್ತಿ ಕಟ್ಟೆಯ ಮೇಲಿಡೋಣ",ಎಂದು ನುಡಿದ. ಔಟ,ಬೆಕ್ ರನು "ಬನ್ನಿ" ಎಂದು ಕರೆದ:
{{gap}}ಬಟಾನ ಬಟ್ಟೆಯನ್ನು ಕಟ್ಟೆಯ ಮೇಲೆ ನೀರಾನೆಯ ಶಿಲಾಮೂರ್ತಿಯನ್ನು ಹೊತ್ತ ಪೀಠದ ಬುಡದಲ್ಲಿ ಹಾಸಿ, ಅದರ ಮೇಲೆ ಮೆನೆಪ್ ಟಾನ ಶವವನ್ನು ಇರಿಸಿದರು.
{{gap}}ಹರಿಯುತ್ತಿದ್ದ ಬೆಳಕಿನೆದುರು ಕ್ಷೀಣವಾಗುತ್ತಿದ್ದ ನಕ್ಷತ್ರಗಳನ್ನು<noinclude></noinclude>
iut6ymilcj0bbk9s2d3bzhoulq0vtre
ಪುಟ:Mrutyunjaya.pdf/೬೨೮
104
22117
320725
65719
2026-05-19T06:30:35Z
Shreelatha.Halemane
7642
/* Validated */
320725
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=}}
ನೋಡುತ್ತ ಅಂಗಾತ ಮಲಗಿದ ನಾಯಕ. ಲೇಪನದ ಪ್ರಭೆ ಅಳಲಿನ ಕೊಡಗಳನ್ನು ಕುಕ್ಕಿತು. ಮತ್ತೆ ರೋದನ ಆಕಾಶ ಮುಟ್ಟಿತು. ಅದರ ಅಲೆ ದುರ್ಬಲವಾದೊಡನೆ, ಬಟಾ ನಾಮೋಚ್ಚಾರ ಆರಂಭಿಸಿ ಮಾರ್ದನಿ ಪಡೆದ.
{{gap}}ಖೈಮ್ ಹೊಟೆಪ್ ಓಡುತ್ತ ಬಂದ. ಅವನ ಹಿಂದೆ ಊರಿನ ಹಿರಿಯರು; ಅವರ ಹಿಂದೆ ನೂರಾರು ಜನ; ಅವರ ಹಿಂದೆ ಬೇರೆ ನೂರಾರು ಜನ; ಅವರ ಹಿಂದೆಯೂ ನೂರಾರು ಜನ. ಹೀಗೆಯೇ. ಅಲೆಯ ಬೆನ್ನಲ್ಲಿ ಅಲೆ. ದೋಣಿಕಟ್ಟಿಯಿಂದ ಹೊರಟ ಶೋಕಧ್ವನಿ ನೀರಾನೆ ಪ್ರಾಂತದ ಮುಖ್ಯಪಟ್ಟಣದ ಸಹಸ್ರಾರು ಮನೆಗಳ ಕದಗಳನ್ನು ತಟ್ಟಿತ್ತು, ಕಿವಿಗಳನ್ನು ಮುಟ್ಟಿತ್ತು.
{{gap}}ತನ್ನನ್ನು ದಳಪತಿಯಾಗಿ ಮಾಡಿದ್ದ ನಾಯಕನ ಲೇಪಿತ ಶವದೆದುರು ನಿಂತು, “ಹೋ!” ಎಂದು ಎರಡೂ ತೋಳುಗಳನ್ನು ಮುಂದಕ್ಕೆ ಚಾಚುತ್ತ, ಕರ್ಣಭೇದಕವಾಗಿ ಖ್ನೆಮ್ ಆರ್ತನಾದ ಮಾಡಿದ. ಕುಸಿಕುಳಿತು, ಶವದ ಎದುರು ಮೇಲೆ ಕೈಗಳನ್ನು ಚಾಚಿ, ತಲೆಯನ್ನಿರಿಸಿದ, "ಓ--ಓ--ಓ" ಎಂದು ರೋದನ ಮುಂದುವರಿಸಿದ.
{{gap}}ರಾಮೆರಿಪ್ ಟಾಗೆ ತಾಯಿಯದೇ ಯೋಚನೆ. “ಅಮ್ಮನ ಹತ್ತಿರ ಇರು.” ಎಂದಿದ್ದ ತಂದೆ __ ಅವನು ನಾಯಕನಾದ ಆ ದಿನ . ಅಮ್ಮನ ಜತೆಯಲ್ಲೇ ಇದ್ದವನು ತಂದೆಯನ್ನು ಕರೆತರಲೆಂದು ಮೆಂಘಸಿಗೆ ಹೋದ - ರಾಜರಾಣಿಯರ ಆವಾಸಸ್ಥಾನಕ್ಕೆ-ಪಾಪನಗರಿಗೆ. ಮರಳಿ ಬಂದುದಾಯಿತು. ಇಲ್ಲಿ ಎಲ್ಲರೂ ಇದ್ದಾರೆ. ತಂದೆಯ ಹತ್ತಿರ ಎಲ್ಲರು ಇದ್ದಾರೆ. ಅಲ್ಲಿ ತಾಯಿ ಒಬ್ಬಳೇ. ಇಲ್ಲಿಗೆ ಬರುವುದು ಅವಳಿಗೆ ಕಷ್ಟವಾಗಬಹುದು. ತಾನು ಹೋಗಬೇಕು. ಅವಳ ಬಳಿ ಇರಬೇಕು.
{{gap}}ಹುಡುಗ ಹೆಜ್ಜೆ ಮುಂದಿಟ್ಟುದನ್ನು ಅಹೋರಾ ಕಂಡಳು. ಮಗುವನ್ನೆತ್ತಿ ಕೊಂಡು ಅವನ ಹಿಂದೆ ತಾನೂ ನಡೆದಳು. ಮೈಮರೆತಿದ್ದ ಆ ಸ್ಥಿತಿಯಲ್ಲೂ ಗುಂಪು, ಇಬ್ಭಾಗವಾಗಿ ರಾಮೆರಿಪ್ ಟಾನಿಗೂ ಅವನನ್ನು ಹಿಂಬಾಲಿಸಿ ಹೊರಟವಳಿಗೂ ದಾರಿ ಮಾಡಿಕೊಟ್ಟಿತು.
{{gap}}(ಸ್ನೋಪ್ರು ಆಗಲೇ ನೆಜಮುಟಳಿಗೆ ಹೇಳಿದ್ದ ;
{{gap}}" ಕೆಟ್ಟದ್ದೇನೋ ಸಂಭವಿಸಿದ ಹಾಗಿದೆ. ದೋಣಿಕಟ್ಟಿಗೆ ಹೋಗಿ ಬರ್ತೆನೆ. ನೀನು ನೆಘಸ್ ಳನ್ನು ನೋಡ್ಕೊ.”<noinclude></noinclude>
moipvxi08n40vh7d49ah5b8owyvl9j6
ಪುಟ:Mrutyunjaya.pdf/೬೩೩
104
22122
320731
217354
2026-05-19T06:55:15Z
Shreelatha.Halemane
7642
/* Validated */
320731
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=}}
{{gap}}ಮೆನ್ನ : “ಒಂದು ಹಲಗೆ ತರಿಸಿಕೊಂಡು ಹೋಗೋದು</br>
ಸುಲಭವಾಗ್ತದೆ.</br>
{{gap}} ಸೆಬೆಖು : (ಜನರೆಡೆಗೆ ನೋಡಿ) “ಸೆತ' ನಾ ಓ. ಅಲ್ಲಿದ್ದಾನೆ, ಶವ</br>
ಪೆಟ್ಟಿಗೆಯೂ ಬೇಕು ಅಲ್ಲವಾ ?”</br>
{{gap}}ಮೆನ್ನ : “ಹಲಗೆ ತಕ್ಷಣದ ಉಪಯೋಗಕ್ಕೆ, ಮುಚ್ಚಳ ಇಲ್ಲದ ಶವ</br>
ಪೆಟ್ಟಿಗೆ ಗೋರಿಗೆ ಹೋಗುವಾಗ, ಗೋರಿಗೆ ಇಳಿಸಿದ ಮೇಲೆ ಮುಚ್ಚಳದ</br>
ಹಲಗೆ.”</br>
{{gap}} ಸೆಬೆಕ್ಕು : “ ದೋಣಿಕಟ್ಟೆಯ ಬದಿಗೊಡೆಯ ನಿರ್ಮಾಣಕ್ಕೇಂತ</br>
ಹಪು ಕಡಿಸಿರೋ ಎಂಟುನೂರು ಕಲ್ಲುಗಳಿವೆ."</br>
ಹೆಮ್ ಟ : “ಗೋರಿ ಕಟ್ಟೋದಕ್ಕೆ ಉಪಯೋಗಿಸೋಣ. ಆದರೆ</br>
ಕಲ್ಲುಗಳನ್ನು ಮಂದಿರದಾಚೆಗೆ ಗೋರಿ ಪ್ರದೇಶಕ್ಕೆ ಸಾಗಿಸೋದು ತಡ</br>
ವಾಗ್ತದೆ.”</br>
ಸೈಫು : “ವಸತಿ ಪ್ರದೇಶದ ಹತ್ತಿರದಲ್ಲೇ ಗುಂಡಿ ತೋಡಿ ಗೋರಿ</br>
ಕಟ್ಬೇಕು. ಮೇಲ್ಗಡೆಯ ನಿರ್ಮಾಣ ಆ ಮೇಲೆ ಮಾಡಿದರಾಯ್ತು.”</br>
{{gap}} ಬಟಾ ಸನ್ನೆ ಮಾಡಿದನೆಂದು ಸೆತ್ನಾ ಮತ್ತು ಇಪ್ಪುವರ್ ಪ್ರಮುಖರು</br>
ನಿಂತಿದ್ದಲ್ಲಿಗೆ ಬಂದರು. ವಿಷಯ ತಿಳಿದು ಸತ್ನಾ ಮನೆಯತ್ತ ಓಡಿದ.</br>
{{gap}}ಸೊಪ್ಪು ಮೆನ್ನನೊಡನೆ ಅಂದ :</br>
{{gap}}"ಅಯ್ಯ. ನಮ್ಮ ಬುಡಕಟ್ಟಿನಲ್ಲಿ ಇಂಥ ಗೋರಿ ಇದು ಮೊದಲ್ನೋದು.</br>
ಸಾಮಾನುಗಳು ಏನೇನು ಬೇಕೋ ಹೇಳಿ, ರಾಜಗೃಹದ ಲೆಕ್ಕಿಗ ಇಪ್ಪುನರ್</br>
ಒದಗಿಸ್ತಾರೆ.”</br>
{{gap}}ಕಿರಿಯ ವಯಸ್ಸಿನ ಮೆನ್ನನನ್ನು ಇಪ್ಪುವರ್ ಭಕ್ತಿಯಿಂದ ನೋಡಿದ.</br>
{{gap}}ಅವನತ್ತ ತಿರುಗಿ ಮೆನ್ನನೆಂದ :</br>
{{gap}}“ಗೋರಿ ವಾಸಕ್ಕೆ ಬುತ್ತಿ. ಹೂ ಹಣ್ಣು ಗಳು. ಮೃತನ ಪುಟ್ಟ</br>
ಪ್ರತಿರೂಪಕಾ--ವ.೦ದ ಮಾಡಿದು , ಆಟದ ಸಾಮಗ್ರಿ.. ಬೇಟೆಯ</br>
ಸಾಮಗ್ರಿ, ಪಾದರಕ್ಷೆ, ನಡುವಸ್ತ್ರ, ಪುಕ್ಕಗಳ ಚಾಮರ, ಗೋರಿ ಪ್ರವೇಶಕ್ಕೆ</br>
ಮುನ್ನ ಬಾಯಿ ತೆರೆಯೋದಕ್ಕೆ ಚೂಪು ಕಲ್ಲು.”</br>
{{gap}}ಸ್ನೊಫ್ರು ನಡುವೆ ನುಡಿದ :</br><noinclude></noinclude>
dskv63a8pn3bhuxm8eqlm3608ppnp2o
ಪುಟ:Mrutyunjaya.pdf/೬೩೪
104
22123
320732
64626
2026-05-19T06:59:50Z
Shreelatha.Halemane
7642
/* Validated */
320732
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೬೨೧}}
{{gap}}“ಅನ್ಪುವನ್ನು ಮಣ್ಣು ಮಾಡಿದಾಗ ಮೆನೆಪ್ಟಾ ಅರ್ಚಕರ ಕೈಲಿ 'ಬೆಳಕಿಗೆ ಆಗಮನ' ಪುಸ್ತಕ ಓದಿಸಿದ್ದ.”
{{gap}}“ಒಂದು ಪ್ರತಿ ಇದೆಯಾ ?” -
{{gap}}ಇಪ್ಯುವರ್ ಹೇಳಿದ:
{{gap}}“ಅರ್ಚಕರು ಮಾಡಿಸಿಟ್ಟಿದ್ದಾರೆ.”
{{gap}}“ಒಳ್ಳೇದು. ಅದನ್ನು ತನ್ನಿ. ಓದಬೇಕಾದ್ದಿಲ್ಲ, ಗೋರಿಯಲ್ಲಿ ಇಟ್ಟರಾಯ್ತು. ಸರ-ಉಂಗುರ. ಹಣತೆ-ಎಣ್ಣೆ... ಇಕ್ಕುಳ ತುದಿಯ ಕೋಲು. ಬೆಂಕಿ ಪಾತ್ರೆ...."
{{gap}}“ಗೊತ್ತಾಯ್ತು.. ಗೊತ್ತಾಯ್ತು.”
{{gap}}ಬಟಾನ ದೃಷ್ಟಿ ಹಪುವನ್ನು ಅರಸಿತು. ನೆಖೆನ್ನ ಹಿಂಬದಿಯಲ್ಲಿ ಆತ ನಿಂತಿದ್ದ. ಬಟಾ ತನ್ನೆಡೆಗೆ ನೋಡುತ್ತಿದ್ದಾನೆ ಎಂದು ಅವನಿಗೆ ಅನ್ನಿಸಿತು. ಬೆರಳ ಸನ್ನೆ ಕಂಡೊಡನೆ ಹಪು ಬಟಾನತ್ತ ಧಾವಿಸಿದ.
{{gap}}ಗೋರಿಯ ವಿಷಯ ಬಟಾ ತಿಳಿಸುತ್ತಿದ್ದಂತೆ ಸ್ನೋಫ್ರು ಅವರ ಬಳಿಗೆ ಬಂದು, "ನೆಲಮಾಳಿಗೆ ಗೋರಿ. ಹತ್ತು ಮೊಳ, ಆರು ಮೊಳ, ಆರು ಮೊಳ. ಮೇಲ್ಕಟ್ಟಡ ನಿಧಾನವಾಗಿ ಮಾಡೋಣ. ಇನ್ನು ಸ್ವಲ್ಪ ಹೊತ್ತಿನಲ್ಲೇ ಸಿದ್ಧವಾಗ್ಬೇಕು," ಎಂದ
{{gap}}ಮನಸ್ಸಿನಲ್ಲೆ ಲೆಕ್ಕ ಹಾಕುತ್ತ ಹಪು ಹೇಳಿದ:
{{gap}}- “ನಮ್ಮಲ್ಲಿರೋದು ಎರಡು ಗೇಣು ಘನ ಅಳತೆಯ ಕಲ್ಲುಗಳು. ಆರು
ನೂರು ಮತ್ತು ಇಪ್ಪತ್ತನಾಲ್ಕು ಬೇಕು. ಮೇಲೆ ಆಧಾರಕ್ಕೆ ತೊಲೆಗಳು ಹಲಗೆಗಳು ಬೇಕು."
{{gap}}ಆ ಮಾತು ಕೇಳಿಸಿದ ಇಪ್ಯುವರ್ ಅಂದ :
{{gap}}“ಹಲಗೆಗಳು ರಾಜಗೃಹದಲ್ಲಿವೆ. ಈ ಸಲ ಕೆಫ್ಟುನಿಂದ ಕೊಂಡದ್ದು."
ತೊಲೆಗಳೂ ಇವೆ."
{{gap}}"ಒಬ್ಟೊಬ್ಬ್ರು ಒಂದೊಂದು ಕಲ್ಲು ಎತ್ತಿಕೊಂಡರಾಯ್ತು."
{{gap}}ಮಾತುಕತೆ ದೀರ್ಘವಾಗುತ್ತಿದೆ ಎಂಬ ಚಿಂತೆ ಕಾಡತೊಡಗಿತ್ತು ಖೈಮ್ ಹೊಟೆಪ್ ನನ್ನು.<noinclude></noinclude>
jzhv9m6zuyo7ufjowde50m1012wb93w
ಪುಟ:Mrutyunjaya.pdf/೬೩೫
104
22124
320733
64646
2026-05-19T07:04:32Z
Shreelatha.Halemane
7642
/* Validated */
320733
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೬೨೨|right=}}
{{gap}}ಅದುರುವ ಗಂಟಲಲ್ಲಿ ಆತನೆಂದ:
{{gap}}“ಅದೆಷ್ಟರ ಕೆಲಸ? ಎಲ್ಲ ವ್ಯವಸ್ಥೆ ಮಾಡುತ್ತೇನೆ. ಮೊದಲು ನಾಯಕರ ಮನೆಗೆ ಹೋಗೊಣ."
{{gap}}ಸೆಮ ಹೇಳಿದ :
{{gap}}“ಹೂಂ. ಹೂಂ.”
{{gap}}ಪುನಃ ಕಾಡಿದ ಕಂಬನಿಯನ್ನು ಅದರ ಪಾಡಿಗೆ ಹರಿಯಲು ಬಿಟ್ಟು ಖ್ನೆಮ್ ಜನಜಂಗುಳಿಗೆ ಮುಖ ಮಾಡಿ ನಿಂತ. ತಲೆಯನ್ನು ತುಸು ತಗ್ಗಿಸಿ, ಒಡೆದ ಧ್ವನಿಯಲ್ಲಿ ಅವನೆಂದ :
{{gap}}“ನಾಯಕರನ್ನು ಅವರ ಮನೆಗೆ ಕರಕೊಂಡು ಹೋಗಿ, ನೆಫಿಸ್ ಅಕ್ಕನಿಗೆ ತೋರಿಸಿ, ಅಲ್ಲಿಂದ ರಾಜಗೃಹಕ್ಕೆ ಒಯ್ಯಬೇಕು.”
{{gap}}ಮುಂದುಗಡೆ ಇದ್ದವರಿಗೆ ಕೇಳಿಸಿತು. ಅದನ್ನು ಅವರು ತಮ್ಮ ಹಿಂದೆ ಇದ್ದವರಿಗೆ ತಿಳಿಸಿದರು. ಜನ ಸಾಲುಗಟ್ಟುತ್ತಿದ್ದಂತೆ ಜೋಡಿಸಿ ಮಾಡಿದ್ದ ಎರಡು ಮೊಳ ಅಗಲದ ಆಳುದ್ದದ ಹಲಗೆಯನ್ನು ಹೊತ್ತುಕೊಂಡು ಸೆತ್ನಾ ಒಡಿ ಬಂದ. ಲೇಪಿತ ಶವದ ಬಳಿ ಇರಿಸಿ ಅಳತೊಡಗಿದ.
{{gap}}ಮೆನ್ನನ ಸೂಚನೆಯಂತೆ ಬಟಾ ನಾಮೋಚ್ಚಾರ ಆರಂಭಿಸಿದ.
{{gap}}ಎಲ್ಲ ಕಂಠಗಳೂ ಹೇಳಿದುವು :
{{gap}}“ಓ ಒಸೈರಿಸ್ ಓ ಒಸೈರಿಸ್ : ಓ ಮೆನೆಪ್ಟಾ ಓ ಮೆನೆಪ್ ಟಾ........ ''
{{gap}}ದಳಪತಿಯ ದೃಷ್ಟಿಯನ್ನು ಇದಿರಿಸಲು ಅಳುಕಿ ದೂರ ನಿಂತಿದ್ದ ಬೆಕ್ಔಟರ ಬಳಿಗೆ ಖೈಮ್ ನಡೆದು, “ಬನ್ನಿ , ಎತ್ಕೊಳ್ಳಿ" ಎಂದ. ಧ್ವನಿಯ ಮೃದುತನ ಕೇಳಿ ಬೆಕ್ ಔಟರ ದೇಹಗಳಲ್ಲಿ ಜೀವಸಂಚಾರವಾದಂತಾಯಿತು. ಹಿರಿಯರು ಮೆನೆಪ್ಟಾನ ಕಳೇಬರವನ್ನೆತ್ತಿ ಹಲಗೆಯ ವೇಲೆ ಮಲಗಿಸಿದರು. ಹಲಗೆಯನ್ನೆತ್ತಿ 'ಐವತ್ತರ ಶ್ರೇಷ್ಟರ ತಲೆಯ ಮೇಲಿರಿಸಿದರು. (ಎದುರು ಔಟ, ಹಿಂಬದಿಯಲ್ಲಿ ಬೆಕ್.)
{{gap}}ಅಶ್ರುಧಾರೆಗಳನ್ನು ತಡೆಯುವ ಗೊಡವೆಗೆ ಹೋಗದೆ ಖೈಮ್ ಹೊಟೆಪ್ ಮುಂದೆ ಸಾಗಿದ (ಕಟಿಯಲ್ಲಿ ಕಠಾರಿಯಿಲ್ಲ ಅಧಿಕಾರದ ಕೋಲಿಲ್ಲ, ಕೈಯಲ್ಲಿ.) ಅವನ ಹಿಂದೆ ಮೆನ್ನ. ಅವರ ಹಿಂದೆ ಶವ. ಅದನ್ನು ಹಿಂಬಾಲಿಸಿ<noinclude></noinclude>
2nnxwuu8znvmh99jkrmm45wtdjtbl40
ಪುಟ:Mrutyunjaya.pdf/೬೩೬
104
22125
320734
64667
2026-05-19T07:06:43Z
Shreelatha.Halemane
7642
/* Validated */
320734
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ |left=|right=೬೨೩}}
ಹಿರಿಯರು. ಅಳುತ್ತಿದ್ದ ಸ್ತ್ರೀಯರು ಹಿಂದಿನಿಂದ. ಬಳಿಕ ಸಾಲಾಗಿ ಬರುತ್ತಿದ್ದ ಪುರುಷ ಸಮುದಾಯ.. (ಊರಿನ ಅರ್ಧಕ್ಕೂ ಹೆಚ್ಚು ಜನ ಅಲ್ಲಿದ್ದರು.) ಅವರೆಲ್ಲರ ಹಿಂದೆ, ತಲೆ ಬಗ್ಗಿಸಿಕೊಂಡು ನಿಧಾನವಾಗಿ ನಡೆದು ಬರುತ್ತಲಿದ್ದ, ನೆಖೆನ್
{{gap}}ತಡೆತಡೆದು ಬಟಾ ಯೋಚಿಸಿದ :
{{gap}}'ಅಬ್ಬು ಯಾತ್ರೆಯಿಂದ ವಾಪಸಾದಾಗ ನಾಲ್ವತ್ತು ಜನ ಇದ್ದೆವು. ಈ ದಾರಿಯಲ್ಲೇ ನಡೆದು ಮನೆ ಸೇರಿದೆವು....... ಆ ಜನ ಇವತ್ತೂ ಇದ್ದರೆ.ಸಮುದಾಯದ ನಡುವೆ ಚೆದರಿ ಹೋಗಿದ್ದಾರೆ..... ಮೆನೆಪ್ಟಾ ನಾಯಕನಾದ ದಿವಸ---- ರಾತ್ರೆ--- ಬಂಧನದಿಂದ ಅವನನ್ನು ಬಿಡಿಸಿಕೊಂಡು, ಪೀಠಪಲ್ಲಕಿಯಲ್ಲಿ ಕುಳ್ಳಿರಿಸಿ, ಅವನ ಮನೆಗೆ ಮೆರವಣಿಗೆಯಲ್ಲಿ ಕರೆದೊಯ್ದೆವಲ್ಲ.......ಆಗ ಪಲ್ಲಕಿಯ ಮುಂದೆ ನಾನು ಕುಣಿಯುತ್ತ ಹೋದೆ..ಈಗ ಅಣ್ಣ ಅಂಗಾತ ಮಲಗಿದಾನೆ; ನಾನೋ-ಸತ್ತಿದ್ದೇನೆ, ಕುಣಿಯಲಾರೆ.'
* * * *
{{gap}}[ರಾಮೇರಿಯ ಓರಗೆಯವರು ಮುಂದಾಗಿ ಓಡಿ ಬಂದು ತಿಳಿಸಿದರು :
“ಮೆರವಣಿಗೆ ಹೊರಟಿದೆ. ನಿಮ್ಮ ತಂದೇನ ಇಲ್ಲಿಗೆ ಕರಕೊಂಡು ಬರ್ತಿದ್ದಾರೆ.")
* * * *
{{gap}}...... ತುಂಬಿದ ಬಸುರಿ ನೆಫಿಸ್ ಜತೆ ಆ ನಮನೆಯಲ್ಲಿ ಮಲಗುತ್ತಿದ್ದವಳು ಅದೇ ಕೇರಿಯ ಒಬ್ಬಳು ವಯೋವೃದ್ಧೆ, ರಾತ್ರೆ ಅವಳಿಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಆ ಬೆಳಗಿನ ಜಾವ ಬೀದಿಯಲ್ಲಿ ಜನ ಓಡಾಡಿದ ಸದ್ದು ಅವಳಿಗೆ ಕೇಳಿಸಿತು, ಬಳಿಕ ಬಾಗಿಲು ತಟ್ಟಿದ ಸಪ್ಪಳ, “ಸ್ನೋಫು ಮಾವ, ಸ್ನೋಫ್ರು ಮಾವ" ಎಂಬ ಕರೆ. ಎಚ್ಚರಗೊಂಡ ಸ್ನೋಪ್ಪುವಿನ “ಯಾರು ಅದು ?” ಎಂಬ ಪ್ರಶ್ನೆ, “ಯಾಕೆ ಇದೆಲ್ಲ ? ಬಟಾನ ದೋಣಿ ಬಂತೆ? ನಾಯಕರು ಬಂದರೆ?' ಎಂದು ಮುದುಕಿ ಮನಸ್ಸಿನಲ್ಲೆ ಗೊಣಗಿದಳು. ತಾನೂ ಎದ್ದಳು.<noinclude></noinclude>
mlyi4l0xh4r54u4vwid00oorr333ery
ಪುಟ:Mrutyunjaya.pdf/೬೩೭
104
22126
320735
64731
2026-05-19T07:16:26Z
Shreelatha.Halemane
7642
/* Validated */
320735
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=|right=}}ಮೃತುಂಜಯ
{{gap}}ಅಷ್ಟರಲ್ಲಿ "ನೆಫಿಸ್ , ಎದ್ದಿಯಾ?" ಎಂದು ನೆಜಮೂಟಳ ಪ್ರಶ್ನೆ ಕೇಳಿಸಿತು. ವೃದ್ಧೆ ಬಾಗಿಲು ತೆರೆದಳು.
{{gap}}"ಬಂದರಾ ? ಬಂದರಾ?" ಎಂದು ಕೇಳುತ್ತ ನೆಫಿಸ್ ಕಣ್ಣು ಹೊಸಕಿ ಕೊಂಡು ಎದ್ದಳು.
{{gap}}ಒಳಗೆ ಬಂದವಳು ನೆಜಮುಟ್.
{{gap}}"ದೋಣಿ ಬಂತಂತೆ ನೆಫಿಸ್. ದೇವರು ದಯಾಮಯ."
{{gap}}“ಬಂತಾ ? ಬಂತಾ ನನ್ನ ದೇವರೇ...” ಎನ್ನುತ್ತ ಪ್ರಯಾಸಪಟ್ಟು ನೆಫಿಸ್ ಎದ್ದಳು. ಮೂಲೆಯಲ್ಲಿರಿಸಿದ್ದ ಮೂರ್ತಿಗಳಲ್ಲಿಗೆ ನಡೆದಳು. ಐಸಿಸ್, ಬೆಸ್, ಥೊಎರಿಸ್. ಭಕ್ತಿಯಿಂದ ತಲೆಬಾಗಿ ನಮಿಸಿದಳು.
{{gap}}ಬೀದಿಯಲ್ಲಿ ಜನ ದೋಣಿಕಟ್ಟೆಗೆ ಓಡುತ್ತಿದ್ದ ಸಪ್ಪಳ ಕೇಳಿಸಿತು.
{{gap}}“ಎಲ್ಲರೂ ಕಟ್ಟೆಗೆ ಹೋಗ್ಲಿದ್ದಾರೆ. ಸ್ವಾಗತಕ್ಕೆ ಇರಬೇಕು, ಅಲ್ವಾ ನೆಜ್ ?"
{{gap}}“ಹೂಂ.. ಪ್ರಯಾಣ ಸುಸೂತ್ರವಾಗಿ ಆದಂತಿಲ್ಲ, ಏನೋ ಸ್ವಲ್ಪ ತೊಂದರೆ.. ಗಂಡ ಹೋಗಿದ್ದಾನೆ,” ಎಂದಳು ನೆಜಮುಟ್, ತನ್ನೊಳಗಿನ ಕಸಿವಿಸಿಯನ್ನು ಆದಷ್ಟು ಮೃದುವಾಗಿ ಹೊರಗೆಡವುತ್ತ
{{gap}}"ಏನು ಹಾದೆಂದರೆ ? ಯಾಕೆ? ಏನಾಯ್ತು?"
{{gap}}ನಾಲ್ಕೈದು ದಿನಗಳ ಹಿಂದೆ ನೆಫಿಸ್ಗೆ ಒಂದು ಕನಸು ಬಿದ್ದಿತ್ತು. ಗಂಡನ ಜತೆ ದೋಣಿವಿಹಾರ. ಮೆನೆಪ್ಟಾನೇ ಚುಕ್ಕಾಣಿ ಹಿಡಿದಿದ್ದ, ಅವರ ಪುಟ್ಟಿ ಪೆಪ್ಟೆರಸ್ ದೋಣಿ ನೀಲ ನದಿಯಲ್ಲಿ ದೊಡ್ಡ ವೃತ್ತ ರಚಿಸುತ್ತಿದ್ದಾಗೆ ಒಂದು ಮೊಸಳೆ ಬಂತು. ಮೆನೆಪ್ಟಾ "ಶ್!" ಎಂದ ಅದು ಹೊರಟೇ ಹೊಯಿತು. ಸ್ವಲ್ಪ ಹೊತ್ತಾದ ಮೇಲೆ ಅವಳಿಗೆ ನೋವು ಕಾಣಿಸಿಕೊಂಡಿತು. ಮೆನೆಪಟಾ ವೇಗವಾಗಿ ದೋಣಿಯನ್ನು ದಂಡೆಗೆ ನಡೆಸಿದ. ಅಷ್ಟರಲ್ಲಿ ಎಚ್ಚರ.....
{{gap}}ಆ ಕನಸನ್ನು ನೆಫಿಸ್ ವೃದ್ಧೆಗೆ ಹೇಳಿದ್ದಳು. ನೆಜಮುಟ್ ಗೂ ತಿಳಿಸಿ ದ್ದಳು. ಯಾವ ಮಹತ್ವವನ್ನೂ ಆ ಸ್ವಪ್ನಕ್ಕೆ ಅವರ ನೀಡಿರಲಿಲ್ಲ.
{{gap}}“ಅದಕ್ಕೇನು ? ಪುಟ್ಟದು ಬಂದ ಮೆಲೆ ಗಂಡನ ಜತೆ ಒಮ್ಮೆ ವಿಹಾರಕ್ಕೆ ಹೋದರಾಯ್ತು," ಎಂದು ಹೇಳಿ ನೆಜಮುಟ್ ನಕ್ಕಿದ್ದಳು.<noinclude></noinclude>
stbir1dv0dolqrp9qnl3ax5k6bo7xkf
ಪುಟ:Mrutyunjaya.pdf/೬೪೧
104
22130
320746
217277
2026-05-19T07:36:47Z
Shreelatha.Halemane
7642
/* Validated */
320746
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೬೨೮|right=}}
{{gap}}ಕೇಳಿಯ ಕೇಳಿಸದಂತಿದ್ದ ಧ್ವನಿಯಲ್ಲಿ ಅವಳೆಂದಳು:</br>
{{gap}}“ಏನಾಯ್ತು ? ನಾನೆಲ್ಲಿದ್ದೇನೆ ? ಬಂದರಾ ?”</br>
{{gap}}ಬಿಸುಸುಯ್ಯುತ್ತ ನೆಜಮುಟ್ ಅಂದಳು :</br>
{{gap}}“ಏಳಬೇಡ. ಹಾಗೇ ಮಲಗಿರು. ಇನ್ನೇನು ಕರಕೊಂಡು ಬತ್ತಾರೆ.”</br>
{{gap}}“ರಾಮೆರಿ....”</br>
{{gap}}ಒಂದು ಹೆಜ್ಜೆ ಹತ್ತಿರ ಸರಿದು ರಾಮರಿಪ್ಟಾನೆಂದ :</br>
{{gap}}“ಇಲ್ಲಿದ್ದೇನೆ ಅಮ್ಮ....”</br>
{{gap}}ಮೆಲ್ಲಮೆಲ್ಲನೆ ಕಳೆದ ಅಸಹನೀಯ ಕ್ಷಣಗಳು....</br>
{{gap}}ಧ್ವನಿ ಕೇಳಿಸತೊಡಗಿತು:</br>
{{gap}}“ ಓ ಒಸೈರಿಸ್, ಓ ಒಸೈರಿಸ್........ ಓ ಮೆನೆಪ್ ಟಾ, ಓ</br>
ಮೆನೆಪ್ಟಾ....”</br>
{{gap}}ಶೋಕಾಲಾಪನೆ ಬರಬರುತ್ತ ಬಲಗೊಂಡಿತು.</br>
{{gap}}ನೆಫಿಸಳನ್ನು ನೋಡುತ್ತಿದ್ದ ನೆಫರುರಾ, ಅಕ್ಕನಿಗೆ ಮತ್ತೆ ಪ್ರಜ್ಞೆ</br>
ತಪ್ಪಿದೆ,” ಎಂದಳು, ನೆಜಮುಟ್ ನೆಲದ ಮೇಲಿರಿಸಿದ್ದ ಈರುಳ್ಳಿಯನ್ನು</br>
ಅಹೂರಾ ಎತ್ತಿಕೊಂಡು ನೆಫಿಸಳ ಮೂಗಿನ ಬಳಿ ಆಡಿಸಿದಳು,</br>
{{gap}}ಪ್ರಜ್ಞೆ ಮರಳಿ, ಹೊರಗಿನಿಂದ ಬರುತ್ತಿದ್ದ ಶೋಕಾಲಾಪನೆ ಕಿವಿಗಳನ್ನು</br>
ಹೊಕ್ಕಂತೆ, ನೆಫಿಸ್ ಕಣ್ಣುಗಳನ್ನು ಅಗಲವಾಗಿ ತೆರೆದಳು. ಎದ್ದು ಕುಳಿತು</br>
ಕೊಳ್ಳಲು ನೆಜಮುಟ್ ಮತ್ತು ಅಹೂರಾ ಅವಳಿಗೆ ನೆರವಾದರು. ನಡುವಸ್ತ್ರ</br>
ಬಿಚ್ಚಿ ಹೋಗಿತ್ತು. ನೆಫರುರಾ ಅದನ್ನು ಸರಿಪಡಿಸಿದಳು.</br>
{{gap}}ರಾಮೆರಿಪ್ಟಾ ಬಂದು ತಾಯಿಯ ಬೆನ್ನು ಹಿಂದೆ ನಿಂತ.</br>
{{gap}}....ಜನಜಂಗುಳಿ ಮನೆ ಬಾಗಿಲಿಗೆ ಬಂತು. ಬಿಕ್ಕಳಿಸುವ ದುಃಖವೂ</br>
ಇತ್ತು ನಾಮೋಚ್ಛಾರದೊಂದಿಗೆ. ಒಮ್ಮೆಲೆ ಮೌನ. ಸ್ನೊಫ್ರು ನೀಡುತ್ತಿದ್ದ</br>
ನಿರ್ದೆಶಗಳನ್ನು ಪುನರುಚ್ಚರಿಸುತ್ತಿದ್ದ ಖ್ನೆಮ್ ಹೊಟೆಪನ ಧ್ವನಿ.</br>
{{gap}}ಸ್ನೊಫ್ರು ಒಳಗೆ ಬಂದ. ನೆಲ ನೋಡುತ್ತ ಕುಳಿತಿದ್ದ ನೆಫಿಸಳನ್ನು ,</br>
ಅವಳನ್ನು ಹಿಡಿದುಕೊಂಡಿದ್ದ ನೆಜಮುಟ್ ಅಹೂರಾರನ್ನು , ನಿಂತಿದ್ದ ಅನ್ಪು</br>
ವಿನ ವಿಧವೆ, ನೆಫರುರಾ, ರಾಮೆರಿಪ್ಟಾರನ್ನು ದಿಟ್ಟಿಸಿದ. ನೀಳ ಉಸಿರುಗಳ</br>
ನಡುವೆ ನಿಧಾನವಾಗಿ ಅವನೆಂದ:</br><noinclude></noinclude>
p2lbl9lwbs8apvhazrz14mrm4ky2qlp
ಪುಟ:Mrutyunjaya.pdf/೬೪೨
104
22131
320749
217273
2026-05-19T07:38:54Z
Shreelatha.Halemane
7642
/* Validated */
320749
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''ಮೃತ್ಯುಂಜಯ'''|left=|right=೬೨೯}}
{{gap}}“ನೆಫಿಸ್, ನಿನ್ನನ್ನು ತಂಗಿ ಅಂತ ಕರೆಯೋದಿಲ್ಲ. ನಮ್ಮ ಬುಡಕಟ್ಟಿನ</br>
ಮಹಾನ್ ನಾಯಕನ ಮಡದಿಯಾದ ನೀನು ಇನ್ನು ನಮ್ಮೆಲ್ಲರ ತಾಯಿ.</br>
ನಾವು ಅದೃಷ್ಟಹೀನರು. ನಿನ್ನ ವೈಯಕ್ತಿಕ ದುಃಖ ಇಡೀ ಸಮುದಾಯದ</br>
ಶೋಕ, ಏನೋ ಮಾಡಲು ಹೋಗಿ ಇನ್ನೇನೋ ಆಯಿತು. ನೀನು</br>
ವಿಧವೆಯಾದೆ, ನಾವೆಲ್ಲ ತಬ್ಬಲಿಗಳಾದೆವು. ಅಮ್ಮ, ಈ ಲೋಕದ ಮೇಲಿನ</br>
ಪುಟ್ಟ ಬದುಕಿನಲ್ಲಿ ನಿನ್ನ ಸಂಗಾತಿಯಾಗಿದ್ದವನನ್ನು ಕರೆದುಕೊಂಡು ಬಂದಿ</br>
ದ್ದೇವೆ. ಕಡೆಯ ಸಲ ನೋಡಿ ಬೀಳ್ಕೊಡು. ರಾಜಗೃಹಕ್ಕೆ ಒಯ್ದು,</br>
ಅಲ್ಲಿಂದ ಶಾಶ್ವತ ಮನೆಗೆ ಸಾಗಿಸ್ತೇವೆ.”</br>
{{gap}} ಮಾತುಗಳು. ಬಿಸಿಬಿಸಿಯಾಗಿ ನೆಫಿಸಳ ಕಿವಿಗಳನ್ನು ಹೊಕ್ಕು ಹೃದಯ</br>
ವನ್ನು ಹೆಪ್ಪು ಗಟ್ಟಿಸುತ್ತಿದ್ದ ಪದಗಳು.</br>
{{gap}}ಖ್ನೆಮ್ ಬಾಗಿಲಲ್ಲಿ ನಿಂತಿದ್ದ. ಪ್ರೊಫು ಸನ್ನೆ ಮಾಡಿದೊಡನೆ ಬದಿಗೆ</br>
ಸರಿದ. ಆಗಲೇ ತಲೆಗಳ ಮೇಲಿಂದ ಕೆಳಕ್ಕಿಳಿಸಿದ್ದ ನಾಯಕನ ಕಳೇಬರವನ್ನು</br>
ಹಿರಿಯ ಸಮಿತಿ ಸದಸ್ಯರು ಎತ್ತಿಕೊಂಡು ಒಳಬಂದರು. ಜತೆಗಿದ್ದರು ಬಟಾ,</br>
ಮೆನ್ನ.</br>
{{gap}}ಒಳ ತಂದುದನ್ನು ನಡುಮನೆಯಲ್ಲಿ ನೆಫಿಸಳ ಎದುರು ನೆಲದ ಮೇಲೆ</br>
ಇರಿಸಿದರು.</br>
{{gap}} ಸ್ನೊಫ್ರು ಅಂದ:</br>
{{gap}} “ಅಮ್ಮ, ನಾಯಕನನ್ನು ನಿಮ್ಮೆದುರು ಮಲಗಿಸಿದ್ದೇವೆ. (ಸ್ವಲ್ಪ</br>
ತಡೆದು) ಇಲ್ಲಿ ನೋಡು. ಇವರು ನಾಯಕನಿಗೆ ರಕ್ಷಿತ ಲೇಪ ಮಾಡಿದ</br>
ಅಯ್ಯ. ಮೆಂಫಿಸಿನಿಂದ ನಮ್ಮವರ ಜೊತೆ ಬಂದರು.”</br>
{{gap}}ನೆಫಿಸ್ ಕತ್ತನ್ನು ಮೇಲಕ್ಕೆ ಎತ್ತಿದಳು. ಕಣ್ಣುಗಳು ಮುಚ್ಚಿಯೇ</br>
ಇದ್ದುವು. ಅರೆತೆರೆದಳು. ದೃಷ್ಟಿ ಅಲ್ಲಿದ್ದವರನ್ನು ಗುರುತಿಸಲು ಯತ್ನಿಸಿತು.</br>
ಮೆನ್ನನ ಮೇಲೆ ತಂಗಿತು..</br>
{{gap}}ಸಂತವಿಡುವ ಮಾತುಗಳನ್ನು ಆಡಲು ಮೆನ್ನ ಸಿದ್ಧನಿದ್ದ. ಆದರೆ ಈ</br>
ಐಸಿಸ್ ರೋದಿಸುತ್ತಲೇ ಇಲ್ಲವಲ್ಲ....</br>
{{gap}}“ಹದಿನಾಲ್ಕು ಹೋಳು”.... ಎಂದಳು ನೆಫಿಸ್, ಮೆಲ್ಲನೆ.</br>
{{gap}}"ಒಸೈರಿಸ್ ದೇವನನ್ನು ನೆನಸಿಕೊಳ್ತಿದ್ದಾಳೆ, ” ಎಂದ ಮೆನ್ನ,</br>
ಹಿರಿಯರತ್ತ ತಿರುಗಿ,</br><noinclude></noinclude>
0a9em3qxonu1uv3z87iabnei1on6nt5
ಪುಟ:Mrutyunjaya.pdf/೬೪೩
104
22132
320754
217269
2026-05-19T07:41:15Z
Shreelatha.Halemane
7642
/* Validated */
320754
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೬೩೦|right=}}
{{gap}}“ ನಮ್ಮ ಮೆನೆಪ್ಟಾನೂ ಒಸೈರಿಸ್ ದೇವನೇ ಅಲ್ಲವೇ ?” ಎಂದ</br>
ಸ್ನೊಫ್ರು. ತುಸು ಗಟ್ಟಿಯಾದ ಸ್ವರದಲ್ಲಿ ನೆಫಿಸ್ ನುಡಿದಳು :</br>
{{gap}}“ನನ್ನ ದೇವರನ್ನು ನಾನು ಮುಟ್ತೇನೆ. ”</br>
{{gap}}ಕುಳಿತಲ್ಲಿಂದಲೇ ಅವಳು ತುಸು ಮುಂದಕ್ಕೆ ಸರಿದಳು, ಹಣೆ, ಕಣ್ಣು,</br>
ಮೂಗು, ತುಟಿಗಳನ್ನು, ಕಿವಿ ಭಾಗವನ್ನು ಸವರಿದಳು. ಕತ್ತನ್ನು ಮತ್ತೆ ಮತ್ತೆ</br>
ಮುಟ್ಟಿದಳು. ಬಸಿರು ಅಡ್ಡವಾಗುತ್ತಿದ್ದರೂ, ಶ್ರಮಪಟ್ಟು ತನ್ನ ತಲೆಯನ್ನು</br>
ವಕ್ಷಸ್ಥಲದ ಮೇಲೆ ಕ್ಷಣಕಾಲ ಇರಿಸಿದಳು. ಹಾಗೆಯೇ ಕೆಳಕ್ಕೆ ಸರಿದು, ಕಟಿ</br>
ಭಾಗದ ಕೆಳಗಡೆ ಹಣೆಯನ್ನಿಟ್ಟಳು. ಮತ್ತೆ ತಲೆ ಎತ್ತಿ, ಇನ್ನೂ ಕೊಂಚ</br>
ಕೆಳಕ್ಕೆ ಜರಗಿ ತೊಡೆ ಮೊಣಕಾಲು, ಪಾದಗಳವರೆಗೂ ಅಂಗೈಗಳಿಂದ ತಡವಿ</br>
ದಳು ಆಯಾಸಗೊಂಡ ಬಿಸಿಯುಸಿರು ಬಿಡುತ್ತ “ ಅಯ್ಯೋ ! ” ಎಂದಳು.</br>
{{gap}}ಸ್ನೊಫ್ರು ನಿಧಾನವಾಗಿ ಪದಗಳನ್ನು ಬಿಡಿಬಿಡಿಸಿ ಹೇಳಿದ :</br>
{{gap}}“ ನೆಫಿಸ್ ತಾಯಿ, ಇಡೀ ಬುಡಕಟ್ಟಿನ ಜನ ಸಮುದಾಯ ಹುತಾತ್ಮನ</br>
ಹೆಂಡತಿ ಅಂತ ನಿನ್ನನ್ನು ಈ ದಿನ ಗೌರವಿಸಿದೆ. ”</br>
{{gap}}ನೆಫಿಸಳ ಗಂಟಲಿನಿಂದ ಪದಗಳು ದಾರಿ ಬಿಡಿಸಿಕೊಂಡು ಹೊರಬಂದುವು :</br>
{{gap}}“ನೀವೆಲ್ಲ ಅವನನ್ನು ನಾಯಕನಾಗಿ ಮಾಡಿದಿರಿ. ಅವನು ದೊಡ್ಡವ</br>
ನಾದ. ನನ್ನಿಂದ ದೂರ ಎತ್ತರಕ್ಕೆ ಹೋದ. ಒಸೈರಿಸ್ ದೇವನಾದ.</br>
ತಟ್ಟಿದ ಬಿಸಿರೊಟ್ಟಿ, ಒಣಗಿದ ಮಾವಿನ ಉಪ್ಪೇರಿ, ಇಷ್ಟನ್ನೇ ಆತ ನನ್ನಿಂದ</br>
ಬಯಸಿದ್ದು, ಅದು ಮಾಡು, ಇದು ಮಾಡು ಅಂತ ಯಾವತ್ತೂ ಹೇಳಿದ</br>
ವನಲ್ಲ, ಹೊಡೆದವನಲ್ಲ, ಬಡೆದವನಲ್ಲ, ರಾಜಧಾನಿಯಿಂದ ಆಮಂತ್ರಣ</br>
ಬಂದಾಗ ನನಗೆ ದಿಗಲಾಯಿತು, ಅಲ್ಲಿ ಅಪಾಯ ಇರಬಹುದು; ಹುಷಾರಾ</br>
ಗಿರು '__ಎಂದೆ ಹೂಂ ಅಂದ. ಚಿಕ್ಕಮ್ಮನ ಹಳ್ಳಿಗೆ ಹೋಗಿ ಬರೋ ಒಂದು</br>
ಆಸೆ ಹಾಗೆಯೇ ಉಳಿದಿತ್ತು. 'ವಾಪಸಾದ್ಮೇಲೆ, ಕುಯಿಲು ಮುಗಿಸಿ, ಹೋಗಿ</br>
ಬರೋಣ' ಅಂದ. ಇಲ್ಲಿಂದ ಹೊರಡೋ ಹಿಂದಿನ ರಾತ್ರೆ ಸುಮ್ಮನೆ</br>
ಮಾತಾಡ್ತಾ ಮಲಗಿದ್ವಿ. ಇವತ್ತು ನಿನ್ನ ತೋಳೇ ನನಗೆ ದಿಂಬು, ಪ್ಟಾ</br>
....ಕಣ್ಣೀರಿಂದ ತೋಯಿಸೋದಿಲ್ಲ. ಜೊಲ್ಲು ಸುರಿಸಿ ಒದ್ದೆ ಮಾಡ್ತನೆ'_ ಅಂತ</br>
ನಾನಂದೆ....ನನ್ನ ಗಂಡನನ್ನು ರಕ್ಷಿಸದೆ ಹೋದೆಯಲ್ಲ ಐಸಿಸ್. ಮಹಾದೇವ</br>
ಪ್ಟಾನೂ ನನ್ನ ಕೈ ಬಿಟ್ಟನಲ್ಲ...ಅಯ್ಯೋ ! ”</br><noinclude></noinclude>
fokt4uu9t1ncbl67oldaxvr7xgmo1gz
ಪುಟ:Mrutyunjaya.pdf/೬೪೪
104
22133
320759
217264
2026-05-19T07:42:49Z
Shreelatha.Halemane
7642
/* Validated */
320759
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center='''ಮೃತ್ಯುಂಜಯ'''|left=|right=೬೩೧}}
{{gap}}ಕುರಳು ಕತ್ತರಿಸುವ ಆಕ್ರಂದನವಲ್ಲ. ನೆಫಿಸ್ ಇಷ್ಟು ಸಂಯಮದಿಂದ</br>
ಮಾತನಾಡುತ್ತಿರುವಳಲ್ಲ ಎಂದು ಸ್ನೊಫ್ರುಗೆ ವಿಸ್ಮಯ_ಒಂದಿಷ್ಟು ಸಮಾ</br>
ಧಾನ ಕೂಡಾ.</br>
{{gap}}ಸೆಮನೆಂದ :</br>
{{gap}} “ನಮ್ಮ ನಾಯಕರಿಗೆ ರಾಜಯೋಗ್ಯವಾದ ಅಂತ್ಯಕ್ರಿಯೆ ಏರ್ಪಡದೆ.</br>
ಮೆನೆಪೇಟಾ ನಮ್ಮ ಬುಡಕಟ್ಟಿನ__ ನೀರಾನೆ ಪ್ರಾಂತದ ಸುಪುತ್ರ. ನಮ್ಮ</br>
ವರನ್ನು ವಿಮುಕ್ತರನ್ನಾಗಿ ಮಾಡಿದ ಮಹಾಪುರುಷ, ಆತ ಶಾಶ್ವತ ಮನೆ</br>
ಯಿಂದ ಮತ್ತೆ ಬತ್ತಾನೆ, ನಮ್ಮ ಸಮುದಾಯದ ನಾಯಕನಾಗ್ತಾನೆ.</br>
ಆವರೆಗೆ ಒಸೈರಿಸ್ ದೇವನ ಹಾಗೆ ಅವನು ವಿಶ್ರಾಂತಿ ಪಡೀತಾನೆ.... "</br>
{{gap}}ತಲೆಬಾಗಿಸಿ ನೆಫಿಸ್ ಯಾಚಕಿಯಾದಳು :</br>
{{gap}}“ ನನ್ನ ಒಂದು ಮಾತು ನಡೆಸಿಕೊಡಿ. ಶಾಶ್ವತ ಮನೆಯಲ್ಲಿ ನಾಯಕರ</br>
ಸೇವೆ ಮಾಡೋದಕ್ಕೆ ನನಗೆ ಸಮ್ಮತಿ ಕೊಡಿ, ಗೋರಿ ಪ್ರವೇಶಕ್ಕೆ ನನಗೆ</br>
ಅನುಮತಿ ಕೊಡಿ__”</br>
{{gap}} “ ಛೇ! ಛೇ!” ಎಂಬ ಉದ್ಘಾರ ಎಲ್ಲರಿಂದಲೂ.</br>
{{gap}}ರಾಮೆರಿ ಕುಸಿಕುಳಿತು, ತಾಯಿಗೆ ಅಂಟಿಕೊಂಡ.</br>
{{gap}}ಸೆಮ :</br>
{{gap}}"ಇದು ಧರ್ಮಕ್ಕೆ ಸಂಬಂಧಿಸಿದ್ದು, ಅಯ್ಯನವರು ಹೇಳಬೇಕು. ”</br>
{{gap}}ಮೆನ್ನ ಖಚಿತ ವಾಕ್ಕುಗಳನ್ನಾಡಿದ :</br>
{{gap}}“ ಬಹಳ ಹಿಂದೆ ಪೆರೋ ಸತ್ತಾಗ ಗೋರಿಯೊಳಕ್ಕೆ ಜೀವಂತ ವ್ಯಕ್ತಿ</br>
ಗಳನ್ನೂ ತಳ್ಳುವುದಿತ್ತು. ಮಹಾರಾಣಿಯರನ್ನಲ್ಲ.ದಾಸದಾಸಿಯರನ್ನು.</br>
ಮುಂದೆ ವ್ಯರ್ಥವಾಗಿ ಸೇವಕ ಜನ ಸಾಯ್ತಾರಲ್ಲ ಅಂತ, ಆ ನಷ್ಟ ತಪ್ಪಿಸೋ</br>
ದಕ್ಕೆ, ಅವರ ಗೊಂಬೆಗಳನ್ನಷ್ಟೇ ಇಡೋದು ಶುರು ಮಾಡಿದ್ರು. ಮೆನೆಸ್ಟಾ</br>
ಪ್ರಜಾಪೀಡಕ ಪೆರೋ ಅಲ್ಲ. ಕ್ರೂರಿಯಾದ ಮಹಾಅರ್ಚಕನಲ್ಲ. ಇವರು.</br>
ವಾತ್ಸಲ್ಯಮಯಿಯಾದ ಜನನಾಯಕ .ತಮ್ಮ ಕುಡಿಯನ್ನು ಬಸಿರಲ್ಲಿ ಹೊತ್ತಿರುವ</br>
ನಮ್ಮೆಲ್ಲರ ತಾಯಿಗೆ ಗೋರಿಪ್ರವೇಶಕ್ಕೆ ಮೆನೆಪ ಟಾ ಅಣ್ಣ ಅನುಮತಿ</br>
ಕೊಡ್ತಿದ್ದರೆ ? ಧರ್ಮ ಸಮ್ಮತವಂತೂ ಇದು ಖಂಡಿತ ಅಲ್ಲ. ತಾಯಿಯವರು</br>
ಕ್ಷಮಿಸ್ಟೇಕು. ”</br><noinclude></noinclude>
3spfjxb331id9dfkbe6p3satv0154g3
ಪುಟ:Mrutyunjaya.pdf/೬೪೫
104
22134
320760
217733
2026-05-19T07:44:55Z
Shreelatha.Halemane
7642
320760
proofread-page
text/x-wiki
<noinclude><pagequality level="4" user="Mithun Mijar" /></noinclude>{{rh|center='''ಮೃತ್ಯುಂಜಯ'''|left=೬೩೨|right=}}
{{gap}}ನೀಳವಾಗಿ ಉಸಿರು ಬಿಟ್ಟು ನೆಫಿಸ್ ಅಂದಳು :</br>
{{gap}}“ಕ್ಷಮಿಸ್ಬೇಕಾದ್ದು ನಾನಲ್ಲ. ನೀವು. ನನ್ನನ್ನು .ನಾನು ಪಾಪಿ.</br>
ನಿಮ್ಮ ನಾಯಕನಾಗಿ ನನ್ನ ಗಂಡ ಏರಿದ ಎತ್ತರವನ್ನು ನಾನು ಮುಟ್ಟಲಿಲ್ಲ.”</br>
{{gap}}ಸ್ನೊಫ್ರು : “ಹಾಗನ್ನಬಾರದು ನೆಫಿಸ್ ತಾಯಿ,”</br>
{{gap}}ನೆಫಿಸ್: “ಇನ್ನು ರಾಜಗೃಹಕ್ಕೆ ಕರಕೊಂಡು ಹೋಗ್ತಿರಾ ?”</br>
{{gap}}ನೆಫಿಸ್ : “ನಾನೂ ಬರಲಾ ? ಗೋರಿಗೆ ಕಳಿಸುವಾಗ ನಾನೂ</br>
ಇರಲಾ ?”</br>
{{gap}}ಸ್ನೊಫ್ರು: “ ತಾಯಿ ನೆಫಿಸ್, ದಿನ ತುಂಬಿದೆ. ಈ ಪರಿಸ್ಥಿತಿಯಲ್ಲಿ</br>
ಅಂತ್ಯಕ್ರಿಯೆಗೆ ನೀವು ಬರಬಾರದು.”</br>
{{gap}}ನೆಫಿಸ್ : “ ಹಾಗಾದರೆ ಬರಿಯ ಪಾಪಿಯಲ್ಲ, ಕಡು ಪಾಪಿ ನಾನು,”</br>
{{gap}}ಖ್ನೆಮ್ ಹೊಟೆಪ್ ಕಾಣಿಸಿಕೊಂಡ.</br>
{{gap}}ಸೊಪ್ಪು: "ಅಮ್ಮ, ಅಪ್ಪಣೆ ಕೊಡು.”</br>
{{gap}}ನೆಫಿಸ್: “ನನ್ನದೆ ಈ ಒಡವೆ ? ನಾನು ಬಿಟ್ಟುಕೊಡಬೇಕೆ ?</br>
ಶೋಕಾಲಾಪನೆ ಅಯ್ಯೋ ! ಅಯ್ಯೋ ! "</br>
{{gap}}ರಾಮೆರಿಯೆಂದ :</br>
{{gap}}“ಧೈರ್ಯ ವಾಗಿರು ಅಮ್ಮ.”</br>
{{gap}}ನೆಫಿಸ್ ಮತ್ತೊಮ್ಮೆ ಪಾದಗಳಿಂದ ತಲೆಯತನಕ ಶವವನ್ನು ತಡವಿ</br>
ದಳು. ಸಂಕಟವನ್ನು ಹತ್ತಿಕ್ಕಲಾಗದೆ, ರಾಮೆರಿಪ್ಟಾನನ್ನು ತಬ್ಬಿಕೊಂಡು</br>
ಆರಂಭಿಸಿದಳು.</br>
{{gap}}ಸ್ನೊಫ್ರು ಸನ್ನೆ ಮಾಡಿದ; ಖ್ನೆಮ್ ಹೊಟೆಪ್ ಸೂಚನೆ ಇತ್ತ, ಹಿರಿಯರು</br>
ಹಲಗೆಗಳನ್ನೆತ್ತಿದರು. ಅವರು ಮುಂದಕ್ಕೆ ಹೆಜ್ಜೆ ಇಟ್ಟಂತೆ, ನೆಫಿಸ್ಳ ರೋದ</br>ನಕ್ಕೆ ನೆಜಮುಟ್, ತಬಬುನಾ, ಅಹೂರಾ, ನೆಫರುರಾ ಧ್ವನಿಗೂಡಿ</br>
ಸಿದರು.</br>
{{gap}}ಹೊರಗೆ ಕೇಳಿಸಿತು ಜನಸಾಗರದ ಭೋರ್ಗರೆತ.</br>
{{gap}}“ಓ ಒಸೈರಿಸ್, ಓ ಒಸೈರಿಸ್; ಓ ಮೆನೆಪ್ ಟಾ, ಓ ಮೆನೆಪ್ಟಾ....”</br><noinclude></noinclude>
pluc0tgcu4lem1fdoutakquw99kzha3
ಪುಟ:Mrutyunjaya.pdf/೬೫೪
104
22143
320730
216438
2026-05-19T06:51:36Z
Shreelatha.Halemane
7642
/* Validated */
320730
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೬೪೧}}
{{gap}} ಯಾರು ಮೊದಲು?: ಅನಿಶ್ಚಯತೆ ಅನರ್ಥಕಾರಿ, ವಿಲಂಬವಾಗ
ಬಾರದು.</br>
{{gap}}ಅಸಹನೆಯಿಂದ ಖ್ನೆಮ್ ನುಡಿದ :</br>
{{gap}}“ ಬೇಗ ! ಅಮ್ಮ ಹೇಳಿದಂತೆ ಮಾಡಿ, ಹಿರಿಯರು ಮುಂದಾಗಬೇಕು.”</br>
{{gap}}ಆ ನಾಲ್ವರು ಶವದ ಪಾದದ ಬಳಿ ನಿಂತು, ಮುಖವನ್ನು ನೋಡಿ ತಲೆ</br>
ಬಾಗಿ ನಮಿಸಿದರು. ಸ್ನೊಪ್ರು_ಸೆಬೆಕ್ಖು ಹಾಗೆಯೇ ಮಾಡಿದರು.</br>
{{gap}}ಗಟ್ಟಿಯಾಗಿ ಅಳುತ್ತ ಬಟಾ ಬಂದ. ಶೈವಮ್ ಹೊಟೆಸ್, ಔಟ, ಬೆಕ್</br>
ಒಟ್ಟಾಗಿ ನಿಂತು ನಮಿಸಿದರು. [ಅದಾದೊಡನೆಯೇ ಬೆಕ್, ಗುಂಪಾಗಿ ನಿಂತಿದ್ದ</br>
ತನ್ನ ಯೋಧರೊಡನೆ, ದಂಡೆಗೆ ಧಾವಿಸಿದ.] ಇಪ್ಯುವರ್ ಬಂದು ಕಳೇಬರದ</br>
ಪಾದಗಳ ಮೇಲೆ ತಲೆ ಇರಿಸಿ ಅತ್ತ, ಗಂಡಸರು, ಹೆಂಗಸರು ಅಂತಿಮ</br>
ವಿದಾಯಕ್ಕೆ ಎಲ್ಲರೂ ಮುಂದಾದರು. ಖೈಮ್ ತೋಳುಗಳನ್ನಷ್ಟೇ ಚಾಚಿ</br>
ಜನರ ನೂಕು ನುಗ್ಗಲನ್ನು ಹತೋಟಿಯಲ್ಲಿಟ್ಟುಕೊಂಡ.</br>
{{gap}}ಮೆನ್ನ ಸೆಮನೊಡನೆ ಅಂದ :
{{gap}}“ ನಾಯಕರಿಗೆ ಎಲ್ಲರೂ ಒಡನಾಡಿಗಳೇ. ಇವರು ಸಾಲುಗಟ್ಟಿ ನಮಿಸ್ತಾ</br>
ಇರಿ, ಈ ಕಡೆಯಿಂದ ಗೋರಿ ವಾಸಕ್ಕೆ ಬೇಕಾದ ಸಾಮಗ್ರಿಗಳನ್ನಿಡುವ ಕೆಲಸ</br>
ಮಾಡಿ ಮುಗಿಸೋಣ.”</br>
{{gap}}ಆ ಸಾಮಗ್ರಿಗಳು ಮೊದಲೇ ಬಂದಿದ್ದುವು.</br>
ಕಾ, ಹೊಲ ಉಳಲು ಮರದ ಪುಟ್ಟ ಹೋರಿಗಳು, ನೇಗಿಲು, ಬಾತು</br>
ಕೋಳಿಯ ಬೇಟೆಗೆ ಹೊಡೆಗೋಲು, ಪೆಪೈರಸ್ ದೋಣಿಯ ಆಕೃತಿ, ಬಣ್ಣದ</br>
ಪುಕ್ಕಗಳ ಬೀಸಣಿಗೆ, ಜೊಂಡಿನ ಪಾದರಕ್ಷೆ, ನೀಲಿಕವಡೆ ಸರ, ಬೆಳ್ಳಿಯುಂಗುರ </br>
ಖಿನವ ಚೀಲ, ಧೂಪದ್ರವ್ಯಗಳು, ಶುಭ್ರ ನಡುವಸ್ತ್ರ, ಹಣ್ಣಿನ ಬುಟ್ಟಿಗಳು,</br>
ಹೂವಿನ ರಾಶಿ...</br>
{{gap}}ಚೂಪುಗಲ್ಲೊಂದು ಉಳಿಯಿತು.</br>
{{gap}}ರಾಮೆರಿಪ್ಟಾನ ಕೈಯಲ್ಲಿ ಬುತ್ತಿ ಇದ್ದುದನ್ನು ಗಮನಿಸಿದ ನನ್ನ</br>
ರಾಮೆರಿ, ಒಳಗೆ ಹೋಗಿ ಬುತ್ತಿ ಇಟ್ಟು ಬಾ.” |</br>
'ಯಲ್ಲಿ ನೆಫರುರಾ ಮುಖ ತೋರಿಸಿ, ಅಂಗಲಾಚುವ ಸ್ವರದಲ್ಲಿ,</br><noinclude></noinclude>
cra95czlekc4x0jbt7vttrscx9z753g
ಪುಟ:ನನ್ನ ಸಂಸಾರ.djvu/೧೭೬
104
57459
320662
160165
2026-05-18T17:59:04Z
Pragathi. BH
7585
/* Validated */
320662
proofread-page
text/x-wiki
<noinclude><pagequality level="4" user="Pragathi. BH" /></noinclude>೩೮ ಕಾದಂಬರೀಸಂಗ್ರಹ
{{gap}}ಅನಂತರ ಶಂಕರರು ಮಂಡನ ಪಂಡಿತನ ಮನೆಗೆ ಬಂದು, ಮಂಡನಪಂಡಿತನಿಂದ
ಪೂಜಿಸಲ್ಪಟ್ಟವರಾಗಿ, ಶಾರದೆಯನ್ನು ವಾದಕ್ಕೆ ಕರೆಯಲು, ಶಾಂಕರಮಹಿಮೆಯನ್ನು ತಿಳಿದ ಶಾರದೆಯು, ದಂಪತಿಗಳಾದ ತಾವಿಬ್ಬರೂ ಸೋತೆವೆಂದೂ ಮತ್ತು ತನ್ನ ಅವ
ತಾರ ಪೂರ್ತಿಯಾಯಿತೆಂದೂ ಲಜ್ಜೆಯಿಲ್ಲದೆ ಹೇಳಿ ಅಂತರ್ಹಿತಳಾಗಲು ಆಚರ್ಯರು
ಆಕೆಯನ್ನು ಯೋಗದೃಷ್ಟಿಯಿಂದ ನೋಡಿ " ಎಲೌ, ಮಾತೆಯೇ! ನೀನು ಬ್ರಹ್ಮದೇವರ
ಪತ್ನಿಯೆಂಬುದನ್ನೂ , ಈಶ್ವರನ ಸಹೋದರಿಯೆಂಬುದನ್ನೂ , ವಾಗ್ದೇವಿಯೆಂಬುದನ್ನೂ,
ಪ್ರಪಂಚರಕ್ಷಣೆಗೋಸ್ಕರವೇ ಲಕ್ಷ್ಮ್ಯಾದಿ ರೂಪಗಳನ್ನೂ ಧರಿಸುತ್ತೀಯೆಂಬುದನ್ನೂ,
ಬಲ್ಲೆನಾದ್ದರಿಂದ, ನಮ್ಮಿಂದ ರಚಿಸಲ್ಪಡುವ ಶೃಃಗೇರಾದಿ ಕ್ಷೇತ್ರಗಳಲ್ಲಿ ಶಾರದೆಯೆಂಬ
ಹೆಸರಿನಿಂದ ನೆಲೆಗೊಂಡವಳಾಗಿ, ಜನರ ಇಷ್ಟಾರ್ಥಗಳನ್ನೀಯುತ್ತಾ ಸತ್ಪುರುಷರಿಂದ
ಅರ್ಚಿಸಲ್ಪಡುತ್ತಿರಬೇಕು" ಎಂದು ಪ್ರಾರ್ಥಿಸಲು, ವೈಧವ್ಯ ಸಂಭವಿಸುವುದೆಂಬ ಶಂಕೆ
ಯಿಂದ ಭೂಸ್ಪರ್ಶಮಾಡದೇ ನಿಂತಿದ್ದು, ಸಭೆಯವರಿಗೆಲ್ಲಾ ದರ್ಶನವನ್ನಿತ್ತು ತಥಾಸ್ತು'
ಎಂದು ಹೇಳಿ, ಹಾಗೆಯೇ ಅಂತರಿಕ್ಷಕ್ಕೇರಿದ ಮಾಯವಾದ ಶಾರದೆಯನ್ನು ನೋಡಿ ಎಲ್ಲ
ರೂ ಆಶ್ಚರ್ಯಭರಿತರಾದರು. ಅನಂತರ ಶಂಕರದೇಶಿಕರು ಮಂಡನಮಿಶ್ರನಿಗ
ಸನ್ಯಾಸವನ್ನಿತ್ತು ಆತ್ಮತತ್ತ್ವಗಳನ್ನುಪದೇಶಿಸಿ ಸುರೇಶ್ವರಾಚಾರ್ಯರೆಂಬ ಹೆಸರನ್ನಿಟ್ಟು
ಸಶಿಷ್ಯರಾಗಿ ದಕ್ಷಿಣಕಡೆಗೆ ಬಂದು, ಮಹಾರಾಷ್ತ್ರಾದಿದೇಶಗಳಲ್ಲಿ ತಮ್ಮ ಭಾಷ್ಯಗಳನ್ನು
ಪ್ರಚಾರಮಾಡುತ್ತಾ ಶ್ರೀಶೈಲಕ್ಕೆ ಬಂದು ಪಾತಾಳಗಂಗೆಯಲ್ಲಿ ಸ್ನಾನಮಾಡಿ ಭ್ರಮ
ರಾಂಬಾಸಹಿತನಾದ ಮಲ್ಲಿಕಾರ್ಜುನೇಶ್ವರನನ್ನು ಪೂಜಿಸಿ, ಅಲ್ಲಿದ್ದ ಪಾಶುಪತರು,
ವೈಷ್ಣವರು, ವೀರಶೈವರು, ಮಾಹೇಶ್ವರರು ಮುಂತಾದವರನ್ನು ಸೋಲಿಸಿ, ಅವರಿಗೆಲ್ಲಾ, ಜ್ಞಾನಮಾರ್ಗೋಪದೇಶವಂಗೈಯುತ್ತಿದ್ದರು.<noinclude></noinclude>
a1dbtgsrrhjtbx4irza1swvzkuf9uon
ಪುಟ:ನನ್ನ ಸಂಸಾರ.djvu/೨೩೨
104
57515
320663
160928
2026-05-18T18:01:21Z
Pragathi. BH
7585
/* Validated */
320663
proofread-page
text/x-wiki
<noinclude><pagequality level="4" user="Pragathi. BH" />{{rh|center=ಕಾದಂಬರೀ ಸಂಗ್ರಹ|left=|right=}}</noinclude>
ವಯಸ್ಸಾಯಿತು. ಏನುತಾನೇ ಮಾಡಿಯಾಳು ? ಕೆಲವು ಕಾಲದ ವರೆ ವಿಗೂ ನಿನ್ನನ್ನು ಅವಳ ಸವಿಾಪಕ್ಕೆ ಕಳುಹಿಸಬೇಕೆಂಬ ಇಚ್ಛೆ ಇದೆ. ನಿನ್ನ ಅದೃಷ್ಟದಿಂದ ಆಕೆಗೆ ಆರೋಗ್ಯವಾಗಬೇಕು ಎಂದು ಹೇಳಿದನು. ಅದಕ್ಕೆ ರೋಹಿಣಿಯು ಕರುಣಾಕರನನ್ನು ಕುರಿತು ಅಪ್ಪಾ ! ತಮ್ಮ ಇಪ್ಪ ದಂತೆಯೆ ನಡೆಯಲು ಸಂತುಷ್ಟಚಿತ್ತಳಾಗಿರುವೆನು. ತಮ್ಮ ಸಹೋದ ರಿಯರಾದ ಕರುಣಾಂಬೆಯರ ಸೇವೆಯನ್ನು ಮನಃಪೂರ್ವಕವಾಗಿ ಮಾಡು
ವನಾದರೂ ತಮ್ಮನ್ನು ಅಗಲಿ ಹೇಗಿರಲಿ '' ಎಂದಳು.<br />
{{gap}}ಅದನ್ನು ಕೇಳಿ ಕರುಣಾಕರನು ಮಗುವೇ ! “ ನಾನೇ ಜಾಗ್ರತೆ ಯಾಗಿ ಬಂದು ನಿನ್ನನ್ನು ಕರೆದುಕೊ೦ಡು ಬರುವೆನು. ನಾನು ಎಂದು ಕರೆದ ಹೊರ್ತು ನೀನು ಮತ್ತಾರ ಸಂಗಡಲೂ ಬರಕೂಡದು ” ಎಂದು
ಹೇಳಿದನು.<br />
{{gap}}ರೋಹಿಣಿಯು ಆತನ ಮನೋಭಿಪ್ರಾಯವನ್ನು ತಿಳಿಯದೆ ಇದ್ದು ದರಿಂದ ಸಂತೋಷದಿಂದ ಪ್ರಯಾಣಸನ್ನದ್ಧಳಾದಳು. ತಂದೆ ಮಗಳಿಬ್ಬರೂ ಪ್ರಯಾಣಮಾಡಿ ಪೂರ್ವದಲ್ಲಿ ಈ ಮಗುವು ಬಿದ್ದಿದ್ದ ಸ್ಥಳವನ್ನು ಕಂಡು ಕರುಣಾಕರನು-“ ರೋಹಿಣಿ ಈಗ ಹನ್ನೆರಡು ವರ್ಷಗಳ ಮುಂಚೆ ನೀನು ಈ ಪ್ರದೇಶದಲ್ಲಿ ಬಿದ್ದಿದ್ದೆ ” ಎಂದು ಆ ಪ್ರದೇಶವನ್ನು ತೋರಿಸಿದನು. ಅದನ್ನು ಕೇಳಿ ರೋಹಿಣಿಯು ಆ ಪ್ರದೇಶದಲ್ಲಿ ನಿಂತು ಭಗವಂತನ ವ್ಯಾಪಾರವನ್ನು ಕುರಿತು ಆತನನ್ನು ಸ್ತೋತ್ರ ಮಾಡಿದಳು. ಅನಂತರ ಕರುಣಾಕರನ ಕಡೆಗೆ ತಿರುಗಿ ಗದ್ದ ದಧ್ವನಿಯಿಂದ ಎಲೈ ತಂದೆಯೆ ? ( ಈಗ್ಗೆ ಹನ್ನೆರಡು ವರ್ಷಗಳ ಹಿಂದೆ ಈಶ್ವರಾನುಗ್ರಹದಿಂದ ನೀನು ನನ್ನನ್ನು ಕಂಡು ಕಾಪಾಡಿದೆ. ಮತ್ತು ಈಗಲೂ ಕಾಪಾಡುತ್ತಲಿರುವಿ. ನನ್ನ ಸಂರಕ್ಷಣೆಗೋಸ್ಕರ ಜಗದೀಶ ರನು ನಿನ್ನನ್ನು ಹೇಗೆ ಕಳುಹಿಸಿ ದನೋ ಹಾಗೆಯೇ ನಾನು ಈಗ ಮಾಡತಕ್ಕ ಪ್ರಾರ್ಥನೆಯನ್ನು ಕೇಳಿ ಆತನು ನೀನು ಮಾಡಿದ ಉಪಕಾರಕ್ಕೋಸ್ಕರ ದೀರ್ಘಾಯುಸ್ಸನ್ನು ಕೊಟ್ಟು ನಮ್ಮೆಲ್ಲರನ್ನೂ ಸಂರಕ್ಷಿಸಲಿ ” ಎಂದು ಪ್ರಾರ್ಥಿಸುತ್ತೇನೆ
ಎಂದಳು.<noinclude></noinclude>
f25kxxd42qjdpvam3w41h0nfppxqiqm
ಪುಟ:ನನ್ನ ಸಂಸಾರ.djvu/೨೩೩
104
57516
320664
160929
2026-05-18T18:03:08Z
Pragathi. BH
7585
/* Validated */
320664
proofread-page
text/x-wiki
<noinclude><pagequality level="4" user="Pragathi. BH" />{{rh|center=ರೋಹಿಣಿ|left=|right=}}</noinclude>
{{gap}} ಈ ಮಾತನ್ನು ಕೇಳಿ ಕರುಣಾಕರನ ಮನಸ್ಸು ಕರಗಿತು, ಆಕೆಯ ತಲೆಯ ಮೇಲೆ ಕೈಯನ್ನಿಟ್ಟು “ ಸಕಲ ಪ್ರಾಣಿಗಳನ್ನೂ ಸಂರಕ್ಷಿಸತ ಕವನು ಈಶ್ವರನು, ಆತನ ಸಂಕಲ್ಪಕ್ಕೆ ವಿರೋಧವಾಗಿ ಯಾವುದೂ ನಡೆಯಲಾರದು, ಆತನ ಚಿತ್ತವಿದ್ದಂತೆ ಆಗಲಿ, ನನ್ನ ಆಯುರ್ಮಿತಿ ವಿಷ್ಯಾ ದರೂ ಇರಲಿ, ನಾನೇನೋ ನನ್ನ ಜೀವಮಾನವನ್ನೆಲ್ಲಾ ಭಗವಂತನ ಸೇವೆಯಲ್ಲಿಯೇ ಕಳೆಯಬೇಕೆಂದು ದೃಢ ಪ್ರತಿಜ್ಞೆಯನ್ನು ಮಾಡಿದೇನೆ. ಒಂದುವೇಳೆ ನಾನೇನಾದರೂ ಅಕಾಲಮೃತ್ಯುವಿಗೆ ತುತ್ತಾದರೂ ನಮ್ಮ ಕರುಣಾಂಬೆಯು ನಿನ್ನನ್ನು ಕಾಪಾಡದಿರಳು.<br />
{{gap}}ನಾನು ನಿನಗೆ ವಿದ್ಯೆಯನ್ನು ಕಲಿಸಲಿಲ್ಲ, ಧನವನ್ನು ಕೊಡಲು ಧನಿಕನಾಗಿಲ್ಲ, ಆದರೂ ಈಶ್ವರನಲ್ಲಿ ಭಕ್ತಿಯನ್ನೂ ವಿಶ್ವಾಸವನ್ನೂ ಉಂಟುಮಾಡಿರುವೆನು, ನೀನು ಸುಗುಣಿಯು, ವಿಧೇಯಳು, ಸತ್ಯವು ತಳು. ನೀನು ಪರಮೇಶ್ವರನನ್ನು ಮಾತ್ರ ಯಾವಾಗಲೂ ಮರೆಯಬೇಡ; ಆತನ ಅನುಗ್ರಹವಿಲ್ಲದೆ ಯಾವ ಪ್ರಾಣಿಯ ಭೂಮಿಯಲ್ಲಿ ಬಂದು ನಿಮಿಷವಾದರೂ ಜೀವಿಸಲಾರದು, ಆತನಿಗೆ ಸಮ್ಮತವಾದ ಕೆಲಸವನ್ನೆ ಮಾಡು. ಒಬ್ಬರ ಮನಸ್ಸಿಗೂ ವ್ಯಥೆಯುಂಟಾಗತಕ್ಕ ಮಾತನ್ನು ಆಡ ಬೇಡ, ಉಪಕಾರಿಯಾಗಿರು, ದೇವರು ನಿನಗೆ ಒಳ್ಳೆಯದನ್ನು ಮಾಡು ವನು. ಋಣಾನುಬಂಧವಿದ್ದರೆ ಈ ಲೋಕದಲ್ಲಿ ಇನ್ನೊಂದಾವರ್ತಿ ಒಬ್ಬರನ್ನೊಬ್ಬರು ನೋಡುವೆವು, ಇಲ್ಲದಿದ್ದರೆ ಜಗದೀಶನ ಸನ್ನಿಧಿಯಲ್ಲಿ ನೋಡಲು ಯಾವ ಅಡ್ಡಿಯೂ ಇಲ್ಲ. ಎಂದು ಬುದ್ದಿ ಹೇಳಿ ಮಗ ಳನ್ನು ಕಲ್ಯಾಣಪುರಕ್ಕೆ ಸೇರಿಸಿ ಕರುಣಾಂಬೆಯೊಡನೆ ಸಂಗತಿಯೆಲ್ಲವನ್ನೂ
ತಿಳಿಸಿ ಕರುಣಾಕರನು ಪುತ್ರಿ ವಿರಹ ವ್ಯಸನದಿಂದಕೂಡಿ ಆ ದೇಶದ ರಾಜ ಧಾನಿಯಾದ ಸುವರ್ಣಪುರಕ್ಕೆ ಪ್ರಯಾಣ ಮಾಡಿದನು.<br />
{{gap}}ಪಾಠಕಮಹಾಶಯರೇ ! ದೈವಘಟನೆಯು ವಿಚಿತ್ರವಾದುದು. ಆಹಾ ! ರೋಹಿಣಿಯು ಎಲ್ಲಿ ಹುಟ್ಟಿದಳು ! ಎಲ್ಲಿ ಬೆಳದಳು ! ಈಗ ಎಲ್ಲಿರುವಳು ? ಕರುಣಾಕರನಿಗೆ ತನ್ನ ಸಾಕುಮಗಳನ್ನು ತನ್ನ ಸಹೋದರಿಯ ಮನೆಗೆ ಕಳುಹಿಸುವಾಗೈ ಉಂಟಾದ ದುಃಖವೇ ಇಂತಿರುವಲ್ಲಿ ಸ್ವಂತ ಹೆಣ್ಣುಮು ಕಳನ್ನು ಪ್ರೀತಿಯಿಂದ ಸಲಹಿ ಮದುವೆ ಮುಂತಾದುವುಗಳನ್ನು ನಡಿಸಿ<noinclude></noinclude>
8cj47yeo5m3hm8umbanmeaizjltdtd1
ಪುಟ:ಶ್ರೀ ಕೃಷ್ಣ ಲೀಲೆ.djvu/೧೩೯
104
68813
320776
139399
2026-05-19T09:59:04Z
Hariprasad Shetty10
7490
/* ಪರಿಶೀಲಿಸಲಾಗಿಲ್ಲ */
320776
proofread-page
text/x-wiki
<noinclude><pagequality level="1" user="Hariprasad Shetty10" />{{rh|left=|center=ಚತುರ್ಥಾ೦ಕ೦.|right=೧೨೩}}</noinclude>ನಾದ ಕಾಳೀಯನನ್ನು ಮರ್ದಿಸಿ ಸಮುದ್ರಕ್ಕೆ ಹೊರಡಿಸಿದನು. ದಾವಾಗ್ನಿಯನ್ನು ನುಂಗಿ ಗೋವುಗಳನ್ನೂ ಗೋವಸಂಘವನ್ನೂ ಕಾಪಾಡಿದನು, ಕ್ಷುದ್ರ ಪೂಜಾರೂಪವಾದ ಇಂದ್ರಯೋಗವನ್ನು ನಿಲ್ಲಿಸಿ ಅಹಿಂ ಸಾಧರವನ್ನು ಸ್ಥಾಪಿಸಿದನು. ಗೋವರ್ಧನಪರ್ವತವನ್ನು ಬೆರಳಿನಿಂದ ದೇವೇಂದ್ರನ ಗರ್ವವನ: ಭಂಗಪಡಿಸಿದನು ಇಂತು ಗೋಪಾಲಬಾಲ ನಂದದಿ ಭಗವಂತನು ಶೂರ್ದಡಿಸುತ್ತಿರುವ ಲೀಲಾ ವಿನೋದಗಳು ಒಂದೊಂದೂ ಅತ್ಯದ್ಭುತವಾಗಿರುವುವು. ಸರ್ವಜ್ಞನಾದ ತಾನು ಶ್ರೀ ರಾಮಾವತಾರವನ್ನು ಧರಿಸಿ ಆರಣ್ಯವಾಸದಲ್ಲಿದ್ದಾಗ, ಸಚ್ಚಿದಾನಂದ ಸ್ಪರೂಪನಾದ ತನ್ನ ನ್ನು ನೋಡಿ ಬ್ರಹ್ಮರ್ಷಿಗಳು ಸಹ ಭ್ರಮಿಸು ವಂತ ರಾರಾಜಿಸಿದನು. ಆಗ ತನ್ನ ಸರ್ವಾಂಗ ಸೌಂದರವನ್ನು ನೋಡಿ ಸಮ್ಮೋಹಿತರಾದ ಬ್ರಹ್ಮರ್ಷಿಗಳು, ತನ್ನನ್ನು ಆಲಿಂಗನ ಮಾಡಿ ಕೊಳ್ಳಬೇಕೆಂದು ಬಯಸಿದಾಗ, ಅವರ ಅಭಿಷ್ಟ್ಯವು ಆಗ ಸಾಧ್ಯವಿಲ್ಲ ವೆಂತಲೂ, ತಾನು ಕೃಷ್ಣಾವತಾರವನ್ನು ಧರಿಸಿದಾಗ ಬ್ರಹ್ಮಋಷಿಗಳೆ ಲ್ಲರೂ ಗೋಕುಲದಲ್ಲಿ ಗೋಖನಿಯರಾಗಿ ಹುಟ್ಟಬೇಕಂತಲೂ, ಹಾಗೆ ಹುಟ್ಟಿದಾಗ ಅವರ ಇಷ್ಟಾಥ್ಯವನ್ನು ಸಫಲಗೊಳಿಸುವಂತೆಯೂ ವಾಗ್ದಾನಮಾಡಿದನು. ಅದರಂತೆಯೇ ಬ್ರಹ್ಮವೇತ್ತರಾದ ಋಷಿಮುನಿ ಗಳು ಈಗ ಗೋಪಿಯರಾಗಿ ಹುಟ್ಟಿರುವರು. ಶ್ರೀರಾಮಾವತಾರದಲ್ಲಿ ತಾನುಮಾಡಿದ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕಾಗಿ ಸತ್ಯವ್ರತ ನಾದ ಭಗವಂತನು ಅತ್ಯಂತಪುಣ್ಯದಿವಸವಾದ ಮಾರ ಶಿರ ಶುಕ್ಲ ಪಾಡ್ಯ ಮಿಯ ದಿವಸ, ಯಮುನಾಜಲದಲ್ಲಿ ಗೋಪಿಯರು ಮಂಗಳಸ್ನಾನ ಮಾಡುತ್ತಿರುವ ಸಮಯವನ್ನು ತಿಳಿದು, ಅವರ ವಸ್ತುಗಳನ್ನ ಸಹ ರಿಸಿ, ನದೀತೀರದಲ್ಲಿರುವ ಕಡಗದ ಮರವನ್ನೇರಿ ಕುಳಿತನು. ಗೋಪಿ ಯರು ತಮ್ಮ ವಸ್ತ್ರಗಳನ್ನು ಕಾಣದೆ, ಸ್ಪಲ್ಪ ಹೊತ್ತು ವಿಚಾರಮಗ್ನ ರಾಗಿದ್ದು, ಅದು ಕೃಷ್ಣನ ಕಾವ್ಯವೆಂದರಿತು, ವಸ್ತ್ರಗಳನ್ನು ಕೊಡೆಂ ದು ಬೇಡಲಾಗಿ ವಿಗಳಿತವರಾದ ಅವರಿಂದ ನಮಸ್ಕಾರಗಳನ್ನು ಪಡೆದು ವಸ್ತ್ರಗಳನ್ನ ನುಗ್ರಹಿಸಿದನು. ಭಗವಂತನ ದಿವ್ಯಸಂದರ್ಶ ನಾಪೇಕ್ಷಿಗಳಾದ ಬ್ರಹ್ಮನಿರು ಅಜ್ಞಾನಾವರಣವನ್ನು ಪರಿತ್ಯಜಿಸಿದ ಹೊರತು, ಹೀಗೆ ಪರಮಾರಸಿದ್ದಿಯಾಗುವುದಿಲ್ಲವೋ, ಅದರಂತೆಯೇ
_<noinclude></noinclude>
gpd6h6mbeag57il79bbfj2dnxu0o3jt
320777
320776
2026-05-19T10:07:01Z
Hariprasad Shetty10
7490
320777
proofread-page
text/x-wiki
<noinclude><pagequality level="1" user="Hariprasad Shetty10" />{{rh|left=|center=ಚತುರ್ಥಾ೦ಕ೦.|right=೧೨೩}}</noinclude>ನಾದ ಕಾಳೀಯನನ್ನು ಮರ್ದಿಸಿ ಸಮುದ್ರಕ್ಕೆ ಹೊರಡಿಸಿದನು. ದಾವಾಗ್ನಿಯನ್ನು ನುಂಗಿ ಗೋವುಗಳನ್ನೂ ಗೋವಸಂಘವನ್ನೂ ಕಾಪಾಡಿದನು, ಕ್ಷುದ್ರ ಪೂಜಾರೂಪವಾದ ಇಂದ್ರಯಾಗವನ್ನು ನಿಲ್ಲಿಸಿ ಅಹಿಂ ಸಾಧರ್ಮವನ್ನು ಸ್ಥಾಪಿಸಿದನು. ಗೋವರ್ಧನಪರ್ವತವನ್ನು ಬೆರಳಿನಿಂದೆತ್ತಿ ದೇವೇಂದ್ರನ ಗರ್ವವನ್ನು ಭಂಗಪಡಿಸಿದನು. ಇಂತು ಗೋಪಾಲಬಾಲ ನಂದದಿ ಭಗವಂತನು ತೋರ್ಪಡಿಸುತ್ತಿರುವ ಲೀಲಾ ವಿನೋದಗಳು ಒಂದೊಂದೂ ಅತ್ಯದ್ಭುತವಾಗಿರುವುವು. ಸರ್ವಜ್ಞನಾದ ತಾನು ಶ್ರೀ ರಾಮಾವತಾರವನ್ನು ಧರಿಸಿ ಆರಣ್ಯವಾಸದಲ್ಲಿದ್ದಾಗ, ಸಚ್ಚಿದಾನಂದ ಸ್ಪರೂಪನಾದ ತನ್ನನ್ನು ನೋಡಿ ಬ್ರಹ್ಮರ್ಷಿಗಳು ಸಹ ಭ್ರಮಿಸುವಂತೆ ರಾರಾಜಿಸಿದನು. ಆಗ ತನ್ನ ಸರ್ವಾಂಗ ಸೌಂದರವನ್ನು ನೋಡಿ ಸಮ್ಮೋಹಿತರಾದ ಬ್ರಹ್ಮರ್ಷಿಗಳು, ತನ್ನನ್ನು ಆಲಿಂಗನ ಮಾಡಿ ಕೊಳ್ಳಬೇಕೆಂದು ಬಯಸಿದಾಗ, ಅವರ ಅಭಿಷ್ಟ್ಯವು ಆಗ ಸಾಧ್ಯವಿಲ್ಲವೆಂತಲೂ, ತಾನು ಕೃಷ್ಣಾವತಾರವನ್ನು ಧರಿಸಿದಾಗ ಬ್ರಹ್ಮಋಷಿಗಳೆಲ್ಲರೂ ಗೋಕುಲದಲ್ಲಿ ಗೋಪಸ್ತ್ರೀಯರಾಗಿ ಹುಟ್ಟಬೇಕಂತಲೂ, ಹಾಗೆ ಹುಟ್ಟಿದಾಗ ಅವರ ಇಷ್ಟಾಥ್ಯವನ್ನು ಸಫಲಗೊಳಿಸುವಂತೆಯೂ ವಾಗ್ದಾನಮಾಡಿದನು. ಅದರಂತೆಯೇ ಬ್ರಹ್ಮವೇತ್ತರಾದ ಋಷಿಮುನಿಗಳು ಈಗ ಗೋಪಿಯರಾಗಿ ಹುಟ್ಟಿರುವರು. ಶ್ರೀರಾಮಾವತಾರದಲ್ಲಿ ತಾನುಮಾಡಿದ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕಾಗಿ ಸತ್ಯವ್ರತ ನಾದ ಭಗವಂತನು ಅತ್ಯಂತಪುಣ್ಯದಿವಸವಾದ ಮಾರ್ಗಶಿರ ಶುಕ್ಲ ಪಾಡ್ಯಮಿಯ ದಿವಸ, ಯಮುನಾಜಲದಲ್ಲಿ ಗೋಪಿಯರು ಮಂಗಳಸ್ನಾನ ಮಾಡುತ್ತಿರುವ ಸಮಯವನ್ನು ತಿಳಿದು, ಅವರ ವಸ್ತ್ರಗಳನ್ನಪಹರಿಸಿ, ನದೀತೀರದಲ್ಲಿರುವ ಕಡಗದ ಮರವನ್ನೇರಿ ಕುಳಿತನು. ಗೋಪಿಯರು ತಮ್ಮ ವಸ್ತ್ರಗಳನ್ನು ಕಾಣದೆ, ಸ್ಪಲ್ಪ ಹೊತ್ತು ವಿಚಾರಮಗ್ನರಾಗಿದ್ದು, ಅದು ಕೃಷ್ಣನ ಕಾರ್ಯಯವೆಂದರಿತು, ವಸ್ತ್ರಗಳನ್ನು ಕೊಡೆಂದು ಬೇಡಲಾಗಿ ವಿಗಳಿತವಸ್ತ್ರರಾದ ಅವರಿಂದ ನಮಸ್ಕಾರಗಳನ್ನು ಪಡೆದು ವಸ್ತ್ರಗಳನ್ನನುಗ್ರಹಿಸಿದನು. ಭಗವಂತನ ದಿವ್ಯಸಂದರ್ಶನಾಪೇಕ್ಷಿಗಳಾದ ಬ್ರಹ್ಮನಿಷ್ಠರು ಅಜ್ಞಾನಾವರಣವನ್ನು ಪರಿತ್ಯಜಿಸಿದ ಹೊರತು, ಹೀಗೆ ಪರಮಾರ್ಥಸಿದ್ಧಿಯಾಗುವುದಿಲ್ಲವೋ, ಅದರಂತೆಯೇ<noinclude></noinclude>
cmd5wo9kj9njwi4u92grrvea2svznpu
320778
320777
2026-05-19T10:07:16Z
Hariprasad Shetty10
7490
/* Proofread */
320778
proofread-page
text/x-wiki
<noinclude><pagequality level="3" user="Hariprasad Shetty10" />{{rh|left=|center=ಚತುರ್ಥಾ೦ಕ೦.|right=೧೨೩}}</noinclude>ನಾದ ಕಾಳೀಯನನ್ನು ಮರ್ದಿಸಿ ಸಮುದ್ರಕ್ಕೆ ಹೊರಡಿಸಿದನು. ದಾವಾಗ್ನಿಯನ್ನು ನುಂಗಿ ಗೋವುಗಳನ್ನೂ ಗೋವಸಂಘವನ್ನೂ ಕಾಪಾಡಿದನು, ಕ್ಷುದ್ರ ಪೂಜಾರೂಪವಾದ ಇಂದ್ರಯಾಗವನ್ನು ನಿಲ್ಲಿಸಿ ಅಹಿಂ ಸಾಧರ್ಮವನ್ನು ಸ್ಥಾಪಿಸಿದನು. ಗೋವರ್ಧನಪರ್ವತವನ್ನು ಬೆರಳಿನಿಂದೆತ್ತಿ ದೇವೇಂದ್ರನ ಗರ್ವವನ್ನು ಭಂಗಪಡಿಸಿದನು. ಇಂತು ಗೋಪಾಲಬಾಲ ನಂದದಿ ಭಗವಂತನು ತೋರ್ಪಡಿಸುತ್ತಿರುವ ಲೀಲಾ ವಿನೋದಗಳು ಒಂದೊಂದೂ ಅತ್ಯದ್ಭುತವಾಗಿರುವುವು. ಸರ್ವಜ್ಞನಾದ ತಾನು ಶ್ರೀ ರಾಮಾವತಾರವನ್ನು ಧರಿಸಿ ಆರಣ್ಯವಾಸದಲ್ಲಿದ್ದಾಗ, ಸಚ್ಚಿದಾನಂದ ಸ್ಪರೂಪನಾದ ತನ್ನನ್ನು ನೋಡಿ ಬ್ರಹ್ಮರ್ಷಿಗಳು ಸಹ ಭ್ರಮಿಸುವಂತೆ ರಾರಾಜಿಸಿದನು. ಆಗ ತನ್ನ ಸರ್ವಾಂಗ ಸೌಂದರವನ್ನು ನೋಡಿ ಸಮ್ಮೋಹಿತರಾದ ಬ್ರಹ್ಮರ್ಷಿಗಳು, ತನ್ನನ್ನು ಆಲಿಂಗನ ಮಾಡಿ ಕೊಳ್ಳಬೇಕೆಂದು ಬಯಸಿದಾಗ, ಅವರ ಅಭಿಷ್ಟ್ಯವು ಆಗ ಸಾಧ್ಯವಿಲ್ಲವೆಂತಲೂ, ತಾನು ಕೃಷ್ಣಾವತಾರವನ್ನು ಧರಿಸಿದಾಗ ಬ್ರಹ್ಮಋಷಿಗಳೆಲ್ಲರೂ ಗೋಕುಲದಲ್ಲಿ ಗೋಪಸ್ತ್ರೀಯರಾಗಿ ಹುಟ್ಟಬೇಕಂತಲೂ, ಹಾಗೆ ಹುಟ್ಟಿದಾಗ ಅವರ ಇಷ್ಟಾಥ್ಯವನ್ನು ಸಫಲಗೊಳಿಸುವಂತೆಯೂ ವಾಗ್ದಾನಮಾಡಿದನು. ಅದರಂತೆಯೇ ಬ್ರಹ್ಮವೇತ್ತರಾದ ಋಷಿಮುನಿಗಳು ಈಗ ಗೋಪಿಯರಾಗಿ ಹುಟ್ಟಿರುವರು. ಶ್ರೀರಾಮಾವತಾರದಲ್ಲಿ ತಾನುಮಾಡಿದ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕಾಗಿ ಸತ್ಯವ್ರತ ನಾದ ಭಗವಂತನು ಅತ್ಯಂತಪುಣ್ಯದಿವಸವಾದ ಮಾರ್ಗಶಿರ ಶುಕ್ಲ ಪಾಡ್ಯಮಿಯ ದಿವಸ, ಯಮುನಾಜಲದಲ್ಲಿ ಗೋಪಿಯರು ಮಂಗಳಸ್ನಾನ ಮಾಡುತ್ತಿರುವ ಸಮಯವನ್ನು ತಿಳಿದು, ಅವರ ವಸ್ತ್ರಗಳನ್ನಪಹರಿಸಿ, ನದೀತೀರದಲ್ಲಿರುವ ಕಡಗದ ಮರವನ್ನೇರಿ ಕುಳಿತನು. ಗೋಪಿಯರು ತಮ್ಮ ವಸ್ತ್ರಗಳನ್ನು ಕಾಣದೆ, ಸ್ಪಲ್ಪ ಹೊತ್ತು ವಿಚಾರಮಗ್ನರಾಗಿದ್ದು, ಅದು ಕೃಷ್ಣನ ಕಾರ್ಯಯವೆಂದರಿತು, ವಸ್ತ್ರಗಳನ್ನು ಕೊಡೆಂದು ಬೇಡಲಾಗಿ ವಿಗಳಿತವಸ್ತ್ರರಾದ ಅವರಿಂದ ನಮಸ್ಕಾರಗಳನ್ನು ಪಡೆದು ವಸ್ತ್ರಗಳನ್ನನುಗ್ರಹಿಸಿದನು. ಭಗವಂತನ ದಿವ್ಯಸಂದರ್ಶನಾಪೇಕ್ಷಿಗಳಾದ ಬ್ರಹ್ಮನಿಷ್ಠರು ಅಜ್ಞಾನಾವರಣವನ್ನು ಪರಿತ್ಯಜಿಸಿದ ಹೊರತು, ಹೀಗೆ ಪರಮಾರ್ಥಸಿದ್ಧಿಯಾಗುವುದಿಲ್ಲವೋ, ಅದರಂತೆಯೇ<noinclude></noinclude>
nyqofk1fabmlu13in4xk0l6b1fonged
ಪುಟ:ಶ್ರೀ ಕೃಷ್ಣ ಲೀಲೆ.djvu/೧೪೦
104
68814
320779
139400
2026-05-19T10:10:19Z
Hariprasad Shetty10
7490
/* ಪರಿಶೀಲಿಸಲಾಗಿಲ್ಲ */
320779
proofread-page
text/x-wiki
<noinclude><pagequality level="1" user="Hariprasad Shetty10" />{{rh|left=೧೨೪|center=|right=ಕೃಷ್ಣ ಲೀಲೆ}}</noinclude>
ಪರಬ್ರಹವರ್ತಿಯಾದ ತನ್ನ ಅದ್ರಾಕೃತ ದಿವ್ಯಸಂದರ್ಶನವನ್ನು ಮಾಡಬೇಕೆಂದಪೇಕ್ಷಿಸಿದ ಗೋಪಿಯರ ವಸ್ತ್ರಗಳೆಂಬ ಅಜ್ಞಾನಾವ ರಣಗಳನ್ನು ಅಪಹರಿಸಿ, ಅವರಿಗೆ ತನ್ನ ಅಮಾನುಷವಾದ ಪರಂಜ್ಯೋತಿ ಸುರೂಪಸಂದರ್ಶನವನ್ನು ಅನುಗ್ರಹಿಸಿ ತನ್ಮೂಲಕವಾಗಿ ಶ್ರೀರಾಮಾ ವತಾರದಲ್ಲಿ ತಾನು ಮಾಡಿದ್ದ ವಾಗ್ದಾನವನ್ನು ಸಫಲಗೊಳಿಸಿದನು, ಒಮ್ಮೆ ಅವರು ತಮ್ಮ ಪೂರ್ವಸತಿಯುಂಟಾಗಿರುವರು. ಮತ್ತೊಮ್ಮೆ ಭಗವನ್ನಾಯೆಗೆ ಸಿಲುಕಿ ಅದನ್ನು ಮರೆತು ಪರಿತಪಿಸುವರು. ಇಂತು ಬ್ರಹ್ಮರ್ಷಿಗಳಾದ ಗೋಪಿಯರ ಸ್ಥಿತಿಯೇ ಇರೀತಿಯಾಗಿರುವಲ್ಲಿ ಕೇವಲ ಆಹಾರನಿದ್ರಾದಿ ತುಚ್ಛಭೋಗಗಳಲ್ಲಿ ಮಗ್ನರಾಗಿರುವ ನರವರು ಗಳಿಗೆ ವೈವಶೀಲೆಗಳು ಅರ್ಥವಾಗಬಲ್ಲವೆ | ಪಾಂಡುರೋಗಿಯ ಕಣ್ಣ ಆಗ ಪ್ರಪಂಚವೆಲ್ಲವೂ ಹಳದಿಯಾಗಿ ಕಾಣುವಂತೆ, ಕೇವಲ ಲೌಕಿಕ ಕ್ಷರ ಮತ್ರರಿಗೂ, ಧನಾಧಿಕಾರ ಮದಾಂಧರಾದ ಡಾಂಬಿಕರಿಗೂ, ಭ ಗವದ್ಗೀಲಾಸಗಳು ವಿಲಕ್ಷಣವಾಗಿ ಕಾಣುವುದರಲ್ಲಿ ಆಶ್ರವೇನು? ನಿದರ್ಶ ನಕ್ಕ ಕಂಸನೊಬ್ಬನೇ ಸಾಕಾಗಿರುವನು. ಈ ದುರಭಿಮಾನಿಯು ಐಕ್ಷ ರದಲ್ಲಿಯೂ, ಅಧಿಕಾರದಲ್ಲಿಯೂ, ಪ್ರತಾಪದಲ್ಲಿಯೂ, ತಾನೇ ಅಗ್ರ ಗಣ್ಯನೆಂತಲೂ, ತನಗೆ ಸಮಾನವಾದ ತಿಳಿವಳಿಕ ಯುಂಟಾದವರು, ಮತ್ತಾರೂ ಇಲ್ಲವೆಂತಲೂ ಕೊಬ್ಬಿರುವನು. ತನ್ನ ವಿನಾಶಕಾಲವನ್ನ ರಿಯದೆ, ಋಷಿಮುನಿಗಳನ4, ಬಚ್ಚವೇತ್ತರಾದ ಸಾಧುಜನರನ್ನೂ ಸಾಧೀಮಣಿಯರನ ಬಗೆಬಗೆಯ ಸುತ್ತಲೂ, ದ್ವೇಷಿಸು ತಲೂ ಉನ್ಮತ್ತನಾಗಿರುವನು. ತನ್ನ ತಂದೆಯನ್ನೆ ಸೆರೆಯಲ್ಲಿ ಬಂಧಿ ಸಿರುವನು. ಮೂರ್ಖನಾದ ಕಂಸನಿಗೆ ಲೇವಾದರೂ ವಿವೇಕವಿಲ್ಲ ವಲ್ಲಾ ! ಪ್ರಪಂಚದಲ್ಲಿ ಯಾವ ಮನುಷ್ಯನೇ ಆಗಲಿ, ತನ್ನ ಹಿರಿಯರ ನ್ನು ಅವಿವೇಕಿಗಳೆಂದು 'ತಾನು ಅಲ್ಲಗಳೆಯುವುದಾದರೆ ತನ್ನ ಮಕ್ಕಳು ಮೊಮ್ಮಕ್ಕಳು ಮುಂತಾದವರು ತನ್ನನ್ನು ವಜ್ರಕುಂಠನೆಂದು ದೂಷಿಸ ಲೇ ದೂಷಿಸುತ್ತಾರೆಂಬ ಪರಿಜ್ಞಾನವಿಲ್ಲದೆ ತನಗೆ ಎದುರಿಲ್ಲವೆಂದು ಗರ್ವಿಸಿ ಹಿರಿಯರಾದ ಋಷಿಮುನಿಗಳನ್ನು ದೂಷಿಸುತ್ತ ಹಾರಿಬೀಳು ತಿರುವನು. ಆಗಲಾಗಲಿ! ಇವನ ವಿನಾಶಕಾಲವೂ ಹಿತ್ರದಲ್ಲಿಯೇ ಎದಿರುನೋಡುತ್ತಿರುವುದಲ್ಲವೆ! * ವಿನಾಶಕಾಲೇ ವಿಪರೀತಬು” ಈ<noinclude></noinclude>
mwo25kmnh63u0n344mwtoj6qquw9m2h
320788
320779
2026-05-19T10:25:19Z
Hariprasad Shetty10
7490
320788
proofread-page
text/x-wiki
<noinclude><pagequality level="1" user="Hariprasad Shetty10" />{{rh|left=೧೨೪|center=|right=ಕೃಷ್ಣ ಲೀಲೆ}}</noinclude>ಪರಬ್ರಹವರ್ತಿಯಾದ ತನ್ನ ಅದ್ರಾಕೃತ ದಿವ್ಯಸಂದರ್ಶನವನ್ನು ಮಾಡಬೇಕೆಂದಪೇಕ್ಷಿಸಿದ ಗೋಪಿಯರ ವಸ್ತ್ರಗಳೆಂಬ ಅಜ್ಞಾನಾವರಣಗಳನ್ನು ಅಪಹರಿಸಿ, ಅವರಿಗೆ ತನ್ನ ಅಮಾನುಷವಾದ ಪರಂಜ್ಯೋತಿ ಸ್ವರೂಪಸಂದರ್ಶನವನ್ನು ಅನುಗ್ರಹಿಸಿ ತನ್ಮೂಲಕವಾಗಿ ಶ್ರೀರಾಮಾವತಾರದಲ್ಲಿ ತಾನು ಮಾಡಿದ್ದ ವಾಗ್ದಾನವನ್ನು ಸಫಲಗೊಳಿಸಿದನು. ಒಮ್ಮೆ ಅವರು ತಮ್ಮ ಪೂರ್ವಸ್ಮ್ರತಿಯುಂಟಾಗಿರುವರು. ಮತ್ತೊಮ್ಮೆ ಭಗವನ್ಮಾಯೆಗೆ ಸಿಲುಕಿ ಅದನ್ನು ಮರೆತು ಪರಿತಪಿಸುವರು. ಇಂತು ಬ್ರಹ್ಮರ್ಷಿಗಳಾದ ಗೋಪಿಯರ ಸ್ಥಿತಿಯೇ ಈ ರೀತಿಯಾಗಿರುವಲ್ಲಿ ಕೇವಲ ಆಹಾರನಿದ್ರಾದಿ ತುಚ್ಛಭೋಗಗಳಲ್ಲಿ ಮಗ್ನರಾಗಿರುವ ನರಪಶುಗಳಿಗೆ ದೈವಲೀಲೆಗಳು ಅರ್ಥವಾಗಬಲ್ಲವೆ! ಪಾಂಡುರೋಗಿಯ ಕಣ್ಗಳಿಗೆ ಪ್ರಪಂಚವೆಲ್ಲವೂ ಹಳದಿಯಾಗಿ ಕಾಣುವಂತೆ, ಕೇವಲ ಲೌಕಿಕ ಕ್ಷರ ಮತ್ರರಿಗೂ, ಧನಾಧಿಕಾರ ಮದಾಂಧರಾದ ಡಾಂಬಿಕರಿಗೂ, ಭ ಗವದ್ಗೀಲಾಸಗಳು ವಿಲಕ್ಷಣವಾಗಿ ಕಾಣುವುದರಲ್ಲಿ ಆಶ್ರವೇನು? ನಿದರ್ಶ ನಕ್ಕ ಕಂಸನೊಬ್ಬನೇ ಸಾಕಾಗಿರುವನು. ಈ ದುರಭಿಮಾನಿಯು ಐಕ್ಷ ರದಲ್ಲಿಯೂ, ಅಧಿಕಾರದಲ್ಲಿಯೂ, ಪ್ರತಾಪದಲ್ಲಿಯೂ, ತಾನೇ ಅಗ್ರ ಗಣ್ಯನೆಂತಲೂ, ತನಗೆ ಸಮಾನವಾದ ತಿಳಿವಳಿಕ ಯುಂಟಾದವರು, ಮತ್ತಾರೂ ಇಲ್ಲವೆಂತಲೂ ಕೊಬ್ಬಿರುವನು. ತನ್ನ ವಿನಾಶಕಾಲವನ್ನ ರಿಯದೆ, ಋಷಿಮುನಿಗಳನ4, ಬಚ್ಚವೇತ್ತರಾದ ಸಾಧುಜನರನ್ನೂ ಸಾಧೀಮಣಿಯರನ ಬಗೆಬಗೆಯ ಸುತ್ತಲೂ, ದ್ವೇಷಿಸು ತಲೂ ಉನ್ಮತ್ತನಾಗಿರುವನು. ತನ್ನ ತಂದೆಯನ್ನೆ ಸೆರೆಯಲ್ಲಿ ಬಂಧಿ ಸಿರುವನು. ಮೂರ್ಖನಾದ ಕಂಸನಿಗೆ ಲೇವಾದರೂ ವಿವೇಕವಿಲ್ಲ ವಲ್ಲಾ ! ಪ್ರಪಂಚದಲ್ಲಿ ಯಾವ ಮನುಷ್ಯನೇ ಆಗಲಿ, ತನ್ನ ಹಿರಿಯರ ನ್ನು ಅವಿವೇಕಿಗಳೆಂದು 'ತಾನು ಅಲ್ಲಗಳೆಯುವುದಾದರೆ ತನ್ನ ಮಕ್ಕಳು ಮೊಮ್ಮಕ್ಕಳು ಮುಂತಾದವರು ತನ್ನನ್ನು ವಜ್ರಕುಂಠನೆಂದು ದೂಷಿಸ ಲೇ ದೂಷಿಸುತ್ತಾರೆಂಬ ಪರಿಜ್ಞಾನವಿಲ್ಲದೆ ತನಗೆ ಎದುರಿಲ್ಲವೆಂದು ಗರ್ವಿಸಿ ಹಿರಿಯರಾದ ಋಷಿಮುನಿಗಳನ್ನು ದೂಷಿಸುತ್ತ ಹಾರಿಬೀಳು ತಿರುವನು. ಆಗಲಾಗಲಿ! ಇವನ ವಿನಾಶಕಾಲವೂ ಹಿತ್ರದಲ್ಲಿಯೇ ಎದಿರುನೋಡುತ್ತಿರುವುದಲ್ಲವೆ! * ವಿನಾಶಕಾಲೇ ವಿಪರೀತಬು” ಈ<noinclude></noinclude>
6xrrs3ccmubut4iavkh9i7pf3tr3d6s
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೧೫
104
89228
320634
233233
2026-05-18T14:02:44Z
Shreelatha.Halemane
7642
/* Validated */
320634
proofread-page
text/x-wiki
<noinclude><pagequality level="4" user="Shreelatha.Halemane" />{{rh|ಶಾಪಾದಪಿ ವರಾದಪಿ!||೯೧}}</noinclude>ವೇನೆಂದರೆ|ಕಾರಣವೇನೆಂದರೆ, ಅವಳು ಆತನಿಗೆ ಪತ್ನಿಯೆಂದು ಬೇಕಾಗಿದ್ದಳು. ಸದಾಕಾಲವೂ ಅವಳನ್ನು ಉಪಭೋಗಿಸಬೇಕೆಂಬ ಲಾಲಸೆ ಅವನದಾಗಿತ್ತು. {{bold|“ಭಾರ್ಯಾ ಮೇ ಭವ ಸುಶ್ರೋಣಿ ಯಥಾ ಮಂಡೋದರೀ ತಥಾ |”}} “ಹೇ ಸುಂದರಿ!
ಮಂಡೋದರಿಯು ಹೇಗೋ ಹಾಗೆ ನೀನು ನನ್ನ ಪತ್ನಿಯಾಗು!” ಎಂಬ ಸ್ಪಷ್ಟ
ಉಲ್ಲೇಖವು ಮಹಾಭಾರತದ ವನಪರ್ವದಲ್ಲಿ (೨೮೧-೧೬) ಬಂದಿದೆ. ತನ್ನ
ಐಶ್ವರ್ಯ-ವೈಭವಗಳಿಂದ ಅವಳ ಮನಸ್ಸನ್ನು ಸೆಳೆಯಬೇಕೆಂದು ಆತನು
ಬಯಸಿದ್ದನು; ಆ ಕಾರಣ ಅನ್ಯಸ್ತ್ರೀಯರನ್ನು ಬಲಾತ್ಕರಿಸಿದಂತೆ ಸೀತೆಯೊಡನೆ
ನಡೆದುಕೊಂಡಿಲ್ಲ. ರಾವಣನ ವಧೆಗೆ ತಕ್ಕ ಪರಿಸ್ಥಿತಿ ಒದಗಲು, ಸೀತೆಯು
ಲಂಕೆಯಲ್ಲಿರುವದು ಆವಶ್ಯಕವಿತ್ತು. ರಾವಣನು ಸೀತೆಯನ್ನು ಲಂಕೆಗೆ ಸಾಗಿಸಿದ
ಘಟನೆಯು ರಾಮ-ರಾವಣರ ಯುದ್ಧಕ್ಕೆ ಪ್ರಮುಖ ಕಾರಣವಯಿತು.<br>
{{gap}}ತನ್ನನ್ನು ಪತಿಯಾಗಿ ಸ್ವೀಕರಿಸಬೇಕೆಂದು ರಾವಣನು ಸೀತೆಯ ಬಳಿ
ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದವು; ಅಷ್ಟೇ ಅಲ್ಲದೆ, ಸೀತೆಯು ಆತನನ್ನು
ಬಿರುಸಾದ ವಚನಗಳಿಂದ ತಿರಸ್ಕರಿಸಿದಳು. ಆತನು ಅವಳನ್ನು ಕ್ರೂರ ರಾಕ್ಷಸಿಯರ
ಸರ್ಪಕಾವಲಿನಲ್ಲಿಟ್ಟನು. ಯಾರ ಕಣ್ಣಿಗೂ ಅವಳ ನಖದರ್ಶನ ಕೂಡ ಆಗಬಾರದಂತೆ
ಭದ್ರವ್ಯವಸ್ಥೆ ಮಾಡಿದನು. ಹೀಗಿದ್ದರೂ ಹನುಮಂತ ಮತ್ತು ಇಂದ್ರ ಇವರು
ರಾವಣನಿಗೆ ಸುಳಿವು ಕೊಡದೆ ಸೀತೆಯನ್ನು ಭೇಟಿಯಾಗಿ ಅವಳ ನೈತಿಕ
ಧೈರ್ಯವನ್ನು ಹೆಚ್ಚಿಸಿದರು. ಇಷ್ಟೊಂದು ಕಾವಲಿನಲ್ಲಿದ್ದ ಸೀತೆಯ ಶೀಲಗೆಡದೆ
ಉಳಿದದ್ದು ಸೋಜಿಗವಾಗಿದೆ. ಈ ಅಬಲೆಯ ಪ್ರತೀಕಾರವನ್ನು ರಾವಣನು
ದುರ್ಲಕ್ಷ್ಯಿಸಬಹುದಿತ್ತು. ಇಂಥ ಪರಿಸ್ಥಿತಿಯಲ್ಲಿ ಸೀತೆಯ ಮುಂದೆ ಎರಡು
ಮಾರ್ಗಗಳಿದ್ದವು- ಆತ್ಮಹತ್ಯೆ ಇಲ್ಲವೇ ರಾವಣನಿಗೆ ಶರಣಾಗುವದು.</br>
'''ಸೀತೆಯ ಆತ್ಮಹತ್ಯೆಯ ಪ್ರಯತ್ನಗಳು'''</br>
{{gap}}ರಾವಣನು ತನ್ನನ್ನು ಕೊಲ್ಲಬಹುದೆಂಬ ಅಂಜಿಕೆಯು ಸೀತೆಗೆ ಇತ್ತು.
ಹೀಗೆ ಸಾಯುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದು ಲೇಸೆಂದು ಭಾವಿಸಿದಳು.
ಬದುಕಿಗೆ ಬೇಸತ್ತು ಅವಳು ಎರಡು ಬಾರಿ ಆತ್ಮಹತ್ಯೆಯ ಪ್ರಯತ್ನವನ್ನು
ಮಾಡಿದಳು.
<small><poem>
'''ಶೋಕಾಭಿತಪ್ತಾ ಬಹುಧಾ ವಿಚಿಂತ್ಯ ಸೀತಾಥ ವೇಣೀಗ್ರಥನಂ ಗೃಹೀತ್ವಾ |'''
'''ಉದ್ಬದ್ಧ್ಯ ವೇಣ್ಯುದ್ಗ್ರಥನೇನ ಶೀಘ್ರಮಹಂ ಗಮಿಷ್ಯಾಮಿ ಯಮಸ್ಯ ಮೂಲಮ್ ||''' </small></poem></br><noinclude></noinclude>
fyv01ye96ap3znpvmdkv07uxpmq1jpj
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೯೨
104
89505
320635
279752
2026-05-18T14:04:43Z
Shreelatha.Halemane
7642
/* Validated */
320635
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೨೬೮|center=|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
<br/>ನಿನ್ನ ಉದರದಿಂದ ಜನಿಸುವನು. ಎಲೈ ಕಮಲನಯನೇ, ನೀನು ಶೋಕಿಸಬೇಡ!”<br/>ಈ ಉದ್ಗಾರಗಳು, ವರವೋ? ಆಶೀರ್ವಾದವೋ? ಎಂಬುದನ್ನು ವಾಲ್ಮೀಕಿಯು<br/>ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಅಯೋಧ್ಯಾ ಕಾಂಡದಲ್ಲಿ 'ವರೆಪ್ಸುಂ' ಎಂಬ ಸ್ಪಷ್ಟ<br/>ನಿರ್ದೇಶವಿದೆ. ಹೀಗಿರುವುದರಿಂದ ಇದು ವರವೇ ಸರಿಯೆನಿಸುತ್ತದೆ.<br/>ಆಶೀರ್ವಾದವಾಗಿರುವುದಿಲ್ಲ.<br/>
{{gap}}ಇದು 'ಯಾಚಿತ' ವರವಾಗಿದೆ.
<br/>{{center|'''೨೧. ಅನಸೂಯೆ < ಸೀತಾ'''}}{{center|'''ಅಯೋಧ್ಯಾಕಾಂಡ/೧೧೮'''}}
{{gap}}ರಾಮ, ಲಕ್ಷ್ಮಣ ಮತ್ತು ಸೀತೆ ಈ ಮೂವರು ಕಾಡಿನಲ್ಲಿ ಸಂಚರಿಸುತ್ತ<br/>'ಅತ್ರಿ' ಋಷಿಯ ಆಶ್ರಮಕ್ಕೆ ಬಂದರು. ಋಷಿಯು ಅವರನ್ನು ಮಕ್ಕಳಂತೆ ಬರಮಾಡಿ<br/>ಕೊಂಡನು. ತನ್ನ ಪತ್ನಿಯಾದ ಅನಸೂಯೆಗೆ ಸೀತೆಯನ್ನು ಬರಮಾಡಿಕೊಳ್ಳಲು<br/>ಹೇಳಿದನು. ಋಷಿಯು ಅನಸೂಯೆಯು ಮಾಡುತ್ತಿದ್ದ ತಪಸ್ಸಿನ ಬಗ್ಗೆ ರಾಮನಿಗೆ<br/>ಹೇಳಿದ್ದನು. ರಾಮನು ಸೀತೆಗೆ ಅನಸೂಯೆಯತ್ತ ಹೋಗಲು ಅನುಮತಿಯನ್ನು<br/>ಕೊಟ್ಟನು. ಸೀತೆಯು ಅನಸೂಯೆಗೆ ಅಭಿವಂದಿಸಿದಳು. ಅನಸೂಯೆಯು<br/>ಸೀತೆಯು ಕ್ಷೇಮ, ಕುಶಲ, ಆರೋಗ್ಯದ ಬಗ್ಗೆ ಕೇಳಿಕೊಂಡು ಅವಳಿಗೆ ಸ್ತ್ರೀಧರ್ಮ,<br/>ಕರ್ತವ್ಯವಗಳನ್ನು ಉಪದೇಶಿಸಿದಳು. ಈ ಉಪದೇಶವು ಸೀತೆಗೆ ತುಂಬಾ<br/>ಹಿಡಿಸಿತು. ಆಗ ಸೀತೆಯು ತನ್ನ ಆಚರಣೆಯ ರೀತಿ, ಪತಿಯ ಬಗ್ಗೆ ತನಗಿದ್ದ<br/>ನಿಷ್ಠೆ ಇವುಗಳನ್ನು ವಿವರಿಸಿ ಹೇಳಿದಳು. ಅದನ್ನು ತಿಳಿದುಕೊಂಡು ಅನಸೂಯೆಗೆ<br/>ಸಂತೋಷವಾಯಿತು. ಆಗ ಸೀತೆಯ ತಲೆಯನ್ನು ಆಘ್ರಾಣಿಸಿ ಅನಸೂಯೆಯು<br/>ಇಂತೆಂದಳು-
{{gap}}'''ನಿಯಮೈರ್ವಿವಿಧೈರಾಪ್ತಂ ತಪೋ ಹಿ ಮಹದಸ್ತಿ ಮೇ ।'''<br/>{{gap}}'''ತತ್ಸಂಶ್ರಿತ್ಯ ಬಲಂ ಸೀತೇ ಛಂದಯೇ ತ್ವಾಂ ಶುಚಿವ್ರತೇ ॥೧೪॥'''<br/>{{gap}}'''ಉಪಪನ್ನಂ ಚ ಯುಕ್ತಂ ಚ ವಚನಂ ತವ ಮೈಥಿಲಿ ।'''<br/>{{gap}}'''ಪ್ರೀತಾ ಚಾಸ್ಮ್ಯು ಚಿತಾಂ ಸೀತೇ ಕರವಾಣಿ ಪ್ರಿಯಂ ಚ ಕಿಮ್ ॥೧೫॥'''
<br/>{{gap}}“ಹಲವಾರು ಬಗೆಯ ನಿಯಮಗಳನ್ನಾಚರಿಸಿ ನಾನು ಮಹಾತಪಸ್ಸಿನ<br/>ಬಲವನ್ನು ಸಂಪಾದಿಸಿದ್ದೇನೆ. ಆ ತಪೋಬಲದ ಆಧಾರದಿಂದ ನೀನು ನನ್ನ<br/>ಹತ್ತಿರ ವರವನ್ನು ಬೇಡಿಕೊಳ್ಳಬೇಕೆಂದು ನನ್ನ ಇಚ್ಛೆಯಾಗಿದೆ. ಎಲೈ ಮೈಥಿಲಿಯೇ,<br/><noinclude></noinclude>
7wjfvr67rnmkqpirpga26toz1dxpylb
ಪುಟ:ಬೆಳಗಿದ ದೀಪಗಳು.pdf/೧೨೯
104
92407
320660
240284
2026-05-18T17:55:29Z
Pragathi. BH
7585
/* Validated */
320660
proofread-page
text/x-wiki
<noinclude><pagequality level="4" user="Pragathi. BH" />{{rh||ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು|೧೦೯}}</noinclude>ನ್ನಿಟ್ಟು, ನಿಷ್ಕ ಪಟವಾದ ಭಾವದಿಂದ ಆಕೆ ಯ ಕೂಡ ನಡೆದುಕೊಳ್ಳುತ್ತಿ
ದ್ದನು. ಆದರೆ, ಭೋಲಾನಾಥನ ಪತ್ನಿ ಯು ಬಾಹ್ಯ ಸ್ವರೂಪದಲ್ಲಿ ಸುಂದರ
೪ಾಗಿದ್ದಂತೆ ಆಕೆಯ ಅಂತರಂಗವು ಚನ್ನಾಗಿದ್ದಿದ್ದಿಲ್ಲ. ಅವಳು ಪ್ರತಿಯೊಂದು
ಮಾತಿಗೆ ಸಂಶಯವನ್ನು ಸತುವ ಸ್ವಭಾವದವಳಾಗಿದ್ದಳು. ಅತ್ತೆಯು
ಸೊಸೆಗಿಂತಲೂ ಎರಡೇ ವರ್ಷಗಳಿಂದ ಹಿರಿಯಳಾಗಿದ್ದಳು. ಇಬ್ಬರೂ
ತರುಣಿಯ: ರು ಸಮಾನ ರೂಪವುಳ್ಳವರಾಗಿದ್ದರೂ ಅವರ ಸ್ವಭಾವವು ಭಿನ್ನ
ವಾಗಿತ್ತು. ಈ ಸ್ಥಿತಿಯ ಮೂಲಕವಾಗಿ ಮತ್ತು ಪುತ್ರರ ಪರಸ್ಪರರ ವರ್ತನ
ಇಲ್ಲಿಯ ಸರಲವಾದ ಹಾಗೂ ಸ್ವಾಭಾವಿಕವಾದ ಎಷ್ಟೋ ಸಂಗತಿಗಳ
ಸಂಬಂಧವಾಗಿ ಭೋಲಾನಾಥನ ಪತ್ನಿಯ ಮನಸ್ಸಿನಲ್ಲಿ ಉತ್ಪನ್ನವಾದ ಇಲ್ಲದ
ಕುತರ್ಕಗಳು ದೃಢವಾಗುತ್ತ ನಡೆದವು. ಭೋಲಾನಾಥನಿಗಾಗಲಿ, ಅವನ
ತಾಯಿಗಾಗಲಿ ಇದರ ಕಲ್ಪನೆಯು ಕೂಡ ಇಲ್ಲದ್ದರಿಂದ, ಮಾತಾಪುತ್ರರಲ್ಲಿದ್ದ
ಪ್ರೇಮದ ಮೂಲಕವಾಗಿ ಆ ಉಭಯ ತರು ಪರಸ್ಪರರನ್ನು ಸ್ನೇಹಿತರಂತೆ
ಭಾವಿಸುತ್ತಿದ್ದರು. ಆದರೆ ಸಂಶಯದಿಂದ ಗ್ರಸ್ತಳಾದ ಗಿರಿಜಾಬಾಯಿಯ
ದೃಷ್ಟಿಗೆ ಈ ಸಂಗತಿಗಳೆಲ್ಲ ಏಪರೀತವಾಗಿ ತೋರಹತ್ತಿದವು. ಗಿರಿಜಾ
ಬಾಯಿಯ ಹೃದಯದಲ್ಲಿದ್ದ ಮರವೆಂಬ ರಾವುಗನ್ನಡಿಯಲ್ಲಿ ನಿಷ್ಕಪಟವು
ಕಪಟವಾಗಿಯೂ ಮಾತೃಪ್ರೇಮವು ವಿಷಯಾಂಧತೆಯಾಗಿಯ ಸಹಜವಾದ
ವೃತ್ತಿಯು ನಿರ್ಲಜ್ಜತೆಯಾಗಿಯ ಕಾಣಹತ್ತಿದವು. ಇರಲಿ,
{{***|4}}
{{gap}}ಭೋಲಾನಾಥನ ದತ್ತಕ ತಂದೆಯ ಹುಚ್ಚು ದಿವಸ ದಿವಸಕ್ಕೆ ಹೆಚ
ಗುತ್ತ ನಡೆಯಿತು. ಇವನಂತೆಯೇ ಇವನ ತಂದೆ, ಅಜ್ಜ ಮುತ್ತಂದಿರು
ಹುಚ್ಚರಾಗಿದ್ದರು, ಹಾಗೂ ಅದರಿಂದಲೇ ಅವರು ಮರಣವನ್ನು ಹೊಂದಿ
ದ್ದರೆಂಬ ತನ್ನ ಮನೆತನದ ಈ ಪೂರ್ವೆತಿಹಾಸವು ಭೋಲಾನಾಥನಿಗೆ
ಗೊತ್ತಾಗಿತ್ತು. ಅದರಿಂದ ಅವನ ಮನಸ್ಸಿನ ಮೇಲೆ ಈ ಪೂರ್ವ ಪರಂ
ಪರೆಯ ಪರಿಣಾಮವು ಬಹು ವಿಲಕ್ಷಣವಾಗಿ ಆಗಹತ್ತಿತ್ತು. ಈ ಕುಟುಂಬಕ್ಕೆ
ಹೊಂದಿದ್ದರಿಂದ ನಾನಾದರೂ ವೃದ್ಧಾಪ್ಯ ಕಾಲದಲ್ಲಿ ಹುಚ್ಚನಾಗುವನೋ
ಏನೋ ' ಎಂಬ ಭೀತಿಯಿಂದ ಅವನು ತಾರುಣ್ಯದಲ್ಲಿಯೇ ಹುಚ್ಚು ಹಿಡಿದವ
ನಂತೆ ಮಾಡ ಹತ್ತಿದ್ದನು. ಈ ಆನುವಂಶಿಕವಾದ ಹುಚ್ಚಿನ ಬಾಧೆಯು<noinclude></noinclude>
lz35z2yql433jfyaac7y5bk5qqw0uf4
ಪುಟ:ಬೆಳಗಿದ ದೀಪಗಳು.pdf/೧೩೦
104
92408
320661
240076
2026-05-18T17:56:11Z
Pragathi. BH
7585
/* Validated */
320661
proofread-page
text/x-wiki
<noinclude><pagequality level="4" user="Pragathi. BH" />{{rh|೧೨೦|ಸಂಪೂರ್ಣ-ಕಥೆಗಳು|}}</noinclude>ಯಾಕೆ ಹಾಗೂ ಹೇಗೆ ಉತ್ಪನ್ನವಾಗುತ್ತದೆಂಬುದರ ಬಗ್ಗೆ ಅವನು ಬಹು
ಪ್ರಯತ್ನ ಪೂರ್ವಕವಾಗಿ ಆಲೋಚಿಸಿದರು. ಆದರೆ, ಚತುರ್ಥ ಸಂಬಂಧದ
ತಾಯಿಯನ್ನು ಹೊರತುಪಡಿಸಿ, ಮನೆತನದ ಸಂಗತಿಗಳನ್ನು ಬಲ್ಲ ಹಿರಿಯರು
ಯಾರೂ ಇಲ್ಲದ್ದರಿಂದ ಅವನಿಗೆ ಈ ಕಾರಣಗಳ ಬಗ್ಗೆ ಏನೂ ಗೊತ್ತಾಗ
ಇದರಿಂದ ಅವನು ಭವಿಷ್ಟನ ಹಾಗೆ ಆಚರಿಸಹತ್ತಿದನು.
ಬರಬರುತ್ತ ತಂದೆ:ತು ಭ, ಮಿಷ್ಟ ತನವೂ ಹುಚ್ಚುತನವೂ ವಿಕೋಪಕ್ಕೆ
ಹೋದವು ಇನ್ನು ಮೇಲೆ ತಾನು ಬಚ್ಚಳ ದಿವಸ ಬಾಳುವದಿಲ್ಲೆಂತಲೂ ತನ್ನ
ಅಂತಕಾಲವು ಸವಿಾಪಿಸಿರುವಂತಲೂ ಭ>ವಿಸಿ ಆ ವೃದ್ಧಗೃಹಸ್ಥನು ಒಂದು
ದಿನ ಮಧ್ಯರಾತ್ರಿಯಲ್ಲಿ ಎಲ್ಲಾ ಗಾಢವಾದ ನಿದ್ರೆಯಲ್ಲಿದ್ದಾಗ ಭೋಲಾನಾಥ
ನನ್ನು ಮೆಲ್ಲ: ಎಬ್ಬಿಸಿದನು. ಅವನ ಕೈ ಹಿಡಿದು ಅವನ ಕೂಡ ಮಾತಾಡುತ್ತ
ಮಾತಾಡುತ್ತ ತನ್ನ ವಿಸ್ತಾರವಾದ ಮನೆಯ ಹೊರ ಅಂಗಳದಲ್ಲಿ ಉತ್ತರ
ದಿಕ್ಕಿನ ಕೊನೆಯ ಭಾಗದಲ್ಲಿದ್ದ ಒಂದು ಕಟ್ಟಡದ ಮಾರ್ಗವನ್ನು ಹಿಡಿದು
ಅವನು ಹೊ?ಗುತ್ತಿದನು. "ಭೋಲಾನಾಥನೆ, ಇದೇ ಉತ್ತರ ದಿಕ್ಕು.
ಎದುರಿನಲ್ಲಿ ಕಾಣುವ ಗಿಡದ ತಲೆಯ ಮೇಲೆ ಧ್ರುವನಕ್ಷತ್ರವಿರಬೇಕು.
ಮೊದಲು ಅದು ನನಗೆ ಕಾಣುತ್ತಿತ್ತು; ಆದರೆ, ಇತ್ತಿತ್ತಲಾಗಿ ಅದು ನನಗೆ
ಕಾಣದಂತಾಗಿದೆ. ಅದೇನೆ, ನನ್ನ ಮೂಗಿನ ತುದಿಯಾದರೂ ನನಗೆ
ಈಗ ಕಾಣುವದಿಲ್ಲ. ರಾತ್ರಿಯಲ್ಲಿ ನನಗೆ ನಿದ್ದೆ ಯು ಹತ್ತು ವದಿಲ್ಲ. ಹತ್ತಿ
ದರ ಭಯಂಕರವಾದ ಸ್ವಪ್ನಗಳು ಬಿದ್ದು, ಬೆದರಿ ಎದ್ದು ಕೂಡುತ್ತೆ?ನೆ.
ಭಯಂಕರವಾದ ಧ್ವನಿಗಳು ಕೇಳಬರುತ್ತಿವೆ. ಚೀರಾಟದ ಸಪ್ಪಳವನ್ನು
ಕೇಳಿ ಕಿಏಗಳು ಗಡು ಚುಹಾಕಿವೆ
ಆಕಾಳವಿಕಾಳರಾದ ಯಮದೂತರು
ನನ್ನ ಸುತ್ತಲೂ ಭಯಾನಕ ವಾವ ನರ್ತನವನ್ನು ಮಾಡುತ್ತಾರೆ; ಹಾಗೂ
ತಮ್ಮ ಪಾಶದಿಂದ ನನ್ನನ್ನು ಬಿಗಿಯಲು ಪ್ರಯತ್ನಿಸುತ್ತಾರೆ. ಇಂಥ ಸ್ಥಿತಿ
ಯಲ್ಲಿ ನಾನು ಬಹಳ ದಿನಗಳ ವರೆಗೆ ಬದುಕಿರುವೆನೆಂಬದು ಅಸಾಧ್ಯವು.
ನನ್ನ ಹಿಂದೆ ನೀನು ಎಲ್ಲ ಸಂಗತಿಗಳನ್ನು ಚನ್ನಾಗಿ ನೋಡುತ್ತ ಹೋಗುವಿ
ಎಂದು ನನಗೆ ಪೂರ್ಣ ವಾದ ನಂಬಿಗೆಯಿ: ದೆ ಆದರೆ, ನಿನ್ನ ಪ್ರಪಂಚಕ್ಕೆ
ಬೇಕಾಗುವ ಹಣವು ನಿನಗೆ ಎಲ್ಲಿ ದೊರೆಯುವದೆಂಬ ಸ್ಥಳವನ್ನು ನಿನಗೆ
ತೋರಿಸಬೇಕಾಗಿದೆ ಹಾಗೂ ಅದಕ್ಕಾಗಿಯೇ ನಿನ್ನನ್ನು ಆ ಕಟ್ಟಡದ ಕಡೆಗೆ<noinclude></noinclude>
6d6ux4kyffdm1nu6bz0b795f5oa7sce
ಪುಟ:ಬೆಳಗಿದ ದೀಪಗಳು.pdf/೧೩೧
104
92409
320657
240078
2026-05-18T17:52:54Z
Pragathi. BH
7585
/* Validated */
320657
proofread-page
text/x-wiki
<noinclude><pagequality level="4" user="Pragathi. BH" />{{rh||ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು|೧೨೧}}</noinclude>
ಕರೆದುಕೊಂಡು ಹೋಗುತ್ತಲಿದ್ದೇನೆ. ನಿನಗೆ ಹಣವು ಬೇಕಾದರೆ ಅದು.
ಹುಣ್ಣಿಮೆ ಅಮಾಸೆಗೆ ಮಾತ್ರ ದೊರೆಯುವದು."
{{gap}}ಹೀಗೆ ಮಾತಾಡುತ್ತ ವೃದ್ಧನು ಮುಂದೆ ಸಾಗಿದನು ಲಕ್ಷ ಕೊಟ್ಟು
ಇದನ್ನೆಲ್ಲ ಕೇಳಿದ ಭೋಲಾನಾಥನು ಆಶ್ಚರ್ಯಚಕಿತನಾಗಿ ಒಂದು ಶಬ್ದ
ವನ್ನಾದರೂ ಉಚ್ಚರಿಸದೆ ಆವನ ಬೆನ್ನು ಹತ್ತಿ ನಡೆದನು. ಮುದುಕನು .ಆ
ಕಟ್ಟಡದ ಹೊರಗಿನ ಬಾಗಿಲವನ್ನು ತೆರೆದನು. ಒಳಗೆ ಹೋದ ಬಳಿಕ ನೆಲ
ಮನೆಯು ಹತ್ತಿತು. ನೆಲಮನೆಯ ಕಲ್ಲಿನ ಗೋಡೆಯಲ್ಲಿ ಒಂದು ಗುಪ್ತ
ದ್ವಾರವಿತ್ತು. ಮೊದಲೇ ಅಲ್ಲಿ ಸಿದ್ಧ ಮಾಡಿಡಲ್ಪಟ್ಟ ಯಾವದೋ ಒಂದು
ಕೃತ್ರಿಮ ಸಾಧನದಿಂದ ೪ ದ್ವಾರವನ್ನು ಒಂದು ಮಗ್ಗಲಿಗೆ ಸರಿಸಿ ಉಭಯ
ತರೂ ಒಳ ಹೊಕ್ಕರು ಅಲ್ಲಿದ್ದ ಕೆಲವು ಪಾವಟಣಿಗೆಗಳನ್ನು ಇಳಿದು ಹೋದ
ಬಳಿಕ ಆ ಮುದಕನು ಮಿಣಿಮಿಣಿ ಉರಿಯುವ ಒಂದು ದೀಪವನ್ನು ಹಚ್ಚಿ
ದನು, ಆ ದೀಪದ ಬೆಳಕಿನಲ್ಲಿ ಇಲ್ಲಿ ಕಾಣುತ್ತಿದ್ದ ಒಂದು ಕೋಣೆಯ
ಬಾಗಿಲವನ್ನು ಆ ಮುದುಕನು ತೆರೆದನು.
ಈ ಬಾಗಿಲವನ್ನು ತೆರೆಯುವಾಗ
ಮುದುಕನ ಕೈ ಕಾಲುಗಳು ತೀರ ನಡುಗಹತ್ತಿದವು. ಅವನ ಕೈಯಲ್ಲಿದ್ದ ಕರ
ದೀಪವು ನೆಲಕ್ಕೆ ಬೀಳುತ್ತಿತ್ತು; ಆದರೆ ಭೋಲಾನಾಥನು ಅದನ್ನು ಅವಸರ
ಮಾಡಿ ತನ್ನ ಕೈಯಲ್ಲಿ ಹಿಡಿದನು, ಮುದುಕನು ತೀರ ಗಾಬರಿrಟ್ಟು ಹೋಗಿ,
ದ್ದ ರೂ ಅಂಜಬೇಡ, ಗಾಬರಿಗೊಳ್ಳಬೇಡ ! 'ನಿನ್ನ ಮೈಯಲ್ಲಿ ಬೆವರು
ಯಾಕೆ ಬಿಟ್ಟಿದೆ ? ಇಕೊ ಇಲ್ಲಿ ನೋಡು, ನಮ್ಮ ಸಂಪತ್ತೆಲ್ಲ ಈ ಸ್ಥಳದಲ್ಲಿ
ಸಂಚಿತವಾಗಿದೆ," ಎಂದು ತನ್ನ ಮಗನಿಗೆ ಹೇಳುತ್ತಿದ್ದನು. ಈ ಶಬ್ದಗ
ಳನ್ನು ಕೇಳುತ್ತಿರುವಾಗ ಭೋಲಾನಾಥನ ಲಕ್ಷ್ಯವು ಆಂಧವಾದ ದೀಪದ
ಪ್ರಕಾಶದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ಆ ಕೋಣೆಯೊಳಗಿನ ಭಯಂಕರ
ವಾದ ನೋಟದ ಕಡೆಗೆ ಹೋಯಿತು, ಆ ಕೋಣೆಯಲ್ಲಿ ಬಂಗಾರದ
ಮೋಹರಗಳಿಂದ ತುಂಬಿದ ದೊಡ್ಡ ದೊಡ್ಡ ಹರಿವೆಗಳು ಅನೇಕವಿದ್ದವು.
ಆದರೆ, ಆ ಹರಿವೆಗಳ ಕಡೆಗೆ ತನ್ನ ದೃಷ್ಟಿಯನ್ನು ಚಲ್ಲಲು ಭೋಲಾನಾಥನು
ಅಲ್ಲಿ ಏನು ನೋಡಿದನು ? ಪ್ರತಿಯೊಂದು ಹರಿವೆಯ ಮೇಲೆ, ಭಯಾನಕ
ವಾದ ಹಾಗೂ ಆಕಾಳ ವಿಕ್ರಾಳ ಸ್ವರೂಪವನ್ನು ಧಾರಣಮಾಡಿದ
ಒಂದೊಂದು ಪಿಶಾಚಿಯನ್ನು ಅವನು ನೋಡಿದನು, ಈ ಪಿಶಾಚಿಗಳ<noinclude>{{left|೧೬}}</noinclude>
c8grj3s0j42khsvbdpqgmh63nmemgk7
ಪುಟ:ಬೆಳಗಿದ ದೀಪಗಳು.pdf/೧೩೨
104
92410
320658
240080
2026-05-18T17:53:23Z
Pragathi. BH
7585
/* Validated */
320658
proofread-page
text/x-wiki
<noinclude><pagequality level="4" user="Pragathi. BH" />{{rh|೧೨೨|ಸಂಪೂರ್ಣಿ-ಕಥೆಗಳು|}}</noinclude>ಸ್ವರೂಪಗಳಾದರೂ ನಾನಾವಿಧವಾಗಿದ್ದವು.
ಎಲುಬಿನ ಹಂದರದಂತೆ
ತೋರುವ ವೃದ್ಧ ಪುರುಷರ ರೂಪಗಳನ್ನು ಧಾರಣಮಾಡಿದ ಪಿಶಾಚಿಗಳು
ಕೆಲವು ಹರಿವೆಗಳ ಮೇಲೆ ಅಂಟಿಕೊಂಡು ಕುಳಿತಿದ್ದವು, ಅನಾಥರಾದ ವಿಧ
ವೆಯರ ರೂಪಗಳನ್ನು ಧಾರಣ ಮಾಡಿದ ಪಿಶಾಚಿಗಳು ದೀನರಂತೆ ರೋದನ
ಮಾಡುತ್ತ ತಮ್ಮ ಎದೆಗಳನ್ನು ಬಡೆದುಕೊಳ್ಳುತ್ತ ಕೆಲವು ಹರಿವೆಗಳ ಮೇಲೆ
ಕುಳಿತಿದ್ದವು. ನಿಷಪ್ರಯೋಗದಿಂದ ಕಾಡಿಗೆಯಂತೆ ಕಪ್ಪಾದ ಹಾಗೂ ಚೂರಿಯ
ಗಾಯದ ರಕ್ತ ದಿಂದ ಮಲಿನವಾದ ಅರ್ಭಕರ ರೂಪಗಳನ್ನು ಧಾರಣಮಾಡಿದ
ಪಿಶಾಚಿಗಳು ದೊಡ್ಡ ಧ್ವನಿಯಿಂದ ಚೀರುತ್ತ ಕೆಲವು ಹರಿವೆಗಳ ಮೇಲೆ
ಕುಳಿತಿದ್ದ ವು. ಆ ಭವ್ಯವಾದ ಕೋಣೆಯು ಭೂತಪ್ರೇತ ಪಿಶಾಚ್ಛಾದಿ
ಗಳಿಂದ ದಟಿತವಾಗಿತ್ತು. ಮೈಮೇಲೆ ಗೇಣು ಗೇಣು ಉದ್ದ ಕೂದಲು
ಬೆಳೆದ, ಕಣ್ಣುಗಳೊಳಗಿಂದ ಕಿಡಿಗಳನ್ನು ಉದುರಿಸುವ ಹಾಗೂ ಆನೆಯ
ಸೊಂಡಿಲದಂತೆ ಪುಷ್ಟವಾದ ಮಹಾಭುಜಂಗಗಳು ತಮ್ಮ ಹೆಡೆಗಳನ್ನು
ತೆಗೆದು ಪೂತ್ಕಾರಗಳನ್ನಿಕ್ಕುತ್ತ ಕೆಲವು ಹರಿವೆಗಳ ಮೇಲೆ ಸುರಳೆಯನ್ನು
ಸುತ್ತಿಕೊಂಡು ಕುಳಿತಿದ್ದವು. ಕೆಲವು ಹರಿವೆಗಳಿಂದ ಅಗ್ನಿ ಯ ಜ್ವಾಲೆಗಳು
ಹೊರಬೀಳುತ್ತಿದ್ದವು. ಕೆಲವು ಹರಿವೆಗಳೊಳಗಿನ ಮೋಹರಗಳು ಒಂದು
ಕ್ಷಣಹೊತ್ತು ಭಂಗಾರದವಾಗಿ ತೋರಿದರೆ, ಮತ್ತೊಂದು ಕ್ಷಣದಲ್ಲಿ ಇದ್ದಲೆ
ಯಂತೆ ತೋರುತ್ತಿದ್ದವು ಆ ಕಲ್ಲಿನ ಕೋಣೆಯ ಬಾಗಿಲನು ತೆರದ ಕೂಡಲೆ,
`ಅಲ್ಲಿದ್ದ ಪಿಶಾಚಿಗಳೆಲ್ಲ ಈ ದುಷ್ಟರು ನಮ್ಮ ದ್ರವ್ಯವನ್ನು ಹರಣ ಮಾಡುವ
ದಕ್ಕಾಗಿ ಬಂದರೆಂದು ಕೆಲವು ಚೀರಾಡಹತ್ತಿದವು; ಕೆಲವು ಭಯಂಕರವಾದ
ಧ್ವನಿಯನ್ನು ತೆಗೆದು ಆಕ್ರೋಶಮಾಡಹತ್ತಿದವು; ಹಾಗೂ ಕೆಲವು ಹೊರಗಿ
ನವರು ಒಳಗೆ ಬರಬಾರದೆಂದು ಮೈಮೇಲೆ ಎಚ್ಚರವಿಲ್ಲದಂತೆ ಓಡಿಬಂದು
ಬಾಗಿಲವನ್ನು ಅಡ್ಡಗಟ್ಟಿದವು. ಮುದುಕನ ನಾಲಿಗೆಯು ಗಾಬರಿಯಿಂದ
ತೊದಲಹತ್ತಿತು. ಅವನು ಅಸ್ಪಷ್ಟವಾದ ಶಬ್ದಗಳಿಂದ ತನ್ನ
ಮಗನಿಗೆ ಅಂದದ್ದು : "ಹೂಂ ಮುಂದೆ ಆಗು ; ಯಾವದಾದ
ಕೊಂದು ಕೊಪ್ಪರಿಗೆಯಲ್ಲಿ ಕೈ ಹಾಕಿ ನಿನ್ನ ಬೊಗಸೆ ತುಂಬ ಮೋಹರಗಳನ್ನು
ತ್ವರಿತವಾಗಿ ತೆಗೆದುಕೊಂಡು
ಈ ಪಿಶಾಚಿಗಳು ನಿನ್ನ ಮೈಮೇಲೆ
ಬಂದರೆ, ನೀನು ಅವುಗಳಿಗೆ ಹೆದರಬೇಡ ; ಅವುಗಳ ಕಡೆ ಹೊಡೆದಾಡಿ<noinclude></noinclude>
kev526kkvtvwp6i9n7haq27ezjffb5w
ಪುಟ:ಬೆಳಗಿದ ದೀಪಗಳು.pdf/೧೩೩
104
92411
320659
240082
2026-05-18T17:54:31Z
Pragathi. BH
7585
/* Validated */
320659
proofread-page
text/x-wiki
<noinclude><pagequality level="4" user="Pragathi. BH" />{{rh||ಪೂರ್ವಜನ್ಮದ ವಿಧಿಯು ತಾ ಬೆನ್ನು ಬಿಡದು|೧೨೩}}</noinclude>ಬಡೆದಾಡಿ ಅವುಗಳನ್ನು ಒಂದು ಮಗ್ಗಲಿಗೆ ನೂಕಿ, ಕೊಪ್ಪರಿಗೆಯಲ್ಲಿಯ
ದ್ರವ್ಯವನ್ನು ತೆಗೆದುಕೊಂಡು ಬಾ. ತಂದೆಯು ಹೀಗೆ ಹೇಳಿದರೂ ಮಗ
ನಿಗೆ ಧೈರ್ಯವು ಸಾಲಲೊಲ್ಲದು. ಕಲ್ಲಿನಂತೆ ಸ್ತಬ್ಧವಾಗಿಯೂ ಪ್ರೇತದಂತೆ
ತಣ್ಣಗಾಗಿಯೂ ನಿಂತಿದ್ದ ಮಗನನ್ನು. ನೋಡಿ ಕೊನೆಗೆ ಮುದುಕನೇ
ಮುಂದಾಗಿ ಒಂದು ಕೊಪ್ಪರಿಗೆಯಲ್ಲಿ ಕೈ ಹಾಕಿದನು. ಕೂಡಲೆ, ಅಲ್ಲಿದ್ದ
ಪಿಶಾಚಿಗಳೆಲ್ಲ ಮುದುಕನನ್ನು ಸುತ್ತು ಗಟ್ಟ ಆವನ ಕೈ ಕಾಲು ಚಂಡಿಕೆ
ಗಳನ್ನು ಹಿಡಿದು ಅವನನ್ನು ದರದರ ಎಳೆಯಹತ್ತಿದವು. ಇದನ್ನು ನೋಡಿದ
ಕೂಡಲೆ ಭೋಲಾನಾಥನು ತೀರ ಮೃತಪ್ರಾಯನಾದನು, ಆದರೆ, ಅವನು
ಕೂಡಲೆ, ಎಚ್ಚರವನ್ನು ಹೊಂದಿ ತನ್ನ ತಂದೆಯನ್ನು ತನ್ನ ಕೈವಶ ಮಾಡಿ
ಕೊಳ್ಳಲು ಪ್ರಯತ್ನಿಸಹತ್ತಿದನು. ಮುದುಕನ ಒಂದು ಕೈಯನ್ನು ಹಿಡಿದು
ಪಿಶಾಚಿಗಳು ಅವನನ್ನು ಒಳಗೆ ಜಗ್ಗುತ್ತಿದ್ದವು ; ಮಗನು ಅವನ
ಮತ್ತೊಂದು ಕೈಯನ್ನು ಹಿಡಿದು ಹೊರಗೆ ಜಗ್ಗುತ್ತಿದ್ದನು. ಈ ಜಗಳಾಟ
ದಲ್ಲಿ ಮಗನು ಹಾಗೂ ಹೀಗೂ ಮಾಡಿ ತಂದೆಯನ್ನು ಕೋಣೆಯ ಹೊರಗೆ
ಜಗ್ಗಿ ತಂದು, ಕೋಣೆಯ ಬಾಗಿಲವನ್ನು ಗಟ್ಟಿಯಾಗಿ ಮುಚ್ಚಿಕೊಂಡನು.
ಕೆಲವು ಹೊತ್ತಿನ ಮೇಲೆ ತಂದೆಯು ಎಚ್ಚರಗೊಂಡು, ತಾನು ಎಷ್ಟು
ಮೊಹರಗಳನ್ನು ತಂದಿರುವೆನೆಂಬದನ್ನು ಎಣಿಸಿ, ಅವುಗಳನ್ನು ಸೆರಗಿನಲ್ಲಿ
ಕಟ್ಟಿಕೊಂಡು, ಮಗನ ಹೆಗಲಮೇಲೆ ಕುತ್ತಿಗೆಯನ್ನು ಚೆಲ್ಲಿ ಬಂದ ಹಾದಿ
ಯನ್ನು ಹಿಡಿದು ಹಿಂದಿರುಗಿದನು. ಮಗನು ತಂದೆಯನ್ನು ವಿಸ್ತರಿಸುತ್ತ
ನಿಸ್ಕರಿಸುತ್ತ ಆ ಕಟ್ಟಡವನ್ನು ಬಿಟ್ಟು ಹೊರಬೀಳಲು, ತಾನು ಪೂರ್ವದಲ್ಲಿ
ತನ್ನ ಸ್ವಪ್ನದಲ್ಲಿ ಕಂಡ ಪುರುಷಾಕೃತಿಯು ತನ್ನ ಎದುರಿನಲ್ಲಿ ನಿಂತು ತನ್ನನ್ನು
ದಿಟ್ಟಿಸಿ ನೋಡುವದನ್ನು ಅವನು ಕಂಡನು.
{{center|* * * * }}
{{gap}}ತಾಯಿಯು: ಈಗ ಇವರು ಬೇನೆ ಬಿದ್ದಂತೆ ಪ್ರತಿ ಅಮಾಸೆ
ಹುಣ್ಣಿವಿಗೆ ಬೇನೆ ಬೀಳುತ್ತಿದ್ದರು, ಪ್ರತಿ ಅಮಾಸೆ ಹುಣ್ಣಿಮೆಯ ದಿವಸ
ಮಧ್ಯ ರಾತ್ರಿಯಲ್ಲಿ ಎದ್ದು ಹೊರಗೆ ಹೋಗಿ ಮೋಹರಗಳನ್ನು ತೆಗೆದು
ಕಂಡು ಬರುತ್ತಿದ್ದರು. ಆದರೆ, ಇವರು ಎಲ್ಲಿ ಹೋಗುತ್ತಾರೆಂಬ
ಮೋಹರಗಳನ್ನು ಎಲ್ಲಿಂದ ತರುತ್ತಾರೆಂಬ ನನಗೆ ಗೊತ್ತಾಗುತ್ತಿದ್ದಿಲ್ಲ.<noinclude></noinclude>
scnwrisoy1928saexh93herluus9h97
ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು
4
101285
320671
320257
2026-05-19T02:21:41Z
A826
6806
320671
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 36915<br><small>ದತ್ತಾಂಶ ಪಡೆದ ಸಮಯ: 2026-05-19 02:14:21 UTC / 2026-05-19 07:44:21 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 8605 (9266) || 0 || 0 || 7983 || 135 (270) || 464 (1392) || 9098 || '''9266'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 6704 (9215) || 0 || 0 || 4890 || 801 (1602) || 944 (2832) || 7102 || '''9215'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 3194 (4197) || 0 || 0 || 2097 || 358 (716) || 340 (1020) || 3717 || '''4197'''
|-
| 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 528 (1254) || 0 || 0 || 70 || 63 (126) || 390 (1170) || 654 || '''1254'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 187 (232) || 26 || 0 || 5 || 3 (6) || 27 (81) || 10968 || '''256'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 10 || [[Special:Contributions/Hariprasad Shetty10|Hariprasad Shetty10]] || 0 || 0 || 62 (131) || 0 || 0 || 0 || 18 (36) || 29 (87) || 243 || '''131'''
|-
| 11 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109'''
|-
| 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
0zfxn62e84xyhkape9k2r5ivvav7imy
ಪುಟ:ನಿತ್ಯ ನೇಮಾವಲಿ.pdf/೧೦೫
104
101927
320792
284300
2026-05-19T10:31:13Z
Hariprasad Shetty10
7490
320792
proofread-page
text/x-wiki
<noinclude><pagequality level="1" user="Shreesha Sharma" />{{center|ನಿತ್ಯನೇಮಾವಲಿ}}</noinclude>ಭಾವಾರ್ಥ: ಹಗಲು, ರಾತ್ರಿ ಎನ್ನದೆ ಯಾವಾಗಲೂ ಪರಮಾರ್ಥ<br />
ಸಾಧಿಸಬೇಕು. ಅದನ್ನು ಬಿಟ್ಟು ಅಡ್ಡದಾರಿಯಲ್ಲಿ ಹೋಗಬಾರದು.<br />
ಅಡ್ಡದಾರಿಯಲ್ಲಿ ಯಾರಾದರೂ ಹೋದರೆ ಅವರನ್ನು ಸರಿಯಾದ ಮಾರ್ಗಕ್ಕೆ<br />
ತರುವವನೇ ಜ್ಞಾನಿಯು. ಇತರರನ್ನು ಉದ್ಧಾರ ಮಾಡುವವನೇ ಜ್ಞಾನಿಯು.<br />
ಅವನಿಗೆ ಮೇಲಿಂದ ಮೇಲೆ ಶರಣು ಹೋಗಬೇಕು. ಜ್ಞಾನಿಯು ತಾನು<br />
ಮುಕ್ತಿಯನ್ನು ಪಡೆಯುವದು ಆಶ್ಚರ್ಯವೇನಲ್ಲ. ಇತರರ ಕುಲವನ್ನೇ<br />
ಉದ್ಧರಿಸುವನು ಎಂದು ತುಕಾರಾಮರು ಹೇಳುತ್ತಾರೆ.<br />
{{Right|೩}}
ಉದ್ಧರಿಲೇ ಕೂಳ ಆಪಣ ತರಲಾ<br />
ತೋಚಿ ಏಕ ಝಾಲಾ ತೈಲೋಕ್ಯಾತ। ॥೧॥
ತ್ರೈಲೋಕ್ಯಾತ ಝಾಲೇ ದೈತಚಿ ನಿಮಾಲೇ।
ಐಸೇ ಸಾಧಿಯಲೇ ಸಾಧನ ಬರವೇ ॥೨॥
ಬರವೇ ಸಾಧನ ಸುಖಶಾಂತಿ ಮನಾ।
ಕ್ರೋಧ ನಾಹೀ ಜಾಣಾ ತಿಳಭರೀ ॥೩॥
ತಿಳಭರೀ ನಾಹೀ ಚಿತ್ತಾಸೀ ತೋ ಮಳ।
ತುಕಾ ಮ್ಹಣ್ ಜಳ ಗಂಗೇಚೀ ತೇ ॥೪॥
{{Right|೧೦೪}}<noinclude></noinclude>
be02z11gucu44jjzus1p1f93hzztk96
320793
320792
2026-05-19T10:32:07Z
Hariprasad Shetty10
7490
320793
proofread-page
text/x-wiki
<noinclude><pagequality level="1" user="Shreesha Sharma" />{{center|ನಿತ್ಯನೇಮಾವಲಿ}}</noinclude>ಭಾವಾರ್ಥ: ಹಗಲು, ರಾತ್ರಿ ಎನ್ನದೆ ಯಾವಾಗಲೂ ಪರಮಾರ್ಥ<br />
ಸಾಧಿಸಬೇಕು. ಅದನ್ನು ಬಿಟ್ಟು ಅಡ್ಡದಾರಿಯಲ್ಲಿ ಹೋಗಬಾರದು.<br />
ಅಡ್ಡದಾರಿಯಲ್ಲಿ ಯಾರಾದರೂ ಹೋದರೆ ಅವರನ್ನು ಸರಿಯಾದ ಮಾರ್ಗಕ್ಕೆ<br />
ತರುವವನೇ ಜ್ಞಾನಿಯು. ಇತರರನ್ನು ಉದ್ಧಾರ ಮಾಡುವವನೇ ಜ್ಞಾನಿಯು.<br />
ಅವನಿಗೆ ಮೇಲಿಂದ ಮೇಲೆ ಶರಣು ಹೋಗಬೇಕು. ಜ್ಞಾನಿಯು ತಾನು<br />
ಮುಕ್ತಿಯನ್ನು ಪಡೆಯುವದು ಆಶ್ಚರ್ಯವೇನಲ್ಲ. ಇತರರ ಕುಲವನ್ನೇ<br />
ಉದ್ಧರಿಸುವನು ಎಂದು ತುಕಾರಾಮರು ಹೇಳುತ್ತಾರೆ.<br />
{{Right|೩}}
ಉದ್ಧರಿಲೇ ಕೂಳ ಆಪಣ ತರಲಾ<br />
ತೋಚಿ ಏಕ ಝಾಲಾ ತೈಲೋಕ್ಯಾತ। ॥೧॥<br />
ತ್ರೈಲೋಕ್ಯಾತ ಝಾಲೇ ದೈತಚಿ ನಿಮಾಲೇ।<br />
ಐಸೇ ಸಾಧಿಯಲೇ ಸಾಧನ ಬರವೇ ॥೨॥<br />
ಬರವೇ ಸಾಧನ ಸುಖಶಾಂತಿ ಮನಾ।<br />
ಕ್ರೋಧ ನಾಹೀ ಜಾಣಾ ತಿಳಭರೀ ॥೩॥<br />
ತಿಳಭರೀ ನಾಹೀ ಚಿತ್ತಾಸೀ ತೋ ಮಳ।<br />
ತುಕಾ ಮ್ಹಣ್ ಜಳ ಗಂಗೇಚೀ ತೇ ॥೪॥<br />
{{Right|೧೦೪}}<noinclude></noinclude>
8equqkjedskpskipr7tb8obrpbphxmv
320794
320793
2026-05-19T10:32:58Z
Hariprasad Shetty10
7490
320794
proofread-page
text/x-wiki
<noinclude><pagequality level="1" user="Shreesha Sharma" />{{center|ನಿತ್ಯನೇಮಾವಲಿ}}</noinclude>ಭಾವಾರ್ಥ: ಹಗಲು, ರಾತ್ರಿ ಎನ್ನದೆ ಯಾವಾಗಲೂ ಪರಮಾರ್ಥ<br />
ಸಾಧಿಸಬೇಕು. ಅದನ್ನು ಬಿಟ್ಟು ಅಡ್ಡದಾರಿಯಲ್ಲಿ ಹೋಗಬಾರದು.<br />
ಅಡ್ಡದಾರಿಯಲ್ಲಿ ಯಾರಾದರೂ ಹೋದರೆ ಅವರನ್ನು ಸರಿಯಾದ ಮಾರ್ಗಕ್ಕೆ<br />
ತರುವವನೇ ಜ್ಞಾನಿಯು. ಇತರರನ್ನು ಉದ್ಧಾರ ಮಾಡುವವನೇ ಜ್ಞಾನಿಯು.<br />
ಅವನಿಗೆ ಮೇಲಿಂದ ಮೇಲೆ ಶರಣು ಹೋಗಬೇಕು. ಜ್ಞಾನಿಯು ತಾನು<br />
ಮುಕ್ತಿಯನ್ನು ಪಡೆಯುವದು ಆಶ್ಚರ್ಯವೇನಲ್ಲ. ಇತರರ ಕುಲವನ್ನೇ<br />
ಉದ್ಧರಿಸುವನು ಎಂದು ತುಕಾರಾಮರು ಹೇಳುತ್ತಾರೆ.<br />
{{Right|೩}}
ಉದ್ಧರಿಲೇ ಕೂಳ ಆಪಣ ತರಲಾ<br />
ತೋಚಿ ಏಕ ಝಾಲಾ ತೈಲೋಕ್ಯಾತ। {{Right|॥೧॥}}<br />
ತ್ರೈಲೋಕ್ಯಾತ ಝಾಲೇ ದೈತಚಿ ನಿಮಾಲೇ।<br />
ಐಸೇ ಸಾಧಿಯಲೇ ಸಾಧನ ಬರವೇ ॥೨॥<br />
ಬರವೇ ಸಾಧನ ಸುಖಶಾಂತಿ ಮನಾ।<br />
ಕ್ರೋಧ ನಾಹೀ ಜಾಣಾ ತಿಳಭರೀ ॥೩॥<br />
ತಿಳಭರೀ ನಾಹೀ ಚಿತ್ತಾಸೀ ತೋ ಮಳ।<br />
ತುಕಾ ಮ್ಹಣ್ ಜಳ ಗಂಗೇಚೀ ತೇ ॥೪॥<br />
{{Right|೧೦೪}}<noinclude></noinclude>
q6wwsp8s4abj99rrevgnli3l7rbvzsm
320796
320794
2026-05-19T10:34:24Z
Hariprasad Shetty10
7490
320796
proofread-page
text/x-wiki
<noinclude><pagequality level="1" user="Shreesha Sharma" />{{center|ನಿತ್ಯನೇಮಾವಲಿ}}</noinclude>ಭಾವಾರ್ಥ: ಹಗಲು, ರಾತ್ರಿ ಎನ್ನದೆ ಯಾವಾಗಲೂ ಪರಮಾರ್ಥ<br />
ಸಾಧಿಸಬೇಕು. ಅದನ್ನು ಬಿಟ್ಟು ಅಡ್ಡದಾರಿಯಲ್ಲಿ ಹೋಗಬಾರದು.<br />
ಅಡ್ಡದಾರಿಯಲ್ಲಿ ಯಾರಾದರೂ ಹೋದರೆ ಅವರನ್ನು ಸರಿಯಾದ ಮಾರ್ಗಕ್ಕೆ<br />
ತರುವವನೇ ಜ್ಞಾನಿಯು. ಇತರರನ್ನು ಉದ್ಧಾರ ಮಾಡುವವನೇ ಜ್ಞಾನಿಯು.<br />
ಅವನಿಗೆ ಮೇಲಿಂದ ಮೇಲೆ ಶರಣು ಹೋಗಬೇಕು. ಜ್ಞಾನಿಯು ತಾನು<br />
ಮುಕ್ತಿಯನ್ನು ಪಡೆಯುವದು ಆಶ್ಚರ್ಯವೇನಲ್ಲ. ಇತರರ ಕುಲವನ್ನೇ<br />
ಉದ್ಧರಿಸುವನು ಎಂದು ತುಕಾರಾಮರು ಹೇಳುತ್ತಾರೆ.<br />
{{Right|೩}}
ಉದ್ಧರಿಲೇ ಕೂಳ ಆಪಣ ತರಲಾ<br />
ತೋಚಿ ಏಕ ಝಾಲಾ ತೈಲೋಕ್ಯಾತ। {{Right|॥೧॥}}<br />
ತ್ರೈಲೋಕ್ಯಾತ ಝಾಲೇ ದೈತಚಿ ನಿಮಾಲೇ।<br />
ಐಸೇ ಸಾಧಿಯಲೇ ಸಾಧನ ಬರವೇ {{Right|॥೨॥}}<br />
ಬರವೇ ಸಾಧನ ಸುಖಶಾಂತಿ ಮನಾ।<br />
ಕ್ರೋಧ ನಾಹೀ ಜಾಣಾ ತಿಳಭರೀ {{Right|॥೩॥}}<br />
ತಿಳಭರೀ ನಾಹೀ ಚಿತ್ತಾಸೀ ತೋ ಮಳ।<br />
ತುಕಾ ಮ್ಹಣ್ ಜಳ ಗಂಗೇಚೀ ತೇ {{Right|॥೪॥}}<br />
{{center|೧೦೪}}<noinclude></noinclude>
hxorasuzsv0xg9xpkf9co9ax7ll37ds
320797
320796
2026-05-19T10:35:21Z
Hariprasad Shetty10
7490
320797
proofread-page
text/x-wiki
<noinclude><pagequality level="1" user="Shreesha Sharma" />{{center|ನಿತ್ಯನೇಮಾವಲಿ}}</noinclude>ಭಾವಾರ್ಥ: ಹಗಲು, ರಾತ್ರಿ ಎನ್ನದೆ ಯಾವಾಗಲೂ ಪರಮಾರ್ಥ<br />
ಸಾಧಿಸಬೇಕು. ಅದನ್ನು ಬಿಟ್ಟು ಅಡ್ಡದಾರಿಯಲ್ಲಿ ಹೋಗಬಾರದು.<br />
ಅಡ್ಡದಾರಿಯಲ್ಲಿ ಯಾರಾದರೂ ಹೋದರೆ ಅವರನ್ನು ಸರಿಯಾದ ಮಾರ್ಗಕ್ಕೆ<br />
ತರುವವನೇ ಜ್ಞಾನಿಯು. ಇತರರನ್ನು ಉದ್ಧಾರ ಮಾಡುವವನೇ ಜ್ಞಾನಿಯು.<br />
ಅವನಿಗೆ ಮೇಲಿಂದ ಮೇಲೆ ಶರಣು ಹೋಗಬೇಕು. ಜ್ಞಾನಿಯು ತಾನು<br />
ಮುಕ್ತಿಯನ್ನು ಪಡೆಯುವದು ಆಶ್ಚರ್ಯವೇನಲ್ಲ. ಇತರರ ಕುಲವನ್ನೇ<br />
ಉದ್ಧರಿಸುವನು ಎಂದು ತುಕಾರಾಮರು ಹೇಳುತ್ತಾರೆ.<br />
{{Right|೩}}
ಉದ್ಧರಿಲೇ ಕೂಳ ಆಪಣ ತರಲಾ<br />
ತೋಚಿ ಏಕ ಝಾಲಾ ತೈಲೋಕ್ಯಾತ। {{Right|॥೧॥}}<br/>
ತ್ರೈಲೋಕ್ಯಾತ ಝಾಲೇ ದೈತಚಿ ನಿಮಾಲೇ।<br />
ಐಸೇ ಸಾಧಿಯಲೇ ಸಾಧನ ಬರವೇ {{Right|॥೨॥}}
<br />
ಬರವೇ ಸಾಧನ ಸುಖಶಾಂತಿ ಮನಾ।<br />
ಕ್ರೋಧ ನಾಹೀ ಜಾಣಾ ತಿಳಭರೀ {{Right|॥೩॥}}
<br />
ತಿಳಭರೀ ನಾಹೀ ಚಿತ್ತಾಸೀ ತೋ ಮಳ।<br />
ತುಕಾ ಮ್ಹಣ್ ಜಳ ಗಂಗೇಚೀ ತೇ {{Right|॥೪॥}}
<br />
{{center|೧೦೪}}<noinclude></noinclude>
5fsb2alhp89gncu84c6udqdg2oz8fnv
320798
320797
2026-05-19T10:35:49Z
Hariprasad Shetty10
7490
320798
proofread-page
text/x-wiki
<noinclude><pagequality level="1" user="Shreesha Sharma" />{{center|ನಿತ್ಯನೇಮಾವಲಿ}}</noinclude>ಭಾವಾರ್ಥ: ಹಗಲು, ರಾತ್ರಿ ಎನ್ನದೆ ಯಾವಾಗಲೂ ಪರಮಾರ್ಥ<br />
ಸಾಧಿಸಬೇಕು. ಅದನ್ನು ಬಿಟ್ಟು ಅಡ್ಡದಾರಿಯಲ್ಲಿ ಹೋಗಬಾರದು.<br />
ಅಡ್ಡದಾರಿಯಲ್ಲಿ ಯಾರಾದರೂ ಹೋದರೆ ಅವರನ್ನು ಸರಿಯಾದ ಮಾರ್ಗಕ್ಕೆ<br />
ತರುವವನೇ ಜ್ಞಾನಿಯು. ಇತರರನ್ನು ಉದ್ಧಾರ ಮಾಡುವವನೇ ಜ್ಞಾನಿಯು.<br />
ಅವನಿಗೆ ಮೇಲಿಂದ ಮೇಲೆ ಶರಣು ಹೋಗಬೇಕು. ಜ್ಞಾನಿಯು ತಾನು<br />
ಮುಕ್ತಿಯನ್ನು ಪಡೆಯುವದು ಆಶ್ಚರ್ಯವೇನಲ್ಲ. ಇತರರ ಕುಲವನ್ನೇ<br />
ಉದ್ಧರಿಸುವನು ಎಂದು ತುಕಾರಾಮರು ಹೇಳುತ್ತಾರೆ.<br />
{{Right|೩}}
ಉದ್ಧರಿಲೇ ಕೂಳ ಆಪಣ ತರಲಾ<br />
ತೋಚಿ ಏಕ ಝಾಲಾ ತೈಲೋಕ್ಯಾತ। <br/> {{Right|॥೧॥}}
ತ್ರೈಲೋಕ್ಯಾತ ಝಾಲೇ ದೈತಚಿ ನಿಮಾಲೇ।<br />
ಐಸೇ ಸಾಧಿಯಲೇ ಸಾಧನ ಬರವೇ {{Right|॥೨॥}}
<br />
ಬರವೇ ಸಾಧನ ಸುಖಶಾಂತಿ ಮನಾ।<br />
ಕ್ರೋಧ ನಾಹೀ ಜಾಣಾ ತಿಳಭರೀ {{Right|॥೩॥}}
<br />
ತಿಳಭರೀ ನಾಹೀ ಚಿತ್ತಾಸೀ ತೋ ಮಳ।<br />
ತುಕಾ ಮ್ಹಣ್ ಜಳ ಗಂಗೇಚೀ ತೇ {{Right|॥೪॥}}
<br />
{{center|೧೦೪}}<noinclude></noinclude>
qqgf4nk6aof8p8nc9r5c3tekjd9q0ay
320799
320798
2026-05-19T10:36:23Z
Hariprasad Shetty10
7490
320799
proofread-page
text/x-wiki
<noinclude><pagequality level="1" user="Shreesha Sharma" />{{center|ನಿತ್ಯನೇಮಾವಲಿ}}</noinclude>ಭಾವಾರ್ಥ: ಹಗಲು, ರಾತ್ರಿ ಎನ್ನದೆ ಯಾವಾಗಲೂ ಪರಮಾರ್ಥ<br />
ಸಾಧಿಸಬೇಕು. ಅದನ್ನು ಬಿಟ್ಟು ಅಡ್ಡದಾರಿಯಲ್ಲಿ ಹೋಗಬಾರದು.<br />
ಅಡ್ಡದಾರಿಯಲ್ಲಿ ಯಾರಾದರೂ ಹೋದರೆ ಅವರನ್ನು ಸರಿಯಾದ ಮಾರ್ಗಕ್ಕೆ<br />
ತರುವವನೇ ಜ್ಞಾನಿಯು. ಇತರರನ್ನು ಉದ್ಧಾರ ಮಾಡುವವನೇ ಜ್ಞಾನಿಯು.<br />
ಅವನಿಗೆ ಮೇಲಿಂದ ಮೇಲೆ ಶರಣು ಹೋಗಬೇಕು. ಜ್ಞಾನಿಯು ತಾನು<br />
ಮುಕ್ತಿಯನ್ನು ಪಡೆಯುವದು ಆಶ್ಚರ್ಯವೇನಲ್ಲ. ಇತರರ ಕುಲವನ್ನೇ<br />
ಉದ್ಧರಿಸುವನು ಎಂದು ತುಕಾರಾಮರು ಹೇಳುತ್ತಾರೆ.<br />
{{Right|೩}}
ಉದ್ಧರಿಲೇ ಕೂಳ ಆಪಣ ತರಲಾ<br />
ತೋಚಿ ಏಕ ಝಾಲಾ ತೈಲೋಕ್ಯಾತ। <br/> {{Right|॥೧॥}}
ತ್ರೈಲೋಕ್ಯಾತ ಝಾಲೇ ದೈತಚಿ ನಿಮಾಲೇ।<br />
ಐಸೇ ಸಾಧಿಯಲೇ ಸಾಧನ ಬರವೇ <br/> {{Right|॥೨॥}}
<br />
ಬರವೇ ಸಾಧನ ಸುಖಶಾಂತಿ ಮನಾ।<br />
ಕ್ರೋಧ ನಾಹೀ ಜಾಣಾ ತಿಳಭರೀ <br/> {{Right|॥೩॥}}
<br />
ತಿಳಭರೀ ನಾಹೀ ಚಿತ್ತಾಸೀ ತೋ ಮಳ।<br />
ತುಕಾ ಮ್ಹಣ್ ಜಳ ಗಂಗೇಚೀ ತೇ {{Right|॥೪॥}}
<br />
{{center|೧೦೪}}<noinclude></noinclude>
dqbfw6ymjho6cjb8m13untl5yvqj7lh