ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.3
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:Kalyaand-asvaami.pdf/೩೩
104
9316
321419
62083
2026-05-20T10:37:03Z
Pragathi. BH
7585
/* Validated */
321419
proofread-page
text/x-wiki
<noinclude><pagequality level="4" user="Pragathi. BH" />{{rh|center=ಕತ್ತಲು ಕವಿದ ಕೊಡಗು|left=|right=}}</noinclude>ಪದಗಳನ್ನು ನಿಧಾನವಾಗಿ ಉಚ್ಚರಿಸುತ್ತ ಆತನೆಂದಃ <br />
"ಅಲ್ಲಿಯ ಕಥೆ ಹೇಳಬೇಕಾದ್ದು ಎಷ್ಟೋ ಇದೆ ಅವ್ವಾ."<br />
"ಹಾಗಾ?"<br />
"ಹೂಂ. ಇನ್ನೂ ಕೋಳಿ ಕೂಗಿಲ್ಲ. ಮಲಕೋ."<br />
"ನನ್ನ ನಿದ್ದೆಗಿಷ್ಟು ಬೆಂಕಿ.ನೀನು ಮಲಕೋ ಮಗಾ."<br />
ಪುಟ್ಟಬಸವ ಹೊರಹೋಗಿ ಬಂದ.ನಂಜಯ ಆಷ್ಟರಲ್ಲೆ ಗೊರಕೆ ಹೊಡೆಯುತಿದ್ದ. ಉಳಿದಿಬ್ಬರು ನಿದ್ದೆ ಎಚ್ಚರಗಳ ನಡುವೆ ತೂಗಾಡುತಿದ್ದರು.<br />
ಗಂಗವ್ವನಾಗಲೆ ಸೊಸೆಯೊಡನೆ ಅಡುಗೆ ಮನೆಗೆ ನಡೆದಿದ್ದಳು.<br />
ಪುಟ್ಟಬಸವ ಉಡುಪು ಕಳಚಿಟ್ಟು ತಾಯಿಯ ಚಾಪೆಯ ಮೇಲೆಯೆ ನಿದ್ದೆ ಹೋದ...<br />
....ಅವರೆಲ್ಲರಿಗೂ ಎಚ್ಚರವಾದಾಗ ಸೂರ್ಯನ ಬೆಳಕಿನುಂಡೆ,ಮರಗಳ ರೆಂಬೆಕೊಂಬೆಗಳೆಡೆಯಿಂದ ಮೇಲು ಮೇಲಕ್ಕೆ ನೆಗೆಯುತ್ತ ಸಾಗಿತ್ತು.<br />
ಕುದುರೆಗಳು ಒಂದೆರಡು ಸಾರೆ ಕೆನೆದು, 'ಇಂದು ಪ್ರಯಾಣವಿಲ್ಲವೇ?' ಎಂದು ಕೇಳಿದ ಬಳಿಕ, ಗಿರಿಜನ್ವ ತಂದುಹಾಕಿದ ಹಸಿರು ಹುಲ್ಲನ್ನು ತಿನ್ನುವುದರಲ್ಲೆ ನಿರತವಾಗಿದ್ದುವು.<br />
ಮುಖ ಮಾರ್ಜನ ಮುಗಿಸಿ ಸಂಗಡಿಗರನ್ನು ಪುಟ್ಟಬಸ ನಡು ಮನೆಗೆ ಕರೆದೊಯ್ದ. ಅಕ್ಕಿಯ ರೊಟ್ಟಿಗಳನ್ನು ಎತ್ತರಕ್ಕೆ ಹೇರಿದ್ದ ತಟ್ಟಿ ಇತ್ತು ಮಧ್ಯದಲ್ಲಿ. ಪಾತ್ರೆಯಲ್ಲಿ ಪಲ್ಯವಿತ್ತು. ಎರಡು ಮೂರು ತಂಬಿಗೆ ತುಂಬಾ ನೀರು.<br />
"ತಗೊಳೀಪ್ಪಾ. ಊಟಕ್ಮುಂಚೆ ಓಂದಿಷ್ಟು ರೊಟ್ಟಿತಿನ್ನಿ. ಹಳ್ಳೀ ಜನರ ಅಡುಗೆ ನಿಮಗೆ ರುಚಿಯಾಗ್ತೇತೋ ಇಲ್ಲೋ..." ಎಂದಳು ಗಂಗವ್ವ ಆಡುಗೆ ಮನೆಯ ಬಾಗಿಲ ಬಳಿಯಲ್ಲೆ ಕುಳಿತು.
ನಂಜಯ್ಯ ಒಂದು ರೊಟ್ಟಿಯನ್ನು ಎಡಗೈಯಲ್ಲಿರಿಸಿ, ಅದರ ನಡುವೆ ಹಾಕಿಸಿಕೊಂಡ ಪಲ್ಯಕ್ಕೆ ಒಂದು ತುಣುಕನ್ನು ಮುರಿದು ಅದ್ದಿ ಬಾಯಿಗಿಟ್ಟು, ಚಪ್ಪರಿಸಿದ:<br />
"ಆಹಾ! ಈ ರುಚಿ ನೋಡದೆ ಎರಡು ವರ್ಷಕ್ಕೂ ಮೇಲಾಯ್ತು.<noinclude><references/></noinclude>
0zc3ykmrnlgpx4jkf1r44ffpnt32qkf
321420
321419
2026-05-20T10:37:30Z
Pragathi. BH
7585
321420
proofread-page
text/x-wiki
<noinclude><pagequality level="4" user="Pragathi. BH" />{{rh|center=ಕತ್ತಲು ಕವಿದ ಕೊಡಗು|left=|right=೩೧}}</noinclude>ಪದಗಳನ್ನು ನಿಧಾನವಾಗಿ ಉಚ್ಚರಿಸುತ್ತ ಆತನೆಂದಃ <br />
"ಅಲ್ಲಿಯ ಕಥೆ ಹೇಳಬೇಕಾದ್ದು ಎಷ್ಟೋ ಇದೆ ಅವ್ವಾ."<br />
"ಹಾಗಾ?"<br />
"ಹೂಂ. ಇನ್ನೂ ಕೋಳಿ ಕೂಗಿಲ್ಲ. ಮಲಕೋ."<br />
"ನನ್ನ ನಿದ್ದೆಗಿಷ್ಟು ಬೆಂಕಿ.ನೀನು ಮಲಕೋ ಮಗಾ."<br />
ಪುಟ್ಟಬಸವ ಹೊರಹೋಗಿ ಬಂದ.ನಂಜಯ ಆಷ್ಟರಲ್ಲೆ ಗೊರಕೆ ಹೊಡೆಯುತಿದ್ದ. ಉಳಿದಿಬ್ಬರು ನಿದ್ದೆ ಎಚ್ಚರಗಳ ನಡುವೆ ತೂಗಾಡುತಿದ್ದರು.<br />
ಗಂಗವ್ವನಾಗಲೆ ಸೊಸೆಯೊಡನೆ ಅಡುಗೆ ಮನೆಗೆ ನಡೆದಿದ್ದಳು.<br />
ಪುಟ್ಟಬಸವ ಉಡುಪು ಕಳಚಿಟ್ಟು ತಾಯಿಯ ಚಾಪೆಯ ಮೇಲೆಯೆ ನಿದ್ದೆ ಹೋದ...<br />
....ಅವರೆಲ್ಲರಿಗೂ ಎಚ್ಚರವಾದಾಗ ಸೂರ್ಯನ ಬೆಳಕಿನುಂಡೆ,ಮರಗಳ ರೆಂಬೆಕೊಂಬೆಗಳೆಡೆಯಿಂದ ಮೇಲು ಮೇಲಕ್ಕೆ ನೆಗೆಯುತ್ತ ಸಾಗಿತ್ತು.<br />
ಕುದುರೆಗಳು ಒಂದೆರಡು ಸಾರೆ ಕೆನೆದು, 'ಇಂದು ಪ್ರಯಾಣವಿಲ್ಲವೇ?' ಎಂದು ಕೇಳಿದ ಬಳಿಕ, ಗಿರಿಜನ್ವ ತಂದುಹಾಕಿದ ಹಸಿರು ಹುಲ್ಲನ್ನು ತಿನ್ನುವುದರಲ್ಲೆ ನಿರತವಾಗಿದ್ದುವು.<br />
ಮುಖ ಮಾರ್ಜನ ಮುಗಿಸಿ ಸಂಗಡಿಗರನ್ನು ಪುಟ್ಟಬಸ ನಡು ಮನೆಗೆ ಕರೆದೊಯ್ದ. ಅಕ್ಕಿಯ ರೊಟ್ಟಿಗಳನ್ನು ಎತ್ತರಕ್ಕೆ ಹೇರಿದ್ದ ತಟ್ಟಿ ಇತ್ತು ಮಧ್ಯದಲ್ಲಿ. ಪಾತ್ರೆಯಲ್ಲಿ ಪಲ್ಯವಿತ್ತು. ಎರಡು ಮೂರು ತಂಬಿಗೆ ತುಂಬಾ ನೀರು.<br />
"ತಗೊಳೀಪ್ಪಾ. ಊಟಕ್ಮುಂಚೆ ಓಂದಿಷ್ಟು ರೊಟ್ಟಿತಿನ್ನಿ. ಹಳ್ಳೀ ಜನರ ಅಡುಗೆ ನಿಮಗೆ ರುಚಿಯಾಗ್ತೇತೋ ಇಲ್ಲೋ..." ಎಂದಳು ಗಂಗವ್ವ ಆಡುಗೆ ಮನೆಯ ಬಾಗಿಲ ಬಳಿಯಲ್ಲೆ ಕುಳಿತು.
ನಂಜಯ್ಯ ಒಂದು ರೊಟ್ಟಿಯನ್ನು ಎಡಗೈಯಲ್ಲಿರಿಸಿ, ಅದರ ನಡುವೆ ಹಾಕಿಸಿಕೊಂಡ ಪಲ್ಯಕ್ಕೆ ಒಂದು ತುಣುಕನ್ನು ಮುರಿದು ಅದ್ದಿ ಬಾಯಿಗಿಟ್ಟು, ಚಪ್ಪರಿಸಿದ:<br />
"ಆಹಾ! ಈ ರುಚಿ ನೋಡದೆ ಎರಡು ವರ್ಷಕ್ಕೂ ಮೇಲಾಯ್ತು.<noinclude><references/></noinclude>
m2oobjkimyut9j693gbcjl8rzokugul
ಪುಟ:Kalyaand-asvaami.pdf/೩೪
104
9322
321421
62085
2026-05-20T10:39:19Z
Pragathi. BH
7585
/* Validated */
321421
proofread-page
text/x-wiki
<noinclude><pagequality level="4" user="Pragathi. BH" />{{rh|center=ಕಲ್ಯಾಣ ಸ್ವಾಮಿ|left=೩೨|right=}}</noinclude>ಏನ್ರಿ ಪುಟ್ಟಬಸಪ್ನೋರೆ-ಆರಮನೇಲಿ ಆವತ್ತು ರೊಟ್ಟಿ ತಿಂದ್ಮೇಲೆ ಅಂಥಾದ್ದು ಇದೇ ಮೊದಲ್ನೇ ಸಲ.ಹೌದೋ,ಅಲ್ಲೋ?"<br />
"ಯಾವುದಕ್ಕೆ ಯಾವುದನ್ನ ಹೋಲಿಸ್ತೀಯಪ್ಪಾ," ಎಂದಳು ಗಂಗವ್ವ,ತುಸು ಲಜ್ಜೆಗೊಂಡು. ತಟ್ಟಲು ತಾನೂ ನೆರವಾಗಿದ್ದ ಆ ರೊಟ್ಟಿಯನ್ನು ಕುರಿತ ಹೊಗಳಿಕೆ ಆಕೆಗೆ ಇಷ್ಟವಾಯಿತು.<br />
ಆ ಒಳ್ಳೆಯ ಮಾತನ್ನು ಆಡಿದ ವ್ಯಕ್ತಿಯನ್ನು ಪ್ರಯತ್ನಪೂರ್ವಕವಾಗಿ ಗಂಗವ್ವ ದಿಟ್ಟಿಸಿ ನೋಡಿದಳು.<br />
ತಿನ್ನುತ್ತಲಿದ್ದಂತೆ ಪುಟ್ಟಬಸವ, ತನ್ನ ಸ್ನೇಹಿತರ ಪರಿಚಯವನ್ನು ತಾಯಿಗೆ ಮಾಡಿಕೊಟ್ಟ.<br />
"ಇವರು ನೋಡವ್ವ, ಹುಲಿಕುಂದ ನಂಜಯ್ಯೋರು ಅಂತ-ಸರದಾರರು.ನಮಗೆಲ್ಲಾ ದೊಡ್ಡಣ್ಣ ಇದ್ದಹಾಗೆ. ಈ ಇಬ್ಬರು, ಒಡಹುಟ್ಟಿ ದೋರು-ಚೆಟ್ಟಿಕುಡಿಯ,ಕರ್ತಕುಡಿಯ ಅಂತ".<br />
ಮುಖದ ರೂಪುರೇಖೆ ಸ್ಪಷ್ಟವಾಗಿ ಕಾಣಿಸದಿದ್ದರೂ ಅವರನ್ನೂ ಗಂಗವ್ವ ನೆಟ್ಟ ದೃಷ್ಟಿಯಿಂದ ನೋಡಿದಳು.<br />
ಬಾಯಿಯಲ್ಲಿದ್ದುದನ್ನು ನುಂಗಿ,ಒಂದು ಗುಟುಕು ನೀರು ಕುಡಿದು, ಪುನಃ ರೊಟ್ಟಿಯ ತುಣುಕುಗಳನ್ನು ಪಲ್ಯಕ್ಕೆ ಆದ್ದುತ್ತಾ ಪುಟ್ಟಬಸವನೆಂದ :<br />
"ಇವರು ಮಹಾಶೂರರು ಅವ್ವಾ. ಮಹಾರಾಜರಿಗೆ ಆಪ್ತರು. ಹಾರುತ್ತಿರೋ ಹಕ್ಕಿಯ ಕಣ್ಣಿಗೆ ಗುರಿ ಇಟ್ಟು ಹೊಡೀತಾನೆ ಚೆಟ್ಟಕುಡಿಯ. ಮಹಾರಾಜರಿಗೆ ಗುರಿ ಹೊಡೆಯೋಕೆ ಕಲಿಸಿಕೊಟ್ಟರೋದು ಇವನೇ."<br />
"ಹೌದಾ!" ಎಂದಳು ಗಂಗವ್ವ. ಮುಖ್ಯರಾದ ವ್ಯಕ್ತಿಗಳೇ ಬಂದಿದ್ದರು ಮಗನ ಜತೆ. ಕುಡಿಯರಾದರೇನು? ಆಸಾಮಾನ್ಯರಾದವರು.ಮಹಾರಾಜರ ಆಪ್ತರು. ನಂಜಯ್ಯನಂತೂ ತಮ್ಮ ಜನವೇ ಇರಬೇಕು. ಹೆಸರೇ ಹೇಳುವುದಿಲ್ಲವೆ?<br />
ಮಗನ ಸ್ನೇಹಿತರನ್ನು ಉದ್ದೇಶಿಸಿ ಆಕೆಯೆಂದಳು :<br />
"ನೀವೆಲ್ಲಾ ಈ ಕಡೆ ಬರ್ತಿರೋದು ಇದೇ ಮೊದಲ್ನೇಸಾರಿ,ಅಲ್ಲವಾ?"<br />
ನಂಜಯ್ಯ ಉತ್ತರವಿತ್ತ :
"ಹೂಂ. ಮಹಾರಾಜರಿದ್ದಾಗ ಬೇಟೆ ಆಡ್ಕೊಂಡು ಇಲ್ಲಿಗೆ ಹತ್ತು<noinclude><references/></noinclude>
acsk05jq8ssoj2iztkhiba86h9ag87m
ಪುಟ:Kalyaand-asvaami.pdf/೩೨
104
9343
321418
62082
2026-05-20T10:35:34Z
Pragathi. BH
7585
/* Validated */
321418
proofread-page
text/x-wiki
<noinclude><pagequality level="4" user="Pragathi. BH" />{{rh|center=ಕಲ್ಯಾಣ ಸ್ವಾಮಿ|left೩೦=|right=}}</noinclude>
"ನನ್ನವ್ವ!"<br />
"ಕೆಟ್ಟುಡುಗ ಎಲ್ಲೋಗಿದ್ಯೊ ಇಷ್ಟು ದಿವಸ?"<br />
"ಎಲ್ಲೋದ್ರೂ ನಿನ್ನ ಹತ್ತಿರಕ್ಕೆ ವಾಪಸು ಬಂದೇ ಬರ್ತೇನಲ್ಲವ್ವಾ ನಾನು?"<br />
"ಬರುತಿಯಾ...ಊಂ....ಇಂಗೇ ಮಾಡ್ತಿರು.ಒಂದು ಸಾರ್ತಿ ನೀನು ಬರೋದರೊಳಗೆ ಸತ್ತುಹೋಗಿರ್ತೀನಿ .ನೋಡ್ಕೋ!"<br />
"ಹಾಗೆಲ್ಲಾ ಅನ್ಬೇಡವ್ವಾ!"<br />
"ಅನ್ನಬಾರದಂತೆ,ಅಯ್ಯೋ!"<br />
ಬಳಿಕ,ಸಂತೋಷದಿಂದಲೂ ಸಂಕಟದಿಂದಲೂ ಒತ್ತರಿಸಿಬಂದ ಕಂಬನಿ. <br />
ಅಗ್ಗಿಷ್ಟಿಕೆಯ ಕೆಂಡವನ್ನಾಗಲೆ ಕೆದಕಿ ಗಿರಿಜಾ ಉರಿಮಾಡಿದ್ದಳು.<br />
ಸೊಸೆಯನ್ನು ಕುರಿತು ಅತ್ತೆ ಕೇಳಿದಳು:<br />
"ಮಗನಿಗೆ ಏನ್ಮಾಡ್ಕೊಡ್ತಿಯೆ ಗಿರಿಜಾ?"ಪುಟ್ಟಬಸವನೆಂದ:"ಈಗೇನೂ ಬೇಡವ್ವ.ಮೂರು ಜನ ಸ್ನೇಹಿತರನ್ನು ಕರಕೊಂಡು ಬಂದಿದೀನಿ.ಅವರೆಲ್ಲಾ ನಿದ್ದೆ ಮಾಡ್ತವರೆ.ಬೆಳಗಾದ್ಮೇಲೆ ರೊಟ್ಟಿಯೋ ಗಂಜಿಯೋ ಮಾಡಿದರಾಯ್ತು."<br />
"ನೀನೂ ಮಲಕೋ ಹಂಗಾರೆ."<br />
"ಹೂಂ."<br />
"ಯಾರು ಬಂದಿರೋದು?"<br />
"ನಿನಗೆ ಅವರ ಗುರುತಿಲ್ಲ ಅವ್ವ.ಹೊಸಬರು.""ಮಡಿಕೇರಿಯಿಂದಲೆ ಬಂದಿರಾ?"<br />
"ಹೂನವ್ವಾ."<br />
"ರಾಜರೆಲ್ಲಾ ಚೆಂದಾಕಿದಾರೆ ಅಲ್ವಾ?"<br />
ಒಮ್ಮೆಲೆ ಉತ್ತರ ಬರಲಿಲ್ಲ.<br />
ಪುಟ್ಟಬಸವ ಏನು ಹೇಳಬೇಕೆಂದು ತೋಚದೆ ತಡವರಿಸಿದ.ವಿಷಯ ತಿಳಿದೇ ಇರಲಿಲ್ಲ ತನ್ನ ತಾಯಿಗೆ ಹಾಗಾದರೆ.ಕಿಂವದಂತಿಗಳೂ ಹಬ್ಬಿರಲಿಲ್ಲವೇನೊ ಪುಷ್ಪಗಿರಿಯ ಆ ತಪ್ಪಲಿಗೆ?<noinclude><references/></noinclude>
tdj1ho634fcuj2sw4f581ihpd4aa8q3
ಪುಟ:Kalyaand-asvaami.pdf/೩೧
104
9344
321417
62081
2026-05-20T10:34:14Z
Pragathi. BH
7585
/* Validated */
321417
proofread-page
text/x-wiki
<noinclude><pagequality level="4" user="Pragathi. BH" /></noinclude> ಕತ್ತಲು ಕವಿದ ಕೊಡಗು
"ಹಾಗೇ ಒಂದು ತಪ್ಪಲೆ ತನ್ನಿ.ಕುದುರೆಗಳಿಗೆ ನೀರು ಕುಡಿಸ್ಬೇಕು.ಬಾವಿ ಎಲ್ಲೈತೆ ತೋರಿಸಿ."<br />
ಅದು ಮೂರನೆಯ ಸ್ವರ.ತಪ್ಪಲೆ ಬಂತು.ಮೆಟ್ಟಲಿಳಿದು ಹೋಗ ಬೇಕಾದ ನೀರಿನ ಹೊಂಡ ಅಲ್ಲಿಯೇ ಇತ್ತು<br />
"ಬೇಸಗೆ.ಜಾಸ್ತಿ ನೀರಿರೋದಿಲ್ಲ.ಆದರೂ ಕಾಲು ಜಾರೀತು.ಹುಷಾರಿ!"ಎಂದ ಪುಟ್ಟಬಸವ.ಬಳಿಕ ಎಲ್ಲರನ್ನೂ ಉದ್ದೇಶಿಸಿ ಆತನೆಂದ:"ಬಂದೂಕೆಲ್ಲಾ ಒಳಗಿಟ್ಟಿಡಿ.ಜಗಲಿಯ ಮೇಲೆಯೇ ಮಲಕ್ಕೊಳ್ಳುವಿರಂತೆ."<br />
ಒಳಗೆ ಎರಡು ಈಚಲು ಚಾಪೆಗಳಿದ್ದುವು.ಎರಡನ್ನೂ ಜೋಡಿಸಿ ಪುಟ್ಟಬಸವ ಹಾಸಿದ.ಈ ಕೆಲಸವನ್ನಷ್ಟು ಸದ್ದಿಲ್ಲದೆ ಮುಗಿಸಿದ ಬಳಿಕ ತಾಯಿಯನ್ನೆಬ್ಬಿಸ ಬೇಕೆಂದು ಯೋಚಿಸಿದ್ದ ಆತ. ಆದರೆ ಗಂಗವ್ವನಿಗಾಗಲೆ ಎಚ್ಚರವಾಗಿ ಬಿಟ್ಟಿತ್ತು.ಆಕೆ ಎದ್ದು ಕುಳಿತು ಉದ್ವೇಗದಿಂದ ಕೇಳಿದಳು:<br />
"ಗಿರಿಜಾ! ಯಾರು ಬಂದರು? ಪುಟ್ಟಬಸ್ಯ ಬಂದ್ನಾ?"<br />
ಸ್ನೇಹಿತರಿಗೆ ಮಲಗುವ ಜಾಗ ತೋರಿಸುತ್ತಿದ್ದ ಪುಟ್ಟಬಸವನೆಂದ:<br />
"ಹೂನವ್ವಾ,ನಾನು ಕಣವ್ವಾ."ಎಲ್ಲಿ,ಎಲ್ಲಿದೀಯೋ?ಏನೊ ಕಾಣಿಸುವಲ್ಲದಲ್ಲೋ!"<br />
ತಾನು ಮನೆ ಬಿಟ್ಟಾಗಲೇ ತಾಯಿಯ ದೃಷ್ಟಿ ಮಂದವಾಗತೊಡಗಿತ್ತೆಂಬುದು ಆತನ ನೆನಪಿಗೆ ಬಂತು.ಈಗ ಆಕೆ ಪೂರ್ಣ ಕುರುಡಿಯಾಗಿರುವಳೆನೋ ಎಂದು ಕಳವಳವಾಯಿತು ಆತನಿಗೆ.<br />
"ಬಂದೆ ತಾಳವ್ವಾ" ಎನ್ನುತ್ತ ಪುಟ್ಟಬಸವ ನಡುಮನೆಗೆ ಧಾನಿಸಿದ.ತಾಯಿಯ ಮಡಿಲಲ್ಲಿ ಮುಖವಿಟ್ಟು, ಎಳೆಕರುವಿನಂತೆ ಅರ್ಥವಿಲ್ಲದ ಸ್ವರ ಹೊರಡಿಸಿದ.<br />
"ಯಾಕವ್ವಾ,ಕಾಣಿಸೋದಿಲ್ವಾ?ನಾನು ಪುಟ್ಟಬಸ್ಯಾ."<br />
ಎರಡು ಕೈಗಳಿಂದ ಅವನ ಅಂಗಾಗಗಳನ್ನೆಲ್ಲ ಮುಟ್ಟಿ ನೋಡುತ್ತಾ ಗಂಗವ್ವನೆಂದಳು<br />
:"ನೀನು ಓದಾಗ ದೃಷ್ಟೀನೂ ಓಗ್ತೇತೆ ಮಗಾ.ನೀನು ಬಂದಾಗ ತಿರುಗಾ ಬರ್ತೇತೆ."<noinclude><references/></noinclude>
c3m04gy1b5o82jm44bp737tsrjby5a7
ಪುಟ:Kalyaand-asvaami.pdf/೩೫
104
11123
321422
62086
2026-05-20T10:40:52Z
Pragathi. BH
7585
/* Validated */
321422
proofread-page
text/x-wiki
<noinclude><pagequality level="4" user="Pragathi. BH" />{{rh|center=ಕತ್ತಲು ಕವಿದ ಕೊಡಗು|left=|right=೩೩}}</noinclude>ಹರದಾರಿ ಸಮೀಪದವರೆಗೂ ಒಮ್ಮೆ ಬಂದಿದ್ವಿ, ಅಷ್ಟೆ.”<br />
ಮಹಾರಾಜರಿದ್ದಾಗ - ಎಂದಿದ್ದ ನಂಜಯ್ಯ. ಪುಟ್ಟಬಸವ ದೃಷ್ಟಿ ಎತ್ತಿ ಆತನ ಮುಖವನ್ನು ನೋಡಿದ.<br />
ನಂಜಯ್ಯನ ಮಾತು ಗಂಗವ್ವನನ್ನು ಗೊಂದಲದಲ್ಲಿ ಕೆಡವಿತು. ಪ್ರಾಯಶಃ ಗತಿಸಿದ ಮಹರಾಜರ ವಿಷಯ ಆತ ಹೇಳುತ್ತಿರಬೇಕು ಎಂದು ಆಕೆ ಸುಮ್ಮನಾದಳು.<br />
ಆದರೆ ನಂಜಯ್ಯನ ಮಾತಿನ ಕುದುರೆ ಆಗಲೆ ಮುಂದಕ್ಕೆ ಹೆಜ್ಜೆ ಇಟ್ಟಿತ್ತು<br />
“ಆ ಸಲದು ಎಂಥಾ ಬೇಟೆ! ನಿನಗೆ ನೆನಪೈತೆ ಅಲ್ವಾ ಚೆಟ್ಟ ?” <br />
“ ಹೂಂ," ಎಂದ ಚೆಟ್ಟಕುಡಿಯ. ಧ್ವನಿಯಲ್ಲಿ ಉತ್ಸಾಹವಿರಲಿಲ್ಲ. ಹತಾಶನಾದ ಮನುಷ್ಯ, ಕಳೆದು ಹೋದ ವಿಷಯವನ್ನು ಕುರಿತು ಉದಾಸೀನಭಾವ ತಳೆದಂತಿತ್ತು ಆತನ ವರ್ತನೆ.<br />
ನಂಜಯ್ಯ ಅದನ್ನು ಗಮನಿಸದೆಯೆ ಮುಂದುವರಿದ:<br />
"ಅದೊಂದು ಪೋಲಿ ಆನೆ ಬಹಳ ತೊಂದರೆ ಕೊಡ್ತಿತ್ತು. ಎಷ್ಟು ಸರ್ತಿ ತಪ್ಪಿಸ್ಕೊಂಡಿತ್ತೂಂತ. ಆ ಸಲ ರಾಜರು ಅದನ್ನು ಗುಂಡು ಹಾಕಿ ಸಾಯಿಸಿದ್ರು, ವೀರಾಗ್ರಣಿ ! ನಾಲ್ವತ್ತು ದಿವಸಗಳಲ್ಲಿ ಇನ್ನೂರ ಮೂವತ್ತ
ಮೂರು ಆನೆಗಳನ್ನು ಮಹಾರಾಜರು ಸ್ವತಃ ತಾವೇ ಬೇಟೆಯಾಡಿ ಕೊಂದರು ಅಂದರೆ ನಂಬ್ತೀಯಾ ಅವ್ವ? ಎಂಥ ಧೈರ್ಯಶಾಲಿ ! [ಸ್ವರ ತಗ್ಗಿತು, ಕಂಠ ಗದ್ಗದಿತವಾಯಿತು] ಆದರೆ ನಾವು ಪಾಪಿಗಳು- ನಮಗೆ ಭಾಗ್ಯವಿಲ್ಲ...."<br />
ಗಂಗವ್ವನಿಗೆ ಕಸಿವಿಸಿಯಾಯಿತು. ಆನೆಯ ಬೇಟೆಯಲ್ಲಿ ಮಹಾರಾಜರು ಮಹಾ ಚತುರರೆಂದು ಪುಟ್ಟಬಸವ ಹಿಂದೆಯೇ ಒಂದೆರಡು ಸಾರೆ ಹೇಳಿದ್ದುದು ನೆನಪಿತ್ತು ಆಕೆಗೆ. ಸಂಶಯ ನಿವಾರಣೆಯಾಗಲೆಂದು ಗಂಗವ್ವ ಕೇಳಿದಳು:<br />
“ ಯಾವ ಮಹಾರಾಜರ ವಿಷಯ ಹೇಳ್ತೀದೀರಪ್ಪಾ ?" <br />
ಆ ಪ್ರಶ್ನೆ ವಿಚಿತ್ರವಾಗಿ ತೋರಿತು ನಂಜಯ್ಯನಿಗೆ.<br />
" ಯಾವ ಮಹಾರಾಜರು? ಚಿಕ್ಕವೀರರಾಜರು. ಇನ್ಯಾರು ?"<br />
ಗಂಗವ್ವ ಕಾತರಗೊಂಡಳು. ಅರಸರು ಆರೋಗ್ಯದಿಂದಿರುವರೆಂದೇ<noinclude><references/></noinclude>
45913yadjhhc9v2ily2bki8bg7ffkbg
ಪುಟ:Chirasmarane-Niranjana.pdf/೧೬೫
104
12984
321028
256521
2026-05-20T03:49:41Z
Shreelatha.Halemane
7642
/* Validated */
321028
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೧೬೬|center=|right=ಚಿರಸ್ಮರಣೆ}}
{{gap}}ಏನು? ಯಾಕೆ?ಎಂದು ಯೋಚಿಸಿದಾಗ ವಿಷಯ ಸ್ಪಷ್ಟವಾದಂತೆ ಚಿರುಕಂಡನಿಗೆ ಒಮ್ಮೆಲೆ ಅನಿಸಿತು.
{{gap}}ಹತ್ತು ವರ್ಷಗಳ ಹಿಂದೆ ಚಿಕ್ಕವರಿದ್ದಾಗ ಆಟವಾಡುತ್ತಿದ್ದ ಹಾಗೆ ಮರದ
ಮರೆಯಲ್ಲಿ ನಿಂತು ಚಿರುಕಂಡ, ಮಲಗಿದ ಅಪ್ಪುವಿನೆಡೆಗೆ ಪುಟ್ಟ ಕಲ್ಲೆಸೆದ.
ಎರಡನೆಯದು ತಾಕಿತ್ತು. ಧಿಗ್ಗನೆ ಮಗ್ಗುಲು ಹೊರಳಿ, ಮೊಣಕ್ಕೆಯೂರಿ ಕತ್ತೆತ್ತಿ
ಅಪ್ಪು. ಅತ್ತಿತ್ತ ನೋಡಿದ. ಚಿರುಕಂಡ ನಗುತ್ತ ಮರೆಯಿಂದ ಹೊರ ಬಂದ. <br/>
{{gap}}"ನಿರಾಶೆಯಾಯ್ತೇನೋ? ಯಾರೂಂತಿದ್ದೆ?" <br/>
{{gap}}ಅಪ್ಪುವಿನ ಮುಖ ಕೆಂಪಡರಿತು. ಆತ ಚಿರುಕಂಡನನ್ನು ದುರದುರನೆ ನೋಡಿ ಹೇಳಿದ:"ಬಾ, ಕೂತ್ಕೋ!" <br/>
{{gap}}ಬೇರೆ ದಿನವಾಗಿದ್ದರೆ, ಸೋಮಾರಿತನದ ವಿಷಯದಲ್ಲಿ ಚಿರುಕಂಡನ ಟೀಕೆಯ ಪೀಠಿಕೆಯಿಂದಲೇ ಸಂಭಾಷಣೆ ಮೊದಲಾಗುತ್ತಿತ್ತು. ಈ ದಿನ ಹಾಗೆ ಮಾಡದೆ ಚಿರುಕಂಡ ನೆರವಾಗಿಯೇ ವಿಷಯಕ್ಕೆ ಬಂದ. <br/>
{{gap}}"ಚರ್ವತ್ತೂರಿನಲ್ಲಿ ನಾಳೆ ರಾತ್ರೆ ಕಾರ್ಯಕರ್ತರ ಸಭೆ ಇಟ್ಟಿದ್ದಾರೆ. ನಿನಗೆ
ತಿಳಿಸು ಅಂದರು ಮಾಸ್ತರು." <br/>
{{gap}}ಕರ್ತವ್ಯನಿಷ್ಮೆ ಇರುವೆಯ ಕಡಿತದಂತೆ ಅಪ್ಪುವನ್ನು ಎಚ್ಚರಗೊಳಿಸಿತು. <br/>
{{gap}}"ಹೂ. ಎಲ್ಲರಿಗೂ ಹೇಳಿದ್ಯಾ?" <br/>
{{gap}}"ನಾವಿಬ್ಬರೆ ಸಾಕು ಅಂದರು." <br/>
{{gap}}"ಮಾಸ್ತರು ಬರ್ತಾರಾ?"
{{gap}}"ಹೂಂ" <br/>
{{gap}}ಮಾಸ್ತರು ಕೂಡಾ ನಾಳೆ ಸಭೆಗೆ ಬರುವರೆಂಬ ಸುದ್ದಿಯಿಂದ, ಅವರು ಬೇಗನೆ ಹೊರಟೇ ಹೋಗುವರೆಂಬ ನೆನಪು ಜಾಗೃತವಾಗಿ, ಅಪ್ಪು ಮತ್ತೆ ಖಿನ್ನನಾದ. ಮುಖದಲ್ಲಾದ ಬದಲಾವಣೆಯನ್ನು ಗಮನಿಸಿದ ಚಿರುಕಂಡ: <br/>
{{gap}}"ಸ್ನಾನ ಆಯ್ತೇನು?" ಎಂದು ಕೇಳಿದ. <br/>
{{gap}}"ಹೂಂ." <br/>
{{gap}}"ನಡಿ ಹಾಗಾದರೆ, ಬಟ್ಟೆ ಹಾಕ್ಕೋ." <br/>
{{gap}}....ಅವರು ನಡೆಯುತ್ತಿದ್ದಂತೆ ಚಿರುಕಂಡ ಹೇಳಿದ: <br/>
{{gap}}"ಬರ್ತಾ ಕಣ್ಣನ ಮನೆಗೆ ಹೋಗಿದ್ದೆ." <br/>
{{gap}}ಅಪ್ಪುಸರಕ್ಕನೆ ಆತನತ್ತ ನೋಡಿದ. ಆ ನೋಟವನ್ನು ಗಮನಿಸಿ ಚಿರುಕಂಡ
ಮುಂದುವರಿಸಿದ: <br/><noinclude></noinclude>
7ixprv4mi23qzuav27bspshab1digrd
ಪುಟ:AAHVANA.pdf/೩೧
104
19997
320990
261008
2026-05-20T02:58:41Z
Shreelatha.Halemane
7642
/* Validated */
320990
proofread-page
text/x-wiki
<noinclude><pagequality level="4" user="Shreelatha.Halemane" /></noinclude><br>
{{rh|center='''ಆಹ್ವಾನ'''}}
{{gap}}{{gap}} ಆದರೆ ನಮ್ಮ ಪುಣ್ಯದಿಂದ, ಆ ನಾಟಕದ ಇನ್ನೊಂದು ಅಂಶ ನಿಜವಾಗಲಿಲ್ಲ; ಸ್ವಾತಂತ್ರ್ಯದ ಹರಣವಾಗಲಿಲ್ಲ. <br>
{{gap}}{{gap}}ಬದಲು, ವಿಶೇಷ ಘಟನೆಯೊಂದು ಸಂಭವಿಸಿತು. ಮಿಸುನಿಜಿಂಕೆಯಾಗಿದ್ದ ರಾಷ್ಟ್ರೀಯ ಭಾವೈಕ್ಯ, ವೈರಿಗಳು ಈ ನೆಲದ ಮೇಲೆ ಕಾಲಿರಿಸಿದ ಕೆಲವೇ ದಿನಗಳಲ್ಲಿ ಕರಗತವಾಯಿತು. ಏಕಪುರುಷನಂತೆ ಭಾರತ ಎದ್ದು ನಿಂತ ದೃಶ್ಯ ಕಂಡು ಲೋಕವೇ ಬೆರಗಾಯಿತು. ಪ್ರಜಾಕೋಟಿ ತೋರಿದ ಧೀರತೆ, ಆತ್ಮ ವಿಶ್ವಾಸ, ಉತ್ಸಾಹಗಳು ಅಭೂತಪೂರ್ವನಾಗಿದ್ದುವು.<br>
{{gap}}{{gap}} ಆದರೆ ನಮ್ಮ ದುರದೃಷ್ಟ__ಆ ಭವ್ಯ ದೃಶ್ಯ ಆಲ್ಪಾಯುವಾಗಬೇಕೆ! ಮಿಂಚಿ ಮಾಯವಾಗಬೇಕೆ!<br>
{{gap}}{{gap}} ರಣರಂಗದಲ್ಲಿ ಪರಾಜಿತರಾಗದೆ ಇದ್ದರೂ ಚೀಣಿಯರು ಇಲ್ಲಿಂದ ಕಾಲ್ತೆಗೆದರು. ಯಾಕೆ ಎಂಬುದೊಂದು ಚೀಣೀ ಒಗಟು. ಅನಾದೃಶವಾದ ರಾಷ್ಟ್ರಿಯ ಐಕ್ಯವೂ ಆ ಕಾರಣಗಳಲ್ಲಿ ಒಂದು ಎಂಬುದು ಸ್ಪಷ್ಟ. ಆದರೆ ಈ ಐಕ್ಯ, ಚೀಣೀ ಆಕ್ರಾಣಕಾರರೊಡನೆ ಕಣ್ಣುಮುಚ್ಚಾಲೆಯಾಡಿತು! ಅವರು ತೆರಳಿದೊಡನೆಯೇ ಇದು ಕಣ್ಮರೆಯಾಯಿತು!<br>
{{gap}}{{gap}} ಈಗ ಮತ್ತೆ, ಚೀಣೀ ಆಕ್ರಮಣದ ಪೂರ್ವದ ಸ್ಥಿತಿಗೇ ಮರಳಿದ್ದೇವೆ. ಜಾತಿ__ಮತಗಳಿಗಾಗಿ, ಸ್ಥಾನ ಪದವಿಗಳಿಗಾಗಿ, ನೀರು ಭಾಷೆಗಳಿಗಾಗಿ ಭಾರತದೊಳಗೆ ಆಂತರಿಕ ಹೋರಾಟ ನಡೆದಿದೆ. ರಕ್ಷಣೆಯ ಚೌಕಟ್ಟು; ಅದರೊಳಗೆ ನವಭಾರತದ ಚಿತ್ರನಿರ್ಮಾಣ. ಶತಮಾನಗಳಿಂದ ಹಸಿದಿದ್ದುವೇನೋ ಎಂಬಂತೆ ಹಸಿಬಣ್ಣಗಳನ್ನೇ ಕಬಳಿಸುತ್ತಿರುವ ಗೆದ್ದಲು ಹುಳುಗಳು. ಚೀಣೀಯರು ಬಂದುದಾಗಲೀ, ರಾಷ್ಟ್ರಪುರುಷನ ಪ್ರತಿಭಟನೆಯ ಠೇಂಕಾರ ಗಗನಭೇದಕವಾದುದಾಗಲೀ ಯಾವುದೋ ಕ್ಷಣದ ಕನಸು ಎನ್ನುವಂತೆ, ಪರಸ್ಪರರ ಮೇಲೆ ಕೆಸರೆರಚುವ ಓಕುಳಿಯಾಟದಲ್ಲಿ ಭಾರತದ ಮಕ್ಕಳೀಗ ನಿರತರಾಗಿದ್ದಾರೆ.
{{rh|center='''______'''}}
{{rh|center='''೨೯'''}}<noinclude></noinclude>
8xsxc57v0wpqdhuf1g0bvzykxv5v4xd
ಪುಟ:AAHVANA.pdf/೩೨
104
19998
320991
253306
2026-05-20T02:59:09Z
Shreelatha.Halemane
7642
/* Validated */
320991
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|'''ಆಹ್ವಾನ'''
'''೩'''}}
{{gap}}ಆ ಕಾರಣದಿಂದ, ಎರಡು ವರ್ಷಗಳಿಗೆ ಹಿಂದಿನ ಪರಿಸ್ಥಿತಿಯನ್ನು ಅನುಲಕ್ಷಿಸಿ ಬರೆಯಲಾದ ಈ "ಆಹ್ವಾನ" ನಾಟಕ ಮಾಲಿಕೆ, ಆಗ ಎಷ್ಟು ಸಮಂಜಸವಾಗಿತ್ತೊ ಈಗಲೂ ಅಷ್ಟೇ ಸಮಂಜಸವಾಗಿದೆ. ರಾಷ್ಟ್ರೀಯ ಅನೈಕ್ಯ ಕೊನೆಗಾಣುವವರೆಗೂ ಈ ಕೃತಿಗೆ ಅಳಿವಿಲ್ಲ__ಎಂಬುದು ಈ ಲೇಖಕನ ದೃಢ ವಿಶ್ವಾಸವಾಗಿದೆ.
{{gap}}ಆಗಾಗ್ಗೆ ಓದುವುದಕ್ಕೂ ನಿದ್ಯಾರ್ಥಿಮೇಳಗಳಲ್ಲಿ, ವಾರ್ಷಿಕೋತ್ಸವಗಳಲ್ಲಿ, ಸಭೆ ಸಮಾರಂಭಗಳಲ್ಲಿ ಕಲಾವಿಲಾಸಿಗಳು ಅಭಿನಯಿಸುವುದಕ್ಕೂ, ಈ ನಾಟಕ ಮಾಲಿಕೆ ಉಪಯುಕ್ತವೆನಿಸುವುದೆಂದು ನಾನು ನಂಬಿದ್ದೇನೆ. ಇದರ ವಸ್ತು ಭಾರತ__ಎಂದು ಮುನ್ನುಡಿಯ ಆರಂಭದಲ್ಲಿ ಹೇಳಿದೆ. ಇದನ್ನೋದಿದ ಬಳಿಕ, ಅಥವಾ ರಂಗಭೂಮಿಯ ಮೇಲೆ ಇದರ ಪ್ರಯೋಗಗಳನ್ನು ನೋಡಿದ ಬಳಿಕ, ಭಾರತವನ್ನು ಕುರಿತ ನಮ್ಮ ಜನರ ತಿಳಿವಳಿಕೆ ತುಸು ಹೆಚ್ಚುವುದು ಇಲ್ಲವೆ ನಿಚ್ಚಳವಾಗುವುದು ಎಂದು ನಾನು ಭಾವಿಸಿದ್ದೇನೆ.
{{rh|left='''೧೫ ಆಗಸ್ಟ್ ೧೯೬೩,''' |right='''__ನಿರಂಜನ'''}}
{{rh|left='''ಜಯನಗರ''' <br />
'''ಬೆಂಗಳೂರು_೧೧'''}}<noinclude></noinclude>
bz0g5nui4bsdwv3l9vcga0r57ymhyv5
ಪುಟ:AAHVANA.pdf/೩೩
104
19999
320992
261017
2026-05-20T02:59:34Z
Shreelatha.Halemane
7642
/* Validated */
320992
proofread-page
text/x-wiki
<noinclude><pagequality level="4" user="Shreelatha.Halemane" /></noinclude><br>{{rh|center= '''೩೧'''}}
<br><br><br>
{{rh|center= '''ಆಹ್ವಾನ'''}}<br>
{{gap}}{{gap}}{{gap}}{{gap}}{{gap}}<small>'''೧. ಭಾರತ ಗಾಥಾ'''</small><br>
{{gap}}{{gap}}{{gap}}{{gap}}{{gap}}<small>'''೨. ವಿರೋಧಾಭಾಸ'''</small><br>
{{gap}}{{gap}}{{gap}}{{gap}}{{gap}}<small>'''೩. ಇತಿಹಾಸ ಕಲಿಸುವ ಪಾಠ'''</small><br>
{{gap}}{{gap}}{{gap}}{{gap}}{{gap}}<small>'''೪. ದುಃಸ್ವಪ್ನ'''</small><br>
{{gap}}{{gap}}{{gap}}{{gap}}{{gap}}<small>'''೫. "ಇದು ಬರಿ ಬೆಳಗಲ್ಲೋ ಅಣ್ಣಾ"'''</small><br>
{{gap}}{{gap}}{{gap}}{{gap}}{{gap}}<small>'''೬. ಕಾಮನ ಬಿಲ್ಲು'''</small><noinclude></noinclude>
eb9ys0nz4djhk4xb1h3nh4numm79qt1
ಪುಟ:AAHVANA.pdf/೩೭
104
20003
320940
275963
2026-05-19T17:57:57Z
Pragathi. BH
7585
/* Validated */
320940
proofread-page
text/x-wiki
<noinclude><pagequality level="4" user="Pragathi. BH" /></noinclude>{{c|'''ಆಹ್ವಾನ'''}}
{{larger|'''ಋಷಿ :'''}}
{{C|<poem>"ಸಂ ಗಚ್ಛಧ್ವ ಸಂ ವದಧ್ವ ಸಂವೋ ಮನಾಂಸಿ ಜಾನತಾಮ್
ದೇವಾ ಭಾಗಂ ಯಥಾಪೂರ್ವ ಸಂಜಾನನ ಉಪಾಸತೇ
ಸಮನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ
ಸಹಚಿತ್ತ ಮೇಷಾಮ್
ಸಮಾನಂ ಮಂತ್ರಮಛಿಮಂತ್ರಯೇ ವಃ ಸಮಾನೇನ
ವೋ ಹವಿಷಾ ಜುಹೋಮಿ
ಸಮಾನಿ ವ ಆಕೃತಿಃ ಸಮಾನಾ ಹೃದಯಾನಿ ವಃ
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ” </poem>}} {{larger|'''ಸ್ರೀಕಂಠ :'''}}
{{c|[ಮೇಲಿನ ಶ್ಲೋಕದ ಕೊನೆಯ ಚರಣಗಳ ಹಿನ್ನೆಲೆಯಲ್ಲಿ]}}
ಒಂದೆಡೆ ಕರೆಯಿರಿ; ನಿಮ್ಮದಾಗಲಿ ಏಕ ಗುರಿ, ಸಮಾನ ಸಮಿತಿ; ಒಂದಾದ ವರ ಮನ ವಿಚಾರಗಳಿರಲಿ ಸಮಾನ. ನಿಮ್ಮ ಮುಂದಿಡುವೆ ಏಕೋದ್ದೇಶ. ಪೂಜಿಸಿರಿ ನೀವೆಲ್ಲ ಸಮಾನ ಬಲಿಯನ್ನಿತ್ತು. ನಿಮ್ಮದಾಗಲಿ ಏಕ ಧ್ಯೇಯ. ಇರಲಿ ಹೃದಯಗಳ ಐಕ್ಯ. ಒಂದಾಗಿರಲಿ ನಿಮ್ಮ ಮನ. ಹೀಗೆ ಸರ್ವರೂ ಸುಖವಾಗಿ ಒಟ್ಟಾಗಿ ಬಾಳಲಿ.
{{larger|'''ನಿರೂಪಕ :'''}} <br>
ಸಾಮಾಜಿಕ ಐಕ್ಯವನ್ನು ಕುರಿತ ಈ ವೇದಘೋಷವೇ ಪ್ರಾಚೀನ ಜನಪದದ ರೀತಿ ನೀತಿಗಳ ತಿರುಳು. ಜನಕನಂತಹ ರಾಜರ್ಷಿಗಳಿಂದ, ಯಾಜ್ಞವಲ್ಕ್ಯ ನಂತಹ ಬ್ರಹ್ಮರ್ಷಿಗಳಿಂದ, ಬಾಳು ಆಗ ಬೆಳಗಿತು. ಮುಂದೆ ರಾಮಾಯಣ ಮಹಾಭಾರತಗಳು ರೂಪುಗೊಂಡು, ಪುರಾಣ ಗ್ರಂಥಗಳಾದುವು. ಅಲ್ಲಿದೆ ರಾಷ್ಟ್ರ ವಿಸ್ತಾರದ_ಸಮಗ್ರತೆಯ_ಕಲ್ಪನೆ. ಆಗಿನ ಅರಸರೆಲ್ಲ ಇಡಿಯ ದೇಶವನ್ನೇ ಆಳಬಯಸಿದರೆಂಬುದಕ್ಕೆ ಅಶ್ವಮೇಧ ಯಾಗವೊಂದು ದೃಷ್ಟಾಂತ. ....ನಾಲ್ಕನೆಯದಾದ ಅಥರ್ವವೇದ ಸೃಷ್ಟಿಯಾದುದು ಆರ್ಯ_ಅನಾರ್ಯ ಸಂಕರದಿಂದ ಪ್ರಭಾವಿತವಾಗಿ. ....ಉಪನಿಷತ್ತುಗಳು ರಚಿತವಾಗಿ ವೈಚಾರಿಕ ವಿಕಾಸಕ್ಕೆ ಇಂಬು ದೊರೆಯಿತು.
{{c|_______}}
{{c|೩೭}}<noinclude></noinclude>
r6t8vfsrtd8silg0bkuu6wmdyqd9exj
ಪುಟ:AAHVANA.pdf/೩೮
104
20004
320941
275972
2026-05-19T17:58:24Z
Pragathi. BH
7585
/* Validated */
320941
proofread-page
text/x-wiki
<noinclude><pagequality level="4" user="Pragathi. BH" /></noinclude>{{c|ಆಹ್ವಾನ}}
'''ತಪಸ್ವಿ :'''<br>
{{gap}} ಆಲದ ಮರದ ಹಣ್ಣೊಂದನ್ನು ತಾ, ವತ್ಸ. <br>
'''ಶಿಷ್ಯ:'''<br>
{{gap}} ಇಗೋ, ತಂದೆನು,ಆರ್ಯ. <br>
'''ತಪಸ್ವಿ :'''<br>
{{gap}}ಅದನ್ನು ಭೇದಿಸು. <br>
'''ಶಿಷ್ಯ:'''<br>
{{gap}}ಭೇದಿಸಿದೆನು,ಆರ್ಯ. <br>
'''ತಪಸ್ವಿ :'''<br>
{{gap}}ಏನನ್ನು ಕಾಣುತ್ತಿರುವೆ? <br>
'''ಶಿಷ್ಯ:'''<br>
{{gap}}ಪುಟ್ಟ ಬೀಜಗಳು, ಆರ್ಯ. <br>
'''ತಪಸ್ವಿ :'''<br>
{{gap}}ಒಂದನ್ನು ಭೇದಿಸು. <br>
'''ಶಿಷ್ಯ:'''<br>
{{gap}}ಭೇದಿಸಿದೆನು ಆರ್ಯ. <br>
'''ತಪಸ್ವಿ :'''<br>
{{gap}}ಈಗ ಏನನ್ನು ಕಾಣುತ್ತಿರುವೆ ? <br>
'''ಶಿಷ್ಯ:'''<br>
{{gap}}ಏನಿಲ್ಲ,ಆರ್ಯ. <br>
'''ತಪಸ್ವಿ :'''<br>
{{gap}}ವತ್ಸ, ನಿನಗೆ ಅಗೋಚರವಾಗಿರುವುದು ಸಾರ: ಆ ಸಾರದಲ್ಲೇ ಬಲಿಷ್ಠವಾದ ಆಲದ ಮರ ಅಡಗಿದೆ. ನನ್ನನ್ನು ನಂಬು, ವತ್ಸ. ಆ ಸಾರದಲ್ಲೇ
{{c|______}}
{{c|೩೮}}<noinclude></noinclude>
g81hwnsuzgx35g3frx20d1yweblniil
ಪುಟ:AAHVANA.pdf/೩೯
104
20005
320942
275981
2026-05-19T17:58:37Z
Pragathi. BH
7585
/* Validated */
320942
proofread-page
text/x-wiki
<noinclude><pagequality level="4" user="Pragathi. BH" /></noinclude>{{c|ಆಹ್ವಾನ}}
ಆತ್ಮವಿದೆ__ಸರ್ವಸ್ವವಿದೆ. ಅದೇ ತಥ್ಯ__ಅದೇ ಆತ್ಮ. ನೀನೇ ಆ ಆತ್ಮ, ಶ್ವೇತಕೇತು! <br>
'''ನಿರೂಪಕ :'''<br>
{{gap}} ಈ ಬಗೆಯ ಚಿಂತನೆಯ ಜತೆಯಲ್ಲೇ ಯುದ್ಧ ಆಕ್ರಮಣಗಳೂ ಆಗ ನಡೆದುವು.<br>
'''ಭಾಷ್ಹಾಮ್:'''<br>
"ಅಲ್ಲಿ ಇಲ್ಲಿ ಕ್ರೌರ್ಯ ದಬ್ಬಾಳಿಕೆಗಳು ನಿಸ್ಸಂದೇಹವಾಗಿಯೂ ಇದ್ದುವು.
ಆದರೆ, ಆರಂಭದ ಇತರ ಸಂಸ್ಕೃತಿಗಳ ಸ್ಥಿತಿಗಳೂಡನೆ ತುಲನೆ ಮಾಡಿದಾಗ,
ಅದು ಅಲ್ಪವೇ ಸರಿ. ಪುರಾತನ ಭಾರತೀಯ ನಾಗರಿಕತೆಯ ಆತಿ ಸ್ಫುಟವಾದ ಲಕ್ಷಣವೆಂದರೆ ಅದರ ಮಾನವೀಯತೆ."<br>
'''ನಿರೂಪಕ:'''<br>
ಭಾರತಾಧ್ಯಯನದ ಪ್ರಾಧ್ಯಾಪಕ ಭಾಷ್ಹಾಮರ ಈ ಆಭಿಪ್ರಾಯ, ನಿಜಸ್ಥಿತಿಯ
ಸ್ಪಷ್ಟೀಕರಣ.... ಮಾನವೀಯತೆಯ ಉಚ್ಚತಮ ಪ್ರತಿಪಾದಕನಾಗಿ ಪುರುಷ
ಶ್ರೇಷ್ಠನೊಬ್ಬ ಕ್ರಿಸ್ತಪೂರ್ವ ಐದನೆಯ ಶತಮಾನದಲ್ಲಿ ಜನ್ಮ ತಳಿದ.<br>
'''ಇತಿಹಾಸಕಾರ:'''<br>
ಭಗವಾನ್ ಬುದ್ಧ. ಶಾಕ್ಯರಾಜಕುಮಾರ ಸಿದ್ಧಾರ್ಥನು ಸಕಲ ಸೌಭಾಗ್ಯ
ಗಳನ್ನೂ ತ್ಯಜಿಸಿ, ಜಗತ್ತಿನಲ್ಲಿಯ ದುಃಖದ ಮೂಲವನ್ನರಸುತ್ತ ಹೊರಟನು.
ಮೂವತ್ತೈದನೆಯ ವಯಸ್ಸಿನಲ್ಲಿ ಗಯೆಯ ಬಳಿ ಬೋಧಿವೃಕ್ಷದ ಕೆಳಗೆ
ನಾಲ್ವತ್ತೊಂಭತ್ತು ದಿನ ಧ್ಯಾನಮಗ್ನನಾದ ಬಳಿಕ, ಅವನಿಗೆ ಬೋಧಿ ಲಾಭವಾಯಿತು. ಸಿದ್ಧಾರ್ಥ ಬುದ್ಧನಾದನು. ವೈಶಾಖ ಪೂರ್ಣಿಮೆಯಂದು
ಸಿದ್ಧಾರ್ಥನ ಜನನ. ಬೋಧಿ ಲಾಭವಾದುದೂ ವೈಶಾಖ ಪೂರ್ಣಿಮೆಯಂದೇ. ಎಂಬತ್ತನೆಯ ವಯಸ್ಸಿನಲ್ಲಿ ವೈಶಾಖ ಶುಕ್ಲ ಪೂರ್ಣಿಮೆಯ ದಿನವೇ ಬುದ್ಧನ ಸರಿನಿರ್ವಾಣವೂ ಆಯಿತು. ಎಲ್ಲ ಪ್ರಾಣಿಗಳಲ್ಲಿ ದಯೆಯನ್ನು ತೋರಬೇಕೆಂದು ಅಹಿಂಸೆಯನ್ನು ಪಾಲಿಸಬೇಕೆಂದೂ ಬುದ್ಧನು ಸಾರಿದನು. ವೈಯಕ್ತಿಕ ವ್ಯಾಮೋಹವೇ ದುಃಖಕ್ಕೆ ಮೂಲ . ಆ ವ್ಯಾಮೋಹವನ್ನು ತಡೆಗಟ್ಟುಬೇಕು---ಎಂದನು.<noinclude></noinclude>
jweumekfg7popxa0yk59s5xzfjqe88f
ಪುಟ:AAHVANA.pdf/೪೦
104
20006
320943
275987
2026-05-19T17:58:53Z
Pragathi. BH
7585
/* Validated */
320943
proofread-page
text/x-wiki
<noinclude><pagequality level="4" user="Pragathi. BH" /></noinclude>{{c|ಆಹ್ವಾನ}}
{{c|[ಚೊಚ್ಚಲ ಹಸುಳೆಯನ್ನು ಕಳೆದುಕೊ೦ಡ ಯುವತಿ ತಾಯಿಯ ಆರ್ತನಾದ. ದುಃಖದ ಅಲೆ ಮೆಲ್ಲನೆ ಆಡಗಿ ಕ್ಷಣಮೌನದ ಬಳಿಕ-]}}
'''ಬುದ್ಧ :'''<br>
{{gap}} ಯಾರು ನೀನು, ಮಗಳೆ ?<br>
'''ಕಿಸಾಗೋತಮಿ:'''<br>
{{gap}} [ಬಿಕ್ಕುತ್ತ]<br>
ನಾನು ಕಿಸಾಗೋತಮಿ, ಭಗವನ್, ಇಗೋ, ಈ ಚೊಚ್ಚಲ ಹಸುಳೆಯನ್ನು ಕಳೆದುಕೊಂಡಿರುವ ಪಾಪಿ ! ಇದು ಉಸಿರಾಡುವಂತೆ ಮಾಡು ಭಗವನ್ !...<br>
'''ಬುದ್ಧ:''' <br>
{{gap}} ಆಗಲಿ, ಮಗಳೆ, ಒಂದು ಚಿಟಕೆ ಬಿಳಿಯ ಸಾಸಿವೆಕಾಳು ತಾ.<br>
'''ಕಿಸಾಗೋತಮಿ''':<br>
{{gap}} ತರುವೆನು ಭಗವನ್...ಆದರೆ, ಎಲ್ಲಿಂದ ತರಲಿ ? <br>
'''ಬುದ್ಧ:'''<br>
ಯಾರ ಮನೆಯಲ್ಲಿ ಈವರೆಗೆ ಮಗನಾಗಲೀ ಮಗಳಾಗಲೀ ಬೇರೆ ಯಾರೇ ಆಗಲೀ ಸತ್ತಿಲ್ಲವೋ, ಆ ಮನೆಯಿಂದ ತಾ.
{{c|[ಏಕನಾದದ ಶೋಕಧ್ವನಿಯ ಹಿನ್ನೆಲೆಯಲ್ಲಿ]}}
'''ಕಿಸಾಗೋತಮಿ:'''<br>
{{gap}} ಬಿಳಿಯ ಸಾಸಿವೆಯುಂಟೆ ನಿಮ್ಮ ಮನೆಯಲ್ಲಿ?<br>
'''ಹೆಂಗಸು:'''<br>
{{gap}} ಕೊಡಲೆ ತಂಗಿ?<br>
'''ಕಿಸಾಗೋತಮಿ:'''<br>
{{gap}} ಇಲ್ಲಿ ಯಾರೂ ಸತ್ತುದಿಲ್ಲವಷ್ಟೆ?<br>
'''ಹೆಂಗಸು:'''<br>
{{gap}} ಏನು ಮಾತು,ತಂಗಿ! ಬದುಕಿರುವವರು ಕಡಮೆ. ಸತ್ತವರೇ ಹೆಚ್ಚು.<br>
{{c|_____}}
{{c|೪೦}}<noinclude></noinclude>
jy0vo2opf3wz20h6uc4jfkr1g04kfjp
ಪುಟ:AAHVANA.pdf/೪೧
104
20007
320944
275993
2026-05-19T17:59:09Z
Pragathi. BH
7585
/* Validated */
320944
proofread-page
text/x-wiki
<noinclude><pagequality level="4" user="Pragathi. BH" /></noinclude>{{c|ಆಹ್ವಾನ}}
{{c|[ನಿರಾಶೆ ಸೂಚಿಸುವ ಏಕನಾದ]}}
'''ಕಿಸಾಗೋತಮಿ:'''<br>
ಅಮ್ಮಾ, ಇದು ಸಾವಿಲ್ಲದ ಮನೆಯೆ? ಸಾವಿಲ್ಲದ ಮನೆಯ ಸಾಸಿವೆ ಕಾಳು ಬೇಕು ನನಗೆ.<br>
'''ಇನ್ನೊಬ್ಬಳು ಹೆಂಗಸು:'''<br>
{{gap}} ಎಂಥ ಮಾತು..... ತ್ಸು---ತ್ಸು.....<br>
{{c|[ಕ್ಷಣ ಮೌನ. ತೀವ್ರಗೊಳ್ಳುವ ಏಕನಾದ] }}
'''ಕಿಸಾಗೋತಮಿ:'''<br>
{{gap}} ಕತ್ತಲಾಯಿತು. ಎಲ್ಲರನ್ನೂ ಕೇಳಿ ನೋಡಿದೆನಲ್ಲ! ಸಾವಿಲ್ಲದ ಮನೆಯಿಲ್ಲ--ಅಂಥ ಮನೆಯೇ ಇಲ್ಲ....<br>
{{gap}} [ಅರಿವು ಮೂಡುತ್ತ] <br>
{{gap}} ಮಗುವನ್ನು ಕಳೆದುಕೊಂಡ ತಾಯಿ ನಾನೊಬ್ಬಳೇ ಎಂದಿದ್ದೆನಲ್ಲ!.... ಎಂಥ ಹುಚ್ಚಿ ನಾನು! ಸಾವಿಲ್ಲದ ಮನೆಯ ಸಾಸಿವೆಯ ತಾರೆಂದು ಭಗವನ್
ಅಂದುದರ ಅರ್ಥ ಈಗ ತಿಳಿಯಿತು--ಈಗ ತಿಳಿಯಿತು....<br>
'''ನಿರೂಪಕ:'''<br>
{{gap}} ಜನಸಾಮಾನ್ಯರ ಬದುಕಿನಲ್ಲಷ್ಟೇ ಅಲ್ಲ! ರಾಷ್ಟ್ರ ಜೀವನದಲ್ಲೂ ಅರಿವು
ಮೂಡಿಸುವ ಕಾರ್ಯವನ್ನು ಬುದ್ಧ ಕೈಕೊಂಡ.<br>
'''ಇತಿಹಾಸಕಾರ:'''<br>
{{gap}} ಒಮ್ಮೆ ಶಾಕ್ಯರು ಮತ್ತು ಕೋಲಿಯೊಳಗಿನ ವೈರ ತೀವ್ರಗೊಂಡು ಯುದ್ಧ ಒದಗಿಬಂತು, ಎರಡೂ ಸೇನೆಗಳು ಕದನಕ್ಕೆಂದು ಸೂರ್ಯೋದಯವನ್ನು ಇದಿರುನೋಡುತ್ತ ಎದುರುಬದುರಾಗಿ ಅಣಿ ನೆರೆದುವು.<br>
{{c|[ತುತೂರಿ ಮೊಳಗುತ್ತದೆ. ಭೇರಿ ಬಾರಿಸುವ ಸದ್ದು, ಶಂಖಧ್ವನಿ] }}
'''ಶಾಕ್ಕರಾಜ :'''<br>
{{gap}} ಶಾಕ್ಯ ಸೇನಾಪತಿ ! ಎಲ್ಲವೂ ಸಿದ್ಧವೆ ?
{{c|____}}
{{c|೪೧}}<noinclude></noinclude>
1dos7bf29xfsaooq1vc90m522fe52hi
ಪುಟ:AAHVANA.pdf/೪೨
104
20008
320945
275998
2026-05-19T17:59:23Z
Pragathi. BH
7585
/* Validated */
320945
proofread-page
text/x-wiki
<noinclude><pagequality level="4" user="Pragathi. BH" /></noinclude>{{c|ಆಹ್ವಾನ}}
'''ಶಾಕ್ಯ ಸೇನಾನಿ:'''<br>
{{gap}} ಎಲ್ಲವೂ ಸಿದ್ಧ, ಮಹಾಪ್ರಭು !<br>
{{gap}} [ಮೇಲಿನ ಮಾತು ಮುಗಿಯುತ್ತಿರುವಂತೆಯೇ ತುತೂರಿ-ಭೇರಿ-ಶಂಖಧ್ವನಿ]<br>
'''ಕೋಲಿಯಾಧಿಪ :'''<br>
{{gap}} ಸನ್ನದ್ದರೆ, ಸೇನಾನಿ? <br>
'''ಕೋಲಿಯ ಸೇನಾನಿ:'''<br>
{{gap}} ಸನ್ನದ್ಧರು, ಮಹಾರಾಜ! <br>
{{gap}}[ಗುಜುಗುಜು ಕಲರವ. ಕುದುರಿಗಳ ಹೇಷಾರವ, ಘೀಳಿಡುವ ಆನೆಗಳು. ಈ ಸದ್ದು ಹಿನ್ನೆಲೆಗೆ ಸರಿದಂತೆ ದೂರದಿಂದ ಹಾವುಗೆಗಳ ಸಪ್ಪಳ, ಹತ್ತಿರ ಹತ್ತಿರ ಬರುತ್ತ ಹಿರಿದಾಗುವ ಸದ್ದು, ಮತ್ತೆ ಗುಸುಗುಸು, “ಯಾರು?”-ಪಿಸುದನಿ ; “ಯಾರು ?” ತಗ್ಗಿದ ಕ೦ಠ - ಗಾಬರಿಯಿಂದ-“ಬುದ್ಧ!”.... ಕಂಪಿಸುವ ಧ್ವನಿ: “ಭಗವನ್ ಬುದ್ಧ!”]<br>
'''ಬುದ್ಧ:'''<br>
{{gap}} [ಉಚ್ಛ ಕಂಠದಲ್ಲಿ-ನಿಧಾನವಾಗಿ]<br>
{{gap}} ನನ್ನ ಎಡಕ್ಕೂ ಬಲಕ್ಕೂ ನಿಂತಿರುವ ಯೋಧಗಣವೇ! ಶಾಕ್ಯರಾಜ!
ಕೋಲಿಯಾಧಿಪ! ಇದೇನೀ ಮೂರ್ಖತನ ! ಒಬ್ಬರನ್ನೊಬ್ಬರು ಕೊಲ್ಲುವ
ಇದೇನೀ ದುಷ್ಟತನ! ಯಾವ ಸುಖಕ್ಕಾಗಿ ಈ ಹಿಂಸಾಚರಣೆ ? ತಥಾಗತನ
ಈ ಹಿತಬೋಧೆಗೆ ಕಿವಿಗೊಡಿ, ಧರ್ಮ ಒಳ್ಳೆಯದು. ಧರ್ಮಕ್ಕೆ ಶರಣೆನ್ನಿ.
ಅಲ್ಪ ಆಸ್ರವ, ಬಹುಕಲ್ಯಾಣ, ದಯೆ, ದಾನ, ಸತ್ಯ,ಶೌಚ--ಇದೇ ಧರ್ಮ.
ಇದು ಲೋಕದಲ್ಲಿ ವೃದ್ಧಿಯಾಗುವುದೇ ಧರ್ಮಕಾರ್ಯ, ಧರ್ಮಾಚರಣೆ.
ಶೀಲವಿಲ್ಲದವನೆಂದೂ ಧರ್ಮವನ್ನಾಚರಿಸಲಾರ. ರಕ್ತದ ಕೋಡಿ ಹರಿಸಿ,
ರುಂಡಗಳನ್ನು ಚೆಂಡಾಡಿ, ಪಾಪಕಾರ್ಯಗಳನ್ನು ಮಾಡಿ, ನೀವು ಸಾಧಿಸು
ವುದಾರು ಏನು? ಹೆಜ್ಜೆಯನ್ನು ಹಿಂದಿಟ್ಟು ಚೆದರಿ ಹೋಗಿ! ಸಮ್ಯಕ್
ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್, ಸಮ್ಯಕ್ ಕರ್ಮ, ಸಮ್ಯಗಾ
ಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ, ಸಮ್ಯಕ್ ಸಮಾಧಿ-ಈ
ಅಷ್ಟಾಂಗಿಕ ಮಾರ್ಗವನ್ನು ಅನುಸರಿಸಿ!
{{c|____}}
{{c|೪೨}}<noinclude></noinclude>
10o6d7tus02nkzvngye6pe5qakwizq4
ಪುಟ:AAHVANA.pdf/೪೩
104
20009
320946
276003
2026-05-19T17:59:36Z
Pragathi. BH
7585
/* Validated */
320946
proofread-page
text/x-wiki
<noinclude><pagequality level="4" user="Pragathi. BH" /></noinclude>{{c|ಆಹ್ವಾನ}}
{{gap}} [ಗುಜುಗುಜು] <br>
{{gap}} ಅಗೋ ಸೂರ್ಯೋದಯವಾಗುತ್ತಿದೆ! ಈ ಶುಭ ಘಳಿಗೆಯಲ್ಲಿ ಪರಸ್ಪರ ಮಿತ್ರರಾಗಿ ಕೈಕೈ ಹಿಡಿದು ಧರ್ಮಕ್ಕೆ ಶರಣು ಬನ್ನಿ!<br>
{{c|[ಗುಜರಿಗುಜು]}}
'''ಶಾಕ್ಕರಾಜ :'''<br>
'''ಕೋಲಿಯಾಧಿಪ:<br>
{{gap}} ಕ್ಷಮಿಸಿ ಭಗವನ್ !<br>
'''ಸೈನಿಕ ಸ್ತೋಮ''':<br>
{{gap}} [ಸಾಲು ಮುರಿದು]<br>
{{gap}} ಜಯ ಜಯ ಬುದ್ಧದೇವ ! <br>
'''ನಿರೂಪಕ:'''<br>
{{gap}} ಬುದ್ಧನ ಪರಿನಿರ್ವಾಣವಾದ ಮೇಲೂ ಬುದ್ಧಮತ ಬೆಳೆಯಿತು. ದೇಶವನ್ನೆಲ್ಲಾ ಸಂಘದ ಸೂತ್ರಗಳಿಂದ ಕಟ್ಟಿತು. ವಿದೇಶಗಳಿಗೂ ವ್ಯಾಪಿಸಿತು. ಅಸಂಖ್ಯ ಭಿಕ್ಕುಗಳು ಎಲ್ಲೆಡೆಗಳಿಗೂ ಬುದ್ಧನ ಸಂದೇಶವನ್ನು ಹೊತ್ತು ಸಾಗಿದರು.<br>
'''ಭಿಕ್ಕುಗಳು:'''<br>
{{c|<poem>"ಬುದ್ಧಂ ಶರಣಂ ಗಚ್ಛಾಮಿ
ಧಮ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ"</poem>}}
'''ನಿರೂಪಕ:'''<br>
{{gap}} ಬುದ್ಧನ ಸಮಕಾಲೀನನು ವರ್ಧಮಾನ ಮಹಾವೀರ. ಬುದ್ಧ ಧರ್ಮದಂತೆಯೇ ವೇದೋಪನಿಷತ್ತುಗಳಿಗಿಂತ ಭಿನ್ನವಾದ ಇನ್ನೊಂದು ಮತವನ್ನು- ಜೈನ ಮತವನ್ನು-ಈತ ಸ್ಥಾಪಿಸಿದ. ದೇಶದ ವಿವಿಧ ಭಾಗಗಳಲ್ಲಿ-- ಕಾಥೇವಾಡ,
ಗುಜರಾತ್, ರಾಜಸ್ಥಾ ನ, ಕರ್ನಾಟಕ, ದಖ್ಖಣದ ಪೀಠಭೂಮಿ ಇಲ್ಲೆಲ್ಲ ---
ಈ ಧರ್ಮ ಪ್ರಸಾರಗೊಂಡಿತು. ಅದು, ವಿಶ್ವವನ್ನು ಜಯಿಸ ಹೊರಟ
ಅಲೆಕ್ಝಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ ಕಾಲ, ಇಲ್ಲಿಂದ ಆತ
{{c|____}}
{{c|೪೩}}<noinclude></noinclude>
c49bmhiro2qfd0ycestmkq1vjhzs6gv
ಪುಟ:AAHVANA.pdf/೪೪
104
20010
320947
65096
2026-05-19T17:59:51Z
Pragathi. BH
7585
/* Validated */
320947
proofread-page
text/x-wiki
<noinclude><pagequality level="4" user="Pragathi. BH" /></noinclude>ಆಹ್ವಾನ
ಹಿಂತೆರಳಿದ ಬಳಿಕ ಮೌರ್ಯಸಾಮ್ರಾಜ್ಯದ ಸ್ಥಾಪನೆಯಾಯಿತು. ರಾಜಕೀಯ
ವಾಗಿ ಭಾರತವನ್ನು ಒಗ್ಗೂಡಿಸಲೆತ್ನಿಸಿದ ಮೊದಲ ಸಮ್ರಾಟನೇ ಚಂದ್ರಗುಪ್ತ.
ಇತಿಹಾಸಕಾರ :
ಚಂದ್ರಗುಪ್ತನ ರಾಜಧಾನಿಯಾದ ಪಾಟಲೀಪುತ್ರದಲ್ಲಿ ಗ್ರೀಕರ ರಾಯಭಾರಿ
ಯಾಗಿದ್ದ ಮೆಗಾಸ್ತನೀಸ್ ಮೌರ್ಯ ಸಾಮ್ರಾಜ್ಯವು ಸುಖ ಸಮೃದ್ಧಿಯಿಂದ
ಕೂಡಿತ್ತೆಂದು ಬರೆದಿದ್ದಾನೆ, ತಕ್ಷಶಿಲೆಯ ವಿಶ್ವವಿದ್ಯಾಲಯವು ಆಗ
ಪ್ರಖ್ಯಾತವಾಗಿತ್ತು.
ಕೌಟಲ್ಯ :
" ಪ್ರಜೆಗಳ ಸುಖದಲ್ಲೇ ರಾಜನ ಸುಖವಿದೆ. ಅವರ ಕಲ್ಯಣವೇ ಅವನ
ಕಲ್ಯಣ. ತನಗೆ ಇಷ್ಟವೆನಿಸಿದ್ದರಿಂದಲೇ ತನ್ನ ಒಳಿತು......ಎಂದು ಆತ
ಪರಿಗಣಿಸಬಾರದು. ಬದಲು, ತನ್ನ ಪ್ರಜೆಗಳಿಗೆ ಇಷ್ಟವಾದ್ದರಿಂದಲೇ ತನ್ನ
ఒళిತು......ಎಂದು ಭಾವಿಸಬೇಕು.”
ಇತಿಹಾಸಕಾರ :
ಇಂತಹ ರಾಜನೀತಿಯನ್ನೊಳಗೊಂಡ 'ಅರ್ಥಶಾಸ್ತ್ರ'ವನ್ನು ಬರೆದ ಕೌಟಲ್ಯನು
ಚಂದ್ರಗುಪ್ತನ ಪ್ರಧಾನಾಮಾತ್ಯನಾಗಿದ್ದరు. ದೀಘರ್ ರಾಜ್ಯಭಾರದ ಬಳಿಕ
ಚಂದ್ರಗುಪ್ತನು ಮಗನಿಗೆ ಪಟ್ಟಕಟ್ಟ, ತಾನು ಮೈಸೂರಿನ ಬಳಿಯ ಶ್ರವಣ
ಬೆಳಗೊಳಕ್ಕೆ ತೆರಳಿ, ಜಿನ ಧರ್ಮದ ನಿಯಮದಂತೆ ಆಹಾರ ಪಾನೀಯ
ಗಳನ್ನು ತೊರೆದು ನಿರ್ವಾಣ ಹೊಂದಿದನು.
ನಿರೂಪಕ :
ಐಕ್ಯ ಭಾರತದ ಭವ್ಯಚಿತ್ರ ಕಣ್ಣಿಗೆ ಕಟ್ಟುವುದು ಸಮ್ರಾಟ ಅಶೋಕನ
ಕಾಲದಲ್ಲಿ-ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ, ಬೌದ್ಧ ವಿಹಾರ
ಗಳಿಂದ, ಚೈತ್ಯಗಳಿಂದ, ಶಿಲಾಸ್ತಂಭ-ಸ್ತೂಪಗಳಿಂದ ಕಂಗೊಳಿಸುತ್ತಿದ್ದ
ಅಶೋಕನ ಭಾರತ ಧರ್ಮಸಾಮ್ರಾಜ್ಯವಾಗಿತ್ತು.
ಅಶೋಕ :
" ಎಲ್ಲ ಜನರೂ ನನ್ನ ಮಕ್ಕಳು....ಮುಖ್ಯವಾಗಿ ನಾನು ಬುದ್ಧಮತಕ್ಕೆ
ಆಶ್ರಯವೀಯುವೆನಾದರೂ, ಉಳಿದೆಲ್ಲ ಮತಗಳನ್ನೂ ನಾನು ಪುರಸ್ಕರಿಸು
೪೪<noinclude></noinclude>
bz30f4u95iwt2skmarogqb1eanahvz8
320949
320947
2026-05-19T18:02:10Z
Pragathi. BH
7585
320949
proofread-page
text/x-wiki
<noinclude><pagequality level="4" user="Pragathi. BH" /></noinclude>ಆಹ್ವಾನ
ಹಿಂತೆರಳಿದ ಬಳಿಕ ಮೌರ್ಯಸಾಮ್ರಾಜ್ಯದ ಸ್ಥಾಪನೆಯಾಯಿತು. ರಾಜಕೀಯ
ವಾಗಿ ಭಾರತವನ್ನು ಒಗ್ಗೂಡಿಸಲೆತ್ನಿಸಿದ ಮೊದಲ ಸಮ್ರಾಟನೇ ಚಂದ್ರಗುಪ್ತ.
ಇತಿಹಾಸಕಾರ :
ಚಂದ್ರಗುಪ್ತನ ರಾಜಧಾನಿಯಾದ ಪಾಟಲೀಪುತ್ರದಲ್ಲಿ ಗ್ರೀಕರ ರಾಯಭಾರಿ
ಯಾಗಿದ್ದ ಮೆಗಾಸ್ತನೀಸ್ ಮೌರ್ಯ ಸಾಮ್ರಾಜ್ಯವು ಸುಖ ಸಮೃದ್ಧಿಯಿಂದ
ಕೂಡಿತ್ತೆಂದು ಬರೆದಿದ್ದಾನೆ, ತಕ್ಷಶಿಲೆಯ ವಿಶ್ವವಿದ್ಯಾಲಯವು ಆಗ
ಪ್ರಖ್ಯಾತವಾಗಿತ್ತು.
ಕೌಟಲ್ಯ :
" ಪ್ರಜೆಗಳ ಸುಖದಲ್ಲೇ ರಾಜನ ಸುಖವಿದೆ. ಅವರ ಕಲ್ಯಣವೇ ಅವನ
ಕಲ್ಯಣ. ತನಗೆ ಇಷ್ಟವೆನಿಸಿದ್ದರಿಂದಲೇ ತನ್ನ ಒಳಿತು......ಎಂದು ಆತ
ಪರಿಗಣಿಸಬಾರದು. ಬದಲು, ತನ್ನ ಪ್ರಜೆಗಳಿಗೆ ಇಷ್ಟವಾದ್ದರಿಂದಲೇ ತನ್ನ
ఒళిತು......ಎಂದು ಭಾವಿಸಬೇಕು.”
ಇತಿಹಾಸಕಾರ :
ಇಂತಹ ರಾಜನೀತಿಯನ್ನೊಳಗೊಂಡ 'ಅರ್ಥಶಾಸ್ತ್ರ'ವನ್ನು ಬರೆದ ಕೌಟಲ್ಯನು
ಚಂದ್ರಗುಪ್ತನ ಪ್ರಧಾನಾಮಾತ್ಯನಾಗಿದ್ದరు. ದೀಘರ್ ರಾಜ್ಯಭಾರದ ಬಳಿಕ
ಚಂದ್ರಗುಪ್ತನು ಮಗನಿಗೆ ಪಟ್ಟಕಟ್ಟ, ತಾನು ಮೈಸೂರಿನ ಬಳಿಯ ಶ್ರವಣ
ಬೆಳಗೊಳಕ್ಕೆ ತೆರಳಿ, ಜಿನ ಧರ್ಮದ ನಿಯಮದಂತೆ ಆಹಾರ ಪಾನೀಯ
ಗಳನ್ನು ತೊರೆದು ನಿರ್ವಾಣ ಹೊಂದಿದನು.
ನಿರೂಪಕ :
ಐಕ್ಯ ಭಾರತದ ಭವ್ಯಚಿತ್ರ ಕಣ್ಣಿಗೆ ಕಟ್ಟುವುದು ಸಮ್ರಾಟ ಅಶೋಕನ
ಕಾಲದಲ್ಲಿ-ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ, ಬೌದ್ಧ ವಿಹಾರ
ಗಳಿಂದ, ಚೈತ್ಯಗಳಿಂದ, ಶಿಲಾಸ್ತಂಭ-ಸ್ತೂಪಗಳಿಂದ ಕಂಗೊಳಿಸುತ್ತಿದ್ದ
ಅಶೋಕನ ಭಾರತ ಧರ್ಮಸಾಮ್ರಾಜ್ಯವಾಗಿತ್ತು.
ಅಶೋಕ :
" ಎಲ್ಲ ಜನರೂ ನನ್ನ ಮಕ್ಕಳು....ಮುಖ್ಯವಾಗಿ ನಾನು ಬುದ್ಧಮತಕ್ಕೆ
ಆಶ್ರಯವೀಯುವೆನಾದರೂ, ಉಳಿದೆಲ್ಲ ಮತಗಳನ್ನೂ ನಾನು ಪುರಸ್ಕರಿಸು
{{c|____}}
{{c|೪೪}}<noinclude></noinclude>
8y9ukxa9un86til763muh05rei9q1iw
ಪುಟ:AAHVANA.pdf/೪೫
104
20011
320948
65025
2026-05-19T18:01:18Z
Pragathi. BH
7585
/* Validated */
320948
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
ವೆನು. ನನ್ನ ಪ್ರಜೆಗಳಾದರೂ ಹಾಗೆಯೇ ಮಾಡಬೇಕೆಂಬುದು ನನ್ನ
ನಿರ್ದೇಶವಾಗಿದೆ___”
'''ಇತಿಹಾಸಕಾರ :'''
___ಹೀಗೆ ಹೇಳಿದ ಅಶೋಕನು ತನ್ನ ಅನುಜ್ಞೆಯನ್ನೂ ಧರ್ಮಬೋಧೆಗಳನ್ನೂ
ಅಸಂಖ್ಯ ಶಿಲಾಶಾಸನಗಳಾಗಿ ಕೊರೆಸಿದನು.
'''ಅಶೋಕ :'''
" ದೇವಾನಾಂ ಪ್ರಿಯದರ್ಶಿ ಪ್ರಭುವು ಅಭಿಷಿಕ್ತನಾದ ಎಂಟನೆಯ ವರ್ಷದಲ್ಲಿ
ಕಳಿಂಗವನ್ನು ಜಯಿಸಲಾಯಿತು. ಆಗ ಒಂದೂವರೆ ಲಕ್ಷ ಜನರನ್ನು ಸೆರೆ
ಹಿಡಿಯಲಾಯಿತು ; ಒಂದು ಲಕ್ಷ ಜನ ಗಾಯಗೊಂಡರು ; ಅನೇಕ ಜನ
ಸತ್ತರು. ಕಳಿಂಗವನ್ನು ಜಯಿಸಿ ಆದೊಡನೆಯೇ ದೇವಾನಾಂಪ್ರಿಯನು,
ಧರ್ಮವನ್ನು ಪ್ರೀತಿಸುವುದಕ್ಕೂ ಧರ್ಮಬೋಧೆಯನ್ನು ಮಾಡುವುದಕ್ಕೂ
ತೊಡಗಿದನು.... ಈ ದಿನ, ಕಳಿಂಗದಲ್ಲಿ ಯಾತನೆಗೆ ಗುರಿಯಾದವರ
ನೂರರಲ್ಲೊ೦ದು ಸಾಲು....ಸಾವಿರದಲ್ಲೊ೦ದು ಪಾಲು ಕೊಲ್ಲಲ್ಪಟ್ಟರೆ,
ಸತ್ತರೆ ಅಥವಾ ಸೆರೆಹಿಡಿಯಲ್ಪಟ್ಟರೆ, ದೇವಾನಾಂಪ್ರಿಯನಿಗೆ ಬಲು ಸಂಕಟ
ವಾಗುವುದು. ದೇವಾನಾಂಪ್ರಿಯನು ತನ್ನ ಸಾಮ್ರಾಜ್ಯದ ಅರಣ್ಯ ನಿವಾಸಿ
ಗಳಿಗೂ ಕೂಡ ತಿಳಿಯಹೇಳುವನು ; ಅವರನ್ನು ಸರಿದಾರಿಗೆ ತರಬಯಸುವನು.
ಆದರೆ ದೇವಾನಾಂಪ್ರಿಯನು ಕರುಣಾಳುವಷ್ಟೇ ಅಲ್ಲ, ಶಕ್ತಿಶಾಲಿಯೂ ಆಗಿ
ದ್ದಾನೆ. ಪಶ್ಚಾತ್ತಾಪಪಡಿರಿ, ಇಲ್ಲವೆ ಹತರಾಗಿರಿ___ಎಂದು ಅವರಿಗೆ ಹೇಳು
ತಾನೆ....ಧರ್ಮವಿಜಯವೇ ಶ್ರೇಶ್ಟತಮ ನಿಜಯವೆಂಬುದು ದೇವಾನಾಂ
ಪ್ರಿಯನ ಅಭಿಪ್ರಾಯ....ತನ್ನ ರಾಜ್ಯ ಹಾಗೂ ಗಡಿ ಪ್ರದೇಶಗಳಲ್ಲಿ ಮಾತ್ರ
ವಲ್ಲದೆ, ಆರು ನೂರು ಯೋಜನ ದೂರವಿರುವ ಗ್ರೀಕ್ ರಾಜ್ಯಗಳಲ್ಲೂ....
ದಕ್ಷಿಣದಲ್ಲಿ ಚೋಳ, ಪಾಂಡ್ಯ ದೇಶಗಳಲ್ಲೂ ಸಿಂಹಳತನಕವೂ ದೇವಾನಾಂ
ಪ್ರಿಯನಿಗೆ ಈ ಧರ್ಮವಿಜಯವು ಲಭಿಸಿದೆ.”
'''ಇತಿಹಾಸಕಾರ :'''
ಆಂತರಿಕ ಆಡಳಿತದಲ್ಲಿ ಮಾನವೀಯತೆ, ಆಕ್ರಮಣಕಾರೀ ಯುದ್ಧಗಳ
ವರ್ಜನೆ___ಇವು ಅಶೋಕನ ರಾಜ್ಯಭಾರದ ಮುಖ್ಯ ಸೂತ್ರಗಳಾಗಿದ್ದುವು.
{{center|೪೫}}<noinclude></noinclude>
fcsw50u9758qnu8vgtswfv4lythw0yb
320950
320948
2026-05-19T18:03:03Z
Pragathi. BH
7585
320950
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
ವೆನು. ನನ್ನ ಪ್ರಜೆಗಳಾದರೂ ಹಾಗೆಯೇ ಮಾಡಬೇಕೆಂಬುದು ನನ್ನ
ನಿರ್ದೇಶವಾಗಿದೆ___”
'''ಇತಿಹಾಸಕಾರ :'''
___ಹೀಗೆ ಹೇಳಿದ ಅಶೋಕನು ತನ್ನ ಅನುಜ್ಞೆಯನ್ನೂ ಧರ್ಮಬೋಧೆಗಳನ್ನೂ
ಅಸಂಖ್ಯ ಶಿಲಾಶಾಸನಗಳಾಗಿ ಕೊರೆಸಿದನು.
'''ಅಶೋಕ :'''
" ದೇವಾನಾಂ ಪ್ರಿಯದರ್ಶಿ ಪ್ರಭುವು ಅಭಿಷಿಕ್ತನಾದ ಎಂಟನೆಯ ವರ್ಷದಲ್ಲಿ
ಕಳಿಂಗವನ್ನು ಜಯಿಸಲಾಯಿತು. ಆಗ ಒಂದೂವರೆ ಲಕ್ಷ ಜನರನ್ನು ಸೆರೆ
ಹಿಡಿಯಲಾಯಿತು ; ಒಂದು ಲಕ್ಷ ಜನ ಗಾಯಗೊಂಡರು ; ಅನೇಕ ಜನ
ಸತ್ತರು. ಕಳಿಂಗವನ್ನು ಜಯಿಸಿ ಆದೊಡನೆಯೇ ದೇವಾನಾಂಪ್ರಿಯನು,
ಧರ್ಮವನ್ನು ಪ್ರೀತಿಸುವುದಕ್ಕೂ ಧರ್ಮಬೋಧೆಯನ್ನು ಮಾಡುವುದಕ್ಕೂ
ತೊಡಗಿದನು.... ಈ ದಿನ, ಕಳಿಂಗದಲ್ಲಿ ಯಾತನೆಗೆ ಗುರಿಯಾದವರ
ನೂರರಲ್ಲೊ೦ದು ಸಾಲು....ಸಾವಿರದಲ್ಲೊ೦ದು ಪಾಲು ಕೊಲ್ಲಲ್ಪಟ್ಟರೆ,
ಸತ್ತರೆ ಅಥವಾ ಸೆರೆಹಿಡಿಯಲ್ಪಟ್ಟರೆ, ದೇವಾನಾಂಪ್ರಿಯನಿಗೆ ಬಲು ಸಂಕಟ
ವಾಗುವುದು. ದೇವಾನಾಂಪ್ರಿಯನು ತನ್ನ ಸಾಮ್ರಾಜ್ಯದ ಅರಣ್ಯ ನಿವಾಸಿ
ಗಳಿಗೂ ಕೂಡ ತಿಳಿಯಹೇಳುವನು ; ಅವರನ್ನು ಸರಿದಾರಿಗೆ ತರಬಯಸುವನು.
ಆದರೆ ದೇವಾನಾಂಪ್ರಿಯನು ಕರುಣಾಳುವಷ್ಟೇ ಅಲ್ಲ, ಶಕ್ತಿಶಾಲಿಯೂ ಆಗಿ
ದ್ದಾನೆ. ಪಶ್ಚಾತ್ತಾಪಪಡಿರಿ, ಇಲ್ಲವೆ ಹತರಾಗಿರಿ___ಎಂದು ಅವರಿಗೆ ಹೇಳು
ತಾನೆ....ಧರ್ಮವಿಜಯವೇ ಶ್ರೇಶ್ಟತಮ ನಿಜಯವೆಂಬುದು ದೇವಾನಾಂ
ಪ್ರಿಯನ ಅಭಿಪ್ರಾಯ....ತನ್ನ ರಾಜ್ಯ ಹಾಗೂ ಗಡಿ ಪ್ರದೇಶಗಳಲ್ಲಿ ಮಾತ್ರ
ವಲ್ಲದೆ, ಆರು ನೂರು ಯೋಜನ ದೂರವಿರುವ ಗ್ರೀಕ್ ರಾಜ್ಯಗಳಲ್ಲೂ....
ದಕ್ಷಿಣದಲ್ಲಿ ಚೋಳ, ಪಾಂಡ್ಯ ದೇಶಗಳಲ್ಲೂ ಸಿಂಹಳತನಕವೂ ದೇವಾನಾಂ
ಪ್ರಿಯನಿಗೆ ಈ ಧರ್ಮವಿಜಯವು ಲಭಿಸಿದೆ.”
'''ಇತಿಹಾಸಕಾರ :'''
ಆಂತರಿಕ ಆಡಳಿತದಲ್ಲಿ ಮಾನವೀಯತೆ, ಆಕ್ರಮಣಕಾರೀ ಯುದ್ಧಗಳ
ವರ್ಜನೆ___ಇವು ಅಶೋಕನ ರಾಜ್ಯಭಾರದ ಮುಖ್ಯ ಸೂತ್ರಗಳಾಗಿದ್ದುವು.
{{c|____}}
{{c|೪೫}}<noinclude></noinclude>
toul2mfx1f88o5rkmmj964g3gnzsd55
ಪುಟ:AAHVANA.pdf/೪೬
104
20012
320951
65045
2026-05-19T18:05:33Z
Pragathi. BH
7585
/* Validated */
320951
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ನಿರೂಪಕ :'''
ಮಹಾನ್ ವ್ಯಕ್ತಿ ಅಶೋಕನ ಮರಣದ ಅನಂತರ ಮತ್ತೆ ಗ್ರೀಕರು, ಶಕರು,
ಕುಶಾಣರು, ಹೂಣರು, ಭಾರತದ ಮೇಲೆ ದಂಡೆತ್ತಿ ಬಂದರು. ಹೊರಗಿನಿಂದ
ಬಂದ ಈ ಎಲ್ಲ ನದಿಗಳೂ ಭಾರತೀಯ ಜನಪದದ ಮಹಾನದಿಯಲ್ಲಿ ಲೀನ
ವಾಗಿ ಹೋದುವು....ಕ್ರಿಸ್ತಶಕ ಏಳನೆಯ ಶತಮಾನದಲ್ಲಿ ಮತ್ತೋಮ್ಮೆ
ಭಾರತದ ಬಹು ಭಾಗ ಒಂದೇ ಆಡಳಿತಕ್ಕೆ ಒಳಗಾಯಿತು.
'''ಇತಿಹಾಸಕಾರ :'''
ಗುಪ್ತವಂಶದ ಹರ್ಷವರ್ಧನ.
'''ಹ್ಯುಅನ್ ತ್ಸಾಂಗ್ :'''
" ಸಮ್ರಾಟ ಹರ್ಷ ಬಡಪಾಯಿ ಪ್ರಜೆಗಳ ದೂರುಗಳನ್ನು ಅಪಾರ ತಾಳ್ಮೆ
ಯಿಂದ ಆಲಿಸುತ್ತಿದ್ದೆ. ಆದೂ ರಾಜಸಭಾಭವನದಲ್ಲಲ್ಲ___ಪ್ರವಾಸಿಗಳ
ಬೀದಿಯಂಚಿನ ಡೇರೆಗಳಲ್ಲಿ. ಅವನು ನಿಶ್ತಾವಂತನಾದ ಸಹ್ರದಯನಾದ
ಸ್ನೇಹಿತ. ತತ್ತ್ವಜ್ಞಾನವೂ ಸಾಹಿತ್ಯವೂ ಅವನಿಗೆ ಪ್ರಿಯವಾಗಿದ್ದುವು."
'''ಇತಿಹಾಸಕಾರ :'''
___ಇದು ಚೀನೀ ಯಾತ್ರಿಕ ಹ್ಯುಅನ್ ತ್ಸಾಂಗ್ ವ್ಯಕ್ತಪಡಿಸಿರುವ ಮೆಚ್ಚುಗೆ.
ನಳಂದದ ವಿಶ್ವವಿದ್ಯಾಲಯವು ಆಗ ಜಗತ್ ಪ್ರಸಿದ್ದವಾಗಿತ್ತು. ದೇಶದ
ನಾನಾ ಭಾಗಗಳಿಂದಲೂ ವಿದೇಶಗಳಿಂದಲೂ ಬಂದ ಹತ್ತು ಸಾವಿರ ವಿದ್ಯಾರ್ಥಿ
ಗಳು ಅಲ್ಲಿ ಅಭ್ಯಸಿಸುತ್ತಿದ್ದರು. ಬುದ್ಧ ಧರ್ಮದ ಜತೆಗೆ ಹಿಂದೂ ತತ್ತ್ವ
ಜ್ಞಾನ, ತರ್ಕ, ವ್ಯಕರಣ, ವೈದ್ಯ___ಈ ಎಲ್ಲ ವಿಷಯಗಳ ಬಗೆಗೆ ಪಾಠ
ಪ್ರವಚನಗಳು ನಡೆಯುತ್ತಿದ್ದುವು.
'''ನಿರೂಪಕ :'''
ಕ್ರಿಸ್ತಾನಂತರದ ಕೆಲ ಶತಮಾನಗಳ ಮುಖ್ಯ ಘಟನೆಯೇ ಭಾರತೀಯ
ಸಾಹಿತ್ಯದ ನಿರ್ಮಾಣ. ಭಾಸನ 'ಸ್ವಪ್ನವಾಸವದತ್ತ', ಕಾಳಿದಾಸನ
'ಶಾಕುಂತಲ', ಶೂದ್ರಕನ 'ಮೃಚ್ಛಕಟಕ', ವಿಶಾಖದತ್ತನ 'ಮುದ್ರಾರಾಕ್ಷಸ'
ಭವಭೂತಿಯ 'ಮಾಲತೀ ಮಾಧವ', ಬಾಣನ 'ಕಾದಂಬರಿ' ತಮಿಳುನಾಡಿನ
'ಶಿಲಪ್ಪದಿಕಾರಂ'-ಇವು ಅಮೂಲ್ಯ ಸಾರಸ್ವತ ಸೃಷ್ಟಿ. ಭರತನ 'ನಾಟ್ಯಶಾಸ್ತ್ರ',
{{c|____}}
{{c|೪೬}}<noinclude></noinclude>
qtdhyg8p564xsyvoivry05v1b45oool
ಪುಟ:AAHVANA.pdf/೪೭
104
20013
320952
65080
2026-05-19T18:06:53Z
Pragathi. BH
7585
/* Validated */
320952
proofread-page
text/x-wiki
<noinclude><pagequality level="4" user="Pragathi. BH" /></noinclude>ಆಹ್ಯಾನ
ಕಲೆಯ ಲೋಕದ ಧರ್ಮಗ್ರಂಥ, ಆರ್ಯ, ದ್ರಾವಿಡ ಸಂಸ್ಕೃತಿಗಳ ಸಂಗಮ
ವಾಗಲೇ ಸಾಧಿಸಿತ್ತು. ದಾಕ್ಷಿಣಾತ್ಯರ ಶಿವ, ಆರ್ಯರಿಂದಲೂ ಪುರಸ್ಕೃತ
ನಾದ........ದರ್ಶನಗಳ ಘರ್ಷಣೆಯೂ ಸಂಕರವೂ ನಡೆಯುತ್ತಿದ್ದ ಆ ಕಾಲದಲ್ಲಿ
ಅದ್ವೈತ್ಯ ಸಿದ್ದಾಂತದ ಅಧ್ವರ್ಯುವಾಗಿ ಶಂಕರ ಕಾಣಿಸಿಕೊಂಡ.
ಇತಿಹಾಸಕಾರ :
ಕೇರಳದಲ್ಲಿ ಹುಟ್ಟಿದ ಶಂಕರಾಚಾರ್ಯರು ಅದ್ವೈತ ಸಿದ್ದಾಂತವನ್ನು ಪ್ರತಿ
ಪಾದಿಸುತ್ತ, ವೇದೋಪನಿಷತ್ತುಗಳ ಹಿರಿಮೆಯನ್ನು ಎತ್ತಿ ಹಿಡಿಯುತ್ತ,
ದಿಗ್ವಿಜಯಕ್ಕೆಂದು ಹೊರಟು ಭಾರತದಾದ್ಯಂತ ಸಂಚಾರಮಾಡಿದರು. ದಕ್ಷಿಣದ
ಶೃಂಗೇರಿ-ಕಾಂಚಿಗಳಲ್ಲಿ, ಪಶ್ಚಿಮದ ದಾರಕೆಯಲ್ಲಿ, ಉತ್ತರದ ಬದರೀನಾಥ
ದಲ್ಲಿ, ಪೂರ್ವದ ಪುರಿಯಲ್ಲಿ ಪೀಠಗಳನ್ನು ಅವರು ಸ್ಧಾಪಿಸಿದರು.
ನಿರೂಪಕ :
ಆಸ್ತಿಕರ ನಿತ್ಯಪೂಜೆಯ ಸ್ತೋತ್ರಗಳ ಬಣ್ಣನೆಯಂತೆ ಏಳು ಪವಿತ್ರ ನದಿಗಳ,
ಏಳು ಪವಿತ್ರ ಪರ್ವತಗಳ, ಏಳು ಪುಣ್ಯಕ್ಷೇತ್ರಗಳ ಭೂಮಿ ಭಾಗತ.
ಭಕ್ತ :
<poem>
“ ಸೌರಾಷ್ರ್ಟೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನ |
ಉಜ್ಜಯಿನ್ಯಾಂ ಮಹಾಕಾಲಮೋಂಕಾರಮಮರೇಶ್ವರೇ ||
ಕೇದಾರ ಹಿಮವತ್ಪ್ರಶ್ಟೇ ಡಾಕಿನ್ಯಾ ಭೀಮಶಂಕರಂ |
ವಾರಣಾಸ್ಯಾಂಚ ವಿಶ್ವೇಶಂ ತ್ರ್ಯ ಂಬಕಂ ಗೌತಮಿತಟೇ ||
ವೈದ್ಯನಾಥ೦ ಚಿತಾಭೂಮೌ ನರೇಶಂ ದ್ವಾರಕಾವತೇ |
ಸೇತು ಬಂಧೇ ಚ ರಾಮೇಶಾ ಘುಶ್ಮೇಶಂಚ ಶಿವಾಲಯೇ ||
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತ జನ್ಮಕ್ರತಂ ಪಾಪಂ ಸ್ಮರಣೇನ ವಿನಶ್ಯತಿ ||
</poem>
ನಿರೂಪಕ :
ಶೈವಾರಾಧನೆಯ ಪುಣ್ಯಸ್ಥಳಗಳ ನಾಮಾವಳಿಯಲ್ಲಾ ఇದೆ భాರತದ
ವಿಸ್ತಾರದ ಕಲ್ಪನೆ.
{{c|____}}
{{c|೪೭}}<noinclude></noinclude>
ca0kncmtu5b36muhqfyfup9zaax8mgw
320953
320952
2026-05-19T18:07:53Z
Pragathi. BH
7585
320953
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ಯಾನ}}
ಕಲೆಯ ಲೋಕದ ಧರ್ಮಗ್ರಂಥ, ಆರ್ಯ, ದ್ರಾವಿಡ ಸಂಸ್ಕೃತಿಗಳ ಸಂಗಮ
ವಾಗಲೇ ಸಾಧಿಸಿತ್ತು. ದಾಕ್ಷಿಣಾತ್ಯರ ಶಿವ, ಆರ್ಯರಿಂದಲೂ ಪುರಸ್ಕೃತ
ನಾದ........ದರ್ಶನಗಳ ಘರ್ಷಣೆಯೂ ಸಂಕರವೂ ನಡೆಯುತ್ತಿದ್ದ ಆ ಕಾಲದಲ್ಲಿ
ಅದ್ವೈತ್ಯ ಸಿದ್ದಾಂತದ ಅಧ್ವರ್ಯುವಾಗಿ ಶಂಕರ ಕಾಣಿಸಿಕೊಂಡ.
'''ಇತಿಹಾಸಕಾರ :'''
ಕೇರಳದಲ್ಲಿ ಹುಟ್ಟಿದ ಶಂಕರಾಚಾರ್ಯರು ಅದ್ವೈತ ಸಿದ್ದಾಂತವನ್ನು ಪ್ರತಿ
ಪಾದಿಸುತ್ತ, ವೇದೋಪನಿಷತ್ತುಗಳ ಹಿರಿಮೆಯನ್ನು ಎತ್ತಿ ಹಿಡಿಯುತ್ತ,
ದಿಗ್ವಿಜಯಕ್ಕೆಂದು ಹೊರಟು ಭಾರತದಾದ್ಯಂತ ಸಂಚಾರಮಾಡಿದರು. ದಕ್ಷಿಣದ
ಶೃಂಗೇರಿ-ಕಾಂಚಿಗಳಲ್ಲಿ, ಪಶ್ಚಿಮದ ದಾರಕೆಯಲ್ಲಿ, ಉತ್ತರದ ಬದರೀನಾಥ
ದಲ್ಲಿ, ಪೂರ್ವದ ಪುರಿಯಲ್ಲಿ ಪೀಠಗಳನ್ನು ಅವರು ಸ್ಧಾಪಿಸಿದರು.
'''ನಿರೂಪಕ :'''
ಆಸ್ತಿಕರ ನಿತ್ಯಪೂಜೆಯ ಸ್ತೋತ್ರಗಳ ಬಣ್ಣನೆಯಂತೆ ಏಳು ಪವಿತ್ರ ನದಿಗಳ,
ಏಳು ಪವಿತ್ರ ಪರ್ವತಗಳ, ಏಳು ಪುಣ್ಯಕ್ಷೇತ್ರಗಳ ಭೂಮಿ ಭಾಗತ.
'''ಭಕ್ತ :'''
<poem>
“ ಸೌರಾಷ್ರ್ಟೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನ |
ಉಜ್ಜಯಿನ್ಯಾಂ ಮಹಾಕಾಲಮೋಂಕಾರಮಮರೇಶ್ವರೇ ||
ಕೇದಾರ ಹಿಮವತ್ಪ್ರಶ್ಟೇ ಡಾಕಿನ್ಯಾ ಭೀಮಶಂಕರಂ |
ವಾರಣಾಸ್ಯಾಂಚ ವಿಶ್ವೇಶಂ ತ್ರ್ಯ ಂಬಕಂ ಗೌತಮಿತಟೇ ||
ವೈದ್ಯನಾಥ೦ ಚಿತಾಭೂಮೌ ನರೇಶಂ ದ್ವಾರಕಾವತೇ |
ಸೇತು ಬಂಧೇ ಚ ರಾಮೇಶಾ ಘುಶ್ಮೇಶಂಚ ಶಿವಾಲಯೇ ||
ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತ జನ್ಮಕ್ರತಂ ಪಾಪಂ ಸ್ಮರಣೇನ ವಿನಶ್ಯತಿ ||
</poem>
'''ನಿರೂಪಕ :'''
ಶೈವಾರಾಧನೆಯ ಪುಣ್ಯಸ್ಥಳಗಳ ನಾಮಾವಳಿಯಲ್ಲಾ ఇದೆ భాರತದ
ವಿಸ್ತಾರದ ಕಲ್ಪನೆ.
{{c|____}}
{{c|೪೭}}<noinclude></noinclude>
6tahron2x0dqrktltep6r1uwcwppvat
ಪುಟ:AAHVANA.pdf/೪೮
104
20014
320954
65095
2026-05-19T18:09:10Z
Pragathi. BH
7585
/* Validated */
320954
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಇತಿಹಾಸಕಾರ :'''
ತಮಿಳುನಾಡಿನ ನಾಯನಾರರಿಂದಲೂ ಆಳ್ವಾರರಿಂದಲೂ ವಿಪುಲವಾಗಿ ಭಕ್ತಿ
ಗೀತಗಳ ರಚನೆಯಾಯಿತು.
'''ನಿರೂಪಕ :'''
ಭಾರತದ ಧಾರ್ಮಿಕ ಸಾಹಿತ್ಯಕ್ಕಿದು ಅಪೂರ್ವ ಕೊಡುಗೆ. ಭಾವ ಒಂದೇ-
ಭಾಷೆ ಬೇರೆ.
'''ಇತಿಹಾಸಕಾರ :'''
ಶಂಕರಾಚಾರ್ಯರ ಬಳಿಕ ರಾಮಾನುಜಾಚಾರ್ಯರು ವಿಶಿಶ್ತಾದ್ವೈತದ
ಸಿದ್ದಾಂತವನ್ನು ಪ್ರತಿಪಾದಿಸಿದರು.
'''ನಿರೂಪಕ :'''
ದಕ್ಷಿಣದಿಂದ ಮೊದಲಾಗಿ ಭಾರತದಲ್ಲೆಲ್ಲಾ ಪ್ರಸಾರಗೊಂಡ ಇನ್ನೊಂದು
ಸಿದ್ಧಾಂತ.
'''ಇತಿಹಾಸಕಾರ :'''
ಕರ್ನಾಟಕದಲ್ಲಿ ಮಧ್ವರು ದ್ವೈತ ಸಿದ್ದಾಂತದ ಆಚಾರ್ಯರಾದರು.
'''ತಾಗರಾಜ :'''
" ನೀ ಚಿತ್ತಮು ನಿಶ್ಚಲಮು ನಿರ್ಮಲ....
ಮನಿ ನಿನ್ನೇ ನಮ್ಮಿ ನಾನುರ........”
'''ನಿರೂಪಕ :'''
ಪುರಂದರದಾಸರ ಪದಗಳಿಂದ ಸ್ಫೂರ್ತಿಗೊಂಡು ಗಾನಚಕ್ರವರ್ತಿ ತಾಗರಾಜರು
ತೆಲುಗಿನಲ್ಲಿ ರಚಿಸಿದ ಕೀರ್ತನೆಗಳು ಹೇರಳ...ಮಧ್ವಾಚಾರ್ಯರ ಸಿದ್ದಾಂತ
ವಂತಾ ದೂರದ ಬಂಗಾಲದ ಗೌರಾಂಗ ಚೈತನ್ಯಪಂಥದ ಮೇಲೂ ಪ್ರಭಾವ
ಬೀರಿತು.
'''ಇತಿಹಾಸಕಾರ :'''
ಇದಕ್ಕೂ ಒಂದು ಶತಮಾನದ ಮುನ್ನ ಕಲ್ಯಣದ ಕ್ರಾಂತಿಯಾಯಿತು.
'ಕಾಯಕವೇ ಕೈಲಾಸ'ವೆಂಬ ತತ್ವವನ್ನು ಬೋಧಿಸಿದ ಬಸವೇಶ್ವರರು
ವೀರಶೈವ ಮತದ ಸಂಸ್ಥಾಪನಾಚಾರ್ಯರಾದರು.
{{c|____}}
{{c|೪೮}}<noinclude></noinclude>
ixnzz4mlbro8rqdj3giz3ytdkk2007g
ಪುಟ:AAHVANA.pdf/೪೯
104
20015
320955
275951
2026-05-19T18:09:48Z
Pragathi. BH
7585
/* Validated */
320955
proofread-page
text/x-wiki
<noinclude><pagequality level="4" user="Pragathi. BH" />{{c|ಆಹ್ವಾನ}}</noinclude>
'''ಬಸವೇಶ್ವರ:'''
{{c|<poem>"ದಯವಿಲ್ಲದ ಧರ್ಮವಾವುದಯ್ಯ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿ,
ದಯವೇ ಧರ್ಮದ ಮೂಲವಯ್ಯ.
ಕೂಡಲ ಸಂಗಮದೇವರಂತಲ್ಲದೊಲ್ಲನಯ್ಯ." </poem>}}
'''ನಿರೂಪಕ :'''
<p>ಕರ್ಣಾಟಕಾಂಧ್ರಗಳಲ್ಲಿ ವೀರಶೈವ ಮತ ಪ್ರಸಾರವಾಯಿತು. ಉತ್ತರದ ರಾಜ್ಯಗಳೆಡೆಗೂ ಜಂಗಮರು ನಡೆದರು.<br>
'''ಇತಿಹಾಸಕಾರ :'''
<p>ಈ ವೇಳೆಗಾಗಲೇ ಮುಸಲ್ಮಾನರು ಭಾರತದ ಮೇಲೆ ಏರಿ ಬಂದಿದ್ದರು.ಅವರ ಧರ್ಮವೂ ಇಲ್ಲಿ ಮನೆಮಾಡಿತು.<br>
'''ನಿರೂಪಕ :'''
<p>ಇಸ್ಲಾಂ ಜ್ಞಾನ ಭಂಡಾರದೊಡನೆ ಬಂದಿತು; ಧಾರ್ಮಿಕ ಪ್ರಜಾಪ್ರಭುತ್ವದ
ಭಾವನೆಯನ್ನು ತಂದಿತು. ಭಾರತೀಯ ಸಂಗೀತ, ಶಿಲ್ಪಕಲೆ, ಚಿತ್ರಕಲೆಗೆ
ಸ್ಥಿರವಾದ ಅಮೂಲ್ಯವಾದ ಕಾಣ್ಕೆಗಳು ಮುಸಲ್ಮಾನರಿಂದ ಬಂದುವು......
ಬಡ ನೇಕಾರನೊಬ್ಬ ರಾಮರಹೀಮರಲ್ಲಿ ಏಕರೂಪವನ್ನು ಕಂಡ.<br>
'''ಕಬೀರ:'''
{{c|<poem> “ ಬೀತಗಯೆ ದಿನ ಭಜನ ಬಿನಾರೆ |
ಬಾಲ ಅವಸ್ಥಾ ಖೆಲ ಗವಾಯೊ |
ಜಬ ಜೋ ಬನ ತಬ ಮಾನ ಘನಾರೆ ||
ಕಹತ ಕಬೀರ ಸುನೊ' ಭಯಿ ಸಾಧೊ |
ಪಾರ ಉತರಗಯೆ ಸಂತ ಜನಾರೆ ||"</poem>}}
'''ನಿರೂಪಕ :'''
<p> ಕಬೀರನು ಹಾಡಿದ ಆ ಹದಿನೈದು-ಹದಿನಾರನೆಯ ಶತಮಾನದಲ್ಲೇ ಗುರು ನಾನಕ್, ಹಿಂದೂಧರ್ಮ ಇಸ್ಲಾಂಗಳೆರಡರಿಂದಲೂ ಅತ್ಯುತ್ತಮವಾದ
{{c|_____}}
{{C|೪೫}}
{{larger|A3]}}<noinclude></noinclude>
im3e3oc13wtv89b3lr0w4b0vgcatvzl
ಪುಟ:AAHVANA.pdf/೫೦
104
20016
320956
277330
2026-05-19T18:11:39Z
Pragathi. BH
7585
/* Validated */
320956
proofread-page
text/x-wiki
<noinclude><pagequality level="4" user="Pragathi. BH" /></noinclude> '''ಆಹ್ವಾನ'''
ಬೋಧನೆಗಳನ್ನಾರಿಸಿ,ಶಾಂತಿಯ ಸದ್ಭಾವನೆಯ ಸಂದೇಶ ಸಾರುವ ಸಿಕ್ಖ್ ಥವನ್ನು ಸ್ಥಾಪಿಸಿದ.
ಸಿಕ್ಖ್ ಪ್ರಾರ್ಥನೆ:
{{center|<poem>“........ ನಾನಕ್ ನಾಮ್ ಚಾರ್ಹದಿ ಕಲಾ
ತೇರಿ ಭಾನೀ ಸರ್ಬತ್ಕ ಭಲಾ ”</poem>}}
'''ಸ್ತ್ರೀಕಂಠ:'''
“ ನಾನಕನ ಹೆಸರಿಲ್ಲಿ,.ಧರ್ಮ ನೀಡುವ ನಂಬುಗೆಯಿಂದ, ದೇವರ ದಯೆಯಿಂದ, ವಿಶ್ವದ ಬಗೆಗೆ ನಮಗಿರುವುದು ಸೌಹಾರ್ದವೊಂದೇ."
'''ನಿರೂಪಕ:'''
ಧರ್ಮ ಸಮನ್ವಯದ ದೃಷ್ಟಿಯ ಜತೆಗೇ ರಾಜಕೀಯವಾಗಿಯೂ ಭಾರತ ದೇಶವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿಯೊಬ್ಬ, ಹದಿನಾರನೆಯ ಶತ ಮಾನದ ಮಧ್ಯದಲ್ಲಿ ದಿಲ್ಲಿಯ ಸಿಂಹಾಸನದ ಮೇಲೆ ವಿರಾಜಮಾನನಾದ.
ಇತಿಹಾಸಕಾರ :
ಅಕ್ಬರ್. 'ಇತಿಹಾಸದಲ್ಲಿನ ಅತಿ ಬುದ್ಧಿಶಾಲಿಗಳಾದ, ಪರವು ಮಾನವೀಯ ದೃಷ್ಟಿಯ, ಅತ್ಯಂತ ಸುಸಂಸ್ಕೃತರಾದ ಅರಸರಲ್ಲೊಬ್ಬ.'
'''ಅಕ್ಬರ್:'''
ಹೊಸತಾದ ವಿಶಾಲವಾದ ನಿಷ್ಪಕ್ಷಪಾತಿಯಾದ ದೃಷ್ಟಿಕೋನವೊಂದೇ, ಸಂಕುಚಿತ ಮನೋಭಾವದ ಮುರುಟು ಬಂಧನದಿಂದ ಮನುಷ್ಯನನ್ನು ಬಿಡುಗಡೆ ಮಾಡಬಲ್ಲುದೆಂದು ನಮ್ಮ ಅಭಿಪ್ರಾಯ. ಅದಕ್ಕಾಗಿ ದಿನ್-ಇ-ಇಲಾಹಿ-ದಿವ್ಯಸಂಥ...ನಮ್ಮಿಂದ ಸ್ಥಾಪನೆಯಾಗುತ್ತಿದೆ. ಎಲ್ಲ ಮತಗಳ ಸತ್ಯಗಳೂ ಇದರಲ್ಲಿ ಅಡಕವಾಗಿವೆ. ದೇವರಿಗೆ ಮನ್ನಣೆ, ಜನತೆಗೆ ಶಾಂತಿ, ಸಾಮ್ರಾಜ್ಯಕ್ಕೆ ಭದ್ರತೆ-ಇವೇ ಈ ಪಂಥದ ಸೂತ್ರಗಳಾಗಿವೆ. ನಾವು ಸುಲ್-ಇ-ಕುಲ್-- ವಿಶ್ವಶಾಂತಿ-ಯನ್ನೂ ಬಯಸುತ್ತೇವೆ.
'''ಇತಿಹಾಸಕಾರ:'''
ಈ ಪಂಥ ದೇಶವನ್ನೆಲ್ಲಾ ಆವರಿಸುವ 'ನಾಳೆ'ಯ ಕನಸನ್ನು ಅಕ್ಬ್ ರನು ಕಂಡನು.ಹಿಂದೂಗಳ ಮೇಲಿನ ಜೆಜಿಯಾ ತೆರಿಗೆಯನ್ನು ಅವನು ತೆಗೆದು<noinclude></noinclude>
pqu5evzhal6djgsili8rse0sfm9clkc
320957
320956
2026-05-19T18:14:06Z
Pragathi. BH
7585
320957
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ
ಬೋಧನೆಗಳನ್ನಾರಿಸಿ,ಶಾಂತಿಯ ಸದ್ಭಾವನೆಯ ಸಂದೇಶ ಸಾರುವ ಸಿಕ್ಖ್ ಥವನ್ನು ಸ್ಥಾಪಿಸಿದ.
'''ಸಿಕ್ಖ್ ಪ್ರಾರ್ಥನೆ:'''
{{center|<poem>“........ ನಾನಕ್ ನಾಮ್ ಚಾರ್ಹದಿ ಕಲಾ
ತೇರಿ ಭಾನೀ ಸರ್ಬತ್ಕ ಭಲಾ ”</poem>}}
'''ಸ್ತ್ರೀಕಂಠ:'''
“ ನಾನಕನ ಹೆಸರಿಲ್ಲಿ,.ಧರ್ಮ ನೀಡುವ ನಂಬುಗೆಯಿಂದ, ದೇವರ ದಯೆಯಿಂದ, ವಿಶ್ವದ ಬಗೆಗೆ ನಮಗಿರುವುದು ಸೌಹಾರ್ದವೊಂದೇ."
'''ನಿರೂಪಕ:'''
ಧರ್ಮ ಸಮನ್ವಯದ ದೃಷ್ಟಿಯ ಜತೆಗೇ ರಾಜಕೀಯವಾಗಿಯೂ ಭಾರತ ದೇಶವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿಯೊಬ್ಬ, ಹದಿನಾರನೆಯ ಶತ ಮಾನದ ಮಧ್ಯದಲ್ಲಿ ದಿಲ್ಲಿಯ ಸಿಂಹಾಸನದ ಮೇಲೆ ವಿರಾಜಮಾನನಾದ.
'''ಇತಿಹಾಸಕಾರ :'''
ಅಕ್ಬರ್. 'ಇತಿಹಾಸದಲ್ಲಿನ ಅತಿ ಬುದ್ಧಿಶಾಲಿಗಳಾದ, ಪರವು ಮಾನವೀಯ ದೃಷ್ಟಿಯ, ಅತ್ಯಂತ ಸುಸಂಸ್ಕೃತರಾದ ಅರಸರಲ್ಲೊಬ್ಬ.'
'''ಅಕ್ಬರ್:'''
ಹೊಸತಾದ ವಿಶಾಲವಾದ ನಿಷ್ಪಕ್ಷಪಾತಿಯಾದ ದೃಷ್ಟಿಕೋನವೊಂದೇ, ಸಂಕುಚಿತ ಮನೋಭಾವದ ಮುರುಟು ಬಂಧನದಿಂದ ಮನುಷ್ಯನನ್ನು ಬಿಡುಗಡೆ ಮಾಡಬಲ್ಲುದೆಂದು ನಮ್ಮ ಅಭಿಪ್ರಾಯ. ಅದಕ್ಕಾಗಿ ದಿನ್-ಇ-ಇಲಾಹಿ-ದಿವ್ಯಸಂಥ...ನಮ್ಮಿಂದ ಸ್ಥಾಪನೆಯಾಗುತ್ತಿದೆ. ಎಲ್ಲ ಮತಗಳ ಸತ್ಯಗಳೂ ಇದರಲ್ಲಿ ಅಡಕವಾಗಿವೆ. ದೇವರಿಗೆ ಮನ್ನಣೆ, ಜನತೆಗೆ ಶಾಂತಿ, ಸಾಮ್ರಾಜ್ಯಕ್ಕೆ ಭದ್ರತೆ-ಇವೇ ಈ ಪಂಥದ ಸೂತ್ರಗಳಾಗಿವೆ. ನಾವು ಸುಲ್-ಇ-ಕುಲ್-- ವಿಶ್ವಶಾಂತಿ-ಯನ್ನೂ ಬಯಸುತ್ತೇವೆ.
'''ಇತಿಹಾಸಕಾರ:'''
ಈ ಪಂಥ ದೇಶವನ್ನೆಲ್ಲಾ ಆವರಿಸುವ 'ನಾಳೆ'ಯ ಕನಸನ್ನು ಅಕ್ಬ್ ರನು ಕಂಡನು.ಹಿಂದೂಗಳ ಮೇಲಿನ ಜೆಜಿಯಾ ತೆರಿಗೆಯನ್ನು ಅವನು ತೆಗೆದು<noinclude></noinclude>
bu284ybd01ecm85mbf0i420ymfkwh5f
ಪುಟ:AAHVANA.pdf/೫೧
104
20017
320958
277331
2026-05-19T18:14:57Z
Pragathi. BH
7585
/* Validated */
320958
proofread-page
text/x-wiki
<noinclude><pagequality level="4" user="Pragathi. BH" /></noinclude> '''ಆಹ್ವಾನ'''
ಹಾಕಿನನು. ಸೈನಿಕರಿಂದ ಕೊಲೆ ಸುಲಿಗೆಗಳಾಗದಂತೆ ಕಟ್ಟಪ್ಪಣೆ ವಿಧಿಸಿದನು. ಅವನ ಸೇನೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ರಜಪೂತರೇ ಇದ್ದರು. ಬೀರಬಲ್,ತೋಡರಮಲ್,ಮಾನ್ಸಿಂಗ್ ರಂತಹ ಆಪ್ತಕೋಟಿಯಿದ್ದ ಅಕ್ಬರನು ಇಂಡಿಯ ದೇಶವನ್ನು ಸಂಪದ್ಭರಿತವನ್ನಾಗಿ ಮಾಡಿದನು.
'''ನಿರೂಪಕ:'''
ಹೊಸ ರಾಷ್ಟ್ರವನ್ನು ಕಟ್ಟಿದ ಛತ್ರಪತಿ ಶಿವಾಜಿಗಾದರೂ ದೇಶದ ಐಕ್ಯವೇ ತಾರಕ ಮಂತ್ರವಾಗಿತ್ತು.
'''ಇತಿಹಾಸಕಾರ:'''
ಪೋರ್ಚುಗೀಸರು, ಡಚ್ಚರು, ಬ್ರಿಟಿಷರು, ಜೈನರು, ಫ್ರೆಂಚರು ಭಾರತದಲ್ಲಿ ಪದಾರ್ಪಣ ಮಾಡಿದರು.
Jesus Christ :
“Father, forgive them, for they know not what they do.”
'''ನಿರೂಪಕ:'''
ಕ್ರಿಸ್ತನುಡಿ. ಒಂದನೆಯ ಶತಮಾನದಲ್ಲೇ ಸಂತ ಥಾಮಸ್ ಯೇಸುವಿನ ಸಂದೇಶದೊಡನೆ ದಕ್ಷಿಣ ಭಾರತಕ್ಕೆ ಬಂದ. ಮಾನವೀಯತೆಯ ಆಗರವಾದ ಕ್ರಿಸ್ತಧರ್ಮ, ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಂತೂ ಭಾರತದ ಎಲ್ಲೆಡೆಗಳಲ್ಲಿ ಬೇರುಬಿಟ್ಟಿತು.
'''ಇತಿಹಾಸಕಾರ :'''
ಹತ್ತೊಂಭತ್ತನೆಯ ಶತಮಾನದ ಅಂತ್ಯದವೇಳೆಗೆ ಇಂಡಿಯ ಭಾರತವೇ ಬ್ರಿಟಿಷರಿಗೆ ಶರಣಾಗತವಾಯಿತು.
'''ನಿರೂಪಕ:'''
ಇಂಡಿಯಾವಾಗಿ ಮಾರ್ಪಟ್ಟ ಹಿಂದೂಸ್ಥಾನ, ಅರ್ಥಾತ್ ಭಾರತ, ಬಂಧನ ದಲ್ಲಿ ಒಂದಾಯಿತು. ಆಧುನಿಕ ಯುಗದ ಕ್ರಾಂತಿಕಾರಕ ವಿಚಾರಗಳು ಭರತ ಭೂಮಿಯ ಮಡಿಲನ್ನು ತುಂಬಿದುವು.<noinclude></noinclude>
2s7o5p5y1nojsim0mcctgn0ujsrjlaa
320959
320958
2026-05-19T18:16:42Z
Pragathi. BH
7585
320959
proofread-page
text/x-wiki
<noinclude><pagequality level="4" user="Pragathi. BH" /></noinclude> '''ಆಹ್ವಾನ'''
ಹಾಕಿನನು. ಸೈನಿಕರಿಂದ ಕೊಲೆ ಸುಲಿಗೆಗಳಾಗದಂತೆ ಕಟ್ಟಪ್ಪಣೆ ವಿಧಿಸಿದನು. ಅವನ ಸೇನೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ರಜಪೂತರೇ ಇದ್ದರು. ಬೀರಬಲ್,ತೋಡರಮಲ್,ಮಾನ್ಸಿಂಗ್ ರಂತಹ ಆಪ್ತಕೋಟಿಯಿದ್ದ ಅಕ್ಬರನು ಇಂಡಿಯ ದೇಶವನ್ನು ಸಂಪದ್ಭರಿತವನ್ನಾಗಿ ಮಾಡಿದನು. <br />
'''ನಿರೂಪಕ:'''<br />
ಹೊಸ ರಾಷ್ಟ್ರವನ್ನು ಕಟ್ಟಿದ ಛತ್ರಪತಿ ಶಿವಾಜಿಗಾದರೂ ದೇಶದ ಐಕ್ಯವೇ ತಾರಕ ಮಂತ್ರವಾಗಿತ್ತು.<br />
'''ಇತಿಹಾಸಕಾರ:'''<br />
ಪೋರ್ಚುಗೀಸರು, ಡಚ್ಚರು, ಬ್ರಿಟಿಷರು, ಜೈನರು, ಫ್ರೆಂಚರು ಭಾರತದಲ್ಲಿ ಪದಾರ್ಪಣ ಮಾಡಿದರು.
Jesus Christ :
“Father, forgive them, for they know not what they do.”<br />
'''ನಿರೂಪಕ:'''
ಕ್ರಿಸ್ತನುಡಿ. ಒಂದನೆಯ ಶತಮಾನದಲ್ಲೇ ಸಂತ ಥಾಮಸ್ ಯೇಸುವಿನ ಸಂದೇಶದೊಡನೆ ದಕ್ಷಿಣ ಭಾರತಕ್ಕೆ ಬಂದ. ಮಾನವೀಯತೆಯ ಆಗರವಾದ ಕ್ರಿಸ್ತಧರ್ಮ, ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಂತೂ ಭಾರತದ ಎಲ್ಲೆಡೆಗಳಲ್ಲಿ ಬೇರುಬಿಟ್ಟಿತು.
'''ಇತಿಹಾಸಕಾರ :'''
ಹತ್ತೊಂಭತ್ತನೆಯ ಶತಮಾನದ ಅಂತ್ಯದವೇಳೆಗೆ ಇಂಡಿಯ ಭಾರತವೇ ಬ್ರಿಟಿಷರಿಗೆ ಶರಣಾಗತವಾಯಿತು.
'''ನಿರೂಪಕ:'''
ಇಂಡಿಯಾವಾಗಿ ಮಾರ್ಪಟ್ಟ ಹಿಂದೂಸ್ಥಾನ, ಅರ್ಥಾತ್ ಭಾರತ, ಬಂಧನ ದಲ್ಲಿ ಒಂದಾಯಿತು. ಆಧುನಿಕ ಯುಗದ ಕ್ರಾಂತಿಕಾರಕ ವಿಚಾರಗಳು ಭರತ ಭೂಮಿಯ ಮಡಿಲನ್ನು ತುಂಬಿದುವು.<noinclude></noinclude>
iqni6uby6gr5obzp0gxyt6r60xid0vy
ಪುಟ:AAHVANA.pdf/೫೨
104
20018
320993
277334
2026-05-20T03:01:01Z
Shreelatha.Halemane
7642
/* Validated */
320993
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|ಆಹ್ವಾನ}}
'''ಇತಿಹಾಸಕಾರ:'''
ರಾಮಮೋಹನ ರಾಯ್, ದಯಾನಂದ ಸರಸ್ವತಿಯರಂಥ ವಿಚಾರವೇತ್ತರು, ಸಾಮಾಜಿಕ ಕ್ಷೇತ್ರದಲ್ಲಿ ತೀವ್ರ ಸುಧಾರಣೆಯ ಶಂಖಧ್ವನಿಯನ್ನು ಮೊಳ ಗಿದರು. ಬ್ರಹ್ಮೋ ಸಮಾಜ, ಆರ್ಯ ಸಮಾಜಗಳು ಭಾರತದಾದ್ಯಂತ ಜನ ಜೀವನದ ಮೇಲೆ ಪ್ರಭಾವ ಬೀರಿದುವು.
'''ನಿರೂಪಕ :'''
ಸ್ವಾತಂತ್ರ್ಯದ ಪ್ರಜಾಪ್ರಭುತ್ವದ ಕಲ್ಪನೆಗಳು ಈ ಮಣ್ಣಲ್ಲಿ ಮತ್ತೊಮ್ಮೆ ಮೊಳೆತು ಅದಮ್ಯನಾಗಿ ಬೆಳದುವು.
'''ಇತಿಹಾಸಕಾರ :'''
ಅಹಿಂಸೆಯ ಸತ್ಯಾಗ್ರಹದ ಸಂದೇಶವನ್ನು ಬೀರಿದ ಮೋಹನದಾಸ ಕರಮ ಚಂದ ಗಾಂಧಿ, ಅಖಿಲಭಾರತದ ಅನಭಿಷಿಕ್ತ ರಾಜನಾದರು.
'''ಗಾಂಧಿಜಿ :'''
" ಸಂಬಂಧಿಕರು ಹಾಗೂ ಅಪರಿಚಿತರ ನಡುವೆ, ಬಿಳಿಯರು ಹಾಗೂ ಕರಿಯರ ನಡುವೆ, ಹಿಂದೂಗಳು ಹಾಗೂ ಇತರ ಧರ್ಮಗಳ ಭಾರತೀಯರಾದ ಮುಸಲ್ಮಾನರು-ಪಾರಸೀಕರು-ಕ್ರಿಶ್ಚಿಯನ್ನರು ಇಲ್ಲವೆ ಯೆಹೂದಿಯರ ನಡುವೆ, ಯಾವ ತಾರತಮ್ಯವನ್ನೂ ನಾನು ತೋರಿದವನಲ್ಲ, ಅಂತಹ ತಾರ ತಮ್ಯಗಳನ್ನು ಮಾಡಲು ನನ್ನ ಹೃದಯ ಅಸಮರ್ಥವಾಗಿದೆಯೆಂದೇ ನಾನು ಹೇಳಬಹುದು.
'''ನಿರೂಪಕ:'''
ಭಾರತೀಯ ಸಂಸ್ಕೃತಿಯ ಮಹಾಸಾಗರದ ಅಲೆಯೇ ಮಹಾತ್ಮರ ಈ ಸರ್ವ ಸೋದರತಾಭಾವ. ಅಷ್ಟೇ ಅಮೂಲ್ಯವಾದುದು ರವೀಂದ್ರರ ಕವಿವಾಣಿ.
'''ರವೀಂದ್ರನಾಥ ಠಾಕೂರ್:'''
" ಭಾರತದ ಮೇಲಿನ ನನ್ನ ಪ್ರೀತಿಗೆ ಕಾರಣ- ಭೂಗೋಳದ ಆರಾಧನೆಯ ಹವ್ಯಾಸವಲ್ಲ; ಈ ಮಣ್ಣಿನಲ್ಲಿ ಹುಟ್ಟುವ ಅವಕಾಶ ನನಗೆ ದೊರೆಯಿತೆಂಬುದೂ ಅಲ್ಲ. ತನ್ನ ಮಹಾಪುತ್ರರ ದಿವ್ಯ ಪ್ರಜ್ಞೆಯಿಂದ ಉದಿಸಿದ ಸತ್ಯಂ,ಜ್ಞಾನಂ, ಶಿವಂ, ಅದ್ವೈತಂ ಎಂಬ ಜೀವಂತ ಪದಗಳನ್ನು ಪ್ರಕ್ಷುಬ್ಧ
{{center|೫೨}}<noinclude></noinclude>
bs2eqfm8fglxucv833p99c4frnr67vr
ಪುಟ:AAHVANA.pdf/೫೩
104
20019
320994
277342
2026-05-20T03:04:19Z
Shreelatha.Halemane
7642
/* Validated */
320994
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|ಆಹ್ವಾನ}}
{{gap}}ಯುಗಗಳೆಡೆಯಿಂದಲೂ ಹಾಯಿಸಿ ಉಳಿಸಿರುವಳಲ್ಲ- ಆ ಕಾರಣಕ್ಕಾಗಿ ಅವಳನ್ನು ನಾನು ಪ್ರೀತಿಸುವೆ,”
{{gap}}ನಿರೂಪಕ:
{{gap}}ಇದೀಗ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ಗಾಥಾ!
ರವೀಂದ್ರನಾಥ ಠಾಕೂರ್ :
{{gap}}ಜನ-ಗಣ-ಮನ....ಅಧಿನಾಯಕ....
ಮೇಳಗಾನ:
{{center|}}“ಜನಗಣಮನ ಅಧಿನಾಯಕ ಜಯಹೇ
{{center|}}ಭಾರತ ಭಾಗ್ಯವಿಧಾತ...
{{center|}}ಪಂಜಾಬ ಸಿಂಧು ಗುಜರಾಥ ಮರಾಠಾ
{{center|}}ದ್ರಾವಿಡ ಉತ್ಕಲ ವಂಗ
{{center|}}ವಿಂಧ್ಯ ಹಿಮಾಚಲ ಯಮುನಾ ಗಂಗಾ
{{center|}}ಉತ್ಕಲ ಜಲಜಿತ ರಂಗ
{{center|}}ಜಯಹೇ ಜಯಹೇ ಜಯ
{{center|}}ಜಯ ಜಯ ಜಯ ಜಯಹೇ ||”
{{center|೫೩}}<noinclude></noinclude>
i5k9obinabc6rhhvi8nk53pfp0pvupd
ಪುಟ:AAHVANA.pdf/೫೪
104
20020
320960
277349
2026-05-19T18:17:32Z
Pragathi. BH
7585
/* Validated */
320960
proofread-page
text/x-wiki
<noinclude><pagequality level="4" user="Pragathi. BH" /></noinclude>{{center|}}'''ವಿರೋಧಾಭಾಸ'''{{center|}}
Ο ರಂಗಸ್ಥಲದ ಮುಂಭಾಗದ ಎಡ ಮೂಲೆಯಲ್ಲಿ ನಿರೂಪಕ, ಮಧ್ಯದಲ್ಲಿ ಸತಾನ್ವೇಷಕ, ಈತ ಅತ್ತಿತ್ತ ಚಲಿಸುತ್ತಾನೆ. ಮು೦ಭಾಗದ ಬಲ ಮೂಲೆಯಲ್ಲಿ ಪತ್ರಿಕೋದ್ಯೋಗಿಗಳು-ಪುರುಷ ಹಾಗೂ ಸ್ತ್ರೀ, ಛಾವಣಿಯಲ್ಲಿ ವಿಶ್ವಮಾನವ. ಈತ ಪ್ರೇಕ್ಷಕರಿಗೆ ಗೋಚರನಲ್ಲ. ಎಡ ನೇಪಥ್ಯದಲ್ಲಿ ಶರೀರದ ಸ್ವಲ್ಪ ಭಾಗವಷ್ಟೇ ಪ್ರೇಕ್ಷಕರಿಗೆ ಕಾಣಿಸುವಂತೆ ನೆಲ ಹಾಗೂ ಛಾವಣಿಗೆ ಮಧ್ಯ ಎತ್ತರದಲ್ಲಿ ನಿಂತಿರುವವನು ಪ್ರಸಾರಕ. ರಂಗಸ್ಥಲದ &ుంబదియు ఆధిF, ನಿರೂಪಿಸಲ್ಪಡುವ ಘಟನೆಗಳ ಚಿತ್ರಣಕ್ಕೆ ಮಿಾಸಲು, ಹಿ೦ಭಾಗವನ್ನು ಘಟನೆಗಳ ನಿರೂಪಣೆಯಾಗುವಾಗ ಮಾತ್ರ ಬೆಳಗಬೇಕು, ಕೆಲಧ್ವನಿಗಳು ನೇಪಥ್ಯದಿಂದಲಷ್ಟೇ ಕೇಳಿಸುವಂತೆ ಏರ್ಪಡಿಸಬಹುದು. ಅಥವಾ ಘಟನೆಗಳ ನಿರೂಪಣೆಯನ್ನು ಛಾಯಾ ನಾಟಕವಾಗಿ ಮಾಡಬಹುದು, ಉಪಗ್ರಹವನ್ನು ಹಾರಿಬಿಡುವ ನೋಟದ ವೀಕ್ಷಕ ವರದಿಯ ವೇಳೆಯಲ್ಲಿ ಯಂತ್ರಗಳ ಸದ್ದು ಹಿಂಭಾಗದ
ಪರದೆಯ ಆಚೆಯಿ೦ದ, Beep-Beep ಧ್ವನಿ ಛಾವಣಿಯಿಂದ.
{{gap}}ಇಲ್ಲಿ ನಿರೂಪಕ, ಚಿತ್ರಿತ ಘಟನೆಗಳ ಪ್ರಭಾವಕ್ಕೆ ಓಳಗಾಗಿ ತಾನೂ ರೂಪಕದಲ್ಲಿ భాగియూగుత్తానే, f<noinclude></noinclude>
dc86awrvndntsdr95on1k9yg4ndq6gh
320961
320960
2026-05-19T18:18:03Z
Pragathi. BH
7585
320961
proofread-page
text/x-wiki
<noinclude><pagequality level="4" user="Pragathi. BH" /></noinclude>{{center|'''ವಿರೋಧಾಭಾಸ'''}}
Ο ರಂಗಸ್ಥಲದ ಮುಂಭಾಗದ ಎಡ ಮೂಲೆಯಲ್ಲಿ ನಿರೂಪಕ, ಮಧ್ಯದಲ್ಲಿ ಸತಾನ್ವೇಷಕ, ಈತ ಅತ್ತಿತ್ತ ಚಲಿಸುತ್ತಾನೆ. ಮು೦ಭಾಗದ ಬಲ ಮೂಲೆಯಲ್ಲಿ ಪತ್ರಿಕೋದ್ಯೋಗಿಗಳು-ಪುರುಷ ಹಾಗೂ ಸ್ತ್ರೀ, ಛಾವಣಿಯಲ್ಲಿ ವಿಶ್ವಮಾನವ. ಈತ ಪ್ರೇಕ್ಷಕರಿಗೆ ಗೋಚರನಲ್ಲ. ಎಡ ನೇಪಥ್ಯದಲ್ಲಿ ಶರೀರದ ಸ್ವಲ್ಪ ಭಾಗವಷ್ಟೇ ಪ್ರೇಕ್ಷಕರಿಗೆ ಕಾಣಿಸುವಂತೆ ನೆಲ ಹಾಗೂ ಛಾವಣಿಗೆ ಮಧ್ಯ ಎತ್ತರದಲ್ಲಿ ನಿಂತಿರುವವನು ಪ್ರಸಾರಕ. ರಂಗಸ್ಥಲದ &ుంబదియు ఆధిF, ನಿರೂಪಿಸಲ್ಪಡುವ ಘಟನೆಗಳ ಚಿತ್ರಣಕ್ಕೆ ಮಿಾಸಲು, ಹಿ೦ಭಾಗವನ್ನು ಘಟನೆಗಳ ನಿರೂಪಣೆಯಾಗುವಾಗ ಮಾತ್ರ ಬೆಳಗಬೇಕು, ಕೆಲಧ್ವನಿಗಳು ನೇಪಥ್ಯದಿಂದಲಷ್ಟೇ ಕೇಳಿಸುವಂತೆ ಏರ್ಪಡಿಸಬಹುದು. ಅಥವಾ ಘಟನೆಗಳ ನಿರೂಪಣೆಯನ್ನು ಛಾಯಾ ನಾಟಕವಾಗಿ ಮಾಡಬಹುದು, ಉಪಗ್ರಹವನ್ನು ಹಾರಿಬಿಡುವ ನೋಟದ ವೀಕ್ಷಕ ವರದಿಯ ವೇಳೆಯಲ್ಲಿ ಯಂತ್ರಗಳ ಸದ್ದು ಹಿಂಭಾಗದ
ಪರದೆಯ ಆಚೆಯಿ೦ದ, Beep-Beep ಧ್ವನಿ ಛಾವಣಿಯಿಂದ.
{{gap}}ಇಲ್ಲಿ ನಿರೂಪಕ, ಚಿತ್ರಿತ ಘಟನೆಗಳ ಪ್ರಭಾವಕ್ಕೆ ಓಳಗಾಗಿ ತಾನೂ ರೂಪಕದಲ್ಲಿ భాగియూగుత్తానే, f<noinclude></noinclude>
c2djgg1nsp8vv9ggc6eo35mvyhufam1
ಪುಟ:AAHVANA.pdf/೫೬
104
20022
320962
277356
2026-05-19T18:18:33Z
Pragathi. BH
7585
/* Validated */
320962
proofread-page
text/x-wiki
<noinclude><pagequality level="4" user="Pragathi. BH" /></noinclude>ಆ ಹಾನ ಮಾನವ ಆ ನೌಕೆಯನ್ನು ಪ್ರವೇಶಿಸುತ್ತಲಿದ್ದಾನೆ. [ಬೃಹತ್ ಯ೦ತ್ರದ
rigల గల్లు ತೀವ್ರಗತಿಯಿ೦ದ ಚಲಿಸುತ್ತಿರುವ ಸಪ್ಪಳ, ಆ ಸಪ್ಪಳ ಕ್ಷೀಣವಾದ೦ತೆ ಅದರ ಹಿನ್ನೆಲೆಯಲ್ಲಿ-] ಲೋಕದ ಪ್ರತಿಯೊಂದು ದೇಶದಲ್ಲಾ ಪಂಡಿತ. ಪಾವುರ స్త్రీ-ురేునే ಬಾಲಕ-ವೃದ್ಧ ఎల్లరణ లుసిరు బిగి శిండిదేు అంతేరికై ನೌಕೆಯನ್ನು ನೋಡುತ್ತಿದ್ದಾ ರೆ, ಅಗೋ, ಅದು ಹಿಂದೂಸ್ಥಾನ. అల్లినే ಸಾಧಕ-ಸಿದ್ಧ ರೆಲ್ಲರ ళ్ళే ಈ ಕಡೆಗೆ ಹರಿದಿದೆ. ನಾನು ನಿಂತಲ್ಲಿಂದ ಭಾರತ ಕಥಾನಿರೂಪಕ ನನಗೆ ಕಾಣಿಸುತ್ತಿದ್ದಾನೆ, ಅವನ ಮಗುಲಲ್ಲಿ
ראי) ו", ಸತ್ಯಾನ್ವೇಷಕನಿದ್ದಾನೆ. ದೇಶದಾದ್ಯಂತ ಅಲ್ಲಿ ಇಲ್ಲಿ ಬೆಳಗುತ್ತಿರುವ ಆ ಚುಕ್ಕೆಗಳೇನು ?... ಟ್ವೆ! ನಮ್ಮ ಮಿತ್ರರು, ಪತ್ರಿಕಾಪ್ರತಿನಿಧಿಗಳು!
[ಮತ್ತೊಮ್ಮೆ ಬಲವಾಗಿ ಕೇಳಿಸುವ ಯಂತ್ರಗಳ ಚಲನೆ. ಅದು ಕ್ಷೀಣಗೊಂಡಂತೆ ಅದರ ಹಿನ್ನೆಲೆಯಲ್ಲಿ--) ಮುಹೂರ್ತ ಸನ್ನಿಹಿತವಾಗುತ್ತಿದೆ. ಪ್ರಾತಃ ಕಾಲದ ಹೊಂಬಿಸಿಲು, ನಿರಭ್ರ ಆಕಾಶ. ಧಾರಿಕ ಕಲ್ಪನೆಯ ಸ್ವರ್ಗಲೋಕ ఎమ్చేందేు ಪ್ರಶಾಂತವಾಗಿದೆ ! [ಗುಸು rQ高」 28) Count down | [ನೀರವತೆ]
గంభిeర నినిFశార ధ్చని :
[ಮೊದಲು ಮೆಲ್ಲನೆ, ಕ್ರಮೇಣ ಸ್ವರವೇರಿಸಿ]
Five, four, three, two, one—OFF! (ಧ್ವನಿವೇಗವನ್ನು ಮಿಾರಿಸಿ ಆಕಾಶವನ್ನು ಭೇದಿಸುತ್ತ ಕ್ಷಿಪಣಿ ಸಾಗುವ ಸು೦ಯ ಸದು] [ಗುಸು ಗುಸು - ಕಾತರ ಕಳವಳ.]
ಪ್ರಸಾರಕ :
ಅದ್ಭುತ! ಅತ್ಯಂತ ಮೋಹಕ ! ಶರವೇಗ? ಧ್ವನಿವೇಗ ? ಅಲ್ಲ, ಕ್ಷಿಪಣೀ ವೇಗ ! ಘಂಟೆಗೆ ಐದು ಸಾವಿರ ಮೈಲುಗಳ ಮಾರ್ಗಕ್ರಮಣ! ಸುಂಯ' ಅಂದದ್ದು, ಬಾಹಾಂತರಿಕ್ಷವೇ ಮೊನೆಯಾಗುಳ್ಳ ಬೆಳ್ಳಿಯ ಬಾಣ. ಹೊರಡ ಬೇಕಾದರೆ ಉರಿದ ಇಂಧನದ ಕಾವು ಎಷ್ಟು ಪ್ರಖರ ! ಅಗೊ-ಕ್ಷಿಪಣಿ 03ుందే ಬೇರ್ಪಟ್ಟ నౌజియేగిందే నెుందే సెగుత్తడి. అద్విగ ಕಣ್ಣಿ 产德 ಬೀಳುತ್ತಿರುವ ಚುಕ್ಕೆ ಮಾತ್ರ [Beep Beep Bcep] ಅದೇ
苏她<noinclude></noinclude>
d9qfqgty2sps4l54h0barqp4lnnxvdb
320966
320962
2026-05-20T02:36:47Z
Pragathi. BH
7585
320966
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
ಮಾನವ ಆ ನೌಕೆಯನ್ನು ಪ್ರವೇಶಿಸುತ್ತಲಿದ್ದಾನೆ. [ಬೃಹತ್ ಯಂತ್ರದ
ಗಾಲಿಗಳು ತೀವ್ರಗತಿಯಿಂದ ಚಲಿಸುತ್ತಿರುವ ಸಪ್ಪಳ, ಆ ಸಪ್ಪಳ ಕ್ಷೀಣವಾದಂತೆ
ಅದರ ಹಿನ್ನೆಲೆಯಲ್ಲಿ ಲೋಕದ ಪ್ರತಿಯೊಂದು ದೇಶದಲ್ಲೂ ಪಂಡಿತ-
ಪಾಮರ ಸ್ತ್ರೀ-ಪುರುಷ ಬಾಲಕ ವೃದ್ಧ ಎಲ್ಲರೂ ಉಸಿರು ಬಿಗಿ ಹಿಡಿದು
ಅಂತರಿಕ್ಷ ನೌಕೆಯನ್ನು ನೋಡುತ್ತಿದ್ದಾರೆ. ಅಗೋ, ಅದು ಹಿಂದೂಸ್ಥಾನ.
ಅಲ್ಲಿನ ಸಾಧಕ-ಸಿದ್ಧರೆಲ್ಲರ ದೃಷ್ಟಿ ಈ ಕಡೆಗೆ ಹರಿದಿದೆ. ನಾನು ನಿಂತಲ್ಲಿಂದ
ಭಾರತ ಕಥಾನಿರೂಪಕ ನನಗೆ ಕಾಣಿಸುತ್ತಿದ್ದಾನೆ. ಅವನ ಮಗ್ಗುಲಲ್ಲಿ
ಸತ್ಯಾನ್ವೇಷಕನಿದ್ದಾನೆ. ದೇಶದಾದ್ಯಂತ ಅಲ್ಲಿ ಇಲ್ಲಿ ಬೆಳಗುತ್ತಿರುವ ಆ
ಚುಕ್ಕೆಗಳೇನು ?......... ! ನಮ್ಮ ಮಿತ್ರರು, ಪತ್ರಿಕಾಪ್ರತಿನಿಧಿಗಳು !
[ಮತ್ತೊಮ್ಮೆ ಬಲವಾಗಿ ಕೇಳಿಸುವ ಯಂತ್ರಗಳ ಚಲನೆ. ಅದು ಕ್ಷೀಣಗೊಂಡಂತೆ
ಅದರ ಹಿನ್ನೆಲೆಯಲ್ಲಿ ಮುಹೂರ್ತ ಸನ್ನಿಹಿತವಾಗುತ್ತಿದೆ. ಪ್ರಾತಃ
ಕಾಲದ ಹೊಂಬಿಸಿಲು, ನಿರಭ್ರ ಆಕಾಶ, ಧಾತ್ಮಕ ಕಲ್ಪನೆಯ ಸ್ವರ್ಗಲೋಕ
ಎಷ್ಟೊಂದು ಪ್ರಶಾಂತವಾಗಿದೆ ! [ಗುಸು ಗುಸು ಧ್ವನಿ] Count down !
[ನೀರವತೆ ]
'''ಗಂಭೀರ ನಿರ್ವಿಕಾರ ಧ್ವನಿ :'''
[ಮೊದಲು ಮೆಲ್ಲನೆ, ಕ್ರಮೇಣ ಸ್ವರವೇರಿಸಿ]
Five, four, three, two, one-OFF !
(ಧ್ವನಿವೇಗವನ್ನು ಮಾರಿಸಿ ಆಕಾಶವನ್ನು ಭೇದಿಸುತ್ತ ಕ್ಷಿಪಣಿ ಸಾಗುವ ಸುಂ
ಸದ್ದು.]
[ಗುಸು ಗುಸು - '''ಕಾತರ ಕಳವಳ.''']
'''ಪ್ರಸಾರಕ :'''
ಅದ್ಭುತ ! ಅತ್ಯಂತ ಮೋಹಕ ! ಶರವೇಗ ? ಧ್ವನಿವೇಗ ? ಅಲ್ಲ, ಕ್ಷಿಪಣಿ
ವೇಗ ! ಘಂಟೆಗೆ ಐದು ಸಾವಿರ ಮೈಲುಗಳ ಮಾರ್ಗಕ್ರಮಣ ! ಸುಂಯ್
ಅಂದದ್ದು, ಬಾಹ್ಯಾಂತರಿಕ್ಷವೇ ಮೊನೆಯಾಗುಳ್ಳ ಬೆಳ್ಳಿಯ ಬಾಣ, ಹೊರಡ
ಬೇಕಾದರೆ ಉರಿದ ಇಂಧನದ ಕಾವು ಎಷ್ಟು ಪ್ರಖರ ! ಅಗೋಕ್ಷಿಪಣಿ
ಯಿಂದ ಬೇರ್ಪಟ್ಟು ನೌಕೆಯೊಂದೇ ಮುಂದೆ ಸಾಗುತ್ತಿದೆ. ಅದೀಗ ಕಣ್ಣಿಗೆ
ಬೀಳುತ್ತಿರುವ ಚುಕ್ಕೆ ಮಾತ್ರ. [Beep Beep Beep]<noinclude></noinclude>
lp1zufmwz0kqs327waru9mf70pdk81w
320968
320966
2026-05-20T02:37:25Z
Pragathi. BH
7585
320968
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
ಮಾನವ ಆ ನೌಕೆಯನ್ನು ಪ್ರವೇಶಿಸುತ್ತಲಿದ್ದಾನೆ. [ಬೃಹತ್ ಯಂತ್ರದ
ಗಾಲಿಗಳು ತೀವ್ರಗತಿಯಿಂದ ಚಲಿಸುತ್ತಿರುವ ಸಪ್ಪಳ, ಆ ಸಪ್ಪಳ ಕ್ಷೀಣವಾದಂತೆ
ಅದರ ಹಿನ್ನೆಲೆಯಲ್ಲಿ ಲೋಕದ ಪ್ರತಿಯೊಂದು ದೇಶದಲ್ಲೂ ಪಂಡಿತ-
ಪಾಮರ ಸ್ತ್ರೀ-ಪುರುಷ ಬಾಲಕ ವೃದ್ಧ ಎಲ್ಲರೂ ಉಸಿರು ಬಿಗಿ ಹಿಡಿದು
ಅಂತರಿಕ್ಷ ನೌಕೆಯನ್ನು ನೋಡುತ್ತಿದ್ದಾರೆ. ಅಗೋ, ಅದು ಹಿಂದೂಸ್ಥಾನ.
ಅಲ್ಲಿನ ಸಾಧಕ-ಸಿದ್ಧರೆಲ್ಲರ ದೃಷ್ಟಿ ಈ ಕಡೆಗೆ ಹರಿದಿದೆ. ನಾನು ನಿಂತಲ್ಲಿಂದ
ಭಾರತ ಕಥಾನಿರೂಪಕ ನನಗೆ ಕಾಣಿಸುತ್ತಿದ್ದಾನೆ. ಅವನ ಮಗ್ಗುಲಲ್ಲಿ
ಸತ್ಯಾನ್ವೇಷಕನಿದ್ದಾನೆ. ದೇಶದಾದ್ಯಂತ ಅಲ್ಲಿ ಇಲ್ಲಿ ಬೆಳಗುತ್ತಿರುವ ಆ
ಚುಕ್ಕೆಗಳೇನು ?......... ! ನಮ್ಮ ಮಿತ್ರರು, ಪತ್ರಿಕಾಪ್ರತಿನಿಧಿಗಳು !
[ಮತ್ತೊಮ್ಮೆ ಬಲವಾಗಿ ಕೇಳಿಸುವ ಯಂತ್ರಗಳ ಚಲನೆ. ಅದು ಕ್ಷೀಣಗೊಂಡಂತೆ
ಅದರ ಹಿನ್ನೆಲೆಯಲ್ಲಿ ಮುಹೂರ್ತ ಸನ್ನಿಹಿತವಾಗುತ್ತಿದೆ. ಪ್ರಾತಃ
ಕಾಲದ ಹೊಂಬಿಸಿಲು, ನಿರಭ್ರ ಆಕಾಶ, ಧಾತ್ಮಕ ಕಲ್ಪನೆಯ ಸ್ವರ್ಗಲೋಕ
ಎಷ್ಟೊಂದು ಪ್ರಶಾಂತವಾಗಿದೆ ! [ಗುಸು ಗುಸು ಧ್ವನಿ] Count down !
[ನೀರವತೆ ]
'''ಗಂಭೀರ ನಿರ್ವಿಕಾರ ಧ್ವನಿ :'''
[ಮೊದಲು ಮೆಲ್ಲನೆ, ಕ್ರಮೇಣ ಸ್ವರವೇರಿಸಿ]
Five, four, three, two, one-OFF !
(ಧ್ವನಿವೇಗವನ್ನು ಮಾರಿಸಿ ಆಕಾಶವನ್ನು ಭೇದಿಸುತ್ತ ಕ್ಷಿಪಣಿ ಸಾಗುವ ಸುಂ
ಸದ್ದು.]
[ಗುಸು ಗುಸು - '''ಕಾತರ ಕಳವಳ.''']
'''ಪ್ರಸಾರಕ :'''
ಅದ್ಭುತ ! ಅತ್ಯಂತ ಮೋಹಕ ! ಶರವೇಗ ? ಧ್ವನಿವೇಗ ? ಅಲ್ಲ, ಕ್ಷಿಪಣಿ
ವೇಗ ! ಘಂಟೆಗೆ ಐದು ಸಾವಿರ ಮೈಲುಗಳ ಮಾರ್ಗಕ್ರಮಣ ! ಸುಂಯ್
ಅಂದದ್ದು, ಬಾಹ್ಯಾಂತರಿಕ್ಷವೇ ಮೊನೆಯಾಗುಳ್ಳ ಬೆಳ್ಳಿಯ ಬಾಣ, ಹೊರಡ
ಬೇಕಾದರೆ ಉರಿದ ಇಂಧನದ ಕಾವು ಎಷ್ಟು ಪ್ರಖರ ! ಅಗೋಕ್ಷಿಪಣಿ
ಯಿಂದ ಬೇರ್ಪಟ್ಟು ನೌಕೆಯೊಂದೇ ಮುಂದೆ ಸಾಗುತ್ತಿದೆ. ಅದೀಗ ಕಣ್ಣಿಗೆ
ಬೀಳುತ್ತಿರುವ ಚುಕ್ಕೆ ಮಾತ್ರ. [Beep Beep Beep]<noinclude></noinclude>
5ymxv47eir5pcm2qbsqppt5ke5lnuev
ಪುಟ:AAHVANA.pdf/೫೭
104
20023
321029
277361
2026-05-20T04:02:10Z
Pragathi. BH
7585
/* Validated */
321029
proofread-page
text/x-wiki
<noinclude><pagequality level="4" user="Pragathi. BH" /></noinclude>{{center|'''ಆಹ್ವಾನ'''}}
ಬಾಹ್ಯಾಂತರಿಕ್ಷ ನೌಕೆಯ ಧ್ವನಿ! ವಿಶ್ವಮಾನವನೇ ಈಗ ಅದರ ಚಾಲಕ
ನಾಗಿದ್ದಾನೆ. (Beep Beep Beep]
'''ವಿಶ್ವಮಾನವ :'''
[ಅಂತರಿಕ್ಷದಾಚೆಯಿಂದ] ಹಲೊ ! ಎಲ್ಲರಿಗೂ ಅಭಿನಂದನೆ ! ಸೃಷ್ಟಿಯಿಂದ
ಇನ್ನೂರು ಮೈಲುಗಳ ಎತ್ತರದಿಂದ ನಾನು ಮಾತಾಡುತ್ತಿದ್ದೇನೆ.
'''ಸತ್ಯಾನ್ವೇಷಕ :'''
{{Right|[Fade out]}}
(ಕಂಪಿಸುವ ಕಂಠ ದೇವಲೋಕದಿಂದ ಬರುತ್ತಿರುವ ಅಶರೀರವಾಣಿ !........
21-2-3........
ನಿರೂಪಕ :
[ಸಣ್ಣನೆ ನಕ್ಕು
ಅಲ್ಲ ! ಮಾನವ; ಭೂಲೋಕದ ವಿಜ್ಞಾನಿಯ ಮಾಯಾ ಸೃಷ್ಟಿಯಾದ ಉಪ
ಗ್ರಹದ ನಿವಾಸಿ.
ಸತ್ಯಾನ್ವೇಷಕ :
[ಬೆರಗಾಗಿ]
ಮನುಷ್ಯ ನಿರ್ಮಿತ ಉಪಗ್ರಹ ?
ನಿರೂಪಕ :
ತ್ರಿಲೋಕ ಸಂಚಾರಿ ನಾರದರ ಅತಿ ರಂಜಿತ ಕತೆಗಳ ಕಾಲದಿಂದ ಅದೆಷ್ಟು
ದೂರ ಸಾಗಿ ಬಂದಂತಾಯ್ತು ನಾಗರಿಕತೆಯ ಪ್ರವಾಹ !
[Beep Beep Beep]
ಸತ್ಯಾನ್ವೇಷಕ :
[ಭಕ್ತಿಪೂರ್ವಕ
ಅಗೋ!
ವಿಶ್ವಮಾನವ :
ಪೃಥ್ವಿಯ ನೋಟ ಇಲ್ಲಿಂದ ಎಷ್ಟು ಸುಂದರ ! ಅದೊಂದು ತತ್ತಿಯ ಹಾಗೆ,
ನೀಲವರ್ಣದ ಪುಟ್ಟ ಚೆಂಡಿನ ಹಾಗೆ, ನನಗೆ ಕಾಣಿಸುತ್ತಿದೆ. ಸುತ್ತಲೂ<noinclude></noinclude>
kk4q4e9ydp5o9o4uow9sokg1fphg2hb
321030
321029
2026-05-20T04:09:35Z
Pragathi. BH
7585
321030
proofread-page
text/x-wiki
<noinclude><pagequality level="4" user="Pragathi. BH" /></noinclude>{{center|'''ಆಹ್ವಾನ'''}}
ಬಾಹ್ಯಾಂತರಿಕ್ಷ ನೌಕೆಯ ಧ್ವನಿ! ವಿಶ್ವಮಾನವನೇ ಈಗ ಅದರ ಚಾಲಕ
ನಾಗಿದ್ದಾನೆ. (Beep Beep Beep]
'''ವಿಶ್ವಮಾನವ :'''
[ಅಂತರಿಕ್ಷದಾಚೆಯಿಂದ] ಹಲೊ ! ಎಲ್ಲರಿಗೂ ಅಭಿನಂದನೆ ! ಸೃಷ್ಟಿಯಿಂದ
ಇನ್ನೂರು ಮೈಲುಗಳ ಎತ್ತರದಿಂದ ನಾನು ಮಾತಾಡುತ್ತಿದ್ದೇನೆ.
'''ಸತ್ಯಾನ್ವೇಷಕ :'''
{{Right|[Fade out]}}
(ಕಂಪಿಸುವ ಕಂಠ ದೇವಲೋಕದಿಂದ ಬರುತ್ತಿರುವ ಅಶರೀರವಾಣಿ !........
21-2-3........
'''ನಿರೂಪಕ''' :
[ಸಣ್ಣನೆ ನಕ್ಕು
ಅಲ್ಲ ! ಮಾನವ; ಭೂಲೋಕದ ವಿಜ್ಞಾನಿಯ ಮಾಯಾ ಸೃಷ್ಟಿಯಾದ ಉಪ
ಗ್ರಹದ ನಿವಾಸಿ.⁰
'''ಸತ್ಯಾನ್ವೇಷಕ :'''
[ಬೆರಗಾಗಿ]
ಮನುಷ್ಯ ನಿರ್ಮಿತ ಉಪಗ್ರಹ ?
'''ನಿರೂಪಕ :'''
ತ್ರಿಲೋಕ ಸಂಚಾರಿ ನಾರದರ ಅತಿ ರಂಜಿತ ಕತೆಗಳ ಕಾಲದಿಂದ ಅದೆಷ್ಟು
ದೂರ ಸಾಗಿ ಬಂದಂತಾಯ್ತು ನಾಗರಿಕತೆಯ ಪ್ರವಾಹ !
[Beep Beep Beep]
'''ಸತ್ಯಾನ್ವೇಷಕ :'''
[ಭಕ್ತಿಪೂರ್ವಕ
ಅಗೋ!
ವಿಶ್ವಮಾನವ :
ಪೃಥ್ವಿಯ ನೋಟ ಇಲ್ಲಿಂದ ಎಷ್ಟು ಸುಂದರ ! ಅದೊಂದು ತತ್ತಿಯ ಹಾಗೆ,
ನೀಲವರ್ಣದ ಪುಟ್ಟ ಚೆಂಡಿನ ಹಾಗೆ, ನನಗೆ ಕಾಣಿಸುತ್ತಿದೆ. ಸುತ್ತಲೂ<noinclude></noinclude>
7xzje167ixmvlz3wv67oqvjfhfz8uv5
ಪುಟ:AAHVANA.pdf/೫೮
104
20024
321031
308538
2026-05-20T04:09:55Z
Pragathi. BH
7585
/* Validated */
321031
proofread-page
text/x-wiki
<noinclude><pagequality level="4" user="Pragathi. BH" /></noinclude>{{center|'''ಆಹ್ವಾನ'''}}
ಶುಭ್ರವಾಗಿ ಮಿನುಗುತ್ತಿರುವ అಅಂಖ್ಯ ತಾರೆಗಳು! ಇವುಗಳ ನಡುವೆ ಅತಿ ವೇಗದಿಂದ ನಡೆಯುತ್ತ, ಎಂಭತ್ತೇ ನಿಮಿಷಗಳಲ್ಲಿ ಭೂಮಿಗೆ ಒಂದು ಸುತ್ತು బರಬಲ್ಲೆ.
{{Right|[Fade out] }}
'''నిರೂಪಕ''' :
'ಎಂಬತ್ತು ದಿನಗಳಲ್ಲಿ ಪ್ರಪಂಚ ಪರ್ಯಟನ' ಎಂಬ ಹಳೆಯ ಕಾಲ್ಪನಿಕ ಕಾದಂಬರಿ ಸುರಸ ಕೃತಿ. ಆದರೆ, ಎಂಬಂತ್ತೇ ನಿಮಿಷಗಳಲ್ಲಿ ಭೂಪ್ರದಕ್ಷಿಣೆ ಎನ್ನುವ ವಸ್ತುಸ್ಥಿತಿ, ಊಹೆಗೂ ನಿಲುಕದ ಮಹತ್ ಸಾಧನೆ.
'''ವಿಶ್ವಮಾನವ''' :
[Beep Beep]
ಗುರುತ್ವಾಕರ್ಷಣೆಯ ವಲಯದಿಂದ ಹೊರಗಿರುವ ನಾನು, ಇಲ್ಲಿ ಹೂವಿನಷ್ಟು ಹಗುರ.
{{Right|}}
'''ನಿರೂಪಕ''' :
ಆ ಎತ್ತರದಲ್ಲಿ ಮನುಷ್ಯನಿಗೆ ಮುಪ್ಪಿಲ್ಲ,ಸಾವಿಲ್ಲ.
'''ಸತ್ಯಾನ್ವೇಷಕ''' :
ದೇವತೆಗಳು ಅಮರರು !
'''ನಿರೂಪಕ''' :
ನಮಗಾದರೋ ದಿನಕ್ಕೊಂದೇ ಸೂರ್ಯಾಸ್ತ, ಒಂದೇ ಸೂರ್ಯೋದಯ. ಆತ ಅಲ್ಲಿಂದ, ಒಂದು ದಿವಸದ ಅವಧಿಯಲ್ಲಿ ಹಲವು ಸಾರೆ, ಅನೇಕ ಕಡೆ, ಸೂರ್ಯ ಉದಿಸುವುದನ್ನೂ ಮುಳುಗುವುದನ್ನೂ ಕಾಣುವ.
'''ಸತ್ಯಾನ್ವೇಷಕ''' :
ಮನುಷ್ಯ ವಾಪಾರಗಳನ್ನೆಲ್ಲ ಸಮಷ್ಟಿ ಭಾವದಿಂದಲೂ ಸಮಗ್ರ ನೋಟ ದಿಂದಲೂ ಅರಿಯಬಲ್ಲ ಸಮರ್ಥ.
{{center|————}}<noinclude></noinclude>
8p0c8nm506uxdvtsmpfset7io6jof7c
321032
321031
2026-05-20T04:10:39Z
Pragathi. BH
7585
321032
proofread-page
text/x-wiki
<noinclude><pagequality level="4" user="Pragathi. BH" /></noinclude>{{center|'''ಆಹ್ವಾನ'''}}
ಶುಭ್ರವಾಗಿ ಮಿನುಗುತ್ತಿರುವ అಅಂಖ್ಯ ತಾರೆಗಳು! ಇವುಗಳ ನಡುವೆ ಅತಿ ವೇಗದಿಂದ ನಡೆಯುತ್ತ, ಎಂಭತ್ತೇ ನಿಮಿಷಗಳಲ್ಲಿ ಭೂಮಿಗೆ ಒಂದು ಸುತ್ತು బರಬಲ್ಲೆ.
{{Right|[Fade out] }}
'''నిರೂಪಕ''' :
'ಎಂಬತ್ತು ದಿನಗಳಲ್ಲಿ ಪ್ರಪಂಚ ಪರ್ಯಟನ' ಎಂಬ ಹಳೆಯ ಕಾಲ್ಪನಿಕ ಕಾದಂಬರಿ ಸುರಸ ಕೃತಿ. ಆದರೆ, ಎಂಬಂತ್ತೇ ನಿಮಿಷಗಳಲ್ಲಿ ಭೂಪ್ರದಕ್ಷಿಣೆ ಎನ್ನುವ ವಸ್ತುಸ್ಥಿತಿ, ಊಹೆಗೂ ನಿಲುಕದ ಮಹತ್ ಸಾಧನೆ.
'''ವಿಶ್ವಮಾನವ''' :
[Beep Beep]
ಗುರುತ್ವಾಕರ್ಷಣೆಯ ವಲಯದಿಂದ ಹೊರಗಿರುವ ನಾನು, ಇಲ್ಲಿ ಹೂವಿನಷ್ಟು ಹಗುರ.
{{Right|}}
'''ನಿರೂಪಕ''' :
ಆ ಎತ್ತರದಲ್ಲಿ ಮನುಷ್ಯನಿಗೆ ಮುಪ್ಪಿಲ್ಲ,ಸಾವಿಲ್ಲ.
'''ಸತ್ಯಾನ್ವೇಷಕ''' :
ದೇವತೆಗಳು ಅಮರರು !
'''ನಿರೂಪಕ''' :
ನಮಗಾದರೋ ದಿನಕ್ಕೊಂದೇ ಸೂರ್ಯಾಸ್ತ, ಒಂದೇ ಸೂರ್ಯೋದಯ. ಆತ ಅಲ್ಲಿಂದ, ಒಂದು ದಿವಸದ ಅವಧಿಯಲ್ಲಿ ಹಲವು ಸಾರೆ, ಅನೇಕ ಕಡೆ, ಸೂರ್ಯ ಉದಿಸುವುದನ್ನೂ ಮುಳುಗುವುದನ್ನೂ ಕಾಣುವ.
'''ಸತ್ಯಾನ್ವೇಷಕ''' :
ಮನುಷ್ಯ ವಾಪಾರಗಳನ್ನೆಲ್ಲ ಸಮಷ್ಟಿ ಭಾವದಿಂದಲೂ ಸಮಗ್ರ ನೋಟ ದಿಂದಲೂ ಅರಿಯಬಲ್ಲ ಸಮರ್ಥ.
{{center|————}}
{{center|೫೮}}<noinclude></noinclude>
bgdyal7cqnqq99wq3r1bvtunh2tl8mt
ಪುಟ:AAHVANA.pdf/೬೧
104
20027
320995
308539
2026-05-20T03:04:56Z
Shreelatha.Halemane
7642
320995
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಆಹ್ವಾನ}}
freedom. A moment comes which comes but rarely in history, when we step out from the old to the new, when an age ends and when the soul of a nation, long suppressed finds utterance. It is fitting that at this solemn moment we take a pledge of dedication to the service of India and her people and to the still larger cause of humanity.”
{{Left|[After a pause]}}
“That future is not one of ease or resting, but of incessant striving, so that we might fulfil the pledges we have so often taken and the one we shall take to-day. The service of India means the service of the millions who suffer. It means the ending of poverty and ignorance and disease and inequality of opportunity.”
'''ನಿರೂಪಕ''' :
೧೯೪೭ರ ಆಗಸ್ಟ್ ೧೪ ರ ರಾತ್ರೆ ನಡುವಿರುಳು ಸಮೀಪಿಸುತ್ತಲಿದ್ದಂತೆ, ನವದೆಹಲಿಯಲ್ಲಿ ಲೋಕಸಭಾಭವನದಲ್ಲಿ, ರಾಷ್ಟ್ರನಾಯಕ ಜವಾಹರಲಾಲ ನೆಹರೂ ಆಡಿದ ನುಡಿ ಇದು :
"ಮಧ್ಯರಾತ್ರಿಯ ಘಂಟೆಬಾರಿಸುತ್ತಲೇ, ಜಗತ್ತು ನಿದ್ರಿಸುತ್ತಿರುವ ವೇಳೆಯಲ್ಲಿ, ಭಾರತವು ಎಚ್ಚತ್ತು ಜೀವ ತಳೆಯುವುದು, ಸ್ವತಂತ್ರವಾಗುವುದು. ಇತಿಹಾಸದಲ್ಲಿ ಎಂದಾದರೊಮ್ಮೆ ಬರುವ ಮಹತ್ವದ ಘಳಿಗೆಯೊಂದುಂಟು, ಅಂತಹ ಘಳಿಗೆಯಲ್ಲಿ ಹಳತಿನಿಂದ ಹೊಸತಿಗೆ ನಾವು ಪದಾರ್ಪಣ ಮಾಡುತ್ತೇವೆ. ಒಂದು ಯುಗ ಮುಕ್ತಾಯವಾಗುತ್ತದೆ.ದೀರ್ಘಕಾಲದಿಂದ
{{center|————}}
{{center|೬೧}}<noinclude></noinclude>
bbzn9cu682xlq6zvbz1ytn0coeoqbc8
321033
320995
2026-05-20T04:11:33Z
Pragathi. BH
7585
/* Validated */
321033
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
freedom. A moment comes which comes but rarely in history, when we step out from the old to the new, when an age ends and when the soul of a nation, long suppressed finds utterance. It is fitting that at this solemn moment we take a pledge of dedication to the service of India and her people and to the still larger cause of humanity.”
{{Left|[After a pause]}}
“That future is not one of ease or resting, but of incessant striving, so that we might fulfil the pledges we have so often taken and the one we shall take to-day. The service of India means the service of the millions who suffer. It means the ending of poverty and ignorance and disease and inequality of opportunity.”
'''ನಿರೂಪಕ''' :
೧೯೪೭ರ ಆಗಸ್ಟ್ ೧೪ ರ ರಾತ್ರೆ ನಡುವಿರುಳು ಸಮೀಪಿಸುತ್ತಲಿದ್ದಂತೆ, ನವದೆಹಲಿಯಲ್ಲಿ ಲೋಕಸಭಾಭವನದಲ್ಲಿ, ರಾಷ್ಟ್ರನಾಯಕ ಜವಾಹರಲಾಲ ನೆಹರೂ ಆಡಿದ ನುಡಿ ಇದು :
"ಮಧ್ಯರಾತ್ರಿಯ ಘಂಟೆಬಾರಿಸುತ್ತಲೇ, ಜಗತ್ತು ನಿದ್ರಿಸುತ್ತಿರುವ ವೇಳೆಯಲ್ಲಿ, ಭಾರತವು ಎಚ್ಚತ್ತು ಜೀವ ತಳೆಯುವುದು, ಸ್ವತಂತ್ರವಾಗುವುದು. ಇತಿಹಾಸದಲ್ಲಿ ಎಂದಾದರೊಮ್ಮೆ ಬರುವ ಮಹತ್ವದ ಘಳಿಗೆಯೊಂದುಂಟು, ಅಂತಹ ಘಳಿಗೆಯಲ್ಲಿ ಹಳತಿನಿಂದ ಹೊಸತಿಗೆ ನಾವು ಪದಾರ್ಪಣ ಮಾಡುತ್ತೇವೆ. ಒಂದು ಯುಗ ಮುಕ್ತಾಯವಾಗುತ್ತದೆ.ದೀರ್ಘಕಾಲದಿಂದ
{{center|————}}
{{center|೬೧}}<noinclude></noinclude>
5rukyty4syw3sp07svfddny8o8kcujd
ಪುಟ:AAHVANA.pdf/೬೨
104
20028
321034
308542
2026-05-20T04:12:03Z
Pragathi. BH
7585
/* Validated */
321034
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
ಅದುಮಿ ಹಿಡಿಯಲ್ಪಟ್ಟ ರಾಷ್ಟ್ರವೊಂದರ ಆತ್ಮ ನುಡಿಯತೊಡಗುತ್ತದೆ. ಈ ಗಂಭೀರ ಘಳಿಗೆಯಲ್ಲಿ, ಭಾರತದ ಹಾಗೂ ಆಕೆಯ ಜನತೆಯ ಸೇವೆಗಾಗಿಯೂ ಇನ್ನೂ ಹಿರಿದಾದ ಮಾನವಕೋಟಿಯ ಒಳ್ಳಿತಿಗಾಗಿಯೂ ಸಮರ್ಪಣ ಭಾವದಿಂದ ಪ್ರತಿಙ್ಞೆ, ಕೈಕೊಳ್ಳುವುದು ನ್ಯಾಯೋಚಿತವಾಗಿದೆ.”
'''[ಕ್ಷಣ ತಡೆದು]'''
"ನಮ್ಮ ಮುಂದಿರುವುದು ಸುಖಜೀವನದ ಅಥವಾ ವಿಶ್ರಾಂತಿಯ ಭವಿಷ್ಯತ್ತಲ್ಲ, ಅದು ನಾವೆಷ್ಟೋ ಬಾರಿ ಸ್ವೀಕರಿಸುತ್ತ ಬಂದಿರುವ ಪ್ರತಿಜ್ಞೆಗಳೂ ಈ ದಿನ ಸ್ವೀಕರಿಸಲಿರುವ ಪ್ರತಿಙ್ಞೆಯೂ ಈಡೇರುವುದು ಸಾಧ್ಯವಾಗುವಂತೆ ನಾವು ನಡಸಬೇಕಾಗಿರುವ ಅವ್ಯಾಹತ ಹೋರಾಟದ ಭವಿಷ್ಯತ್ತು.ಭಾರತದ ಸೇವೆ ಎಂದರೆ,ಸಂಕಟಪಡುತ್ತಿರುವ ಕೋಟ್ಯಂತರ ಜನರ ಸೇವೆ ಎಂದರ್ಥ; ದಾರಿದ್ರ್ಯ, ಅಜ್ಞಾನ, ರೋಗರುಜಿನ, ಅವಕಾಶಗಳ ಅಸಮಾನತೆ-ಇವುಗಳನ್ನೆಲ್ಲಾ ಕೊನೆಗಾಣಿಸುವುದು ಎಂದರ್ಥ.”
'''ವಿಶ್ವಮಾನವ''' :
ಸ್ವತಂತ್ರ ಭಾರತದಲ್ಲಿ, ಅನೇಕ ಭಾಷೆಗಳ ಅನೇಕ ಬುಡಕಟ್ಟಗಳ ಜನರೆಲ್ಲರ ಸಾಮೂಹಿಕ ಶ್ರೇಯಸ್ಸಿಗಾಗಿ ರಾಷ್ಟ್ರ ನಿರ್ಮಾಣ ಕಾರ್ಯ ನಡೆದಿದೆ.
'''ನಿರೂಪಕ''':
ವಿಶ್ವಮಾನವನ ಈ ವರದಿ, ಭಾರತಯಾತ್ರೆಯನ್ನು ಕೈಗೊಂಡ ಪತ್ರಿಕಾ ಪ್ರಪಂಚದ ಪ್ರೇಷಿತ ಪ್ರತಿನಿಧಿಗಳ ವರದಿಗಳಿಗಿಂತ ಭಿನ್ನವಲ್ಲ.
'''ಪುರುಷ ಪತ್ರಿಕೋದ್ಯೋಗಿ''':
ಆರ್ಥಿಕ ಅಭಿವೃದ್ಧಿಗೆ ಔದ್ಯೋಗಿಕ ಬೆಳವಣಿಗೆಯೇ ತಳಹದಿ, ಆ ಬೆಳವಣಿಗೆಗೆ ಉಕ್ಕು ಮುಖ್ಯ. ಭಿಲಾಯಿ, ರೂರ್ ಕೆಲಾ, ದುರ್ಗಾಪುರಗಳ ಉಕ್ಕಿನ ಕಾರಖಾನೆಗಳು ಹೊಸ ಆರ್ಥಿಕ ವ್ಯವಸ್ಥೆಗೆ ಅಡಿಪಾಯವಾಗಿವೆ.
'''ಸ್ತ್ರೀ ಪತ್ರಿಕೋದ್ಯೋಗಿ''':
ಮದರಾಸಿನ ಸಮೀಪದ ಗಾಂಧೀಗ್ರಾಮದಲ್ಲಿ ಗ್ರಾಮೋದ್ಯೋಗ,ಸಾಮಾಜಿಕ ಶಿಕ್ಷಣ, ಶಿಶು ಸಂಗೋಪನ ಮತ್ತಿತರ ಕ್ಷೇತ್ರಗಳಲ್ಲಿ ಸಹಸ್ರಾರು ಜನ ಶಿಕ್ಷಿತರಾಗುತ್ತಿದ್ದಾರೆ.
{{center|————}}
{{center|೬೨}}<noinclude></noinclude>
063lq3ucc7f7hlhyy21qmfpweadwp3b
ಪುಟ:AAHVANA.pdf/೬೩
104
20029
321035
308543
2026-05-20T04:12:16Z
Pragathi. BH
7585
/* Validated */
321035
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ನಿರೂಪಕ''':
ಮೂಲಭೂತ ಘನ ಕೈಗಾರಿಕೋದ್ಯಮಗಳ ಜತೆಗೆ ಗ್ರಾಮಿಾಣ ಗುಡಿ ಕೈಗಾರಿಕೆಗಳಿಗೂ ಒಂದು ಸ್ಥಾನ.
'''ಪುರುಷ ಪತ್ರಿಕೋದ್ಯೋಗಿ''' :
ಮದರಾಸಿನಲ್ಲಿ ಅಖಂಡ ರೈಲುಡಬ್ಬಿಗಳನ್ನು ತಯಾರಿಸುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗೆ, ಐದುವರ್ಷಗಳ ಗುರಿಯನ್ನು ಮೂರೇ ವರ್ಷಗಳಲ್ಲಿ ಸಾಧಿಸಿದ ಹಿರಿಮೆಯಿದೆ.
'''ಸ್ತ್ರೀಕಂಠ''' :
ಯಾಕಯ್ಯ ಇಷ್ಟೊಂದು ನೀರು ಹಾಕ್ತೀಯಾ ಹಾಲಿಗೆ? ದಿನಾ ಇದೇ ಗೋಳು. ಸಾಕಪ್ಪಾ, ಸಾಕು!
'''ಸ್ತ್ರೀ ಪತ್ರಿಕೋದ್ಯೋಗಿ''' :
ಮುಂಬಯಿಯ ಆರೇ ಮಿಲ್ಕ್ ಕಾಲನಿ, ಇಡೀ ನಗರದ ಅರ್ಧ ಜನಸಂಖ್ಯೆಗೆ ಸಾಲುವಷ್ಟು ಒಳ್ಳೆಯ ಹಾಲನ್ನು ಪೂರೈಸುತ್ತಿದೆ.
'''ಪುರುಷ ಪತ್ರಿಕೋದ್ಯೋಗಿ''' :
ಚಿತ್ತರಂಜನ ಕಾರಖಾನೆಯ ರೈಲು ಎಂಜಿನುಗಳು,ಯಾವದೇಶವಾದರೂ ಹೆಮ್ಮೆ ಪಡುವಂಥವಾಗಿವೆ.
'''ಸ್ತ್ರೀ ಪತ್ರಿಕೋದ್ಯೋಗಿ''' :
ಮುಂಬಯಿಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ, ಪುಣೆಯ ರಾಸಾಯನಿಕ ಸಂಶೋಧನಾ ಸಂಸ್ಥೆ,ಪಿಂಪ್ರಿಯ ಪೆನಿಸಿಲಿನ್ ಕಾರಖಾನೆ_ ಇವೆಲ್ಲಾ, ಸರಿಯಾದ ದಿಕ್ಕಿನಲ್ಲಿ ಇಡಲಾಗಿರುವ ದೃಢ ಹೆಜ್ಜೆಗಳು.
'''ಪುರುಷ ಪತ್ರಿಕೋದ್ಯೋಗಿ''' :
ಬೆಂಗಳೂರಿನ ಹಿಂದೂಸ್ಥಾನ ವಿಮಾನ ಕಾರಖಾನೆ, ಸೂಪರ್ ಸಾನಿಕ್- ಧ್ವನಿವೇಗದ-ವಿಮಾನವನ್ನು ನಿರ್ಮಿಸಿದೆ.
'''ನಿರೂಪಕ''' :
ರಾಷ್ಟ್ರರಕ್ಷಣೆಯ ಮಾರ್ಗದಲ್ಲಿ ಈ ಆಕಾಶಹರಿಣಿಯೊಂದು ಹೆಗುರುತು.
{{center|————}}
{{center|೬೩}}<noinclude></noinclude>
cm9pgwxhco3yhga68nsswjutdp3zuf8
ಪುಟ:AAHVANA.pdf/೬೪
104
20030
320918
308545
2026-05-19T17:42:22Z
Pragathi. BH
7585
/* Validated */
320918
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಸ್ತ್ರೀ ಪತ್ರಿಕೋದ್ಯೋಗಿ''':
ಬೆಂಗಳೂರಿನಲ್ಲಿರುವ ಭಾರತ ಎಲೆಕ್ಟ್ರಾನಿಕ್ಸ್, ಸೂಕ್ಷ್ಮತಮ ವಿದ್ಯುತ್ ಉಪಕರಣಗಳನ್ನು ತಯಾರಿಸುತ್ತಿದೆ.
'''ಸ್ತ್ರೀ ಪತ್ರಿಕೋದ್ಯೋಗಿ''' :
ಮೆಷಿನ್ ಗಳಿಗೆ ಜನ್ಮನೀಡುವ ತಾಯಿಮೆಷಿನ್ ಗಳು, ಹಿಂದೂಸ್ಥಾನ್ ಮೆಷಿನ್ ಟೂಲ್ಸ್ ಕಾರಖಾನೆಯಲ್ಲಿ ನಿರ್ಮಾಣವಾಗುತ್ತಿವೆ.
'''ನಿರೂಪಕ''' :
ಕೃಷಿ ವ್ಯವಸಾಯವೇ ಜೀವನಾಡಿ ಎಂದು ಪರಿಗಣಿತವಾದ ರಾಷ್ಟ್ರದಲ್ಲಿ, ಔದ್ಯೋಗಿಕ ಕ್ರಾಂತಿ, ಜತೆಯಲ್ಲೆ, ಆ ನಾಡಿಯ ಬಡಿತದ ಬಗೆಗೂ ತೀವ್ರ ಗಮನ.
'''ಸ್ತ್ರೀ ಪತ್ರಿಕೋದ್ಯೋಗಿ''':
ಸಿಂದ್ರಿಯಲ್ಲಿ ರಾಸಾಯನಿಕ ಗೊಬ್ಬರದ ಕಾರಖಾನೆ ಇದೆ. ಗ್ರಾಮಾಂತರ ಪ್ರದೇಶಗಳ ಸ್ವರೂಪವನ್ನು ಬದಲಾಯಿಸುವ ಕಾರ್ಯಕರ್ತರು ಹೈದರಾಬಾದಿನ ಬಳಿಯ ಹಿಮಾಯತ್ ಸಾಗರದಲ್ಲಿ ಸಿದ್ಧವಾಗುತ್ತಿದ್ದಾರೆ. ಸಮಾಜ ವಿಕಾಸ ಯೋಜನೆಗಳು ಹಳ್ಳಿಗಾಡುಗಳನ್ನು ಆವರಿಸುತ್ತಿವೆ.
'''ಪುರುಷ ಪತ್ರಿಕೋದ್ಯೋಗಿ'''
:
ರಾಷ್ಟ್ರೀಯ ಹೆದ್ದಾರಿಗಳ, ಜಲಮಾರ್ಗಗಳ, ನೌಕಾತಾಣಗಳ ರಚನೆಯಾಗುತ್ತಿದೆ. ಒಣಗಿದ ನೆಲಕ್ಕೆ, ಬಂಜರು ಭೂಮಿಗೆ, ನೀರುಣಿಸುವ ಯೋಜನೆಗಳು ಕರಗತವಾಗಿವೆ. ಎಂತಹ ಅಣೆಕಟ್ಟಗಳು! ವಾಯವ್ಯದ ಭಾಕ್ರಾನಂಗಲ್, ಈಶಾನ್ಯದ ಹಿರಾಕುಡ್, ದಕ್ಷಿಣದ ತುಂಗಭದ್ರಾ, ಪಶ್ಚಿಮದ ಕೊಯಿನಾ-ಶರಾವತಿ....
'''ನಿರೂಪಕ'' :
ನೀರಿಗಷ್ಟೇ ಅಲ್ಲ, ವಿದ್ಯುದುತ್ಪಾದನೆಗೂ ಇಲ್ಲಿ ಏರ್ಪಾಟಿದೆ.
'''ಸ್ತ್ರೀ ಪತ್ರಿಕೋದ್ಯೋಗಿ''':
ಮನೆ-ಮನೆಗೂ ಬೆಳಕು.
{{center|————}}
{{center|೬೪}}<noinclude></noinclude>
aqzr5fq45xtblhfgftlc6u672oiuwlc
ಪುಟ:AAHVANA.pdf/೬೫
104
20031
320919
308547
2026-05-19T17:44:30Z
Pragathi. BH
7585
/* Validated */
320919
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಪುರುಷ ಪತ್ರಿಕೋದ್ಯೋಗಿ''' :
ಉದ್ಯಮಗಳಿಗೆ ಅಶ್ವಶಕ್ತಿ,
'''ನಿರೂಪಕ''' :
ಮುಂಬೈಯ ಬಳಿ ಪಶ್ಚಿಮದ ಕಡಲು ನಿತ್ಯವೂ ನೀರು ಹನಿಸುವ ಎಲಿ ಫೆಂಟಾ ನಡುಗಡ್ಡೆಯಲ್ಲಿನ ಶಿಲ್ಪಕೃತಿಯಾದ ತ್ರಿಮೂರ್ತಿ, ಶತಮಾನಗಳಿಂದಲೂ
ಸ್ಥಿರವಾಗಿರುವ ಭಾರತೀಯ ಚೇತನದ ಪ್ರತೀಕ.
'''ಪುರುಷ ಪತ್ರಿಕೋದ್ಯೋಗಿ''' :
ಆ ತ್ರಿಮೂರ್ತಿಗೆದುರುಬದುರಾಗಿ ಟ್ರಾಂಬೆಯಲ್ಲಿದೆ, ಅಗ್ಗದ ವಿದ್ಯುತ್ ಉತ್ಪಾದನೆಗೆ ಮಾತೃಕೆಯಾದ ಅಣು ರಿಯಾಕ್ಟರ್-ಅಪ್ಸರಾ,
'''ಸ್ತ್ರೀ ಪತ್ರಿಕೋದ್ಯೋಗಿ''':
[ಅಭಿಮಾನದಿಂದ]
ಅಪ್ಸರಾ!
{{center|[ಕ್ಷಣಮೌನ]}}
'''ಸತ್ಯಾನ್ವೇಷಕ''':
[ಅಸಹನೆಯಿಂದ, ವ್ಯ೦ಗ್ಯವಾಗಿ]
ಅಪ್ಸರಾ-ಹುಂ! [ಸಂಕಟಪಡುತ್ತ] ನೂರು ಬಾರಿ ಕೇಳಿರುವ ಈ ನಾಮಾವಳಿಯೇ ಏನು ವಿಶ್ವಮಾನವನೂ ನೀಡುವ ಕ್ಯಾಟಲಾಗು? ಇದೇ ಏನು ಭಾರತದ ವಸ್ತುಸ್ಥಿತಿ? ಇಷ್ಟೇನೆ ಮಿಸುನಿ ಜಿಂಕೆಯಾಗಿ ಈ ವರೆಗೂ ನನ್ನನ್ನು ಪುಸಲಾಯಿಸಿದ ಸತ್ಯ?
'''ವಿಶ್ವಮಾನವ''' :
[Beep Beep Beep]
ಭಾರತ ವಿಹಾರದಲ್ಲಿ ನಾನು ಕಂಡದ್ದನ್ನು ಕಂಡಂತೆ ನುಡಿದೆ. ಆದರೆ, ಇದು
ಸತ್ಯದ ಒಂದು ಮೈ ಮಾತ್ರ.
{{Right|[Fade out]}}
{{center|————}}
{{center|೬೫}}<noinclude></noinclude>
3u9vftc1ju2iidpxamxxr47nldbfaea
ಪುಟ:AAHVANA.pdf/೬೬
104
20032
320921
308548
2026-05-19T17:46:13Z
Pragathi. BH
7585
/* Validated */
320921
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಸತ್ಯಾನ್ವೇಷಕ''':
[ತವಕಗೊಳ್ಳುತ್ತ]
ಹೌದೆ? ಯಾವುದು ಇನ್ನೊಂದು ಮೈ ? ಸತ್ಯದ ಆ ಮೈ ಯಾವುದು ?
'''ವಿಶ್ವಮಾನವ''' : -
ಸ್ವತಂತ್ರ ಭಾರತವು ಜಾತ್ಯತೀತ ರಾಷ್ಟ್ರ:ಆದರೆ
{{Right|[Fade out]}}
'''ನಿರೂಪಕ''' : -
ಆದರೆ! ಹೆಜ್ಜೆ ಹೆಜ್ಜೆಗೂ ಕೆನ್ನಾಲಿಗೆಯನ್ನು ಮುಂಚಾಚಿ, ನೀಳ ಕೈಗಳ ಕ್ರೂರ ನಖಗಳಿಂದ ತಿವಿಯಬರುವ ಜಾತೀಯ ಪೆಡಂಭೂತದ ದರ್ಶನ!
'''ಸ್ತ್ರೀ ಕಂಠ''' :
ಯಾವ ಜನ ನೀವು ?... ನಾನು ಏನೋ ಅಂದ್ಕೊಂಡಿದ್ದೆ, ಅಲ್ಲೇ ಇರಿ!– ಇದು ಅಡುಗೆಮನೆ-ದೇವರಮನೆ.
{{center|* * * *}}
'''ಪುರುಷ ಕಂಠ''':
ಸ್ವಾಮಿ, ಇಲ್ಲೇನಾದರೂ ಮನೆ ಬಾಡಿಗೆಗಿದೆಯೇ ?
'''ಮನೆ ಮಾಲಿಕ''' :
ನೀವು ಯಾವ ಮತಸ್ಥರು ? ಅದನ್ನಿಷ್ಟು ಮೊದಲು ಹೇಳಿದಿರಿ ಅಂದರೆ....
'''ಬಾಯಾರಿದವನು''' :
ಕುಡಿಯಾಕೀಟು ನೀರು ಹನಿಸೆವ್ವಾ ತಂಗಿ....
'''ಹುಡುಗಿ''' :
ಕೊಡ್ತೀನಿ, ಒಳಗ್ಬಾ. [ಒಳಗಿರುವ ತಾಯಿಗೆ ಕೇಳಿಸುವಂತೆ, ಗಟ್ಟಿಯಾಗಿ]
ಯಾವನೋ ಕುಡಿಯೋಕೆ ನೀರು ಕೇಳ್ತಿದಾನಮ್ಮಾ.
{{center|————}}
{{center|೬೬}}<noinclude></noinclude>
lccnku60f6fvsikmeonukn0i7r7xdrh
ಪುಟ:AAHVANA.pdf/೬೭
104
20033
320922
308549
2026-05-19T17:46:28Z
Pragathi. BH
7585
/* Validated */
320922
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ತಾಯಿ''' :
[ಒಳಗಿನಿಂದ]
ಇದೇನು ಅರವಟ್ಟಿಗೆಮನೆ ಕೆಟ್ಟೋಯ್ತೇ! [ಗೊಣಗುತ್ತ] ಯಾವ ಜಾತೀನೋ
ಏನೋ........(ಗಟ್ಟಿಯಾಗಿ)ತಂಬಿಗೇಲಿ ಕೊಡ್ಬೇಡ.ಮೇಲಿಂದ ಅಂಗೈಗೆ ಸುರಿ.
'''ಶಾಸ್ತ್ರಿ''':
ನೋಡಿದಿರಾ ಇವನ ಸೊಕ್ಕು!ಬಾವಿ ಮುಟ್ದ ಅಂದೆ !ಹಿಡೀರಿ ! ಕಟ್ಟಾಕಿ!
ಸುಲೀರಿ ಚಕ್ಕಳ !
'''ಒಬ್ಬ''':
ಕಲಿಗಾಲ!ಕಲಿಗಾಲ! ಪರಜಾತಿಯವನನ್ನು ಕಟ್ಕೊಂಡು ಆ ಹುಡುಗಿ ಓಡೋದ್ಲು!
'''ಇನ್ನೊಬ್ಬ''' :
What a calamity!
ರಾಜಕಾರಣಿ :
ನನ್ನ ಕೋಮಿಗೆ ಅನ್ಯಾಯವಾಗಿದೆ! ನಮ್ಮ ಜಾತಿಯ ಹುಡುಗರಿಗೆ ಶಾಲೆ ಕಾಲೇಜುಗಳಲ್ಲಿ, ನಮ್ಮ ವಿದ್ಯಾವಂತರಿಗೆ ಸರಕಾರೀ ಉದ್ಯೋಗಗಳಲ್ಲಿ, ನನ್ನಂಥವರಿಗೆ ಮಂತ್ರಿಮಂಡಲದಲ್ಲಿ ಸಾಕಷ್ಟು ಸ್ವಾನ ಕೊಡದೇ ಹೋದರೆ, ಆಮರಣ ಉಪವಾಸ ಮುಷ್ಕರ ನಾನು ಹೂಡೋದೇ ನಿಶ್ಚಯ!
'''ನಿರೂಪಕ'':
ಜಾತೀಯವಾದದ್ದು ಬಟ್ಟಬಯಲಿನ ಕುತ್ಸಿತ ಆಟ. ಮತೀಯ ಘಟಸರ್ಪವಾದರೋ ಗುಪ್ತಗಾಮಿನಿ. ರಾಷ್ಟ್ರ ವಿಭಜನೆಯ ಕಾಲದಲ್ಲಿ ಹಲವು ಲಕ್ಷ
{{center|————}}
{{center|೬೭}}<noinclude></noinclude>
jggaqs12c3lwh14m1u0h39nidxw0rou
ಪುಟ:AAHVANA.pdf/೬೮
104
20034
320923
308551
2026-05-19T17:46:42Z
Pragathi. BH
7585
/* Validated */
320923
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
ಜನರ ಪ್ರಾಣಾಹುತಿ ಪಡೆದರೂ, ಅದಕ್ಕಿನ್ನೂ ತೃಪ್ತಿ ಇಲ್ಲ, ಆಗೊಮ್ಮೆ ಈಗೊಮ್ಮೆ ಹೆಡೆ-ಎತ್ತಿ ಫೂತ್ಕರಿಸುವ ಆಸೆ, ರಕ್ತಸೇಚನದ ರಂಗಪಂಚಮಿಗಾಗಿಯೇ ಸದಾಕಾಲವೂ ಇಂಥ ಜನರ ಸಿದ್ಧತೆ.
{{center|[ಕ್ಷಣಮೌನ] }}
'''ಒಬ್ಬಳು''' :
[ಹಾಡುತ್ತ]
{{gap}}ತಾರಕ್ಕ ಬಿಂದಿಗೆ ನೀರಿಗೆ ಹೋಗೋಣ
{{gap}}ತಾರೇ ಬಿಂದಿಗೆಯಾ...ತಾರೇ ಬಿಂದಿಗೆಯಾ..
[ಕೊಡವನ್ನು ನೆಲಕ್ಕೆ ಕುಕ್ಕಿ ಅರಚುತ್ತ]
ಯಾರೇ ಇಲ್ಲಿ ಬಕೀಟು ಇಟ್ಟಿರೋದು? ತೆಗೀರಿ ಇದನ್ನ!
'''ಇನ್ನೊಬ್ಬಳು''' :
ಯಾಕ?ನಾ ಇಟ್ಟೀನಿ. ಇದು ಸಾರ್ವಜನಿಕ ನಲ್ಲಿ, ಗೊತ್ತಿಲ್ಲೇನು ನಿನಗ?
'''ಮೊದಲನೆಯವಳು''' :
ನಲ್ಲಿ ಇರೋದುನಮ್ಮನೆ ಹತ್ರ. ನಾನು ಮೊದಲು ಹಿಡ್ಕೋಬೇಕು.
'''ಎರಡೆನೆಯವಳು''' :
ಬಾಲ್ದಿ ಮುಟ್ಟಿದರ ಹುಷಾರ್! ನಿನ್ನ ಕಣ್ಣ ಕಿತ್ತು ಕೈಗೆ ಕೊಟ್ಟೇನು!
[ಡರಡರನೆ ಬಾಲ್ದಿಯನ್ನೆಳೆದು ಉರುಳಿಸಿದ ಸಪ್ಪಳ] ಬಾಲ್ದಿ ಮುಟ್ಟಿದಿಯಾ ?
[ಗುದ್ದು] ನಿನ್ನ ಮನಿ ಹಾಳಾಗ!
'''ಮೊದಲನೆಯವಳು''' :
ಅಕ್ಕಾ! ಅಯ್ಯೋ! ಅಯ್ಯೋ!
{{center|[ಗುಸುಗುಸು.. ನಲ್ಲಿಯ ಹತ್ತಿರ ಗದ್ದಲ]}}
'''ಎರಡನೆಯವಳು''' :
ನೋಡ್ರಿ-ನನ್ನ ಕೊಲ್ಲಾಕ ತನ್ನ ನುಂದಿನ ಕರೀತಾಳ! ಅತ್ತಿ! ವೈನೀ ! ಎಲ್ಲಾರು ಬರ್ರೀ ....
{{Right|[Fade out]}}
{{center|[ಸುರಿಯುತ್ತಿರುವ ನೀರು]}}
{{center|————}}
{{center|೬೮}}<noinclude></noinclude>
it4qq36rvxtbl2feid5axtijnecq4i1
ಪುಟ:AAHVANA.pdf/೬೯
104
20035
320924
308553
2026-05-19T17:47:05Z
Pragathi. BH
7585
/* Validated */
320924
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ನಿರೂಪಕ''' :
ಕೊಡ ಬಾಲ್ದಿಗಳ ಜಗಳದಲ್ಲಿ ನೀರು ಸುರಿದುಹೋಯ್ತು, ಹೆಂಗಸರ ಲೆಕ್ಕಾಚಾರ' ಅ೦ತೀರೇನು ? ಅವರನ್ನು ನಾಚಿಸಬಲ್ಲರು, ಗಂಡಸರು!
{{center|[ಕೆಳಗಿನ ಮಾತುಗಳು ಅಧಿಕಾರವಾಣಿಯಲ್ಲಿ]}}
'''ಒಬ್ಬ''':
ನಮ್ಮ ರಾಜ್ಯದಲ್ಲಿ ಹುಟ್ಟಿ ನಿಮ್ಮಲ್ಲಿಗೆ ಹರಿಯೋ ಈ ನದಿಗೆ ಅಣೆಕಟ್ಟು ಕಟ್ಟೋದಕ್ಕೆ ನಿಮ್ಮ ರಾಜ್ಯಕ್ಕೆ ಹಕ್ಕಿಲ್ಲ! ಕೆಲಸ ನಿಲ್ಲಿಸಿ!
'''ಇನ್ನೊಬ್ಬ"':
ಈ ಜಲಾಶಯದ ನೀರಿನ ಹೆಚ್ಚು ಪಾಲು ಸಿಗಬೇಕು !
'''ಮತ್ತೊಬ್ಬ''' :
ನಮಗೆ ಸಲ್ಲಬೇಕಾದ ನೀರಿಗಾಗಿ ಹೋರಾಟ ಹೂಡೋದಕ್ಕೂ ನಾವು ಸಿದ್ಧ!
'''ನಿರೂಪಕ''' :
ಧೀರರು ! ಸಂಶಯವಿಲ್ಲ,ಬೇರೆ ಸಮಸ್ಯೆಗಳಿಲ್ಲದೇ ಹೋದಾಗ ನೀರಿಗೋಸ್ಕರವಾದರೂ ಹೋರಾಟ ಬೇಡವೇ? ಕೆಲಸವಿಲ್ಲದ ಬಡಗಿ ಅದನ್ನೇನೋ ಮಾಡಿದನಲ್ಲ-ಹಾಗೆ!.. ಜಾತಿ ಮುಖ್ಯ. ಅದಾದಮೇಲೆ ಮತ, ಮುಂದೆ ತಮ್ಮ ಪ್ರದೇಶ. ..ಮೊದಲು, ಹಿತ್ತಲಗೋಡೆಯೊಳಗೆ ನಮ್ಮ ರಾಜ್ಯ. ಬಳಿಕ,ನಮ್ಮ ಮನೆ ಇದ್ದ ರಸ್ತೆಯ ಮುಖಂಡತ್ವ .ಅದಾದಮೇಲೆ, ಮೊಹಲ್ಲಾದ ಧುರೀಣತ್ವ ! ಇಂಥ ಸಣ್ಣ ಮನಸ್ಸಿಗೆ, ಗಾದೆಯೂ ಒಂದು ಊರು ಗೋಲು : ಜಗಲಿ ಹಾರದವ ಗಗನ ಹಾರಿಯಾನೆ ? ಮಲೆನಾಡಿನವರು ನಾವು: ನಾವು ಬಯಲುಸೀಮೆಯವರು ; ನಮ್ಮದು ಕಣಿವೆ ಪ್ರದೇಶ: ಕಡಲುತೀರ ನಮ್ಮದು. ಅದಾದ ಬಳಿಕ, ದಕ್ಷಿಣದವರು-ಉತ್ತರದವರು!
'''ದಕ್ಷಿಣದವನು''':
ಉತ್ತರದವರು ಅಹಂಕಾರಿಗಳು, ಸೋಮಾರಿಗಳು, ಹಿಂದೂಸ್ಥಾನವೆಂದರೆ ತಾವೇ ತಿಳಕೊಂಡಿದ್ದಾರೆ.ಬುದ್ದಿ ಕಲಿಸಬೇಕು ಅವರಿಗೆ !
{{center|————}}
{{center|೬೯}}<noinclude></noinclude>
2vzcpqxchw0ep7eudsw9fnlw5xctgx1
ಪುಟ:AAHVANA.pdf/೭೦
104
20036
320925
308555
2026-05-19T17:48:10Z
Pragathi. BH
7585
/* Validated */
320925
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಉತ್ತರದವನು''' :
ದಕ್ಷಿಣದವರು ತುಚ್ಛ ಜನ !! ರಾಜಧಾನಿಗೆ ಬಂದು ಮುಖ್ಯ ಸ್ಥಳಗಳನ್ನೆಲ್ಲಾ ಆಕ್ರಮಿಸಿದ್ದಾರೆ! ಆಶ್ರಯ ಕೊಡಬಾರದು ಅವರಿಗೆ !
'''ನಿರೂಪಕ''' :
ಕಲಕು ನೀರಿನ ಈ ಮಹಾಪ್ರವಾಹದಲ್ಲಿ ಅಂತರ್ಗತವಾಗಿರುವ ಇನ್ನೊಂದು ಪ್ರವಾಹವುಂಟು, ಮೇರೆಮೀರಿದ ಭಾಷಾ ವ್ಯಾಮೋಹ, ಅಥವಾ, ಇತಿಹಾಸಜ್ಞ ಟಾಯ್'ನ ಬೀ ಹೇಳಿರುವಂತೆ, 'ಭಾಷಾವಾರು ರಾಷ್ಟ್ರೀಯವಾದ'. ಸಾಧುವಾದುದಲ್ಲ, ಪ್ರಾಗತಿಕ ಉದ್ದೇಶ ಉಳ್ಳದಲ್ಲ. ಹುಟ್ಟುಕುರುಡು. ಒಂದು ಗೆರೆಯಾಚೆಗಿನ ಈಚೆಗಿನ ಚೂರು ಪಾರು ನಮ್ಮದೇ ನೆಲಕ್ಕಾಗಿ ಎಂತಹ ಆಕ್ರೋಶ ! ತೂಕತಪ್ಪಿದ ನುಡಿ, ತಾಳತಪ್ಪಿದ ನಡತೆ, ಸಿಟ್ಟಿನ ಕೈಯ್ಯಲ್ಲಿ ಬುದ್ಧಿಯ ಜುಟ್ಟುಕೊಟ್ಟು, ಕಳೆದುಹೋದ ಸೂಜಿಗಾಗಿ ಕಗ್ಗತ್ತಲಲ್ಲಿ ಪರದಾಟ, ಕಾದಾಟ. ನಾಲ್ಕು ಪ್ರಾಂತಗಳ ನಾಲ್ಕು ಜನ ಸೇರಿದ ಕಡೆ, ಪರಸ್ಪರ ಭಾಷೆಗಳನ್ನು ಕುರಿತ ಮೂದಲಿಕೆಯೇ ದಿನನಿತ್ಯದ ಕ್ರೂರ ವಿನೋದ. ದೇಶವನ್ನು ವಿಭಜಿಸಿದ ಕತ್ತಿ ಇನ್ನೂ ಪೂರ್ತಿ ಮೊಂಡಾಗಿಲ್ಲ, ಮ್ಯೂಸಿಯಮಿನ ಕೌತುಕದ ವಸ್ತುಗಳ ನಡುವೆ ಅದಕ್ಕಿನ್ನೂ ಸ್ಥಾನ ದೊರೆತಿಲ್ಲ. ಆ ಕತ್ತಿಯನ್ನು ಮತ್ತೂ ಮಸೆಯಬೇಕು, ಇನ್ನೂ ಬಳಸಬೇಕು-ಎನ್ನುವ ಆಸೆ ಕೆಲವರಿಗೆ.
'''ಪುರುಷ ಪತ್ರಿಕೋದ್ಯೋಗಿ''' :
ಸ್ವಲ್ಪ ಸಮಯದ ಹಿಂದೆ ದೇಶದೊಂದು ರಾಜ್ಯದಲ್ಲಿ ಭಾಷಾ ಗಲಭೆಗಳಾದುವಷ್ಟೆ? ಅಲ್ಲಿಗೆ ಹೋಗಿ ಆ ವಿಷಯವಾಗಿ ವರದಿ ಮಾಡಲು ನನ್ನ ಪತ್ರಿಕೆ ನನ್ನನ್ನು ಕಳಿಸಿಕೊಟ್ಟಿತು. ['''ಹೃದಯವನ್ನು ತೋಡಿಕೊಳ್ಳುತ್ತ'''] ಅಲ್ಲಿ ಕಂಡು ಕೇಳಿದ ಸಂಗತಿಗಳಿಂದೆ ನಾನು ಅಧೀರನಾಗಿ ಹೋದೆ. ನನ್ನ ಮನಸ್ಸಿನ ಮೇಲಾದ ಅಪಘಾತದಿಂದ ಚೇತರಿಸಿಕೊಳ್ಳಲಾರದಾದೆ. ನಡದುದರ ನೂರರಲ್ಲೊಂದು ಪಾಲು ವರದಿಮಾಡಿದರೂ ಆ ಬರೆವಣಿಗೆ ಓದಲು ಅರ್ಹವಾಗದೆನಿಸಿತು.ಯಾರದೋ ಜಗಳ -ಸತ್ತವರು ಯಾರೋ!ಸಾವಿನ ರೀತಿಯಾದರೂ ಎಷ್ಟು ಹೃದಯವಿದ್ರಾವಕ !ಎಷ್ಟು ಹೇಯ!ಆವರೆಗೆ ನಾನೊಬ್ಬ
{{center|——}}
{{center|೭೦}}<noinclude></noinclude>
tt65wtsw23idh36b3v3jhybsnhxuov3
ಪುಟ:AAHVANA.pdf/೭೧
104
20037
320926
308562
2026-05-19T17:50:03Z
Pragathi. BH
7585
/* Validated */
320926
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
ನಾಗರಿಕ ಜನಾಂಗದ ಸದಸ್ಯ-ಎಂಬ ಆತ್ಮವಂಚನೆಗೆ ನಾನು ಗುರಿಯಾಗಿದ್ದೆ.ಆದರೆ, ಆ ಭ್ರಮೆ ನಿರಸನಹೊಂದಿ, ಸರ್ವಸ್ವವನ್ನೂ ಕಳೆದುಕೊಂಡ ಭಿಕಾರಿಯಂತೆ ನಾನು ಊರಿಗೆ ಮರಳಿದೆ.
{{center|['''ಕ್ಷಣ ಮೌನ''']}}
'''ಸತ್ಯಾನ್ವೇಷಕ''':
[ಮೊದಲು ಮೆಲ್ಲನೆ-ಬಳಿಕ ಗಟ್ಟಿಯಾಗಿ-ಬಿಕ್ಕಿ ಬಿಕ್ಕಿ ಅಳುತ್ತ, ನಡುನಡುವೆ ನಗುತ್ತ]
ಅಯ್ಯೋ ! ಸಾಲದೆ? ಸಾಲದೆ ಇಷ್ಟು? (ಗೊಗ್ಗರ ಗಂಟಲಲ್ಲಿ, ಮೇಲ್ಮೊಗವಾಗಿ] ಅಪ್ಪಾ! ವಿಶ್ವಮಾನವ! ಕಂಡದ್ದನ್ನು ಕಂಡಹಾಗೆ ನುಡಿದೆಯಲ್ಲೋ !ನಿಜವಾದ ಸತ್ಯಾನ್ವೇಷಕ ನೀನೇ ಕಣಪ್ಪ! ಆಯಿತೇನಯ್ಯ ಚಿತ್ರ ಬರೆದದ್ದು? ಮುಗಿಯಿತೇನಣ್ಣ ನಿನ್ನ ಭಾರತ ವಿಹಾರ?
'''ವಿಶ್ವಮಾನವ' :'''
[Beep Beep Beep ಬೇಸರದ ಧ್ವನಿಯಲ್ಲಿ]
ಮುಗಿಯಿತು. ಭಾರತ ಚಿತ್ರದ ಒಂದು ಮೈಯ್ಯನ್ನು ಕಂಡು ಉಲ್ಲಾಸಗೊಂಡಿದ್ದೆ, ಈಗ ಇನ್ನೊಂದು ಮೈನೋಡಿ ಬಳಲಿದ್ದೇನೆ. ನನಗೆ ವಿಶ್ರಾಂತಿ ಬೇಕು.ನಾನು ನಿದ್ರಿಸಬೇಕು. -
{{Right|[Beep Beep Beep : Fade out]}}
'''ವಿಶ್ವವಾಣಿ ನಿಲಯದ ಪ್ರಸಾರಕ''' :
ಇದು ವಿಶ್ವವಾಣಿ, ಗಗನಯಾತ್ರಿಕ ವಿಶ್ವಮಾನವನ ಬಾಹಾಂತರಿಕ್ಷ ಉಡಾಣದ ವೀಕ್ಷಕ ವರದಿಯನ್ನು ಈವರೆಗೂ ನೀವು ಕೇಳಿದಿರಿ. ಆಧುನಿಕ ಭಾರತದ ವಿಹಾರದ ಬಳಿಕ ಆಯಾಸಗೊಂಡ ವಿಶ್ವಮಾನವ, ಈಗ ಅಂತರಿಕ್ಷ ನೌಕೆಯೊಳಗೆ ನಿದ್ರೆ ಹೋಗಿದ್ದಾನೆ. ಆತ ಎಚ್ಚರಗೊಳ್ಳುವವರೆಗೂ ನಮಗಿನ್ನು ವಿರಾಮ.ವಿಶ್ವವಾಣಿಯ ವಿಶೇಷ ಪ್ರಸಾರ ಕಾರ್ಯ ಸಧ್ಯಕ್ಕೆ ಮುಕ್ತಾಯವಾಯಿತು. ಇದು ವಿಶ್ವವಾಣಿ.
{{center|———}}
{{center|೭೧}}<noinclude></noinclude>
eucukq5eq5rir6x3pude5c8g9hkoefc
ಪುಟ:AAHVANA.pdf/೭೨
104
20038
320927
308573
2026-05-19T17:50:21Z
Pragathi. BH
7585
/* Validated */
320927
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಸತಾನ್ವೇಷಕ''':
['''ಸಂಕಟ-ಆಕ್ರೋಶ''']
ಮು-ಕ್ತಾ-ಯ! ಹಳೆಯ ಯುಗ ಮುಕ್ತಾಯಗೊಂಡು ಹೊಸತಿಗೆ ನಾವು
ಕಾಲಿರಿಸಿದ್ದೆವಲ್ಲ! ಹಳೆಯ ಯುಗ ಮುಕ್ತಾಯಗೊಂಡು ಹೊಸತಿಗೆ ನಾವು ಕಾಲಿರಿಸಿದ್ದೆವಲ್ಲ? ಇದೇ ಏನು ಆ ಹೊಸ ಯುಗ? ಈ ಅರೆಬೆಂದ ಬಿರುಕು ಬಿಟ್ಟ ಪುಡಿ ಇಟ್ಟಂಗಿಗಳಿಂದಲೇ ಕಟ್ಟಬೇಕೆ ನವಭಾರತದ ಸೌಧವನ್ನು !
'''ನಿರೂಪಕ''' :
ಹಗಲು ಸೊಗಸಾಗಿತ್ತು. ಇರುಳು ಭಯಾನಕ, ಹಾಗಾದರೆ, ಸುಸ್ವಪ್ನಗಳ ಸುಖ ನಿದ್ದೆ ಎಂದೂ ಇಲ್ಲವೆ ನಮಗೆ? ನಾಗರಿಕತೆಯ ಬಾಹ್ಯಾಡಂಬರದೊಳಗೆ ಕಾಡುಮನುಷ್ಯನನ್ನೇ ನಾವು ಕಂಡೆವಲ್ಲ!
'''ಸತ್ಯಾನ್ವೇಷಕ''' : -
ಎರಡು ಸಾವಿರದ ಐದುನೂರು ವರುಷಗಳಿಗೆ ಹಿಂದೆಯೇ ತಪ್ತ ಕರುಣೆಯ ಜಲ ಸೇಚನ ಮಾಡಿದ ಭಗವಾನ್ ಬುದ್ಧನನ್ನು ಲೋಕಕ್ಕೆ ನಾವು ಕೊಟ್ಟೆವು. ಅಂತಹ ಭಾಗ್ಯಶಾಲಿ ಭೂಮಿಯಲ್ಲಿ ಈ ಅಲ್ಪತನ-ಕ್ಷುದ್ರವೃತ್ತಿ ? ಇದೆಂಥ ದುರ್ಗತಿ!
'''ನಿರೂಪಕ''' : -
ಹಾಯಿದೋಣಿಯಲ್ಲ;ಉಗಿ ಹಡಗಲ್ಲ;ಎಂಟು ದಿನಗಳಲ್ಲಿ ಇಂಗ್ಲೆಂಡ್ ನ್ನು ತಲಪುವ ವಿಮಾನವಲ್ಲ, ಎಂಟೇ ಗಂಟೆಗಳಲ್ಲಿ ಲಂಡನ್ ಸೇರುವ ಜೆಟ್ ವಿಮಾನವನ್ನು ನಾವು ಬಳಸುತ್ತಿದ್ದೇವೆ. ಧ್ವನಿವೇಗದ ವಿಮಾನವನ್ನೂ ನಾವು ನಿರ್ಮಿಸಿದ್ದೇವೆ.ನಮ್ಮ ಸ್ನೇಹಿತ ರಾಷ್ಟ್ರಗಳಲ್ಲಾದರೋ ಬಾಹ್ಯಾಂತರಿಕ್ಷದಲ್ಲಿ ವಿಹರಿಸುವ ಗಗನಯಾತ್ರಿಗಳಿದ್ದಾರೆ. ಮಂಗಳಗ್ರಹಕ್ಕೆ ಮಾನವ ಹೋಗುವ ದಿನ ದೂರವಿಲ್ಲ, ಬೇಗನೆ ಚಂದ್ರಗ್ರಹಯಾನವೂ ನಿಶ್ಚಿತ.. ಹೀಗೆ ವಿಜ್ಞಾನವೂ ವಿಶೇಷ ಯಂತ್ರಜ್ಞಾನವವೂ ಊಹಾತೀತವಾಗಿ ಬೆಳೆದಿರುವ ಈಗಿನ ಅಣು ಯುಗದಲ್ಲಿ, ನಮ್ಮಲ್ಲಿ ಕಾಣಬರುವ ಛಿದ್ರಪ್ರವೃತ್ತಿಗಳಿಗೆ ಸಂಕುಚಿತ ಮನೋಭಾವಗಳಿಗೆ ಯಾವ ಸ್ಥಾನ?
{{center|———}}
{{center|೭೨}}<noinclude></noinclude>
fc905baixram1ctqg44k3i7octnte8k
ಪುಟ:AAHVANA.pdf/೭೩
104
20039
320928
308580
2026-05-19T17:50:39Z
Pragathi. BH
7585
/* Validated */
320928
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಸತ್ಯಾನ್ವೇಷಕ''' :
[ಯೋಚಿಸುತ್ತಾ]
ಎಲಿಫೆಂಟಾ ಗವಿಯ ತ್ರಿಮೂರ್ತಿ ಮತ್ತು ಟ್ರಾಂಬೆಯ ಅಪ್ಸರಾ.
'''ನಿರೂಪಕ''' :
ಒಂದು ಪ್ರಾಚೀನ, ಇನ್ನೊಂದು ಆಧುನಿಕ, ಇವೆರಡರ ಹಿಂದೆಯೂ ಆದಮ್ಯವಾದ ಭಾರತೀಯ ಚೇತನವೇ ತುಂಬಿದೆ.ನಿನ್ನೆಯಿಂದ ಇಂದಿಗೆ ನಡದು ಬಂದಿರುವ ನಾವು, ಈಗಿನ ಕಾಲ್ತೊಡಕುಗಳೆದುರು ಅಸಹಾಯರಾಗಬೇಕೆ? ಕಳೆದ ಎರಡು ಸಾವಿರ ವರ್ಷಗಳಲ್ಲಿ ಯೆಹೂದಿಯರು ಭೌಗೋಳಿಕ ಐಕ್ಯವನ್ನು ಕಂಡವರಲ್ಲ, ಚಾರಿತ್ರಿಕ ಐಕ್ಯವನ್ನೂ ಕಂಡವರಲ್ಲ, ರಾಜಕೀಯ ಐಕ್ಯವೂ ಅವರಲ್ಲಿರಲಿಲ್ಲ. ಅವರು ಮಾತನಾಡುವ ಭಾಷೆಗಳೂ ಹಲವು. ಅವರು ಬೇರೆ ಬೇರೆ ರಾಷ್ಟ್ರಗಳ ಪ್ರಜೆಗಳು. ಧಾರ್ಮಿಕ ಐಕ್ಯವೂ ಅವರನ್ನು ಬೆಸೆದಿಲ್ಲ. ಹೀಗಿದ್ದರೂ ಯೆಹೂದಿಯರಲ್ಲಿ ಭಾವೈಕ್ಯವುಂಟು. ಸ್ವಿಸ್ಸರೂ ಹಲವು ಭಾಷೆ ಗಳನಾಡುವ ಜನ.ಒಂದೇ ಬುಡಕಟ್ಟಿನವರೂ ಅಲ್ಲ,ಆದರೂ ಸ್ವಿಟ್ಟರ್ಲೆಂಡಿನ ರಾಷ್ಟ್ರೈಕ್ಯ ಅನಾದೃಶವಾದದ್ದು ಐದಾರು ವಿಭಿನ್ನ ಪ್ರಾಂತಗಳ, ಐದು ಮುಖ್ಯ ಭಾಷೆಗಳ ಹಾಗೂ ಹಲವಾರು ಸಣ್ಣ ಪುಟ್ಟ ಭಾಷೆ ಮತ್ತು ಭಾಷಾ ಪ್ರಭೇದಗಳ ಯುಗೋಸ್ಲಾವಿಯಾ, ಈಗ ಒಂದು ದೇಶ. ಅರುವತ್ತಕ್ಕೂ ಹೆಚ್ಚು ವಿಭಿನ್ನ ಜನಾಂಗಗಳಿದ್ದೂ ಒಂದಾಗಿರುವ ರಾಷ್ಟ್ರ -ರಷ್ಯಾ. ಕಳೆದ ಮೂರು ಶತಮಾನಗಳಲ್ಲಿ ವಿವಿಧ ದೇಶಗಳಿಂದ ಜನ ವಲಸೆ ಬಂದು ನೆಲಸಿರುವಾದರೂ ಅಮೇರಿಕಾ ಐಕ್ಯವುಳ್ಳ ರಾಷ್ಟ್ರ..ಆದರೆ ನಾವು ಮಾತ್ರ,ಭಾವೈಕ್ಯವನ್ನಿನ್ನೂ ಸಾಧಿಸಲು ಸಮರ್ಥರಾಗದೇ ಇರುವ ಜನ. ಯಾವ ಕಾರಣಕ್ಕಾಗಿ ಹೀಗೆ ? ಯಾಕೆ ಹೀಗೆ ?
'''ಸತ್ಯಾನ್ವೇಷಕ''' :
ಹಂ....ಯಾಕೆ ಹೀಗೆ ?
'''ನಿರೂಪಕ''' :
ಅಣುಯುಗದ ಅಪ್ಸರೆ ಕನಸಿನ ರಾಜ್ಯದೆಡೆಗೆ ಭಾರತೀಯರನ್ನು ಕೈ ಮಾಡಿ ಕರೆಯುತ್ತಿದ್ದಾಳೆ. ಆಧುನಿಕ ಜಗತ್ತಿನ ನಾಗಾಲೋಟದ ಪ್ರಗತಿಗೆ ಸರಿಸಮ
{{center|———}}
{{center|೭೩}}<noinclude></noinclude>
7cyxjsalu9turbkioci4lz9bm53tz47
ಪುಟ:AAHVANA.pdf/೭೪
104
20040
320929
308582
2026-05-19T17:50:53Z
Pragathi. BH
7585
/* Validated */
320929
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
ವಾಗಿ ನಾವು ಹೆಜ್ಜೆ ಇಡಬೇಕು. ಆ ಸಾಮರ್ಥ್ಯ ನಮಗಿದೆ ಎಂದು, ಇತ್ತೀಚಿನ ನಮ್ಮ ಬೃಹತ್ ಸಾಧನೆಗಳು ಸಾಕ್ಷ್ಯ ನುಡಿಯುತ್ತಿವೆ. ಹೀಗಿದ್ದೂ ರಾಷ್ಟ್ರ ಪುರುಶನು ಮಂಕಾಗಿ ಮೈಮುದುಡಿ ಕುಳಿತಿದ್ದಾನೆ. ಯಾಕೆ ಹೀಗೆ ? ಯಾಕೆ ?
'''ಸತ್ಯಾನ್ವೇಷಕ''' :
ಹೌದು.ಯಾಕೆ ಹೀಗೆ ? ಯಾಕೆ ?
{{center|————}}
{{center|೭೪}}<noinclude></noinclude>
933g8zkj0gwa6a95ouv08wetmf1f1q4
ಪುಟ:AAHVANA.pdf/೭೫
104
20041
320930
308583
2026-05-19T17:51:08Z
Pragathi. BH
7585
/* Validated */
320930
proofread-page
text/x-wiki
<noinclude><pagequality level="4" user="Pragathi. BH" /></noinclude>{{center|'''ಇತಿಹಾಸ ಕಲಿಸುವ ಪಾಠ'''}}
{{gap}}ನಿರೂಪಕ ಆರಂಭದಲ್ಲಿ ಕಾಣಿಸಿಕೊ೦ಡು - ಅಂಕದ ಪರದೆಯ ಹೊರಗೆ - ನಿವೇದನೆಯ ಬಳಿಕ ಮರೆಯಾಗುತ್ತಾನೆ. ಪುನಃ ಆತ ಕಾಣಿಸಿಕೊಳ್ಳುವುದು ಉಪ ಸಂಹಾರದ ಮಾತಿಗೆ, ಕೊನೆಯಲ್ಲಿ,
{{gap}}ಇಲ್ಲಿ ರಂಗಸ್ಥಲವನ್ನು ಭಾರತ ಗಾಥಾ'ದಲ್ಲಿ ಮಾಡಿದಂತೆ ಇಬ್ಭಾಗಿಸಬೇಕು ಎಡ ಭಾಗದಲ್ಲಿ, ಇತಿಹಾಸದ ಪ್ರಾಧಾಪಕ ಹಾಗೂ ವಿದ್ಯಾರ್ಥಿಗಳಾದ ಗಂಗಾಶರಣ ಮತ್ತು ಕಾವೇರಿ, ಬಲ ಭಾಗದಲ್ಲಿ, ಘಟನೆಗಳ ಚಿತ್ರಣ, ಚಿತ್ರಿತವಾಗುವ ಘಟ ಗಳೊಡನೆ ಪ್ರಾಧಾಪಕ ಹಾಗೂ ವಿದಾರ್ಥಿಗಳು ಸಾಮರಸ್ಯ ಹೊಂದಿರುತಾರೆ.
{{gap}}ಎಡ ಭಾಗದಲ್ಲಿ ರೂಪಕದುದ್ದಕ್ಕೂ ಶುಭ್ರ ಬೆಳಕು, ಬಲ ಭಾಗದಲ್ಲಿ ಘಟನೆಗಳ ವೇಳೆಯಲ್ಲಷ್ಟೆ ಬೆಳಕು.<noinclude></noinclude>
f20v20liij5kqt3idw0hoaehb178ace
ಪುಟ:AAHVANA.pdf/೭೬
104
20042
320931
308584
2026-05-19T17:51:31Z
Pragathi. BH
7585
/* Validated */
320931
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ನಿರೂಪಕ''' :
ಕಾಲಗಳು ಮೂರು, ಹಿಂದಿನದು, ಈಗಿನದು, ಮುಂದಿನದು.ನಿನ್ನೆಯ ಗರ್ಭದಿಂದ “ಇವತ್ತು' ಹುಟ್ಟ ಪಡೆದಿದೆ; ಇಂದಿನ ಮಡಿಲಲ್ಲಿ 'ನಾಳೆ' ಬೆಳೆಯಬೇಕು. ಗತಕಾಲದ ಘಟನೆಗಳಿಂದ ವರ್ತಮಾನಕಾಲ ಪ್ರಭಾವಿತವಾಗಿದೆ. ಭವಿಷ್ಯತ್ಕಾಲದ ರೂಪು ರೇಖೆಗಳನ್ನು ಈಗಿನ ಸಂಭವಗಳೇ ಅಣಿಗೊಳಿಸುತ್ತವೆ. ಒಂದು ತಲೆಮಾರಿನವರು ಮುಂದಿನ ತಲೆಮಾರಿಗೆ ಹೊಣೆಗಾರರು.ಹೊಸ ಪೀಳಿಗೆಯವರು ಹಳಬರ ಸಾಲಗಳಿಂದ ಬಾಧಿತರು ; ಸಂಪಾದನೆಗಳಿಗೆ ಹಕ್ಕುದಾರರು. ಒಂದೇ ದಾರ, ಮೂರು ಕಾಲಗಳನ್ನು
ಒಟ್ಟಾಗಿ ಕೋದಿದೆ.
{{gap}}ಇತಿಹಾಸದ ಪರಿಧಿಯಿಂದ ಅದೆಷ್ಟೋ ಆಚೆಗಿನ 'ರಾಮಾಯಣ' “ಮಹಾಭಾರತ'ಗಳು, ಶತಮಾನಗಳು ಕಳೆದ ಮೇಲೂ ನಿತ್ಯ ನೂತನವಾಗಿ ಉಳಿದಿವೆ: ಪುರಾಣ ಗ್ರಂಥಗಳಾಗಿವೆ. ಆಲ್ಲಿರುವುದು, ದೈವತ್ವಕ್ಕೆ ಸಮಿಾಪವಾದ ಮಾನವತ್ವದ ಕಲ್ಪನೆ, ನಿಜ, ಆದರೆ ವಾಲ್ಮೀಕಿ ಚಿತ್ರಿಸಿದ್ದು ಸೀತಾರಾಮರ ಮಹೋನ್ನತ ಪಾತ್ರಗಳನ್ನು ಮಾತ್ರವಲ್ಲ, ಅಲ್ಲಿ, ಸ್ತ್ರೀರತ್ನವಲ್ಲದ ಕೈಕೇಯಿಯನ್ನು ನಾವು ಕಾಣುವೆವು. ಸೋದರರ ಕಲಹದಿಂದ ಕಂಗೆಟ್ಟ ಕಿಷ್ಕಿಂಧೆಯನ್ನು ನೋಡುವೆವು. ಒಡಹುಟ್ಟಿದವರಾದರೂ ರಾವಣ ವಿಭೀಷಣರು ಎರಡು ಧ್ರುವಗಳು. ವ್ಯಾಸರ ಮಹಾಭಾರತವಂತೂ ವಿರಾಟ್ರೂಪ ತಳೆದ ಗೃಹಕಲಹ. ಇಂದ್ರಪ್ರಸ್ಥ -ಹಸ್ತಿನಾಪುರಗಳೆಂಬ ಹೆಸರುಗಳು ಮರೆಯಬಹುದು. ಆದರೆ, ಕುರುಕ್ಷೇತ್ರವೆಂಬ ಪದದ ನೆನಪು ಅಳಿಯುವುದುಂಟೆ? ಆ ದಾಯಾದಿಗಳ ಕಾದಾಟದಿಂದ ಹಸುರು ನೆಲ ಮಸಣವಾಯಿತಲ್ಲ?
{{gap}}ಕವಿಕುಂಚದ ವರ್ಣರಂಜಿತ ಸೃಷ್ಟಿ ಎನ್ನುವಿರೇನೋ! ಕಟ್ಟು ಕಥೆಯ ಕಾಲಾವಧಿಯನ್ನು ಹಿಂದೆಬಿಟ್ಟ, ವಿಮರ್ಶೆಯ - ಪುರಾವೆಯ ಮೂಸೆಯಲ್ಲಿ ಸ್ಫುಟಗೊಂಡ ದಾಖಲೆಗಳನ್ನು ಅವಲೋಕಿಸೋಣ, ಇತಿಹಾಸ ಶಾಲಾ ಬಾಲಕರಾಗಿ ನೀವು ಉರು ಹೊಡೆದಿರುವ ಇಸವಿಗಳು, ಘಟನೆಗಳು. ಆದರೆ,
ಅನ್ವೇಷಕ ಬುದ್ಧಿಗದು ಬರಿಯ ಚರಿತ್ರೆಯಲ್ಲ. ಅದರ ಪುಟಗಳಿಂದ ಮಹಾನ್
{{center|————}}
{{center|೭೬}}<noinclude></noinclude>
t8i3ga74jtac3qdkaerea16me9964ne
ಪುಟ:AAHVANA.pdf/೭೭
104
20043
320932
308585
2026-05-19T17:52:17Z
Pragathi. BH
7585
/* Validated */
320932
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
ರಾಷ್ಟ್ರದ ಬೃಹತ್ ಬದುಕೊಂದು ಮೈತಳೆದು ಹೊರಬರುವುದನ್ನು ಇತಿಹಾಸದ ಪ್ರೌಢ ವಿದ್ಯಾರ್ಥಿ ಕಾಣಬಲ್ಲ, ಅದು ಕಲಿಸುವ ವಿಶಿಷ್ಟ ಪಾಠವನ್ನು ತಿಳಿಯಬಲ್ಲ.
{{center|* * * *}}
'''ಕಾವೇರಿ''': -
[ಪ್ರೊಫೆಸರರ ಕೊಠಡಿಯ ಕದವನ್ನು ಮೆಲ್ಲನೆ ತಟ್ಟುತ್ತ]
ಸರ್......
'''ಗಂಗಾಶರಣ್''':
[ತುಸು ಗಟ್ಟಿಯಾಗಿ ಕದ ತಟ್ಟಿ]
ಪ್ರೊಫೆಸರ್, ನಾವು ಒಳಗೆ ಬರಬಹುದೆ?
'''ಇತಿಹಾಸದ ಪ್ರೊಫೆಸರ್''' :
yes,ಬನ್ನಿ.
[ನೂಕು ಮರೆಬಾಗಿಲು ತೆರೆದುಕೊಂಡು ಮುಚ್ಚಿದ ಕೀರಲು ಸದ್ದು]
'''ಕಾವೇರಿ''' :
[ತುಸು ಅಳುಕುತ್ತ]
ಸರ್...ತಮಗೆ ಬಿಡುವಿದ್ದರೆ.
'''ಪ್ರೊಫೆಸರ್''' :
ಕೂತ್ಕೋಳ್ಳಿ ಮಿಸ್ ಕಾವೇರಿ ; ಕೂತ್ಕೋಳ್ಳಿ ಮಿಸ್ಟರ್ ಗಂಗಾಶರಣ್,
[ಕೈ ಗಡಿಯಾರ ನೋಡಿ] ಇನ್ನರ್ಧ ಘಂಟೆ ಕಾಲ ನನಗೆ ಬಿಡುವಿದೆ.
'''ಕಾವೇರಿ''' :
[ರಾಗವೆಳೆಯುತ್ತ]
ಇವತ್ತು ತಮ್ಮ ತರಗತಿ ಆದ್ಮೇಲೆ ಮಿಸ್ಟರ್ ಗಂಗಾಶರಣರಿಗೂ ನನಗೂ ಸ್ವಲ್ಪ
ವಿವಾದವಾಯ್ತು.
{{center|————}}
{{center|೭೭}}<noinclude></noinclude>
ftavrusbys3w8pihphar5p3to2iqiv5
ಪುಟ:AAHVANA.pdf/೭೮
104
20044
320933
308586
2026-05-19T17:52:31Z
Pragathi. BH
7585
/* Validated */
320933
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಪ್ರೊಫೆಸರ್''' :
[ನಗೆಯ ಧ್ವನಿಯಲ್ಲಿ]
ಏನು ವಿಷಯ ?
'''ಗಂಗಾಶರಣ್''' :
ನನ್ನ ಹುಟ್ಟು ಪ್ರದೇಶವಾದ ಉತ್ತರದವರು ಜಗಳಗಂಟರು, ಭಾರತದ ಅನೇಕ ಅಂತರ್ಯುದ್ಧಗಳು ಅಲ್ಲೇ ಆದುವು-ಅಂತ ಮಿಸ್ ಕಾವೇರಿ ಹೇಳಿದ್ರು.
'''ಪ್ರೊಫೆಸರ್''' :
[ಛೇಡಿಸುವ ಕಂಠ]
Fine ! ಮುಂದೆ?
'''ಕಾವೇರಿ''' :
ಅದಕ್ಕೆ ಗಂಗಾ ಶರಣ್ ಅಂದ್ರು, ಸರ್ – ಅಂತಃಕಲಹದಲ್ಲಿ ದಕ್ಷಿಣದ ನನ್ನ ವರಿಗೇ ಫಸ್ಟ್ ಪ್ರೈಜ್ ಅಂತ.'
'''ಪ್ರೊಫೆಸರ್''' ಕಡೆಗೆ ?
'''ಗಂಗಾಶರಣ್''' :
ಯಾರು ಸರಿ ಯಾರು ತಪ್ಪೂಂತ ತಮ್ಮ ನಿರ್ಣಯ ಕೇಳೋಕೆ ಬಂದ್ವಿ.
'''ಪ್ರೊಫೆಸರ್''' :
ಹಂ!.. [ನಗೆಯ ಧ್ವನಿ ] ತೀರ್ಪು ಕೊಡ್ಲೇನು? ಇಬ್ಬರೂ ಸರಿ, ಇಬ್ಬರೂ
ತಪ್ಪು?
'''ಕಾವೇರಿ'':
ಅಂದರೆ?'
ಗಂಗಾಶರಣ್:
ಹೇಗೆ?
{{center|———}}
{{center|೭೮}}<noinclude></noinclude>
8e85exj9cmu5a66rd1jkq4rvyjfasti
320934
320933
2026-05-19T17:53:27Z
Pragathi. BH
7585
320934
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಪ್ರೊಫೆಸರ್''' :
[ನಗೆಯ ಧ್ವನಿಯಲ್ಲಿ]
ಏನು ವಿಷಯ ?
'''ಗಂಗಾಶರಣ್''' :
ನನ್ನ ಹುಟ್ಟು ಪ್ರದೇಶವಾದ ಉತ್ತರದವರು ಜಗಳಗಂಟರು, ಭಾರತದ ಅನೇಕ ಅಂತರ್ಯುದ್ಧಗಳು ಅಲ್ಲೇ ಆದುವು-ಅಂತ ಮಿಸ್ ಕಾವೇರಿ ಹೇಳಿದ್ರು.
'''ಪ್ರೊಫೆಸರ್''' :
[ಛೇಡಿಸುವ ಕಂಠ]
Fine ! ಮುಂದೆ?
'''ಕಾವೇರಿ''' :
ಅದಕ್ಕೆ ಗಂಗಾ ಶರಣ್ ಅಂದ್ರು, ಸರ್ – ಅಂತಃಕಲಹದಲ್ಲಿ ದಕ್ಷಿಣದ ನನ್ನ ವರಿಗೇ ಫಸ್ಟ್ ಪ್ರೈಜ್ ಅಂತ.'
'''ಪ್ರೊಫೆಸರ್'''
ಕಡೆಗೆ ?
'''ಗಂಗಾಶರಣ್''' :
ಯಾರು ಸರಿ ಯಾರು ತಪ್ಪೂಂತ ತಮ್ಮ ನಿರ್ಣಯ ಕೇಳೋಕೆ ಬಂದ್ವಿ.
'''ಪ್ರೊಫೆಸರ್''' :
ಹಂ!.. [ನಗೆಯ ಧ್ವನಿ ] ತೀರ್ಪು ಕೊಡ್ಲೇನು? ಇಬ್ಬರೂ ಸರಿ, ಇಬ್ಬರೂ
ತಪ್ಪು?
'''ಕಾವೇರಿ'':
ಅಂದರೆ?'
ಗಂಗಾಶರಣ್:
ಹೇಗೆ?
{{center|———}}
{{center|೭೮}}<noinclude></noinclude>
66qze88tss8tzaz3p6p30az26vveh5x
ಪುಟ:AAHVANA.pdf/೭೯
104
20045
320935
308588
2026-05-19T17:53:44Z
Pragathi. BH
7585
/* Validated */
320935
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಪ್ರೊಫೆಸರ್''' :
ಎಲ್ಲ ಘಟನೆಗಳ ಪ್ರಸ್ತಾಪ ಮಾಡಿದ್ರೆ ಮಧ್ಯರಾತ್ರಿಯಾದರೂ ಮುಗೀಲಾರದು.
ಮುಖ್ಯಾಂಶಗಳನ್ನಷ್ಟೆ ತಗೊಳ್ಳೋಣ....ಸರಿ, ಎಲ್ಲಿ ಶುರು ?
'''ಗಂಗಾಶರಣ್''' :
ಅಲೆಕ್ಸಾಂಡರನ ದಿಗ್ವಿಜಯ.
'''ಪ್ರೊಫೆಸರ್''' :
ಹೌದು. ಕ್ರಿಸ್ತಪೂರ್ವ ೩೩೧, ಪರ್ಸಿಯಾ ಅವನ ವಶವಾಯ್ತು. ಕ್ರಿಸ್ತ
ಪೂರ್ವ ೩೨೭. ಹಿಂದೂಸ್ಥಾನದ ಕಡೆಗೆ ಗ್ರೀಕರು ಹೆಜ್ಜೆ ಇಟ್ಟರು. ಯಾವ
ದಾರಿಯಾಗಿ ?
'''ಗಂಗಾಶರಣ್''':
ಹಿಂದೂಖುಶನ್ನು ದಾಟಿ, ಆಫ್ಘಾನಿಸ್ತಾನದ ಬೆಟ್ಟಗಳ ಮೇಲಿಂದ.
'''ಪ್ರೊಫೆಸರ್''' :
ಆಗ ಹಿಂದೂಸ್ಥಾನದ ಗಡಿಯಲ್ಲೇನಾಯ್ತು ಗೊತ್ತೆ, ಮಿಸ್ ಕಾವೇರಿ ?
'''ಕಾವೇರಿ''' :
ಮಸಾಗಾ ಅನ್ನೋ ದುರ್ಗದಲ್ಲಿ ಕ್ಲಿಯೊಫೆಸ್ ಅಂತ ಒಬ್ಬಳು ರಾಣಿ ಆಕ್ರಮಣ
ಕಾರನನ್ನು ಇದಿರಿಸಿದ್ಲು,
'''ಪ್ರೊಫೆಸರ್''' :
ಕ್ಲಿಯೊಫೆಸ್-ಅದು ಗ್ರೀಕರಿಟ್ಟ ಹೆಸರು. ಅವಳು ನಿಸ್ಸಂದೇಹವಾಗಿಯೂ
ಧೀರೆ. ಮೂವತ್ತೇ ಸಾವಿರವಿದ್ದ ಅವಳ ಸೇನೆ, ಆದರ ನಾಲ್ಕು ಪಾಲಷ್ಟಿದ್ದ
ಗ್ರೀಕ್ ದಂಡಿನೊಡನೆ ಕಾದಾಡಿತು.
'''ಗಂಗಾಶರಣ್''' :
ಕೊನೆಯಲ್ಲಿ ಅಲೆಗ್ಸಾಂಡರನಿಗೆ ಜಯವಾಯ್ತು.
'''ಪ್ರೊಫೆಸರ್''' :
ಆ ಜಯಕ್ಕಾಗಿ ಅವನು ಸ್ವಲ್ಪ ಪ್ರಯಾಸಪಟ್ಟ. ಸ್ವಾಭಿಮಾನಕ್ಕೂ ಶೌರ್ಯಕ್ಕೂ
ಹಿಂದೂಸ್ಥಾನದಲ್ಲಿ ಕೊರತೆ ಇರಲಿಲ್ಲ ಅನ್ನೋದಕ್ಕೆ ದೃಷ್ಟಾಂತವಾಗಿ ಆ
{{center|————}}
{{center|೭೯}}<noinclude></noinclude>
tmncisb9a1ax85bk4m5bi5dymjby9xl
ಪುಟ:AAHVANA.pdf/೮೦
104
20046
320936
308590
2026-05-19T17:54:42Z
Pragathi. BH
7585
/* Validated */
320936
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
ವಿಷಯ ಹೇಳ್ದೆ . ಆದರೆ....ನಮ್ಮ ದೇಶದಲ್ಲಿ ವಿಪುಲವಾಗಿರುವ ಬೇರೊಂದು ಗುಣ--
'''ಕಾವೇರಿ''' :
ಯಾವುದು, ಸರ್ ?
'''ಪ್ರೊಫೆಸರ್''' :
ಅಭಿಮಾನ್ಯಶೂನ್ಯತೆ, ಸಂಕುಚಿತ ಮನೋಭಾವ, ವಿಶ್ವಾಸಘಾತ ಪ್ರವೃತ್ತಿ. ತಕ್ಷಶಿಲೆಯಲ್ಲೊ ದೊಡ್ಡ ರಾಜನಿದ್ದ , ಆಂಭಿ, ಆಕ್ರಮಣಕಾರನಿಗೆ ಸಸ್ವಗತ ಬಯಸುವ ಓಲೆಯನ್ನು ದೂತನೊಡನೆ ಆತ ಕಳಿಸಿಕೊಟ್ಟ.
ಆಲೆಗ್ಸಾಂಡರ್ :
[ಯುವಕ ಕಂಠ]
ಹಹಹಾ! ಬಾಗಿಲು ಬಡೆಯುವುದಕ್ಕೆ ಮುನ್ನವೇ ಅಗಣಿ ತೆಗೆದು ಈ ಜಗದೇಕವೀರನಿಗೆ ಸಾಗತ! ಹಹಹಾ! ಸೇನಾನಿ ಸೆಲ್ಯೂಕಸ್,ಏನೆನ್ನುವೆ ಇದಕ್ಕೆ?
'''ಸೆಲ್ಯೂಕಸ್''':
ಸ್ವಾಗತವಷ್ಟೇ ಅಲ್ಲ, ಮಹಾಪ್ರಭು, ತನ್ನ ಹಗೆಯಾದ ಪೋರಸನನ್ನು ಸದೆ ಬಡೆಯುವ ಕಾರ್ಯದಲ್ಲಿ ನಮ್ಮೊಡನೆ ಸಹಕರಿಸುವುದಾಗಿ ಒಂಫಿ ಆಶ್ವಾಸನ ವಿತ್ತಿದಾನೆ!
'''ಅಲೆಗ್ಸಾಂಡರ್''' :
ಒಂದೇ ದೇಶದ ಒಂದೇ ಕುಲದ ಸೋದರ ರಾಜರಿಬ್ಬರಲ್ಲಿ ಹಗೆತನ! ಹಹಹಾ!
{{Right|[Fade ou
'''ಪ್ರೊಫೆಸರ್''' :
ಅಂಭಿ ಅಲೆಗ್ಸಾಂಡರನಿಗೆ ತಲೆಬಾಗಿ ನಮಿಸಿದ. ಮುಂದೆ ಜೀಲಂ ನದಿ ತಟದಲ್ಲಿ ಪೌರವ-ಪೋರಸ್-ಕಲಿಯಂತೆ ಕಾದಿದ. ಅವನಲ್ಲಿ ಚತುರಂಗ ಬಲವಿತ್ತು, ಆದರೆ, ಆಂಭಿಯ ಮನೆಮುರುಕ ಧೋರಣೆಯಿಂದ ಬಲಗೊಂಡ ಗ್ರೀಕರ ತೀವ್ರ ಚಲನೆಯ ಸೈನಿಕರೆದುರು, ಅವನು ಅಸಹಾಯನಾದ.
{{center|———}}
{{center|೮೦}}<noinclude></noinclude>
03z2l5kcezs1h7mqy233m9vweqnz5m1
ಪುಟ:AAHVANA.pdf/೮೧
104
20047
320937
309089
2026-05-19T17:54:57Z
Pragathi. BH
7585
/* Validated */
320937
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಕಾವೇರಿ''' :
ಪೌರವನನ್ನು ಸೆರೆ ಹಿಡಿದರು, ಅಲ್ವೇ ಸಾರ್ ?
'''ಪ್ರೊಫೆಸರ್''' :
ಸೆರೆ ಹಿಡಿದು ಅಲೆಗ್ಸಾಂಡರನೆದುರು ತಂದರು.
[ಗುಸುಗುಸು ಧ್ವನಿ.ನೀರವತೆ.]
ಅಲೆಗ್ಸಾಂಡರ್:
ಪೋರಸ್ ! ಯಾವ ಬಗೆಯ ವರ್ತನೆಯನ್ನು ನಮ್ಮಿಂದ ನಿರೀಕ್ಷಿಸುತ್ತಿಯೆ?
'''ಪೌರವ''':
ಒಬ್ಬ ರಾಜ ಇನ್ನೊಬ್ಬ ರಾಜನ ವಿಷಯದಲ್ಲಿ ತೋರುವ ವರ್ತನೆಯನ್ನು!
'''ಅಲೆಗ್ಸಾಂಡರ್''' :
ಭಪ್ಪರೆ! ವಿರೋಚಿತವಾದ ನುಡಿ !
'''ಪ್ರೊಫೆಸರ್''' :
ಅಲೆಗ್ಸಾಂಡರ್ ಪೌರವನನ್ನು ಆದರದಿಂದ ಕಂಡ. ಅವನ ರಾಜ್ಯವನ್ನು ಅವನಿಗೆ ಬಿಟ್ಟುಕೊಟ್ಟ,
'''ಗಂಗಾಶರಣ್''': .
ಪೌರವನನ್ನು ಮಣ್ಣುಗೂಡಿಸುವ ಆಂಭಿಯ ಆಸೆ ಫಲಿಸಲಿಲ್ಲ!
'''ಪ್ರೊಫೆಸರ್''' :
ಎಲ್ಲ ಕಾಲಗಳಲ್ಲೂ ದ್ರೋಹಚಿಂತನೆಗೆ ಅಲ್ಪ ಬೆಲೆಗಂಗಾಶರಣ್....
ಪೌರವನ ಒಬ್ಬ ಅಧಿಕಾರಿಯಾಗಿ ಚಂದ್ರಗುಪ್ತ ಎಂಬಾತನಿದ್ದ. ಆತ ಈಗ ಅಲೆಗ್ಸಾ ೦ಡರನ ಸೇನೆಯನ್ನು ಸೇರಿದ.
'''ಅಲೆಗ್ಸಾಂಡರ್''': -
ಸೇನಾನಿ ಸೆಲ್ಯೂಕಸ್ ! ಈ ನಮ್ಮ ಹೊಸ ಭಾರತೀಯ ಮಿತ್ರನಿಗೆ ಏನು ಬೇಕಂತೆ ?<noinclude></noinclude>
ozsj5tffjwqeu9u9q4uxqc3w3smmai1
ಪುಟ:AAHVANA.pdf/೮೨
104
20048
320938
311954
2026-05-19T17:55:20Z
Pragathi. BH
7585
/* Validated */
320938
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಸೆಲ್ಯೂಕಸ್''' :
ಸನ್ನಿಧಿಯಲ್ಲಿ ಅರಿಕೆ ಮಾಡಿಕೊಳ್ಳುವ నా జెత్చేదే సంగతియేణందిడి ఆంతే ಚಂದ್ರಗುಪ್ತ ಹೇಳುತ್ತಿದ್ದಾನೆ.
'''ಅಲೆಗ್ಸಾಂಡರ್''' :
ಏನದು ಚಂದ್ರಗುಪ್ತ?
'''ಚಂದ್ರಗುಪ್ತ''':
ಮಹಾಪ್ರಭು! ತಮ್ಮನಿರಂತರ ಶ್ರೇಯೋಭಿಲಾಷಿಯಾದ ಸೇವಕನ ಮಾತ ನ್ನಿಷ್ಟು ಲಾಲಿಸಬೇಕು. ಇಲ್ಲಿಂದ ಪೂರ್ವಕ್ಕೆ ಗಂಗಾ ನದೀ ಪಾತ್ರದಲ್ಲಿ ಮಗಧವೆಂಬ ರಾಜ್ಯವೊಂದುಂಟು. ಅದರ ರಾಜಧಾನಿಯಾದ ಪಾಟಲೀ ಪುತ್ರ, ಅಪಾರ ಸಂಪತ್ತುಳ್ಳ ಪಟ್ಟಣವಾಗಿದೆ. ೭೦೦,೦೦೦ ಕಾಲಾಳುಗಳ, ఒం,000 ಅಶ್ವಾರೋಹಿಗಳ, ఒ,000 ರಥಗಳ, ಬಿಳಿ,000 ದಷ್ಟು ಯುದ್ಧ ಗಜಗಳ ಸೇನೆ ಅಲ್ಲಿದೆ. ಆದರೆ ಅಲ್ಲಿನ ಅರಸು ಮಹಾಪದ್ಮನಂದ, ದುರ್ಬಲ, ಅವನ ವಿಷಯದಲ್ಲಿ ಪ್ರಜೆಗಳಿಗೆ ಗೌರವವಿಲ್ಲ, ತಾವು ಅತ್ತ ಸರಿದರೆ ಸಾಕು, ಅಲ್ಲಿನ ಪ್ರಜಾಕೋಟಿ ಬಂಡಾಯವೇಳುವುದು, ಸೇನೆ ತಮ್ಮನ್ನು ಸೇರುವುದು, ಸಂಸತ್ತು ತಮ್ಮದಾಗುವುದು.
'''ಅಲೆಗ್ಸಾಂಡರ್''' :
ಇದನ್ನೆಲ್ಲ ನೀನು ಹೇಗೆ ಬಲ್ಲೆ?
ಚಂದ್ರಗುಪ್ತ :
ನಾನು ಮಗಧದವನು,
'''ಅಲೆಗ್ಸಾಂಡರ್''':
[ಶಂಕಿತನಾಗಿ]
ಮಗಧದವನೊ ? [ಗದರಿಕೆಯ ಧ್ವನಿಯಲ್ಲಿ] ವಂಚಿಸಿ ಯಾವುದೋ ಅಪಾಯದಲ್ಲಿ ನಮ್ಮನ್ನು ಕೆಡಹುವುದಕ್ಕೆ ಇದು ಉಪಾಯ ಅಂತ ನಾವು ಯಾಕೆ ಶಂಕಿಸಬಾರದು ?<noinclude></noinclude>
thmpy3mcmvp6t8sn58t8hj9spm6q7g6
ಪುಟ:AAHVANA.pdf/೮೩
104
20049
320939
316797
2026-05-19T17:55:49Z
Pragathi. BH
7585
/* Validated */
320939
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಆಹ್ವಾನ}}
'''ಚಂದ್ರಗುಪ್ತ''' :
ವಂಚನೆ! [ವ್ಯಥೆ ನಟಿಸುತ್ತ] ವಂಚಿತನಾಗಿರುವವನು ನಾನು ಮಹಾಪ್ರಭು,
'''ಅಲೆಗ್ಸಾಂಡರ್''' :
[ಆಶ್ಚರ್ಯದಿಂದ]
ಏನು ? -
'''ಚಂದ್ರಗುಪ್ತ''' :
ಮಗಧ ಸಿಂಹಾಸನಕ್ಕೆ ನಾನು ಹಕ್ಕುದಾರ.
'''ಅಲೆಗ್ಸಾಂಡರ್''' :
ಒಹೊಹೋ! . . . . . . . . . . . . ಹುಂ, ಸರಿ, ರಾಜಾ ಚಂದ್ರಗುಪ್ತ, [ಧನಿ ಏರಿಸಿ] ನಿಮ್ಮ ಮಾತೇನಾದರೂ ಸುಳ್ಳಾಯಿತು ಅಂದರೆ--
'''ಚಂದ್ರಗುಪ್ತ''':
ಈ ಶಿರಸ್ಸನ್ನು ಚೆಂಡಾಡುವಿರಂತೆ.
'''ಅಲೆಗ್ಸಾಂಡರ್''' :
ಆಗಲಿ, ಮಗಧದ ಮೇಲೆ ಧಾಳಿ ನಡಸೋಣ.
'''ಪ್ರೊಫೆಸರ್''' : -
ಆ ದಂಡಯಾತ್ರೆ ನೆರವೇರಲಿಲ್ಲ. ಹುಟ್ಟೂರಿಗಾಗಿ ಹಂಬಲಿಸಿದ ಗ್ರೀಕ್ ಸೈನಿಕರು, ಇನ್ನು ಸಾಕು-ಎಂದರು. ಅಲೆಗ್ಸಾಂಡರ್ ಸ್ವದೇಶಕ್ಕೆ ಅಭಿಮುಖವಾಗಿ ನಿರ್ಗಮಿಸಿದ. ಬೇಗನೆ ಮರಳಿ ಬರುತ್ತೇನೆ-ಎಂದಿರಬೇಕು ಚಂದ್ರ ಗುಪ್ತನಿಗೆ!
'''ಗಂಗಾಶರಣ್'''
ಆಗ ಆ ಗ್ರೀಕ್ ವೀರನಿಗಿನ್ನೂ ಮೂವತ್ತೆರಡು ವರ್ಷ ವಯಸ್ಸು.
'''ಕಾವೇರಿ''' :
ಎಷ್ಟು ಚಿಕ್ಕ ಪ್ರಾಯ!<noinclude></noinclude>
83ll95ce0c71qstdm2q6b04c16ozefb
ಪುಟ:KELAVU SANNA KATHEGALU.pdf/೪೧
104
20195
321164
60357
2026-05-20T06:43:11Z
Shreelatha.Halemane
7642
/* Validated */
321164
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=19|left=|right=}}
{{center|೪}}
{{center|ರಕ್ತ ಸರೋವರ}}
{{gap}}ಕಣ್ಣೊರೆಸಿಕೊಂಡಳು ಜೈನಬಿ. ನುಂಗಲಾಗದೊಂದು ಉಗುಳು ಗಂಟಲಲ್ಲಿ ತಡೆದು ನಿಂತಿತ್ತು .ಮಾತು ಹೊರಡುತ್ತಿರಲಿಲ್ಲ. ಮುದುಕ ಮಾವ ಮುಸ್ಸಂಜೆಯ ನಮಾಜು ಮಾಡುತ್ತಿದ್ದ, ಪುಟ್ಟ ಮಗು ಓಡಿಯಾಡಿ ಬಸವಳಿದು ನಿದ್ದೆ ಹೋಗಿತ್ತು, ಶೇಕ ಮೂಕನಾಗಿ ಕುಳಿತಿದ್ದ, ತುಟಿಯಲುಗುತ್ತಿರಲಿಲ್ಲ; ಆದರೆ ಕಣ್ಣ ಮಾತಾಡುತ್ತಿತ್ತು.
{{gap}}ಮನಸ್ಸು-ಭಾವನೆಗಳನ್ನು ಮುಗ್ಧಗೊಳಿಸುವ ನೀರವತೆ ಸುತ್ತಲೂ ಹರಡಿತ್ತು.
{{gap}}ನೆರೆಮನೆಯೊಂದರಲ್ಲಿ ನಡೆಯುತ್ತಿದ್ದ ಕೊರಾನಿನ ಪಠನ ಅಲೆಯಲೆ ಯಾಗಿ ಬಂದು ಬಂದು ಆ ಮೂರು ಜೀವಗಳ ಸುತ್ತಲೂ ಅವ್ಯಕ್ತ ಜಾಲವನ್ನು ಹೆಣೆಯುತ್ತಿತ್ತು.
{{gap}}ಶೇಕ ಆ ಸ್ವಪ್ನ ಸಮಾನ ಮೌನವನ್ನು ಭೇದಿಸಿ ಹೇಳಿದ:
{{gap}}“ಬೆಳಕು ಹರಿಯುವ ಹೊತ್ತಿಗೆ ಮರಳಿ ಬರುತ್ತೇವೆ ಜೈನಬಿ.”
{{gap}}ಜೈನಬಿ ಆ ದಲ್ ತಟಾಕವನ್ನು ನೋಡಿದ್ದಳು. ಕೆಂದಾವರೆಗಳಿಗಾಗಿ ಆಸೆಪಟ್ಟಿದ್ದಳು. ಮದುವೆಯಾದ ಮೊದಲ ದಿನಗಳಲ್ಲೊಮ್ಮೆ, "ಶೇಕ! ಒಂದು ಬಾರಿ ಶಿಕಾರಾ (ದೋಣಿ)ದಲ್ಲಿ ಕುಳಿತು ನಾವು ವಿಹಾರಕ್ಕೆ ಹೋಗಬಾರ ದೇಕೆ?” ಎಂದಿದ್ದಳು. “ಹುಚ್ಚಿ ಬೇರೆ ಊರಿನಿಂದ ಬರುವ ಶ್ರೀಮಂತರು • ಮಾತ್ರ ಅಲ್ಲಿ ವಿಹರಿಸುವುದು. ಅದು ರಾಜರ ಸರೋವರ, ನಮ್ಮಂಥವರು ಅಲ್ಲಿಗೆ ಹೋಗಬಾರದು” ಎಂದು ಶೇಕ ಉತ್ತರ ಕೊಟ್ಟಿದ್ದ.
{{gap}}ಅದು ಮೂರು ವರ್ಷಗಳ ಹಿಂದಿನ ಮಾತು. ತಮ್ಮ ಬಡ ಗುಡಿಸಲಿನಲ್ಲಿ - ತಾವೇ ರಾಜರಾಣಿಯರಾಗಿ ಶೇಕ ಮತ್ತು ಜೈನಬಿ ಬಾಳಿದರು.
{{gap}}ಸುಂದರ ನಾಡಾದ ಕಾಶ್ಮೀರದಲ್ಲಿ ಅರಳಿಯೂ ಬಾಡಿ ಹೋಗುವ, ಅರಳದೆ ಮುದುಡಿ ಹೋಗುವ, ಮಾನವ ಸುಮಗಳು ಲೆಕ್ಕವಿಲ್ಲದಷ್ಟು. ಅವು ಗಳಲ್ಲಿ ಜೈನಬಿ ಒಂದೂ ಹೂ, ಶೇಕ ಒಂದು ಹೂ.
{{gap}}ಅವು ವನಸುಮಗಳೂ ಅಲ್ಲ; ಉದ್ಯಾನದ ಹೂಗಳೂ ಅಲ್ಲ; ಆ ರಾಜ<noinclude></noinclude>
9nc235cek7b2qchzfrp155fn7rzw6xm
ಪುಟ:KELAVU SANNA KATHEGALU.pdf/೪೨
104
20196
321036
60399
2026-05-20T04:17:39Z
Pragathi. BH
7585
/* Validated */
321036
proofread-page
text/x-wiki
<noinclude><pagequality level="4" user="Pragathi. BH" />{{rh|center=|left=20|right=ನಿರಂಜನ: ಕೆಲವು ಸಣ್ಣ ಕಥೆಗಳು}}</noinclude>
ರಾಣಿಯರು ಬಾಳಿನಲ್ಲಿ ಸುಖ ಕಾಣಲಿಲ್ಲ. ವಿಕಾಸವಿಲ್ಲದ ಪರಿಮಳವಿಲ್ಲದ ಪುಷ್ಪಗಳಾದರು. ಬಡತನ ಅವರ ಸಂತೋಷವನ್ನು ಕೆಡಿಸಿತು. ಇದ್ದ ಹೊಲವನ್ನು ಜಹಗೀರುದಾರ ಕಸಿದುಕೊಂಡ. <br />
{{gap}}ಔಡುಗಚ್ಚಿ ನೌಜವಾನ ಶೇಕ ಕೂಗಾಡಿದ: - <br />
{{gap}}“ಎಂಥ ಅಬ್ಬರ! ಎಂಥ ದರ್ಪ! ನೋಡೋಣ-ಇದಕ್ಕೂ ಒಂದು ಕೊನೆ ಇದೆ.ಒಂದಲ್ಲ ಎಂದು ದಿನ ಇದನ್ನು ನಿಲ್ಲಿಸೇನು.. ನನ್ನ ಈ ಬಿಗಿ ಮುಷ್ಟೈಯಲ್ಲಿ ಶಕ್ತಿ ಇಲ್ಲ? ನನ್ನ ಈ ತೋಳುಗಳಲ್ಲಿಸಾಮರ್ಥ್ಯವಿಲ್ಲ? ಹುಂ ಹುಂ!" <br />
{{gap}}ಅವನಪ್ಪ ಮುದುಕ ಖುದಾ ಪರವರ್ದಿಗಾರ್! ನನ್ನ ಮಗನ ಬಾಯಿಂದ ಏನು ಮಾತಾಡಿಸುತ್ತಿದ್ದಿ?ನನ್ನ ಶೇರ್ ನಿಂದ ಏನು ಮಾಡಿಸುತ್ತಿದ್ದಿ?" ಎಂದು ಚಿಂತಿಸಿದ.<br />
{{gap}}ಕೊನೆಗೊಮ್ಮೆಆ ದಿನ ಬಂದಿತು! ఆ ರಾತ್ರೆ, ಅಮಾವಾಸ್ಯೆಯ ನಡು ವಿರುಳಿನಲ್ಲಿ, ದಲ್ ಸರೋವರವನ್ನು ದಾಟ ಪ್ರದೇಶದ ಯುವಜನ ಅತ್ತ, ಕಡೆ ಇದ್ದ ರಾಜರ ಬೀಡಿನ ಮೇಲೆ ಏರಿ ಹೋಗುವರು! ಕಾಶ್ಮೀರದಲ್ಲಿ ಕ್ರಾಂತಿ ಯಾಗಿತ್ತಂತೆ. ಶ್ರೀನಗರದ ಬೀದಿ ರಕ್ತಕಾಲುವೆಯಾಯಿತಂತೆ. ಪೋಲೀಸರೂ ಸಂಪು ಹೂಡಿದರಂತೆ. ಮಿಲಿಟರಿಯವರು ಹೆಂಗಸರು ಗಂಡಸರು ಮಕ್ಕಳ ತಲೆಗಳನ್ನು ಚೆಂಡಾಡಿದರಂತೆ. ಹಿಂದಿನ ವರ್ಷ ಅವರ ಊರಿಗೆ ಬಂದಿದ್ದ 'ಕಾಶ್ಮೀರದ ಸಿಂಹ? ಅಬ್ದುಲ್ಲಾನನು ಮಹಾರಾಜರು ಸೆರೆ ಹಿಡಿದರಂತೆ. ಊರು-ಊರು ಗಳಲ್ಲಿ ಬಂಡಾಯವೆದು ರೈತರು ಸ್ವತಃ ತಮ್ಮ ಜಹಗೀರುದಾರರನ್ನು ಕೈದು ಮಾಡಿದರಂತೆ-ಹೀಗೆ ಎಷ್ಟೋ ಸುದ್ದಿ ಕಿವಿಯಿಂದ ಕಿವಿಗೆ ಹಾಯ್ದು ಆ ಊರಿಗೆ ಬಂತು. ತಮ್ಮ ಹೊಲಕ್ಕೆ ತಾವೊಡೆಯರಾಗಬಹುದೆಂದು ರೈತರು ಹುಚ್ಚರಾದರು. ಮುದುಕ ಮುದುಕಿಯರು " ಮುಂದೇನಾಗುತ್ತದೆ? ಮುಂದೇನಾಗುತ್ತದೆ ?” ಎಂದು ತವಕಗೊಂಡರು. ಯುವಕ ರೈತರುಒಬ್ಬರ ಮುಖವನ್ನೊಬ್ಬರು ನೋಡಿದರು. ಒಬ್ಬರು ಒಂದು ಮಾತನ್ನೂ ಆಡಲ್ಲಿಲ್ಲ್ಸ, ಪ್ರತಿಯೊಬ್ಬರ ಕರ್ತವ್ಯ ಎಲ್ಲರಿಗೂ ತಿಳಿದಿತ್ತು.<br />
{{gap}}......ಯಾವಾಗಲೂ ಒಂದು ಸಣ್ಣ ನಿದ್ದೆಯಾಗುವ ಹೊತ್ತು ಕಳೆಯುವುದ ರೊಳಗೆ ಊರ ಗಂಡಾಳುಗಳು ತಟಾಕದ ದಂಡೆಯಲ್ಲಿ ಬಂದು ಕೂಡ ಬೇಕಾಗಿತ್ತು. <br />
{{gap}}ಮಲಗಿದ್ದ ಪುಟಾಣಿಯ ಹಣೆಯನ್ನು ಚುಂಬಿಸಿ, ಜೈನಬಿಯನ್ನು ಎದೆ ಗವಚಿಕೊಂಡು, ಆ ಮುದ್ದು ಮುಖವನ್ನು ಎರಡೂ ಕೈಗಳಿಂದ ಸವರಿ, “ಬರುತ್ತೇನೆ ಜಾನ್, ನಾಳೆ ಬೆಳಗಾಗುವುದರೊಳಗಾಗಿ ಬರುತ್ತೇನೆ” ಎಂದು<noinclude></noinclude>
a40rjqjncrne2x65ry0sz3qgkpav159
ಪುಟ:KELAVU SANNA KATHEGALU.pdf/೪೩
104
20197
321037
276778
2026-05-20T04:20:04Z
Pragathi. BH
7585
/* Validated */
321037
proofread-page
text/x-wiki
<noinclude><pagequality level="4" user="Pragathi. BH" />{{rh|ರಕ್ತ ಸರೋವರ|21}}</noinclude>ಹೇಳಿ ಶೇಕ ಹೊರಟ ತಂದೆ, ಕಿಶನಚಂದನ ಮನೆಯವರೆಗೆ ಬಿಂದು ಮಗನನ್ನು ಬೀಳ್ಕೊಟ್ಟಿ.<br />
{{gap}}ಕಿಶನಚಂದ ಹಿಂದೂ ಹುಡುಗ. ಶೇಕನ ಒಡನಾಡಿ. ಮದುವೆಯಾಗಿ
ಆರು ತಿಂಗಳೂ ಆಗಿರಲಿಲ್ಲ. ಹುಡುಗಿ ನೀರಾ "ಹೊಗುತ್ತೀಯಾ? ಹೋಗಲೇ
ಬೇಕೆ?” ಎಂದು ಗೋಳಾಡಿದಳು. <br />
{{gap}}ಎಲ್ಲ ಮಾತೂ ವ್ಯರ್ಥವಾದ ಮೇಲೆ ಇದ್ದೊಬ್ಬಳೇ ತಾಯಿ ಹೇಳಿದಳು.
“ನಿನ್ನ ಹಟ ನಿನಗೆ. ಒಳ್ಳೇದು. ಹೋಗು. ಹೋಗಿ ಬಾ. ನನಗಾಗಿ ಅಲ್ಲ
ವಾದರೂ ಈ ಹೆಣ್ಣು ಕೂಸಿನ ಮೋರೆ ನೋಡಿ ಹಿಂದೆ ಬಾ-” ಎಂದು.<br />
{{gap}}ಜತೆಯಲ್ಲೇ,“ಶೇಕ,ಕಿಶೂ ನಿನಗಿಂತಲೂ ಸಣ್ಣವ. ನಿನ್ನ ತಮ್ಮ ಅಂತ
ಜೋಪಾನವಾಗಿ ನೋಡಿಕೋ. ಯಾವ ಹೊತ್ತಿಗೂ ಅವನ ಜತೆ ಬಿಡಬೇಡ”
ಎಂದು ತುಂಬಿ ಬರುತ್ತಿದ್ದ ಕಂಬನಿಯನ್ನು ಒತ್ತಿಹಿಡಿದು ಆ ತಾಯಿ ದೈನ್ಯದಿಂದ
ಮಾತಾಡಿದಳು.
{{center|* * * *}}
{{gap}} ಆ ಊರಿನ ಎಪ್ಪತ್ತಾರು ಗಂಡುಗಲಿಗಳು ಅವರು ಆ ತಾಯ್ನೆಲದ
ಮಮತೆಯ ಮಕ್ಕಳು. ಈ ರಾತ್ರಿ ಅವರೊಂದು ಮಹಾಸಾಹಸದ ಕೆಲಸ
ವನ್ನು ಮಡುವರು. ಅವರ ಹಿರಿಯರೊಂದೂ ಆಂಥಾದ್ದನ್ನು ಮಡಿರಲಿಲ್ಲ.
“ನಮ್ಮ ನಾಡಿನ ಇತಿಹಾಸದಲ್ಲೇ ಇಂಥ ಪರಿಸ್ಥಿತಿ ಬಂದದ್ದಿಲ್ಲ" ಎಂದು ಅವರ
ಹಳ್ಳಿಯ ಸಾಲೆಯ ಮಾಸ್ತರನೂ ಆ ದಿನ ಹೇಳಿದ್ದ.<br />
{{gap}} ಶಿಕಾರಾಗಳು ಸಿದ್ಧವಾಗಿದ್ದವು. ಆರು ದೋಣಿಗಳಲ್ಲಿ ಆ ಎಪ್ಪತ್ತಾರು
ಮಂದೆ ಕುಳಿತು ಹುಟ್ಟುಹಾಕಿದ್ದರು. ನಿದ್ರಿಸಿದ್ದ ಸರೋವರವನ್ನು ಸೀಳಿ ಅವರ
'ನೌಕಾಪಡೆ'ಮುಂದೆ ಸಾಗಿತು.<br />
{{gap}}ಅಲ್ಲೇ ಒಂದೂವರೆ ಮೈಲಿನಾಚೆ ವಾಯವ್ಯದ ದಂಡೆಯಲ್ಲಿ ಕಾಶ್ಮೀರದ
ಮಹಾರಾಜರು ರಾಣೀವಾಸದೊಡನೆ ಸುಖನಿದ್ರೆ ಮಾಡುತ್ತಿದ್ದಾರೆ. ಪ್ರಧಾನಿ
ಕಾಕನ ಕೈಯಲ್ಲಿ ರಾಜ್ಯಸೂತ್ರವನ್ನು ಕೊಟ್ಟು,ಬಂದೂಕು ಮಶಿನ್ಗನ್ನುಗಳ
ಗು೦ಡಿನ ಸಪ್ಪಳದಿಂದ ದೂರವಿರಬೇಕೆಂದು ಆ ವಿಹಾರ ಸರೋವರದ ದಂಡೆಗೆ
ಅವರು ಬಂದಿದ್ದಾರೆ. ಅಲ್ಲಿ ಕೆಂಪು ತಾವರೆಗಳ ಮೇಲಿಂದ ಕಂಪಿನಲರು ಬೀಸು
ವುದು. ಹೊರಗಿನೆಲ್ಲ ಗೊಂದಲಗಳನ್ನು ಮರೆತು ಆ ಅಮೃತ ಶಾಂತಿಯಲ್ಲಿ,
ಭೂಮಿಯ ಮೇಲಿನ ಸ್ವರ್ಗದಲ್ಲಿ, ಸುಖವಾಗಿರಬಹುದು. ಆದರೆ ಪ್ರಧಾನಿ
ಕಾಕ ಹೇಳಿದ್ದ:"ಈ ಪ್ರಜೆಗಳನ್ನು ನಂಬುವ ಹಾಗಿಲ್ಲ ಮಹಾರಾಜ. ಹಳ್ಳಿ
ಯವರಾದರೇನು? ಯಾವ ಹೊತ್ತಿನಲ್ಲಿ ಏನು ಮಾಡುವರೋ ಹೇಳುವುದು<noinclude></noinclude>
706x7uoef66bnf08u8snxfhlnkltken
ಪುಟ:KELAVU SANNA KATHEGALU.pdf/೪೪
104
20198
321038
152199
2026-05-20T04:23:27Z
Pragathi. BH
7585
/* Validated */
321038
proofread-page
text/x-wiki
<noinclude><pagequality level="4" user="Pragathi. BH" />{{rh|center=|left=22|right=ನಿರಂಜನ: ಕೆಲವು ಸಣ್ಣ ಕಥೆಗಳು}}</noinclude>
ಹೇಗೆ?” “ಹೂಂ” ಎಂದರು ರಾಜರು. ಸುಸಜ್ಜಿತ ಸೇನೆಯೂ ಅವರ ರಕ್ಷಣೆಗೆ
ಹೊರಟಿತು.<br />
{{gap}}ಕೆಲವೆಡೆ ಸ್ವಚ್ಛ ನೀರಿನ ಮೇಲೆ, ಬೇರೆ ಕೆಲವೆಡೆ ತಾವರೆಗಳ ದಂಟು_
ದಳಗಳನ್ನು ಸರಿಸಿ, ದೋಣಿಗಳು ಸಾಗಿದುವು.ಆ ಎಪ್ಪತ್ತಾರು ಮಂದಿ ಉಸಿರು
ಬಿಗಿ ಹಿಡಿದು ಕುಳಿತಿದ್ದರು. ಹುಟ್ಟಿನದೊಂದು ಏಕನಾದ, ನೀರಿನ ಸುಳು
ಸುಳು ಸಪ್ಪಳ-ಇವೇ ಸಂಗೀತವಾಗಿತ್ತು.<br />
{{gap}}ಅವರೇನು ಮಾಡುವರು? ಆ ದಂಡೆಯನ್ನು ಸೇರಿ ಅವರೇನು ಮಾಡು
ವರು? ಒಬ್ಬನೆಂದಿದ್ದ:"ಆ ರಾಜನಿಗೆ ನಮ್ಮ ಕಷ್ಟಗಳನ್ನು ವಿವರಿಸಿ ಹೆಳೋಣ.
ಅವನ ಮನಸ್ಸನ್ನು ಬದಲಿಸೋಣ" ಆ ಮಾತಿಗೆ ಹಲವರು ಥೂ_ಥೂ ಎಂದಿ
ದ್ದರು, ಕಣ್ಣಲ್ಲಿ ನೆತ್ತರಿಲ್ಲದ, ಹೃದಯ ಕಲ್ಲಾಗಿದ್ದ, ಮಾನವಿಯತೆಯ ಅರಿವಿಲ್ಲದೆ
ಮಹಾರಾಜನ ಮನಸ್ಸನು ಬದಲಿಸುವುದೆ?<br />
{{gap}}ಹಿಂದಿನ ದಿನ ನಗರದ ವಿದ್ಯಾಲಯದಿಂದ ಓದು ನಿಲ್ಲಿಸಿ ಹಿಂದೆ ತಮ್ಮ
ಹಳ್ಳಿಗೆ ಬಂದಿದ್ದು ಇಬ್ಬರು ತರುಣರಲ್ಲೊಬ್ಬ, “ಹೃದಯ ಪರಿವರ್ತನೆಯಂತೆ!
ಅವನಿಗೆ ಹೃದಯವಿದ್ದರಲ್ಲವೆ ಪರಿವರ್ತನೆ?” ಎಂದಿದ್ದ. ಇನ್ನೊಬ್ಬ, “ಮಹಾ
ರಾಜನನ್ನು ಸೆರೆ ಹಿಡಿಯೋಣ. 'ಕಾಶ್ಮೀರ ಸಿಂಹ'ನ ಬಿಡುಗಡೆಯಾಗುವವರೆಗೆ
ಬಂದೀಖಾನೆಯಲ್ಲಿಡೋಣ. ಆಮೇಲೆ ಗಂಟುಮೂಟೆ ಸಹಿತ ಕಾಶ್ಮೀರದಿಂದ
ಹೊರಕ್ಕಟ್ಟೋಣ" ಎಂದು ತೀರ್ಪು ಕೊಟ್ಟಿದ್ದ.<br />
{{gap}}ದೂರ ದೂರ-ಒಂದು ಯುಗವಾಗಿ ತೋರುತ್ತಿದ್ದವು ಆ ಕೆಲವು
ಸಂದಿಗ್ಧ ನಿಮಿಷಗಳು. ನೂರುನೂರೇ ಗಜ ಮುಂದೆ ಮುಂದಕ್ಕೆ, ಅರಸು
ಭವನದ ವಿದ್ಯುದ್ದೀಪಗಳಲ್ಲಿ ಆಗಲಿನ್ನೂ ಪ್ರಜ್ವಲಿಸುತ್ತಿದ್ದ ಕೆಲವು, ದೂರದ
ಹತ್ತಾರು ನಕ್ಷತ್ರಗಳಂತೆ ಕಾಣುತ್ತಿದ್ದುವು.<br />
{{gap}}ಇನ್ನೆರಡು ಫರ್ಲಾಂಗು ಮುಂದೆ ಹೋದರಾಯಿತು, ಅವರ ಗುರಿ
ಸಮೀಪಿಸುವುದು. ದಂಡೆ ಸಿಗುವುದು. ಅನಂತರ ಅವರ ಕಾರ್ಯ ಕೈಗೂಡು
'ವುದು.<br />
{{gap}}ಅಲ್ಲಿ ಆಗಲೆ ಆಚೆ ದಂಡೆಯ ವಿದ್ಯುದ್ದೀಪಗಳು ಬೆಳಗಿ ಅನಂತ ತಾರೆ
ಗಳಾದುವು. ಕಾವಲುಗಾರರಿಗೆ ಸುಳಿವು ಹತ್ತಿತೇನೋ. ಶಿಕಾರಿಯ ವಿದ್ಯುತ್
ಕಂದೀಲು ಸರೋವರದುದ್ದಕ್ಕೂ ಬೆಳಕು ಹಾಯಿಸಿತು. ಢಂ_ಎಂದೊಂದು
ಗುಂಡು ದೋಣಿಗಳೆಡೆಯಿಂದ ಸುಂಯ್ಗುಟ್ಟ ಹಾದುಹೋಯಿತು. ನಗರದ
ಆ ವಿದ್ಯಾರ್ಥಿ ಯುವಕ ಆರಂಭಿಸಿದ:<br />
{{gap}}"ಇಂಕ್ವಿಲಾಬ್!_"<noinclude></noinclude>
5cvjvgl31qgomgcvpvpfypze947eob2
ಪುಟ:KELAVU SANNA KATHEGALU.pdf/೪೫
104
20199
321039
152200
2026-05-20T04:26:30Z
Pragathi. BH
7585
/* Validated */
321039
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ರಕ್ತ ಸರೋವರ|right=23}}</noinclude>
{{gap}}ಎಪ್ಪತ್ತಾರು ಕಂಠಗಳೂ ಒಮ್ಮೆಲೆ ಘೋಷಿಸಿದುವು
{{gap}}"ಜಿಂದಾಬಾದ್!"
{{gap}}"ಕಶ್ಮೀರ್ ಬಾಗಿ_"
{{gap}}"ಜಿಂದಾ ಹೈ!"
{{gap}}"ಛೋಡ್ದೋ"
{{gap}}"ಇಂಕ್ವಿಲಾಬ್!_"
{{gap}}"ಜಿಂದಾಬಾದ್"
{{gap}}ಢಂ_ಢಂ_ಢಂ_ಎಂದು ಹತ್ತಾರು ಬಂದೂಕುಗಳಿಂದ ಗುಂಡು ಹಾರಿ
ಬಂತು. ಮುಂದಿದ್ದ ದೋಣಿಯಿಂದೋಬ್ಬ ಕಾಶ್ಮೀರದ ರಾಷ್ಟ್ರೀಯ ಗೀತೆಯನ್ನು
ಹಾಡತೊಡಗಿದ. ಢಂ-ಢಂ-ತಾಳ ಮೇಳದೊಡನೆ ಆ ಗೀತ ಮಹಾ ಸಂಗೀತ
ವಾಯಿತು. ಶೇಕ ಪಲ್ಲವಿ ಹಾಡಿದ; ಕಿಶನ್ ಪಲ್ಲವಿ ಹಾಡಿದ. ಎಲ್ಲರೂ
ಹಾಡಿದರು. "ಸ್ವಾತಂತ್ರ್ಯ ಸಮತೆಯ ನೂತನ ಕಾಶ್ಮೀರವನ್ನು ಕಟ್ಟುವ
ವೀರರು ನಾವ್! ವೀರರು ನಾವ್! ಸೋಲನರಿಯದ ಸಿಂಹಹೃದಯದ ವೀರರು
ನಾವ್ ವೀರರು ನಾವ್!"<br />
{{gap}}ಮತ್ತೆ ಅದೇ ಎಪ್ಪತ್ತಾರು ಕಂಠಗಳಿಂದ ರಣ ಗರ್ಜನೆ “ಇಂಕ್ವಿಲಾಬ್-
ಜಿಂದಾಬಾದ್!"<br />
{{gap}}ಎಪ್ಪತ್ತಾರೂ, ಎಪ್ಪತ್ನನಾಲ್ಕೊ,ಎಪ್ಪತ್ತೆರಡೊ! ಬಲಿದಾನಕ್ಕೆ ಆರಂಬ
ವಾಗಿತ್ತು. ಆಚೆ ದಡದ ಸಿಪಾಯಿಗಳೆಲ್ಲ ಎಚ್ಚತ್ತಿದ್ದರು. ರಾಜರ ಸುಖ ಸ್ವಪ್ನ
ಕಡಿದು ಹೋಯಿತು. ಬಾಹುಬಲದ ವಜ್ರಹೃದಯದ ಸ್ವಾತಂತ್ರ್ಯಯೋಧ
ರೆಡೆಗೆ ಮರ್ದನದ ಶೋಷಣೆಯ ಕ್ರೂರ ಗುಂಡುಗಳು ಧಾವಿಸಿಬಂದವು.<br />
{{gap}}ದೋಣಿಗಳು ಮುಂದೆ ಸಾಗುತ್ತಲೆ ಹೋದುವು. ಜಯಘೋಷ ನಡೆ
ಯುತ್ತಲೇ ಇತ್ತು. ಆ ಯುವಕ ಹಾಡುತ್ತಲೇ ಇದ್ದ. ಶೇಕ-ಕಿಶನರು ಪಲ್ಲವಿಗೆ
ದನಿ ಕೂಡಿಸುತ್ತಲೆ ಇದ್ದರು.<br />
{{gap}}ಒಂದು ದೋಣಿಗೆ ಗುಂಡು ತಗಲಿ ತೂತು ಬಿದ್ದು ಜನ ನೀರುಪಾಲಾ
ದರು. ಸರೋವರಕ್ಕೆ ಬಿದ್ದ ಜನ ಈಸಾಡಿದರು. ಇನ್ನೊಂದು ದೋಣಿ ದಡದ
ತೀರಕ್ಕೆ ಬಂತು. ಆ ಇರುಳಲ್ಲಿ ಬಯನೆಟುಗಳು ಬೇಟೆ ಸಿಗದೆ ಒಂದಕ್ಕೊಂದು
ತಗಲಿದುವು.<br />
{{gap}}ದೋಣಿಗಳಲ್ಲಿದ್ದ ಜನ ನೋಡುತ್ತಲೇ ಇದ್ದರು. ವಿದ್ಯುದ್ದೀಪದ<noinclude></noinclude>
ik7uga4dgf32dqdtzqxzuxm8wmfu161
321040
321039
2026-05-20T04:27:13Z
Pragathi. BH
7585
321040
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ರಕ್ತ ಸರೋವರ|right=23}}</noinclude>
{{gap}}ಎಪ್ಪತ್ತಾರು ಕಂಠಗಳೂ ಒಮ್ಮೆಲೆ ಘೋಷಿಸಿದುವು<br />
{{gap}}"ಜಿಂದಾಬಾದ್!"<br />
{{gap}}"ಕಶ್ಮೀರ್ ಬಾಗಿ_"<br />
{{gap}}"ಜಿಂದಾ ಹೈ!"<br />
{{gap}}"ಛೋಡ್ದೋ"<br />
{{gap}}"ಇಂಕ್ವಿಲಾಬ್!_"<br />
{{gap}}"ಜಿಂದಾಬಾದ್"<br />
{{gap}}ಢಂ_ಢಂ_ಢಂ_ಎಂದು ಹತ್ತಾರು ಬಂದೂಕುಗಳಿಂದ ಗುಂಡು ಹಾರಿ
ಬಂತು. ಮುಂದಿದ್ದ ದೋಣಿಯಿಂದೋಬ್ಬ ಕಾಶ್ಮೀರದ ರಾಷ್ಟ್ರೀಯ ಗೀತೆಯನ್ನು
ಹಾಡತೊಡಗಿದ. ಢಂ-ಢಂ-ತಾಳ ಮೇಳದೊಡನೆ ಆ ಗೀತ ಮಹಾ ಸಂಗೀತ
ವಾಯಿತು. ಶೇಕ ಪಲ್ಲವಿ ಹಾಡಿದ; ಕಿಶನ್ ಪಲ್ಲವಿ ಹಾಡಿದ. ಎಲ್ಲರೂ
ಹಾಡಿದರು. "ಸ್ವಾತಂತ್ರ್ಯ ಸಮತೆಯ ನೂತನ ಕಾಶ್ಮೀರವನ್ನು ಕಟ್ಟುವ
ವೀರರು ನಾವ್! ವೀರರು ನಾವ್! ಸೋಲನರಿಯದ ಸಿಂಹಹೃದಯದ ವೀರರು
ನಾವ್ ವೀರರು ನಾವ್!"<br />
{{gap}}ಮತ್ತೆ ಅದೇ ಎಪ್ಪತ್ತಾರು ಕಂಠಗಳಿಂದ ರಣ ಗರ್ಜನೆ “ಇಂಕ್ವಿಲಾಬ್-
ಜಿಂದಾಬಾದ್!"<br />
{{gap}}ಎಪ್ಪತ್ತಾರೂ, ಎಪ್ಪತ್ನನಾಲ್ಕೊ,ಎಪ್ಪತ್ತೆರಡೊ! ಬಲಿದಾನಕ್ಕೆ ಆರಂಬ
ವಾಗಿತ್ತು. ಆಚೆ ದಡದ ಸಿಪಾಯಿಗಳೆಲ್ಲ ಎಚ್ಚತ್ತಿದ್ದರು. ರಾಜರ ಸುಖ ಸ್ವಪ್ನ
ಕಡಿದು ಹೋಯಿತು. ಬಾಹುಬಲದ ವಜ್ರಹೃದಯದ ಸ್ವಾತಂತ್ರ್ಯಯೋಧ
ರೆಡೆಗೆ ಮರ್ದನದ ಶೋಷಣೆಯ ಕ್ರೂರ ಗುಂಡುಗಳು ಧಾವಿಸಿಬಂದವು.<br />
{{gap}}ದೋಣಿಗಳು ಮುಂದೆ ಸಾಗುತ್ತಲೆ ಹೋದುವು. ಜಯಘೋಷ ನಡೆ
ಯುತ್ತಲೇ ಇತ್ತು. ಆ ಯುವಕ ಹಾಡುತ್ತಲೇ ಇದ್ದ. ಶೇಕ-ಕಿಶನರು ಪಲ್ಲವಿಗೆ
ದನಿ ಕೂಡಿಸುತ್ತಲೆ ಇದ್ದರು.<br />
{{gap}}ಒಂದು ದೋಣಿಗೆ ಗುಂಡು ತಗಲಿ ತೂತು ಬಿದ್ದು ಜನ ನೀರುಪಾಲಾ
ದರು. ಸರೋವರಕ್ಕೆ ಬಿದ್ದ ಜನ ಈಸಾಡಿದರು. ಇನ್ನೊಂದು ದೋಣಿ ದಡದ
ತೀರಕ್ಕೆ ಬಂತು. ಆ ಇರುಳಲ್ಲಿ ಬಯನೆಟುಗಳು ಬೇಟೆ ಸಿಗದೆ ಒಂದಕ್ಕೊಂದು
ತಗಲಿದುವು.<br />
{{gap}}ದೋಣಿಗಳಲ್ಲಿದ್ದ ಜನ ನೋಡುತ್ತಲೇ ಇದ್ದರು. ವಿದ್ಯುದ್ದೀಪದ<noinclude></noinclude>
iw2651o2j95cmbe2ajpuhckoyjgcbgk
ಪುಟ:KELAVU SANNA KATHEGALU.pdf/೪೬
104
20200
321041
59997
2026-05-20T04:31:11Z
Pragathi. BH
7585
/* Validated */
321041
proofread-page
text/x-wiki
<noinclude><pagequality level="4" user="Pragathi. BH" />{{rh|center=|left=24|right=ನಿರಂಜನ: ಕೆಲವು ಸಣ್ಣ ಕಥೆಗಳು}}</noinclude>
ಬೆಳಕಿನಲ್ಲಿ ಕಾಣಿಸುತ್ತಲೇ ಇತ್ತು. ಆ ಯುವಕನೂ ಇನ್ನೊಬ್ಬನೂ ದಡವನ್ನೇ
ರಿದರು. ಯುವಕನೆದೆಗೆ ಮಿಲಿಟರಿಯವನೊಬ್ಬ ಬಯನೆಟಿನಿಂದ ತಿವಿದ. ಆ
ಸಲದ "ಇಂಕ್ವಿಲಾಬ್" ಅವನ ಕೊನೆಯ ಗರ್ಜನೆಯಾಯಿತು. ಬಯನೆಟು
ಸಹಿತ, ಅದನ್ನು ಹಿಡಿದುಕೊಂಡಿದ್ದ ಮಿಲಿಟರಿಯವನನ್ನೂ ಬರಸೆಳೆದು ಆ
ಯುವಕ ತಟಾಕದ ಆಳಕ್ಕೆ ಇಳಿದು ಹೋದ.<br />
{{gap}}ದಡದ ಸಮೀಪವಿದ್ದ ಮತ್ತೊಂದು ದೋಣಿ ಒಡೆಯಿತು. ಕ್ಷಣ ಕಾಲ
ರಣ ಗರ್ಜನೆ ಇರಲಿಲ್ಲ. ಶೇಕ-ಕಿಶನ್ ಇಬ್ಬರೂ ಹುಟ್ಟುಬಿಟ್ಟು ಉದ್ವಿಗ್ನರಾಗಿ
ಎದ್ದು ನಿಂತರು. ಶೇಕ ಕೂಗಿದ. “ಇಂಕ್ವಿಲಾಬ್!” ಈಸುತ್ತಿದ್ದ ಜನ,
ಮುಳುಗುತ್ತಿದ್ದ ಜನ, ಜೀವಂತವಿದ್ದ ಜನ "ಜಿಂದಾಬಾದ್" ಎಂದು ಮರು
ನುಡಿದರು.<br />
{{gap}}ಮತ್ತೊಮ್ಮೆ ಶೇಕ ಕೂಗಿದೆ: "ಇಂಕ್ವಿಲಾಬ್!" ಮರು ನುಡಿಯ
ಘೋಷಣೆಯ ನಡುವೆ ಗುಂಡೊಂದು ಬಂದು ಶೇಕನೆದೆಯಲ್ಲಿನಾಟಿತು.“ಹಾ!”
ಎಂದ ಕಿಶನ್. ದೋಣಿಯಲ್ಲಿ ನಿಂತಿದ್ದ ಶೇಕ ಉರುಳಿ ಹೋದ-ಕೆಳಕ್ಕೆ,
ನೀರಿನ ಆಳಕ್ಕೆ!"ಹಾ!ಅಯ್ಯೋ!” ಎಂದ ಕಿಶನ್. ಆಳಕ್ಕೆ ಆ ಸಿಂಹ ಜೀವ
ಇಳಿದು ಹೋಗುತ್ತಿತ್ತು.<br />
{{gap}} ...ಹೋರಾಟ ವಿಫಲವಾದಾಗ ಉಳಿದ ಮೂರು ದೋಣಿಗಳು ಹಿಮ್ಮೆ
ಟ್ಟಿದುವು. ಕೆಲವರು ಈಸಾಡಿ ಈಚೆ ದಡ ಸೇರಿದರು. ದೂರದಿಂದ ಬರುತ್ತಿದ್ದ
ಗುಂಡುಗಳಿಗೆ ಬೆಚ್ಚಿಬೀಳುತ್ತ ತಪ್ಪಿಸಿಕೊಳ್ಳುತ್ತ ಇವರು ಇತ್ತ ಬಂದರು.<br />
{{gap}}ದಡ ಸೇರಿದವರು ಅಲ್ಲೆ ಬಿದ್ದುಕ್ಂಡರು ಆ ವಿಸ್ತಾರ ಸರೋವರದಲ್ಲಿ
ಯಾವ ದಂಡೆಗೆ ಹೋದರೋ ಏನೋ ಎಂದು ರಾಜರ ಮಿಲಿಟರಿ ಅವರನ್ನು
ಬೆನ್ನಟ್ಟಲಿಲ್ಲ.
{{gap}}ಯಾವುದೋ ಜೀವ ದನಿತೆಗೆದು ಅಳುತ್ತಿತ್ತು.
{{center|* * * *}}
{{gap}}ಮಾತು ಬಾರದ ಮೂಕ ಕಿಶನ್ ಮನೆಗೆ ಬಂದ.<br />
{{gap}}"ಬಂದೆಯಾ_ಬಂದೆಯಾ?" ಎಂದಳು ಹೆಂಡತಿ ನೀರಾ.<br />
{{gap}}"ಬಾ_ಬಾ ಮಗನೆ!" ಎ೦ದಳು ತಾಯಿ.<br />
{{gap}}ಕಿಶನ್ ಮಾತಾಡಲ್ಲೋಲ್ಲ.<br />
{{gap}}"ಮಗೂ! ಮಗೂ! ಯಾಕೆ ಹೀಗೆ? ಶೇಕ ಎಲ್ಲಿ?"<br />
{{gap}}ಶೇಕನ ತಂದೆ ನಡೆಗೋಲನ್ನೂ ರುತ್ತ ಬಂದು ಕೇಳಿದ:<br />
{{gap}}"ಕಿಶನ್! ಎಲ್ಲಿ ನನ್ನ ಶೇರ್? ಎಲ್ಲಿ ನನ್ನ ಶೇಕ?"<noinclude></noinclude>
861k8w8l1zk7cmq9f9ix3jd3cwawh2n
ಪುಟ:KELAVU SANNA KATHEGALU.pdf/೪೭
104
20201
321042
152201
2026-05-20T04:33:39Z
Pragathi. BH
7585
/* Validated */
321042
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ರಕ್ತ ಸರೋವರ|right=25}}</noinclude>
{{gap}}ಜೈನಬಿ ಹುಚ್ಚಿಯಂತೆ ಧಾವಿಸಿ ಬಂದು ಕಿಶನನ ಹೆಗಲನ್ನಲುಗಿಸಿ ಚೀರಾ
ಡಿದಳು:<br />
{{gap}}“ಅಣ್ಣ ಅಣ್ಣ ! ಎಲ್ಲಿ? ಶೇಕೆ ಎಲ್ಲಿ?"<br />
{{gap}}ಶೇಕ, ವಿಹಾರ ಸರೋವರದ ಜಲಗರ್ಭದಲ್ಲಿ ಸಮಾಧಿಸ್ಥನಾಗಿದ್ದ.
ಶಾಂತಿಯ ಪರಮ ಶಾಂತಿಯ ತಾಣ ಅದು. ಅಲ್ಲಿ ಹೂರಾಶಿಯ ಕೆಳಗೆ
ಕೆಂದಾವರೆಯ ದಂಟುಗಳಡಿಯಲ್ಲಿ ಆ ವೀರ ವಿರಮಿಸುತ್ತಿದ್ದ.<br />
{{gap}}ಶೇಕನ ಮನೆಯ ಸುತ್ತುಮುತ್ತಲಿನವರೆಲ್ಲ ಬಂದು ಸರೋವರದ ದಂಡೆ
ಯಲ್ಲಿ ನಿಂತು ನೋಡಿದರು. ಅಲ್ಲೇ ಒಂದು ಮೈಲಿನಾಚೆ ಇಪ್ಪತ್ತಾರು ಜೀವ
ಗಳು ಪ್ರಾಣ ಬಿಟ್ಟಿದುವು. ಅಲ್ಲೆ_ಓ ಅಲ್ಲೇ ಶೇಕ ಕಣ್ಮರೆಯಾಗಿದ್ದ.<br />
{{gap}}ಬೆಳಕು ಚೆನ್ನಾಗಿ ಹರಡಿತ್ತು. ಬೇಕೊ ಬೇಡವೊ ಎಂದು ಸೂರ್ಯ
ಮೇಲೆ ಬರುತ್ತಿದ್ದ. ಹಿಮರಾಶಿ “ಒಲ್ಲೆ ಕರಗಲೊಲ್ಲೆ!” ಎನ್ನುತ್ತಿತ್ತು.
ತಾವರೆಗಳು “ಬೇಡ ನಾವು ಅರಳುವುದಿಲ್ಲ!” ಎನ್ನುತ್ತಿದ್ದವು. ಗಾಳಿ ಮೆಲ್ಲ
ಮೆಲ್ಲನೆ ತಟಾಕದ ಮೇಲಿಂದ ಬೀಸುತ್ತಿತ್ತು. ವಿಹಾರ ಸರೋವರ ರಕ್ತ
ಸರೋವರವಾಗಿ ರುದ್ರಭೀಕರವಾಗಿತ್ತು.
{{Right|೧೯೪೬}}<noinclude></noinclude>
pntqgpvx8z8u4e69inzbkm466o8bmr5
ಪುಟ:KELAVU SANNA KATHEGALU.pdf/೪೮
104
20202
321043
208721
2026-05-20T04:41:45Z
Pragathi. BH
7585
/* Validated */
321043
proofread-page
text/x-wiki
<noinclude><pagequality level="4" user="Pragathi. BH" />{{center|26}}
{{center|೫}}
{{center|'''ಕೊನೆಯ ಗಿರಾಕಿ'''}}</noinclude>
ಆ ಸರ್ಕಲಿನಾಚೆ ಯಾರೂ ಹೋಗಲೊಲ್ಲರು. ಕಟ್ಟಡಗಳ ಅಡೆತಡೆಯಿಲ್ಲದ ವಿಸ್ತಾರ ಭೂಮಿಯ ಮೇಲಿಂದ ಬೀಸುತ್ತಿದ್ದ ತಂಗಾಳಿ ದುರ್ಗಂಧವನ್ನು ತರುತ್ತಿತ್ತು. ಜನ ಗುಜುಗುಜು ಮಾತಾಡುತ್ತಿದ್ದರು. ಅದೆಲ್ಲ ಅಸ್ಪಷ್ಟ ಕಲರವ.</br>
{{gap}}ಸೂರ್ಯ ಮೇಲಕ್ಕೆ ಬಂದಂತೆ ಕಾವೇರತೊಡಗಿತು. ಸರ್ಕಲನ್ನು ಹಾದು ಹೋಗಲೇಬೇಕಾದವರು, ಭೀತಿಯಿಂದೊಮ್ಮೆ ಎಡಕ್ಕೆ ಕಣ್ಣ ಹೊರಳಿಸಿ,
ಮತ್ತೆ ತಲೆಕೆಳಗೆ ಮಾಡಿ, ಸರಸರನೆ ನಡೆದು ಹೋಗುತ್ತಿದ್ದರು.</br>
{{gap}}ಎಲ್ಲರೂ ಚಲಿಸುತ್ತಲೇ ಇದ್ದರು..................ನಿಲ್ಲುವವರು ಯಾರ ಇರಲಿಲ್ಲ..........</br>
{{gap}}ನಿಧಾನವಾಗಿ ಪುರಸಭೆಗೆ ವರದಿ ಹೋಯಿತು.</br>
{{gap}}*{{gap}}{{gap}}*{{gap}}{{gap}}*{{gap}}{{gap}}*
{{gap}}ಅದೊಂದು ದಿನ ಬೆಳಗ್ಗೆ ಕಾಣಿ ಎದ್ದು ನೋಡುತ್ತಾಳೆ-ರಾತ್ರಿ ಜತೆಯಲ್ಲಿ ಮಲಗಿದ್ದ ಸಂಗಡಿಗನಿಲ್ಲ. ಹದಿನಾರರ ಆ ಹುಡುಗಿ ಹತ್ತು ದಿನಗಳ ಹಿಂದೆ ಅವನ ಬೆಂಬತ್ತಿ ಕರ್ನಾಟಕದ ರಾಜಧಾನಿಗೆ ಓಡಿಬಂದಿದ್ದಳು-ತಮಿಳುನಾಡಿ ನೊಂದು ಊರಿಂದ.ತಿರುಪೆ ಎತ್ತುವ ಗರೀಬ ಆತ.ಒಂದು ಕೈ ಮೊಂಡು. ಆದರೆ ಒಂದು ರಾತ್ರೆ, ಇನ್ನೊಂದು ತೋಳಿನಿಂದ ಆಕೆಯನ್ನು ಆತ ಬಳಸಿ ಬರ ಸೆಳೆದಿದ್ದ. ಕಂಪಿಸುತ್ತಿದ್ದ ಹೃದಯದಿಂದ ಆಕೆ ಆತನನ್ನು ನೋಡಿದಳು; ಆ ಬಲಿಷ್ಟ ತೋಳನ್ನು ನೋಡಿದಳು. ಎರಡು ಕೈಗಳ ಶಕ್ತಿಯೂ ಇತ್ತದಕ್ಕೆ.</br>
{{gap}}ಅಲ್ಲಿಂದ ಆ ರಾತ್ರೆಯೇ ಅವರು ಓಡಿಹೋದರು.
{{gap}}ಮನೆ ಇತ್ತು ಆಕೆಗೆ-ಚಿಕ್ಕ ಗುಡಿಸಲು.ಹೊಲವಿತ್ತು ಆಕೆಯ ತಾಯ್ತಂದೆಯರಿಗೆ-ಒಕ್ಕಲುತನದ ಒಂದಿಷ್ಟು ಹೊಲ. ಆ ವರ್ಷವೇ ಕೈಬಿಟ್ಟುವು; ಎಲ್ಲವೂ ಹೊರಟುಹೋದವು! ದೇಶಪ್ರೇಮಿಯಾದ ಆ ಹಿರಿಯ ಜಮೀನ್ದಾರ ಹೆಚ್ಚುಗೇಣಿ ಕೇಳಿದ. ಕೊಡದೆ ಹೋದರೆ ಹೊಸ ಒಕ್ಕಲನ್ನು ಹುಡುಕುವುದಾಗಿ ಹೇಳಿದ. ಹಾಗೆಯೇ ಆಯಿತು. ಕಾಣಿಯ ತಾಯ್ತಂದೆಯರು ಹೊಲ ಕಳೆದು ಕೊಂಡರು.ಮಡಿಕೆ ಕುಡಿಕೆಗಳೊಡನೆ ಗುಳೆ ಹೊರಟಿತು ಆ ಸಂಸಾರ.ಹಿರಿಯ
</br><noinclude></noinclude>
5msqiy5f354c4z9dezz9z9kt8m81feq
ಪುಟ:KELAVU SANNA KATHEGALU.pdf/೪೯
104
20203
321044
208845
2026-05-20T04:45:39Z
Pragathi. BH
7585
/* Validated */
321044
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಕೊನೆಯ ಗಿರಾಕಿ|right=27}}
ಮಗ ಕೂಲಿಯಾಗುವೆನೆಂದು ಮದರಾಸಿಗೆ ಹೋದ. ಕಿರಿಯವನು ಜಗಳಾಡಿ ದೇಶಾಂತರ ಹೋದ. ತಂದೆ-ತಾಯಿ ಮೂಕಿಯಾದ ಮಗಳನ್ನು ಕಟ್ಟಿಕೊಂಡು ಊರೂರು ಸುತ್ತಿದರು.</br>
{{gap}}ಎಷ್ಟು ಸುತ್ತಾಡಿದರೂ ಕೆಲಸ ಸಿಗಲಿಲ್ಲ, ಬೇಡಿಬೇಡಿ ಸರ್ವೀಸಾದ ಬಳಿಕ, ಭಿಕ್ಷೆ ಎತ್ತುವ ಕೆಲಸ ಅವರಿಗೆ ಖಾಯಮಾಯಿತು.
{{gap}}ತಾಯ್ತಂದೆಯವರನ್ನು ಬಿಟ್ಟು ಬಂದಾಗ ಆ ಮೂಕಿಗೆ ಸ್ವಲ್ಪ ದುಃಖವಾಗಿತ್ತು- ಎಂಬುದನ್ನು ಒತ್ತಿ ಹೇಳುವುದು ವಾಸಿ. ಯಾಕೆಂದರೆ ಯಾವುದೋ ಮನೆಯ ಮಾಡಿನ ಕೆಳಗೆ ಬೀದಿಯ ಬಳಿ ಆ ರಾತ್ರೆ ತನ್ನೊಡನೆ ಹೊರಳಾಡಿದ ಮೊಂಡುಕೈಯ ಯುವಕ ಭಿಕ್ಷುಕ, ಆಕೆಗೊಂದು ಆಧಾರವಾಗಿದ್ದ.</br>
{{gap}}ನಿಮಿಷ ನಿಮಿಷಕ್ಕೂ ಕುಸಿದು ಬೀಳುವ ಆಧಾರ ಅದು.</br>{{gap}}ಓಡಿಬಂದ ಮೇಲೆ ಆ ದೊಡ್ಡ ನಗರದಲ್ಲಿ ಕಳೆದುದು ಹತ್ತೇ ದಿನ. ಹನ್ನೊಂದನೆಯ ಬೆಳಗು ಮುಂಜಾನೆ ಆಕೆ ಒಬ್ಬಳೆ, ಆಶ್ರಯಕ್ಕೆ ಹುಲ್ಲು ಕಡ್ಡಿಯೂ ಇಲ್ಲದ ಮಹಾ ಆಳದಲ್ಲಿ ಕೈಕಾಲು ಬಡಿಯುತ್ತಿದ್ದಳು.</br>
{{gap}}ಆ ದಿನವೆಲ್ಲ ಆ ಮೂಕಿಯ ಕಣ್ಣಗಳಿಂದ ಬಳಬಳ ಕಣ್ಣೀರು ಸುರಿಯುತ್ತಲೇ ಇತ್ತು, ಆಕೆ ಹೊಟ್ಟೆ ಹಿಸುಕಿಕೊಂಡು, ಕೂತಲ್ಲೆ ಗೋಡೆಗೆ ಹಣೆಚಚ್ಚಿ ಕೊಂಡು, ಗೊಳೋ ಎಂದು ರೋದಿಸಿದಳು. ಅಲ್ಲಿ ಇಲ್ಲಿ ಸುತ್ತಾಡಿದಳು. ಆತ ಸಿಗಲಿಲ್ಲ, ಯಾವ ಗಾಡಿ ಹತ್ತಿ ಯಾವ ಊರಿಗೆ ಟಿಕೆಟಿಲ್ಲದ ಪ್ರವಾಸವನ್ನು ಕೈಗೊಂಡಿದ್ದನೊ ಆ ಮಹಾರಾಯ!</br>
{{gap}}ರೈಲು ನಿಲಾಣದ ಹಿಂದಿದ್ದ ಕೆರೆಗೆ ಕಾಣಿ ಹೋದಳು. ನೀರಲ್ಲಿ ಕಾಲುಗಳನ್ನು ಇಳಿಬಿಟ್ಟು ಕೂತಳು. ರವಿಕೆಗೆ ಸಿಕ್ಕಿಸಿದ್ದ ಬಾಚಣಿಗೆಯನ್ನು ತೆಗೆದು, ತಲೆಗೆ ಕೈಯಿಂದ ನೀರು ಹನಿಸಿ, ಬಾಚಿದಳು. ಅದೇ ಕೆರೆಯ ನೀರನ್ನು ಸ್ವಲ್ಪ ಕುಡಿದಳು. ಹಾಗೆಯೆ ಉದ್ದಕ್ಕೂ ಆ ಕಾಲುಹಾದಿಯಲ್ಲಿ ನಡೆದುಹೋದಳು.</br>
{{gap}}ಆಕೆ ರೂಪವತಿಯಲ್ಲ, ತೆಳ್ಳನೆಯ ಜೀವ. ಆದರೆ ವಯಸ್ಸಿಗೆ ಮೀರಿ ಮೈ ತುಂಬಿತ್ತು, ಬರಿಯ ದೇಹಮಾಂಸಕ್ಕಾಗಿ ಹಂಬಲಿಸುವವರಿಗೆ ಆಕೆ ಮನದಣಿಯುವ ಊಟವಾಗಿದ್ದಳು.</br>
{{gap}}ನಡೆದು ಹೋಗುತ್ತ ಹೋಗುತ್ತ ಆಕೆಯೊಮ್ಮೆ ತಿರುಗಿ ನೋಡಿದಳು. ಯಾವನೋ ಒಬ್ಬ ಸಿಗರೇಟು ಕುಡಿದುಕೊಂಡು ಹಿಂಬಾಲಿಸಿಕೊಂಡು ಬರುತ್ತಿದ್ದ. ಬೀದಿಯ ದೀಪಗಳು ಹತ್ತಿಕೊಂಡುವು. ಯಾವುದೋ ಹೊಸ ಪ್ರಪಂಚದ ಬಾಗಿಲು ತನ್ನ ಪಾಲಿಗೆ ತೆರೆದ ಹಾಗೆ ಕಾಣಿ ಆ ದೀಪಗಳತ್ತ ಪಿಳಿಪಿಳಿ ನೋಡಿದಳು. ಒಂದು ಸೈಕಲ್ ಎದುರುದಿಕ್ಕಿನಿಂದ ಹರಿದುಹೋಯಿತು. ಪೋಲೀಸನ<noinclude></noinclude>
f3w0hd5n09ymxw5uxmpi6d39pviscsy
ಪುಟ:KELAVU SANNA KATHEGALU.pdf/೫೦
104
20204
321091
213603
2026-05-20T05:30:12Z
Shreelatha.Halemane
7642
/* Validated */
321091
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=28|right=ನಿರಂಜನಃ ಕೆಲವು ಸಣ್ಣ ಕಥೆಗಳು}}
ಸಿಳ್ಳೊಂದು ಎಲ್ಲಿಂದಲೋ ಸದ್ದು ಮಾಡಿತು....ಆಕೆ ಮತ್ತೊಮ್ಮೆ ಹಿಂತಿರುಗಿ</br>ನೋಡಿದಳು.ಆತ ಬರುತ್ತಲೇ ಇದ್ದ. </br>
{{gap}}ಫುಟ್ ಪಾತಿನ ಮೇಲೆ ಒಂದು ದೇವದಾರು ಮರದ ಬಳಿ ಆಕೆ ನಿಂತಳು. </br> ಆತ ಸಮೀಪ ಬಂದ. ತಿಂಡಿಯ ಪೊಟ್ಟಣವನ್ನು ಆತ ಮುಂದಕ್ಕೆ ನೀಡಿದ.</br>"ಆ ಆ”ಎಂದು ಆಕೆಯ ಗಂಟಲಿಂದ ಸ್ವರ ಹೊರಟಿತು. ಪೊಟ್ಟಣವನ್ಯಾಕೆ ಬಿಚ್ಚಿ </br> ಆ ಚೌಚೌವನ್ನು ಗಬಗಬನೆ ತಿಂದಳು. ಆತ ಇನ್ನೊಂದು ಸಿಗರೇಟು ಹಚ್ಚಿದ. </br>
{{gap}}ಬೆಳಗ್ಗಿಂದಲೇ ನಿನ್ನ ನೋಡ್ತಾ ಇದ್ದೆ” ಎಂದನಾತ. </br>
{{gap}}ಆಕೆ, ಆತನ ತುಟಿಯಲುಗುತ್ತಿದ್ದುದರಿಂದಲೆ ಎಷ್ಟನ್ನೋ ಅರ್ಥಮಾಡಿ </br> ಕೊಂಡಳು. ಕಿವಿಯ ಭೇರಿಯ ಮೇಲೆ ತಣ್ಣನೆ ಸದ್ದೇನೋ ಆಗುತ್ತಿತ್ತು; </br>ಆದರೆ ಆರ್ಥವಾಗುತ್ತಿರಲಿಲ್ಲ.</br>
{{gap}}ಆಕೆ "ಕಕಾಕ ಅ ಆ ಅ” ಎಂದೇನೋ ಹೇಳಿದಳು.ಕಣ್ಣೀರು ಚಿಮ್ಮ </br> ತೊಡಗಿತು. </br>
{{gap}}“ಚು ಚು ಚ್” ಎಂದು ಆತ ಸಂತಾಪಸೂಚಿಸಿದ. ಬಾ, ಎಂದು ಕೈ </br> ಸನ್ನೆ ಮಾಡಿದ. ಆಕೆ ತಲೆಬಾಗಿಸಿಕೊಂಡು ಆತನನ್ನೇ ಹಿಂಬಾಲಿಸಿದಳು.. </br>ನಾಯಿ ವಿನಮ್ರವಾಗಿ ಹಿಂದಿನಿಂದ ಹೋಗುವಂತೆ ಸಾಗಿದಳು. </br>
{{gap}}ಯಾವುದೋ ಆಶ್ರಯದಲ್ಲಿ ಹಾಗೆ ಆ ರಾತ್ರಿ ಬೆಳಗಾಯಿತು. </br>
{{gap}}ಆ ರೀತಿ ನಾಲ್ಕು ದಿನ ಕಳೆದುವು. ಆಕೆಯನ್ನು ಅವನು ಸಿಂಗರಿಸಿದ.</br>
{{gap}}ಅರ್ಧಮಾತಿನಿಂದ ಅರ್ಧ ಕೈಸನ್ನೆಯಿಂದ ವಿವರಿಸಿ ಹೇಳಿದ: </br>
{{gap}}“ನಾನು ಹೊಸಬರನ್ನು ಕರಕೊಂಡು ಬರ್ತೀನಿ. ನೀನು ಸುಮ್ಮಗಿರಬೇಕು. </br> ಬಾಯಿ ಬಿಚ್ಚಬಾರದು. ಮೂಕಿ ಅಂತ ತೋರಿಸಬಾರದು.” </br>
{{gap}}ಆಕೆ ಕುಂಯ್ ಕುಂಯ್ ಎನ್ನುತಿದ್ದಳು. ತನ್ನನ್ನು ಮೂಕಿ ಎಂದು </br> ಸಂಬೋಧಿಸಿದ ಆತ ಹಾವ ಭಾವ ಮಾಡಿದಾಗ ಆಕೆಗೆ ತುಂಬ ಸಿಟ್ಟು ಬರು</br>ತಿತ್ತು. ಆದರೆ ಕುಂಯ್ ಕುಂಯ್ ಶಬ್ದದಲ್ಲೇ ಆ ಸಿಟ್ಟು ಮುಕ್ತಾಯವಾಗು </br>ತಿತ್ತು.</br>
{{gap}}ಆತ ಯಾರನ್ನೋ ಕರೆದು ತಂದ.ಸಂಭಾವಿತರಂತೆ ಕಾಣುತ್ತಿದ್ದ ರವರು.</br> ಅವರೆದುರು ಆತ ಹಾಗೆ ಹಲ್ಲುಕಿರಿಯುತ್ತಿದ್ದ. ತಿಂಡಿಯ ತುಣುಕಿನ ಮೇಲೆ </br> ನಾಯಿಯ ಕಣ್ಣಿದ್ದ ಹಾಗೆ! ಅವನ ದೃಷ್ಟಿ ಅವರ ಜೇಬುಗಳ ಮೇಲಿತ್ತು.</br>
{{gap}}ಬಂದವರಲ್ಲೊಬ್ಬ ಶುದ್ಧ ಪಶು. ಆಕೆಯ ಅಂಗಾಂಗಗಳನ್ನೆಲ್ಲಾ ಹಿಡಿದು </br> ನೋಯಿಸತೊಡಗಿದ. </br><noinclude></noinclude>
p1gcfd53pdbvi94bqfp4qneyyr47u7x
ಪುಟ:KELAVU SANNA KATHEGALU.pdf/೫೧
104
20205
321092
214563
2026-05-20T05:31:49Z
Shreelatha.Halemane
7642
/* Validated */
321092
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಕೊನೆಯ ಗಿರಾಕಿ|right=29}}
{{gap}}ಆಕೆ ನೋವು ತಡೆಯಲಾರದೆ “ವೆ ವೆ ವೇ ವೆ” ಎಂದು ಪ್ರತಿಭಟಿಸಿದಳು. </br>ಎರಡೂ ಕೈಯಿಂದ ದಬ್ಬಿ ಅವನನ್ನು ಕೆಳಕ್ಕೆ ಬೀಳಿಸಿದಳು. ರಂಪವಾಯಿತು. </br>ಆಕೆಯ ಯಜಮಾನನು ಬಡ ನಾಯಿಗೆ ಹೊಡೆವ ಹಾಗೆ ಆಕೆಗೆ ಬಡೆದ. ಆಕೆ</br> ಮುದುಡಿಕೊಂಡು ಮೂಲೆಯಲ್ಲಿ ಬಿದ್ದಳು. ಬಂದವರು ಮುಖ ಸಿಂಡರಿಸಿಕೊಂಡು</br> ಹೊರಟುಹೋದರು.</br>
{{gap}}ನಡುರಾತ್ರೆ ಆತ, ಬಿದ್ದಿದ್ದ ಜಾಗದಿಂದ ಆಕೆಯನ್ನೆತ್ತಿ ಚಾಪೆಯ ಮೇಲೆ</br> ಇರಿಸಿದ. “ನೋವಾಯಿತೇ? ನೋವಾಯಿತೇ?” ಎಂದ. ಆಕೆ ಏನನ್ನೂ ಹೇಳ </br>ಲಿಲ್ಲ. ಕಣ್ಣುಗಳಲ್ಲಿ ಮಾತ್ರ ಏನೇನೋ ವಿವಿಧ ವಿಕಾರಗಳಾಗುತ್ತಿದ್ದುವು. ಆದರೆ</br> ಆ ಅಲ್ಪ ಮಾನವನಿಗೆ ಅದರ ಅರ್ಥವಾಗಲಿಲ್ಲ.</br>
{{gap}}ಅಂದಿನಿಂದ ಕಾಣಿ ಬಲು ಮೆದುವಾದಳು.</br>
{{gap}}ಆತನನ್ನು ಆಕೆ ಪ್ರೀತಿಸಲಿಲ್ಲ. ಮೊದಲ ಸಾರೆ ಮೊಂಡು ಕೈ ಯವನನ್ನು</br> ಪ್ರೀತಿಸಿದ ಹಾಗೆ ಯಾರನ್ನೂ ಆಕೆ ಪ್ರೀತಿಸಲಿಲ್ಲ.</br>
{{gap}}ದುಡ್ಡಿನ ಬೆಲೆ ಕಾಣಿಗೆ ತಿಳಿಯದು. ಎಷ್ಟು ಬರುತ್ತಿತ್ತೋ ಏನೋ. </br>ಎರಡು ಸೀರೆ-ರವಕೆ, ಜಂಪರ್, ರಾತ್ರೆ ಹೊರಹೋಗುವಾಗ ಹಾಕಿಕೊಳ್ಳಲು</br> ತೂತಾಗಿದ್ದ, ಆದರೆ ಉಣ್ಣೆಯ, ಸ್ತ್ರೀ ಕೊಟ್ಟು; ಮುಡಿಯಲು ಹೂ; ಮೂಗಿಗೆ</br> ಹೊಡೆಯುವ ಎಣ್ಣೆ - ಕೂದಲಿಗೆ; ಹೊಟ್ಟೆ ತುಂಬ ಊಟ-ತಿಂಡಿ... ಹಾಗೆ ದಿನ</br> ಕಳೆಯಿತು.</br>
{{gap}}ಸದ್ಯಃ ಆಕೆ ಬಸುರಿಯಾಗಲಿಲ್ಲ!</br>
{{gap}}ಇಷ್ಟಿದ್ದರೂ ಒಂದು ದಿನ ಆಕೆಗೆ ಎದೆ ನೋವಾಯಿತು. ಹೊರಳಾಡಿದಳು.,</br> ವಿಲಿವಿಲಿ ಒದ್ದಾಡಿದಳು. ತನ್ನ ಹಳ್ಳಿಯ, ತಾನು ಹುಟ್ಟಿದ ಗುಡಿಸಲಿನ ತನ್ನ </br>ಭಾಷೆಯಾಡುವ ಜನರ, ಮೊಂಡುಕೈಯ ಮೊದಲ ಜತೆಗಾರನ ನೆನಪಾಯಿತು.</br> ಓಹೋ ಓಓ- ಎಂದೆಲ್ಲ ಸ್ವರವೆತ್ತಿದಳು. ಎರಡು ದಿನವೂ ರಾತ್ರೆಯೂ ಹೀಗೇ</br> ಆಯಿತು. ಗಿರಾಕಿಗಳು ಬರುವುದಾಗಲೇ ಇಲ್ಲ.</br>
{{gap}}ಮೂರನೆಯ ಬೆಳಗು ಮುಂಜಾನೆ, ಅಲ್ಲಿದ್ದ ತಿಂಡಿಯನ್ನೆಲ್ಲ ಬಟ್ಟೆಬರೆಯ</br> ನೆಲ್ಲ ಕಟ್ಟಿಕೊಂಡು ಆಕೆ ಓಡಿಹೋದಳು. ನಗರದ ಇನ್ನೊಂದು ಅಂಚನ್ನು </br>ತಲಪಿ ಅದನ್ನೂ ದಾಟಿದಳು.</br>
{{gap}}ದಾಟಿ ಮುಂದೆ ನಡೆದುದೊಂದು ಹಳ್ಳಿಗೆ. ಹೊಲ, ಉಳುತ್ತಿದ್ದ ಒಂದು</br> ಜೊತೆ ಎತ್ತು, ರೈತರು...ಎಲ್ಲವನ್ನೂ ಆಕೆ ಮೌನದಿಂದ ನೋಡಿದಳು. ಕೆದರಿದ</br> ತಲೆಕೂದಲನ್ನು ಬಾಚುವುದೂ ನೆನಪಾಗಲಿಲ್ಲ ಆಕೆಗೆ.ಒಂದಾಣೆಯ ಪುಟ್ಟ ಕನ್ನಡಿ</br><noinclude></noinclude>
emb0kjynlph0hatlgcw1tip138xh22h
ಪುಟ:KELAVU SANNA KATHEGALU.pdf/೫೨
104
20206
321093
249750
2026-05-20T05:33:00Z
Shreelatha.Halemane
7642
/* Validated */
321093
proofread-page
text/x-wiki
<noinclude><pagequality level="4" user="Shreelatha.Halemane" /></noinclude>೩೦ {{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}ನಿರಂಜನ: ಕೆಲವು ಸಣ್ಣ ಕಥೆಗಳು <br>
ಯಲ್ಲಿ ತನ್ನ ಪ್ರತಿರೂಪವನ್ನು ನೋಡುವ ಬಯಕೆಯೂ ಆಗಲಿಲ್ಲ. ತಿಂಡಿ ತಿನ್ನುವುದೂ ಬೇಕೆನಿಸಲಿಲ್ಲ.<br>
{{gap}}ಮಳೆಹನಿ ಬಿದ್ದು ಸುತ್ತಲಿನ ನೆಲವೆಲ್ಲ ಹಸುರಾಗಿತ್ತು. ಚಿಗುರು ಹುಲ್ಲಿನ ಮೇಲೆ ಕಾಣಿ ಒಂದೆಡೆ ಕುಳಿತಳು.<br>
{{gap}}ತನ್ನ ಬಾಲ್ಯದ ನೂರೊಂದು ನೆನಪುಗಳು ಒತ್ತರಿಸಿ ಬಂದುವು. ಮುಖ ಸಣ್ಣದಾಯಿತು. ನಿಧಾನವಾಗಿ ಜೊಂಪು ಹತ್ತಿ ಅಲ್ಲೆ ಒರಗಿ ನಿದ್ದೆಹೋದಳು.<br>
{{gap}}ಸಂಜೆ, “ಶ್ ಶ್ ಏಯ್ ಏಯ್” ಎಂದು ಕೆಲವು ರೈತ ಹೆಂಗಸರು ಎಬ್ಬಿಸಿದಾಗಲೇ ಆಕೆ ಕಣ್ಣು ತೆರೆದದ್ದು.<br>
{{gap}}ಕತ್ತಲಾದಂತೆ ಆ ಹಳ್ಳಿಯಲ್ಲಿ ಆಕೆಗೆ ಹೆದರಿಕೆಯಾಯಿತು. ಧಾವಿಸುತ್ತ ಧಾವಿಸುತ್ತ ಕಾಣಿ ನಗರ ಸೇರಿದಳು.<br>
{{gap}}ಒಂದು ಕೊನೆಯಲ್ಲಿ ಆ ಶಾಲೆ ಇತ್ತು. ರಾತ್ರಿ ಅಲ್ಲಿ ಯಾರೂ ಇರುತ್ತಿರಲಿಲ್ಲ, ಅಲ್ಲಿಯೇ ಜಗಲಿಯ ಒಂದು ಮೂಲೆಯಲ್ಲಿ ಆಕೆ ಮಲಗಿದಳು.<br>
{{gap}}{{gap}}{{gap}}{{gap}} * {{gap}}{{gap}}{{gap}}{{gap}} * {{gap}}{{gap}}{{gap}}{{gap}} * {{gap}}{{gap}}{{gap}}{{gap}} * <br>
{{gap}}ಬೆಳಗಾದೊಡನೆಯೆ ಎದ್ದು ಹೋದಳಾಕೆ. ಹೋಗುತ್ತ ಮೈಮೇಲಿನ ಬಟ್ಟೆ ಸರಿಪಡಿಸಿಕೊಂಡಳು; ಕೊಂಚಮಟ್ಟಿಗೆ ಸಿಂಗರಿಸಿಕೊಂಡಳು.<br>
{{gap}}ಹಾಗೆಯೇ ಸುತ್ತಾಡಿದಾಗ ಆ ಜಾಗದ ಪರಿಚಯವಾಯಿತು. ವಿಸ್ತಾರ ಭೂಮಿ-ಸುತ್ತಲೂ ಹಸುರು ಹುಲ್ಲು. ಅಲ್ಲೆ ಆ ಸರ್ಕಲ್-ಅದರ ನಡುವಿನಲ್ಲಿ ಕಾರಂಜಿ, ಯಾರದೋ ಒ೦ದು ಪ್ರತಿಮೆ. ದೂರದಲ್ಲಿ ಒಂದೇ ಒಂದಾದ ಯಾವುದೋ ದೊಡ್ಡ ಕಟ್ಟಡ.<br>
{{gap}}ಮೂಲೆಯಲ್ಲಿ ಕಡಲೆಕಾಯಿ ಮಾರುತ್ತ ಕುಳಿತಿದ್ದವನೊಬ್ಬನಿಗೆ ಇದ್ದ ಪುಡಿ ಕಾಸು ಸುರಿದು, ಕಾಸಿನ ಬೆಲೆ ಏನೆಂಬುದನ್ನು ಆ ಮೂಕಿ ಕಲಿತಳು.<br>
{{gap}}ಹಸಿವು ಇಂಗಲಿಲ್ಲ.<br>
{{gap}}ಕತ್ತಲಾದಾಗ ಆ ಸರ್ಕಲಿನ ಬಳಿ ಹೋಗಿ ಒಂದು ಮೂಲೆಯಲ್ಲಿ ಕುಳಿತಳು. ಕೇಂದ್ರದ ಒಂದೇ ಒಂದು ದೀಪದಿಂದ ಮಂದ ಪ್ರಕಾಶವಷ್ಟೆ ಬೀಳುತ್ತಿತ್ತು. ಹಾದುಹೋಗುತ್ತಿದ್ದವರು ಆಕೆಯನ್ನು ನೋಡಿ ಹೋಗುತ್ತಿದ್ದರು. ನೋಡಿದ ಒಬ್ಬಿಬ್ಬರು ಮುಂದೆ ಹೋದ ಬಳಿಕ ತಿರುಗಿ ನೋಡುತ್ತಿದ್ದರು.<br>
{{gap}}ಗಂಭೀರನಾಗಿ ಕಾಣುತ್ತಿದ್ದ ಮನುಷ್ಯನೊಬ್ಬ ಕನ್ನಡಕವನ್ನು ಸರಿಪಡಿಸುತ್ತ ಆ ಹಾದಿಯಲ್ಲಿ ಎರಡು ಬಾರಿ ಸುಳಿದ. ಕಾಣಿ ಎದ್ದು ನಿಂತು ಸರ್ಕಲಿನಿಂದ ಹೊರಕ್ಕೆ ಬಯಲಿನತ್ತ ನಡೆದಳು-ಎಲ್ಲೋ ಮರದತ್ತ. ಯಾವುದೋ ಪೊದೆಯ ಬಳಿಗೆ. ಆ ಮನುಷ್ಯ ಹಿಂದೆ ಮುಂದೆ ನೋಡುತ್ತ ಆಕೆಯನ್ನು ಹಿಂಬಾಲಿಸಿದ.<noinclude></noinclude>
m2eun0ud1mzekg8tvphjpxv5o6hr8fy
321094
321093
2026-05-20T05:34:02Z
Shreelatha.Halemane
7642
321094
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೩೦|center=|right=ನಿರಂಜನ: ಕೆಲವು ಸಣ್ಣ ಕಥೆಗಳು }}
ಯಲ್ಲಿ ತನ್ನ ಪ್ರತಿರೂಪವನ್ನು ನೋಡುವ ಬಯಕೆಯೂ ಆಗಲಿಲ್ಲ. ತಿಂಡಿ ತಿನ್ನುವುದೂ ಬೇಕೆನಿಸಲಿಲ್ಲ.<br>
{{gap}}ಮಳೆಹನಿ ಬಿದ್ದು ಸುತ್ತಲಿನ ನೆಲವೆಲ್ಲ ಹಸುರಾಗಿತ್ತು. ಚಿಗುರು ಹುಲ್ಲಿನ ಮೇಲೆ ಕಾಣಿ ಒಂದೆಡೆ ಕುಳಿತಳು.<br>
{{gap}}ತನ್ನ ಬಾಲ್ಯದ ನೂರೊಂದು ನೆನಪುಗಳು ಒತ್ತರಿಸಿ ಬಂದುವು. ಮುಖ ಸಣ್ಣದಾಯಿತು. ನಿಧಾನವಾಗಿ ಜೊಂಪು ಹತ್ತಿ ಅಲ್ಲೆ ಒರಗಿ ನಿದ್ದೆಹೋದಳು.<br>
{{gap}}ಸಂಜೆ, “ಶ್ ಶ್ ಏಯ್ ಏಯ್” ಎಂದು ಕೆಲವು ರೈತ ಹೆಂಗಸರು ಎಬ್ಬಿಸಿದಾಗಲೇ ಆಕೆ ಕಣ್ಣು ತೆರೆದದ್ದು.<br>
{{gap}}ಕತ್ತಲಾದಂತೆ ಆ ಹಳ್ಳಿಯಲ್ಲಿ ಆಕೆಗೆ ಹೆದರಿಕೆಯಾಯಿತು. ಧಾವಿಸುತ್ತ ಧಾವಿಸುತ್ತ ಕಾಣಿ ನಗರ ಸೇರಿದಳು.<br>
{{gap}}ಒಂದು ಕೊನೆಯಲ್ಲಿ ಆ ಶಾಲೆ ಇತ್ತು. ರಾತ್ರಿ ಅಲ್ಲಿ ಯಾರೂ ಇರುತ್ತಿರಲಿಲ್ಲ, ಅಲ್ಲಿಯೇ ಜಗಲಿಯ ಒಂದು ಮೂಲೆಯಲ್ಲಿ ಆಕೆ ಮಲಗಿದಳು.<br>
{{gap}}{{gap}}{{gap}}{{gap}} * {{gap}}{{gap}}{{gap}}{{gap}} * {{gap}}{{gap}}{{gap}}{{gap}} * {{gap}}{{gap}}{{gap}}{{gap}} * <br>
{{gap}}ಬೆಳಗಾದೊಡನೆಯೆ ಎದ್ದು ಹೋದಳಾಕೆ. ಹೋಗುತ್ತ ಮೈಮೇಲಿನ ಬಟ್ಟೆ ಸರಿಪಡಿಸಿಕೊಂಡಳು; ಕೊಂಚಮಟ್ಟಿಗೆ ಸಿಂಗರಿಸಿಕೊಂಡಳು.<br>
{{gap}}ಹಾಗೆಯೇ ಸುತ್ತಾಡಿದಾಗ ಆ ಜಾಗದ ಪರಿಚಯವಾಯಿತು. ವಿಸ್ತಾರ ಭೂಮಿ-ಸುತ್ತಲೂ ಹಸುರು ಹುಲ್ಲು. ಅಲ್ಲೆ ಆ ಸರ್ಕಲ್-ಅದರ ನಡುವಿನಲ್ಲಿ ಕಾರಂಜಿ, ಯಾರದೋ ಒ೦ದು ಪ್ರತಿಮೆ. ದೂರದಲ್ಲಿ ಒಂದೇ ಒಂದಾದ ಯಾವುದೋ ದೊಡ್ಡ ಕಟ್ಟಡ.<br>
{{gap}}ಮೂಲೆಯಲ್ಲಿ ಕಡಲೆಕಾಯಿ ಮಾರುತ್ತ ಕುಳಿತಿದ್ದವನೊಬ್ಬನಿಗೆ ಇದ್ದ ಪುಡಿ ಕಾಸು ಸುರಿದು, ಕಾಸಿನ ಬೆಲೆ ಏನೆಂಬುದನ್ನು ಆ ಮೂಕಿ ಕಲಿತಳು.<br>
{{gap}}ಹಸಿವು ಇಂಗಲಿಲ್ಲ.<br>
{{gap}}ಕತ್ತಲಾದಾಗ ಆ ಸರ್ಕಲಿನ ಬಳಿ ಹೋಗಿ ಒಂದು ಮೂಲೆಯಲ್ಲಿ ಕುಳಿತಳು. ಕೇಂದ್ರದ ಒಂದೇ ಒಂದು ದೀಪದಿಂದ ಮಂದ ಪ್ರಕಾಶವಷ್ಟೆ ಬೀಳುತ್ತಿತ್ತು. ಹಾದುಹೋಗುತ್ತಿದ್ದವರು ಆಕೆಯನ್ನು ನೋಡಿ ಹೋಗುತ್ತಿದ್ದರು. ನೋಡಿದ ಒಬ್ಬಿಬ್ಬರು ಮುಂದೆ ಹೋದ ಬಳಿಕ ತಿರುಗಿ ನೋಡುತ್ತಿದ್ದರು.<br>
{{gap}}ಗಂಭೀರನಾಗಿ ಕಾಣುತ್ತಿದ್ದ ಮನುಷ್ಯನೊಬ್ಬ ಕನ್ನಡಕವನ್ನು ಸರಿಪಡಿಸುತ್ತ ಆ ಹಾದಿಯಲ್ಲಿ ಎರಡು ಬಾರಿ ಸುಳಿದ. ಕಾಣಿ ಎದ್ದು ನಿಂತು ಸರ್ಕಲಿನಿಂದ ಹೊರಕ್ಕೆ ಬಯಲಿನತ್ತ ನಡೆದಳು-ಎಲ್ಲೋ ಮರದತ್ತ. ಯಾವುದೋ ಪೊದೆಯ ಬಳಿಗೆ. ಆ ಮನುಷ್ಯ ಹಿಂದೆ ಮುಂದೆ ನೋಡುತ್ತ ಆಕೆಯನ್ನು ಹಿಂಬಾಲಿಸಿದ.<noinclude></noinclude>
r9x28ecdf0liv4jiqtwwusyk42gyjm1
ಪುಟ:KELAVU SANNA KATHEGALU.pdf/೫೩
104
20207
321095
250090
2026-05-20T05:34:55Z
Shreelatha.Halemane
7642
/* Validated */
321095
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಕೊನೆಯ ಗಿರಾಕಿ|right=31}}
{{gap}}....ಮರುದಿನ ಕಾಗದದ ಚೂರನ್ನು ಕೊಟ್ಟರೆ ತಿಂಡಿಯೂ ಬರುವುದು,</br>ಊಟವೂ ಬರುವುದು, ಚಿಲ್ಲರೆ ಕಾಸೂ ವಾಪಸು ಬರುವುದು, ಎಂದು ಕಾಣಿ </br>ಕಲಿತಳು. ಎಷ್ಟು ವಾಪಸು ಬರುತ್ತಿತ್ತೊ ಏನು ಕತೆಯೊ-ಅಷ್ಟೆಲ್ಲ ಜ್ಞಾನವಿರಲಿಲ್ಲ</br>ಆಕೆಗೆ.</br>
{{gap}}ಅಂದಿನಿಂದ ಹಗಲು ಅಲೆದಾಟ, ಸಂಜೆ ಸರ್ಕಲಿನಲ್ಲಿ ಒಂದೋ ಎರಡೋ</br>ಪರಿಚಯ; ಸಮೀಪದ ಹುಲ್ಲುಗಾವಲಿನ ಹಾಸಿಗೆಯಲ್ಲಿ ಆಕೆಯೇ ಒಂದು</br>ಸಾರಿಯೋ ಎರಡು ಮೂರು ಸಾರಿಯೋ ಸಾಯುವುದು- ಸತ್ತು ಜೀವಿಸುವುದು.</br>
{{gap}}ಜೀವಿಸಿ ಮತ್ತೆ ಮಾರನೆಯ ರಾತ್ರೆ ಸಾಯುವುದು.</br>
{{gap}}ಹಾಗೆಯೇ ಕಾಲ ಕಳೆಯಿತು....</br>
{{gap}}ಎಂಥೆಂಥವರೆಲ್ಲ ಆಕೆಯ ಬಳಿಗೆ ಬರುತ್ತಿದ್ದರೊ ಆಕೆಗೆ ತಿಳಿಯದು.</br>ಕುಡುಕ 'ಲಫಂಗ'ರಿರಬಹುದು; ದಿಕ್ಕುಗೆಟ್ಟ ಭ್ರಮರ ಜೀವನದ ವಿಲಾಸಿಗಳಿರ</br>ಬಹುದು; ಹಗಲೆಲ್ಲ ಸಾಂಪ್ರದಾಯಿಕ ಬುದ್ಧಿಮತ್ತೆಯ ಸೋಗು ಧರಿಸುವ</br>ಕಾಮುಕರಿರಬಹುದು; ಮನೆಯ ಅತೃಪ್ತಿಯನ್ನು ಹೋಗಲಾಡಿಸುವ ದಾಹಿಗಳಿರ </br> ಬಹುದು....... ಆಕೆಗೆ ತಿಳಿಯದು. ಮಾತು ಬರುತ್ತಿದ್ದರೆ, ಏನಾದರೂ ಅರ್ಥ</br>ವಾಗುತ್ತಿತ್ತೋ ಏನೋ. ಮುಖ ನೋಡಿದರೆ ಅದರ ಹಾವಭಾವದಿಂದ ಸ್ವಲ್ಪ</br>ವಾದರೂ ತಿಳಿಯಬಹುದಿತ್ತು. ಆದರೆ ಆ ರಾತ್ರೆ ಹೊತ್ತಿನಲ್ಲಿ ಬಂದವರ ಮುಖ</br>ಕಾಣುವುದೇನು ಬಂತು?</br>
{{gap}}ಇದು ಮಾನವೀಯವೆ? ಪಾಶವಿಕವೆ? ಎಂಬುದೂ ಆಕೆಗೆ ತಿಳಿಯದು.</br>ಪ್ರೇಮ-ಕಾಮಗಳ ವಿಚಾರವನ್ನು ಬಲ್ಲವಳಲ್ಲ ಆಕೆ. ಎಳೆ ಮೀಸೆಯವರಿರಲಿ-</br>ಮುದುಕರಿರಲಿ, ಆಕೆಗೆರಡೂ ಸಮವೇ. ದೇಹ ಬಳಲಿದಾಗ ಆಕೆ ನರಳುವಳು.</br>ನೋವಾದಾಗ ಗಂಟಲಿನಿಂದ ಅರ್ಥವಾಗದ ವಿಕೃತ ಸ್ವರ ಹೊರಡಿಸುವಳು....</br>
{{gap}}ತಾನು ಮೂಕಿ. ಮೂಕಿಯಿಂದ ತೃಪ್ತಿ ಬಯಸುವವರ ಮನಸ್ಸಿನಲ್ಲಿ</br>ಏನೇನು ಅನುಭವಗಳಾಗುತ್ತವೆಂಬುದೂ ಗೊತ್ತಿಲ್ಲ, ಕಾಣಿಗೆ. ನಡೆಯುವುದೆಲ್ಲ</br>ಯಾಂತ್ರಿಕ ವ್ಯವಹಾರ. ಆಕೆಯೊಂದು ಉಸಿರಾಡುವ ಯಂತ್ರ.</br>
{{gap}}{{gap}}*{{gap}}{{gap}}{{gap}}*{{gap}}{{gap}}{{gap}}*{{gap}}{{gap}}{{gap}}*{{gap}}{{gap}}</br>
{{gap}}ಮಳೆ ಬಲವಾಯಿತು. ಗಿರಾಕಿಗಳು ಬರಲಿಲ್ಲ. ಆಗಾಗ್ಗೆ ಸಂಪಾದನೆ ಕಡಿಮೆ</br>ಯಾಯಿತು. ಜೀವ ಸಣ್ಣಗಾಯಿತು. ಕಾಣಿ ಬಡಕಲಾದಳು. ತಾನೇ ಎದ್ದು</br>ಜನರಿದ್ದೆಡೆಗೆ ಹೋಗಿ ಅವರ ಸುತ್ತಮುತ್ತ ಸುಳಿಯಲಾರಂಭಿಸಿದಳು.</br>
{{gap}}ಕೆನ್ನೆಗಳು ಗುಳಿಬಿದ್ದುವು; ಕಣ್ಣು ಕೆಳಕ್ಕಿಳಿಯಿತು. ಜ್ವರ ಬರತೊಡಗಿತು.</br>
{{gap}}ಮತ್ತಷ್ಟು ಹೆಚ್ಚು ಸಿಂಗಾರಮಾಡಿಕೊಂಡಳಾಕೆ.<noinclude></noinclude>
hbe1xsbujp1b60xvw6w6iu6oatktqz4
ಪುಟ:KELAVU SANNA KATHEGALU.pdf/೫೪
104
20208
321096
250091
2026-05-20T05:35:38Z
Shreelatha.Halemane
7642
/* Validated */
321096
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=32|right=ನಿರಂಜನ: ಕೆಲವು ಸಣ್ಣ ಕಥೆಗಳು}}
{{gap}}ಆಕೆ ದೂರದಲ್ಲಿ ಬಳಕುತ್ತ ನಡೆಯುತ್ತಿದ್ದರೆ, ಆ ಉಣ್ಣೆ ಕೋಟನ್ನು</br> ಧರಿಸಿದ್ದರೆ, ತಲೆಗೆ ಹೂ ಮುಡಿದಿದ್ದರೆ, ಸುಮಾರಾಗಿ ಕಾಣಿಸುತ್ತಿದ್ದಳು. ಆದರೆ</br> ಹತ್ತಿರದಲ್ಲಿ ಮುಖವಿಟ್ಟು ನೋಡಿದರೆ, ಎರಡು ಕಣ್ಣುಗಳಲ್ಲಿ ಎರಡು ದೆವ್ವಗಳು</br> ನರ್ತಿಸುತ್ತಿದ್ದಂತೆ ತೋರುತ್ತಿತ್ತು.</br>
{{gap}}ಕೆಲವು ಪುಂಡರು ಆಕೆ ಮಲಗುತ್ತಿದ್ದ ಶಾಲೆಗೆ ಬರುತ್ತಿದ್ದರು ರಾತ್ರೆ</br> ಹೊತ್ತು. ಆದರೆ ಪುಡಿಕಾಸು ಬಿಚ್ಚುತ್ತಿರಲಿಲ್ಲ. ಆಕೆ ಜಗಳಾಡುತ್ತಿದ್ದಳು.</br>ಅವರೂ ಪೀಡಿಸಿ ಬಲಾತ್ಕರಿಸುತ್ತಿದ್ದರು. ಅವರ ನಗೆಯೊ-ವಿಕಟ ಅಟ್ಟಹಾಸವೊ!</br> ಪ್ರತಿಭಟನೆ ವಿಫಲವಾದಾಗ ಕಾಣಿ ತೇಕುತ್ತ ತೇಕುತ್ತ ಆದದ್ದಾಗಲೆಂದು ತಲೆ </br> ಬಾಗುತ್ತಿದ್ದಳು.</br>
{{gap}}ಜ್ವರ ಹೆಚ್ಚಿತು. ಕೆರೆಯಲ್ಲಿ ಸ್ನಾನಮಾಡಬೇಡವೆಂದು ಆಕೆಯ ಮನಸ್ಸು</br> ಹೇಳಿದಂತಾಯಿತು.</br>
{{gap}}ಚರ್ಮಕ್ಕೇನೋ ರೋಗ ಬಡಿಯಿತು. ಯುವತಿ ಕಾಣಿ ತುಂಬ ನರಳಾ</br> ಡಿದಳು.</br>
{{gap}}ಮೈಯಿಂದ ಕೆಟ್ಟ ವಾಸನೆ ಬರತೊಡಗಿತು.</br>
{{gap}}ಕಾಣಿ ಇರುವ ತಾಣ ಬದಲಿಸಿದಳು. ಒಂದು ಫರ್ಲಾಂಗಿನಾಚೆ ಇದ್ದ</br> ಮುರುಕು ಮನೆಯೊಂದರ ಬಳಿಗೆ ಹೋದಳು. ಅಲ್ಲೊಬ್ಬ ನಡುವಯಸ್ಸಿನ</br> ಭಿಕ್ಷುಕ ತನ್ನ ಅರಮನೆ ಕಟ್ಟಿಕೊಂಡಿದ್ದ.</br>
{{gap}}ಆತ ಮೂರು ದಿನ ಅವಳಿಗಿಷ್ಟು ಗಂಜಿ ನೀಡಿದ.</br>
{{gap}}ಆಕೆ, ಮುರಿದಿದ್ದ ಮಾಡಿನೆಡೆಯಿಂದ ಆಕಾಶದತ್ತ ಬಿರಬಿರನೆ ನೋಡುತ್ತ</br> ಮಲಗಿದಳು.</br>
{{gap}}ನಾಲ್ಕನೆಯ ದಿನ ಜ್ವರ ಸ್ವಲ್ಪವಾಸಿ ಎಂದು ತೋರಿತು. ಆಕೆ ಎದ್ದು </br> ಕುಳಿತಳು. ಆ ಭಿಕ್ಷುಕ, ಆಸೆಯಿಂದ ಅವಳ ಕಡೆ ನೋಡಿದ. ಆಕೆಯ ಮುಖದ</br>ಮೇಲೆ ಯಾವ ಭಾವನೆಯೂ ಇರಲಿಲ್ಲ, ಅಂಥ ಭಾವನೆಗಳನ್ನು ಅನುಭವಿಸುವ </br> ಸಾಮರ್ಥ್ಯವೆಲ್ಲ ಆಕೆಯಲ್ಲಿ ನಶಿಸಿಹೋಗಿತ್ತು. ಆತ ಆ ದಿನ ಭಿಕ್ಷುವೆತ್ತುವು</br> ದಕ್ಕೂ ಹೋಗದೆ ಅವಳೊಡನೆಯೇ ಇದ್ದು ಬಿಟ್ಟ. ರೋಗಪೀಡಿತವಾಗಿದ್ದ ಆತನ</br>ದೇಹ, ಬಹಳ ದಿನ ಬಯಕೆಯನ್ನು ಈಡೇರಿಸಹೊರಟಿತ್ತು.</br>
{{gap}}ಸಂಜೆ ಕಾಣಿ, ತನ್ನ ಕರಿಯ ಕೋಟನ್ನು ಹೊದ್ದುಕೊಂಡು, ನಿಧಾನವಾಗಿ</br>ನಡೆಯುತ್ತ ಹುಲ್ಲುಗಾವಲನ್ನು ದಾಟಿ, ಸರ್ಕಲಿನತ್ತ ಹೋಗಿ, ಕತ್ತಲೆಯಿದ್ದ ಆ</br>ಒಂದು ಮೂಲೆಯಲ್ಲಿ ನಿಂತಳು. ಆಕೆಗೆ ಬವಳಿ ಬಂದ ಹಾಗಾಗುತ್ತಿತ್ತು. ಊರಿನ </br> ಹೊಲ, ತಾಯಿ-ತಂದೆ, ಮೊಂಡು ಕೈಯ ಜೊತೆಗಾರ, ಇವರೆಲ್ಲ ಕಣ್ಣ ಮುಂದೆ<noinclude></noinclude>
mmi3pcokr54q7fgkzwbfptq0bzq8hxd
ಪುಟ:KELAVU SANNA KATHEGALU.pdf/೫೫
104
20209
321097
250123
2026-05-20T05:36:40Z
Shreelatha.Halemane
7642
/* Validated */
321097
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಕೊನೆಯ ಗಿರಾಕಿ|right=33}}
ಬಂದ ಹಾಗಾಯಿತು. ಕೂಲಿಯಾಗಲೆಂದು ಮದರಾಸಿಗೆ ಹೋದ ಅಣ್ಣನೂ</br>ಜಗಳಾಡಿ ಮನೆಬಿಟ್ಟ ತಮ್ಮನೂ ಎದುರಲ್ಲಿ ನಿಂತು “ಕಾಣಿ” ಎಂದು ಕರೆದ</br>ಹಾಗಾಗುತ್ತಿತ್ತು....ಹೃದಯವೆಲ್ಲ ನೋವಿನಿಂದ ತುಂಬಿತು........</br>
{{gap}}ಬಹಳ ಹೊತ್ತು ನಿಂತಿರಲಾರದೆ ಆಕೆ ಅಲ್ಲಿಯೇ ಮೂಲೆಯಲ್ಲಿ ಕುಸಿ ಕುಳಿ</br>ತಳು. ದೂರದಲ್ಲಿ ಕಡಲೆಕಾಯಿ ಮಾರುವಾತನ ಕಾಗದದೊಳಗಿನ ದೀಪ ಬಾ</br>ಎನ್ನುತ್ತಿತ್ತು. ಆದರೆ ಪುಡಿಕಾಸಿರಲಿಲ್ಲ. ಕೈಚಾಚಿ ಬಾಚಿ ಕಡಲೆಕಾಯಿ ಒಯ್ದು</br>ಬಿಡಬೇಕೆಂದು ತೋರಿತು. ಆದರೆ ಸಾಮರ್ಥ್ಯವಿರಲಿಲ್ಲ.</br>
{{gap}}ಗಂಟೆ ಒಂದು ಕಳೆಯಿತು. ಒಂದೂವರೆಯಾಯಿತು. ಕಾರಂಜಿಯ ಬಳಿ</br>ಕುಳಿತವರೆಲ್ಲ ಒಬ್ಬೊಬ್ಬರಾಗಿ ಮನೆಯ ಕಡೆ ಹೊರಟರು. ಕಾಣಿ ಒಬ್ಬೊಬ್ಬ</br>ರನ್ನೇ ಆಸೆಯ ದೃಷ್ಟಿಯಿಂದ ನೋಡಿದಳು.</br>
{{gap}}ಕೊನೆಗೊಬ್ಬ ಬಂದು ದೂರದಲ್ಲೇ ನಿಂತ. ಧಾಂಡಿಗ ದೇಹ, ಪೋಲಿ</br>ಸ್ವರೂಪಿ. ತೋಳು ಬೀಸಿ ಸನ್ನೆ ಮಾಡಿದ. ಆಕೆ ಎದ್ದು ನಿಂತು ಪ್ರಯಾಸದಿಂದ</br>ಕಾಲೆಳೆದುಕೊಂಡು ಆತನನ್ನು ಹಿಂಬಾಲಿಸಿದಳು.</br>
{{gap}}ಆತ ಯಾವನೋ</br>ಹೊಸಬ. ಅಲ್ಲೇ ಪೊದರಿನಾಕೆ ಆಕೆಯನ್ನಾತ</br>ಕೆಡವಿದ. “ಗರಕ್” ಎಂದಳು ಕಾಣಿ.......</br>
{{gap}}....ಸಿಡಿಮಿಡಿಗೊಂಡು ಆತ ಎದ್ದು ನಿಂತು ಮೈಕೊಡವಿದ. “ಥುತ್!”</br>ಎಂದು ಆಕೆಯ ಮೇಲೆ ಉಗುಳಿದ. ಕಾಣಿ ಎದ್ದು ಕುಳಿತುಕೊಳ್ಳಲು ಯತ್ನಿಸಿ</br>ದಳು. ಆದರೆ ಶಕ್ತಿಯೇ ಇರಲಿಲ್ಲ.</br>
{{gap}}ಆತ ಮತ್ತೊಮ್ಮೆ “ಥುತ್!” ಎಂದು ಹೊರಟ.</br>
{{gap}}ಕಾಸು ಕೊಡಲಿಲ್ಲ.</br>
{{gap}}ಕಾಣಿ ಆರ್ತನಾದ ಮಾಡುವಂತೆ ಬಾಯಿ ತೆರೆದಳು; ಆದರೆ ಸ್ವರ ಹೊರಡ</br>ಲಿಲ್ಲ. ಏಳಬೇಕೆಂದು ಮತ್ತೊಮ್ಮೆ ಪ್ರಯತ್ನಿಸಿದಳು; ಸಾಧ್ಯವಾಗಲಿಲ್ಲ.</br>
{{gap}}ಆತ ಬೇಗಬೇಗನೆ ಹೆಜ್ಜೆ ಇಡತೊಡಗಿದ.</br>
{{gap}}ಕೊನೆಗೊಮ್ಮೆ ಆಕೆ ತೆವಳಿ ಎದ್ದಳು.</br>
{{gap}}ಹೆತ್ತ ಎಳೆಗೂಸನ್ನು ಕಸಿದೊಯ್ಯುವ ಪಾಪಿಯ ಬೆನ್ನಟ್ಟುವಂತೆ, ಆಕೆ</br>ಓಡಿದಳು.</br>
{{gap}}“ಲೊಬೊಲೊಬೊ” ಎಂದಾಕೆ ಬೊಬ್ಬಿಟ್ಟಳು. “ಯವವಾ ಕಕಾಕ</br>ಆಆ” ಎಂದು ಚೀರಿದಳಾಕೆ.</br>
{{gap}}ಈತ ದುಡ್ಡು ಕೊಡದೆ ಓಡುತ್ತಿದ್ದಾನೆ. ಆಕೆ ತನ್ನ ಭಾಷೆಯಲ್ಲಿ ನ್ಯಾಯ
{{Right|5}}<noinclude></noinclude>
4zmqnz8jsi6bnu501ud7fvu1uy2bkms
ಪುಟ:KELAVU SANNA KATHEGALU.pdf/೫೬
104
20210
321098
250136
2026-05-20T05:37:36Z
Shreelatha.Halemane
7642
/* Validated */
321098
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=34|right=ನಿರಂಜನ: ಕೆಲವು ಸಣ್ಣ ಕಥೆಗಳು}}
ಮೀರಿ ವರ್ತಿಸಬೇಡವೆಂದು ಕೇಳುತ್ತಿದ್ದಾಳೆ; ನಾಳೆಯ ಒಂದು ತುತ್ತು ಅನ್ನ</br>ಕಸಿಯಬೇಡವೆಂದು ಮೊರೆಯಿಡುತ್ತಿದ್ದಾಳೆ.</br>
{{gap}}ಈತ ಗಾಬರಿಯಾಗಿ ನಿಂತು ನೋಡಿದ. ಜನರಿನ್ನೂ ಇದ್ದರು. ಅವರಿಗೆ</br>ಕೇಳಿಸಬಹುದು. ಯಾರಾದರೂ ತನ್ನನ್ನು ಬೆನ್ನಟ್ಟಬಹುದು.......</br>
{{gap}}ಆ ಆಸಾಮಿ ಥಟಕ್ಕನೆ ಹಿಂತಿರುಗಿದ. ಆಕೆಯ ಗಂಟಲಿಗೆ ಕೈ ಹಾಕಿ</br>ಹಿಸುಕಿ ನೆಲಕ್ಕುರುಳಿಸಿದ. “ಹೊಲಸು ರಂಡೆ!” ಎಂದು ಶಪಿಸಿದ. ಆಕೆಯ</br>ಹೊಟ್ಟೆಗೆ ಬೂಟುಗಾಲಿನಿಂದ ಒದೆದ.</br>
{{gap}}ಕಾಣಿ ಹಾಗೆಯೇ ಬಿದ್ದು ಕೊಂಡಳು...........ಗಂಟಲಲ್ಲಿ ಏನೋ ಸ್ವರ</br>ಬರುತ್ತಿತ್ತು. ಆದರೆ ಅದು ಹೊರಗೆ ಕೇಳಿಸುತ್ತಿರಲಿಲ್ಲ.</br>
{{gap}}ಉಸಿರಾಡುತ್ತಿತ್ತು... ಮೆಲ್ಲಮೆಲ್ಲನೆ....ನಿಂತು ನಿಂತು....ನಿಧಾನವಾದ</br>ಉಸಿರು...ಕೊನೆಯ ಒಂದೆರಡು ಉಸಿರಾಟ.</br>
{{gap}}{{gap}}*{{gap}}{{gap}}{{gap}}*{{gap}}{{gap}}{{gap}}*{{gap}}{{gap}}{{gap}}*{{gap}}{{gap}}</br>
{{gap}}ಬೆಳಗಾಯಿತು.</br>
{{gap}}...ಸೂರ್ಯ ಮೇಲಕ್ಕೆ ಬಂದಂತೆ ಕಾವೇರತೊಡಗಿತು. ಸರ್ಕಲನ್ನು</br>ಹಾದು ಹೋಗಲೇಬೇಕಾದವರು, ಭೀತಿಯಿಂದೊಮ್ಮೆ ಎಡಕ್ಕೆ ಕಣ್ಣು</br>ಹೊರಳಿಸಿ, ಮತ್ತೆ ತಲೆಕೆಳಗೆ ಮಾಡಿ, ಸರಸರನೆ ನಡೆದು ಹೋಗುತ್ತಿದ್ದರು.</br>
{{gap}}ಎಲ್ಲರೂ ಚಲಿಸುತ್ತಲೇ ಇದ್ದರು. ನಿಲ್ಲುವವರು ಯಾರೂ ಇರಲಿಲ್ಲ...</br>
{{gap}}.... ಪುರಸಭೆಯ ವ್ಯಾನು ಬಂದು ಕಳೇಬರವನ್ನು ಒಯ್ಯುವುದೆಂದು</br>ಯಾರೋ ಹೇಳುತ್ತಿದ್ದರು.</br>
{{gap}}ಕಾಣಿಯ ದೇಹದ ಮೇಲೆ ಎತ್ತರದಲ್ಲಿ ಗಿಡಗವೊಂದು ಸುತ್ತು ಸುತ್ತು</br>ಬರುತ್ತಿತ್ತು.</br>
{{gap}}ಅದನ್ನೇ ನೋಡುತ್ತಿದ್ದ ಹಾಗೆ ಕಣ್ಣರಳಿಸಿ ಕಾಣಿ ಮಲಗಿದ್ದಳು.</br>
{{gap}}ಸುತ್ತು ಬರುತ್ತಲೇ ಇತ್ತು ಗಿಡುಗ, ಕೆಳಗೆ ನೋಡುತ್ತ.</br>
{{gap}}-ಕೊನೆಯ ಗಿರಾಕಿ.
{{Right|-೧೯೫೧}}<noinclude></noinclude>
mfdp2nofvp5edwfuirn7ma6od2x74v3
ಪುಟ:KELAVU SANNA KATHEGALU.pdf/೫೭
104
20211
321099
250153
2026-05-20T05:38:26Z
Shreelatha.Halemane
7642
/* Validated */
321099
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|35}}
{{center|೬}}
{{center|'''ತಿರುಕಣ್ಣನ ಮತದಾನ'''}}
ಕೆಲಸ ಕಳೆದುಕೊಂಡು ತಿಂಗಳು ಮೂರಾಗಿತ್ತು ನಿಜ. ಆದರೂ ಬೆಳಗ್ಗೆ</br>ಕಾರಖಾನೆಯ ಸಿಳ್ಳು ಕೇಳಿಸಿದಾಗ ತಿರುಕಣ್ಣನಿಗೆ ಎಚ್ಚರವಾಗಿಯೇ ಆಗು</br>ತಿತ್ತು. ಅಭ್ಯಾಸ ಬಲ. ಆದರೆ ಈಗ ಏಳಬೇಕಾದ್ದೇ ಇಲ್ಲವಲ್ಲ! ಎರಡನೆಯ </br>ಸಿಳ್ಳು ಕೇಳಿಸಿದಾಗಲಂತೂ ಮುಸುಕನ್ನು ಮತ್ತಿಷ್ಟು ಗಟ್ಟಿಯಾಗಿ ಹೊದೆದು</br>ಕೊಂಡು ತಿರುಕಣ್ಣ ಮಲಗುತ್ತಿದ್ದ. ಅವನ ಆರೇಳು ವರ್ಷದ ಮಗಳಂತೂ</br>ಏಳುವ ಗೊಡವೆಗೇ ಹೋಗುತ್ತಿರಲಿಲ್ಲ.</br>
{{gap}}ಆದರೆ ಬೆಳಗ್ಗೆ ಆ ಸಿಳ್ಳಿನ ಜತೆಗೆ ಕಾರಿನೊಂದು ಕಿರಿಚಾಟ ಕೇಳಿಸಿತು.</br>ಒಂದೇ ಸಮನೆ ಕೂಗಿ ಕರೆಯುತ್ತಿದ್ದ ಹಾರನ್!</br>
{{gap}}ಯಾರೋ ತನ್ನ ಗುಡಿಸಲಿನ ಬಾಗಿಲನ್ನೇ ತಟ್ಟಿದ ಹಾಗಾಯಿತು.</br>
{{gap}}ಏನೋ ಅಪಾಯದ ಮುನ್ಸೂಚನೆ ಇದು-ಎಂದು ಅಂಜಿದ ತಿರುಕಣ್ಣ.</br>
{{gap}}ಆದರೆ ಮೃದುವಾದ ಇಂಪಾದ ಒಂದು ಸ್ವರ ಕೇಳಿಸುತ್ತಿತ್ತು:</br>
{{gap}}“ಮಿಸ್ಟರ್ ತಿರುಕಣ್ಣನ್, ಮಿಸ್ಟರ್ ತಿರುಕಣ್ಣನ್!”</br>
{{gap}}ಆ ಜೀವಮಾನದಲ್ಲೇ ಮೊದಲ ಸಾರಿಗೆ ಅಂಥ ಸಂಬೋಧನೆ! ಅದೇನೋ</br>ಎಂಥ ಶಬ್ದವೋ ಆತನಿಗೆ ಅರ್ಥವೂ ಆಗಲಿಲ್ಲ.</br>
{{gap}}ಆದರೂ ಆತ ಎದ್ದು, ಕಂಬಳಿ ಹೊದ್ದುಕೊಂಡು, ಬಾಗಿಲನ್ನು ಬದಿಗೆ</br>ಸರಿಸಿ ಬಾಗಿ ಹೊರಬಂದ.</br>
{{gap}}ಥಳಥಳಿಸುವ ದೊಡ್ಡದೊಂದು ಕಾರು ದೂರದಲ್ಲಿ ನಿಂತಿತ್ತು. ಪಾಶ್ಚಾತ್ಯ</br>ರೀತಿಯಲ್ಲಿ ಉಣ್ಣೆಯ ಪೋಷಾಕು ಧರಿಸಿದ್ದ ಸಾಹೇಬರೊಬ್ಬರು ಅಲ್ಲಿ ಇದ್ದರು.</br>ಗುಡಿಸಲಿನ ಕೊಳಕು ಅಂಗಳದಲ್ಲಿ ಇನ್ನೊಬ್ಬ ಯುವಕ ನೂರಾರು ಹಾಳೆಗಳಿದ್ದ</br>ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದಿದ್ದ. ಬಾಗಿಲು ತಟ್ಟಿ ಹೇಳಿದ:</br>
{{gap}}“ನೀವೇನೋ ತಿರುಕಣ್ಣನ್?”</br>
{{gap}}“ನಾನೇ ಬುದ್ಧಿ, ತಿರುಕಣ್ಣ.”</br>
{{gap}}ಪುಸ್ತಕವಿದ್ದವನು ಓದಿ ಹೇಳಿದ:<noinclude></noinclude>
4jqd7tnxq4bys6wucqbg4olssorlysk
ಪುಟ:KELAVU SANNA KATHEGALU.pdf/೫೮
104
20212
321100
250190
2026-05-20T05:40:51Z
Shreelatha.Halemane
7642
/* Validated */
321100
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=36|right=ನಿರಂಜನ: ಕೆಲವು ಸಣ್ಣ ಕಥೆಗಳು}}
{{gap}}“೯ಎ೦೦೬೮೩ ತಿರುಕಣ್ಣನ್ ಮತ್ತು ೯ಎ೦೦೬೮೪ ಆರೋಗ್ಯಮ್ಮ”</br>
{{gap}}ತಿರುಕಣ್ಣನಿಗೆ ಅರ್ಥವಾಗಲಿಲ್ಲ. ಆತ ವಿನೀತನಾಗಿ ಕೇಳಿದ:</br>
{{gap}}“ನನ್ನಿಂದೇನು ಮಾಪರಾಧವಾಯ್ತು ಸ್ವಾಮಿ?”</br>
{{gap}}“ಛೇ! ಏನೂ ಇಲ್ಲ.......ಇಕೋ ಇವರು ಸ್ವತಂತ್ರ ಭಾರತದ ಸ್ವತಂತ್ರ</br>ಚುನಾವಣೇಲಿ ಸ್ವತಂತ್ರ ಉಮೇದುವಾರರು.ಇವರಿಗೆ ನೀನೂ ಓಟು ಮಾಡ</br>ಬೇಕು, ನಿನ್ನ ಹೆಂಡತಿಯೂ ಓಟು ಮಾಡಬೇಕು. ಗುರುತು
ಕಾರು. ಕಾರು</br>ಗುರುತು...”</br>
{{gap}}“ಅದೆಂಥಾದೋ ತಿಳೀಲಿಲ್ವೆ ಬುದ್ಧಿ.”</br>
{{gap}}ಮತ್ತೊಮ್ಮೆ ಆತ ಸಹನೆಯಿಂದ ವಿವರಿಸಿದ:</br>
{{gap}}“ನಾನು ನನ್ನ ಹೆಂಡ್ತಿ, ಅದ್ದೆಂಗೆ?”</br>
{{gap}}“ಯಾಕೆ?”</br>
{{gap}}“ಅವಳಿಲ್ವಲ್ಲಾ!”</br>
{{gap}}“ಎಲ್ಲಿಗೋಗವ್ಳೆ?”</br>
{{gap}}“ಬರೋ ಹಂಗೇ ಇಲ್ವಲ್ಲಾ!”</br>
{{gap}}“ಏನು ಸಮಾಚಾರ?”</br>
{{gap}}ಸ್ವಲ್ಪ ತಡೆದು ತಿರುಕಣ್ಣನ್ ಹೇಳಿದ:</br>
{{gap}}“ಹಯ್ಯೋ ಒಂಟೋದ್ಧಲ್ಲಾ ಬುದ್ದಿ ಒಂದು ವಾರದ ಇಂದೇನೇ.....</br>ಭೇದಿ ಅತ್ಕೊಂಡಿತ್ತು. ಅಂಗೇ ಒಂಟೋದ್ಲಲ್ಲಾ...”</br>
{{gap}}“ಅಯ್ಯೋ ಪಾಪ! ಎಂಥ ಅನ್ಯಾಯ!”</br>
{{gap}}ತನ್ನ ಬಗ್ಗೆ ಕನಿಕರ ತೋರಿಸುತ್ತಿದ್ದಾರೆ ಎಂದುಕೊಂಡ ತಿರುಕಣ್ಣನ್.</br>
{{gap}}“ಎಂಥ ಅನ್ಯಾಯ! ನಮ್ಮ ಒಂದು ಷೂರ್ ಓಟು ಹೊರಟೋಯ್ತಲ್ಲಾ!”</br>
{{gap}}ತಿರುಕಣ್ಣನಿಗೆ ಆಶ್ಚರ್ಯವಾಯಿತು. ಇನ್ನೊಬ್ಬ ಕೇಳಿದ:</br>
{{gap}}“ಯಾವ ಮಿಲ್ಲಿಗಪ್ಪಾ ನೀವು ಹೋಗಿರೋದು?”</br>
{{gap}}“ಅದೂ ಆಗೋಯ್ತು ಬುದ್ಧಿ. ಮನೆಗೆ ಕಳಿಸ್ಬುಟ್ರು ನಾಕ್ತಿಂಗ್ಳಾಯ್ತು..</br>ಅದೇನೋ ತುಂಬಾ ಕಾಯಿಲೆಯಾಗಿತ್ತು. ಇಳಿದೋಗ್ಬಿಟ್ಟಿದ್ದೆ. 'ಈ ಕಾಯಿಲೆ</br>ವಾಸೀನೇ ಆಗಂಗಿಲ್ಲ-ಹೊರಟೋಗು' ಅಂದ್ರು.”</br>
{{gap}}“ಎಂಥ ಅನ್ಯಾಯ! ಇದಕ್ಕೊಸ್ಕರವೇ ನಮ್ಮ ಯಜಮಾನರು</br>ಎಲೆಕ್ಷನ್ಗೆ ನಿಂತಿದ್ದಾರೆ. ಆರೋಗ್ಯಮ್ಮನ ಓಟಂತೂ ಅನ್ಯಾಯವಾಗಿ</br>ಹಾಳಾಯ್ತು. ನಿನ್ನ ಓಟನ್ನು ಅವರಿಗೆ ದಯಪಾಲ್ಸು” ಇನ್ನೊಬ್ಬ ಹೇಳಿದ.</br>
{{gap}}"ಅಂಗೇ ಆಗ್ಲಿ ಬುದ್ಧಿ.”<noinclude></noinclude>
m5h2fxo4wlmnh6jhs159w42afzactp3
ಪುಟ:KELAVU SANNA KATHEGALU.pdf/೫೯
104
20213
321101
250225
2026-05-20T05:41:27Z
Shreelatha.Halemane
7642
/* Validated */
321101
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ತಿರುಕಣ್ಣನ ಮತದಾನ|right=37}}
{{gap}}“ನಿಮ್ಮ ಕೇರೀಲಿ ಇನ್ನೂ ರೈವತ್ತು ಓಟುಗಳಿವೆ. ಅಷ್ಟಕ್ಕೂ ಯಜ</br>ಮಾನರಿಗೇ ಕೊಡಿಸು. ಎಲೆಕ್ಷನ್ ಆದ್ಮಲೆ ನೂರು ರೂಪಾಯಿ ಕೊಡ್ತಾರೆ.”</br>
{{gap}}ಅಪನಂಬಿಕೆಯ ಕಣ್ಣಿನಿಂದ ತಿರುಕಣ್ಣನ್ ನೋಡಿದ. ಅವನು ಚೇತರಿಸ</br>ಕೊಂಡು “ನಿಜವಾ ಬುದ್ದಿ?” ಎಂದು ಕೇಳಬೇಕು ಎನ್ನುವುದರೊಳಗೇ ಕಾರು</br>ಹೊರಟು ಹೋಗಿತ್ತು.</br>
{{gap}}ನೂರು ಯಾಕೆ, ಬೇರೆಯವರಿಗೆ ಗೊತ್ತಾದರೆ ಐವತ್ತಕ್ಕೂ ಆ ಕೆಲಸ</br>ಒಪ್ಪಬಹುದು, ಎಂದು ತಿರುಕಣ್ಣನ್ ಲೆಕ್ಕಾಚಾರ ಹಾಕಿದ. ಸ್ವಲ್ಪ ಅಡ್ವಾನ್ಸಾ</br>ದರೂ ತಗೊಂಡಿದ್ದರೆ_ಎಂದು ಹಲುಬಿದ. ಆ ಯಜಮಾನರ ಮನೆ ಎಲ್ಲಿದೆ</br>ಯೆಂತಲಾದರೂ ತಿಳಕೊಂಡಿದ್ದರೆ?</br>
{{gap}}{{gap}}*{{gap}}{{gap}}{{gap}}*{{gap}}{{gap}}{{gap}}*{{gap}}{{gap}}{{gap}}*{{gap}}{{gap}}</br>
{{gap}}ಮತ್ತೆ ನಿದ್ದೆ ಬರಲಿಲ್ಲ. ಮಗಳನ್ನೆಬ್ಬಿಸಿ ಮಂಡಿ ಸಾಹುಕಾರರ ಮನೆಗೆ,</br>ಮುಸುರೆ ತಿಕ್ಕಲು ಕಳುಹಿಸಿಕೊಟ್ಟ. ಹಿಂದೆ ಆರೋಗ್ಯಮ್ಮ ಮಾಡುತ್ತಿದ್ದ</br>ಕೆಲಸ ಅದು. ತಿರುಕಣ್ಣನ ಪಾಲಿನ ಅದೃಷ್ಟದ ಬಾಗಿಲು ಪೂರ್ಣ ಮುಚ್ಚಿರ</br>ಲಿಲ್ಲ, ಎಂತಲೇ ತಾಯಿಯ ಕೆಲಸ ಮಗಳಿಗೆ ದೊರಕಿತ್ತು. ಒಪ್ಪೊತ್ತಿನ ಊಟ</br>ಮತ್ತು ಎರಡು ರೂಪಾಯಿ ಸಂಬಳ. ಆ ಎರಡು ರೂಪಾಯಿ ಹುಳಿ ಹೆಂಡದ</br>ಬಾಬತ್ತು. ಸ್ವಂತ ಹೊಟ್ಟೆಗೆ ತಿನ್ನಬೇಕಾದರೆ ತಿರುಕಣ್ಣನ್ ದುಡಿದು ತರ</br>ಬೇಕಾಗಿತ್ತು. ಸಾಯುವದಕ್ಕೆ ಮುಂಚೆ ಆರೋಗ್ಯಮ್ಮ ಗಂಡನಿಗೊಂದು</br>ಕೊಡಲಿ ತೆಗೆಸಿಕೊಟ್ಟಿದ್ದಳು. ನಡು ವಯಸ್ಸಿನಲ್ಲಿ ಸೌದೆ ಒಡೆಯುವುದನ್ನು</br>ಅವನು ಕಲಿತಿದ್ದ. ಆದರೆ ಅವನದು ಸಹಿಸಲಾಗದ ಕೆಮ್ಮು; ದೇಹವೂ ಬಡಕ</br>ಲಾಗಿತ್ತು. ಎರಡು ಮಣ ಒಡೆಯುವುದರೊಳಗೆ ಸಾಕೋಸಾಕು ಎನಿಸುತ್ತಿತ್ತು.</br>
{{gap}}ಈ ದಿನ ಕೊಡಲಿಯನ್ನು ಹೆಗಲಿಗೇರಿಸಿಕೊಂಡು ತಿರುಕಣ್ಣ ಹೊರಟಾಗ</br>ಬೆಳಗ್ಗೆ ನಡೆದಿದ್ದ ವಿಚಿತ್ರ ಘಟನೆಯನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತಿದ್ದ.</br>
{{gap}}ಅವನ ಮೊದಲ ಹುಡುಗ ಆರು ವರ್ಷಗಳ ಹಿಂದೆಯೇ ಮನೆ ಬಿಟ್ಟು</br>ಓಡಿಹೋಗಿದ್ದ. ಅವನೂ ಇದ್ದಿದ್ದರೆ? ಅವನಿಗೂ ಒಂದು ಓಟು ಇರುತ್ತಿತ್ತೋ</br>ಏನೋ. ಆರೋಗ್ಯಮ್ಮನೂ ಅಷ್ಟೇ. ಇನ್ನೂ ಒಂದಷ್ಟು ದಿನ ಬದುಕಿದ್ದರೆ?</br>ಅಂತೂ ತನ್ನ ಅದೃಷ್ಟ ಖುಲಾಯಿಸಿತು...ಆರೋಗ್ಯಮ್ಮ ಇದ್ದಿದ್ದರೆ ಅವಳೆ</br>ದುರು ಜಂಭ ತೋರಿಸಬಹುದಾಗಿತ್ತು.</br>
{{gap}}ಈ ವಿಷಯ ಯಾರಿಗೂ ಹೇಳಬಾರದು, ಎಂದುಕೊಂಡ ತಿರುಕಣ್ಣನ್,</br>ಹೇಳಿದರೆ ಸಿಗುವ ಹಣಕ್ಕೆ ಎಲ್ಲಿ ಕಲ್ಲು ಬೀಳುವುದೋ ಎಂಬ ಭಯ, ಆದರೆ</br>ಸಂಜೆ, ಕೇರಿಯ ಕೆಲಸಗಾರರು ವಾಪಸು ಬಂದಾಗ, ಮನೆ ಮುದುಕರೋ<noinclude></noinclude>
aalrs1uobt4uz7zn64eefy9cjyd2y7l
ಪುಟ:KELAVU SANNA KATHEGALU.pdf/೬೦
104
20214
321102
250256
2026-05-20T05:42:12Z
Shreelatha.Halemane
7642
/* Validated */
321102
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=38|right=ನಿರಂಜನ: ಕೆಲವು ಸಣ್ಣ ಕಥೆಗಳು}}
ಹುಡುಗರೋ ಕಾರು ಬಂದಿದ್ದ ವಿಷಯ ಹೇಳುತ್ತಾರೆ. ಅಂತೂ ನಡೆದದ್ದನ್ನು</br>ತಾನು ಹೇಳಲೇಬೇಕು.</br>
{{gap}}ಮಧ್ಯಾಹ್ನವಾದ ಮೇಲೆ, ತಿರುಕಣ್ಣನ್ ಮೆಲ್ಲನೆ ಈ ವಿಷಯ ಸೌದೆ</br>ಡಿಪೋದ ವೆಂಕಟಪ್ಪನಿಗೆ ತಿಳಿಸಿ ಸಲಹೆ ಕೇಳಿದ.</br>
{{gap}}“ಅಯ್ಯೋ ಬೆಪ್-ಮಗ್ನೇ... ಇನ್ನೂ ಬತ್ತಾರೆ ಕಣೋ ಒಂದಷ್ಟು</br>ಜನಾ....ಎಲ್ರೂ ಬೇಡ್ಕೊಂಡು ಬರ್ತಾರೆ. ನನಕ್ಕೊಡಿ ಓಟು ನನಕ್ಕೊಡಿ</br>ಅಂತ....ಎಲ್ಲಾ ಮೋಸ. ಮಕ್ಳು...”</br>
{{gap}}ತಿರುಕಣ್ಣನಿಗೆ ತುಂಬ ನಿರಾಸೆಯಾಯಿತು.</br>
{{gap}}ಕೇರಿಯವರ ಕಾಟ ತಪ್ಪಿಸಿಕೊಳ್ಳಲು ಆ ಸಂಜೆ ತಡವಾಗಿ ತಿರುಕಣ್ಣ</br>ವಾಪಸು ಹೋದ. ಬೆಳಗ್ಗೆ ನಡೆದದ್ದು ಅವನ ಮನಶ್ಯಾಂತಿಯನ್ನು ಕದಡಿತ್ತು.</br>ಅದಕ್ಕೆ ಪರಿಹಾರವಾಗಿ ಅವನು ಆ ಸಂಜೆ ನಾಲ್ಕಾಣೆಯಷ್ಟನ್ನು ಕುಡಿದ;</br>ಬಿಮ್ಮನೆ ಮುಖ ಮಾಡಿಕೊಂಡು, ನಾಲಿಗೆಯನ್ನು ಬಿಗಿಹಿಡಿದು, ಒಂದು ಸ್ವರ</br>ವನ್ನೂ ಹೊರಡಿಸದೆ, ಬೀದಿಯುದ್ದಕ್ಕೂ ನಡೆದ.</br>
{{gap}}ಮರುದಿನ ಭಾನುವಾರ ಅವನ ಎಲ್ಲ ಭ್ರಮೆಯೂ ಹೊರಟು</br>ಹೋಯಿತು. ಕೇರಿಯ ಬೇರೆ ನಾಲ್ಕಾರು ಜನರಿಗೂ ಅದೇ ನೂರು ರೂಪಾ</br>ಯಿಯ ಆಶ್ವಾಸನೆ ದೊರೆತಿತ್ತಂತೆ!</br>
{{gap}}“ಎಲ್ಲಾ ಮೋಸ! ಥೂ!” ಎಂದು ತಿರುಕಣ್ಣನ್ ಉಗುಳಿದ.</br>
{{gap}}ಅನಂತರದ ದಿನಗಳೆಲ್ಲ ತಮಾಷೆಯಾಗಿದ್ದುವು. ಆ ಕಾರುಗಳ ಓಡಾಟ</br>ವೇನು! ಗಟ್ಟಿ ಸ್ವರಗಳ ಕಿರಿಚಾಟವೇನು! ಆ ಅಂಗಲಾಚಿ ಬೇಡುವ ಸೌಜನ್ಯ</br>ವೇನು!</br>
{{gap}}ಒಂದು ಮರವನ್ನೇ ಕಡಿದು ಲಾರಿಯೊಳಗೆ ಇರಿಸಿಕೊಂಡು “ಮರಕ್ಕೆ</br>ಓಟು ಕೊಡಿ!” ಎನ್ನುತ್ತಿದ್ದರು.</br>
{{gap}}ಇನ್ನೊಂದು ವ್ಯಾನಿನ ಮೇಲೆ ಒಂದು ಗುಡಿಸಲನ್ನೇ ಕಟ್ಟಿದ್ದರು,</br>“ಗುಡಿಸಲು ನಮ್ಮ ಗುರುತು, ನಮ್ಮ ಗುರುತು ಗುಡಿಸಲು” ಎನ್ನುತ್ತಿದ್ದರು.</br>
{{gap}}ಕೇರಿಯ ಮಕ್ಕಳಂತೂ ದಿನವೂ ಧೂಳೆಬ್ಬಿಸುತ್ತಿದ್ದುವು: “ಯಾರಿಗೆ </br>ಓತ್-ಮರಕ್ಕೆ ನೇತ್_ಕೋತಿಗೆ ಓತ್-ಓತ್ ಫಾ ಕಾಂಗ್ ಲೇಸ್,”....</br> ಒಬ್ಬ ಕೆಲಸದಾಕೆ ಎಂಬುದನ್ನು ಮರೆತು ತಿರುಕಣ್ಣನ ಮಗಳೂ ಆ</br>ಹುಡುಗರ ಜತೆ ಸೇರುತ್ತಿದ್ದಳು.</br>
{{gap}}ಹಾಗೇ, ದಿನ ಕಳೆಯಿತು.</br>
{{gap}}ತಿರುಕಣ್ಣನನ್ನು ಕೇಳಿಕೊಂಡು ಬರುತ್ತಿದ್ದ ಜನ ಬಹಳ.<noinclude></noinclude>
0fyf5mm7oq9p9mc448dh4eyf9b1d558
ಪುಟ:KELAVU SANNA KATHEGALU.pdf/೬೧
104
20215
321103
250298
2026-05-20T05:43:28Z
Shreelatha.Halemane
7642
/* Validated */
321103
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ತಿರುಕಣ್ಣನ ಮತದಾನ|right=39}}
{{gap}}“ತಿರು-ಕಣ್ಣಾ” ಎಂದೊಬ್ಬನು ಕೂಗಿದರೆ, “ತಿರುಕಣ್ಣ ಇದ್ದಾರೆಯೆ?”</br>ಎಂದಿನ್ನೊಬ್ಬ ರಾಗವಾಗಿ; ಮೂರನೆಯವನು "ತಿರ್ಕಣ್ಣನ್ ಇರ್ಕಾರಾ?”ಎಂತ.</br>
{{gap}}“ಆಗಲಿ ಸಾಮಿ, ಆಗಲಿ ಬುದ್ಧಿ, ಕೊಡ್ತೀನಿ ಓಟು” ಎಂದು ಹೇಳಿ</br>ಹೇಳಿ ತಿರುಕಣ್ಣನಿಗೆ ಸಾಕಾಗಿ ಹೋಯಿತು.</br>
{{gap}}.... ಮೈಯ ನಿಶ್ಯಕ್ತಿ ಹೆಚ್ಚುತ್ತಿತ್ತು. ರೇಷನ್ ತರಲು ಸಾಕಷ್ಟು ಹಣವೇ</br>ಇರುತ್ತಿರಲಿಲ್ಲ. ಹೆಂಡದಂಗಡಿಯವನು, “ನಿನಗಿನ್ನು ಸಾಲ ಕೊಡೋಕಾಗಲ್ಲ,</br>ಕಾರ್ಖಾನೇಲಿ ಕೆಲ್ಸ ಇದ್ದವರಿಗಷ್ಟೇ ಸಾಲ, ಹೋಗು” ಎಂದು ಖಡಾಖಂಡಿತ</br>ವಾಗಿ ಹೇಳಿದ್ದ.</br>
{{gap}}ಗುಡಿಸಲಿನ ಬಾಡಿಗೆ ಎರಡು ತಿಂಗಳಿಂದ ಬಾಕಿ ಇತ್ತು. ಅದರ ಮಾಲಿಕ</br>ಹೋದ ತಿಂಗಳೇ ಹೇಳಿದ್ದ: “ನೀನು ಬೇರೆ ಕಡೆಗೆ ಹೋಗೋದು ವಾಸಿ”</br>ಎಂತ.</br>
{{gap}}{{gap}}*{{gap}}{{gap}}{{gap}}*{{gap}}{{gap}}{{gap}}*{{gap}}{{gap}}{{gap}}*{{gap}}{{gap}}</br>
{{gap}}ಕೆಳಗೆ ಮೂರನೆಯ ಬೀದಿಯಲ್ಲಿ ಒಂದು ಹಳೆಯ ಕಟ್ಟಡವಿತ್ತು.</br>ಯಾಕೋ ಅದರ ಬಾಗಿಲು ತೆರೆಯುತ್ತಿರಲಿಲ್ಲ. ಆ ಜಗಲಿಗೆ ತನ್ನ ಬಿಡಾರ</br>ಸಾಗಿಸಿ ಬಿಡಬೇಕು ಎಂದು ಕಣ್ಣನ್ ಯೋಚಿಸುತ್ತಿದ್ದ. ಮುಂದೆ ಪೋಲೀಸರು</br>ಬಂದು ಕಾಡಿಸಿದರೆ, ಮಗಳನ್ನು ಮಂಡಿ ಸಾಹುಕಾರರ ಮನೆಯಲ್ಲೇ ಬಿಟ್ಟು</br>ಬಿಡುವುದು, ತಾನು ಸೌದೆ ಡಿಪೋವನ್ನು ಆಶ್ರಯಿಸುವುದು ಎಂದು ತಿರು</br>ಕಣ್ಣನ್ ತೀರ್ಮಾನಕ್ಕೆ ಬಂದ.</br>
{{gap}}ಆ ಸಂಜೆ ಸ್ವಲ್ಪ ಮಟ್ಟಿಗೆ 'ಡಂಗಾಗಿ'ಯೇ ಅವನು ಗುಡಿಸಲಿಗೆ</br>ಮರಳಿದ್ದ.</br>
{{gap}}ಅಲ್ಲಿ ಅವನ ಹಟ್ಟಿಯ ಎದುರು ಹತ್ತಾರು ಜನ ಗುಂಪು ಕೂಡಿ ಮಾತ</br>ನಾಡುತ್ತಿದ್ದರು. ನಡುವೆ ಅವರ ಸಂಘದ ಅಧ್ಯಕ್ಷ ರಂಗೇಶಿ,</br>
{{gap}}ಒಬ್ಬ ಯುವಕ ಕೆಲಸಗಾರ ಕೂಗಾಡುತ್ತಿದ್ದ....</br>
{{gap}}“ಎಲ್ಲಾ ಬುಟ್ಟುಡಣ್ಣ ರಂಗೇಶಿ, ನಿನ್ತಾವ ಎಲ್ಲೈತೆ ದುಡ್ಡು ? ಫ್ಯಾಕ್ಟರಿ</br>ಯವರು ಅತ್ಸಾವಿರ ಕೊಡ್ತಾರೇಂತ ನೀನೂ ಚುನಾವಣೆಗೆ ನಿಂತುಕೊಂಡಿದ್ಯ...</br>ನಂಗೊತ್ತಿಲ್ವಾ! ಹಹ್ಹ!”</br>
{{gap}}ರಂಗೇಶಿ ಶಾಂತನಾಗಿ ಉದ್ದುದ್ದ ಭಾಷಣ ಕೊಡಲು ಶುರುಮಾಡಿದ.</br>ಆದರೆ ನೆರೆದಿದ್ದವರಲ್ಲಿ ಬಹಳ ಜನ ಹೊರಟುಹೋದರು; ಕೂತಿದ್ದವರು</br>ಕೆಲವರು ಮಾತ್ರ. ಏಳುವುದೂ ಒಂದು ಆಯಾಸದ ಕೆಲಸವೇ ಎಂದು,</br>
ಕುಳಿತೇ ಇದ್ದರು.<noinclude></noinclude>
1azlr14psepd693bvkr5e0hw62lw23s
ಪುಟ:KELAVU SANNA KATHEGALU.pdf/೬೨
104
20216
321104
250338
2026-05-20T05:44:21Z
Shreelatha.Halemane
7642
/* Validated */
321104
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=40|right=ನಿರಂಜನ: ಕೆಲವು ಸಣ್ಣ ಕಥೆಗಳು}}
{{gap}}ಕೊನೆಗೆ ರಂಗೇಶಿ ತಿರುಕಣ್ಣನ ಬಳಿಗೆ ಬಂದ.</br>
{{gap}}ಅದೇ ರಂಗೇಶಿ! ಆ ದಿನ ಡಿಸ್ಮಿಸ್ ಆದಾಗ ಅವನ ಬಳಿ ಹೋಗಿ</br>ಕಾಲು ಹಿಡಿದು ಗೋಗರೆದು ತಿರುಕಣ್ಣ ಅತ್ತಿದ್ದ. ಆಗ, “ನೀನು ಸಂಘದ</br>ಮೆಂಬರಲ್ವಲ್ಲಾ” ಎಂದು ಉತ್ತರ ಬಂದಿತ್ತು. ಅವನನ್ನು ಸಿಗಿದು ಹಾಕ</br> ಬೇಕು, ಎನ್ನುವಷ್ಟು ಸಿಟ್ಟು ಬಂತು ತಿರುಕಣ್ಣನಿಗೆ.</br>
{{gap}}“ಅಂತೂ ನೀನೂ ನಿಂತ್ಬಿಟ್ಟೆ ಚುನಾವಣೆಗೆ!” ಎಂದ ತಿರುಕಣ್ಣ ವ್ಯಂಗ್ಯ</br>ವಾಗಿ.</br>
{{gap}}ಅದೇ ಧ್ವನಿಯಲ್ಲಿ ಮತ್ತೂ ಹೇಳಿದ.</br>
{{gap}}“ಆರೋಗ್ಯ ಒಂಟೋದ್ಲು. ಇಲ್ದಿದ್ರೆ ಎಲ್ಡು ಓಟು ಬರ್ತಿತ್ತು</br> ನಿಂಗೆ!”</br>
{{gap}}“ಇಲ್ಲ ತಿರುಕಣ್ಣ, ನೀನು ಒಳ್ಳೆಯವನು. ಮಾಲಿಕರಿಗೆ ಹೇಳಿ ಕೆಲಸ</br> ಕೊಡಿಸ್ತೀನಿ. ಒಂದೇ ಶರ್ತ. ಈ ಕೇರಿಯ ಎಲ್ಲಾ ಓಟನ್ನೂ ನೀನು ನಂಗೇ</br> ಕೊಡಿಸ್ಬೇಕು” ಎಂದು ರಂಗೇಶಿ ವಯ್ಯಾರವಾಗಿ ಹೇಳಿದ.</br>
{{gap}}ತಿರುಕಣ್ಣ ಗಟ್ಟಿಯಾಗಿ ಕರ್ಕಶವಾಗಿ ಉತ್ತರಕೊಟ್ಟ:</br>
{{gap}}“ಓಗೋಗು...... ಮುಚ್ಕೊಂಡು ಹೋಗು........ ನಿನ್ನ ಬಂಡ್ವಾಳ್ವೆಲ್ಲ</br>ಬೀದಿಗೆಳ್ದೇನು........ಓಗ್!"</br>
{{gap}}ಇದಾದ ಮರುದಿನವೇ ಗುಡಿಸಲಿನ ಮಾಲಿಕ ಬಂದು ಗುಡಿಸಲಿನಲ್ಲಿದ್ದ</br> ಕುಡಿಕೆ ಮಡಿಕೆಗಳನ್ನೆಲ್ಲ ಬೀದಿಗೆಳೆದು ತಿರುಕಣ್ಣನನ್ನು ಹೊರಹಾಕಿದ. ಬಲು</br> ಸಂಕಟವಾಯಿತು ತಿರುಕಣ್ಣನಿಗೆ. ಗುಡಿಸಲನ್ನು ಬಿಡಬೇಕೆಂದು ತಾನಾಗಿಯೇ</br>ಹಿಂದೆ ಯೋಚಿಸಿದ್ದಾಗ ಆ ನೋವು ತಿಳಿದಿರಲಿಲ್ಲ. ಈಗ ಬಿಡಲೇಬೇಕಾಗಿ</br> ಬಂದಾಗ ಅವನ ಕರುಳು ಕಿವುಚಿ ಬರುತ್ತಿತ್ತು. ಆ ಹಲವು ನೆನಪುಗಳು...</br> ಆರೋಗ್ಯಮ್ಮನ ಕೊನೆಯ ದಿನಗಳು.</br>
{{gap}}ಆದರೂ ಅವನು ಬೇರೆ ಗತಿ ಇಲ್ಲದೆ ಆ ಜಗಲಿಗೆ ಹೊರಟು ಹೋದ.</br>
{{gap}}{{gap}}*{{gap}}{{gap}}{{gap}}*{{gap}}{{gap}}{{gap}}*{{gap}}{{gap}}{{gap}}*{{gap}}{{gap}}</br>
{{gap}}ಚುನಾವಣೆಯ ಸಂಭ್ರಮ ನಡದೇ ಇತ್ತು.</br>
{{gap}}ಆ ದಿನ ಮತ್ತೆ ಮೂರು ಪಕ್ಷಗಳ ಸ್ವಯಂ ಸೇವಕರು ಸೌದೆ ಅಂಗಡಿಗೆ</br> ಬಂದರು. ಕಣ್ಣು ತಪ್ಪಿಸಲು ಎಷ್ಟು ಯತ್ನಿಸಿದರೂ ಗಂಟೆಗಟ್ಟಲೆ ಕಾದು </br>ಅವರು ಅವನನ್ನು ಪೀಡಿಸಿದರು.</br>
{{gap}}“ತಿರುಕಣ್ಣನ್ ತಿರುಕಣ್ಣನ್! ನಮಗೆ ಓಟು-ನಮಗೆ!”</br>
{{gap}}ಆ ಸಾಯಂಕಾಲ ಇನ್ನೊಂದು ದೊಡ್ಡ ಕಾರು ಬಂತು. ಅದರ ಎದುರು<noinclude></noinclude>
cl51ce6yiuntj5yp1o0xlcloit9jm7f
ಪುಟ:KELAVU SANNA KATHEGALU.pdf/೬೩
104
20217
321105
250394
2026-05-20T05:44:58Z
Shreelatha.Halemane
7642
/* Validated */
321105
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ತಿರುಕಣ್ಣನ ಮತದಾನ|right=41}}
ಎರಡೆತ್ತುಗಳನ್ನು ಎತ್ತಿ ಕಟ್ಟಿದ್ದರು. ಭಾರಿ ದೇಹದ ವ್ಯಕ್ತಿಯೊಬ್ಬರು ಕೆಳಕ್ಕಿಳಿ</br>ದರು. ಅವರು “ಕೇರಿಯ ತಿರುಕಣ್ಣ ಇದ್ದಾರೆಯೆ?” ಎಂದು ಕೇಳಿದರು.</br>
{{gap}}ಈ ಸಾರೆ ಗಡಸು ದನಿಯಲ್ಲೇ ತಿರುಕಣ್ಣ, “ಯಾಕ್ಸಾಮೀ?” ಎಂದ.</br>
{{gap}}ಬಂದವರು ದೇಶಾವರಿ ನಗೆ ಬೀರಿದರು. ಅವರ ಜತೆಯಲ್ಲಿದ್ದವನೊಬ್ಬ</br>ಹೇಳಿದ:</br>
{{gap}}“ರಾಯರ ಪರಿಚಯ ಇದೆ ಅಲ್ವೇನಪ್ಪಾ?”</br>
{{gap}}ತಿರುಕಣ್ಣ ಅವರ ಖಾದಿಟೋಪಿಯತ್ತ ನೋಡುತ್ತ, “ಓಹೋ! ಇಲ್ಲೆ?”</br>ಎಂದ.</br>
{{gap}}“ಯಾರು ಹೇಳು?” ಎಂದರು ಸ್ವತಹ ರಾಯರು.</br>
{{gap}}“ಇನ್ಯಾರು ಬುದ್ಧಿ ? ಸರ್ಕಾರದೋರು.”</br>
{{gap}}ಕ್ಷಣ ಕಾಲ ರಾಯರು ಸುಮ್ಮನಾದರು.</br>
{{gap}}ಬಳಿಕ “ನಿಮಗೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ಸಿನೋರು. ನೆಹ್ರೂ </br>ಹೇಳಿದ್ದಾರೆ... ನನಗೆ ಓಟು ಹಾಕಪ್ಪ_” </br>
{{gap}}ನಗೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ಸಿನವರನ್ನು ಸ್ಮರಿಸಿ ತಿರುಕಣ್ಣ</br>ನಸುನಕ್ಕ.</br>
{{gap}}... ಬೀದಿಗಳಲ್ಲಿ ಕೂಗಾಟ ಹೆಚ್ಚುತ್ತ ಹೋಯಿತು. 'ಪವಿತ್ರ ಹಕ್ಕನ್ನು</br>ಚಲಾಯಿಸಿ' 'ಘನವಾದ ಓಟನ್ನು ನೀಡಿ' 'ಮತದಾನ ಮಾಡಿ' 'ನಿಮ್ಮ ಮಕ್ಕಳ</br>ಹೆಸರಲ್ಲಿ, ವೀರ ಸಂತಾನದ ಹೆಸರಲ್ಲಿ, ನಿಮ್ಮ ಪವಿತ್ರ ಮತವನ್ನು ದಯ</br>ಪಾಲಿಸಿ...'</br>
{{gap}}ಮೂರು ವಾರಗಳ ಹಿಂದೆ ಒಂದು ಬೆಳಗು ಮುಂಜಾನೆ ಸ್ವತಂತ್ರ</br>ಕಾರೊಂದು ತನ್ನ ಮನೆ ಬಾಗಿಲಿಗೆ ಬಂದಿದ್ದುದನ್ನು ತಿರುಕಣ್ಣ ಮರೆತುಬಿಟ್ಟಿದ್ದ.</br>ನೋಡಿ ನೋಡಿ ಬೇಜಾರವಾಗಿದ್ದ ದಿನನಿತ್ಯದ ನಾಟಕವಾಗಿತ್ತು, ಆ ಬೀದಿಯ</br>ನೋಟ.</br>
{{gap}}"ಇನ್ನು ಆರೇ ದಿನ-ಐದೇ ದಿನ-ನಾಲ್ಕೇ ದಿನ- ಅಗೋ ಇನ್ನು ೪೮</br>ಗಂಟೆಗಳ ಒಳಗಾಗಿ!”</br>
{{gap}}ಆ ದಿವಸ ಯಾರೂ ಸೌದೆ ಒಡೆಸಲೇ ಇಲ್ಲ. ಡಿಪೋದಲ್ಲೂ ಸೌದೆ</br>ಇರಲಿಲ್ಲ. ಮೂರು ಬಾರಿ ಸೇದಿ ಮುಗಿಸಿದ್ದ ಬೀಡಿಯನ್ನೇ ಮತ್ತೂ ಚೀಪುತ್ತ </br>ತಿರುಕಣ್ಣ ಒಂದೆಡೆ ಕುಳಿತ.</br>
{{gap}}“ಇನ್ನು ಇಪ್ಪತ್ತನಾಲ್ವೇ ಗಂಟೆ... ಅದೋ ಆ ಸುಪ್ರಭಾತದಲ್ಲಿ....<noinclude></noinclude>
ss2a6213xune6jfjzudzd1r3mz6qe4e
ಪುಟ:KELAVU SANNA KATHEGALU.pdf/೬೪
104
20218
321106
250442
2026-05-20T05:45:34Z
Shreelatha.Halemane
7642
/* Validated */
321106
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=42|right=ನಿರಂಜನ: ಕೆಲವು ಸಣ್ಣ ಕಥೆಗಳು}}
ಭಾರತೀಯ ಸಂಸ್ಕೃತಿ..."</br>
{{gap}}ಆ ಮಾತುಗಳಿಗೆ ಯಾವ ಅರ್ಥವೂ ಇದ್ದಂತೆ ತೋರಲಿಲ್ಲ ತಿರುಕಣ್ಣನಿಗೆ.</br>
{{gap}}...ಚುನಾವಣೆಯ ದಿನ ಬಂತು. ಯಾವ ಗದ್ದಲವೂ ಆ ಬೆಳಗ್ಗೆ</br> ಕೇಳಿಸಲಿಲ್ಲ.</br>
{{gap}}"ಅಂತೂ ಪೀಡೆ ತೊಲಗಿತು!” ಎಂದುಕೊಂಡ ತಿರುಕಣ್ಣ. ಮಗಳ</br> ಮೇಲೂ, ತಾನೂ, ಮತ್ತೊಮ್ಮೆ ಕಂಬಳಿಯ ಮುಸುಕನ್ನೆಳೆದು ಮಲಗಿದ.</br>
{{gap}}ಬಿಸಿಲೇರಿತು.</br>
{{gap}}ತಿರುಕಣ್ಣ ಎದ್ದು ಕುಳಿತ.</br>
{{gap}}ಬಹುಶಃ ತನಗಾಗಿ ಆ ದೊಡ್ಡ ಮನುಷ್ಯರೆಲ್ಲ ಹುಡುಕುತ್ತಿರಬಹುದು</br> ಎಂಬ ಯೋಚನೆ ಬಂತು. ಆದ್ದರಿಂದ ಒಂದು ರೀತಿಯ ಸಮಾಧಾನವೇ</br> ಆಯಿತು ಆತನಿಗೆ. ಭಿಕ್ಷೆ ಬೇಡಿಕೊಂಡು, ದಾನ ಕೇಳಿಕೊಂಡು, ತನ್ನ ಬಳಿಗೂ</br>ಬರುವವರಿದ್ದಾರಲ್ಲಾ ಎಂಬ ಹೆಮ್ಮೆ ಅವನಿಗೆ. ಆದರೆ ಅದು ಒಣ ಹೆಮ್ಮೆ.</br> ಅವನ ಕೆಮ್ಮು ಇದ್ದ ಹಾಗೆ.</br>
{{gap}}ಆ ನೂರು ರೂಪಾಯಿ ಬರಲೇ ಇಲ್ಲ. ಆ ರಂಗೇಶಿಯ ಕಾಲು ಹಿಡಿ</br>ದಿದ್ದರೆ, ಅಥವಾ ಆ ಮರಕ್ಕೋ, ಗುಡಿಸಲಿಗೋ ಆತುಕೊಂಡಿದ್ದರೆ, ಅಥವಾ</br> ಎತ್ತಿನ ಹಿಂದೆಯಾದರೂ ಓಡಿದ್ದರೆ, ಏನಾದರೂ ಪ್ರಯೋಜನವಾಗುತ್ತಿತ್ತೋ </br>ಏನೋ. ಜೀವಮಾನವೆಲ್ಲ ದೇಹಶ್ರಮವನ್ನು ಮಾರಿಯೆ ಬದುಕಿದ ಆ ಜೀವಕ್ಕೆ </br>ಈ ಮಾರಾಟವೇನೂ ಹೊಸದಲ್ಲ. ಆದರೆ ಅವನ ಕಣ್ಣಿಗೆ ಕಾಣದೇ ಇದ್ದ, </br>ರಹಸ್ಯಮಯವಾದ, ಆರೋಗ್ಯಮ್ಮನ ಹೆಸರಿನ ಜತೆಯಲ್ಲೇ ಬರೆಯಲ್ಪಟ್ಟಿದ್ದ,</br> ತನ್ನ ಹಕ್ಕೆಂದು ಹೇಳಲಾದ ಒಂದು ಓಟನ್ನು ಮಾರಲು ಅವನ ಮನಸ್ಸು</br> ಒಡಂಬಡಲಿಲ್ಲ.
{{gap}}{{gap}}*{{gap}}{{gap}}{{gap}}*{{gap}}{{gap}}{{gap}}*{{gap}}{{gap}}{{gap}}*{{gap}}{{gap}}
{{gap}}ಮಧ್ಯಾಹ್ನ ಬಂತು. ಮಗಳು ಆಗಲೇ ಹೊರಟು ಹೋಗಿದ್ದಳು.</br> ಹೊಟ್ಟೆ ಚುರುಕೆನ್ನುತ್ತಿತ್ತು. ಇದ್ದ ಬಿಡಿಕಾಸುಗಳನ್ನು ಜೇಬಿಗೆ ಸೇರಿಸಿ ತಿರುಕಣ್ಣ</br> ಹೊರಹೊರಡಲು ತೀರ್ಮಾನಿಸಿದ. ಆದರೆ ಮರುಕ್ಷಣದಲ್ಲೆ ಆತನಿಗೆ ಭಯ</br>ವಾಯಿತು. ಆ ಉಮೇದುವಾರರೆಲ್ಲಾದರೂ ತನ್ನನ್ನು ಕಂಡುಹಿಡಿದರೆ?....</br> ಯೋಚಿಸಿದಂತೆಲ್ಲ ಆ ಭಯ ಹೆಚ್ಚಿತು.</br>
{{gap}}ಅಂತೂ ಹೊಟ್ಟೆ ಕೇಳದೆ ಇದ್ದಾಗ ತಿರುಕಣ್ಣ ಮೆಲ್ಲನೆ ಬೀದಿಗೆ ನುಸುಳಿ</br> ಆರು ಕಾಸಿನ ಕಡಲೆಕಾಯಿಯನ್ನೂ ಮೂರು ಕಾಸಿನ ಬೀಡಿಯನ್ನೂ ತಂದ.</br> ಕಡಲೆಕಾಯಿ ಭೋಜನವಾದ ಮೇಲೆ ಮತ್ತೊಮ್ಮೆ ನುಸುಳಿ ಹೋಗಿ ಬೀದಿ<noinclude></noinclude>
51p5j2b8phoxn0emn7wpbunpykrzjx7
ಪುಟ:KELAVU SANNA KATHEGALU.pdf/೬೫
104
20219
321107
248530
2026-05-20T05:47:38Z
Shreelatha.Halemane
7642
/* Validated */
321107
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=ತಿರುಕಣ್ಣನ ಮತದಾನ|center=|right=೪೩}}
ನಳ್ಳಿಯ ನೀರು ಕುಡಿದು ಬಂದ. ಬೀಡಿ ಹಚ್ಚಿ,ಹೊಗೆಯಾಡುತ್ತಿದುದನ್ನು ಮೋಜಿನಿಂದ ನೋಡಿದ.
{{gap}}ಈಗ ಓಟು ಕೊಡುವ ಉತ್ಸವ ನಡೆಯುತ್ತಿರಬಹುದೇನೋ, ಅದನ್ನು ನೋಡುವ ಕುತೂಹಲವುಂಟಾಯಿತು ಕ್ಷಣ ಕಾಲ. ಅದು ಹೇಗಿರುವುದೋ ಏನೋ! ಆದರೂ ಹೆದರಿಕೆ! ಯಜ್ಞದ ಪಶುವಾಗಿ ತನ್ನನ್ನೂ ಹಿಡಿದೊಯ್ದರೆ?
{{gap}}ತಿರುಕಣ್ಣ ಸ್ವಲ್ಪ ಹೊತ್ತು ಮಲಗಿಕೊಂಡ. ನಿದ್ದೆ ಬರಲಿಲ್ಲ. ಎಳೆಂಟು ವರ್ಷಗಳ ಹುಡುಗನಿದ್ದಾಗಲೇ ಅವನು ದುಡಿತ ಆರಂಭಿಸಿದ್ದ. ಅಂತೂ ನಾಲ್ವತ್ತು ವರ್ಷಗಳ ದುಡಿಮೆ ಮುಗಿದ ಹಾಗಾಗಿತ್ತು....ಆ ವರ್ಷಗಳು....
{{gap}}ತಿರುಕಣ್ಣನಿಗೆ ಏನೇನೋ ನೆನಪಾಗತೊಡಗಿತು....
{{gap}}ಆತ ಎದು ಕುಳಿತು, ಮನಸ್ಸನ್ನು ಹಿಂಡುವ ಈ ಯೋಚನೆಗಳನ್ನೆಲ್ಲ ಬದಿಗೆ ತಳ್ಳುವ ಹಾಗೆ ಒಂದಿಷ್ಟು ಹೆಂಡ ಗಂಟಲೊಳಗೆ ಇಳಿಬಿಡುವುದು ಸಾಧ್ಯವಾಗಿದ್ದರೆ! ಯಾರಾದರೂ ನಾಲ್ಕು ಪುಡಿಕಾಸು ದಾನ ಮಾಡಿದರೆ? ಯಾವನಾದರೂ ಸ್ನೇಹಿತ ಕಂಡು ಬಂದರೆ?
{{gap}}ಲೋಹ ಚುಂಬಕದ ಹಾಗೆ ಪಡಖಾನೆ ಅವನನ್ನು ಸೆಳೆಯುತ್ತಿತ್ತು.
{{gap}}ಸಂಜೆಯ ಹೊತ್ತು ತಿರುಕಣ್ಣ ಬೀದಿಗಿಳಿದ ಕುರುಚಲು ಗಡ್ಡದ, ಕೆದರಿದ ಕೂದಲು, ಮಾಸಿದ ಹರಕು ಬಟ್ಟೆಯ, ಕೊಳಕು ದೇಹದ, ತಿರುಕಣ್ಣ ಮೆಲ್ಲನೆ ನಡೆದು ಹೋದ.
{{gap}}ಅಲ್ಲೇ... ಆ ಸ್ಕೂಲಿನಲ್ಲೆ...!
{{gap}}ಓ! ಅವನಿಗೆ ಗೊತ್ತೇ ಇರಲಿಲ್ಲ!
{{gap}}ಪ್ರಮಾದ ನಡೆದು ಬಿಟ್ಟಿತ್ತು.
{{gap}}ಮೊದಲ ದಿನ ಕಾರಿನಲ್ಲಿ ಬಂದವರಲ್ಲಿ ಒಬ್ಬ ತಿರುಕಣ್ಣನ ಗುರುತುಹಿಡಿದ.
{{gap}}“ ಓ! ಮಿಸ್ಟರ್ ತಿರುಕಣ್ಣ...”
{{gap}}“ತಿರುಕಣ್ಣ? ಎಲ್ಲಿ? ಬಂದರೆ?"
{{gap}}“ಇನ್ನು ಎರಡೇ ನಿಮಿಷ ಇದೆ.
{{gap}}"ಬನ್ನಿ, ಹೀಗೆ ಬನ್ನಿ..."
{{gap}}"ಆಲದಮರ!"
{{gap}}“ಎತ್ತು!”
{{gap}}"ಗುಡಿಸಲು!"
{{gap}}"ಕಾರು"
{{gap}}“ಅಯ್ಯಾ, ದೀಪ!"<noinclude></noinclude>
f3y58ihzumenmajjxs3wlu8d6qpvq85
ಪುಟ:KELAVU SANNA KATHEGALU.pdf/೬೬
104
20220
321109
248538
2026-05-20T05:50:25Z
Shreelatha.Halemane
7642
/* Validated */
321109
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=44 |center=|right=ನಿರಂಜನ: ಕೆಲವು ಸಣ್ಣ ಕಥೆಗಳು}}
{{gap}}"ಬುಡ್ದಿ"
{{gap}}ನಾಲ್ಕು ಜನ ತಿರುಕಣ್ಣನನ್ನು ಪಿಸುನುಡಿಯುತ್ತ ಸುತ್ತುವರಿದರು. ಉಳಿದವರು ಹಿಂದೂ ಮುಂದೂ ಓಡಾಡಿದವರು. ಪ್ರತಿಭಟಿಸುವ ಶಕ್ತಿ ಇರಲಿಲ್ಲ ತಿರುಕಣ್ಣನಿಗೆ.ಅವನ ತೆರೆದ ತುಟಿಗಳು ನಗುತ್ತಲೇ ಇದುವು.
{{gap}}ಒಬ್ಬ ಪೋಲೀಸಿನವನು ಬಂದು ತಿರುಕಣ್ಣನನ್ನು ಕೆಂಗಣ್ಣಿನಿಂದ ನೋಡಿದ.
{{gap}}“ಏನ್ಸಾರ್? ಗಲಾಟೆ ಮಾಡ್ತಿದಾನಾ? ಇಲ್ಕೊಡಿ....... ಲಾಕಪ್ಪಿಗೆ ಸೇರಿಸ್ತೀನಿ."
{{gap}}ತಿರುಕಣ್ಣನ ಮುಖ ಬಿಳಿಚಿಕೊಂಡಿತು. ಆದರೆ ಓಟಿನವರು ಪೋಲೀಸಿನವರನ್ನು ದಿಗ್ಭ್ರಮೆಗೊಳಿಸಿದರು.
{{gap}}"ಇನ್ನೊಂದೇ ನಿಮಿಶ ಉಳಿದಿರೋದು. ಹೀಗೆ ಬನ್ನಿ.."
{{gap}}"೯ಎ ೦೦೬೮೩ ತಿರುಕಣ್ಣನ್! ೯ಎ ೦೦೬೮೪ ಹೆಂಡತಿ ಆರೊಗ್ಯಮ್ಮ ಸತ್ಹೋಗಿದಾಳೆ."
{{gap}}ತಿರುಕಣ್ಣನಿಗೆ ಬವಳಿ ಬಂತು. ಕೈಕಾಲುಗಳು ಕುಸಿದು ಬೀಳುವ ಹಾಗಾಯಿತು.
{{gap}}ಅಷ್ಟರಲ್ಲೇ-ಗಂಟೆ ಬಾರಿಸಿದರು.
{{gap}}"ಅನ್ಯಾಯವಾಗಿ ನಮ್ಮ ಒಂದು ಓಟು, ತಿರುಕಣ್ಣನ ಓಟು ವ್ಯರ್ಥವಾಯಿತಲ್ಲ."
{{gap}}“ಅನ್ಯಾಯ! ಅನ್ಯಾಯ!”
{{gap}}ಚೇತರಿಸಿಕೊಂಡು ತಿರುಕಣ್ಣ ಹೇಳಿದ:
{{gap}}“ಓಗ್ಲೇಳಿ..ಅನಾಯ ಏನ್ಬಂತು?”
{{gap}}ದೊಡ್ಡ ಮನುಷ್ಯರೊಬ್ಬರು ರೇಗಿಕೊಂಡು ಕೂಗಿದರು:
{{gap}}“ನಿನಗೇನು ಗೊತ್ತೊ ಮುಠಾಳ? ಒಂದು ಓಟಿನ ಬೆಲೆ ನಿನಗೇನು ಗೊತ್ತು?”
{{gap}}ಇನ್ನೊಬ್ನರು ಬಂದು ಕೇಳಿದರು:
{{gap}}“ತಿರುಕಣ್ಣನ್ ಓಟು ಪೋಲು ಮಾಡಿದರೆ?
{{gap}}ಯಾರೋ ಉತ್ತರ ಕೊಟ್ಟರು:
{{gap}}"ಇಲ್ಲ, ತಿರುಕಣ್ಣನ್ ಇ ಸಾರಿ ಓಟು 'ಪೋಲು' ಮಾಡಲಿಲ್ಲ.<noinclude></noinclude>
aixqvvaqqf4qtm9niwflj37g15wunrm
ಪುಟ:KELAVU SANNA KATHEGALU.pdf/೬೭
104
20221
321111
250472
2026-05-20T05:51:33Z
Shreelatha.Halemane
7642
/* Validated */
321111
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|45}}
{{center|'''೭'''}}
{{center|'''ಒಂದೇ ನಾಣ್ಯದ ಎರಡು ಮೈ'''}}
ರಾತ್ರಿಯ ಹೊತ್ತು ಬೆಂಗಳೂರು ಬಿಟ್ಟ ನಾವು ಹುಬ್ಬಳ್ಳಿ ತಲುಪಿದಾಗ</br>ಮಧ್ಯಾಹ್ನವಾಗಿತ್ತು. ಇಡಿಯ ಕಂಪಾರ್ಟಮೆಂಟಿನಲ್ಲಿ ಇದ್ದವರು ನಾಲ್ವೇ ಜನ.</br>ಪ್ರತಿಯೊಬ್ಬರೂ ಕಾಲು ಚಾಚಿ ಹೊರಳಾಡುವಷ್ಟು ಜಾಗ. ಸುಖ ಪ್ರಯಾಣವೇ</br>ಎನ್ನಬೇಕು. ರಾತ್ರಿಯೆಲ್ಲ ರೈಲುಗಾಡಿಯ ಸದ್ದೇ ನಮ್ಮ ನಿದ್ದೆಗೆ ಜೋಗುಳ</br>ವಾಯಿತು. ಬೆಳಗಾದ ಬಳಿಕ ಹರಿಹರದಲ್ಲಿ ಕಾಫಿ ಕುಡಿದು, ತುಂಗಭದ್ರೆಯನ್ನು</br>ದಾಟಿ, ಮತ್ತೂ ಉತ್ತರಕ್ಕೆ ಮೈ ಚಾಚಿದ್ದ ಕನ್ನಡ ಭೂಮಿಯ ವಿಸ್ತಾರವನ್ನು</br>ದಿಟ್ಟಿಸುತ್ತ ನಾವು ಸಾಗಿದೆವು.</br>
{{gap}}ನಾವು ನಾಲ್ಕು ಜನ ಎಂದರೆ, ನನ್ನ ಪರಮ ಸ್ನೇಹಿತರು ಮೂವರು</br>ಮತ್ತು ನಾನು. ಆ ಮೂವರು ಯಾರು ಎನ್ನಲೆ? ಒಬ್ಬ ಪೋಲೀಸ್ ಅಧಿಕಾರಿ</br>ಮತ್ತು ಇಬ್ಬರು ಪೊಲೀಸರು. ಜತೆಯಲ್ಲಿದ್ದ ನಾನು ಅವರ ಕೈದಿ!</br>
{{gap}}ಹುಬ್ಬಳ್ಳಿಯ ನಿಲ್ದಾಣದಲ್ಲಿ ಹತ್ತು ಜನ ಸಶಸ್ತ್ರ ಪೊಲೀಸರು ಗೌರವ</br>ರಕ್ಷೆ ಸಲ್ಲಿಸಿದರು-ಪೋಲೀಸ್ ಅಧಿಕಾರಿಗೆ ಮತ್ತು ನನಗೆ ಅವರು ಆಗ ತೊಟ್ಟ</br>ದ್ದುದು ಗಾಂಭೀರ್ಯದ ಮುಖವಾಡ. ಅದರ ಹಿಂದೆ ಕುತೂಹಲದ, ವಿಸ್ಮಯದ,</br>ನಿರಾಸೆಯ ಭಾವಗಳನ್ನು ಕಾಣುವುದು ಕಷ್ಟವಾಗಿರಲಿಲ್ಲ. ಮೂರು ವರ್ಷಗಳ</br>
ಕಾಲ ಕಾದು, ನೀರಿನಂತೆ ಹಣ ವೆಚ್ಚ ಮಾಡಿ, ಕೊನೆಗೂ ಸಿಕ್ಕಿ ಬಿದ್ದ ಆರೋಪಿ</br>ಇಷ್ಟೇನೇ_ಎನಿಸಿರಬೇಕು ಅವರಿಗೆ.</br>
{{gap}}ಕೈದಿಗಳನ್ನೊಯ್ಯುವ ಕರಿಯ ಮೋಟಾರು ಗಾಡಿ, ನೂರು ಮೈಲಿಗಳಾ</br>ಚೆಯ ಸಮುದ್ರ ತೀರದಿಂದ ಬಂದು ಕಾದಿತ್ತು-ನಮಗಾಗಿ.</br>
{{gap}}ಹುಬ್ಬಳ್ಳಿ ಮಾರ್ಗವಾಗಿ ಗೋಕರ್ಣಕ್ಕೆ ಎಂದಾದರೂ ನೀವು ಹೋಗಿದೀ</br>ರೇನು? ಆ ದಾರಿಯಲ್ಲಿ ಬಹಳ ದೂರ ಸಾಗಿ ಉತ್ತರಕ್ಕೆ ತಿರುಗಿದರೆ ಕಾರವಾರ</br>ಸಿಗುತ್ತದೆ. ಕೆಲವು ವರ್ಷಗಳ ಅನಂತರ ಒದಗಿ ಬಂದಿದ್ದ ಪ್ರಯಾಣ. ಅದೂ</br>ಸರಕಾರದ ಅತಿಥಿಯಾಗಿ! ವಾಸ್ತವದ ಇರುವಿಕೆಯಲ್ಲಿ ನಾನು ಸೆರೆಯಾಳು; ಆದರೆ</br>ಕಲ್ಪನೆಯ ಸೃಷ್ಟಿಯಲ್ಲಿ, ಕೆಂಪು ಮಣ್ಣಿನ ಸುಡು ಭೂಮಿಯಿಂದ ಕಡಲತಡಿಗೆ<noinclude></noinclude>
4qlmnln7dt2ne015vqunwiahm6j49ev
ಪುಟ:KELAVU SANNA KATHEGALU.pdf/೬೮
104
20222
321112
250515
2026-05-20T05:51:40Z
Pragathi. BH
7585
/* Validated */
321112
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=46|right=ನಿರಂಜನ: ಕೆಲವು ಸಣ್ಣ ಕಥೆಗಳು}}
ಧಾವಿಸುತ್ತಿದ್ದ ಸ್ವೇಚ್ಛಾವಿಹಾರಿ, ಕೋಳ ಕೈಯನ್ನು ಕಟ್ಟಿತ್ತೇ ಹೊರತು</br>
ಹೃದಯವನ್ನು ಬಿಗಿದಿತ್ತೆ? ಮೆದುಳಿಗೆ ಬಂಧನ ಉಂಟೆ?</br>
{{gap}}ರಣಗುಡುತ್ತಿದ್ದ ಬಿಸಿಲು. ಬೆವರುತ್ತ-ಒಣಗುತ್ತ, ಬೆವರುತ್ತ-ಒಣಗುತ್ತ,</br>ಮುದುಡಿದ್ದ ಮಾನವರು. ಓಡುತ್ತಿದ್ದ ಕರಿಯ ವಾಹನ ಎಬ್ಬಿಸುತ್ತಿದ್ದುದು</br>ಧೂಳಿನ ಮೋಡವನ್ನು. ಎರಡು ಬದಿಗಳಲ್ಲೂ ಬಿದಿರು ಮೇಳೆ. ಬೀದಿಯು</br>ದ್ದಕ್ಕೂ ಅವುಗಳ ಕಮಾನು. ಅಲ್ಲಲ್ಲಿ ಬಿದಿರ ರೆಂಬೆಗಳ ತುಂಟತನ ಬೇರೆ. ಇಳಿ</br>ಜಾರು ಹಾದಿಯಲ್ಲಿ ಮೋಟಾರು ಸಾಗುತ್ತಿದ್ದರೆ, ಸರ್ರನೆ ಕೆಳಕ್ಕೆ ಸರಿದು ವಾಹ</br>ನದ ಮೈ ಮುಟ್ಟಿ ಮತ್ತೆ ಚಂಗನೆ ಮೇಲಕ್ಕೇರುವ ಚಪಲ. ಬಿದಿರುಗಳಾಚೆ</br>ಬರಿಯ ಗುಡ್ಡ. ಗುಡ್ಡಗಳನ್ನು ದಾಟಿ ಮರಗಳು, ದಟ್ಟನೆಯ ಕಾಡು. ಆಕಾಶ</br>ವನ್ನು ಮೋಡ ದಟ್ಟಿಸಿತೇನೋ ಎನ್ನುವ ಹಾಗೆ ಒಮ್ಮೆಲೆ ಕವಿಯುತ್ತಿದ್ದ</br>ಕಾಡಿನ ಕತ್ತಲು. ಮರುಕ್ಷಣದಲ್ಲೇ,ಯಮಗಾತ್ರದ ಕೊಂಬೆಗಳ ಮೇಲೆ ಕುಳಿತು</br>ನಗುವ ಸೂರ್ಯ. ಅಲ್ಲಲ್ಲಿ ಸುಟ್ಟು ಬೂದಿಯಾದ, ಅರೆಸುಟ್ಟು ಕರಿಯಾದ</br>ಮರ ಗಿಡಗಳು, ಉರಿಯುತ್ತ, ಹೊಗೆಯಾಡುತ್ತ ಉಳಿದ ಮರದ ಕೊರಡು.</br>ವನದೇವ ಅಲ್ಲಿ ಅಡುಗೆ ಬೇಯಿಸಿ ಉಂಡಿದ್ದನೆಂಬುದಕ್ಕೆ ಅದು ಕುರುಹು,</br>ಮತ್ತೆ ಅಲ್ಲಲ್ಲಿ ಜುಳು ಜುಳು ಹರಿಯುವ ತಿರುತೊರೆ-ಉಪನದಿ; ಚಲಿಸದೆ ನಿಂತ</br>ಕಪ್ಪು ನೀರಿನ ಕೆರೆ. ಕ್ಷಣವೂ ನಿಲ್ಲದೇ ಹೊರಟೇ ಹೋಗುವ ಜನರನ್ನು ಕಂಡು</br>ಅಣಕಿಸುತ್ತಿದ್ದ ಕೋತಿಗಳು; ಕರಿ ಮುಸುಡಿನ ಕೆಂಪು ಮುಸುಡಿನ 'ಮಂಗ್ಯಾ.'</br>ಆಗೊಮ್ಮೆ ಈಗೊಮ್ಮೆ ಹೆಬ್ಬಾವು ಬೀದಿ ದಾಟಿತ್ತೆಂಬುದಕ್ಕೆ ಸಾಕ್ಷ್ಯವಾಗಿ ಉಳಿ</br>ದಿದ್ದ ಗುರುತು, ಹಾದಿಯ ಇಳಕಲು ನೇರವಾದುದಲ್ಲ; ಸುರುಳಿಯಾದ ಹಾವಿನ</br>ಹಾಗೆ. ತಿರುತಿರುಗಿ ಹೊರಟಲ್ಲಿಗೇ ಬರುತ್ತಿರುವವೇನೋ ಎಂಬ ಭ್ರಮೆ ಹುಟ್ಟಿ</br>
ಸುವಂತೆ. ಎದುರಿನಿಂದ ಮೋಟಾರು ಬಂದಾಗಲಂತೂ ಧೂಳಿನ ಬೆಟ್ಟ ಕರಗಿ</br>ನೆಲಕ್ಕಿಳಿಯುವ ತನಕ ಒಂದು ಹೆಜ್ಜೆ ದೂರವೂ ಕಾಣಿಸದಂತಹ ಪರಿಸ್ಥಿತಿ.</br>ರೊಯೋ ಎನ್ನುವ ಬಸ್ಸಿನ ಗೀತಕ್ಕೆ ಮಾರುಹೋಗಿ ಕುಳಿತವರಿಗೆ ತೂಕಡಿಕೆ-</br>ಮಂಪರು-ನಿದ್ದೆ. ಪೋಲೀಸ್ ಅಧಿಕಾರಿಯ ಭುಜಕ್ಕೆ ತಲೆಯೊರಗಿಸುವ ಕೈದಿ.</br>ಕೈದಿಯನ್ನು ಮರೆತು ನಿದ್ದೆ ಹೋಗುವ ಅಧಿಕಾರಿ... ಈ ಬೇಗೆಯಲ್ಲಿ ಆಗಾಗ್ಗೆ</br>ಸಣ್ಣನೆ ಕದ್ದು ಬೀಸಿ ಕಚಗುಳಿ ಇಟ್ಟು ಕಣ್ಮರೆಯಾಗುತ್ತಿದ್ದ ತಂಗಾಳಿ.</br>
{{gap}}ನಾವು ಅಂಕೋಲ ತಲುಪಿದಾಗ ಕತ್ತಲಾಗಿತ್ತು. ಅಲ್ಲಿಂದ ಕಡಲಿನುದ್ದಕ್ಕೂ</br>ಒಂದು ಗಂಟೆಯ ಹಾದಿ ಕಾರವಾರಕ್ಕೆ. ನಮ್ಮ ವಾಹನ-ಅಂದರೆ ಸರಕಾರಕ್ಕೆ</br>ಸೇರಿದ ಪೋಲೀಸರ ವಾಹನ-ಬೆಳಕಿನ ಎರಡು ಕಣ್ಣುಗಳಿಂದ ಹಾದಿ ನೋಡುತ್ತ</br>ಸಾಗಿತು.ಹುಣ್ಣಿಮೆಯನ್ನು ಸಮೀಪಿಸುತ್ತಿದ್ದ ಚಂದಿರ ಆಗಲೇ ಹಾಲು ಚೆಲ್ಲಿದ್ದ.<noinclude></noinclude>
hpayfvxiz6kfaqmu3w6dqyqn179c3gp
321116
321112
2026-05-20T05:55:39Z
Pragathi. BH
7585
321116
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=46|right=ನಿರಂಜನ: ಕೆಲವು ಸಣ್ಣ ಕಥೆಗಳು}}
ಧಾವಿಸುತ್ತಿದ್ದ ಸ್ವೇಚ್ಛಾವಿಹಾರಿ, ಕೋಳ ಕೈಯನ್ನು ಕಟ್ಟಿತ್ತೇ ಹೊರತು
ಹೃದಯವನ್ನು ಬಿಗಿದಿತ್ತೆ? ಮೆದುಳಿಗೆ ಬಂಧನ ಉಂಟೆ?</br>
{{gap}}ರಣಗುಡುತ್ತಿದ್ದ ಬಿಸಿಲು. ಬೆವರುತ್ತ-ಒಣಗುತ್ತ, ಬೆವರುತ್ತ-ಒಣಗುತ್ತ,ಮುದುಡಿದ್ದ ಮಾನವರು. ಓಡುತ್ತಿದ್ದ ಕರಿಯ ವಾಹನ ಎಬ್ಬಿಸುತ್ತಿದ್ದುದುಧೂಳಿನ ಮೋಡವನ್ನು. ಎರಡು ಬದಿಗಳಲ್ಲೂ ಬಿದಿರು ಮೇಳೆ. ಬೀದಿಯುದ್ದಕ್ಕೂ ಅವುಗಳ ಕಮಾನು. ಅಲ್ಲಲ್ಲಿ ಬಿದಿರ ರೆಂಬೆಗಳ ತುಂಟತನ ಬೇರೆ. ಇಳಿಜಾರು ಹಾದಿಯಲ್ಲಿ ಮೋಟಾರು ಸಾಗುತ್ತಿದ್ದರೆ, ಸರ್ರನೆ ಕೆಳಕ್ಕೆ ಸರಿದು ವಾಹನದ ಮೈ ಮುಟ್ಟಿ ಮತ್ತೆ ಚಂಗನೆ ಮೇಲಕ್ಕೇರುವ ಚಪಲ. ಬಿದಿರುಗಳಾಚೆಬರಿಯ ಗುಡ್ಡ. ಗುಡ್ಡಗಳನ್ನು ದಾಟಿ ಮರಗಳು, ದಟ್ಟನೆಯ ಕಾಡು. ಆಕಾಶವನ್ನು ಮೋಡ ದಟ್ಟಿಸಿತೇನೋ ಎನ್ನುವ ಹಾಗೆ ಒಮ್ಮೆಲೆ ಕವಿಯುತ್ತಿದ್ದ ಕಾಡಿನ ಕತ್ತಲು. ಮರುಕ್ಷಣದಲ್ಲೇ,ಯಮಗಾತ್ರದ ಕೊಂಬೆಗಳ ಮೇಲೆ ಕುಳಿತು ನಗುವ ಸೂರ್ಯ. ಅಲ್ಲಲ್ಲಿ ಸುಟ್ಟು ಬೂದಿಯಾದ, ಅರೆಸುಟ್ಟು ಕರಿಯಾದ ಮರ ಗಿಡಗಳು, ಉರಿಯುತ್ತ, ಹೊಗೆಯಾಡುತ್ತ ಉಳಿದ ಮರದ ಕೊರಡು.ವನದೇವ ಅಲ್ಲಿ ಅಡುಗೆ ಬೇಯಿಸಿ ಉಂಡಿದ್ದನೆಂಬುದಕ್ಕೆ ಅದು ಕುರುಹು,ಮತ್ತೆ ಅಲ್ಲಲ್ಲಿ ಜುಳು ಜುಳು ಹರಿಯುವ ತಿರುತೊರೆ-ಉಪನದಿ; ಚಲಿಸದೆ ನಿಂತ ಕಪ್ಪು ನೀರಿನ ಕೆರೆ. ಕ್ಷಣವೂ ನಿಲ್ಲದೇ ಹೊರಟೇ ಹೋಗುವ ಜನರನ್ನು ಕಂಡು ಅಣಕಿಸುತ್ತಿದ್ದ ಕೋತಿಗಳು; ಕರಿ ಮುಸುಡಿನ ಕೆಂಪು ಮುಸುಡಿನ 'ಮಂಗ್ಯಾ.'ಆಗೊಮ್ಮೆ ಈಗೊಮ್ಮೆ ಹೆಬ್ಬಾವು ಬೀದಿ ದಾಟಿತ್ತೆಂಬುದಕ್ಕೆ ಸಾಕ್ಷ್ಯವಾಗಿ ಉಳಿದಿದ್ದ ಗುರುತು, ಹಾದಿಯ ಇಳಕಲು ನೇರವಾದುದಲ್ಲ; ಸುರುಳಿಯಾದ ಹಾವಿನಹಾಗೆ. ತಿರುತಿರುಗಿ ಹೊರಟಲ್ಲಿಗೇ ಬರುತ್ತಿರುವವೇನೋ ಎಂಬ ಭ್ರಮೆ ಹುಟ್ಟಿ
ಸುವಂತೆ. ಎದುರಿನಿಂದ ಮೋಟಾರು ಬಂದಾಗಲಂತೂ ಧೂಳಿನ ಬೆಟ್ಟ ಕರಗಿನೆಲಕ್ಕಿಳಿಯುವ ತನಕ ಒಂದು ಹೆಜ್ಜೆ ದೂರವೂ ಕಾಣಿಸದಂತಹ ಪರಿಸ್ಥಿತಿ.ರೊಯೋ ಎನ್ನುವ ಬಸ್ಸಿನ ಗೀತಕ್ಕೆ ಮಾರುಹೋಗಿ ಕುಳಿತವರಿಗೆ ತೂಕಡಿಕೆ-ಮಂಪರು-ನಿದ್ದೆ. ಪೋಲೀಸ್ ಅಧಿಕಾರಿಯ ಭುಜಕ್ಕೆ ತಲೆಯೊರಗಿಸುವ ಕೈದಿ.ಕೈದಿಯನ್ನು ಮರೆತು ನಿದ್ದೆ ಹೋಗುವ ಅಧಿಕಾರಿ... ಈ ಬೇಗೆಯಲ್ಲಿ ಆಗಾಗ್ಗೆಸಣ್ಣನೆ ಕದ್ದು ಬೀಸಿ ಕಚಗುಳಿ ಇಟ್ಟು ಕಣ್ಮರೆಯಾಗುತ್ತಿದ್ದ ತಂಗಾಳಿ.</br>
{{gap}}ನಾವು ಅಂಕೋಲ ತಲುಪಿದಾಗ ಕತ್ತಲಾಗಿತ್ತು. ಅಲ್ಲಿಂದ ಕಡಲಿನುದ್ದಕ್ಕೂ ಒಂದು ಗಂಟೆಯ ಹಾದಿ ಕಾರವಾರಕ್ಕೆ. ನಮ್ಮ ವಾಹನ-ಅಂದರೆ ಸರಕಾರಕ್ಕೆ ಸೇರಿದ ಪೋಲೀಸರ ವಾಹನ-ಬೆಳಕಿನ ಎರಡು ಕಣ್ಣುಗಳಿಂದ ಹಾದಿ ನೋಡುತ್ತಸಾಗಿತು.ಹುಣ್ಣಿಮೆಯನ್ನು ಸಮೀಪಿಸುತ್ತಿದ್ದ ಚಂದಿರ ಆಗಲೇ ಹಾಲು ಚೆಲ್ಲಿದ್ದ.<noinclude></noinclude>
02g7sfunpzsgjhdl9syrsi25lo3gcb9
ಪುಟ:KELAVU SANNA KATHEGALU.pdf/೭೦
104
20224
321113
250917
2026-05-20T05:52:45Z
Shreelatha.Halemane
7642
/* Validated */
321113
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=48|right=ನಿರಂಜನ: ಕೆಲವು ಸಣ್ಣ ಕಥೆಗಳು}}
ಕೊಟ್ಟ. ಮೂಲೆಯಲ್ಲಿ ಕರಿದಾದೊಂದು ಪೀಪಾಯಿ ಇತ್ತು. ಮೀನಿನ, ಹೆಂಡದ</br>
ವಾಸನೆ. ನನಗೆ ಉಸಿರುಕಟ್ಟಿತು.</br>
{{gap}}“ಒಳಗ್ಹೋಗಿ!”</br>
{{gap}}ಅಧಿಕಾರಿ ಬಹುವಚನದಿಂದ ಸಂಬೋಧಿಸಿದ್ದನೆಂದು, ಈತನೂ ಅಷ್ಟರ</br>
ಮಟ್ಟಿನ ಗೌರವವನ್ನಿತ್ತ.</br>
{{gap}}ಕಿರ್ರೆಂದು ಬಾಗಿಲು ಮುಚ್ಚಿತು. ಕೊಟಕ್ ಎಂದಿತು ಬಿಗಿದುಕೊಂಡ</br>ಬೀಗ. ದೀಪ ಮರೆಯಾಯಿತು. ಲಾಕಪ್ಪಿನೆದುರು ಮರದ ಪೀಠದ ಮೇಲೆ</br>ಬಂದೂಕುಧಾರಿಯಾದ ಪೋಲೀಸರವನು ಕಾವಲು ಕುಳಿತ. ಅಪಾಯಕಾರಿ</br>ಯಾದ ಕೈದಿಯನ್ನು ಅಷ್ಟು ದೂರದಿಂದ ತಂದಿದ್ದ ಇತರ ಪೋಲೀಸರು, ತಮ್ಮ</br>
ಕೆಲಸ ಮುಗಿಯಿತೆಂದು ಲೈನುಗಳಿಗೆ ಹೊರಟರು.</br>
{{gap}}ನನ್ನ ಚೀಲದಲ್ಲಿದ್ದುದು, ಹೊದ್ದುಕೊಳ್ಳಲೆಂದು ತಂದಿದ್ದ ಚಾದರ,</br>ಓದಲು ಪುಸ್ತಕಗಳು. ಆ ಚೀಲವನ್ನು ಕೈಲಿ ಹಿಡಿದೇ ಒಂದು ಕ್ಷಣ ದಿಗ್ಮೂಢ</br>ನಾಗಿ ಅಲ್ಲೇ ನಿಂತೆ. ಕತ್ತಲಲ್ಲೂ ಕಾಣಲು ಕಣ್ಣುಗಳು ಯತ್ನಿಸಿದುವು. ಕೂಡು</br>ದೊಡ್ಡಿಯಲ್ಲಿ ಮಲಗಿಕೊಂಡಿದ್ದ ಮಾನವ ಪ್ರಾಣಿಗಳು. ಬಗೆಬಗೆಯ ಗೊರಕೆಯ</br>ಸ್ವರಗಳು... ಯಾವುದೋ ಮೂಲೆಯಿಂದ ಮೂತ್ರದ ವಾಸನೆ ಬರುತ್ತಿತ್ತು....</br> ಗೋಡೆಯನ್ನು ಸಮೀಪಿಸಿ ಚಾದರವನ್ನು ಹಾಸಿದೆ. ಪುಸ್ತಕಗಳ ಚೀಲ ತಲೆ</br>ದಿಂಬಾಯಿತು. ಸೊಳ್ಳೆಗಳೆಲ್ಲ ಹೊಸಬನಾದ ನನ್ನ ಬಳಿಗೇ ನಾಲ್ಕೂ ಕಡೆಗಳಿಂದ</br>ಧಾವಿಸಿ ಬಂದು ನನ್ನ ಸುಖ ದುಃಖ ವಿಚಾರಿಸಿದುವು. ಲಜ್ಜೆಗೊಂಡು ನಾನು</br>ಅಂಗೈಗಳಿಂದ ಮುಖ ಮುಚ್ಚುವ ಹಾಗಾಯಿತು....</br>
{{gap}}ತೆರೆಗಳ ಸದ್ದು ಕೇಳಿಸುತ್ತಿತ್ತು ಈಗಲೂ; ಸ್ಟೇಷನ್ನಿನ ಆವರಣದ</br>ಹೊರಗಿದ್ದ ಯಾವುದೋ ಮರದ ಮಾತಿನಮಲ್ಲಿ ಎಲೆಗಳ ಕಿಚಕಿಚ ರವ,</br>ದೂರದ ಬೀದಿಯಲ್ಲಿ ಗಡಗಡನೆ ಹಾದು ಹೋದ ಮುರುಕಲು ಮೋಟಾರು...</br>ಯೋಚನೆ ಅತ್ತಿತ್ತ ಸುತ್ತಾಡಿ ಆಯಾಸಗೊಂಡು ದೇಹದ ಚಾವಣಿಯೊಳಕ್ಕೆ</br>
ಮರಳಿ ನುಸುಳಿತು.</br>
{{gap}}ಮನುಷ್ಯ ಅಂತರ್ಮುಖಿಯಾಗುವುದು ಇಂತಹ ಘಳಿಗೆಯಲ್ಲೆ!</br>
{{gap}}ನಿದ್ದೆ, ಬಹಳ ಹೊತ್ತು ಕಾಡಿಸಿದ ಬಳಿಕ ಶರಣು ಬಂತು.</br>
{{gap}}ರಾತ್ರಿ ಕಳೆದು ಬೆಳಕು ಬೀದಿಯಿಂದ ತೂರಿ ಬರುತ್ತಿದ್ದ ಸೂರ್ಯ ಕಿರಣ</br>ಗಳು. ಒಬ್ಬೊಬ್ಬರಾಗಿ ನಿದ್ದೆ ಕಳೆದು ಏಳುತ್ತಿದ್ದ ಆ ಜನ... ಕೊಂಕಣಿ ಮಾತು-</br>ಕನ್ನಡ. ಕೊಳೆಯಾಗಿದ್ದ ಬಟ್ಟೆಬರೆ. ನನ್ನನ್ನು ಕುರಿತು ಕುತೂಹಲದ ದೃಷ್ಟಿ,</br>ಅಲ್ಲಿ ಪ್ರಾತರ್ವಿಧಿಯ ಪ್ರಶ್ನೆಯಿಲ್ಲ. ಮುಖ ತೊಳೆಯಲು ನೀರಿಲ್ಲ. ನೆಲವನ್ನು</br><noinclude></noinclude>
i6cnit9kgnk6buom3udaampxuc1gdjh
ಪುಟ:KELAVU SANNA KATHEGALU.pdf/೭೧
104
20225
321114
251182
2026-05-20T05:54:00Z
Shreelatha.Halemane
7642
/* Validated */
321114
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಒಂದೇ ನಾಣ್ಯದ ಎರಡು ಮೈ|right=49}}
ತಗಲಿದ ಅಂಗೈಯನ್ನು ಎತ್ತಿ ನೋಡಿದೆ. ಧೂಳು ಮೆತ್ತಿಕೊಂಡಿತ್ತು. ಚಾದರವೂ</br>
ಕೆಂಪು, ಪ್ರವಾಸದಿಂದ ಕಂಗೆಟ್ಟಿದ್ದ ಬಿಳಿಯ ಪೋಷಾಕೂ ಕೆಂಪು. ನನ್ನ ಸ್ಥಿತಿ</br>
ಕಂಡು ನನಗೇ ನಗು ಬಂತು.</br>
{{gap}}ಅಲ್ಲಿದ್ದ ಕೈದಿಗಳಲ್ಲೊಬ್ಬ ಕೇಳಿದ:</br>
{{gap}}“ಯಾವೂರು?”</br>
{{gap}}ಆ ಯುವಕರಿಗೆಲ್ಲಾ ಆತನೆ ಹಿರಿಯನೆಂಬುದು ಸ್ಪಷ್ಟವಾಗಿತ್ತು.</br>
{{gap}}ನಾನು ಧ್ವನಿಯಲ್ಲಿ ಆತ್ಮೀಯತೆಯನ್ನು ತುಂಬಲು ಯತ್ನಿಸುತ್ತ,</br>
“ಮೈಸೂರು ಕಡೆ” ಎಂದೆ.</br>
{{gap}}ಇನ್ನೊಂದು ಪ್ರಶ್ನೆ ಬಂತು:</br>
{{gap}}“ಯಾವ ಕೇಸು?”</br>
{{gap}}ಅದನ್ನು ತಿಳಿಯ ಹೇಳುವುದು ಸುಲಭವಾಗಿರಲಿಲ್ಲ. ಆದರೂ ಪ್ರಯತ್ನ</br>
ಪಟ್ಟೆ. ಏನೋ ಬರೆದು ಸರಕಾರದ ಕೈದಿಯಾದೆನೆನ್ನುವುದನ್ನು ಅವರು ನಂಬು</br>ವುದು ಕಷ್ಟವಾಗಿತ್ತು.</br>
{{gap}}"ಅಂತೂ ನೀವು ಸರಕಾರದ ವಿರುದ್ಧ ತಾನೆ?” ಎಂದು ಆತ ಕೇಳಿದ.</br>
{{gap}}“ಹೌದು! ಹೌದು!”</br>
{{gap}}“ಹಾಗಾದರೆ, ನಾವೂ ನೀವೂ ಸ್ನೇಹಿತರೇ!”</br>
{{gap}}ಆ ಸ್ನೇಹಿತರು ತಮ್ಮ ಕತೆ ಹೇಳಿದರು.</br>ಪಾನನಿಷೇಧವಿದ್ದ ಕಾರವಾರ</br>ಪ್ರದೇಶಕ್ಕೆ ಗೋವಾದಿಂದ ವಿದೇಶೀ ಪಾನೀಯಗಳನ್ನು ಸಾಗಿಸುತ್ತಿದ್ದರೆಂದು ಆ</br>ಏಳು ಜನರನ್ನೂ ಹಿಡಿದಿದ್ದರಂತೆ.</br>
{{gap}}ಅದು ಗೌರವದ ಕೆಲಸವೆನ್ನುವಂತೆ ಮುಖ್ಯಸ್ಥ ಹೇಳಿದ:</br>
{{gap}}“ಇದೆಲ್ಲಾ ನಮಗೆ ಹೊಸತಲ್ಲ. ನಮ್ಮ ನಾಯಕರಿದ್ದಾರೆ. ಬಂದು</br>ಒಂದು ಮಾತು ಹೇಳಿದರೆ ಸಾಕು. ಕೇಸು ಬಿಟ್ಹೋಗ್ತದೆ. ಹಿಂದೆಯೂ ಎಷ್ಟೋ</br>ಸಲ...”</br>
{{gap}}ಅವರ ನಾಯಕರ ಪ್ರತಾಪದ ಕಥೆ ಸ್ವಾರಸ್ಯಪೂರ್ಣವಾಗಿತ್ತು.</br>
{{gap}}"ಅವರ ಹೆಸರೇನು?” ಎಂದು ನಾನು ಕೇಳಿದೆ.</br>
{{gap}}“ನಾಯಕ್ ಅನ್ನೋದೆ ಅವರ ಹೆಸರು” ಎಂದ ಆತ...ಆದರೆ ಅವನ</br>
ಕಣ್ಣಂಚಿನಲ್ಲಿ ತುಂಟತನದ ನಗೆಯನ್ನು ಕಂಡಂತಾಗಿ, ನನಗೆ ಬೇಸರವೆನಿಸಿತು.</br>
{{gap}}ಪ್ರಭಾವಶಾಲಿಗಳಾದ ಸಮರ್ಥರ ಕಥೆ ಯಾರಿಗೆ ತಿಳಿಯದು? ಇವರ</br>
ನಾಯಕನೂ ಅಂತಹ ವ್ಯಕ್ತಿಯಾಗಿರಬಹುದು ಎಂದುಕೊಂಡೆ ನಾನು. ಎತ್ತರದ</br>
ದೇಹ, ಅಗಲವಾದ ಎದೆ, ನೀಳವಾದ ಬಾಹು...
{{Right|7}}<noinclude></noinclude>
3nkcj37mu0zhs63j3t458tz2qomceu4
ಪುಟ:KELAVU SANNA KATHEGALU.pdf/೭೨
104
20226
321115
251194
2026-05-20T05:54:44Z
Shreelatha.Halemane
7642
/* Validated */
321115
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=50|right=ನಿರಂಜನ: ಕೆಲವು ಸಣ್ಣ ಕಥೆಗಳು}}
{{gap}}ಸ್ವಲ್ಪ ಹೊತ್ತಿನಲ್ಲಿ ಸರಪಳಿ ಹಾಕಿದ ಸೀಮೆ ನಾಯಿಯೊಡನೆ ಕುಳ್ಳಗಿನ,</br>ಮುದುಡಿದ ಎದೆಯ ವ್ಯಕ್ತಿಯೊಬ್ಬ ಬಂದ. ಎಣ್ಣೆ ನೀರು ಸೋ೦ಕಿಯೇ ಇಲ್ಲ</br>ವೇನೋ ಎನ್ನುವಂತಹ ಒರಟಾದ ತಲೆ ಕೂದಲು. ಪುಟ್ಟ ಮುಖದಲ್ಲಿ ಪುಟ್ಟ</br>ಬಾಯಿ. ನಾಲ್ಕಾರು ದಿನದಿಂದ ಬೆಳೆದಿದ್ದ ಕುರುಚಲು ಗಡ್ಡ. ಚಪ್ಪಲಿ</br>
ಪಾಯಜಾಮ, ಶರಟು. ಯಾವುದೋ ದೊಡ್ಡವರ ಮನೆಯ ನಾಯಿಯನ್ನು</br>'ವಾಕಿಂಗ್' ಕರೆದೊಯ್ಯುತ್ತಿರುವ ಜವಾನ-ಎಂದು ಯಾರಾದರೂ ಭಾವಿಸುವ</br>ಹಾಗಿದ್ದ.</br>
{{gap}}ಆದರೆ ಆತ ಬಂದೊಡನೆಯೇ ಲಾಕಪ್ಪಿನಲ್ಲಿದ್ದ ಏಳು ಜನರೂ ಎದ್ದು</br>ನಿಂತರು. ನೀರವತೆ, ವಿನಮ್ರತೆ, ಗೌರವ; ಆತ್ಮೀಯತೆಯ ಪಿಸುದನಿ. ಆತನೋ</br>ಮಿತಭಾಷಿ. ಚುಟುಕು ಪ್ರಶ್ನೆಗಳು-ಚುಟುಕು ನಿರ್ದೇಶ... ಪೋಲೀಸರೂ ಆತ</br>ನೆದುರು ಗೌರವದಿಂದ ಎದ್ದು ನಿಂತಿದ್ದರು. ಆತ ಯಾರಿರಬಹುದೆಂದು ಊಹಿಸು</br>ವುದು ನನಗೆ ಕಷ್ಟವಾಗಲಿಲ್ಲ. ಆ ನಾಯಕನನ್ನು ಕುರಿತು ನಾನು ಮಾಡಿದ್ದ</br>ಎಣಿಕೆ ತಪ್ಪಾಯಿತಲ್ಲಾ ಎಂದು ನಾಚುವಂತಾಯಿತು.</br>
{{gap}}ಆತ ನನ್ನನ್ನೂ ಒಮ್ಮೆ ನೋಡಿದ. ಆದರೆ ವಿವರ ತಿಳಿದ ಬಳಿಕ 'ಹುಂ!'</br>ಎಂದನೇ ಹೊರತು, ನನ್ನ ವಿಷಯದಲ್ಲಿ ಆಸಕ್ತಿ ತೋರಲಿಲ್ಲ.</br>
{{gap}}ಬಿಂದಿಗೆಯಲ್ಲಿ ನೀರು ಬಂತು. ಮೂತ್ರ ಶಂಕೆಗೆ ಕುಳಿತಿದ್ದ ಮೂಲೆಯಲ್ಲೆ</br>ಅವರು ಮುಖ ತೊಳೆದರು. ಹೋಟೆಲಿನಿಂದ ಹೇರಳವಾಗಿ ಬಂದ ತಿಂಡಿ ತಿಂದರು.</br>ಚಹಾ ಕುಡಿದರು. ಅವರ ಆಹ್ವಾನವನ್ನು ಸ್ವೀಕರಿಸಲೂ ಆಗದೆ, ನಿರಾಕರಿಸಲೂ</br>ಆಗದೆ, ಒಂದು ಕಪ್ ಚಹವನ್ನು ನಾನು ಕೈಗೆತ್ತಿಕೊಂಡೆ.</br>
{{gap}}ಹೊರಟು ಹೋಗಿದ್ದ ನಾಯಕ ಬಿಸಿಲೇರಿದಾಗ ಮತ್ತೆ ಬಂದ. ಜಾಮೀ</br>ನಿನ ಮೇಲೆ ಅವರನ್ನೆಲ್ಲ ಬಿಡುಗಡೆ ಮಾಡಲು ಏರ್ಪಾಟಾಗಿತ್ತು</br>.
{{gap}}ಲಾಕಪ್ಪಿನಲ್ಲಿ ಕರಿಯ ಪೀಪಾಯಿ ಮತ್ತು ನಾನೂ-ಇಬ್ಬರೇ ಉಳಿದೆವು.</br>
{{gap}}ಆಗ ಹೊರಗೆ ಕಾವಲಿದ್ದ ಪೋಲೀಸರವನು ಹೇಳಿದ:</br>
{{gap}}“ಈ ನಾಯಕನ ಪ್ರತಾಪ ಏನ್ಹೇಳ್ತೀರಾ ಸ್ವಾಮಿ? ಕಾನೂನು ಕಸಕ್ಕೆ</br>ಸಮ ಟೋನಿ ಅಂತ್ಲೂ
ಆತನ್ನ ಕರೀತಾರೆ. ಫಿಲಿಪ್ ಅಂತೂ ಹೆಸರಿದೆ.</br>ಬೇರೆಯೂ ಏನೇನೋ ಹೆಸರು. ಸಾರಾಯಿ, ಗಡಿಯಾರ, ಪೆನ್ನು, ಬಂಗಾರ-</br>ಸ್ವಾಮಿ ಬಂಗಾರ-ಔಷಧಿ, ಅದೇನೇನೋ ಗೋವಾದಿಂದ ಈಚೆಗೆ</br>
ಸಾಗಿಸ್ತಾನೆ, ಒಂದು ನೂರು ಜನರನ್ನ ಇಟ್ಕಂಡು ಸಾಕ್ತಾನೆ, ನಾಲ್ಕು</br>ದೋಣಿಗಳಿವೆ. ಒಂದು ಸ್ಟೀಮ್ ಲಾಂಚಿದೆ. ನೋಡೋಕೆ ನಮ್ಮ ಜನರ </br>ಹಾಗಿದಾನೆ. ಆದರೆ ಯಾವ ದೇಶದೋನೂಂತ ಹೇಳೋದೆ ಕಷ್ಟ. ಇವತ್ತು</br><noinclude></noinclude>
d68wa1tasbw7tqbctoj3qnd94p4up7h
ಪುಟ:KELAVU SANNA KATHEGALU.pdf/೭೩
104
20227
321117
252138
2026-05-20T05:55:52Z
Shreelatha.Halemane
7642
/* Validated */
321117
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|ಒಂದೇ ನಾಣ್ಯದ ಎರಡು ಮೈ||51}}</small></noinclude>ಇಲ್ಲಿರಾನೆ. ನಾಳೆ ಗೋವಾದಲ್ಲಿ, ನಾಡದ್ದು ಲೋಂಡಾದಲ್ಲಿ. ದೊಡ್ಡ ದೊಡ್ಡ ಅಧಿಕಾರಿಗಳು, ಸಾಹುಕಾರ್ರು ಎಲ್ರಿಗೂ ಬೇಕಾದವನೇ. ಏನ್ಹೇಳ್ತೀರಾ ಅವನ ದರ್ಬಾರು...! ಬಡ ಕನಿಷ್ಠ ಬಿಲ್ಲನಿಗೆ ನನಗ್ಯಾಕ್ಬೇಕು? ಮಾತ್ಸ ಹೇಳ್ದೆ ಅಷ್ಟೆ... ಯಾರಿಗೂ ಹೇಳ್ಬೇಡಿಪ್ಪ ಸದ್ಯಃ....ಹೂಂ... ನಿಮಗೆ ಯಾರೂ ಜಾವಿನು ನಿಲ್ಲೋದಿಲ್ವೊ?"
{{gap}}ಉತ್ತರ ಕೊಡಲಾಗದೆ ಮುಗುಳು ನಕ್ಕೆ ನಾನು...
:.........................
{{gap}}ಇದು ಹಲವು ವರ್ಷಗಳ ಹಿಂದಿನ ಮಾತು.
{{C|{{x-larger|'''೨'''}}}}
{{gap}}ಪುನಃ ಮೊನ್ನೆಯೊಮ್ಮೆ ಕಾರವಾರಕ್ಕೆ ಹೋಗಿದ್ದೆ 'ಪರಮ ಸ್ಟೇಹಿತರಿಲ್ಲದೆ,? ನಾನೊಬ್ಬನೇ, ಸ್ವತಂತ್ರ ಪ್ರಜೆಯಾಗಿ. ಅದೇ ಹಾದಿ. ಅದೇ ಬಿದಿರು ಮೆಳೆಯ ಕಮಾನು ಉದ್ದಕ್ಕೂ. ದೂರದಿಂದ ನೀಲಿಯಾಗಿ, ಹತ್ತಿರ ಕಪ್ಪಾಗಿ, ತೋರುವ ಹೆಸಿರು ಗಿಡಮರಗಳ ದಟ್ಟಡವಿ. ಹಿಂದಿನ ಕಿರುತೊರೆ, ಉಪನದಿ, ಕೆರೆಗಳೇ.
{{gap}}ಸರಕಾರಿ ಸಾರಿಗೆಯ ಆ ದೊಡ್ಡ ವಾಹನದಲ್ಲಿ ಮಾತುಕತೆಯಾಗುತ್ತಿತ್ತು.
{{gap}}“ಹುಬ್ಬಳ್ಳಿ-ಕಾರವಾರ ರಸ್ತೆಗೆ ಡಾಮರು ಹಾಕ್ತಾರಂತ್ರಿ."
{{gap}}"ಯಾರೋ ಅಂದ್ರು-ರೈಲ್ವೆ ಹಾಕಿಸೋ ಯೋಜನೇನೂ ಅದೆ ಅಂತೆ."
{{gap}}ನಾಳೆಯ ಕನಸು. ಸಾಧ್ಯತೆಯ ಮಾತು. ರಾಷ್ಟ್ರ ಕಟ್ಟುವ ಯೋಚನೆ. ಯೋಜನೆಗಳ ಯೋಚನೆ. ಕ್ಷಣಕಾಲವಾದರೂ ಕಚಗುಳಿ ಇಡುತ್ತಿದ್ದ ತಣುಪು ಗಾಳಿಯಷ್ಟೆ ಹಿತಕರವಾದ ಮಾತು.
{{gap}}ಆದಕ್ಕೆ ಅದನ್ನು ಮೀರಿಸುವ ಹಾಗೆ ಆರಂಭವಾಯಿತೊಂದು ಸಂಭಾಷಣೆ- ಗೋವಾಕ್ಕೆ ಸಂಬಂಧಿಸಿ. ಇಬ್ಬರ ಮಾತಿಗೆ ಎಲ್ಲರೂ ಧ್ವನಿ ಕೂಡಿಸುವವರೇ. ಕಾತರ__ಉದ್ವೇಗ__ಶಂಕೆ__ಕನಿಕರ...
{{gap}}“ಸ್ವಾತಂತ್ರ್ಯದ ದಿನ ಹತ್ತು ಸಾವಿರ ಜನ ಹೋಗ್ತಾರಂತ್ರೀ."
{{gap}}“ಅವರು ಕರುಣೆ ಇಲ್ದೋರು ಕಣ್ರೀ. ನಾಗರಿಕ ಭಾಷೆ ಅವರಿಗೆ ಎಲ್ಲಿ ಅರ್ಥವಾದೀತು?”
{{gap}}“ಏನೇ ಹೇಳಿ ಗೋವಾ ಸ್ವತಂತ್ರವಾಗೋದು ಸುಲಭವಲ್ಲ."{{nop}}<noinclude></noinclude>
bw6420svanqbw03l8drk0zlosp57eoh
ಪುಟ:KELAVU SANNA KATHEGALU.pdf/೭೪
104
20228
321157
252139
2026-05-20T06:36:08Z
Shreelatha.Halemane
7642
/* Validated */
321157
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|52||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>{{gap}}“ಸುಲಭವೋ ಕಷ್ಟವೋ ನಮ್ಮ ಕರ್ತವ್ಯ ನಾವು ಮಾಡಬೇಕು..."
{{gap}}''ಒಂದಲ್ಲ ಒಂದು ದಿವ್ಸ ಗೋವಾ ಭಾರತಕ್ಕೆ ಖಂಡಿತ ಸೇರ್ಕೊಳ್ಳುತ್ತೆ. ಗ್ಯಾರಂಟಿ-ನೋಡ್ಕೊಳ್ಳಿ!"
{{gap}}"ವಾಹೆವ್ವಾ!"
{{gap}}ಮಾತು ನಿಜ. ಆದರೂ ಜೀವಂತ ರಾಷ್ಟ್ರದ ಉಸಿರಾಡುವ ಪ್ರಜೆಗಳು ಅಡುವ ಮಾತು. ಸಿದ್ಧಿ ಹೊಂದಿದ ಸುಸ್ವರವಲ್ಲದೆ ಹೋದರೂ ಸಾಕಷ್ಟು ಇಂಪಾದ ಧ್ವನಿಯೇ. ನಾವು ಸ್ವತಂತ್ರರೆನ್ನುವುದಕ್ಕೆ ಸಾಕ್ಷ್ಯವೀಯುವಂತಹ ಲೋಕ ಪ್ರಶ್ನೆ.
{{gap}}ನಿಲ್ದಾಣದಲ್ಲಿ ಕಾದಿದ್ದ ಕಾರವಾರದ ಬರೆಹಗಾರ ಗೆಳೆಯರೊಬ್ಬರೊಡನೆ ಅವರ ಮನೆಗೆ ಹೊರಟೆ. ಅಲ್ಲಿಯೇ ಪೋಲೀಸ್ ಸ್ಟೇಷನ್ನು ಜಡವಾಗಿ ನಿಂತಿತ್ತು. ನಾನು ಮರೆಯಲಾಗದ ಕಂಬಿಗಳು-ಲಾಕಪ್ಪು-ಒಳಗಿದ್ದ ಏಳುಜನ-ಪೀಪಾಯಿ-ನಾಯಕನ ಕಥೆ...
{{gap}}ಸಂಜೆ ಕಡಲ ತೀರದುದ್ದಕ್ಕೂ ನಾನೂ ಆ ಗೆಳೆಯರೂ ನಡೆದುಹೋದಿವು. ದೂರದಲ್ಲೊಂದು ಹಡಗು. ಅದೇ ಆಗ ಬೆಳಕು ಹಾಯಿಸತೊಡಗಿದ್ದ ದೀಪಸ್ತಂಭ. ಭೋರ್ಗರೆಯುತ್ತಿದ್ದ ಕಡಲು. ದಡ ಸೇರಿದೊಡನೆ ಬೆನ್ನು ತಿರುಗಿಸುತ್ತಿದ್ದ ಉತ್ತರಕುಮಾರ ತೆರೆಗಳು. ಡಬಾಲ್-ಸುಯ್, ಡಬಾಲ್-ಸುಯ್, ಜುಳು ಜುಳು ಜುಳು...
{{gap}}ಇಷ್ಟಿದ್ವರೂ ನಾವು ಆಡುತ್ತಿದ್ಹುದು ಗೋವಾದ ಮಾತು.
{{gap}}"ಹಾಯಾಗಿ ನಾಲ್ಕು ದಿನ ಇರೋಣ ಅಂತ ನೀವು ಬಂದರೆ ಇಲ್ಲಿ ಈ ಗದ್ದಲ" ಎಂದರು ಗೆಳೆಯರು.
{{gap}}ನಾನೆಂದೆ:
{{gap}}“ಹಾಗೇನಿಲ್ಲ. ನನ್ಮು ಜನ ಹೊಸ ಇತಿಹಾಸ ಬರೀತಿರುವಾಗ ಇಷ್ಟು ಹತ್ತಿರ ನಿಂತು ನಿರೀಕ್ಷಿಸೋದು ದೊಡ್ಡ ಅವಕಾಶವೇ."
{{gap}}ಅನರು ಹಿಂದಿನ ದಿನ ಕಾಳೀನದಿಯನ್ನು ದಾಟಿ ಸದಾಶಿವಗಡಕ್ಕೆ ಹೋಗಿದ್ದರಂತೆ. ಮಾಜಾಳಿ ಅಲ್ಲಿಗೆ ಬಲು ಸಮೀಪ. ಗೋವಾದ ಗಡಿ ಆ ಊರು.
{{gap}}“ಕಣ್ಣಾರೆ ಕಂಡೆ-ಅಬ್ಬ! ಒಂದೇ ಹೊಟ್ಟೇಲಿ ಹುಟ್ಟಿದೋರು ನಾವು ಅಂತ ಕೂಗ್ಳೊಂಡು ನಮ್ಮ ರಾಷ್ಟ್ರಧ್ವಜ ಹಿಡ್ಕೊಂಡು ಹೋಗ್ತಿದ್ರೆ, ಆ ಕಡೆಯಿಂದ ಎಂಥಾ ಹಿಂಸೆ ಕೊಡ್ತಿದ್ರೂಂತ! ಲಾಠಿ ಬೀಸಿ ಶರೀರ ನಬ್ಚು ಗುಜ್ಜು ಆಗೋ ಹಾಗೆ ಹೊಡಿಯೋದು. ನೆತ್ತಿ ಕೂದಲು ಕೀಳೋದು. ಮೀಸೆ ಸುಡೋದು. ಹಲ್ಲು ಮುರಿಯೋದು, ಹೊಲಸು ಮಾತು, ಹೊಲಸು ಬೈಗಳು. ಥೂ-ಥೂ-<noinclude></noinclude>
edhc6gh7bqz5u7ro97pmaqf5evsfgxw
ಪುಟ:KELAVU SANNA KATHEGALU.pdf/೭೫
104
20229
321155
252140
2026-05-20T06:31:51Z
Pragathi. BH
7585
/* Validated */
321155
proofread-page
text/x-wiki
<noinclude><pagequality level="4" user="Pragathi. BH" /><small>{{rh|ಒಂದೇ ನಾಣ್ಯದ ಎರಡು ಮೈ||53}}</small></noinclude>ಥೂ-ನೆನೆಸ್ಕೊಂಡ್ರೆ ಮೈ ಉರಿಯುತ್ತೆ."
ಅಷ್ಟು ಹೇಳಿ, "ಹೂಂ' ಎಂದು ನಿಟ್ಟುಸಿರುಬಿಟ್ಟು, ಅವರು ಸುಮ್ಮನಾದರು.
ಇಬ್ಬರನ್ನೂ ಬೇಸರದ ಮಹಾ ಸಾಗರದಲ್ಲಿ ಅದ್ದಿತು ಆ ಮೌನ. ನಡೆದು ಸಾಕಾಗಿ ಮರಳದಿಣ್ಣೆಯ ಮೇಲೆ ಕುಳಿತೆವು. ಸವಿೂಪದಲ್ಲೆ ಎಳೆಯ ಹುಡುಗರು ಆಟನಾಡುತ್ತಿದ್ದರು. ಒದ್ದೆ ಮರಳನ್ನು ತಟ್ಟಿ ಕಟ್ಟುತ್ತಿದ್ದ ಗೂಡು ಮನೆಗಳು. ಬೇರೇನೂ ಮಾಡಲಾಗದಿದ್ದರೂ ಆ ಮನೆಗಳನ್ನು ಕಬಳಿಸಿ, ಮಕ್ಕಳನ್ನು ಹೆದರಿಸಿ, ಪಿಸಿ ಪಿಸಿ ಪಿಸಿ ಎಂದು ನಗುತ್ತ ಹಿಂತಿರುಗುತ್ತಿದ್ದ ತೆರೆಗಳು. ಪುನಃ ಮಕ್ಕಳ ಯತ್ನ. ಪುನಃ ಕಣ್ಣುಮುಚ್ಚಾಲೆ...
ಅಟ್ಟಹಾಸ ಮಾಡುತ್ತ, ಬಲು ದೂರದಿಂದಲೇ ಗರ್ಜಿಸುತ್ತ ತೆರೆಯೊಂದು ಬಂತು. ಆ ಸದ್ದನ್ನು ಭೇದಿಸಿಕೊಂಡು ಗಟ್ಟಿಯಾದ ಸ್ವರದಲ್ಲಿ ನನ್ನ ಸ್ನೇಹಿತರೆಂದರು:
“ಗುಂಡಾಗಳ್ನ ಬಾಡ್ಗೆಗೆ ನೇಮಿಸ್ಕೊಂಡಿದಾರೆ. ಪೋಲಿ ಅಲೆಯೋ ಜನಕೈಲ್ಲ, ಕಳ್ಳಕಾಕರಿಗೆಲ್ಲ, ಈಗ ಕೆಲಸ. ಏನ್ಸೇಳ್ತೀರಾ....?
ಮಾರನೆಯ ದಿನ ಸ್ನೇಹಿತರಿಗೆ ಬಿಡುವಿತ್ತು. ನದಿ ದಾಟಿ ಸುತ್ತಾಡಿ ಬರೋಣವೆಂದು ನಾವು ಹೊರಟಿವು.
“ಕೋಡಿಬಾಗದ ಈ ದಡದಲ್ಲಿ ದೋಣಿ ಇರಲಿಲ್ಲ. ಆಚೆಯ ದಡದಿಂದ ಅದೇ ತಾನೆ ಅದು ಹೊರಡುತ್ತಿತ್ತು.”
ನಮ್ಮ ಸಮೀಪದಲ್ಲೆ ಹತ್ತು ಜನ ಸಶಸ್ತ್ರ ಪೋಲೀಸರು ದಡದ ರಕ್ಷಣೆಗೆ ನಿಂತಿದ್ದರು.
“ಇವತ್ತು ಸತ್ಯಾಗ್ರಹ ಇದೆಯೇನಪ್ಪಾ?” ಎಂದರು ನನ್ನ ಸ್ನೇಹಿತರು. 'ಹೂಂ ಸ್ವಾಮೀ, ಮಧ್ಯ್ಯಾಹ್ನ ಒಂದು ತಂಡ ಹೊರಡುತ್ತಂತೆ.'
ಆ ಕ್ಷಣವೇ ಅವರಲ್ಲೊಬ್ಬ ಪೋಲೀಸಿನನನು ನನಗೆ ಸಲಾಂ ಮಾಡಿದ. ಬಡಕಲು ಮುಖದ ಮೇಲಿನ ನಿರ್ದುಷ್ಟವಾದ ನಗೆ. ಆತನೇ-ವರ್ಷಗಳ ಹಿಂದೆ ಬಂದೂಕು ಹಿಡಿದು ನಾವಿದ್ದ ಲಾಕಪ್ಟಿನೆದುರು ಕಾವಲು ಕುಳಿತಿದ್ದ ವ್ಯಕ್ತಿ. ಅನಂತರವೂ ವಿಚಾರಣೆಗೆಂದು ಕಾರವಾರಕ್ಕೆ ಬರುತ್ತಿದ್ದಾಗಲೆಲ್ಲ ಅವನನ್ನು ಕಂಡಿದ್ದೆ. ಆತ ಕೇಳಿದ:
“ಆರೋಗ್ಯವಾಗಿದೀರಾ ಸ್ವಾಮಿ?”
“ಇಷ್ಟರ ಮಟ್ಟಗಿದೀನಪ್ಪ-ನೀವೆಲ್ಲಾ ಜೆನ್ನಾಗಿದ್ದೀರೋ?"
ಆತ ಪುನಃ ಹಲ್ಲುಕಿರಿದ.{{nop}}<noinclude></noinclude>
ggt0tlgpvko9t7wa7wa7nnhskp717us
321158
321155
2026-05-20T06:36:08Z
Pragathi. BH
7585
321158
proofread-page
text/x-wiki
<noinclude><pagequality level="4" user="Pragathi. BH" /><small>{{rh|ಒಂದೇ ನಾಣ್ಯದ ಎರಡು ಮೈ||53}}</small></noinclude>ಥೂ-ನೆನೆಸ್ಕೊಂಡ್ರೆ ಮೈ ಉರಿಯುತ್ತೆ."
{{gap}}ಅಷ್ಟು ಹೇಳಿ, "ಹೂಂ' ಎಂದು ನಿಟ್ಟುಸಿರುಬಿಟ್ಟು, ಅವರು ಸುಮ್ಮನಾದರು.
{{gap}}ಇಬ್ಬರನ್ನೂ ಬೇಸರದ ಮಹಾ ಸಾಗರದಲ್ಲಿ ಅದ್ದಿತು ಆ ಮೌನ. ನಡೆದು ಸಾಕಾಗಿ ಮರಳದಿಣ್ಣೆಯ ಮೇಲೆ ಕುಳಿತೆವು. ಸವಿೂಪದಲ್ಲೆ ಎಳೆಯ ಹುಡುಗರು ಆಟನಾಡುತ್ತಿದ್ದರು. ಒದ್ದೆ ಮರಳನ್ನು ತಟ್ಟಿ ಕಟ್ಟುತ್ತಿದ್ದ ಗೂಡು ಮನೆಗಳು. ಬೇರೇನೂ ಮಾಡಲಾಗದಿದ್ದರೂ ಆ ಮನೆಗಳನ್ನು ಕಬಳಿಸಿ, ಮಕ್ಕಳನ್ನು ಹೆದರಿಸಿ, ಪಿಸಿ ಪಿಸಿ ಪಿಸಿ ಎಂದು ನಗುತ್ತ ಹಿಂತಿರುಗುತ್ತಿದ್ದ ತೆರೆಗಳು. ಪುನಃ ಮಕ್ಕಳ ಯತ್ನ. ಪುನಃ ಕಣ್ಣುಮುಚ್ಚಾಲೆ...
{{gap}}ಅಟ್ಟಹಾಸ ಮಾಡುತ್ತ, ಬಲು ದೂರದಿಂದಲೇ ಗರ್ಜಿಸುತ್ತ ತೆರೆಯೊಂದು ಬಂತು. ಆ ಸದ್ದನ್ನು ಭೇದಿಸಿಕೊಂಡು ಗಟ್ಟಿಯಾದ ಸ್ವರದಲ್ಲಿ ನನ್ನ ಸ್ನೇಹಿತರೆಂದರು:
{{gap}}“ಗುಂಡಾಗಳ್ನ ಬಾಡ್ಗೆಗೆ ನೇಮಿಸ್ಕೊಂಡಿದಾರೆ. ಪೋಲಿ ಅಲೆಯೋ ಜನಕೈಲ್ಲ, ಕಳ್ಳಕಾಕರಿಗೆಲ್ಲ, ಈಗ ಕೆಲಸ. ಏನ್ಸೇಳ್ತೀರಾ....?
{{gap}}ಮಾರನೆಯ ದಿನ ಸ್ನೇಹಿತರಿಗೆ ಬಿಡುವಿತ್ತು. ನದಿ ದಾಟಿ ಸುತ್ತಾಡಿ ಬರೋಣವೆಂದು ನಾವು ಹೊರಟಿವು.
{{gap}}“ಕೋಡಿಬಾಗದ ಈ ದಡದಲ್ಲಿ ದೋಣಿ ಇರಲಿಲ್ಲ. ಆಚೆಯ ದಡದಿಂದ ಅದೇ ತಾನೆ ಅದು ಹೊರಡುತ್ತಿತ್ತು.”
ನ{{gap}}ಮ್ಮ ಸಮೀಪದಲ್ಲೆ ಹತ್ತು ಜನ ಸಶಸ್ತ್ರ ಪೋಲೀಸರು ದಡದ ರಕ್ಷಣೆಗೆ ನಿಂತಿದ್ದರು.
{{gap}}“ಇವತ್ತು ಸತ್ಯಾಗ್ರಹ ಇದೆಯೇನಪ್ಪಾ?” ಎಂದರು ನನ್ನ ಸ್ನೇಹಿತರು. 'ಹೂಂ ಸ್ವಾಮೀ, ಮಧ್ಯ್ಯಾಹ್ನ ಒಂದು ತಂಡ ಹೊರಡುತ್ತಂತೆ.'
{{gap}}ಆ ಕ್ಷಣವೇ ಅವರಲ್ಲೊಬ್ಬ ಪೋಲೀಸಿನನನು ನನಗೆ ಸಲಾಂ ಮಾಡಿದ. ಬಡಕಲು ಮುಖದ ಮೇಲಿನ ನಿರ್ದುಷ್ಟವಾದ ನಗೆ. ಆತನೇ-ವರ್ಷಗಳ ಹಿಂದೆ ಬಂದೂಕು ಹಿಡಿದು ನಾವಿದ್ದ ಲಾಕಪ್ಟಿನೆದುರು ಕಾವಲು ಕುಳಿತಿದ್ದ ವ್ಯಕ್ತಿ. ಅನಂತರವೂ ವಿಚಾರಣೆಗೆಂದು ಕಾರವಾರಕ್ಕೆ ಬರುತ್ತಿದ್ದಾಗಲೆಲ್ಲ ಅವನನ್ನು ಕಂಡಿದ್ದೆ. ಆತ ಕೇಳಿದ:
{{gap}}“ಆರೋಗ್ಯವಾಗಿದೀರಾ ಸ್ವಾಮಿ?”
{{gap}}“ಇಷ್ಟರ ಮಟ್ಟಗಿದೀನಪ್ಪ-ನೀವೆಲ್ಲಾ ಜೆನ್ನಾಗಿದ್ದೀರೋ?"
{{gap}}ಆತ ಪುನಃ ಹಲ್ಲುಕಿರಿದ.{{nop}}<noinclude></noinclude>
4z32fcy50usmkru2jsq21a447pmc9wm
ಪುಟ:KELAVU SANNA KATHEGALU.pdf/೭೬
104
20230
321159
252141
2026-05-20T06:37:42Z
Pragathi. BH
7585
/* Validated */
321159
proofread-page
text/x-wiki
<noinclude><pagequality level="4" user="Pragathi. BH" /><small>{{rh|54||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>
{{gap}}ದೋಣಿ ಇನ್ನೂ ಎಷ್ಟೋ ದೂರದಲ್ಲಿತ್ತೆಂದು ಆ ಪೋಲೀಸನೊಡನೆ ನಾನು ಮಾತನಾಡುತ್ತ ನಿಂತೆ.
{{gap}}ಗಂಭೀರ ಧ್ವನಿಯಲ್ಲಿ ಪ್ರತಿಯೊಂದು ಮಾತನ್ನೂ ತೂಗಿ ತೂಗಿ ಆತನೆಂದ:
{{gap}}“ಯುದ್ಧ ಶುರುವಾದರೂ ಆಗ್ಬಹುದು."
{{gap}}ನನಗೆ ನಗು ಬಂತು. ತನ್ನ ಮಾತಿಗೆ ನಾನು ಬೆಲೆ ಕೊಡಲಿಲ್ಲವೆಂದು ಆತನಿಗೆ ಬೇಸರವೇನೂ ಆಗಲಿಲ್ಲ. ಯೋಚಿಸುತ್ತಿದ್ದಂತೆ ಹಣೆಯನ್ನು ನೆರಿಗೆ ಕಟ್ಟುತ್ತ ಆತ ಹೇಳಿದ.
{{gap}}“ಬಹಳ ಕಷ್ಟ. ಅವರು ಸಿದ್ಧವಾಗಿದಾರೆ. ಎಂಥೆಂಥೋರೆಲ್ಲ-ನೋಡಿ, ಆ ನಾಯಕ. ಹ್ಞಾ! ನಿಮಗೆ ಆವತ್ತು ಹೇಳಿರ್ಲಿಲ್ವೆ ಅವನ ವಿಷಯ?"
{{gap}}ನನ್ನ ಕುಶೂಹಲ ಕೆರಳಿತು.
{{gap}}“ಯಾರು? ಆ ನಾಯಕ? ಟೋನಿ? ಏನಾಯ್ತು?”
{{gap}}"ನಿಮಗೆ ಗೊತ್ತೇ ಇಲ್ವೇನು? ಈ ಭಾಗದಲ್ಲೆಲ್ಲ ಆಚೆ ಕಡೆ ಆವನದೇ ರಕ್ಷಣೆ. ಈಗ ಕಮಾಂಡರ್ ಆಗಿದಾನೆ. ಆ ನಾಯಿಗಳಿಗೆಲ್ಲಾ ಯೂನಿಫಾರ್ಮ್ ಕೊಟ್ಟಿದಾನೆ. ಬಂದೂಕು ಸಹ. ಕಳ್ಳ ಸಾಮಾನು ಸಾಗ್ಸೋ ಕೆಲಸ ಮಾಡಿ ಅವನ ಕೂಳು ತಿನ್ತಿದ್ದೋರೆಲ್ಲ ಈಗ ಸೈನಿಕರು. ಹ್ಯಾಗಿದೆ? ಹ್ಞೆ? ಅಯ್ಯೋ!"
{{gap}}ಈ ಮಾತುತತೆಗೆ ವಿಸ್ಮಯದಿಂದಲೂ ಆಸಕ್ತಿಯಿಂದಲೂ *ಕಿವಿಗೊಡುತ್ತಿದ್ದ ನನ್ನ ಸ್ನೇಹಿತರು ಅಂದರು:
{{gap}}“ಅಂತರರಾಷ್ಟ್ರೀಯ ಖದೀಮ ಆ ಟೋನಿ! ಗೋವಾ ವಿಮೋಚನೆಯಾದ್ಮೇಲೆ ಅವನಿಗೂ ಅನ್ನ ಇರೋದಿಲ್ಲ; ಅವನ ಅನ್ನದಾತರಿಗೂ ಇಲ್ಲಿ ಅನ್ನವಿರೋದಿಲ್ಲ...ಅದಕ್ಕೇ ಈಗ ಕಮಾಂಡರ್ ಆಗಿದಾನೆ."
{{gap}}..ದೋಣಿ ಬಂತು__ಉಗಿಯಂತ್ರವಿದ್ದ ದೋಣಿ, ಇತರ ಹಲವರೊಡನೆ ನಾವೂ ಕುಳಿತೆವು. ನನ್ನ ಗೆಳೆಯರು ನಮ್ಮಿಬ್ಬರ ಪರವಾಗಿ ಎರಡಾಣೆ ತೆತ್ತರು.
{{gap}}ಯಾರೋ ಒಬ್ಬರು ಕೊಟ್ಟಿದ್ದ ನಾಣ್ಯ ಸವೆದಿತ್ತೆಂದು ಗದ್ದಲವಾಯಿತು.
{{gap}}ಸವಕಲು ನಾಣ್ಯ__
{{gap}}-ಬಡಕಲಾಗಿ ಕುಸಿದು ಸಾಯುತ್ತಲಿರುವ ಸಾಮ್ರಾಜ್ಞಶಾಹಿಯ ಹಾಗೆ.
{{gap}}ಸೀಮೆ ನಾಯಿಯನ್ನು ಕೈಲಿ ಹಿಡಿದಿದ್ದ ಆ ನಾಯಕನ ಚಿತ್ರ...
{{gap}}ಲೂಟ, ದರೋಡೆ, ಸುಲಿಗೆ ಕಳ್ಳವ್ಯಾಪಾರ; ಲಂಚರುಷುವತ್ತಿನ ರಾಜ್ಯ. ಇದು ಆತನ ಜೀವನದ ಒಂದು ಮುಖ; ಸ್ವಾತಂತ್ರ್ಯ ಶಕ್ತಿಯ ದಮನ<noinclude></noinclude>
c6bq39ofvzxmy5vbs6fxlxwymx2rqvr
ಪುಟ:KELAVU SANNA KATHEGALU.pdf/೭೭
104
20231
321160
252188
2026-05-20T06:38:15Z
Pragathi. BH
7585
/* Validated */
321160
proofread-page
text/x-wiki
<noinclude><pagequality level="4" user="Pragathi. BH" /><small>{{rh|ಒಂದೇ ನಾಣ್ಯದ ಎರಡು ಮೈ||55}}</small></noinclude>ದಬ್ಬಾಳಿಕೆ-ಅದೇ ಜೀವನದ ಇನ್ನೊಂದು ಮುಖ.
{{gap}}ನಾಣ್ಯ ಸವೆದಂತೆ ರೂಪುರೇಖೆಗಳು ಅಳಿದು ಎರಡೂ ಮೈ ಒಂದೇ ಆಗುತ್ತವೆ-ಒಂದೇ. ಒಂದೇ ನಾಣ್ಯದ ಎರಡು ಮೈ. ಮುಂದೆ, ಮೈಗಳೇ ಇಲ್ಲದ ಆಯುಸ್ಸು ಮುಗಿದ, ಸವಕಲು ನಾಣ್ಯ.
{{Right|-೧೯೫೫}}<noinclude></noinclude>
bstrr9fvdsc4po2cfargykmrv3ro9xb
ಪುಟ:KELAVU SANNA KATHEGALU.pdf/೭೯
104
20233
321162
252274
2026-05-20T06:39:57Z
Shreelatha.Halemane
7642
/* Validated */
321162
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|ಒಂಟಿ ನಕ್ಷತ್ರ ನಕ್ಕಿತು||57}}</small></noinclude>ಮುಟ್ಟಿಸುತ್ತಿದ್ದ ಖಾರಬಿಸಿಲು. ಬೇಸಗೆಯೇನೊ ಮುಗಿಯುತ್ತ ಬಂದಿತ್ತು. ಆದರೆ, ಮೋಡಗಳ ಸುಳಿವಿರಲಿಲ್ಲ. ಹಾದಿ ನಡೆಯುತ್ತಿದ್ದ ಹಿರಿಯನನ್ನು, ಎಂದಿನ ಸಂಕಟವೇ ಇಂದೂ ಬಾಧಿಸಿತು. ಮತ್ತೂ ಹತ್ತಾರು ದಿನ ಮಳೆ ಬರದೇ ಹೋದರೆ? ಈ ಸಲದ ಬಿತ್ತನೆಯ ಗತಿ? ವರ್ಷಕ್ಕೊಂದೇ ಆದ ಪೈರಿನ ಗತಿ...? ಗುಡ್ಡದ ಮರೆಯಲ್ಲಿ ಕ್ಷಾಮರಾಕ್ಷಸ ಹೊಂಚು ಹಾಕುತ್ತ ಅಡಗಿ ಕುಳಿತಿದ್ದ. ತಾಯ್ನೆಲ ಭಣಗುಡುತ್ತಿತ್ತು. ಪೊರೆಕಳಚಿದ ಹಾವು, ಪ್ರಕೃತಿ, ಉದ್ದಕ್ಕೂ ಒರಗಿತ್ತು ಆ ಬಿಳಿಯ ಪೊರೆ. ಪುಡಿ ಪುಡಿಯಾಗಿದ್ದ ಕಣಕಣವಾಗಿದ್ದ ಕಾಲುಹಾದಿ, ದಾರಿ ತುಳಿಯುತ್ತ ಆ ಬಿಳಿಯ ಗೆರೆಯನ್ನು ಹಿರಿಯ ನೋಡಿದ ದೃಷ್ಟಿಯೊಡನೆ
ನಡುಬಾಗಿತು. ಹೃದಯದ ಭಾರದಿಂದ ತಪ್ಪಿಸಿಕೊಂಡ ಬಿಸಿಯುಸಿರು ದೀರ್ಘವಾಗಿ ಹೊರಬಂತು.
{{gap}}ಹಿರಿಯನ ಸಂಕಟವನ್ನು ಗ್ರಹಿಸಿದ ರಾಮ, ಕನಸಿನ ಲೋಕದಿಂದ ಕೆಳಕ್ಕಿಳಿದು ಬಂದ. ಎಂದಿಗಿಂತ ಭಿನ್ನವಾದ ಆ ದಿನದಲ್ಲೂ ಆ ಹೊತ್ತಿನಲ್ಲೂ ಹಾಗಿರಬೇಕೆ ತನ್ನ ತಂದೆ?
{{gap}}“ಏನಪ್ಪಾ ಅದು?”
{{gap}}"ಈ ದುರ್ಗತಿ ನಮಗೆ ಬಂತಲ್ಲಾ ಅಂತ ಯೋಚಿಸ್ತಿದ್ದೆ, ಮಗಾ."
{{gap}}“ಸಾಕು, ಸಾಕು! ನಿನ್ನದು ಯಾವಾಗಲೂ ಒಂದೇ ಹಾಡು!"
{{gap}}ಬಿಸಿಲಿನಷ್ಟೇ ಬಿಸಿಯಾಗಿದ್ದ ಉಗುಳನ್ನು ಹಿರಿಯ ನುಂಗಿದ. 'ಉಚ್ಮುಂಡೆ!' ಎಂದುಕೊಂಡ ಮನಸಿನಲ್ಲೆ. 'ಒಂದೇ ಹಾಡು'... ಹೂಂ... ಹೀಗಾಗಬಹೂದೂಂತ ಯಾರಿಗೆ ಗೊತ್ತಿತ್ತು? ತನ್ನ ಹಿರಿಯ ಮಗನಿಗೇ ಈ ರೀತಿ ಹುಚ್ಚು ಹಿಡಿಯುವುದೆಂದರೆ?ಸಾಲದುದಕ್ಕೆ, ಶಹರದಲ್ಲಿ ಓದುತ್ತಿದ್ದ ಎರಡನೆಯ ಮಗ ಕೃಷ್ಣ ಕೂಡಾ....
{{gap}}"ಕಲಿಗಾಲ..."
{{C|{{x-larger|'''೨'''}}}}
{{gap}}ಕೆಟ್ಟ ಸುದ್ದಿಯನ್ನು ಕೇಳಿದ ಆ ದಿನ, ತನ್ನ ಓರಗೆಯವರಷ್ಟೋ ಜನ ನಕ್ಕಿದ್ದರು.
{{gap}}___'ಆದರೆ ಹೋದರೆ, ಅಜ್ಜಿಗೆ ಮೀಸೆ ಬಂದರೆ...!'
{{gap}}___'ಐ-ಬಿಡಿ!'{{nop}}<noinclude></noinclude>
6iwa7jcictpwhpuhrfq20fwso4uvbz4
ಪುಟ:KELAVU SANNA KATHEGALU.pdf/೮೦
104
20234
321161
252275
2026-05-20T06:38:48Z
Shreelatha.Halemane
7642
/* Validated */
321161
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|58||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>{{gap}}ಗಾಳಿಯಲ್ಲಿ ಸುದ್ದಿ, ತೇಲಿ ಬಂದಿತ್ತು-ತೇಲಿ ಹೋಗಿತ್ತು.
{{gap}}ಸ್ವಲ್ಪ ಸಮಯದ ಅನಂತರ, ಅದನ್ನೆಲ್ಲರೂ ಮರೆತಿದ್ದ ಹೊತ್ತಿಗೆ, ಹೊಸ ಜನ ಅಲ್ಲಿಗೆ ಬಂದರು -ಹ್ಯಾಟು ಬೂಟು ತೊಟ್ಟ ಅಪರಿಚಿತರು. ಅವರ ಹಿಂದೂ ಮುಂದೂ ಓಡಾಡಿದರು ಗ್ರಾಮಾಧಿಕಾರಿಗಳು.
{{gap}}-'ಹಳ್ಳಿಯನ್ನು ಬಿಟ್ಟು ಹೋಗ್ಬೇಕು.'
{{gap}}-('ಅಹಾ! ಎಲ್ಲಿಗೆ? ಯಾರಪ್ಪನ ಮನೆಗೆ?')
{{gap}}-'ಏ ಗೌಡ! ನೀನೊಬ್ಬನೇ ಅಲ್ಲ ಕಣಯ್ಯ!'
{{gap}}-'ರೀ, ಗೌರವ ಕೊಟ್ಟು ಮಾತನಾಡಿ.'
{{gap}}-'೦h! I see !'
{{gap}}'ಒಟ್ಟು ಹನ್ನೆರಡು ಹಳ್ಳಿ ಖಾಲಿಯಾಗ್ತವೆ.'
{{gap}}'ಅನ್ನೆರಡು ಅಳ್ಳಿ?'
{{gap}}'ಹೂಂ. ದೇಸಾಯರು, ಜೋಡೀದಾರ್ರು, ಇನಾಂದಾರ್ರು-ಎಲ್ರೂ ಒಪ್ಕೊಂಡಿದಾರೆ. ಸಣ್ಣ ಪುಟ್ಟ ಆಸ್ತಿ ಪಾಸ್ತಿ ಇರೋ ನಿಮ್ಮದೇನಪ್ಪ ಇನ್ನು?'
{{gap}}ಮಹಾ ಬುದ್ದಿವಂತರೇ ಸರಿ. ಚತುರೋಪಾಯಗಳೂ ಗೊತ್ತಿದ್ದುವು ಅವರಿಗೆ. ಪರಿಹಾರ-ಹಣ. 'ಬೇರೆ ಕಡೆ ಭೂಮಿ ಕೊಂಡ್ಕೋಬಹುದು.' ಅಥವಾ ಹೊಲಕ್ಕೆ ಬದಲು ಹೊಲ (ಬಂಜರು ಭೂಮಿಗೇನು ಬರಗಾಲ?) ಸಾವಿರಾರು
ಜನರಿಗೆ ಕೆಲಸ ಬೇರೆ.
{{gap}}"ಕೆಲಸ? ಎಂಥ ಕೆಲಸ?"
{{gap}}“ಕೂಲಿ ಕೆಲಸ."
{{gap}}“ಕೂಲಿ? ನಾವು ರೈತರು. ಕೂಲಿ-ನಾಲಿ ಮಾಡೋವರಲ್ಲ!"
{{gap}}"ಈ ರೈತರಿಗೆ ಒಂದೂ ಅರ್ಥವಾಗೋದಿಲ್ಲ"
{{gap}}"ಹುಂ!"
{{gap}}"ಈ ಹಳ್ಳಿಗಳೆಲ್ಲ ನೀರಿನ ಕೆಳಗೆ ಮುಳುಗುತ್ತೆ ಗೌಡರೆ!"
{{gap}}"ನೀರಿನ ಕೆಳಗೆ? ಮುಳುಗುತ್ವೆ?”
{{gap}}“ಹೌದು. ಸಾವಿರ ಎಕರೆ ಮುಳುಗಿದರೇನ್ರ,? ಲಕ್ಷ ಎಕರೆ ಭೂಮಿಗೆ ನೀರು ಸಿಗುತ್ತೆ. ಅಷ್ಟೇ ಅಲ್ಲ-”
{{gap}}“ಸಾಕು! ಸಾಕು!"
{{gap}}ಸಿಡಿಮಿಡಿಗೊಂಡು ತಾನು ದಡದಡನೆ ಅಲ್ಲಿಂದ ಹೊರಟು ಬಿಟ್ಟಿದ್ದ. ರಾಮ ಮಾತ್ರ ಆ ಜನರ ಜತೆಯಲ್ಲಿ, ಮಾತುಗಳಿಗೆ ಕಿವಿಗೊಡುತ್ತ, ನಿಂತಿದ್ದ. ಹುಚ್ಮುಂಡೆ! ಕತ್ತಲಾಗುವ ಹೊತ್ತಿಗೆ ಮನೆಗೆ ಬಂದ.{{nop}}<noinclude></noinclude>
4716lkql403i90fg1p8zp9kon9jss6e
ಪುಟ:KELAVU SANNA KATHEGALU.pdf/೮೧
104
20235
321151
252316
2026-05-20T06:27:06Z
Shreelatha.Halemane
7642
/* Validated */
321151
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|ಒಂಟಿ ನಕ್ಷತ್ರ ನಕ್ಕಿತು||59}}</small></noinclude>{{gap}}"ಅಲ್ಲೇನೊ ಮಾಡ್ತಿದ್ದೆ ಇಷ್ಟೊತ್ತು?”
{{gap}}“ಇಕಾ, ಕಾಜಗ ಕೊಟ್ಟವ್ರೆ. ಇದರೊಳಗೆಲ್ಲಾ ಪಿರಿಂಟ್ ಮಾಡೈತೆ."
{{gap}}“ಫಿರಿಂಟ್ ಮಾಡೈತೆ- ಮಣ್ಣು!”
{{***|4}}
{{gap}}ಮುಂದೆ ಆಗಬೇಕಾಗಿದ್ದುದು ಆಗಿಯೇ ಹೋಯಿತು. ರಾಮ ಪಲ್ಲವಿ ನುಡಿದ:
{{gap}}“ನಡಿ, ಓಗಾನ. ಎಲ್ಲಾರಿಗಾಗೋದು ನಮಗೂ ಆಗ್ತೇತೆ."
{{gap}}ಹೊಲವನ್ನು ಮಾರಲಿಲ್ಲ ನಾನು. ಬದಲಿ ಭೂಮಿಯನ್ನು ಕೊಟ್ಟಿರು. ಮೂರೆಕರೆಗೆ ಮೂರೆಕರೆ. ನದಿಯ ದಂಡೆಯಲ್ಲಲ್ಲ. ಕೆಳಕ್ಕೆ, ಒಳಕ್ಕೆ.
{{gap}}ಹುಟ್ಟಿ ಬೆಳೆದ ಹಳ್ಳಿಯ ಹನುಮಂತರಾಯನ ಗುಡಿಯ ಮುಂದೆ ನಿಂತು ನಾನೆಂದೆ:
{{gap}}“ಓಗ್ಬರ್ತೀನಪ್ಪ. ಅಳ್ಳಿ ಮುಣಿಗಿಸ್ಬೌದು, ನಿನ್ನನ್ನು ಮುಣಿಗಿಸೋಕಾತದಾ? ಮನಿಸ್ಯರು ತಿಳೀದೆ ತಪ್ಮಾಡ್ತಾ ಅವರೆ. ಕ್ಸಮ್ಸಪ್ಪಾ..."
{{gap}}ವಲಸೆ ಬಂದವರನ್ನು ಅಣಕಿಸಿತು ಬರಿದಾಗಿದ್ದ ಹೊಸ ಮಣ್ಣು. ಆ ನೆಲಕ್ಕೆ ಕೈ ಬಡೆದು, ಅಂಥ ಸ್ಥಿತಿಗೆ ನಮ್ಮನ್ನು ತಂದವರಿಗೆ ನಾನು ಶಾಪವಿತ್ತೆ; ಹಣೆ ಚಚ್ಚಿಕೊಂಡು ಮನದಣಿಯೆ ಅತ್ತೆ.
{{gap}}.... ಆ ದಿವಸದಿಂದ ಇವತ್ತಿನವರೆಗೆ- ಈ ಮೂರು ವರ್ಷಗಳ ಕಾಲ-ಏನನ್ನೆಲ್ಲ ಕಂಡೆ ನಾನು!
{{gap}}ಮೊದಮೊದಲು, ಎಲ್ಲೋ ಕೇಳಿದ ಯಾವುದೋ ಸುದ್ದಿ ಎನ್ನುವ ಹಾಗೆ-ಬಳಿಕ ಉತ್ಸಾಹದಿಂದ, ನನ್ನ ಮಗ ರಾಮನೇ ಬಂದು ಹೇಳುತ್ತಿದ್ದ.
{{gap}}“ಎಲ್ರೂ ಬಂದ್ಬಿಟ್ಫವ್ರೆ. ನದೀಲಿ ತಳ ಎಷ್ಟು ಆಳಕ್ಕೈತೆ ಅಂತ ಭೈರಿಗೆ ಕೊರೆದು ನೋಡ್ತವ್ರೆ. ದೊಡ್ದೊಡ್ಡ ಲಾರಿಗ್ಳು ಬಂದವೆ-ಅತ್ತಿಪ್ಪತ್ತು. ಮಿಸ್ನುಗಳೂ ಯಂತ್ರಗಳೂ ಬಂದ್ಬಿಟ್ಟಿವೆ. ಅದೇನೋ ಕ್ರೇನೂಂತ ತಗೊಂಡ್ಬಂದವ್ರೆ ಅಪ್ಪಾ. ತೆಂಗಿನಮರದಂತೆ ಎತ್ತರಕ್ಕೈತೆ. ಎಂಗ್ಬೇಕಾದರೂ ತಿರುಗ್ತೇತೆ. ಕೈಯಿಂದ ಕಡ್ಡೀನ ಇಂಗೆತ್ತಿ ಅಂಗ್ಮಡ್ಗಾಕಿಲ್ವ ನಾವು?-ಅಂಗೇನೆ, ಎಸ್ಟ್ ಬಾರದ್ಸಾಮಾನಿದ್ರೂ ಒಂದ್ಕಡೆಯಿಂದ ಇನ್ನೊಂದ್ಕಡೆಗಿಡ್ತೇತೆ."
{{gap}}ನಮ್ಮ ನದಿ. ಬೇಸಗೆಯಲ್ಲಿ ಕಿರುಬೆರಳಿನೆಷ್ಟು ನೀರು. ಮಳೆ ಬಂದಾಗ ಕೆರಳಿದ ಮಹಾ ಕಾಳಿ. ಏನಾದರೇನು? ಮನುಷ್ಠ ಮಾಡುವ ತಪ್ಪಿಗೆ ಅದು ದೇವರು ಕೊಡುವ ಶಿಕ್ಷೆ. ಅಂಥ ದೇವರ ಶಕ್ತಿಯೊಡನೆ ಈ ಜನರ ಸೆಣಸಾಟ. ನಾಸ್ತಿಕರು! ಹುಂ!{{nop}}<noinclude></noinclude>
5ia13rjqqdlhcracdp5aem1zyiaou0l
ಪುಟ:KELAVU SANNA KATHEGALU.pdf/೮೨
104
20236
321153
252318
2026-05-20T06:29:37Z
Shreelatha.Halemane
7642
/* Validated */
321153
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|60||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>{{gap}}ರಾಮನೆಂದ:
{{gap}}“ಹಾಫೀಸರ್ಗಳಲ್ಲಿ ಬಿರಾಮರು, ಲಿಂಗವಂತರು, ಒಕ್ಸಲಿಗರು, ಸಾಬರು, ಕೆರಸ್ತಾನರು-ಎಲ್ಲ ಜಾತಿಯವರೂ ಅವರೆ."
{{gap}}ಕಟ್ಟುನಿಟ್ಟಾಗಿ ನಾನೆಂದೆ:
{{gap}}“ಅವರ ಜತೆ ನೀನು ಸೇರ್ಕೊಬ್ಯಾಡ."
{{gap}}ದಿನ ಕಳೆದ ಹಾಗೆ ಜನರೆಲ್ಲ ಅವರ ಜತೆ ಸೇರಿದರು. ಕೆಲಸದ ಜಾಗಕ್ಕೆ ಅಂಟಿಕೊಂಡೇ ಊರು ಹುಟ್ಟಿತು. ಎಲ್ಲೆಲ್ಲಿಂದಲೋ ಜನರು ಬಂದರು. ಸಾವಿರ ಹತ್ತು ಸಾವಿರ-ಇಪ್ಪತ್ತು ಸಾವಿರ ಜನ. ಹೆಣ್ಣಾಳು, ಗಂಡಾಳು. ಹಟ್ಟಗಳನ್ನು ಕಟ್ಟಿದರು. ಜತೆಯಲ್ಲಿ "ಹೋಟಿಲು ಬಂತು... ದಿನಸಿನಂಗಡಿ, ಹೆಂಡದಂಗಡಿ...ಮಣ್ಣು ಅಗೆಯುವವರು, ಕಲ್ಲು ಕಡಿಯುವವರು....ಮನುಷ್ಯರು, ಯಂತ್ರಗಳು. ಕೆವಿ ಕಿವುಡಾಗುವ ಹಾಗೆ ಹಗಲೆಲ್ಲ ಸದ್ದು. ಮಣ್ಣು ತೋಡಿ ಕಲ್ಲಿರಿಸಿದರು.
ಕಲ್ಲು, ಗಾರೆ; ಕಲ್ಲು ಗಾರೆ.
{{gap}}"ಮಳೆ ಬರಲಿ, ಆಗ ತಿಳೀತದೈೆ ಎಂದುಕೊಂಡೆ.
{{gap}}ಮಳೆ ಬಂತು. ಕಟ್ಟಿದ್ದು ಮಿಸುಕಲಿಲ್ಲ.
{{gap}}ನವರಾತ್ರಿಯ ರಜೆಯಲ್ಲಿ ಮನೆಗೆ ಬಂದ ಕೃಷ್ಣನೆಂದ:
{{gap}}“ಅಣೆಕಟ್ಟು ಕಟ್ಟಿದ್ಮೇಲೆ ಮಹಾಪೂರ ಬರೋದಿಲ್ಲ. ಕಾಲಿವೆ ಕಡಿದು ಊರೂರಿಗೆ ನೀರು ತಗೊಂಡು ಹೋಗ್ತಾರೆ. ಎಲ್ಲೆಲ್ಲೂ ಬೆಳೆ ಬೆಳೀತದೆ. ವಿದ್ಯುಚ್ಛಕ್ತಿ ಉತ್ಪಾದಿಸ್ತಾರೆ. ಮನೆಮನೆಗೆ ದೀಪ ಬರ್ತದೆ. ಕಾರ್ಖಾನೆಗಳು ಹುಟ್ಕೋತವೆ. ನದೀಲಿ ದೊಡ್ಡ ದೊಡ್ಡ ದೋಣಿಗಳು ಸಂಚಃರಮಾಡ್ತವೆ.?"
{{gap}}ರೇಗುತ್ತ ನಾನೆಂದೆ;
{{gap}}“ನಮ್ಮ ಅಳ್ಳಿ ಏನಾಗ್ತೇತೆ?”
{{gap}}“ಹಳ್ಳಿ ಮುಳುಗೋಗ್ತದೆ."
{{gap}}"ಅಂಗಂತೀಯಾ ನೀನೂ?”
{{gap}}"ಈ ಪುಸ್ತಕದಲ್ಲಿ ಬರೆದವರೆ."
{{gap}}“ಉಚ್ಮುಂಡೆ! ನಿನ್ನ ಪುಸ್ತಕನ ಸುಡ್ತು!"
{{gap}}ಹುಡುಗರು ಮೊದಲು ಕೆಟ್ಟರು. ವಯಸ್ಸಾದವರು ಆಮೇಲೆ. ಲೋಕ ತಲೆಕೆಳಗಾಗಿ ಹಾಳಾಗುತ್ತಿದ್ದುದನ್ನು ನೋಡಲು ನಾನೊಬ್ಬನೆ ಉಳಿದೆನೆನಿಸಿತು.
{{gap}}ಭೂಮಿತಾಯಿ ಮುನಿದಳು ಅರೆ ಹೊಟ್ಟೆ ಕೆಡವಿದಳು.
{{gap}}...ವರ್ಷ ಒಂದಾಯಿತು. ಅನಂತರವೂ ಒಂದು. ನದಿಗೆ ಅಡ್ಡವಾಗಿ ಮರಳಿನ ಗೋಡೆ ಕಟ್ಟ, ಅದರ ಹಾದಿಯನ್ನೆ ಬದಲು ಮಾಡಿದರು. ಎರಡೂ<noinclude></noinclude>
jzqkjptffywh2w4dwe7svchkmljk4d7
ಪುಟ:KELAVU SANNA KATHEGALU.pdf/೮೩
104
20237
321152
252330
2026-05-20T06:29:33Z
Pragathi. BH
7585
/* Validated */
321152
proofread-page
text/x-wiki
<noinclude><pagequality level="4" user="Pragathi. BH" /><small>{{rh|ಒಂಟಿ ನಕ್ಷತ್ರ ನಕ್ಕಿತು||61}}</small></noinclude>ಕಡೆಗಳಿಂದ ಬಂದಿದ್ದ ಅಣೆಕಟ್ಟು ನಡುವೆ ಕೂಡಿಕೊಂಡಿತು. ನೀರು ನಿಂತು ಕೆರೆಯಾಯಿತು. ನದಿ ಆಳನಾಯಿತು.
ಆಗ ಬಲ್ಲಿದನಾಗಿದ್ದ ರಾಮನನ್ನು. ಕೆಣಕಿ ಕೇಳಿಜಿ.
“ಅಳ್ಳಿಗಳನ್ನ ಯಾವತ್ತು ಮುಣುಗಿಸ್ತಾರೆ?”
"ಇನ್ನೇನು, ಮುಣುಗೋಗ್ತವೆ.?
“ಉಂ! ಅನುಮಂತರಾಯನ ಗುಡಿಯೊಳಕ್ಕೆ ನೀರು ನುಗ್ಲಿ. ಅಮ್ಯಾಕೆ ಯೋಳ್ತೀನಿ!
ಗುಡಿಯೊಳಕ್ಕೆ ನೀರು ನುಗ್ಗಿತು. ಗುಡಿ ಮುಳುಗಿತು. ಹನುಮಂತರಾಯ ಆಕ್ಷೇಪಿಸಲಿಲ್ಲ. ಕೆರೆ ಸರೋವರವಾಯಿತು. ಸರೋವರ ನೀರಸಾಗರವಾಯಿತು. ದೇವರು ತುಟಿಪಿಟ್ಟಿನ್ನಲಿಲ್ಲ.
ನನ್ನೊಳಗಿನದೇನೋ ಕುಸಿದುಬಿದ್ದಂತಾಯಿತು.
ನಾನು ಕಾಹಿಲೆ ಮಲಗಿದುದು ಆಗಲೇ...
{{***|4}}
ನಿಶ್ಶಕ್ತನಾಗಿ ಎದ್ದ ಬಳಿಕ, ಅಣೆಕಟ್ಟಿನ ಪ್ರಸ್ತಾಸವನ್ನೇ ಹಿರಿಯ ಮಾಡಲಿಲ್ಲ. ಬದುಕಿನಲ್ಲಿ ಆತ ಒಂದಿಷ್ಟಾದರೂ. ಆಸಕ್ತಿ ತೋರಲು ಕಾರಣ, ಅದೇ ಮೊದಲ ಬಾರಿ ಸೊಸೆ ಲಚ್ಚಿಗೆ ನೀರು ನಿಂತುದು. ರಾಮನ ಮುಖದ ಮೇಲೆ ಆಗ ಮೂಡಿದ ಮುಗುಳುನಗೆ, ಕರಿಯ ಕಲ್ಲಿನಲ್ಲೆ ಕೊರೆದ ನಿತ್ಯ ಮಲ್ಲಿಗೆಯಾ
ಯಿತು...
ಕಿಂವದಂತಿಯ ಕೀಚಲು ಧ್ವನಿ ಕೇಳಿಸಿತೊಮ್ಮೆ :
“ನರಬಲಿ ಕೊಡ್ತಾರಂತಪ್ಪೋ! ಅಯ್ಯಪ್ಪೊ!"
ಎಳೆಯರು-ಮೂರನೆಯವನಾದ ಒಬ್ಬ ಹುಡುಗ, ಕೊನೆಯ ಸಂತಾನವಾದ ಹುಡುಗಿ-ಮನೆಯಲ್ಲೇ ಬಂದಿಗಳಾದರು. ತುಂಬಿದ ಬಸುರಿ ಲಚ್ಚಿ, ಹಿತ್ತಲು ದಾಟ ಹೊರಕ್ಕಿಳಿಯಲಿಲ್ಲ.
“ಸುಮ್ಸುಮ್ನೆ ಪುಕಾರು ಉಟ್ಟಿಸ್ತಾರೆ" ಎಂದ ರಾಮ.
ಆದರೆ, ಕೆಲಸವೆಲ್ಲ ಮುಗಿಯುತ್ತ ಬಂದಿದ್ದಂತೆ, ಒಂದು ಯಂತ್ರದಡಿಗೆ ಬಿದ್ದ ಇಬ್ಬರು ಆಳುಗಳು ಬಲಿಯಾದಾಗ, ಜನರೆಲ್ಲ ಕ್ಷಣ ಕಾಲ ಉಸಿರು ಬಿಗಿಹಿಡಿದರು...
....................
...ಅಂತೂ ಕೊನೆಗೊಮ್ಮೆ ಬಂದಿತ್ತು ಈ ಫಳಿಗೆ.
ತಂದೆಯನ್ನು ಕರೆದವನು ರಾಮನೇ.{{nop}}<noinclude></noinclude>
4qr64e3n8gpo2wh20ega6ytrxl6k875
321154
321152
2026-05-20T06:31:34Z
Shreelatha.Halemane
7642
321154
proofread-page
text/x-wiki
<noinclude><pagequality level="4" user="Pragathi. BH" /><small>{{rh|ಒಂಟಿ ನಕ್ಷತ್ರ ನಕ್ಕಿತು||61}}</small></noinclude>ಕಡೆಗಳಿಂದ ಬಂದಿದ್ದ ಅಣೆಕಟ್ಟು ನಡುವೆ ಕೂಡಿಕೊಂಡಿತು. ನೀರು ನಿಂತು ಕೆರೆಯಾಯಿತು. ನದಿ ಆಳನಾಯಿತು.
{{gap}}ಆಗ ಬಲ್ಲಿದನಾಗಿದ್ದ ರಾಮನನ್ನು. ಕೆಣಕಿ ಕೇಳಿದೆ.
{{gap}}“ಅಳ್ಳಿಗಳನ್ನ ಯಾವತ್ತು ಮುಣುಗಿಸ್ತಾರೆ?”
{{gap}}"ಇನ್ನೇನು, ಮುಣುಗೋಗ್ತವೆ.?
{{gap}}“ಉಂ! ಅನುಮಂತರಾಯನ ಗುಡಿಯೊಳಕ್ಕೆ ನೀರು ನುಗ್ಲಿ. ಅಮ್ಯಾಕೆ ಯೋಳ್ತೀನಿ!
{{gap}}ಗುಡಿಯೊಳಕ್ಕೆ ನೀರು ನುಗ್ಗಿತು. ಗುಡಿ ಮುಳುಗಿತು. ಹನುಮಂತರಾಯ ಆಕ್ಷೇಪಿಸಲಿಲ್ಲ. ಕೆರೆ ಸರೋವರವಾಯಿತು. ಸರೋವರ ನೀರಸಾಗರವಾಯಿತು. ದೇವರು ತುಟಿಪಿಟ್ಟಿನ್ನಲಿಲ್ಲ.
{{gap}}ನನ್ನೊಳಗಿನದೇನೋ ಕುಸಿದುಬಿದ್ದಂತಾಯಿತು.
{{gap}}ನಾನು ಕಾಹಿಲೆ ಮಲಗಿದುದು ಆಗಲೇ...
{{***|4}}
{{gap}}ನಿಶ್ಶಕ್ತನಾಗಿ ಎದ್ದ ಬಳಿಕ, ಅಣೆಕಟ್ಟಿನ ಪ್ರಸ್ತಾಸವನ್ನೇ ಹಿರಿಯ ಮಾಡಲಿಲ್ಲ. ಬದುಕಿನಲ್ಲಿ ಆತ ಒಂದಿಷ್ಟಾದರೂ. ಆಸಕ್ತಿ ತೋರಲು ಕಾರಣ, ಅದೇ ಮೊದಲ ಬಾರಿ ಸೊಸೆ ಲಚ್ಚಿಗೆ ನೀರು ನಿಂತುದು. ರಾಮನ ಮುಖದ ಮೇಲೆ ಆಗ ಮೂಡಿದ ಮುಗುಳುನಗೆ, ಕರಿಯ ಕಲ್ಲಿನಲ್ಲೆ ಕೊರೆದ ನಿತ್ಯ ಮಲ್ಲಿಗೆಯಾಯಿತು...
{{gap}}ಕಿಂವದಂತಿಯ ಕೀಚಲು ಧ್ವನಿ ಕೇಳಿಸಿತೊಮ್ಮೆ :
{{gap}}“ನರಬಲಿ ಕೊಡ್ತಾರಂತಪ್ಪೋ! ಅಯ್ಯಪ್ಪೊ!"
{{gap}}ಎಳೆಯರು-ಮೂರನೆಯವನಾದ ಒಬ್ಬ ಹುಡುಗ, ಕೊನೆಯ ಸಂತಾನವಾದ ಹುಡುಗಿ-ಮನೆಯಲ್ಲೇ ಬಂದಿಗಳಾದರು. ತುಂಬಿದ ಬಸುರಿ ಲಚ್ಚಿ, ಹಿತ್ತಲು ದಾಟ ಹೊರಕ್ಕಿಳಿಯಲಿಲ್ಲ.
{{gap}}“ಸುಮ್ಸುಮ್ನೆ ಪುಕಾರು ಉಟ್ಟಿಸ್ತಾರೆ" ಎಂದ ರಾಮ.
{{gap}}ಆದರೆ, ಕೆಲಸವೆಲ್ಲ ಮುಗಿಯುತ್ತ ಬಂದಿದ್ದಂತೆ, ಒಂದು ಯಂತ್ರದಡಿಗೆ ಬಿದ್ದ ಇಬ್ಬರು ಆಳುಗಳು ಬಲಿಯಾದಾಗ, ಜನರೆಲ್ಲ ಕ್ಷಣ ಕಾಲ ಉಸಿರು ಬಿಗಿಹಿಡಿದರು...
{{gap}}....................
{{gap}}...ಅಂತೂ ಕೊನೆಗೊಮ್ಮೆ ಬಂದಿತ್ತು ಈ ಫಳಿಗೆ.
{{gap}}ತಂದೆಯನ್ನು ಕರೆದವನು ರಾಮನೇ.{{nop}}<noinclude></noinclude>
mm8i87ubv0hobnq1z1huorbdv9hbpjl
ಪುಟ:KELAVU SANNA KATHEGALU.pdf/೮೪
104
20238
321156
251961
2026-05-20T06:33:25Z
Shreelatha.Halemane
7642
/* Validated */
321156
proofread-page
text/x-wiki
<noinclude><pagequality level="4" user="Shreelatha.Halemane" />{{rh|62||ನಿರಂಜನ: ಕೆಲವು ಸಣ್ಣ ಕಥೆಗಳು}}</noinclude>{{gap}}“ನಾನ್ಯಾಕೊ ಬರ್ಲಿ?”
{{gap}}“ಇಲ್ಲ ಅಪ್ಪ, ನೀನು ನಿನ್ನ ಕಣ್ಣಿಂದ್ಲೇ ನೋಡ್ಬೇಕು.”
{{gap}}ಅದಕ್ಕೆ ಆತ ತನ್ನಾಕೆಗೆ ಹೇಳಿದ್ದ.
{{gap}}“ಅದೇನೈತೋ ನೋಡ್ಬರ್ತೀನಿ.”
{{center|೩}}
{{gap}}ಅವರನ್ನು ಹಾದು ಮುಂದೆ ಹೋದವರು ಓಡುತ್ತ ಹೋದವರು-ಹಲ
ವರು.ಹುಡುಗರಿಗೆ ಯುವಕರಿಗೆ ಮುದುಕರಿಗೆ-ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ.
ತಗ್ಗಿನಿಂದ ಮೇಲಕ್ಕೆ ನಡೆದು ಬಂದಂತೆ ಅವರ ಕಣ್ಣಿಗೆ ಬಿತ್ತು-ಸಹಸ್ರ ಜನರನ್ನು
ಹೊತ್ತು ಎತ್ತರದಲ್ಲಿ ಭವ್ಯವಾಗಿ ನಿಂತಿದ್ದ ಅಣೆಕಟ್ಟು ಮೇಲೂ ಜನರು, ಕೆಳಗೂ
ಜನರು. ಒಂದೇ ಕಡೆ ನೆರೆದಿತ್ತು, ಹತ್ತೂರುಗಳ ಜಾತ್ರೆ. ನೀರಿನ ಅಲೆಗಳು,
ಮಾತಿನ ಹಾಡಿನ ಅಲೆಗಳು, ಹರ್ಷೋದ್ಗಾರ, ಜಯಜಯಕಾರ. ನಗೆ-ಎಲ್ಲ
ಜನರಿಂದಲೂ ಹೊರಟು, ವಿರಾಟ್ರೂಪ ತಳೆದು, ಗಿರಿಕಂದರ ಕಾನನಗಳನ್ನು
ಕುಲುಕಿ ಅಲುಗಿಸಿ ನಗಿಸುತ್ತಿದ್ದ ನಗೆ. ತಳಿರುತೋರಣಗಳು, ಬಣ್ಣದ ಕಾಗದ
ಗಳು. ನದಿಯ ಕತ್ತಿಗೆ ನೂರು ಹಾರಗಳಾಗಿದ್ದವು, ಸೂರ್ಯನ ಕೊನೆಯ ರಶ್ಮಿಗೆ
ಮಿನುಗುತ್ತಿದ್ದ ಗಾಜಿನ ದೀಪಗಳು.
{{gap}}ಮೇಲೆ ಹೋಗಲು ಹಾದಿಯಿರಲಿಲ್ಲ. ಜಾಗವಿರಲಿಲ್ಲ.
{{gap}}“ತಡವಾಗಿ ಬಂದ್ವಿ,” ಎಂದು ರಾಮ ಗೊಣಗಿದ.
{{gap}}“ಏನು ಕೊಳ್ಳೆ ಹೋದದ್ದು? ಇಲ್ಲೇ ಇರಾನ,” ಎಂದ ಹಿರಿಯ.
{{gap}}ಜಲಾಶಯದೊಳಕ್ಕೆ ಸೂರ್ಯ ಧುಮುಕಿರಬೇಕು. ಒಮ್ಮೆಲೆ ಕತ್ತಲಾಯಿತು. ಮತ್ತೆ ಒಮ್ಮೆಲೆ, ಗಾಜಿನ ಬುರುಡೆಗಳೆಲ್ಲ
ದೀಪದ ಉಂಡೆಗಳಾದುವು. ನದಿಯ ಕೊರಳಹಾರಗಳ ಹಲವು ಸಹಸ್ರ ಮಣಿಗಳು ವರ್ಣರಂಜಿತವಾಗಿ ಬೆಳಗಿದುವು.
{{gap}}ಆಗ ಇದ್ದಕ್ಕಿದ್ದಂತೆ, ರುದ್ರ ಕಡಲು ಭೋರ್ಗರೆಯುತ್ತ ಏರಿ ಬಂದಂತಹ ಸದ್ದಾಯಿತು.
{{gap}}ಹಿರಿಯನ ಅಂಗಾಂಗಗಳು ತಣ್ಣಗಾದುವು.
{{gap}}(ಶಿಕ್ಷೆ ವಿಧಿಸಲು ಆ ಘಳಿಗೆಯನ್ನೇ ಆರಿಸಿದ್ದನೆ ದೇವರು?)
{{gap}}“ಅಗೋ!” ಎಂದ ರಾಮ, ಉಳಿದೆಲ್ಲ ಸದ್ದನ್ನೂ ಮೀರಿಸುವ ಏರುದನಿ
ಯಲ್ಲಿ.<noinclude></noinclude>
lmt4qdw2nhaiyho1r8gq5xomknzcrpg
ಪುಟ:KELAVU SANNA KATHEGALU.pdf/೮೫
104
20239
321118
252340
2026-05-20T06:07:01Z
Pragathi. BH
7585
/* Validated */
321118
proofread-page
text/x-wiki
<noinclude><pagequality level="4" user="Pragathi. BH" /><small>{{rh|ಒಂಟಿ ನಕ್ಷತ್ರ ನಕ್ಕಿತು||63}}</small></noinclude>
ಅಣೆಕಟ್ಟಿನೆರಡು ತೆರೆದ ದ್ವಾರಗಳಿಂದ, ಕೋಟಿ ಶ್ವೇತಾಶ್ವಗಳು ಕರ್ಣಭೇದಕವಾಗಿ ಕೆನೆಯುತ್ತ, ಬಾಯಿಗಳಿಂದ ನೊರೆಯುಗುಳುತ್ತ, ಮುನ್ನುಗ್ಗುತ್ತಿದ್ದುವು. ಕುಪ್ಪಳಿಸುತ್ತ ಹಾರುತ್ತ ಕಿಲಕಿಲನೆ ನಗುತ್ತ ನೀರು ಧುಮುಧುಮುಸಿ
ಹರಿಯಿತು, ಕಾಲಿವೆಗಳಲ್ಲಿ, ಉಪಕಾಲಿವೆಗಳಲ್ಲಿ.
ಎಚ್ಚತ್ತ ಹಿರಿಯ. "ಓ!" ಎಂದ.
ಬಾಗಿದ್ದ ನಡು ನಿಡಿದುಕೊಂಡಿತು. ಜಡವಾಗಿದ್ದ ಕಾಲುಗಳು ಚೇತನಗೊಂಡವು.
ಮತ್ತೆ ಅಂದ: "ಓ! ಓ!"
ದೂರಕ್ಕೆ ದೂರಕ್ಕೆ--ಅತನ ಹೊಲಗಳಿದ್ದ ಕಡೆಗೂ-ನೀರು ಧಾವಿಸುತ್ತಿತ್ತು.
ಬೇರೊಂದನ್ನೂ ಗಮನಿಸದೆ ಹಿರಿಯ ಆ ನೀರನ್ನೆ ನೋಡಿದ; ಆ ನೀರಿನ ಹಿಂದೆಯೇ ಓಡಿದ.
ತಂದೆಯಷ್ಟೇ ವೇಗವಾಗಿ ಓಡುವುದು ರಾಮನಿಗೂ ಕಷ್ಟವೆನಿಸಿತು.
...ಗುಡಿಸಲ ಮುಂದೆ ರಾಮನ ತಾಯಿ ನಿಂತಿದ್ದಳು. ಚಿಕ್ಕ ಹುಡುಗನಂತೆ ಓಡುತ್ತ ಬಂದ ಗಂಡನನ್ನು ನೋಡಿ ಅಕೆಯೆಂದಳು:
“ಲಚ್ಚಿಗೆ ಎರಿಗೆಯಾಯ್ತು! ಗಂಡು ಮಗು!"
“ಓ!" ಎಂದ ಹಿರಿಯ. ಧಾರಾಕಾರವಾಗಿ ಸುರಿಯುತ್ತಿದ್ದ ಕಂಬನಿಯನ್ನೊರಸಿಕೊಳ್ಳುತ್ತ.
-"ಓ ಓ!"
ಎಲ್ಲ ಬೇಗೆಯನ್ನೂ ಮರೆಸುವ ಹಾಗೆ ಬೀಸುತ್ತಿತ್ತು ತಣ್ಣನೆಯ ಗಾಳಿ. ವಾತಾವರಣ ತುಂಬಿತ್ತು, ಹಾಲುಹೊಳೆಯ ಜುಳುಜುಳು ಗೀತದಿಂದ. ಮಂದವಾಗಿ ಕಾಣಿಸುತ್ತಿದ್ದುವು, ಬಲು ದೂರದಲ್ಲಿ ಅಣೆಕಟ್ಟಿನ ದೀಪಮಾಲೆಗಳು.
ಮೇಲ್ಗಡೆ ಆಕಾಶದಲ್ಲಿ ಕೋಟಿ ನಕ್ಷತ್ರಗಳಿದ್ದುವು.
ಅವುಗಳನ್ನೇ ಮುಗ್ಧನಾಗಿ ಹಿರಿಯ ನೋಡಿದ.
ಪಶ್ಚಿಮದಲ್ಲಿ ಒಂಟಯಾಗಿಯೆ ಇದ್ದೊಂದು ನಕ್ಷತ್ರ ಅವನನ್ನು ಕಂಡು ನಕ್ಕಿತು.
ಅದನ್ನು ಗಮನಿಸಿದ ಹಿರಿಯ ರುಮಾಲನ್ನೆಳೆದು, ತಲೆಯಾಡಿಸುತ್ತ, ಅಂದ:
“ಉಚ್ಮುಂಡೆ!"
ಆ ನಕ್ಷತ್ರ ಮತ್ತೆ ನಕ್ಕಿತು.
{{right|__೧೯೫೭}}<noinclude></noinclude>
73ko07kcrjmp8t3iafdrzthszpb1spz
ಪುಟ:KELAVU SANNA KATHEGALU.pdf/೮೬
104
20240
321119
251963
2026-05-20T06:12:40Z
Shreelatha.Halemane
7642
/* Validated */
321119
proofread-page
text/x-wiki
<noinclude><pagequality level="4" user="Shreelatha.Halemane" />{{center|{{big|೯}}}}
{{center|{{big|'''ಹಮಾಲ ಇಮಾಮ್ಸಾಬಿ'''}}}}</noinclude>
:ಮೊದಲ ಮಳೆ ಕಳೆದ ಬಳಿಕ, ಸೂರ್ಯ ಧೈರ್ಯಗೊಂಡು ಮತ್ತೊಮ್ಮೆ ಚಕ್ರ ಕುಣಿತ ಆರಂಭಿಸಿದ್ದ.
{{gap}}ನೀಲಿ ವರ್ಣದ ವೇದಿಕೆಯ ಮೇಲೆ ಹಗಲು, ಕರಿ ಪರದೆಯ ಹಿಂದೆ
ರಾತ್ರೆ, ಕತ್ತಲು ಆವರಿಸಿದಾಗ ಚಂದ್ರನೊಂದು ಕಂದೀಲು, ನೀರು ಕುಡಿದು
ನೆಲ ತೃಪ್ತವಾಗಿತ್ತು. ಗಿಡಮರಗಳೆಲ್ಲ, ಹಸಿರುಮಯ. ಮನುಷ್ಯ ತುಳಿವ
ದಾರಿಗೆರೆಯ ಎರಡು ಪಕ್ಕಗಳಲ್ಲೂ ಗರಿಕೆಹುಲ್ಲು ಟಿಸಿಲೊಡೆದು ಮುಸಿಮುಸಿ
ನಗುತ್ತಿತ್ತು.
{{gap}}ಬಹಳ ಹೊತ್ತು ನೆಲೆಸಿದ ನೀರವತೆಯನ್ನು ಭೇದಿಸಿ ಒಂದು ಸದ್ದು ಬಂತು.
{{gap}}ಫೋನ್ ಯಂತ್ರದ ಖಣಖಣತ್ಕಾರ. ಅದನ್ನು ಹಿಂಬಾಲಿಸಿ:
{{gap}}“ಹಲ್ಲೋ....ಹಲ್ಲೋ...."
{{gap}}ಇನ್ನೊಂದು ನಿಲ್ದಾಣದ ವೃತ್ತಿ ಬಂಧುವಿನೊಡನೆ ಈ ಮಾಸ್ತರರ ಸಂವಾದ.
{{gap}}ಹೆಬ್ಬಾಗಿಲ ಹೊರಗೆ ಸಿಮೆಂಟಿನ ಒರಗು ಬೆಂಚಿನ ಮೇಲೆ, ಹೂಬಿಸಿಲಲ್ಲಿ ಮೈ ಕಾಯಿಸುತ್ತ ಇಮಾಮಸಾಬಿ ಕುಳಿತಿದ್ದ.
{{gap}}“ಅರೇ, ಗಾಡಿ ಔಟಾಯಿತೇನು ಹಾಗಾದರೆ?”
{{gap}}ನಿರ್ಜನವಾಗಿದ್ದ ನಿಲ್ದಾಣ. ಔಟಾಗುವುದೆಂದರೇನು? ಲೋಕಲನ್ನು ಕಳುಹಿಬಂದು ಅರ್ಧ ಘಂಟೆ ಕೂಡ ಆಗಲಿಲ್ಲವಲ್ಲ ಇನ್ನೂ?
{{gap}}ಮಾಲ್ಗಾಡಿಯೇ ಇರಬೇಕು. ಮುಂದಿನ ನಿಲ್ದಾಣದಲ್ಲೋ ಅದರಾಚೆಗೋ ಕ್ರಾಸಿಂಗ್. ಇಳಿಸುವ ಸಾಮಾನು ಇದ್ದರಷ್ಟೆ ಅದಿಲ್ಲಿ ನಿಲ್ಲಬಹುದು.ಇಲ್ಲವೆಂದಾದರೆ, ಸಿಗ್ನಲಿನ ಗೌರವರಕ್ಷೆ ಸ್ವೀಕರಿಸಿ, ಹಸುರು ನಿಶಾನೆಯಿಂದ ಗಾಳಿ ಹಾಕಿಸಿಕೊಂಡು, ಮುಂದಕ್ಕೆ ಪಯಣ.
{{gap}}ಮಾಲ್ಗಾಡಿಯೊಂದೇ ಅಲ್ಲ. ಮೇಲ್ ಎಕ್ಸ್ ಪ್ರೆಸ್ ಗಾಡಿಗಳೂ ಹಿಂದೆ<noinclude></noinclude>
li1lz6ac05r2fhznjghaey7u2731y9a
ಪುಟ:KELAVU SANNA KATHEGALU.pdf/೮೭
104
20241
321120
252341
2026-05-20T06:13:53Z
Shreelatha.Halemane
7642
/* Validated */
321120
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|ಹಮಾಲ ಇಮಾಮ್ಸಾಬಿ||65}}</small></noinclude>ಅಲ್ಲಿ ನಿಲ್ಲುತ್ತಿರಲಿಲ್ಲ. ಒಮ್ಮೆಯಷ್ಟೇ ವಿಶೇಷ ಸಂದರ್ಶಕರು ಬಂದರೆಂದು ಮೇಲ್ಗಾಡಿ ನಿಂತುದು, ಆಗಿನ ತಳಿರು ತೋರಣಗಳ ಸಂಭ್ರಮ, ಇಮಾಮ್ಸಾಬಿಗೆ ನೆನಪಿತ್ತು. ಬಂದಿಳಿದುದು ಒಬ್ಬ ಆಂಗ್ಲ ಉಚ್ಛಾಧಿಕಾರಿ. ಅರಸರಲ್ಲ, ವೈಸರಾಯರೋ ರೆಸಿಡೆಂಟರೋ-ಯಾರೋ ಒಬ್ಬರು. ಇಮಾಮ್ ಆಗಿನ್ನೂ ಮೂವತ್ತು ವರ್ಷಗಳ ಜವ್ವನಿಗ.
{{gap}}ಆಗ ಅವನ ವಯಸ್ಸು ಖಚಿತವಾಗಿ ಅಷ್ಟೇ ಎಂದು ಹೇಳಲು ಯಾವ ಆಧಾರವಿತ್ತು? ಬೀಬಿ ಮನೆಗೆ ಬಂದ ವರ್ಷ ಅದು, ಎರಡನೆಯ ಬೀಬಿ. ಚೊಚ್ಚಿಲ ಹೆರಿಗೆಗೆಂದು ತವರುಮನೆಗೆ ಹೋದ ಮೊದಲಿನಾಕೆ ಮರಳಿರಲಿಲ್ಲ. ಪ್ರಸವದ ವೇಳೆ, ಬಸಿರಲ್ಲಿದ್ದ ಜೀವದೊಡನೆ ಆಕೆಯೂ ಅಪಮೃತ್ಯುವಿಗೆ ಗುರಿಯಾಗಿದ್ದಳು. ಅದು, ಇಮಾಮ್ಸಾಬಿಯ ಚಿತ್ತಫಲಕದ ಮೇಲೆ ಅಳಿಸಲಾಗದ ಚಿತ್ತನ್ನು ಉಳಿಸಿ ಹೋದ ಘಟನೆ. ಆ ಯಾತನೆಯನ್ನು ಮೂಲೆಗೊತ್ತಿ ಇನ್ನೊಬ್ಬಳ ಕೈ ಹಿಡಿಯಲು, ಆರೆಂಟು ವರ್ಷಗಳ ಅವಧಿಯೇ ಅವನಿಗೆ ಬೇಕಾಯಿತು. ಆಗ ಆತನ ಸೋದರ ಮಾವ ಅಂದಿದ್ದ:
{{gap}}“ಮೂವತ್ತು ವರ್ಷವಾಯ್ತು ನಿನಗೆ. ಇನ್ನು ತಡಮಾಡ್ಬೇಡ."
{{gap}}ಅನಂತರವೂ ದಿನ ತಿಂಗಳು ವರ್ಷಗಳ ಲೆಕ್ಕವಿಡುವ ಗೊಡವೆಗೆ ಇಮಾಮ್ಸಾಬಿ ಹೋದವನಲ್ಲ. ಗಳಿಸಿದ ದುಡ್ಡನ್ನಷ್ಟು ಹೆಂಡತಿಗೆ ದಿನವೂ ಒಪ್ಪಿಸಿದರಾಯ್ತು ಅವನ ಕೆಲಸ. ಬೀಬಿ ಒಳ್ಳೆಯ ಹೆಂಡತಿ, ಒಳ್ಳೆಯ ತಾಯಿ. ಅವಳು ಹೆತ್ತುದು ಒಟ್ಟು ಐದು ಮಕ್ಕಳನ್ನು. (ಒಂದರ ಅನಂತರ ಒಂದಾಗಿ, ಐದೂ ಗಂಡೇ.) ತಮ್ಮ ವಿವಾಹವಾಗಿ ಎಷ್ಟು ಕಾಲವಾಯಿತು? ಮಕ್ಕಳ ವಯಸ್ಸೆಷ್ಟು-ಎಂಬುದನ್ನೆಲ್ಲ ಕೂಡಿಸಿ ಕಳೆದು ಹೇಳುತ್ತಲಿದ್ದವಳು ಇಮಾಮ್ಸಾಬಿಯ ಹೆಂಡತಿಯೇ.
{{gap}}ಇದೇ ಮೊನ್ನೆ ಆಕೆ ಅಂದಿದ್ದಳು:
{{gap}}"ಈ ಬಕ್ರೀದ್ಗೆ ನಮ್ಮ ಲಗ್ನ ಆಗಿ ಮುವತ್ತು ವರ್ಸ ಆಯ್ತೂಂದ್ರೆ...?
{{gap}}ಅವನಿಗೆ ಅಚ್ಚರಿಯಾಗಿತ್ತು.
{{gap}}"ಹಾಂ? ಹೌದಾ?... ಹಾಗಾದರೆ ನನಗೆಷ್ಟು ವರ್ಷ ಈಗ?"
{{gap}}“ನನ್ನ ಕೇಳ್ತೀರಲ್ಲ? ಅರವತ್ತು ಆಗ್ಲಿಲ್ವೇನು?”
{{gap}}“ಹೌದಾ? ಸರಿ! ಮುದುಕ ಅದೆ ಅನ್ನು!”
{{gap}}“ನೀವು ಮುದುಕ, ನಾನು ಮುದುಕಿ."
{{gap}}ಜೀವನದುದ್ದಕ್ಕೂ ಬಡತನದ ಬುತ್ತಿಯೇ ಆದರೂ, ನೇಗಿಲಗೆರೆಗಳಿಲ್ಲದ<noinclude></noinclude>
mtv2ke6hi431f7g8wk3jl98n36bi1cj
ಪುಟ:KELAVU SANNA KATHEGALU.pdf/೮೮
104
20242
321121
252342
2026-05-20T06:15:13Z
Shreelatha.Halemane
7642
/* Validated */
321121
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|66||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>ಸುಕ್ಳುಗಳಿಲ್ಲದ ಸೊಂಪಾದ ಮುಖ; ಮೇಣದ ಬೊಂಬೆಯಂತಹ ದುಂಡಗಿನ ಮೃದುಶರೀರ. ಮುಗ್ಧ ಹಸುಳೆಯ ಛಾಯೆ ತುಟಗಲ್ಲಗಳಲ್ಲೆಲ್ಲ. ಮುಖದ ಮೇಲೆ ಬಿಳಿಯ ಬೆಳೆಯಿತ್ತು. ಸೋತು ಜೋತ ತೆಳ್ಳಗಿನ ಮೀಸೆ. ವಿರಳವಾಗಿ ಬೆಳೆದು ತಿಂಗಳಿಗೊಮ್ಮೆ ಕ್ಷೌರಿಕನ ಕತ್ತಿಗೆ ಬಲಿಯಾಗುತ್ತಿದ್ದ ಗಡ್ಡ. ಮಗುತನವನ್ನು ಮರೆಸಲು ಎಳೆಯನೊಬ್ಬ ಕೃತ್ರಿಮ ಗಡ್ಡ-ಮೀಸೆಗಳನ್ನು ಅಂಟಿಸಿಕೊಂಡಹಾಗಿತ್ತು, ಆ ನೋಟ. ಮಹಾ ಸಾತ್ವಿಕನಂತೆ ತೋರುತ್ತಲಿದ್ದ, ನಡುಎತ್ತರದ ಈ ಮನುಷ್ಯ...
{{gap}}'ಕುಕ್' 'ಕುಕ್'? ಸದ್ದು ಕೇಳಿಸತೊಡಗಿತು, ದೂರದೊಂದು ಹಿಟ್ಟಿನ ಗಿರಣಿಯಿಂದ.
{{gap}}'ಮಿಲ್ ಶುರುವಾಯ್ತು.'
{{gap}}ಗಿರಣಿಯ ಕೂಗಿನಿಂದ ಕೆರಳಿತೆನ್ನುವಂತೆ ಕತ್ತೆಯೊಂದು ಅರಚುತ್ತ ದೂರ ಸಾಗಿತು ಹತ್ತಿರದಿಂದ.
{{gap}}ಇಮಾಮ್ಸಾಬಿ ಕುಳಿತಿದ್ದ ಒರಗು ಬೆಂಚು ಹೊಸದು. ನಿಲ್ದಾಣದ ಹೊರ ಆವರಣದಲ್ಲಿ ಅಂತಹವು ಎರಡು ಇರಲೆಂದು ರೇಲ್ವೆ ಇಲಾಖೆಯವರು ತರಿಸಿ ಹಾಕಿದ್ದರು. ಅವುಗಳ ಮೇಲೆ ಕುಳಿತವರ ಕಣ್ಣಿಗೆ, ಹೊಸದಾಗಿ ನೆಟ್ಟು ಬೆಳೆಸಿದ್ದ ಹೂವಿನ ಗಿಡಗಳು ಕಾಣುತ್ತಿ ದ್ದುವು.. ದೀಪಸ್ತಂಭದ ಬುಡದಲ್ಲಿ ಮುಳ್ಳುತಂತಿಯ ವೃತ್ತದೊಳಗೆ ಬಂದಿಗಳಾಗಿ (ಸುರಕ್ಷಿತವಾಗಿ) ಬಣ್ಣ ಬಣ್ಣದ ಬಗೆಬಗೆಯ ಹೂಗಳಿದ್ದುವು. ಮೊಗ್ಗುಗಳು; ಅರೆಬಿರಿದ, ಪೂರ್ಣವಾಗಿ ಅರಳಿ ಬಾಡಿ ಜೋಲುತ್ತಿದ್ದ ಹೂಗಳು.
{{gap}}ವಯಸ್ಸಿನೊಡನೆ ಮಂದವಾಗುತ್ತ ನಡೆದಿದ್ದ ಇಮಾವ್ಸಾಬಿಯ ದೃಷ್ಟಿ, ಹೂವಿನ ಸಸಿಗಳ ಮೇಲೆ ಸೋಮಾರಿಯಂತೆ ಎರಗಿತು. ಆ ಸೊಬಗಿನ ಆಸ್ವಾದನೆ ಅವನ ಸಾಮರ್ಥ್ಯಕ್ಕೆ ನಿಲುಕದ್ದು. ನೋಟ ಪುಷ್ಪರಾಶಿಯ ಮೇಲಿದ್ದರೂ ಆತ ಯೋಚಿಸುತ್ತಿದ್ದುದು ಬೇರೆಯೇ ಒಂದು;
{{gap}}ಕಿರಿಯ ಮಗನ ಹೆಂಡತಿ ತುಂಬಿದ ಗರ್ಭಿಣಿ. ಬೀಬಿ ನುಡಿದಿದ್ದಳು---"ಇವತ್ತೋ ನಾಳೆಯೋ ಆಗಬಹುದು, ಚೊಚ್ಚಲು."
{{gap}}ಚೊಚ್ಚಲು--
{{gap}}ಆ ಅಂಶ ಮತ್ತೆ ಮತ್ತೆ ನೆನಪಾಗಿ, ಇಮಾಮ್ಸಾಬಿಯ ಒಳಗೆ ಚಳಿ ಚಳಿ ಎನಿಸುತ್ತಿತ್ತು.
{{gap}}ಅವನು ತಾತನಾಗಲಿದ್ದುದು ಅದೇ ಮೊದಲನೆಯ ಸಲವೇನೂ ಅಲ್ಲ. ಹಾಗೆ ನೋಡಿದರೆ, ರೆಂಬೆಗಳು ವಿಶಾಲವಾಗಿ ಹರಡಿದ್ದ ವೃಕ್ಷ ಆತ. ಆದರೇನು?<noinclude></noinclude>
o65adnzt1m7nqmlz0tmdvuwuwc9nwf7
ಪುಟ:KELAVU SANNA KATHEGALU.pdf/೮೯
104
20243
321122
252380
2026-05-20T06:16:04Z
Shreelatha.Halemane
7642
/* Validated */
321122
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|ಹಮಾಲ ಇಮಾಮ್ಸಾಬಿ||67}}</small></noinclude>ಕೊಂಬೆಗಳು ಬಲಿತಂತೆ ಬೇಕೆ ಬೇರೆ ದಿಕ್ಭುಗಳಿಗೆ ಅವುಗಳನ್ನು ಕಡಿದೊಯ್ದಿದ್ಹರು. ಈಗ ಉಳಿದಿದ್ದುದು ಕಾಂಡ ಮತ್ತು ಕೊನೆಯ ರೆಂಬೆ ಮಾತ್ರ. ಎಲ್ಲ ಗಂಡು ಸಂತಾನವೆಂದೇ ಅಸೂಯೆ ಪಟ್ಟವರೆಷ್ಟು ಜನ! ಹಾಗೆ ಅವರು ಅಡಿದ್ದೇ ಕೆಡಕು ಮಾಡಿತೋ ಏನೋ. ಇಮಾಮ್ಸಾಬಿ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದೇ ಬಂತು. ಕಿರಿಯ ಒಬ್ಬನ ಹೊರತಾಗಿ ಯಾರೂ ಅವನಿಗೆ ದಕ್ಕಲಿಲ್ಲ.
{{gap}}ಕೂ ಎಂಜಿನಿನ ಜುಕುಜುಕುಜೂ ಆಟವೇ ಎಳೆಯರಿಗೆ. ಹಿರಿಯವನಿಗಿಷ್ಟು ಸಾಲೆ ಓದಿಸಿ ರೈಲ್ವೆಯಲ್ಲಿ ನೌಕರಿ ದೊರಕಿಸಿಕೊಡಬೇಕೆಂದು ಇಮಾಮ್ಸಾಬಿ ಆಸೆ ಕಟ್ಟಿಕೊಂಡಿದ್ದ. ಆದರೆ, ಹಿರಿಯವನಿಗಷ್ಟೇ ಅಲ್ಲ, ಅವನ ಮಕ್ಕಳು ಯಾರಿಗೂ ಸಾಲೆ ಪ್ರಿಯವಾಗಲಿಲ್ಲ.
{{gap}}“ಅಪ್ಪನಿಗೂ ಹೆಬ್ಬೆಟ್ಟಿನ ಗುರುತು; ಮಕ್ಕಳಿಗೂ ಹೆಬ್ಬಿಟ್ಟಿನ ಗುರುತು. ಅಲ್ಲಾನಿಗೆ ಇದೇ ಇಷ್ಟವೆಂದಾದರೆ ಹಾಗೆಯೇ ಅಗಲಿ” ಎಂದುಕೊಂಡ ಇಮಾಮ್ಸಾಬಿ|
{{gap}}ಕುಡಿಮೀಸೆ ಚಿಗುರುವ ವೇಳೆಗೆ ದೊಡ್ಡವನು ಜಟಕಾವಾಲನಾದ. ಸೊಸೆ ತವರಿಗೆ ಹೋಗಿ, ಇಮಾಮ್ಸಾಬಿಯ ಮೊಮ್ಮಗನೊಡನೆ ಮರಳಿದಳು.
{{gap}}ಆದರೆ ಆ ಬಗೆಯ ಸಮೃದ್ಧ ಬದುಕಿನ ಸೌಭಾಗ್ಯ ಬಹಳ ದಿನ ಇಮಾಮ್ಸಾಬಿಗೆ ದೊರೆಯಲಿಲ್ಲ. ಮಗ ಜಗಳವಾಡಿ, ತಾನು ಸಂಪಾದಿಸಿ ಕೂಡಿಟ್ಟಿದ್ದ ಹಣದೊಡನೆ, ಮತ್ತೊಮ್ಮೆ ಗರ್ಭಿಣಿಯಾಗಿದ್ದ ಹೆಂಡತಿ ಹಾಗೂ ಮಗುವಿನೊಡನೆ ಮನೆ ಬಿಟ್ಟು ಮುಂಬಯಿಗೆ ಹೊರಟುಹೋದ.
{{gap}}ಅನಂತರ ಇಬ್ಬರು ಜಗಳವಾಡದೆಯೇ ಮನೆಬಿಟ್ಟು ಹೋದರು, ಉತ್ತರ ಹಿಂದೂಸ್ಥಾನಕ್ಕೆಂದು.
{{gap}}ಊರಿಗೊಮ್ಮೆ ಸರ್ಕಸ್ ಬಂದು ಬೀಡು ಬಿಟ್ಟಿತು. ಇಪ್ಪತ್ತು ದಿನ ಅಲ್ಲಿದ್ದು ಡೇರೆ ಕಿತ್ತಾಗ ಇಮಾಮ್ಸಾಬಿಯ ನಾಲ್ಕನೆಯ ಹುಡುಗ ನಾಪತ್ತೆಯಾದ. ಸರ್ಕಸಿನವರು ಅಪಹರಿಸಿರಬೇಕೆಂಬ ಶಂಕೆ ತಂದೆಗೆ. ಆ ಶಂಕೆ
ಬೇಗನೆ ನಿರಸನವಾಯಿತು.
{{gap}}ಕೊನೆಯ ಮಗನನ್ನು ತಂದೆ ತಾಯಿ ಬಹಳ ಜೋಪಾನವಾಗಿ ಬೆಳೆಸಿದರು. ಆರೈಕೆ ಅತಿಯಾಗಿತ್ತೆಂದೇ ಆತ ಬಡಕಲು ಶರೀರದವನಾದ. ಒಮ್ಮೆ ಆತ ವಿಷಮಶೀತಜ್ವರಕ್ಕೆ ತುತ್ತಾದಾಗಲಂತೂ ಇಮಾಮ್ಸಾಬಿ ಅರೆಹುಚ್ಛನಾದ. ಅವನ ಹೆಂಡತಿ, ಮುಸಲ್ವಾನ-ಹಿಂದೂ ದೇವರಿಬ್ಬರಿಗೂ ಹರಕೆಹೊತ್ತಳು... ಹುಡುಗ ಕುತ್ತಿನಿಂದ ಪಾರಾದ... ಹಳ್ಳಿಯ ಹುಡುಗಿಯೊಬ್ಬಳು ಅವನ ಮಡದಿ<noinclude></noinclude>
qvqyke0mszrdwofs9kgb3l6igmitomm
321123
321122
2026-05-20T06:16:21Z
Shreelatha.Halemane
7642
321123
proofread-page
text/x-wiki
<noinclude><pagequality level="4" user="Shreelatha.Halemane" /><small>{{rh|ಹಮಾಲ ಇಮಾಮ್ಸಾಬಿ||67}}</small></noinclude>ಕೊಂಬೆಗಳು ಬಲಿತಂತೆ ಬೇಕೆ ಬೇರೆ ದಿಕ್ಭುಗಳಿಗೆ ಅವುಗಳನ್ನು ಕಡಿದೊಯ್ದಿದ್ಹರು. ಈಗ ಉಳಿದಿದ್ದುದು ಕಾಂಡ ಮತ್ತು ಕೊನೆಯ ರೆಂಬೆ ಮಾತ್ರ. ಎಲ್ಲ ಗಂಡು ಸಂತಾನವೆಂದೇ ಅಸೂಯೆ ಪಟ್ಟವರೆಷ್ಟು ಜನ! ಹಾಗೆ ಅವರು ಅಡಿದ್ದೇ ಕೆಡಕು ಮಾಡಿತೋ ಏನೋ. ಇಮಾಮ್ಸಾಬಿ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದೇ ಬಂತು. ಕಿರಿಯ ಒಬ್ಬನ ಹೊರತಾಗಿ ಯಾರೂ ಅವನಿಗೆ ದಕ್ಕಲಿಲ್ಲ.
{{gap}}ಕೂ ಎಂಜಿನಿನ ಜುಕುಜುಕುಜೂ ಆಟವೇ ಎಳೆಯರಿಗೆ. ಹಿರಿಯವನಿಗಿಷ್ಟು ಸಾಲೆ ಓದಿಸಿ ರೈಲ್ವೆಯಲ್ಲಿ ನೌಕರಿ ದೊರಕಿಸಿಕೊಡಬೇಕೆಂದು ಇಮಾಮ್ಸಾಬಿ ಆಸೆ ಕಟ್ಟಿಕೊಂಡಿದ್ದ. ಆದರೆ, ಹಿರಿಯವನಿಗಷ್ಟೇ ಅಲ್ಲ, ಅವನ ಮಕ್ಕಳು ಯಾರಿಗೂ ಸಾಲೆ ಪ್ರಿಯವಾಗಲಿಲ್ಲ.
{{gap}}“ಅಪ್ಪನಿಗೂ ಹೆಬ್ಬೆಟ್ಟಿನ ಗುರುತು; ಮಕ್ಕಳಿಗೂ ಹೆಬ್ಬಿಟ್ಟಿನ ಗುರುತು. ಅಲ್ಲಾನಿಗೆ ಇದೇ ಇಷ್ಟವೆಂದಾದರೆ ಹಾಗೆಯೇ ಅಗಲಿ” ಎಂದುಕೊಂಡ ಇಮಾಮ್ಸಾಬಿ|
{{gap}}ಕುಡಿಮೀಸೆ ಚಿಗುರುವ ವೇಳೆಗೆ ದೊಡ್ಡವನು ಜಟಕಾವಾಲನಾದ. ಸೊಸೆ ತವರಿಗೆ ಹೋಗಿ, ಇಮಾಮ್ಸಾಬಿಯ ಮೊಮ್ಮಗನೊಡನೆ ಮರಳಿದಳು.
{{gap}}ಆದರೆ ಆ ಬಗೆಯ ಸಮೃದ್ಧ ಬದುಕಿನ ಸೌಭಾಗ್ಯ ಬಹಳ ದಿನ ಇಮಾಮ್ಸಾಬಿಗೆ ದೊರೆಯಲಿಲ್ಲ. ಮಗ ಜಗಳವಾಡಿ, ತಾನು ಸಂಪಾದಿಸಿ ಕೂಡಿಟ್ಟಿದ್ದ ಹಣದೊಡನೆ, ಮತ್ತೊಮ್ಮೆ ಗರ್ಭಿಣಿಯಾಗಿದ್ದ ಹೆಂಡತಿ ಹಾಗೂ ಮಗುವಿನೊಡನೆ ಮನೆ ಬಿಟ್ಟು ಮುಂಬಯಿಗೆ ಹೊರಟುಹೋದ.
{{gap}}ಅನಂತರ ಇಬ್ಬರು ಜಗಳವಾಡದೆಯೇ ಮನೆಬಿಟ್ಟು ಹೋದರು, ಉತ್ತರ ಹಿಂದೂಸ್ಥಾನಕ್ಕೆಂದು.
{{gap}}ಊರಿಗೊಮ್ಮೆ ಸರ್ಕಸ್ ಬಂದು ಬೀಡು ಬಿಟ್ಟಿತು. ಇಪ್ಪತ್ತು ದಿನ ಅಲ್ಲಿದ್ದು ಡೇರೆ ಕಿತ್ತಾಗ ಇಮಾಮ್ಸಾಬಿಯ ನಾಲ್ಕನೆಯ ಹುಡುಗ ನಾಪತ್ತೆಯಾದ. ಸರ್ಕಸಿನವರು ಅಪಹರಿಸಿರಬೇಕೆಂಬ ಶಂಕೆ ತಂದೆಗೆ. ಆ ಶಂಕೆ
ಬೇಗನೆ ನಿರಸನವಾಯಿತು.
{{gap}}ಕೊನೆಯ ಮಗನನ್ನು ತಂದೆ ತಾಯಿ ಬಹಳ ಜೋಪಾನವಾಗಿ ಬೆಳೆಸಿದರು. ಆರೈಕೆ ಅತಿಯಾಗಿತ್ತೆಂದೇ ಆತ ಬಡಕಲು ಶರೀರದವನಾದ. ಒಮ್ಮೆ ಆತ ವಿಷಮಶೀತಜ್ವರಕ್ಕೆ ತುತ್ತಾದಾಗಲಂತೂ ಇಮಾಮ್ಸಾಬಿ ಅರೆಹುಚ್ಛನಾದ. ಅವನ ಹೆಂಡತಿ, ಮುಸಲ್ಮಾನ-ಹಿಂದೂ ದೇವರಿಬ್ಬರಿಗೂ ಹರಕೆಹೊತ್ತಳು... ಹುಡುಗ ಕುತ್ತಿನಿಂದ ಪಾರಾದ... ಹಳ್ಳಿಯ ಹುಡುಗಿಯೊಬ್ಬಳು ಅವನ ಮಡದಿ<noinclude></noinclude>
oam8f6vb0usxfieqg9qkoy6yj82xz0c
ಪುಟ:KELAVU SANNA KATHEGALU.pdf/೯೦
104
20244
321124
252383
2026-05-20T06:17:55Z
Pragathi. BH
7585
/* Validated */
321124
proofread-page
text/x-wiki
<noinclude><pagequality level="4" user="Pragathi. BH" /><small>{{rh|68||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>ಯಾಗಿ ಬಂದಳು.
ಆ ಕಿರಿಯವನೇ, ತನ್ನ ಜೀವನಾಧಾರವಾದ ರೈಲ್ವೆ ಶಾಖೆಗೆ ಇಮಾಮ್ಸಾಬಿ ನೀಡಿದ ಕಾಣ್ಕೆ. ಹಿಂದೆ ಇಬ್ಬರೇ ಹಮಾಲರಿದ್ದ ನಿಲ್ದಾಣದಲ್ಲಿ ಈಗ ನಾಲ್ವರಿದ್ದರು. ಇಮಾಮ್ಸಾಬಿಯ ಮಗ ಕರೀಂ ಐದನೆಯವನಾದ.
"ನನಗೆ ವಯಸ್ಸಾಯ್ತು. ಇನ್ನು ಕರೀಂ ಇರ್ತಾನೆ."
“ನೀನು ರಾತ್ರಿ ನಿದ್ದೆ ಕೆಡ್ಬೇಡ, ದಾದಾಮಿಯಾ ತ್ರೀ-ಆಪ್-ಫೋರ್-ಡೌನ್ ಎಲ್ಲಾ ಕರೀಂ ನೋಡ್ಕೊಳ್ಲಿ."
“ಹೂಂ, ಹೂಂ."
ಹೂಂ-ಎಂದನಾದರೂ, ಸದಾ ಕಾಲವೂ ರಾತ್ರಿಯ ದುಡಿಮೆಯನ್ನು ಮಗನಿಗೇ ವಹಿಸಿಕೊಡಲಿಲ್ಲ ಇಮಾಮಸಾಬಿ,. ಒಂದು ವಾರ ಇವನಾದರೆ ಒಂದು ವಾರ ಅವನು.
ಆ ಹುಡುಗಿ, ತನ್ನ ಕಿರಿಯ ಸೊಸೆ, ಈಗ ತುಂಬಿದ ಗರ್ಭಿಣಿ. ಹಳ್ಳಿಯಲ್ಲಿ ಬಾಣಂತಿತನಕ್ಕೆ ಅನುಕೂಲವಿಲ್ಲವೆಂದು ಇಮಾನ್ಸಾಬಿ ಇಲ್ಲಿಯೇ ಇರಿಸಿಕೊಂಡಿದ್ದ. ಅಲ್ಲದೆ, ಹೆಣ್ಣು ಮಕ್ಕಳಿಲ್ಲದ ಆ ಮುಗ್ಧೆಯ ಬಗೆಗೆ ವಿಶೇಷ ಒಲವನ್ನು ತೋರಿಸುತ್ತಲಿದ್ದ ಇಮಾಮ್ಸಾಬಿಯ ಹೆಂಡತಿ ಆ ಹುಡುಗಿಗೆ ಅತ್ತೆಯೂ ಆಗಿದ್ದಳು, ಅಮ್ಮನೂ ಆಗಿದ್ದಳು.
ಚೊಚ್ಚಲ ಹೆರಿಗೆ ಬೇರೆ__
ಬೆನ್ನು ಹುರಿಯನ್ನು ನಡುಕ ಮುತ್ತಿಡಲು, ಇಮಾಮ್ಸಾಬಿ ತನ್ನಷ್ಟಕ್ಕೆ ಅಂದುಕೊಂಡ:
“ಈಗ ಸೂಲಗಿತ್ತಿ ಇದ್ದಾಳೆ. ತಾನೆಲ್ಲ ನೋಡ್ಫೊಳ್ತೀನಿ ಅಂದಿದಾಳೆ. ಐದು ರೂಪಾಯಿ ಕೊಟ್ಟರಾಯ್ತು."
ಆ ಸಾರೆ, ತನ್ನ ಮೊದಲ ಬೀಬಿಯ ಹೆರಿಗೆಯ ವೇಳೆ, ಸೂಲಗಿತ್ತಿ ಇರಲಿಲ್ಲ.
ತಳವೇ ಇಲ್ಲವೇನೋ ಎನ್ನುವಂತಹ ಆಳದಿಂದ ಇಣಿಕಿ ನೋಡುತ್ತಿತ್ತು ನೋವಿನ ಆ ನೆನಪು.
“ಈಗ ಯಾಕೆ ಆ ಇಚಾರ..."
ಇದಕ್ಕಿಂತಲೂ ಹಿಂದಕ್ಕೆ ಸರಿಯತು ಸ್ಮರಣೆ.
ತಂದೆಯನ್ನು ಕಳೆದುಕೊಂಡಿದ್ದರೂ ಬಾಲ್ಯ ಸುಖಕರವಾಗಿಯೇ ಇತ್ತು ಸೋದರಮಾವ ನೀಡಿದ್ದ ಆಶ್ರಯದ ನೆರವಿನಿಂದ.
ಆ ಮಾವನೂ ಹಮಾಲ. ರೈಲ್ವೆ ಸ್ಪೇಷನ್ಸಿನ ಮುಖದರ್ಶನ ಏಳು,<noinclude></noinclude>
3xbf4yh70re3rsekh5s05oatdfg0isa
321128
321124
2026-05-20T06:18:47Z
Shreelatha.Halemane
7642
/* Validated */
321128
proofread-page
text/x-wiki
<noinclude><pagequality level="4" user="Pragathi. BH" /><small>{{rh|68||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>ಯಾಗಿ ಬಂದಳು.
{{gap}}ಆ ಕಿರಿಯವನೇ, ತನ್ನ ಜೀವನಾಧಾರವಾದ ರೈಲ್ವೆ ಶಾಖೆಗೆ ಇಮಾಮ್ಸಾಬಿ ನೀಡಿದ ಕಾಣ್ಕೆ. ಹಿಂದೆ ಇಬ್ಬರೇ ಹಮಾಲರಿದ್ದ ನಿಲ್ದಾಣದಲ್ಲಿ ಈಗ ನಾಲ್ವರಿದ್ದರು. ಇಮಾಮ್ಸಾಬಿಯ ಮಗ ಕರೀಂ ಐದನೆಯವನಾದ.
{{gap}}"ನನಗೆ ವಯಸ್ಸಾಯ್ತು. ಇನ್ನು ಕರೀಂ ಇರ್ತಾನೆ."
{{gap}}“ನೀನು ರಾತ್ರಿ ನಿದ್ದೆ ಕೆಡ್ಬೇಡ, ದಾದಾಮಿಯಾ ತ್ರೀ-ಆಪ್-ಫೋರ್-ಡೌನ್ ಎಲ್ಲಾ ಕರೀಂ ನೋಡ್ಕೊಳ್ಲಿ."
{{gap}}“ಹೂಂ, ಹೂಂ."
{{gap}}ಹೂಂ-ಎಂದನಾದರೂ, ಸದಾ ಕಾಲವೂ ರಾತ್ರಿಯ ದುಡಿಮೆಯನ್ನು ಮಗನಿಗೇ ವಹಿಸಿಕೊಡಲಿಲ್ಲ ಇಮಾಮಸಾಬಿ,. ಒಂದು ವಾರ ಇವನಾದರೆ ಒಂದು ವಾರ ಅವನು.
{{gap}}ಆ ಹುಡುಗಿ, ತನ್ನ ಕಿರಿಯ ಸೊಸೆ, ಈಗ ತುಂಬಿದ ಗರ್ಭಿಣಿ. ಹಳ್ಳಿಯಲ್ಲಿ ಬಾಣಂತಿತನಕ್ಕೆ ಅನುಕೂಲವಿಲ್ಲವೆಂದು ಇಮಾನ್ಸಾಬಿ ಇಲ್ಲಿಯೇ ಇರಿಸಿಕೊಂಡಿದ್ದ. ಅಲ್ಲದೆ, ಹೆಣ್ಣು ಮಕ್ಕಳಿಲ್ಲದ ಆ ಮುಗ್ಧೆಯ ಬಗೆಗೆ ವಿಶೇಷ ಒಲವನ್ನು ತೋರಿಸುತ್ತಲಿದ್ದ ಇಮಾಮ್ಸಾಬಿಯ ಹೆಂಡತಿ ಆ ಹುಡುಗಿಗೆ ಅತ್ತೆಯೂ ಆಗಿದ್ದಳು, ಅಮ್ಮನೂ ಆಗಿದ್ದಳು.
{{gap}}ಚೊಚ್ಚಲ ಹೆರಿಗೆ ಬೇರೆ__
{{gap}}ಬೆನ್ನು ಹುರಿಯನ್ನು ನಡುಕ ಮುತ್ತಿಡಲು, ಇಮಾಮ್ಸಾಬಿ ತನ್ನಷ್ಟಕ್ಕೆ ಅಂದುಕೊಂಡ:
{{gap}}“ಈಗ ಸೂಲಗಿತ್ತಿ ಇದ್ದಾಳೆ. ತಾನೆಲ್ಲ ನೋಡ್ಫೊಳ್ತೀನಿ ಅಂದಿದಾಳೆ. ಐದು ರೂಪಾಯಿ ಕೊಟ್ಟರಾಯ್ತು."
{{gap}}ಆ ಸಾರೆ, ತನ್ನ ಮೊದಲ ಬೀಬಿಯ ಹೆರಿಗೆಯ ವೇಳೆ, ಸೂಲಗಿತ್ತಿ ಇರಲಿಲ್ಲ.
{{gap}}ತಳವೇ ಇಲ್ಲವೇನೋ ಎನ್ನುವಂತಹ ಆಳದಿಂದ ಇಣಿಕಿ ನೋಡುತ್ತಿತ್ತು ನೋವಿನ ಆ ನೆನಪು.
{{gap}}“ಈಗ ಯಾಕೆ ಆ ಇಚಾರ..."
{{gap}}ಇದಕ್ಕಿಂತಲೂ ಹಿಂದಕ್ಕೆ ಸರಿಯತು ಸ್ಮರಣೆ.
{{gap}}ತಂದೆಯನ್ನು ಕಳೆದುಕೊಂಡಿದ್ದರೂ ಬಾಲ್ಯ ಸುಖಕರವಾಗಿಯೇ ಇತ್ತು ಸೋದರಮಾವ ನೀಡಿದ್ದ ಆಶ್ರಯದ ನೆರವಿನಿಂದ.
{{gap}}ಆ ಮಾವನೂ ಹಮಾಲ. ರೈಲ್ವೆ ಸ್ಪೇಷನ್ನಿನ ಮುಖದರ್ಶನ ಏಳು,<noinclude></noinclude>
30we9iewxbuv3ijykta5q42t4wv4fpg
ಪುಟ:KELAVU SANNA KATHEGALU.pdf/೯೧
104
20245
321125
252385
2026-05-20T06:18:04Z
Pragathi. BH
7585
/* Validated */
321125
proofread-page
text/x-wiki
<noinclude><pagequality level="4" user="Pragathi. BH" /><small>{{rh|ಹಮಾಲ ಇಮಾಮ್ಸಾಬಿ||69}}</small></noinclude>ಎಂಟಿರ ಹರೆಯದವನಾಗಿದ್ದಾಗಲೇ ತನಗೆ ಆಗಿತ್ತು. ಪ್ರತಿಯೊಂದು ಗಾಡಿಯನ್ನೂ ಇದಿರುನೋಡುತ್ತ ತಾನು ಕಳೆಯುತ್ತಿದ್ದ ಆ ದಿನಗಳು...
ಧಡ್ ಧಡಾಲ್!
[ಸಿಡಿಮದ್ದು ಕಲ್ಲುಬಂಡೆಗಳನ್ನು ಒಡೆದಂತಹ, ಬೆಟ್ಟದೊಂದು ತುಣುಕು ಜಾರಿ ಪ್ರಪಾತಕ್ಕೆ ಬಿದ್ದಂತಹ, ಸಹೆಸ್ರ ತೋಫುಗಳು ಏಕಕಾಲದಲ್ಲೇ ಗುಂಡಿನ ಮಳೆಗಳೆದಂತಹ್ ಸದ್ದು]
“ಆಕ್ಸಿಡೆಂಟ್!"
ಇಮಾಮ್ಸಾಬಿ ಹೌಹಾರಿ ಎದ್ದು ಬೊಬ್ಬಿಟ್ಟ:
“ಆಕ್ಸಿಡೆಂಟ್!"
ಬೆಂಕಿ ಬಿದ್ದ ಮನೆಯ ಎದುರು ನಿಂತು ಆರ್ತನಾದ ಮಾಡುವ ಎಳೆಯ ಬಾಲಕನಂತೆ ಅರಚುತ್ತ ಇಮಾಮ್ಸಾಬಿ, ನಿಲ್ದಾಣದ ಹೆಬ್ಬಾಗಿಲಿನತ್ತ ಧಾವಿಸಿದ.
ಓಡುತ್ತ, ಏದುಸಿರು ಬಿಡುತ್ತ, ಅತ ಕೂಗಿ ಕೇಳಿದ:
"ಎಲ್ಲಿ ಏನಾಯ್ತು?"
ಕಿವಿಯಿಂದ ಧ್ವನಿ ಕೇಳಿ, ತಮ್ಮ ಕೊಠಡಿಯಿಂದ ಹೊರಬಂದ ಸ್ಟೇಶನ್ ಮಾಸ್ತರು, ಓಡಿಬರುತ್ತಲಿದ್ದ ಇಮಾನರ್ಸಾಬಿಯನ್ನು ತಡೆಯುತ್ತ ಅಂದರು:
“ಯಾಕಪ್ಪಾ? ಏನಿದು?”
ಮಾಸ್ತರು ಅಲ್ಲಿಗೆ ಹೊಸಬರು. ಆದರೂ ಇಮಾಮ್ಸಾಬಿಯ ಬಗೆಗೆ ಆಗಲೇ ಅವರು ಸಾಕಷ್ಟು ತಿಳಿದಿದ್ದರು. ಅವರ ನೋಟ ಛೇಡಿಸುತ್ತಿತ್ತು. ಮುಗುಳುನಗೆ ಮೂಡಿತ್ತು ಮುಖದ ಮೇಲೆ.
“ಆಕ್ಸಿಡೆಂಟ್ ಆಗಿಲ್ವ ಮಾಸ್ತರ್ಸಾಬ್?"
“ಮತ್ತೆ ಕನಸು ಬಿತ್ತೇನಪ್ಪ?”
ನಿಲ್ದಾಣದೆದುರಿಗೆ ಮೂರನೆಯ ಸಾಲಿನಲ್ಲಿ ಕಟ್ಟಿಗೆ ತಾಗಿ ನಿಂತಿತ್ತು ಮಾಲ್ಗಾಡಿ. ತುಂಬಿದ್ದ ಡಬ್ಬಿಯೊಂದನ್ನು ತಂದು ಎಂಜಿನು, ಗಾಡಿಗೆ ಅಂಟಿಸಿತ್ತು. ಆಗ ಕೊಂಡಿ ತಗಲಿ, ತಮಗೆ ನೋವಾಯಿತೆಂದು ಎಲ್ಲ ಡಬ್ಬಿಗಳೂ
ತುಸು ಗದ್ದಲ ಮಾಡಿದ್ದುವು.
ಅದೇ ಸದ್ದು-ಧಡ್ಧಡಾಲ್.
ಆಕ್ಸಿಡೆಂಟ್!
ನಾಚಿಕೆಯಿಂದ ಇಮಾಮ್ಸಾಬಿಯ ಮುಖ ಕೆಂಪೇರಿತು.
“ವಯಸ್ಸಾಗೋಯ್ತು ನಂಗೆ!” ಎಂದು ನುಡಿದು, ತಲೆ ತಗ್ಗಿಸಿ ನೆಲ<noinclude></noinclude>
h8vk1slykwxzi541ddduvf3kmwo3ars
321129
321125
2026-05-20T06:19:56Z
Shreelatha.Halemane
7642
321129
proofread-page
text/x-wiki
<noinclude><pagequality level="4" user="Pragathi. BH" /><small>{{rh|ಹಮಾಲ ಇಮಾಮ್ಸಾಬಿ||69}}</small></noinclude>ಎಂಟಿರ ಹರೆಯದವನಾಗಿದ್ದಾಗಲೇ ತನಗೆ ಆಗಿತ್ತು. ಪ್ರತಿಯೊಂದು ಗಾಡಿಯನ್ನೂ ಇದಿರುನೋಡುತ್ತ ತಾನು ಕಳೆಯುತ್ತಿದ್ದ ಆ ದಿನಗಳು...
{{gap}}ಧಡ್ ಧಡಾಲ್!
{{gap}}[ಸಿಡಿಮದ್ದು ಕಲ್ಲುಬಂಡೆಗಳನ್ನು ಒಡೆದಂತಹ, ಬೆಟ್ಟದೊಂದು ತುಣುಕು ಜಾರಿ ಪ್ರಪಾತಕ್ಕೆ ಬಿದ್ದಂತಹ, ಸಹೆಸ್ರ ತೋಫುಗಳು ಏಕಕಾಲದಲ್ಲೇ ಗುಂಡಿನ ಮಳೆಗಳೆದಂತಹ್ ಸದ್ದು]
{{gap}}“ಆಕ್ಸಿಡೆಂಟ್!"
{{gap}}ಇಮಾಮ್ಸಾಬಿ ಹೌಹಾರಿ ಎದ್ದು ಬೊಬ್ಬಿಟ್ಟ:
{{gap}}“ಆಕ್ಸಿಡೆಂಟ್!"
{{gap}}ಬೆಂಕಿ ಬಿದ್ದ ಮನೆಯ ಎದುರು ನಿಂತು ಆರ್ತನಾದ ಮಾಡುವ ಎಳೆಯ ಬಾಲಕನಂತೆ ಅರಚುತ್ತ ಇಮಾಮ್ಸಾಬಿ, ನಿಲ್ದಾಣದ ಹೆಬ್ಬಾಗಿಲಿನತ್ತ ಧಾವಿಸಿದ.
{{gap}}ಓಡುತ್ತ, ಏದುಸಿರು ಬಿಡುತ್ತ, ಅತ ಕೂಗಿ ಕೇಳಿದ:
{{gap}}"ಎಲ್ಲಿ ಏನಾಯ್ತು?"
{{gap}}ಕಿವಿಯಿಂದ ಧ್ವನಿ ಕೇಳಿ, ತಮ್ಮ ಕೊಠಡಿಯಿಂದ ಹೊರಬಂದ ಸ್ಟೇಶನ್ ಮಾಸ್ತರು, ಓಡಿಬರುತ್ತಲಿದ್ದ ಇಮಾನರ್ಸಾಬಿಯನ್ನು ತಡೆಯುತ್ತ ಅಂದರು:
{{gap}}“ಯಾಕಪ್ಪಾ? ಏನಿದು?”
{{gap}}ಮಾಸ್ತರು ಅಲ್ಲಿಗೆ ಹೊಸಬರು. ಆದರೂ ಇಮಾಮ್ಸಾಬಿಯ ಬಗೆಗೆ ಆಗಲೇ ಅವರು ಸಾಕಷ್ಟು ತಿಳಿದಿದ್ದರು. ಅವರ ನೋಟ ಛೇಡಿಸುತ್ತಿತ್ತು. ಮುಗುಳುನಗೆ ಮೂಡಿತ್ತು ಮುಖದ ಮೇಲೆ.
{{gap}}“ಆಕ್ಸಿಡೆಂಟ್ ಆಗಿಲ್ವ ಮಾಸ್ತರ್ಸಾಬ್?"
{{gap}}“ಮತ್ತೆ ಕನಸು ಬಿತ್ತೇನಪ್ಪ?”
{{gap}}ನಿಲ್ದಾಣದೆದುರಿಗೆ ಮೂರನೆಯ ಸಾಲಿನಲ್ಲಿ ಕಟ್ಟಿಗೆ ತಾಗಿ ನಿಂತಿತ್ತು ಮಾಲ್ಗಾಡಿ. ತುಂಬಿದ್ದ ಡಬ್ಬಿಯೊಂದನ್ನು ತಂದು ಎಂಜಿನು, ಗಾಡಿಗೆ ಅಂಟಿಸಿತ್ತು. ಆಗ ಕೊಂಡಿ ತಗಲಿ, ತಮಗೆ ನೋವಾಯಿತೆಂದು ಎಲ್ಲ ಡಬ್ಬಿಗಳೂ
ತುಸು ಗದ್ದಲ ಮಾಡಿದ್ದುವು.
{{gap}}ಅದೇ ಸದ್ದು-ಧಡ್ಧಡಾಲ್.
{{gap}}ಆಕ್ಸಿಡೆಂಟ್!
{{gap}}ನಾಚಿಕೆಯಿಂದ ಇಮಾಮ್ಸಾಬಿಯ ಮುಖ ಕೆಂಪೇರಿತು.
{{gap}}“ವಯಸ್ಸಾಗೋಯ್ತು ನಂಗೆ!” ಎಂದು ನುಡಿದು, ತಲೆ ತಗ್ಗಿಸಿ ನೆಲ<noinclude></noinclude>
ikdflkpuzkz8u02tns85ior7bqbbojw
ಪುಟ:KELAVU SANNA KATHEGALU.pdf/೯೨
104
20246
321126
252386
2026-05-20T06:18:20Z
Pragathi. BH
7585
/* Validated */
321126
proofread-page
text/x-wiki
<noinclude><pagequality level="4" user="Pragathi. BH" /><small>{{rh|70||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>ನೋಡುತ್ತ, ಪ್ಲಾಟ್ಫಾರ್ಮಿನುದ್ದಕ್ಕೂ ಆತ ನಡೆದುಹೋದ.
ಕಟ್ಟಡ ಮುಗಿದು ಕಪ್ಪು ಪಟ್ಟಿಯ ಬೇಲಿ ಮೊದಲಾದೆಡೆ, ಹೊರಗೆ ಬೆಳೆದು ಒಳಕ್ಕೂ ನೆರಳು ನೀಡಿದ್ದ ಹುಣಸೆಮರದ ಕೆಳಗೆ ಬೇಲಿಗೊರಗಿ ರುಮಾಲು ತೆಗೆದು ಕೆಳಕ್ಕೆಳೆದು, ಸುರಳಿ ಬಿಚ್ಚಿಕೊಂಡ ತುದಿಯಿಂದ ತಲೆಯನ್ನೂ ಮುಖವನ್ನೂ ಒರೆಸಿದ.
ಹೇಗೆ ಬೇಸ್ತು ಬಿದ್ದೆ ತಾನು!
ಹಿಂದೆಯೂ ಹತ್ತಾರು ಸಾರೆ ಆ ರೀತಿ ಅವನಿಗೆ ಆಗಿತ್ತು. ಗಾಢನಿದ್ರೆಯಲ್ಲೂ ಕನಸು ಕಂಡು. ಮೂಕನಂತೆ ಅಸ್ಪಷ್ಟ ಸ್ವರ ಹೊರಡಿಸುತ್ತ ಆತ ಗಡಬಡಿಸಿ ಎದ್ದುದಿತ್ತು. ಅವನು ಯುವಕನಾಗಿದ್ದಾಗ ಅವನ ಊರಿನಿಂದ
ಕೆಲವೇ ಮೈಲುಗಳಾಚೆ ಸಂಭವಿಸಿದ್ದೊಂದು ರೈಲು ಅವಘಡದ ಪ್ರತಿಧ್ವನಿ ಅದಿಲ್ಲ. ಅಪಘಾತನನ್ನು ಕಣ್ಣಾರೆ ಕಂಡಿರಲಿಲ್ಲ ಇಮಾಮ್ಸಾಬಿ. ಆದರೂ ಅದು ಸಂಭವಿಸಿದ ಕೆಲವೇ ಗಂಟಿಗಳಲ್ಲಿ, ಆತ ಸ್ಥಳಕ್ಕೆ ಬಂದಿದ್ದ. ಕತ್ತಲಲ್ಲಿ ಬರಿಗಾಲಲ್ಲೇ ನಡೆದು ತಲುಪಿದ್ದ. ಮುಂದೆ ಕೆಲವೇ ನಿಮಿಷಗಳಲ್ಲಿ, ವೈದ್ಯಕೀಯ ಸಹಾಯವನ್ನೂ ಮತ್ತಿತರ ಪರಿಹಾರವನ್ನೂ ರಿಲೀಫ್ ಟ್ರೈನು ತಂದಿತ್ತು. ಅದರಲ್ಲಿದ್ದ ನಗರದ ರೈಲ್ವೆ ಆಳುಗಳನ್ನು ಇಮಾಮ್ಸಾಬಿ ಸೇರಿಕೊಂಡು ಆರ್ತರಿಗೆ ನೆರವು ನೀಡಿದ್ದ. ಮುಳುಗಿ ಸಾಯಲು ಸಾಕಷ್ಟು ನೀರಿಲ್ಲದ ನದಿ. ಆದರೂ ಹಳೆಯ ಸೇತುವೆ ಬಿರುಕುಬಿಟ್ಟು, ಎಂಜಿನ್ ಹಾಗೂ ಎದುರಿನ ಮೂರು ಡಬ್ಬಿಗಳು ಕೆಳಕ್ಕೆ ಉರುಳಿದ್ದುವು. ಪ್ರಯಾಣಿಕರ ಆಕ್ರಂದನ ಕರ್ಣ ಭೇದಕವಾಗಿತ್ತು. ಅವಸರ ಅವಸರವಾಗಿ ವ್ಯವಸ್ಥೆಗೊಳಿಸಿದ ಸರ್ಚ್ ಲೈಟುಗಳ ಬೆಳಕಿನಲ್ಲಿ, ಸಾವಿನ ಬೋನು ಕತ್ತರಿಗಳಲ್ಲಿ ಸಿಲುಕಿಕೊಂಡವರ-ಬದುಕಿ ಉಳಿದವರ- ರಕ್ಷಣೆಗಾಗಿ ಯತ್ನ ನಡೆಯಿತು. ಬಾಹುಗಳಲ್ಲಿ ನೂರು ಜನರ ಬಲವಿದ್ದವರಂತೆ ಇಮಾಮಸಾಬಿ ದುಡಿದ. ಬೆಳಕು ಹರಿದು ಸೂರ್ಯ ನಡುನೆತ್ತಿಗೆ
ಬರುವ ಹೊತ್ತಿಗೆ ಆ ದುಡಿಮೆ ಮುಗಿಯಿತು. ಸತ್ತವರ ಶವಗಳೆಲ್ಲ ದೊರೆತಿದ್ಹುವು. ಐವತ್ತೆಂಟು ಜನ. ಗಂಭೀರ ಸ್ವರೂಪದ ಗಾಯಗಳಾಗಿದ್ದವರು ಇಪ್ಪತ್ತೆರಡು ಮಂದಿ. ಸಣ್ಣ ಪುಟ್ಟ ಗಾಯಗಳು ಇನ್ನೂ ಹಲವರಿಗೆ.
ಮುಂದೆ ಅನೇಕ ವರ್ಷಗಳ ನಂತರವೂ ಕನಸಿನಲ್ಲಿ ಕಾಣುವಷ್ಟು ಭೀಕರವಾಗಿತ್ತು ಆ ಫಟನೆ.
ಅಂದು ದುಡಿಮೆ ಮುಗಿದಾಗ, ಎಲ್ಲ ಬಳಲಿಕೆಯೂ ಒಟ್ಟಿಗೆ ಕಾಣಿಸಿಕೊಂಡು ಕಾಲು ಕಟ್ಟಿತು. ಅವಘಡದ ಸನ್ನಿವೇಶವನ್ನು ನೋಡಲೆಂದು ಇಮಾಮ್ಸಾಬಿ ಕುಳಿತ. ಮೈ ಥರಥರನೆ ನಡುಸುತ್ತಿತ್ತು. ತೀವ್ರಗೊಂಡಿದ್ದ<noinclude></noinclude>
dqzg52djm20orsjg4o6glhq16tx92hk
321131
321126
2026-05-20T06:21:10Z
Shreelatha.Halemane
7642
321131
proofread-page
text/x-wiki
<noinclude><pagequality level="4" user="Pragathi. BH" /><small>{{rh|70||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>ನೋಡುತ್ತ, ಪ್ಲಾಟ್ಫಾರ್ಮಿನುದ್ದಕ್ಕೂ ಆತ ನಡೆದುಹೋದ.
{{gap}}ಕಟ್ಟಡ ಮುಗಿದು ಕಪ್ಪು ಪಟ್ಟಿಯ ಬೇಲಿ ಮೊದಲಾದೆಡೆ, ಹೊರಗೆ ಬೆಳೆದು ಒಳಕ್ಕೂ ನೆರಳು ನೀಡಿದ್ದ ಹುಣಸೆಮರದ ಕೆಳಗೆ ಬೇಲಿಗೊರಗಿ ರುಮಾಲು ತೆಗೆದು ಕೆಳಕ್ಕೆಳೆದು, ಸುರಳಿ ಬಿಚ್ಚಿಕೊಂಡ ತುದಿಯಿಂದ ತಲೆಯನ್ನೂ ಮುಖವನ್ನೂ ಒರೆಸಿದ.
{{gap}}ಹೇಗೆ ಬೇಸ್ತು ಬಿದ್ದೆ ತಾನು!
{{gap}}ಹಿಂದೆಯೂ ಹತ್ತಾರು ಸಾರೆ ಆ ರೀತಿ ಅವನಿಗೆ ಆಗಿತ್ತು. ಗಾಢನಿದ್ರೆಯಲ್ಲೂ ಕನಸು ಕಂಡು. ಮೂಕನಂತೆ ಅಸ್ಪಷ್ಟ ಸ್ವರ ಹೊರಡಿಸುತ್ತ ಆತ ಗಡಬಡಿಸಿ ಎದ್ದುದಿತ್ತು. ಅವನು ಯುವಕನಾಗಿದ್ದಾಗ ಅವನ ಊರಿನಿಂದ
ಕೆಲವೇ ಮೈಲುಗಳಾಚೆ ಸಂಭವಿಸಿದ್ದೊಂದು ರೈಲು ಅವಘಡದ ಪ್ರತಿಧ್ವನಿ ಅದಿಲ್ಲ. ಅಪಘಾತನನ್ನು ಕಣ್ಣಾರೆ ಕಂಡಿರಲಿಲ್ಲ ಇಮಾಮ್ಸಾಬಿ. ಆದರೂ ಅದು ಸಂಭವಿಸಿದ ಕೆಲವೇ ಗಂಟಿಗಳಲ್ಲಿ, ಆತ ಸ್ಥಳಕ್ಕೆ ಬಂದಿದ್ದ. ಕತ್ತಲಲ್ಲಿ ಬರಿಗಾಲಲ್ಲೇ ನಡೆದು ತಲುಪಿದ್ದ. ಮುಂದೆ ಕೆಲವೇ ನಿಮಿಷಗಳಲ್ಲಿ, ವೈದ್ಯಕೀಯ ಸಹಾಯವನ್ನೂ ಮತ್ತಿತರ ಪರಿಹಾರವನ್ನೂ ರಿಲೀಫ್ ಟ್ರೈನು ತಂದಿತ್ತು. ಅದರಲ್ಲಿದ್ದ ನಗರದ ರೈಲ್ವೆ ಆಳುಗಳನ್ನು ಇಮಾಮ್ಸಾಬಿ ಸೇರಿಕೊಂಡು ಆರ್ತರಿಗೆ ನೆರವು ನೀಡಿದ್ದ. ಮುಳುಗಿ ಸಾಯಲು ಸಾಕಷ್ಟು ನೀರಿಲ್ಲದ ನದಿ. ಆದರೂ ಹಳೆಯ ಸೇತುವೆ ಬಿರುಕುಬಿಟ್ಟು, ಎಂಜಿನ್ ಹಾಗೂ ಎದುರಿನ ಮೂರು ಡಬ್ಬಿಗಳು ಕೆಳಕ್ಕೆ ಉರುಳಿದ್ದುವು. ಪ್ರಯಾಣಿಕರ ಆಕ್ರಂದನ ಕರ್ಣ ಭೇದಕವಾಗಿತ್ತು. ಅವಸರ ಅವಸರವಾಗಿ ವ್ಯವಸ್ಥೆಗೊಳಿಸಿದ ಸರ್ಚ್ ಲೈಟುಗಳ ಬೆಳಕಿನಲ್ಲಿ, ಸಾವಿನ ಬೋನು ಕತ್ತರಿಗಳಲ್ಲಿ ಸಿಲುಕಿಕೊಂಡವರ-ಬದುಕಿ ಉಳಿದವರ- ರಕ್ಷಣೆಗಾಗಿ ಯತ್ನ ನಡೆಯಿತು. ಬಾಹುಗಳಲ್ಲಿ ನೂರು ಜನರ ಬಲವಿದ್ದವರಂತೆ ಇಮಾಮಸಾಬಿ ದುಡಿದ. ಬೆಳಕು ಹರಿದು ಸೂರ್ಯ ನಡುನೆತ್ತಿಗೆ
ಬರುವ ಹೊತ್ತಿಗೆ ಆ ದುಡಿಮೆ ಮುಗಿಯಿತು. ಸತ್ತವರ ಶವಗಳೆಲ್ಲ ದೊರೆತಿದ್ಹುವು. ಐವತ್ತೆಂಟು ಜನ. ಗಂಭೀರ ಸ್ವರೂಪದ ಗಾಯಗಳಾಗಿದ್ದವರು ಇಪ್ಪತ್ತೆರಡು ಮಂದಿ. ಸಣ್ಣ ಪುಟ್ಟ ಗಾಯಗಳು ಇನ್ನೂ ಹಲವರಿಗೆ.
{{gap}}ಮುಂದೆ ಅನೇಕ ವರ್ಷಗಳ ನಂತರವೂ ಕನಸಿನಲ್ಲಿ ಕಾಣುವಷ್ಟು ಭೀಕರವಾಗಿತ್ತು ಆ ಫಟನೆ.
{{gap}}ಅಂದು ದುಡಿಮೆ ಮುಗಿದಾಗ, ಎಲ್ಲ ಬಳಲಿಕೆಯೂ ಒಟ್ಟಿಗೆ ಕಾಣಿಸಿಕೊಂಡು ಕಾಲು ಕಟ್ಟಿತು. ಅವಘಡದ ಸನ್ನಿವೇಶವನ್ನು ನೋಡಲೆಂದು ಇಮಾಮ್ಸಾಬಿ ಕುಳಿತ. ಮೈ ಥರಥರನೆ ನಡುಸುತ್ತಿತ್ತು. ತೀವ್ರಗೊಂಡಿದ್ದ<noinclude></noinclude>
s8ko54cl3trp4x5xvfou4u0zhjiifhh
ಪುಟ:KELAVU SANNA KATHEGALU.pdf/೯೩
104
20247
321127
252389
2026-05-20T06:18:36Z
Pragathi. BH
7585
/* Validated */
321127
proofread-page
text/x-wiki
<noinclude><pagequality level="4" user="Pragathi. BH" /><small>{{rh|ಹಮಾಲ ಇಮಾಮ್ಸಾಬಿ||71}}</small></noinclude>ಎದೆಗುಂಡಿಯ ಬಡಿತ ಇನ್ನೂ ಕಡಿಮೆಯಾಗಿರಲಿಲ್ಲ. ತಲೆ, ಮುಖ, ಕಂಕುಳು, ಎದೆ-ಎಲ್ಲ ಬೆವತಿದ್ದುವು.
ಕಂಪಿಸುತ್ತಿದ್ದ ಬೆರಳುಗಳಿಂದ ಕೆಂಪು ರುಮಾಲನ್ನು ಸರಿಪಡಿಸುತ್ತ ಊರಿನಿಂತ ಬಂದಿದ್ದ ಹಲವರೊಡನೆ, ರಾತ್ರೆ ತಾನು ಕಂಡುದನ್ನು ಅವರಿಗೆ ಬಣ್ಣಿಸುತ್ತ, ಇಮಾವರ್ಸಾಬಿ ಹಿಂದಿರುಗಿದ.
ಅವನನ್ನು ಇದಿರ್ಗೊಂಡವರಲ್ಲಿ ಕೆಲವರು ಹೇಳಿದ್ದರು:
“ಭಾರಿ ಸಂಪಾದನೆಯಾಗಿರ್ಬೇಕು ಇಮಾಮ್ಗೆ!”
ಅದನ್ನು ಕೇಳಿ, ರಕ್ತವೆಲ್ಲ ಮುಖಕ್ಕೇರಿ ಬಂದ್ಕು ಕಣ್ಣಿಗೆ ಕತ್ತಲು ಕವಿದಂತಾಯಿತು ಈತನಿಗೆ.
ಇವನು ಸ್ವರವೇರಿಸಿ ಅಂದಿದ್ದ:
"ಥೂ ನಿಮ್ಮ! ನೀವು ಮನುಷ್ಯರೊ ಮೃಗಗಳೊ?"
ಶ್ರೀಮಂತ ಪ್ರಯಾಣಿಕರು ಕೆಲವರು ಅವನಿಗೆ ಹಣ ಕೊಡಲು ಬಂದಿದ್ಹುದು ನಿಜ. ಆದರೆ ಬಿಡಿಕಾಸನ್ನೂ ಅವನು ಮುಟ್ಟಿರಲಿಲ್ಲ.
ಹಣಕಾಸಿನ ವಿಷಯದಲ್ಲಿ ಅವನಿಗೂ ಅವನ ಸಹೋದ್ಯೋಗಿಗಳಿಗೂ ನಡುವೆ ಸದಾಕಾಲವೂ ಭಿನ್ನಾಭಿಪ್ರಾಯವಿದ್ದೇ ಇತ್ತು. ಹೊಸ ಮುಖಗಳನ್ನು ಕಾಡಿಸಿ ಪೀಡಿಸಿ ಅದೆಷ್ಟು ಕಿತ್ತುಕೊಳ್ಳಲು ಅವರು ಯತ್ನಿಸುತ್ತಿದ್ದರು! ಎಷ್ಟೋ ಸಾರಿ ಯಶಸ್ವಿಗಳಾಗುತ್ತಿದ್ದರು. ಯಾರಾದರೂ ಗದರಿದರೆ ಜಗಳ ಕಾಯುತ್ತಿದ್ದರು. ಇಮಾಮ್ಸಾಬಿ ಮಾತ್ರ, ಅಷ್ಟು ಕೊಡಿ--ಇಷ್ಟು ಕೊಡಿ ಎಂದು ಯಾವತ್ತೂ ಕೇಳಿದವನಲ್ಲ. "ಎಷ್ಟು ಕೂಲಿ?" ಎಂದು ಯಾರಾದರೂ ಪ್ರಶ್ನಿಸಿದರೆ, ಇಂತಿಷ್ಟು-ಎಂದು ನ್ಕಾಯಸಮ್ಮತವಾದುದನ್ನು ತಿಳಿಸುತ್ತಿದ್ದ....
ಮತ್ತೆ ಹಲ್ಲೋ! ಹಲ್ಲೋ! (ಫೋನಿನ ಖಣಖಣತ್ಯಾರ)
ನೌಕರಿ ಘಂಟಿ ಬಾರಿಸಿದ.
ಕೆಲ ನಿಮಿಷಗಳ ಅನಂತರ ಬೀಗ ತೆಗೆದು ಹಿಡಿಯನ್ನು ಎಳೆದ. ಕೈಕಂಬ ಮಿಸುಕಿ ಸಿಗ್ನಲ್ ಬಿತ್ತು.
ಘಂಟಿಯ ಸಪ್ಸಳ ಇಮಾಮ್ಸಾಬಿಗೆ ಕೇಳಿಸಿದುದು ಸ್ವಲ್ಪ ಅಸ್ಪಷ್ಟವಾಗಿಯೇ. ಕೈಕಂಬ ಕಾಣಿಸುತ್ತಿದ್ದುದೂ ಮಸುಕು ಮಸುಕಾಗಿಯೇ. ಆದರೂ
ಸಿಗ್ನಲ್ ಬಿತ್ತೆಂಬುದನ್ನು ಅಭ್ಯಾಸ ಬಲದಿಂದ ಆತ ಬಲ್ಲ.
ನಿಲ್ದಾಣದ ನೀರವತೆ ಮಾಯವಾಗಿ ಗುಸುಗುಸು ಸದ್ದು ಆಗಲೇ ಕೇಳಿಸತೊಡಗಿತ್ತು. ಸೋಮಾರಿಯಾದೆ ತಾನು-ಎಂದು ಛೀಗಳೆಯುತ್ತ ಇಮಾವರ್
ಸಾಬಿ ಎದ್ದು ರುಮಾಲು ಸುತ್ತಿದ. ಅವನ ಬರಿಯ ಪಾದಗಳು ದೇಹದ ಭಾರ<noinclude></noinclude>
ozucljnvuf7xqm15no749lrp5645cm8
321130
321127
2026-05-20T06:20:59Z
Pragathi. BH
7585
321130
proofread-page
text/x-wiki
<noinclude><pagequality level="4" user="Pragathi. BH" /><small>{{rh|ಹಮಾಲ ಇಮಾಮ್ಸಾಬಿ||71}}</small></noinclude>ಎದೆಗುಂಡಿಯ ಬಡಿತ ಇನ್ನೂ ಕಡಿಮೆಯಾಗಿರಲಿಲ್ಲ. ತಲೆ, ಮುಖ, ಕಂಕುಳು, ಎದೆ-ಎಲ್ಲ ಬೆವತಿದ್ದುವು.
{{gap}}ಕಂಪಿಸುತ್ತಿದ್ದ ಬೆರಳುಗಳಿಂದ ಕೆಂಪು ರುಮಾಲನ್ನು ಸರಿಪಡಿಸುತ್ತ ಊರಿನಿಂತ ಬಂದಿದ್ದ ಹಲವರೊಡನೆ, ರಾತ್ರೆ ತಾನು ಕಂಡುದನ್ನು ಅವರಿಗೆ ಬಣ್ಣಿಸುತ್ತ, ಇಮಾವರ್ಸಾಬಿ ಹಿಂದಿರುಗಿದ.
{{gap}}ಅವನನ್ನು ಇದಿರ್ಗೊಂಡವರಲ್ಲಿ ಕೆಲವರು ಹೇಳಿದ್ದರು:
{{gap}}“ಭಾರಿ ಸಂಪಾದನೆಯಾಗಿರ್ಬೇಕು ಇಮಾಮ್ಗೆ!”
{{gap}}ಅದನ್ನು ಕೇಳಿ, ರಕ್ತವೆಲ್ಲ ಮುಖಕ್ಕೇರಿ ಬಂದ್ಕು ಕಣ್ಣಿಗೆ ಕತ್ತಲು ಕವಿದಂತಾಯಿತು ಈತನಿಗೆ.
{{gap}}ಇವನು ಸ್ವರವೇರಿಸಿ ಅಂದಿದ್ದ:
{{gap}}"ಥೂ ನಿಮ್ಮ! ನೀವು ಮನುಷ್ಯರೊ ಮೃಗಗಳೊ?"
{{gap}}ಶ್ರೀಮಂತ ಪ್ರಯಾಣಿಕರು ಕೆಲವರು ಅವನಿಗೆ ಹಣ ಕೊಡಲು ಬಂದಿದ್ಹುದು ನಿಜ. ಆದರೆ ಬಿಡಿಕಾಸನ್ನೂ ಅವನು ಮುಟ್ಟಿರಲಿಲ್ಲ.
{{gap}}ಹಣಕಾಸಿನ ವಿಷಯದಲ್ಲಿ ಅವನಿಗೂ ಅವನ ಸಹೋದ್ಯೋಗಿಗಳಿಗೂ ನಡುವೆ ಸದಾಕಾಲವೂ ಭಿನ್ನಾಭಿಪ್ರಾಯವಿದ್ದೇ ಇತ್ತು. ಹೊಸ ಮುಖಗಳನ್ನು ಕಾಡಿಸಿ ಪೀಡಿಸಿ ಅದೆಷ್ಟು ಕಿತ್ತುಕೊಳ್ಳಲು ಅವರು ಯತ್ನಿಸುತ್ತಿದ್ದರು! ಎಷ್ಟೋ ಸಾರಿ ಯಶಸ್ವಿಗಳಾಗುತ್ತಿದ್ದರು. ಯಾರಾದರೂ ಗದರಿದರೆ ಜಗಳ ಕಾಯುತ್ತಿದ್ದರು. ಇಮಾಮ್ಸಾಬಿ ಮಾತ್ರ, ಅಷ್ಟು ಕೊಡಿ--ಇಷ್ಟು ಕೊಡಿ ಎಂದು ಯಾವತ್ತೂ ಕೇಳಿದವನಲ್ಲ. "ಎಷ್ಟು ಕೂಲಿ?" ಎಂದು ಯಾರಾದರೂ ಪ್ರಶ್ನಿಸಿದರೆ, ಇಂತಿಷ್ಟು-ಎಂದು ನ್ಕಾಯಸಮ್ಮತವಾದುದನ್ನು ತಿಳಿಸುತ್ತಿದ್ದ....
{{gap}}ಮತ್ತೆ ಹಲ್ಲೋ! ಹಲ್ಲೋ! (ಫೋನಿನ ಖಣಖಣತ್ಯಾರ)
{{gap}}ನೌಕರಿ ಘಂಟಿ ಬಾರಿಸಿದ.
{{gap}}ಕೆಲ ನಿಮಿಷಗಳ ಅನಂತರ ಬೀಗ ತೆಗೆದು ಹಿಡಿಯನ್ನು ಎಳೆದ. ಕೈಕಂಬ ಮಿಸುಕಿ ಸಿಗ್ನಲ್ ಬಿತ್ತು.
{{gap}}ಘಂಟಿಯ ಸಪ್ಸಳ ಇಮಾಮ್ಸಾಬಿಗೆ ಕೇಳಿಸಿದುದು ಸ್ವಲ್ಪ ಅಸ್ಪಷ್ಟವಾಗಿಯೇ. ಕೈಕಂಬ ಕಾಣಿಸುತ್ತಿದ್ದುದೂ ಮಸುಕು ಮಸುಕಾಗಿಯೇ. ಆದರೂ
ಸಿಗ್ನಲ್ ಬಿತ್ತೆಂಬುದನ್ನು ಅಭ್ಯಾಸ ಬಲದಿಂದ ಆತ ಬಲ್ಲ.
{{gap}}ನಿಲ್ದಾಣದ ನೀರವತೆ ಮಾಯವಾಗಿ ಗುಸುಗುಸು ಸದ್ದು ಆಗಲೇ ಕೇಳಿಸತೊಡಗಿತ್ತು. ಸೋಮಾರಿಯಾದೆ ತಾನು-ಎಂದು ಛೀಗಳೆಯುತ್ತ ಇಮಾವರ್
ಸಾಬಿ ಎದ್ದು ರುಮಾಲು ಸುತ್ತಿದ. ಅವನ ಬರಿಯ ಪಾದಗಳು ದೇಹದ ಭಾರ<noinclude></noinclude>
orx2q2pzfadvvvoqb7caqmkwb78asjk
ಪುಟ:KELAVU SANNA KATHEGALU.pdf/೯೪
104
20248
321132
252390
2026-05-20T06:22:06Z
Pragathi. BH
7585
/* Validated */
321132
proofread-page
text/x-wiki
<noinclude><pagequality level="4" user="Pragathi. BH" /><small>{{rh|72||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>ವನ್ನು ಹೊತ್ತು ಮಹಾದ್ವಾರದೆಡೆಗೆ ಚಲಿಸಿದುವು.
ಗೂಡ್ಸ್ ಕಟ್ಟೆಯಲ್ಲಿದ್ದ ಮೂವರು ಹೆಮಾಲರು ಅದೆಷ್ಟು ಹೊತ್ತಿಗೆ ಇತ್ತ ಜಿಗಿದರೊ! ಪ್ರಯಾಣಿಕರ ಸುಖದುಃಖ ವಿಚಾರಿಸುವುದರಲ್ಲಿ ಅವರಾಗಲೇ ಮಗ್ನರಾಗಿದ್ದರು. ಯುವಕರು. ಒಬ್ಬ ನಂತೂ ಮಹಾ ಖದೀಮ.
ಪ್ಯಾಸೆಂಜರ್ ಗಾಡಿ. ಹತ್ತುವವರೂ ಕಡಮೆ, ಇಳಿಯುವವರೂ ಕಡಮೆ. ಇಮಾಮ್ಸಾಬಿ ಹೊರಗೆ ಹೋಗದೆ ಒಳಗೇ ನಿಂತ.
ಲಗುಬಗೆಯಿಂದ ಗಾಡಿ ಬಂತು. ನಿಂತು ಮುಂದಕ್ಕೆ ಸಾಗಿತು. ಕಣ್ಣೆದುರು ಅತ್ತಿತ್ತ ಸರಿದ ಜನರು ತುಂತುರು ಮಳೆಯಂತೆ ಚೆದರಿ ಮಾಯವಾದರು.
ಅಪರಿಚಿತನಂತೆ ಕಂಡ ಒಬ್ಬರ ಹಗುರವಾದ ಸೂಟ್ಕೇಸನ್ನು ಇಮಾಮ್ಸಾಬಿ ಹೊರಕ್ಕೊಯ್ದು ಜಟಕಾದಲ್ಲಿರಿಸಿದ. ಅವರಿತ್ತ ಎರಡಾಣೆಯನ್ನು ತನ್ನ ನೀಲಿ ಅಂಗಿಯ ಜೇಬಿಗೆ ಸೇರಿಸಿದ.
ಮೊದಲಾದರೆ, ಹೋಗುತ್ತಿದ್ದವರು ಬರುತ್ತಿದ್ದವರೆಲ್ಲ ಪರಿಚಿತರೇ. ಈಗ ಕೆಲವು ವರ್ಷಗಳಿಂದ ಬೀಡಿ ಕಾರಖಾನೆಗಳಾಗಿ, ಹತ್ತಿ ಹಿಂಜುವ ಒಂದು ಗಿರಣಿಯೂ ಪ್ರಾರಂಭವಾಗಿ, ಊರಿನ ಜನಸಂಖ್ಯೆ ಹೆಚ್ಚಿತ್ತು. ಹಲವು ಹೊಸ ಮುಖಗಳು ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದುವು.
ಸ್ವತಃ ನಿಲ್ದಾಣವೇ ಎಷ್ಟೊಂದು ಬದಲಾಗಿ ಬಿಟ್ಟಿತ್ತು! ಸೀಮೆಎಣ್ಣೆಯ ಆಗಿನ ಮಿಣಿ ಮಿಣಿ ದೀಪಗಳೆಲ್ಲಿ, ಢಾಳಾಗಿ ಉರಿಯುವ ಈಗಿನ ವಿದ್ಯುತ್ ಬಲ್ಬುಗಳೆಲ್ಲಿ! ಆಗ ಸ್ಟೇಷನ್ ಮಾಸ್ಟರು ಎಲ್ಲ ಕೆಲಸವನ್ನೂ ಮಾಡಬೇಕಾಗಿತ್ತು. ಬಕೆಟ್ ಮಾರುವುದು, ಕೀಲಿಕೈ ಕೊಡುವುದು, ಪಡೆಯುವುದು, ಬಾವುಟ ಬೀಸುವುದು, ಗೇಟು ತೆರೆದು ಇಳಿದವರನ್ನು ಹೊರಬಿಡುವುದು-ಪ್ರತಿಯೊಂದನ್ನೂ. ಈಗ ಅವರಿಗೊಬ್ಬ ಸಹಾಯಕನಿದ್ದ. ಗೂಡ್ಸ್ ವಿಭಾಗವನ್ನು
ನೋಡಿಕೊಳ್ಳಲು ಮತ್ತೂ ಒಬ್ಬನಿದ್ದ. ಹಿಂದಿನ ಕಟ್ಟಡವೂ ಗುರುತು ಸಿಗದಂತೆ ಮಾರ್ಪಾಟು ಹೊಂದಿತ್ತು. ಹೆಂಚುಗಳೆಲ್ಪ ಮಾಯವಾಗಿ ತಾರಸಿ ಛಾವಣಿಗಳು ಎತ್ತರದಲ್ಲಿ ಹರಡಿಕೊಂಡಿದ್ದುವು. ಹಳೆಯ ತಲೆಮಾರಿನ ಮಾಸ್ತರುಗಳೂ ಈಗಿಲ್ಲ. ಇತ್ತೀಚಿನ ಒಬ್ಬಿಬ್ಬರಂತೂ ಇಮಾಮ್ಸಾಬಿಯನ್ನು "ಹಮಾಲ್" ಎನ್ನುತ್ತಿರಲಿಲ್ಲ; "ಫೋರ್ಟರ್" ಎಂದು ಕರೆಯುತ್ತಿದ್ದರು. ಕೈಗೆ ಕಟ್ಟಿಕೊಳ್ಳಲು ಹಿತ್ತಾಳೆಯ ಬಿಲ್ಲೆಗಳು ಬಂದಿದ್ದುವು. ಪೋರ್ಟರನ ನಂಬರು, "ಒಂದು ಮಣವನ್ನು ಮೀರದ ಹೇರಿಗೆ ಎರಡಾಣೆ." ಅದನ್ನು ಧರಿಸಲೇಬೇಕಾಗಿ ಬಂದಾಗ ಇಮಾಮ್ಸಾಬಿ ಪಟ್ಟ ವ್ಯಥೆ ಅಷ್ಟಿಷ್ಟಲ್ಲ. ಅಷ್ಟು ಮಟ್ಟಿನ ಅವಿಶ್ವಾಸಕ್ಕೂ ಪ್ರಾಪ್ತವಾಯಿತೆ ತನ್ನ ವೃತ್ತಿ? ಇಂತಹ ಅವಮಾನವನ್ನೂ<noinclude></noinclude>
n8o23qec7cyys39ylmzz9tllf4xg5ds
321135
321132
2026-05-20T06:22:36Z
Shreelatha.Halemane
7642
/* Validated */
321135
proofread-page
text/x-wiki
<noinclude><pagequality level="4" user="Pragathi. BH" /><small>{{rh|72||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>ವನ್ನು ಹೊತ್ತು ಮಹಾದ್ವಾರದೆಡೆಗೆ ಚಲಿಸಿದುವು.
{{gap}}ಗೂಡ್ಸ್ ಕಟ್ಟೆಯಲ್ಲಿದ್ದ ಮೂವರು ಹಮಾಲರು ಅದೆಷ್ಟು ಹೊತ್ತಿಗೆ ಇತ್ತ ಜಿಗಿದರೊ! ಪ್ರಯಾಣಿಕರ ಸುಖದುಃಖ ವಿಚಾರಿಸುವುದರಲ್ಲಿ ಅವರಾಗಲೇ ಮಗ್ನರಾಗಿದ್ದರು. ಯುವಕರು. ಒಬ್ಬನಂತೂ ಮಹಾ ಖದೀಮ.
{{gap}}ಪ್ಯಾಸೆಂಜರ್ ಗಾಡಿ. ಹತ್ತುವವರೂ ಕಡಮೆ, ಇಳಿಯುವವರೂ ಕಡಮೆ. ಇಮಾಮ್ಸಾಬಿ ಹೊರಗೆ ಹೋಗದೆ ಒಳಗೇ ನಿಂತ.
{{gap}}ಲಗುಬಗೆಯಿಂದ ಗಾಡಿ ಬಂತು. ನಿಂತು ಮುಂದಕ್ಕೆ ಸಾಗಿತು. ಕಣ್ಣೆದುರು ಅತ್ತಿತ್ತ ಸರಿದ ಜನರು ತುಂತುರು ಮಳೆಯಂತೆ ಚೆದರಿ ಮಾಯವಾದರು.
{{gap}}ಅಪರಿಚಿತನಂತೆ ಕಂಡ ಒಬ್ಬರ ಹಗುರವಾದ ಸೂಟ್ಕೇಸನ್ನು ಇಮಾಮ್ಸಾಬಿ ಹೊರಕ್ಕೊಯ್ದು ಜಟಕಾದಲ್ಲಿರಿಸಿದ. ಅವರಿತ್ತ ಎರಡಾಣೆಯನ್ನು ತನ್ನ ನೀಲಿ ಅಂಗಿಯ ಜೇಬಿಗೆ ಸೇರಿಸಿದ.
{{gap}}ಮೊದಲಾದರೆ, ಹೋಗುತ್ತಿದ್ದವರು ಬರುತ್ತಿದ್ದವರೆಲ್ಲ ಪರಿಚಿತರೇ. ಈಗ ಕೆಲವು ವರ್ಷಗಳಿಂದ ಬೀಡಿ ಕಾರಖಾನೆಗಳಾಗಿ, ಹತ್ತಿ ಹಿಂಜುವ ಒಂದು ಗಿರಣಿಯೂ ಪ್ರಾರಂಭವಾಗಿ, ಊರಿನ ಜನಸಂಖ್ಯೆ ಹೆಚ್ಚಿತ್ತು. ಹಲವು ಹೊಸ ಮುಖಗಳು ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದುವು.
{{gap}}ಸ್ವತಃ ನಿಲ್ದಾಣವೇ ಎಷ್ಟೊಂದು ಬದಲಾಗಿ ಬಿಟ್ಟಿತ್ತು! ಸೀಮೆಎಣ್ಣೆಯ ಆಗಿನ ಮಿಣಿ ಮಿಣಿ ದೀಪಗಳೆಲ್ಲಿ, ಢಾಳಾಗಿ ಉರಿಯುವ ಈಗಿನ ವಿದ್ಯುತ್ ಬಲ್ಬುಗಳೆಲ್ಲಿ! ಆಗ ಸ್ಟೇಷನ್ ಮಾಸ್ಟರು ಎಲ್ಲ ಕೆಲಸವನ್ನೂ ಮಾಡಬೇಕಾಗಿತ್ತು. ಬಕೆಟ್ ಮಾರುವುದು, ಕೀಲಿಕೈ ಕೊಡುವುದು, ಪಡೆಯುವುದು, ಬಾವುಟ ಬೀಸುವುದು, ಗೇಟು ತೆರೆದು ಇಳಿದವರನ್ನು ಹೊರಬಿಡುವುದು-ಪ್ರತಿಯೊಂದನ್ನೂ. ಈಗ ಅವರಿಗೊಬ್ಬ ಸಹಾಯಕನಿದ್ದ. ಗೂಡ್ಸ್ ವಿಭಾಗವನ್ನು
ನೋಡಿಕೊಳ್ಳಲು ಮತ್ತೂ ಒಬ್ಬನಿದ್ದ. ಹಿಂದಿನ ಕಟ್ಟಡವೂ ಗುರುತು ಸಿಗದಂತೆ ಮಾರ್ಪಾಟು ಹೊಂದಿತ್ತು. ಹೆಂಚುಗಳೆಲ್ಪ ಮಾಯವಾಗಿ ತಾರಸಿ ಛಾವಣಿಗಳು ಎತ್ತರದಲ್ಲಿ ಹರಡಿಕೊಂಡಿದ್ದುವು. ಹಳೆಯ ತಲೆಮಾರಿನ ಮಾಸ್ತರುಗಳೂ ಈಗಿಲ್ಲ. ಇತ್ತೀಚಿನ ಒಬ್ಬಿಬ್ಬರಂತೂ ಇಮಾಮ್ಸಾಬಿಯನ್ನು "ಹಮಾಲ್" ಎನ್ನುತ್ತಿರಲಿಲ್ಲ; "ಫೋರ್ಟರ್" ಎಂದು ಕರೆಯುತ್ತಿದ್ದರು. ಕೈಗೆ ಕಟ್ಟಿಕೊಳ್ಳಲು ಹಿತ್ತಾಳೆಯ ಬಿಲ್ಲೆಗಳು ಬಂದಿದ್ದುವು. ಪೋರ್ಟರನ ನಂಬರು, "ಒಂದು ಮಣವನ್ನು ಮೀರದ ಹೇರಿಗೆ ಎರಡಾಣೆ." ಅದನ್ನು ಧರಿಸಲೇಬೇಕಾಗಿ ಬಂದಾಗ ಇಮಾಮ್ಸಾಬಿ ಪಟ್ಟ ವ್ಯಥೆ ಅಷ್ಟಿಷ್ಟಲ್ಲ. ಅಷ್ಟು ಮಟ್ಟಿನ ಅವಿಶ್ವಾಸಕ್ಕೂ ಪ್ರಾಪ್ತವಾಯಿತೆ ತನ್ನ ವೃತ್ತಿ? ಇಂತಹ ಅವಮಾನವನ್ನೂ<noinclude></noinclude>
s700bhzj6d5rsgl99xgkorc5w5lklne
ಪುಟ:KELAVU SANNA KATHEGALU.pdf/೯೫
104
20249
321133
252392
2026-05-20T06:22:24Z
Pragathi. BH
7585
/* Validated */
321133
proofread-page
text/x-wiki
<noinclude><pagequality level="4" user="Pragathi. BH" /><small>{{rh|ಹಮಾಲ ಇಮಾಮ್ಸಾಬಿ||73}}</small></noinclude>ಸಹಿಸಬೇಕೆ ತಾನು? ಆದರೆ ಅವನ ಮಗ ಕರೀಮನಿಗೆ ಆ ಬಗೆಯ ಯಾವ ಕಸಿವಿಸಿಯೂ ಇಲ್ಲ. "ರೂಲ್ಸ್ ಬಾಬಾ, ರೂಲ್ಸ್" ಎನ್ನುತ್ತಿದ್ದ ಆತ.
ಎರಡು ತಲೆಮಾರುಗಳ ನಡುವಿನ ಅಂತರ ನೆನೆದು ಇಮಾಮ್ಸಾಬಿಗೆ ಸೋಜಿಗನೆನಿಸುತ್ತಿತ್ತು.
..ಅರಿವಿಲ್ಲದಂತೆಯೇ ತನ್ನ ಮುಖವನ್ನು ಆವರಿಸಿದ ಮಂದಹಾಸವನ್ನು ಬದಿಗೆ ಸರಿಸುತ್ತ ಇಮಾಮ್ಸಾಬಿ, ಮತ್ತೆ ಹೊರಗಿನ ಒರಗುಬೆಂಚಿನತ್ತ ಸಾಗೋಣವೇ ಎಂದು ನೋಡಿದ. ಆದರೆ ಬಿಸಿಲಿನ ಝಳ ಕಣ ಇನ್ನು ಕುಕ್ಕಿತು. ಪ್ಲಾಟ್ಫಾರ್ಮಿನುದ್ದಕ್ಕೂ ಎರಡು ಸಾರೆ ಅತ್ತಿತ್ತ ನಡೆದ.
ಇನ್ನೂ ಪೂನಾದಿಂದ ಬರುವ ಮೇಲ್ಗಾಡಿ. ಅದಾದ ಮೇಲೆ ಹೆಂಡತಿ ತರುವ ಬುತ್ತಿಯೂಟ. ಮುಂದೆ, ಬೆಂಗಳೂರಿನಿಂದ ಬರುವ ಮೇಲ್ಗಾಡಿ. ನಾಲ್ಕರ ಸುಮಾರಿಗೊಂದು ಲೋಕಲ್. ಸಂಜೆಗೆ ದಕ್ಷಿಣಾಭಿಮುಖವಾಗಿ
ಪ್ಯಾಸೆಂಜರ್. ಅದರ ನಿರ್ಗಮನದ ಬಳಿಕ ತಾನು ಮನೆಗೆ....
"ಇವತ್ತೋ ನಾಳೆಯೋ ಆಗಬಹುದು."
_ಇವತ್ತು. ರಾತ್ರೆಯೇ ಆಗಲೂಬಹುದು.
ಗೇಟಿನ ಹೊರಗೆ ಗೋಡೆಗೊರಗಿ ಇಮಾಮ್ಸಾಬಿ ಕುಳಿತ. ಜನ ಬರತೊಡಗಿದ್ದರು. ಮೂರನೆಯ ತರಗತಿಯವರು.
ಫೋನ್ ಕರೆ ಗಂಟೆ.
ಒಂಟಿ ಎತ್ತಿನ ಗಾಡಿಯಲ್ಲಿ ಸಾಮಾನು ಹೇರಿಸಿಕೊಂಡು ಸಂಸಾರವೊಂದು ಬಂತು. "ಯಾರು? ಕಾಣಿಸುತ್ತಿಲ್ಲ ಸರಿಯಾಗಿ.
ಅಬ್ದುಲ್ಲನ ಸ್ವರ ಕೇಳಿಸಿತು.
"ಬಾ ದಾದಾಮಿಯಾ."
ಇಮಾವು ಸಾಬಿ ಎದ್ದು ಅಬ್ದುಲ್ಲನನ್ನು ಹಿಂಬಾಲಿಸಿದ.
"ಒಟ್ಟು ಹನ್ನೊಂದು ಸಾಮಾನು. ಮೊದಲೇ ಹೇಳಿಬಿಡಿ. ಆಮೇಲೆ ತಕರಾರು ಬೇಡ.
ಅಬ್ದುಲ್ಲ:
"ಮೂರು ರೂಪಾಯಿ ಕೊಟ್ಬಿಡಿ ಬುದ್ದಿ..."
"ಮೂರು ರೂಪಾಯಿ! ಎಲ್ಲಾದರೂ ಉಂಟೆ? ಒಂದು ರೂಪಾಯಿ ಕೊಡ್ತೀನಿ- ಇಬ್ಬರಿಗೂ ಸೇರಿಸಿ."
ನರೆಗೂದಲಿಗೆ ಗೌರವ ಕೊಡುವವನಂತೆ ಇಮಾಮ್ಸಾಬಿಯತ್ತ ತಿರುಗಿ<noinclude><small>{{rh|||10}}</small></noinclude>
ft0ad5v8oz584rulbo2jys8dusfcbs3
321141
321133
2026-05-20T06:24:46Z
Shreelatha.Halemane
7642
321141
proofread-page
text/x-wiki
<noinclude><pagequality level="4" user="Pragathi. BH" /><small>{{rh|ಹಮಾಲ ಇಮಾಮ್ಸಾಬಿ||73}}</small></noinclude>ಸಹಿಸಬೇಕೆ ತಾನು? ಆದರೆ ಅವನ ಮಗ ಕರೀಮನಿಗೆ ಆ ಬಗೆಯ ಯಾವ ಕಸಿವಿಸಿಯೂ ಇಲ್ಲ. "ರೂಲ್ಸ್ ಬಾಬಾ, ರೂಲ್ಸ್" ಎನ್ನುತ್ತಿದ್ದ ಆತ.
{{gap}}ಎರಡು ತಲೆಮಾರುಗಳ ನಡುವಿನ ಅಂತರ ನೆನೆದು ಇಮಾಮ್ಸಾಬಿಗೆ ಸೋಜಿಗನೆನಿಸುತ್ತಿತ್ತು.
{{gap}}..ಅರಿವಿಲ್ಲದಂತೆಯೇ ತನ್ನ ಮುಖವನ್ನು ಆವರಿಸಿದ ಮಂದಹಾಸವನ್ನು ಬದಿಗೆ ಸರಿಸುತ್ತ ಇಮಾಮ್ಸಾಬಿ, ಮತ್ತೆ ಹೊರಗಿನ ಒರಗುಬೆಂಚಿನತ್ತ ಸಾಗೋಣವೇ ಎಂದು ನೋಡಿದ. ಆದರೆ ಬಿಸಿಲಿನ ಝಳ ಕಣ ಇನ್ನು ಕುಕ್ಕಿತು. ಪ್ಲಾಟ್ಫಾರ್ಮಿನುದ್ದಕ್ಕೂ ಎರಡು ಸಾರೆ ಅತ್ತಿತ್ತ ನಡೆದ.
{{gap}}ಇನ್ನೂ ಪೂನಾದಿಂದ ಬರುವ ಮೇಲ್ಗಾಡಿ. ಅದಾದ ಮೇಲೆ ಹೆಂಡತಿ ತರುವ ಬುತ್ತಿಯೂಟ. ಮುಂದೆ, ಬೆಂಗಳೂರಿನಿಂದ ಬರುವ ಮೇಲ್ಗಾಡಿ. ನಾಲ್ಕರ ಸುಮಾರಿಗೊಂದು ಲೋಕಲ್. ಸಂಜೆಗೆ ದಕ್ಷಿಣಾಭಿಮುಖವಾಗಿ
ಪ್ಯಾಸೆಂಜರ್. ಅದರ ನಿರ್ಗಮನದ ಬಳಿಕ ತಾನು ಮನೆಗೆ....
{{gap}}"ಇವತ್ತೋ ನಾಳೆಯೋ ಆಗಬಹುದು."
{{gap}}_ಇವತ್ತು. ರಾತ್ರೆಯೇ ಆಗಲೂಬಹುದು.
{{gap}}ಗೇಟಿನ ಹೊರಗೆ ಗೋಡೆಗೊರಗಿ ಇಮಾಮ್ಸಾಬಿ ಕುಳಿತ. ಜನ ಬರತೊಡಗಿದ್ದರು. ಮೂರನೆಯ ತರಗತಿಯವರು.
{{gap}}ಫೋನ್ ಕರೆ ಗಂಟೆ.
{{gap}}ಒಂಟಿ ಎತ್ತಿನ ಗಾಡಿಯಲ್ಲಿ ಸಾಮಾನು ಹೇರಿಸಿಕೊಂಡು ಸಂಸಾರವೊಂದು ಬಂತು. "ಯಾರು? ಕಾಣಿಸುತ್ತಿಲ್ಲ ಸರಿಯಾಗಿ.
{{gap}}ಅಬ್ದುಲ್ಲನ ಸ್ವರ ಕೇಳಿಸಿತು.
{{gap}}"ಬಾದಾದಾಮಿಯಾ."
{{gap}}ಇಮಾವ್ ಸಾಬಿ ಎದ್ದು ಅಬ್ದುಲ್ಲನನ್ನು ಹಿಂಬಾಲಿಸಿದ.
{{gap}}"ಒಟ್ಟು ಹನ್ನೊಂದು ಸಾಮಾನು. ಮೊದಲೇ ಹೇಳಿಬಿಡಿ. ಆಮೇಲೆ ತಕರಾರು ಬೇಡ.
{{gap}}ಅಬ್ದುಲ್ಲ:
{{gap}}"ಮೂರು ರೂಪಾಯಿ ಕೊಟ್ಬಿಡಿ ಬುದ್ದಿ..."
{{gap}}"ಮೂರು ರೂಪಾಯಿ! ಎಲ್ಲಾದರೂ ಉಂಟೆ? ಒಂದು ರೂಪಾಯಿ ಕೊಡ್ತೀನಿ- ಇಬ್ಬರಿಗೂ ಸೇರಿಸಿ."
{{gap}}ನರೆಗೂದಲಿಗೆ ಗೌರವ ಕೊಡುವವನಂತೆ ಇಮಾಮ್ಸಾಬಿಯತ್ತ ತಿರುಗಿ<noinclude><small>{{rh|||10}}</small></noinclude>
lihudz1wx9iporhxyhl6xtbxjywe1hb
ಪುಟ:KELAVU SANNA KATHEGALU.pdf/೯೬
104
20250
321134
252393
2026-05-20T06:22:35Z
Pragathi. BH
7585
/* Validated */
321134
proofread-page
text/x-wiki
<noinclude><pagequality level="4" user="Pragathi. BH" /><small>{{rh|74||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>ಆತ ಮತ್ತೂ ಅಂದ:
:"ಸರಿಯೇನಪ್ಪ?"
ಅಬ್ದುಲ್ಲನ ಕೆಕ್ಕರಗಣ್ಣನ್ನ ಲಕ್ಷ್ಯಕ್ಕೆ ತರದೆ ಇಮಾಮ್ಸಾಬಿಯೆಂದ:
:"ಅನ್ನೆರಡನ್ನೆರಡಾಣೆ ಕೊಡಿ ಸೋಮಿ."
..ರೈಲು ಬಂದು ಹೋಯಿತು. ದೊರೆತ ಒಂದೂವರೆಯಿಂದ ಎಂಟಾಣೆಯ ನಾಣ್ಯವನ್ನು ಅಬ್ದುಲ್ಲ ಇಮಾಮ್ ಸಾಬಿಗೆ ಕೊಟ್ಟು, ಬಳಿಕ ತನ್ನ ಜೇಬಿನೊಳಗಿಂದ ಸಣ್ಣ ಪುಟ್ಟ ನಾಣ್ಯಗಳು ಕೆಲವನ್ನು ತೆಗೆದು ಮುದುಕನಿಗೆ
ಕೊಡುತ್ತ ಅಂದ:
“ಇಪ್ಪತ್ತೈದು ನಯೇ ಸೈಸೆ...... ನೀನು ಬಾಯಿ ಮುಚ್ಕೊಂಡಿದ್ದಿದ್ದರೆ ಒಂದೊಂದು ರೂಪಾಯಿಯಾದರೂ ಬರ್ತಿತ್ತು."
“ಹೋಗಲಿ ಬಿಡು," ಎಂದ ಇಮಾಮ್ಸಾಬಿ.
ನಯೇ ಪೈಸೆಗಳ ಲೆಕ್ಕ ಅವನಿಗೆ ತಿಳಿಯದು. ಆದರೆ ತನ್ನ ಕಣ್ಣೆದುರಲ್ಲೇ ಬೆಳೆದ ಅಬ್ದುಲ್ಲನಾಗಲೀ ಹುಡುಗರಾಗಲೀ ತನಗೆ ಮೋಸಮಾಡಲಾರರೆಂಬ ವಿಶ್ವಾಸವಿತ್ತು ಅವನಿಗೆ.
ಇನ್ನೊಬ್ಬ ಹಮಾಲ ಅತ್ತ ಬರುತ್ತ ಅಂದ:
"ಪೂನಾ ಗಾಡಿ ತೊಂಬತ್ತು ಮಿನಿಟ್ ಲೇಟ್."
ಗಾಡಿ ತಡವಾಗುವುದಂತೂ ಹೊಸದಲ್ಲ. ತಡವಾಗದ ದಿನವಾದರೂ ಯಾವುದು? ಹತ್ತಿಪ್ಪತ್ತು ವರ್ಷಗಳ ಹಿಂದೆಯೊಂದು ಯುದ್ಧ ನಡೆದಿತ್ತಲ್ಲ? ಆಗ ಅಸ್ತವ್ಯಸ್ತವಾಗಿದ್ದ ರೈಲು ವ್ಯವಸ್ಥೆ ಸರಿ ಹೋಗಿಯೇ ಇರಲಿಲ್ಲ.
ನಿಲ್ದಾಣ ಮತ್ತೆ ನಿರ್ಜನವಾಯಿತು. ಮಾಸ್ತರರು ಊಟಕ್ಕೆ ಹೋದರು. ಇಬ್ಬರು ಹಮಾಲರು ಊಟಕ್ಕೆ ತೆರಳಿದರು. ಒಬ್ಬ ಪ್ಲಾಟ್ ಫಾರ್ಮಿನ ಮೇಲೆಯೇ ಒಂದೆಡೆ ಮೈ ಚೆಲ್ಲಿ, ಕೆಂಪು ರುಮಾಲನ್ನು ದಿಂಬಾಗಿ ಮಾಡಿ, ನಿದ್ದೆ ಹೋದ.
ಇಮಾಮ್ಸಾಬಿ ಪ್ಲಾಟ್ಫಾರ್ಮಿನ ಉತ್ತರ ತುದಿಗೆ ಸಾಗಿ, ಮರದ ನೆರಳಿನಲ್ಲಿ ಕುಳಿತ... ಅವನ ಬೀಬಿ ಊಟ ತರುತ್ತಿದ್ಹುದು ಆ ತಾಣಕ್ಕೆ. ಒಳಹಾದಿಯಾಗಿ ಅಲ್ಲಿಗೆ ಬರುತ್ತಿದ್ದಳು ಅಕೆ.
ಮರದ ಕೆಳಗೆ ಕುಳಿತು "ಅದೆಷ್ಟು ಹೊತ್ತಾಯಿತೋ. ಬೀಜಿ ಇಷ್ಟರಲ್ಲೇ ಬರಬೇಕಾಗಿತ್ತು. ಯಾಕೆ ಬರಲಿಲ್ಲ?
ಇಮಾಮ್ಸಾಬಿಯ ಗುಂಡಿಗೆ ಡವಡವನೆಂದಿತು.
ಬೇಲಿಯ ಪಟ್ಚಿಗಳೆಡೆಯಿಂದ ಅವನ ಕಣ್ಣುಗಳು, ಪೊದೆ ಪೊದರು<noinclude></noinclude>
4zi01uqpg5pitsyr9erjti876owdn6j
ಪುಟ:KELAVU SANNA KATHEGALU.pdf/೯೭
104
20251
321136
252394
2026-05-20T06:23:15Z
Pragathi. BH
7585
321136
proofread-page
text/x-wiki
<noinclude><pagequality level="3" user="Vikashegde" /><small>{{rh|ಹಮಾಲ ಇಮಾಮ್ಸಾಬಿ||75}}</small></noinclude>ಗಳನ್ನು ಬಳಸುತ್ತ ಸಾಗಿದ್ದ ಕಾಲುದಾರಿಯತ್ತ ಹರಿದುವು. ಮಬ್ಬು ಮಬ್ಬಾಗಿ ಕಾಣಿಸುತ್ತಿತ್ತು ಎಲ್ಲವೂ-ಹಸುರು ನೋಡಿ ನೋಡಿ ನೋವಾಗಲು ಅತ ಎವೆಮುಚ್ಚಿದ. ಗುಡ್ಡದಾಚೆಗಿಂದ ತಪ್ಪಿಸಿಕೊಂಡು ಬಂದ ಸಣ್ಣನೆಯ ತಂಗಾಳಿಯೊಂದು ಬೀಸಿದಂತೆ, ಸ್ವಲ್ಪ ಹಾಯೆನಿಸಿತು. ಯೋಚನೆಗಳ ಪೆಟ್ಟಿಗೆಯ ಮುಚ್ಚಳ ಮುಚ್ಚಿಕೊಂಡಿತು. ತಲೆ ಎದೆಯ ಮೇಲಕ್ಕೆ ತಾಗಿತು, ತೂಕಡಿಕೆ ಬಂತು.
{{gap}}"ಬಾಬಾ"
{{gap}}.............
{{gap}}"ಬಾಬಾ!"
:ಇಮಾಮ್ಸಾಬಿ ಹೌಹಾರಿ ಎದ್ದ.
:"ಏನಾಯ್ತು? ಏನಾಯ್ತು?"
:"ನಾನು ಬಾಬಾ. ಊಟ ತಂದಿದೀನಿ."
:"ಹ್ಞಾ..."
ಬೀಬಿಯ ಬದಲು ಮಗ ಕರೀಮನೇ ಬಂದಿದ್ದ.
ತಂದೆ ಕೇಳಲಿದ್ದ ಪ್ರಶ್ನೆಯನ್ನು ಮೊದಲೇ ಗ್ರಹಿಸುತ್ತ ಅವನೆಂದ:
:"ಅವಳು ನೋವು ತೀನ್ತಾ ಇದ್ದಾಳೆ.
ವೃದ್ಧನ ಎದೆಗುಂಡಿಗೆ ಮತ್ತೆ ಬಲವಾಗಿ ಬಡಿದುಕೊಂಡಿತು.
:"ಎಷ್ಟು ಒತ್ತಾಯ್ತು?”
:"ಅತ್ತು ಗಂಟೆಯಿಂದ."
:"ಸೂಲಗಿತ್ತಿ?"
:"ಬಂದವಳೆ. ಚೊಚ್ಚಲು; ತಡವಾಗ್ಬೌದು ಅಂದ್ಲು."
ಬುತ್ತಿಯನ್ನು ಬಿಚ್ಚುತ್ತ ಇಮಾಮ್ಸಾಬಿಯೆಂದ:
:"ಹೂಂ, ಹೂಂ."
ಬೀಬಿ ಬುತ್ತಿ ತಂದಾಗ, "ಕುಡಿಯುವ ನೀರು" ಎಂದು ಬರೆದ ಗಡಿಗೆಯತ್ತ ಇಮಾಮನೇ ಹೋಗಿ ನೀರು ತರುತ್ತಿದ್ದ. ಇಂದು, ಕಾಲುಗಳಲ್ಲಿ ಬಲವೇ ಇಲ್ಲ-ಎನಿಸಿತು. ಅಲ್ಲದೆ-ಬಳಿಯಲ್ಲೆ ಮಗನಿದ್ದ.
:"ನೀರು ತಾ."
ನಜ್ಜುಗುಜ್ಜಾಗಿದ್ದ 'ಎಲ್ಮಿನಿ' ತಟ್ಟಿಯಲ್ಲಿ ಕರೀಂ ನೀರು ಹಿಡಿದ ತಂದ.
....ಊಟ ಮುಗಿದಾಗ ತಂದೆ ಮಗಳಿಗೆ ಅಂದ:
:"ನೀನು ಮನೇಲೇ ಇರು."{{nop}}<noinclude></noinclude>
288i8l8do2yvp109sm43m39qzyo7q5r
321137
321136
2026-05-20T06:23:34Z
Pragathi. BH
7585
/* Validated */
321137
proofread-page
text/x-wiki
<noinclude><pagequality level="4" user="Pragathi. BH" /><small>{{rh|ಹಮಾಲ ಇಮಾಮ್ಸಾಬಿ||75}}</small></noinclude>ಗಳನ್ನು ಬಳಸುತ್ತ ಸಾಗಿದ್ದ ಕಾಲುದಾರಿಯತ್ತ ಹರಿದುವು. ಮಬ್ಬು ಮಬ್ಬಾಗಿ ಕಾಣಿಸುತ್ತಿತ್ತು ಎಲ್ಲವೂ-ಹಸುರು ನೋಡಿ ನೋಡಿ ನೋವಾಗಲು ಅತ ಎವೆಮುಚ್ಚಿದ. ಗುಡ್ಡದಾಚೆಗಿಂದ ತಪ್ಪಿಸಿಕೊಂಡು ಬಂದ ಸಣ್ಣನೆಯ ತಂಗಾಳಿಯೊಂದು ಬೀಸಿದಂತೆ, ಸ್ವಲ್ಪ ಹಾಯೆನಿಸಿತು. ಯೋಚನೆಗಳ ಪೆಟ್ಟಿಗೆಯ ಮುಚ್ಚಳ ಮುಚ್ಚಿಕೊಂಡಿತು. ತಲೆ ಎದೆಯ ಮೇಲಕ್ಕೆ ತಾಗಿತು, ತೂಕಡಿಕೆ ಬಂತು.
{{gap}}"ಬಾಬಾ"
{{gap}}.............
{{gap}}"ಬಾಬಾ!"
:ಇಮಾಮ್ಸಾಬಿ ಹೌಹಾರಿ ಎದ್ದ.
:"ಏನಾಯ್ತು? ಏನಾಯ್ತು?"
:"ನಾನು ಬಾಬಾ. ಊಟ ತಂದಿದೀನಿ."
:"ಹ್ಞಾ..."
ಬೀಬಿಯ ಬದಲು ಮಗ ಕರೀಮನೇ ಬಂದಿದ್ದ.
ತಂದೆ ಕೇಳಲಿದ್ದ ಪ್ರಶ್ನೆಯನ್ನು ಮೊದಲೇ ಗ್ರಹಿಸುತ್ತ ಅವನೆಂದ:
:"ಅವಳು ನೋವು ತೀನ್ತಾ ಇದ್ದಾಳೆ.
ವೃದ್ಧನ ಎದೆಗುಂಡಿಗೆ ಮತ್ತೆ ಬಲವಾಗಿ ಬಡಿದುಕೊಂಡಿತು.
:"ಎಷ್ಟು ಒತ್ತಾಯ್ತು?”
:"ಅತ್ತು ಗಂಟೆಯಿಂದ."
:"ಸೂಲಗಿತ್ತಿ?"
:"ಬಂದವಳೆ. ಚೊಚ್ಚಲು; ತಡವಾಗ್ಬೌದು ಅಂದ್ಲು."
ಬುತ್ತಿಯನ್ನು ಬಿಚ್ಚುತ್ತ ಇಮಾಮ್ಸಾಬಿಯೆಂದ:
:"ಹೂಂ, ಹೂಂ."
ಬೀಬಿ ಬುತ್ತಿ ತಂದಾಗ, "ಕುಡಿಯುವ ನೀರು" ಎಂದು ಬರೆದ ಗಡಿಗೆಯತ್ತ ಇಮಾಮನೇ ಹೋಗಿ ನೀರು ತರುತ್ತಿದ್ದ. ಇಂದು, ಕಾಲುಗಳಲ್ಲಿ ಬಲವೇ ಇಲ್ಲ-ಎನಿಸಿತು. ಅಲ್ಲದೆ-ಬಳಿಯಲ್ಲೆ ಮಗನಿದ್ದ.
:"ನೀರು ತಾ."
ನಜ್ಜುಗುಜ್ಜಾಗಿದ್ದ 'ಎಲ್ಮಿನಿ' ತಟ್ಟಿಯಲ್ಲಿ ಕರೀಂ ನೀರು ಹಿಡಿದ ತಂದ.
....ಊಟ ಮುಗಿದಾಗ ತಂದೆ ಮಗಳಿಗೆ ಅಂದ:
:"ನೀನು ಮನೇಲೇ ಇರು."{{nop}}<noinclude></noinclude>
3ur2gydd6g88kp3gg7vcnnxadu30k80
ಪುಟ:KELAVU SANNA KATHEGALU.pdf/೧೦೧
104
20255
321138
251252
2026-05-20T06:24:14Z
Pragathi. BH
7585
/* Validated */
321138
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಹಮಾಲ ಇಮಾಮ್ಸಾಬಿ|right=79}}
ಕುಸಿಯುವುದೇನೋ ಎನಿಸುತ್ತಿತ್ತು.</br>
{{gap}}ಮೂರು ಫರ್ಲಾಂಗುಗಳ ದೂರ ಸಾಗಲು ಅದೆಷ್ಟು ಹೊತ್ತು</br>
ಹಿಡಿಯಿತೊ?</br>
{{gap}}ಅದೇ ಮನೆ (ಗುಡಿಸಲು). ಯಾರು ಬರುತ್ತಿರುವವರು? ಕರೀಂ?</br>
ಏನಾಯ್ತು?</br>
{{gap}}ಓಡುತ್ತ ಬರುತ್ತಿದ್ದ ಹುಡುಗ.</br>
{{gap}}ಆ_</br>
{{gap}}“ಬಾ ಬಾ!”</br>
{{gap}}ಓ ದೇವರೆ_</br>
{{gap}}“ಗಂಡು ಮಗು!”</br>
{{gap}}“ಹಾ!”</br>
{{gap}}ಬವಳಿ ಬಂದಂತಾಯಿತು ಇಮಾಮ್ಸಾಬಿಗೆ. ಪೂರ್ಣಚಂದ್ರನಂತೆ</br>
ಮುಖವಗಲಗೊಂಡಿತು. ಕಣ್ಣುಗಳಿಂದ ಆನಂದಾಶ್ರು ಒಸರಿತು.</br>
{{gap}}ಆತ ಕೈಯನ್ನು ಮುಂದಕ್ಕೆ ಚಾಚಿದ.</br>
{{gap}}ಕರೀಂ ಅದನ್ನು ಹಿಡಿದುಕೊಂಡ.</br>
{{gap}}ಏನನ್ನೋ ಹೇಳುತ್ತಲೇ ಇದ್ದ ಮಗ.</br>
{{gap}}ಏನನ್ನೋ ಹುಚ್ಚು ಸಂತಸದ ತೊದಲು ಮಾತಿನಹಾಗಿತ್ತು ಅದು.</br>
{{gap}}ನಾಲ್ಕು ಹೆಜ್ಜೆ. ಮನೆ.</br>
{{gap}}“ಅಮ್ಮಾಜಾನ್! ಬಾಬಾ ಬಂದ್ರು!”</br>
{{gap}}ಶೇಖರಿಸಿ ಇಟ್ಟಿದ್ದ ಸಕ್ಕರೆಯಿಂದೊಂದು ಚಿಟಕಿ ತೆಗೆದು ಬೀಬಿ ಹೊರಕ್ಕೆ</br>
ಒಡಿಬಂದಳು.</br>
{{gap}}ಇಮಾಮ್ಸಾಬಿ ನಿಲ್ಲಲಾಗದೆ, ಗೋಡೆ ಹಿಡಿದು, ಕುಸಿದು ಕುಳಿತಿದ್ದ.</br>
ಬಾಗಿಲ ಚೌಕಟ್ಟಿಗೊರಗಿ.</br>
{{gap}}ಬೀಬಿ ಸಕ್ಕರೆಯನ್ನು ಆತನ ಬಾಯಿಗೆ ಹಾಕಲೆಂದು ಬಾಗಿದಳು.</br>
{{gap}}ಬಾಗಿದವಳೇ ಚೀರಿದಳು.</br>
{{gap}}ಕೆಂಪು ರುಮಾಲು, ನೀಲಿ ಅಂಗಿ, ಕೊಳಕು ಧೋತರ, ಎಲ್ಲವೂ</br>
ಇದ್ದುವು. ತೆರೆದ ಜೇಬಿನಲ್ಲಿ ನಾಣ್ಯಗಳಿದ್ದುವು, _ದಿನದ ಸಂಪಾದನೆಯಿತ್ತು.</br>
{{gap}}ಇಮಾಮ್ಸಾಬಿ ಮಾತ್ರ ಇರಲಿಲ್ಲ.</br></br>
{{rh|center=|left=|right=_೧೯೬೧}}<noinclude></noinclude>
n0ok4tu0nwwci4rntmf8ts69idd7i5j
ಪುಟ:KELAVU SANNA KATHEGALU.pdf/೧೦೨
104
20256
321139
248526
2026-05-20T06:24:25Z
Pragathi. BH
7585
/* Validated */
321139
proofread-page
text/x-wiki
<noinclude><pagequality level="4" user="Pragathi. BH" /></noinclude><big><big>{{c|೧೦}}
{{c|ಹರಕೆಯು ಖಡ್ಗ}}</big></big>
“ಮೋನ್ಯಾ...”
:“ಅಪ್ಪಾಜಿ...”
:“ಏನಾಟ ಅದು?”
:“ಯಾನಿಲ್ಲಪ್ಪಾಜಿ...ಹಿಹ್ಹಿ!”
:ನಾಲ್ಕು ವರ್ಷಗಳ ಹಸುಳೆಗೆ ಮಣಭಾರ ಹೊರುವ ಹಟ.
{{gap}}“ತಂದೆಯ ಖಡ್ಗ ಈಗಲೇ ಎತ್ತೋಕೆ ನೋಡ್ತೀಯೇನೋ? ಶಹಭಾಸ್!!”
ಎತ್ತುವುದೇನು బంలేు? ಖಡ್ಡ ಮಿಸುಕಲೂ ಇಲ್ಲ, ಆದರೂ, ಏನೋ ಸಾಧಿಸಿದೆನೆಂಬ ಸಮಾಧಾನ ಮೋನ್ಯಾನಿಗೆ. ಬಲಬದಿಯ ಕೆನ್ನೆಯಲ್ಲಿ ಗುಳಿ ಬಿದ್ದಿತು, ಆತ ನಕ್ಕಾಗ. ಅಹಲ್ಯೆಗೆ-ಅಲ್ಲ ರಾಣಿಗೆ (ಅವಳ ಗಂಡನ ಪಟ್ಟಾಭಿಷೇಕವಾದಂದಿನಿಂದ ಹಾಗೆ) ಯಾತನೆಯಲ್ಲಿಯೂ ಹರ್ಷ. ತನ್ನ ಗಂಡ ಸಂಸ್ಕಾರದ-ಅಲ್ಲ, ರಾಣಿವಾಸದ-ಜತೆ ಕಳೆಯುವ ವೇಳೆ, ಉಪಾಹಾರ ಸ್ವೀಕರಿಸುವ ಕೆಲವೇ ನಿಮಿಷ.
ಇನ್ನರ್ಧ ಘಳಿಗೆಯಲ್ಲಿ ಡೇರೆ ಕೀಳಬೇಕು. ಇಲ್ಲಿಂದ ಇನ್ನೆಲ್ಲಿಗೆ ಪಯಣವೊ? ಇದಕ್ಕೆ ಯಾವಾಗ ಕೊನೆಯೊ?
ಮನಸ್ಸು ಮುದುಡಿದ ಆ ವೇಳೆಯಲ್ಲಿ ಚೇತೋಹಾರಿಯಾಗುತ್ತಿದ್ದವನು ಮೋನ್ಯಾ.
ಅದೇನು ಮಾಯೆಯೊ? ಶಿಕಾರಿಪುರದ ದೇವಾಲಯದಲ್ಲಿ ಪೂಜೆ ಮಾಡಿಸಿ ಮರಳಿದ ಬಳಿಕ ಅಲ್ಲವೆ ತಾನು ಗರ್ಭವತಿಯಾದದ್ದು? ಹುಟ್ಟಿದ ಕ್ಷಣದಿಂದಲೂ ಸುಖ ಕಾಣಲಿಲ್ಲವಲ್ಲ ಮಗು? ಆದರೂ ನಗು, ನಗು..ತನಗೆ ಮೋಸ ಮಾಡಿದರೆಂದು ಗಂಡ ಕ್ರುದ್ಧ, ತಪ್ತ. ಮೋನ್ಯ ಅಂಬೆಗಾಲಿಡುವ ಹೊತ್ತಿಗೆ ಸುಲ್ತಾನರೊಡನೆ ವಿರಸ, ಮತಾಂತರದ ದಂಡನೆ, ಸೆರೆಮನೆ. ಪಟ್ಟಣ ಆಂಗ್ಲರ ವಶವಾಗಿ, ಬಿಡುಗಡೆ ಪ್ರಾಪ್ತವಾದ ಮೇಲೆ ತೂಗುಯ್ಯಾಲೆಯ ಬದುಕು-ಮೇಲಕ್ಕೆ ಹೋಯಿತು, ಕೆಳಕ್ಕೆ ಬಂತು-ಮತ್ತೆ ಮೇಲಕ್ಕೆ ಮತ್ತೆ ಕೆಳಕ್ಕೆ,<noinclude>{{c|80}}</noinclude>
7vszkqu2wzv2fjtmfu5negesxwldvxj
ಪುಟ:KELAVU SANNA KATHEGALU.pdf/೧೦೩
104
20257
321140
248527
2026-05-20T06:24:38Z
Pragathi. BH
7585
/* Validated */
321140
proofread-page
text/x-wiki
<noinclude><pagequality level="4" user="Pragathi. BH" /><small>{{rh|ಹರಕೆಯ ಖಡ್ಗ||81}}</small></noinclude>ಮತ್ತೆ....
ರಾಜಧಾನಿಗೆ ಸ್ಥಳ ಗೊತ್ತುಮಾಡಿ, ಕೋಟೆ-ಅರಮನೆ ಕಟ್ಟಿಸಿ ರಾಜ್ಯವಾಳುವುದಕ್ಕೆ ಮುನ್ನವೇ ಯುದ್ಧ, ಯುದ್ಧ ಯುದ್ಧ.
ಗಂಡ ಹಿರಿಯುತ್ತಿದ್ದುದು ಸಾಮಾನ್ಯ ಯೋಧ ಎರಡು ಕೈಗಳಲ್ಲೂ ಹಿಡಿದು ಎತ್ತಲಾಗದ ಖಡ್ಗ. ಇಕ್ಕಡೆಗಳ ಅಲಗಿಗೆ ಆಹುತಿಯಾದವರು ಅದೆಷ್ಟು ಸಹಸ್ರ ವೈರಿಗಳು!
ಏನೋ ಸದು ಹೊರಗೆ. ನಿತ್ಯದ್ದಲ್ಲ. ಮಹಾರಾಜನಿಗೆ ಕಸಿವಿಸಿ. ಎಡಗಣ್ಣೊಂದು ಬೆಳಗಿನಿಂದಲೇ ಅದರುತ್ತಿದೆ. ತಿಂಗಳುಗಟ್ಟಲೆ ನಿದ್ದೆ ಕೆಟ್ಟರೆ ಇನ್ನೇನು ತಾನೆ ಆದೀತು?
:ಶಿಬಿರ ಹೊರಡಲು ಅಣಿಯಾಗುತ್ತಿರಬೇಕು.
:ಆದರೂ, ಈ ಸಪ್ಪಳ?
:ಬಿರುಗಾಳಿ? ಗುಡುಗಿನ ಚಲನೆ?
:ಖಂಡಿತ ಅಲ್ಲ; ಇದು ದಂಡು.
:“ಮೋನ್ಯಾ!”
:“ಯಾನಪ್ಪಾಜಿ?”
:“ಅಮ್ಮನತ್ರಕ್ಕೆ ಹೋಗು."
:“ಯುದ್ಧಕ್ಕೆ ಹೊಂಟ್ಯಾ?”
:“ಒಳಗ್ಹೋಗು ಅಂದೆ!"
{{gap}}ಗುಡಾರದ ಅರಿವೆ ಬಾಗಿಲನ್ನು ಸರಿಸಿದರು, ಧಾವಿಸಿ ಬಂದು ಏದುಸಿರು ಬಿಡುತ್ತಿದ್ದ ರಕ್ಷಕಭಟರು.
:“ಮ-ಹಾ-ಪ್ರಭೂ, ಮ-ಹಾ-ಪ್ರ-ಭೂ!"
:“ಏನದು ಬೊಗಳ್ರೋ! ಫರಂಗಿಯವರ ದಂಡು ಬಂತೆ?”
:"ಔದು ಮಹಾ-ಪ್ರಭೂ....ನಾಲ್ಕು ದಿಕ್ಕಿಂದ ಮುತ್ಗೆ...”
:“ನಡೀರಿ ಆಚ್ಗೆ! ಕಹಳೆ! ಭೇರಿ! ನನ್ನ ಖಡ್ಗ!”
:ಅಹಲ್ಕೆ-ಅಲ್ಲ, ರಾಣಿ-ಅಂದಳು:
:“ಆರತಿ ತರ್ತೀನಿ."
:“ಆರತಿ! ಆರತಿ! ತಡವಾಯ್ತು!”
{{gap}}-ಟೊಂಕದ ಪಟ್ಟಿಯನ್ನು ಬಿಗಿಯುತ್ತ, ಮೀಸೆಯ ಮೇಲೆ ಕೈಯಾಡಿಸುತ್ತ, ಮಹಾರಾಜ ಗುಡುಗಿದ.<noinclude></noinclude>
2lmopgfng9mcimdel3lx3sulr913y89
ಪುಟ:KELAVU SANNA KATHEGALU.pdf/೧೦೪
104
20258
321142
248529
2026-05-20T06:24:53Z
Pragathi. BH
7585
/* Validated */
321142
proofread-page
text/x-wiki
<noinclude><pagequality level="4" user="Pragathi. BH" /><small>{{rh|82 ||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>{{gap}}ಆರತಿ ಬೆಳಗಿದ ತಾಯಿಗಂಟಿಕೊಂಡು ತಂದೆಯ ಕಡೆ ಬೆರಗುನೋಟ ಬೀರುತ್ತ, ಮೋನ್ಯಾ ಅ೦ದ;
:“ನಾನೂ ಬತ್ತಿನಿ, ಅಪ್ಪಾಜಿ..”
:ಆಮೇಕೆ, ಆಮೇಕೆ!
{{gap}}-ಎನ್ನುತ್ತ ಮಹಾರಾಜ ಹೊರಕ್ಕೆ ತೇಲಿದ ಸುಂಟರಗಾಳಿಯಾಗಿ, ಅಲ್ಲಿನ ಕಲರವದಲ್ಲಿ ಬೆರೆಯಲು, ರಣಾಂಗಣದಲ್ಲಿ ಮೆರೆಯಲು, ಅಸಮಾನ ಖಡ್ಗದಿಂದ ವೈರಿ ಶಿರಸ್ಸುಗಳನ್ನು ಕಡಿಯಲು.
:“ಜಯ ಚಾಮುಂಡೇಶ್ವರೀ!”
:_"ಜಯ ಮಹಿಷಾಸುರಮರ್ದಿನೀ!"
ಗುಡಾರದೊಳಗೆ ಮೋನಾ ತಾಯಿಯನ್ನು ಕಾಡಿದ:
“ನನಗೊಂದು ಕತ್ತಿ ಕೊಡು, ಕೊಡಮಾ ಒಂದು ಕತ್ತಿ ...”
{{***|4}}
"ಧೋಂಡಿಯಾ...
:ಧೋಂಡಿಯಾ ವಾಘ್...
{{gap}}ಚನ್ನಗಿರಿಯ ಮಣ್ಣಿನಲ್ಲಿ ಹುಟ್ಟಿದ ಆ ಹುಲಿಯ ಆರ್ಭಟಕ್ಕೆ ಪರಕೀಯರ ಪಡೆ ಗದಗದ ನಡುಗುತ್ತಿತ್ತು.
ಆ ರಣಧೀರನ ದಂಡನ್ನು ಬೆನ್ನಟ್ಟೀ ಬೆನ್ನಟ್ಟೀ, ಅಲೆದೂ ಅಲೆದೂ ಬಳಲೀ ಬಳಲೀ ಹಣ್ಣಾದ ಆ೦ಗ್ಲರ ಶ್ರೇಷ್ಠ ಸೇನಾನಿಗಳಲ್ಲೊಬ್ಬ-ವೆಲ್ಲೆಸ್ಲಿ-ಹತಾಶನಾಗಿ ಉದ್ಗರಿಸಿದ್ದ:
“ಈ ಧೋಂಡಿಯಾನನ್ನು ಯಾವಾಗ ಹಿಡಿಯುವೆನೋ ದೇವರಿಗೇ ಗೊತ್ತು!”
ಅಂತೂ ಕೊನೆಗೊಮ್ಮೆ ದೇವರಿಗೆ ಅರಿತಿದ್ದ ಘಳಿಗೆ ಸವಿನೂಪಿಸಿತ್ತು.
{{***|4}}
ಸುತ್ತುವರಿಯಲ್ಪಟ್ಟಿ ಐದು ಸಾವಿರ ಅಶ್ವಾರೋಹಿಗಳ ದಂಡಿಗೂ ಇಮ್ಮಡಿ ಬಲದ ವೈರಿ ಪಡೆಗಳಿಗೂ ಹೊಯ್ ಕಯ್.
:“ಫಯರ್! ಫಯರ್!”
:“ಹಿಮ್ಮೆಟ್ಟಬೇಡಿ! ಹಾರಿಸಿಗುಂಡು! ತುಂಡರಿಸಿ! ಕತ್ತರಿಸಿ!”
{{gap}}ವ್ಯೂಯ ರಚನೆಗಾಗಲೀ ಅತ್ತಿತ್ತ ಸರಿಯುವುದಕ್ಕಾಗಲೀ ಅವಕಾಶವಿಲ್ಲದ ತಾಣ.
:ಅಭಿಮನ್ಯು ಮಹಾನ್ವೀರ.{{nop}}<noinclude></noinclude>
ehg9gppu2jsl8nfh9rk8ydueihho2bn
ಪುಟ:KELAVU SANNA KATHEGALU.pdf/೧೦೫
104
20259
321143
248535
2026-05-20T06:25:04Z
Pragathi. BH
7585
/* Validated */
321143
proofread-page
text/x-wiki
<noinclude><pagequality level="4" user="Pragathi. BH" /><small>{{rh|ಹರಕೆಯ ಖಡ್ಗ||83}}</small></noinclude>:ಆದರೆ, ವ್ಯೂಹದಿಂದ ಹೊರಬರುವ ದಾರಿ ಯಾವುದು? ಯಾವುದು?
:ಎರಡು ಗಂಟೆಗಲ ಕಾಲ ಅವ್ಯಾಹತ ಹೋರಾಟ.
{{gap}}ಧೋಂಡಿಯಾನ ಯೋಧರ ಸ್ಟೈರ್ಯ ಕ್ರಮೇಣ ಕುಸಿಯಿತು. ಕಾಣನಲ್ಲ ನಾಯಕ? (ಎಲ್ಲಿ ಮಹಾರಾಜರು?) ಆತನನ್ನು ಹೊತ್ತು ಮಿಂಚಿನಂತೆ ಸುಳಿಯುವ ಕಂದು ಬಣ್ಣದ ಕುದುರೆ ಎಲ್ಲಿ?
:“ಮಹಾಪ್ರಭುಗಳು ಓಡ್ಹೋದ್ರು!”
:(ಸುಳ್ಳು! ಸುಳ್ಳು!)
:("ಓಡಿ! ಓಡಿ!")
:(ನಿಲ್ಲಿರೋ ನಿಲ್ಲಿರೋ ನನ್ಮಕ್ಕಳ್ರಾ!!”)
{{gap}}ಗಾಯಗೊಂಡು ಬಿದ್ದಿದ್ದ ಮಹಾರಾಜರ ದೇಹ ನೆಲದ ಮೇಲೆ, ಶವಗಳ ನಡುವೆ, ತೆವಳುತ್ತಿತ್ತು.
:ಅರಿರುವ ಗಂಟಲಿಗೆ ಎಲ್ಲಿಂದಾದರೂ ಒಂದಿಷ್ಟು ನೀರು?
{{***|4}}
:ನೀರು, ನೀರೂ ನೀರೂ...
{{gap}}ತುಂಗಾ-ಭದ್ರಾ ತುಂಗಭದ್ರಾ...ವರದಾ...ಕೃಷ್ಣಾ...ಮಲಪ್ರಭಾ... ಮಹಾಪೂರಗಳಲ್ಲಿ ಈಸಿದೆ.ಬಾನೊಡೆದು ಸುರಿದ ಕೋಡಿಮಳೆಯಲ್ಲಿ ತೋಯಿಸಿಕೊಂಡೆ. ಈಗ ಕುಡಿಯಲೂ ನೀರಿಲ್ಲ.
:ನೀಲು, ನೀರೂ ನೀರೂ...
:“ಎರಡು ಲೋಕಗಳ ಅರಸ ಎಂದು ಕರೆದುಕೊಂಡ ನನಗೆ-”
:“ಮಂತ್ರಿ ತಿಪ್ಪಯ್ಯಾ!"
“ಮಹಾಪ್ರಭೂ....”
“ಗೊಣಗ್ತಿದೀಯಲ್ಲ, ಏನದು?”
“ಏನಿಲ್ಲ, ಏನಿಲ್ಲ"
“ಬೊಗಳೋ!”
“ಇಹ್ಹಿ!” - - -
“ನಾಚೈ ನನ್ಮಗ್ನಿಗೆ-ಮಂತ್ರಿ ಪದವಿಯಿಂದ ನಿನ್ನನ್ನ ಬರ್ತಫ್ ಮಾಡೇನು, ಹುಷಾರ್!”
:“ಮಹಾಪ್ರಭುಗಳು-”
:"ಏನು?"
:“ಈರೇಳು ಲೋಕಗಳ ಮಾರಮಣ ಅಂತ ಹೆಸರಿಟ್ಟುಕೊಂಡರೆ...”<noinclude></noinclude>
2np97179ihj40ymc2qurqt2oy1dsru9
ಪುಟ:KELAVU SANNA KATHEGALU.pdf/೧೦೬
104
20260
321144
248534
2026-05-20T06:25:17Z
Pragathi. BH
7585
/* Validated */
321144
proofread-page
text/x-wiki
<noinclude><pagequality level="4" user="Pragathi. BH" /><small>{{rh|84||ನಿರಂಜನ: ಕೆಲವು ಸಣ್ಣ ಕಥೆಗಳು}}</small></noinclude>:“ಈರುಳ್ಳಿಯಾ?”
:“ಈರೇಳು, ಅಂದರೆ ಹದಿನಾಲ್ಕು. ನಮ್ಮ ಪುರಾಣದಲ್ಲಿ-”
:“ಕಟ್ಟು ಕಂತೆ ಪುರಾಣಾನ!”
:“ಮೂರು ಲೋಕಗಳ ಗಂಡಾಂತಾದನ್ರಿ-”
:“ಯಾವುದೋ ಅದು?”
:“ಸ್ವರ್ಗ, ಮರ್ತ್ಯ, ಪಾತಾಳ...”
{{gap}}"ಪಾತಾಳ ಸುಟ್ಟಿತು. ಈಗಿರೋದು ಮುಂದೆ ಬರೋದು ಸಾಕು. ಎರಡು ಲೋಕಗಳ ಅರಸ!"
:“ಅಪ್ಪಣೆ.”
:“ಜಂಗಮರಿಗೆ ದಾಸೋಹ, ಬ್ರಾಹ್ಮಣರಿಗೆ ಸಂತರ್ಪಣೆ, ಫಕೀರರಿಗೆ ಭಿಕ್ಷೆ”
:“ಏರ್ಪಾಟಾಗ್ರದೆ.”
:ಹಾಲು ಮೊಸರುಗಳ ಹೊಳೆ ಹರಿಯಿತೆ! ನೀರಂತೂ ಹೇರಳವಾಗಿತ್ತು.
:ಈಗ ಒಂದು ಗುಟುಕು?
{{***|4}}
:ನೀರು, ನೀರೂ ನೀರೂ...
:ಇದು ರಕ್ತದ ಮಡು. ಶವದ್ವೀಪಗಳು...
{{gap}}అಲ್ಲವಪ್ಪಾ, ಅಲ್ಲ. ಇದು ರಕ್ತದ ಸಮುದ್ರ ಅಗೋ ಬಿಳಿಯರ ಹಾಯಿ ಹಡಗುಗಳು. ಬಾವುಟ? ಊಹೂಂ, ಹಾಯಿ...ದಡಹಾಯಿಸೋ ದೇವಾ. ಎಷ್ಟು ಇಂಪಾದ ಕಂಠ! ಹಾಡುತ್ತಿರುವವಳು ತನ್ನ ತಾಯಿ...ಶಿಕಾರಿಪುರದ ಕದನದಲ್ಲಿ ತನಗೆ ಸೋಲಾಗಿ (ಸ್ಟೀವನ್ಸನ್ ಅವನ ಹೆಸರು. ಕಿಲ್ಲೇದಾರನನ್ನು ಹಿಡಿದು ನನ್ನ ಪಡೆಗಳ ಕಣ್ಣಿಗೆ ಬೀಳುವಂತೆ ತೂಗಹಾಕಿದ. ಪುಕ್ಕಲು ಮುಂಡೇವು ಓಡಿದುವೂ ಓಡಿದುವು. ನಿಲ್ಲಿರೋ, ನಿಲ್ಲಿರೋ ನನ್ಮಕ್ಕಳ್ರಾ), ತಾನೊಂದು ದೋಣೆ ಏರಿ, ಕುಮುದ್ವತಿ ನದಿಯನ್ನು ದಾಟಿ ನಾಡಿನ ಉತ್ತರಕ್ಕೆ ಓಡಬೇಕಾಗಿ ಬಂದಾಗ... ದಡ ಹಾಯಿಸೋ ದೇವಾ....
:“ಧೋಂಡಿಯಾ...”
:"ಹಾಂ???
{{gap}}“ಭಾರೀ ಬೇಟೇಂತ ಕಾಣ್ತೇತೆ. ನಿನ್ನಪ್ಪ ಯಾವಾಗ ಬರ್ತಾರೋ ಯಾನೋ. ನೀನು ಉಣ್ಣು, ಮರಿ.”
{{gap}}"ಊಹೂಂ, ಹುಲಿಮರಿ ತಂದ್ಕೊಡ್ತೀನಂತ ಅಂದಿದಾರೆ. ಅದು<noinclude></noinclude>
g8xwyqxv0x7nv84sqveurgp91ig8dj3
ಪುಟ:KELAVU SANNA KATHEGALU.pdf/೧೦೭
104
20261
321145
248544
2026-05-20T06:25:27Z
Pragathi. BH
7585
/* Validated */
321145
proofread-page
text/x-wiki
<noinclude><pagequality level="4" user="Pragathi. BH" /><small>{{rh|ಹರಕೆಯ ಖಡ್ಗ||85}}</small></noinclude>ಬಂದ್ಮೇಲೇನೇ ಊಟ"
:“ನಿನಗ್ಯಾಕಪ್ಪ ಹುಲಿ?
:“ಆಟ ಆಡೋಕೆ, ಸವಾರಿ ಮಾಡೋಕೆ.”
:“ಭಗವಂತ!! ಎಂಥೆಂಥಾ ಆಸೆಯಪ್ಪಾ ಈ ಮಗೂಗೆ!”
:“ಅಮ್ಮಾ.”
:“ಯಾನೋ?”
:“ಅಪ್ಪ ಹುಲಿ ಕೊಡ್ತಾನೆ. ನೀನೊಂದು ಕಿರೀಟ ಕೊಡ್ಡಮ್ಮ”
:“ಯಾಕೊ ಧೋಂಡೂ?”
:“ರಾಜನ ಆಟ ಆಡೋಕೆ.”
:“ಹೊಹ್ಹೊ ನನ ರಾಜ!"
:ಹುಲಿ ಬಂತು; ತನ್ನನ್ನೂ ಹುಲಿ ಮಾಡಿತು.
:ಧೊಂಡಿಯಾ ವಾಘ್-ಧೊಂಡಿಯಾ ವ್ಯಾಘ್ರ...
:ಹುಲಿಯಾಟ ಆಡಿದೆ: ರಾಜನ ಆಟವನ್ನೂ ಆಡಿದೆ...
:ಮೋನ್ಯಾ ಖಡ್ಗ ಕೇಳಿದನಲ್ಲ?
{{gap}}ಇನ್ನು ಅವನ ಸರದಿ. ಯುದ್ಧದ ಆಟ ಆಡ್ತಾನೆ. ರಾಜನ ಆಟವನ್ನೂ ಆಡ್ತಾನೆ...
{{gap}}ಯಾವ ಕಡೆ ಹೋಗಲಿ? ಎಡಕ್ಕೋ ಬಲಕ್ಕೋ? ಆತ? ಪಾಪ! ಹಬೀಬುಲ್ಲ ಸತ್ತು ಬಿದ್ದಿದಾನೆ. ಹೈದರಾಲಿ ಖಾನರದೇ ಮುಖ ಇವನದು.
:ಇಕ್ಕೇರಿಯಿಂದ ಪಟ್ಟಣಕ್ಕೆ ಬಂದ ಯುವಕ ತಾನು.
:“ಸನ್ನಿಧಾನದಲ್ಲಿ ಅರಿಕೆ...”
:"ಯಾರೀತ?"
{{gap}}“ನಗರದಿಂದ ಬಂದಿದಾನೆ. ಮಹಾಶೂರ. ಧೊಂಡಿಯಾ ವಾಘ್ ಅಂತ ಕರೀತಾರೆ."
:“ಮಲೆನಾಡಿನ ಹುಲಿಯೋ ನೀನು?”
:“ಮಾತಾಡು ಧೊಂಡಿಯಾ.”
:ಗಂಟಲು ಸರಿಪಡಿಸಿ ಯುವಕನೆಂದ:
{{gap}}"ಯುದ್ಧ ವಿದ್ಯೆ, ಕುದುರೆಸವಾರಿ ಬಲ್ಲೆ. ತಂದೆ ತಾಯಿ ತೀರಿಕೊಂಡಿದ್ದಾರೆ. ನಾನು ಒಬ್ಬಂಟಿಗ. ಸೈನ್ಯದಲ್ಲಿ ಕೆಲಸ ಕೊಟ್ಟದ್ದೇ ಆದರೆ...."
:“ನಂಜಪ್ಪನನ್ನು ಕರೀರಿ. ಖಡ್ಗ ಇದೆಯೇನೊ ಹುಲಿಹುಡುಗ?”
:“ಖಡ್ಗ ಕುದುರೆ ಎರಡೂ ಇವೆ.”<noinclude></noinclude>
bdppayvnue9i2liyaulfdtykuuxugxx
ಪುಟ:KELAVU SANNA KATHEGALU.pdf/೧೧೧
104
20265
321146
251956
2026-05-20T06:25:47Z
Pragathi. BH
7585
/* Validated */
321146
proofread-page
text/x-wiki
<noinclude><pagequality level="4" user="Pragathi. BH" />{{rh|ಹರಕೆಯ ಖಡ್ಗ||89}}</noinclude>:ನೀರಿಗಾಗಿ ಬಾವಿ ತೋಡುತ್ತಿದ್ದೇನೆ. ಕನಸು.
:ನೆನಸು? ಹಳೆಯ ನೆನಪು?
:ಪಟ್ಟಣದಿಂದ ತಪ್ಪಿಸಿಕೊಂಡು ಬಂದವನು ಶಿಕಾರಿಪುರದ ದೇವಾಲಯದಲ್ಲಿ
ಪೂಜೆ ಸಲ್ಲಿಸಿದೆ.
:ಸಂಗಡಿಗರು ರಾಜ ಖಡ್ಗವನ್ನು ತಂದರು. ಅದನ್ನು ಎತ್ತಿ ಬಳಸ ಬಲ್ಲ
ವನು ಧೊಂಡಿಯಾ ಒಬ್ಬನೇ.
:"“ಮಂಗಳಾರತಿಯಾಗುತ್ತಿದೆ.”
:“ಹ್ಞ."
:“ಹರಕೆಗಳಿದ್ದರೆ...”
:“ಹ್ಞ, ಮೈಸೂರನ್ನು, ಕರ್ನಾಟಕವನ್ನು ಸ್ವತಂತ್ರಗೊಳಿಸುತ್ತೇನೆ.
ಮರಾಠರನ್ನು ಕೃಷ್ಣಯಾಚೆಗೆ, ಆಂಗ್ಲರನ್ನು ಕಡಲಿನಾಚೆಗೆ ಅಟ್ಟುತ್ತೇನೆ. ಎಲ್ಲ
ವೈರಿಗಳಿಗೆ ನೀರು ಕುಡಿಸುತ್ತೇನೆ. ದೇವರ ಸಾಕ್ಷಿಯಾಗಿ ಈ ಖಡ್ಗವನ್ನೀಗ
ಎತ್ತಿಕೊಳ್ಳುವೆ. ಯತ್ನ ಯಶಸ್ವಿಯಾಯಿತೆಂದರೆ ದೇವಾಲಯಕ್ಕೆ ಬಂಗಾರದ
ಕಳಶವಿಡಿಸುತ್ತೇನೆ.”
:“ಹಾಗೆಯೇ ಆಗಲಿ.”
:ಗುರಿ ಸಾಧಿಸಬೇಕು. ಹರಕೆ ಸಲ್ಲಿಸಬೇಕು.
:“ಎಲ್ಲ ವೈರಿಗಳಿಗೆ ನೀರು ಕುಡಿಸು....”
{{***|4}}
:ನೀರು, ನೀರೂ ನೀರೂ...
:ಸಾವಿನ ಸಮ್ಮುಖದಲ್ಲಿರುವ ಎರಡು ಲೋಕಗಳ ಅರಸನಿಗೆ ನೀರು....
:ಸಾವಿನ ಸಮ್ಮುಖ?
:ಅದು ಸುಳ್ಳು. ಇದು ಹೊಸ್ತಿಲು. ವಿಜಯದ ಹೊಸ್ತಿಲಲ್ಲಿರುವ ಎರಡು
ಲೋಕಗಳ ಅರಸನಿಗೆ ಒಂದು ಗುಟುಕು ನೀರು ಬೇಕು, ನೀರು.
:ಬಗ್ಗಿ, ಬಗ್ಗಿ ಬರುತ್ತಿರುವ ಈತ ಯಾರು? ಇವನು ಹುಡುಕುತ್ತಿರು
ವುದು ಯಾರನ್ನು ? ದೊರೆ ಧೊಂಡಿಯಾನನ್ನು ಹಿಡಿದು ಆಂಗ್ಲರಿಗೆ ಕೊಡುವ
ಆಸೆಯೋ?
:ತಾನು ಕಣ್ಣು ಮುಚ್ಚಿಕೊಳ್ಳಬೇಕು; ಸತ್ತವನಂತೆ ನಟಿಸಬೇಕು.
:(ನಟಿಸುವುದೇನು ಬಂತು? ವಾಸ್ತವವಾಗಿ ತಾನು ಸತ್ತೇ ಇಲ್ಲವೆ? ಹೊಟ್ಟೆ<noinclude>{{right|12}}</noinclude>
mothzmesbytjm4st7lfjto1o474rt94
ಪುಟ:KELAVU SANNA KATHEGALU.pdf/೧೧೨
104
20266
321147
251955
2026-05-20T06:25:58Z
Pragathi. BH
7585
/* Validated */
321147
proofread-page
text/x-wiki
<noinclude><pagequality level="4" user="Pragathi. BH" />{{rh|90||{{smaller|ನಿರಂಜನ: ಕೆಲವು ಸಣ್ಣ ಕಥೆಗಳು}}}}</noinclude>ಯಲ್ಲಿ ಗುಂಡು, ಕತ್ತಿಗೆ ನೆಟ್ಟಿರುವ ಈಟಿ. ರಕ್ತ ಹರಿಯುತ್ತಿದೆಯಲ್ಲ? ಹುಟ್ಟಿದ
ವನು ಸಾಯಬೇಕೆನ್ನುವುದು ಪ್ರಕೃತಿ ನಿಯಮ? ನಾನು, ನಾನು....)
:“ಮಹಾಪ್ರಭೂ..."
:ಪಿಸುದನಿ.
:ಈ ಸ್ವತ ಪರಿಚಿತ, ಸ್ವಾಮಿನಿಷ್ಠ ಯೋಧನೇ ಇರಬೇಕು.
:ಮೆಲ್ಲನೆ ಕಣ್ಣು ತೆರೆದೆ....
:ಆತ ತನ್ನ ಮಗ್ಗುಲಲ್ಲಿ ಮಲಗಿದ್ದಾನೆ.
:“ಯಾ-ರು?”
:“ಅಪ್ಪಣ್ಣ...
:ಅಪ್ಪಣ್ಣ-ಬಲ್ಲೆ, ನಂಬುಗೆಯ ಬಂಟ.
:“ನೀರೂ....”
{{***|4}}
:ಅಪ್ಪಣ್ಣ ತನ್ನ ಬೆನ್ನ ಮೇಲಿದ್ದ ತೊಗಲ ಚೀಲದಿಂದ ದೊರೆಗೆ ನೀರುಣಿ
ಸಿದ-ಸ್ವಲ್ಪ ಸ್ವಲ್ಪವಾಗಿ, ಎರಡು ಗುಟುಕು.
:“ಸಾ-ಕು.”
:ಅವನು ವರದಿ ಇತ್ತ:
:“ನಮಗೆ ಸೋಲು. ಬೇಹುಗಾರ ನಿನ್ನೆ ತಿಳಿಸಿದ್ದು ನಿಜವಲ್ಲ. ರಾತ್ರೆ ವೈರಿ
ಗಳು ನಮ್ಮ ಸಮೀಪದಲ್ಲೇ ಇದ್ರು, ಘಾತವಾಯ್ತು. ಈಗ....ಈಗ...”
:“ಏನು?”
:“ಪ್ರಭುಗಳು ತಪ್ಪಿಸಿಕೊಂಡು....”
:ಆಳ ಆಳಕ್ಕೆ ದೇಹ ಕುಸಿಯುತ್ತಿದ್ದಂತೆ ಕಂಡಿತು.
:ತಿಪ್ಪಯ್ಯನ ಸಲಹೆಯನ್ನು ಸ್ವೀಕರಿಸಬೇಕಾಗಿತ್ತು. ಪಾತಾಳವನ್ನು
ಬಿಟ್ಟುದು ತಪ್ಪು. ಮೂರು ಲೋಕಗಳ ಅರಸ ಎನ್ನಬೇಕಾಗಿತ್ತು.
:“ನಾ-ನು....ಅವರ....ಕೈಗೆ... ಸಿಗೋದಿಲ್ಲ...ಅ....ಪ್ಪಣ್ಣ...”
:ಅಪ್ಪಣ್ಣ ಕಣ್ಣಗಲಿಸಿದ.ಅರಿವು ಮೂಡಿದೊಡನೆ ಆ ಕಣ್ಣುಗಳಿಂದ ಕಾರಂಜಿ
ಗಳು ಪುಟಿದುವು.
:“ಪ್ರಭೂ!”
:“ಇ-ಷ್ಟು ಕೆಲಸ ಮಾಡಪ್ಪ....ಈ-ಖಡ್ಗವನ್ನ...ಶಿಕಾರಿಪುರಕ್ಕೆ...ಒಯ್ದು
....ದೇವಸ್ಥಾನದಲ್ಲಿ... ಇಡು...ಕೆಲಸ....ಮುಗಿಯಲಿಲ್ಲ.... ಹರಕೆ....ಬಾಕಿ...
ಮೋನ್ಯಾ... ನನ್ನು ....ನೋಡಿಕೋ...ಅವನು... ದೊಡ್ಡವನಾದ್ಮೇಕೆ...ಆ.....<noinclude></noinclude>
kmkaauxlolsxbwt8u7wptlrjkp2z6b4
ಪುಟ:KELAVU SANNA KATHEGALU.pdf/೧೧೪
104
20268
321148
251950
2026-05-20T06:26:10Z
Pragathi. BH
7585
/* Validated */
321148
proofread-page
text/x-wiki
<noinclude><pagequality level="4" user="Pragathi. BH" />{{rh|center=92}}
{{center|{{big|'''ಕತೆಗಾರನ ಟಿಪ್ಪಣಿ'''}}}}</noinclude>'''ಬಾಪೂಜಿ! ಬಾಪೂ!'''
:ಕತೆಯ ಮೊದಲ ಪ್ರಕಟಣೆ ೧೯೪೧ರಲ್ಲಿ, ಮಂಗಳೂರಿನ 'ರಾಷ್ಟ್ರಬಂಧು'
:ಸಾಪ್ತಾಹಿಕದಲ್ಲಿ.
:ಗಾಂಧಿಜಿಯ ಕೊಲೆಯಾದದ್ದು ೧೯೪೮ ರಲ್ಲಿ. ಆದರೆ, ಅದಕ್ಕೂ ಏಳು
:ವರ್ಷ ಮೊದಲೇ ಬರೆದ ನನ್ನ ಕತೆಯಲ್ಲಿ ಅವರು ದಿವಂಗತರಾಗಿದ್ದರು;
:ದೇಶಕ್ಕೆ ಸ್ವಾತಂತ್ರ್ಯವೂ ಬಂದಿತ್ತು! ಶೀರ್ಷಿಕೆಯ ಕೆಳಗೆ ದಪ್ಪಕ್ಷರದಲ್ಲಿ
:ಗಾಂಧೀಜಿ ಶತಾಯುವಾಗಲೆಂಬ ಆಶಯದೊಡನೆ ಎಂದೂ
:ಬರೆದಿದ್ದೆ.
:ಕತೆಯನ್ನು ಮೊಳೆ ಜೋಡಿಸಿ ಪುಟ ಕಟ್ಟಿದರು. ಅದರ ಪ್ರೂಫ್ ಸಹಾ
:ಯಕ ಸಂಪಾದಕ ಶ್ರೀ ಕೆ. ಕೃಷ್ಣರಾಯರ ಬಳಿಗೆ ಹೋಯಿತು. ಬದುಕಿ
:ರುವಾಗಲೇ ಗಾಂಧಿಜಿಯನ್ನು ಪ್ರೇತಾತ್ಮ ಮಾಡುವುದೆಂದರೆ? ಅವರು
:ಆಕ್ಷೇಪಿಸಿದರು. ಪುಟ, ಸಂಜೆ, ಸಂಪಾದಕರ ಮನೆಗೆ ಹೋಯಿತು.ಮರು
:ದಿನ ಬೆಳಗ್ಗೆ ಕಾರ್ಯಾಲಯಕ್ಕೆ ಬಂದ ಶ್ರೀ ಕಡೆಂಗೋಡ್ಲು ಶಂಕರ
:ಭಟ್ಟರು ಮುಗುಳುನಗುತ್ತ “ಏನುಕೃಷ್ಣರಾಯರೆ?ಗಾಂಧಿಜಿ ಸಾಯೋದೇ
:ಇಲ್ವೊ?” ಎಂದರು.
:ಉಪ ಸಂಪಾದಕ ಬರೆದ ಈ ಕತೆ ಅಚ್ಚಾಯಿತು.
'''ಎಣ್ಣೆ! ಚಿಮಿಣಿ ಎಣ್ಣೆ!'''
:ಬ್ರಿಟಿಷ್ ಸರಕಾರದ ಕೆಂಗಣ್ಣಿಗೆ ಗುರಿಯಾದ ಮೊದಲ ಕನ್ನಡಕತೆ ಇದು.
:ನನಗೆ ಗೊತ್ತಿರುವಷ್ಟರ ಮಟ್ಟಿಗೆ. ಪ್ರಥಮ ಪ್ರಕಟಣೆ ೧೯೪೨ ಆಗಸ್ಟ್
:೨ರ 'ರಾಷ್ಟ್ರಬಂಧು'ವಿನಲ್ಲಿ. ಪ್ರಕಟವಾದ ಎರಡು ಮೂರು ದಿನಗಳಲ್ಲೆ
:ದಕ್ಷಿಣ ಕನ್ನಡದ ಐ.ಸಿ.ಎಸ್. ಕಲೆಕ್ಟರು ಸಂಪಾದಕರನ್ನು ಕರೆಸಿದರು.
:ಕತೆಯಾಗಲೇ ಇಂಗ್ಲಿಷಿಗೆ ಭಾಷಾಂತರಗೊಂಡು ಕಲೆಕ್ಟರರ ಮುಂದಿತ್ತು.
:ಕಲೆಕ್ಟರ್ ಎಚ್ಚರಿಕೆಯ ನುಡಿ ಆಡಿ ಸಂಪಾದಕರನ್ನು ಹೋಗಗೊಟ್ಟರು.<noinclude></noinclude>
91xblvmpnx09i180slz994g1sdzc8ig
ಪುಟ:KELAVU SANNA KATHEGALU.pdf/೧೧೫
104
20269
321149
251949
2026-05-20T06:26:21Z
Pragathi. BH
7585
/* Validated */
321149
proofread-page
text/x-wiki
<noinclude><pagequality level="4" user="Pragathi. BH" />{{rh|ಕತೆಗಾರನ ಟಿಪ್ಪಣಿ||93}}</noinclude>
:ಮೂವತ್ತಮೂರು ವರ್ಷಗಳ ಬಳಿಕ ೧೯೭೫ರಲ್ಲಿ, ಮಂಗಳೂರಿನ
:"ಅರುಣ' ಸಾಪ್ತಾಹಿಕ ನನ್ಸ್ಟಿಂದ ಒಂದು ಕತೆ ಬಯಸಿತು. ಸಂಪಾದಕ
:ಯು, ಎನ್. ಶ್ರೀನಿವಾಸ ಭಟ್ಟರು "ಹಳೆಯದೂ ಆಗಬಹುದು' ಎಂಬ
:ಸೂಚನೆಯನ್ನೂ ಇತ್ತಿದ್ದರು. ಈ ಕತೆಯನ್ನು ಪ್ರತಿ ಮಾಡಿ ಕಳಿಸಿದೆ.
:ಅದು ಎಮರ್ಜೆನ್ಸಿ ಕಾಲಾವಧಿ. ಯಾವುದೇ ಪತ್ರಿಕೆಯ ಅಂತಿಮ
:ಪ್ರೂಫ್ ಡಿ. ಸಿ. (ಡೆಪ್ಯೂಟಿ ಕಮಿಷನರ್) ಅವರಿಂದ 'ಓ.ಕೆ.' ಆಗ
:ಬೇಕು. 'ಎಣ್ಣೆ! ಚಿಮಿಣಿ ಎಣ್ಣೆ' ಪುಟ ಸೆನ್ಸಾರ್ ಆಯಿತು. "ಈ ಕತೆ
:ಅಚ್ಚು ಮಾಡಬೇಡಿ” ಎಂಬ ಆಜ್ಞೆಯೊಂದಿಗೆ ಹಿಂದಿರುಗಿ ಬಂತು!
'''ಮೈಖೆಲ್ಮಾಸ್ ಪಿಕ್ನಿಕ್'''
:ಕ್ರಿಸ್ತೀಯ ಬದುಕು, ಆಚಾರ-ವಿಚಾರ, ಬಹಳ ಹಿಂದಿನಿಂದಲೂ ನನಗೆ
:ಕುತೂಹಲದ ವಿಷಯ. ಆದರೆ, ಅಲ್ಲಿಯೂ ಎರಡು ವರ್ಗಗಳನ್ನು ನಾನು
:ಗಮನಿಸಿದ್ದೆ, ಸಮಾಜದ ಇತರ ಮತ-ಪಂಗಡಗಳಲ್ಲಿ ಇರುವಂತೆ.
:ಈ ಕತಿ ಮೊದಲು ಅಚ್ಚಾದದ್ದು 'ರಾಷ್ಟ್ರಬಂಧು'ವಿನಲ್ಲಿ, ೧೯೪೩ ರಲ್ಲಿ.
'''ರಕ್ತ ಸರೋವರ'''
:೧೯೪೬ರಲ್ಲಿ ಕಾಶ್ಮೀರದಲ್ಲಿ, ಡೋಗ್ರಾ ಅರಸೊತ್ತಿಗೆಯ ವಿರುದ್ಧ ಜನ
:ದಂಗೆ ಎದ್ದರು. ಅಲ್ಲೂ ಬೇರೆ ಆಶ್ರಿತ ರಾಜ್ಯಗಳಲ್ಲೂ ನಡೆದ ಜನತೆಯ
:ಸಮರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಒಂದಂಗವಾಗಿತ್ತು.
:ಅಲ್ಲಿಂದ ತೊಟ್ಟಿಕ್ಕಿ ಹರಿಯತೊಡಗಿದ ಸುದ್ದಿ ದೇಶದ ಮೈಯಲ್ಲಿ
:ರೋಮಾಂಚ ಉಂಟಿಮಾಡುತ್ತಿತ್ತು. ನನ್ನ್ನ ಕಣ್ಣಿಗೆ ಕಂಡುದು ಕೆಂಪಗಿನ
:ದಲ್ತಟಾಕ. ಧಾರವಾಡದ ಪ್ರೊ. ಶಿ.ಶಿ. ಬಸವನಾಳರು ತಮ್ಮ 'ಜಯ
:ಕರ್ನಾಟಕ' ಪತ್ರಿಕೆಯಲ್ಲಿ ಇದನ್ನು ಪ್ರಕಟಿಸಿದರು.
'''ಕೊನೆಯ ಗಿರಾಕಿ'''
:ನನ್ನ ಮೂರು ವರ್ಷಗಳ ಭೂಗತ ಜೀವನದ ಕೊನೆಯ ವರ್ಷ-೧೯೫೦.
:ಶಾತಾ ವಿಜ್ಞಾನ ಮಂದಿರ ಮತ್ತು ಮಲ್ಲೇಶ್ವರಂ ಹೈಸ್ಕೂಲುಗಳ ನಡುವೆ
:ಒಂದು ವೃತ್ತ. (ಕಾರಂಜಿ ಇರಲಿಲ್ಲ.) ಸುತ್ತಲೂ ಒಂದುವರೆ ಅಡಿ ಎತ್ತ
:ರದ ಕಟಿಕಟೆ. ಅಲ್ಲಿ, ಮೊದಲೇ ಗೊತ್ತುಪಡಿಸಿದ ದಿನಗಳಲ್ಲಿ, ರಾತ್ರೆ
:ಒಂಭತ್ತೂವರೆಯಿಂದ ನಾನು ಕುಳಿತಿರಬೇಕು, ಒಂದು ಚೀಲದೊಡನೆ.
:ಹತ್ತರೊಳಗೆ ಜಾಲಹಳ್ಳಿ ಕಡೆಯಿಂದ ಯಾರಾದರೂ ಬರುವರು. ಅವರಿಗೆ<noinclude></noinclude>
8pik1yh3xgrwxl2edr9oo95jxclc3m1
ಪುಟ:KELAVU SANNA KATHEGALU.pdf/೧೧೬
104
20270
321150
251947
2026-05-20T06:26:31Z
Pragathi. BH
7585
/* Validated */
321150
proofread-page
text/x-wiki
<noinclude><pagequality level="4" user="Pragathi. BH" />{{rh|94||ನಿರಂಜನ: ಕೆಲವು ಸಣ್ಣ ಕಥೆಗಳು}}</noinclude>:ಆ ಚೀಲ ದಾಟಸಬೇಕು; ಪತ್ರಿಕೆಗಳಲ್ಲಿ ಅಚ್ಚಾಗದ ವಿಷಯಗಳ ಬಗ್ಗೆ
:ತುಸು ಮಾತನಾಡಬೇಕು. ಬಳಿಕ ಒಂದು ಸೈಕಲ್ ಆಚೆಗೆ; ಇನ್ನೊಂದು
:ನಗರದೊಳಗಿನ ಇಕ್ಕಟ್ಟಿನ ಸ್ಥಳಕ್ಕೆ.
:ಆ ವೃತ್ತದಲ್ಲಿ ಕುಳಿತಿದ್ದ ಒಂದೆರಡು ಸಲ 'ಕಾಣಿ'ಯನ್ನು ಹೋಲುವ
:ಒಬ್ಬಳು ಆ ಕಾಲುದಾರಿಯಲ್ಲಿ ಸುತ್ತುವುದನ್ನು ಕಂಡಿದ್ದೆ. ಒಬ್ಬಿಬ್ಬರು
:ಅವಳ ಜತೆ ಪೊದೆಗಳತ್ತ ಸಾಗಿದ್ದರು. ಒಮ್ಮೆ ಅವಳ ಕಿರಿಚಾಟ ಕೇಳಿ
:ಸಿತು. ಮೂಗರ ಪ್ರಲಾಪ...ಆ ಕಟ್ಟಿಯಲ್ಲಿ 'ಸಂಗಾತಿ'ಗಾಗಿ ಕಾಯುವ
:ಕೆಲಸ ನಿಂತಿತು. ಬಳಿಕ 'ಕಾಣಿ'ಯನ್ನು ನಾನು ಕಾಣಲಿಲ್ಲ.
:ಮನಸ್ಸು ಮೆದುಳಿನ ಯಾವ ಮೂಲೆಯಲ್ಲಿದೆಯೊ? ಆ ಘಟನೆ ಈಟ
:ಯಂತೆ ಅದನ್ನು ತಿವಿದಿತ್ತು. ಒಂದು ವರ್ಷ ಕಳೆದ ಮೇಲೆ ಚೌಕಟ್ಟು,
:ಹಿನ್ನಲೆ- ಎಲ್ಲವನ್ನೂ ಕಲ್ಪಿಸಿಕೊಂಡು 'ಕೊನೆಯ ಗಿರಾಕಿ' ಬರೆದೆ. ಆ
:ಜೀವಕ್ಕೆ 'ಕಾಣಿ' ಎಂದು ಹೆಸರಿಟ್ಟೆ. ಕತೆ ಬರೆದ ಮೇಲೆ ಅದಕ್ಕೆ ಪ್ರೇರಣೆ
:ಯಾದ ಸಂದರ್ಭವನ್ನು ನೆನಪಿನ `ಗವಿಯೊಳಕ್ಕೆ ತಳ್ಳಿದೆ.
:'ಕತೆಗಾರ' ಮಾಸಪತ್ರಿಕೆಯಲ್ಲಿ 'ಕೊನೆಯ ಗಿರಾಕಿ' ಮೊದಲು ಬೆಳಕು
:ಕಂಡಿತು. ಸಂಪಾದಕರು: ಜಿ. ಎ. ನರಸಿಂಹಮೂರ್ತಿ.
'''ತಿರುಕಣ್ಣನ ಮತದಾನ'''
:ನಾನು ಎಷ್ಟೋ ಮಂದಿ ತಿರುಕಣ್ಣರನ್ನು ನೋಡಿದ್ದೇನೆ. ಆರೋಗ್ಯ
:ಮ್ಮಂದಿರು ಸತ್ತದ್ದೂ ಗೊತ್ತು. ಮತಗಟ್ಟೆಯಿಂದ ಮಾನಸಿಕವಾಗಿ
:ಎಷ್ಟೊಂದು ದೂರ ಅವರು!.... ಇಲ್ಲ; ಈಗ ಪರಿಸ್ಥಿತಿ ಬದಲಾಗಿದೆ ಎನ್ನು
:ತ್ತೀರಾ? ನೋಟಿಗೆ ಪ್ರತಿಯಾಗಿ ಓಟು? ಹೆಂಡವೆಂಬ ದ್ರವ ಇಂಧನದ
:ಕರಾಮತ್ತು?
'''ಒಂದೇ ನಾಣ್ಯದ ಎರಡು ಮೈ'''
:ಎಸ್. ಎನ್. ಶಿವಸ್ವಾಮಿ ಮೈಸೂರು ಆಕಾಶವಾಣಿಯ ದಕ್ಷ ಅಧಿಕಾರಿ.
:ಸಾಹಿತ್ಯವನ್ನು ಆ ಮಾಧ್ಯಮಕ್ಕಾಗಿ ಸೊಗಸಾಗಿ ದುಡಿಸಿಕೊೊಂಡವರು.
:ಅವರು ಕೇಳದೆ ಇರುತ್ತಿದ್ದರೆ, ಇದನ್ನು ನಾನು ಬರೆಯುತ್ತಲೂ ಇರಲಿಲ್ಲ,
:ಇದು ಪ್ರಸಾರವಾಗುತ್ತಲೂ ಇರಲಿಲ್ಲ. ಮುಂದೆ ಅಚ್ಚಾಗುತ್ತಲೂ ಇರ
:ಲಿಲ್ಲ ಎನ್ನುವುದು ಅಷ್ಟೇ ನಿಜ. ಕತೆಯ ಪೂರ್ವಾರ್ಧ, ನಡೆದದ್ದು.
:ನಾನೇ ಮುಖ್ಯ ಪಾತ್ರ. ಉತ್ತರಾರ್ಧ, ಕಲ್ಪನೆ.<noinclude></noinclude>
slm55o7g25loce8yfz0k4lj48huszzp
ಪುಟ:KELAVU SANNA KATHEGALU.pdf/೧೨೦
104
20274
321163
235090
2026-05-20T06:40:18Z
Shreelatha.Halemane
7642
/* Validated */
321163
proofread-page
text/x-wiki
<noinclude><pagequality level="4" user="Shreelatha.Halemane" />98</noinclude>
{{c|'''ಈ ಕಥಾ ಸಂಕಲನವನ್ನು ಕುರಿತು'''}}
ಸಮಕಾಲೀನ ಕನ್ನಡ ಸಾಹಿತ್ಯವಲಯದಲ್ಲಿ ನಿರಂಜನ
ಯಾಕೆ ಮತ್ತು ಹೇಗೆ ಒಬ್ಬ ಮಹತ್ವದ ಲೇಖಕರೆಂಬುದನ್ನು
ಪರಿಗ್ರಹಿಸಲು ಈ ಸಂಕಲನದ ಹತ್ತು ಕಥೆಗಳು ದಿಕ್ಸೂಚಿಯಾಗಬಲ್ಲುವು. ಒಂದು ವ್ಯವಸ್ಥಿತ ಸಂಯೋಜನೆಯಿಂದಾಗಿ ಈ
ಸಂಕಲನಕ್ಕೆ ಚಾರಿತ್ರಿಕ ಸ್ಥಾನವೂ ಪ್ರಾಪ್ತವಾಗಿದೆ.
ಶತಮಾನದ ಕಾಲಮಾನ ಘಟಕದಲ್ಲಿ, 1941 ರಿಂದ 1965ರ
ಅವಧಿಯಲ್ಲಿ ಬರೆದ ಕಥೆಗಳಲ್ಲಿ ಹತ್ತನ್ನು ಆರಿಸಲಾಗಿದೆ. ಕಥೆಗಾರರ ಕಥನ ಕಲೆಯ ವಿಕಾಸದ ಮಜಲುಗಳನ್ನು ಅರಿಯಲೂ
ಈ ಸಂಕಲನ ನೆರವಿಗೆ ನಿಲ್ಲಬಹುದು.
{{rh|(ಮುನ್ನುಡಿಯಿಂದ)||'''ಡಾ. ಹಂಪನಾ'''}}
{{Css image crop
|Image = KELAVU_SANNA_KATHEGALU.pdf
|Page = 120
|bSize = 419
|cWidth = 60
|cHeight = 105
|oTop = 383
|oLeft = 74
|Location = left
|Description =
}}
'''ಐಬಿಎಚ್ ಪ್ರಕಾಶನ'''<br/>
ಗಾಂಧಿನಗರ, ಬೆಂಗಳೂರು 560 009<noinclude></noinclude>
mobku7g6o9wwgkm7gl7ik7ch44ph3qc
ಪುಟ:ಮಿಂಚು.pdf/೧೭೧
104
20616
320820
206765
2026-05-19T13:05:07Z
Shreelatha.Halemane
7642
/* Validated */
320820
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=165}}
{{gap}}ಧನಂಜಯನನ್ನು ಒಳಕ್ಕೆ ಕರೆದು ಸೌದಾಮಿನಿ ಅಂದಳು :
{{gap}}“ನೃತ್ಯ ಕಾರ್ಯಕ್ರಮಕ್ಕೆ ಸಂಸಾರ ಸಮೇತ ಬನ್ನಿ,”
{{gap}}“ಹತ್ತು ಟಿಕೆಟ್ ತಗೊಂಡಿದೇನೆ.
{{gap}}“ಸಂತೋಷ, ವ್ಯವಹಾರ ಚೆನ್ನಾಗಿ ಆಗ್ತಿದೆ ತಾನೆ ?”
{{gap}}“ತಮ್ಮ ಆಶೀರ್ವಾದ ಮಾತಾಜಿ."
{{gap}}“ಶಾಸಕರಭವನಕ್ಕೆ ಹೋಗಿ ಅಲ್ಲಿರುವ ಪ್ರತಿಷ್ಠಾನ ಕಲಾತಂಡದ ಹುಡುಗಿಯರಿಗೆ
ಯಾವ ಯಾವ ಬಣ್ಣ ಇಷ್ಟ ಅಂತ ಬರೆಸ್ಕೊಳ್ಳಿ, ಅವರವರ ಹೆಸರು ಸಹಿತ, ಅಷ್ಟು
ಸೀರೆ ಬೇಕು.ವ್ಯವಸ್ಥಿತವಾದ ವಿತರಣೆ, ಆಗ ನೀವೂ ವೇದಿಕೆಯ ಮೇಲಿರ್ತೀರಿ. ಯುವಕರಿಗೆಲ್ಲ ಎರಡೆರಡು ಮೀಟರ್ ಸಿಲ್ಕ್ ಬಟ್ಟೆ ಕೊಡಿ__ಶರ್ಟ್ ಹೊಲಿಸ್ಕೊಳ್ಲಿ.”
{{gap}}“ಪ್ರತಿಷ್ಠಾನದ ಅಧ್ಯಕ್ಷೆಯವರಿಗೆ ?"
{{gap}}“ಕಾರ್ಯಕ್ರಮದ ಮಾರನೇ ದಿನ ಬೆಳಗ್ಗೆ ಹತ್ತು ಸೀರೆ ಕಳಿಸ್ಕೊಡಿ, ಅವರೇ ಒಂದೆರಡು ಆರಿಸ್ಕೊಳ್ತಾರೆ."
{{gap}}“ನನ್ನ ಹೊಸ ಅಂಗಡಿಗೆ...”
{{gap}}“ನಮ್ಮ ಭೇಟಿ. ಖಂಡಿತ ಬರ್ತೇವೆ. ಮುಂದಿನ ತಿಂಗಳು.”
{{gap}}“ಎಕ್ಸ್ಪೋರ್ಟ್ ವಿಭಾಗ ಆರಂಭಿಸಿದ್ದೇನೆ
{{gap}}"ಭೇಷ್!"
* * *
{{gap}}ಟಿಕೆಟ್ ಪ್ಲೀಸ್... 13_10 ಬನ್ನಿ ಸಾರ್ ಕರಕೊಂಡು ಹೋಗಪ್ಪ, ಕೌಂಟರ್
ಎಲ್ಲಿದೆ ? ಮಿಸ್ಟರ್. ಆಲ್ ಟಿಕೆಟ್ಸ್ ಸೋಲ್ಡ್ ಔಟ್. 'ಒಳಗೆ ಸೀಟುಗಳು ಖಾಲಿ ಇದ್ದ ಹಾಗಿದೇ...' ಬಂದ್ಬಿಡ್ತಾರೆ. ಎಲ್ರೂ ಬರ್ತಾರೆ. ನೂರು ರೂಪಾಯಿ ಕೊಟ್ಟು ಟಿಕೆಟ್ ಕೊಂಡವರು ಬರದೆ ಇರ್ತಾರಾ?' 'ಅಂಥವರು ಊರಲ್ಲಿ ಇಲ್ಲದೇ ಹೋದರೆ?-- 'ಸಂಬಂಧಿಕರೋ ಗೆಳೆಯರೋ ಬರ್ತಾರೆ,' ನಿರಾಶೆ ! ನಿರಾಶೆ ! ನೂರು ರೂಪಾಯಿ
ಸಾల ಪಡೆದು బ೦ದರೂ ಟಿಕೆಟ್ಟಿಲ್ಲ. A-20 ಬನ್ನಿ,ಬನ್ನಿ,... 'ಫಸ್ಟ್ ರೋಗೆ
ಕರಕೊಂಡು ಹೋಗಪ್ಪ .ಯಾರೋ ವಿ.ಐ.ಪಿಸೀಟುಗಳಲ್ಲಿ ಕೂತಿದ್ದಾರೆ. ಅವರನ್ನ
ಸ್ವಲ್ಪ ವಿಚಾರಿಸ್ಕೋಪ್ಪ. ಗೌರವ ಕೊಟ್ಟು ಮಾತನಾಡಿಸು.' 'ಇದು ಬಾಲ್ಕನಿ
ಸೀಟೂ, ಮೇಲಕ್ಕೆ ಹೋಗಿ.' ಆರ್ಥರೈಟಿಸ್. ಮೆಟ್ಟಲು ಹತ್ತೋಕೆ ಆಗೋಲ್ವಲ್ಲ......' 'ಯಾರದಾದರೂ ಸಹಾಯ ತಗೊಳ್ಳಿ. ಐ ಆಯಮ್ ಸೋ ಸಾರಿ.''ನಮಸ್ಕಾರ ಸಾರ್,
ಪ್ರೆಸ್ ಗ್ಯಾಲರಿ. ಕರಕೊಂಡು ಹೋಗಪ್ಪ,' 'ದಾರಿ ಗೊತ್ತು. ಸೀಟು ಹಿಡೀತೀವಿ.'
M-17.... ಬಾಲ್ಕನಿಗೆ.
{{gap}}ಗದ್ದಲವಿಲ್ಲ. ಬಹ್ವಂಶ ಪ್ರೇಕ್ಷಕರು ಶಿಷ್ಟರು.<noinclude></noinclude>
cy7s6jtieyzowyw0fniruz4wenslsrr
ಪುಟ:ಮಿಂಚು.pdf/೧೭೫
104
20620
320863
206769
2026-05-19T14:57:12Z
Shreelatha.Halemane
7642
/* Validated */
320863
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=169}}
ನಿರಂತರವಾಗಿ ಸಾಗಲಿ. ನಿಮಗೆ ಭಾರತರತ್ನ ಬಿರುದು ಕೊಡಿಸೋದಕ್ಕೆ ಪ್ರಯತ್ನಿಸ್ತೀನಿ."
{{gap}}"ಅದಕ್ಕೆ ಎಷ್ಟು ಲಕ್ಷ ಖರ್ಚಾಗಬಹುದು ?"
{{gap}}"ತೋಬಾ ತೋಬಾ! ಬಿಡ್ತು ಅನ್ನಿ. ಅದು ದಿಲ್ಲಿ ಮರ್ಜೀನ ಅವಲಂಬಿ ಸಿರ್ತದೆ. ನಾನು ನಿಮಗೆ ಹೇಳಲೇಬಾರದಿತ್ತು. ಮರ್ತು ಬಿಡಿ."
{{gap}}“ಅದೇನು ಮಾಡ್ತಿಯೊ ಮಾಡು. ನಾನು ಮರೆತೇ ಬಿಟ್ಟೆ."
* * *
{{gap}}ಪ್ರತಿಷ್ಠಾನ ಕಲಾತಂಡ ಮರಳುವ ಪೂರ್ವಾಹ್ನ ನಗರದ, ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳ ಸಂದರ್ಶನ, ಜತೆಗೊಬ್ಬ ಛಾಯಾಚಿತ್ರಗಾರ. ರಾಮರಾಜುಗೆ ತಂಡದ ಒಬ್ಬಳು ಬಹಳ ಮೆಚ್ಚುಗೆಯಾಗಿದ್ದಳು. ಬಸ್ಸಿನಿಂದ ಇಳಿಯುವಾಗ ಹತ್ತುವಾಗ ಅವಳಿಗೇ ಅಂಟಿಕೊಂಡಿರುತ್ತಿದ್ದ. ಉದ್ಯಾನದಲ್ಲಿದ್ದಾಗ ಸಮಯ ಸಾಧಿಸಿ ಅವಳಿಗೊಂದು ಪುಟ್ಟ ಪ್ಯಾಕೆಟ್ ಕೊಟ್ಟ. "ಶ್ರೀಗಂಧದೆಣ್ಣೆ" ಎಂದ. "ಪ್ರಿಯತಮ ನೀಡುವ ಸೆಂಟ್" ಎಂದು ಮಾತು ಸೇರಿಸಿದ.
{{gap}}"ಸ್ವಲ್ಪ ಹೊತ್ತು ಒಟ್ಟಿಗಿರೋಣವಾ ?" ಎಂದು ಕೇಳಿದ,
{{gap}}"ಎಲ್ಲಿ?"
{{gap}}"ತಲೆನೋವು_ಶಾಸಕರಭವನಕ್ಕೆ ಹೋಗ್ತೇನೆ, అನ್ನಿ, అల్లి ವೈದ್ಯರಿದ್ದಾರೆ.
ಅಲ್ಲಿ_"
{{gap}}ತಂಡದ ಮುಖ್ಯಸ್ಥ_ಶಿವ ಪಾತ್ರಧಾರಿ_ಹದ್ದಾಗಿ ಹತ್ತಿರ ಹಾರಾಡಿದ.
{{gap}}"ಮಿಸ್ಟರ್ ರಾಮಾರಾಜು, ಮುಖ್ಯಮಂತ್ರಿ ನಿವಾಸದಲ್ಲಿ ಭೋಜನ ಅಲ್ಲವಾ?"
{{gap}}"ಇನ್ನೂ ಟೈಮಿದೆ."
{{gap}}"ಗೊತ್ತು. ಕಲಾ, ಮೈಥಿಲಿಗೆ ತಲೆನೋವಂತೆ. ಅವಳ ಜತೆ ಇರು."
{{gap}}"ಹ್ಞ ಹ್ಞ."
{{gap}}ಅವನು ಬಸ್ಸಿನತ್ತ ತೆರಳಿದೊಡನೆ ಕಲಾ ರಾಮರಾಜುಗೆ ಅಂದಳು:
{{gap}}"ರಾಜು. ಮುಂಬಯಿಗೆ ಬನ್ನಿ, ಅಲ್ಲಿ ಭೇಟಿಯಾಗೋಣ. ಬೈ-ಬೈ."
{{gap}}"ಬೈ-ಬೈ," (ಕ್ಷೀಣ ಸ್ವರ.) ಆ ಹಣೆಗಣ್ಣನ ಟೊಂಕ ಮುರಿಯಬೇಕು ಎನ್ನುವ ಸಿಟ್ಟು.
{{gap}}....ಗೃಹ ಕಾರ್ಯಾಲಯದಲ್ಲಿ ಸಂಜೆಯ ವರೆಗೆ ಪರಶುರಾಮನಿಗೆ ಬಿಡುವಿಲ್ಲದ ಚಟುವಟಿಕೆ. ಮುಖ್ಯ ಕಾರ್ಯದರ್ಶಿ ಚೌಗುಲೆ ಬಂದು ಹೋದರು, ಕೆಲ ಮಂತ್ರಿಗಳು ತಮ್ಮ ಇಲಾಖೆಯಲ್ಲಿ ಅಧಿಕಾರಿಗಳ ದಿಢೀರ್ ವರ್ಗಾವಣೆಗೆ ಆಗ್ರಹಿಸಿದ್ದರು. ವಿದೇಶ ಯಾತ್ರೆಯಲ್ಲಿದ್ದ ರಂಗಧಾಮ್ಗೆ ಫೋನ್ಮಾಡಿ "ಪತ್ರಗಳಲ್ಲಿ ಏನೂ ಬರೀಬೇಡಿ”<noinclude></noinclude>
3kjgkgs1ecpggb2re6vm2fo4wlmfeyi
ಪುಟ:ಮಿಂಚು.pdf/೧೭೬
104
20621
320860
206770
2026-05-19T14:42:54Z
Shreelatha.Halemane
7642
/* Validated */
320860
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=170|right=ಮಿಂಚು}}
ಎಂದು ಎಚ್ಚರಿಸಬೇಕಾಗಿತ್ತು. "ವರ್ಗಾವಣೆ ವಿಷಯ ನಿಮಗೇ ಬಿಟ್ಟಿದ್ದೀನಿ. ಸರಿ ತೋರಿದರೆ ಯೆಸ್. ತಪ್ಪೆಂದಾದರೆ ನೋ. ರಂಗಧಾಮ್ ಎಲ್ಲಿದಾರೇಂತ ವಿಚಾರಿಸಿ ನೀವೇ ಒಂದು ಸಲ ಫೋನ್ ಮಾಡಿಬಿಡಿ."
{{gap}}“ಮುಖ್ಯಮಂತ್ರಿಯವರು ಇವತ್ತು ಚೇಂಬರಿಗೆ ಬರೋದಿಲ್ಲ.” ಎಂದು ಎಷ್ಟು ಖಡಾಖಂಡಿತವಾಗಿ ಹೇಳಿದರೂ ಕೆಲ ಕುಳುಗಳು ಬಾಗಿಲು ಕಾಯಲು ಬಂದರು.ಅವರು ಪೋಲಿಸರಿಂದ "ಗಾಡಿಬಿಡಿ" ಅನ್ನಿಸಿಕೊಳ್ಳಬೇಕಾಯಿತು.
{{gap}}ಫೋನ್ ಕರೆಗಳಿಗೆ ವಿರಾಮವಿರಲಿಲ್ಲ. ಒಂದು ಕರೆ ಪರಶುರಾಮನನ್ನು ಸ್ವಲ್ಪ ಗೊಂದಲಕ್ಕೀಡುಮಾಡಿತು.
{{gap}}ಈತ "ಮುಖ್ಯಮಂತ್ರಿ ಗೃಹಕಾರ್ಯಲಯ" ಎ೦ದೊಡನೆ, “ಯಾರು ಪರಶು ರಾಮ್ನಾ?" ಎಂದಿತು ಧ್ವని ಆಕಡೆಯಿ೦ದ
{{gap}}"ಯಾರು ನೀವು?"
{{gap}}"ಪ್ರತಿ ಪಕ್ಷದ ಮುಖಂಡ. ಆ ಗುಜರಾಥಿ ಹೆಂಗಸು ಹೋದ್ಲಾ ?"
{{gap}}"ಅವರು ಯಾರೂಂತ ಗೊತ್ತಾಗ್ಲಿಲ್ವೆ?"
{{gap}}"ಗೊತ್ತಾಗುತ್ತೆ. ಗೊತ್ತಾಗುತ್ತೆ.”
{{gap}}ಮಾತಾಜಿಯ ಸನ್ನಿಧಿಗೆ ತೆರಳಿ, ಸಂಭಾಷಣೆಯನ್ನು ಅವಳ ಕಿವಿಯಲ್ಲಿ ಉಸುರಿದ. ಸೌದಾಮಿನಿಯ ಮುಖ ಕಪ್ಪಿಟ್ಟಿತು. ಆಪ್ತ ಕಾರ್ಯದರ್ಶಿಯ ಗಮನಕ್ಕೆ ಬರಬಾರದೆ೦ದು, ತನ್ನ ತುಟಿಗಳ ಮೇಲೆ ನಗೆ ಅರಳಿಸಿದಳು.
{{gap}}ಆಲ್ಬಮುಗಳ ರಾಶಿಯೇ ಅಲ್ಲಿತ್ತು. ಸೌದಾಮಿನಿಯ ವೈಭವದ ಚಿತ್ರರಾಶಿ. "ಇದು ಯಾರು? ಇದು ಯಾರು ?" ಎಂದು ಕೇಳಿ ಮೃದುಲಾ ಬೇಸತ್ತಳು. ಉತ್ತರ ಕೊಟ್ಟು ಮಾತಾಜಿ ಬಳಲಿದಳು.
{{gap}}ಬಯಲಲ್ಲಿ ಬೆಳಗ್ಗೆಯೇ ಷಾಮಿಯಾನ ಎದ್ದಿತ್ತು. ಟೇಬ್ಲ್ ಮೇಜುಗಳನ್ನು ಹೊತ್ತು ಲಾರಿ ಬಂತು. ಸಿದ್ಧ ಅಡುಗೆಯ ವ್ಯಾನ್ ಹಾಜರಿ ಹಾಕಿತು. ಕಲಾ ತಂಡವನ್ನು ಒಯ್ದಿದ್ದ ಕೋಚ್ ಕೂಡ ಬಂತು.
{{gap}}"ಎಲ್ಲ ಚೆನ್ನಾಗಿ ಆಯ್ತು" ಎಂದು ರಾಮರಾಜು ಬಂದು ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ.
{{gap}}"ನಿಮ್ಮದು ಸುಂದರ ನಗರ" ಎಂದಳು ಕರುಣಾಬೆನ್,
{{gap}}"ಚಟುವಟಿಕೆ ಸಾಲದು. ಪಿಂಚಣಿದಾರರ ಸ್ವರ್ಗ_ಅಂತ ಮೊನ್ನೆ ಮೊನ್ನೆ ವರೆಗೂ ಈ ಊರನ್ನೂ ಕರೀತಿದ್ರು, ನಮಗೆ ಹೆಚ್ಚು ಹೆಚ್ಚಾಗಿ ಬೇಕಾದ್ದು ಕಲೆ ಮತ್ತು ಕೈಗಾರಿಕೋದ್ಯಮ," ಎಂದಳು ಸೌದಾಮಿನಿ.
{{gap}}ಆತ್ಮೀಯ ಭೋಜನಕ್ಕೆ ಹಿಮ್ಮೇಳವಾಯಿತು ಮೀರಾಭಜನ್.
{{gap}}"ಎಲಾ!" ಎಂದು ಉದ್ಗರಿಸಿದಳು ಮೈದುಲ.
{{gap}}ಮಾತಾಜಿ ಅಂದಳು :<noinclude></noinclude>
crfnan47at4xwd0yqi7707avl7bjlnn
ಪುಟ:ಮಿಂಚು.pdf/೧೭೭
104
20622
320859
206771
2026-05-19T14:37:00Z
Shreelatha.Halemane
7642
/* Validated */
320859
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right= 171}}
{{gap}}"ಇದು ಮಂಗೇಶ್ಕರ್ದು ಅಲ್ಲ; ಸುಬ್ಬಲಕ್ಷ್ಮೀದು."
{{gap}}"ಸುಬ್ಬಲಕ್ಷ್ಮಿ! ಹಿಂದೀಲಿ!"
{{gap}}"ಹ್ಞ! ಆಶ್ಚರ್ಯವಾಯ್ತಾ ?"
{{gap}}ಮೈದುಲಾ ಕಿವಿಗೊಟ್ಟು ಆಲಿಸಿದಳು.
{{gap}}"ಕೋಯೆಲಿಯಾ,ಕೋಯೆಲಿಯಾ,ಕೋಯೆಲಿಯಾ..."
{{gap}} _ಈ ಸಾಲು ಬಂದೊಡನೆ ಮೈದುಲಾಬೆನ್ ಮೇಜನ್ನು ತಟ್ಟಿದಳು. ನೀರಿನ ಲೋಟ ಉರುಳಿ ನೆಲ ಒದ್ದೆಯಾಯಿತು. ಬೇರೊಂದು ಲೋಟ ನೀರು ಬಂತು.
ಪರಶುರಾಮ ಹಿ೦ದಿನ ದಿನವೇ ಪತ್ನಿಗೆ ಊಟದ ವಿಷಯ ತಿಳಿಸಿದ್ದ, ನಿವಾಸದಲ್ಲಿ ಭೋಜನವಿರುವ ದಿನ ಹರಿಣಾಕ್ಷಿ ಅಡುಗೆ ಮಾಡಬೇಕಾಗಿರಲಿಲ್ಲ. ಅಂಗರಕ್ಷಕರ ಮನೆಗಳಲ್ಲೂ ಅಷ್ಟೆ. ಊಟದ ಮಟ್ಟಿಗೆ ಪೋಲೀಸರೂ ಆಮಂತ್ರಿತರೇ, ಅವರದು ಎರಡನೆಯ ಪಂಕ್ತಿ, ಅಷ್ಟೆ.
* * *
{{gap}}ಕಲಾ ವಿಮರ್ಶಕರು ಕಾರ್ಯಕ್ರಮವನ್ನು ಪತ್ರಿಕೆಗಳಲ್ಲಿ ಮುಕ್ತಕಂಠದಿಂದ ಅಲ್ಲವಾದರೂ ತಕ್ಕಮಟ್ಟಿನ ಔದಾರ್ಯ ತೋರಿಸಿ ಹೊಗಳಿದ್ದರು. ಚಿತ್ರಗಳನ್ನು ಧಾರಾಳವಾಗಿ ಬಳಸಿದ್ದರು.
{{gap}}ಮರು ಪ್ರಯಾಣಕ್ಕೆ ಮೃದುಲಾಬೆನ್ಗೂ ಆಪ್ತ ಸಹಾಯಕಿ ಜುಮ್ಕಿಗೂ ಒಂದು ಫಸ್ ಕ್ಲಾಸ್ಟ್ ಕೂಪೆ ಸಿಕ್ಕಿತು. ಕೆಳಗಿನ ತರಗತಿಯಾದರೂ ಸ್ವತಂತ್ರವಾಗಿದ್ದ ಕಂಪಾರ್ಟ್ಮೆಂಟ್, ತಂಡದವರಿಗೆ. ಅವರಲ್ಲಿದ್ದ ಲಕ್ಷ ಬೆಲೆಯ ಒಂದು ಸೂಟ್ಕೇಸನ್ನು ಕಾಯಲು ಸಾದಾ ದಿರಿಸಿನಲ್ಲಿದ್ದ ಇಬ್ಬರು ಪೋಲೀಸರು. (ಬೆಂಗಾವಲು ಮುಂಬಯಿವರೆಗೆ.)
{{gap}}ಕೋಚ್ ಬಂತು, ಮೃದುಲಾಬೆನ್, ಜುಮ್ಕಿ, ಪರಶುರಾಮರೊಂದಿಗೆ ಮುಖ್ಯ ಮಂತ್ರಿ ತನ್ನ ಕಾರಿನಲ್ಲಿ ಬಂದಳು. ರಾಮರಾಜು ಅನುಭವಿಸಿದ ಸಂಕಟ ಆಗಲೇ ಪರಶುರಾಮನ ಅರಿವಿಗೆ ಬಂದಿತ್ತು. ವೃಥಾ ಕೆಲಸ ಕಳೆದುಕೊಳ್ಳುತ್ತಾನೆ_ಎಂದು ಕೆಡುಕೆನಿಸಿತು, ಆ ಕಂಪಾರ್ಟ್ಮೆಂಟಿನ ಬಳಿ ರಾಮರಾಜುವನ್ನು ಕರೆದು ಹಿತವಚನ ಹೇಳಿದ :
{{gap}}"ಆ ಪ್ರತಿಷ್ಠಾನದ ಮಾಜಿ ನಮ್ಮ ಮಾತಾಜಿಗೆ ಇಲ್ಲಿ ಒಂದು ಮಾತು ಹೇಳಿದರೂ ಸರಿ, ಮು೦ಬಯಿಗೆ ಹೋಗಿ ಒ೦ದು ಕಾಗದ ಬರೆದರೂ ಸರಿ_ನೀನು ಡಿಸ್ಮಿಸ್ ಆಗ್ತೀಯ, ಹುಷಾರ್! ಸ್ನೇಹಿತ ಅಂತ ಇದನ್ನು ಹೇಳಿದ್ದೇನೆ.”
{{gap}}ರಾಮರಾಜು ಕಂಪಾರ್ಟ್ಮೆಂಟಿನಿಂದ ದೂರ ಸರಿದ. ಮುಖ್ಯಮಂತ್ರಿಯ ಬೆನ್ನ ಹಿಂದೆ ನಿಂತುಕೊಂಡ. ಮೃದುಲಾಬೆನ್ಳ ದೃಷ್ಟಿ ತನ್ನತ್ತ ಸರಿದಾಗಲೆಲ್ಲ ಕೈ ಮುಗಿದ.<noinclude></noinclude>
cl70i34u6mchygnenc33o8fqb27w4ra
ಪುಟ:ಮಿಂಚು.pdf/೧೭೮
104
20623
320821
206772
2026-05-19T13:14:46Z
Shreelatha.Halemane
7642
/* Validated */
320821
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=172 |right=ಮಿಂಚು}}
{{gap}}ಕಲ್ಯಾಣನಗರದ ಅನಾಥಾಶ್ರಮದ ಅಧ್ಯಕ್ಷೆ ಸುಲೋಚನಾಬಾಯಿ ಆಡಳಿತ ಮಂಡಲದ ಮಿಸೆಸ್ ಐ.ಜಿ.ಪಿ. ಮತ್ತಿತರರೊಡನೆ ಬಂದು, ಮುಖ್ಯಮಂತ್ರಿಗೆ ವಂದಿಸಿದರು. ಮೃದುಲಾಬೆನ್ಗೆ ನಮಸ್ಕರಿಸಿ ತಾವು ತಂದಿದ್ದ ಹೂ ಹಣ್ಣುಗಳ ಪೊಟ್ಟಣವನ್ನು ಸುಲೋಚನಾಬಾಯಿ ಅವರ ಕೈಗಿತ್ತಳು. ಮೃದುಲಾ ಅಂದಳು:
{{gap}}“ಸುಲೋಚನಾ ಬಹೆನ್, ನೀವು ಪ್ರತಿಷ್ಠಾನದ ಧರ್ಮದರ್ಶಿ ಮಂಡಲದಲ್ಲಿರಬೇಕು. ಮುಂದಿನ ಸಭೆಯಲ್ಲಿ ಕೋಆಪ್ಟ್ ಮಾಡ್ಕೊಳ್ತೇವೆ. ನಿಮ್ಮ ಮುಖ್ಯಮಂತ್ರಿ ಇದಕ್ಕೆ ಖಂಡಿತ ಒಪ್ಪಿಯಾರು,”
{{gap}}“ಸಂತೋಷದಿಂದ," ಎಂದಳು ಸೌದಾಮಿನಿ.
{{gap}}ವಾರ್ತಾ ಇಎಾಖೆಯ ನಿರ್ದೆಶಕ ಭಾರದ ಆಲ್ಬಮನ್ನು ಎದೆಗವಚಿಕೊಂಡು ಬಂದು, ಅದನ್ನು ಮುಖ್ಯಮಂತ್ರಿಗೆ ఒಪ್ಪಿಸಿ ತಾನು ಸರಾಗವಾಗಿ ಉಸಿರಾಡಿ ನಿವೇದಿಸಿದ :
{{gap}}“ಪ್ರತಿಷ್ಟಾನದವರು ಕಲ್ಯಾಣನಗರಕ್ಕೆ ಆಗಮಿಸಿದ್ದ ಕ್ಷಣದಿಂದ ಇವತ್ತಿನ ವಿದಾಯ ಭೋಜನದವರೆಗೆ ಎಲ್ಲ ಚಿತ್ರಗಳಿವೆ."
{{gap}}"ವೆರಿ ಗುಡ್.ಇಲಾಖೆಯ ಸೀಲು ಹಾಕಿದೀರೊ?"
{{gap}}“ಹಾಕಿದೇನೆ. 'ಮುಖ್ಯಮಂತ್ರಿಯ ಶುಭಾಶಯಗಳೊಂದಿಗೆ' ಅಂತ ಟೈಪ್ ಮಾಡಿ ಅಂಟಿಸಿದ್ದೇನೆ.”
{{gap}}"ಫೈನ್. ದೀದಿಜಿ, ಕೊನೆಯದಾಗಿ ಇದೊಂದು ಕಾಣಿಕೆ ತಗೊಳ್ಳಿ.”
{{gap}}ಮೃದುಲಾಬೆನ್ ಆಲ್ಬಮನ್ನು ತೆರೆದು, ನೋಡಿ, ಮುಚ್ಚಿದಳು. “ರಾತ್ರೆಯೇ ಎಲ್ಲ ಚಿತ್ರ ನೋಡಿ, ನಾಳೆ ಬೆಳಗ್ಗೆ ಮಕ್ಕಳಿಗೆ ಕೊಡ್ತೇನೆ. ನೋಡಿ ಸಂತೋಷ ಪಡ್ತಾರೆ ಎಂದಳು.”
{{gap}}ಕ್ಯಾಮರಾಮನ್ ಇರಲಿಲ್ಲ. (ಅವನ ಡ್ಯೂಟಿ ಮುಗಿದಿತ್ತು) ದೀಪಗಳು ಬೆಳಗಿದುವು. ರೈಲು ಎಂಜಿನ್ ಕೂ ಎಂದಿತು. ಸೌದಾಮಿನಿ ಮೃದುಲಾಬೆನ್ಳ ಕೈ ಕಲುಕಿದಳು. ಜುಮ್ಕಿಗೆ "ಟಾಟಾ" ಎಂದಳು.
{{gap}}ತಾನು ಹೊರಿಸಿದ ಋಣಭಾರದಿಂದ ಮೃದುಲಾ ಕೊನೆಯ ಕ್ಷಣ ಜಗ್ಗಬಹುದು ಎಂದು ಭಾವಿಸಿದ್ದಳು ಸೌದಾಮಿನಿ ದೇವಿ. ಹಾಗೇನೂ ಆಗಲಿಲ್ಲ. ಅವಳ ಮುಖದ ಉದ್ದಗಲವನ್ನು ಹರ್ಷೋಲ್ಲಾಸ ವ್ಯಾಪಿಸಿತ್ತು.<noinclude></noinclude>
ghyyykh2bz70mx695istwx2zguu6tys
ಪುಟ:ಮಿಂಚು.pdf/೧೮೨
104
20627
320822
206776
2026-05-19T13:20:07Z
Shreelatha.Halemane
7642
/* Validated */
320822
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=176|right=ಮಿಂಚು}}
{{gap}}“ಪ್ರಜಾಪಕ್ಷ ರಾಷ್ಟ್ರಪತಿಗೆ ಮಾತಾಜಿ ಮೇಲಿನ ಆರೋಪಗಳ ಪಟ್ಟಿ ಸಲ್ಲಿಸ್ತ ದಂತೆ.”
{{gap}}“ಎಷ್ಟು ಆರೋಪಗಳು ?”
{{gap}}“ಅದು ತಿಳೀದು."
{{gap}}“ನೂರು ಇಲ್ಲವಾದ್ದರಿಂದ ನೂರ ಒಂದನೇದು ಊಹೂಂ.ಆದ್ದರಿಂದ ಶಿಶು
ಪಾಲವಧೆ ಆಗೋದಿಲ್ಲ !"
{{gap}}“ಜ್ಯೋತಿಷಿ ವಿಷ್ಣುಮೂರ್ತಿ ಮನೆ ಮುಂದೆ ಈಗ ರಾಜಕಾರಣಿಗಳ ಕ್ಯೂ. ಶಾಸಕರು, ಶಾಸಕರಲ್ಲದವರು, ಎಲ್ಲ ಬಗೆಯವರು.”
{{gap}}“ಅವರದೊಂದು ಪಟ್ಟಿ ಬೇಕು.”
{{gap}}“ಆ ಕೆಲಸಕ್ಕೋಸ್ಕರ ನಮ್ಮವರನ್ನ ಬಿಡ್ತೀನಿ.”
{{gap}}“ಇವತ್ತಿಗೆ ಇಷ್ಟು ಸಾಲದಾ? ನಾಳೆ ಮತ್ತೆ ಬನ್ನಿ. ಪ್ರತಿ ದಿನ ಬೆಳಗ್ಗೆ.
ನಮಸ್ಕಾರ."
{{gap}}ಗುಪ್ತಚಾರದಳದ ಮುಖ್ಯಸ್ಥ ಹೋದೊಡನೆ, ಇಂಟರ್ ಕಾಮ್ ನಲ್ಲಿ ಸೌದಾ
ಮಿನಿ ಪರಶುರಾಮನನ್ನು ಕರೆದಳು.
{{gap}}“ಸಾರಿಡಾನ್ ಮತ್ತು ನೀರು,”
{{gap}}ಆತ ತಂದೊಡನೆ ನೀರಿನ ನೆರವಿನಿಂದ ಮಾತ್ರೆಯನ್ನು ಒಳಕ್ಕೆ ತಳ್ಳಿದಳು.
{{gap}}“ಡಾಕ್ಟರನ್ನು ಕರೀಲಾ ?”
{{gap}}“ನನಗೇನೂ ಆಗಿಲ್ಲ.ಆ ಮುಖ್ಯಸ್ಥ ಬೇಕೂಫ ಯಾವುದೋ ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಇಷ್ಟು ಹೊತ್ತು ಕಥೆ ಹೇಳಿ, 'ನನ್ನನ್ನು ಕಾಪಾಡಿ' ಅಂತ ಗೋಗರೆದ.”
* * *
{{gap}}ಚಿತ್ರಾವತಿಯಿಂದ ಫೋನ್.
{{gap}}“ಪರಶುರಾಮ್, ಸಿ ಎಂ ಲೈನ್ ಮೇಲೆ ಸಿಗ್ತಾರಾ ?”
{{gap}}“ತಾಳಿ, ನೋಡ್ತೇನೆ.”
{{gap}}ಸೌದಾಮಿನಿ ರಿಸೀವರ್ ಎತ್ತಿಕೊಂಡಳು:
{{gap}}“ನಮಸ್ತೆ ಮಾತಾಜಿ, ಹೆರಿಗೆ ಆಯ್ತು, ಗಂಡು ಮಗು,"
{{gap}}“ಪಟ್ಟಕ್ಕೆ ವಾರಸುದಾರ ಬಂದ ಹಾಗಾಯ್ತು. ಹೆಸರು ಏನಿಡಬೇಕೂಂತ ಮಾಡಿದೀರಾ ?"
{{gap}}"ಆಶೀರ್ವಾದ."
{{gap}}"ಅದು ಎದ್ದೇ ಇದೆ.'<noinclude></noinclude>
aevfnhd9yy940jf821z8fxx8vb62z8k
320823
320822
2026-05-19T13:20:39Z
Shreelatha.Halemane
7642
320823
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=176|right=ಮಿಂಚು}}
{{gap}}“ಪ್ರಜಾಪಕ್ಷ ರಾಷ್ಟ್ರಪತಿಗೆ ಮಾತಾಜಿ ಮೇಲಿನ ಆರೋಪಗಳ ಪಟ್ಟಿ ಸಲ್ಲಿಸ್ತ ದಂತೆ.”
{{gap}}“ಎಷ್ಟು ಆರೋಪಗಳು ?”
{{gap}}“ಅದು ತಿಳೀದು."
{{gap}}“ನೂರು ಇಲ್ಲವಾದ್ದರಿಂದ ನೂರ ಒಂದನೇದು ಊಹೂಂ.ಆದ್ದರಿಂದ ಶಿಶು
ಪಾಲವಧೆ ಆಗೋದಿಲ್ಲ !"
{{gap}}“ಜ್ಯೋತಿಷಿ ವಿಷ್ಣುಮೂರ್ತಿ ಮನೆ ಮುಂದೆ ಈಗ ರಾಜಕಾರಣಿಗಳ ಕ್ಯೂ. ಶಾಸಕರು, ಶಾಸಕರಲ್ಲದವರು, ಎಲ್ಲ ಬಗೆಯವರು.”
{{gap}}“ಅವರದೊಂದು ಪಟ್ಟಿ ಬೇಕು.”
{{gap}}“ಆ ಕೆಲಸಕ್ಕೋಸ್ಕರ ನಮ್ಮವರನ್ನ ಬಿಡ್ತೀನಿ.”
{{gap}}“ಇವತ್ತಿಗೆ ಇಷ್ಟು ಸಾಲದಾ? ನಾಳೆ ಮತ್ತೆ ಬನ್ನಿ. ಪ್ರತಿ ದಿನ ಬೆಳಗ್ಗೆ.
ನಮಸ್ಕಾರ."
{{gap}}ಗುಪ್ತಚಾರದಳದ ಮುಖ್ಯಸ್ಥ ಹೋದೊಡನೆ, ಇಂಟರ್ ಕಾಮ್ ನಲ್ಲಿ ಸೌದಾ
ಮಿನಿ ಪರಶುರಾಮನನ್ನು ಕರೆದಳು.
{{gap}}“ಸಾರಿಡಾನ್ ಮತ್ತು ನೀರು,”
{{gap}}ಆತ ತಂದೊಡನೆ ನೀರಿನ ನೆರವಿನಿಂದ ಮಾತ್ರೆಯನ್ನು ಒಳಕ್ಕೆ ತಳ್ಳಿದಳು.
{{gap}}“ಡಾಕ್ಟರನ್ನು ಕರೀಲಾ ?”
{{gap}}“ನನಗೇನೂ ಆಗಿಲ್ಲ.ಆ ಮುಖ್ಯಸ್ಥ ಬೇಕೂಫ ಯಾವುದೋ ಜಾಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಇಷ್ಟು ಹೊತ್ತು ಕಥೆ ಹೇಳಿ, 'ನನ್ನನ್ನು ಕಾಪಾಡಿ' ಅಂತ ಗೋಗರೆದ.”
* * *
{{gap}}ಚಿತ್ರಾವತಿಯಿಂದ ಫೋನ್.
{{gap}}“ಪರಶುರಾಮ್, ಸಿ ಎಂ ಲೈನ್ ಮೇಲೆ ಸಿಗ್ತಾರಾ ?”
{{gap}}“ತಾಳಿ, ನೋಡ್ತೇನೆ.”
{{gap}}ಸೌದಾಮಿನಿ ರಿಸೀವರ್ ಎತ್ತಿಕೊಂಡಳು:
{{gap}}“ನಮಸ್ತೆ ಮಾತಾಜಿ, ಹೆರಿಗೆ ಆಯ್ತು, ಗಂಡು ಮಗು,"
{{gap}}“ಪಟ್ಟಕ್ಕೆ ವಾರಸುದಾರ ಬಂದ ಹಾಗಾಯ್ತು. ಹೆಸರು ಏನಿಡಬೇಕೂಂತ ಮಾಡಿದೀರಾ ?"
{{gap}}"ಆಶೀರ್ವಾದ."
{{gap}}"ಅದು ಎದ್ದೇ ಇದೆ.'<noinclude></noinclude>
e1yjcuv2heigcepjdc1i30arnpbkcfb
ಪುಟ:ಮಿಂಚು.pdf/೧೮೮
104
20634
320824
206782
2026-05-19T13:26:28Z
Shreelatha.Halemane
7642
/* Validated */
320824
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=182|right=ಮಿಂಚು}}
{{gap}}“ಹೌದೆ? ಹೇಳೀಪ್ಪಾ, ಡಯರೀಲಿರ್ಲ್ಲಿ.”
{{gap}}“ಎನವಸರ ? ಹೇಳ್ತೀನಿ." -
{{gap}}“ಅನಂತರ, ರಾತ್ರೆ ಪ್ರತಿಪಕ್ಷದ ಮುಖಂಡನನ್ನು ಮುಖ್ಯಮಂತ್ರಿ
ತಮ್ಮ ನಿವಾಸದಿಂದ ಹೊರಗೆ ದಬ್ಬಿಸಿದ್ದು....."
{{gap}}“ನಿಜವೇ ?! ಏನಾದರೂ ಮಾಡಿದನೋ ?'
{{gap}}“ನಿಮಗೇನು ಪ್ರಯೋಜನ ? ಆತ ಹಿಟ್ ಲಿಸ್ಟಿನಲ್ಲಿ ಇಲ್ಲ.”
{{gap}}“నిಮ್ಮ ಸಲಹೆ ಏನು ? -
{{gap}}"ನಿಮಗೆ ತಿಳಿಯದ್ದೆ ಸಾರ್ ? ಇಬ್ಬರು ಮೂವರನ್ನು ಸ್ಟೇಷನ್ನಿಗೆ ಕರೆಸಿ.
{{gap}}ಸಾಕು. ಮುಖ್ಯಮಂತ್ರಿದು ಈಗ ಅರಗಿನ ಮನೆ. ನಾವೆಲ್ಲ ಹುಷಾರಾಗಿರ್ಬೇಕು."
{{gap}}“ವಿಶ್ವಂಭರನ ಸೌದಾ-ದಸ್ತಾವೇಜು ತಯಾರಾಯ್ತೆ?” - .
{{gap}}“ಬಿಸಿದೋಸೆಯ ಹಾಗೆ ಖರ್ಚಾಗ್ತಿದೆ. ಒಂದು ಸೆಟ್ಟಿಗೆ ಐವತ್ತು ರೂಪಾಯಿ
ಮುದ್ರಿತ ಬೆಲೆ: ಸಿಗೋದಿಲ್ಲ, ಕಾಳಸಂತೇಲಿ ಮೂರು ಪಟ್ಟು.”
{{gap}}“ನಾನು ಪುಸ್ತಕ ಗಿಸ್ತಕ ಕೊಂಡವನಲ್ಲ, ಮಾರುವವರ ಅಂಗಡಿ ಮೇಲೆ ಧಾಳಿ
ನಡೆಸಿ, ಒಂದು ಪ್ರತಿ ಪಡೀತೇನೆ." -
{{gap}}“ಅಧ್ಯಕ್ಷತೆ ಖಾಲಿ ಇರೋ ನಿಗಮಗಳು ಯಾವುವು ಅಂತ ತಮಗೆ ತಿಳಿಸೋದಕ್ಕೆ ಮುಖ್ಯ ಕಾಯದರ್ಶಿ ಚೌಗುಲೆಗೆ ಸೂಚನೆ ಹೋಗಿದೆಯಂತೆ.”
{{gap}}“ಮಾತಾಜಿ ಪರವಾಗಿಲ್ಲ. ಅಧ್ಯಕ್ಷತೆ, ಕಾರು, ಬಂಗಲೆ, ಸಂಬಳ, ಗಿಂಬಳ....
ಮಾತಾಜಿ ಭಂಡಾರದಲ್ಲಿ ನಗದು ಎಷ್ಟಿದೆಯೊ ? ”
{{gap}}“ నిಖರವಾಗಿ ಹೆಳೋದು ಕಷ್ಟ." -
{{gap}}“ನಿಷ್ಠೇನ ಕೊಂಡುಕೋ ಬಹುದು, ನೋಡಿ. ವಿಶ್ವಂಭರನದು ಬರಿ ಮಾತಿನ
ಬಡಾಯಿ ಆದರೆ ಪ್ರಯೋಜನವಿಲ್ಲ."
{{gap}}“ಹಾಗೇನಿಲ್ಲ. ಅವನ ಗುಂಪಿನಲ್ಲೂ ನಿಧಿ ಸಂಗ್ರಹ ಸಮರ್ಥರು ಇದ್ದಾರೆ.
ವಾಗ್ವಾನಗಳನ್ನು ಮಾಡಿದರಾಯ್ತು."
{{gap}}“ಮಾತಾಜಿಯ ಪಾಲಿಗೆ ಈ ನಾಟಕ ದುಃಖಾಂತವಾಗುತ್ತೊ ? ಸುಖಾಂತ
ವಾಗುತ್ತೊ ?”
{{gap}}“ಅದು ದಿಲ್ಲೀಶ್ವರರನ್ನು ಅವಲಂಬಿಸಿದೆ."
{{gap}}“ಅಂತೂ ಇಬ್ಬರು ಮೂವರಿಗೆ ನಾನು ಆತಿಥ್ಯ ನೀಡಲೇಬೇಕು. ಇವತ್ತು
ರಾತ್ರೆ ಹಿಡಕೊಂಡು ಬರ್ತೀನಿ."
* * *
{{gap}}ರಾಜ್ಯಪಾಲರು ಪೈಪ್ ಚೀಪಿದರು, ಚೀಪಿದರು. ಅದರಲ್ಲಿ ತಂಬಾಕು ಇರಲಿಲ್ಲ.
ಬರಲಿಲ್ಲವಲ್ಲ ಈ ಮಾತಾಜಿ? ತಮ್ಮ ಆಪ್ತ ಕಾರ್ಯದರ್ಶಿಯನ್ನು ಕರೆದು ಹೇಳಿದರು:<noinclude></noinclude>
lrd8ynh6igi1urxfp356hynmfuelnw2
ಪುಟ:ಮಿಂಚು.pdf/೧೮೯
104
20635
320825
206783
2026-05-19T13:32:54Z
Shreelatha.Halemane
7642
/* Validated */
320825
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left= ಮಿಂಚು|right=183}}
{{gap}}“ರಾಜ್ಯಪಾಲರು ಕಾಯ್ತಿದಾರೆಂತ ಸಿಎಂ ಗೆ ಫೋನ್ ಮಾಡು.”
{{gap}}ಮುಖ್ಯಮಂತ್ರಿ ಕಾರ್ಯ ಸೌಧದಿಂದ ಹೊರಟಿದ್ದಾರೆ ಎಂದು ಬಂತು ಉತ್ತರ.
ಆಗಮನವಾಯಿತು, ರಾಜ್ಯಪಾಲರು ಎದ್ದು ನಿಂತು ಕೈಕುಲುಕಿದರು.
{{gap}}“ಎನು ತಗೊಳ್ತೀರಿ?"
{{gap}}“ನೀವು ನನ್ನ ವೈರಿಯಾದರೆ ವಿಷ ಕೊಡಿ ; ಸ್ನೇಹಿತನಾದರೆ ಅಮೃತ ಇರಲಿ.”
{{gap}}“ನನ್ನಲ್ಲಿ ಎರಡೂ ಇಲ್ಲ."
{{gap}}“ಹಾಗಾದರೆ ಏನೂ ಬೇಡ."
{{gap}}“ನಿನ್ನೆ ಸಂಜೆ ಏನೋ ಹೇಳಲು ಬಂದಿರಿ, ಅಲ್ಲವ?”
{{gap}}“ಅಂಥಾದ್ದೇನೂ ఇల్ల. ನಮ್ಮ ಶಾಸನಸಭಾ ಪಕ್ಷದಲ್ಲಿ ಅಪಶ್ರುತಿ ಇದೆ ಅಂತ ಯಾವನಾದರೂ ಮುಟಾಳ ಬಂದು ಚಾಡಿ ಹೇಳಿದರೆ, ನೀವದಕ್ಕೆ ಗಮನ ಕೊಡ
ಬಾರದೂಂತ ತಿಳಿಸೋದಕ್ಕೆ ಬಂದೆ.”
{{gap}}“ಸಾಮಾನ್ಯವಾಗಿ ಭಿನ್ನಮತೀಯರ ಗುಂಪು ಎల్ల ರಾಜ್ಯಗಳಲ್ಲೂ ఇದೆ, ದಿಲ್ಲಿ
ಅದಕ್ಕೆ ಹೆಚ್ಚಿನ ಮಹತ್ವ ಕೊಡೋದಿಲ್ಲ."
{{gap}}“ವರದಿ ಬರೆಯುವಾಗ ಈಗ ಹೇಳಿದ್ದನ್ನು ಮರೀಬೇಡಿ."
{{gap}}“ಪ್ರಜಾಪಕ್ಷದ ಆರೋಪಪಟ್ಟಿಗೆ ಒಂದು ನಯಾಪೈಸೆ ಬೆಲೆಯೂ ಇಲ್ಲ. ಅವರು ತಂದುಕೊಟ್ಟರೆ ಸುಮ್ಮನೆ ರಾಷ್ಟ್ರಪತಿಗೆ ಒಂದು ಪ್ರತಿ ಪೋಸ್ಟ್ ಮಾಡ್ತೇನೆ. ಅಲ್ಲಿಗೆ ನನ್ನ ಕೆಲಸ ಆಯ್ತು, ನನ್ನಿಂದ ನಿಮಗೆ ಬೇರೇನಾದರೂ ಸಹಾಯ ಆಗ್ಬೇಕೆ?”
{{gap}}“ಸಭಾಧ್ಯಕ್ಷ ಲಕ್ಷ್ಮೀಪತಿಯನ್ನು ಮುಂದಿಟ್ಕೊಂಡು ವಿಶ್ವಂಭರ ಆಟ ಅಡ್ತಿ
ದ್ದಾನೆ. ಅವರಿಬ್ಬರನ್ನೂ ಕರೆಸಿ ಒಂದಿಷ್ಟು ಬುದ್ದಿ ಹೇಳ್ತೀರಾ ?”
{{gap}}“ವಿಶ್ವಂಭರರಿಗೆ ಹನ್ನೆರಡು ಗಂಟೆಗೆ ಟೈಮ್ ಕೊಟ್ಟಿದೆ, ಸಂತೋಷದಿಂದ
ಮಾತಾಡ್ತೇನೆ."
{{gap}}“ವಿಶ್ವಂಭರನಿಗೆ ಯೋಗ್ಯತೆ ಇದೆ. ಮುಂದೆ ಆತನಿಗೆ ಸಂಪುಟ್ಟದಲ್ಲಿ ಸ್ಥಾನ
ಕೊಡೋದಕ್ಕೆ ನಾನು ಸಿದ್ದ.”
{{gap}}“ಈ ವಿಷಯ ಅವರಿಗೆ ಹೇಳ್ತೀನಿ.”
{{gap}}“ಬರಲಾ ಹಾಗಾದರೆ?" ಎಂದು ಹೇಳಿ, ಸೌದಾಮಿನಿ ಏಳುತ್ತಿದ್ದಂತೆ, ರಾಜ್ಯ
ಪಾಲರೆಂದರು
{{gap}}“ನಿನ್ನೆ ನಿಮಗೆ ಬೇಸರವಾಯ್ತೇನೊ? ನನ್ನ ಮಿಸೆಸ್ ನಿಮಗೆ ಗೊತ್ತಲ್ಲ....”
{{gap}}"ಗೊತ್ತು,ಗೊತ್ತು."
{{gap}}ಕಾರನ್ನು ಏರುತ್ತಿದ್ದಂತೆ ಸೌದಾಮಿನಿಗೆ ರಾಜಭವನದ ಒಂದು ಕಿಟಿಕಿಯಲ್ಲಿ
ರಾಜ್ಯಪಾಲರ ಪತ್ನಿಯ ಮುಖ ಕಂಡಂತಾಯಿತು. 'ಥುತ್ತೆರಿ!' ಎನ್ನುವ ಪದ ಮುಖ್ಯಮಂತ್ರಿಯ ನಾಲಗೆಯ ಮೇಲೆ ಆಡಿತು.
* * *<noinclude></noinclude>
hqnzq054whn0bwen4l83ipa2l6kynzz
ಪುಟ:ಮಿಂಚು.pdf/೧೯೦
104
20636
320826
206784
2026-05-19T13:41:27Z
Shreelatha.Halemane
7642
/* Validated */
320826
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=184 |right=ಮಿಂಚು}}
{{gap}}ವಿಶ್ವಂಭರ ರಾಜ್ಯಪಾಲರಲ್ಲಿಗೆ ಲಕ್ಷ್ಮೀಪತಯ್ಯನನ್ನೂ ಕರೆದುಕೊಂಡು ಬಂದಿದ್ದ.ವಿಧಾನಸಭಾಪತಿಯಾಗಿ ಲಕ್ಷ್ಮೀಪತಯ್ಯ ರಾಜ್ಯಪಾಲರಿಗೆ ಹೆಚ್ಚು ಪರಿಚಿತ. ವಿಶ್ವಂಭರನ ಮುಖ ಪರಿಚಯವಷ್ಟೇ ರಾಜ್ಯಪಾಲರಿಗಿತ್ತು.
{{gap}}"ಅನುಮತಿ ಇಲ್ಲದೆಯೇ ಸ್ಪೀಕರರನ್ನು ಕರತಂದಿದ್ದೇನೆ" ಎಂದ ವಿಶ್ವಂಭರ,
ರಾಜ್ಯಪಾಲರೆಂದರು :
{{gap}}"ನೀವು ಮಾಡಿದ್ದು ಕ್ರಮಬದ್ಧ ವಾಗಿದೇಂತ ರೂಲಿಂಗ್ ಕೊಡ್ತೇನೆ.”
{{gap}}ಎಲ್ಲರೂ ನಕ್ಕರು.
{{gap}}ವಿಶ್ವಂಭರ ದೂರು ಕೊಟ್ಟ.
{{gap}}"ನನ್ನ ಕ್ಷೇತ್ರಕ್ಕೆ ರಾಜ್ಯಪಾಲರು ಬಂದೇ ಇಲ್ಲ."
{{gap}}"ದೀಪಾವಳಿ ಆದ್ಮೇಲೆ ಖಂಡಿತ ಬರ್ತೀನಿ."
{{gap}}"ದೀಪಾವಳಿಯನ್ನು ಕಿಷ್ಕಿಂಧೆ ಈ ಸಲ ಹೇಗೆ ಆಚರಿಸುತ್ತೊ ನೋಡಬೇಕು."
{{gap}}"ಆನೆ ಪಟಾಕಿ ಆಟಂ ಬಾಂಬ್ ಬಹಳ ಸಂಗ್ರಹಿಸ್ತಾ ಇದೀರಂತೆ
{{gap}}ಭೇಟಿಗೆ ಬಂದವರ ನಗೆ ಮುಕ್ತಾಯವಾದ ಬಳಿಕ ರಾಜ್ಯಪಾಲರು ಮಾತನಾಡಿದರು :
{{gap}}"ವಿಶ್ವಂಭರ್, నిಜಸ್ಥಿತಿ ಏನೂಂತ ತಿಳಿಸಿ. ನೀವೇನೊ ಯೋಚಿಸೋದು
ಬೇಡ_ರಹಸ್ಯ ಪಾಲನೆಯಲ್ಲಿ ನಾನು ನಿಸ್ಸೀಮ!"
{{gap}}"ತಾವು ಒಪ್ತೀರೋ ಇಲ್ಲವೊ.ಈ ಸೌದಾಮಿನಿ ಕುರಿಯ ತುಪ್ಪಳ ಹೊದ್ದು
ಕೊಂಡಿರೋ ಹೆಣ್ಣು ತೋಳ, ಕಿಷ್ಕಿಂಧೆಗೆ ಅಂಟಿರೋ ಪಿಡುಗು. ಒಂದು ದಾಖಲೆ
ತಯಾರಸಿದೇವೆ, ಪರಾಂಬರಿಸಬೇಕು" ಎಂದು ಹೇಳಿ ವಿಶ್ವಂಭರ ಬ್ರೀಘ್ಕೇಸಿನಿಂದ
ಒಂದು ಪುಸ್ತಕವನ್ನು ಹೊರತೆಗೆದು ರಾಜ್ಯಪಾಲರ ಮುಂದಿಟ್ಟ.'ಗ್ರಂಥಕರ್ತ
ವಿಶ್ವಂಭರ' ಎಂದಿತ್ತು, ರಾಜ್ಯಪಾಲರು ಹಾಳೆಗಳನ್ನು ತಿರುವಿದರು.
{{gap}}"ನೂರ ಅರವತ್ತೆಂಟು ಪುಟ! ಬೆಲೆ ಇಟ್ಟಿದೀರಿ. ಶಾಸಕರಿಗೆ ಉಚಿತ ಅಂತ
ತೋರ್ತದೆ"
{{gap}}"ಅದು ತಮ್ಮ ಪ್ರತಿ. ನನ್ನ ಶುಭಾಶಯಗಳೊಂದಿಗೆ."
{{gap}}"ನಿಮಗೆ ಬೆಂಬಲ ಕೊಡುವವರು ಎಷ್ಟು ಮಂದಿ ಇದ್ದಾರೆ?"
{{gap}}"ಈಗಿನ ಮುಖ್ಯಮಂತ್ರಿಯಲ್ಲಿ ಅವಿಶ್ವಾಸ ಸೂಚಿಸುವ ಪತ್ರಕ್ಕೆ ನಲ್ವತ್ತೈದು.
ಶಾಸಕರು ಸಹಿ ಮಾಡಿದ್ದಾರೆ. ದಿನವೂ ಐದಾರು ಜನ ನಮ್ಮ ಕಡೆ ಸೇರಿದ್ದಾರೆ.
ಇದು ಮನೆ ಜಗಳ, ರಾಷ್ಟ್ರಪಕ್ಷಕ್ಕೆ ಇದರಿಂದ ಯಾವ ಹಾನಿಯೂ ಆಗಬಾರದು.
{{gap}}"ಹಾನಿಯಾಗೋದಿಲ್ಲ," ಎಂದ ಲಕ್ಷ್ಮಿಪತಯ್ಯ.
{{gap}}"ಹೆಚ್ಚಿನ ಶಾಸಕರು ಸ್ವಂತ ಊರುಗಳಿಗೆ ಹೋಗಿರಬೇಕಲ್ಲ?
{{gap}}"ಅದಕ್ಕೇ ತಡವಾಗಿದೆ. ಮೊದಲು ಈ ಪುಸ್ತಕ ಹೋಗ್ತದೆ. ಆಮೇಲೆ
ಪತ್ರ. ಇಲ್ಲಿಗೆ ಬಂದು ಸಹಿ ಮಾಡ್ತಾರೆ. ಭಿನ್ನಮತೀಯರು ಅಂದ್ರೆ ಬಂಡಾಯ<noinclude></noinclude>
h4h9fq89togj6miwfgj8p0cw40wh1ig
ಪುಟ:ಮಿಂಚು.pdf/೧೯೧
104
20637
320869
206785
2026-05-19T16:42:46Z
Shreelatha.Halemane
7642
/* Validated */
320869
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=185}}
ಗಾರರಲ್ಲ, ನಾವು ರಾಷ್ಟ್ರಪಕ್ಷದ ನರನಾಡಿ, ಶರೀರದೊಳಕ್ಕೆ ಸೇರಿಕೊಂಡಿರೋ
ಬಾಹ್ಯ ಕಸವನ್ನು ಸಣ್ಣ ಸರ್ಜರಿಯಿಂದ ತೆಗೆದು ಹಾಕಿದರಾಯಿತು. ಈ ವಿಷಯ
ವನ್ನು ದಿಲ್ಲಿಗೆ ಈಗಾಗಲೇ ತಾವು ತಿಳಿಸಬೇಕು. ಸಹಿಸಂಗ್ರಹಮುಗಿದ ಕೂಡಲೆ_"
{{gap}}"ಎರಡು ವಾರ ಹಿಡಿದೀತಾ?"
{{gap}}ಉತ್ತರ ಲಕ್ಷ್ಮೀಪತಯ್ಯ ಕೊಟ್ಟ :
{{gap}}"ಹೊ, ಎರಡು ವಾರ ಸಾಕು."
{{gap}}''ನೂರು ಜನ ಸಹಿ ಮಾಡಿಯಾರು ಅ೦ತೀರಾ ?"
{{gap}}"ಎಂಬತ್ತೈದು ಗಾರಂಟಿ. ಆಗ ನಿಚ್ಚಳ ಬಹುಮತ ನಮ್ಮದಾಗ್ತದೆ. ವಿಧಾನ
ಮಂಡಲದ ವಿಶೇಷಾಧಿವೇಶನ ಕರೀಬೇಕೂಂತ ಕೇಳ್ತೀವಿ," ಎಂದು ವಿಶ್ವಂಭರ
ಉತ್ತರವಿತ್ತ.
{{gap}}"ನಾನು ವಂಗದಲ್ಲಿದ್ದಾಗ ಇಂಥದೇ ನಡೆದಿತ್ತು. ನಾಯಕತ್ವದಲ್ಲಿ ದಿಲ್ಲಿ
ಬದಲಾವಣೆ ಬಯಸ್ತದೆ ಅಂತ ಗೊತ್ತಾದ ತಕ್ಷಣ ಮೀನ ಮೇಷ ಎಣಿಸ್ತಿದ್ದವರೆಲ್ಲ
ಕ್ಯೂ నింತ್ಕೊಂಡು ಹೊಸ ಶಿಬಿರಕ್ಕೆ ಬಂದ್ರು."
{{gap}}"ಇಲ್ಲಿಯೂ ಹಾಗೇ ಆಗ್ತದೆ,” ಎಂದ ವಿಶ್ವಂಭರ.
{{gap}}"ಈ ಸಂಪುಟದಲ್ಲೇ ನಿಮ್ಮಲ್ಲಿ ಕೆಲವರಿಗೆ ಸ್ಥಾನ ಸಿಗೋ ಹಾಗಿದ್ರೆ?"
{{gap}}"ನಾವು ಒಪ್ಪೋದಿಲ್ಲ. ಇದು ತತ್ವದ ಪ್ರಶ್ನೆ, ರಾಷ್ಟ್ರಪಕ್ಷದ ಪ್ರತಿಷ್ಠೆಗೆ
ಸಂಬಂಧಿಸಿದ್ದು."
{{gap}}ರಾಜ್ಯಪಾಲರು ಎದ್ದು ಅತ್ತಿತ್ತ ನಡೆದರು. ಮಾತುಕತೆ ನಿಂತಿತೆಂದು ವಿಶ್ವಂಭರ
ಎರಡು ಬಾರಿ ರಾಜ್ಯಪಾಲರ ಕಡೆ ನೋಡಿದ, ಅವರೆಂದರು :
{{gap}}"ವಿಶ್ ಯೂ ದ ಬೆಸ್ಟ್ ಆಘ್ ಲಕ್,"
{{gap}}ಇವರು ಎದ್ದರು :
{{gap}}"ಎಂಭತ್ತೈದು ಆದೊಡನೆ ದಿಲ್ಲಿಗೆ ಹೋಗ್ತೀವಿ," ಎಂದರು.
* * *
{{gap}}ವಿಶ್ವಂಭರ ಮತ್ತು ಲಕ್ಷ್ಮೀಪತಯ್ಯ ಪತ್ರಿಕಾಗೋಷ್ಠಿ ಕರೆದರು. ಹಿಂದಿನ
ರಾತ್ರೆಯಷ್ಟೆ ಮೂವರು ಶಾಸಕರ ಬಂಧನವಾಗಿತ್ತು. ಪತ್ರಿಕೆಗಳಿಗೆ ಸುದ್ದಿಯ ಸುಗ್ಗಿ.
{{gap}}ವಿಶ್ವಂಭರನೆಂದ :
{{gap}}"ಆ ಮೂವರು ಅವಿಶ್ವಾಸ ಸೂಚನೆಗೆ ಸಹಿ ಹಾಕಿರುವ ಭಿನ್ನಮತೀಯರು,
ಇದು ಧಮುಕಿ ಹಾಕುವ ತಂತ್ರ. ನಾವು ಇದಕ್ಕೆಲ್ಲ ಹಾದರೋದಿಲ್ಲ. ಸೌದಾಮಿನಿಯೇ
ರಾಷ್ಟ್ರಪಕ್ಷದ ವಿರೋಧಿ ನಂಬರ್ ಒನ್. ಸಹಮತ ಇಲ್ಲದವರನ್ನು ಬಗ್ಗು ಬಡೆಯಲು
ರಾಜ್ಯಯಂತ್ರ ಬಳಸುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಎಡೆಯಿಲ್ಲ. ಕೇಂದ್ರ ತನಿಖಾ
ದಳದವರು ರಹಸ್ಯವಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ."<noinclude></noinclude>
s115lnbxu7vh3aztzyfdqq88uo0u300
ಪುಟ:ಮಿಂಚು.pdf/೧೯೨
104
20638
320870
206786
2026-05-19T16:49:50Z
Shreelatha.Halemane
7642
/* Validated */
320870
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=186 |right=ಮಿಂಚು}}
{{gap}}ಒಬ್ಬ ಸುದ್ದಿಗಾರ ವಿಶ್ವಂಭರನ ಪುಸ್ತಕ ಪ್ರತಿಯನ್ನು ಎತ್ತಿ ತೋರಿಸಿ, "ಆ
ತನಿಖಾದಳಕ್ಕೆ ಸಹಾಯವಾಗಲೀಂತ ಇದನ್ನು ಸಿದ್ಧಗೊಳಿಸಿದ್ದೀರಾ?"
{{gap}}"ಸತ್ಯದ ಶೋಧನೆ ಮಹಾತ್ಮರ ಕಾಲದಿಂದ ನಡೆದು ಬಂದಿರುವ ಯಜ್ಞ
ಅದರಲ್ಲಿ ಯಾರೇ ತೊಡಗಲಿ ಅವರಿಗೆ ನೆರವಾಗುವುದು ಪುಣ್ಯದ ಕೆలಸ."
{{gap}}"ಸೌದಾಮಿನಿ ಸಂಪುಟವನ್ನು ಉರುಳಿಸಿದ ತರುವಾಯ ನೀವು ರಚಿಸುವ
ಸಂಪುಟದಲ್ಲಿ ಮುಖ್ಯಮಂತ್ರಿ ಯಾರಾಗ್ತಾರೆ?" ಎಂದು ಕೇಳಿದನೊಬ್ಬ.
{{gap}}ಸ್ಪೀಕರ್ ಅಂದರು :
{{gap}}"ಈ ಪ್ರಶ್ನೆಗೆ ನನ್ನ ಅನುಮತಿ ಇಲ್ಲ"
{{gap}}ವಿಶ್ವಂಭರ ನಕ್ಕ: ವರದಿಗಾರ ತಂಡವೂ ನಕ್ಕಿತು.
{{gap}}ಅಷ್ಟರಲ್ಲಿ ಸುದ್ದಿ ಬಂತು :
{{gap}}"ಬಂಧಿತ ಶಾಸಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದಾರಂತೆ."
{{gap}}ಲಕ್ಷ್ಮೀಪತಯ್ಯ ಕೆರಳಿ ನುಡಿದ :
{{gap}}"ಇದು ಗಾಯದ ಮೇಲೆ ಬರೆ ! ಕೋರ್ಟಿಗೆ ನೂರಾರು ಸಲ ಎಡತಾಕಿಸೋ
ಹೂಟ."
* * *
{{gap}}ಪ್ರಜಾಪಕ್ಷದ ನಾಯಕರು ತಮ್ಮ ಆರೋಪಗಳ ಪಟ್ಟಿಯನ್ನು ಪತ್ರಿಕೆಗಳಿಗೆ
ಬಿಡುಗಡೆ ಮಾಡಿದರು.ಅದು ಎಂಟು ಹತ್ತು ಸಾಲುಗಳ ಸಂಕ್ಷಿಪ್ತ ಸುದ್ದಿಯಾಯಿತು.
{{gap}}"ನನ್ನ ಪಕ್ಷ ಚಿಕ್ಕದು ಅಂತ ಇವರಿಗೆ ತಾತ್ಸಾರ. ಇರಲಿ, ನೋಡೋಣ,"
ಎ೦ದು ನಾಯಕ್ ಕೂಗಾಡಿದರು.
{{gap}}ತಾನು ಪ್ರಜಾಪಕ್ಷದ ಸಹಸದಸ್ಯರೊಡನೆ ವಿಶ್ವಂಭರನನ್ನು ಸೇರಿಕೊಡರೆ
ಹೇಗೆ?__ಎಂಬ ಯೋಚನೆ ಬಂತು: ಮಿತ್ರರೊಬ್ಬರ ಮೂಲಕ ರಾಯಭಾರ
ನಡೆಯಿತು. ಮತದಾರರು ನಿರಾಕರಿಸಿದ್ದ ಪಕ್ಷದ ಬೆಂಬಲ ವಿಶ್ವಂಭರನಿಗೆ ಬೇಕಿರ
ಲಿಲ್ಲ, "ಸಮಯ ಪಕ್ವವಾದಾಗ ಈ ಬಗ್ಗೆ ನಿರ್ಧರಿಸೋಣ" ಎಂದು ಹೇಳಿ, ಅಡ್ಡ
ಗೋಡೆಯ ಮೇಲೆ ದೀಪ ಇಟ್ಟ....
{{gap}}...ರಂಗಸ್ವಾಮಿ “ಹೈಕೋರ್ಟಿಗೆ ಹೋಗುವುದೇ ಸರಿ," ಎಂದರು,
ಸೌದಾಮಿನಿಯ ಹೆಸರು ಸೌದಾಮಿನಿಯಲ್ಲ__ಸುಳ್ಳು ಹೆಸರಿನವನೊಬ್ಬಳು ಮುಖ್ಯ
ಮಂತ್ರಿರಾಗಿರುವುದು ಅಸಿ೦ಧು."
{{gap}}ಹೈಕೋರ್ಟು ದೂರನ್ನು ಸ್ವೀಕರಿಸಿತು. ಆದರೆ ಕಾನೂನು ಕತ್ತೆ.ಹಲವು
ಸಹಸ್ರ ಮೊಕದ್ದಮೆಗಳ ಹೇರು ಅದರ ಮೇಲೆ. ತತ್ಪರಿಣಮವಾಗಿ ನಡಿಗೆ ಕುಂಟು.<noinclude></noinclude>
7tik2nw0dy53xpaa21p20rcd9gr4e1b
ಪುಟ:ಮಿಂಚು.pdf/೧೯೩
104
20639
320872
206787
2026-05-19T16:55:18Z
Shreelatha.Halemane
7642
/* Validated */
320872
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=187}}
ನ್ಯಾಯಸ್ಧಾನದಲ್ಲಿ ಸೌದಾಮಿನಿಯನ್ನು ಬೆತ್ತಲೆ ಮಾಡಲು ವರ್ಷಗಳೇ ಹಿಡಿಯ
ಬಹುದು ಎನಿಸಿತು ರಂಗಸ್ವಾಮಿಗೆ.
* * *
{{gap}}ಸೌದಾಮಿನಿ ಸಂಪುಟದ ತುರ್ತುಸಭೆ ಕರೆದಳು, ತನ್ನ ನಿವಾಸದಲ್ಲಿ. ಮುಖ್ಯ ಕಾರ್ಯದರ್ಶಿ ಚೌಗುಲೆಗೆ ತಿಳಿಸಿರಲ್ಲಿ.
{{gap}}ಸಭೆಯಲ್ಲಿ ಸೌದಾಮಿನಿ ಕೆರಳಿದ ದಂತೇಶ್ವರಿಯಾದಳು :
{{gap}}"ಕಿಷ್ಕಿಂಧೆಗೆ ಕಿಚ್ಚು ಇಕ್ಕುವ ಪ್ರಯತ್ನ ನಡೀತಿದೆ. ನಿಮ್ಮ ಮೌನ ಸರಿಯಲ್ಲ.
ಸೌದಾಮಿನಿ ಸಂಪುಟದಲ್ಲಿ ನಮಗೆ ಪೂರ್ಣ ವಿಶ್ವಾಸವಿದೆ; ಅಪಪ್ರಚಾರದ ಕಂತೆಗಳಿಗೆ
ರಾಷ್ಟ್ರಪಕ್ಷದ ಶಾಸಕರಾಗಲೀ ಜನರಾಗಲೀ ಕಿವಿ ಕೊಡಬಾರದು ; ಸರಕಾರ ಸುಭದ್ರ
ವಾಗಿಗದೆ...ಈ ನಿರ್ಣಯಕ್ಕೆ ಬಾಲಾಜಿ_ಸಂಗಪ್ಪ ನೀವಿಬ್ಬರುನಮ್ಮ ನಮ್ಮ ಶಾಸಕರ
ಸಹಿ ಸಂಗ್ರಹಿಸಿ, ನೋಡೋಣ."
{{gap}}"ಸಹಿ ಹಾಕುವವರು ಅಂಗೈ ಮುಂದಕ್ಕೆ ಚಾಚಿದರೆ ?"
{{gap}}"ನಾಯಿಕೆಯಲ್ಲಿ ಪಕ್ಷದಲ್ಲಿ ನಿಷ್ಠೆ ತೋರಿಸೋದಕ್ಕೆ ಲಂಚ ಕೊಡಬೇಕೇನ್ರಿ? ಸಹಿ
ಹಾಕದೇ ಇರೋದು ಶಿಸ್ತಿನ ಉಲ್ಲಂಘನೆಯಾಗ್ತದೆ ಶಾಸ್ತಿ. ಉಲ್ಲಂಘನೆಯಾಗ್ತದೆ ಏನು
ಶಾಸ್ತಿ ಅನ್ನೋದು ಗೊತ್ತಿದೆ ತಾನೆ?"
{{gap}}ನಾರಣಪ್ಪ ಅಂದರು :
{{gap}}"ಈ ಪದಗಳಿಗೆ ಗಾಂಧಿ ಬದುಕಿದ್ದಾಗಲೇ ಅರ್ಥ ಇರಲಿಲ್ಲ, ಈಗೆ ಅರ್ಥದ
ಅರ್ಥ ಅರ್ಥವೇ.ದುಡು ದುಗ್ಗಾಣಿ, ಚೀಲ ಬಿಚ್ಚಿ, ಕೆಲಸ ಆಗ್ರದೆ. ವಿಶ್ವಂಭರವ
ಕಡೆಯವರು ಹಣ ನೀರಿನಂತೆ ಖರ್ಚು ಮಾಡ್ತಿದಾರೆ."
{{gap}}"ನೀರಾವರಿ ಮಂತ್ರಿ ನೀವೊ ? ವಿಶ್ವಂಭರನೊ ?"
{{gap}}"ಯಾರೂ ಅಲ್ಲ, ಮಾತಾಜಿ, ನೀವೇ. ಎಲ್ಲ ಕಂಟ್ರಾಕ್ಟುದಾರರೂ ಬರೋದು
ನಿಮ್ಮಲ್ಲಿಗೆ. ಅಲ್ಲವಾ ?"
{{gap}}"ನಾನೇ! ನಾನೇ! ನಮ್ಮ ಪ್ರತಿಯೊಬ್ಬ ಶಾಸಕನನ್ನೂ ಇಲ್ಲಿಗೆ ಕರೆಸಿ ಸಹಿ
ಪಡಿತೇನೆ !"
{{gap}}"ದಿಲ್ಲಿಗೆ ಹೋಗೋದಿಲ್ವ, ಮಾತಾಜಿ ?" ಎಂದು ಕೇಳಿದ ವಿದ್ಯಾಧರ.
{{gap}}ಸಿಡುಕು ಜಾಸ್ತಿಯಾಯಿತೆಂದು ಸೌದಾಮಿನಿ ನಗೆ ಬೀರಿದಳು.
{{gap}}"ನಿವೇಶನ ಕೊಟ್ಟಿದ್ದಾರೆ, ಪ್ರಧಾನಿ ಕೈಯಿಂದ ಕಿಷ್ಕಿಂಧೆ ಭವನದ ಶಂಕುಸ್ಥಾಪನೆ
ಮಾಡಿಸೋಣ. ಒಂದು ಸಂಪುಟ ಸಭೇನ ಅಲ್ಲೆ ಇಟ್ಟೊಂಡರಾಯಿತು."
{{gap}}ಯಾರೂ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಮೌನ ನೆಲೆಸಿತು.ಸಹೋದ್ಯೋಗಿಗಳು<noinclude></noinclude>
p0aq22qdaaoqvtx5fxc58zbau5ibkfr
ಪುಟ:ಮಿಂಚು.pdf/೧೯೪
104
20640
320877
206788
2026-05-19T17:01:11Z
Shreelatha.Halemane
7642
/* Validated */
320877
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=188 |right=ಮಿಂಚು}}
ನೆಟ್ಟ ದೃಷ್ಟಿಯಿಂದ ಮುಖ್ಯಮಂತ್ರಿಯನ್ನು ನೋಡಿದರು. ಆಕೆ ಬಿಳಿಹಾಳೆಯನ್ನು
ಮುಂದಕ್ಕೆ ತಳ್ಳಿ ಅಂದರುಃ
{{gap}}"ವಿದ್ಯಾಧರ್,ಆಗ ಹೇಳಿದೆನಲ್ಲ? ಅದನ್ನು ಬರೆದು ಬಿಡಿ. ಸಹಿ ಸಂಗ್ರಹ
ಇಲ್ಲಿಂದಲೇ ಶುರುವಾಗಲಿ. ಅಂದ ಹಾಗೆನಮ್ಮ ಬೆಂಬಲಿಗರಿಂದ ಸಹಿ ಸಂಗ್ರಹಿಸುವುದು
ನಿಮ್ಮದೇ ಹೊಣೆ."
* * *
{{gap}}ಅ ರಾತ್ರೆ ವಿಶ್ವಂಭರನ ಮನೆಯ ಮೇಲೆ ಕಲ್ಲುಗಳು ಬಿದ್ದು ವು.
{{gap}}ವಿಶ್ವಂಭರನ ಫೋನ್ ಐ.ಜಿ.ಪಿ ಯನ್ನು ಎಬ್ಬಿಸಿತು.
{{gap}}"ಕಿಟಿಕಿ ಗಾಜು ಒಡೆದಿದೆ."
{{gap}}"ಪೋಲೀಸ್ ರಕ್ಷಣೆ ಬೇಕೂಂತ ನಾಳೆ ಕಮಿಾಷನರಿಗೆ ಒಂದು ಕಾಗದ ಬರೆದು
ಬಿಡಿ. ಪೋಲೀಸರನ್ನು ಬೇಕಾದರೆ ಈಗಲೇ ಕಳಿಸ್ತೇನೆ."
{{gap}}"ಥ್ಯಾಂಕ್ಸ್."
{{gap}}ಸೋಜಿಗವೆಂದರೆ ಅದೇ ರಾತ್ರೆ ಮುಖ್ಯಮಂತ್ರಿಯ ನಿವಾಸ (ಗೃಹ
ಕಾರ್ಯಾಲಯ)ದ ಮೇಲೂ ಕಲ್ಲುಗಳು ಬಿದ್ದುವು.
{{gap}}ಫೋನ್ ಬಂದಾಗ ಐ.ಜಿ.ಪಿ.ಯ ನಿದ್ದೆ ಪೂರ್ತಿ ಕರಗಿತು, ಮುಖ್ಯಮಂತ್ರಿಯ
ಸ್ವರ.
{{gap}}"ಕಲ್ಯಾಣನಗರದಲ್ಲಿ ಇನ್ನು ಬದುಕೋದು ಹ್ಯಾಗ್ರಿ ? ಯಾರದು ಈ
ಪುಂಡಾಟಿಕೆ ? ಇವರು ಯಾರು ಅನ್ನೋದು ನಿಮಗೆ ಗೊತ್ತಿದೆ. ಬೆಳಗಾಗೋದ
ರೊಳಗೆ ಅವರನ್ನು ಬಂಧಿಸಿ ಲಾಕಪ್ಪಿನಲ್ಲಿಟ್ಟು ವಿಚಾರಣೆ ನಡೆಸಿ. ಇದು ಕಟ್ಟಪ್ಪಣೆ."
{{gap}}"ಏನು ? ಏನಾಯಿತು ?" ಎಂದು ಕೇಳುತ್ತ ಐ.ಜಿ.ಪಿ.ಯ ಪತ್ನಿ ಗಡಬಡಿಸಿ
ಎದ್ದರು.
{{gap}}"ಮೋಹಿನಿಕಾಟ ! ಮೋಹಿನಿಕಾಟ !" ಎನ್ನುತ್ತ ಐ.ಜಿ.ಪಿ ಕಮಿಾಷನರಿಗೆ
ಫೋನ್ ಮಾಡಿ, ರೌಡಿಗಳ ಒಂದು ತಂಡವನ್ನು ಹಿಡಿದು ಕೇಂದ್ರ ಸ್ಟೇಷನಿನ ಲಾಕಪ್ಪಿ
ನಲ್ಲಿಡಲು ಹೇಳಿದರು.
{{gap}}ಬೆಳಗಾಯಿತು. ಐ.ಜಿ.ಪಿ.ಗೆ ವರದಿ ಬಂತು :
{{gap}}"ಎರಡೂ ಕಡೆ ಕಲ್ಲೆಸೆದದ್ದು ಒಂದೇ ರೌಡಿ ತಂಡ. ಎರಡು ಕಡೆಗಳಿಂದಲೂ
ಅವರು ಹಣ ಪಡೆದಿದ್ದಾರೆ."
{{gap}}"ಎಚ್ಚರಿಕೆ ಕೊಟ್ಟಿ ಬಿಟ್ಟಿಡಿ."
{{gap}}ವಿಶ್ವಂಭರರ ಮನೆಯ ಮೇಲೆ ಬಿದ್ದ ಕಲ್ಲುಗಳಿಗೂ ಮುಖ್ಯಮಂತ್ರಿಯ ನಿವಾಸದ
ಮೇಲೆ ಬಿದ್ದ ಕಲ್ಲುಗಳಿಗೂ ಸಂಬಂಧವಿದೆಯೆ ? ಅವೆಲ್ಲ ಒಂದೇ ಬಂಡೆಯ ಮಕ್ಕಳೆ ?
ಎಂಬ ಜಿಜ್ಞಾಸೆ ಆ ದಿನ ಪತ್ರಿಕಾ ವಾಚಕರಲ್ಲಿ ನಡೆಯಿತು.<noinclude></noinclude>
nelxt39q2h18djmj6e3evgsg1jhq16o
ಪುಟ:ಮಿಂಚು.pdf/೧೯೫
104
20641
321172
206789
2026-05-20T06:48:40Z
Shreelatha.Halemane
7642
/* Validated */
321172
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿ೦ಚು|right= 189}}
{{gap}}ಐ.ಜಿ.ಪಿ. ಮುಖ್ಯಮಂತ್ರಿ ನಿವಾಸಕ್ಕೆ ಹೋಗಬೇಕಾಯಿತು, ಕಾವಲು ಸಿಬ್ಬ೦ದಿ
ಹತ್ತು ಹನ್ನೆರಡು ಕಲ್ಲು ಆರಿಸಿ ಇಟ್ಟಿದ್ದರು.
{{gap}}ಮುಖ್ಯಮಂತ್ರಿ : “ಏನಾದರೂ ಗೊತ್ತಾಯಿತೇನ್ರಿ ?"
{{gap}}ಐಜಿಪಿ : “ಒಂದು ತಂಡವನ್ನು ಹಿಡಿದು ತೀವ್ರ ತನಿಖೆ ನಡೆಸಿದ್ದೇವೆ,
ಮಾತಾಜಿ."
{{gap}}ಮುಖ್ಯಮಂತ್ರಿ: “ಬಿಡಬೇಡಿ, ತನಿಖೆ ಮುಂದುವರಿಸಿ."
{{gap}}ಐಜಿಪಿ: " ನಾನೊ೦ದು ಸಲಹೆ ನೀಡಬಹುದೆ?"
{{gap}}ಮುಖ್ಯಮಂತ್ರಿ : “ಏನದು?”
{{gap}}ಐಜಿಪಿ : “ಅವತ್ತು ಮೂವರು ಶಾಸಕರನ್ನು ಹಿಡಿದು ಜಾಮೀನಿನ ಮೇಲೆ
ಬಿಟ್ಟೆವಲ್ಲ? (ಎಲ್ಲ ಚಿಲ್ಲರೆ ಅಪಾದನೆ) ಕೇಸ್ ಗಳನ್ನು ವಾಪಸು
ತೆಗೆದುಕೊಳ್ಳಲು ತಾವು ಆದೇಶವಿತ್ತರೆ, ಮುಖ್ಯಮಂತ್ರಿಯ ಬಗ್ಗೆ
ಶಾಸಕರ ಮತ್ತು ಜನರ ಗೌರವ ಹೆಚ್ಚದೆ."
{{gap}}ಮುಖ್ಯಮಂತ್ರಿ : “ಹಾಗೆಯೇ ಮಾಡಿ. ನನ್ನ ಹೃದಯ ಎಷ್ಟು ವಿಶಾಲ
ಅನ್ನೋದು ಎಲ್ಲರಿಗೂ ಗೊತ್ತಾಗಲಿ.”
{{gap}}....ಮಾರನೆಯ ಬೆಳಗ್ಗೆ ಗುಪ್ತಚಾರ ದಳದ ಮುಖ್ಯಸ್ಥ ಬಂದ.
{{gap}}“ನಿಮ್ಮ ದಾರಿಯನ್ನೇ ನೋಡ್ತಿದ್ದೆ.." ಎಂದಳು ಮುಖ್ಯಮಂತ್ರಿ.
{{gap}}“ಸಿ.ಬಿ.ಐ, ಬೇಹುಗಾರಿಕೆ ಪೂರ್ತಿಯಾಗಲೀಂತ ಎರಡು ದಿನ ತಡಮಾಡಿದೆ."
{{gap}}“ಆಯ್ತಾ ? ಅವರ ವರದಿ ಹೇಗಿರುತ್ತೊ ?”
{{gap}}“ಅಸ್ಥಿರತೆ ಇದೆ, ಅಲುಗಾಡುವ ಸ್ಥಿತಿಗೆ ಇನ್ನೂ ಮುಟ್ಟಿಲ್ಲ."
{{gap}}"ಅಸ್ಥಿರತೆ ತಲೆಕಾಯಿ ".
{{gap}}“ಆದರೂ ಮಾತಾಜಿ, ತಾವೊಮ್ಮೆ ದಿಲ್ಲಿಗೆ ಹೋಗಿ ಬರೋದು ಮೇಲು ಅಂತ
ತೋರ್ತದೆ.”
{{gap}}ಸೌದಾಮಿನಿ ಸುಮ್ಮನಿದ್ದಳು. ಆದರೆ ಆ ಸಂಜೆಯೇ ದಿಲ್ಲಿಗೆ ಹಾರಲು
ನಿರ್ಧರಿಸಿದಳು. ಹಿ೦ದಿನ ಹಾಗೆಯೇ, ರಾಮ್ ಧನ್, ಅವಳು, ಪರಶುರಾಮ,
ಬೋಲಾನಾಥ್, 'ಏನೂ ಬದಲಾಗಿಲ್ಲ-ಏನೂ' ವಾರ್ತಾ ಇಲಾಖೆ ಹೊರಡಿಸಿದ
ಪತ್ರಿಕಾ ಟಿಪ್ಪಣಿಯಲ್ಲಿತ್ತು
{{gap}}“ರಾಷ್ಟ್ರದ ಪ್ರಧಾನಿಯ ಕರೆ ಬಂದುದರಿಂದ ಮುಖ್ಯಮ೦ತ್ರಿ ದಿಲ್ಲಿಗೆ ಹೋಗಿ
ದ್ದಾರೆ, ಇದು ಮಾಮೂಲು ಭೇಟಿ. ಇದಕ್ಕೆ ರಾಜಕೀಯ ಮಹತ್ವವಿಲ್ಲ.”
{{gap}}ವಿದ್ಯಾಧರನಿಗೆ ಫೋನ್ ಮಾಡಿ ಮುಖ್ಯಮಂತ್ರಿ ಅಂದಳು :
{{gap}}“ನಿಮ್ಮ ಸಹಿ ಸಂಗ್ರಹ ಕೆಲಸ ಮುಂದುವರೀಲಿ, ಎಲ್ಲ ಶಾಸಕರಿಗೂ ಫೋನ್
ಮಾಡಿ ಕಲ್ಯಾಣನಗರಿಗೆ ಕರೆಸಿ." -<noinclude></noinclude>
iyuhtmve7ossi6xijon7rb8aoy99ifd
ಪುಟ:ಮಿಂಚು.pdf/೧೯೬
104
20642
321178
206790
2026-05-20T06:51:55Z
Shreelatha.Halemane
7642
/* Validated */
321178
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=190|left=|right=}}
{{center|೨೦}}
{{gap}}ದಿಲ್ಲಿಯಲ್ಲಿ ವಿಮಾನನಿಲ್ದಾಣಕ್ಕೆ ಫೆರ್ನಾಂಡೀಸ್ ಜೀಪ್ ತಂದಿದ್ದ, ಎರಡು
ಬ್ರೀಫ್ಕೇಸುಗಳು ಅಂಗರಕ್ಷಕರ ವಶ ಇದ್ದುದರಿಂದ ನಿಲ್ದಾಣದಿಂದ ಹೊರಡುವುದು
ತಡವಾಗಲಿಲ್ಲ.
{{gap}}ಕಿಷ್ಟಿಂಧೆಯ ಕುಟೀರದಲ್ಲಿ ಅಡುಗೆಯ ಶ್ರೀಪಾದ, ಟೈಪಿಸ್ಟ್ ಸಿತಾರಾ, ಜವಾನ
ಮುಖ್ಯಮಂತ್ರಿಗೆ ಸ್ವಾಗತ ಬಯಸಿದರು.
{{gap}}ಸೌದಾಮಿನಿಯನ್ನು ಕಾಡುತ್ತಿದ್ದುದೊಂದೇ ಚಿಂತೆ: ಈಗ ತನ್ನ ಬಗ್ಗೆ ದಿಲ್ಲಿಯ
ವಿವಿಧ ಪ್ರಮುಖರ ನಿಲುವೇನು? ಸಿ ಬಿ ಐ ಅಧಿಕಾರಿಗಳು ಏನು ವರದಿ ಕೊಟ್ಟಿರು
ವರೊ? ಇಲ್ಲಿನ ಎರಡು ಪತ್ರಿಕೆಗಳಲ್ಲಿ ಕಳೆದ ಎರಡು ವಾರಗಳಲ್ಲಿ ತನ್ನ ಬಗ್ಗೆ
ಅಷ್ಟೊಂದು ಅನುಕೂಲಕರವಲ್ಲದ ವಾರ್ತಾಪತ್ರಗಳು ಪ್ರಕಟವಾಗಿದ್ದುವು. “ಕಿಷ್ಕಿ೦ಧೆ
ಯಲ್ಲಿ ಭಿನ್ನಮತೀಯರ ಸವಾಲು.' 'ನಾಯಕತ್ವದಲ್ಲಿ ಬದಲಾವಣೆ ಸಂಭವ?'...
ಒಂದು ಪತ್ರಿಕೆಯಲ್ಲಿ ಹೀಗೆ. ಇನ್ನೊಂದರಲ್ಲಿ ಇದೇ ಸರಣಿಯಲ್ಲಿ ಮತ್ತಿಷ್ಟು.
ಜೀಪಿನಲ್ಲಿ ಕುಟೀರದತ್ತ ಬರುತ್ತಿದ್ದಾಗ ತಪ್ತವಾಗಿದ್ದ ಮೆದುಳು ಸ್ವಾಗತಿಸಿದವರನ್ನು
ಕಂಡೊಡನೆ ಕರ್ತವ್ಯದ ನೆನಪು ಮಾಡಿಕೊಟ್ಟಿತು. -
{{gap}}“ಶ್ರೀಪಾದ ಆಚಾರು, ಚೆನಾಗಿದ್ದೀರಾ ?”
{{gap}}—“ಸಿತಾರಾ, ಇನ್ನೂ ಹೋಗಿಲ್ಲವೇನಮ್ಮ ಮನೆಗೆ?”
{{gap}}ರೇಗುವ, ಕೂಗುವ ಅಗತ್ಯವಿಲ್ಲ, ಇಲ್ಲಿ, ಮುಗುಳುನಗೆಯ ಮುಖವಾಡವೇ
ಸರಿ.
{{gap}}ಫೆರ್ನಾಂಡೀಸ್'ಗೂ ಸಿತಾರಾಗೂ ಗೊತ್ತು, ಕಿಷ್ಟಿಂಧೆಯಲ್ಲೇನೋ ಕರಾಮತ್ತಿನ
ರಾಜಕೀಯ ನಡೆದಿದೆ ಎಂದು, ಅದರ ಸುಳಿವು ನಾಳೆ ಸಿಗಬಹುದು.
{{gap}}“ಊಟ ಸಿದ್ದ ವಾಗಿದೆ"ಎಂದು ಶ್ರೀಪಾದ ಫೆರ್ನಾಂಡೀಸ್ಗೆ ತಿಳಿಸಿದ. ಆತನಿಂದ
ಪರಶುರಾಮನಿಗೆ ಸಂದೇಶ. ಆತ ಮುಖ್ಯಮಂತ್ರಿಗೆ ಬಿತ್ತರಿಸಿದ.
{{gap}}“ನಾನು ಕೊಠಡೀಲೇ ಊಟ ಮಾಡ್ವೇನೆ. ಸ್ವಲ್ಪ ಸಾಕೂಂತ ಹೇಳು.”
{{gap}}ಫೆರ್ನಾಂಡೀಸ್ಗೆ ಅವಳೆ೦ದಳು :
{{gap}}“ತಡವಾಯು, ಜೀಪ್ ತಗೊಂಡು ಹೋಗಿ, ಸಿತಾರಾಗೆ ಡ್ರಾಪ್ ಕೊಡಿ,
ನಾಳೆ ಬೆಳಗ್ಗೆ ಎ೦ಟು ಗ೦ಟೆಗೆ ಬ೦ದ್ಬಿದಡಿ,"
{{gap}}“ಹೂಂ, ಗುಡ್ನೈಟ್, ಮಾತಾಜಿ,”<noinclude></noinclude>
c3k4ukzhwipi2jf3jf7ljpyttql6ugw
ಪುಟ:ಮಿಂಚು.pdf/೧೯೭
104
20643
321195
206791
2026-05-20T06:59:45Z
Shreelatha.Halemane
7642
/* Validated */
321195
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿ೦ಚು|right=191}}
{{gap}}ಅಂಗರಕ್ಷಕರನ್ನು ಸೌದಾಮಿನಿ ಕರೆದಳು:
{{gap}}"ಈ ಸಲ ಬಂದ ಕೆಲಸ ನಾಳೆ ಮುಗೀತದೆ. ನಾಡದು ಸಂಜೆ ವಾಪಸು.. ನೀವು
ಬೆಳಗ್ಗೆ ಪರಶುರಾಮ ಸಾಹೇಬರಿಗೆ ತಿಳಿಸಿ ನಿಮ್ಮ ಮನೆಗೆ ಹೋಗಿ, ನಾಡದು ಬೆಳಗ್ಗೆ
ಡ್ಯೂಟಿಗೆ ಬಂದ್ಬಿಡಿ, ಈಗ ಊಟ ಮಾಡಿ ಮಲಗಿ.”
{{gap}}ಮಲಗಿದ ಸೌದಾಮಿನಿಗೆ ನಡುವಿರುಳು ದಾಟಿದರೂ ನಿದ್ದೆ ಬರಲಿಲ್ಲ. ನಾಳೆ
ಫೋನಿನ ಬಳಕೆ. ನಕುಲದೇವ್ ಜಿ ಇಲ್ಲಿಗೆ ಬರಬಹುದು. ಪ್ರಧಾನಿಯನ್ನು ಕಾಣಲೇ ಬೇಕು. ಆ! ಲೇಹ್ಯ ಮರೆತೆ...
{{gap}}ಎದ್ದಳು. ದೀಪ ಹಾಕಿ ಲೇಹ್ಯ ತಿಂದು, ಗುಟುಕು ನೀರು ಕುಡಿದು ಮತ್ತೆ
ಹಾಸಿಗೆ ಸೇರಿದಳು.
{{gap}}ನಿಧಾನವಾಗಿ, ಬಹಳ ನಿಧಾನವಾಗಿ, ನಿದ್ದೆ ಬ೦ತು.
{{gap}}ಬೆಳಗ್ಗೆ ಎದ್ದವಳೇ ಮುಖಕ್ಕಿಷ್ಟು ನೀರು ಹನಿಸಿ ನಕುಲದೇವ್ ಜಿಗೆ ತಾನೇ
ಫೋನ್ ಮಾಡಿದಳು.
{{gap}}“ನಮಸ್ತೆ, ಆಣ್ಣ.”
{{gap}}“ಎಲಾ! ಯಾವಾಗ ಬರೋಣವಾಯ್ತು ?"
{{gap}}“ನಿನ್ನೆ ಸಂಜೆ ಫ್ಲೈಟಿನಲ್ಲಿ."
{{gap}}“ತಿಳಿಸದೆ ಬ೦ದಿರಲ್ಲ?"
{{gap}}“ಯಾಕೆ ದ್ರಿ ಬಹುವಚನ ?"
{{gap}}"ಬೇರೆ ಮುಖ್ಯಮಂತ್ರಿಗಳನ್ನು ಹೀಗೆ ಮಾತನಾಡಿಸಿ ಮಾತನಾಡಿಸಿ ರೂಢಿ
ಯಾಗಿದೆ."
{{gap}}“ನಿಮ್ಮಿಷ್ಟ ಯಾವಾಗ ಸಿಗ್ತೀರಾ? ಅಲ್ಪ ಕಾಣಿಕೆ ತಂದಿದ್ದೇನೆ. ವೈಯಕ್ತಿಕ,
ನನ್ನಿಂದ ನಿಮಗೆ.”
{{gap}}“ನಾನೀಗ ಶ್ರೀನಗರಕ್ಕೆ ಹೊರಟಿದ್ದೇನೆ,”
{{gap}}“ನೀನೂ ಬಾ ಅಂತ ಹೇಳೋಲ್ವ ?”
{{gap}}“ಈ ಪ್ರವಾಸ ಪ್ರಧಾನಿಯ ಪರವಾಗಿ. ನಾನೊಬ್ಬನೇ ಮಾಡಬೇಕಾದ್ದು....
ಒಂದು ಕೆಲಸ ಮಾಡ್ತೀನಿ. ಇನ್ನು ಸ್ವಲ್ಪ ಹೊತ್ತಿನಲ್ಲಿ ಕುಟೀರಕ್ಕೆ ಬರ್ತೀನಿ.”
{{gap}}“ಇಲ್ಲಿ ಉಪಾಹಾರ ತಗೊಳ್ಳಿ.”
{{gap}}“ಕ್ಷಮಿಸಬೇಕು, ನಾನು ಬದ್ರಿರೋದು ಮುಖದರ್ಶನಕ್ಕೆ, ಕಾಣಿಕೆ ಸ್ವೀಕರಿಸೋ
ದಕ್ಕೆ ಅಷ್ಟೆ"
{{gap}}“ನಿಮ್ಜತೆ ಮಾತಾಡಬೇಕಲ್ಲ..."
{{gap}}“ನನಗೆ ಎಲ್ಲ ಗೊತ್ತಿದೆ, ಮಿನಿ, ನೀನು ಚಿಂತಿಸ್ಬೇಡ, ಎಲ್ಲ ಸರಿಹೋಗುತ್ತೆ.”
{{gap}}“ಮಿನಿ ಅಂತಾದರೂ ಕರೆದಿರಲ್ಲ...ನೀವು ಕಾಶ್ಮೀರದಿಂದ ವಾಪಸಾಗೋದು?”
{{gap}}“ಎರಡು ಮೂರು ದಿನ ಬಿಟ್ಟೊಂಡು."<noinclude></noinclude>
9twndvu8h4g6bn87sqlskmbtmoyzqhl
ಪುಟ:ಮಿಂಚು.pdf/೨೧೨
104
20659
320831
248889
2026-05-19T13:50:05Z
Shreelatha.Halemane
7642
/* Validated */
320831
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=206|right=ಮಿಂಚು}}
{{gap}}ಲಕ್ಷ್ಮೀಪತಯ್ಯ ಅಂದರು : </br>
{{gap}}“ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಮಹಾಜನತೆ ಮೆರವಣಿಗೆಯಲ್ಲಿ ರಾಜ </br>ಭವನಕ್ಕೆ ತೆರಳಿ ಮನವಿ ಸಲ್ಲಿಸಬೇಕು.” </br>
{{gap}}“ವಿಶ್ವಂಭರನೆಂದ ; </br>
{{gap}}ಅವರು ಕೇಂದ್ರಕ್ಕೆ ವರದಿ ಕಳಿಸಿಯೇ ಕಳಿಸ್ತಾರೆ. ಆದರೆ ನಮ್ಮ ಒಂದು </br>
ನಿಯೋಗವೂ ದಿಲ್ಲಿಗೆ ಹೋಗಿ ವರಿಷ್ಠರನ್ನು ಕಾಣಬೇಕು.” </br>
{{gap}}ಹತ್ತಾರು ಸ್ವರಗಳು ಕೇಳಿಸಿದುವು : </br>
{{gap}}“ನೀವಿಬ್ಬರೇ ಸಾಕು, ನಾಳೆ ಸಂಜೆಯ ವಿಮಾನದಲ್ಲೇ ಹೋಗಿ,” </br>
{{gap}}ಉಪಾಹಾರ ಸಭೆಯ ವಿವರವನ್ನು ಒಬ್ಬ ಬೇಹುಗಾರ ತಂದ. </br>
{{gap}}“ಈ ಅಂಕೆ ಸಂಖ್ಯೆಗಳನ್ನು ನಾನು ನಂಬೋದಿಲ್ಲ, ಚಿತ್ರ ನಾಳೆ ಬದಲಾಗ್ತದೆ. </br>ಮೆರವಣಿಗೆ ಏನು ಮಹಾ ? ಹುಶ್ ಎಂದರೆ ಸಾಕು. ಜನ ಜಮಾಯಿಸ್ತಾರೆ.” </br>
ಎಂದು ಸೌದಾಮಿನಿ ತಣ್ಣನೆ ನುಡಿದಳು. ಒಳಗೆ ಮಾತ್ರ ಕಾವು ಏರುತ್ತಿತ್ತು. ಅಲ್ಲಿ </br>
ಪರಿಸರ ಕಮರುತ್ತಿತ್ತು. </br>
{{gap}}ಆಪ್ತ ಕಾರ್ಯದರ್ಶಿಯನ್ನು ಕರೆದು ಅವಳೆಂದಳು : </br>
{{gap}}“ಇವತ್ತು ರಾತ್ರೆ ಆ ವಿಶ್ವಂಭರನನ್ನು ಕಾಣಬೇಕು, ಪರಶು.” </br>
{{gap}}ಅವರಿಗೆ ಫೋನ್ ಮಾಡ್ಲಾ ?” </br>
{{gap}}“ದಿಢೀರ್ ಪ್ರತ್ಯಕ್ಷ, ಹತ್ತು ಗಂಟೆಗೆ ರಕ್ಷಣಾ ಪೋಲೀಸರೂ ಇಲ್ಲದೆ, ಅಂಗ </br>
ರಕ್ಷಕರೂ ಇಲ್ಲದೆ, ಅಡ್ರೆಸ್ ಸರಿಯಾಗಿ ಬರೆದಿಟ್ಕೊ.” </br>
{{gap}}“ಅಲ್ಲಿ ಬೇರೆಯವರು ಇದ್ದರೆ ?” </br>
{{gap}}“ಶಿಬಿರ ಅಂದ್ಮೇಲೆ ಯಾರಾದರೂ ಇದ್ದೇ ಇರ್ತಾರೆ. ದೊಡ್ಡದಲ್ಲ.” </br>
{{***|3|6em}}
{{gap}}ಬಾಗಿಲು ತೆರೆದಿತ್ತು. ಶಿಬಿರವಾಗಿ ಮಾರ್ಪಟ್ಟಿದ್ದ ಮನೆ. ಸೌದಾಮಿನಿ </br>
ಬಿರುಗಾಳಿಯಂತೆ ಶಿಬಿರಕ್ಕೆ ನುಗ್ಗಿದಳು. ನೆರೆದಿದ್ದವರು ಅವಾಕ್ಕಾದರು. ಎಲಾ ! </br>
ಹೀಗೂ ಉಂಟೆ ? </br>
{{gap}}ನೆಲೆಸಿದ ಮೌನದಲ್ಲಿ ವಿಶ್ವಂಭರನೂ ಒಂದು ನಿಮಿಷ ಕಕ್ಕಾವಿಕ್ಕಿಯಾದ, </br>
ಸಾವರಿಸಿಕೊಂಡು ಎದ್ದು ನಿಂತು ನಸು ನಕ್ಕು “ಸ್ವಾಗತ" ಅಂದ. </br>
{{gap}}“ನನ್ನ ಸಹಿಯೂ ಒಂದಿರಲಿ. ಎಂಬತ್ತೊಂದಾಗ್ತದೆ, ಗಣಿತ ಪ್ರಾಧ್ಯಾಪಕರೇ." </br>
{{gap}}“ಪೆನ್ ಕೊಡಲೆ ?” </br>
{{gap}}“ಎಲ್ಲಿ ನಿಮ್ಮ ಸ್ಟಡೀ ತೋರಿಸಿ.” </br>
{{gap}}“ಖಾಸಗಿ ಮಾತು ?”<noinclude></noinclude>
rr9lujzuk5zw7o9pki0lq1o957sxz3k
ಪುಟ:ಮಿಂಚು.pdf/೨೧೩
104
20660
320832
248892
2026-05-19T13:57:01Z
Shreelatha.Halemane
7642
/* Validated */
320832
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=207}}
{{gap}}"ಹ್ಞ." </br>
{{gap}}ತೆರೆ ಸರಿಸಿ ಒಳ ಕೊಠಡಿಗೆ ಪ್ರವೇಶ, </br>
{{gap}}“ಒಪ್ಪ ಓರಣ ಶಿಸ್ತು ನಿಮ್ಮಿಂದ ಕಲೀಬೇಕು. ಅಭಿನಂದನೆ ಯಾರಿಗೆ ಸಲ್ಲಿಸ </br>
ಬೇಕು ? ನಿಮಗೊ ? ಶ್ರೀಮತಿಯವರಿಗೊ ?” </br>
{{gap}}“ಹೊರಗೆ ಜನ ಇದಾರೆ. ವಿಷಯಕ್ಕೆ ಬನ್ನಿ.” </br>
{{gap}}“ಅಂಗೈ ಚಾಚಿ.” </br>
{{gap}}ವಿಶ್ವಂಭರ ಬಲ ಅಂಗೈಯನ್ನು ಮುಂದಕ್ಕೆ ಚಾಚಿದ, ಅದಕ್ಕೆ ಸೌದಾಮಿನಿ </br>ತನ್ನ ಅಂಗೈಯಿಂದ ಬಡೆದಳು, ಮೆಲ್ಲನೆ </br>
{{gap}}"ಇದು ವಾಗ್ದಾನ, ಸಂಪುಟವನ್ನು ಪುನರ್ ರಚಿಸ್ತೇನೆ, ನೀವು ಉಪ </br>
ಮುಖ್ಯಮಂತ್ರಿ. ಎಲ್ಲ ತಣ್ಣಗಾದ ಮೇಲೆ ನಾನು ಸನ್ಯಾಸ ತಗೊಳ್ತೇನೆ, ಆಮೇಲೆ </br>
ನೀವೆ__” </br>
{{gap}}“ಮುಖ್ಯಮಂತ್ರಿ ! ಎಷ್ಟು ಸರಳ ! ಈಗ ಈ ಸಹಿ ಸಂಗ್ರಹ ಇತ್ಯಾದಿ </br>
ಬಿಟ್ಬಿಡ್ಬೇಕು ಅಲ್ವೆ ?” </br>
{{gap}}“ಒಪ್ಪಿಗೆ ಅನ್ನಿ.” </br>
{{gap}}“Sorry, ಮಾತಾಜಿ." </br>
{{gap}}“ಹಾಗಾದರೆ ನಾನು ಇಲ್ಲಿಗೆ ಬಂದೂ ಇಲ್ಲ, ನಿಮ್ಜತೆ ಮಾತಾಡಿಯೂ ಇಲ್ಲ,” </br>
{{gap}}“ಸರಿ.” </br>
{{gap}}ಹೊರಟ ಸೌದಾಮಿನಿಯನ್ನು ಬೀಳ್ಕೊಡಲು ವಿಶ್ವಂಭರ ಅಂಗಳಕ್ಕಿಳಿದ. ಅಲ್ಲಿ </br>
ಅಂದ : </br>
{{gap}}“ಬಾಡಿಗಾರ್ಡ್ ಇಲ್ಲದೆ ಬಂದಿದ್ದೀರಿ !” </br>
{{gap}}"ಇದು ಸ್ನೇಹದ ಮನೆ ವಿಶ್ವಂಭರ, ವೈರಿ ಶಿಬಿರ ಅಲ್ಲ.” </br>
{{gap}}“ದಾರಿಯಲ್ಲಿ ದುರ್ಜನರಿರ್ತಾರೆ. ಏನಾದರೂ ಆದರೆ ?” </br>
{{gap}}“ನನ್ನ ಕೂದಲು ಕೊಂಕಿದರೂ ಸಾಕು, ಅದಕ್ಕೆ ನೀವೇ ಕಾರಣ ಅಂತ ನಾಳೆ </br>ಕಲ್ಯಾಣನಗರ ವಿಚಾರಿಸ್ಕೊಳ್ತದೆ.” </br>
{{gap}}“ಮೆಚ್ಚಿದೆ.” </br>
{{gap}}“ಮೆಚ್ಚಿದರೂ ಏನು ಪ್ರಯೋಜನ ? ಬರೀ ಮಾತಾಯಿತು, ಅಷ್ಟೆ.” </br>
{{gap}}ಕಾರು ಹೊರಟಿತು. ವಿಶ್ವಂಭರನ ಮನೆಯಲ್ಲಿನ ನಗೆಯ ಭೋರ್ಗರೆತ ಕಾರನ್ನು </br>ಹಿಂಬಾಲಿಸಿತು. </br>
{{gap}}ಕಾರಿನಲ್ಲಿ ಸೌದಾಮಿನಿ ತನ್ನ ಖಿನ್ನತೆಯನ್ನು ಮರೆಮಾಡುತ್ತ ಕೇಳಿದಳು : </br>
{{gap}}“ಪರಶು, ನಾಯಕ್ ಮನೆಯ ವಿಳಾಸ ನೆನಪಿದೆಯಾ ?” </br>
{{gap}}ಇದೆ. ಹಿಂದೆ ರಾಷ್ಟ್ರಪಕ್ಷದ ಕಾರ್ಯಾಲಯದಿಂದ ಅಲ್ಲಿಗೆ ಹೋಗಿದ್ದೆ.” </br>
{{gap}}“ಡ್ರೈವರಿಗೆ ದಾರಿ ತೋರಿಸು..”<noinclude></noinclude>
t31gaqh8xyc0zdfshckixdwhddftv1m
ಪುಟ:ಮಿಂಚು.pdf/೨೧೪
104
20661
320833
250322
2026-05-19T14:00:53Z
Shreelatha.Halemane
7642
/* Validated */
320833
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=208|right=ಮಿಂಚು}}
{{gap}}....ನಾಯಕ್ ಮಲಗುವ ಸಿದ್ಧತೆಯಲ್ಲಿದ್ದರು. ಹೊರಗೆ ಬಂದವರನ್ನು ಹಿಂದಿನ<br/>ಸೀಟಿಗೆ ಕರೆದುಕೊಂಡಳು.<br/>
{{gap}}“ಇವತ್ತು ನನ್ನನ್ನು ದಬ್ಬೋಕೆ ಅಂಗರಕ್ಷಕರಿಲ್ಲವ ?”<br/>
{{gap}}“ದಬ್ಬೋ ಕೆಲಸ ತಬ್ಬೋ ಕೆಲಸ ನೀವೇ ಮಾಡಿ.”<br/>
{{gap}}“ಅವತ್ತು ನಾನು ಬಂದಾಗ ಈ ಬುದ್ಧಿ ಎಲ್ಲಿ ಹೋಗಿತ್ತು ?”<br/>
{{gap}}“ತಪ್ಪು ಮಾಡ್ಡೆ. ಈಗ ಯಾಚಕಿಯಾಗಿ ಬಂದಿದ್ದೇನೆ.”<br/>
{{gap}}“ನನ್ನ ಗುಂಡಿಗೆ ಬಗೆದು ಕೊಡಲೊ ?”<br/>
{{gap}}ಸೌದಾಮಿನಿ ನಾಯಕರ ತೊಡೆಯ ಮೇಲೆ ತನ್ನ ಅಂಗೈ ಇಟ್ಟಳು. ಒಲಿಸುವ<br/ಓಲೈಸುವ ಧ್ವನಿಯಲ್ಲಿ ಅವಳೆಂದಳು :<br/>
{{gap}}“ರಾಷ್ಟ್ರಪಕ್ಷಕ್ಕೆ ವಾಪಸು ಬನ್ನಿ.”<br/>
{{gap}}“ಐದು ಜನ. ಆಮೇಲೆ ಅಪ್ಪಚ್ಚಿ ಮಾಡೋಣ ಅಂತಲೋ ?”<br/>
{{gap}}“ಅಷ್ಟು ಸಂದೇಹವಿದ್ದರೆ ರಾಷ್ಟ್ರಪಕ್ಷ-ಪ್ರಜಾಪಕ್ಷ ಸಂಯುಕ್ತರಂಗ ಮಾಡೋಣ.”<br/>
{{gap}}"ಏನು ಕೊಡ್ತೀಯಾ ?”<br/>
{{gap}}“ನನ್ನನ್ನೇ.”<br/>
{{gap}}“ಅದು ವೈಯಕ್ತಿಕ ವಿಷಯ. ಈಗ ಬೇಡ.”<br/>
{{gap}}“ಹೊಸ ಸರ್ಕಾರದ ರಚನೆ ಅಗತ್ಯ, ಅನಿವಾರ್ಯ, ಲಕ್ಷ್ಮೀಪತಿ ಅತ್ತ ಹೋದ<br/>ನಲ್ಲ. ಈಗ ನೀವೇ ಹಿರಿಯ ಮುತ್ಸುದ್ದಿ, ಸ್ಪೀಕರ್ ಆಗಿ.”<br/>
{{gap}}“ಸ್ಪೀಕರ್ ? ಅಲ್ಲಿ ಆಕಳಿಸ್ತಾ ಕೂತ್ಕಳ್ಳಾ ? ಮುಖ್ಯಮಂತ್ರಿ ಸ್ಥಾನ<br/>
ಬಿಟ್ಕೊಡ್ತೀಯಾ ಹೇಳು.”<br/>
{{gap}}“ಬೇರೆ ಏನಾದರೂ ಕೇಳಿ.”<br/>
{{gap}}“ಒಳ್ಳೇ ವರಮಹಾಲಕ್ಷ್ಮಿ ನೀನು.”<br/>
{{gap}}“ಅವಸರದ ತೀರ್ಮಾನ ಬೇಡ,ಇದು ನಿಮ್ಮ ರಾಜಕೀಯ ಭವಿಷ್ಯತ್ತಿನ<br/>
ಪ್ರಶ್ನೆ, ರಾತ್ರಿ ಚೆನ್ನಾಗಿ ಯೋಚಿಸಿ, ಬೆಳಗ್ಗೆ ಫೋನ್ ಮಾಡಿ.”<br/>
{{gap}}“ಹಾಗಾದರೆ ಈಗ ಹೊರತೋಗ್ತೀಯ ಅನ್ನು.”<br/>
{{gap}}“ವೈಯಕ್ತಿಕ ವಿಷಯ ಈಗ ಬೇಡ ಅಂದಿರಲ್ಲ ?”<br/>
{{gap}}“ಹೌದು, ಮಹಾತಾಯಿ. ನೀನು ದೊಡ್ಡವಳು, ಕರಗಿರೋ ಮಂಜು<br/>
ಬೆಟ್ಟದ ಮೇಲೆ ಕೂತಿದೀಯಾ ! ನಾನಿರೋದು ಐದು ದಿಂಡುಕಲ್ಲುಗಳ ಮೇಲೆ,”<br/>
{{gap}}“ಪ್ರಜಾಪಕ್ಷದ ಐವರ ಬೆಂಬಲ ಸೌದಾಮಿನಿ ಸಂಪುಟಕ್ಕೆ ಇದೆ ಅಂತ ರಾಜ್ಯ<br/>
ಪಾಲರಿಗೆ ಬರಕೊಡಿ, ಸಾಕು.”<br/>
{{gap}}“ನಿನ್ನ ವಿಷಯದಲ್ಲಿ ನನಗೆ ಕನಿಕರ, ಪುಟ್ಟವ್ವ.”<br/>
{{gap}}“ಸೌದಾಮಿನಿ ಮೇಲೆ ನಿಮಗೆ ಸಿಟ್ಟು, ಪುಟ್ಟನಿಗೋಸ್ಕರವಾದರೂ ಮೆತ್ತ<br/>
ಗಾಗಿ, ನಾಳೆ ಬೆಳಗ್ಗೆ ತಿಳಿಸಿ.”<br/><noinclude></noinclude>
2wo50di07a9r6kcz3yz0pegihvbzlai
320834
320833
2026-05-19T14:01:22Z
Shreelatha.Halemane
7642
320834
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=208|right=ಮಿಂಚು}}
{{gap}}....ನಾಯಕ್ ಮಲಗುವ ಸಿದ್ಧತೆಯಲ್ಲಿದ್ದರು. ಹೊರಗೆ ಬಂದವರನ್ನು ಹಿಂದಿನ<br/>ಸೀಟಿಗೆ ಕರೆದುಕೊಂಡಳು.<br/>
{{gap}}“ಇವತ್ತು ನನ್ನನ್ನು ದಬ್ಬೋಕೆ ಅಂಗರಕ್ಷಕರಿಲ್ಲವ ?”<br/>
{{gap}}“ದಬ್ಬೋ ಕೆಲಸ ತಬ್ಬೋ ಕೆಲಸ ನೀವೇ ಮಾಡಿ.”<br/>
{{gap}}“ಅವತ್ತು ನಾನು ಬಂದಾಗ ಈ ಬುದ್ಧಿ ಎಲ್ಲಿ ಹೋಗಿತ್ತು ?”<br/>
{{gap}}“ತಪ್ಪು ಮಾಡ್ಡೆ. ಈಗ ಯಾಚಕಿಯಾಗಿ ಬಂದಿದ್ದೇನೆ.”<br/>
{{gap}}“ನನ್ನ ಗುಂಡಿಗೆ ಬಗೆದು ಕೊಡಲೊ ?”<br/>
{{gap}}ಸೌದಾಮಿನಿ ನಾಯಕರ ತೊಡೆಯ ಮೇಲೆ ತನ್ನ ಅಂಗೈ ಇಟ್ಟಳು. ಒಲಿಸುವ ಓಲೈಸುವ ಧ್ವನಿಯಲ್ಲಿ ಅವಳೆಂದಳು :<br/>
{{gap}}“ರಾಷ್ಟ್ರಪಕ್ಷಕ್ಕೆ ವಾಪಸು ಬನ್ನಿ.”<br/>
{{gap}}“ಐದು ಜನ. ಆಮೇಲೆ ಅಪ್ಪಚ್ಚಿ ಮಾಡೋಣ ಅಂತಲೋ ?”<br/>
{{gap}}“ಅಷ್ಟು ಸಂದೇಹವಿದ್ದರೆ ರಾಷ್ಟ್ರಪಕ್ಷ-ಪ್ರಜಾಪಕ್ಷ ಸಂಯುಕ್ತರಂಗ ಮಾಡೋಣ.”<br/>
{{gap}}"ಏನು ಕೊಡ್ತೀಯಾ ?”<br/>
{{gap}}“ನನ್ನನ್ನೇ.”<br/>
{{gap}}“ಅದು ವೈಯಕ್ತಿಕ ವಿಷಯ. ಈಗ ಬೇಡ.”<br/>
{{gap}}“ಹೊಸ ಸರ್ಕಾರದ ರಚನೆ ಅಗತ್ಯ, ಅನಿವಾರ್ಯ, ಲಕ್ಷ್ಮೀಪತಿ ಅತ್ತ ಹೋದ<br/>ನಲ್ಲ. ಈಗ ನೀವೇ ಹಿರಿಯ ಮುತ್ಸುದ್ದಿ, ಸ್ಪೀಕರ್ ಆಗಿ.”<br/>
{{gap}}“ಸ್ಪೀಕರ್ ? ಅಲ್ಲಿ ಆಕಳಿಸ್ತಾ ಕೂತ್ಕಳ್ಳಾ ? ಮುಖ್ಯಮಂತ್ರಿ ಸ್ಥಾನ<br/>
ಬಿಟ್ಕೊಡ್ತೀಯಾ ಹೇಳು.”<br/>
{{gap}}“ಬೇರೆ ಏನಾದರೂ ಕೇಳಿ.”<br/>
{{gap}}“ಒಳ್ಳೇ ವರಮಹಾಲಕ್ಷ್ಮಿ ನೀನು.”<br/>
{{gap}}“ಅವಸರದ ತೀರ್ಮಾನ ಬೇಡ,ಇದು ನಿಮ್ಮ ರಾಜಕೀಯ ಭವಿಷ್ಯತ್ತಿನ<br/>
ಪ್ರಶ್ನೆ, ರಾತ್ರಿ ಚೆನ್ನಾಗಿ ಯೋಚಿಸಿ, ಬೆಳಗ್ಗೆ ಫೋನ್ ಮಾಡಿ.”<br/>
{{gap}}“ಹಾಗಾದರೆ ಈಗ ಹೊರತೋಗ್ತೀಯ ಅನ್ನು.”<br/>
{{gap}}“ವೈಯಕ್ತಿಕ ವಿಷಯ ಈಗ ಬೇಡ ಅಂದಿರಲ್ಲ ?”<br/>
{{gap}}“ಹೌದು, ಮಹಾತಾಯಿ. ನೀನು ದೊಡ್ಡವಳು, ಕರಗಿರೋ ಮಂಜು<br/>
ಬೆಟ್ಟದ ಮೇಲೆ ಕೂತಿದೀಯಾ ! ನಾನಿರೋದು ಐದು ದಿಂಡುಕಲ್ಲುಗಳ ಮೇಲೆ,”<br/>
{{gap}}“ಪ್ರಜಾಪಕ್ಷದ ಐವರ ಬೆಂಬಲ ಸೌದಾಮಿನಿ ಸಂಪುಟಕ್ಕೆ ಇದೆ ಅಂತ ರಾಜ್ಯ<br/>
ಪಾಲರಿಗೆ ಬರಕೊಡಿ, ಸಾಕು.”<br/>
{{gap}}“ನಿನ್ನ ವಿಷಯದಲ್ಲಿ ನನಗೆ ಕನಿಕರ, ಪುಟ್ಟವ್ವ.”<br/>
{{gap}}“ಸೌದಾಮಿನಿ ಮೇಲೆ ನಿಮಗೆ ಸಿಟ್ಟು, ಪುಟ್ಟನಿಗೋಸ್ಕರವಾದರೂ ಮೆತ್ತ<br/>
ಗಾಗಿ, ನಾಳೆ ಬೆಳಗ್ಗೆ ತಿಳಿಸಿ.”<br/><noinclude></noinclude>
j06379pzcfcwhvw3prq9rjzfhkmjktf
ಪುಟ:ಮಿಂಚು.pdf/೨೧೫
104
20662
320864
206809
2026-05-19T14:57:40Z
Shreelatha.Halemane
7642
320864
proofread-page
text/x-wiki
<noinclude><pagequality level="3" user="Abhivkmurthy" /></noinclude>ಮಿಂಚು 209
“ನಾನು ನಿವಾಸಕ್ಕೆ ಬಂದರೆ ಹಾರ ಹಾಕಿ ಸ್ವಾಗತಿಸ್ತೀಯಾ ?”
“ಸಭಾಪತಿಗೆ ಹಾರ ಹಾಕದೆ ಇರೀನಾ? ಈಗ ಅಪ್ಪಣೆ ಕೊಡಿ.”
“ಆಗಲಮ್ಮ, ಹಾರ್ನ್ ಒತ್ತು, ನಮ್ಮ ಮಾತಿಗೆ ಕೃತಿಗೆ ಅಡ್ಡಿಯಾಗೋದು
ಬೇಡ ಅಂತ ದೂರ ಹೊಡ್ತೀಗಿದಾರೆ !"
ನಾಯಕ್ ಇಳಿದರು, ಪರಶುರಾಮ ಮತ್ತು ಡ್ರೈವರ್ ಓಡಿ ಬಂದರು,
ಪರಶುರಾಮ ನಾಯಕರಿಗೆ ಗುಡ್ನನೈಟ್ ಹೇಳಿದ, ಅವನೂ ಎಣಿಸುತ್ತ ಇದ್ದ,
೭೫ ಮತ್ತು ೫=೮೦. ಇನ್ನು ಒಂದಾದರಾಯಿತು.
“ಪರಶು, ಆ ದಂಡಪಾಣೀನ ಕಾಣಬೇಕಲ್ಲಪ್ಪ....”
“ಸಮತಾ ಪಕ್ಷದ ಕಚೇರಿಲಿ ಕೇಳಿದರೆ ಹೇಳ್ತಾರೆ, ಕಚೇರಿ ಸನ್ನಿಧಿ ರಸ್ತೆಲಿದೆ.”
ಕಾರು ಅತ್ತ ಹೊರಟಿತು, ಅಲ್ಲಿ ಮರುದಿನದ ಮೆರವಣಿಗೇಲಿ ಭಾಗವಹಿಸ
ಬೇಕೊ ಬೇಡವೊ ಎಂದು ಚರ್ಚೆ ನಡೆದಿತ್ತು, ದಂಡಪಾಣಿಯೂ ಅಲ್ಲಿದ್ದ, ಕೆಳ
ಗಿಳಿದು ಬ೦ದ, ಮುಖ್ಯಮಂತ್ರಿಯ ಗುರುತು ಹಿಡಿದು, ಕಾರಿನ ಒಳ ಸೇರಿದ,
“ಸ್ವಲ್ಪ ಮುಂದೆ ಹೋಗಿ ಆ ತಿರುವಿನಲ್ಲಿ ನಿಲ್ಲಿಸಪ್ಪ."
ಕಾರು ತಿರುವಿನಲ್ಲಿ ನಿ೦ತಿತು.ಸೊದಮಿನಿ ಅ೦ದಳು:
“ನಿಮ್ಮ ಜೀವನದಲ್ಲಿ ಇದೊ೦ದು ತಿರುವು ದಂಡಪಾಣಿ:"
“ನಾಯಕ್ ಬೆಂಬಲಿಸಾರಾ ?”
“ಓಹೋ! ಇನ್ನೂ ಕೆಲವರು ಬರಾರೆ, ನೀವು ನನಗೆ ಬೆಂಬಲ ನೀಡ್ಬೇಕು.”
"ಇದು ರಾಜಕೀಯ ಪ್ರಶ್ನೆ. ಕೇಂದ್ರ ಸಮಿತಿಯನ್ನು ಕೇಳಬೇಕು”
“ಅದೆಲ್ಲಿದೆ ?”
“దిల్లియల్లి."
“ಫೋನ್ ಮಾಡಿದರಾಯಿತು. ನಿಮಗೆ ಎಷ್ಟು ದುಡುಬೇಕು, ಹೇಳಿ."
“ಫೋನ್ ಖಚಿಗಾ ?"
“ಗೇಲಿ ಮಾಡ್ರೀರಾ ? ಹಣ ಯಾವಾಗಲೂ ಪಕ್ಷಕ್ಕೆ."
“ಸ್ವಾನವೂ ಬೇಕು, ಹಣವೂ ಬೇಕು.'
"......."
“ಮಾತಾಜಿ. ನನಗೆ ಗೊತ್ತಿದೆ. ನಿಮಗೆ ಬಹುಮತ ಸಿಗೋದು ನನ್ನ ಏಕ
ಮತದ ಬೆ೦ಬಲದಿ೦ದಲೇ.”
“ಹಾಗೇ ತಿಳಕೊಳ್ಳಿ, ಡಿಮಾಂಡ್ಸ್ ಏನು ?”
“ಮುಖ್ಯಮಂತ್ರಿಯ ಸ್ವಾನ ಮತ್ತು ఒంದು ಕೋಟಿ,"
“ಮುಖ್ಯಮಂತ್ರಿಯಾದರೆ ಲಾಠಿ ಚಾರ್ಜು, ಅಶ್ರುವಾಯು, ಗುಂಡಿನೇಟು
ಇವೆಲ್ಲ ಪ್ರಯೋಗಿಸಬೇಕಾಗ್ರದೆ. ದುಡ್ಡೆ ಆದರೆ ?'
“ನನಗೆ ಗೊತ್ತಿಲ್ಲ. ನಾನು ಒಬ್ಬನೇ ಮಾತುಕತೆ ನಡೆಸಲಾರೆ.”
14<noinclude></noinclude>
9zs8s9v7h251m8o2jwjtz18eb2nqvhu
320882
320864
2026-05-19T17:09:18Z
Shreelatha.Halemane
7642
/* Validated */
320882
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=209}}
{{gap}}“ನಾನು ನಿವಾಸಕ್ಕೆ ಬಂದರೆ ಹಾರ ಹಾಕಿ ಸ್ವಾಗತಿಸ್ತೀಯಾ ?”
{{gap}}“ಸಭಾಪತಿಗೆ ಹಾರ ಹಾಕದೆ ಇರ್ತೀನಾ? ಈಗ ಅಪ್ಪಣೆ ಕೊಡಿ.”
{{gap}}“ಆಗಲಮ್ಮ, ಹಾರ್ನ್ ಒತ್ತು, ನಮ್ಮ ಮಾತಿಗೆ ಕೃತಿಗೆ ಅಡ್ಡಿಯಾಗೋದು
ಬೇಡ ಅಂತ ದೂರ ಹೊಗಿದಾರೆ !"
{{gap}}ನಾಯಕ್ ಇಳಿದರು, ಪರಶುರಾಮ ಮತ್ತು ಡ್ರೈವರ್ ಓಡಿ ಬಂದರು,
ಪರಶುರಾಮ ನಾಯಕರಿಗೆ ಗುಡ್ನನೈಟ್ ಹೇಳಿದ, ಅವನೂ ಎಣಿಸುತ್ತ ಇದ್ದ,
೭೫ ಮತ್ತು ೫=೮೦. ಇನ್ನು ಒಂದಾದರಾಯಿತು.
{{gap}}“ಪರಶು, ಆ ದಂಡಪಾಣೀನ ಕಾಣಬೇಕಲ್ಲಪ್ಪ....”
{{gap}}“ಸಮತಾ ಪಕ್ಷದ ಕಚೇರಿಲಿ ಕೇಳಿದರೆ ಹೇಳ್ತಾರೆ, ಕಚೇರಿ ಸನ್ನಿಧಿ ರಸ್ತೆಲಿದೆ.”
{{gap}}ಕಾರು ಅತ್ತ ಹೊರಟಿತು, ಅಲ್ಲಿ ಮರುದಿನದ ಮೆರವಣಿಗೇಲಿ ಭಾಗವಹಿಸ
ಬೇಕೊ ಬೇಡವೊ ಎಂದು ಚರ್ಚೆ ನಡೆದಿತ್ತು, ದಂಡಪಾಣಿಯೂ ಅಲ್ಲಿದ್ದ, ಕೆಳ
ಗಿಳಿದು ಬ೦ದ, ಮುಖ್ಯಮಂತ್ರಿಯ ಗುರುತು ಹಿಡಿದು, ಕಾರಿನ ಒಳ ಸೇರಿದ,
{{gap}}“ಸ್ವಲ್ಪ ಮುಂದೆ ಹೋಗಿ ಆ ತಿರುವಿನಲ್ಲಿ ನಿಲ್ಲಿಸಪ್ಪ."
{{gap}}ಕಾರು ತಿರುವಿನಲ್ಲಿ ನಿ೦ತಿತು.ಸೌದಾಮಿನಿ ಅ೦ದಳು:
{{gap}}“ನಿಮ್ಮ ಜೀವನದಲ್ಲಿ ಇದೊ೦ದು ತಿರುವು ದಂಡಪಾಣಿ:"
{{gap}}“ನಾಯಕ್ ಬೆಂಬಲಿಸಾರಾ ?”
{{gap}}“ಓಹೋ! ಇನ್ನೂ ಕೆಲವರು ಬರ್ತಾರೆ, ನೀವು ನನಗೆ ಬೆಂಬಲ ನೀಡ್ಬೇಕು.”
{{gap}}"ಇದು ರಾಜಕೀಯ ಪ್ರಶ್ನೆ. ಕೇಂದ್ರ ಸಮಿತಿಯನ್ನು ಕೇಳಬೇಕು”
{{gap}}“ಅದೆಲ್ಲಿದೆ ?”
{{gap}}“ದಿಲ್ಲಿಯಲ್ಲಿ."
{{gap}}“ಫೋನ್ ಮಾಡಿದರಾಯಿತು. ನಿಮಗೆ ಎಷ್ಟು ದುಡುಬೇಕು, ಹೇಳಿ."
{{gap}}“ಫೋನ್ ಖರ್ಚಿಗಾ ?"
{{gap}}“ಗೇಲಿ ಮಾಡ್ತೀರಾ ? ಹಣ ಯಾವಾಗಲೂ ಪಕ್ಷಕ್ಕೆ."
{{gap}}“ಸ್ಥಾನವೂ ಬೇಕು, ಹಣವೂ ಬೇಕು.'
{{gap}}"......."
{{gap}}“ಮಾತಾಜಿ. ನನಗೆ ಗೊತ್ತಿದೆ. ನಿಮಗೆ ಬಹುಮತ ಸಿಗೋದು ನನ್ನ ಏಕ
ಮತದ ಬೆ೦ಬಲದಿ೦ದಲೇ.”
{{gap}}“ಹಾಗೇ ತಿಳಕೊಳ್ಳಿ, ಡಿಮಾಂಡ್ಸ್ ಏನು ?”
{{gap}}“ಮುಖ್ಯಮಂತ್ರಿಯ ಸ್ಥಾನ ಮತ್ತು ఒంದು ಕೋಟಿ,"
{{gap}}“ಮುಖ್ಯಮಂತ್ರಿಯಾದರೆ ಲಾಠಿ ಚಾರ್ಜು, ಅಶ್ರುವಾಯು, ಗುಂಡಿನೇಟು
ಇವೆಲ್ಲ ಪ್ರಯೋಗಿಸಬೇಕಾಗ್ತದೆ. ದುಡ್ದೇ ಆದರೆ ?'
{{gap}}“ನನಗೆ ಗೊತ್ತಿಲ್ಲ. ನಾನು ಒಬ್ಬನೇ ಮಾತುಕತೆ ನಡೆಸಲಾರೆ.”
14<noinclude></noinclude>
1plfkbgusn0a9u9v5a5n5ijyuqodqse
ಪುಟ:ಮಿಂಚು.pdf/೨೨೦
104
20667
320810
320789
2026-05-19T12:17:20Z
Pragathi. BH
7585
320810
proofread-page
text/x-wiki
<noinclude><pagequality level="4" user="Pragathi. BH" />
.
{{rh|center=|left=214|right=ಮಿಂಚು}}</noinclude>
{{gap}}ಹೌದು. ಪ್ರತಿ ಪಕ್ಷದ ನಾಯಕ. ಫೋನಿನ ಬಳಿ ಸಾರಿದಳು<br />
{{gap}}“ಮಾತಾಜಿಗೆ ಪ್ರಣಾಮ, ಯೋಗಾಸನ ಆಯ್ತು ?"<br />
{{gap}}"ಏನು ತೀರ್ಮಾನಿಸಿದಿರಿ ?"<br />
{{gap}} “ಅವಸರದಲ್ಲಿದೀರೀಂತ ಕಾಣುತ್ತೆ, ಸಹಜ. ಪಾಪ ! ತೀರ್ಮಾನ ನಿನ್ನೇದೆ.
ನೀನು ಪಟ್ಟದಿಂದ ಇಳೀಬೇಕು. ಹೆಚ್ಚೆಂದರೆ ನಿನಗೊಂದು ಮಂತ್ರಿಸ್ಥಾನ ಕೊಟ್ಟೇನು,
ಸಮಾಜ ಕಲ್ಯಾಣ ಖಾತೆ. ಆದೀತಾ ?"{{gap}}
{{gap}}ಸೌದಾಮಿನಿ ರಿಸೀವರನ್ನು ಕುಕ್ಕಿದಳು. ಅವಳ ಮನಸ್ಸು ಕಲ್ಲಾಯಿತು. ಶಾಂತಿ
ಮಾತುಕತೆ ಯಾರೊಂದಿಗೂ ಇಲ್ಲ. ಇನ್ನು ಸಮರ, ಸಮರವೊಂದೇ !<br />
{{gap}}ಮುಖ್ಯ ಕಾರ್ಯದರ್ಶಿಯಿಂದ ಫೋನ್ ಬಂತು :<br />
{{gap}}"ರಾಜ್ಯಪಾಲರು ಇವತ್ತು ಸಂಜೆ ದಿಲ್ಲಿಗೊಂದು ವರದಿ ಕಳಿಸ್ತಾರಂತೆ."
{{gap}}"ಅವನಿಗಿನ್ನೇನು ಕೆಲಸ ? ದೂತ ಬೇಕಾದರೆ ವಿಶ್ವಂಭರ ಇದ್ದಾನೆ. ಅವನ
ಕೈಲಿ ಕೊಟ್ಟರಾಯಿತು;"<br />
{{gap}}"ಪರಿಸ್ಥಿತಿ ಬಿಗಡಾಯಿಸಿಲ್ಲ ಅಂತ ನನ್ನ ಅನಿಸಿಕೆ."<br />
{{gap}}"ನನಗೂ ಹಾಗೇ ತೋರುತ್ತೆ.ಒಂದು ಕೆಲಸವಾಗಬೇಕಲ್ಲ ಚೌಗುಲೆ ಸಾಹಿಬ್....
ಕಿಷ್ಕಿಂಧಾವಾಣಿ ವ್ಯಂಗ್ಯ ಚಿತ್ರ__"<br />
{{gap}}"ಸೊಗಸಾಗಿದೆ."<br />
{{gap}}"ಅದರೆ ಸಂಪುಟದ ನನ್ನ ಆರು ಜನ ಮಂತ್ರಿಗಳಿಗೆ ಹಾಗೆ ಅನಿಸಿಲ್ಲ. ಇದು
ಅವಮಾನ ಅಂತ ಕೂಗಾಡಿದ್ರು. ಆ ಮಾಲಿಕನಿಗೆ ಸ್ವಲ್ಪ ತಿಳಿಯ ಹೇಳಿ. 'ವ್ಯಂಗ್ಯ
ಚಿತ್ರದಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತ ಪಡಿಸುತ್ತೇವೆ' ಬೇಡ_
'ಕ್ಷಮೆ ಕೋರುತ್ತೇವೆ' ಅಂತ ನಾಳೆಯ ಸಂಚಿಕೇಲಿ ಅಚ್ಚು ಹಾಕಲಿ. ಇದು ಬಹಳ
ಅಗತ್ಯ. ಹಾಗಲ್ಲ. 'ನಿನ್ನೆಯ ವ್ಯಂಗ್ಯ ಚಿತ್ರ ಕೆಲಮಂತ್ರಿಗಳಿಗೆ ನೋವುಂಟು ಮಾಡಿದೆ
ಎಂದು ತಿಳಿದು ಬಂದಿದೆ. ವ್ಯಂಗ್ಯ ಚಿತ್ರದಲ್ಲಿ ತಮಾಷೆಗೇ ಮಹತ್ವ: ಅಷ್ಟರಲ್ಲೂ
ಮನಸ್ಸಿಗೆ ನೋವಾಗಿದ್ದರೆ ನಿಶ್ಯರ್ತ ಕ್ಷಮೆ ಕೋರುತ್ತೇವೆ' ಎಂದು ಹಾಕಿಸಿ, ನುಣುಚಿ
ಕೊಂಡು ಪಾರಾಗೋದಕ್ಕೆ ಬಿಡಬೇಡಿ. ಮಂಜೂರಾಗಿರುವ ನಿವೇಶನವನ್ನು ಬೇಗನೆ
ಬಿಡುಗಡೆ ಮಾಡ್ತೇವೆ ಅನ್ನಿ,"<br />
{{gap}}"ಅವರನ್ನು ಖಂಡಿತ ಒಪ್ಪಿಸ್ತೇನೆ."
{{gap}}ಮಾತಾಜಿ ಕಿಟಿಕಿಯ ಮೂಲಕ ಆಕಾಶ ನೋಡುತ್ತ ಯೋಚಿಸಿದಳು :<br />
{{gap}}ಮಾನವ ಶಕ್ತಿಗಿಂತ ಮಿಗಿಲಾದದ್ದು ದೈವೀ ಶಕ್ತಿ, ಅದು ತನ್ನ ಪಾಲಿಗೆ ಹೇರಳ
ವಾಗಿದೆ. ಹೀಗಿರುತ್ತ ಮಾನವಶಕ್ತಿಯ ಕೈ ಮೇಲಾದೀತೆ ? ಇಷ್ಟರಲ್ಲೂ ಹುಲು
ಮಾನವರನ್ನು ಜಯಿಸಬಲ್ಲ ಶಕ್ತಿ ಇಲ್ಲವೆ ? ಇದೆ. ಯಾವುದು ? ಧನಶಕ್ತಿ.<br />
{{gap}}ಭಾನುವಾರ ರಾಷ್ಟ್ರಪಕ್ಷದ ಶಾಸಕಾಂಗದ ಸಭೆ, ತಾನು ಅದರಲ್ಲಿ ಜಯಶೀಲೆ
ಯಾಗಲೇಬೇಕು. ಲಕ್ಷ್ಮೀಪತಿ_ವಿಶ್ವಂಭರರನ್ನು ಬಿಟ್ಟು, ಮಂತ್ರಿಗಳನ್ನೂ ಬಿಟ್ಟು,<noinclude></noinclude>
8k4b7dn1wyx1p61rxpky8ub00h8n5su
ಪುಟ:ಮಿಂಚು.pdf/೨೨೧
104
20668
320809
320790
2026-05-19T12:05:20Z
Pragathi. BH
7585
320809
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಮಿಂಚು|right=215}}</noinclude>
ತನ್ನ ಪಕ್ಷದ ಉಳಿದೆಲ್ಲ ಶಾಸಕರಿಗೆ, 'ಪ್ರಯಾಣ ವೆಚ್ಚ' ಎಂದು ಚೀಟಿ ಬರೆದು,
ಅದಕ್ಕೆ ಎರಡೆರಡು ಸಾವಿರ ಲಗ್ತೀಕರಿಸಿ ಲಕೋಟೆಗಳನ್ನು ನಸುಕಿನಲ್ಲೆ ತಲಪಿಸ
ಬೇಕು. ಚೀಟಿಯಲ್ಲಿ ತನ್ನ ಸಹಿ ? ಲಕೋಟಿ ವಿಶ್ವಂಭರನ ಶಿಬಿರದಿಂದ ಬಂದಿದೆ
ಎಂದು ಯಾರಾದರೂ ಭಾವಿಸಿದರೆ ? ಚೀಟಿಯಲ್ಲಿ ತನ್ನ ಸಹಿ ಇರುವುದೇ ಸರಿ.
ಪಕ್ಷದ ನಾಯಿಕೆಯಾಗಿ ತಾನು ಕೊಡುತ್ತಿರುವ ಪ್ರಯಾಣ ವೆಚ್ಚ. ಇದು ಲಂಚವಲ್ಲ.<br />
{{gap}}ಎಂದಿನಂತೆ ಸೌದಾಮಿನಿ ಕಾರ್ಯಸೌಧಕ್ಕೆ ಹೋದಳು. ಹತ್ತಿರದಲ್ಲೆ ಇತ್ತು
ರಾಜಭವನ ರಸ್ತೆ. ಅತ್ತ ಬರುವ ಅವಕಾಶ ಯಾವುದಾದರೂ ಮೆರವಣಿಗೆಗೆ ಎಂದಾ
ದರೂ ಸಿಕ್ಕಿದರೆ,ಕಾರ್ಯಸೌಧದಿಂದ ಅದರ ವೀಕ್ಷಣೆ ಸಾಧ್ಯವಿತ್ತು. ಮೂಖ್ಯಮಂತ್ರಿಯ
ಚೇಂಬರ್ ಇರುವ ಮೊದಲ ಮಹಡಿಯಿಂದಂತೂ ಮೆರವಣಿಗೆಯ ಎಲ್ಲ ವಿವರಗಳೂ
-ಕೋಡು, ನಡು, ಬಾಲ ಎಲ್ಲ_ಕಾಣಿಸುತ್ತಿದ್ದುವು, ದುರ್ಬೀನಿನ ನೆರವು ಇಲ್ಲದೆಯೇ.<br />
ಐ.ಜಿ.ಪಿ. ವಿಶ್ವಂಭರನೊಡನೆಯೂ ಚರ್ಚಿಸಿದ್ದ.<br />
{{gap}}"ನಿಮ್ಮಿಂದ ಸ್ವಲ್ಪ ಸಹಾಯವಾಗಬೇಕಲ್ಲ ಐ.ಜಿ.ಪಿಯವರೆ...."<br />
{{gap}}"ಪೋಲೀಸ್ ಬ್ಯಾಂಡ್ ಒಂದನ್ನು ಬಿಟ್ಟು ಬೇರೆ ಏನು ಬೇಕಾದರೂ ಕೇಳಿ,"<br />
{{gap}}"ಹಹ್ಹ ! ನಮ್ಮದು ಸೆಂಟ್ ಪರ್ಸೆಂಟ್ ಅಹಿಂಸಾತ್ಮಕ. ನಿಮ್ಮವರು
ಮುಂದೆಯೂ ಹಿಂದೆಯೂ ಲೆಫ಼್ಟ್ ರೈಟ್ ನಡೆದರೆ ಸಾಕು,"
{{gap}}"ಬಾವುಟ ಯಾವುದು ?"<br />
{{gap}}"ರಾಷ್ಟ್ರಧ್ವಜ."<br />
{{gap}}"ಸ್ಲೋಗನ್ಸ್ ?"<br />
{{gap}}"ರಾಷ್ಟ್ರಪಕ್ಷ ಜಿಂದಾಬಾದ್."<br />
{{gap}}"ಆಮೇಲೆ .."<br />
{{gap}}"ಸೌದಾಮಿನಿ ಸರಕಾರ ಮುರ್ದಾಬಾದ್."<br />
{{gap}}ಐ.ಜಿ.ಪಿ. ಎರಡು ನಿಮಿಷ ಮೌನವಾಗಿದ್ದು, "ಅದೊಂದನ್ನು ಬಿಟ್ಟರಾಗದೆ?"
ಎಂದು ಕೇಳಿದ.<br />
{{gap}}"ಅದು ಹೇಗೆ ಸಾಧ್ಯ ? ಜೀವಾಂಶವೇ ಆ ಸ್ಲೋಗನ್."
{{gap}}"ಏನೋಪ್ಪ...."<br />
"ಏನೂ ಚಿಂತಿಸ್ಬೇಡಿ. ನಿಮ್ಮ ವರದಿ ಸರಕಾರಕ್ಕೆ ತಲಪೋ ಹೊತ್ತಿಗೆ....
ಇನ್ನೆರಡು ಮೂರು ದಿವಸ..ಹೊಸ ಗೃಹಮಂತ್ರಿ ಅಧಿಕಾರ ವಹಿಸ್ಕೊಂಡಿರ್ತಾರೆ."<br />
"ನಿಮ್ಮಿಚ್ಛೆ. ಕಾರ್ಯಸೌಧದ ಮುಂದೆ ಶಾಂತವಾಗಿ ಹೋಗ್ಬೇಕು' ಸಿ.ಎಂ.ನ
ಚೇಂಬರ್ ಕಡೆ ನೋಡಿ ಕೂಗಾಡ್ಬಾರದು."<br />
{{gap}}"ನೀವು ಕಿಷ್ಕಿಂಧೆಯ ಗಾಂಧೀ_ಐ ಜಿ ಪಿ."
{{gap}}"ಗೃಹಮಂತ್ರಿಯಾದ್ಮೇಲೆ ಏನು ಹೇಳ್ತೀರೋ ಪರಮಾತ್ಮನಿಗೇ ಗೊತ್ತು !"<br />
.....ಘೋಷ ದೂರದಿಂದ ಕೇಳಿಸಿತು, ಹತ್ತಿರ ಬಂತು. ಸೌದಾಮಿನಿ<noinclude></noinclude>
oqp17wylhgiefxp8iunrgte1vkym8ci
ಪುಟ:ಮಿಂಚು.pdf/೨೨೩
104
20670
320811
320795
2026-05-19T12:21:19Z
Pragathi. BH
7585
320811
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಮಿಂಚು|right=217}}</noinclude>
ಬಿರಿಯುತ್ತಿದ್ದ ಸೊಪ್ಪಿಗೆ ಅವನೊಂದು ಏಟುಕೊಟ್ಟ, ಅತ್ತ ಕಡೆ ಎಲೆ ಆರಿಸುತ್ತ
ಲಿದ್ದ ಒಂದು ಆಡು 'ಮೆಹೆ ಮೆಹೆ' ಎನ್ನುತ್ತ ಓಡಿಹೋಯಿತು. ಮೆರವಣಿಗೆಯ
ಕಾರಣದಿಂದ ಡೊಂಕು ದಾರಿ ಹಿಡಿದಿದ್ದ ಸಿಟಿ ಬಸ್ಸುಗಳು ಮತ್ತೆ ಆ ಮಾರ್ಗದಲ್ಲೇ
ಓಡಾಡತೊಡಗಿದುವು.<br />
{{gap}}....ಅವತ್ತಿನ ಅಂಚೆಯಲ್ಲಿ 'ಖಾಸಗಿ' ಎಂದು ಮೇಲೆ ಬರೆದಿದ್ದ ಒಂದು
ಲಕೋಟೆ ಬಂತು.ಪರಶುರಾಮನಿಂದ ಅದನ್ನು ಪಡೆದು ಸ್ವತಃ ಸೌದಾಮಿನಿಯೇ
ಒಡೆದಳು. 'ಭಾರತ್ ಸತ್ತಾ' ದೈನಿಕದ ಮತ್ತು 'ಪ್ರೆಸೆಂಟ್' ಸಾಪ್ತಾಹಿಕದ ಪುಟ
ಗಳು. ಮೃದುಲಾಬೆನ್ ಮತ್ತು ಅವಳ ತಂಡ ಕಿಷ್ಟಿಂಧೆಗೆ ನೀಡಿದ ಭೇಟಿಯನ್ನು
ಕುರಿತು ಹಿಂದಿಯಲ್ಲಾ ಇಂಗ್ಲಿಷಿನಲ್ಲೂ ಲೇಖನಗಳಿದ್ದುವು.ಸಚಿತ್ರ,ಸೌದಾಮಿನಿಯ
ದೊಡ್ಡದಾದ ಒಂಟಿ ಚಿತ್ರವೂ ಇತ್ತು ಎರಡೂ ಲೇಖನಗಳಲ್ಲಿ, ಕಾಗದದಲ್ಲಿ
ಮೃದುಲಾಬೆನ್ ಬರೆದಿದ್ದಳು :<br />
{{gap}}ಪ್ರೀತಿಯ ಸೌದಾ,
{{gap}}ಮುಂಬಯಿ ತಲಪಿದೊಡನೆ ಕಿಷ್ಕಿಂಧೆಯ ಮುಖ್ಯಮಂತ್ರಿಗೆ ನಾನು
ಬರೆದ ಔಪಚಾರಿಕ ಪತ್ರ ಆಗಲೇ ಕೈಸೇರಿರಬಹುದು. (ಸೇರಿತು) ಇದನ್ನು
బರೆಯುತ್ತಿರುವುದು ನನ್ನ ಆದರಣೀಯ ಗೆಳತಿ ಸೌದಾಗೆ, ಇನ್ನೊಂದು
ಹೆಸರಿನಿಂದಲೇ ಸಂಬೋಧಿಸಬಹುದಾಗಿತ್ತು, ಆದರೆ ಈಗಿನ ಪರಿಸ್ಥಿತಿಯಲ್ಲಿ
ಅದು ಸರಿಯಲ್ಲ (ಸೌದಾ : ಸ್ವಗತ—'ಈಗಿನ ಪರಿಸ್ಥಿತಿಯಲ್ಲಿ ಅದೇ ಸರಿ!')
ಎಷ್ಟೆ೦ದರೂ ನೀವು ಮುಖ್ಯಮಂತ್ರಿ, ನಾನು ಸಮಾಜ ಸೇವಿಕೆ. ನಿಮ್ಮದು
ಐಂದ್ರಜಾಲಿಕ ಸಾಧನೆ.ನನ್ನಿಂದ ಅಂಥದು ಕನಸಿನಲ್ಲಲೊ ಸಾಧ್ಯವಿಲ್ಲ.<br />
ಈಗ ಇಲ್ಲಿ ಜಡಿಮಳೆ, ಮುಂಬಯಿ ಮಳೆ ನಿಮಗೆ ನೆನಪಿದ್ದೀತು.
ಬಾಲ್ಕನಿಗೆ ಹೋಗೋಣ ಎಂದರೆ ಇರಿಚಲು ಕಾಟ. ಆದರೂ ಹುಟ್ಟೂರಿನ
ಮಳೆ ಇಷ್ಟವಾದ್ದೇ ಅಲ್ಲವೆ ? <br />
{{gap}}ವಿನೋದನಿಗೆ ಕಿಷ್ಟಿಂಧಾ ಯಾತ್ರೆಗೆ ಆಮಂತ್ರಣ ಬೇಕಂತೆ, ಸರಕಾರದ
ಅತಿಥಿಯಾಗಿ ಇಡೀ ರಾಜ್ಯ ಸುತ್ತಿ ಕಿಷ್ಕಿಂಧೆಯ ಮೇಲೆ ಒಂದು ಪುಸ್ತಕ
ಬರೀತಾನಂತೆ. ಅವನ ಗೆಳೆಯನೊಬ್ಬ ವಿಶ್ವವಿಖ್ಯಾತ ಪೇಂಟರ್__
ಪೋರ್ಟ್ರೇಯ್ಟ್ ಪೇಂಟರ್__, ನೀವು ಪರಸೊತ್ತು ಮಾಡಿಕೊಂಡು ಅವನಿಗೆ
ಸಿಟಿಂಗ್ಸ್ ಕೊಡಬೇಕಂತೆ__ಇನ್ನೊಬ್ಬ ಶಿಲ್ಪಿ ಅವನೂ ಮಿತ್ರನೇ, ಎದೆ
ಮಟ್ಟದ ಶಿಲ್ಪಕೃತಿ ರಚಿಸಿದರೆ ಹೇಗೆ-ಅಂತ ವಿನೋದ ಕೇಳ್ತೀದ್ದಾನೆ. ಈ
ಎಲ್ಲ ಕಾರ್ಯಕ್ರಮದಿಂದ ನಿಮ್ಮ ಬೊಕ್ಕಸ ಖಂಡಿತ ದಿವಾಳಿಯಾಗುವುದಿಲ್ಲ
ವಂತೆ,<br />
{{gap}}ಈ ಲೇಖನಗಳನ್ನು ಬಹಳ ಹಿಂದೆಯೇ ಕಳಿಸಬೇಕಾಗಿತ್ತು, ಕ್ಷಮಿಸಿ,<noinclude></noinclude>
ov8cxiqfr59fni9phg377az1406up8k
ಪುಟ:ಮಿಂಚು.pdf/೨೨೪
104
20671
320812
206818
2026-05-19T12:21:51Z
Pragathi. BH
7585
/* Validated */
320812
proofread-page
text/x-wiki
<noinclude><pagequality level="4" user="Pragathi. BH" /></noinclude>218 ಮಿಂಚು
ವಿನೋದನೇ ಕಳಿಸ್ತಾನೆ ಅಂತ ನಾನು ಸುಮ್ಮನಿದ್ದೆ , ನಾನು ಕಳಿಸ್ತೆನೆ ಅಂತ
ಅವನು ಸುಮ್ಮನಿದ್ದ, ಕರುಣಾ ಊರಲ್ಲಿಲ್ಲ, ಎರಡು ವಾರಗಳ ಮಟ್ಟಿಗೆ
ಅలಹಾಬಾದಿಗೆ ಹೋಗಿದ್ದಾಳೆ.
ಮು೦ದಿನ ತಿoಗಳು ನಮ್ಮ ತಂಡ ಲಕ್ನೋಗೆ ಹೋಗುತ್ತದೆ. ನಿಮ್ಮ
ಶುಭಾಶಯ ನಮಗೆ ಶ್ರೀರಕ್ಷೆ,
ಮೃದುಲಾಬೆನ್ (ದೀದಿ)
ಅಧ್ಯಕ್ಷೆ
ಭಾರತಿ ಅನಾಥಾಶ್ರಮ ಪ್ರತಿಷ್ಠಾನ
ಕಾಗದ ಓದಿ ಮುಗಿಸುತ್ತಿದ್ದಂತೆ ಸೌದಾಮಿನಿಯ ಕಣ್ಣಗಳಿಂದ ಎರಡು ಹನಿ ಕಣ್ಣೀರು ತೊಟ್ಟಿಕ್ಕಿತು. (ಎಲ್ಲ ಅನಾಥ ಮಕ್ಕಳಿಗೆ ಒಳ್ಳೆಯದಾಗಲಿ, ಈ ರಾಜ್ಯದ,
ಈ ರಾಷ್ಟ್ರದ, ಈ ಜಗತ್ತಿನ ಎಲ್ಲಾ ಅನಾಥ ಮಕ್ಕಳಿಗೆ ಒಳ್ಳೆಯದಾಗಲಿ ಪತ್ರವನ್ನು ಮಡಚಿ ಕಟಿಂಗ್ಸ್ ಸಹಿತ ಅವು ಬಂದಿದ್ದ ಲಕೋಟೆಯೊಳಕ್ಕೆ ತುರುಕಿ,ಅದನ್ನು ಪಕ್ಕ ದಲ್ಲಿರಿಸಿದಳು.
ಮೂಲೆಯಲ್ಲಿ ಫೋನ್ ಸದ್ದು ಮಾಡಿತು. ಪರಶುರಾಮ ರಿಸೀವರನ್ನೆತ್ತಿ, ಮಾತನಾಡಿ, ಮುಖ್ಯಮಂತ್ರಿಯ ಬಳಿ ಬಂದ.
“ಚೀಫ್ ಸೆಕ್ರೆಟರಿ ನೋಡಲು ಬರಬಹುದೆ ? ಅಂತ ಕೇಳ್ತೀದ್ದಾರೆ."
ಬೇಡ-ಎನ್ನಲೆ. ಎನಿಸಿತು ಒಮ್ಮೆ ಬರಲಿ, ಆತನಿಗೆ ಹೇಗೆ ಅನಿಸುತ್ತೆ ಅಂತ
ಕೇಳೋಣ ಎನಿಸಿತು ಮರುಕ್ಷಣ.
“ಬರಲಿ..."
....ಒಳಗೆ ಬಂದ ಚೌಗುಲೆ ನಮಸ್ಕರಿಸಿ ಕುಳಿತ.
“ಚೆನಾಗಿದ್ದೀರಾ ಶಿವಭಾವು ಸಾಹಿಬ್ ?"
“ಚೆನಾಗಿದ್ದೇನೆ, ಮಾತಾಜಿ..ನಿಗಮಗಳ ಖಾಲಿ ಹುದ್ದೆಗಳ ಬಗ್ಗೆ ತಾವೇನೂ
ಹೇಳಲಿಲ್ಲ."
“ಶಾಸಕಾಂಗ ಪಕ್ಷದ ಸಭೆ ಕಳೀಲಿ-ಆಮೇಲೆ ಸಂಪುಟವನ್ನು ಪುನರ್ರಚಿಸ್ತೇನೆ.
ಆಗೆ ಖಾಲಿ ಹುದ್ದೆಗಳ ಇತ್ಯರ್ಥವನ್ನೂ ಮಾಡೋಣ."
“ನನ್ನಿಂದ ಆಗಬೇಕಾದ ಕೆಲಸವೇನಾದರೂ ಇದ್ದರೆ ಹೇಳಿ.”
“ನಮ್ಮ ಗುಪ್ತಚಾರದಳದ ಮುಖ್ಯಸ್ಥ ನಾಪತ್ತೆ. ಹುಡುಕಿ ಹಿಡಿದು ಸ್ವಲ್ಪ ಕಳಿಸ್ಕೊಡಿ."
“ಹೂಂ.(ಏಳುತ್ತ) ನಿಮ್ಮ ಮನೋಸ್ಥೈರ್ಯಕ್ಕೆ ಯಾರಾದರೂ ತಲೆಬಾಗಲೇ ಬೇಕು,”
“ಥಾಂಕ್ಸ್, ಗೃಹ ಕಾರ್ಯಾಲಯಕ್ಕೆ ಹೋಗ್ತೀನಿ. ಆತ ಅಲ್ಲಿಗೇ ಬರಲಿ.”
"ಆಗಲಿ,"
* * *<noinclude></noinclude>
7ct4acbcxp67d9aqm8porfrfjs1m7u0
320815
320812
2026-05-19T12:29:58Z
Pragathi. BH
7585
320815
proofread-page
text/x-wiki
<noinclude><pagequality level="4" user="Pragathi. BH" />{{rh|center=|left=218|right=ಮಿಂಚು}}</noinclude>
{{gap}}ವಿನೋದನೇ ಕಳಿಸ್ತಾನೆ ಅಂತ ನಾನು ಸುಮ್ಮನಿದ್ದೆ , ನಾನು ಕಳಿಸ್ತೆನೆ ಅಂತ
ಅವನು ಸುಮ್ಮನಿದ್ದ, ಕರುಣಾ ಊರಲ್ಲಿಲ್ಲ, ಎರಡು ವಾರಗಳ ಮಟ್ಟಿಗೆ
ಅలಹಾಬಾದಿಗೆ ಹೋಗಿದ್ದಾಳೆ.<br />
ಮು೦ದಿನ ತಿoಗಳು ನಮ್ಮ ತಂಡ ಲಕ್ನೋಗೆ ಹೋಗುತ್ತದೆ. ನಿಮ್ಮ
ಶುಭಾಶಯ ನಮಗೆ ಶ್ರೀರಕ್ಷೆ,<br />
{{Right|ಮೃದುಲಾಬೆನ್ (ದೀದಿ)}}
{{Right|ಅಧ್ಯಕ್ಷೆ }}
{{Right|ಭಾರತಿ ಅನಾಥಾಶ್ರಮ ಪ್ರತಿಷ್ಠಾನ }}<br />
{{gap}}ಕಾಗದ ಓದಿ ಮುಗಿಸುತ್ತಿದ್ದಂತೆ ಸೌದಾಮಿನಿಯ ಕಣ್ಣಗಳಿಂದ ಎರಡು ಹನಿ ಕಣ್ಣೀರು ತೊಟ್ಟಿಕ್ಕಿತು. (ಎಲ್ಲ ಅನಾಥ ಮಕ್ಕಳಿಗೆ ಒಳ್ಳೆಯದಾಗಲಿ, ಈ ರಾಜ್ಯದ,
ಈ ರಾಷ್ಟ್ರದ, ಈ ಜಗತ್ತಿನ ಎಲ್ಲಾ ಅನಾಥ ಮಕ್ಕಳಿಗೆ ಒಳ್ಳೆಯದಾಗಲಿ ಪತ್ರವನ್ನು ಮಡಚಿ ಕಟಿಂಗ್ಸ್ ಸಹಿತ ಅವು ಬಂದಿದ್ದ ಲಕೋಟೆಯೊಳಕ್ಕೆ ತುರುಕಿ,ಅದನ್ನು ಪಕ್ಕ ದಲ್ಲಿರಿಸಿದಳು.<br />
{{gap}}ಮೂಲೆಯಲ್ಲಿ ಫೋನ್ ಸದ್ದು ಮಾಡಿತು. ಪರಶುರಾಮ ರಿಸೀವರನ್ನೆತ್ತಿ, ಮಾತನಾಡಿ, ಮುಖ್ಯಮಂತ್ರಿಯ ಬಳಿ ಬಂದ.<br />
{{gap}}“ಚೀಫ್ ಸೆಕ್ರೆಟರಿ ನೋಡಲು ಬರಬಹುದೆ ? ಅಂತ ಕೇಳ್ತೀದ್ದಾರೆ."
{{gap}}ಬೇಡ-ಎನ್ನಲೆ. ಎನಿಸಿತು ಒಮ್ಮೆ ಬರಲಿ, ಆತನಿಗೆ ಹೇಗೆ ಅನಿಸುತ್ತೆ ಅಂತ
ಕೇಳೋಣ ಎನಿಸಿತು ಮರುಕ್ಷಣ.<br />
{{gap}}“ಬರಲಿ..."
{{gap}}....ಒಳಗೆ ಬಂದ ಚೌಗುಲೆ ನಮಸ್ಕರಿಸಿ ಕುಳಿತ.
{{gap}}“ಚೆನಾಗಿದ್ದೀರಾ ಶಿವಭಾವು ಸಾಹಿಬ್ ?"
{{gap}}“ಚೆನಾಗಿದ್ದೇನೆ, ಮಾತಾಜಿ..ನಿಗಮಗಳ ಖಾಲಿ ಹುದ್ದೆಗಳ ಬಗ್ಗೆ ತಾವೇನೂ
ಹೇಳಲಿಲ್ಲ." <br />
{{gap}}“ಶಾಸಕಾಂಗ ಪಕ್ಷದ ಸಭೆ ಕಳೀಲಿ-ಆಮೇಲೆ ಸಂಪುಟವನ್ನು ಪುನರ್ರಚಿಸ್ತೇನೆ.
ಆಗೆ ಖಾಲಿ ಹುದ್ದೆಗಳ ಇತ್ಯರ್ಥವನ್ನೂ ಮಾಡೋಣ."<br />
{{gap}}“ನನ್ನಿಂದ ಆಗಬೇಕಾದ ಕೆಲಸವೇನಾದರೂ ಇದ್ದರೆ ಹೇಳಿ.”<br />
{{gap}}“ನಮ್ಮ ಗುಪ್ತಚಾರದಳದ ಮುಖ್ಯಸ್ಥ ನಾಪತ್ತೆ. ಹುಡುಕಿ ಹಿಡಿದು ಸ್ವಲ್ಪ ಕಳಿಸ್ಕೊಡಿ."[[Category:]]
{{gap}}“ಹೂಂ.(ಏಳುತ್ತ) ನಿಮ್ಮ ಮನೋಸ್ಥೈರ್ಯಕ್ಕೆ ಯಾರಾದರೂ ತಲೆಬಾಗಲೇ ಬೇಕು,”
{{gap}}“ಥಾಂಕ್ಸ್, ಗೃಹ ಕಾರ್ಯಾಲಯಕ್ಕೆ ಹೋಗ್ತೀನಿ. ಆತ ಅಲ್ಲಿಗೇ ಬರಲಿ.”<br />
{{gap}}"ಆಗಲಿ,"
* * *<noinclude></noinclude>
423ujig5iw2eyibkpdmw0gduz3aczz7
320816
320815
2026-05-19T12:30:37Z
Pragathi. BH
7585
320816
proofread-page
text/x-wiki
<noinclude><pagequality level="4" user="Pragathi. BH" />{{rh|center=|left=218|right=ಮಿಂಚು}}</noinclude>
{{gap}}ವಿನೋದನೇ ಕಳಿಸ್ತಾನೆ ಅಂತ ನಾನು ಸುಮ್ಮನಿದ್ದೆ , ನಾನು ಕಳಿಸ್ತೆನೆ ಅಂತ
ಅವನು ಸುಮ್ಮನಿದ್ದ, ಕರುಣಾ ಊರಲ್ಲಿಲ್ಲ, ಎರಡು ವಾರಗಳ ಮಟ್ಟಿಗೆ
ಅలಹಾಬಾದಿಗೆ ಹೋಗಿದ್ದಾಳೆ.<br />
ಮು೦ದಿನ ತಿoಗಳು ನಮ್ಮ ತಂಡ ಲಕ್ನೋಗೆ ಹೋಗುತ್ತದೆ. ನಿಮ್ಮ
ಶುಭಾಶಯ ನಮಗೆ ಶ್ರೀರಕ್ಷೆ,<br />
{{Right|ಮೃದುಲಾಬೆನ್ (ದೀದಿ)}}
{{Right|ಅಧ್ಯಕ್ಷೆ }}
{{Right|ಭಾರತಿ ಅನಾಥಾಶ್ರಮ ಪ್ರತಿಷ್ಠಾನ }}<br />
{{gap}}ಕಾಗದ ಓದಿ ಮುಗಿಸುತ್ತಿದ್ದಂತೆ ಸೌದಾಮಿನಿಯ ಕಣ್ಣಗಳಿಂದ ಎರಡು ಹನಿ ಕಣ್ಣೀರು ತೊಟ್ಟಿಕ್ಕಿತು. (ಎಲ್ಲ ಅನಾಥ ಮಕ್ಕಳಿಗೆ ಒಳ್ಳೆಯದಾಗಲಿ, ಈ ರಾಜ್ಯದ,
ಈ ರಾಷ್ಟ್ರದ, ಈ ಜಗತ್ತಿನ ಎಲ್ಲಾ ಅನಾಥ ಮಕ್ಕಳಿಗೆ ಒಳ್ಳೆಯದಾಗಲಿ ಪತ್ರವನ್ನು ಮಡಚಿ ಕಟಿಂಗ್ಸ್ ಸಹಿತ ಅವು ಬಂದಿದ್ದ ಲಕೋಟೆಯೊಳಕ್ಕೆ ತುರುಕಿ,ಅದನ್ನು ಪಕ್ಕ ದಲ್ಲಿರಿಸಿದಳು.<br />
{{gap}}ಮೂಲೆಯಲ್ಲಿ ಫೋನ್ ಸದ್ದು ಮಾಡಿತು. ಪರಶುರಾಮ ರಿಸೀವರನ್ನೆತ್ತಿ, ಮಾತನಾಡಿ, ಮುಖ್ಯಮಂತ್ರಿಯ ಬಳಿ ಬಂದ.<br />
{{gap}}“ಚೀಫ್ ಸೆಕ್ರೆಟರಿ ನೋಡಲು ಬರಬಹುದೆ ? ಅಂತ ಕೇಳ್ತೀದ್ದಾರೆ."
{{gap}}ಬೇಡ-ಎನ್ನಲೆ. ಎನಿಸಿತು ಒಮ್ಮೆ ಬರಲಿ, ಆತನಿಗೆ ಹೇಗೆ ಅನಿಸುತ್ತೆ ಅಂತ
ಕೇಳೋಣ ಎನಿಸಿತು ಮರುಕ್ಷಣ.<br />
{{gap}}“ಬರಲಿ..."
{{gap}}....ಒಳಗೆ ಬಂದ ಚೌಗುಲೆ ನಮಸ್ಕರಿಸಿ ಕುಳಿತ.
{{gap}}“ಚೆನಾಗಿದ್ದೀರಾ ಶಿವಭಾವು ಸಾಹಿಬ್ ?"
{{gap}}“ಚೆನಾಗಿದ್ದೇನೆ, ಮಾತಾಜಿ..ನಿಗಮಗಳ ಖಾಲಿ ಹುದ್ದೆಗಳ ಬಗ್ಗೆ ತಾವೇನೂ
ಹೇಳಲಿಲ್ಲ." <br />
{{gap}}“ಶಾಸಕಾಂಗ ಪಕ್ಷದ ಸಭೆ ಕಳೀಲಿ-ಆಮೇಲೆ ಸಂಪುಟವನ್ನು ಪುನರ್ರಚಿಸ್ತೇನೆ.
ಆಗೆ ಖಾಲಿ ಹುದ್ದೆಗಳ ಇತ್ಯರ್ಥವನ್ನೂ ಮಾಡೋಣ."<br />
{{gap}}“ನನ್ನಿಂದ ಆಗಬೇಕಾದ ಕೆಲಸವೇನಾದರೂ ಇದ್ದರೆ ಹೇಳಿ.”<br />
{{gap}}“ನಮ್ಮ ಗುಪ್ತಚಾರದಳದ ಮುಖ್ಯಸ್ಥ ನಾಪತ್ತೆ. ಹುಡುಕಿ ಹಿಡಿದು ಸ್ವಲ್ಪ ಕಳಿಸ್ಕೊಡಿ."[[Category:]]
{{gap}}“ಹೂಂ.(ಏಳುತ್ತ) ನಿಮ್ಮ ಮನೋಸ್ಥೈರ್ಯಕ್ಕೆ ಯಾರಾದರೂ ತಲೆಬಾಗಲೇ ಬೇಕು,”
{{gap}}“ಥಾಂಕ್ಸ್, ಗೃಹ ಕಾರ್ಯಾಲಯಕ್ಕೆ ಹೋಗ್ತೀನಿ. ಆತ ಅಲ್ಲಿಗೇ ಬರಲಿ.”<br />
{{gap}}"ಆಗಲಿ,"
{{center| * * * *}}<noinclude></noinclude>
ogorm1kwvv32r565mzbvkj3t7kb9zw3
ಪುಟ:ಮಿಂಚು.pdf/೨೨೫
104
20672
320813
206819
2026-05-19T12:22:02Z
Pragathi. BH
7585
/* Validated */
320813
proofread-page
text/x-wiki
<noinclude><pagequality level="4" user="Pragathi. BH" /></noinclude>ಮಿಂಚು 219 లV83 చాూడిదా చేులల, నిధి సుచేుదోు చేులు-ఒందిఙుلتع ನೆಮ್ಮದಿ సిriబయేుదాiు ఎనిసి, సౌదాచిుని ಅಡ್ಯಾಗಲು ಸಿದ್ಧ ವಾದಳು.
“అధికారిగళు యూరాదారణ బండారి, నాన్సా విళువా చారిగే శాదిర్షి." ಎ೦ದಳು ಹೊರಗಿದ್ದ ಸೇವಕನಿಗೆ.
“ಪರಶುರಾಮ, ಮನೆಗೆ ಹೋಗಪ್ಪ, ಹೆಂಡತೀನ ಬಹಳ ಕಾಯಿಸ್ಕಾರು .”
ಆಪ್ತ ಕಾರ್ಯದರ್ಶಿಗೆ ಅಳು ಬಂತು, ಎಲಾ! ನನ್ನ ಅವಸ್ಥೆಗಾಗಿ ಇವನ ಕಣ್ಣೀರೆ ? ఎందాiు సౌదామినిగే ಆಶ್ಚ ರ್ಯವಾಯಿತು.
" ( پیلارام »،
“ಹೆಂಡತಿ ಅಲ್ಲ,-ಹೆಂಡಿರು ಮಾತಾಜಿ, ಮೊದಲಿನವಳೂ ಬೆಳಗಿನ ಜಾವ బందిట."
1 పాలపాం ఓుది శ్రాల జిటుعن ಅವರಪ್ಪ ಕಳಿಸಿದ್ರೆ ぐさUQ ?”
“ದಾಸಿ ಪಾತ್ರದಲ್ಲಾದರೂ ಸರಿ, ಇಲ್ಲಿಯೇ ಇರಾಳಂತೆ." -
“ಎಲ್ಲರೂ ನಾಟಕ ಪಾತ್ರಧಾರಿಗಳೇ...! ಒಬ್ಬಳಿದ್ದ ರೂ అబ్చే, ಇಬ್ಬರಿದ್ದ ರೂ ಅಷ್ಟೆ, ವಿಶಾಂತಿ ಸುಖ ನಿನ್ನ ಹಣೇಲಿ ಬರೆದಿಲ್ಲ, ಹೋಗು, ಪ್ರೇಮ ಸಲಾಪ ಮಾಡೊಂಡು ಕೂತಿರು.. ಕತ್ತಲಾದ್ಯೆಲೆ ಮಠಕ್ಕೆ ಹೋಗಿ ಬಡ್ಬೇಕು.”
*యోణం వాూతాజి."
ಗೃಹ ಕಾರಾಲಯಕ್ಕೆ ಹೋದ ಮೇಲೆ ಎಷ್ಟು ಹೊತ್ತಾಗುತ್ತದೊ ಏನೊ
نبة ಎಂದು, ಗುಪ್ತಚಾರ ದಳದ ಮುಖ್ಯಸ್ಥ ತನ್ನ ಊಟ ಮುಗಿಸಿ ನಿಧಾನವಾಗಿ ಬಂದ.
ಅಲ್ಲಿ ನೆಲೆಸಿದ್ದ ಮೌನ ಕಂಡು, ಮುಖ್ಯಮಂತ್ರಿ ನಿದ್ವಾಂಗನೆಯ ವಶದಲ್ಲಿದ್ದರೂ ಇರಬಹುದು-ಎನಿಸಿತು. ಫೋನ್ ಸಪ್ಪಳ ಮಾಡುತ್ತಿರಲಿಲ್ಲ. 'ಒಂದೋ ಕೆಟ್ಟಿರ ಬೇಕು, ಇಲ್ಲವೆ ಪ್ಲಗ್ ತೆಗೆದಿರಬೇಕು,'' ಎಂದು ತರ್ಕಿಸಿದ, (ಎರಡನೆಯ ತರ್ಕ ಸರಿ ಯಾಗಿತ್ತು.) ಸೇವಕನ ಸೂಚನೆಯಂತೆ ಹೊರಗಿದ್ದ ಸೋಫಾದಲ್ಲಿ ಕುಳಿತ. ಸದ್ದಿಲ್ಲದೆ ನಿದ್ದೆ ಮಾಡಿದ, ಬಂದು ನೋಡಿದ ಸೇವಕನಿಗೆ ಆಶ್ಚರ್ಯವಾಯಿತು-ಗೊರಕೆಯೇ ಇಲ್ಲವಲ್ಲ ಎ೦ದು.
ಗುಪ್ತಚಾರ ದಳದ ಮುಖ್ಯಸ್ಥ ಮೆಲ್ಲನೆ ಎವೆ ತೆರೆದಾಗ ಕೈಗಡಿಯಾರ 'ನಾಲ್ಕು' ఎంది3ు. ఒళగినిందా జనెర వేలనేయు ಸದ್ದು చేలల్లోEు. ಥಟಕ್ಕನೆ ಎದ್ದು ಕರವಸ್ತ್ರದಿಂದ ಮುಖವನ್ನು ಚೆನಾಗಿ ಒರೆಸಿದ. ಸೇವಕ ಬಂದು ನುಡಿದ :
“ಎದ್ದಿದ್ರೆ ಆಫೀಸು ರೂಮಿಗೆ ಕಳಿಸು ಅಂದು," ಬಹು ಕಾಲದಿಂದ ಕರಗತವಾಗಿದ್ದ ವಿದ್ಯೆ ಇವತ್ತು ಕೈಕೊಟ್ಟಿತಲ್ಲ ಎಂದು ಗುಪ್ತ ಚಾರ ದಳದ ಮುಖ್ಯಸ್ಥನಿಗೆ ಪಿಚ್ಚೆನಿಸಿತು.
ಮೇಜಿನ ಮೇಲೆ ಹತ್ತಿಪ್ಪತ್ತು ಫೈಲುಗಳು, ಒಂದನ್ನು ತೆರೆದು ನೋಡುತ್ತ
బెుమ్మిచేుంశ్రీ ಕುಳಿತಿದಳು.
ெ<noinclude></noinclude>
97umgt22jfeitnhikdh4or24bct6k92
320818
320813
2026-05-19T12:33:50Z
Pragathi. BH
7585
320818
proofread-page
text/x-wiki
<noinclude><pagequality level="4" user="Pragathi. BH" /></noinclude>ಮಿಂಚು
219
ತುಸು ಊಟ ಮಾಡಿದ ಮೇಲೆ, ನಿದ್ರಿಸುವುದು ಮೇಲು-ಒಂದಿಷ್ಟು ನೆಮ್ಮದಿ
ಸಿಗಬಹುದು ಎನಿಸಿ, ಸೌದಾಮಿನಿ ಅಡ್ಡಾಗಲು ಸಿದ್ಧವಾದಳು.
“ಅಧಿಕಾರಿಗಳು ಯಾರಾದರೂ ಬಂದರೆ, ನಾನು ಏಳುವವರೆಗೆ ಕಾದಿರಿ.”
ಎಂದಳು ಹೊರಗಿದ್ದ ಸೇವಕನಿಗೆ
“ಪರಶುರಾಮ, ಮನೆಗೆ ಹೋಗಪ್ಪ,
"
ಹೆಂಡತೀನ ಬಹಳ ಕಾಯಿಸ್ಟಾರು.”
ಆಪ್ತ ಕಾರ್ಯದರ್ಶಿಗೆ ಅಳು ಬಂತು, ಎಲಾ ! ನನ್ನ ಅವಸ್ಥೆಗಾಗಿ ಇವನ
ಕಣ್ಣೀರೆ ? ಎಂದು ಸೌದಾಮಿನಿಗೆ ಆಶ್ಚರ್ಯವಾಯಿತು.
"art"?"
“ಹೆಂಡತಿ ಅಲ್ಲ, ಹೆಂಡಿರು ಮಾತಾಜಿ,
ಬಂದ್ಬಟ್ಟು.”
ಮೊದಲಿನವಳೂ ಬೆಳಗಿನ ಜಾವ
“ಪೇಪರ್ ಓದಿ ತಲೆ ಕೆಟ್ಟು ಅವರಪ್ಪ ಕಳಿಸಿದ್ದೇನೊ ?”
“ದಾಸಿ ಪಾತ್ರದಲ್ಲಾದರೂ ಸರಿ, ಇಲ್ಲಿಯೇ ಇದ್ದಾಳಂತೆ.”
“ಎಲ್ಲರೂ ನಾಟಕ ಪಾತ್ರಧಾರಿಗಳೇ...! ಒಬ್ಬಳಿದ್ದರೂ ಅಷ್ಟೆ, ಇಬ್ಬರಿದ್ದರೂ
ಅಷ್ಟೆ. ವಿಶ್ರಾಂತಿ ಸುಖ ನಿನ್ನ ಹಣೇಲಿ ಬರೆದಿಲ್ಲ. ಹೋಗು, ಪ್ರೇಮ ಸಲ್ಲಾಪ
ಮಾಡ್ಕೊಂಡು ಕೂತಿರು. ಕತ್ತಲಾಲೆ ಮಠಕ್ಕೆ ಹೋಗಿ ಬರೋಕು.”
“ಹೂಂ ಮಾತಾಜಿ.”
....ಗೃಹ ಕಾವ್ಯಾಲಯಕ್ಕೆ ಹೋದ ಮೇಲೆ ಎಷ್ಟು ಹೊತ್ತಾಗುತ್ತದೋ ಏನೊ
ಎಂದು, ಗುಪ್ತಚಾರ ದಳದ ಮುಖ್ಯಸ್ಥ ತನ್ನ ಊಟ ಮುಗಿಸಿ ನಿಧಾನವಾಗಿ ಬಂದ.
ಅಲ್ಲಿ ನೆಲೆಸಿದ್ದ ಮೌನ ಕಂಡು, ಮುಖ್ಯಮಂತ್ರಿ ನಿದ್ರಾಂಗನೆಯ ವಶದಲ್ಲಿದ್ದರೂ
ಇರಬಹುದು ಎನಿಸಿತು. ಫೋನ್ ಸಪ್ಪಳ ಮಾಡುತ್ತಿರಲಿಲ್ಲ. ಒಂದೋ ಕೆಟ್ಟಿರ
ಬೇಕು, ಇಲ್ಲವೆ ಪ್ಲಗ್ ತೆಗೆದಿರಬೇಕು,' ಎಂದು ತರ್ಕಿಸಿದ. (ಎರಡನೆಯ ತರ್ಕ ಸರಿ
ಯಾಗಿತ್ತು.) ಸೇವಕನ ಸೂಚನೆಯಂತೆ ಹೊರಗಿದ್ದ ಸೋಫಾದಲ್ಲಿ ಕುಳಿತ. ಸದ್ದಿಲ್ಲದೆ
ನಿದ್ದೆ ಮಾಡಿದ, ಬಂದು ನೋಡಿದ ಸೇವಕನಿಗೆ ಆಶ್ಚರ್ಯವಾಯಿತು-ಗೊರಕೆಯೇ
ಇಲ್ಲವಲ್ಲ ಎಂದು.
ಎಂದಿತು.
ಗುಪ್ತಚಾರ ದಳದ ಮುಖ್ಯಸ್ಥ ಮೆಲ್ಲನೆ ಎವೆ ತೆರೆದಾಗ ಕೈಗಡಿಯಾರ 'ನಾಲ್ಕು "
ಒಳಗಿನಿಂದ ಜನರ ಚಲನೆಯ ಸದ್ದು ಕೇಳಿಸಿತು. ಥಟಕ್ಕನೆ ಎದ್ದು
ಕರವಸ್ತ್ರದಿಂದ ಮುಖವನ್ನು ಚೆನ್ನಾಗಿ ಒರೆಸಿದ. ಸೇವಕ ಬಂದು ನುಡಿದ :
“ಎದ್ದಿದ್ರೆ ಆಫೀಸು ರೂಮಿಗೆ ಕಳಿಸು ಅಂದ್ರು.”
ಬಹು ಕಾಲದಿಂದ ಕರಗತವಾಗಿದ್ದ ವಿದ್ಯೆ ಇವತ್ತು ಕೈಕೊಟ್ಟಿತಲ್ಲ ಎಂದು ಗುಪ್ತ
ಚಾರ ದಳದ ಮುಖ್ಯಸ್ಥನಿಗೆ ಪಿಚ್ಚೆನಿಸಿತು.
ಮೇಜಿನ ಮೇಲೆ ಹತ್ತಿಪ್ಪತ್ತು ಫೈಲುಗಳು, ಒಂದನ್ನು ತೆರೆದು ನೋಡುತ್ತ
ಮುಖ್ಯಮಂತ್ರಿ ಕುಳಿತಿದ್ದಳು.<noinclude></noinclude>
0yjjvnncft89h1j80yipegt34ho148o
320819
320818
2026-05-19T12:37:28Z
Pragathi. BH
7585
320819
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಮಿಂಚು|right=219}}</noinclude>
{{gap}}ತುಸು ಊಟ ಮಾಡಿದ ಮೇಲೆ, ನಿದ್ರಿಸುವುದು ಮೇಲು-ಒಂದಿಷ್ಟು ನೆಮ್ಮದಿ
ಸಿಗಬಹುದು ಎನಿಸಿ, ಸೌದಾಮಿನಿ ಅಡ್ಡಾಗಲು ಸಿದ್ಧವಾದಳು.<br />
{{gap}}“ಅಧಿಕಾರಿಗಳು ಯಾರಾದರೂ ಬಂದರೆ, ನಾನು ಏಳುವವರೆಗೆ ಕಾದಿರಿ.”
ಎಂದಳು ಹೊರಗಿದ್ದ ಸೇವಕನಿಗೆ<br />
{{gap}}“ಪರಶುರಾಮ, ಮನೆಗೆ ಹೋಗಪ್ಪ,"
ಹೆಂಡತೀನ ಬಹಳ ಕಾಯಿಸ್ಟಾರು.”<br />
{{gap}}ಆಪ್ತ ಕಾರ್ಯದರ್ಶಿಗೆ ಅಳು ಬಂತು, ಎಲಾ ! ನನ್ನ ಅವಸ್ಥೆಗಾಗಿ ಇವನ
ಕಣ್ಣೀರೆ ? ಎಂದು ಸೌದಾಮಿನಿಗೆ ಆಶ್ಚರ್ಯವಾಯಿತು.<br />
{{gap}}"ಯಾಕೆ"?"<br />
{{gap}}“ಹೆಂಡತಿ ಅಲ್ಲ, ಹೆಂಡಿರು ಮಾತಾಜಿ,
ಬಂದ್ಬಟ್ಟು.”<br />
ಮೊದಲಿನವಳೂ ಬೆಳಗಿನ ಜಾವ
“ಪೇಪರ್ ಓದಿ ತಲೆ ಕೆಟ್ಟು ಅವರಪ್ಪ ಕಳಿಸಿದ್ದೇನೊ ?”
“ದಾಸಿ ಪಾತ್ರದಲ್ಲಾದರೂ ಸರಿ, ಇಲ್ಲಿಯೇ ಇದ್ದಾಳಂತೆ.”
“ಎಲ್ಲರೂ ನಾಟಕ ಪಾತ್ರಧಾರಿಗಳೇ...! ಒಬ್ಬಳಿದ್ದರೂ ಅಷ್ಟೆ, ಇಬ್ಬರಿದ್ದರೂ
ಅಷ್ಟೆ. ವಿಶ್ರಾಂತಿ ಸುಖ ನಿನ್ನ ಹಣೇಲಿ ಬರೆದಿಲ್ಲ. ಹೋಗು, ಪ್ರೇಮ ಸಲ್ಲಾಪ
ಮಾಡ್ಕೊಂಡು ಕೂತಿರು. ಕತ್ತಲಾಲೆ ಮಠಕ್ಕೆ ಹೋಗಿ ಬರೋಕು.”
“ಹೂಂ ಮಾತಾಜಿ.”
....ಗೃಹ ಕಾವ್ಯಾಲಯಕ್ಕೆ ಹೋದ ಮೇಲೆ ಎಷ್ಟು ಹೊತ್ತಾಗುತ್ತದೋ ಏನೊ
ಎಂದು, ಗುಪ್ತಚಾರ ದಳದ ಮುಖ್ಯಸ್ಥ ತನ್ನ ಊಟ ಮುಗಿಸಿ ನಿಧಾನವಾಗಿ ಬಂದ.
ಅಲ್ಲಿ ನೆಲೆಸಿದ್ದ ಮೌನ ಕಂಡು, ಮುಖ್ಯಮಂತ್ರಿ ನಿದ್ರಾಂಗನೆಯ ವಶದಲ್ಲಿದ್ದರೂ
ಇರಬಹುದು ಎನಿಸಿತು. ಫೋನ್ ಸಪ್ಪಳ ಮಾಡುತ್ತಿರಲಿಲ್ಲ. ಒಂದೋ ಕೆಟ್ಟಿರ
ಬೇಕು, ಇಲ್ಲವೆ ಪ್ಲಗ್ ತೆಗೆದಿರಬೇಕು,' ಎಂದು ತರ್ಕಿಸಿದ. (ಎರಡನೆಯ ತರ್ಕ ಸರಿ
ಯಾಗಿತ್ತು.) ಸೇವಕನ ಸೂಚನೆಯಂತೆ ಹೊರಗಿದ್ದ ಸೋಫಾದಲ್ಲಿ ಕುಳಿತ. ಸದ್ದಿಲ್ಲದೆ
ನಿದ್ದೆ ಮಾಡಿದ, ಬಂದು ನೋಡಿದ ಸೇವಕನಿಗೆ ಆಶ್ಚರ್ಯವಾಯಿತು-ಗೊರಕೆಯೇ
ಇಲ್ಲವಲ್ಲ ಎಂದು.
ಎಂದಿತು.
ಗುಪ್ತಚಾರ ದಳದ ಮುಖ್ಯಸ್ಥ ಮೆಲ್ಲನೆ ಎವೆ ತೆರೆದಾಗ ಕೈಗಡಿಯಾರ 'ನಾಲ್ಕು "
ಒಳಗಿನಿಂದ ಜನರ ಚಲನೆಯ ಸದ್ದು ಕೇಳಿಸಿತು. ಥಟಕ್ಕನೆ ಎದ್ದು
ಕರವಸ್ತ್ರದಿಂದ ಮುಖವನ್ನು ಚೆನ್ನಾಗಿ ಒರೆಸಿದ. ಸೇವಕ ಬಂದು ನುಡಿದ :
“ಎದ್ದಿದ್ರೆ ಆಫೀಸು ರೂಮಿಗೆ ಕಳಿಸು ಅಂದ್ರು.”
ಬಹು ಕಾಲದಿಂದ ಕರಗತವಾಗಿದ್ದ ವಿದ್ಯೆ ಇವತ್ತು ಕೈಕೊಟ್ಟಿತಲ್ಲ ಎಂದು ಗುಪ್ತ
ಚಾರ ದಳದ ಮುಖ್ಯಸ್ಥನಿಗೆ ಪಿಚ್ಚೆನಿಸಿತು.
ಮೇಜಿನ ಮೇಲೆ ಹತ್ತಿಪ್ಪತ್ತು ಫೈಲುಗಳು, ಒಂದನ್ನು ತೆರೆದು ನೋಡುತ್ತ
ಮುಖ್ಯಮಂತ್ರಿ ಕುಳಿತಿದ್ದಳು.<noinclude></noinclude>
sq0nfbv5ovhz50rj9dsetq8ji0ck4pm
320835
320819
2026-05-19T14:03:17Z
Pragathi. BH
7585
320835
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಮಿಂಚು|right=219}}</noinclude>
{{gap}}ತುಸು ಊಟ ಮಾಡಿದ ಮೇಲೆ, ನಿದ್ರಿಸುವುದು ಮೇಲು-ಒಂದಿಷ್ಟು ನೆಮ್ಮದಿ
ಸಿಗಬಹುದು ಎನಿಸಿ, ಸೌದಾಮಿನಿ ಅಡ್ಡಾಗಲು ಸಿದ್ಧವಾದಳು.<br />
{{gap}}“ಅಧಿಕಾರಿಗಳು ಯಾರಾದರೂ ಬಂದರೆ, ನಾನು ಏಳುವವರೆಗೆ ಕಾದಿರಿ.”
ಎಂದಳು ಹೊರಗಿದ್ದ ಸೇವಕನಿಗೆ<br />
{{gap}}“ಪರಶುರಾಮ, ಮನೆಗೆ ಹೋಗಪ್ಪ,"
ಹೆಂಡತೀನ ಬಹಳ ಕಾಯಿಸ್ಟಾರು.”<br />
{{gap}}ಆಪ್ತ ಕಾರ್ಯದರ್ಶಿಗೆ ಅಳು ಬಂತು, ಎಲಾ ! ನನ್ನ ಅವಸ್ಥೆಗಾಗಿ ಇವನ
ಕಣ್ಣೀರೆ ? ಎಂದು ಸೌದಾಮಿನಿಗೆ ಆಶ್ಚರ್ಯವಾಯಿತು.<br />
{{gap}}"ಯಾಕೆ"?"<br />
{{gap}}“ಹೆಂಡತಿ ಅಲ್ಲ, ಹೆಂಡಿರು ಮಾತಾಜಿ,
ಮೊದಲಿನವಳೂ ಬೆಳಗಿನ ಜಾವ
ಬಂದ್ಬಿಟ್ಟು."<br />
{{gap}}“ಪೇಪರ್ ಓದಿ ತಲೆ ಕೆಟ್ಟು ಅವರಪ್ಪ ಕಳಿಸಿದ್ದೇನೊ ?”<br />
{{gap}}“ದಾಸಿ ಪಾತ್ರದಲ್ಲಾದರೂ ಸರಿ, ಇಲ್ಲಿಯೇ ಇದ್ದಾಳಂತೆ.”<br />
{{gap}}“ಎಲ್ಲರೂ ನಾಟಕ ಪಾತ್ರಧಾರಿಗಳೇ...! ಒಬ್ಬಳಿದ್ದರೂ ಅಷ್ಟೆ, ಇಬ್ಬರಿದ್ದರೂ
ಅಷ್ಟೆ. ವಿಶ್ರಾಂತಿ ಸುಖ ನಿನ್ನ ಹಣೇಲಿ ಬರೆದಿಲ್ಲ. ಹೋಗು, ಪ್ರೇಮ ಸಲ್ಲಾಪ
ಮಾಡ್ಕೊಂಡು ಕೂತಿರು. ಕತ್ತಲಾಲೆ ಮಠಕ್ಕೆ ಹೋಗಿ ಬರ್ಬೇಕು.”<br />
{{gap}}“ಹೂಂ ಮಾತಾಜಿ.”<br />
{{gap}}....ಗೃಹ ಕಾವ್ಯಾಲಯಕ್ಕೆ ಹೋದ ಮೇಲೆ ಎಷ್ಟು ಹೊತ್ತಾಗುತ್ತದೋ ಏನೊ
ಎಂದು, ಗುಪ್ತಚಾರ ದಳದ ಮುಖ್ಯಸ್ಥ ತನ್ನ ಊಟ ಮುಗಿಸಿ ನಿಧಾನವಾಗಿ ಬಂದ.
ಅಲ್ಲಿ ನೆಲೆಸಿದ್ದ ಮೌನ ಕಂಡು, ಮುಖ್ಯಮಂತ್ರಿ ನಿದ್ರಾಂಗನೆಯ ವಶದಲ್ಲಿದ್ದರೂ
ಇರಬಹುದು ಎನಿಸಿತು. ಫೋನ್ ಸಪ್ಪಳ ಮಾಡುತ್ತಿರಲಿಲ್ಲ. ಒಂದೋ ಕೆಟ್ಟಿರ
ಬೇಕು, ಇಲ್ಲವೆ ಪ್ಲಗ್ ತೆಗೆದಿರಬೇಕು,' ಎಂದು ತರ್ಕಿಸಿದ. (ಎರಡನೆಯ ತರ್ಕ ಸರಿ
ಯಾಗಿತ್ತು.) ಸೇವಕನ ಸೂಚನೆಯಂತೆ ಹೊರಗಿದ್ದ ಸೋಫಾದಲ್ಲಿ ಕುಳಿತ. ಸದ್ದಿಲ್ಲದೆ
ನಿದ್ದೆ ಮಾಡಿದ, ಬಂದು ನೋಡಿದ ಸೇವಕನಿಗೆ ಆಶ್ಚರ್ಯವಾಯಿತು-ಗೊರಕೆಯೇ
ಇಲ್ಲವಲ್ಲ ಎಂದು.<br />
ಎಂದಿತು.
{{gap}}ಗುಪ್ತಚಾರ ದಳದ ಮುಖ್ಯಸ್ಥ ಮೆಲ್ಲನೆ ಎವೆ ತೆರೆದಾಗ ಕೈಗಡಿಯಾರ 'ನಾಲ್ಕು "
ಒಳಗಿನಿಂದ ಜನರ ಚಲನೆಯ ಸದ್ದು ಕೇಳಿಸಿತು. ಥಟಕ್ಕನೆ ಎದ್ದು
ಕರವಸ್ತ್ರದಿಂದ ಮುಖವನ್ನು ಚೆನ್ನಾಗಿ ಒರೆಸಿದ. ಸೇವಕ ಬಂದು ನುಡಿದ :<br />
{{gap}}“ಎದ್ದಿದ್ರೆ ಆಫೀಸು ರೂಮಿಗೆ ಕಳಿಸು ಅಂದ್ರು.”<br />
{{gap}}ಬಹು ಕಾಲದಿಂದ ಕರಗತವಾಗಿದ್ದ ವಿದ್ಯೆ ಇವತ್ತು ಕೈಕೊಟ್ಟಿತಲ್ಲ ಎಂದು ಗುಪ್ತ
ಚಾರ ದಳದ ಮುಖ್ಯಸ್ಥನಿಗೆ ಪಿಚ್ಚೆನಿಸಿತು.<br />
{{gap}}ಮೇಜಿನ ಮೇಲೆ ಹತ್ತಿಪ್ಪತ್ತು ಫೈಲುಗಳು, ಒಂದನ್ನು ತೆರೆದು ನೋಡುತ್ತ
ಮುಖ್ಯಮಂತ್ರಿ ಕುಳಿತಿದ್ದಳು.<noinclude></noinclude>
hiu4tq6hw6qrl25k1t72pioz1yhlggw
ಪುಟ:ಮಿಂಚು.pdf/೨೨೬
104
20673
320814
248891
2026-05-19T12:22:46Z
Pragathi. BH
7585
/* Validated */
320814
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=220|right=ಮಿಂಚು}}
{{gap}}“ನಮಸ್ತೆ, ಮಾತಾಜಿ.” </br>
{{gap}}ಆಕೆ ತಲೆ ಎತ್ತಿ ಮುಗುಳು ನಕ್ಕು, ಪಕ್ಕದ ಬಾಗಿಲು ತೋರಿಸಿ, “ಮುಖ </br>
ತೊಳ್ಕೊಳ್ಳಿ” ಎಂದಳು. ಆತ ಮುಖಕ್ಕೆ ನೀರು ಹನಿಸಿ ಕರವಸ್ತ್ರದಿಂದ ಒರೆಸಿಕೊಂಡು </br>
ಹಿoತಿರುಗಿದ. </br>
{{gap}}“ರಾತ್ರೆ ಡ್ಯೂಟಿ ಇತ್ತಾ ?” </br>
{{gap}}“ಹೂಂ, ಮಾತಾಜಿ, ಐಜಿಪಿಯವರೂ ನಾನೂ ಒಟ್ಟಿಗಿದ್ದಿ." </br>
{{gap}}“ಗುಪ್ತದಳ ಬಹಿರಂಗದಳ ಎರಡೂ ಜತೆಯಾಗೋದು ಸರೀನಾ ? ಘಾಟಿ </br>
ಗಳಪ್ಪ ನೀವು!" </br>
{{gap}}“ಇವತ್ತಿನ ಮೆರವಣಿಗೆ ವಿಷಯ ಅವರಿಗೆ ಒಂದೆರಡು ಮಾಹಿತಿಕೊಡುವುದಿತ್ತು.” </br>
{{gap}}“ಅಂತೂ ಇವತ್ತು ಕ್ರಾಂತಿಯಾಗೋದು ತಪ್ಪಿತು ಅನ್ನಿ!" </br>
{{gap}}“ನಿಮ್ಮ ಮನೋಸ್ಥೈರ್ಯಕ್ಕೆ ಯಾರಾದರೂ ತಲೆದೂಗಲೇಬೇಕು." </br>
{{gap}}"అರೇ! ఇದೇ ಮಾತನ್ನು ಬೆಳಗ್ಗೆ ಹೇಳಿದವರು ಯಾರು? ಚೀಫ್ ಸೆಕ್ರೆಟರಿ, </br>
ನೌಕರಶಾಹಿ ಮಂದಿಯ ಮಾತೆಲ್ಲ ಒಂದೇ ತರಹೆ...” </br>
{{gap}}“ಸಿಬಿಐಯ ಒಬ್ಬ, ಮತ್ತೆ ಬಂದಿದ್ದಾನೆ. ಚೆನ್ನೆ ದಾರಿಯಾಗಿ ಬಂದನಂತೆ." </br>
{{gap}}“ಇಲ್ಲಿಯ ಘಟನೆಗಳ ಬಗ್ಗೆ ಆಸಕ್ತಿ ಇಲ್ಲವಂತೊ ?" </br>
{{gap}}“ಹೀಗೆ ಪರಸ್ಪರ ನೇರ ಪ್ರಸ್ತಾಪ ನಾವು ಮಾಡೋದೇ ಇಲ್ಲ." </br>
{{gap}}“ಪರೋಕ್ಷ ಪ್ರಸ್ತಾಪದಿಂದ ನಿಮಗೆ ಏನು ತಿಳಿತು?" </br>
{{gap}}“ಇವತ್ತಿನ ಮತಪ್ರದರ್ಶನ ಇತಾದಿ ಕುರಿತು ರಾಜ್ಯಪಾಲರ ವರದಿ, ಈ </br>
ಸಿಬಿಐ ಅಧಿಕಾರಿ ಒದಗಿಸುವ ಮಾಹಿತಿ, ವಿಶ್ವ ೦ಭರ-ಲಕ್ಷ್ಮಿಪತಿಯರ ದಿಲ್ಲಿ ಮಾತುಕತೆ </br>
ಈ ಮೂರನ್ನೂ ಆಧರಿಸಿ ವರಿಷ್ಕರು ತೀರ್ಮಾನ ಕೈಗೊಳ್ಳಬಹುದು.” </br>
{{gap}}“ಅಂಕೆ ಸಂಖ್ಯೆ ವಿಷಯ?” </br>
{{gap}}“ಇನ್ನೂ ಗೊಂದಲ ಇದೆ. ಶಾಸಕಾಂಗ ಸಭೆ ಸೇರಿದಾಗಲೇ ಇದು ಸ್ಪಷ್ಟ </br>
ವಾದೀತು." </br>
{{gap}}“ಅಷ್ಟೇನಾ? ಖಚಿತವಾಗಿ ಹೆಚ್ಚು ತಿಳಿಯೋದು ನಿಮ್ಮಿಂದ ಆಗಿಲ್ಲ ಅನ್ನಿ.” </br>
{{gap}}“ಒ೦ದು ನಾಲಗೆ ಎರಡು ಮಾತು, ಒಂದು ಲೇಖನಿ ಎರಡು ಸಹಿ__ವರ್ತನೆ </br>
ಹೀಗಿರುವಾಗ ಎಡವಟ್ಟು ತಪ್ಪಿದಲ್ಲ.” </br>
{{gap}}“ಎಂಬತ್ತು ಶಾಸಕರು ಆ ಶಿಬಿರದಲ್ಲಿ ಇದ್ದಾರೆ ಅಂತೀರಾ? </br>
{{gap}}ಹೌದು, ಈಗ ಇದ್ದಾರೆ. ಶಾಸಕಾಂಗ ಪಕ್ಷದ ಸಭೇಲಿ ತಮ್ಮ ಭಾಷಣ </br>
ಕೇಳಿದ ಮೇಲೆ ಯಾರ ಯಾರ ಮನಸ್ಸಾಕ್ಷಿ ಹೇಗೆ ಹೇಗೆ ಇರುತ್ತೊ ?” </br>
{{gap}}“ಸಭೆಗೆ ವೀಕ್ಷಕರಾಗಿರೋದಕ್ಕೆ ದಿಲ್ಲಿಯಿಂದ ಯಾರಾದರೂ ಬಂದರೆ?” </br>
{{gap}}“ಅವರು ನಿಮ್ಮ ಪಕ್ಷಪಾತಿಯಾದರೆ ವಿಶ್ವಂಭರನಿಗೆ ಸೋಲಾಗ್ತದೆ.” </br>
{{gap}}“ಯಾರು ಬರ್ತಾರೆ ಅನ್ನೋದು ಕೋಟಿ ರೂಪಾಯಿಯ ಪ್ರಶ್ನೆ.”<noinclude></noinclude>
eir665c3gv1fw4hhqr44xsaz0pksssc
320817
320814
2026-05-19T12:33:04Z
Pragathi. BH
7585
320817
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=220|right=ಮಿಂಚು}}
{{gap}}“ನಮಸ್ತೆ, ಮಾತಾಜಿ.” </br>
{{gap}}ಆಕೆ ತಲೆ ಎತ್ತಿ ಮುಗುಳು ನಕ್ಕು, ಪಕ್ಕದ ಬಾಗಿಲು ತೋರಿಸಿ, “ಮುಖ </br>
ತೊಳ್ಕೊಳ್ಳಿ” ಎಂದಳು. ಆತ ಮುಖಕ್ಕೆ ನೀರು ಹನಿಸಿ ಕರವಸ್ತ್ರದಿಂದ ಒರೆಸಿಕೊಂಡು
ಹಿoತಿರುಗಿದ. </br>
{{gap}}“ರಾತ್ರೆ ಡ್ಯೂಟಿ ಇತ್ತಾ ?” </br>
{{gap}}“ಹೂಂ, ಮಾತಾಜಿ, ಐಜಿಪಿಯವರೂ ನಾನೂ ಒಟ್ಟಿಗಿದ್ದಿ." </br>
{{gap}}“ಗುಪ್ತದಳ ಬಹಿರಂಗದಳ ಎರಡೂ ಜತೆಯಾಗೋದು ಸರೀನಾ ? ಘಾಟಿ
ಗಳಪ್ಪ ನೀವು!" </br>
{{gap}}“ಇವತ್ತಿನ ಮೆರವಣಿಗೆ ವಿಷಯ ಅವರಿಗೆ ಒಂದೆರಡು ಮಾಹಿತಿಕೊಡುವುದಿತ್ತು.” </br>
{{gap}}“ಅಂತೂ ಇವತ್ತು ಕ್ರಾಂತಿಯಾಗೋದು ತಪ್ಪಿತು ಅನ್ನಿ!" </br>
{{gap}}“ನಿಮ್ಮ ಮನೋಸ್ಥೈರ್ಯಕ್ಕೆ ಯಾರಾದರೂ ತಲೆದೂಗಲೇಬೇಕು." </br>
{{gap}}"అರೇ! ఇದೇ ಮಾತನ್ನು ಬೆಳಗ್ಗೆ ಹೇಳಿದವರು ಯಾರು? ಚೀಫ್ ಸೆಕ್ರೆಟರಿ,
ನೌಕರಶಾಹಿ ಮಂದಿಯ ಮಾತೆಲ್ಲ ಒಂದೇ ತರಹೆ...” </br>
{{gap}}“ಸಿಬಿಐಯ ಒಬ್ಬ, ಮತ್ತೆ ಬಂದಿದ್ದಾನೆ. ಚೆನ್ನೆ ದಾರಿಯಾಗಿ ಬಂದನಂತೆ." </br>
{{gap}}“ಇಲ್ಲಿಯ ಘಟನೆಗಳ ಬಗ್ಗೆ ಆಸಕ್ತಿ ಇಲ್ಲವಂತೊ ?" </br>
{{gap}}“ಹೀಗೆ ಪರಸ್ಪರ ನೇರ ಪ್ರಸ್ತಾಪ ನಾವು ಮಾಡೋದೇ ಇಲ್ಲ." </br>
{{gap}}“ಪರೋಕ್ಷ ಪ್ರಸ್ತಾಪದಿಂದ ನಿಮಗೆ ಏನು ತಿಳಿತು?" </br>
{{gap}}“ಇವತ್ತಿನ ಮತಪ್ರದರ್ಶನ ಇತಾದಿ ಕುರಿತು ರಾಜ್ಯಪಾಲರ ವರದಿ, ಈ
ಸಿಬಿಐ ಅಧಿಕಾರಿ ಒದಗಿಸುವ ಮಾಹಿತಿ, ವಿಶ್ವ ೦ಭರ-ಲಕ್ಷ್ಮಿಪತಿಯರ ದಿಲ್ಲಿ ಮಾತುಕತೆ
ಈ ಮೂರನ್ನೂ ಆಧರಿಸಿ ವರಿಷ್ಕರು ತೀರ್ಮಾನ ಕೈಗೊಳ್ಳಬಹುದು.” </br>
{{gap}}“ಅಂಕೆ ಸಂಖ್ಯೆ ವಿಷಯ?” </br>
{{gap}}“ಇನ್ನೂ ಗೊಂದಲ ಇದೆ. ಶಾಸಕಾಂಗ ಸಭೆ ಸೇರಿದಾಗಲೇ ಇದು ಸ್ಪಷ್ಟ
ವಾದೀತು." </br>
{{gap}}“ಅಷ್ಟೇನಾ? ಖಚಿತವಾಗಿ ಹೆಚ್ಚು ತಿಳಿಯೋದು ನಿಮ್ಮಿಂದ ಆಗಿಲ್ಲ ಅನ್ನಿ.” </br>
{{gap}}“ಒ೦ದು ನಾಲಗೆ ಎರಡು ಮಾತು, ಒಂದು ಲೇಖನಿ ಎರಡು ಸಹಿ__ವರ್ತನೆ
ಹೀಗಿರುವಾಗ ಎಡವಟ್ಟು ತಪ್ಪಿದಲ್ಲ.” </br>
{{gap}}“ಎಂಬತ್ತು ಶಾಸಕರು ಆ ಶಿಬಿರದಲ್ಲಿ ಇದ್ದಾರೆ ಅಂತೀರಾ? </br>
{{gap}}ಹೌದು, ಈಗ ಇದ್ದಾರೆ. ಶಾಸಕಾಂಗ ಪಕ್ಷದ ಸಭೇಲಿ ತಮ್ಮ ಭಾಷಣ
ಕೇಳಿದ ಮೇಲೆ ಯಾರ ಯಾರ ಮನಸ್ಸಾಕ್ಷಿ ಹೇಗೆ ಹೇಗೆ ಇರುತ್ತೊ ?” </br>
{{gap}}“ಸಭೆಗೆ ವೀಕ್ಷಕರಾಗಿರೋದಕ್ಕೆ ದಿಲ್ಲಿಯಿಂದ ಯಾರಾದರೂ ಬಂದರೆ?” </br>
{{gap}}“ಅವರು ನಿಮ್ಮ ಪಕ್ಷಪಾತಿಯಾದರೆ ವಿಶ್ವಂಭರನಿಗೆ ಸೋಲಾಗ್ತದೆ.” </br>
{{gap}}“ಯಾರು ಬರ್ತಾರೆ ಅನ್ನೋದು ಕೋಟಿ ರೂಪಾಯಿಯ ಪ್ರಶ್ನೆ.”<noinclude></noinclude>
1xe4srowes7g6vmywav4nqcvqm0pflt
ಪುಟ:ಮಿಂಚು.pdf/೨೨೭
104
20674
320836
250519
2026-05-19T14:03:36Z
Pragathi. BH
7585
/* Validated */
320836
proofread-page
text/x-wiki
<noinclude><pagequality level="4" user="Pragathi. BH" /></noinclude>
ಮಿಂಚು{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}} 221</br>
{{gap}}ಗುಪ್ತಚಾರ ದಳದ ಮುಖ್ಯಸ್ಥ ಮೆಚ್ಚುಗೆಯ ನಗೆ ಸೂಸಿದ.ಸೌದಾಮಿನಿ</br>
ಅಂದಳು :</br>
{{gap}}“ಹಸ್ತ ಸಾಮುದ್ರಿಕ ಜ್ಯೋತಿಷ್ಯ ಏನಾದರೂ ಬರುತ್ತ ನಿಮಗೆ ?”</br>
{{gap}}“ಇಲ್ಲ ಮಾತಾಜಿ.”</br>
{{gap}}“ನಿಮ್ಮ ಉದ್ಯೋಗಕ್ಕೂ ಆ ಕಸಬುಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಇದು</br>
ಜೋಕು. ನಗೋದಿಲ್ಲವೆ ?”</br>
{{gap}}ಇಬ್ಬರೂ ನಕ್ಕರು.</br>
{{gap}}“ನಾಡದು ಮಧ್ಯಾಹ್ನ ಇಷ್ಟು ಹೊತ್ತಿಗೆ ಗಂಡೋ ಹೆಣ್ಣೂ ಗೊತ್ತಾಗುತ್ತೆ.”</br>
{{gap}}“ನಾನು ಸರಕಾರಿ ಅಧಿಕಾರಿ, ಪಕ್ಷ ವಹಿಸಬಾರದು.”</br>
{{gap}}“ಒಳ್ಳೇದು. ವಿಶೇಷವೇನಾದರೂ ಇದ್ದರೆ ಭೇಟಿಗೆ ಬನ್ನಿ.”</br>
{{gap}}“ಏನಾದರೂ ಪ್ರಮಾದ ನನ್ನಿಂದ ನಡೆದಿದ್ದರೆ ಕ್ಷಮೆ ಇರಲಿ.”</br>
{{gap}}“ಆಮೋದ ಪ್ರಮೋದ ಯಾವುದೂ ಇಲ್ಲ.ನೀವು ಶಿಷ್ಟ ನಡವಳಿಕೆಯ</br>
ಮನುಷ್ಯ, ನಿಮಗೆ ಒಳ್ಳೆಯದಾಗಲಿ.”</br>
{{gap}}ಮುಖ್ಯಸ್ಥ ಎದ್ದು ಹೊರಬಿದ್ದ.</br>
{{gap}}ಪರಶುರಾಮನ ಆಗಮನವಾಯಿತು. ಫೋನ್ ಬಾರಿಸತೊಡಗಿತು.</br>
{{gap}}“ಮಾತಾಜಿ, ಐ.ಜಿ.ಪಿ.</br>
{{gap}}“ಬಂದರಾ ?”</br>
{{gap}}“ಇಲ್ಲ. ಅವರ ಪತ್ನಿ ಫೋನ್ ಮಾಡಿದಾರೆ.”</br>
{{gap}}“ಏನಂತೆ ?”</br>
{{gap}}“ಒಂದು ವಿನಂತಿ ಮಾಡ್ತಿದಾರೆ. ಭಾನುವಾರ ಬೆಳಗ್ಗೆ ಅನಾಥಾಶ್ರಮದ ಅತಿಥಿ</br>
ಗೃಹದ ಉದ್ಘಾಟನೆಗೆ ತಾವು ಒಪ್ಪಬೇಕಂತೆ. ಅವಸರದ ಏರ್ಪಾಟು. ಆಮಂತ್ರಣ</br>
ಪತ್ರಿಕೆ ಇವತ್ತು ರಾತ್ರಿ ಅಚ್ಚಾಗಿ ನಾಳೆಯೆಲ್ಲ ವಿತರಣೆ ಆಗದಂತೆ, ಔಪಚಾರಿಕವಾಗಿ</br>
ಅಮಂತ್ರಿಸೋದಕ್ಕೆ ಈಗ ಬರಬಹುದೆ ಅಂತ____”</br>
{{gap}}ಭಾನುವಾರ ಮುಖ್ಯಮಂತ್ರಿಯ ಕಾಠ್ಯಕ್ರಮ ! ಸೌದಾಮಿನಿಗೆ ನಗೆ ಬಂತು,</br>
ಖುಶಿಯೂ ಆಯಿತು.</br>
{{gap}}“ಒಪ್ಪಿದ್ದೇನೆ ಅಂತ ಹೇಳು,ನಾಳೆ ಬೆಳಗ್ಗೆ ಹತ್ತಿಪ್ಪತ್ತು ಆಮಂತ್ರಣದ ಪ್ರತಿ</br>
ಗಳನ್ನು ತಗೊಂಡು ಐ.ಜಿ.ಪಿ. ಪತ್ನಿಯೂ ಸುಲೋಚನಾಬಾಯಿಯೂ ಉಪಾಹಾರಕ್ಕೆ</br>
ಬರಲಿ. ವಿತರಣೆಗೆ ದೂತರ ಸಹಾಯವೇನಾದರೂ ಬೇಕೆ ಕೇಳು. ನಮ್ಮ ದೂತರ</br>
ಮೂಲಕ ಏರ್ಪಡಿಸಬಹುದು. ಒಂದು ಸಾವಿರ ಮುದ್ರಿಸಲಿ.”</br>
{{gap}}ಅವನು ಅವರಿಗೆ ತಿಳಿಸಿದ. ಮಾತಾಜಿಗೆ ವರದಿ ಸಲ್ಲಿಸಿದ.</br>
{{gap}}“ಧನ್ಯವಾದ ಧನ್ಯವಾದ ಅಂತ ಅವರಿಬ್ಬರೂ ನಾಲ್ಕಾರು ಸಲ ಹೇಳಿದರು.</br>
ನಾಳೆ ಬೆಳಗ್ಗೆ ಬಾರಂತೆ.</br><noinclude></noinclude>
p572klkwtwm69pvfzsekoupm8akgvv1
320838
320836
2026-05-19T14:05:07Z
Shreelatha.Halemane
7642
/* Validated */
320838
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಿಂಚು|right=221}}
{{gap}}ಗುಪ್ತಚಾರ ದಳದ ಮುಖ್ಯಸ್ಥ ಮೆಚ್ಚುಗೆಯ ನಗೆ ಸೂಸಿದ.ಸೌದಾಮಿನಿ</br>
ಅಂದಳು :</br>
{{gap}}“ಹಸ್ತ ಸಾಮುದ್ರಿಕ ಜ್ಯೋತಿಷ್ಯ ಏನಾದರೂ ಬರುತ್ತ ನಿಮಗೆ ?”</br>
{{gap}}“ಇಲ್ಲ ಮಾತಾಜಿ.”</br>
{{gap}}“ನಿಮ್ಮ ಉದ್ಯೋಗಕ್ಕೂ ಆ ಕಸಬುಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಇದು</br>
ಜೋಕು. ನಗೋದಿಲ್ಲವೆ ?”</br>
{{gap}}ಇಬ್ಬರೂ ನಕ್ಕರು.</br>
{{gap}}“ನಾಡದು ಮಧ್ಯಾಹ್ನ ಇಷ್ಟು ಹೊತ್ತಿಗೆ ಗಂಡೋ ಹೆಣ್ಣೂ ಗೊತ್ತಾಗುತ್ತೆ.”</br>
{{gap}}“ನಾನು ಸರಕಾರಿ ಅಧಿಕಾರಿ, ಪಕ್ಷ ವಹಿಸಬಾರದು.”</br>
{{gap}}“ಒಳ್ಳೇದು. ವಿಶೇಷವೇನಾದರೂ ಇದ್ದರೆ ಭೇಟಿಗೆ ಬನ್ನಿ.”</br>
{{gap}}“ಏನಾದರೂ ಪ್ರಮಾದ ನನ್ನಿಂದ ನಡೆದಿದ್ದರೆ ಕ್ಷಮೆ ಇರಲಿ.”</br>
{{gap}}“ಆಮೋದ ಪ್ರಮೋದ ಯಾವುದೂ ಇಲ್ಲ.ನೀವು ಶಿಷ್ಟ ನಡವಳಿಕೆಯ</br>
ಮನುಷ್ಯ, ನಿಮಗೆ ಒಳ್ಳೆಯದಾಗಲಿ.”</br>
{{gap}}ಮುಖ್ಯಸ್ಥ ಎದ್ದು ಹೊರಬಿದ್ದ.</br>
{{gap}}ಪರಶುರಾಮನ ಆಗಮನವಾಯಿತು. ಫೋನ್ ಬಾರಿಸತೊಡಗಿತು.</br>
{{gap}}“ಮಾತಾಜಿ, ಐ.ಜಿ.ಪಿ.</br>
{{gap}}“ಬಂದರಾ ?”</br>
{{gap}}“ಇಲ್ಲ. ಅವರ ಪತ್ನಿ ಫೋನ್ ಮಾಡಿದಾರೆ.”</br>
{{gap}}“ಏನಂತೆ ?”</br>
{{gap}}“ಒಂದು ವಿನಂತಿ ಮಾಡ್ತಿದಾರೆ. ಭಾನುವಾರ ಬೆಳಗ್ಗೆ ಅನಾಥಾಶ್ರಮದ ಅತಿಥಿ</br>ಗೃಹದ ಉದ್ಘಾಟನೆಗೆ ತಾವು ಒಪ್ಪಬೇಕಂತೆ. ಅವಸರದ ಏರ್ಪಾಟು. ಆಮಂತ್ರಣ</br>ಪತ್ರಿಕೆ ಇವತ್ತು ರಾತ್ರಿ ಅಚ್ಚಾಗಿ ನಾಳೆಯೆಲ್ಲ ವಿತರಣೆ ಆಗದಂತೆ, ಔಪಚಾರಿಕವಾಗಿ</br>ಅಮಂತ್ರಿಸೋದಕ್ಕೆ ಈಗ ಬರಬಹುದೆ ಅಂತ____”</br>
{{gap}}ಭಾನುವಾರ ಮುಖ್ಯಮಂತ್ರಿಯ ಕಾರ್ಯಕ್ರಮ ! ಸೌದಾಮಿನಿಗೆ ನಗೆ ಬಂತು,</br>ಖುಶಿಯೂ ಆಯಿತು.</br>
{{gap}}“ಒಪ್ಪಿದ್ದೇನೆ ಅಂತ ಹೇಳು,ನಾಳೆ ಬೆಳಗ್ಗೆ ಹತ್ತಿಪ್ಪತ್ತು ಆಮಂತ್ರಣದ ಪ್ರತಿ</br>
ಗಳನ್ನು ತಗೊಂಡು ಐ.ಜಿ.ಪಿ. ಪತ್ನಿಯೂ ಸುಲೋಚನಾಬಾಯಿಯೂ ಉಪಾಹಾರಕ್ಕೆ</br>ಬರಲಿ. ವಿತರಣೆಗೆ ದೂತರ ಸಹಾಯವೇನಾದರೂ ಬೇಕೆ ಕೇಳು. ನಮ್ಮ ದೂತರ</br>ಮೂಲಕ ಏರ್ಪಡಿಸಬಹುದು. ಒಂದು ಸಾವಿರ ಮುದ್ರಿಸಲಿ.”</br>
{{gap}}ಅವನು ಅವರಿಗೆ ತಿಳಿಸಿದ. ಮಾತಾಜಿಗೆ ವರದಿ ಸಲ್ಲಿಸಿದ.</br>
{{gap}}“ಧನ್ಯವಾದ ಧನ್ಯವಾದ ಅಂತ ಅವರಿಬ್ಬರೂ ನಾಲ್ಕಾರು ಸಲ ಹೇಳಿದರು.</br>
ನಾಳೆ ಬೆಳಗ್ಗೆ ಬರ್ತಾರಂತೆ.</br><noinclude></noinclude>
piu9zfxbjnpq0tnuuy5zvs01tmasvh4
ಪುಟ:ಮಿಂಚು.pdf/೨೨೮
104
20675
320837
206822
2026-05-19T14:03:47Z
Pragathi. BH
7585
/* Validated */
320837
proofread-page
text/x-wiki
<noinclude><pagequality level="4" user="Pragathi. BH" /></noinclude>222 ಮಿಂಚು
ಸೌದಾಮಿನಿ ಯೋಚಿಸಿದಳು : ಇನ್ನೊಂದು ದೊಡ್ಡ ನಮಸ್ಕಾರ ? ಮುಖ
ಭಂಗ ?.. ಛೆ! ಛೆ!ಎನಿಸಿತು.ಐ.ಜಿ.ಪಿ.ಯ ಪತ್ನಿ ಇರುವುದರಿಂದ ಆಭಾಸಕರ
ವಾದುದೇನೂ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿಗೆ ಖಾತರಿ.ಇನ್ನೂ ಅಧಿಕಾರ
ದಲ್ಲಿದ್ದೇನೆ. ತನಗೆ ದೊರೆಯುವುದು ಕುರ್ನೀಸೊಂದೇ.
* * *
ಸಂಜೆ ಸೌದಾಮಿನಿ ತಾಡವಾಗಿ ಧರ್ಮಮಠಕ್ಕೆ ಹೊದಳು. ಸ್ವಾಮಿజి ಗೌರವ
ದಿ೦ದ ಬರಮಾಡಿಕೊಂಡರು. ಹೂ ಗಿಡಬಳ್ಳಿಗಳು ಸೋಂಪಾಗಿ ಬೆಳೆದಿದ್ದು వు. ఇల్లి ರಾಜಕೀಯದ ಗೊಂದಲವಿಲ್ಲ. ಬಹಳವೆಂದರೆ ಭಕ್ತಾದಿಗಳು ದರ್ಶನಕ್ಕೆ ಬರುತ್ತಾರೆ.
ಪ್ರಣಾಮ ಸಲ್ಲಿಸಿ, ಪ್ರಸಾದ ಸ್ವೀಕರಿಸಿ (ಕಾಣಿಕೆ ಸಂದಾಯಮಾಡಿ), ಹೋಗುತ್ತಾರೆ.
ಏಳರ బళిಕ ದರ್ಶನವಿಲ್ಲ. ಕೇವಲ ಶಾಂతిః ಶಾಂతిః ಶಾಂతిః .
ಮುಖ್ಯಮಂತ್ರಿ ತಂದ ಹೂ ಹಣ್ಣುಗಳನ್ನು ಕಿರಿಯ ಸ್ವಾಮಿ ಒಳಕ್ಕೊಯ್ದ.
ಮಠದಲ್ಲಿನ ದಂತೇಶ್ವರಿಯ ಮುಂದೆ ಸ್ವಲ್ಪ ಸಮಯ ಧಾನಮಗ್ನಳಾಗಿ ಕುಳಿತು,
ಸೌದಾಮಿನಿ ಸ್ವಾಮಿజిಯ ಬಳಿಗೆ బందಳು.
"ಇల్లి ಸ್ವಾರ್ಥಿಗಳು ಕೆಲವರು ಆರಂಭಿಸಿರುವ ಕಿರಿಕಿರಿ ವಿಷಯ ತಮಗೆ
ಗೊತ್ತಾಗಿರಬಹುದು.”
“ಗೊತಾಗಿದೆ. ಬೇಸರದ ಸಂಗತಿ. ನಾನು ಧರ್ಮೇಂದರ್ ಮಠಕ್ಕೆ ಯಾವಾಗ
ಹೂಗಿ ಬರಲಿ."
“ನಿಮಗೆ ಅನುಕೂಲವಾದಾಗ. ತಾವು ಅಲ್ಲಿರುವಾಗಲೇ ನಾನೂ ಒಮ್ಮೆ
బందರೂ బంದೆ."
“ದಂತೇಶ್ವರಿಯ ದಯೆಯಿಂದ ತಮಗೇನನೂ ತೊಂದರೆಯಾಗದು."
“ಆ ವಿಶ್ವಾಸ ನನಗೂ ಇದೆ. ಆದರೆ ರಾಜಕೀಯ ಕ್ಷುದ್ರ ಆಟ. ಅದರಲ್ಲಿ
ನೀతి నియತ್ತು ಒಮ್ಮಮ್ಮೆ ಮಾಯವಾಗುವುದೂಟು."
“ದೈವೀಕೃಪೆಯ ಮುಂದೆ ಕ್ಷುದ್ರ ಆಟ ನಡೆಯೋದಿಲ್ಲ."
“ತಮ್ಮ ಮಾತು ಸತ್ಯವಾಗಲಿ, ಸ್ವಾಮಿజి."
“ಶಾಸಕಾಂಗ ಪಕ್ಷದ ಸಭೆ ಭಾನುವಾರ ಅಪರಾಹ್ನ ಅಲ್ಲವೆ?”
"ಊಟದ ಬಳಿಕ ಒಂದು ಗಂಟೆಗೆ.'
“ಆಗ ತಮ್ಮ ವಿಜಯಕ್ಕಾಗಿ ವಿಶೇಷ ಪೂಜೆ ಸಲ್ಲಿಸ್ತೇನೆ. ತಮ್ಮಿಂದಾಗಿ ಕಲ್ಯಾಣ
ನಗರದ ಧರ್ಮಮಠಕ್ಕೆ ಕೀ బంತು."
“ಅಷ್ಟು ಕೆಲಸವನ್ನು ನನ್ನಿಂದ ಆಗ ಮಾಡಿಸಿದವರು ಪೂಜ್ಯ ಬಾಬಾಜಿ..”
<noinclude></noinclude>
h9mltjto77zlel9zc7f52864z5e4efu
320839
320837
2026-05-19T14:12:21Z
Shreelatha.Halemane
7642
320839
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=222 |right=ಮಿಂಚು}}
{{gap}}ಸೌದಾಮಿನಿ ಯೋಚಿಸಿದಳು : ಇನ್ನೊಂದು ದೊಡ್ಡ ನಮಸ್ಕಾರ ? ಮುಖ
ಭಂಗ ?.. ಛೆ! ಛೆ!ಎನಿಸಿತು.ಐ.ಜಿ.ಪಿ.ಯ ಪತ್ನಿ ಇರುವುದರಿಂದ ಆಭಾಸಕರ
ವಾದುದೇನೂ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿಗೆ ಖಾತರಿ.ಇನ್ನೂ ಅಧಿಕಾರ
ದಲ್ಲಿದ್ದೇನೆ. ತನಗೆ ದೊರೆಯುವುದು ಕುರ್ನೀಸೊಂದೇ.
* * *
{{gap}}ಸಂಜೆ ಸೌದಾಮಿನಿ ತಡವಾಗಿ ಧರ್ಮಮಠಕ್ಕೆ ಹೋದಳು. ಸ್ವಾಮೀజి ಗೌರವ
ದಿ೦ದ ಬರಮಾಡಿಕೊಂಡರು. ಹೂ ಗಿಡಬಳ್ಳಿಗಳು ಸೊಂಪಾಗಿ ಬೆಳೆದಿದ್ದುವು. ఇಲ್ಲಿ ರಾಜಕೀಯದ ಗೊಂದಲವಿಲ್ಲ. ಬಹಳವೆಂದರೆ ಭಕ್ತಾದಿಗಳು ದರ್ಶನಕ್ಕೆ ಬರುತ್ತಾರೆ.
ಪ್ರಣಾಮ ಸಲ್ಲಿಸಿ, ಪ್ರಸಾದ ಸ್ವೀಕರಿಸಿ (ಕಾಣಿಕೆ ಸಂದಾಯಮಾಡಿ), ಹೋಗುತ್ತಾರೆ.
ಏಳರ ಬಳಿಕ ದರ್ಶನವಿಲ್ಲ. ಕೇವಲ ಶಾಂತಿಃ ಶಾಂತಿಃ ಶಾಂತಿಃ .
{{gap}}ಮುಖ್ಯಮಂತ್ರಿ ತಂದ ಹೂ ಹಣ್ಣುಗಳನ್ನು ಕಿರಿಯ ಸ್ವಾಮಿ ಒಳಕ್ಕೊಯ್ದ.
ಮಠದಲ್ಲಿನ ದಂತೇಶ್ವರಿಯ ಮುಂದೆ ಸ್ವಲ್ಪ ಸಮಯ ಧಾನಮಗ್ನಳಾಗಿ ಕುಳಿತು,
ಸೌದಾಮಿನಿ ಸ್ವಾಮಿజిಯ ಬಳಿಗೆ ಬಂದಳು.
{{gap}}"ಇల్లి ಸ್ವಾರ್ಥಿಗಳು ಕೆಲವರು ಆರಂಭಿಸಿರುವ ಕಿರಿಕಿರಿ ವಿಷಯ ತಮಗೆ
ಗೊತ್ತಾಗಿರಬಹುದು.”
{{gap}}“ಗೊತ್ತಗಿದೆ. ಬೇಸರದ ಸಂಗತಿ. ನಾನು ಧರ್ಮೇಂದರ್ ಮಠಕ್ಕೆ ಯಾವಾಗ
ಹೋಗಿ ಬರಲಿ."
{{gap}}“ನಿಮಗೆ ಅನುಕೂಲವಾದಾಗ.ತಾವು ಅಲ್ಲಿರುವಾಗಲೇ ನಾನೂ ಒಮ್ಮೆ
ಬಂದರೂ బంದೆ."
{{gap}}“ದಂತೇಶ್ವರಿಯ ದಯೆಯಿಂದ ತಮಗೇನೇನೂ ತೊಂದರೆಯಾಗದು."
{{gap}}“ಆ ವಿಶ್ವಾಸ ನನಗೂ ಇದೆ. ಆದರೆ ರಾಜಕೀಯ ಕ್ಷುದ್ರ ಆಟ. ಅದರಲ್ಲಿ
ನೀತಿ ನಿಯತ್ತು ಒಮ್ಮಮ್ಮೆ ಮಾಯವಾಗುವುದುಂಟು."
{{gap}}“ದೈವೀಕೃಪೆಯ ಮುಂದೆ ಕ್ಷುದ್ರ ಆಟ ನಡೆಯೋದಿಲ್ಲ."
{{gap}}“ತಮ್ಮ ಮಾತು ಸತ್ಯವಾಗಲಿ, ಸ್ವಾಮಿజి."
{{gap}}“ಶಾಸಕಾಂಗ ಪಕ್ಷದ ಸಭೆ ಭಾನುವಾರ ಅಪರಾಹ್ನ ಅಲ್ಲವೆ?”
{{gap}}"ಊಟದ ಬಳಿಕ ಒಂದು ಗಂಟೆಗೆ.'
{{gap}}“ಆಗ ತಮ್ಮ ವಿಜಯಕ್ಕಾಗಿ ವಿಶೇಷ ಪೂಜೆ ಸಲ್ಲಿಸ್ತೇನೆ. ತಮ್ಮಿಂದಾಗಿ ಕಲ್ಯಾಣ
ನಗರದ ಧರ್ಮಮಠಕ್ಕೆ ಕೀರ್ತಿ బంತು."
{{gap}}“ಅಷ್ಟು ಕೆಲಸವನ್ನು ನನ್ನಿಂದ ಆಗ ಮಾಡಿಸಿದವರು ಪೂಜ್ಯ ಬಾಬಾಜಿ..”<noinclude></noinclude>
814av2dpvccl7215171wumwkg6r4jjt
ಪುಟ:ಮಿಂಚು.pdf/೨೨೯
104
20676
320840
206823
2026-05-19T14:15:08Z
Pragathi. BH
7585
/* Validated */
320840
proofread-page
text/x-wiki
<noinclude><pagequality level="4" user="Pragathi. BH" /></noinclude>ಮಿಂಚು 223
“ತಮ್ಮ ಭಕ್ತಿ, ನಿಷ್ಟೆ ಅನಾದೃಶ."
ಕಿరియు ಸ್ವಾಮಿ ಹಿರಿಯ ಸ್ವಾಮೀಜಿಯ ಸೂಚನೆಯ೦ತೆ ಮುಖ್ಯಮಂತ್ರಿಗೆ
ಬೆಳ್ಳಿಯ ತಟ್ಟೆ ಯಲ್ಲಿ ಪ್ರಸಾದ ತಂದ...
“ಭಾನುವಾರ ರಾತ್ರೆ ದರ್ಶನಕ್ಕೆ ಬಲ್ಲೇನೆ," ಎಂದು ಹೇಳಿ ಸೌದಾಮಿನಿ
ಹೊರಟಳು.
* * *
ಊಟದ ಹೊತ್ತಾಗಿದ್ದರೂ ಧನಂಜಯಕುಮಾರ ಕಾದಿದ್ದ , ಪರಶುರಾಮ
ನಿಂದ ಭರವಸೆಯ ಮಾತುಗಳನ್ನು ಕೇಳುತ್ತ.
ಮಠಕ್ಕೆ ಹೋಗಿದ್ದಾರೆ ಎಂದು ಅರಿತಾಗ. ತಾನೂ ಅಲ್ಲಿಗೇ ಹೋಗುತ್ತಿದ್ದೆ,
ಈ ಪರಶುರಾಮ ತಿಳಿಸಲಿಲ್ಲವಲ್ಲ ಎಂದುಕೊಂಡ ಧನಂಜಯ. ಹಾಗೆಲ್ಲ ತಿಳಿಸಬೇಕೆಂಬ ಕರಾರು ಇಲ್ಲ ಎನ್ನುವುದೂ ಅವನಿಗೆ ಗೊತ್ತಿಲ್ಲದ ಸಂಗತಿಯಲ್ಲ.
ಒಳಕ್ಕೆ ಕಾలిరిసిದ ಸೌದಾಮಿನಿ "ಏನು ధనంజయు ? " ఎంದళు.
ಪ್ರಶ್ನೆಗೆ ಉತ್ತರ ಪರಶುರಾಮನಿಂದ ಬಂತು.
“ಲಕ್ಷ್ಮಿಪೂಜೆಯ దినో వాూతాజి నింపాశ్చారార ఆంగాడిగే బరాలలబ€5ంతే. ವರ್ಣರಂಜಿತ ಆಮಂತ್ರಣ ಪತ್ರಿಕೆ ಮುದ್ರಿಸ್ತಾರಂತೆ.”
“ಇನ್ನೂ ಬೇಕಾದಷ್ಟು ಸಮಯವಿದೆಯಲ್ಲ?”
“ಮುದ್ರಣ ಶಿವಕಾಶಿಯಲ್ಲಿ ಆಗಬೇಕಂತೆ.”
“ಸರಿ. ಸಾಹುಕಾರರಿಗೆ ಇಲ್ಲ ಅನ್ನುವಂತಿಲ್ಲವಲ್ಲ.”
“ಋಣಿಯಾಗಿದ್ದೇನೆ" ಎಂದು ಹೇಳಿ ಹೊರಟವನು, ಅಂಗಳದಲ್ಲಿ, ಮುಖ್ಯ ಮಂತ್ರಿಯ ಕಾರ್ಯದರ್ಶಿಯ ಜತೆ “ಭಾನುವಾರ ಸಭೆ ಮುಗಿಯುವ ಹೊತ್ತಿಗೆ ಒಂದು ಹಾರ ತಗೊ೦ಡು ನಾನು ಬರಬಹುದಾ ?" ಎ೦ದು ಕೇಳಿದ.
ಪರಶುರಾಮ ತಲೆ ಕೆರೆದು, “ಬನ್ನಿ, ಅದಕ್ಕೇನು ? ನಾನು ಬಾಗಿಲಲ್ಲೇ ಇಲ್ಲೇನೆ" ಎಂದ.
# * చేుమ్మిచేుంత్రి ಬಂದಿದ್ದ ಫೋನ್ಕರೆಗಳ ಪಟಿليبيا ನೋಡಿದಳು. బ్చైతివ్రీయ ವ್ಯಕ್ತಪಡಿಸಲಿಲ್ಲ.
ವಿಶ್ವಂಭರ-ಲಕ್ಷ್ಮಿಪತಿ ದಿಲ್ಲಿಯಲ್ಲಿ ಇಳಿಯುವ ಹೊತ್ತು, ಅವರ ಆಪ್ತರು ಯಾರಾದರೂ ಇದ್ದೇ ಇರುತ್ತಾರೆ. ದೂತನ ಮೂಲಕ ರಾಜ್ಯಪಾಲರ ವರದಿಯೂ ಅದೇ ವಿಮಾನದಲ್ಲಿ ಹೋಗಿರುತ್ತದೆ. ಅಲ್ಲಿ ನಾಳೆ ಪೂರ್ವಾಹ್ನ ತೀರ್ಮಾನವಾಗುತ್ತದೆ. ಎಂತಹ ಪಾತ್ರ ವಹಿಸಬಹುದು ನಕುಲ್ ದೇವ್ ಜಿ ? ಅವರು ಮತ್ತು ಬಾಬಾಜಿ ನಡುವೆ ಸಂವಾದ ನಡೆದಿರುತ್ತದೆ. ಪ್ರಧಾನಿ ? ನೋಡೋಣ, ನೋಡೋಣ.<noinclude></noinclude>
lzavlzybpit5b0ec5vthko20szsreh7
320851
320840
2026-05-19T14:24:27Z
Shreelatha.Halemane
7642
/* Validated */
320851
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಿಂಚು |right=223}}
{{gap}}“ತಮ್ಮ ಭಕ್ತಿ, ನಿಷ್ಟೆ ಅನಾದೃಶ."
{{gap}}ಕಿರಿಯ ಸ್ವಾಮಿ ಹಿರಿಯ ಸ್ವಾಮೀಜಿಯ ಸೂಚನೆಯ೦ತೆ ಮುಖ್ಯಮಂತ್ರಿಗೆ
ಬೆಳ್ಳಿಯ ತಟ್ಟೆಯಲ್ಲಿ ಪ್ರಸಾದ ತಂದ...
{{gap}}“ಭಾನುವಾರ ರಾತ್ರೆ ದರ್ಶನಕ್ಕೆ ಬರ್ತೇನೆ," ಎಂದು ಹೇಳಿ ಸೌದಾಮಿನಿ
ಹೊರಟಳು.
* * *
{{gap}}ಊಟದ ಹೊತ್ತಾಗಿದ್ದರೂ ಧನಂಜಯಕುಮಾರ ಕಾದಿದ್ದ , ಪರಶುರಾಮ
ನಿಂದ ಭರವಸೆಯ ಮಾತುಗಳನ್ನು ಕೇಳುತ್ತ.
{{gap}}ಮಠಕ್ಕೆ ಹೋಗಿದ್ದಾರೆ ಎಂದು ಅರಿತಾಗ. ತಾನೂ ಅಲ್ಲಿಗೇ ಹೋಗುತ್ತಿದ್ದೆ,
ಈ ಪರಶುರಾಮ ತಿಳಿಸಲಿಲ್ಲವಲ್ಲ ಎಂದುಕೊಂಡ ಧನಂಜಯ. ಹಾಗೆಲ್ಲ ತಿಳಿಸಬೇಕೆಂಬ ಕರಾರು ಇಲ್ಲ ಎನ್ನುವುದೂ ಅವನಿಗೆ ಗೊತ್ತಿಲ್ಲದ ಸಂಗತಿಯಲ್ಲ.
{{gap}}ಒಳಕ್ಕೆ ಕಾಲಿರಿಸಿದ ಸೌದಾಮಿನಿ "ಏನು ಧನಂಜಯ್ ? "ಎಂದಳು.
{{gap}}ಪ್ರಶ್ನೆಗೆ ಉತ್ತರ ಪರಶುರಾಮನಿಂದ ಬಂತು.
{{gap}}“ಲಕ್ಷ್ಮಿಪೂಜೆಯ ದಿನ ಮಾತಾಜಿ ಸಾಹುಕಾರರ ಅಂಗಡಿಗೆ ಬರಲೇಬೇಕಂತೆ. ವರ್ಣರಂಜಿತ ಆಮಂತ್ರಣ ಪತ್ರಿಕೆ ಮುದ್ರಿಸ್ತಾರಂತೆ.”
{{gap}}“ಇನ್ನೂ ಬೇಕಾದಷ್ಟು ಸಮಯವಿದೆಯಲ್ಲ?”
{{gap}}“ಮುದ್ರಣ ಶಿವಕಾಶಿಯಲ್ಲಿ ಆಗಬೇಕಂತೆ.”
{{gap}}“ಸರಿ. ಸಾಹುಕಾರರಿಗೆ ಇಲ್ಲ ಅನ್ನುವಂತಿಲ್ಲವಲ್ಲ.”
{{gap}}“ಋಣಿಯಾಗಿದ್ದೇನೆ" ಎಂದು ಹೇಳಿ ಹೊರಟವನು, ಅಂಗಳದಲ್ಲಿ, ಮುಖ್ಯ ಮಂತ್ರಿಯ ಕಾರ್ಯದರ್ಶಿಯ ಜತೆ “ಭಾನುವಾರ ಸಭೆ ಮುಗಿಯುವ ಹೊತ್ತಿಗೆ ಒಂದು ಹಾರ ತಗೊ೦ಡು ನಾನು ಬರಬಹುದಾ ?" ಎ೦ದು ಕೇಳಿದ.
{{gap}}ಪರಶುರಾಮ ತಲೆ ಕೆರೆದು, “ಬನ್ನಿ, ಅದಕ್ಕೇನು ? ನಾನು ಬಾಗಿಲಲ್ಲೇ ಇಲ್ಲೇನೆ" ಎಂದ.
{{gap}}ಮುಖ್ಯಮಂತ್ರಿ ಬಂದಿದ್ದ ಫೋನ್ಕರೆಗಳ ಪಟ್ಟಿ ನೋಡಿದಳು.ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ.
{{gap}}ವಿಶ್ವಂಭರ-ಲಕ್ಷ್ಮಿಪತಿ ದಿಲ್ಲಿಯಲ್ಲಿ ಇಳಿಯುವ ಹೊತ್ತು, ಅವರ ಆಪ್ತರು ಯಾರಾದರೂ ಇದ್ದೇ ಇರುತ್ತಾರೆ. ದೂತನ ಮೂಲಕ ರಾಜ್ಯಪಾಲರ ವರದಿಯೂ ಅದೇ ವಿಮಾನದಲ್ಲಿ ಹೋಗಿರುತ್ತದೆ. ಅಲ್ಲಿ ನಾಳೆ ಪೂರ್ವಾಹ್ನ ತೀರ್ಮಾನವಾಗುತ್ತದೆ. ಎಂತಹ ಪಾತ್ರ ವಹಿಸಬಹುದು ನಕುಲ್ ದೇವ್ ಜಿ ? ಅವರು ಮತ್ತು ಬಾಬಾಜಿ ನಡುವೆ ಸಂವಾದ ನಡೆದಿರುತ್ತದೆ. ಪ್ರಧಾನಿ ? ನೋಡೋಣ, ನೋಡೋಣ.<noinclude></noinclude>
tkmdz869v8dc5eizsx8hc9n7kwfoi8b
ಪುಟ:ಮಿಂಚು.pdf/೨೩೦
104
20677
320841
217072
2026-05-19T14:15:18Z
Pragathi. BH
7585
/* Validated */
320841
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=224|right=ಮಿಂಚು}}
{{gap}}ನಾಳೆ ಸಂಜೆ ಈ ಮಹಾನುಭಾವರು ವಾಪಸಾಗುತ್ತಾರೆ. ವೀಕ್ಷಕರು ಬರದಿದ್ದರೆ</br>
ಭಾನುವಾರ ಬಿರುಗಾಳಿಯಾಗುತ್ತೇನೆ. ಕೆಲವು ತರಗೆಲೆಗಳು ಹಾರಿ ಹೋಗುತ್ತವೆ.</br>
ನನ್ನ ಚೀಲದಲ್ಲಿ ಸಾಕಷ್ಟು ಗಟ್ಟಿ ಕಾಳು ಉಳಿದುವೆಂದರೆ ? ಅದು ಇನ್ನೊಂದು</br>
ವಿಜಯೋತ್ಸವ !</br>
{{gap}}ಆ ರಾತ್ರೆ ಸೌದಾಮಿನಿ ಮರೆಯದೆ ಲೇಹ್ಯ ತಿಂದಳು,</br><noinclude></noinclude>
qdmzboh5drefzmki026gcvx2cx2zo9g
320852
320841
2026-05-19T14:25:04Z
Shreelatha.Halemane
7642
320852
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=224|right=ಮಿಂಚು}}
{{gap}}ನಾಳೆ ಸಂಜೆ ಈ ಮಹಾನುಭಾವರು ವಾಪಸಾಗುತ್ತಾರೆ. ವೀಕ್ಷಕರು ಬರದಿದ್ದರೆ</br>ಭಾನುವಾರ ಬಿರುಗಾಳಿಯಾಗುತ್ತೇನೆ. ಕೆಲವು ತರಗೆಲೆಗಳು ಹಾರಿ ಹೋಗುತ್ತವೆ.</br>
ನನ್ನ ಚೀಲದಲ್ಲಿ ಸಾಕಷ್ಟು ಗಟ್ಟಿ ಕಾಳು ಉಳಿದುವೆಂದರೆ ? ಅದು ಇನ್ನೊಂದು</br>
ವಿಜಯೋತ್ಸವ !</br>
{{gap}}ಆ ರಾತ್ರೆ ಸೌದಾಮಿನಿ ಮರೆಯದೆ ಲೇಹ್ಯ ತಿಂದಳು,</br><noinclude></noinclude>
kw1klcujnt3a2gs0aputbcsyx0oytnb
ಪುಟ:ಮಿಂಚು.pdf/೨೩೨
104
20679
320842
250447
2026-05-19T14:15:33Z
Pragathi. BH
7585
/* Validated */
320842
proofread-page
text/x-wiki
<noinclude><pagequality level="4" user="Pragathi. BH" /></noinclude>226{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}ಮಿಂಚು</br>
{{gap}}“ಸ್ವಲ್ಪ ಜರಡಿ ಹಿಡಿದು ಉಪಯೋಗಿಸಿ.”</br>
{{gap}}ಉಪಾಹಾರ ಚೆನ್ನಾಗಿತ್ತು.</br>
{{gap}}“ಅಲ್ಲಿ ನಾಳೆ ಬೆಳಗ್ಗೆ ಇಂಥದೇನೂ ಇರೋದಿಲ್ಲ”, ಎಂದಳು ಸುಲೋಚನಾ</br>
ಬಾಯಿ.</br>
{{gap}}“ದೊಡ್ಡದಲ್ಲ, ಶುಭ ಸಮಾರಂಭಕ್ಕೆ ಎಲ್ಲ ನಿಮ್ಮ ಅಭಿಮಾನಿಗಳು ಬರೋದು</br>
ಮುಖ್ಯ.”</br>
{{gap}}“ತಾವು ಬರೀರೀಂತ ಜನ ಮುಕುತ್ತಾರೆ.”</br>
{{gap}}“ಚಪ್ಪರ ಗಿಪ್ಪರ ಬೇಡಿ. ಒಂಭತ್ತು ಘಂಟೆಗೆ ಬಿಸಿಲಿರೋದಿಲ್ಲ. ಮಡಚು</br>
ಕುರ್ಚಿಗಳಿರಲಿ.”</br>
{{gap}}“ನಮ್ಮ ಪಾಲಿಗೆ ನಾಳೆ ಸುದಿನ.”</br>
{{gap}}“ಮುಹೂರ್ತ ನೋಡಿದೀರೊ ?”</br>
{{gap}}“ಹೌದು, ಶುಭ ದಿವಸ.”</br>
{{gap}}ಮನಸ್ಸಿನಲ್ಲಿ ಸೌದಾಮಿನಿ ಅಂದುಕೊಂಡಳು : ತನ್ನ ಪಾಲಿಗೂ ಶುಭದಿವಸವೇ</br>
ಆಗಲಿ. ಅಥವಾ, ಸಿ.ಎಂ. ಬರಲೇಬೇಕೂಂತಾದರೆ ಭಾನುವಾರ ಬೆಳಗ್ಗೆ ಇಟ್ಟು</br>
ಕೊಳ್ಳೋದೇ ವಾಸೀಂತ ಐ.ಜಿ.ಪಿ. ಹೇಳಿದನೊ ? ನಾಳೆ ತನ್ನ ಸತ್ವ ಪರೀಕ್ಷೆ.</br>
ಅಂದೇ ಈ ಸಾರ್ವಜನಿಕ ಕಾರ್ಯಕ್ರಮ ಇರುವುದರಿಂದ ತನಗೇ ಲಾಭ. ಎಲ್ಲರೂ</br>
ಅಚ್ಚರಿಪಡುತ್ತಾರೆ. ಒಂದಷ್ಟು ಶಾಸಕರು ತನ್ನ ಶಿಬಿರಕ್ಕೆ ಬಂದರೂ ಬಂದರೇ.</br>
ಹಾಗೆಯೇ ಆಗಲಿ, ದಂತೇಶ್ವರಿ.</br>
{{gap}}-ಕಾಫಿ ಹೀರುತ್ತಲಿದ್ದಾಗ ಮುಖ್ಯ ಮಂತ್ರಿ ಮಾತನಾಡಲಿಲ್ಲ. ಯೋಚನೆಗಳ</br>
ಸುರುಳಿಯೊಳಗೆ ಆಗ ಅವಳು ಬಂದಿ,</br>
{{gap}}ಕಾಫಿ ಮುಗಿಯಿತು. ಮುಗುಲ್ನಕ್ಕಳು. ಯೋಚನೆಗಳ ಸಂಕೋಲೆಗಳು</br>
ಕಳಚಿದುವು.</br>
{{gap}}ಬಂದವರು ಎದ್ದರು.</br>
{{gap}}“ಒಂಭತ್ತು ಗಂಟೆಗೆ ಸರಿಯಾಗಿ ಅಲ್ಲಿದ್ದೇವೆ.”</br>
{{gap}}“ತಮ್ಮ ದಾರಿ ನೋಡ್ತವೆ, ನಮಸ್ಕಾರ.”</br>
{{gap}}ಪ್ರತಿವಂದನೆ ಎನ್ನುವಂತೆ ಸೌದಾಮಿನಿ ತಲೆಯಾಡಿಸಿದಳು. ಜೀವನದಲ್ಲಿ ಮೊಟ್ಟ</br>
ಮೊದಲ ಸಲ ತಾನು ನಮಸ್ಕಾರ ಪಡೆದುದು ಯಾವಾಗ ? ಕೊಟ್ಟವರು ಯಾರು ?</br>
ಬೇರೆ ಯಾರೋ ಎಂದು ತಪ್ಪು ಗ್ರಹಿಸಿ ತನಗೆ ಕೈ ಜೋಡಿಸಿದಳೊ(ರೊ) ? ಹೆಂಗಸು,</br>
ಹೆಂಗಸೇ ಅಂತ ತೋರದೆ ಆ ಪದ ಕೇಳಿದೊಡನೆ ಜೋಡಿಸಿದ ಕೈಗಳನ್ನು ಕಂಡೊ</br>
ಡನೆ, ಅವಳ ಮೈ ಪುಲಕಗೊಂಡಿತ್ತು. ಆಮೇಲೆ ಬೀದಿಗಿಳಿದಾಗಲೆಲ್ಲ ನಮಸ್ಕಾರದ</br>
ನಿರೀಕ್ಷೆಯಲ್ಲಿರುತ್ತಿದ್ದಳು. ಅದರ ಆಗಮನ ಸುಲಭಸಾಧ್ಯವಲ್ಲವೆಂದು ಮನವರಿಕೆ</br><noinclude></noinclude>
gshk9aodwanwnzvbgic95ekawys9v1a
320857
320842
2026-05-19T14:36:14Z
Pragathi. BH
7585
320857
proofread-page
text/x-wiki
<noinclude><pagequality level="4" user="Pragathi. BH" />{{rh|center=|left=226|right=ಮಿಂಚು}}</noinclude>
{{gap}}“ಸ್ವಲ್ಪ ಜರಡಿ ಹಿಡಿದು ಉಪಯೋಗಿಸಿ.”</br>
{{gap}}ಉಪಾಹಾರ ಚೆನ್ನಾಗಿತ್ತು.</br>
{{gap}}“ಅಲ್ಲಿ ನಾಳೆ ಬೆಳಗ್ಗೆ ಇಂಥದೇನೂ ಇರೋದಿಲ್ಲ”, ಎಂದಳು ಸುಲೋಚನಾ
ಬಾಯಿ.</br>
{{gap}}“ದೊಡ್ಡದಲ್ಲ, ಶುಭ ಸಮಾರಂಭಕ್ಕೆ ಎಲ್ಲ ನಿಮ್ಮ ಅಭಿಮಾನಿಗಳು ಬರೋದು
ಮುಖ್ಯ.”</br>
{{gap}}“ತಾವು ಬರೀರೀಂತ ಜನ ಮುಕುತ್ತಾರೆ.”</br>
{{gap}}“ಚಪ್ಪರ ಗಿಪ್ಪರ ಬೇಡಿ. ಒಂಭತ್ತು ಘಂಟೆಗೆ ಬಿಸಿಲಿರೋದಿಲ್ಲ. ಮಡಚು
ಕುರ್ಚಿಗಳಿರಲಿ.”</br>
{{gap}}“ನಮ್ಮ ಪಾಲಿಗೆ ನಾಳೆ ಸುದಿನ.”</br>
{{gap}}“ಮುಹೂರ್ತ ನೋಡಿದೀರೊ ?”</br>
{{gap}}“ಹೌದು, ಶುಭ ದಿವಸ.”</br>
{{gap}}ಮನಸ್ಸಿನಲ್ಲಿ ಸೌದಾಮಿನಿ ಅಂದುಕೊಂಡಳು : ತನ್ನ ಪಾಲಿಗೂ ಶುಭದಿವಸವೇ
ಆಗಲಿ. ಅಥವಾ, ಸಿ.ಎಂ. ಬರಲೇಬೇಕೂಂತಾದರೆ ಭಾನುವಾರ ಬೆಳಗ್ಗೆ ಇಟ್ಟು</br>
ಕೊಳ್ಳೋದೇ ವಾಸೀಂತ ಐ.ಜಿ.ಪಿ. ಹೇಳಿದನೊ ? ನಾಳೆ ತನ್ನ ಸತ್ವ ಪರೀಕ್ಷೆ.
ಅಂದೇ ಈ ಸಾರ್ವಜನಿಕ ಕಾರ್ಯಕ್ರಮ ಇರುವುದರಿಂದ ತನಗೇ ಲಾಭ. ಎಲ್ಲರೂ
ಅಚ್ಚರಿಪಡುತ್ತಾರೆ. ಒಂದಷ್ಟು ಶಾಸಕರು ತನ್ನ ಶಿಬಿರಕ್ಕೆ ಬಂದರೂ ಬಂದರೇ.
ಹಾಗೆಯೇ ಆಗಲಿ, ದಂತೇಶ್ವರಿ.</br>
{{gap}}-ಕಾಫಿ ಹೀರುತ್ತಲಿದ್ದಾಗ ಮುಖ್ಯ ಮಂತ್ರಿ ಮಾತನಾಡಲಿಲ್ಲ. ಯೋಚನೆಗಳ
ಸುರುಳಿಯೊಳಗೆ ಆಗ ಅವಳು ಬಂದಿ,</br>
{{gap}}ಕಾಫಿ ಮುಗಿಯಿತು. ಮುಗುಲ್ನಕ್ಕಳು. ಯೋಚನೆಗಳ ಸಂಕೋಲೆಗಳು
ಕಳಚಿದುವು.</br>
{{gap}}ಬಂದವರು ಎದ್ದರು.</br>
{{gap}}“ಒಂಭತ್ತು ಗಂಟೆಗೆ ಸರಿಯಾಗಿ ಅಲ್ಲಿದ್ದೇವೆ.”</br>
{{gap}}“ತಮ್ಮ ದಾರಿ ನೋಡ್ತವೆ, ನಮಸ್ಕಾರ.”</br>
{{gap}}ಪ್ರತಿವಂದನೆ ಎನ್ನುವಂತೆ ಸೌದಾಮಿನಿ ತಲೆಯಾಡಿಸಿದಳು. ಜೀವನದಲ್ಲಿ ಮೊಟ್ಟ
ಮೊದಲ ಸಲ ತಾನು ನಮಸ್ಕಾರ ಪಡೆದುದು ಯಾವಾಗ ? ಕೊಟ್ಟವರು ಯಾರು ?
ಬೇರೆ ಯಾರೋ ಎಂದು ತಪ್ಪು ಗ್ರಹಿಸಿ ತನಗೆ ಕೈ ಜೋಡಿಸಿದಳೊ(ರೊ) ? ಹೆಂಗಸು,
ಹೆಂಗಸೇ ಅಂತ ತೋರದೆ ಆ ಪದ ಕೇಳಿದೊಡನೆ ಜೋಡಿಸಿದ ಕೈಗಳನ್ನು ಕಂಡೊ
ಡನೆ, ಅವಳ ಮೈ ಪುಲಕಗೊಂಡಿತ್ತು. ಆಮೇಲೆ ಬೀದಿಗಿಳಿದಾಗಲೆಲ್ಲ ನಮಸ್ಕಾರದ
ನಿರೀಕ್ಷೆಯಲ್ಲಿರುತ್ತಿದ್ದಳು. ಅದರ ಆಗಮನ ಸುಲಭಸಾಧ್ಯವಲ್ಲವೆಂದು ಮನವರಿಕೆ</br><noinclude></noinclude>
tog3szd7eaio2aojlyuw2juazhz0yjq
ಪುಟ:ಮಿಂಚು.pdf/೨೩೩
104
20680
320843
250568
2026-05-19T14:15:43Z
Pragathi. BH
7585
/* Validated */
320843
proofread-page
text/x-wiki
<noinclude><pagequality level="4" user="Pragathi. BH" /></noinclude>ಮಿಂಚು{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}227</br>
ಯಾದಾಗ, ಅರ್ಹರೆಂದು ಕಂಡವರಿಗೆ ತಾನೇ ನಮಸ್ಕರಿಸತೊಡಗಿದಳು. ಆಗ ಪ್ರತಿ</br>
ನಮಸ್ಕಾರ ದೊರೆಯುತ್ತಿತ್ತು. ಕ್ರಮೇಣ ಅವಳು ಗಣನೀಯ ವ್ಯಕ್ತಿಯಾದಾಗ, ಪ್ರತಿ</br>
ದಿನವೂ ನಮಸ್ಕಾರಗಳು ಹೇರಳವಾಗಿ ಸಿಗತೊಡಗಿದುವು.ಒಂದು ದಿವಸ ಕುತೂ</br>
ಹಲದಿಂದ ನಮಸ್ಕಾರಗಳನ್ನು ಎಣಿಸಿದ್ದಳು. ಸೆರಗಿಗೆ ಮನೆ ಸೇರುವ ಹೊತ್ತಿಗೆ ಅಂದು</br>
ಒಟ್ಟು ದೊರೆತುದು ನಾಲ್ವತ್ತಾರು ! ಈಗ ಸಹಸ್ರಾರು. ಸಹಸ್ರ ವಂದನೆಗಳಿಗೆ</br>
ಪ್ರತಿಯಾಗಿ ಒಂದನ್ನು ತಾನು ಕೊಟ್ಟರೆ ಸಾಕು, ಗೋಣು ಆಡಿಸಿದರೂ ಸರಿಯೆ.</br>
{{gap}}“ಪರಶುರಾಮ್....”</br>
{{gap}}“ಬಂದೆ ಮಾತಾಜಿ.”</br>
{{gap}}ಬಂದವನಿಗೆ ಅವಳಂದಳು :</br>
{{gap}}“ಚೌಗುಲೆಗೆ ಫೋನ್ ಮಾಡ್ತೀನೆ. ಹನ್ನೊಂದು ಗಂಟೆಗೆ ಹೋಗಿ ಭೇಟಿ</br>
ಯಾಗು.”</br>
{{gap}}“ಈಗ ಮನೆಯಲ್ಲಿದ್ದಾರೆ.”</br>
{{gap}}“ಕೊಡು.”</br>
{{gap}}ಅಲ್ಲಿಂದ : “ನಮಸ್ತೆ ಮಾತಾಜಿ”</br>
{{gap}}ಇಲ್ಲಿಂದ : “ಪರಶುರಾಮರ ಸರ್ವಿಸ್ ರೆಕಾರ್ಡ್ಸ್ ಸ್ವಲ್ಪ ನೋಡಿ, ವಾರ್ತಾ</br>
ಇಲಾಖೇಲಿ ಅವರಿಗೆ ಯಾವ ಹುದ್ದೆಯ ಸಮೀಕರಣವಾಗದೇಂತ ಪರಿಶೀಲಿಸಿ....</br>
ಸರಿ.... ಅನುಜ್ಞೆ ಹೊರಡಿಸಿ...ದುಡಿಮೆ ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ</br>
ಯಾಗಿಯೇ....ಆಜ್ಞಾಪತ್ರ ಇಲ್ಲಿಗೆ ಕಳಿಸಿಕೊಡ್ತೀರಾ ? ಥ್ಯಾಂಕ್ಸ್.”</br>
{{gap}}ಸೌದಾಮಿನಿ ಏನನ್ನಾದರೂ ಹೇಳಬಹುದೆಂದು ಪರಶುರಾಮ ಇದಿರು</br>
ನೋಡಿದ. ಮೌನದಿಂದ ಅಚ್ಚರಿಯಾಯಿತು,</br>
{{gap}}“ಇದೇನು ಮಾತಾಜಿ?____ಅಂತ ಕೇಳು,”</br>
{{gap}}ಅವನ ತುಟಿಗಳು ಬಿಮ್ಮನೆ ಬಿಗಿದುವು. ಆಕೆಯೇ ಹೇಳಿದಳು :</br>
{{gap}}“ಚೌಗುಲೆ ಜೊತೆ ನಾನೇನು ಮಾತನಾಡಿದೆ ಅಂತ ಊಹಿಸು ನೋಡೋಣ.”</br>
{{gap}}“ನನಗೆ ತಿಳೀದು, ಮಾತಾಜಿ.”</br>
{{gap}}“ನಿನ್ನದೊಂದು ತಮಾಷೆ ಸ್ವಿಚ್ಚು. ಒಂದು ಸಲ ಜೋರಾಗಿ ಉರಿದರೆ,</br>
ಇನ್ನೊಂದ್ಸಲ ಮಿಣಿಮಿಣಿ. ಲಾಟರೀಲಿ ನಿನ್ನ ಹಣೆಬರಹ ಹೇಗಿರುತ್ತೆ ನೋಡೋಣ.”</br>
{{gap}}ನಸುನಕ್ಕಂತೆ ಮಾಡಿ ಪರಶುರಾಮ ಸುಮ್ಮನಾದ. ಒಮ್ಮೆಲೆ ಆತಂಕದ ಮಾತು</br>
ಹೊರಟಿತು :</br>
{{gap}}“ನನ್ನ ಕುಟುಂಬದ ವಿಷಯ ಏನು ಮಾಡಲಿ ಮಾತಾಜಿ ?”</br>
{{gap}}“ಇಬ್ಬರೆಂಡಿರ ಕಾಟ...! ಕಾನೂನು ಕ್ರಮ ಇತ್ಯಾದಿಗೆ ಹೋಗೋಡ, ಎರಡು</br>
ಮನೆ ಮಾಡು. ಇಬ್ಬರನ್ನೂ ಪ್ರೀತಿಸು. ಇಬ್ಬರಿಗೂ ಹಣಕಾಸು, ಸೀರೆ, ಆಭರಣ</br>
ಕೊಡು. 'ಎರಡು ಮನೆ' ಇರುವವರು ಎಷ್ಟು ಜನ ಇಲ್ಲ ? ಅರ್ಥವಾಯ್ತಾ ?”</br><noinclude></noinclude>
gh1xx8kypobtgb2hn55jpaleculqwb8
320856
320843
2026-05-19T14:34:00Z
Pragathi. BH
7585
320856
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಮಿಂಚು|right=227}}</noinclude>
ಯಾದಾಗ, ಅರ್ಹರೆಂದು ಕಂಡವರಿಗೆ ತಾನೇ ನಮಸ್ಕರಿಸತೊಡಗಿದಳು. ಆಗ ಪ್ರತಿ
ನಮಸ್ಕಾರ ದೊರೆಯುತ್ತಿತ್ತು. ಕ್ರಮೇಣ ಅವಳು ಗಣನೀಯ ವ್ಯಕ್ತಿಯಾದಾಗ, ಪ್ರತಿ
ದಿನವೂ ನಮಸ್ಕಾರಗಳು ಹೇರಳವಾಗಿ ಸಿಗತೊಡಗಿದುವು.ಒಂದು ದಿವಸ ಕುತೂ
ಹಲದಿಂದ ನಮಸ್ಕಾರಗಳನ್ನು ಎಣಿಸಿದ್ದಳು. ಸೆರಗಿಗೆ ಮನೆ ಸೇರುವ ಹೊತ್ತಿಗೆ ಅಂದು
ಒಟ್ಟು ದೊರೆತುದು ನಾಲ್ವತ್ತಾರು ! ಈಗ ಸಹಸ್ರಾರು. ಸಹಸ್ರ ವಂದನೆಗಳಿಗೆ
ಪ್ರತಿಯಾಗಿ ಒಂದನ್ನು ತಾನು ಕೊಟ್ಟರೆ ಸಾಕು, ಗೋಣು ಆಡಿಸಿದರೂ ಸರಿಯೆ.</br>
{{gap}}“ಪರಶುರಾಮ್....”</br>
{{gap}}“ಬಂದೆ ಮಾತಾಜಿ.”</br>
{{gap}}ಬಂದವನಿಗೆ ಅವಳಂದಳು :</br>
{{gap}}“ಚೌಗುಲೆಗೆ ಫೋನ್ ಮಾಡ್ತೀನೆ. ಹನ್ನೊಂದು ಗಂಟೆಗೆ ಹೋಗಿ ಭೇಟಿ</br>
ಯಾಗು.”</br>
{{gap}}“ಈಗ ಮನೆಯಲ್ಲಿದ್ದಾರೆ.”</br>
{{gap}}“ಕೊಡು.”</br>
{{gap}}ಅಲ್ಲಿಂದ : “ನಮಸ್ತೆ ಮಾತಾಜಿ”</br>
{{gap}}ಇಲ್ಲಿಂದ : “ಪರಶುರಾಮರ ಸರ್ವಿಸ್ ರೆಕಾರ್ಡ್ಸ್ ಸ್ವಲ್ಪ ನೋಡಿ, ವಾರ್ತಾ
ಇಲಾಖೇಲಿ ಅವರಿಗೆ ಯಾವ ಹುದ್ದೆಯ ಸಮೀಕರಣವಾಗದೇಂತ ಪರಿಶೀಲಿಸಿ....
ಸರಿ.... ಅನುಜ್ಞೆ ಹೊರಡಿಸಿ...ದುಡಿಮೆ ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ
ಯಾಗಿಯೇ....ಆಜ್ಞಾಪತ್ರ ಇಲ್ಲಿಗೆ ಕಳಿಸಿಕೊಡ್ತೀರಾ ? ಥ್ಯಾಂಕ್ಸ್.”</br>
{{gap}}ಸೌದಾಮಿನಿ ಏನನ್ನಾದರೂ ಹೇಳಬಹುದೆಂದು ಪರಶುರಾಮ ಇದಿರು</br>
ನೋಡಿದ. ಮೌನದಿಂದ ಅಚ್ಚರಿಯಾಯಿತು,</br>
{{gap}}“ಇದೇನು ಮಾತಾಜಿ?____ಅಂತ ಕೇಳು,”</br>
{{gap}}ಅವನ ತುಟಿಗಳು ಬಿಮ್ಮನೆ ಬಿಗಿದುವು. ಆಕೆಯೇ ಹೇಳಿದಳು :</br>
{{gap}}“ಚೌಗುಲೆ ಜೊತೆ ನಾನೇನು ಮಾತನಾಡಿದೆ ಅಂತ ಊಹಿಸು ನೋಡೋಣ.”</br>
{{gap}}“ನನಗೆ ತಿಳೀದು, ಮಾತಾಜಿ.”</br>
{{gap}}“ನಿನ್ನದೊಂದು ತಮಾಷೆ ಸ್ವಿಚ್ಚು. ಒಂದು ಸಲ ಜೋರಾಗಿ ಉರಿದರೆ,</br>
ಇನ್ನೊಂದ್ಸಲ ಮಿಣಿಮಿಣಿ. ಲಾಟರೀಲಿ ನಿನ್ನ ಹಣೆಬರಹ ಹೇಗಿರುತ್ತೆ ನೋಡೋಣ.”</br>
{{gap}}ನಸುನಕ್ಕಂತೆ ಮಾಡಿ ಪರಶುರಾಮ ಸುಮ್ಮನಾದ. ಒಮ್ಮೆಲೆ ಆತಂಕದ ಮಾತು</br>
ಹೊರಟಿತು :</br>
{{gap}}“ನನ್ನ ಕುಟುಂಬದ ವಿಷಯ ಏನು ಮಾಡಲಿ ಮಾತಾಜಿ ?”</br>
{{gap}}“ಇಬ್ಬರೆಂಡಿರ ಕಾಟ...! ಕಾನೂನು ಕ್ರಮ ಇತ್ಯಾದಿಗೆ ಹೋಗೋಡ, ಎರಡು
ಮನೆ ಮಾಡು. ಇಬ್ಬರನ್ನೂ ಪ್ರೀತಿಸು. ಇಬ್ಬರಿಗೂ ಹಣಕಾಸು, ಸೀರೆ, ಆಭರಣ
ಕೊಡು. 'ಎರಡು ಮನೆ' ಇರುವವರು ಎಷ್ಟು ಜನ ಇಲ್ಲ ? ಅರ್ಥವಾಯ್ತಾ ?”</br><noinclude></noinclude>
eb2f00188b2q9xojqdqlql5l2mj2hg3
ಪುಟ:ಮಿಂಚು.pdf/೨೩೪
104
20681
320844
250633
2026-05-19T14:15:53Z
Pragathi. BH
7585
/* Validated */
320844
proofread-page
text/x-wiki
<noinclude><pagequality level="4" user="Pragathi. BH" /></noinclude>228{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}}{{gap}} ಮಿಂಚು</br>
{{gap}}“ಆಯ್ತು, ಮಾತಾಜಿ."</br>
{{gap}}........ಹನ್ನೆರಡು ಆಗುತ್ತಿದ್ದಂತೆ ದಿಲ್ಲಿಯ ಕಿಂಧಾ ಸಂಪರ್ಕಾಧಿಕಾರಿ</br>
ಫರ್ನಾಂಡೀಸ್ನ ಕರೆ ಬಂತು,</br>
{{gap}}ಮಾರ್ದವತೆ ತುಂಬಿದ ಧ್ವನಿಯಲ್ಲಿ ಸೌದಾಮಿನಿ ಅಂದಳು :</br>
{{gap}}“ಹಲೋ ಸಂಪರ್ಕಾಧಿಕಾರಿ ಫೆರ್ನಾಂಡೀಸ್ ! ನಮ್ಮ ಸ್ಪೀಕರ್ ಮತ್ತು ಶಾಸಕ</br>
ಏನ್ಮಾಡ್ತಿದಾರೆ ?”</br>
{{gap}}“ಕುಟೀರಕ್ಕೆ ಬರಲಿಲ್ಲ. ನಕುಲದೇವ್ಜಿ ಅವರನ್ನು ಕರಕೊಂಡು ಪ್ರಧಾನಿ</br>
ಯವರನ್ನು ಕಾಡ್ತಾರೆ ಅಂತ 'ಹಿಂದೂಸ್ಥಾನ್ ಹೆರಾಲ್ಡ್' ಮಿತ್ರನಿಂದ ತಿಳೀತು”</br>
{{gap}}“ನಮ್ಮ ಇಬ್ಬರು ಪತ್ರಿಕಾಗೋಷ್ಠಿ ಕರೆಯೋದಿಲ್ಲ ?”</br>
{{gap}}“ಇಷ್ಟರವರೆಗೆ ಅದರ ಸುದ್ದಿ ಇಲ್ಲ.”</br>
{{gap}}“ಸಂಜೆ ಅಲ್ಲಿಂದ ಯಾರು ಯಾರು ಹೊರಡ್ತಾರೇಂತ ತಿಳಕೊಂಡು ಫೋನ್</br>
ಮಾಡಿ. ವಿಮಾನ ನಿಲ್ದಾಣಕ್ಕೆ ಹೋಗಿ ನಮಸ್ಕಾರ ಮಾಡಿದರೂ ತಪ್ಪಿಲ್ಲ.”</br>
{{gap}}“ನನಗೆ ವಿಶ್ವಂಭರರ ಪರಿಚಯ ಇಲ್ಲ.”</br>
{{gap}}“ನಕುಲದೇವ್ಜಿಗೆ ಸಲಾಂ ಹೊಡೀರಿ."</br>
{{gap}}“ಆಗಲಿ, ಮಾತಾಜಿ, ನಿಲ್ದಾಣದಿಂದ ವಾಪಸು ಬಂದು ಫೋನ್ ಮಾಡ್ತೀನಿ.”</br>
{{gap}}“ಹೂಂ, ಗೃಹ ಕಾರಾಲಯದಲ್ಲೇ ಇದ್ದೇವೆ.”</br>
{{gap}}ಚೌಗುಲೆಯವರ ದೂತ ಪರಶುರಾಮನಿಗೆ ಆಜ್ಞಾಪತ್ರ ತಂದ. ಅಂಟಿಸಿದ</br>
ಲಕೋಟೆ, ಸೌದಾಮಿನಿ ತೆರೆದು ಓದಿದಳು. ಮುಖ ಅಗಲಿಸಿ, ಆಪ್ತ ಕಾರ್ಯದರ್ಶಿಗೆ</br>
ಅಂದಳು :</br>
{{gap}}“ತಗೋ. ಲಕೋಟೆ, ಕಾಗದ ಎರಡೂ.”</br>
{{gap}}ಕೊಠಡಿಯಿಂದ ಹೊರಬಿದ್ದು ಒಬ್ಬನೇ ಮೂಲೆಯಲ್ಲಿ ನಿಂತು ಆಜ್ಞಾಪತ್ರ</br>
ವನ್ನು ಓದಿದ, ಇನ್ನು ಪರಶುರಾಮ ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ.</br>
ನಂಬಲಾರ, ಮಾತಾಜಿ ಸಾಧಿಸಿದ ಪವಾಡ,</br>
{{gap}}ವಾರ್ತಾ ಇಲಾಖೆಯ ನಿರ್ದೇಶಕನಿಂದ ಫೋನ್ ಬಂತು :</br>
{{gap}}“ಹಿಂದೆ ಒಮ್ಮೆ ನಾನು ಹೇಳಿದ್ದು ನೆನಪಿದೆಯ ಮಿ. ಪರಶುರಾಮ್ ?”</br>
{{gap}}“ಹೌದಲ್ಲ ? ನೀವು ತಮಾಷೆಗೆ ಹೇಳಿದ್ದಿರಿ.”</br>
{{gap}}“ಈಗ ನಿಜವಾಗಿದೆ.”</br>
{{gap}}“ಏನಿದ್ದರೂ ನಾನು ಇಲ್ಲೇ ಇದ್ದೀನಿ.”</br>
{{gap}}“ಅದ್ದರಿ. ಯಾವಾಗಲಾದರೂ ಬೇಸರ ಅನಿಸಿದಾಗ, ಅಥವಾ ಎತ್ತಂಗಡಿ</br>
ಆದಾಗ ನೀವು ಇಲ್ಲಿಗೆ ಬಂದೇ ಬರೀರಿ, ಜೋಡಿ ಕತ್ತೆ ದುಡಿತ ಚೆನ್ನಾಗಿದೆ.”</br>
{{gap}}“ಏನೋಪ್ಪ.”</br>
{{gap}}ಸ್ವರತಗ್ಗಿಸಿ ಆ ಕಡೆಯಿಂದ ನಿರ್ದೇಶಕ ಕೇಳಿದ :</br><noinclude></noinclude>
8xpz4b5wvoyzha7q5n22l0cvitkzcab
320855
320844
2026-05-19T14:31:10Z
Pragathi. BH
7585
320855
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಮಿಂಚು|right=228}}</noinclude>
{{gap}}“ಆಯ್ತು, ಮಾತಾಜಿ."</br>
{{gap}}........ಹನ್ನೆರಡು ಆಗುತ್ತಿದ್ದಂತೆ ದಿಲ್ಲಿಯ ಕಿಂಧಾ ಸಂಪರ್ಕಾಧಿಕಾರಿ</br>
ಫರ್ನಾಂಡೀಸ್ನ ಕರೆ ಬಂತು,</br>
{{gap}}ಮಾರ್ದವತೆ ತುಂಬಿದ ಧ್ವನಿಯಲ್ಲಿ ಸೌದಾಮಿನಿ ಅಂದಳು :</br>
{{gap}}“ಹಲೋ ಸಂಪರ್ಕಾಧಿಕಾರಿ ಫೆರ್ನಾಂಡೀಸ್ ! ನಮ್ಮ ಸ್ಪೀಕರ್ ಮತ್ತು ಶಾಸಕ
ಏನ್ಮಾಡ್ತಿದಾರೆ ?”</br>
{{gap}}“ಕುಟೀರಕ್ಕೆ ಬರಲಿಲ್ಲ. ನಕುಲದೇವ್ಜಿ ಅವರನ್ನು ಕರಕೊಂಡು ಪ್ರಧಾನಿ
ಯವರನ್ನು ಕಾಡ್ತಾರೆ ಅಂತ 'ಹಿಂದೂಸ್ಥಾನ್ ಹೆರಾಲ್ಡ್' ಮಿತ್ರನಿಂದ ತಿಳೀತು”</br>
{{gap}}“ನಮ್ಮ ಇಬ್ಬರು ಪತ್ರಿಕಾಗೋಷ್ಠಿ ಕರೆಯೋದಿಲ್ಲ ?”</br>
{{gap}}“ಇಷ್ಟರವರೆಗೆ ಅದರ ಸುದ್ದಿ ಇಲ್ಲ.”</br>
{{gap}}“ಸಂಜೆ ಅಲ್ಲಿಂದ ಯಾರು ಯಾರು ಹೊರಡ್ತಾರೇಂತ ತಿಳಕೊಂಡು ಫೋನ್
ಮಾಡಿ. ವಿಮಾನ ನಿಲ್ದಾಣಕ್ಕೆ ಹೋಗಿ ನಮಸ್ಕಾರ ಮಾಡಿದರೂ ತಪ್ಪಿಲ್ಲ.”</br>
{{gap}}“ನನಗೆ ವಿಶ್ವಂಭರರ ಪರಿಚಯ ಇಲ್ಲ.”</br>
{{gap}}“ನಕುಲದೇವ್ಜಿಗೆ ಸಲಾಂ ಹೊಡೀರಿ."</br>
{{gap}}“ಆಗಲಿ, ಮಾತಾಜಿ, ನಿಲ್ದಾಣದಿಂದ ವಾಪಸು ಬಂದು ಫೋನ್ ಮಾಡ್ತೀನಿ.”</br>
{{gap}}“ಹೂಂ, ಗೃಹ ಕಾರಾಲಯದಲ್ಲೇ ಇದ್ದೇವೆ.”</br>
{{gap}}ಚೌಗುಲೆಯವರ ದೂತ ಪರಶುರಾಮನಿಗೆ ಆಜ್ಞಾಪತ್ರ ತಂದ. ಅಂಟಿಸಿದ
ಲಕೋಟೆ, ಸೌದಾಮಿನಿ ತೆರೆದು ಓದಿದಳು. ಮುಖ ಅಗಲಿಸಿ, ಆಪ್ತ ಕಾರ್ಯದರ್ಶಿಗೆ
ಅಂದಳು :</br>
{{gap}}“ತಗೋ. ಲಕೋಟೆ, ಕಾಗದ ಎರಡೂ.”</br>
{{gap}}ಕೊಠಡಿಯಿಂದ ಹೊರಬಿದ್ದು ಒಬ್ಬನೇ ಮೂಲೆಯಲ್ಲಿ ನಿಂತು ಆಜ್ಞಾಪತ್ರ
ವನ್ನು ಓದಿದ, ಇನ್ನು ಪರಶುರಾಮ ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ.</br>
ನಂಬಲಾರ, ಮಾತಾಜಿ ಸಾಧಿಸಿದ ಪವಾಡ,</br>
{{gap}}ವಾರ್ತಾ ಇಲಾಖೆಯ ನಿರ್ದೇಶಕನಿಂದ ಫೋನ್ ಬಂತು :</br>
{{gap}}“ಹಿಂದೆ ಒಮ್ಮೆ ನಾನು ಹೇಳಿದ್ದು ನೆನಪಿದೆಯ ಮಿ. ಪರಶುರಾಮ್ ?”</br>
{{gap}}“ಹೌದಲ್ಲ ? ನೀವು ತಮಾಷೆಗೆ ಹೇಳಿದ್ದಿರಿ.”</br>
{{gap}}“ಈಗ ನಿಜವಾಗಿದೆ.”</br>
{{gap}}“ಏನಿದ್ದರೂ ನಾನು ಇಲ್ಲೇ ಇದ್ದೀನಿ.”</br>
{{gap}}“ಅದ್ದರಿ. ಯಾವಾಗಲಾದರೂ ಬೇಸರ ಅನಿಸಿದಾಗ, ಅಥವಾ ಎತ್ತಂಗಡಿ
ಆದಾಗ ನೀವು ಇಲ್ಲಿಗೆ ಬಂದೇ ಬರೀರಿ, ಜೋಡಿ ಕತ್ತೆ ದುಡಿತ ಚೆನ್ನಾಗಿದೆ.”</br>
{{gap}}“ಏನೋಪ್ಪ.”</br>
{{gap}}ಸ್ವರತಗ್ಗಿಸಿ ಆ ಕಡೆಯಿಂದ ನಿರ್ದೇಶಕ ಕೇಳಿದ :</br><noinclude></noinclude>
6i19fhc6y09o59z7ghbjtjx4cr49jec
ಪುಟ:ಮಿಂಚು.pdf/೨೩೫
104
20682
320845
206829
2026-05-19T14:16:05Z
Pragathi. BH
7585
/* Validated */
320845
proofread-page
text/x-wiki
<noinclude><pagequality level="4" user="Pragathi. BH" /></noinclude>ಮಿಂಚು 229
"ನಾಳೆ ಏನಾಗುತ್ತೆ ? ಈ ಆಜ್ಞಾಪತ್ರ ಅದಕ್ಕೆ ಸಿದ್ಧತೆ ಅಂದ್ಕೊಂಡೆ."
"ಗೊತ್ತಿಲ್ಲ."
"ಗೊತ್ತಿದೆ ಅಂತ ನೀವು ಯಾವತ್ತಾದರೂ ಹೇಳಿದೀರಾ ? ಅದೇ ನಿಮ್ಮ ಯಶಸ್ಸಿನ ಗುಟ್ಟು !"
"ಇಡ್ತೀನಿ"
"ಮಾತಾಜಿ ಅಲ್ಲೇ ಇದಾರೆ ಅಲ್ವಾ ?"
ಮುಖ್ಯಮಂತ್ರಿ ಕೇಳಿದಳು :
"ಯಾರು ? ನಿನ್ನ ಇಲಾಖಾ ನಿರ್ದೇಶಕನಾ ?"
"ಹೌದು, ಮಾತಾಜಿ."
"ನಾಳೆ ಏನಾಗುತ್ತೆ ಅಂತ ತಿಳಿಯುವ ತವಕ ಎಲ್ಲರಿಗೂ-ಅಲ್ಲವಾ?"
"ಹೊಂ."
"ಜಂಟಿ ನಿರ್ದೆಶಕ ಮಾಡ್ದೆ, ಕೃತಜ್ಞತೆ ಸಲ್ಲಿಸೋದಿಲ್ಲವ?"
ಪರಶುರಾಮ ಮುಖ್ಯಮಂತ್ರಿಯ ಬಳಿಸಾರಿ ಪಾದ ಮುಟ್ಟಿದ.
"ಏಳು, ಮರುಳ!"
ಸೌದಾಮಿನಿ ಪರಶುರಾಮನ ಎರಡೂ ಭುಜಗಳನ್ನು ಹಿಡಿದು ಮೇಲಕ್ಕೆ ಎತ್ತಿದಳು. ಧಾರೆಗಟ್ಟಿ ಹರಿಯುತ್ತಿದ್ದ ತನ್ನ ಕಂಬನಿಯನ್ನು ಅವನು ಕರವಸ್ತ್ರದಿಂದ ಒರೆಸಿದ.
ತಕ್ಷಣವೆ ಮೊದಲಿನಂತಾಗಿ, "ಲಂಚ್ ರೆಡಿ ಮಾಡೋದಕ್ಕೆ ಹೇಳ್ಲಾ?" ಎಂದು ಕೇಳಿದ.
"ಹೇಳು."
ಪುಟ್ಟ ಲಂಚ್. ಹಸಿವಿಲ್ಲ. ನಾಲಗೆ ರುಚಿ ಇಲ್ಲ....
....ಊಟದ ಕ್ರಿಯೆ ಮುಗಿಸಿ ಹೊರ ಬಂದೊಡನೆ ಅವಳೆಂದಳು :
"ನೀನು ಮನೆಗೆ ಹೋಗಿ ಬಾ. ಫೋನ್ ನಾನೇ ಎತ್ತುತೀನಿ."
ಪರಶುರಾಮ ಹೊರಗೆ ಕಾಲಿಡುತ್ತಿದ್ದಂತೆ ಫೋನ್ ಬಂತು. ಪರವಾಗಿಲ್ಲ, ಹೋಗು-ಎಂದು ಸೌದಾಮಿನಿ ಸನ್ನೆ ಮಾಡಿದಳು: ಸ್ವತಃ ತಾನು ಫೋನ್ ಎತ್ತಿದಳು.
"ಚೀಫ್ ಮಿನಿಸ್ಟರ ನಿವಾಸ."
"ಕಾಕಿನಾಡದಿಂದ ಬಂದಿದ್ದೇವೆ.ಸ್ವಲ್ಪ ಅವರನ್ನು ಅರ್ಜೆಂಟಾಗಿ ಕಾಣ್ಬೇಕಾಗಿತ್ತು."
"ಯಾವ ಸಂಬಂಧವಾಗಿ ?"
"ಕಿಷ್ಕಿಂಧೆಯಲ್ಲಿ ಒಂದು ಪೆಪ್ಪರ್ಮಿಂಟ್ ಫ್ಯಾಕ್ಟರಿ ಆರಂಭಿಸಬೇಕೂಂತ ಅಪೇಕ್ಷೆ."<noinclude></noinclude>
91soxnoudch2q2wbkcmc6iwdi811q29
320854
320845
2026-05-19T14:29:03Z
Pragathi. BH
7585
320854
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಮಿಂಚು|right=229}}</noinclude>
"ನಾಳೆ ಏನಾಗುತ್ತೆ ? ಈ ಆಜ್ಞಾಪತ್ರ ಅದಕ್ಕೆ ಸಿದ್ಧತೆ ಅಂದ್ಕೊಂಡೆ."
"ಗೊತ್ತಿಲ್ಲ."
"ಗೊತ್ತಿದೆ ಅಂತ ನೀವು ಯಾವತ್ತಾದರೂ ಹೇಳಿದೀರಾ ? ಅದೇ ನಿಮ್ಮ ಯಶಸ್ಸಿನ ಗುಟ್ಟು !"
"ಇಡ್ತೀನಿ"
"ಮಾತಾಜಿ ಅಲ್ಲೇ ಇದಾರೆ ಅಲ್ವಾ ?"
ಮುಖ್ಯಮಂತ್ರಿ ಕೇಳಿದಳು :
"ಯಾರು ? ನಿನ್ನ ಇಲಾಖಾ ನಿರ್ದೇಶಕನಾ ?"
"ಹೌದು, ಮಾತಾಜಿ."
"ನಾಳೆ ಏನಾಗುತ್ತೆ ಅಂತ ತಿಳಿಯುವ ತವಕ ಎಲ್ಲರಿಗೂ-ಅಲ್ಲವಾ?"
"ಹೊಂ."
"ಜಂಟಿ ನಿರ್ದೆಶಕ ಮಾಡ್ದೆ, ಕೃತಜ್ಞತೆ ಸಲ್ಲಿಸೋದಿಲ್ಲವ?"
ಪರಶುರಾಮ ಮುಖ್ಯಮಂತ್ರಿಯ ಬಳಿಸಾರಿ ಪಾದ ಮುಟ್ಟಿದ.
"ಏಳು, ಮರುಳ!"
ಸೌದಾಮಿನಿ ಪರಶುರಾಮನ ಎರಡೂ ಭುಜಗಳನ್ನು ಹಿಡಿದು ಮೇಲಕ್ಕೆ ಎತ್ತಿದಳು. ಧಾರೆಗಟ್ಟಿ ಹರಿಯುತ್ತಿದ್ದ ತನ್ನ ಕಂಬನಿಯನ್ನು ಅವನು ಕರವಸ್ತ್ರದಿಂದ ಒರೆಸಿದ.
ತಕ್ಷಣವೆ ಮೊದಲಿನಂತಾಗಿ, "ಲಂಚ್ ರೆಡಿ ಮಾಡೋದಕ್ಕೆ ಹೇಳ್ಲಾ?" ಎಂದು ಕೇಳಿದ.
"ಹೇಳು."
ಪುಟ್ಟ ಲಂಚ್. ಹಸಿವಿಲ್ಲ. ನಾಲಗೆ ರುಚಿ ಇಲ್ಲ....
....ಊಟದ ಕ್ರಿಯೆ ಮುಗಿಸಿ ಹೊರ ಬಂದೊಡನೆ ಅವಳೆಂದಳು :
"ನೀನು ಮನೆಗೆ ಹೋಗಿ ಬಾ. ಫೋನ್ ನಾನೇ ಎತ್ತುತೀನಿ."
ಪರಶುರಾಮ ಹೊರಗೆ ಕಾಲಿಡುತ್ತಿದ್ದಂತೆ ಫೋನ್ ಬಂತು. ಪರವಾಗಿಲ್ಲ, ಹೋಗು-ಎಂದು ಸೌದಾಮಿನಿ ಸನ್ನೆ ಮಾಡಿದಳು: ಸ್ವತಃ ತಾನು ಫೋನ್ ಎತ್ತಿದಳು.
"ಚೀಫ್ ಮಿನಿಸ್ಟರ ನಿವಾಸ."
"ಕಾಕಿನಾಡದಿಂದ ಬಂದಿದ್ದೇವೆ.ಸ್ವಲ್ಪ ಅವರನ್ನು ಅರ್ಜೆಂಟಾಗಿ ಕಾಣ್ಬೇಕಾಗಿತ್ತು."
"ಯಾವ ಸಂಬಂಧವಾಗಿ ?"
"ಕಿಷ್ಕಿಂಧೆಯಲ್ಲಿ ಒಂದು ಪೆಪ್ಪರ್ಮಿಂಟ್ ಫ್ಯಾಕ್ಟರಿ ಆರಂಭಿಸಬೇಕೂಂತ ಅಪೇಕ್ಷೆ."<noinclude></noinclude>
aplgemlwtscjai31phf6w391a8zbgks
ಪುಟ:ಮಿಂಚು.pdf/೨೩೬
104
20683
320846
206830
2026-05-19T14:16:18Z
Pragathi. BH
7585
/* Validated */
320846
proofread-page
text/x-wiki
<noinclude><pagequality level="4" user="Pragathi. BH" /></noinclude>230 ಮಿಂಚು
"ಇವತ್ತು ನಾಳೆ ಆಗೋದಿಲ್ಲ. ಸೋಮವಾರ ನಾಲ್ಕು ಗಂಟೆಗೆ ಕಾರ್ಯ ಸೌಧಕ್ಕೆ ಬನ್ನಿ."
"ವ್ಯವಹಾರ ಮುಗಿಸಿ ಈ ರಾತ್ರೆಯೇ ಊರಿಗೆ ವಾಪಸಾಗೋಣಾಂತಿದ್ವಿ."
"ಕುದುರೆ ಮೇಲೆ ಕೂತೇ ಇದ್ದೀರಲ್ಲ. ವಿಶ್ರಾಂತಿ ತಗೊಳ್ಳಿ. ನಾಡದ್ದು ಬನ್ನಿ."
ಸೌದಾಮಿನಿ ಫೋನನ್ನು ಟಕ್ ಎಂದು ಕೆಳಗಿಟ್ಟಳು.
ಎರಡು ಮೂರು ನಿಮಿಷಗಳಲ್ಲಿ ಇನ್ನೊಂದು ಕರೆ ಬಂತು:
"ಪರಶುರಾಮ್ ಅವರು ಇಲ್ಲವ?"
ಸ್ವರವನ್ನು ಗೊಗ್ಗರಗೊಳಿಸಿ ಸೌದಾಮಿನಿ ಅಂದಳು:
"ಕಾಲು ಗಂಟೆ ಬಿಟ್ಕೊಂಡು ಫೋನ್ ಮಾಡಿ."
“ನಾನು ಮುರಬದ ಶಾಸಕ. ಶಾಸಕರ ಭವನದಲ್ಲಿದ್ದೇನೆ. ಅರ್ಜೆಂಟ್. ಫೋನ್ ಮಾಡೋದಕ್ಕೆ ಅವರಿಗೇ ಹೇಳಿ."
ಒಬ್ಬಳಿಂದಲೇ ವಿವಿಧ ಪಾತ್ಪಾಭಿನಯ.
ಮತ್ತೊಂದು ರಿಂಗ್ ಬಂತು. ರಿಸೀವರನ್ನು ಎತ್ತಿ ಇಟ್ಟಳು. ಸಂಪರ್ಕ ಕಡಿಯಿತ, ಇನ್ನೊಂದು ರಿಂಗ್. ಪುನಃ ಹಿಂದಿನಂತೆ ಎತ್ತಿಟ್ಟಳು. ಹೀಗೆ ನಾಲ್ಕು ಬಾರಿ. ರಾಬರ್ಟ್ ಬ್ರೂಸ್ನ ತಾಳ್ಮೆ ಇರಲಿಲ್ಲ ಆತನಿಗೆ. ಫೋನ್ ಕೆಟ್ಟಿರಬೇಕೆಂದು ಭಾವಿಸಿ ಸುಮ್ಮನಾದ.
ಪ್ಲಗ್ ತೆಗೆಯದೆ ರಿಸೀವರನ್ನಷ್ಟೆ ಕೆಳಗಿಟ್ಟರೆ? ಟರ್ರ್ರ್ರ್.
ತಾನು ಮೊದಲು ಫೋನ್ ಮಾಡಿದ್ದು ಎಲ್ಲಿ? ಯಾವಾಗ? ಯಾಕೆ?
ಮುಂಬಯಿ ನಗರದಲ್ಲಿ. ಉಳಿದ ಪ್ರಶ್ನೆಗೆ ಉತ್ತರ ತಿಳಿಯದು.
ಪರಶುರಾಮ ನೂರಾರು ಜನರಿಗೆ ನೆನಪಿನಿಂದಲೆ ರಿಂಗ್ ಮಾಡಬಲ್ಲ. ತಾನು ಒಬ್ಬರಿಗಾದರೂ ನೆರವಿಲ್ಲದೆ ಹಲ್ಲೋ ಎನ್ನಬಲ್ಲೆನೆ? ಮುಖ್ಯಮಂತ್ರಿಯ ಅಧಿಕೃತ ನಂಬರಿನ ಕಾರಿನ ನೆನಪಾದರೂ ಉಂಟೆ ತನಗೆ ? ಸಾವಿರ ? ಲಕ್ಷ? ಕೋಟಿ? ಊಹೂಂ. ಒಮ್ಮೆ ತನಗೆ ಬಾಲ್ಯದಲ್ಲಿ, ಹೆದ್ದಾರಿಯಲ್ಲಿ, ಒಂದು ರೂಪಾಯಿ ನಾಣ್ಯ ಸಿಕ್ಕಿತು. ಅತ್ತಿತ್ತ ನೋಡದೆ ಅದನ್ನೆತ್ತಿಕೊಂಡು ಕಾಲಿಗೆ ಬುದ್ದಿ ಹೇಳಿದ್ದೆ ಅದನ್ನು ಎಷ್ಟೋ ಕಾಲ ಸುರಕ್ಷಿತವಾಗಿ ಇಟ್ಟಿದ್ದೆ. ಪುಟ್ಟವ್ವನಾಗಿದ್ದಾಗಲೂ ಅದಿತ್ತು. ಅಲ್ಲಿ ಯಾರೋ ಕದ್ದರು.
ಹೊತ್ತು ಕಳೆಯಬೇಕು. ವಿಮಾನ ನಿಲ್ದಾಣದಲ್ಲಿ ಹಾಜರಿ ಹಾಕುವ ಹೊತ್ತಾಯಿತೆ ?
ನಿಮಿಷಗಳನ್ನು ಕಲೆ ಹಾಕಬೇಕು.
ಕ್ಷಣವೊಂದು ಯುಗವಾಗಿ ?<noinclude></noinclude>
strsbrr1lbuhbcm4fc8ln8q6ee5snji
320853
320846
2026-05-19T14:27:34Z
Pragathi. BH
7585
320853
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಮಿಂಚು|right=230}}</noinclude>
{{gap}}"ಇವತ್ತು ನಾಳೆ ಆಗೋದಿಲ್ಲ. ಸೋಮವಾರ ನಾಲ್ಕು ಗಂಟೆಗೆ ಕಾರ್ಯ ಸೌಧಕ್ಕೆ ಬನ್ನಿ."
{{gap}}"ವ್ಯವಹಾರ ಮುಗಿಸಿ ಈ ರಾತ್ರೆಯೇ ಊರಿಗೆ ವಾಪಸಾಗೋಣಾಂತಿದ್ವಿ."
{{gap}}"ಕುದುರೆ ಮೇಲೆ ಕೂತೇ ಇದ್ದೀರಲ್ಲ. ವಿಶ್ರಾಂತಿ ತಗೊಳ್ಳಿ. ನಾಡದ್ದು ಬನ್ನಿ."<br />
{{gap}}ಸೌದಾಮಿನಿ ಫೋನನ್ನು ಟಕ್ ಎಂದು ಕೆಳಗಿಟ್ಟಳು.<br />
{{gap}}ಎರಡು ಮೂರು ನಿಮಿಷಗಳಲ್ಲಿ ಇನ್ನೊಂದು ಕರೆ ಬಂತು:<br />
{{gap}}"ಪರಶುರಾಮ್ ಅವರು ಇಲ್ಲವ?"<br />
{{gap}}ಸ್ವರವನ್ನು ಗೊಗ್ಗರಗೊಳಿಸಿ ಸೌದಾಮಿನಿ ಅಂದಳು:<br />
{{gap}}"ಕಾಲು ಗಂಟೆ ಬಿಟ್ಕೊಂಡು ಫೋನ್ ಮಾಡಿ."<br />
{{gap}}“ನಾನು ಮುರಬದ ಶಾಸಕ. ಶಾಸಕರ ಭವನದಲ್ಲಿದ್ದೇನೆ. ಅರ್ಜೆಂಟ್. ಫೋನ್ ಮಾಡೋದಕ್ಕೆ ಅವರಿಗೇ ಹೇಳಿ."<br />
{{gap}}ಒಬ್ಬಳಿಂದಲೇ ವಿವಿಧ ಪಾತ್ಪಾಭಿನಯ.<br />
{{gap}}ಮತ್ತೊಂದು ರಿಂಗ್ ಬಂತು. ರಿಸೀವರನ್ನು ಎತ್ತಿ ಇಟ್ಟಳು. ಸಂಪರ್ಕ ಕಡಿಯಿತ, ಇನ್ನೊಂದು ರಿಂಗ್. ಪುನಃ ಹಿಂದಿನಂತೆ ಎತ್ತಿಟ್ಟಳು. ಹೀಗೆ ನಾಲ್ಕು ಬಾರಿ. ರಾಬರ್ಟ್ ಬ್ರೂಸ್ನ ತಾಳ್ಮೆ ಇರಲಿಲ್ಲ ಆತನಿಗೆ. ಫೋನ್ ಕೆಟ್ಟಿರಬೇಕೆಂದು ಭಾವಿಸಿ ಸುಮ್ಮನಾದ.<br />
{{gap}}ಪ್ಲಗ್ ತೆಗೆಯದೆ ರಿಸೀವರನ್ನಷ್ಟೆ ಕೆಳಗಿಟ್ಟರೆ? ಟರ್ರ್ರ್ರ್.<br />
{{gap}}ತಾನು ಮೊದಲು ಫೋನ್ ಮಾಡಿದ್ದು ಎಲ್ಲಿ? ಯಾವಾಗ? ಯಾಕೆ?
{{gap}}ಮುಂಬಯಿ ನಗರದಲ್ಲಿ. ಉಳಿದ ಪ್ರಶ್ನೆಗೆ ಉತ್ತರ ತಿಳಿಯದು.<br />
{{gap}}ಪರಶುರಾಮ ನೂರಾರು ಜನರಿಗೆ ನೆನಪಿನಿಂದಲೆ ರಿಂಗ್ ಮಾಡಬಲ್ಲ. ತಾನು ಒಬ್ಬರಿಗಾದರೂ ನೆರವಿಲ್ಲದೆ ಹಲ್ಲೋ ಎನ್ನಬಲ್ಲೆನೆ? ಮುಖ್ಯಮಂತ್ರಿಯ ಅಧಿಕೃತ ನಂಬರಿನ ಕಾರಿನ ನೆನಪಾದರೂ ಉಂಟೆ ತನಗೆ ? ಸಾವಿರ ? ಲಕ್ಷ? ಕೋಟಿ? ಊಹೂಂ. ಒಮ್ಮೆ ತನಗೆ ಬಾಲ್ಯದಲ್ಲಿ, ಹೆದ್ದಾರಿಯಲ್ಲಿ, ಒಂದು ರೂಪಾಯಿ ನಾಣ್ಯ ಸಿಕ್ಕಿತು. ಅತ್ತಿತ್ತ ನೋಡದೆ ಅದನ್ನೆತ್ತಿಕೊಂಡು ಕಾಲಿಗೆ ಬುದ್ದಿ ಹೇಳಿದ್ದೆ ಅದನ್ನು ಎಷ್ಟೋ ಕಾಲ ಸುರಕ್ಷಿತವಾಗಿ ಇಟ್ಟಿದ್ದೆ. ಪುಟ್ಟವ್ವನಾಗಿದ್ದಾಗಲೂ ಅದಿತ್ತು. ಅಲ್ಲಿ ಯಾರೋ ಕದ್ದರು.<br />
{{gap}}ಹೊತ್ತು ಕಳೆಯಬೇಕು. ವಿಮಾನ ನಿಲ್ದಾಣದಲ್ಲಿ ಹಾಜರಿ ಹಾಕುವ ಹೊತ್ತಾಯಿತೆ ?<br />
{{gap}}ನಿಮಿಷಗಳನ್ನು ಕಲೆ ಹಾಕಬೇಕು.<br />
{{gap}}ಕ್ಷಣವೊಂದು ಯುಗವಾಗಿ ?<noinclude></noinclude>
9k5ttstq37bx3vcn1yemi2ccss7kxae
ಪುಟ:ಮಿಂಚು.pdf/೨೩೭
104
20684
320847
206831
2026-05-19T14:16:29Z
Pragathi. BH
7585
/* Validated */
320847
proofread-page
text/x-wiki
<noinclude><pagequality level="4" user="Pragathi. BH" /></noinclude>ಮಿಂಚು 231
ಪರಶುರಾಮ ಹೆಂಡಿರೊಡನೆ ಜಗಳವಾಡುತ್ತ ಕುಳಿತನೊ ? ಅವನಾದರೂ ಬಂದಿದ್ದರೆ ಮುರಬದ ನಿಗೂಢ ವ್ಯಕ್ತಿಗೆ ಫೋನ್ ಮಾಡಬಹುದಿತ್ತು.
ಹೊರಗೆ ನಡೆದಾಡಿದ ಸದ್ದು. ಪರಶುರಾಮನ ಸ್ವರ : "ಕೂತ್ಕೊಳ್ಳಿ, ಒಂದ್ನಿಮಿಷ."
ಮುರಬದ ಶಾಸಕ ಬಂದೇ ಬಿಟ್ಟಿದ್ದಾನೆ. ರಸ್ತೆಯಲ್ಲಿ ಆಟೊ ನಿಲ್ಲಿಸಿ ಬಾಗಿಲ ವರೆಗೆ ನಡೆದು ಬoದಿರಬೇಕು.
"ಮಾತಾಜಿ, ಮುರಬದ ಶಾಸಕರು-"
"ಕರಿ. ಬನ್ನಿ, ನಮಸ್ಕಾರ." ತಾನೆ ಮೊದಲು ವಂದಿಸಿದೆ, ತಪ್ಪೇನು? ವಿನಯ ಇರಬೇಕು-ವಿನಯ.
"ನಮಸ್ಕಾರ, ಮಾತಾಜಿ, ಒಂದು ಗುಟ್ಟಿನ ವಿಷಯ (ಹತ್ತಿರ ಬಂದು). ಅವರ ತಂಡದಿಂದ ಹತ್ತು ಜನ ತಮ್ಮಲ್ಲಿ ಬರೋದಕ್ಕೆ-"
"ತಾವೂ ಸೇರಿ ?"
"ಹೌದು, ಸಿದ್ಧ. ಇನ್ನರ್ಧ ಗಂಟೆಯೊಳಗೆ ವ್ಯವಹಾರ ಮುಗೀಬೇಕು. ಒಬ್ಬರಿಗೆ ಒಂದೊಂದು ಲಕ್ಷ."
"ಈಗೆಲ್ಲಿಂದ ತರಲಿ ? ಪುನರಾಯ್ಕೆಯಾಗಿ ಮಂತ್ರಿಮಂಡಲದ ರಚಿಸಿದ ಮೇಲೆ ಕೊಟ್ಟೇನು. ಅದೂ ಅರ್ಧಅರ್ಧ ಲಕ್ಷ.... ಇಷ್ಟಕ್ಕೆ ಒಪ್ಪಬೇಕಪ್ಪ, ಸಂಪಾದಿಸಿದ ಮೇಲೆ ಕೊಡಬೇಕಲ್ಲವ ನಾನು? ಈಗ ಹಣದ ಮಾರ್ಕೆಟು ಎಷ್ಟು ಟೈಟ್ ಅನ್ನೋದು ತಮಗೆ ಗೊತ್ತೇ ಇದೆ."
"ತಮ್ಮನ್ನು ಕಂಡರೆ ಮರಬದವರಿಗೆ ಇಷ್ಟ. ನಿಮ್ಮ ಪಕ್ಕದಲ್ಲೇ ಇರಬೇಕೂಂತ ನನ್ನ ಆಸೆ."
"ನಮ್ಮಿಬ್ಬರ ಪಕ್ಷವೂ ಒಂದೇ ಅಲ್ಲವ?"
"ಅದು ಹ್ಯಾಗೆ? ಮನಸ್ಸು ಒಡೀತು ಅಂದ್ಮೇಲೆ ಏನು ಉಳೀತು? ತಾವು ಹೇಳಿದ ಹಾಗೆ ಅರ್ಧ ಅರ್ಧ ಲಕ್ಷ ಮುಂದೆ ಕೊಡೋದಾದರೆ, ಈಗ ಐವತ್ತೈವತ್ತು ಸಾವಿರವಾದರೂ ಕೊಡಿ."
"ಹತ್ತು ಹತ್ತು ಸಾವಿರ ಕೊಡ್ತೇನೆ. ಒಂದು ಶರತ, ವಿಶ್ವಂಭರರನ್ನೂ ನಮ್ಮ ಕಡೆಗೆ ಕರಕೊಂಡು ಬರಬೇಕು."
"ಅವರನ್ನು ಕಟ್ಟೊಂಡು ಏನು ಮಾಡ್ತೀರಿ? ಒಟ್ಟು ಹತ್ತು ತಲೆ ತರ್ತೆನಪ್ಪ. ಒಬ್ಬೊಬ್ಬರಿಗೆ ಹತ್ತು ಹತ್ತು ಸಾವಿರ."
"ನಾಳೆ ಸಭೆಯಲ್ಲಿ ಓಟು ಹಾಕಿ, ಇಲ್ಲವೆ ಕೈಯೆತ್ತಿ, ಆಮೇಲೆ ಸಾಯಂಕಾಲ ಇಲ್ಲಿಗೆ ಬಂದು ಹತ್ತು ಹತ್ತು ತಗೊಂಡು ರೈಲು ಹತ್ತಿ-ನಿಮ್ಮ ನಿಮ್ಮ ಊರಿಗೆ," ಮುಂದುವರಿಸುತ್ತ ಆಕೆ ಅಲ್ಲಿ ಕುಳಿತಿದ್ದ-ಶಾಸಕನನ್ನು ಕೇಳಿದಳು :
"ಕಾರಿನಲ್ಲಿ ಬಿಟ್ಟ ಬರಬೇಕಾ ನಿಮ್ಮನ್ನು ?"<noinclude></noinclude>
bd3qq75nvolvct3eb1dekbimh8g0op8
320850
320847
2026-05-19T14:23:34Z
Pragathi. BH
7585
320850
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಮಿಂಚು|right=231}}</noinclude>
{{gap}}ಪರಶುರಾಮ ಹೆಂಡಿರೊಡನೆ ಜಗಳವಾಡುತ್ತ ಕುಳಿತನೊ ? ಅವನಾದರೂ ಬಂದಿದ್ದರೆ ಮುರಬದ ನಿಗೂಢ ವ್ಯಕ್ತಿಗೆ ಫೋನ್ ಮಾಡಬಹುದಿತ್ತು. <br />
{{gap}}ಹೊರಗೆ ನಡೆದಾಡಿದ ಸದ್ದು. ಪರಶುರಾಮನ ಸ್ವರ : "ಕೂತ್ಕೊಳ್ಳಿ, ಒಂದ್ನಿಮಿಷ."<br />
{{gap}}ಮುರಬದ ಶಾಸಕ ಬಂದೇ ಬಿಟ್ಟಿದ್ದಾನೆ. ರಸ್ತೆಯಲ್ಲಿ ಆಟೊ ನಿಲ್ಲಿಸಿ ಬಾಗಿಲ ವರೆಗೆ ನಡೆದು ಬoದಿರಬೇಕು.<br />
{{gap}}"ಮಾತಾಜಿ, ಮುರಬದ ಶಾಸಕರು-"<br />
{{gap}}"ಕರಿ. ಬನ್ನಿ, ನಮಸ್ಕಾರ." ತಾನೆ ಮೊದಲು ವಂದಿಸಿದೆ, ತಪ್ಪೇನು? ವಿನಯ ಇರಬೇಕು-ವಿನಯ.<br />
{{gap}}"ನಮಸ್ಕಾರ, ಮಾತಾಜಿ, ಒಂದು ಗುಟ್ಟಿನ ವಿಷಯ (ಹತ್ತಿರ ಬಂದು). ಅವರ ತಂಡದಿಂದ ಹತ್ತು ಜನ ತಮ್ಮಲ್ಲಿ ಬರೋದಕ್ಕೆ-"<br />
{{gap}}"ತಾವೂ ಸೇರಿ ?"<br />
{{gap}}"ಹೌದು, ಸಿದ್ಧ. ಇನ್ನರ್ಧ ಗಂಟೆಯೊಳಗೆ ವ್ಯವಹಾರ ಮುಗೀಬೇಕು. ಒಬ್ಬರಿಗೆ ಒಂದೊಂದು ಲಕ್ಷ."<br />
{{gap}}"ಈಗೆಲ್ಲಿಂದ ತರಲಿ ? ಪುನರಾಯ್ಕೆಯಾಗಿ ಮಂತ್ರಿಮಂಡಲದ ರಚಿಸಿದ ಮೇಲೆ ಕೊಟ್ಟೇನು. ಅದೂ ಅರ್ಧಅರ್ಧ ಲಕ್ಷ.... ಇಷ್ಟಕ್ಕೆ ಒಪ್ಪಬೇಕಪ್ಪ, ಸಂಪಾದಿಸಿದ ಮೇಲೆ ಕೊಡಬೇಕಲ್ಲವ ನಾನು? ಈಗ ಹಣದ ಮಾರ್ಕೆಟು ಎಷ್ಟು ಟೈಟ್ ಅನ್ನೋದು ತಮಗೆ ಗೊತ್ತೇ ಇದೆ."<br />
{{gap}}"ತಮ್ಮನ್ನು ಕಂಡರೆ ಮರಬದವರಿಗೆ ಇಷ್ಟ. ನಿಮ್ಮ ಪಕ್ಕದಲ್ಲೇ ಇರಬೇಕೂಂತ ನನ್ನ ಆಸೆ." <br />
{{gap}}"ನಮ್ಮಿಬ್ಬರ ಪಕ್ಷವೂ ಒಂದೇ ಅಲ್ಲವ?"<br />
{{gap}}"ಅದು ಹ್ಯಾಗೆ? ಮನಸ್ಸು ಒಡೀತು ಅಂದ್ಮೇಲೆ ಏನು ಉಳೀತು? ತಾವು ಹೇಳಿದ ಹಾಗೆ ಅರ್ಧ ಅರ್ಧ ಲಕ್ಷ ಮುಂದೆ ಕೊಡೋದಾದರೆ, ಈಗ ಐವತ್ತೈವತ್ತು ಸಾವಿರವಾದರೂ ಕೊಡಿ."<br />
{{gap}}"ಹತ್ತು ಹತ್ತು ಸಾವಿರ ಕೊಡ್ತೇನೆ. ಒಂದು ಶರತ, ವಿಶ್ವಂಭರರನ್ನೂ ನಮ್ಮ ಕಡೆಗೆ ಕರಕೊಂಡು ಬರಬೇಕು."<br />
{{gap}}"ಅವರನ್ನು ಕಟ್ಟೊಂಡು ಏನು ಮಾಡ್ತೀರಿ? ಒಟ್ಟು ಹತ್ತು ತಲೆ ತರ್ತೆನಪ್ಪ. ಒಬ್ಬೊಬ್ಬರಿಗೆ ಹತ್ತು ಹತ್ತು ಸಾವಿರ."<br />
{{gap}}"ನಾಳೆ ಸಭೆಯಲ್ಲಿ ಓಟು ಹಾಕಿ, ಇಲ್ಲವೆ ಕೈಯೆತ್ತಿ, ಆಮೇಲೆ ಸಾಯಂಕಾಲ ಇಲ್ಲಿಗೆ ಬಂದು ಹತ್ತು ಹತ್ತು ತಗೊಂಡು ರೈಲು ಹತ್ತಿ-ನಿಮ್ಮ ನಿಮ್ಮ ಊರಿಗೆ," ಮುಂದುವರಿಸುತ್ತ ಆಕೆ ಅಲ್ಲಿ ಕುಳಿತಿದ್ದ-ಶಾಸಕನನ್ನು ಕೇಳಿದಳು :<br />
{{gap}}"ಕಾರಿನಲ್ಲಿ ಬಿಟ್ಟ ಬರಬೇಕಾ ನಿಮ್ಮನ್ನು ?"<noinclude></noinclude>
c85v9mmtvu429ywq4w8yd1qzk5vghae
ಪುಟ:ಮಿಂಚು.pdf/೨೩೮
104
20685
320848
206832
2026-05-19T14:16:39Z
Pragathi. BH
7585
/* Validated */
320848
proofread-page
text/x-wiki
<noinclude><pagequality level="4" user="Pragathi. BH" /></noinclude>232 ಮಿಂಚು
"ಬ್ಯಾಡ. ಗುಟ್ಟು ಬಹಿರಂಗವಾಗ್ತದೆ. ಆಟೋರಿಕ್ಷಾದಲ್ಲಿ ಹೋಗ್ತೀನಿ. ಒಂದೈದು ರೂಪಾಯಿ ಚಿಲ್ಲರೆ ಕೊಡಿ."
"ಇಲ್ಲಿ ಚಿಲ್ಲರೆ ಒಂದಿಲ್ಲ. ಹೀಗೇ ನಡಕೊಂಡು ಹೋಗಿ, ಹೆಚ್ಚು ದೂರ ಇಲ್ಲ." ಸಂಭಾಷಣೆಯನ್ನು ಆಲಿಸುತ್ತ ನಿಂತಿದ್ದ ಪರಶುರಾಮ ದಂಗಾದ.
"ನೋಡಿದೀಯಪ್ಪ, ಇವರೆಲ್ಲ ನಮ್ಮ ಶಾಸಕರು!"
ಪರಶುರಾಮ ಏನೋ ಹೇಳಲು ಹೊರಟ. ನಾಲಿಗೆ ಹೊರಳಿಸಿದ. ಬಾಯಿ ಆಡಿಸಿದ. ಸುಮ್ಮನಾದ.
....ನಾಲ್ಕೂವರೆ. ದಿಲ್ಲಿಯಿಂದ ಫೋನ್ ಕರೆ ಬಂತು.
"ನಮಸ್ತೆ ಮಾತಾಜಿ. ನಕುಲದೇವ್, ವಿಶ್ವಂಭರ, ಲಕ್ಷ್ಮೀಪತಿ ಹೊರಟಿದ್ದಾರೆ."
"ಥಾಂಕ್ಸ್. ನಿಮಗೆಲ್ಲ ಒಳ್ಳೆಯದಾಗಲಿ."
ಒಂದು ಕ್ಷಣ ತನ್ನ ಎರಡು ಪಾದಗಳೂ ಮರಗಟ್ಟಿದಂತೆ, ಕೈಗಳು ನಿಶ್ಚೇಷ್ಟಿವಾದಂತೆ, ಮಾತು ನಿಂತಂತೆ ಅನಿಸಿತು. ತುಸು ಪ್ರಯಾಸಪಟ್ಟು ಅವಳೆಂದಳು :
"ಒಂದು ಕಪ್ ಬಿಸಿ ಕಾಫಿ ಬೇಕಲ್ಲ, ಪರಶು ?"
"ತರ್ತೇನೆ, ಮಾತಾಜಿ."
....ತುಸು ತುಸುವೆ ಕುಡಿದ ಕಾಫಿ ಅವಳ ದೇಹದಲ್ಲಿ ಶಕ್ತಿ ತುಂಬಿತು.
ಆಗಲೆ ಆಗಿರುವ ತೀರ್ಮಾನ ಈಗ ಆಕಾಶ ಮಾರ್ಗವಾಗಿ ಬರುತ್ತಿದೆ. ಗುಪ್ತಚಾರದಳದ ಮುಖ್ಯಸ್ಥನಿಗೇನಾದರೂ ರಾತ್ರೆ ಗೊತ್ತಾದರೆ ಫೋನ್ ಮಾಡಬಹುದು. ಆದರೆ, ಮಾಡದೆಯೂ ಇರಬಹುದು. ತಾನು ಅಧಿಕಾರದಲ್ಲಿರುವುದಾದರೆ, ತನಗೆ ಅನುಕೂಲವಾದ ಸುದ್ದಿಯಾದರೆ ತಿಳಿಸುತ್ತಾನೆ. ಇಲ್ಲವಾದರೆ, ನಿದ್ದೆ ಹೋಗುತ್ತಾನೆ. ಸೋಮವಾರ ತಾನು ಪೀಠದ ಮೇಲಿರುವೆನೊ? ವಿಶ್ವಂಭರನೊ? ಲಕ್ಷ್ಮೀಪತಯ್ಯನನ್ನು ಉಪಮುಖ್ಯಮಂತ್ರಿ ಮಾಡಬಹುದು. ಅರ್ಥವನ್ನೊ ಗೃಹ ಇಲಾಖೆಯನ್ನೊ ಕೊಡಬಹುದು.
ಹಾಗಾಗದೆ ನಕುಲದೇವ್ಜಿ ತನ್ನ ಪರವಾಗಿ ದಾಳ ಸರಿಸಿದರೆ? (ಆದರೆಹೋದರೆ, ಅಜ್ಜಿಗೆ ಮೀಸೆ ಬಂದರೆ) ಹಾಗೇನಾದರೂ ಸಂಭವಿಸಿದರೆ ನಾಳೆ ರಾತ್ರೆ 'ನೃಪತುಂಗ'ದಲ್ಲಿ ಊಟ-ಆಟ.
ಇವತ್ತು ನಕುಲದೇವ್ಜಿ 'ಅರಿಕೇಸರಿ'ಯಲ್ಲಿರುತ್ತಾನೆ, ಪ್ರಾಯಶಃ.
"ಪರಶು, ಧನಂಜಯ ಸಿಗ್ತಾನೊ ನೋಡು."
ಆತ ಅಂಗಡಿಯಲ್ಲಿದ್ದ,.ವಾರಾಂತ್ಯದ ವ್ಯಾಪಾರ.
"ನಾನು-ಮಾತಾಜಿ."
ಸಾಹುಕಾರ ಎದ್ದು ನಿಂತು, "ನಮಸ್ತೆ, ನಮಸ್ತೆ, ಅಪ್ಪಣೆಯಾಗಲಿ" ಎಂದ. "ನಾಳೆ ಮಧ್ಯಾಹ್ನ ಒಂದು ಅಂಬಾಸಡರ್ ಕಳಿಸಿ ಕೊಡಿ, ಒಂದೆರಡು ದಿನಗಳ ಮಟ್ಟಿಗೆ."<noinclude></noinclude>
99m22c263qwu3qn8o7mgyf4turtlhwa
320849
320848
2026-05-19T14:19:52Z
Pragathi. BH
7585
320849
proofread-page
text/x-wiki
<noinclude><pagequality level="4" user="Pragathi. BH" />{{rh|center=|left=232|right=ಮಿಂಚು}}</noinclude>
{{gap}}"ಬ್ಯಾಡ. ಗುಟ್ಟು ಬಹಿರಂಗವಾಗ್ತದೆ. ಆಟೋರಿಕ್ಷಾದಲ್ಲಿ ಹೋಗ್ತೀನಿ. ಒಂದೈದು ರೂಪಾಯಿ ಚಿಲ್ಲರೆ ಕೊಡಿ."
{{gap}}"ಇಲ್ಲಿ ಚಿಲ್ಲರೆ ಒಂದಿಲ್ಲ. ಹೀಗೇ ನಡಕೊಂಡು ಹೋಗಿ, ಹೆಚ್ಚು ದೂರ ಇಲ್ಲ." ಸಂಭಾಷಣೆಯನ್ನು ಆಲಿಸುತ್ತ ನಿಂತಿದ್ದ ಪರಶುರಾಮ ದಂಗಾದ.
{{gap}}"ನೋಡಿದೀಯಪ್ಪ, ಇವರೆಲ್ಲ ನಮ್ಮ ಶಾಸಕರು!"
{{gap}}ಪರಶುರಾಮ ಏನೋ ಹೇಳಲು ಹೊರಟ. ನಾಲಿಗೆ ಹೊರಳಿಸಿದ. ಬಾಯಿ ಆಡಿಸಿದ. ಸುಮ್ಮನಾದ.
{{gap}}....ನಾಲ್ಕೂವರೆ. ದಿಲ್ಲಿಯಿಂದ ಫೋನ್ ಕರೆ ಬಂತು.
{{gap}}"ನಮಸ್ತೆ ಮಾತಾಜಿ. ನಕುಲದೇವ್, ವಿಶ್ವಂಭರ, ಲಕ್ಷ್ಮೀಪತಿ ಹೊರಟಿದ್ದಾರೆ."
{{gap}}"ಥಾಂಕ್ಸ್. ನಿಮಗೆಲ್ಲ ಒಳ್ಳೆಯದಾಗಲಿ."
{{gap}}ಒಂದು ಕ್ಷಣ ತನ್ನ ಎರಡು ಪಾದಗಳೂ ಮರಗಟ್ಟಿದಂತೆ, ಕೈಗಳು ನಿಶ್ಚೇಷ್ಟಿವಾದಂತೆ, ಮಾತು ನಿಂತಂತೆ ಅನಿಸಿತು. ತುಸು ಪ್ರಯಾಸಪಟ್ಟು ಅವಳೆಂದಳು :
{{gap}}"ಒಂದು ಕಪ್ ಬಿಸಿ ಕಾಫಿ ಬೇಕಲ್ಲ, ಪರಶು ?"
{{gap}}"ತರ್ತೇನೆ, ಮಾತಾಜಿ."
{{gap}}....ತುಸು ತುಸುವೆ ಕುಡಿದ ಕಾಫಿ ಅವಳ ದೇಹದಲ್ಲಿ ಶಕ್ತಿ ತುಂಬಿತು.
{{gap}}ಆಗಲೆ ಆಗಿರುವ ತೀರ್ಮಾನ ಈಗ ಆಕಾಶ ಮಾರ್ಗವಾಗಿ ಬರುತ್ತಿದೆ. ಗುಪ್ತಚಾರದಳದ ಮುಖ್ಯಸ್ಥನಿಗೇನಾದರೂ ರಾತ್ರೆ ಗೊತ್ತಾದರೆ ಫೋನ್ ಮಾಡಬಹುದು. ಆದರೆ, ಮಾಡದೆಯೂ ಇರಬಹುದು. ತಾನು ಅಧಿಕಾರದಲ್ಲಿರುವುದಾದರೆ, ತನಗೆ ಅನುಕೂಲವಾದ ಸುದ್ದಿಯಾದರೆ ತಿಳಿಸುತ್ತಾನೆ. ಇಲ್ಲವಾದರೆ, ನಿದ್ದೆ ಹೋಗುತ್ತಾನೆ. ಸೋಮವಾರ ತಾನು ಪೀಠದ ಮೇಲಿರುವೆನೊ? ವಿಶ್ವಂಭರನೊ? ಲಕ್ಷ್ಮೀಪತಯ್ಯನನ್ನು ಉಪಮುಖ್ಯಮಂತ್ರಿ ಮಾಡಬಹುದು. ಅರ್ಥವನ್ನೊ ಗೃಹ ಇಲಾಖೆಯನ್ನೊ ಕೊಡಬಹುದು.
{{gap}}ಹಾಗಾಗದೆ ನಕುಲದೇವ್ಜಿ ತನ್ನ ಪರವಾಗಿ ದಾಳ ಸರಿಸಿದರೆ? (ಆದರೆಹೋದರೆ, ಅಜ್ಜಿಗೆ ಮೀಸೆ ಬಂದರೆ) ಹಾಗೇನಾದರೂ ಸಂಭವಿಸಿದರೆ ನಾಳೆ ರಾತ್ರೆ 'ನೃಪತುಂಗ'ದಲ್ಲಿ ಊಟ-ಆಟ.
{{gap}}ಇವತ್ತು ನಕುಲದೇವ್ಜಿ 'ಅರಿಕೇಸರಿ'ಯಲ್ಲಿರುತ್ತಾನೆ, ಪ್ರಾಯಶಃ.
{{gap}}"ಪರಶು, ಧನಂಜಯ ಸಿಗ್ತಾನೊ ನೋಡು."
{{gap}}ಆತ ಅಂಗಡಿಯಲ್ಲಿದ್ದ,.ವಾರಾಂತ್ಯದ ವ್ಯಾಪಾರ.
{{gap}}"ನಾನು-ಮಾತಾಜಿ."
{{gap}}ಸಾಹುಕಾರ ಎದ್ದು ನಿಂತು, "ನಮಸ್ತೆ, ನಮಸ್ತೆ, ಅಪ್ಪಣೆಯಾಗಲಿ" ಎಂದ.
{{gap}}"ನಾಳೆ ಮಧ್ಯಾಹ್ನ ಒಂದು ಅಂಬಾಸಡರ್ ಕಳಿಸಿ ಕೊಡಿ, ಒಂದೆರಡು ದಿನಗಳ ಮಟ್ಟಿಗೆ."<noinclude></noinclude>
kagahuvy1r0kus80y8vsvdpqg4vh6wo
ಪುಟ:ಮಿಂಚು.pdf/೨೩೯
104
20686
320865
206833
2026-05-19T15:01:21Z
Shreelatha.Halemane
7642
/* Validated */
320865
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right= 233}}
{{gap}}"ಕಳಿಸಿ ಕೊಡ್ತೇನೆ, ಮಾತಾಜಿ, ನಾನೇ ತರ್ತೇನೆ. ಎಕ್ಸ್ ಪ್ರೆಸ್ ಟ್ರಾವಲ್ಸ್ ನವರ ಕಾರು. ಕರೀಮ್ ಅಂತ ಒಳ್ಳೇ ಡ್ರೈವರ್ ಇದ್ದಾನೆ. ಇನ್ನೇನಾದರೂ ಬೇಕೆ ಮಾತಾಜಿ?"
{{gap}}"ಏನೂ ಬೇಡ. ನಾಳೆ ಸಭೆ ಆದ್ಮೇಲೆ ಭೇಟಿಯಾಗೋಣ."
* * *
{{gap}}ರಾತ್ರೆ ವಿಮಾನ ಬಂದ ಸದ್ದಾಯಿತು. ಅದು ಬಂದು ಒಂದು ಗಂಟೆಯಾಯಿತು. ಫೋನ್ ಸರಿಯಾಗಿದೆ ಎಂದು ಖಚಿತ ಮಾಡಿಕೊಳ್ಳಲು ರಿಸೀವರನ್ನೆತ್ತಿ ಕೆಳಗಿಟ್ಟಳು, ಎರಡು ಸಲ. ಟಿಣ್ ಟಿಣ್ ಸದ್ದಾಯಿತು, ಕೆಟ್ಟಿಲ್ಲ.
{{gap}}ಇರುಳು ದಟ್ಟವಾಯಿತು, ದೀಪಗಳು ಮ೦ಕಾದುವು.
{{gap}}"ಇನ್ನು ಯಾರು ಫೋನ್ ಮಾಡ್ತಾರೆ? ಮಾಡಿದರೆ ನಡುರಾತ್ರೆಯೊಳಗೆ ನಕುಲದೇವ್ಜಿ ಮಾಡಬೇಕು. ನಾನು ನೋಡ್ಕೊಳ್ತೀನಿ, ನೀನು ಹೋಗು, ಪರಶುರಾಮ್. ನಾಳೆ ಬೆಳಗ್ಗೆ ಅನಾಥಾಶ್ರಮದ ವಸತಿಗೃಹದ ಉದ್ಘಾಟನೆ. ಮರೀಬೇಡ."
{{gap}}"ಏಳು ಗಂಟೆಗೇ ಬರ್ತೀನಿ, ಮಾತಾಜಿ."
{{gap}}ಒಂಭತ್ತು ಗಂಟೆಯ ಅಲ್ ಇಂಡಿಯಾ ರೇಡಿಯೊ ವಾರ್ತಾ ಬುಲೆಟಿನ್ನಲ್ಲಿ ಕಿಷ್ಟಿಂಧೆಯ ಪ್ರಸ್ತಾಪವಿರಲಿಲ್ಲ. ನಾಳೆ ಸಂಜೆ ಆರು ಗಂಟೆಯ ವಾರ್ತೆಯಲ್ಲಿರುತ್ತೆ.
{{gap}}ಲೇಹ್ಯ ? ನಿದ್ದೆ ಮಾತ್ರೆ?
{{gap}}ಹತ್ತು, ಹನ್ನೊಂದು, ಹನ್ನೆರಡು... ಗಾಢ ಮೌನ.
{{gap}}ನಿದ್ದೆ ಬರಲಪ್ಪ, ಒಂದಿಷ್ಟು ನಿದ್ದೆ ಬರಲಿ.<noinclude></noinclude>
2mbo0qsn92y9fe2dr66mjjb3srzrue3
ಪುಟ:ಮಿಂಚು.pdf/೨೪೦
104
20687
320866
206834
2026-05-19T15:03:29Z
Shreelatha.Halemane
7642
/* Validated */
320866
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=೨೪|left=|right=}}
{{gap}}ಜೀಪು, ಕಾರು, ಕಾರು, ಕಾರು, ಜೀಪು......
{{gap}}ಜನ ನೆರೆದಿದ್ದರು, ಸಹಸ್ರ ಜನ, ಸೌದಾಮಿನಿಗೆ ಅನಿಸಿತು : ತಾನು ಜನ ಪ್ರಿಯ ನಾಯಕಿ ಎನ್ನುವುದರಲ್ಲಿ ಏನು ಸಂದೇಹ ?
{{gap}}
ఒಳ್ಳೆ ಬಟ್ಟೆ ಧರಿಸಿದ ಅನಾಥ ಮಕ್ಕಳಿಂದ ಗೌರವರಕ್ಷೆ. (ಇಲ್ಲಿ, ಆ ಹುಡುಗರು ಯಾರೂ ಇಲ್ಲ. ಇವರು ಭಿಕ್ಷುಕರಲ್ಲ, ಭಕ್ಷಕರು,) ಹತ್ತಕ್ಕೂ ಹೆಚ್ಚು ಛಾಯಾ ಚಿತ್ರಗ್ರಾಹಕರು. ತಳಿರು ಸಿಂಗಾರ, ಹಸಿರು ಬಿಸಿಲು. ಕಪ್ಪು ಕನ್ನಡಕ ಧರಿಸಿ ಕೊಂಡರೆ ಛದ್ಮವೇಷವಾಗುತ್ತಿತ್ತು. ಈಗ ತಾನು ನಸು ನಗುತ್ತ ನೆಟ್ಟದೃಷ್ಟಿಯಿಂದ ಎಲ್ಲರನ್ನೂ ನೋಡುವವಳು. ಗತಕಾಲದ ಪುಟ್ಟವ್ವನಲ್ಲ, ಆಧುನಿಕ ಸೌದಾಮಿನಿ.
{{gap}}ವಿಶ್ವಂಭರನ ಹಿ೦ಬಾಲಕರು ಹಲವರು ಬಂದಿದ್ದಾರೆ-ತನ್ನ ఎದೆగారిಜಕೆ ಎಷ್ಟು ಎಂದು ನೋಡಲು. ತನ್ನ ಕಡೆಯವರಲ್ಲಾ ಹೆಚ್ಚಿನವರಿದ್ದಾರೆ. ಯಾವ ಶಿಬಿರಕ್ಕೂ ಸೇರದವರದೇ ದೊಡ್ಡ ಸಂಖ್ಯೆ. ಭಾನುವಾರ ಬೆಳಗ್ಗೆ ವಿಪರೀತ ಕೆಲಸವಾದರೂ ಮಹಿಳೆಯರು ತಮ್ಮ ಮುಖ್ಯಮಂತ್ರಿಯನ್ನು ನೋಡಲು ಹಲವು ದಾರಿಗಳಿ೦ದ ಬಂದಿದ್ದಾರೆ.
{{gap}}ಸೌದಾಮಿನಿ ಕೇಳಿದಳು :
{{gap}}“ಮಕ್ಕಳಿಗೆ ತಿಂಡಿಕೊಟ್ಟಿರಾ ?”
{{gap}}“ನಿತ್ಯದಂತೆ ಉಪಾಹಾರ ಆಗಿದೆ."
{{gap}}ಕಮಲಮ್ಮ ಇರಬಹುದು. ಲಕ್ಷ್ಮೀನರಸಿಂಹಯ್ಯ ? ಸುಲೋಚನಾಬಾಯಿಯ ಪ್ರೊಫೆಸರ್ ಗಂಡ ? ರಂಗಸ್ವಾಮಿ ಬಂದಿಲ್ಲ. ಮತದಾರರ ಪಟ್ಟಿಯ ಪ್ರಕರಣ ತೀರ್ಮಾನವಾಗಲು ಹಲವು ವರ್ಷ ಹಿಡಿದೀತು, ಹಿಡಿದೀತು. ವಿಶ್ವಂಭರ ಮತ್ತು ನಕುಲದೇವ್ ಬಂದಿದ್ದರೆ ಚೆನ್ನಾಗಿತ್ತು. ಆದರೆ ದೂತರಿಂದ ವರದಿ ಹೋಗುತ್ತದೆ. (ಅಷ್ಟೇನೂ ಜನ ಇರಲಿಲ್ಲ. 'ಜಾತ್ರೆ ಮರುಳೋ, ಜನಮರುಳೊ' ಅಂತ ನೆರೆದಿದ್ದರು.) ಸತ್ಯ ಯಾವುದು ? అದೊ ? ఇದೊ ? ಸತ್ಯ ಎಂಬುದೇ ಇಲ್ಲವೇನೊ ಕಡೆಗೆ ?
{{gap}}ಶಿಲಾಫಲಕವನ್ನು ಮುಚ್ಚಿದ್ದ ರೇಷ್ಮೆ ಹೊದಿಕೆ. ಆತುರ ಮಾಡದೆ ನಿಧಾನ ವಾಗಿ ಅರಿವೆಯನ್ನು ಸರಿಸಿದಳು. ಕಿವಿಗೆ ಹಬ್ಬವಾಯಿತು ಕರತಾಡನ. ಫಲಕವನ್ನು<noinclude></noinclude>
jq3yetrpawh74qgu7dqioos0pbxuro8
ಪುಟ:ಮಿಂಚು.pdf/೨೪೧
104
20688
320867
206835
2026-05-19T15:05:41Z
Shreelatha.Halemane
7642
/* Validated */
320867
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು |right=235}}
ನೋಡಿಯೂ ನೋಡದವಳಂತೆ ಮಾಡಿದಳು ಸೊದಾಮಿನಿ. ...ಮೂರು ಸಾವಿರ ವರ್ಷಗಳ ಅನಂತರ ಅಗೆದಾಗೆ.
{{gap}}"ಹೀಗೆ ದಯಮಾಡೀಸಿ,ಹೀಗೆ ದಯಮಾಡಿಸಿ."
{{gap}}ಮಕ್ಕಳಿಂದ ಸಮೂಹಗಾಯನ ನಡೆಯಿತು:
{{gap}}“ಈಗ ಮುಖ್ಯಮಂತ್ರಿಯವರಿಂದ ಆಶೀರ್ವಚನ."
{{gap}}“ಬಿಸಿಲು ಏರುವುದಕ್ಕೆ ಮುಂಚೆ ನಾವೆಲ್ಲರೂ ಮನೆಗಳನ್ನು ಸೇರಬೇಕು. ಬೆವರು ಒರೆಸಿಕೊಳ್ಳುತ್ತ ನಿಮ್ಮ ಪ್ರೀತಿಯ ಮುಖ್ಯಮಂತ್ರಿಯನ್ನು ನೀವು ಶಪಿಸುವ ಹಾಗಾಗಬಾರದು. ಕೆಲವರಿಗೆ ಮಾತನಾಡುವ ಚಟ, ಹೊತ್ತು ಗೊತ್ತು ಒಂದೂ ಇಲ್ಲ. ಧ್ವನಿವರ್ಧಕ ನೋಡಿದರಂತೂ ಆವೇಶ ಬರುವುದುಂಟು, ನಾನು ಕಡಮೆ ಮಾತಿನ ಮುಖ್ಯಮಂತ್ರಿ ಎನ್ನುವುದನ್ನಂತೂ ನೀವೆಲ್ಲ ಅರಿತಿದ್ದೀರಿ. ಮಾತು ಹೆಚ್ಚೂ ? ಕೃತಿ ಹೆಚ್ಚೊ ? ನಾನು ಎರಡನೆಯ ಪಂಗಡಕ್ಕೆ ಸೇರಿದವಳು.”
{{gap}}ಹೆಚ್ಚೇನೂ ಇಲ್ಲವೆಂದರೂ ಇಪ್ಪತ್ತು ಮಿನಿಟು ಸೌದಾಮಿನಿ ಮಾತನಾಡಿದಳು. ಮುಕ್ತಾಯದಲ್ಲಿ ಅವಳೆಂದಳು :
{{gap}}“ಸುಖದ ಸುಪ್ಪತ್ತಿಗೆಯ ಮೇಲಿರುವವರು ಹರಕು ಚಾಪೆಯವರನ್ನು ನೆನಪಿಡಿ. ದಿನಕ್ಕೊಂದು ಹಿಡಿ ಅಕ್ಕಿ ಹತಭಾಗ್ಯರಿಗೆ. ಇದು ಕಲ್ಯಾಣನಗರ, ಕಲ್ಯಾಣ ರಾಜ್ಯ, ಇಲ್ಲಿ ಸರ್ವರೂ ಸುಖಿಗಳಾಗಲಿ ! ಜಯ ಕಿಸ್ಕಿಂದೆ ! ಜಯ ಭಾರತ !"
{{gap}}ಹುಡುಗರೂ ಅ೦ದರು :
{{gap}}“ಜಯ ಕಿಷ್ಟಿಂಧೆ ! ಜಯ ಭಾರತ !”
* * *
{{gap}}ಶಾಸಕರಲ್ಲಿ ಹಲವು ತೆರ: ಜನರಿಗೆ ತಮ್ಮಿಂದಾದಷ್ಟು ಒಳ್ಳೆಯದನ್ನು ಮಾಡುವ ವರು; ತಮ್ಮನ್ನೇ ಪೊರಕೆ ಕಡ್ಡಿಯಾಗಿ ಮಾಡಿ ಸವೆಯುವವರು (ತಮ್ಮ ಹೆಂಡತಿ ಮಕ್ಕಳ ಗಮನವೂ ಅವರಿಗಿಲ್ಲ; ಇನ್ನು ಕೆಲವರು ಸ್ವಾರ್ಥಕ್ಕಿಷ್ಟು ಪರಾರ್ಥಕ್ಕಿಷ್ಟ ಪೈಕಿ); ಬೇರೆ ಕೆಲವರು ಎಂಥ ಕೀಳು ಕೆಲಸಕ್ಕೆ ಬೇಕಾದರೂ ಕೈಇಕ್ಕಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು; ಹೇರಳ ಇದ್ದಿ ತೆಂದರೆ ಪಾಲುಕೊಡುವುದಕ್ಕೂ ಬಟವಾಡೆಗೂ ಅವರು ಹಿಂದೆ ಮುಂದೆ ನೋಡುವುದಿಲ್ಲ, ಮೇಲಿನ ಕೆಲಸಗಳೆಲ್ಲ ನಡೆಯುವುದುಆಯಾ ಶಾಸಕ ಎಷ್ಟು ಕುಶಲಮತಿ, ಬುದ್ದಿ ವಂತ, ಸಾಧಾಧಣಿಗ, ದಡ್ಡ ಎಂಬು ದನ್ನು ಅವಲಂಬಿಸಿ. ಇವರೆಲ್ಲರಿಗೂ ಒಂದು ಸಂಗತಿ ಮಾತ್ರ ಸಮಾನ. ವ್ಯಷ್ಟಿ ಯಾಗಿಯೂ ಸಮಷಿಯಾಗಿಯೂ ಜನತೆ ಇವರ ಕಣ್ಣಿಗೆ ಕಾಣಿಸುವುದು ಮತದಾರ ರಾಗಿ. ಅವರೆಂದೂ ಜಯಘೋಷ ಮಾಡುವುದಿಲ್ಲ. ಮಾಡಿದರೂ ಜನಸ್ತೋಮಕ್ಕೆ ಮೇಲ್ಪಂಗ್ತಿಯಾಗಿ. ಕಿಷ್ಕಿಂದ್ದೆಯಿರಲಿ, ಭಾರತವಿರಲಿ ಇವೆಲ್ಲ ಭೌಗೋಳಿಕ ಘಟಕ<noinclude></noinclude>
obsj79d5qqo1iu53428fsaxiookxdm9
ಪುಟ:ಮಿಂಚು.pdf/೨೪೨
104
20689
320868
206836
2026-05-19T15:09:54Z
Shreelatha.Halemane
7642
/* Validated */
320868
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=236|right=ಮಿಂಚು}}
ಗಳು. ಈ ಘಟಕಗಳ ಒಳಗಿರುವುದು ಜನ. ಬೆಳೆ ಪೈರು, ಗುಡಿಸಲು ಸೌದ, ಕೈಗಾರಿಕೋದ್ಯಮ ಗುಡಿ ಕೈಗಾರಿಕೆ, ಸಂಪತ್ತು, ನೆಲ-ಜಲ-ಆಕಾಶ. ಇಲ್ಲಿನ ಶಾಸಕರು ಇಲ್ಲಿಗೆ ಒಡೆಯರು. ಎಲ್ಲೆಡೆಯ ಶಾಸಕರು ಎಲ್ಲೆಡೆಗೆ ಒಡೆಯರು.
{{gap}}ಒಳ್ಳೆಯ ಶಾಸಕ ವಸ್ತುನಿಷ್ಟ, ಚಿಕಿತ್ಸಕ ಪ್ರವೃತ್ತಿಯವ, ಭಾವ ವಿಕಾರಗಳಿಗೆ ಗುರಿಯಾಗುವುದಿಲ್ಲ. ಗುರಿಯಾದರೂ ನೆರೆದ ಸಮುದಾಯದಿಂದ ಕಣ್ಣೀರು ಹಿಂಡು ವುದಕ್ಕಾಗಿ. ಅವನಿಗೆ ದಕ್ಕುವ ಮೆಚ್ಚುಗೆ-ಭಳಿರೆ! ಭಪ್ಪರೆ!
{{gap}}ಪರಸ್ಪರ ವೈರ (ಸ್ನೇಹ ಕೂಡ) ಶಾಸಕರ ಗುಣಗಳೇ. ವೈರ ಗಾಢ. ಸ್ನೇಹ ಸೀಮಿತ,
{{gap}}ಇವರ ಕಾರ್ಯಾಚರಣೆ ಒಮ್ಮೊಮ್ಮೆ ವೈಯಕ್ತಿಕ ನೆಲೆಯಿಂದ, ಒಮ್ಮೊಮ್ಮೆ ಸಾಮೂಹಿಕ ಆಖಾಡದಿಂದ. ಗೆದ್ದಾಗ ಟೇಂಕಾರ, ಸೋತಾಗ ಬಿಸುಸುಯ್ಲು.
{{gap}}ವಿಧಾನಸಭೆಗೆ ಒತ್ತಿಕೊಂಡೇ ಇತ್ತು ಶಾಸಕಾಂಗ ಪಕ್ಷದ ಸಭೆ ಜರಗುವ ಸ್ಥಳ, ಉಳಿದ ಪಕ್ಷಗಳಿಗೂ ಇದ್ದುವು ಪುಟ್ಟ ಒಂದೊಂದು ಕೊಠಡಿ, ಜಗಲಿಯಲ್ಲಿ ಬೆತ್ತದ ಕುರ್ಚಿಗಳಿದ್ದುವು. ಇಪ್ಪತ್ತು ಮಿನಿಟು ಮೊದಲೇ ಬಂದ ಸೌದಾಮಿನಿ ಒಂದು ಕುರ್ಚಿಯನ್ನು ಆರಿಸಿಕೊಂಡಳು
{{gap}}ಬರತೊಡಗಿದವರಿ೦ದ :
{{gap}}“ನಮಸ್ಕಾರ.”
{{gap}}ತಪ್ಪದೆ ಇವಳ ಉತ್ತರ :
{{gap}}“ನಮಸ್ಕಾರ.”
{{gap}}ಸುಯ್ಸುಯ್ಯೆಂದು ಸರಿದಾಡುವ ಮೀನುಗಳು. ಮಹಾವ್ಯಾಧನ ಬಾಣಕ್ಕೆ ಯಾರು ತುತ್ತು ? ಬಲೆಗೆ ಸಿಕ್ಕಿದವರು ಉಪ್ಪೇರಿಯಾಗುವುದು ತನ್ನ ಬಾಣಲೆಯಲ್ಲೊ? ವಿಶ್ವಂಭರನ ತಪ್ಪಲೆಯಲ್ಲೋ ?
{{gap}}ಬಾಗಿಲು ದಾಟುವ ಮುನ್ನ ಆಮಂತ್ರಣ ತೋರಿಸಬೇಕು. ಕಳೆದುಹೋಗಿದ್ದರೆ, ಗುರುತಿಸುವವರು ಯಾರಾದರೂ ಬೇಕು.
{{gap}}ಸೌದಾಮಿನಿ ಬೇಗನೆ ಬಂದಿರುವಳೆಂಬ ವಾರ್ತೆ ತಲಪಿದೊಡನೆ ವಿಶ್ವಂಭರನ ಕಾರು ಧಾವಿಸಿತು. (ನಕುಲದೇವ್ ಅಂದಿದ್ದ : ನೀವು ಮೊದಲು ಹೋಗಿ ಅಲ್ಲೇ ಇರಿ; ನಾನು ಒಂದು ಘಂಟೆಗೆ ಐದು ಮಿನಿಟು ಇರುವಾಗ ಬರೇನೆ. ಬೆಟ್ಟಕೊಟ್ಟರೆ ಹಸ್ತವನ್ನು ಅದೃಶ್ಯಮಾಡುವ ಸಮರ್ಥೆ ಆಕೆ.)
{{gap}}ಊಟವಾಗಿತ್ತು. ಬಿಸಿಲಿನ ದಣಿವಾರಿಸಿಕೊಳ್ಳಲು ಒಂದಿಷ್ಟು ಪೇಯ. ಕೋಕೊ ಕೋಲಾ ವಿತರಣೆಯಾಯಿತು, ಕೆಳಗಿರಿಸಿದ ಎರಡು ಖಾಲಿ ಬಾಟಲಿಗಳು ಬಿದ್ದುವು. (ಒಂದರ ಕತ್ತು ಮುರಿಯಿತು. ಇನ್ನೊಂದರ ಹೊಟ್ಟೆ ಬಿರಿಯಿತು), ಕಾರ್ಯಸೌಧದ ಜವಾನರಿಗೆ ಗಾಜಿನ ಚೂರುಗಳನ್ನೆತ್ತುವ ಕೆಲಸ.<noinclude></noinclude>
ig8i0qad4ut00jp1c4mmkzchdgc6yrl
ಪುಟ:Mrutyunjaya.pdf/೧೩೯
104
21623
321266
60414
2026-05-20T08:20:04Z
Hariprasad Shetty10
7490
321266
proofread-page
text/x-wiki
<noinclude><pagequality level="1" user="Sophia anna dinesh" />{{rh|left=೧೨೬|center=ಮೃತ್ಯುಂಜಯ|right=}}</noinclude> ನೆಜಮುಟ್ ಮೂತಿ ತಿರುವಿ ಮೌನ ತಳೆದಳು.
ಮೆನೆಪ್ ಟಾ ಮತ್ತಿತರರು ಹೊರಬರುವುದನ್ನೇ ಕಾಯುತ್ತ ಅಪೆಟ್ ನಿಂತಿದ್ದ;ಒಬ್ಬನೇ. ಮಂದಿರ ಬಿಡುವುದಕ್ಕೆ ಮುನ್ನ ಸಿನ್ಯುಹೆಯ ಆಳು ಬಂದಿದ್ದ,ತನ್ನನ್ನು ಕರೆಯಲು."ಸ್ವಲ್ಪ ವಾಸಿಯಂತೆ ;ಆದರೂ ಬರಬೇಕಂತೆ," ಎಂದು ತಿಳಿಸಿದ್ದ.ಅಲ್ಲಿಗೆ ಹೋಗಬೇಕು. ರಾತ್ರಿಯ ಊಟ ಅಲ್ಲಿಯೇ ಮುಗಿಸಬಹುದು. ಇಲ್ಲಿ ಸಭೆಯಲ್ಲಿ ಮಾತನಾಡುವಂತೆ ತನ್ನನ್ನು ಕೇಳುವರೇನೋ ಎಂದಿದ್ದ. ಅದಕ್ಕೆ ಆಸ್ಪದವೇ ಇಲ್ಲದ ಹಾಗೆ ಸಭೆ ಮುಗಿದಿತ್ತು.
ಮೆನೆಪ್ ಟಾ ಮತ್ತಿತರರು ಹೊರ ಬರುತ್ತಿದ್ದಂತೆ, ಒಳಹೋಗಲು ಇನ್ನೊಂದು ತಂಡ ಸಿದ್ಧವಾಯಿತು.
"ಅರ್ಚಕರು ಇನ್ನೂ ಇಲ್ಲೇ ಇದೀರಾ?" ಎಂದು ಮೆನೆಪ್ ಟಾನೆ ಕೇಳಿದ.
" ಹೇಳಿ ಹೋಗೋಣ ಅಂತ ನಿಂತೆ " ಎಂದ ಅಪೆಟ್.
"ಏನು ತೊಂದರೆ ಇದ್ದರೂ ರಾಜಗೃಹಕ್ಕೆ ತಿಳಿಸಿದರಾಯ್ತು.ಯಾವ ಸಂಕೋಚವು ಬೇಡ."
"ಹಿಂದೆ ಯಾವತ್ತೂ ಇದ್ದಿರದ ಪರಿಸ್ಥಿತಿ. ಕಾಲಕ್ರಮದಲ್ಲಿ ಎಲ್ಲ ಸರಿಹೋದೀತು."
"ಸಂಶಯವಿಲ್ಲ."
"ಮಂದಿರಕ್ಕೆ ಯಾವಾಗ ಬರ್ತೀರಿ?"
"ನಾಳೆ ಆದೀತೆ?"
"ಬನ್ನಿ ನಾಯಕನಿಗೆ ಯಶಕೋರಿ ವಿಶೇಷ ಪೂಜೆ ಸಲ್ಲಿಸುತ್ತೇನೆ. ಸಕುಟುಂಬವಾಗಿ ಬನ್ನಿ."
"ಹಾಗೇ ಆಗಲಿ,ಸ್ನೊಫ್ರು,ಸೆಬೆಕ್ಖು,ಹಿರಿಯರು-ನಾವೆಲ್ಲಾ ಬರ್ತೇವೆ."
ನಿನ್ನೆ ತನಕ
ಹೋಗು ಬಾ ಇಂದಿನಿಂದ ಗೌರವದ ಸಂಭೋಧನೆ,ಸದ್ಯಃ ತನ್ನನ್ನು ಏಕವಚನದಿಂದ ಅವನು ಕರೆಯುತ್ತಿಲ್ಲವಲ್ಲ; ಅಷ್ಟಕ್ಕಾದರೂ ಸಮಾಧಾನಪಟ್ಟುಕೊಳ್ಳಬೇಕು- ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಅಪೆಟ್ ಸಿನ್ಯುಹೆಯ ಮನೆಯತ್ತ ಹೊರಟ.<noinclude></noinclude>
tu4vfx9juxv0wxpfouo5s1ngxytmyr2
321267
321266
2026-05-20T08:22:13Z
Hariprasad Shetty10
7490
321267
proofread-page
text/x-wiki
<noinclude><pagequality level="1" user="Sophia anna dinesh" />{{rh|left=೧೨೬|center=ಮೃತ್ಯುಂಜಯ|right=}}</noinclude>{{gap}}ನೆಜಮುಟ್ ಮೂತಿ ತಿರುವಿ ಮೌನ ತಳೆದಳು.<br />
{{gap}}ಮೆನೆಪ್ ಟಾ ಮತ್ತಿತರರು ಹೊರಬರುವುದನ್ನೇ ಕಾಯುತ್ತ ಅಪೆಟ್ ನಿಂತಿದ್ದ;ಒಬ್ಬನೇ. ಮಂದಿರ ಬಿಡುವುದಕ್ಕೆ ಮುನ್ನ ಸಿನ್ಯುಹೆಯ ಆಳು ಬಂದಿದ್ದ,ತನ್ನನ್ನು ಕರೆಯಲು."ಸ್ವಲ್ಪ ವಾಸಿಯಂತೆ ;ಆದರೂ ಬರಬೇಕಂತೆ," ಎಂದು ತಿಳಿಸಿದ್ದ.ಅಲ್ಲಿಗೆ ಹೋಗಬೇಕು. ರಾತ್ರಿಯ ಊಟ ಅಲ್ಲಿಯೇ ಮುಗಿಸಬಹುದು. ಇಲ್ಲಿ ಸಭೆಯಲ್ಲಿ ಮಾತನಾಡುವಂತೆ ತನ್ನನ್ನು ಕೇಳುವರೇನೋ ಎಂದಿದ್ದ. ಅದಕ್ಕೆ ಆಸ್ಪದವೇ ಇಲ್ಲದ ಹಾಗೆ ಸಭೆ ಮುಗಿದಿತ್ತು.
{{gap}}ಮೆನೆಪ್ ಟಾ ಮತ್ತಿತರರು ಹೊರ ಬರುತ್ತಿದ್ದಂತೆ, ಒಳಹೋಗಲು ಇನ್ನೊಂದು ತಂಡ ಸಿದ್ಧವಾಯಿತು.
{{gap}}"ಅರ್ಚಕರು ಇನ್ನೂ ಇಲ್ಲೇ ಇದೀರಾ?" ಎಂದು ಮೆನೆಪ್ ಟಾನೆ ಕೇಳಿದ.
{{gap}}" ಹೇಳಿ ಹೋಗೋಣ ಅಂತ ನಿಂತೆ " ಎಂದ ಅಪೆಟ್.
{{gap}}"ಏನು ತೊಂದರೆ ಇದ್ದರೂ ರಾಜಗೃಹಕ್ಕೆ ತಿಳಿಸಿದರಾಯ್ತು.ಯಾವ ಸಂಕೋಚವು ಬೇಡ."
{{gap}}"ಹಿಂದೆ ಯಾವತ್ತೂ ಇದ್ದಿರದ ಪರಿಸ್ಥಿತಿ. ಕಾಲಕ್ರಮದಲ್ಲಿ ಎಲ್ಲ ಸರಿಹೋದೀತು."
{{gap}}"ಸಂಶಯವಿಲ್ಲ."
{{gap}}"ಮಂದಿರಕ್ಕೆ ಯಾವಾಗ ಬರ್ತೀರಿ?"
{{gap}}"ನಾಳೆ ಆದೀತೆ?"
{{gap}}"ಬನ್ನಿ ನಾಯಕನಿಗೆ ಯಶಕೋರಿ ವಿಶೇಷ ಪೂಜೆ ಸಲ್ಲಿಸುತ್ತೇನೆ. ಸಕುಟುಂಬವಾಗಿ ಬನ್ನಿ."
{{gap}}"ಹಾಗೇ ಆಗಲಿ,ಸ್ನೊಫ್ರು,ಸೆಬೆಕ್ಖು,ಹಿರಿಯರು-ನಾವೆಲ್ಲಾ ಬರ್ತೇವೆ."
{{gap}}ನಿನ್ನೆ ತನಕ 'ಹೋಗು' 'ಬಾ' ಇಂದಿನಿಂದ ಗೌರವದ ಸಂಭೋಧನೆ,ಸದ್ಯಃ ತನ್ನನ್ನು ಏಕವಚನದಿಂದ ಅವನು ಕರೆಯುತ್ತಿಲ್ಲವಲ್ಲ; ಅಷ್ಟಕ್ಕಾದರೂ ಸಮಾಧಾನಪಟ್ಟುಕೊಳ್ಳಬೇಕು— ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಅಪೆಟ್ ಸಿನ್ಯುಹೆಯ ಮನೆಯತ್ತ ಹೊರಟ.<noinclude></noinclude>
921gs0442nqlye393i4wx6i6ju0l991
321268
321267
2026-05-20T08:22:59Z
Hariprasad Shetty10
7490
321268
proofread-page
text/x-wiki
<noinclude><pagequality level="1" user="Sophia anna dinesh" />{{rh|left=೧೨೬|center=ಮೃತ್ಯುಂಜಯ|right=}}</noinclude>{{gap}}ನೆಜಮುಟ್ ಮೂತಿ ತಿರುವಿ ಮೌನ ತಳೆದಳು.<br />
{{gap}}ಮೆನೆಪ್ ಟಾ ಮತ್ತಿತರರು ಹೊರಬರುವುದನ್ನೇ ಕಾಯುತ್ತ ಅಪೆಟ್ ನಿಂತಿದ್ದ;ಒಬ್ಬನೇ. ಮಂದಿರ ಬಿಡುವುದಕ್ಕೆ ಮುನ್ನ ಸಿನ್ಯುಹೆಯ ಆಳು ಬಂದಿದ್ದ,ತನ್ನನ್ನು ಕರೆಯಲು."ಸ್ವಲ್ಪ ವಾಸಿಯಂತೆ ;ಆದರೂ ಬರಬೇಕಂತೆ," ಎಂದು ತಿಳಿಸಿದ್ದ.ಅಲ್ಲಿಗೆ ಹೋಗಬೇಕು. ರಾತ್ರಿಯ ಊಟ ಅಲ್ಲಿಯೇ ಮುಗಿಸಬಹುದು. ಇಲ್ಲಿ ಸಭೆಯಲ್ಲಿ ಮಾತನಾಡುವಂತೆ ತನ್ನನ್ನು ಕೇಳುವರೇನೋ ಎಂದಿದ್ದ. ಅದಕ್ಕೆ ಆಸ್ಪದವೇ ಇಲ್ಲದ ಹಾಗೆ ಸಭೆ ಮುಗಿದಿತ್ತು.<br />
{{gap}}ಮೆನೆಪ್ ಟಾ ಮತ್ತಿತರರು ಹೊರ ಬರುತ್ತಿದ್ದಂತೆ, ಒಳಹೋಗಲು ಇನ್ನೊಂದು ತಂಡ ಸಿದ್ಧವಾಯಿತು.<br />
{{gap}}"ಅರ್ಚಕರು ಇನ್ನೂ ಇಲ್ಲೇ ಇದೀರಾ?" ಎಂದು ಮೆನೆಪ್ ಟಾನೆ ಕೇಳಿದ.<br />
{{gap}}" ಹೇಳಿ ಹೋಗೋಣ ಅಂತ ನಿಂತೆ " ಎಂದ ಅಪೆಟ್. <br />
{{gap}}"ಏನು ತೊಂದರೆ ಇದ್ದರೂ ರಾಜಗೃಹಕ್ಕೆ ತಿಳಿಸಿದರಾಯ್ತು.ಯಾವ ಸಂಕೋಚವು ಬೇಡ."<br />
{{gap}}"ಹಿಂದೆ ಯಾವತ್ತೂ ಇದ್ದಿರದ ಪರಿಸ್ಥಿತಿ. ಕಾಲಕ್ರಮದಲ್ಲಿ ಎಲ್ಲ ಸರಿಹೋದೀತು."
{{gap}}"ಸಂಶಯವಿಲ್ಲ."<br />
{{gap}}"ಮಂದಿರಕ್ಕೆ ಯಾವಾಗ ಬರ್ತೀರಿ?"<br />
{{gap}}"ನಾಳೆ ಆದೀತೆ?"<br />
{{gap}}"ಬನ್ನಿ ನಾಯಕನಿಗೆ ಯಶಕೋರಿ ವಿಶೇಷ ಪೂಜೆ ಸಲ್ಲಿಸುತ್ತೇನೆ. ಸಕುಟುಂಬವಾಗಿ ಬನ್ನಿ." <br />
{{gap}}"ಹಾಗೇ ಆಗಲಿ,ಸ್ನೊಫ್ರು,ಸೆಬೆಕ್ಖು,ಹಿರಿಯರು-ನಾವೆಲ್ಲಾ ಬರ್ತೇವೆ."<br />
{{gap}}ನಿನ್ನೆ ತನಕ 'ಹೋಗು' 'ಬಾ' ಇಂದಿನಿಂದ ಗೌರವದ ಸಂಭೋಧನೆ,ಸದ್ಯಃ ತನ್ನನ್ನು ಏಕವಚನದಿಂದ ಅವನು ಕರೆಯುತ್ತಿಲ್ಲವಲ್ಲ; ಅಷ್ಟಕ್ಕಾದರೂ ಸಮಾಧಾನಪಟ್ಟುಕೊಳ್ಳಬೇಕು— ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಅಪೆಟ್ ಸಿನ್ಯುಹೆಯ ಮನೆಯತ್ತ ಹೊರಟ.<noinclude></noinclude>
oxi4g18n8594sj1zgagin08plzcx54m
321269
321268
2026-05-20T08:23:45Z
Hariprasad Shetty10
7490
321269
proofread-page
text/x-wiki
<noinclude><pagequality level="1" user="Sophia anna dinesh" />{{rh|left=೧೨೬|center=ಮೃತ್ಯುಂಜಯ|right=}}</noinclude>{{gap}}ನೆಜಮುಟ್ ಮೂತಿ ತಿರುವಿ ಮೌನ ತಳೆದಳು.<br />
{{gap}}ಮೆನೆಪ್ ಟಾ ಮತ್ತಿತರರು ಹೊರಬರುವುದನ್ನೇ ಕಾಯುತ್ತ ಅಪೆಟ್ ನಿಂತಿದ್ದ;ಒಬ್ಬನೇ. ಮಂದಿರ ಬಿಡುವುದಕ್ಕೆ ಮುನ್ನ ಸಿನ್ಯುಹೆಯ ಆಳು ಬಂದಿದ್ದ,ತನ್ನನ್ನು ಕರೆಯಲು."ಸ್ವಲ್ಪ ವಾಸಿಯಂತೆ ;ಆದರೂ ಬರಬೇಕಂತೆ," ಎಂದು ತಿಳಿಸಿದ್ದ.ಅಲ್ಲಿಗೆ ಹೋಗಬೇಕು. ರಾತ್ರಿಯ ಊಟ ಅಲ್ಲಿಯೇ ಮುಗಿಸಬಹುದು. ಇಲ್ಲಿ ಸಭೆಯಲ್ಲಿ ಮಾತನಾಡುವಂತೆ ತನ್ನನ್ನು ಕೇಳುವರೇನೋ ಎಂದಿದ್ದ. ಅದಕ್ಕೆ ಆಸ್ಪದವೇ ಇಲ್ಲದ ಹಾಗೆ ಸಭೆ ಮುಗಿದಿತ್ತು.<br />
{{gap}}ಮೆನೆಪ್ ಟಾ ಮತ್ತಿತರರು ಹೊರ ಬರುತ್ತಿದ್ದಂತೆ, ಒಳಹೋಗಲು ಇನ್ನೊಂದು ತಂಡ ಸಿದ್ಧವಾಯಿತು.<br />
{{gap}}"ಅರ್ಚಕರು ಇನ್ನೂ ಇಲ್ಲೇ ಇದೀರಾ?" ಎಂದು ಮೆನೆಪ್ ಟಾನೆ ಕೇಳಿದ.<br />
{{gap}}" ಹೇಳಿ ಹೋಗೋಣ ಅಂತ ನಿಂತೆ " ಎಂದ ಅಪೆಟ್. <br />
{{gap}}"ಏನು ತೊಂದರೆ ಇದ್ದರೂ ರಾಜಗೃಹಕ್ಕೆ ತಿಳಿಸಿದರಾಯ್ತು.ಯಾವ ಸಂಕೋಚವು ಬೇಡ."<br />
{{gap}}"ಹಿಂದೆ ಯಾವತ್ತೂ ಇದ್ದಿರದ ಪರಿಸ್ಥಿತಿ. ಕಾಲಕ್ರಮದಲ್ಲಿ ಎಲ್ಲ ಸರಿಹೋದೀತು."
{{gap}}"ಸಂಶಯವಿಲ್ಲ."<br />
{{gap}}"ಮಂದಿರಕ್ಕೆ ಯಾವಾಗ ಬರ್ತೀರಿ?"<br />
{{gap}}"ನಾಳೆ ಆದೀತೆ?"<br />
{{gap}}"ಬನ್ನಿ ನಾಯಕನಿಗೆ ಯಶಕೋರಿ ವಿಶೇಷ ಪೂಜೆ ಸಲ್ಲಿಸುತ್ತೇನೆ. ಸಕುಟುಂಬವಾಗಿ ಬನ್ನಿ." <br />
{{gap}}"ಹಾಗೇ ಆಗಲಿ,ಸ್ನೊಫ್ರು,ಸೆಬೆಕ್ಖು,ಹಿರಿಯರು——ನಾವೆಲ್ಲಾ ಬರ್ತೇವೆ."<br />
{{gap}}ನಿನ್ನೆ ತನಕ 'ಹೋಗು' 'ಬಾ' ಇಂದಿನಿಂದ ಗೌರವದ ಸಂಭೋಧನೆ,ಸದ್ಯಃ ತನ್ನನ್ನು ಏಕವಚನದಿಂದ ಅವನು ಕರೆಯುತ್ತಿಲ್ಲವಲ್ಲ; ಅಷ್ಟಕ್ಕಾದರೂ ಸಮಾಧಾನಪಟ್ಟುಕೊಳ್ಳಬೇಕು——— ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಅಪೆಟ್ ಸಿನ್ಯುಹೆಯ ಮನೆಯತ್ತ ಹೊರಟ.<noinclude></noinclude>
dypb9klwpo8kp5wayzuyeeynpq6aw2j
321270
321269
2026-05-20T08:23:56Z
Hariprasad Shetty10
7490
/* Proofread */
321270
proofread-page
text/x-wiki
<noinclude><pagequality level="3" user="Hariprasad Shetty10" />{{rh|left=೧೨೬|center=ಮೃತ್ಯುಂಜಯ|right=}}</noinclude>{{gap}}ನೆಜಮುಟ್ ಮೂತಿ ತಿರುವಿ ಮೌನ ತಳೆದಳು.<br />
{{gap}}ಮೆನೆಪ್ ಟಾ ಮತ್ತಿತರರು ಹೊರಬರುವುದನ್ನೇ ಕಾಯುತ್ತ ಅಪೆಟ್ ನಿಂತಿದ್ದ;ಒಬ್ಬನೇ. ಮಂದಿರ ಬಿಡುವುದಕ್ಕೆ ಮುನ್ನ ಸಿನ್ಯುಹೆಯ ಆಳು ಬಂದಿದ್ದ,ತನ್ನನ್ನು ಕರೆಯಲು."ಸ್ವಲ್ಪ ವಾಸಿಯಂತೆ ;ಆದರೂ ಬರಬೇಕಂತೆ," ಎಂದು ತಿಳಿಸಿದ್ದ.ಅಲ್ಲಿಗೆ ಹೋಗಬೇಕು. ರಾತ್ರಿಯ ಊಟ ಅಲ್ಲಿಯೇ ಮುಗಿಸಬಹುದು. ಇಲ್ಲಿ ಸಭೆಯಲ್ಲಿ ಮಾತನಾಡುವಂತೆ ತನ್ನನ್ನು ಕೇಳುವರೇನೋ ಎಂದಿದ್ದ. ಅದಕ್ಕೆ ಆಸ್ಪದವೇ ಇಲ್ಲದ ಹಾಗೆ ಸಭೆ ಮುಗಿದಿತ್ತು.<br />
{{gap}}ಮೆನೆಪ್ ಟಾ ಮತ್ತಿತರರು ಹೊರ ಬರುತ್ತಿದ್ದಂತೆ, ಒಳಹೋಗಲು ಇನ್ನೊಂದು ತಂಡ ಸಿದ್ಧವಾಯಿತು.<br />
{{gap}}"ಅರ್ಚಕರು ಇನ್ನೂ ಇಲ್ಲೇ ಇದೀರಾ?" ಎಂದು ಮೆನೆಪ್ ಟಾನೆ ಕೇಳಿದ.<br />
{{gap}}" ಹೇಳಿ ಹೋಗೋಣ ಅಂತ ನಿಂತೆ " ಎಂದ ಅಪೆಟ್. <br />
{{gap}}"ಏನು ತೊಂದರೆ ಇದ್ದರೂ ರಾಜಗೃಹಕ್ಕೆ ತಿಳಿಸಿದರಾಯ್ತು.ಯಾವ ಸಂಕೋಚವು ಬೇಡ."<br />
{{gap}}"ಹಿಂದೆ ಯಾವತ್ತೂ ಇದ್ದಿರದ ಪರಿಸ್ಥಿತಿ. ಕಾಲಕ್ರಮದಲ್ಲಿ ಎಲ್ಲ ಸರಿಹೋದೀತು."
{{gap}}"ಸಂಶಯವಿಲ್ಲ."<br />
{{gap}}"ಮಂದಿರಕ್ಕೆ ಯಾವಾಗ ಬರ್ತೀರಿ?"<br />
{{gap}}"ನಾಳೆ ಆದೀತೆ?"<br />
{{gap}}"ಬನ್ನಿ ನಾಯಕನಿಗೆ ಯಶಕೋರಿ ವಿಶೇಷ ಪೂಜೆ ಸಲ್ಲಿಸುತ್ತೇನೆ. ಸಕುಟುಂಬವಾಗಿ ಬನ್ನಿ." <br />
{{gap}}"ಹಾಗೇ ಆಗಲಿ,ಸ್ನೊಫ್ರು,ಸೆಬೆಕ್ಖು,ಹಿರಿಯರು——ನಾವೆಲ್ಲಾ ಬರ್ತೇವೆ."<br />
{{gap}}ನಿನ್ನೆ ತನಕ 'ಹೋಗು' 'ಬಾ' ಇಂದಿನಿಂದ ಗೌರವದ ಸಂಭೋಧನೆ,ಸದ್ಯಃ ತನ್ನನ್ನು ಏಕವಚನದಿಂದ ಅವನು ಕರೆಯುತ್ತಿಲ್ಲವಲ್ಲ; ಅಷ್ಟಕ್ಕಾದರೂ ಸಮಾಧಾನಪಟ್ಟುಕೊಳ್ಳಬೇಕು——— ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಅಪೆಟ್ ಸಿನ್ಯುಹೆಯ ಮನೆಯತ್ತ ಹೊರಟ.<noinclude></noinclude>
518qrfuc4dy00ja7gpy1stba5e302ua
321275
321270
2026-05-20T08:35:59Z
Shreelatha.Halemane
7642
/* Validated */
321275
proofread-page
text/x-wiki
<noinclude><pagequality level="4" user="Shreelatha.Halemane" />{{rh|left=೧೨೬|center=ಮೃತ್ಯುಂಜಯ|right=}}</noinclude>{{gap}}ನೆಜಮುಟ್ ಮೂತಿ ತಿರುವಿ ಮೌನ ತಳೆದಳು.<br />
{{gap}}ಮೆನೆಪ್ ಟಾ ಮತ್ತಿತರರು ಹೊರಬರುವುದನ್ನೇ ಕಾಯುತ್ತ ಅಪೆಟ್ ನಿಂತಿದ್ದ;ಒಬ್ಬನೇ. ಮಂದಿರ ಬಿಡುವುದಕ್ಕೆ ಮುನ್ನ ಸಿನ್ಯುಹೆಯ ಆಳು ಬಂದಿದ್ದ,ತನ್ನನ್ನು ಕರೆಯಲು."ಸ್ವಲ್ಪ ವಾಸಿಯಂತೆ ;ಆದರೂ ಬರಬೇಕಂತೆ," ಎಂದು ತಿಳಿಸಿದ್ದ.ಅಲ್ಲಿಗೆ ಹೋಗಬೇಕು. ರಾತ್ರಿಯ ಊಟ ಅಲ್ಲಿಯೇ ಮುಗಿಸಬಹುದು. ಇಲ್ಲಿ ಸಭೆಯಲ್ಲಿ ಮಾತನಾಡುವಂತೆ ತನ್ನನ್ನು ಕೇಳುವರೇನೋ ಎಂದಿದ್ದ. ಅದಕ್ಕೆ ಆಸ್ಪದವೇ ಇಲ್ಲದ ಹಾಗೆ ಸಭೆ ಮುಗಿದಿತ್ತು.<br />
{{gap}}ಮೆನೆಪ್ ಟಾ ಮತ್ತಿತರರು ಹೊರ ಬರುತ್ತಿದ್ದಂತೆ, ಒಳಹೋಗಲು ಇನ್ನೊಂದು ತಂಡ ಸಿದ್ಧವಾಯಿತು.<br />
{{gap}}"ಅರ್ಚಕರು ಇನ್ನೂ ಇಲ್ಲೇ ಇದೀರಾ?" ಎಂದು ಮೆನೆಪ್ ಟಾನೆ ಕೇಳಿದ.<br />
{{gap}}" ಹೇಳಿ ಹೋಗೋಣ ಅಂತ ನಿಂತೆ " ಎಂದ ಅಪೆಟ್. <br />
{{gap}}"ಏನು ತೊಂದರೆ ಇದ್ದರೂ ರಾಜಗೃಹಕ್ಕೆ ತಿಳಿಸಿದರಾಯ್ತು.ಯಾವ ಸಂಕೋಚವು ಬೇಡ."<br />
{{gap}}"ಹಿಂದೆ ಯಾವತ್ತೂ ಇದ್ದಿರದ ಪರಿಸ್ಥಿತಿ. ಕಾಲಕ್ರಮದಲ್ಲಿ ಎಲ್ಲ ಸರಿಹೋದೀತು."
{{gap}}"ಸಂಶಯವಿಲ್ಲ."<br />
{{gap}}"ಮಂದಿರಕ್ಕೆ ಯಾವಾಗ ಬರ್ತೀರಿ?"<br />
{{gap}}"ನಾಳೆ ಆದೀತೆ?"<br />
{{gap}}"ಬನ್ನಿ ನಾಯಕನಿಗೆ ಯಶಕೋರಿ ವಿಶೇಷ ಪೂಜೆ ಸಲ್ಲಿಸುತ್ತೇನೆ. ಸಕುಟುಂಬವಾಗಿ ಬನ್ನಿ." <br />
{{gap}}"ಹಾಗೇ ಆಗಲಿ,ಸ್ನೊಫ್ರು,ಸೆಬೆಕ್ಖು,ಹಿರಿಯರು——ನಾವೆಲ್ಲಾ ಬರ್ತೇವೆ."<br />
{{gap}}ನಿನ್ನೆ ತನಕ 'ಹೋಗು' 'ಬಾ' ಇಂದಿನಿಂದ ಗೌರವದ ಸಂಭೋಧನೆ,ಸದ್ಯಃ ತನ್ನನ್ನು ಏಕವಚನದಿಂದ ಅವನು ಕರೆಯುತ್ತಿಲ್ಲವಲ್ಲ; ಅಷ್ಟಕ್ಕಾದರೂ ಸಮಾಧಾನಪಟ್ಟುಕೊಳ್ಳಬೇಕು——— ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾ ಅಪೆಟ್ ಸಿನ್ಯುಹೆಯ ಮನೆಯತ್ತ ಹೊರಟ.<noinclude></noinclude>
oex9yi707mme5e1drs4i2pgplibhagt
ಪುಟ:Mrutyunjaya.pdf/೧೪೦
104
21624
321271
63048
2026-05-20T08:25:04Z
Hariprasad Shetty10
7490
321271
proofread-page
text/x-wiki
<noinclude><pagequality level="1" user="Sophia anna dinesh" />{{rh|left=|center=ಮೃತ್ಯು೦ಜಯ|right= ೧೨೭}}</noinclude>
ಇಪ್ಯುವರ್ ಬಂದು," ಇವತ್ತು ಮಾತಾಡಿದ್ದನ್ನು ಬರಕೊಂಡಿಲ್ಲ"ಎಂದ.
ತೀರ್ಮಾನಗಳೆಲ್ಲಾ ದಾಖಲೆಯಾಗ್ಬೇಕು.ಬರೆದು ನಾಳೆ ನನಗೆ ಓದಿ ಹೇಳಿ," ಎಂದ ಮೆನೆಪ್ ಟಾ. “
"ರಾತ್ರಿಯೇ ಬರೆದಿಡ್ತೇನೆ..."
ರಾಜಗೃಹದಲ್ಲಿ ವಾಸಿಸುವುದು ಇಪ್ಯೂವರ್ ಗೆ ಅಪ್ರಿಯವೇನೂ ఆಗಿರಲಿಲ್ಲ. ಆದರೆ ಅವನ ಪಾಲಿಗೆ ಆ ಮಾತು ಹಠಾತ್ತನೆ ಬಂದಿತ್ತು. ಕೆಲವು ದಿನಗಳಲ್ಲಿ ಈ ಕನಸು ಒಡೆದರೆ ? ಆತ ಕೇಳಿದ:
“ನಾನು. ನನ್ನ ಮನೆಯಲ್ಲೇ ಇದ್ದರಾಗದೆ?”
“ರಾಜಗೃಹ ಅನಾಥವಾಗ್ಭಾರ್ದು, ಇಪ್ಯುವರ್.ನಾಳೆ ದೇವಮಂದಿರಕ್ಕೆ ಬನ್ನಿ ಪೂಜೆ ಆದ ಮೇಲೆ ಇಲ್ಲಿಗೆ ಸಾಮಾನು ಸಾಗಿಸಿ.”
"ರಾಮೆರಿಪ್ ಟಾಗೆ ಓದು ಬರಹ"
“ಎರಡು ದಿನ ಹೋಗಲಿ. ಹೇಳ್ತೇನೆ.”
ಮೆನೆಪ್ ಟಾ, ಇತರ ಪ್ರಮುಖರು ಮತ್ತು ಹಿಂಬಾಲಿಸಿದ ಹಲವರು ತಮ್ಮ ತಮ್ಮ ಮನೆಗಳಿಗೆ ಹೊರಟರು.
ನೆಜಮುಟ್ ತಗ್ಗಿದ ಧ್ವನಿಯಲ್ಲಿ ನೆಫಿಸಳೊಡನೆ ಅಂದಳು :
“ನಾಯಕರು! ಊಹ್! ಒಂದು ಪೀಠ ಪಲ್ಲಕಿಯಾದರೂ ಬೇಡವೆ? ನೋಡು, ನಡೀತಿರೋದು_ಪಾದರಕ್ಷೇನೂ ಇಲ್ದೆ!”
ಸ್ನೋಪ್ರಗೆ ಪತ್ನಿಯ ಸ್ವರ ಕೇಳಿಸಿತು, ಹೊರಳಿ ನೋಡಿ, “ಏನದು?” ಎಂದು ಕೇಳಿದ.
ನೆಜಮುಟಾ ಉತ್ತರವೀಯಲಿಲ್ಲ.
* * * *
ವಿಶೇಷ ಪೂಜೆಯ ಸುದ್ದಿ ಹಬ್ಬಿತ್ತು. ಬೆಳಗ್ಗೆ ಬಿಡುವಾಗಿದ್ದ ನೂರಾರು ಜನ ಮೆನೆಪ್ ಟಾನ ತಂಡವನ್ನು ಹಿಂಬಾಲಿಸಿ ದೇವಮಂದಿರಕ್ಕೆ ಬಂದರು.
ಅರ್ಚಕನ ಮಂತ್ರೋಚ್ಚಾರ ; ಉಳಿದವರ ಮೌನ ಪ್ರಾರ್ಥನೆ.
ಕೊನೆಯಲ್ಲಿ, ಎಲ್ಲರಿಗೂ ಕೇಳಿಸುವಂತೆ ಉಚ್ಚ ಕಂಠದಲ್ಲಿ ದೇವರನ್ನು<noinclude></noinclude>
bb8w9ci7lz9vigz1rj9vpnmrxfong80
321272
321271
2026-05-20T08:29:23Z
Hariprasad Shetty10
7490
321272
proofread-page
text/x-wiki
<noinclude><pagequality level="1" user="Sophia anna dinesh" />{{rh|left=|center=ಮೃತ್ಯು೦ಜಯ|right= ೧೨೭}}</noinclude>{{gap}}ಇಪ್ಯುವರ್ ಬಂದು," ಇವತ್ತು ಮಾತಾಡಿದ್ದನ್ನು ಬರಕೊಂಡಿಲ್ಲ"ಎಂದ.<br /> {{gap}}ತೀರ್ಮಾನಗಳೆಲ್ಲಾ ದಾಖಲೆಯಾಗ್ಬೇಕು.ಬರೆದು ನಾಳೆ ನನಗೆ ಓದಿ ಹೇಳಿ," ಎಂದ ಮೆನೆಪ್ ಟಾ.<br />
{{gap}}"ರಾತ್ರಿಯೇ ಬರೆದಿಡ್ತೇನೆ..."<br />
{{gap}}ರಾಜಗೃಹದಲ್ಲಿ ವಾಸಿಸುವುದು ಇಪ್ಯೂವರ್ ಗೆ ಅಪ್ರಿಯವೇನೂ ఆಗಿರಲಿಲ್ಲ. ಆದರೆ ಅವನ ಪಾಲಿಗೆ ಆ ಮಾತು ಹಠಾತ್ತನೆ ಬಂದಿತ್ತು. ಕೆಲವು ದಿನಗಳಲ್ಲಿ ಈ ಕನಸು ಒಡೆದರೆ ? ಆತ ಕೇಳಿದ:<br />
{{gap}}“ನಾನು. ನನ್ನ ಮನೆಯಲ್ಲೇ ಇದ್ದರಾಗದೆ?”<br />
{{gap}}“ರಾಜಗೃಹ ಅನಾಥವಾಗ್ಭಾರ್ದು, ಇಪ್ಯುವರ್.ನಾಳೆ ದೇವಮಂದಿರಕ್ಕೆ ಬನ್ನಿ ಪೂಜೆ ಆದ ಮೇಲೆ ಇಲ್ಲಿಗೆ ಸಾಮಾನು ಸಾಗಿಸಿ.”<br />
{{gap}}"ರಾಮೆರಿಪ್ ಟಾಗೆ ಓದು ಬರಹ"<br />
{{gap}}“ಎರಡು ದಿನ ಹೋಗಲಿ. ಹೇಳ್ತೇನೆ.”<br />
ಮೆನೆಪ್ ಟಾ, ಇತರ ಪ್ರಮುಖರು ಮತ್ತು ಹಿಂಬಾಲಿಸಿದ ಹಲವರು ತಮ್ಮ ತಮ್ಮ ಮನೆಗಳಿಗೆ ಹೊರಟರು.
ನೆಜಮುಟ್ ತಗ್ಗಿದ ಧ್ವನಿಯಲ್ಲಿ ನೆಫಿಸಳೊಡನೆ ಅಂದಳು :
“ನಾಯಕರು! ಊಹ್! ಒಂದು ಪೀಠ ಪಲ್ಲಕಿಯಾದರೂ ಬೇಡವೆ? ನೋಡು, ನಡೀತಿರೋದು_ಪಾದರಕ್ಷೇನೂ ಇಲ್ದೆ!”
ಸ್ನೋಪ್ರಗೆ ಪತ್ನಿಯ ಸ್ವರ ಕೇಳಿಸಿತು, ಹೊರಳಿ ನೋಡಿ, “ಏನದು?” ಎಂದು ಕೇಳಿದ.
ನೆಜಮುಟಾ ಉತ್ತರವೀಯಲಿಲ್ಲ.
* * * *
ವಿಶೇಷ ಪೂಜೆಯ ಸುದ್ದಿ ಹಬ್ಬಿತ್ತು. ಬೆಳಗ್ಗೆ ಬಿಡುವಾಗಿದ್ದ ನೂರಾರು ಜನ ಮೆನೆಪ್ ಟಾನ ತಂಡವನ್ನು ಹಿಂಬಾಲಿಸಿ ದೇವಮಂದಿರಕ್ಕೆ ಬಂದರು.
ಅರ್ಚಕನ ಮಂತ್ರೋಚ್ಚಾರ ; ಉಳಿದವರ ಮೌನ ಪ್ರಾರ್ಥನೆ.
ಕೊನೆಯಲ್ಲಿ, ಎಲ್ಲರಿಗೂ ಕೇಳಿಸುವಂತೆ ಉಚ್ಚ ಕಂಠದಲ್ಲಿ ದೇವರನ್ನು<noinclude></noinclude>
9dtgrqcazwh4yj7bxuxfu685rhyf3ph
321273
321272
2026-05-20T08:30:44Z
Hariprasad Shetty10
7490
321273
proofread-page
text/x-wiki
<noinclude><pagequality level="1" user="Sophia anna dinesh" />{{rh|left=|center=ಮೃತ್ಯು೦ಜಯ|right= ೧೨೭}}</noinclude>{{gap}}ಇಪ್ಯುವರ್ ಬಂದು," ಇವತ್ತು ಮಾತಾಡಿದ್ದನ್ನು ಬರಕೊಂಡಿಲ್ಲ"ಎಂದ.<br /> {{gap}}ತೀರ್ಮಾನಗಳೆಲ್ಲಾ ದಾಖಲೆಯಾಗ್ಬೇಕು.ಬರೆದು ನಾಳೆ ನನಗೆ ಓದಿ ಹೇಳಿ," ಎಂದ ಮೆನೆಪ್ ಟಾ.<br />
{{gap}}"ರಾತ್ರಿಯೇ ಬರೆದಿಡ್ತೇನೆ..."<br />
{{gap}}ರಾಜಗೃಹದಲ್ಲಿ ವಾಸಿಸುವುದು ಇಪ್ಯೂವರ್ ಗೆ ಅಪ್ರಿಯವೇನೂ ఆಗಿರಲಿಲ್ಲ. ಆದರೆ ಅವನ ಪಾಲಿಗೆ ಆ ಮಾತು ಹಠಾತ್ತನೆ ಬಂದಿತ್ತು. ಕೆಲವು ದಿನಗಳಲ್ಲಿ ಈ ಕನಸು ಒಡೆದರೆ ? ಆತ ಕೇಳಿದ:<br />
{{gap}}“ನಾನು. ನನ್ನ ಮನೆಯಲ್ಲೇ ಇದ್ದರಾಗದೆ?”<br />
{{gap}}“ರಾಜಗೃಹ ಅನಾಥವಾಗ್ಭಾರ್ದು, ಇಪ್ಯುವರ್.ನಾಳೆ ದೇವಮಂದಿರಕ್ಕೆ ಬನ್ನಿ ಪೂಜೆ ಆದ ಮೇಲೆ ಇಲ್ಲಿಗೆ ಸಾಮಾನು ಸಾಗಿಸಿ.”<br />
{{gap}}"ರಾಮೆರಿಪ್ ಟಾಗೆ ಓದು ಬರಹ"<br />
{{gap}}“ಎರಡು ದಿನ ಹೋಗಲಿ. ಹೇಳ್ತೇನೆ.”<br />
{{gap}}ಮೆನೆಪ್ ಟಾ, ಇತರ ಪ್ರಮುಖರು ಮತ್ತು ಹಿಂಬಾಲಿಸಿದ ಹಲವರು ತಮ್ಮ ತಮ್ಮ ಮನೆಗಳಿಗೆ ಹೊರಟರು.<br />
{{gap}}ನೆಜಮುಟ್ ತಗ್ಗಿದ ಧ್ವನಿಯಲ್ಲಿ ನೆಫಿಸಳೊಡನೆ ಅಂದಳು :<br />
{{gap}}“ನಾಯಕರು! ಊಹ್! ಒಂದು ಪೀಠ ಪಲ್ಲಕಿಯಾದರೂ ಬೇಡವೆ? ನೋಡು, ನಡೀತಿರೋದು_ಪಾದರಕ್ಷೇನೂ ಇಲ್ದೆ!”<br />
{{gap}}ಸ್ನೋಪ್ರಗೆ ಪತ್ನಿಯ ಸ್ವರ ಕೇಳಿಸಿತು, ಹೊರಳಿ ನೋಡಿ, “ಏನದು?” ಎಂದು ಕೇಳಿದ.<br />
{{gap}}ನೆಜಮುಟಾ ಉತ್ತರವೀಯಲಿಲ್ಲ.<br />
* * * *
{{gap}}ವಿಶೇಷ ಪೂಜೆಯ ಸುದ್ದಿ ಹಬ್ಬಿತ್ತು. ಬೆಳಗ್ಗೆ ಬಿಡುವಾಗಿದ್ದ ನೂರಾರು ಜನ ಮೆನೆಪ್ ಟಾನ ತಂಡವನ್ನು ಹಿಂಬಾಲಿಸಿ ದೇವಮಂದಿರಕ್ಕೆ ಬಂದರು.<br />
{{gap}}ಅರ್ಚಕನ ಮಂತ್ರೋಚ್ಚಾರ ; ಉಳಿದವರ ಮೌನ ಪ್ರಾರ್ಥನೆ.
ಕೊನೆಯಲ್ಲಿ, ಎಲ್ಲರಿಗೂ ಕೇಳಿಸುವಂತೆ ಉಚ್ಚ ಕಂಠದಲ್ಲಿ ದೇವರನ್ನು<noinclude></noinclude>
5furt36q7138bk77d53ddhpedosjz5h
321274
321273
2026-05-20T08:31:39Z
Hariprasad Shetty10
7490
321274
proofread-page
text/x-wiki
<noinclude><pagequality level="1" user="Sophia anna dinesh" />{{rh|left=|center=ಮೃತ್ಯು೦ಜಯ|right= ೧೨೭}}</noinclude>{{gap}}ಇಪ್ಯುವರ್ ಬಂದು," ಇವತ್ತು ಮಾತಾಡಿದ್ದನ್ನು ಬರಕೊಂಡಿಲ್ಲ"ಎಂದ.<br /> {{gap}}ತೀರ್ಮಾನಗಳೆಲ್ಲಾ ದಾಖಲೆಯಾಗ್ಬೇಕು.ಬರೆದು ನಾಳೆ ನನಗೆ ಓದಿ ಹೇಳಿ," ಎಂದ ಮೆನೆಪ್ ಟಾ.<br />
{{gap}}"ರಾತ್ರಿಯೇ ಬರೆದಿಡ್ತೇನೆ..."<br />
{{gap}}ರಾಜಗೃಹದಲ್ಲಿ ವಾಸಿಸುವುದು ಇಪ್ಯೂವರ್ ಗೆ ಅಪ್ರಿಯವೇನೂ ఆಗಿರಲಿಲ್ಲ. ಆದರೆ ಅವನ ಪಾಲಿಗೆ ಆ ಮಾತು ಹಠಾತ್ತನೆ ಬಂದಿತ್ತು. ಕೆಲವು ದಿನಗಳಲ್ಲಿ ಈ ಕನಸು ಒಡೆದರೆ ? ಆತ ಕೇಳಿದ:<br />
{{gap}}“ನಾನು. ನನ್ನ ಮನೆಯಲ್ಲೇ ಇದ್ದರಾಗದೆ?”<br />
{{gap}}“ರಾಜಗೃಹ ಅನಾಥವಾಗ್ಭಾರ್ದು, ಇಪ್ಯುವರ್.ನಾಳೆ ದೇವಮಂದಿರಕ್ಕೆ ಬನ್ನಿ ಪೂಜೆ ಆದ ಮೇಲೆ ಇಲ್ಲಿಗೆ ಸಾಮಾನು ಸಾಗಿಸಿ.”<br />
{{gap}}"ರಾಮೆರಿಪ್ ಟಾಗೆ ಓದು ಬರಹ"<br />
{{gap}}“ಎರಡು ದಿನ ಹೋಗಲಿ. ಹೇಳ್ತೇನೆ.”<br />
{{gap}}ಮೆನೆಪ್ ಟಾ, ಇತರ ಪ್ರಮುಖರು ಮತ್ತು ಹಿಂಬಾಲಿಸಿದ ಹಲವರು ತಮ್ಮ ತಮ್ಮ ಮನೆಗಳಿಗೆ ಹೊರಟರು.<br />
{{gap}}ನೆಜಮುಟ್ ತಗ್ಗಿದ ಧ್ವನಿಯಲ್ಲಿ ನೆಫಿಸಳೊಡನೆ ಅಂದಳು :<br />
{{gap}}“ನಾಯಕರು! ಊಹ್! ಒಂದು ಪೀಠ ಪಲ್ಲಕಿಯಾದರೂ ಬೇಡವೆ? ನೋಡು, ನಡೀತಿರೋದು_ಪಾದರಕ್ಷೇನೂ ಇಲ್ದೆ!”<br />
{{gap}}ಸ್ನೋಪ್ರಗೆ ಪತ್ನಿಯ ಸ್ವರ ಕೇಳಿಸಿತು, ಹೊರಳಿ ನೋಡಿ, “ಏನದು?” ಎಂದು ಕೇಳಿದ.<br />
{{gap}}ನೆಜಮುಟಾ ಉತ್ತರವೀಯಲಿಲ್ಲ.<br />
{{rh|left=*|center=*|right=*}}
{{gap}}ವಿಶೇಷ ಪೂಜೆಯ ಸುದ್ದಿ ಹಬ್ಬಿತ್ತು. ಬೆಳಗ್ಗೆ ಬಿಡುವಾಗಿದ್ದ ನೂರಾರು ಜನ ಮೆನೆಪ್ ಟಾನ ತಂಡವನ್ನು ಹಿಂಬಾಲಿಸಿ ದೇವಮಂದಿರಕ್ಕೆ ಬಂದರು.<br />
{{gap}}ಅರ್ಚಕನ ಮಂತ್ರೋಚ್ಚಾರ ; ಉಳಿದವರ ಮೌನ ಪ್ರಾರ್ಥನೆ.
ಕೊನೆಯಲ್ಲಿ, ಎಲ್ಲರಿಗೂ ಕೇಳಿಸುವಂತೆ ಉಚ್ಚ ಕಂಠದಲ್ಲಿ ದೇವರನ್ನು<noinclude></noinclude>
mk54x5lu09dc8xgjo2ejkulz8affpbm
321276
321274
2026-05-20T08:37:15Z
Shreelatha.Halemane
7642
/* Proofread */
321276
proofread-page
text/x-wiki
<noinclude><pagequality level="3" user="Shreelatha.Halemane" />{{rh|left=|center=ಮೃತ್ಯು೦ಜಯ|right= ೧೨೭}}</noinclude>{{gap}}ಇಪ್ಯುವರ್ ಬಂದು," ಇವತ್ತು ಮಾತಾಡಿದ್ದನ್ನು ಬರಕೊಂಡಿಲ್ಲ"ಎಂದ.<br /> {{gap}}ತೀರ್ಮಾನಗಳೆಲ್ಲಾ ದಾಖಲೆಯಾಗ್ಬೇಕು.ಬರೆದು ನಾಳೆ ನನಗೆ ಓದಿ ಹೇಳಿ," ಎಂದ ಮೆನೆಪ್ ಟಾ.<br />
{{gap}}"ರಾತ್ರಿಯೇ ಬರೆದಿಡ್ತೇನೆ..."<br />
{{gap}}ರಾಜಗೃಹದಲ್ಲಿ ವಾಸಿಸುವುದು ಇಪ್ಯೂವರ್ ಗೆ ಅಪ್ರಿಯವೇನೂ ఆಗಿರಲಿಲ್ಲ. ಆದರೆ ಅವನ ಪಾಲಿಗೆ ಆ ಮಾತು ಹಠಾತ್ತನೆ ಬಂದಿತ್ತು. ಕೆಲವು ದಿನಗಳಲ್ಲಿ ಈ ಕನಸು ಒಡೆದರೆ ? ಆತ ಕೇಳಿದ:<br />
{{gap}}“ನಾನು. ನನ್ನ ಮನೆಯಲ್ಲೇ ಇದ್ದರಾಗದೆ?”<br />
{{gap}}“ರಾಜಗೃಹ ಅನಾಥವಾಗ್ಭಾರ್ದು, ಇಪ್ಯುವರ್.ನಾಳೆ ದೇವಮಂದಿರಕ್ಕೆ ಬನ್ನಿ ಪೂಜೆ ಆದ ಮೇಲೆ ಇಲ್ಲಿಗೆ ಸಾಮಾನು ಸಾಗಿಸಿ.”<br />
{{gap}}"ರಾಮೆರಿಪ್ ಟಾಗೆ ಓದು ಬರಹ"<br />
{{gap}}“ಎರಡು ದಿನ ಹೋಗಲಿ. ಹೇಳ್ತೇನೆ.”<br />
{{gap}}ಮೆನೆಪ್ ಟಾ, ಇತರ ಪ್ರಮುಖರು ಮತ್ತು ಹಿಂಬಾಲಿಸಿದ ಹಲವರು ತಮ್ಮ ತಮ್ಮ ಮನೆಗಳಿಗೆ ಹೊರಟರು.<br />
{{gap}}ನೆಜಮುಟ್ ತಗ್ಗಿದ ಧ್ವನಿಯಲ್ಲಿ ನೆಫಿಸಳೊಡನೆ ಅಂದಳು :<br />
{{gap}}“ನಾಯಕರು! ಊಹ್! ಒಂದು ಪೀಠ ಪಲ್ಲಕಿಯಾದರೂ ಬೇಡವೆ? ನೋಡು, ನಡೀತಿರೋದು_ಪಾದರಕ್ಷೇನೂ ಇಲ್ದೆ!”<br />
{{gap}}ಸ್ನೋಪ್ರಗೆ ಪತ್ನಿಯ ಸ್ವರ ಕೇಳಿಸಿತು, ಹೊರಳಿ ನೋಡಿ, “ಏನದು?” ಎಂದು ಕೇಳಿದ.<br />
{{gap}}ನೆಜಮುಟಾ ಉತ್ತರವೀಯಲಿಲ್ಲ.<br />
{{rh|left=*|center=*|right=*}}
{{gap}}ವಿಶೇಷ ಪೂಜೆಯ ಸುದ್ದಿ ಹಬ್ಬಿತ್ತು. ಬೆಳಗ್ಗೆ ಬಿಡುವಾಗಿದ್ದ ನೂರಾರು ಜನ ಮೆನೆಪ್ ಟಾನ ತಂಡವನ್ನು ಹಿಂಬಾಲಿಸಿ ದೇವಮಂದಿರಕ್ಕೆ ಬಂದರು.<br />
{{gap}}ಅರ್ಚಕನ ಮಂತ್ರೋಚ್ಚಾರ ; ಉಳಿದವರ ಮೌನ ಪ್ರಾರ್ಥನೆ.
ಕೊನೆಯಲ್ಲಿ, ಎಲ್ಲರಿಗೂ ಕೇಳಿಸುವಂತೆ ಉಚ್ಚ ಕಂಠದಲ್ಲಿ ದೇವರನ್ನು<noinclude></noinclude>
sag2pvwcboddlvdn8l9epmsw2ap1l3t
321279
321276
2026-05-20T08:40:59Z
Shreelatha.Halemane
7642
321279
proofread-page
text/x-wiki
<noinclude><pagequality level="3" user="Shreelatha.Halemane" />{{rh|left=|center=ಮೃತ್ಯು೦ಜಯ|right= ೧೨೭}}</noinclude>
{{gap}}ಇಪ್ಯುವರ್ ಬಂದು," ಇವತ್ತು ಮಾತಾಡಿದ್ದನ್ನು ಬರಕೊಂಡಿಲ್ಲ"ಎಂದ.<br />
{{gap}}ತೀರ್ಮಾನಗಳೆಲ್ಲಾ ದಾಖಲೆಯಾಗ್ಬೇಕು.ಬರೆದು ನಾಳೆ ನನಗೆ ಓದಿ ಹೇಳಿ," ಎಂದ ಮೆನೆಪ್ ಟಾ.<br />
{{gap}}"ರಾತ್ರಿಯೇ ಬರೆದಿಡ್ತೇನೆ..."<br />
{{gap}}ರಾಜಗೃಹದಲ್ಲಿ ವಾಸಿಸುವುದು ಇಪ್ಯೂವರ್ ಗೆ ಅಪ್ರಿಯವೇನೂ ఆಗಿರಲಿಲ್ಲ. ಆದರೆ ಅವನ ಪಾಲಿಗೆ ಆ ಮಾತು ಹಠಾತ್ತನೆ ಬಂದಿತ್ತು. ಕೆಲವು ದಿನಗಳಲ್ಲಿ ಈ ಕನಸು ಒಡೆದರೆ ? ಆತ ಕೇಳಿದ:<br />
{{gap}}“ನಾನು. ನನ್ನ ಮನೆಯಲ್ಲೇ ಇದ್ದರಾಗದೆ?”<br />
{{gap}}“ರಾಜಗೃಹ ಅನಾಥವಾಗ್ಭಾರ್ದು, ಇಪ್ಯುವರ್.ನಾಳೆ ದೇವಮಂದಿರಕ್ಕೆ ಬನ್ನಿ ಪೂಜೆ ಆದ ಮೇಲೆ ಇಲ್ಲಿಗೆ ಸಾಮಾನು ಸಾಗಿಸಿ.”<br />
{{gap}}"ರಾಮೆರಿಪ್ ಟಾಗೆ ಓದು ಬರಹ"<br />
{{gap}}“ಎರಡು ದಿನ ಹೋಗಲಿ. ಹೇಳ್ತೇನೆ.”<br />
{{gap}}ಮೆನೆಪ್ ಟಾ, ಇತರ ಪ್ರಮುಖರು ಮತ್ತು ಹಿಂಬಾಲಿಸಿದ ಹಲವರು ತಮ್ಮ ತಮ್ಮ ಮನೆಗಳಿಗೆ ಹೊರಟರು.<br />
{{gap}}ನೆಜಮುಟ್ ತಗ್ಗಿದ ಧ್ವನಿಯಲ್ಲಿ ನೆಫಿಸಳೊಡನೆ ಅಂದಳು :<br />
{{gap}}“ನಾಯಕರು! ಊಹ್! ಒಂದು ಪೀಠ ಪಲ್ಲಕಿಯಾದರೂ ಬೇಡವೆ? ನೋಡು, ನಡೀತಿರೋದು_ಪಾದರಕ್ಷೇನೂ ಇಲ್ದೆ!”<br />
{{gap}}ಸ್ನೋಪ್ರಗೆ ಪತ್ನಿಯ ಸ್ವರ ಕೇಳಿಸಿತು, ಹೊರಳಿ ನೋಡಿ, “ಏನದು?” ಎಂದು ಕೇಳಿದ.<br />
{{gap}}ನೆಜಮುಟಾ ಉತ್ತರವೀಯಲಿಲ್ಲ.<br />
{{rh|left=*|center=*|right=*}}
{{gap}}ವಿಶೇಷ ಪೂಜೆಯ ಸುದ್ದಿ ಹಬ್ಬಿತ್ತು. ಬೆಳಗ್ಗೆ ಬಿಡುವಾಗಿದ್ದ ನೂರಾರು ಜನ ಮೆನೆಪ್ ಟಾನ ತಂಡವನ್ನು ಹಿಂಬಾಲಿಸಿ ದೇವಮಂದಿರಕ್ಕೆ ಬಂದರು.<br />
{{gap}}ಅರ್ಚಕನ ಮಂತ್ರೋಚ್ಚಾರ ; ಉಳಿದವರ ಮೌನ ಪ್ರಾರ್ಥನೆ.
ಕೊನೆಯಲ್ಲಿ, ಎಲ್ಲರಿಗೂ ಕೇಳಿಸುವಂತೆ ಉಚ್ಚ ಕಂಠದಲ್ಲಿ ದೇವರನ್ನು<noinclude></noinclude>
8eyu4fy2b0tkx0st0ntw524zt4ushcg
ಪುಟ:Mrutyunjaya.pdf/೪೫೩
104
21942
321277
201854
2026-05-20T08:38:29Z
Shreelatha.Halemane
7642
/* Validated */
321277
proofread-page
text/x-wiki
<noinclude><pagequality level="4" user="Shreelatha.Halemane" /></noinclude> {{rh|center=ಮೃತ್ಯುಂಜಯ|left=೪೪೦|right=}}
ಮರಳುವುದು ತಡವಾಗಿದೆಯಲ್ಲ ಎಂದು ಕಾತರ.</br>
{{gap}}“ನಾನು ಹೊರಡೋದಕ್ಕೆ ಮುಂಚೆ ಅಣ್ಣ ಒಂದು ಮಾತು ಅಂದ:</br> ವೈಯಕ್ತಿಕವಾಗಿ ನನಗೆ ಏನು ಆಗ್ತದೆ ಅನ್ನೋದು ಮಹತ್ವದ್ದಲ್ಲ, ಬಟಾ.</br>ನೀರಾನೆ ಪ್ರಾಂತದ ಜನ ನೆಮ್ಮದಿಯಿಂದ ಬದುಕೋದು ಸಾಧ್ಯವಾಗ್ಬೇಕು.</br>ರಾಜಧಾನಿ ಇದಕ್ಕೆ ಆಸ್ಪದ ಇತ್ತರೆ ಎಲ್ಲರಿಗೂ ಹಿತವಾದೀತು. ಅದಕ್ಕಾಗಿ</br>ಇಲ್ಲಿದ್ದು ನಾನು ಪ್ರಯತ್ನಿಸುತ್ತೇನೆ. ಊರಲ್ಲಿ ಅದನ್ನು ಎಲ್ಲರಿಗು ವಿವರಿಸಿ</br>ಹೇಳು.”</br>
</br>ಮೆನೆಪ್ ಟಾನ ಮಾತುಗಳು. ಬಟಾನ ಧ್ವನಿ.</br>
</br>ಖ್ನೆಮ್ ಹೊಟಪ್ ಗುಡುಗಿದ:</br>
{{gap}}“ವೈಯಕ್ತಿಕವಾಗಿ ನನಗೆ ಏನು ಆಗ್ತದೆ ಅನ್ನೋದು ಮಹತ್ವದ್ದಲ್ಲ—</br>ಅಂದರೆ ಏನರ್ಥ ? ಅಣ್ಣನಿಗೇನಾದರೂ ಆದರೆ, ನೀಲನದಿಯೇ ಹತ್ತಿಕೊಂಡು</br>ಉರಿದೀತು!"</br>
{{gap}}ಎಲ್ಲರ ಒಳಗಿನ ಸಂಕಟವನ್ನು ಖ್ನೆಮ್ ಹೊಟೆಪ್ ಮಾತಿನಲ್ಲಿ ಒಡ</br>ಮೂಡಿಸಿದ್ದ.</br>
{{gap}}ಸೆಮ ನಿಧಾನವಾಗಿ ನುಡಿದ :</br>
{{gap}}"ಮೆನೆಪ್ಟಾ ನಮ್ಮನ್ನು ಬಿಟ್ಟುಹೋಗಿ ಹತ್ತಿರ ಹತ್ತಿರ ಮೂರು</br>ತಿಂಗಳಾಗ್ತಾ ಬಂತು. ಕುಯಿಲಿನ ವೇಳೆಯಲ್ಲಿ ನಾಯಕ ಇರಲೇಬೇಕು. ಇನ್ನು</br>ಹೆಚ್ಚುದಿನ ಇಲ್ಲ. ಸೆಡ್ ಉತ್ಸವ ನಡೀಲಿ, ನಡೀದೆ ಇರಲಿ, ನಾಯಕನನ್ನು</br>ನಾವು ವಾಪಸು ಕರಕೊಂಡ್ಬರಬೇಕು.”</br>
{{gap}}"ಇದು ಹಿರಿಯರ ಸಮಿತಿಯ ಅಂತ ತಿಳಿದರೆ ಮೆನೆಪ್ಟಾ</br>ಒಪ್ತಾರೆ," ಎಂದ ಹೆಮೊನ್.</br>
</br>ಖ್ನೆಮ್ ಹೊಟೆಪ್ ಅಂದ:</br>
{{gap}}“ನಮ್ಮ ಯೋಧ ದಳದ ಐವತ್ತು ಜನರ ಜತೆ ನಾನು ಹೋಗಿ</br>ಬರ್ತೇನೆ.”</br>
{{gap}}ಹೆಮ್ ಟ್ ಅಭಿಪ್ರಾಯ ವ್ಯಕ್ತಪಡಿಸಿದ :</br>
{{gap}}“ರಾಜಧಾನಿಗೆ ಕದನಕ್ಕೆ ಹೋಗೋದಾದರೆ ಐವತ್ತು ಜನ, ನೂರು ಜನ<noinclude></noinclude>
bplubm1305yth6h8w4mfzwg46i8a6ah
ಪುಟ:Mrutyunjaya.pdf/೪೫೪
104
21943
321278
201985
2026-05-20T08:40:05Z
Shreelatha.Halemane
7642
/* Validated */
321278
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ |right=೪೪೧|left=}}
ಸಾಲದು.ಸೈನ್ಯ ಗಡಿಯಿಂದ ಅವರ ದಳ ವಾಪಸು ಬಂದರೊ ? ಅಲ್ದೆ</br>ನಮ್ಮಲ್ಲಿ ಆಯುಧಗಳೂ ಇಲ್ಲವಲ್ಲ...."</br>
{{gap}}“ಆ ಕೆಫ್ಟು ಬರಲೇ ಇಲ್ಲ"__ಎಂದ ಖ್ನೆಮ್ ಹೊಟೆಪ್.{{gap}}ಈಗಿನ</br> ಅಸಹಾಯತೆಯ ಭಾವನೆಗೆ ಆ ವರ್ತಕನೇ ಹೊಣೆ ಎನ್ನುವಂತೆ.</br>{{gap}}ಥಾನಿಸ್ ಕೇಳಿದ :</br>
{{gap}}“ನೀನು ಏನು ಹೇಳ್ತೀಯಪ್ಪ ಬಟಾ ?”</br>
{{gap}}“ಅಣ್ಣ ರಾಜಧಾನಿಗೆ ನಿಂತಾಗ ಹೋದ ವರ್ಷ ಅಬ್ಟು</br>ಯಾತ್ರೆಗೆ ಬಂದಿದ್ದವರೆಲ್ಲ 'ನಾವೂ ಬರ್ತೇವೆ' ಅಂತ ಹೇಳಿದ್ದು, ಬೇಡ</br>ಅಂದಾಗ....'ಕರಕೊಂಡ್ಬರೋದಂತೂ ನಾವೇ' ಅಂತ ತಿಳಿಸಿದ್ದು__ನಿಮಗೆ</br>ನೆನಪಿರಬಹುದು.ಅವರು ರಾಜಧಾನಿಗೆ ಬಂದರೆ ಅಣ್ಣನಿಗೆ ಇಷ್ಟವಾಗ್ತದೆ.”</br>
{{gap}}ತಕ್ಷಣ ಯಾರೂ ಮಾತನಾಡಲಿಲ್ಲ.</br>
{{gap}}ಬಟಾನೇ ಮುಂದುವರಿಸಿದ :</br>
{{gap}}"ಔಟ ಬೆಕ್ ಅಣ್ಣನನ್ನು ಕಾಯ್ತಾರೆ. ನಾವು ಹೋಗಿ ಸಮಿತಿಯ</br>ತೀರ್ಮಾನ ತಿಳಿಸಿ,ಮನ ಒಲಿಸಿ ಉಪಾಯವಾಗಿ ಕರಕೊಂಡ್ಬರ್ತೇವೆ.”</br>
{{gap}}ಎಲ್ಲರ ಮುಖಗಳನ್ನೂ ನೋಡುತ್ತ ಸೆಮ ಕೇಳಿದ:</br>
{{gap}}“ಆದೀತು, ಅಲ್ಲವೆ?”</br>
{{gap}}ಹೂಂ-ಹೂಂ ಧ್ವನಿಗಳ ಉತ್ತರ.</br>
{{gap}}“ಹಾಗಾದರೆ ನಾಳೆ ಬೆಳಿಗ್ಗೆ ಡಂಗುರ ಹೊಡಿಸೋಣ.ಒಳನಾಡಿಗೆ</br>ದೂತರನ್ನು ಅಟ್ಟೋಣ. ಯಾತ್ರಿಕರೆಲ್ಲ ಬಂದು ಸೇರೋದಕ್ಕೆ ಎರಡು ಮೂರು</br>ದಿನ ಬೇಕು."</br>
{{gap}}ಬಟಾ ಖ್ನೆಮ್ ಹೊಟೆಪನ ಭುಜದ ಮೇಲೆ ಕೈ ಇರಿಸಿದ.{{gap}}ಕಾವಲು</br>ಪಡೆಯ ದಳಪತಿ ಆ ಸ್ಪರ್ಶಕ್ಕೆ ತುಸು ಕರಗಿದ.</br>
{{gap}}ಹೆಮ್ಟ ಏಳುತ್ತ, “ಉದ್ಯಾನದಲ್ಲಿ ಜನರ ಸದ್ದಿಲ್ಲವಲ್ಲ ಇವತ್ತು,”</br>ಎಂದ.</br>
{{gap}}ಒಂದು ನಗೆಯ ಅಲೆ ಕಿವಿಗೆ ಅಪ್ಪಳಿಸಿದಂತೆ ಇಪ್ಯುವರ್ ಗೆ ಅನಿಸಿತು.</br>ಉದ್ಯಾನದತ್ತ ಸಾಗಿ, ಬೇಗನೆ ಮರಳಿದ. ಸಭೆ ಮುಗಿಸಿ ಎದ್ದವರಿಗೆ ಅವನು</br>ತಿಳಿಸಿದ:<noinclude></noinclude>
nacqp5nt88qqu1lsdq7g0whx7n8zast
ಪುಟ:Mrutyunjaya.pdf/೪೫೯
104
21948
321280
65103
2026-05-20T08:43:52Z
Shreelatha.Halemane
7642
/* Validated */
321280
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೪೪೬|right=}}
ರಾಜಗೃಹದಿಂದ ನನಗೆ ಆಹಾರ ಧಾನ್ಯ ಇತ್ಯಾದಿ ಕೊಡ್ತಾರೆ . అತಿಥಿ ಎನ್ನಿಸಿ ಕೊಳ್ಳೋದು ನನಗೆ ಇಷ್ಟವಿಲ್ಲ. ನಮ್ಮವರೇನೇ ಅಂತ ನೀವು ನನ್ನನ್ನು ಸ್ವೀಕರಿಸೋದು ಯಾವತ್ತು?"
{{gap}}ಬಟಾನ ನೋಟ ನೆಖೆನ್ ನನ್ನು ಮುದ್ದಿಸಿತು.
{{gap}}“ನಾಯಕರು ವಾಪಸಾಗೋ ತನಕ ನೀವು ಆತಿಥಿ. ಅಮೇಲೆ ನೀವು ನನ್ನನ್ನು ಅಣ್ಣ ಅಂತ ಕರೆಯೋ ಹಾಗಿಲ್ಲ. ಮಗ ಅನ್ಬೇಕು, ತಮ್ಮ ಅನ್ಬೇಕು.”
{{gap}}“ಆಗಲಿ. ನನ್ನ ಆಸೆ ಇದು; ಉದ್ಯಾನದ ಸ್ಮಾರಕ ಕಂಬಕ್ಕೆ ಒಂದು ಶಿಲಾಪೀಠ; ದೇವಮಂದಿರದ ಅಂಗಣದಲ್ಲಿ ನಾಯಕರ ಒಂದು ಶಿಲಾಪ್ರತಿಮೆ -ಎತ್ತರದ್ದು."
{{gap}}“ಪ್ರತಿಮೆಗೆ ಮೆನೆಪ್ ಟಾ ಅಣ್ಣ ಒಪ್ಪಲಾರ. ಬಹಳ ಅಂದರೆ ಅವನು ಏನು ಹೇಳಬಹುದು ಗೊತ್ತಾ?”
{{gap}}"ಏನು ?”
{{gap}}“ಜನರು ಅಧಿಕಾರ ವಶಪಡಿಸಿಕೊಂಡ ದಿನ ವೈರಿಬಾಣಕ್ಕೆ ಬಲಿಯಾದವನು ನೇಕಾರ ಅನ್ಪು; ಆ ಅನ್ಪುವಿನ ಪ್ರತಿಮೆ ರಚನೆಯಾಗಲಿ-ಅಂತ.”
{{gap}}“ಅನ್ಪು, ಅವನ ವಿಷಯ ಕೇಳಿದ್ದೇನೆ. ಆಗಬಹುದು.”
{{gap}}“ಆದರೆ ಆತ ಇಲ್ಲ.”
{{gap}}“ಮಕ್ಕಳಿದ್ದಾರೆ.”
{{gap}}“ಹ್ಞ . ದೊಡ್ಡ ಹುಡುಗನದು ತಂದೆಯದೇ ರೂಪ.”
{{gap}}“ಮೊದಲು ಅರಿವೆಯ ಮೇಲೆ ಅನ್ಪುವಿನ ಪ್ರತಿರೂಪ ಬಿಡಿಸ್ತೇನೆ.”
{{gap}}"ಆಗಲಿ. ಆಗಲಿ."
{{gap}}“ಅನ್ಪು ವೀರನ್ದು ಆದ್ಮೇಲೆ ನಾಯಕರದು ಒಂದು ನಿರ್ಮಿಸ್ಬೇಕು. ಪೆರೋನ ಮೂರ್ತಿಗೆ ಎಷ್ಟು ಮಹತ್ವವೋ ಜನನಾಯಕನಿಗೂ ಅಷ್ಟೇ ಮಹತ್ವ.”
ಬಟಾ ನಕ್ಕು ನುಡಿದ:
{{gap}}“ಆ ವಿಷಯದ ಪ್ರಸ್ತಾಪ ಈಗ ಬೇಡ.”
{{gap}}“ಅವಸರವಿಲ್ಲ, ಅವಸರವಿಲ್ಲ. ಇಷ್ಟೆ, ರಕ್ತದ ಬಿಸಿ ಆರೋದಕ್ಮುಂಚೆ,<noinclude></noinclude>
hwoofz9t2ce8v5njjcaymmajsxj2a8e
ಪುಟ:Mrutyunjaya.pdf/೪೬೦
104
21949
321281
65113
2026-05-20T08:45:40Z
Shreelatha.Halemane
7642
/* Validated */
321281
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೪೪೭}}
ತೋಳಿನ ಬಲ ಕುಂದೋದಕ್ಮುಂಚೆ ಆ ಕೆಲಸ ನಾನು ಮಾಡ್ಬೇಕು.”
{{gap}}“ದೇವಮಂದಿರಕ್ಕೊಂದು ಮುಖ ಮಂಟಪ ಕಟ್ಟಿಸಿ, ತಬ್ಬೋದಕ್ಕೆ ಇಬ್ಬರು ಬೇಕಾಗುವಂಥ ಕಂಬಗಳಲ್ಲಿ ನಮ್ಮ ಪ್ರಾಂತದ ಜನರ ಹೋರಾಟದ ಕಥೇನ ಕೆತ್ತಿದರೆ?”
{{gap}}“ಒಪ್ಪಿದೆ! ಶ್ರೇಷ್ಟ ವಿಚಾರ, ಭವ್ಯ ಸೃಷ್ಟಿ!"
{{gap}}“ಏನೊ ತೋಚ್ತು. ಹೇಳ್ದೆ. ತೀರ್ಮಾನ ಏನಿದ್ದರೂ ಮೆನೆಪ್ ಟಾ ಅಣ್ಣ ಬಂದ್ಮೇಲೆ......"
{{gap}}“ಓಹೊ ಆಗಬಹುದು.”
* * * *
{{gap}}ಡಂಗುರದವನು ಊರಲ್ಲಿ ಸುತ್ತಾಡಿದ. ದೂತರು ಒಳನಾಡಿಗೆ ಹೋದರು.
ನೆಫರುರಾ ಅಂದಳು:
{{gap}}“ಅಬ್ಟು ಯಾತ್ರಿಕರೇ ಅದೃಷ್ಟವಂತರು. ನೋಡೋಣ. ಯಾವತ್ತಾದ ರೊಂದು ದಿನ ಅಣ್ಣನ ಜತೆ ನಾನು ಪ್ರಯಾಣ ಬೆಳೆಸೇನು.”
{{gap}}ರಾತ್ರಿಯ ಊಟಕ್ಕೆ ಬಟಾನ ಕುಟುಂಬವನ್ನು ಮಾತ್ರವಲ್ಲ, ಸ್ನೊಘ್ರು_ಸೆಬೆಕ್ಖುರ ಸಂಸಾರಗಳನ್ನೂ ನೆಫಿಸ್ ಕರೆದಳು. ಖ್ನೆಮ್ ಹೊಟಿಪನೂ ಹೆಂಡತಿಯೊಡನೆ ಬಂದ.
{{gap}}ಅಡುಗೆಯ ಆತಿಥ್ಯದ ಎಲ್ಲ ಹೊಣೆಯನ್ನೂ ನೆಜಮುಟ್ ಹೊತ್ತಳು ತಬಬುವಾ ಅವಳಿಗೆ ನೆರವಾದಳು.
{{gap}}ರಾಜಧಾನಿಯ ರಂಜಕ ಕಥೆಗಳನ್ನು ಎಷ್ಟು ಸಲ ಹೇಳಿದರೂ ಬಟಾಗೆ ದಣಿವಿಲ್ಲ. ಅವನ್ನು ಎಷ್ಟು ಸಲ ಆಲಿಸಿದರೂ ಶ್ರೋತೃಗಳಿಗೆ ಬೇಸರವಿಲ್ಲ.
{{gap}}ಧ್ವನಿ ಎತ್ತರಿಸಿ ನೆಜಮುಟ್ ಅಂದಳು:
{{gap}}“ಅಣ್ಣ ನನ್ನು ಕರಕೊಂಡು ಬರೋದಕ್ಕೆ ಆಬ್ಟು ಯಾತ್ರಿಕರು ಮಾತ್ರ ಹೋಗೋದು ಅಂತ ತೀರ್ಮಾನಿಸಿದ್ದೀರಿ. ಹಾಗೇ ಆಗಲಿ. ಆದರೆ ರಾಮೆರಿಪ್ ಟಾನನ್ನು ಬಿಟ್ಟು ಹೋಗೋದು ಖಂಡಿತ ಸರಿಯಲ್ಲ. ಅವನು ಅಬ್ಟುಗೆ ಹೋಗಿರ್ಲಿಲ್ಲವಾ? ಬೇರೆ ಸಮಯವಾಗಿದ್ದರೆ ನೆಫಿಸ್ ಳೂ ಬರ್ತಿದ್ಲು.”<noinclude></noinclude>
o7d7x9gv9lobyozjt4dg27puyh1vupv
ಪುಟ:Mrutyunjaya.pdf/೪೬೧
104
21950
321282
65123
2026-05-20T08:47:36Z
Shreelatha.Halemane
7642
/* Validated */
321282
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೪೪೮|right=}}
{{gap}}ಮೂಲೆಯಲ್ಲಿ ನಿಂತಿದ್ದ ರಾಮೆರಿಪ್ ಟಾ ಗಾಂಭೀರ್ಯ ನಟಿಸಿದ. ದೊಡ್ಡ ವರು ತನ್ನ ಬಗೆಗೆ ಮಾತನಾಡುತ್ತಿರುವರೆಂದು ಕಿರಿಯನಿಗೆ ಹೆಮ್ಮೆ.
{{gap}}“ಅಮ್ಮನನ್ನು ನೋಡ್ಕೋ ಅಂತ ರಾಮೆರಿಗೆ ಅವನ ತಂದೆ ಹೇಳಿದ್ದಾನಂತೆ,"ಎಂದ ಬಟಾ, ನಗುತ್ತ.
{{gap}}ನೆಜಮುಟ್ ನ ಮಾತು ಕೇಳಿ, ತಂದೆಯನ್ನು ನೋಡಲು ಹೋಗುವ ಆಸೆ ರಾಮೆರಿಪ್ ಟಾನಲ್ಲಿ ಮತ್ತೆ ಗರಿಗೆದರಿತ್ತು, ಆದರೆ ಬಟಾ ಮಾವನ ಪರಿ ಹಾಸ್ಯದ ಧ್ವನಿಯಿಂದ ಅವನು ಕೆರಳಿದ.
{{gap}}"ಹೌದು, ಹೌದು. ತಂದೆ ಹೇಳಿದ್ದಾರೆ," ಎಂದ ಗಟ್ಟಿಯಾಗಿ.
{{gap}}ಸ್ನೊಘ್ರು ಅಂದ :
{{gap}}"ಸಿಟ್ಟು ಬೇರೆ! ಇಲ್ಲಿ ಕೇಳು,ರಾಮೆರಿ. ಅಮ್ಮನನ್ನು ನಾವು ನೋಡ್ಕೊಳ್ತೇವೆ. ನೀನು ಹೋಗಿ ಅಪ್ಪನನ್ನು ಕರಕೊಂಡ್ಬಾ.”
{{gap}}"ಹೌದು ಮಗ," ಎಂದಳು ನೆಫಿಸ್.
{{gap}}ಸಂತಸದ ನೋವು ರಾಮೆರಿಪ್ ಟಾನನ್ನು ಹಿಂಡಿತು. ಒಸರಬಯಸಿದ ಹರ್ಷಾಶ್ರುವನ್ನು ಹತ್ತಿಕ್ಕಿ ಆತ ಮುಗುಳುನಗೆ ಬೀರಿದ.
* * * *
{{gap}}ಇನ್ನೂ ಒಂದಿಷ್ಟು ಬೆಳೆದಿದ್ದ ಮಗಳನ್ನೆತ್ತಿಕೊಂಡು ಅಹೂರಾ ತನ್ನ ಗಂಡನನ್ನೂ ಭಾವನನ್ನೂ ಕರೆದುಕೊಂಡು ಬಂದಳು. ಈ ಸಲವೂ ಇತ್ತು ಖಿವವದ ಚೀಲ.ಬೇರೆಡೆಗಳಿಂದಲೂ ಅಬ್ಟು ಯಾತ್ರಿಕರು ಆಗಮಿಸಿದರು. ಅದೇ ಊರಿನಲ್ಲಿದ್ದವರೂ ಅಣಿಯಾದರು. ಸುಮಾರು ನಾಲ್ವತ್ತು ಜನರಿಗೆ ಎಂಟು ಹತ್ತು ದಿನಗಳಿಗೆ ಸಾಲುವಷ್ಟು ಬುತ್ತಿ ಕಟ್ಟಿದರು.
{{gap}}ಮಾರನೆಯ ಸಂಜೆ ರಾಜಧಾನಿಗೆ ಪ್ರಯಾಣ ಎಂದು ತೀರ್ಮಾನ ವಾಯಿತು.
{{gap}}ಬಟಾ ತನ್ನ ಮನೆಯಲ್ಲಿ ಕಿರಿಯ ಮಗಳ ಜತೆ ಮೊಸಳೆ ಆಟ ಆಡುತ್ತಿ ದ್ದಾಗ ಶಿಲ್ಪಿ ನೆಖೆನ್ ಬಂದ.
{{gap}}“ನಾಳೆ ಸಾಯಂಕಾಲ ಪ್ರಯಾಣವಂತೆ."
{{gap}}"ಹ್ಞ."<noinclude></noinclude>
agrf1xfouf7vwk14ehr11hskkve3hfj
ಪುಟ:Mrutyunjaya.pdf/೪೬೨
104
21951
321283
64384
2026-05-20T08:50:32Z
Shreelatha.Halemane
7642
/* Validated */
321283
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೪೪೯}}
{{gap}}“ನೀವು ಹೋಗೋಕ್ಮುಂಚೆ ಇವನ್ನಿಷ್ಟು ತೋರಿಸ್ಬಿಡೋಣ್ ಅಂತ ಬಂದೆ.”
{{gap}}ಅವನ ಕಂಕುಳಲ್ಲಿ ಕಡ್ಡಿಗೆ ಸುತ್ತಿದ್ದ ಬಟ್ಟೆ ಸುರುಳಿ ಇತ್ತು, ಅದನ್ನು ಅವನು ತೆಗೆದು ಬಿಚ್ಚಿದ ಒಂದು ಬಟ್ಟೆ ಚಿಕ್ಕದು, ಇನ್ನೊಂದು ನೀಳವಾದದು. ಚಿಕ್ಕದನ್ನು ಬಿಡಿಸಿ ಗೋಡೆಯಿಂದ ಇಳಿಬಿಟ್ಟು ನೆಖೆನ್ ನಿಂತ.
{{gap}}ಲಿಪಿಸುರುಳಿ ಬರೆಯುವ ಮಸಿಯಲ್ಲಿ ಬಿಡಿಸಿದ ಒಂದು ಚಿತ್ರ.ಕೃಶಾಂಗ ಯುವಕ.ಮುಖದ ಮೇಲೆ ಕೆಚ್ಚು. ಬಲಪಾದವನ್ನು ಮುಂದಿರಿಸಿದ್ದಾನೆ.ಏನನ್ನೋ ಬದಿಗೆ ಸರಿಸುವವನಂತೆ ಬಲ ಅಂಗೈಯನ್ನು ಬೀಸಿದಾನೆ.
{{gap}}“ಅನ್ಪು!" ಎಂದ ಬಟಾ ಉದ್ಗರಿಸಿದ.
{{gap}}ನೆಖೆನ್ ನಸುನಕ್ಕು ಅ ಚಿತ್ರವನ್ನು ಬಿಡಿಸಿದ. ಅವನಿಗಿಂತಲೂ ಒಂದು ಮೊಳ ಎತ್ತರವಿತ್ತು ಆ ಸುರುಳಿ, ಮೊದಲು ನೋಡಿದ ಚಿತ್ರದ ದೊಡ್ಡರೂಪ.
{{gap}}ಬಟಾನನ್ನು ಉದ್ವಿಗ್ನತೆ ಬಾಧಿಸಿತು. ಅವನು ಉಗುಳು ನುಂಗಿದ. ಕಣ್ಣೆವೆ ಮುಚ್ಚದೆ ಚಿತ್ರವನ್ನು ದಿಟ್ಟಿಸಿದ.
{{gap}}“ಅನ್ಪು ಸತ್ತಿಲ್ಲ, ಇಲ್ಲೇ ಇದ್ದಾನೆ. ನಮ್ಮೆಲ್ಲರಿಗಿಂತಲೂ ದೊಡ್ಡವನಾಗಿ ಬೆಳೆದಿದ್ದಾನೆ. ಆಶ್ಚರ್ಯ ! ಆಶ್ಚರ್ಯ !” ಎಂದ.
{{gap}}ಬಟಾನ ಹೆಂಡತಿ ನೋಡಿದಳು. ಮಕ್ಕಳು ನೋಡಿದರು. ಸತ್ತವರನ್ನು ಬದುಕಿಸುವ ಕೌಶಲ!ನೆಖೆನ್ ಅವರಿಗೆ ಪವಾಡಪುರುಷನಂತೆ ಕಂಡ.
{{gap}}ವಿನಮ್ರನಾಗಿ ಬಟಾ ಹೇಳಿದ:
{{gap}}“ಇದು ಅಪೂರ್ವ ಸಾಧನೆ. ಮೆನೆಪಟಾ ಅಣ್ಣನಿಗೆ ತಿಳಿಸ್ತೇನೆ.
{{gap}}” ಕೃತಜ್ಞತೆಯ ಭಾವದಿಂದ ಬಟಾನನ್ನು ನೋಡುತ್ತ ನೆಖೆನ್ ಅಂದ:
{{gap}}“ನೀವು ರಾಜಧಾನಿಯಿಂದ ಮರಳಿ ಬಂದ್ಮೇಲೆ ಹತ್ತು ಮೊಳ ಉದ್ದ, ಎರಡು ಮೊಳ ಅಗಲ, ಎರಡು ಮೊಳ ದಪ್ಪದ ಕರಿಶಿಲೆ ತರಿಸ್ಕೊಡಿ. ಸ್ಯೆನೆ ಹತ್ತಿರ ಹೇರಳವಾಗಿ ಸಿಗ್ರವೆ. ಸಹಾಯಕರಿದ್ದರೆ ಕೆಲಸ ಬೇಗನೆ ಆಗ್ರದೆ ಹಪು ವಿನ ಮಕ್ಕಳಿಗೆ ಶಿಲ್ಪಕಲೆ ಹೇಳ್ಕೊಡ್ರೇನೆ. ಕಲಿಯೋದಕ್ಕೆ ಇಷ್ಟಪಡೋ ಬೇರೆ ಯುವಕರಿದ್ದರೆ ಅವರೂ ಬರಲಿ.”
೨೯<noinclude></noinclude>
lasz32rbe473twezvrrhkaugbpulzp0
ಪುಟ:Mrutyunjaya.pdf/೪೬೩
104
21952
321284
64807
2026-05-20T08:53:47Z
Shreelatha.Halemane
7642
/* Validated */
321284
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೪೫೦|right=}}
{{gap}}“ಹೂಂ.. ಹೂಂ. ನೀವು ರಾಜಗೃಹಕ್ಕೆ ಹೋಗಿ ಹಿರಿಯರಿಗೆ ಅನ್ಪುವಿನ ಚಿತ್ರ ತೋರಿಸ್ತೀರಾ ?”
{{gap}}“ಚಿತ್ರ ಸರಿಯಾಗಿದೆ ಅಂತ ಅನ್ಪುವಿನ ಹೆಂಡತಿ ಹೇಳ್ಬೇಕಲ್ಲ! ಆ ತಾಯಿಗೆ ತೋರಿಸಿ, ಅಲ್ಲಿಂದ ರಾಜಗೃಹಕ್ಕೆ ಹೋಗ್ತೇನೆ.”
{{gap}}“ಅಗಲಿ ನೆಖೆನ್ ಮಾವ. ಮಾವ ಅಂತ ಕರೀಬಹುದು ?”
{{gap}}“ಮಗ ಮಗಳು ಯಾರೂ ಇಲ್ಲ, ಅಳಿಯಂದಿರಾದರೂ ಇರಲಿ ! ಯಾಕೆ ಬೇಡ?”
{{gap}}ಹಾಗೆ ಹೇಳುತ್ತ ನೆಖೆನ್ ಚಿತ್ರವನ್ನು ಸುರುಳಿ ಸುತ್ತಿದ.
{{gap}}....ಆ ಸಂಜೆ ರಾಜಗೃಹದಲ್ಲಿ ಹದಲ್ಲಿ ಅಬ್ಟು ಯಾತ್ರಿಕರೊಡನೆ ಸ್ವಲ್ಪ ಹೊತ್ತು ಕಳೆದು ಬಟಾ ಮನೆಗೆ ಮರಳಿದ.
{{gap}}ಬುಡ್ಡಿ ದೀಪದ ಬೆಳಕಿನಲ್ಲಿ ಕೈ ಬೆರಳುಗಳನ್ನು ಚಮತ್ಕಾರವಾಗಿ ಮಡಚಿ ಬೇರೆ ಬೇರೆ ಪ್ರಾಣಿಗಳ ಛಾಯಾ ಆಕೃತಿಗಳನ್ನು ಗೋಡೆಯ ಮೇಲೆ ಮೂಡಿ ಸುತ್ತ ಬಟಾ ಮಕ್ಕಳ ಜತೆ ಕುಳಿತಿದ್ದ.
{{gap}}"ಅಗೋ ನೀರಾನೆ !”
{{gap}}"ಅಗೋ ನೀರಾನೆ !”
{{gap}}"ಜಿಂಕೆ!"
{{gap}}ಧಪಧಪನೆ ತಟಿಕೆ ಬಾಗಿಲನ್ನು ಬಡೆದ ಸದ್ದು. ಜತೆಯಲ್ಲೇ “ಅಣಾ ! ಅಣ್ಣಾ!” ಎಂಬ ಕರೆ. ದೋಣಿಕಟ್ಟೆಯ ಹುಡುಗನ ಸ್ವರ.
{{gap}}ಬಟಾ ಥಟ್ಟನೆ ಎದು, ಬಾಗಿಲಿನ ಅಗಣಿ ತೆಗೆದು, ದೋಣಿಕಟ್ಟೆಯ ಕಿರಿಯನನ್ನು ಒಳಕ್ಕೆ ಬಿಟ್ಟ. ಓಡಿಕೊಂಡು ಬಂದ್ದಿದ ಅವನು ಏದುಸಿರು ಬಿಡುತ್ತ ವರದಿ ಮಾಡಿದ :
{{gap}}“ಹೇರುನಾವೆ_ವರ್ತಕ ಕೆಫ್ಟುದು_ಕಟ್ಟೆಗೆ ಬಂದಿದೆ........ ಬಟಾ ಎದ್ದಾರಾ? ಅಂತ ಕೇಳಿದ್ರು. ಎದ್ದಾರೆ ಅಂದೆ_ಓಡಿ ಹೋಗಿ ತಕ್ಷಣ_ಕರಕೊಂಡ್ಬಾ ಅಂದ್ರು....ಬನ್ನಿ...."
{{gap}}ಏಕಕಾಲದಲ್ಲೇ ಒಡಮೂಡಲು ಬಯಸಿದ ವಿವಿಧ ಭಾವನೆಗಳನ್ನು ನಿಯಂತ್ರಿಸುತ್ತ ಬಟಾ ಅಂದ :
{{gap}}“ನೀನು ಹೋಗು_ಬಂದ್ಬಿಟ್ಟೆ"<noinclude></noinclude>
q0ytl19p4ubn6zqeh12pxfgeohm65b3
ಪುಟ:Praantabhaashhe-Rashhtrabhaashhe.pdf/೯
104
22537
321229
308657
2026-05-20T07:07:20Z
Shreesha Sharma
7840
/* Validated */
321229
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|— ೪—}}
ಅಂತಃಕರಣಗಳು ನುಡಿಯ ಮುಖಾಂತರ ಸ್ವರಸಂಕೇತದ ಮೂಲಕ ಒಡಮೂ
ಡುವವು. ಮನಸ ಭಾಷೆಯೆಂಬ ಕುದುರೆಯನೇರಿ ಬೇಕಾದ ಸಂಚರಿಸ
ಬಲ್ಲದು. ಭಾಷೆಯು ಮನಸಿನ ಭಾವನೆಗಳ ಕಲ್ಪನೆಗಳ ವಾಹನವು. ಭಾಷೆ
ಯಿಲ್ಲದಿದ್ದರೆ ಮನಸು ಮೂಕಾಗಿ ಮಂಕಾಗಿ ಕುಳಿತು ಬಿಡುವದು, ಭಾಷೆಯ
ರೂಪದಿಂದ ಮನಸು ಮೈವೆತ್ತಿ ನಿಲ್ಲುವದು. ಅದರ ಮೂಲಕವೆ ನಮಗೆ
ಮನಸಿನ ಚಟುವಟಿಕೆಗಳ ತಿಳುವಳಿಕೆ ಆಗುವದು. ಒಬ್ಬ ಶಿಲ್ಪಿಗನ ಕಲ್ಪನೆ
ಒಂದು ಸುಂದರ ಮಂದಿಂದ ೮ ದಿಂದ ಹೆಪ್ಪು ಗಟ್ಟಿ ನಿಲ್ಲುವಂತೆ ನಮ್ಮ
ಮನಸು ಭಾಷೆಯ ರೂಪವನ್ನು ತಾಳಿ ನಮ್ಮೆದುರು ಕಂಗೊಳಿಸುವದು
ನಮ್ಮವೇ ಆದ ವಿಚಾರ ಮತ್ತು ಭಾವನೆಗಳ ಪುನರ್ವಿಚಾರ ಮಾಡಲು ನಮಗೆ
ಭಾಷೆಯ ಅನುಕೂಲ ಮಾಡಿ ಕೊಡುವದು, ತಕ್ಕಶುದ್ಧ ರೀತಿಯಿಂದ ವಿಚಾರ
ಗಳನ್ನು ಪರಿಶೀಲಿಸಲು ಭಾಷೆಯ ಮೂಲಕವೆ ಸಾಧ್ಯವಾಗುವದು. ಪ್ರತೀಕದ
ಸಹಾಯದಿಂದ ಮರಿಯ ಆಶ್ರಯ ಪಡೆದು ಅವ್ಯಕ್ತ ಪರಮಾತ್ಮನ ಧ್ಯಾನ
ಮಾಡುವದು ಹೇಗೆ ಸುಲಭವೊ ಹಾಗೆ ಭಾಷೆಯ ಸಹಾಯದಿಂದ ನಮ್ಮ
ವಿಚಾರ ಮತ್ತು ಭಾವನೆಗಳನ್ನು ಚೆನ್ನಾಗಿ ತಿಳಿದುಕೊಳ್ಳಲು, ಧ್ಯಾನಿಸಲು,
ಅಳವಡಿಸಲು ಸಾಧ್ಯವೂ ಸುಲಭವೂ ಆಗುವದು.
{{gap}}ಇನ್ನೊಬ್ಬರ ವಿಚಾರ ಭಾವನೆಗಳ ಅರಿವು ನಮಗೆ ಆಗಲು, ಪರಸ್ಪರ
ರಲ್ಲಿ ವಿಚಾರ ವಿನಿಯಮ ನಡೆಸಲು ಭಾಷೆಯ ಅನುಕೂಲಮಾಡಿಕೊಮವದು.
ನನ್ನಲ್ಲಿ ನಡೆದ ವಿಚಾರಗಳನ್ನು, ಉಕ್ಕಿ ಬಂದ ಭಾವನೆಗಳನ್ನು, ಇನ್ನೊಬ್ಬರಿಗೆ
ತಿಳಿಸುವ ಬಗೆ ಹೇಗೆ? ಇನ್ನೊಬ್ಬರ ವಿಚಾರಗಳನ್ನು ತಿಳಿದುಕೊಳ್ಳಲು ಸಾಧನ
ವೇನು ? ತಾಯಿ ಮಗುವಿಗೆ, ತಂದೆ ಮಗನಿಗೆ, ಗುರು ಶಿಷ್ಯನಿಗೆ ಶಿಕ್ಷಣ,
ಸಂಸ್ಕಾರ ಮುಂತಾದವುಗಳನ್ನು ಒದಗಿಸಿಕೊಡುವ ರೀತಿಯಾವದು ? ಈ
ಪ್ರಶ್ನೆಗಳಿಗೆ ಭಾಷೆ, ನಿಮ್ಮಿಬ್ಬರಿಗೂ ಬರುವ ಭಾಷೆ, ಎಂದೇ ಉತ್ತರಕೊಡಬೇಕಾಗುವದು.
ಭಾಷೆ ಇಲ್ಲದಿದ್ದರೆ ಮೂಕ ಕಂಡ ಕನಸಿನಂತೆ ನನಗೆ ಹೊಳೆದ ವಿಚಾರ ನನಲ್ಲಿ ಎದ್ದ ಭಾವನಾತರಂಗ ಇವು ನನ್ನ ಮನೋಮಂಡಲ ಡಲ್ಲಿಯೆ ಹುಟ್ಟಿ ಅಡಗಿ ಹೋಗುವವು. ಪ್ರವಾಹವಿಲ್ಲದ ನೀರು ಮಲೆತು ಕೊಳೆತು ಹೋಗುವಂತೆ ಅವರವರ ಮನಸಿನಲ್ಲಿಯ ವಿಚಾರ ಭಾವನೆ ಕಲ್ಪನೆ ಗಳು ಅಲ್ಲಲ್ಲಿಯೆ ಕರಗಿ ಹೋಗುವವು. ನಿಷ್ಪಲ ಮರಗಳಂತೆ ಅವುಗಳ ಗತಿ<noinclude><references/></noinclude>
l5gjriu1x9n6w3cyfrlxq6y96sgl47f
ಪುಟ:Praantabhaashhe-Rashhtrabhaashhe.pdf/೧೨
104
22985
321167
308664
2026-05-20T06:44:41Z
Pragathi. BH
7585
/* Validated */
321167
proofread-page
text/x-wiki
<noinclude><pagequality level="4" user="Pragathi. BH" /></noinclude>{{center|— ೭—}}
ಯಬಹುದು ಸುಮಾರು ೪೦ ಭಾಷೆಗಳನ್ನು ಕಲಿತ ಪಂಡಿತರು ಹಲವರಿರು
ವರು. ಜನಸಾಮಾನ್ಯರು ಬಹುಶಃ ಒಂದೇ ಭಾಷೆ ಗೊತ್ತಿದ್ದವರು, ಒಂದೇ
ಭಾಷೆ ಕಲಿಯುಲಿನವರಿರುವರು. ಅವಶ್ಯವಿದ್ದಾಗ ಹೆಚ್ಚು ಭಾಷೆಗಳನ್ನು ಕಲಿ
ಯುವದು ಜಾಣತನದ್ದಿದ್ದರೂ ಅನವಶ್ಯಕವಾಗಿ ಭಾಷೆಗಳನ್ನು ಕಲಿಯುತ್ತ
ಹೋಗುವದು ಸಮಂಜಸವಾಗಲಾರದು. ಅದು ಕಾಲಾಪವ್ಯವೆ ಸೈ. ಈ
ಬಗೆಯ ವ್ಯಾವಹಾರಿಕ ದೃಷ್ಟಿಯಿಂದಲೆ ಭಾಷೆ, ಲಿಪಿ ಮುಂತಾದವುಗಳತ್ತ
ನಾವು ನೋಡುವುದು ಅವಶ್ಯ.
{{gap}}ಭಾಷೆಯೆಂಬುದು ಸಾಧನ ಮಾತ್ರವು. ಮನುಷ್ಯನ ಪ್ರಗತಿ, ಮನು
ಷ್ಯನ ವಿಕಾಸ, ಶಾಂತಿ, ಸುಖ, ಜ್ಞಾನ, ತೇಜ ಇವುಗಳತ್ತ ವಿಕಾಸ ಇದೇ
ಸಾಧ್ಯವು. ಈ ವಿಕಾಸ ಮಾರ್ಗದಲ್ಲಿ ಭಾಷೆಯು ದೊಡ್ಡ ಸಾಧನವು. ಅದು
ಸುಲಭವೂ ಸಹಜವೂ ಸುಂದರವೂ ಇದ್ದುಷ್ಟು ನಮ್ಮ ವೇಳೆ ಶಕ್ತಿಗಳ ಅಪವ್ಯ
ಯವಾಗದೆ. ನಾವು ಪ್ರಗತಿ ಪಥದಲ್ಲಿ ಸಾಗಬಲ್ಲೆವು. ಹರುಕು ಮುರುಕು,
ಕೊರಟು ಮುರುಟು ಸಾಧನವಿದ್ದರೆ ಸಾಧ್ಯದತ್ತ ಬೇಗ ಸಾಗುವದು ಕಠಿಣ
ವಾಗುವದು. ಮೇಲಾಗಿ ಭಾಷೆಯು ಕೇವಲ ವೈಯ್ಯಕ್ತಿಕ ಜೀವನದ ಅಥವಾ
ವಿಕಾಸದ ಸಾಧನವಷ್ಟೇ ಅಲ್ಲ. ಅದು ಸಾಮೂಹಿಕ, ಸಾಂಘಿಕ, ಸಾಮಾಜಿಕ
ಜೀವನ ವಿಕಾಸದ ಸಾಧನವಿರುವದು. ಒಬ್ಬನೆ ಇರುವಲ್ಲಿ ಇಬ್ಬರು ಒಂದೆಡೆ
ಬಂದೊಡನೆ ಭಾಷೆಯ ಅವಶ್ಯಕಥೆಯುಂಟಾಗುವದು. ವಿದ್ಯುತ್ಪ್ರ ವಾಹವು
ಒಂದೆಡೆಯಿಂದ ಇನ್ನೊಂದೆಡೆ ಹೋಗಲು ಆಕಾಶದ ಆಧಾರವು ಬೇಕಾಗು
ವಂತೆ, ನೀರು ಒಂದು ಬದಯಿಂದ ಇನ್ನೊಂದು ಬದಿ ಹರಿಯಬೇಕಾದರೆ
ಕಾಲುವೆ ಬೇಕಾಗುವಂತೆ, ವಿಚಾರವಾಹನಕ್ಕೆ ಭಾಷೆ ಬೇಕು. ಆ ಭಾಷೆ
ಉತ್ತಮವೂ ಪರಸ್ಪರರಿಗೆ ಚನ್ನಾಗಿ ತಿಳಿಯುಂತಹದೂ ಯಾವದೆ ಅಡಚಣಿ
ಯನ್ನುಂಟು ಮಾಡದೆ ಇರುವಂತಹದೂ ಇದ್ದರೆ ಪರಸ್ಪರ ಬಳಕೆಯ ಕೆಲ
ಸವು ಸುಕರವಾಗುವದು,
{{gap}}ಅಂಥ ಭಾಷೆಯಾವುದು, ಅದು ಹೇಗಿರಬೇಕು, ಅದರ ಲಕ್ಷಣ
ಗಳೇನು?
{{gap}}ತಾಯಿ ತನ್ನ ಮೊಲೆ ಹಾಲುಣಿಸಿ ಮಗುವನ್ನು ಬೆಳೆಸುವಳು. ಆ
ಹಾಲಿನೊಡನೆಯೆ ಮಗುವಿಗೆ ಮುದ್ದು ಮಾತುಗಳನ್ನು ಕಲಿಸುವಳು. ಆ<noinclude><references/></noinclude>
cl9f5zym1at28r9ntx6jof546l4nvrr
ಪುಟ:Praantabhaashhe-Rashhtrabhaashhe.pdf/೧೦
104
23582
321165
308662
2026-05-20T06:44:08Z
Pragathi. BH
7585
/* Validated */
321165
proofread-page
text/x-wiki
<noinclude><pagequality level="4" user="Pragathi. BH" />{{center|_೫_}}</noinclude>ಆಗುವದು. ಅದೇ ಭಾಷೆಯೆಂಬ ಸೇತುವೆ ಇದ್ದರೆ ಅವು ಮನದಿಂದ ಮನಕ್ಕೆ
ದೇಶದಿಂದ ದೇಶಕ್ಕೆ ಹೋಗಿ ಹಬ್ಬಿ ಬೆಳೆದು ಬಲಿತು ಫಲಕಾರಿಯಾಗುವವು.
{{gap}}ಅಷ್ಟೇ ಏಕೆ ? ಸಾವಿರಾರು ವರುಷಗಳಿಂದ, ಮಾನವನು ಪ್ರಥಮದಲ್ಲಿ
ಪ್ರಗತಿ ಪಥವನ್ನು ನಡೆಯಲು ಪ್ರಾರಂಭಿಸಿದಂದಿನಿಂದ ಈ ಹೊತ್ತಿನ ವರೆಗೆ
ಅವನು ಮಾಡಿದ ಏಚಾರ, ಅವನ ಹೃದಯದಲ್ಲಿ ಉಂಟಾದ ಭಾವನೆ, ಅವನಿಗೆ
ಕಾಲಕಾಲಕ್ಕೆ ಆದ ಅನುಭವ, ಇವೆಲ್ಲ ಭಾಷೆಯ ಮೂಲಕವೆ ನಮ್ಮತನಕ
ಬಂದು ಮುಟ್ಟಿವೆ. ಭಾಷೆ ಇಲ್ಲದೆ ಹೋಗಿದ್ದರೆ ಅವೆಲ್ಲವುಗಳ ಲಾಭವ ನನಗೆ
ಈಗ ಆಗುವದು ಸಾಧ್ಯವೇ ಇರಲಿಲ್ಲ. ಅವೆಲ್ಲ ಅವರೊಡನೆಯೆ ಮಣ್ಣುಗೂಡಿ
ಹೋಗುತ್ತಿದ್ದವು. ಆನೇಕ ವೈಜ್ಞಾನಿಕ ಪ್ರಯೋಗ ಹಾಗೂ ಶೋಧಗಳ
ಸಂಗತಿಯೂ ಹೀಗೆಯೆ ಇರುವದು.ತಮತಮಗೆ ಹೊಳದ ಹೊಸ ಹೊಸ
ತತ್ವಗಳನ್ನು, ನಿಸ ನಿಯಮಗಳನ್ನು ಆಯಾ ಸಂಶೋಧಕರು ತಮ್ಮ
ಬಾಂಧವರಿಗೆ ಭಾಷೆಯ ಸಾಧನದಿಂದ ತಿಳಿಸುತ್ತ ಬಂದುದರಿಂದಲೆ ಈಹೊತ್ತು
ಅವು ಇಡೀ ಮಾನವ ಕುಲಕ್ಕೆ ಉಪಲಬ್ಧವಾಗಿರುವವು ? ಇಲ್ಲದಿದ್ದರೆ ಅವು
ಎಂದೋ ಗಾಳಿ ಪಾಲಾಗಿ ಹೋಗುತ್ತಿದ್ದವು.
{{gap}}ಭಾಷೆ ಎಂಬದು ಅವ್ಯಕ್ತ ಆಮೂರ ವಿಚಾರ ಮತ್ತು ಭಾವನೆಗಳ
ಧ್ವನಿರೂಪ ಅಥವಾ ಶಬ್ದ ರೂಪ ಸಂಕೇತವು. ಆ ಸಂಕೇತವು ಕೇವಲ
ಧ್ವನಿ ಅಥವಾ ಶಬ್ದ ರೂಪದಲ್ಲಿಯೆ ಉಳಿಯದೆ ಮುಂದೆ ಗ್ರಂಥಸ್ಥವಾಗ
ಬೇಕಾದರೆ ಬರೆಹದ ರೂಪವನ್ನು ತಾಳಿತು. ಬರೆಹದ ಶೋಧದ ಮೂಲಕ
ಭಾಷೆ ಮತ್ತಷ್ಟು ಹೆಚ್ಚು ವಿಕಾಸಹೊಂದಲು ಏಕರೂಪವಾಗಲು ಅನುಕೂಲ
ವಾಯಿತು. ಬರೆಹವು ವಿಚಾರ ಸಂಗ್ರಹಕ್ಕೆ ಅತಿಶಯ ಸಹಾಯಕವಾಗಿರು
ಬರಹವಿಲ್ಲದ ಬರೀ ಬಾಯಿ ಭಾಷೆ, ಬಹಳ ವಿಕಾಸಹೊಂದಲಾರದು, ವಿಚಾರ
ಸಾಗರವನ್ನು ಸಂಗ್ರಹಿಸಿಡಲಾರದು. ಮನೋವಿಕಾಸದ ಮೂಲಕ ಕಳಿತ
ವಿಚಾರವು ಭಾಷೆಯಾಗಿ ಬಾಯಲ್ಲಿ ಒಂದು ಬರಹ ರೂಪದಿಂದ ಕೈಸೇರುವುದ
ರಿಂದ ಅದನ್ನು ಒಂದು ಜಡವಸ್ತುವಿನಂತೆ ಬೇಕಾದಲ್ಲಿಡಲು, ಸಂಗ್ರಹಿಸಲು
ಬೇಕಾದಾಗ ಉಪಯೋಗಿಸಲು, ಕೈಯೆತ್ತಿ ಕೊಡುಕೊಳ್ಳಲು ಸಾಧ್ಯವಾಗಿದೆ
ಮುಂದೆ ಮತ್ತೆ ಆ ಬರೆಹವು ಸಹಸ್ರಾರು ಲಕ್ಷಾಂತರ ಜನರ ಕೈಸೇರಬೇಕಾ
ದರೆ ಅಚ್ಚು ಕೂಟಾದಿ ಸಾಧನಗಳು ತಯಾರಾಗಬೇಕಾಯಿತು. ಈ ರೀತಿ<noinclude><references/></noinclude>
f4nzl4cz98sp65k9gj1u526jaqpnku7
ಪುಟ:Praantabhaashhe-Rashhtrabhaashhe.pdf/೧೩
104
23829
321168
308665
2026-05-20T06:45:13Z
Pragathi. BH
7585
/* Validated */
321168
proofread-page
text/x-wiki
<noinclude><pagequality level="4" user="Pragathi. BH" />{{center|_೮_}}</noinclude>ಮಾತುಗಳಿಂದ ಮಗುವಿಗೆ ಜಗತ್ತಿನ ಗುರುತಾಗುವದು. ಅದೇ ಕೂಸು ಕಲಿ
ಯುವ ಮೊದಲು ಮಾತುಗಳು. ಅದೇ ಭಾಷೆಯೊಡನೆ ಮಗುವಿನ ಪ್ರಥಮ
ಪರಿಚಯ. ಆ ಮಾತುಗಳಲ್ಲಿ ಒಂದು ಸಹಜತೆ, ಸ್ವಾಭಾವಿಕತೆ, ಮೂಲ
ಭೂತ ಭಾವನೆಗಳ ನೈಸರ್ಗಿಕ ಪ್ರತಿಬಿಂಬ ಇರುವದು ಅದೇ ತಾಯ್ನುಡಿ
ಅಥವಾ ಮಾತೃಭಾಷೆ ಎನಿಸುವದು. ಒಂದೇ ಮಾತೃಭಾಷೆಯುಳ್ಳವರು ಅತಿ
ದೊಡ್ಡ ಪ್ರಮಾಣದಲ್ಲಿ ಬಹುಸಂಖ್ಯರಾಗಿ ಯಾವ ಪಾಂತದಲ್ಲಿರುವರೊ ಆ
ಪ್ರಾಂತದಲ್ಲಿ ಆ ಭಾಷೆಯೆ ಪ್ರಾಂತ ಭಾಷೆಯಾಗುವದು. ಅಂಥಲ್ಲಿ ಜನರ
ಸ್ವಭಾಷೆ, ಪ್ರಾದೇಶಿಕ ಭಾಷೆ, ಪ್ರಾಂತ ಭಾಷೆ ಒಂದೇ ಇರುವದು. ಆಯಾ
ಪ್ರಾಂತದ ವಾತಾವರಣದಲ್ಲಿ ಅದೇ ನುಡಿಯ ನಿನಾದವು ಸ್ವಾಭಾವಿಕವಾ
ಗಿಯೆ ತುಂಬಿಕೊಂಡಿರುವದು. ಅದೇ ಭಾಷೆಯ ಬಿಂಬವು ಎಲ್ಲೆಲ್ಲಿಯೂ
ಕಾಣುವದು. ಆ ಭಾಷೆಯ ಉಪಭಾಷೆಗಳು ಅಥವಾ ಬಾಯಿ ಭಾಷೆಗಳು
ಹಲವು ಇರಬಲ್ಲವು. ಅವು ಒಂದೇ ಗಿಡದ ಟೊಂಗೆಗಳಂತೆ, ಒಂದೇ ನದಿಯ
ಶಾಖೆಗಳಂತೆ ಒಂದಕ್ಕೊಂದು ಹೊಂದಿಕೊಂಡು ಇರುವವು.
{{gap}}ಆಯಾ ಪ್ರಾಂತದ ಜನರ ನಿತ್ಯವ್ಯವಹಾರಾದಿಗಳು ಪ್ರಾಂತೀಯ ಭಾಷೆಯಲ್ಲಿಯೆ ನಡೆಯುವವು. ಅಲ್ಲದೆ ಅವರ ಇತಿಹಾಸ, ಪರಂಪರೆ, ಸಂಸ್ಕೃತಿ,
ಜ್ಞಾನಭಾಂಡಾರ, ಅನುಭವ, ಜಾಣತನ, ಇವೆಲ್ಲ ಹಾಗೂ ಅವರ ದೋಷ
ಲೋಪಗಳು ಸಹ ಆಯಾ ಭಾಷೆಯ ವಿವಿಧ ವಾಙ್ಮಯದಲ್ಲಿ ಅಡಕವಾಗಿರು
ವದು ಸ್ವಾಭಾವಿಕ. ಅದೆಲ್ಲ ಆಯಾ ಪ್ರಾಂತದಲ್ಲಿ ಹುಟ್ಟಿ ಬೆಳೆದವನ ಸೊತ್ತು.
ಆ ಎಲ್ಲ ಬೊಕ್ಕಸದ ಕೀಲಿಕೈ ಆ ಭಾಷೆಯ ಮೂಲಕವೆ ದೊರೆಯುವದು ಗಣ್ಯ
ವಾದ, ಸಂಸ್ಮರಣಿಯವಾದ ಯಾವದೆ ಮಾತನ್ನು ಆಯಾ ಪ್ರಾಂತದ ಲೇಖ
ಕರು ತಮ್ಮ ಭಾಷೆಯಲ್ಲಿ ಬರೆದಿಡದೆ ಇರಲಾರರು. ಸಾಕಷ್ಟು ಮಹತ್ವದ
ಮತ್ತು ಸುಂದರ ವಾಙ್ಮಯವನ್ನು ಯಾವ ಜನಾಂಗದವರೂ ಅಳಿಯಗೊಡ
ಲಾರರು. ವೇದರಚನೆಯಾದಾಗ ಇನ್ನು ಬರೆಹದ ಕಲೆ ಹುಟ್ಟಿರಲಿಲ್ಲವಂತೆ.
ಆದರೂ ಚಾಚೂ ತಪ್ಪದೆ ಕಂಠಸ್ಥ ಮಾಡಿ ಆಗಿನ ಜನರು ಸುಮಾರು ಸಾವಿರ
ವರುಷಗಳವರೆಗೆ ಅವನ್ನು ಸಂರಕ್ಷಿಸಿ ಪೀಳಿಗೆಯಿಂದ ಪೀಳಿಗೆಗೆ ಅಮೂಲ್ಯ
ವಾದ ಧನವೆಂದು ಕೊಡುತ್ತ ಬಂದರು, ಎಂದು ಪಂಡಿತರು ಹೇಳುವರು.
ತಾತ್ಪರ್ಯವೇನೆಂದರೆ, ಯಾವ ಅಪಾರ ಜ್ಞಾನ ಅನುಭವಾದಿಗಳನ್ನು ವ್ಯಕ್ತಿ<noinclude><references/></noinclude>
devjxhcx2zvsv53fc48nskvtml28vkj
ಪುಟ:Praantabhaashhe-Rashhtrabhaashhe.pdf/೧೪
104
23848
321169
308666
2026-05-20T06:45:45Z
Pragathi. BH
7585
/* Validated */
321169
proofread-page
text/x-wiki
<noinclude><pagequality level="4" user="Pragathi. BH" /></noinclude>{{center|— ೯—}}
ಗಳು ತಮ್ಮ ಚಿಕ್ಕ ಮಿದುಳಿನಲ್ಲಿ ಬಹುಕಾಲ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿ
ಸಿಡುವದು ಅಸಾಧ್ಯವೊ ಅವುಗಳನ್ನೆಲ್ಲ ಒಂದು ಭಾಷೆಯು ಸಾವಿರಾರು ವರು
ಷಗಳ ವರೆಗೆ ವಾಹ್ಮಯರೂಪದಿಂದ ಕಾದಿಡಬಲ್ಲದು. ಒಂದು ಪ್ರಾಂತದ
ಇಲ್ಲವೆ ಜನಾಂಗದ ವಾಯವೆಂದರೆ ಆಯಾ ಜನರ ಅನೇಕ ಪೀಳಿಗೆಗಳ
ವಿಚಾರ ಮತ್ತು ಅನುಭವ ಪರಂಪರೆಗಳ ನಿಘಂಟು ಅಥವಾ ಸಂದರಗ್ರಂಥ
ಎಂದರೂ ಸಲ್ಲವರು ವೇದೋಪನಿಷತ್ತುಗಳ ಕಾಲದ ಜನರ ಜ್ಞಾನವು,
ಅವರ ಪೂರಾ ಪರ, ಸುಖ ದುಃಖ, ಸ್ವಭಾವ, ಎಚಾರ ವ್ಯವಹಾರ ಇತ್ಯಾದಿ,
ಆ ಗ್ರಂಥಗಳ ಅಭ್ಯಾಸದಿಂದಲೆ ಆಗುವದು. ಈಗ ಉಸುಬಿನ ಕೆಳಗೆ ನೂರಾರು
ಅಡಿ ಹುಗಿದುಹೋದ ಬ್ಯಾಬಿಲೋಲ, ನಿನೇವಾ ಮುಂತಾದ ಪಟ್ಟಣಗಳ
ರಹಿವಾಸಿಗಳ ಸ್ಥಿತಿಗತಿ, ರೀತಿ ನಡತೆಗಳು, ಮಿಸರ ದೇಶದ ಜೀವನಾಂಶಗಳು
ಅವರವರ ಆ ಬಾಣ ಭಾಷೆ' ( ಕುನಿಫಾತ್ಮ) ಚಿತ್ರಭಾಷೆ' (ಹಾಯರೊ
ಗ್ಲಿಫ್) ಗಳ ಸಾಧನದಿಂದಲೆ ನಮಗೆ ತಿಳಿಯುವವು. ಭಾಷೆ ರೂಪುಗೊಂಡು
ಗ್ರಂಥಸ್ಥವಾಯಿತೆಂದರೆ ಅದು ಇಷ್ಟೆಂದು ಮಹತ್ವವಾಗುವದು.
ಭಾಷೆಯೆಂಬುದು ಸ್ವವಿಚಾರ ಪ್ರಕಾಶನದ, ವಿಚಾರ ವಿನಿಮಯದ,
ವಿಚಾರ ವಿಮರೆಯ, ವಿಕಾಸದ, ಸಾಮಾಜಿಕ ಜೀವನದ, ಜ್ಞಾನಸಂಗ್ರಹದ
ಉತ್ತಮ ಸಾಧನವೆಂಬ ಮಾತು ನಿಜ, ಅದೇ ಕಾಲಕ್ಕೆ ಸ್ವಭಾಷೆಯು ಅಂಥ
ಉತ್ತಮೋತ್ತಮ ಸಾಧನವಾಗಬಲ್ಲವೆಂಬುದನ್ನು ನಾವು ಲಕ್ಷದಲ್ಲಿಡಲಿಕ್ಕೆ
ಬೇಕು. ರವೀಂದ್ರನಾಥ ಟಾಗೋರರಂಥ ಶಿಕ್ಷಣಪಟುಗಳು, ಗಾಂಧೀಜಿಯ
ವರಂಥ ವಿಚಾರಪರಾಯಣರು, ಪಂಡಿತ ಜವಾಹರಲಾಲರಂಧ ಉಜ್ವಲ
ದೇಶಭಕ್ತರು ಪ್ರಾಂತೀಯ ಭಾಷೆಗಳ ಮಹತಿಯನ್ನು ವಿಧವಿಧದಿಂದ ಬಣ್ಣಿಸಿ
ರುವರು. ಶಿಕ್ಷಣದ ಮಾಧ್ಯಮವನ್ನು ಇಂಗ್ಲಿಷ್ ಮಾಡದೆ ಪ್ರಾಂತಿಯ ಭಾಷೆ
ಗಳನ್ನ ಮಾಡಬೇಕೆಂದು ಹೇಳುವಾಗ ಡಾ. ಮೆಕಂಝಿ, ಡಾ. ಅಮರನಾಥ
ಝಾ, ರೆ. ಹಾಲಂಡ, ಮಿ. ವರವರ ಮುಂತಾದವರು ಈ ವಿಷಯವನ್ನು
ಬಹಳ ಒತ್ತಿ ಹೇಳಿರುವರು ಸರಕಾರದವರು ನೇಮಿಸಿದ ಸ್ಯಾಡಲತಕಮಿಶನ್
ಹಾಂಟಾಗ್ ಕವಿಶನ್, ಅಬಟ್ವುಡ್ ಕಮೀಟಿ ಮುಂತಾದವರು ಸಹ
ಪ್ರಾಂತೀಯ ಭಾಷೆಯನ್ನೆ ಮಾಧ್ಯಮ ಮಾಡಬೇಕು, ಇಲ್ಲದೆ ಹೋದರೆ ವಿದ್ಯಾರಿ<noinclude><references/></noinclude>
6b0dpfv1op87ljg0flel5kqdfbr29x3
ಪುಟ:Praantabhaashhe-Rashhtrabhaashhe.pdf/೧೯
104
25979
321175
308672
2026-05-20T06:50:00Z
Pragathi. BH
7585
/* Validated */
321175
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೧೪—}}
ಆಗಿತ್ತು. ಸಾವಿರಾರು ಶಿಲಾಲಿಪಿಗಳೂ ತಾಮ್ರಪತಟಗಳೂ ಈ ಮಾತಿಗೆ
ಸಾಕ್ಷಿಯಾಗಿವೆ. ನೃಪತುಂಗನನ್ನು ಮೊದಲುಮಾಡಿ ಈ ಹೊತ್ತಿನ ವರೆಗೆ
ಉದ್ದಾಮ ಕವಿಶ್ರೇಷ್ಠರು ಕನ್ನಡದಲ್ಲಿ ಕಾವ್ಯವನ್ನು ನಿರ್ಮಾಣಗೊಳಿಸಿರುವರು.
ವಚನಕಾರರು, ಹಾಗೂ ದಾಸಕೂಟದವರು ಧರ್ಮ ವಿಚಾರಗಳನ್ನು ಸವಿಗನ್ನಡ
ದಲ್ಲಿ ಪಾಮರರಿಗೂ ಅರ್ಥವಾಗುವಂತೆ ಬೋಧಿಸಿರುವರು.ಬ್ರಿಟಿಷರು ಬಂದ
ಬಳಿಕ ಕನ್ನಡ ಬೋಧಭಾಷೆ ಹೋಗಿ ಇಂಗ್ಲೀಷು ಆ ಸ್ಥಾನವನ್ನು ಆಕ್ರಮಿ
ಸಿದ ನಂತರವೇ ಕನ್ನಡವು ಕುಗ್ಗಿತು. ಅದರ ಸ್ವಾಭಾವಿಕ ಓಜಸ್ಸು ಮರೆ
ಯಾಯಿತು. ಈಗ ಪುನಃ ಸ್ವಭಾಷೆಯ ಬಗ್ಗೆ ನವಜಾಗ್ರತಿಯ್ಯುಂಟಾದಂದಿ
ನಿಂದ ಕನ್ನಡವು ತಲೆಯೆತ್ತುತ್ತಲಿದೆ. ಇದೇ ಪ್ರಗತಿ, ದ್ರುತಗತಿಯಿಂದ ಸಾಗಿ
ದರೆ ಅದು ತನ್ನ ಪೂರ್ವ ವೈಭವವನ್ನು ಪಡೆಯುವದಲ್ಲದೆ ತನ್ನ ಸಹೋದರ
ಭಾಷೆಗಳು ಯಾವ ಮಟ್ಟನ್ನು ಮುಟ್ಟಬಹುದೊ ಅದೇ ಮಟ್ಟನ್ನು ಸಹಜ
ವಾಗಿ ಮುಟ್ಟಬಲ್ಲದು.
{{center|'''ಪ್ರಾಂತಿಕ ಭಾಷೆಯ ಉಪಯೋಗ'''}}
ಕರ್ನಾಟಕದಲ್ಲಿ ಕನ್ನಡವೆ ಪ್ರಾಂತಿಕ ಭಾಷೆ. ಗುಜರಾಥದಲ್ಲಿ ಗುಜ
ರಾಥಿ, ಆಂಧ್ರದಲ್ಲಿ ತೆಲುಗು, ತಮಿಳುನಾಡಿನಲ್ಲಿ ತಮಿಳು, ಮಹಾರಾಷ್ಟ್ರದಲ್ಲಿ
ಮರಾಠಿ ಇರುವಂತೆ ಪ್ರಾಂತದಲ್ಲಿಯ ಪ್ರಾಥಮಿಕ ಶಾಲೆಗಳ ಭಾಷೆ, ಬೋಧ
ಭಾಷೆ, ವಿಶ್ವವಿದ್ಯಾಲಯದ ಭಾಷೆ, ಕ್ವ್ಯಾಪಾರ-ಉದ್ಯೋಗ-ವ್ಯವಹಾರಗಳವ್
ಭಾಷೆ, ಸಾರ್ವಜನಿಕ ಸಭೆ ಸಮ್ಮೇಲನಗಳ ಭಾಷೆ, ನಾಟಕ-ಗೀತ-ಸಂಗೀತಗಳ
ಭಾಷೆ, ಸಂಸ್ಕೃತಿ ವಾಙ್ಮಯಗಳ ಭಾಷೆ, ರಾಜ್ಯಕಾರಭಾರದ ಭಾಷೆ, ಕೋರ್ಟು
ಕಚೇರಿಗಳ ಭಾಷೆ ಪ್ರಾಧಾನ್ಯವಾಗಿ ಕನ್ನಡವೆ ಇರಲಿಕ್ಕೆಬೇಕು. ಅಂದರೆ
ಮಾತ್ರ ನಮಲ್ಲಿಯ ಜನಸಾಮಾನ್ಯರ ವಿಕಾಸವು ಆಗಬಲ್ಲದು. ನಾಲ್ಕು ಬುದ್ಧಿ
ಜೀವಿಗಳಿಗೆ ಅಥವಾ ಉಚ್ಚಶಿಕ್ಷಣ ಪಡೆದವರಿಗೆ ಯಾವ ಭಾಷೆಯಾದರೂ
ಅನುಕೂಲವಾಗಬಹುದು. ಆದರೆ ಅದು ಜನಸಾಮಾನ್ಯರ ವಿಕಾಸಕ್ಕೆ
ಸಹಾಯಕವಾಗಲರಿಯದು. ಅವರಿಗೆ ಯಾವದು ಉಪಕಾರಕ, ಅವರು ಭಾಗ
ವಹಿಸಲು ಉತ್ತೇಜನವುಂಟಾಗಬೇಕಾದರೆ ಯಾವ ಭಾಷೆ ಅವಶ್ಯ ಇದನ್ನೆ ಮುಖ್ಯ
ವಾಗಿ ನಾವು ನೋಡಲಿಕ್ಕೆಬೇಕು. ನಾವು ಕನ್ನಡ ಬಿಟ್ಟು ಇನ್ನಾವದೆ ಭಾಷೆ<noinclude><references/></noinclude>
l3na9jfu7v20s3iojn1xo4dwzaohdj4
ಪುಟ:ನಡೆದದ್ದೇ ದಾರಿ.pdf/೧೩೩
104
30984
320862
319144
2026-05-19T14:43:54Z
Pragathi. BH
7585
/* Validated */
320862
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೨೬|right=ನಡೆದದ್ದೇ ದಾರಿ}}
ಮಲಗಿದ್ದು ಕಾಣಿಸಿತು.ಪಾಪ ಅನಿಸಿತು.ಸದ್ದಾಗದ ಹಾಗೆ ಹೋಗಿ ಅವಳ ಮಂಚದ
ಪಕ್ಕದಲ್ಲಿ ನಿಂತ ಆತ.ಅವಳ ನಿಟ್ಟುಸಿರುಗಳಿಗೆ ಕಿವಿಗೊಟ್ಟ.ಮನಸ್ಸು ಕರಗಿತು.ಮೆತ್ತಗೆ
ಅವಳ ಕೈ ಅದುಮಿ 'ಕಲಾ'
{{gap}}ತಟ್ಟ್ಟನೆ ಕಣ್ಣ್ಣು ತೆರೆದ ಆಕೆ ಒರಟಾಗಿ ಕೈ ಕೊಸರಿಕೊಂಡಿದ್ದಳು.ಕಣ್ಣು
ಕೆಂಪಾಗಿದ್ಡವು."ಮನಸಿಗೆ ಹಚ್ಚಿಗೋ ಬ್ಯಾಡ ಕಲಾ.ಮರೆತುಬಿಡು ಅವನನ್ನ. ಅವನ
ಅಪ್ಪನಂಥಾ ವರ ಹುಡುಕಿ ಲಗ್ನಾ ಮಾಡ್ತೀನಿ ನಿಂದು.'
{{gap}}'ಲಗ್ನಾ ಬ್ಯಾಡ್ರೀ ಮಾಮಾ ನನಗ,ಎಲ್ಲಾ ಸಾಕಾತು"-ಭಗ್ನಪ್ರೇಮಿಯ
ಭಾರವಾದ ದನಿ.
{{gap}}"ಹಾಂಗಂದ್ರ ಹ್ಯಾಂಗ ಕಲಾ? ಜೀವನದಾಗ ಇಂಥಾ ಪ್ರಸಂಗ ಬರೋವೇ.
ಆವನಂಥಾ ಚಂಚಲ ಮನುಷ್ಯ ನಿನಗ ಯೋಗ್ಯ ಅಲ್ಲವೇ ಆಲ್ಲ.ಬರೇ flirt
ಮಾಡಿಕೋತ ತಿರುಗ್ಯಾಡೋ ಸ್ವಭಾವ ಅವನದು."
{{gap}}-ಇದ್ದಕ್ಕಿದ್ದಂತೆ ಕಲಾ ಆತನ ಕಾಲುಗಳ ಬಳಿ ಕುಸಿದು ಅಳಲಾರಂಭಿಸಿದಳು.
ಅವಳ ಬೆನ್ನ ಮೇಲೆ ಕೈಯಿಟ್ಟ ಆತ,"ಸಮಾಧಾನ ಮಾಡಿಕೊ ಕಲಾ,ನೀ ಒಬ್ಬ ವ್ಯಕ್ತಿ
ಸಲುವಾಗಿ ಕೊರಗಲಿಕ್ಕೆ ಆ ವ್ಯಕ್ತಿಗೆ ಯೋಗ್ಯತಾ ಇರಬ್ಯಾಕೋ ಬ್ಯಾಡೋ?"
ಬಿಕ್ಕುತ್ತಲೇ ಹೇಳಿದಳು ಆಕೆ,"ನೀವು ಬೇಕಾದ್ದ ಹೇಳ್ರೀ ಮಾಮಾ. ನನಗ
ಚಂದೂಲಾಲನ್ನ ಮರೆಯೋದು ಆಗೋದಿಲ್ಲ.ಆತ ಕೆಟ್ಟವನಿರಲಿ.ಮೋಸ ಮೊಡಲಿ,
ಖೂನಿ ಮಾಡಲಿ....ನಾ ಅವನ್ನ ಪ್ರೀತಿ ಮಾಡ್ತೀನಿ ಮಾಮಾ.ಹಿಂಗ ಬದಕಲಿಕ್ಕೆ ಶಕ್ಯನs
ಇಲ್ಲ ನನಗ.
{{gap}}ಎಲಾ ಹುಡುಗಿ!ನಿನ್ನೆ ಮೊನ್ನೆ ಭೆಟ್ಟಿಯಾದ ಮನುಷ್ಯನ ಬಗ್ಗೆ ಎಷ್ಟು
ಇವಳಿಗೆ.......
{{gap}}"ಹಾಂಗೆಲ್ಲ ಅನಬಾರದು ಕಲಾ...."
{{gap}}"ಮಾಮಾ,ನೀವು ಮನಸ್ಸು ಮಾಡಿದರ ಅವನಿಗೆ ತಿಳಿಸಿ ಹೇಳಬಲ್ಲಿರಿ.ಅವನಿಗೆ
ಹೇಳ್ರೀ ಮಾಮಾ.ಇಲ್ಲಂದರ ನಿಮ್ಮ ಕಲಾನ ಆಶಾ ಬಿಟ್ಟಿ ಬಿಡ್ರಿ...."
{{gap}}" ಛೀ. ಹುಚ್ಚಿ ಏಳು,ಏಳು. ಏನಾದರೋ ಮಾಡೋಣಂತ. ನಿನಗ ಆಷ್ಟು
ಮನಸ್ಸಿದ್ದರೆ ಏನರೇ ಮಾಡಾಲಿಕ್ಕೇ ಬೇಕಾತು. ನಾ ವಿಚಾರ ಮಾಡಾತೀನಿ.ನನ್ನ ಶಕ್ತಿಮೀರಿ
ಪ್ರಯತ್ನ ಮಾಡ್ತೀನಿ. ನೀ ಕಾಳಜಿ ಬಿಡು."
{{gap}}"ಮಾಮಾ-"
{{gap}}"ಹೌದು ಕಲಾ,ನಾ ನಿನ್ನ ಭಾಳ ಪ್ರೀತಿ ಮಾಡತೀನಿ. ನಿನ್ನ ಮನಸ್ಸಿಗೆ
ಸಮಾಧಾನ ಆಗೋಹಂಗ ಮಾಡಲಿಕ್ಕೆ ಜೀವಾ ಸುದ್ಧಾ ಕೊಟ್ಟೇನು."<noinclude><references/></noinclude>
a4xzwsj5w7fil0kqibp4m4s9szzv4pk
ಪುಟ:ನಡೆದದ್ದೇ ದಾರಿ.pdf/೧೩೪
104
31023
320871
319145
2026-05-19T16:54:48Z
Pragathi. BH
7585
/* Validated */
320871
proofread-page
text/x-wiki
<noinclude><pagequality level="4" user="Pragathi. BH" /></noinclude>ಅಂದು ರಾತ್ರಿ ಹೆಂಡತಿಯ ಸಮೀಪ ಸರಿದಾಗ ಯಾಕೋ ಕಲಾನ ಶಿಲಾಬಾಲಿಕೆಯ ಮೈಕಟ್ಟು ನೆನಪಿಗೆ ಬಂದು ಆವಳು ಚಂದೂಲಾಲನನ್ನು ಮದುವೆಯಾದರೆ ಆನಿಸಿ, ಎಂಥದೋ ಸಂಕಟ ಆನಿಸಿ, 'ಛೇ, ಕೂಡದು, ಶಕ್ಯವಿಲ್ಲ.' ಎಂದೇನೇನೋ ಅನಿಸಿತು....
{{gap}}-ಮರುದಿನ ಆಫ಼ೀಸಿನಲ್ಲಿ ಚಂದೂಲಾಲ ಸಹಜವೆಂಬಂತೆ "ಯಾಕ್ರೀ ಹ್ಯಾಂಗ ಇದ್ದಾಳ ಕಲಾ?" ಅಂದಾಗ ನೀರು ತುಂಬಿದ ಅವಳ ಕಣ್ಣುಗಳು- 'ಕಲಾನ ಆಶಾ ಬಿಟ್ಟಬಿಡ್ರಿ'- ನೆನಪಾಗಿ, ನಕ್ಕು ಹೇಳಿದ ಆತ, "ಆರಾಮ ಇದ್ದಾಳ ಆಕೀಗೇನು? ಒಂದು ಛಲೋ ವರ ನೋಡಿ ಲಗ್ನಾ ಮಾಡಬೇಕಂತೀವಿ ಲಗೂನ.
{{gap}}ಕಲಾನಿಗೆ ಬುದ್ದಿಯಿಲ್ಲ ಪ್ರೇಮಭಂಗವಾದ ಹೊಸದರಲ್ಲಿ ಹೀಗೆಲ್ಲ ಅನಿಸುವುದು ಸಹಜ. ಮುಂದೆ ತಾನೇ ಸರಿಯಾಗುತ್ತಾಳೆ ಅವಳಿಗೆ ಯಾವುದರಿಂದ ಹೆಚ್ಚು ಒಳ್ಳೆಯದಾಗುವುದೆಂಬುದು ತನಗಲ್ಲವೇ ತಿಳಿಯುವುದು.
{{gap}}"ಆವನ ಮನಸ್ಸು ಬದಲಾಗೋಹಾಂಗ ಕಾಣಸೂದಿಲ್ಲ ಕಲಾ. ಬರೇ ಬಾಸ್ ಮಗಳು ಸುದ್ದೀ ಮಾತಾಡತಾನ. ನಿನ್ನ ಮಾತು ತೆಗಸಿಯೇ ಕೊಡೋದಿಲ್ಲ. ಅರಾಮ ಇದ್ದಾನ ಮಗ. ನೀ ಯಾಕವನ ಸಲುವಾಗಿ ವ್ಯರ್ಥ ಕೊರಗತೀಯೇ ತಿಳೀಲೊಲ್ಲದು.ನೀ ಆವನಕಿಂದತ ಆರಾಮ ಇರು.ನಿನಗೇನು ಕಡಿಮ್ಯಾಗೇದ?"
{{gap}}-ಕಾಲಾ ಅಳಲಿಲ್ಲಿ. ಮಾತೂ ಆಡಲಿಲ್ಲಿ. ಸುಮ್ಮನಾದಳು.
{{gap}}ನಂತರವೂ ಸುಮ್ಮನೆ ಇದ್ದಳು .
{{gap}}ಯಾಕೋ ಚಿಂತೆಗಳೆಲ್ಲಾ ಮುಗಿದಂತೆ ಅನಿಸುತ್ತಿದೆ ಇತ್ತೀಚೆ. ಇನ್ನು ಚಂದೂಲಾಲನ ಲಗ್ನ್, ತನಗೆ ಪ್ರಮೋಶನ್....ಮೊದಲು ಅಂಧೇರಿಯಲ್ಲಿಯ ಆ ಕತ್ತಲು ಮನೆ ಬಿಡಬೇಕು.ಒಂದು ಛೆಂದ ಪುಟ್ಟ ಫ಼್ಲ್ಯಾಟು ಹಿಡಿಯಬೇಕು. ಒಂದು ಸಣ್ಣ ತೋಟ..ಬೇಕಾದರೆ ಒಂದು ಸ್ಕೂಟರ್ಸಹ ಕೊಳ್ಳಬಹುದು.ತನ್ನ ಕೂದಲೇನೂ ಬೆಳ್ಳಗಾಗಿಲ್ಲ.ಸ್ವಲ್ಪ ಉದುರುತ್ತಿವೆ ಆ..ತನಗೆ ಫಿಟ್ ಪ್ಯಾಂಟ್ ಚೆಂದ ಕಾಣುತ್ತದೆಂದು ಮೊನ್ನೆ ಕಲಾ ಹೇಳಿದ್ದುಳು..ಒಂದು ಒಳ್ಳೆಯ ಟೆರಿಲಿನ್ ಪೀಸ ಕೊಳ್ಳಲಿಕ್ಕೆ ಅಡ್ಡಿಯಿಲ್ಲ. ಮೊದಲು ಪ್ರಮೋಶನ್.
{{gap}}'ಪ್ರಮೋಶನ್ ಸಿಕ್ಕಕೂಡಲೇ ಮೊದಲು ಸತ್ಯನಾರಾಯಣ ಪೂಜೆ ಮಾಡಸಬೇಕ್ರೀ'-ಅನ್ನುತ್ತಿದ್ದಾಳೆ ಹೆಂಡತಿ, ಎಂದಿನಿಂದಲೂ
{{gap}}ಹ್ಹ, ದೇವರೆ ನೆನಪಾದರೆ ತನಗೆ ನಗು ಬರುತ್ತದೆ.ಮೊದಲಿನಿಂದಲೂ ಹಾಗೆಯೇ.<noinclude><references/></noinclude>
cbfu2aznpsobcl85lkq2vfnt0etadoc
320873
320871
2026-05-19T16:56:13Z
Pragathi. BH
7585
320873
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಕೊನೆಯ ದಾರಿ/ಮುಕ್ತಿ|right=೧೨೩}}</noinclude>{{gap}}ಅಂದು ರಾತ್ರಿ ಹೆಂಡತಿಯ ಸಮೀಪ ಸರಿದಾಗ ಯಾಕೋ ಕಲಾನ ಶಿಲಾಬಾಲಿಕೆಯ ಮೈಕಟ್ಟು ನೆನಪಿಗೆ ಬಂದು ಆವಳು ಚಂದೂಲಾಲನನ್ನು ಮದುವೆಯಾದರೆ ಆನಿಸಿ, ಎಂಥದೋ ಸಂಕಟ ಆನಿಸಿ, 'ಛೇ, ಕೂಡದು, ಶಕ್ಯವಿಲ್ಲ.' ಎಂದೇನೇನೋ ಅನಿಸಿತು....
{{gap}}-ಮರುದಿನ ಆಫ಼ೀಸಿನಲ್ಲಿ ಚಂದೂಲಾಲ ಸಹಜವೆಂಬಂತೆ "ಯಾಕ್ರೀ ಹ್ಯಾಂಗ ಇದ್ದಾಳ ಕಲಾ?" ಅಂದಾಗ ನೀರು ತುಂಬಿದ ಅವಳ ಕಣ್ಣುಗಳು- 'ಕಲಾನ ಆಶಾ ಬಿಟ್ಟಬಿಡ್ರಿ'- ನೆನಪಾಗಿ, ನಕ್ಕು ಹೇಳಿದ ಆತ, "ಆರಾಮ ಇದ್ದಾಳ ಆಕೀಗೇನು? ಒಂದು ಛಲೋ ವರ ನೋಡಿ ಲಗ್ನಾ ಮಾಡಬೇಕಂತೀವಿ ಲಗೂನ.
{{gap}}ಕಲಾನಿಗೆ ಬುದ್ದಿಯಿಲ್ಲ ಪ್ರೇಮಭಂಗವಾದ ಹೊಸದರಲ್ಲಿ ಹೀಗೆಲ್ಲ ಅನಿಸುವುದು ಸಹಜ. ಮುಂದೆ ತಾನೇ ಸರಿಯಾಗುತ್ತಾಳೆ ಅವಳಿಗೆ ಯಾವುದರಿಂದ ಹೆಚ್ಚು ಒಳ್ಳೆಯದಾಗುವುದೆಂಬುದು ತನಗಲ್ಲವೇ ತಿಳಿಯುವುದು.
{{gap}}"ಆವನ ಮನಸ್ಸು ಬದಲಾಗೋಹಾಂಗ ಕಾಣಸೂದಿಲ್ಲ ಕಲಾ. ಬರೇ ಬಾಸ್ ಮಗಳು ಸುದ್ದೀ ಮಾತಾಡತಾನ. ನಿನ್ನ ಮಾತು ತೆಗಸಿಯೇ ಕೊಡೋದಿಲ್ಲ. ಅರಾಮ ಇದ್ದಾನ ಮಗ. ನೀ ಯಾಕವನ ಸಲುವಾಗಿ ವ್ಯರ್ಥ ಕೊರಗತೀಯೇ ತಿಳೀಲೊಲ್ಲದು.ನೀ ಆವನಕಿಂದತ ಆರಾಮ ಇರು.ನಿನಗೇನು ಕಡಿಮ್ಯಾಗೇದ?"
{{gap}}-ಕಾಲಾ ಅಳಲಿಲ್ಲಿ. ಮಾತೂ ಆಡಲಿಲ್ಲಿ. ಸುಮ್ಮನಾದಳು.
{{gap}}ನಂತರವೂ ಸುಮ್ಮನೆ ಇದ್ದಳು .
{{gap}}ಯಾಕೋ ಚಿಂತೆಗಳೆಲ್ಲಾ ಮುಗಿದಂತೆ ಅನಿಸುತ್ತಿದೆ ಇತ್ತೀಚೆ. ಇನ್ನು ಚಂದೂಲಾಲನ ಲಗ್ನ್, ತನಗೆ ಪ್ರಮೋಶನ್....ಮೊದಲು ಅಂಧೇರಿಯಲ್ಲಿಯ ಆ ಕತ್ತಲು ಮನೆ ಬಿಡಬೇಕು.ಒಂದು ಛೆಂದ ಪುಟ್ಟ ಫ಼್ಲ್ಯಾಟು ಹಿಡಿಯಬೇಕು. ಒಂದು ಸಣ್ಣ ತೋಟ..ಬೇಕಾದರೆ ಒಂದು ಸ್ಕೂಟರ್ಸಹ ಕೊಳ್ಳಬಹುದು.ತನ್ನ ಕೂದಲೇನೂ ಬೆಳ್ಳಗಾಗಿಲ್ಲ.ಸ್ವಲ್ಪ ಉದುರುತ್ತಿವೆ ಆ..ತನಗೆ ಫಿಟ್ ಪ್ಯಾಂಟ್ ಚೆಂದ ಕಾಣುತ್ತದೆಂದು ಮೊನ್ನೆ ಕಲಾ ಹೇಳಿದ್ದುಳು..ಒಂದು ಒಳ್ಳೆಯ ಟೆರಿಲಿನ್ ಪೀಸ ಕೊಳ್ಳಲಿಕ್ಕೆ ಅಡ್ಡಿಯಿಲ್ಲ. ಮೊದಲು ಪ್ರಮೋಶನ್.
{{gap}}'ಪ್ರಮೋಶನ್ ಸಿಕ್ಕಕೂಡಲೇ ಮೊದಲು ಸತ್ಯನಾರಾಯಣ ಪೂಜೆ ಮಾಡಸಬೇಕ್ರೀ'-ಅನ್ನುತ್ತಿದ್ದಾಳೆ ಹೆಂಡತಿ, ಎಂದಿನಿಂದಲೂ
{{gap}}ಹ್ಹ, ದೇವರೆ ನೆನಪಾದರೆ ತನಗೆ ನಗು ಬರುತ್ತದೆ.ಮೊದಲಿನಿಂದಲೂ ಹಾಗೆಯೇ.<noinclude><references/></noinclude>
652abjplhsumbek46e4ggkidr8xwxir
ಪುಟ:ನಡೆದದ್ದೇ ದಾರಿ.pdf/೧೩೫
104
31071
320874
319146
2026-05-19T16:56:40Z
Pragathi. BH
7585
/* Validated */
320874
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೨೮|right=ನಡೆದದ್ದೇ ದಾರಿ}}
ಒ೦ದು ದಿನ ಗುಡಿಗೆ ಹೊದ ನೆನಪಿಲ್ಲ. ಕೈ ಮುಗಿದ ನೆನಪಿಲ್ಲ. ದೆವರು.... ಮನುಷ್ಯನ ದೌರ್ಬಲ್ಯ, ಮೂರ್ಖತನ, ಅಯೊಗ್ಯತನಗಳ ಸಾಕಾರ ಕಲ್ಪನೆ ಥೂ,
disgusting....
*
{{gap}}`ನಾಳಿನಿ೦ದ ಕಲಾ ಮತ್ತೆ ಕೆಲಸಕ್ಕೆ ಹಾಜರ ಆಗತಾಳೀನ್ರಿ ಶ೦ಕರ ಮಾಮಾ? ಆಕಿ ರಜಾ ಮುಗೀತಲ್ಲ?"ಮೀಸ್ ಪರ್ವತಿ.
{{gap}}"ಒ ಯೆಸ್, ಬರದ ಎಲ್ಲಿಗೆ ಹೊಗತಾಳ?"ಪೈಲುಗಳನ್ನು ಕಟೀಡುತ್ತಾ ಊತ್ತರಿಸಿದ ಶ೦ಕರಮಾಮಾ.ಮನೆಗೆ ಹೊಗಿ ರಾತ್ರಿ ಊಟಕ್ಕೆ ಕಾಯಬೆಡವೆ೦ದು ಹೆ೦ಡತಿಗೆ ಹೆಳಿ ಬಾ೦ದ್ರದಲ್ಲಿರುವ ಚ೦ದೂಲಾಲನ ಕಡೆ ಹೊಗಬೀಕು.ಅವನ ಅಡಿಗೆಯನು ಚಿಕನ್ಕರಿ ಬಹಳ ಛಲೊ ಮಾಡತನೆ.ಚ೦ದೂಲಾಲನ ಪಾರ್ಟಿ ಅ೦ದರೆ ಮೂರು ದಿನ ಅಮಲು ಇಳಿಯುವುದಿಲ್ಲ.
{{gap}}"ಆಪ್ಕ ಕಾ ಫೊನ್ ಹೈ ಸಾಬ್"- ಶ೦ಕರಮಾಮಾನ ಅಮಲು ಏರುತ್ತಿದ್ದುದು ಅಲ್ಲಿಗೇ ನಿ೦ತಿತು.ಯಾರಪ್ಪ ಎ೦ದು ಗೊಣಗಿಕೊ೦ಡೇ ಎದ್ದ ಆತ.
{{gap}}ಒ೦ದು ಕ್ಶಣ ಕಾಲು ನಡುಕ; ಅಸಿ ಮ್ಯಾನೇಜರ್ ಬೋರ್ಡು, ಮಿಸ್ ಪರ್ವತಿ,ಟೈಪ್ ರೈಟರ್,ಟೇಬಲು,ಕುರ್ಚಿಗಳು,ಊಳಿದವರು-ಎಲ್ಲ ತಲೆಕೆಳಗೆ,ಕಾಲು ಮೇಲೆ,ಆಫೀಸು ಗಿಮಿ ಗಿಮಿ ತಿರುಗುತ್ತಿದೆ...ಸಮುದ್ರ ಭೊರೆ೦ದು ಊಕ್ಕಿ ಊಕ್ಕಿ ಕುತ್ತಿಗೆಗೆ ಬರುತ್ತಿದೆ...
{{gap}}-ನೆರೆಮನೆಯ ಸಿ೦ಗ್ ನ ಧ್ವನಿ ಆಚೆಯಿ೦ದ,'ಕಲಾ ಆತ್ಮಹತ್ಯೆ ಮಾಡಿಕೊ೦ಡಳು....
{{gap}}ಹ್ಞಾ,ಹೌದು,ರೂಮಿನ ತೊಲೆಗೆ ಸೀರೆಯೀ೦ದ ನೇಣು ಹಾಕಿಕೊ೦ಡು... ನನ್ನ ಹೆ೦ಡತಿ ನಿಮ್ಮ ಮನೆಯವರ ಜೋಡಿ ಇದ್ದಾಳ... ಹ್ಞಾ ಹ್ಞಾ,ಪೊಲೀಸರಿಗೆ ತಿಳಿಸಲ್ಲ... ಲಗೂ ಲಗೂ ಬರ್ರಿ.'
{{gap}}ಬೀಳಲಿದ್ದ ಶ೦ಕರಮಾಮಾನನ್ನು ಆಧರಿಸಿ ಹಿಡಿದರು ಯಾರೋ.
{{gap}}ಪ್ಲಾಟ್ ಫಾರ್ಮ್ ಮೇಲಿನ ಗದ್ದಲ, ಸೇ೦ಗಾ ಮಾರುವ ಮೂದುಕಿ, ಕುಷ್ಟರೋಗಿ ಭಿಕ್ಶುಕ- ಎ೦ದಿನ೦ತೆಯೇ.ಸುಡುವ ಬಿಸಿಲು-ಹೊರಗೆ,ಒಳಗೆ-ಎ೦ದಿನ೦ತೆಯೇ-ಏನೂ ಬದಲಾವಣೆಯಿಲ್ಲ.
{{gap}}ಕಲಾ ಸತ್ತು ಎ೦ಟು ದಿನ. ಇ೦ದು ತಾನು ಹೊರಬಿದ್ದದ್ದು.
{{gap}}ಎಲ್ಲೋ ದೂರ ವರ್ಗ ಮಾಡಿಸಿಕೋ೦ಡು ಹೊರಟಿದ್ದಾನೆ ಚ೦ದೂಲಾಲ.<noinclude><references/></noinclude>
jv7kr7kw0hc56wbwgs9cq4pmmnrwpeo
ಪುಟ:ನಡೆದದ್ದೇ ದಾರಿ.pdf/೪೯೯
104
31650
320876
318083
2026-05-19T17:00:18Z
Pragathi. BH
7585
/* Validated */
320876
proofread-page
text/x-wiki
<noinclude><pagequality level="4" user="Pragathi. BH" />{{rh|center=|left=೪೯೨|right=ನಡೆದದ್ದೇ ದಾರಿ}}</noinclude>ಆಜ್ಜಿ , ವಿಧವೆ ಸೋದರತ್ತೆ, ಅಜ್ಜಿಯ ಅತ್ತೆ ಹೀಗೆ ಮೂವರು ಮುವರು ಮುದುಕಿಯರು. ಹದಿನಾಲ್ಕು ವರ್ಷಕ್ಕೆ ಹುಡುಗಿಯ ಕೈ ಹಳಿದಿ ಮಾಡುವುದು ಸಂಪ್ರದಯ. ಹೆಚ್ಚು ಕಲಿತರೆ ಈ ಕಡೆ ಅವರ ಜಾತಿಯ ವರ ಸಿಗುವುದೇ ಇಲ್ಲ. ಹಿರಿಯ ಮಗಳದೇ ಮದವೆಯನ್ನು ಸರಿಯಾದ ಕಾಲಕ್ಕೆ ಮಾಡಿದಿದ್ದರೆ ತಂಗಿಯರ ಗತಿಯೇನು? ಎಲ್ಲ ರೀತಿಯಿಂದ ಯೋಚನೆ ಮಾಡಿ ಹಿರಿಯರ ನಿರ್ಧರಿಸಿದರೆ. ಮುಂಬಯಿಯಲ್ಲಿ ಪ್ರಸಿದ್ಧ ಬಿಜಿನೆಸ್ ಮನ್ ಆಗಿದ್ದವರ ಮಗ. ಮ್ಯಾಟ್ರಿಕ್ ಫ಼ೇಲಾಗಿದ್ದರೇನ್ಂತೆ, ಲಕ್ಷಾನುಗಟ್ಟಲೆ ಹಣ ಗಳಿಸುತ್ತಾನೆ. ಒಳ್ಳೆಯ ವರ , ಸೋನಿಯಾ ತಕರಾರು ಮಾಡುತ್ತಾಳೆ ಅಂತ ಗೋತ್ತಿತ್ತು. ಅವಳಿಗೆ ಹೇಳದೆಯೇ ಮದುವೆಯ ತಯಾರಿ ಮಾಡಿದರು. ನೆಂಟರ ಮನೆಗೆ ಹೋಗೋಣ ಅಂತ ಹೇಳಿ ಕರಕೊಂಡು ಹೋದರು. ಯಾರದೋ ಮದುವೆ ಅಂತ ಸುಳ್ಲು ಹೇಳಿದರು.ತನ್ನದೇ ಅಂತ ತಿಳಿದಾಗ ಪ್ರತಿಭಟಿಸಿದಳು,ಅತ್ತಳು, ಉಪವಾಸ ಕೂತಳು. ಕೂಡಿದ ಬಂಧುಗಳು ಬುದ್ಧಿ ಹೇಳಿದರು. ಅವಳ ಸ್ವಂತ ತಾಯಿ ನೀನು ಒಪ್ಪದಿದ್ದರೆ ವಿಷ ಕುಡಿದು ಸಾಯುತ್ತೇನೆಂದು ಬೆದರಿಕೆ ಹಾಕಿದಳು. ಸೋನಿಯಾಗೆದಿಕ್ಕೇ ತೋಚಲಿಲ್ಲ. ಮದುವೆ ನಡೆದೇ ಹೋಯಿತು. ಭಾರಿ ವೈಭವದ ಮದುವೆ.
{{gap}}ವೈಭವದ ಮದುವೆಯ ನಂತರ ಸಿಮ್ಲಾದಲ್ಲಿ ಒಂದು ತಿಂಗಳ ಹನಿಮೂನ್. ಅದಾದ ನಂತರ ಒಂದು ವಾರ ಇದ್ದು ಹೋಗಲು ಸೋನೆಯಾ ತವರಿಗೆ ಬಂದಿದ್ದಳು."ಹ್ಯಾಂಗಿದ್ದಾಳ ಸೋನೆಯಾ? ಏನಂತಾಳ?"- ಉಗುಳು ನುಂಗಿ ಕೇಳಿದೆ.
{{gap}}ಏನಂತಾಳಮ್ಮಾ ಪಾಪ , ಬರೇ ಅಳತಾಳ . ಸೊರಗಿ ಕಡ್ಡಿ ಅಗ್ಯಾಳ . ಮುಖದ ಮ್ಯಾಲ, ಕುತ್ತಿಗೀ ಮ್ತಾಲ ನೀಲಿ ನೀಲಿ ಕಲೆ . ಮೈತುಂಬ ಬಂಗಾರ, ಜರೀ ಸೀರೆ,ಕಾಲೊಳಗೂ ಒಜ್ಜಾ-ಒಜ್ಜಾ ಚೈನು. ಎದ್ದು ತಿರಗ್ಯಾಡಲಿಕ್ಕೂ ಶಕ್ತಿ ಇಲ್ಲ ಅಕೆಗೆ. ಘೂಂಘಟ ಹಾಕ್ಕೊಂಡು ಕೂತಬಿಟ್ಟಾಳ. ಮಾತಾಡಿದರ ಕಣ್ಣಾಗ ನೀರು ಬರ್ತವ ,"ಗೆಳತಿಯೊಂದಿಗೆ ತಾನೂ ಕಣ್ಣೀರು ಸುರಿಸಿ ಬಂದಿದ್ದ ಮಿಲಿಗೆ ನಿಜವಾಗಿ ಅಘಾತವಾಗಿತ್ತು.
{{gap}}ಸದಾ ನಗುತ್ತ ಜೋಕು ಮಾಡುತ್ತ ಕುಣಿಯುತ್ತಲೇ ಓಡಾಡುತ್ತಿದ್ದ ಸೋನಿಯಾಳ ಮುಖ ಕಣ್ಣಿದುರು ಬಂತು. ಛೆ,ಅನ್ಯಾಯ ಅಂದುಕೊಂಡೆ.
{{center|೩}}
{{gap}}ಮತ್ತೆ ಒಂದು ವರ್ಷಕಳೆದಿತ್ತು. ಮಿಲಿ ಎಸ್ ಎಸ್ ಎಲ್.ಸಿ.ಯಲ್ಲಿ ತುಂಬ ಚೆನ್ನಾಗಿ ಮಾಡಿದ್ದಳು. ರಿಝಲ್ಪ್ ಬಂದ ದಿನವೇ ಸೋನಿಯಾ ಊರಿಗೆ ಬಂದ ಸುದ್ದಿ<noinclude><references/></noinclude>
iof58235op04zzcqf41a6w5i1jgjojf
ಪುಟ:ನಡೆದದ್ದೇ ದಾರಿ.pdf/೫೦೧
104
31681
320879
250758
2026-05-19T17:07:44Z
Pragathi. BH
7585
/* Validated */
320879
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೪೯೪|right= ನಡೆದದ್ದೇ ದಾರಿ}}
ಆದರೆ ಆಕೆ ಓದುತ್ತಿರಲಿಲ್ಲ. ನಾನು ಹೋಗಿ ಅವಳ ಹೆಗಲ ಮೇಲೆ ಮೃದುವಾಗಿ<br>
ಕೈಯಿಟ್ಟಾಗ ತಟ್ಟನೆ ತಲೆಯೆತ್ತಿ ಏನೂ ಪೀಠಿಕೆಯಿಲ್ಲದೆ. ಬಹುಶಃ ಬಹಳ ಹೊತ್ತಿನಿಂದ<br>
ಅವಳ ಮನಸ್ಸಿನಲ್ಲಿ ತಾಕಲಾಡತೊಡಗಿದ್ದ ಆ ಪ್ರಶ್ನೆಯನ್ನು ಕೇಳಿದಳು.<br>
{{gap}}"ಅಮ್ಮಾ, ಸ್ಕೂಲಿನ್ಯಾಗ ಒಂಬತ್ತು ವರ್ಷ ಸೋನಿಯಾ ನನ್ನ<br>
ಕ್ಲಾಸ್ಮೇಟಾಗಿದ್ದಳು. ನಿನಗೆ ಗೊತ್ತಲ್ಲ ? ಕರಿಯರ್ ಸಲುವಾಗಿ ಎಷ್ಟು ಕನಸು<br>
ಇದ್ದವು ಆಕಿಗೆ ! ನಾವಿಬ್ರೂ ಡಾಕ್ಟರ್ ಆಗೋಣ. ನಮ್ಮ ದೇಶದ ಬಡಜನರ ಸೇವಾ<br>
ಮಾಡೋಣ ಅಂದುಕೋತಿದ್ವಿ ನಾವು. ಆಂಥಾ ಹುಡುಗಿನ್ನ ಈ ಥರಾ ಟ್ರಾನ್ಸ್ ಫಾರ್ಮ್<br>
ಮಾಡಿ ಆಕಿಯ ವ್ಯಕ್ತಿತ್ವವನ್ನೇ ಕೊಲೆ ಮಾಡ್ಯಾರಲ್ಲಮ್ಮಾ, ಈ ಅನ್ಯಾಯಕ್ಕ ಯಾರು<br>
ಜವಾಬ್ದಾರರು ?"<br>
{{gap}}ನಾನು ಸುಮ್ಮನ್ನಿದ್ದೆ.<br>
{{gap}}“ಹೊತ್ತು ಭಾಳ ಆಗೇದ ಮಿಲಿ, ಮಲಕೋ" ಅಂತ ಹೇಳಿ ಹೊರಟು ಬಂದೆ.<br>
{{gap}}ನಾನೆಂದೂ ಸರಸಿಯ ಗೊಂಬೆಯ ಕತೆಯನ್ನು ಮಿಲಿಗೆ ಹೇಳಲೇ ಇಲ್ಲ.<br>
***<noinclude><references/></noinclude>
r6a841dq9yndq6hxlpp1ze8ns5iq2py
320880
320879
2026-05-19T17:08:36Z
Pragathi. BH
7585
320880
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೪೯೪|right= ನಡೆದದ್ದೇ ದಾರಿ}}
ಆದರೆ ಆಕೆ ಓದುತ್ತಿರಲಿಲ್ಲ. ನಾನು ಹೋಗಿ ಅವಳ ಹೆಗಲ ಮೇಲೆ ಮೃದುವಾಗಿ
ಕೈಯಿಟ್ಟಾಗ ತಟ್ಟನೆ ತಲೆಯೆತ್ತಿ ಏನೂ ಪೀಠಿಕೆಯಿಲ್ಲದೆ. ಬಹುಶಃ ಬಹಳ ಹೊತ್ತಿನಿಂದ
ಅವಳ ಮನಸ್ಸಿನಲ್ಲಿ ತಾಕಲಾಡತೊಡಗಿದ್ದ ಆ ಪ್ರಶ್ನೆಯನ್ನು ಕೇಳಿದಳು.<br>
{{gap}}"ಅಮ್ಮಾ, ಸ್ಕೂಲಿನ್ಯಾಗ ಒಂಬತ್ತು ವರ್ಷ ಸೋನಿಯಾ ನನ್ನ<br>
ಕ್ಲಾಸ್ಮೇಟಾಗಿದ್ದಳು. ನಿನಗೆ ಗೊತ್ತಲ್ಲ ? ಕರಿಯರ್ ಸಲುವಾಗಿ ಎಷ್ಟು ಕನಸು
ಇದ್ದವು ಆಕಿಗೆ ! ನಾವಿಬ್ರೂ ಡಾಕ್ಟರ್ ಆಗೋಣ. ನಮ್ಮ ದೇಶದ ಬಡಜನರ ಸೇವಾ
ಮಾಡೋಣ ಅಂದುಕೋತಿದ್ವಿ ನಾವು. ಆಂಥಾ ಹುಡುಗಿನ್ನ ಈ ಥರಾ ಟ್ರಾನ್ಸ್ ಫಾರ್ಮ್
ಮಾಡಿ ಆಕಿಯ ವ್ಯಕ್ತಿತ್ವವನ್ನೇ ಕೊಲೆ ಮಾಡ್ಯಾರಲ್ಲಮ್ಮಾ, ಈ ಅನ್ಯಾಯಕ್ಕ ಯಾರು
ಜವಾಬ್ದಾರರು ?"<br>
{{gap}}ನಾನು ಸುಮ್ಮನ್ನಿದ್ದೆ.<br>
{{gap}}“ಹೊತ್ತು ಭಾಳ ಆಗೇದ ಮಿಲಿ, ಮಲಕೋ" ಅಂತ ಹೇಳಿ ಹೊರಟು ಬಂದೆ.<br>
{{gap}}ನಾನೆಂದೂ ಸರಸಿಯ ಗೊಂಬೆಯ ಕತೆಯನ್ನು ಮಿಲಿಗೆ ಹೇಳಲೇ ಇಲ್ಲ.<br>
{{center|***}}<noinclude><references/></noinclude>
c33ziz17igedohq4ennwc1jbn22ihfz
ಪುಟ:ನಡೆದದ್ದೇ ದಾರಿ.pdf/೫೦೨
104
31697
320881
250769
2026-05-19T17:08:54Z
Pragathi. BH
7585
/* Validated */
320881
proofread-page
text/x-wiki
<noinclude><pagequality level="4" user="Pragathi. BH" /></noinclude>೪೯೫
ಸಮಾಧಾನ
೧
{{gap}}ಆ ತಾಲೂಕಿನಲ್ಲಿ ಕೆಲವರ್ಷಗಳ ಹಿಂದೆಯಷ್ಟೆ ಶುರುವಾಗಿದ್ದ ಸರಕಾರಿ<br>
ಹೈಸ್ಕೂಲಿಗೆ ವರ್ಗವಾಗಿ ಅವಳು ಬಂದಿದ್ದಳು. “ಹೊಸ ಊರು. ಬಸ್ ಪ್ರವಾಸ. ಎಲ್ಲ<br>
ಹೇಗೋ ಏನೋ. ಒಂದು ತಿಂಗಳು ರಜಾ ಹಾಕು. ಅಷ್ಟರಲ್ಲಿ ನನ್ನದೂ ಟ್ರಾನ್ಸ್ಫರ್<br>
ಆರ್ಡರ್ ಬರುತ್ತದೆ. ಇಬ್ಬರೂ ಕೂಡಿಯೇ ಹೋಗೋಣ..." ಅಂತ ಬಹಳ ಹೇಳಿದ್ದ<br>
ಅವಳ ಗಂಡ. ಅವಳು ಕೇಳಿರಲಿಲ್ಲ ; ಹೇಗೂ ಮಾವಶಿ ಅದೇ ಊರಲ್ಲಿದ್ದಾಳೆ. ಅವಳ<br>
ಮನೆಯೂ ದೊಡ್ಡದಿದೆ. ಅದರಲ್ಲೇ ಮೂರು ರೂಮ್ಸು ಕೊಡುವೆನೆಂದು ಹೇಳಿಯೇ<br>
ಬಿಟ್ಟಿದ್ದಾಳಲ್ಲ. ಸುಮ್ಮನೆ ರಜಾ ಹಾಳು ಮಾಡುವುದೇಕೆ ? ನಾನು ಹೋಗುತ್ತೇನೆ.<br>
ನೀವು ನಿಮ್ಮ ಆರ್ಡರು ತಗೊಂಡೇ ಬರ್ರಿ. ನನ್ನ ಸಲುವಾಗಿ ಕಾಳಜಿ ಬೇಡ -ಅಂತ<br>
ಹೇಳಿ ಎರಡು ಸೂಟ್ಕೇಸ್ ತಗೊಂಡು ಹೊರಟು ಬಂದೇಬಿಟ್ಟಿದ್ದಳು. "ಜೋಕೆಯಿಂದ<br>
ಹೋಗು ರಜನೀ, ಹೋದಕೂಡಲೇ ಟೆಲಿಗ್ರಾಮ್ ಕೊಡು. ದಿನಾ ಪತ್ರ ಬರೆ" -ಅಂತ<br>
ತಾಕೀತು ಮಾಡಿ ಕಳಿಸಿದ್ದ ಆತ.<br>
{{gap}}ಅಲ್ಲ, ತಾನೇನು ಸಣ್ಣ ಹುಡುಗಿಯೆ ? ಅಥವಾ ತಿಳಿವಳಿಕೆಯಿಲ್ಲದ,<br>
ಅಂಜುಬುರುಕ, ಕೈಲಾಗದ, ಅವಲಂಬೀ ಹೆಂಗಸೆ ? ಗಂಡನಿಲ್ಲದೆ ಪರಊರಲ್ಲಿ, ಅದೂ<br>
ಮಾವಶಿಯ ಮನೆಯಿರುವ, ಅಷ್ಟು ದೊಡ್ಡದೂ ಅಲ್ಲದ ಇಂಥ ಊರಲ್ಲಿ, ಒಂದು<br>
ತಿಂಗಳ ಮಟ್ಟಿಗೆ ಒಬ್ಬಳೇ ಇರುವುದು ತನಗೆ ಆಗುವುದಿಲ್ಲವೆ ? ಗಂಡ-ಹೆಂಡತಿ<br>
ಇಬ್ಬರೂ ನೌಕರಿಯಲ್ಲಿದ್ದಾಗ ಇಂಥ ಪ್ರಸಂಗಗಳು ಆಗಾಗ ಬರತಕ್ಕವೇ. ತನ್ನ ಗಂಡ<br>
ಬಹಳ ಸೆಂಟಿಮೆಂಟಲ್ ಅನಿಸಿತು ಅವಳಿಗೆ.<br>
{{gap}}ಹಾಗೆ ನೋಡಿದರೆ ಲಗ್ನವಾದ ನಂತರದ ಇಡೀ ಎರಡು ವರ್ಷ ಆತ<br>
ಅವಳನ್ನೆಂದೂ ಒಬ್ಬಳನ್ನೇ ಎಲ್ಲಿಯೂ ಕಳಿಸಿರಲಿಲ್ಲ. ಈ ಸ್ವಾತಂತ್ರ್ಯ, ಬಹಳ ದಿನಗಳ<br>
ನಂತರ ಹೀಗೆ ಯಾವ ಎಗ್ಗಿಲ್ಲದೆ ದಾರಿಯಲ್ಲಿ ಬೇಕಾದ ಕಡೆ ನೋಡುತ್ತ ನಡೆಯುವ<br>
ಸ್ವಾತಂತ್ರ್ಯ ಅವಳಿಗೆ ಪ್ರಿಯವೆನಿಸುತ್ತಿದೆ. ಹಳೆಯ ಸಾಹಸಗಳ ನೆನಪಾಗುತ್ತಿದೆ. ಈಗ<br>
ಮತ್ತೆ ಸಾಮರ್ಥ್ಯ ಪರೀಕ್ಷೆ ಮಾಡಿಕೊಳ್ಳಬಾರದೆಕೆ ಅನಿಸುತ್ತಿದೆ. ಒಂದು ಥರಾ ಸುಖೀ<br>
ಆತ್ಮವಿಶ್ವಾಸದ ಅನುಭವವಾಗುತ್ತಿದೆ.<br><noinclude><references/></noinclude>
ajny8fgpylez3qlcqxgr2qqw5unt1bl
320883
320881
2026-05-19T17:09:45Z
Pragathi. BH
7585
320883
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|೪೯೫}}
{{center|ಸಮಾಧಾನ}}
{{center|೧}}
{{gap}}ಆ ತಾಲೂಕಿನಲ್ಲಿ ಕೆಲವರ್ಷಗಳ ಹಿಂದೆಯಷ್ಟೆ ಶುರುವಾಗಿದ್ದ ಸರಕಾರಿ<br>
ಹೈಸ್ಕೂಲಿಗೆ ವರ್ಗವಾಗಿ ಅವಳು ಬಂದಿದ್ದಳು. “ಹೊಸ ಊರು. ಬಸ್ ಪ್ರವಾಸ. ಎಲ್ಲ<br>
ಹೇಗೋ ಏನೋ. ಒಂದು ತಿಂಗಳು ರಜಾ ಹಾಕು. ಅಷ್ಟರಲ್ಲಿ ನನ್ನದೂ ಟ್ರಾನ್ಸ್ಫರ್<br>
ಆರ್ಡರ್ ಬರುತ್ತದೆ. ಇಬ್ಬರೂ ಕೂಡಿಯೇ ಹೋಗೋಣ..." ಅಂತ ಬಹಳ ಹೇಳಿದ್ದ<br>
ಅವಳ ಗಂಡ. ಅವಳು ಕೇಳಿರಲಿಲ್ಲ ; ಹೇಗೂ ಮಾವಶಿ ಅದೇ ಊರಲ್ಲಿದ್ದಾಳೆ. ಅವಳ<br>
ಮನೆಯೂ ದೊಡ್ಡದಿದೆ. ಅದರಲ್ಲೇ ಮೂರು ರೂಮ್ಸು ಕೊಡುವೆನೆಂದು ಹೇಳಿಯೇ<br>
ಬಿಟ್ಟಿದ್ದಾಳಲ್ಲ. ಸುಮ್ಮನೆ ರಜಾ ಹಾಳು ಮಾಡುವುದೇಕೆ ? ನಾನು ಹೋಗುತ್ತೇನೆ.<br>
ನೀವು ನಿಮ್ಮ ಆರ್ಡರು ತಗೊಂಡೇ ಬರ್ರಿ. ನನ್ನ ಸಲುವಾಗಿ ಕಾಳಜಿ ಬೇಡ -ಅಂತ<br>
ಹೇಳಿ ಎರಡು ಸೂಟ್ಕೇಸ್ ತಗೊಂಡು ಹೊರಟು ಬಂದೇಬಿಟ್ಟಿದ್ದಳು. "ಜೋಕೆಯಿಂದ<br>
ಹೋಗು ರಜನೀ, ಹೋದಕೂಡಲೇ ಟೆಲಿಗ್ರಾಮ್ ಕೊಡು. ದಿನಾ ಪತ್ರ ಬರೆ" -ಅಂತ<br>
ತಾಕೀತು ಮಾಡಿ ಕಳಿಸಿದ್ದ ಆತ.<br>
{{gap}}ಅಲ್ಲ, ತಾನೇನು ಸಣ್ಣ ಹುಡುಗಿಯೆ ? ಅಥವಾ ತಿಳಿವಳಿಕೆಯಿಲ್ಲದ,<br>
ಅಂಜುಬುರುಕ, ಕೈಲಾಗದ, ಅವಲಂಬೀ ಹೆಂಗಸೆ ? ಗಂಡನಿಲ್ಲದೆ ಪರಊರಲ್ಲಿ, ಅದೂ<br>
ಮಾವಶಿಯ ಮನೆಯಿರುವ, ಅಷ್ಟು ದೊಡ್ಡದೂ ಅಲ್ಲದ ಇಂಥ ಊರಲ್ಲಿ, ಒಂದು<br>
ತಿಂಗಳ ಮಟ್ಟಿಗೆ ಒಬ್ಬಳೇ ಇರುವುದು ತನಗೆ ಆಗುವುದಿಲ್ಲವೆ ? ಗಂಡ-ಹೆಂಡತಿ<br>
ಇಬ್ಬರೂ ನೌಕರಿಯಲ್ಲಿದ್ದಾಗ ಇಂಥ ಪ್ರಸಂಗಗಳು ಆಗಾಗ ಬರತಕ್ಕವೇ. ತನ್ನ ಗಂಡ<br>
ಬಹಳ ಸೆಂಟಿಮೆಂಟಲ್ ಅನಿಸಿತು ಅವಳಿಗೆ.<br>
{{gap}}ಹಾಗೆ ನೋಡಿದರೆ ಲಗ್ನವಾದ ನಂತರದ ಇಡೀ ಎರಡು ವರ್ಷ ಆತ<br>
ಅವಳನ್ನೆಂದೂ ಒಬ್ಬಳನ್ನೇ ಎಲ್ಲಿಯೂ ಕಳಿಸಿರಲಿಲ್ಲ. ಈ ಸ್ವಾತಂತ್ರ್ಯ, ಬಹಳ ದಿನಗಳ<br>
ನಂತರ ಹೀಗೆ ಯಾವ ಎಗ್ಗಿಲ್ಲದೆ ದಾರಿಯಲ್ಲಿ ಬೇಕಾದ ಕಡೆ ನೋಡುತ್ತ ನಡೆಯುವ<br>
ಸ್ವಾತಂತ್ರ್ಯ ಅವಳಿಗೆ ಪ್ರಿಯವೆನಿಸುತ್ತಿದೆ. ಹಳೆಯ ಸಾಹಸಗಳ ನೆನಪಾಗುತ್ತಿದೆ. ಈಗ<br>
ಮತ್ತೆ ಸಾಮರ್ಥ್ಯ ಪರೀಕ್ಷೆ ಮಾಡಿಕೊಳ್ಳಬಾರದೆಕೆ ಅನಿಸುತ್ತಿದೆ. ಒಂದು ಥರಾ ಸುಖೀ<br>
ಆತ್ಮವಿಶ್ವಾಸದ ಅನುಭವವಾಗುತ್ತಿದೆ.<br><noinclude><references/></noinclude>
bl8o3zw8fv91raw8rpyucp7qod9hsqv
320884
320883
2026-05-19T17:14:05Z
Pragathi. BH
7585
320884
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|೪೯೫}}
{{center|ಸಮಾಧಾನ}}
{{center|೧}}
{{gap}}ಆ ತಾಲೂಕಿನಲ್ಲಿ ಕೆಲವರ್ಷಗಳ ಹಿಂದೆಯಷ್ಟೆ ಶುರುವಾಗಿದ್ದ ಸರಕಾರಿ
ಹೈಸ್ಕೂಲಿಗೆ ವರ್ಗವಾಗಿ ಅವಳು ಬಂದಿದ್ದಳು. “ಹೊಸ ಊರು. ಬಸ್ ಪ್ರವಾಸ. ಎಲ್ಲ
ಹೇಗೋ ಏನೋ. ಒಂದು ತಿಂಗಳು ರಜಾ ಹಾಕು. ಅಷ್ಟರಲ್ಲಿ ನನ್ನದೂ ಟ್ರಾನ್ಸ್ಫರ್
ಆರ್ಡರ್ ಬರುತ್ತದೆ. ಇಬ್ಬರೂ ಕೂಡಿಯೇ ಹೋಗೋಣ..." ಅಂತ ಬಹಳ ಹೇಳಿದ್ದ
ಅವಳ ಗಂಡ. ಅವಳು ಕೇಳಿರಲಿಲ್ಲ ; ಹೇಗೂ ಮಾವಶಿ ಅದೇ ಊರಲ್ಲಿದ್ದಾಳೆ. ಅವಳ
ಮನೆಯೂ ದೊಡ್ಡದಿದೆ. ಅದರಲ್ಲೇ ಮೂರು ರೂಮ್ಸು ಕೊಡುವೆನೆಂದು ಹೇಳಿಯೇ
ಬಿಟ್ಟಿದ್ದಾಳಲ್ಲ. ಸುಮ್ಮನೆ ರಜಾ ಹಾಳು ಮಾಡುವುದೇಕೆ ? ನಾನು ಹೋಗುತ್ತೇನೆ.
ನೀವು ನಿಮ್ಮ ಆರ್ಡರು ತಗೊಂಡೇ ಬರ್ರಿ. ನನ್ನ ಸಲುವಾಗಿ ಕಾಳಜಿ ಬೇಡ -ಅಂತ
ಹೇಳಿ ಎರಡು ಸೂಟ್ಕೇಸ್ ತಗೊಂಡು ಹೊರಟು ಬಂದೇಬಿಟ್ಟಿದ್ದಳು. "ಜೋಕೆಯಿಂದ
ಹೋಗು ರಜನೀ, ಹೋದಕೂಡಲೇ ಟೆಲಿಗ್ರಾಮ್ ಕೊಡು. ದಿನಾ ಪತ್ರ ಬರೆ" -ಅಂತ
ತಾಕೀತು ಮಾಡಿ ಕಳಿಸಿದ್ದ ಆತ.<br>
{{gap}}ಅಲ್ಲ, ತಾನೇನು ಸಣ್ಣ ಹುಡುಗಿಯೆ ? ಅಥವಾ ತಿಳಿವಳಿಕೆಯಿಲ್ಲದ,
ಅಂಜುಬುರುಕ, ಕೈಲಾಗದ, ಅವಲಂಬೀ ಹೆಂಗಸೆ ? ಗಂಡನಿಲ್ಲದೆ ಪರಊರಲ್ಲಿ, ಅದೂ
ಮಾವಶಿಯ ಮನೆಯಿರುವ, ಅಷ್ಟು ದೊಡ್ಡದೂ ಅಲ್ಲದ ಇಂಥ ಊರಲ್ಲಿ, ಒಂದು
ತಿಂಗಳ ಮಟ್ಟಿಗೆ ಒಬ್ಬಳೇ ಇರುವುದು ತನಗೆ ಆಗುವುದಿಲ್ಲವೆ ? ಗಂಡ-ಹೆಂಡತಿ
ಇಬ್ಬರೂ ನೌಕರಿಯಲ್ಲಿದ್ದಾಗ ಇಂಥ ಪ್ರಸಂಗಗಳು ಆಗಾಗ ಬರತಕ್ಕವೇ. ತನ್ನ ಗಂಡ
ಬಹಳ ಸೆಂಟಿಮೆಂಟಲ್ ಅನಿಸಿತು ಅವಳಿಗೆ.<br>
{{gap}}ಹಾಗೆ ನೋಡಿದರೆ ಲಗ್ನವಾದ ನಂತರದ ಇಡೀ ಎರಡು ವರ್ಷ ಆತ
ಅವಳನ್ನೆಂದೂ ಒಬ್ಬಳನ್ನೇ ಎಲ್ಲಿಯೂ ಕಳಿಸಿರಲಿಲ್ಲ. ಈ ಸ್ವಾತಂತ್ರ್ಯ, ಬಹಳ ದಿನಗಳ
ನಂತರ ಹೀಗೆ ಯಾವ ಎಗ್ಗಿಲ್ಲದೆ ದಾರಿಯಲ್ಲಿ ಬೇಕಾದ ಕಡೆ ನೋಡುತ್ತ ನಡೆಯುವ
ಸ್ವಾತಂತ್ರ್ಯ ಅವಳಿಗೆ ಪ್ರಿಯವೆನಿಸುತ್ತಿದೆ. ಹಳೆಯ ಸಾಹಸಗಳ ನೆನಪಾಗುತ್ತಿದೆ. ಈಗ
ಮತ್ತೆ ಸಾಮರ್ಥ್ಯ ಪರೀಕ್ಷೆ ಮಾಡಿಕೊಳ್ಳಬಾರದೆಕೆ ಅನಿಸುತ್ತಿದೆ. ಒಂದು ಥರಾ ಸುಖೀ
ಆತ್ಮವಿಶ್ವಾಸದ ಅನುಭವವಾಗುತ್ತಿದೆ.<br><noinclude><references/></noinclude>
9t7c5480jdq4acmd9be3p5vsufhv8wv
ಪುಟ:ನಡೆದದ್ದೇ ದಾರಿ.pdf/೫೦೦
104
31701
320878
250751
2026-05-19T17:07:30Z
Pragathi. BH
7585
/* Validated */
320878
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=ಇನ್ನಷ್ಟು ಕತೆಗಳು / ಸೋನಿಯಾ|right=೪೯೩}}
ತಿಳಿದಿದ್ದರಿಂದ ಪೇಢೆ ತಗೊಂಡು ಗೆಳತಿಯನ್ನು ಕಾಣಲು ಹೊರಟಳು. ನಾನೂ ಜೊತೆಗೆ<br>
ಹೋದೆ.<br>
{{gap}}ಸೋನಿಯಾ ತನ್ನ ಮೂರು ತಿಂಗಳ ಮಗುವನ್ನೆತ್ತಿಕೊಂಡು ನಗುತ್ತ
ಕೂತಿದ್ದಳು. ಬಂಗಾರದೊಡವೆ ತೊಟ್ಟು ರೇಶಿಮೆ ಸೀರೆ ಉಟ್ಟು ಮಗುವಿಗೂ
ಅಲಂಕಾರ ಮಾಡಿ ರಂಗು ರಂಗಿನ ಚಿತ್ತಾರದ ದುಪ್ಪಟಿಯಲ್ಲಿ ಮಗುವನ್ನು ಸುತ್ತಿ
ಮಡಿಲಲ್ಲಿರಿಸಿಕೊಂಡು ಕೂತಿದ್ದಳು ಒಂದು ಸುಂದರ ಕಲಾಕೃತಿಯ ಹಾಗೆ.
ಸೋನಿಯಾಳ ಮದುವೆ ಒಂದು ಟ್ರ್ಯಾಜಿಡಿ ಅಂದುಕೊಂಡು ಕಳೆದ ವರ್ಷವಿಡೀ
ಅವಳಿಗಾಗಿ ಪರಿತಾಪ ಪಟ್ಟಿದ್ದು ನಮ್ಮದೇ ತಪ್ಪೇನೋ ಅನಿಸುವ ಹಾಗೆ. ಆಕೆಯ
ತುಟಿಯಂಚಿನ ಮಂದಸ್ಮಿತ, ಕಣ್ಣಲ್ಲಿನ ಮಿಂಚು, ಮುಖದ ಮೇಲಿನ ದೈವೀಕಳೆ,
ತಾಯ್ತನದ ಸೊಗಸು -ಎಲ್ಲ ಎಷ್ಟು ಚೆಂದ....<br>
{{gap}}“ಹೇಗಿದ್ದೀ ಸೋನಿಯಾ ?"" ಅಂತ ಕೇಳುವುದೇ ತಡ, ಪಟಪಟ ಅರಳು
ಹುರಿದಂತೆ ಮಾತಾಡಿದಳು. ಮೂರೇ ತಿಂಗಳಾಗಿದ್ದರೂ ಎಷ್ಟು ತುಂಟವಾಗಿದೆ ಮಗು.
ತಾಯಿಯನ್ನು ನೋಡಿದರೆ ನಗುತ್ತದೆ, ಅಜ್ಜಿಯನ್ನು ನೋಡಿದರೆ ಅಳುತ್ತದೆ, ಹಾಲು
ಬೇಕಾದಾಗ ಕೈಯೆತ್ತಿ, ಚೀರುತ್ತದೆ. ನಿದ್ರೆ ಬಂದಾಗ ಹಾಡಿದರೇನೇ ಮಲಗುತ್ತದೆ.
ರಾತ್ರಿಯಿಡೀ ಹಾಸಿಗೆ ಒದ್ದೆ ಮಾಡುವುದಿಲ್ಲ. ಎಲ್ಲ ಟೈಮಿಗೆ ಸರಿಯಾಗಿ ಆಗಬೇಕು.
ಪಾಪ್ ಮ್ಯೂಜಿಕ್ ಹಾಕಿದರೆ ಅದಕ್ಕೆ ಬಹಳ ಖುಷಿ, ಆಹಾ, ಇಂತಹ ಅಪರೂಪದ
ಮಗು ಬೇರೆಲ್ಲೂ ಇರಲಾರದು... ಇರಲು ಹೇಗೆ ಸಾಧ್ಯ?<br>
{{gap}}“ನಾ ಈಗ ಭಾಳ ಹ್ಯಾಪಿ ಇದ್ದೀನಿ ಆಂಟಿ, ದಿನಾ ಹ್ಯಾಂಗ ಕಳೀತದಂತ ಗೊತ್ತ
ಆಗೋದಿಲ್ಲ ಈ ಪಾಪೂನ ತುಂಟಾಟದಾಗ....<br>
{{gap}}“ನೀನು ಹೀಗೆಯೇ ಸುಖವಾಗಿರು, ನಗುನಗುತ್ತ ಇರು, ನಿನಗೆ ಒಳ್ಳೆಯದಾಗಲಿ"
ಅಂತ ಹರಸಿ ಬಂದೆ.<br>
***<br>
{{gap}}ಆ ರಾತ್ರಿ ತಿರುತಿರುಗಿ ನನಗೆ ಮಾಸ್ತಿಯವರ "ಸರಸಿಯ ಗೊಂಬೆ"
ನೆನಪಾಗತೊಡಗಿತು. “ಒಬ್ಬ ಪುಟ್ಟ ಹುಡುಗನೆಂದರೆ ಪುಟ್ಟ ಹುಡುಗನೇ. ಒಬ್ಬ ಪುಟ್ಟ
ಹುಡುಗಿ ಮಾತ್ರ ಒಬ್ಬ ಪುಟ್ಟ ತಾಯಿಯಾಗಿರುತ್ತಾಳೆ'. ಎಂತಹ ಜೀವನ ದರ್ಶನ !<br>
{{gap}}ನನಗೆ ನಿದ್ರೆ ಬರಲಿಲ್ಲ. ಇವರಾಗಲೇ ಗೊರಕೆ ಹೊಡೆಯತೊಡಗಿದ್ದರು.
ನಾನು ಚಿಕ್ಕಂದಿನಲ್ಲಿ ಬಹುವಾಗಿ ಮೆಚ್ಚಿಕೊಂಡಿದ್ದ ಸರಸಿಯ ಗೊಂಬೆಯ ಕತೆಯನ್ನು
ಮಿಲಿಗೆ ಹೇಳೋಣವೆಂದುಕೊಂಡು ಅವಳ ಕೋಣೆಗೆ ಹೋದೆ.<br>
{{gap}}ಟೇಬಲ್ ಲ್ಯಾಂಪ್ ಉರಿಯುತ್ತಿತ್ತು. ಮಿಲಿಯ ಎದುರಿಗೆ ಪುಸ್ತಕವಿತ್ತು.<br><noinclude><references/></noinclude>
nj0kw93hbo4ohhiaqxo92thtsi8ybw5
ಪುಟ:ನಡೆದದ್ದೇ ದಾರಿ.pdf/೫೦೩
104
31702
320885
250771
2026-05-19T17:14:19Z
Pragathi. BH
7585
/* Validated */
320885
proofread-page
text/x-wiki
<noinclude><pagequality level="4" user="Pragathi. BH" /></noinclude>೪೯೬ ನಡೆದದ್ದೇ ದಾರಿ
{{gap}}ಹೈಸ್ಕೂಲು ಹೊಸದು. ಜನ ಹೊಸಬರು. ಖರೆ. ಆದರೆ ತನಗೇನೂ ಅದರಿಂದ<br>
ತೊಂದರೆಯಾಗಲಾರದು. ತಾನು ಹೋದ ತಕ್ಬಣ ಎಲ್ಲರೂ ಎಲ್ಲ ರೀತಿಯಿಂದ ತನಗೆ<br>
ಎಲ್ಲ ನೆರವು ನೀಡಲು ಮುಂದೆ ಬರುವುದು ನಿಶ್ಚಯ. ಹೊಸ ಪ್ರಿನ್ಸಿಪಾಲರು<br>
"ನಿಮಗೇನಾದರೂ ಬೇಕಿದ್ದರೆ ನನಗೆ ಹೇಳ್ರಿ ಮಿಸೆಸ್ ನಾಯಕ್, ಯಾತಕ್ಕೂ<br>
ಸಂಕೋಚಪಡಬೇಕಾಗಿಲ್ಲ'. ಅನ್ನುವುದರಲ್ಲಿ ಸಂಶಯವಿಲ್ಲ. ಸಹೋದ್ಯೋಗಿ ಶಿಕ್ಬಕರು<br>
“ನಿಮಗೆ ಬೇಕಾದ ಪೀರಿಯಡ್ಸ್ ತಗೊಳ್ರಿ ಮಿಸೆಸ್ ನಾಯಕ್, ನಿಮ್ಮ ಅನುಕೂಲ<br>
ಮುಖ್ಯ' -ಅಂತ ತನ್ನನ್ನು ಪ್ರಸನ್ನಗೊಳಿಸಲು ಒದ್ದಾಡುವುದೂ ನಿರೀಕ್ಷಿತವೇ.<br>
ಹುಡುಗರು-ಹುಡುಗಿಯರಂತೂ ಒಂದೆರಡು ವಾರಗಳ ನಂತರ "ನಮಗೆ ನಾಯಕ<br>
ಮ್ಯಾಡಮ್ ಅವರೇ ಬೇಕು" ಅಂತ ಸ್ಟ್ರೆಕ್ ಮಾಡಿದರೂ ಮಾಡಿದರೇ. ಶಿಕ್ಬಕಿಯರ<br>
ಅಸೂಯೆಯನ್ನು ಮಾತ್ರ ತಾನು ಎದುರಿಸಬೇಕಾಗಬಹುದು. ಆದರೆ ಅದೇನೂ ತನಗೆ<br>
ಸಮಸ್ಯೆಯಾಗಲಾರದು.<br>
***
{{gap}}ಜೊತೆಯ ಹೆಂಗಸರ ಆಸೂಯೆ ತಾನು ಮೊದಲಿನಿಂದಲೂ ಕಂಡು ಅನುಭವಿಸಿ<br>
ಆನಂದಿಸಿದ್ದು. ಚಿಕ್ಕವಳಿದ್ದಾಗ ಸ್ಕೂಲಿನಲ್ಲಿ ಜೊತೆಯ ಹುಡುಗಿಯರು ತನ್ನ<br>
ರೂಪಕ್ಕಾಗಿ, ತನ್ನ ಮೊದಲ ರ್ಯಾಂಕಿಗಾಗಿ, ಬ್ಯಾಡ್ಮಿಂಟನ್ ಚ್ಯಾಂಪಿಯನ್ಶಿಪ್ಗಾಗಿ,<br>
ಗಂಡುಹುಡುಗರೊಂದಿಗಿನ ಸ್ನೇಹಕ್ಕಾಗಿ ಅಸೂಯೆ ಪಟ್ಟರು. ಕಾಲೇಜಿನಲ್ಲೂ ಅದೇ<br>
ಹಾಡಿನ ಪುನರಾವರ್ತನೆ. ಮಜವಾಗಿದ್ದವು ಆ ದಿನಗಳು. ನಂತರ ಟ್ರೇನಿಂಗ್<br>
ಕಾಲೇಜಿನಲ್ಲೂ ಅಷ್ಟೆ. ಗವ್ಹರ್ನ್ಮೆಂಟ್ ಹೈಸ್ಕೂಲಿನಲ್ಲಿ ನೌಕರಿಗೆ ಸೇರಿದಾಗಲೂ<br>
ಅಷ್ಟೆ. ತಾನು ಹೋದ ಕಡೆಯಲ್ಲೆಲ್ಲ ಜನರ ಕಣ್ಣು ಹೊರಳುವುದು, ತನ್ನ ಎರಡು<br>
ಮಾತಿನಿಂದ ಜನರ ಕಣ್ಣು ಅರಳುವುದು, ಅಭ್ಯಾಸವಾಗಿಹೋಗಿಬಿಟ್ಟಿದೆ. ಲಗ್ನವಾದ<br>
ನಂತರವೂ ಈ ಥರದ ಮುಕ್ತ ಪ್ರಶಂಸೆಗೆ ತಾನು ಎರವಾಗಿಲ್ಲ. ಸರಕಾರಿ ಕಾಲೇಜಿನಲ್ಲಿ<br>
ಕೆಮ್ಮಸ್ಟ್ರಿ ರೀಡರ್ ಆಗಿರುವ ಗಂಡನಿಗೆ ತನ್ನ ಬಗ್ಗೆ ಬಹಳ ಅಭಿಮಾನ. ಆತನೂ ತನ್ನ<br>
ಪ್ರಶಂಸಕನೇ. ಒಮ್ಮೊಮ್ಮೆ ಆತನ ಪ್ರಶಂಸೆ ಬೋರ್ ಆಗುತ್ತದಷ್ಟೆ.<br>
{{gap}}ಈಗ- ಹೀಗೆ ಯಾರೂ ಕಾಣದ ಹೊಸ ಊರಿಗೆ- ಹೊಸ ಜಾಗಕ್ಕೆ ಬಂದು<br>
ಸೇರಿರುವುದು ಅದಕ್ಕೇ ಮಜವೆನಿಸುತ್ತಿದೆ. “ಇವತ್ತಿನ್ನೂ ಬಂದಿರುವಿ ರಜನೀ, ರೆಸ್ಟ್<br>
ತಗೋ. ನಾಳೆ ಹೋಗಿ ಕೆಲಸಕ್ಕೆ ಹಾಜರಾಗುವಿಯಂತೆ' -ಅಂತ ಮಾವಶಿ ಎಷ್ಟು<br>
ಹೇಳಿದರೂ ಕೇಳದೆ ಹುರುಪಿನಿಂದ ಹೊರಟಿದ್ದಾಳೆ.<br>
***
{{gap}}“ಪ್ರಿನ್ಸಿಪಾಲರ ಹತ್ತಿರ ವರ್ಮಾಬಾಯಿಯವು ಮಾತಾಡತಾ ಇದ್ದಾರೆ. ಸ್ವಲ್ಪ<noinclude><references/></noinclude>
6qxjt9g3rsxzj01af2av73qn06hlkns
320886
320885
2026-05-19T17:16:18Z
Pragathi. BH
7585
320886
proofread-page
text/x-wiki
<noinclude><pagequality level="4" user="Pragathi. BH" /></noinclude>೪೯೬ ನಡೆದದ್ದೇ ದಾರಿ
{{gap}}ಹೈಸ್ಕೂಲು ಹೊಸದು. ಜನ ಹೊಸಬರು. ಖರೆ. ಆದರೆ ತನಗೇನೂ ಅದರಿಂದ
ತೊಂದರೆಯಾಗಲಾರದು. ತಾನು ಹೋದ ತಕ್ಬಣ ಎಲ್ಲರೂ ಎಲ್ಲ ರೀತಿಯಿಂದ ತನಗೆ
ಎಲ್ಲ ನೆರವು ನೀಡಲು ಮುಂದೆ ಬರುವುದು ನಿಶ್ಚಯ. ಹೊಸ ಪ್ರಿನ್ಸಿಪಾಲರು
"ನಿಮಗೇನಾದರೂ ಬೇಕಿದ್ದರೆ ನನಗೆ ಹೇಳ್ರಿ ಮಿಸೆಸ್ ನಾಯಕ್, ಯಾತಕ್ಕೂ
ಸಂಕೋಚಪಡಬೇಕಾಗಿಲ್ಲ'. ಅನ್ನುವುದರಲ್ಲಿ ಸಂಶಯವಿಲ್ಲ. ಸಹೋದ್ಯೋಗಿ ಶಿಕ್ಬಕರು
“ನಿಮಗೆ ಬೇಕಾದ ಪೀರಿಯಡ್ಸ್ ತಗೊಳ್ರಿ ಮಿಸೆಸ್ ನಾಯಕ್, ನಿಮ್ಮ ಅನುಕೂಲ
ಮುಖ್ಯ' -ಅಂತ ತನ್ನನ್ನು ಪ್ರಸನ್ನಗೊಳಿಸಲು ಒದ್ದಾಡುವುದೂ ನಿರೀಕ್ಷಿತವೇ.
ಹುಡುಗರು-ಹುಡುಗಿಯರಂತೂ ಒಂದೆರಡು ವಾರಗಳ ನಂತರ "ನಮಗೆ ನಾಯಕ
ಮ್ಯಾಡಮ್ ಅವರೇ ಬೇಕು" ಅಂತ ಸ್ಟ್ರೆಕ್ ಮಾಡಿದರೂ ಮಾಡಿದರೇ. ಶಿಕ್ಬಕಿಯರ
ಅಸೂಯೆಯನ್ನು ಮಾತ್ರ ತಾನು ಎದುರಿಸಬೇಕಾಗಬಹುದು. ಆದರೆ ಅದೇನೂ ತನಗೆ
ಸಮಸ್ಯೆಯಾಗಲಾರದು.<br>
{{center|***}}
{{gap}}ಜೊತೆಯ ಹೆಂಗಸರ ಆಸೂಯೆ ತಾನು ಮೊದಲಿನಿಂದಲೂ ಕಂಡು ಅನುಭವಿಸಿ
ಆನಂದಿಸಿದ್ದು. ಚಿಕ್ಕವಳಿದ್ದಾಗ ಸ್ಕೂಲಿನಲ್ಲಿ ಜೊತೆಯ ಹುಡುಗಿಯರು ತನ್ನ
ರೂಪಕ್ಕಾಗಿ, ತನ್ನ ಮೊದಲ ರ್ಯಾಂಕಿಗಾಗಿ, ಬ್ಯಾಡ್ಮಿಂಟನ್ ಚ್ಯಾಂಪಿಯನ್ಶಿಪ್ಗಾಗಿ,
ಗಂಡುಹುಡುಗರೊಂದಿಗಿನ ಸ್ನೇಹಕ್ಕಾಗಿ ಅಸೂಯೆ ಪಟ್ಟರು. ಕಾಲೇಜಿನಲ್ಲೂ ಅದೇ
ಹಾಡಿನ ಪುನರಾವರ್ತನೆ. ಮಜವಾಗಿದ್ದವು ಆ ದಿನಗಳು. ನಂತರ ಟ್ರೇನಿಂಗ್
ಕಾಲೇಜಿನಲ್ಲೂ ಅಷ್ಟೆ. ಗವ್ಹರ್ನ್ಮೆಂಟ್ ಹೈಸ್ಕೂಲಿನಲ್ಲಿ ನೌಕರಿಗೆ ಸೇರಿದಾಗಲೂ
ಅಷ್ಟೆ. ತಾನು ಹೋದ ಕಡೆಯಲ್ಲೆಲ್ಲ ಜನರ ಕಣ್ಣು ಹೊರಳುವುದು, ತನ್ನ ಎರಡು
ಮಾತಿನಿಂದ ಜನರ ಕಣ್ಣು ಅರಳುವುದು, ಅಭ್ಯಾಸವಾಗಿಹೋಗಿಬಿಟ್ಟಿದೆ. ಲಗ್ನವಾದ
ನಂತರವೂ ಈ ಥರದ ಮುಕ್ತ ಪ್ರಶಂಸೆಗೆ ತಾನು ಎರವಾಗಿಲ್ಲ. ಸರಕಾರಿ ಕಾಲೇಜಿನಲ್ಲಿ
ಕೆಮ್ಮಸ್ಟ್ರಿ ರೀಡರ್ ಆಗಿರುವ ಗಂಡನಿಗೆ ತನ್ನ ಬಗ್ಗೆ ಬಹಳ ಅಭಿಮಾನ. ಆತನೂ ತನ್ನ
ಪ್ರಶಂಸಕನೇ. ಒಮ್ಮೊಮ್ಮೆ ಆತನ ಪ್ರಶಂಸೆ ಬೋರ್ ಆಗುತ್ತದಷ್ಟೆ.<br>
{{gap}}ಈಗ- ಹೀಗೆ ಯಾರೂ ಕಾಣದ ಹೊಸ ಊರಿಗೆ- ಹೊಸ ಜಾಗಕ್ಕೆ ಬಂದು
ಸೇರಿರುವುದು ಅದಕ್ಕೇ ಮಜವೆನಿಸುತ್ತಿದೆ. “ಇವತ್ತಿನ್ನೂ ಬಂದಿರುವಿ ರಜನೀ, ರೆಸ್ಟ್
ತಗೋ. ನಾಳೆ ಹೋಗಿ ಕೆಲಸಕ್ಕೆ ಹಾಜರಾಗುವಿಯಂತೆ' -ಅಂತ ಮಾವಶಿ ಎಷ್ಟು
ಹೇಳಿದರೂ ಕೇಳದೆ ಹುರುಪಿನಿಂದ ಹೊರಟಿದ್ದಾಳೆ.<br>
{{center|***}}
{{gap}}“ಪ್ರಿನ್ಸಿಪಾಲರ ಹತ್ತಿರ ವರ್ಮಾಬಾಯಿಯವು ಮಾತಾಡತಾ ಇದ್ದಾರೆ. ಸ್ವಲ್ಪ<noinclude><references/></noinclude>
kitei6d2vtqaxswc98xxd8d8x4rk07u
ಪುಟ:Praantabhaashhe-Rashhtrabhaashhe.pdf/೨೫
104
37779
321184
308711
2026-05-20T06:54:52Z
Pragathi. BH
7585
/* Validated */
321184
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೨೦—}}
ಎಂದು ಸುಮ್ಮನೆ ಕೂಡುವವೆಂದರೆ ಪ್ರತಿ ಕ್ಷಣವೂ ನಾವು ನಮ್ಮ ಉನ್ನತಿಯನ್ನು
ಕುಗ್ಗಿಸಿದಂದೆಸೈ. ಈಗ ಜನರಲ್ಲಿ ಸಾಕಷ್ಟು ಜಾಗ್ರತಿಯಾಗುತ್ತ ನಡೆದಿದೆ.
ಆದುದರಿಂದ ಲೋಕಸೇವಕರು, ಕಾರ್ಯಕರ್ತರು ಬಹುಮುಖವಾಗಿ ಪ್ರಾಂತ
ದಲ್ಲಿ ಕರ್ನಾಟಕವು ಬಂಗಾಲ, ಮಹಾರಾಷ್ಟ್ರ, ಆಂಧ್ರ ಮುಂತಾದ ಪ್ರಾಂತ
ಗಳಿಗಿಂತ ಇನ್ನೂ ಹಿಂದೆ ಇರುವರು. ಆದುದರಿಂದ ಕರ್ನಾಟಕಸ್ತರು ಹೆಚ್ಛು
ಪ್ರಯತ್ನಶೀತರಾಗುವದು ಅವಶ್ಯವು.
{{center|'''ಭಾಷಾಜಾಗ್ರತಿ'''}}
ಜನಾಂಗಗಳ ಇತಿಹಾಸವನ್ನು ನಾವು ಪರಿಶೀಲಿಸಿದರೆ ಸಾಮಾನ್ಯತಃ
ರಾಷ್ಟೀಯ ಜಾಗ್ರತಿಯೊಡನೆಯೆ ಭಾಷಾಜಾಗ್ರತಿಯಾಗುತಿರುವುದು ಕಂಡು
ಬರುವದು. ರಾಷ್ಟೀಯ ಜಾಗ್ರತಿಯೆಂಬುದು ಯಾವಾಗಲು ಬಹುಮುಖ
ವಿರುವದು. ಅದು ಕೇವಲ ರಾಜಕೀಯ, ಕೇವಲ ಸಾಮಾಜಿಕ, ಅಥವಾ
ಕೇವಲ ಧಾರ್ಮಿಕ ಇಲ್ಲವೆ ಆರ್ಥಿಕವಿರುವದಿಲ್ಲ. ಆ ನವಚೈತನ್ಯದ ಉಗಮ
ದೊಡನೆ ಹೊಸ ಹೊಸ ವಿಚಾರಗಳು, ನವಭಾವನೆಗಳು ಆಯಾ ದೇಶದ
ಜನರ ಮನಸ್ಸಿನಲ್ಲಿ ಮೂಡುವವು. ಆಗಲೇ ಭಾಷಾ ಜಾಗ್ರತಿಯಾಗಿ ಭಾಷೆಯೆ
ವಿಕಾಸ ಮಾಡಬೇಕೆಂಬ ಅವಶ್ಯಕತೆಯ ಪ್ರತೀತಿ ಅಲ್ಲಿಯ ಮುಖಂಡರಿಗೆ
ಆಗುವದು. ವರುಷಾನುವರುಷ ದಾಸ್ಯದಲ್ಲಿ ಮುಳುಗಿದ್ದರೂ ಮುಂದೆ
ಹೋರಾಡಿ ಸ್ವತಂತ್ರವಾದ ಇಟಲಿ, ಆಯರ್ಲೆಂಡ್ ಮುಂತಾದ ರಾಷ್ಟ್ರಗಳಲ್ಲಿ
ಭಾಷಾಜಾಗ್ರತಿಯ ಪ್ರಚಂಡ ತೆರೆಗಳು ಆ ದೇಶಗಳನ್ನು ಅಲುಗಾಡಿಸಿ ಬಿಟ್ಟವು.
ನಮ್ಮಲಿ ಕೂಡ ಬಂಗಾಲ ಮಹಾರಾಷ್ಟ್ರ ಪ್ರಾಂತಗಳಲ್ಲಿ ಮೊದಲು ರಾಷ್ಟ್ರೀಯ
ಜಾಗ್ರತಿಯ ಕಾಲಕ್ಕೆಯೆ ಭಾಷಾ ಜಾಗ್ರತಿ ಹೆಚ್ಚಾಯಿತು. ಅದೇ ಜಾಗ್ರತಿ
೧೯೦೫ರ ಸುಮಾರಕ್ಕೆ ಇಡೀ ಹಿಂದುಸ್ತಾನದ ಪ್ರಾಂತಪ್ರಾಂತಗಳಲ್ಲಿ ಹರ
ಡಿತು. ಬಂಗಾಲದ ವಂಗಭಂಗ ಚಳವಳಿಯ ಚೈತನ್ಯವು ಇಡೀ ದೇಶವನ್ನು ಆವರಿಸಿತು.
ಭಾಷಾಜಾಗ್ರತಿಯ ಮುಖ್ಯ ಕಾರಣಗಳು ಎರದು. ಅನ್ಯ ಭಾಷೆಗಳ
ಆಕ್ರಮಣ ಅಥವಾ ಅವಾಸ್ತವ ವರ್ಚಸ್ಸು ಮತ್ತು ಸ್ತೋಮ ಒಂದು<noinclude><references/></noinclude>
mmo91sh9vebyucsfkhn13rryd9qv1d2
321185
321184
2026-05-20T06:55:15Z
Pragathi. BH
7585
321185
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೨೦—}}
ಎಂದು ಸುಮ್ಮನೆ ಕೂಡುವವೆಂದರೆ ಪ್ರತಿ ಕ್ಷಣವೂ ನಾವು ನಮ್ಮ ಉನ್ನತಿಯನ್ನು
ಕುಗ್ಗಿಸಿದಂದೆಸೈ. ಈಗ ಜನರಲ್ಲಿ ಸಾಕಷ್ಟು ಜಾಗ್ರತಿಯಾಗುತ್ತ ನಡೆದಿದೆ.
ಆದುದರಿಂದ ಲೋಕಸೇವಕರು, ಕಾರ್ಯಕರ್ತರು ಬಹುಮುಖವಾಗಿ ಪ್ರಾಂತ
ದಲ್ಲಿ ಕರ್ನಾಟಕವು ಬಂಗಾಲ, ಮಹಾರಾಷ್ಟ್ರ, ಆಂಧ್ರ ಮುಂತಾದ ಪ್ರಾಂತ
ಗಳಿಗಿಂತ ಇನ್ನೂ ಹಿಂದೆ ಇರುವರು. ಆದುದರಿಂದ ಕರ್ನಾಟಕಸ್ತರು ಹೆಚ್ಛು
ಪ್ರಯತ್ನಶೀತರಾಗುವದು ಅವಶ್ಯವು.
{{center|'''ಭಾಷಾಜಾಗ್ರತಿ'''}}
{{gap}}ಜನಾಂಗಗಳ ಇತಿಹಾಸವನ್ನು ನಾವು ಪರಿಶೀಲಿಸಿದರೆ ಸಾಮಾನ್ಯತಃ
ರಾಷ್ಟೀಯ ಜಾಗ್ರತಿಯೊಡನೆಯೆ ಭಾಷಾಜಾಗ್ರತಿಯಾಗುತಿರುವುದು ಕಂಡು
ಬರುವದು. ರಾಷ್ಟೀಯ ಜಾಗ್ರತಿಯೆಂಬುದು ಯಾವಾಗಲು ಬಹುಮುಖ
ವಿರುವದು. ಅದು ಕೇವಲ ರಾಜಕೀಯ, ಕೇವಲ ಸಾಮಾಜಿಕ, ಅಥವಾ
ಕೇವಲ ಧಾರ್ಮಿಕ ಇಲ್ಲವೆ ಆರ್ಥಿಕವಿರುವದಿಲ್ಲ. ಆ ನವಚೈತನ್ಯದ ಉಗಮ
ದೊಡನೆ ಹೊಸ ಹೊಸ ವಿಚಾರಗಳು, ನವಭಾವನೆಗಳು ಆಯಾ ದೇಶದ
ಜನರ ಮನಸ್ಸಿನಲ್ಲಿ ಮೂಡುವವು. ಆಗಲೇ ಭಾಷಾ ಜಾಗ್ರತಿಯಾಗಿ ಭಾಷೆಯೆ
ವಿಕಾಸ ಮಾಡಬೇಕೆಂಬ ಅವಶ್ಯಕತೆಯ ಪ್ರತೀತಿ ಅಲ್ಲಿಯ ಮುಖಂಡರಿಗೆ
ಆಗುವದು. ವರುಷಾನುವರುಷ ದಾಸ್ಯದಲ್ಲಿ ಮುಳುಗಿದ್ದರೂ ಮುಂದೆ
ಹೋರಾಡಿ ಸ್ವತಂತ್ರವಾದ ಇಟಲಿ, ಆಯರ್ಲೆಂಡ್ ಮುಂತಾದ ರಾಷ್ಟ್ರಗಳಲ್ಲಿ
ಭಾಷಾಜಾಗ್ರತಿಯ ಪ್ರಚಂಡ ತೆರೆಗಳು ಆ ದೇಶಗಳನ್ನು ಅಲುಗಾಡಿಸಿ ಬಿಟ್ಟವು.
ನಮ್ಮಲಿ ಕೂಡ ಬಂಗಾಲ ಮಹಾರಾಷ್ಟ್ರ ಪ್ರಾಂತಗಳಲ್ಲಿ ಮೊದಲು ರಾಷ್ಟ್ರೀಯ
ಜಾಗ್ರತಿಯ ಕಾಲಕ್ಕೆಯೆ ಭಾಷಾ ಜಾಗ್ರತಿ ಹೆಚ್ಚಾಯಿತು. ಅದೇ ಜಾಗ್ರತಿ
೧೯೦೫ರ ಸುಮಾರಕ್ಕೆ ಇಡೀ ಹಿಂದುಸ್ತಾನದ ಪ್ರಾಂತಪ್ರಾಂತಗಳಲ್ಲಿ ಹರ
ಡಿತು. ಬಂಗಾಲದ ವಂಗಭಂಗ ಚಳವಳಿಯ ಚೈತನ್ಯವು ಇಡೀ ದೇಶವನ್ನು ಆವರಿಸಿತು.
{{gap}}ಭಾಷಾಜಾಗ್ರತಿಯ ಮುಖ್ಯ ಕಾರಣಗಳು ಎರದು. ಅನ್ಯ ಭಾಷೆಗಳ
ಆಕ್ರಮಣ ಅಥವಾ ಅವಾಸ್ತವ ವರ್ಚಸ್ಸು ಮತ್ತು ಸ್ತೋಮ ಒಂದು<noinclude><references/></noinclude>
71f4d5u16ry2qbbruoqmiwto77kuzxq
ಪುಟ:Praantabhaashhe-Rashhtrabhaashhe.pdf/೬
104
37789
321226
308661
2026-05-20T07:06:31Z
Shreesha Sharma
7840
/* Validated */
321226
proofread-page
text/x-wiki
<noinclude><pagequality level="4" user="Shreesha Sharma" /></noinclude><p style="text-indent: 5.9cm;">||ವಂದೇ ಮಾತರಂ||</p>
<p style="text-indent: 5.3cm;">'''ಪ್ರಾಂತಭಾಷೆ-ರಾಷ್ಟ್ರಭಾಷೆ'''
<p style="text-indent: 5.8cm;">೧. ಪ್ರಾಂತ ಭಾಷೆ</p>
<p style="text-indent: 5.9cm;">ಒಂದು ನೆನಪು</p>
{{gap}}೧೯೨೮ರಲ್ಲಿ ಒಂದು ಮಾತು. ಇಡೀ ದಕ್ಷಿಣ ಹಿಂದುಸ್ತಾನದಲ್ಲಿ
ಅತ್ಯುಚ್ಚವಾದ ನೀಲಗಿರಿ ಪರತ್ವದ ತಪ್ಪಲಲ್ಲಿರುವ ಉದಕ ಮಂಡಲಕ್ಕೆ
ಹೋದ ಪ್ರಸಂಗವದು. ಅಲ್ಲಿಯ ದೊಡ್ಡ ಬೆಟ್ಟ ಎಂಬ ೮೬೦೦ ಅಡಿ ಇರುವ
ಶಿಖರವನ್ನು, ಸಾಲು ಗಟ್ಟಿ ಶಿಸ್ತಿನಿಂದ ನಿಂತಿರುವ ೨೦೦-೨೫೦ ಅಡಿ ಎತ್ತರದ
ನೀಲಗಿರಿ ಎಣ್ಣೆಯ ಗಿಡಗಳನ್ನು, ಅತ್ಯಂತ ರಮ್ಯ. ಚಹಾ ತೋಟಗಳನ್ನು,
ಹಚ್ಚ ಹಸಿರು ದುಂಡ ದುಂಡ ದಿನ್ನಿಗಳನ್ನು ನೋಡಿದೆನು. ಅವೆಲ್ಲವುಗಳಿಗಿಂತ
ಅಲ್ಲಿರುವ ಬಡಗರತ್ತ ನನ್ನ ಮನಸು ಹೆಚ್ಚು ಎಳೆಯಿತು. ಬಡಗು ಭಾಷೆ
ಮಾತಾಡುವ ಜನ ಅವರು, ಅವರನ್ನು ನೋಡಿ ಮಾತಾಡಿಸಿದೊಡನೆ ಅವರು
ನನ್ನ ಬಾಂಧವರೆಂಬ ಭಾವನೆ ನನ್ನಲ್ಲಿ ಒಡಮೂಡಿತು. ಆ ಜಿಲ್ಲೆಯಲ್ಲಿ
ನೂರಕ್ಕೆ ಸುಮಾರು ಅರುವತ್ತು ಜನ ಬಡಗರು. ಆದರೆ ಅಲ್ಲಿಯ ಪ್ರಾಥ
ಮಿಕ ಶಾಲೆಗಳಲ್ಲಿ ತಮಿಳು, ಮಾಧ್ಯಮಿಕ ಶಾಲೆಗಳ ಬೋಧ ಭಾಷೆ ತಮಿಳು,
ಕೋರ್ಟು ಕಛೇರಿಗಳಲ್ಲಿ ತಮಿಳು. ಅನೇಕ ವರುಷ ಹೀಗೆಯೆ ನಡೆಯುತ್ತ
ಬಂದಿತು. ಆದರೂ ಇನ್ನೂ ಕನ್ನಡದ ಅಭಿಮಾನಿಗಳು ಆ ಬಡಗು ಬಾಂಧ
ವರಲ್ಲ ಇನ್ನು ಅನೇಕರಿದ್ದಾರು. ಅರೇಗೌಡರ ಎಂಬವರು ಸ್ವಂತ ಖರ್ಚಿ
ನಿಂದ ಕನ್ನಡ ಶಾಲೆ ಮುಂತಾದವುಗಳನ್ನು ನಡೆಸಿದ್ದರು. ಅಷ್ಟರಿಂದ
ನನ್ನ ಸಮಾಧಾನವಾಗಲಿಲ್ಲ. ನಾನು ಸಂತೆ ಪೇಟೆಗಳಲ್ಲಿ ಅಡ್ಡಾಡಿದೆನು.
ಹಲವು ಹಳ್ಳಿಗಳಿಗೆ ಹೋಗಿ ಹಳ್ಳೀಗರೊಡನೆ ಮಾತಾಡಿದೆನು. ನನ್ನ ವಿಷಯ
ಒಂದೇ-ಕನ್ನಡ, ಕನ್ನಡ ಶಾಳೆ, ಕನ್ನಡ ಮಾಧ್ಯಮ, ಕನ್ನಡದ ಪ್ರಸಾರ.
{{gap}}ನಾನು ಆ ಬಗ್ಗೆ ಮಾತಾಡಲಾರಂಭಿಸಿದೊಡನೆ ಆ ಬಡ ಸಾದಾ
ವೃತ್ತಿಯ ಒಡಗರ ಅಂತಃಕರಣಗಳು ಉಕ್ಕಿ ಬರುತಿದ್ದುವು, ಅವರ ಚಿತ್ತಹ<noinclude><references/></noinclude>
fmo3saw4s9u8696ssyu675yfsiz89a2
ಪುಟ:ಹಗಲಿರುಳು.djvu/೪೧
104
38639
320887
317825
2026-05-19T17:18:28Z
Pragathi. BH
7585
/* Validated */
320887
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|೩೨}}
{{center|ಕನ್ನಡ ಕೋಗಿಲೆ, ಮೇ ೧೧೮.}}
ಳನ್ನು ಸೇವಿಸಬೇಕೆಂಬುದು ಹಸುರುಹಳ್ಳಿಯ ಹಾಡಿಗೌಡರಿಗೂ ಗೊತ್ತು, ಯಾಕೆ- ಪ್ರತಿಯೊಂದು ತಿರ್ಯಗಜಂತುವೂ ಹೀಗೆಯೆ ನಡೆಯುತ್ತಿದೆ. ಅಷ್ಟೆ ಅಲ್ಲ; ಹೆತ್ತ ಮಗುವನ್ನು ಎತ್ತಿ ಏಳಿಗೆಗೆ ತರುವ ಲೋಕವೃಕ್ಷದ ತಾಯಿ ಬೇರಾದ ಹೆಂಗುಸು, ಆಕಷ್ಟವನ್ನು ಸಂತೋಷದಿಂದ ಸೈರಿಸಿಕೊಳ್ಳುವಳು. ಅದೇನು, ಉಮ್ಮಿ ಬಂದೀತೆಂದು ಊಟವನ್ನೆ ಬಿಡುವುದುಂಟೆ ? ಈ ಅಂಗಾರಕ ನೊಬ್ಬನು ಹಾರಿಹೋದನೆಂದು ಭೂದೇವಿಯಾದರೂ ಕೊರಗಿ ಕೊ' ಎನ್ನ ಲಿಲ್ಲ, ಬಾಲ್ಯದಲ್ಲಿ ಸ್ವಾತಂತ್ರವನ್ನೀಯದೆ, ವಿದ್ಯಾಭ್ಯಾಸ ಲೋಕವ್ಯವ ಹಾರಜ್ಞಾನಾದಿಗಳ ಕಷ್ಟಕ್ಕೆ ಮಕ್ಕಳನ್ನು ಗುರಿಮಾಡಿ ಆ ಸ್ವಾತಂತ್ರ್ಯದ ಗುಟ್ಟನ್ನು ಕಲಿಸುವುದು ಪೋಷಕರ ಕರ್ತವ್ಯವು, ಜ್ಞಾನಾರ್ಜನೆಯಲ್ಲಿ ಮನ ಸ್ಸಿಲ್ಲದ ಈಗಿನ ಕೆಲವು ಕೆಟ್ಟ ಹುಡುಗರಿಗೆ ಇವೆಲ್ಲ ವೂ ವಿಪರೀತವಾಗಿ ತೋರುತ್ತದೆ. ಅದರಿಂದಲೆ ಮೂರಕ್ಷರವನ್ನೋದಿ ಮೂರು ಲೋಕವನ್ನೋದಿ ದೆವೆಂದೆಣಿಸಿ, ವಿದ್ಯಾಭ್ಯಾಸದ ಆವಾಹನೆಯನ್ನು ಉದ್ಘಾಹಿಸಿ, ಹಿರಿಯರ ಬುದ್ಧಿ ಮಾತನ್ನು ಒದ್ದು, ಅಲ್ಲಿ ಸಲ್ಲ ದವರ ಬಿಳಿನಗೆಗೆ ಬಾಯಿಬಿಟ್ಟು, ಆ ಅಲ್ಪರ ರೀತಿಯೆ: ನಾಗರಿಕತೆಯ ಲಕ್ಷಣವೆಂದೆಣಿಸಿ, ಅಕಟಾ ! ಅನಿಷ್ಟ ಸ್ವರೂಪದ - ಅಂಗಾರಕರಾಗಿ ಹೋಗುತ್ತಾರೆ. ಅಂಥವರಲ್ಲಿ ಇವನೂ ಒಬ್ಬನು. ಒಳಗೆ ಪ್ರೇಮವನ್ನೂ ಹೊರಗೆ ನಿಯಮವನ್ನೂ ತೋರದಿದ್ದರೆ, ಹುಡುಗರು ಹಾಳಾಗುವರೆಂಬುದಕ್ಕೆ ಬಹಳ ದೃಷ್ಟಾಂತಗಳಿವೆ. ಅದಿರಲಿ, ಅವನ ದುಷ್ಕಾರ್ಯಗಳಿಂದಲೆ 4 ಅನಿಷ್ಟಕ್ಕೆ ಅಂಗಾರಕನೆ ಗುರಿ' ಎಂಬ ಮಾತಿಗೆ ಎಡೆಯಾಯಿತು. ಒಬ್ಬೊಬ್ಬನು ಅನ್ಯಾಯವನ್ನೆ ಮಾಡಿದರೂ ಇಡಿ ಲೋಕವು ಬರಿದೆ ಅಪವಾದದ ಆರೋಪವನ್ನು ಹೊರಿಸಲಿಕ್ಕಿಲ್ಲ.
{{gap}}ಅದರಿಂದಲೆ ಹತ್ತಿದ್ದಲ್ಲಿ ಮುತ್ತುಂಟ ಎಂದು ಹೇಳುತ್ತಾರೆ. ಇನ್ನು, ಅಂಗಾರಕ ಶನಿಗಳ ಹುಡುಗಾಟದ ಬಿರುಸು, ಒತ್ತಟ್ಟಿಗಿರಲಿ, ಈ ನಕ್ಷತ್ರಪತಿಯೆಂಬ ಅರಸನಾದರೂ ಯೋಗ್ಯನಾಗುತ್ತಿದ್ದರೆ, ತಾಯ್ತಂದೆಯ ರೊಡನೆ ವಿಚಾರಿಸದೆ, ಈಗಿನ ಕೆಲವು ಸಂಸ್ಥೆಗಳ ವರಂತೆ, ಈ ಬಾಲಕರನ್ನು ತನ್ನಲ್ಲಿ ಸೇರಿಸಿಕೊಳ್ಳಬಹುದೆ? ಹೋ ! ತಪ್ಪಿದೆನು ! ಅವನ ಬಣ್ಣವನ್ನು ಒರೆ ಯುವ ಒರೆಗಲ್ಲೂ ಇಲ್ಲಿ ಯೆ ಇದೆ. ಒಂದೇ ಮಾತಿನಿಂದ ಹೇಳುವುದಾದರೆ, ಇಷ್ಟೆ ಸಾಕು.<noinclude></noinclude>
5erdoe6ag6dw2244zkb6095os48c37j
ಪುಟ:ಹಗಲಿರುಳು.djvu/೪೨
104
38640
320888
293957
2026-05-19T17:19:39Z
Pragathi. BH
7585
/* Validated */
320888
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಹಗಲಿರುಳು,}}{{Right|೩೩}}
<poem>
ಕುಸುಮಷಟ್ಟದಿ || ತಂದೆತಾಯ್ಗಳನು ಹಳಿವರೆ ಸಭ್ಯರಸುರಗುರು |
ವಂದೆನುವ ಕುರುಡನೇ ಕವಿ, ನಾಸ್ತಿಕಂ || .
ಸಂದಗುರುವನ್ನಲಾ ಗುರುಸತಿಯು ರಮಿಸಿದೀ |
ಕುಂದಿನವನಲ್ಲ ದಿನ್ನಾರರನ್ನು|| ೧ ||
</poem>
'''ಸದಾಗತಿ''':-(ಬಿರುಸಾಗಿ) ಸಾಕು, ಸಾಕು, ನಿನ್ನ ಈ ವಿಮರ್ಷೆಯನ್ನೆಲ್ಲ ಮುಂದಿನ
ಸಭೆಯಲ್ಲಿ ವಿಸ್ತರಿಸಬೇಕಲ್ಲದೆ, ಈಗ ಯಾಕೆ, ಗುಡುಸಿಂದೊಳಗೆ ಸುಳಿದರೆ ಕೀ' ಎಂದು ಕಿವಿಯನ್ನು ಕೀಲಿಸುವೆ? ಇನ್ನಾದರೂ ಹೇಳುತ್ತೇನೆ; ಕೇಳು. ಗತಿಗೇಣುದ್ದ, ಮತಿಮಾರುದ್ದ' ಎಂಬಂತೆ ಹಾರಾಡಿ, ಬರಿದೆ ಅಪಹಾಸ್ಯಕ್ಕೆ ಎಡೆಯಾಗಬೇಡ, 'ನಮ್ಮದು ಮಣಿ, ಅವರದು ಮಸಿಯಾಗಬೇಕೆಂದು ಹಠಹಿಡಿದರೆ ಹೇಗಾಗುವುದೆಂದು, ಸಮಾಧಾನಚಿತ್ತದಿಂದ ನಿನ್ನಲ್ಲಿ ಒಮ್ಮೆ ಯೋಚಿಸಿ ನೋಡು, ಈಗ ಹೇಗಾದರೂ ಸುಧಾರಿಸಿ, ಹೆಚ್ಚಿನ ಚರ್ಚೆಯನ್ನುಮತ್ತೆ ನೋಡೋಣ.
'''ತೇಜಸ್ವಿ:''' (ಕೋಪಿಸಿ) ಸರಿ ಸರಿ; ಎಲ್ಲ ವನ್ನೂ ಮೊದಲೆ ನೋಡಿದ್ದೇನೆ ನಿನ್ನ
ಈಗಿನ ಈ ಬೋಧನೆಯ ಬೋನಕ್ಕೆ ಬಾಯ್ದೆರೆವನಲ್ಲ. ಭಗವಂತನಾದ ಆರ್ಯನು ಅಂದು ಕಟ್ಟಿಕೊಟ್ಟ ಬುತ್ತಿ, ಇಂದಿಗೂ ಅಕ್ಷಯವಾಗಿಯೆ ಇದೆ. ಈ ವಿಮರ್ಷೆಯನ್ನೆಲ್ಲ, ಸಂಧಿಯ ಸಭೆಯಮುಂದೆ ಇಡಬೇಕೆಂದು ಸೂತ್ರಾತ್ಮಕವಾದ ಉತ್ತರವನ್ನು ಕೊಡುವ ಶಾಸ್ತ್ರಜ್ಞರಾದ ನೀವು, ಆ ನೀಚರು ಆರ್ಯನ ಮೇಲೆ ಮಾಡಿದ ಮಿಥ್ಯಾರೋಪಗಳಿಗೆ ಹೇಗೆ ಕಿವಿಗೊಟ್ಟರೆ? ದಾರಿಗನ ಹೆಗಲಿಗೆ ಹಿಂದಿನಿಂದ ಹೊರಿಸಿದ ಹೊರೆಯನ್ನು, ಮುಳ್ಳನ್ನು ಮುಳ್ಳಿಂದಲೆ ಕೀಳುವಂತೆ, ಹಿಂದಕ್ಕೆ ನೂಕಿ ಅಲಕ್ಷಿಸುವುದೆ ಧರ್ಮಪು. ಶಾಸ್ತ್ರವನ್ನು ಓದುತ್ತ ಗಾಳವನ್ನು ಹಾಕುವುದಕ್ಕೆ ಲೋಕವು ಒಪ್ಪಿದರಲ್ಲದೆ, ನಿಮ್ಮ ಸಂಧಾನದ ಸಭೆ ? ಸತಿ ಕುಗ್ಧ ಚಿತ್ರಂ' ಎಂಬ ಮಾತು ಪ್ರಸಿದ್ಧವಿರುವಾಗ, ಗೋಡೆಯಿಲ್ಲದೆ ಬರಿದೆ ಆಕಾಶದಲ್ಲಿ ಚಿತ್ರ ಬರೆಯಲಿಕ್ಕೆ ಕೈನೀಡುವ ನಿಮ್ಮ ಮೂಢತೆಯನ್ನು ಕಂಡೇ, ಈಗಲೆ ಉತ್ತರಗೊಟ್ಟಿದ್ದೇನೆ ಈ ಕತ್ತಲೆ ಬತ್ತಲೆಗುಣಿವ ಆಸಂಧಿಯ ಸಭೆಯನ್ನು, ಒಂದು ವೇಳೆ ನೀವು ಜರಗಿಸಿದರೂ, ಈ ಲೋಕವು ಕಕ್ಷರೆದು ನೋಡುವಂತಿಲ್ಲ. ಆ ಹಗೆಗಳ ಮಡಿಲಲ್ಲೆ ಆ ಅಂಗಾರಕನು ಬೀಳಲಿ; ಅವರನ್ನೆ, ಶನಿ ಹಿಡಿಯಲಿ.
{{Right|೫}}<noinclude></noinclude>
qsmvtsbukf5plkngg0m4b5lfbvqebjs
ಪುಟ:ಹಗಲಿರುಳು.djvu/೪೩
104
38641
320889
293959
2026-05-19T17:21:16Z
Pragathi. BH
7585
/* Validated */
320889
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|೩೪}}{{center|ಕನ್ನಡ ಕೋಗಿಲೆ, ಜೂನ್ ೧೯೧೮.}}
'''ಸದಾಗತಿ''':- ಹುಂ, ಕೆಡುವ ಕಾಲಕ್ಕೆ ಬದ್ಧಿ ಇಲ್ಲ, ಮರಣ ಕಾಲಕ್ಕೆ ಮದ್ದಿಲ್ಲ,
ಮಾಡುವುದೇನು ? (ಲೋಕವನ್ನು ಉದ್ದೇಶಿಸಿ) ಲೋಕವೆ, ಇಂಥ ತಲೆದಿರು ಕರಿಗೆ ಎಷ್ಟು ಹೇಳಿದರೂ ಅಷ್ಟೆ, ಸ್ವಾರ್ಥದಿಂದ ಯಾರು ಹೇಗೆ ನಡೆದರೂ (ಗೋಡೆ ಬಿದ್ದರೆ ಜಗಲಿಯ ಮೇಲೆ' ಎಂಬ ಹಾಗೆ, ಕಷ್ಟವು ನಿನ್ನ ತಲೆಗೇ ಕಟ್ಟಿದ ಹೊರೆ, ಅದರಿಂದ, ಸಾರಾಸಾರವಿವೇಚನೆಮಾಡಿ, ನಮ್ಮ ಜಲ ಧರನ ಈಗಿನ ಉದ್ದೇಶಕ್ಕೆ ಸಮ್ಮತಿಗೊಡುವುದು ತಕ್ಕುದಾಗಿದೆ. ಇದು, ಲೋಕಾಭಿವೃದ್ಧಿ ಯ ಅಡಿಗಟ್ಟೆಂದು, ಮತ್ತೂ ಮತ್ತೂ ಒತ್ತಿ ಹೇಳುತ್ತೇನೆ. ತೆರೆ ನಿಂತ ಮೇಲೆ ಹಾರಿದರೆ ಮರಳನ್ನು ಮುಕ್ಕುವುದೇ ಫಲವು.
'''ಲೋಕ''':--ನಿನ್ನ ಮಾತಿಗೆ ನಮ್ಮದೂ ಒಪ್ಪಿಗೆಯಿರುತ್ತಿತ್ತು, ಆದರೆ, ಆರ್ಯನ
ಹಿತಸೂಚನೆಯನ್ನು ಅಲ್ಲೆ ಮರೆತು, ನಮ್ಮ ಮೋರೆಗೆ ಮಸಿ ಹಚ್ಚುವುದು ನಮಗೆ ಸಮ್ಮತವಲ್ಲ. ಆ ನಕ್ಷತ್ರಪತಿಯೆ ಬಯಲಿಗೆ ಬಂದನೆಂದರೆ, ಅವನೆ ದುರಲ್ಲಿ ಈ ಕತ್ತಲೆ ಇರಬಾರದಂತೆ ಎಂದ ಮೇಲೆ, ಅವನಿಗೇ ಅವಲಕ್ಷ ಣವಾದ ಈ ಪ್ರೇತಸ್ವರೂಪವನ್ನು, ನಮ್ಮ ಮೇಲೆ ಆರೋಪಿಸುವುದೇಕೆ ? ಅವನು ರಾಜಮರ್ಯಾದೆಯನ್ನು, ನಮ್ಮಿಂದ ಕೈಗೊಳ್ಳಬೇಕಾದರೆ < ಯಥಾ ರಾಜಾ ತಥಾಪ್ರಜಾಃ' ಎಂಬ ನೀತಿಯನ್ನು ಮರೆಯಬಾರದು. ಜಲಧರನು, ಕತ್ತಲೆಯ ಪೋಷಕನು; ನಿನಗೆ ಅದರ ಕೋಲುಬೇಲಿಯೆ ಇಲ್ಲ. ಅದ ರಿಂದ, ನೀವು ಈ ಸಂಧಾನದ ಮುಂದಾಳುತನವನ್ನು ಸ್ವೀಕರಿಸಿದರೂ, ನಾವು ಹುಂ ಗೂಡಿಸಲಾರೆವು, ಒಂದು ವೇಳೆಗೆ, ನಮ್ಮನ್ನು ಅಲ್ಲಗಳೆದು, ಕತ್ತಲೆ ಯನ್ನು ಮುಂದೆ ಮಾಡಿ ನೀವು ನಿಮ್ಮಷ್ಟಕ್ಕೆ ಸಭೆಗೂಡಿಸಿದರೂ, ಅದರಿಂದ ಒಳ್ಳೆಯ ಪಾಠವನ್ನೇ ಕಲಿಯುವೆವು. ನಾವೆಲ್ಲರೂ ಎಣಿಕೆಯನ್ನು ಬಿಗಿ ಹಿಡಿದು, ಮೈಮರೆತು ಕಲಸಮಾಡಿ ನಿದ್ರಾರೂಪದ ಸಮಾಧಿಯಿಂದಲೆ ಆರ್ಯ
ಸಾಕ್ಷಾತ್ಕಾರವನ್ನು ಪಡೆಯುವೆವು.
'''ಸದಾಗತಿ''':-ನೀವು ಆಶ್ರಯಾಶನಾದ ಈ ತೇಜಸ್ವಿಯ ಮಾತಿಗೆ ಮರುಳಾಗಿದ್ದೀರಿ.ಜಲಧರನೂ ನಾನೂ, ನಿಮ್ಮ ಜೀವನ ಪ್ರಾಣಾಧಾರರೆಂಬುದನ್ನು ಮರೆತು ಕೆಡುತ್ತೀರಿ, ಆರ್ಯನಾದರೂ, ತೇಜಸ್ವಿಯ ಮೇಲಧಿಕಾರಿಗಳನ್ನಾಗಿ, ನನ್ನನ್ನು ನಿಯಮಿಸಿದುದನ್ನು ಗಣಿಸಿರುವುದರಿಂದ, ಆರ್ಯಮತಕ್ಕಾದರೂ ನೀವು ವಿರೋಧಿಗಳೆ ಆಯಿತಲ್ಲವೆ? ಕಾಲಾನುಸಾರಿಯಾದ ಆರ್ಯನ ಮತವಾದರೂ,<noinclude></noinclude>
2cvlxg24t1eqhya6obychm3muoxrgtx
ಪುಟ:ಹಗಲಿರುಳು.djvu/೪೪
104
38642
320890
293961
2026-05-19T17:22:20Z
Pragathi. BH
7585
/* Validated */
320890
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಹಗಲಿರುಳು,}}{{Right|೩೫}}
ಈಗಿನ ಕಾಲಕ್ಕೆ ತಕ್ಕಂತೆ ಸುಧಾರಿಸಬೇಕೆಂಬುದಾಗಿ ಇದ್ದಿರಲಿಲ್ಲವೆ? ಅದಕ್ಕಾಗಿ ತೇಜಸ್ವಿಯ ಅವಿಚಾರಿತ ಭುರಭುರಾವಣೆಯ ಭುಸ್ಸಿನ ಬೆಂಕಿಯ ಬೂದಿಯನ್ನು
ಅರಿತೆ ನಮ್ಮನ್ನು ಅಧಿಕಾರಿಗಳನ್ನಾಗಿ ಆರಿಸಿದುದು.
'''ಲೋಕ''':-ಓಹೋ, ನೀವೂ ಮೇಲಧಿಕಾರಿಗಳೊ ? ಈಗಲೆ ಸ್ವಷ್ಟವಾಯಿತು.
ಹಾಗಾದರೆ, ಅಂಗಾರಕಾದಿಗಳತೆ, ಅಧಿಕಾರಿ (ಬಹುವಿರೋಧಿ) ಯಾದ ನಕ್ಷತ್ರಪತಿಯನ್ನು ಹಿಂಬಾಲಿಸುವವರೆ ಆಯಿತು, ಕೇಳು; ಆರ್ಯನ ಆ ನುಡಿಗಟ್ಟಿನ ಮಟ್ಟು, ನಿನ್ನೊಬ್ಬನ ಒಂದು ಮನಸ್ಸಿಗೆ ಮುಟ್ಟದೆ ಮರೆತು ಹೋದರೂ, ನಮ್ಮ ಕೋಟ್ಯಂತರದ ಮನಸ್ಸಿಗೆ ಗಟ್ಟಿಯಾಗಿ ಅಂಟಿಕೊಂಡೇ ಇದೆ, ನಮ್ಮ ಈ ಲೋಕದ ಎಣಿಕೆಗೆ ಅಡ್ಡ ಬಂದರೆ ಮಾತ್ರವೆ, ತೇಜಸ್ವಿ ಯನ್ನು ಆತಂಕಿಸುವ ಹಕ್ಕು ನಿಮಗೆ ಇರಬೇಕೆಂದು, ಆರ್ಯನ ಕಟ್ಟು, ನಮ್ಮ ಮತವೆ ತೇಜಸ್ವಿಯ ಮಾತಿನಲ್ಲಿ ಅಚ್ಚಾಗಿರುವಾಗ, ನಿನ್ನ ಈ ಹೊಣೆ ಗಾರಿಕೆಯ ಮಾತಿಗೆ ಬಣ್ಣವೆಲ್ಲಿ೦ದ ? ನೀವು ನಮ್ಮ ಜೀವನಪ್ರಾಣಾಧಾರ ರೆಂಬುದು ಸರಿಯಾದರೂ, ನಿಮ್ಮ ಸ್ವಾಭಿಮಾನ ಧರ್ಮ ಹೀನತೆಗಳಿಂದಾಗಿ, ಆ ಅನುಕೂಲತೆಗಳನ್ನು ತೃಣವನ್ನಾಗಿ ಭಾವಿಸುತ್ತೇವೆ.
'''ತೇಜಸ್ಟೀ''':- ಲೌಕಿಕರೆ, ಈ ಗಾಳಿಯ ಗಂಟು, ಇನ್ನಾದರೂ, ಸಡಿಲಿಹೋಗ
ಬಾರದೆಂದು ಇನ್ನೊಮ್ಮೆ ಎಚ್ಚರಿಸಿರಿ. ಯಾವಾಗಲೂ, ಸ್ವಾರ್ಥಿಗಳಾದ ಅಹಂಮನ್ಯರಿಗೆ ಧರ್ಮದ ದಾರಿಯ ಹೊತ್ತು ಕಡಮೆ, ಅದರಿಂದ, ಚರ್ವಿತ ಚರ್ವಣದಿಂದ ಹದಮಾಡಿ ನಯವಾದ ನಮ್ಮ ಎಣಿಕೆಯ ತುತ್ತು, ಇವನ ಬಾಯಲ್ಲಿದ್ದರೆ, ಸುಲಭವಾಗಿ ಗಂಟಲಿಗಿಳಿದು ಇವನ ಈ ರೋಗವನ್ನು ವಾಸಿಮಾಡಬಹುದು, ಈ ಸ್ವಾರ್ಥಿಯ ಹೇಳಿಕೆಯಂತೆ, ಆಶ್ರಯದಾತರಾದ ನಿಮ್ಮ ಏಳಿಗೆಯಲ್ಲಿ ಆಶೆಯಿರುವುದರಿಂದಲೆ ಹೇಳಿಕೊಂಡಿರುವೆ.
'''ಸದಾಗತಿ''':- ಎಲೆ ತೇಜಸ್ವಿ, ಈ ನಿನ್ನ ಈ ಪರಿ, ನಮ್ಮ ಸ್ನೇಹದ ಸೇತುವನ್ನು
ಎಂದೆಂದಿಗೂ ಮುರಿದಿಡುವಂತಿದೆ. ನನ್ನ ನಿನ್ನ ಅಭಿಪ್ರಾಯಗಳೆಂಬ ಬಂಧು ಗಳು, ಅನ್ನೋನ್ಯರ ಕಿವಿಬಾಗಿಲನ್ನು ಒಳಹೊಕ್ಕು, ಮನಸ್ಸಿನ ಮನೆಯಲ್ಲಿ ಸಮ್ಮಾನವನ್ನುಂಡು ಬಳೆದು ಬಾಳುವ ಏಳಿಗೆಯನ್ನು ಕಳೆದುಕೊಳ್ಳುವಂತಿವೆ. ಹೆಚ್ಚೇನು ? ಮೂರು ಮೂರು ಬಾರಿಗೂ ಸಾರಿಹೇಳುತ್ತೇನೆ. ಇಂಥ ಅಹಂಕಾ ರವು ಸಲ್ಲದು. ದಾರಿಗಿಂತ ಅಗಲವಾದ ತೇರು ಮುಂದುವರಿಯದು.<noinclude></noinclude>
f7bq3g25q6l1cck1z1zkp1snlvq3c1b
ಪುಟ:ಹಗಲಿರುಳು.djvu/೪೫
104
38643
320891
293964
2026-05-19T17:22:50Z
Pragathi. BH
7585
/* Validated */
320891
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|೩೬}}
{{center|ಕನ್ನಡ ಕೋಗಿಲೆ, ಜೂನ್ ೧೯೧೮.}}
'''ಲೋಕ'':-ಸದಾಗತಿಯೆ, ನೀನಿನ್ನು ಆಗಾಗ ಕಿರಿಕಿರಿ ಗುಟ್ಟಿ, ನಮ್ಮ ದೊರೆ
ಯಾದ ತೇಜಸ್ವಿಗೆ ಉಪದ್ರವಮಾಡಬೇಡ, ನಿನ್ನ ಸ್ನೇಹದಸಂಕ ಮುರಿದಲ್ಲೆ ಸ್ನಾನಮಾಡಿ ನಾವು ಶುದ್ಧರಾಗುವೆವು, ನಿನ್ನ ಮಾತು ಆದಹತ್ತಿ' ಅದೆ ನೂಲು, ಆದರೆ, ನಮ್ಮದೂ ಅದೆ ಬಟ್ಟೆ, ಅದೆ ಬಣ್ಣ'ವು.
{{gap}}ಈ ಮಾತನ್ನು ಕೇಳಿದೊಡನೆಯೆ ಸದಾಗತಿಯ ಗತಿ ಬಿರುಸಾಯಿತು. ಗಡಿಯಾರದ ಮುಳ್ಳನ್ನು ಮುರಿದರೆ ಗತಿನಿಲ್ಲುವುದೆಂದು ನಿಶ್ಚಸಿ, ಲೋಕದ ಹಾರಾಟದ ಚಾಲಕನಾದ ತೇಜಸ್ವಿಯಲ್ಲಿ, ಅವನ ಕೋಪವೇರಿತು. ಆ ತೇಜ ಸ್ವಿಯ ತಲೆಗೆ ಒಂದೇಟುಗೊಟ್ಟನು, ಬಾಯಿಯಲ್ಲಿ ಸಾಗದಿದ್ದರೆ, ಕೈಮೀರು ವುದು ದುಷ್ಟರ ಹುಟ್ಟುಗುಣವು, ಎಷ್ಟು ಓದಿದರೂ ಲೋಕವ್ಯವಹಾರವನ್ನು ಅರಿತರೂ, ಸ್ವಭಾವವು ಮರೆಯಾಗಲಾರದೆಂದು ಬೇರೆ ಹೇಳಬೇಕೆ? ಪ್ರಾಣ ಪ್ರಿಯರಾದರೂ ಕೆಲವರು, ತಮ್ಮ ಕೈ ನಡೆಯದಿದ್ದಾಗ, ಆ ಕೆಳೆಯರ ಪ್ರಾಣ ವನ್ನೆ ತೆಗೆದುಬಿಡುತ್ತಾರೆಂಬುದಕ್ಕೆ ಇದೂ ಒಂದು ದೃಷ್ಟಾಂತವೆ, ಅಬಲನಾದ ತೇಜಸ್ವಿ, ಅಭಿಮಾನರಕ್ಷಣಕ್ಕಾಗಿ ಮೈಬಿಟ್ಟನು, 'ನಿಮ್ಮ ದೊರೆಯ ದೊರೆತನ ವೇನಾಯಿತು ? ವಿನಾಶಕಾಲೇ ವಿಪರೀತ ಬುದ್ದಿ' ಎಂಬುದು ಬರಿದಾಗುವುದೆ? ಎಂದು ಅತ್ತ ಮೇಲೆ ಹಾರಿದನು. ಇತ್ತ ತೇಜಸ್ವಿಯ ಶೋಚನೀಯಾವಸ್ಥೆಗೆ ಹೊಗೆಯಂತೆ ನಿಟ್ಟುಸಿರೆದ್ದಿತು, ಹಕ್ಕಿನ ಬೆಳಕು ಬತ್ತಿ ಹೋಯಿತು, ಕತ್ತ ಲೆಯ ಮೊತ್ತದ ಕಾಲಾಟವನ್ನು ಬೇಕುಬೇಡೆಂಬರಿಲ್ಲ. ಆರ್ಯಧ್ಯಾನಾ ಎಷ್ಟವಾದ ಲೋಕವು, ಪ್ರತಿಜ್ಞೆ ಮಾಡಿದಂತೆ, ನಿದ್ರಾಸಮಾಧಿಯನ್ನು ಅವ ಲಂಬಿಸಿತು. ಎಲ್ಲೆಲ್ಲಿಯೂ ನಿಶ್ಯಬ್ದ, ಅದು ಎಷ್ಟರಮಟ್ಟಿಗೆಂದರೆ, ಒಂದು ಹುಲ್ಲಾಡಿದರೆ ಸಾಕು; ನೆಟ್ಟಗೆ ಕಿವಿಗೆ ಕೇಳಿಸುವಂತಿತ್ತು, ಈ ಸುದ್ದಿಯನ್ನು ಸದಾಗತಿ ಜಲಧರನಿಗೆ, ಒಂದುಳಿಯದಂತೆ ಹೇಳಿದನು, ಅವನು ಮಿತಿ ಮೀರಿದ ಸಿಟ್ಟಿರಿ, ಕುಡಿಮಿಂಚಿನ ಕಡೆಗಣ್ಣಿಂದ ನೋಡಿದನು. ಲೋಕದಲ್ಲಿ ಎತ್ತಲೂ ಸಮಾಧಿ, ಶಾಂತ, ಆ ಶಾಂತವು, ಜ್ವರಬಂದವನಿಗೆ ತಣ್ಣೀರೆರೆ ದಂತೆ, ಜಲಧರನ ಕೋಪವನ್ನೆ ಹುರಿದುಂಬಿಸಿತು. ಈ ಲೋಕವನ್ನು ಕಷ್ಟ ಸಾಗರದಲ್ಲಿ ಮುಳುಗಿಸಿಬಿಡಬೇಕೆಂದು, ಗುಡುಗುಡಿಸಿ ಗರ್ಜಿಸಿ, ನಿಮಿಷದಲ್ಲಿ ಶರವರ್ಷವನ್ನು ಪ್ರಯೋಗಿಸತೊಡಗಿದನು. ಲೋಕವು, ಮೊದಲೆ, ಮನೆ ಮಾಡಗಳ ಬಾಗಿಲುಮುಚ್ಚು ಗಳೂ ಎಂಬ ಅಡ್ಡಣಗಳನ್ನು ಏರ್ಪಡಿಸಿದ್ದರಿಂದ ಅವುಗಳಿಗೆ ನಾಟಿ, ಶರವರ್ಷಗಳು ಚೂರು ಚೂರಾದುವು. ಆದರೂ, ನೀರು<noinclude></noinclude>
4hk50q0x1s9ylb27kulda87h0m9g8lr
ಪುಟ:ಹಗಲಿರುಳು.djvu/೪೬
104
38644
320892
293966
2026-05-19T17:23:56Z
Pragathi. BH
7585
/* Validated */
320892
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಹಗಲಿರುಳು,}}
{{Right|೩೭}}
ಹನಿಗಳ ಈಟಗಳು ಮಾಡಸಂದುಗಳಲ್ಲಿ ಯೂ, ಗಿಳಿಬಾಗಿಲುಗಳ ವಿಡಗಳ ಆಯೂ ನುಸುಳಿ, ಸಮಾಧಿಭಂಗಕ್ಕೆ ಪ್ರಯತ್ನಿಸಹತ್ತಿದುವು, ಅವರಿಂದೇನು ? ಮೂಗಿನಲ್ಲಿ ಉಂಡರೆ ಹೊಟ್ಟೆ ತುಂಬುವುದೆ? ಆ ಒತ್ತಾಯವು, ಕುಂಭಕರ್ಣ ನಿಗೆ ಇರುವ ಚುಚ್ಚಿದಂತೆ, ಲವಲೇಶವಾದರೂ ಫಲಕಾರಿಯಾಗಲಿಲ್ಲ. ಹೊರಗೆ ಅಂತೂ, ಜಲಧರನ ವಾಹಿನಿಯ ಕೋಲಾಹಲಕ್ಕೆ ತೆರವೇ ಇದ್ದಿಲ್ಲ. ಗೆರಸೆ ಬಡಿದು ಇಲಿಯನ್ನು ಅಟ್ಟುವ ಆಯೆಣಿಕೆಯಾದರೂ, ಈ ಮಹತ್ಕಾ ರ್ಯದಲ್ಲಿ ಗುರಿಮುಟ್ಟುವುದು ಹೇಗೆ ?
<poem>
ಕಂದ ||
ವನಮಧ್ಯದಲಿ ಸಮಾಧಿಯೊ |
ಆಣೆಗೊಂಡಿಹಮುನಿಯ ನಗಲಿಸುವಖಳಜನವು ||
ದಣಿವುತಧೋಗತಿ' ಗಿಳಿವೊಲು |
ವನವಾಹಿನಿ ಕೀಳುನೆಲೆಗೆ ಹರಿಯುತ್ತಿತ್ತು ||೧||
</poem>
ಲೋಕದ ಸಮಾಧಿಗೆ ಒಂದಿಷ್ಟೂ ಭಂಗವಾಗಲಿಲ್ಲ, ದೃಢನಿಶ್ಚಯದ ಕೋಟೆಯನ್ನು ಒಡೆಯಲಿಕ್ಕೆ ಯಾವ ಗುಂಡುಗಳಿಗೂ ಸಾಧ್ಯವೆ? : ಅಹಂಕಾರಕ್ಕೆ ಔದಾಸೀನ್ಯವೆ ಮದ್ದು' ಎಂಬಂತೆ, ಲೋಕದ ಅಲಕ್ಷತೆಯಿಂದಾಗಿ, ಸ್ವಲ್ಪ ಕಾಲದಲ್ಲಿ ಜಲಧರನು ಜೀವನರಹಿತನಾಗುವ ಕಾಲಬಂತು. ನಕ್ಷತ್ರಪತಿಯೂ, ನಿರ್ಧನರನ್ನು ಬಿಟ್ಟುಬಿಡುವ ಆಶ್ರಿತನಂತೆ, ಜಲಧರನನ್ನು ಮೆಲ್ಲನೆ ತೊರೆಯತೊಡಗಿದನು. ಎಲೆ, ಜಗತ್ತೆ, ತಿಳಿ ವಿನ ಕಣ್ಣನ್ನು ತೆರೆದು, ಒಮ್ಮೆ ಈ ಚಿತ್ರವನ್ನು ನೋಡು,
<poem>
ಭಾಮಿನಿ ||
ಜೀವನವು ತುಂಬಿರಲು ಮೋರೆಯೊ | ೪ಾವರಿಸಿತೆ ಕಪ್ಪು ನಕ್ಷ ಶ್ರಾವಳಿಯಪತಿಗೆಡೆಗೊಡುತ ತನ್ನಡಿಯ ಲೋಕಕ್ಕೆ |
ನೋವನೊದಗಿಸಿ ಕಣ್ಣು ಕತ್ತಲೆ | ತೀವಿಸಿದ ಮೋಡಕ್ಕೆ ಪಾಪದಿ.
ಜೀವನವು ಕಡೆಯಾಗಲಾಶ್ರಿತರೇ, ನಗುವರದಕೊ || ೧ ||
ಕಷ್ಟ ಬಂದಿರೆ ಬಗ್ಗಿ ಬೀಳದೆ | ಇಷ್ಟ ಚಿಹ್ನೆಗೆ ಹಿಗ್ಗಿ ಹೆಚ್ಚಿದೆ
ನೆಟ್ಟ ತನ್ನ ಸಮಾಧಿಯನ್ನಾರ್ಯೋದಯಕ್ಕೆ ಮುನ್ನ||
ಬಿಟ್ಟು ಬಿಡೆನೆನ್ನುತ್ತ ಲೋಕವು | ಕಟ್ಟು ಮಾಡಿದೆ, ನೋಡಿ 'ಸ್ವಜನರ
ಮೆಟ್ಟಿದಿರಿ, (ಮರಕೇರಿ ಬುಡವನು ಕಡಿಯಲೆಣಿಸದಿರಿ)|| ೨ ||
“ಸರ್ವಜನಾಸ್ಸು ಖಿನೋಭವಂತು' ||
ತನ್ನ ಮನೆ ತನ್ನವರು ನೆರೆಯವ | ರಿನ್ನು ಹುಟ್ಟಿದ ಮಾತೃ ದೇಶವು
ಎನ್ನುತಲಿ ಅಭಿಮಾನದಡಿಗಟ್ಟಿಂದ ಮೇಲೇರಿ ||
ತನ್ನ ಬೆಳಕನು ಬೀರಬೇಹುದು | ಮುನ್ನವೇ ನೆಲದಿಂದ ಬಾನಿಗೆ ಸನ್ನೆಗೆದರೆ ಸಾಗದೆಂಬುದನರಿತು ಕೈಗೊಡಿರಿ||೩||
</poem><noinclude></noinclude>
opgwt56o7u51h7w276la49nbo0n2s5g
320893
320892
2026-05-19T17:26:13Z
Pragathi. BH
7585
320893
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಹಗಲಿರುಳು,}}
{{Right|೩೭}}
ಹನಿಗಳ ಈಟಗಳು ಮಾಡಸಂದುಗಳಲ್ಲಿ ಯೂ, ಗಿಳಿಬಾಗಿಲುಗಳ ವಿಡಗಳ ಆಯೂ ನುಸುಳಿ, ಸಮಾಧಿಭಂಗಕ್ಕೆ ಪ್ರಯತ್ನಿಸಹತ್ತಿದುವು, ಅವರಿಂದೇನು ? ಮೂಗಿನಲ್ಲಿ ಉಂಡರೆ ಹೊಟ್ಟೆ ತುಂಬುವುದೆ? ಆ ಒತ್ತಾಯವು, ಕುಂಭಕರ್ಣ ನಿಗೆ ಇರುವ ಚುಚ್ಚಿದಂತೆ, ಲವಲೇಶವಾದರೂ ಫಲಕಾರಿಯಾಗಲಿಲ್ಲ. ಹೊರಗೆ ಅಂತೂ, ಜಲಧರನ ವಾಹಿನಿಯ ಕೋಲಾಹಲಕ್ಕೆ ತೆರವೇ ಇದ್ದಿಲ್ಲ. ಗೆರಸೆ ಬಡಿದು ಇಲಿಯನ್ನು ಅಟ್ಟುವ ಆಯೆಣಿಕೆಯಾದರೂ, ಈ ಮಹತ್ಕಾ ರ್ಯದಲ್ಲಿ ಗುರಿಮುಟ್ಟುವುದು ಹೇಗೆ ?
<poem>
ಕಂದ ||.
ವನಮಧ್ಯದಲಿ ಸಮಾಧಿಯೊ |
ಆಣೆಗೊಂಡಿಹಮುನಿಯ ನಗಲಿಸುವಖಳಜನವು ||
ದಣಿವುತಧೋಗತಿ' ಗಿಳಿವೊಲು |
ವನವಾಹಿನಿ ಕೀಳುನೆಲೆಗೆ ಹರಿಯುತ್ತಿತ್ತು ||೧||
</poem>
ಲೋಕದ ಸಮಾಧಿಗೆ ಒಂದಿಷ್ಟೂ ಭಂಗವಾಗಲಿಲ್ಲ, ದೃಢನಿಶ್ಚಯದ ಕೋಟೆಯನ್ನು ಒಡೆಯಲಿಕ್ಕೆ ಯಾವ ಗುಂಡುಗಳಿಗೂ ಸಾಧ್ಯವೆ? : ಅಹಂಕಾರಕ್ಕೆ ಔದಾಸೀನ್ಯವೆ ಮದ್ದು' ಎಂಬಂತೆ, ಲೋಕದ ಅಲಕ್ಷತೆಯಿಂದಾಗಿ, ಸ್ವಲ್ಪ ಕಾಲದಲ್ಲಿ ಜಲಧರನು ಜೀವನರಹಿತನಾಗುವ ಕಾಲಬಂತು. ನಕ್ಷತ್ರಪತಿಯೂ, ನಿರ್ಧನರನ್ನು ಬಿಟ್ಟುಬಿಡುವ ಆಶ್ರಿತನಂತೆ, ಜಲಧರನನ್ನು ಮೆಲ್ಲನೆ ತೊರೆಯತೊಡಗಿದನು. ಎಲೆ, ಜಗತ್ತೆ, ತಿಳಿ ವಿನ ಕಣ್ಣನ್ನು ತೆರೆದು, ಒಮ್ಮೆ ಈ ಚಿತ್ರವನ್ನು ನೋಡು,
<poem>
ಭಾಮಿನಿ ||
ಜೀವನವು ತುಂಬಿರಲು ಮೋರೆಯೊ | ೪ಾವರಿಸಿತೆ ಕಪ್ಪು ನಕ್ಷ ಶ್ರಾವಳಿಯಪತಿಗೆಡೆಗೊಡುತ ತನ್ನಡಿಯ ಲೋಕಕ್ಕೆ |
ನೋವನೊದಗಿಸಿ ಕಣ್ಣು ಕತ್ತಲೆ | ತೀವಿಸಿದ ಮೋಡಕ್ಕೆ ಪಾಪದಿ.
ಜೀವನವು ಕಡೆಯಾಗಲಾಶ್ರಿತರೇ, ನಗುವರದಕೊ || ೧ ||
ಕಷ್ಟ ಬಂದಿರೆ ಬಗ್ಗಿ ಬೀಳದೆ | ಇಷ್ಟ ಚಿಹ್ನೆಗೆ ಹಿಗ್ಗಿ ಹೆಚ್ಚಿದೆ
ನೆಟ್ಟ ತನ್ನ ಸಮಾಧಿಯನ್ನಾರ್ಯೋದಯಕ್ಕೆ ಮುನ್ನ||
ಬಿಟ್ಟು ಬಿಡೆನೆನ್ನುತ್ತ ಲೋಕವು | ಕಟ್ಟು ಮಾಡಿದೆ, ನೋಡಿ 'ಸ್ವಜನರ
ಮೆಟ್ಟಿದಿರಿ, (ಮರಕೇರಿ ಬುಡವನು ಕಡಿಯಲೆಣಿಸದಿರಿ)|| ೨ ||
“ಸರ್ವಜನಾಸ್ಸು ಖಿನೋಭವಂತು' ||
ತನ್ನ ಮನೆ ತನ್ನವರು ನೆರೆಯವ | ರಿನ್ನು ಹುಟ್ಟಿದ ಮಾತೃ ದೇಶವು
ಎನ್ನುತಲಿ ಅಭಿಮಾನದಡಿಗಟ್ಟಿಂದ ಮೇಲೇರಿ ||
ತನ್ನ ಬೆಳಕನು ಬೀರಬೇಹುದು | ಮುನ್ನವೇ ನೆಲದಿಂದ ಬಾನಿಗೆ ಸನ್ನೆಗೆದರೆ ಸಾಗದೆಂಬುದನರಿತು ಕೈಗೊಡಿರಿ||೩||
</poem><noinclude></noinclude>
dkz0we71o57cyxh1buyjjmtmcrbyf49
ಪುಟ:ಹಗಲಿರುಳು.djvu/೪೭
104
38645
321086
293979
2026-05-20T05:26:02Z
Shreesha Sharma
7840
/* Validated */
321086
proofread-page
text/x-wiki
<noinclude><pagequality level="4" user="Shreesha Sharma" />{{Left|೩೮}}{{center|ಕನ್ನಡ ಕೋಗಿಲೆ, ಜೂನ್ ೧೧೮.}}</noinclude>ಅ:, ನಕ್ಷತ್ರಪತಿಯೆ, ನಿನ್ನ ಭೇದೋಪಾಯವು, ಸದ್ಯಕ್ಕೆ ಸಫಲವಾಯಿತು. ಏಡಿಯ ಕಾಲನ್ನು ಏಡಿಗೆ ಕುತ್ತುವ ಅಂಬಿಗನಂತೆ, ಹಿಂದೆ ನಿಂತು ಒಡನಾಡಿಗಳನ್ನೆ ಹೊದೆ ದಾರಿಸಿ ಕೃತಾರ್ಥನಾದೆ. ಜಲಧರಪ್ರೇರಿತನಾದ ಸದಾಗತಿಯ `ಪೆಟ್ಟಿಗೆ, ತೇಜಸ್ವಿ ಬಲಿಬಿದ್ದನು. ಜಲಧರನೂ, ಶಪಿಸಿದ ಮುನಿ, ಪುಣ್ಯವನ್ನು ಕಳಕೊಳ್ಳುವಂತೆ, ಟೊಳ್ಳಾದನು. ಓಡುವವನಿಗೂ ಅಟ್ಟುವವನಿಗೂ ದಣಿವು ಒಂದೆಯಲ್ಲವೆ? ಸದಾಗತಿ ಒಬ್ಬನು ಕಲ್ಲಿಲ್ಲದ ಗುಳಿಗನಂತೆ, ಅತ್ತಿತ್ತ ಅಲೆಯುತ್ತಿದ್ದಾನೆ, ಅಹೋ, ನಿನ್ನ ಕಲಿಕೆಗೆ ಕಣ್ಣಿಲ್ಲ, ಮೇಲು ಹಂತಿಯ ಉದ್ದೇಶವು, ತನ್ನಂತೆಯೆ ಕೀಳುಹಂತಿ ಬರೆಯೋಣಾಗ ಬೇಕೆಂಬುದು ಸರಿ, ಆದರೆ, ಇನ್ನು ನಿನ್ನ ಈ ರೀತಿಯಕೌಳಿಕಕ್ಕೆ, ಕಣ್ಣಾರೆ ಕಂಡುದ ರಿಂದ, ಯಾರೂ ಮರುಳಾಗಲಿಕ್ಕಿಲ್ಲ ಎಂಬುದು ನಿಶ್ಚಯವು, ಹೊಂಡವೆಂದು ತಿಳಿದೂ, ಆನೆ ಕಾಲಿಡುವುದೆ ? ಅದಿರಲಿ, ಮುಗುಳಗೆಯ ಬಾಯ ಬಿನ್ನಣಕ್ಕೆ ಮರುಳಾಗಿ, ಪರರನ್ನು ನಂಬಿದರೆ, ಜಲಧರನಂತೆ, ಆತ್ಮನಾಶವೆ ಫಲವಾಗುವುದು, ಅದರಿಂದ, ಪರೀಕ್ಷಿಸಿಯೆ, ಪ್ರತಿಯೊಬ್ಬನಲ್ಲಿಯೂ ನಂಬಿಕೆ ಇಡಬೇಕು, ಹೇಗೆಂದರೆ:-
ಚೌಪದಿ || ನೋಡುತ್ತಲೊರೆದು ಹೆಟ್ಟು ತ ಕರಗಿಸುತ್ತ ||
ಕೂಡೆ ಚಿನ್ನವ ಪರೀಕ್ಷಿಸಿ ಕೆಲಸಗೆಯ ||
ಪಾಡಿಂದ ಕುಲಶೀಲ ನುಡಿನಡತೆಗಳನು ||
ನೋಡಿ ಜನರನ್ನು ನಂಬುವುದು ತಿಳಿದವನು | || ೧ ||
ನಂಬಿಕೆಯೆನಲ್ಕೆ ಸಾಮಾನ್ಯವೆನಬೇಡ |
ನಂಬಿದವನಲ್ಲಿ ಸಂದೇಹವಿಹುದಿಲ್ಲ |
ನಂಬಿ ದೋಣಿಯನೇರೆ ಗಾಳಿಯಿಂಮಗುಚಿ |
ನಂಬಿದವನನು ಮುಳುಗಿಸಿದ ದೋಣಿಯಾಚೆ|| ೨ ||
ನಂಬಿಕೆಯನೊಗ ಹೊನ್ನುರನ್ನಗಳಕಟ್ಟೆ |
ನಂಬಿಕೆಯ ಬೆನ್ನು ಬಿಂಗದಬೆಲೆಯ (ಜಗಲಿ) ತಟ್ಟೆ ||
ನಂಬಿಕೆಯ ದಾರಿಗಂಬಕ್ಕೆರಡು ಕೈಗಳ್ ||
ನಂಬಿನಡೆಯಲ್ಕವುಗಳಕ್ಷರವನೋದಿ || ೩ ||
ಇದನ್ನು ಮನಗಾಣದೆ, ಕೊಂಬಿನ ಹೆಮ್ಮೆಯಿಂದ ಹಾಯ್ದರೆ ಹದಗೆಟ್ಟು ಹೋಗುವುದು-
ಕಂದ || ತಲೆಯೊಳು ಮುಕುಟದ ಕೂಂಬಿ |
ನ್ಯೂಲೆದಾಡುಗಳೊಂದಕೊರದು ಹಾಯಲು ಕಂಬೂ ||
ತಲೆಯ ಫಳೆಂದೊಡೆಯಲು |
ಬಳಲಿಕೆಯಾರ್ಗೆ೦ಬುದರಿವುದಿದೆಯಲ್ಲೆಲ್ಲ ||
————<noinclude></noinclude>
dv0ni1korh8udif683t8lzeizrqgwyn
ಪುಟ:ಹಗಲಿರುಳು.djvu/೪೮
104
38646
321087
293980
2026-05-20T05:26:16Z
Shreesha Sharma
7840
/* Validated */
321087
proofread-page
text/x-wiki
<noinclude><pagequality level="4" user="Shreesha Sharma" />{{center|ಹಗಲಿರುಳು.}}</noinclude>
{{center|'''ತೃತೀಯಾಂಕ'''.}}
'''ಕತ್ತಲೆ:'''-(ಪ್ರವೇಶಿಸಿ) ಆ8, “ಯಾವ ರಾಯನಿಗೆ ರಾಜ್ಯ ಹೋದರೂ, ನನಗೆ ರಾಗಿ
ಬೀಸುವುದು ತಪ್ಪುವುದಿಲ್ಲ' ಎಂಬಂತೆ ನನಗೆ ಇನ್ನೂ ಈ ಗತಿ! ಆರ್ಯನ ಮೈ ಅಳಿಯಿತು, ಹಗೆಗಳಲ್ಲಿ ಯ ಇತ್ತಂಡಕ್ಕ ಹೊಯ್ಕೆಯಾಗಿ, ಎರಡೂ ನಾಮಾವಶೇಷವಾದಂತೆಯೆ ಆಯಿತು, ಆದರೇನು? ನಮ್ಮವನೆಂದು, ಈ ನಕ್ಷತ್ರ ಪತಿಯನ್ನು ಬಯಸುತ್ತಿದ್ದರೆ, ಎಲ್ಲವೂ ಕನ್ನಡಿಯ ಗಂಟೆ ಸರಿ, ಈಗಿನ ಕಾಲದಲ್ಲಿ ನಮ್ಮವನೆಂದು ಹೊರೆ ಹೊರೆಯ ಫಲವು, ಅದರಿಂದ, ಇಕ್ಕಡೆಯ ಹೊಡೆ ದಾಡಿಕೊಂಡಿದ್ದರೇ ನನ್ನಂಥವರಿಗೆ ಕೈ, : ಇಬ್ಬರ ನ್ಯಾಯ, ಮೂರನೆಯವನ ಆಯ' ಎಂಬ ಸೂತ್ರವನ್ನೆ ಇಲ್ಲಿ ಸುರಿಯ ಬೇಕು, ಆದರೆ, ಇನ್ನಾದರೂ, ಎಡೆಯರಿತೆ ಸುರಿಯತಕ್ಕದ್ದು, ಹೀಗೆ ಯೋಚಿಸುತ್ತ ಕತ್ತಲೆ ಹೊರಟಿತು. ಎಲ್ಲೆಲ್ಲಿ ಯ ಬೆಳಕಿನ ಸಂಚಿಕೆಯ ಮಿಂಚೂ ಇಲ್ಲ. ಲೋಕವಂತೂ, ಮೂರು ಮುಕ್ಕಾಲು ಪಾಲು ಇಹಲೋಕದ ವ್ಯಾಪಾರವನ್ನು ಮರೆತು ಬಿಟ್ಟಿದೆ. ಅದರಿಂದ ಎತ್ತೆತ್ತಲೂ ಶಾಂತತೆಯೆ ತಾನು ತಾನಾಗಿದ್ದು, ಒಂದು ಕಡ್ಡಿ ವಿಳ್ಳೆ'ಂದು ಮುರಿದರೂ ಕಿವಿಗೆ ಕೇಳಿಸುವಂತಿತ್ತು. ಆದರೆ, ನೀಚನಾದ ಸದಾಗತಿಯನ್ನು ನಿಶ್ವಾಸಮೂಲಕವಾಗಿ, ಲೋಕವು ಹೊರದೂಡುತ್ತಿದ್ದುದು ರಿಂದ, ಆ ಗಾಳಿಯ ಬಸಬಸಾವಣೆ ಮಾತ್ರ ಆ ಶಾಂತತೆಗೆ ಅಷ್ಟಿಷ್ಟು ಭಂಗ ಮಾಡುತ್ತಿತ್ತು. ಹೊರಹೊರಗೆ, ಹಾದಿಬೀದಿಗಳಲ್ಲಿ ಮಾಡಮೈದಾನುಗಳಲ್ಲಿ, ನಕ್ಷತ್ರಪತಿಯ ಕೈಯಾಟ, ಒಳಗೊಳಗೆ, ಓಣಿಕೋಣೆಗಳಲ್ಲಿ ಮರೆಮಲೆ ಗಳಲ್ಲಿ ಕತ್ತಲೆಯ ಮಸಮಾಟ, ಒಟ್ಟಿಗೆ ಹೇಳುವುದಾದರೆ, ಊರು, ವಂಚಕ ನಂತೆ, ಒಳಗೊಂದು ಹೊರಗೊಂದು, ಸುಳ್ಳಿನ ನಾಣ್ಯಕ್ಕೆ ಸತ್ಯದ ಮುದ್ರೆ. ಇಲಿಗಳು ದಾರಿಯಲ್ಲಿ ತಲೆಯೆತ್ತಿ ಹರಿದಾಡುತ್ತಿದ್ದವು. ಬೆಕ್ಕುಗಳು ಮೂ' ಎಂಬ ಸಿಳ್ಳಿನೊಡನೆ, ಅಲ್ಲಲ್ಲಿ ತಳವಾರಿಕೆಯ ಸೋಗಿನಿಂದ ಹೊಂಚುಹಾಕು ತಿದ್ದುವು. ಹಕ್ಕಿಯೊಂದು ಟ್ರಂಕು ಡ್ರಿಂಕು' ಎಂದು ಏನೋ ಒಂದು ಲಕ್ಷಣವನ್ನು ಹೇಳಿ ವಾಯುಮಂಡಲದಲ್ಲಿ ತೇಲಿಕೊಂಡು ಹೋಯಿತು. ಅದಕ್ಕೆ ಗೂಗೆ ಹೂಂ ಹೂಂ' ಎಂದುದು ನರಸಣ್ಣನ ಚಿಟ್ಟಿಗನ ಹೌದಣ್ಣ ಹೌದು' ಆಗಿರಬಹುದು, ಆಗ ನಡುವಿರುಳ ಕೋಳಿ ಕೋ ಕೋ' (ಯಾರು ಯಾರು) ಎಂದು ಕೇಳಿತು, ಅದಕ್ಕೆ ಮತ್ತೊಂದು, ಗೂಗೆ ಅಹಂ ಅಹಂ'<noinclude></noinclude>
jcekd5ialk5o45r69gugabvqqh3e7sd
ಪುಟ:ಹಗಲಿರುಳು.djvu/೪೯
104
38647
321088
293987
2026-05-20T05:26:31Z
Shreesha Sharma
7840
/* Validated */
321088
proofread-page
text/x-wiki
<noinclude><pagequality level="4" user="Shreesha Sharma" />{{Left|೪೦}}{{center|ಕನ್ನಡ ಕೋಗಿಲೆ, ಜೂನ್ ೧೯೧೮.}}</noinclude>
(ನಾನು ನಾನು) ಎಂದು ಮರು ಮಾತುಗೊಟ್ಟಿತು. ಆಗ ಎಚ್ಚರಿತ ದನವೊಂದು ಹುಂ ಮಾ' (ಹುಂ, ಬೇಡ) ಎಂದು ಕೂಗಿ ಹೇಳಿತು, ಒಡನೆ ಕರು ಅಂಬೇ' (ಅಮ್ಮಾ, ಏನು?) ಎಂದು ಕೇಳಿತು.. ಕೂಡಲೆ (ಉಂ, ಮಾ. (ತಾಳು, ಸೌಭಾಗ್ಯ ದೇವತೆಯಾದ ಲಕ್ಷ್ಮೀದೇವಿಯ ಪ್ರಕಾಶವು, ಬೇಗನೆ ತಲೆದೋರುವುದು) ಎಂದು ಹೇಳಿತು. ಹೀಗೆ ನಾನಾ ಸಂಜ್ಞೆಯ ಪ್ರಶ್ನೋತ್ತರಗಳು ಅಸ್ಪಷ್ಟವಾಗಿ ನಡೆಯುತ್ತಿದ್ದುವು. ಹೀಗಿರುವಾಗ, ಕತ್ತಲೆ ಮನೆ ಸಾಲುಗಳನ್ನು ಹೊಕ್ಕು, ಪರೀಕ್ಷಿಸತೊಡಗಿತು. ಬಹಳ ಮಂದಿ, ನಿದ್ರಾ ಸಮಾಧಿಯಲ್ಲಿ ಮೈಮರೆತು, ತಮ್ಮ ನೆಡುನೋಟದಲ್ಲೆ ಇದ್ದರು, “ಮಹಾ ಜನೋ ಯೇನಗತಸ್ಸಪಂಥಾ:' ಎಂಬ ಮೂಢಭಕ್ತಿಯವರಲ್ಲಿ ಕೆಲವರು ಮಾತ್ರ ಆ ದಾರಿತಪ್ಪಿ ಅತ್ತಿತ್ತ ನೋಡುತ್ತಿದ್ದರು. ಆದರೂ, ಕತ್ತಲೆಗೆ, ಹಲವರನ್ನು ತನ್ನ ದಾರಿಗೆ ಎಳೆಯಲಾಗಲಿಲ್ಲ. ಹಾಗೆಂದು ಕೆಲವರು ಮಾತ್ರ ಅದರ, ಬಲೆಗೆ ಬಂದಿಗಳಾಗದೆಯೂ ಇರಲಿಲ್ಲ, ಭೂಕಲ್ಪವೃಕ್ಷವಾದರೂ ತೆಂಗಿನ ಮರವು, ತಲೆಯಲ್ಲಿ ಹೊತ್ತು ಸಾಕಿದುವುಗಳೆಲ್ಲ ಫಲಗಳೂ ಎಳೆ ನೀರಿಂದ ತುಂಬಿರುವುವೆ? ಕೆಲವು ಬೋಡಾಗಿ ಬರಿಗತ್ತಲೆಯಿಂದಲೆ ತುಂಬಿ ರುತ್ತವೆಯಲ್ಲ ವೆ? ಕೆಲವು ದುಷ್ಟರು ಎಚ್ಚರಿಕೆಯಿಂದಿದ್ದರು. ಕತ್ತಲೆ ಅವರ ಬಳಿಸಾರಿತು, ತಾತ್ಕಾಲಿಕವಾದ ಸತ್ಕಾರಗಳೆಲ್ಲವೂ ಕಳೆದುವು.]
'''ಕತ್ತಲೆ''':- ಪ್ರಿಯರೆ, ಹೇಗೆ, ಸರ್ವಸಮದೃಷ್ಟಿಯ ಕಾಲನ ದಯದಿಂದ ನಿಮಗೆ
ಲ್ಲರಿಗೂ ಸುಖವೆ?
{{gap}}ಈ ಪ್ರಶ್ನೆಗೆ, ಏನೆಂದು ಉತ್ತರಗೊಡಲಿ? ಮೇಲಾಗಿ, ಸರ್ವಾಧಾರನಾಗಿರುವ ಈ ಕಾಲವನ್ನು ಸಮದೃಷ್ಟಿಯವನೆಂದು ಹೇಳುತ್ತಿರುವೆ. ನೀನೇನೆ ಅವನ ದಯಕ್ಕೆ ಪಾತ್ರಳಾದರೂ, ನಾವೂ ಆ ಸುಖಕ್ಕೆ ಆಸ್ಪದರೆಂದಣಿ ಸುವುದು, ಬಾನಿನ ಬಳ್ಳಿಯೆ ಸರಿ
'''ಕತ್ತಲೆ''':- ಅದೇನು ? ಕಾಲನು, ಸರ್ವಾಶ್ರಯನಾದರೂ, ಪ್ರಯತ್ಯಾನುಸಾರ
ವಾಗಿಯೆ ಫಲವನ್ನು ಒದಗಿಸುವುದು, ಅವನ ರೀತಿ, ನೀವಾದರೂ, ಪ್ರಯತ್ನಿಸುತ್ತಿದ್ದಿರಬಹುದೆಂದು ನನ್ನ ಎಣಿಕೆ ಇತ್ತು. ಹಾಗೆ ಕೈಯನೆ
ಹಾಕದೆ ಕಹಿಯೆನ್ನುವುದು ಚೆನ್ನಾಗಿಲ್ಲ.<noinclude></noinclude>
dcbepglda4da8c3msj07x4ykbbi59n1
ಪುಟ:ಹಗಲಿರುಳು.djvu/೫೦
104
38648
321089
293989
2026-05-20T05:26:56Z
Shreesha Sharma
7840
/* Validated */
321089
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಹಗಲಿರುಳು.}}
{{Right|೪೧}}
{{gap}}ಅದೇನೆಂದು ಹೇಳಲಿ ? ಮೇಲೆ ನೋಡಿ ಉಗುಳಿದರೆ ಮೋರೆಗೇ। ಬೀಳುವುದಲ್ಲವೆ? ಆದರೂ, ನೀನು, ನಿರ್ವಂಚನೆಯಿಂದ ವಿಚಾರಿಸಿದುದಕ್ಕಾಗಿ ಹೇಳುತ್ತೇನೆ, ಕಾಲನ ಇಚ್ಛೆ ಸರ್ವಸಮಾನವಾಗಿಯೆ ಇರಬಹುದು, ನಾವೂ ಹಾಗೆಯೆ, ಆದರೆ, ಏಕೋದ್ದೇಶದ ಬಡವರಾದ ನಮ್ಮ ಮತ್ತು ಅವನ ನಡುವೆ ಒಂದು ಅಡ್ಡಿಯ ಪರದೆಯುಂಟು.ಅದೇ ನಮ್ಮಲ್ಲಿಯ ಧನಿಕ ಸಮಾಜವು, ಕೆರೆಯ ತೂಬು, ಎಡೆಯ ತೂತುಗಳಲ್ಲಿ ನೀರನ್ನು ಒಳಗೊಳಗೆ ಸೆಳೆವಂತೆ, ಆ ದುಷ್ಟ ಮಂತ್ರಿಗಳಾದ ಧನಿಕರು, ಕಾಲನ ಕರುಣಾಕಟಾಕ್ಷದ ಫಲವನ್ನು ತಂತಮ್ಮೊಳಗೇ ಹಂಚಿಕೊಳ್ಳುತ್ತಾರೆ, ಅದರಿಂದ ನಾವು ಬಾವಿಯ
ಕಪ್ಪೆಗಳೇ ಆಗಿರುತ್ತೇವೆ. "
'''ಕತ್ತಲೆ''':-ಅ:, ಕಷ್ಟ, ಇದು ಬಹಳ ಕಷ್ಟ, ಮೊದಲಿನ ನನ್ನ ಮನಸ್ಸಿನ ಮಂಡಲ
ವೆಲ್ಲವು ಈಗ ಟೊಳ್ಳಾಗುತ್ತ ಬರುತ್ತದೆ. ಭೂದೇವಿಗೆ ಸ್ಥಾವರ ಜಂಗಮಗಳೆಂಬ ಎರಡು ತರಗತಿಯ ಮಕ್ಕಳು, ಅವುಗಳಲ್ಲಿ, ಸ್ಥಾವರಗಳು ಅಂಗ ವಿಕಲರಾಗಿಯೂ ದಡ್ಡರಾಗಿಯೂ ಇರುವುದರಿಂದ, ಎಂದೆಂದೂ ತಾಯಿಯು ತಾನೆ ಆನುಕೂಲ್ಯಗಳನ್ನು ಒದಗಿಸಿ, ಅವುಗಳನ್ನು ರಕ್ಷಿಸುತ್ತಾಳೆ, ಜಂಗಮಗಳಾದರೂ, ಸ್ಥಾವರಗಳನ್ನೆ ತಿಂದು ತೇಗಿ ಓಡಾಡುವವು. ಅಷ್ಟೆ ಅಲ್ಲ. ತಮ್ಮಲ್ಲಿ ಮೂಢರಾದ ಪಶುಪಕ್ಷಾದಿಗಳನ್ನೂ, ನೀವು ಮನುಷ್ಯರು, ಶಕ್ತಿ ಯುಕ್ತಿಗಳಿಂದ ಬಡಿದು ಬಾರಣೆ ಮಾಡುತ್ತೀರಂತೆ. ಈ ಸುದ್ದಿಯನ್ನು, ಆ ಪ್ರಾಣಿಗಳು ಆಗಾಗ ಹೇಳುತ್ತಿದ್ದರೂ,ಸುಳ್ಳಾಗಿರಬಹುದೆಂದೆ ಎಣಿಸುತ್ತಿದ್ದೆನು. ಆದರೆ ಈಗ ಎಲ್ಲವೂ ಸ್ವಷ್ಟವಾಯಿತು, ಅದರಿಂದ ನಿಮ್ಮ ಈ ಸ್ಥಿತಿ ಯಾದರೂ ಅಯುಕ್ತವಲ್ಲ. ತಲೆಗೆ ಎರೆದ ನೀರು ಕಾಲಿಗೆ ಇಳಿವುದು ಪ್ರಕೃತಿ, ಮೊದಲು ನೀವೆಲ್ಲರೂ ಒಟ್ಟುಗೂಡಿ ಅಬಲರನ್ನು ಹಿಡಿದು ಹಿಂದಿ ಕಡಿಯುತ್ತಿದ್ದುದರಿಂದ, ಈಗ ನಿಮ್ಮ ಕೊರಳಿಗೂ ಅದೇ ಕತ್ತಿ ಎತ್ತಿರುವುದು,
{{gap}}“ಸರಿ, ಆದರೆ, ಹಿಂದಿನ ಪಾಪವು, ಬಡವರಾದ ನಮಗೆ ಮಾತ್ರ ತಲೆ ಹೊರೆಯೊ? ಆ ಅನ್ಯಾಯಾರ್ಜಿತ ಪ್ರಯೋಜನವೆಲ್ಲ ದೊಡ್ಡವರಿಗೆ, ಎಂದ ಮೇಲೆ, ಅವರು ಸುಖವಾಗಿರುತ್ತಾ ನಾವು ಯಾಕೆ ಈ ಕಷ್ಟಕ್ಕೆ ಈಡಾಕಬೇಕು?
'''ಕತ್ತಲೆ''':- ಒಳ್ಳೆಯ ಪ್ರಶ್ನೆ ಇದು, ಆದರೆ ಕೇಳರಿ, ಅವರ ಈಗಿನ ಮಹತ್ವವೆ
ತಮಗೆ ಒದಗಬಹುದಾಗಿದ್ದ ಕಷ್ಟವನ್ನು ನೂಕಿದೆ. ಆದರೆ, ಅವರ ಪಾಲಿನ<noinclude></noinclude>
dvilmt31h3cs8gqsmw3qjnlsieg9972
ಪುಟ:ಹಗಲಿರುಳು.djvu/೫೧
104
38649
321090
293991
2026-05-20T05:27:13Z
Shreesha Sharma
7840
/* Validated */
321090
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೪೨}}{{center|ಕನ್ನಡ ಕೋಗಿಲೆ, ಲೂಸ್ ೧೯೧೬.}}
ಕಷ್ಟವೂ ನಿಮ್ಮನ್ನೆ ಹಿಡಿಯಬೇಕಾಯಿತು. ಇಬ್ಬರೂ ಒಟ್ಟಿಗೆ ಹೊಣೆ ಬರ ಕೊಟ್ಟಲ್ಲಿ ಸಾಲಗಾರನು, ಅವರೊಳಗೆ ಸಿಕ್ಕಿದವನಿಂದ ಹಣವನ್ನು ವಸೂಲಿ
ಮಾಡಬಹುದು, ಅದರಿಂದ ಅವರ ಪಾಪವೂ ನಿಮ್ಮನ್ನೆ ಹೊಂದಿದೆ.
{{gap}}“ಹಾಗಾದರೆ, ಪಾಲುಗಾರನ ಸಾಲದ ನಷ್ಟದಂತೆ, ನಮಗೆ ಕಷ್ಟವೆ ಗತಿಯೆ??
'''ಕತ್ತಲೆ-ಅಲ್ಲ''': ಒಮ್ಮೆ, ಯುಕ್ತಿಯಿಂದ ತಪ್ಪಿಸಿಕೊಂಡರೂ, ಎಂದೆಂದಿಗೂ
'ಸಾಗದು, ಆ ಮೇಲೆ, ನಷ್ಟ ಹೊಂದಿದ ಪಾಲುಗಾರನು, ಆ ತಪ್ಪಿಸಿಕೊಂಡವ ನಿಂದ ವಸೂಲಿ ಮಾಡಬಹುದು, ಹಾಗೆಯೆ, ನೀವಾದರೂ ಪ್ರಯತ್ನಿಸಿ ಸುಖದ ಬಾಗಿಲನ್ನು ತೆರೆದುಕೊಳ್ಳಬೇಕು, ನೀವು ಮನಮುಟ್ಟಿ ಹೆಣಗುವು ದಿದ್ದರೆ, ತಕ್ಕ ಉಪಾಯವನ್ನೂ ತಿಳಿಸುತ್ತೇನೆ. ಸುಮ್ಮನೆ (ಆಟಿನೋಡಿದುದೂ ಅಲ್ಲ, ಮದಕಾಯುದೂ ಅಲ್ಲ” ಎಂಬಂತೆ ಆಗುವುದಿದ್ದರೆ ಹೊರಗಿ ನವಳಾದ ನಾನು ಕಷ್ಟಕ್ಕೆ ಕತ್ತಲೆಯ ಗುರಿ' ಎಂಬ ಇನ್ನೊಂದು ಗಾದೆಯನ್ನು, ಯಾಕೆ ಹುಟ್ಟಿಸಿಕೊಳ್ಳಬೇಕು?
ದಯವಿಟ್ಟು ಹೇಳು, ಮೈಗೆಟ್ಟು ಹೆಣಗುತ್ತೇವೆ. 6: ತಲೆ ಮಟ್ಟು ವಾಗ ಬಾರದ ಕೋಪ ಬೆನ್ನು ತಟ್ಟುವಾಗಳೆ?”
'''ಕತ್ತಲೆ''':- ಆದರೆ ಕೇಳಿರಿ, ಈ ಭೂಮಾತೆಯ ಮಡಿಲಲ್ಲಿ ಬಳೆದುದರಿಂದ,
ಎಲ್ಲರೂ ಅಣ್ಣ ತಮ್ಮಂದಿರಂತೆ, ಸುಖದುಃಖಗಳಿಗೆ, ಒಂದೆ ತರದ ಹಕ್ಕು ದಾರರು, “ಒಬ್ಬನಿಗೆ ಹಾಲು ಒಬ್ಬನಿಗೆ ನೀರು' ಎಂಬ ಪಕ್ಷಪಾತ ಬುದ್ಧಿ ಭೂಮಾತೆಗೂ ಇಲ್ಲ, ಕೆಲ ಮಂದಿ ಬಡವರು, ಸಾವಿರ ಬೊಟ್ಟು ನೆತ್ತರನ್ನು ಒಂದು ಬೊಟ್ಟು ಮಾಡಿ ಬೆವರಿಳಿಸಿ ಕೆಲಸಮಾಡುವುದು! ಕೆಲ ದೊಡ್ಡವ ರೆಂಬವರು ಮಾತ್ರ ಕಾಲುನೀಡಿ ಕೂತುಕೊಂಡು ಡೊಳ್ಳು ಬಾರಿಸುವುದು!! ಊರು ಸೂರೆಯಾದಾಗ, ಯುದ್ಧ ವೆದ್ದಿರುವಾಗ, ಮುಂದಾಗಿ ಮೈ ಮಾರ ಬೇಕು, ಈ ಬಡಜನರು! ಅದರ ಪ್ರತಿಫಲವಾದ ಸೌಭಾಗ್ಯ ಸಂಪತ್ತನ್ನು, ಸುಖಶಾಂತಿಯನ್ನು ಅನುಭವಿಸುವುದು ಈ ದೊಡ್ಡವರು!! ಇದೇನು ಅನ್ಯಾಯ! ಇಂಥ ವಕ್ರಬುದ್ಧಿ, ಸರ್ವತಂತ್ರನಿಯಂತ್ರಿಣಿಯಾದ ಪ್ರಕೃತಿದೇವಿಯಲ್ಲಿ ರುವುದೆ? ಆ ಪವಿತ್ರವಾದ ಪರಲೋಕದಿಂದ ಇಲ್ಲಿಗೆ ಬರುವಾಗ ಒಬ್ಬನಿಗಾದರೂ, ತಂದ<noinclude></noinclude>
c2oho8rcefff4wea0wg9e957t3ur1lb
ಪುಟ:ಹಗಲಿರುಳು.djvu/೫೨
104
38650
321060
293993
2026-05-20T05:14:50Z
Shreesha Sharma
7840
/* Validated */
321060
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಹಗಲಿರುಳು.}}
ಮೈಯೊಂದಲ್ಲದೆ, ಬೇರೇನಾದರೂ - ಮೂಲಧನವಿತ್ತೆ ? ಇಲ್ಲ. ಈ ಧನಿಕರೆಲ್ಲರೂ ಭೂಮಾತೆಯ ಮಡಿಲಿನಿಂದ ಕಸುಕೊಂಡಿರುವರು: ಅದು ನ್ಯಾಯಾರ್ಜಿತವಾಗಿದ್ದರೆ, ಈ ಸಹೋದರರೆಲ್ಲರಿಗೂ ಸರಿಯಾಗಿ ಹಂಚಬೇಕು. ಹಂಚುವುದಿರಲಿ, ಸೂಚಿ ಮಾತ್ರೇಣ ಮಾಧವ' ಎಂದ ಕೌರವನಂತೆ, ಎಳ್ಳಿನ ಜಳ್ಳನ್ನಾದರೂ ತೋರಿಸುವಂತಿಲ್ಲ, ಅದರಿಂದ ಮುಳ್ಳನ್ನು ಮುಳ್ಳಿಂದಲೆ ತೆಗೆವಂತೆ, ಆ ಕಳ್ಳರನ್ನು ಕಳ್ಳತನದಿಂದಲೆ ಗೆಲಬೇಕು. ಈ ಉಪಾಯವನ್ನು ಚೌರ್ಯವೆಂದೂ ಹೇಳಲಾಗುವುದಿಲ್ಲ. ಹಲವರ ಹಕ್ಕಿಗೆ ಆ ಕೆಲವರೆ ಕೈ ಹಾಕುವುದು ನ್ಯಾಯವೆಂದಾದ ಮೇಲೆ, ನಿಮ್ಮದನ್ನು ನೀವೆ ಪಡಕೊಂಡರೆ ಹೇಗೆ ತಪ್ಪಾಗುವುದು? ಕಾಲವಂತೂ ಅನುಕೂಲವೇ ಆಗಿದೆ. ನಕ್ಷತ್ರಪತಿಯು ಭೇದೋಪಾಯದಿಂದಾಗಿ, ಲೋಕವೆಲ್ಲ ವೂ ಮೈ ಮರೆತಿದೆ. ತೇಜಸ್ವಿ ಕಣ್ಣು ಮುಚ್ಚಿರುತ್ತಾನೆ, ಕಲಿಯುಗಕ್ಕೆ ಮಾಂಡವ್ಯ ಮತದಂತೆ ಪಯಣಕ್ಕೆ, ದೃಢ ನಿಶ್ಚಯವೆ ಸುಮುಹೂರ್ತವಾಗಿರುವುದರಿಂದ, ಕ್ಷಣಕಾಲವಾದರೂ ತಡೆಯದೆ ಹೊರಡಿರಿ, ಆ ಧನಿಕರ ಮನೆಗಳಿಗೆ ಗನ್ನಹಾಕಿ ಬೇಕಾದಷ್ಟು ನಗನಾಣ್ಯ ಗಳನ್ನು ಬಾಚಿಕೊಂಡು ಬನ್ನಿರಿ, ದಾರಿಕೇರಿಗಳಲ್ಲಿ ಯ ಬಯಲು ಬಟ್ಟೆ ಗಳಲ್ಲಿಯ ರಾಜನಾದ ನಕ್ಷತ್ರಪತಿಯ ಕೈಯಾಡುತ್ತಿ ರುವುದರಿಂದ, ನಿಮಗೆ ಅಂಜಿಕೆಯಾಗಬಹುದು, ಆದರೆ, ರಾಜಮುದ್ರೆಯ ನಾಣ್ಯವು ಬಡವರಲ್ಲಿಯೂ ಭಾಗ್ಯವಂತರಲ್ಲಿಯೂ ಏಕಪ್ರಕಾರವಾಗಿ ನಡೆವಂತೆ ಈ ರಾಜನ ಕೈಗೂ ಪಕ್ಷ ಪರಪಕ್ಷವೆಂಬ ಭೇದವಿಲ್ಲ. ನಿಮ್ಮ ಮುಖ್ಯಸ್ಥಾನವಾದ ಅಂಕ ಡೊಂಕಿನ ಮರೆ ಮೂಲೆಗಳಲ್ಲಿ ನಾನೆ ಇದ್ದು ಸಹಾಯಮಾಡುತ್ತೇನೆ. ನಾನು ಹೊರಗಿನವಳಾದರೂ ಅಷ್ಟೆಲ್ಲ ಹೇಳಿದುದು ಕವಲೆಣಿಕೆಯಿಂದಲ್ಲ ಎಂಬುದನ್ನು, ನಿಮಗೆ ಹೇಳುವ ಅವಶ್ಯವಿಲ್ಲ,ನನಗೆ ಇಕ್ಕಡೆಯೂ ಒಂದೆ. ಅವರು ಕಣ್ಣು ಕುತ್ತಲಿಲ್ಲ; ನೀವು ಹಾಲೆರೆಯಲಿಲ್ಲ. ಆದರೂ, ಧನ ಪ್ರವಾಹವು, ದೊಡ್ಡವರು ಬಡವರೆಂಬ ಕೃತ್ರಿಮವಾದ ಮರಳಿನ ದಿಣ್ಣೆ ಕಣಿವೆ ಗಳನ್ನು ಕೊಚ್ಚಿಕೊಂಡು ಹೋಗಿ ಅಡಿಗಟ್ಟು ಸರಿಯಾದರೆ, ಮೇಲಿನ ಹೊಯ್ಲಿನ ಹೊಡತವೂ ಹೋಗಿ ಸಂಸಾರವೆಂಬ ನದಿ ಸುಗಮವಾಗುವುದು.ಸರ್ವಜನಾಸ್ಸು ಖಿನೋ ಭವಂತು' ಎಂಬುದೆ ನನ್ನ ಕೋರಿಕೆ.
ನಾವು ಈ ವರೆಗೂ ಹತಾಶರಾಗಿ, ನಮ್ಮಕಡೆಯ ದೈವವೆ ನಿದ್ರಾವಸ್ಥೆಯಲ್ಲಿದೆ ಎಂದು ಎಣಿಸುತ್ತಿದ್ದೆವು. ಆದರೆ, ಈಗಿನ ನಿನ್ನ ಮಾತನ್ನು ಕೇಳಿ<noinclude></noinclude>
ow4i73eqfx97obo3gma4axp4qiujgse
ಪುಟ:ಹಗಲಿರುಳು.djvu/೫೩
104
38651
321061
293995
2026-05-20T05:15:58Z
Shreesha Sharma
7840
/* Validated */
321061
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಕನ್ನಡ ಕೋಗಿಲೆ, ಜೂನ್ ೧೯೧೮.}}
ದರೆ, ಕಾಲವೆ ನಮಗೆ ಅನುಕೂಲವಿದೆಯೆಂದು ತೋರುವುದು. ಹಚ್ಚೆನು ಹೇಳಲಿ, ಈ ನಮ್ಮ ಮಕ್ಕಳ ಬೆನ್ನಿಗೆ ಅಂಟಿದ ಹೊಟ್ಟೆ ತುಂಬುವ ಈ ಸೂಚನೆಗೆ ತುಂಬ ಕೃತಜ್ಞರಾಗಿರುವೆವು, ಅದಕ್ಕಾಗಿ, ಈಗಲೆ ಹೊರಡುತೇವೆ.
[ಆಗ ಮೈ ಮೆರತು ನಿರಾಶವಾದ ಕತ್ತಲೆಯ ಎಣಿಕೆಗಣ್ಣಗೆ ನೀರು ಮುಟ್ಟಿಸಿದಂತಾಯಿತು. ಅದರಿಂದ, ಹೀಗೆ ಹೇಳಿತು.]
'''ಕತ್ತಲೆ''':- ಪ್ರಿಯರೆ, ನಿಮಗೆ, ನನ್ನ ಅದೃಶ್ಯಶಕ್ತಿಯ ಕತ್ತಲೆಯ ಕಂಬಳಿಯನ್ನು
ಹೊದೆಯಿಸುತ್ತೇನೆ. ಇದರಿಂದ ನಿಮ್ಮನ್ನು ಎಚ್ಚತ್ತರೂ ಯಾರೂ ಕಾಣಲಾರರು. [ಆ ಮೇಲೆ, ಕತ್ತಲೆಗೆ ಕೃತಜ್ಞತೆಯನ್ನು ಒಪ್ಪಿಸಿ, ಆ ಪಂಗಡವು ಹೊರಟಿತು. ಅವರಲ್ಲಿ ಅನೇಕ ತರಗತಿಯವರಿದ್ದರು. ಕಳ್ಳರ ಗುರುವೆಂಬ ವನು ಒಂದು ಸಮಾಜದ ಮುಂದಾಳು, ಹೆಂಡದಗಂಡನೆಂಬವನು ಬೇರೊಂದು ನೆರವಿಯ ಮೇಲಾಳು, ಜೂಜಿನ ಓಜನೆಂಬವನು ಬದಲೊಂದು ಸಂದಣಿಯ ಮೊದಲಿಗನು, ಇವರೆಲ್ಲ, ಒಂದು ಗಿಡುವಿನ ಮೂರು ಶಾಖೆಗಳು, ಎಲ್ಲರೂ ಇಂದು ಒಂದೆ ಕೆಲಸದಲ್ಲಿ ಕೈ ಹಾಕಿದ್ದರು. ಒಂದು ಹುರಿಗೆ ಮತ್ತೆರಡು ಸೇರಿದರೆ ಮುಪ್ಪುರಿಯಾಗಿ ಮತ್ತಷ್ಟು ಬಲವಾಗುವುದಿಲ್ಲವೆ? ಆದರೆ, ಹಲವು ಸಮಗಾರರು ಸೇರಿ ಚರ್ಮದ ಹದಗೆಟ್ಟಿತು, ಎಂಬ ಮಾತೂ ಇದೆ.]
{{center|'''ಧನಕೋಟನಾರಾಯಣಸೆಟ್ಟಿಯ ಮಾಳಿಗೆಮನೆ'''}}
'''ಕಳ್ಳರ ಗುರು''':- ಅ, ಈ ಮನೆಯ ಗಂಭೀರತೆಯನ್ನು ಏನೆಂದು ಬಣ್ಣಿಸಲಿ !
ಒಂದಕ್ಕೊಂದು ಸೇರಿ ಎರಡಾಗಿ, ಮೆಲ್ಲ ಮೆಲ್ಲನೆ ಹತ್ತು ನೂರು ಸಾವಿರ ಲೆಕ್ಕದಿಂದ ಕೋಟ್ಯಂತರವಾಗುವಂತೆ ಇದೂ ಇಷ್ಟು ಎತ್ತರವಾಗಿದೆ. ಇದರ ಈ ಮಹತ್ವವು ನೆಲೆಗೊಳ್ಳಲಿಕ್ಕೆ ನಮ್ಮಂಥವರ ಎಷ್ಟು ಮನೆಗಳಿಗೆ ಮುಳ್ಳ ಕಟ್ಟಿಗಳು ಬಿದ್ದಿವೆಯೊ? ಎಷ್ಟು ಸಂಸಾರಗಳು ಹಾದಿ ಬೀದಿಗಳಲ್ಲಿ ಅಲೆಯು ತಿರುವವೊ ? ಇನ್ನೆಷ್ಟು ಮಂದಿಗೆ ಕಾಡಸೊಪ್ಪು ತೋಡನೀರು' ಆಗಿದೆಯೋ ? ಮತ್ತೆಷ್ಟು ಜನರು ಹೇಳಿದ ಕೆಲಸ, ಹಾಕಿದ ಕೂಳು'ಗಳಿಗೆ ಕೈಯೊಡ್ಡಿ ಎದೆ ಮುರಿದು ಕೆಲಸಮಾಡುತ್ತಿರುವರೋ ? ಹಾ! ಲೋಕವನ್ನೆ (ಪ್ರಾಣಾಯ ಸ್ವಾಹಾ' ಎಂದು ನೀರುಗುಡಿದು ತಿಂದು ತೇಗುವ ಈ ದೊಡ್ಡವರನ್ನು ನಿರ್ಮಿಸಿದ ಸ್ವಾರ್ಥಿಯಾದ ಹಿರಣ್ಯಗರ್ಭನ ಸ್ವಾರ್ಥವು ಇವರಲ್ಲಿ ಯ<noinclude></noinclude>
av58dt78c1zxp45ff49kl2zjiw2ov09
ಪುಟ:ಹಗಲಿರುಳು.djvu/೫೪
104
38652
321062
293997
2026-05-20T05:16:25Z
Shreesha Sharma
7840
/* Validated */
321062
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಹಗಲಿರುಳು.}}{{Right|೪೫}}
ಹೊಳೆದು ಕಾಣುತ್ತಿದೆ, ತಂದೆಯಂತೆ ಮಗ'ನೆಂಬ ಮಾತು ಇಲ್ಲಿಯೆ
ಅನ್ವಿತವಾಗಿದೆ.
'''ಹೆಂಡದ ಗಂಡ''':- ಪ್ರಿಯನೆ, ನಿನ್ನ ಮಾತು ಸರಿ, ಇಂಥ ದೊಡ್ಡವರು, ಕೈತೋಡು
ಗಳಂತಿರುವ ಸಣ್ಣ ಸಣ್ಣ ಭೂಭಾಗಗಳನ್ನು ತಮ್ಮ ವಶಮಾಡಿ ಹರಿವ ಹೆದ್ದೊರೆ ಯಂತಿದ್ದರೆ, ಲೋಕ ಹಿತವೆ ಆಗುತ್ತಿತ್ತು. ಆದರೆ, ಎಲ್ಲವಕ್ಕೂ ಬಾಯಿದೆರೆ ವರಲ್ಲದೆ, ಅದರಿಂದೇನೂ ಪ್ರಯೋಜನವಿಲ್ಲ,ಊರಿಗೂ ತಮಗೂ ಕಷ್ಟವೆ: ಈ ಮನೆಯೆ, ಅದನ್ನು ಸೂಚಿಸುತ್ತಿದೆ. ಮಗು ಮುಟ್ಟುವಂತೆ ಉಂಡು, ತಲೆಬಗ್ಗಿ ಸಲಾರದ ಹೊಟ್ಟೆಬಾಕನ ಉರ್ಧ್ವದೃಷ್ಟಿಯಿಂದ ಮೇಲೆ ನೋಡುತ್ತಿದೆ. ಮಿತಭೋಜನವನ್ನು ಮಾಡಿದರೆ, ಆ ಅನ್ನರಸವು ನಾಡಿ ನಾಡಿಗಳಲ್ಲಿ ಯ ಸರಿದು ಶರೀರಕ್ಕೂ, ಅದರಿಂದ ತನ್ನನ್ನು ಹೊಂದಿದವರಿಗೂ ಉಪಕಾರ ವಾಗುವುದು. ಆದರೆ, ಅದು ಮಿತಿಮೀರಿದರೆ, ಅರಗದೆ ತನಗೂ ಇತರರಿಗೂ ಉಪದ್ರವವೆ ಸರಿ, ನೋಡು ಅದಕ್ಕಾಗಿಯೇ ನಾನು ಸಾರದ ಅಂಗಡಿಯನ್ನು ಎಲ್ಲರಿಗಾಗಿ ತೆರೆದಿರುವುದು, ಆ ಸಾರವನ್ನು ಸೇವಿಸಿದರಲ್ಲದೆ ಸಂಸಾರವು ಸಾರ್ಥವಾಗುವುದು ? ಆದರೇನು ಈ ದುಷ್ಟರು, ಆ ಸಾರಕ್ಕೆ ಹೆಂಡವೆಂದು ಹೆಸರಿಟ್ಟು, ನನಗೂ, ನನ್ನಲ್ಲಿ ಹೊಕ್ಕು ಹೊರಡುವ ಸಾರಜ್ಞರೆಲ್ಲರಿಗೂ ಕಪ್ಪು ಕರೆಯಿಡತೊಡಗಿದ್ದಾರೆ. ಸಾರವೆಂದರೆ ಸಾಮಾನ್ಯವೆ? ಸರಸ್ವತೀ ಭಕ್ತನಂತೆ, ನನ್ನ ಸಾರಸೇವಕನು, ಮೊದಲು ಚಾರಕನಾಗಿದ್ದರೂ ಎರಡನೆ ನಿಮಿಷಕ್ಕೆ ಚಕ್ರವರ್ತಿಯಾಗುತ್ತಾನೆ. ಅಂಥವರು, ಯಾವಾಗಲೂ ಸರ್ವಸಮದೃಷ್ಟಿ ಯವರು, ಅವರಿಗೆ, ಯೋಗಿಗಳಂತೆ, ಕಾಡೂ ನಾಡೂ, ಹುಂಚವೂ ಮಂಚವೂ, ಇರುಳೂ ಹಗಲೂ, ಒಂದೇ ರೀತಿ, ಅವರು ಶಕ್ತಿದೇವಿಯನ್ನು ಆರಾಧಿಸಿ, ಮಹಾಶಕ್ತಿ ಸಂಪನ್ನರಾಗಿದ್ದರು. ಶಂಕರಾಚಾರ್ಯನೆಂಬ ದುಷ್ಟನೊಬ್ಬನು ಹುಟ್ಟಿ, ಆ ಶಾಸ್ತ್ರೀಯರ ಬೇರನ್ನೆ ಕಿತ್ತು ಬಿಟ್ಟನು, ಆ ಹಿಂದಿನ ವೈಭವವನ್ನು ನೆನೆದರೆ ಹೊಟ್ಟೆಗೆ ಕತ್ತಿ ಗುತ್ತಿ ದಂತಾಗುತ್ತಿದೆ. ಆದರೆ, ಆ ತುಂಡಾಗಿ ಉಳಿದ ನಮ್ಮ ಮತದ ಕಿರುಬೇರುಗಳು, ಈಗಿನ ಮಳೆಯಿಂದ ನಮ್ಮವರ ಆಶಾ ತಂತುವಿನೊಡನೆ ಅಲ್ಲಲ್ಲಿ ಚಿಗುರುತ್ತಿ ರುವುದೊಂದು ಶುಭಚಿಹ್ನೆ, ಆದರೆ, ಈ ದುಷ್ಟರ ಮೂಗಿಗೆ ಬಳ್ಳಿ ಸುರಿಯದಿದ್ದರೆ, ಎಲ್ಲವೂ ಗೊಡ್ಡಾಕಳಿನ ಹಾಲೆ ಸರಿ<noinclude></noinclude>
n009we60o0owas7c3jhb55jsdel7x44
ಪುಟ:ಹಗಲಿರುಳು.djvu/೫೫
104
38653
321063
293999
2026-05-20T05:16:42Z
Shreesha Sharma
7840
/* Validated */
321063
proofread-page
text/x-wiki
<noinclude><pagequality level="4" user="Shreesha Sharma" /></noinclude>
{{Left|೪೬}}{{center|ಕನ್ನಕ ಕೋಗಿಲೆ, ಜೂನ ೧೯೧೮,}}
'''ಜೂಜಿನ ಓಜ''':- ನಮ್ಮ ಮತಗಳಲ್ಲಿ 'ಅದು ಇದು' ಎಂದೇನು? ಎಲ್ಲವೂ
ಮೇಲಾಗಿಯೇ ಇದ್ದುವು, ಪುಷ್ಕರ ಶಕುನಿ ಮೊದಲಾದ ದ್ಯೂತವಿದ್ಯಾ ಶಿರೋಮಣಿಗಳೆಂದರೆ ಸಾಮಾನ್ಯರೆ ? ಐಶ್ವರ್ಯಬಲದಿಂದ ಉಚ್ಚ ನೀಚ ಭಾವನೆಗಳುಂಟಾಗಿ ಲೋಕವೆ ಕೆಟ್ಟು ಹೋಗುವ ಪ್ರಸಂಗವನ್ನು ನಿವಾರಿಸಲಿಕ್ಕಾಗಿ, ಆ ದ್ರವ್ಯವನ್ನು ತೂಗಿಕೊಡುವಂತಿರುವ ದ್ಯೂತವಿದ್ಯೆಯನ್ನು ಹಬ್ಬಿಸಿದ ಆ ಆಚಾರ್ಯರ ಕಲಿಕೆಗೆ ಕಣ್ಣುಂಟೆ? ದುರದೃಷ್ಟದಿಂದ ಆ ಮಹ ನೀಯರು ಮರೆಯಾದರು, ಈಗ ಈ ನೀಚರು ಕಾಲ್ನೀಡಿ ಕುಳಿತು ಕಂಡು ಕೇಳಿದವರನ್ನು “ಏಳುಕೂರು' ಮಾಡುತ್ತಾರೆ, ಅದರಿಂದ ಕೆರಳಿನ ತೂಣ ದಂತಿರುವ ಇವರನ್ನು ಮುರಿದಿಡಲೆಬೇಕು.
'''ಕಳ್ಳರ ಗುರು''':- ಎಲ್ಲವೂ ಸರಿಯೆ. ಆದರೆ, ಈಗ ಮಾತಾಡುತ್ತಿರಲಿಕ್ಕೆ ಎಡೆಯಿಲ್ಲ. ಮನೆಗಟ್ಟಿದ ಮೇಲೆ ಸಾರಣೆ ಎಂಬಂತೆ, ಕೆಲಸವನ್ನು ಮೊದಲು ಮಾಡೋಣ, ನಾನೀಗ ಗನ್ನಹಾಕಿ ಒಳಹೋಗುತ್ತೇನೆ. ನಗನಾಣ್ಯಗಳನ್ನು ಆರಿಸುವುದಕ್ಕಾಗಿ ಜೂಜಿನ ಓಜನು ನನ್ನೊಟ್ಟಿಗೆ ಇರಬೇಕು. ಈ ಸಾರಜ್ಞನು, ಯಾರಾದರೂ ಕಾವಲಿಗರ ಸುಳಿವು ಸೋಂಕನ್ನು ಇದಿರುನೋಡುತ್ತ ಹೊರಗೆ ಇರಲಿ.
[ಎಲ್ಲರೂ ಒಪ್ಪಿದರು. ಕಳ್ಳರಗುರುವಿನ ಗನ್ನಗತ್ತರಿಗೆ ಮನೆಗೋಡೆ ಒಡೆಯಿತು, ವಾತಕಫಗಳಂತೆ, ಮನೆಯೆಂಬ ಮೆಯನ್ನು ಹೊಕ್ಕರು. ಪಿತ್ತದಂತೆ, ಹೆಂಡದಗಂಡನು ಆ ತೂತಿನ ತಲೆಬಾಗಿಲಲ್ಲಿ ಕಾಯುತ್ತಿದ್ದನು, ರೋಗ ಬಾಧೆಯಿಂದ ನರಳುವಂತೆ, ಮನನಾಯಿ ಬೊಬ್ಬೋ' ಎಂದು ಬಗುಳಿತು. ನರಗಳ ಬಡಿದಾಟದಂತೆ ಕೆಲ ಹೆಂಗಸರು, ಎಚ್ಚತ್ತು ಅತ್ತಿತ್ತ ತಿರುಗಾಡಿದರು. ಮುದ್ದು ಮಾಟಗಳಂತೆ, ಆಯುಧಗಳೊಡನೆ, ಒಳಗೆ ಸದ್ದಾದ ಕಡೆಗೆ ಮನೆ ಗಂಡ ಸರು ಬಂದರು, ಕಳ್ಳರ ಗುರುವಿಗೂ ಜೂಜಿನ ಓಜನಿಗೂ ಔಷಧದ ಗದಾ ಪ್ರಯೋಗವೂ ಆಯಿತು. ಬಂದ ದಾರಿಗೆ ಸುಂಕವಿಲ್ಲ ಎಂದು ಭಾವಿಸಿ ಇಬ್ಬರೂ ಹೊಕ್ಕಕ್ಕೆ ಹೊರಡಲು ಆರಂಭಿಸಿದರು.]
'''ಹೆಂಡದಗಂಡ''':- (ಗಾಬರಿಗೊಂಡರೂ ವಿಮರ್ಷಾಪೂರ್ವಕವಾಗಿ) ಇದೆ, ನಮ್ಮವ
ರಿಬ್ಬರೂ ಕಣ್ಣು ಮುಚ್ಚಿಕೊಳ್ಳಿರಿ, ಮರಳು ಚೆಲ್ಲುತ್ತೇನೆ ಜಾಗ್ರತೆ, ಜಾಗ್ರತೆ: [ಎಂದು ಚೆಲ್ಲಿದನು. ಇಬ್ಬರ ಕಣ್ಣ ಮರಳು ತುಂಬಿಹೋಗಿ<noinclude></noinclude>
s79sxs6vbwq9dritghs4qiymtl4qvgc
ಪುಟ:ಹಗಲಿರುಳು.djvu/೫೬
104
38654
321064
294001
2026-05-20T05:16:59Z
Shreesha Sharma
7840
/* Validated */
321064
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಹಗಲಿರುಳು}}{{Right|೪೭}}
ಮರಳಿ ತೆರೆಯದಂತಾಯಿತು. ಹೇಗಾದರೂ ಹೊರಬಿದ್ದು, ಎಡವಿತಡವರಿಸುತ್ತ ಓಡಿಹೋದರು, ಒಂದೆ ಹೊಟ್ಟೆಯಿಂದ ಇಳಿದವರೂ, ಅಲ್ಲಲ್ಲಿ ಚದರಿ ಮಡಿದುಹೋಗುವಂತೆ, ಒಂದೆ ದಾರಿ ಹಿಡಿದು ಬಂದರೂ, ಎಲ್ಲೆಲ್ಲಿಯೂ ಕಂಡ ಬಟ್ಟೆ ಹಿಡಿಯಬೇಕಾಯಿತು, ಇಂಥ ನೀಚರಲ್ಲಿಯ ಕೆಲವು ಯೋಚನೆ ಗಳು ಯೋಗ್ಯವಾಗಿವೆ, ಆದರೆ, ಸಮುದ್ರಕ್ಕೆ ಸಕ್ಕರೆ ಹಾಕಿದಂತೆ, ಅವು ಅಲ್ಪವಾಗಿರುವುದರಿಂದ, ದುರ್ಭಾವನೆಗಳೆ ಮಿತಿಮೀರಿರುತ್ತವೆ. ಅದರಿಂದ, ಈಗಿನ ಏಕಸತ್ತಾವಾದಿಗಳ ಸಭೆಯಂತೆ, ಎಲ್ಲ ವೂ ಲೋಕವಿರುದ್ಧ ವಾಗಿಪರಿಣಮಿಸಿ, ಕೆಟ್ಟುಹೋಗುತ್ತಿದೆ.
——————————
{{center|'''ನಾಲ್ಕನೆಯ ಅ೦ಕ '''}}
'''ಕತ್ತಲೆ''':- ಅ, ಮಾಡಿದ ಮಾಟಗಳೆಲ್ಲ, ಹಿಂದೊದೆವ ಕೋವಿಯಂತೆ, ನನಗೇ
ಅನಿಷ್ಟಕರವಾಗುತ್ತಿವೆ. ಕೈಗೆ ಬಂದುದು ಬಾಯಿಗಿಲ್ಲದೆ ಮಾಯವಾಗುತ್ತಿದೆ. ಆದರೆ ಈಗ, ನಕ್ಷತ್ರಪತಿ ನನ್ನ ಕಡೆಗೆ, ಒಂದಿಷ್ಟು ಕೊಂಕಾಗಿದ್ದರೂ ಈ ರಾತ್ರಿಯಲ್ಲಿಯ ಆ ಹಗಲಿನಲ್ಲಿಯೂ ನನಗಿರುವ ಅನುಕೂಲತೆಗಳನ್ನು ಹೋಲಿಸಿದರೆ, ಅಜಗಜಾಂತರದ ವ್ಯತ್ಯಾಸವಿರುವುದು, ಅದರಿಂದ, ಈಗಲೆ, ಏಳಿಗೆಗಾಗಿ ಕೈಲಾಗುವ ಪ್ರಯತ್ನ ಮಾಡಬೇಕು, [ಮನೋರಥವನ್ನು ಏರಿದರೆ, ಅದು ಎಲ್ಲೆಲ್ಲಿಗೆ ಹೋಗಿ, ಆರಾರೊಡನೆ ಮಾತಾಡಿ, ಎಂಥೆಂಥ ಉಪಾಯಗಳನ್ನು ಹೂಡುವುದಿಲ್ಲ ! ಆದರೆ, ಆ ಹೂಟವು ಬಾನಿನ ಬಳ್ಳಿಯಾಗದ ತೋಟದ ತೆಂಗಾಗಬೇಕಾದರೆ, ಹಿನ್ನೋಟ ಮುನ್ನೋಟಗಳೂ ತನ್ಯಾಟದ ತಿಳಿವೂ ಚೆನ್ನಾಗಿ ಇರಬೇಕು, ಆ ರಥಕ್ಕೆ, ವಿಚಾರವೆಂಬ ಪಳಗಿದ ಕುದುರೆ ಯನ್ನು ಕಟ್ಟಿದರೆ, ರಾಜಬೀದಿಯಲ್ಲಿ ನೀರಾಗಿ ಗರಗರನೆ ಹರಿದು ಗುರಿ ಮುಟ್ಟುವುದು, ಆ ತೇರಿನ ನೊಗವನ್ನು, ಭ್ರಮವೆಂಬ ವಾಜಿಯ ಹೆಗಲಿಗೆ ತಗಲಿಸಿದರೆ, ಅದು ಕಾಡುಗುಡ್ಡಗಳಿಗೆ ಕಣಿವೆಕಂದಕಗಳಿಗೆ ಹಾಯ್ದು; ತನ್ನನ್ನು ನಂಬಿ ಹಿಂಬಾಲಿಸುವ ಗಾಡಿಗೂ ಅದರೊಳಗಿನವರಿಗೂ ದುರ್ಗತಿಯನ್ನ ಒದಗಿಸುವುದು, ಈ ಸಂದರ್ಭದಲ್ಲಿ, ಬೆನ್ನು ಹಿಡಿದ ಮಡದಿಮಕ್ಕಳನ್ನು ದುರ್ದಶೆಯ ತುತ್ತಾಗಿಸಿ ಪಾರಾದ ಕೆಲವು ಪಂಡಿತರು ಕಣ್ಣೆದುರಿಗೆ ಬಂದು<noinclude></noinclude>
bp1tt16ath0958tldcebl8kflamz28y
ಪುಟ:ಹಗಲಿರುಳು.djvu/೫೭
104
38655
321065
294005
2026-05-20T05:17:12Z
Shreesha Sharma
7840
/* Validated */
321065
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೪೮}}{{center|ಕನ್ನಡ ಕೋಗಿಲೆ , ಜೂನ್ ೧೯೧೮}}
ಬಿಡುವರು. ಇರಲಿ, ಆ ಮನೋರಥವು ಮೂರು ಲೋಕದಲ್ಲೂ ಹರಿದು ಎಲ್ಲವನ್ನೂ ವಶಮಾಡುವುದು, ಮಹಾರಾಜರ ಹಾಗೂ ಮಹೇಂದ್ರನ ಏಕಾಂತಮಂದಿರಕ್ಕೂ ಹೋಗುವುದು, ಶೇಷನ ಹಡೆಮಣಿಯ, ಅದಕ್ಕೆ ಅಂಗೈನಲ್ಲಿಯಂತಾಗುವುದು, ಆದರೆ, ಈ ಮನೋರಥವನ್ನು, ಕಾರ್ಯರಥವು ಹಿಂಬಾಲಿಸಬೇಕಾದರೆ, ಮೇಲೆ ಹೇಳಿದಂತೆ ಮೊದಲಿನದಕ್ಕೆ ವಿಚಾರಾ ಶ್ವವನ್ನು ಕಟ್ಟದೆ ಸಾಗದು, ಈಗ ಕತ್ತಲೆ ತನ್ನ ರಥಕ್ಕೆ ಯಾವುದನ್ನು ಕಟ್ಟಿದೆಯೋ, ನೋಡೋಣ, ತನ್ನ ಮನಸ್ಸಿಗೆ ಏನೋ ಒಂದು ಕಲ್ಪನೆ ಕಚ್ಚಿಹಿಡಿದುದರಿಂದ, ಕತ್ತಲೆ ಹೊರಟಿತು. ಪಂಚವಟಿಯಿಂದ ಅಣ್ಣರಾವಣ ನಲ್ಲಿಗೆ ಓಡಿಹೋದ ಶೂರ್ಪಣಖೆಯಂತೆ ಗಾಢಾಂಧಕಾರನ ಕಾಡಿಗೆ ಧಿಂಕಿಟ್ಟುದು, ಅ:, ಅದೆಂಥ ಅರಮನೆ ಸುತ್ತಲೂ ಮುಳ್ಳಿನಕೋಟೆ. ಹೊರಗಿನ ಮನುಷ್ಯಮಾತ್ರಕ್ಕೆ ದಾರಿ ಇಲ್ಲದಿದ್ದರೂ ದುರ್ಬುದ್ಧಿಗೆ ಹೆಬ್ಬಾಗಿಲು ತೆರೆದೇ ಇದೆ, ಮನೆಗಂಬಿಗಳಿಗಾಗಿ ಹೆಮ್ಮರಗಳೆ ಮೈಗೆಟ್ಟಿವೆ. ಕೊಂಬೆಗಳೆ, ಉಪ್ಪರಿಗೆಯ ಜಂತೆಮುಚ್ಚಳಗಳು, ರೆಂಬೆಸೊಪ್ಪುಗಳೆ, ಗಳವಾಡುಗಳು, ಆ ಜಂತೆಗಳ ಬದಿಯಲ್ಲಿ ಕೋಟಿರಗಳ ಕಪೋತಪಾಲಿಕೆಗಳು, ಒತ್ತಟ್ಟು, ಲತಾಮಂಟಪಗಳ ರಚನೆ ನೇರಾಗಿದೆ. ತರತರದ ಕಲ್ಲು ದಿಣ್ಣೆಗಳ ಮಣೆ ಮಂಚ ಜಗಲಿಗಳೂ, ಗುಡ್ಡೆಗಳ ಮುಖಶಾಲೆಗಳೂ ಕಂಗೊಳಿಸುತ್ತಿವೆ. ಉಪ್ಪರಿಗೆಯಿಂದ ಮುಖಶಾಲೆಗಿರುವ ದಾರಿಗಾಗಿ, ಕೆಲ ಕೊಂಬೆಗಳು ಗುಡ್ಡಗಳಿಗೆ ನೀಡಿರುತ್ತವೆ. ಆಯಾವ್ಯಕ್ತಿಗಳಿಗೆ ತಕ್ಕಂತೆ, ಪೊದರುಗವಿಗಳ ಕೋಣೆಗಳು ಭದ್ರವಾಗಿವೆ. ಈ ಗೂಢವಾದ ಬೀದಿಗೆ, ಅಂಧಕಾರನೆಂಬವನೆ ದೊರೆ. ಹುಲಿ, ಸಿಂಹ ಮೊದಲಾದವರೆ ಅವನ ಸಭ್ಯರು, ಅವರ ಜೀವನ ಕ್ರಮವೆಂದರೆ ಅನಿರ್ವಚನೀಯವು, ಮತ್ತ್ವನ್ಯಾಯದಂತೆ ಅಬಲಪ್ರಾಣಿಗಳು ಬಲವಿದ್ದವು ಗಳಿಗೆ ಬಿಸಿರೊಟ್ಟಿ, ಅರಸಾದ ಅಂಧಕಾರನಿಗೂ ಇದೇ ಇಷ್ಟವಂತೆ. ಇದೆ ಪ್ರಕೃತಿಯೆಂದೂ, ಆಯಾ ವ್ಯಕ್ತಿಗಳ ಬಾಯಿಗೆ ಅಡ್ಡ ಬರುವುದೆ ವಿಕೃತಿ ಯೆಂದೂ ಎಣಿಸಿ, ಅವನು ಆಪ್ರಕೃತಿಹಿತವಾಗಿರಬೇಕೆಂದು ಅಪ್ಪಣೆಮಾಡಿರು ತಾನಂತೆ, ಅಂಗವಿಕಲರಾಗಿ ಅಲ್ಲವೆ ರೋಗಗ್ರಸ್ತರಾಗಿ, ಬರಿದೆ ಅಶನಧ್ವಂಸಿ ಗಳೆಂದೆನಿಸಿ ಇರುವುದಕ್ಕಿಂತ, ಬಲವಂತರಿಗೆ ಅನ್ನದ ಜೀಮೂತವಾಹನರಾಗ ತಕ್ಕುದೆ ಧರ್ಮವೂ ರಾಜ್ಯಹಿತವೂ ಆಗುವುದೆಂದು, ಆ ಆಜ್ಞೆಗೊಟ್ಟಿರಬಹುದೊ ಏನೊ? ಆದರೆ, ಪ್ರತಿಯೊಂದು ಪ್ರಾಣಿಯ ಅಂತರದಲ್ಲಿ ರುವ ಪುಕೃತಿ ಗುಣವು<noinclude></noinclude>
i8p70avr3gb7wxeayoeb3p1cmh464lu
ಪುಟ:ಹಗಲಿರುಳು.djvu/೫೮
104
38656
321066
294008
2026-05-20T05:17:26Z
Shreesha Sharma
7840
/* Validated */
321066
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಹಗಲಿರುಳು}}.{{Right|೪೯}}
ಪ್ರಾಯವೇರಿದಂತೆ ಹೊರಗಣ ವಿಕೃತಿಗುಣದಿಂದ ಮಿಶ್ರಿತವಾಗಿ ಮಾಸಿಹೋಗುವುದು; ಆ ಮಿಶ್ರಿತಗುಣವು ಪ್ರಕೃತಿಗೆ ಭಿನ್ನವಾಗಿ ಅದರಲ್ಲಿ ವಿಕೃತಿಯೆ ಪ್ರಬಲವಾಗಿರುವುದು; ಅದರಿಂದಲೇ ಅದು ಅಚಲವಾದ ವ್ಯಕ್ತಿಗಳನ್ನೆಲ್ಲ ತೃಷ್ಣಯ ಗಾಳದಿಂದ ಸೆಳೆಯಹತ್ತುವುದು.ಆ ಮಿಶ್ರಣವೆ ಪ್ರಕೃತಿಯಾದರೆ, ಅಬಲಪ್ರಾಣಿಯ ಪ್ರಕೃತಿಗೆ ವಿರುದ್ಧವಾಗಿ ಅದನ್ನು ಬಡಿದು ಬಾಯಿತುಂಬಿ ಸುವ ಎಣಿಕೆ, ಆ ಬಲಿಷ್ಠ ಪ್ರಾಣಿಯಲ್ಲಿ ಮೊಳೆಯಬಹುದೆ ? ಶುದ್ಧವಾದ ಬಂಗಾರದ ಪ್ರಕೃತಿ ಮೆದುವಾಗಿ ಕೆಲಸಕ್ಕೆ ಬರುವುದಿಲ್ಲವೆಂದು, ಮನ ಬಂದಂತೆ ಕಣ್ಮುಚ್ಚಿ ಚೆಂಬನ್ನು ತುಂಬಿದರೆ ಯಾಕಾದೀತು ? ಇರಲಿ, ಇದಕ್ಕೆ ಬೆರಗಾಗಿ ಬರಿದೆ ಮರುಕಪಡುವುದೇಕೆ ? ನಮ್ಮ ನಾಗರಿಕತೆಯ ನಾಡಿನಲ್ಲಿ ಯಾದರೂ, ಆ ಅನ್ಯಾಯವು ಕಾಲ್ಲೆ ಗೆದಿರುವುದಿಲ್ಲ. ಹಲವರು, ಹೊರ ಹೊರಗೆ ಮಾತ್ರ ಪರೋಪಕಾರದ ಬಣ್ಣವನ್ನು ಬಳಿದಿರುವರಲ್ಲದೆ, ಒಳಗೊಳಗೆ ಸ್ವಾರ್ಥದ ಹೆಬ್ಬಾವಿನ ಹೆಬ್ಬಾಯನ್ನೆ ತೆರೆದಿರುತ್ತಾರೆ. ಹೋಗಲಿ, ಅಂಥವರ ಮಾತೇಕೆ ? ಅವರನ್ನು ದಾರಿಗೆ ತರಲಿಕ್ಕೆ ದೇವರಿಗೂ ಅಸಾಧ್ಯವು. ಬೇರೊಣಗಿದ ಮರಕ್ಕೆ ನೀರೆರೆದು ವಸಂತನನ್ನು ಕಾಯುತ್ತಿದ್ದರೂ ಅದು ಹೂಬಿಡುವುದೆ ? ಮುಂದಿನ ಮೊಳಕೆಯ ಜನಾಂಗವಾದರೂ ಕಣ್ಣೆರೆದು, ಲೋಕಹಿತಕಾರಿಯಾಗಿ ಏಳೆಗೆ ಬರಬೇಕೆಂಬುದು ಮಾತ್ರ ನಮ್ಮ ಉದ್ದೇಶವು. ಇರಲಿ, ಕತ್ತಲೆಯ ಕೆಲಸವೇನು, ನೋಡೋಣ.]
'''ಕತ್ತಲೆ''':- (ಅಳುತ್ತ) ಅಣ್ಣ, ' ಲೋಕದಲ್ಲಿ ಸ್ವಚ್ಛೆಯಿಂದ ತಾನುತಾನಾಗಿರು'
ಎಂದು, ನೀನು, ನನ್ನನ್ನು ನಾಡಿಗೆ ಕಳುಹಿಸಿ, ನಿನ್ನ ಕಾರ್ಯಭಾರದ ಹೊರೆ ಯನ್ನು ಇಳಿಸಿಕೊಂಡೆಯಷ್ಟೆ, ಆದರೆ...(ಎಂದು ಗೋಳಿಡತೊಡಗಿದಳು).
'''ಅಂಧಕಾರ''':-(ಅಚ್ಚರಿಯಿಂದ) ತಂಗಿ, ಇದೇನು ವಿಕೃತಿ ? 'ನಾಡಿನಲ್ಲಿ ನಮ್ಮ
ಸಮೀಪಬಂಧುಗಳಾದ ರಾತ್ರಿನಕ್ಷತ್ರಪತಿಗಳಿಗೆ ಪೂರ್ಣಾಧಿಕಾರವು ದೊರೆತಿದೆ. ಅದರಿಂದ ನಾನೂ ಅವರೊಡನೆ ವಿಹರಿಸುತ್ತೇನೆ' ಎಂಬ ನಿನ್ನ .ಒತ್ತಾಯ ಕ್ಯಾಗಿಯೆ ಕಳುಹಿದೆನು. ಈಗ, ಹೆಂಗುಸಾದ ನಿನ್ನ ಸ್ವಾತಂತ್ರ್ಯಪ್ರಿಯತೆಗೆ ಬಡ್ಡಿ ಸಿಕ್ಕಿತೆಂದು ನನ್ನ ಮೇಲೆ ತಪ್ಪನ್ನು ಹೊರಿಸುವಂತೆ ತೋರುವುದು. ಇರಲಿ, ಈಗಿನ ಸಂಕಷ್ಟವೇನು ?<noinclude></noinclude>
4ue8v4yoi6dgu7rvt9rqiefm6rhv53z
ಪುಟ:ಹಗಲಿರುಳು.djvu/೫೯
104
38657
321067
298096
2026-05-20T05:17:39Z
Shreesha Sharma
7840
/* Validated */
321067
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೫೦}}{{center|ಕನ್ನಡ ಕೋಗಿಲೆ, ಜುಲಾಯಿ ೧೯೧೮}}
'''ಕತ್ತಲೆಃ'''- ಅಣ್ಣ, ಅಲ್ಲಿರಲಿಕ್ಕೆ ನನಗೆ ಒಪ್ಪಿಗೆ ಇತ್ತು, ರಾತ್ರಿ ರಾಣಿಯ ಅಕ್ಕನು.
ನಕ್ಷತ್ರಪತಿರಾಜನ ಭಾವನು ಮತ್ತೇನು, ನನ್ನ ಕೈಯಾಟವೇ ಆಟವೆಂದು ಎಣಿಸಿದ್ದೆನು. ಹಾ! ಎಲ್ಲ ವೂ ಬಯಲುಬರಗಿದಂತಾಯಿತು. ಆದರೆ, ಭಾವನ ಎದೆಯಲ್ಲಿ, ಇನ್ನೂ ನನ್ನ ಪ್ರೇಮವು ನಾಟದ ಕಪ್ಪು ಗುರುತು ಇದ್ದೇ ಇದೆ. ಅದನ್ನು ಕಂಡು ಕರುಬಿ, ಲೋಕದ ಮುಂದಾಳಾದ ತೇಜಸ್ವಿ, ಬಹಳ ಹೆಣಗಿ ತಲೆಯಾಡಿಸಿದನು. ಆ ದುರ್ಬುದ್ಧಿಗೆ ತಕ್ಕ ಪ್ರಾಯಶ್ಚಿತ್ತವಾಗಿ ಈಗ ಅವನ ಹೆಸರೂ ಇಲ್ಲದಂತಾಗಿದೆ. ಆದರೇನು ? ಈಗ ಲೋಕವೆಲ್ಲವೂ, ಭಾವನನ್ನು , ಬಹಿಷ್ಕರಿಸಿ ತಿರಸ್ಕರಿಸಿಬಿಟ್ಟಿದೆ. ಅದರಿಂದ, ಹೆದರಿ ಅವನೂ ಅಕ್ಕನೂ ನನ್ನನ್ನು , ಊರಿಂದ ಹೊರಡಿಸಿಬಿಟ್ಟರು, ಅಣ್ಣ, ಅವರು ಅದಕ್ಕೆ ಈಗ ಸಾವಿರಕಾರಣಗಳನ್ನು ತೋರಿಸಬಹುದು, ಅಂತೂ, ದೊಡ್ಡವರ-ಅದ ರಲ್ಲಿ ಯ ಬಂಧುಗಳ ಎಡೆಯಲ್ಲಿ ದಿನದೂಡುತ್ತಿರುವ ಬಡವರ ಬಾಳುವೆಯೆ ಬೇಡ.'
ಚೌಪದಿ || ಪರಿಚಯವು ಕಡಿಕಡಿಮೆಯಾದಲ್ಲಿ ಮಾನಂ ।
ಅರೆಗಲ್ಲಿ ಗೆಣೆಯಾಗಿ ನೋಯದೆಂತೆಂತುಂ ||
ಪರಿಚಯವು ಹತ್ತಿ ಹತ್ತಿರಕ್ಕೆ ಬಂದಂತ | ಕೊರಗುವುದು ಚಿಗುರಂತೆ ಮುಟ್ಟಲಾಮಾನಂ|| ೧ |
ಕುಸುವು ಪಟ್ಟದಿ || ಗುಟ್ಟು ಗೊತ್ತಿರದಲ್ಲಿ ಗೌರವವನೊಳಗೊಳಗೆ !
ಪಟ್ಟಿರಿಸುತಾಳಾಗುವುದುಚಿತ್ತವು |
ಬಟ್ಟ ಬಯಲಿನ ಬಂಧುಗಳ ಚೌಕದಲಿ ಮೋರೆ |
ಗೆಟ್ಟು ಮಾನವನಲ್ಲಿ ಬಚ್ಚಿಡುವುದು?||೨||
'''ಅಂಧಃ'''-(ಕೋಪಿಸಿ) ತಂಗಿ, ಏನು, ಭಾವನೂ ಹೀಗೆ ಮರೆಮೋಸಮಾಡಿದನೆ ?
ನಾವು ರಾಜನೆಂದೆಣಿಸಿ ಹಿರಿಯ ತಂಗಿಯನ್ನು ಕೊಟ್ಟು, ಅವನನ್ನು ಮನ್ನಿಸಿದರೂ ಅವನ ಕುಟಿಲತೆ ಕುಂದುವುದಿಲ್ಲ, ಆ ರಾತ್ರಿಯ ಕೈಹಿಡಿಯದಿದ್ದರೆ, ಆರ್ಯನ ಬಿಸಿಲಬೇಗೆಯಿಂದ, ಇಷ್ಟರೊಳಗೇ ಅವನ ಗತಿ ಏನಾಗುತ್ತಿತ್ತೋ? (ಹಾಕಿದ ಅಂಗಿ ಹಾರಿದರೆ ಹೋಗುವುದೆ?” ನಮ್ಮೊಡನೆ ನೆಂಟನಾಗಿದ್ದರೂ ಅವನ ಹುಟ್ಟು ಗುಣವು ಹೇಗೆ ಅಳಿವುದು? ಅದಿರಲಿ, ಈ ಶಾಯಿಯಾದ ಕಾಡಿನ ಗವಿಯೆಂಬ ಗರ್ಭದಲ್ಲಿ ಒಡಹುಟ್ಟಿ ಒಡನಾಡಿ ಒಬ್ಬುದ್ಧಿಯಿಂದ ಬಳೆದ ತಂಗಿ ರಾತ್ರಿ ಬದಲಾದಳು ! ಅಷ್ಟೆ ಅಲ್ಲ, ದೊರೆತನದ ಉಬ್ಬಿ ನಲ್ಲಿ, ಅವಳಿಗೆ ಈಗ ಸಹೋದರಪ್ರೇಮವೂ<noinclude></noinclude>
l0tfbos5l0nd3598hzqm1txxfdumwvp
ಪುಟ:ಹಗಲಿರುಳು.djvu/೬೦
104
38658
321068
298097
2026-05-20T05:17:53Z
Shreesha Sharma
7840
/* Validated */
321068
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಹಗಲಿರುಳು.}}{{Right|೫೧}}.
ಮಾಸಿಹೋಯಿತು ! ಇದನ್ನು ಲೋಕದ ಒಂದು ಕತೆ ನೆನಪಿಗೆ ತರು ತಿದೆ. ಕೇಳು- ಇಂದಿಗೆ ಎಷ್ಟೋ ಮೊದಲು, ಕಡೆಹಳ್ಳಿಯಂಬಲ್ಲಿ ಒಬ್ಬ ಬ್ರಾಹ್ಮಣನಿದ್ದನು, ಅವನ ಮನೆಯನ್ನು ಹಲವರು ನೋಡದಿದ್ದರೂ ಅವನು ಒಬ್ಬ ನದನ್ನೂ ಬಿಡಲಿಲ್ಲ, ನಾಲ್ಕು, ತಪ್ಪಿದರೆ, ಐದು ದಿನಕ್ಕೊಮ್ಮೆ ಅವನ (ಭವತಿಭಿಕ್ಷಾಂದೇಹಿ' ಪ್ರತಿಯೊಂದು ಮನೆಯಲ್ಲೂ ಆವೃತ್ತಿಯಾಗುತ್ತಿತ್ತು. ಅಕ್ಕಿಯ ಕದಿಕಡ್ಕೊ೦ದು ಚೆಲ್ಲಿ ಹೋದರೂ, ಕಾಗೆಯ ಕೊಕ್ಕಿನಂತಿರುವ ಬೆರಳಿಂದ ಹೆಕ್ಕುತ್ತಿದ್ದನು. ಆಗ ನಗುತ್ತ ಅವನು ಲೋಕದಲ್ಲಿ ಬಹಳ ಮಂದಿ ಗಣಿತಶಾಸ್ತ್ರ ಪಾರಂಗತರಿದ್ದಾರೆ. ಆದರೆ, ಈ ಕಡಿಕಾಳಿಗೆ, ಇಂತಿಷ್ಟೆ ಬೆಲೆಯೆಂದು, ನಾನಲ್ಲದೆ ಯಾರೂ ಹೇಳಲಾರರು' ಅದಕ್ಕೆ ಮತ್ತೊಬ್ಬ ವಿದ್ಯಾರ್ಥಿ “ಅಯ್ಯಾ, ವೆಂಕಣ್ಣ, ನಾನು ಅಯ್ಯಗಳ ಮಠದಲ್ಲಿ ಕಲಿಯ ತೊಡಗಿ ಐದಾರು ವರ್ಷಗಳಾದುವು. ನಿನ್ನ ಪ್ರಶ್ನೆಗೆ ಉತ್ತರಗೊಡಲಿಕ್ಕೆ
ಮಹಾಶಾಸ್ತ್ರಿಗಳೇನೂ ಬೇಡ, ಅದಿರಲಿ, ಉತ್ತರಹೇಳಿದರೆ, ನನಗೆ ಉಡುಗೊರೆ ಏನು?
“'''ಬ್ರಾಹ್ಮಣ'''-ಇದೇನು? ಮಜ್ಜಿಗೆಗೆ ಗತಿಯಿಲ್ಲ, ಮೊಸರಿಗೆ ಚೀಟು, ಉತ್ತರದ
ಮೇಲಲ್ಲವೆ ಉಡುಗೊರೆ ? ಹುಂ, ಚಿಂತೆಯಿಲ್ಲ, ಹುಡುಗರು ನಿಷ್ಕಾಮ ಕರ್ಮಕ್ಕೆ ಕೈಹಾಕುವುದು ಕಡಮೆ, ಸಂಸಾರಿಗಳಾಗತಕ್ಕ ಅವರು ನಿಷ್ಠಾವಿ ಗಳಾಗಬಾರದೆಂದೆ ನನ್ನದೂ ಎಣಿಕೆ, ಇರಲಿ, ಉತ್ತರಹೇಳಿದರೆ ಸುಂದರ ವಾದ ಬಹುಮಾನವನ್ನೆ ಕೊಡುತ್ತೇನೆ, ಆದರೆ, ಅದನ್ನು ಹಾಗೆಹೀಗೆಂದು ತಿರಸ್ಕರಿಸದೆ ತಲೆಬಗ್ಗಿಸಿ ಅಂಗೀಕರಿಸಬೇಕು, ನಿನ್ನಂಥ ಹುಡುಗರೂ ನನ್ನ ವಿದ್ವತ್ತೆಗೆ ಕಪ್ಪು ಹಚ್ಚಿ ಉಡುಗರೆಗೆ ಕೈನೀಡುವುದಿದ್ದರೆ ನೋಡೋಣ.* ಹುಡುಗನೇನೋ ಶ್ರೀಮಂತನ ಮಗನು, ಈ ಬಡವನು ಹೆಚ್ಚೇನೂ ಕೊಡ ಲಾರನೆಂದು ಅವನಿಗೆ ಗೊತ್ತಿತ್ತು, ಆದರೂ, ಹತ್ತಾಗಲಿ, ಒಂದಾಗಲಿ, ಉಡು ಗೊರೆಯೆಂದರೆ, ಹುಡುಗರಿಗೆ ಒಂದು ಸಡಗರಿಕೆ: ಬ್ರಾಹ್ಮಣನ ಮಾತಿಗೆ ಹುಂಗುಟ್ಟಿದನು. ಇಬ್ಬರು ಗೃಹಸ್ಥರ ಎದುರಲ್ಲಿ ಹೊಡೆಗೈಯ ಆಣೆಗೈಯ ಪಂತವಾಯಿತು, ಬಾಲಕನು ಉತ್ತರವನ್ನು ನೀರಿನಂತೆ ಹೇಳಿಬಿಟ್ಟನು. ಮಧ್ಯ ಸ್ಥರು 'ಸೈ' ಎಂದರು. ಆಗ ಹುಡುಗನು ಕೈಹೊಯ್ದು “ಎಲೆ, ವೆಂಕಣ್ಣಾ, ಈಗೇಲ್ಲಿ ಉಡುಗೊರೆ” ಎಂದು ಚಾಳಿಸಿದನು. ಆಗ ಬ್ರಾಹ್ಮಣನು ನಗುತ್ತ<noinclude></noinclude>
r4lk29vdgcykhq8rsn7gck50ptaxtdk
ಪುಟ:ಹಗಲಿರುಳು.djvu/೬೧
104
38659
321069
298103
2026-05-20T05:18:04Z
Shreesha Sharma
7840
/* Validated */
321069
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೫೨}}{{center|ಕನ್ನಡ ಕೋಗಿಲೆ, ಜುಲಾಯಿ ೧೯೧೮,}}
ಊರುರು ಬಿಕ್ಕಬೇಡುವ ಬ್ರಾಹ್ಮನನ್ನು ಬೇಡಿಕಾಡುವ ನಿನಗೆ-ಲಕ್ಷಾಧಿ
ಪತಿಗೆ ನಾಚಿಕೆ ಇಲ್ಲವೆ?” ಎಂದು ಕಟಕಿಯಾಡಿದನು.
'''ಹುಡುಗ'''- ಬೇಡಿದೆನೆ? ಮತ್ತೇಕ, ಈ ಪಂತದ ಹೊಂತಗಾರಿಕೆ ? ಹೂಗೊಡು
ವಲ್ಲಿ ಹೂವಿನ ಎಸಳಾದರೂ ಕೊಟ್ಟೇ ತೀರಬೇಕು.* ಎಂದು ಕೊನೆಯ ಮರುಮಾತಾಡಿದನು. ಮಧ್ಯಸ್ಥರೂ ಸರಿಸರಿ' ಎಂದರು. ವೆಂಕಣ್ಣನು “ಹೌದು, ಮಾತಿಗೆ ಮರೆಯಿಲ್ಲ, ಆದರೆ, ನನ್ನಲ್ಲಿ ಬೇರೆ, ಚೆಂಬಿನ ಕಾಸೂ ಇಲ್ಲವೆಂಬುದು ಎಲ್ಲರಿಗೂ ಗೊತ್ತು. ಈ ವರೆಗೆ ಸಾಕಿ ಸಂರಕ್ಷಿಸಿದ ಕನ್ಯಾರತ್ನವೊಂದುಂಟು. ಅದನ್ನು ಕೊಟ್ಟು ಮಾತಿನ ಮೈಲಿಗೆಯನ್ನು ಮಡಿ ಮಾಡುತ್ತೇನೆ.” ಎಂದನು. ಮಧ್ಯಸ್ಥರು ಅಸ್ತುಗೊಟ್ಟರು. ಹುಡುಗನ ಮಾರುದ್ದದ ಕೈ ಗೇಣುದ್ದಕ್ಕೂ ನೀಡಲಿಲ್ಲ. ಉಕ್ಕುವ ನಾಲಗೆ ಮಿಕ್ಕಿ ಮಿಸುಕಲಿಲ್ಲ, ಕನ್ನಡಿಮೋರೆಗೆ ಇಬ್ಬನಿ ಮುಸುಕಿದಂತಾಯಿತು. ಮಾತಿಗೆ ತಪ್ಪಿ ಬರಕೊಟ್ಟ ಒಪ್ಪಿಗೆಯ ಕರಾರು ಎಲ್ಲಿದೆ?” ಎಂದು ಧಿಕ್ಕರಿಸುವ ಈಗಿನ ಲೋಕದ ನವನಾಗರಿಕತೆ ಅಂದು ಬಂದಿಲ್ಲ, ಆದರೆ, ಆ ಭಿಕ್ಷಾಪಾತ್ರದ ಜಲಧಾರೆಯಿಂದ ಮಲಿನವಾಗಿ ತೋರುವ ಕನ್ನೆಯ ಕೈಹಿಡಿ ಯಲಿಕ್ಕೆ, ಆಗರ್ಭ ಶ್ರೀಮಂತನಾದ ಆ ಹುಡುಗನಿಗೆ ಹೇಗೆ ಮನಸ್ಸು ಮೆಚ್ಚು ವುದು? ಅಳಿ, ಈ 'ಕುಶಾಲುಕೊಳ'ವು ಯಾಕೆ ಬೇಕಿತ್ತು? ಎಂದು ಚಿಂತಿಸಿ ದನು, ಕಡೆಗೆ ಹೇಗಾದರೂ ಮದುವೆಯಾಯಿತು, ಹುಡುಗಿ ಗಂಡನ ಮನೆ ಹೊಕ್ಕರೂ, ತಂದೆ ಊರ ಮೇಲೇ ಇದ್ದನು. ಕೆಲಗಾಲವು ಕಳೆಯಿತು. ಒಂದುದಿನ ಮಧ್ಯಾಹ್ನದಲ್ಲಿ ಆ ಶ್ರೀಮಂತನ ಮಗನು ದೇವರ ಪೂಜೆಯಲ್ಲಿ ದ್ದನು, ಹೊರಗಣಿಂದ ಕೆಮ್ಮುವ ಸದ್ದು ಕೇಳಿಸಿತು. ಯಾರು? ನೋಡಿ ಬಾ' ಎಂದು ಹೆಂಡತಿಯನ್ನು ಕಳುಹಿದನು, ಹೆಂಡತಿ ಹೋಗಿ ಬಂದು “ಯಾವುದೊ ಒಂದು ಬಿಕ್ಕಿಯ ಜೋಗಿ' ಎಂದು ಹೊರಗೆ ಕೇಳುವಂತೆ ಹೇಳಿ ದಳು, “ಮಡಿಗೊಟ್ಟು ಊಯ ಹೇಳು' ಎಂದು ಗೃಹಸ್ಥನು ಹೇಳಿದೊಡನೆ ಆಕೆ ಹೊರಗೆ ಹೋದಳು. ಈ ಸಂವಾದವನ್ನು ಕೇಳಿದ ಬ್ರಾಹ್ಮಣನು “ಭವತಿ ಭಿಕ್ಷಾಂ ದೇಹಿ' ಎಂದು ಭಿಕ್ಷಾಪಾತ್ರೆಯನ್ನು ನೀಡಿದನು. ಅಷ್ಟರಲ್ಲಿ ಒಳಗಿಂದ ಗೃಹಸ್ಥನೂ ಬಂದು ನೋಡುತ್ತಾನೆ ! ಯಾರು? ಮಾವನು ! ಅಳಿಯನ ಎದೆ ಹಾರಿದಂತಾಯಿತು. ಕೋಪಿಸಿಕೊಂಡು “ಏನೆ, ಹುಬ್ಬಿನ ಕೂದಲು ಕಣ್ಣಿಗೆ ಅಡ್ಡಾಯಿತೋ? ಹೆತ್ತು ಬಾಲ್ಯ ಮೊದಲ್ಗೊಂಡು ಹೊತ್ತು ಹೊರೆದ ದೈವತ್ವ<noinclude></noinclude>
0vpzvkoz2ep1gozrueietip388nc6y6
ಪುಟ:ಹಗಲಿರುಳು.djvu/೬೨
104
38660
321070
298105
2026-05-20T05:18:38Z
Shreesha Sharma
7840
/* Validated */
321070
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಹಗಲಿರುಳು}}{{Right|೫೩}}
ರೂಪನಾದ ತಂದೆಯನ್ನೇ ಮರೆತ ಮೇಲೆ, ನಿನ್ನ ಎದೆ ಕರಗಿ ಇನ್ನಾವ ಕಡೆಗೆ
ಹರಿಯಲಿಕ್ಕಿದೆ ? ಅದು ಮಂಜುಗಡ್ಡೆಯ ಸರಿ.
ಕುಸುಮ ಷಟ್ರದಿ ಇನನೊಡನೆ ಕೂಡಿ ನಗುವಾನಳಿನಿಯೊಂದಿಷ್ಟು
ನೆನೆವುದೇ ಹುಟ್ಟಿದ ಕಸರು ನೆಲವನು? ||
ಮನವಿಡದೆ ಬೆನ್ನು ಹಾಕುತ ಮೇಲೆನೋಳ್ಳು ದೆಲೆ
ವನಿತೆ, ಅದು ನಿನ್ನಿಂದಲೇ ಕಲಿತುದೆ?||೧||
ಚೌಪದಿ || ಹಡೆದು ಹೊರೆಯುತ ನಡೆಯಿಸುತ ನುಡಿಯ ಕಲಿಸಿ
ಬಡತನದ ಹೇಳಲಾಗದ ಕಷ್ಟ ಸೈಸಿ ||
ಹುಡುಕಿ ಗಂಡನ ಕೈಗೆ ಕೊಡೆ ಪುನರ್ಜನ್ಮ
ಪಡೆದವರವೋಲು ಮರೆತೆಯೆ ನಿನ್ನ ಕರ್ಮ ? ||೨||
ತನ್ನ ಮನೆಯಲ್ಲಿ ಅಶನಧ್ವಂಸಕಾಗಿ
ಇನ್ನಿಲ್ಲಿ ಬಂದನೆಂದೆಣಿಸಿದೆಯೊ ನೀನು ?
ನಿನ್ನನೇ ನಿಷ್ಠಾವದಿಂ ಸಾಕಿದವಗೆ
ಅನ್ನಕೇಂ ಕಡವೆ ನಾಡಿನ ಬಟ್ಟಲೊಳಗೆ ?||೩||
{{gap}}ಆಗ ವೆಂಕಣ್ಣನು ಆಕೆಯನ್ನು ಯಾಕೆ ಬರಿದೆ ಬಯ್ಯುವೆ? ನನ್ನ ಬಡತನವನ್ನೂ, ಅಲ್ಲವೆ, ಅವಳಿಗೆ ಸರಿಯಾದ ಜಾಲ್ಯ ಶಿಕ್ಷಣವನ್ನು ಕೊಡ ಲಾರದ ನನ್ನನ್ನೂ ಬಯ್ಯಬೇಕು.” ಎಂದನು, ಆ ಮೇಲೆ, ಮಗಳು ತಂದೆಯ ಕೈಕಾಲುಹಿಡಿದುಕೊಂಡು ಪಶ್ಚಾತ್ತಾಪಪಟ್ಟಳಂತೆ. ಹಾಗೆಯೇ ನಮ್ಮ ರಾತ್ರಿಯೂ ಈಗ ರೂಪಾಂತರವನ್ನೆ ಹೊಂದಿರುವಳು. ಎಂದಮೇಲೆ, ಲೋಕವು ನಮ್ಮ ಹಗೆಗಟ್ಟುತ್ತಿರುವುದು ಅಷ್ಟಿಷ್ಟೆಂದು ಬಣ್ಣಿಸುವುದು ಹೇಗೆ ? “ನಮ್ಮ ವರೆಲ್ಲರೂ ನೀಚರು, ಅವರು ನಾಡಿಗೆ ಅಡಿಯಿಡಲೆ ಬಾರದು. ಅಷ್ಟೆ ಅಲ್ಲ, ಆಗಾಗ ಈ ಕಾಡಿಗೂ ಬಂದು, ಆ ನಾಡವರು ನಮ್ಮವರನ್ನು ಗುಂಡಿನ ಬಾಯಿಗೆ ಕಟ್ಟುವುದೂ ನ್ಯಾಯಸಮ್ಮತವು !” ಈ ಪ್ರಕೃತಿವಿರುದ್ಧವಾದ, ಅಸಹ್ಯವಾದ, ಅವರ ಉಪಟಳಗಳು ಲೆಕ್ಕಕ್ಕೆ ಸಿಕ್ಕದಷ್ಟು, ಅದು ಹೇಗೂ ಇರಲಿ, ಎಂದು ಸೈರಿಸಿಕೊಂಡು ಹೆಣ್ಣು ಕೊಟ್ಟು, ಈ ಹೊಸದೊರೆಯಿಂದ ನ್ಯಾಯವನ್ನು ನಿರೀಕ್ಷಿಸುತ್ತಿದ್ದುದು ಬೆಲೆಗೊಟ್ಟು ಹಾಯುವ ಎತ್ತನ್ನು ಕೊಂಡಂತಾಯಿತು. ಇರಲಿ, ಈ ವಿಷಯದಲ್ಲಿ, ಸರ್ವಪ್ರಯತ್ನವನ್ನಾ ದರೂ ಮಾಡಿ ಒಂದು ಕೈ ನೋಡುವುದೆ ಸಿದ್ಧವು, ತಂಗಿ, ಕೊಟ್ಟ ಕೂಸು ಕುಲದಿಂದ ಹೊರಗೆ ಎಂಬ ಗಾದೆಗೆ, ನಿನ್ನಕ್ಕನಾದ ಕತ್ತಲೆ ಆದರ್ಶವಾ<noinclude></noinclude>
cxh2y9ge0kz2q7o4nm8nzar2p6nn90z
ಪುಟ:ಹಗಲಿರುಳು.djvu/೬೩
104
38661
321045
298106
2026-05-20T04:46:41Z
Pragathi. BH
7585
/* Validated */
321045
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|೫೪}}{{center|ಕನ್ನಡ ಕೋಗಿಲೆ, ಜುಲಾಯಿ ೧೯೧೮.}}
ದರೂ, ಅವಳಲ್ಲಿ ಯ ಬೇಸರವನ್ನು ನಿನ್ನಲ್ಲಿ ಡುವ ಅಲ್ಪಬುದ್ಧಿ, ನನಗೂ ಈ ನನ್ನ ಸಭ್ಯರಿಗೂ ಇಲೆಲಾರದು, [ಒಡನೆಯೆ ಸಿಂಹರಾಜನ ಮುದುರಿದ ಕೇಸರವು ನೆಟ್ಟಗೆ ನಿಂತುದು, ಯಜ್ಞಕುಂಡದ ಎರಡು ಕಿಡಿಗಳೆಂಬಂತೆ ಕಣ್ಣು ಗಳು ಮಿಣಿಮಿಣಿಸಿದುವು. ಮೇಲೆ ಹೊಮ್ಮುವ ಹೊಗೆಯಂತೆ ನಿಡುಸುಯ್ದು ಬುಬ್ಬುಸ್ಸೆಂದಿತು, ದರ್ಭಾದಿಗಳಲ್ಲಿ ಆವರಿಸಿ ಅನ್ವಳಿಸುವ ಸಪ್ತ ಜಿಹ್ವ (ಅಗ್ನಿ) ನಂತೆ, ಮಿಂಚಿನ ಕೇಸರಗಳು ಕಳಚಳಿಸಿದುವು. ತೇಜಸ್ವಿಯ ದ್ವೇಷಿಗಳಾ ದರೂ ದಾರಿಗಾಣಬೇಕಾದರೆ, ಅವನ ಸಹಾಯವೇ ಬೇಕೆಂಬಂತೆ ಮೊರೆ ಕಿಚ್ಚಿನ ಅಚ್ಚಾಗಿತ್ತು. ಹಗೆಗಳನ್ನು ಹೊಕ್ಕು ಹೊಡೆಯಬೇಕೆಂಬ ಮಾತಿ ಗನುಸಾರವಾಗಿ, ತೇಜಸ್ವಿ ಆ ಸಿಂಹರಾಜನ ಮುಖವನ್ನು ಸೇರಿರಬಹುದು, ಹಾವಿಗೆ ಹಾಲೆರೆದರೆ ನಿಷವೆ ಏರುವುದು; ನೀಚರಿಗೆ ವಿದ್ಯಾಭ್ಯಾಸದಿಂದ ದುರ್ಬುದ್ಧಿಯೆ ಪ್ರಬಲವಾಗುವುದು ; ಹಾಗೆಯೆ, ಆ ಘಾತುಕ ಜಂತುಗಳಿಗೆ ತೇಜಸ್ಸಿನ ಕಣ್ಣಿನಿಂದಲೂ ಕಾಡುದಾರಿಯ ಕಾಣವುದು. ]
'''ಸಿಂಹರಾಜ''':- ಒಡೆಯನೆ, ತನ್ನ ಶಕ್ತಿಯನ್ನೆಲ್ಲ, ಪ್ರಜೆಗಳಾದ ನಮ್ಮನ್ನು ಕಣ್ತೆರೆ
ಯಿಸಿ ನಡೆಯಿಸುವುದಕ್ಕಾಗಿ ಉಪಯೋಗಿಸಿ ತ್ಯಾಗರಾಜನಾಗಿರುವ ನಿನ್ನ ಉದಾರಭಾವವನ್ನು ಎಷ್ಟು ಹೊಗಳಿದರೂ ಕಡಮೆಯೆ, ಇರಲಿ, ಜೀವದ ಬೇನೆ ದೇಹಕ್ಕೆ ತಟ್ಟುವಂತೆ ದೊರೆಯ ಅವಮಾನವು ಪ್ರಜೆಗಳಿಗೂ ಮೀಸಲು, ಈಗ, ಲೋಕದಿಂದಾಗಿ ನಿನಗೆ ಅಪಮಾನವೆಂದರೆ, ಕತ್ತಲೆಯ ಮೂಲಕವಾಗಿ, ಆ ಕತ್ತಲೆಯೆ ನಮ್ಮೆಲ್ಲರ ಕಣ್ಣಿಗೆ ಕಾಡಿಗೆ, ಅದು ಎಷ್ಟೆಷ್ಟು ಅಳಿವುದೊ, ಅಷ್ಟಷ್ಟೂ ನಮ್ಮ ನೋಟಕ್ಕೆ ಕಾಟವು, ಆ ಕಾಟವೆ ಗತಿ ಗೆಡಿಸುವ ಮಂತ್ರದ ಮಾಟವು, ಹಾಗೆ ಗತಿಗೆಟ್ಟರೆ, ನಮ್ಮ ಇನಿಬರ ಬಾಯಿಯೂ ಕಟ್ಟಿತು, ಆ ಮೇಲೆ, ನಮ್ಮನ್ನು ಒಂದು ನಾಡನಾಯಾದರೂ ಲೆಕ್ಕಿ ಸದು. ಎಂದಮೇಲೆ, ಈಗಿನ ನಿನ್ನ ಅವಮಾನವೆಂಬುದು, ನಮ್ಮ ಉದ್ದಾರದ ಉದ್ದೇಶದಿಂದ ಹುಟ್ಟಿದೆಯೆಂದಾಯಿತು, ಈ ತಲೆಹೋಪಾಗ ಬಾರದ ಕೈಯನ್ನು ಕೇಸರವೋಸರಿಸುವಾಗ ನೀಡುವುದೆ ? ಬೆನ್ನಿಗೆ ಬಡಿದರೆ ಭಳಿರೆ' ಎನ್ನುವ ಮೂಢನೂ ಹೊಟ್ಟೆಗೆ ಹೊಡೆದರೆ ಒಟ್ಟು' ಎಂದು ಭಾವಿಸುವನೆ ? ಆ ಬಿಳಿಮೋರೆಯ ರಾಜತ್ವಕ್ಕೆ ಮರುಳಾಗಿ, ನಮ್ಮ ಕರಿಮಣಿಯ ರಾತ್ರಿಯನ್ನು ಅವನ ಕೈವಿಡಿಸಿದುದೆ ದೊಡ್ಡ ತಪ್ಪು, ಆರ್ಯಮತದವರಾದರೂ, ನಮ್ಮಲ್ಲಿ<noinclude></noinclude>
18mqamqw18qw2e62krjkb6997cqeup5
321046
321045
2026-05-20T04:48:24Z
Pragathi. BH
7585
321046
proofread-page
text/x-wiki
<noinclude><pagequality level="4" user="Pragathi. BH" />{{rh|center=ಕನ್ನಡ ಕೋಗಿಲೆ, ಜುಲಾಯಿ ೧೯೧೮.|left=೫೪|right=}}</noinclude>
ದರೂ, ಅವಳಲ್ಲಿ ಯ ಬೇಸರವನ್ನು ನಿನ್ನಲ್ಲಿ ಡುವ ಅಲ್ಪಬುದ್ಧಿ, ನನಗೂ ಈ ನನ್ನ ಸಭ್ಯರಿಗೂ ಇಲೆಲಾರದು, [ಒಡನೆಯೆ ಸಿಂಹರಾಜನ ಮುದುರಿದ ಕೇಸರವು ನೆಟ್ಟಗೆ ನಿಂತುದು, ಯಜ್ಞಕುಂಡದ ಎರಡು ಕಿಡಿಗಳೆಂಬಂತೆ ಕಣ್ಣು ಗಳು ಮಿಣಿಮಿಣಿಸಿದುವು. ಮೇಲೆ ಹೊಮ್ಮುವ ಹೊಗೆಯಂತೆ ನಿಡುಸುಯ್ದು ಬುಬ್ಬುಸ್ಸೆಂದಿತು, ದರ್ಭಾದಿಗಳಲ್ಲಿ ಆವರಿಸಿ ಅನ್ವಳಿಸುವ ಸಪ್ತ ಜಿಹ್ವ (ಅಗ್ನಿ) ನಂತೆ, ಮಿಂಚಿನ ಕೇಸರಗಳು ಕಳಚಳಿಸಿದುವು. ತೇಜಸ್ವಿಯ ದ್ವೇಷಿಗಳಾ ದರೂ ದಾರಿಗಾಣಬೇಕಾದರೆ, ಅವನ ಸಹಾಯವೇ ಬೇಕೆಂಬಂತೆ ಮೊರೆ ಕಿಚ್ಚಿನ ಅಚ್ಚಾಗಿತ್ತು. ಹಗೆಗಳನ್ನು ಹೊಕ್ಕು ಹೊಡೆಯಬೇಕೆಂಬ ಮಾತಿ ಗನುಸಾರವಾಗಿ, ತೇಜಸ್ವಿ ಆ ಸಿಂಹರಾಜನ ಮುಖವನ್ನು ಸೇರಿರಬಹುದು, ಹಾವಿಗೆ ಹಾಲೆರೆದರೆ ನಿಷವೆ ಏರುವುದು; ನೀಚರಿಗೆ ವಿದ್ಯಾಭ್ಯಾಸದಿಂದ ದುರ್ಬುದ್ಧಿಯೆ ಪ್ರಬಲವಾಗುವುದು ; ಹಾಗೆಯೆ, ಆ ಘಾತುಕ ಜಂತುಗಳಿಗೆ ತೇಜಸ್ಸಿನ ಕಣ್ಣಿನಿಂದಲೂ ಕಾಡುದಾರಿಯ ಕಾಣವುದು. ]
'''ಸಿಂಹರಾಜ''':- ಒಡೆಯನೆ, ತನ್ನ ಶಕ್ತಿಯನ್ನೆಲ್ಲ, ಪ್ರಜೆಗಳಾದ ನಮ್ಮನ್ನು ಕಣ್ತೆರೆ
ಯಿಸಿ ನಡೆಯಿಸುವುದಕ್ಕಾಗಿ ಉಪಯೋಗಿಸಿ ತ್ಯಾಗರಾಜನಾಗಿರುವ ನಿನ್ನ ಉದಾರಭಾವವನ್ನು ಎಷ್ಟು ಹೊಗಳಿದರೂ ಕಡಮೆಯೆ, ಇರಲಿ, ಜೀವದ ಬೇನೆ ದೇಹಕ್ಕೆ ತಟ್ಟುವಂತೆ ದೊರೆಯ ಅವಮಾನವು ಪ್ರಜೆಗಳಿಗೂ ಮೀಸಲು, ಈಗ, ಲೋಕದಿಂದಾಗಿ ನಿನಗೆ ಅಪಮಾನವೆಂದರೆ, ಕತ್ತಲೆಯ ಮೂಲಕವಾಗಿ, ಆ ಕತ್ತಲೆಯೆ ನಮ್ಮೆಲ್ಲರ ಕಣ್ಣಿಗೆ ಕಾಡಿಗೆ, ಅದು ಎಷ್ಟೆಷ್ಟು ಅಳಿವುದೊ, ಅಷ್ಟಷ್ಟೂ ನಮ್ಮ ನೋಟಕ್ಕೆ ಕಾಟವು, ಆ ಕಾಟವೆ ಗತಿ ಗೆಡಿಸುವ ಮಂತ್ರದ ಮಾಟವು, ಹಾಗೆ ಗತಿಗೆಟ್ಟರೆ, ನಮ್ಮ ಇನಿಬರ ಬಾಯಿಯೂ ಕಟ್ಟಿತು, ಆ ಮೇಲೆ, ನಮ್ಮನ್ನು ಒಂದು ನಾಡನಾಯಾದರೂ ಲೆಕ್ಕಿ ಸದು. ಎಂದಮೇಲೆ, ಈಗಿನ ನಿನ್ನ ಅವಮಾನವೆಂಬುದು, ನಮ್ಮ ಉದ್ದಾರದ ಉದ್ದೇಶದಿಂದ ಹುಟ್ಟಿದೆಯೆಂದಾಯಿತು, ಈ ತಲೆಹೋಪಾಗ ಬಾರದ ಕೈಯನ್ನು ಕೇಸರವೋಸರಿಸುವಾಗ ನೀಡುವುದೆ ? ಬೆನ್ನಿಗೆ ಬಡಿದರೆ ಭಳಿರೆ' ಎನ್ನುವ ಮೂಢನೂ ಹೊಟ್ಟೆಗೆ ಹೊಡೆದರೆ ಒಟ್ಟು' ಎಂದು ಭಾವಿಸುವನೆ ? ಆ ಬಿಳಿಮೋರೆಯ ರಾಜತ್ವಕ್ಕೆ ಮರುಳಾಗಿ, ನಮ್ಮ ಕರಿಮಣಿಯ ರಾತ್ರಿಯನ್ನು ಅವನ ಕೈವಿಡಿಸಿದುದೆ ದೊಡ್ಡ ತಪ್ಪು, ಆರ್ಯಮತದವರಾದರೂ, ನಮ್ಮಲ್ಲಿ<noinclude></noinclude>
1kueiov20snk2b4m1j755zk82jlsjq9
ಪುಟ:ಹಗಲಿರುಳು.djvu/೬೪
104
38662
321047
298107
2026-05-20T04:49:32Z
Pragathi. BH
7585
/* Validated */
321047
proofread-page
text/x-wiki
<noinclude><pagequality level="4" user="Pragathi. BH" />{{rh|center=ಹಗಲಿರುಳು|left=|right=೫೫}}</noinclude>
ಎದುರೆದುರು ದಂಡೋಪಾಯದಿಂದ ಹೋರಾಡುತ್ತಿದ್ದರು. ಈ ನೀಚನು, (ಒಳಹೊಕ್ಕುರಕಡಿವ' ಮರೆಮೋಸದ ಭೇದವನ್ನೆ ಪ್ರಯೋಗಿಸಿದ್ದಾನೆ. ಅದರಿಂದ ಲೋಕಮತವನ್ನೂ, ಈ ರಾಜಮತವನ್ನೂ ಖಂಡಿಸಿ, ನಮ್ಮ ಕತ್ತ ಲೆಯ ರಾಜ್ಯವನ್ನೆ ಅಖಂಡವಾಗಿ ಸ್ಥಾಪಿಸುವುದು ಆದ್ಯ ಕರ್ತವ್ಯವು, (ತಿರುಗಿ) ಪ್ರಿಯರಾದ ವ್ಯಾಘ್ರ ಪ್ರಮುಖರೆ, ನಮ್ಮೊಳಗೆ, ಮತಭೇದಗಳು ಇದ್ದ ರೂ ಇರಬಹುದು, ಅದು ಪ್ರಕೃತಿಯ ಕಟ್ಟಳೆ, ಮರಗಳು, ಕುಂಜಗಳು, ಗವಿ ಗಳು ಹಲವಾದರೂ, ನಮ್ಮ ನೆಲೆಮನೆಯಾದ ಈ ಕಾಡೊಂದೇ ಅಲ್ಲವೆ? ಅದರಿಂದ, ಎಲ್ಲರೂ ಒಕ್ಕಟ್ಟಾಗಿ ಮೊದಲು ಲೋಕವನ್ನೂ ನಕ್ಷತ್ರಪತಿಯನ್ನೂ ಬಗ್ಗು ಬಡಿಯಬೇಕು.
'''ವ್ಯಾಘ್ರ''':-( ಭೂಮಿ ಬಾಯಿಬಿಡುವಂತೆ ಬಾಯಿಬಿಟ್ಟು ) ಸಿಂಹರಾಜನ, ಅದ
ಕ್ಕೇನು ಸಂದೇಹವು ? ಆ ನಾಡವರು, ನಮಗೆ ಕೊಡುತ್ತಿರುವ ಕೋಟಲೆ ಯೆಂದರೆ ಕೋಟಿ ಕೋಟಿ, ನಮ್ಮ ಮೃಗಜಾತಿಗೆ ಸೇರಿದ, ನಮ್ಮ ಹಲವು ಮಂದಿ ಬಂಧುಬಾಂಧವರನ್ನು, ಮೊದಲೆ ಸೆರೆಯ ಲ್ಲಿಟ್ಟವರು ಯಾರು ? ಪಾಪ ಬಹುಕಾಲ ಮೊದಲ್ಗೊಂಡು ಮನಮೆಚ್ಚಿದಂತೆ ಪಳಗಿಸಿ, ಸ್ವಾತಂತ್ರದ ದೈವೀ ಪ್ರಸಾದವನ್ನೆ ಮರೆಯಿಸಿ, ಅವರನ್ನು ಕೈಮರಿಗಳನ್ನಾಗಿ ಮಾಡಿದವರಾರು !? ಎಲ್ಲ ಆ ನೀಚಲೌಕಿಕರೆ, ಕಡೆಗೆ, ಆ ನಮ್ಮವರಿಗೆ 'ನಾಡಜಂತುಗಳು' ಎಂಬ ಹೆಸರಿಟ್ಟಿದ್ದಾರೆ. ಆದರೆ, ಆ ನಾಡಲ್ಲಿ ಯ ಅವರಿಗೆ ಇನ್ನೂ ಬಿಡುಗಡೆ ಇಲ್ಲ, ದನ, ನಾಯಿ, ಒಂಟಿ, ಕುದುರೆ ಮೊದಲಾದ ನಮ್ಮವರು ಅವರ ಊಳಿಗವನ್ನು ಮಾಡುತ್ತಿರುವುದೆಂದರೇನು ! ಇರಲಿ, ಸ್ವಾತಂತ್ರವಾದರೂಇದ್ದರೆ, ಮೆಣಸಿನ ಕಾರವನ್ನು ಸಕ್ಕರೆಯ ಸಿಹಿಯಿಂದ ಸೈಸುವಂತೆ ಇರಬಹುದಿತ್ತು, ಅದೊಂದಕ್ಕೂ ಎಡೆಯಿಲ್ಲ, ಇನ್ನು ಆ ವಂಚಕರಲ್ಲಿ ಹಲವರು (ಗೋವುಗಳೆಂದರೆ ನಮ್ಮ ದೇವತೆಗಳು' ಎಂದು ಹೇಳಿಕೊಳ್ಳುತ್ತಾರೆ. ಆದರೆ, ಪಾಲಿನ ವಿಷಯವು ಬಂದೊಡನೆ, ಆ ದೇವತೆಗಳ ಕರುಗಳ ಕೊರಳಿಗೆ ಹಗ್ಗವೆ ದೇವತಾರಾಧನೆ, ಇಷ್ಟಲ್ಲದೆ ಗೋಹತ್ಯಕಾರರ' ಎಂದು ನಮ್ಮಲ್ಲಿ ಬೇರೊಂದು ಆಕ್ಷೇಪವಿದೆ. ಅದರಿಂದ, ನಮ್ಮನ್ನು, ಗುಂಡಿನ ಬಾಯಿಗೆ ಕಟ್ಟುತ್ತಾರೆ. ಆಗಾಗ ನಮ್ಮ ಈ ಮನೆಯನ್ನು ನುಗ್ಗಿ, ಸೂರೆಮಾಡುವುದಲ್ಲದೆ, ನಮ್ಮ ಮರಿಮಕ್ಕಳನ್ನೂ ಹಿಡಿದುಕೊಂಡು ಹೋಗುತ್ತಾರೆ, ನಮ್ಮ ಈ ಕಾಂಡೆಂಬ ಮನೆಯನ್ನು ಮುರಿದು ತಮ್ಮ ಮನೆಗಟ್ಟುತ್ತಾರೆ. ಇದೆಂಥ ಅನ್ಯಾಯ ?<noinclude></noinclude>
4a12ixt1h9yc17zqjy57ufmf31t7jkc
ಪುಟ:ಹಗಲಿರುಳು.djvu/೬೫
104
38663
321048
298220
2026-05-20T04:51:27Z
Pragathi. BH
7585
/* Validated */
321048
proofread-page
text/x-wiki
<noinclude><pagequality level="4" user="Pragathi. BH" />{{rh|center=ಕನ್ನಡ ಕೋಗಿಲೆ, ಜುಲಾಯಿ ೧೯೧೮.|left=|right=}}</noinclude>
.
ಬಂಧುಗಳನ್ನು ಮರೆತು ಹಗೆಗಳಲ್ಲಿ ಆಳಾಗಿ, ನಮ್ಮ ವಂಶಕ್ಕೇ ಕಳಂಕವನ್ನು ತರುವ ಆ ದನಗಳನ್ನು ಶಿಕ್ಷಿಸುವುದು ನಮ್ಮದೆ ಧರ್ಮವು, ಹೊಳೆನೀರಿಗೆ ದೊಣ್ಣೆಯ ಅಪ್ಪಣೆಯೇನು ? ಅದೂ ಬೇಡ, ಅವರೊಳಗೇ ಹಲವರು ಆ ದೇವತಾಸ್ವರೂಪಿಗಳಾದ ಗೋವುಗಳನ್ನು ಕಡಿದು, ಬಾಯಿಗೆ ಗಿಡಿಯುತ್ತಿರುವು ದನ್ನು, ಆ ಧರ್ಮರಕ್ಷಕರು ಯಾಕೆ ಕಂಡೂ ಕಾಣದಂತಿರುವುದು? ಅದರಿಂದ, ಅವರ ಧರ್ಮಾಚರಣೆಯೆಂದರೆ ಬಗ್ಗಿ ದವನಿಗೆ ಒಂದು ಗುದ್ದು ಹೆಚ್ಚು' ಎಂಬಂತೆಯೆ ಸರಿ, ಅಂಥ ದುಷ್ಟ ಲೋಕವನ್ನು ಮುರಿದುಬಡಿಯಲೆ ಬೇಕು. ಅದಕ್ಕೆ ಹಲವರೇಕೆ ? ಅಪ್ಪಣೆಯಾದರೆ, ಕೂಡಲೆ ಊರಿಗೆ ದಾಳಿಯಿಟ್ಟು, ಆ ಮನುಷ್ಯರನ್ನು ಕೊಂದುಕೂಗಿ ತಿಂದುತೇಗಿದ ಜಯಭೇರಿಯೊಡನೆ
ಬರುತ್ತೇನೆ.
'''ಜಂಬುಕ'':- ಜೀಯ, ನಿಮ್ಮ ಪಣೆಗಟ್ಟಿನ ಎಣಿಕೆಗೆ ಎಣೆಯಿಲ್ಲ, ಆದರೂ ಹಿತ
ದೃಷ್ಟಿಯ ನನ್ನದೂ ಒಂದು ಅಭಿಪ್ರಾಯವಿದೆ. ಆನೆಗರುಳಿನ ಸವಿ ಬೇರೆ. ಆಡಿನ ಅಡಗಿನ ಕಂಪು ಬೇರೆ. ಅವರಂತೆ, ನನ್ನ ಮಾತಿನಲ್ಲಿ ಯ ಬೆಲೆ ಯಿದ್ದರೆ ಕೇಳಬಹುದಷ್ಟೆ.. ಅಪ್ಪಣೆಯಾದರೆ ಹೇಳುತ್ತೇನೆ.
'''ಸಿಂಹ''':- ಹುಂ, ಅದೇನು ?
'''ಜಂಬುಕ''':- ಬುದ್ಧಿ, ನಿಮ್ಮ ಉದ್ಯೋಗಶಕ್ತಿಗಳ ಬಲುಮೆ ತಕ್ಕಷ್ಟು೦ಟು. ಆದರೆ,
ಶಕ್ತಿ ನೆಲೆಗೊಳ್ಳಬೇಕಾದರೆ, ಯುಕ್ತಿಯೋಚನೆಗಳ ಅಡಿಗಟ್ಟು ಅಚ್ಚುಗಟ್ಟಾಗಿರಬೇಕು, ಹೇಗೆಂದರೆ--ಎಣಿಕೆಯ ನೂಲನ್ನು ಯುಕ್ತಿಯ ಮಗ್ಗ ಕ್ಕೆ ಸುತ್ತುವ ಮೊದಲೆ, ಅದು ಗಟ್ಟಿಯಾಗಿದೆಯೋ ಎಂದು ಪರೀಕ್ಷಿಸಬೇಕು, ಆ ಉಪಾಯದ ಮಗ್ಗವನ್ನು , ಶಕ್ತಿಗನುಸಾರವಾಗಿ ಉದ್ಯೋಗದ ಬಟ್ಟೆ ಯಲ್ಲಿ ಎಸೆಯಬೇಕು. ಹಾಗಾದರೇ ಬಟ್ಟೆ ಬಯಲಿಗೆ ಬಂದು ಮಾನಕ್ಕಾ ಗುವದು, ಇದು ಸ್ವಕಪೋಲಕಲ್ಪಿತವಲ್ಲ ; ನಿಮ್ಮ ಪೂರ್ವಿಕರ ಪ್ರಿಯ ಮಂತ್ರಿಗಳಾಗಿದ್ದ, ನನ್ನ ಹಿರಿಯರಾದ ಕರಟಕದಮನಕರ ಬಾಯಿಂದ ಬಿದ್ದ ಬಂಗಾರದ ಮಾತು. ಅದರಿಂದ, ಎಲ್ಲದಕ್ಕೂ ತಳಗಲ್ಲಾದ ಯುಕ್ತಿಯನ್ನೆಮೊದಲು ಪರೀಕ್ಷಿಸಬೇಕು.
'''ವ್ಯಾಘ್ರ''':-ಆಗಲಿ, ಅದೇನು ಪರೀಕ್ಷೆ?<noinclude></noinclude>
37z823rrcrdjo9fn4q5mjxl4qs9e0ct
321049
321048
2026-05-20T04:51:51Z
Pragathi. BH
7585
321049
proofread-page
text/x-wiki
<noinclude><pagequality level="4" user="Pragathi. BH" />{{rh|center=ಕನ್ನಡ ಕೋಗಿಲೆ, ಜುಲಾಯಿ ೧೯೧೮.|left=|right=}}</noinclude>
.
ಬಂಧುಗಳನ್ನು ಮರೆತು ಹಗೆಗಳಲ್ಲಿ ಆಳಾಗಿ, ನಮ್ಮ ವಂಶಕ್ಕೇ ಕಳಂಕವನ್ನು ತರುವ ಆ ದನಗಳನ್ನು ಶಿಕ್ಷಿಸುವುದು ನಮ್ಮದೆ ಧರ್ಮವು, ಹೊಳೆನೀರಿಗೆ ದೊಣ್ಣೆಯ ಅಪ್ಪಣೆಯೇನು ? ಅದೂ ಬೇಡ, ಅವರೊಳಗೇ ಹಲವರು ಆ ದೇವತಾಸ್ವರೂಪಿಗಳಾದ ಗೋವುಗಳನ್ನು ಕಡಿದು, ಬಾಯಿಗೆ ಗಿಡಿಯುತ್ತಿರುವು ದನ್ನು, ಆ ಧರ್ಮರಕ್ಷಕರು ಯಾಕೆ ಕಂಡೂ ಕಾಣದಂತಿರುವುದು? ಅದರಿಂದ, ಅವರ ಧರ್ಮಾಚರಣೆಯೆಂದರೆ ಬಗ್ಗಿ ದವನಿಗೆ ಒಂದು ಗುದ್ದು ಹೆಚ್ಚು' ಎಂಬಂತೆಯೆ ಸರಿ, ಅಂಥ ದುಷ್ಟ ಲೋಕವನ್ನು ಮುರಿದುಬಡಿಯಲೆ ಬೇಕು. ಅದಕ್ಕೆ ಹಲವರೇಕೆ ? ಅಪ್ಪಣೆಯಾದರೆ, ಕೂಡಲೆ ಊರಿಗೆ ದಾಳಿಯಿಟ್ಟು, ಆ ಮನುಷ್ಯರನ್ನು ಕೊಂದುಕೂಗಿ ತಿಂದುತೇಗಿದ ಜಯಭೇರಿಯೊಡನೆ
ಬರುತ್ತೇನೆ.
'''ಜಂಬುಕ''':- ಜೀಯ, ನಿಮ್ಮ ಪಣೆಗಟ್ಟಿನ ಎಣಿಕೆಗೆ ಎಣೆಯಿಲ್ಲ, ಆದರೂ ಹಿತ
ದೃಷ್ಟಿಯ ನನ್ನದೂ ಒಂದು ಅಭಿಪ್ರಾಯವಿದೆ. ಆನೆಗರುಳಿನ ಸವಿ ಬೇರೆ. ಆಡಿನ ಅಡಗಿನ ಕಂಪು ಬೇರೆ. ಅವರಂತೆ, ನನ್ನ ಮಾತಿನಲ್ಲಿ ಯ ಬೆಲೆ ಯಿದ್ದರೆ ಕೇಳಬಹುದಷ್ಟೆ.. ಅಪ್ಪಣೆಯಾದರೆ ಹೇಳುತ್ತೇನೆ.
'''ಸಿಂಹ''':- ಹುಂ, ಅದೇನು ?
'''ಜಂಬುಕ''':- ಬುದ್ಧಿ, ನಿಮ್ಮ ಉದ್ಯೋಗಶಕ್ತಿಗಳ ಬಲುಮೆ ತಕ್ಕಷ್ಟು೦ಟು. ಆದರೆ,
ಶಕ್ತಿ ನೆಲೆಗೊಳ್ಳಬೇಕಾದರೆ, ಯುಕ್ತಿಯೋಚನೆಗಳ ಅಡಿಗಟ್ಟು ಅಚ್ಚುಗಟ್ಟಾಗಿರಬೇಕು, ಹೇಗೆಂದರೆ--ಎಣಿಕೆಯ ನೂಲನ್ನು ಯುಕ್ತಿಯ ಮಗ್ಗ ಕ್ಕೆ ಸುತ್ತುವ ಮೊದಲೆ, ಅದು ಗಟ್ಟಿಯಾಗಿದೆಯೋ ಎಂದು ಪರೀಕ್ಷಿಸಬೇಕು, ಆ ಉಪಾಯದ ಮಗ್ಗವನ್ನು , ಶಕ್ತಿಗನುಸಾರವಾಗಿ ಉದ್ಯೋಗದ ಬಟ್ಟೆ ಯಲ್ಲಿ ಎಸೆಯಬೇಕು. ಹಾಗಾದರೇ ಬಟ್ಟೆ ಬಯಲಿಗೆ ಬಂದು ಮಾನಕ್ಕಾ ಗುವದು, ಇದು ಸ್ವಕಪೋಲಕಲ್ಪಿತವಲ್ಲ ; ನಿಮ್ಮ ಪೂರ್ವಿಕರ ಪ್ರಿಯ ಮಂತ್ರಿಗಳಾಗಿದ್ದ, ನನ್ನ ಹಿರಿಯರಾದ ಕರಟಕದಮನಕರ ಬಾಯಿಂದ ಬಿದ್ದ ಬಂಗಾರದ ಮಾತು. ಅದರಿಂದ, ಎಲ್ಲದಕ್ಕೂ ತಳಗಲ್ಲಾದ ಯುಕ್ತಿಯನ್ನೆಮೊದಲು ಪರೀಕ್ಷಿಸಬೇಕು.
'''ವ್ಯಾಘ್ರ''':-ಆಗಲಿ, ಅದೇನು ಪರೀಕ್ಷೆ?<noinclude></noinclude>
k2oskdwgoynxd04ysj6dcxe89ut4k1a
ಪುಟ:ಹಗಲಿರುಳು.djvu/೬೬
104
38664
321050
298221
2026-05-20T04:52:48Z
Pragathi. BH
7585
/* Validated */
321050
proofread-page
text/x-wiki
<noinclude><pagequality level="4" user="Pragathi. BH" />{{rh|center=ಹಗಲಿರುಳು|left=|right=೫೬}}</noinclude>
'''ಜಂಬುಕ''':- ಬುದ್ದಿ, ಹೇಳುತ್ತೇನೆ, ಆದರೆ ಹಿಂದಿದ್ದರೆ ತೊತ್ತು, ಮುಂದಿದ್ದರೆ
ತುತ್ತು' ಎಂಬುದು ಹೆಚ್ಚಾಗಿ ಈಗಿನ ಅರಸರ ರೀತಿ, ಅದರಿಂದ, ಕಂಡು
ದನ್ನು ಕಂಡಂತೆ ಹೇಳಲಿಕ್ಕೆ ಸ್ವಲ್ಪ ಭಯವಾಗುತ್ತದೆ.
'''ಸಿಂಹ''':- ಅದೇನೂ ಇಲ್ಲ, ನಿನ್ನ ಪೂರ್ವಜರಂತೆ, ನೀನೂ ಬಗೆಬಾಯಿಗಳಿಂದ
ಸಹಾಯಕನಾಗಲೇ ಬೇಕು, ಕೆಲಸದ ಬಂಡಾರಕ್ಕೆ ಎಣಿಕೆಯ ಬೀಗದ
ಕೈಯಲ್ಲವೆ ?
'''ಜಂಬುಕ''':- ಇದೀಗ ಕೋಲುಬೇಲಿಯಿಲ್ಲದ ರಾಜಮಾರ್ಗವು, ಕೇಳು, ಮೊದಲು
ನಮ್ಮೆಣಿಕೆಯನ್ನೆ ಬಲಪಡಿಸಿಕೊಳ್ಳಬೇಕು ಎಂದರೆ-ಆಡಳಿತದ ರೀತಿ, ಪ್ರಜೆ ಗಳೆಲ್ಲರಿಗೂ ಮೆಚ್ಚಿಕೆಯಾಗಿರಬೇಕು, ಮೇಲಾಳುಗಳಿಗೆ, ಎಲ್ಲರಲ್ಲಿ ಯ ಸಮದೃಷ್ಟಿಯಿದ್ದರೇ ಅದು ಸಾಗುವುದು ಹಾಗಿಲ್ಲದೆ, ಈ ಕೆಲಸದಲ್ಲಿ ಮಾತ್ರ ನೀವು ನಮಗೆ ಸಹಾಯಕರಾಗಬೇಕು' ಎಂದರೆ, ಆ ಕೀಳುತರಗತಿ ಯವರು ಒಪ್ಪುವರೆ ? ಕಷ್ಟ ಕಾಲದಲ್ಲಿ ಕೈಗೊಟ್ಟವನನ್ನು, ಇಷ್ಟವೊದಗಿದಾಗ, ಸಮ್ಮಾನದ ಹಿಟ್ಟಾಗಿಸಬಾರದು, ಐಕಮತ್ಯವೆಂಬುದು, ಒತ್ತಾಯದಿಂದ ಕಡೆ ಸಾಗದು, ಒಳಗೊಳಗಿನ ಬಿರುಕಿಗೆ ಮಣ್ಣು ಮತ್ತದೆ, ಮೇಲುಮೇಲಿಂದ ಸಾರಣೆಮಾಡಿದರೆ ಹೇಗಾದೀತು? ನಿನ್ನ ಉದಾರಮತದಂತೆ, ದೊರೆಯಾದ ಅಂಧಕಾರನ ಅಭಿಪ್ರಾಯವೂ ಇರುವುದಾದರೆ ಕಾರ್ಯಸಿದ್ಧಿ ಕೈಗೆ ಬಂದಂತೆ ಯೇ ಸರಿ.
'''ಅಂಧಕಾರ''':- ಹೌದು, ನನ್ನೊಳಗಿನ ಪ್ರಜೆಗಳೆಲ್ಲ ರೂ, ತಾಯಮಡಿಲ ಮಕ್ಕಳಂತೆ,
ಅವರವರ ಯೋಗ್ಯತಾನುಸಾರವಾಗಿ, ಏಕರೀತಿಯಿಂದ ಸುರಕ್ಷಿತರಾಗಬೇಕು.
'''ವ್ಯಾಘ್ರ''':- (ಕೋಪಿಸಿ) ದೊರೆಯೆ, ಭೇದಬುದ್ದಿ ಯ ಬೀಜವಾದ, ಈ ನರಿಯ ಮಾತಿಗೆ
ಏನೆಂದು ಹೇಳಬೇಕು! ಸಮಭಾವವೆಂಬುದು, ನಮ್ಮಲ್ಲಿ ಈಗಲ್ಲ ಆಗಲ್ಲ ;ಆದಿಯಿಂದಲೆ ಹುಟ್ಟಿರುವುದು, ಲೋಕದ ಆ ಪಕ್ಷಪಾತಬುದ್ದಿಯ ನಿಗ್ರಹ ಕಾಗಿಯೆ, ನಾವು ಇಷ್ಟೆಲ್ಲ ಯೋಚಿಸುವುದು, ಪ್ರಜೆಗಳಿಗೆ ಅಸಂತೋಷ ವುಂಟಾಗಬಾರದೆಂದು,ನಾವು ಕೈಲಾದಷ್ಟು ಪ್ರಯತ್ನಿಸುತ್ತೇವೆ.ಸುಲಭ ವಾಗಿ ಒದಗತಕ್ಕ ಕಾಡಜಂತುಗಳನ್ನೂ ಬಿಟ್ಟು ನಾಡವುಗಳನ್ನೆ ತಿನಿಸಿಗಾಗಿ ಆರಿಸುವುದು ಮತ್ತೇಕೆ ? ನನ್ನಾಕೆ, ಈ ಪ್ರಜೆಗಳ ಹಿತಕ್ಕಾಗಿ, ಹುಟ್ಟಿದ<noinclude></noinclude>
blx6gmr5psu9v9fxm3zn7073mbaf06k
ಪುಟ:ಹಗಲಿರುಳು.djvu/೬೭
104
38665
321051
311082
2026-05-20T04:54:09Z
Pragathi. BH
7585
/* Validated */
321051
proofread-page
text/x-wiki
<noinclude><pagequality level="4" user="Pragathi. BH" />{{rh|center=ಕನ್ನಡ ಕೋಗಿಲೆ, ಜುಲಾಯಿ ೧೯೧೮.|left=೫೮|right=}}</noinclude>
ಮರಿಯನ್ನಾದರೂ ತಿಂದು ಹೊಟ್ಟೆಹೊರೆಯುತ್ತಾಳೆಂಬುದು ಜಗತ್ಪ್ರಸಿದ್ಧವಾಗಿದೆ. ಇದಕ್ಕಿಂತಲೂ ಅಧಿಕವಾದ ಪ್ರಜಾವಾತ್ಸಲ್ಯವೆಂದರೇನು? ಇನ್ನು , ಒಂದೊಂದು ಕಷ್ಟ ಕಾಲಗಳಲ್ಲಿ, ಇಂಥ ಮುಂದಾಳುಗಳ ರಕ್ಷಣೆಗಾಗಿ ತಮ್ಮ ಮೆಯ್ಯಾ ದರೂ ಕೊಟ್ಟು, ಅದರಿಂದ, ನಮ್ಮ ಸಮಾಜೋದ್ಧಾರದ ಕೀರ್ತಿಯನ್ನು ಕಟ್ಟಿಕೊಳ್ಳುವುದು, ಹಿಂದಾಳುಗಳ ಧರ್ಮವು, ಇಂಥ ದೃಷ್ಟಾಂತವು ಆ ಊರಲ್ಲಿಯೂ ಬೇಕಾದಷ್ಟಿದೆ. ಎಂದಮೇಲೆ, ಸಂದೇಹದ ಸೆರೆಯೂ ಇಲ್ಲದೆ, ಈ ಜಂಬುಕ ಬಡಗಿ, ಈ ಅಯಂವಿಶೇಷದ ಪ್ರಶ್ನೆಯ ಉಳಿಯನ್ನು, ಹೆಚ್ಚಿದುದೇಕೆ?
'''ಕಪಿ''':-(ಮರದಿಂದ) ಮಹನೀಯರೆ, ಒಂದಿಷ್ಟು, ಮೇಲೆ ಕಣ್ಣಿಟ್ಟು ಕಿವಿಗೊಡಿರಿ.
ನಮ್ಮ ಕರಿಯಣ್ಣನ ಪ್ರಶ್ನೆ ಯಥಾರ್ಥವಿದೆ. ಹೊರಗಿನವರಿಗೆ, ಹೊಕ್ಕು ನೋಡದೆ, ಒಳಗಿನ ಗುಟ್ಟು ಗೊತ್ತಾಗದು, ಅದರಿಂದ, ಬಡವರ ಅಧಿಕ ವಾಗಿರುವ ಇಲ್ಲಿಯ ಪ್ರಜಾಸಮೂಹದ ಹಿತಚಿಂತನೆಮಾಡುವುದಿದ್ದರೆ, ನರಿಯಣ್ಣನ ಮಾತನ್ನು ಚೆನ್ನಾಗಿ ಲಕ್ಷಿಸಬೇಕು. ಹುಲಿಯ ಹೊಟ್ಟೆಪಾಡಿನ ಈ ಮಾತು ಹಿತಕರವಲ್ಲ. ಅವನು ನಾಡಿಗೆ ಹೋಗುವುದು ನಾಲಗೆಯ ಸವಿಗಲ್ಲದೆ, ಈ ಪ್ರಜಾವಾತ್ಸಲ್ಯದಿಂದ ಅಲ್ಲ ಎಂಬುದಕ್ಕೆ ಬೇಕಷ್ಟು ದೃಷ್ಟಾಂತ ಗಳುಂಟು. ಅವನ ಆಕೆಯ ಮರಿಯನ್ನು ಮುಕ್ಕುವುದು ಬಾಳಂತಿಮದ್ದಿ ಗಲ್ಲದೆ, ನಮ್ಮ ಒಳ್ಳಿತಕ್ಕಲ್ಲ ಎಂಬುದನ್ನು ಹೇಳಬೇಕಾಗಿಲ್ಲ. ಸರ್ವಸಮ ಭಾವದವನಾದರೆ, ಈ ಹುಲಿ ತಮ್ಮವರನ್ನು ಯಾಕೆ ಮುಟ್ಟುವುದಿಲ್ಲ ? ಇವನು, ಅಷ್ಟು ನಿಷ್ಪಕ್ಷಪಾತಿಯಾದರೆ, ನಾನೇಕೆ ಮರದಿಂದ ಮರಕ್ಕೆ ಲಂಘಿಸುತ್ತಿರುವುದು ? ಹಕ್ಕಿಗಳು ನೆಲಮುಟ್ಟದೆ ಆಕಾಶದಲ್ಲಿ ಹಾರು ತಿರುವುದಾದರೂ ಯಾಕೆ ? ಈ ಬಗೆಯ ಹಾವಳಿಯನ್ನು ಸೈರಿಸದೆಯೆ, ದನಮುಂತಾದುವು, ಮೊದಲೆ ನಾಡನ್ನು ಸೇರಿದುವು. ಇದಕ್ಕಾಗಿಯೆ, ದೇಶಾಂತರಹೋದರೂ ಸ್ವಾತಂತ್ರವಿರಬೇಕು' ಎಂದು ಆಗಾಗ ಗೋಳಿಡು ತಿರುವುದು, ಅದರಿಂದ, ಮುಖಂಡರಾದವರು, ಇನ್ನಾದರೂ, ಈ ಹೊಟ್ಟೆ ಬಾಕತನಕ್ಕೆ ಅಡ್ಡ ಬಾರದಿದ್ದರೆ, ಎಲ್ಲವೂ ಗಾಳಿಮಾತಾಗುವುದು, [ಆ
ಮಾತನ್ನು ಕೇಳುವ ಮೊದಲೆ ಹುಲಿಗೆ ಮಿತಿಮೀರಿದ ಸಿಟ್ಟಿದ್ದಿತು. ನರಿಯ ಮೇಲಿನ ಕೋಪದ ಕಿಡಿ ಕಪಿಯಲ್ಲಿ ಭುಗಿಲೆಂದಿತು, ಮಾಡುವುದೇನು? ಮಂಗನ ಮನೆ ಭದ್ರವಾಗಿತ್ತು, ಏರಿದ ಸಿಟ್ಟು ಪ್ರತಿಕ್ರಿಯೆಯಿಂದಲೆ ತಣಿದು<noinclude></noinclude>
85veibl3pchr55twec9lw2bm1vxlt1h
ಪುಟ:ಹಗಲಿರುಳು.djvu/೬೮
104
38666
321052
311084
2026-05-20T04:55:25Z
Pragathi. BH
7585
/* Validated */
321052
proofread-page
text/x-wiki
<noinclude><pagequality level="4" user="Pragathi. BH" />{{rh|center=ಹಗಲಿರುಳು|left=|right=೫೯}}</noinclude>
ಇಳಿಯಬೇಕಷ್ಟೆ, ಮೊದಲು ಕೈ, ಅದು ಮುಟ್ಟದಿದ್ದರೆ ನಾಲಗೆಯಾದರೂ
ನೀಡುವುದು ನೀಚರ ಸ್ವಭಾವವು.]
'''ಹುಲಿ''':- (ಗುಡುಗುಡಿಸಿ) ಅ, ನಿನ್ನ ನೆತ್ತರನ್ನು, ಈಗಲೆ ಕುಡಿಯಬೇಕಿತ್ತು!
'''ಕಪಿ''':-ಉಃ, ಏನುಮಾಡಲಿ, 'ಕೈನಿಲುಕದಷ್ಟು ದೂರವಾಯಿತಲ್ಲ' ಎಂದಲ್ಲವೆ
ಚಿಂತೆ? ಇದಕ್ಕೆ ನಾವು ಇಷ್ಟು ಎತ್ತರದಲ್ಲಿರುವುದೆಂದು ಗೊತ್ತಾಯಿತೆ?
'''ಹುಲಿ''':-ಆಗಲಿ, ನೀನೆಲ್ಲಿ ಹೋಗುವೆ? ನೋಡೋಣ.
'''ಕಪಿ''':- ಮತ್ತೆಲ್ಲಿ? ಮರದಿಂದ ಮರಕ್ಕೆ ಚೆನ್ನಾಗಿ ನೋಡಬಹುದು.
'''ಹುಲಿ''':- ಏನು, ಈ ಮರಕ್ಕೆ ಹತ್ತ ಕೂಡದೊ?
'''ಕಪಿ''':- ಒಂದುವೇಳೆ ಹತ್ತಿದರೂ, ನನ್ನಂತೆ ಹಾರಕೂಡದು,
'''ಹುಲಿ''':- ಇರಲಿ; ನಮ್ಮದೆಲ್ಲ ಅನ್ಯಾಯವು. ಆ ಮನುಷ್ಯರು ಸೊಂಟಕ್ಕೆ ಹಗ್ಗ
ಹಾಕಿ, ಕೇರಿಕೇರಿಗಳಲ್ಲಿ ನಿಮ್ಮನ್ನು ಕುಣಿಸುವುದು ನ್ಯಾಯವಷ್ಟೆ.
'''ಕಪಿ''':-ಸೊಂಟಕ್ಕೆ ಹಗ್ಗ ಹಾಕಿದರೂ, ನಿಮ್ಮಂತೆ ಕೊರಳಿಗೆ ಬಾಯಿಹಾಕುವ
ಅಪಾಯವಿಲ್ಲ ವಲ್ಲವೆ? ಹುಟ್ಟುಗುರುಡನಿಗಿಂತ ಒಕ್ಕಣ್ಣನಾಗಿರುವುದೆ ವಾಸಿ. [ಈಗ ವ್ಯಾಘ್ರನ ಮನಸ್ಸು ಮುಖ್ಯಿಗೆ ಎಡೆ ಎಲ್ಲಿ ?” ಎಂದು ಹುಡುಕುತ್ತಿತ್ತು. ಆ ಮರದ ತೊಗಟೆ ನುಣುಪಾಗಿಯೂ, ಉಗುರುನಾಟದಂತೆ ಗಟ್ಟಿಯಾಗಿಯ ಇದ್ದುದರಿಂದ ಹತ್ತಲಿಕ್ಕೂ ಸಾಧ್ಯವಿಲ್ಲ, ಆದಕಾರಣ ಕೈಯೂ ಇಲ್ಲ ಬಾಯ ಇಲ್ಲ, ಮರದ ಬುಡವನ್ನೆಲ್ಲ ಕೀರಿ ಎಡೆಗಾಣದೆ ಸಿಟ್ಟು ತಿರು ಗಿತು, ಆಮೇಲೆ ಅದು ಎಲ್ಲಿ ಹೋಗಬೇಕು ? ಬಾದರಾಯಣಸಂಬಂಧ ಹಿಡಿದು, ಹೀಗೆ ಚರ್ಚೆಗೆ ಮೊದಲುಮಾಡಿದ ತನ್ನಲ್ಲಿ ಆಸಿಟ್ಟು ಬರಬಹುದೆಂದು
ನರಿ ಊಹಿಸಿತು, ನರಿಯ ಕಲಿಕೆಗೆ ಬೆನ್ನುಂಟೆ?]
'''ಜಂಬುಕ''':- ಹುಲಿಯಣ್ಣ, ಬಾವಿಯ ಕಪ್ಪೆಯಂತಿರುವ ಈ ಮರದ 'ಮಂಗನ
ಮಾತಿಗೆ ಬೆಲೆಯುಂಟೆ? ಮೇಲಾಳುಗಳ ವಿಚಾರವು, ಕೀಳಾಳುಗಳೆಲ್ಲ ರಲ್ಲಿ ಯ ಸರಿಯಾಗಿ ಹಬ್ಬುವುದರಿಂದ, ಅದು ಮೆಲ್ಲ ಮೆಲ್ಲನೆ ಜರಗಬೇಕೆಂಬುದು ಖಂಡಿ ತವು, ಆದರೆ, ಸ್ವಾರ್ಥದಲ್ಲಿ ಮಾತ್ರ ಕಣ್ಣಿರುವ ಇಂಥ ಅಲ್ಪರಿಗೆ ಅದು ನಿಮ್ಮ,<noinclude></noinclude>
swduou2dku7pdaib5icp70jwwoscvf3
ಪುಟ:ಹಗಲಿರುಳು.djvu/೬೯
104
38667
321053
311085
2026-05-20T04:56:21Z
Pragathi. BH
7585
/* Validated */
321053
proofread-page
text/x-wiki
<noinclude><pagequality level="4" user="Pragathi. BH" />{{rh|center=|left=೬೦|right=ಕನ್ನಡ ಕೋಗಿಲೆ, ಜುಲಾಯಿ ೧೯೧೮.}}</noinclude>
{{center|ಕನ್ನಡ ಕೋಗಿಲೆ, ಜುಲಾಯಿ ೧೯೧೮.}}
ದುರುದ್ದೇಶವೆಂದು ತೋರಬಹುದು, ಮನೆಕಟ್ಟಿದವನೆ ಬಲ್ಲ, ಮದುವೆಮಾಡಿ ದವನೆ ಬಲ್ಲ' ಎಂಬ ನಾಡವರ ಮಾತಿನಂತೆ, ಯಜಮಾನಿಕೆಯ ಕಷ್ಟವನ್ನು ಬಲ್ಲವರೆ ಬಲ್ಲ ರು. ಇಂಥ ಅಲ್ಪರ ಅಪವಾದಗಳನ್ನು, ನಿಮ್ಮಂಥ ದೊಡ್ಡವರು ಮನಮುಟ್ಟಿಸಿಕೊಳ್ಳಬಾರದು, ಮಂಗಗಳು ಮಾತ್ರ ಮರಹತ್ತಿದರೂ, ಹಲವು ಅಬಲಜಂತುಗಳು ನಿಮ್ಮ ಕಾಲಡಿಯಲ್ಲಿ ಸುಖವಾಗಿ ಬಾಳಿಕೊಂಡಿಲ್ಲ ವೆ? ಎಲ್ಲದಕ್ಕಿಂತಲೂ ಹೆಚ್ಚಾಗಿ, ಅಶಕ್ತನಾದ ನನ್ನನ್ನು ತಮ್ಮವನೆಂಬ ಅಕ್ಕರೆಯಿಂದ ಮಂತ್ರಿಪದವಿಯಲ್ಲಿ ನೇಮಿಸಿದ, ಒಂದೇ ಒಂದು ದೃಷ್ಟಾಂತವು ನಿಮ್ಮ ಸಮ ದೃಷ್ಟಿಯನ್ನು ಸಮರ್ಥಿಸುತ್ತಿದೆ. ನಾನು ಮೊದಲು ಹೇಳಿಕೊಂಡುದಾದರೂ ನಿಮ್ಮ ತಪ್ಪನ್ನೆ ಕಂಡಲ್ಲ, ನಮ್ಮೊಳಗೆ ಏನಾದರೂ ಕುಂದಿದ್ದರೆ ಮೊದಲೆ ನಿವಾರಿಸಿಕೊಳ್ಳಬೇಕೆಂಬ ಎಣಿಕೆಯಿಂದ ಮಾತ್ರವೆ. ನಿಮ್ಮ ಉತ್ತರವಾದರೂ ಅರ್ಥಗರ್ಭಿತವಾಗಿಯೇ ಇತ್ತು.
'''ವ್ಯಾಘ್ರ''':- (ಆನಂದಬಟ್ಟು) ನರಿಯಣ್ಣ, ಚೆನ್ನಾಗಿ ಹೇಳಿದೆ. ನೀನು ಇಷ್ಟರ
ಸುವಿಚಾರಿಯೆಂದು ತಿಳಿದಿರಲಿಲ್ಲ, ನನಗೆ ನಿನ್ನಲ್ಲಿದ್ದ ಓರೆಗಣ್ಣು ಈಗಲೆ ನೇರಾಯಿತು, ಅದರಿಂದ ನನ್ನ ಬಿರುನುಡಿಯ ಬೇಸರವನ್ನು ಬಿಟ್ಟು ಕ್ಷಮಿಸು. ನಾವು ಮನಸ್ಸಾಕ್ಷಿಗೆ ಸರಿಯಾಗಿರುತ್ತೇವೆ, ಆದರೇನು ? ಹೇಳೆನೆಂದಿದ್ದರೂ ಕೇಳೆನೆಂದಿರಬಹುದೆ ?” ಇಂಥ ವಿಚಾರಪೂರ್ವಕವಾದ ಸಮಾಧಾನವು, ನಿನ್ನಂಥ ಯಥಾರ್ಥವಾದಿಗಳ ಮಾತಿನಿಂದಲೆ ನೆಲೆಗೊಳ್ಳಬೇಕು.
'''ಜಂಬುಕ''':-ಹುಲಿಯ ಮುಖವನ್ನೇ ನೋಡುತ್ತ ತಿಳಿದವನಂತೆ ನಟಿಸಿ) ಓಹೋ,
ಹೀಗೆ ? ಗುಟ್ಟೂಡೆಯಿತು, ನಮ್ಮೊಳಗೆ ಎಂದೂ ಇಲ್ಲದ `ಈ ಮಾತಿನ ಜಗಳಕ್ಕೆ ಕಾರಣವೇನಿರಬಹುದೆಂದು ಆಗಿನಿಂದಲೆ ಯೋಚಿಸುತ್ತಿದ್ದನು. ಅದು ಈಗಲೆ ಹೊರಬಿತ್ತು, ಮರೆಯಲ್ಲಿ ಅಡಗಿದರೂ ಮೈದಾನಿನಲ್ಲಿ ಆಗದಿರುವಂತೆ,ಕೈಗೆ ಸಿಕ್ಕಿದ ಮೇಲೆ, ಆ ಮೋಸದ ತೇಜಸ್ವಿಯ ಆಟಕ್ಕೆ ಎಡೆಯುಂಟೆ ?
ವ್ಯಾಘ್ರ:- ಅದೇನು ? ಬೇಗನೆ ಹೇಳು. ಅವನ ಕುಹಕವನ್ನು ಹಾದಿಗೆಳೆದು,ಅಜಿಗಿಜಿಮಾಡಿಬಿಡುತ್ತೇನೆ. ಜಂಬುಕ:- ಅದೀಗ ನಮ್ಮ ಮೊದಲಿನ ಕೆಲಸವು, ಆ ದುಷ್ಟನಾದ ಸದಾಗತಿ, ತೇಜಸ್ವಿಯೊಡನೆ ಹಗೆಗಟ್ಟಿದನೆಂದು ನಮ್ಮ ಕತ್ತಲೆಯಿಂದ ಗೊತ್ತಾಗಿದೆಯಷ್ಟೆ.<noinclude></noinclude>
rm2drvru5fi498vswkwsad484h5nvmw
ಪುಟ:ಹಗಲಿರುಳು.djvu/೭೦
104
38668
321054
311086
2026-05-20T04:57:15Z
Pragathi. BH
7585
/* Validated */
321054
proofread-page
text/x-wiki
<noinclude><pagequality level="4" user="Pragathi. BH" />{{rh|center=ಹಗಲಿರುಳು|left=|right=೬೧}}</noinclude>
ಆದರೆ ಅದೆಲ್ಲ ಸುಳ್ಳೆಂದು ಈಗ ಪ್ರತ್ಯಕ್ಷಸಿದ್ಧವಾಗುವಂತಿದೆ. ಆ ಸದಾಗತಿ ಮೈಮರೆಯಿಸಿಕೊಂಡು, ಮಿಂಚುಹುಳುಗಳ ಅವತಾರವನ್ನು ಧರಿಸಿದ ತೇಜಸ್ವಿ ಯೊಡನೆ ಸೇರಿ ಈಕಡೆಗೆ ಬೀಸುತ್ತಿದ್ದನು, ಆದರೆ, ನಮ್ಮ ಅಂಧಕಾರನ ಎಡೆ ಯಲ್ಲಿ, ಅವರಿಗೆ ಸ್ಥಿರವಾದ ಆಶ್ರಯವು ಸಿಕ್ಕಲಿಲ್ಲ, ಅದರಿಂದ ಮುಂದಾಳು ಗಳಾದ ನಿಮ್ಮೆಲ್ಲರ ಉಸಿರುಗಳಲ್ಲಿ ಸದಾಗತಿಯೂ, ಕಣ್ಣುಗಳಲ್ಲಿ, ಮಿಂಚು ಹುಳುಗಳ ರೂಪದ ತೇಜಸ್ವಿಯ, ಗೊತ್ತಾಗದಂತೆ ಮನೆಮಾಡಿರುತ್ತಾರೆ. ಅದೋ, ನಿನ್ನ ಕಣ್ಣುಗಳಲ್ಲಿ, ಮಿಂಚುಹುಳುಗಳು ಕೆಂಪು ಕೆಂಡಗಳಂತೆ ವಿನುಗುಟ್ಟುತ್ತವೆ, ಆ ನೀಚರು ನಿಮ್ಮಲ್ಲಿ ಮಾತ್ರವಲ್ಲ; ನಮ್ಮ ಕಣ್ಣು ಗಳಲ್ಲಿಯೂ ಹೊಕ್ಕಿರಬಹುದು, ಆದರೆ, ಕಳ್ಳರು ದೊಡ್ಡವರ ಮನೆ ಗಳಿಗೇ ಹೆಚ್ಚಾಗಿ, ಕನ್ನಹಾಕುವಂತೆ, ಹುಲಿ ಸಿಂಹ ಮೊದಲಾದ ಮುಖಂಡ ರನ್ನೇ ಹೆಚ್ಚಾಗಿ ಪ್ರವೇಶಿಸಿದ್ದಾರೆ. ಒಬ್ಬೊಬ್ಬರಲ್ಲಿ ಯ ಇದ್ದು ಭಿನ್ನ ಭಿನ್ನವಾದ ಯೋಚನಾಭಿಪ್ರಾಯಗಳನ್ನು ತೋರಿಸುವುದೇ ಅವರ ಉದ್ದೇಶವು. ಅದರಿಂದಲೆ, ನಮ್ಮಲ್ಲಿ, ಒಬ್ಬನಿಗೆ ಒಂದು ಅಭಿಪ್ರಾಯವಾದರೆ, ಇನ್ನೊಬ್ಬನಿಗೆ ಮತ್ತೊಂದು ತಲೆದೋರಿ, ಹೀಗೆ ಮನಕೇಶವುಂಟಾಗುವುದು, ಅದಕ್ಕಾಗಿ, ಅವರನ್ನು ಈಗಲೆ, ನಾವೆಲ್ಲ ರೂ ಕಿತ್ತೊಗೆಯಬೇಕು. {ಈ ಮಾತನ್ನು ಕೇಳಿದ ಕೂಡಲೆ, ಹುಲಿ ಸಿಂಹ ಮೊದಲಾದ ಮೂಢಪ್ರಾಣಿಗಳು ಮಹಾಕೋಪದಿಂದ & ಅ8, ನೀಚರೆ, ತೇಜಸ್ವಿಸದಾಗತಿಗಳೆ, ಸಿಕ್ಕಿದಿರಿ' ಎಂದು ಗುಡುಗುಡಿಸಿ ಗರ್ಜಿಸಿ, ತಂತಮ್ಮ ಕಣ್ಣುಗಳನ್ನು ಕುಕ್ಕಿ ಬಿಕ್ಕಿದುವು ಸುಗ್ರೀವನನ್ನು ಹಿಡುಕೊಂಡು ಹೋದ ಕುಂಭಕರ್ಣನ ಕಾರ್ಯದಷ್ಟು ಸತ್ಯತ್ವವು ಇಲ್ಲಿಲ್ಲ ದಿದ್ದರೂ, ಪ್ರತಿಫಲವು, ಅದಕ್ಕಿಂತಲೂ ಅಧಿಕವಾಗಿಯೆ ಆಯಿತೆನ್ನಬಹುದು. ಅಲ್ಲಿ ಮಗು ಬಾಗವಾಯಿತು, ಇಲ್ಲಿ ಕಣ್ಣಿಗೆ ಸೊನ್ನೆ ಮುಚ್ಚಿತು. ಒಡ ನೆಯ ಉರಿಬೇನೆಗಳು ಏರಿದುವು. ಆಗ ನರಿಯ, ಅದರ ಆನುಯಾಯಿ ಗಳೂ (ಹಾ! ಒಳಹೊಕ್ಕು ತಲೆಬಡಿವ ಘಾತಕರೆ, ಜೀವಹೋದರೂ ಸರಿ,
ನಿಮ್ಮನ್ನು ಕಿತ್ತೊಗೆವುದೆ ನಿಶ್ಚಯವು' ಎಂದು ಚೀರುತ್ತ ಓಡಾಡಹತ್ತಿದುವು.]
'''ಸಿಂಹಾದಿಗಳು''':-(ಚೀರುತ್ತ)'ಮಂತ್ರಿ, ಇದೇನು ಉರಿ ಏರುತ್ತಲೆ ಇದೆ ?
'''ಜಂಬುಕ''':- (ದೂರದಿಂದ) ನಮಗೂ ಹಾಗೆಯೇ ಆಗುತ್ತಿದೆ. ಅದೊಂದು ಅಪಾ
ಯಕರವಲ್ಲ. ಬೀಗಿದ ಬಾವು, ಕೀವುತುಂಬಿ ಸಿಳಿತವೇರಿದರೆ, ಕೂಡಲೆ ಒಡೆದು ಸೇರಿ ವಾಸಿಯಾಗುವುದು, ಹಾಗೆಯೆ, ತನ್ನ ಒಳಸಂಚು ಬಯ ಲಾಯಿತೆಂದು ನಿರಾಶನಾಗಿ ತೇಜಸ್ವಿ ಈ ರೀತಿಯಲ್ಲಿ ಚುಚ್ಚುತ್ತಿರುವುದು.<noinclude></noinclude>
7of9fw29gqatgecps8imt04i5z4wdvi
ಪುಟ:ಹಗಲಿರುಳು.djvu/೭೧
104
38669
321055
311087
2026-05-20T04:58:38Z
Pragathi. BH
7585
/* Validated */
321055
proofread-page
text/x-wiki
<noinclude><pagequality level="4" user="Pragathi. BH" />{{rh|center=ಕನ್ನಡ ಕೋಗಿಲೆ, ಜುಲಾಯಿ ೧೯೧೮.|left=|right=}}</noinclude>
ಆದರೆ, ಆತನ ಆಪ್ತನಾದ ಸದಾಗತಿಯನ್ನು, ಇನ್ನೂ ನಾವು ಶ್ವಾಸಕೋಶ ಗಳಲ್ಲಿ ಹೊಕ್ಕು ಹೊರಡಿಸಿ ಮನ್ನಿಸುತ್ತಿರುವುದರಿಂದ, ಅವನಿಗೆ, ತನ್ನ ಆ ಮಿತ್ರನ ಸಹಾಯವು ಈಗಳೂ ಇದೆ. ವಂಚಕಸದಗತಿಯೆ, ತೇಜಸ್ವಿಗೆ, ಒಳಗೊಳಗೆ ಕೈಗೊಟ್ಟು, ಹೀಗೆ ಪೀಡಿಸುತ್ತಾನೆ. ಕೇಳಿರಿ, ನಾಡಿನ ಸಂಸಾ ರಾಗ್ನಿಯನ್ನು ಸೈರಿಸದೆ ಕಾಡಿಗೆ ಬಂದರೂ, ಯೋಗಿಗಳು ಶ್ವಾಸ (ಸದಾಗತಿ) ಗಟ್ಟಿಯ ಸುಖಿಗಳಾಗುವುದು, ಅದರಂತೆ, ನಾವೂ ಉಸುರಗಟ್ಟಿ, ಅವ ನನ್ನು ಅಟ್ಟಿಬಿಡಬೇಕು, ಹಾಗಾದರೆ, ಬೇನೆಯುರಿಗಳೆಲ್ಲ ತಣ್ಣಗಾಗಿ ಮುಂದಣ ಕೆಲಸವೆಲ್ಲ ತನ್ನಷ್ಟಕ್ಕೆ ತಾನೆ ನೆರವೇರುವುದು, [ನರಿಯ ಮಾತನ್ನೆ ಬ್ರಹ್ಮ ವಾಕ್ಯವೆಂದೆಣಿಸಿ ಘಾತುಕ ಪ್ರಾಣಿಗಳು ಉಸುರುಗಟ್ಟತೊಡಗಿದುವು. ಅದರ ಮಾತು ಸುಳ್ಳಾಗದೆ ಒಂದಕ್ಕೆ ಮೂರರಷ್ಟು ನಿಜವಾಯಿತು, ಹೇಗೆಂದರೆಎಲ್ಲ ಮೃಗಗಳೂ ನರಿಯ ಉಪದೇಶವನ್ನು ಕಡೆವರೆಗೆ ಬಿಗಿಹಿಡಿಯದಿದ್ದರೂ, ಕೆಲವು ಕಣ್ಣಿಲ್ಲ ದುದರಿಂದ ಅಲ್ಲಲ್ಲಿ ಎಡವಿತಡವರಿಸಿ ಕಂಡಿಗುಂಡಿಗಳಿಗೆ ಬಿದ್ದು ಮಡಿದುವು. ವ್ಯಾಘ್ರ ಸಮೂಹದ ಹುಲಿಹುಣ್ಣು' ಎಂಬುದು ಪ್ರಸಿದ್ಧ ವಷ್ಟೆ, , ಹುಲಿಗಳು ಅತ್ತಣಿಂದ ಇತ್ತ, ಇತ್ತಣಿಂದ ಅತ್ತ, ಚುಚ್ಚಿಟ್ಟು ಒದ್ದಾಡಿ ಕೈಕಾಲು ಬಡಿದು ಕೆಡೆದುವು. ಹಲವು ಬದುಕಿದರೂ, ಆ ಕುರುಡುಮೊರಡು ಗಳಿಂದ ಏನಾಗಲಿಕ್ಕಿದೆ ? ಸ್ವಲ್ಪ ಕಾಲದಲ್ಲಿ ಆ ಮೃಗಗಳ ಮೆಯ ತಣ್ಣಗೆ ; ಘಾತುಕ ಕೃತ್ಯಗಳೂ ತಣ್ಣಗೆ: ಕಾಡೂ ತಣ್ಣಗೆ, 'ಓಂ ಶಾಂತಿಶ್ಯಾಂತಿಶ್ಯಾಂತಿಃ ? ಆಯಿತು. ಕೊಟ್ಟುದಕ್ಕೆಲ್ಲ ದಸ್ಕತು' ಎಳೆಯುತ್ತಿದ್ದ ಅಂಧಕಾರಧೃತರಾಷ್ಟ್ರನು, ಇನ್ನು ಮಾಡುತ್ತಾ ನೇನು? ನೋಡಿರಿ, ಹೀಗೆಯೆ, ನಮ್ಮಲ್ಲಿಯ ಕೆಲವು ಜಂಬುಕ ವ್ಯಕ್ತಿಗಳು ಜನಾಂಗವನ್ನೇ ವಂಚಿಸುತ್ತಿರುವುದು ತುಂಬ ವಿಷಾದಕರವು, ಹುಂ, ವಿಷಾದವೇಕೆ ? ವಂಚಿಸಬೇಕಾದರೆ, ಆ ಮಾತು ಸಯುಕ್ತಿಕವಾಗಿರತಕ್ಕುದಷ್ಟೆ. ಅಂಥ ಮಾತುಗಳು, ಕೇಳುವ ಜನರ ಹೃದಯಕ್ಕೆ ಅನುಸಾರವಾಗಿಯೆ ಕಾರ್ಯರೂಪವನ್ನು ಹೊಂದುತ್ತವೆ ಎಂಬುದೂ ನಿಶ್ಚಯವು, ಕತ್ತಿ, ಕಟುಕನ ಕೈಗೆ ಬಂದು ಅಬಲರನ್ನು ಕಡಿಯಲಿಕ್ಕೂ, ಧೀರನ ಹಸ್ತಗತವಾಗಿ ಕಾಯ ಲಿಕ್ಕೂ ಕಾರಣವಾಗುವುದಲ್ಲವೆ? ಅದರಿಂದ, ಇದೂ ಪ್ರಕೃತಿಯ ಒಂದು ಅವತಾರವೆಂದು ಹೇಳಬಹುದು, ಆದರೆ, ಈ ಅವತಾರದಿಂದ ನಿರಪರಾಧಿ ಗಳೂ ಬಲಿಬಿದ್ದು ವಿಕೃತಿಯ , ಅನ್ಯಾಯವಾಗುವುದೆಂದು ಆಕ್ಷೇಪಿಸಿದರೆ, (ಆದಿಕಾಡಸುಡುವಲ್ಲಿ ಹಸಿಯೊಣಗಿಲೆಂದುಂಟೆ?' ಎಂದು ನ್ಯಾಯವನ್ನು ಸಮರ್ಥಿಸಬೇಕು, ದುಷ್ಟಸಂಗದ ಫಲವೆ ಅಷ್ಟು, ಕಲ್ಲಪ್ಪ ಗುಂಡಪ್ಪರ ಎಡೆಯಲ್ಲಿ ಮೆಣಸಪ್ಪ ನುಗದ' ರೀತಿಯ ಹೀಗೆಯೆ.<noinclude></noinclude>
ol70ki4lqg5m2mt3h4sejmy5wvoymfe
ಪುಟ:ಹಗಲಿರುಳು.djvu/೭೨
104
38670
321056
311088
2026-05-20T04:58:51Z
Pragathi. BH
7585
/* Validated */
321056
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಹಗಲಿರುಳು.}}
ಅಂತೂ ಇಂತೂ, ಆ ಕಾಡವರ ಸಂಕಲ್ಪದಲ್ಲಿ ಪುಣ್ಯಕಾಲವು ಕಳೆಯಿತು. ಘಾತುಕ ಪ್ರಾಣಿಗಳ ಒತ್ತಾಟವೂ ಕಳೆಯಿತು. ಪರಮಾತ್ಮನು, ದುಷ್ಟನಾಶಕ್ಕೆ ಸಿದ್ಧ ಮಾಡಿಟ್ಟ ಉಪಾಯಗಳಲ್ಲಿ ಇದೂ ಒಂದು. ಹಲವರು ಕಾಲದಿಂದ, ಕೆಲವರು ರೋಗದಿಂದ, ಅನ್ಯರು ಹಗೆಗಳಿಂದ, ಅನೇಕರು ಅವಗಡಗಳಿಂದ, ಬೇರೆಯವರು ತಮ್ಮವರ ಮರೆಮೋಸಗಳಿಂದ, ಇನ್ನಿರುವವರು ತಮ್ಮಿಂದಲೆ ತಾವು ಸಾವಿನ ಸಜ್ಜೆಯನ್ನು ಸಾರುತ್ತಾರೆ. ಯಜ್ಜನ್ಯಂ ತನ್ನಷ್ಟಂ' ಎಂಬುದನ್ನು ಯೋಚಿಸಿದರೆ, ಅದು ಒಂದು ಆಶ್ಚರ್ಯವಲ್ಲ, ವಿಕೃತಿಯ ಅವತಾರವು ತರತರವಾಗಿದ್ದರೂ, ಕಡೆಗೆ, ಪ್ರಕೃತಿಯ ಮೈ ಒಂದೆ ಸರಿ. ಬಗೆಬಗೆಯ ಬಣ್ಣಗಳ ಬಳಿತದಿಂದ ಕ್ಷಣಕ್ಕೆ ಒಬ್ಬನಾಗಿ, ರಂಗಕ್ಕೆ ಮೊರೆ ತೋರಿಸಿದವನೂ, ಕಡೆಗೆ ಮನೆಗೆ ಹೊರಡುವಾಗ ತಾನೊಬ್ಬನು ಮಾತ್ರವೆ. ಆದರೂ “ವಿಕೃತಿಮೂಲಕವಾಗಿ ಪುಣ್ಯಪಾಪಗಳನ್ನು ಮಾಡಿಸುವುದೂ, ತಕ್ಕಂತೆ ಸ್ವರ್ಗ ನರಕಫಲಗೊಡುವುದೂ ಪರಮಾತ್ಮನೆ ಎಂದ ಮೇಲೆ, ನಾವೇನು ಮಾಡ ಲಿಕ್ಕಿದೆ ?” ಎಂದು ತಪ್ಪೋಸ್ಸುಗಳೆರಡನ್ನೂ ಒಡೆಯನಾದ ಪರಮಾತ್ಮನ ಮೇಲೆ ಹೊರಿಸುವ ಯುಕ್ತಿವಾದವು ಸರಿಯಲ್ಲ. ಯಾಕೆಂದರೆ, ತನ್ನ ಮನೆಗೆ ಬರಲಿಕ್ಕಿ ರುವ ಅತಿಥಿಗಳ ಅನುಕೂಲತೆಗಾಗಿ ಒಳಾರಿಗಳನ್ನು ಮಾಡಿಸುವುದೂ, ಕಳ್ಳರನ್ನು ಹಿಡಿಯಲಿಕ್ಕೆ ಸಂಚುಗಳನ್ನು ಒಡ್ಡುವುದೂ ಯಜಮಾನನ ಕೆಲಸವು. ಆದರೆ, ಅವರವರಿಗೆ ಆಯಾಬದ್ದಿಗಳನ್ನು ಕೊಡುವುದೂ ಅವನ ಕರ್ತವ್ಯವಲ್ಲ. (ಬುದ್ಧಿ: ಕರ್ಮಾನುಸಾರಿಣೀ' ಎಂಬ ಹಾಗೆ, ಪೂರ್ವಕರ್ಮಾನುಸಾರ ವಾಗಿಯೆ ಆಯಾ ಬುದ್ಧಿ ನೆಲೆಗೊಳ್ಳಬೇಕು. ಬಿತ್ತಿದುದೆ ಬೆಳೆಯಲ್ಲವೆ? ಆದರೆ, ಆರಾಜಮಾರ್ಗದಲ್ಲಿ ಬಂದು ತಸ್ಕರಣ ಮಾಡಿದರೆ ಬಂಧನವೇ ಮನ್ನಣೆ. ದುಷ್ಕರ್ಮಕ್ಕೆ, ಅವನೆ ಪ್ರೋತ್ಸಾಹಿಸಿ, ಆಮೇಲೆ ಅವನೆ ಶಿಕ್ಷಿಸುವುದೆಂದರೆ, ಕೆಲವು ದುಷ್ಟರಾದ ಅಧಿಕಾರಿಗಳಂತೆಯೆ ಆಯಿತು. . ಲೋಕರಕ್ಷಕನಾದ ಪರ ಮಾತ್ಮನನ್ನು, ಆ ಅಲ್ಪರಾದ ಅಧಿಕಾರಿಗಳೊಡನೆ ಹೋಲಿಸುವುದೆಂದರೆ, ಹಿಟ್ಟು ಬೂದಿಗಳನ್ನು ಒಟ್ಟುಗೂಡಿಸುವ ಮೂಢತೆಯೆ ಸರಿ, ನಮ್ಮ ಈ ರಾಜ್ಯಗಳಲ್ಲಿ ಹಸಿಬಿಸಿಗಳು ಒಟ್ಟಿಗೆ ಹೊತ್ತಿ ಹೋಮವಾಗುತ್ತಿದ್ದರೂ, ಪರಮಾತ್ಮನ ಅಖಂಡ ಸಾಮ್ರಾಜ್ಯಸಭೆಯಲ್ಲಿ ಸತ್ಯವೇ ಸಾವಿಲ್ಲದ ಸಭಾಹಿತನು ನಮ್ಮಲ್ಲಿ, ಸತ್ಯದ ಕಿಡಿಯ ಸುತ್ತಲೂ ಸುಳ್ಳಿನ ಬೂದಿ ಮುಚ್ಚುವುದು ಸ್ವಭಾವವಾದ ಕಾರಣ, ಅದು ಕ್ರಮೇಣ, ಆ ಕಿಡಿಯನ್ನು ಸವೆಯಿಸುತ್ತ ಬರುತ್ತದೆ. ಸ್ವಾರ್ಥಿಗಳಾದ ಮಂತ್ರಿ ಗಳಿಗೆ ಒಳಗಾದ ಮುಖಂಡರ ಗತಿಯ ಹಾಗೆಯೆ.]<noinclude></noinclude>
c1wv53h6mrtv4424ezhs7twi59ihvgm
ಪುಟ:ಹಗಲಿರುಳು.djvu/೭೩
104
38671
321057
311174
2026-05-20T04:59:59Z
Pragathi. BH
7585
/* Validated */
321057
proofread-page
text/x-wiki
<noinclude><pagequality level="4" user="Pragathi. BH" />{{center|ಕನ್ನಡ ಕೋಗಿಲೆ, ಜುಲಾಯಿ ೧೯೧೮.|Left|೬೪}}</noinclude>
{{center|'''ಪ೦ ಚ ಮಾಂ ಕ'''}}
[ನಾಡವರಿಗೆ ಎಡೆಗೊಡುವಂತೆ ಕಾಡವರ ಕಟ್ಟೆ ಅಳಿಯಿತು. ಶುಭೋದಯದ ಡಂಗುರಸಾರುವಂತೆ ಕೋಳಿಯ ನೀಳದ ಕೂಗು ಕೇಳತೊಡಗಿತು. ಒಡನೆ, ಗುರುವನ್ನು ಅನುಸರಿಸಿ ಹಾಡುವ ಶಿಷ್ಯರ ಪಾಠದಂತೆ, ನೂರಾರು ಹುಂಜಗಳು ಬಾಯ್ದೆರೆದುವು, ಆ ಬೋಧನೆಯಿಂದ ಎಚ್ಚರಿತ ಬೇರೆ ಹಕ್ಕಿಗಳೂ ಮುಂದಣ ದಾರಿ ಏನೆಂದು ಕಿಂಕಿಂ' ಗುಟ್ಟಿದುವು. ಮಾತು ಮುಟ್ಟಿದ್ದ ಕೋಗಿಲೆಯ ಹಾಡು ಕೋಡಿಹರಿದು, ಗೀತಾರಂಭವಾಯಿತು. ಜಲಧರನು ಸ್ವಚ್ಛತೆಯಿಂದ ಅನುರಕ್ತನಾದುದು ವೃದ್ದಾ ನಾರೀಪತಿವ್ರತಾ' ಎಂಬಂತೆ ಎಂದು ಕೆಲವರು ಹೇಳಿದರೂ, ನಾವು, ಆರ್ಯನ ಆಗಮನಕಾಲದ ಸುಲಕ್ಷಣದಿಂದಲೆಂದೆ ಹೇಳುತ್ತೇವೆ. ಸದಾಗತಿಯ ಬಿರುಸೂ ತಣ್ಣಗಾಗಿತ್ತು. ಮನೆಮನೆಗಳಲ್ಲಿ ತೇಜಸ್ವಿಯ ಕಣ್ಣೆರೆಯತೊಡಗಿದನು.
ಅಡಿಯಾಳುಗಳೊಳಗೆ, ಎಷ್ಟೆ ವೈಮನಸ್ಯವಿದ್ದರೂ, ಸರ್ವಸಮದೃಷ್ಟಿಯ ಮೇಲಾಳಿನ ಸಮುಖದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಕೈಜೋಡಿಸುತ್ತಾರೆ, ನೂರಾರು ದಾರಿಗಳು ಊರೂರೊಳಗೆ ಎಲ್ಲೆಲ್ಲಿಯೂ ಸುಂದಿಸುರುತಿಸುಳಿದಾಡಿದರೂ ಪಟ್ಟಣದಲ್ಲಿ ಎಲ್ಲವೂ ಕಲೆತು ಕೂಡುತ್ತವೆಯಲ್ಲವೆ? ಆಗ, ಕರುಗಳು—
| ೧ ||
ಕುಸುಅ ಷಟ್ಟದಿ || ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಕೊರಳನಿದೊ |
ಅನ್ನಿಗರು ಕಟ್ಟಿ ದೂರದೊಳಿರಿಸುತ ||
ನನ್ನ ಹಕ್ಕಿನ ಪಾಲಿಗಡ್ಡ ಬಹರನ್ಯಾಯ |
ವಾರಿಗೆಂಬೆ ನಿನಗಲ್ಲ ದಂಬೆ | | ೧ ||
ನಮ್ಮನ್ನು ಸಾಕುವನಿಗತಿ ಮೋಹವಿದ್ದರೂ i
ದುರ್ಮನಸ್ಸಿನಲ್ಲಿ ಹುಲ್ಲಿತ್ತುಪಾಲಂ ||
ತಮ್ಮ ಸ್ವಾರ್ಥಕ್ಕಾಗಿ ಸೆಳೆವ ದೂತರ ಕೆಟ್ಟ !
ಹೆಮ್ಮೆಯನು ತಡೆದು ಮೊಲೆಗೊಡುವುದಂಬೆ ||೨||
ದನ | ಎಲೆ ಕರುವ ಕಾಡಮೃಗಗಳ ಬಾಯಿಯಿಂದುಳಿಸಿ |
ಬಳಿಕ ನಮ್ಮನು ಮೊದಲೊಳೇ ಪೂಜಿಸಿ ||
ಸಲಹುವಾ ನರರ ತಪ್ಪುಗಳ ಹುಡುಕದೆ ರೋಮ | ಗಳನುಗುಳಿ ಪಾಲುಣ್ಣಬೇಹುದಂಬಾ ||೩||<noinclude></noinclude>
ni2j2g3fmqsh2d7lhb365po9zpn1s04
321058
321057
2026-05-20T05:00:56Z
Pragathi. BH
7585
321058
proofread-page
text/x-wiki
<noinclude><pagequality level="4" user="Pragathi. BH" />{{center|ಕನ್ನಡ ಕೋಗಿಲೆ, ಜುಲಾಯಿ ೧೯೧೮.|Left|೬೪}}</noinclude>
{{center|'''ಪ೦ ಚ ಮಾಂ ಕ'''}}
[ನಾಡವರಿಗೆ ಎಡೆಗೊಡುವಂತೆ ಕಾಡವರ ಕಟ್ಟೆ ಅಳಿಯಿತು. ಶುಭೋದಯದ ಡಂಗುರಸಾರುವಂತೆ ಕೋಳಿಯ ನೀಳದ ಕೂಗು ಕೇಳತೊಡಗಿತು. ಒಡನೆ, ಗುರುವನ್ನು ಅನುಸರಿಸಿ ಹಾಡುವ ಶಿಷ್ಯರ ಪಾಠದಂತೆ, ನೂರಾರು ಹುಂಜಗಳು ಬಾಯ್ದೆರೆದುವು, ಆ ಬೋಧನೆಯಿಂದ ಎಚ್ಚರಿತ ಬೇರೆ ಹಕ್ಕಿಗಳೂ ಮುಂದಣ ದಾರಿ ಏನೆಂದು ಕಿಂಕಿಂ' ಗುಟ್ಟಿದುವು. ಮಾತು ಮುಟ್ಟಿದ್ದ ಕೋಗಿಲೆಯ ಹಾಡು ಕೋಡಿಹರಿದು, ಗೀತಾರಂಭವಾಯಿತು. ಜಲಧರನು ಸ್ವಚ್ಛತೆಯಿಂದ ಅನುರಕ್ತನಾದುದು ವೃದ್ದಾ ನಾರೀಪತಿವ್ರತಾ' ಎಂಬಂತೆ ಎಂದು ಕೆಲವರು ಹೇಳಿದರೂ, ನಾವು, ಆರ್ಯನ ಆಗಮನಕಾಲದ ಸುಲಕ್ಷಣದಿಂದಲೆಂದೆ ಹೇಳುತ್ತೇವೆ. ಸದಾಗತಿಯ ಬಿರುಸೂ ತಣ್ಣಗಾಗಿತ್ತು. ಮನೆಮನೆಗಳಲ್ಲಿ ತೇಜಸ್ವಿಯ ಕಣ್ಣೆರೆಯತೊಡಗಿದನು.
ಅಡಿಯಾಳುಗಳೊಳಗೆ, ಎಷ್ಟೆ ವೈಮನಸ್ಯವಿದ್ದರೂ, ಸರ್ವಸಮದೃಷ್ಟಿಯ ಮೇಲಾಳಿನ ಸಮುಖದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಕೈಜೋಡಿಸುತ್ತಾರೆ, ನೂರಾರು ದಾರಿಗಳು ಊರೂರೊಳಗೆ ಎಲ್ಲೆಲ್ಲಿಯೂ ಸುಂದಿಸುರುತಿಸುಳಿದಾಡಿದರೂ ಪಟ್ಟಣದಲ್ಲಿ ಎಲ್ಲವೂ ಕಲೆತು ಕೂಡುತ್ತವೆಯಲ್ಲವೆ? ಆಗ, ಕರುಗಳು—
| ೧ ||
<poem>
ಕುಸುಅ ಷಟ್ಟದಿ || ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಕೊರಳನಿದೊ |
ಅನ್ನಿಗರು ಕಟ್ಟಿ ದೂರದೊಳಿರಿಸುತ ||
ನನ್ನ ಹಕ್ಕಿನ ಪಾಲಿಗಡ್ಡ ಬಹರನ್ಯಾಯ |
ವಾರಿಗೆಂಬೆ ನಿನಗಲ್ಲ ದಂಬೆ | | ೧ ||
ನಮ್ಮನ್ನು ಸಾಕುವನಿಗತಿ ಮೋಹವಿದ್ದರೂ i
ದುರ್ಮನಸ್ಸಿನಲ್ಲಿ ಹುಲ್ಲಿತ್ತುಪಾಲಂ ||
ತಮ್ಮ ಸ್ವಾರ್ಥಕ್ಕಾಗಿ ಸೆಳೆವ ದೂತರ ಕೆಟ್ಟ !
ಹೆಮ್ಮೆಯನು ತಡೆದು ಮೊಲೆಗೊಡುವುದಂಬೆ ||೨||
ದನ | ಎಲೆ ಕರುವ ಕಾಡಮೃಗಗಳ ಬಾಯಿಯಿಂದುಳಿಸಿ |
ಬಳಿಕ ನಮ್ಮನು ಮೊದಲೊಳೇ ಪೂಜಿಸಿ ||
ಸಲಹುವಾ ನರರ ತಪ್ಪುಗಳ ಹುಡುಕದೆ ರೋಮ | ಗಳನುಗುಳಿ ಪಾಲುಣ್ಣಬೇಹುದಂಬಾ ||೩||
</poem><noinclude></noinclude>
djie30kyhbzkxgrqku5js9gu1eb94sl
ಪುಟ:ಹಗಲಿರುಳು.djvu/೭೪
104
38672
321059
311176
2026-05-20T05:01:12Z
Pragathi. BH
7585
/* Validated */
321059
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ಹಗಲಿರುಳು.}}
ಹೀಗೆ ಗಾನಪೂರ್ವಕವಾದ ಕರುದನಗಳ ಮಾತುಕತೆಗಳು ನಡೆಯುತ್ತಿದ್ದುವು. ಆದರೆ, ಹೊರಗೆ ಇಷ್ಟು ಜಾಗ್ರತೆಯುಂಟಾದ ಮಾತ್ರದಿಂದೇನು ? ಜೀವಿಗಳೊಳಗೆ ಪ್ರಮುಖರಾದ ಮನುಷ್ಯರಲ್ಲಿ ಹಲವರು, ಹಾಸಿಗೆಯಲ್ಲಿಯೂ ಮಿಸುಕಲಿಲ್ಲ. ಮಿಸುಕಿದರೂ, ಚಳಿಗೆ ಅಳುಕಿ, ಮುಸುಕುದೆಗೆಯಲಿಲ್ಲ. ತೆಗೆದರೂ, ಬೆಳೆಕಿಗೆ ಕಣ್ಣುದೆರೆಯಲಿಲ್ಲ. ಈಗಿನ ನವನಾಗರಿಕಲೋಕದ ರೀತಿಯೆ ಹೆಚ್ಚಾಗಿ ಹಾಗೆ ಹೊತ್ತು ಮೀರಿ ಹೊಟ್ಟೆ ಕರೆದ ಮೇಲೆ ಮಾತ್ರವೆ ಏಳುತ್ತಾರೆ. ಆದರೆ, ಅರ್ಧಾಂಗವಾದ ಹೆಂಗುಸರಾದರೂ ಪೂರ್ವಾಚಾರವನ್ನು ಬಿಡದೆ ಕಾಲದಲ್ಲಿ ಎದ್ದು ಪುರುಷರ ಆನುಕೂಲ್ಯಗಳನ್ನು ಒದಗಿಸುತ್ತಿರುವುದೆಂದು ಸುಚಿಹ್ನವೆ.. ಕೈಮುಟ್ಟಿ ತಾವು ಮಾಡಿಟ್ಟ ಸಿದ್ಧಾನ್ನವನ್ನು ಎಲ್ಲರಿಗೂ ಇಕ್ಕಿ, ಉಳಿದುದನ್ನೆ ತಾವು ಸೇವಿಸುವ ಆ ಸ್ತ್ರೀಯರ ನಿಸ್ವಾರ್ಥ ಬುದ್ಧಿಯ ಕರ್ತವ್ಯ ನಿಪುಣತೆಯೂ, ಇನ್ನೂ ಕದಲದಿರುವುದು ಭಾಗೋದಯವೆಂದೆ ಹೇಳಬೇಕು, ಆದರೆ, ಹಲವರು, ತಮ್ಮ ನವನಾಗರಿಕತೆಯ ಮಂತ್ರವನ್ನು ಅವರ ಕಿವಿಯಲ್ಲಿಯೂ ಜಪಿಸಹತ್ತಿದ್ದಾರೆ. ಆದರೂ, ಆಪರಾರ್ಥ ಬುದ್ಧಿಯ ಬೇರು, ಭರತಖಂಡದ ಸ್ತ್ರೀರತ್ನಗಳ ಹೃದಯದಿಂದ ಕಿತ್ತುಹೋಗಲಾರದು, ಹುಂ, ಸೂಜಿಗೆ ನೂಲನ್ನು ಎಷ್ಟುದ್ದಕ್ಕೂ ಸುರಿಯಬಹುದಲ್ಲವೆ? ಅದಿರಲಿ, ಮಡಲಕರೆಯಲ್ಲಿ ಆರ್ಯನ ಪತಾಕೆಯ ಕೆಂಪು ತಲೆದೋರಿತು. ಮರದ ಅಡಿಯಲ್ಲಿದ್ದ ಕತ್ತಲೆಕಾಡಿಗೆ, ಅಲ್ಲಿಂದ ಗವಿಗೆ ಹೊಕ್ಕು, ಬೇಟೆಗಾರನಿಗೆ ಭಯಪಟ್ಟ ಮೃಗದಂತೆ, ಮೈಮರೆಯಿಸಿತು, ಆದರೂ, ದುಷ್ಟರ ಅಂತರಂಗ ದಂತಿರುವ ಕೆಲವೆಡೆಗಳಲ್ಲಿ ಮಾತ್ರ, ಮುಂದಿನ ಬಿತ್ತಿಗಾಗಿ, ಮತ್ತೂ ನಿಶ್ಯೇಷ ವಾಗಲಿಲ್ಲ. ಆದರೆ, ನಕ್ಷತ್ರಪತಿ, ತನ್ನ ಹಿಮಕರಗಳಿಂದ, ಆರ್ಯಪತಾಕೆ ಯನ್ನು ಮುಚ್ಚಿ ಮುಸುಕಿದನು, ಅದರಿಂದೇನು? ಹತ್ತಿಯ ಮೂಟೆ ಕಿಡಿ ಯನ್ನು ಒತ್ತಿ ಬಾಳುವುದೆ ? ಮಂಜೆಲ್ಲ ಕರಗಿಹೋಯಿತು, ಆಗ ನಕ್ಷತ್ರಪತಿಯನ್ನೇನು ನೋಡುವುದು ! ಅವನ ಮೋರೆಯೆಂದರೆ, ಆಕಾಶಗಂಗೆಯಲ್ಲಿ ತೇಲಬಿಟ್ಟ ಹಾಲುಕಂಚಿನ ಬಟ್ಟಲೆಂಬಂತೆ ತೋರಿತು. ಅವನ ಒಡನಾಡಿಗಳ ತಲೆಕುಡಿಯನ್ನು ಸಹ ಕಂಡು ಕೇಳಿದವರಿಲ್ಲ. ಅದರಿಂದ, ನಕ್ಷತ್ರಪತಿ ನಿಸ್ತೇಜನಾಗಿ ಮುಂಗಾಣದೆ ಮುನ್ನೀರಮಡುವಿಗೆ ಬೀಳುವುದೊ, ಇನ್ನೆಲ್ಲಾ ದರೂ ಮರೆಯಾಗುವುದೊ ಎಂದು ಕಳವಳಿಸುತ್ತಿದ್ದನು. ಅಷ್ಟರಲ್ಲಿ ಆರ್ಯ ನೂ ದ್ವಿಜಸಮೂಹದ ಸ್ವಸ್ತಿವಾಚನದೊಡನೆ ಮೇಲೇರಿ ಮೂಡುವೆಟ್ಟದ ಮಣೆ ಯನ್ನು ಮಂಡಿಸಿದನು.]<noinclude></noinclude>
03nqyzi0ogipqei9mxi0fszggr5rl8t
ಪುಟ:ಹಗಲಿರುಳು.djvu/೭೫
104
38673
321071
312189
2026-05-20T05:19:22Z
Shreesha Sharma
7840
/* Validated */
321071
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೬೬}}{{center|ಕನ್ನಡ ಕೋಗಿಲೆ, ಅಗೋಸ್ತು ೧೯೧೮.}}
'''ಆರ್ಯ'''- ಪ್ರಿಯ ಲೋಕವೆ, ನಿಮ್ಮ ದೃಢನಿಶ್ಚಯಪೂರ್ವಕವಾದ ಮಂತ್ರದ
ಮಹಿಮೆಯಿಂದಲೆ, ನನಗೆ ಬಂಧಮೋಕ್ಷವಾಯಿತು. ಆ ಮಹತ್ಕಾರ್ಯಕ್ಕೆ, ಉಪಚಾರದ ಬಣ್ಣದ ಮಾತುಗಳನ್ನು ಒಪ್ಪಿಸಿ, ನಿಮ್ಮ ಸಾಲಕ್ಕೆ ಬರಿಸೊನ್ನೆ
ಯನ್ನು ಅಡವಿಡುವ ವಂಚಕಬುದ್ದಿ ನನಗೆ ಸಲ್ಲದು. ಅಷ್ಟೆ ಅಲ್ಲ.
ಚೌಪದಿ || ಆಡಿಕೆಯ ಮರಳ ರಾಶಿಯೊಳೆಣಿಕ ನೀರಂ ||
- ತೋಡಿತೋಂಕಿದರೆ ಕೂಡಲೆ ಆರುತೊಣಗಿ ||
ಮಾಡಿಕೆಯ ಹೊಲಕತಟಕೂ ನಾಸ್ತಿಯಾಗಿ |
ನೋಡೆ, ಕೆಲಸದ ಬೆಳೆಮೊಳೆಯದು ನಿಜವಾಗಿ | ೧ !
ಎಂಬ ಸುಭಾಷಿತವಿರುವುದರಿಂದ, ಶಕ್ತ್ಯಾನುಸಾರವಾಗಿ ಕೆಲಸದಿಂದಲೆ ನಿಮಗೆ ಕೃತಜ್ಞತೆಯನ್ನು ಸಮರ್ಪಿಸಬೇಕು. ಮೊದಲೀಗ, ಈ ನಕ್ಷತ್ರಪತಿಗೆ ಒಂದೆರಡು ಬುದ್ದಿ ಮಾತುಗಳನ್ನು ಹೇಳಲಿಕ್ಕಿದೆ. ಆತನು, ದುಷ್ಟಸಂಗದಿಂದಲೂ ಕಾಲಾನುಸಾರವಾಗಿಯೂ, ಒಮ್ಮೆ, ಹಗೆಗಟ್ಟಿದರೂ, ನಮ್ಮವನೆ ಅಲ್ಲವೆ? ಮಾತ್ರವಲ್ಲ.
ಚೌಪದಿ || ಕಳೆಗುಂದಿ ನೀರಹೊಕ್ಕಡಗಲಿಚ್ಚಿಸಿದ ||
ಖಳನನಾದರು ದಂಡಿಸುವುದು ಸರಿಯಲ್ಲ ||
ಕನಿಕರದ ಹನಿ, ನಿರಾಶಾರೋಗವನ್ನು |
ತಣಿಸುತೊನ್ದಾರಿಯನ್ನು ತೋರಿಸುವ ಮದ್ದು| ೧ |
ಹಲರದರೊಳೂ ಗುಣವನೊಂದದಿರಲೇನು? ||
ಅಳಿವನೌಷಧಿಯಿಂದ ತಡೆಯಲಾಗುವುದೆ ? ||
ಕೆಲರಾದರೂ ಸುಖವನೊಂದಿ ಲೋಕವನು ||
ಬೆಳಗಿಪರು, ಹತ್ತು ಕಲ್ಲೊಂದು ಹಣ್ಣೆಂಬರ್ ||೨||
ಕರುಣವೆನ್ನುವ ದೈವಿಕದ ಪೈರನವುಕಿ |
ನರರ ದುರುಳಶಮೋಸಮುಳ್ಳುಗಳು ಮುಸುಕಿ ||
ಬೆಳೆಗಡ್ಡಿ ಬರಲು ಖಂಡಿಸುತದರಕಾಳಂ
ನೆಲಕ ಸರಿಯಾಗಿ ಹಂಚುವುದು ಧರ್ಮಂ|| ೩ ||
ಇದಕಷ್ಟು ಕಷ್ಟವೋ, ಅದಕ್ಕಿಂತ ಸುಖವು |
ಅಧಿಕವೆ, ಬಾವಿಯಗೆದೊಸರುಚಿಮ್ಮಿದವೊಲ್ |
ಮೊದಲಿನದು ಕ್ಷಣಿಕ ಮತ್ತಿನದು ಶಾಶ್ವತವು |
ಅದನರಿತು ಲೋಕಹಿತಗೈವುದೇಮತವು ||೪||<noinclude></noinclude>
er1hrbj5j07xjashjhjnl6zcjhufjay
321108
321071
2026-05-20T05:48:55Z
Pragathi. BH
7585
321108
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೬೬}}{{center|ಕನ್ನಡ ಕೋಗಿಲೆ, ಅಗೋಸ್ತು ೧೯೧೮.}}
'''ಆರ್ಯ'''- ಪ್ರಿಯ ಲೋಕವೆ, ನಿಮ್ಮ ದೃಢನಿಶ್ಚಯಪೂರ್ವಕವಾದ ಮಂತ್ರದ
ಮಹಿಮೆಯಿಂದಲೆ, ನನಗೆ ಬಂಧಮೋಕ್ಷವಾಯಿತು. ಆ ಮಹತ್ಕಾರ್ಯಕ್ಕೆ, ಉಪಚಾರದ ಬಣ್ಣದ ಮಾತುಗಳನ್ನು ಒಪ್ಪಿಸಿ, ನಿಮ್ಮ ಸಾಲಕ್ಕೆ ಬರಿಸೊನ್ನೆ
ಯನ್ನು ಅಡವಿಡುವ ವಂಚಕಬುದ್ದಿ ನನಗೆ ಸಲ್ಲದು. ಅಷ್ಟೆ ಅಲ್ಲ.
<poem>
ಚೌಪದಿ || ಆಡಿಕೆಯ ಮರಳ ರಾಶಿಯೊಳೆಣಿಕ ನೀರಂ ||
- ತೋಡಿತೋಂಕಿದರೆ ಕೂಡಲೆ ಆರುತೊಣಗಿ ||
ಮಾಡಿಕೆಯ ಹೊಲಕತಟಕೂ ನಾಸ್ತಿಯಾಗಿ |
ನೋಡೆ, ಕೆಲಸದ ಬೆಳೆಮೊಳೆಯದು ನಿಜವಾಗಿ | ೧ !
</poem>
ಎಂಬ ಸುಭಾಷಿತವಿರುವುದರಿಂದ, ಶಕ್ತ್ಯಾನುಸಾರವಾಗಿ ಕೆಲಸದಿಂದಲೆ ನಿಮಗೆ ಕೃತಜ್ಞತೆಯನ್ನು ಸಮರ್ಪಿಸಬೇಕು. ಮೊದಲೀಗ, ಈ ನಕ್ಷತ್ರಪತಿಗೆ ಒಂದೆರಡು ಬುದ್ದಿ ಮಾತುಗಳನ್ನು ಹೇಳಲಿಕ್ಕಿದೆ. ಆತನು, ದುಷ್ಟಸಂಗದಿಂದಲೂ ಕಾಲಾನುಸಾರವಾಗಿಯೂ, ಒಮ್ಮೆ, ಹಗೆಗಟ್ಟಿದರೂ, ನಮ್ಮವನೆ ಅಲ್ಲವೆ? ಮಾತ್ರವಲ್ಲ.
<poem>
ಚೌಪದಿ || ಕಳೆಗುಂದಿ ನೀರಹೊಕ್ಕಡಗಲಿಚ್ಚಿಸಿದ ||
ಖಳನನಾದರು ದಂಡಿಸುವುದು ಸರಿಯಲ್ಲ ||
ಕನಿಕರದ ಹನಿ, ನಿರಾಶಾರೋಗವನ್ನು |
ತಣಿಸುತೊನ್ದಾರಿಯನ್ನು ತೋರಿಸುವ ಮದ್ದು| ೧ |
ಹಲರದರೊಳೂ ಗುಣವನೊಂದದಿರಲೇನು? ||
ಅಳಿವನೌಷಧಿಯಿಂದ ತಡೆಯಲಾಗುವುದೆ ? ||
ಕೆಲರಾದರೂ ಸುಖವನೊಂದಿ ಲೋಕವನು ||
ಬೆಳಗಿಪರು, ಹತ್ತು ಕಲ್ಲೊಂದು ಹಣ್ಣೆಂಬರ್ ||೨||
ಕರುಣವೆನ್ನುವ ದೈವಿಕದ ಪೈರನವುಕಿ |
ನರರ ದುರುಳಶಮೋಸಮುಳ್ಳುಗಳು ಮುಸುಕಿ ||
ಬೆಳೆಗಡ್ಡಿ ಬರಲು ಖಂಡಿಸುತದರಕಾಳಂ
ನೆಲಕ ಸರಿಯಾಗಿ ಹಂಚುವುದು ಧರ್ಮಂ|| ೩ ||
ಇದಕಷ್ಟು ಕಷ್ಟವೋ, ಅದಕ್ಕಿಂತ ಸುಖವು |
ಅಧಿಕವೆ, ಬಾವಿಯಗೆದೊಸರುಚಿಮ್ಮಿದವೊಲ್ |
ಮೊದಲಿನದು ಕ್ಷಣಿಕ ಮತ್ತಿನದು ಶಾಶ್ವತವು |
ಅದನರಿತು ಲೋಕಹಿತಗೈವುದೇಮತವು ||೪||
</poem><noinclude></noinclude>
94b03g8ypo5837nunez5emixkqnhnwq
321110
321108
2026-05-20T05:50:33Z
Pragathi. BH
7585
321110
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೬೬}}{{center|ಕನ್ನಡ ಕೋಗಿಲೆ, ಅಗೋಸ್ತು ೧೯೧೮.}}
'''ಆರ್ಯ'''- ಪ್ರಿಯ ಲೋಕವೆ, ನಿಮ್ಮ ದೃಢನಿಶ್ಚಯಪೂರ್ವಕವಾದ ಮಂತ್ರದ
ಮಹಿಮೆಯಿಂದಲೆ, ನನಗೆ ಬಂಧಮೋಕ್ಷವಾಯಿತು. ಆ ಮಹತ್ಕಾರ್ಯಕ್ಕೆ, ಉಪಚಾರದ ಬಣ್ಣದ ಮಾತುಗಳನ್ನು ಒಪ್ಪಿಸಿ, ನಿಮ್ಮ ಸಾಲಕ್ಕೆ ಬರಿಸೊನ್ನೆ
ಯನ್ನು ಅಡವಿಡುವ ವಂಚಕಬುದ್ದಿ ನನಗೆ ಸಲ್ಲದು. ಅಷ್ಟೆ ಅಲ್ಲ.
<poem>
ಚೌಪದಿ || ಆಡಿಕೆಯ ಮರಳ ರಾಶಿಯೊಳೆಣಿಕ ನೀರಂ ||
- ತೋಡಿತೋಂಕಿದರೆ ಕೂಡಲೆ ಆರುತೊಣಗಿ ||
ಮಾಡಿಕೆಯ ಹೊಲಕತಟಕೂ ನಾಸ್ತಿಯಾಗಿ |
ನೋಡೆ, ಕೆಲಸದ ಬೆಳೆಮೊಳೆಯದು ನಿಜವಾಗಿ | ೧ !
</poem>
ಎಂಬ ಸುಭಾಷಿತವಿರುವುದರಿಂದ, ಶಕ್ತ್ಯಾನುಸಾರವಾಗಿ ಕೆಲಸದಿಂದಲೆ ನಿಮಗೆ ಕೃತಜ್ಞತೆಯನ್ನು ಸಮರ್ಪಿಸಬೇಕು. ಮೊದಲೀಗ, ಈ ನಕ್ಷತ್ರಪತಿಗೆ ಒಂದೆರಡು ಬುದ್ದಿ ಮಾತುಗಳನ್ನು ಹೇಳಲಿಕ್ಕಿದೆ. ಆತನು, ದುಷ್ಟಸಂಗದಿಂದಲೂ ಕಾಲಾನುಸಾರವಾಗಿಯೂ, ಒಮ್ಮೆ, ಹಗೆಗಟ್ಟಿದರೂ, ನಮ್ಮವನೆ ಅಲ್ಲವೆ? ಮಾತ್ರವಲ್ಲ.
<poem>
'''ಚೌಪದಿ''' || ಕಳೆಗುಂದಿ ನೀರಹೊಕ್ಕಡಗಲಿಚ್ಚಿಸಿದ ||
ಖಳನನಾದರು ದಂಡಿಸುವುದು ಸರಿಯಲ್ಲ ||
ಕನಿಕರದ ಹನಿ, ನಿರಾಶಾರೋಗವನ್ನು |
ತಣಿಸುತೊನ್ದಾರಿಯನ್ನು ತೋರಿಸುವ ಮದ್ದು| ೧ |
ಹಲರದರೊಳೂ ಗುಣವನೊಂದದಿರಲೇನು? ||
ಅಳಿವನೌಷಧಿಯಿಂದ ತಡೆಯಲಾಗುವುದೆ ? ||
ಕೆಲರಾದರೂ ಸುಖವನೊಂದಿ ಲೋಕವನು ||
ಬೆಳಗಿಪರು, ಹತ್ತು ಕಲ್ಲೊಂದು ಹಣ್ಣೆಂಬರ್ ||೨||
ಕರುಣವೆನ್ನುವ ದೈವಿಕದ ಪೈರನವುಕಿ |
ನರರ ದುರುಳಶಮೋಸಮುಳ್ಳುಗಳು ಮುಸುಕಿ ||
ಬೆಳೆಗಡ್ಡಿ ಬರಲು ಖಂಡಿಸುತದರಕಾಳಂ
ನೆಲಕ ಸರಿಯಾಗಿ ಹಂಚುವುದು ಧರ್ಮಂ|| ೩ ||
ಇದಕಷ್ಟು ಕಷ್ಟವೋ, ಅದಕ್ಕಿಂತ ಸುಖವು |
ಅಧಿಕವೆ, ಬಾವಿಯಗೆದೊಸರುಚಿಮ್ಮಿದವೊಲ್ |
ಮೊದಲಿನದು ಕ್ಷಣಿಕ ಮತ್ತಿನದು ಶಾಶ್ವತವು |
ಅದನರಿತು ಲೋಕಹಿತಗೈವುದೇಮತವು ||೪||
</poem><noinclude></noinclude>
ig3v5t5t7a5ejlstqlcto6foqic65ne
ಪುಟ:ಹಗಲಿರುಳು.djvu/೭೬
104
38674
321072
311177
2026-05-20T05:19:41Z
Shreesha Sharma
7840
/* Validated */
321072
proofread-page
text/x-wiki
<noinclude><pagequality level="4" user="Shreesha Sharma" />{{center|ಹಗಲಿರುಳು,}}</noinclude>
ಎಂದು ಹೇಳುತ್ತಾರೆ, ಒಮ್ಮೆ ನಾಟದ ಮದ್ದು, ಇನ್ನೊಮ್ಮೆ ಕಾಲ, ಹವೆ ಇವುಗಳ ಆನುಕೂಲ್ಯದಿಂದ ನಾಟುವುದಲ್ಲವೆ? (ಎಂದು, ಕಳೆಗುಂದಿದ ನಕ್ಷತ್ರಪತಿಯ ಕಡೆಗೆ ಕೈನೀಡಿ)
{{gap}}ಎಲೆ ನಕ್ಷತ್ರಪತಿಯೆ, ಈ ವರೆಗೆ, ಎಷ್ಟೆಷ್ಟೊ ಆನುಕೂಲ್ಯಗಳನ್ನು ಒದಗಿಸಿ ಬುದ್ದಿ, ಈ ಹೊತ್ತು ಬಂದೀತು, ನಾಳೆ ಬಂದೀತು' ಎಂದು ದಾರಿ ನೋಡುತ್ತಿದ್ದುದೆಲ್ಲ ಗಾಳಿಯ ಹತ್ತಿ ಯಾಯಿತು. ಆದರೆ, ಸಾರಾಸಾರವಿಚಾರಕನಾದಮೇಲೆಯೆ, ಅಧಿಕಾರವನ್ನು ಕೊಡದೆ, ಮೊದಲೆ ಯಜಮಾನಿಕೆ ಯನ್ನು ಒಪ್ಪಿಸಿದ ತಪ್ಪು ನನ್ನದೆ. ಈಗ ಮನೆಗಿಂತ ದೊಡ್ಡ ಮೆಟ್ಟುಗಲ್ಲನ್ನು ಏರಿಸಿದ ನನ್ನ ತಪ್ಪಿಗೆ ನನಗೂ, ನಿಂತಲ್ಲಿಂದಲೆ ಕಾಲುನೀಡಿದ ನಿನ್ನ ಉದ್ಧತತ್ವದ ಘಾತುಕತನಕ್ಕೆ ನಿನಗೂ ತಕ್ಕ ಪ್ರಾಯಶ್ಚಿತ್ತವೆ ಆಯಿತು. ಇರಲಿ, ಇದರಿಂದ ಲೂ ಒಳ್ಳೆಯ ಪಾಠವನ್ನೇ ಕಲಿಯಬಹುದು, ಹೇಗೆಂದರೆ-ದಾರಿಹಿಡಿದವರು ಮುಂದಾಳುಗಳ-ದಾರಿಬಿಟ್ಟವರು ತಂತಮ್ಮ ಪ್ರಯತ್ನ ಕಷ್ಟಗಳಿಂದಲೆ ಕರ್ತವ್ಯ ವನ್ನು ಕಂಡುಕೊಳ್ಳತಕ್ಕುದು, ಅದರಲ್ಲಿ, ಮೊದಲನೆಯವರಿಗೆ, ಆ ಮುಖಂಡರ ಮೇಲುಪಂತಿಯಿಂದಾಗಿ ಸನ್ಮಾರ್ಗವು ಕಣ್ಣೆದುರಲ್ಲಿಯೆ ಇರುವುದು, ಎರಡನೆಯ
ವರಿಗೆ, ಅಭ್ಯಾಸವು ದುಷ್ಟವಾಗಿಯೂ, ಸನ್ಮಾರ್ಗವನ್ನು ಹುಡುಕಬೇಕಾಗಿರುವು ದರಿಂದಲೂ, ಕಷ್ಟಕರವಾಗುವುದು, ಊರ ಮುಂದಾಳುಗಳೂ ಹಿಂದಾಳುಗಳೂ ಈ ರೀತಿಯ ವಿಷಯವಿಚಾರವನ್ನು, ಮಾಡುವವರಿದ್ದಾರೆ, ಅದರಿಂದ ನಾವು ಬಹಳ ಜಾಗ್ರತೆಯಿಂದಿದ್ದು , ನಮ್ಮ ನಡತೆಯಿಂದ ಆದಷ್ಟು ಒಳ್ಳೆಯ ದೃಷ್ಟಾಂತವನ್ನೆ ತೋರಿಸಬೇಕು, ಅಲ್ಲವಾದರೆ “ಶಿಷ್ಯಶಾಪಂ ಗುರೋರಪಿ ಎಂಬಂತೆ ಲೋಕವೆಂಬ ಶಿಷ್ಯನ ಪಾಪವು ನಮ್ಮ ಮೇಲೆಯ ಹೊರು ವುದು, ಕೇಳು, ಎಳವೆಯಲ್ಲಿ, ಅದರಲ್ಲಿ ಯೂ, ಸ್ವತಂತ್ರಾಧಿಕಾರಕ್ಕೆ ಎರೆಸಿಕ್ಕಿದಲ್ಲಿ, ಹಲವು ಮಂದಿ ಕೆಳೆಯರು ತಲೆದೋರುತ್ತಾರೆ, ಅವರು ವಿನಯ ವಿಧೇಯತೆ ಸ್ತುತಿ ನಮಸ್ಕಾರ ಮೊದಲಾದ ರಸಾಯನ (Wine)ಗಳನ್ನ ಕಾಣಿಕೆಕೊಡುತ್ತಾರೆ. ಆ ರಸಾಯನವು ನಾಲಗೆಗೆ ಮೆಚ್ಚಿದಷ್ಟೂ, ಹೃದಯಕ್ಕೆ ಕಿಚ್ಚೆಂಬುದು, ಮೊದಮೊದಲು ಗೊತ್ತಾಗುವುದಿಲ್ಲ. ಅವರ ಹೊಗಳಿ ಕಗೆ ಹಿಗ್ಗಿ ಹಲವರು ಪರೋಪಕಾರಿಗಳ ಹಂತಿಗೆ ಹತ್ತುತ್ತಾರೆ. ಊರಲ್ಲಿ ಈಗ 'ಪರೀಕ್ಷೆಗಾಗಿ ಓದುವ ಹುಡುಗರಂತೆ, ತಾವು ಮೇಲಿನ ತರಗತಿಗೆ ಏರಬೇಕೆಂದು ಸೊಂಟಗಟ್ಟ ಪ್ರಯತ್ನಿಸುತ್ತಾರೆ. ಆ ತರಗತಿಗಳಲ್ಲಿ ಬಹಳ ಭೇದ<noinclude></noinclude>
c5ngd6t3neclovy6khyl06v9nunnlgt
ಪುಟ:ಹಗಲಿರುಳು.djvu/೭೭
104
38675
321073
312190
2026-05-20T05:20:02Z
Shreesha Sharma
7840
/* Validated */
321073
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೬೮}}{{center|ಕನ್ನಡ ಕೋಗಿಲೆ ಅಗೋಸ್ತು ೧೯೧೮}}
ಗಳುಂಟ, ಎಷ್ಟೆಷ್ಟು ಮೇಲೇರುತ್ತಾರೋ, ಅಷ್ಟೂ ಮನೆಯನ್ನು ಮರೆಯ ಬೇಕಾಗುತ್ತದೆ. ಅದರಲ್ಲಿ ಮೊದಲನೆಯವನಾದಕೂಡಲೆ, ಮನೆಗೆ ಮಾರಿ, ಪರರಿಗೆ ಉಪಕಾರಿ' ಎಂಬ ಬಿರುದು ಸಿಕ್ಕುವುದು, ಆದರೆ, ಆ ಬಿರುದಿನ ಬಿರುಗಾಳಿಗೆ ತಲೆಕೊಟ್ಟವನು, ಬುಡವು ಸಪುರವಾಗಿಯೂ, ಕೊಡಿ ತೋರವಾಗಿಯು ಬೆಳೆದ ಮರದಂತೆ, ಕಡೆಗೆ ಮೈಮರೆತು ಬಿದ್ದು ದಾರಿಹೋಕರ ತುಳಿತಕ್ಕೆ ಎಡೆಯಾಗುವನು, ಹಾಗೆಂದರೆ, ಪರೋಪಕಾರವೆಂಬುದು ನಿಕೃಷ್ಟ ವೆಂದು ನನ್ನ ಯೋಚನೆಯಲ್ಲ., ಆ ಸದ್ಗುಣವು, ತನ್ನೊಡನೆ ಮನೆಯಲ್ಲಿ ಖಳೆದು ತರಬೇತಾಗಬೇಕು, ಹೇಗೆಂದರೆ-ತನಗೆ, ಮನೆಗೆ, ನೆರೆಹೊರಗೆ, ಹಳ್ಳಿಹಳ್ಳಿಗೆ ಕ್ರಮೇಣ ಊರುದ್ದಕ್ಕೂ ಕೃತಜ್ಞತೆಯ ಉಪಕಾರವನ್ನು ಒಪ್ಪಿಸ ಬೇಕು, ಹಾಗಿದ್ದರೆ, ಬುಡಬುಡ ದಪ್ಪವಾಗಿಯೂ, ಕೊಡಿಕೊಡಿ ತೆಳ್ಳಗಾಗಿ ನೆಲೆನಿಂತು ಗಟ್ಟಿಮುಟ್ಟಾಗಿಯೂ ಇರುವ ವೃಕ್ಷದಂತೆ, ಲೋಕಕ್ಕೆ ಹೂವಿನ ಪರಿಮಳದ ಬೋಧನೆಯನ್ನೂ ಫಲವನ್ನೂ ಒದಗಿಸಲು ಸಮರ್ಥನಾಗುವನು. ಹೀಗೆ, ಅಡಿನೋಡಿ ಮುಡಿಹೊರುವ ಎಚ್ಚರಿಕೆ' ಇಲ್ಲದ ಕಾರಣವೆ ನಿನ್ನ ಪರೋಪಕಾರದ ಕೈಯ ಕಟ್ಟಿ ಹೋಯಿತು. ಈಗ, ನಿನ್ನ ಪ್ರೋತ್ಸಾಹಕರೂ ಸ್ನೇಹಿತರೂ ಎಲ್ಲಿ? ಕೇಳು.
ಕಂದ | ಸಂಕಟವೆಂಬಾ ಹೆಸರಿನ ||
ಬೆಂಕಿಯ ಕೋಟೆಯೊಳಗಿಟ್ಟು ಕರಗಿಸ ಹೊನ್ನಂ ||
ತಾಂಕೂಡಿಕೊಂಡ ಬೆಸುಗೆಯು ||
ಸಂಕುಲವೆಂಬಾಪ್ತರಲ್ಲಿ ಗಲ್ಲಿಗೆ ಸರಿವರ್| ೧ ||
{{gap}}ಇನ್ನಾದರೂ, ಬೆಳ್ಳಗಿದ್ದುದೆಲ್ಲ ಸಕ್ಕರೆಯೆಂಬ ಅವಿಚಾರಕ್ಕೆ ಎಡೆಗೊಡದೆ, ನಿಜವಾದ ಲೋಕೋಪಕಾರವನ್ನೇ ಮಾಡು, ನಿನ್ನಲ್ಲಿದ್ದಂತೆ, ನಿನ್ನನ್ನು ಹೊಂದಿದ ನಕ್ಷತ್ರಮಂಡಲದಲ್ಲಿಯೂ, ನನಗೆ ಅಕ್ಕರೆಯುಂಟು. ಕತ್ತಲೆಯನ್ನಾದರೂ, ಸಂಪೂರ್ಣವಾಗಿ, ಅಲ್ಲಗಳೆವವನಲ್ಲ, ಎಲ್ಲೆಲ್ಲಿಯೂ ಅದರ ಕಪ್ಪಿನ ಲೆಪ್ಪಹಾಕಿ ನೋಟಕ್ಕೆ ಅಂದವಾಗಿಸಬಹುದಲ್ಲದೆ, ಕುಂದುಕವನ್ನು ಉಂಟುಮಾಡುವ ಆ ಕತ್ತಲೆಯನ್ನ, ಯಾವಾಗಲೂ ಎಲ್ಲೆಲ್ಲಿಯ ಬಿಟ್ಟು ಅವಲಕ್ಷಣಕ್ಕೆ ದಕ್ಷಿಣೆಗೊಡಬಾರದೆಂದು ಮಾತ್ರವೆ ನನ್ನ ಉದ್ದೇಶವು ಎಲ್ಲ ವನ್ನೂ .ಸಾವಧಾನವಾಗಿ ಎಣಿಸಿನೋಡು, ಪಾಪವು ಪಂಕದಲ್ಲಿ ಅದ್ದಿದರೂ, ಅದೋ, ಪುಣ್ಯದ ವಿಚಾರವು ಕೈನೀಡಿರುವುದು,<noinclude></noinclude>
9i9xkxii3c7lv6r8csprpq5cd4sjp91
ಪುಟ:ಹಗಲಿರುಳು.djvu/೭೮
104
38676
321074
312191
2026-05-20T05:20:19Z
Shreesha Sharma
7840
/* Validated */
321074
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಹಗಲಿರುಳು}},{{Right|೬೯}}
ನಕ್ಷತ್ರಪತಿ;-(ಬಾಡಿಬಸವಳಿದು) ಆರ್ಯ, ಅಮೃತವನ್ನು ಕುಡಿದರೂ, ವಿಷ
ವನ್ನು 'ಕಾರುತ್ತಿದ್ದ ಈ ದುಷ್ಟನ ನಡತೆಯನ್ನು ಎಷ್ಟೆಂದು ನಿಂದಿಸಲಿ ! ಆಗಲೇ, ತಪ್ಪನ್ನು ಮನ್ನಿಸಿ ವಾತ್ಸಲ್ಯದಿಂದ ಕೈಗೊಡುತ್ತಿರುವ ನಿನ್ನ ಕನಿಕರವನ್ನು ಏನೆಂದು ಬಣ್ಣಿಸಲಿ !! ಲೋಕದಲ್ಲಿ ನ್ಯಾಯಪರರಾದ ಮುಖಂಡರಿಗೂ ಅನುಯಾಯಿಗಳಿಗೂ, ಇನ್ನು ಬೇರೆ ಕಲಿಯಬೇಕಾಗಿಲ್ಲ. ದೊಡ್ಡವರು ನಿನ್ನ ನಡತೆಯನ್ನು ಕಲಿತು, ಚಿಕ್ಕವರು ನನ್ನ ರೀತಿಯನ್ನು ಅಷ್ಟೂ ಬಿಟ್ಟರೆ, ಅದೆ ಸನ್ಮಾರ್ಗವಾಗುವುದು, ದುರ್ಬೋಧನೆಗೆಟ್ಟ ಸ್ನೇಹಿತರನ್ನು ನಾನೀಗ ದೂರುವುದೇಕೆ ? “ಹರಿಣನ ಚಿತ್ತಂ ನೆಲೆಗೊಂ | ಡರೆ ಬೇಡನ ಗಾನವೇನುಮಾಡಲಿಕುಂಟು ?” ಎಂಬಂತೆ, ನನ್ನ ಬುದ್ಧಿ ಭ್ರಂಶತೆಯನ್ನ ನಿಂದಿ ಸಬೇಕು, ಅದಿರಲಿ, ನಾನು ಇನ್ನೂ ಈ ಕಳಂಕದ ಮೋರೆಯನ್ನು ತೋರಿಸಿ, ಭೂಮಿಗೆ ಪಾಪದ ಕನ್ನಡಿಯನ್ನು ಹಿಡಿಯಬಹುದೆ ? ನಿಶ್ಚಯಿಸಿದಂತೆ ಈ ಕಡಲಿಗೆ ಬಿದ್ದು, ದುರಿತದ ಹೇಸಿಕೆಗೆ ಸಗಣಿಬಳಿದುಬಿಡುತ್ತೇನೆ.ದಯವಿಟ್ಟು ಅಪ್ಪಣೆಗೊಡಬೇಕು.
'''ಆರ್ಯ''':- ಪ್ರಿಯನೆ, ನಿನ್ನ ಈ ಮಾರ್ಪಾಡು ಮಹದಾನಂದಕರವು. ಆದರೆ,
ಈಕಡೆಮಾತು ಅಷ್ಟೆ ಶೋಚನೀಯವು, ಆತ್ಮಘಾತವೆಂದರೆ, ಮೊದಲಿನ ಪಾಪಕ್ಕೆ ಬಡ್ಡಿ, ನೀನು ಮಾತಿನಂತೆ ಕೆಲಸವನ್ನು ಮಾಡಿದರೆ, ಪಶ್ಚಾತ್ತಾಪದಿಂದ ಕಂಗಾಣದಿರುವ ಪಾಪಿಗಳಲ್ಲಿ, ಆ ದೃಷ್ಟಾಂತದಿಂದ ಕೆಟ್ಟ ಪರಿಣಾಮವೆ ಆಗುವುದು, ಅದರಿಂದ ಇಡಿ ಲೋಕವೆ ಹಾಳಾಗಬಹುದು
'''ನಕ್ಷತ್ರಪತಿ''':- ಮುಂಗಾಣದ ನನ್ನ ಆ ಪಾಪಕ್ಕೆ ಈ ಪರಿಹಾರವೆ ತಕ್ಕುದಲ್ಲವೆ?
'''ಆರ್ಯ''':- ಛೀ, ಎಂದೂ ಅಲ್ಲ. ಕಣ್ಣುದೆರೆದರೂ ದಾರಿಗಾಣುವುದಿಲ್ಲವೆ?
'''ನಕ್ಷತ್ರಪತಿ''':- ಮುಂದೆ ಕತ್ತಲೆ ಮುತ್ತಿಕೊಂಡಿದ್ದರೆ ಕಾಣುವುದು ಹೇಗೆ ?
'''ಆರ್ಯ''':-ಆ ಕತ್ತಲೆಯ ಕಾಡನ್ನು ಒತ್ತಿ, ದಾರಿಬಿಡಿಸುವುದು ನಮ್ಮ ಕೆಲಸವು.
'''ನಕ್ಷತ್ರಪತಿ''':- ಆದರೆ, ನನ್ನ ಈಗಿನ ಕರ್ತವ್ಯವೇನು?
'''ಆರ್ಯ''':- ಈಗ ನೀನು ಈ ಸಮುದ್ರದಲ್ಲಿ ಮುಳುಗಿ ಮಿಂದು, ಪಾಪವನ್ನು
ತೊಳೆದು ನಡೆ 'ನಾಳೆ ಮೊದಲ್ಗೊಂಡು, ಕಾಲಕ್ಕಿಂತ ಮೊದಲೆ ನನ್ನಲ್ಲಿಗೆ<noinclude></noinclude>
obe3fjmoaoyuxw7p77e9w3l33o0clbq
ಪುಟ:ಹಗಲಿರುಳು.djvu/೭೯
104
38677
321075
312221
2026-05-20T05:20:32Z
Shreesha Sharma
7840
/* Validated */
321075
proofread-page
text/x-wiki
<noinclude><pagequality level="4" user="Shreesha Sharma" /></noinclude>{{Left|೭೦.}}
{{center|ಕನ್ನಡ ಕೋಗಿಲೆ, ಅಗೋಸ್ತು ೧೯೧೮.}}
ಬರತೊಡಗು.ದಿನಗಳೆದಂತೆ, ಹೆಚ್ಚು ಹೆಚ್ಚು ಹೊತ್ತು, ನನ್ನ ಬಳಿಯಲ್ಲಿ ಇರಬೇಕಾದೀತು, ಆದರೆ ಈಗಲೆ ಹೇಳುತ್ತೇನೆ; ಮೊದಮೊದಲು ನೀನು ಕೃಷನಾಗಹತ್ತುವಂತೆ ತೋರುವೆ, ಮದ್ದಿನಿಂದ ರೋಗನಿವೃತ್ತಿಯಾಗುತ್ತಿರುವಾಗ ಮುಂಚೆ ಮುಂಚೆ ರೋಗಿಯು ಮೈ ಕುಂದುವ ಹಾಗೆ, ನಿನ್ನಂಥ ದಾರಿ ದಪ್ಪಿದ ಪ್ರಾಯಸ್ಥ ವಿದ್ಯಾರ್ಥಿಗಳೂ, ಆದಿಯಲ್ಲಿ ಒಮ್ಮೆ, ಬದಲಿಕೆಯ ಗುಣವು ನೆಲೆಗೊಳ್ಳುವ ವರೆಗೆ, ಅಬಲರಾಗುತ್ತ ಬರುವುದು ಸ್ವಭಾವವು, ಆದರೆ, ಅದು ಅಪಾಯಸೂಚಕವಲ್ಲದುದರಿಂದ ಭಯವಿಲ್ಲ. ಆಮೇಲೆ ಬೋಧಿಸಿ ನಿನ್ನನ್ನು ಪರಿಪೂರ್ಣನನ್ನಾಗಿಯೂ ಕಳಾವಂತನನ್ನಾಗಿಯೂ ಮಾಡುವೆನು. ಬರಿದೆ, ಈಗಿನ ಕೆಲ ವಿದ್ಯಾರ್ಥಿಗಳ ಯೋಚನೆಯಂತೆ ಕಂಡಲ್ಲಿ ಕೈಹಾಕಿದರೆ ಗುರಿಮುಟ್ಟದು.
'''ನಕ್ಷತ್ರಪತಿ''':- ಹೇಗಾದರೂ ಗಾಯಮಾಡಿ ಮದ್ದು ಬಳಿದಂತಾಗುವುದರಿಂದ,
ಈ ಕಪ್ಪು ಕಳಂಕವೊಂದು ನನ್ನನ್ನು ಬಿಡುವಂತಿಲ್ಲ. ಇಂಥ ದೋಷದ ನಿದ
ರ್ಶನವು, ಲೋಕಕ್ಕೆ ಸನ್ಮಾರ್ಗದಾಯಕವೆಂಬುದನ್ನಾದರೂ, ಹೇಗೆ ನಂಬಲಿ?
'''ಆರ್ಯ''':- ಅದು ಯಾರನ್ನು ಬಿಟ್ಟಿದೆ? ಹುಟ್ಟುವುದೇ ಕಳಂಕದಿಂದ. ಆದರೆ, ಆ
ದೋಷವನ್ನು ಒಳಗೆ ಅಡಗಿಸಿ, ನಿರ್ದೋಷಿಯೆಂದು ನಟಿಸುವುದೆ ವಂಚಕ ತನದ ತಪ್ಪು, ತನ್ನದನ್ನಾದರೂ, ತಿಳಿದು ಬಯಲಾಗಿಸಿದರೆ, ಅದು ಭೂಷಣವೆ, ನೀನು ಕಳಂಕವನ್ನು ಪ್ರಕಟಿಸಿದ ಕಾರಣ ಧರ್ಮವೆ ಆಯಿತು. ಪಂತಿಯಲ್ಲಿ ತಪ್ಪಿನ ಕೆಳಗೆ ಹಂಸಪಾದವನ್ನು ಎಳೆದಂತೆ, ನಿನ್ನಲ್ಲಿ ಆ ಕಳಂಕವಿರಲಿ. ಮೇಲೆ ತಳತಳಿಸುವ ಕಳೆಯ ಒಪ್ಪು ಹೊಳೆಯುತ್ತಿರುವುದಲ್ಲವೆ? ಕೈತಪ್ಪು ಪ್ರತಿಯೊಬ್ಬನನ್ನೂ ಬಿಡದಿರುವಂತೆ, ಇಂತಹ ರಾಜನನ್ನಾದರೂ ದೋಷದ ಬ್ರಹ್ಮಕಫಾಲವು ಬಿಟ್ಟಿಲ್ಲ ವೆಂದು, ಪ್ರಜೆಗಳಿಗೆ ಜಾಗ್ರತೆಯ ದೃಷ್ಟಾಂತವೆ ಆಗುವುದು, ಮುಂದಿನವನು ಮರೆತು ಕಲ್ಲನ್ನು ಎಡವಿದರೆ, ಹಿಂದಿನವನೂ ಎಡವಲೇಬೇಕೆಂಬ ಕಟ್ಟಳೆಯುಂಟೊ ? ಎಚ್ಚರಿತು ಕೆಳನೋಡಿ ಕಾಲಿಡಬೇಕೆಂಬ ವಿವೇಕವುಂಟಾಗುವುದೊ ?
[ಆರ್ಯನ ಅಪ್ಪಣೆಯಂತೆ, ಸಮುದ್ರಸ್ನಾನ ಮಾಡಿ, ನಕ್ಷತ್ರಪತಿ ನಡೆದನು, ಮೂರ್ಖತೆಯ ಮರುಗುತ್ತಕ್ಕೆ ಪಶ್ಚಾತ್ತಾಪವೆ ಮೊದಲಿನ ಮದ್ದೆಂದು ಆರ್ಯನ ಅಭಿಪ್ರಾಯವು, ಹಾ ! ಇಂಥ ಹಿತಬೋಧನೆಯನ್ನೂ,<noinclude></noinclude>
fvozh6k6hz9kjnc939wep3wtgf7ifr8
ಪುಟ:ಹಗಲಿರುಳು.djvu/೮೦
104
38678
321076
312222
2026-05-20T05:20:44Z
Shreesha Sharma
7840
/* Validated */
321076
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಹಗಲಿರುಳು,}}{{Right|೭೧.}}
ಹಲವುಮಂದಿ ನೀಚರು, ಗೂಗೆಗಳಂತೆ, ಕಣ್ಮುಚ್ಚಿ ನಿಂದಿಸುತ್ತಾರೆ, ಕೆಲವರು ಕತ್ತಲೆಯಂತ, ತಿಳಿದವರ ಕಣ್ಣನ್ನೂ ಕಟ್ಟಲಿಕ್ಕೆ ಕೈನೀಡುತ್ತಾರೆ, ಬೇರೆ ಕೆಲವು ಮಂದಿ ಗೆದ್ದವನೇ ಮುದ್ದಣ್ಣ'ನೆಂದು ನೆಗೆದ ದೋಣಿಹತ್ತುವ ಹೇಡಿಗಳು ಏನೇನೋ ಗಾಳಿಮಾತಾಡುತ್ತಾರೆ. ಆದರೆ, ತೇಜಸ್ವಿಗಳೆಂದರೆ ಮಾತ್ರ, ಎಂದೆಂದೂ ದೃಢಗೆಡದ ತೇಜಸ್ವಿಗಳೆ, ಅಂಥವರಿಗೆ ವಿಧೇಯರಾಗಿ, ಎಲ್ಲರಲ್ಲಿಯೂ ಸ್ವಾಭಾವಿಕವಾಗಿ ತೋರಿಬರುವ ಹಲಕೆಲವು ತಪ್ಪುಗಳನ್ನಷ್ಟೆ ತಿದ್ದಿ, ಒಡಗೂಡಿ ಬಾಳಿದರೆ, ನೂರು ವರುಷದಲ್ಲಿ ಆಗಬಹುದಾದ ಏಳಿಗೆ ಮೂರೆ ವರುಷದಲ್ಲಿ ಸಾಧ್ಯವಾಗುವುದು, ಒಂದು ವಿಷಯದ ಸೇಡನ್ನು ಇನ್ನೊಂದಕ್ಕೆ ನೆಯ್ಯತ್ತಿದ್ದರೆ, ಅದು ಸಂಕರಜಾತಿಯಂತೆ, ಎಲ್ಲವು ಎಲ್ಲವಕ್ಕೂ ಸಂಬಂಧಿಸಿ, ಇಡಿ ಜನಾಂಗದ ಕೊರಳಿಗೇ ಒಯ್ಪುಂಚ (ಉರುಳು)ವಾಗುವುದು. ಬರಿದೆ ಮುಂದಾಳುಗಳಲ್ಲಿ ತಪ್ಪನ್ನೆ ಒಡ್ಡುತ್ತಿದ್ದರೆ ಹೇಗೆ ಸಾಗುವುದು ? ಉಪ್ಪೊಂದರಿಂದಲೆ ಊಟವಾಗುವುದೆ ? ಹಾಗೆಂದು, ಅವರೂ ಹಿಂದಾಳುಗಳಲ್ಲಿ ಭೇದವಿಡಬಾರದು, ಎರಡು ಪಂಗಡವೂ ಸಂಗಡಿಸಿ ಇರಬೇಕು, ನೋಡಿರಿ, ಕಾಲೆರಡು ನಡೆಯೊಂದು.]
'''ಆರ್ಯ''':- ಪ್ರಿಯಲೋಕವೆ, ಈಗ ಇಷ್ಟೊಂದು ಮಾತ್ರವೆ ಹೇಳಬೇಕಾಗಿದೆ.
ಕಾಲಗತಿಯಿಂದ ನಾನು, ಈ ವಾತಾವರಣದಿಂದ ಅತ್ತ ಒಯ್ಯಲ್ಪಟ್ಟ ಕೂಡಲೆ, ನಮ್ಮೆಲ್ಲರ ಬಾಳುವೆಯೂ ಕಪ್ಪಾಯಿತೆಂದು ಎದುರಾಳುಗಳು ಎಣಿಸಿರಬಹುದು, ಆದರೆ, ನಾನು ಹೋದಹೋದಲ್ಲಿಗೆ ಆಗಾಗ ಬಂದು ನೆರವಾಗುತ್ತಿದ್ದ ನಿಮ್ಮ ಮಂತ್ರಶಕ್ತಿಯಿಂದಾಗಿ, ಅವರಿಗೆ ನನ್ನನ್ನು ಕೈಗಟ್ಟುವ ಧೈರ್ಯಶಕ್ತಿಗಳು ಇದ್ದಿಲ್ಲ. ಅದರಿಂದ, ಎತ್ತೆತ್ತಲೂ ಬೆಳಕಿನ ಬಯಲಾಯಿತು, ಕಿಕ್ಕಿರಿದ ಕತ್ತಲೆಯೆ ಮಾಯವಾಗಿ, ಪರರಿಗಿಟ್ಟ ಶೂಲ ತನಗೆ ಎಂಬ ಮಾತು ಅವರಿಗೇ ದೃಷ್ಟಾಂತವಾಯಿತು, ಕಡೆಗೂ, ನಿಮ್ಮಿಂದಲೆ ಈ ಪೂರ್ವಸ್ಥಿತಿ ಪ್ರಾಪ್ತವಾಯಿತು, ಇದೀಗ ಪ್ರಜಾಧರ್ಮದ ಲಕ್ಷಣವು ರಾಜಭಕ್ತಿ, ಸ್ವಾಭಿಮಾನ, ಲೋಕಧರ್ಮ, ಇವೆಲ್ಲವನ್ನೂ ಸದುದ್ದೇಶದ ಪರೋಪಕಾರದ ಬುದ್ಧಿಯೊಂದರಿಂದಲೆ ಸಾರ್ಥಕವನ್ನಾಗಿ ಮಾಡಿದ ನಿಮ್ಮ ರೀತಿನೀತಿಗಳನ್ನು ಹೇಳಿ ಮುಗಿಸುವಂತಿಲ್ಲ, ನಿಮ್ಮಲ್ಲಿ ಹೀಗೆ ಹಲವರು ನಡೆದರೂ, ಕೆಲವರು, ಇನ್ನೂ ದಾರಿಗಾಣಲಿಲ್ಲವೆಂದು ತೋರುವುದು.<noinclude></noinclude>
11u8r6d7pw1w0l5ez4bd31agf6ipwtj
ಪುಟ:ಹಗಲಿರುಳು.djvu/೮೧
104
38679
321077
312223
2026-05-20T05:21:09Z
Shreesha Sharma
7840
/* Validated */
321077
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಕನ್ನಡ ಕೋಗಿಲೆ, ಅಗೋಸ್ತು ೧೯೧೮.}}
ಭಾವಿಯ ಜೀವನಕ್ಕೆ ಮರುಳಾಗಿ, ಅವರು ತತ್ಕಾಲದ ಏಳಿಗೆಯ ದಿಣ್ಣೆಯಿಂದ, ಬಗ್ಗಿ ಬೀಳುವಂತಿದ್ದಾರೆ. ಆ ಜೀವನವನ್ನೂ, ತಮ್ಮ ಸದ್ಗುಣಬದ್ಧವಾದ ಕೆಲಸದ ಕೊಡದಿಂದ ಉದ್ಧರಿಸಿ, ಶೋಧಿಸಿಯೇ ಸೇವಿಸತಕ್ಕುದು, ಇರಲಿ, ಅಂಥ ಚಂಚಲಚಿತ್ತರು, ಆ ತತ್ಕಾಲದ ನಿರಾಶೆಯಿಂದ ದಾರಿಗಾಣದ ಹುಚ್ಚುಗಟ್ಟುವುದು ಸ್ವಭಾವವು, ಅದರ ನಿವಾರಣೆಗಾಗಿ, ಇಡೀ ಜನಾಂಗದ ವಿದ್ಯಾಭ್ಯಾಸವೆ (National Education) ಮುಖ್ಯವು. ಈಗ ನಕ್ಷತ್ರಪತಿಯ, ದಾರಿಗೆ ಬರುವಂತಿದ್ದಾನೆ. ಅದರಿಂದ, ತಲೆಯ ಹೊರೆ ಹೆಗಲಿಗೆ ಬಂದಂತಾಗುವುದು. ಆದರೆ, ಆಧಾರವು ಇಳಿದಂತೆ ಲೋಕದಲ್ಲಿ ನಿರಂತರೋದ್ಯೋಗದ ಉತ್ಸಾಹವೂ ಇಳಿವುದುಂಟು. ಅದು ಮಾತ್ರ, ತೆಪ್ಪತ್ತರೋಗಿಯ ಅಪಥ್ಯ ಸೇವನೆಯಂತೆ, ಜನಾಂಗಕ್ಕೆ ಅಪಾಯಕರವು, ಮನಸ್ಸಿಟ್ಟು ಕೇಳಿರಿ, ನಮ್ಮ ಕರ್ತವ್ಯಭಾರವು ಇನ್ನೂ ಇಳಿದಿಲ್ಲ. ಲೋಕವೆಲ್ಲವೂ ರೂಢಿವಿರೋಧವಲ್ಲದ ಶಾಸ್ತ್ರೀಯಸುಧಾರಣೆಗಳನ್ನು ತಿಳಿದಮೇಲೆಯೆ, ನಮ್ಮ ಪ್ರಯತ್ನಕ್ಕೆ ಮುಗುಳಿಯನ್ನು ಇಡತಕ್ಕುದು.
ಚೌಪದಿ || ಮೊದಲಿನದೆಯಾದರೂ ಧಾನ್ಯವನ್ನು ತಂದು |
ವಿಧವಿಧಪರಿಷ್ಕಾರಗಳನೆಸಗಿ ಜನರು ||
ಸವಿಗೆ ಸರಿಯಾಗಿ ಭಕ್ಷ್ಯವ ಮಾಡುವಂತೆ |
ನವಸುಧಾರಣೆ ಶಾಸ್ತ್ರಬೀಜದಿಂದಹುದು || ೧ |
ಆಧಿಯಲಿ ನಮ್ಮಯ ಸುಧಾರಣೆಗೆ ಬಿತ್ತು |
ವೇದವಾಯಿತು, ಶಾಸ್ತ್ರವಾಮೇಲೆ ಬಂತು ||
ಆಧುನಿಕಧರ್ಮಸಮ್ಮತಮತವೆ ಮುಂದೆ |
ಮೋದವೀವುದು ಶಾಸ್ತ್ರವಾಗಿ ಹಿತದಿಂದ |||೨ ||
ನೀವೂ ಅದಕ್ಕೆ ಅನುಸಾರವಾಗಿಯೆ, ಕೆಲಸಕ್ಕೆ ಕೈಹಾಕಿರಿ, ನಿಮ್ಮಗಳು ಮುಕ್ಕುರುಕುವವೆಂದು ಎದೆಗೆಡಬೇಡಿರಿ, ಆ ವಿಘ್ನದ ಮೈ ಎರಡು. ಆದಿಯಲ್ಲಿ ಸವಿದೋರಿಸುವುದು ಒಂದು ; ಭೀತಿಬಿತ್ತುವುದು ಇನ್ನೊಂದು. ಮೊದಲಿನದು ನಂಜಿನ ಕಜ್ಜಾಯದಂತೆ, ಆದಿಯಲ್ಲಿ ಮಾತ್ರ ಸವಿ. ಎರಡನೆಯದು ಗೆರಸಿಹಟ್ಟಿ ಹಕ್ಕಿ ಹಾರಿಸುವಂತೆ, ಮೊದಲೆ ಅಬ್ಬರವು. ಎರಡಕ್ಕೂ<noinclude></noinclude>
rbdogukw1sscenn5u0g8jxcbbzbr9g5
ಪುಟ:ಹಗಲಿರುಳು.djvu/೮೨
104
38680
321078
312224
2026-05-20T05:21:22Z
Shreesha Sharma
7840
/* Validated */
321078
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಹಗಲಿರುಳು,}}
ಗುರಿ ಒಂದೆಯಾದಕಾರಣ, ಅವುಗಳಿಂದ ಮೈಮರೆಯಬಾರದು. ಅದಿರಲಿ, ಎಲ್ಲವನ್ನೂ ತಿಳಿದ ನಿಮ್ಮೊಳಗಿನ ದೃಢಚಿತ್ತರ ಕರ್ತವ್ಯದಕ್ಷತೆಯಿಂದಲೆ, ನನ್ನ ಗತಿ, ಇಷ್ಟರಲ್ಲಿ ಈ ನೆಲೆಗೆ ಬಂತು ಎಂದ ಮೇಲೆ ಹೆಚ್ಚೇಕೆ ಹೇಳಲಿ? ನಮ್ಮ ಈ ತೇಜಸ್ವಿ ಎಂಥೆಂಥ ಕಷ್ಟ ಸಂದರ್ಭಗಳಲ್ಲಿಯೂ ಎದೆಗೆಡದುದರಿಂದಲೂ, ಈ ಆರ್ಯಭೂಮಿ ಕಷ್ಟಗಳನ್ನು ಸೈರಿಸಿ ನಡೆದ ಕಾರಣದಿಂದಲೂ, ಅವರ ಮಹಿಮೆ ಎಂದೆಂದೂ ಶಾಶ್ವತವಾಗಿರಲಿ, ಈ ಭೂಮಿ, ಯಜ್ಞಯಾಗಾದಿಗಳಿಗೆ ಎಡೆಗೊಡುತ್ತಾ ಲೋಕೋಪಕಾರದಲ್ಲಿ ನಿರತವಾಗಿ ಕೀರ್ತಿಯನ್ನು ಪಡೆಯಲಿ, ಆ ಹವಿಸ್ಸುಗಳನ್ನು ಸ್ವರ್ಗಕ್ಕೆ ಸಾಗಿಸುವ ಮಹಾಧಿಕಾರವು ತೇಜಸ್ವಿಗೆ, ಅದಲ್ಲದೆ ಚಿತ್ರಭಾನು' ಎಂಬ ನನ್ನ ಹೆಸರಿನ ಬಿರುದನ್ನೂ
ಅವನಿಗೆ ಕೊಡುತ್ತೇನೆ. ಜಲಧರಸಧಾಗತಿಗಳೂ, ತಮ್ಮ ಅಧಿಕಾರದ ನಿಜ ತತ್ವವನ್ನು ತಿಳಿದು, ಕಾರ್ಯಕ್ಕೆ ಕೈಹಾಕತಕ್ಕುದು, ಕಡೆಗೆ, ಇದೊಂದು ಮಾತು. ಲೋಕದಲ್ಲಿ , ತಂತಮ್ಮ ಮನಶ್ಯಕ್ತಿ ಕಾರ್ಯಶಕ್ತಿಗಳಿಗೆ ಅನುಸಾರವಾಗಿಯೆ, ಆಯಾ ವ್ಯಕ್ತಿಗಳು ನಿಜವಾದ ಮುಂದಾಳುಗಳಾಗುವುದು, ಆ ಶಕ್ತಿಗಳಿಲ್ಲದೆ, ಹೊರಗಿನ ಆಡಂಬರದ ಬಲದಿಂದ ಒಮ್ಮೆ ಮುಂದಾಳುಗಳ ಹಂತಿಯಲ್ಲಿ ನಿಂತರೂ,ಅಶಕ್ತನಾದವನು ಎರಡನೆ ನಿಮಿಷದಲ್ಲಿಯೆ ಕೆಳಗಿಳಿಯಬೇಕಾಗುವುದು, ನಿಜವಾಗಿ ನೋಡಿದರೆ, ಮುಂದಾಳೆಂದರೆ, ಹಿಂದಾಳುಗಳ ಊಳಿಗದವರು, ಅವರು, ಏಳಿಗೆಹೊಂದತಕ್ಕ ಉಪಾಯಗಳನ್ನು ಎಣಿಸಿ ಹೂಣಿಸುವ ಕೆಲಸವು ಆ ಮುಂದಾಳುಗಳನ್ನೆ ಹೊಂದಿರುವುದರಿಂದ ಹಾಗೆ ಹೇಳಿದೆನು. ಲೋಕದ ಸ್ಥಾವರಜಂಗಮಾತ್ಮಕವಾದ ಪ್ರತಿಯೊಂದು ವ್ಯಕ್ತಿಯಲ್ಲಿಯೂ ಅಗಾಧಶಕ್ತಿಯಂಟು, ಅವುಗಳೊಳಗೆ ಬಹಳಪಾಲು ಇನ್ನೂ ಪ್ರಕಟವಾಗಲಿಲ್ಲ. ಪ್ರಕಟವಾಗಿರುವವುಗಳಲ್ಲಿ ಯೂ ಮುಖ್ಯಮುಖ್ಯಾಂಶ ಗಳು, ಈಗಿನ, 'ಹಾಲನ್ನು ಹೆಂಡಕ್ಕೆ ಮಾರುವ ನವನಾಗರಿಕತೆಯಿಂದಾಗಿ ಮಾಯವಾದುವು, ವಿಚಾರಿಸಿ ನೋಡಿರಿ, ಅಂದಿನ ಸಂಜೀವನಮಣಿ ಮೊದಲಾದ ದಿವ್ಯ ಔಷಧಗಳೂ ದಿವ್ಯಕಲೆಗಳೂ ಈಗ ಎಲ್ಲಿರುತ್ತವೆ? ಎಲ್ಲವನ್ನೂ, ಕಣ್ಣಿಗೆ ಮಣ್ಣು ಚೆಲ್ಲಿದ ಕಳ್ಳರು, ಕಣ್ತೆರೆವಾಗ ಸುಲಿದುಕೊಂಡು ಓಡಿದ್ದಾರೆ. ಆದರೆ, ಅವರಿಗೂ, ಆ ದಿವ್ಯ ವಸ್ತುಗಳ ಪ್ರಯೋಗವಿವೇಕವು ಇಲ್ಲದಕಾರಣ, ಕುರುಬನಿಗೆ ಮಾಣಿಕವೂ, ಕಲ್ಲಾಗುವಂತೆ, ಎಲ್ಲವೂ ಎಲ್ಲೆಲ್ಲಿಯೊ ಚಡರಿ ಹೋಯಿತು, ಆಗಲಿ, ಇನ್ನಾದರೂ ಪ್ರಯತ್ನಿಸಿ ಪ್ರತಿಯೊಬ್ಬನೂ ವಿದ್ವಾಂಸ
{{Right|10}}<noinclude></noinclude>
2wtg6kdyizvjytrol40d7q4vganf9gc
ಪುಟ:ಹಗಲಿರುಳು.djvu/೮೩
104
38681
321079
312225
2026-05-20T05:22:01Z
Shreesha Sharma
7840
/* Validated */
321079
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಕನ್ನಡ ಕೋಗಿಲೆ, ಅಗೋಸ್ತು ೧೯೧೮.}}
ನಾಗುವಂತೆ ಮಾಡಿರಿ.ಅಂದಿಗೆ, ಎಲ್ಲವೂ ಸಮೃದ್ಧವಾಗುವುದು. ಈ ಭೂಮಿಯನ್ನು ಸ್ವರ್ಗವನ್ನಾಗಿ ಮಾಡುವ ಯೋಗ್ಯತಾಂಶಗಳು ಪ್ರತಿಯೊಂದು ವಸ್ತುವಿನಲ್ಲೂ ಇವೆ, ಅವುಗಳನ್ನು ಶೇಖರಿಸುವ ಕಾರ್ಯಭಾರವೆಂಬುದು ಈ ಮುಂದಾಳುಗಳ ತಲೆಯಲ್ಲಿ, ಅದರಿಂದ ಎಲ್ಲರೂ ಈ ಕಡೆಮಾತನ್ನು ಮರೆಯದಿರಬೇಕು.
ಚೌಪದಿ || ನಿಮ್ಮಲ್ಲಿ ಸುಖವಿಹುದು ಹೊರಗಿಲ್ಲವಿಲ್ಲ |
ಒಮ್ಮೆ ತಿಳಿವಿನ ದೀಪಹಚ್ಚಿ ನೋಡುವುದು ||
ಸಮ್ಮತಿಸದೂರುದ್ದ ಕೋಡಿ ಕೈನಿಲುಕೆ |
ಅಮ್ಮಮ್ಮ ದುಃಖಕಂಟಕವೆ ಚುಚ್ಚಲಿಕೆ ||೧ ||
ನೀವಾರು ನಿಮ್ಮ ಹದನೇನರಿತುಕೊಳ್ಳಿ |
ಭಾವಭೇದವ ಸುಟ್ಟು, ಸೀಕರಿಸಕೊಳ್ಳಿ |
ಭಾವವೊಂದಹುದೆ ಕತ್ತಲೆಯ ಕೈದೀಪ |
ಆವಾಗಲೂ ಬಿಡದಿದನು ನಡೆಯಿರಪ್ಪ ||೨||
ನಾನೆ ಮೇಲ್ ನೀ ಕೀಳೆನುವ ಭೇದಬುದ್ದಿ |
ಹೀನವಹಸ್ವಾರ್ಥದಂಜಲಕಳ ಮಡ್ಡಿ |
ತಾನಾವನೋ ಲೋಕಹಿತಗೈವನವನು |
ಮಾನವನ್ನಳೆವ ಮಾನವನೆನ್ನಿಸುವನು ||೩||
ಕಾಲಪುಸ್ತಕದ ಹಗಲಿರುಳ ಪುಟಗಳಲಿ |
ಹೇಳುವ ಅದೃಷ್ಟದಾಸುಖದುಃಖಗಳನು ||
ಆಲೋಚಿಸದೆ ಕಣ್ಣು ಮುಚ್ಚಿ ಕುಳಿತಿರಲು |
ಹಾಳಹುದಿದನು ತಿಳಿದು ಬಾಳಿರೆ ಸುಖದಿ ||೪||
ತಿಳಿದ ಮಂದಿಗೆ ದುಃಖವೂ ಸುಖವೆನಿಪುದು ||
ತಿಳಿಯದಿರೆ ಸುಖವಾದರೂ ದುಃಖವಹುದು ||
ತಿಳಿಯದಂತಂತೂ ಕೊಳಲನ್ನ ತವೂ ವಿಷವೂ ||
ತಿಳಿಯೆ ವಿಷವೂ ಅಮೃತವಾಗುವುದು ನಿಜವು||೫||
{{center|[ತೇಜಸ್ವಿ ಮುಂತಾದವರೆಲ್ಲರೂ ಏಕಕಂಠರಾಗಿ] }}
'''ಆರ್ಯ''':-ನಿನ್ನ ಸದ್ಭೋಧನೆಗೆ ಮರುಮಾತಿಲ್ಲ, ನಾವೂ, ಅದಕ್ಕೆ ಅನುಸಾರ
ವಾಗಿಯೆ ಕಾರ್ಯತತ್ಪರರಾಗುತ್ತೇವೆ. ಆದರೆ ಅಂಗಸಾಧನೆ ಮಿತಾಹಾರ<noinclude></noinclude>
3x4rgzmgrlftgv30a5lcuimmhf0gise
ಪುಟ:ಹಗಲಿರುಳು.djvu/೮೪
104
38682
321080
312202
2026-05-20T05:22:50Z
Shreesha Sharma
7840
/* Validated */
321080
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಹಗಲಿರುಳು.}}
ಮೊದಲಾದ ಎಚ್ಚರಿಕೆಯಿಂದ ಇರುವವನಿಗೆ, ಪ್ರಕೃತಿದೇವಿಯ ರೋಗವನ್ನು ದೂರದಲ್ಲಿಡುವಂತೆ, ನೀನು ಸದ್ಬುದ್ಧಿ ಕಾರ್ಯದಕ್ಷತೆ ಮೊದಲಾದ ಸದ್ಗುಣ
ಗಳನ್ನು ದಯಪಾಲಿಸತಕ್ಕದು,
'''ಆರ್ಯ''':- ಪರಮಾತ್ಮನ ಉದ್ದೇಶದಂತೆ ಎಲ್ಲವೂ ಸುಗಮವಾಗುವುದು.
{{center|( ಎಲ್ಲರೂ ಸೇರಿ)}}
ಚೌಪದಿ||ಎಲೆ ದೇವ, ನಿನ್ನೆಣಿಕೆಯಂತೆ ಈ ಲೋಕಂ |
ನಲಿವುತಿರೆ, ನಾವೆ ನಮ್ಮನು ನೂಕಿ ದುಃಖಂ |
ಗಳಿಗೆ ಬಲಿಯಹುದನರಿತವು ಇನ್ನು ಮೇಲೆ |
ಕಲಿವ ಸದ್ದುದ್ಧಿಯನು ನಿಲಿಸು ನಮ್ಮಲ್ಲಿ ||೧||
ಹಲವರಿನ್ನೂ ಕಾಡುಗವಿಗಳಲ್ಲಿಹರು |
ಕಲರು ದುರ್ಮನದ ಕೋಣೆಯೊಳೆ ಕುಳಿತಿಹರು |
ತಿಳಿವೆಂಬ ಬೆಳಕನ್ನು ತೋರುವೆವು ನಾವು |
ತಿಳಿವ ಹುಟ್ಟಿಸಿ ಕಣ್ಣ ತೆರೆಯಿಸೆರಗುವವು ||೨||
ಮೇಲುಮೇಲಿನ ಕಾರ್ಯ ಲೋಕಕಾಗಿಹುದು |
ಆಲಿಸುತ್ತೋಳಗೆ ಕಳೆಗೊಡಲು ನೀನೆಂದು ||
ಕೇಳಿಕಗೆ ಹಲವು ದೃಷ್ಟಾಂತವಿಹುದದನು |
ಹೇಳಲೇಕೆ? ಧರಿತ್ರಿಯೇ ಸಾಕ್ಷಿಯಿರಲ) ||೩||
ಎತ್ತಿಹವು ತಲೆಯನಿದು ಧರ್ಮದಾ ಹೊರೆಯಂ |
ಹೊತ್ತು ನಡವಾಶಕ್ತಿಗೊಡುಹೃದಯಕಿನ್ನು ||
ಸತ್ಯಸಾರದ ಸವಿಯ ನಾಲಗೆಗೆ ಕಳಿಸು |
ಮತ್ತೆ ಹಾಲೊಡನೆ ರುಚಿಯಂತೆಲ್ಲ ಬಹುದು||೪||
ಕಂದ || |ಅವರವರ ಹುಟ್ಟುಹಕ್ಕುಗ |
ಇವರವರಿಗೆ ಬಂದು ಬಂಧನ೦ಗಳ ಹರಿದು ||
ಅವನಿಯೊಳಟ್ಟೆ ತಾನಂ ||
ದವತೋರೆ, ಸರ್ವಸಮದಭಾವವಬೀರೈ||೫||
ಮೊದಲಾವು ಗೈದಪಾಪ |
ಕ್ಕೊದಗಿದ ಫಲವೆಂಬ ಭೇದವಸ್ವಾತಂತ್ರ್ಯ ||
ಮೊದಲಾದ ಬಂಧನಾವಳಿ
ಕದಲಿತು ನಮ್ಮನ್ನು ನಮ್ಮನೇ ಮಾಡಿನ್ನು||೬||<noinclude></noinclude>
kzolqgenzgz0l27hpekr786ps192kla
ಪುಟ:ಹಗಲಿರುಳು.djvu/೮೫
104
38683
321081
312200
2026-05-20T05:23:56Z
Shreesha Sharma
7840
/* Validated */
321081
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಕನ್ನಡ ಕೋಗಿಲೆ,ಅಗೋಸ್ತು ೧೯೧೮.}}
ತನ್ನಂತೆ ಬೇರೆಯವನೂ | ಎನ್ನುವ ವಿಜ್ಞಾನಬೀಜವಲ್ಲರ ಬಗೆಯೊಳ್ |
ತನ್ನಂತೆ ಮೊಳೆಯಲಾರ್ಯಮ |
ತೋನ್ನತಿ ಕನ್ನಡಿಸಲಾಶಿವಂ ಕೈಗೊಡಲಿ||೭||
{{center|(ಎಲ್ಲ ರೂ ಹೋಗುವರು.)}}
'''ಸೂತ್ರಧಾರನಾದ ಕಾಲನು''':-(ಪ್ರವೇಶಿಸಿ) ಅ ! ಈ ಒಂದು ಹಗಲಿರುಳಲ್ಲಿ
ಏನೆಲ್ಲ ಕೆಲಸವಾಯಿತು!! ಒಮ್ಮೆ ಹೊನ್ನಾದುದು ಇನ್ನೊಮ್ಮೆ ಮಣ್ಣಾಗಿಯೂ, ಮತ್ತೊಮ್ಮೆ ಮಣ್ಣಾಗಿದ್ದುದು ಮೇಲೊಮ್ಮೆ ಹೊನ್ನಾಗಿಯೂ ತೋರಿತು. ಈ ಅಶಾಶ್ವತವಾದ ಮಾರ್ಪಾಟದಿಂದ ಏನು ಫಲ ? ಎಲ್ಲವೂ ನಾಟಕದ ವೇಷಾಂತರವಲ್ಲದೆ ಬೇರೇನೂ ಇಲ್ಲ.' ಎಂದು ಕೆಲವರು ಆಕ್ಷೇಪಿಸಬಹುದು, ಆದರೆ, ಅದು ಸರಿಯಲ್ಲ. ಈ ಪ್ರಪಂಚವೆ ಸುಳ್ಳು, ಮೇಲೆ ಮಾತ್ರ ಸತ್ಯದ ಬಣ್ಣ ಬಳಿದಿದೆ. ಆ ಬಣ್ಣವು, ಆಗಾಗ ಮಾಸಿಹೋಗುವುದು ಪ್ರಕೃತಿ, ಅದರಿಂದ, ಪುನಃ ಬಣ್ಣಹಿಡಿಯಲಿಕ್ಕಾಗಿ ಒಂದಿಷ್ಟು ಬದಲಾವಣೆಮಾಡಬೇಕಾಗುವುದು, ಮೊದಲೊಮ್ಮೆ ಬೆಳೆಗೆಟ್ಟ ಹಳೆಮಣ್ಣನ್ನು ನೇಗಿಲಗುಳದಿಂದ ಮಗುಚಿ, ಎರಡನೆ ಅದರಲ್ಲಿ ಬಿತ್ತಿ ಬೆಳೆಮಾಡುವ ರೂಢಿಯೂ ಇದಕ್ಕೆ ಅನುಸಾರವಾಗಿಯೆ, ಹಾಗೆಯೆ, ಈ ಲೋಕವನ್ನು ಹೆಚ್ಚಾಗಿ ಕವಿದು ನಿಂತ ಅಸತ್ಯದ ಅಜ್ಞಾನಾಂಧಕಾರವೆಂಬ ಕತ್ತಲೆಮಣ್ಣನ್ನು, ಸತ್ಯ ಸೂರ್ಯನೆಂಬ ಗುಳದಿಂದ ಅಡಿಮಗುಚಿ ಜ್ಞಾನಬೀಜವನ್ನು ಬಿತ್ತಿ ಬೆಳೆಯಿಸಿ ಬೆಳಕಿಗೆ ತರಬೇಕು, ಆ ಕೃಷಿಯಲ್ಲಿ ಅನೇಕ ಮಿಥಾತ್ಮದ ಕ್ರಿಮಿಕೀಟಗಳು ನಾಶವಾಗಿ ಅವುಗಳೆ ಗೊಬ್ಬರವಾಗುವವು, ಆ ಮೇಲೆ ಅದರಲ್ಲಿಯೆ ಮೊಳೆತು ಬೆಳೆಯನ್ನು ಅಳಿಯಿಸುವ ಕಳೆಗಳನ್ನೂ, ಹೊರಗಿನ ಸೊಪ್ಪು ಸದೆಗಳನ್ನೂ ಆ ಪೈರಿಗಾಗಿ ಬೂದಿಮಾಡುವರು, ತಪ್ಪಿನ ನಾಶವೆ ಒಪ್ಪಿನ ಪೋಷಕವೆಂಬ ಹೇಳಿಕೆಯಂತೆ ಇದು ಯುಕ್ತವೆ ಆಗಿದೆ. “ಅಸತ್ಯಂ ಪಥ ಮಾರುಹ್ಯ ಸತ್ಯಂ ಪಶ್ಯಾಮಿ ಭಾರತ=ಎಲೈ ಅರ್ಜುನನೆ, ಅಸತ್ಯವನ್ನು ಹೊಂದಿ ಸತ್ಯವನ್ನು ನಿರೀಕ್ಷಿಸುತ್ತೇನೆ' ಎಂಬ ಪರಮಾತ್ಮನ ಉದ್ದೇಶವಾದರೂ ಇದೆ. ಈ ಹಗಲಿರುಳಿನ ಉದ್ದೇಶವೂ ಇದೇ, ಒಂದೆ ಮರದ ಎರಡು ಕೊಂಬೆಗಳು ಒರಸೊರಸುವಂತೆ, ಈ ಹಗಲಿರುಳುಗಳು ನಮ್ಮ ದೃಷ್ಟಿಗೆ ಅನ್ಯೋನ್ಯ ವಿರೋಧಭಾವದಿಂದ ತೋರಿದರೂ, ನಿಜವಾಗಿ ಹಾಗಿಲ್ಲ, ಪಕ್ಷ<noinclude></noinclude>
7jjnxa1ej6k4jflhr5twphel3hkpy0r
321082
321081
2026-05-20T05:24:11Z
Shreesha Sharma
7840
321082
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಕನ್ನಡ ಕೋಗಿಲೆ,ಅಗೋಸ್ತು ೧೯೧೮.}}
ತನ್ನಂತೆ ಬೇರೆಯವನೂ |
ಎನ್ನುವ ವಿಜ್ಞಾನಬೀಜವಲ್ಲರ ಬಗೆಯೊಳ್ |
ತನ್ನಂತೆ ಮೊಳೆಯಲಾರ್ಯಮ |
ತೋನ್ನತಿ ಕನ್ನಡಿಸಲಾಶಿವಂ ಕೈಗೊಡಲಿ||೭||
{{center|(ಎಲ್ಲ ರೂ ಹೋಗುವರು.)}}
'''ಸೂತ್ರಧಾರನಾದ ಕಾಲನು''':-(ಪ್ರವೇಶಿಸಿ) ಅ ! ಈ ಒಂದು ಹಗಲಿರುಳಲ್ಲಿ
ಏನೆಲ್ಲ ಕೆಲಸವಾಯಿತು!! ಒಮ್ಮೆ ಹೊನ್ನಾದುದು ಇನ್ನೊಮ್ಮೆ ಮಣ್ಣಾಗಿಯೂ, ಮತ್ತೊಮ್ಮೆ ಮಣ್ಣಾಗಿದ್ದುದು ಮೇಲೊಮ್ಮೆ ಹೊನ್ನಾಗಿಯೂ ತೋರಿತು. ಈ ಅಶಾಶ್ವತವಾದ ಮಾರ್ಪಾಟದಿಂದ ಏನು ಫಲ ? ಎಲ್ಲವೂ ನಾಟಕದ ವೇಷಾಂತರವಲ್ಲದೆ ಬೇರೇನೂ ಇಲ್ಲ.' ಎಂದು ಕೆಲವರು ಆಕ್ಷೇಪಿಸಬಹುದು, ಆದರೆ, ಅದು ಸರಿಯಲ್ಲ. ಈ ಪ್ರಪಂಚವೆ ಸುಳ್ಳು, ಮೇಲೆ ಮಾತ್ರ ಸತ್ಯದ ಬಣ್ಣ ಬಳಿದಿದೆ. ಆ ಬಣ್ಣವು, ಆಗಾಗ ಮಾಸಿಹೋಗುವುದು ಪ್ರಕೃತಿ, ಅದರಿಂದ, ಪುನಃ ಬಣ್ಣಹಿಡಿಯಲಿಕ್ಕಾಗಿ ಒಂದಿಷ್ಟು ಬದಲಾವಣೆಮಾಡಬೇಕಾಗುವುದು, ಮೊದಲೊಮ್ಮೆ ಬೆಳೆಗೆಟ್ಟ ಹಳೆಮಣ್ಣನ್ನು ನೇಗಿಲಗುಳದಿಂದ ಮಗುಚಿ, ಎರಡನೆ ಅದರಲ್ಲಿ ಬಿತ್ತಿ ಬೆಳೆಮಾಡುವ ರೂಢಿಯೂ ಇದಕ್ಕೆ ಅನುಸಾರವಾಗಿಯೆ, ಹಾಗೆಯೆ, ಈ ಲೋಕವನ್ನು ಹೆಚ್ಚಾಗಿ ಕವಿದು ನಿಂತ ಅಸತ್ಯದ ಅಜ್ಞಾನಾಂಧಕಾರವೆಂಬ ಕತ್ತಲೆಮಣ್ಣನ್ನು, ಸತ್ಯ ಸೂರ್ಯನೆಂಬ ಗುಳದಿಂದ ಅಡಿಮಗುಚಿ ಜ್ಞಾನಬೀಜವನ್ನು ಬಿತ್ತಿ ಬೆಳೆಯಿಸಿ ಬೆಳಕಿಗೆ ತರಬೇಕು, ಆ ಕೃಷಿಯಲ್ಲಿ ಅನೇಕ ಮಿಥಾತ್ಮದ ಕ್ರಿಮಿಕೀಟಗಳು ನಾಶವಾಗಿ ಅವುಗಳೆ ಗೊಬ್ಬರವಾಗುವವು, ಆ ಮೇಲೆ ಅದರಲ್ಲಿಯೆ ಮೊಳೆತು ಬೆಳೆಯನ್ನು ಅಳಿಯಿಸುವ ಕಳೆಗಳನ್ನೂ, ಹೊರಗಿನ ಸೊಪ್ಪು ಸದೆಗಳನ್ನೂ ಆ ಪೈರಿಗಾಗಿ ಬೂದಿಮಾಡುವರು, ತಪ್ಪಿನ ನಾಶವೆ ಒಪ್ಪಿನ ಪೋಷಕವೆಂಬ ಹೇಳಿಕೆಯಂತೆ ಇದು ಯುಕ್ತವೆ ಆಗಿದೆ. “ಅಸತ್ಯಂ ಪಥ ಮಾರುಹ್ಯ ಸತ್ಯಂ ಪಶ್ಯಾಮಿ ಭಾರತ=ಎಲೈ ಅರ್ಜುನನೆ, ಅಸತ್ಯವನ್ನು ಹೊಂದಿ ಸತ್ಯವನ್ನು ನಿರೀಕ್ಷಿಸುತ್ತೇನೆ' ಎಂಬ ಪರಮಾತ್ಮನ ಉದ್ದೇಶವಾದರೂ ಇದೆ. ಈ ಹಗಲಿರುಳಿನ ಉದ್ದೇಶವೂ ಇದೇ, ಒಂದೆ ಮರದ ಎರಡು ಕೊಂಬೆಗಳು ಒರಸೊರಸುವಂತೆ, ಈ ಹಗಲಿರುಳುಗಳು ನಮ್ಮ ದೃಷ್ಟಿಗೆ ಅನ್ಯೋನ್ಯ ವಿರೋಧಭಾವದಿಂದ ತೋರಿದರೂ, ನಿಜವಾಗಿ ಹಾಗಿಲ್ಲ, ಪಕ್ಷ<noinclude></noinclude>
pfwff43rxlmb1tz7tpcojv89p6mwnqb
ಪುಟ:ಹಗಲಿರುಳು.djvu/೮೬
104
38684
321083
312198
2026-05-20T05:24:30Z
Shreesha Sharma
7840
/* Validated */
321083
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಹಗಲಿರುಳು}}
ತಿಯ ನಾಮಾಂತರದ ವಿದ್ಯೆಯ ರೂಪವೆ - ಪರಮಾತ್ಮನ ಅಂಗಚ್ಛವಿ. ಮಾಯಾದೇವಿಯೆಂಬ ಅಜ್ಞಾನಾಂಧಕಾರವೆ, ಆತನ ಹೊದಕೆ, ಜ್ಞಾನ ಹಸ್ತದಿಂದ ಆ ಹೊದಕೆಯನ್ನು ಎತ್ತಿದರೆ, ಪರಬ್ರಹ್ಮನ ರೂಪು ಪ್ರಕಟ ವಾಗುವುದು, ಅದನ್ನ ವಿದ್ಯಾಭ್ಯಾಸವೆಂದು ಹೇಳುವರು, ಅದನ್ನು, ಧರ್ಮಾನುಸಾರವಾಗಿ, ಎಷ್ಟೆಷ್ಟು ಚೆನ್ನಾಗಿ ಮಾಡುತ್ತಾರೆ ಅಷ್ಟಷ್ಟೂ ಪರಮಾತ್ಮನ ಬಂಧುಗಳಾಗುತ್ತಾರೆ. ಸಂಪೂರ್ಣವಾಗಿ ತತ್ವಾರ್ಥವನ್ನು ಅರಿತ ಮೇಲೆ, ಹೊಳೆ ಸಮುದ್ರದಲ್ಲಿ ಬೆರತುಹೋಗುವಂತ, ಪರಬ್ರಹ್ಮನ ಅಖಂಡ ಜ್ಯೋತಿಯಲ್ಲಿ ಐಕ್ಯವಾಗುತ್ತಾರೆ, ಎಷ್ಟೆಷ್ಟು ಪರಮಾತ್ಮನ ಹೊರಗಾಗಿ ತೊಳಲುತ್ತಾರೋ, ಅಷ್ಟಷ್ಟೂ, ಅವನ ಹೊದಕೆಯ ಅಂಧಕಾರವೇ ಕಣ್ಣು ಕಟ್ಟುತ್ತಿದೆ. ಅದು, ರಾಜಸ್ಥಾನದ ದ್ವಾರಪಾಲಕನಂತೆ, ಅಪರಿಚಿತನನ್ನು ತಡೆದು ಬಿಡುತ್ತದೆ. ಆ ದ್ವಾರವನ್ನು ಬಿಟ್ಟು ಎತ್ತೆತ್ತ ಹೊಂಚುಹಾಕಿದರೂ, ಅಜ್ಞಾನವೂ, ಅಪರಾಧವೂ, ಅವನ ತಲೆಹೊರೆಯಾಗುತ್ತದೆ. ಕಳ್ಳದಾರಿಯಲ್ಲಿ ಮುಂದುವರಿದರೆ, ಆತನಿಗೆ ಶಿಕ್ಷೆಯ ಗತಿಯಾಗಿ ಬಹಿಷ್ಕಾರಹೊಂದಿ ಪಾಪಿಯಾಗುತ್ತಾನೆ, ಅದರಿಂದ, ವಿನಯ ವಿಧೇಯತೆ ಮೊದಲಾದ ಗುಣಗಳನ್ನು ಬಿಗಿಹಿಡಿದು, ಕಷ್ಟಗಳನ್ನು ಸೈರಿಸಿ ಪ್ರಯತ್ನಿಸಿದರೆ, ಒಂದಲ್ಲ, ಇನ್ನೊಂದು ಸಂದರ್ಭದಲ್ಲಿ ಆ ಜಗತ್ಪತಿಯ ಕರುಣೆಯನ್ನು, ರಾಜದ್ವಾರದಿಂದಲೆ ಪಡೆಯ ಬಹುದು, ವಿನಯಪೂರ್ವಕವಾದ ಕಷ್ಟವೆ, ಸಫಲವಿದ್ಯಾಭ್ಯಾಸದ ಪೂರ್ವ ರೂಪವೆಂಬುದನ್ನು ಯಥಾರ್ಥತತ್ಪರವಾದ ಲೋಕವೆಂಬ ವಿದ್ಯಾರ್ಥಿ ಮರೆಯಬಾರದು, ನಿಜವಾದ ವಿದ್ಯಾರ್ಥಿಗಳ ಇಷ್ಟಾರ್ಥವನ್ನು, ಜಗದ್ಗುರುವಾದ ಪರಮಾತ್ಮನು ಸಲಿಸಿ, ಗುರುವಿನಂತೆ ಶಿಷ್ಯ' ಎಂಬಂತೆ ಸಿದ್ಧಪಡಿಸದೆ ಇರಲಾರನು. ಈಗ, ಹಗಲೆಂದರೆ, ಕಣ್ತೆರೆಯಿಸುವ ಆವಿದ್ಯೆಯೆಂದೂ, ಇರುಳೆಂಬುದು, ಆ ಅಂಧಕಾರರೂಪದ ಕತ್ತಲೆಯಿಂದೂ, ಲೋಕಕ್ಕೆ ಮನ ಮುಟ್ಟಿರಬಹುದು, ಅದರಿಂದ, ಈ ಹಗಲಿರುಳಿನ ಕಥೆ ಎಲ್ಲವೂ, ಪವಿತ್ರಧಾರಿಯಾದ ಭಗವಂತನ ಎಣಿಕೆಯಂತೆಯೇ ನಡೆದಿದೆ. ಅವನಾದರೂ ಆಯಾ ವ್ಯಕ್ತಿಗಳನ್ನು, ಗಾಳಿಯ ಮೂಲಕ ಜಳ್ಳನ್ನು ತೂರಿ ನೆಲ್ಲನ್ನು ಆರಿಸುವಂತೆ, ಪರೀಕ್ಷಿಸಿಯೇ ಒಳಗೊಳ್ಳತಕ್ಕವನು, ಆ ಕೆಲಸಕ್ಕೆ ಸಾಧನರೂಪವಾಗಿ, ನನ್ನನ್ನು ನಿಯಮಿಸಿರುವುದು, ಅಕಟಾ ! ಈ ಗುಟ್ಟನ್ನು ತಿಳಿಯದ ಲೋಕವು, ಸುಖಬಂದಾಗ ತಾನೆ ಸಮರ್ಥನೆಂದು ಹಿಗ್ಗಿ, ದುಃಖವೊದಗಿದಾಗ, ಕೈ<noinclude></noinclude>
oo3q7dct9l3e3xyg7nkgi4l99n29qub
ಪುಟ:ಹಗಲಿರುಳು.djvu/೮೭
104
38685
321084
312197
2026-05-20T05:24:59Z
Shreesha Sharma
7840
/* Validated */
321084
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಕನ್ನಡ ಕೋಗಿಲೆ, ಅಗೋಸ್ತು ೧೯೧೮,}}
ದೋರಿಸಿ ನನ್ನನ್ನು ಬೈಯುತ್ತಿದೆ, ಹೇಗೆ ? ಈಗ ಕುರುಡುಹೋಗಿ, ಕನ್ನಡಿ ಕೈಗೆ ಬಂತೆ ?
{{gap}}ಪ್ರಿಯ ಲೋಕವೆ, ಇದನ್ನು ತಿಳಿದು, ಕಾಡುಗತ್ತಲೆಗಳ ಭೇದಭಾವವನ್ನು ಬಿಟ್ಟುಬಿಡಿರಿ, ನಿಮ್ಮ, ರಾಜಕೀಯ ಧಾರ್ಮಿಕ ಸಾಮಾಜಿಕ ಮಾರ್ಗಗಳನ್ನು ಸರಿಪಡಿಸಿಕೊಳ್ಳಿರಿ. ಹಾಗಾದರೆ, ನನ್ನ ಕಾಲರಥದ ಚಕ್ರವೂ, ಆ ಮಾರ್ಗಗಳಲ್ಲಿ, ನಿರಾತಂಕವಾಗಿ ನಡೆವುದು. ನಿಮಗೂ ಹಿತವಾಗುವುದು. ಇದೇ ಗಂಟೆ ಬಾರಿಸಿ ಸಾರುತ್ತೇನೆ ಅಂಗಳದಲ್ಲಿ ಹೇಸಿಕೆಮಾಡಿಕೊಂಡು ಮಂಗಳನ ಕಷ್ಟ'ವೆಂದು ಗುಣುಗುಟ್ಟಬೇಡಿರಿ. ಈ ಜ್ಞಾನವು ನಿಮ್ಮಲ್ಲಿ ನೆಲಗೊಳ್ಳಬೇಕಾದರೆ, ನನ್ನ ಈ ಉಪನ್ಯಾಸವೊಂದೇ ಸಾಲದು. ನೀವೆಲ್ಲರೂ, ಮಾತೃಭೂಮಿಯನ್ನು ಮನಮುಟ್ಟಿ ಸರ್ವವಿಧದಿಂದಲೂ ಸೇವಿಸುವ ವ್ರತ ಹಿಡಿಯಬೇಕು, ಲೋಕಮಾನ್ಯರಾದ, ಸರ್ವವನ್ನೂ ಬಿಟ್ಟ, ಸನ್ಯಾಸಿಗಳೂ ಕೂಡ, ಮಾತೃದೇವತೆಯನ್ನು ಕಂಡಲ್ಲಿ ತಲೆಬಗ್ಗಿಸಿ ಪೂಜಿಸುತ್ತಾರೆ. ಎಂದಮೇಲೆ, ಇಡಿ ಜನಾಂಗಕ್ಕೆ ಮಾತೃಸ್ವರೂಪಿಣಿಯಾದ ಈ ಭಾರತ ಮಾತೆಯನ್ನು ಅಲಕ್ಷಿಸಿದರೆ, ನಿಮಗೆ ಗತಿ ಇಲ್ಲ. ಈಗಿನ ಹಲವು ನವ ನಾಗರಿಕರು, ಅವಳ ಮಾತಿಗೆ ಮನ್ನಣೆಗೊಡದೆ ತಿರಸ್ಕರಿಸುತ್ತಿರುವುದರಿಂದಲೆ, ನಿಮಗೆ ಇಂಥ ದುರ್ಗತಿಯುಂಟಾಗಿದೆ.
ಚೌಪದಿ | ಬೆಳೆದ ಪುದು ತಾಯ ಹೊಟ್ಟೆಯೊಳಗಲ್ಲಿಂದ ||
ತಲೆದೋರುತವಳ ಮಡಿಲೊಳೊಸಪಾಲ !
ಕುಡಿದು ಫಲದುಂಬುತಾ ಮಾತೃ ಭೂಮಿಯನು |
ಬಿಡುತಳಲಿಪುದೆ ವರವೆಯಾದರೂ ತಾನು ? || ೧ ||
ಹುಟ್ಟು ತಿನ್ನೊಂದು ಕಡೆಗೆದಿರೀತಿಯನು |
ಬಿಟ್ಟು, ಬಗೆಬಗೆ ಬಟ್ಟೆ, ವೇಷಭಾಷೆಯನು ||
ಕಟ್ಟಿಬಂದಭೆಯನು ಬೈವ ವ್ಯಾಪಾರ |
ದೃಷ್ಟಿಯಿದು ಏಳಿಗೆಯ ಮೂಲೇ ಕುಠಾರ| ೨ ||
ಕುಸುಮ ಷಟ್ಟದಿ || ಫಲಕೆ ತಂದೆಯೆ ಕಾರ್ಯವೃಕ್ಷವಾ ವೃಕ್ಷಕ್ಕೆ |
ಎಣಿಕಯೇ ತಾಯಿಬೇರದಕೆ ಯುಕ್ತಿ |
ಮೊಳೆವ ಬಿತ್ತಹುದೆಲ್ಲ ಕೂ ಜೀವನವು ಧರ್ಮ |
ಹೊಳೆವುದದು ಕಣ್ಣೆರೆದರೆಲ್ಲೆಲ್ಲಿಯೂ ಹೊಳೆವುದದುil ೩ ||<noinclude></noinclude>
9mb9dutf7gtvlcz1ivufcymsjgl50ef
ಪುಟ:ಹಗಲಿರುಳು.djvu/೮೮
104
38686
321085
312192
2026-05-20T05:25:28Z
Shreesha Sharma
7840
/* Validated */
321085
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಪುನರ್ವಿವಾಹ.}}
ಅದರಿಂದ ಬೇರೆ ಯೋಚನೆಯ ಬಿಟ್ಟಿಲ್ಲ ಕೂ |
ಮೊದಲಾದ ಧರ್ಮವೊಂದನೆ ಹಿಡಿದರೆ ||
ತುದಿವರೆಗೆ ಸರಿಯಾಗಿ ಫಲವನುಂಬನುಕೃಷಿಯ |
ನೊದಗಿಸಲು " ತಾನೆ ಕ ನೀಡದೆ?| ೪ |
ಕಂದ ||ಹಗಲಿರುಳ ನೋದುತ್ತಿಲ್ಲ ರು
ಬಗೆಯನು ತಿದ್ದುತ್ರ ಧರ್ಮಮಾರ್ಗದಿ ನಡೆಯೆ ||
ಜಗದೊಳಗದ್ದೆತಾನಂ |
ದಗಳು ಸಮಾಜಕ್ಕೆ ಸಂತತಂ ಸಂಜನಿಕುಂ| ೫ ||
{{center|[ ಎಂದು ಪುಷ್ಪಾಂಜಲಿಯನ್ನು ಒಪ್ಪಿಸುವನು]}}
{{center||| ಇತಿ ||}}
{{center|———}}<noinclude></noinclude>
7ake6ptjvysiuj1fnk4qvhh5c0dag6v
ಪುಟ:ಕಥಾವಳಿ.djvu/೨೫
104
45085
321406
279383
2026-05-20T10:27:45Z
Pragathi. BH
7585
/* Validated */
321406
proofread-page
text/x-wiki
<noinclude><pagequality level="4" user="Pragathi. BH" /></noinclude>{{center|೧೦}}
{{gap}}ನಾಗವಲ್ಲಿಯು ಹಿಂದಿರುಗಿ ಬಂದು ತನ್ನ ತಂದೆ ತಾಯಿಗಳನ್ನು ಸಂತೋಷಪಡಿಸಿ ಹೋಗುವುದರಲ್ಲಿ ಒಂದು ಗಳಿಗೆ ಹೆಚ್ಚಾದುದರಿಂದ, ತನ್ನ ಪ್ರಿಯನಿದ್ದೆಡೆಗೆ ಓಡಿ ಓಡಿ ಹೋದಳು.
{{gap}}ಅಲ್ಲಿ ರಾಜಕುಮಾರನೇ ಇರಲಿಲ್ಲ, ತಾನು ಸ್ವಲ್ಪ ಹೊತ್ತಾಗಿ ಬಂದು ದರಿಂದ ರಾಜಕುಮಾರನು ಮಾಯವಾದನೆಂದು ಚಿಂತಿಸಿ, ಅವನನ್ನು ಹುಡುಕಿಕೊಂಡು ಕಾಡಿನಲ್ಲಿಯೇ ಹೊರಟಳು, ಗೆಡ್ಡೆ ಗೆಣಸುಗಳನ್ನು ತಿಂದು ಪ್ರಾಣವನ್ನುಳಿಸಿಕೊಂಡು ಕಾಡಿನಲ್ಲೆಲ್ಲಾ ಅಲೆದಳು. ಎಲ್ಲಿಯೂ ತನ್ನ ಪ್ರಿಯನು ಸಿಕ್ಕಲಿಲ್ಲ. ಬಹು ಶಾಂತಳಾಗಿ ಒಂದು ಮರದ ನೆರಳಲ್ಲಿ ಕುಳಿ ತುಕೊಂಡಳು, ಹತ್ತಿರದಲ್ಲಿಯೆ ಒಂದು ಗುಡಿಸಲು ಕಾಣಬಂದಿತು. ಪ್ರಿಯನು ಆ ಗುಡಿಸಲಿನಲ್ಲಿಯಾದರೂ ಇರುವನೋ ಎಂದು ತಟ್ಟನೆ ಹೊರಟು ಗುಡಿ ಸಲನ್ನು ಸೇರಿದಳು.
{{gap}}ಆ ಗುಡಿಸಲಿನಲ್ಲಿ ಕುಳಿತಿದ್ದವನು, ರತ್ನದ ಕವಚವನ್ನು ತೊಟ್ಟು ವಜ್ರದ ಕಿರೀಟವನ್ನು ಇಟ್ಟು ಥಳಥಳಿಸುತಿದ್ದ ಪ್ರಿಯನೆ ? ಅಲ್ಲ, ಕಾವಿಯ ಬಟ್ಟೆಯನ್ನುಟ್ಟು, ಬಿಳಿಯ ಗಡ್ಡವನ್ನು ಬಿಟ್ಟು ಕಂಗೊಳಿಸುತ್ತಿದ್ದ ಒಬ್ಬ ಋಷಿಯು, ನಾಗವಲ್ಲಿಯು ಆ ಋಷಿಯ ಪಾದಕ್ಕೆರಗಿ ಕೈ ಮುಗಿದು ನಿಂತಳು, ಋಷಿಯು ನಾಗವಲ್ಲಿಯ ವೃತ್ತಾಂತವನ್ನೆಲ್ಲಾ ತಿಳಿದು, ಅವಳಿಗೆ ಧೈಲ್ಯವನ್ನು ಹೇಳಿ, ಮಂತ್ರಿಸಿ ನಾಲ್ಕು ಪದಾರ್ಥಗಳನ್ನು ಕೊಟ್ಟ ' ನಿನ್ನ ಪ್ರಿಯನು ಸಿಕ್ಕುವನು ಹೋಗು ' ಎಂದು ಆಶೀರ್ವದಿಸಿ ಕಳುಹಿಸಿದನು.
{{gap}}ನಾಗವಲ್ಲಿಯು ಆ ಋಷಿಗೆ ನಮಸ್ಕರಿಸಿ, ನಾಗರಾಜನ ಮಗನನ್ನು ಹುಡುಕಿಕೊಂಡು ಆಕಾಡಿನಲ್ಲ ಯೇ ಹೊರಟಳು. ದಾರಿಯಲ್ಲಿ ಒಂದುದೊಡ್ಡ ಬೆಟ್ಟವು ಸಿಕ್ಕಿತು. ಆ ಬೆಟ್ಟವ ಬಹು ಇಳಿಜಾರಾಗಿಯೂ, ನುಣು ಪಾ ಗಿಯೂ ಇದ್ದುದರಿಂದ, ಹತ್ತು ಇದಕ್ಕೆ ಅಸಾಧ್ಯವಾಗಿ ತೋರಿತು. ಆಗ ಋಷಿಯ ಕೊಟ್ಟಿದ್ದ ಪದಾರ್ಥಗಳಲ್ಲಿ ಮೂರು ವಜ್ರದ ಸೂಜಿಗಳು ಇದ್ದು ದನ್ನು ನೋಡಿ ಅವುಗಳನ್ನು ಚುಚ್ಚಿ ಮೆಟ್ಟಿಲುಗಳಂತೆ ಮಾಡಿ ಕೊಂಡು ಆ ಬೆಟ್ಟವನ್ನು ದಾಟಿದಳು.<noinclude></noinclude>
0mt9b59pkj90e588j3iu728df4u1djs
ಪುಟ:ಕಥಾವಳಿ.djvu/೨೬
104
45086
321407
279185
2026-05-20T10:28:04Z
Pragathi. BH
7585
/* Validated */
321407
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=|center=೧೧|right=}}
{{gap}}ಅಲ್ಲಿಂದ ಮುಂದೆ ಹೋಗುತ್ತಿರುವಾಗ, ಒಂದು ಇಕ್ಕಟ್ಟಾದ ಸ್ಥಳವು ಸಿಕ್ಕಿತು. ಆ ಸ್ಥಳದಲ್ಲಿ ಹರಿತವಾದ ಮೂರು ಕತ್ತಿಗಳು ತಕತಕನೆ ಕುಣಿ ದಾಡುತ್ತಿದ್ದುವು. ಅವನ್ನು ನೋಡುವುದಕ್ಕೇ ಭಯವಾಗುತ್ತಿದ್ದಿತು. ಇನ್ನು ದಾಟುವನ್ದು ಹೇಗೆ ? ನಾಗವಲ್ಲಿಯು ಧೈರೈ ತಾಳಿ ಋಷಿಯು ಕೊ ಟ್ವಿದ್ದುದರಲ್ಲಿ ಒಂದು ಚಕ್ರವಿದ್ದುದನ್ನು ನೋಡಿ, ಅದೂ ಸೂಜಿಯಂತಯೇ
ಮಂತ್ರಸಿದ್ದವಾದ ಚಕ್ರವಿರಬಹುದೆಂದು, ಅದರ ಮೇಲೆ ಕುಳಿತು, ಕತ್ತಿಯ ಹತ್ತಿರ ಉರುಳಿಸಿದಳು. ಕತ್ತಿಗಳಮೇಲೆ ಚಕ್ರವ ಸರ್ರ್ನೆ ಹೊರಟ ಅವ ಇನ್ನು ಆಚೆಗೆ ದಾಟಿಸಿತು.
{{gap}}ಅವಳು ಮುಂದೆ ಮುಂದೆ ಹೋಗುತ, ಕಾಡು ಭಯಂಕರವಾಗುತ ಬಂದಿತೇ ಹೊರತು, ಊರು ಬೇರೆ ಸಿಕ್ಕಲಿಲ್ಲ. ಹುಲಿಗಳ ಆಲ್ಬಟ, ಆನೆಗಳ ಕೂಗು, ಸಿಂಹದ ಗರ್ಜನೆ, ಇವ್ರ ಬಾರಿ ಬಾರಿಗೂ ಅವಳ ಮೈಯನ್ನೆ ಲ್ಲಾ ನಡುಗಿಸುತ್ತಿದ್ದು ವ. ಆದರೆ ಅಲ್ಲಲ್ಲೆ ಸಿಕುತಿದ್ದ ಹುಲ್ಲಿಗಳ ಹಿಂಡು, ನವಿಲುಗಳ ಸಮೂಹ, ಕೋಗಿಲೆಗಳ ಗುಂಪು, ಇವು,ಅವಳಿಗೆ ಸಮಾಧಾನವ ನ್ನುಂಟುಮಾಡುತಿದ್ದುವ. ಹಾಗೆಯೇ ಹೊರಟಳು. ಮುಂದೆ ಒಂದು ದೊಡ್ಡ ಮೈದಾನವೂ ಸಿಕ್ಕಿತು ಆ ಮೈದಾನದಲ್ಲಿ ಒಂದು ಸೊಗಸಾದ ಕೊಳ. ಆ ಕೊಳದಲ್ಲಿ ನೀರು ಕುದಿಯುತ್ತಿದ್ದಿತು. ಅದನ್ನು ನೋಡಿ ಅವಳಿಗೆ ಆಶ್ಚರ್ಯವಾಯಿತು.
{{gap}}ಖುಷಿಯು ಕೊಟ್ಟಿದ್ದ ಪದಾರ್ಥಗಳಲ್ಲಿ ಒಂದು ಗೋಲಿ ಯಿದ್ದಿತು. ಅದನ್ನು ಎಲ್ಲಿ ಯಾವಾಗ ಉಪಯೋಗಿಸಬಹುದೆಂದು ಯೋಚಿಸುತ, ಆ ಕೊಳೆದ ಮೇಲುಗಡೆಯ ಮೆಟ್ಟಲಮೇಲೆ ಕುಳಿತಿದ್ದಾಗ, ಮಂತ್ರಸಿದ್ದವಾದ ಆ ಗೋಲಿಯು ಅವಳ ಕೈಯಿಂದ ಉರುಳಿಹೋಗಿ ಆ ಕುದಿವ ನೀರಿಗೆ ಬಿದ್ದಿತು. ಅದು ಬಿದ್ದೊಡನೆ ಕುದಿಯುತ್ತಿದ್ದ ನೀರು ತಣ್ಣಗೆ ಆಗಿ ತಿಳಿಯಿತು. ತಿಳಿದ ನೀರಿನಲ್ಲಿ ಏಳುಪ್ಪರಿಗೆಯ ಅರಮನೆಯೊಂದು ಕಾಣಿಸಿಕೊಂಡಿತು. ಆ ಅರಮನೆಯ ಮೇಲುಗಡೆಯ ಬಿಸಿಲು ಮಚ್ಚಿನಲ್ಲಿ ನಾಗರಾಜ ಕುಮಾರನು ಯೋಚಿಸುತ ಕುಳಿತಿದ್ದಂತೆ ಕಾಣಿಸಿತು. ತನ್ನ ಪ್ರಿಯನನ್ನು ನೋಡಿದ ಸಂತೋ ಷಕ್ಕೆ ನಾಗವಲ್ಲಿಯು ಅಲ್ಲಿಯೇ ಮೂರ್ಛಿತಳಾದಳು.<noinclude></noinclude>
r557x61bssrsmn6l1e99jy9g8pinkjd
ಪುಟ:ಕಥಾವಳಿ.djvu/೨೭
104
45087
321408
279273
2026-05-20T10:28:17Z
Pragathi. BH
7585
/* Validated */
321408
proofread-page
text/x-wiki
<noinclude><pagequality level="4" user="Pragathi. BH" /></noinclude>
{{rh|left=|center=೧೨
|right=}}{{rh|left=|center='''೯. ನಾಗವಲ್ಲಿಯ ಕಥೆ-[೫ ನೆಯ ಭಾಗ]'''|right=}}
{{gap}}ನಾಗವಲ್ಲಿಯು ಮೂರ್ಛಯಿಂದ ಚೇತರಿಸಿಕೊಂಡು ಎದ್ದು, ಸರಸರನೆ ಆ ನೀರಿನ ಹತ್ತಿರಕ್ಕೆ ಹೋದಳು. ಆ ತಿಳಿನೀರಿನಲ್ಲಿ ರಾಜಕುಮಾರನು ಇರುವುದನ್ನು ಮತ್ತೆ ನೋಡಿದಳು. ಹೇಗಾದರೂ ಅವನನ್ನು ಸೇರಬೇ ಕೆಂದು ಆ ನೀರಿನಲ್ಲಿ ದುಮುಕಿದಳು, ನೀರು ದಾರಿಬಿಟ್ಟಿತು, ಒಂದು ಕ್ಷಣ ದಲ್ಲಿ ಅರಮನೆಯ ಬಾಗಿಲನ್ನು ಸೇರಿದಳು. ಆದರೆ ಅರಮನೆಯ ಒಳಕ್ಕೆ ಇವಳನ್ನು ಯಾರೂ ಬಿಡರು ; ಒಬ್ಬರೂ ಮಾತನಾಡಿಸರು ; ಎಲ್ಲರೂ ಬಹು ಸಡಗರದಲ್ಲಿದ್ದರು ; ನಾಗಕನೈಗೆ ನಾಳೆ ಮದುವೆಯೆಂದು ಎಲ್ಲರೂ ಹೇಳಿ ಕೊಳ್ಳುತಿದ್ದರು, ತಾನು ಹೇಗೆ ರಾಜಕುಮಾರನನ್ನು ಕಂಡು ಮಾತನಾ ಡುವುದು ? ರಾಜಕುಮಾರನು ನಾಗಕನೈಯನ್ನು ಮದುವೆಯಾಗುವುದಾ ದರೆ ತಾನು ಏನು ಮಾಡುವುದು ? ತಾನು ಪಟ್ಟ ಕಷ್ಯವೆಲ್ಲಾ ವ್ಯರ್ಥವಾ ಗುವುದು ಎಂದು ಚಿಂತಿಸುತ್ತಾ, ಅರಮನೆಗೆ ಸ್ವಲ್ಪ ದೂರದಲ್ಲಿದ್ದ ಒಂದು ಮರದ ನೆಳಲಲ್ಲಿ ಕುಳಿತುಕೊಂಡಳು. ಸ್ವಲ್ಪ ಹೊತ್ತಿನಲ್ಲಿಯೆ ಅಲ್ಲಿಗೆ ಒಬ್ಬ ಮುದುಕಿಯು ಬಂದಳು. ಆ ಮುದುಕಿಗೆ ಇವಳು ನಮಸ್ಕಾರಮಾಡಿ,
• ಅಮ್ಮಾ ನಾಳೆ ಯಾರಿಗೆ ಮದುವೆ ? ' ಎಂದು ಕೇಳಿದಳು, ಮುದುಕಿಯು, ಗಲ್ಲದಮೇಲೆ ಬೆಟ್ಟಿಟ್ಟ, ತಲೆಯೆತ್ತಿ ಇವಳ ಮುಖವನ್ನು ನೋಡಿ, 'ಇದೇನೆ ! ಹೀಗೆ ಕೇಳುತೀಯೆ ! ಚೆನ್ನಾಯಿತು, ಹೊಸದಾಗಿ ಬಂದಿದಾನಲ್ಲೆ ; ನಾಗ
ರಾಜಕುಮಾರನಂತಲ್ಲೆ ! ಅವನಿಗೆ ನಮ್ಮ ನಾಗಕನಯನ್ನು ಕೊಡು ವರಲ್ಲವೇನೆ! ಅವನಿಗೇನೋ ಮದುವೆ ಬೇಡವಂತೆ ; ಮೂರು ಹೊತ್ತು ತಲೆಯ ಮೇಲೆ ಕೈ ಬಿಟ್ಟುಕೊಂಡು ಕುಳಿರುತ್ತಾನಂತೆ ! ರಾತ್ರಿ ಒಂದು ಹೊತ್ತಿನಲ್ಲಿ ಸ್ವಲ್ಪ ಹೊರಕ್ಕೆ ಬರುತ್ತಾನಂತೆ ! ನನಗೆ ಕೆಲಸವಿದೆ, ನಾನು ಹೋಗಬೇಕು. ನೀನು ಹುಡುಗಿ, ನಿನಗೆ ತಿಳಿಯದೇ ಇದ್ದುದು ನನಗೆ ತಿಳಿಯುತ್ತದೆಯೆ ! ನನ್ನನ್ನು ನೋಡಿದರೆ ನಿಮಗೆ ಹಾಸ್ಯ' ಎಂದು ಕೊಂಡು ಹೊರಟುಹೋದಳು.
{{gap}}ನಾಗವಲ್ಲಿಯು ರಾತ್ರಿಯಲ್ಲಿ ಆ ರಾಜಕುಮಾರನು ಹೊರಡುವುದನ್ನೇ ಕಾದಿದ್ದಳು. ರಾತ್ರಿ ಒಂದು ಹೊತ್ತಿನಲ್ಲಿ ರಾಜಕುಮಾರನು, ಏಳನೆಯ ಉಪ್ಪರಿಗೆಯಿಂದ ಬರುತಿದ್ದುದನ್ನು ನೋಡಿದಳು. ತನ್ನ ಪ್ರಿಯನನ್ನು<noinclude></noinclude>
fiwc8x9646iuq6h1j4k5e8ubelk2mup
ಪುಟ:ಕಥಾವಳಿ.djvu/೨೮
104
45088
321409
279450
2026-05-20T10:29:01Z
Pragathi. BH
7585
/* Validated */
321409
proofread-page
text/x-wiki
<noinclude><pagequality level="4" user="Pragathi. BH" /></noinclude> {{center|೧೩}}
ಸೇರುವೆನೆಂಬ ಸಂತೋಷದಿಂದ ಮುಂದಾಗಿ ಬಂದಳು. ರಾಜಕುಮಾರನಾದರೋ, ಎಂದಿನಂತೆ ಹೊರಗೆ ಸಂಚಾರ ಹೊರಡದೆ ಎರಡನೆಯ ಅ೦ತಸ್ತಿನ ಮಚ್ಚಿನಮೇಲೆ ನಿಂತನು. ಎಷ್ಟು ಹೊತ್ತಾದರೂ ಕೆಳಕ್ಕೆ ಬರಲಿಲ್ಲ.ಬೆಳಗಾಗುತ್ತಾ ಬಂದಿತು.ಇವಳ ಮನಸ್ಸು ಕಳವಳಿಸುತ್ತಿದ್ದಿತು.
{{gap}}ಆಗ ನಾಗವಲ್ಲಿಯು ಮೆಲ್ಲನೆ ಎರಡನೆಯ ಅ೦ತಸ್ತಿನ ಕೆಳಗೆ ನಿ೦ತು, ನಿಶ್ಯಬ್ದವಾಗಿರುವ ಸಮಯದಲ್ಲಿ' ತಾನು ಕಾಡನ್ನು ಹೊಕ್ಕುದು ಮೊದಲುಗೊಂಡು, ಇಳಿಜಾರಾದ ಬೆಟ್ಟವನ್ನು ಹತ್ತಿದುದು, ಕುಣಿದಾಡುವ ಕತ್ತಿಗಳನ್ನು ದಾಟಿದುದು, ಕುದಿವ ನೀರನ್ನು ಅಣಗಿಸಿದುದು, ಇವೇ ಮುಂತಾದ ತನ್ನ ಕಥೆಯನ್ನೆಲ್ಲಾ ಒಂದು ಗಾನವನ್ನು ಮಾಡಿ, ಅದನ್ನು ಬಹು ಮಧುರ ಧ್ವನಿಯಿಂದ ಹಾಡಿದಳು. ಆ ಗಾನವನ್ನು ಕೊನೆಯವರೆಗೂ ಕೇಳಿ, ರಾಜಕುಮಾರನು ತನ್ನ ಪ್ರಿಯೆಯು ಇಲ್ಲಿಯೇ ಬಂದಿರುವಳೆಂದು ತಿಳಿದು ಒಡನೆಯೆ ಕೆಳಕ್ಕಿಳಿದು ಬಂದು ಅಲ್ಲಿ ನಾಗವಲ್ಲಿ ಇದ್ದುದನ್ನು ನೋಡಿ ಬಹು ಸಂತೋಷಪಟ್ಟನು.
{{gap}}ಆಗ ನಾಗರಾಜನು ತಾನು ಕಾಡಿನಲ್ಲಿ ಕಾದಿದ್ದುದು, ತರುವಾಯ ನಾಗಕನ್ನೆಯ ವಶವಾದುದು, ಅವಳು ಮದುವೆಯಾಗಬೇಕೆಂದು ಬಲತ್ಕಾರಿಸಿದುದು, ಅದಕ್ಕಾಗಿ ತಾನು ಯೋಚಿಸುತಿದ್ದುದು, ಇವೇ ಮುಂತಾದ ತನ್ನ ವೃತ್ತಾಂತವನ್ನೆಲ್ಲಾ ಹೇಳಿ ನಾಗವಲ್ಲಿಯನ್ನು ಸಮಾಧಾನಪಡಿಸಿದನು.'ನಾಗರಾಜ! ನಾವಿನ್ನು ಇಲ್ಲಿರುವುದು ಸರಿಯಲ್ಲ, ನನ್ನಲ್ಲಿ ಆ ಖುಷಿಯು ಆಶೀರ್ವದಿಸಿ ಕೊಟ್ಟಿರುವ ಒಂದು ಪದಾರ್ಥವಿರುವುದು. ಅದನ್ನು ಈಗ ಉಪಯೋಗಿಸಬಹುದು ಎಂದು ತನ್ನಲ್ಲಿದ್ದ ಒಂದು ಸಣ್ಣ ಪೆಟ್ಟಿಗೆಯನ್ನು ತೆಗೆದಳು. ಅದರಲ್ಲಿ ಒಂದು ವಿಧವಾದ ಸಿದ್ಧರಸವು ಇದ್ದಿತು. ಆದನ್ನು ನಾಗರಾಜಕುಮಾರ ನಾಗವಲ್ಲಿಯರು ಕಾಲಿಗೆ ಹಚ್ಚಿ ಕೊಂಡರು. ಆ ರಸವು ಇವರಿಗೆ ಗಂಧರ್ವರ೦ತೆ ಆಕಾಶದಲ್ಲಿ ಸಂಚಾರಮಾಡುವ ಶಕ್ತಿಯನ್ನು ಕೊಟ್ಟಿತು. ಅಲ್ಲಿಂದ ಇಬ್ಬರೂ ಹೊರಟು ಬರುತ್ತಿರುವಾಗ ದಾರಿಯಲ್ಲಿ ಆ ಖುಷಿಯ ಪಣ೯ಶಾಲೆ ಸಿಕ್ಕಿತು. ಅಲ್ಲಿಳಿದು, ಋಷಿಗೆ ಇಬ್ಬರೂ ನಮಸ್ಕರಿಸಿದರು. ನಾಗವಲ್ಲಿಯು ನಡೆದುದನ್ನೆಲ್ಲಾ ಖುಷಿಗೆ ತಿಳಿಸಿದಳು. ಋಷಿಯು<noinclude></noinclude>
d719cmdtujvifk3ta8ebtbq8p0uvq4w
ಪುಟ:ಕಥಾವಳಿ.djvu/೨೯
104
45089
321410
279460
2026-05-20T10:29:38Z
Pragathi. BH
7585
/* Validated */
321410
proofread-page
text/x-wiki
<noinclude><pagequality level="4" user="Pragathi. BH" /></noinclude>{{center|೧೪}}
ನಾಗವಲ್ಲಿಯ ಸಾಹಸಕ್ಕೆ ಮೆಚ್ಚಿ ಆಶೀರ್ವದಿಸಿ, ಅವರಿಬ್ಬರನ್ನೂ ನಕುಲ ರಾಯನಲ್ಲಿಗೆ ಕಳುಹಿಸಿಕೊಟ್ಟನು. ಅಲ್ಲಿ ನಾಗರಾಜಕುಮಾರ ನಾಗವಲ್ಲಿಯರಿಗೆ ಮದುವೆಯು ಬಹು ಸಂಭ್ರಮದಿಂದ ನೆರವೇರಿತು.
{{rule}}
{{center|'''೧೦. ಕಾಗೆಯೂ ಗುಬ್ಬಿಯೂ.'''}}
{{gap}}ಒಂದು ದಿನ ಬೆಳಿಗ್ಗೆ ಒಂದು ಬಾವಿಯ ಕಟ್ಟೆಯ ಮೇಲೆ ಒಂದು ಗುಬ್ಬಿಯು ಕುಳಿತುಕೊಂಡು ತನ್ನ ಗರಿಯನ್ನು ಸರಿಮಾಡಿಕೊಳ್ಳುತಿದ್ದಿತು. ಆಗ ಒಂದು ಕಾಗೆಯು ಎಲ್ಲಿಂದಲೋ ಹಾರಿ ಬಂದು ಅಲ್ಲಿಯೇ ಕುಳಿತು, ತನ್ನ ಕೊಕ್ಕನ್ನು ಮಸೆಯುತ್ತಾ ಹಾಗೆಯೇ ಸ್ವಲ್ಪ ತನ್ನ ಕತ್ತನ್ನು ಸೊಟ್ಟ ಮಾಡಿಕೊಂಡು, ರೆಕ್ಕೆಯನ್ನು ನೋಡಿಕೊಳ್ಳುತಿದ್ದಿತು. ಆಗ ಗುಬ್ಬಿಯು ಕಾಗೆಯನ್ನು ನೋಡಿ- ಏನೇ, ಕಾಗಕ್ಕ ! ನಿನ್ನ ಗರಿ ಏನು ಚೆನ್ನಾಗಿದೆ ಎಂದು ನೋಡಿಕೊಳ್ಳುತ್ತೀಯೆ ? ಹೇಳು -ಎಂದಿತು.
{{gap}}ಇದನ್ನು ಕೇಳಿ ಕಾಗೆಯು- ನಿನ್ನದೇನು ಚೆನ್ನಾಗಿದೆ ಹೇಳು?ಎಂದಿತು. ಗುಬ್ಬಿಯು-ನನ್ನ ಗರಿಯೆ ! ನಿನ್ನ ಗರಿಯ ಬಣ್ಣ ಸೊಗಸಾಗಿದೆ- ಎಂದಿತು. ಕಾಗೆಯು-ನನ್ನ ಗರಿಯ ಬಣ್ಣವೇ ಸೊಗಸು-ಎಂದಿತು. ಹೀಗೆ ಕಾಗೆಯೂ ಗುಬ್ಬಿಯ ಬಹಳ ಹೊತ್ತು ಜಗಳವಾಡುತ್ತಿದ್ದುವು.
{{gap}}ಕೊನೆಗೆ ಕಾಗೆಯು-ಎಲೆ, ಗುಬ್ಬಕ್ಕ ! ನೀನು ಸಾವಿರ ಹೇಳಿಕೆ" ನನಗೇನು ! ಇರುವುದನ್ನು ಹೇಳುತ್ತೇನೆ, ಕೇಳು, ಬಿಸಿಲು ಕಾಲಕ್ಕೆ ನಿನ್ನ ಗರಿ ತಡೆದರೂ ತಡೆಯಬಹುದು. ಚಳಿಗಾಲ ಬಂದರೆ, ನೀನು ನಡುಗುತ್ತ ಕೂತಿರುವುದೇ, ನಾನು ಹಾರಾಡುತಿರುವುದೇ ? ಎ೦ದು ಭರನೆ ಹಾರಿ ಹೆಯಿತು.<noinclude></noinclude>
eaf6jfsccxg6zkfb5304kanb1u7uwed
ಪುಟ:ಕಥಾವಳಿ.djvu/೩೦
104
45090
321411
279282
2026-05-20T10:29:52Z
Pragathi. BH
7585
/* Validated */
321411
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=|center='''೧೧ ನಾಯಿಯ ಕಥೆ'''|right=}}
{{gap}} ಒಬ್ಬ ದೊರೆಯು ಒಂದು ದಿನ ಬೇಟೆಗಾಗಿ ಬಹುಮಂದಿಯೊಡನೆ ಒಂದು ಕಾಡಿಗೆ ಹೊರಟನು. ಕಾಡಿನಲ್ಲಿ ಇಬ್ಬರು ಮಾತ್ರ ಒಂದು ಜಿಂಕೆ ಯನ್ನು ಅಟ್ಟಿಕೊಂಡು ಮುಂದೆ ಮುಂದೆ ಹೋದರು, ಜಿಂಕೆಯು ಸಿಕ್ಕ ಲಿಲ್ಲ. ಆಗ ಅವರವರಿಗೆ ಜಗಳಬಂದು, ಒಬ್ಬನು ತನ್ನ ಜತೆಗಾರನನ್ನು ಹೊಡೆದು ಕೊಂದು ಹಿಂದಿರುಗಿ ಬಂದು ಗುಂಪನ್ನು ಸೇರಿದನು.
{{gap}}ಸತ್ತವನ ನಾಯಿ ಮಾತ್ರ ತನ್ನ ಯಜಮಾನನ ಹೆಣದ ಬಳಿಯಲ್ಲಿಯೇ ಕಾದಿದ್ದಿತು. ಮಾರನೆಯ ದಿನ, ಒಂದು ಕಾಡುಹಂದಿಯನ್ನು ಅಟ್ಟಿಕೊಂಡು ದೊರೆಯೇ ಆ ಮಾರ್ಗವಾಗಿ ಬಂದನು. ಅಲ್ಲಿ ಬಿದ್ದಿದ್ದ ಹೆಣವನ್ನು ನೋಡಿ ತನ್ನ ಕಡೆಯವನೆಂದು ತಿಳಿದು, ಒಪ್ಪಮಾಡಿಸಿ, ಆ ನಾಯಿಯನ್ನು ಕರೆದುಕೊಂಡು ಹಿಂದಿರುಗಿದನು.
{{gap}}ಅವನು ಸತ್ತ ಬಗೆಯನ್ನು ತನ್ನ ಪಾಳಯದಲ್ಲಿ ದೊರೆಯು ವಿಚಾರಿಸಲು ಯಾರೂ ಹೇಳಲಿಲ್ಲ. ಕೊಂದವನು ತಲೆ ಮರೆಸಿಕೊಂಡು ಇದ್ದನು. ಕೆಲವು ದಿನಗಳಾದುವು. ದೊರೆಯ ಬಳಿಯಲ್ಲಿಯೇ ಈ ನಾಯಿ ಇದ್ದಿತು. ಒಂದು ದಿನ ತನ್ನ ಯಜಮಾನನನ್ನು ಕೊಂದವನು ದೊರೆಯ ಹತ್ತಿರಕ್ಕೆ ಒಂದು ಕೆಲಸಕ್ಕಾಗಿ ಬರಲು, ನಾಯಿಯು ಅವನಮೇಲೆ ಬಿದ್ದಿತು ; ದೊರೆಯು ಆಗ ಅವನನ್ನು ಹಿಡಿಸಿ ಬೆದರಿಸಲು, ಅವನು ನಡೆದುದನ್ನೆಲ್ಲಾ ನಿಜವಾಗಿ ಹೇಳಿಬಿಟ್ಟನು. ಬಳಿಕ ದೊರೆಯು ಅವನಿಗೆ ಶಿಕ್ಷೆಮಾಡಿದನು.
{{rh|left=|center=———————|right=}}
{{rh|left=|center='''೧೨. ಎರಡು ನದಿಗಳು'''.|right=}}
{{gap}} ಒಂದು ದೊಡ್ಡ ಬೆಟ್ಟದಲ್ಲಿ ಹತ್ತಿರ ಹತ್ತಿರ ಎರಡು ನದಿಗಳು ಹುಟ್ಟಿ ಹರಿಯಲಿಕ್ಕೆ ಮೊದಲಾದುವು.
{{gap}}ಒಂದು ನದಿಯು ಬಹಳ ಎತ್ತರವಾದ ಸ್ಥಳದಲ್ಲಿ ಹುಟ್ಟಿತಾದುದರಿಂದ ಗುಡ್ಡದಿಂದ ಗುಡ್ಡಕ್ಕೆ ಬಿದ್ದು, ಧಡಧಡನೆ ಹರಿಯುತಿದ್ದಿತು.ಇನ್ನೊಂದು<noinclude></noinclude>
d8pb5uzuflwos3q1py6bukdewhus4c5
ಪುಟ:ಕಥಾವಳಿ.djvu/೩೧
104
45091
321412
279384
2026-05-20T10:30:19Z
Pragathi. BH
7585
/* Validated */
321412
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=|center='''೧೬'''|right=}}
ಸ್ವಲ್ಪ ಕೆಳಗಡೆ ಸಮನಾದ ಸ್ಥಳದಲ್ಲಿ ಹುಟ್ಟಿತಾದುದರಿಂದ ಅಲ್ಲಲ್ಲಿ ನಿಂತು ಮೆಲ್ಲಮೆಲ್ಲನೆ ಹರಿಯುತಿದ್ದಿತು.
{{gap}}ಸರಸರನೆ ಹರಿದು ಹೋಗುತ್ತಿದ್ದ ನದಿಯು, ಇನ್ನೊಂದನ್ನು ನೋಡಿ 'ಏನು ! ಸೋಮಾರಿಯಂತೆ ತೆವಳಿಕೊಂಡು ಮೆಲ್ಲಗೆ ಹೋಗುತಿದ್ದೀಯೆ ? ನನ್ನನ್ನು ನೋಡು ! ಇನ್ನು ಸ್ವಲ್ಪದೂರ ಹೀಗೆ ಹೋಗಿ ದೊಡ್ಡ ಹೊಳೆಯಾಗಿ ಹರಿದು, ಅನೇಕ ದೇಶಗಳಲ್ಲಿ ಪ್ರವಹಿಸಿ, ಕಾಲುವೆಗಳನ್ನು ಕೊಟ್ಟು ರೈತರಿಗೆ ಬೇಕಾದುದನ್ನೆಲ್ಲಾ ಬೆಳೆಯಲೂ ಸಹಾಯವಾಗಿ, ಅನೇಕ ಸಣ್ಯ ಸಣ್ಣ ನದಿಗಳೊಡನೆ ಕೂಡಿ ಸಮುದ್ರವನ್ನು ಸೇರುವೆನು ' ಎಂದು ಹರಿದು ಮುಂದೆ ಮುಂದೆ ಹೋಗುತಿದ್ದಿತು.
{{gap}}ಮೆಲ್ಲಗೆ ಹರಿಯುತಿದ್ದ ನದಿಯು ಯಾವ ಉತ್ತರವನ್ನು ಕೊಡದೆ ತನ್ನ ಪಾಡಿಗೆ ತಾನು ಮೆಲ್ಲನೆ ಹರಿದು ಬಯಲಿಗೆ ಬೀಳಲು, ಇತರ ಸಣ್ಣ ಸಣ್ಣ ನದಿಗಳು ಬಂದು ಇದರೊಡನೆ ಸೇರಿದುವು. ಆಗ ಇದು ದೊಡ್ಡ ಹೊಳೆಯಾಗಿ, ಜನರಿಗೆ ಬಹು ಉಪಯೋಗವಾಗಿ, ಗಂಭೀರವಾಗಿ ಹರಿಯುತಿದ್ವಿತು. ಮೊದಲುಡಂಭವನ್ನು ಮಾಡಿಕೊಂಡು ಮುಂದಾಗಿ ಬಂದ ನದಿಯೂ ಸ್ವಲ್ಪದೂರದಲ್ಲಿಯೇ ಇದನ್ನು ಸೇರಿ, ಇದರ ಮೇಲೆ ಹೋಗುತಿದ್ದ ಹಡಗುಗಳನ್ನೂ ಇದಕ್ಕೆ ಕಟ್ಟಿದ್ದ ಅಣೆಕಟ್ಟು ಸೇತುಗಳನ್ನೂ ನೋಡಿ ನಾಚಿಕೊಂಡು ಈ ದೊಡ್ಡ ಹೊಳೆಯಲ್ಲಿಯೆ ಅಡಗಿಹೋಯಿತು.
{{rh|left=|center='''——————'''|right=}}
{{gap}}{{rh|left=|center='''೧೩, ಸುಳ್ಳು ಹುಡುಗ.'''|right=}}
{{gap}} ಒಂದು ಕಾಡಿನ ಹತ್ತಿರ ಒಂದು ಸಣ್ಣ ಊರು ಇದ್ದಿತು. ಆ ಊರಿನ ದನಗಳನ್ನು ಅಟ್ಟಿ ಕೊಂಡು ಸವಿಾಪವಾಗಿದ್ದ ಒಂದು ಹುಲ್ಲುಗಾವಲಿಗೆ ಒಬ್ಬ ಹುಡುಗನು ಪ್ರತಿದಿನವೂ ಹೋಗುತಿದ್ದನು.
{{gap}}ಒಂದು ದಿವಸ ಸಾಯಂಕಾಲದ ಹೊತ್ತಿನಲ್ಲಿ ಆ ಹುಡುಗನು ಊರ ಬಿಳಿಗೆ ಬಂದು 'ಓ ಹುಲಿ ಬಂದಿತು ; ಬಂದಿತೋ ; ಎಂದು ಬಿಡದೆ<noinclude></noinclude>
o117hj7a41y5e5sncey1ns2fe1r7upx
ಪುಟ:ಕಥಾವಳಿ.djvu/೩೨
104
45092
321413
279583
2026-05-20T10:30:42Z
Pragathi. BH
7585
/* Validated */
321413
proofread-page
text/x-wiki
<noinclude><pagequality level="4" user="Pragathi. BH" /></noinclude>
{{rh|left=|center='''೧೭'''|right=}}
ಗಟ್ಟಿಯಾಗಿ ಅರಚಿಕೊಂಡನು.ಊರಜನರು ಅವನ ಕೂಗನ್ನು ಕೇಳಿ ಮಾಡುತ್ತಿದ್ದ ಕೆಲಸವನ್ನು ಹಾಗೆಯೇ ಬಿಟ್ಟು, ಈಟಿದೊಣ್ಣೆಗಳನ್ನು ತೆಗೆದುಕೊಂಡು ಅಲ್ಲಿಗೆ ಓಡಿಬಂದರು.ಜನರು ಬೇಗ ಬೇಗ ಬರುವುದನ್ನು ನೋಡಿ ಆ ಹುಡುಗನು ನಗುತ ನಿಂತನು. ಜನರೆಲ್ಲರೂ ಅವನನ್ನು ಬೈಯ್ಯುತ್ತಾ ಹಿಂದಿರುಗಿದರು.<br />
{{gap}}ಇನ್ನೊಂದು ದಿನ ಸಂಜೆಯಲ್ಲಿ ನಿಜವಾಗಿಯೂ ಹುಲಿಬಂದಿತು.
ಅದೇ ಹುಡುಗನು ಆ ಹೊತ್ತೂ ಒಂದೇ ಉಸಿರಿನಲ್ಲಿ ಗಟ್ಟಿಯಾಗಿ ಕಿರಿಚಿಕೊಂಡನು. ಊರ ಜನರೆಲ್ಲರೂ ಕೇಳಿದರು. ಆದರೂ ಅದು ಸುಳ್ಳಿರಬಹುದೆಂದು ಯಾರೂ ಅತ್ತಲಾಗಿ ಹೋಗಲೇ ಇಲ್ಲ. ಹುಲಿಯು ಬಂದು ಅವನ ಹಸುವನ್ನು ಎತ್ತಿಕೊಂಡು ಹೊರಟೇಹೋಯಿತು.<br />
{{Css image crop
|Image = ಕಥಾವಳಿ.djvu
|Page = 32
|bSize = 398
|cWidth = 80
|cHeight = 51
|oTop = 246
|oLeft = 159
|Location = center
|Description =
}}
{{center|'''೧೪. ಚಿಕ್ಕ ದೇವರಾಜವೊಡೆಯರು.'''}}
{{gap}}ನಮ್ಮ ಈ ಮಹಿಸೂರು ಸಂಸ್ಥಾನವನ್ನು ಹಿಂದೆ ಮಹಾಶೂರರಾದ
ಅನೇಕ ರಾಜರುಗಳು ಆಳಿರುವರು. ಅವರಲ್ಲಿ ಚಿಕ್ಕದೇವರಾಜ ಒಡೆಯರೆಂಬವರೊಬ್ಬರು. ಇವರು ಬಹು ಸಮರ್ಥರು. ಇವರ ಕಾಲದಲ್ಲಿಯೇ ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಮದ್ದಗಿರಿ ಇವು ಮಹಿಸೂರು ಸಂಸ್ಥಾನಕ್ಕೆ ಸೇರಿದುವು. ಊರಿಂದೂರಿಗೆ ಕಾಗದ ಪತ್ರಗಳನ್ನು ಸಾಗಿಸುವ
ಅಂಚೆ (ಪೋಸ್ಟ್) ಕಛೇರಿಯನ್ನು ಏರ್ಪಡಿಸಿದವರೂ ಇವರೇ. ರಾತ್ರಿ ವೇಳೆ
ಕಳ್ಳರು ಕಾಕರು ಪ್ರಜೆಗಳಿಗೆ ಹಿಂಸೆಕೊಡದಂತೆ ನೋಡಿಕೊಳ್ಳಲು,ಕೊತ್ವಾಲ,
ಕಳ್ಳಭಂಟ, ದಂಡಿ ಮುಂತಾದವರನ್ನು ಇವರೇ ಮೊದಲು ಗೊತ್ತು ಮಾಡಿದವರು. ರೈತರೆಲ್ಲರೂ ಕ್ರಮವಾಗಿ ತಾವು ಬೆಳೆದ ಬೆಳೆಯಲ್ಲಿ ಒಂದು ಪಾಲನ್ನು
ಸರಕಾರಕ್ಕೆ ಕೊಡಬೇಕೆಂದು ಕಟ್ಟು ಮಾಡಿದವರೂ ಇವರೇ. ಹೀಗೆ ಕಟ್ಟು
ಮಾಡಲು, "ಕಾಡು ಭೂಮಿಯನ್ನು ಬಸವಣ್ಣ ಉಳುತ್ತಾನೆ, ದೇವೇಂದ್ರ
ಮಳೆಯನ್ನು ಕರೆಯುತ್ತಾನೆ; ನಾವು ಕಷ್ಟಪಟ್ಟು ಬೆಳೆಮಾಡಿ ದೊರೆಗೇಕೆ
{{left|'''೩'''}}<noinclude></noinclude>
s5puxti24swpkq0qd8ippupe1jz83dd
ಪುಟ:ಕಥಾವಳಿ.djvu/೩೪
104
45094
321414
279250
2026-05-20T10:31:10Z
Pragathi. BH
7585
/* Validated */
321414
proofread-page
text/x-wiki
<noinclude><pagequality level="4" user="Pragathi. BH" /></noinclude>
{{center|೧೯}}
{{gap}}ಇವರ ಸಾಹಸಕ್ಕೂ ಆಳುವಿಕೆಗೂ ಮೆಚ್ಚಿ ದೆಹಲೀ ಚಕ್ರವರ್ತಿಯು ಇವರಿಗೆ 'ರಾಜಾ ಜಗದೇಕ್ ' ಎಂಬ ಬಿರುದನ್ನು ಕೊಟ್ಟನಲ್ಲದೆ, ನಗಾರಿ ನವಪತ್ತು ಮರ್ಯಾದೆ ಗಳನ್ನೂ ಜಂತದ ಒಂದು ಸಿಂಹಾಸನವನ್ನೂ ಕಳುಹಿಸಿ ಕೊಟ್ಟನು ಇವರು ಬಹುಕಾಲ ಸುಖವಾಗಿ ಮಹಿಸೂರರಾಜ್ಯವನ್ನಾಳಿದರು.
{{Css image crop
|Image = ಕಥಾವಳಿ.djvu
|Page = 34
|bSize = 398
|cWidth = 80
|cHeight = 59
|oTop = 129
|oLeft = 156
|Location = center
|Description =
}}
{{center|೧೫, ಬಕಾಸುರನ ಕಥೆ.}}
{{gap}}ಮಕ್ಕಳಿರಾ, ನೀವೂ ಬಕಾಸುರನ ಹೆಸರನ್ನು ಕೇಳಿರಬಹುದು, ಎಷ್ಟು ತಿಂಡಿಯನ್ನು ಕೊಟ್ಟರೂ ಬಕಬಕನೆ ಮುಕ್ಕಿಬಿಟ್ಟು, ಇನ್ನಿಷ್ಟು ಕೊಡು, ಮತ್ತಿಷ್ಟು ಕೊಡು, ಎಂದು, ಚಂಡಿ ಹಿಡಿವ ಹುಡುಗರಿಗೆ ' ಇದೇನು ಬಕಾ ಸುರನ ಹಾಗೆ ಆಡುತ್ತಾನೆ ? ' ಎನ್ನುವುದನ್ನು ನೀವು ಕೇಳಲಿಲ್ಲವೆ ? ಆ ಬಕಾಸುರನ ಕಥೆಯನ್ನು ಈಗ ಹೇಳುವೆನು ಕೇಳಿ:- ಆ ಬಕಾಸುರನು ಒಬ್ಬ ದೊಡ್ಡ ರಾಕ್ಷಸನು. ಅಬ್ಬಬ್ಬ ! ಅವನ ಹೆಸರನ್ನು ಕೇಳಿದರೆ ಮೈ ನಡು ಗುತ್ತಿದೆ ! ಆ ರಾಕ್ಷಸನು ಒಂದಾನೊಂದು ಕಾಲದಲ್ಲಿ ಏಕಚಕ್ರ ಸರಿ ಎಂಬ ಒಂದು ಊರಿನ ಹತ್ತಿರ ಒಂದು ಗವಿಯಲ್ಲಿ ವಾಸಮಾಡಿಕೊಂಡಿದ್ದನು. ಅವನು ಪ್ರತಿದಿವಸವೂ ಏಕಚಕ್ರಪುರಿಗೆ ಬಂದು ಬೇಕಾದುದನ್ನೆಲ್ಲಾ ತಿಂದು ಜನರನ್ನು ಕೊಂದು ರಕ್ತವನ್ನು ಹೀರಿ ಹೋಗುತ್ತಿದ್ದನು. ಕೆಲವು ಕಾಲದ ಲ್ಲಿಯೇ ಊರು ಬರಿದಾಗುತ್ತಾ ಬಂದಿತು. ಆಗ ಉಳಿದ ಜನರೆಲ್ಲರೂ ಸೇರಿ ಗಡಗಡನೆ ನಡಗುತ್ತಾ, ಬಕಾಸುರನು ಬರುವ ವೇಳೆಗೆ ಸರಿಯಾಗಿ, ದೂರ ದಲ್ಲಿ ಅಡ್ಡಬಿದ್ದು ಹೋ ಎಂದು ಮೊರೆಯಿಟ್ಟರು. ಆ ಗೋಳನ್ನು ಕೇಳಿ, ರಾಕ್ಷಸನ ಮನಸ್ಸು ಸ್ವಲ್ಪ ಕರಗಿತು. ಆಗ ರಾಕ್ಷಸನು--ನಿತ್ಯವೂ ತಪ್ಪದೆ ನೀವು ಒಂದು ಗಾಡಿ ಅನ್ನ, ಒಂದು ಗಾಡಿ ತಿಂಡಿ, ಒಂದು ಭಂಡಿಯತುಂಬ ಪಾನಕ, ನೀರು ಮಜ್ಜಿಗೆ, ಒಬ್ಬ ಮನುಷ್ಯ ಇಷ್ಟನ್ನೂ ನನಗೆ ಕೊಡುವದಾ ದರೆ ನಿಮಗೆ ಈಗ ಕೊಡುತ್ತಿರುವ ತೊಂದರೆಯನ್ನು ತಪ್ಪಿಸುವೆನು ಎಂದನು. ಅದಕ್ಕೆ ಊರಿನವರೆಲ್ಲರೂ ಒಪ್ಪಿಕೊಂಡು ಅದೇ ರೀತಿಯಲ್ಲಿ ನಡಿಸುತ್ತಾ ಬರುತ್ತಿದ್ದರು.<noinclude></noinclude>
7ltnp851pmo902rxsc01h8ryz9lptpi
ಪುಟ:ಕಥಾವಳಿ.djvu/೩೫
104
45095
321399
279304
2026-05-20T09:38:11Z
Pragathi. BH
7585
/* Validated */
321399
proofread-page
text/x-wiki
<noinclude><pagequality level="4" user="Pragathi. BH" /></noinclude>{{center|೨೦}}
{{gap}}ಒಂದು ದಿನದ ಸರದಿ ಒಬ್ಬ ಮುದುಕಿಯದಾಗಿದ್ದಿತು. ಆ ಮುದು ಕಿಗೆ ಒಬ್ಬನೇ ಒಬ್ಬ ಮಗನಿದ್ದನು, ಅವನಲ್ಲದೆ ಮತ್ತಾರೂ ಇರಲಿಲ್ಲ' ತಾನೇ ಹೋಗಿ ರಾಕ್ಷಸನಿಗೆ ತುತ್ತಾಗುವುದು ಎಂದರೆ, ಬಕನು ಮುದುಕಿ ಯರನ್ನೂ ಮಕ್ಕಳನ್ನೂ ಮುಟ್ಟುತಿರಲಿಲ್ಲ. ಮುಖ್ಯವೇನು ? ಅವರನ್ನು ತಿಂದರೆ ಅವನ ಹೊಟ್ಟೆ ತುಂಬುತ್ತಿರಲಿಲ್ಲ: ಮಗನನ್ನು ಕಳುಹಿಸಲು ಮುದುಕಿಗೆ ಮನಸ್ಸಿಲ್ಲ. ಅವಳು ಗೊಳೋ ಎಂದು ಅಳುತ್ತಿದ್ದಳು, ಊರು ಜನರು, ಮಗನನ್ನು ಅಟ್ಟಿಬಿಡಬೇಕು, ಇಲ್ಲದಿದ್ದರೆ ಊರು ಹಾಳಾಗುವುದು ಎಂದು ಮುದುಕಿಯನ್ನು ಬಲಾತ್ಕರಿಸುತಿದ್ದರು.
{{gap}}ಆ ಸಮಯಕ್ಕೆ ಸರಿಯಾಗಿ ಪಂಚ ಪಾಂಡವರಾದ ಧರ್ಮರಾಜ, ಭೀಮ, ಅರ್ಜುನ, ನಕುಲ, ಸಹದೇವ ಇವರು ತಾಯಿಯಾದ ಕುಂತೀ ದೇವಿಯೊಡನೆ ಬಂದು ಅಲ್ಲಿದ್ದರು. ಆಗ ಆ ಮುದುಕಿಯ ರೋದನವನ್ನು ಕೇಳಿ ಭೀಮನು, “ಅಮ್ಮಾ, ನಾನು ಹೋಗುವೆನು, ನಮ್ಮ ತಾಯಿಗೆ ನಾನ ಲ್ಲದೆ ಇನ್ನೂ ನಾಲ್ಕು ಮಂದಿ ಮಕ್ಕಳಿರುವರು. ನಾನು ಸತ್ತರೂ ಚಿಂತೆ ಯಿಲ್ಲ, ನೀನು ಎಲ್ಲವನ್ನೂ ಸಿದ್ಧಪಡಿಸು, ನಾನು ಹೋಗಿಬರುವೆನು' ಎಂದನು. ಮಗನ ಸಾಮರ್ಥ್ಯವನ್ನು ತಿಳಿದಿದ್ದ ಕುಂತಿಯು ಭೀಮನು ಬಕಾಸುರನಿಗೆ ತುತ್ತಾಗಿ ಹೋಗುವುದಕ್ಕೆ ಸಮ್ಮತಿಸಿದಳು. ನಾನಾ ವಿಧ ವಾದ ಹುಳಿಯನ್ನ, ಮೊಸರನ್ನ ಇವೆಲ್ಲಾ ಸಿದ್ಧವಾದುವ; ಕಡುಬು ಕಜ್ಜಾ ಯ ಇವೂ ಒದುಗಿದವ, ಪಾನಕ, ನೀರುಮಜ್ಜಿಗೆ ಇವೂ ಅಣಿಯಾದುವು. ಭಂಡಿಗಳು ಸಿದ್ದವಾದುವು. ಭೀಮನೂ ಹೊರಟನು.
{{gap}}ಹೋಗು ಹೋಗುತ ಹಸಿದಿದ್ದ ಭೀಮನು ಒಂದೊಂದುಬಗೆಯಅನ್ನವನ್ನಾಗಿ ತಿಂದು ಮುಗಿಸಿ, ಕಡುಬು ಕಜ್ಜಾಯಗಳನ್ನು ನಿಧಾನವಾಗಿ ಮೆದ್ದು, ಗಟ ಗಟನೆ ಪಾನಕ ನೀರುಮಜ್ಜಿಗೆಗಳನ್ನು ಕುಡಿದು ತೃಪ್ತನಾಗುವ ಹೊತ್ತಿಗೆ ಮಧ್ಯಾಹ್ನವಾಗಿ ಹೋಯಿತು. ಬಕಾಸುರನಿಗೆ, ಆಹಾರವು ಅಂದು ಅಷ್ಟು ಹೊತ್ತಾದರೂ ಬರಲಿಲ್ಲವೆಂದು, ಬಹು ಕೋಪಬಂದಿತು. ಹಸಿವಿನಿಂದ ಕೋಪವು ಅತಿಯಾಗಿ, ಅವನು ಭೂಮಿಯನ್ನು ಅಪ್ಪಳಿಸುತ್ತಿದ್ದನು. ಅಷ್ಟುಹೊತ್ತಿಗೆ ಭಂಡಿಗಳು ನಿಧಾನವಾಗಿ ಬರುತ್ತಿದ್ದುದನ್ನು ನೋಡಿ ಒಂದುಸಲ ಗರ್ಜನಮಾ ಡಿದನು. ಆ ಗರ್ಜನೆಗೆ ಭೀಮನು ಹೆದರಲಿಲ್ಲ, ಭೀಮನು ತಿಂದು ಹೊ<noinclude></noinclude>
1wxu4hby1xmgwpmk1po8py7dt7p7b5t
ಪುಟ:ಕಥಾವಳಿ.djvu/೩೬
104
45096
321400
279373
2026-05-20T09:38:34Z
Pragathi. BH
7585
/* Validated */
321400
proofread-page
text/x-wiki
<noinclude><pagequality level="4" user="Pragathi. BH" /></noinclude>
{{center|೨೧}}
ಟ್ಟೆಯನ್ನು ಸವರಿಕೊಳ್ಳುತಿದ್ದನು. ಇದನ್ನು ಬಕಾಸುರನು ಕಂಡು,'ಎಲಾ! ಎಲಾ! ನರಾಧಮ,ನಿನ್ನನ್ನು ಮೊದಲು ತಿಂದು, ಆಮೇಲೆ, ಊಟ ಮಾಡುವೆನು. ತರುವಾಯ ಇಷ್ಟು ಸಾವಕಾಶಮಾಡಿದುದಕ್ಕಾಗಿ ಈ ಪಟ್ಟಣವನ್ನೇ ಸುಟ್ಟುಬಿಡುವೆನು,'ಎಂದು ಆರ್ಭಟಿಸಿ,ಭೀಮನನ್ನು ಭಂಡಿಯಿಂದ ಈಚೆಗೆ ಸೆಳೆಯ ಹೋದನು.ಭೀಮನು ಅಲ್ಲಾಡಲಿಲ್ಲ, ಆಗ ಬಕನಿಗೆ ಇನ್ನೂ ಕೋಪ ಹೆಚ್ಚಿ ಭಂಡಿಯನ್ನು ಒಡೆದು ಪುಡಿ ಪುಡಿಮಾಡಿದನು.ಭೀಮನು ಮೆಲ್ಲನೆ ಈಚೆಗೆ ಬಂದು ನಿಂತನು.ಆಗ ಇಬ್ಬರಿಗೂ ಭಯಂಕರವಾದ ಹೊಡೆದಾಟವ್ರ ಆರಂಭವಾಯಿತು, ಒಂದೊಂದಾವೃತ್ತಿ ಭೂಮಿಯನ್ನು ತುಳಿದರೆ ಭೂಮಿಯಲ್ಲಾ ನಡುಗಿಹೋಗುತಿದ್ದಿತು.ಅದೇನೋ ಅನರ್ಥ ನಡೆಯುತ್ತಿದೆ ಎಂದು ದೂರದಲ್ಲಿದ್ದ ಏಕಚಕ್ರನಗರಿಯ ಜನರೆಲ್ಲ ಮನೆಯಲ್ಲಿಯೇ ಅಡಗಿಕೊಂಡಿದ್ದರು. ಭೀಮ ಬಕರ ಹೋರಾಟವು ಹೆಚ್ಚಿ ಭೀಮನಿಗೆ ಬಕನು ಒಂದು ಗುದ್ದನ್ನು ಗುದ್ದಿದನು. ಭೀಮನು-ಆ8 | ನಾನು ತಿಂದುದೆಲ್ಲ ಜೀರ್ಣಕ್ಕೆ ಬಂದಿತು. ಇನ್ನು ಪಟುವಾಗಿ ಯುದ್ಧ ಮಾಡುವೆನು ಎಂದು ಬಕನೊಡನೆ ಯುದ್ದಮಾಡಿ ಅವನಿಗೆ ಒಂದು ಬಲವಾದ ಗುದ್ದನ್ನು ಹಾಕಿ ಕೆಡವಿ ಅವನ ಪ್ರಾಣವನ್ನೇ ತೆಗೆದನು.ಬಳಿಕ ಬಕನು ಆ ಉದ್ದದಿಂದ ಈ ಉದ್ದದವರೆಗೂ ಕಾಲು ಚಾಚಿಕೊಂಡು ಬಿದ್ದನು.
{{gap}}ಈ ಗದ್ದಲವು ನಿಂತ ಬಹು ಹೊತ್ತಿನಮೇಲೆ ಊರ ಜನರೆಲ್ಲರೂ ಮೆಲ್ಲ ಮೆಲ್ಲನೆ ಅಲ್ಲಲ್ಲಿ ಸುಳಿದಾಡುತ ರಾಕ್ಷಸನು ಬಿದ್ದಿದ್ದು ದನ್ನೂ ಭೀಮನು ಸುಖ ವಾಗಿ ಓಡಾಡುತಿದ್ದುದನ್ನೂ ಕಂಡರು. ತರುವಾಯ ಅವರೆಲ್ಲರೂ ಬಹು ಸಂತೋಷದಿಂದ ಬಂದು ಭೀಮನನ್ನು ಕೊಂಡಾಡಿ- ಅ೦ತಹ ಮಗನನ್ನು ಪಡೆದ ಕುಂತಿಯು ಎಂತಹ ಧನ್ಯಳೊ! ನಮ್ಮ ಪಟ್ಟಣವನ್ನೇ ಉಳುಹಿದನಲ್ಲ! ಎಂದು ಹೊಗಳುತ, ಭೀಮನೊಡನೆ ಸುಖವಾಗಿ ಪಟ್ಟಣಕ್ಕೆ ಹಿಂದಿರುಗಿದರು.
{{Css image crop
|Image = ಕಥಾವಳಿ.djvu
|Page = 36
|bSize = 398
|cWidth = 47
|cHeight = 41
|oTop = 459
|oLeft = 174
|Location = center
|Description =
}}
{{center|'''೧೬, ಮಾವಿನಗಿಡ, ಗೊಬ್ಬಳಿಯಗಿಡ.'''}}
{{gap}}ಒಂದಾನೊಂದು ಪಟ್ಟಣವಿದ್ದಿತು, ಆ ಪಟ್ಟಣಕ್ಕೆ ಸವಿಾಪವಾಗಿಯೇ ಒಂದು ಉದ್ಯಾನವನ, ಆ ವನದಲ್ಲಿ ಮಲ್ಲಿಗೆ, ಜಾಜಿ, ಸಂಪಿಗೆ, ಗುಲಾಬಿ<noinclude></noinclude>
ryj8cvetlzqm0btxgpgju820yy4gp1m
ಪುಟ:ಕಥಾವಳಿ.djvu/೩೭
104
45097
321401
279398
2026-05-20T09:38:51Z
Pragathi. BH
7585
/* Validated */
321401
proofread-page
text/x-wiki
<noinclude><pagequality level="4" user="Pragathi. BH" /></noinclude>{{center|೨೨}}
ಇವೇ ಮುಂತಾದ ಒಳ್ಳೆಯ ಹೂವಿನ ಬಳ್ಳಿಗಳೂ, ಗಿಡಗಳೂ; ತೆಂಗು, ಮಾವು, ಹಲಸು, ಕಿತ್ತಿಳೆ, ನಿಂಬೆ, ಬಾಳೆ ಇವೇ ಮುಂತಾದ ಹಣ್ಣಿನ ಗಿಡ ಗಳೂ; ಗಿಳಿ, ನವಿಲು, ಪಾರಿವಾಳ ಇವೇ ಮೊದಲಾದ ಪಕ್ಷಿಗಳೂ ತುಂಬಿದ್ದುವು. ಇ೦ತಹ ಮನೋಹರವಾದ ಉದ್ಯಾನವನದಲ್ಲಿ ಒಂದು ಮಾವಿನ ಮರದ ಬಳಿ ಒಂದೇ ಒಂದು ಗೊಬ್ಬಳಿಯ ಗಿಡವಿತ್ತು, ಆ ಮಾವಿನಮರದಲ್ಲಾದರೂ ಬೇಕಾದಷ್ಟು ಹಣ್ಣುಗಳು ಇದ್ದುವು, ಆ ಹಣ್ಣುಗಳನ್ನು ತೆಗೆದು ತಿನ್ನ ಬೇಕೆಂದು ಬಂದವರ ಕಾಲಿಗೆ, ಆ ಗೊಬ್ಬಳಿಯ ಮರದ ಸುತ್ತಲೂ ಉದಿರಿದ್ದ ಮುಳ್ಳು ಚುಚ್ಚಿಕೊಳ್ಳುತ್ತಿತ್ತು. ಹಣ್ಣು ಸಿಕ್ಕದೆ ಮುಳ್ಳು ಚುಚ್ಚಿದ ವ್ಯಥೆಯಿಂದ ಎಲ್ಲರೂ ಹಿಂದಿರುಗುತ್ತಿದ್ದರು. ಇದನ್ನು ಕಂಡು, ಮಾವಿನ ಮರಕ್ಕೆ ಬಹು ಕೋಪವ್ರಂಟಾಗಿ, ಅದು ಗೊಬ್ಬಳಿಯ ಮರವನ್ನು ಕುರಿತು—ಛೇ ! ಪಾಪಿ! ನೀನಂತೂ ಹಣ್ಣು ಬಿಡುವುದಿಲ್ಲ, ನನ್ನಲ್ಲಿರುವ ಸವಿಯಾದ ಹಣ್ಣನ್ನು ತಿಂದು ಆನಂದಪಡಲು ಬರುವವರನೂ, ನೀನು ಸೇರ ಗೋಡೆಯಲ್ಲ ! ನೀನು, ನನಗೂ ಜನರಿಗೂ ಎಂತಹ ಕಂಟಕನಾಗಿರುವೆ ! ನಿನಗಿಂತಲೂ ಕಂಟಕರಾದವರು ಯಾರಾದರೂ ಉಂಟೆ ? ಈ ಪ್ರಣ್ಯಭೂಮಿಯಲ್ಲಿ ನಿನಗೇನು ಕೆಲಸ ? ನೀನು ಏಕೆ ಬೇಗ ಸಾಯಬಾರದು !- ಎಂದು ಬಹು ಕಠಿನವಾಗಿ ಜರಿಯಿತು
{{gap}}ಅದಕ್ಕೆ ಗೊಬ್ಬಳಯು ಕೋಪಗೊಂಡು 'ಎಲೆ ಮಾವಿನಮರವೇ ! ನಿನಗೇಕೆ ಇಷ್ಟು ಅಹಂಕಾರ ! ನಿನ್ನ ಹಣ್ಣು ಇರುವುದೆಲ್ಲ ಇನ್ನೆಷ್ಟು ದಿನ ! ನಿನ್ನಲ್ಲಿ ಒಂದುವರ್ಷ ಹೆಚ್ಚಾಗಿ ಹಣ್ಣು ಬಿಟ್ಟರೆ ಇನ್ನೊಂದುವರ್ಷ ಎಲೆಯೂ ಕೊಂಬೆಯೂ ಹೆಚ್ಚಾಗಿ ಬಿಡುತ್ತವೆ ! ನೀನೇ ಟೊಳ್ಳು ! ನೀನು ಜನರಿಗೆ ಮಾಡುವ ಅಂತಹ ದೊಡ್ಡ ಉಪಕಾರವೇನು ? 'ನನ್ನ ನೆರಳಲ್ಲಿ ಜನರು ಕೂಡುವರೆಂಬೆಯೋ ?' ಆಗಬಹುದು ಆಗಬಹುದು ! ನಿನ್ನ ಮೇಲೆ ಹರಿ ದಾಡುವ ಕೆಂಜಿಗದ ಕಡಿತವನ್ನು ಕಾಣದ ಬೆಪ್ಪರು ಹಾಗೆ ಕೊಡಬೇಕು ! 'ಗಿಣಿಗಳು! ಕೋಗಿಲೆಗಳು ! ಬಂದು ನನ್ನ ಮೇಲೆ ಕೂಡುವುವು ಎಂಬೆಯೋ?' ಅಹುದು ಅಹುದು ! ನಿನ್ನ ಅಹಂಕಾರವನ್ನು ನೋಡಿ ನಿನ್ನ ಹಣ್ಣನ್ನು ಕಡಿದು ಛಿನ್ನ ಭಿನ್ನ ಮಾಡಲು ಗಿಳಿಗಳು ಬರುವುವು. ಸಾಕಿದವನನ್ನು ಕಚ್ಚಿ ಅಟ್ಟುವ ಕೆಲಸದಲ್ಲಿ ನಿಪುಣತೆಯುಳ್ಳ ಕೋಗಿಲೆಗಳು ನಿನ್ನ ಮರೆ<noinclude></noinclude>
ivak7vbq9e92z9kbarkn4gqgymd6fjh
ಪುಟ:ಕಥಾವಳಿ.djvu/೩೮
104
45098
321402
279375
2026-05-20T09:39:22Z
Pragathi. BH
7585
/* Validated */
321402
proofread-page
text/x-wiki
<noinclude><pagequality level="4" user="Pragathi. BH" /></noinclude>{{center|೨೩}}
ಬೀಳುವುವು,ಮೋಸಗಾರರಿಗಲ್ಲವೆ ನೀನು ಆಶ್ರಯ? ನನ್ನನ್ನು ನೋಡು!ನನ್ನ ಹೂವನ್ನು ನೋಡು,ಎಷ್ಟು ಸುಗಂಧವುಳ್ಳುದಾಗಿರುವುದು! ನನ್ನಕಾಯನ್ನು ನೋಡು,ಎಷ್ಟು ಉಪಯೋಗವಾಗಿರುವುದು!'ನಿನ್ನ ಮುಳ್ಳನ್ನು ನೋಡು' ಎಂದರೆ ಅಹುದು; ಮುಳ್ಳಿರುವುದು ಕಷ್ಟವು ಬೆರೆಯದ ಸುಖವೆಲ್ಲಿರುವುದು? ಮುಳ್ಳಿಲ್ಲದ ಗುಲಾಬಿ ಎಲ್ಲಿ ನಾನು ಬಹುಗಟ್ಟಿ, ನನ್ನಿಂದ ಬೇಕಾದ ಮುರಮುಟ್ಟುಗಳಾಗುವವ; ನನ್ನನು ಅರಿಯದ ಜನರು ಬೇಗನೆ ಕಡಿದುಹಾಕುವರು. ಆದುದರಿಂದ ದೇವರು ನನ್ನ ರಕ್ಷಣೆಗಾಗಿ ಮುಳ್ಳನ್ನು ಕೊಟ್ಟಿರುವನು. ಈ ಹೊತ್ತಿಗಾಯಿತು, ನಾಳೆಯಿ೦ದ ಇ೦ತಹ ಮಾತನಾಡಬೇಡ ' ಎ೦ದಿತು.<br />
{{gap}}ಇದಕ್ಕೆ ಮಾವಿನಮರವ-“ ನಮ್ಮ ವಂಶಕ್ಕೆ ಮೃತ್ಯುವಾದ ನಿನ್ನೊಡನೆ ನನಗೇನುಮಾತು? ನೀನು ಜನೋಪಕಾರಿ ಎಂದು ಹೇಳಿಕೊಂಡರೆ ಜನರು ನಂಬುವರೆ? ನನ್ನಯೋಗ್ಯತೆಯನ್ನು ಹೊಗಳಲು ಮನುಷ್ಯರಲ್ಲಿ ಶ್ರೇಷ್ಟರಾದ ಕವಿಗಳು ಇರುವರು; ಪಕ್ಷಿಗಳಲ್ಲಿ ಕೋಗಿಲೆಗಳಿರುವುವು; ನೀನು ನನ್ನನ್ನು ಸ್ತೋತ್ರಮಾಡ ಬೇಕೆಂದಿಲ್ಲ, ಕೈಯಲ್ಲಾದರೆ ಪರೋಪಕಾರ ಮಾಡಬೇಕು, ಇಲ್ಲದಿದ್ದರೆ ಉಪಕಾರ ಹೊಂದತಕ್ಕವರಿಗೆ ಕಂಟಕನಾಗಿ ಬಾರದೆ, ತಟಸ್ಥನಾಗಿರಬೇಕು, ನಿನ್ನ ಬಾಳು ಎಂತಹ ಬಾಳು ಹೇಳು" ಎಂದು ಮಾವಿನಮರವು ಸುಮ್ಮನೆ ಆಯಿತು.
{{center|———————}}
{{center|'''೧೭, ಕೋಳಿಯೂ-ರತ್ನವೂ.'''}}
{{gap}} ಒಂದು ಹೆಣ್ಣು ಕೋಳಿಯು ತನ್ನ ಮರಿಗಳನ್ನೆಲ್ಲಾ ಜತೆಯಲ್ಲಿ ಕರೆದು ಕೊಂಡು ತಾಸಿದ್ದ ಅಂಗಳದಲ್ಲಿದ್ದ ಕಸ ಕಡ್ಡಿಯನ್ನು ಕಾಲಿನಿಂದ ಕೆದಕುತ್ತಾ ಕೊಕ್ಕಿನಿಂದ ಕುಕ್ಕುತ್ತಾ ಕೊ ಕ್ಕೊ ಎಂದು ಗಂಟಲಲ್ಲಿ ಕೂಗುತ್ತಾ ಅಲ್ಲಲ್ಲಿಯೇ ಸುತ್ತಾಡುತಿದ್ದಾಗ ಆ ಕಸದಲ್ಲಿ ಒಂದು ಕಡ್ಡಿಯ ಕೆಳಗೆ ಥಳಥಳನೆ ಹೊಳೆಯುತ್ತಿದ್ದ ಒಂದಾನೊಂದು ವಸ್ತುವನ್ನು ಕಂಡಿತು.
{{gap}}ಆಗ ಬಹು ಸಡಗರದಿಂದ, ರೆಕ್ಕೆಯನ್ನು ಬಡಿಯುತ್ತಾ ಕತ್ತನ್ನು ಎತ್ತಿ ಕೊ, ಕೆ,ಎಂದು ಗಟ್ಟಿಯಾಗಿ ಕೂಗಿ ಕಿಚ್,ಕಿಚ್,ಕಿಚೆನ್ನುತ<noinclude></noinclude>
hwmrh0oo9oky3ugt9uawkqtsnh04zu6
ಪುಟ:ಕಥಾವಳಿ.djvu/೩೯
104
45099
321403
279289
2026-05-20T09:39:50Z
Pragathi. BH
7585
/* Validated */
321403
proofread-page
text/x-wiki
<noinclude><pagequality level="4" user="Pragathi. BH" /></noinclude>{{center|೨೪}}
ಬಂದ ತನ್ನ ಮರಿಗಳೊಡನೆ ದೊಡ್ಡ ದೊಡ್ಡ ಹಜ್ಜೆಯನ್ನಿಟ್ಟುಕೊಂಡು ಬೇಗನೆ ಆ ಸ್ಥಳಕ್ಕೆ ಹೋಗಿ, ಕಾಲಿನಿಂದ ಕೆದಕಿ, ಥಳಥಳಿಸುತ್ತಿದ್ದುದನ್ನು ಕೊಕ್ಕಿನಿಂದ ತೆಗೆದುಕೊಂಡಿತು.{{center|}}
{{gap}}ಅಯ್ಯೋ ಪಾಪ ! ಅದು ಒಂದು ರತ್ನ ! ಅದರ ಬೆಲೆಯನ್ನು ಕೋಳಿ ಏನು ಬಲ್ಲದು ? ಅದನ್ನು ನೋಡಿ ಕೋಳಿಗೆ ಬಹು ದುಃಖವಾಯಿತು. ಆ ಥಳಥಳಿಸುತ್ತಿದ್ದ ಕೆಂಪನ್ನು ಉಗುಳಿ ಇದಕ್ಕಿಂತಲೂ ಒಂದು ಕಡಲೆ ಕಾಳಾಗಲಿ ಹೆಸರು ಕಾಳಾಗಲಿ ಸಿಕ್ಕಿದ್ದರೆ ನನಗೆ ಸಂತೋಷವಾಗುತ್ತಿತ್ತು? ಎಂದು ಕೊಳ್ಳುತ್ತಾ ಆ ತಿಪ್ಪೆಯಲ್ಲಿಯೆ ಕಾಳು ಕಡ್ಡಿಯನ್ನು ಹುಡುಕಾಡುತಿದ್ದಿತು.{{center|}}
{{center|'''೧೮.ಇರುವೆಯೂ- ಚಿಮ್ಮಂಡೆ ಹುಳುವೂ.'''}}{{gap}}ಚಳಿಗಾಲದಲ್ಲಿ ಒಂದು ದಿನ ಇರುವೆಗಳು ತಾವ ತಿಂಡಿಯನ್ನು ಕೂಡಿ ಹಾಕಿದ್ದ ಗೂಡಿಗೆ ಹೋಗಿದ್ದುವು, ಅಲ್ಲಿಗೆ ಒಂದು ತಾರಿ ಬಡಕಲಾದ ಚಿಮ್ಮಂಡೆ ಹುಳುವು ಬಂದು ' ನಾನು ಹಸಿವಿನಿಂದ ಸಂಕಟಪಡುತ್ತಿದ್ದೇನೆ. ತಿನ್ನುವುದಕ್ಕೆ ಏನಾದರೂ ಸ್ವಲ್ಪ ಕೊಡಿ' ಎಂದು ಇರುವೆಗಳನ್ನು ಕೇಳಿ ಕೊಂಡಿತು{{gap}}.
{{gap}}ಇರುವೆಗಳು-' ಏಕೆ ! ನೀನು ಕೂಡಿಹಾಕಿದ್ದುದು ಏನಾಯಿತು ? ನೀನು ಬೇಸಗೆಯಲ್ಲಿ ಕಾಳು ಕಡ್ಡಿಯನ್ನು ಕೂಡಿಹಾಕಲಿಲ್ಲವೆ ?” ಎಂದು ಕೇಳಿದುವ, ಅದಕ್ಕೆ ಚಿಮ್ಮಂಡೆ ಹುಳವು- ಅಯ್ಯೋ ! ನನಗೆ ಹೊತ್ತೇ ಇರಲಿಲ್ಲ. ಬೇಸಗೆಯು ಬಹು ಚೆನ್ನಾಗಿದ್ದಿತು. ನಾನು ಮೂರು ಹೊತ್ತೂ ಹಾಡುತ್ತಲೆ ಕಾಲವನ್ನು ಕಳೆದೆನು ” ಎಂದಿತು. “ ಓಹೋ ! ಸರಿ, ಸರಿ : ಬೇಸಗೆಯಲ್ಲೆಲ್ಲಾ ಹಾಡಿದುದಾಯಿತು. ಈಗ ಚಳಿಗಾಲದಲ್ಲಿ ಹೊಟ್ಟೆಗಿಲ್ಲದೆ ಕುಣಿವುದಕ್ಕೆ ಹೊರಟಿದ್ದೀಯೆ ? ' ಎಂದು ಇರುವೆಗಳು ಅಪಹಾಸ್ಯ ಮಾಡಿ ನಕ್ಕುವು.<noinclude></noinclude>
jt9avsw3kinsv31e7ed84lhg3r4952t
ಪುಟ:ಕಥಾವಳಿ.djvu/೪೦
104
45100
321404
279291
2026-05-20T09:48:06Z
Pragathi. BH
7585
/* Validated */
321404
proofread-page
text/x-wiki
<noinclude><pagequality level="4" user="Pragathi. BH" /></noinclude>{{center|}}{{center|}}೨೫
{{center|}}೧೯, ಅಭಿಮನ್ಯುವಿನ ಕಥೆ.
{{gap}} ಅಭಿಮನ್ಯುನ ಅರ್ಜುನನ ಮಗನು. ಅರ್ಜುನನು ಪಂಚಪಾಂಡವರೆಂಬ ಐದುಮಂದಿ ಅಣ್ಣ ತಮ್ಮಂದಿರಲ್ಲಿ ಒಬ್ಬನು. ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ, ಇವರೇ ಪಂಚಪಾಂಡವರು. ಇವರಿಗೂ ಇವರಿಗೂ ಇವರ ದಾಯಾದಿಗಳಾದ ರಾಜ್ಯಕ್ಕಾಗಿ ದೊಡ್ಡ ಯುದ್ಧವು ನಡೆಯಿತು. ಆ ಯುದ್ಧದಲ್ಲಿ ಒಂದು ದಿನ ಮಗುವಾದ ಅಭಿಮನ್ಯುವು ತೋರಿಸಿದ ಪರಾ ಕ್ರಮವನ್ನು ಈ ಹೊತ್ತು ಹೇಳುವೆನು ಕೇಳಿ.
{{center|}}ಕೌರವರಿಗೆಲ್ಲಾ ದುರ್ಯೋಧನನು ದೊರೆಯು. ದುರ್ಯೋಧನನ ಕಡೆ ಬಹು ಶಕ್ತರಾದ ದ್ರೋಣ, ಕೃಪ, ಅಶ್ವತ್ಥಾಮ, ಕರ್ಣ, ಶಲ್ಯ, ಸೈಂಧವ ಇವರೇ ಮುಂತಾದ ಮಹಾ ಶೂರರೂ, ಅನೇಕಸೈನಿಕರೂ ಇದ್ದರು, ಯುದ್ಧವು ನಡೆಯುತ್ತಿದ್ದಿತು. ದ್ರೋಣಾಚಾರ್ಯರು ಸೇನಾಧಿಪತಿಯಾಗಿದ್ದರು. ಅಂದು ಪಾಂಡವರನ್ನು ಸೋಲಿಸುವೆನೆಂದು ಹಟವನ್ನು ಮಾಡಿದ್ದರು. ಅದಕ್ಕಾಗಿ ಸೈನ್ಯದಿಂದಲೆ ಒಂದುಬಲವಾದ ಕೋಟೆ ಕಟ್ಟಿದ್ದರು. ಆ ಕೋಟೆಯೊಳಗೆ ನುಗ್ಗಿ ಹೆಡೆಯಲು ಅರ್ಜುನನಿಗೂ, ಅವನ ಸಾರಥಿ ಶ್ರೀ ಕೃಷ ನಿಗೂ ಗೊತ್ತು ಇದ್ದಿತು; ಧರ್ಮರಾಜ ಭೀಮರಿಗೆ ತಿಳಿದಿರಲಿಲ್ಲ. ಕೌರವರು ಉಪಾಯದಿಂದ ಅರ್ಜುನನನ್ನು ಬೇರೆ ಕಡೆ ಯುದ್ಧಕ್ಕೆ ಸೆಳೆದು,ಧರ ರಾಜಭೀಮರಿಗೆ ಈ ಕೋಟೆಯೊಳಕ್ಕೆ ಬಂದು ಯುದ್ಧ ಮಾಡುವಂತೆ ಹೇಳಿ ಕಳುಹಿಸಿದರು, ಕ್ಷತ್ರಿಯರು ಯುದ್ಧಕ್ಕೆ ಬರಲಾರೆವೆಂದು ಹೇಳಿ ಕಳುಹಿಸಲು ಆದೀತೆ? ಆಗ ಏನು ಮಾಡಬೇಕು?ಅರ್ಜುನನಾದರೋ ಬೇರೆ ಹೋಗಿದ್ದನು. ಭೀಮನಿಗೆ ಗದೆ ತಿರುಗಿಸಿ ಶತ್ರುಗಳನ್ನು ಕೊಲ್ಲಲು ಬರುತ್ತಿದ್ದಿತೇ ಹೊರತು ಅ೦ತಹ ಕೋಟೆಯನ್ನು ಬಾಣದಿಂದ ಭೇದಿಸಲು ಬಾರದು.ನಕುಲ ಸಹದೇವರು ಅಷ್ಟು ಸಮರ್ಥರಾಗಿರಲಿಲ್ಲ. “ಏನು ಮಾಡುವುದು?” ಎಂದು ಧರರಾಯನು ಯೋಚಿಸುತ್ತಿದ್ದಾಗ, ಅಲ್ಲಿ ಓಡಾಡುತ್ತಿದ್ದ ಅಭಿಮನ್ಯುವ, ಧರ್ಮರಾಯನಿಗೆ ನಮಸ್ಕರಿಸಿ, “ನನಗೆ ಅಪ್ಪಣೆಯನ್ನು ಕೊಡಬೇಕು, ನಾನು ಆ ಕೋಟೆಯನ್ನು ಮುರಿದು ಕೌರವ ಸೈನ್ಯವನ್ನು ಧ್ವಂಸವಾಡಿ, ಅತಿರಥ ಮಹಾರಥರನ್ನು ಸೋಲಿಸಿ, ಜಯಶಾಲಿಯಾಗಿ ಬರುವೆನು, ಎಂದನು. ಅದಕ್ಕೆ ಧರ್ಮರಾಯ ನೀನು ಮಗು, ನಿನಗೆ ಸಾಧ್ಯವೆ ? ಯುದ್ದದಲ್ಲಿ<noinclude></noinclude>
2l6r718aizqcx3hbyf073om5uog5knv
ಪುಟ:ಕಥಾವಳಿ.djvu/೪೧
104
45101
321405
279389
2026-05-20T10:26:04Z
Pragathi. BH
7585
/* Validated */
321405
proofread-page
text/x-wiki
<noinclude><pagequality level="4" user="Pragathi. BH" /></noinclude>{{center|}}೬೨{{center|}}
ಚತುರನಾದ ನಿಮ್ಮ ತಂದೆಗಲ್ಲದೆ ಇನ್ನಾರಿಗೂ ಸಾಧ್ಯವಲ್ಲಪ್ಪ 1 ರಣಧೀರನಾದ ಭೀಮನಿಗೂ ಆದು ಕಷ್ಟ ವಾಗಿರುವುದು, ನಿನಗೇಕೆ ಇದು, ಕಂದ! ಬೇಡ !? ಎಂದು ಹೇಳಲು, ಅಭಿಮನ್ಯುವ ಕೇಳದೆ, ನನಗೆ ಅಪ್ಪಣೆಯನ್ನು ಕೊಡ ಬೇಕು, ನಾನು ಹೋಗಿ ಬರುವೆನು ' ಎಂದು ಮುಷ್ಕರ ಹಿಡಿದನು, ಆಗ ಧರ್ಮರಾಯನು ಯತ್ನವಿಲ್ಲದೆ ಅಪ್ಪಣೆಯನ್ನು ಕೊಟ್ಟು, ಆಶೀರ್ವದಿಸಿ ಕಳುಹಿಸಲು ಮಕ್ಕಳು ಚೆಂಡಾಡುವದಕ್ಕೆ ಕುಣಿಯುತ್ತಾ ಓಡುವಂತೆ ಅಭಿಮನ್ಯುವ, ಸಂತೋಷದಿಂದ ರಥವನ್ನು ಸಿದ್ಧ ಮಾಡೆಂದು ಹೇಳಿ, ಬಿಲ್ಲು ಬಾಣ ಗಳನ್ನು ತೆಗೆದುಕೊಂಡು ಹೊರಟನು. ಧರ್ಮರಾಯನು ಅವನ ಬೆಂಗಾವಲಿಗೆ ಭೀಮ, ನಕುಲ, ಸಹದೇವರನ್ನು ಕಳುಹಿಸಿದನು.
{{gap}}ಅಭಿಮನ್ಯುವು, ದ್ರೋಣಾಚಾರ್ಯ ಕಟ್ಟಿದ್ದ ಸೈನ್ಯದ ಕೋಟೆಯ ಬಳಿಗೆ ಬಂದು, ಬಾಗಿಲಲ್ಲಿ ಅದ್ಭುತಾಕಾರನಾಗಿ ನಿಂತಿದ್ದ ಸೈಂಧವನನ್ನು ಎರಡು ಬಾಣಗಳಿಂದ ಹೊಡೆದು, ಅವನು ಚೇತರಿಸುವುದರೊಳಗಾಗಿಯೇ ಒಳಕ್ಕೆ ನುಗ್ಗಿದನು, ಅಭಿಮನ್ಯುವಿನ ತರುವಾಯ ಬಂದ ಭೀಮ, ನಕುಲು ಸಹದೇವರಿಗೆ ಒಳಕ್ಕೆ ನುಗ್ಗಲು ಆಗಲಿಲ್ಲ. ಅವರು ಹೊರಗೆ ಬಡಿದಾಡುತಿದ್ದರು. ಬಾಲನಾದ ಅಭಿಮನ್ಯುವಾದರೆ, ಯಾರಿಗೂ ಅಂಜದೆ, ಎಲ್ಲೆಲ್ಲ ನುಗ್ಗುತ, ಒಂದೊಂದು ಬಾಣದಿಂದ ನೂರಾರು ಮಂದಿಯನ್ನು ಕೊಲ್ಲುತ, ಇದಿರಾಗಿ ಬಂದ ದ್ರೋಣಾಶ್ವತಾ ಮರನ್ನು ಧಿಕ್ಕರಿಸಲು, ಅವರು, ಮಗು ಏನು ಮಾಡಾನೆಂದು ಇರುವಲ್ಲಿ, ಸ್ವಲ್ಪ ಕಾಲದಲ್ಲಿಯೇ ಸಾವಿರಾರು ಮಂದಿ ಮಡಿದರು. ಜನರ ಕೋಟೆಯು ಸಡಿಲು ಬಂದಿತು. ಆಗ ಕರ್ಣನು ಬಂದನು, ಮಹಾ ಶೂರನಾದ ಆ ಕರ್ಣನನ್ನು ನಾಲ್ಕಾರು ಬಾಣಗಳಿ೦ದ ಹೊಡೆದು, ಅವನ ಕುದುರೆ, ರಥ, ಧ್ವಜ ಇವೆಲ್ಲವನ್ನೂ ನಾಶಮಾಡಿ ಅಟ್ಟಿದನು. ದೊಣ, ಕೃಪ, ಅಶ್ವತ್ಥಾಮ ಇವರೆಲ್ಲರನ, ಹಸುಳೆಯದ ಅಭಿಮನ್ನು ವಿನಸೆಟ್ಟಿಗೆ ನಿಲ್ಲಲಾರದೆ ಹೋದರು. ಅವರು ರೇಗಿ ರೇಗಿ ಮೇಲೆಬಿದ್ದ ಹಾಗೆಲ್ಲ, ಅಭಿಮನ್ಯುವ ನಗುನಗುತ ಅವರನ್ನು ಅಟ್ಟಿ, ಅವರ ರಥಗಳನ್ನು ಪುಡಿಪುಡಿಮಾಡಿ ಅವರ ಕವಚಗಳನ್ನು ಕತ್ತರಿಸಿ, ಅವರ ಬಿಲ್ಲನ್ನು ಮುರಿದು, ರಣರಂಗದಿಂದ ಅವರನ್ನು ಸಾಗಿಸುತ್ತಿದ್ದನು, ಅಭಿಮನ್ಯುವಿನ ಬಾಣಗಳ ಉರಿಯು ಎಲ್ಲೆಲ್ಲೂ ಸುಡಹತ್ತಿತು. ಆನೆ ಕುದುರೆಗಳು ಆ ಬಾಧೆಯನು<noinclude></noinclude>
fg6tlncyb43bodu6v0pcb24xita0per
ಪುಟ:ಕಥಾವಳಿ.djvu/೬೨
104
45122
321415
279347
2026-05-20T10:32:48Z
Pragathi. BH
7585
/* Validated */
321415
proofread-page
text/x-wiki
<noinclude><pagequality level="4" user="Pragathi. BH" /></noinclude>{{center|೪೬}}
ಕುಳಿತಿದ್ದುವು. ಅಷ್ಟು ಹೊತ್ತಿಗೆ ಸರಿಯಾಗಿ ಮಂತ್ರಿಶ್ರೇಷ್ಟ ನಾದ ಜಂಬು ಕನು (ನರಿಯು) ಬಂದು ರಾಜಪ್ರತ್ರರಿಗೆ ಸಮಾಧಾನವನ್ನು ಹೇಳಿ, ಹೆದರ ಬೇಡಿ ಯೆಂದು ಇತರ ಸಣ್ಣ ಸಣ್ಯ ಮೃಗಗಳಿಗೆ ಧೈರ್ಯವನ್ನು ಕೊಟ್ಟು, ಮುಂದಣ ಕ್ರಮವನ್ನು ನಡೆಸಲು, ಬಹುಬೇಗ ಒಂದು ಉಪಾಯವನ್ನು ತನ್ನೊಳಗೆ ತಾನೇ ಯೋಚಿಸಿತು. ' ಈಗಲಾದರೋ ನಮ್ಮ ಮಹಾರಾಜ ಸಿಂಹರಾಜನು ಸತ್ತು ಬಿದ್ದಿರುವನು. ಅವನಿಗೆ ಪರಮಮಿತ್ರನಾದ ನಾನು ಅವನ ಹಿರಿಯ ಮಗನಿಗೆ ಪಟ್ಟ ವನ್ನು ಕಟ್ಟಿ, ಅವನು ದೊಡ್ಡವನಾಗುವ ವರೆಗೂ ನಾನೇ ನಿಂತು ರಾಜ್ಯಭಾರವನ್ನು ಮಾಡುವುದು ಧರ್ಮ. ಆದರೆ ನನಗೆ ಸಲಹೆ ಕೊಡುವುದಕ್ಕೆ ಬರುದೇ ಹೊರತು ನಿಂತು ರಾಜ್ಯಭಾರ ವನ್ನು ಮಾಡುವುದಕ್ಕೆ ತಿ ಧರ್ಮ. ಆದರೆ ನನಗೆ ಸಲಹೆ ಕೊಡುವುದಕ್ಕೆ ಬರುವುದೇ ಹೊರತು ನಿಂತು ರಾಜ್ಯಭಾರ ವನ್ನು ಮಾಡುವುಡಕ್ಕೆ ತಿಳಿಯದು. ನನಗೆ ತಿಳಿಯದ ಕೆಲಸವನ್ನು ಮಾಡುವುದಕ್ಕೆ ತಿಳಿಯದು.ನನಗೆ ತಿಳಿಯದ ಕೆಲಸವನ್ನುಮಾಡುವುದಕ್ಕೆ ಹೋಗಿ, ನಾನು ಅವಿವೇಕಿ ಎನ್ನಿಸಿಕೊಳ್ಳಬಾರದು. ನನ್ನ ಮಂತ್ರಿ ತ್ವವೇನೋ ನನಗೆ ಉಳಿಯಬೇಕು ; ರಾಜನು ಯಾವನಾದರೇನು ?ನನ್ನಮಾತನ್ನು ಕೇಳುವವನು ಸಿಕ್ಕಿದರೆ ನನಗೆ ಬೇರೆ ದೊರೆತನವೇಕೆ ? ದೊರೆತ ನದ ಕಷ್ಟವಿಲ್ಲದೆ ದೊರೆಯ ಸುಖವನ್ನೆಲ್ಲಾ ನನ್ನ ಮನಸ್ಸು ಬಂದ ಹಾಗೆ ನಾನು ಅನುಭವಿಸಬಹುದು. ಇದಕ್ಕಾಗಿ ನಾನೇ ಮುಖ್ಯಮುಖ್ಯವಾದ ಪ್ರತಿಯೊಂದು ಜಾತಿಯ ಮೃಗದ ಬಳಿಗೂ ಹೋಗಿ--ಸಮಯವ್ರ ಹೀಗೆ ಇದೆ, ನೀನೇ ಹೇಗಾದರೂ ದೊರೆಯಾಗಬೇಕ೦ಬುದು ನನ್ನ ಮನಸ್ಸು ; ತಕ್ಕ ಪ್ರಯತ್ನವನ್ನು ಮಾಡು ಎಂದು ಹೇಳಿ ಬರುವೆನು. ಯಾರಾದರೂ ನನ್ನನ್ನೇ ಆಪ್ತನೆಂದು ಕರೆದರು ಎಂದು ಯೋಚಿಸಿ, ಹೊರಟ, ಆ ಕಾಡಿನಲ್ಲಿ ದ್ದ ಮೃಗಗಳಿಗೆಲ್ಲಾ ವರ್ತಮಾನವನ್ನು ಕೊಟ್ಟನು ಆಗ ಪ್ರತಿಯೊಂದು ಮೃ ಗವ್ರ * ಮಂತ್ರಿಯಂದರೆ ಜಂಬುಕನೇ ಮಂತ್ರಿ, ನಾನು ದೊರೆಯಾದರೆ ಅವ ನನ್ನೇ ಮಂತ್ರಿಯಾಗಿ ಇಟ್ಟುಕೊಳ್ಳುವೆನು, ನಮಗೆ ಎಂತಹ ಮಿತ್ರ, ' ಎಂದು ಕೊಂಡು ಸಿಂಹರಾಜನ ಅರಮನೆಯಾಗಿದ್ದ ಒಂದು ದೊಡ್ಡ ಗವಿಯ ಬಳಿಗೆ ಬಂದು ಸೇರಿತು. ನರಿಯ ಅಷ್ಟು ಹೊತ್ತಿಗೆ ಅಲ್ಲಿಗೆ ಬಂದು, ' ಎಲೈ, ಮೃಗಶ್ರೇಷ್ಟರಿರಾ ! ನಮ್ಮ ಮಹಾರಾಜನು ದೈವಾಧೀನನಾಗಿರುವನು. ಅವನ ಮಕ್ಕಳು ಶಕ್ತರೇ ಆದರೂ ಇನ್ನೂ ಚಿಕ್ಕವರಾಗಿರುವರು. ಅವರು ದೊಡ್ಡವರಾಗುವವರೆಗೂ ರಾಜ್ಯಭಾರವನ್ನು ನಿಮ್ಮಲ್ಲಿ ಯೋಗ್ಯರಾದವ ರಿಗೆ ಒಪ್ಪಿಸಬೇಕೆಂದು ಯೋಚಿಸಿರುವರು. ಆದುದರಿಂದ ನಿಮ್ಮಲ್ಲಿ ಶ್ರೇಷ್ಠ
{{gap}}<noinclude></noinclude>
tr4f7r6b9f2sl51tlkllpo9st2nuhvi
321416
321415
2026-05-20T10:33:15Z
Pragathi. BH
7585
321416
proofread-page
text/x-wiki
<noinclude><pagequality level="4" user="Pragathi. BH" /></noinclude>{{center|೪೬}}
ಕುಳಿತಿದ್ದುವು. ಅಷ್ಟು ಹೊತ್ತಿಗೆ ಸರಿಯಾಗಿ ಮಂತ್ರಿಶ್ರೇಷ್ಟ ನಾದ ಜಂಬು ಕನು (ನರಿಯು) ಬಂದು ರಾಜಪ್ರತ್ರರಿಗೆ ಸಮಾಧಾನವನ್ನು ಹೇಳಿ, ಹೆದರ ಬೇಡಿ ಯೆಂದು ಇತರ ಸಣ್ಣ ಸಣ್ಯ ಮೃಗಗಳಿಗೆ ಧೈರ್ಯವನ್ನು ಕೊಟ್ಟು, ಮುಂದಣ ಕ್ರಮವನ್ನು ನಡೆಸಲು, ಬಹುಬೇಗ ಒಂದು ಉಪಾಯವನ್ನು ತನ್ನೊಳಗೆ ತಾನೇ ಯೋಚಿಸಿತು. ' ಈಗಲಾದರೋ ನಮ್ಮ ಮಹಾರಾಜ ಸಿಂಹರಾಜನು ಸತ್ತು ಬಿದ್ದಿರುವನು. ಅವನಿಗೆ ಪರಮಮಿತ್ರನಾದ ನಾನು ಅವನ ಹಿರಿಯ ಮಗನಿಗೆ ಪಟ್ಟ ವನ್ನು ಕಟ್ಟಿ, ಅವನು ದೊಡ್ಡವನಾಗುವ ವರೆಗೂ ನಾನೇ ನಿಂತು ರಾಜ್ಯಭಾರವನ್ನು ಮಾಡುವುದು ಧರ್ಮ. ಆದರೆ ನನಗೆ ಸಲಹೆ ಕೊಡುವುದಕ್ಕೆ ಬರುದೇ ಹೊರತು ನಿಂತು ರಾಜ್ಯಭಾರ ವನ್ನು ಮಾಡುವುದಕ್ಕೆ ತಿ ಧರ್ಮ. ಆದರೆ ನನಗೆ ಸಲಹೆ ಕೊಡುವುದಕ್ಕೆ ಬರುವುದೇ ಹೊರತು ನಿಂತು ರಾಜ್ಯಭಾರ ವನ್ನು ಮಾಡುವುಡಕ್ಕೆ ತಿಳಿಯದು. ನನಗೆ ತಿಳಿಯದ ಕೆಲಸವನ್ನು ಮಾಡುವುದಕ್ಕೆ ತಿಳಿಯದು.ನನಗೆ ತಿಳಿಯದ ಕೆಲಸವನ್ನುಮಾಡುವುದಕ್ಕೆ ಹೋಗಿ, ನಾನು ಅವಿವೇಕಿ ಎನ್ನಿಸಿಕೊಳ್ಳಬಾರದು. ನನ್ನ ಮಂತ್ರಿ ತ್ವವೇನೋ ನನಗೆ ಉಳಿಯಬೇಕು ; ರಾಜನು ಯಾವನಾದರೇನು ?ನನ್ನಮಾತನ್ನು ಕೇಳುವವನು ಸಿಕ್ಕಿದರೆ ನನಗೆ ಬೇರೆ ದೊರೆತನವೇಕೆ ? ದೊರೆತ ನದ ಕಷ್ಟವಿಲ್ಲದೆ ದೊರೆಯ ಸುಖವನ್ನೆಲ್ಲಾ ನನ್ನ ಮನಸ್ಸು ಬಂದ ಹಾಗೆ ನಾನು ಅನುಭವಿಸಬಹುದು. ಇದಕ್ಕಾಗಿ ನಾನೇ ಮುಖ್ಯಮುಖ್ಯವಾದ ಪ್ರತಿಯೊಂದು ಜಾತಿಯ ಮೃಗದ ಬಳಿಗೂ ಹೋಗಿ--ಸಮಯವ್ರ ಹೀಗೆ ಇದೆ, ನೀನೇ ಹೇಗಾದರೂ ದೊರೆಯಾಗಬೇಕ೦ಬುದು ನನ್ನ ಮನಸ್ಸು ; ತಕ್ಕ ಪ್ರಯತ್ನವನ್ನು ಮಾಡು ಎಂದು ಹೇಳಿ ಬರುವೆನು. ಯಾರಾದರೂ ನನ್ನನ್ನೇ ಆಪ್ತನೆಂದು ಕರೆದರು ಎಂದು ಯೋಚಿಸಿ, ಹೊರಟ, ಆ ಕಾಡಿನಲ್ಲಿ ದ್ದ ಮೃಗಗಳಿಗೆಲ್ಲಾ ವರ್ತಮಾನವನ್ನು ಕೊಟ್ಟನು ಆಗ ಪ್ರತಿಯೊಂದು ಮೃ ಗವ್ರ * ಮಂತ್ರಿಯಂದರೆ ಜಂಬುಕನೇ ಮಂತ್ರಿ, ನಾನು ದೊರೆಯಾದರೆ ಅವ ನನ್ನೇ ಮಂತ್ರಿಯಾಗಿ ಇಟ್ಟುಕೊಳ್ಳುವೆನು, ನಮಗೆ ಎಂತಹ ಮಿತ್ರ, ' ಎಂದು ಕೊಂಡು ಸಿಂಹರಾಜನ ಅರಮನೆಯಾಗಿದ್ದ ಒಂದು ದೊಡ್ಡ ಗವಿಯ ಬಳಿಗೆ ಬಂದು ಸೇರಿತು. ನರಿಯ ಅಷ್ಟು ಹೊತ್ತಿಗೆ ಅಲ್ಲಿಗೆ ಬಂದು, ' ಎಲೈ, ಮೃಗಶ್ರೇಷ್ಟರಿರಾ ! ನಮ್ಮ ಮಹಾರಾಜನು ದೈವಾಧೀನನಾಗಿರುವನು. ಅವನ ಮಕ್ಕಳು ಶಕ್ತರೇ ಆದರೂ ಇನ್ನೂ ಚಿಕ್ಕವರಾಗಿರುವರು. ಅವರು ದೊಡ್ಡವರಾಗುವವರೆಗೂ ರಾಜ್ಯಭಾರವನ್ನು ನಿಮ್ಮಲ್ಲಿ ಯೋಗ್ಯರಾದವ ರಿಗೆ ಒಪ್ಪಿಸಬೇಕೆಂದು ಯೋಚಿಸಿರುವರು. ಆದುದರಿಂದ ನಿಮ್ಮಲ್ಲಿ ಶ್ರೇಷ್ಠ
{{gap}}<noinclude></noinclude>
l9hhmql10rllwc0mhw2euhv18iay0yb
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೮೩
104
45902
321397
160987
2026-05-20T09:31:26Z
Pragathi. BH
7585
/* Validated */
321397
proofread-page
text/x-wiki
<noinclude><pagequality level="4" user="Pragathi. BH" /></noinclude> 32
ಸಂಪುಟಕ್ಕೆ ಸೇರಬೇಕಾದ ಕೆಲವು ಹೊಸ ವಿಷಯಗಳನ್ನೂ ಕೆಲವು ತಿದ್ದುಪಾಡುಗಳನ್ನೂ ತಿಳಿಸಿದ್ದೇನೆ. ವೀರಶೈವಕವಿಗಳಲ್ಲಿ ಹಲವರು ಗೂಢವಾದ ವೇದಾಂತ ವಿಷಯಗಳನ್ನು -`ಲ್ಲರಿಗೂ ತಿಳವಂತೆ ಸುಲಭವಾದ ಮಾತುಗಳಲ್ಲಿ ವಚನಗಾರವಾಗಿ ಬರೆದಿದ್ದಾರೆ. ಈ ವಚನಕಾರರ ಹೆಸರು ಅಂಕಿತ ಮುಂತಾದ ವಿಷಯಗಳನ್ನು ಉದಾಹರಣಗಳೊಡನೆ ಬಂದೇ ಕಡೆ (ಪುಟಗಳು 105-124) ಸೇರಿಸಿ ಬರೆದಿದ್ದೇನೆ ಹೀಗೆಯೇ ಕೆಲವು ಪದ್ಯಗಳಲ್ಲಿ ದೊರೆವ ಕವಿಗಳ ಬಿರುದುಗಳ ವಿಷಯವಾಗಿ ಒಂದೇ ಕಡೆ (ಪುಟಗಳು 175-178) ಕೆಲವು ಮಾತುಗಳನ್ನು ಹೇಳಿದ್ದೇನೆ. ಗ್ರಂಥದ ಕೊನೆಯಲ್ಲಿ ಮೂರು ಪರಿಶಿಷ್ಟಗಳಿವೆ. ಒಂದನೆಯದರಲ್ಲಿ ಈ ಸಂಪುಟಕ್ಕೆ ಸೇರಬೇಕಾದ ಕೆಲವರು ಕವಿಗಳ ಚರಿತೆ ಹೇಳಿದೆ. ಎರಡನೆಯದರಲ್ಲಿ ಗ್ರಂಥಶುದ್ದಿಯೂ ಕೆಲವು ವಿಶೇಷವಿಷಯಗಳೂ ಉಕ್ತವಾಗಿವೆ. ಮೂರನೆಯದರಲ್ಲಿ ಈಚೆಗೆ ತಿಳಿದುಬಂದ ಬಬ್ಬ ಪುರಾತನಕವಿಯ ವಿಷಯವು ಹೇಳಿದೆ. ಆದಿಭಾಗದಲ್ಲಿ ವಾಚರ್ಯಕ್ಕಾಗಿ ಈಸಂಪುಟದಲ್ಲಿ ವಿವರಿಸಿರುವ ಕವಿಗಳ ಮತ್ತು ಗ್ರಂಥಗಳ ಹೆಸರುಗಳು ಬೇರೆಬೇರೆ ವರ್ಣಾನುಕ್ರಮವಾಗಿ ಪುಟಸಂಖ್ಯೆಯೊಡನೆ ಕೊಟ್ಟಿವೆ.<br />
{{gap}}ಈ ಸಂಪುಟದಲ್ಲಿ 15, 16, 17 ಈ ಮೂರು ಶತಮಾನಗಳಲ್ಲಿದ್ದ ಎಲ್ಲಾ ಕವಿಗಳ ವಿಷಯವೂ ಬಂದಿದೆ ಎಂದು ಧೈರ್ಯವಾಗಿ ಹೇಳಲಾರೆನು. ನನ್ನ ತಿಳಿವಳಿಕೆಗೆ ಬಂದ ಆವ ಕವಿಯ ಹೆಸರನ್ನೂ ಬಿಟ್ಟಿಲ್ಲ ಎಂದು ಮಾತ್ರ ಹೇಳಬಲ್ಲೆನು ಹೆಚ್ಚಾದ ಅಂಶಗಳು ತಿಳಿದು ಬಾರದಿರುವುದರಿಂದ ಕೆಲವರು ಕವಿಗಳ ಚರಿತೆ ಅತಿಸಂಗ್ರಹವಾಗಿ ಬರೆಯಲ್ಪಟ್ಟಿದೆ. ಕವಿಗಳ ಕಾಲವನ್ನು ನಿರ್ಧರಿಸುವುದರಲ್ಲಿ ಬೇರೆ ಆಧಾರವಿಲ್ಲದ ಕಡೆ ಪುಸ್ತಕಗಳ ಸ್ವರೂಪ, ಅಕ್ಷರದ ರೀತಿ, ಪ್ರತಿಮಾಡಿದವರು ಹೇಳುವ ಕಾಲ, ಭಾಷಾಶೈಲಿ ಮುಂತಾದುವುಗಳಿಂದ ಕಾಲವನ್ನು ಊಹಿಸಿದ್ದೇನೆ. ಸಾಧನಸಂಪತ್ತಿಯುಳ್ಳ ಮಹನೀಯರು ಈ ಕೊರತೆಗಳನ್ನು ಸಾಧ್ಯವಾದ ಮಟ್ಟಿಗೆ ನಿವಾರಣ ಮಾಡಲು ಸಹಾಯಮಾಡಿದರೆ ಬಹಳ ಉಪಕಾರವಾಗುವುದು. ಇಷ್ಟು ಕೊರತೆಗಳುಳ್ಳ ಈ ಗ್ರಂಥವನ್ನು ಏಕೆ ಇಷ್ಟ ಆತುರವಾಗಿ ಪ್ರಕಟಿಸಬೇಕು ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಅಂಕುರಿಸಬಹುದು. ಇದಕ್ಕೆ ಉತ್ತರ ವೇನೆಂದರೆ ಮನುಷ್ಯನ ದೇಹವು ಶಾಶ್ವತವಲ್ಲ ; ನಾನು ಸುಮಾರು 30<noinclude></noinclude>
mkx9jrnu1eitn48vd3vtq646w8k5po1
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೮೪
104
45903
321398
160995
2026-05-20T09:33:03Z
Pragathi. BH
7585
/* Validated */
321398
proofread-page
text/x-wiki
<noinclude><pagequality level="4" user="Pragathi. BH" /></noinclude>{{center|33}}
ವರುಷದಿಂದ ಭಾಷಾಸೇವೆಮಾಡಿ ಸಂಗ್ರಹಿಸಿದ ವಿಷಯಗಳು “ ಜೀರ್ಣ ಮಂಗೇ ಸಂಭಾಷಿತಂ '' ಎಂಬಂತೆ ವ್ಯರ್ಥವಾಗಬಾರದು ; ಅವುಗಳನ್ನು ಪ್ರಕಟಿಸಿ ಕನ್ನಡಿಗರ ಮುಂದೆ ಇಟ್ಟರೆ ಅವರು ಒಂದಾನೊಂದುಕಾಲದಲ್ಲಿ ತಪ್ಪುಗಳನ್ನು ತಿದ್ದಿ ಶುದ್ಧಮಾಡಿ ವೃದ್ಧಿಗೊಳಿಸುವ ಸಂಭವವುಂಟು-ಎಂಬುದೇ, ಆದುದರಿಂದ ಕೊರತೆಗಳಿವೆ ಎಂದು ತಿಳಿದೂ ಈ ಗ್ರಂಥವನ್ನು ಕನ್ನಡಿಗರಿಗೆ ಕಾಣಿಕೆಯಾಗಿ ಒಪ್ಪಿಸಿದ್ದೇನೆ. ಇದರಿಂದ ಕನ್ನಡ ಭಾಷೆಯ ಅಭಿವೃದ್ಧಿಗೆ ಅಲ್ಪಸ್ವಲ್ಪ ಸಹಾಯವಾದರೂ ನನ್ನ ಶ್ರಮವು ಸಾರ್ಥಕವಾಯಿತೆಂದು ಆನಂದಿಸುವೆನು ಭಾಷಾಸೇವೆಯನ್ನು ಮಾಡಬೇಕೆಂಬ ಉತ್ಕಟೇಚ್ಛೆಯಿಂದ ಈ ಗ್ರಂಥವನ್ನು ಬರೆದಿದ್ದೇನೆಯೇ ಹೊರತು ಖ್ಯಾತಿಲಾಭ ಪೂಜೆಗಳಿಗಾಗಿ ಅಲ್ಲ ಇದರಲ್ಲಿರಬಹುದಾದ ಗುಣವನ್ನು ಮಾತ್ರ ಗ್ರಹಿಸಿ ಅಭಿನಂದಿಸುವುದು ಸಹೃದಯರಾದ ಮಹನೀಯರುಗಳಿಗೆ ಸ್ವಭಾವವಾಗಿದೆ. ಆದರೂ ಇದರಲ್ಲಿರುವ ತಪ್ಪುಗಳನ್ನೂ ನಿರ್ದಾಕ್ಷಿಣ್ಯವಾಗಿ ತಿಳಿಸಿ ನನಗೂ ಕನ್ನಡಸಾಹಿತ್ಯಕ್ಕೂ ಉಪಕಾರಮಾಡಬೇಕೆಂದು ಅವರನ್ನು ಬೇಡಿಕೊಳ್ಳುತ್ತೇನೆ.
{{gap}}ಹದಿನೇಳನೆಯ ಶತಮಾನದಿಂದ ಈಚೆಗೆ ಬಾಳಿದ ಕವಿಗಳ ಚರಿತೆಯನ್ನು ಮೂರನೆಯ ಸಂಪುಟವಾಗಿ ಬರೆಯಬೇಕೆಂಬ ಕೋರಿಕೆಯಿದೆ. ಈ ಕೋರಿಕೆಯನ್ನು ದೇವರು ನೆರವೇರಿಸಬೇಕೆಂದು ಪ್ರಾರ್ಥಿಸುತ್ತೇನೆ.
{{gap}}ಈ ಸಂಪುಟವನ್ನು ತಮಗೆ ಅರ್ಪಿಸಲು ಅಪ್ಪಣೆಯನ್ನು ದಯಪಾಲಿಸಿದುದಕ್ಕಾಗಿ ಶ್ರೀಮನ್ಮಹಾರಾಜರವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ.
{{gap}}ಪ್ರಥಮಸಂಪುಟದ ವಿಷಯವಾಗಿ ಸದಭಿಪ್ರಾಯಗಳನ್ನು ತಿಳಿಸಿದ ಮಹನೀಯರುಗಳ ದ್ವಿತೀಯಸಂಪುಟದ ಮುದ್ರಣಕ್ಕೆ ಸಹಕಾರಿಗಳಾದ ಮೈಸೂರು ವಿಶ್ವವಿದ್ಯಾನಿಲಯದ ಅಧಿಕಾರಿಗಳ ಉಪಕಾರವು ಚಿರಸ್ಮರಣೀಯವಾಗಿದೆ.<noinclude></noinclude>
ix55xqkmice4c2x2se06qtjur5zlth6
ಪುಟ:ನನ್ನ ಸಂಸಾರ.djvu/೪೨
104
57325
321025
317382
2026-05-20T03:40:52Z
Shreelatha.Halemane
7642
/* Validated */
321025
proofread-page
text/x-wiki
<noinclude><pagequality level="4" user="Shreelatha.Halemane" /></noinclude>
{{rh|left=34|center=ಕಾದಂಬರಿ ಸಂಗ್ರಹ|right=}}
ತಮ್ಮ ಕೆಲಸಕ್ಕೆ ಹೊರಟುಹೋದರು.ಆಗಲೇ ರಂಗಪುರಕ್ಕೆ ಪ್ರಯಾಣ ಮಾಡಿ ಈ ಹಣದ ವಿಷಯವನ್ನು ನಿರ್ಧರಿಸಬೇಕೆಂದು ಅವರು ಆಲೋಚಿಸಿದರು. ಆಗ ಮಧ್ಯಾಹ್ನ ಒಂದು ಗಂಟೆಯ ಹೊತ್ತಾಗಿದ್ದುದರಿಂದ ರಂಗಪುರಕ್ಕೆ ರೈಲು ಹೊರಟುಹೋಗಿದ್ದಿತು. ಇನ್ನು ಸಾಯಂಕಾಲದ ರೈಲನ್ನೇ ಕಾಯಬೇಕಾಯಿತು. ನಮ್ಮ ಯಜಮಾನರು ಆದಿನ ಮಧ್ಯಾಹ್ನ ಊಟವನ್ನು ಸರಿಯಾಗಿ ಮಾಡಲಿಲ್ಲ. ಅವರು ಏನೋಚಿಂತಿಸುತ್ತಾ ನಮ್ಮ ಕಿರುಮನೆಯಲ್ಲಿ ಮಲಗಿಕೊಂಡಿದ್ದರು. ನಾನೂ ನನ್ನ ಕೆಲಸಕಾರ್ಯಗಳನ್ನು ಮಾಡಿಕೊಂಡು ಸಹನೆಯಿಂದ ನನ್ನ ಸ್ವಾಮಿಯು ಮಲಗಿದ್ದ ಸ್ಥಳಕ್ಕೆ ಹೋಗಿ ಕುಳಿತೆನು. ಅಲ್ಲಿ ಕುಳಿತೊಡನೆಯೇ ನನಗೆ ಬಹು ದುಃಖಬಂದಿತು. ತಡೆಯಲಾರದೆ ಘಟ್ಟಿಯಾಗಿ ಅತ್ತುಬಿಟ್ಟೆನು. ನಮ್ಮ ಯಜಮಾನರು ಎದ್ದು "ಏಕೆ ! ಹೊಡೆದುಕೊಳ್ಳುತ್ತಿರುವೆ ? ಇನ್ನೂ ಸಾಯಲಿಲ್ಲವೆಂದು ಬಡಿದುಕೊಳ್ಳುವಿಯಾ ?" ಎಂದು ಕೇಳಿದರು. ನನಗಿನ್ನೂ ಹೆಚ್ಚಾಗಿ ದುಃಖ ಬಂದಿತು. ತಡೆದುಕೊಂಡು ಸ್ವಾಮಿಯ ಪಾದಗಳಮೇಲೆ ಬಿದ್ದು ಇಂತು ಪ್ರಾರ್ಥಿ ಸಿಕೊಂಡೆನು.
ಜೀವನಸರ್ವಸ್ವ !
{{gap}}ನಾನಿಂದು ಪಾದಸನ್ನಿಧಿಯಲ್ಲಿ ಮಹದಪರಾಧಮಾಡಿದವಳೆಂದು ನಿರ್ಧರ ವಾಗಿರುವುದು ಸುಯಷ್ಟೆ ? ನಾನು ತಮ್ಮ ವಿಷಯದಲ್ಲಿ ಮಹತ್ತರವಾದೆರಡು ಅಪರಾಧಗಳನ್ನು ಮಾಡಿರುವುದರಿಂದಲೇ ಈ ದಿನ ಇಂತಹ ಭಯಂಕರ ಚಿಂತೆಗೆ ಗುರಿಯಾಗಬೇಕಾಗಿ ಬಂದಿತು. ನಮ್ಮ ತಾಯಿಯು ನನ್ನ ವಶಕ್ಕೆ, ನನ್ನನ್ನು ಇಲ್ಲಿ ಬಿಟ್ಟು ಹೋಗುವ ಸಂದರ್ಭದಲ್ಲಿ ಐವತ್ತೈದು ರೂಪಾಯಿಗಳನ್ನು ಕೊಟ್ಟಿದ್ದರು. ಗೌರೀಹಬ್ಬದ ಅರಿಶಿನ ಕುಂಕುಮಕ್ಕಾಗಿ ಕಳುಹಿಸಿದ್ದ ಎರಡು ರೂಪಾಯಿ, ನನ್ನ ಮದುವೆಯಲ್ಲಿ ಆರತಿಗೆ ಹಾಕಿದ್ದ ರೂಪಾಯಿಗಳಲ್ಲಿ ನಾಲ್ಕು, ಅಲ್ಲಿ, ಇಲ್ಲಿ ಆರತಿಗಳಲ್ಲಿ ಲಭ್ಯವಾದ ಕೆಲವು ಚಿಲ್ಲರೆಗಳು, ಇಷ್ಟೂಸೇರಿ ಐವತ್ತಾರೂ ಚಿಲ್ಲರೆ ರೂಪಾಯಿಗಳನ್ನು ನಾನು ನನ್ನ ವಶದಲ್ಲಿಟ್ಟುಕೊಂಡಿದ್ದೆನು. ನಮ್ಮ ತಾಯಿಯು ನನ್ನಲ್ಲಿ ಹಣವನ್ನು ಕೊಡುವಾಗ, ಈ ವಿಷಯವನ್ನು ನಿನ್ನ ಗಂಡನಿಗೂ ಸಹ ತಿಳಿಸಬೇಡ. ತಿಳಿಸಿಬಿಟ್ಟರೆ ನಿನ್ನ ಬಳಿಯಿಂದ ತೆಗೆದುಕೊಂಡು ಏನಾದರೂ ಖರ್ಚುಮಾಡಿಬಿಡಬಹುದು. ಗಂಡಸರು ಬಹು ತಾಪತ್ರಯದವರು ಎಂದು ಹೇಳಿ ರಹಸ್ಯವಾಗಿ ಕೊಟ್ಟರು. ನನಗೆ ಆಗ ಬಹು ಸಂತೋಷವಾಗಿತ್ತು, ಹಣವನ್ನು ಇಟ್ಟುಕೊಂಡಿರುವವರು ಬಹು ದೊಡ್ಡ ಮನುಷ್ಯರೆಂದು ನನಗೆ ನಂಬಿಕೆಯಿದ್ದಿತು. ಆದುದರಿಂದ ಆ ಹಣವನ್ನು ನನ್ನಲ್ಲಿಟ್ಟುಕೊಂಡೆನು. ನಮ್ಮ ತಾಯಿಯ ಪ್ರತಿಜ್ಞಾಪಾಲನಕ್ಕಾಗಿ ನಾನು ಈ ವಿಚಾರವನ್ನು ನಿಮ್ಮೊಡನೆ<noinclude></noinclude>
1lcqsjd11jx0mdhpw5e8kiqkh3ervub
321026
321025
2026-05-20T03:41:12Z
Shreelatha.Halemane
7642
321026
proofread-page
text/x-wiki
<noinclude><pagequality level="4" user="Shreelatha.Halemane" /></noinclude>
{{rh|left=34|center=ಕಾದಂಬರಿ ಸಂಗ್ರಹ|right=}}
ತಮ್ಮ ಕೆಲಸಕ್ಕೆ ಹೊರಟುಹೋದರು.ಆಗಲೇ ರಂಗಪುರಕ್ಕೆ ಪ್ರಯಾಣ ಮಾಡಿ ಈ ಹಣದ ವಿಷಯವನ್ನು ನಿರ್ಧರಿಸಬೇಕೆಂದು ಅವರು ಆಲೋಚಿಸಿದರು. ಆಗ ಮಧ್ಯಾಹ್ನ ಒಂದು ಗಂಟೆಯ ಹೊತ್ತಾಗಿದ್ದುದರಿಂದ ರಂಗಪುರಕ್ಕೆ ರೈಲು ಹೊರಟುಹೋಗಿದ್ದಿತು. ಇನ್ನು ಸಾಯಂಕಾಲದ ರೈಲನ್ನೇ ಕಾಯಬೇಕಾಯಿತು. ನಮ್ಮ ಯಜಮಾನರು ಆದಿನ ಮಧ್ಯಾಹ್ನ ಊಟವನ್ನು ಸರಿಯಾಗಿ ಮಾಡಲಿಲ್ಲ. ಅವರು ಏನೋಚಿಂತಿಸುತ್ತಾ ನಮ್ಮ ಕಿರುಮನೆಯಲ್ಲಿ ಮಲಗಿಕೊಂಡಿದ್ದರು. ನಾನೂ ನನ್ನ ಕೆಲಸಕಾರ್ಯಗಳನ್ನು ಮಾಡಿಕೊಂಡು ಸಹನೆಯಿಂದ ನನ್ನ ಸ್ವಾಮಿಯು ಮಲಗಿದ್ದ ಸ್ಥಳಕ್ಕೆ ಹೋಗಿ ಕುಳಿತೆನು. ಅಲ್ಲಿ ಕುಳಿತೊಡನೆಯೇ ನನಗೆ ಬಹು ದುಃಖಬಂದಿತು. ತಡೆಯಲಾರದೆ ಘಟ್ಟಿಯಾಗಿ ಅತ್ತುಬಿಟ್ಟೆನು. ನಮ್ಮ ಯಜಮಾನರು ಎದ್ದು "ಏಕೆ ! ಹೊಡೆದುಕೊಳ್ಳುತ್ತಿರುವೆ ? ಇನ್ನೂ ಸಾಯಲಿಲ್ಲವೆಂದು ಬಡಿದುಕೊಳ್ಳುವಿಯಾ ?" ಎಂದು ಕೇಳಿದರು. ನನಗಿನ್ನೂ ಹೆಚ್ಚಾಗಿ ದುಃಖ ಬಂದಿತು. ತಡೆದುಕೊಂಡು ಸ್ವಾಮಿಯ ಪಾದಗಳಮೇಲೆ ಬಿದ್ದು ಇಂತು ಪ್ರಾರ್ಥಿ ಸಿಕೊಂಡೆನು.
ಜೀವನಸರ್ವಸ್ವ !
{{gap}}ನಾನಿಂದು ಪಾದಸನ್ನಿಧಿಯಲ್ಲಿ ಮಹದಪರಾಧಮಾಡಿದವಳೆಂದು ನಿರ್ಧರ ವಾಗಿರುವುದು ಸುಯಷ್ಟೆ ? ನಾನು ತಮ್ಮ ವಿಷಯದಲ್ಲಿ ಮಹತ್ತರವಾದೆರಡು ಅಪರಾಧಗಳನ್ನು ಮಾಡಿರುವುದರಿಂದಲೇ ಈ ದಿನ ಇಂತಹ ಭಯಂಕರ ಚಿಂತೆಗೆ ಗುರಿಯಾಗಬೇಕಾಗಿ ಬಂದಿತು. ನಮ್ಮ ತಾಯಿಯು ನನ್ನ ವಶಕ್ಕೆ, ನನ್ನನ್ನು ಇಲ್ಲಿ ಬಿಟ್ಟು ಹೋಗುವ ಸಂದರ್ಭದಲ್ಲಿ ಐವತ್ತೈದು ರೂಪಾಯಿಗಳನ್ನು ಕೊಟ್ಟಿದ್ದರು. ಗೌರೀಹಬ್ಬದ ಅರಿಶಿನ ಕುಂಕುಮಕ್ಕಾಗಿ ಕಳುಹಿಸಿದ್ದ ಎರಡು ರೂಪಾಯಿ, ನನ್ನ ಮದುವೆಯಲ್ಲಿ ಆರತಿಗೆ ಹಾಕಿದ್ದ ರೂಪಾಯಿಗಳಲ್ಲಿ ನಾಲ್ಕು, ಅಲ್ಲಿ, ಇಲ್ಲಿ ಆರತಿಗಳಲ್ಲಿ ಲಭ್ಯವಾದ ಕೆಲವು ಚಿಲ್ಲರೆಗಳು, ಇಷ್ಟೂಸೇರಿ ಐವತ್ತಾರೂ ಚಿಲ್ಲರೆ ರೂಪಾಯಿಗಳನ್ನು ನಾನು ನನ್ನ ವಶದಲ್ಲಿಟ್ಟುಕೊಂಡಿದ್ದೆನು. ನಮ್ಮ ತಾಯಿಯು ನನ್ನಲ್ಲಿ ಹಣವನ್ನು ಕೊಡುವಾಗ, ಈ ವಿಷಯವನ್ನು ನಿನ್ನ ಗಂಡನಿಗೂ ಸಹ ತಿಳಿಸಬೇಡ. ತಿಳಿಸಿಬಿಟ್ಟರೆ ನಿನ್ನ ಬಳಿಯಿಂದ ತೆಗೆದುಕೊಂಡು ಏನಾದರೂ ಖರ್ಚುಮಾಡಿಬಿಡಬಹುದು. ಗಂಡಸರು ಬಹು ತಾಪತ್ರಯದವರು ಎಂದು ಹೇಳಿ ರಹಸ್ಯವಾಗಿ ಕೊಟ್ಟರು. ನನಗೆ ಆಗ ಬಹು ಸಂತೋಷವಾಗಿತ್ತು, ಹಣವನ್ನು ಇಟ್ಟುಕೊಂಡಿರುವವರು ಬಹು ದೊಡ್ಡ ಮನುಷ್ಯರೆಂದು ನನಗೆ ನಂಬಿಕೆಯಿದ್ದಿತು. ಆದುದರಿಂದ ಆ ಹಣವನ್ನು ನನ್ನಲ್ಲಿಟ್ಟುಕೊಂಡೆನು. ನಮ್ಮ ತಾಯಿಯ ಪ್ರತಿಜ್ಞಾಪಾಲನಕ್ಕಾಗಿ ನಾನು ಈ ವಿಚಾರವನ್ನು ನಿಮ್ಮೊಡನೆ<noinclude></noinclude>
kouysnjlnox0m63pgxd3zqj6xqh67ee
ಪುಟ:ನನ್ನ ಸಂಸಾರ.djvu/೭೯
104
57362
321022
219256
2026-05-20T03:38:43Z
Shreelatha.Halemane
7642
/* Validated */
321022
proofread-page
text/x-wiki
<noinclude><pagequality level="4" user="Shreelatha.Halemane" /></noinclude></br>{{rh|center=ಮಧುಸೂದನ|left=|right=5}}
{{gap}} ಭಾಸ್ಕರನು ಸ್ವಲ್ಪಹೊತ್ತು ಹಾಗೇ ಯೋಚಿಸಿ ಮಧ್ಯಾಹ್ನದಮೇಲೆ ಎಲ್ಲಾ </br>ವಿಷಯಗಳನ್ನೂ ಪರೀಕ್ಷಿಸುವುದಾಗಿಯೂ ಈಗ ಹೊತ್ತಾದ್ದರಿಂದ ಭೋಜನಾದಿಗಳನ್ನು</br> ಮುಗಿಸಿಕೊಳ್ಳುವುದು ಒಳ್ಳೆಯದೆಂದೂ ತಿಳಿಸಿದನು. ಸೋಮಸುಂದರನೂ ಒಪ್ಪಿ ಅವ</br> ನನ್ನು ಸ್ನಾನಾದಿಗಳನ್ನು ಮಾಡುವಂತೆ ಹೇಳಿ ಹೊರಟುಹೋದನು.</br>
{{gap}}'''ಮೂರನೆಯ ಅಧ್ಯಾಯ.'''</br>{{gap}}____________</br>
{{gap}}(ಭಾಸ್ಕರನು ಏನು ಯೋಚಿಸಿದನು?)</br> {{gap}}ಮಧ್ಯಾಹ್ನ ಸುಮಾರು ಎರಡು ಗಂಟೆಯ ಹೊತ್ತಿಗೆ ಸೋಮಸುಂದರನೂ</br> ಭಾಸ್ಕರನೂ ಮಧುಸೂದನನ ಕೊಠಡಿಗೆ ಬಂದು ಸೇರಿದರು.</br> ಭಾಸ್ಕರನು ಸೋಮಸುಂದರನನ್ನು ಕುರಿತು "ನೀವು ಈ ಕೊಠಡಿಯ ಸಮೀಪಕ್ಕೆ ಬಂದಾಗ ಒಳಗೆ ಅಗಣಿ</br> ಹಾಕಿತ್ತೆಂದು ಹೇಳಿದಿರಲ್ಲವೆ? ಹಾಗಾದರೆ ಒಳಗಿನಿಂದ ಹೋಗಲು ಬೇರೇ ಮಾರ್ಗ</br> ವಾವುದಾದರೂ ಇರುವುದೊ ? ಇಲ್ಲದಿದ್ದರೆ ಹಾಗೆ ಒಳಗಿನಿಂದ ಅಗಣಿ</br> ಹಾಕಿರಲು ಅದು ಹೇಗೆ ಸಾಧ್ಯವು ? ಆದ್ದರಿಂದ ನಿಮಗೆ ತಿಳಿಯದ ಯಾವದೋ ಒಂದು ಮಾರ್ಗ</br>ವು ಇರಲೇಬೇಕು" ಎಂಬದಾಗಿ ಹೇಳಿದನು.</br>
{{gap}}ಸೋಮಸುಂದರ: ಸ್ವಾಮಿಾ, ನನಗೆ ತಿಳಿದಮಟ್ಟಿಗೆ ಇಲ್ಲಿ ಯಾವ ಗುಪ್ತ</br> ಮಾರ್ಗವೂ ಇಲ್ಲವು. ಇದೇ ಪ್ರಶ್ನೆಯನ್ನು ಪೋಲೀಸ್ ಮುಖ್ಯಾಧಿಕಾರಿಯೂ ನನ್ನ</br>ನ್ನು ಕೇಳಿದನು. ಈ ಮನೆಯು ನನ್ನ ಪಿತ್ರಾರ್ಜಿತವಾದುದು. ಇದರಲ್ಲಿ ಯಾವ ಗೂಢ</br> ಮಾರ್ಗವಿದ್ದರೂ ನನಗೆ ತಿಳಿದಿರಬೇಕು. ಆದರೂ ನನ್ನ ಪುತ್ರನನ್ನು ಹ್ಯಾಗೆ ಎತ್ತಿ ಕೊಂ</br>ಡು ಹೋಗಿರಬೇಕೆಂಬುವುದೂ ಒಳಗೆ ಅಗಣೀಹಾಕಿದ್ರೂ ನನಗೆ ತಿಳಿಯಲಸಾಧ್ಯವಾದ ಒಗಟಾಗಿದೆ.</br>
{{gap}}ಭಾಸ್ಕರನು ತನ್ನ ಪತ್ತೇದಾರೀ ಮಾರ್ಗದ ಹುಡುಕುವಿಕೆಯನ್ನು ಪ್ರಾರಂಭಿಸಿದನು.</br> ಅವನು ಸೋಮಸುಂದರನನ್ನು ಕುರಿತು ಅಲ್ಲಿ ಎಲ್ಲಾ ಸಾಮಾನುಗಳೂ ಮಧುಸೂದ</br>ನನು ಕಾಣದೇ ಹೋದ ದಿನ ಇದ್ದ ಹಾಗೆಯೇ ಇದೆಯೋ ಎಂದು ಕೇಳಲು, ಅವನು</br> ಪೊಲೀಸಿನವರು ತಿರಿಗಿ ಪಾಕಿದ ಪದಾರ್ಥಗಳು ವಿನಹಾ ಉಳಿದವುಗಳೆಲ್ಲಾ ಹಾಗೆಯೇ</br> ಇರುವುದೆಂದು ತಿಳಿಸಿದನು. ಭಾಸ್ಕರನು ಹಾಗೇ ಸ್ವಲ್ಪ ಹೊತ್ತು ಆ ಕೊಠಡಿಯ</br> ಆಕಾರ ಮತ್ತು ಅದರ ರಚನೆ ಇವುಗಳನ್ನು ನೋಡುತ್ತಿದ್ದನು. ಅವನಿಗೆ ಯಾವ ವಿಧ</br><noinclude></noinclude>
b0ieesinemaber9xj88sgjw505htwbb
ಪುಟ:ನನ್ನ ಸಂಸಾರ.djvu/೮೦
104
57363
321023
219271
2026-05-20T03:39:12Z
Shreelatha.Halemane
7642
/* Validated */
321023
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕಾದಂಬರೀ ಸಂಗ್ರಹ|left=6|right=}}
ವಾದ ಸುಳಿವಾದರೂ ಸಿಗಲಿಲ್ಲವು. ಕೊಠಡಿಯ ಒಂದು ಭಾಗದಲ್ಲಿ ಒಂದು ದೊಡ್ಡ</br> ಮಂಚವು ಹಾಕಲ್ಪಟ್ಟಿತ್ತು. ಭಾಸ್ಕರನ ಸೂಕ್ಷ್ಮವಾದ ಕಣ್ಣಿಗೆ ಆ ಮಂಚದ ಒಂದು</br> ಭಾಗದಲ್ಲಿ ಸ್ವಲ್ಪ ಆರಿಶಿನವು ಕಾಣಬಂದಿತು. ಭಾಸ್ಕರನು ಅದನ್ನು ತನ್ನ ಬುಕ್ಕಿನಲ್ಲಿ</br> ಬರೆದುಕೊಂಡನು. ಕೊಠಡಿಗೆಲ್ಲಾ ಮೆತ್ತನಾದ ಜಮಖಾನವನ್ನು ಹಾಸಿದ್ದರು.</br> ಅದರ ಮೇಲೇನಾದರೂ ಕಾಲಿನ ಗುರುತುಗಳು ಕಾಣುವುವೋ ಎಂದು ಬಹಳ</br> ಹೊತ್ತು ದೃಷ್ಟಿಸಿ ನೋಡಿದನು. ಏನೂ ಪ್ರಯೋಜನ ಕಂಡು ಬರಲಿಲ್ಲ. ಹಾಗೇ</br> ಮಲಗಿಕ್ಕೊಂಡು ಪರೀಕ್ಷಿಸುತ್ತಾ ಬಂದನು. ಮಂಚದ ಸವಿಾಪದಲ್ಲಿ ಸ್ವಲ್ಪ ಮಂಕು</br> ಮಂಕಾಗಿ ಎರಡು ಮೂರು ಬೂಟ್ಸ್ ಕಾಲಿನ ಗುರುತುಗಳು ಮಂಚದ ಕಡೆಗೆ ತೋರಿಸು</br>ತ್ತಿದ್ದವು. ಅದನ್ನೂ ತನ್ನ ಬುಕ್ಕಿನಲ್ಲಿ ಬರೆದುಕೊಂಡನು. ಅನಂತರ ಅವನಿಗೆ ಯಾವ</br> ಸುಳಿವಾದರೂ ಶಿಗಲಿಲ್ಲವು. ಇನ್ನು ಹುಡುಕಿ ಪ್ರಯೋಜನವಿಲ್ಲವೆಂದು ತೀರ್ಮಾನಿಸಿ</br> ಸೋಮಸುಂದರನನ್ನೂ ಸಹಾ ಹಿಂದಕ್ಕೆ ಕರೆದುಕೊಂಡು ಬಂದು ಮಾರನೇ ದಿವಸ </br>ಬೆಳಿಗ್ಗೆ ಒಂದು ಮಾತನಾಡುವುದಾಗಿ ಹೇಳಿ ಹೊರಟು ತನಗಾಗಿ ಕೊಟ್ಟಿದ್ದ ಕೊಠಡಿ</br>ಯನ್ನು ಸೇರಿ ಅಲ್ಲಿ ಒಂದು ವೇತ್ರಾಸನದ ಮೇಲೆ ಕುಳಿತುಕೊಂಡು ಯೋಚಿಸಲಾ</br>ರಂಭಿಸಿದನು.</br>
{{gap}}ಭಾಸ್ಕರನು ಯೋಚನೆಯಲ್ಲಿಯೇ ರಾತ್ರಿ ಎಂಟು ಗಂಟೆಗಳವರಿಗೆ ಕುಳಿತಿದ್ದನು.</br> ಆಗ ಹಠಾತ್ತಾಗಿ ಅವನು ಆಹಾ ! ಗೊತ್ತಾಯಿತು. ನಾನು ಈಗ ಯೋಚಿಸಿದ್ದೇ ಸರಿ</br> ಯಾಗಿರಬೇಕು. ಇರಲಿ. ಎಲ್ಲವನ್ನೂ ವಿಚಾರಿಸಿದರೆ ತಿಳಿಯುವುದು ಎಂದು ಹೇಳಿ</br> ಕೊಂಡು ಊಟಕ್ಕೆ ಹೊತ್ತಾದ್ದರಿಂದ ಎದ್ದು ಊಟಮಾಡಿ ಪುನಃ ಬಂದು ಕುಳಿತನು.</br> ಆಗ ಅವನು ಸ್ವಲ್ಪ ಹೊತ್ತು ಯೋಚಿಸುತ್ತಿದ್ದು ತನ್ನ ಪುಸ್ತಕದಲ್ಲಿ ಏನನ್ನೋ</br> ಬರೆದುಕೊಂಡು ಮಲಗಿ ನಿದ್ರೆಹೋದನು.</br>
{{gap}}ಮಾರನೇ ದಿನ ಬಳಿಗ್ಗೆ ಒಂಭತ್ತು ಗಂಟೆಯ ಸುಮಾರಿಗೆ ಭಾಸ್ಕರನು ಸೋಮ</br>ಸುಂದರನ ಕೊಠಡಿಗೆ ಹೋಗಿ ಅಲ್ಲಿದ್ದ ವೇತ್ರಾಸನದ ಮೇಲೆ ಕುಳಿತುಕೊಂಡು ಅವನು</br> ಕೊಟ್ಟ ಕಾಫಿಯನ್ನು ಕುಡಿದನು.</br>
{{gap}}ಭಾಸ್ಕರ:-ಸ್ವಮಿಾ, ನಿಮ್ಮ ಮನೆಯಲ್ಲಿ ಬಹಳ ಹಳೆಯ ಸೇವಕರಾರಾ</br>ದರೂ ಇರುವರೋ ?</br>
{{gap}}ಸೋಮಸುಂದರ :-ಆಹಾ ! ಇರುವರು, ನಮ್ಮ ತಾತನ ಕಾಲದಿಂದಲೂ ಬಂದ</br> ಮುದುಕನಾದ ಕೃಷ್ಣನೆಂಬುವನೊಬ್ಬನೂ ನನ್ನ ತಂದೆಯ ಕಾಲದಿಂದ ಬಂದ ಹೀರಣ್ಣ</br> ನೆಂಬುವನೂ ಇರುವರು.</br><noinclude></noinclude>
cwhbb4tqp2ak69xwdzjviff2xllwxo2
ಪುಟ:ನನ್ನ ಸಂಸಾರ.djvu/೮೧
104
57364
321024
311945
2026-05-20T03:39:34Z
Shreelatha.Halemane
7642
321024
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{gap}}{{rh|center=ಮಧುಸೂದನ|left=|right=7}}
{{gap}}ಭಾಸ್ಕರ:- ಅವರಿಬ್ಬರಿಗೂ ಮನೆಯ ಪ್ರತಿಯೊಂದು ಭಾಗವೂ ಚನ್ನಾಗಿ ತಿಳಿದಿದೆಯೋ?
{{gap}}ಸೋಮಸುಂದರ ಅವರಿಬ್ಬರಲ್ಲಿ ಮುದುಕನಾದ ಕೃಷ್ಣನಿಗೆ ಅನೇಕ ವಿಷಯಗಳು ತಿಳಿದಿರುತ್ತವೆ. ಈಗ ತಾನೇ ಸ್ವಲ್ಪದಿವಸಗಳ ಕೆಳಗೆ ಅವನು ನನಗೊಂದು ಗುಪ್ತಮಾರ್ಗವನ್ನು ತೋರಿಸಿದನು, ಅಲ್ಲಿಯವರಿಗೂ ಅದು ಇರುವುದಾಗಿ ನನಗೆ ತಿಳಿದೇ ಇರಲಿಲ್ಲ.ಆ ಗುಪ್ತ ಮೂರ್ಗವು ನನ್ನ ಕೊಠಡಿಯಿಂದ ಅದೋ ಅಲ್ಲಿರುವ ಕೊಠಡಿಗೆ ಭೂಮಿಯೊಳಗಿಂದ ದಾರಿಮಾಡಿಕೊಂಡು ಹೋಗುತ್ತದೆ. ಎನಲು ಇಲ್ಲಿ ನೋಡೋಣ ನೀವು ಆ ಗುಪ್ತ ಮಾರ್ಗವಿರುವ ಸ್ಥಳವನ್ನು ತೋರಿಸಿರಿ. ಎಂದುಹೇಳಿ ಭಾಸ್ಕರನು ಮತ್ತೊಂದು ಕೊಠಡಿಯಿರುವ ದಿಕ್ಕನ್ನು ನೋಡಿಕೊಂಡು ಅದಕ್ಕೆ ಸರಿಯಾಗಿ ತಾನುಕುಳಿತಿದ್ದ ಕೊಠಡಿಯ ಬಾಗಲನ್ನು ತನ್ನ ಸೂಕ್ಷ್ಮವಾದ ಕಣ್ಣಿನಿಂದ ನೋಡಿದನು. ಅಲ್ಲೊಂದು ದೊಡ್ಡದಾದ ಗುಂಡಾದ ಮೇಜುಹಾಕಿತ್ತು. ಇ೦ಥಾ ಗುಪ್ತಮಾರ್ಗಗಳ ವಿಷಯವನ್ನರಿತಿದ್ದ ಭಾಸ್ಕರನು ಅಲ್ಲೇ ಏನೋ ಗುಟ್ಟಿದೆಯಂದು ಯೋಚಿಸಿ" ಆ ಗುಪ್ತಮಾರ್ಗದ ದಾರಿಯು ಆ ಗುಂದಾದ ಮೇಜಿನಡಿಯಿಂದ ಪ್ರಾರಂಭವಾಗುತ್ತದೆಂದು ತಿಳಿಸಿದನು. ಸೋಮಸುಂದರನು ನಕ್ಕು, ಹೌದು ಅದು ಅಲ್ಲೇಇರುವುದು. ಆದರೆ ನಾನು ಹೇಳದೇ ಇದ್ದರೆ ಪತ್ತೆಯಾಗುವುದು ಆಸಾಧ್ಯವಲ್ಲವೇ" ಎಂದು ಕೇಳಿದನು.
{{gap}}ಭಾಸ್ಕರ :-ದಯವಿಟ್ಟು ಆ ಕೃಷ್ಣನೆಂಬ ಸೇವಕನನ್ನು ನನ್ನ ಕೊಠಡಿಗೆ ಕಳುಹಿಸಿರಿ, ಮತ್ತು ನಾನು ಕೇಳುವ ಪ್ರಶ್ನೆಗೆ-ಗೆಲ್ಲಾ ಸುರಿಯಾದ ಉತ್ತರವನ್ನು ಕೊಡುವಂತೆ ಹೇಳಿಕಳುಹಿಸಿ, ಎಂದು ಹೇಳಿಬಿಟ್ಟು ತನ್ನ ಕೊಠಡಿಗೆ ಹೋದನು. ಸ್ವಲ್ಪ ಹೊತ್ತಿಗೆ ಎಂಭತ್ತು ವರ್ಷ ವಯಸ್ಸಿನ ಅತಿವೃದ್ಧನೊಬ್ಬನು ಕೋಲೂರಿಕೊಡು ಕೆಮ್ಮುತ್ತಾ ಬಂದು ಭಾಸ್ಕರನಿತ್ತ ಆಸನದ ಮೇಲೆ ಕುಳಿತುಕ್ಕೊಂಡು ತನ್ನನ್ನು ಕರೆಯ ಕಳುಹಿಸಿದ ಕಾರಣವೇನೆಂದು ಕೇಳಿದನು.
{{gap}}ಭಾಸ್ಕರ :-ಅಯ್ಯಾ ನೀನು ಈ ಮನೆಯಲ್ಲಿ ಎಷ್ಟು ವರ್ಷಗಳಿಂದ ಇರುವಿ.
{{gap}}ಕೃಷ :-ಸ್ವಾಮಿಾ ನಾನು ಈ ಮನೆಯನ್ನು ನನ್ನ ಇಪ್ಪತ್ತನೇ ವರ್ಷದಲ್ಲಿಸೇರಿದೆನು. ಈಗ ನನಗೆ ಎಂಭತ್ತೆರಡು ವರ್ಷ ವಯಸ್ಸು, ಆದ್ದರಿಂದ ನಾನು ಇಲ್ಲಿ
ಅರವತ್ತೆರಡು ವರ್ಷಗಳಿಂದಿರುವೆನು. ನಾನು ಕೆಲಸಕ್ಕೆ ಸೇರಿದಾಗ ಸೋಮಸುಂದರರ ತಾತಂದಿರಿದ್ದರು. ಆಗಿನಿಂದಲೂ ನಾನು ನಂಬಿಗಸ್ತನಾಗಿ ಕೆಲಸಮಾಡುತ್ತಾ ಬಂದೆನು,ನನ್ನ ವೃದ್ಧಾಷ್ಯದಲ್ಲಿ ಇವರು ನನ್ನನ್ನು ತಮ್ಮ ಮನೆಯವರರಂತೆ ನೋಡಿಕೊಳ್ಳುತ್ತಿದ್ದಾರೆ. ಎಲ್ಲಾ ವಿಷಯಗಳೂ ನನ್ನ ಮೂಲಕವೇ ನಡೆಯಬೇಕಾಗಿದೆ, ನಮ್ಮ ಯಜಮೂನು<noinclude></noinclude>
j0gqauc95tc8o5bqptm33ld4n5vw0rx
ಪುಟ:ಮಾಲತಿ.djvu/೨೫
104
65258
321231
260820
2026-05-20T07:11:35Z
Pragathi. BH
7585
/* Validated */
321231
proofread-page
text/x-wiki
<noinclude><pagequality level="4" user="Pragathi. BH" />{{rh| |ಎರಡನೆಯ ಪರಿಚ್ಛೇದ|೧೭}}
{{custom rule|w|160|w|160|w|160|w|160}}</noinclude>ಅವನು ವಿಲಾಯಿತಿಯಿಂದ ಬರುತ್ತಲೇ ಲಗ್ನವಾಗುವುದು. ಹೋದವರ್ಷ ಅವನಿಗೆ ಪರೀಕ್ಷೆಯಾಗಲಿಲ್ಲ. ಈ ವರ್ಷ ಪರೀಕ್ಷೆಯಾಗದಿದ್ದರೆ ಬರುವುದು ಸವ್ರ ಸಾವಕಾಶವಾಗಬಹುದು. ಹಾಗಾದರೂ ಮಾಲತಿಯನ್ನು ಬೇರೆ ಕೊಟ್ಟು ಲಗ್ನವನ್ನು ಮಾಡೆನು. ಅದಕ್ಕೋಸ್ಕರವಾಗಿ ನಿನ್ನ ಕಣ್ಣಿಗೆನ್ನ ಪ್ರೇಮವು ಹೆಚ್ಚಾದಂತೆ ಕಂಡಿತೆಂದು ತೋರುತ್ತದೆ. ಈರ್ಷೆಯಿಂದ ಮನು
ಪ್ಯರು ಎಷ್ಟು ಬೇಗನೆ ಕುರುಡರಾಗುತ್ತಾರೆ ?
{{gap}}ಶೋಭನೆಯು ತನ್ನ ತಪ್ಪು ತನಗೆ ಉಂಟಾಗಿದ್ದ ಭಾ೦ತಿಮೂಲಕವಾ ದುದೆಂದು ತಿಳಿದುಕೊಂಡಳು.
{{gap}}ಯುವಕ-ಶೋಭನೆ ! ನೀನು ಹೀಗೆ ಇಲ್ಲದುದನೆಲ್ಲಾ ಭಾವಿಸಿ ಕೊಂಡು ಅನರ್ಥಕವಾಗಿ ಅಸುಖಿಯಾಗುವೆಯಲ್ಲದೆ ನನ್ನನ್ನೂ ವ್ಯಸನಕ್ಕೆ ಗುರಿಮಾಡುವೆ. ಇನ್ನು ಮುಂದೆ ಹಾಗೆ ಮಾಡಬೇಡ. ನಾನು ಏನನ್ನು ಮಾಡಿ ದರೆ ನಿನ್ನ ಅಪನಂಬಿಕೆಯು ದೂರವಾಗುವುದು, ಹೇಳು. ನಾನು ಮಾಡತ ಕುದು ಏನು? ನಿನ್ನನ್ನು ಬಿಟ್ಟು ನಾನು ಮತ್ತಾರನ್ನೂ ಹೆಚ್ಚು ಪ್ರೀತಿಸುವು ದಿಲ್ಲ. ಎಷ್ಟು ಕಾಲವಾದರೂ ಮಾಲತಿಯನ್ನು ಬಿಟ್ಟಿರುವೆನು. ನಿನ್ನನ್ನು ಬಿಟ್ಟು ಒಂದುಕ್ಷಣವಾದರೂ ಅಗಲಿರೆನು, ನಿನ್ನನ್ನು ನೋಡದಿದ್ದರೆ ನನಗೆ ಉಂಟಾ ಗುವ ಕಷ್ಟವನ್ನು ಬಣ್ಣಿಸಲಾರೆನು. ಹೊರಗೆ ಹೋಗಿ ಆ ಕೆಲಸವನ್ನು ಮಾಡುತ್ತಿದ್ದರೂ ಮನವು ನಿನ್ನ ಮೇಲಿರುವುದು. ನಿನ್ನ ಮೇಲಿನ ಜ್ಞಾನ ದಿಂದ ಮಾಡುತ್ತಿದ್ದ ಕೆಲಸವೇ ಮರೆತು ಹೋಗುವುದು. ನಿನ್ನಿಂದಲೇ ಎಲ್ಲಾ ಕಾರ್ಯಗಳನ್ನೂ ನಿರ್ವಹಿಸಿಕೊಳ್ಳುವುದಕ್ಕೆನಗೆ ಶಕ್ತಿಯಿರುವುದು. ಶೋಭನೆ! ಹೀಗಿದ್ದುಕೊಂಡಿದ್ದರೂ ನೀನೆನ್ನಲ್ಲಿ ನಂಬಿಕೆಯನಿಡದೆ ಕಷ್ಟವಂ ಕೊಡಬಹುದೆ? ಇನ್ನು ಮುಂದೆ ನನ್ನಲ್ಲಿ ದಯೆಯಿಲ್ಲದವಳಾಗಬೇಡ.
{{gap}}ಮನಸ್ಸಿನ ವ್ಯಾಕುಲತೆಯಿಂದ ಯುವಕನು ಹೆಂಡತಿಯ ಕಾಲನ್ನು ಹಿಡಿದುಕೊಳ್ಳುವುದಕ್ಕೆ ಹೋದನು. ಶೋಭನೆಯು ಚಮಕಿತೆಯಾಗಿ ಅವನ ಕೈಯನ್ನು ಹಿಡಿದು ತನ್ನ ವಕ್ಷದಮೇಲೆ ಇಟ್ಟುಕೊಂಡಳು. ಆಗವಳ ಕಣ್ಣಿಗೆ ಸ೦ಪಂಚವೇ ತಿರುಗುವಂತೆ ಕಂಡಿತು. ಎಲ್ಲವೂ ಸ್ವಪ್ನದಂತೆ ತೋರಿತು. ತನಗಿಂತ ಸುಖಿಗಳು ಪ್ರಪಂಚದಲ್ಲಿ ಮತ್ತಾರೂ ಇಲ್ಲವೆಂದು<noinclude></noinclude>
o4zd4m1k77mphsni1e5nocii08bo66p
ಪುಟ:ಮಾಲತಿ.djvu/೨೬
104
65259
321233
260821
2026-05-20T07:36:23Z
Pragathi. BH
7585
/* Validated */
321233
proofread-page
text/x-wiki
<noinclude><pagequality level="4" user="Pragathi. BH" />{{rh|೧೮|ಮಾಲತೀ}}
{{custom rule|w|160|w|160|w|160|w|160}}</noinclude>ತಿಳಿದಳು. ಹಾಳಾದಾ ಕಲ್ಪನೆಯಿಂದ ತಾನು ನಿರರ್ಥಕವಾಗಿ 7೦ಡನನ್ನು ದೋಷಿಯೆಂದು ತಿಳಿದುಕೊಂಡೆನೆಂದು ತನ್ನನ್ನು ತಾನೇ ಧಿಕ್ಕರಿಸಿಕೊಂಡಳು. ಅವಳ ಹೃದಯವು ಅನುತಾಪದಿಂದ ತುಂಬಿತು. ಗಂಡನ ಭುಜದ ಮೇಲೆ ತಲೆಯನ್ನಿಟ್ಟುಕೊಂಡು ಅಳುವುದಕ್ಕೆ ತೊಡಗಿ, ಮನದಲ್ಲಿಯೆ ಕ್ಷಮೆ ಯನ್ನು ಪ್ರಾರ್ಥಿನಿಗಳು, ವಾಷಿಂದ ಮಾತ್ರ ಕೆಡದು, ನಿನನ್ನು ಕೇಳಿ ಆಳ್ವುದ ತೋಚಲಿಲ್ಲ. ಯುವಕಸಿಗೆ ಅವಳ ಮನದ ಭಾವವು ಗೊತ್ತಾಯಿತು. ಅವಳ ಮನಸ್ಸಿನ ಸಂವೇದನೆಲ್ಲಾ ತೊಲಗಿತೆಂದು ತಿಳಿದುಕೊಂಡನು. ಪುನಃ ಎಂದೆ. ಅವಕ್ಕಿಲ್ಲ ಎಂದು ಸ್ಥಿರವಾ ಸಿತು. ಅವರಿಬ್ಬರೂ ಮಂದಿ ಅಭಿ , ರಾಗಿ ನನವಾಗಿದ್ದರು.
{{gap}}ಇದ್ದಹಾಗೆ ಆ ಸಮಯದಲ್ಲಿ ಮಾಲತಿಯು ಮನೆಯೊಳಗೆ ಬಂದಳು, ಬಂದವಳು ನಗು ಬಂದು ಲಾರಿ ? ನಿನ್ನ ಯು.ನ ಕೈಯಲ್ಲಿರಿಸಿ, “ನೋಡು ! ನಿನಗೆ ಇದೆ ಎಂದು ಕ. ಸಾರ್ಥವನ್ನು ತಂದೆ, ನನ್ನು ಒಣ: ಕ ದ್ದ ಕವರ್ ೩೦ರ ಒದು ದ - SAವು ಪುಟ್ಟಪ್ಪ -೨ ೧yದು ಹೇಳಿದಳು.
{{gap}}ಪನಿಯು ಒ೪೬೦ ಕೆ : ” SC trai' ಮನೆ.. ವ..ಲತಿಗೆ ಸ್ಪಧಾನವಾಗಿ ಅವಳ ಹತ್ರ . ಸಟದ ಬೆಳೆ ಕಾಯಿ?. ಏನನ್ನೂ ಅರಿಯಪ್ಪ ಮಾಲತಿಯ ಸರಳ ಹರಸಭಾವನ್ನು ನೆ: ಇಡಿ ಯುವಕನ ಕಣ್ಣುಗಳಲ್ಲಿ ಕಲಸಿದ ಈಕೆ "., ನಾಲತಿ ಹುಗಿತಾ fದ್ದಳು. ಅವಳಿಗೆ ಸಿಲುಕhಯ ಆಳ ತಿಟ್ಟುಸಿಗೆ ಅಂದು ನನ.
ಅವಳ ಮೇಲಿನ ಪ್ರೀತಿಗೆ ಗವಾಯಿ' ಅಂL. ('ಜನು ಸುಜಿ.ರಮ ಶನ ನೊಫೆನೆಯ ಅಸುಯಾಗಿದ್ದಾಳೆ. ಯುವಕನು ಸ೦೪ ಹೃದಯವು ೪ಾಬಾಲೆಯ ಮುಖವನ್ನು ನೋಡಿ, ಕಸ »ಪದಗಳಿಂದ ಕೂಡಿದ ಭಾವ ದಿಂದ ಸ್ವಲ್ಪ ನಕ್ಕು ಅವಳು ಕೊಟ್ಟಿದ್ದ ಗುಲಾಬಿ ಹೂವನ್ನು ತೆಗೆದುಕೊಂಡು ಮನಿಸೋದನು.
{{gap}}ಪುನಃ ಬೆಂಕಿಯ ಉರಿಯೆದ್ದಿತು! ಅವನಾ ನಗುವನ್ನು ಕಂಡು ಕೋ ಭನೆಯು ತನ್ನ ಸಂಕಲ್ಪವನ್ನು ಸ್ಥಿರಗೆ.ಇಸಲಸವರ್ಣಿಯಾದಳು. ಮನು<noinclude></noinclude>
k3j89lva0c0q7chz65tu8c31mfnfg71
ಪುಟ:ಮಾಲತಿ.djvu/೨೮
104
65261
321234
260825
2026-05-20T07:38:06Z
Pragathi. BH
7585
/* Validated */
321234
proofread-page
text/x-wiki
<noinclude><pagequality level="4" user="Pragathi. BH" />{{rh|೨೦|ಮಾಲತೀ}}
{{custom rule|w|160|w|160|w|160|w|160}}</noinclude>{{gap}}ನಡೆದ ಸಮಾಚಾರಗಳಾವದನ್ನೂ ಮಾಲತಿಯು ಅರಿಯಳು. ಸಣ್ಣ ದಾದಾ ಪ್ರಪಂಚದಲ್ಲಿ ಅವಳಿಗೆ ಸಲುವಾಗಿ ನಡೆದಿದ್ದ ರಾಜ್ಯಪರಿವರ್ತನೆಗಳಾ ವದನ್ನೂ ಅವಳು ಅರಿಯಳು. ಅದುಕಾರಣ ಅವಳ ನಗುಮೊಗದಲ್ಲಾವಾ ಗಲೂ ನಗುವು ತುಂಬಿದ್ದಿತು. ಆದರೆ ಆ ಮನೆಯ ಅಂಧಕಾರವು ಒಂದೊಂದು ತಡವೆ ಆ ಜೊನ್ನೆ ಜೊಂಪಲ ಬೊಂಬೆಯನ್ನೂ ಸ್ಪರ್ಶ ಮಾಡುತ್ತಿರುವುದು. ಶೋಭನೆಯು ಮೊದಲಿನಂತೆ ತೋಟದಲ್ಲಿ ಮಾಲತಿಯೊಡನೆ ಉಲ್ಲಾಸದಿಂದ ತಿರುಗಾಡಳು, ಮೊದಲಿನಂತೆ ಕಣ್ಣುಮುಚ್ಚಾಲೆ ಆಟದಲ್ಲಿ ಗಂಡನಹಿಂದೆ ಹೋಗಿ ಬಚ್ಚಿಟ್ಟುಕೊಂಡು ಮಾಲತಿಯನ್ನು ಸೋಲಿಸುತ್ತಿರಲಿಲ್ಲ, ಮಾಲ ತಿಯ ಹೂವುಗಳನ್ನು ಹರಿದು ಕಿತ್ತು ಅವಳನ್ನು ಅಳುವಹಾಗೆ ಮಾಡುತ್ತಿರ ಅಲ್ಲ, ಕದವಿನ ಹಿಂದೆ ಮೂಲೆಯಲ್ಲಿ ಅವಿತುಕೊಂಡು ಮಾಲತಿಯನ್ನು ಹೆದ ರಿಸುತ್ತಿರಲಿಲ್ಲ, ರಾತ್ರಿ ಗಂಡನ ಸಂಗಡ ಮಾತಾಡಿದುದನ್ನೆಲ್ಲಾ ಮಾಹಿತಿಗೆ ಹೇಳಿ ಅವಳನ್ನು ನಗುಸುತ್ತಿರಲಿಲ್ಲ. ಶೋಭನೆಯು ಬಹಳ ವ್ಯಸನಾಕಾಂತೆ. ಶೋಭನೆಯು ತಾನುಹುಡುಗಾಟವನ್ನು ಮಾಡುವುದಿಲ್ಲವೆಂದು ಹೇಳುವಳು. ಮಾಲತಿಯು ಮಾತ್ರ ಚಿರಕಾಲವೂ ಹುಡುಗಿಯಾಗಿರಬೇಕೆ? ಚಿರಕಾ ಲವೂ ಹೀಗೇನೇ ಆಡಿಕೊಂಡಿರಬೇಕೆ? ಶೋಭನೆಯು ಹೇಳಿದ ಮಾತಿನ ಅರ್ಥವಾವದೂ ಮಾಲತಿಗೆ ಗೊತ್ತಾಗಲಿಲ್ಲ. ಮಾಲತಿಯು ಮಾತಿಲ್ಲದೆ, “ನಾನಾವಾಗಲೂ ನಗುಕೊಡದೆ ? ಆಡಬಾರದೆ ? ಹುಡುಗರು ಹೊರ್ತು ಮತ್ತಾರೂ ನಗುಕೊಡದೆ ? ಆಡಬಾರದೆ? ಮದುವೆಯಾದರೆ ನಾನೂ ಆವಾ ಗಲೂ ನಗುಬಾರದೆ?' ಎಂದು ಮುಂತಾಗಿ ಯೋಚಿಸಿಕೊಳ್ಳುವಳು. ಮಾಲ ತಿಯು ಏನನ್ನೂ ಅರಿಯದೆ, ಹುಡುಗಾಟ ಮಾಡುತ್ತ ಶೋಭನೆಯನ್ನು ನಗುವಹಾಗೆ ಮಾಡಲು ಯತ್ನಿಸುವಳು. ಅವಳಿಗೆ ಇಷ್ಟವಾದ ಹೂವುಗ ಳನ್ನು ತಂದು ಅವಳ ಮೇಲೆ ಹಾಕುವಳು. ಅದರಿಂದಲೂ ಶೋಧನೆಯ ವ್ಯಸನವುಳ್ಳ ಮುಖವು ಪ್ರಫುಲ್ಲವಾಗದುದನ್ನು ಕಂಡು, ಆಗ ಮನೆಯ ಅಂಧಕಾರದ ಛಾಯೆಯು ಅವಳ ಹೃದಯವನ್ನು ಸುರ್ಶಮಾಡುವುದು. ಶೋಭನೆಯು ನಿಜವಾಗಿಯೂ ದೊಡ್ಡ ಮನುಪೈಯಾಗಿ ಆಡದೆಲೂ ನಗು ಗೆ ಇರುವುದನ್ನು ಕಂಡು ಮಾಲತಿಯ ವ್ಯಸನಾಕಾಂಕೆಯಾಗಿ ಅಳು<noinclude></noinclude>
8ub2aje0mwd1aap1h9q37n2s47g8k80
ಪುಟ:ಮಾಲತಿ.djvu/೨೯
104
65262
321299
260826
2026-05-20T09:04:14Z
Pragathi. BH
7585
/* Validated */
321299
proofread-page
text/x-wiki
<noinclude><pagequality level="4" user="Pragathi. BH" />{{rh| |ಎರಡನೆಯ ಪರಿಚ್ಛೇದ|೨೧}}
{{custom rule|w|160|w|160|w|160|w|160}}</noinclude>ವುದಕ್ಕೆ ಬೇರೆ ಸ್ಥಳಕ್ಕೆ ಹೊರಟುಹೋಗುವಳು. ನದಿಯ ತೀರದಲ್ಲಿ ಒಬ್ಬ ಳೇ ತಿರುಗಾಡುತ್ತ ಹೊತ್ತಾದಬಳಿಕ ಮನೆಗೆ ಬರುವಳು. ಬಂದು ರಮೇ ಶನು ಸಂತೋಷವಾಗಿದ್ದರೆ ಆನಂದಪಡುವಳು. ಹಾಗಿಲ್ಲದೆ ರಮೇಶನು ವಿಷಣ್ಣನಾಗಿದ್ದರೆ ಸಂಭೀತೆಯಾಗಿ ಯೋಚನಾಕಾತೆಯಾಗುವಳು. ದೊ ಡ್ಡವರಾಗಿ ಸಂಸಾರಿಗಳಾದ ಬಳಿಕ ಗಂಭೀರದಿಂದ ವ್ಯಸನಪಡತಕ್ಕವರು. ಹೆಂಗಸರೆಂದೂ ಗಂಡಸರುಹಾಗೆ ವ್ಯಸನಪಡತಕ್ಕವರಲ್ಲವೆಂದೂ ಮಾಲತಿಯು ತಿಳಿದಿದ್ದಳು. ಏಕೆಂದರೆ, ಶೋಭನೆಯು ಹಾಗಿರಬೇಕೆಂದು ಹೇಳಿದ್ದಳು. ಶೋ ಭನೆಯ ಹಾಗಿದ್ದುದನ್ನು ಮಾಲತಿಯು ಕಣ್ಣಾರೆ ನೋಡಿದ್ದಳು. ಹೀಗಿರುತ್ತೆ ಗಂಡಸಾದ ರಮೇಶನಿಗೆ ವ್ಯಸನವೇಕೆ? ಅವನು ಒಂದೊಂದು ತಡವೆ ವ್ಯಸನ ದಿಂದ ಊಟಮಾಡದೆ ಮಲಗಿಬಿಡುವನು, ಅದನ್ನು ನೋಡಿ ಮಾಹಿತಿಯೂ ಊಟವಿಲ್ಲದೆ ಯೋಚನೆಯಿಂದ ಮಲಗಿಬಿಡುವಳು. ರಮೇಶನು ಚೆನ್ನಾಗಿ ಉಲ್ಲಾಸದಿಂದಿದ್ದರೆ ಅವನಸಂಗಡ ಮಾತಾಡುವಳು, ವ್ಯಸನವುಳ್ಳವನಾಗಿದ್ದರೆ ಅವನ ಸಂಗಡ ಮಾತಾಡುವುದಕ್ಕೆ ಸಾಹಸವುಳ್ಳವಳಾಗುತ್ತಿರಲಿಲ್ಲ. ಒಂದು ದಿನ ರಾತ್ರಿ ಮಲಗಿರುವಾಗ ಮಾಲತಿಯು ಮನಸ್ಸಿನಲ್ಲಿ, ಅಣ್ಣನು ವ್ಯಸನ ವುಳ್ಳವನಾಗಿದ್ದರೆ ಅದಕ್ಕೆ ಕಾರಣವನ್ನು ವಿಚಾರಿಸಬೇಕೆಂದು ಯೋಚಿಸಿ ಕೊಂಡಳು. ಮಾರನೆಯ ದಿನ ರಮೇಶನು ವಿಷಣ್ಣನಾಗಿದ್ದನು. ಆದರೂ ಮಾಲತಿಯು ಅದಕ್ಕೆ ಕಾರಣವನ್ನು ವಿಚಾರಿಸುವುದಕ್ಕೆ ಧೈರ್ಯವುಳ್ಳವಳಾ ಗಲಿಲ್ಲ. ಹೀಗೆ ಅನೇಕತಡವೆ ವ್ಯಸನಕ್ಕೆ ಕಾರಣವನ್ನು ವಿಚಾರಿಸುವುದಕ್ಕೆ ಹೋಗಿ ರಮೇಶನನ್ನು ಕೇಳಲಾಗದೆ ಹಿಂದಿರುಗಿ ಬಂದು ಮನೆಯನ್ನು ಬಿಟ್ಟು ನದಿಯ ತೀರಕ್ಕೆ ಹೋಗಿ ಅಳುತ್ತ ಕುಳಿತಿರುವಳು. ಒಂದು ದಿನ ಮಾಲ ತಿಯು ನದಿಯ ತೀರದಲ್ಲಿ ಕುಳಿತು ಅಳುತಿರುವ ಸಮಯದಲ್ಲಿ ರಮೇಶನು ಹೋಗಿ ಆಶ್ಚರ್ಯದಿಂದ ವ್ಯಥೆಪಟ್ಟು ಮೆಲ್ಲ ಮೆಲ್ಲನೆ ಅವಳದ್ದೆಡೆ ಹೋಗಿ ಹಿಂದೆ ನಿಂತು ಅವಳ ಭುಜದಮೇಲೆ ಕೈಯಿಟ್ಟು, 'ಇದೇನು!ಮಾಲತಿ! ಆರೂ ಇಲ್ಲದ ಸ್ಥಳದಲ್ಲಿ ಒಬ್ಬಳೇ ಕುಳಿತು ಅಳುತ್ತಿ?” ಎಂದು ಕೇಳಿದನು. ಮಾಲ ತಿಯು ಧ್ವನಿಯಿಂದ ಗುರ್ತಿಸಿ ಹಿಂದಿರಿಗಿ ನೋಡಿದಳು. ಅವಳಿಗೆ ಹೃದಯದ ವೇಗವು ತಡಿಯಲಿಲ್ಲ. ಕಣ್ಣೀರು ಧಾರೆಯಾಗಿ ಹರಿಯಿತು. ತಾನು ಏಕೆ ಅಳು<noinclude></noinclude>
55ft8zbkgwjr7xdnkyhw6u1522npxmf
ಪುಟ:ಮಾಲತಿ.djvu/೩೦
104
65263
321300
260828
2026-05-20T09:04:29Z
Pragathi. BH
7585
/* Validated */
321300
proofread-page
text/x-wiki
<noinclude><pagequality level="4" user="Pragathi. BH" />{{rh|೨೨|ಮಾಲತೀ}}
{{custom rule|w|160|w|160|w|160|w|160}}</noinclude>ತಿದ್ದಳೊ ಅದನ್ನು ಮಾಲತಿಯು ಅರಿತಿರಲಿಲ್ಲ. ಅಂಥವಳು ರಮೇಶನಿಗೆ ಹೇಗೆ ತಿಳಿಯಹೇಳಬಲ್ಲಳು? ರಮೇಶನು ಮೆಲ್ಲ ಮೆಲ್ಲನೆ ಕಣ್ಣೀರನ್ನೂ ರಸಿ, ಪುನಃ, * ಮಾಲತಿ: ಅಳುವುದೇಕೆ? ಶೋಭನೆಯು ನಿನ್ನನ್ನು ಹೆದರಿಸಿ ಅಳುಸಿದಳೆ?ಎಂದು ಕೇಳಿದನು.
{{gap}}ತೋಭನೆಯು ಮಾಲತಿಯನ್ನು ಹೆದರಿಸಿ ಅಳಸುತ್ತಿದ್ದುದನ್ನು ನೋಡಿದ್ದನು. ಮಾಲತಿಯು ಕಣ್ಣೀರ ಪ್ರವಾಹವನ್ನು ಕಷ್ಟದಿಂದ ನಿಲ್ಲಿಸಿ, * ಇಲ್ಲ-ಅವಳು ಇನ್ನು ಮೇಲೆ ಹೆದರಿಸುವುದಿಲ್ಲವಂತೆ ' ಎಂದು ವಿಷಾದ ದಿಂದ ಭಗ್ನವಾದಸ್ಸರದಿಂದ ಹೇಳುತ್ತಲೇ, ರಮೇಶನು ಚಮಕಿತನಾಗಿ, 'ಮಾ ಅತಿ! ಹಾಗಾದರೆ, ನಿನಗೆ ದುಃಖನೇಕೆ ? ಎಂದು ಕೇಳಿದನು ಮಾಲತಿಯು, “ ಶೋಧನೆಯು ಹೆದರಿಸುವುದಿಲ್ಲವೆಂದು ಹೇಳಿದುದರಿಂದಲೇ ವ್ಯಸನವೆಂದಳು. ರಮೇಶನು, " ಹಾಗಾದರೆ, ನಡೆ, ನಿನ್ನನ್ನು ಮೊದಲಿನಂತೆ ಓಡಾಡಿಸುತ್ತ ಹೆದ ರಿಸುತ್ತಿರಬೇಕೆಂದು ಕೋಭನೆಗೆ ಹೇಳುತಿರು ” ಎಂದು ಹೇಳಿದನು.
{{gap}}ಮಾಲತಿಯು ಏಳಲಿಲ್ಲ-ನಲಿಲ್ಲ. ವಿಷಣ್ಣ ಮನಸ್ಕಳಾಗಿ ಕುಳಿತು ಕೊಂಡು, ರಮೇಶನ ದುಃಖಕ್ಕೆ ಕಾರಣವನ್ನು ವಿಚಾರಿಸುವ ಬಗೆಯನ್ನು ಕುರಿತು ಯೋಚಿಸುತ್ತಿದ್ದಳು. ರಮೇಶನು ಪುನಃ, 'ಮಾಲತಿ! ಶೋಭನೆಯು ಹೆದರಿಸುವುದಿಲ್ಲವೆಂದು ನಿನಗೆ ದುಃಖವೊ ? ' ಎಂದು ಕೇಳಿದನು. ಮಾಲ ತಿಯು ಸಮಯವು ಸಿಕ್ಕಿತೆಂದ, ಮೆಲ್ಲ ಮೆಲ್ಲನೆ “ ದುಃಖಕ್ಕೆ ಮತ್ತೊಂದು ಕಾರಣವುಂಟು. ಅಣ್ಣ ! ನಿನಗೇನಾಗಿದೆ ? ಮೊದಲಿನಂತೆ ನೀನು ಮಾತಾ ಡುವುದಿಲ್ಲ. ನಾನೇನು ತಪ್ಪನ್ನು ಮಾಡಿದೆನು ? ” ಎಂದು ಕೇಳಿದಳು.
{{gap}}ಮಾಲತಿಯು ಕೇಳಿದ ಸಹಜವಾದ ಸರಳ ಪ್ರಶ್ನೆಯಿಂದ ರಮೇಶನ ಕಣ್ಣುಗಳಲ್ಲಿ ನೀರು ತುಂಬಿ ಗಲ್ಲದ ಮೇಲಿಂದ ಕಂಬನಿಯು ಹರಿದುಬಂದು ಮಾಲತಿಯ ಕೈಮೇಲೆ ಬಿದ್ದಿತು ! ಮಾಲತಿಯ ಹೃದಯವು ಸೃಂಭಿತವಾಗಿ ಮುಖವು ಬಾಡಿತು. ಮಾಲತಿಯು ತಾನೇಏನೋ ತಪ್ಪನ್ನು ಮಾಡಿ ದೇ ಕೆಂದೂ ಇಲ್ಲವಾಗಿದ್ದರೆ ಅವನ ಕಣ್ಣುಗಳಲ್ಲಿ ನೀರು ತುಂಬಲೇಕೆಂದೂ ಯೋಚಿಸಿ, ಮಾಲತಿಯು ಈ ಕೋಚವನ್ನು ಬಿಟ್ಟು, ವ್ಯಾಕುಲದಿಂದ, ( ಅಣ್ಣ : ನಾನೇನು ತಪ್ಪನ್ನು ಮಾಡಿದೆನು ? ಹೇಳು. ನಿನಗೆ ನನ್ನ ಮೇಲೆ<noinclude></noinclude>
cx1nmtdwrswfs1cvxzfdqmn2kcgtu1y
ಪುಟ:ಮಾಲತಿ.djvu/೩೧
104
65264
321302
260827
2026-05-20T09:04:46Z
Pragathi. BH
7585
/* Validated */
321302
proofread-page
text/x-wiki
<noinclude><pagequality level="4" user="Pragathi. BH" />{{rh| |ಎರಡನೆಯ ಪರಿಚ್ಛೇದ|೨೩}}
{{custom rule|w|160|w|160|w|160|w|160}}</noinclude>ಕೋಪವೆ ? ಕೋಪಿಸಿಕೊಳ್ಳದೆ ನನ್ನ ತಪ್ಪನ್ನು ಹೇಳು " ಎಂದು ಕೇಳಿದಳು, ಯುವಕನು ಅವಳ ವ್ಯಾಕುಲತೆಯನ್ನು ನೋಡಿ ಕಳವಳಗೊಂಡು, “ ಇಲ್ಲ ಮಾಲತಿ ! ನೀನಾವ ತಪ್ಪನ್ನೂ ಮಾಡಿಲ್ಲವೆಂದು ಹೇಳಿದನು.
{{gap}}ಮಾಲತಿ-ಹಾಗಾದರೆ ಮೊದಲಿನಂತೆ ನೀನೆನ್ನ ಸಂಗಡ ಮಾತಾಡು ವುದಿಲ್ಲವೇಕೆ? ಮಾತಾಡುತ್ತಿದ್ದ ಹಾಗೆ ನಿನ್ನ ಕಣ್ಣುಗಳಲ್ಲಿ ನೀರು ಬಂದು ದಕ್ಕೆ ಕಾರಣವೇನು?
{{gap}}ಮನುಷ್ಯನು ಸುಖದಲ್ಲಿ ಮಾತ್ರ ನಗುವನೆಂದು ಹೇಳುವುದಕ್ಕಾಗದು. ಅಳಿಸಿಹೋಗುವಾಗಲೂ ದೀಪದ ಉರಿಯು ಹೆಚ್ಚಾಗಿ ಹೋಲಿಸುವುದು? ಅಂಧ ಕಾರದಲ್ಲಿಯೂ ಮಿಂಚು ಮಿನುಗುವುದು; ಇದು ಯುವಕನು ಹುಡಗಿಯ ವಾತಿಗೆ ದುಃಖಪಟ್ಟು ಆ ದುಃಖಲ್ಲಿಯೂ ನಕ್ಕು, ಮಾಲತಿ! ನಿನ್ನ ಮೇಲೆ ಕೋಪಮಾಡುವುದಕ್ಕಾವಾಗಲಾದರೂ ಸಂಭವವುಂಟೆ? ಅಂಥಾ ಸಂಭವವಿಲ್ಲ. ನನಗೆ ಮೊದಲಿನ ಭಾವವು ಇಲ್ಲದುದಕ್ಕೆ ಕಾರಣವನ್ನೂ ಕಠೋರವಾದೀ ಕಣ್ಣುಗಳಿಂದ ನೀರು ಬಂದುದಕ್ಕೆ ಕಾರಣವನ್ನೂ ನೀನು ತಿಳಿಯಬಲ್ಲೆಯಾ? ನಿನ್ನಂಥ ಅರಿಯದ ಚಿಕ್ಕ ಹುಡುಗಿಯು ಅದನ್ನೆಲ್ಲಾ ಹೇಗೆ ತಿಳಿದುಕೊಳ್ಳಬಲ್ಲೆ? ಮಾಲತಿ! ” ಎಂದು ಹೇಳಿದನು.
{{gap}}ರಮೇಶನು ಹೇಳಿದುದು ನಿಜ-ಮಾಲತಿಯು ಇಪ್ಪತ್ತು ವರ್ಷದವಳಾ ಗಿದ್ದರೂ ಇನ್ನೂ ಬಾಲೆ. ಮನಸ್ಸಿನ ಸಬಳ ತೆಗೆ ಸಲುವಾಗಿ ಇನ್ನೂ ಬಾಲೆ. ಬಾಲೆಯಾಗಿದ್ದರೂ ಮಾಲತಿಯು ಹೆಂಗಸು.ಹೆಂಗಸರು ದುಃಖಿಗಳಂದಿಗೆ ದುಃಖಿಗಳಾಗುವರು. ವ್ಯಥೆಪಡುವವರ ಸಂಗಡ ವ್ಯಥೆಪಡದಿರರು. ಮತ್ತಾವ ದನ್ನು ತಿಳಿಯದಿದ್ದರೂ ಪರರ ದುಃಖವನ್ನು ತಿಳಿಯಬೇಕಾದಾಗ ಅವರು ಹುಡುಗಿಯರಾಗಿರರು. ಮಿಕ್ಕೆ ಎಲ್ಲಾ ವಿಷಯಗಳಲ್ಲಿಯೂ ಅವರು ಚಿಕ್ಕನ ರಾಗಿದ್ದರೂ ಅನ್ಯರ ಕಷ್ಟವನ್ನು ತಿಳಿದುಕೊಳ್ಳುವುದರಲ್ಲಿ ನೂರಾರು ವರ್ಷದ ಮುದುಕರೂ ಅವರಿಗೆ ಸಮನಾಗರು, ಹುಡುಗಿಯಾಗಿದ್ದ ಮಾಲತಿಯು ಪ್ರೌಥೆಯಂತೆ, ಅಣ್ಣ ನಿನ್ನ ಮಾತನ್ನು ನಾನು ತಿಳಿಯಲಾರೆನೆ? ಹುಡುಗಿಯೆ? ಈಗ್ಗೆ ಮೂರು ವರ್ಷಕ್ಕೆ ಹಿಂದೆ ನನ್ನನ್ನು ದೊಡ್ಡವಳೆಂದು ಹೇಳಿ ನಿನ್ನ<noinclude></noinclude>
a3pe9vvxzbjaql7qliys3hdd31lqoa9
ಪುಟ:ಮಾಲತಿ.djvu/೩೨
104
65265
321304
260815
2026-05-20T09:05:11Z
Pragathi. BH
7585
/* Validated */
321304
proofread-page
text/x-wiki
<noinclude><pagequality level="4" user="Pragathi. BH" />{{rh|೨೪|ಮಾಲತೀ}}
{{custom rule|w|160|w|160|w|160|w|160}}</noinclude>ಮನಸ್ಸಿನಲ್ಲಿದ್ದ ಮಾತನ್ನು ನನಗೆ ಹೇಳಲಿಲ್ಲವೆ ? ಆಗಿನಿಗಿಂತಲೂ ಈಗ ದೊಡ್ಡವಳಲ್ಲವೆ? ” ಎಂದಳು.
{{gap}}ಭೂಮಂಡಲದಲ್ಲಿ ದುಃಖಿಗಳಾದವರಲ್ಲಿ ನಿಜವಾಗಿ ದುಃಖಿಸುವವರು ಅತಿ ದುರ್ಲಭ-ಒಂದು ಸುಂದರವಾದ ಗುಲಾಬಿಹೂವನ್ನು ನೋಡಿದರೆ ಅದನ್ನು ಪ್ರಯತ್ನ ಪೂರ್ವಕವಾಗಿ ಗ್ರಹಮಾಡದಿರುವವರಾರು? ಅದನ್ನು ಪಿರ್ತಿದಿರುವವರಾರು? ಅದರಿಂದ ತೃಪ್ತರಾಗದಿರುವವರಾರು? ಆದರೆ ಆ ಗುಲಾಬಿಹೂವು ಒಣಗಿದರೆ ಒತ್ತಡವೆಯಾದರೂ ಮಮತೆಯಿಂದ ಅದನ್ನು ನೋಡುವವರಾರು? ಎಷ್ಟು ಮಂದಿ ಅದನ್ನು ನೋಡಿ ಅಕೃತ್ರಿಮ ಶೋಕಾ ಶುವನ್ನು ಬಿಡುವರು? ಹಾಗೆಶೋಕಾತ್ರುವನ್ನು ಬಿಡುವವರಿಲ್ಲದುದರಿಂದಲೇ ಅಕೃತ್ರಿಮವಾದ ಅಕುಜಲಕ್ಕೆ ಅಷ್ಟೊಂದು ಆದರ-ಪ್ರಪಂಚದಲ್ಲಿ ಸ್ವಾರ್ಥ ವಿಲ್ಲದ ಪ್ರೀತಿ ವಿಶ್ವಾಸಗಳಿಗೆ ಅಷ್ಟೊಂದು ಹೆಚ್ಚು ಬೆಲೆ. ಜನರು ಸ್ವರ್ಗವ ನ್ನಾದರೂ ತುಚ್ಚವಾಗಿ ಎಣಿಸಿ ಅಂಥಾ ಪ್ರೀತಿಯನ್ನು ಹೊಂದಲು ಇಷ್ಟವು ಳ್ಳವರಾಗಿರುವರು-ಅದರಿಂದ ಮುಗ್ಧರಾಗುತ್ತಾರೆ-ರಮೇಶನೂ ಮನುಷ್ಯಮನುಷ್ಯನಿಗೆ ಸಹಜವಾದಾ ದುರ್ಬಲತೆಗೆ ರಮೇಶನು ಹೊರಗಾಗಿರಲಿಲ್ಲ -- ಅವನ ಹೃದಯದ ಕವಾಟವು ತಾನಾಗಿಯೇ ತೆರಕೊಂಡಿತು--ದುಃಖಿಯಲ್ಲಿ ದು:ಖಿಸುವ ದುಃಖಿಯನ್ನು ಹೊಂದಲು ಅವನಹೃದಯವು ತೆರಿಯಿತು. ಅವನು, * ಮಾಲತಿ! ನನ್ನ ದುಃಖವನ್ನು ಕುರಿತು ಕೇಳುವಿಯಾ ? ನನಗಾವದರಿಂದ ಸುಖವೋ ಅದರಿಂದಲೇ ನನಗೆ ದುಃಖ! ಶೋಭನೆಯು ತನ್ನ ಸ್ವಂತ ಕಲ್ಪ ನಾತಿಶಯದಿಂದ ತಾನೂ ಅಸುಖಿಯಾಗಿ ನನ್ನನ್ನೂ ದುಃಖಿಯಾಗಿ ಮಾಡಿದ್ದಾ ಳೆ ' ಎಂದು ಹೇಳಿ, ಬಳಿಕ ಶೋಭನೆಗೆ ಉಂಟಾಗಿದ್ದ ಸಂದೇಹದ ವೃತ್ತಾಂತ ವನ್ನು ಸಂಕ್ಷೇಪವಾಗಿ ಹೇಳಿದನು.
{{gap}}ಮಾಲತಿಯು ಮೌನವಾಗಿ ಕಣ್ಣಿನೆವೆ ಇಕ್ಕದೆ ಎಲ್ಲವನ್ನೂ ಕೇಳಿ ದಳು-ವುನಃ ಅವಳು ಮಾಲತಿಯಾಗಿರಲಿಲ್ಲ. ಅವಳ ಬಾಡಿದ ತುಟಿಗಳು ತಲತಲ ಅದುರಿದುವು-ಯಾತನಾಮಯವಾದ ದೈನ್ಯದೃಷ್ಟಿಯು ಶೂನ್ಯವಾದ ಅಂತರಿಕ್ಷದಲ್ಲಿ ಸೇರಿತು-ಮಾಲತಿಯು ನಿಂತಹಾಗೆ ಅತ್ತಳು. ಯುವ ಕನೂ ಅಳುವುದಕ್ಕೆ ತೊಡಗಿದನು. ಸಂಧ್ಯಾಕಾಲದಲ್ಲಿ ಸುಖಮಯಿ<noinclude></noinclude>
484gvp1vg1p71grndqkmlntb8dwuqzl
ಪುಟ:ಮಾಲತಿ.djvu/೩೩
104
65266
321235
260818
2026-05-20T07:43:23Z
Shreelatha.Halemane
7642
/* Validated */
321235
proofread-page
text/x-wiki
<noinclude><pagequality level="4" user="Shreelatha.Halemane" />{{rh| |ಮೂರನೆಯ ಪರಿಚ್ಛೇದ|೨೫}}
{{custom rule|w|160|w|160|w|160|w|160}}</noinclude>ನದಿಯ ನಕ್ಷದಲ್ಲಿ ಅವರಿಬ್ಬರ ಕಣ್ಣಿನ ಪ್ರವಾಹವು ಶಬ್ದವಿಲ್ಲದೆ ಸೇರಿ ಕೊಂಡಿತು. ಆಕಾಶದಲ್ಲಿ ಚಂದ್ರನಿರಲಿಲ್ಲ. ನೂರಾರು ನಕ್ಷತ್ರಗಳು ಎದ್ದುವು. ಅವು ಆ ದುಃಖವನ್ನು ಸ್ವಲ್ಪವೂ ಅರಿಯವು. ಸ್ವಲ್ಪಸ್ವಲ್ಪ ಮೃದುವಾಗಿ ನಗುತ್ತಿದ್ದುವು. ನಗದೆ ಮತ್ತೆ “ಏನನ್ನು ಮಾಡಬಲ್ಲವು ? ಅವು ಗಳಲ್ಲಿ ಮಮತೆಯುಂಟೆಂದು ಎದುರು ನೋಡುವವರಾರು? ಅವು ಅನಂತ ಕಾಲದವರೆಗೂ ನಗುವುದಕ್ಕೋಸ್ಕರ ಹುಟ್ಟಿದೆ. ಆದುದರಿಂದ ಅವು ಮಮತೆಯನ್ನು ತೋರದಿದ್ದರೆ ಆರ ಹೃದಯದಲ್ಲಿಯ ನೋವಾಗುವುದಿಲ್ಲ. ಆದರೆ ಪ್ರಶಸ್ತವಾದಾ ಸುಖಮಯಿ ನದಿಯ ತೀರದಲ್ಲಿ ಮತ್ತಾರು ನರ ಪಾಳೆಯ ಇಲ್ಲದಿದ್ದುದು ಕ್ಷೇಮ. ಅಲ್ಲಿ ಅವರಿಬ್ಬರ ಕಣ್ಣೀರನ್ನು ನೋಡಿ ನಗುವುದಕ್ಕಾಗಲಿ ಅವರು ಸಾಯುವುದನ್ನು ನೋಡಿ ಹಾಸ್ಯ ಮಾಡುವುದಕ್ಕಾಗಲೀ ಅವರ ವ್ಯಾಕುಲವನ್ನು ನೋಡಿ ಸಂತೋಷಿಸುವುದಕ್ಕಾಗಲೀ ಆರೂ ಇರಲಿಲ್ಲ. ಅವರಿಬ್ಬಲೆ ನಿರ್ವಿಘ್ನವಾಗಿ ಅಳುವುದಕ್ಕೆ ತೊಡಗಿದರು. ಹುಡುಗಿಯು ಅಳುಕುತಳುಕುತ, ಅ ! ಏನನ್ನು ಹೇಳಿದೆ? ಶೋಭನೆಯು ತನಗಿಂತಲೂ ನನ್ನನ್ನು ನೀನು ಹೆಚ್ಚು ಪ್ರೀತಿಸುತ್ತಿದೆಯೆಂದು ತಿಳಿದುಕೊಂಡಿದ್ದಳೆಯೇ ? ಹಾಗಾದರೆ, ನಿಮ್ಮಿಬ್ಬರ ದುಃಖಕ್ಕೆ ನಾನೇ ಕಾರಣ ! ನನೆ ಗೋಸ್ಕರವಾಗಿಯೆ ನಿನ್ನ ಪ್ರಫುಲ್ಲವಾದ ಮುಣಿವು ಮಲಿನವಾಗಿದೆ. ಶೋಭನೆಯ ನಗವೂ ಅಳಿಸಿಹೋಯಿತು, ನಿನ್ನ ಅಶಾಂತಿಗೆ ನಾನೇಮೂಲ ಅಣ್ಣ ನಾನೇನನ್ನು ಮಾಡಿದರೆ ನೀನು ಮೊದಲಿನಂತೆ ಸುಖಿಯಾಗುವೆ?ಎಂದು ಹೇಳಿದಳು.
{{gap}}ಮಾಲತಿಯು ನಿಸ್ವಾರ್ಥವಾಗಿ ನುಡಿದಾ ನುಡಿಗಳಿಂದ ಯುವಕನ ಹೃದಯವು ಕ೦ಪಿತವಾಯಿತು. ಅವಳನ್ನು ಹೇಗೆ ಸಮಾಧಾನಗೊಳಿಸ ಬೇಕೋ ಅದನ್ನರಿಯದೆ ಯುವಕನು, 'ಮಾಲತಿ! ನನ್ನ ಅಸುಖಕ್ಕೆ ನೀನು ಮೂಲವೆ? ಇಲ್ಲ, ಮಾಲತಿ ! ಆಕಾರಣವಾಗಿ ನನಗೆ
{{gap}}ಮಾಲತಿಯು ಮುಂದಿನ ಮಾತನ್ನು ಹೇಳಕೊಡಿಸದೆ, “ ಇಲ್ಲ, ಅಲ್ಲ! ನಾನೇನನ್ನು ಮಾಡಿದರೆ ನೀನು ಮೊದಲಿನಂತೆ ಸುಖಿಯಾಗುವೆ? ನಾನು ಸತ್ತರೆ ನಿನ್ನ ದುಃಖಮಯವಾದ ಯಾತನೆಯು ಕೊನೆಗಾಣಲಾರದೆ- ಅಣ್ಣ? ಎಂದು ಹೇಳಿದಳು.<noinclude></noinclude>
h5cdp4pis04u4ehrvq6y9autsfuascv
ಪುಟ:ಮಾಲತಿ.djvu/೩೪
104
65267
321232
260814
2026-05-20T07:30:26Z
Shreelatha.Halemane
7642
/* Validated */
321232
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೬|ಮಾಲತೀ}}
{{custom rule|w|160|w|160|w|160|w|160}}</noinclude>
{{gap}}ಸಕಲ ವಿಧವಾದ ಪ್ರೀತಿಗಳಿಗೂ ಮರ್ಮಾಂತಿಕಭಾವವು ಒಂದೇ</br> ಪ್ರಕಾರವೆ? ಪ್ರಿಯ ಜನರ ಸುಖಕ್ಕೋಸ್ಕರ ಸಾಯ್ಬೇಕೆಂಬ ಇಚ್ಛೆಯು </br>ಪ್ರೀತಿಗೆ ಸ್ವಾಭಾವಿಕ ಉಚ್ಛ್ವಾಸವೆ? ಮಾಲತಿಯ ಮಾತನ್ನು ಕೇಳಿ ರಮೇ</br> ಶನು ಮೌನವಾಗಿ ಅಳುವುದಕ್ಕೆ ತೊಡಿಗಿದನು ಅವಳ ಮನದ ಭಾವವನ್ನು</br> ತಿಳಿದುಕೊಂಡವನಾಗಿ ಅವನಾವ ಮಾತಾಡುವುದಕ್ಕೂ ಶಕ್ತನಾಗಲಿಲ್ಲ. ಮಾ </br>ಲತಿಯೂ ಮತ್ತೇನನ್ನೂ ಹೇಳಲಿಲ್ಲ. ತಾನು ಮನಸ್ಸಿನಲ್ಲಿ ಮಾಡಿಕೊಂಡ </br>ಸಂಕಲ್ಪವನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡಳು, ಮೌನದಲ್ಲಿ ಒಹಳ</br> ಹೊತ್ತು ಕಳೆದು ಹೋಯಿತು. ಇಬ್ಬರ ಮನಸ್ಸಿನಲ್ಲಿಯೂ ಎಷ್ಟೋ ಮಾತು</br> ಗಳು ನಡೆದು ಹೋದುವು.ಆದರೆ ಇಬ್ಬರಲ್ಲಾರಿಗೂ ಅವುಗಳನ್ನು ಹೊರಪ</br> ಡಿಸುವುದಕ್ಕೆ ಪ್ರವೃತ್ತಿಯುಂಟಾಗಲಿಲ್ಲ. ಇಬ್ಬರೂ ಗಂಭೀರ ಚಿಂತೆಯಲ್ಲಿ</br> ಮಗ್ನರಾಗಿ ತಾವುತಾವು ಅಲ್ಲಿ ನಿಂತಿರುವುದನ್ನೂ ಮರೆತರು. ಯುವಕನು ತಾನೊಬ್ಬನೇ ಅಲ್ಲಿರುವವನೆಂಬ ಭಾವದಿಂದ, ತನ್ನೂಳು ತಾನೇ, “ಸರ್ವಾ೦</br> ತಃ ಕರಣಗಳಿಂದಾರನ್ನು ಪ್ರೀತಿಸುತ್ತಿದ್ದೇನೋ ಅಂಥವಳು ಅಪನಂಬಿಕೆ ಪಡು </br>ವುದು ಅದಕ್ಕೆ ತಕ್ಕ ಪ್ರತಿಕಾರವೆ: ಮರ್ಮಾಂತಿಕವಾದೀ ಆಘಾತವೇ ಆ ಪ್ರೀತಿಗೆ ತಕ್ಕ ಪುರಸ್ಕಾರ ಎಂದು ಹೇಳಿದನು. ಆ ಮಾತಿನಿಂದ ಮಾಲತಿಯು ಎಚ್ಚರಗೊಂಡು * ಅಣ್ಣ : ಏನನ್ನು ಹೇಳಿದೆ, ನೀನು .. “ಶೋಭನ ಗಿಂತ ನನ್ನನ್ನು ಹೆಚ್ಚಾಗಿ ಪ್ರೀತಿಸು ಎಂದು ಅವಳು ನಂಬಿದ್ದಾಳಯೆ?' ಎಂದಳು.
{{gap}}ಯುವಕನು ಏನೋ ಉತ್ತರವನ್ನು ಕೊಡಲಿಲ್ಲ. ಮಾಲತಿಯು ಪುನಃ ಶೋಭನೆಯು ಮನಸ್ಸಿನಲ್ಲಿ ನಂಬಿರುವುದು, ಅವಳಿಗಿಂತಲೂ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತಿಂದಲ್ಲವೆ? ಎಂದಳು. ಯಂತ್ರದಂತೆ ನಿಂತಿದ್ದ ಯುವಕನ ಬಾಯಿಂದ ( ಅಹುದು ” ಎಂಬ ಮಾತು ಹೊರಟಿತು.
{{gap}}ಇದ್ದಹಾಗೆ ಆ ಸಮಯಕ್ಕೆ ಸರ್ಯಾಗಿ ಶೋಭನೆಯು ಹಿಂದೆ ಒಂದು ನಿಂತಳು. ಆಗ ಮಾಲತಿಯು ಕೇಳಿದ ಕಡೆಯ ನಿನ್ನನ್ನು ನೀನು ಹೆಚ್ಚಾಗಿ ಪ್ರೀತಿಸುತ್ತಿಯೆಂದಲ್ಲವೆ?'' ಎಂಬ ಪ್ರಷ್ಣೆಯೂ ಅದಕ್ಕೆ ಯುವಕನು ಕೊಟ್ಟ ಕಡೆಯ; ಅಹುದು ' ಎಂಬ ಉತ್ತರವೂ ಅವಳ ಕಿಗೆ ಬಿದ್ದುವು. ಅದರಲ್ಲಿ ಮತ್ತೇನೂ ತಪ್ಪಿಲ್ಲ, ಅನುಮಾನವೂ ಇಲ್ಲ, ಆಗವಳ ಕಣ್ಣು<noinclude></noinclude>
6peh5ld94vu87p8nr0xcemtrz9evr8r
ಪುಟ:ಮಾಲತಿ.djvu/೩೬
104
65269
321236
260936
2026-05-20T07:45:42Z
Shreelatha.Halemane
7642
321236
proofread-page
text/x-wiki
<noinclude><pagequality level="3" user="Ashay vb" />{{rh|೧೮|ಮಾಲತೀ}}
{{custom rule|w|160|w|160|w|160|w|160}}</noinclude>{{gap}}ಶೋಭನೆಯು ಹಿಂದೆ ಬಂದುನಿಂತು ಆಕಾರಣವಾಗಿ ಅಲ್ಲಿಂದ ಹೊರಟು ಹೋದುದನ್ನು ಕಂಡು ರಮೇಶನೂ ವಮಾಲತಿಯೂ ಅವಳ ಹಿಂದೆ ಹೋದರು. ಶೋಭನೆಯು ನದಿಯಲ್ಲಿ ಧುಮುಕಿದ ನಿಮಿಷವೇ ರಮೇಶನೂ ನದಿಯಲ್ಲಿ ಹಾರಿ ಅವಳನ್ನು ನೀರಿನಿಂದೆತ್ತಿ ತೀರಕ್ಕೆ ತಂದನು. ಮಾಲತಿಯು ಕಲ್ಲಿನ ಪ್ರತಿಮೆಯಂತೆ ಸ್ತ೦ಭಿತೆಯಾಗಿ ಅಲ್ಲಿಯೇ ನಿಂತಿದ್ದಳು.
{{Css image crop
|Image = ಮಾಲತಿ.djvu
|Page = 36
|bSize = 377
|cWidth = 69
|cHeight = 21
|oTop = 153
|oLeft = 155
|Location = center
|Description =
}}
{{center|{{x-larger|ನಾಲ್ಕನೆಯ ಪರಿಚ್ಛೇದ.}}}}
{{rule|8em}}
{{gap}}ರಮೇಶನು ಶೋಭನೆಯನ್ನು ಎತ್ತಿಕೊಂಡು ಒಂದು ಮನೆಯಲ್ಲಿ ಮಲಗುವ ಕೊಠಡಿಯಲ್ಲಿ ಸೋಫಾದಮೇಲೆ ಮಲಗಿಸಿ ತಾನು ಅವಳ ಪಾರ್ಶ್ವದಲ್ಲಿ ಕುಳಿತುಕೊಂಡನು. ಶೋಭನೆಯು ನಾಲ್ಕೂ ಕಡೆ ನೋಡಿದಳು. ಈ ಜನ್ಮದಲ್ಲಿ ಪುನಃ ನೋಡುವುದಿಲ್ಲವೆಂದು ಯೋಚಿಸಿದ್ದ ಪದಾರ್ಥಗಳು ಪುನಃ ಆಳ ಕಣಿಗೆ ಬಿದ್ದುವು. ಅದೇ ಮನೆ ಅದೇ ಕೊಠಡಿ E&, ೧ರ ಹರಾ ವೆ ಗಲೆ.* * * : ಸಹ ಇದು ನಿಮ್ಮ ಸರದ.8 ಖಗಳಿಗೆ ಕಸಿ . ೧ ವಾದ ... ಧ ತಳು ೧: ೬೨ಾಗಿ ಆನೆಕೆ ರ್ಕಾರ್ಯ ಗಳು ನಡೆದ ಅದೆ- ಮನೆ೯೧ ವ..? – ಹಾಸಿಗೆ ಹಾಕಿ ತೆಯೆ ಇದೆ, ಸ ದ ಒ೪ ಇದ್ದ ಸಣ್ಣ ಮೇಜಿನ ಮೇಲೆ ಒತ್ಸಾ ಎಳ ನಾಟಕ, ಉತ್ತರರಾಮಚರಿತೆ, ಶಕುಂತಲೆ ಮುಂತಾದ ಪ್ರಸ್ಥಕಗಳು ಹಾಗೇನೇ ಅವೆ, ದೀಪವು ಉರಿಯುತ್ತಿದೆ, ಆದರೆ ಎಣ್ಣೆಯಿಲ್ಲದೆ ಪ್ರಕಾಶವು ಕಡಿಮೆ; ಸಾವನನ ಪ್ರಾಣದಂತೆ ತುಡುಕೂಳ್ಳು ತ್ತಿದೆ, ನಂದಿಜೋಗುವಂತಾಗಿ ನೊಂದಿಗೆ ಆಗುವುದಿಲ್ಲ, ಶೋಭನೆಯ ಪಾಣವೂ ಹಾಗೇನೇ ನೆಂದಿಗಿದ್ದುದು ನೋಂದಿಹೋಗಲಿಲ್ಲ ಶೋಭನೆಯು ನಾಚಿ ಕೆಯಿಂದ ಅದುವರೆಗೂ ಸ್ವಾಮಿಯ ಮುಖವನ್ನು ನೋಡದಿದ್ದವಳು ಆಗ ನೋಡಿದಳು. ಅವ ಹೃದಯರತ್ನವನ್ನು ನೋಡುವ ಆಸೆಯನ್ನು ತೋರದಿ ದ್ದಳೆ ಅಂಧಾ ಸ್ವಾಮಿಯು ಪುನಃ ಗೊರಕುವನೆ ? ನೃಗ ಭಾವದಿಂದ ಅಂಧಾ ಸ್ವಾಮಿಯನ್ನು ನೋಡಿದಳು. ವಿಷಾದದಿಂದ ಗಂಭೀರವಾಗಿದ್ದ<noinclude></noinclude>
pgvmu5fb30yig3ms07bwju73xjp0d1d
ಪುಟ:ಶ್ರೀ ಕೃಷ್ಣ ಲೀಲೆ.djvu/೫೭
104
68731
320828
169181
2026-05-19T13:45:34Z
Shreelatha.Halemane
7642
/* Validated */
320828
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಕೃಷ್ಣಲೀಲೆ |left=೪೨|right=}}</noinclude>
ಚಂದ್ರನಿಗೆ ದಿವ್ಯಗುಣ ಸಾಂದ್ರನಿಗೆ ಸರ್ವನಿಸ್ತ೦ದ್ರನಿಗೆ ಧರ್ಮಸ೦ಕ್ರಂದ ನನಿಗೆ |
ಬೃಂದಾರಕಾವಳೀವಂದ್ಯನಿಗೆ ಸತತ ಸ್ವಚ್ಚಂದನಿಗೆ ನಿರ್ಮಲಾನಂದ ನಿನಗೆ ಸ್ವಾಗತ!!
ಶೀಲನಿಗೆ ಭಕ್ತಜನ ಲೋಲನಿಗೆ ಸದ್ಯ ಪರಿಪಾಲನಿಗನಂತ ಜಗಮೂಲ ನಿನಗೆ
ಕಾಲಾನುಕೂಲ ಶುಭಲೀಲಾ ವಿನೋದಗುಣ ಜಾಲನಿಗೆ ಶಿವರಾಮಪಾಲ
ನಿನಗೆ || ಸ್ವಾಗತ ||
{{gap}}ಪರಮಾತ್ಮನೆ ! ಅನಂತಕೋಟಿ ಬ್ರಹ್ಮಾಂಡಗಳಿಗೆ ಒಡೆಯನಾ ಗಿಯೂ, ಸರ್ವಸಾಕ್ಷಿಯಾಗಿ ಸಮಸ್ತವನ್ನೂ ನೋಡತಕ್ಕವನಾಗಿಯೂ, ಜ್ಞಾನಾನಂದ ಸ್ವರೂಪನಾಗಿಯೂ, ಸರ್ವತಂತ್ರ) ಸ್ವತಂತ್ರನಾಗಿಯೂ, ಸರ್ವಾಧಿಕಾರಿಯಾಗಿಯೂ,ಸರ್ವಾಂತರ್ಯಾಮಿಯಾಗಿಯೂ, ಸರ್ವಜ್ಞತ್ವ ಸರ್ವಶಕ್ತಿತ್ವಾದಿ ಷಡ್ಗುಣೇಶ್ವರ್ಯ ಸಂಪನ್ನನಾಗಿಯೂ, ವಾತ್ಸಲ್ಯ, ಅಭಯಪ್ರದಾನ, ಅರಿವರಿಹಾರಾದಿ ಕಲ್ಯಾಣಗುಣ ಪರಿಪೂರ್ಣನಾಗಿಯೂ,ಕರುಣಾಸಮುದ್ರನಾಗಿಯೂ, ವಾಚಾಮಗೋಚರನಾಗಿಯೂ, ಜ್ಞಾನನೇತ್ರಗೋಚರನಾಗಿಯೂ ಇರುವ ನೀನು, ಪಾಮರರಾದ ನಮ್ಮನ್ನು ಕಟಾಕ್ಷಿಸಲೆಳಸಿ ನಿನ್ನಿ ಅಪ್ರಾಕೃತ ದಿವ್ಯ ಮಂಗಳಸ್ಪರೂಪ ಸಂದರ್ಶನವನ್ನು ನಮಗನುಗ್ರಹಿಸಿರುವುದನ್ನು ನೋಡಿದರೆ, ನಿನ್ನ ಅವ್ಯಾಜ ಕಾರುಣ್ಯವು ಚೆನ್ನಾಗಿ ವ್ಯಕ್ತವಾಗುತ್ತದೆ. "ಪ್ರಕೃತಿಂ ಸಮಧಿಷ್ಠ ಯ ಸಂಭವಾಮ್ಯಾತ್ಮ ಮಾಯಯಾ” ಎಂಬ ನಿನ್ನ ಸನಾತನ ಧರಸೂ ಇದಂತ, ನಿನಗಧೀನವಾದ ಮಾಯೆಯನ್ನವಲಂಬಿಸಿ ಇಚ್ಚಾ ಮಾತ್ರ ವಾದ ದಿವ್ಯಶರೀರ ಪರಿಗ್ರಹವನ್ನು ಮಾಡುತ್ತಿರುವ ನಿನ್ನ ದಿವ್ಯ ಮಹಿಮೆಯನ್ನು ಬಣ್ಣಿಸಲು ನಾನೆಷ್ಟರವನು ? ಪರಬ್ರಹ್ಮಸ್ವರೂಪನೆ ! ಪರಮ ತಪೋಧನರಾದ ಯೋಗಿಗಳ ಜ್ಞಾನಚಕ್ಷುಗಳಿಗೆ ಪಾತ್ರವಾದ ಈ ನಿನ್ನ ತೇಜೋಮಯಾಕಾರವು ಕೇವಲ ದುಃಖ ಭಾಜನರಾದ ನಮಗೆ ಲಭಿಸಿದುದರಿಂದ ನಾವು ಧನ್ಯರಾದೆವು. ಶರಣಾಗತರಾದ ನಾವು ನಿನ್ನವರಾಗಿರುವೆವು. ನಮ್ಮನ್ನು ಆಜ್ಞಾಪಿಸತಕ್ಕ ಪ್ರಭುವು ನೀನಾಗಿರುವೆ. ಪರಂಧಾಮನೆ! ನಿನ್ನ ಚಿತ್ತವೇ ನಮ್ಮಭಾಗ್ಯವು !
{{center|(ಎಂದು ವಸುದೇವನು ನಮಸ್ಕರಿಸುವನು.)}}
{{gap}}ದೇವಕಿ:-ಭಕ್ತ ತ್ರಾಪರಾಯಣನಾದ ಶ್ರೀಮನ್ನಾರಾಯಣನೆ ! ಲಕ್ಷ್ಮೀವಲ್ಲಭನೆ! ಲಾವಣ್ಯಮೂರ್ತಿಯೆ ! ಅನಂತನಾಮರೂಪಗಳನ್ನೂ<noinclude></noinclude>
fmmkzeqxe1bawd3qbmi3l6blx5pazpb
ಪುಟ:ಶ್ರೀ ಕೃಷ್ಣ ಲೀಲೆ.djvu/೭೦
104
68744
320829
169913
2026-05-19T13:47:15Z
Shreelatha.Halemane
7642
/* Validated */
320829
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕೃಷ್ಣಲೀಲೆ|left=|right=೫೫}}
{{gap}}ಕಂಸನಿಂದ ಹಾರಿಸಲ್ಪಟ್ಟ, ಶಿಶುವು ನೆಲಕ್ಕೆ ಬೀಳದೆ, ಗಗನಮಂ
ಡಲದಲ್ಲಿ ನಿಂತು ನೂತನ ವಿಕಸಿತವಾದ ಪುಷ್ಪಮಾಲೆಗಳಿಂದಲೂ,ಕೆಂಬ
ಣ್ಣದ ಸೀರೆಯಿಂದಲೂ, ಸುಗಂಧ ಪರಿಮಳಗಳಿಂದಲೂ, ರತ್ನ ಖಚಿತವಾದ
ಆಭರಣಗಳಿಂದಲೂ, ತನ್ನ ಎಂಟು ಕೈಗಳಲ್ಲಿಯೂ ಧರಿಸಿದ ಗದಾ-ಶಂಖ-
ಚಕ್ರ-ಖಢ್ಗ-ಬಾಣ-ಬಿಲ್ಲು-ಡವರುಕ-ಶೂಲ ಮುಂತಾದ ಆಯುಧಗಳಿಂ
ದಲೂ ಶೋಭಿಸುತ್ತ, ಸಿದ್ದ ಚಾರಣ ಗಂಧರ್ವಾದಿಗಳು ಸಮರ್ಪಿಸುವ
ಕರ್ಪೂರದಾರತಿಗಳನ್ನು ಸ್ವೀಕರಿಸುತ್ತ ಕಂಸನನ್ನು ಕುರಿತು ಧಿಕ್ಕ
ರಿಸಿ ಮಾತನಾಡುವಳು.
{{gap}}'''ಯೋಗಮಾಯೆ''':-...ಎಲ್ಲಿ ದುರಾತ್ಮನಾದ ಕಂಸನೆ ! ಒಡಹು
ಟ್ಟಿದ ತಂಗಿ ಎಂದೆಣಿಸದೆ ಮದೋನ್ಮತ್ತನಾಗಿ ಹಾರಿ ಬೀಳುತ್ತಿರುವೆ. ದೇವ
ಕಿಯ ಗರ್ಭದಲ್ಲಿ ಹುಟ್ಟಿದ ಆರುಮಂದಿ ಪಸುಕಂದರನ್ನೂ ಕೊಂದೆ.
ಅಷ್ಟಕ್ಕಾದರೂ ಸುಮ್ಮನಿರದೆ ನನ್ನ ಕಾಲುಗಳನ್ನು ಹಿಡಿದು ಮೇಲ
ಕ್ಕೆಸೆದೆ. ಚೀ ಚೀ ಚಾಪಿ ! ಮದಾಂಧಾ ! ಹುಟ್ಟಿದ ಮಕ್ಕಳನ್ನೊ೦ದು
ಕ್ಷಣವಾದರೂ ಇರಗೊಡಿಸದೆ, ಕೊಲೆಪಾತಕನಾದ ಕಟುಕನಂತೆ ಸಂಹ
ರಿಸುತ್ತಿರುವೆಯಲ್ಲಾ! ಎಳೆಮಕ್ಕಳನ್ನು ಕೊಲ್ಲುವುದೊಂದು ಶೂರ
ತ್ವವೆ ? ಎಲವೋ ದುರ್ಮತಿ ! ನಿನ್ನ ನ್ನು ಸಂಹರಿಸಿ ಲೋಕಕ್ಕೆ ಕುಶ
ಲವನ್ನುಂಟು ಮಾಡತಕ್ಕ ಮಹಾತ್ಮನು ಬೇರೊಂದುಕಡೆ ಅವತರಿಸಿರು
ವನೆಂದು ತಿಳಿ, ಆತನು ನಿನ್ನ ಗರ್ವವನ್ನು ಮುರಿದು ನಿನ್ನನ್ನು ಯಮನ
ಬಳಿಗೆ ಕಳುಹಿಸುವನು. ಆ ನಿನ್ನ ಅವಸಾನಕಾಲದಲ್ಲಿ ನಾನು ಮೃತ್ಯು
ದೇವತಾರೂಪದಿಂದ ಬಂದು ನಿನ್ನ ರಕ್ತವನ್ನು ಹೀರುವೆನು, ದೈವದ್ರೋಹಿ!
ನಿನ್ನ ವಿನಾಶಕಾಲವು ಸವಿಾಪಿಸುತ್ತಿದೆ. ಮೆರೆಯದಿರು ! ಮೆರೆಯದಿರು!
(ಎಂದು ಕಂಸನನ್ನು ಜರೆದಾಡುತ ಯೋಗಮಾಯೆಯು ಅದೃಶ್ಯಳಾಗುವಳು.) .
{{gap}}ಕಂಸನು ಭಯಭ್ರಾಂತಚಿತ್ತನಾಗಿ ಗಡಗಡನಡುಗುತ, ತನ್ನ
ದುಷ್ಕಾರ್ಯಕ್ಕೆ ಪಶ್ಚಾತ್ತಾಪಡುತ, ದೇವಕೀ ವಸುದೇವರ ಪಾದಗಳಿ ಗೆರಗಿ ಕ್ಷಮಾಪಣೆ ಬೇಡುವನು.
{{gap}}ಕಂಸ:- ತಂಗಿ ದೇವಕಿ! ಭಾವಾ ವಸುದೇವ! ನಾನು ಮಾಡಿದ ಮಹಾಪರಾಧಗಳನ್ನು ಕ್ಷಮಿಸಿರಿ. ಸಾಧುಮಾರ್ಗವನ್ನು ತೊರೆದು,<noinclude></noinclude>
618ae7mgrjsoc4bnndvez8pc3rzc5fi
320830
320829
2026-05-19T13:47:32Z
Shreelatha.Halemane
7642
320830
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕೃಷ್ಣಲೀಲೆ|left=|right=೫೫}}
{{gap}}ಕಂಸನಿಂದ ಹಾರಿಸಲ್ಪಟ್ಟ, ಶಿಶುವು ನೆಲಕ್ಕೆ ಬೀಳದೆ, ಗಗನಮಂ
ಡಲದಲ್ಲಿ ನಿಂತು ನೂತನ ವಿಕಸಿತವಾದ ಪುಷ್ಪಮಾಲೆಗಳಿಂದಲೂ,ಕೆಂಬ
ಣ್ಣದ ಸೀರೆಯಿಂದಲೂ, ಸುಗಂಧ ಪರಿಮಳಗಳಿಂದಲೂ, ರತ್ನ ಖಚಿತವಾದ
ಆಭರಣಗಳಿಂದಲೂ, ತನ್ನ ಎಂಟು ಕೈಗಳಲ್ಲಿಯೂ ಧರಿಸಿದ ಗದಾ-ಶಂಖ-
ಚಕ್ರ-ಖಢ್ಗ-ಬಾಣ-ಬಿಲ್ಲು-ಡವರುಕ-ಶೂಲ ಮುಂತಾದ ಆಯುಧಗಳಿಂ
ದಲೂ ಶೋಭಿಸುತ್ತ, ಸಿದ್ದ ಚಾರಣ ಗಂಧರ್ವಾದಿಗಳು ಸಮರ್ಪಿಸುವ
ಕರ್ಪೂರದಾರತಿಗಳನ್ನು ಸ್ವೀಕರಿಸುತ್ತ ಕಂಸನನ್ನು ಕುರಿತು ಧಿಕ್ಕ
ರಿಸಿ ಮಾತನಾಡುವಳು.
{{gap}}'''ಯೋಗಮಾಯೆ''':-...ಎಲ್ಲಿ ದುರಾತ್ಮನಾದ ಕಂಸನೆ ! ಒಡಹು
ಟ್ಟಿದ ತಂಗಿ ಎಂದೆಣಿಸದೆ ಮದೋನ್ಮತ್ತನಾಗಿ ಹಾರಿ ಬೀಳುತ್ತಿರುವೆ. ದೇವ
ಕಿಯ ಗರ್ಭದಲ್ಲಿ ಹುಟ್ಟಿದ ಆರುಮಂದಿ ಪಸುಕಂದರನ್ನೂ ಕೊಂದೆ.
ಅಷ್ಟಕ್ಕಾದರೂ ಸುಮ್ಮನಿರದೆ ನನ್ನ ಕಾಲುಗಳನ್ನು ಹಿಡಿದು ಮೇಲ
ಕ್ಕೆಸೆದೆ. ಚೀ ಚೀ ಚಾಪಿ ! ಮದಾಂಧಾ ! ಹುಟ್ಟಿದ ಮಕ್ಕಳನ್ನೊ೦ದು
ಕ್ಷಣವಾದರೂ ಇರಗೊಡಿಸದೆ, ಕೊಲೆಪಾತಕನಾದ ಕಟುಕನಂತೆ ಸಂಹ
ರಿಸುತ್ತಿರುವೆಯಲ್ಲಾ! ಎಳೆಮಕ್ಕಳನ್ನು ಕೊಲ್ಲುವುದೊಂದು ಶೂರ
ತ್ವವೆ ? ಎಲವೋ ದುರ್ಮತಿ ! ನಿನ್ನ ನ್ನು ಸಂಹರಿಸಿ ಲೋಕಕ್ಕೆ ಕುಶ
ಲವನ್ನುಂಟು ಮಾಡತಕ್ಕ ಮಹಾತ್ಮನು ಬೇರೊಂದುಕಡೆ ಅವತರಿಸಿರು
ವನೆಂದು ತಿಳಿ, ಆತನು ನಿನ್ನ ಗರ್ವವನ್ನು ಮುರಿದು ನಿನ್ನನ್ನು ಯಮನ
ಬಳಿಗೆ ಕಳುಹಿಸುವನು. ಆ ನಿನ್ನ ಅವಸಾನಕಾಲದಲ್ಲಿ ನಾನು ಮೃತ್ಯು
ದೇವತಾರೂಪದಿಂದ ಬಂದು ನಿನ್ನ ರಕ್ತವನ್ನು ಹೀರುವೆನು, ದೈವದ್ರೋಹಿ!
ನಿನ್ನ ವಿನಾಶಕಾಲವು ಸವಿಾಪಿಸುತ್ತಿದೆ. ಮೆರೆಯದಿರು ! ಮೆರೆಯದಿರು!
(ಎಂದು ಕಂಸನನ್ನು ಜರೆದಾಡುತ ಯೋಗಮಾಯೆಯು ಅದೃಶ್ಯಳಾಗುವಳು.) .
{{gap}}ಕಂಸನು ಭಯಭ್ರಾಂತಚಿತ್ತನಾಗಿ ಗಡಗಡನಡುಗುತ, ತನ್ನ
ದುಷ್ಕಾರ್ಯಕ್ಕೆ ಪಶ್ಚಾತ್ತಾಪಡುತ, ದೇವಕೀ ವಸುದೇವರ ಪಾದಗಳಿ ಗೆರಗಿ ಕ್ಷಮಾಪಣೆ ಬೇಡುವನು.
{{gap}}ಕಂಸ:- ತಂಗಿ ದೇವಕಿ! ಭಾವಾ ವಸುದೇವ! ನಾನು ಮಾಡಿದ ಮಹಾಪರಾಧಗಳನ್ನು ಕ್ಷಮಿಸಿರಿ. ಸಾಧುಮಾರ್ಗವನ್ನು ತೊರೆದು,<noinclude></noinclude>
d2qezaqa92km3yzcqh19a1sa43ftbhg
ಪುಟ:ಶ್ರೀ ಕೃಷ್ಣ ಲೀಲೆ.djvu/೧೩೯
104
68813
320827
320778
2026-05-19T13:42:59Z
Shreelatha.Halemane
7642
/* Validated */
320827
proofread-page
text/x-wiki
<noinclude><pagequality level="4" user="Shreelatha.Halemane" />{{rh|left=|center=ಚತುರ್ಥಾ೦ಕ೦.|right=೧೨೩}}</noinclude>ನಾದ ಕಾಳೀಯನನ್ನು ಮರ್ದಿಸಿ ಸಮುದ್ರಕ್ಕೆ ಹೊರಡಿಸಿದನು. ದಾವಾಗ್ನಿಯನ್ನು ನುಂಗಿ ಗೋವುಗಳನ್ನೂ ಗೋವಸಂಘವನ್ನೂ ಕಾಪಾಡಿದನು, ಕ್ಷುದ್ರ ಪೂಜಾರೂಪವಾದ ಇಂದ್ರಯಾಗವನ್ನು ನಿಲ್ಲಿಸಿ ಅಹಿಂಸಾಧರ್ಮವನ್ನು ಸ್ಥಾಪಿಸಿದನು. ಗೋವರ್ಧನಪರ್ವತವನ್ನು ಬೆರಳಿನಿಂದೆತ್ತಿ ದೇವೇಂದ್ರನ ಗರ್ವವನ್ನು ಭಂಗಪಡಿಸಿದನು. ಇಂತು ಗೋಪಾಲಬಾಲ ನಂದದಿ ಭಗವಂತನು ತೋರ್ಪಡಿಸುತ್ತಿರುವ ಲೀಲಾ ವಿನೋದಗಳು ಒಂದೊಂದೂ ಅತ್ಯದ್ಭುತವಾಗಿರುವುವು. ಸರ್ವಜ್ಞನಾದ ತಾನು ಶ್ರೀ ರಾಮಾವತಾರವನ್ನು ಧರಿಸಿ ಆರಣ್ಯವಾಸದಲ್ಲಿದ್ದಾಗ, ಸಚ್ಚಿದಾನಂದ ಸ್ಪರೂಪನಾದ ತನ್ನನ್ನು ನೋಡಿ ಬ್ರಹ್ಮರ್ಷಿಗಳು ಸಹ ಭ್ರಮಿಸುವಂತೆ ರಾರಾಜಿಸಿದನು. ಆಗ ತನ್ನ ಸರ್ವಾಂಗ ಸೌಂದರವನ್ನು ನೋಡಿ ಸಮ್ಮೋಹಿತರಾದ ಬ್ರಹ್ಮರ್ಷಿಗಳು, ತನ್ನನ್ನು ಆಲಿಂಗನ ಮಾಡಿ ಕೊಳ್ಳಬೇಕೆಂದು ಬಯಸಿದಾಗ, ಅವರ ಅಭಿಷ್ಟ್ಯವು ಆಗ ಸಾಧ್ಯವಿಲ್ಲವೆಂತಲೂ, ತಾನು ಕೃಷ್ಣಾವತಾರವನ್ನು ಧರಿಸಿದಾಗ ಬ್ರಹ್ಮಋಷಿಗಳೆಲ್ಲರೂ ಗೋಕುಲದಲ್ಲಿ ಗೋಪಸ್ತ್ರೀಯರಾಗಿ ಹುಟ್ಟಬೇಕಂತಲೂ, ಹಾಗೆ ಹುಟ್ಟಿದಾಗ ಅವರ ಇಷ್ಟಾಥ್ಯವನ್ನು ಸಫಲಗೊಳಿಸುವಂತೆಯೂ ವಾಗ್ದಾನಮಾಡಿದನು. ಅದರಂತೆಯೇ ಬ್ರಹ್ಮವೇತ್ತರಾದ ಋಷಿಮುನಿಗಳು ಈಗ ಗೋಪಿಯರಾಗಿ ಹುಟ್ಟಿರುವರು. ಶ್ರೀರಾಮಾವತಾರದಲ್ಲಿ ತಾನುಮಾಡಿದ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕಾಗಿ ಸತ್ಯವ್ರತ ನಾದ ಭಗವಂತನು ಅತ್ಯಂತಪುಣ್ಯದಿವಸವಾದ ಮಾರ್ಗಶಿರ ಶುಕ್ಲ ಪಾಡ್ಯಮಿಯ ದಿವಸ, ಯಮುನಾಜಲದಲ್ಲಿ ಗೋಪಿಯರು ಮಂಗಳಸ್ನಾನ ಮಾಡುತ್ತಿರುವ ಸಮಯವನ್ನು ತಿಳಿದು, ಅವರ ವಸ್ತ್ರಗಳನ್ನಪಹರಿಸಿ, ನದೀತೀರದಲ್ಲಿರುವ ಕಡಗದ ಮರವನ್ನೇರಿ ಕುಳಿತನು. ಗೋಪಿಯರು ತಮ್ಮ ವಸ್ತ್ರಗಳನ್ನು ಕಾಣದೆ, ಸ್ಪಲ್ಪ ಹೊತ್ತು ವಿಚಾರಮಗ್ನರಾಗಿದ್ದು, ಅದು ಕೃಷ್ಣನ ಕಾರ್ಯಯವೆಂದರಿತು, ವಸ್ತ್ರಗಳನ್ನು ಕೊಡೆಂದು ಬೇಡಲಾಗಿ ವಿಗಳಿತವಸ್ತ್ರರಾದ ಅವರಿಂದ ನಮಸ್ಕಾರಗಳನ್ನು ಪಡೆದು ವಸ್ತ್ರಗಳನ್ನನುಗ್ರಹಿಸಿದನು. ಭಗವಂತನ ದಿವ್ಯಸಂದರ್ಶನಾಪೇಕ್ಷಿಗಳಾದ ಬ್ರಹ್ಮನಿಷ್ಠರು ಅಜ್ಞಾನಾವರಣವನ್ನು ಪರಿತ್ಯಜಿಸಿದ ಹೊರತು, ಹೀಗೆ ಪರಮಾರ್ಥಸಿದ್ಧಿಯಾಗುವುದಿಲ್ಲವೋ, ಅದರಂತೆಯೇ<noinclude></noinclude>
1nby4vzedzp9ce256c4zaipmhjdcgfh
ಪುಟ:ನಡೆದದ್ದೇ ದಾರಿ.pdf/೧೪೩
104
76900
321027
319198
2026-05-20T03:44:14Z
Shreelatha.Halemane
7642
/* Validated */
321027
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೧೩೬|center=|right=ನಡೆದದ್ದೇ ದಾರಿ}}
ಬಂದೀರಿ, ಒಂದು ಜೋಡು ಹೊಲಿಸಿ ಬಿಡ್ರಿ. ನೀವು ಕೊಟ್ಟ ಆರಿವಿ ಹಾಕ್ಕೊಂಡು ಬೆಳೆದಾವ ನನ್ನ ಮಕ್ಕಳು. ಸಂಜೆ ವಾಕಿಂಗ್ ಮುಗಿಸಿ ಬಂದ ತಮ್ಮ ಹೇಳುತ್ತಾನೆ, 'ಹಿತ್ತಲ ಕಡೆಯ ಮಾಳಗಿ ಬೀಳಲಿಕ್ಕಾಗೇದ ಅಕ್ಕಾ, ರಿಪೇರಿ ಮಾಡಸದಿದ್ರ ಮಳೆಗಾಲ ಕಳೆಯೋದು ಕಠಿಣ ಆದ. ಈ ತುಟ್ಟಿ ಕಾಲದಾಗ ಎಲ್ಲಾ ನಿಭಾಯಿಸೋದು ಅಂದ್ರ
{{gap}}ಹೀಗೇ ಕೊನೆಯಿಲ್ಲದ ಗೋಳಿನ ಕತೆ. ದೇವರೇ ಯಾಕೆ ಬಂದೆ ಇಲ್ಲಿಗೆ ಎನ್ನಿಸಿ ಬಿಡುತ್ತದೆ. ಹೇಗೋ ಎರಡು ದಿನ ಕಳೆದು ತಿರುಗಿ ಊರಿಗೆ ಹೊರಡುತ್ತಾಳೆ ತಾನು, ಸ್ವಲ್ಪ ಹಣ ತಮ್ಮನ ಕೈಯಲ್ಲಿಟ್ಟು, 'ಮತ್ತೆ ಊರಿಗೆ ಹೋಗಿ ಕಳಿಸುತ್ತೇನೆಂದು ಆಶ್ವಾಸನೆ ಕೊಟ್ಟು, ತುಂಬಿದ ಬೇಸರದಿಂದ ಟ್ರೇನು ಹತ್ತುತ್ತಾಳೆ. ಲೋಂಡಾ ಬಂದೀತೇ ಎಂದು ಕಾಯುತ್ತಾಳೆ. “ಬಾಯಿ ಸಾಬ್ಕೊ ಖಾನಾ ಲಾವ್ರ ?' ಎಂದು ಕೇಳುತ್ತಾನೆ ಕಿಡಿಕಿಯಾಚೆಯಿಂದ ಆ ಮಿಠಾಯಿವಾಲಾ. ಅಷ್ಟೇ ಅವನು ಮಾತಾಡುವುದು. ತಾನು “ಹೂ" ಅಂದ ಕೂಡಲೇ ಮಿಠಾಯಿಯ ಗಾಡಿ ಅಲ್ಲೇ ಬಿಟ್ಟು ಓಡುತ್ತಾನೆ.... ತಿರುಗಿ ತನ್ನ ಟ್ರೇನು ಹೊರಟಾಗ ಪ್ಲಾಟ್ಫಾರ್ಮಿನ ತುದಿಗೆ ನಿಂತು ಕೈ ಬೀಸುತ್ತಾನೆ.
{{gap}}“ನಿಂದೂ ತವರಮನೀ ಸಲುವಾಗಿ ಭಾಳ ಅಂತಃಕರಣ. ಇಷ್ಟು attachment ಇರವು ಆಗದೀ ಕಡಿಮಿ" -ಅನ್ನುತ್ತಾನೆ ಗಂಡ.
{{gap}}-ಹತ್ತು ಗಂಟೆ.
{{gap}}ಬಿಸಿಲು ಏರತೊಡಗಿದೆ. ಕಿಡಿಕಿಗುಂಟ ಒಳಗೆ ಇಳಿದುಬಂದಿದೆ. ಕಿಡಿಕಿ ಮುಚ್ಚಲು ಮನಸ್ಸಿಲ್ಲ.
{{gap}}“ಬಿಸಿಲು ನಿಮಗೆ ಒಳ್ಳೇದಲ್ಲ " -ಮೊನ್ನೆ ಹೇಳಿದ್ದರು ಡಾಕ್ಟರು ತನಗೆ, ಬಹಳ ಆತ್ಮವಿಶ್ವಾಸದ ಮನುಷ್ಯ ಆ ಡಾಕ್ಟರು. ಸತೀಶನ ಆಪ್ತ ಗೆಳೆಯನಂತೆ. ಹಚ್ಚಹ, ಹೇಗೆ ಗೋಳುಗುಟ್ಟಿಸಿದ್ದೆ ಅವನನ್ನು ತಾನು ಹತ್ತು ವರ್ಷಗಳ ಹಿಂದೊಮ್ಮೆ !
{{gap}}ಹತ್ತು ವರ್ಷಗಳ ಹಿಂದೆ ಮೊದಲ ಸಲ ತಾನು ಬಸಿರಿಯಾದಾಗ ಸತೀಶನಿಗಿಂತ ಹೆಚ್ಚು ಸಂಭ್ರಮಪಟ್ಟಿದ್ದ ಅವನು. “ನಮ್ಮ ಸತೀಶಗ ಮಕ್ಕಳ ಮ್ಯಾಲೆ ಭಾಳ ಪ್ರೀತಿ ಭಾಭಿ. ನೀವು ನಿಮ್ಮ ಸಲುವಾಗಿ ಭಾಳ ಕಾಳಜಿ ತಗೋಬೇಕು. ದಿನಾ ತಪ್ಪದೆ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದ ಅವನು. “ಎಲ್ಲಾ ನಿನ್ನ ಜವಾಬ್ದಾರಿ ನೋಡಪಾ" ಎನ್ನುತ್ತಿದ್ದ ಸತೀಶ.
{{gap}}ಮುಂದೆ ನಾಲ್ಕು ತಿಂಗಳ ನಂತರ ಒಂದು ದಿನ ಆಕಸ್ಮಿಕವಾಗಿ ಗರ್ಭಪಾತವಾದಾಗ ಸತೀಶ ಕಂಗೆಟ್ಟು ತಲೆಮೇಲೆ ಕೈಹೊತ್ತು ನಿರ್ಜಿವನಂತೆ ಕೂತಿದ್ದ. 'ಏನಾದರೂ ಅಪಥ್ಯ ಮಾಡಿದಿರಾ ಭಾಭಿ ?' ಎಂದು ಉತ್ಕಂಠಯಿಂದ ಕೇಳಿದ್ದ ಈ ಡಾಕ್ಟರು. 'ಇಲ್ಲವಲ್ಲ' – ಎಂದಿದ್ದೆ, ವಿಜಯದ ಆನಂದದಿಂದ. ಆ ಆಘಾತದಿಂದ<noinclude><references/></noinclude>
qgp126yi1lc2oh4pqit52nn1ikpqae2
ಪುಟ:ನಡೆದದ್ದೇ ದಾರಿ.pdf/೧೩೬
104
76955
320875
319149
2026-05-19T16:57:01Z
Pragathi. BH
7585
/* Validated */
320875
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{rh|center=|left=ಕೊನೆಯ ದಾರಿ / ಮುಕ್ತಿ|right=೧೨೯}}
</br>ಅವನೂ ಮುಕ್ತನಾಗುತ್ತಾನೆ ಲಫಂಗ....</br>
{{gap}}ಕಲಾ.... ತಿರುತಿರುಗಿ ಅವಳ ಹೊರಬಿದ್ದ ಕಣ್ಣುಗುಡ್ಡೆಗಳೇ ನೆನಪಾಗುತ್ತಿವೆ</br>. ಜಂತಿಗೆ ತೂಗಾಡುತ್ತಿದ್ದ ವಿಕೃತವಾದ ದೇಹ- ಶಿಲಾಬಾಲಿಕೆಯ ಮಾದಕತೆ ಇರಲಿಲ್ಲ.</br> ಭಯಂಕರವಾಗಿ ಅಂಜಿಕೆ ಬರುವಂತಿತ್ತು ಕಲಾನ ಹೆಣ.
{{gap}}ಏನೆಂದುಕೊಂಡಳೋ ಸಾಯುವಾಗ.... ಏನು ವಿಚಾರಿಸಿದ್ದಾಳು ? ನೋವಾಗಿರಬಹುದೇ ? ಹೇಗೆ ಸಹಿಸಿದ್ದಾಳು... ಹೀಗೆ ಮುಕ್ತಿ ಪಡೆಯಬಯಸುವಷ್ಟು ಆಸಹನೀಯವಾಗಿತ್ತೇ ಬದುಕು ಅವಳಿಗೆ ?.....'ಕಲಾನ ಆಶಾ ಬಿಟ್ಟ ಬಿಡ್ರಿ'.....
{{gap}}ತಾನು ಹೇಗೆ ಮುಕ್ತನಾಗುವುದು ಇದರಿಂದ ? ತಾನು.... ಎಲ್ಲರಿಗೂ ಹಿತ ಮಾಡುತ್ತ ಬಂದಿರುವ ತಾನು.... ಸುಳ್ಳಾದರೂ ಹೇಳಿ ಪರಹಿತ ಮಾಡುವ ತಾನು....? ತಾನು ಪಾಪಿಯೇ ? ಮುಕ್ತಿಯಿಲ್ಲವೇ ತನಗೆ ?
{{gap}}ಛೇ, ಹೀಗೆಲ್ಲ ಅನಿಸಬಾರದು. ಅನಿಸಿಸಿಕೊಳ್ಳಬಾರದು....
{{gap}}ಶಂಕರಮಾಮಾನ ಕಾಲು ಅಪ್ರಯತ್ನವಾಗಿ ರಸ್ತೆಯ ಬದಿಗೆ ಹೊರಳುತ್ತವೆ... ಸೋತು ಹೋಗಿದ್ದ ಕಾಲುಗಳು, ಹೈರಾಣಾಗಿದ್ದ ಮೈ-ಮನಸ್ಸು..... ಹಳೆಯ ಗುಡಿ, ಇಷ್ಟು ವರ್ಷಗಳಿಂದಲೂ ಇಲ್ಲೇ ಇತ್ತೇ ಈ ಗುಡಿ ? ತನಗೇಕೆ ಕಂಡಿರಲಿಲ್ಲ ಒಮ್ಮೆಯೂ ?
{{gap}}ದೊಡ್ಡ ಕಂಬಗಳು, ಜೀರ್ಣವಾಗಿದ್ದ ಚಪ್ಪರ, ಮಂದ ಬೆಳಕು, ಉಳಿದದ್ದೆಲ್ಲ</br> ಕತ್ತಲು.... ಈ ಕಲ್ಲು ದೇವರು ಕೊಡುತ್ತಾನೆಯೇ ತನಗೆ ಶಾಂತಿ ? ತನ್ನೊಳಗೆ ಒಂದೇ</br> ಸಮನೆ ಉರಿಯುತ್ತಿರುವ ಬೆಂಕಿ ಆರಿಸುವನೇ ಇವನು ? ಸುತ್ತೆಲ್ಲ ಕಡೆಯಿಂದ</br> ಭೋರ್ಗರೆಯುತ್ತ ತನ್ನನ್ನು ಪೂರ್ಣ ಮುಳುಗಿಸಲೆಂದು ಬರುತ್ತಿರುವ ಈ ರಾಕ್ಷಸ</br> ಅಲೆಗಳನ್ನು ತಡೆಯುವನೇ ? ತನ್ನ ಮೈತುಂಬ ಸುಡುತ್ತ ಹರಿದಾಡುತ್ತಿರುವ ಈ</br> ವಿಷವನ್ನು ತಣ್ಣಗಾಗಿಸುವನೇ ? ಕೊಡುವನೇ ಈ ನಾಲಾಯಕ ತನಗೆ ಮುಕ್ತಿಯನ್ನು</br>-
{{gap}}ಶಂಕರ ಮಾಮಾ ಪೂರಾ ಸೋತು ಕುಸಿದು ಕಲ್ಲು ಕಂಬಕ್ಕೆ ತಲೆಯೊರಗಿಸಿ ಬಿಕ್ಕಿ ಬಿಕ್ಕಿ ಅತ್ತನು.<noinclude><references/></noinclude>
gx2h81ef5k94ah3cwdrh43qu2k7ow6u
ಪುಟ:ನಡೆದದ್ದೇ ದಾರಿ.pdf/೧೩೨
104
76973
320861
318081
2026-05-19T14:43:42Z
Pragathi. BH
7585
/* Validated */
320861
proofread-page
text/x-wiki
<noinclude><pagequality level="4" user="Pragathi. BH" /></noinclude>________________
{{rh|center=|left=ಕೊನೆಯ ದಾರಿ /ಮುಕ್ತಿ|right=೧೨೫}}
ಯಾವಾಗಲೂ ನನಗ ಛಲೋದನ್ನೇ ಹೇಳತೀರಿ ಅಂತ ಗೊತ್ತದ. ನಾ ನೀವು ಹೇಳಿದಾಂಗ ಕೇಳತೀನಿ. ಅವರನ್ನ ಮರೆಯೋ ಪ್ರಯತ್ನ ಮಾಡ್ತೀನಿ.'
{{gap}}ಇನ್ನು ಚಂದ್ರಲಾಲನ ಸರದಿ.
{{gap}}ಚಂದೂಲಾಲ ಎಂಥವನಾದರೇನು, ಅವನಿಗೂ ಒಳ್ಳೆಯದಾಗಬೇಕೆಂಬುದೇ ತನ್ನ ಉದ್ದೇಶ. ಅವನೂ ಸುಖವಾಗಿರಲೆಂದೇ ತನ್ನ ಇಚ್ಛೆ.
{{gap}}'ನಾ ಹಿಂಗ ಹೇಳತೀನಂತ ತಪ್ಪು ತಿಳಕೋಬ್ಯಾಡ್ರಿ ಸರ್, ನೀವು ನನ್ನ ತಮ್ಮನ ಸರಿ, ನಿಮ್ಮ ಮುಂದಿನ ಜೀವನ ಸುಖೀ ಆಗಲೀ ಅಂತ ಇಷ್ಟೆಲ್ಲಾ ಹೇಳಿದೆ.'
{{gap}}`ಕಲಾ ಮೊದಲಿನಿಂದಲೂ ಹೀಂಗ ಅಂತೀರ ಶಂಕರ ಮಾವಾ ? ಆಕಿ ಛಲೋ ಹುಡುಗಿ ಅಂತ ತಿಳಿದಿದ್ದೆ ನಾ ಆಕೀ ಕ್ಯಾರೆಕ್ಟರ್ ಸ್ವಲ್ಪ ಲೂಜ್ ಅಂತ ನೀವು ಹೇಳಿದ್ದು ನಂಬಲಿಕ್ಕೇ ಆಗೂದಿಲ್ಲ. ಬ್ಯಾರೆ ಯಾರು ಹೇಳಿದ್ರೂ ನಾ ನಂಬಲಿಕ್ಕಿಲ್ಲ. ಆಕೀ ಮ್ಯಾಲೆ ಭಾಳ ಜನರದು ಮರ್ಜಿ ಅಂತ ಎಷ್ಟು frank ಆಗಿ ಹೇಳಿದೀರಲ್ಲಾ ಅಂತೀನಿ. ನಿಮ್ಮ ಜಾಗಾದಾಗ ಬ್ಯಾರೇ ಯಾರಿದ್ರೂ ಹೀಂಗ ಹೇಳೋ ಧೈರ್ಯ ಮಾಡತಿದ್ದಿಲ್ಲ.
{{gap}}'ನನಗೂ ಅದನ್ನ ಹೇಳಲಿಕ್ಕೆ ಕೆಟ್ಟನಸತದ ಸರ್. ಆದರ ನಮ್ಮ ಜವಾಬ್ದಾ ರಿಕಿಂತಾ ನಿಮ್ಮ ಹಿತ ಮುಖ್ಯ ನನಗ.'
{{gap}}'ಶಂಕರ ಮಾವಾ, ನೀವು ಎಷ್ಟು ನಿಸ್ವಾರ್ಥಿ ಇದ್ದೀರಿ ! ನನ್ನ ಹಿತದ ಸಲುವಾಗಿ ಎಷ್ಟು ಕಾಳಜಿ ಮಾಡತೀರಿ !
'
{{gap}}........ - ತಾನು ಸುಮ್ಮನೆ ಇದ್ದಾಗ ನಕ್ಕು ಕಣ್ಣು ಮಿಟುಕಿಸಿ ಕೇಳಿದ್ದ ಚಂದೂಲಾಲ. 'ಕಲಾನ ಮ್ಯಾಲೆ ನಿಮ್ಮದೂ ಮರ್ಜಿ ಆದ ಏನು ಮತ್ತ ?'
{{gap}}ಲುಜ್ಞಾ ಇದ್ದಾನೆ ಈ ಅಸಿ. ಮ್ಯಾನೇಜರ್, ಬಾಯಿಗೆ ಬಂದದ್ದು ಮಾತಾಡುತ್ತಾನೆ.
{{gap}}ಮೌನವೇ ಇವನಿಗೆ ಸರಿಯಾದ ಉತ್ತರ. ಬೇಕಾದದ್ದು ತಿಳಿಯಲಿ.
{{gap}}ಏನೂ ತಿಳಿದನೋ. 'ಹಹ್ಹಹ್ಮಜ್ಞಾ' ಎಂದು ಗಹಗಹಿಸಿ 'ಬೆಸ್ಟ್ ಲಕ್ ಶಂಕರ ಮಾಮಾ" ಅಂದ ಚಂದೂಲಾಲ.
{{gap}}ಎರಡು ಕ್ಷಣ ಬಿಟ್ಟು ತಾನಂದಿದ್ದ, 'ನಿಮ್ಮ ಸಲುವಾಗಿ ಬೇಕಾದ್ದು ಮಾಡ್ಲಿಕ್ಕೆ ತಯಾರಿದ್ದೀನಿ ನಾ.'
{{gap}}ತಾನಂದದ್ದರಲ್ಲಿ ಅಪ್ರಾಮಾಣಿಕತೆಯ ನೆರಳೂ ಇರಲಿಲ್ಲ.
{{gap}}ಸಂಜೆ ಆಫೀಸಿನಿಂದ ತಿರುಗಿ ಮನೆಗೆ ಹೋದಾಗ ಕೋಣೆಯಲ್ಲಿ ಕಲಾ ಡಬ್ಬು<noinclude><references/></noinclude>
dh1kdcktaarv6qhj3i97fnftve8ytbm
ಪುಟ:Praantabhaashhe-Rashhtrabhaashhe.pdf/೨೦
104
78217
321176
308674
2026-05-20T06:50:23Z
Pragathi. BH
7585
/* Validated */
321176
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೧೫—}}
ಯನ್ನು ಪಯೋಗಿಸಿದರೂ ಕರಾ ಟಕದ ಜನಸಾಮಾನ್ಯರು ಜೀವನದ ವಿವಿಧ
ಚಟುವಟಿಕೆಗಳಲ್ಲಿ ರುಚಿಗೊಂಡು ಭಾಗವಹಿಸಲಾರರು, ಹೊಣೆಗೊಂಡು
ಕವ್ಯರತಲಾಗಲಾರರು, ಪ್ರಜಾಪ್ರಭುತ್ವದ ತತ್ವದ ಪ್ರಕಾರ ತಮ್ಮಕಾರಭಾರ
ವನ್ನು ತಾವೇ ತಿಳುವಳಿಕೆಯಿಂದ ನಡೆಸಿಕೊಂಡು ಹೋಗಲಾರರು.
'ಜನರಿಂದ, ಜನರಿಗಾಗಿ ನಡೆಸಲಾದ ಜನರ ಸರಕಾರವೆ ನಿಜವಾದ
ಪ್ರಜಾಪ್ರಭುತ್ವ ಅಥವಾ ಜನಾಧಿಕಾರ' ಎಂದು ಅಬ್ರಹಾಮ ಲಿಂಕನ್ನನ
ಪ್ರಸಿದ್ಧವಚನವಿರುವದು. ಇದು ಯಥಾರವಾಗಬೇಕಾದರೆ ಎಲ್ಲ ರಾಜ್ಯ ಕಾರ
ಭಾರ, ಶಾಸನಸಭೆಗಳ ವ್ಯವಹಾರ ಇವು ಪ್ರಾಂತಿಕ ಭಾಷೆಯಲ್ಲಿಯೇ ನಡೆಯ
ಬೇಕು, ಇದು ಜನಸಾಮಾನ್ಯರ ಜನ್ಮಸಿದ್ಧ ಹಕ್ಕು ಇರುವದು. ಈ ಹಕ್ಕನ್ನು
ಅವರಿಗೆ ಕೊಡದೆ ಇತರ ಹಕ್ಕುಗಳನ್ನು ಅವರಿಗೆ ಕೊಡುವದೆಂದರೆ ಕೈ ಕಟ್ಟಿ
ಊಟಕ್ಕೆ ಕೂಡಿಸಿದಂತೆ ಇಲ್ಲವೆ ಬಾಯಿ ಕಟ್ಟಿ ಮಾತಾಡಹೇಳಿದಂತೆ.
ನಮ್ಮ ಇತಿಹಾಸದಲ್ಲಿ ವಿಶೇಷತಃ ಧರಂಗದಲ್ಲಿ ಬುದ್ಧ ಭಗವಾನನು
ಜನಸಾಮಾನ್ಯರ ಭಾಷೆಯ ಮಹತ್ವವನ್ನು ಕಂಡುಹಿಡಿದನೆಂದು ಹೇಳ
ಬಹುದು, ಗಡಚಾದ ಪಂಡಿತನನ್ಯ ಸಂಸ್ಕೃತ ಭಾಷೆಯನ್ನು ಪ್ರಯೋಗಿಸದೆ
ಅವನು ತನ್ನ ಧಮ್ಮೋಪದೇಶಕ್ಕಾಗಿ ಪಾಲಿ ಭಾಷೆಯನ್ನು ಜನರಲ್ಲಿ ರೂಢವಿದ್ದ
ಒಂದು ಭಾಷೆಯನ್ನು ಉಪಯೋಗಿಸಿದನು. ಅವನ ಶಿಷ್ಯ ಪ್ರಶಿಷ್ಯರು ಅದೇ
ಮಾರವನ್ನವಲಂಬಿಸಿದರು, ಇದೇ ಗುಟ್ಟನ್ನರಿತು ಸಾಧುಸಂತರು ಜನ
ಸಾಮಾನ್ಯರ ಭಾಷೆಯ ಮುಖಾಂತರವೆ ಧಮ್ಮ ನೀತಿಗಳ ಪ್ರಸಾರಮಾಡಲು
ಗಿಸಿದರು. ಜನಜಾಗ್ರತೆಯ ತೆರೆಗಳು ಯುರೋಪಖಂಡದಲ್ಲಿ ಏರಲಾರಂಭಿ
ಸಿದಂತೆ ಅಲ್ಲಿ ಮೊದಲು ಇದ್ದ ಗ್ರೀಕಲ್ಯಾಟಿನ್ ಭಾಷೆಗಳ ವರಸ್ಸು ಕಡಿಮೆ
ಯಾಗಿ ಫ್ರೆಂಚ್, ಇಟಾಲಿಯನ್, ಇಂಗ್ಲೀಷ, ಜರನ್, ಸ್ಪ್ಯಾನಿಶ್ ಮುಂತಾದ
ಜನಸಾಮಾನ್ಯರ ಭಾಷೆಗಳ ಪ್ರಾದುರಾವವಾಯಿತು. ಅವೇ ಈಗ ಒಳ್ಳೆ
ವೈಭವಶಿಖರದಲ್ಲಿ ಮೆರೆಯುತ್ತಿರುವವು. ತಾತ್ಸರವೇನಂದರೆ, ನಿಜವಾಗಿ
ಜನಜೀವನದ ವಿಕಾಸವಾಗಬೇಕಾದರೆ ಹಾಗು ಅದು ಆಗುತ್ತ ಹೋದಂತೆ
ಜನಸಾಮಾನ್ಯರ ಭಾಷೆಯಲ್ಲಿಯೆ ಧಾತ್ಮಿಕ, ಸಾಮಾಜಿಕ, ರಾಜಕೀಯ,
ಶೈಕ್ಷಣಿಕ, ಸಾಂಸ್ಕೃತಿಕ ವ್ಯವಹಾರಗಳೆಲ್ಲ ನಡೆಯಲಿಕ್ಕೆ ಬೇಕು. ಯಾವು
ದೊಂದು ಶ್ಲೋಕ ಇಲ್ಲವೆ ಮಂತ್ರ ಅದು ಸಂಸ್ಕೃತದಲ್ಲಿದ್ದಾಕ್ಷಣಕ್ಕೆ ಧಾರ್ಮಿಕ<noinclude></noinclude>
qx8n5v2v7qkbu2dzgjv4vsrf08cv8qv
321177
321176
2026-05-20T06:50:46Z
Pragathi. BH
7585
321177
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೧೫—}}
ಯನ್ನು ಪಯೋಗಿಸಿದರೂ ಕರಾ ಟಕದ ಜನಸಾಮಾನ್ಯರು ಜೀವನದ ವಿವಿಧ
ಚಟುವಟಿಕೆಗಳಲ್ಲಿ ರುಚಿಗೊಂಡು ಭಾಗವಹಿಸಲಾರರು, ಹೊಣೆಗೊಂಡು
ಕವ್ಯರತಲಾಗಲಾರರು, ಪ್ರಜಾಪ್ರಭುತ್ವದ ತತ್ವದ ಪ್ರಕಾರ ತಮ್ಮಕಾರಭಾರ
ವನ್ನು ತಾವೇ ತಿಳುವಳಿಕೆಯಿಂದ ನಡೆಸಿಕೊಂಡು ಹೋಗಲಾರರು.
{{gap}}'ಜನರಿಂದ, ಜನರಿಗಾಗಿ ನಡೆಸಲಾದ ಜನರ ಸರಕಾರವೆ ನಿಜವಾದ
ಪ್ರಜಾಪ್ರಭುತ್ವ ಅಥವಾ ಜನಾಧಿಕಾರ' ಎಂದು ಅಬ್ರಹಾಮ ಲಿಂಕನ್ನನ
ಪ್ರಸಿದ್ಧವಚನವಿರುವದು. ಇದು ಯಥಾರವಾಗಬೇಕಾದರೆ ಎಲ್ಲ ರಾಜ್ಯ ಕಾರ
ಭಾರ, ಶಾಸನಸಭೆಗಳ ವ್ಯವಹಾರ ಇವು ಪ್ರಾಂತಿಕ ಭಾಷೆಯಲ್ಲಿಯೇ ನಡೆಯ
ಬೇಕು, ಇದು ಜನಸಾಮಾನ್ಯರ ಜನ್ಮಸಿದ್ಧ ಹಕ್ಕು ಇರುವದು. ಈ ಹಕ್ಕನ್ನು
ಅವರಿಗೆ ಕೊಡದೆ ಇತರ ಹಕ್ಕುಗಳನ್ನು ಅವರಿಗೆ ಕೊಡುವದೆಂದರೆ ಕೈ ಕಟ್ಟಿ
ಊಟಕ್ಕೆ ಕೂಡಿಸಿದಂತೆ ಇಲ್ಲವೆ ಬಾಯಿ ಕಟ್ಟಿ ಮಾತಾಡಹೇಳಿದಂತೆ.
{{gap}}ನಮ್ಮ ಇತಿಹಾಸದಲ್ಲಿ ವಿಶೇಷತಃ ಧರಂಗದಲ್ಲಿ ಬುದ್ಧ ಭಗವಾನನು
ಜನಸಾಮಾನ್ಯರ ಭಾಷೆಯ ಮಹತ್ವವನ್ನು ಕಂಡುಹಿಡಿದನೆಂದು ಹೇಳ
ಬಹುದು, ಗಡಚಾದ ಪಂಡಿತನನ್ಯ ಸಂಸ್ಕೃತ ಭಾಷೆಯನ್ನು ಪ್ರಯೋಗಿಸದೆ
ಅವನು ತನ್ನ ಧಮ್ಮೋಪದೇಶಕ್ಕಾಗಿ ಪಾಲಿ ಭಾಷೆಯನ್ನು ಜನರಲ್ಲಿ ರೂಢವಿದ್ದ
ಒಂದು ಭಾಷೆಯನ್ನು ಉಪಯೋಗಿಸಿದನು. ಅವನ ಶಿಷ್ಯ ಪ್ರಶಿಷ್ಯರು ಅದೇ
ಮಾರವನ್ನವಲಂಬಿಸಿದರು, ಇದೇ ಗುಟ್ಟನ್ನರಿತು ಸಾಧುಸಂತರು ಜನ
ಸಾಮಾನ್ಯರ ಭಾಷೆಯ ಮುಖಾಂತರವೆ ಧಮ್ಮ ನೀತಿಗಳ ಪ್ರಸಾರಮಾಡಲು
ಗಿಸಿದರು. ಜನಜಾಗ್ರತೆಯ ತೆರೆಗಳು ಯುರೋಪಖಂಡದಲ್ಲಿ ಏರಲಾರಂಭಿ
ಸಿದಂತೆ ಅಲ್ಲಿ ಮೊದಲು ಇದ್ದ ಗ್ರೀಕಲ್ಯಾಟಿನ್ ಭಾಷೆಗಳ ವರಸ್ಸು ಕಡಿಮೆ
ಯಾಗಿ ಫ್ರೆಂಚ್, ಇಟಾಲಿಯನ್, ಇಂಗ್ಲೀಷ, ಜರನ್, ಸ್ಪ್ಯಾನಿಶ್ ಮುಂತಾದ
ಜನಸಾಮಾನ್ಯರ ಭಾಷೆಗಳ ಪ್ರಾದುರಾವವಾಯಿತು. ಅವೇ ಈಗ ಒಳ್ಳೆ
ವೈಭವಶಿಖರದಲ್ಲಿ ಮೆರೆಯುತ್ತಿರುವವು. ತಾತ್ಸರವೇನಂದರೆ, ನಿಜವಾಗಿ
ಜನಜೀವನದ ವಿಕಾಸವಾಗಬೇಕಾದರೆ ಹಾಗು ಅದು ಆಗುತ್ತ ಹೋದಂತೆ
ಜನಸಾಮಾನ್ಯರ ಭಾಷೆಯಲ್ಲಿಯೆ ಧಾತ್ಮಿಕ, ಸಾಮಾಜಿಕ, ರಾಜಕೀಯ,
ಶೈಕ್ಷಣಿಕ, ಸಾಂಸ್ಕೃತಿಕ ವ್ಯವಹಾರಗಳೆಲ್ಲ ನಡೆಯಲಿಕ್ಕೆ ಬೇಕು. ಯಾವು
ದೊಂದು ಶ್ಲೋಕ ಇಲ್ಲವೆ ಮಂತ್ರ ಅದು ಸಂಸ್ಕೃತದಲ್ಲಿದ್ದಾಕ್ಷಣಕ್ಕೆ ಧಾರ್ಮಿಕ<noinclude></noinclude>
477s8tw0zbqbrs9ke2r7pyhyabgfhuy
ಪುಟ:ಭಾರತ ದರ್ಶನ.djvu/೧೨೦
104
85012
321365
229028
2026-05-20T09:22:46Z
Pragathi. BH
7585
/* Validated */
321365
proofread-page
text/x-wiki
<noinclude><pagequality level="4" user="Pragathi. BH" />{{rh||ಭಾರತ ಸಂಶೋಧನೆ|೧೦೩}}</noinclude>ಪ್ರಾಯಶಃ ಭಾರತೀಯ ರೇಷ್ಮೆ ಸ್ವಲ್ಪ ಒರಟು ಇರಬಹುದು. ಚೀನಾ ರೇಷ್ಮೆಯು ಆಗ ಭಾರತದಲ್ಲಿ ದೊರೆಯುತ್ತಿದ್ದಿತೆಂದರೆ ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಲ್ಲಿಯೇ ಚೀನ ಇಂಡಿಯಾಗಳ ಮಧ್ಯೆ ವ್ಯಾಪಾರ ವ್ಯವಹಾರವಿತ್ತೆಂಬುದು ಸ್ಪಷ್ಟ.
{{gap}}ತನ್ನ ರಾಜ್ಯಾಭಿಷೇಕ ಕಾಲದಲ್ಲಿ ರಾಜನಾಗುವವನು ಪ್ರಜೆಗಳ ಸೇವೆಗಾಗಿ “ನಾನು ನಿಮ್ಮನ್ನು ಹಿಂಸಿಸಿದರೆ ನನ್ನ ವಂಶ ನಿರ್ವಂಶವಾಗಲಿ, ನನ್ನ ಜೀವ ಹೋಗಲಿ, ನನ್ನ ಗತಿ ಹಾಳಾಗಲಿ” ಎಂದು ಪ್ರಮಾಣಮಾಡಬೇಕಾಗಿತ್ತು. “ತನ್ನ ಪ್ರಜೆಗಳ ಸೌಖ್ಯದಲ್ಲಿ, ಅವರ ಪುರೋಭಿವೃದ್ಧಿಯಲ್ಲಿ ರಾಜನ ಸೌಖ್ಯ, ತನಗೆ ಇಷ್ಟವಾದುದೆಲ್ಲ ಒಳ್ಳೆಯದೆಂದು ಭಾವಿಸಬಾರದು. ತನ್ನ ಪ್ರಜೆಗಳಿಗೆ ಇಷ್ಟವಾದುದೇ ಒಳ್ಳೆಯದು.” “ರಾಜನು ಕಾರ್ಯಶೀಲನಾದರೆ ಪ್ರಜೆಗಳೂ ಕಾರ್ಯಶೀಲರಾಗುತ್ತಾರೆ”. ಸಾರ್ವಜನಿಕ ಕೆಲಸವು ರಾಜನ ಇಷ್ಟಾನಿಷ್ಟಕ್ಕೆ ಗುರಿಯಾಗಿ ತೊಂದರೆಗೀಡಾಗಬಾರದು. ಸದಾ ಅವನು ಸಾರ್ವ ಜನಿಕ ಸೇವೆಗೆ ಸಿದ್ದನಿರಬೇಕು. ರಾಜ ದುರ್ಮಾರ್ಗಿಯಾದರೆ ಅವನನ್ನು ಪದಚ್ಯುತನನ್ನಾ ಗಿಮಾಡಿ ಬೇರೊಬ್ಬನನ್ನು ರಾಜನನ್ನಾಗಿ ಆರಿಸಲು ಪ್ರಜೆಗಳಿಗೆ
ಅಧಿಕಾರವಿತ್ತು.
{{gap}}ಅನೇಕ ನಾಲೆಗಳಿದ್ದವು. ಅವುಗಳನ್ನು ನೋಡಿಕೊಳ್ಳಲು ನೀರಾವರಿ ಇಲಾಖೆ ಇತ್ತು. ಬಂದರುಗಳು, ತೆಪ್ಪಗಳು, ಸೇತುವೆಗಳು ಮತ್ತು ನದಿಗಳ ಮೇಲಕ್ಕೂ ಕೆಳಕ್ಕೂ ನಡೆಯುತ್ತ ಇದ್ದ ದೋಣಿಗಳ ವ್ಯಾಪಾರಕ್ಕೆ ಮತ್ತು ಸಮುದ್ರದಾಚೆ ಬರ ಮುಂತಾದ ದೇಶಗಳಿಗೆ ಹೋಗಿ ಬರುತ್ತಿದ್ದ ದೋಣಿಗಳ ಮತ್ತು ಹಡಗುಗಳ ಮೇಲ್ವಿಚಾರಣೆಗೆ ಒಂದು ನಾವಿಕಾ ಇಲಾಖೆ ಇತ್ತು. ಸೈನ್ಯದ ಅಂಗವಾಗಿ ಒಂದು ನಾವಿಕಾ ಪಡೆಯೂ ಇದ್ದಿರಬೇಕು.
{{gap}}ಸಾಮ್ರಾಜ್ಯದ ವ್ಯಾಪಾರವು ಬಹಳ ಅಭಿವೃದ್ಧಿ ಹೊಂದಿತ್ತು. ದೇಶದ ಮೂಲೆಮೂಲೆಗೂ ರಾಜ ಮಾರ್ಗಗಳು ಹರಡಿದ್ದುವು. ಅಲ್ಲಲ್ಲಿ ಪ್ರಯಾಣಿಕರಿಗೆ ವಸತಿ ಸೌಕರ್ಯವಿತ್ತು. ಮುಖ್ಯ ರಸ್ತೆಗೆ ರಾಜಮಾರ್ಗ ಎಂದು ಹೆಸರಿತ್ತು. ಇದು ನೇರವಾಗಿ ದೇಶದ ಮಧ್ಯೆ ಹಾಯ್ದು ವಾಯವ್ಯದ ಗಡಿಯ ವರೆಗೆ ಹಬ್ಬಿತ್ತು. ಪರದೇಶದ ವರ್ತಕರಿಗೆ ವಿಶೇಷ ಮರ್ಯಾದೆಯೂ ಆದರವೂ ಇತ್ತು. ಅನ್ಯ ದೇಶದವರೆಂದು ವಿಶೇಷ ಸೌಲಭ್ಯಗಳು ದೊರೆಯುತ್ತಿದ್ದವು. ಪ್ರಾಚೀನ ಐಗುಪ್ತರು ತಮ್ಮ ದ್ರವ್ಯ ರಕ್ಷಿತಶವಗಳಿಗೆ ಭಾರತದಿಂದ ಬಂದ ಮಲ್ ಬಟ್ಟೆಯನ್ನು ಉಡಿಸುತ್ತಿದ್ದರಂತೆ; ಮತ್ತು ತಮ್ಮ ಬಟ್ಟೆಗಳಿಗೆ ಇಂಡಿಯ ನೀಲಿಯಿಂದ ಬಣ್ಣ ಹಾಕುತ್ತಿದ್ದರಂತೆ, ಪ್ರಾಚೀನ ಭೂಶೋಧನೆಯಲ್ಲಿ ಒಂದು ವಿಧ ವಾದ ಗಾಜು ಸಹ ದೊರೆತಿದೆ. ಗ್ರೀಕ್ ರಾಯಭಾರಿಯಾದ ಮೆಗಾಸ್ತನೀಸ್ ಭಾರತೀಯರು ಅಲಂಕಾರ ಪ್ರಿಯರು, ಸೌಂದಯ್ಯೋಪಾಸಕರು, ತಮ್ಮ ನಿಲುವನ್ನು ಎತ್ತರಿಸಿಕೊಳ್ಳಲು ಪಾದರಕ್ಷೆ ಸಹ ಧರಿಸುತಿದ್ದರು ಎಂದು ಹೇಳುತ್ತಾನೆ.
{{gap}}ಮೌರ್ಯ ಸಾಮ್ರಾಜ್ಯದಲ್ಲಿ ವಿಲಾಸ ಜೀವನವು ಹೆಚ್ಚಿತು. ಜೀವನವು ಹೆಚ್ಚು ಜಟಿಲವಾಯಿತು, ವಿಶೇಷ ನೈಪುಣ್ಯತೆ ಪಡೆಯಿತು, ಮತ್ತು ಸುಸಂಘಟಿತವಾಯಿತು. ಪಥಿಕ ಗೃಹಗಳು, ಭೋಜನ ಶಾಲೆಗಳು, ಉಪಹಾರಮಂದಿರಗಳು, ಛತ್ರಶಾಲೆಗಳು ಜೂಜುಕಟ್ಟೆಗಳು ಅಸಂಖ್ಯಾತವಾದವು. ಕೆಲವು ಪಂಗಡಗಳು, ಕಸಬುದಾರರು ತಮ್ಮದೇ ಸಭಾ ಮಂದಿರಗಳನ್ನು ಮಾಡಿಕೊಂಡಿರುತ್ತಾರೆ ; ಕಸಬು ದಾರರು ಸಾರ್ವಜನಿಕ ಔತಣಗಳನ್ನು ನಡೆಸುತ್ತಾರೆ. ಅನೇಕ ಬಗೆಯ ನರ್ತಕ ನರ್ತಕಿಯರು, ಸಂಗೀತಗಾರರು ಮತ್ತು ನಟರಿಗೆ ಮನರಂಜನೆಯಿಂದ ಒಳ್ಳೆಯ ಸಂಪಾದನೆಯಿದೆ. ಅವರು ಹಳ್ಳಿಗಳಿಗೆ ಸಹ ಹೋಗುತ್ತಾರೆ. ಗೃಹ ಜೀವನ ಮತ್ತು ಕೃಷಿ ಕರ್ಮ ಹಾಳಾಗುವುದರಿಂದ ಈ ಪ್ರದರ್ಶನಗಳಿಗೆ ಸಾರ್ವಜನಿಕ ಸಭಾಮಂದಿರಗಳು ಇರಕೂಡದೆಂದು “ಅರ್ಥಶಾಸ್ತ್ರ” ಗ್ರಂಥಕರ್ತನು ಹೇಳುತ್ತಾನೆ. ಸಾರ್ವಜನಿಕ ಮನರಂಜನೆಗಳನ್ನು ಏರ್ಪಡಿಸಲು ಸಹಾಯಮಾಡಿದ್ದರೆ ಶಿಕ್ಷೆ ವಿಧಿಸಲಾಗುತ್ತಿದ್ದಿತೆಂದು ಅವನೇ ಹೇಳುತ್ತಾನೆ. ಅದೇ ಉದ್ದೇಶಕ್ಕಾಗಿ ಕಟ್ಟದ ಕ್ರೀಡಾರಂಗಗಳಲ್ಲಿ ನಾಟಕ, ಮುಷ್ಟಿ ಯುದ್ದ ಮುಂತಾದ ಮನುಷ್ಯರ ಮತ್ತು ಮೃಗಗಳ ಪಂದ್ಯಗಳನ್ನು ಜನರ ಮನರಂಜನೆಗಾಗಿ ರಾಜನೇ ಏರ್ಪಡಿಸುತ್ತಿದ್ದನು. ವಿಶೇಷ ವಸ್ತುಗಳ ಚಿತ್ರಗಳ ಪ್ರದರ್ಶನಗಳೂ ನಡೆಯುತ್ತಿದ್ದವು. ಜಾತ್ರೆಗಳ<noinclude></noinclude>
m3a09xoxt9r59or2fcsxkz0mhkr8ckw
ಪುಟ:ಭಾರತ ದರ್ಶನ.djvu/೧೨೧
104
85013
321367
229029
2026-05-20T09:23:15Z
Pragathi. BH
7585
/* Validated */
321367
proofread-page
text/x-wiki
<noinclude><pagequality level="4" user="Pragathi. BH" />{{rh|೧೦೪|ಭಾರತ ದರ್ಶನ|}}</noinclude>ಸಮಯದಲ್ಲಿ ಅನೇಕ ದೀಪೋತ್ಸವಗಳು ನಡೆಯುತ್ತಿದ್ದುವು. ರಾಜಮೆರವಣಿಗೆಗಳೂ ಬೇಟಗಳೂ ನಡೆಯುತ್ತಿದ್ದವು.
{{gap}}ಈ ಮಹಾ ಸಾಮ್ರಾಜ್ಯದಲ್ಲಿ ಅನೇಕ ಜನನಿಬಿಡ ನಗರಗಳಿದ್ದವು. ಶೋಣ ಮತ್ತು ಗಂಗಾನದಿಗಳ ಸಂಗಮದಲ್ಲಿ ಗಂಗಾತೀರದ ಮಹಾ ನಗರವಾದ ಪಾಟಲಿಪುತ್ರ (ಈಗಿನ ಪಾಟ್ನ), ಅದರ ಮುಖ್ಯ ನಗರ, ಮೆಗಾಸ್ತನೀಸ್ ಈ ರೀತಿ ವರ್ಣಿಸಿದ್ದಾನೆ: “ ಈ ನದಿ ಮತ್ತು ಇನ್ನೊಂದು ನದಿಯ ಸಂಗಮದಲ್ಲಿ ೯.೨ ಮೈಲು ಉದ್ದ ೧.೭ ಮೈಲು ಅಗಲವಿರುವ ಪಾಲಿಬೋತ್ರವೆಂಬ ಮಹಾನಗರವಿದೆ. ಸಮಾಂತರ ಚತುರ್ಭುಜದ ಆಕಾರದಲ್ಲಿದೆ. ಸುತ್ತಲೂ ಮರದ ಗೋಡೆಯಿದೆ. ಗೋಡೆಯ ಮಧ್ಯೆ ಬಾಣಗಳನ್ನು ಹೊಡೆಯಲು ಅಲ್ಲಲ್ಲಿ ಕಿಂಡಿಗಳಿವೆ. ರಕ್ಷಣೆಗಾಗಿಯೂ ಮತ್ತು ನಗರದ ಕೊಳಕನ್ನು ಕೂಡಿಡುವುದಕ್ಕೂ ಎದುರಿನಲ್ಲಿ ಕಂದಕವಿದೆ. ಸುತ್ತಲೂ ಹರಡಿದ್ದ ಈ ಕಂದಕದ ಅಗಲ ೬೦೦ ಅಡಿ, ಆಳ ಮೂವತ್ತು ಅಡಿ. ಗೋಡೆಯ ಮೇಲೆ ೫೭೦ ಗೋಪುರಗಳಿವೆ ಮತ್ತು ನಾಲ್ಕು ನೂರ ಅರುವತ್ತು ಬಾಗಿಲುಗಳಿವೆ.
{{gap}}ಈ ಗೋಡೆಯನ್ನು ಮಾತ್ರ ಮರದಿಂದ ಮಾಡಿಲ್ಲ. ಮುಕ್ಕಾಲು ಪಾಲು ಮನೆಗಳೆಲ್ಲ ಮರದಲ್ಲಿಯೇ ಕಟ್ಟಿದವು. ಪ್ರಾಯಶಃ ಆ ಪ್ರಾಂತ್ಯ ಪದೇ ಪದೇ ಭೂಕಂಪಗಳಿಗೆ ಈಡಾಗುತ್ತಿದ್ದ ಕಾರಣ ಮುಂಜಾಗ್ರತೆಯಿಂದ ಆ ರೀತಿ ಮರದಿಂದ ಕಟ್ಟುತ್ತಿದ್ದಿರಬೇಕು. ೧೯೩೪ರ ಬೀಹಾರ ಭೂಕಂಪವೇ ಅದಕ್ಕೆ ಸಾಕ್ಷಿ. ಮನೆಗಳೆಲ್ಲ ಮರವಾದ್ದರಿಂದ ಬೆಂಕಿಯಿಂದ ಕಾಪಾಡಲು ವಿಶೇಷ ಮುಂಜಾಗ್ರತೆ ಮಾಡಲಾಗಿತ್ತು. ಪ್ರತಿಯೊಂದು ಮನೆಯ ಯಜಮಾನನೂ ಏಣಿಗಳು, ಕೊಕ್ಕೆ ಗಳು ಮತ್ತಾ ನೀರು ತುಂಬಿದ ಪಾತ್ರೆಗಳನ್ನು ಇಡಬೇಕಾಗಿತ್ತು.
{{gap}}ಪಾಟಲಿಪುತ್ರದ ನಗರ ಸಭೆಗೆ ಮುವತ್ತಾರು ಜನ ಚುನಾಯಿತ ಸದಸ್ಯರಿದ್ದರು. ಆ ಸಭೆ ಯನ್ನು ಆರು ಸಮಿತಿಗಳಾಗಿ ವಿಂಗಡಿಸಿದ್ದರು. ಪ್ರತಿ ಸಮಿತಿಗೂ ಐದು ಜನ ಸದಸ್ಯರು, ಒಂದೊಂದು ಸಮಿತಿಯ ಕೈಗಾರಿಕೆ ಮತ್ತು ಕುಶಲವಿದ್ಯೆ, ಜನನ ಮರಣ, ವಸ್ತು ನಿರ್ಮಾಣ ಕಾರ್ಯ, ಪ್ರಯಾಣಿಕರ ಮತ್ತು ಯಾತ್ರಿಕರ ಸೌಕರ್ಯ ಮುಂತಾದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದವು. ಒಟ್ಟು ನಗರ ಸಭೆಯು ಹಣಕಾಸು, ಆರೋಗ್ಯ ರಕ್ಷಣೆ, ನೀರಿನ ಪೂರೈಕೆ, ಸಾರ್ವಜನಿಕ ಕಟ್ಟಡಗಳು ಮತ್ತು ಉದ್ಯಾನವನಗಳ ಆಡಳಿತ ನೋಡುತ್ತಿದ್ದರು.
{{center|೧೯ ಬುದ್ಧನ ಉಪದೇಶ}}
{{gap}}ಭಾರತದ ಬಾಹ್ಯ ಸ್ವರೂಪವನ್ನೇ ಮಾರ್ಪಡಿಸುತ್ತಿದ್ದ ಈ ರಾಜಕೀಯ ಆರ್ಥಿಕ ವಿಪ್ಲವಗಳ ಹಿಂದೆ ಬೌದ್ಧ ಧರ್ಮದ ಕ್ರಾಂತಿಕಾರಕ ಹಿನ್ನೆಲೆ ಇತ್ತು. ಸನಾತನಧರ್ಮದ ಮೇಲಿನ ಧಾಳಿ ಮತ್ತು ಅದರ ಅಧಿಕಾರವರ್ಗದ ಮೂಲೋತ್ಪಾಟನೆಗಾಗಿ ನಡೆಸಿದ ಹೋರಾಟದ ಪ್ರಕೋಪವಿತ್ತು. ಸದಾ ಕಿವಿಸೋಲುತ್ತಿದ್ದ ಚರ್ಚೆ ಮತ್ತು ವಾಗ್ವಾದಕ್ಕಿಂತ ಹೆಚ್ಚಾಗಿ ಒಬ್ಬ ಮಹಾತೇಜಸ್ವಿ ಯಾದ ಅದ್ಭುತ ಪುರುಷನ ವ್ಯಕ್ತಿತ್ವವು ಭಾರತದ ಜನರ ಮನಸ್ಸನ್ನು ಸೆಳೆದಿತ್ತು. ಆತನ ನೆನಪು ಇನ್ನು ಜನರ ಮನಸ್ಸಿನಲ್ಲಿ ಮಾಸಿರಲಿಲ್ಲ. ಆತನ ಉಪದೇಶ ಸನಾತನ ಆದರೂ ತಾತ್ವಿಕ ಚರ್ವಿತ ಚರ್ವಣದಲ್ಲಿ ಮಗ್ನರಾದವರಿಗೆ ಅತಿ ನೂತನವೂ, ಅಪೂರ್ವವೂ ಆಗಿ ಕಂಡು ವಿದ್ವಾಂಸರ ಮನಸ್ಸನ್ನೂ ಸೆಳೆಯಿತು. ಜನತೆಯ ಹೃದಯದಲ್ಲಂತೂ ಆಳವಾಗಿ ಬೇರೂರಿತು. “ ಎಲ್ಲ ದೇಶಗಳಿಗೂ ಹೋಗಿ ಈ ಉಪದೇಶ ಸಾರಿರಿ. ದೀನರು, ಹೀನರು, ಶ್ರೀಮಂತರು, ಉನ್ನತ ಸ್ಥಾನದಲ್ಲಿರುವವರು ಎಲ್ಲರೂ ಒಂದೇ, ಎಲ್ಲ ನದಿಗಳು ಸಮುದ್ರದಲ್ಲಿ ಒಂದುಗೂಡುವಂತೆ ಎಲ್ಲ ಜಾತಿಗಳೂ ಈ ಧರ್ಮದಲ್ಲಿ ಒಂದುಗೂಡುವುವು? ಎಂದು ಹೇಳಿದನು. ಆತನ ಉಪದೇಶದ ಗುರಿ ವಿಶ್ವದ ಕಲ್ಯಾಣ, ಮತ್ತು ವಿಶ್ವ ಪ್ರೇಮ, ಏಕೆಂದರೆ “ ಈ ಪ್ರಪಂಚದಲ್ಲಿ ದ್ವೇಷದಿಂದ ದ್ವೇಷ ಎಂದಿಗೂ ನಂದುವುದಿಲ್ಲ”, ಮತ್ತು “ ಮನುಷ್ಯನು ಕೋಪ ವನ್ನು ದಯೆಯಿಂದ ಗೆಲ್ಲಲಿ, ದುರ್ಗುಣವನ್ನು ಸುಗುಣದಿಂದ ಜೈಸಲಿ, ”<noinclude></noinclude>
o4fdxf9wjrlded3jk2j3t2d17og0ir4
ಪುಟ:ಭಾರತ ದರ್ಶನ.djvu/೧೨೨
104
85014
321369
229030
2026-05-20T09:23:27Z
Pragathi. BH
7585
/* Validated */
321369
proofread-page
text/x-wiki
<noinclude><pagequality level="4" user="Pragathi. BH" />{{rh||ಭಾರತ ಸಂಶೋಧನ|೧೦೫}}</noinclude>{{gap}}ಆ ಆದರ್ಶವು ಸದಾಚಾರ ಮತ್ತು ಆತ್ಮಸಂಯಮದಿಂದ ಬಂದುದು. “ಯುದ್ದದಲ್ಲಿ ಸಾವಿರ ಜನರನ್ನು ಜೈಸಬಹುದು ಆದರೆ ತನ್ನನ್ನು ತಾನು ಗೆದ್ದವನೇ ನಿಜವಾದ ವೀರ,” “ಅಂತ್ಯಜ ಅಥವ ಬ್ರಾಹ್ಮಣನಾಗುವುದು ತನ್ನ ಹುಟ್ಟಿನಿಂದಲ್ಲ. ನಡತೆಯಿಂದ ಮಾತ್ರ ” ಪಾಪಕರ್ಮಿಯನ್ನು ಸಹ ನಿಂದಿಸಬಾರದು. ಏಕೆಂದರೆ “ಗಾಯದ ಮೇಲೆ ಮೆಣಸಿನ ಪುಡಿ ಹಾಕಿದಂತೆ ಕಠಿಣೋಕ್ತಿಯಿಂದ ತಪು. ಮಾಡಿದವನ ಮನಸ್ಸು ನೋಯಿಸದವರು ಯಾರು?” “ಇನ್ನೊಬ್ಬನನ್ನು ಜಯಿಸುವುದರಿಂದ ಅನಿಷ್ಟ ಪರಿಣಾಮಗಳಾಗುತ್ತವೆ” ಗೆಲುವಿನಿಂದ ದ್ವೇಷ ಹುಟ್ಟುತ್ತದೆ, ಏಕೆಂದರೆ ಸೋತವನು ದುಃಖಿಯಾಗುತ್ತಾನೆ.
{{gap}}ಯಾವ ಧರ್ಮದ ಅಧಿಕಾರವಾಣಿಯೂ ಇಲ್ಲದೆ ಯಾವ ದೇವರ ಅಥವ ಪರಲೋಕದ ಮಾತನ್ನೂ ಎತ್ತದೆ ಇದನ್ನೆಲ್ಲ ಆತನು ಉಪದೇಶ ಮಾಡಿದ. ವಿಚಾರ ತರ್ಕ ಮತ್ತು ಅನುಭವವೇ ಆತನ ಆಧಾರಸ್ತಂಭಗಳು. ಅವರವರ ಮನಸ್ಸೇ ಅವರಿಗೆ ಸತ್ಯದ ಅರಿವನ್ನುಂಟುಮಾಡುತ್ತದೆ ಎಂದು ಹೇಳಿದ. “ ನನ್ನ ಮೇಲಿನ ಗೌರವದಿಂದ ಒಪ್ಪಬೇಡಿ ; ಬೆಂಕಿಯಲ್ಲಿ ಚಿನ್ನವನ್ನು ಪುಟಕ್ಕಿಟ್ಟ೦ತೆ ಮೊದಲು ಪರೀಕ್ಷೆ ಮಾಡಿ ಒಪ್ಪಿರಿ” ಎಂದು ಹೇಳಿದನಂತೆ. ಸತ್ಯದ ಅಜ್ಞಾನವೇ ಎಲ್ಲ ದುಃಖಗಳ ಮೂಲ. ಒಬ್ಬ ದೇವರು ಅಥವ ಪರವಸ್ತು ಇದೆಯೋ ಇಲ್ಲವೋ ಏನೂ ಹೇಳುವುದಿಲ್ಲ. ಒಪ್ಪುವುದೂ ಇಲ್ಲ, ಇಲ್ಲವೆಂದು ನಿರಾಕರಿಸುವುದೂ ಇಲ್ಲ ; ನಿರ್ದಿಷ್ಟ ಜ್ಞಾನ ಎಲ್ಲಿ ಸಾಧ್ಯವಿಲ್ಲವೋ ಅಲ್ಲಿ ತೀರ್ಮಾನ ಹೇಳದಿರಬೇಕು. ಒಂದು ಪ್ರಶ್ನೆಗೆ ಉತ್ತರವಾಗಿ “ಪರವಸ್ತು ಎಂದರೆ ಜ್ಞಾನ ವಸ್ತು ಗಳಿಗೆ ಯಾರ ಸಂಬಂಧವೂ ಇಲ್ಲದ ಒಂದು ವಸ್ತು : ಎಂದರೆ ಜ್ಞಾತವಿಚಾರದಿಂದ ಅದರ ಅಸ್ತಿತವನ್ನು ದೃಢಪಡಿಸಲು ಸಾಧ್ಯವಿಲ್ಲ. ಇತರ ವಸ್ತುಗಳಿಗೆ ಸಂಬಂಧವಿರದ ವಸ್ತು ಒಂದಿದೆ ಎಂದು ತಿಳೆಯುವುದಾದರೂ ಹೇಗೆ. ವಿಶ್ವ ಪ್ರಪಂಚವೇ ನಮಗೆಲ್ಲ ತಿಳಿದಂತೆ ಪರಸ್ಪರ ಸಂಬಂಧಗಳ ಒಂದು ವ್ಯವಸ್ಥೆ. ಸಂಬಂಧವಿಲ್ಲದ ಅಥವ ಸ೦ಬ೦ಧಪಡಲಾರದ ಯಾವ ವಸ್ತುವೂ ನಮಗೆ ತಿಳಿದಿಲ್ಲ” ಎಂದು ಉತ್ತರಕೊಟ್ಟನಂತೆ. ಆದ್ದರಿಂದ ನಮ್ಮ ದೃಷ್ಟಿಗೆ ಗೋಚರವಾಗುವ ಮತ್ತು ನಮ್ಮ ನಿರ್ದಿಷ್ಟ ಜ್ಞಾನಕ್ಕೆ ಎಟುಕುವ ಮಿತಿಯನ್ನು ಮಾತ್ರ ಮೀರಬಾರದು.
{{gap}}ಇದೇ ರೀತಿ ಆತ್ಮ ವಿದೆಯೇ ಇಲ್ಲವೇ ಎಂಬ ವಿಷಯದಲ್ಲ ಬುದ್ದನು ಯಾವ ಸ್ಪಷ್ಟ ಅಭಿಪ್ರಾಯವನ್ನೂ ತಿಳಿಸಿಲ್ಲ, ತಿರಸ್ಕರಿಸಿಯೂ ಇಲ್ಲ, ಪುರಸ್ಕರಿಸಿಯೂ ಇಲ್ಲ. ಆ ಪ್ರಶ್ನೆ ಯನ್ನೇ ಚರ್ಚಿಸಲು ನಿರಾಕರಿಸುತ್ತಾನೆ. ಆಗಿನ ಭಾರತೀಯ ಮನೋಭಾವನೆಯೆಲ್ಲ ಆತ್ಮ, ಪರಮಾತ್ಮ, ಏಕತ್ವವಾದ ಏಕದೈವತಾವಾದ ಮುಂತಾದ ತಾತ್ವಿಕ ಕಲ್ಪನೆಗಳಲ್ಲಿಯೇ ಮಗ್ನ ವಾಗಿದ್ದ ಕಾಲದಲ್ಲಿ ಬುದ್ಧನು ಅದನ್ನೆಲ್ಲ ನಿರಾಕರಿಸಿದ್ದು ಒಂದು ಆಶ್ಚರ್ಯ. ಆದರೆ ಬುದ್ಧನು ಯಾವ ತಾತ್ವಿಕ ವಿಚಾರಕ್ಕೂ ಎಡೆಗೊಡಲಿಲ್ಲ. ಆದರೆ ಪ್ರಕೃತಿ ನಿಯಮದ ನಿತ್ಯತೆಯಲ್ಲಿ, ವಿಶ್ವ ಕರ್ತೃತ್ವದಲ್ಲಿ ಪೂರ್ವಾವಸ್ಥೆಯಿಂದ ಮುಂದಿನ ಪ್ರತಿ ಯೊಂದು ಅವಸ್ಥೆಯೂ ನಿಯಮಿತ ಎನ್ನು ವುದರಲ್ಲಿ ಸದ್ಗುಣಕ್ಕೂ, ಸುಖಕ್ಕೂ, ದುರ್ಗುಣಕ್ಕೂ ದುಃಖಕ್ಕೂ ಪರಸ್ಪರ ಸಂಬಂಧವಿದೆ ಎನ್ನುವುದರಲ್ಲಿ ಆತನು ನಂಬಿದ್ದನು.
{{gap}}ಅನುಭವ ಪ್ರಪಂಚದಲ್ಲಿ 'ಅದು ಇದೆ' “ ಅದು ಇಲ್ಲ' ಎಂಬ ಶಬ್ದಗಳನ್ನು ವಿವರಣೆಗಳನ್ನು ಉಪಯೋಗಿಸುತ್ತೇವೆ. ವಸ್ತುಗಳ ಬಾಹ್ಯ ಸ್ಥಿತಿಯನ್ನು ಬಿಟ್ಟು ಸ್ವಲ್ಪ ಹಿಂದೆ ಹೋದರೆ ಈ ಎರಡು ವಿವರಣೆಗಳೂ ತಪ್ಪು ಇರಬಹುದು ; ಪ್ರಾಯಶಃ ನಿಜ ಸ್ಥಿತಿಯನ್ನು ವಿವರಿಸಲು ನಮ್ಮ ಭಾಷೆ ಅಸಮರ್ಥವಿರಬಹುದು. ಸತ್ಯವು 'ಇದೆ' ಮತ್ತು 'ಇಲ್ಲ' ಎಂಬುದರ ಮಧ್ಯೆ ಅಥವ ಅವುಗಳೆರಡರ ಆಚೆ ಎಲ್ಲೋ ಇರಬಹುದು. ನದಿಯು ಸದಾ ಹರಿಯುತ್ತಲೇ ಇರುತ್ತದೆ ; ಕ್ಷಣಕ್ಷಣಕ್ಕೂ ಅದೇ ನದಿ ಯಾಗಿ ಕಂಡರೂ ನೀರು ಮಾತ್ರ ಪ್ರತಿಕ್ಷಣದಲ್ಲಿ ಬೇರೆಯಾಗುತ್ತದೆ. ಬೆಂಕಿಯೂ ಹೀಗೆಯೇ ಜ್ವಾಲೆ ಉರಿಯುತ್ತಲೇ ಇರುತ್ತದೆ. ಅದೇ ರೂಪ, ಅದೇ ಆಕೃತಿ, ಆದರೂ ಅದೇ ಜ್ವಾಲೆಯಲ್ಲ ; ಪ್ರತಿಕ್ಷಣವೂ ಪ್ರತ್ಯೇಕ, ಆದರೂ ಸರ್ವವೂ ಸದಾ ಪರಿವರ್ತನೆಯಾಗುತ್ತಲಿದೆ. ಈ ಬಹುಮುಖ ಜೀವನವಲ್ಲ ಯಾವುದೋ ಗಮ್ಯದೆಡೆಗೆ ಹರಿಯುವ ಅನಂತವಾಹಿನಿ, ವಾಸ್ತವಿಕ ಶಾಶ್ವತವೂ ಅಲ್ಲ.<noinclude></noinclude>
704kvb0nd6fvnl0lq4sl0gqux97l40u
ಪುಟ:ಭಾರತ ದರ್ಶನ.djvu/೧೨೩
104
85015
321370
229032
2026-05-20T09:23:43Z
Pragathi. BH
7585
/* Validated */
321370
proofread-page
text/x-wiki
<noinclude><pagequality level="4" user="Pragathi. BH" />{{rh|೧೦೬|ಭಾರತ ದರ್ಶನ|}}</noinclude>ಅಪರಿವರ್ತಿತವೂ ಅಲ್ಲ, ಆದರೆ ಒಂದು ಬಗೆಯ ಉಜ್ವಲ ಶಕ್ತಿಯ ಪ್ರಭಾವ ಪೂರ್ಣ, ಚಲನವಲನ ವಸ್ತು ಕ್ರಮಾನುಗತ ಪರಿಣಾಮ ಪರಂಪರೆ, ಕಾಲದ ಕಲ್ಪನೆಯು ಆ ಈ ಘಟನೆಯಿಂದ ಕೇವಲ ರೂಢಿಯಿಂದ ಬೇರ್ಪಡಿಸಿದ ಭಾವನೆ. ಪರಿವರ್ತನೆಯಾಗುವ ಶಾಶ್ವತ ವಸ್ತುವಿನ ಅಂತರ್ಭಾಗ ಯಾವುದೂ ಇಲ್ಲದಿರುವುದರಿಂದ ಒಂದು ಇನ್ನೊಂದರ ಕಾರಣದಿಂದ ಎಂದು ಹೇಳಲು ಸಾಧ್ಯವಿಲ್ಲ. ಇತರ ವಸ್ತುಗಳೊಡನೆ ಒಂದು ವಸ್ತುವಿನ ಸಂಬಂಧದ ಅಂತರ್ನಿಯಮವೇ ಆ ವಸ್ತುವಿನ ಮೂಲತತ್ವ, ನಮ್ಮ ದೇಹಗಳು ಮತ್ತು ಆತ್ಮಗಳು ಕ್ಷಣಕ್ಷಣಕ್ಕೂ ಪರಿವರ್ತನೆ ಹೊಂದುತ್ತಿವೆ. ಹೋದ ಕ್ಷಣದಲ್ಲಿದ್ದಂತೆ ಈ ಕ್ಷಣದಲ್ಲಿಲ್ಲ; ಅವು ಇಲ್ಲವಾಗಿ ಅವುಗಳ೦ತೆ ಬೇರೆ ಯಾವುವೋ ಆದರೆ ಪ್ರತ್ಯೇಕವಾದ ವಸ್ತುಗಳಾಗಿ ಅವೂ ಗತಕಾಲವನ್ನು ಸೇರುತ್ತವೆ. ಒಂದು ದೃಷ್ಟಿಯಲ್ಲಿ ಪ್ರತಿಕ್ಷಣವೂ ನಾವು ಸಾಯುತ್ತಿದ್ದೇವೆ, ಮತ್ತು ಪುನರ್ಜನ್ಮ ತಾಳುತ್ತಿದ್ದೇವೆ ; ಈ ಅನುಕ್ರಮಣ ಪರಂಪರೆ ಅವಿಚ್ಛಿನ್ನ ಅನನ್ಯತೆಯ ರೂಪುಕೊಟ್ಟಿದೆ. ಅದು “ಸದಾ ಪರಿವರ್ತನೆಯಾಗುತ್ತಿರುವ ಅನನ್ಯತೆಯ ನೈರಂತರ್ಯ.” ಎಲ್ಲವೂ ಪರಿವರ್ತನೆ, ಚಲನೆ, ರೂಪಾಂತರ.
{{gap}}ಭೌತಕಾರ್ಯವನ್ನು ಯಾವುದೋ ನಿಯತಮಾರ್ಗದಲ್ಲೇ ಭಾವಿಸಿ, ಅರ್ಥಮಾಡಿಕೊಳ್ಳುತ್ತಿರುವ ನಮಗೆ ಈ ವಿಷಯಗಳನ್ನೆಲ್ಲ ಗ್ರಹಿಸುವುದು ಕಷ್ಟ. ಆದರೂ ಆಧುನಿಕ ಭೌತಶಾಸ್ತ್ರ ಮತ್ತು ಆಧುನಿಕ ತತ್ವಶಾಸ್ತ್ರಗಳ ಭಾವನೆಗೆ ಬೌದ್ಧದರ್ಶನ ಎಷ್ಟು ಸಮಾಪವಿದೆ ಎಂಬುದನ್ನು ಗಮನಿಸಿದರೆ ಅತ್ಯಾಶ್ಚರ್ಯವಾಗುತ್ತದೆ.
{{gap}}ಬುದ್ಧನ ಮಾರ್ಗ ಮನಶ್ಯಾಸ್ತ್ರದ ವಿಶ್ಲೇಷಣ ಪದ್ಧತಿ, ಅಲ್ಲಿಯೂ ಸಹ ಆಧುನಿಕ ವಿಜ್ಞಾನ ಶಾಸ್ತ್ರಗಳಲ್ಲೊಂದಾದ ಮನಶ್ಯಾಸ್ತದ ಇತ್ತೀಚಿನ ಸಂಶೋಧನೆಗಳಿಗೆ ಎಷ್ಟು ಸಮಾಪವಿದ್ದಾನೆಂದು ನೋಡಿದರೆ ಆರ್ಶಯವಾಗುತ್ತದೆ, ಪರಮಾತ್ಮನ ಸಂಪರ್ಕವಿಲ್ಲದೆ ಮಾನವ ಜೀವನವನ್ನು ಯೋಚಿಸಿ ಪರೀಕ್ಷಿಸಲಾಯಿತು, ಏಕೆಂದರೆ ಅಂತಹ ಪರಮಾತ್ಮನಿದ್ದರೂ ಅವನು ನಮ್ಮ ಜ್ಞಾನದೃಷ್ಟಿಗೆ ಅತೀತ. ಮನಸ್ಸು ಮನಶ್ಯಕ್ತಿಗಳ ಸಂಗ್ರಹವಾದ ದೇಹದ ಒಂದು ಅಂಗ, ವ್ಯಕ್ತಿಯೂ ಈ ರೀತಿ ಮಾನಸಿಕ ಅವಸ್ಥೆಗಳ ಒಂದು ಗುಚ್ಛ, ಆತ್ಮವು ಭಾವನೆಗಳ ಒಂದು ವಾಹಿನಿಮಾತ್ರ. “ನಮ್ಮ ಭಾವನೆಗಳ ಪರಿಣಾಮವೇ ನಮ್ಮ ಇಂದಿನ ಇರವು.”
{{gap}}ಜೀವನದಲ್ಲಿ ನೋವು ಮತ್ತು ಸಂಕಟಗಳಿಗೆ ಮಹತ್ವ ಕೊಡಲಾಗಿದೆ. ಬುದ್ಧನು ಬೋಧಿಸಿದ ನಾಲ್ಕು ಮಹಾ ಸತ್ಯಗಳು ಈ ಸಂಕಟ, ಅದರ ಕಾರಣ, ಅದರ ನಿವಾರಣೆಯ ಸಾಧ್ಯಾಸಾಧ್ಯತೆ ಮತ್ತು ನಿವಾರಣಾಮಾರ್ಗಗಳ ವಿಷಯವನ್ನೇ ತಿಳಿಸುತ್ತವೆ. ಅವನು ತನ್ನ ಶಿಷ್ಯರಿಗೆ ಬೋಧೆಮಾಡುತ್ತ, “ಯುಗಯುಗಗಳಿಂದ ನೀವು ಈ ಸಂಕಟವನ್ನು ಅನುಭವಿಸುತ್ತಾ ಬಂದಾಗ ಚತುಸ್ಸಾಗರಗಳ ನೀರಿಗಿಂತ ಹೆಚ್ಚು ಕಣ್ಣೀರು ಸುರಿಸಿದ್ದೀರಿ; ಈ ಜೀವನ ಯಾತ್ರೆಯಲ್ಲಿ ದಾರಿತಪ್ಪಿ ಅಲೆದು ವ್ಯಥೆಪಟ್ಟು ಅತ್ತಿದ್ದೀರಿ; ಏಕೆಂದರೆ ನಿಮಗೆ ಅಹಿತವಾದುದೇ ನಿಮ್ಮ ಪಾಲಿಗೆ ಬಂದಿತು ; ನಿಮಗೆ ಪ್ರಿಯವಾದದ್ದು ನಿಮ್ಮ ಪಾಲಿಗೆ ಬರಲಿಲ್ಲ” ಎಂದು ಹೇಳಿದನಂತೆ.
{{gap}}ಈ ಸಂಕಟ ಸ್ಥಿತಿಯ ನಿವಾರಣೆಯೇ “ನಿರ್ವಾಣ.' 'ನಿರ್ವಾಣ' ಎಂದರೇನು ಎನ್ನುವುದರಲ್ಲಿ ಅನೇಕರು ಅನೇಕ ವಿಧವಾಗಿ ಅರ್ಥಮಾಡುತ್ತಾರೆ. ನಮ್ಮ ಪರಿಮಿತ ಮನೋಭಾವನೆಗಳ ಪ್ರಮಾಣ ದಲ್ಲಿ, ಅಸಮರ್ಥ ಭಾಷೆಯಲ್ಲಿ ಅಲೌಕಿಕ ಗಹನಸ್ಥಿತಿಯನ್ನು ವರ್ಣಿಸುವುದು ಬಹು ಕಷ್ಟ, ನಿರ್ವಾಣ ಎಂದರೆ ನಿರ್ನಾಮವಾಗುವುದು, ನಾಶವಾಗುವುದು ಎಂದು ಕೆಲವರ ಮತ. ಆದರೆ ಬುದ್ದನು “ಅದು ಒಂದು ಉತ್ಕಟಕ್ರಿಯಾವಸ್ಥೆ” ಎಂದು ಹೇಳಿದನಂತೆ. ಅದು ದುರ್ವ್ಯಾಮೋಹದ ನಾಶ, ಬರಿ ನಾಶ ವಲ್ಲ. ಇದಲ್ಲ ಇದಲ್ಲ ಎಂದು ಹೇಳಬಹುದೇ ವಿನಾ ಇದೇ ಎಂದು ಹೇಳಲು ಸಾಧ್ಯವಿಲ್ಲ.
{{gap}}ಬುದ್ಧನ ಮಾರ್ಗ ಭೋಗಾಸಕ್ತ ಜೀವನಕ್ಕೂ, ಆತ್ಮನಿಗ್ರಹಕ್ಕೂ ಮಧ್ಯಮಾರ್ಗ. ತಾನೇ ದೇಹದಂಡನೆ ಮಾಡಿಕೊಂಡ ತನ್ನ ಅನುಭವದಿಂದ, ದೇಹಶಕ್ತಿಯಿಲ್ಲದವನು ಸನ್ಮಾರ್ಗದಲ್ಲಿ ಮುಂದುವರಿಯಲಾರ ಎಂದು ಹೇಳಿದ. ಈ ಮಧ್ಯಮಾರ್ಗವೇ ಆರರ ಅಷ್ಟ ವಿಧಮಾರ್ಗ, ಸದಾಚಾರ, ಸದಾಶೆ,<noinclude></noinclude>
g3srydlth1ffqxn3dh9krplyhepm86k
ಪುಟ:ಭಾರತ ದರ್ಶನ.djvu/೧೨೪
104
85016
321372
229033
2026-05-20T09:24:03Z
Pragathi. BH
7585
/* Validated */
321372
proofread-page
text/x-wiki
<noinclude><pagequality level="4" user="Pragathi. BH" />{{rh||ಭಾರತ ಸಂಶೋಧನೆ|೧೦೭}}</noinclude>ಸನ್ನು ಡಿ, ಸನ್ನಡತೆ, ಸಜೀವನ, ಸತ್ಪ್ರಯತ್ನ, ಸದ್ಭಾವನೆ ಮತ್ತು ಸತ್ರಾರ್ಥನೆ, ಇವೆಲ್ಲ ಆಕ್ರೋನ್ನತಿಯ ವಿಷಯ ಇದರಲ್ಲಿ ವರ ಪ್ರಸಾದವೇನೂ ಇಲ್ಲ. ಯಾರೇ ಆಗಲಿ ಈ ದಾರಿಯಲ್ಲಿ ನಡೆದು ಕೃತಕೃತ್ಯನಾದರೆ ಆತನಿಗೆ ಸೋಲೆಂಬುದಿಲ್ಲ. ಆತ್ಮಾರ್ಪಣೆ ಮಾಡಿದ ಮನುಷ್ಯನ ವಿಜಯವನ್ನು ಅಪಜಯಗೊಳಿಸಲು ದೇವರಿಗೂ ಸಾಧ್ಯವಿಲ್ಲ.
{{gap}}ಬುದ್ಧನು ತನ್ನ ಶಿಷ್ಯರಿಗೆ ಅವರ ತಿಳಿವಿನ ಮಟ್ಟಕ್ಕೆ ನಿಲುಕುವ ಮತ್ತು ಆಚರಣೆಗೆ ಸಾಧ್ಯವಾದ ಬೋಧೆಯನ್ನೇ ಮಾಡಿದ. ಆತನ ಬೋಧೆ ಎಲ್ಲ ವಸ್ತು ವಿನ ಪೂರ್ಣ ರಹಸ್ಯವನ್ನು ತಿಳಿಸುವ ಪ್ರಯತ್ನವಲ್ಲ; ಎಲ್ಲವನ್ನೂ ವಿವರಿಸುವ ಉದ್ದೇಶವೂ ಅದಕ್ಕಿರಲಿಲ್ಲ. ಒಂದು ಬಾರಿ ಕೆಲವು ತರಗೆಲೆಗಳನ್ನು ತನ್ನ ಕೈಲಿ ತೆಗೆದುಕೊಂಡು, ತನ್ನ ಕೈಲಿರುವ ಎಲೆಗಳಲ್ಲದೆ ಬೇರೆ ಎಲೆಗಳು ಏನಾದರೂ ಇವೆಯೇ ಎಂದು ತನ್ನ ಪ್ರಿಯ ಶಿಷ್ಯನಾದ ಆನಂದನನ್ನು ಕೇಳಿದನಂತೆ. “ಮಾಗಿಯ ಎಲೆಗಳು ಸುತ್ತಲೂ ಉದುರುತ್ತಿವೆ. ಇನ್ನೂ ಎಣಿಸಲಾರದಷ್ಟು ಎಲೆಗಳಿವೆ ” ಎಂದನಂತೆ. ಆಗ ಬುದ್ದ “ಅದೇ ರೀತಿ ಕೆಲವು ಸತ್ಯಗಳನ್ನು ಮಾತ್ರ ನಿಮಗೆ ತಿಳಿಸಿದ್ದೇನೆ. ಇವಲ್ಲದೆ ಸಾವಿರಾರು ಸತ್ಯಗಳು ಎಣಿಸಲಾರದಷ್ಟಿವೆ” ಎಂದನಂತೆ.
{{center|೨೦. ಬುದ್ಧನ ಕಥೆ}}
{{gap}}ಬುದ್ದನ ಕಥೆಯು ಬಾಲ್ಯದಲ್ಲಿಯೇ ನನ್ನ ಮನಸ್ಸನ್ನು ಸೆಳೆಯಿತು; ಅನೇಕ ಅಂತರ್ಯುದ್ಧಗಳು ನೋವು ಸಂಕಟಗಳನ್ನು ಅನುಭವಿಸಿ ಬುದ್ದನಾದ ಆ ಹುಡುಗ ಸಿದ್ದಾರ್ಥನು ನನ್ನ ಆದರ್ಶ ಪುರುಷ ನಾದ. ಎಡ್ವಿನ್ ಆರ್ನಾಲ್ಡ್ ನ ಏಷ್ಯದ ಜ್ಯೋತಿ (Light of Asia) ನನ್ನ ಮೆಚ್ಚಿನ ಪುಸ್ತಕವಾಯಿತು, ಅನೇಕ ವರ್ಷಗಳ ನಂತರ ನನ್ನ ಪ್ರಾಂತ್ಯದಲ್ಲಿ ನಾನು ದೀರ್ಘ ಪ್ರವಾಸ ಮಾಡಿದಾಗ ಬುದ್ದನ ಇತಿಹಾಸಕ್ಕೆ ಸಂಬಂಧಿಸಿದ ಸ್ಥಳಗಳನ್ನೆಲ್ಲ ನೋಡಿದೆ, ಕೆಲವು ವೇಳೆ ಅದೇ ಉದ್ದಿಶ್ಯದಿಂದ ಪ್ರಯಾಣಹೋಗುತ್ತಿದ್ದೆ. ಇವುಗಳೆಲ್ಲವೂ ನನ್ನ ಪ್ರಾಂತ್ಯ ಅಥವ ಅದರ ಸಮಾಸದಲ್ಲಿವೆ. ಇದೋ ಇಲ್ಲಿ (ನೇಪಾಲದ ಗಡಿಯಲ್ಲಿ) ಬುದ್ಧನ ಜನ್ಮಸ್ಥಳ, ಇಲ್ಲಿ ಅವನು ಓಡಾಡಿದ ಸ್ಥಳ, ಇಲ್ಲಿ (ಬೀಹಾರಿನ ಗದಲ್ಲಿ) ಬೋಧಿ ವೃಕ್ಷದ ಕೆಳಗೆ ಕುಳಿತು ಬೆಳಕನ್ನು ಕಂಡ ಸ್ಥಳ, ಇಲ್ಲಿ ಅವನು ತನ್ನ ಪ್ರಥಮ ಬೋಧೆಯನ್ನು ಉಪದೇಶ ಮಾಡಿದ ಸ್ಥಳ, ಇಲ್ಲಿ ಅವನು ದೇಹವಿಟ್ಟ ಸ್ಥಳ ; ಎಲ್ಲವೂ ಇಲ್ಲಿಯೇ ?
{{gap}}ಬೌದ್ಧ ಧರ್ಮವು ಇನ್ನೂ ಜೀವಂತ ಮತ್ತು ಪ್ರಧಾನ ಧರ್ಮವಾಗಿರುವ ದೇಶಗಳಿಗೆ ಹೋದಾಗ ಅವರ ದೇವಸ್ಥಾನಗಳನ್ನು ವಿಹಾರಗಳನ್ನು ನೋಡಲು ಹೋಗುತ್ತಿದ್ದೆ. ಅವರ ಸಂನ್ಯಾಸಿಗಳನ್ನೂ, ಇತರರನ್ನೂ ಕಂಡು ಬೌದ್ಧ ಮತವು ಜನರಿಗೆ ಯಾವ ಪ್ರಯೋಜನವಾಡಿದೆ ಎಂದು ತಿಳಿದುಕೊಳ್ಳಲು ಪ್ರಯತ್ನ ಮಾಡಿದೆ, ಅವರ ಮೇಲೆ ಯಾವ ಪ್ರಭಾವ ಬೀರಿತ್ತು, ಅವರ ಮನಸ್ಸಿನ ಮೇಲೆ, ಮುಖದಮೇಲೆ ಯಾವ ವರ್ಚಸ್ಸನ್ನು ಬೀರಿತ್ತು, ಆಧುನಿಕ ಜೀವನಕ್ಕೆ ಅವರ ಪ್ರತಿಕ್ರಿಯೆ ಏನು ? ಎಷ್ಟೋ ವಿಷಯ ನನಗೆ ಸರಿತೋರಲಿಲ್ಲ. ವಿಚಾರಪೂರಿತ ನೈತಿಕ ಧರ್ಮದ ಮೇಲೆ ಅಸಾಧ್ಯ ಶಬ್ದಾಡಂಬರದ ಹೊರೆ, ವಿಧಿ ಕ್ರಮಗಳು, ಶಾಸ್ತ್ರ ನಿಯಮಗಳು, ಮತ್ತು ಬುದ್ಧನೇ ಬೇಡವೆಂದ ತಾತ್ವಿಕವಾದಗಳು ಮತ್ತು ಇಂದ್ರಜಾಲ ವಿದ್ಯೆ ಸಹ ಬೆಳೆದು ಜೊಂಡುಗಟ್ಟಿತ್ತು, ಬುದ್ದನು ಎಚ್ಚರಿಕೆ ಕೊಟ್ಟಿದ್ದರೂ ಅವನನ್ನು ದೈವತ್ವಕ್ಕೇರಿಸಿದ್ದರು. ದೇವಸ್ಥಾನಗಳಲ್ಲಿ, ಇತರ ಕಡೆಗಳಲ್ಲಿ ಅವನ ಬೃಹದಾಕಾರದ ವಿಗ್ರಹಗಳು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದವು. ಬುದ್ಧನೇ ಪುನರವತಾರ ಮಾಡಿದರೆ ಏನು ಅಂದುಕೊಳ್ಳುತ್ತಾನೋ ಎಂದು ಚಕಿತನಾದೆ, ಸಂನ್ಯಾಸಿಗಳನೇಕರು ಜ್ಞಾನ ಶೂನ್ಯರು ; ದುರಂಹಕಾರಿಗಳು ; ತಮಗಲ್ಲದಿದ್ದರೂ ತಮ್ಮ ಕಾಷಾಯಗಳಿಗೆ ಪೂಜಾಪೇಕ್ಷಿಗಳು. ಪ್ರತಿಯೊಂದು ದೇಶದಲ್ಲಿ ರಾಷ್ಟ್ರದ ಹುಟ್ಟು ಗುಣವು ಧರ್ಮದಮೇಲೂ ತನ್ನ ದರ್ಪ ತೋರಿಸಿತ್ತು. ತನ್ನ ಪೂರ್ವ ಪದ್ಧತಿಯ ಮತ್ತು ಜೀವನ ಕ್ರಮದ ವೈಶಿಷ್ಟಕ್ಕನುಗುಣವಾಗಿ ಧರ್ಮವನ್ನು ವಿಕೃತಿಗೊಳಿಸಿತು.<noinclude></noinclude>
7cteiykpj5bpn7gohl7su6iyp1wqong
ಪುಟ:ಭಾರತ ದರ್ಶನ.djvu/೧೨೫
104
85017
321373
229034
2026-05-20T09:24:21Z
Pragathi. BH
7585
/* Validated */
321373
proofread-page
text/x-wiki
<noinclude><pagequality level="4" user="Pragathi. BH" />{{rh|೧೦೮|ಭಾರತ ದರ್ಶನ|}}</noinclude>{{gap}}ಇನ್ನೆಷ್ಟೋ ವಿಷಯಗಳು ನನ್ನ ಮನಸ್ಸಿಗೆ ಮೆಚ್ಚಿಗೆಯಾದವು. ಕೆಲವು ವಿಚಾರಗಳಲ್ಲಿ ಅವಕ್ಕೆ ಸೇರಿದ ಶಾಲೆಗಳಲ್ಲಿ ಶಾಂತಿಯುತ ಅಧ್ಯಯನ ಮತ್ತು ಧ್ಯಾನದ ವಾತಾವರಣವಿತ್ತು. ಅನೇಕ ಸಂನ್ಯಾಸಿ ಗಳ ಮುಖದ ಮೇಲೆ ಶಾಂತಿ ಮತ್ತು ತುಷ್ಟಿ ಯ ಮುದ್ರೆ ಇತ್ತು, ಒಂದು ವಿಧವಾದ ಗಾಂಭೀರ್, ಮೃದು ಸ್ವಭಾವ, ನಿರ್ಲಿಪ್ತ ಮನೋಭಾವನೆ ಮತ್ತು ಪ್ರಪಂಚವ್ಯಸನಗಳಿಂದ ದೂರವಾದ ಸ್ವಾತಂತ್ರ್ಯ ಅವರಲ್ಲಿ ಕಾಣುತ್ತಿತ್ತು. ಇದೆಲ್ಲ ಇಂದಿನ ಜೀವನಕ್ಕೆ ಹೊಂದಿಕೊಂಡಿದೆಯೇ ? ಅಥವ ಅದಕ್ಕೆ ಹೆದರಿ ಓಡಿಹೋಗುವ ಮನೋವೃತ್ತಿಯೆ ? ಇದನ್ನೆಲ್ಲ ಜೀವನದ ಅನಂತ ಹೋರಾಟದೊಡನೆ ಸಮನ್ವಯ ಗೊಳಿಸಿ ನಮ್ಮನ್ನು ಪೀಡಿಸುತ್ತಿರುವ ಪಾಶವೀ ವೃತ್ತಿ, ದುರಾಕ್ರಮಣ ಮತ್ತು ಹಿಂಸೆಯನ್ನು ಹತೋಟಿಯಲ್ಲಿಡಲು ಸಾಧ್ಯವಿಲ್ಲವೆ ?
{{gap}}ಬೌದ್ಧ ಮತದ ನಿರಾಶಾವಾದವು ನನ್ನ ಜೀವನ ದೃಷ್ಟಿಗೆ ಸರಿ ಹೋಗಲಿಲ್ಲ; ಜೀವನ ಮತ್ತು ಅದರ ಸಮಸ್ಯೆಗಳಿಗೆ ಹಿಮ್ಮುಖವಾಗಿ ಹಿಂದೇಟು ಹಾಕುವುದೂ ಒಪ್ಪಿಗೆಯಾಗಲಿಲ್ಲ. ಎಲ್ಲಿಯೋ, ನನ್ನ ಮನಸ್ಸಿನ ಹಿನ್ನೆಲೆಯಲ್ಲಿ, ದೈವಭಕ್ತಿಯಿಲ್ಲದ ನಾನು ಮನುಷ್ಯನಂತೆ, ಪ್ರಕೃತಿ ಮತ್ತು ಜೀವನದ ಪೂರ್ಣತೆಯನ್ನು ಬಯಸುವ ಮತ್ತು ಜೀವನ ಸಹಜವಾದ ಹೋರಾಟಗಳಿಗೆ ಹೆದರಿಕೊಳ್ಳದ ಒಬ್ಬ ಅಮತೀಯನಾಗಿದ್ದೆ. ನನ್ನ ಅನುಭವಗಳು, ನನ್ನ ಸುತ್ತಮುತ್ತಲಿನ ನೋವು ಮತ್ತು ಸಂಕಟಗಳು ಆ ಮನೋಭಾವನೆಯನ್ನು ನಾಶಮಾಡಿರಲಿಲ್ಲ.
{{gap}}ಬೌದ್ಧ ಧರ್ಮವು ನಿಷ್ಕ್ರಿಯೆ ಮತ್ತು ನಿರಾಶಾವಾದವನ್ನು ಬೋಧಿಸುವುದೆ ? ಅದರ ಅನುವಾದ ಕರು ಆ ರೀತಿ ಹೇಳಬಹುದು. ಅದರ ಅನುಯಾಯಿಗಳೇ ಅನೇಕರು ಆ ರೀತಿ ಅಭಿಪ್ರಾಯ ಪಡಬಹುದು. ಅದರ ಸೂಕವಿಚಾರಗಳನ್ನು, ಅನಂತರದ ಜಟಿಲತೆಯನ್ನು ಮತ್ತು ತಾತ್ವಿಕ ಬೆಳೆವಣಿಗೆಯನ್ನು ತೀರ್ಮಾನಮಾಡಲು ನನಗೆ ಸಾಧ್ಯವಿಲ್ಲ ; ಆದರೆ ಬುದ್ಧನ ವಿಷಯ ಯೋಚನೆಮಾಡಿದಾಗ ನನ್ನ ಎದೆಯಲ್ಲಿ ಒಂದು ಬಿರುಗಾಳಿಯೇ ಏಳುತ್ತದೆ. ನಿಷ್ಕ್ರಿಯ ಮತ್ತು ನಿರಾಶೆಯನ್ನು ಬೋಧಿಸಿದ ಈ ಧರ್ಮ ಅಷ್ಟು ಅಸಂಖ್ಯಾತ ಜನಸ್ತೋಮದ ಮೇಲೆ--ಅವರಲ್ಲಿ ಕೆಲವರು ಮಹಾಮೇಧಾವಿಗಳು--ಅಂತಹ ಒಂದು ಪ್ರಬಲವಾದ ಪ್ರಭಾವ ಬೀರಿತ್ತೆಂದು ಊಹಿಸುವುದೂ ಸಾಧ್ಯವಿಲ್ಲ.
{{gap}}ಅಸಂಖ್ಯಾತ ಪ್ರೇಮಪೂರ್ಣ ಹಸ್ತಗಳು ಕಲ್ಲಿನಲ್ಲಿ, ಅಮೃತಶಿಲೆಯಲ್ಲಿ, ಕಂಚಿನಲ್ಲಿ ಕೆತ್ತಿದ ಬುದ್ಧನ ಕಲ್ಪ ನಾಚಿತ್ರಗಳು ಭಾರತೀಯ ಭಾವನೆಯ ಪೂರ್ಣ ಆದರ್ಶದ ಅಥವ ಅದರ ಒಂದು ಮುಖ್ಯ ದೃಷ್ಟಿಯು ಸಂಕೇತ. ಕಮಲದ ಹೂವಿನ ಮೇಲೆ ಶಾಂತ ನಿಶ್ಚಲ ಮುಖಮುದ್ರೆಯಿಂದ, ಕಾಮರಹಿತನಾಗಿ, ಮೋಹಾತೀತನಾಗಿ, ಪ್ರಪಂಚದ ಪ್ರಚಂಡ ಬಿರುಗಾಳಿ ಮತ್ತು ಹೋರಾಟದಿಂದ ದೂರನಾಗಿ, ಕುಳಿತ ಬುದ್ದನು ನಮ್ಮ ನಿಲುವಿಗೆ ಬಹುದೂರವಿದ್ದಂತೆ, ದೃಷ್ಟಿಗೆ ಎಟುಕದಂತೆ ಕಾಣುತ್ತಾನೆ. ಪುನಃ ಇನ್ನೊಮ್ಮೆ ನೋಡಿದರೆ ಆ ಪ್ರಶಾಂತ, ನಿಶ್ಚಲ ಮುಖಮುದ್ರೆಯ ಹಿಂದೆ ನಮ್ಮ ಅನುಭವದ ರಾಗ ಭಾವೋದ್ವೇಗಗಳಿಗಿಂತ ಅತ್ಯಾಶ್ಚರ್ಯವೂ, ಅತಿ ತೀಕವೂ ಆದ ರಾಗ ಮತ್ತು ಭಾವೋನ್ಮಾದವಿರು ವಂತೆ ತೋರುತ್ತದೆ. ಆತನ ಕಣ್ಣುಗಳು ಮುಚ್ಚಿವೆ, ಆದರೆ ಯಾವುದೋ ಒಂದು ಆತ್ಮಶಕ್ತಿ ಒಡೆದು ನೋಡುವಂತಿದೆ. ದೇಹಾದ್ಯಂತ ಒಂದು ಜೀವಶಕ್ತಿ ಪ್ರವಹಿಸುತ್ತದೆ. ಯುಗಯುಗಗಳು ಉರುಳು ಇವೆ. ಬುದ್ದನು ನಿಜವಾಗಿ ಬಹುದೂರವಿದ್ದಂತೆ ತೋರುವುದಿಲ್ಲ. ಅವನ ವಾಣಿಯು ನನ್ನ ಕಿವಿ ಯಲ್ಲಿ ಮಾತನಾಡುತ್ತದೆ, “ ಹೋರಾಟಕ್ಕೆ ಹೆದರಿ ಓಡಬೇಡ ; ಶಾಂತಚಿತ್ತನಾಗಿ ಎದುರಿಸು. ಜೀವನದಲ್ಲಿ ಸದಾ ಪ್ರವೃದ್ಧಿ ಯ ಪ್ರಗತಿಯ ಮಹದವಕಾಶಗಳನ್ನು ನೋಡು” ಎಂದು ಹೇಳುತ್ತದೆ.
{{gap}}ಇಂದಿಗೂ ಎಂದಿನಂತೆ ವ್ಯಕ್ತಿತ್ವಕ್ಕೆ ಮಹತ್ವವಿದೆ, ಅದರಲ್ಲೂ ಮಾನವ ಮನಸ್ಸಿನ ಮೇಲೆ ಅದ್ಭುತ ಪರಿಣಾಮ ಮಾಡಿದ, ಹೆಸರು ಕೇಳಿದೊಡನೆ ಇಂದಿಗೂ ರೋಮಾಂಚವನ್ನುಂಟುಮಾಡುವ ಮಹಾ ಪುರುಷ ಬುದ್ದನು ಬಾರ್ತ್ ಹೇಳುವಂತೆ “ ಪ್ರಶಾಂತಮುದ್ರೆಯ ಸುಂದರ ಗಾಂಭೀರದ, ಸಕಲ ಪ್ರಾಣಿಗಳಲ್ಲೂ ಅಪಾರ ದಯೆಯ, ಎಲ್ಲ ಆರ್ತರ ಮಾತಿಗೆ ಕಿವಿಗೊಡುವ ದೈನ್ಯತೆಯ, ಸಂಪೂರ್ಣ ನೈತಿಕ ಸ್ವಾತಂತ್ರ ಮತ್ತು ಎಲ್ಲ ವಿರೋಧ ಭಾವನೆಯಿಂದ ದೂರನಾದ ವ್ಯಕ್ತಿಯ ಮೂರ್ತಸ್ವರೂಪ”<noinclude></noinclude>
gfaiateyrkr0dyhz6vv4dqugnpnoxm8
ಪುಟ:ಭಾರತ ದರ್ಶನ.djvu/೧೨೬
104
85018
321374
229035
2026-05-20T09:24:37Z
Pragathi. BH
7585
/* Validated */
321374
proofread-page
text/x-wiki
<noinclude><pagequality level="4" user="Pragathi. BH" />{{rh||ಭಾರತ ಸಂಶೋಧನೆ|೧೦೯}}</noinclude>ನಿದ್ದಿರಬೇಕು. ಅಂತಹ ಮಹಾನುಭಾವನಿಗೆ ಜನ್ಮ ಕೊಡಬಲ್ಲ ರಾಷ್ಟ್ರದಲ್ಲಿ ಜನಾಂಗದ ವಿವೇಕದ ಅಂತಃಶಕ್ತಿಯ ನಿಧಿಯೂ ಇರಬೇಕು.
{{center|೨೧. ಅಶೋಕ}}
{{gap}}ಚಂದ್ರಗುಪ್ತ ಮೌರ್ಯನು ಭಾರತ ಮತ್ತು ಪಾಶ್ಚಾತ್ಯ ಪ್ರಪಂಚದ ಮಧ್ಯೆ ನಡೆಸಿದ ವ್ಯವಹಾರ ಸಂಬಂಧವು ಅವನ ಮಗ ಬಿಂದುಸಾರನ ಕಾಲದಲ್ಲೂ ಮುಂದುವರಿಯಿತು. ಈಜಿಪ್ಟ್ ದೇಶದ ಟಾಲೆಮಿ ಕಡೆಯಿಂದಲೂ, ಪಶ್ಚಿಮ ಏಷ್ಯದ ಸೆಲ್ಯೂಕಸ್ ನಿಕಟಾರ್ನ ಮಗ ಮತ್ತು ಉತ್ತರಾಧಿಕಾರಿ ಯಾದ ಆಂಟಿಯೋಕಸ್ ನಿಂದಲೂ ಪಾಟಲಿಪುತ್ರದ ರಾಜಸಭೆಗೆ ರಾಯಭಾರಿಗಳು ಬರುತ್ತಿದ್ದರು. ಚಂದ್ರಗುಪ್ತನ ಮೊಮ್ಮಗನಾಗ ಅಶೋಕನು ಈ ಸಂಬಂಧವನ್ನು ಇನ್ನೂ ವೃದ್ಧಿಗೊಳಿಸಿದನು. ಮುಖ್ಯವಾಗಿ ಬೌದ್ದ ಮತ ಪ್ರಸಾರದಿಂದ ಆತನ ಕಾಲದಲ್ಲಿ ಭಾರತವು ಬಹು ಮುಖ್ಯವಾದ ಅಂತರ ರಾಷ್ಟ್ರೀಯ ಕೇಂದ್ರವಾಯಿತು.
{{gap}}ಅಶೋಕನು ಕ್ರಿಸ್ತಪೂರ್ವ ೨೭೩ರಲ್ಲಿ ಈ ಮಹಾ ಸಾಮ್ರಾಜ್ಯಕ್ಕೆ ಅಧಿಪತಿಯಾದನು. ವಿಶ್ವವಿದ್ಯಾ ನಿಲಯದ ಕೇಂದ್ರವಾದ ತಕ್ಷಶಿಲೆಯೇ ರಾಜಧಾನಿಯಾಗಿದ್ದ ವಾಯವ್ಯ ಪ್ರಾಂತ್ಯಕ್ಕೆ ಮೊದಲು ಆತನು ಅಧಿಕಾರಿಯಾಗಿದ್ದನು. ಇಷ್ಟು ಹೊತ್ತಿಗೆ ಭಾರತದ ಬಹುಭಾಗವು ಸಾಮ್ರಾಜ್ಯದಲ್ಲಿ ಸೇರಿ ಏಷ್ಯದವರೆಗೆ ಹರಡಿತ್ತು. ನೈರುತ್ಯ ಮೂಲೆಯೂ ಮತ್ತು ದಕ್ಷಿಣದ ಸ್ವಲ್ಪ ಭಾಗ ಮಾತ್ರ ಅದರ ಆಧಿಪತ್ಯಕ್ಕೆ ಸೇರಿರಲಿಲ್ಲ. ಇಡೀ ಭಾರತವನ್ನು ಒಂದು ಕೇಂದ್ರ ರಾಜ್ಯಾಡಳಿತದೊಳಗೆ ತಂದು ಒಟ್ಟು ಗೂಡಿಸಬೇಕೆಂಬ ಹಿಂದಿನ ಹಿರಿಯಾಸೆಯು ಅಶೋಕನನ್ನೂ ಹಿಡಿಯಿತು. ಒಡನೆ ಪೂರ್ವ ತೀರದ ಕಳಿಂಗ ರಾಜ್ಯವನ್ನು ಗೆಲ್ಲಲು ದಂಡೆತ್ತಿ ಹೋದ. ಕಳಿಂಗ ಈಗಿನ ಒರಿಸ್ಸ ಮತ್ತು ಆಂಧ್ರದೇಶದ ಕೆಲವು ಭಾಗವಾಗಿತ್ತು. ಈ ಯುದ್ಧದಲ್ಲಿ ಅನೇಕ ಜನರು ಕೊಲೆಯಾದರು. ಈ ಸುದ್ದಿಯು ಅಶೋಕನ ಕಿವಿ ಮುಟ್ಟಿದೊಡನೆ ಶೋಕದಲ್ಲಿ ಮುಳುಗಿದ ಮತ್ತು ಯುದ್ಧವೆಂದರೆ ಅವನಿಗೆ ಅಸಹ್ಯ ಹುಟ್ಟಿತು. ಪ್ರಪಂಚದ ಇತಿಹಾಸದಲ್ಲಿ ವಿಜಯಶಾಲಿಗಳಾದ ರಾಜರ ಮತ್ತು ಸೇನಾನಾಯಕರ ಪರಂಪರೆಯಲ್ಲಿ ವಿಜಯೋನ್ಮತ್ತನಾಗಿರಬೇಕಾದಾಗ ಯುದ್ಧವನ್ನೇ ತ್ಯಜಿಸಲು ನಿರ್ಧರಮಾಡಿದ ಮಹಾಪುರುಷನೆಂದರೆ ಅಶೋಕ ಒಬ್ಬನೆ. ದಕ್ಷಿಣ ಭಾರತದ ತುದಿಯೊಂದನ್ನು ಬಿಟ್ಟು-ಮನಸ್ಸು ಮಾಡಿದ್ದರೆ ಅದೂ ಅವನ ದಾಗುತ್ತಿತ್ತು-ಇಡೀ ಭಾರತವೇ ಅವನ ಅಧೀನವಾಗಿತ್ತು. ಆದರೆ ತಿರುಗಿ ಆಕ್ರಮಣಮಾಡಲು ನಿರಾಕರಿಸಿದ. ಅವನಲ್ಲಿ ಅಸಾಧ್ಯ ಮಾನಸಿಕ ಪರಿವರ್ತನೆಯಾಯಿತು. ಬುದ್ಧನ ಉಪದೇಶದ ಪ್ರಭಾವದಿಂದ ಬೇರೆ ಕ್ಷೇತ್ರದಲ್ಲಿ ಸಾಹಸಮಾಡಿ ಜಯಶೀಲನಾದ.
{{gap}}ಅಶೋಕನ ಮನಸ್ಸಿನಮೇಲೆ ಯಾವ ಪರಿಣಾಮವಾಯಿತು, ಮುಂದೆ ಅವನು ಏನುಮಾಡಿದ ಎಂಬುದು ಅವನೇ ಕೆತ್ತಿಸಿದ ಶಿಲಾಲೇಖನಗಳಲ್ಲಿ, ಲೋಹ ಪಟಗಳಲ್ಲಿ ಬರೆದಿಟ್ಟ ಶಾಸನಗಳಲ್ಲಿ ಅವನ ಮಾತುಗಳಿಂದಲೇ ತಿಳಿಯುತ್ತದೆ. ಈ ಶಾಸನಗಳು ಭಾರತದ ನಾನಾಕಡೆಗಳಲ್ಲಿ ಈಗಲೂ ನಮಗೆ ದೊರೆಯುತ್ತವೆ. ಅವುಗಳಿಂದ ಅವನ ಸಂದೇಶ ಅವನ ಪ್ರಜೆಗಳಿಗೆ ಮಾತ್ರವಲ್ಲ, ಮುಂದಿನ ಪೀಳಿಗೆ ಗಳಿಗೂ ದೊರೆಯಿತು, ಒಂದು ಶಾಸನದಲ್ಲಿ ಈ ರೀತಿ ಹೇಳಿದೆ :
{{gap}}“ಚಕ್ರವರ್ತಿ ಸಾರ್ವಭೌಮನು ರಾಜ್ಯಾಭಿಷಿಕ್ತನಾದ ಎಂಟು ವರ್ಷಕ್ಕೆ ಕಳಿ೦ಗ ರಾಜ್ಯವನ್ನು ಜಯಿಸಿದನು. ೧೫೦ ಸಾವಿರ ಜನರು ಸೆರೆಸಿಕ್ಕರು; ಒಂದು ನೂರು ಸಾವಿರ ಜನರ ವಧೆಯಾಯಿತು. ಅದಕ್ಕೂ ಎಷ್ಟೊಪಾಲು ಜನರು ಸತ್ತರು.
{{gap}}“ಕಳಿಂಗರಾಜ್ಯ ಅಧೀನವಾದೊಡನೆ ಸಾಮ್ರಾಟ್ ಅಶೋಕನು ಭಕ್ತಿಧರ್ಮದ ರಕ್ಷಣೆಗಾಗಿ ಪ್ರತಿಜ್ಞೆ ಮಾಡಿದನು. ಆ ಧರ್ಮದ ಮೇಲೆ ವಿಶ್ವಾಸವೂ ನಿಷ್ಠೆ ಯೂ ಅಪಾರವಾಗಿ ಬೆಳೆಯಿತು. ಹಿಂದೆಂದೂ ದಾಸ್ಯಕ್ಕೀಡಾಗದ ಒಂದು ರಾಜ್ಯವನ್ನು ಗೆಲ್ಲಬೇಕಾದರೆ ಕೊಲೆ ಸಾವು ಮತ್ತು ಅನೇಕರ ಬಂಧನ ಅನಿವಾದ್ಯ. ಆದ್ದರಿಂದ ಕಳಿಂಗರಾಜ್ಯವನ್ನು ಅಧೀನಮಾಡಿಕೊಳ್ಳಲು ಆದ ಕೊಲೆಯಿಂದ ಚಕ್ರ<noinclude></noinclude>
t65v161rh7jmcrdugol1h9y4a5pn5p3
ಪುಟ:ಭಾರತ ದರ್ಶನ.djvu/೧೩೧
104
85023
321388
229077
2026-05-20T09:28:11Z
Pragathi. BH
7585
/* Validated */
321388
proofread-page
text/x-wiki
<noinclude><pagequality level="4" user="Pragathi. BH" />{{rh|೧೧೪|ಭಾರತ ದರ್ಶನ|}}</noinclude>ಒಂದು ಶಾಶ್ವತ ಪರಿಹಾರವನ್ನು ಕಲ್ಪಿಸಿತ್ತು. ಅದೇ ರೀತಿ ಬೇರೆ ವಿದೇಶೀಯರು ಬಂದಾಗ ಅವರನ್ನೂ ಭಾರತೀಯರನ್ನಾಗಿ ಸೇರಿಸಿಕೊಂಡರು. ಅದರಿಂದ ಯಾವ ವ್ಯತ್ಯಾಸವೂ ಕಾಣಲಿಲ್ಲ. ವ್ಯಾಪಾರ ಮತ್ತು ಇತರ ಕಾರಣಗಳಿಂದ ಭಾರತಕ್ಕೂ ಇತರ ದೇಶಗಳಿಗೂ ಅನೇಕ ವ್ಯವಹಾರ ವಿದ್ದರೂ ಭಾರತವು ತನ್ನ ಪಾಡನ್ನು ತಾನು ನೋಡಿಕೊಳ್ಳುತ್ತ ಇತ್ತು ; ಬೇರೆ ಕಡೆಗಳಲ್ಲಿ ಏನಾಯಿ ತೆಂಬುದಕ್ಕೆ ವಿಶೇಷ ಗಮನ ಕೊಡುತ್ತಿರಲಿಲ್ಲ. ಆದರೆ ಭಿನ್ನ ರೀತಿಯ ಭಿನ್ನ ದೇಶೀಯರಿಂದ ಪದೇ ಪದೇ ದಂಡಯಾತ್ರೆಗಳೊದಗಿ ಜನರು ತಲ್ಲಣಿಸಿದ್ದರು. ತನ್ನ ರಾಜಕೀಯ ಆಡಳಿತ ಮಾತ್ರವಲ್ಲದೆ ತನ್ನ ಸಂಸ್ಕೃತಿಯ ಆದರ್ಶಗಳು ಮತ್ತು ಸಾಮಾಜಿಕ ರಚನೆಯು ಸಹ ಕಳಚಿ ಬೀಳುವ ಸ್ಥಿತಿಗೆ ತರುತ್ತಿದ್ದ ಈ ಸ್ಫೋಟಕಗಳನ್ನು ಅಲಕ್ಷ ಮಾಡುವಂತೆ ಇರಲಿಲ್ಲ. ಮುಖ್ಯವಾಗಿ ಈ ಪ್ರತಿಕ್ರಿಯೆ ರಾಷ್ಟ್ರೀಯ ಭಾವನೆಯದಾಗಿತ್ತು ; ಅದರಲ್ಲಿ ರಾಷ್ಟ್ರೀಯ ಭಾವನೆಯ ಶಕ್ತಿ ಮತ್ತು ಸಂಕುಚಿತ ದೃಷ್ಟಿ ಯೂ ಇತ್ತು. ಧರ್ಮ, ತತ್ತ್ವ ಶಾಸ್ತ್ರ, ಇತಿಹಾಸ, ಸಂಪ್ರದಾಯ, ಸಾಮಾಜಿಕ ರಚನೆ, ಇವು ಗಳೆಲ್ಲವನ್ನೂ ಅಂದಿನ ಹಿಂದೂ ಅಥವ ಬ್ರಾಹ್ಮಣಧರ್ಮ ಭಾರತೀಯ ಜೀವನದಲ್ಲಿ ಸಮನ್ವಯ ಮಾಡಿತು. ಈ ಸಮಗ್ರ ದೃಷ್ಟಿಯು ಆ ರಾಷ್ಟ್ರೀಯ ಭಾವನೆಯ ಸಂಕೇತವಾಯಿತು. ಇಂದಿನ ಎಲ್ಲ ರಾಷ್ಟ್ರೀಯ ಭಾವನೆಗಳ ಮೂಲ ಆದರ್ಶಗಳಂತೆ ಆ ಧರ್ಮವು ಜನಾಂಗ ಮತ್ತು ಸಂಸ್ಕೃತಿಯ ಭಾವನೆಗಳಿಂದ ಆಳವಾದ ಅಲೆಗಳನ್ನೆಬ್ಬಿಸುವ ಒಂದು ಪ್ರಬಲವಾದ ರಾಷ್ಟ್ರೀಯ ಧರ್ಮವಾಯಿತು. ಭಾರತೀಯ ಭಾವನೆಯ ಶಿಶುವಾದ ಬೌದ್ಧ ಧರ್ಮದಲ್ಲಿ ಅದರದೇ ಒಂದು ರಾಷ್ಟ್ರೀಯ ಹಿನ್ನೆಲೆ ಇತ್ತು. ಭಾರತವು ಬುದ್ಧನು ಜೀವಿಸಿ, ಉಪದೇಶಮಾಡಿ, ನಿರ್ಯಾಣ ಹೊಂದಿದ ಮತ್ತು ಮಹಾ ಜ್ಞಾನಿಗಳೂ ಸಂತರೂ ಧರ್ಮ ಪ್ರಚಾರ ಮಾಡಿದ ಪುಣ್ಯ ಭೂಮಿ. ಆದರೆ ಬೌದ್ಧ ಧರ್ಮವು ಮುಖ್ಯವಾಗಿ ಅಂತರ ರಾಷ್ಟ್ರೀಯ ಧರ್ಮ ; ಒಂದು ವಿಶ್ವ ಧರ್ಮ ಮತ್ತು ಅದು ದೂರ ದೇಶಗಳಿಗೆ ವ್ಯಾಪಿಸಿ ಬೆಳೆದಂತೆಲ್ಲ ಇನ್ನೂ ಹೆಚ್ಚು ಅಂತರ ರಾಷ್ಟ್ರೀಯವಾಯಿತು. ಆದ್ದರಿಂದ ಪುನಃ ಪುನಃ ರಾಷ್ಟ್ರೀಯ ಪುನರುಜ್ಜಿವನ ಕಾಲಗಳಲ್ಲಿ ಸನಾತನ ಬ್ರಾಹ್ಮಣ ಮತವೇ ರಾಷ್ಟ್ರೀಯತೆಯ ಸಂಕೇತ ವಾಗುವುದು ಸ್ವಾಭಾವಿಕವಾಯಿತು.
{{gap}}ಆ ಧರ್ಮ ಮತ್ತು ತತ್ವ ಶಾಸ್ತ್ರವು ಭಾರತದ ಇತರ ಅನೇಕ ಧರ್ಮಗಳಿಗೆ ಮತ್ತು ಜನಾಂಗಗಳಿಗೆ ಸಹನೆಯನ್ನು ತೋರಿದವು ಮತ್ತು ಆಶ್ರಯ ಕೊಟ್ಟವು. ತಮ್ಮ ವಿಶಾಲವಾದ ಚೌಕಟ್ಟಿನಲ್ಲಿ ಅವುಗಳನ್ನೂ ಸೇರಿಸಿಕೊಳ್ಳುತ್ತಲೇ ಮುಂದುವರಿದವು. ಆದರೆ ವಿದೇಶೀಯರಿಗೆ ಮಾತ್ರ ಅವಕಾಶ ಕೊಡಲು ಪ್ರಬಲವಾಗಿ ವಿರೋಧಿಸುತ್ತಿದ್ದವು ಮತ್ತು ಅವುಗಳ ಪ್ರಭಾವಕ್ಕೆ ಬಲಿಬೀಳದಂತೆ ಆತ್ಮ ರಕ್ಷಣೆ ಮಾಡಿಕೊಳ್ಳುತ್ತಿದ್ದವು. ಆ ರೀತಿ ಮಾಡುವಾಗ ರಾಷ್ಟ್ರೀಯ ಭಾವನೆಯ ಶಕ್ತಿ, ಹೆಚ್ಚಿದಾಗ ಅನೇಕ ಸಂದರ್ಭಗಳಲ್ಲಿ ಆಗುವಂತೆ ಸಾಮ್ರಾಜ್ಯ ಭಾವನೆಯಾಗಿ ಬಿಡುತ್ತಿತ್ತು. ಗುಪ್ತರ ಕಾಲವು ಪ್ರತಿಭಾಯುಕ್ತವೂ ಚಟುವಟಿಕೆಯುಳ್ಳದ್ದೂ, ಸುಸಂಸ್ಕೃತವೂ, ಪೂರ್ಣಜೀವಂತವೂ ಆದಾಗ್ಯೂ ಶೀಘ್ರದಲ್ಲೇ ಸಾಮ್ರಾಜ್ಯ ಸ್ವರೂಪವನ್ನು ತಾಳಿತು. ಅವರಲ್ಲಿ ವಿಶೇಷ ಪ್ರಖ್ಯಾತನಾದ ಸಮುದ್ರ ಗುಪ್ತನನ್ನು ಇಂಡಿಯಾದ ನೆಪೋಲಿಯನ್ ಎಂದು ಕರೆದಿದ್ದಾರೆ. ಸಾಹಿತ್ಯ ಮತ್ತು ಕಲೆಯ ದೃಷ್ಟಿಯಿಂದ ಅದು ಒಂದು ಸ್ವರ್ಣಯುಗ.
{{gap}}ನಾಲ್ಕನೆಯ ಶತಮಾನದ ಆರಂಭದಿಂದ ಸುಮಾರು ಒಂದೂವರೆ ಶತಮಾನದವರೆಗೆ ಉತ್ತರ ಹಿಂದೂಸ್ಥಾನದಲ್ಲಿ ಒಂದು ಶಕ್ತಿಯುತ ಪ್ರಗತಿಪೂರ್ಣರಾಜ್ಯದ ಮೇಲೆ ಗುಪ್ತರು ರಾಜ್ಯವಾಳಿದರು. ಆಲ್ಲಿಂದ ಮುಂದೆ ಇನ್ನೊಂದು ನೂರೈವತ್ತು ವರ್ಷ, ಅವರ ಸಂತತಿಯವರು ರಾಜರಾಗಿದ್ದರು. ಆದರೆ ಈಗ ಅವರು ಆತ್ಮರಕ್ಷಣೆಯಲ್ಲಿದ್ದರು ಮತ್ತು ರಾಜ್ಯವು ಕ್ರಮೇಣ ಸಣ್ಣದಾಗುತ್ತ ಬಂದಿತು. ಮಧ್ಯ ಏಷ್ಯದಿಂದ ಹೊಸ ಜನರು ದಂಡೆತ್ತಿ ಬರಲಾರಂಭಿಸಿದರು. ಇವರನ್ನು ಶ್ವೇತಹೂಣರೆಂದು ಕರೆಯು ತಿದ್ದರು, ಅವರೇ ಅಲನ ಕೈಕೆಳಗೆ ಯುರೋಪನ್ನು ಕೊಳ್ಳೆ ಹೊಡೆದಂತೆ ಭಾರತವನ್ನು ಕೊಳ್ಳೆ ಹೊಡೆಯಲಾರಂಭಿಸಿದರು. ಅವರ ಪಾಶವೀವೃತ್ತಿ, ಪೈಶಾಚಿಕ ಕ್ರೌರ್ಯ ಜನರನ್ನು ರೊಚ್ಚಿಗೆಬ್ಬಿಸಿತು.<noinclude></noinclude>
4bq2tcd4wi5no57spoleahse92vxiqo
ಪುಟ:ಭಾರತ ದರ್ಶನ.djvu/೧೩೨
104
85024
321389
229081
2026-05-20T09:28:27Z
Shreelatha.Halemane
7642
/* Validated */
321389
proofread-page
text/x-wiki
<noinclude><pagequality level="4" user="Shreelatha.Halemane" />{{rh||ಯುಗಾಂತರಗಳು|೧೧೫}}</noinclude>ಕೊನೆಗೆ ಯಶೋವರ್ಮನ ನಾಯಕತ್ವದಲ್ಲಿ ಒಂದು ಸಂಯುಕ್ತ ಬಲದಿಂದ, ಒಗ್ಗಟ್ಟಿನಿಂದ ಅವರನ್ನು ಎದುರಿಸಿದರು, ಹೂಣರ ಶಕ್ತಿ ಮುರಿಯಿತು. ಅವರ ನಾಯಕ ಮಿಹಿರಗುಳ ಸೆರೆಯಾಳಾದ, ಆದರೆ ಗುಪ್ತರ ವಂಶಿಕನಾದ ಬಾಲಾದಿತ್ಯ ದೇಶರೂಢಿಯಂತೆ ಆತನಿಗೆ ಕರುಣೆತೋರಿ ಭಾರತವನ್ನು ಬಿಟ್ಟು ಹೋಗಲು ಆಜ್ಞೆ ಮಾಡಿದ, ಮಿಹಿರಗುಳ ಸ್ವಲ್ಪ ದಿನಗಳಲ್ಲೇ ಹಿಂತಿರುಗಿ ಬಂದು ಜೀವದಾತನನ್ನು ಮೋಸದಿಂದ ಕೊಂದು ಅವನ ಔದಾರಕ್ಕೆ ಪ್ರತೀಕಾರಮಾಡಿದ.
{{gap}}ಆದರೆ ಹೂಣರ ರಾಜ್ಯ ಭಾರತದಲ್ಲಿ ಬಹುಕಾಲ ನಡೆಯಲಿಲ್ಲ, ಐವತ್ತು ವರ್ಷಗಳು ಮಾತ್ರ ನಡೆಯಿತು. ಅವರಲ್ಲಿ ಕೆಲವರು ಇಲ್ಲಿಯೇ ಸಣ್ಣ ಸಣ್ಣ ಪಾಳೆಯ ಪಟ್ಟು ಗಳಾಗಿ ಉಳಿದು ಆಗಾಗ್ಗೆ ತೊಂದರೆ ಕೊಡುತ್ತಿದ್ದರು; ಕ್ರಮೇಣ ಅವರು ಭಾರತ ಜನತೆಯ ಮಹಾಸಾಗರದಲ್ಲಿ ಮುಳುಗಿ ಹೋದರು. ಈ ಪಾಳೆಯಗಾರರಲ್ಲಿ ಕೆಲವರು ಕ್ರಿಸ್ತಶಕ ಏಳನೆಯ ಶತಮಾನದ ಆದಿಯಲ್ಲಿ ಪುನಃ ಕಿರುಕುಳ ಕೊಡಲಾರಂಭಿಸಿದರು, ಕನೂಜದ ರಾಜನಾದ ಹರ್ಷವರ್ಧನ ಅವರನ್ನು ಸದೆಬಡಿದು, ಉತ್ತರ ಮತ್ತು ಮಧ್ಯ ಹಿಂದೂಸ್ಥಾನದಲ್ಲಿ ಒಂದು ಪ್ರಬಲ ರಾಜ್ಯವನ್ನು ಕಟ್ಟಿದನು. ಆತನು ಬಹಳ ನಿಷ್ಠ ನಾದ ಬೌದ್ಧಧರ್ಮ ಆದರೆ ಮಹಾಯಾನ ಬೌದ್ದನಾದ್ದರಿಂದ ಆ ಧರ್ಮವು ಅನೇಕ ವಿಧದಲ್ಲಿ ಹಿಂದೂ ಧರ್ಮದಂತೆಯೇ ಇತ್ತು. ಆತನು ಹಿಂದೂ ಮತ್ತು ಬೌದ್ಧ ಧರ್ಮಗಳೆರಡನ್ನೂ ಪ್ರೋತ್ಸಾಹಿ ಸಿದ. ಪ್ರಸಿದ್ದ ಚೀನೀ ಯಾತ್ರಿಕನಾದ ಹುಯನ್ ತ್ಸಾಂಗ್ ಕ್ರಿಸ್ತ ಶಕ ೬೨೯ ರಲ್ಲಿ ಭಾರತಕ್ಕೆ ಬಂದದ್ದೂ ಈತನ ಕಾಲದಲ್ಲೇ , ಹರ್ಷವರ್ಧನನು ಕವಿ ಮತ್ತು ನಾಟಕಕರ್ತೃ, ಅವನ ಆಸ್ಥಾನದಲ್ಲಿ ಅನೇಕ ಕಲಾವಿದರೂ ಕವಿಗಳೂ ಇದ್ದರು. ಅವನ ರಾಜಧಾನಿಯಾದ ಉಜ್ಜಯಿನಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒಂದು ಪ್ರಸಿದ್ದ ಕೇಂದ್ರವಾಗಿತ್ತು. ಕ್ರಿ.ಶ. ೬೪೮ ರಲ್ಲಿ ಹರ್ಷವರ್ಧನ ಕಾಲವಾದನು. ಅದೇ ಕಾಲದಲ್ಲಿ ಇಸ್ಲಾಂ ಧರ್ಮವು ಅರೇಬಿಯ ಮರುಭೂಮಿಯಿಂದ ಹೊರಟು ಆಫ್ರಿಕ ಮತ್ತು ಏಷ್ಯಾಖಂಡ ಗಳಲ್ಲಿ ಬಹುಬೇಗ ಹಬ್ಬಲು ಆರಂಭಿಸಿತ್ತು.
{{center|೨. ದಕ್ಷಿಣ ಭಾರತ}}
{{gap}}ದಕ್ಷಿಣ ಭಾರತದಲ್ಲಿ, ಮೌರ್ಯ ಚಕ್ರಾಧಿಪತ್ಯವು ಕುಸಿದು ಬಿದ್ದ ಮೇಲೆ ಸುಮಾರು ಒಂದು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ದೊಡ್ಡ ದೊಡ್ಡ ರಾಜ್ಯಗಳು ಪ್ರಾಬಲ್ಯಕ್ಕೆ ಬಂದವು. ಆಂಧ್ರರು ಶಕರನ್ನು ಸೋಲಿಸಿದ್ದರು ಮತ್ತು ಕುಶಾನರ ಸಮಕಾಲೀನರಾಗಿದ್ದರು. ಅನಂತರ ಪಶ್ಚಿಮದಲ್ಲಿ ಚಾಲುಕ್ಯರ ಚಕ್ರಾಧಿಪತ್ಯ, ಆ ಮೇಲೆ ರಾಷ್ಟ್ರ ಕೂಟರು, ಇನ್ನೂ ದಕ್ಷಿಣದಲ್ಲಿ ಭಾರತದಿಂದ ಅನೇಕ ಬಾರಿ ದಂಡಯಾತ್ರೆ ಮಾಡಿ ವಸಾಹತುಗಳನ್ನು ಸ್ಥಾಪಿಸಿದ ಪಲ್ಲವರು ಇದ್ದರು. ಆ ಮೇಲೆ ಚೋಳರ ಚಕ್ರಾಧಿ ಪತ್ಯವು ಇಡೀ ಪಠ್ಯಾಯದೀಪವನ್ನೇ ಆಕ್ರಮಿಸಿ ಸಿಂಹಳ ಮತ್ತು ದಕ್ಷಿಣ ಬ್ರಹ್ಮದೇಶವನ್ನು ಸಹ ಅಧೀನಪಡಿಸಿಕೊಂಡಿತ್ತು. ಚೋಳರಾಜರುಗಳಲ್ಲಿ ಪ್ರಖ್ಯಾತರಾದವರಲ್ಲಿ ಕೊನೆಯವನಾದ ರಾಜೇಂದ್ರ ಕ್ರಿ.ಶ. ೧೦೪೪ ರಲ್ಲಿತೀರಿಕೊಂಡ.
{{gap}}ದಕ್ಷಿಣ ಭಾರತವು ಮುಖ್ಯವಾಗಿ ಅದರ ನಯವಸ್ತುಗಳ ಸಮುದ್ರ ವ್ಯಾಪಾರಕ್ಕೆ ಪ್ರಸಿದ್ದಿ ಪಡೆದಿತ್ತು. ದಕ್ಷಿಣ ರಾಷ್ಟ್ರಗಳು ನೌಕಾಬಲವುಳ್ಳ ರಾಷ್ಟ್ರಗಳು. ಅವರ ಹಡಗುಗಳು ದೂರ ದೇಶಗಳಿಗೆ ವ್ಯಾಪಾರಸರಕನ್ನೊ ಯ್ಯುತ್ತಿದ್ದವು. ಗ್ರೀಕರು, ಅಲ್ಲಿ ವಲಸೆ ಬಂದು ನೆಲಸಿದ್ದರು ಮತ್ತು ರೋಮನ್ ನಾಣ್ಯಗಳು ಅಲ್ಲಿ ದೊರೆತಿವೆ. ಚಾಲುಕ್ಯ ರಾಜನೂ ಪರ್ಷಿಯದ ಸಸ್ಸನಿದ್ ರಾಜನೂ ಪರಸ್ಪರ ರಾಯಭಾರಿಗಳನ್ನು ವಿನಿಮಯಿಸಿದ್ದರು.
{{gap}}ಉತ್ತರ ಹಿಂದೂಸ್ಥಾನದಲ್ಲಿ ಪದೇ ಪದೇ ದಂಡಯಾತ್ರೆಗಳಾಗುತ್ತಿದ್ದರೂ ದಕ್ಷಿಣ ಭಾರತದ ಮೇಲೆ ಯಾವ ಪರಿಣಾಮವೂ ಆಗಲಿಲ್ಲ. ಪರೋಕ್ಷಪರಿಣಾಮವೆಂದರೆ ಅನೇಕರು ಉತ್ತರ ಭಾರತ ದಿಂದ ದಕ್ಷಿಣಕ್ಕೆ ಬಂದು ನೆಲಸಿದರು. ಅನೇಕ ಶಿಲ್ಪಿಗಳು, ಕುಶಲಕರ್ಮಿಗಳು, ಉದ್ಯೋಗಿಗಳು ಬಂದರು. ಈ ರೀತಿ ದಕ್ಷಿಣ ಭಾರತವು ಪ್ರಾಚೀನ ಕಲಾಸಂಪ್ರದಾಯಕ್ಕೆ, ಸಂಪತ್ತಿಗೆ ನೆಲೆವನೆ<noinclude></noinclude>
togrrv2saymszdscy5bn642pz885lrw
ಪುಟ:ಭಾರತ ದರ್ಶನ.djvu/೧೩೩
104
85025
321387
229083
2026-05-20T09:28:11Z
Shreelatha.Halemane
7642
/* Validated */
321387
proofread-page
text/x-wiki
<noinclude><pagequality level="4" user="Shreelatha.Halemane" />{{rh|೧೧೬|ಭಾರತ ದರ್ಶನ|}}</noinclude>ಯಾಯಿತು. ಉತ್ತರ ಭಾರತವು ವಿದೇಶೀಯರ ದಂಡಯಾತ್ರೆಗಳ ಸುಳಿಗೆ ಸಿಕ್ಕಿತು. ಬರುಬರುತ್ತ ಈ ಪರಿವರ್ತನೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರೆತು ದಕ್ಷಿಣ ಭಾರತವು ಹಿಂದೂ ಧರ್ಮನಿಷ್ಠೆಗೆ ತವರುಮನೆಯಾಯಿತು.
{{center|೩. ಶಾಂತಿಯುತ ಪ್ರಗತಿ ಮತ್ತು ಯುದ್ಧ ರೀತಿ }}
{{gap}}ಮೇಲಿಂದ ಮೇಲೆ ಒದಗಿದ ದಂಡಯಾತ್ರೆಗಳ, ಸಾಮ್ರಾಜ್ಯಗಳ ಮೇಲೆ ಸಾಮ್ರಾಜ್ಯಗಳು ಬಂದ ಸಂಕ್ಷೇಪ ಇತಿಹಾಸದಿಂದ ಭಾರತದಲ್ಲಿ ಆಗ ಏನು ನಡೆಯುತ್ತಿತ್ತು ಎಂಬುದರ ಕಲ್ಪನೆ ಸಹ ಆಗುವುದಿಲ್ಲ ; ತಪ್ಪು ಅಭಿಪ್ರಾಯವೂ ಹುಟ್ಟುತ್ತದೆ. ಈ ಕಾಲವು ಸುಮಾರು ಒಂದು ಸಾವಿರ ವರ್ಷಗಳ ಕಾಲದ್ದು. ಮಧ್ಯೆ ಮಧ್ಯೆ ಬಹು ಕಾಲ ಶಾಂತಿಯುತ ವ್ಯವಸ್ಥಿತ ರಾಜ್ಯಭಾರವಿತ್ತು. ಮೌರ್ಯರು, ಕುಶಾನರು, ಮತ್ತು ಗುಪ್ತರು, ದಕ್ಷಿಣದಲ್ಲಿ ಆಂಧ್ರರು, ಚಾಳುಕ್ಯರು, ರಾಷ್ಟ್ರಕೂಟರು ಮತ್ತು ಇತರರು ಈ ರೀತಿ ಪ್ರತಿಯೊಂದು ರಾಜ್ಯವೂ ೨೦೦-೩೦೦ ವರ್ಷ ಅಥವ ಇನ್ನೂ ಹೆಚ್ಚು ಕಾಲ ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯದ ಕಾಲಕ್ಕಿಂತ ಹೆಚ್ಚು ಕಾಲ ಅಧಿಕಾರ ನಡೆಸಿದವು. ಇವರೆಲ್ಲ ದೇಶೀಯ ರಾಜ ಮನೆತನಗಳವರು. ಉತ್ತರದ ಗಡಿಯಿಂದ ಬಂದ ಕುಶಾನರಂಥವರು ಸಹ ಈ ದೇಶ ಮತ್ತು ಅದರ ಸಂಸ್ಕೃತಿ ಯನ್ನವಲಂಬಿಸಿ ದೇಶೀಯ ರಾಜಮನೆತನಗಳ೦ತೆಯೇ ವರ್ತಿಸಿದರು. ಗಡಿನಾಡಿನಲ್ಲಿ, ಆಗಾಗ ಅಕ್ಕ ಪಕ್ಕದ ರಾಜ್ಯಗಳಲ್ಲಿ ಘರ್ಷಣೆ ಮತ್ತು ಯುದ್ದಗಳಾಗುತ್ತಿದ್ದವು. ಆದರೆ ಸಾಮಾನ್ಯವಾಗಿ ದೇಶದಲ್ಲಿ ಶಾಂತಿ ನೆಲೆಸಿತು. ರಾಜರುಗಳು ಕಲೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತಿದ್ದರು. ಈ ಚಟುವಟಿಕೆಗಳು ರಾಜ್ಯದಿಂದ ರಾಜ್ಯಕ್ಕೆ ಸೀಮೋಲ್ಲಂಘನ ಮಾಡುತ್ತಿದ್ದವು. ಕಾರಣ ಸಾಹಿತ್ಯ ಮತ್ತು ಸಂಸ್ಕೃತಿಯ ಹಿನ್ನೆಲೆಯು ಭಾರತಕ್ಕೆಲ್ಲ ಒಂದೇ ಆಗಿತ್ತು. ಪ್ರತಿಯೊಂದು ತಾತ್ವಿಕ, ಧಾರ್ಮಿಕ ಜಿಜ್ಞಾಸೆಯೂ ಮರುಗಳಿಗೆಯಲ್ಲಿ ದೇಶಾದ್ಯಂತವೂ ಹರಡಿ ಉತ್ತರ ದಕ್ಷಿಣದೆರಡೂ ಕಡೆಯಲ್ಲ ವಾದ ವಿವಾದಗಳು ಜರುಗುತ್ತಿದ್ದವು.
{{gap}}ಎರಡು ರಾಜ್ಯಗಳಿಗೆ ಯುದ್ದವಾದಾಗ, ಅಥವ ದೇಶದಲ್ಲಿ ರಾಜಕೀಯ ಕ್ಷೋಭೆ ಎದ್ದಾಗ ಸಹ ಜನಸಮುದಾಯದ ಚಟುವಟಿಕೆಗಳಿಗೆ ಯಾವ ಆತಂಕವೂ ಬರುತ್ತಿರಲಿಲ್ಲ. ಯುದ್ದದಲ್ಲಿ ನಿರತರಾದ ರಾಜರುಗಳು ಗ್ರಾಮಗಳ ಸ್ಥಳೀಯ ಸ್ವಾತಂತ್ರಕ್ಕೆ ಯಾವ ಧಕ್ಕೆ ಯನ್ನೂ ತರುತ್ತಿರಲಿಲ್ಲ. ಯಾವ ರೀತಿಯಲ್ಲೂ ಬೆಳೆದ ಫಸಲನ್ನು ನಷ್ಟ ಪಡಿಸುವುದಿಲ್ಲ, ಅಚಾತುರ್ಯದಿಂದ ನಷ್ಟ ಪಡಿಸಿದರೆ ಪರಿಹಾರ ಕೊಡುತ್ತೇವೆ ಎಂದು ರಾಜರುಗಳು ಗ್ರಾಮಸ್ಥರೊಡನೆ ಒಪ್ಪಂದ ಮಾಡಿಕೊಂಡ ಬಗ್ಗೆ ಸಾಕ್ಷ ದೊರೆ ತಿದೆ, ಆದರೆ ಹೊರಗಿನಿಂದ ದಂಡೆತ್ತಿ ಬಂದ ಪರಕೀಯರಿಗಾಗಲಿ ಅಥವ ಪ್ರಾಯಶಃ ಅಧಿಕಾರಕ್ಕಾಗಿ ನಡೆಯುತ್ತಿದ್ದ ಅಂತರ್ಯುದ್ದಗಳಿಗಾಗಲಿ ಇದು ಅನ್ವಯಿಸುತ್ತಿದ್ದಿಲ್ಲ.
{{gap}}ಪ್ರಾಚೀನ ಹಿಂದೂ ಆರ್ಯರ ಯುದ್ದ ನೀತಿಯಲ್ಲಿ, ಯಾವ ಅಧರ್ಮ ಯುದ್ಧವನ್ನೂ ಮಾಡ ಕೂಡದು. ಧರ್ಮ ರಕ್ಷಣೆಗಾಗಿ ಧರ್ಮ ಯುದ್ಧ ನಡೆಯಬೇಕು ಎನ್ನುವದು ಮುಖ್ಯ ವಿಧಿ. ತತ್ವಕ್ಕೂ ಅನುಷ್ಟಾನಕ್ಕೂ ಎಷ್ಟರ ಸಾಮ್ಯವಿತ್ತೆಂಬುದು ಬೇರೆ ವಿಚಾರ. ವಿಷ ಪೂರಿತವಾದ ಬಾಣಗಳು, ಗುಪ್ರಾಸ್ತ್ರಗಳು, ನಿದ್ರಾವಶರಾದವರನ್ನು ಕೊಲ್ಲುವುದು, ಬಂದಿಗಳಾಗಿ ಅಥವ ಶರಣು ಬಂದವರನ್ನು ಕೊಲ್ಲುವುದು ನಿಷಿದ್ದವಿತ್ತು. ಒಳ್ಳೆಯ ಕಟ್ಟಡಗಳನ್ನು ನಾಶ ಮಾಡಬಾರದೆಂದೂ ವಿಧಿ ಸಲಾಗಿತ್ತು. ಆದರೆ ಇದೆಲ್ಲ ಚಾಣಕ್ಯನ ಕಾಲದ ಹೊತ್ತಿಗೆ ವ್ಯತ್ಯಾಸವಾಗುತ್ತ ಇತ್ತು. ಅವನು ಶತ್ರುವಿನ ನಾಶಕ್ಕೆ ಇನ್ನೂ ನಾಶಕಾರಕ ಮತ್ತು ಮೋಸದ ಮಾರ್ಗಗಳು ಅವಶ್ಯವೆಂದರೆ ಅನುಮೋದಿಸುತ್ತಾನೆ.
{{gap}}ಚಾಣಕ್ಯನು ತನ್ನ ಅರ್ಥ ಶಾಸ್ತ್ರದಲ್ಲಿ ನೂರಾರು ಜನರನ್ನು ಒಟ್ಟಿಗೆ ನಾಶಮಾಡತಕ್ಕ ಯಂತ್ರ ಗಳು ಮತ್ತೂ ಯಾವುದೋ ಸ್ಫೋಟಕ ವಸ್ತುಗಳ ವಿಷಯವನ್ನು ತಿಳಿಸುವುದು ಅತಿ ಮಹತ್ವದ ವಿಷಯ. ಕಂದಕ ಯುದ್ದದ ವಿಷಯವನ್ನು ಸಹ ತಿಳಿಸುತ್ತಾನೆ. ಅವೆಲ್ಲ ಏನು-ಎಂದು ಈಗ ಹೇಳಲು ನಿಜವಾಗಿಯೂ ಸಾಧ್ಯವಿಲ್ಲ. ಪ್ರಾಯಶಃ ರೂಢಿಯಲ್ಲಿದ್ದ ಕೆಲವು ಇಂದ್ರಜಾಲ ಶಕ್ತಿಯ<noinclude></noinclude>
snlvj2sf66q8rhpp9yp3efpj8jlhxs9
ಪುಟ:ಭಾರತ ದರ್ಶನ.djvu/೧೩೪
104
85026
321386
229091
2026-05-20T09:28:00Z
Shreelatha.Halemane
7642
/* Validated */
321386
proofread-page
text/x-wiki
<noinclude><pagequality level="4" user="Shreelatha.Halemane" />{{rh|ಯುಗಾಂತರಗಳು|೧೧೭}}</noinclude>ಕತಗಳಿದ್ದರೂ ಇರಬಹುದು, ಅದು ಸಿಡಿಮದ್ದೇ ಇರಬೇಕೆಂದು ಊಹಿಸಲು ಯಾವ ಆಧಾರವೂ ಇಲ್ಲ.
{{gap}}ಬೆಂಕಿ, ಯುದ್ಧ, ಕಾಮಗಳ ಹಾವಳಿಗೆ ಸಿಕ್ಕಿ ದೇಶದಲ್ಲಿ ಒಳಾಡಳಿತವು ಕುಸಿದು ಬಿದ್ದಾಗ ಭಾರತವು ತನ್ನ ಇತಿಹಾಸ ಪರಂಪರೆಯಲ್ಲಿ ಅನೇಕ ಸಂಕಟಗಳನ್ನು ಅನುಭವಿದೆ. ಆದರೂ ಈ ಇತಿಹಾಸದ ಸ್ಫೂಲ ವೀಕ್ಷಣೆಯಿಂದ ಯೂರೋಪಿಗಿಂತ ಭಾರತದಲ್ಲಿ ಬಹು ದೀರ್ಘಕಾಲದ ಶಾಂತಿಯುತ, ವ್ಯವಸ್ಥಿತ ಜೀವನ ನಡೆದು ಬಂದಿದೆ ಎಂಬುದು ವ್ಯಕ್ತವಾಗುತ್ತದೆ, ತುರ್ಕಿ ಜನರ ಮತ್ತು ಆಫ್ಘನರ ದಂಡಯಾತ್ರೆಯ ನಂತರ ಸಹ, ಮೊಗಲ ಸಾಮ್ರಾಜ್ಯ ಕುಸಿದು ಬೀಳುವವರೆಗೆ ಅದೇ ರೀತಿಯ ವ್ಯವಸ್ಥಿತ ಜೀವನ ಇತ್ತು. ಬ್ರಿಟಿಷರ ಆಳ್ವಿಕೆಯ ನಂತರವೇ ದೇಶದಲ್ಲಿ ಮೊಟ್ಟ ಮೊದಲು ಶಾಂತಿ ಮತ್ತು ವ್ಯವಸ್ಥೆ ಯು ನೆಲಸಿತೆಂದು ಹೇಳುತ್ತಿರುವ ಭ್ರಮೆಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಬ್ರಿಟಿಷರ ಆಳ್ವಿಕೆಯು ಆರಂಭವಾದಾಗ ದೇಶದ ರಾಜಕೀಯ ಮತ್ತು ಆರ್ಥಿಕ ರಚನೆಯು ಮುರಿದಿತ್ತು, ದೇಶವು ಬಹಳ ಹೀನಸ್ಥಿತಿಯಲ್ಲಿತ್ತು ಎನ್ನು ವುದು ನಿಜ. ಬ್ರಿಟಿಷರು ಇಲ್ಲಿ ಬೇರು ಬಿಡಲು ಅದೇ ಮುಖ್ಯ ಕಾರಣ.
{{Center|೪. ಭಾರತದ ಸ್ವಾತಂತ್ರಾಭಿಲಾಷೆ}}
{{block center|<poem>
ಸೈನ್ಯ ಸಾಲ್ಯ ಳ ಎದುರು ಬಾಗಿತ್ತು ಮೂಡಣವು
ಕಡೆಗಣಿಸಿ ನೂಕಿದೆಡೆ ತಾಳ್ಮೆಯಲಿ ಬಿದ್ದು;
ಪರದಾಳಿಗಳು ಅಬ್ಬರಿಸಿ ಸಾಗಿರಲು ಮೇಲೆ ಮೇಲೆ
ತಡೆಯದೆಯೆ, ತಿರುತಿರುಗಿ ಮುಳುಗಿತ್ತು ಮೂಡಣವು ಚಿ೦ತೆಯಲಿ, </poem>}}
{{gap}}ಕವಿಯ ಈ ಸಾಲ ಳನ್ನು ಪದೇ ಪದೇ ಉದಹರಿಸುತ್ತಾರೆ. ಪೌರ್ವಾತ್ಯವು ಅದರಲ್ಲಿಯೂ 'ಇಂಡಿಯ ' ಎಂಬ ಹೆಸರಿನ ಪೌರ್ವಾತ್ಯ ಭಾಗವು ಸದಾ ಆಲೋಚನಾಪರ. ಆದರಲ್ಲೂ ವ್ಯವಹಾರ ಕುಶಲರ ದೃಷ್ಟಿಯಲ್ಲಿ ಭಾರತದ ಯೋಚನೆಗಳೆಲ್ಲ ಗುರಿಯಿಲ್ಲದ ಅಸಂಬದ್ಧ ವಿಷಯಗಳ ವಿಚಾರದಲ್ಲಿ. ಭಾರತವು ಜ್ಞಾನಕ್ಕೆ ಮತ್ತು ಮಹಾ ಜ್ಞಾನಿಗಳಾದ ವಿದ್ವಾಂಸರಿಗೆ ಬಹಳ ಗೌರವಕೊಟ್ಟಿದೆ. ಅಲ್ಲದೆ ಖಡ್ಗಧಾರಿಗಳಾದ ಕ್ಷತ್ರಿಯರೂ ಧನಿಕರಾದ ಶ್ರೀಮಂತರೂ ಜ್ಞಾನಿಗಳಿಗಿಂತ ಕೀಳು ಎಂದೇ ಭಾರತದ ಭಾವನೆ. ತನ್ನ ಅವನತಸ್ಥಿತಿಯಲ್ಲಿ ಸಹ ಜ್ಞಾನಕ್ಕೆ ಪ್ರಾಶಸ್ತ್ರ ಕೊಟ್ಟು ಅದರಲ್ಲೇ ಒಂದು ಮನಶ್ಯಾಂತಿ ಯನ್ನು ಪಡೆದಿದೆ.
{{gap}}ಆದರೆ ಇಂಡಿಯ ಎಲ್ಲ ಕಾಲಗಳಲ್ಲಿಯೂ ಪರದಾಳಿಗೆ ಮೌನದಿಂದ ತಲೆಬಾಗಿದೆ ಎಂಬುದಾಗಲಿ, ಶತ್ರು ಸೇನೆಗಳಿಗೆ ಸುಮ್ಮನೆ ಮುನ್ನುಗ್ಗಲು ಅವಕಾಶ ಕೊಟ್ಟಿದೆ ಎಂಬುದಾಗಲಿ ನಿಜವಲ್ಲ. ಸದಾ ಅವುಗ ಳನ್ನು ಎದುರಿಸಿದೆ, ಎಷ್ಟೋ ವೇಳೆ ಜಯಶಾಲಿಯಾಗಿದೆ ; ಕೆಲವು ವೇಳೆ ವಿಫಲವಾದರು ಆ ಸೋಲನ್ನು ಮರೆಯದೆ ಅದನ್ನೇ ಮುಂದಿನ ಪ್ರಯತ್ನಕ್ಕೆ ಸೋಪಾನವಾಗಿ ಉಪಯೋಗಿಸಿಕೊಂಡಿದೆ. ಆ ಪ್ರಯತ್ನ ದಲ್ಲಿ ಎರಡು ಮಾರ್ಗವನ್ನು ಅವಲಂಬಿಸಿದೆ, ಕಾದಾಡಿ ಹೊಡೆದೋಡಿಸುವುದು ಒಂದು ಮಾರ್ಗ ; ಸಾಧ್ಯವಾಗದೆ ಹೋದರೆ ಉಳಿದವರನ್ನು ತಾನೇ ಜೀರ್ಣಿಸಿಕೊಳ್ಳುವದು ಎರಡನೆಯ ಮಾರ್ಗ. ಅಲೆಕ್ಸಾಂಡರ್ ನ ಸೈನ್ಯವನ್ನು ಬಹಳ ಯಶಸ್ವಿಯಾಗಿ ತಡೆಗಟ್ಟಿತು ಮತ್ತು ಆತನು ಮರಣ ಹೊಂದಿದ ಅತ್ಯಲ್ಪ ಕಾಲದಲ್ಲೇ ಉತ್ತರದಲ್ಲಿದ್ದ ಗ್ರೀಕ್ ಸೈನ್ಯವನ್ನೆಲ್ಲ ಸದೆಬಡೆದೋಡಿಸಿತು. ಅನಂತರ ಇಂಡೊ ಗ್ರೀಕರನ್ನೂ ಮತ್ತು ಇಂಡೋ ಸಿಥಿಯನರನ್ನೂ ತನ್ನೊಳಗೇ ಐಕ್ಯ ಮಾಡಿಕೊಂಡು ಕೊನೆಯಲ್ಲಿ ಹಣ ರೊಡನೆ ಅನೇಕ ಕಾಲ ಯುದ್ದ ಮಾಡಿ ಕಟ್ಟ ಕಡೆಗೆ ಅವರನ್ನು ಓಡಿಸಿತು, ಉಳಿದವರನ್ನು ಪುನಃ ತನ್ನೊಳಗೆ ಸೇರಿಸಿಕೊಂಡಿತು. ಅರಬರು ಬಂದವರು ಸಿಂಧು ನದಿಯ ಬಳಿಯೇ ನಿಂತರು. ತುರ್ಕಿ ಜನರು ಮತ್ತು ಆಫ್ಘನರಿಗೆ ಮುಂದುವರಿಯಲು ಬಹುಕಾಲ ಹಿಡಿಯಿತು. ದೆಹಲಿಯ ಸಿಂಹಾಸನದ ಮೇಲೆ ಭದ್ರವಾಗಿ ಕೂಡಲು ಬಹಳ ದಿನಗಳು ಬೇಕಾಯಿತು. ಅದೊಂದು ತಡೆಯಿಲ್ಲದ ಬಹುಕಾಲದ ಹೋರಾಟ. ಈ ಮಧ್ಯೆ ಬಂದವರು ಭಾರತೀಯರಾಗಿ ಬದಲಾವಣೆ ಹೊಂದುತ್ತಿದ್ದರು. ಇತರ ಭಾರತೀ<noinclude></noinclude>
6vw6fq0wg3eq0dadqa2jb981dc2qdy4
ಪುಟ:ಭಾರತ ದರ್ಶನ.djvu/೧೩೫
104
85027
321385
229095
2026-05-20T09:27:48Z
Shreelatha.Halemane
7642
/* Validated */
321385
proofread-page
text/x-wiki
<noinclude><pagequality level="4" user="Shreelatha.Halemane" />{{rh|೧೧೮|ಭಾರತ ದರ್ಶನ|}}</noinclude>ಯರಿಗಿಂತ ಅವರು ಯಾವುದರಲ್ಲೂ ಕಡಮೆ ಇರುತ್ತಿರಲಿಲ್ಲ. ಭಿನ್ನ ತೆಯಲ್ಲಿ ಐಕ್ಯತೆಯನ್ನುಂಟುಮಾಡಿ ಈ ರೀತಿ ಸಾರ್ವತ್ರಿಕ ರಾಷ್ಟ್ರೀಯತ್ವವನ್ನು ಬೆಳೆಸುವ ಸನಾತನ ಭಾರತೀಯರ ಆದರ್ಶಕ್ಕೆ ಅಕ್ಷರ್ ಬಾದಶಹನೇ ಮಹಾ ಪ್ರತಿನಿಧಿಯಾದನು ; ಭಾರತದೊಂದಿಗೆ ಅವನು ಏಕೀಭವಿಸಿದುದರಿಂದಲೇ ಪರಕೀಯನಾದರೂ ಭಾರತವು ಅವನನ್ನು ಹಿಂಬಾಲಿಸಿತು. ಅದೇ ಕಾರಣದಿಂದಲೇ ಭದ್ರವಾದ ತಳಹದಿ ಯನ್ನು ಹಾಕಿ ಒಂದು ಮಹಾ ವೈಭವಯುಕ್ತ ಸಾಮ್ರಾಜ್ಯವನ್ನು ಕಟ್ಟಲು ಅವನಿಗೆ ಸಾಧ್ಯವಾಯಿತು. ಆತನ ವಂಶೀಕರು ಎಲ್ಲಿಯವರೆಗೆ ಈ ನೀತಿಯನ್ನು ತಮ್ಮ ದೃಷ್ಟಿ ಪಥದಲ್ಲಿಟ್ಟು ಕೊಂಡು ರಾಷ್ಟ್ರದ ಇಚ್ಛೆ ಗನುಸಾರವಾಗಿ ನಡೆದರೋ ಅಲ್ಲಿಯವರೆಗೆ ಆ ಚಕ್ರಾಧಿಪತ್ಯವು ಬೆಳೆದು ಉಳಿಯಿತು. ಆದರೆ ಆ ದಾರಿ ಯನ್ನು ಬಿಟ್ಟು ಅಡ್ಡ ದಾರಿಯನ್ನು ಎಂದಿನಿಂದ ಹಿಡಿದು ರಾಷ್ಟ್ರದ ಪ್ರಗತಿಗೆ ಅಡ್ಡ ಬಂದರೋ ಅಂದಿ ನಿಂದ ಅವರ ಶಕ್ತಿಯು ಕುಂದುತ್ತ ಬಂದಿತು. ಅವರ ಚಕ್ರಾಧಿಪತ್ಯವೂ ನುಚ್ಚು ನೂರಾಯಿತು. ಸಂಕುಚಿತ ದೃಷ್ಟಿ ಯಿದ್ದರೂ ಪುನರುಜ್ಜಿವಿತ ರಾಷ್ಟ್ರೀಯ ಭಾವನೆಯ ಹೊಸ ಚಳವಳಿಗಳೆದ್ದು ವು. ಶಾಶ್ವತವಾದ ರಾಜ್ಯವನ್ನು ಕಟ್ಟಲು ಅವುಗಳಿಗೆ ಶಕ್ತಿ ಸಾಲದಾದರೂ ಮೊಗಲರ ಸಾಮ್ರಾಜ್ಯವನ್ನು ನಾಶಮಾಡಿದವು. ಸ್ವಲ್ಪ ಕಾಲ ಯಶಸ್ಫೂ ದೊರೆಯಿತು. ಆದರೆ ಅವುಗಳ ದೃಷ್ಟಿ ಎಲ್ಲವೂ ಪ್ರಾಚೀನತೆಯಲ್ಲಿಯೇ ನೆಟ್ಟು ಪ್ರಾಚೀನ ವೈಭವವನ್ನೇ ಪುನರುತ್ಥಾನ ಗೊಳಿಸಬೇಕೆಂದು ಪ್ರಯತ್ನ ಪಟ್ಟು ವು. ಈ ಮಧ್ಯೆ ಶತ ಶತ ಮಾನಗಳಿಂದ ರಾಷ್ಟ್ರದಲ್ಲಿ ಬೇರೂರಿ ಬೆಳೆದು ಬಂದಿರುವ ಅನೇಕ ವಿಷಯಗಳನ್ನು ಅಲಕ್ಷ ಮಾಡಲು ಸಾಧ್ಯವಿಲ್ಲ, ಬದಿಗೊತ್ತಲಾಗುವುದಿಲ್ಲ. ಗತಕಾಲವೆಂದಿಗೂ ವರ್ತಮಾನಕಾಲವಾಗಲಾರದು ; ಅವರ ಕಾಲದ ಆ ವರ್ತಮಾನಕಾಲ ಸಹ ಕೊಳೆತು ಪಾಚಿಗಟ್ಟಿದ್ದ ಕ್ರಿಯಾಶೂನ್ಯ ಕಾಲ ಎನ್ನು ವುದನ್ನು ಮರೆತರು. ಪಶ್ಚಿಮ ದೇಶಗಳಲ್ಲಿ ಹೊಸ ದೃಷ್ಟಿ ಮತ್ತು ಹೊಸ ಮಾರ್ಗಗಳನ್ನವಲಂಬಿಸಿದ ಒಂದು ಹೊಸ ಜೀವಂತ ಪ್ರಪಂಚ ಉದ್ಭವಿಸುತ್ತಿದೆ ; ಬ್ರಿಟಿಷರು ಆ ಹೊಸ ಪ್ರಪಂಚದ ಪ್ರತಿನಿಧಿಗಳು ಎನ್ನು ವುದು ಅವರಿಗೆ ತಿಳಿಯದಾಯಿತು. ಬ್ರಿಟಿಷರು ಜಯಶೀಲರಾದರು. ಆದರೆ ಉತ್ತರ ಭಾರತದಲ್ಲಿ ಇನ್ನೂ ನೆಲೆಸಿರಲಿಲ್ಲ; ಅಷ್ಟರಲ್ಲಿಯೇ ಮಹಾ ದಂಗೆ ಎದ್ದು ಸ್ವಾತಂತ್ರ ಸಂಗ್ರಾಮವಾಗಿ ಪರಿಣಮಿಸಿತು ಮತ್ತು ಬ್ರಿಟಿಷ್ ರಾಜ್ಯಭಾರವೂ ಕೊನೆಗಾಣುವುದರಲ್ಲಿಯೂ ಇತ್ತು. ಸ್ವಾತಂತ್ರಾಭಿಲಾಷೆ, ಪರಮಾಧಿಕಾರದ ಆಶೆ, ಪರದಾಸ್ಯಕ್ಕೆ ತಲೆಬಾಗಬಾರದೆಂಬ ಹಟ ಸದಾ ಇದ್ದೆ ಇದ್ದವು.
{{center|೬. ಪ್ರಗತಿಯೋ ? ಶಾಂತಿಯೋ? }}
{{gap}}ನಮ್ಮ ಜನದ ದೃಷ್ಟಿ ಸಂಕುಚಿತ ದೃಷ್ಟಿ, ನಮ್ಮ ಪುರಾತನ ಸಂಸ್ಕೃತಿಯಲ್ಲಿ, ಗತ ವೈಭವದಲ್ಲಿ ಬಹಳ ಹೆಮ್ಮೆ, ಅದನ್ನು ಉಳಿಸಿಕೊಳ್ಳಲೆಂದು ಅಡ್ಡ ಗೋಡೆಗಳನ್ನು ಕಟ್ಟಿ ಒಂದು ಚಕ್ರವ್ಯೂಹವನ್ನೇ ರಚಿಸಿದ್ದೇವೆ. ಈ ರೀತಿ ಕುಲದ ಭಾವನೆ ದಿನ ದಿನಕ್ಕೂ ಬಿಗಿಯಾಗುತ್ತಿದ್ದರೂ ಜಾತಿಮತಗಳ ಕಟ್ಟು ಬಲಗೊಳ್ಳುತ್ತಿದ್ದರೂ ಇತರರಂತೆ ನಮ್ಮ ಕುಲಗೋತ್ರಗಳ ಪಾರಿಶುದ್ಧತೆಯಲ್ಲಿ ಹೆಮ್ಮೆಗೊಳ್ಳುತ್ತ ಇದ್ದರೂ ನಮ್ಮಲ್ಲಿ ಅನೇಕ ಬುಡಕಟ್ಟಿನ ಜನರು ಬೆರೆತು ಹೋಗಿದ್ದಾರೆ- ಆರರು, ದ್ರಾವಿಡರು, ತುರೇನಿಯನರು, ಸೆಮೆಟಿಕ್ ಜನರು ಮತ್ತು ಮಂಗೊಲಿಯನರು. ಆರ್ಯರು ಮೇಲಿಂದ ಮೇಲೆ ಅಲೆಯಲೆಯಾಗಿ ಇಲ್ಲಿಗೆ ಬಂದು ದ್ರಾವಿಡರೊಂದಿಗೆ ಬೆರೆತರು. ಅವರ ನಂತರದ ಸಹಸ್ರಾರು ವರ್ಷಗಳಲ್ಲಿ ಅನೇಕ ಜನಾಂಗಗಳು, ಪಂಗಡಗಳು ಮೇಲಿಂದ ಮೇಲೆ ವಲಸೆ ಬಂದಿದ್ದಾರೆ- ಮೂಾಡಿಯನರು, ಇರಾನಿಗಳು, ಗ್ರೀಕರು, ಬ್ಯಾಕ್ಟ್ರಿಯನರು, ಪಾರ್ಥಿಯನರು, ಶಕರು ಅಥವ ಸಿಥಿಯನರು, ಕುಶಾನರು ಅಥವ ಯುಯೇಚಿಗಳು, ತುರ್ಕಿ ಜನರು, ಮಂಗೋಲಿರ್ಯ, ತುರುಕರು ಮತ್ತು ಇತರರು ಸಣ್ಣ ದೊಡ್ಡ ಗುಂಪುಗಳಲ್ಲಿ ಬಂದು ಭಾರತದಲ್ಲಿ ನೆಲೆಸಿ ಮನೆಮಾಡಿಕೊಂಡರು. ಡಾಡೈಲ್- ಇ೦ಡಿಯ ” ಎಂಬ ಗ್ರಂಥದಲ್ಲಿ ಮಹಾ ಕ್ರೂರಿಗಳೂ, ಯುದ್ದ ಸಾಹಸಿಗಳೂ ಆದ ಜನರು ಪದೇ ಪದೇ ಭಾರತದ ಮೈದಾನ ಪ್ರದೇಶಗಳ ಮೇಲೆ ದಂಡೆತ್ತಿ ಬಂದರು, ಅಲ್ಲಿನ ರಾಜರನ್ನು ಸೋಲಿಸಿದರು, ಅವರ ನಗರ ಗಳನ್ನು ಹಿಡಿದು ನಾಶಮಾಡಿದರು, ಹೊಸ ರಾಜ್ಯಗಳನ್ನು ಸ್ಥಾಪಿಸಿ ತಮ್ಮದೇ ನೂತನ ರಾಜಧಾನಿಗಳನ್ನು ನಿರ್ಮಿಸಿದರು; ಅನಂತರ ಮಾನವ ಕುಲದ ಮತ್ತೊಂದು ಮಹಾ ಅಲೆಯಲ್ಲಿ ನಿರ್ನಾಮ<noinclude></noinclude>
jnxzaj2e9cgziwfvrc2dhj61z0frdt9
ಪುಟ:ಭಾರತ ದರ್ಶನ.djvu/೧೩೬
104
85028
321384
229121
2026-05-20T09:27:34Z
Shreelatha.Halemane
7642
/* Validated */
321384
proofread-page
text/x-wiki
<noinclude><pagequality level="4" user="Shreelatha.Halemane" />{{rh||ಯುಗಾಂತರಗಳು|೧೧೯}}</noinclude>ವಾದರು. ಅವರ ನಂತರದವರಿಗೆ ಉಳಿದ ಆಸ್ತಿ ಎಂದರೆ ಸ್ವಲ್ಪ ಹೊಸ ರಕ್ತ, ಸ್ವಲ್ಪ ಹೊಸ ಸಂಪ್ರ ದಾಯಗಳು; ಸುತ್ತಲಿನ ಸನ್ನಿವೇಶ ಅದನ್ನೇ ಅಧೀನ ಪಡಿಸಿಕೊಂಡು, ಸಜಾತೀಯವನ್ನಾಗಿ ಮಾಡಿ ಕೊಂಡಿತು-ಎಂದಿದಾನೆ.
{{gap}}ಈ ರೀತಿ ಅಧೀನ ಮಾಡಿಕೊಳ್ಳುವ ಶಕ್ತಿಗೆ ಕಾರಣವೇನು ? ಭೂಗೋಲ ಮತ್ತು ವಾಯು ಗುಣ ಪ್ರಭಾವದ ಒಂದು ವಿಶಿಷ್ಟ ವಾತಾವರಣ. ಆದರೆ ಎಲ್ಲಕ್ಕೂ ಮಿಗಿಲಾಗಿ ಭಾರತೀಯ ಇತಿ ಹಾಸದ ಮುಂಬೆಳಗಿನಲ್ಲಿ, ಭಾರತದ ಯೌವನದ ನವ್ಯತೆಯಲ್ಲಿ ಅದರ ಸುಷುಪ್ತ ಮನಸ್ಸಿನ ಮೇಲೆ ಮುದ್ರಿಸಿ ಯಾವುದೋ ಒಂದು ಶಕ್ತಿದಾಯಕ ಪ್ರೇರಣೆ ; ಯಾವುದೋ ಅಸಾಧಾರಣ ಪ್ರವೃತ್ತಿ ಅಥವ ಜೀವನದ ಮೌಲ್ಯದ ಭಾವನೆ ಇರಬೇಕು. ಆ ಪ್ರೇರಣೆಯು ಇನ್ನೂ ಶಕ್ತಿಯುತವಾಗಿ ಉಳಿ ದಿತ್ತು ಮತ್ತು ಎಷ್ಟೇ ಭಿನ್ನ ಸಂಸ್ಕೃತಿಯವರಿರಲಿ ಭಾರತಕ್ಕೆ ಬಂದವರನ್ನೆಲ್ಲ ತನ್ನವರನ್ನಾಗಿ ಮಾಡಿಕೊಳ್ಳುವ ಶಕ್ತಿಯು ಅದಕ್ಕೆ ಇತ್ತು. ಈ ದೇಶದಲ್ಲಿ ಹುಟ್ಟಿ ಬೆಳಗಿದ ಸಂಸ್ಕೃತಿಗೆ ಈ ಪ್ರೇರಣೆಯೇ ಜೀವಜ್ಯೋತಿಯಾಗಿ ಇರಬಹುದೆ? ಮತ್ತು ಇತಿಹಾಸ ಪರಂಪರೆಯಲ್ಲಿ ಜನತೆಯ ಮೇಲೆ ತನ್ನ ಪ್ರಭಾವ ಬೀರುತ್ತ ಬಂದಿರಬಹುದೆ ?
{{gap}}ಭಾರತೀಯ ಸಂಸ್ಕೃತಿಯ ಬೆಳವಣಿಗೆಯ ತಳಹದಿಯಾಗಿ ಒಂದು ಪ್ರೇರಣ ಶಕ್ತಿ ಅಥವ ಜೀವನಾದರ್ಶದ ವಿಷಯ ಪ್ರಸ್ತಾಪಿಸುವುದು ಅವಿವೇಕವಾಗಿ ಮತ್ತು ಧೋರಣೆಯಾಗಿ ತೋರ ಬಹುದು. ಒಬ್ಬ ವ್ಯಕ್ತಿಯೇ ತನ್ನ ಜೀವನದಲ್ಲಿ ನೂರಾರು ಕಡೆಗಳಿಂದ ಪೋಷಣೆಯನ್ನು ಪಡೆ ಯುತ್ತಾನೆಂದಮೇಲೆ ಒಂದು ಜನಾಂಗ ಅಥವಾ ಸಂಸ್ಕೃತಿಯ ಜೀವನ ಇನ್ನೂ ಹೆಚ್ಚು ಜಟಿಲ ವಾಗಿರಬೇಕು. ಭಾರತದ ಮೇಲ್ಪದರದಲ್ಲಿ ಸಹಸ್ರಾರು ಭಾವನೆಗಳು ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿದ ಹಡಗಿನಿಂದ ತೇಲಿಬರುವ ವಸ್ತುಗಳಂತೆ ತೆರೆ ತೆರೆಯಾಗಿ ತೇಲಿ ಬರುತ್ತವೆ; ಒಂದಕ್ಕೆ ಒಂದು ವಿರೋಧ, ಯಾವುದಾದರೂ ಒಂದನ್ನು ಭದ್ರವಾಗಿ ಹಿಡಿದುಕೊಂಡು ಅದೇ ಸರಿಯೆಂದು ವಾದಿಸು ವುದೂ ಸುಲಭ ; ಇನೊ೦ದರ ಆಧಾರದ ಮೇಲೆ ಅದನ್ನು ಉರುಳಿಸುವುದೂ ಅಷ್ಟೇ ಸುಲಭ, ಎಲೆ ಗೆ ಯಲ್ಲೂ ಹೀಗೆಯೇ ; ಅದರಲ್ಲೂ ಸಜೀವ ವಸ್ತುಗಳಿಗೆ ನಿರ್ಜೀವ ವಸ್ತುಗಳೆಷ್ಟೊ ಅಂಟಿಕೊಂಡಿರುವ ಪುರಾತನವೂ ವಿಶಾಲವೂ ಆದ ಈ ನಮ್ಮ ದೇಶದಲ್ಲಂತೂ ಅತಿ ಸುಲಭ, ಅತಿ ಕಷ್ಟತಮವಾದ ಘಟನೆ ಗಳನ್ನು ಸುಲಭವಾಗಿ ವಿಂಗಡಮಾಡುವುದರಲ್ಲಿ ಒಂದು ಕೆಡುಕು ಇದೆ. ಭಾವನೆ ಮತ್ತು ಕ್ರಿಯಾ ಶಕ್ತಿಗಳ ಬೆಳವಣಿಗೆಯಲ್ಲಿ ವಿಶೇಷ ವ್ಯತ್ಯಾಸ ಕಾಣುವುದು ಬಹಳ ಅಪರೂಪ. ಭಾವನೆಗಳು ಒಂದರ ಹಿಂದೆ ಒಂದು ಓಡುತ್ತಿರುತ್ತವೆ, ಭಾವನೆಗಳಲ್ಲಿ ಸಹ ಬಾಹ್ಯ ಸ್ವರೂಪ ಇದ್ದಂತೆಯೇ ಉಳಿದರೂ ಒಳಗಿನ ತಿರುಳು ಪೂರ್ಣ ವ್ಯತ್ಯಾಸ ಹೊಂದಿರುತ್ತದೆ. ಅಥವ ಅನೇಕವೇಳೆ ಪ್ರಪಂಚದ ಪರಿಸ್ಥಿತಿ ವ್ಯತ್ಯಾಸದ ವೇಗದೊಡನೆ ಓಡಲಾರದೆ ಹಿಂದುಳಿದು ಪ್ರಪಂಚಕ್ಕೆ ಹೊರೆಯಾಗುತ್ತವೆ.
{{gap}}ಯುಗ ಯುಗಾಂತರಗಳಿಂದ ನಾವು ವ್ಯತ್ಯಾಸ ಹೊಂದುತ್ತಲೇ ಬಂದಿದ್ದೇವೆ. ಯಾವ ಕಾಲದಲ್ಲು ನಾವು ಹಿಂದೆ ಇದ್ದಂತೆಯೇ ಇರಲಿಲ್ಲ. ಇಂದಿಗು ಸಹ ಜನಾಂಗ ದೃಷ್ಟಿಯಿಂದ ಮೊದಲಿಗಿಂತ ಬಹಳ ವ್ಯತ್ಯಾಸ ಹೊಂದಿದ್ದೇವೆ, ನನ್ನ ಸುತ್ತ ಮುತ್ತಲೂ ಇತರ ಕಡೆಗಳಂತೆ ಇಂಡಿಯದಲ್ಲಿ ಸಹ ಈ ವ್ಯತ್ಯಸ್ತ ಜೀವನ ನಾಮನ ಪಾದಗಳಿಂದ ಮುಂದೋಡುತ್ತಿದೆ. ಆದರೂ ಚೀನ ಮತ್ತು ಭಾರತದ ಸಂಸ್ಕೃತಿಗಳಲ್ಲಿ ಯಾವುದೋ ಒಂದು ವಿಶಿಷ್ಟ ಶಾಶ್ವತಶಕ್ತಿ, ಒಂದು ಹೊಂದಾಣಿಕೆಯ ಶಕ್ತಿ ಇದೆ ಎಂಬುದನ್ನೂ ಮತ್ತು ಆ ಶಕ್ತಿಯು ಏನೇ ವ್ಯತ್ಯಾಸ, ವಿಪ್ಲವಗಳು ಬರಲಿ ಅನೇಕ ವರ್ಷಗಳ ಕಾಲ ಆ ಮೂಲ ವ್ಯಕ್ತಿತ್ವವನ್ನು ಕಾಪಾಡಲು ಸಮರ್ಥವಾಗಿದೆ ಎಂಬ ಭಾವನೆಯನ್ನು ನನ್ನ ಮನಸ್ಸಿನಿಂದ ಅಳಿಸಲು ಸಾಧ್ಯವಾಗಿಲ್ಲ, ಜೀವನಕ್ಕೂ ಪ್ರಕೃತಿಗೂ ಹೊಂದಿಕೊಂಡು ಸಮರಸತೆಯಿಂದ ಕೆಲಸ ಮಾಡಿರದೆ ಆ ರೀತಿ ಪರಿಣಾಮ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಳ್ಳೆಯದಕ್ಕೋ, ಕೆಟ್ಟು ದಕ್ಕೋ, ಅಥವ ಎರಡಕ್ಕೂ ಬಹುಮಟ್ಟಿಗೆ ತಮ್ಮ ಪ್ರಾಚೀನ ಸಂಪ್ರದಾಯಗಳಿಗೆ ಕಟ್ಟು ಹಾಕಿದ ಈ ಶಕ್ತಿ ಬಹು ಬಲಯುತವಾದದ್ದಿರಬೇಕು ; ಇಲ್ಲವಾದರೆ ಅಷ್ಟು ಕಾಲ ಬದುಕಿರಲು ಸಾಧ್ಯವಾಗುತ್ತಿರಲಿಲ್ಲ.<noinclude></noinclude>
nh2cj033j4oqs36xrz98vcgmmjfv120
ಪುಟ:ಭಾರತ ದರ್ಶನ.djvu/೧೩೭
104
85029
321383
229124
2026-05-20T09:27:20Z
Shreelatha.Halemane
7642
/* Validated */
321383
proofread-page
text/x-wiki
<noinclude><pagequality level="4" user="Shreelatha.Halemane" />{{rh|೧೨೦|ಭಾರತ ದರ್ಶನ|}}</noinclude>ಪ್ರಾಯಶಃ ಅದರ ಉಪಯುಕ್ತತೆ ಅನೇಕ ವರ್ಷಗಳ ಹಿಂದೆಯೇ ಕ್ಷೀಣಿಸಿರಬೇಕು ಮತ್ತು ಅಂದಿನಿಂದಲೂ ಒಂದು ಹೊರೆಯಾಗಿ, ಆತಂಕವಾಗಿರಬೇಕು. ಅಥವ ಈಚಿನ ಶತಮಾನಗಳ ಕಿಟ್ಟವು ಪದರುಗಟ್ಟಿ, ಸತ್ವವನ್ನೆಲ್ಲ ಹೀರಿ ಬರೀ ಕರಟವನ್ನು ಮಾತ್ರ ಬಿಟ್ಟಿರಬೇಕು.
{{gap}}ಪ್ರಾಯಶಃ ಪ್ರಗತಿಯ ಭಾವನೆಗೂ ಭದ್ರತೆ ಮತ್ತು ಸುರಕ್ಷತೆಯ ಭಾವನೆಗೂ ಸದಾ ಘರ್ಷಣೆ ನಡೆಯುತ್ತಲೇ ಇರುತ್ತದೆ. ಎರಡಕ್ಕೂ ಎಂದೂ ಸರಿ ಹೋಗುವುದಿಲ್ಲ. ಒಂದಕ್ಕೆ ಬದಲಾವಣೆಯಾಗುವುದು ಬೇಕು ; ಇನ್ನೊಂದಕ್ಕೆ ಬದಲಾವಣೆ ಇಲ್ಲದೆ, ಇದ್ದಂತೆ ಇರುವ ಸುರಕ್ಷಿತ ಸ್ಥಳಬೇಕು. ಪ್ರಗತಿ ಭಾವನೆ ಬಹಳ ಇತ್ತೀಚಿನದು. ಪಾಶ್ಚಿಮಾತ್ಯರಿಗೆ ಸಹ ತೀರ ಹೊಸದು. ಪ್ರಾಚೀನ ಮತ್ತು ಮಧ್ಯಯುಗದ ಸಂಸ್ಕೃತಿಗಳು ತಮ್ಮ ಹಿಂದಿನದನ್ನೆ ಸ್ವರ್ಣಯುಗವೆಂದು ಭಾವಿಸಿ ಅಲ್ಲಿಂದ ಅವನತಿ ಯಾಗುತ್ತ ಬಂದಿದೆ ಎಂದು ಭಾವಿಸಿದ್ದರು. ಭಾರತದಲ್ಲಿ ಸಹ ಪ್ರಾಚೀನ ಕಾಲಕ್ಕೆ ಪುರಸ್ಕಾರ. ಇಲ್ಲಿ ಬೆಳೆದ ಸಂಸ್ಕೃತಿಗೂ ತಳಹದಿ ಸುರಕ್ಷತೆ ಮತ್ತು ಭದ್ರತೆ. ಈ ದೃಷ್ಟಿಯಿಂದ ಪಾಶ್ಚಿಮಾತ್ಯರಲ್ಲಿ ಉದಯಿಸಿದ ಎಲ್ಲ ಸಂಸ್ಕೃತಿಗಳಿಗಿಂತ ಭಾರತ ಸಂಸ್ಕೃತಿ ತುಂಬ ಯಶಸ್ವಿಯಾಗಿತ್ತು. ಜಾತಿ ಪದ್ದತಿ ಮತ್ತು ಅವಿಭಕ್ತ ಕುಟುಂಬದ ಆಧಾರದ ಮೇಲೆ ಕಟ್ಟಿದ ಸಮಾಜ ರಚನೆ ಅದಕ್ಕೆ ಸಹಾಯಕವಾಯಿತು ; ಮತ್ತು ಆ ಪಂಗಡಕ್ಕೊಂದು ಸಮಾಜಭದ್ರತೆಯನ್ನು ಕೊಟ್ಟ ತಲ್ಲದೆ ವಯಸ್ಸು, ಅಂಗವಿಕಲತೆ ಅಥವ ಬೇರಾವ ಕಾರಣದಿಂದಲಾದರೂ ತನ್ನ ರಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳಲಾರದ ವ್ಯಕ್ತಿಗೆ ಒಂದು ವಿಧವಾದ ಭದ್ರತೆಯನ್ನು ಒದಗಿಸಿತು. ಈ ವ್ಯವಸ್ಥೆಯಿಂದ ದುರ್ಬಲರಿಗೆ ಸಹಾಯವಾದರೂ ಸ್ವಲ್ಪ ಮಟ್ಟಿಗೆ ಸಬಲರಿಗೆ ಅಡ್ಡಿಯಾಗುತ್ತದೆ. ಅಸಾಧಾರಣ, ಅಥವ ಪ್ರತಿಭಾಶಾಲಿಯ ವೆಚ್ಚದಲ್ಲಿ ಸಾಮಾನ್ಯರಿಗೆ ಪ್ರೋತ್ಸಾಹಿಸಿದಂತಾಗುತ್ತದೆ. ಎಲ್ಲವನ್ನೂ ಮೇಲ್ಮಟ್ಟಕ್ಕೂ ಕೆಳಮಟ್ಟ ಕ್ರೋ ಅಂತೂ ಸಮಮಾಡುತ್ತದೆ ; ವ್ಯಕ್ತಿತ್ವಕ್ಕೆ ಅವಕಾಶ ಕಡಮೆ. ಭಾರತೀಯ ತತ್ವಶಾಸ್ತ್ರ ಅತ್ಯಂತ ವ್ಯಕ್ತಿ ವೈಲಕ್ಷಣ್ಯಯುತವಾಗಿದ್ದು, ಒಂದು ವಿಧವಾದ ವೈಯಕ್ತಿಕ ಆತ್ಮ ವಿಕಾಸಕ್ಕೆ ಸಂಪೂರ್ಣ ಅವಕಾಶ ಕೊಟ್ಟರೂ ಭಾರತೀಯ ಸಮಾಜ ರಚನೆ ಮಾತ್ರ ಜಾತಿವಾರು ಇದ್ದು ಆ ಜಾತಿ ಪಂಗಡಗಳಿಗೇ ಪ್ರಾಮುಖ್ಯತೆ ಕೊಟ್ಟಿತ್ತು. ತನಗೆ ತೋರಿದಂತೆ ಚಿ೦ತಿಸಿ ನ೦ಬಲು ವ್ಯಕ್ತಿಗೆ ಸಂಪೂರ್ಣ ಸ್ವಾತಂತ್ರವಿತ್ತು ; ಆದರೆ ಸಾಮಾಜಿಕ ಮತ್ತು ಮತ ಸಂಪ್ರದಾಯಗಳನ್ನು ಮಾತ್ರ ಚಾಚೂತಪ್ಪದೆ ನಡೆಸ ಬೇಕು.
{{gap}}ಈ ಎಲ್ಲ ನಿಯಮಾನುಚರಣೆಯಿದ್ದರೂ ಆ ಒಂದು ಪಂಗಡದ ಒಳಗೆ ಬಹುಮಟ್ಟಿನ ಸ್ವಾತಂತ್ರವಿತ್ತು. ಸಂಪ್ರದಾಯದಿಂದ ವ್ಯತ್ಯಾಸವಾಗದೆ ಯಾವ ಶಾಸನ, ಸಾಮಾಜಿಕ ಕಟ್ಟಳೆಯು ಇರಲಿಲ್ಲ. ಹೊಸ ಪಂಗಡಗಳು ತಮ್ಮದೇ ಪದ್ದತಿಗಳು, ನಂಬಿಕೆಗಳು, ಅನುಷ್ಠಾನಗಳನ್ನು ಇಟ್ಟು ಕೊಂಡಿದ್ದರು. ಎಲ್ಲರೂ ಒಂದು ದೊಡ್ಡ ಅವರಣದಲ್ಲಿರಲು ಅವಕಾಶವಿತ್ತು. ಈ ಒಂದು ಮೃದುಸ್ವಭಾವ, ಹೊಂದಿ ಕೊಳ್ಳುವ ಗುಣ ಇದ್ದುದರಿಂದಲೇ ಪರದೇಶದ ಜನರು ಸಮಾಜದಲ್ಲಿ ಅಡಕವಾಗಲು ಸಹಾಯವಾ ಯಿತು. ಇದೆಲ್ಲದರ ಹಿಂದೆ ಕೆಲವು ಮೂಲ ನೀತಿಧರ್ಮಗಳು, .ಜೀವನದಲ್ಲಿ ಒಂದು ತಾತ್ವಿಕ ಭಾವನೆ, ಮತ್ತು ಇತರರ ನಡೆನುಡಿಗಳಲ್ಲಿ ಸಹನೆ ಇದ್ದವು.
{{gap}}ಎಂದಿನವರೆಗೆ ಭದ್ರತೆ ಮತ್ತು ರಕ್ಷಣೆಯೇ ಮುಖ್ಯ ಗುರಿಯಾಗಿತ್ತೋ ಅಲ್ಲಿಯವರೆಗೆ ಈ ಒಂದು ರಚನೆಯು ಯಶಸ್ವಿಯಾಗಿ ಕೆಲಸ ಮಾಡಿತು ; ಆರ್ಥಿಕ ವಿಪ್ಲವಗಳು ಒದಗಿದಾಗ ಸಹ ಕಾಲಕ್ಕನು ಗುಣವಾಗಿ ಹೊಂದಿಕೊಂಡು ನಡೆದು ಬಂದಿತು. ಹಳೆಯ ಜಡಭಾವನೆಗಳಿಗೆ ಪ್ರತಿಯಾಗಿ ಸಾಮಾಜಿಕ ಪುರೋಭಿವೃದ್ಧಿಯ ಹೊಸ ಪ್ರಗತಿ ಭಾವನೆಗಳು ಹುಟ್ಟಿದಾಗ ಈ ರಚನೆಗೆ ನಿಜವಾದ ಪೆಟ್ಟು ಬಿದ್ದಿತು. ಪಾಶ್ಚಾತ್ಯ ದೇಶಗಳಂತೆ ಪೌರ್ವಾತ್ಯದಲ್ಲಿ ಸಹ ಈ ಪ್ರಗತಿ ಭಾವನೆಯು ರೂಢಮೂಲವಾದ ಪುರಾತನ ಪದ್ಧತಿಗಳನ್ನು ಬುಡ ಮೇಲುಮಾಡುತ್ತಿದೆ. ಪಾಶ್ಚಾತ್ಯರಲ್ಲಿ ಮುಖ್ಯ ಧೈಯವು ಪ್ರಗತಿಯಾಗಿದ್ದರೂ ರಕ್ಷಣೆಯ ಅವಶ್ಯಕತೆಯ ಕೂಗು ಕೇಳಹತ್ತಿದೆ. ಭಾರತದಲ್ಲಿ ರಕ್ಷಣೆಯ ಅಭಾವದಿಂದಲೇ ಜನರು ತಮ್ಮ ಹಳೆಯ ಜಾಡನ್ನು ಬಿಟ್ಟು ಹೊರಹೊರಟಿದ್ದಾರೆ ; ಮತ್ತು ತಮಗೆ ನಿಜವಾದ ರಕ್ಷಣೆ ದೊರೆಯ ಬೇಕಾದರೆ ಪ್ರಗತಿಯೊಂದೇ ಪರಮಸಾಧನ ಎಂದು ನಂಬಿದ್ದಾರೆ.<noinclude></noinclude>
1x8ta1n8aja022ocys9rmo91uu30wf3
ಪುಟ:ಭಾರತ ದರ್ಶನ.djvu/೧೩೮
104
85030
321382
229129
2026-05-20T09:27:07Z
Shreelatha.Halemane
7642
/* Validated */
321382
proofread-page
text/x-wiki
<noinclude><pagequality level="4" user="Shreelatha.Halemane" />{{rh||ಯುಗಾಂತರಗಳು|೧೨೧}}</noinclude>{{gap}}ಪ್ರಾಚೀನ ಮತ್ತು ಮಧ್ಯಯುಗದ ಭಾರತದಲ್ಲಿ ಸಮಾಜರಚನೆಗೆ ಪ್ರಗತಿಯ ಪ್ರತಿಭಟನೆ ಯಾವುದೂ ಇರಲಿಲ್ಲ. ಆದರೂ ಮಾರ್ಪಾಟು ಮತ್ತು ಹೊಂದಾಣಿಕೆಯ ಅವಶ್ಯಕತೆಯು ಅಗತ್ಯವೆಂದು ಜನತೆಯು ಸದಾ ತಿಳಿದಿತ್ತು; ಆದ್ದರಿಂದ ಸಂಘಟನೆಯ ಉತ್ಸಾಹವೂ ಬೆಳೆದಿತ್ತು, ಈ ಸಂಘಟನೆ ಭಾರತದ ಹೊರಗಿನಿಂದ ಬಂದ ವಿವಿಧ ಜನರ ಸಂಘಟನೆ ಮಾತ್ರವಲ್ಲ; ವ್ಯಕ್ತಿಯ ಬಾಹ್ಯ ಜೀವನದ ಮತ್ತು ಆಂತರಿಕ ಜೀವನದ ಸಮಿಾಕರಣ, ಪ್ರಕೃತಿ ಮತ್ತು ಮನುಷ್ಯನ ಏಕೀಭಾವವಾಗತ್ತು. ಈಗ ಇರುವಂತ ಆಗ ಸಮಾಜದಲ್ಲಿ ಆಳವಾದ ಅ೦ತರವೂ ಇರಲಿಲ್ಲ, ಭೇದವೂ ಇರಲಿಲ್ಲ. ಈ ಒಂದು ಸಾಮಾನ್ಯ ಸಂಸ್ಕೃ ತಿಯ ಹಿನ್ನೆಲೆಯು ಭಾರತಕ್ಕೊಂದು ರೂಪುಕೊಟ್ಟಿತು ಮತ್ತು ಎಷ್ಟೇ ಅನೈಕ್ಯತೆಗಳಿದ್ದರೂ ಒಂದು ಐಕ್ಯತೆ ಯನ್ನು ಕೊಟ್ಟಿತು. ರಾಜ್ಯ ರಚನೆಯ ತಳಹದಿಯಾಗಿ ಸ್ಥಳೀಯ ಸ್ವರಾಜ್ಯವುಳ್ಳ ಗ್ರಾಮ ಪಂಚಾಯಿತಿ ಗಳಿದ್ದವು. ರಾಜರುಗಳು ಎಷ್ಟೋ ಜನ ಆಗಿಹೋದರೂ ಮೂಲ ಗ್ರಾಮಜೀವನವು ನಾಶವಾಗಲಿಲ್ಲ. ರಾಜ್ಯಶಕ್ತಿಯು ನೋಡಲು ಎಷ್ಟೇ ಕ್ರೂರವೆಂದು ತೋರಿದರೂ, ಅದನ್ನು ಹದ್ದಿನಲ್ಲಿಡಲು ಅನೇಕ ಸಾಂಪ್ರದಾಯಿಕ ಮತ್ತು ವಿಧಿಬದ್ಧ ಮಾರ್ಗಗಳಿದ್ದವು. ಯಾವ ರಾಜನೇ ಆಗಲಿ ಗ್ರಾಮಸ್ಥರ ಹಕ್ಕು ಬಾಧ್ಯತೆಗಳಲ್ಲಿ ಪ್ರವೇಶಿಸಲು ಅವಕಾಶವಿರಲಿಲ್ಲ. ಈ ಸಾಂಪ್ರದಾಯಿಕ ಹಕ್ಕು ಬಾಧ್ಯತೆಗಳಿಂದ ಜನತೆಗೂ ವ್ಯಕ್ತಿಗೂ ಸ್ವಲ್ಪ ಸ್ವಾತಂತ್ರವಿತ್ತು.
{{gap}}ಇಂದಿನ ಭಾರತೀಯರಲ್ಲಿ ನಿಜವಾದ ಭಾರತೀಯರೆಂದು, ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಹೆಮ್ಮೆ ಪಡುವವರಲ್ಲಿ ರಜಪೂತರು ಅಗ್ರಗಣ್ಯರು. ಗತಕಾಲದ ಅವರ ಶೌರ್ಯ ಸಾಹಸ ಕಾರ್ಯಗಳು ಆ ಪರಂಪರೆಯ ಒಂದು ಜೀವಂತ ಅಂಗವಾಗಿದೆ. ಆದರೂ ರಜಪೂತರಲ್ಲಿ ಅನೇಕರು ಇಂಡೊ ಸಿಥಿಯನರ ವಂಶಜರು, ಇನ್ನು ಕೆಲವರು ಹೂಣ ವಂಶಜರು. ಇವರೆಲ್ಲ ಭಾರತಕ್ಕೆ ಹೊರಗಿ ನಿಂದ ಬಂದವರು. ಜಾಠರಿಗಿಂತ ಭೂಮಿತಾಯಿಯ ನಚ್ಚಿನ ಮಕ್ಕಳಿಲ್ಲ; ಆದರೆ ಒಂದು ಅಂಗುಲ ಭೂಮಿಗಾಗಿ ತಮ್ಮ ಪ್ರಾಣವನ್ನೆ ಕೊಡಲು ಸಿದ್ಧರಿರುವ ಈ ಜಾಠರು ಭಾರತೀಯ ರೈತರಲ್ಲ; ಆಜಾನುಬಾಹು ಗಳು ಮತ್ತು ದೃಢಕಾಯರೂ ಆದ ಅವರೂ ಸಿಥಿಯನರಿಂದ ಬಂದವರು. ಕಾಥೇವಾಡದ ಎತ್ತರದ ನಿಲು ವಿನ ಅಂದವಾದ ಮೈ ಕಟ್ಟಿನ 'ಕಥಿ'ಗಳೂ ಹಾಗೆಯೇ ನಮ್ಮ ಜನರ ವಂಶಮೂಲವನ್ನು ಕೆಲವು ಕಡೆ ಸ್ವಲ್ಪ ನಿಕರವಾಗಿ ಹೇಳಬಹುದು; ಇನ್ನು ಕೆಲವು ಸಂದರ್ಭಗಳಲ್ಲಿ ಸಾಧ್ಯವೇ ಇಲ್ಲ. ಆದರೆ ಅವರ ವಂಶ ಮೂಲ ಏನೇ ಇರಲಿ ಅವರೆಲ್ಲ ಭಾರತೀಯರಾಗಿದ್ದಾರೆ. ಭಾರತೀಯರ ಪುರಾತನ ಸಂಪ್ರದಾಯಗಳು ತಮ್ಮವೆಂದೇ ಭಾವಿಸಿ, ಭಾರತೀಯ ಸಂಸ್ಕೃತಿಯಲ್ಲಿ ತಾವೂ ಇತರರೊಡನೆ ಭಾಗಿಗಳಾಗಿ ನಡೆದು ಬಂದಿದ್ದಾರೆ.
{{gap}}ಹೊರಗಿನಿಂದ ಬಂದು ಭಾರತದ ಜನಕೋಟಿಯಲ್ಲಿ ಐಕ್ಯರಾದ ಜನರೆಲ್ಲ ಭಾರತ ಸಂಸ್ಕೃತಿ ಯಿಂದ ವಿಶೇಷ ಪ್ರಯೋಜನ ಪಡೆದಿದ್ದರೂ, ಭಾರತ ಸಂಸ್ಕೃತಿಗೆ ತಮ್ಮದೂ ಕಾಣಿಕೆ ಸಲ್ಲಿಸಿದ್ದಾರೆ ; ಆ ಸಂಸ್ಕೃತಿಯ ಶಕ್ತಿಯಿಂದ ಭಾರತದ ಸಂಸ್ಕೃತಿ ಪುಷ್ಟಿ ಗೂಡಿಕೊಂಡಿದೆ. ಆದರೆ ಪ್ರತ್ಯೇಕವಾಗಿಯೇ ಇದ್ದು, ಭಾರತದ ಜೀವನದಲ್ಲಿ ಮತ್ತು ಅದರ ವಿವಿಧ ಸಂಪದಭಿವೃದ್ಧಿ ಸಂಸ್ಕೃತಿಯಲ್ಲಿ ಭಾಗಿಯಾಗದೆ ಉಳಿದ ಜನಾಂಗವು ಭಾರತ ಜನತೆಯ ಮೇಲೆ ಯಾವ ಶಾಶ್ವತ ಪರಿಣಾಮವನ್ನೂ ಮಾಡಲಿಲ್ಲ. ತಾನೂ ನಾಶವಾಯಿತು; ಜೊತೆಗೆ ಭಾರತದ ಪ್ರಗತಿಗೂ ಹಾನಿಮಾಡಿತು.
{{center|೬. ಭಾರತ ಮತ್ತು ಇರಾಣ}}
{{gap}}ಭಾರತದ ಜನ ಜೀವನ ಮತ್ತು ಸಂಸ್ಕೃತಿಯೊಂದಿಗೆ ಬಾಂಧವ್ಯ ಬೆಳೆಸಿ ಅವುಗಳ ಮೇಲೆ ಪ್ರಭಾವ ಬೀರಿದ ಅನೇಕ ಜನರು ಮತ್ತು ಜನಾಂಗಗಳಲ್ಲಿ ಅತಿ ಪ್ರಾಚೀನವೂ ಮತ್ತು ಪ್ರಬಲವೂ ಆದ ಜನಾಂಗವೆಂದರೆ ಇರಾಣಿಗಳು, ಈ ಸಂಬಂಧವು ಸಿಂಧೂ ಆರ್ಯರ ನಾಗರಿಕತೆಗಿಂತ ಹಿಂದಿನದು. ಏಕೆಂದರೆ ಸಿಂಧೂ ಆರ್ಯರೂ ಮತ್ತು ಪುರಾತನ ಇರಾಣಿಗಳೂ ಒಂದೇ ಬುಡಕಟ್ಟಿನವರು ; ಬೇರೆ ಬೇರೆ ದೇಶಗಳಿಗೆ ಹೋಗಿ ಬೇರೆ ಬೇರೆ ದಾರಿಹಿಡಿದರು. ಜನಾಂಗ ಸಂಬಂಧವಲ್ಲದೆ ಅವರ ಧರ್ಮ ಮತ್ತು ಭಾಷೆಗಳಿಗೂ ಒಂದೇ ಹಿನ್ನೆಲೆ ಇತ್ತು. ವೇದ ಧರ್ಮಕ್ಕೂ, ಜೂರಾಷ್ಟ್ರ ಧರ್ಮಕ್ಕೂ<noinclude></noinclude>
35km4cfn4llvg13ohn59sr2clm06clc
ಪುಟ:ಭಾರತ ದರ್ಶನ.djvu/೧೩೯
104
85031
321381
229133
2026-05-20T09:26:56Z
Shreelatha.Halemane
7642
/* Validated */
321381
proofread-page
text/x-wiki
<noinclude><pagequality level="4" user="Shreelatha.Halemane" />{{rh|೧೨೨|ಭಾರತ ದರ್ಶನ|}}</noinclude>ಅನೇಕ ವಿಷಯಗಳು ಸಾಮಾನ್ಯವಾಗಿವೆ. ವೇದ ಭಾಷೆಯಾದ ಸಂಸ್ಕೃತಕ್ಕೂ 'ಅವೆಸ್ಟ' ದ ಭಾಷೆಯಾದ ಪುರಾತನ ಪಕ್ಷವಿ ಭಾಷೆಗೂ ಬಹಳ ಹೋಲಿಕೆ ಇದೆ. ಮಹಾಕಾವ್ಯಗಳ ಸಂಸ್ಕೃತ ಮತ್ತು ಪಹ್ಲವಿ ಬೇರೆ ಬೇರೆಯಾಗಿ ಬೆಳೆದವು, ಆದರೆ ಇತರ ಆರ್ಯ ಭಾಷೆಗಿರುವಂತೆ ಅವುಗಳ ಮೂಲ ಶಬ್ಬಗಳು ಎರಡು ಭಾಷೆಗಳಿಗೂ ಒಂದೇ, ಎರಡು ಭಾಷೆಗಳೂ ಮತ್ತು ಎಲ್ಲಕ್ಕೂ ಹೆಚ್ಚಾಗಿ ಅವುಗಳ ಕಲೆ ಮತ್ತು ಸಂಸ್ಕೃತಿಗಳು ತಮ್ಮ ತಮ್ಮ ಸನ್ನಿವೇಶಗಳಿಗನುಗುಣವಾಗಿ ವ್ಯತ್ಯಾಸ ಗೊಂಡವು. ಪರ್ಷಿಯಾ ದೇಶದ ಕಲೆ ಪರ್ಷಿಯಾ ದೇಶದ ಭೂಗುಣ ಮತ್ತು ಪ್ರಕೃತಿ ಸೌಂದಯ್ಯಕ್ಕೆ ನಿಕಟವಾಗಿ ಅಂಟಿಕೊಂಡಿದೆ. ಪ್ರಾಯಶಃ ಇರಾಣಿ ಕಲಾ ಸಂಪ್ರದಾಯದ ಅವಿಚ್ಛಿನ್ನತೆಗೆ ಕಾರಣ ಇದೇ ಇರಬಹುದು. ಅದೇ ರೀತಿಯಾಗಿ ಸಿಂಧೂ ಆರ್ಯರ ಕಲಾ ಸಂಪ್ರದಾಯ ಹಿಮ ಆಚ್ಛಾದಿತ ಪರ್ವತಶ್ರೇಣಿಗಳ, ನಿಬಿಡವಾದ ಕಾನನ ಪಂಜಗಳ, ಉತ್ತರ ಹಿಂದೂಸ್ಥಾನದ ಮಹಾನದಿಗಳ ಸುತ್ತ ಬೆಳೆದು ಬಂದಿದೆ,
{{gap}}ಭಾರತದಂತೆ ಇರಾಣ ಸಂಸ್ಕೃತಿಯು ಸಹ ದಂಡೆತ್ತಿ ಬಂದ ಪರಕೀಯರನ್ನು ತನ್ನ ಪ್ರಭಾವಕ್ಕೆ ಅಧೀನ ಮಾಡಿಕೊಂಡಿತು. ತನ್ನೊಳಗೇ ಐಕ್ಯಮಾಡಿಕೊಳ್ಳುವಷ್ಟು ಪ್ರಬಲವಾಗಿತ್ತು ಅದರ ಸಾಂಸ್ಕೃತಿಕ ತಳಹದಿಯ ಶಕ್ತಿ. ಏಳನೆಯ ಶತಮಾನದಲ್ಲಿ ಇರಾಣರನ್ನು ಗೆದ್ದ ಅರಬ್ಬಿ ಜನರು ಅತ್ಯಲ್ಪ ಕಾಲ ದಲ್ಲೆ ಇರಾಣಿ ಸಂಸ್ಕೃತಿಗೆ ಮಾರು ಹೋದರು. ತಮ್ಮ ಮರುಭೂಮಿಯ ಸರಳ ಜೀವನವನ್ನು ಬಿಟ್ಟು ಇರಾಣಿ ಸಂಸ್ಕೃತಿಯ ಕೃತಕ ಜೀವನವನ್ನು ಆರಂಭಿಸಿದರು. ಯೂರೋಪಿನಲ್ಲಿ ಫ್ರೆಂಚ್ ಭಾಷೆ ಯಂತ ವಿಶಾಲ ಏಷ್ಯದ ಬಹುಭಾಗದಲ್ಲಿ ಪಾರ್ಸಿ ಭಾಷೆ ಸುಸಂಸ್ಕೃತ ಜನರ ಭಾಷೆಯಾಯಿತು. ಇರಾಣಿ ಕಲೆ ಮತ್ತು ಸಂಸ್ಕೃತಿ ಪಶ್ಚಿಮದಲ್ಲಿ ಕಾನ್ಸ್ಟೆಂಟಿನೋಪಲ್ ನಿಂದ ಗೋಬಿ ಮರುಭೂಮಿಯ ಸೆರಗಿನವರೆಗೆ ಹಬ್ಬಿತ್ತು.
{{gap}}ಭಾರತದಲ್ಲಿ ಈ ಇಲಾಣಿ ಪ್ರಭಾವ ನಿರರ್ಗಳವಾಗಿತ್ತು. ಆಫ್ಘನರ ಮತ್ತು ಮೊಗಲರ ಕಾಲಗಳಲ್ಲಿ ಭಾರತದಲ್ಲಿ ಪರ್ಷಿಯ್ರ ರಾಜಭಾಷೆಯಾಗಿತ್ತು. ಬ್ರಿಟಿಷರ ಕಾಲದ ಆರಂಭದವರೆಗೂ ಇದೇ ಪರಿಸ್ಥಿತಿ ಇತ್ತು. ಇಂದಿನ ಭಾರತೀಯ ಭಾಷೆಗಳಲ್ಲೆಲ್ಲ ಅನೇಕ ಪಾರಸಿ ಶಬ್ದಗಳು ತುಂಬಿವೆ. ಈ ಭಾಷೆಗಳೆಲ್ಲ ಸಂಸ್ಕೃತ ಜನ್ಯವಾದುದರಿಂದ ಇದು ಸ್ವಾಭಾವಿಕ, ಅದರಲ್ಲೂ ಮುಖ್ಯವಾಗಿ ಹಿಂದೂಸ್ತಾನಿಯಂತೂ ಮಿಶ್ರಭಾಷೆ ; ದಕ್ಷಿಣ ಭಾರತದ ದ್ರಾವಿಡಭಾಷೆಗಳು ಸಹ ಪಾರಸಿ ಭಾಷೆಯ ಪ್ರಭಾವದಿಂದ ಪಾರಾಗ ಲಿಲ್ಲ. ಭಾರತದಲ್ಲಿ ಹಲವು ಪ್ರಖ್ಯಾತ ಪಾರಸಿ ಕವಿಗಳೂ ಇದ್ದರು. ಇಂದಿಗೂ ಹಿಂದೂ ಮುಸ್ಲಿಮರಲ್ಲಿ ಪಾರ್ಸಿ ಭಾಷೆಯಲ್ಲಿ ಪ್ರಸಿದ್ದರಾದ ಪಂಡಿತರಿದ್ದಾರೆ.
{{gap}}ಸಿಂಧೂ ಕಣಿವೆಯ ನಾಗರಿಕತೆಗೂ ಮತ್ತು ಆಗಿನ ಕಾಲದಲ್ಲಿ ಇರಾಣ ಮತ್ತು ಮೆಸೊಪೊಟೋ ಮಿಯದಲ್ಲಿದ್ದ ನಾಗರಿಕರಿಗೂ ಯಾವುದೇ ಸಂಬಂಧವಿದ್ದಿರಬೇಕೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಕೆಲವು ರೇಖಾಚಿತ್ರಗಳಲ್ಲಿ ಮತ್ತು ಮುದ್ರೆಗಳಲ್ಲಿ ಕಂಡುಬರುವ ಸಾಮ್ಯವು ಅತಿ ವಿಸ್ಮಯಕಾರಕ ವಿವೆ. ಅಕೀಮಿರ್ಯ ಕಾಲಕ್ಕೆ ಪೂರ್ವದಲ್ಲಿ ಇರಾಣ ಮತ್ತು ಇಂಡಿಯ ದೇಶಗಳಿಗೆ ವ್ಯವಹಾರ ಸಂಬಂಧವಿತ್ತೆಂಬುದಕ್ಕೆ ಸಾಕ್ಷವೂ ದೊರೆತಿದೆ, ಅವೆಸ್ಟದಲ್ಲಿ ಇಂಡಿಯದ ಉಲ್ಲೇಖವಿದೆ ಮತ್ತು ಉತ್ತರ ಭಾರತದ ಒಂದು ವರ್ಣನೆಯೂ ಇದೆ. ಋಗೈದದಲ್ಲಿ ಪರ್ಷಿಯಕ್ಕೆ ಸಂಬಂಧಿಸಿದ ಉಲೇಖ ಗಳಿವೆ. ಪಾರ್ಸಿ ಜನರಿಗೆ ಈ 'ಪಾರ್ಶವರು ' ಎಂದೂ ಅನಂತರ 'ಪಾರಸಿಕರು' ಎಂದೂ ಕರೆದಿದ್ದಾರೆ. ಪಾರಸಿ ಎಂಬುದು ' ಪಾರಸಿಕ' ಎಂಬುದರಿಂದ ಹುಟ್ಟಿದ್ದು, ಪಾರ್ಥಿಯನರನ್ನು ' ಪಾರ್ಥನ' ರೆಂದು ಕರೆದಿದ್ದಾರೆ. ಈ ರೀತಿ ಭಾರತ ಮತ್ತು ಇರಾಣ ದೇಶಗಳೆರಡು ಅಕೀಮಿರ್ಯ ಸಂತತಿಯ ಕುಲಕ್ಕೂ ಮೊದಲಿನಿಂದ ಅತಿ ಪ್ರಾಚೀನ ಕಾಲದಿಂದ ಪರಸ್ಪರ ಸಾಂಸ್ಕೃತಿಕ ಮೈತ್ರಿಯನ್ನು ಬೆಳೆಸಿ ಕೊಂಡು ಬಂದಿವೆ. ರಾಜಾಧಿರಾಜನಾದ ಸೈರಸ್ ಮಹಾರಾಜನ ಕಾಲದಲ್ಲಿ ಇನ್ನೂ ಹೆಚ್ಚಿನ ಬಾಂಧ ವ್ಯದ ಸಾಕ್ಷ ದೊರೆಯುತ್ತದೆ. ಸೈರಸ್ ಪ್ರಾಯಶಃ ಕಾಬೂಲ್ ಮತ್ತು ಬೆಲೂಚಿಸ್ಥಾನದವರೆಗೆ ಭಾರತದ ಗಡಿಯವರೆಗೆ ಬಂದಿದ್ದನು. ಕ್ರಿಸ್ತ ಪೂರ್ವ ಆರನೆಯ ಶತಮಾನದಲ್ಲಿ ಡೇರಿಯಸ್ ಕಾಲದಲ್ಲಿ<noinclude></noinclude>
h47iiujg0k65drxtrficach7vquy49w
ಪುಟ:ಭಾರತ ದರ್ಶನ.djvu/೧೪೦
104
85032
321380
229160
2026-05-20T09:26:45Z
Shreelatha.Halemane
7642
/* Validated */
321380
proofread-page
text/x-wiki
<noinclude><pagequality level="4" user="Shreelatha.Halemane" />{{rh||ಯುಗಾಂತರಗಳು|೧೨೩}}</noinclude>ಪಾರಸಿ ಚಕ್ರಾಧಿಪತ್ಯ ಸಿಂಧೂದೇಶ ಮತ್ತು ಪಶ್ಚಿಮ ಪಂಜಾಬ್ ಪ್ರಾಂತ್ಯವನ್ನೊಳಗೊಂಡು ವಾಯವ್ಯ ಭಾರತದವರೆಗೆ ಹಬ್ಬಿತ್ತು. ಭಾರತೀಯ ಇತಿಹಾಸದಲ್ಲಿ ಈ ಕಾಲಕ್ಕೆ ಜೊರಾಷ್ಟರಕಾಲ ಎಂದು ಹೆಸರಿದೆ. ಪ್ರಾಯಶಃ ಅದರ ಪ್ರಭಾವವೂ ವಿಶಾಲವಾಗಿದ್ದಿರಬೇಕು. ಸೂಯ್ಯಾರಾಧನೆಗೆ ಪ್ರೋತ್ಸಾಹವಿತ್ತು.
{{gap}}ಡೇರಿಯಸ್ನ ಭಾರತದ ಪ್ರಾಂತ್ಯ ಅವನ ಚಕ್ರಾಧಿಪತ್ಯದಲ್ಲೆಲ್ಲ ಬಹುಫಲವತ್ತಾದುದೂ, ಜನನಿಬಿಡವಾದುದೂ ಆಗಿತ್ತು, ಈಗಿನಕಾಲದ ನಿರ್ಜಲ ಮರಳಾಡಾಗಿರುವ ಸಿಂಧೂದೇಶವು ಆಗ ಬಹಳ ಫಲವತ್ತಾಗಿರಬೇಕು. ಹೆರೊಡೋಟಸ್ ನು ಭಾರತೀಯರ ಐಶ್ವರ್ಯ ಮತ್ತು ಜನಸಾಂದ್ರತೆಯನ್ನೂ ಭಾರತೀಯರು ಡೇರಿಯಸ್ಗೆ ತೋರಿಸುತ್ತಿದ್ದ ಗೌರವವನ್ನೂ ವರ್ಣಿಸಿದ್ದಾನೆ. “ ನಮಗೆ ಗೊತ್ತಿರುವ ಇತರ ಎಲ್ಲ ಜನರಿಗಿಂತ ಭಾರತೀಯರ ಜನಸಂಖ್ಯೆಯೇ ಬಹಳ ಹೆಚ್ಚಿನದು. ಇತರರೆಲ್ಲರ ಕಾಣಿಕೆಗಿಂತ ಹೆಚ್ಚು ಕಾಣಿಕೆ ಕೊಡುತ್ತಿದ್ದರು. ಮೂವತ್ತು ಲಕ್ಷ ಪೌಂಡು ಸ್ಟರ್ಲಿ೦ಗ್ ಬೆಲೆಯಾಗುವಷ್ಟು, ಚಿನ್ನದ ಗಟ್ಟಿಗಳನ್ನು ಕೊಡುತ್ತಿದ್ದರು.” ಪಾರಸಿ ಸೈನ್ಯದಲ್ಲಿ ಭಾರತೀಯ ಕಾಲಾಳು, ಅಶ್ವದಳ, ರಥದಳಗಳೂ ಅನಂತರ ಹಸ್ತಿದಳಗಳೂ ಇದ್ದುವೆಂದು ತಿಳಿಸುತ್ತಾನೆ.
{{gap}}ಕ್ರಿಸ್ತಪೂರ್ವ ಏಳನೆಯ ಶತಮಾನಕ್ಕೆ ಪೂರ್ವದಿಂದ ಮತ್ತು ಆಮೇಲೆ ಅನೇಕ ಶತಮಾನಗಳ ಕಾಲ ಪರ್ಷಿಯ ಮತ್ತು ಭಾರತಗಳ ಮಧ್ಯೆ ವ್ಯಾಪಾರದ ಮೂಲಕ ಸಂಬಂಧವಿತ್ತೆಂಬುದಕ್ಕೆ ಬೇಕಾ ದಷ್ಟು ಸಾಕ್ಷದೊರೆತಿದೆ. ಅದರಲ್ಲೂ ಮುಖ್ಯವಾಗಿ ಅತಿ ಪೂರ್ವದಲ್ಲಿ ಇಂಡಿಯ ಮತ್ತು ಬೇಬಿಲಾನ್ ಮಧ್ಯೆ ನಡೆಯುತ್ತಿದ್ದ ವ್ಯಾಪಾರ ಪರ್ಷಿಯಕೊಲ್ಲಿಯ ಮೂಲಕ ನಡೆಯುತ್ತಿತ್ತೆಂದು ನಂಬಲಾಗಿದೆ. ೬ನೆಯ ಶತಮಾನದಿಂದೀಚೆ ಸೈರಸ್ ಮತ್ತು ಡೇರಿಯಸ್ಸನ ದಂಡಯಾತ್ರೆಗಳಿಂದ ಪ್ರತ್ಯಕ್ಷ ಸಂಬಂಧವೇ ಬೆಳೆಯಿತು. ಅಲೆಕ್ಸಾಂಡರನ ವಿಜಯದಿಂದ ಅನೇಕ ಶತಮಾನಗಳ ಕಾಲ ಪರ್ಷಿಯ ಗ್ರೀಕರ ರಾಜ್ಯಭಾರಕ್ಕೆ ಅಧೀನವಾಗಿತ್ತು. ಭಾರತದೊಂದಿಗೆ ಸಂಬಂಧ ಇದ್ದೇ ಇತ್ತು. ಅಶೋಕನ ಕಟ್ಟಡಗಳ ಶಿಲ್ಪ ಕಲೆ ಪರ್ಸಿಪೊಲೀಸ್ ಶಿಲ್ಪ ಕಲೆಯ ಮಾದರಿಯನ್ನು ಅನುಸರಿಸಿತಂತೆ. ವಾಯವ್ಯ ಭಾರತ ಮತ್ತು ಆಫ್ಘಾನಿಸ್ಥಾನಗಳಲ್ಲಿ ಬೆಳೆದ ಗ್ರೀಕ್-ಬೌದ್ಧ ಕಲೆಯಲ್ಲಿ ಇರಾಣಿ ಕಲೆಯ ಛಾಯೆಇತ್ತು. ಕಲೆ ಮತ್ತು ಸಂಸ್ಕೃತಿಯ ಚಟುವಟಿಕೆಗಳಿಗೆ ಹೆಸರಾದ ಕ್ರಿಸ್ತಶಕ ೪ ಮತ್ತು ೫ನೆಯ ಶತಮಾನಗಳಲ್ಲಿ ಗುಪ್ತರ ಕಾಲದಲ್ಲಿ ಭಾರತಕ್ಕೂ ಇರಾಣಕ್ಕೂ ಪರಸ್ಪರ ವ್ಯವಹಾರ ಬೆಳೆಯಿತು.
{{gap}}ಗಡಿ ಪ್ರದೇಶದ ಕಾಬೂಲ್, ಕಾಂದಹಾರ ಮತ್ತು ಸೀಸ್ತಾನ್ಗಳು ಭಾರತೀಯರೂ ಇರಾಣಿ ಗಳೂ ಸೇರುತ್ತಿದ್ದ ಪ್ರದೇಶಗಳಾಗಿದ್ದವು. ಅನೇಕವೇಳೆ ರಾಜಕೀಯ ಕಾರಣಗಳಿಂದ ಅವು ಭಾರತದ ಗಡಿಯೊಳಗು ಇರುತ್ತಿದ್ದವು. ಈಚೆಗೆ ಪಾರ್ಥಿಯನರ ಕಾಲದಲ್ಲಿ ಆ ಪ್ರದೇಶಗಳನ್ನು “ ಶ್ವೇತಭಾರತ ಎಂದು ಕರೆಯುತ್ತಿದ್ದರು. ಈ ಭಾಗಗಳ ವಿಷಯದಲ್ಲಿ ಫ್ರೆಂಚ್ ವಿದ್ವಾಂಸನಾದ ಜೆಮ್ಸ್ ಡಾರ್ ಮೆಸ್ಲರ್ “ ಆ ಭಾಗಗಳಲ್ಲಿ ಹಿಂದೂ ನಾಗರಿಕತೆ ಹರಡಿತ್ತು. ಕ್ರಿಸ್ತ ಪೂರ್ವದ ಎರಡು ಮತ್ತು ಕ್ರಿಸ್ತ ಶಕೆಯ ಎರಡು ಶತಮಾನಗಳಲ್ಲಿ ಅವುಗಳನ್ನು ' ಶೇತಭಾರತ' ಎಂದು ಕರೆಯುತ್ತಿದ್ದರು. ಮುಸಲ್ಮಾನರು ಆ ಪ್ರದೇಶಗಳನ್ನು ಗೆಲ್ಲುವವರೆಗೆ ಅವು ಇರಾಣೀಯಕ್ಕಿಂತ ಹೆಚ್ಚಾಗಿ ಭಾರತೀಯ ಪ್ರದೇಶಗಳಾಗಿದ್ದವು.
{{gap}}ಉತ್ತರದಲ್ಲಿ ವ್ಯಾಪಾರಿಗಳೂ ಮತ್ತು ಪ್ರವಾಸಿಕರೂ ಭೂಮಾರ್ಗದಿಂದ ಭಾರತಕ್ಕೆ ಬರುತ್ತಿದ್ದರು. ದಕ್ಷಿಣ ಭಾರತವು ಸಮುದ್ರ ಮಾರ್ಗವನ್ನು ಅವಲಂಬಿಸಿತ್ತು. ಸಮುದ್ರ ವ್ಯಾಪಾರದಿಂದ ಪರದೇಶ ವ್ಯವಹಾರ ಬೆಳೆದಿತ್ತು. ಸಸ್ಸನಿದ್ರ ಪರ್ಷಿಯ ಮತ್ತು ದಕ್ಷಿಣ ಭಾರತದ ಒಂದು ರಾಜ್ಯ ಪರಸ್ಪರ ರಾಯಭಾರಿಗಳನ್ನು ಕಳುಹಿಸಿದ್ದಂತೆ ಸಾಕ್ಷ ದೊರೆತಿದೆ.
{{gap}}ತುರುಕರು, ಆಫ್ಘನರು, ಮೊಗಲರು ಭಾರತವನ್ನು ಗೆದ್ದ ಕಾರಣ ಮಧ್ಯ ಮತ್ತು ಪಶ್ಚಿಮ ಏಷ್ಯದ ರಾಜ್ಯಗಳಿಗೂ ಭಾರತಕ್ಕೂ ಬೇಗ ಬಾಂಧವ್ಯ ಬೆಳೆಯಲು ಅನುಕೂಲವಾಯಿತು. ಯುರೋಪಿನ ಪುನರುಜ್ಜಿವನ ಕಾಲದ ಹದಿನೈದನೆಯ ಶತಮಾನದಲ್ಲಿ ಸಾಮರಖಂಡ ಮತ್ತು ಬೊಖಾರದಲ್ಲಿ ಇರಾಣದ ಅದ್ಭುತ ಪ್ರಭಾವದಿಂದ ತೈಮೂರ್ ಯುಗದ ಪುನರುಜ್ಜಿವನವು ಪ್ರಫುಲ್ಲಿತವಾಗಿತ್ತು. ಅದೇ ತೈಮೂರ್ ವಂಶದ ರಾಜಕುಮಾರನಾದ ಬಾಬರ್ ಸಾಮಾಜಿಕ ಸನ್ನಿವೇಶದಿಂದ ಬಂದು ದೆಹಲಿಯ ಸಿಂಹಾಸನ<noinclude></noinclude>
eckay4xey7mtlluzovnbggk9pzqlz5u
ಪುಟ:ಭಾರತ ದರ್ಶನ.djvu/೧೪೧
104
85033
321379
229169
2026-05-20T09:26:34Z
Shreelatha.Halemane
7642
/* Validated */
321379
proofread-page
text/x-wiki
<noinclude><pagequality level="4" user="Shreelatha.Halemane" />{{rh|೧೨೪|ಭಾರತ ದರ್ಶನ|}}</noinclude>ವನ್ನು ಆಕ್ರಮಿಸಿದನು. ಇದು ನಡೆದ ೧೬ನೆಯ ಶತಮಾನವು ಇರಾಣದಲ್ಲಿ ಸಘಾವಿಸ್ ಆಳ್ವಿಕೆಯಲ್ಲಿ ಒಂದು ಅದ್ಭುತ ಕಲಾ ಪುನರುಜ್ಜಿವನ ಕಾಲ, ಪರ್ಷಿಯನ್ ಕಲೆಯ ಸ್ವರ್ಣಯುಗ ಎನ್ನುತ್ತಾರೆ ಆ ಕಾಲವನ್ನು , ಬಾಬರನ ಮಗನಾದ ಹುಮಾಯೂನ್ ಆಶ್ರಯ ಪಡೆದದ್ದು ಸಘಾವಿ ದೊರೆಯಲ್ಲಿ ಮತ್ತು ಅವನ ಸಹಾಯದಿಂದಲೇ ಪುನಃ ಇ೦ಡಿಯಕ್ಕೆ ಬಂದದ್ದು. ಇ೦ಡಿಯದ ಮೊಗಲ್ ಚಕ್ರವರ್ತಿಗಳು ಇರಾನದೊಂದಿಗೆ ನಿಕಟ ಬಾಂಧವ್ಯ ಬೆಳೆಸಿದ್ದರು. ಮೊಗಲ್ ಚಕ್ರವರ್ತಿಗಳ ರಾಜ ಸಭೆಯಲ್ಲಿ ಕೀರ್ತಿಯನ್ನೂ ಬಹುಮಾನವನ್ನೂ ಪಡೆಯಬೇಕೆಂದು ವಿದ್ವಾಂಸರು ಮತ್ತು ಕಲಾವಿದರು ತಂಡೋಪತಂಡವಾಗಿ ಗಡಿಯನ್ನು ದಾಟಿ ಬರುತ್ತಿದ್ದರು,
{{gap}}ಭಾರತೀಯ ಆದರ್ಶಗಳ ಮತ್ತು ಪಾರಸಿ ಭಾವನೆಗಳ ಮಿಳನದಿಂದ ಒಂದು ಹೊಸ ಶಿಲ್ಪ ಕಲೆಯೂ ಭಾರತದಲ್ಲಿ ಬೆಳೆಯಿತು. ದೆಹಲಿ ಮತ್ತು ಆಗ್ರ ನಗರಗಳ ಗಂಭೀರ ಸರ್ವಸುಂದರ ಸೌಧಗಳು ಆ ಕಲೆಯ ಮುಕ್ತಾ ಫಲಗಳು. ಇವುಗಳಲ್ಲಿ ಅತಿ ಮುಖ್ಯವಾದ ತಾಜ್ಮಹಲನ್ನು ಕಂಡು ಫ್ರೆಂಚ್ ವಿದ್ವಾಂಸ ನಾದ ಸೆ “ ಇರಾನದ ಆತ್ಮವು ಭಾರತೀಯ ದೇಹದಲ್ಲಿ ಅವತಾರ ಮಾಡಿದೆ” ಎಂದಿದ್ದಾನೆ.
{{gap}}ತಮ್ಮ ಬುಡಕಟ್ಟಿನಲ್ಲಿ ಮತ್ತು ಇತಿಹಾಸ ಪರಂಪರೆಯಲ್ಲಿ ಭಾರತೀಯರಿಗೂ ಇರಾಣದ ಜನ ರಿಗೂ ಇರುವಷ್ಟು ಸಮಾಜ ಬಾಂಧವ್ಯ ಬೇರೆ ಯಾರಲ್ಲೂ ಕಾಣದು. ಈ ನಿರರ್ಗಳ, ಮೈತ್ರಿಯುತ, ಗೌರವಯುತ ಬಾಂಧವ್ಯವು ಬಹುಕಾಲ ನಡೆಯಿತು. ಕೊನೆಯ ನೆನಪು ಮಾತ್ರ ಅತ್ಯಲ್ಪ ಕಾಲದ್ದಾ ದರೂ ಅತಿ ಭಯಂಕರವಾಗಿತ್ತು. ಎರಡು ನೂರು ವರ್ಷಗಳ ಹಿಂದೆ ನಾದಿರ್ ಷಹನು ದಂಡಯಾತ್ರೆ ಬಂದು ದೆಹಲಿಯನ್ನು ಕೊಳ್ಳೆ ಹೊಡೆದುದು ಒಂದು ದುರ್ದೈವ.
{{gap}}ಅನಂತರದ ಬ್ರಿಟಿಷರ ಆಗಮನದಿಂದ ಏಷ್ಯದ ನಮ್ಮ ನೆರೆಹೊರೆಯ ಜನರಿಗೂ ನಮಗೂ ಇದ್ದ ಬಾಂಧವ್ಯ ಮಾರ್ಗಗಳೆಲ್ಲ ಮುಚ್ಚಿದವು. ಕಪಟ ಬಂಧನ ಮಾಡಿದರು. ನಮ್ಮನ್ನು ಯೂರೋಪಿನ ಸಮಾಸಕ್ಕೆ ಅದರಲ್ಲೂ ಇಂಗ್ಲೆಂಡಿನ ಸಮಾಜಕ್ಕೆ ಕರೆದೊಯ್ಯುವ ಹೊಸ ಸಮುದ್ರ ಮಾರ್ಗಗಳನ್ನು ತೋರಿಸಿದರು. ಇಂಡಿಯ, ಇರಾಣ, ಮಧ್ಯ ಏಷ್ಯ, ಚೀನಗಳಿಗೆ ಆಧುನಿಕ ಯುಗದ ವಿಮಾನ ಸೌಕಯ್ಯ ಒದಗುವವರೆಗೆ ನಮ್ಮ ಹಿಂದಿನ ಸ್ನೇಹಸಂಪರ್ಕದ ಭೂಮಾರ್ಗಗಳೆಲ್ಲ ಅಂದಿನಿಂದ ಮಾಯ ವಾದವು. ಈ ರೀತಿ ಆಕಸ್ಮಿಕವಾಗಿ ಇದ್ದಕ್ಕಿದ್ದಂತೆ ಭಾರತವು ಏಷ್ಯದ ಇತರ ರಾಷ್ಟ್ರಗಳಿಂದ ಬೇರೆ ಯಾದದ್ದು ಬ್ರಿಟಿಷರ ಆಳ್ವಿಕೆಯ ಒಂದು ಅತಿ ವಿಚಿತ್ರದುಷ್ಪರಿಣಾಮ.*
ಆ
{{gap}}ದರೆ ಕಡಿಯದ ಬಾಂಧವ್ಯ ಒಂದು ಇನ್ನೂ ಉಳಿದಿದೆ. ಅದು ಇಂದಿನದಲ್ಲ ; ಪುರಾತನ ಇರಾಣದೊಂದಿನದು. ಹದಿಮೂರು ಶತಮಾನಗಳ ಹಿಂದೆ ಇಸ್ಲಾಂ ಧರ್ಮವು ಇರಾಣ ದೇಶಕ್ಕೆ ಬ೦ದಾಗ ಸನಾತನ ಜೊರಾಷ್ಟಧರ್ಮದ ಅನುಯಾಯಿಗಳು ಕೆಲವರು ಭಾರತಕ್ಕೆ ಬಂದು ನೆಲಸಿದರು. ಇಲ್ಲಿ ಅವರಿಗೆ ಆಶ್ರಯ ದೊರೆತು ಪಶ್ಚಿಮ ತೀರದಲ್ಲಿ ನೆಲೆಸಿದರು ಅವರ ಧರ್ಮ ಮತ್ತು ನಡೆನುಡಿ ಗಳಿಗೆ ಯಾವ ಆತಂಕವೂ ಬರಲಿಲ್ಲ. ಅವರೂ ಇನ್ನೊಬ್ಬರ ಗೋಜಿಗೆ ಹೋಗಲಿಲ್ಲ. ಈ ಪಾರ್ಸಿ ಜನರು ಸದ್ದಿಲ್ಲದೆ ಯಾವ ಆಡಂಬರವೂ ಇಲ್ಲದೆ ಭಾರತೀಯರಾಗಿ ಭಾರತದಲ್ಲಿ ಮನೆಮಾಡಿಕೊಂಡರೂ
{{bar}}
{{gap}}<small>* ಪ್ರೊಫೆಸರ್ ಇ, ಜೆ, ಕ್ಯಾಪ್ಟನ್ ರು ಕೇಂಬ್ರಿಜ್ ಭಾರತೀಯ ಇತಿಹಾಸದಲ್ಲಿ “ ಸಣ್ಣ ಪುಟ್ಟ ರಾಜ್ಯಗಳನ್ನು ಒಂದು ದೊಡ್ಡ ರಾಜ್ಯವನ್ನಾಗಿ ಒಂದುಗೂಡಿಸಿದ ಶಕ್ತಿಯು ಮುಖ್ಯವಾಗಿ ನೌಕಾಶಕ್ತಿ ; ಸಮುದ್ರ ಮಾರ್ಗಗಳೆಲ್ಲ ತನ್ನ ಅಧೀನದಲ್ಲಿದ್ದುದರಿಂದ ರಕ್ಷಣಾದೃಷ್ಟಿಯಿಂದ ಭೂಮಾರ್ಗಗಳನ್ನು ಮುಚ್ಚುವುದು ಅತ್ಯವಶ್ಯಕವಾಯಿತು, ಇ೦ಡಿಯ ಚಕ್ರಾಧಿಪತ್ಯದ ಗಡಿಯ ರಾಷ್ಟ್ರಗಳ ವಿಚಾರದಲ್ಲಿ ಇದೇ ಬ್ರಿಟಿಷರ ರಾಜನೀತಿ, ಆಫ್ಘಾನಿಸ್ಥಾನ, ಬೆಲೂಚಿಸ್ಥಾನ ಮತ್ತು ಬ್ರಹ್ಮದೇಶಗಳು ಆದೇಕಾರಣದಿಂದ ಭಾರತದಿಂದ ದೂರವಾದವು. ಒಳಗಿನ ರಾಜಕೀಯ ಐಕ್ಯಮದ ಜೊತೆಗೆ ಹಿಂದೆಯೇ ಹೊರಗೆ ರಾಜಕೀಯ ಪ್ರತ್ಯೇಕತೆಯೂ ಬೆಳೆಯಿತು. ಆದರೆ ಈ ರಾಜಕೀಯ ಪ್ರತ್ಯೇಕತೆಯು ಬಹಳ ಇತ್ತೀಚಿನದು ಮತ್ತು ಭಾರತೀಯ ಇತಿಹಾಸಕ್ಕೆ ತೀರ ಹೊಸದು, ಪ್ರಸ್ತು ತಕಾಲವನ್ನು ಪ್ರಾಚೀನಕಾಲದಿಂದ ಕಡಿದು ಹಾಕಿರುವ ಒಂದು ಮಹಾ ಘಟನೆ, </small><noinclude></noinclude>
5fqqufrl620qjwswxukna7bj7nmxaob
ಪುಟ:ಭಾರತ ದರ್ಶನ.djvu/೧೪೨
104
85034
321378
229176
2026-05-20T09:26:22Z
Shreelatha.Halemane
7642
/* Validated */
321378
proofread-page
text/x-wiki
<noinclude><pagequality level="4" user="Shreelatha.Halemane" />{{rh||ಯುಗಾಂತರಗಳು|೧೨೫}}</noinclude>ತಮ್ಮ ಸನಾತನ ಸಂಪ್ರದಾಯಗಳಿಗೆ ಅಂಟಿಕೊಂಡ ಒಂದು ಸಣ್ಣ ಪಂಗಡವಾಗಿ ಪ್ರತ್ಯೇಕವಾಗಿಯೇ ಉಳಿದಿರುವುದು ಒಂದು ಆಶ್ಚರ್ಯ, ಅಂತರ್ಜಾತೀಯ ವಿವಾಹಗಳೂ ನಡೆದಿದ್ದರೂ ಅವು ಅತಿ ವಿರಳ, ಭಾರತೀಯರಲ್ಲಿ ಸಾಮಾನ್ಯವಾಗಿ ತಮ್ಮ ತಮ್ಮ ಮತದಲ್ಲಿ ಮದುವೆಯಾಗುವುದು ಸಾಮಾನ್ಯವಾದುದರಿಂದ ಈ ಪದ್ದತಿಯು ಏನೂ ಹೊಸದಾಗಿ ಕಾಣಲಿಲ್ಲ. ಅವರ ಸಂಖ್ಯೆಯೂ ಹೆಚ್ಚು ಬೆಳೆದಿಲ್ಲ, ಎಲ್ಲ ಒಟ್ಟು ಸೇರಿ ಒಂದು ಲಕ್ಷ ಜನ, ವ್ಯಾಪಾರ ಉದ್ಯಮದಲ್ಲಿ ನಿಸ್ಸಿಮರು, ಅವರಲ್ಲನೇಕರು ಭಾರತದ ಕೈಗಾರಿಕೆಗಳ ನಾಯಕರು, ಇರಾಣದೊಂದಿಗೆ ಅವರಿಗೆ ಯಾವ ಸಂಪರ್ಕವೂ ಇಲ್ಲ, ಅವರೆಲ್ಲ ಪೂರ್ಣ ಭಾರತೀಯರು. ಆದರೆ ಅವರು ಪೂರ್ವ ಸಂಪ್ರದಾಯಗಳನ್ನೂ ಅವರ ಪೂರ್ವ ಜನ್ಮಭೂಮಿಯ ಸ್ಮರಣೆ ಯನ್ನೂ ಬಿಟ್ಟಿಲ್ಲ.
{{gap}}ಇರಾಣದಲ್ಲಿ ಇತ್ತೀಚೆಗೆ ಇಸ್ಲಾ೦ಯುಗದ ಪೂರ್ವದ ತಮ್ಮ ನಾಗರಿಕತೆಯ ಕಡೆ ನೋಡುವ ಆಶೆಯು ಬಲಗೊಳ್ಳುತ್ತಿದೆ. ಇದಕ್ಕೂ ಧರ್ಮಕ್ಕೂ ಯವ ಸಂಬಂಧವೂ ಇಲ್ಲ. ಅದು ಕೇವಲ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ದೃಷ್ಟಿ ಯದು ; ಅತಿ ಪ್ರಾಚೀನ ಕಾಲದಿಂದ ನಿರರ್ಗಳವಾಗಿ ಪ್ರವಹಿಸಿದ ಸಂಸ್ಕೃತಿ ಸಂಪ್ರದಾಯಗಳಲ್ಲಿ ಲಾಭ ಪಡೆದು ಹೆಮ್ಮೆಗೊಳ್ಳುವ ದೃಷ್ಟಿಯದು.
{{gap}}ಪ್ರಪಂಚದ ಘಟನೆಗಳು ಮತ್ತು ಸಮಷ್ಟಿ ಪ್ರಶ್ನೆಗಳು ಪುನಃ ಏಷ್ಯದ ಜನಾಂಗಗಳ ಒಕ್ಕೂಟಕ್ಕೆ ದಾರಿ ತೋರುತ್ತಿವೆ. ಯುರೋಪಿನ ಪ್ರಭುತ್ವವನ್ನು ಒಂದು ಕೆಟ್ಟ ಕನಸಿನಂತೆ ಮರೆತು ಪ್ರಾಚೀನ ಕಾಲದ ಹಳೆಯ ಸ್ನೇಹ ಮತ್ತು ಒಟ್ಟನ ಸಾಹಸಗಳು ಪುನಃ ಸ್ಮರಣೆಗೆ ಬರುತ್ತಿವೆ. ಸ್ವಲ್ಪ ದಿನಗಳ ಲ್ಲಿಯೇ ಭಾರತವು ಚೀನಾದೊಡನೆ ಬಾಂಧವ್ಯ ಬೆಳೆಸಿದಂತೆ ಇರಾಣದೊಡನೆಯೂ ಮೈತ್ರಿಯನ್ನು ಬೆಳೆಸುವುದರಲ್ಲಿ ಅನುಮಾನವಿಲ್ಲ.
{{gap}}ಎರಡು ತಿಂಗಳ ಹಿಂದೆ ಭಾರತಕ್ಕೆ ಬಂದ ಇರಾಣ ಸಂಸ್ಕೃತಿ ಗೋಷ್ಠಿ ಯ ನಾಯಕನು ಅಲಹಾ ಬಾದಿನಲ್ಲಿ “ಇರಾಣಿಗಳೂ ಭಾರತೀಯರೂ ಇರಾಣದ ಒಂದು ಕತೆಯಲ್ಲಿ ಪೂರ್ವಕ್ಕೊಬ್ಬ ಪತ್ನಿ ಮತ್ತೊಬ್ಬ ಹೋಗಿ ಅಗಲಿದ ಸಹೋದರರಂತೆ. ಅವರ ವಂಶೀಕರು ಪರಸ್ಪರ ಪರಿಚಯವನ್ನೆ ಮರೆತಿದ್ದರು, ಅವರಿಬ್ಬರಲ್ಲೂ ಉಳಿದಿರುವ ಪದ್ದತಿ ಎಂದರೆ ಅವರ ಮುರಳಿ ಗಾನದ ಕೆಲವು ಹರಕು ಗೀತೆಗಳ ಹಳೆಯ ರಾಗಗಳು. ಅನೇಕ ಶತಮಾನಗಳ ನಂತರ ಆ ರಾಗ ಶ್ರವಣದಿಂದ ಪುನಃ ಪರಸ್ಪರ ಪರಿಚಯವಾಗಿ ಪುರ್ನಮಿಲನವಾಯಿತು. ಅದೇ ರೀತಿ ನಾವು ಸಹ ನಮ್ಮ ಕೊಳಲಗಾನದಿಂದ ಪುರಾತನ ಗೀತೆಗಳನ್ನು ನುಡಿಸಲು ಬಂದಿದ್ದೇವೆ. ಭಾರತೀಯ ಸಹೋದರರೇ ಆ ಗೀತೆಗಳನ್ನು ಕೇಳಿ ನಿಮ್ಮ ಇರಾಣಿ ಸಹೋ ದರರನ್ನು ಗುರುತಿಸಿ ನಮ್ಮನ್ನು ಅಪ್ಪಿಕೊಳ್ಳಿ” ಎಂದು ಹೇಳಿದನು.
{{center|೭ ಭಾರತ ಮತ್ತು ಗ್ರೀಸ್}}
{{gap}}ಯೂರೋಪಿನ ಎಲ್ಲ ಸಂಸ್ಕೃತಿಗಳಿಗೆ ಪುರಾತನ ಗ್ರೀಸ್ ತೌರುಮನೆ ಎಂದು ಪ್ರಸಿದ್ದಿಯಾಗಿದೆ. ಪೌರ್ವಾತ್ಯ ಕ್ಕೂ ಪಾಶ್ಚಿಮಾತ್ಯಕ್ಕೂ ಇರುವ ಮೂಲ ಭಿನ್ನತೆಯ ವಿಷಯವಾಗಿ ಎಷ್ಟೋ ಗ್ರಂಥ ಗಳು ಹುಟ್ಟಿದೆ. ಇದು ನನಗೆ ಅರ್ಥವಾಗುವುದಿಲ್ಲ, ಅದೆಲ್ಲ ಬಹುಮಟ್ಟಿಗೆ ಯಾವ ವಿಚಾರವೂ ಇಲ್ಲದೆ, ವಿಜ್ಞಾನ ದೃಷ್ಟಿ ಯಿಲ್ಲದೆ ಅಸ್ಪಷ್ಟ ಭಾವನೆಗಳಿಂದ ಬರೆದದ್ದು. ಅನೇಕ ಯೂರೋಪಿಯು ವಿದ್ವಾಂಸರು ಮೊನ್ನೆ ಮೊನ್ನಿನವರೆಗೆ ಉತ್ತಮ ವಸ್ತು ಯಾವುದಿದ್ದರೂ ಗ್ರೀಸ್ ಮತ್ತು ರೋಮಿನಿಂದ ಬಂದುದೇ ಇರಬೇಕು ಎಂದು ಭಾವಿಸಿದ್ದರು. ಸರ್ ಹೆನ್ರಿ ಮೇನ್ ಎಲ್ಲೋ ಒಂದೆಡೆ ಕುರುಡು ಪ್ರಕೃತಿ ಶಕ್ತಿ ಯೊಂದನ್ನು ಬಿಟ್ಟರೆ ಪ್ರಪಂಚದಲ್ಲಿ ಗ್ರೀಕ್ ಜನ್ಯ ವಸ್ತು ವಿನಾ ಬೇರೆ ಯಾವುದಕ್ಕೂ ಚಲನಶಕ್ತಿಯೇ ಇಲ್ಲ ಎಂದಿದ್ದಾನೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಮಹಾ ಪಂಡಿತರಾದ ಯೂರೋಪಿನ ವಿದ್ವಾಂಸ ರಿಗೆ ಭಾರತ ಮತ್ತು ಚೀನಾದೇಶಗಳ ಪರಿಚಯವೇ ಇರಲಿಲ್ಲ. ಆದರೂ ಪ್ರೊಫೆಸರ್ ಇ.ಆರ್. ಡಾಡ್ಸ್ “ ಗ್ರೀಕ್ ಸಂಸ್ಕೃತಿಯ ಉದಯ ಪೌರ್ವಾತ್ಯ ಹಿನ್ನೆಲೆಯಲ್ಲಿ, ಯೂರೊಪಿಯನ್ ಮಹಾ ಪಂಡಿತರ ಮನಸ್ಸಿನಲ್ಲಿ ಮಾತ್ರವಲ್ಲದೆ ಈ ಹಿನ್ನೆಲೆಯು ಯಾವಾಗಲೂ ಸಂಬಂಧ ಕಡಿಮೆ ಬೀಳಲಿಲ್ಲ.” ಎಂದಿದ್ದಾನೆ.<noinclude></noinclude>
7k5mg99j4cm8a2wm6rv3takbwhazqhy
ಪುಟ:ಭಾರತ ದರ್ಶನ.djvu/೧೪೩
104
85035
321377
229184
2026-05-20T09:26:10Z
Shreelatha.Halemane
7642
/* Validated */
321377
proofread-page
text/x-wiki
<noinclude><pagequality level="4" user="Shreelatha.Halemane" />{{rh|೧೨೬|ಭಾರತ ದರ್ಶನ|}}</noinclude>{{gap}}ಯೂರೋಪಿನಲ್ಲಿ ಪಾಂಡಿತ್ಯವೆಂದರೆ ಗ್ರೀಕ್, ಹೀಬ್ರೂ ಮತ್ತು ಲ್ಯಾಟಿನ್ ಭಾಷೆಗಳ ಪಾಂಡಿತ್ಯ. ಆ ಪಂಡಿತರ ದೃಷ್ಟಿಯಲ್ಲಿ ಪ್ರಪಂಚವೆಂದರೆ ಮೆಡಿಟೆರೇನಿರ್ಯ ತೀರದ ಪ್ರಪಂಚ, ಈ ಪ್ರಪಂಚದ ಮೂಲತತ್ವವು ಪುರಾತನ ರೋಮನರ ಉದ್ದೇಶಕ್ಕಿಂತ ಹೆಚ್ಚು ಭಿನ್ನವಿರಲಿಲ್ಲ. ಆಗಾಗ ಮಾತ್ರ ಸ್ವಲ್ಪ ಮಾರ್ಪಾಡಾಗುತ್ತಿತ್ತು. ಅವರ ಇತಿಹಾಸ ಮತ್ತು ಭೌಗೋಲಿಕ ರಾಜಕೀಯವು ಈ ತತ್ವಕ್ಕೆ ಅಧೀನವಾಗಿತ್ತು. ಸಂಸ್ಕೃತಿ ಮತ್ತು ನಾಗರಿಕತೆಯ ಬೆಳೆವಣಿಗೆ ಮಾತ್ರವಲ್ಲದೆ ಅವರ ವೈಜ್ಞಾನಿಕ ಬೆಳೆವಣಿಗೆಗೆ ಸಹ ಈ ತತ್ವವು ಅಡ್ಡ ಬಂದಿತು. ಅವರ ಮನಸ್ಸಿನಲ್ಲೆಲ್ಲ ಪ್ಲೇಟೋ ಮತ್ತು ಅರಿಸ್ಟಾಟೆಲ್ಹಿಂದಿನ ಕಾಲದ ಏಷ್ಯನರ ಅನೇಕ ಅದ್ಭುತ ಕಾವ್ಯಗಳು ಅವರ ಕಿವಿಗೆ ಬಿದ್ದರೂ ಅವನ್ನು ಸುಲಭವಾಗಿ ಒಪ್ಪುತ್ತ ಇರಲಿಲ್ಲ. ಅದನ್ನು ಎದುರಿಸಿ, ಹೇಗೋ ತಮ್ಮ ಹಿಂದಿನ ಚಿತ್ರದ ಚೌಕಟ್ಟಿನೊಳಗೇ ಸೇರಿಸಿಬಿಡುವ ಮನೋಭಾವನೆ ಇತ್ತು. ವಿದ್ವಾಂಸರ ಮನೋಭಾವನೆಯೇ ಈ ರೀತಿ ಇರುವಾಗ ನಿರಕ್ಷರ ಕುಕ್ಷಿಗಳಾದ ಯೂರೋಪಿಯನ್ ಜನಸ್ತೋಮವು ಪೂರ್ವ ಪಶ್ಚಿಮಗಳೆರಡಕ್ಕೂ ಮೂಲ ಭಿನ್ನತೆ ಇದ್ದೇ ಇದೆ ಎಂದು ನಂಬಲೇ ಬೇಕು. ಯೂರೋಪಿನ ಔದ್ಯೋಗೀಕರಣ, ಅದರಿಂದ ಲಭಿಸಿದ ಅಪಾರ ಧನಸಂಪತ್ತು ಸಾಮಾನ್ಯ ಜನರ ಮನಸ್ಸಿನಲ್ಲಿ ಈ ಭಿನ್ನತೆಯ ಕಲ್ಪನೆಯನ್ನು ಇನ್ನೂ ಹೆಚ್ಚು ಮಾಡಿತು. ಒಂದು ವಿಚಿತ್ರ ತರ್ಕ ಪದ್ಧತಿಯಿಂದ ಪುರಾತನ ಗ್ರೀಸ್ ಆಧುನಿಕ ಯೂರೋಪ್ ಮತ್ತು ಅಮೆರಿಕಾಗಳಿಗೆ ಪಿತೃಸ್ಥಾನವೋ ಮಾತೃ ಸ್ಥಾನವೋ ಆಯಿತು. ಆದರೆ ಪ್ರಪಂಚದ ಪೂರ್ವೆತಿಹಾಸದ ಹೊಸ ಜ್ಞಾನವು ಕೆಲವು ವಿದ್ವಾಂಸರ ಮನಸ್ಸಿನಲ್ಲಿದ್ದ ಈ ಭಾವನೆಗಳನ್ನು ತಲೆಕೆಳಗೆ ಮಾಡಿತು. ಆದರೆ ಸಾಮಾನ್ಯ ಜನತೆಯಲ್ಲಿ ಅವರ ಯುಗಾಂತರದ ಅಭಿಪ್ರಾಯಗಳೇ ಶಾಶ್ವತ ಉಳಿದವು. ಒಮ್ಮೊಮ್ಮೆ ಕೆಲವು ಕಲ್ಪನೆಗಳು ಮೇಲೆ ಮೇಲೆ ಸುಳಿದು ಅವರ ಮನಸ್ಸಿನ ಚಿತ್ರದ ಹಿಂದೆ ಮರೆಯಾಗುತ್ತುದ್ದವು.
{{gap}}ಯೂರೋಪ್ ಮತ್ತು ಅಮೆರಿಕ ಔದ್ಯೋಗೀಕರಣದಲ್ಲಿ ಬಹಳ ಮುಂದುವರಿದು, ಏಷ್ಯ ಈ ವಿಚಾ ರದಲ್ಲಿ ಹಿಂದೆ ಬಿದ್ದಿದೆಯೇ ಹೊರತು ಬೇರೆ ಅರ್ಥದಲ್ಲಿ ಪಾಶ್ಚಾತ್ಯ ಪೌರ್ವಾತ್ಯ ಎಂಬ ಪದಭೇದಗಳ ಉಪಯೋಗ ನನಗೆ ಹಿಡಿಯುವುದಿಲ್ಲ, ಈ ಔದ್ಯೋಗಿಕರಣವು ಪ್ರಪಂಚದ ಇತಿಹಾಸದಲ್ಲೇ ಹೊಸದು. ಇನ್ನಾವುದಕ್ಕೂ ಸಾಧ್ಯವಾಗದಷ್ಟರ ಮಟ್ಟಿಗೆ ಪ್ರಪಂಚದ ಸ್ಥಿತಿಯನ್ನೆ ವ್ಯತ್ಯಾಸಗೊಳಿಸಿದೆ. ಇನ್ನೂ ವ್ಯತ್ಯಾ ಸಗೊಳಿಸುತ್ತಿದೆ. ಆಧುನಿಕ ಯುರೋಪ್ ಮತ್ತು ಅಮೆರಿಕಗಳ ನಾಗರಿಕತೆಗೂ ಗ್ರೀಕ್ ನಾಗರಿಕತೆಗೂ ಯಾವ ಸಜೀವ ಸಂಬಂಧವೂ ಇಲ್ಲ. ಸುಖಜೀವನವೇ ಮಾನವನ ಬಾಳ್ವೆಯ ನಿಜವಾದ ಮುಖ್ಯ ಗುರಿ ಎಂಬ ಆಧುನಿಕ ಭಾವನೆಯು ಗ್ರೀಕ್ರದು. ಉಳಿದೆಲ್ಲ ಪುರಾತನ ಸಂಸ್ಕೃತಿಗಳಿಗೆ ಇದು ತೀರ ಅಪರಿ ಚಿತ, ಗ್ರೀಕರು, ಭಾರತೀಯರು, ಚೀಣೀಯರು, ಇರಾಣಿಗಳು ಎಲ್ಲರೂ ಜೀವನದಲ್ಲಿ ಒಂದು ಸಮತೂಕ ಮತ್ತು ಸಮರಸತೆಯನ್ನು ಕೊಟ್ಟು, ನಮ್ಮ ಎಲ್ಲ ಕಾರ್ಯಗಳಿಗೆ ಹಿನ್ನೆಲೆಯಾದ ಒಂದು ಜೀವನ ಧರ್ಮ ಮತ್ತು ದರ್ಶನದ ಅನ್ವೇಷಣೆಯಲ್ಲಿದ್ದರು. ಈ ಆದರ್ಶವು ಜೀವನದ ಪ್ರತಿಯೊಂದು ಅಂಗದಲ್ಲಿ ಸಾಹಿತ್ಯ ದಲ್ಲಿ ಕಲೆಯಲ್ಲಿ--ಸಂಸ್ಥೆಗಳಲ್ಲಿ ಎದ್ದು ನೋಡಿ ಒಂದು ಸಮಸ್ಥಿತಿಯನ್ನು ಸಾಮರಸ್ಯವನ್ನು ಉ೦ಟುಮಾಡುತ್ತದೆ. ಪ್ರಾಯಶಃ ಈ ಕಲ್ಪನೆಗಳು ಪೂರ್ಣ ಸಾಧುವಲ್ಲದಿರಬಹುದು ; ಜೀವ ನದ ವಾಸ್ತವಚಿತ್ರವು ಬೇರೆ ಇದ್ದಿರಬಹುದು. ಆದರೂ ಇಂದಿನ ಯೂರೋಪ್ ಮತ್ತು ಅಮೆರಿಕದ ದೃಷ್ಟಿ ಗೂ ಪುರಾತನ ಗ್ರೀಕರ ಜೀವನ ದೃಷ್ಟಿ ಮತ್ತು ಪ್ರವೇಶಕ್ಕೂ ಇರುವ ಅಜಗಜಾಂತರವನ್ನು ಗಮನಿಸುವುದು ಒಳ್ಳೆಯದು. ಆಧುನಿಕ ಜೀವನದ ಕಠಿನ ವಿಧ್ವಂಸಕ ಜ್ವಾಲೆಯಿಂದ ತಪ್ತ ಜೀವ ನಕ್ಕೊಂದು ತಂಪನ್ನೆ ರಚಲು, ಅಥವ ತಮ್ಮ ಅಂತರಾತ್ಮದ ಯಾವುದೊ ಯಾತನೆಗೆ ಸಮಾಧಾನ ಕೊಡಲು ಅಮೆರಿಕನರು ಯುರೋಪಿಯನ್ರು ತಮ್ಮ ವಿರಾಮ ಕಾಲದಲ್ಲಿ ಗ್ರೀಕರನ್ನು ಸ್ತೋತ್ರ ಮಾಡುತ್ತಾರೆ ಮತ್ತು ಅವರೊಂದಿಗೆ ದೂರದ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತಾರೆ.
{{gap}}ಪೂರ್ವದಲ್ಲಾಗಲಿ, ಪಶ್ಚಿಮದಲ್ಲಿ ಆಗಲಿ ಪ್ರತಿಯೊಂದು ದೇಶಕ್ಕೆ ಮತ್ತು ಜನಕ್ಕೆ ಒಂದು ವ್ಯಕ್ತಿತ್ವವಿದೆ ; ಒಂದು ಸಂದೇಶವಿದೆ; ಮತ್ತು ಆ ವ್ಯಕ್ತಿತ್ವವು ಜೀವನದ ಸಮಸ್ಯೆಗಳನ್ನು<noinclude></noinclude>
iapzby4gk54urs5z5jnwswtoph1mzb2
ಪುಟ:ಭಾರತ ದರ್ಶನ.djvu/೧೪೪
104
85036
321376
229189
2026-05-20T09:25:59Z
Shreelatha.Halemane
7642
/* Validated */
321376
proofread-page
text/x-wiki
<noinclude><pagequality level="4" user="Shreelatha.Halemane" />{{rh||ಯುಗಾಂತರಗಳು|೧೨೭}}</noinclude>ತನ್ನದೇ ಒಂದು ವೈಶಿಷ್ಟ್ಯ ಮಾರ್ಗದಿಂದ ಬಿಡಿಸಲು ಯತ್ನಿಸಿದೆ. ಗ್ರೀಸಿಗೂ ಒಂದು ನಿರ್ದಿಷ್ಟ ಸ್ಥಾನವಿದೆ ; ಆ ದಾರಿಯಲ್ಲಿ ಅದು ಅತ್ಯುನ್ನತ ಸ್ಥಾನ; ಅಂತೆಯೇ ಭಾರತ, ಚೀಣ ಮತ್ತು ಇರಾಣ, ಪ್ರಾಚೀನ ಭಾರತಕ್ಕೂ ಪ್ರಾಚೀನ ಗ್ರೀಸಿಗೂ ಎಷ್ಟೊ ಅಂತರವಿದ್ದರೂ ಪ್ರಾಚೀನ ಭಾರತ ಮತ್ತು ಚೀನಗಳ ಮಧ್ಯೆ ಎಷ್ಟೋ ಭಿನ್ನತೆ ಇದ್ದರೂ ಒಂದೇ ಭಾವನಾದೃಷ್ಟಿ ಇರುವಂತೆ ಕೆಲವು ವಿಷಯಗಳಲ್ಲಿ ಸಾಮ್ಯವಿದೆ. ಎಲ್ಲರಿಗೂ ಒಂದು ವಿಶಾಲವಾದ, ಸಹನೆಯ ಅಸಂಸ್ಕೃತ ದೃಷ್ಟಿ ಇತ್ತು. ಜೀವನೋತ್ಸಾಹವಿತ್ತು ಮತ್ತು ಸನಾತನ ಜನಾಂಗದ ಅನುಭವ ಪೂರ್ಣ ವಿವೇಕವಿತ್ತು. ಪ್ರತಿಯೊಂದು ಜನಾಂಗವೂ ತನ್ನ ಅಂತಃ ಪ್ರವೃತ್ತಿಗನುಗುಣವಾಗಿ, ತನ್ನ ಪ್ರಾಕೃತಿಕ ಸನ್ನಿವೇಶಗಳ ಪ್ರಭಾವವನ್ನನುಸರಿಸಿ ವಿಕಾಸಹೊಂದಿತು, ಮತ್ತು ಇತರ ದೃಷ್ಟಿಗಳಿಗಿಂತ ತನಗೆ ಯುಕ್ತ ತೋರಿದ ಜೀವನದ ಯಾವುದೋ ಒಂದು ದೃಷ್ಟಿಗೆ ಪ್ರಾಶಸ್ತ್ರ ಕೊಟ್ಟಿತು. ಈ ಪ್ರಾಶಸ್ಯವು ಪ್ರತಿಯೊಂದು ಜನಾಂಗಕ್ಕೂ ಬೇರೆಯಾಗಿತ್ತು. ಗ್ರೀಕ್ ಜನಾಂಗವು ವಾಸ್ತವಜೀವನಕ್ಕೆ ಪ್ರಾಶಸ್ತ್ರ ಕೊಟ್ಟರು. ತಮ್ಮ ಸುತ್ತಮುತ್ತಲಿನ ಸೌಂದಯ್ಯದಲ್ಲಿ ಅಥವ ಅವರೇ ಸೃಷ್ಟಿಸಿದ ಸೌಂದರದಲ್ಲಿ ಆನಂದವನ್ನು ಅನುಭವಿಸುತ್ತಿದ್ದರು. ಭಾರತೀಯರು ಸಹ ವಾಸ್ತವ ಜೀವನದಲ್ಲಿ ಈ ಆನಂದವನ್ನೂ ಮತ್ತು ಸಾಮರಸ್ಯವನ್ನೂ ಪಡೆದರು; ಆದರೆ ಅದರ ಜೊತೆಗೆ ಅವರ ದೃಷ್ಟಿಯು ಇನ್ನೂ ಆಳವಾದ ಜ್ಞಾನಾರ್ಜನೆಯ ಕಡೆಗೆ ನೆಟ್ಟಿತ್ತು ಮತ್ತು ಅವರ ಮನಸ್ಸು ವಿಚಿತ್ರ ಪ್ರಶ್ನೆಗಳ ಕಡೆಗೆ ಹರಿಯುತ್ತಿತ್ತು. ಚೀಣೀಯರು ಈ ಪ್ರಶ್ನೆಗಳನ್ನು, ಅವುಗಳ ರಹಸ್ಯವನ್ನು ಅರಿತುಕೊಂಡು ಅವುಗಳ ಜಟಿಲತೆಯಲ್ಲೇ ಸಿಕ್ಕಿಕೊಳ್ಳದ ವಿವೇಕವನ್ನು ತೋರಿಸಿದರು. ತನ್ನ ತನ್ನ ವೈಶಿಷ್ಟದ ಮಾರ್ಗದಲ್ಲಿ ಪ್ರತಿಯೊಂದು ಜನಾಂಗವೂ ತನ್ನ ಜೀವನದ ಪೂರ್ಣತೆಯನ್ನು ಮತ್ತು ಸೌಂದರ್ಯವನ್ನು ವ್ಯಕ್ತಗೊಳಿಸಲು ಪ್ರಯತ್ನ ಪಟ್ಟಿತು. ಭಾರತ ಮತ್ತು ಚೀನದೇಶಗಳ ತಳಹದಿಯು ಬಲವಾಗಿತ್ತು ; ಅವಕ್ಕೆ ಹೆಚ್ಚಿನ ಸಹನ ಸಾಮರ್ಥ್ಯವಿತ್ತು ಎಂಬುದು ಚರಿತ್ರೆಯಿಂದ ದೃಢವಾಗಿದೆ. ಬಹಳ ತೊನೆದಾಡಿ, ಹೀನಸ್ಥಿತಿಗೆ ಬಂದು, ಭವಿಷ್ಯವು ಅನಿಶ್ಚಿತವಿದ್ದರೂ ಇನ್ನೂ ಜೀವಂತವಾಗಿವೆ. ಪುರಾತನ ಗ್ರೀಸ್ ಎಷ್ಟೇ ವೈಭವ ದಿಂದ ಮೆರೆದರೂ ಅತ್ಯಲ್ಪ ಕಾಲ ಬಾಳಿತು. ಆ ಸಂಸ್ಕೃತಿಯು ತನ್ನ ಅದ್ಭುತ ಸಾಧನೆಗಳಲ್ಲಿ, ಅನಂತರ ಬಂದ ಸಂಸ್ಕೃತಿಗಳ ಸಂಸ್ಕಾರದಲ್ಲಿ, ತನ್ನ ಕ್ಷಣಿಕ, ಉಜ್ಜಲ ತುಂಬು ಜೀವನದ ನೆನಪಿನಲ್ಲಿ ಉಳಿಯಿತೆ ವಿನಾ ದೀರ್ಘಕಾಲ ತಾನೇ ಬಾಳಲಿಲ್ಲ. ಪ್ರಾಯಶಃ ಪ್ರಸಕ್ತ ಜೀವನಕ್ಕೆ ಹೆಚ್ಚು ಬೆಲೆ ಕೊಟ್ಟು ದರಿಂದ ಬೇಗಪ್ರಾಚೀನತೆಯ ಪದರಿನಲ್ಲಡಗಿಹೋಯಿತು.
{{gap}}ಇಂದಿನ ಯುರೋಪಿನ ಜನಾಂಗಗಳು ತಾವು ಹೆಲೆನಿಕ್ ಸತ್ವದ ಶಿಶುಗಳೆಂದು ಹೆಮ್ಮೆಗೊಳ್ಳುತ್ತಿದ್ದರೂ ಪ್ರಾಯಶಃ ಭಾರತವೇ ಪುರಾತನ ಗ್ರೀಸಿನ ಸತ್ವಕ್ಕೆ ದೃಷ್ಟಿಗೆ ಹೆಚ್ಚು ಹತ್ತಿರವಿದೆ. ನಮ್ಮ ಆನುವಂಶೀಯ ನಿಶ್ಚಿತ ಭಾವನೆಗಳು ನಮ್ಮ ವಿಚಾರಪೂರ್ಣದೃಷ್ಟಿಯನ್ನು ಮಬ್ಬುಗೊಳಿಸಿರುವುದರಿಂದ ಇದನ್ನು ನಾವು ಮರೆತಿದ್ದೇವೆ. ಭಾರತವು ಧರ್ಮ, ದರ್ಶನ, ಧ್ಯಾನ ಮತ್ತು ತತ್ವವಿಚಾರ ಗಳಲ್ಲಿ ಮಗ್ನವಾಗಿದೆ ; ಈ ಪ್ರಪಂಚದ ವಿಷಯವು ಅದಕ್ಕೆ ಬೇಕಿಲ್ಲ; ಪರಲೋಕ ಮತ್ತು ಜನ್ಮಾಂತರಗಳ ಕನಸು ಕಾಣುತ್ತ ಮೈಮರೆತಿದೆ ಎಂಬ ಪ್ರತೀತಿ ಇದೆ. ಪ್ರಾಯಶಃ ಈ ರೀತಿ ಹೇಳುವರು, ಭಾರತವು ಮುಂದೆಯೂ ಅದೇರೀತಿ ಚಿಂತಾಮಗ್ನವಾಗಿದ್ದರೆ, ಕಲ್ಪನಾ ಪ್ರಪಂಚದಲ್ಲೇ ಇದ್ದರೆ ಯಾರ ಅಡ್ಡಿಯೂ ಇಲ್ಲದೆ ಪ್ರಪಂಚದ ಸುಖವನ್ನೆಲ್ಲ ತಮ್ಮದನ್ನಾಗಿ ಅನುಭವಿಸ ಬಹುದು, ಜೀವನದ ಪೂರ್ಣತೆಯನ್ನು, ಜೀವನಾನಂದವನ್ನು ನಿರಾತಂಕವಾಗಿ ಸವಿಯಬಹುದು ಎಂಬ ಅಭಿಲಾಷೆಯಿಂದ ಹೇಳುತ್ತಿರಬಹುದು. ನಿಜ, ಇಂಡಿಯ ಆ ರೀತಿಯಲ್ಲಿ ಇದ್ದುದೂ ನಿಜ, ಅದಕ್ಕಿಂತ ಹೆಚ್ಚಾಗಿ ಬಾಳಿದ್ದೂ ನಿಜ. ಬಾಲ್ಯಾವಸ್ಥೆಯ ನಿಷ್ಕಾ ಪಟ್ಯವನ್ನೂ, ಉದಾಸೀನತೆಯನ್ನೂ ಭಾರತವು ಅರಿತಿದೆ; ಯೌವನದ ಭಾವೋದ್ರೇಕವನ್ನೂ ಪರವಶತೆಯನ್ನೂ ಅರಿತಿದೆ ; ಬಹು ಕಾಲದ ಸುಖ ದುಃಖಗಳ ಅನುಭವದಿಂದ ಬರುವ ಪರಿಪಕ್ವ ಜೀವನದ ತುಂಬು ವಿವೇಕವನ್ನು ಅರಿತಿದೆ; ಮತ್ತು ಪುನಃ ತನ್ನ ಬಾಲ್ಯಾವಸ್ಥೆಯನ್ನು, ಯೌವನವನ್ನು, ಪರಿಪಕ್ವ ಜೀವನವನ್ನು<noinclude></noinclude>
7e5mx5914e7erhpmit88wz1qjb7loif
ಪುಟ:ಭಾರತ ದರ್ಶನ.djvu/೧೫೪
104
85046
321375
253140
2026-05-20T09:25:36Z
Shreelatha.Halemane
7642
/* Validated */
321375
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಯುಗಾಂತರಗಳು|left=|right=೧೩೭}}ನಾಟಕದಲ್ಲಿ ಪಾತ್ರವಹಿಸುತ್ತಿದ್ದರು. ಈ ಪದ್ಧತಿಯು ಗ್ರೀಕರಲ್ಲಿ ಇರಲಿಲ್ಲ. ಗ್ರೀಕ್ ಮತ್ತು ಸಂಸ್ಕೃತ</br>ಗಳೆರಡರಲ್ಲೂ ಪ್ರಕೃತಿಯ ಸಾಮೀಪ್ಯದ ಅರಿವು ಇದೆ ಮತ್ತು ಮಾನವಜೀವನ ಪ್ರಕೃತಿಯ ಒಂದು</br>ಅಂಗ ಎಂಬ ಭಾವನೆ ಇದೆ. ಅವುಗಳಲ್ಲಿ ಒಂದು ವಿಶೇಷಭಾವನಾಶಕ್ತಿ ಇದೆ. ಅವುಗಳಲ್ಲಿ ಚಿತ್ರಿತವಾದ</br>ಜೀವನವು ಅರ್ಥಗರ್ಭಿತವೂ, ಅರ್ಥಪೂರ್ಣವೂ ಕಾವ್ಯಮಯವೂ ಇದ್ದಂತೆ ತೋರುತ್ತದೆ.</br>
{{gap}}ಗ್ರೀಕ್ ನಾಟಕಗಳ ಮುಖ್ಯ ತಳಹದಿಯು ದುರಂತ, ಮತ್ತು ದೌರ್ಜನ್ಯದ ಪ್ರಶ್ನೆ. ಮನುಷ್ಯನು</br>ದುಃಖಪಡುವುದೇಕೆ? ಪ್ರಪಂಚದಲ್ಲಿ ಪಾಪ ಇರುವುದೇಕೆ? ಧರ್ಮ ಮತ್ತು ದೇವರ ರಹಸ್ಯವೇನು?</br>ಸರ್ವಶಕ್ತ ವಿಧಿಯ ಎದುರು ದಾರಿ ಕಾಣದೆ ಗುರಿಯಿಲ್ಲದೆ ಹೋರಾಡುವ ಕ್ಷಣಿಕ ಜೀವನದ ಮನುಷ್ಯನು</br>ಎಷ್ಟು ದಯಾಪಾತ್ರ ಪ್ರಾಣಿ. ವಿಧಿ ನಿಯಮವನ್ನು ಎಲ್ಲರೂ ಅನುಭವಿಸಲೇಬೇಕು. ಯುಗಯುಗಗಳು</br>ಕಳೆದರೂ ಆ ನಿಯಮದಿಂದ ಕೂದಲೆಳೆಯಷ್ಟೂ ಕದಲಲು ಸಾಧ್ಯವಿಲ್ಲ. ಕಷ್ಟ ಸಹಿಷ್ಣುತೆಯಿಂದ</br>ಮನುಷ್ಯನು ಪಾಠ ಕಲಿಯಬೇಕು. ಅದೃಷ್ಟವಿದ್ದರೆ ಕಷ್ಟದಿಂದ ಪಾರಾಗುತ್ತಾನೆ ಎನ್ನುವುದೇ</br>ಗ್ರೀಕ್ ನಾಟಕಗಳ ಶ್ರುತಿ.</br>
{{gap}}{{gap}}{{gap}}ಏರಿಬಹ ಅಲೆಗಳಲಿ ಬಿರುಗಾಳಿ ಎದುರಿನಲಿ</br>
{{gap}}{{gap}}{{gap}}ದೂರ ತೀರವ ಸೇರ್ದ ಮಾನವನೆ ಸುಖಿಯು;</br>
{{gap}}{{gap}}{{gap}}ಹೋರಾಡಿ ಧೈರ್ಯದಲಿ ಸ್ವಾತಂತ್ರವನ್ನು ಗಳಿಸಿ</br>
{{gap}}{{gap}}{{gap}}ವೀರನಹ ಮಾನವನೆ ಧನ್ಯಾತ್ಮ ಸುಖಿಯು;</br>
{{gap}}{{gap}}{{gap}}ಅಣ್ಣ ತಮ್ಮದಿರಲ್ಲೆ ಭೇದ ತಾ ತೋರುತಿದೆ</br>
{{gap}}{{gap}}{{gap}}ಧನಕನಕವಸ್ತುವಿನಲಿ ಶಕ್ತಿ ಧೈರ್ಯದಲಿ;</br>
{{gap}}{{gap}}{{gap}}ಜೀವನದ ನಾಟಕದ ಕಲೆಯ ವೈಚಿತ್ರ್ಯವಿದು</br>
{{gap}}{{gap}}{{gap}}ವಿಧಿ ಲಿಖಿತ ನಿಯಮವಿದ ಮೀರಿದವರಿಲ್ಲ</br>
{{gap}}{{gap}}{{gap}}ತಿಳಿದವರು ಬಹಳಿಲ್ಲ ಕಾಲಗರ್ಭದಲಿ.</br>
{{gap}}{{gap}}{{gap}}ಜನಕೋಟ, ಆಶೆಯಲಿ ತೇಲುತಿದೆ ಸಾಗುತಿದೆ</br>
{{gap}}{{gap}}{{gap}}ಜಯವಕ್ಕು ಕೆಲಬರಿಗೆ ಸೋಲು ಅನಿಬರಿಗೆ</br>
{{gap}}{{gap}}{{gap}}ಅಳಿವುದು ಆಶೆಯದು ಮೊಳೆತು ತಾ ಚಿಗುರುವುದು.(<small>ಯುರಿಪಿಡೀಸನ 'ಬ್ಯಾಕಿ' ನಾಟಕದಿಂದ</small>)</br>
ಮನುಷ್ಯನು ಸಂಕಟದಲ್ಲಿ ನರಳಿ ಜೀವನವನ್ನು ಎದುರಿಸುವ ಶಕ್ತಿಯನ್ನು ಪಡೆಯುತ್ತಾನೆ. ಆದರೆ</br>ಯಾರೂ ಬಿಡಿಸಲಾರದ ಅಂತಿಮ ಸಮಸ್ಯೆಯೊಂದಿದೆ; ತನ್ನ ಪ್ರಶ್ನೆಗಳಿಗೆಲ್ಲ ಉತ್ತರ ದೊರೆಯುವುದಿಲ್ಲ.</br>ಪಾಪ ಪುಣ್ಯದ ಪ್ರಶ್ನೆಯನ್ನು ಬಿಡಿಸಲು ಸಾಧ್ಯವಿಲ್ಲ ಎಂದೂ ಅರಿಯುತ್ತಾನೆ.</br>{{gap}}{{gap}}{{gap}}{{gap}}{{gap}}ಒಗಟುಗಳೆಷ್ಟೋ ಇರಬಹುದು</br>
{{gap}}{{gap}}{{gap}}{{gap}}{{gap}}ನಿರಾಶೆ ಭಯ ಕವಿದಿರಬಹುದು</br>
{{gap}}{{gap}}{{gap}}{{gap}}{{gap}}ದೇವಸೃಷ್ಟಿಗದು ಮಿತಿಯಿಲ್ಲ</br>
{{gap}}{{gap}}{{gap}}{{gap}}{{gap}}ಮಾನವನೆಣಿಸುವ ದಾರಿಯು ಬೇರೆ</br>
{{gap}}{{gap}}{{gap}}{{gap}}{{gap}}ದೈವ ನಿಯಾಮಕ ದಾರಿಯೇ ಬೇರೆ.(<small>ಯುರಿಪಿಡೀಸನ್ 'ಆಲ್ಸೆಸ್ಟಿಸ್' ನಾಟಕದಿಂದ</small>)</br>
ಗ್ರೀಕ್ ದುರಂತ ನಾಟಕಗಳಲ್ಲಿ ಕಂಡುಬರುವ ಶಕ್ತಿ ಮತ್ತು ಗಾಂಭೀರ್ಯವುಳ್ಳ ನಾಟಕಗಳು ಸಂಸ್ಕೃತ</br>ದಲ್ಲಿ ಯಾವುದೂ ಇಲ್ಲ. ನಿಜವಾಗಿ ನೋಡಿದರೆ ಸಂಸ್ಕೃತದಲ್ಲಿ ದುರಂತ ನಾಟಕಗಳೇ ಇಲ್ಲ. ಅದಕ್ಕೆ</br>ಕಾರಣ ನಾಟಕ ದುರಂತದಲ್ಲಿ ಕೊನೆಗಾಣಕೂಡದೆಂದು ನಿಷೇಧವಿತ್ತು. ಜನಸಾಮಾನ್ಯದಲ್ಲಿ</br>ಬೇರೂರಿದ್ದ ಮತ ಧರ್ಮಗಳನ್ನು ನಾಟಕ ಕರ್ತರು ಒಪ್ಪಿದ್ದರಿಂದ ಅಂತಹ ಮೂಲ ಪ್ರಶ್ನೆಗಳನ್ನು</br>ನಾಟಕಗಳಲ್ಲಿ ಚರ್ಚಿಸಲು ಅವಕಾಶವೇ ಇರಲಿಲ್ಲ. ಈ ಮತಧರ್ಮದಲ್ಲಿ ಪುನರ್ಜನ್ಮ ಮತ್ತು ಕರ್ಮ</br>ಫಲ ತತ್ವಗಳು ಮುಖ್ಯವಾದವು. ಆಕಸ್ಮಿಕವಾದ ಅಥವ ಕರ್ಮ ಫಲವಲ್ಲದ ದುಃಖಕ್ಕೆ ಅವಕಾಶವೇ</br>ಇರಲಿಲ್ಲ. ಏಕೆಂದರೆ ಇಂದಿನ ಜನ್ಮದಲ್ಲಿ ಅನುಭವಿಸುವುದೆಲ್ಲ ಹಿಂದಿನ ಜನ್ಮದ ಕರ್ಮಫಲ. ಗುರಿ</br><noinclude></noinclude>
2fn19f0s3cb6lsgu7cpappjfgxd3v6t
ಪುಟ:ಭಾರತ ದರ್ಶನ.djvu/೨೦೧
104
85093
321332
229205
2026-05-20T09:15:10Z
Pragathi. BH
7585
/* Validated */
321332
proofread-page
text/x-wiki
<noinclude><pagequality level="4" user="Pragathi. BH" />{{rh|೧೯೬|ಭಾರತ ದರ್ಶನ|}}</noinclude>ವಲ್ಲಭಿ ವಿಶ್ವವಿದ್ಯಾನಿಲಯವೂ ಇದ್ದವು. ಗುಪ್ತರ ಕಾಲದಲ್ಲಿ ಉಜ್ಜಯಿನಿ ವಿಶ್ವವಿದ್ಯಾನಿಲಯವು ಬಹು ಪ್ರಾಮುಖ್ಯತೆಗೆ ಬಂದಿತು. ದಕ್ಷಿಣದಲ್ಲಿ ಅಮರಾವತಿ ವಿಶ್ವವಿದ್ಯಾನಿಲಯವಿತ್ತು.
{{gap}}ಆದರೆ ಈ ಯುಗಕ್ಕೂ ಅಸ್ತ ಕಾಲವು ಸಮೀಪಿಸಿದ್ದ೦ತೆ ಇದೆಲ್ಲವೂ ಅನಾಗರಿಕತೆಯ ಅಪರಾಹ್ನದಂತೆ ತೋರುತ್ತದೆ. ಪ್ರಾತಸ್ಸಮಯದ ಹೊಂಗನಸು ಮಾಯವಾಗಿ, ಮಧ್ಯಾನ್ಹದ ತೀಕ್ಷ್ಣತೆಯೂ ಕಳೆದಿತ್ತು. ದಕ್ಷಿಣದಲ್ಲಿ ಅಂತಶಕ್ತಿಯೂ, ಕಾರ್ಯಪಟುತ್ವವೂ ಇನ್ನೂ ಉಳಿದಿತ್ತು. ಇದೂ ಕೆಲವು ಶತಮಾನಗಳ ಕಾಲ ಬಾಳಿತು. ಭಾರತೀಯ ವಲಸೆರಾಜ್ಯಗಳಲ್ಲಿನ ಶಕ್ತಿ ಪೂರ್ಣ ತುಂಬು ಜೀವನದಿಂದ ಇನ್ನೂ ಐದುನೂರು ವರ್ಷಗಳು ಈ ಸಂಸ್ಕೃತಿ ಜೀವಂತವಿತ್ತು. ಆದರೆ ಹೃದ್ರೋಗವು ಆರಂಭವಾಗಿ ತಾಡನ ನಿದಾನವಾಗಿತ್ತು. ಕ್ರಮೇಣ ಹೃದಯ ಸ್ತಂಭನೆಯಾಗಿ ಅಂಗಾಂಗಗಳೂ ನಿರ್ಜಿವವಾದವು. ಎಂಟನೆಯ ಶತಮಾನದಿಂದೀಚೆಗೆ ಶಂಕರನ ತರುವಾಯ ತತ್ತ್ವ ಶಾಸ್ತ್ರದಲ್ಲಿ ವಿಭೂತಿ ಪುರುಷರು ಯಾರೂ ಬಂದಿಲ್ಲ. ಅನೇಕ ಟೀಕಾಕಾರರು ಮತ್ತು ನೈಯಾಯಿಕರು ಮಾತ್ರ ಬಂದಿದ್ದಾರೆ. ಶಂಕರನೂ ದಕ್ಷಿಣ ಭಾರತದವನು. ಆತನಲ್ಲಿ ಕಂಡ ಅನ್ವೇಷಣ ಕುತೂಹಲ ಮಾನಸಿಕ ಸಾಹಸದ ಭಾವನೆಗಳಿಗೆ ಬದಲು ಕಠಿಣ, ಆಡಂಬರದ ತರ್ಕ ಮತ್ತು ಟೀಕೆಗಳಿಗೆ ಪ್ರಾಧಾನ್ಯತೆ ದೊರೆಯುತ್ತವೆ. ಬ್ರಾಹ್ಮಣ ಮತ್ತು ಬೌದ್ದ ಮತಗಳೆರಡೂ ಅವನತಿಗಿಳಿದು ಹೀನ ಪೂಜಾ ಪದ್ಧತಿಗೆ ಎಡೆಕೊಡುತ್ತವೆ. ಅದರಲ್ಲೂ ತಂತ್ರ ಪೂಜೆ ಮತ್ತು ಯೋಗಶಾಸ್ತ್ರದ ದುರುಪಯೋಗ ಹೆಚ್ಚುತ್ತಿದೆ.
{{gap}}ಸಾಹಿತ್ಯದಲ್ಲಿ ಎಂಟನೆಯ ಶತಮಾನದ ಭವಭೂತಿಯೇ ಕೊನೆಯವನು. ಅನೇಕ ಗ್ರಂಥಗಳು ಹುಟ್ಟಿದರೂ ಶೈಲಿಯು ಹೆಚ್ಚು ಜಟಿಲವೂ, ಕಠಿಣವೂ ಆಗುತ್ತದೆ. ವಿಷಯಭಾವನೆಯಲ್ಲಾಗಲಿ, ನಿರೂಪಣೆಯಲ್ಲಾಗಲಿ ಯಾವ ನವೀನತೆಯೂ ಇಲ್ಲ. ಗಣಿತ ಶಾಸ್ತ್ರದಲ್ಲಿ ೧೨ ನೆಯ ಶತಮಾನದಲ್ಲಿದ್ದ ಎರಡನೆಯ ಭಾಸ್ಕರನೆ ಕೊನೆಯವನು. ಕಲೆಯಲ್ಲಿ, ಇ. ಬಿ. ಹ್ಯಾವೆಲ್ ಇನ್ನೂ ಸ್ವಲ್ಪ ಹೆಚ್ಚು ಕಾಲಾವಕಾಶವನ್ನು ಕೊಟ್ಟಿದ್ದಾನೆ.ಆತನ ಅಭಿಪ್ರಾಯದಂತೆ ಏಳು ಮತ್ತು ಎಂಟನೆಯ ಶತಮಾನಗಳಲ್ಲಿ ಭಾರತದಲ್ಲಿ ಉನ್ನತ ಶಿಲ್ಪ ಕಲೆ ಮತ್ತು ಚಿತ್ರಕಲೆ ರೂಪುಗೊಳ್ಳುವವರೆಗೂ ಕಲೆಯು ಭಾವ ವಿನ್ಯಾಸದ ಸಂಪೂರ್ಣತೆ ಪಡೆಯಲಿಲ್ಲ. ಯೂರೋಪಿನಲ್ಲಿ ಏಳು ಅಥವ ಎಂಟನೆಯ ಶತಮಾನದಿಂದ ಹದಿನಾಲ್ಕನೆಯ ಶತಮಾನದವರೆಗೆ ಗಾಢಿಕ್ಕಿ ಅತ್ಯುನ್ನತ ಮಟ್ಟಕ್ಕೇರಿದಂತೆ ಭಾರತದಲ್ಲಿ ಸಹ ಅದೇ ಕಾಲ ಭಾರತೀಯ ಕಲೆಗೆ ಮಹೋನ್ನತಿಯ ಕಾಲವಾಗಿತ್ತು. ಹದಿನಾರನೆಯ ಶತಮಾನದಿಂದ ಪ್ರಾಚೀನ ಭಾರತೀಯ ಸೃಷ್ಟಿ ಕೌಶಲ್ಯ ಕ್ಷೀಣಿಸುತ್ತ ಬಂದಿತು. ಈ ಅಭಿಪ್ರಾಯ ಎಷ್ಟು ಸಾಧುವೋ ನಾನರಿಯೆ. ಆದರೆ ಕಲಾ ಪ್ರಪಂಚದಲ್ಲಿ ಸಹ ಉತ್ತರ ಭಾರತಕ್ಕಿಂತ ಹೆಚ್ಚು ಕಾಲ ದಕ್ಷಿಣ ಭಾರತ ತನ್ನ ಕಲಾಪ್ರೌಢಿಮೆಯನ್ನೂ ಕಾಯ್ದು ಕೊಂಡು ಬಂದಿತು.
{{gap}}ಕೊನೆಯ ಬಾರಿ ದೊಡ್ಡ ವಲಸೆಗಾರರ ತಂಡ ಸೀಮೋಲ್ಲಂಘನಕ್ಕಾಗಿ ಹೊರಟಿದ್ದು ದಕ್ಷಿಣ ಇ೦ಡಿಯದಿಂದ ಒಂಭತ್ತನೆಯ ಶತಮಾನದಲ್ಲಿ. ಆದರೆ ಚೋಳರಾಜರು ಹನ್ನೊಂದನೆಯ ಶತಮಾನದಲ್ಲಿ ಶ್ರೀವಿಜಯನನ್ನು ಸೋಲಿಸಿ ಗೆಲ್ಲುವವರೆಗೂ ದೊಡ್ಡ ನೌಕಾ ಬಲವುಳ್ಳ ರಾಜರಾಗಿದ್ದರು.
{{gap}}ಈ ರೀತಿ ಭಾರತ ಬಲಹೀನವಾಗುತ್ತ ತನ್ನ ಸೃಷ್ಟಿ ಸಾಮರ್ಥವನ್ನೂ, ಜೀವ ಸತ್ವವನ್ನೂ ಕಳೆದುಕೊಳ್ಳುತ್ತ ಬಂದಿತು. ಆದರೆ ಈ ಹೃದ್ರೋಗ ಬಹಳ ಹಿಂದೆಯೇ ಮೊದಲು ಉತ್ತರದಲ್ಲಿ ಆರಂಭವಾಗಿ ಕ್ರಮೇಣ ದಕ್ಷಿಣಕ್ಕೂ ಹರಡಿ ಆರಂಭವಾಗಿ ಅನೇಕ ಶತಮಾನಗಳ ಕಾಲ ನರಳಿ ಕೊನೆಗೆ ಕ್ಷೀಣದೆಶೆಗೆ ಬಂದಿತು, ಈ ರಾಜಕೀಯ ಅವನತಿಗೆ, ಸಾಂಸ್ಕೃತಿಕ ಜಡತ್ವಕ್ಕೆ ಕಾರಣಗಳೇನು ? ವ್ಯಕ್ತಿಗಳ ವಿನಾಶಕ್ಕೆ ಕಾರಣವಾದಂತೆ ನಾಗರಿಕತೆಗಳ ವಿನಾಶಕ್ಕೂ ಕಾಲಮಹಿಮೆಯೇ ಕಾರಣವೇ ಅಥವ ಅದೊಂದು ಅಲೆಯ ಉಬ್ಬರವಿಳಿತವೇ ? ಅಥವ ಬಾಹ್ಯ ಕಾರಣಗಳ ಮತ್ತು ಪರಧಾಳಿಗಳ ಪರಿಣಾಮವೆ ? ರಾಜಕೀಯ ಸ್ವಾತಂತ್ರವು ಹೋದ ಮರುಕ್ಷಣದಲ್ಲಿಯೇ ಭಾರತೀಯ ತತ್ತ್ವಶಾಸ್ತ್ರದ ಪಟುತ್ವವೂ ಕುಂದಿತು ಎಂದು ರಾಧಾಕೃಷ್ಣ೯ರ ಅಭಿಪ್ರಾಯವಿದೆ; ಸಿರ್ಲ್ವೆ ಲೆವಿಯ ಅಭಿಪ್ರಾಯವೂ ಅದೇ ಇದೆ.<noinclude></noinclude>
85dt55z03ht485j8rytd0x98bt064pr
ಪುಟ:ಭಾರತ ದರ್ಶನ.djvu/೨೦೨
104
85094
321333
229208
2026-05-20T09:15:36Z
Pragathi. BH
7585
/* Validated */
321333
proofread-page
text/x-wiki
<noinclude><pagequality level="4" user="Pragathi. BH" />{{rh||ಯುಗಾಂತರಗಳು|೧೯೭}}</noinclude>{{gap}}ರಾಜಕೀಯ ಸ್ವಾತಂತ್ರವು ಹೋದ ಒಡನೆ ಸಾಂಸ್ಕೃತಿಕ ಅವನತಿಯ ನಿಶ್ಚಯವೆಂಬುದೆಲ್ಲ ನಿಜ. ಆದರೆ ರಾಜಕೀಯ ಸ್ವಾತಂತ್ರದ ನಾಶಕ್ಕೆ ಮೊದಲು ಯಾವುದೋ ಒಂದು ಕ್ಷಯರೋಗ ವಿಲ್ಲದೆ ರಾಜಕೀಯ ಸ್ವಾತಂತ್ರವು ಏಕೆ ಹೋಗಬೇಕು ? ಒಂದು ದೊಡ್ಡ ಬಲಯುತ ರಾಷ್ಟ್ರವು ಸಣ್ಣ ನೆರೆಯ ರಾಜ್ಯವನ್ನು ನುಂಗಬಹುದು. ಆದರೆ ಸರ್ವತೋಮುಖ ಪ್ರಗತಿಯನ್ನು ಪಡೆದು, ಶ್ರೇಷ್ಠ ನಾಗರಿಕತೆಯುಳ್ಳ ವಿಶಾಲ ಭಾರತದಂಥ ದೇಶವು ಅಂತಃಕ್ಷಯ ಅಥವ ಪರಕೀಯರ ವಿಶೇಷ ಯುದ್ಧ ನೈಪುಣ್ಯವಿಲ್ಲದ ಸರದಾಳಿಗೆ ಬಲಿಯಾಗಲು ಕಾರಣವಿಲ್ಲ. ಈ ಒಂದು ಸಾವಿರ ವರ್ಷಗಳ ಅಂತ್ಯದಲ್ಲಿ ಆ ಅಂತಃ ಕ್ಷಯವು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ.
{{gap}}ಪ್ರತಿಯೊಂದು ನಾಗರಿಕತೆಯ ಜೀವನದಲ್ಲಿಯೂ ಅವನತಿ ಮತ್ತು ಛಿದ್ರತೆಯ ಕಾಲಗಳು ಇದ್ದೇ ಇವೆ. ಭಾರತದ ಇತಿಹಾಸದಲ್ಲಿಯೂ ಮೊದಲು ಕಾಲಗಳಿದ್ದವು. ಆದರೆ ಭಾರತವು ಅವೆಲ್ಲವನ್ನೂ ಗೆದ್ದು ಜೀರ್ಣಿಸಿಕೊಂಡಿತ್ತು. ಪುನರುಜ್ಜಿವನ ಪಡೆದಿತ್ತು; ಕೆಲವು ಕಾಲ ತನ್ನೊಳಗೆ ತಾನೆ ಗುಪ್ತವಾಗಿ ಅಡಗಿದ್ದು ಪುನಃ ಹೊಸಶಕ್ತಿಯಿಂದ ಭೋರ್ಗರೆದು ಹೊರಹೊಮ್ಮುತ್ತಿತ್ತು. ಒಳಗೊಂದು ಅಂತ ಶೈಕಿಯ ಜ್ವಾಲೆಯಿತ್ತು. ಹೊಸ ಸಂಪರ್ಕದಿಂದ ಕಳೆಗುಂದಿ, ಅಭಿವೃದ್ಧಿಗೊಂಡು, ಹೊಸದಾಗಿ ಕಂಡರೂ ತನ್ನ ಅಂತಸ್ಸತ್ವವನ್ನೂ ಬಿಡದೆ ಪ್ರಜ್ವಲಿಸುವ ಕಾವು ಇತ್ತು. ಭಾರತದ ಅಸ್ತಿತ್ವವನ್ನು ಅಷ್ಟು ದೀರ್ಘಕಾಲ ಕಾಪಾಡಿಕೊಂಡು ಬಂದ ಈ ಮಾನಸಿಕ ನವ್ಯತೆ, ಈ ಸಂಯೋಜಕಶಕ್ತಿಯು ಈಗ ಮಾಯವಾದವೇನು ? ಅದರ ನಿರ್ದಿಷ್ಟ ಮತಗಳ ಮತ್ತು ಸಾಮಾಜಿಕ ರಚನೆಯ ಕಟ್ಟುಗಳ ಕಾಠಿಣ್ಯ ಬೆಳೆದು ಮನಸ್ಸನ್ನೂ ಕಠಿಣಮಾಡಿದವೇನು ? ಏಕೆಂದರೆ ಜೀವನ ಬೆಳೆಯದೆ ಹೋದರೆ, ವಿಕಾಸನಾಗದೆ ಹೋದರೆ ಭಾವನಾವಿಕಾಸವೂ ಅವಕುಂಠಿತವಾಗುತ್ತದೆ, ಭಾವನೆಯ ಉತ್ಪಾ೦ತಿಯೂ, ಸಂಪ್ರದಾಯಶೀಲವೂ ಎರಡೂ ವಿಚಿತ್ರ ರೀತಿಯಿಂದ ಬಹುಕಾಲದಿಂದ ಭಾರತದಲ್ಲಿ ಸಮಾವೇಶ ಗೊ೦ಡಿದ್ದವು. ಭಾವನೆಗಳು ಆಚರಣೆಯ ಮೇಲೆ ಪ್ರಭಾವ ಬೀರುವುದು ಅನಿವಾರ್ಯವಿತ್ತು ; ಆದರೂ ಹಿಂದಿನವನ್ನು ನಾಶಮಾಡದೆ ತನ್ನದೇ ಒಂದು ವೈಶಿಷ್ಠದಿಂದ ಮಾರ್ಪಾಟು ಮಾಡುತ್ತಿತ್ತು, ಆದರೆ ಭಾವನೆಯಲ್ಲಿ ಕ್ರಾಂತಿಯ ಕಾವು ನಾಶವಾದೊಡನೆ ಅದರ ನಿರ್ಮಾಣ ಶಕ್ತಿ ಕುಂದಿದೊಡನೆ, ಭಾವನೆಯ ಅರ್ಥರಹಿತ ಶುಷ್ಕ ಶಿಷ್ಟಾಚಾರದ ಗಿಳಿಪಾಠದ ಹಿಮ್ಮೇಳವಾಗಿ, ಜೀವನ ಶುಷ್ಕವಾಗಿ, ತನ್ನಿಂದ ತಾನೇ ರಚಿಸಿಕೊಂಡ ಬಲೆಯಲ್ಲಿ ಬಂಧಿತವಾಯಿತು.
{{gap}}ಅನೇಕ ನಾಗರಿಕತೆಗಳು ನಾಶವಾದ ಕತೆಗಳನ್ನು ನಾವು ಕಂಡಿದ್ದೇವೆ. ಇವುಗಳಲ್ಲೆಲ್ಲ ಅತಿ ಮುಖ್ಯವಾದುದೆಂದರೆ ರೋಮ್ ಪತನವಾದಂದಿನಿಂದ ನಾಶವಾದ ಯೂರೋಪಿನ ಪ್ರಾಚೀನ ನಾಗರಿಕತೆ ಉತ್ತರದಿಂದ ದಂಡೆತ್ತಿ ಬಂದವರಿಗೆ ರೋಮ್ ಸೋಲುವ ಮುಂಚೆಯೇ ಅಂತರ್ದೌಬಲ್ಯದಿಂದಲೇ ರೋಮ್ ಕುಸಿದು ಬೀಳುವುದರಲ್ಲಿತ್ತು. ಒಂದಾನೊಂದು ಕಾಲದಲ್ಲಿ ವಿಶಾಲಗೊಳ್ಳುತಿದ್ದ ಅದರ ಆರ್ಥಿಕ ನೀತಿಯು ಸಂಕುಚಿತವಾಗಿ ಅನೇಕ ತೊಡರುಗಳನ್ನು ತಂದು ಒಡ್ಡಿತ್ತು. ನಗರದ ಕೈಗಾರಿಕೆ ಗಳು ಕ್ಷೀಣಿಸಿದವು. ಮಹಾನಗರಗಳು ಹೀನಸ್ಥಿತಿಗೆ ಬಂದು ಪಾಳುಬಿದ್ದು, ನಾಶವಾದವು. ದೇಶದ ಫಲವತ್ತು ಸಹ ಕ್ಷೀಣಿಸಿತು. ಈ ತೊಂದರೆಗಳ ನಿವಾರಣೆಗೆ ರೋಮನ್ ಚಕ್ರವರ್ತಿಗಳು ಏನೇನೊ ಉಪಾಯಗಳನ್ನು ಹೂಡಿದರು. ವರ್ತಕರು, ಕರ್ಮಕುಶಲರು, ಶ್ರಮಜೀವಿಗಳು ನಿರ್ದಿಷ್ಟ ಕೆಲಸ ವನ್ನೆ ಮಾಡಬೇಕೆಂಬ ನಿರ್ಬಂಧವಿತ್ತು. ಅನೇಕ ಕೆಲಸಗಾರರಿಗೆ ಅವರ ಗುಂಪಿನಿಂದ ಹೊರಗೆ ಮದುವೆ ಮಾಡಿಕೊಳ್ಳಬಾರದೆಂಬ ನಿರ್ಬಂಧವಿತ್ತು. ಆದ್ದರಿಂದ ಕೆಲವು ಉದ್ಯೋಗದವರಿಗೆ ಅವರದೇ ಒಂದು ಜಾತಿಯಾಯಿತು. ರೈತರು ಜೀತದಾಳುಗಳಾದರು. ಆದರೆ ಅವಸಾನ ಕಾಲವನ್ನು ತಡೆ ಗಟ್ಟಲು ಮಾಡಿದ ಈ ಎಲ್ಲ ತೇಪೆ ಕೆಲಸಗಳೂ ನಿಷ್ಪಲವಾದವು. ರೋಗವು ಇನ್ನೂ ಪ್ರಬಲಗೊಂಡು ರೋಮನ್ ಚಕ್ರಾಧಿಪತ್ಯವು ನಾಶವಾಯಿತು.
{{gap}}ಭಾರತೀಯ ಸಂಸ್ಕೃತಿಯು ಅಷ್ಟು ನಾಟಕೀಯವಾಗಿ ಯಾವಾಗಲೂ ನಾಶವಾಗಿಯೂ ಇಲ್ಲ, ಆಗುವುದೂ ಇಲ್ಲ ; ಏನೇ ಇರಲಿ ಒಂದು ಅದ್ಭುತ ಜೀವನಚೈತನ್ಯವನ್ನು ತೋರಿಸಿದೆ. ಆದರೆ<noinclude></noinclude>
kp03egmek78v9sq3gimrg0okozclufa
ಪುಟ:ಭಾರತ ದರ್ಶನ.djvu/೨೦೩
104
85095
321335
229214
2026-05-20T09:15:55Z
Pragathi. BH
7585
/* Validated */
321335
proofread-page
text/x-wiki
<noinclude><pagequality level="4" user="Pragathi. BH" />{{rh|೧೯೮|ಭಾರತ ದರ್ಶನ|}}</noinclude>ನಿದಾನವಾಗಿ ಶಕ್ತಿಗುಂದುತ್ತಿರುವುದು ತೋರುತ್ತಿದೆ. ಕ್ರಿಸ್ತ ಯುಗದ ಮೊದಲ ಒಂದು ಸಾವಿರ ವರ್ಷಗಳಲ್ಲಿ ಭಾರತದಲ್ಲಿ ಸಾಮಾಜಿಕ ಪರಿಸ್ಥಿತಿಯು ಹೇಗಿತ್ತು ಎಂದು ಸ್ಪಷ್ಟವಾಗಿ ವಿವರಿಸುವುದು ಕಷ್ಟ. ಆದರೆ ಆರ್ಥಿಕ ನೀತಿಯ ದೃಷ್ಟಿಯ ವೈಶಾಲ್ಯವು ಮಾಯವಾಗಿ ಸಂಕುಚಿತ ದೃಷ್ಟಿಯು ಬಲಗೊಳ್ಳುತ್ತ ಬಂದಿತೆಂದು ಮಾತ್ರ ಧೈರ್ಯವಾಗಿ ಹೇಳಬಹುದು. ಪ್ರಾಯಶಃ ಭಾರತೀಯ ಸಮಾಜ ರಚನೆಯ ಮತ ಪದ್ದತಿಗಳ ಕಟ್ಟುಗಳು ಕಠಿಣವಾಗಿ, ಬಹಿಷ್ಕಾರ ಮನೋಭಾವ ಬಲಗೊಂಡು, ಈ ಅಧೋ ಗತಿಯು ಅನಿವಾರ್ಯವಾಯಿತು. ಆಗೈಯ ಮುಂತಾದ ಪರದೇಶಗಳಲ್ಲಿನ ಭಾರತೀಯರು ಅವರ ಭಾವನೆಯಲ್ಲಾಗಲಿ, ನಡವಳಿಕೆಯಲ್ಲಾಗಲಿ, ಆರ್ಥಿಕ ನೀತಿಯಲ್ಲಾಗಲಿ ಅಷ್ಟು ಸಂಕುಚಿತ ಸ್ವಭಾವ ದವರಾಗಿರಲಿಲ್ಲ. ಆದ್ದರಿಂದ ಅವರು ಅಭಿವೃದ್ಧಿ ಹೊಂದಿದರು, ರಾಜ್ಯವನ್ನೂ ವಿಸ್ತರಿಸಿದರು. ಇನ್ನೂ ನಾನೂರು ಐದುನೂರು ವರ್ಷಗಳ ಕಾಲ ಆ ವಲಸೆ ರಾಷ್ಟ್ರಗಳು ಪ್ರಗತಿ ಹೊಂದಿ, ತಮ್ಮ ಪ್ರಭಾವವನ್ನು ಬಿತ್ತರಿಸಿ ಅದ್ಭುತಕಾರ್ಯ ಶಕ್ತಿಯನ್ನೂ, ಕಾರ್ಯಪಟುತ್ವವನ್ನೂ ತೋರಿಸಿದರು. ಆದರೆ ಭಾರತದಲ್ಲೇ ಈ ಸಂಕುಚಿತ ಜೀವನವು ಸೃಷ್ಟಿ ಶಕ್ತಿಯನ್ನು ಹೀರಿ, ಸಣ್ಣ ಪಂಗಡಗಳನ್ನಾಗಿ ಮಾಡಿದವು. ಅವರ ದೃಷ್ಟಿ ಯು ಸಂಕುಚಿತವಾಯಿತು. ಪ್ರತಿಯೊಂದು ವ್ಯಕ್ತಿಗೂ ಅವನ ಕಾವ್ಯವನ್ನು ವಿಧಿಸಲಾಗಿತ್ತು. ಆದ್ದರಿಂದ ಇತರರ ಗೋಜಿಗೆ ಅವರು ಹೋಗುತ್ತಿರಲಿಲ್ಲ. ರಾಜ್ಯ ರಕ್ಷಣೆಗಾಗಿ ಯುದ್ಧ ಮಾಡುವುದು ಕ್ಷತ್ರಿಯನ ಕೆಲಸವಾಗಿತ್ತು. ಆದ್ದರಿಂದ ಬೇರೆಯವರಿಗೆ ಅದರಲ್ಲಿ ಆಸಕ್ತಿಯು ಇರಲಿಲ್ಲ, ಅವಕಾಶವೂ ಇರಲಿಲ್ಲ. ಬ್ರಾಹ್ಮಣ, ಕ್ಷತ್ರಿಯರಿಬ್ಬರೂ ವ್ಯಾಪಾರ ಉದ್ಯಮವೆಂದರೆ ಕಡೆಗಣ್ಣಿನಿಂದ ನೋಡುತ್ತಿದ್ದರು. ವಿದ್ಯಾರ್ಜನೆ ಮತ್ತು ಆತ್ಮೋನ್ನತಿಯ ಮಾರ್ಗವು ಹೀನ ಕುಲದವರಿಗೆ ಬಾಹ್ಯವಿತ್ತು. ಉತ್ತಮ ಜಾತಿಯವರ ಸೇವೆಯೇ ಅವರ ಕಾರ್ಯವೆಂದು ಬೋಧಿಸಲಾಗಿತ್ತು. ನಗರಗಳ ಆರ್ಥಿಕ ನೀತಿ ಮತ್ತು ವ್ಯಾಪಾರವು ಉನ್ನತಮಟ್ಟದಲ್ಲಿದ್ದರೂ ರಾಜ್ಯ ರಚನೆಯು ಪಾಳೆಯಗಾರಿಕೆಯೇ ಆಗಿತ್ತು. ಪ್ರಾಯಶಃ ಯುದ್ಧ ಕೌಶಲ್ಯದಲ್ಲಿಯೂ ಭಾರತವು ಕ್ಷೀಣದೆಸೆಗೆ ಬಂದಿತ್ತು. ಆ ಸಮಾಜರಚನೆ ಯನ್ನು ಬದಲಾಯಿಸಿ, ಹೊಸ ಶಕ್ತಿಯನ್ನು ಅಣಿಗೊಳಿಸದೆ ಆ ಸ್ಥಿತಿಯಲ್ಲಿ ಯಾವ ಪ್ರಗತಿಯೂ ಸಾಧ್ಯವಿರಲಿಲ್ಲ. ಅಂತಹ ಬದಲಾವಣೆಗೆ ಮತ ಪದ್ಧತಿಯು ಅಡ್ಡಿಯಾಯಿತು. ಭಾರತೀಯ ಸಮಾಜಕ್ಕೆ ಒಂದು ಭದ್ರತೆಯನ್ನು ಕೊಟ್ಟು, ಅನೇಕ ಸದ್ಗುಣಗಳಿಂದ ತುಂಬಿದ್ದರೂ ಜಾತಿ ಪದ್ಧತಿಯಿಂದ ಜೊತೆಯಲ್ಲೇ ನಾಶದ ಅಂಕುರವೂ ಬಿತ್ತಿ ಬಂದಿತು.
{{gap}}ಭಾರತೀಯ ಸಮಾಜ ರಚನೆಯು (ಈ ವಿಷಯವನ್ನು ಮುಂದೆ ವಿಶದವಾಗಿ ಪ್ರಸ್ತಾಪಿಸುತ್ತೇನೆ) ಭಾರತೀಯ ನಾಗರಿಕತೆಗೆ ಒಂದು ಅಸ್ಪಲಿತ ಭದ್ರತೆಯನ್ನು ಕೊಟ್ಟಿತ್ತು. ಪ್ರತಿ ಪಂಗಡಕ್ಕೂ ಒಂದು ಅದ್ಭುತಕ್ತಿಯನ್ನೂ, ದೊಡ್ಡ ಸಂಘಟನಾ ಶಕ್ತಿಯನ್ನೂ ಕೊಟ್ಟಿತ್ತು. ಕಲೆ, ಕುಶಲಬುದ್ದಿ, ವ್ಯಾಪಾರ, ಹಡಗಿನ ವ್ಯಾಪಾರ ಅಭಿವೃದ್ದಿ ಯಾದರೂ, ಆ ಪಂಗಡದಲ್ಲಿಯೇ ಆಯಿತು. ಆದ್ದರಿಂದ ಕೆಲವು ಉದ್ಯಮಗಳು ಅನುವಂಶಿಕವಾದವು. ಹೊಸ ಉದ್ಯಮವನ್ನು ಕಲಿಯುವುದು ನೂತನ ಕಾರ್ಯ ಚಟುವಟಿಕೆಯನ್ನು ಆರಂಭಿಸುವುದು ನಿಷಿದ್ಧವಾಯಿತು. ಅಪ್ಪ ಹಾಕಿದ ಆಲದ ಮರವೇ ಶಾಶ್ವತ ವಾಯಿತು. ಸಾಹಸ ಶಕ್ತಿಯು ಕಡಮೆಯಾಗಿ, ನೂತನ ಮಾರ್ಗಾನ್ವೇಷಣೆಯ ದೃಷ್ಟಿಯೇ ಶೂನ್ಯ ವಾಯಿತು. ತನ್ನ ಅಲ್ಪ ಆವರಣದಲ್ಲಿ ಸಂಪೂರ್ಣ ಸ್ವಾತಂತ್ರ್ಯ ದೊರೆತರೂ, ಅದು ವಿಶಾಲ ಸ್ವಾತಂ ತ್ರದ ಬೆಳೆವಣಿಗೆಗೆ ಅಡ್ಡಿಯಾಯಿತು. ಅಸಂಖ್ಯಾತ ಜನರನ್ನು ಸಮಾಜದಲ್ಲಿ ಬಹಳ ಕೀಳು ಮಟ್ಟದಲ್ಲಿ ಇಟ್ಟುದರಿಂದ ಪ್ರಗತಿಗೆ ಅವಕಾಶವೇ ಇಲ್ಲದಾಯಿತು. ಈ ಸಮಾಜ ರಚನೆಯು ಎಲ್ಲಿಯ ವರೆಗೆ ಬೆಳೆವಣಿಗೆಗೆ ಮತ್ತು ವಿಕಾಸಕ್ಕೆ ಅವಕಾಶ ಕೊಟ್ಟಿತೋ ಅಲ್ಲಿಯವರೆಗೆ ಸಮಾಜವು ಪ್ರಗತಿಪರ ವಿತ್ತು ; ಆದರೆ ಆ ವಿಕಾಸದ ಮೇರೆಯನ್ನು ಮುಟ್ಟಿದೊಡನೆ ಮುಂದೆ ಯಾವ ಪ್ರಗತಿಯೂ ಸಾಧ್ಯ ವಿಲ್ಲದೆ ನಿಂತಲ್ಲಿಯೇ ನಿಂತಿತು, ಪ್ರತಿಗಾಮಿಯಾಯಿತು, ಕೊನೆಗೆ ಕ್ಷೀಣಹೊಂದಲಾರಂಭಿಸಿತು.
ಇದೇ ಕಾರಣದಿಂದ ಬೌದ್ಧಿಕ, ದಾರ್ಶನಿಕ, ರಾಜಕೀಯ ಬೆಳವಣಿಗೆಯಲ್ಲಿ, ಯುದ್ದ ನೀತಿ ಮತ್ತು ಕೌಶಲ್ಯದಲ್ಲಿ, ಪರದೇಶ ಪರಿಚಯ ಮತ್ತು ಸಂಪರ್ಕದಲ್ಲಿ, ಕ್ಷೀಣದೆಶೆಯು ಆರಂಭವಾಯಿತು.<noinclude></noinclude>
l5ftjg5fg67c4sqp094g5ijpt9ba9qg
ಪುಟ:ಭಾರತ ದರ್ಶನ.djvu/೨೦೪
104
85096
321336
229225
2026-05-20T09:16:10Z
Pragathi. BH
7585
/* Validated */
321336
proofread-page
text/x-wiki
<noinclude><pagequality level="4" user="Pragathi. BH" />{{rh||ಯುಗಾಂತರಗಳು|೧೯೯}}</noinclude>ಸ್ಥಳೀಯ ಅಭಿಮಾನ ಹೆಚ್ಚಿತು. ವಿಶಾಲ ಭಾರತದ ಭಾವನೆಯು ಮಾಯವಾಗಿ ಪಾಳೆಯಗಾರಿಕೆ, ಸ್ವಾರ್ಥ ಭಾವನೆ ಹೆಚ್ಚಿತು. ಆದಾಗ್ಯೂ ಕೊನೆ ಕೊನೆಗೆ ವ್ಯಕ್ತವಾದಂತೆ ಆ ಜೀರ್ಣವಾದ ರಚನಾ ಚೌಕಟ್ಟಿನಲ್ಲೂ ಜೀವಶಕ್ತಿಯು ಇನ್ನೂ ಅಡಗಿತ್ತು : ನೂತನ ಸನ್ನಿವೇಶಕ್ಕಣಿಗೊಳ್ಳುವ ಶಕ್ತಿ, ನವ್ಯತ, ದಿಟ್ಟ ತನವೂ ಇತ್ತು. ಆ ಶಕ್ತಿಯಿಂದಲೇ ಜೀವಂತವಾಗಿ ಉಳಿಯಿತು. ಹೊಸ ಸಂಪರ್ಕ, ಭಾವನಾ ತರಂಗಗಳಿಂದ ಲಾಭಗೊಂಡು ಕೆಲವು ಮಾರ್ಗಗಳಲ್ಲಿ ಪ್ರಗತಿಯನ್ನೂ ಪಡೆಯಿತು. ಆದರೆ ಅನೇಕ ಪುರಾತನ ಪದ್ದತಿಗಳ ಅವಶೇಷಗಳು ಆ ಪ್ರಗತಿಗೆ ಉರುಲು ಆಗಿ ಸದಾ ಅದುಮುತ್ತಿದ್ದವು.
{{rule|3em}}
{{larger|{{center|ಅಧ್ಯಾಯ ೬ : ಹೊಸ ಸಮಸ್ಯೆಗಳು}}}}
{{center|೧. ಅರಬರು ಮತ್ತು ಮಂಗೋಲರು}}
{{gap}}ಉತ್ತರ ಹಿಂದೂಸ್ಥಾನದಲ್ಲಿ ಶ್ರೀಹರ್ಷನು ಒಂದು ಬಲಿಷ್ಠ ರಾಜ್ಯಾಧಿಪನಾಗಿ ಆಳುತ್ತಿದ್ದಾಗ, ಚೀನೀ ಯಾತ್ರಿಕನೂ ಜ್ಞಾನಭಿಕ್ಷುವೂ ಆದ ಹುಯನ್ ತ್ಸಾಂಗ್ ನಲಂದ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾಗ, ಅರೇಬಿಯಾದಲ್ಲಿ ಇಸ್ಲಾಂ ಧರ್ಮವು ರೂಪುಗೊಳ್ಳುತ್ತಿದ್ದಿತು. ಇಸ್ಲಾಂ ಭಾರತಕ್ಕೆ ಒಂದು ಧಾರ್ಮಿಕ ಶಕ್ತಿಯಾಗಿ, ರಾಜಕೀಯ ಶಕ್ತಿಯಾಗಿ ಬಂದು ಹೊಸ ಸಮಸ್ಯೆಗಳನ್ನು ಎಬ್ಬಿಸತಕ್ಕದ್ದಿತ್ತು. ಆದರೆ ಭಾರತೀಯ ರಂಗದಲ್ಲಿ ವಿಶೇಷ ವ್ಯತ್ಯಾಸ ಮಾಡಲು ಬಹಳ ಕಾಲಹಿಡಿ ಯಿತು. ಭಾರತ ಹೃದಯವನ್ನು ಮುಟ್ಟಲು ಆರುನೂರು ವರ್ಷಗಳು ಬೇಕಾಯಿತು. ರಾಜಕೀಯ ವಿಜಯವನ್ನು ಪಡೆಯುವ ಹೊತ್ತಿಗೆ ಅದರ ಸ್ವರೂಪವೇ ಬಹಳ ಬದಲಾಯಿಸಿತ್ತು. ಅದರ ಮುಂಚೂಣಿ ಜನರೂ ಬೇರೆ ಇದ್ದರು. ಒಂದು ಉನ್ನತ ಉತ್ಸಾಹದ ಉದ್ದೇಶದಿಂದ ಮತ್ತು ಉಜ್ವಲ ಕಾರ್ಯಶಕ್ತಿಯಿಂದ ಸ್ಪೇನ್ನಿಂದ ಮಂಗೋಲಿಯದವರೆಗೆ ಹಬ್ಬಿ ಹರಡಿ, ವಿಜಯ ಪತಾಕೆಯನ್ನು ನೆಟ್ಟು, ಜಾಜ್ವಲ್ಯಮಾನವಾದ ಸಂಸ್ಕೃತಿಯನ್ನು ಹರಡಿದ ಅರಬ್ಬಿ ಜನರು ಇಂಡಿಯ ದೇಶಕ್ಕೆ ಬರ ಲಿಲ್ಲ. ವಾಯವ್ಯದ ಗಡಿಯ ಅಂಚಿಗೆ ಬಂದು ಅಲ್ಲಿಯೇ ನಿಂತರು, ಅರಬ್ಬಿ ಸಂಸ್ಕೃತಿಯು ಕ್ರಮೇಣ ಹೀನಸ್ಥಿತಿಗೆ ಬಂದು ಅನೇಕ ತುರ್ಕಿ ಪಂಗಡಗಳು ಮಧ್ಯ ಮತ್ತು ಪಶ್ಚಿಮ ಏಷ್ಯಗಳಲ್ಲಿ ಪ್ರಾಮುಖ್ಯತೆಗೆ ಬಂದವು. ಭಾರತದ ಗಡಿ ಪ್ರಾಂತ್ಯಗಳಿಂದ ಇಸ್ಲಾಂ ಧರ್ಮವನ್ನು ಒಂದು ರಾಜಕೀಯ ಶಕ್ತಿಯನ್ನಾಗಿ ಇಂಡಿಯಕ್ಕೆ ತಂದವರೇ ಇವರು.
{{gap}}ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಕೆಲವು ದಿನಾಂಕಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಮಹಮ್ಮದ್ ಪೈಗಂಬರರು ಕ್ರಿಸ್ತಶಕ ೬೨೨ ರಲ್ಲಿ ಮಕ್ಕದಿಂದ ಮದೀನಾಕ್ಕೆ ಹೊರಟು ಹೋದ ಸರತ್ತಿನಿಂದ ಇಸ್ಲಾಂ ಧರ್ಮವು ಆರಂಭವಾಗುತ್ತದೆ. ಮಹಮ್ಮದರು ಕಾಲವಾದದ್ದು ಹತ್ತು ವರ್ಷಗಳ ನಂತರ, ಅರೇಬಿಯಾದಲ್ಲಿಯೇ ಒಂದು ರಾಜಕೀಯ ಸ್ಥಿಮಿತಕ್ಕೆ ಬರಲು ಕೆಲವು ಕಾಲ ಹಿಡಿಯಿತು. ಇದಾದ ನಂತರ ಅರಬ್ಬರು ಇಸ್ಲಾಂ ಧ್ವಜವನ್ನೆ ಹಿಡಿದು ಪೂರ್ವದಲ್ಲಿ ಮಧ್ಯ ಏಷ್ಯ ವನ್ನೂ ಪಶ್ಚಿಮದಲ್ಲಿ ಉತ್ತರ ಆಫ್ರಿಕೆಯನ್ನೂ ಆಕ್ರಮಿಸಿ, ಸ್ಪೇನ್ ಮೂಲಕ ಫ್ರಾನ್ಸ್ ವರೆಗೆ ಹರಡಿ ಅದ್ಭುತ ಕಾಠ್ಯಗಳನ್ನು ಸಾಧಿಸಿದರು. ಏಳು ಮತ್ತು ಎಂಟನೆಯ ಶತಮಾನಗಳಲ್ಲಿ ಇರಾಣ ಇರಾಕ್ ಮತ್ತು ಮಧ್ಯ ಏಷ್ಯದಲ್ಲಿ ಹರಡಿದ್ದರು. ಕ್ರಿಸ್ತಶಕ ೭೧೨ ರಲ್ಲಿ ವಾಯವ್ಯ ಇಂಡಿಯದಲ್ಲಿ ಸಿಂಧು ದೇಶ ವನ್ನು ಅಕ್ರಮಿಸಿ ಅಲ್ಲಿಯೇ ನಿಂತುಬಿಟ್ಟರು. ಅವರಿಗೂ ಭಾರತದ ಫಲವತ್ತಾದ ಮೈದಾನಗಳಿಗೂ ಮಧ್ಯೆ ದೊಡ್ಡ ಮರಳಾಡುಇತ್ತು. ಪಶ್ಚಿಮದಲ್ಲಿ ಅರಬ್ಬಿ ಜನರು ಯೂರೋಪ್ ಮತ್ತು ಆಫ್ರಿಕ ಖಂಡಗಳ ಮಧ್ಯದ ಜಲಸಂಧಿಯನ್ನು (ಅಲ್ಲಿಂದ ಈಚೆಗೆ ಜಿಬ್ರಾಲ್ಟರ್ ಜಲಸಂಧಿ ಎಂದು ಹೆಸರಾಗಿದೆ) ದಾಟ ಕ್ರಿಸ್ತಶಕ ೭೧ ರಲ್ಲಿ ಸ್ಪೇನಿಗೆ ಬಂದರು. ಸ್ಪೇನ್ ದೇಶವನ್ನು ಪೂರ್ಣ ಆಕ್ರಮಿಸಿ ಪಿರನೀಸ್ ಬೆಟ್ಟವನ್ನು ದಾಟಿ ಫ್ರ್ರಾಸಿಗೆ ಬಂದರು. ೭೪೨ ರಲ್ಲಿ ಫ್ರಾನ್ಸಿನಲ್ಲಿ ಟೂರ್ಸ್ ನಲ್ಲಿ ಬೌರ್ಲೆಸ್ ಮಾರ್ಟಲ್ ಎಂಬಾತನು ಅವರನ್ನು ಸೋಲಿಸಿ ಹಿಮ್ಮೆಟ್ಟಿಸಿದನು.<noinclude></noinclude>
2tvfsml8cvmj5o0vb8lwa8kgukncz6k
ಪುಟ:ಭಾರತ ದರ್ಶನ.djvu/೨೦೫
104
85097
321338
229228
2026-05-20T09:16:29Z
Pragathi. BH
7585
/* Validated */
321338
proofread-page
text/x-wiki
<noinclude><pagequality level="4" user="Pragathi. BH" />{{rh|೨೦೦|ಭಾರತ ದರ್ಶನ|}}</noinclude>{{gap}}ಅದುವರೆಗೆ ಇತಿಹಾಸದಲ್ಲಿ ಯಾವ ಪ್ರಮುಖ ಪಾತ್ರವನ್ನೂ ವಹಿಸದೆ ಅರಬ್ಬಿ ಮರುಭೂಮಿಯಲ್ಲಿ ಮನೆಮಾಡಿಕೊಂಡಿದ್ದ ಅರಬ್ಬಿ ಜನರ ಈ ವಿಜಯ ಪರಂಪರೆಯು ಅತ್ಯಾಶ್ಚರ್ಯಕರವಿದೆ. ಈ ಅಪಾರ ಶಕ್ತಿಯೂ ಅದ್ಭುತ ಕಾರ್ಯ ಪಟುತ್ವವೂ ಕ್ರಾಂತಿ ಪುರುಷನಾದ ಪೈಗಂಬರರಿಂದ ಮತ್ತು ಆತನ ಮಾನವ ಭ್ರಾತೃತ್ವದ ಸಂದೇಶದಿಂದ ಬಂದಿರಬೇಕು. ಆದರೂ ಅರಬ್ಬಿ ನಾಗರಿಕತೆಯು ಇದ್ದ ಕ್ಕಿದ್ದಂತೆ ಉದ್ಭವಿಸಿ, ಇಸ್ಲಾಂ ಧರ್ಮದಿಂದಲೇ ರೂಪುಗೊಂಡಿತೆಂದು ಭಾವಿಸುವುದು ತಪ್ಪು. ಇಸ್ಲಾಮ್ ವಿದ್ವಾಂಸರು ಅರಬ್ಬಿ ಜನರ ಇಸ್ಲಾ೦ ಪೂರ್ವದ ನಾಗರಿಕತೆಯನ್ನು ಜಹಿಲಿಯಾತ್ ಕಾಲ, ಅಜ್ಞಾನ ಮತ್ತು ಮೂಢ ಭಾವನೆಯ ಕಾರ್ಗತ್ತಲೆಯ ಕಾಲ ಎಂದು ಹಳಿಯುತ್ತಾರೆ. ಇತರ ನಾಗರಿಕತೆಗಳಂತೆ ಅರಬ್ಬಿ ನಾಗರಿಕತೆಗೂ ಬಹು ಪ್ರಾಚೀನತೆಯಿದೆ. ಸೆಮಿಟಿಕ್ ಜನಾಂಗ, ಫಿನೀಷಿಯನರು, ಕ್ರೀಟರು, ಚಾಲ್ಡಿಯನರು, ಹೀಬ್ರೂ ಜನರುಗಳ ನಾಗರಿಕತೆಗಳ ಬೆಳವಣಿಗೆಯೊಂದಿಗೆ ನಿಕಟ ಸಂಬಂಧವಿದೆ. ಇಸ್ರೇಲರು ಇತರರಿಂದ ಸ್ವಲ್ಪ ದೂರ ಸರಿದು ವಿಶಾಲ ಮನೋಭಾವನೆಯ ಚಾಲ್ಲಿ ಯನರು ಮತ್ತು ಇತರರಿಂದ ಭಿನ್ನವಾದರು. ಅವರಿಗೂ ಸೆಮಿಟಿಕ್ ಜನಾಂಗಗಳಿಗೂ ಘರ್ಷಣೆಗಳಾಗುತ್ತಿದ್ದವು. ಆದಷ್ಟೂ ಸೆವಿಟಕ್ ಪ್ರದೇಶದಲ್ಲೆಲ್ಲ ಪರಸ್ಪರ ಸಂಬಂಧ, ವಿಚಾರ ವಿನಿಮಯವಿದ್ದು ಒಂದು ಸರ್ವ ಸಾಮಾನ್ಯ ಹಿನ್ನೆಲೆ ಇತ್ತು. ಇಸ್ಲಾ೦ಪೂರ್ವದ ಅರಬ್ಬಿ ನಾಗರಿಕತೆಯು ಮುಖ್ಯವಾಗಿ ಏನನ್ನಲ್ಲಿ ಬೆಳೆಯಿತು. ಪೈಗಂಬರರ ಕಾಲದಲ್ಲಿ ಅರಬ್ಬಿ ಭಾಷೆಯು ಪಾರಸಿ ಮತ್ತು ಭಾರತೀಯ ಭಾಷೆಯಿಂದ ಪುಷ್ಟಿಗೊಂಡು ಶ್ರೇಷ್ಠ ಭಾಷೆಯಾಗಿ ಬೆಳೆದಿತ್ತು. ಫಿನೀಷಿಯನರಂತೆ ವ್ಯಾಪಾರಕ್ಕಾಗಿ ಅರಬ್ಬಿ ಜನರೂ ಪರದೇಶಗಳಿಗೆ ಪ್ರವಾಸಮಾಡುತ್ತಿದ್ದರು. ಕ್ಯಾಂಟನ್ ಬಳಿ ದಕ್ಷಿಣ ಚೀನದಲ್ಲಿ ಇಸ್ಲಾಂ ಧರ್ಮಕ್ಕೆ ಪೂರ್ವದಲ್ಲಿ ಒಂದು ಅರಬ್ಬಿ ಠಾಣ್ಯವಿತ್ತು. .
{{gap}}ಆದಾಗ್ಯೂ ಇಸ್ಲಾ೦ಧರ್ಮ ಸಂಸ್ಥಾಪಕನಾದ ಪೈಗಂಬರ್ ತನ್ನ ಜನರಲ್ಲಿ ಪ್ರಚಂಡ ಶಕ್ತಿಯನ್ನು ಪ್ರಚೋದಿಸಿ ಅಗಾಧ ಆತ್ಮವಿಶ್ವಾಸವನ್ನೂ ಆತ್ಮಶ್ರದ್ದೆ ಯನ್ನೂ ತುಂಬಿದನೆಂಬುದು ನಿಶ್ಚಯ, ಹೊಸ ಸಂದೇಶದ ಹರಿಕಾರರೆಂಬ ಭಾವನೆಯು ಕೆಲವುಸಲ ಇಡೀ ಜನಾಂಗವನ್ನೇ ಆವರಿಸಿ, ನೂತನ ಇತಿಹಾಸ ವನ್ನೇ ಸೃಷ್ಟಿಸುವ ಒಂದು ಅದ್ಭುತ ಕಾರ್ಯಶ್ರದ್ಧೆ ಮತ್ತು ಆತ್ಮವಿಶ್ವಾಸವು ಅವರಲ್ಲಿ ಬೆಳೆಯಿತು. ಪಶ್ಚಿಮ ಮತ್ತು ಮಧ್ಯ ಏಷ್ಯಗಳಲ್ಲೂ ಉತ್ತರ ಆಫ್ರಿಕದಲ್ಲಿ ಅಲ್ಲಿನ ರಾಜ್ಯಗಳು ಹೀನಸ್ಥಿತಿಗೆ ಬಂದುದೂ ಅರಬ್ಬಿ ಜನರ ಉನ್ನತಿಗೆ ಕಾರಣವಾಯಿತು. ಉತ್ತರ ಆಫ್ರಿಕದಲ್ಲಿ ವಿರೋಧಿ ಕ್ರೈಸ್ತ ಪಂಗಡಗಳಲ್ಲಿ ಪರಸ್ಪರ ವೈಷಮ್ಯವು ಹುಟ್ಟಿ ಘರ್ಷಣೆಗಳಾಗಿ, ಅನೇಕ ಬಾರಿ ಅಧಿಕಾರಕ್ಕಾಗಿ ಯುದ್ಧ ವಾಗಿ ರಕ್ತ ಪಾತವೂ ಆಗುತ್ತಿತ್ತು. ಆ ಕಾಲದಲ್ಲಿ ಅಲ್ಲಿ ಆಚರಣೆಯಲ್ಲಿದ್ದ ಕ್ರೈಸ್ತಮತವು ತುಂಬ ಸಂಕುಚಿತವೂ, ಅಸಹನೆಯುಳ್ಳದ್ದೂ ಆಗಿತ್ತು. ಮಾನವ ಭ್ರಾತೃತ್ವವನ್ನು ಸಾರುತ್ತ ಬಂದ ಅರಬ್ಬಿ ಮುಸ್ಲಿಮರ ಸಹನಶೀಲತೆಗೂ ಇದಕ್ಕೂ ಅಜಗಜಾಂತರವಿತ್ತು. ಕ್ರೈಸ್ತರ ಅಂತಃ ಕಲಹಗಳಿಂದ ಬೇಸತ್ತು ಇಡೀ ಜನಾಂಗಗಳೇ ಇಸ್ಲಾಂ ಧರ್ಮವನ್ನು ಒಲಿದು ಸ್ವೀಕರಿಸಿದವು.
{{gap}}ದೂರದ ದೇಶಗಳಿಗೆ ಅರಬ್ಬಿ ಜನರು ಕೊಂಡೊಯ್ಯುತ್ತಿದ್ದ ಸಂಸ್ಕೃತಿಯೇ ಸದಾ ವ್ಯತ್ಯಾಸ ಗೊಂಡು ಬೆಳೆಯುತ್ತಿತ್ತು. ಇಸ್ಲಾ೦ಧರ್ಮದ ನೂತನ ಭಾವನೆಗಳ ಬಲವತ್ತಾದ ಪ್ರಭಾವವು ಅದರ ಮೇಲೆ ಬೀರಿದ್ದರೂ ಆ ಸಂಸ್ಕೃತಿಯನ್ನು ಇಸ್ಲಾಂ ಸಂಸ್ಕೃತಿ ಎಂದು ಕರೆಯುವುದು ಒಂದು ಭ್ರಾಂತಿ ಮತ್ತು ಪ್ರಾಯಶಃ ತಪ್ಪು, ಡೆಮಾಸ್ಕಸ್ಸನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅರಬ್ಬಿ ಜನರು ತಮ್ಮ ಸರಳ ಜೀವನವನ್ನು ತ್ಯಜಿಸಿದರು ಮತ್ತು ಒಂದು ಕೃತಕ ಜೀವನದ ಸಂಸ್ಕೃತಿಯನ್ನು ಬೆಳೆ ಸಿದರು. ಅದನ್ನು ಅರಬ್ಬಿ-ಸಿರಿಯನ್ ನಾಗರಿಕತೆಯ ಕಾಲ ಎನ್ನ ಬಹುದು. ಬೈಜಾಂಟೈನ್ ಪ್ರಭಾವ ವೇನೋ ಬಂದಿತು. ಆದರೆ ಎಲ್ಲಕ್ಕೂ ಹೆಚ್ಚಾಗಿ ಬಾಗ್ದಾದಿಗೆ ಅವರು ಬಂದೊಡನೆ ಇರಾಣದ ಪೂರ್ವ ಸಂಪ್ರದಾಯಗಳಿಗೆ ಅವರು ಶರಣುಹೋದರು. ಒಂದು ಅರಬ್ಬಿ ಪಾರಸಿ ನಾಗರಿಕತೆಯನ್ನು ಬೆಳೆಸಿದರು. ಅವರ ಅಧೀನದ ರಾಜ್ಯಗಳಲ್ಲೆಲ್ಲಾ ಈ ನಾಗರಿಕತೆಯ ಪ್ರಭಾವವೇ ಮುಖ್ಯವಾಗಿ ಹರಡಿತು.
{{gap}}ಅರಬ್ಬಿ ಜನರ ವಿಜಯಯಾತ್ರೆಗಳು ಬಹುವ್ಯಾಪಕವೂ, ಅತಿಸುಲಭವೂ ಆದರೂ, ಆಗಲಾಗಲಿ<noinclude></noinclude>
ohyjzow21t44n3vubzhnomgrckwz4wt
ಪುಟ:ಭಾರತ ದರ್ಶನ.djvu/೨೦೬
104
85098
321341
229230
2026-05-20T09:17:25Z
Pragathi. BH
7585
/* Validated */
321341
proofread-page
text/x-wiki
<noinclude><pagequality level="4" user="Pragathi. BH" />{{rh||ಹೊಸ ಸಮಸ್ಯೆಗಳ|೨೦೧}}</noinclude>ಅನಂತರವಾಗಲಿ ಅವರು ಭಾರತದಲ್ಲಿ ಸಿಂಧೂದೇಶದಿಂದ ಮುಂದೆ ಬರಲಿಲ್ಲ. ದಂಡೆತ್ತಿಬಂದ ಪರಕೀಯರನ್ನು ಹಿಮ್ಮೆಟ್ಟಿಸುವ ಶಕ್ತಿಯು ಇನ್ನೂ ಭಾರತಕ್ಕೆ ಇದ್ದಿತೆಂದು ತೋರುತ್ತದೆ. ಇದ್ದಿರಬೇಕು; ಏಕೆಂದರೆ ನಿಜವಾದ ಮುತ್ತಿಗೆಯಾಗಲು ಅನೇಕ ಶತಮಾನಗಳು ಹಿಡಿದಿದ್ದರಿಂದ ಬೇರೆ ಕಾರಣವನ್ನು ಹೇಳವುದು ಕಷ್ಟ. ಅರಬ್ಬಿ ಜನರಲ್ಲಿದ್ದ ಅಂತಃ ಕಲಹಗಳೂ ಸ್ವಲ್ಪ ಮಟ್ಟಿಗೆ ಕಾರಣವಾಗಿರಬಹುದು. ಬಾಗ್ದಾದಿನ ಕೇಂದ್ರ ಆಡಳಿತದಿಂದ ಸಿಂಧುದೇಶವು ಪ್ರತ್ಯೇಕವಾಗಿ ಸ್ವತಂತ್ರ ಮುಸ್ಲಿಂ ರಾಜ್ಯವಾಯಿತು. ಮುತ್ತಿಗೆ ನಡೆಯದಿದ್ದರೂ ಭಾರತಕ್ಕೂ, ಅರಬ್ಬಿ ಜನರಿಗೂ ಪರಸ್ಪರ ಸಂಪರ್ಕ ಬೆಳೆಯಿತು, ಯಾತ್ರಿಕರು ಬಂದು ಹೋಗುತ್ತಿದ್ದರು, ರಾಯಭಾರಿಗಳನ್ನು ಕಳುಹಿಸುತ್ತಿದ್ದರು, ಗಣಿತಶಾಸ್ತ್ರ ಮತ್ತು ಖಗೋಳ ಶಾಸ್ತ್ರದ ಭಾರತೀಯ ಗ್ರಂಥಗಳನ್ನು ಅರಬ್ಬಿ ಭಾಷೆಗೆ ಅನುವಾದ ಮಾಡಿದರು. ಅನೇಕ ಭಾರತೀಯ ವೈದ್ಯರು ಬಾಗ್ದಾದಿಗೆ ಹೋದರು. ಈ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧವು ಉತ್ತರ ಹಿಂದೂಸ್ಥಾನಕ್ಕೆ ಮಾತ್ರ ಅನ್ವಯಿಸಲಿಲ್ಲ. ದಕ್ಷಿಣ ಭಾರತದ ರಾಜ್ಯಗಳೂ ಭಾಗವಹಿಸಿದ್ದವು. ಪಶ್ಚಿಮ ತೀರದ ರಾಷ್ಟ್ರ ಕೂಟರೂ ಅರೇಬಿಯದೊಂದಿಗೆ ವ್ಯಾಪಾರ ನಡೆಸಿದವರಲ್ಲಿ ಅತಿಮುಖ್ಯರು.
{{gap}}ಈ ರೀತಿ ಸತತ ಸಂಪರ್ಕ ಬೆಳೆದಕಾರಣ ಭಾರತೀಯರಿಗೆ ಹೊಸ ಇಸ್ಲಾಂ ಧರ್ಮದ ಪರಿಚಯ ವಾಯಿತು. ಈ ಧರ್ಮವನ್ನು ಹರಡಲು ಬಂದ ಪ್ರಚಾರಕರಿಗೆ ಸ್ವಾಗತ ದೊರೆಯಿತು. ಮಸೀದಿ ಗಳನ್ನು ಕಟ್ಟಿದರು. ರಾಜರುಗಳಾಗಲಿ, ಜನರಾಗಲಿ ಯಾವ ಅಡ್ಡಿ ಯನ್ನೂ ಮಾಡಲಿಲ್ಲ. ಮತೀಯ ಘರ್ಷಣೆಗಳೂ ಹುಟ್ಟಲಿಲ್ಲ. ಸರ್ವ ಧರ್ಮಗಳಿಗೆ, ಪೂಜಾ ವಿಧಾನಗಳಿಗೆ ಸಹನೆ ತೋರುವುದೇ ಭಾರತ ಸಂಪ್ರದಾಯದ ವೈಶಿಷ್ಟ, ರಾಜಕೀಯ ಶಕ್ತಿಯಾಗಿ ಬಂದ ಅನೇಕ ಶತಮಾನಗಳ ಮುಂಚೆಯೇ ಈ ರೀತಿ ಇಸ್ಲಾಂ ಧರ್ಮಕ್ಕೆ ಭಾರತದಲ್ಲಿ ಮನ್ನಣೆ ದೊರೆಯಿತು.
{{gap}}ಉಮ್ಮೆಯ ಖಲೀಫರ (ಉಮ್ಮೆಯಾದೆ ಖಲೀಪ್) ಹೊಸ ಅರಬ್ಬಿ ಚಕ್ರಾಧಿಪತ್ಯಕ್ಕೆ ಡಮಾಸ್ಕಸ್ ರಾಜಧಾನಿಯಾಗಿ ಅದು ಒಂದು ಮಹಾನಗರವಾಗಿ ಬೆಳೆಯಿತು. ಆದರೆ ಸ್ವಲ್ಪ ಕಾಲದಲ್ಲಿ ಕ್ರಿ. ಶ. ೭೫೦ರಲ್ಲಿ ಅಬ್ಬಾಸಿಯ (ಅಬ್ಬಾ ಸೀದೆ) ಖಲೀಫರು ರಾಜಧಾನಿಯನ್ನು ಬಾಗ್ದಾದಿಗೆ ವರ್ಗಾಯಿಸಿದರು. ಅಂತಃಕಲಹಗಳು ಹುಟ್ಟಿದವು, ಸ್ಪೇನ್ ದೇಶವು ಚಕ್ರಾಧಿಪತ್ಯದಿಂದ ಹೊರಬಿದ್ದಿತು. ಆದರೂ ಅನೇಕಕಾಲ ಮುಸ್ಲಿಂರಾಜ್ಯವಾಗಿಯೇ ಉಳಿಯಿತು. ಕ್ರಮೇಣ ಬಾಗ್ದಾದ್ ಚಕ್ರಾಧಿಪತ್ಯವೂ ಶಕ್ತಿ ಗುಂದಿ, ಒಡೆದು ಚೂರಾಯಿತು. ಮಧ್ಯ ಏಷ್ಯಾದಿಂದ ಸೆಕ್ ತುರ್ಕಿ ಜನರು ಬಂದು ಬಾಗ್ದಾದಿನಲ್ಲಿ ತಮ್ಮ ಸ್ವಾಮ್ಯವನ್ನು ಸ್ಥಾಪಿಸಿ ಖಲೀಫನನ್ನು ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡರು. ಆಫ್ಘಾನಿ ಸ್ಥಾನದಲ್ಲಿ ತಲೆಯೆತ್ತಿದೆ ಮಹಾಯೋಧನೂ, ಪ್ರಸಿದ್ದ ಸೇನಾನಾಯಕನೂ ಆದ ಘಜಿ ಸುಲ್ತಾನ್ ಮಹಮ್ಮದನು ಖಲೀಫನನ್ನು ನಿರ್ಲಕ್ಷಿಸಿ ಹಾಸ್ಯ ಮಾಡುತ್ತಿದ್ದನು. ಆದರೂ ಬಾಗ್ದಾದ್ ಇನ್ನೂ ಇಸ್ಲಾಂ ಸಂಸ್ಕೃತಿಯ ಕೇಂದ್ರವಾಗಿ ಉಳಿಯಿತು. ದೂರದ ಸ್ಪೇನ್ ಸಹ ಬಾಗ್ದಾದಿನಿಂದ ಸ್ಫೂರ್ತಿ ಪಡೆಯುತ್ತಿದ್ದಿತು. ವಿದ್ಯೆ, ವಿಜ್ಞಾನ, ಕಲೆ ಮತ್ತು ಜೀವನ ಸೌಕಯ್ಯದಲ್ಲಿ ಆಗ ಯೂರೋಪ್ ಬಹಳ ಹಿಂದೆ ಬಿದ್ದಿತ್ತು. ಯೂರೋಪಿನ ಈ ಅಂಧಕಾರಯುಗದಲ್ಲಿ ಜ್ಞಾನದೀಪವನ್ನು ಬೆಳಗಿಸಿ ಜ್ಞಾನ ಪಿಪಾಸೆಯನ್ನು ಬೆಳೆಸಿಕೊಂಡು ಬಂದದ್ದು ಅರಬ್ಬಿ ಸ್ಪೇನ್. ಅದರಲ್ಲೂ ಮುಖ್ಯವಾಗಿ ಕಾರ್ಡೊಬ ವಿಶ್ವವಿದ್ಯಾನಿಲಯ, ಅದರ ಕೆಲವು ಕಿರಣಗಳು ಯೂರೋಪಿನ ಗಾಡಾಂಧಕಾರದಲ್ಲಿ ತೂರಿದವು.
{{gap}}ಕ್ರಿ. ಶ. ೧೦೯೫ ರಿಂದ ಆರಂಭವಾದ ಕ್ರೈಸ್ತ ಧರ್ಮ ಯುದ್ದಗಳು ಸುಮಾರು ಒಂದೂವರೆ ಶತಮಾನಗಳ ಕಾಲ ನಡೆದವು. ಇವು ಕೇವಲ ಶಿಲುಬೆ ಮತ್ತು ಚರಿತ್ರೆ ಅಥವ ಎರಡು ಧರ್ಮಗಳ ಮಧ್ಯದ ಯುದ್ಧಗಳಾಗಿರಲಿಲ್ಲ. ಪ್ರಸಿದ್ಧ ಇತಿಹಾಸಕಾರನಾದ ಪ್ರೊಫೆಸರ್ ಜಿ. ಎಮ್. ಟ್ರೆವೆಲಿನ್ ಈ ಧರ್ಮ ಯುದ್ದಗಳು, ಯೂರೋಪಿನ ಪುನರುಜ್ಜಿವನ ಶಕ್ತಿಗಳು, ಪೌರ್ವಾತ್ಯವನ್ನು ತಮ್ಮ ಅಧೀನ ಪಡಿಸಿಕೊಳ್ಳಬೇಕೆಂಬ ಹಂಬಲದ ಸೈನಿಕಸಾಹಸದ ಮತ್ತು ಧರ್ಮಶ್ರದ್ದೆಯ ಫಲ. ಈ ಧರ್ಮ ಯುದ್ಧಗಳಿಂದ ಯೂರೋಪಿಗೆ ದೊರೆತ ಫಲ ಕ್ರಿಸ್ತನ ಸಮಾಧಿಯ ಬಿಡುಗಡೆ ಅಥವ ಕ್ರೈಸ್ತರಾಷ್ಟ್ರ ಗಳ ಒಕ್ಕೂಟವಲ್ಲ. ಆ ದೃಷ್ಟಿಯಿಂದ ಈ ಯುದ್ಧಗಳೆಲ್ಲ ನಿಷ್ಪಲ. ಅದಕ್ಕೆ ಪ್ರತಿಯಾಗಿ, ಸಂತಪೀಟಿ<noinclude></noinclude>
9osmsc14gbgqysgsi71hyxffjouwwdz
ಪುಟ:ಭಾರತ ದರ್ಶನ.djvu/೨೦೭
104
85099
321343
229232
2026-05-20T09:18:50Z
Pragathi. BH
7585
/* Validated */
321343
proofread-page
text/x-wiki
<noinclude><pagequality level="4" user="Pragathi. BH" />{{rh|೨೦೨|ಭಾರತ ದರ್ಶನ|}}</noinclude>ರನು ಸೈತಾನಿ ವಿದ್ಯೆ ಎಂದು ಹಳಿಯುತ್ತಿದ್ದ ಲಲಿತಕಲೆ, ಕುಶಲವಿದ್ಯೆ, ಸುಖಜೀವನ, ವಿಜ್ಞಾನ, ಬೌದ್ಧಿಕ ವಿಚಾರದೃಷ್ಟಿಗಳು ಬಂದವು.
{{gap}}ಈ ಧರ್ಮಯುದ್ಧಗಳಲ್ಲಿ ಕೊನೆಯದರಲ್ಲಿ ಮುಖಕ್ಕೆ ಮಂಗಳಾರತಿ ಆಗುವುದರ ಒಳಗೆ ಮಧ್ಯ ಏಷ್ಯದಲ್ಲಿ ಒಂದು ಪ್ರಚಂಡ ಪ್ರಳಯವೇ ಆಗಿತ್ತು. ಚ೦ಗೀಸ್ ಖಾನನು ತನ್ನ ಪಶ್ಚಿಮದ ವಿಧ್ವಂಸಕ ಯಾತ್ರೆಯನ್ನು ಆರಂಭಿಸಿದನು. ೧೧೫೫ ರಲ್ಲಿ ಮಂಗೋಲಿಯದಲ್ಲಿ ಹುಟ್ಟಿದವನು, ಈ ಪ್ರಳಯಾಗ್ನಿಯನ್ನು ಹೊತ್ತಿಸಿ ೧೨೧೯ ರ ಹೊತ್ತಿಗೆ ಮಧ್ಯ ಏಷ್ಯವನ್ನೆಲ್ಲ ಹೊಗೆಕವಿದ ಸ್ಮಶಾನವನ್ನು ಮಾಡಿದ್ದನು. ಆಗ ಅವನೇನು ಹುಡುಗನಾಗಿರಲಿಲ್ಲ. ಬೊಖಾರ, ಸಾಮರಖಂಡ್, ಹೀರತ್, ಬಾಲ್ಟ್, ಮುಂತಾದ ಹತ್ತು ಲಕ್ಷಕ್ಕಿಂತ ಹೆಚ್ಚು ಪ್ರಜಾ ಸಂಖ್ಯೆಯ ಈ ಎಲ್ಲ ನಗರಗಳೂ ಉರಿದು ಬೂದಿಯಾದವು. ಚ೦ಗೀಸ್ ಖಾನ್ ರಷ್ಯದ ಕೀವ್ ನಗರದ ವರೆಗೆ ಹೋಗಿ ಹಿಂದಿರುಗಿದನು. ಬಾಗ್ದಾದ್ ಅವನ ದಾರಿಯಲ್ಲಿ ಇಲ್ಲದ ಕಾರಣ ಹೇಗೋ ಉಳಿದುಕೊಂಡಿತು. ಆತನು ತನ್ನ ಎಪ್ಪತ್ತೆರಡ ನೆಯ ವರ್ಷದಲ್ಲಿ ೧೨೨೭ ರಲ್ಲಿ ಸತ್ತನು. ಆತನ ವಂಶೀಕರು ಯೂರೋಪಿನೊಳಗೆ ಮುನ್ನುಗ್ಗಿದರು. ೧೨೫೮ರಲ್ಲಿ ಹುಲಾಗು ಬಾಗ್ದಾದ್ ನಗರವನ್ನು ಹಿಡಿದು ಸುಮಾರು ಐದುನೂರು ವರ್ಷಗಳಿಂದ ಹೆಚ್ಚಾಗಿ ಪ್ರಪಂಚದ ಎಲ್ಲ ಭಾಗಗಳ ಸಂಪತ್ತು ಬಂದು ಸೇರಿದ್ದ, ಜ್ಞಾನ ಮತ್ತು ಕಲೆಗಳಿಗೆ ಪ್ರಸಿದ್ದ ಕೇಂದ್ರ ವಾಗಿದ್ದ ಆ ಮಹಾನಗರವನ್ನು ನಿರ್ನಾಮ ಮಾಡಿದನು. ಅರಬ್ಬಿ-ಪಾರ್ಸಿ ನಾಗರಿಕತೆಯು ಮಂಗೋಲರ ಕೈಕೆಳಗೆ ಬಾಳಿದರೂ ಇದರಿಂದ ಆ ನಾಗರಿಕತೆಗೆ ಏಷ್ಯದಲ್ಲಿ ದೊಡ್ಡ ಧಕ್ಕೆ ತಗಲಿತು. ಮುಖ್ಯವಾಗಿ ಅದು ಉತ್ತರ ಆಫ್ರಿಕದಲ್ಲಿ ಮತ್ತು ಸ್ಪೇನ್ನಲ್ಲಿ ಮುಂದುವರಿಯಿತು. ಸಹಸ್ರಾರು ವಿದ್ವಾಂಸರು ತಮ್ಮ ಗ್ರಂಥಗಳನ್ನು ಹೊತ್ತು ಕೊಂಡು ಬಾಗ್ದಾದಿನಿ೦ದ ಕೈರೋ ನಗರಕ್ಕೆ ಮತ್ತು ಸ್ಪೇನಿಗೆ ಪಲಾಯನ ಮಾಡಿದರು. ಅಲ್ಲಿ ಪುನಃ ಕಲೆ ಮತ್ತು ಜ್ಞಾನದ ಪುನರುಜ್ಜಿವನವಾಯಿತು. ಆದರೆ ಸ್ಪೇನ್ ದೇಶವೇ ಅರಬ್ಬಿ ಜನರ ಕೈಯಿಂದ ಕಳಚುತ್ತಿತ್ತು. ಕಾರ್ಡೊಬ ೧೨೩೬ರಲ್ಲಿ ಕೈ ಬಿಟ್ಟು ಹೋಗಿತ್ತು. ಇನ್ನೂ ಎರಡುನೂರು ಐವತ್ತು ವರ್ಷಗಳ ಕಾಲ ಗ್ರಾನಡ ಅರಬ್ಬಿ ಸಂಸ್ಕೃತಿಗೆ ಒಂದು ಉಜ್ವಲಕೇಂದ್ರವಾಗಿ ಉಳಿದಿತ್ತು. ೧೪೯೨ರಲ್ಲಿ ಫರ್ಡಿನೆಂಡ್ ಮತ್ತು ಇಸಬೆಲ ಗ್ರಾನಡವನ್ನು ಜಯಿಸಿದ್ದರಿಂದ ಸ್ಪೇನಿನಲ್ಲಿ ಅರಬ್ಬಿ ಆಡಳಿತ ಮುಗಿಯಿತು. ಅನಂತರ ಅರಬ್ಬಿ ಸಂಸ್ಕೃತಿಗೆ ಕೈರೋ ಪಟ್ಟಣವು- ತುರ್ಕಿಯ ಅಧೀನ ನಾದರೂ ಕೇಂದ್ರವಾಯಿತು. ಆಟೊಮನ್ ತುರ್ಕಿ ಜನರು ೧೪೫೩ರಲ್ಲಿ ಕಾನ್ಸ್ಟೆಂಟಿನೋಪಲ್ ನಗರವನ್ನು ಹಿಡಿದರು. ಇದರಿಂದ ಯೂರೋಪಿನ ಪುನರುಜೀವನಕ್ಕೆ ಕಾರಣಭೂತವಾದ ನೂತನ ಶಕ್ತಿಗಳು ಹೊರಹೊಮ್ಮಿದುವು.
{{gap}}ಏಷ್ಯ ಮತ್ತು ಯೂರೋಪಿನಲ್ಲಿ ಮಂಗೋಲರ ವಿಜಯದಿಂದ ಯುದ್ಧ ಕಲೆಯಲ್ಲಿ ಒಂದು ಹೊಸ ವಿಧಾನವು ಕಂಡುಬಂದಿತು. ಈ ಪ್ರಮಾಣದಲ್ಲಿ ಮತ್ತು ಗುಣದಲ್ಲಿ ಆಕಸ್ಮಿಕದಲ್ಲಿ ಮತ್ತು ಚಲನೆಯಲ್ಲಿ, ರಚನಾಕೌಶಲ್ಯದಲ್ಲಿ ಮತ್ತು ಅಪ್ರತ್ಯಕ್ಷವಾಗಿ ಬಂದೊದಗಿದ ಬುದ್ದಿವಂತಿಕೆಯಲ್ಲಿ ಮಂಗೋಲರ ಈ ದಂಡಯಾತ್ರೆಗಳನ್ನು ಹೋಲತಕ್ಕವು ಇತಿಹಾಸದಲ್ಲಿ ಯಾವುವೂ ಇಲ್ಲ” ಎಂದು ಪ್ರಸಿದ್ಧ ಚರಿತ್ರಕಾರನಾದ ಲಿಡ್ಡೆಲ್ ಹಾರ್ಟ್ ಹೇಳುತ್ತಾನೆಪ್ರಪಂಚದಲ್ಲಿ ಜನ್ಮತಾಳಿದ ಮಹಾಸೇನಾನಿಗಳಲ್ಲಿ ಚಂಗೀಸ್ ಖಾನನು ಅತಿ ಶ್ರೇಷ್ಠ ನಲ್ಲದಿದ್ದರೂ, ಶ್ರೇಷ್ಠ ರಲ್ಲಿ ಒಬ್ಬ. ಏಷ್ಯ ಮತ್ತು ಯೂರೋಪುಗಳ ಪೌರಸವೆಲ್ಲ ಆತನ ಮತ್ತು ಆತನ ವಂಶೀಕರ ಎದುರು ಹುಲ್ಲುಕಡ್ಡಿ ಯಂತೆ ಉರುಬಿಹೋಯಿತು. ಮಧ್ಯ ಮತ್ತು ಪಶ್ಚಿಮ ಯೂರೋಪು ಆತನ ಅಧೀನವಾಗದಿದ್ದುದು ಕೇವಲ ಆಕಸ್ಮಿಕ, ಯೂರೋಪು ತನ್ನ ನೂತನ ಯುದ್ಧ ಕಲೆ ಮತ್ತು ಕೌಶಲ್ಯವನ್ನು ಈ ಮಂಗೋಲರಿಂದ ಕಲಿಯಿತು. ಬಂದೂಕಿನ ಮಸಿಯ ಉಪಯೋಗವನ್ನು ಚೀನದಿಂದ ತಂದು ಯೂರೋಪಿಗೆ ಕಲಿಸಿದವರೂ ಈ ಮಂಗೋಲರೆ.
{{gap}}ಮಂಗೋಲರು ಇಂಡಿಯಕ್ಕೆ ದಂಡೆತ್ತಿ ಬರಲಿಲ್ಲ. ಸಿಂಧು ನದಿಯ ದಡದಲ್ಲಿಯೇ ನಿಂತು ಅವರ ದಂಡಯಾತ್ರೆಗಳನ್ನು ಬೇರೆ ಕಡೆಗಳಲ್ಲಿ ಮುಂದುವರಿಸಿದರು. ಅವರ ಮಹಾ ಸಾಮ್ರಾಜ್ಯವು ಒಡೆದು ಹೋದಾಗ ಏಷ್ಯದಲ್ಲಿ ಅನೇಕ ಸಣ್ಣ ರಾಜ್ಯಗಳು ಹುಟ್ಟಿದುವು. ೧೩೬೯ರಲ್ಲಿ, ತನ್ನ ತಾಯಿಯ ಮೂಲಕ<noinclude></noinclude>
sb54vcfn0ra0xells784oj9nphl8b85
ಪುಟ:ಭಾರತ ದರ್ಶನ.djvu/೨೦೮
104
85100
321345
229234
2026-05-20T09:19:09Z
Pragathi. BH
7585
/* Validated */
321345
proofread-page
text/x-wiki
<noinclude><pagequality level="4" user="Pragathi. BH" />{{rh||ಹೊಸ ಸಮಸ್ಯೆಗಳು|೨೦೩}}</noinclude>ಚಂಗೀಸ್ ಖಾನನ ವಂಶೀಳನೆಂದು ಹೇಳಿಕೊಳ್ಳುತ್ತಿದ್ದ ತುರ್ಕಿಯ ತೈಮೂರನು ಚಂಗೀಸ್ ಖಾನನ ದಂಡಯಾತ್ರೆಗಳನ್ನು ಅನುಕರಣಮಾಡಲು ಹೊರಟನು. ಅತ್ಯಲ್ಪ ಕಾಲ ಮೆರೆದರೂ ಆತನ ರಾಜಧಾನಿಯಾದ ಸಮರ್ಖಂಡ್ ಒಂದು ದೊಡ್ಡ ಸಾಮ್ರಾಜ್ಯದ ಕೇಂದ್ರವಾಯಿತು. ತೈಮೂರ್ ಕಾಲವಾದನಂತರ ಆತನ ವಂಶೀಕರು ದಂಡಯಾತ್ರೆಗಳನ್ನು ಬಿಟ್ಟು ಕಲಾಭಿವೃದ್ಧಿಯಲ್ಲಿ ಆಸಕ್ತರಾಗಿ ಶಾಂತಜೀವನವನ್ನು ನಡೆಸುವುದರಲ್ಲಿ ಉದ್ಯುಕ್ತರಾದರು. ಮಧ್ಯ ಏಷ್ಯದಲ್ಲಿ ತೈಮೂರಿನ ಪುನರುಜ್ಜಿವನವೊಂದು ನಡೆಯಿತು, ತೈಮೂರ್ ವಂಶೀಕನಾದ ಬಾಬರ್ ಹುಟ್ಟಿ ಬೆಳೆದದ್ದು ಈ ಸನ್ನಿವೇಶದಲ್ಲಿ, ಭಾರತದಲ್ಲಿ ಮೊಗಲ ಸಂತತಿಯ ಮೂಲಪುರುಷ ಬಾಬರ್, ಆತನೇ ಮಹಾ ಮೊಗಲರಲ್ಲಿ ಮೊದಲಿಗನು, ೧೫೨೬ರಲ್ಲಿ ದೆಹಲಿಯನ್ನು ಆತನು ಹಿಡಿದನು.
{{gap}} ಹೆಸರು ಇಸ್ಲಾ೦ ಹೆಸರಿನಂತಿದ್ದರೂ, ಅನೇಕರು ಭಾವಿಸಿರುವಂತೆ ಚಂಗೀಸ್ ಖಾನ್ ಮುಸಲ್ಮಾನ ನಲ್ಲ. ಅಂತರಿಕ್ಷ ಪೂಜೆಯನ್ನು ಮಾಡುವ “ಶಾವಾಧರ್ಮ” ಅವನ ಮತವಾಗಿತ್ತು. ಅದೇನೆಂಬುದು ನನಗೆ ಗೊತ್ತಿಲ್ಲ. ಆದರೆ ಆ ಪದವನ್ನು ನೋಡಿದರೆ ಅರಬ್ಬಿಗಳು ಬೌದ್ಧರನ್ನು ಕರೆಯುತ್ತಿದ್ದ ಪದವು ಜ್ಞಾಪಕಕ್ಕೆ ಬರುತ್ತದೆ- “ ಶಮಣ” ಎಂಬುದು ಸಂಸ್ಕೃತ “ಶ್ರವಣ” ದಿಂದ ಬಂದದ್ದು. ಮಂಗೋಲಿಯ ಸಹ ಸೇರಿ ಏಷ್ಯದ ಅನೇಕ ಭಾಗಗಳಲ್ಲಿ ಬೌದ್ಧ ಮತದ ಅಪಭ್ರಂಶಗಳು ಆಚರಣೆಯಲ್ಲಿ ಇದ್ದುವು. ಪ್ರಾಯಶಃ ಚಂಗೀಸ್ ಖಾನ್ ಅವುಗಳಲ್ಲೊ೦ದರ ಹಿನ್ನೆಲೆಯಲ್ಲಿ ಬೆಳೆದಿರಬಹುದು. ಚರಿತ್ರೆಯಲ್ಲಿ ಅತಿ ಶ್ರೇಷ್ಠ ದಂಡನಾಯಕನು ಯಾವುದೇ ಬಗೆಯ ಬೌದ್ದನೆಂಬುದು ಒಂದು ದೊಡ್ಡ ಆಶ್ಚರ್ಯ.
{{gap}}ಮಧ್ಯ ಏಷ್ಯದ ಜನರಲ್ಲಿ ಈಗಲೂ ನಾಲ್ಕು ಜನ ದಂಡನಾಯಕರ ಹೆಸರುಗಳು ಬಳಕೆಯಲ್ಲಿವೆ. ಸಿಕಂದರ್ (ಅಲೆಕ್ಸಾಂಡರ್), ಸುಲ್ತಾನ್ ಮಹಮ್ಮದ್, ಚಂಗೀಸ್ ರ್ಖಾ ಮತ್ತು ತೈಮೂರ್. ಈ ನಾಲ್ವರ ಜೊತೆಗೆ ಇನ್ನೊಂದು ರೀತಿಯಲ್ಲಿ ಪ್ರಸಿದ್ಧನಾದ ಐದನೆಯ ಹೆಸರನ್ನು ಸೇರಿಸಬೇಕು. ಆತನು ಯೋಧನಲ್ಲದಿದ್ದರೂ ಇನ್ನೊಂದು ಬಗೆಯಿಂದ ಆತನೂ ಒಬ್ಬ ವಿಜಯಶಾಲಿ ; ಆತನ ಹೆಸರನ್ನು ಹೇಳಿದರೆ ಅನೇಕ ಕತೆಗಳನ್ನು ಹೇಳುತ್ತಾರೆ. ಆತನೇ ಲೆನಿನ್,
{{center|೨. ಅರಬ್ಬಿ ಸಂಸ್ಕೃತಿಯ ವಿಕಾಸ ಮತ್ತು ಭಾರತದ ಸಂಬಂಧ }}
{{gap}}ಏಷ್ಯ ಆಫ್ರಿಕಗಳಲ್ಲಿ ವಿಶಾಲ ಪ್ರದೇಶವನ್ನೂ ಮತ್ತು ಯೂರೋಪಿನಲ್ಲಿ ಸ್ವಲ್ಪ ಭಾಗವನ್ನೂ ಬಹುಬೇಗ ಅಧೀನಮಾಡಿಕೊಂಡ ಅರಬ್ಬಿ ಜನರು ಇತರ ಮಾರ್ಗಗಳಲ್ಲಿ ಜಯಶಾಲಿಗಳಾಗಲು ಮನಸ್ಸು ಮಾಡಿದರು. ತಮ್ಮ ಸಾಮ್ರಾಜ್ಯವನ್ನು ಭದ್ರಗೊಳಿಸಿದರು. ತಮ್ಮ ದೃಷ್ಟಿಗೆ ಪರಿಚಯವಾದ ಅನೇಕ ಜನಾಂಗಗಳಿಂದ ಅವರ ಜೀವನ ಚರೈ ಯನ್ನು ಅರಿತು ಪ್ರಪಂಚವನ್ನು ತಿಳಿದುಕೊಳ್ಳಲು ಉದ್ಯುಕ್ತರಾದರು. ಎಂಟು ಮತ್ತು ಒಂಭತ್ತನೆಯ ಶತಮಾನದ ಅರಬ್ಬಿ ಜನರ ಜ್ಞಾನದಾಹ, ತರ್ಕ ಬದ್ದ ಮಾನಸಿಕ ಸಾಹಸ, ವಿಜ್ಞಾನವಿಷಯ, ಚರ್ಚಾದೃಷ್ಟಿಗಳು ಅತಿ ವಿಸ್ಮಯವನ್ನು೦ಟುಮಾಡು ಇವೆ. ನಿರ್ದಿಷ್ಟ ಅಭಿಪ್ರಾಯಗಳ ಮತ್ತು ನಂಬಿಕೆಗಳ ಆಧಾರದ ಮೇಲೆ ನಿಂತ ಒಂದು ಧರ್ಮದ ಆರಂಭದಿನಗಳಲ್ಲಿ ಶ್ರದ್ಧೆ ಪ್ರಾಧಾನ್ಯ, ಮತ್ತು ಇತರ ಯಾವ ಭಿನ್ನಾಭಿಪ್ರಾಯಕ್ಕೂ ಪ್ರೋತ್ಸಾಹವಾಗಲಿ, ಮನ್ನಣೆಯಾಗಲಿ ದೊರೆಯುವುದಿಲ್ಲ. ಅರಬ್ಬಿ ಜನರು ಅಷ್ಟು ಮುಂದುವರಿಯಲು ಈ ಶ್ರದ್ದೆ ಯೇ ಮುಖ್ಯ ಕಾರಣ ; ಮತ್ತು ಈ ವಿಜಯ ಪರಂಪರೆಯಿಂದ ಅವರ ಶ್ರದ್ದೆಯೂ ಗಾಢವಾಯಿತು. ಆದರೂ ಅವರು ತಮ್ಮ ಮತ ಮತ್ತು ಆಚಾರದ ಮೇರೆಯನ್ನು ದಾಟ, ನಿರೀಶ್ವರವಾದ ವಿಷಯವನ್ನು ಚರ್ಚೆ ಮಾಡಿದ್ದಾರೆ; ತಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮನೋಸಾಹಸದೆಡೆಗೆ ತಿರುಗಿಸಿದ್ದಾರೆ. ಪ್ರವಾಸಿ ಗರಲ್ಲಿ ಮಹಾಸಾಹಸಿಗಳಾದ ಅರಬ್ಬಿ ಯಾತ್ರಿಕರು ದೂರದೇಶಗಳಿಗೆ ಹೋಗಿ ಇತರರು ಏನುಮಾಡುತ್ತಿ ದಾರೆ, ಏನು ಯೋಚಿಸುತ್ತಾರೆ, ಅವರ ತತ್ವಗಳೇನು, ವಿಜ್ಞಾನಗಳಾವುವು, ಅವರ ಜೀವನ ಪದ್ಧತಿ ಏನು ಎಂಬುದನ್ನು ಕಂಡು ಹಿಡಿದು ತಮ್ಮ ಜ್ಞಾನ ಶ್ರೀಯನ್ನೂ ಪುಷ್ಟಿಗೊಳಿಸಿದ್ದಾರೆ. ಬಾಗ್ದಾದಿಗೆ ವಿದೇಶ ಗಳಿಂದ ಅನೇಕ ವಿದ್ವಾಂಸರನ್ನೂ, ಗ್ರಂಥಗಳನ್ನೂ ಕರೆಸುತ್ತಿದ್ದರು. ಎಂಟನೆಯ ಶತಮಾನದ ಮಧ್ಯಕಾಲದಲ್ಲಿದ್ದ ಖಲೀಫ್ ಆಲ್ ಮನ್ಸೂರ್ನು ಒಂದು ಸಂಶೋಧನಾಲಯವನ್ನೂ, ಭಾಷಾಂತರ<noinclude></noinclude>
oati5cddhhoy50acbtjvgqae06283ou
ಪುಟ:ಭಾರತ ದರ್ಶನ.djvu/೨೦೯
104
85101
321347
229296
2026-05-20T09:19:53Z
Pragathi. BH
7585
/* Validated */
321347
proofread-page
text/x-wiki
<noinclude><pagequality level="4" user="Pragathi. BH" />{{rh|೨೦೪|ಭಾರತ ದರ್ಶನ|}}</noinclude>ಸಮಿತಿಯನ್ನೂ ಏರ್ಪಡಿಸಿದನು. ಗ್ರೀಕ್, ಸಿರಿಯಾಕ್, ಜೆಂದ್, ಲ್ಯಾಟಿನ್ ಮತ್ತು ಸಂಸ್ಕೃತ ಭಾಷೆಗಳಿಂದ ಗ್ರಂಥಗಳನ್ನು ಭಾಷಾಂತರಿಸುತ್ತಿದ್ದರು, ಸಿರಿಯಾ, ಏಷ್ಯ ಮೈನರ್ ಮತ್ತು ಲೆವಾಂಟಿನ ಹಳೆಯ ಮಠಗಳನ್ನೆಲ್ಲ ಹಸ್ತ ಪ್ರತಿಗಳಿಗಾಗಿ ಶೋಧನೆಮಾಡಿದರು. ಕ್ರೈಸ್ತ ಗುರುಗಳು ಹಳೆಯ ಅಲೆಕ್ಸಾಂಡ್ರಿಯ ಶಾಲೆಗಳನ್ನು ಮುಚ್ಚಿದ್ದರು. ಅವುಗಳ ಅಧ್ಯಾಪಕರು ಕೆಲಸವಿಲ್ಲದೆ ನಿರಾಶ್ರಿತರಾಗಿ ದ್ದರು. ಈ ನಿರಾಶ್ರಿತರ ಅನೇಕರು ಪರ್ಷಿಯ ಮತ್ತು ಇತರ ಕಡೆಗಳಿಗೆ ಹೊರಟುಹೋಗಿದ್ದರು. ಅವರಿಗೆಲ್ಲ ಬಾಗ್ದಾದಿನಲ್ಲಿ ಸ್ವಾಗತವೂ ಆಶ್ರಯವೂ ದೊರೆಯಿತು. ಅವರೊಂದಿಗೆ ಗ್ರೀಕರ ತತ್ವಶಾಸ್ತ್ರ, ವಿಜ್ಞಾನ, ಗಣಿತ ಶಾಸ್ತ್ರಗಳು ಬಂದವು.-ಪ್ಲೇಟೊ, ಅರಿಸ್ಟಾಟಲ್, ತೋಲೆಮಿ ಮತ್ತು ಯೂಕ್ಲಿಡ್ ಪರಿಚಯವಾಯಿತು. ನೆಸ್ಟೋರಿಯನ್ ಮತ್ತು ಯಹೂದಿ ವಿದ್ವಾಂಸರಿದ್ದರು. ಭಾರತೀಯ ವೈದ್ಯರು, ದಾರ್ಶನಿಕರು, ಗಣಿತಶಾಸ್ತ್ರಜ್ಞರು ಇದ್ದರು. ಎಂಟು ಮತ್ತು ಒಂಭತ್ತನೆಯ ಶತಮಾನಗಳಲ್ಲಿ ಹರೂನ್ ಅಲ್ ರಷೀದ್, ಅಲ್ ಮಾಮೂನ್ ಖಲೀಫರ ರಾಜ್ಯಭಾರದಲ್ಲಿ ಇವೆಲ್ಲ ಮುಂದುವರಿದವು. ಬಾಗ್ದಾದ್ ನಗರವು ನಾಗರಿಕ ಪ್ರಪಂಚದ ಉನ್ನತ ಸಂಸ್ಕೃತಿಗೆ ಮಹಾಕೇಂದ್ರವಾಯಿತು.
{{gap}}ಈ ಕಾಲದಲ್ಲಿ ಭಾರತದೊಂದಿನ ಸಂಬಂಧಗಳು ಅನೇಕ ಇದ್ದವು. ಅರಬ್ಬಿ ಜನರು ಭಾರತೀಯ ಗಣಿತಶಾಸ್ತ್ರ, ಖಗೋಳಶಾಸ್ತ್ರ, ವೈದ್ಯಶಾಸ್ತ್ರಗಳಿಂದ ಬಹಳ ಜ್ಞಾನ ಸಂಪಾದನೆಮಾಡಿದರು. ಆದರೂ ಈ ಸಂಬಂಧಗಳಿಗೆಲ್ಲ ಮುಖ್ಯ ಕಾರಣರಾದವರು ಅರಬ್ಬಿ ಜನರು. ಭಾರತದಿಂದ ಅರಬ್ಬಿ ಜನರು ಬಹಳ ಜ್ಞಾನಲಾಭ ಪಡೆದರೂ ಭಾರತೀಯರು ಮಾತ್ರ ಅರಬ್ಬಿ ಜನರಿಂದ ಯಾವ ಜ್ಞಾನಲಾಭವನ್ನೂ ಪಡೆಯಲಿಲ್ಲ. ಭಾರತೀಯರು ತಮ್ಮ ಅಹಂಕಾರದಿಂದ, ತಮ್ಮೊಳಗೆ ತಾವು ಇದ್ದು ಮಡಿವಂತರಾಗಿಯೇ ಉಳಿದರು. ಇದರಿಂದ ಬಹಳ ಅನರ್ಥವಾಯಿತು. ಭಾರತೀಯ ಜನ ಮನಸ್ಸು ತನ್ನ ಸೃಷ್ಟಿ ಶಕ್ತಿ ಯನ್ನು ಬಹಳಮಟ್ಟಿಗೆ ಕಳೆದುಕೊಳ್ಳುತ್ತಿದ್ದಾಗ ಈ ಅರಬ್ಬಿ ಪುನರುಜ್ಜಿವನವು ಅದಕ್ಕೊಂದು ಹೊಸ ಚೈತನ್ಯವನ್ನು ಕೊಡುತ್ತಿತ್ತು. ಪ್ರಾಚೀನ ಕಾಲದ ಭಾರತೀಯರಾಗಿದ್ದರೆ ಆ ಜ್ಞಾನ ಕುತೂಹಲ ದೃಷ್ಟಿಯಲ್ಲಿ ತಲ್ಲೀನರಾಗಿ ಲಾಭ ಪಡೆಯುತ್ತಿದ್ದರು.
{{gap}}ಭಾರತೀಯ ವಿದ್ವತ್ತು ಮತ್ತು ವಿಜ್ಞಾನದ ಈ ಅಭ್ಯಾಸಕ್ಕೆ ಹರೂನ್ ಅಲ್ ರಷೀದನ ವಜೀರ್ ಮನೆತನದ ಬಾರ್ಮಕ್ (ಬಾರ್ಮೈಸೈಡೀಸ್) ವಂಶೀಕರು ಬಹಳ ಪ್ರೋತ್ಸಾಹಕೊಟ್ಟರು. ಪ್ರಾಯಶಃ ಆ ವಂಶೀಕರೆಲ್ಲ ಬೌದ್ಧರಾಗಿರಬೇಕು. ಹರೂನ್ ಅಲ್ ರಷೀದನಿಗೆ ಕಾಹಿಲೆಯಾದಾಗ ಭಾರತದಿಂದ ಮಾನಕ್ ಎಂಬ ವೈದ್ಯನನ್ನು ಕರೆತರಲು ದೂತರನ್ನು ಕಳುಹಿಸಿದ್ದರು. ಮಾನಕ್ ಬಾಗ್ದಾದಿನಲ್ಲಿಯೇ ನಿಂತು ಒಂದು ದೊಡ್ಡ ವೈದ್ಯಶಾಲೆಯ ಮುಖ್ಯ ಅಧಿಕಾರಿಯಾದನು. ಮಾನಕ್ ಅಲ್ಲದೆ ಬೇರೆ ಆರು ಜನ ಭಾರತೀಯ ವೈದ್ಯರಿದ್ದರೆಂದು ಅರಬ್ಬಿ ಗ್ರಂಥಕರ್ತರು ಹೇಳುತ್ತಾರೆ. ಖಗೋಳ ಶಾಸ್ತ್ರದಲ್ಲಿ ಅರಬ್ಬಿಗಳು ಭಾರತೀಯರನ್ನೂ, ಅಲೆಕ್ಸಾಂಡ್ರಿಯನರನ್ನೂ ಮೀರಿಸಿದರು. ಇದರಲ್ಲಿ ಒಂಭತ್ತನೆಯ ಶತಮಾ ನದ ಗಣಿತ ಮತ್ತು ಖಗೋಳಶಾಸ್ತ್ರಗಳಲ್ಲಿ ಪ್ರವೀಣನಾದ ಅಲ್ ಖೈರಿ ಮತ್ತು ಹನ್ನೆರಡನೆಯ ಶತ ಮಾನದ ಕವಿಯೂ, ಖಗೋಳ ಶಾಸ್ತ್ರಜ್ಞನೂ ಆದ ಉಮರ್ ಖಯ್ಯಾಮ್ ಪ್ರಮುಖರು, ವೈದ್ಯದಲ್ಲಿ ಅರಬ್ಬಿ ಭಿಷಜರೂ, ಶಸ್ತ್ರವೈದ್ಯರೂ ಏಷ್ಯ ಮತ್ತು ಯೂರೋಪಿನಲ್ಲಿ ಪ್ರಸಿದ್ಧರಿದ್ದರು, ಅವರಲ್ಲೆಲ್ಲ ಅತಿ ಪ್ರಾಮುಖ್ಯನೆಂದರೆ ವೈದ್ಯರಾಜನೆಂದು ಹೆಸರಾದ ಜೂಬಾರ ಪಟ್ಟಣದ ಇಬನ್ ಸೈನಾ (ಅವಿಸೆನ್ನ). ೧೦೩೭ ರಲ್ಲಿ ಆತನು ಕಾಲವಾದನು. ಅರಬ್ಬಿ ತತ್ವಶಾಸ್ತ್ರ ಮತ್ತು ದರ್ಶನಗಳಲ್ಲಿ ಅಬು ನಜರ್ ಫರಾಬಿ ಪ್ರಸಿದ್ಧನಾದವನು.
{{gap}}ತತ್ವಶಾಸ್ತ್ರದಲ್ಲಿ ಅರಬ್ಬಿ ಜನರಮೇಲೆ ಭಾರತವು ಹೆಚ್ಚು ಪ್ರಭಾವ ಬೀರಿದಂತೆ ತೋರುವುದಿಲ್ಲ. ತತ್ವಶಾಸ್ತ್ರ ಮತ್ತು ವಿಜ್ಞಾನಗಳೆರಡರಲ್ಲೂ ಅರಬ್ಬಿ ಜನರು ಗ್ರೀಸ್ ಮತ್ತು ಪ್ರಾಚೀನ ಅಲೆಕ್ಸಾಂಡ್ರಿಯದ ವಿದ್ಯಾಮಂದಿರಗಳಿಂದ ಸ್ಫೂರ್ತಿ ಪಡೆಯುತ್ತಿದ್ದರು. ಅರಬ್ಬಿ ಜನರ ಮನಸ್ಸಿನ ಮೇಲೆ ಆಗಲೂ ಮತ್ತು ಇಂದಿನವರೆಗೆ ಸಹ ಪ್ಲೇಟೋ ಮತ್ತು ಎಲ್ಲರಿಗೂ ಮುಖ್ಯವಾಗಿ ಅರಿಸ್ಟಾಟಲ್ ಬಹಳ ಪ್ರಭಾವ ಬೀರಿದ್ದಾರೆ. ಮೂಲಗ್ರಂಥಗಳಿಗಿಂತ ಹೆಚ್ಚಾಗಿ ಅರಬ್ಬಿ ಟೀಕಾ ಗ್ರಂಥಗಳ ಮೂಲಕ ಇಸ್ಲಾಂ<noinclude></noinclude>
8c3td8d7gtc3rv7h47wpkkrxw72irl6
ಪುಟ:ಭಾರತ ದರ್ಶನ.djvu/೨೧೦
104
85102
321349
229301
2026-05-20T09:20:06Z
Pragathi. BH
7585
/* Validated */
321349
proofread-page
text/x-wiki
<noinclude><pagequality level="4" user="Pragathi. BH" />{{rh||ಹೊಸ ಸಮಸ್ಯೆಗಳು|೨೦೫}}</noinclude>ವಿದ್ಯಾಪೀಠಗಳಲ್ಲಿ ಅವರ ತತ್ವಶಾಸ್ತ್ರವು ಪಾಠಕ್ರಮದಲ್ಲಿ ಅವಶ್ಯಭಾಗವಾಗಿದೆ. ಅಲೆಕ್ಸಾಂಡ್ರಿಯದ ನವೀನ ಪ್ಲೇಟೋ ಮತವೂ ಅರಬ್ಬಿ ಮನಸ್ಸಿನಮೇಲೆ ಪರಿಣಾಮ ಮಾಡಿತು. ಗ್ರೀಕ್ ತತ್ವಶಾಸ್ತ್ರದ ಚಾರ್ವಾಕವಾದದ ಪರಿಚಯವಾಗಿ ಹೇತುವಾದವೂ, ಚಾರ್ವಾಕವಾದವೂ ಬೆಳೆಯಲು ಅವಕಾಶ ವಾಯಿತು. ಹೇತುವಾದಿಗಳು ಧಾರ್ಮಿಕ ಬೋಧೆಗಳನ್ನು, ವಿಧಿಗಳನ್ನು ತರ್ಕರೀತಿಯಿಂದ ವಿಚಾರ ಮಾಡತೊಡಗಿದರು. ಚಾರ್ವಾಕವಾದಿಗಳು ಮತವನ್ನೇ ನಿರಾಕರಿಸಿದರು. ಬಾಗ್ದಾದಿನಲ್ಲಿ ಈ ಎಲ್ಲ ವಿರುದ್ಧ ಮತ್ತು ಅನನ್ವಯ ಸಿದ್ಧಾಂತಗಳ ಪ್ರತಿಪಾದನೆಗೆ ಮತ್ತು ಚರ್ಚೆಗೆ ಇದ್ದ ಸ್ವಾತಂತ್ರವು ಅತ್ಯಾಶ್ಚರ್ಯವನ್ನುಂಟುಮಾಡುತ್ತದೆ. ಧರ್ಮಶ್ರದ್ಧೆ ಮತ್ತು ವಿಚಾರ ದೃಷ್ಟಿಗಳಿಗೆ ಇದ್ದ ಈ ವಿವಾದ ಮತ್ತು ಘರ್ಷಣೆಗಳು ಬಾಗ್ದಾದಿನಿಂದ ಅರಬ್ಬಿ ಪ್ರಪಂಚದಲ್ಲೆಲ್ಲ ಹರಡಿ ಸ್ಪೇನ್ವರೆಗೂ ಮುಟ್ಟಿತು. ದೇವರ ಸ್ವರೂಪವು ಚರ್ಚೆಯಾಗಿ ಸಾಮಾನ್ಯವಾಗಿ ದೇವರಿಗೆ ಆರೋಪಿಸುವ ಗುಣಗಳು ಯಾವುವೂ ಇಲ್ಲವೆಂದೂ, ಆತನು ನಿರ್ಗುಣನೆಂದೂ ಹೇಳಿದರು. ಆ ಗುಣಗಳೆಲ್ಲ ಮಾನವಸ್ವಭಾವ ಗುಣಗಳಿದ್ದವು. ದೇವರು ದಯಾಮಯ, ಸತ್ಯಸಂಕಲ್ಪನೆಂದು ಹೇಳಿದರೆ ದೇವರಿಗೆ ಗಡ್ಡವಿದೆ ಎಂದರೆ ಎಷ್ಟು ಅಸಂಸ್ಕೃತವೋ, ಮೂಢವೋ ಅಷ್ಟೇ ಮೂಢವೆಂದರು.
{{gap}}ಹೇತುವಾದ ನಿರೀಶ್ವರವಾದ ನಾಸ್ತಿಕವಾದ ಎಡೆಗೊಟ್ಟವು. ಕ್ರಮೇಣ ಬಾಗ್ದಾದ್ ಹೀನಸ್ಥಿತಿಗೆ ಬಂದು, ತುರ್ಕಿಯ ಶಕ್ತಿಯು ಬಲಗೊಂಡಮೇಲೆ ಈ ತರ್ಕಬದ್ಧ ವಿಚಾರಬುದ್ದಿಯು ಕಡಮೆ ಯಾಯಿತು. ಆದರೆ ಅರಬ್ಬಿ ಸ್ಪೇನಿನಲ್ಲಿ ಈ ತರ್ಕ ವಿಚಾರವು ಮುಂದುವರಿದು ಸ್ಪೇನಿನ ಅರಬ್ಬಿ ದಾರ್ಶನಿಕರಲ್ಲಿ ಅತಿ ಶ್ರೇಷ್ಠ ನಾದ ಹನ್ನೆರಡನೆಯ ಶತಮಾನದ ಇಬನ್ ರಷೀದ್ (ಅವೆರೋಸ್) ನಾಸ್ತಿಕನಾಗಿದ್ದನು. ಆಗ ಪ್ರಚಾರದಲ್ಲಿದ್ದ ಮತಗಳೆಲ್ಲವೂ ಮಕ್ಕಳು ಅಥವ ಹುಚ್ಚರಿಗೆ ಮಾತ್ರ ಯೋಗ್ಯ, ಯಾವುದೂ ಆಚರಣಾರ್ಹವಲ್ಲ ಎಂದು ಹೇಳಿದನಂತೆ. ನಿಶ್ಚಯವಾಗಿ ಆತನು ಆ ರೀತಿ ಹೇಳಿದನೋ ಇಲ್ಲವೋ ತಿಳಿಯದು. ಆದರೂ ಈ ಕಥೆಯಿಂದ ಆತನ ಮನೋಭಾವವು ವ್ಯಕ್ತವಾಗುತ್ತದೆ; ಮತ್ತು ತನ್ನ ಅಭಿಪ್ರಾಯಗಳಿಗಾಗಿ ಆತನು ತೊಂದರೆಗೀಡಾದನು. ಅನೇಕ ವಿಧದಲ್ಲಿ ಆತನು ಕ್ರಾ೦ತಿ ಪುರುಷನಾಗಿದ್ದನು. ಸಾರ್ವಜನಿಕ ಕೆಲಸಗಳಲ್ಲಿ ಸ್ತ್ರೀಯರಿಗೆ ಪೂರ್ಣ ಅವಕಾಶ ಕೊಡಬೇಕೆಂದೂ, ಯಾವ ಕೆಲಸವನ್ನಾದರೂ ದಕ್ಷತೆಯಿಂದ ನಿರ್ವಹಿಸಬಲ್ಲರೆಂದೂ ಹೇಳಿದನು. ವಾಸಿಮಾಡಲಾಗದ ರೋಗಿಗಳು ಮತ್ತು ನಿಷ್ಟ್ರಯೋಜಕ ವ್ಯಕ್ತಿಗಳು ಸಮಾಜಕ್ಕೆ ಹೊರೆಯಾದ್ದರಿಂದ ಅವರನ್ನೆಲ್ಲ ನಾಶಮಾಡಬೇಕೆಂದು ಹೇಳಿದನು. ಯೂರೋಪಿನ ಇತರ ವಿದ್ಯಾಪೀಠಗಳೆಲ್ಲಕ್ಕಿಂತ ಸ್ಪೇನ್ ಬಹಳ ಮುಂದುವರಿದಿತ್ತು. ಕಾರ್ಡೊಬ ವಿದ್ಯಾಮಂದಿರದ ಅರಬ್ಬಿ ಮತ್ತು ಯಹೂದಿ ವಿದ್ವಾಂಸರಿಗೆ ಪ್ಯಾರಿಸ್ ಮತ್ತು ಇತರ ಕಡೆಗಳಲ್ಲಿ ಬಹಳ ಗೌರವವಿತ್ತು. ಈ ಅರಬ್ಬಿ ವಿದ್ವಾಂಸರಿಗೆ ಇತರ ಯೂರೋಪಿಯನರ ಮೇಲೆ ಯಾವ ಗೌರವಭಾವನೆಯು ಇರಲಿಲ್ಲ. ತೋಲೆದೊವಿನ ಸೈಯದ್ ಎಂಬ ಅರಬ್ಬಿ ಗ್ರಂಥಕರ್ತನು ಪಿರನೀಸ್ ಪರ್ವತಗಳಾಚೆ ಇರುವ ಯೂರೋಪಿಯನರ ವಿಷಯದಲ್ಲಿ “ ಅವರು ಶೀತಲ ಸ್ವಭಾವ ದವರು. ಎಂದಿಗೂ ಪ್ರೌಢರಾಗುವುದೇ ಇಲ್ಲ. ಆಜಾನುಬಾಹುಗಳು. ಬಿಳಿಯ ಬಣ್ಣದವರು. ಆದರೆ ಹಾಸ್ಯ ನೈಪುಣ್ಯವೂ ಇಲ್ಲ ಕುಶಾಗ್ರ ಬುದ್ದಿಯೂ ಇಲ್ಲ” ಎಂದಿದ್ದಾನೆ.
{{gap}}ಪಶ್ಚಿಮ ಮತ್ತು ಮಧ್ಯ ಏಷ್ಯದಲ್ಲಿ ಅರಬ್ಬಿ ಸಂಸ್ಕೃತಿಯು ವಿಕಾಸವಾಗಲು ಸ್ಫೂರ್ತಿ ಬಂದುದು ಮುಖ್ಯವಾಗಿ ಅರಬ್ಬಿ ಮತ್ತು ಇರಾಣಿ ಮೂಲಗಳೆರಡರಿಂದ ಎರಡೂ ರಸಪಾಕವಾಗಿ ಅದ್ಭುತ ಭಾವನಾಶಕ್ತಿಯನ್ನು ಕೊಟ್ಟುದಲ್ಲದೆ ಮೇಲ್ಮಟ್ಟದ ಜನರಿಗೆ ಉತ್ತಮ ಜೀವನ ಸೌಕರ್ಯವನ್ನೂ ಒದಗಿಸಿಕೊಟ್ಟಿತು. ಅರಬ್ಬಿ ಜನರಿಂದ ಕಾರ್ಯಶಕ್ತಿಯ, ವಿಚಾರಪರತೆಯೂ ಬಂದುವು. ಇರಾಣಿ ಗಳಿಂದ ಜೀವನಗಾಂಭೀರ್ಯ, ಕಲೆ ಮತ್ತು ಸುಖಜೀವನಗಳು ಬೆಳೆದವು. ತುರ್ಕಿಯ ಪ್ರಾಬಲ್ಯ ದಿ೦ದ ಬಾಗ್ದಾದ್ನ ಅವನತಿಯಾಗಿ ತರ್ಕಬುದ್ಧಿ ಮತ್ತು ವಿಚಾರಪರತೆಗಳು ನಾಶವಾದವು. ಚಂಗೀಸ್ ರ್ಖಾ ಮತ್ತು ಮಂಗೋಲರು ಅದನ್ನೆಲ್ಲ ಪೂರ್ಣ ನಾಶಮಾಡಿದರು. ಒಂದು ನೂರು ವರ್ಷಗಳ ಮೇಲೆ ಮಧ್ಯ ಏಷ್ಯ ಪುನಃ ಎಚ್ಚತ್ತು ಸಾಮರಖಂಡ್ ಮತ್ತು ಹೀರತ್ ನಗರಗಳು ಚಿತ್ರ ಮತ್ತು<noinclude></noinclude>
c0vkp7i8bzz5fgurhm4jpgaonzszhi9
ಪುಟ:ಭಾರತ ದರ್ಶನ.djvu/೨೧೧
104
85103
321351
229309
2026-05-20T09:20:26Z
Pragathi. BH
7585
/* Validated */
321351
proofread-page
text/x-wiki
<noinclude><pagequality level="4" user="Pragathi. BH" />{{rh|೨೦೬|ಭಾರತ ದರ್ಶನ|}}</noinclude>ಶಿಲ್ಪ ಕಲೆಯ ಕೇಂದ್ರಗಳಾದವು; ಪ್ರಾಚೀನ ಅರಬ್ಬಿ-ಪಾರಸಿ ನಾಗರಿಕತೆಯ ಸಂಪ್ರದಾಯಗಳು ಪುನರುಜ್ಜಿವಿತವಾದುವು. ಆದರೆ ಅರಬ್ಬಿ ರಾಷ್ಟ್ರೀಯ ಭಾವನೆಯಾಗಲಿ ವಿಜ್ಞಾನವಾಗಲಿ ಪುನರುಜ್ಜೀವನಗೊಳ್ಳಲಿಲ್ಲ. ಮನೋರಾಜ್ಯದ ವಿಚಾರಕ್ಕಿಂತ ರಣರಂಗದಲ್ಲಿ ವಿಜಯ ಪಡೆಯಲು ಅನುಕೂಲವಾಗುವಂತೆ ಇಸ್ಲಾಂ ಧರ್ಮವು ತುಂಬ ಕಟ್ಟು ನಿಟ್ಟಾಯಿತು. ಏಷ್ಯದಲ್ಲಿ ಅದರ ಮುಖ್ಯ ಪ್ರತಿ ನಿಧಿಗಳು ಅರಬ್ಬಿ ಜನವಾಗಲಿಲ್ಲ. ತುರ್ಕಿಯವರು, ಮಂಗೋಲಿಯನರು (ಭಾರತದಲ್ಲಿ ಮೊಗಲರು), ಸ್ವಲ್ಪ ಮಟ್ಟಿಗೆ ಅಪ್ಘ್ನರು ಅದರ ಮುಖ್ಯ ಪ್ರಚಾರಕರಾದರು. ಪಶ್ಚಿಮ ಏಷ್ಯದಲ್ಲಿ ಮಂಗೋಲರು ಮುಸ್ಲಿಮರಾಗಿದ್ದರು. ದೂರ ಪ್ರಾಚ್ಯದಲ್ಲಿ ಮತ್ತು ಮಧ್ಯ ಪ್ರದೇಶಗಳಲ್ಲಿ ಅನೇಕರು ಇನ್ನೂ ಬೌದ್ಧರಾಗಿದ್ದರು.
{{center|೩. ಘಜ್ನಿ ಮಹಮ್ಮದ್ ಮತ್ತು ಆಫ್ಘನರು }}
{{gap}}ಎಂಟನೆಯ ಶತಮಾನದ ಆರಂಭದಲ್ಲಿ ಕ್ರಿ. ಶ. ೨೧೨ ರಲ್ಲಿ ಅರಬ್ಬಿ ಜನರು ಸಿಂಧು ದೇಶದವರೆಗೆ ಬಂದು ಅದನ್ನು ಆಕ್ರಮಿಸಿದರು. ಸುಮಾರು ಅರ್ಧ ಶತಮಾನದ ಒಳಗೆ ಸಿಂಧು ದೇಶವು ಅರಬ್ಬಿ ಸಾಮ್ರಾಜ್ಯದಿಂದ ದೂರವಾಗಿ ಒಂದು ಸಣ್ಣ ಸ್ವತಂತ್ರ ಮುಸ್ಲಿಂ ರಾಷ್ಟ್ರವಾಯಿತು, ಅನಂತರ ಸುಮಾರು ಮೂರುನೂರು ವರ್ಷಗಳವರೆಗೆ ಯಾವ ಮುತ್ತಿಗೆಯೂ ಆಗಲಿಲ್ಲ. ಕ್ರಿ. ಶ. ೧೦೦೦ದ ಸುಮಾರಿನಲ್ಲಿ ಮಧ್ಯ ಏಷ್ಯದಲ್ಲಿ ಪ್ರಾಬಲ್ಯಕ್ಕೆ ಬಂದ ತುರ್ಕಿ ಆಫ್ಘಾನಿಸ್ತಾನದ ಸುಲ್ತಾನ್ ಘಜ್ಜಿ ಮಹಮ್ಮದ್ ಎಂಬ ತುರ್ಕಿಯವರು ಭಾರತದ ಮೇಲೆ ದಂಡಯಾತ್ರೆಗಳನ್ನು ಆರಂಭಿಸಿದನು. ಅನೇಕ ದಂಡಯಾತ್ರೆಗಳನ್ನು ಮಾಡಿದನು. ನಿಷ್ಕರುಣೆಯಿಂದ ರಕ್ತಪಾತಮಾಡಿ ಪ್ರತಿಸಲವೂ ಅಪಾರ ಐಶ್ವರ್ಯವನ್ನು ಕೊಳ್ಳೆ ಹೊಡೆದುಕೊಂಡು ಹೋದನು. ಆಗಿನ ಕಾಲದ ವಿದ್ವಾಂಸನಾದ ಖೈವ್ ನಗರದ ಅಲ್ಬೆರುನಿ “ ಹಿಂದು ಗಳು ಧೂಳಿಕಣದಂತೆ ಚಲ್ಲಾಪಿಲ್ಲಿಯಾಗಿ ದಿಕ್ಕು ಪಾಲಾಗಿ ಓಡಿ ಹೋದರು. ಅವರ ಕಥೆಯು ದಂತ ಕಥೆಯಾಯಿತು. ಚೆದುರಿ ಉಳಿದವರು ಮುಸ್ಲಿಮರನ್ನು ಕಂಡರೆ ವಿಷಕಾರುತ್ತಾರೆ” ಎಂದು ಬರೆದಿದ್ದಾನೆ. ಈ ಕಾವ್ಯಮಯ ವರ್ಣನೆಯಿಂದ ಮಹಮ್ಮದನು ಎಷ್ಟು ಅನರ್ಥಮಾಡಿದನೆಂಬುದು ಗೊತ್ತಾಗುತ್ತದೆ. ಆದರೂ ಮಹಮ್ಮದ್ ತನ್ನ ದಾರಿಯಲ್ಲಿ ದೊರೆತ ಉತ್ತರ ಹಿಂದೂಸ್ಥಾನದ ಅಲ್ಪ ಭಾಗವನ್ನು ಮಾತ್ರ ಕೊಳ್ಳೆ ಹೊಡೆದು ನಾಶಮಾಡಿದನೆಂಬುದನ್ನು ಮರೆಯಲಾಗದು. ಮಧ್ಯ ಇಂಡಿಯ, ಪೂರ್ವ ಮತ್ತು ದಕ್ಷಿಣ ಇಂಡಿಯದ ಭಾಗಗಳಿಗೆ ಆತನಿಂದ ಯಾವ ಹಾನಿಯೂ ಆಗಲಿಲ್ಲ.
{{gap}}ದಕ್ಷಿಣ ಇಂಡಿಯದಲ್ಲಿ ಆಗಲೂ ಮತ್ತು ಅನೇಕ ದಿನಗಳ ಅನಂತರವೂ ಬಲಯುತವಾದ ಚೋಳ ಚಕ್ರಾಧಿಪತ್ಯದ ಅಧಿಕಾರ ನಡೆಯುತ್ತಲಿತ್ತು. ಅದು ಸಮುದ್ರ ಮಾರ್ಗಗಳನ್ನೆಲ್ಲ ತನ್ನ ಕೈವಶಮಾಡಿಕೊಂಡು ಜಾವ ಮತ್ತು ಸುಮಾತ್ರಾಗಳವರೆಗೂ ಹಬ್ಬಿ ಅಲ್ಲಿನ ದೊರೆಯಾದ ಶ್ರೀವಿಜಯ ನನ್ನು ತನ್ನ ಅಧೀನಮಾಡಿಕೊಂಡಿತ್ತು. ಆದರೆ ಇದರಿಂದ ಉತ್ತರ ಹಿಂದೂಸ್ಥಾನವು ಮುತ್ತಿಗೆಗೆ ಗುರಿಯಾಗುವುದು ತಪ್ಪಲಿಲ್ಲ.
{{gap}}ಮಹಮ್ಮದನು ಪಂಜಾಬ್ ಮತ್ತು ಸಿಂಧು ದೇಶಗಳನ್ನು ಗೆದ್ದು ತನ್ನ ರಾಜ್ಯದೊಳಗೆ ಸೇರಿಸಿ ಕೊಂಡು ಪ್ರತಿಯೊಂದು ದಂಡಯಾತ್ರೆಯಾದೊಡನೆ ಘಸ್ನಿಗೆ ಹಿಂದಿರುಗುತ್ತಿದ್ದನು. ಕಾಶ್ಮೀರವನ್ನು ಗೆಲ್ಲಲು ಆತನಿಂದ ಸಾಧ್ಯವಾಗಲಿಲ್ಲ, ಗುಡ್ಡಗಾಡಿನ ದೇಶವಾದ್ದರಿಂದ ಆತನನ್ನು ತಡೆದು ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಕಾಥೇವಾಡದ ಸೋಮನಾಥದಿಂದ ಹಿಂತಿರುಗುವಾಗ ರಾಜಪುತಾನದಲ್ಲಿ ಆತನಿಗೆ ದೊಡ್ಡ ಸೋಲಾಯಿತು. ಅದೇ ಅವನ ಕೊನೆಯ ದಂಡಯಾತ್ರೆಯಾಗಿ ಪುನಃ ಅವನು ಬರಲಿಲ್ಲ.
{{gap}}ಮಹಮ್ಮದ್ ಮತ ಪ್ರಚಾರಕನಿಗಿಂತ ಹೆಚ್ಚಾಗಿ ಯೋಧನಾಗಿದ್ದನು. ಇತರ ಎಲ್ಲ ಯೋಧ
<small>{{gap}}ಪಾರಸಿಭಾಷೆಯ ತರೀಖ್-ಇ-ಸೋರತ್ ಎಂಬ ಪ್ರಾಚೀನ ಗ್ರಂಥದಲ್ಲಿ ಮಹಮ್ಮದನು ದಿಕ್ಕು ಕಾಣದೆ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡನು, ಅವನನ್ನು ಹಿಂಬಾಲಿಸಿದ್ದ ಸ್ತ್ರೀಪುರುಷರೆಲ್ಲರೂ ಸೆರೆಬಿದ್ದರು, ತುರ್ಕಿ, ಆಫ್ಘನ್, ಮೊಗಲ್ ಸ್ತ್ರೀಯರಲ್ಲಿ ಕನ್ನೆಯರಾಗಿದ್ದವರನ್ನು ಭಾರತೀಯ ಸೈನಿಕರು ಮದುವೆ ಮಾಡಿಕೊಂಡರು.</small><noinclude></noinclude>
bkztbropcfz9i7rcfzdoro59r1m4lih
ಪುಟ:ಭಾರತ ದರ್ಶನ.djvu/೨೧೨
104
85104
321352
229322
2026-05-20T09:20:47Z
Pragathi. BH
7585
/* Validated */
321352
proofread-page
text/x-wiki
<noinclude><pagequality level="4" user="Pragathi. BH" />{{rh||ಹೊಸ ಸಮಸ್ಯೆಗಳು|೨0೭}}</noinclude>ರಂತೆ ಆತನು ತನ್ನ ವಿಜಯಯಾತ್ರಗಳಿಗೆ ಧರ್ಮದ ಹೆಸರನ್ನು ಕೊಟ್ಟು ದುರುಪಯೋಗಮಾಡಿದನು. ಇಂಡಿಯ ಅವನಿಗೆ, ಕೊಳ್ಳೆ ಹೊಡೆದ ಲೂಟಿಮಾಡಿದ ಅಪಾರ ಐಶ್ವಠ್ಯವನ್ನು ತನ್ನ ದೇಶಕ್ಕೆ ತೆಗೆದು ಕೊಂಡು ಹೋಗಲು ಅನುಕೂಲವಾದ ದೇಶಮಾತ್ರವಾಗಿತ್ತು. ಭಾರತದಲ್ಲಿಯೇ ಒಂದು ಸೈನ್ಯವನ್ನು ಕಟ್ಟಿ ಭಾರತೀಯನನ್ನೆ ಒಬ್ಬನನ್ನು ಅದಕ್ಕೆ ಸೇನಾನಿಯನ್ನಾಗಿ ಮಾಡಿದನು. ಅವನ ಹೆಸರು ತಿಲಕ್. ಅವನು ಭಾರತೀಯನೂ ಹಿಂದುವೂ ಆಗಿದ್ದನು. ಈ ಸೈನ್ಯವನ್ನು ಮಧ್ಯ ಏಷ್ಯದಲ್ಲಿ ತನ್ನ ಸ್ವಧರ್ಮಿಯರ ಮೇಲೂ ಯುದ್ಧಕ್ಕೆ ಬಿಟ್ಟನು. ಅವನ ರಾಜಧಾನಿಯಾದ ಘಜ್ಜಿ ನಗರವು ಮಧ್ಯ ಮತ್ತು ಪಶ್ಚಿಮ ಏಷ್ಯದ ಮಹಾನಗರಗಳನ್ನು ಮೀರಿಸಬೇಕೆಂಬುದೇ ಅವನ ಹಿರಿಯಾಸೆಯಾಗಿತ್ತು. ಭಾರತ ದಿಂದ ಅನೇಕ ಕುಶಲ ಕರ್ಮಿಗಳನ್ನು, ಶಿಲ್ಪಶಾಸ್ತ್ರಜ್ಞರನ್ನು ಅಲ್ಲಿಗೆ ಕರೆದುಕೊಂಡು ಹೋದನು. ಭಾರತೀಯರ ಕಟ್ಟಡಗಳನ್ನು ನೋಡಿ ಬಹಳ ಮೋಹಿತನಾದನು. ದೆಹಲಿಯ ಬಳಿ ಇರುವ ಮಧುರಾ ನಗರವನ್ನು ನೋಡಿ ಮುಗ್ಧನಾದನು. ಅದನ್ನು ನೋಡಿ “ಧರ್ಮಭೀರುಗಳ ಅಚಲವಾದ ಧರ್ಮಶ್ರದ್ದೆ ಯಿಂದ ಇಲ್ಲಿ ಸಾವಿರಾರು ಸೌಧಗಳಿವೆ. ಅನೇಕ ಶತಲಕ್ಷ ಹೊನ್ನು ಗಳ ವೆಚ್ಚವಿಲ್ಲದೆ ಈ ನಗರವು ಈ ಸ್ಥಿತಿಗೆ ಬರಲು ಸಾಧ್ಯವಿಲ್ಲ. ಇಂಥ ಇನ್ನೊಂದು ನಗರ ನಿರ್ಮಾಣಕ್ಕೆ ಎರಡುನೂರು ವರ್ಷಗಳಾದರೂ ಬೇಕು” ಎಂದು ಬರೆದಿದ್ದಾನೆ.
{{gap}}ತನ್ನ ಯುದ್ಧಗಳ ಮಧ್ಯೆ ತನ್ನ ತಾಯ್ನಾಡಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿ ಸಲು ಕಾತರನಾಗಿದ್ದನು. ಅನೇಕ ಮಹಾವ್ಯಕ್ತಿಗಳನ್ನು ಸುತ್ತಲೂ ಸೇರಿಸಿಕೊಂಡನು. 'ಷಹ ನಾಮ' ಬರೆದ ಫಿರ್ದೌಸಿಯು ಇವರಲ್ಲಿ ಒಬ್ಬ. ಕೊನೆಯಲ್ಲಿ ಇವನು ಮಹಮ್ಮದನೊಂದಿಗೆ ವ್ಯಾಜ್ಯ ವಾಡಿದನು. ಮಹಾವಿದ್ವಾಂಸನೂ, ಪ್ರಸಿದ್ಧ ಪ್ರವಾಸಿಯೂ ಆದ ಅಲ್ಬೆರುನಿ ಅವನ ಸಮಕಾಲೀನ. ತನ್ನ ಗ್ರಂಥಗಳಲ್ಲಿ ಮಧ್ಯ ಏಷ್ಯದಲ್ಲಿ ಆಗಿನ ಕಾಲದಲ್ಲಿ ಜೀವನ ಹೇಗಿತ್ತು ಎಂಬ ಕಿರುನೋಟವನ್ನು ಕೊಡುತ್ತಾನೆ. ಪಾರಸಿನಂಶೀಕನಾದರೂ, ಶೈವದಲ್ಲಿ ಹುಟ್ಟಿ ಇಂಡಿಯ ದೇಶಕ್ಕೆ ಬಂದು ದೊಡ್ಡ ಪ್ರವಾಸಮಾಡಿದನು. ಚೋಳರಾಜ್ಯಕ್ಕೆ ಬಂದಿದ್ದುದೂ ದಕ್ಷಿಣಭಾರತದಲ್ಲಿ ಪ್ರವಾಸಮಾಡಿದುದೂ ಅನುಮಾನವಾದರೂ ಚೋಳ ರಾಜ್ಯದಲ್ಲಿ ಒಂದು ದೊಡ್ಡ ಜಲಾಶಯವಿತ್ತೆಂದು ಹೇಳುತ್ತಾನೆ. ಕಾಶ್ಮೀರ ದಲ್ಲಿ ಸಂಸ್ಕೃತವನ್ನು ಕಲಿತು ಭಾರತೀಯ ಧರ್ಮ, ತತ್ವಶಾಸ್ತ್ರ, ವಿಜ್ಞಾನ ಮತ್ತು ಕಲೆಗಳನ್ನು ಅಭ್ಯಾಸಮಾಡಿದನು. ಗ್ರೀಕ್ ತತ್ವಶಾಸ್ತ್ರವನ್ನು ಕಲಿಯಲು ಮೊದಲೇ ಆತನು ಗ್ರೀಕ್ ಭಾಷೆಯನ್ನು ಕಲಿತಿದ್ದನು. ಆತನ ಗ್ರಂಥಗಳು ಜ್ಞಾನ ಭಂಡಾರ ಮಾತ್ರವಲ್ಲದೆ ಸುತ್ತಲೂ ಯುದ್ಧ, ಸುಲಿಗೆ, ಕೊಲೆಪಾತಗಳಾಗುತ್ತಿದ್ದರೂ ತಾಳ್ಮೆಯಿಂದ ವಿದ್ವತ್ತು ಹೇಗೆ ಮುಂದುವರಿಯಿತು, ಕಾಮಕ್ರೋಧಾದಿ ಗಳಿಂದ ಪರಸ್ಪರ ಬಾಂಧವ್ಯದಲ್ಲಿ ವೈಷಮ್ಯ ಹುಟ್ಟಿದ್ದರೂ ಒಂದು ದೇಶವು ಇನ್ನೊಂದು ದೇಶವನ್ನು ಅರ್ಥಮಾಡಿಕೊಳ್ಳಲು ಹೇಗೆ ಪ್ರಯತ್ನ ಮಾಡಿತು ಎಂದು ತಿಳಿಸುತ್ತಾನೆ. ಆ ವ್ಯಾಮೋಹ ಮತ್ತು ಕ್ರೋಧದಿಂದ ಇಬ್ಬರ ದೃಷ್ಟಿ ಯೂ ಮಂಜಾಗಿರಬಹುದು, ಪ್ರತಿಯೊಂದು ದೇಶವೂ ತನ್ನ ಜನರೇ ಶ್ರೇಷ್ಠರೆಂದು ಭಾವಿಸಿರಬಹುದು. ಭಾರತೀಯರ ವಿಷಯದಲ್ಲಿ “ ಗರ್ವಿಗಳು, ಜಂಭದ ಕೋಳಿಗಳು, ಸ್ವಯಂ ಪೂರ್ಣರು, ಜಡಮತಿಗಳು” ಎಂದೂ “ ತಮ್ಮ ದೇಶಕ್ಕಿಂತ ಇನ್ನೊಂದಿಲ್ಲ, ತಮ್ಮ ಜನಾಂಗ ಕ್ಕಿಂತ ಉತ್ತಮವಿಲ್ಲ. ತಮ್ಮ ದೊರೆಗಿಂತ ಶ್ರೇಷ್ಠ ವಿಲ್ಲ, ತಮ್ಮ ವಿಜ್ಞಾನಕ್ಕಿಂತ ಬೇರೆ ಇಲ್ಲ ಎಂದು
<small>ಉಳಿದವರನ್ನು ವಮನ ವಿರೇಚನಗಳಿಂದ ದೇಹಶುದ್ದಿ ಮಾಡಿ ಅದೇ ಅಂತಸ್ತಿನ ಸೈನಿಕರಿಗೆ ಮದುವೆಮಾಡಿಕೊಡುತ್ತಿ ದ್ದರು, ಕೀಳುಜಾತಿಯ ಸ್ತ್ರೀಯರನ್ನು ಕೀಳುಜಾತಿಯ ಗಂಡಸರಿಗೆ ಮದುವೆಮಾಡುತ್ತಿದ್ದರು. ಉತ್ತಮರಿಗೆ ಅವರ ಗಡ್ಡವನ್ನು ಬೋಳಿಸಿ ರಜಪೂತರ ಹಿಖಾವತ್ ಮತ್ತು ವಾಧೀಲ ಗುಂಪಿಗೆ ಸೇರಿಸುತ್ತಿದ್ದರು, ಕಡಮೆ ದರ್ಜೆಯವರನ್ನು ಖೋಲಿ, ಖಂಟ, ಬಬ್ರಿಯ, ಮೇರ್ ಗುಂಪಿಗೆ ಸೇರಿಸುತ್ತಿದ್ದರು.” ತರೀಖ್-ಇ-ಸೋರತ್ ನಾನು ಓದಿಲ್ಲ, ಅದನ್ನು ಎಷ್ಟನ್ನು ನಂಬಬಹುದು ನಾನರಿಯೆ, ಈ ಉಲ್ಲೇಖನವನ್ನು ಕೆ, ಎಂ, ಮುನ್ನಿಯವರ ಗುರ್ಜರ ದೇಶದ ವೈಭವ ಎಂಬ ಗ್ರಂಥದಿಂದ ಉದಹರಿಸಿರುತ್ತೇನೆ, ಮುಖ್ಯವಾಗಿ ಗಮನಿಸಬೇಕಾದದ್ದು ಏದೇಶೀಯರು ರಜಪೂತ ಪಂಗಡ ಗಳಲ್ಲಿ ಸೇರಿ ಹೋಗುತ್ತಿದ್ದ ಮದುವೆ ಸಹ ಆಗುತ್ತಿದ್ದ ರೀತಿ, ಶುದ್ಧಿಕರಣ ಪದ್ಧತಿಯು ಬಹಳ ವಿಚಿತ್ರವಿದೆ</small><noinclude></noinclude>
k7njbxyxtn1b9eya0muodquku6edzom
ಪುಟ:ಭಾರತ ದರ್ಶನ.djvu/೨೧೩
104
85105
321354
229324
2026-05-20T09:20:59Z
Pragathi. BH
7585
/* Validated */
321354
proofread-page
text/x-wiki
<noinclude><pagequality level="4" user="Pragathi. BH" />{{rh|೨೦೮|ಭಾರತ ದರ್ಶನ|}}</noinclude>ನಂಬಿದ್ದಾರೆ” ಎಂದೂ ಬರೆದಿದ್ದಾನೆ. ಪ್ರಾಯಶಃ ಆಗಿನ ಜನರ ಮನೋಭಾವನೆಯ ನಿಜವಾದ ವರ್ಣನೆಯೇ ಇರಬೇಕು,
{{gap}}ರಾಜಕೀಯ ದೃಷ್ಟಿಯಿಂದ ಇಡೀ ಭಾರತದಲ್ಲಿ ಮಹಮ್ಮದನ ದಂಡಯಾತ್ರೆಗಳಿಂದ ಹೆಚ್ಚು ಹಾನಿಯಾಗದೆ ಭಾರತದ ನಡುಗಡ್ಡೆಯನ್ನು ಸಹ ಮುಟ್ಟಲು ಸಾಧ್ಯವಾಗದಿದ್ದರೂ ಇಂಡಿಯದ ಇತಿ ಹಾಸದಲ್ಲಿ ಮಹಮ್ಮದನ ದಂಡಯಾತ್ರೆಗಳು ಒಂದು ದೊಡ್ಡ ಘಟನೆ. ಉತ್ತರ ಹಿಂದೂಸ್ಥಾನದ ದೌರ್ಬಲ್ಯ ಮತ್ತು ಹೀನಸ್ಥಿತಿಯನ್ನು ಅದು ವ್ಯಕ್ತಗೊಳಿಸುತ್ತದೆ. ಉತ್ತರ ಮತ್ತು ಪಶ್ಚಿಮ ಭಾರತದ ಆಗಿನ ರಾಜಕೀಯ ಛಿದ್ರತೆಯ ಮೇಲೆ ಅಲ್ಪೆರುನಿಯು ಹೆಚ್ಚು ಬೆಳಕನ್ನು ಬೀರಿದ್ದಾನೆ. ಮೇಲಿಂದ ಮೇಲೆ ವಾಯವ್ಯದ ಗಡಿಯಿಂದ ಬಂದ ಈ ದಂಡಯಾತ್ರೆಗಳಿಂದ ಇಂಡಿಯದ ಕಾರ್ಪಣ್ಯ ಭಾವನೆ ಮತ್ತು ಆರ್ಥಿಕ ನೀತಿಯಲ್ಲಿ ಹೊಸ ಸಮಸ್ಯೆಗಳು ಉದ್ಭವಿಸಿದವು. ಕ್ರೂರ ಸೈನಿಕ ಧಾಳಿ ಮತ್ತು ವಿಜಯಯಾತ್ರೆಯ ಹಿಂದೆಯೇ ಇಸ್ಲಾಂ ಧರ್ಮದ ಪ್ರಥಮ ಪ್ರವೇಶವಾಯಿತು. ಇದುವರೆಗೆ ಮೂರು ನೂರು ವರ್ಷಗಳಿಂದ ಇಸ್ಲಾಂ ಶಾಂತರೀತಿಯಲ್ಲಿ ಒಂದು ಮತಧರ್ಮವಾಗಿ ಬಂದಿತ್ತು ಮತ್ತು ಇಂಡಿಯದಿಂದ ಅನೇಕ ಧರ್ಮಗಳ ಜೊತೆಯಲ್ಲಿ ಯಾವ ತೊಂದರೆ ಅಥವ ವಿರೋಧಕ್ಕೂ ಎಡೆಗೊಡದೆ ಅದೂ ಒಂದು ಧರ್ಮವಾಗಿತ್ತು. ಆದರೆ ಈ ನೂತನ ಮಾರ್ಗವು ಜನರಲ್ಲಿ ದೊಡ್ಡ ಮಾನಸಿಕ ಪರಿಣಾಮವನ್ನುಂಟುಮಾಡಿ ಜನರಲ್ಲೊಂದು ರಚ್ಚು ತುಂಬಿತ್ತು. ಹೊಸ ಧರ್ಮಕ್ಕೆ ಯಾವ ವಿರೋಧವೂ ಇರಲಿಲ್ಲ. ಆದರೆ ಬಲಾತ್ಕಾರದಿಂದ ಪ್ರವೇಶಮಾಡಿ ಅವರ ಜೀವನರೀತಿಗೆ ಅಡ್ಡ ಬರುವು ದನ್ನು ಜನರು ಪ್ರಬಲವಾಗಿ ವಿರೋಧಿಸಿದರು.
{{gap}}ಭಾರತದಲ್ಲಿ ಹಿಂದೂ ಧರ್ಮವು ಅನೇಕ ರೂಪಗಳಲ್ಲಿ ಅನೇಕ ವಿಧವಾಗಿ ಮುಖ್ಯ ಧರ್ಮ ವಾದರೂ ಇಂಡಿಯದಲ್ಲಿ ಅನೇಕ ಧರ್ಮಗಳಿದ್ದವು. ಬಹುಮಟ್ಟಿಗೆ ಅಳಿಸಿಹೋಗಿದ್ದ ಜೈನ ಧರ್ಮ, ಬೌದ್ಧ ಧರ್ಮಗಳಲ್ಲದೆ ಕ್ರೈಸ್ತ ಮತ್ತು ಹೀಬ್ರ ಧರ್ಮಗಳೂ ಆಚರಣೆಯಲ್ಲಿದ್ದವು. ಪ್ರಾಯಶಃ ಇವೆರಡೂ ಕ್ರಿಸ್ತಶಕೆಯ ಒಂದನೆಯ ಶತಮಾನದಲ್ಲಿ ಇಂಡಿಯಕ್ಕೆ ಬಂದು ನೆಲೆಸಿದ್ದವು. ದಕ್ಷಿಣ ಇಂಡಿಯದಲ್ಲಿ ಸಿರಿರ್ಯ ಕ್ರಿಶ್ಚಿಯನರೂ, ನೆಸ್ಟೋರಿಯನರೂ ಇದ್ದರು. ಇತರರಂತೆ ಅವರೂ ದೇಶದ ಅಂಗವಾಗಿದ್ದರು. ಇದರಂತೆ ಯಹೂದಿಗಳಿದ್ದರು. ಇರಾಣದಿಂದ ಏಳನೆಯ ಶತಮಾನದಲ್ಲೇ ಬಂದ ಜೋರಾಯನರೂ ಇದ್ದರು. ಅದೇ ರೀತಿ ಪಶ್ಚಿಮ ತೀರ ಮತ್ತು ವಾಯವ್ಯದಲ್ಲಿ ಅನೇಕ ಮುಸ್ಲಿಮರಿದ್ದರು.
{{gap}}ಮಹಮ್ಮದ್ ದೇಶವನ್ನು ಗೆಲ್ಲಲು ಬಂದನು. ಪಂಜಾಬ್ ಅವನ ರಾಜ್ಯದ ಕೊನೆಯ ಗಡಿ ಯಾಯಿತು. ಅವನು ಅಲ್ಲಿ ರಾಜ್ಯವನ್ನು ಕಟ್ಟಿದ ಮೇಲೆ ಸ್ವಲ್ಪ ಮಟ್ಟಿಗಾದರೂ ದೇಶದ ಜನರನ್ನು ಒಲಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ತನ್ನ ಹಿಂದಿನ ಕ್ರೌರ್ಯವನ್ನು ಸ್ವಲ್ಪ ಸೌಮ್ಯ ಮಾಡಲು ಯತ್ನ ಮಾಡಿದನು. ಹಿಂದೂಗಳ ಆಚಾರ ವ್ಯವಹಾರದಲ್ಲಿ ಪ್ರವೇಶ ಮಾಡುವುದನ್ನು ಕಡಮೆ ಮಾಡಿದನು. ಸೈನ್ಯದಲ್ಲಿ ಮತ್ತು ಆಡಳಿತ ವರ್ಗದಲ್ಲಿ ಹಿಂದೂಗಳಿಗೆ ಉನ್ನತ ಸ್ಥಾನಗಳನ್ನು ಕೊಟ್ಟನು. ಈ ನೀತಿಯು ಮೊದಲು ಆರಂಭವಾದದ್ದು ಮಹಮ್ಮದನ ಕಾಲದಲ್ಲಿ ; ಆದರೆ ಬೆಳೆದದ್ದು ಅನೇಕ ದಿನಗಳ ನಂತರ.
{{gap}}೧೦೩೦ ರಲ್ಲಿ ಮಹಮ್ಮದ್ ಕಾಲವಾದನು, ಅನಂತರ ಒಂದುನೂರ ಅರುವತ್ತು ವರ್ಷಗಳವರೆಗೆ ಭಾರತದ ಮೇಲೆ ಯಾವ ಮುತ್ತಿಗೆಯೂ ಆಗಲಿಲ್ಲ. ಪಂಜಾಬನ್ನು ದಾಟಿ ಯಾವ ತುರ್ಕಿಯ ರಾಜನೂ ಬರಲಿಲ್ಲ. ಷಹಬುದ್ದೀನ ಘೋರಿ ಎಂಬ ಆಫ್ಘನನು ಘಜ್ಜೆ ನಗರವನ್ನು ಹಿಡಿದು ಘಜ್ಞೆ ಸಂತತಿಯನ್ನು ನಾಶಮಾಡಿದನು. ಲಾಹೋರ್ ನಗರವನ್ನು ಆಕ್ರಮಿಸಿ ದೆಹಲಿಗೆ ಬಂದನು. ಆದರೆ ದೆಹಲಿಯ ದೊರೆಯಾದ ಪೃಥ್ವಿರಾಜ ಚೌಹನನು ಅವನನ್ನು ಸಂಪೂರ್ಣವಾಗಿ ಸೋಲಿಸಿದನು. ಸಹಬುದ್ದೀನ್ ಆಫ್ಘಾನಿಸ್ಥಾನಕ್ಕೆ ಹಿಂದಿರುಗಿ, ಒಂದು ವರ್ಷದ ನಂತರ ಪುನಃ ದಂಡೆತ್ತಿ ಬಂದನು. ಈ ಬಾರಿ ಜಯಶಾಲಿಯಾಗಿ ೧೧೯೨ ರಲ್ಲಿ ದೆಹಲಿ ಸಿಂಹಾಸನ ಏರಿದನು.<noinclude></noinclude>
41zddr29s3dpjjo6umtxn75ncjqnf3k
ಪುಟ:ಭಾರತ ದರ್ಶನ.djvu/೨೧೪
104
85106
321355
229326
2026-05-20T09:21:16Z
Pragathi. BH
7585
/* Validated */
321355
proofread-page
text/x-wiki
<noinclude><pagequality level="4" user="Pragathi. BH" />{{rh|ಹೊಸ ಸಮಸ್ಯೆಗಳು|೨೦೯}}</noinclude>{{gap}}ಕಾವ್ಯ ಮತ್ತು ಕಥೆಗಳಲ್ಲಿ, ಎಲ್ಲ ಪ್ರೇಮಸಾಹಸಿಗಳಂತೆ, ಪೃಥ್ವಿರಾಜನೂ ಜನಪ್ರಿಯನಾಗಿದ್ದಾನೆ. ತಾನು ಪ್ರೀತಿಸಿದ್ದ ಮತ್ತು ತನಗೆ ಒಲಿದಿದ್ದ ಕನೈಯನ್ನು ವರಿಸಲು ಆಕೆಯ ತಂದೆಯಾದ ಜಯ ಚಂದ್ರನ ಅರಮನೆಯಿಂದ ಎದುರು ಬಂದ ರಾಜಕುಮಾರರನ್ನೆಲ್ಲ ಧಿಕ್ಕರಿಸಿ ಅವರ ಎದುರಿನಲ್ಲಿ ಎತ್ತಿಕೊಂಡು ಹೋಗಿದ್ದನು. ಸ್ವಲ್ಪ ಕಾಲ ತನ್ನ ಪ್ರೇಯಸಿಯ ಪ್ರೇಮವನ್ನೇನೋ ಅನುಭವಿಸಿದನು. ಆದರೆ ಬಲಿಷ್ಠ ರಾಜನೊಡನೆ ವೈರವನ್ನು ಕಟ್ಟಿ ಕೊಂಡು ಅ೦ತಃಕಲಹ ಹುಟ್ಟ ಎರಡು ಕಡೆಯೂ ದೆಹಲಿ ಮತ್ತು ಮಧ್ಯ ಇಂಡಿಯದ ವೀರಾಗ್ರಣಿಗಳೆಲ್ಲ ಪರಸ್ಪರ ಕಾದಾಡಿ ಪ್ರಾಣ ಬಿಟ್ಟರು. ಈ ರೀತಿ ಒಬ್ಬ ಹೆಂಗಸಿನ ಪ್ರೇಮಕ್ಕಾಗಿ ಪೃಥ್ವಿರಾಜನು ತನ್ನ ಪ್ರಾಣವನ್ನೂ, ಸಿಂಹಾಸನ ವನ್ನೂ ಕಳೆದುಕೊಂಡನು. ಭಾರತೀಯ ಸಾಮ್ರಾಜ್ಯಗಳ ರಾಜಧಾನಿಯಾದ ದೆಹಲಿ ನಗರವು ಪರಕೀಯ ದಂಡನಾಯಕನ ಕೈಸೇರಿತು. ಈ ಪ್ರೇಮಕಥೆಯು ಕಾವ್ಯರೂಪದಲ್ಲಿ ಇನ್ನೂ ಕೇಳಬರುತಿದೆ. ಪೃಥ್ವಿರಾಜನೊಬ್ಬ ವೀರನಾಗಿದ್ದಾನೆ. ಜಯಚಂದ್ರನು ದ್ರೋಹಿಯಾಗಿದ್ದಾನೆ.
{{gap}}ದೆಹಲಿ ಪರಾಧೀನವಾದ್ದರಿಂದ ಭಾರತವೆಲ್ಲ ಪರಾಧೀನವಾಗಲಿಲ್ಲ. ದಕ್ಷಿಣದಲ್ಲಿ ಚೋಳರು ಸ್ವತಂತ್ರರಾಗಿದ್ದರು. ಇನ್ನೂ ಕೆಲವು ಸ್ವತಂತ್ರ ರಾಷ್ಟ್ರಗಳಿದ್ದವು. ಆಫ್ಘನರು ದಕ್ಷಿಣಾ ಪಥವನ್ನು ಆಕ್ರಮಿಸಲು ಇನ್ನೂ ಒಂದುನೂರು ಐವತ್ತು ವರ್ಷಗಳು ಬೇಕಾಯಿತು.
೪. ಇಂಡೋ - ಆಫ್ಘನರು : ದಕ್ಷಿಣ ಇಂಡಿಯ : ವಿಜಯನಗರ : ಬಾಬರ್ : ಸಮುದ್ರ ಬಲ
{{gap}}ಇಂಡಿಯದ ಇತಿಹಾಸವನ್ನು ಇಂಗ್ಲಿಷ್ ಮತ್ತು ಕೆಲವು ಭಾರತೀಯ ಚರಿತ್ರಕಾರರು ಸಹ ಪ್ರಾಚೀನ ಅಥವ ಹಿಂದೂ, ಮುಸ್ಲಿ೦, ಮತ್ತು ಬ್ರಿಟಿಷ್ ಕಾಲವೆಂದು ಮೂರು ಭಾಗ ವಿ೦ಗಡಮಾಡಿದ್ದಾರೆ. ಇದು ಅರ್ಥವತ್ತಾಗಿಯೂ ಇಲ್ಲ. ಸರಿಯೂ ಅಲ್ಲ. ಅದರಿಂದ ಬಹಳ ಮೋಸವಾಗುತ್ತದೆ ; ಮತ್ತು ಒಂದು ತಪ್ಪು ಭಾವನೆಯೂ ಹುಟ್ಟುತ್ತದೆ. ಅದರಲ್ಲಿ ಮೇಲಿನ ರಾಜಕೀಯ ಬದಲಾವಣೆ ಗಳಿಗೆ ಪ್ರಾಶಸ್ತ್ರ ಕೊಡಲಾಗಿದೆಯೇ ಹೊರತು, ಭಾರತೀಯರ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಪ್ರಮುಖ ಮಾರ್ಪಾಟುಗಳಿಗೆ ಯಾವ ಗಮನವನ್ನೂ ಕೊಟ್ಟಿಲ್ಲ. ಪ್ರಾಚೀನ ಎನ್ನು ವ ಕಾಲವು ಬಹು ದೀರ್ಘ ವಿದೆ; ಪರಿವರ್ತನೆ, ಬೆಳವಣಿಗೆ, ಕ್ಷೀಣದೆಸೆ, ಪುನಃ ಬೆಳವಣಿಗೆಗಳಿಂದ ತುಂಬಿದೆ. ಮುಸ್ಲಿ೦ ಅಥವ ಮಧ್ಯಯುಗದಲ್ಲಿ ಇನ್ನೊಂದು ಬಗೆಯ ಬದಲಾವಣೆಯಾಯಿತು. ಅದು ಬಹು ಮುಖ್ಯವಾದರೂ ಮೇಲಿನ ಉತ್ತಮ ವರ್ಗದ ಜನರಲ್ಲಿ ಆಯಿತೇ ಹೊರತು ಮುಖ್ಯವಾಗಿ ಭಾರತೀಯ ಜೀವನದ ನಿತ್ಯತೆಗೆ ಅಡ್ಡಿ ಬರಲಿಲ್ಲ. ವಾಯವ್ಯದಿಂದ ಇ೦ಡಿ ಯಕ್ಕೆ ದಂಡೆತ್ತಿ ಬಂದ ಮುತ್ತಿಗೆಕಾರರು ಪೂರ್ವದಲ್ಲಿ ಅವರಿಗಿಂತ ಮುಂಚೆ ದಂಡೆತ್ತಿ ಬಂದವರಂತೆ ಭಾರತದ ಜನಜೀವನದಲ್ಲಿ ಸೇರಿಕೊಂಡು ಐಕ್ಯವಾಗಿ ಹೋದರು. ಅವರ ವಂಶೀಕರು ಭಾರತೀಯ ವಂಶೀಕರಾದರು. ಪರಸ್ಪರ ವಿವಾಹದಿಂದ ತುಂಬ ವರ್ಣಸಂಕರವೂ ಆಯಿತು. ಅಲ್ಲಲ್ಲಿ ಕೆಲವರನ್ನು ಬಿಟ್ಟರೆ ಜನರ ಜೀವನ ಪದ್ಧತಿ ಮತ್ತು ಆಚಾರವ್ಯವಹಾರಗಳಿಗೆ ಯಾವ ಅಡ್ಡಿ ಯೂ ಆಗಲಿಲ್ಲ. ಅವರಿಗೂ ಭಾರತವೇ ಮಾತೃಭೂಮಿಯಾಯಿತು; ಬೇರೆ ಯಾವ ವ್ಯಾಮೋಹವೂ ಇರಲಿಲ್ಲ. ಆದ್ದರಿ೦ದ ಇ೦ಡಿಯ ಸ್ವತಂತ್ರವಾಗಿಯೇ ಉಳಿಯಿತು.
{{gap}}ಬ್ರಿಟಿಷರ ಆಗಮನದಿಂದ ಮಾತ್ರ ಬಹು ಮುಖ್ಯ ಬದಲಾವಣೆಗಳಾದವು. ಅನೇಕ ಬಗೆಯಿಂದ ಹಳೆಯ ಜೀವನ ಪದ್ಧತಿಯು ಬುಡಮೇಲಾಯಿತು. ಇಂಗ್ಲೆಂಡಿನಲ್ಲಾದ ಪುನರುಜೀವನ, ಸುಧಾ ರಣೆ ಮತ್ತು ರಾಜಕೀಯ ಆಂದೋಲನಕಾಲದಿಂದ ಕ್ರಮೇಣ ಯೂರೋಪಿನ ಜನರು ಬಲಗೊಂಡು, ಯಂತ್ರಯುಗದ ಆರಂಭದಿಂದ ರೂಪುಗೊಳ್ಳುತ್ತಿದ್ದ ಒಂದು ಹೊಸ ಪ್ರಚೋದನ ಶಕ್ತಿಯನ್ನು ತಂದರು. ಅಮೆರಿಕನ್ ಮತ್ತು ಫ್ರೆಂಚ್ ಕ್ರಾಂತಿಗಳು ಈ ಶಕ್ತಿಯನ್ನು ಇನ್ನೂ ಪುಷ್ಟಿಗೊಳಿಸಿದವು. ಇ೦ಡಿಯ ದಲ್ಲಿ ಬ್ರಿಟಿಷರು ಹೊರಗಿನವರಾಗಿ, ಪರಕೀಯರಾಗಿಯೇ ಉಳಿದು, ದೇಶದೊಂದಿಗೆ ಹೊಂದಿಕೊಳ್ಳದೆ ಬೇರೆ ನಿಂತರು. ಹೊಂದಿಕೊಳ್ಳುವ ಯತ್ನವನ್ನೂ ಮಾಡಲಿಲ್ಲ, ಎಲ್ಲಕ್ಕೂ ಹೆಚ್ಚಾಗಿ ದೇಶದ ರಾಜ<noinclude>{{right|14}}</noinclude>
hehjciz170wee0gtty4p6rk52csqhu1
ಪುಟ:ಭಾರತ ದರ್ಶನ.djvu/೨೧೫
104
85107
321357
229330
2026-05-20T09:21:28Z
Pragathi. BH
7585
/* Validated */
321357
proofread-page
text/x-wiki
<noinclude><pagequality level="4" user="Pragathi. BH" />{{rh|೨೧೦|ಭಾರತ ದರ್ಶನ|}}</noinclude>ಕೀಯ ಆಡಳಿತವೂ ಆರ್ಥಿಕ ನೀತಿಯೂ ದೇಶದ ಹೊರಗೆ ಬಹುದೂರದಿಂದ ನಿರ್ಧರವಾಗಲು ಆರಂಭವಾದದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಭಾರತವು ಆಧುನಿಕ ಕಾಲದ ಒಂದು ಅಧೀನ ರಾಷ್ಟ್ರವಾಯಿತು. ತನ್ನ ದೊಡ್ಡ ಇತಿಹಾಸ ಪರಂಪರೆಯಲ್ಲಿ ಮೊಟ್ಟ ಮೊದಲು ಅದು ಪರದಾಸ್ಯಕ್ಕೆ ಸಿಕ್ಕಿತು.
{{gap}}ಇಂಡಿಯ ದೇಶದ ಮೇಲಿನ ಘಜ್ಜಿ ಮಹಮ್ಮದನ ದಂಡಯಾತ್ರೆಯು ಪರಕೀಯ ತುರ್ಕಿ ದಂಡ ಯಾತ್ರೆಯು ನಿಜ, ಸ್ವಲ್ಪ ಕಾಲ ಪಂಜಾಬ್ ಇಂಡಿಯದಿಂದ ಪ್ರತ್ಯೇಕವೂ ಆಯಿತು. ಹನ್ನೆರಡನೆಯ ಶತಮಾನದ ಕೊನೆಯಲ್ಲಿ ಬಂದ ಆ ಪ್ರನರ ವಿಷಯವು ಬೇರೆ ಇತ್ತು. ಭಾರತೀಯರಂತೆ ಅವರೂ ಇಂಡೋ-ಆರರ ಜನಾಂಗದ ಬುಡಕಟ್ಟಿಗೆ ಸೇರಿದವರು. ನಿಜವಾಗಿ ನೋಡಿದರೆ ಆಫ್ಘಾನಿಸ್ಥಾನ ಇಂಡಿಯದೇಶದ ಒಂದು ಭಾಗವಾಗಿತ್ತು. ಅವರ ಭಾಷೆಯಾದ ಸಷ್ಟೋ ಸಂಸ್ಕೃತ ಮೂಲದಿಂದ ಜನಿಸಿದ್ದು, ಭಾರತೀಯ ಸಂಸ್ಕೃತಿಯ ಸ್ಮಾರಕಗಳು ಮತ್ತು ಅವಶೇಷಗಳು-ಅದರಲ್ಲೂ ಮುಖ್ಯ ವಾಗಿ ಬೌದ್ದ ಕಾಲದವು-ಆಫ್ಘಾನಿಸ್ಥಾನದಲ್ಲಿರುವಷ್ಟು ಇ೦ಡಿಯದಲ್ಲಾಗಲಿ ಇಂಡಿಯದ ಹೊರಗೆ ಆಗಲಿ ಬೇರೆಲ್ಲಿಯೂ ಇಲ್ಲ. ಆಫ್ಘನರನ್ನು ಇಂಡೋ-ಆಫ್ಘನರೆಂದು ಕರೆಯಬೇಕಾದ್ದೇ ಸಹಜ. ಕಾಶ್ಮೀರದ ಪರ್ವತಕಣಿವೆಗಳ ಜನರು ಉಷ್ಣ ಪ್ರದೇಶದ ಮೈದಾನಗಳ ಜನರಿಗಿಂತ ಭಿನ್ನರಿರುವಂತೆ ಆಫೈನರಿಗೂ ಇಂಡಿಯದ ಮೈದಾನ ಪ್ರದೇಶದ ಜನರಿಗೂ ಭಿನ್ನತೆ ಇದೆ. ಈ ವ್ಯತ್ಯಾಸವಿದ್ದರೂ ಭಾರತೀಯ ವಿದ್ವತ್ತು ಮತ್ತು ಸಂಸ್ಕೃತಿಗೆ ಕಾಶ್ಮೀರವು ಒಂದು ಮುಖ್ಯ ಕೇಂದ್ರವಾಗಿದೆ. ತುಂಬ ಸುಸಂಸ್ಕೃತರೂ, ಕೃತಕ ಆಡಂಬರದ ಜೀವಿಗಳೂ ಆದ ಅರಬ್ಬಿ ಮತ್ತು ಪಾರಸಿ ಜನರಿಗೂ ಆಪ್ಪನ ರಿಗೂ ಸಹ ವ್ಯತ್ಯಾಸವಿತ್ತು. ತಮ್ಮ ಪರ್ವತವೇಗದಂತೆ ಕಠಿಣರೂ ಕ್ರೂರಿಗಳೂ ಇದ್ದರು. ಅಚಲ ಧರ್ಮಶ್ರದ್ದೆ ಯು ಇತ್ತು, ಬೌದ್ಧಿಕ ಪ್ರಯತ್ನದಲ್ಲಿ, ಮಾನಸಿಕ ಸಾಹಸಗಳಲ್ಲಿ ಆಸಕ್ತಿ ಇಲ್ಲದ ಯೋಧರಾ ಗಿದ್ದರು. ದಂಗೆ ಎದ್ದ ಜನರನ್ನು ಹತ್ತಿಕ್ಕುವದರಲ್ಲಿ ವಿಜಯೋನ್ಮತ್ತರಂತೆ ಆರಂಭದಲ್ಲಿ ಕ್ರೂರಿಗಳೂ ಕಠಿಣಹೃದಯರೂ ಆಗಿದ್ದರು.
{{gap}}ಆದರೆ ಸ್ವಲ್ಪ ಕಾಲದಲ್ಲಿ ಅವರೂ ಸೌಮ್ಯ ಸ್ವಭಾವ ತಾಳಿದರು, ಇಂಡಿಯ ಅವರ ನೆಲೆವೀಡಾ ಯಿತು. ಮಹಮ್ಮದನ ಕಾಲದ ದೂರದ ಘಜ್ಜೆ ಯ ಬದಲು ದೆಹಲಿ ಅವರ ರಾಜಧಾನಿಯಾಯಿತು. ಅವರ ಪೂರ್ವದ ನಾಡಾದ ಆಫ್ಘಾನಿಸ್ಥಾನವು ಅವರ ರಾಜ್ಯದ ಎಲ್ಲೆ ಯಲ್ಲಿಯೇ ಇತ್ತು. ಅವರೂ ಬಹು ಬೇಗ ಭಾರತೀಯರಾಗಿ ಇಲ್ಲಿಯೇ ಅನೇಕರನ್ನು ಮದುವೆಯಾದರುಅವರಲ್ಲಿ ಪ್ರಸಿದ್ದ ರಾಜನಾದ ಅಲ್ಲಾ ಉದ್ದೀನ್ ಖಿಲ್ಲಿ ಒಬ್ಬ ಹಿಂದುಮಹಿಳೆಯನ್ನು ಮದುವೆಯಾದನು. ಆತನ ಮಗನೂ ಅದೇ ರೀತಿ ಮಾಡಿದನು. ಅನಂತರ ಕೆಲವು ಅರಸರು ಕುತುಬುದಿನ್ ಐಬಕ್, ರಜಿಯಾ ಬೇಗಂ ಮತ್ತು ಅಲ್ಲ ಮಿಷ್ ತುರ್ಕಿಯವರಾಗಿದ್ದರು. ಆದರೆ ಅಧಿಕಾರಿಗಳು, ಸೈನಿಕರು, ಎಲ್ಲರೂ ಮುಖ್ಯವಾಗಿ ಅಪ್ಪನರೇ ಇದ್ದರು. ದೆಹಲಿನಗರವು ಸಾಮ್ರಾಜ್ಯದ ರಾಜಧಾನಿಯಾಗಿ ಅಭಿವೃದ್ಧಿಗೆ ಬಂದಿತು. ಮೊರಾಕೊದಿಂದ ಹೊರಟು ಕೈರೊ, ಕಾನ್ಸ್ಟಾಂಟಿನೋಪಲ್, ಚೀನಾವರೆಗೆ ಪ್ರವಾಸಮಾಡಿ ಅನೇಕ ಮಹಾನಗರಗಳನ್ನು ನೋಡಿದ ಇಬನ್ ಬಟೂಟ ಹದಿನಾಲ್ಕನೆಯ ಶತಮಾನದಲ್ಲಿ ದೆಹಲಿಯನ್ನು ವರ್ಣಿಸುತ್ತ “ ಪ್ರಪಂಚದ ಮಹಾನಗರಗಳಲ್ಲಿ ಒಂದು ” ಎಂದು ಉತ್ತೇಕ್ಷೆಮಾಡಿದ್ದಾನೆ.
{{gap}}ದೆಹಲಿಯ ಸುಲ್ತಾನರು ದಕ್ಷಿಣದ ಕಡೆ ವಿಸ್ತರಿಸಿದರು. ಚೋಳರಾಜ್ಯವು ಹೀನಸ್ಥಿತಿಗೆ ಬಂದಿತ್ತು. ಅದರ ಸ್ಥಾನದಲ್ಲಿ ವಿಶೇಷ ಸಮುದ್ರ ಬಲವುಳ್ಳ ಪಾಂಡ್ಯರು ಮಧುರೆಯನ್ನು ತಮ್ಮ ರಾಜಧಾನಿಯ ನ್ನಾಗಿ ಮಾಡಿಕೊಂಡು ಪೂರ್ವ ತೀರದ ಕಾಯಾಲದಲ್ಲಿ ದೊಡ್ಡ ಬಂದರನ್ನು ಕಟ್ಟಿಕೊಂಡು ಉನ್ನತ ಸ್ಥಿತಿಯಲ್ಲಿದ್ದರು. ರಾಜ್ಯ ಸಣ್ಣದಾದರೂ ದೊಡ್ಡ ವ್ಯಾಪಾರ ಕೇಂದ್ರವಾಗಿತ್ತು. ಮಾರ್ಕೊಪೋಲೋ ಚೀನಾದಿಂದ ಹಿಂದಿರುಗುವಾಗ ಎರಡು ಬಾರಿ ೧೨೮೮ರಲ್ಲಿ ಮತ್ತು ೧೨೯೩ರಲ್ಲಿ ಭೇಟಿಕೊಟ್ಟು “ ಮಹಾ ಗಂಭೀರನಗರ” ಎಂದೂ, ಅರೇಬಿಯಾ, ಚೀನಾ ದೇಶಗಳ ಅನೇಕ ಹಡಗುಗಳಿಂದ ಬಂದರು ತುಂಬಿರು ಕೈಂದೂ ವರ್ಣಿಸಿದ್ದಾನೆ. ಪೂರ್ವತೀರದಲ್ಲಿ ತಯಾರುಮಾಡುತ್ತಿದ್ದ ನಯವಾದ ಹತ್ತಿಯ ಬಟ್ಟೆಯ<noinclude></noinclude>
2fbdowuyvqvsy5tdkyqupmlzgptsj0e
ಪುಟ:ಭಾರತ ದರ್ಶನ.djvu/೨೧೬
104
85108
321359
229333
2026-05-20T09:21:39Z
Pragathi. BH
7585
/* Validated */
321359
proofread-page
text/x-wiki
<noinclude><pagequality level="4" user="Pragathi. BH" />{{rh||ಹೊಸ ಸಮಸ್ಯೆಗಳು|೨೧೧}}</noinclude>ಜೇಡನ ಪೊರೆಯಂತೆ ಇರುತ್ತಿದ್ದಿತೆಂದೂ ಬಣ್ಣಿಸಿದ್ದಾನೆ. ಮಾರ್ಕೊಪೋಲೋ ಇನ್ನೂ ಒಂದು ಆಶ್ಚರ್ಯದ ವಿಷಯವನ್ನು ತಿಳಿಸುತ್ತಾನೆ. ಅರೇಬಿಯಾ ಮತ್ತು ಪರ್ಷಿಯದಿಂದ ದಕ್ಷಿಣ ಭಾರತಕ್ಕೆ ಕುದುರೆಗಳನ್ನು ವಿಶೇಷ ಸಂಖ್ಯೆಯಲ್ಲಿ ಆಮದು ಮಾಡುತ್ತಿದ್ದರು. ದಕ್ಷಿಣ ಇಂಡಿಯದ ಹವಾಮಾನವು ಕುದುರೆ ಸಾಕಲು ಉತ್ತಮವಿರಲಿಲ್ಲ. ಕುದುರೆಗಳ ಉಪಯೋಗ ಸೈನ್ಯದಲ್ಲಿ ಹೆಚ್ಚಾಗಿ ಇತ್ತು. ಕುದುರೆ ಸಾಕುವ ಉತ್ತಮ ಕೇಂದ್ರಗಳು ಮಧ್ಯ ಮತ್ತು ಪಶ್ಚಿಮ ಏಷ್ಯದಲ್ಲಿದ್ದವು. ಪ್ರಾಯಶಃ ಮಧ್ಯ ಏಷ್ಯ ಜನಾಂಗಗಳ ಉತ್ತಮ ಯುದ್ದ ನೈಪುಣ್ಯತೆಗೆ ಇದೂ ಕಾರಣವಿರಬಹುದು. ಚಂಗಿಸ್ ಖಾನನ ಮೊಗಲರು ಉತ್ತಮ ಅಶ್ವಾರೋಹಿಗಳಾಗಿದ್ದರು. ಕುದುರೆಗಳೆಂದರೆ ಅವರಿಗೆ ಪ್ರಾಣ. ತುರ್ಕಿಯ ವರೂ ಒಳ್ಳೆಯ ಕುದುರೆಸವಾರರು, ಅರಬ್ಬಿ ಜನರ ಕುದುರೆಗಳ ಮಮತೆಯು ಲೋಕವಿಖ್ಯಾತವಿದೆ. ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ, ಮುಖ್ಯವಾಗಿ ಕಾಥೇವಾಡದಲ್ಲಿ, ಕೆಲವು ಒಳ್ಳೆಯ ಕುದುರೆಸಾಕುವ ಸ್ಥಾನಗಳಿವೆ. ರಜಪೂತರಿಗೆ ತಮ್ಮ ಕುದುರೆಗಳೆಂದರೆ ಜೀವ, ಒಳ್ಳೆಯ ಕುದುರೆಗಾಗಿಯೇ ಅನೇಕ ಸಣ್ಣ ಯುದ್ದಗಳಾಗಿವೆ. ದೆಹಲಿ ಸುಲ್ತಾನನೊಬ್ಬ ರಜಪೂತ ಸೇನಾನಿಯೊಬ್ಬನ ಕುದುರೆಯನ್ನು ನೋಡಿ ಮೆಚ್ಚಿ ಕುದುರೆಯನ್ನು ಕೇಳಿದನಂತೆ, ಆದರಾ ಸೇನಾನಿಯು ಲೂದಿರಾಜನಿಗೆ “ ರಜಪೂತನಿಂದ ಮರುವಸ್ತುಗಳನ್ನು ನೀನು ಕೇಳಬಾರದು : ಅವನ ಕುದುರೆ, ಅವನ ಹೆಂಡತಿ ಮತ್ತು ಅವನ ಕತ್ತಿ.” ಎಂದು ಹೇಳಿ ಕುದುರೆಯನ್ನು ಓಡಿಸಿಕೊಂಡು ಹೋದನಂತೆ, ಆ ಮೇಲೆ ಒಂದು ಯುದ್ದವೇ ಆಯಿತು.
{{gap}}ಹದಿನಾಲ್ಕನೆಯ ಶತಮಾನದ ಕೊನೆಯಲ್ಲಿ ತುರ್ಕಿಯ ಅಥವ ತುರ್ಕಿ ಮಂಗೋಲರ ತೈಮೂರನು ಉತ್ತರದಿಂದ ದಂಡೆತ್ತಿ ಬಂದು ದೆಹಲಿಯ ಸುಲ್ತಾನರನ್ನು ಸದೆಬಡಿದನು. ಆತನು ಇ೦ಡಿಯದಲ್ಲಿ ಕೆಲವು ತಿಂಗಳು ಮಾತ್ರ ಇದ್ದನು. ದೆಹಲಿಗೆ ಬಂದವನೇ ಹಿಂದಿರುಗಿದನು. ಆದರೆ ತನ್ನ ದಾರಿ ಯುದ್ದಕ್ಕೂ ಕೊಂದ ಜನರ ತಲೆಬುರುಡೆಗಳ ರಾಶಿಯನ್ನು ಒಟ್ಟ ಭಯೋತ್ಪಾದನೆ ಮಾಡಿದನು. ದೆಹಲಿನಗರವೇ ಒಂದು ಸ್ಮಶಾನವಾಯಿತು. ಅದೃಷ್ಟವಶಾತ್ ಅವನು ಮುಂದುವರಿಯಲಿಲ್ಲ. ಪಂಜಾ ಬಿನ ಕೆಲವು ಭಾಗವೂ ದೆಹಲಿಯ ಅವನ ಈ ಕ್ರೂರಧಾಳಿಗೆ ಸಿಕ್ಕಿದವು.
{{gap}}ಈ ಸ್ಮಶಾನ ನಿದ್ರೆಯಿಂದ ಎಚ್ಚರಗೊಳ್ಳಲು ದೆಹಲಿಗೆ ಬಹಳ ಕಾಲ ಬೇಕಾಯಿತು. ಎಚ್ಚತ್ತಾ ಗಲೂ ಸಾಮ್ರಾಜ್ಯದ ರಾಜಧಾನಿಯಾಗಿ ಉಳಿಯಲಿಲ್ಲ. ತೈಮೂರನ ದಂಡಯಾತ್ರೆಯಿಂದ ಆ ಸಾಮ್ರಾಜ್ಯವು ಪುಡಿಪುಡಿಯಾಗಿತ್ತು; ದಕ್ಷಿಣದಲ್ಲಿ ಕೆಲವು ಸ್ವತಂತ್ರ ರಾಜ್ಯಗಳಿದ್ದವು. ಇದಕ್ಕೂ ಮುಂಚೆಯೇ ಹದಿನಾಲ್ಕನೆಯ ಶತಮಾನದ ಆದಿಯಲ್ಲಿ ಎರಡು ದೊಡ್ಡ ರಾಜ್ಯಗಳು ಹುಟ್ಟಿದ್ದವು. ಗುಲ್ಬರ್ಗದ ಬಹಮನಿ ರಾಜ್ಯ, ವಿಜಯನಗರದ ಹಿಂದೂ ರಾಜ್ಯ, ಗುಲ್ಬರ್ಗ ಪುನಃ ಐದು ರಾಜ್ಯ ಗಳಾಗಿ ಒಡೆಯಿತು. ಅಹಮದ್ನಗರ ಅದರಲ್ಲಿ ಒಂದು. ೧೪೯೦ರಲ್ಲಿ ಅಹಮದ್ ನಗರ ರಾಜ್ಯವನ್ನು ಕಟ್ಟಿದ ಅಹಮ್ಮದ್ ನಿಜಾಮ ಷಾ ಬಹಮನಿದೊರೆಗಳ ಮಂತ್ರಿಗಳಲ್ಲೊಬ್ಬನಾದ ನಿಜಾಮ್ ಉಲ್ಮುಲ್ ಭೈರಿಯ ಮಗ. ಈ ರೀತಿ ಅಹಮ್ಮದ್ ನಗರ ಸಂತತಿಯು ದೇಶೀಯ ಸಂತತಿ, ಅಹಮ್ಮದ್ ನಗರದ ನಾಯಕಿಯಾದ ಚಾಂದ್ ಬೀಬಿಯು ಮಿತ್ರ ರಕ್ತದವಳು, ದಕ್ಷಿಣದ ಎಲ್ಲ ಮುಸ್ಲಿಂ ರಾಜ್ಯ ಗಳೂ ದೇಶೀ ರಾಜ್ಯಗಳು, ಭಾರತೀಯ ರಾಜ್ಯಗಳು,
{{gap}}ತೈಮೂರನು ದೆಹಲಿಯನ್ನು ಲೂಟಿಮಾಡಿದಮೇಲೆ ಉತ್ತರ ಹಿಂದೂಸ್ಥಾನವು ಬಲಹೀನವಾಗಿ ಒಡೆದು ಹೋಗಿತ್ತು. ದಕ್ಷಿಣ ಇಂಡಿಯ ಸ್ವಲ್ಪ ಶಕ್ತಿಯುತವಿತ್ತು. ಇವುಗಳಲ್ಲೆಲ್ಲ ಬಲಿಷ್ಠವಾದುದು ವಿಜಯನಗರ ಸಾಮ್ರಾಜ್ಯ. ಈ ರಾಜ್ಯಕ್ಕೆ ಮತ್ತು ಅದರ ರಾಜಧಾನಿಗೆ ಉತ್ತರದಿಂದ ಅನೇಕ ಹಿಂದೂ ನಿರಾಶ್ರಿತರು ಬಂದರು. ಆಗ ಬರೆದ ಗ್ರಂಥಗಳಿಂದ ಆ ನಗರವು ಬಹಳ ಸಂಪದ್ಯುಕ್ತವೂ ಸುಂದರವೂ ಇತ್ತೆಂದು ತಿಳಿಯುತ್ತದೆ. “ ಪ್ರಪಂಚದಲ್ಲೆಲ್ಲ ಇದರಂತೆ ಇನ್ನೊಂದು ನಗರವನ್ನು ಕೇಳಲೂ ಸಾಧ್ಯವಿಲ್ಲ ನೋಡಲೂ ಸಾಧ್ಯವಿಲ್ಲ.” ಎ೦ದು ಮಧ್ಯ ಏಷ್ಯದ ಅಬ್ದುಲ್ರಜಾಕ್ ಹೇಳುತ್ತಾನೆ. ಪೇಟೆಗಳಿಗಾಗಿ ಸುಂದರವಾದ ಮಂಟಪಗಳೂ, ಅಂಗಡಿಸಾಲುಗಳೂ ಇದ್ದವು. ಅವುಗಳೆಲ್ಲಕ್ಕೂ ಎತ್ತರದಲ್ಲಿ ರಾಜನ ಅರಮನೆಯು ಇತ್ತು. ಈ ಅರಮನೆಯ ಸುತ್ತಲೂ ಕಡೆದ ಕಲ್ಲಿನಿಂದ ಥಳಥಳಿಸುವ ಅನೇಕ ನಾಲೆಗಳಲ್ಲಿ<noinclude></noinclude>
f3rvnjqgc2s6yae2hs86g8ia1zb65u9
ಪುಟ:ಭಾರತ ದರ್ಶನ.djvu/೨೧೭
104
85109
321361
229366
2026-05-20T09:21:55Z
Pragathi. BH
7585
/* Validated */
321361
proofread-page
text/x-wiki
<noinclude><pagequality level="4" user="Pragathi. BH" />{{rh|೨೧೨|ಭಾರತ ದರ್ಶನ}}</noinclude>ಹರಿಯುವ ನೀರಿನ ಕಾಲುವೆಗಳೂ ನದಿಗಳೂ ಇದ್ದವು.” ನಗರದ ತುಂಬ ಉದ್ಯಾನವನಗಳಿದ್ದವು. ೧೪೨೦ರಲ್ಲಿ ಬಂದ ಇಟಲಿ ಪ್ರವಾಸಿ ಕನಾದ ನಿಕೊಲೊಕಾಂಚಿಯು ನಗರದ ಸುತ್ತಳತೆ ಅರುವತ್ತು ಮೈಲಿಗಳಿತ್ತು ಎಂದಿದ್ದಾನೆ. ಅವನಿಗೂ ನಂತರ ೧೫೨೨ರಲ್ಲಿ ಪುನರುಜೀವಿತ ಇಟಲಿಯ ಅನೇಕ ನಗರ ಗಳನ್ನು ನೋಡಿದ್ದ ವೈಸ್ ಎಂಬ ಪೋರ್ಚುಗೀಸ್ ಪ್ರವಾಸಿಕನು ವಿಜಯನಗರವನ್ನು ನೋಡಿ ರೋಮ್ ನಗರದಷ್ಟು ದೊಡ್ಡದಿದೆ, ನೋಡಲು ಬಹಳ ರಮಣೀಯವಿದೆ. ಅಸಂಖ್ಯಾತ ಸರೋವರಗಳು, ನಾಲೆಗಳು ಮತ್ತು ಹಣ್ಣಿನ ತೋಟಗಳಿಂದ ನಯನಮನೋಹರವೂ ವಿಸ್ಮಯಕಾರಕವೂ ಇದೆ. ಪ್ರಪಂಚದ ಯಾವ ನಗರದಲ್ಲೂ ಇಲ್ಲದ ಉತ್ತಮ ವಸ್ತು ಸಾಮಗ್ರಿ ಇದೆ. ಎಲ್ಲದರಲ್ಲೂ ಸಮೃದ್ಧಿ ಇದೆ. ಅರಮನೆಯ ಕೋಣೆಗಳನ್ನು ದಂತದಿಂದ ಕೆತ್ತಲಾಗಿದೆ. ಮೇಲೆ ದಂತದಲ್ಲಿಯೇ ಗುಲಾಬಿ ಮತ್ತು ಕಮಲದ ಹೂಗಳನ್ನು ಬಿಡಿಸಿದ್ದಾರೆ. ಇಷ್ಟು ಐಶ್ವರವನ್ನೂ, ಸೌಂದರವನ್ನೂ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ. ರಾಜನಾದ ಕೃಷ್ಣದೇವರಾಯನ ವಿಷಯವಾಗಿ “ಎಲ್ಲರೂ ಭಯಭಕ್ತಿಯಿಂದ ಆತನನ್ನು ಗೌರವಿಸುತ್ತಾರೆ. ಆದರ್ಶ ರಾಜನಾಗಿದ್ದಾನೆ. ಸದಾ ಹಸನ್ಮುಖಿಯೂ, ಸಂತೋಷಭರಿತನೂ ಆಗಿ ದ್ದಾನೆ. ವಿದೇಶೀಯರನ್ನು ಕಂಡರೆ ಗೌರವಿಸುತ್ತಾನೆ. ದಯೆಯಿಂದ ಕಂಡು ಅವರು ಹೇಳುವುದನ್ನು ಸಾವಧಾನವಾಗಿ ಕೇಳುತ್ತಾನೆ” ಎಂದು ಬಣ್ಣಿಸಿದ್ದಾನೆ.
{{gap}}ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯವು ಉನ್ನತಸ್ಥಿತಿಯಲ್ಲಿದ್ದಾಗ ದೆಹಲಿಯ ಸುಲ್ತಾನನು ಇನ್ನೊಬ್ಬ ಹೊಸ ಶತ್ರುವನ್ನು ಎದುರಿಸಬೇಕಾಯಿತು. ಉತ್ತರದ ಪರ್ವತಗಳಿಂದ ಇನ್ನೊಬ್ಬ ದಂಡ ಯಾತ್ರಿಕನು ಬಂದು ದೆಹಲಿಯ ಬಳಿ ಅನೇಕಸಲ ಭಾರತದ ಅದೃಷ್ಟವನ್ನು ನಿಶ್ಚಯಿಸಿದ ಪಾಣಿ ಪತ್ರ ಯುದ್ಧರಂಗದಲ್ಲಿ ಯುದ್ಧ ಮಾಡಿ ಗೆದ್ದು ೧೫೨೬ರಲ್ಲಿ ದೆಹಲಿಯ ಸಿಂಹಾಸನವನ್ನು ಏರಿದನು. ತುರ್ಕೊ ಮಂಗೋಲನೂ, ಮಧ್ಯ ಏಷ್ಯದ ತೈಮೂರ್ ವಂಶಜನಾದ ರಾಜಕುಮಾರನೂ ಆದ ಬಾಬರನೇ ಇವನು. ಭಾರತದಲ್ಲಿ ಮೊಗಲ್ ಸಾಮ್ರಾಜ್ಯವು ಇವನಿಂದಲೇ ಆರಂಭವಾಯಿತು.
{{gap}}ಬಾಬರನ ವಿಜಯಕ್ಕೆ ಕಾರಣ ದೆಹಲಿಯ ಸುಲ್ತಾನರ ದೌರ್ಬಲ್ಯ ಮಾತ್ರವಲ್ಲ ; ಅದುವರೆಗೂ ಇ೦ಡಿಯದಲ್ಲಿ ಬಳಕೆಯಲ್ಲಿಲ್ಲದ ಒಂದು ಹೊಸ ಉತ್ತಮ ರೀತಿಯ ಬಂದೂಕು ಪಡೆಯು ಮುಖ್ಯ ಕಾರಣ. ಈ ಕಾಲದಿಂದ ಯುದ್ಧ ವಿಜ್ಞಾನದ ಬೆಳೆವಣಿಗೆಯಲ್ಲಿ ಇಂಡಿಯ ಹಿಂದೆ ಬೀಳಲಾರಂಭಿಸಿತು. ಈ ವಿಜ್ಞಾನದಲ್ಲಿ ಇಡಿ ಯೂರೋಪುಖಂಡವೇ ಮುಂದುವರಿಯುತ್ತಿರುವಾಗ, ಏಷ್ಯ ಖಂಡವು ಸಂಪೂರ್ಣ ಹಿಂದುಳಿಯಿತು. ಮೊಗಲ್ ಚಕ್ರಾಧಿಪತ್ಯವು ಇಂಡಿಯದಲ್ಲಿ ಎರಡುನೂರು ವರ್ಷಗಳ ಕಾಲ ಬಲ ಯುತವಾಗಿದ್ದರೂ ಹದಿನೇಳನೆಯ ಶತಮಾನದ ನಂತರ ಯೂರೋಪಿರ್ಯ ಸೈನ್ಯಗಳೊಡನೆ ಸರಿಸಮ ನಾಗಿ ನಿಂತು ಕಾದಾಡುವಷ್ಟು ಶಕ್ತಿಯುತವಿರಲಿಲ್ಲ. ಆದರೆ ಸಮುದ್ರ ಮಾರ್ಗಗಳ ಸ್ವಾಮ್ಯವಿಲ್ಲದೆ ಯಾವ ಯೂರೋಪಿರ್ಯ ಸೈನ್ಯವೂ ಇಂಡಿಯಾಕ್ಕೆ ಬರುವಂತಿರಲಿಲ್ಲ. ಈ ಶತಮಾನಗಳಲ್ಲಿ ಅಭಿವೃದ್ಧಿ ಹೊಂದುತ್ತಿದ್ದ ಮುಖ್ಯ ಶಕ್ತಿ ಎಂದರೆ ಯೂರೋಪಿಯನರ ಸಮುದ್ರ ಬಲ, ಹದಿಮೂರನೆಯ ಶತಮಾನದಲ್ಲಿ ಚೋಳರಾಜ್ಯವು ನಾಶವಾದೊಡನೆ ಇ೦ಡಿಯದ ಸಮುದ್ರಶಕ್ತಿಯೂ ಕುಂದಿತು. ಚಿಕ್ಕ ದಾದ ಪಾಂಡ್ಯ ರಾಜ್ಯಕ್ಕೆ ಸಮುದ್ರ ಬಲವಿದ್ದರೂ ಸಾಕಷ್ಟು ಶಕ್ತಿ ಇರಲಿಲ್ಲ. ಭಾರತೀಯ ವಲಸೆ ರಾಜ್ಯ ಗಳು ಮಾತ್ರ ಹದಿನೈದನೆಯ ಶತಮಾನದಲ್ಲಿ ಅರಬ್ಬಿ ಜನರು ಬಂದು ಸೋಲಿಸುವವರೆಗೂ ಬಲಿಷ್ಠವಾಗಿ ದ್ದವು. ಅರಬ್ಬಿಗಳ ಹಿಂದೆಯೇ ಪೋರ್ಚುಗೀಸರು ಬಂದರು.
{{center|೫, ಸಂಯೋಜನೆ ಮತ್ತು ಮಿಶ್ರ ಸಂಸ್ಕೃತಿಯ ಬೆಳೆವಣಿಗೆ : ಸರ್ದಾ : ಕಬೀರ್ :}}
{{center|ಗುರು ನಾನಕ್ : ಅಮಿರ್ ಖುಸ್ರೋ }}
{{gap}}ಬ್ರಿಟಿಷರು ಇಂಡಿಯಕ್ಕೆ ಬಂದುದನ್ನು ಕ್ರೈಸ್ತರ ಮುತ್ತಿಗೆ ಎಂದೂ, ಬ್ರಿಟಿಷರ ಕಾಲವನ್ನು ಕ್ರೈಸ್ತರ ಕಾಲ ಎಂದೂ ಕರೆದರೆ ಎಷ್ಟು ಅಸಮಂಜಸವೊ ಅದೇ ರೀತಿ ಭಾರತದ ಮುಸ್ಲಿಂರ ದಂಡ ಯಾತ್ರೆಯನ್ನು ಮುಸ್ಲಿಮರ ಕಾಲ ಎನ್ನುವುದೂ ಅಷ್ಟೇ ತಪ್ಪು ಮತ್ತು ಅಸಮಂಜಸ ಇಸ್ಲಾಂ ಧರ್ಮವು<noinclude></noinclude>
dx0u3iyugtwgbk5bk2lpbksoels2nh8
ಪುಟ:ಭಾರತ ದರ್ಶನ.djvu/೨೧೮
104
85110
321348
229369
2026-05-20T09:20:01Z
Shreelatha.Halemane
7642
/* Validated */
321348
proofread-page
text/x-wiki
<noinclude><pagequality level="4" user="Shreelatha.Halemane" />{{rh||ಹೊಸ ಸಮಸ್ಯೆಗಳು|೨೧೩ }}</noinclude>ಇ೦ಡಿಯಕ್ಕೆ ಎಂದೂ ಮುತ್ತಿಗೆ ಹಾಕಲಿಲ್ಲ. ಇಂಡಿಯಕ್ಕೆ ಅನೇಕ ಶತಮಾನಗಳ ಹಿಂದೆಯೇ ಬಂದಿತ್ತು. ತುರ್ಕಿಯ ಮಹಮ್ಮದನ ಮುತ್ತಿಗೆಯಾಯಿತು, ಆಫ್ಘನರ ಮುತ್ತಿಗೆಯಾಯಿತು ; ಆಮೇಲೆ ತುರ್ಕಿ ಮಂಗೋಲ್ ಅಥವ ಮೊಗಲರ ಮುತ್ತಿಗೆಯಾಯಿತು. ಇವುಗಳಲ್ಲಿ ಕೊನೆಯ ಎರಡೇ ಮುಖ್ಯ ವಾದವು. ಆಫ್ಘನರು ಇಂಡಿಯದ ನೆರೆ ನಾಡಿನವರು, ಪರಿಚಿತರು. ಅವರ ರಾಜಕೀಯ ಉನ್ನತಿಯ ಕಾಲವನ್ನು ಇಂಡೋ-ಆಫ್ಘನ್ ಕಾಲ ಎಂದು ಕರೆಯಬೇಕು. ಮೊಗಲರು ಹೊರಗಿನವರು ಮತ್ತು ಇ೦ಡಿಯಕ್ಕೆ ಅಪರಿಚಿತರು. ಆದರೂ ಬಹಳ ಜಾಗ್ರತೆಯಾಗಿ ಭಾರತೀಯ ರಚನೆಯ ಚೌಕಟ್ಟಿನಲ್ಲಿ ಹೊಂದಿಕೊಂಡರು. ಇಂಡೊ- ಮೊಗಲ್ ಕಾಲ ಆರಂಭವಾಯಿತು.
{{gap}}ಇಚ್ಛೆಪಟ್ಟೋ, ಆಕಸ್ಮಿಕವಾಗಿಯೊ ಅಥವ ಎರಡೂ ಕಾರಣದಿಂದಲೂ ಆಪ್ಘನ್ ರಾಜರೂ ಅವರ ಜೊತೆಗೆ ಬಂದವರೂ ಇ೦ಡಿಯದಲ್ಲಿ ಬೆರೆತುಹೋದರು. ಅವರ ಸಂತತಿಯವರು ಪೂರ್ಣ ಭಾರ ತೀಯರಾಗಿ ಇಲ್ಲಿ ನೆಲೆಸಿ ಭಾರತವನ್ನು ತಮ್ಮ ತಾಯ್ಯಾ ಡಾಗಿ ಮಾಡಿಕೊಂಡರು; ಮತ್ತು ಉಳಿದ ಪ್ರಪಂಚವೆಲ್ಲ ಅವರಿಗೆ ಪರದೇಶವಾಯಿತು. ರಾಜಕೀಯ ಘರ್ಷಣೆಗಳಿದ್ದರೂ ಅವರನ್ನು ಭಾರತೀಯ ರೆಂದೇ ಪರಿಗಣಿಸಲಾಗುತ್ತಿತ್ತು. ಅನೇಕ ರಾಜಪುತ್ರ ರಾಜರು ಸಹ ಅವರ ಸ್ವಾಮ್ಯವನ್ನು ಒಪ್ಪಿ ಕೊಂಡರು. ಇನ್ನು ಕೆಲವು ರಾಜಪುತ್ರ ರಾಜರು ಅವರ ಅಧೀನರಾಗಲು ಒಪ್ಪಲಿಲ್ಲ. ಘೋರ ಯುದ್ಧಗಳು ಆದವು. ದೆಹಲಿಯ ಸುಲ್ತಾನರಲ್ಲಿ ಪ್ರಸಿದ್ಧನಾದ ಫಿರೋಜ್ ಷಹಾನ ತಾಯಿಯೂ ಘಯಾ ಸುದ್ದೀನನ ತಾಯಿಯೂ ಹಿಂದುಗಳಾಗಿದ್ದರು. ಈ ರೀತಿ ಆ ಫೈನ್, ತುರ್ಕಿ, ಮತ್ತು ಹಿಂದೂ ಶ್ರೀಮಂತರಲ್ಲಿ ವಿವಾಹಗಳು ಸಾಮಾನ್ಯವಲ್ಲದಿದ್ದರೂ, ನಡೆಯುತ್ತಿದ್ದವು. ದಕ್ಷಿಣದಲ್ಲಿ ಗುಲ್ಬರ್ಗದ ಮುಸ್ಲಿಂ ರಾಜ ವಿಜಯನಗರದ ಹಿಂದೂ ರಾಜಕುಮಾರಿಯನ್ನು ಬಹಳ ವೈಭವದಿಂದ ಮದುವೆ ಯಾದನು.
{{gap}}ಮಧ್ಯ ಮತ್ತು ಪೂರ್ವ ಏಷ್ಯಾದ ಮುಸ್ಲಿಂ ರಾಜ್ಯಗಳಲ್ಲಿ ಭಾರತೀಯರಿಗೆ ಒಳ್ಳೆಯ ಮರ್ಯಾದೆ ಇತ್ತು. ಆಫ್ಘನರ ವಿಜಯಯಾತ್ರೆಗೂ ಮುಂಚೆ ಹನ್ನೊಂದನೆಯ ಶತಮಾನದಲ್ಲಿ ಮುಸ್ಲಿ೦ ಭೂಗೋಳ ಶಾಸ್ತ್ರಜ್ಞನಾದ ಇದ್ರೀಸಿಯು “ ಭಾರತೀಯರು ಸ್ವಭಾವತಃ ನ್ಯಾಯಪರರು, ಎಂದಿಗೂ ನ್ಯಾಯ ವಿರುದ್ಧ ಆಚರಿಸುವುದಿಲ್ಲ. ಅವರ ಒಳ್ಳೆಯ ಭರವಸೆ, ಪ್ರಾಮಾಣಿಕತೆ, ಕೊಟ್ಟ ಮಾತಿನಂತೆ ನಡೆ ಯುವ ಗುಣಗಳು ಜಗತ್ಪಸಿದ್ದ. ಈ ಗುಣಗಳಲ್ಲಿ ಎಷ್ಟು ವಿಖ್ಯಾತರೆಂದರೆ ಪ್ರಪಂಚದ ಎಲ್ಲ ಕಡೆ ಯಿಂದ ಜನರು ಅವರ ದೇಶಕ್ಕೆ ಹೋಗುತ್ತಾರೆ” ಎಂದು ಬರೆದಿದ್ದಾನೆ.
{{gap}}ಒಂದು ದಕ್ಷಪೂರ್ಣವಾದ ಆಡಳಿತ ಪದ್ಧತಿಯು ಬೆಳೆಯಿತು. ಮುಖ್ಯವಾಗಿ ಸೈನ್ಯದ ಉಪಯೋಗ ಕ್ಯಾಗಿ ಒಳ್ಳೆಯ ರಾಜಮಾರ್ಗಗಳೇರ್ಪಟ್ಟವು. ಸ್ಥಳೀಯ ಪದ್ಧತಿಗಳಲ್ಲಿ ಯಾವ ರೀತಿಯಿಂದಲೂ ಕೈ ಹಾಕದಿದ್ದರೂ ಸರ್ಕಾರದ ಆಡಳಿತವು ಕೇಂದ್ರೀಕೃತವಾಯಿತು. ಮೊಗಲರ ಕಾಲದ ಆರಂಭದಲ್ಲಿದ್ದ ಷೇರ್ ಷಹ ಆಫ್ಘನ್ ರಾಜರಲ್ಲೆಲ್ಲ ಬಹಳ ದಕ್ಷನು, ಆತನು ಹಾಕಿದ ಕಂದಾಯ ಪದ್ದತಿಯ ತಳಹದಿಯ ಮೇಲೆಯೇ ಅಕೃರನು ಉತ್ತಮ ಪದ್ದತಿಯನ್ನು ರೂಪಿಸಿದನು. ಅಕ್ಷರನ ಪ್ರಸಿದ್ದ ಹಣಕಾಸಿನ ಮಂತ್ರಿಯಾದ ರಾಜ ತೋದರಮಲ್ನನ್ನು ಮೊದಲು ಷೇರ್ ಷಹನೇ ನೇಮಿಸಿದ್ದನು. ಆಫ್ಘನ್ ರಾಜರು ಹಿಂದೂಗಳ ಬುದ್ದಿ ಶಕ್ತಿಯಿಂದ ಬಹಳ ಉಪಯೋಗ ಪಡೆದರು.
{{gap}}ಆಫ್ಘನರು ದೇಶವನ್ನು ಅಧೀನ ಪಡಿಸಿಕೊಂಡಿದ್ದರಿಂದ ಇ೦ಡಿಯ ಮತ್ತು ಹಿಂದೂ ಧರ್ಮದ ಮೇಲೆ ಎರಡು ಪರಸ್ಪರ ವಿರುದ್ದ ಪರಿಣಾಮಗಳಾದವು. ಮೊದಲನೆಯದಾಗಿ ಜನರು ಆಫ್ಘನ್ ರಾಜ ರಿಂದ ದೂರವಾಗಿ ದಕ್ಷಿಣ ಭಾರತಕ್ಕೆ ನೆಲಸಲು ಹೋದರು. ಅವರು ಬಹಳ ಆಚಾರಶೀಲರೂ, ಮಡಿವಂತರೂ ಆಗಿ ಸಂಕುಚಿತ ಸ್ವಭಾವದವರಾದರು. ಜಾತಿಯ ಕಟ್ಟುಗಳನ್ನು ಬಿಗಿಮಾಡಿ ಪರದೇಶದ ಪದ್ದತಿಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯತ್ನ ಮಾಡಿದರು. ಎರಡನೆಯದಾಗಿ ಕ್ರಮೇಣ, ಕಂಡೂ ಕಾಣದಂತೆ ಆ ಪರಕೀಯರ ಜೀವನ ಮತ್ತು ಭಾವನೆಗಳ ಕಡೆಗೆ ಒಲುಮೆ ತೋರುತ್ತ ಬಂದರು. ತಾನಾಗಿಯೇ ಒಂದು ಸಂಕೀರ್ಣ ಮಾರ್ಗವು ಹುಟ್ಟಿತು. ಶಿಲ್ಪ ಕಲೆಯಲ್ಲಿ ಹೊಸಮಾದರಿಯು<noinclude></noinclude>
fxfaodva8k3o4wgfox5zi85fllxyskw
ಪುಟ:ಭಾರತ ದರ್ಶನ.djvu/೨೧೯
104
85111
321350
229373
2026-05-20T09:20:25Z
Shreelatha.Halemane
7642
/* Validated */
321350
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೧೪|ಭಾರತ ದರ್ಶನ|}}</noinclude>ಹುಟ್ಟಿತು. ಆಹಾರ ಉಡಿಗೆತೊಡಿಗೆಗಳು ವ್ಯತ್ಯಾಸಗೊಂಡವು. ಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳಾದವು. ಈ ಸಂಕೀರ್ಣ ಪದ್ಧತಿಯು ಸಂಗೀತದಲ್ಲಿ ಸ್ಪಷ್ಟ ಎದ್ದು ಕಾಣುತ್ತಿತ್ತು. ಪ್ರಾಚೀನ ಸಾಂಪ್ರದಾಯಿಕ ಪದ್ಧತಿಯೇ ಅನೇಕ ಮಾರ್ಗಗಳಲ್ಲಿ ಮುಂದುವರಿಯಿತು. ಪಾರ್ಸಿ ಭಾಷೆಯು ರಾಜಭಾಷೆಯಾಯಿತು. ಅನೇಕ ಪಾರಸಿ ಶಬ್ದಗಳು ಲೋಕರೂಢಿಯಾದವು. ಇದರ ಜೊತೆಗೆ ದೇಶೀ ಭಾಷೆಗಳೂ ಉನ್ನತಿಗೊಂಡವು.
{{gap}}ಆದರೆ ಇಂಡಿಯದಲ್ಲಿ ಹುಟ್ಟಿದ ಒಂದು ದುಷ್ಪರಿಣಾಮವೆಂದರೆ ಸ್ತ್ರೀಯರನ್ನು ಪ್ರತ್ಯೇಕಿಸುವ ಪರ್ದಾ ಪದ್ಧತಿ ; ಏಕೆ ಇದು ಬಂದಿತು ಎನ್ನು ವುದು ಅರ್ಥವಾಗುವುದಿಲ್ಲ. ಹೊಸದು ಹಳತರ ಪರಸ್ಪರ ಘರ್ಷಣೆಯಲ್ಲಿ ಹೇಗೋ ಇದು ಆಚರಣೆಗೆ ಬಂದಿತು. ಇತರ ದೇಶಗಳಲ್ಲಿ ಅದರಲ್ಲೂ ಮುಖ್ಯ ವಾಗಿ ಗ್ರೀಸಿನಲ್ಲಿದ್ದಂತೆ ಇಂಡಿಯದಲ್ಲಿ ಸಹ ಶ್ರೀಮಂತ ಮನೆತನಗಳಲ್ಲಿ ಸ್ತ್ರೀಯರು ಪ್ರತ್ಯೇಕವಿರುವ ಪದ್ದತಿಯು ಪೂರ್ವದಿಂದಲೂ ಆಚರಣೆಯಲ್ಲಿತ್ತು. ಇದು ಪುರಾತನ ಇರಾಣಿಗಳಲ್ಲಿ, ಪಶ್ಚಿಮ ಏಷ್ಯದ ಲೆಲ್ಲ ಆಚರಣೆಯಲ್ಲಿತ್ತು. ಆದರೆ ಎಲ್ಲಿಯೂ ಸ್ತ್ರೀಯರು ಸಂಪೂರ್ಣವಾಗಿ ಘೋಷಾದಲ್ಲಿ ಇರುತ್ತಿರ ಲಿಲ್ಲ. ಬೈಜಾಂಟೈನ್ ಅರಮನೆಗಳಲ್ಲಿ ರಾಣೀವಾಸಗಳನ್ನು ಕಾಯಲು ನಪುಂಸಕರನ್ನು ನೇಮಿಸುತ್ತಿ ದ್ದರು. ಪ್ರಾಯಶಃ ಈ ಪದ್ದತಿಯು ಅಲ್ಲಿಂದ ಆರಂಭವಾಗಿರಬೇಕು. ಬೈಜಾಂಟೈನ್ ಪದ್ಧತಿಯ ಪ್ರಭಾವವು ರಷ್ಯಕ್ಕೆ ಹರಡಿತು. ಮಹಾ ಪೀಟರನ ಕಾಲದವರೆಗೂ ಸ್ತ್ರೀಯರು ಪ್ರತ್ಯೇಕ ನಿವಾಸಗಳಲ್ಲಿ ವಾಸಮಾಡಬೇಕೆಂಬ, ಕಠಿಣ ನಿಯಮವಿತ್ತು. ಆದರೆ ಚಾರ್ಟರುಗಳಲ್ಲಿ ಈ ಪದ್ಧತಿಯು ಇರಲಿಲ್ಲ. ಅವರು ತಮ್ಮ ಸ್ತ್ರೀಯರಿಗೆ ಪ್ರತ್ಯೇಕ ವಾಸಸ್ಥಾನಗಳನ್ನು ಏರ್ಪಡಿಸುತ್ತಿರಲಿಲ್ಲ. ಮಿಶ್ರ ಅರಬ್ಬಿ ಪಾರಸಿ ನಾಗರಿಕತೆಯಲ್ಲಿ ಬೈಜಾಂಟೈನ್ ಪದ್ದತಿಗಳು ಅನೇಕ ಬಂದವು. ಶ್ರೀಮಂತ ಮನೆತನಗಳ ವಿದ್ಯಾ ಪದ್ಧತಿಯೂ ಪ್ರಾಯಶಃ ಸ್ವಲ್ಪ ಬೆಳೆದು ಬಂದಿರಬೇಕು. ಆದರೂ ಅರೇಬಿಯಾದಲ್ಲಿ ಮತ್ತು ಪಶ್ಚಿಮ ಮತ್ತು ಮಧ್ಯ ಏಷ್ಯದಲ್ಲಿ ಸ್ತ್ರೀಯರನ್ನು ಪ್ರತ್ಯೇಕಿಸಿರಲಿಲ್ಲ. ದೆಹಲಿಯನ್ನು ಹಿಡಿದಾಗಲೂ ಉತರ ಹಿಂದೂಸಾ ನಕೆ ಅಧಿಕ ಸಂಖ್ಯೆಯಲ್ಲಿ ಬಂದ ಆಫ್ಘನರಲ್ಲಿ ಈ ಪರದ ಪದ ತಿಯೂ ಇರಲಿಲ್ಲ ತುರ್ಕಿ ಮತ್ತು ಆಫ್ಘನ್ ರಾಜಕುಮಾರಿಯರು ಮತ್ತು ರಾಣಿವಾಸದ ಸ್ತ್ರೀಯರು ಕುದುರೆಸವಾರಿಗೆ, ಬೇಟೆಗೆ ಹೋಗುತ್ತಿದ್ದರು, ಮತ್ತು ಹೊರಗೆ ಹೋಗಿ ಭೇಟಿಕೊಡುತ್ತಿದ್ದರು, ಮಕ್ಕಾಕ್ಕೆ ಹಾಜ್ ಯಾತ್ರೆಗೆ ಹೋಗುವಾಗ ಸ್ತ್ರೀಯರು ಪರದ ತೆಗೆದು ಮುಖ ತೋರಿಸಬೇಕೆಂಬುದು ಈಗಲೂ ಆಚರಣೆ ಯಲ್ಲಿರುವ ಇಸ್ಲಾ೦ ಪದ್ದತಿ, ಮೊಗಲರ ಕಾಲದಲ್ಲಿ ಈ ಪರ್ದಾ ಪದ್ಧತಿಯ ಆಚರಣೆಯು ಹೆಚ್ಚಿದಂತಿದೆ. ಹಿಂದೂಗಳಲ್ಲ ಮುಸ್ಲಿಮರಲ್ಲ ಅದೊಂದು ಅಂತಸ್ತಿನ ಮತ್ತು ಗೌರವದ ಚಿಹ್ನೆ ಯಾಯಿತು. ಸ್ತ್ರೀಯರನ್ನು ಪ್ರತ್ಯೇಕಿಸುವ ಈ ಪದ್ದತಿಯ ಮುಸ್ಲಿ೦ ಪ್ರಭಾವವು ಹೆಚ್ಚಾಗಿದ್ದ ಪ್ರದೇಶಗಳಲ್ಲಿ ಮುಖ್ಯ ವಾಗಿ ದೆಹಲಿ, ಸಂಯುಕ್ತ ಪ್ರಾಂತ್ಯಗಳು, ರಾಜಪುತಾನ, ಬಿಹಾರ್ ಮತ್ತು ಬಂಗಾಳ ದೇಶಗಳಲ್ಲಿ ಮಧ್ಯ ಮತ್ತು ಪೂರ್ವ ಭಾಗಗಳ ಶ್ರೀಮಂತ ಮನೆತನಗಳಲ್ಲಿ ಬಹಳವಾಗಿ ಹರಡಿತು. ಆದರೂ ಬಹು ಸಂಖ್ಯಾತ ಮುಸ್ಲಿಂ ಪ್ರಾಂತ್ಯಗಳಾದ ಪಂಜಾಬ್ ಮತ್ತು ಗಡಿನಾಡಿನ ಪ್ರಾಂತ್ಯಗಳಲ್ಲಿ ಕಟ್ಟುನಿಟ್ಟಾದ ಪರದ ಪದ್ದತಿ ಇಲ್ಲದಿರುವುದು ಆಶ್ಚರ್ಯ, ದಕ್ಷಿಣ ಮತ್ತು ಪಶ್ಚಿಮ ಇ೦ಡಿಯದಲ್ಲಿ ಮುಸ್ಲಿಮರಲ್ಲಿ ಸ್ವಲ್ಪ ಬಿಟ್ಟರೆ ಬೇರೆ ಯಾರಲ್ಲ ಪರದ ಪದ್ಧತಿಯು ಆಚರಣೆಯಲ್ಲಿ ಇಲ್ಲ.
{{gap}}ಭಾರತದ ಇತ್ತೀಚಿನ ಶತಮಾನಗಳ ಅವನತಿಗೆ ಸ್ತ್ರೀಯರನ್ನು ಪ್ರತ್ಯೇಕಿಸುವ ಈ ಪರದ ಪದ್ದ ತಿಯು ಒಂದು ಮುಖ್ಯ ಕಾರಣ. ಇಂಡಿಯದ ಸಮಾಜ ಜೀವನದ ಪ್ರಗತಿಯಾಗಬೇಕಾದರೆ ಈ ಪಾಶವೀ ಪದ್ದತಿಯು ನಿರ್ಮೂಲವಾಗದ ಹೊರತು ಗತ್ಯಂತರವಿಲ್ಲ. ಸ್ತ್ರೀಯರಿಗೆ ಕೇಡನ್ನುಂಟು ಮಾಡುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ತನ್ನ ತಾಯಿಯ ಬಳಿ ಪರದದಲ್ಲಿ ಕಾಲ ಕಳೆಯಬೇಕಾದ ಮಗುವಿಗೆ, ಮನುಷ್ಯನಿಗೆ, ಸಮಾಜ ಜೀವನಕ್ಕೆ ಆಗುವ ಹಾನಿಯು ಅಪಾರ. ಹಿಂದೂಗಳಲ್ಲಿ ಅತಿ ಜಾಗ್ರತೆಯಾಗಿಯೂ ಮುಸ್ಲಿಮರಲ್ಲಿ ನಿಧಾನವಾಗಿಯೂ ಈ ದುಷ್ಟ ಪದ್ಧತಿಯು ಹೋಗುತ್ತಿರುವುದು ಸಂತೋಷದ ಸಂಗತಿ. ಈ ಪರ್ಧಾ ಪದ್ದತಿಯನ್ನು ನಿರ್ಮೂಲಮಾಡಲು ಮುಖ್ಯ<noinclude></noinclude>
7yuzvlw4nin2joll3dc2rub9c2urt4m
ಪುಟ:ಭಾರತ ದರ್ಶನ.djvu/೨೨೦
104
85112
321353
229377
2026-05-20T09:20:58Z
Shreelatha.Halemane
7642
/* Validated */
321353
proofread-page
text/x-wiki
<noinclude><pagequality level="4" user="Shreelatha.Halemane" />{{rh||ಹೊಸ ಸಮಸ್ಯೆಗಳು|೨೧೫}}</noinclude>ಕಾರಣ ಸಹಸ್ರಗಟ್ಟಲೆ ಮಧ್ಯಮ ವರ್ಗದ ಮಹಿಳೆಯರನ್ನು ಒಂದಲ್ಲ ಒಂದು ಸಾರ್ವಜನಿಕ ಕೆಲಸಕ್ಕೆ ಎಳೆದಿರುವ ಕಾಂಗ್ರೆಸ್ಸಿನ ರಾಜಕೀಯ ಮತ್ತು ಸಾಮಾಜಿಕ ಚಳವಳಿಗಳು. ಗಾಂಧೀಜಿಯು ಈ ಪರದ ಪದ್ಧತಿಯ ಪ್ರಚಂಡ ವಿರೋಧಿ, ಮಹಿಳೆಯರನ್ನು ಹಿಂದಕ್ಕೆ ತಳ್ಳಿ ಅಪ್ರಬದ್ಧರನ್ನಾ ಗಿಟ್ಟಿರುವ “ ದುಷ್ಟ ಪಾಶವೀ ಪದ್ದತಿ ” ಎಂದು ಕರೆದಿದ್ದಾರೆ. “ ಆಚರಣೆಗೆ ತಂದಾಗ ಏನೇ ಪ್ರಯೋಜನ ವಿದ್ದಿರಲಿ, ಈಗ ಪೂರ್ಣ ನಿರುಪಯೋಗವಾಗಿ, ದೇಶಕ್ಕೆ ಅಪಾರ ಹಾನಿಯನ್ನುಂಟುಮಾಡುವ ಈ ದುಷ್ಟ ಪದ್ಧತಿಗೆ ಅಂಟಿಕೊಂಡು ಗಂಡಸರು ಭಾರತದ ಮಹಿಳೆಯರಿಗೆ ಮಾಡುತ್ತಿರುವ ಅನ್ಯಾಯ ವನ್ನು ಗಮನಿಸಿದ್ದೇನೆ” ಎಂದಿದ್ದಾರೆ. “ ಮನುಷ್ಯನಿಗಿರುವಷ್ಟೇ ಸ್ವಾತಂತ್ರ್ಯ ಮತ್ತು ಆತ್ಮವಿಕಾಸದ ಅವಕಾಶ ಮಹಿಳೆಯರಿಗು ಇರಬೇಕೆಂದು ಗಾಂಧಿಯವರ ಮತ. ಸ್ತ್ರೀ ಪುರುಷರ ಸಂಬಂಧ ಸದ್ಭಾವನೆ ಯಿಂದ ಕೂಡಿರಬೇಕು. ಇಬ್ಬರ ಮಧ್ಯೆ ಯಾವ ಅಡ್ಡ ಗೋಡೆಯನ್ನೂ ಹಾಕಬಾರದು, ಪರಸ್ಪರ ನಡತೆ ಸ್ವಾಭಾವಿಕವೂ, ಸ್ವಯಂಪ್ರೇರಿತವೂ ಇರಬೇಕು ” ಎಂದಿದ್ದಾರೆ. ಸ್ತ್ರೀಯರ ಸಮಾನತೆ ಮತ್ತು ಸ್ವಾತಂತ್ರದ ಪರವಾಗಿ ಗಾಂಧೀಜಿ ಬಹಳ ಕಟುವಾಗಿಯೇ ಬರೆದಿದ್ದಾರೆ ಮತ್ತು ಮಾತನಾಡಿದ್ದಾರೆ. ಅವರು ಮನೆಯ ದಾಸ್ಯತ್ವವನ್ನು ಉಗ್ರವಾಗಿ ಖಂಡಿಸಿದ್ದಾರೆ.
{{gap}}ಅಡ್ಡದಾರಿ ಹಿಡಿದು ಆಧುನಿಕ ಕಾಲಕ್ಕೆ ಹಾರಿ ಬಂದಿದ್ದೇನೆ. ಆಫ್ಘನರು ದೆಹಲಿಯಲ್ಲಿ ನೆಲಸಿದ ಮೇಲೆ ಪುರಾತನ ಮತ್ತು ನವೀನ ಪದ್ಧತಿಗಳ ಸಂಘಟನೆಯ ಮಧ್ಯ ಯುಗಕ್ಕೆ ಹಿಂದಿರುಗಬೇಕು. ಈ ವ್ಯತ್ಯಾಸಗಳೆಲ್ಲ, ಮೇರಗತಿಯ ಶ್ರೀಮಂತರು ಮತ್ತು ಉತ್ತಮ ವರ್ಣದ ಜನರಲ್ಲಿ ಮಾತ್ರ ಆಯಿತು. ಸಾಮಾನ್ಯ ಜನರಲ್ಲಿ, ಅದರಲ್ಲೂ ಮುಖ್ಯವಾಗಿ ಹಳ್ಳಿಗಾಡಿನ ಜನರಲ್ಲಿ ಯಾವ ವ್ಯತ್ಯಾ ಸವೂ ಆಗಲಿಲ್ಲ. ಅರಮನೆಗಳ ಆವರಣದಲ್ಲಿ ಆರಂಭವಾಗಿ ನಗರ ಮತ್ತು ಪಟ್ಟಣಗಳಿಗೆ ಹರಡಿದವು. ಈ ರೀತಿ ಉತ್ತರ ಹಿಂದೂಸ್ಥಾನದಲ್ಲಿ ಒಂದು ಮಿಶ್ರ ಸಂಸ್ಕೃತಿಯು ಆರಂಭವಾಗಿ ಅನೇಕ ಶತಮಾನಗಳ ಕಾಲ ನಡೆಯಿತು. ದೆಹಲಿ ಮತ್ತು ಈಗಿನ ಸಂಯುಕ್ತ ಪ್ರಾಂತ್ಯಗಳು ಪುರಾತನ ಆರ್ಯ ಸಂಸ್ಕೃತಿಗೆ ಕೇಂದ್ರವಾಗಿದ್ದಂತೆ, ಈ ಸಂಸ್ಕೃತಿಗೂ ಕೇಂದ್ರವಾಯಿತು. ಆದರೆ ಆರ್ಯ ಸಂಸ್ಕೃತಿಯ ಬಹು ಭಾಗವು ದಕ್ಷಿಣ ಇಂಡಿಯಕ್ಕೆ ಹೋಯಿತು ದಕ್ಷಿಣ ಭಾರತವು ಶಿಷ್ಟಾಚಾರದ ಹಿಂದೂ ಧರ್ಮಕ್ಕೆ ಭದ್ರವಾದ ಕೋಟೆಯಾಯಿತು.
{{gap}}ತೈಮೂರನ ಮುತ್ತಿಗೆಯಿಂದ ದೆಹಲಿಯ ಸುಲ್ತಾನರು ಬಲಗುಂದಿದ ಮೇಲೆ ಸಂಯುಕ್ತ ಪ್ರಾಂತ್ಯ ಗಳಲ್ಲಿ ಜಾನಪುರದಲ್ಲಿ ಒಂದು ಸಣ್ಣ ಮುಸ್ಲಿ೦ರಾಜ್ಯವು ತಲೆ ಎತ್ತಿತು. ಹದಿನೈದನೆಯ ಶತಮಾನದಲ್ಲಿ ಕಲೆ ಮತ್ತು ಸಂಸ್ಕೃತಿಗೆ, ಧರ್ಮ ಸಹಿಷ್ಣುತೆಗೆ ಇದು ಒಂದು ಕೇಂದ್ರವಾಯಿತು. ಜನಪ್ರಿಯವಾಗಿ ಪ್ರಬುದ್ದ ಮಾನಕ್ಕೆ ಬರುತ್ತಿದ್ದ ಹಿಂದಿ ಭಾಷೆಗೆ ಪ್ರೋತ್ಸಾಹ ದೊರೆಯಿತು. ಹಿಂದು ಮತ್ತು ಮುಸ್ಲಿಂ ಧರ್ಮಗಳನ್ನು ಒಂದುಗೂಡಿಸುವ ಪ್ರಯತ್ನವೂ ನಡೆಯಿತು. ಇದೇ ಸಮಯದಲ್ಲಿ ಉತ್ತರದಲ್ಲಿ ದೂರದ ಕಾಶ್ಮೀರದಲ್ಲಿ ಒಬ್ಬ ಸ್ವತಂತ್ರ ಮುಸ್ಲಿಂ ರಾಜನಾದ ಜೈನುಲಾದ್ದೀನ ತನ್ನ ಪರಮತ ಸಹಿಷ್ಣುತೆಗೆ ಪ್ರಸಿದ್ಧನಾದನು, ಸಂಸ್ಕೃತ ಪಾಂಡಿತ್ಯಕ್ಕೂ ಮತ್ತು ಪುರಾತನ ಸಂಸ್ಕೃತಿಗೂ ಬಹಳ ಪ್ರೋತ್ಸಾಹ ಕೊಟ್ಟನು.
{{gap}}ಭಾರತದಾದ್ಯಂತ ಈ ಹೊಸ ಕ್ರಾಂತಿಯಾಗುತ್ತಿತ್ತು. ಹೊಸಭಾವನೆಗಳು ಜನರ ಮನಸ್ಸನ್ನು ಕಲಕಿದ್ದವು. ಹಿಂದಿನಂತೆಯೇ ಈಗಲೂ ಭಾರತವು, ಅವ್ಯಕ್ತವಾಗಿ ಪರಕೀಯವಾದುದನ್ನು ಜೀರ್ಣಿಸಿ ಕೊಳ್ಳುತ್ತಿತ್ತು ; ಈ ಕಾರ್ಯದಲ್ಲಿ ತಾನೂ ಸ್ವಲ್ಪ ವ್ಯತ್ಯಾಸ ಹೊಂದುತ್ತಿತ್ತು. ಈ ಕ್ರಾಂತಿಸಮಯ ದಲ್ಲಿ ಉದ್ದೇಶ ಪೂರ್ವಕವಾಗಿ ಸಂಘಟನೆಯನ್ನು ಪ್ರಚಾರಮಾಡಿದ ಹೊಸ ಸುಧಾರಕರು ಹುಟ್ಟಿದರು. ಅವರೆಲ್ಲ ಮತ ಪದ್ದತಿಯನ್ನು ಖಂಡಿಸಿ ಅಥವ ನಿರ್ಲಕ್ಷಿಸಿ ತಮ್ಮ ಪ್ರಚಾರ ನಡೆಸಿದರು. ಹದಿನೈದನೆಯ ಶತಮಾನದಲ್ಲಿ ದಕ್ಷಿಣದಲ್ಲಿ ಹಿಂದೂ ರಮಾನಂದನಿದ್ದನು. ಆತನ ಶಿಷ್ಯನಾದ ಕಾಶಿಯ ಮುಸ್ಲಿಂ ನೇಕಾರ ಕಬೀರ್ ಇನ್ನೂ ಪ್ರಾಮುಖ್ಯತೆಗೆ ಬಂದನು. ಕಬೀರನ ಕವನಗಳು ಮತ್ತು ಗೀತೆಗಳು ಬಹಳ ಲೋಕಪ್ರಿಯವಾದವು. ಈಗಲೂ ಜನಜನಿತವಿವೆ. ಉತ್ತರದಲ್ಲಿ ಸಿಕ್ಮತಸ್ಥಾಪಕನಾದ<noinclude></noinclude>
rofcc3ng4krttgeu91v5tcd46lukytp
ಪುಟ:ಭಾರತ ದರ್ಶನ.djvu/೨೨೧
104
85113
321356
229379
2026-05-20T09:21:17Z
Shreelatha.Halemane
7642
/* Validated */
321356
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೧೬|ಭಾರತ ದರ್ಶನ |}}</noinclude>ಗುರು ನಾನಕ್ ಜನ್ಮತಾಳಿದನು. ಈ ಸುಧಾರಕರ ಪ್ರತಿಭೆಯು ಅವರ ನಂತರ ಹುಟ್ಟಿದ ಅವರ ಮತಗಳ ಪ್ರಭಾವವನ್ನೂ ಮೀರಿತ್ತು. ಈ ಹೊಸ ಭಾವನೆಗಳ ಸಂಘರ್ಷಣೆಯಿಂದ ಹಿಂದೂಮತದ ಮೇಲೆ ವಿಶೇಷ ಪರಿಣಾಮವಾಯಿತು. ಇಂಡಿಯದಲ್ಲಿ ಇಸ್ಲಾಂ ಧರ್ಮವು ಸಹ ಇತರ ದೇಶಗಳ ಇಸ್ಲಾಂ ಧರ್ಮಕ್ಕಿಂತ ಭಿನ್ನ ವಾಯಿತು. ಇಸ್ಲಾಂ ಧರ್ಮದ ಏಕದೇವತ್ವವಾದವು ಹಿಂದೂ ಧರ್ಮದ ಮೇಲೆ ಬಹಳ ಪರಿಣಾಮ ಮಾಡಿತು. ಹಿಂದೂಗಳ ಅಸ್ಪಷ್ಟ ಬಹುದೇವತ್ವವಾದವೂ ಭಾರತೀಯ ಮುಸ್ಲಿಮರ ಮೇಲೆ ಪರಿಣಾಮಮಾಡಿತು. ಈ ಭಾರತೀಯ ಮುಸ್ಲಿಮರು ಅನೇಕರು ಸನಾತನ ಸಂಪ್ರದಾಯದಲ್ಲಿ ಹುಟ್ಟಿ ಬೆಳೆದು ಮತಾಂತರವಾದವರು. ಅವರಲ್ಲಿ ಬಹಳ ಸ್ವಲ್ಪ ಜನರು ಹೊರಗಿ ನಿಂದ ಬಂದವರು. ನೂತನ ಪ್ಲೇಟೋ ಮತದಿಂದ ಆರಂಭವಾದ ಮುಸ್ಲಿಂ ಭಕ್ತಿ ಪಂಥವೂ ಮತ್ತು ಸೂಫಿ ಧರ್ಮಗಳೂ ಭಾರತದಲ್ಲಿ ಬೆಳೆದವು.
{{gap}}ಪರ್ಷಿಯ್ರ ಭಾಷೆಯೇ ರಾಜಭಾಷೆಯಾಗಿ ಉಳಿದರೂ ವಿದೇಶೀಯರು ಜನಸಾಮಾನ್ಯದ ದೇಶೀಯ ಭಾಷೆಯನ್ನು ಬೆಳೆಸುತ್ತ ಬಂದು ಕ್ರಮೇಣ ಭಾರತೀಯರಾಗಿ ದೇಶೀಯರಲ್ಲಿ ಐಕ್ಯವಾದರು. ಪ್ರಾಚೀನ ಮುಸ್ಲಿಮರು ಹಿಂದಿಯಲ್ಲಿ ಅನೇಕ ಉತ್ಕೃಷ್ಟ ಗ್ರಂಥಗಳನ್ನು ಬರೆದಿದ್ದಾರೆ. ಹದಿನಾಲ್ಕನೆಯ ಶತಮಾನದಲ್ಲಿ ಆನ್ಲೈನ್ ಸುಲ್ತಾನರುಗಳ ಕಾಲದಲ್ಲಿ ಸಂಯುಕ್ತ ಪ್ರಾಂತ್ಯಕ್ಕೆ ಬಂದು, ಎರಡು ಮೂರು ತಲೆಮಾರುಗಳ ಕಾಲ ನೆಲಸಿದ ತುರ್ಕಿ ವಂಶಸ್ಥನಾದ ಅಮೀರ್ ಖುಸ್ರು ಅವರಲ್ಲಿ ಅತಿಮುಖ್ಯ ನಾದವನು. ಪಾರಸಿ ಭಾಷೆಯಲ್ಲಿ ಆತನೊಬ್ಬ ವರಕವಿ, ಸಂಸ್ಕೃತದ ಪರಿಚಯವೂ ಆತನಿಗಿತ್ತು. ಸಂಗೀತದಲ್ಲಿ ಆತನ ಪಾಂಡಿತ್ಯವು ಅನುಪಮವಿತ್ತು. ಭಾರತೀಯ ಸಂಗೀತದಲ್ಲಿ ಅನೇಕ ಹೊಸ ಮಾರ್ಪಾಟುಗಳನ್ನು ಮಾಡಿದನು. ಭಾರತೀಯರಲ್ಲಿ ಬಹಳ ಪ್ರಿಯವಾದ ಸಿತಾರ್ ಆತನೇ ಕಂಡು ಹಿಡಿದಿದ್ದಂತೆ ಅವನು ಅನೇಕ ವಿಷಯಗಳ ಮೇಲೆ ಗ್ರ೦ಥರಚನೆ ಮಾಡಿದನು. ಭಾರತದ ಮತ್ತು ಭಾರತೀಯ ವಸ್ತುಗಳ ಶ್ರೇಷ್ಠತೆಯನ್ನೂ ಮುಖ್ಯವಾಗಿ ಭಾರತೀಯ ಧರ್ಮ, ತತ್ವಶಾಸ್ತ್ರ, ತರ್ಕಶಾಸ್ತ್ರ, ಭಾಷೆ, ವ್ಯಾಕರಣ, ಸಂಗೀತ, ಗಣಿತ ಮತ್ತು ಮಾವಿನಹಣ್ಣು ಗಳನ್ನು ವರ್ಣಿಸುವುದರಲ್ಲಿ ಆತನು ಅದ್ವಿತೀಯನು.
{{gap}}ಆದರೆ ಈಗಲೂ ಅವನ ಹೆಸರು ಭಾರತದಲ್ಲಿ ಮನೆಮಾತಾಗಿರುವುದಕ್ಕೆ ಅವನು ಜನಸಾಮಾನ್ಯರ ಭಾಷೆಯಾದ ಹಿಂದಿಯಲ್ಲಿ ರಚಿಸಿರುವ ಗೀತೆಗಳೇ ಕಾರಣ. ಹಲಕೆಲವು ವಿದ್ವಾಂಸರಿಗೆ ಮಾತ್ರ ತಿಳಿಯಬಹುದಾದ ಗ್ರಂಥಸ್ಥ ಭಾಷೆಯನ್ನು ಉಪಯೋಗಿಸದೆ ಹಿಂದಿಯನ್ನೆ ಉಪಯೋಗಿಸಿದ್ದು ಆತನ ದೊಂದು ವೈಶಿಷ್ಟ್ಯ. ಜನತಾಭಾಷೆಯಲ್ಲಿ ಬರೆದುದು ಮಾತ್ರವಲ್ಲದೆ, ಹಳ್ಳಿಗಾಡಿನ ಜನಜೀವನ, ಜನರ ಆಚಾರವ್ಯವಹಾರಗಳನ್ನೇ ತನ್ನ ಕಾವ್ಯವಸ್ತುವನ್ನಾಗಿ ಮಾಡಿಕೊಂಡನು. ಋತುಗಳ ವರ್ಣನೆ ಯನ್ನು ಮಾಡಿದನು. ಪ್ರಾಚೀನ ಸಂಪ್ರದಾಯ ಶೈಲಿಗನುಗುಣವಾಗಿ ಪ್ರತಿಯೊಂದು ಋತುವಿಗೂ ಸಮಂಜಸವಾದ ಪದವಿನ್ಯಾಸವನ್ನೂ ರಾಗಜೋಡಣೆಯನ್ನೂ ಮಾಡಿದನು. ನವವಧುವಿನ ಸಮಾ ಗಮ, ವಿರಹವ್ಯಥೆ, ಬಾಯಾರಿ ಬೆಂಡಾದ ಭೂಮಿಗೊಂದು ನವಚೈತನ್ಯ ತುಂಬುವ ವರ್ಷಾಕಾರಿ ಮುಂತಾಗಿ ಜೀವನದ ವಿವಿಧ ರೂಪುರೇಖೆಗಳನ್ನು ಚಿತ್ರಿಸಿದನು, ಉತ್ತರ ಮತ್ತು ಮಧ್ಯ ಭಾರತದ ಗ್ರಾಮಾಂತರಗಳಲ್ಲಿ ಈ ಗೀತೆಗಳು ಇನ್ನೂ ಜನಜನಿತವಿವೆ. ಮಳೆಗಾಲ ಆರಂಭವಾದೊಡನೆ ಪ್ರತಿ ಹಳ್ಳಿಯ ಹುಡುಗಹುಡುಗಿಯರು ಅರಳಿಮರ ಮಾವಿನಮರಗಳಿಗೆ ಉಯ್ಯಾಲೆಗಳನ್ನು ಕಟ್ಟಿ ಹಾಡು ಗಳನ್ನು ಹಾಡುತ್ತ ವರ್ಷಾಗಮವನ್ನು ಸಂಭ್ರಮದಿಂದ ಸ್ವಾಗತಿಸಿ ಆಚರಿಸುತ್ತಾರೆ.
{{gap}}ಹುಡುಗರೂ ದೊಡ್ಡವರೂ ಆದಿಯಾಗಿ ಎಲ್ಲರ ಬಾಯಲ್ಲೂ ಇರುವ ಅಸಂಖ್ಯಾತ ಒಗಟಿಗಳನ್ನು ರಚಿಸಿದವನೂ ಅಮೀರ್ ಖುಸ್ರನೇ, ಅವನ ಗೀತೆಗಳು ಮತ್ತು ಒಗಟೆಗಳಿಂದ ಆತನು ಜೀವಂತ ನಿರುವಾಗಲೇ ಅವನ ಖ್ಯಾತಿಯು ಹಬ್ಬಿತ್ತು. ಆ ಖ್ಯಾತಿಯು ಇನ್ನೂ ಉಳಿದು ಬೆಳೆದಿದೆ. ಈ ರೀತಿ ಆರುನೂರು ವರ್ಷಗಳಾದಾಗ್ಯೂ, ಒಂದು ಅಕ್ಷರವನ್ನೂ ಬದಲಿಸದೆ, ಲೋಕಪ್ರಿಯವಾಗಿ ಜನತೆಯ ಹೃದಯವನ್ನು ಸೂರೆಗೊಂಡ ಗೀತೆಗಳು ಇನ್ನೆಲ್ಲಾದರೂ ಇವೆಯೋ ಇಲ್ಲವೋ ನಾನರಿಯ.<noinclude></noinclude>
25aisz789kupxe9ad8suqd8n7c5jwkt
ಪುಟ:ಭಾರತ ದರ್ಶನ.djvu/೨೨೨
104
85114
321358
229385
2026-05-20T09:21:32Z
Shreelatha.Halemane
7642
/* Validated */
321358
proofread-page
text/x-wiki
<noinclude><pagequality level="4" user="Shreelatha.Halemane" />{{rh||ಹೊಸ ಸಮಸ್ಯೆಗಳು|೨೧೬}}</noinclude>{{center|೬. ಭಾರತೀಯ ಸಮಾಜರಚನೆ-ಜಾತಿಯ ಪ್ರಾಮುಖ್ಯತೆ.}}
{{gap}}ಭಾರತದ ವಿಷಯ ಬಲ್ಲವರಿಗೆಲ್ಲ ಜಾತಿ ಪದ್ಧತಿಯ ವಿಷಯ ತಿಳಿದಿದೆ. ಪ್ರತಿಯೊಬ್ಬ ವಿದೇಶೀಯನೂ ಮತ್ತು ಅನೇಕ ಭಾರತೀಯರೂ ಅದನ್ನು ಅಲ್ಲಗಳೆದು ಖಂಡಿಸಿದ್ದಾರೆ. ಅನೇಕರು ಅದರ ಮೂಲತತ್ವವನ್ನು ಒಪ್ಪಿ, ಬಹುಜನ ಹಿಂದೂಗಳು ಈಗಲೂ ಅದಕ್ಕೆ ಅಂಟಿಕೊಂಡಿದ್ದರೂ ಇಂದಿನ ಅಸಂಖ್ಯಾತ ಜಾತೀಯ ಜಟಿಲತೆಯನ್ನು ಯಾವ ಭಾರತೀಯನೂ ಅನುಮೋದಿಸುವುದಿಲ್ಲ, 'ಜಾತಿ' ಶಬ್ದಕ್ಕೆ ಅನೇಕರು ಅನೇಕ ಅರ್ಥಗಳನ್ನು ಕೊಡುವುದರಿಂದ ಆ ಶಬ್ದದ ಉಪಯೋಗದಲ್ಲೇ ಸ್ವಲ್ಪ ಗೊಂದಲವೆದ್ದಿದೆ. ಸಾಮಾನ್ಯ ಯೂರೋಪಿಯನ್ ಅಥವ ಅದೇ ಭಾವನೆಯ ಭಾರತೀಯನಿಗೆ ಜಾತಿ ಎಂದರೆ ಜನತೆಯನ್ನು ವಿಂಗಡಿಸುವ ಯತ್ನ, ಕೆಲವು ಪಂಗಡಗಳ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳುವ ಕುತಂತ್ರ, ಉಚ್ಚ ನೀಚಭಾವನೆಯನ್ನು ಶಾಶ್ವತಗೊಳಿಸುವ ಯತ್ನ ಎನ್ನುವ ಭಾವನೆ ಇದೆ. ಇದರಲ್ಲಿ ಸತ್ಯವಿದೆ ; ಪ್ರಾಯಶಃ ಆರರು ಭಾರತವನ್ನು ಆಕ್ರಮಿಸಿದಾಗ ಮೂಲನಿವಾಸಿಗಳಿಂದ ಆರರು ಪ್ರತ್ಯೇಕವಿರಬೇಕೆಂದು ಆರಂಭದಲ್ಲಿ ಮಾಡಿದ ಏರ್ಪಾಟು ಇದ್ದರೂ ಇರಬಹುದು. ಮೊದಲು ಸ್ವಲ್ಪ ಹಿಗ್ಗಿಸಲು ಸಾಧ್ಯವಿದ್ದರೂ ಕ್ರಮೇಣ ಬೆಳೆಯುತ್ತ ಬೆಳೆಯುತ್ತ ಬಹಳ ಕಠಿನವಾಗಿದೆ. ಆದರೂ ಅದು ಸತ್ಯದ ಒಂದು ಮುಖಮಾತ್ರ. ಅದರ ಶಕ್ತಿ, ಸಂಘಟನೆ ಮತ್ತು ಇಷ್ಟು ಕಾಲ ಬಾಳಿ ಬಂದುದಕ್ಕೆ ಕಾರಣ ಅದರಿಂದ ತಿಳಿಯುವುದಿಲ್ಲ. ಬೌದ್ಧ ಮತದ ಧಾಳಿಯನ್ನು ಎದುರಿಸಿತು, ಆನ್ಲೈನರ ಮೊಗಲರ ಆಳ್ವಿಕೆಗಳನ್ನೂ ಮತ್ತು ಇಸ್ಲಾಂ ಧರ್ಮದ ಧಾಳಿಯನ್ನೂ ಎದುರಿಸಿತು. ಅಲ್ಲದೆ ಹಿಂದೂಧರ್ಮದಲ್ಲೇ ಅನೇಕ ಸಮಾಜಸುಧಾರಕರ ವಿರೋಧವನ್ನೂ ಎದುರಿಸಿ ಉಳಿಯಿತು. ಅದರ ಮೂಲಕ್ಕೆ ಪೆಟ್ಟು ಬಿದ್ದು ಅಸ್ಥಿಭಾರ ಸಡಿಲವಿರುವುದು ಈಗಮಾತ್ರ. ಅದಕ್ಕೆ ಕಾರಣವು ಹಿಂದೂಧರ್ಮದಲ್ಲೇ ಹುಟ್ಟಿರುವ ಸಮಾಜಸುಧಾರಣೆಯ ಮನೋಭಾವವಲ್ಲ, ಪಾಶ್ಚಿಮಾತ್ಯ ಸಂಸ್ಕೃತಿಯ ಸಂಪರ್ಕವೂ ಅಲ್ಲ. ಇವೆರಡೂ ತಕ್ಕಮಟ್ಟಿಗೆ ತಮ್ಮ ಪ್ರಭಾವ ಬೀರಿದ್ದರೂ ಮುಖ್ಯ ಕಾರಣವು ನಮ್ಮ ಕಣ್ಣೆದುರಿಗೇನೆ ಭಾರತೀಯ ಸಮಾಜವನ್ನೇ ಬುಡಮೇಲು ಮಾಡುತ್ತಿರುವ ಆರ್ಥಿಕ ಆಂದೋಲನ, ಅತಿವೇಗದಿಂದ ವ್ಯತ್ಯಸ್ತವಾಗುತ್ತಿರುವ ಜೀವನ ರೀತಿ ಮತ್ತು ಭಾವನಾ ರೀತಿಯನ್ನು ನೋಡಿದರೆ ಪ್ರಾಯಶಃ ಜಾತಿ ಪದ್ದತಿಯು ಉಳಿಯುವುದು ಕಷ್ಟವೆಂದು ತೋರುತ್ತದೆ. ಅದಕ್ಕೆ ಬದಲು ಏನು ಬರುತ್ತದೆ ಎಂದು ಹೇಳುವುದು ಕಷ್ಟ. ಏಕೆಂದರೆ ಅದಕ್ಕೆ ಸಿಕ್ಕಿರುವ ಈಡು ಜಾತಿ ಪದ್ಧತಿಗೂ ಹಿರಿದು, ಒಂದಕ್ಕೊಂದು ವಿರುದ್ಧವಾದ ಎರಡು ಸಮಾಜರಚನಾ ದೃಷ್ಟಿಕೋನಗಳಿಗೆ ಈಗ ತುಮುಲಯುದ್ಧ ನಡೆಯುತ್ತಿದೆ ಸಮಾಜರಚನೆಗೆ ಪಂಗಡವೇ ಮೂಲವೆಂಬ ಹಿಂದೂಭಾವನೆಗೆ ಮತ್ತು ಪಂಗಡಕ್ಕಿಂತ ವ್ಯಕ್ತಿಯೇ ಶ್ರೇಷ್ಠ ಎಂಬ ಪಾಶ್ಚಿಮಾತ್ಯ ಭಾವನೆಗೆ.
{{gap}}ಈ ಘರ್ಷಣೆ ನಡೆಯುತ್ತಿರುವುದು ಭಾರತದಲ್ಲಿ ಮಾತ್ರವಲ್ಲ. ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೂಪದಲ್ಲಿದ್ದರೂ ಪಾಶ್ಚಿಮಾತ್ಯರಲ್ಲಿಯೂ, ಇಡೀ ಪ್ರಪಂಚದಲ್ಲಿ ಎಲ್ಲ ಕಡೆಗಳಲ್ಲಿಯೂ ನಡೆಯುತ್ತಿದೆ, ಪ್ರಜಾಸತ್ತಾತ್ಮಕ ಉದಾರ ನೀತಿ, ಅದನ್ನ ವಲ೦ಬಿಸಿದ ಆರ್ಥಿಕ ಮತ್ತು ಸಾಮಾಜಿಕ ನೀತಿಯಮೇಲೆ ಮುಂದುವರಿದ ೧೯ನೆಯ ಶತಮಾನದ ಯೂರೋಪಿರ್ಯ ನಾಗರಿಕತೆಯಲ್ಲಿ ವ್ಯಕ್ತಿವಾದದ ಪರಮಾ ವಧಿಯನ್ನು ಕಾಣುತ್ತೇವೆ. ಹತ್ತೊಂಭತ್ತನೆಯ ಶತಮಾನದ ಸಾಮಾಜಿಕ ರಾಜಕೀಯ ನೀತಿಯು ಇಪ್ಪತ್ತನೆಯ ಶತಮಾನಕ್ಕೂ ಬೆಳೆದುಬಂದಿತು ಆದರೆ ಯುದ್ಧ ಮತ್ತು ಇತರ ಕಠಿಣ ಸಮಸ್ಯೆಗಳ ಎದುರಿನಲ್ಲಿ ಆ ನಾಗರಿಕತೆಯು ಶಿಥಿಲವಾಗಿ ನುಚ್ಚು ನೂರಾಗುವಂತೆ ಕಾಣುತ್ತದೆ. ಪಂಗಡಕ್ಕೆ ಮತ್ತು ಸಮಾಜಕ್ಕೆ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದೆ. ವ್ಯಕ್ತಿ ಮತ್ತು ಸಮಾಜದ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಸಮನ್ವಯಗೊಳಿಸುವುದೇ ಸಮಸ್ಯೆಯಾಗಿದೆ. ಈ ಪರಿಹಾರಮಾರ್ಗವು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೂಪ ತಾಳಬಹುದು. ಆದರೆ ಎಲ್ಲರಿಗೂ ಅನ್ವಯಿಸುವ ಒಂದು ಮೂಲತತ್ವ ವನ್ನು ಕಂಡುಹಿಡಿಯುವ ಪ್ರಯತ್ನವು ನಡೆಯಲೇಬೇಕಾಗುತ್ತದೆ.<noinclude></noinclude>
7ke6j8asvui6uoxo1tz1ustw70jdt5d
ಪುಟ:ಭಾರತ ದರ್ಶನ.djvu/೨೨೩
104
85115
321360
229387
2026-05-20T09:21:46Z
Shreelatha.Halemane
7642
/* Validated */
321360
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೧೮|ಭಾರತ ದರ್ಶನ|}}</noinclude>{{gap}}ಜಾತಿ ಪದ್ಧತಿಯಲ್ಲಿ ಒಂದು ವೈಶಿಷ್ಟವಿಲ್ಲ. ಅದು ದೊಡ್ಡದೊಂದು ಸಮಾಜರಚನೆಯಲ್ಲಿ ಒಂದು ಅಂಗ ಮಾತ್ರ. ಆದರೆ ಒಂದು ಮುಖ್ಯವಾದ ಅಂಗ. ಅದರ ಕೆಲವು ದುಷ್ಕಲಂಕಗಳನ್ನು ಕಿತ್ತೊಗೆದು, ಅದರ ಕಠಿಣತೆಯನ್ನು ಕಡಮೆಮಾಡಿ ಉಳಿಸಿಕೊಳ್ಳುವುದು ಸಾಧ್ಯ. ಆದರೆ ಇಂದಿನ ಸಾಮಾಜಿಕ ಆರ್ಥಿಕ ಘರ್ಷಣೆಯಲ್ಲಿ ಜಾತಿ ಪದ್ದತಿಯ ಬಾಹ್ಯರಚನೆಗೆ ಸ್ಥಾನವೇ ಇಲ್ಲ. ಮೂಲಕ್ಕೇ ಪಟ್ಟು ಹಾಕಿ ಅಗಾಧ ಸ್ಥಂಭಗಳನ್ನೇ ಉರುಳಿಸುತ್ತಿವೆ. ಮೂಲ ಅಸ್ತಿತ್ವವು ಬಹುಮಟ್ಟಿಗೆ ನಾಶ ವಾಗಿದೆ ಅಥವ ನಾಶಹೊಂದುತ್ತಲಿದೆ. ಜಾತಿ ಪದ್ಧತಿಯೇ ಇಕ್ಕಟ್ಟಿನಲ್ಲಿದೆ. ನಮಗೆ ಇಷ್ಟವೇ ಅನಿಷ್ಟವೇ ಎಂಬ ಪ್ರಶ್ನೆಯೇ ಇಲ್ಲ. ನಮ್ಮ ಇಷ್ಟಾನಿಷ್ಟಗಳೇನೇ ಇರಲಿ, ಪರಿವರ್ತನೆಗಳಾಗುತ್ತಲಿವೆ. ಆದರೆ ಭಾರತೀಯರು ಕಟ್ಟಿದ ಸಮಾಜದಲ್ಲಿ ಎದ್ದು ಕಾಣುವ ಸಂಘಟನ ಶಕ್ತಿ ಮತ್ತು ನಿತ್ಯತೆ ಭಾರತೀಯರ ಸಹಜ ಅಂತಃಶಕ್ತಿ ಮತ್ತು ಶೀಲಗಳ ಫಲ. ಈ ಅಂತಃಶಕ್ತಿ ಮತ್ತು ಶೀಲದ ಸಹಾಯದಿಂದ ಆ ಪರಿವರ್ತನೆಗಳನ್ನು ಸರಿಯಾದ ಮಾರ್ಗದಲ್ಲಿ ತಿರುಗಿಸಿ ರೂಪಗೊಳಿಸಿ ಪೂರ್ಣ ಪ್ರಯೋಜನ ಪಡೆಯುವುದು ನಮ್ಮ ಕೈಯಲ್ಲಿ ದೆ.
{{gap}}“ ಎಂದಿನವರೆಗೆ ಹಿಂದೂಗಳು ಜಾತಿ ಪದ್ದತಿಯನ್ನು ತ್ಯಜಿಸುವುದಿಲ್ಲವೋ ಅಂದಿನವರೆಗೆ ಭಾರತವು ಭಾರತವಾಗಿ ಉಳಿಯುತ್ತದೆ. ಜಾತಿ ಪದ್ಧತಿಯು ನಾಶವಾದೊಡನೆ ಭಾರತವು ಭಾರತವಾಗಿ ಉಳಿಯು ವುದಿಲ್ಲ. ಆ ಪ್ರತಿಭಾಯುಕ್ತ ಪಠ್ಯಾಯದ್ವೀಪವು ಅಂದೇ ಆಂಗ್ಲೋಸ್ಯಾಕ್ಷನ್ ಚಕ್ರಾಧಿಪತ್ಯದ ಹೊಲಗೇರಿಯಾಗುತ್ತದೆ” ಎಂದು ಸರ್ ಜಾರ್ಜ್ ಬನ್ಸ್ ವುಡ್ ಒ೦ದೆಡೆ ಎಲ್ಲೋ ಹೇಳಿದ್ದಾನೆ. ಜಾತಿ ಪದ್ಧತಿ ಇರಲಿ ಇಲ್ಲದಿರಲಿ ಈಗಾಗಲೇ ನಾವು ಬ್ರಿಟಿಷ್ ಚಕ್ರಾಧಿಪತ್ಯದಲ್ಲಿ ಆ ಅಂತಸ್ತಿಗೆ ಇಳಿದಿದ್ದೇವೆ. ಮುಂದೆ ನಮ್ಮ ಸ್ಥಾನವೇನೆ ಇರಲಿ ಬ್ರಿಟಿಷ್ ಚಕ್ರಾಧಿಪತ್ಯದಲ್ಲಿ ರುವುದಂತೂ ಸಾಧ್ಯ ವಿಲ್ಲ. ಆ ದೃಷ್ಟಿಯಿಂದ ಸರ್ ಜಾರ್ಜ್ ಬನ್ಸ್ ವುಡ್ ನೋಡದಿದ್ದರೂ, ಆತನು ಹೇಳಿರುವುದರಲ್ಲಿ ಸ್ವಲ್ಪ ಸತ್ಯವಿದೆ. ಕಾಲಧರ್ಮ ಮತ್ತು ಜನತೆಯ ಸಹಜ ಮನೋಧರ್ಮಕ್ಕನುಗುಣವಾದ ಬೇರೊಂದು ಸಮಾಜರಚನೆಯು ರೂಪುಗೊಳ್ಳದೆ ಹೋದರೆ, ಅನಾದಿಕಾಲದಿಂದ ಅವ್ಯಾಹತವಾಗಿ ನಡೆದು ಬಂದ ಒಂದು ದೊಡ್ಡ ಸಮಾಜವನ್ನು ಛಿದ್ರಗೊಳಿಸಿದರೆ, ಸಾಮಾಜಿಕ ಜೀವನ ಪೂರ್ಣ ನಾಶವಾಗಿ ಅನೈಕ್ಯತೆ, ಜನಕೋಟೆ, ವ್ಯಕ್ತಿಚರ್ಯೆಯ ವೈಪರೀತ್ಯ ಬಹು ದೊಡ್ಡ ಪ್ರಮಾಣದಲ್ಲಿ ತಲೆದೋರಿ ದೇಶದಲ್ಲಿ ಅನಾಹುತವಾಗಬಹುದು. ಪ್ರಾಯಶಃ ಪರ್ವಕಾಲದಲ್ಲಿ ಈ ಅನಾಹುತಗಳು ಅನಿವಾರ್ಯವೋ ಏನೋ? ಇಂದಿನ ಪ್ರಪಂಚದಲ್ಲಿ ಎಲ್ಲಿ ನೋಡಿದರೂ ಅನಾಹುತಗಳೇ, ಪ್ರಾಯಶಃ ಅನಾಹುತದ ಹಿಂದೆ ಜನತೆಯು ಅನುಭವಿಸಬೇಕಾದ ಸಂಕಟ ಮತ್ತು ನೋವಿನಿಂದಲೇ ಪಾಠಕಲಿತು, ಬೆಳೆದುಬಂದು, ನೂತನ ಪರಿಸ್ಥಿತಿಗನುಗುಣವಾಗಿ ಹೊಸಜೀವನವನ್ನು ಆರಂಭಿಸಬೇಕಾಗುತ್ತದೆ.
{{gap}}ಆದರೂ ನಮ್ಮ ಕಲ್ಪನೆ ಎಷ್ಟೇ ಮಬ್ಬಿರಲಿ, ನಮ್ಮ ಭವಿಷ್ಯದ ಗುರಿ ಏನು, ಏತಕ್ಕಾಗಿ ಶ್ರಮಿಸು ತಿದ್ದೇವೆ ಎಂಬ ಕಲ್ಪನೆ ಇಲ್ಲದೆ, ಇದ್ದುದನ್ನು ಒಡೆದು, ಇಲ್ಲದುದನ್ನು ಬೇಡಲು ಸಾಧ್ಯವಿಲ್ಲ, ಶೂನ್ಯತೆ ಯನ್ನು ಸೃಜಿಸಲು ಸಾಧ್ಯವಿಲ್ಲ ; ಏಕೆಂದರೆ ಆ ಶೂನ್ಯತೆಯೇ ನಮಗೆ ಅನಿಷ್ಟವಾದುದನ್ನು ನಿರ್ಮಿಸಿ ಕೊಳ್ಳಬಹುದು. ನಾವು ರೂಪುಗೊಳಿಸುವ ರಚನಾತ್ಮಕ ಯೋಜನೆಗಳಲ್ಲಿ ನಮಗೆ ಇರುವ ಜನ ಸಂಪ
ನ ಯೋಗ್ಯತೆ, ಅದರ ಭಾವನೆ ಮತ್ತು ಆಕಾಂಕ್ಷೆಗಳ ಹಿನ್ನೆಲೆ ಮತ್ತು ನಮ್ಮ ಕಾರ್ಯಕ್ಷೇತ್ರದ ಸನ್ನಿವೇಶಗಳು ಇವನ್ನೆಲ್ಲ ಗಮನಿಸಬೇಕಾಗುತ್ತದೆ. ಇದನ್ನೆಲ್ಲ ಅಲಕ್ಷ್ಯಮಾಡಿ ಗಾಳಿಗೋಪುರ ಕಟ್ಟ ಬಯಸಿದರೆ, ಅಥವ ಇತರರನ್ನು ಅನುಕರಿಸಹೋದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಆದ್ದರಿಂದ ನಮ್ಮ ಜನಜೀವನದ ಮೇಲೆ ಅತ್ಯಂತ ಪರಿಣಾಮಕಾರಿಯಾದ ಭಾರತೀಯ ಸಮಾಜದ ರಚನೆಯನ್ನು ಅರ್ಥಮಾಡಿಕೊಂಡು ವಿಚಾರಮಾಡುವುದು ಅತ್ಯಾವಶ್ಯಕ.
{{gap}}ಈ ಸಮಾಜರಚನೆಯ ಆಧಾರಸ್ಥಂಭಗಳು ಮೂರು, ಗ್ರಾಮ ಜೀವನ, ಜಾತಿ ಪದ್ಧತಿ, ಮತ್ತು ಒಟ್ಟು ಕುಟುಂಬ. ಇವೆಲ್ಲಕ್ಕೂ ಗ್ರಾಮಜೀವನವೆ ಮುಖ್ಯ. ವ್ಯಕ್ತಿಗೆ ಎರಡನೆಯ ಸ್ಥಾನ, ಒಂದೊಂದನ್ನೇ ವಿಚಾರಮಾಡಿದರೆ ಇದರಲ್ಲಿ ವೈಶಿಷ್ಟ್ಯವೇನೂ ಇಲ್ಲ. ಇತರ ದೇಶಗಳಲ್ಲಿ ಅದರಲ್ಲೂ ಮಧ್ಯಯುಗದಲ್ಲಿ<noinclude></noinclude>
ha2eg4s9x0sk9e9jqqied54sitxj6vj
ಪುಟ:ಭಾರತ ದರ್ಶನ.djvu/೨೨೪
104
85116
321362
229390
2026-05-20T09:22:09Z
Shreelatha.Halemane
7642
/* Validated */
321362
proofread-page
text/x-wiki
<noinclude><pagequality level="4" user="Shreelatha.Halemane" />{{rh||ಹೊಸ ಸಮಸ್ಯೆಗಳು|೨೧೯}}</noinclude>ಒಂದೊಂದನ್ನು ಅಲ್ಲಲ್ಲಿ ಕಾಣಬಹುದು. ಪುರಾತನ ಭಾರತೀಯ ಪ್ರಜಾಧಿಪತ್ಯಗಳಂತೆ ಇತರ ದೇಶ ಗಳಲ್ಲೂ ಪ್ರಾಚೀನ ಪ್ರಜಾಪ್ರಭುತ್ವಗಳನ್ನು ನೋಡಬಹುದು. ರಷ್ಯಾ ದೇಶದ ಪ್ರಾಚೀನ 'ಮೀರ್' ಭಾರತೀಯ ಗ್ರಾಮ ಪಂಚಾಯಿತಿಯನ್ನು ಹೋಲುತ್ತದೆ. ಕಸಬನ್ನವಲಂಬಿಸಿ ಜಾತಿಪದ್ಧತಿಯು ಏರ್ಪಾಟಾಯಿತು. ಮಧ್ಯಯುಗದ ಯೂರೋಪಿನಲ್ಲೂ ಅಂತಹ ವರ್ಣಿಸಂಘಗಳಿದ್ದವು. ಚೀನಾ ದೇಶದ ಕುಟುಂಬ ಜೀವನವು ಹಿಂದೂ ಕುಟುಂಬ ಜೀವನದಂತೆಯೇ ಇದೆ. ಇವುಗಳನ್ನೆಲ್ಲ ಹೋಲಿಸಿ ತುಲನಮಾಡಿ ಚರ್ಚಿಸಲು ನನಗೆ ಸಾಮರ್ಥ್ಯವೂ ಇಲ್ಲ; ಆವಶ್ಯಕತೆಯೂ ಇಲ್ಲ. ಒಟ್ಟಿನಲ್ಲಿ ಭಾರತೀಯ ಸಮಾಜ ರಚನೆಯಲ್ಲಿ ಒಂದು ವೈಶಿಷ್ಟವಿತ್ತು; ಅದು ಬೆಳೆದಂತೆ ಆ ವೈಶಿಷ್ಟವೂ ಬೆಳೆಯಿತು.
{{center|೭. ಗ್ರಾಮಾಡಳಿತ ಸ್ವಾತಂತ್ರ್ಯ: ಶುಕ್ರನೀತಿಸಾರ}}
{{gap}}ತುರ್ಕಿ ಜನರ ಮತ್ತು ಆಫ್ಘನರ ದಂಡಯಾತ್ರೆಗೆ ಮುಂಚೆ ಭಾರತೀಯರ ರಾಜನೀತಿ ಏನಿತ್ತು ಎಂಬುದನ್ನು ತಿಳಿಸಲು ಹತ್ತನೆಯ ಶತಮಾನದ ಪುರಾತನ ಗ್ರಂಥ ಒಂದಿದೆ, ಶುಕ್ರಾಚಾರ್ಯನ ರಾಜ ನೀತಿಗ್ರಂಥವಾದ ನೀತಿಸಾರ, ಕೇಂದ್ರಾಡಳಿತ, ನಗರಾಡಳಿತ, ಗ್ರಾಮಾಡಳಿತ ರಾಜನ ಮಂತ್ರಾ ಲೋಚನಾಸಭೆ, ಸರಕಾರದ ವಿವಿಧ ಅಂಗಗಳ ವಿಷಯವನ್ನು ತಿಳಿಸುತ್ತದೆ. ಗ್ರಾಮ ಪಂಚಾಯಿತಿಯ ಚುನಾಯಿತ ಮಂಡಲಿಗೆ ವಿಶೇಷ ಆಡಳಿತ ಅಧಿಕಾರವೂ, ದಂಡನಾಧಿಕಾರವೂ ಇತ್ತು. ರಾಜನ ಕಡೆಯ ಅಧಿಕಾರಿಗಳು ಅವರಿಗೆ ತುಂಬಾ ಗೌರವ ತೋರಿಸುತ್ತಿದ್ದರು. ಜಮೀನು ಹಂಚಿಕೆ, ಬೆಳೆದ ಬೆಳೆಯಿಂದ ತೆರಿಗೆಯನ್ನು ಶೇಖರಿಸುವುದು, ಗ್ರಾಮದ ಪರವಾಗಿ ಸರಕಾರಕ್ಕೆ ಕೊಡಬೇಕಾದ ಭಾಗ ವನ್ನು ಕೊಡುವುದು ಪಂಚಾಯಿತಿಯ ಕೆಲಸವಾಗಿತ್ತು. ಇಂತಹ ಅನೇಕ ಗ್ರಾಮ ಪಂಚಾಯಿತಿಗಳ ಮೇಲೆ ಆಡಳಿತ ವ್ಯವಸ್ಥೆಗೆ ಮತ್ತು ಅವಶ್ಯ ತೋರಿದರೆ ಮಧ್ಯೆ ಪ್ರವೇಶಮಾಡಿ ಸರಿಪಡಿಸಲು ದೊಡ್ಡ ಪಂಚಾಯಿತಿಗಳು ಇರುತ್ತಿದ್ದವು.
{{gap}}ಕೆಲವು ಪ್ರಾಚೀನ ಶಿಲಾಶಾಸನಗಳಿಂದ ಪಂಚಾಯಿತರನ್ನು ಹೇಗೆ ಆರಿಸುತ್ತ ಇದ್ದರು. ಅವರ ಅರ್ಹತೆಗಳೇನು, ಅನರ್ಹತೆಗಳೇನು ಎಂಬುದು ಗೊತ್ತಾಗುತ್ತದೆ. ಪ್ರತಿವರ್ಷವೂ ಅನೇಕ ಸಮಿತಿಗಳನ್ನು ಚುನಾಯಿಸಿ ನೇಮಿಸುತ್ತಿದ್ದರು. ಸ್ತ್ರೀಯರಿಗೂ ಅವುಗಳಲ್ಲಿ ಸ್ಥಾನವಿತ್ತು. ದುರ್ನಡತೆ ಗಾಗಿ ಸದಸ್ಯರನ್ನು ತೆಗೆದು ಹಾಕಬಹುದಾಗಿತ್ತು. ಸಾರ್ವಜನಿಕ ಹಣಕ್ಕೆ ಲೆಕ್ಕ ಕೊಡದಿದ್ದ ಸದಸ್ಯನು ತನ್ನ ಅರ್ಹತೆಯನ್ನು ಕಳೆದುಕೊಳ್ಳುತ್ತಿದ್ದನು. ಬೇಕಾದವರಿಗೆ ಮಾತ್ರ ಕೆಲಸಕೊಡದಂತಿರಲೆಂದು ಸದಸ್ಯರು ತಮ್ಮ ಸಂಬಂಧಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಬಾರದೆಂಬ ನಿಯಮವಿತ್ತು.
{{gap}}ಈ ಪಂಚಾಯಿತಿಗಳು ತಮ್ಮ ಹಕ್ಕು ಬಾಧ್ಯತೆಗಳ ರಕ್ಷಣೆಯಲ್ಲಿ ಬಹಳ ಜಾಗರೂಕರಿದ್ದರು. ರಾಜನ ಅಪ್ಪಣೆಯಿಲ್ಲದೆ ಯಾವ ಸೈನಿಕನೂ ಗ್ರಾಮದೊಳಗೆ ಪ್ರವೇಶಮಾಡಬಾರದೆಂಬ ನಿಯಮ ವಿತ್ತು. ಅಧಿಕಾರಿಯೊಬ್ಬನ ಮೇಲೆ ಜನರು ದೂರು ತಂದರೆ “ ರಾಜನು ಅಧಿಕಾರಿಯ ಪರ ವಹಿಸ ಬಾರದು, ತನ್ನ ಪ್ರಜೆಗಳ ಪರ ವಹಿಸಬೇಕು ” ಎಂದು ನೀತಿಸಾರ ಹೇಳುತ್ತದೆ. ಅನೇಕರಿಂದ ದೂರು ಬಂದರೆ ಆ ಅಧಿಕಾರಿಯನ್ನು ಕೆಲಸದಿಂದ ನಿವೃತ್ತಿಮಾಡಬೇಕು. "ಅಧಿಕಾರ ಮದದಿಂದ ಉನ್ನತ ನಾಗದವನು ಯಾರು ” ? ತನ್ನ ಪ್ರಜೆಗಳ ಬಹುಮತದ ಇಷ್ಟ ಕ್ಕನುಗುಣವಾಗಿ ದೊರೆಯು ನಡೆಯ ಬೇಕು. “ ಅನೇಕ ಎಳೆಗಳ ಹಗ್ಗವು ಸಿಂಹವನ್ನಾದರೂ ಎಳೆದು ಕಟ್ಟುವಂತೆ ಸಾರ್ವಜನಿಕ ಅಭಿಪ್ರಾ ಯವು ರಾಜನಿಗಿಂತ ದೊಡ್ಡದು.” ಈ ಕೆಲಸಕ್ಕೆ ನೇಮಿಸುವುದರಲ್ಲಿ ಕಾರ್ಯದಕ್ಷತೆ, ನಡತೆ ಮತ್ತು ಬುದ್ದಿ ಶಕ್ತಿಗೆ ಪ್ರಾಧಾನ್ಯ ಕೊಡಬೇಕು- ಜಾತಿ ಅಥವ ಮನೆತನಕ್ಕಲ್ಲ.” “ಬಣ್ಣದಿಂದಲಾಗಲಿ, ವಂಶೀಕರಿಂದಲಾಗಲಿ ಬ್ರಾಹ್ಮಣನ ಗುಣ ಹುಟ್ಟುತ್ತೆಂಬುದು ಸುಳ್ಳು.”
{{gap}}ದೊಡ್ಡ ದೊಡ್ಡ ನಗರಗಳಲ್ಲಿ .ಕುಶಲಕರ್ಮಿಗಳು, ವರ್ತಕರು ಇರುತ್ತಿದ್ದರು. ಉದ್ಯೋಗ ಸಂಘಗಳು, ವಣಿಕ್ ಸಂಘಗಳು, ಧನಕೋಠಿಗಳು ಇರುತ್ತಿದ್ದವು, ಈ ಸಂಘಗಳಿಗೆ ಸಂಪೂರ್ಣ ಆಡಳಿತ ಸ್ವಾತಂತ್ರವಿತ್ತು.<noinclude></noinclude>
jzr1pi68kz181behdxswimd8a0gsvsj
ಪುಟ:ಭಾರತ ದರ್ಶನ.djvu/೨೨೫
104
85117
321363
229398
2026-05-20T09:22:26Z
Shreelatha.Halemane
7642
/* Validated */
321363
proofread-page
text/x-wiki
<noinclude><pagequality level="4" user="Shreelatha.Halemane" />{{rh|೨೨೦|ಭಾರತ ದರ್ಶನ|}}</noinclude>{{gap}}ಈ ವಿಷಯವೆಲ್ಲ ಅಲ್ಲಲ್ಲಿ ಸ್ವಲ್ಪ ದೊರೆಯುತ್ತದೆ. ಆದರೆ ನೀತಿಸಾರ ಮತ್ತು ಇತರ ಆಧಾರ.
ಗಳಿಂದ ದೊರೆಯುವ ವಿಷಯಗಳಿಂದ ಆಗಿನ ಕಾಲದಲ್ಲಿ ಗ್ರಾಮಗಳಿಗೆ ಮತ್ತು ನಗರಗಳಿಗೆ
ಪೂರ್ಣ ಆಡಳಿತ ಸ್ವಾತಂತ್ರವಿತ್ತು ; ಎಂದಿನವರೆಗೆ ತೆರಿಗೆಯು ಸರಿಯಾಗಿ ಸಲ್ಲುತ್ತಲಿತ್ತು ಅಲ್ಲಿನ
ವರೆಗೆ ಕೇಂದ್ರ ಆಡಳಿತವು ಸ್ವಲ್ಪವೂ ಪ್ರವೇಶ ಮಾಡುತ್ತಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಸನಾತನ
ಧರ್ಮವು ಆಚರಣೆಯಲ್ಲಿತ್ತು. ಸಾಂಪ್ರದಾಯಿಕ ಹಕ್ಕು ಬಾಧ್ಯತೆಗಳಿಗೆ ರಾಜಕೀಯ ಅಥವ ಸೈನಿಕ
ಶಕ್ತಿ ಯಾವುದೂ ಅಡ್ಡ ಬರುತ್ತಿರಲಿಲ್ಲ. ಆರಂಭದಲ್ಲಿ ವ್ಯವಸಾಯವು ಸಹಕಾರ ಪದ್ಧತಿಯ ಮೇಲೆ
ಅಥವ ಇಡೀ ಗ್ರಾಮದ ಒಟ್ಟಿನಿಂದ ನಡೆಯುತ್ತಿತ್ತು. ವ್ಯಕ್ತಿಗಳಿಗೆ, ಕುಟುಂಬಗಳಿಗೆ ಹಕ್ಕು ಬಾಧ್ಯತೆ
ಗಳೂ ಇದ್ದವು. ಕರ್ತವ್ಯ ಕರ್ಮವೂ ಇತ್ತು. ಇವೆರಡರ ನಿರ್ಧಾರ ಮತ್ತು ರಕ್ಷಣೆ ಸಂಪ್ರದಾಯ
ಬದ್ಧವಿದ್ದವು.
{{gap}}ಮತ ಪ್ರಾಧಾನ್ಯ ರಾಜತ್ವವು ಭಾರತದಲ್ಲಿ ಯಾವಾಗಲೂ ಇರಲಿಲ್ಲ. ರಾಜನು ನ್ಯಾಯಬಾಹಿರ
ನಾದರೆ ಅಥವ ಕ್ರೂರಿಯಾದರೆ ದಂಗೆ ಏಳಲು ಪ್ರಜೆಗಳಿಗೆ ಅಧಿಕಾರವಿತ್ತು. ಚೀನೀ ದಾರ್ಶನಿಕ
ಮೆನ್ಷಿಯಸ್ ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ “ ರಾಜನು ಪ್ರಜೆಗಳನ್ನು ಕಡ್ಡಿ ಕಸದಂತೆ
ಕಂಡರೆ ಪ್ರಜೆಗಳು ರಾಜನನ್ನು ದರೋಡೆಕಾರನೆಂದೂ ಶತ್ರುವೆಂದೂ ಕಾಣಬೇಕು ” ಎಂಬ ಮಾತು
ಭಾರತಕ್ಕೆ ಅನ್ವಯಿಸುತ್ತದೆ. ಈ ಬಗೆಯ ರಾಜನ ಅಧಿಕಾರಕ್ಕೂ ಯೂರೋಪಿಯನ್ ಶ್ರೀಮಂತಿಕೆಯ
ರಾಜತ್ವದ ಅಧಿಕಾರಭಾವನೆಗೂ ಬಹಳ ಅಂತರವಿದೆ. ಯೂರೋಪಿಯನರ ಭಾವನೆಯಲ್ಲಿ ರಾಜನಿಗೆ
ತನ್ನ ರಾಜ್ಯದ ಎಲ್ಲ ವ್ಯಕ್ತಿಗಳ ಮತ್ತು ವಸ್ತುಗಳ ಮೇಲೆ ಪೂರ್ಣ ಸ್ವಾಮ್ಯವಿದ್ದು ಈ ಅಧಿಕಾರವನ್ನು
ತನ್ನ ಮಾಂಡಲಿಕ ಶ್ರೀಮಂತರಿಗೆ, ಪಾಳೆಯಗಾರರಿಗೆ ವಹಿಸಿಕೊಡಲು ಅಧಿಕಾರವಿತ್ತು. ಈ ರೀತಿಯ
ಒಂದು ಅಧಿಕಾರವರ್ಗವು ಬೆಳೆಯಿತು; ಆ ಪಾಳೆಯ ಪಟ್ಟಿಗೆ ಸೇರಿದ ಜನರು ಮತ್ತು ಆಸ್ತಿ ಎಲ್ಲವೂ
ಆ ಶ್ರೀಮಂತ ಅಥವ ಪಾಳೆಯಗಾರನದಾಗಿತ್ತು, ಅವನ ಮೂಲಕ ದೊರೆಯದು. ಈ ಅಧಿಕಾರ
ಭಾವನೆಯು ರೋಮನರಿಂದ ಬೆಳೆದು ಬಂದದ್ದು, ಭಾರತದ ರಾಜಾಧಿಕಾರಭಾವನೆಯೇ ಬೇರೆ.
ದೊರೆಗೆ ಕೆಲವು ಭೂಕಂದಾಯ ತೆಗೆದುಕೊಳ್ಳುವ ಅಧಿಕಾರವು ಮಾತ್ರವಿತ್ತು. ಅಷ್ಟು ಅಧಿಕಾರವನ್ನು
ಮಾತ್ರ ಆತನು ಬೇರೆಯವರಿಗೆ ವಹಿಸಬಹುದಾಗಿತ್ತು. ಭಾರತದ ರೈತನು ರಾಜನ ಗುಲಾಮನಾಗಿರ
ಲಿಲ್ಲ, ಬೇಕಾದಷ್ಟು ಭೂಮಿ ಇತ್ತು. ರೈತನಿಂದ ಭೂಮಿಯನ್ನು ಕಿತ್ತುಕೊಳ್ಳುವುದರಿಂದ ಯಾವ
ಉಪಯೋಗವೂ ಇರಲಿಲ್ಲ. ಆದ್ದರಿ೦ದ ಪಾಶ್ಚಿಮಾತ್ಯ ದೇಶಗಳಂತೆ ಭಾರತದಲ್ಲಿ ಜಾನುವಾರಿ
ಪದ್ಧತಿಯೂ ಇರಲಿಲ್ಲ; ರೈತನಿಗೆ ಭೂಮಿಯ ಸ್ವಾಮ್ಯವೂ ಇರಲಿಲ್ಲ. ಬ್ರಿಟಿಷರ ಆಳ್ವಿಕೆಯಿಂದ ಬಂದ
ಈ ಎರಡೂ ಭಾವನೆಗಳು ಭಾರತದಲ್ಲಿ ಅಪಾರ ಕೆಡುಕನ್ನು ಮಾಡಿದವು.
{{gap}}ಪರಕೀಯರ ಧಾಳಿಯಿಂದ ಯುದ್ಧ ಮತ್ತು ವಿನಾಶ ಕೃತ್ಯಗಳಾದವು, ದಂಗೆಗಳಾದವು. ಕ್ರೂರ
ದಬ್ಬಾಳಿಕೆಗಳಾದವು. ಸೈನ್ಯ ಶಕ್ತಿಯನ್ನವಲಂಬಿಸಿದ ಹೊಸ ರಾಜಮನೆತನಗಳು ಹುಟ್ಟಿದವು. ದೇಶ
ದಲ್ಲಿ ಆಚರಣೆಯಲ್ಲಿದ್ದ ಸಂಪ್ರದಾಯ ಶಾಸನವನ್ನು ಈ ರಾಜಮನೆತನಗಳು ಅಲಕ್ಷೆಮಾಡಿದರು. ಇದ
ರಿಂದ ಅನೇಕ ಪರಿವರ್ತನೆಗಳಾಗಿ, ಪ್ರಜಾಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿತು. ಕಟ್ಟ ಕಡೆಗೆ ಭೂಕಂದಾಯ
ಪದ್ದತಿಯಲ್ಲೂ ಕೆಲವು ಬದಲಾವಣೆಗಳಾದವು. ಆದರೂ ಆಪ್ಟನ್ ಮತ್ತು ಮೊಗಲ ರಾಜರುಗಳು
ಪ್ರಾಚೀನಸಂಪ್ರದಾಯಗಳಿಗೆ ಮತ್ತು ಪದ್ಧತಿಗಳಿಗೆ ಅಡ್ಡ ಬರಲಿಲ್ಲ. ಯಾವ ಮುಖ್ಯ ವ್ಯತ್ಯಾಸವನ್ನೂ
ಮಾಡಲಿಲ್ಲ. ಭಾರತೀಯ ಜನಜೀವನದ ಸಾಮಾನ್ಯ ಮತ್ತು ಆರ್ಥಿಕರಚನೆಯು ಅಚ್ಚಳಿಯದೆ ಉಳಿ
ಯಿತು. ಸನಾತನ ಧರ್ಮವನ್ನು ಕಾಪಾಡಿಕೊಂಡು ಬರಬೇಕೆಂದೂ, ರಾಜಕಾರ್ಯವನ್ನು ಧರ್ಮ
ದಿಂದ ದೂರವಿಡಬೇಕೆಂದೂ, ಧರ್ಮವು ವೃತ್ತಿಗೆ ಸಂಬಂಧಿಸಿದ್ದೆಂದೂ ಮಯಾಸುದ್ದೀನ್ ತಗ್ಗ ಖ್
ತನ್ನ ಅಧಿಕಾರಿಗಳಿಗೆ ನಿರೂಪಕೊಟ್ಟನು. ಆದರೆ ಕಾಲ ಪರಿವರ್ತನೆ, ಸಂಘರ್ಷಣೆಗಳು ಮತ್ತು
ಕೇಂದ್ರ ಅಧಿಕಾರವ್ಯಾಪ್ತಿಯ ಹೆಚ್ಚಳದಿಂದ ಸಂಪ್ರದಾಯನಿಯಮಕ್ಕೆ ಮನ್ನಣೆಯು ಕಡಮೆ
ಯಾಯಿತು. ಗ್ರಾಮಾಡಳಿತದ ಸ್ವಾತಂತ್ರ್ಯವು ಮಾತ್ರ ಉಳಿಯಿತು. ಬ್ರಿಟಿಷರ ಆಳ್ವಿಕೆಯಲ್ಲಿ
ಅದಕ್ಕೂ ಸಂಚಕಾರವು ಬಂದಿತು.<noinclude></noinclude>
f599mtsjt8sddmbnh8wt81jveljzq9f
ಪುಟ:ಭಾರತ ದರ್ಶನ.djvu/೨೨೬
104
85118
321364
229510
2026-05-20T09:22:39Z
Shreelatha.Halemane
7642
/* Validated */
321364
proofread-page
text/x-wiki
<noinclude><pagequality level="4" user="Shreelatha.Halemane" />{{rh||ಹೊಸ ಸಮಸ್ಯೆಗಳು|೨೨೧}}</noinclude>{{center|೮.ಜಾತಿಯ ಧರ್ಮ ಮತ್ತು ಆಚರಣೆ : ಒಟ್ಟು ಕುಟುಂಬ}}
{{gap}}“ ಭಾರತೀಯರಲ್ಲಿ ಧರ್ಮವು ಕೇವಲ ಒಂದು ತತ್ವವಲ್ಲ, ವಿವಿಧ ಜೀವನ ಮಟ್ಟಕ್ಕೆ ವಿವಿಧ ಧಾರ್ಮಿಕ ಮನೋಭಾವನೆಗೆ ಅನುಗುಣವಾಗಿ ರಚಿಸಿದ ಜನಜೀವನದ ರೀತಿಯ ಒಂದು ಮಾರ್ಗ ಸೂಚಿ ” ಎಂದು ಹ್ಯಾವೆಲ್ ಹೇಳುತ್ತಾನೆ. ಅತಿ ಪ್ರಾಚೀನ ಕಾಲದಲ್ಲಿ ಹಿಂದೂ ಆರ್ಯ ಸಂಸ್ಕೃತಿಯು ರೂಪುಗೊಂಡಾಗ ನಾಗರಿಕತೆಯಲ್ಲಿ ಬುದ್ದಿ ವಿಕಸನದಲ್ಲಿ ಧಾರ್ಮಿಕ ಉನ್ನತಿಯಲ್ಲಿ ಎಷ್ಟು ಭಿನ್ನತೆಯನ್ನು ಊಹಿಸಬಹುದೊ ಅಷ್ಟೂ ಭಿನ್ನವಿದ್ದ ಜನರ ಅವಶ್ಯಕತೆಗೆ ಒಂದು ಧರ್ಮವನ್ನು ರಚಿಸಬೇಕಾಗಿತ್ತು. ಕಾಡು ಜನರಿದ್ದರು, ವಸ್ತು ಪೂಜಕರಿದ್ದರು, ಕುಲದೇವತೆಯ ಆರಾಧಕರಿದ್ದರು ; ಎಲ್ಲ ಬಗೆಯ ಮೂಢ ನಂಬಿಕೆಯ ಜನರೂ ಇದ್ದರು ; ಆತ್ಮಜ್ಞಾನದಲ್ಲಿ ಅತ್ಯುನ್ನತ ಮಟ್ಟವನ್ನೇರಿದ ಮಹಾನುಭಾವಿಗಳೂ ಇದ್ದರು. ಈ ಅಂತರದ ಮಧ್ಯೆ ಎಲ್ಲ ಬಗೆಯ ಮತಾಚಾರಗಳೂ ಇದ್ದವು. ಕೆಲವರು ಶ್ರೇಷ್ಠ ಜ್ಞಾನ ಜಿಜ್ಞಾಸುಗಳಾಗಿದ್ದರೂ ಅನೇಕರಿಗೆ ಅದು ಸಾಧ್ಯವಿರಲಿಲ್ಲ. ಸಮಾಜ ಜೀವನವು ಬೆಳೆದಂತೆ ಮತಾ ಚರಣೆಯಲ್ಲಿ ಒಂದು ಬಗೆಯ ಸ್ತಿಮಿತ ಸ್ಥಿತಿಯು ಬಂದಿತಾದರೂ ಸಾಂಸ್ಕೃತಿಕ ಮಾನಸಿಕ ವ್ಯತ್ಯಾಸಗಳು ಅನೇಕ ಉಳಿದವು. ಯಾವ ಮತವನ್ನೂ ಬಲಾತ್ಕಾರದಿಂದ ತುಳಿಯಬಾರದು, ನಾಶಮಾಡಬಾರದು, ಎಂಬುದು ಹಿಂದೂ ಆರ್ಯ ಧರ್ಮದ ನೀತಿ, ಪ್ರತಿಯೊಂದು ಪಂಗಡಕ್ಕೂ, ತನ್ನ ಮಾನಸಿಕ ಬೆಳವಣಿಗೆ ಮತ್ತು ಶಕ್ತಿಯ ಮಟ್ಟ ಕ್ಕನುಗುಣವಾಗಿ ತನ್ನ ಆದರ್ಶವನ್ನು ಸಾಧಿಸಿಕೊಳ್ಳಲು ಪೂರ್ಣ ಸ್ವಾತಂತ್ರ್ಯ, ವಿತ್ತು. ಸಮನ್ವಯದ ಪ್ರಯತ್ನ ಎಷ್ಟೋ ನಡೆದರೂ ತಿರಸ್ಕಾರ ಬುದ್ಧಿಯಾಗಲಿ, ತುಳಿಯುವ ಬುದ್ಧಿ ಯಾಗಲಿ ಇರಲಿಲ್ಲ.
{{gap}}ಸಮಾಜರಚನೆಯಲ್ಲೂ ಇದೇ ಬಗೆಯ ಇನ್ನೂ ಕಠಿಣ ಸಮಸ್ಯೆಯು ಎದ್ದಿತು. ಪ್ರತಿಯೊಂದು ಪಂಗಡಕ್ಕೂ ತನ್ನ ಜೀವನವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರಲು ಸ್ವಾತಂತ್ರ್ಯ ಕೊಟ್ಟ ರೂ ಪ್ರತಿಯೊಂದು ಪಂಗಡವೂ ಇತರ ಎಲ್ಲ ಪಂಗಡಗಳೊಂದಿಗೆ ಒಂದು ಸಂಸ್ಕೃಷ್ಟ ಜೀವನ ನಡೆಸುವಂತೆ ಈ ಭಿನ್ನ ಭಿನ್ನ ಸಂಗಡಗಳನ್ನು ಒಂದು ಸಮಾಜವಾಗಿ ಹಣೆ ಯುವುದು ಹೇಗೆಂಬುದು ಮುಖ್ಯ ಸಮಸ್ಯೆಯಾಯಿತು. ಅಷ್ಟು ಸಮಂಜಸವಲ್ಲದಿದ್ದರೂ ಅನೇಕ ದೇಶಗಳಲ್ಲಿ ಈಗ ತಲೆದೋರಿರುವ ಅಲ್ಪಸಂಖ್ಯಾತರ ಪ್ರಶ್ನೆಗೆ ಈ ಸಮಸ್ಯೆಯನ್ನು ಹೋಲಿಸಬಹುದು. ಪ್ರತಿಯೊಬ್ಬ ರಾಷ್ಟಕವನ್ನೂ ಹದಿನಾರಾಣೆ : ಅಮೆರಿಕನ್ ' ಮಾಡುವ ಮೂಲಕ ಅಮೆರಿಕ ತನ್ನ ಸಮಸ್ಯೆ ಬಗೆಹರಿಸಲು ಯತ್ನ ಮಾಡಿದೆ. ಎಲ್ಲರಿಗೂ ಒಂದು ಮಾದರಿ ಯನ್ನು ತೋರಿಸಿದ್ದಾರೆ. ಪ್ರಾಚೀನವೂ ಜಟಿಲವೂ ಆದ ಇತಿಹಾಸ ಪರಂಪರೆಯುಳ್ಳ ಇತರ ದೇಶ ಗಳಿಗೆ ಈ ಸಮಸ್ಯಾ ಪರಿಹಾರವು ಅಷ್ಟು ಸುಲಭವಲ್ಲ. ಕೆನಡದಲ್ಲಿ ಸಹ ತಮ್ಮ ಧರ್ಮ ಮತ್ತು ಭಾಷೆಯ ರಕ್ಷಣೆಯಲ್ಲಿ ಉಜ್ವಲ ಅಭಿಮಾನಿಗಳಾದ ಫ್ರೆಂಚರು ಇದಾರೆ. ಯೂರೋಪಿನಲ್ಲಿ ಈ ಅಂತ ರದ ಮಟ್ಟವು ಉನ್ನತವೂ ಇದೆ, ಆಳವೂ ಇದೆ. ಆದರೂ ಅದೆಲ್ಲ ಒಂದೇ ಸಂಸ್ಕೃತಿ ಮತ್ತು ಒಂದೇ ಹಿನ್ನೆಲೆಯುಳ್ಳ ಯೂರೋಪಿಯನರಲ್ಲಿ ಮಾತ್ರ. ಯೂರೋಪಿಯನರಲ್ಲದವರು ಬಂದೊಡನೆ ಅವರಿಗೆ ಈ ಯೂರೋಪಿನ ಆಯಕಟ್ಟಿನಲ್ಲಿ ಸ್ಥಾನವಿಲ್ಲ. ಅಮೆರಿಕೆಯ ಸಂಯುಕ್ತ ಸಂಸ್ಥಾನಗಳಲ್ಲಿ ನೀಗಳು ಹದಿನಾರಾಣೆ ಅಮೆರಿಕನರಾದರೂ ಅವರ ಜನವೇ ಬೇರೆ. ಇತರರಿಗೆ ಸಾಮಾನ್ಯವಾಗಿ ದೊರಕುವ ಅನೇಕ ಸೌಲಭ್ಯಗಳೂ ಅವಕಾಶಗಳೂ ಅವರಿಗೆ ನಿಷೇಧ, ಇತರ ಕಡೆಗಳ ಉದಾಹರಣೆ ಇನ್ನೂ ಹೊಲಸು. ಸೋವಿಯಟ್ ರಷ್ಯ ಮಾತ್ರ ಬಹು ಜನಾಂಗ ರಾಜ್ಯವನ್ನು ಕಟ್ಟಿ ತನ್ನ ಅಲ್ಪ ಸಂಖ್ಯಾ ತರ ಮತ್ತು ಜನಾಂಗಗಳ ಪ್ರಶ್ನೆಯನ್ನು ಬಿಡಿಸಿರುವಂತೆ ತೋರುತ್ತದೆ.
{{gap}}ಇಷ್ಟು ಅನುಭವ, ಪ್ರಗತಿ ನಮಗಿದ್ದರೂ ಈ ಸಮಸ್ಯೆಗಳು ಈಗಲೂ ನಮ್ಮ ತಲೆಕೆಡಿಸುತ್ತಿರು ವಾಗ ಭಿನ್ನ ಬಗೆಯ ಭಿನ್ನ ಜೀವನದ ಅನೇಕ ಪಂಗಡಗಳ ಜನರನ್ನು ಒಂದು ನಾಗರಿಕತೆಯ, ಒಂದು ಸಮಾಜದ ಎಲ್ಲೆ ಕಟ್ಟಿನೊಳಗೆ ತರುವ ಪ್ರಯತ್ನದಲ್ಲಿ ಪ್ರಾಚೀನ ಕಾಲದ ಹಿಂದೂ ಆರರಿಗೆ ಆಗ ಎಷ್ಟು ಕಷ್ಟವಾಗಿರಬೇಕು ? ಸಾಮಾನ್ಯವಾಗಿ ಇಂತಹ ಸಮಸ್ಯೆಗಳನ್ನು ಬಿಡಿಸುವ ಬಗೆ ಎಂದರೆ ಆಗ ಮತ್ತು<noinclude></noinclude>
s125yics1xiogm8anaart6q2gtupn3m
ಪುಟ:ಭಾರತ ದರ್ಶನ.djvu/೨೨೭
104
85119
321366
252374
2026-05-20T09:22:52Z
Shreelatha.Halemane
7642
/* Validated */
321366
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಭಾರತ ದರ್ಶನ |left=೨೨೨|right=}}</noinclude>ಈಗಲೂ ಸಹ ಗೆದ್ದ ಜನರನ್ನು ನಿರ್ನಾಮ ಮಾಡುವುದು ಅಥವ ಗುಲಾಮಗಿರಿಗೆ ತಳ್ಳುವುದು. ಆರ್ಯರು
ಈ ಮಾರ್ಗವನ್ನು ಅನುಸರಿಸಲಿಲ್ಲ; ಆದರೆ ಉಚ್ಚವರ್ಗದ ಉನ್ನತ ಮಟ್ಟವನ್ನು ಕಾಪಾಡಿಕೊಂಡು
ಬರಲು ಎಲ್ಲ ಬಗೆಯ ಎಚ್ಚರಿಕೆಯನ್ನೂ ತೆಗೆದುಕೊಂಡು, ಅಷ್ಟು ಹೆಚ್ಚಳವನ್ನು ಮಾತ್ರ ಕಾಪಾಡಿ
ಕೊಂಡು, ಸಾಮಾನ್ಯ ನಿಯಮಗಳ ಅನುಸಾರವಾಗಿ ಒಂದು ಆಯಕಟ್ಟಿನ ಒಳಗೆ ಪ್ರತಿಯೊಂದು
ಪಂಗಡವೂ ತನ್ನ ಉದ್ಯಮವನ್ನು ಸಾಗಿಸುತ್ತ, ತನ್ನ ಅಭಿಲಾಷೆ ಮತ್ತು ಪದ್ಧತಿಗಳಿಗನುಸಾರವಾಗಿ
ಜೀವನ ನಡೆಸಲು ಅನುಕೂಲವಾಗುವಂತೆ ಬಹು ಪಂಗಡದ ಸಮಾಜ ಒಂದನ್ನು ನಿರ್ಮಿಸಲಾಯಿತು.
ಇನ್ನೊಂದು ಪಂಗಡವನ್ನು ದ್ವೇಷಿಸಬಾರದು. ಅದರ ಆಡಳಿತದೊಳಗೆ ಪ್ರವೇಶ ಮಾಡಬಾರದು.
ಎಂಬುದೊಂದೇ ನಿಜವಾದ ನಿಷೇಧವಿತ್ತು. ಹೊಸಬರು ತಮ್ಮದೇ ಪಂಗಡಗಳನ್ನು ಕಟ್ಟುವದಕ್ಕೂ,
ಹಳೆಯ ಪಂಗಡಗಳಲ್ಲಿ ಅಸಮಾಧಾನಗೊಂಡವರು ತಮ್ಮದೇ ಒಂದು ಪಂಗಡವನ್ನು ನಿರ್ಮಿಸಿಕೊಳ್ಳು
ವದಕ್ಕೂ ಸ್ವಾತಂತ್ರ್ಯವಿತ್ತು. ಪ್ರತಿಯೊಂದು ಗುಂಪಿನಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಸತ್ತೆ ಇತ್ತು. ಗುಂಪಿನ ಯಾಜಮಾನ್ಯವು ಚುನಾವಣೆಯಿಂದ ದೊರೆಯುತ್ತಿತ್ತು. ಮುಖ್ಯ ವಿಷಯಗಳಲ್ಲಿ
ಯಜಮಾನರು ಇಡೀ ಗುಂಪಿನ ಅಭಿಪ್ರಾಯ ಪಡೆದು ತೀರ್ಮಾನಕ್ಕೆ ಬರುತ್ತಿದ್ದರು.
{{gap}}ಈ ಪಂಗಡಗಳೆಲ್ಲವೂ ಯಾವುದಾದರೊಂದು ವ್ಯಾಪಾರ ಅಥವ ಉದ್ಯಮವನ್ನು ಅವಲಂಬಿಸಿ
ನಿರ್ಮಿಸಿದ ಪಂಗಡಗಳು. ಒಂದು ಬಗೆಯ ವಣಿಕಸಂಘ ಅಥವ ಉದ್ಯೋಗ ಸಂಘಗಳು. ಪ್ರತಿಯೊಂದು
ಸಂಘದಲ್ಲೂ ಒಗ್ಗಟ್ಟು ಇದ್ದುದಲ್ಲದೆ ತನ್ನ ಸದಸ್ಯರಲ್ಲಿ ಯಾರಾದರೂ ಕಷ್ಟಕ್ಕೀಡಾದರೆ ಆತನಿಗೆ ರಕ್ಷಣೆ
ಕೊಟ್ಟು ಸಹಾಯ ಮಾಡುತ್ತಿದ್ದವು. ಒಂದೊಂದು ಪಂಗಡಕ್ಕೂ ಇತರ ಪಂಗಡಗಳ ನಿಕಟ ಬಾಂಧವ್ಯವಿತ್ತು.
ಪ್ರತಿಯೊಂದು ಪಂಗಡವೂ ತನ್ನ ಆಯಕಟ್ಟಿನೊಳಗೆ ಅಭಿವೃದ್ಧಿಯಾದರೆ ಇಡೀ ಸಮಾಜವೇ ಸಂತುಷ್ಟಿ
ಯಿಂದ ಸಮಗ್ರವಾಗಿ ಮುಂದುವರಿಯುವುದೆಂದೇ ಮೂಲತತ್ವವಾಗಿತ್ತು. ಇದಲ್ಲದೆ ಈ ಎಲ್ಲ ಗುಂಪು
ಗಳಲ್ಲಿ ಒಂದು ದೃಢವಾದ ಐಕಮತ್ಯವನ್ನುಂಟುಮಾಡಲು ಒಂದೇ ಸಂಸ್ಕೃತಿ, ಒಂದೇ ಬಗೆಯ
ಸಂಪ್ರದಾಯಗಳು; ಅದೇ ರಾಷ್ಟ್ರಪುರುಷರು ಮತ್ತು ಆಚಾರ್ಯ ಪುರುಷರು. ನಾಲ್ಕು ದಿಕ್ಕುಗಳಲ್ಲೂ
ಯಾತ್ರಾಸ್ಥಳಗಳು. ಈ ರೀತಿ ರಾಷ್ಟ್ರೀಯ ಸಂಸ್ಥೆಗಳನ್ನು ಏರ್ಪಡಿಸಿ ಒಂದೇ ದೇಶದವರೆಂಬ ರಾಷ್ಟ್ರ
ಭಾವನೆಯನ್ನು ಬೆಳೆಸಿದರು.
ಈ ರಾಷ್ಟ್ರಭಾವನೆಗೂ ಇಂದಿನ ರಾಷ್ಟ್ರೀಯಭಾವನೆಗೂ ಬಹಳ ಅಂತರ
ವಿದೆ. ರಾಜಕೀಯದೃಷ್ಟಿಯಿಂದ ದುರ್ಬಲವಿದ್ದರೂ ಸಾಮಾಜಿಕ ದೃಷ್ಟಿಯಿಂದ, ಸಂಸ್ಕೃತಿಯ ದೃಷ್ಟಿ
ಯಿಂದ ಅದು ಬಹಳ ಬಲವಾಗಿತ್ತು. ಅದರ ರಾಜಕೀಯ ದೌರ್ಬಲ್ಯದಿಂದ ದೇಶವು ತನ್ನ ಸ್ವಾತಂತ್ರ
ವನ್ನು ಕಳೆದುಕೊಂಡಿತು.
ಸಾಮಾಜಿಕಶಕ್ತಿಯಿಂದ ಪರಕೀಯರನ್ನೂ ಜೀರ್ಣಮಾಡಿಕೊಂಡು
ಸುಲಭವಾಗಿ ಪುನರುಜ್ಜೀವನಗೊಂಡಿತು; ಅನಂತಮುಖಿಯಾದ್ದರಿಂದ ಪರದಾಸ್ಯವನ್ನೂ ಸಂಕಟ
ವನ್ನೂ ನುಂಗಿಕೊಂಡು ಅಮರವಾಗಿ ಉಳಿಯಿತು.
{{gap}}ಈ ರೀತಿ ಜಾತಿಯು ಕರ್ತವ್ಯ ಕರ್ಮ ಮತ್ತು ಉದ್ಯೋಗವನ್ನವಲಂಬಿಸಿ ಹುಟ್ಟಿದುದು. ಯಾವ
ಒಂದು ಬಂಧನವೂ ಇಲ್ಲದೆ, ಎಲ್ಲ ಪಂಗಡಗಳಿಗೂ ಪೂರ್ಣವಿಕಾಸ ಸ್ವಾತಂತ್ರ್ಯವನ್ನು ಕೊಟ್ಟು ಎಲ್ಲ
ವನ್ನೂ ಒಳಗೊಂಡ ಒಂದು ಸಮಷ್ಟಿ ಸಮಾಜವಾಗಿತ್ತು. ಅದರಲ್ಲಿ ಏಕಪತ್ನೀತ್ವ, ಬಹುಪತ್ನೀತ್ವ
ಮತ್ತು ಬ್ರಹ್ಮಚರ್ಯ ಎಲ್ಲವೂ ಇದ್ದವು. ಇತರ ಸಂಪ್ರದಾಯ, ಆಚಾರ ಮತ್ತು ವ್ಯವಹಾರಗಳಿಗೆ
ಮನ್ನಣೆಕೊಟ್ಟಂತೆ ಅವುಗಳಿಗೂ ಅವಕಾಶ ದೊರೆತಿತ್ತು. ಯಾವ ಅಲ್ಪ ಸಂಖ್ಯಾಕ ಪಂಗಡವೂ ಬಹು
ಸಂಖ್ಯಾಕರ ಅಡಿಯಾಳುತನಮಾಡಬೇಕಾದ್ದಿರಲಿಲ್ಲ. ತನ್ನದೇ ಒಂದು ಗುಂಪನ್ನು ಮಾಡಿಕೊಳ್ಳು
ವಷ್ಟು ಸಂಖ್ಯೆಯಿದ್ದರೆ ತನ್ನದೇ ಪ್ರತ್ಯೇಕ ವೈಶಿಷ್ಟ್ಯ ಜೀವನವನ್ನು ನಡೆಸಲು ಅವಕಾಶವಿತ್ತು.
ಒಂದೊಂದು ಪಂಗಡಕ್ಕೂ ಮಧ್ಯೆ ಜನಾಂಗ, ಧರ್ಮ, ವರ್ಣ, ಸಂಸ್ಕೃತಿ ಮತ್ತು ಬೌದ್ಧಿಕ ವ್ಯತ್ಯಾಸಗಳು
ಎಷ್ಟು ಬೇಕಾದರೂ ಇರಲು ಅವಕಾಶವಿತ್ತು.
{{gap}}ಪ್ರತಿಯೊಬ್ಬ ವ್ಯಕ್ತಿಗೂ ಒಂದು ಪಂಗಡವಿತ್ತು. ಆ ಪಂಗಡದ ಕೆಲಸ ಕಾರ್ಯಗಳಿಗೆ ಅಡ್ಡಿ
ಯಾಗದಂತೆ ತಾನು ಏನುಬೇಕಾದರೂ ಮಾಡಲು ಸ್ವಾತಂತ್ರ್ಯವಿತ್ತು. ಆದರೆ ಆ ಗುಂಪನ್ನು ಒಡೆ<noinclude></noinclude>
9geopn3zg4zmnuds60zrj61ef0m212i
ಪುಟ:ಭಾರತ ದರ್ಶನ.djvu/೨೨೮
104
85120
321368
253152
2026-05-20T09:23:20Z
Shreelatha.Halemane
7642
/* Validated */
321368
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಹೊಸ ಸಮಸ್ಯೆಗಳು|left=|right=೨೨೩}}ಯಲು ಆತನಿಗೆ ಅಧಿಕಾರವಿರಲಿಲ್ಲ; ತಕ್ಕಷ್ಟು ಹಿಂಬಾಲಕರಿದ್ದರೆ ತನ್ನದೇ ಒಂದು ಪ್ರತ್ಯೇಕ ಪಂಗಡ</br>ಕಟ್ಟ ಜೀವಿಸಲು ಅವಕಾಶವಿತ್ತು. ಆದರೆ ಯಾವ ಗುಂಪಿನೊಳಗೂ ಹೊಂದಿಕೊಳ್ಳದಿದ್ದರೆ ಪ್ರಾಪಂಚಿಕ</br>ವ್ಯವಹಾರದಿಂದ ದೂರವಾಗುತ್ತಿದ್ದನು. ಆಗ ಜಾತಿ, ಪಂಗಡ ಮತ್ತು ಪ್ರಪಂಚದಿಂದ ದೂರನಾಗಿ</br>'ಸಂನ್ಯಾಸಿ' ಯಾಗಿ ದೇಶಾಟನೆಮಾಡಿ ಹೇಗಾದರೂ ಜೀವಿಸಬಹುದಿತ್ತು.</br>
{{gap}}ಭಾರತೀಯ ಸಮಾಜದೃಷ್ಟಿಯಲ್ಲಿ ವ್ಯಕ್ತಿಯು ಪಂಗಡದ ಅಥವ ಸಮಾಜದ ಅಧೀನನಾದರೂ</br>ಧರ್ಮಾನ್ವೇಷಣೆಯಲ್ಲಿ ಆತ್ಮಜ್ಞಾನದಲ್ಲಿ, ವ್ಯಕ್ತಿಗೇ ಪ್ರಾಧಾನ್ಯವಿತ್ತೆಂಬುದನ್ನು ಮರೆಯಲಾಗದು.</br>ಉಚ್ಚನಿರಲಿ, ನೀಚನಿರಲಿ ಯಾವ ಜಾತಿಯವನೇ ಇರಲಿ, ಪ್ರತಿಯೊಬ್ಬ ವ್ಯಕ್ತಿಗೂ ಮುಕ್ತಿ ಮತ್ತು</br>ಸತ್ಯಾನ್ವೇಷಣೆಯಲ್ಲಿ ಸಮಾನ ಅವಕಾಶವಿತ್ತು. ಮುಕ್ತಿ ಮತ್ತು ಆತ್ಮಾನ್ವೇಷಣೆ ಯಾವ ಒಂದು</br>ಪಂಗಡದ ಸ್ವತ್ತೂ ಆಗಿರಲಿಲ್ಲ; ಅದು ಕೇವಲ ವೈಯಕ್ತಿಕವಿತ್ತು. ಈ ಅನ್ವೇಷಣೆಯ ಮಾರ್ಗ</br>ದಲ್ಲಿಯೂ ಯಾವ ನಿಯತಮಾರ್ಗವೂ ಇರಲಿಲ್ಲ. ಎಲ್ಲ ಮಾರ್ಗಗಳೂ ಒಂದೇ ಗುರಿಯ ಸಾಧನೆಗೆ</br>ಎಂಬ ಭಾವನೆ ಇತ್ತು.</br>
{{gap}}ಸಮಾಜರಚನೆಯಲ್ಲಿ ಪಂಗಡದ ಪ್ರಾಮುಖ್ಯತೆ ಇದ್ದು ಜಾತಿ ಮತಗಳಿಗೆ ಅವಕಾಶಕೊಟ್ಟರೂ</br>ಭಾರತದಲ್ಲಿ ವ್ಯಕ್ತಿಪ್ರಾಧಾನ್ಯತೆ ಯಾವಾಗಲೂ ಇದೆ. ಎರಡು ಮಾರ್ಗಗಳ ಘರ್ಷಣೆಯನ್ನು ಅನೇಕ</br>ಸಂದರ್ಭಗಳಲ್ಲಿ ನೋಡಬಹುದು. ವ್ಯಕ್ತಿಪ್ರಾಧಾನ್ಯತೆಗೆ ಅವಕಾಶಕೊಟ್ಟ ಧಾರ್ಮಿಕ ತತ್ವವೇ ಆ</br>ವ್ಯಕ್ತಿವಾದಕ್ಕೆ ಬಹುಮಟ್ಟಿಗೆ ಕಾರಣವಾಯಿತು. ಜಾತಿಪದ್ಧತಿಯನ್ನು ಖಂಡಿಸಿ ದೂಷಿಸಿದ ಸಮಾಜ</br>ಸುಧಾರಕರೆಲ್ಲ ಸಾಮಾನ್ಯವಾಗಿ ಧರ್ಮಸುಧಾರಕರು. ಧರ್ಮವು ಸಾರುವ ಆತ್ಮೋನ್ನತಿ ಮತ್ತು ವ್ಯಕ್ತಿ</br>ವಿಕಾಸಕ್ಕೆ ಜಾತಿಪದ್ಧತಿಗಳು ಅಡ್ಡ ಬರುತ್ತವೆ ಎಂದೇ ಅವರ ವಾದ. ಜಾತಿಪದ್ದತಿಯನ್ನು ನಿರ್ಮೂಲ</br>ಮಾಡಿ ಒಂದು ಬಗೆಯ ವ್ಯಕ್ತಿವಿಕಾಸ ಮತ್ತು ವಿಶ್ವಧರ್ಮವನ್ನು ಬೋಧಿಸಲೆಂದೇ ಬೌದ್ಧಧರ್ಮವು</br>ಹುಟ್ಟಿತು. ಆದರೆ ಈ ವ್ಯಕ್ತಿವಾದವು ಸಾಮಾನ್ಯ ಸಾಮಾಜಿಕ ವ್ಯವಹಾರದಿಂದ ದೂರವಾಯಿತು.</br>ಜಾತಿಪದ್ಧತಿಗೆ ಪ್ರತಿಯಾಗಿ ಬೇರೊಂದು ಸಮಾಜರಚನೆಯನ್ನು ತೋರಿಸಲಿಲ್ಲ. ಆದ್ದರಿಂದ ಆಗಲೂ</br>ಅನಂತರವೂ ಜಾತಿ ಪದ್ಧತಿಯು ಅಳಿಯದೆ ಉಳಿಯಿತು.</br>
{{gap}}ಮುಖ್ಯ ಜಾತಿಗಳು ಯಾವುವು? ಜಾತಿಬಾಹಿರರಾದ ಅಸ್ಪೃಶ್ಯರನ್ನು ಬಿಟ್ಟರೆ ಆಚಾರ್ಯರೂ</br>ಗುರುಗಳೂ ಜ್ಞಾನಿಗಳೂ ಆದವರು ಬ್ರಾಹ್ಮಣರು, ಅರಸರು ಯೋಧರು ಆದವರು ಕ್ಷತ್ರಿಯರು,</br>ವಣಿಕರು, ವ್ಯಾಪಾರಿಗಳು, ಧನಿಕರು ಆದವರು ವೈಶ್ಯರು, ವ್ಯವಸಾಯಗಾರರು ಮತ್ತು ಇತರ ಕಸಬಿ</br>ನವರು ಶೂದ್ರರು. ಪರಸಂಪರ್ಕವಿಲ್ಲದೆ ಶಿಷ್ಟಾಚಾರಬದ್ದರಾದವರೆಂದರೆ ಬ್ರಾಹ್ಮಣರು ಮಾತ್ರ.</br>ಕ್ಷತ್ರಿಯರು ವಿದೇಶದಿಂದ ಬಂದು ನೆಲಸುವವರನ್ನೂ, ಸ್ವಸಾಮರ್ಥ್ಯದಿಂದ ಅಧಿಕಾರಕ್ಕೆ ಬಂದವರನ್ನೂ</br>ತಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಿದ್ದರು. ವೈಶ್ಯರು ವ್ಯಾಪಾರ, ಧನಕೋಠಿಗಳ ವ್ಯವಹಾರ ಮತ್ತು</br>ಇನ್ನೂ ಇತರ ವೃತ್ತಿಗಳನ್ನು ಕೈಗೊಳ್ಳುತ್ತಿದ್ದರು. ಶೂದ್ರರ ಮುಖ್ಯ ಕಸಬು ವ್ಯವಸಾಯ ಮತ್ತು</br>ಮನೆಯಾಳುತನ. ಹೊಸವೃತ್ತಿಗಳು ಬೆಳೆದಂತೆ ಹೊಸ ಜಾತಿಗಳೂ ಬೆಳೆದವು. ಹಳೆಯ ಜಾತಿಗಳು</br>ಹೊಸ ಜಾತಿಗಳಿಗಿಂತ ಶ್ರೇಷ್ಠತೆ ಪಡೆದವು. ಈ ಪರ೦ಪರೆ ಈಗಲೂ ನಡೆದುಬರುತ್ತಿದೆ. ಜನಿವಾರ</br>ವನ್ನು ಹಾಕಿಕೊಂಡರೆ ಉತ್ತಮರಾಗುತ್ತೇವೆಂದು ಕೆಳಗಿನ ಜಾತಿಗಳವರು ಕೆಲವರು ಜನಿವಾರ</br>ಹಾಕಲು ಆರಂಭಿಸಿದ್ದಾರೆ. ಆದರೆ ಪ್ರತಿಯೊಂದು ಜಾತಿಯೂ ತನ್ನ ಆಯಕಟ್ಟಿನಲ್ಲಿ ತನ್ನ ಕಸಬನ್ನು</br>ನಿರ್ವಹಿಸುತ್ತ ಬಂದುದರಿಂದ ಇದಾವುದೂ ಹೆಚ್ಚು ಪರಿಣಾಮಕಾರಿಯಾಗಲಿಲ್ಲ. ಆತ್ಮಗೌರವದ</br>ಪ್ರಶ್ನೆಮಾತ್ರವಾಯಿತು. ಕೆಲವು ವೇಳೆ ಕೆಳಜಾತಿಯವರು ಕೇವಲ ತಮ್ಮ ಸ್ವಸಾಮರ್ಥ್ಯದಿಂದ</br>ರಾಜ್ಯದ ಉನ್ನತಪದವಿಗೇರಿ ಅಧಿಕಾರ ನಡೆಸುತ್ತಿದ್ದರು. ಆದರೆ ಆ ಸಂಧರ್ಭಗಳು ಬಹಳ ವಿರಳ.</br>
{{gap}}ಸಮಾಜರಚನೆಯಲ್ಲಿ ಸಾಮಾನ್ಯವಾಗಿ ಪೈಪೋಟ ಮತ್ತು ಸಂಪಾದನೆ ಇಲ್ಲದೆ ಇದ್ದುದರಿಂದ</br>ಈ ಜಾತಿಭೇದಗಳಿಂದ ಹೆಚ್ಚು ಕೆಡುಕಾಗಲಿಲ್ಲ. ತನ್ನ ಜ್ಞಾನಸಂಪತ್ತು ಮತ್ತು ಬುದ್ದಿಶಕ್ತಿಗಾಗಿ</br>ಹೆಮ್ಮೆ ಪಡುತ್ತಿದ್ದ ಉತ್ತಮಜಾತಿಯ ಬ್ರಾಹ್ಮಣನಿಗೆ ಸಮಾಜದಲ್ಲಿ ಗೌರವವಿದ್ದರೂ ಆತನಿಗೆ ಯಾವ</br><noinclude></noinclude>
a9c643zgrcba9go60fn9n4ngpvy06xm
ಪುಟ:ಭಾರತ ದರ್ಶನ.djvu/೨೨೯
104
85121
321371
254548
2026-05-20T09:23:47Z
Shreelatha.Halemane
7642
/* Validated */
321371
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಭಾರತ ದರ್ಶನ|left=೨೨೪|right=}}ಆಸ್ತಿಯೂ ಇರಲಿಲ್ಲ. ಆದರೆ ವರ್ತಕನು ಧನಿಕನೂ ಶ್ರೀಮಂತನೂ ಇದ್ದರೂ ಆತನಿಗೆ ಸಮಾಜದಲ್ಲಿ</br>ವಿಶೇಷ ಗೌರವವೂ ಇರಲಿಲ್ಲ.</br>
{{gap}}ಜನತೆಯಲ್ಲಿ ಬಹುಸಂಖ್ಯಾಕರು ವ್ಯವಸಾಯಗಾರರಾಗಿದ್ದರು. ಜಮೀನುದಾರಿಯೂ ಇರಲಿಲ್ಲ.</br>ರೈತನು ಹೊಲದ ಮಾಲಿಕನೂ ಆಗಿರಲಿಲ್ಲ. ಶಾಸನವಿಧಿಯ೦ತೆ ಭೂಮಿಯ ಒಡೆತನ ಯಾರದೆಂದು</br>ಹೇಳುವುದು ಕಷ್ಟ. ಈಗಿನ ಭೂಮಿಯ ಒಡೆತನದ ಭಾವನೆ ಆಗ ಇರಲಿಲ್ಲ. ವ್ಯವಸಾಯಗಾರನಿಗೆ</br>ತನ್ನ ಭೂಮಿಯಲ್ಲಿ ಬೆಳೆ ತೆಗೆಯಲು ಅಧಿಕಾರವಿತ್ತು. ಬೆಳೆಯನ್ನು ಹೇಗೆ ಹಂಚಬೇಕೆಂಬುದೇ</br>ಮುಖ್ಯಪ್ರಶ್ನೆಯಾಗಿತ್ತು. ಬಹುಭಾಗ ರೈತನದಾಗಿತ್ತು. ದೊರೆಗೆ ಅಥವ ರಾಜ್ಯಕ್ಕೆ 1/6ನೆ ಭಾಗ</br>ಸೇರುತ್ತಿತ್ತು. ಗ್ರಾಮದ ಸೇವೆ ಮಾಡುತ್ತಿದ್ದ ಪ್ರತಿಯೊಂದು ಪಂಗಡಕ್ಕೂ ಒಂದೊಂದು</br>ಪಾಲು ಇತ್ತು. ವಿದ್ಯೆಕಲಿಸಿ ಧರ್ಮೋಪದೇಶಮಾಡುತ್ತಿದ್ದ ಬ್ರಾಹ್ಮಣ, ವರ್ತಕ, ಕಮ್ಮಾರ,</br>ಬಡಗಿ, ಚಮ್ಮಾರ, ಕುಂಬಾರ, ಮನೆಕಟ್ಟುವವ, ನಾಯಿಂದ, ಭಂಗಿ ಎಲ್ಲರಿಗೂ ಒಂದೊಂದು</br>ಪಾಲು. ಈ ರೀತಿ ರಾಜನಿಂದ ಭಂಗಿಯವರೆಗೂ ಬೆಳೆಯಲ್ಲಿ ಪಾಲುಗಾರರು.</br>
{{gap}}ಹಾಗಾದರೆ ದಳಿತರೂ, ಅಸ್ಪೃಶ್ಯರೂ ಯಾರು? ದಳಿತರು ಎನ್ನುವ ಶಬ್ದವು ಈಗ ಸಮಾಜದ ಕೆಳ</br>ಮಟ್ಟದಲ್ಲಿರುವ ಅನೇಕ ಪಂಗಡಗಳಿಗೆ ಅನ್ವಯಿಸುವ ಹೊಸ ಪ್ರಯೋಗ. ಹೀಗೇ ಎಂದು ಒಂದು</br>ಗೆರೆ ಎಳೆಯಲು ಸಾಧ್ಯವಿಲ್ಲ. ಅಸ್ಪೃಶ್ಯರೆಂದರೆ ಹೆಚ್ಚು ಸ್ಪಷ್ಟವಿದೆ. ಉತ್ತರ ಹಿಂದೂಸ್ಥಾನದಲ್ಲಿ ಭಂಗಿ</br>ಕೆಲಸಮಾಡುವ ಕೆಲವು ಜನರನ್ನು ಮಾತ್ರ ಅಸ್ಪೃಶ್ಯರೆನ್ನುತ್ತಾರೆ. ತಾನು ಭಾರತಕ್ಕೆ ಬಂದಾಗ ಭಂಗಿ</br>ಗಳು ಮಾತ್ರ ಅಸ್ಪೃಶ್ಯರಾಗಿದ್ದರು ಎಂದು ಫಾಹಿಯಾನ್ ಹೇಳುತ್ತಾನೆ. ದಕ್ಷಿಣ ಭಾರತದಲ್ಲಿ ಇವರ</br>ಸಂಖ್ಯೆಯು ಹೆಚ್ಚು. ಅವರು ಹೇಗೆ ಅಸ್ಪೃಶ್ಯರಾದರು, ಅವರ ಸಂಖ್ಯೆ ಹೇಗೆ ಬೆಳೆಯಿತು ಎಂದು</br>ಹೇಳುವುದು ಕಷ್ಟ. ಪ್ರಾಯಶಃ ಶ್ವಪಚಕೆಲಸದಲ್ಲಿ ತೊಡಗಿದವರನ್ನು ಆ ರೀತಿ ಕಂಡಿರಬಹುದು.</br>ಆಮೇಲೆ ಭೂಮಿ ಕಾಣಿ ಇಲ್ಲದ ಕೂಲಿಯವರೂ ಅವರ ಸಂಖ್ಯೆಗೆ ಸೇರಿರಬಹುದು.</br>
{{gap}}ನಿತ್ಯವಿಧಿಗಳನ್ನು ಮಾಡುವಾಗ ಶುದ್ದರಿರಬೇಕೆಂಬ ನಿಯಮವು ಹಿಂದೂಗಳಲ್ಲಿ ಬಹಳ ಕಠಿನ</br>ವಿದೆ. ಇದರಿಂದ ಒಳ್ಳೆಯ ಪರಿಣಾಮವೂ ಆಗಿದೆ ಕೆಟ್ಟದೂ ಆಗಿದೆ. ದೇಹ ನೈರ್ಮಲ್ಯವು ಒಂದು</br>ಒಳ್ಳೆಯ ಪರಿಣಾಮ. ಅನೇಕ ನಿಮ್ನಜಾತಿಯವರೂ ಸೇರಿ ಹಿಂದೂಗಳಿಗೆಲ್ಲ ಸ್ನಾನವು ಒ೦ದು</br>ನಿತ್ಯ ವಿಧಿ. ಈ ಅಭ್ಯಾಸ ಇಂಗ್ಲೆಂಡ್ ಮತ್ತು ಇತರ ದೇಶಗಳಿಗೆ ಹರಡಿದ್ದು ಹಿಂದೂಸ್ಥಾನದಿಂದ.</br>ಎಷ್ಟೇ ಬಡವನಾದ ರೈತನಿರಲಿ ಸಾಮಾನ್ಯ ಹಿಂದೂವಿಗೆ ತನ್ನ ಅಡಿಗೆ ಊಟದ ಪಾತ್ರೆಗಳು ಶುಭ್ರವಾಗಿ</br>ಹೊಳೆಯುತ್ತಿರಬೇಕು. ಈ ಶುಭ್ರಭಾವನೆಯು ವಿಜ್ಞಾನದಿಂದ ಬಂದುದಲ್ಲ. ದಿನಕ್ಕೆ ಎರಡು ಬಾರಿ</br>ಸ್ನಾನಮಾಡುವವನೂ ಕ್ರಿಮಿಪೂರಿತ ಕೊಳಚೆ ನೀರನ್ನು ಯಾವ ಸಂಕೋಚವೂ ಇಲ್ಲದೆ ಕುಡಿದುಬಿಡು</br>ತ್ತಾನೆ. ಈ ಭಾವನೆಯು ಈಗಂತೂ ಸಾಮೂಹಿಕವೂ ಇಲ್ಲ. ತನ್ನ ಮನೆಯನ್ನು ಬಹಳ ಶುಭ್ರವಿಟ್ಟು</br>ಕೊಂಡರೂ ಮನೆಯ ಕೊಳಕನ್ನೆಲ್ಲ ನೆರೆಮನೆಯ ಮುಂದೆ ಬೀದಿಗೆಸೆಯುತ್ತಾನೆ. ಗ್ರಾಮಗಳಂತೂ</br>ತಿಪ್ಪೆಗುಂಡಿಯಿಂದ ಕೊಳೆತು ನಾರುತ್ತವೆ. ಅದೂ ಅಲ್ಲದೆ ಈ ನೈರ್ಮಲ್ಯವು ನೈರ್ಮಲ್ಯದ ದೃಷ್ಟಿ</br>ಯಿಂದಲೇ ಅಲ್ಲ, ಧರ್ಮದ ದೃಷ್ಟಿಯಿಂದ. ಆ ಧರ್ಮದೃಷ್ಟಿಯು ಮಾಯವಾದರೆ ನೈರ್ಮಲ್ಯ</br>ದೃಷ್ಟಿಯೂ ಮಾಯವಾಗುತ್ತದೆ.</br>
{{gap}}ಈ ಆಚಾರಶೀಲದ ನೈರ್ಮಲ್ಯದಿಂದ ಒಂದು ಬಗೆಯ ಪ್ರತ್ಯೇಕ ಮನೋಭಾವ, ಮುಟ್ಟಬಾರದೆಂಬ</br>ಮಡಿವಂತಿಕೆ, ಇತರ ಜಾತಿಯವರೊಂದಿಗೆ ಆಹಾರ ಪಾನೀಯಗಳನ್ನು ತೆಗೆದುಕೊಳ್ಳಬಾರದೆಂಬ</br>ದುಷ್ಟ ಸಂಪ್ರದಾಯವೂ ಬೆಳೆಯಿತು. ಇತರ ಯಾವ ದೇಶಗಳಲ್ಲೂ ಕಾಣದಷ್ಟರಮಟ್ಟಿಗೆ ಈ ಕೆಟ್ಟ</br>ಪದ್ದತಿಯು ಬೇರು ಬಿಟ್ಟಿತು. ಕೆಲವು ಜನರು ಅತ್ಯುಪಯುಕ್ತ ಕೆಲಸಮಾಡಿದರೂ ಆ ಕೆಲಸ ಕೊಳ</br>ಕೆಂಬ ನೆಪದಿಂದ ಅಸ್ಪೃಶ್ಯರಾಗಬೇಕಾಯಿತು. ತನ್ನ ಜಾತಿಯವರೊಂದಿಗೆ ಮಾತ್ರ ಊಟಮಾಡ</br>ಬೇಕೆಂಬ ಭಾವನೆಯು ಎಲ್ಲ ಜಾತಿಯವರಲ್ಲೂ ಸಾಮಾನ್ಯವಾಯಿತು. ಸಮಾಜದ ಅಂತಸ್ತಿಗೊಂದು</br>ಹೆಗ್ಗುರುತಾಯಿತು. ಕೆಲವು ಉತ್ತಮ ಜಾತಿಯವರಿಗಿಂತ ಕೆಳಜಾತಿಯವರಲ್ಲೇ ಈ ಭಾವನೆ ಹೆಚ್ಚು</br><noinclude></noinclude>
fjjxctv9i38fyvgi2xteb55mxl1m10r
ಪುಟ:ಭಾರತ ದರ್ಶನ.djvu/೫೧೨
104
85404
321390
230389
2026-05-20T09:28:58Z
Shreelatha.Halemane
7642
/* Validated */
321390
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಪುನಃ ಅಹಮದ್ನಗರದ ಕೋಟೆಯಲ್ಲಿ|left=|right=೫೦೬}}
{{gap}}ಇನ್ನೊಂದರಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಇಬ್ಬರೂ ಮರೆಯುತ್ತಾರೆ” ಎಂದು ಪ್ಲೇಟೋ</br> ಹೇಳಿದ್ದಾನೆ.</br>
{{gap}}ಪ್ರಸಿದ್ದ ವಿಜ್ಞಾನಿಗಳಲ್ಲಿ ಅತ್ಯಂತ ಶ್ರೇಷ್ಠನಾದ ಐನ್ಸ್ಟೀನ್ “ ಇಂದು ಮಾನವ ಕುಟುಂಬದ</br> ಅದೃಷ್ಟ ನೈತಿಕ ಬಲವನ್ನು ಅವಲಂಬಿಸಬೇಕಾದಷ್ಟು ಅವಶ್ಯಕತೆ ಹಿಂದೆ ಯಾವಾಗಲೂ ಇರಲಿಲ್ಲ. ಮಾನವ</br> ಜೀವನದಲ್ಲಿ ಆನಂದ ಮತ್ತು ಸುಖಬೇಕಾದರೆ ಎಲ್ಲ ಕಡೆಯೂ ತ್ಯಾಗ ಮತ್ತು ಆತ್ಮಸಂಯಮ ಮನೋ</br>ಭಾವ ಬರಬೇಕು” ಎಂದಿದ್ದಾನೆ. 'ಗರ್ವದಿಂದ ಮೆರೆಯುವ ಈ ವಿಜ್ಞಾನ ಯುಗದಿಂದ ಏಕಾ ಏಕಿ</br> ಪೂರ್ವದ ಋಷಿಗಳ ಬಳಿಗೆ ಕರೆದೊಯ್ಯುತ್ತಾನೆ ; ಅಧಿಕಾರಮೋಹ ಮತ್ತು ಲಾಭದಾಸೆಯ ಬೆನ್ನು ಬಿಟ್ಟು</br> ಭಾರತಕ್ಕೆ ಚಿರಪರಿಚಯವಿದ್ದ ತ್ಯಾಗದೃಷ್ಟಿಯ ಕಡೆ ಕರೆದೊಯ್ಯುತ್ತಾನೆ. ಈ ಪ್ರಪಂಚದ ಅತುಲೈಶ್ವರ್ಯ</br> ವೆಲ್ಲ ಮಾನವ ಪ್ರಗತಿಗೆ ಕಾರಣವಾಗಲಾರದು; ಪರಮ ಶ್ರದ್ಧಾಳುಗಳಿಂದ ಸಹ ಅದು ಸಾಧ್ಯವಿಲ್ಲ.</br> ಮಹಾನುಭಾವರೂ ನಿರ್ಮಲ ಚಾರಿತ್ರರೂ ಆದ ಸತ್ಪುರುಷರ ಆದರ್ಶಮಾತ್ರ ಉನ್ನತ ಧೈಯಗಳನ್ನು</br> ಮಹಾಕಾರ್ಯಗಳನ್ನು ಸಾಧಿಸಬಹುದು. ಹಣ ಬೆಳೆಸುವುದು ಸ್ವಾರ್ಥದೃಷ್ಟಿ ಮಾತ್ರ. ಹಣವಿದ್ದವರನ್ನು</br> ಸದಾ ದುರ್ಮಾರ್ಗಕ್ಕೆಳೆಯುವುದೇ ಹಣದ ಕೆಲಸ ” ಎಂಬ ಐನ್ಸ್ಟೀನನ ಮಾತುಗಳು ಇಂದಿನ ಅನೇಕ</br> ವಿಜ್ಞಾನಿಗಳಿಗೆ ಪ್ರಾಯಶಃ ಒಪ್ಪಿಗೆಯಾಗಲಾರದು.</br>
{{gap}}ನಾಗರಿಕತೆಯಷ್ಟೆ ಹಳೆಯದಾದ ಈ ಪ್ರಶ್ನೆ ಬಿಡಿಸುವುದರಲ್ಲಿ ಹಿಂದಿನ ದಾರ್ಶನಿಕರಿಗೆ ದೊರೆಯದ </br>ಅನೇಕ ಸೌಲಭ್ಯ ಸಲಕರಣೆಗಳು ಇಂದಿನ ವಿಜ್ಞಾನಿಗಳಿಗೆ ದೊರೆತಿದೆ; ಅನಾದಿಯಿಂದ ಸಂಗ್ರಹಿಸಿಟ್ಟ</br> ಅಪಾರ ಜ್ಞಾನಭಾಂಡಾರವಿದೆ. ತನ್ನ ಸಾರ್ಥಕತೆ ಸಾಧಿಸಿಕೊಟ್ಟ ಒಂದು ಮಾರ್ಗವಿದೆ. ಪ್ರಾಚೀನರಿಗೆ</br> ಅಗೋಚರವಾಗಿದ್ದ ಅನೇಕ ಕ್ಷೇತ್ರ ಪ್ರವೇಶಮಾಡಿ ನಿರ್ದಿಷ್ಟ ಮಾರ್ಗ ತೋರಿಸಿದೆ. ಮನುಷ್ಯನ ಜ್ಞಾನ</br> ವೃದ್ಧಿಗೊಳಿಸಿ ಅನೇಕ ವಿಷಯಗಳ ಮೇಲೆ ಅವನ ಅಧಿಕಾರ ಹೆಚ್ಚಿಸಿರುವುದರಿಂದ ಮಠಾಧಿಕಾರಿಗಳು</br> ಗಾಢರಹಸ್ಯಗಳೆಂದು ಅವುಗಳನ್ನು ದುರುಪಯೋಗಪಡಿಸುವಂತಿಲ್ಲ. ಆದರೆ ಅದರಲ್ಲಿ ಕೆಲವು ತೊಂದರೆ</br> ಗಳೂ ಇವೆ. ಈ ಜ್ಞಾನ ಸಂಪತ್ತಿನ ಹೊರೆಯೇ ಮನುಷ್ಯನನ್ನು ದುರ್ಬಲಗೊಳಿಸಿ ಅದರ ಪೂರ್ಣತೆಯ</br> ಸಂಯೋಜಕದೃಷ್ಟಿ ಪಡೆಯದಂತೆ ಅಂಧನನ್ನಾಗಿ ಮಾಡಿದೆ. ಯಾವುದೋ ಒಂದು ಭಾಗ ವಿಶ್ಲೇಷಣ</br> ಮಾಡಿ, ಅಭ್ಯಾಸದಲ್ಲಿ ಮಗ್ನನಾಗಿ, ಆ ಒಂದು ಭಾಗ ಮಾತ್ರ ಅರ್ಥಮಾಡಿಕೊಂಡು ಅದಕ್ಕೂ ಪೂರ್ಣ</br> ಜ್ಞಾನಕ್ಕೂ ಇರುವ ಸಂಬಂಧ ಕಾಣದೆ ಹೋಗುತ್ತಾನೆ. ವಿಜ್ಞಾನ ತನ್ನ ಕೈಗೆ ಕೊಟ್ಟ ಶಕ್ತಿಗಳಿಗೆ ತಾನೇ </br>ಬಲಿಯಾಗಿ ಅವುಗಳ ಸುಳಿಗೆ ಸಿಕ್ಕು ಎಳೆದು ತೇಲಿ ಯಾವುದೋ ಕಾಣದ ದಡ ಸೇರುತ್ತಾನೆ. ಆಧುನಿಕ</br> ಜೀವನದ ವೇಗ, ದುರ್ಘಟನೆಯ ಮೇಲೆ ದುರ್ಘಟನೆ ಇವುಗಳ ದೆಸೆಯಿಂದ ನಿಷ್ಪಕ್ಷಪಾತ ಸತ್ಯಾನ್ವೇಷಣೆ </br>ನಡೆಯುವಂತಿಲ್ಲ. ನಿಜವಾದ ಜ್ಞಾನಾನ್ವೇಷಣೆ, ಅತ್ಯಾವಶ್ಯಕ ಶಾಂತಿ ಮತ್ತು ನಿರ್ಲಿಪ್ತ ಭಾವನೆ ದೊರೆಯ</br> ದಂತೆ ಅವಸರದಲ್ಲಿ ಬುದ್ದಿ ಓಡಿಸಲಾಗುತ್ತಿದೆ. "ಜ್ಞಾನಮಾರ್ಗ ಶಾಂತಿಯುಕ್ತವಿದೆ. ಅದರ ಕಾವು</br> ಕಂಪಿಸುವುದಿಲ್ಲ.”</br>
{{gap}}ನಾವು ಜೀವಿಸುವುದು ಪ್ರಾಯಶಃ ಮಾನವ ಕುಲದ ಒಂದು ಮಹಾಯುಗ, ಅದಕ್ಕೆ ಅವಶ್ಯವಾದ</br> ಬೆಲೆ ನಾವು ತರಲೇಬೇಕು. ಎಲ್ಲ ಯುಗಾಂತರಗಳಲ್ಲಿ ಜೀರ್ಣವಾದುದು ಬಿಟ್ಟು ಹೊಸದು ಸೃಷ್ಟಿಸುವ</br> ಪ್ರಯತ್ನ ನಡೆದಿದೆ. ಆ ಪ್ರಯತ್ನದಲ್ಲಿ ಘರ್ಷಣೆ, ಅಸ್ಥಿರತೆ ಕಂಡು ಬರುವುದು ಸಹಜ. ಜೀವನದಲ್ಲಿ</br> ಯಾವುದೂ ಶಾಶ್ವತವಲ್ಲ, ಸ್ಥಿರವಲ್ಲ, ಅಪರಿವರ್ತಿತವಲ್ಲ ; ಪರಿವರ್ತನೆ ಇಲ್ಲದೆ ಜೀವನವೇ</br> ಶೂನ್ಯವಾಗುತ್ತದೆ. ಹೆಚ್ಚೆಂದರೆ ಸಾಪೇಕ್ಷ ನಿತ್ಯತೆ ಕಾಣಬಹುದು, ಚಲನಾತ್ಮಕ ಸಮತೋಲನೆ ನೋಡ</br> ಬಹುದು. ಜೀವನವು ಮಾನವ ಮಾನವನಿಗೂ ಮಾನವನ ಸನ್ನಿವೇಶಗಳಿಗೂ ನೈಸರ್ಗಿಕ, ಬೌದ್ಧಿಕ</br> ಮತ್ತು ನೈತಿಕ ಮಟ್ಟದಲ್ಲಿ ನಿರಂತರ ನಡೆಯುವ ಒಂದು ಹೋರಾಟ, ಈ ಮಂಥನದಿಂದ ನೂತನ</br> ವಸ್ತುಗಳೂ, ಭಾವನೆಗಳೂ ರೂಪುಗೊಳ್ಳುತ್ತಿವೆ. ಮಾನವನಲ್ಲಿ, ಪ್ರಕೃತಿಯಲ್ಲಿ ಜನನ ಮರಣ ಒಂದರ</br> ಹಿಂದೆ ಒಂದು ಪ್ರಗತಿಯೇ ಜೀವನತತ್ವ, ನಿಶ್ಚಲತೆಯಲ್ಲ, ಪ್ರಗತಿ ಒಂದು ನಿರರ್ಗಳ ಅನಂತವಾಹಿನಿ.</br>
{{gap}}ಇಂದಿನ ಪ್ರಪಂಚದ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಲ್ಲಿ ಅಧಿಕಾರದಾಸೆ ಇದ್ದೇ ಇದೆ.</br><noinclude></noinclude>
qz0qh3nz6fgepob7un6b0gyplwvxk1a
ಪುಟ:ಭಾರತ ದರ್ಶನ.djvu/೫೧೩
104
85405
321391
230380
2026-05-20T09:29:17Z
Shreelatha.Halemane
7642
/* Validated */
321391
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಭಾರತ ದರ್ಶನ|left=೫೦೮|right=}}
ಆದರೆ ಆ ಅಧಿಕಾರ ದೊರಕಿದ ಒಡನೆ ಅನೇಕ ಅಮೂಲ್ಯಗುಣಗಳೂ ಮಾಯವಾಗುತ್ತವೆ. ಉನ್ನತ</br> ಧೈಯಗಳ ಸ್ಥಾನದಲ್ಲಿ ರಾಜಕೀಯ ಮೋಸ ಮತ್ತು ಕಪಟಸಂಧಾನ, ನಿಷ್ಕಾಮ ಧೈರ್ಯದ ಬದಲು</br>ಜೇಡಿತನ ಮತ್ತು ಸ್ವಾರ್ಥ ತಾಂಡವಾಡುತ್ತವೆ. ತಿರುಳು ಬಿಟ್ಟು ಕರಟಕ್ಕೆ ಪ್ರಾಮುಖ್ಯತೆ ದೊರೆಯುತ್ತದೆ.</br> ಅಷ್ಟು ಶ್ರದ್ದೆಯಿಂದ ಸಂಪಾದಿಸಿದ ಅಧಿಕಾರಕ್ಕೆ ತನ್ನ ಉದ್ದೇಶ ಸಾಧಿಸಲು ಅಸಮರ್ಥವಾಗುತ್ತದೆ.</br> ಅಧಿಕಾರಕ್ಕೂ ಒಂದು ಮಿತಿ ಇದೆ ; ತನ್ನ ಮೇಲೆ ತಾನೇ ಶಕ್ತಿಯು ಹಿಂದೊದೆಯುತ್ತದೆ. ಅಧಿಕಾರ ಶಕ್ತಿ</br> ಗಳೆರಡೂ ಆತ್ಮನಾಶ ಮಾಡಲು ಸಾಧ್ಯವಿಲ್ಲ. ಅದಕ್ಕೆ ಪ್ರತಿಯಾಗಿ ಆತ್ಮಶಕ್ತಿ ಇನ್ನೂ ಬಲಗೊಂಡು</br> ವಜ್ರದೇಹಿಯಾಗುತ್ತದೆ. “ಸೈನ್ಯದ ಮಹಾ ಸೇನಾನಾಯಕನನ್ನು ಸೆರೆ ಹಿಡಿಯಬಹುದು ; ಆದರೆ ಒಬ್ಬ</br> ಕನಿಷ್ಟ ಸೈನಿಕನ ಮನಸ್ಥೆರ್ಯ ಮಾತ್ರ ಸೆರೆಹಿಡಿಯಲು ಸಾಧ್ಯವಿಲ್ಲ” ಎಂದು ಕನ್ಫೂಷಿಯಸ್</br> ಹೇಳಿದ್ದಾನೆ.</br>
{{gap}}ಜಾನ್ "ಸ್ಟು ಅರ್ಟ ಮಿಲ್ ತನ್ನ ಆತ್ಮಕಥೆಯಲ್ಲಿ ಎಲ್ಲಿಯವರೆಗೆ ಮಾನವನ ಭಾವನಾ ರೀತಿಗಳ </br>ಮೂಲರಚನೆಯಲ್ಲಿ ಮಹತ್ತರ ಪರಿವರ್ತನೆಯಾಗುವುದಿಲ್ಲವೋ ಅಲ್ಲಿಯವರೆಗೆ ಮಾನವನ ಸ್ಥಿತಿಗತಿಗಳಲ್ಲಿ</br> ಯಾವ ವಿಶೇಷ ಅಭಿವೃದ್ಧಿ ಯೂ ಸಾಧ್ಯವಿಲ್ಲವೆಂದು ಈಗ ಮನಗಂಡಿದ್ದೇನೆ” ಎಂದು ಹೇಳಿದ್ದಾನೆ. ಆದರೆ</br> ಭಾವನಾರೀತಿಗಳಲ್ಲಿ ಆ ಮೂಲ ಪರಿವರ್ತನೆ ಬರುವುದೇ ಸನ್ನಿವೇಶ ವ್ಯತ್ಯಾಸಗಳಿಂದ ಮತ್ತು ಜೀವನದ</br> ಅನಂತ ಹೋರಾಟದ ಹಿಂದಿನ ನೋವು ಮತ್ತು ಸಂಕಟದಿಂದ, ಆದ್ದರಿಂದ ಭಾವನಾರೀತಿ ಪರಿವರ್ತನೆಯ</br> ಪ್ರತ್ಯಕ್ಷ ಪ್ರಯತ್ನದ ಜೊತೆಗೆ ಯಾವ ಸನ್ನಿವೇಶದಲ್ಲಿ ಬೆಳೆದು ಪುಷ್ಟಿ ಪಡೆಯುತ್ತವೆಯೋ ಆ ಸನ್ನಿವೇಶದ</br> ಪರಿವರ್ತನೆಗೂ ಪ್ರಯತ್ನ ಮಾಡುವುದು ಅತ್ಯವಶ್ಯಕ. ಒಂದಕ್ಕೊಂದು ಅವಲಂಬಿತ ಮತ್ತು ಒಂದರ</br> ಮೇಲೊಂದು ಪ್ರಭಾವ ಬೀರುತ್ತವೆ. ಮಾನವನ ಮನಸ್ಸು ಅನಂತ ಮುಖಗಳಲ್ಲಿ ಓಡುತ್ತದೆ. ಪ್ರತಿಯೊಬ್ಬ</br> ವ್ಯಕ್ತಿಯೂ ತನ್ನ ದೃಷ್ಟಿಯಲ್ಲೇ ಸತ್ಯ ಕಂಡು, ಇನ್ನೊಂದು ವ್ಯಕ್ತಿಯ ಅಭಿಪ್ರಾಯ ಒಪ್ಪುವುದಿಲ್ಲ. ಘರ್ಷಣೆ</br> ಎಲ್ಲ ಈ ಅಭಿಪ್ರಾಯ ಭೇದದಿಂದ. ಈ ಘರ್ಷಣೆಯಿಂದಲೇ ಸತ್ಯಕ್ಕೆ ಹೆಚ್ಚು ಪೂರ್ಣತೆ ದೊರೆಯುವುದು.</br> ಏಕೆಂದರೆ ಸತ್ಯ ಬಹುಮುಖವಾದುದು ; ಯಾರೊಬ್ಬರ ವಿಶಿಷ್ಟ ಸ್ವತ್ತಲ್ಲ ಎಂಬುದನ್ನು ಜ್ಞಾಪಕದಲ್ಲಿಟ್ಟಿರ</br> ಬೇಕು. ಕಾರ್ಯಾಚರಣೆಯ ಮಾರ್ಗವೂ ಅಷ್ಟೇ, ಭಿನ್ನ ಭಿನ್ನ ಜನರಿಗೆ ಭಿನ್ನ ಭಿನ್ನ ಸನ್ನಿವೇಶಗಳಲ್ಲಿ</br> ಭಿನ್ನ ಭಿನ್ನ ಮಾರ್ಗ ತೋರಬಹುದು. ಭಾರತ, ಚೀಣ ಮತ್ತು ಇತರ ರಾಷ್ಟ್ರಗಳು ತಮ್ಮದೇ ಜೀವನ</br> ರೀತಿಯ ವೈಶಿಷ್ಟ ಬೆಳೆಸಿಕೊಂಡು ಬಂದು ಅದಕ್ಕೊಂದು ಭದ್ರವಾದ ತಳಹದಿ ಕೊಟ್ಟರು. ತಮ್ಮ ಮಾರ್ಗ ಬಿಟ್ಟು ಬೇರೆ ಮಾರ್ಗ ಇಲ್ಲವೆಂದು ಭಾವಿಸಿದರು. ಈಗಲೂ ಅವರಲ್ಲಿ ಅನೇಕರ ಭಾವನೆ ಅದೇ</br> ರೀತಿ ಇದೆ. ಇಂದು ಯೂರೋಪ್ ಮತ್ತು ಅಮೆರಿಕ ಜನ ಪ್ರಪಂಚದ ಬಹು ಭಾಗ ಆಕ್ರಮಿಸಿರುವ</br> ಒಂದು ವಿಶಿಷ್ಟ ಜೀವನ ರೀತಿ ನಿರ್ಮಿಸಿಕೊಂಡಿದ್ದಾರೆ. ತಮಗೆ ಬೇರೆ ಮಾರ್ಗ ಇಲ್ಲವೇ ಇಲ್ಲವೆಂದು ಆ </br>ಜನರ ಭಾವನೆ. ಪ್ರಾಯಶಃ ಈ ಎರಡರಲ್ಲಿ ಯಾವುದನ್ನೂ ಇದು ಒಂದೇ ಮಾರ್ಗವೆಂದು ಹೇಳಲು ಸಾಧ್ಯ</br> ವಿಲ್ಲ. ಎರಡೂ, ಒಂದರಿಂದ ಇನ್ನೊಂದು ಸ್ವಲ್ಪ ಕಲಿಯುವುದು ಆವಶ್ಯವೆಂದು ತೋರುತ್ತದೆ, ಆದರೆ</br> ಚೀನಾ ಮತ್ತು ಭಾರತದಲ್ಲಿ ಜೀವನ ನಿಶ್ಚತನವಾಗಿ ಸ್ಥಗಿತವಾದುದರಿಂದಲೂ ಪಾಶ್ಚಾತ್ಯವು ಯುಗಧರ್ಮ</br> ಪ್ರತಿಬಿಂಬಿಸುವುದು ಮಾತ್ರವಲ್ಲದೆ, ಕಾರ್ಯಶೀಲವೂ, ಸದಾ ಪರಿವರ್ತಿತವೂ ಇರುವುದರಿಂದಲೂ ಮತ್ತು</br> ಆಗಾಗ ಆತ್ಮ ವಿನಾಶ ಮತ್ತು ಮಾನವ ಕೊಲೆ ಆದರೂ ಮೂಲತಃ ಅದು ಪ್ರಗತಿ ಪರವಿರುವುದರಿಂದಲೂ</br> ಭಾರತ ಮತ್ತು ಚೀನಾ ಪಾಶ್ಚಾತ್ಯರಿಂದ ಹೆಚ್ಚು ಕಲಿಯಬೇಕಾಗಿದೆ.</br>
{{gap}}ಭಾರತದಲ್ಲಿ ಮತ್ತು ಪ್ರಾಯಶಃ ಇತರ ದೇಶಗಳಲ್ಲಿ ಆತ್ಮಪ್ರಶಂಸೆ ಮತ್ತು ಆತ್ಮನಿಂದೆಯ ಕಾಲ</br> ಒಂದರ ಮೇಲೊಂದು ತೆರೆತೆರೆಯಾಗಿ ಬಂದಿವೆ. ಎರಡೂ ಅನಿಷ್ಟ ಮತ್ತು ಅಯೋಗ್ಯ, ಭಾವೋದ್ರೇಕ</br> ಮತ್ತು ಭಾವಪರವಶತೆಯಿಂದ ಜೀವನ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ; ಆದರೆ ಧೈರ್ಯದಿಂದ ಮುಚ್ಚು</br> ಮರೆ ಇಲ್ಲದೆ ವಾಸ್ತವ ಪ್ರಪಂಚ ಎದುರಿಸುವುದರಿಂದ ಮಾತ್ರ ಸಾಧ್ಯ. ಜೀವನ ಸಮಸ್ಯೆಗಳಿಗೆ ಸಂಬಂಧ</br> ವಿಲ್ಲದ ಗೊತ್ತು ಗುರಿ ಇಲ್ಲದ ಭಾವಾವೇಶದ ಅನ್ವೇಷಣೆಯಲ್ಲಿ ಮಗ್ನರಾಗಿ ವ್ಯರ್ಥಕಾಲ ಕಳೆಯಲು ಆಗುವು</br> ದಿಲ್ಲ, ಏಕೆಂದರೆ ಕಾಲಚಕ್ರ ಸಮನಾಗಿ ಕಾಯದೆ ಉರುಳುತ್ತಲೇ ಇದೆ. ಮಾನವನ ಅಂತರಂಗ</br><noinclude></noinclude>
2sj3pt3lmh9ztql95kc7jv7gtwlu2ml
ಪುಟ:ಭಾರತ ದರ್ಶನ.djvu/೫೧೪
104
85406
321392
230372
2026-05-20T09:30:05Z
Shreelatha.Halemane
7642
/* Validated */
321392
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಪುನಃ ಅಹಮದ್ನಗರದ ಕೋಟೆಯಲ್ಲಿ|left=|right=೫೦೯}}
ಜೀವನದ ಮಹತ್ವ ಮರೆತು ಬಾಹ್ಯಾಡಂಬರದಲ್ಲೇ ಮಗ್ನರಾಗುವುದೂ ಒಳ್ಳೆಯದಲ್ಲ. ಎರಡಕ್ಕೂ ಒಂದು</br> ಸಮತೋಲನವಿರಬೇಕು. ಎರಡಕ್ಕೂ ಒಂದು ಸಾಮರಸ್ಯ ಕಲ್ಪಿಸಲು ಯತ್ನ ಮಾಡಬೇಕು." ಪ್ರಕೃತಿ</br> ಮನಸ್ಸುಗಳ ಐಕ್ಯತೆಯ ಜ್ಞಾನವಿದ್ದರೆ ಅದಕ್ಕಿಂತ ಹೆಚ್ಚು ಶ್ರೇಯಸ್ಕರವಾದುದು ಬೇರೆ ಇಲ್ಲ. ಮನಸ್ಸಿನ</br> ಜ್ಞಾನ ಹೆಚ್ಚಿದಂತೆ ತನ್ನ ಶಕ್ತಿಯ ಅರಿವೂ, ಪ್ರಕೃತಿ ನಿಯಮದ ಅರಿವೂ ಹೆಚ್ಚುತ್ತದೆ. ತನ್ನ ಶಕ್ತಿ</br> ಅಥವ ಬಲದ ಅರಿವು ಹೆಚ್ಚಿದಂತೆ ತನ್ನ ದಾರಿ ತಾನು ಕಂಡುಕೊಂಡು ತನ್ನ ನಿಯಮ ತಾನೇ ರಚಿಸಿ</br> ಕೊಳ್ಳಲು ಅನುಕೂಲವಾಗುತ್ತದೆ. ಪ್ರಕೃತಿ ನಿಯಮದ ಅರಿವು ಹೆಚ್ಚಿದಂತೆ ನಿಷ್ಟ್ರಯೋಜಕ ವಸ್ತುಗಳ</br> ಮೋಹ ತ್ಯಜಿಸುವುದೂ ಸುಲಭವಾಗುತ್ತದೆ ; ಇದೇ ಪೂರ್ಣಮಾರ್ಗ ” ಎಂದು ಹದಿನೇಳನೆಯ</br> ಶತಮಾನದ ಸ್ಪಿನೋಜ ಹೇಳಿದ್ದಾನೆ.</br>
{{gap}}ನಮ್ಮ ವ್ಯಕ್ತಿಜೀವನಗಳಲ್ಲಿ ಸಹ ದೇಹಕ್ಕೂ ಆತ್ಮಕ್ಕೂ, ಪ್ರಕೃತಿಯ ಅಂಗವಾದ ಮನುಷ್ಯನಿಗೂ</br> ಸಮಾಜದ ಅಂಗವಾದ ಮನುಷ್ಯನಿಗೂ ಒಂದು ಸಮತೂಕ ಕಂಡುಕೊಳ್ಳಬೇಕು. “ ನಾವು ಪೂರ್ಣತೆ</br> ಪಡೆಯಬೇಕಾದರೆ ಸಿಂಹದ ದೇಹಶಕ್ತಿ ಇರಬೇಕು. ಆದರೆ ಮನಸ್ಸು ಸುಸಂಸ್ಕೃತವಿರಬೇಕು;</br> ಪ್ರಕೃತಿಯೊಂದಿಗೆ ನೈಸರ್ಗಿಕ ಜೀವನ ನಡೆಸುವ ಮಾನವ ಸಮಾಜದಲ್ಲಿ ಮಾನವೀಯತೆ ವ್ಯಕ್ತ ಪಡಿಸುವ</br> ಯೋಗ್ಯತೆ ಇರಬೇಕು” ಎಂದು ರವೀಂದ್ರನಾಥ ಠಾಕೂರರು ಹೇಳಿದ್ದಾರೆ. ಪೂರ್ಣತೆ ಒಂದು ಅಂತಿಮ</br> ಗುರಿ; ಆದ್ದರಿಂದ ಅದು ನಮಗೆ ಎಟುಕದ ವಸ್ತು, ನಮ್ಮ ಪಯಣ ಮಾತ್ರ ಸದಾ ಅದೇ ಕಡೆಗೆ ಇರಲಿ ;</br> ದಾರಿ ನಡೆದಷ್ಟೂ ಅದು ಹಿಂದೆ ಹೋಗುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಪರಸ್ಪರ ಸರಿಬೀಳದ,</br> ವಿರೋಧ ಪ್ರಕೃತಿಯ ಒಂದೊಂದೂ ಒಂದೊಂದು ದಾರಿಗೆಳೆಯುವ ಅನೇಕ ವ್ಯಕ್ತಿಗಳು ಕೆಲಸ ಮಾಡು</br> ತಿವೆ. ಜೀವನ ಪ್ರೇಮವಿದೆ, ಜೀವನ ನಿರಸನವಿದೆ, ಜೀವನಕಾರ್ಯ ಪುರಸ್ಕಾರವಿದೆ, ಅದರ ಬಹುಭಾಗದ</br> ತಿರಸ್ಕಾರವಿದೆ. ಈ ವಿರೋಧ ಪ್ರಕೃತಿಗಳಲ್ಲಿ ಸಮರಸತೆ ಕಲ್ಪಿಸುವುದು ಬಹುಕಷ್ಟ. ಒಂದು ಬಾರಿ ಒಂದು</br> ಇನ್ನೊಂದು ಬಾರಿ ಇನ್ನೊಂದು ಯಾಜಮಾನ್ಯ ನಡೆಸುತ್ತವೆ. ಅನೇಕ ವೇಳೆ</br>
{{{center|“ಬಾಳೊಂದು ಹಿರಿಯೊಗಟೆ</br>
ಅರಿಯ ತುಸು ರಾಗ ಬಿಡು,</br>
ಬಾಳು ತುಸು ರಾಗದಿ</br>
ಲೀಲೆ ಜಾಲವ ನೋಡೆ ”</br>}}
ಎಂದು ಲಾ ಓಜೆ ಹೇಳುತ್ತಾನೆ.</br>
{{gap}}ನಮ್ಮ ತರ್ಕ ಮತ್ತು ಅರಿವಿನ ಆಳ ನಮ್ಮ ಜ್ಞಾನ ಮತ್ತು ಅನುಭವಭಾಂಡಾರ ಎಷ್ಟೇ ಅಪಾರ</br> ವಿದ್ದರೂ ನನಗೆ ತಿಳಿದಿರುವ ಜೀವನ ರಹಸ್ಯ ಅತ್ಯಲ್ಪ ; ಅದರ ಅಗಾಧ ಗೂಢನಿಯಮಗಳ ಊಹೆ </br> ಮಾತ್ರ ಸಾಧ್ಯ. ಆದರೆ ಅದರ ಸೌಂದರ್ಯೋಪಾಸನೆ ಸದಾ ಸಾಧ್ಯವಿದೆ, ಮತ್ತು ಕಲೆಯ ಮೂಲಕ ನಮ್ಮ</br> ಆಚರಣೆಯಲ್ಲಿ ಸೃಷ್ಟಿಯ ದೇವಸಮಾನ ಕಾರ್ಯ ತೋರಬಹುದು. ನಮ್ಮ ಜೀವನ ಸದಾ ತಪ್ಪು ಮಾಡುವ,</br> ಅತ್ಯಲ್ಪ, ಅನಿಶ್ಚಿತ ಕಾಲದ ದುರ್ಬಲ ಜೀವನವಾದರೂ, ಅಮರ ದೈವತ್ವದ ಸತ್ವ ಸ್ವಲ್ಪ ನಮ್ಮಲ್ಲಿದೆ</br> “ ನಾವು ಅಲ್ಪ ಮಾನವರು, ನಶ್ವರ ಜೀವಿಗಳು ಆದ್ದರಿಂದ ಮಾನವ ಸಹಜ ನಶ್ವರ ಭಾವನೆಗಳನ್ನೇ</br>ಯೋಚಿಸಿ ಎಂದು ಉಪದೇಶಿಸುವವರನ್ನು ನಂಬಬಾರದು. ಸಾಧ್ಯವಾದಷ್ಟು ಅಮರತ್ವ ಅನುಷ್ಠಾನ</br> ಮಾಡಬೇಕು. ನಮ್ಮ ಶ್ರೇಷ್ಠತೆಗೆ ಅನುಚಿತವಾದ ಯೋಗ್ಯ ಜೀವನ ನಡೆಸಲು ಸರ್ವ ಪ್ರಯತ್ನ ಮಾಡ</br> ಬೇಕು” ಎಂದು ಅರಿಸ್ಟಾಟಲ್ ಹೇಳಿದ್ದಾನೆ.</br>
{{center|೧೬. ಉಪಸಂಹಾರ</br>}}
{{gap}} ಈ ಗ್ರಂಥ ಆರಂಭಿಸಿ ಐದು ತಿಂಗಳಾಗುತ್ತ ಬಂದವು. ನನ್ನ ಮನೋಭಾವನೆಗಳ ಕಲಸುಮೇಲೋ</br> ಗರದ ಸಾವಿರ ಪುಟಗಳ ಈ ಹಸ್ತಪ್ರತಿ ಈಗ ಮುಗಿಸಿದ್ದೇನೆ. ಈ ಐದು ತಿಂಗಳಲ್ಲಿ ಬಹು ದೂರದ</br> ಪ್ರಾಚೀನ ಯುಗಕ್ಕೆ ಹೋಗಿದ್ದೇನೆ, ಭವಿಷ್ಯದೊಳಗೂ ಇಣಿಕಿ ನೋಡಿದ್ದೇನೆ. “ ಕಾಲವು ಅನಂತ</br><noinclude></noinclude>
sphi09z4mgo84rxm4iawb8x8yn9mg86
ಪುಟ:ಭಾರತ ದರ್ಶನ.djvu/೫೧೫
104
85407
321393
230363
2026-05-20T09:30:24Z
Shreelatha.Halemane
7642
/* Validated */
321393
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಭಾರತ ದರ್ಶನ|left=೫೧೦|right=}}
ದೊಂದಿಗೆ ಸಂಧಿಸುವ ಬಿಂದು ” ನಿನ ಮೇಲೆ ನನ್ನ ಸಮತೋಲನೆ ನಿಲ್ಲಿಸುವುದಕ್ಕೂ ಪ್ರಯತ್ನ ಪಟ್ಟದೇನೆ.</br> ಈ ಐದು ತಿಂಗಳಲ್ಲಿ ಪ್ರಪಂಚದಲ್ಲಿ ಅನೇಕ ಮಹಾ ಘಟನೆಗಳಾಗಿವೆ. ಸೈನಿಕನ ಗೆಲುವಿನ ದೃಷ್ಟಿಯಿಂದ</br> ಯುದ್ದದ ಗತಿ ವಿಜಯೋತ್ಸವದ ಕಡೆ ಅತಿವೇಗದಿಂದ ಸಮಿಾಪಿಸಿದೆ. ನನ್ನ ತಾಯ್ಯಾಡಿನಲ್ಲಿ ಸಹ ದೂರದ</br> ನೋಟ ಮಾತ್ರ ದೊರೆತಿದ್ದರೂ ಅನೇಕ ಘಟನಾ ಪರಂಪರೆಗಳು ಆಗಿವೆ. ಅನೇಕ ಬಾರಿ ಅಲೆ ಅಲೆ</br> ಯಾಗಿ ಬಂದ ತಾತ್ಕಾಲಿಕ ಸಂಕಟಗಳ ಉಬ್ಬರವಿಳಿತಕ್ಕೆ ಸಿಕ್ಕು ಪಾರಾಗಿದ್ದೇನೆ. ಈ ಆಲೋಚನಾ</br> ಕಾರ್ಯದಲ್ಲಿ ಮಗ್ನನಾಗಿ, ನನ್ನ ಭಾವನೆಗಳಿಗೆ ಒಂದು ರೂಪು ಕೊಡುವ ಪ್ರಯತ್ನದಲ್ಲಿ ಇಂದಿನ ಭೀಷಣ</br> ಘಟನೆಗಳ ಮೊನೆಯಲುಗಿನಿಂದ ಸ್ವಲ್ಪ ದೂರ ಸರಿದು ಗತಕಾಲದ ಮತ್ತು ಭವಿಷ್ಯದ ವಿಶಾಲ ನೋಟದ</br> ಕಡೆ ತಿರುಗಿದ್ದೇನೆ.</br>
{{gap}}ಆದರೆ ಈ ತಿರುಗಾಟಕ್ಕೂ ಒಂದು ಕೊನೆಬೇಕು. ಬೇರೆ ಯಾವ ಕಾರಣವಿಲ್ಲದಿದ್ದರೂ ಉಪೇಕ್ಷಿಸ</br> ಲಾಗದ ಒಂದು ವಾಸ್ತವಿಕ ಕಾರಣ ಇದೆ, ಬಹು ಪ್ರಯಾಸದಿಂದ ತರಿಸಿಕೊಂಡ ಕಾಗದ ಮುಗಿದು</br> ಹೋಗಿದೆ; ಹೆಚ್ಚು ಸಿಗುವಂತಿಲ್ಲ.</br>
{{gap}}“ಭಾರತ ದರ್ಶನ” ಹೊಸದು ಏನು ನಾನು ಕಂಡಿರುವುದು ? ಭಾರತದ ಇಂದಿನ ಚಿತ್ರ ಮತ್ತು</br> ಹಿಂದಿನ ಬಹುಕಾಲದ ಚಿತ್ರವನ್ನು ನಾನು ಕಂಡುಹಿಡಿದು ತೋರಿಸುತ್ತೇನೆಂದು ಭಾವಿಸಿದ್ದು ಒಂದು ಎದೆ</br> ಗಾರಿಕೆ, ಭಾರತದ ನಲವತ್ತು ಕೋಟಿ ಜನ ಸ್ತ್ರೀ ಪುರುಷರೂ ಇಂದು ಬೇರೆ ಬೇರೆ, ಒಬ್ಬರಿಗೊಬ್ಬರಿಗೆ</br> ವ್ಯತ್ಯಾಸ, ಪ್ರತಿಯೊಬ್ಬರಿಗೂ ಒಂದೊಂದು ಪ್ರತ್ಯೇಕ ಭಾವನಾ ಮತ್ತು ಯೋಚನಾ ಪ್ರಪಂಚ ಜೀವನ.</br> ಈಗಲೇ ಹೀಗಿರುವಾಗ ಅಗಾಧ ಗತಕಾಲದ ಅಸಂಖ್ಯಾತ ಮಾನವಕೊಟಯ ಅಲೆಗಳ ಚಿತ್ರ ನನ್ನ</br> ಕಲ್ಪನೆಯ ಹಿಡಿತಕ್ಕೆ ಸಿಗುವುದೆಂತು ? ಆದರೂ ಯಾವುದೋ ಒಂದು ಅವ್ಯಕ್ತ ಶಕ್ತಿ ಅದನ್ನೆಲ್ಲ ಒಟ್ಟಿಗೆ</br> ಹೆಣೆದಿದೆ, ಇನ್ನೂ ಹೆಣೆಯುತ್ತಿದೆ. ಭೌಗೋಲಿಕ ಮತ್ತು ಆರ್ಥಿಕ ದೃಷ್ಟಿಯಿಂದ ಭಾರತ ಒಂದು, ಅದರ</br> ಸಂಸ್ಕೃತಿ ವೈವಿಧ್ಯದಲ್ಲಿ ಒಂದು ಐಕ್ಯತೆ ಇದೆ. ಅನೇಕ ವಿರೋಧಗಳ ಹೊರೆಯಾದರೂ ಯಾವುದೋ</br> ಅವ್ಯಕ್ತ ತಂತುಗಳು ಅವನ್ನು ಬಲವಾಗಿ ಬಿಗಿದು ಹಿಡಿದಿವೆ. ಮೇಲಿಂದ ಮೇಲೆ ಎಷ್ಟೋ ಆಘಾತಗಳು</br> ಬಂದು ಒದಗಿದ್ದರೂ ಭಾರತದ ಆತ್ಮ ಜಯಿಸಲು ಮಾತ್ರ ಯಾವುದಕ್ಕೂ ಸಾಧ್ಯವಾಗಿಲ್ಲ ; ಇಂದು </br>ಮದೋನ್ಮತ್ತ ವಿಜಯಶಾಲಿಯ ಕೈಯೊಳಗಿನ ಒಂದು ಆಟದ ಬೊಂಬೆಯಾದರೂ ಭಾರತವು ಇನ್ನೂ,</br> ಅಗತ್ಯವೂ ಅಜೇಯವೂ ಆಗಿ ಉಳಿದಿದೆ. ಪುರಾತನ ಕತೆಯಂತೆ ಯಾವುದೋ ಒಂದು ಕಂಡೂ</br> ಕಾಣದ ಗುಣ, ಒಂದು ಮೋಹಿನೀ ಶಕ್ತಿ ಭಾರತಕ್ಕೆ ಇರುವಂತೆ ಇದೆ. ಭಾರತವೆಂದರೆ ಒಂದು</br> ಕಲ್ಪನೆಯೂ ಹೌದು ಭಾವನೆಯೂ ಹೌದು, ಕನಸೂ ಹೌದು ದೃಶ್ಯವೂ ಹೌದು ; ಆದರೂ</br> ಅದು ಸತ್ಯ ವಾಸ್ತವ ಮತ್ತು ಸರ್ವ ವ್ಯಾಪಕ. ಕತ್ತಲೆಯ ಕೂಪಕ್ಕೆ ತಳ್ಳುವಂತೆ ತೋರುವ</br> ಕಾರ್ಗತ್ತಲು ಕವಿದ ಕಾಲು ದಾರಿಗಳ ಭೀಕರ ದೃಶ್ಯಗಳೂ ಇವೆ; ಹಗಲಿನ ಪೂರ್ಣತೆ ಮತ್ತು</br> ಶಾಖವೂ ಇದೆ. ಈ ವೃದ್ದ ಮಾ ತೆ ಯ ನ್ನು ಕಂಡರೆ ಒಂದೊಂದು ಬಾರಿ ನಾಚಿಕೆಯಿಂದ ತಲೆ</br> ತಗ್ಗಿಸುವಂತೆ ಬಹು ಅಸಹ್ಯವಾಗುತ್ತದೆ. ದುರಾಗ್ರಹ ಮತ್ತು ಮೊಂಡುತನ ತೋರುವುದಲ್ಲದೆ ಕೆಲವು</br> ವೇಳೆ ಹುಚ್ಚುತನ ಸಹ ತೋರುತ್ತಾಳೆ. ಆದರೆ ಆಕೆ ಬಹು ಪ್ರೇಮಮಯಿ. ಆಕೆಯ ಮಕ್ಕಳು ಎಲ್ಲಿಗೆ.</br> ಹೋಗಲಿ ಏನೆ ಆಗಲಿ ಆಕೆಯನ್ನು ಮಾತ್ರ ಯಾರೂ ಮರೆಯಲಾರರು. ಏಕೆಂದರೆ ಆಕೆಯ ಮಹೋನ್ನತಿ</br> ಅಥವ ಅವಗುಣ ಏನಿದ್ದರೂ ಅದಕ್ಕೆ ಅವರೇ ಕಾರಣರು. ಜೀವನಾಶಕ್ತಿ, ಆನಂದ ಮತ್ತು ಮುಗ್ಧತೆ </br>ಹೊರ ಸೂಸುತ್ತ, ಅಪಾರ ಜ್ಞಾನಾಂಬುಧಿಯನ್ನಳೆದ ಆಕೆಯ ಆ ಆಳವಾದ ಕಣ್ಣುಗಳಲ್ಲಿ ಆ ಗುಣಾವ</br> ಗುಣಗಳೆಲ್ಲ ಪ್ರತಿಬಿಂಬಿತ ಇವೆ. ಪ್ರತಿಯೊಬ್ಬ ವ್ಯಕ್ತಿಯೂ ಆಕೆಯನ್ನು ಕಂಡು ಮುಗ್ಧನಾಗಿದ್ದಾನೆ.</br> ಕಾರಣ ಬೇರೆ ಇರಬಹುದು ಅಥವ ಏನೂ ಇಲ್ಲದೆ ಇರಬಹುದು ; ಮತ್ತು ಆಕೆಯ ಬಹುಮುಖ ವ್ಯಕ್ತಿತ್ವದ</br> ಯಾವುದೋ ಒಂದು ಪ್ರತ್ಯೇಕ ಮುಖಕಂಡು ಇರಬಹುದು. ಯುಗ ಯುಗಾಂತರಗಳಿಂದ ಅನೇಕ ಮಹಾ</br> ಪುರುಷರು, ಸ್ತ್ರೀರತ್ನಗಳು ಆಕೆಯ ಗರ್ಭದಿಂದ ಅವತರಿಸಿ ಸನಾತನ ಸಂಪ್ರದಾಯ ಮುಂದುವರಿಸಿದ್ದಾರೆ.</br> ಮತ್ತು ಕಾಲಪರಿವರ್ತನೆಗೆ ತಕ್ಕಂತೆ ಆ ಸಂಪ್ರದಾಯಕ್ಕೆ ಹೊಸಸ್ವರೂಪ ಕೊಟ್ಟಿದ್ದಾರೆ. ಈ ಮಹಾ</br><noinclude></noinclude>
49aqhgbhitmnpbbuw6izh31yzaqua65
ಪುಟ:ಭಾರತ ದರ್ಶನ.djvu/೫೧೬
104
85408
321394
230336
2026-05-20T09:30:37Z
Shreelatha.Halemane
7642
/* Validated */
321394
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಪುನಃ ಅಹಮದ್ ನಗರದ ಕೋಟೆಯಲ್ಲಿ|left=|right=೫೧೧}}
ವ್ಯಕ್ತಿಗಳ ಶ್ರೇಣಿಯಲ್ಲಿ ಒಬ್ಬರಾದ ರವೀಂದ್ರನಾಥ ಠಾಕೂರರಿಗೆ ಆಧುನಿಕ ಯುಗದ ಕಾವು ಮತ್ತು ಆಸಕ್ತಿ ಪೂರ್ಣ ಇದ್ದವು; ಆದರೂ ಅವರ ನಿಲುವು ಎಲ್ಲ ಭಾರತದ ಪ್ರಾಚೀನತೆಯಲ್ಲಿ ; ಅವರ ಜೀವನವೇ ಪ್ರಾಚೀನ ಮತ್ತು ಆಧುನಿಕ ಸಂಸ್ಕೃತಿಗಳ ಒಂದು ಸುಂದರ ಸಾಮರಸ್ಯ. “ನನ್ನ ಭಾರತಪ್ರೇಮ ಭೌಗೋಲಿಕ ಭಾರತದ ನನ್ನ ಪೂಜೆಯಿಂದ ಬಂದುದಲ್ಲ; ಭಾರತದಲ್ಲಿ ನಾನು ಜನ್ಮತಾಳಿದ್ದರಿಂದಲೂ ಅಲ್ಲ ; ಆದರೆ ಯುಗಯುಗಗಳ ಪ್ರಳಯಾಂತಕ ಸನ್ನಿವೇಶಗಳಲ್ಲಿ ಸಹ ಅದು ಮಹಾಜ್ಞಾನಿಗಳಾದ ಆರ್ಯ ಋಷಿಗಳ ದಿವ್ಯ ಅಮೃತವಾಣಿಯನ್ನು ಕಾಪಾಡಿಕೊಂಡು ಬಂದಿರುವುದರಿಂದ" ಎಂದು ರವೀಂದ್ರರು ಹೇಳಿದ್ದಾರೆ. ಅನೇಕರು ಅದೇ ರೀತಿ ಹೇಳಬಹುದು; ಇತರರು ತಮ್ಮ ಭಾರತಪ್ರೇಮಕ್ಕೆ ಬೇರೆ ಕಾರಣ ಕೊಡಬಹುದು.
{{gap}}ಹಿಂದೆ ಆಕೆಯನ್ನು ಮುಸುಕಿದ್ದ ಮೋಹ ಈಗ ಮಾಯವಾಗುವಂತೆ ಇದೆ. ಈಗ ಆಕೆ ಎಚ್ಚತ್ತು ಕಣ್ಣೆರೆದು ಸುತ್ತಲೂ ನೋಡುವಂತಿದೆ. ಆದರೆ ಎಷ್ಟೇ ಹೊಸರೂಪ ಧರಿಸಿದರೂ ಹೊಸರೂಪ ತಾಳಲೇಬೇಕು. ಆ ಹಳೆಯ ಮನಮೋಹಕಶಕ್ತಿ ಮಾತ್ರ ಇದ್ದೇ ಇರುತ್ತದೆ; ತನ್ನ ಜನರ ಹೃದಯ ಸೂರೆಗೊಳ್ಳುತ್ತಲೇ ಇರುತ್ತಾಳೆ. ಆಕೆಯ ಬಾಹ್ಯ ಅಲಂಕಾರ ಬೇರೆ ಆದರೂ ಆಕೆ ಮಾತ್ರ ಅದೇ ಪುರಾತನ ವ್ಯಕ್ತಿ; ಈ ಸೇಡಿನ ಮನೋಭಾವದ, ಕಠಿನ, ದುರಾಸೆಯ ಪ್ರಪಂಚದಲ್ಲಿ ಸತ್ಯ, ಸುಂದರ, ಶ್ರೇಷ್ಠ ವಸ್ತುಗಳು ಯಾವುದನ್ನೂ ಬಿಡದೆ ಬಾಳ್ವೆ ನಡೆಸಲು ಆಕೆಯ ಜ್ಞಾನಸಂಪತ್ತು ಸಹಾಯಕವಾಗುತ್ತದೆ.
{{gap}}ಪ್ರಪಂಚವು ಮಹತ್ಕಾರಗಳನ್ನೆನೋ ಸಾಧಿಸಿದೆ. ಆದರೂ ಮಾನವಪ್ರೇಮ ಮಾನವಪ್ರೇಮ, ಎಂದು ಎಷ್ಟು ಕೂಗಿದರೂ ಅದರ ತಳಹದಿ ಮಾತ್ರ ಮಾನವನ ಮಾನವೀಯತೆಯ ಗುಣಗಳಲ್ಲಿರದೆ ಹೆಚ್ಚಾಗಿ ದ್ವೇಷ ಮತ್ತು ಹಿಂಸೆಯಮೇಲೆ ನಿಂತಿದೆ. ಯುದ್ಧವು ಸತ್ಯ ಮತ್ತು ಮಾನವೀಯತೆಯ ನಕಾರ. ಕೆಲವು ವೇಳೆ ಯುದ್ಧ ಅನಿವಾರ್ಯವಾಗಬಹುದು. ಆದರೆ ಅದರ ಪರಿಣಾಮ ಊಹಿಸುವುದು ಸಹ ಅಸಾಧ್ಯ. ಮರಣ ಮಾತ್ರವಲ್ಲ, ಏಕೆಂದರೆ ಹುಟ್ಟಿದವನು ಸಾಯಲೇ ಬೇಕು ; ಆದರೆ, ಕ್ರಮೇಣ ಮುಂದೆ ಜನತೆಯ ಸಾಮಾನ್ಯ ಸ್ವಭಾವವಾಗುವ ದ್ವೇಷ ಮತ್ತು ಸುಳ್ಳಿನ ಸತತ ಮನಃಪೂರ್ವಕ ಅಪಪ್ರಚಾರ, ದ್ವೇಷ ಮತ್ತು ತಿರಸ್ಕಾರಗಳೇ ನಮ್ಮ ಜೀವನಮಾರ್ಗದ ದಿಗ್ಗರ್ಶಕಗಳಾದರೆ ಅದರಿಂದ ಒದಗುವ ಅಪಾಯ ಮತ್ತು ಹಾನಿ ಅಪಾರ. ಏಕೆಂದರೆ ಆ ಶಕ್ತಿ ವ್ಯಯವೆಲ್ಲ ದುವ್ರ್ರಯ ಮತ್ತು ಅದರಿಂದ ಮನಸ್ಸೇ ವಿಕಾರಹೊಂದಿ, ಕರಟಗಟ್ಟಿ ಸತ್ಯಕ್ಕೆ ಕುರುಡಾಗುತ್ತದೆ. ಭಾರತದಲ್ಲಿ ಈಗ ದ್ವೇಷಾಸೂಯೆಗಳು ಬೆಳೆದಿರುವುದು ತೀರ ವ್ಯಸನಕರ ; ಆದರೆ ಅದೆಲ್ಲ ಹಿಂದಿನ ಕರ್ಮಫಲ. ಇಂದಿಗೂ ಅದರಲ್ಲಿ ಏನೂ ವ್ಯತ್ಯಾಸವಾಗಿಲ್ಲ. ಆತ್ಮಾಭಿಮಾನವುಳ್ಳ ಜನಾಂಗದ ಗೌರವಕ್ಕೆ ಮೇಲಿಂದ ಮೇಲೆ ಮಸಿಬಳಿಯುವ ಪ್ರಯತ್ನ ಮರೆಯಲು ಸಾಧ್ಯವಿಲ್ಲ. ಆದರೂ ಭಾರತೀಯರು ಬಹುಕಾಲ ದ್ವೇಷಸಾಧನೆ ಮಾಡುವವರಲ್ಲ, ಬಹುಬೇಗ ತಮ್ಮ ಉದಾರ ಸ್ವಭಾವ ತೋರುತ್ತಾರೆ.
{{gap}}ಸ್ವಾತಂತ್ರದ ಹೊಸ ದಿಗಂತಗಳನ್ನು ಕಂಡು ಭಾರತ ಪುನಃ ಚೇತರಿಸಿಕೊಳ್ಳುತ್ತದೆ. ಹಿಂದಿನ ನಿರಾಸೆ ಮತ್ತು ಅವಹೇಳನ ಎಲ್ಲ ಮರೆತು ಭವಿಷ್ಯದ ಭವ್ಯತೆಯಲ್ಲಿ ಮಗ್ನವಾಗುತ್ತದೆ. ತನ್ನ ನೆಲೆಯಲ್ಲಿ ತಾನು ಬೇರು ಬಿಟ್ಟರೂ ಇತರರಿಂದ ಕಲಿತು ಅವರೊಡನೆ ಸಹಕರಿಸಬೇಕೆಂಬ ಇಚ್ಛೆ ಮತ್ತು ಆತ್ಮ ವಿಶ್ವಾಸದಿಂದ ಮುಂದುವರಿಯುತ್ತದೆ. ಭಾರತವು ಇಂದು ಪೂರ್ವಾಚಾರಗಳ ಅಂಧಶ್ರದ್ಧೆ ಮತ್ತು ಪಾಶ್ಚಾತ್ಯ ಪದ್ದತಿಗಳ ಕುರುಡು ಅನುಕರಣಗಳ ಮಧ್ಯೆ ತೊನೆದಾಡುತ್ತಿದೆ. ಇವೆರಡರಲ್ಲೂ ಹರ್ಷವಾಗಲಿ, ಜೀವನ ವಾಗಲಿ, ಪ್ರಗತಿಯಾಗಲಿ ದೊರೆಯಲು ಸಾಧ್ಯವಿಲ್ಲ. ಮೇಲೆ ಹೆಪ್ಪುಗಟ್ಟಿರುವ ಕರಟ ಒಡೆದುಕೊಂಡು ಹೊರಬಿದ್ದು ಆಧುನಿಕ ಯುಗದ ಜೀವನ ಮತ್ತು ಕಾರ್ಯ ಚಟುವಟಿಕೆಗಳಲ್ಲಿ ಪೂರ್ಣ ಪಾತ್ರ ವಹಿಸಬೇಕು. ಕೇವಲ ಅನುಕರಣದಿಂದ ಯಾವ ಸಂಸ್ಕೃತಿ ಅರ್ಥ ಆತ್ಮ ಪ್ರಗತಿಸಾಧನೆ ಸಾಧ್ಯವಿಲ್ಲವೆಂದು ಸ್ಪಷ್ಟ ಅರಿಯಬೇಕು. ಜನ ಜೀವನದಿಂದ ಮತ್ತು ರಾಷ್ಟ್ರ ಜೀವನದಿಂದ ದೂರವಿರುವ ಕೆಲವರು ಮಾತ್ರ. ಅನುಕರಣದಿಂದ ತೃಪ್ತಿ ಹೊಂದಬಹುದು. ನಿಜವಾದ ಸಂಸ್ಕೃತಿಯು ಪ್ರಪಂಚದ ಎಲ್ಲ ಮೂಲೆಗಳಿಂದಲೂ ರಸಾಸ್ವಾದನೆ ಮಾಡುತ್ತದೆ. ಆದರೆ ತನ್ನ ವಿಶಾಲಜನತೆಯ ಆಧಾರದ ಮೇಲೆ ಸ್ವಂತ ಮನೆಯಲ್ಲಿ {{hws|ಬೆಳೆಯ|ಬೆಳೆಯಬೇಕು.}}<noinclude></noinclude>
6gzjwj80frbbzkx928nbms8j90v2oxr
ಪುಟ:ಭಾರತ ದರ್ಶನ.djvu/೫೧೭
104
85409
321395
230337
2026-05-20T09:30:50Z
Shreelatha.Halemane
7642
/* Validated */
321395
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಭಾರತ ದರ್ಶನ|left=೫೧೨|right=}}
{{hwe|ಬೇಕು|ಬೆಳೆಯಬೇಕು.}} ವಿದೇಶದ ಪ್ರತಿಮೆಗಳನ್ನೇ ಸದಾ ಯೋಚಿಸುತ್ತಿದ್ದರೆ ಕಲೆ ಮತ್ತು ಸಾಹಿತ್ಯ ನಿರ್ಜೀವವಾಗುತ್ತವೆ. ಸಂಸ್ಕೃತಿಯು ಅತಿಗಾಂಭೀರದ ಸಣ್ಣ ಗುಂಪಿನ ಸಂಕುಚಿತ ಸ್ವತ್ತಾಗಿರುವ ದಿನಗಳು ಕಳೆದು ಹೋದವು; ಈಗ ಎಲ್ಲವನ್ನೂ ಸಾಮಾನ್ಯ ಜನತೆಯ ದೃಷ್ಟಿಯಿಂದ ನೋಡಬೇಕಾಗಿದೆ. ಅವರ ಸಂಸ್ಕೃತಿಯು ಹಿಂದಿನ ಸಂಸ್ಕೃತಿ ಪರಂಪರೆಯ ವಿಕಾಸವಾಗಿ ಅವರ ಹೊಸ ಆಶೋತ್ತರಗಳನ್ನು ಮತ್ತು ರಚನಾತ್ಮಕ ದೃಷ್ಟಿಯನ್ನು ಪ್ರತಿಬಿಂಬಿಸಬೇಕು.
{{gap}}ಎಮರ್ಸನ್ ಯೂರೋಪಿನ ಸಂಸ್ಕೃತಿಯನ್ನು ಬಹಳ ಅನುಕರಿಸಬೇಡಿ, ಅವಲಂಬಿಸಬೇಡಿ ಎಂದು ಅಮೆರಿಕನರಿಗೆ ಒಂದು ನೂರು ವರ್ಷಗಳ ಹಿಂದೆಯೇ ಎಚ್ಚರಿಸಿದನು. ಹೊಸ ಜನಾಂಗವಾದ್ದರಿಂದ ತಮ್ಮ ಹಿಂದಿನ ಯೂರೋಪಿಯನ್ ಜೀವನದ ಕಡೆ ಹೆಚ್ಚು ನೋಡದೆ ತಮ್ಮ ಹೊಸ ದೇಶದ ಸಮೃದ್ಧ ಜೀವನದಿಂದ ಪ್ರೇರಣೆ ಪಡೆಯಲೆಂದು ಅವನ ಇಷ್ಟ, “ಇತರ ದೇಶಗಳ ಜ್ಞಾನಕ್ಕೆ ನಾವು ದಾಸರಾಗಿ, ಅವರಿಂದ ಶಿಕ್ಷಣ ಪಡೆಯುವ ಕಾಲ ಮುಗಿಯಿತು. ನಮ್ಮ ಸುತ್ತಲೂ ಹೊಸಬಾಳಿಗೆ ಜನ್ಮದಾತರಾಗುವ ಪೀಳಿಗೆಗಳಿಗೆ ಪರದೇಶಗಳ ಬೆಳೆಯಿಂದ ಎರವಲು ತಂದ ಜೀರ್ಣವಸ್ತುಗಳಿಂದ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಪ್ರಶಂಸನೀಯ ಸಂಭವಗಳು ಕಾರಗಳು ತಾವೇ ಉದ್ಭವಿಸುತ್ತವೆ ; ತಮ್ಮ ಪ್ರಶಂಸೆ ತಾವೇ ಹಾಡುತ್ತವೆ. ಯಾವ ಸಂಪ್ರದಾಯ ಅಥವ ಅಧಿಕಾರ ಬಂಧವೂ ಇಲ್ಲದ ರಚನಾತ್ಮಕ ನಡೆ, ನುಡಿ ಮತ್ತು ಕಾರ್ಯಗಳಿವೆ. ಮನಸ್ಸಿನ ಸದ್ಭಾವನೆ ಸಮದೃಷ್ಟಿ ಮತ್ತು ಸ್ವಯಂಸ್ಫೂರ್ತಿಯೇ ಅವುಗಳ ಪ್ರೇರಕಗಳು” ಎಂದು ಹೇಳಿದ್ದಾನೆ. ಪುನಃ ತನ್ನ ಈ ಆತ್ಮಾವಲಂಬನ” ಎಂಬ ಪ್ರಬಂಧದಲ್ಲಿ “ಆತ್ಮ ಸಂಸ್ಕಾರವಿಲ್ಲದ ವಿದ್ಯಾವಂತ ಅಮೆರಿಕನರು ಇಟಲಿ ಇಂಗ್ಲೆಂಡ್, ಈಜಿಪ್ಟ್ ದೇಶಗಳನ್ನೆ ಆದರ್ಶ ಇಟ್ಟುಕೊಂಡುಮೂಢಭಕ್ತಿಯಿಂದ ಅಲ್ಲಿಗೆ ಪ್ರವಾಸ ಹೋಗುತ್ತಿದಾರೆ. ಇಂಗ್ಲೆಂಡ್, ಇಟಲಿ, ಈಜಿಪ್ಟ್ವ ದೇಶಗಳಿಗೆ ಗೌರವತ೦ದವರು ಭೂಮಿಯ ಅಕ್ಷಾಂಶದಂತೆ ತಾವು ಇದ್ದಲ್ಲಿಯೇ ಇದ್ದು ಆ ಕಾರ್ಯ ಸಾಧಿಸಿದರು. ಪುಂಸತ್ವದ ಸಮಯದಲ್ಲಿ ನಮ್ಮ ಸ್ಥಾನವೇ ನಮ್ಮ ಕರ್ತವ್ಯ ಎಂಬ ಭಾವನೆ ಬರುತ್ತದೆ. ಆತ್ಮ ಪ್ರವಾಸಿಯಲ್ಲ; ಜ್ಞಾನಿಯ ಆವಾಸ ಸದಾ ತನ್ನ ಆಶ್ರಮದಲ್ಲಿ, ತನ್ನ ಅವಶ್ಯಕತೆ ಮತ್ತು ಕರ್ತವ್ಯ ನಿರ್ವಹಣೆಗೆ ಮನೆಯಿಂದ ಹೊರಗೆ ಅಥವ ವಿದೇಶಗಳಿಗೆ ಹೋದವೇಳೆ ಸಹ ಆತನು ತನ್ನ ಮನೆಯಲ್ಲಿದ್ದಂತೆಯೇ ಇರುತ್ತಾನೆ ; ಮತ್ತು ಜ್ಞಾನ ಮತ್ತು ಗುಣದ ಪ್ರಚಾರಕನಾಗಿ ಹೋಗಿದ್ದೇನೆಂದು ತನ್ನ ಮುಖಭಾವದಿಂದಲೇ ಜನರನ್ನು ತಿದ್ದುತ್ತಾನೆ. ಓಡುಗಳ್ಳ ಅಥವ ಗುಲಾಮನಂತೆ ಹೋಗುವುದಿಲ್ಲ” ಎಂದಿದ್ದಾನೆ. "ತನ್ನ ಕಾಲಮೇಲೆ ತಾನು ನಿಂತು, ಹೆಚ್ಚಿನದೇನೂ ಕಲಿಯಲಾರೆನೆಂದು, ಕಲೆ, ಜ್ಞಾನಾರ್ಜನೆ ಅಥವ ವಿಶಾಲ ದೃಷ್ಟಿಯಿಂದ ಪ್ರಪಂಚ ಪರಿಚಯಕ್ಕಾಗಿ ಪ್ರಪಂಚ ಪರ್ಯಟನ ಮಾಡುವುದಾದರೆ ನನ್ನ ಅಡ್ಡಿ ಇಲ್ಲ. ಆದರೆ ತನಗೆ ಇಲ್ಲಿ ದೊರೆಯದ ಮಹಾಪಾಂಡಿತ್ಯ ಏನೊ ಸಂಪಾದಿಸುತ್ತೇನೆಂದು ಹೋದರೆ, ಅಥವ ಕೇವಲ ಸಂತೋಷಕ್ಕಾಗಿ ಹೋದರೆ ತನ್ನನ್ನೇ ತಾನು ಮರೆತು ಹಳೆಯದರ ಜೊತೆಗೆ ತಾನೂ ಮುದಿಯಾಗಿ ತನ್ನ ಯೌವನದೃಷ್ಟಿ ಸಹ ಕಳೆದುಕೊಳ್ಳುತ್ತಾನೆ. ಥೀಬಸ್ನಲ್ಲಿ ಪಾಳ್ಮೆರಾದಲ್ಲಿ ಹಳೆಯ ಪಾಳು ಗೋಡೆಗಳ ಮಧ್ಯೆ ಅವನ ಇಚ್ಛೆ ಮತ್ತು ಮನಸೂ ಹಳೆಯದಾಗುತ್ತವೆ. ಪಾಳಿಗೆ ಪಾಳನ್ನು ಸೇರಿಸುತ್ತಾನೆ.
{{gap}}“ಪ್ರವಾಸದ ಈ ನಮ್ಮ ದುರಾಸೆ ನಮ್ಮ ಮಾನಸಿಕ ಕಾರ್ಯರಂಗವನ್ನೇ ಪೂರ್ಣ ಮುತ್ತಿರುವ ಒಂದು ಅಂತರಂಗ ರೋಗದ ಚಿಹ್ನೆ. . . . ಎಲ್ಲದರಲ್ಲೂ ಅನುಕರಣ ... ನಮ್ಮ ಮನೆ ಕಟ್ಟುವುದು ವಿದೇಶೀಯರ ಅಭಿರುಚಿಯಂತೆ; ನಮ್ಮ ಪೆಟ್ಟಿಗೆಗಳಲ್ಲೆಲ್ಲ ವಿದೇಶೀ ತೋಡಿಗೆಗಳು ; ಅಭಿಪ್ರಾಯ, ಅಭಿರುಚಿ ಮತ್ತು ಜ್ಞಾನ ಎಲ್ಲವೂ ಯಾವುದೋ ದೂರದ ಹಳೆಯ ವಸ್ತುವಿನ ಅನುಕರಣ, ಎಲ್ಲೆಲ್ಲಿ ಕಲಾಭಿವೃದ್ಧಿ ಯಾಗಿದೆಯೋ ಅದೆಲ್ಲ ಆತ್ಮ ಪ್ರೇರಿತ ಕಲಾವಿದನ ಮಾದರಿ ಮೊದಲು ತನ್ನ ಮನೋಮಂದಿರದಲ್ಲಿ ಆತ ನಿರ್ಮಿಸ ಹೊರಟ ವಸ್ತುವಿಗೆ ಮತ್ತು ಅನುಸರಿಸಬೇಕಾದ ನಿಯಮಗಳಿಗೆ ಆತನ ಭಾವನೆಗಳೇ ಆದರ್ಶ ... ನಿನ್ನನ್ನು ನೀನು ಅರಿತುಕೊ; ಅನುಕರಣ ಬೇಡ, ಒಂದು ತುಂಬುಜೀವನದ ವ್ಯವಸಾಯದಿಂದ ಸಂಗ್ರಹಿಸಿದ ಶಕ್ತಿಯಿಂದ ಪ್ರತಿಗಳಿಗೆ ನೀನು ಒಂದೊಂದು ಉತ್ತಮ ಕೃತಿ ಪ್ರದಾನ ಮಾಡಬಹುದು? ಎಂದು ಹೇಳಿದಾನೆ.<noinclude></noinclude>
93e9iq52k8zkajq5l97bpuhteovk664
ಪುಟ:ಭಾರತ ದರ್ಶನ.djvu/೫೧೮
104
85410
321396
230333
2026-05-20T09:31:03Z
Shreelatha.Halemane
7642
/* Validated */
321396
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಪುನಃ ಅಹಮದ್ ನಗರದ ಕೋಟೆಯಲ್ಲಿ|left=|right=೫೧೩}}
{{gap}}ಭಾರತದಲ್ಲಿ ನಾವು ಹಿಂದಿನದನ್ನಾಗಲಿ, ದೂರದ ವಸ್ತುವನ್ನಾಗಲಿ ಅರಸಿಕೊಂಡು ಹೋಗಬೇಕಾದ್ದಿಲ್ಲ. ನಮ್ಮ ಕಣ್ಣೆದುರಿಗೇನೆ ಅಪಾರ ರಾಶಿ ಇದೆ. ನಾವು ಹೊರಗೆ ಹೋಗಿ ಅರಸುವುದಿದ್ದರೆ ಆಧುನಿಕತೆ ಅರಸಬೇಕು. ಆ ಅನ್ವೇಷಣೆ ಅತ್ಯವಶ್ಯಕ, ಏಕೆಂದರೆ ಏಕಾಂತ ಭಾವನೆ ಎಂದರೆ ಪರಾಙ್ಮುಖತೆ ಮತ್ತು ವಿನಾಶ. ಎಮರ್ಸನ್ ಕಾಲದ ಪ್ರಪಂಚ ಇಂದು ಬದಲಾಯಿಸಿದೆ; ಅಡ್ಡ ಗೋಡೆಗಳು ಕುಸಿದು ಬೀಳುತ್ತಿವೆ; ಜೀವನ ಹೆಚ್ಚು ಹೆಚ್ಚು ಅಂತರ ರಾಷ್ಟ್ರೀಯವಾಗುತ್ತಿದೆ. ಈ ಅಂತರ ರಾಷ್ಟ್ರೀಯ ರಂಗದಲ್ಲಿ ನಾವು ನಮ್ಮ ಪಾತ್ರ ವಹಿಸಬೇಕು; ಅದಕ್ಕಾಗಿ ಪ್ರವಾಸಮಾಡಿ, ಇತರರನ್ನು ಕಂಡು ಅವರಿಂದ ಕಲಿತು, ಅರ್ಥಮಾಡಿಕೊಳ್ಳಬೇಕು, ಆದರೆ ನಿಜವಾದ ಅಂತರ ರಾಷ್ಟ್ರೀಯತ್ವ ಬೇರು ಅಥವ ಲಂಗರಿಲ್ಲದ ಆಕಾಶ ಕುಸುಮವಲ್ಲ, ರಾಷ್ಟ್ರ ಸಂಸ್ಕೃತಿಗಳಿಂದ ಅದು ಬೆಳೆಯಬೇಕು; ಸ್ವಾತಂತ್ರ್ಯ, ಸಮಾನತೆ ಮತ್ತು ನಿಜವಾದ ಅಂತರ ರಾಷ್ಟ್ರೀಯತ್ವದ ಆಧಾರದಿಂದ ಮಾತ್ರ ಇಂದು ಅದು ಬೆಳೆಯಲು ಸಾಧ್ಯ. ಆದರೂ ಎಮರ್ಸನ್ನ ಎಚ್ಚರಿಕೆ ಅಂದು ಹೇಗೋ ಹಾಗೆ ಇಂದೂ ಸತ್ಯ. ಆತನು ತಿಳಿಸಿರುವ ದೃಷ್ಟಿಯಿಂದ ಮಾತ್ರ ನಮ್ಮ ಅನ್ವೇಷಣೆ ಫಲದಾಯಕವಾದೀತು; ಆಗಂತುಕರಾಗಿ ಹೋಗಲು ಸಾಧ್ಯವಿಲ್ಲ; ಆದರೆ ಸಾಮಾನ್ಯ ಅನ್ವೇಷಣೆಯಲ್ಲಿ ಸಮಾನರಾಗಿ, ಸಹೋದ್ಯೋಗಿಗಳೆಂದು ಸ್ವಾಗತವಿದ್ದರೆ ಮಾತ್ರ ಸಾಧ್ಯ. ಕೆಲವು ದೇಶಗಳಲ್ಲಿ ಮುಖ್ಯವಾಗಿ ಬ್ರಿಟಿಷ್ ಡೊಮಿನಿಯನ್ಗಳಲ್ಲಿ ನಮ್ಮ ಜನರಿಗೆ ಅಪಮಾನಗೊಳಿಸುವ ಯತ್ನ ನಡೆದಿದೆ. ನಮಗೆ ಆ ಡೊಮಿನಿಯನ್ ಜನ ಬೇಕಿಲ್ಲ, ಈಗ ನಾವು ಪರದಾಸ್ಯದಲ್ಲಿ ನರಳುತ್ತಿರಬಹುದು ; ಅದರ ಎಲ್ಲ ಗೋಳಿನ ಹೊರೆಯಿಂದ ಕುಗ್ಗಿರಬಹುದು, ಆದರೆ ಬಿಡುಗಡೆಯ ದಿನ ಬಹಳ ದೂರಿಲ್ಲ, ಯಾವ ದೇಶಕ್ಕೂ ಕಡಮೆ ಇಲ್ಲದ ದೇಶದ ನಾಗರಿಕರು ನಾವು; ನಮ್ಮ ಜನ್ಮಭೂಮಿ, ನಮ್ಮ ಜನ, ನಮ್ಮ ಸಂಸ್ಕೃತಿ ಮತ್ತು ನಮ್ಮ ಸಂಪ್ರದಾಯಗಳಲ್ಲಿ ಉಜ್ವಲ ಅಭಿಮಾನವಿದೆ, ಆದರೆ ಆ ಅಭಿಮಾನ ಭಾವಾವೇಶದ ಜೀರ್ಣವಸ್ತುವಾಗಬಾರದು ಮತ್ತು ಅದಕ್ಕೆ ಅಂಟಿಕೊಂಡು ಕುಳ್ಳಿರಬಾರದು. ಅದರಲ್ಲಿ ಏಕಾಂತ ಭಾವನೆಯಾಗಲಿ, ನಮಗಿಂತ ಭಿನ್ನ ರೀತಿಯದನ್ನು ಹೀಯಾಳಿಸುವ ಮನೋಬುದ್ದಿ ಯಾಗಲಿ ಇರಬಾರದು ನಮ್ಮ ಅನೇಕ ದೌರ್ಬಲ್ಯಗಳನ್ನೂ, ದೋಷಗಳನ್ನೂ ಮತ್ತು ಅವುಗಳ ನಿವಾರಣಾಸಕ್ತಿಯನ್ನೂ ಎಂದೂ ಮರೆಯಬಾರದು. ಮಾನವ ನಾಗರಿಕತೆ ಮತ್ತು ಪ್ರಗತಿಯಲ್ಲಿ ಇತರರೊಂದಿಗೆ ನಮ್ಮ ಸರಿಯಾದ ಸ್ಥಾನ ಪಡೆಯಬೇಕಾದರೆ ನಾವು ಬಹು ದೂರ ಮತ್ತು ಬಹಳ ಮುಂದೆ ಹೋಗಬೇಕು, ನಮಗಿರುವ ಕಾಲಅತ್ಯಲ್ಪ, ವಿಳಂಬಿಸುವಂತಿಲ್ಲ ; ಓಡಬೇಕು ; ಪ್ರಪಂಚದ ಗತಿಯೂ ನಾಗಾಲೋಟದಿಂದ ಸಾಗುತ್ತಿದೆ. ಇತರ ಸಂಸ್ಕೃತಿಗಳನ್ನು ಸ್ವಾಗತಿಸಿ ಜೀರ್ಣಿಸಿಕೊಳ್ಳುವುದು ಭಾರತದ ನೀತಿಯಾಗಿತ್ತು. ರಾಷ್ಟ್ರ ಸಂಸ್ಕೃತಿಗಳು ಮಾನವಕುಲದ ಅಂತರರಾಷ್ಟ್ರೀಯ ಸಂಸ್ಕೃತಿಯೊಂದಿಗೆ ಬೆರೆತು ನಾಳಿನ “ಒಂದು ಪ್ರಪಂಚ”ದ ಕಡೆ ನಾವು ಹೋಗುತ್ತಿರುವುದರಿಂದ ಆಗುಣದ ಅವಶ್ಯಕತೆ ಇಂದು ಇನ್ನೂ ಹೆಚ್ಚು ಇದೆ. ಆದ್ದರಿಂದ ವಿದ್ಯೆ, ಜ್ಞಾನ, ಸ್ನೇಹ ಮತ್ತು ಸಹಕಾರ ಎಲ್ಲೆಲ್ಲಿ ದೊರೆಯುತ್ತದೆಯೋ ಅಲ್ಲೆಲ್ಲಿ ಸೇರಿ ಸಾಮಾನ್ಯ ಕೆಲಸಗಳಲ್ಲಿ ಸಹಕರಿಸೋಣ ; ಆದರ ಯಾರ ಭಿಕ್ಷೆಯೂ, ಔದಾರ್ಯವೂ ನಮಗೆ ಬೇಕಿಲ್ಲ. ಈ ರೀತಿ ನಿಜವಾದ ಭಾರತೀಯರಾಗಿ, ಏಷ್ಯನರಾಗಿ ಜೊತೆಗೆ ಉತ್ತಮ ಅಂತರ ರಾಷ್ಟ್ರೀಯವಾದಿಗಳೂ ಪ್ರಪಂಚದ ನಾಗರಿಕರೂ ಆಗೋಣ.
{{gap}}ಭಾರತದಲ್ಲಿ ಮತ್ತು ಪ್ರಪಂಚದಲ್ಲಿ ನಮ್ಮ ತಲೆಮಾರಿನ ಕಥೆ ಎಂದರೆ ಗೋಳಿನ ಕಥೆ, ಇನ್ನೂ ಸ್ವಲ್ಪ ಕಾಲ ತಳ್ಳೇವು, ಆದರೆ ನಮ್ಮ ದಿನವೂ ಮುಗಿಯುತ್ತದೆ ; ಇತರರಿಗೆ ದಾರಿಕೊಡುತ್ತೇವೆ, ಅವರು ತಮ್ಮ ಬಾಳು ಬಾಳಿ ಮುಂದಿನ ಘಟ್ಟಕ್ಕೆ ತಮ್ಮ ಹೊರೆ ಸಾಗಿಸುತ್ತಾರೆ. ಕೊನೆಗೊಳ್ಳುತ್ತಿರುವ ಈ ಸಣ್ಣ ಅಂಕದಲ್ಲಿ ನಮ್ಮ ಪಾತ್ರ ನಾವು ಯಾವ ರೀತಿ ಅಭಿನಯಿಸಿದ್ದೇವೆ? ನಾನರಿಯೆ, ಅದನ್ನು ಬೇರೊಂದು ಯುಗದವರು ನಿರ್ಣಯಿಸುತ್ತಾರೆ. ಜಯಾಪಜಯ ಅಳೆಯಲು ನಮಗೆ ಇರುವ ಮಾಪನ ಯಾವುದು ? ಅದೂ ನಾನರಿಯೆ. ಜೀವನವು ನಮ್ಮನ್ನು ಕಠಿಣ ಕಂಡಿದೆ ಎಂದು ನಾವು ದೂರುವಂತಿಲ್ಲ ; ಏಕೆಂದರೆ ನಮ್ಮ ಆತ್ಮನಿರ್ಣಯದ ದಾರಿಯೇ ಅದು. ಪ್ರಾಯಶಃ ನಮ್ಮ ಮೇಲೆ ಅಷ್ಟು ಕೌರವನ್ನೂ ತೋರಿಸಿಲ್ಲ. ಸಾವಿಗೆ ಅಂಜಿ ಜೀವನ ನಡೆಸದೆ, ಸಾವಿನ ಅಂಚಿನಲ್ಲಿ ಇರುವವರು ಮಾತ್ರ ಜೀವನದ ಸವಿ ಬಲ್ಲರು, ನಮ್ಮ ತಪ್ಪುಗಳು ಏನೇ ಇರಲಿ ಅಲ್ಪ ಮನಸ್ಸು, ನಾಚಿಕೆ ಮತ್ತು ಹೇಡಿತನ ತೋರಿಸಿಲ್ಲ. ವ್ಯಕ್ತಿಶಃ ನಮಗೆ<noinclude></noinclude>
0x1mpdn2sza1lxfaz90pxep0tkqfy3y
ಪುಟ:ಕ್ರಾಂತಿ ಕಲ್ಯಾಣ.pdf/೪೩೯
104
86348
321014
203667
2026-05-20T03:33:00Z
Shreesha Sharma
7840
/* Proofread */
321014
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|left=೪೨೬|center=|right=ಕ್ರಾಂತಿ ಕಲ್ಯಾಣ}}
ಸಮೃದ್ಧಿಗಳು ಹೆಚ್ಚಿದವು. ಪ್ರಜೆಗಳು ಸುರಕ್ಷಿತರಾದರು. ಧಾರ್ಮಿಕ ಸ್ವಾತಂತ್ರ್ಯ ದೇಶದಲ್ಲಿ ಪ್ರತಿಷ್ಠಿತವಾಯಿತು. ಅವರ ಅನುಮತಿ ಪಡೆದು ಸ್ಥಾಪಿತವಾದ ಮಹಮನೆ ಅನುಭವಮಂಟಪ ಪ್ರತಿಷ್ಠಾನಗಳು ಅತ್ಯಲ್ಪ ಕಾಲದಲ್ಲಿ ಪ್ರಭಾವಶಾಲಿಯಾಗಿ ಬೆಳೆದು, ನಾವು ಉದ್ದೇಶಿಸಿದ್ದ ಧಾರ್ಮಿಕ, ಸಾಮಾಜಿಕ ಸುಧಾರಣೆಗಳು ಕಾರ್ಯಗತವಾದವು. ಇದಕ್ಕಾಗಿ ಶರಣರು ಯಾವಾಗಲೂ ಬಿಜ್ಜಳರಾಯರಿಗೆ ಕೃತಜ್ಞರಾಗಿದ್ದಾರೆ.
{{gap}}ಚಾಲುಕ್ಯ ರಾಜ್ಯದ ಎಲ್ಲ ಕಡೆ ಭೀತಿ ಆತಂಕಗಳನ್ನು ಉಂಟುಮಾಡುವ ಈ ಘೋರಕೃತ್ಯ ಯಾವ ರೀತಿ ನಡೆಯಿತು, ಅದರ ಕಾರಣಗಳೇನು, ಹಂತಕರಾರು, ಎಂಬ ವಿವರಗಳೊಂದೂ ಈಗ ನಮಗೆ ತಿಳಿಯದು. ಅವುಗಳೇನೇ ಇರಲಿ, ಚಾಲುಕ್ಯ ಇತಿಹಾಸದಲ್ಲಿ ಇದು ಅತ್ಯಂತ ವಿಷಾದಕರ ದುರ್ಘಟನೆ ಎಂಬುದು ನಿರ್ವಿವಾದ. ಮುಂದೆ ಇದರಿಂದ ಆಗಬಹುದಾದ ದುಷ್ಪರಿಣಾಮಗಳೇನು ಎಂಬುದನ್ನು ಈಗಲೇ ಹೇಳುವುದು ಯಾರಿಗೂ ಸಾಧ್ಯವಿಲ್ಲ. ಚಾಲುಕ್ಯ ರಾಜ್ಯದ ಪುನಃಪ್ರತಿಷ್ಠೆಗಾಗಿ ಪ್ರಯತ್ನಗಳು ನಡೆಯಬಹುದು. ಸರ್ವಾಧಿಕಾರಕ್ಕಾಗಿ ಸ್ಪರ್ಧೆ ಹೋರಾಟಗಳು ಮೊದಲಾಗಬಹುದು. ಇವೆರಡೂ ಅಸಂಭವವಲ್ಲ. ಮುಂದೆ ಒದಗಬಹುದಾದ ಅಶಾಂತ ಪರಿಸ್ಥಿತಿಯಿಂದ ಸಾಮಾನ್ಯ ಪ್ರಜೆಗಳು ಕಷ್ಟಕ್ಕೀಡಾಗುವರು. ಸುವ್ಯವಸ್ಥಿತವಾಗಿ ನಡೆಯುತ್ತಿದ್ದ ನಮ್ಮ ಬದುಕು ದುರ್ಭರವಾಗುವುದು.
{{gap}}“ಸರ್ವಾಧಿಕಾರಿ ಬಿಜ್ಜಳರಾಯರು ಮತ್ತು ಅವರ ಮಂತ್ರಿಮಂಡಲ, ಕಳೆದ ಕೆಲವು ತಿಂಗಳಿಂದ ತಳೆದಿದ್ದ ವಿಚಿತ್ರ ಮನೋಭಾವವೇನೆಂಬುದು ನಿಮಗೆಲ್ಲ ತಿಳಿದಿದೆ. ಅದರ ಫಲವಾಗಿ ಹರಳಯ್ಯ ಮಧುವರಸ ಶೀಲವಂತರ ಮೇಲೆ ವರ್ಣಸಂಕರದ ಮಿಥ್ಯಾಪವಾದ ಹೊರಿಸಲ್ಪಟ್ಟಿತು. ಧರ್ಮಾಧಿಕರಣದಲ್ಲಿ ವಿಚಾರಣೆ ನಡೆದು ಆ ಮೂವರು ಶರಣರು ಶೂಲಕ್ಕೇರಿಸಲ್ಪಟ್ಟರು. ಕಲ್ಯಾಣದ ಶೈವಮಠಗಳನ್ನು ನಾಶಮಾಡಿ ಶರಣಧರ್ಮವನ್ನು ನಿರ್ಮೂಲಗೊಳಿಸಲು ಅಧಿಕಾರಿವಲಯಗಳಲ್ಲಿ ರಹಸ್ಯ ಮಂತ್ರಾಲೋಚನೆಗಳು ನಡೆದವು. ಘಟನೆಗಳಿಂದ ಭಯಭೀತರಾದ ಶರಣರು ಸಹ್ಯಾದ್ರಿಯ ವನಪ್ರದೇಶಗಳಿಗೆ ವಲಸೆ ಹೋಗಲು ನಿರ್ಧರಿಸಿಕೊಂಡರು. ಮಹಮನೆಯ ಶರಣರು ಈ ವಿಚಾರದಲ್ಲಿ ನನ್ನ ಸಲಹೆ ಕೇಳಿದಾಗ ನಾನು, 'ಅನ್ನದ ಹಂಗಿಗಾಗಿ ಬದುಕುವುದಕ್ಕಿಂತ ಸಮಯಾಚಾರಕ್ಕಾಗಿ ಪ್ರಾಣಗಳನ್ನು ತ್ಯಜಿಸಲು ನಾವು ಸಿದ್ದರಾಗಬೇಕು. ಮರಣವೇ ಮಹಾನವಮಿ,' ಎಂದು ಉತ್ತರ ಕಳುಹಿಸಿದೆ. ಆ ಸಂದರ್ಭದಲ್ಲಿ ನಾನು ಕಳುಹಿಸಿದ ವಚನವಿದು :
{{gap}}“ಜೋಳವಾಳಿನವ ನಾನಲ್ಲ. ವೇಳೆಯಾಳಿನವ ನಾನಯ್ಯ !
{{gap}}ಹಾಳುಗೆಟ್ಟೋಡುವ ಆಳು ನಾನಲ್ಲಯ್ಯ.<noinclude></noinclude>
85xut81btfxjv2xwkvsrh84dp42ibeg
321020
321014
2026-05-20T03:37:01Z
Shreelatha.Halemane
7642
/* Validated */
321020
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೪೨೬|center=|right=ಕ್ರಾಂತಿ ಕಲ್ಯಾಣ}}
ಸಮೃದ್ಧಿಗಳು ಹೆಚ್ಚಿದವು. ಪ್ರಜೆಗಳು ಸುರಕ್ಷಿತರಾದರು. ಧಾರ್ಮಿಕ ಸ್ವಾತಂತ್ರ್ಯ ದೇಶದಲ್ಲಿ ಪ್ರತಿಷ್ಠಿತವಾಯಿತು. ಅವರ ಅನುಮತಿ ಪಡೆದು ಸ್ಥಾಪಿತವಾದ ಮಹಮನೆ ಅನುಭವಮಂಟಪ ಪ್ರತಿಷ್ಠಾನಗಳು ಅತ್ಯಲ್ಪ ಕಾಲದಲ್ಲಿ ಪ್ರಭಾವಶಾಲಿಯಾಗಿ ಬೆಳೆದು, ನಾವು ಉದ್ದೇಶಿಸಿದ್ದ ಧಾರ್ಮಿಕ, ಸಾಮಾಜಿಕ ಸುಧಾರಣೆಗಳು ಕಾರ್ಯಗತವಾದವು. ಇದಕ್ಕಾಗಿ ಶರಣರು ಯಾವಾಗಲೂ ಬಿಜ್ಜಳರಾಯರಿಗೆ ಕೃತಜ್ಞರಾಗಿದ್ದಾರೆ.
{{gap}}ಚಾಲುಕ್ಯ ರಾಜ್ಯದ ಎಲ್ಲ ಕಡೆ ಭೀತಿ ಆತಂಕಗಳನ್ನು ಉಂಟುಮಾಡುವ ಈ ಘೋರಕೃತ್ಯ ಯಾವ ರೀತಿ ನಡೆಯಿತು, ಅದರ ಕಾರಣಗಳೇನು, ಹಂತಕರಾರು, ಎಂಬ ವಿವರಗಳೊಂದೂ ಈಗ ನಮಗೆ ತಿಳಿಯದು. ಅವುಗಳೇನೇ ಇರಲಿ, ಚಾಲುಕ್ಯ ಇತಿಹಾಸದಲ್ಲಿ ಇದು ಅತ್ಯಂತ ವಿಷಾದಕರ ದುರ್ಘಟನೆ ಎಂಬುದು ನಿರ್ವಿವಾದ. ಮುಂದೆ ಇದರಿಂದ ಆಗಬಹುದಾದ ದುಷ್ಪರಿಣಾಮಗಳೇನು ಎಂಬುದನ್ನು ಈಗಲೇ ಹೇಳುವುದು ಯಾರಿಗೂ ಸಾಧ್ಯವಿಲ್ಲ. ಚಾಲುಕ್ಯ ರಾಜ್ಯದ ಪುನಃಪ್ರತಿಷ್ಠೆಗಾಗಿ ಪ್ರಯತ್ನಗಳು ನಡೆಯಬಹುದು. ಸರ್ವಾಧಿಕಾರಕ್ಕಾಗಿ ಸ್ಪರ್ಧೆ ಹೋರಾಟಗಳು ಮೊದಲಾಗಬಹುದು. ಇವೆರಡೂ ಅಸಂಭವವಲ್ಲ. ಮುಂದೆ ಒದಗಬಹುದಾದ ಅಶಾಂತ ಪರಿಸ್ಥಿತಿಯಿಂದ ಸಾಮಾನ್ಯ ಪ್ರಜೆಗಳು ಕಷ್ಟಕ್ಕೀಡಾಗುವರು. ಸುವ್ಯವಸ್ಥಿತವಾಗಿ ನಡೆಯುತ್ತಿದ್ದ ನಮ್ಮ ಬದುಕು ದುರ್ಭರವಾಗುವುದು.
{{gap}}“ಸರ್ವಾಧಿಕಾರಿ ಬಿಜ್ಜಳರಾಯರು ಮತ್ತು ಅವರ ಮಂತ್ರಿಮಂಡಲ, ಕಳೆದ ಕೆಲವು ತಿಂಗಳಿಂದ ತಳೆದಿದ್ದ ವಿಚಿತ್ರ ಮನೋಭಾವವೇನೆಂಬುದು ನಿಮಗೆಲ್ಲ ತಿಳಿದಿದೆ. ಅದರ ಫಲವಾಗಿ ಹರಳಯ್ಯ ಮಧುವರಸ ಶೀಲವಂತರ ಮೇಲೆ ವರ್ಣಸಂಕರದ ಮಿಥ್ಯಾಪವಾದ ಹೊರಿಸಲ್ಪಟ್ಟಿತು. ಧರ್ಮಾಧಿಕರಣದಲ್ಲಿ ವಿಚಾರಣೆ ನಡೆದು ಆ ಮೂವರು ಶರಣರು ಶೂಲಕ್ಕೇರಿಸಲ್ಪಟ್ಟರು. ಕಲ್ಯಾಣದ ಶೈವಮಠಗಳನ್ನು ನಾಶಮಾಡಿ ಶರಣಧರ್ಮವನ್ನು ನಿರ್ಮೂಲಗೊಳಿಸಲು ಅಧಿಕಾರಿವಲಯಗಳಲ್ಲಿ ರಹಸ್ಯ ಮಂತ್ರಾಲೋಚನೆಗಳು ನಡೆದವು. ಘಟನೆಗಳಿಂದ ಭಯಭೀತರಾದ ಶರಣರು ಸಹ್ಯಾದ್ರಿಯ ವನಪ್ರದೇಶಗಳಿಗೆ ವಲಸೆ ಹೋಗಲು ನಿರ್ಧರಿಸಿಕೊಂಡರು. ಮಹಮನೆಯ ಶರಣರು ಈ ವಿಚಾರದಲ್ಲಿ ನನ್ನ ಸಲಹೆ ಕೇಳಿದಾಗ ನಾನು, 'ಅನ್ನದ ಹಂಗಿಗಾಗಿ ಬದುಕುವುದಕ್ಕಿಂತ ಸಮಯಾಚಾರಕ್ಕಾಗಿ ಪ್ರಾಣಗಳನ್ನು ತ್ಯಜಿಸಲು ನಾವು ಸಿದ್ದರಾಗಬೇಕು. ಮರಣವೇ ಮಹಾನವಮಿ,' ಎಂದು ಉತ್ತರ ಕಳುಹಿಸಿದೆ. ಆ ಸಂದರ್ಭದಲ್ಲಿ ನಾನು ಕಳುಹಿಸಿದ ವಚನವಿದು :
{{gap}}“ಜೋಳವಾಳಿನವ ನಾನಲ್ಲ. ವೇಳೆಯಾಳಿನವ ನಾನಯ್ಯ !
{{gap}}ಹಾಳುಗೆಟ್ಟೋಡುವ ಆಳು ನಾನಲ್ಲಯ್ಯ.<noinclude></noinclude>
q7lma8vql7suzd0drx7b6r7qt9s4xhr
ಪುಟ:ಕ್ರಾಂತಿ ಕಲ್ಯಾಣ.pdf/೪೩೭
104
86350
321012
203669
2026-05-20T03:30:13Z
Shreesha Sharma
7840
/* Proofread */
321012
proofread-page
text/x-wiki
<noinclude><pagequality level="3" user="Shreesha Sharma" /></noinclude>________________
{{rh|left=೪೨೪|center=|right=ಕ್ರಾಂತಿ ಕಲ್ಯಾಣ}}
ಉಲ್ಲೇಖನಗಳನ್ನು ನೆನಪಿಸಿಕೊಳ್ಳುವುದರಲ್ಲಿ ಹೆಚ್ಚು ಹೊತ್ತು ಹಿಡಿಯಲು ಮೊದಲಾಗಿ ಪ್ರವಚನ ಕುಂಟುತ್ತ ಕೊಂಚ ಕಾಲ ನಡೆದ ಮೇಲೆ, ಗುರುಕುಲದ ಪ್ರಾಧ್ಯಾಪಕನು ಮುಗಿಸಲು ಸಲಹೆಯಿತ್ತನು.
{{gap}}“ಕಲ್ಯಾಣದ ಸುದ್ದಿ ಕೇಳಿ ಅಣ್ಣನವರು ವಿಚಲಿತರಾಗಿದ್ದಾರೆ. ಪ್ರವಚನ ಮುಗಿಸುವ ಸೂಚನೆಯನ್ನು ನಾವು ಅನುಮೋದಿಸುತ್ತೇವೆ,” ಎಂದು ಸಮೀಪದ ಅಗ್ರಹಾರಗಳಿಂದ ಬಂದಿದ್ದ ಶಿಷ್ಯರು ಹೇಳಿದರು.
{{gap}}ಸಲಹೆ ಬಸವಣ್ಣನವರಿಗೆ ಸೂಕ್ತವಾಗಿ ಕಂಡಿತು. ಪ್ರವಚನದ ವಿಚಾರವನ್ನು ಅಷ್ಟಕ್ಕೆ ನಿಲ್ಲಿಸಿ, ಸಭೆಯಲ್ಲಿದ್ದವರಿಗೆ ಕೈಮುಗಿದು ಅವರು ಹೇಳಿದರು :
{{gap}}“ಕಲ್ಯಾಣದಿಂದ ಬಂದ ದುರ್ವಾರ್ತೆ ಬರಸಿಡಿಲಂತೆ ನನ್ನನ್ನು ಸ್ತಂಭಿತಗೊಳಿಸಿದೆ. ಚಾಲುಕ್ಯರಾಜ್ಯದ ಸರ್ವಾಧಿಕಾರಿ ಮಹಾಮಂಡಲೇಶ್ವರ ಬಿಜ್ಜಳರಾಯರು ಅಪರಿಚಿತ ಕೊಲೆಗಡುಕರಿಂದ ಹತರಾದರು. ಶರಣರು ಕಲ್ಯಾಣವನ್ನು ಬಿಟ್ಟು ಸಹ್ಯಾದ್ರಿಯ ಅರಣ್ಯ ಪ್ರದೇಶಕ್ಕೆ ವಲಸೆ ಹೋದರು. ಅಪ್ಪಣ್ಣನಿಂದ ಈ ದುರ್ವಾರ್ತೆಗಳನ್ನು ಕೇಳಿದಾಗ ನನಗಾದ ಅಪಾರ ದುಃಖವನ್ನು ನಿಮ್ಮ ಮುಂದಿಡುವುದು ಈಗ ನನ್ನ ಉದ್ದೇಶವಲ್ಲ. ಈ ವಿಷಾದಕರ ದುಃಖಪೂರ್ಣ ಸಂದರ್ಭದಲ್ಲಿ ಕೊಲೆಗಡುಕರ ಖಡ್ಗಕ್ಕೆ ಬಲಿಯಾದ ಸರ್ವಾಧಿಕಾರಿ ಬಿಜ್ಜಳರಾಯರ ಗುಣಗಾನ ಮಾಡಿ, ಅವರ ಆತ್ಮಕ್ಕೆ ಕೂಡಲಸಂಗಮ ದೇವನು ಶಾಂತಿ ಸಮಾಧಾನಗಳನ್ನು ಕರುಣಿಸಲೆಂದು ಹಾರೈಸುವುದು ನನ್ನ ಕರ್ತವ್ಯವಾಗಿದೆ,” – ಎಂದು ಹೇಳಿ ಬಸವಣ್ಣನವರು ಕೆಲವು ಕ್ಷಣಗಳು ಕಣ್ಣುಗಳನ್ನು ಮುಚ್ಚಿ ಧ್ಯಾನಾಸಕ್ತರಂತೆ ಕುಳಿತರು. ಬಸವಣ್ಣನವರ ದುಃಖದಲ್ಲಿ ತಾವೂ ಭಾಗಿಗಳಾದಂತೆ ಸಭೆಯಲ್ಲಿದ್ದವರೆಲ್ಲ ಮೌನವಾಗಿದ್ದರು. ಅನೇಕರ ಕಣ್ಣುಗಳಲ್ಲಿ ಕಂಬನಿ ಕೂಡಿದವು. -
{{gap}}ಬಸವಣ್ಣನವರು ಕರೆದು ಮಾತು ಮುಂದುವರಿಸಲು ಸಿದ್ದರಾದಾಗ ಎಲ್ಲರೂ ವಿಸ್ಮಯಾತುರಗಳಿಂದ ಅವರನ್ನೇ ನೋಡುತ್ತಿದ್ದರು. ಬಸವಣ್ಣನವರು ಹೇಳಿದರು :
{{gap}}“ಈ ವಿಷಾದಕರ ದುರ್ಘಟನೆಗಳ ವಿಚಾರ ಪ್ರಸ್ತಾಪಿಸುವ ಮೊದಲು ಅವುಗಳಿಂದ ವೈಯಕ್ತಿಕವಾಗಿ ನನ್ನ ಮೇಲಾದ ಪರಿಣಾಮವನ್ನು ಕುರಿತು ಬಿಚ್ಚು ಮನದಿಂದ ನಾಲ್ಕು ಮಾತುಗಳನ್ನು ಆಡುವುದು ಅಗತ್ಯವೆಂದು ಭಾವಿಸುತ್ತೇನೆ.
{{gap}}“ಅನಂತಂ ಬತ ! ಮೇವಿತಂ ಯಸ್ಯಮೇನಾಸ್ತಿ ಕಿಂಚನ |
{{gap}}ಮಿಥಿಲಾಯಾಂ ಪ್ರದೀಪ್ತಾಯಾಂ ನ ಮೇ ಕಿಂಚಿತ್ ಪದಚ್ಯತೇ||”
{{gap}}ಎಂದು ಹೇಳಿದ ವಾಗದ್ವಿತಿಯಂತಾಗಿದ್ದೇನೆ ಈಗ ನಾನು. 'ನನ್ನ ಸಂಪತ್ತು<noinclude></noinclude>
28s01eraras33oadz8ozm6cs2wlclfx
321018
321012
2026-05-20T03:36:38Z
Shreelatha.Halemane
7642
/* Validated */
321018
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|left=೪೨೪|center=|right=ಕ್ರಾಂತಿ ಕಲ್ಯಾಣ}}
ಉಲ್ಲೇಖನಗಳನ್ನು ನೆನಪಿಸಿಕೊಳ್ಳುವುದರಲ್ಲಿ ಹೆಚ್ಚು ಹೊತ್ತು ಹಿಡಿಯಲು ಮೊದಲಾಗಿ ಪ್ರವಚನ ಕುಂಟುತ್ತ ಕೊಂಚ ಕಾಲ ನಡೆದ ಮೇಲೆ, ಗುರುಕುಲದ ಪ್ರಾಧ್ಯಾಪಕನು ಮುಗಿಸಲು ಸಲಹೆಯಿತ್ತನು.
{{gap}}“ಕಲ್ಯಾಣದ ಸುದ್ದಿ ಕೇಳಿ ಅಣ್ಣನವರು ವಿಚಲಿತರಾಗಿದ್ದಾರೆ. ಪ್ರವಚನ ಮುಗಿಸುವ ಸೂಚನೆಯನ್ನು ನಾವು ಅನುಮೋದಿಸುತ್ತೇವೆ,” ಎಂದು ಸಮೀಪದ ಅಗ್ರಹಾರಗಳಿಂದ ಬಂದಿದ್ದ ಶಿಷ್ಯರು ಹೇಳಿದರು.
{{gap}}ಸಲಹೆ ಬಸವಣ್ಣನವರಿಗೆ ಸೂಕ್ತವಾಗಿ ಕಂಡಿತು. ಪ್ರವಚನದ ವಿಚಾರವನ್ನು ಅಷ್ಟಕ್ಕೆ ನಿಲ್ಲಿಸಿ, ಸಭೆಯಲ್ಲಿದ್ದವರಿಗೆ ಕೈಮುಗಿದು ಅವರು ಹೇಳಿದರು :
{{gap}}“ಕಲ್ಯಾಣದಿಂದ ಬಂದ ದುರ್ವಾರ್ತೆ ಬರಸಿಡಿಲಂತೆ ನನ್ನನ್ನು ಸ್ತಂಭಿತಗೊಳಿಸಿದೆ. ಚಾಲುಕ್ಯರಾಜ್ಯದ ಸರ್ವಾಧಿಕಾರಿ ಮಹಾಮಂಡಲೇಶ್ವರ ಬಿಜ್ಜಳರಾಯರು ಅಪರಿಚಿತ ಕೊಲೆಗಡುಕರಿಂದ ಹತರಾದರು. ಶರಣರು ಕಲ್ಯಾಣವನ್ನು ಬಿಟ್ಟು ಸಹ್ಯಾದ್ರಿಯ ಅರಣ್ಯ ಪ್ರದೇಶಕ್ಕೆ ವಲಸೆ ಹೋದರು. ಅಪ್ಪಣ್ಣನಿಂದ ಈ ದುರ್ವಾರ್ತೆಗಳನ್ನು ಕೇಳಿದಾಗ ನನಗಾದ ಅಪಾರ ದುಃಖವನ್ನು ನಿಮ್ಮ ಮುಂದಿಡುವುದು ಈಗ ನನ್ನ ಉದ್ದೇಶವಲ್ಲ. ಈ ವಿಷಾದಕರ ದುಃಖಪೂರ್ಣ ಸಂದರ್ಭದಲ್ಲಿ ಕೊಲೆಗಡುಕರ ಖಡ್ಗಕ್ಕೆ ಬಲಿಯಾದ ಸರ್ವಾಧಿಕಾರಿ ಬಿಜ್ಜಳರಾಯರ ಗುಣಗಾನ ಮಾಡಿ, ಅವರ ಆತ್ಮಕ್ಕೆ ಕೂಡಲಸಂಗಮ ದೇವನು ಶಾಂತಿ ಸಮಾಧಾನಗಳನ್ನು ಕರುಣಿಸಲೆಂದು ಹಾರೈಸುವುದು ನನ್ನ ಕರ್ತವ್ಯವಾಗಿದೆ,” – ಎಂದು ಹೇಳಿ ಬಸವಣ್ಣನವರು ಕೆಲವು ಕ್ಷಣಗಳು ಕಣ್ಣುಗಳನ್ನು ಮುಚ್ಚಿ ಧ್ಯಾನಾಸಕ್ತರಂತೆ ಕುಳಿತರು. ಬಸವಣ್ಣನವರ ದುಃಖದಲ್ಲಿ ತಾವೂ ಭಾಗಿಗಳಾದಂತೆ ಸಭೆಯಲ್ಲಿದ್ದವರೆಲ್ಲ ಮೌನವಾಗಿದ್ದರು. ಅನೇಕರ ಕಣ್ಣುಗಳಲ್ಲಿ ಕಂಬನಿ ಕೂಡಿದವು. -
{{gap}}ಬಸವಣ್ಣನವರು ಕರೆದು ಮಾತು ಮುಂದುವರಿಸಲು ಸಿದ್ದರಾದಾಗ ಎಲ್ಲರೂ ವಿಸ್ಮಯಾತುರಗಳಿಂದ ಅವರನ್ನೇ ನೋಡುತ್ತಿದ್ದರು. ಬಸವಣ್ಣನವರು ಹೇಳಿದರು :
{{gap}}“ಈ ವಿಷಾದಕರ ದುರ್ಘಟನೆಗಳ ವಿಚಾರ ಪ್ರಸ್ತಾಪಿಸುವ ಮೊದಲು ಅವುಗಳಿಂದ ವೈಯಕ್ತಿಕವಾಗಿ ನನ್ನ ಮೇಲಾದ ಪರಿಣಾಮವನ್ನು ಕುರಿತು ಬಿಚ್ಚು ಮನದಿಂದ ನಾಲ್ಕು ಮಾತುಗಳನ್ನು ಆಡುವುದು ಅಗತ್ಯವೆಂದು ಭಾವಿಸುತ್ತೇನೆ.
{{gap}}“ಅನಂತಂ ಬತ ! ಮೇವಿತಂ ಯಸ್ಯಮೇನಾಸ್ತಿ ಕಿಂಚನ |
{{gap}}ಮಿಥಿಲಾಯಾಂ ಪ್ರದೀಪ್ತಾಯಾಂ ನ ಮೇ ಕಿಂಚಿತ್ ಪದಚ್ಯತೇ||”
{{gap}}ಎಂದು ಹೇಳಿದ ವಾಗದ್ವಿತಿಯಂತಾಗಿದ್ದೇನೆ ಈಗ ನಾನು. 'ನನ್ನ ಸಂಪತ್ತು<noinclude></noinclude>
hvju4nobkph31syf80si6qppocguvp6
ಪುಟ:ಕ್ರಾಂತಿ ಕಲ್ಯಾಣ.pdf/೪೨೫
104
86355
321000
203675
2026-05-20T03:17:45Z
Shreelatha.Halemane
7642
/* Proofread */
321000
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|left=೪೧೨|center=|right=ಕ್ರಾಂತಿ ಕಲ್ಯಾಣ}}
ಕಮಂಡಲು, ಯೋಗದಂಡಗಳನ್ನು ಕೆಳಗಿಟ್ಟು ಗಡ್ಡ ಜಟೆಗಳನ್ನು ಕಿತ್ತೊಗೆದು, “ಈಗ ನೀವು ನನ್ನನ್ನು ಗುರುತಿಸಬಲ್ಲಿರಿ, ಗುರುದೇವ.” ಎಂದು ಕೈ ಜೋಡಿಸಿ ಎದುರಿಗೆ ನಿಂತನು.
{{gap}}“ನೀನು ಬಿಜ್ಜಳನ ಸಹೋದರ ಕರ್ಣದೇವನಲ್ಲವೇ? ನಮ್ಮನ್ನು ನೋಡಲು ಇಷ್ಟೆಲ್ಲ ವಂಚನೆಯೇಕೆ ? ಬಾ, ಕುಳಿತುಕೊ,” ಎಂದರು ಸಿದ್ದರಾಮೇಶ್ವರರು.
{{gap}}ನಮ್ರ ಶಿಷ್ಯನಂತೆ ಕರ್ಣದೇವನು ಸಿದ್ದರಾಮೇಶ್ವರರ ಪಾದಗಳಿಗೆರಗಿ ಎದುರಿಗೆ ಕುಳಿತು, “ಮಾಧವ ನಾಯಕನ ಕಾವಲು ಭಟರಿಗೆ ತಿಳಿಯದಂತೆ ಬರಲು ನಾನು ಈ ವೇಷ ಧರಿಸಬೇಕಾಯಿತು. ನಗರದಲ್ಲಿ ಈಗ ಅವನ ನಿರಂಕುಶಾಧಿಕಾರ ನಡೆಯುತ್ತಿದೆ. ಮಹಾದ್ವಾರಗಳನ್ನೆಲ್ಲ ಬಂಧಿಸಿ, ತನ್ನ ವಿಶೇಷಾನುಮತಿಯಿಲ್ಲದೆ ಯಾರೂ ಹೊರಗೆ ಹೋಗಕೂಡದೆಂದು ಆಜ್ಞೆ ಮಾಡಿದ್ದಾನೆ,” ಎಂದನು.
{{gap}}“ಈ ಹಗಲು ವೇಷದ ವಸ್ತುಗಳು ನಿನಗೆಲ್ಲಿ ದೊರಕಿದುವು?”
{{gap}}-ಸಿದ್ದರಾಮೇಶ್ವರರು ನಗುತ್ತಾ ಪ್ರಶ್ನಿಸಿದರು.
{{gap}}“ರಾಜಗೃಹಕ್ಕೆ ಧರ್ಮೋಪದೇಶಕನಾಗಿ ಬಂದ ಜಂಗಮನೊಬ್ಬನು ಇದನ್ನು ಬಿಟ್ಟು ಹೋಗಿದ್ದನು, ಅಣ್ಣನವರೆ,” ಕರ್ಣದೇವ ನಗುದನಿಯಿಂದ ಉತ್ತರಿಸಿದನು. “ಆ ನಿರ್ಮಾಲ್ಯ ನನಗೆ ಸಹಾಯಕವಾಯಿತು. ಮಹಮನೆಯ ಶರಣರೊಡನೆ ವಲಸೆ ಹೋಗುವುದಾಗಿ ಹೇಳಿ ಕಾವಲು ಭಟನೊಬ್ಬನ ಸಹಾಯದಿಂದ ಹೊರಗೆ ಬಂದೆ.”
{{gap}}“ನಾವು ಬಂದ ವಿಚಾರ ನಿಮಗೆ ತಿಳಿದದ್ದು ಹೇಗೆ?”
{{gap}}"ರಾಜಗೃಹಕ್ಕೆ ಕಾಯಿಪಲ್ಲೆಗಳನ್ನು ತಂದುಕೊಡುವ ಗ್ರಾಮವಾಸಿಯಿಂದ. ಬಾಂಧವರ ಓಣಿಯಲ್ಲಿ ನೀವು ಮೋಳಿಗೆಯ ಮಾರಯ್ಯನವರ ಸಂಗಡ ಮಾತಾಡುತ್ತಿದ್ದುದನ್ನು ಅವನು ಕಂಡನಂತೆ. ನಗರದಿಂದ ಹೊರಬಿದ್ದ ಕೂಡಲೆ ನಾನು ಅಲ್ಲಿಗೆ ಹೋದೆ. ಆಂಜನೇಯ ನದಿಯಾಚಿನ ಶರಣ ಶಿಬಿರಕ್ಕೆ ನೀವು ಹೋಗಿರುವುದಾಗಿ ಕೇಳಿ ಇಲ್ಲಿಗೆ ಬಂದೆ.”
{{gap}}ಸಿದ್ದರಾಮೇಶ್ವರನು ಸಾಭಿಪ್ರಾಯದಿಂದ ಮೋಳಿಗೆಯ ಮಾರಯ್ಯನವರ ಮುಖ ನೋಡಿದರು. ಮೋಳಿಗೆ ಮಾರಯ್ಯು ಮೃದುವಾಗಿ ನಕ್ಕು, “ಕರ್ಣದೇವರಸರು ಶರವೇಗದಿಂದ ನಿಮ್ಮಲ್ಲಿಗೆ ಬಂದಿದ್ದಾರೆ, ಅಣ್ಣನವರೆ. ಅವಸರದ ರಾಜಕಾರ್ಯ ಆಲಸ್ಯವನ್ನು ಸಹಿಸುವುದಿಲ್ಲ,” ಎಂದರು.
{{gap}}“ಈಗ ನಮ್ಮಿಂದ ನಿನಗೇನಾಗಬೇಕು, ತಮ್ಮ ?”<noinclude></noinclude>
mqfdrvzl3qeyie76k1krfaccbfkdvq3
321007
321000
2026-05-20T03:22:37Z
Shreesha Sharma
7840
/* Validated */
321007
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|left=೪೧೨|center=|right=ಕ್ರಾಂತಿ ಕಲ್ಯಾಣ}}
ಕಮಂಡಲು, ಯೋಗದಂಡಗಳನ್ನು ಕೆಳಗಿಟ್ಟು ಗಡ್ಡ ಜಟೆಗಳನ್ನು ಕಿತ್ತೊಗೆದು, “ಈಗ ನೀವು ನನ್ನನ್ನು ಗುರುತಿಸಬಲ್ಲಿರಿ, ಗುರುದೇವ.” ಎಂದು ಕೈ ಜೋಡಿಸಿ ಎದುರಿಗೆ ನಿಂತನು.
{{gap}}“ನೀನು ಬಿಜ್ಜಳನ ಸಹೋದರ ಕರ್ಣದೇವನಲ್ಲವೇ? ನಮ್ಮನ್ನು ನೋಡಲು ಇಷ್ಟೆಲ್ಲ ವಂಚನೆಯೇಕೆ ? ಬಾ, ಕುಳಿತುಕೊ,” ಎಂದರು ಸಿದ್ದರಾಮೇಶ್ವರರು.
{{gap}}ನಮ್ರ ಶಿಷ್ಯನಂತೆ ಕರ್ಣದೇವನು ಸಿದ್ದರಾಮೇಶ್ವರರ ಪಾದಗಳಿಗೆರಗಿ ಎದುರಿಗೆ ಕುಳಿತು, “ಮಾಧವ ನಾಯಕನ ಕಾವಲು ಭಟರಿಗೆ ತಿಳಿಯದಂತೆ ಬರಲು ನಾನು ಈ ವೇಷ ಧರಿಸಬೇಕಾಯಿತು. ನಗರದಲ್ಲಿ ಈಗ ಅವನ ನಿರಂಕುಶಾಧಿಕಾರ ನಡೆಯುತ್ತಿದೆ. ಮಹಾದ್ವಾರಗಳನ್ನೆಲ್ಲ ಬಂಧಿಸಿ, ತನ್ನ ವಿಶೇಷಾನುಮತಿಯಿಲ್ಲದೆ ಯಾರೂ ಹೊರಗೆ ಹೋಗಕೂಡದೆಂದು ಆಜ್ಞೆ ಮಾಡಿದ್ದಾನೆ,” ಎಂದನು.
{{gap}}“ಈ ಹಗಲು ವೇಷದ ವಸ್ತುಗಳು ನಿನಗೆಲ್ಲಿ ದೊರಕಿದುವು?”
{{gap}}-ಸಿದ್ದರಾಮೇಶ್ವರರು ನಗುತ್ತಾ ಪ್ರಶ್ನಿಸಿದರು.
{{gap}}“ರಾಜಗೃಹಕ್ಕೆ ಧರ್ಮೋಪದೇಶಕನಾಗಿ ಬಂದ ಜಂಗಮನೊಬ್ಬನು ಇದನ್ನು ಬಿಟ್ಟು ಹೋಗಿದ್ದನು, ಅಣ್ಣನವರೆ,” ಕರ್ಣದೇವ ನಗುದನಿಯಿಂದ ಉತ್ತರಿಸಿದನು. “ಆ ನಿರ್ಮಾಲ್ಯ ನನಗೆ ಸಹಾಯಕವಾಯಿತು. ಮಹಮನೆಯ ಶರಣರೊಡನೆ ವಲಸೆ ಹೋಗುವುದಾಗಿ ಹೇಳಿ ಕಾವಲು ಭಟನೊಬ್ಬನ ಸಹಾಯದಿಂದ ಹೊರಗೆ ಬಂದೆ.”
{{gap}}“ನಾವು ಬಂದ ವಿಚಾರ ನಿಮಗೆ ತಿಳಿದದ್ದು ಹೇಗೆ?”
{{gap}}"ರಾಜಗೃಹಕ್ಕೆ ಕಾಯಿಪಲ್ಲೆಗಳನ್ನು ತಂದುಕೊಡುವ ಗ್ರಾಮವಾಸಿಯಿಂದ. ಬಾಂಧವರ ಓಣಿಯಲ್ಲಿ ನೀವು ಮೋಳಿಗೆಯ ಮಾರಯ್ಯನವರ ಸಂಗಡ ಮಾತಾಡುತ್ತಿದ್ದುದನ್ನು ಅವನು ಕಂಡನಂತೆ. ನಗರದಿಂದ ಹೊರಬಿದ್ದ ಕೂಡಲೆ ನಾನು ಅಲ್ಲಿಗೆ ಹೋದೆ. ಆಂಜನೇಯ ನದಿಯಾಚಿನ ಶರಣ ಶಿಬಿರಕ್ಕೆ ನೀವು ಹೋಗಿರುವುದಾಗಿ ಕೇಳಿ ಇಲ್ಲಿಗೆ ಬಂದೆ.”
{{gap}}ಸಿದ್ದರಾಮೇಶ್ವರನು ಸಾಭಿಪ್ರಾಯದಿಂದ ಮೋಳಿಗೆಯ ಮಾರಯ್ಯನವರ ಮುಖ ನೋಡಿದರು. ಮೋಳಿಗೆ ಮಾರಯ್ಯು ಮೃದುವಾಗಿ ನಕ್ಕು, “ಕರ್ಣದೇವರಸರು ಶರವೇಗದಿಂದ ನಿಮ್ಮಲ್ಲಿಗೆ ಬಂದಿದ್ದಾರೆ, ಅಣ್ಣನವರೆ. ಅವಸರದ ರಾಜಕಾರ್ಯ ಆಲಸ್ಯವನ್ನು ಸಹಿಸುವುದಿಲ್ಲ,” ಎಂದರು.
{{gap}}“ಈಗ ನಮ್ಮಿಂದ ನಿನಗೇನಾಗಬೇಕು, ತಮ್ಮ ?”<noinclude></noinclude>
p41tjgskk4a6xc0wj0eoqzigau60n4j
ಪುಟ:ಕ್ರಾಂತಿ ಕಲ್ಯಾಣ.pdf/೪೨೨
104
86368
320997
203692
2026-05-20T03:10:40Z
Shreelatha.Halemane
7642
/* Proofread */
320997
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|left=ಮಹಾಪ್ರಸ್ಥಾನ|center=|right=೪೯}}
{{gap}}“ಸೊನ್ನಲಾಪುರದಲ್ಲಿ ನಮ್ಮ ಮಣಿಹವಿನ್ನೂ ಮುಗಿದಿಲ್ಲ ಚೆನ್ನಬಸವಣ್ಣನವರೆ. ಅದು ಮುಗಿದು ಕಪಿಲ ಸಿದ್ದಮಲ್ಲಿಕಾರ್ಜುನನ ಅನುಮತಿ ದೊರಕಿದಾಗ ನಾವು ನಿಮ್ಮನ್ನು ಉಳಿವೆಯಲ್ಲಿ ಕಾಣುವೆವು.”
{{gap}}-ಕ್ಷಮಾಯಾಚನೆಯ ನಮ್ರಕಂಠದಿಂದ ಶಿವಯೋಗಿ ಸಿದ್ದರಾಮೇಶ್ವರರು ದೃಢವಾಗಿ ಹೇಳಿದರು.
{{gap}}“ನೀವೇನು ಮಾಡುವಿರಿ, ಮಾರಯ್ಯನವರೆ ? ನಮ್ಮ ಆಹ್ವಾನ ನಿಮಗೆ ಸಕಾಲದಲ್ಲಿ ಮುಟ್ಟಿತಲ್ಲವೆ?” –ಮಾಚಿದೇವರೆಂದರು.
{{gap}}ಮೋಳಿಗೆಯ ಮಾರಯ್ಯನವರ ಮುಖದಲ್ಲಿ ವ್ಯಂಗ್ಯ ಅಭಿಮಾನಗಳ ಮಿದುನಗೆ ಮೂಡಿತು. ಅವರು ಹೇಳಿದರು : “ನಾನೂ ನಿಮ್ಮಂತೆ ಕ್ಷತ್ರಿಯನು, ಮಾಚಿದೇವ, ಶರಣಧರ್ಮದ ಪ್ರಭಾವದಿಂದ ಜಾತಿ ಸೂತಕಗಳು ಅಳಿದರೂ ವರ್ಣಾಶ್ರಮಗಳ ಸೊಗಡು ಇನ್ನೂ ಉಳಿದಿದೆ. ಶರಣರ ರಕ್ಷಣೆಗಾಗಿ ನೀವು ಉಳಿವೆಗೆ ಹೋಗುತ್ತಿರುವಿರಿ. ವಲಸೆ ಹೊರಡಲು ನಿರಾಕರಿಸಿದ ಶರಣರ ಸಹಾಯಕ್ಕಾಗಿ ಇನ್ನು ಕೆಲವು ದಿವಸಗಳು ನಾನು ಕಲ್ಯಾಣದಲ್ಲಿರಲು ನಿರ್ಧರಿಸಿದ್ದೇನೆ.”
{{gap}}ಮಾಚಿದೇವರು ಮೌನ, ನನ್ನನ್ನು ಅಪಹಾಸ್ಯ ಮಾಡುವುದು ಮಾರಯ್ಯನ ಉದ್ದೇಶವೇ? ಅನುಭವಮಂಟಪಕ್ಕೆ ಒಂದು ಸಾರಿ ಕೂಡ ಬಾರದಿದ್ದರೂ ಜೀವನದ ಉನ್ನತಾದರ್ಶ ವಿಚಾರ ಸ್ವಾತಂತ್ರ್ಯಗಳಿಂದ ಶರಣರಲ್ಲಿ ಸಿದ್ದರಾಮೇಶ್ವರ ಶಿವಯೋಗಿಗಳಷ್ಟೇ ಪ್ರಭಾವ ಗೌರವಗಳನ್ನು ಪಡೆದಿದ್ದ ಈ ವಯೋವೃದ್ದ ಜಂಗಮನ ವಿಚಾರದಲ್ಲಿ ಕ್ಷಣಕಾಲ ತನ್ನಲ್ಲಿ ಸಂದೇಹ ಸುಳಿದುದಕ್ಕಾಗಿ ಮಾಚಿದೇವರು ಲಜ್ಜಿತರಾದರು. ಕೈಯೆತ್ತಿ ನಮಸ್ಕಾರ ಮಾಡಿ ಅವರು, “ಶರಣರ ಬಗೆಗೆ ನಿಮ್ಮ ಭರವಸೆಗಾಗಿ ನಾನು ಕೃತಜ್ಞನು, ಮಾರಯ್ಯನವರೆ. ಈಗ ನನಗೆ ನೆಮ್ಮದಿಯಾಯಿತು. ಮಾಧವ ನಾಯಕನ ಸೈನಿಕರ ದುರಾಕ್ರಮಣದಿಂದ ಶರಣರನ್ನು ರಕ್ಷಿಸುವ ಶಕ್ತಿ ಸಾಮರ್ಥ್ಯಗಳನ್ನು ನಿಮಗೆ ಕರುಣಿಸಲಿ ಕಲಿದೇವರ ದೇವನು,” ಎಂದರು.
{{gap}}ಈ ಮಾತುಗಳು ನಡೆಯುತ್ತಿದ್ದಂತೆ ನಾಗಲಾಂಬೆ ಅಲ್ಲಿಗೆ ಬಂದು ಅಭ್ಯಾಗತರ ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡಿದಳು.
{{gap}}“ಶರಣಧರ್ಮಕ್ಕೆ ಎರಡು ಧೃವತಾರೆಗಳನ್ನು ಕೊಟ್ಟ ಆದರ್ಶ ಜನನಿ ನೀನು, ನಾಗಕ್ಕೆ ನಿಮ್ಮ ಪ್ರವಾಸ ಶುಭಪ್ರದವಾಗಲಿ,” ಎಂದು ಶಿವಯೋಗಿ ಸಿದ್ದರಾಮೇಶ್ವರರು ನುಡಿದರು.
{{gap}}“ಹೊಗಳಿ ಹೊಗಳಿ ನನ್ನನ್ನು ಹೊನ್ನ ಶೂಲಕ್ಕಿಡಬೇಡಿ, ಅಣ್ಣ, ಶರಣರೆಲ್ಲರ - ಸೇವಿಕೆ ನಾನು,” ಎಂದು ಹೇಳಿ ನಾಗಲಾಂಬೆ ಮೋಳಿಗೆ ಮಾರಯ್ಯನವರ ಕಡೆ<noinclude></noinclude>
69exzqp7240ervctbqb0alwkjcs6tto
321004
320997
2026-05-20T03:22:00Z
Shreesha Sharma
7840
/* Validated */
321004
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{rh|left=ಮಹಾಪ್ರಸ್ಥಾನ|center=|right=೪೯}}
{{gap}}“ಸೊನ್ನಲಾಪುರದಲ್ಲಿ ನಮ್ಮ ಮಣಿಹವಿನ್ನೂ ಮುಗಿದಿಲ್ಲ ಚೆನ್ನಬಸವಣ್ಣನವರೆ. ಅದು ಮುಗಿದು ಕಪಿಲ ಸಿದ್ದಮಲ್ಲಿಕಾರ್ಜುನನ ಅನುಮತಿ ದೊರಕಿದಾಗ ನಾವು ನಿಮ್ಮನ್ನು ಉಳಿವೆಯಲ್ಲಿ ಕಾಣುವೆವು.”
{{gap}}-ಕ್ಷಮಾಯಾಚನೆಯ ನಮ್ರಕಂಠದಿಂದ ಶಿವಯೋಗಿ ಸಿದ್ದರಾಮೇಶ್ವರರು ದೃಢವಾಗಿ ಹೇಳಿದರು.
{{gap}}“ನೀವೇನು ಮಾಡುವಿರಿ, ಮಾರಯ್ಯನವರೆ ? ನಮ್ಮ ಆಹ್ವಾನ ನಿಮಗೆ ಸಕಾಲದಲ್ಲಿ ಮುಟ್ಟಿತಲ್ಲವೆ?” –ಮಾಚಿದೇವರೆಂದರು.
{{gap}}ಮೋಳಿಗೆಯ ಮಾರಯ್ಯನವರ ಮುಖದಲ್ಲಿ ವ್ಯಂಗ್ಯ ಅಭಿಮಾನಗಳ ಮಿದುನಗೆ ಮೂಡಿತು. ಅವರು ಹೇಳಿದರು : “ನಾನೂ ನಿಮ್ಮಂತೆ ಕ್ಷತ್ರಿಯನು, ಮಾಚಿದೇವ, ಶರಣಧರ್ಮದ ಪ್ರಭಾವದಿಂದ ಜಾತಿ ಸೂತಕಗಳು ಅಳಿದರೂ ವರ್ಣಾಶ್ರಮಗಳ ಸೊಗಡು ಇನ್ನೂ ಉಳಿದಿದೆ. ಶರಣರ ರಕ್ಷಣೆಗಾಗಿ ನೀವು ಉಳಿವೆಗೆ ಹೋಗುತ್ತಿರುವಿರಿ. ವಲಸೆ ಹೊರಡಲು ನಿರಾಕರಿಸಿದ ಶರಣರ ಸಹಾಯಕ್ಕಾಗಿ ಇನ್ನು ಕೆಲವು ದಿವಸಗಳು ನಾನು ಕಲ್ಯಾಣದಲ್ಲಿರಲು ನಿರ್ಧರಿಸಿದ್ದೇನೆ.”
{{gap}}ಮಾಚಿದೇವರು ಮೌನ, ನನ್ನನ್ನು ಅಪಹಾಸ್ಯ ಮಾಡುವುದು ಮಾರಯ್ಯನ ಉದ್ದೇಶವೇ? ಅನುಭವಮಂಟಪಕ್ಕೆ ಒಂದು ಸಾರಿ ಕೂಡ ಬಾರದಿದ್ದರೂ ಜೀವನದ ಉನ್ನತಾದರ್ಶ ವಿಚಾರ ಸ್ವಾತಂತ್ರ್ಯಗಳಿಂದ ಶರಣರಲ್ಲಿ ಸಿದ್ದರಾಮೇಶ್ವರ ಶಿವಯೋಗಿಗಳಷ್ಟೇ ಪ್ರಭಾವ ಗೌರವಗಳನ್ನು ಪಡೆದಿದ್ದ ಈ ವಯೋವೃದ್ದ ಜಂಗಮನ ವಿಚಾರದಲ್ಲಿ ಕ್ಷಣಕಾಲ ತನ್ನಲ್ಲಿ ಸಂದೇಹ ಸುಳಿದುದಕ್ಕಾಗಿ ಮಾಚಿದೇವರು ಲಜ್ಜಿತರಾದರು. ಕೈಯೆತ್ತಿ ನಮಸ್ಕಾರ ಮಾಡಿ ಅವರು, “ಶರಣರ ಬಗೆಗೆ ನಿಮ್ಮ ಭರವಸೆಗಾಗಿ ನಾನು ಕೃತಜ್ಞನು, ಮಾರಯ್ಯನವರೆ. ಈಗ ನನಗೆ ನೆಮ್ಮದಿಯಾಯಿತು. ಮಾಧವ ನಾಯಕನ ಸೈನಿಕರ ದುರಾಕ್ರಮಣದಿಂದ ಶರಣರನ್ನು ರಕ್ಷಿಸುವ ಶಕ್ತಿ ಸಾಮರ್ಥ್ಯಗಳನ್ನು ನಿಮಗೆ ಕರುಣಿಸಲಿ ಕಲಿದೇವರ ದೇವನು,” ಎಂದರು.
{{gap}}ಈ ಮಾತುಗಳು ನಡೆಯುತ್ತಿದ್ದಂತೆ ನಾಗಲಾಂಬೆ ಅಲ್ಲಿಗೆ ಬಂದು ಅಭ್ಯಾಗತರ ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡಿದಳು.
{{gap}}“ಶರಣಧರ್ಮಕ್ಕೆ ಎರಡು ಧೃವತಾರೆಗಳನ್ನು ಕೊಟ್ಟ ಆದರ್ಶ ಜನನಿ ನೀನು, ನಾಗಕ್ಕೆ ನಿಮ್ಮ ಪ್ರವಾಸ ಶುಭಪ್ರದವಾಗಲಿ,” ಎಂದು ಶಿವಯೋಗಿ ಸಿದ್ದರಾಮೇಶ್ವರರು ನುಡಿದರು.
{{gap}}“ಹೊಗಳಿ ಹೊಗಳಿ ನನ್ನನ್ನು ಹೊನ್ನ ಶೂಲಕ್ಕಿಡಬೇಡಿ, ಅಣ್ಣ, ಶರಣರೆಲ್ಲರ - ಸೇವಿಕೆ ನಾನು,” ಎಂದು ಹೇಳಿ ನಾಗಲಾಂಬೆ ಮೋಳಿಗೆ ಮಾರಯ್ಯನವರ ಕಡೆ<noinclude></noinclude>
2guy4qjqlt7mj3h0s7qp0h1t0m97q21
ಪುಟ:ಕ್ರಾಂತಿ ಕಲ್ಯಾಣ.pdf/೪೨೧
104
86369
320996
279622
2026-05-20T03:08:36Z
Shreelatha.Halemane
7642
/* Proofread */
320996
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|left=೪೦೮|center=|right=ಕ್ರಾಂತಿ ಕಲ್ಯಾಣ}}
ಓಲೆಯನ್ನು ನಾಗಲಾಂಬೆಗೆ ಕೊಟ್ಟಳು. ನಾಗಲಾಂಬೆ ಓದಿದಳು. “ಇಪ್ಪೆಯ ಹೂವನನುಗೊಳಿಸಲು...” ಎಂಬ ವಚನದಡಿಯಲ್ಲಿ, “ನಾನಾರ ಸಾರುವನೆಂದು ಚಿಂತಿಸಲೇಕಯ್ಯ?” ಎಂಬ ಇನ್ನೊಂದು ವಚನವನ್ನೂ ಸೇರಿಸಿದ್ದಳು ನೀಲಲೋಚನೆ.<br />
{{gap}}“ಇದು ನಿನ್ನ ಅಂತ್ಯ ನಿರ್ಧಾರವೆ?” ನಾಗಲಾಂಬೆ ಗಂಭೀರವಾಗಿ ಪ್ರಶ್ನಿಸಿದಳು. ನೀಲಲೋಚನೆ ತಲೆಯಾಡಿಸಿ ಒಪ್ಪಿಕೊಂಡಳು.
{{gap}}“ಕಲ್ಯಾಣದ ದುರ್ಘಟನೆಯನ್ನು ಬಸವೇಶನಿಗೆ ತಿಳಿಸಲು ಅಪ್ಪಣ್ಣ ಹೋಗುತ್ತಿದ್ದಾನೆ. ಮೊದಲು ಆ ಕಾರ್ಯ ಮಾಡಿ ಆಮೇಲೆ ನಿನ್ನ ಓಲೆ ಕೊಡುವಂತೆ ಅವನಿಗೆ ಹೇಳುತ್ತೇನೆ. ನಿನ್ನ ನಿರ್ಧಾರದ ಅಂತಃಸತ್ವವನ್ನು ಅರಿಯುವ ಆತ್ಮ ವಿಶ್ವಾಸವನ್ನು ಬಸವೇಶನಿಗೆ ಕರುಣಿಸಲಿ ಸಂಗಮನಾಥನು,”
{{gap}}-ಎಂಬ ನಾಗಲಾಂಬೆ ಅಲ್ಲಿಂದ ಹೊರಟಳು.
{{gap}}ನೀಲಲೋಚನೆ ಮೌನ. “ತಾನು ಮಾಡಿದ್ದು ಸರಿಯೆ?” ಎಂಬ ಚಿಂತೆಯಲ್ಲಿ ಮಗ್ನವಾಗಿತ್ತು ಅವಳ ಚಿತ್ತ. ಆ ಮೌನವನ್ನು ಭೇದಿಸಲು ಗಂಗಾಂಬಿಕೆ ಇಚ್ಚಿಸಲಿಲ್ಲ.
{{center|***}}
{{gap}}ಪಡಿಹಾರಿ ಅಪ್ಪಣ್ಣನನ್ನು ಕೂಡಲ ಸಂಗಮಕ್ಕೆ ಕಳುಹಿಸಿ ನಾಗಲಾಂಬೆ ಶಿಬಿರಕ್ಕೆ ಬಂದಾಗ ಅಶ್ವತ್ಥ ಕಟ್ಟೆಯ ಬಳಿ ಚೆನ್ನಬಸವಣ್ಣನವರು, ಮಾಚಿದೇವರು, ಇಬ್ಬರು ಹೊಸ ಜಂಗಮರ ಸಂಗಡ ಮಾತಾಡುತ್ತಿರುವುದನ್ನು ಕಂಡು ಸಮೀಪಕ್ಕೆ ಹೋದಳು. ಸೊನ್ನಲಾಪುರದ ಸಿದ್ದರಾಮೇಶ್ವರ ಶಿವಯೋಗಿ ಮತ್ತು ಮೋಳಿಗೆಯ ಮಾರಯ್ಯ, ಇವರು ಕೊಂಚ ಹೊತ್ತಿನ ಮೊದಲು ಅಲ್ಲಿಗೆ ಬಂದಿದ್ದರು.
{{gap}}ಶಿವಯೋಗಿ ಹೇಳುತ್ತಿದ್ದರು : “ನಿಮ್ಮಿಂದ ವಲಸೆಯ ಸುದ್ದಿ ಬಂದ ದಿವೇ ಹೊರಡಲು ಯೋಚಿಸಿದೆ. ಅಷ್ಟರಲ್ಲಿ ಯಾತ್ರೆಗಾಗಿ ಉಜ್ಜಯಿನಿಗೆ ಹೋಗಿದ್ದ ಏಳು ನೂರು ಎಪ್ಪತ್ತು ಮಂದಿ ಜಂಗಮರು ಸೊನ್ನಲಾಪುರಕ್ಕೆ ಬಂದರು. ಅವರ ಊಟ ಉಪಚಾರ ವಸತಿಗಳೀಗೆ ಏರ್ಪಡಿಸಲು ಒಂದು ದಿನ ನಿಲ್ಲಬೇಕಾಯಿತು. ಮರುದಿನ ಹೊರಟವನು ಈ ದಿನ ಮುಂಜಾವಿನಲ್ಲಿ ಕಲ್ಯಾಣಕ್ಕೆ ಬಂದೆ. ಮೋಳಿಗೆಯ ಮಾರಯ್ಯನವರು ನಗರದ ದುರ್ಘಟನೆಯನ್ನು ವಿವರಿಸಿ ನೀವು ನೆನ್ನಿನ ರಾತ್ರಿಯೇ ನಗರವನ್ನು ಬಿಟ್ಟುದಾಗಿ ತಿಳಿಸಿದರು, ನಮ್ಮನ್ನು ಇಲ್ಲಿಗೆ ಕರೆತಂದರು. ನೀವು ಯಾವ ಉದ್ದೇಶದಿಂದ ವಲಸೆ ಹೊರಟಿರುವಿರೋ ಆ ಕಾರ್ಯ ಸಫಲವಾಗಲೆಂದು ಕಪಿಲ ಸಿದ್ಧಮಲ್ಲಿಕಾರ್ಜುನನಲ್ಲಿ ನಮ್ಮ ಪ್ರಾರ್ಥನೆ.”
{{gap}}ಶುಭಾಶಯಗಳಿಗಾಗಿ ವಂದಿಸಿ ಚೆನ್ನಬಸವಣ್ಣನವರು, “ನೀವು ನಮ್ಮ ಸಂಗಡ ಉಳಿವೆಗೆ ಬರುವುದಿಲ್ಲವೆ ?” ಎಂದು ಕೇಳಿದರು.<noinclude></noinclude>
5qn7anvtt9o8fvwlgx1e7x3mp4mfh6c
321003
320996
2026-05-20T03:21:47Z
Shreesha Sharma
7840
/* Validated */
321003
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{rh|left=೪೦೮|center=|right=ಕ್ರಾಂತಿ ಕಲ್ಯಾಣ}}
ಓಲೆಯನ್ನು ನಾಗಲಾಂಬೆಗೆ ಕೊಟ್ಟಳು. ನಾಗಲಾಂಬೆ ಓದಿದಳು. “ಇಪ್ಪೆಯ ಹೂವನನುಗೊಳಿಸಲು...” ಎಂಬ ವಚನದಡಿಯಲ್ಲಿ, “ನಾನಾರ ಸಾರುವನೆಂದು ಚಿಂತಿಸಲೇಕಯ್ಯ?” ಎಂಬ ಇನ್ನೊಂದು ವಚನವನ್ನೂ ಸೇರಿಸಿದ್ದಳು ನೀಲಲೋಚನೆ.<br />
{{gap}}“ಇದು ನಿನ್ನ ಅಂತ್ಯ ನಿರ್ಧಾರವೆ?” ನಾಗಲಾಂಬೆ ಗಂಭೀರವಾಗಿ ಪ್ರಶ್ನಿಸಿದಳು. ನೀಲಲೋಚನೆ ತಲೆಯಾಡಿಸಿ ಒಪ್ಪಿಕೊಂಡಳು.
{{gap}}“ಕಲ್ಯಾಣದ ದುರ್ಘಟನೆಯನ್ನು ಬಸವೇಶನಿಗೆ ತಿಳಿಸಲು ಅಪ್ಪಣ್ಣ ಹೋಗುತ್ತಿದ್ದಾನೆ. ಮೊದಲು ಆ ಕಾರ್ಯ ಮಾಡಿ ಆಮೇಲೆ ನಿನ್ನ ಓಲೆ ಕೊಡುವಂತೆ ಅವನಿಗೆ ಹೇಳುತ್ತೇನೆ. ನಿನ್ನ ನಿರ್ಧಾರದ ಅಂತಃಸತ್ವವನ್ನು ಅರಿಯುವ ಆತ್ಮ ವಿಶ್ವಾಸವನ್ನು ಬಸವೇಶನಿಗೆ ಕರುಣಿಸಲಿ ಸಂಗಮನಾಥನು,”
{{gap}}-ಎಂಬ ನಾಗಲಾಂಬೆ ಅಲ್ಲಿಂದ ಹೊರಟಳು.
{{gap}}ನೀಲಲೋಚನೆ ಮೌನ. “ತಾನು ಮಾಡಿದ್ದು ಸರಿಯೆ?” ಎಂಬ ಚಿಂತೆಯಲ್ಲಿ ಮಗ್ನವಾಗಿತ್ತು ಅವಳ ಚಿತ್ತ. ಆ ಮೌನವನ್ನು ಭೇದಿಸಲು ಗಂಗಾಂಬಿಕೆ ಇಚ್ಚಿಸಲಿಲ್ಲ.
{{center|***}}
{{gap}}ಪಡಿಹಾರಿ ಅಪ್ಪಣ್ಣನನ್ನು ಕೂಡಲ ಸಂಗಮಕ್ಕೆ ಕಳುಹಿಸಿ ನಾಗಲಾಂಬೆ ಶಿಬಿರಕ್ಕೆ ಬಂದಾಗ ಅಶ್ವತ್ಥ ಕಟ್ಟೆಯ ಬಳಿ ಚೆನ್ನಬಸವಣ್ಣನವರು, ಮಾಚಿದೇವರು, ಇಬ್ಬರು ಹೊಸ ಜಂಗಮರ ಸಂಗಡ ಮಾತಾಡುತ್ತಿರುವುದನ್ನು ಕಂಡು ಸಮೀಪಕ್ಕೆ ಹೋದಳು. ಸೊನ್ನಲಾಪುರದ ಸಿದ್ದರಾಮೇಶ್ವರ ಶಿವಯೋಗಿ ಮತ್ತು ಮೋಳಿಗೆಯ ಮಾರಯ್ಯ, ಇವರು ಕೊಂಚ ಹೊತ್ತಿನ ಮೊದಲು ಅಲ್ಲಿಗೆ ಬಂದಿದ್ದರು.
{{gap}}ಶಿವಯೋಗಿ ಹೇಳುತ್ತಿದ್ದರು : “ನಿಮ್ಮಿಂದ ವಲಸೆಯ ಸುದ್ದಿ ಬಂದ ದಿವೇ ಹೊರಡಲು ಯೋಚಿಸಿದೆ. ಅಷ್ಟರಲ್ಲಿ ಯಾತ್ರೆಗಾಗಿ ಉಜ್ಜಯಿನಿಗೆ ಹೋಗಿದ್ದ ಏಳು ನೂರು ಎಪ್ಪತ್ತು ಮಂದಿ ಜಂಗಮರು ಸೊನ್ನಲಾಪುರಕ್ಕೆ ಬಂದರು. ಅವರ ಊಟ ಉಪಚಾರ ವಸತಿಗಳೀಗೆ ಏರ್ಪಡಿಸಲು ಒಂದು ದಿನ ನಿಲ್ಲಬೇಕಾಯಿತು. ಮರುದಿನ ಹೊರಟವನು ಈ ದಿನ ಮುಂಜಾವಿನಲ್ಲಿ ಕಲ್ಯಾಣಕ್ಕೆ ಬಂದೆ. ಮೋಳಿಗೆಯ ಮಾರಯ್ಯನವರು ನಗರದ ದುರ್ಘಟನೆಯನ್ನು ವಿವರಿಸಿ ನೀವು ನೆನ್ನಿನ ರಾತ್ರಿಯೇ ನಗರವನ್ನು ಬಿಟ್ಟುದಾಗಿ ತಿಳಿಸಿದರು, ನಮ್ಮನ್ನು ಇಲ್ಲಿಗೆ ಕರೆತಂದರು. ನೀವು ಯಾವ ಉದ್ದೇಶದಿಂದ ವಲಸೆ ಹೊರಟಿರುವಿರೋ ಆ ಕಾರ್ಯ ಸಫಲವಾಗಲೆಂದು ಕಪಿಲ ಸಿದ್ಧಮಲ್ಲಿಕಾರ್ಜುನನಲ್ಲಿ ನಮ್ಮ ಪ್ರಾರ್ಥನೆ.”
{{gap}}ಶುಭಾಶಯಗಳಿಗಾಗಿ ವಂದಿಸಿ ಚೆನ್ನಬಸವಣ್ಣನವರು, “ನೀವು ನಮ್ಮ ಸಂಗಡ ಉಳಿವೆಗೆ ಬರುವುದಿಲ್ಲವೆ ?” ಎಂದು ಕೇಳಿದರು.<noinclude></noinclude>
q7ds2hi0okvk6hdwpjb0nfk4ogci5q0
ಪುಟ:ಕ್ರಾಂತಿ ಕಲ್ಯಾಣ.pdf/೪೨೪
104
86370
320999
203694
2026-05-20T03:14:55Z
Shreelatha.Halemane
7642
/* Proofread */
320999
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|left=ಮಹಾಪ್ರಸ್ಥಾನ|center=|right=೪೧೧}}
{{gap}}ಈ ಅಪರಿಚಿತ ಯತಿ ನಿಜವಾಗಿ ಬ್ರಹೇಂದ್ರ ಶಿವಯೋಗಿಯ ಸಹೋದರನೆ? ಅವನ ಪ್ರಶ್ನೆಗೆ ಉತ್ತರ ಕೊಡುವುದು ಉಚಿತವೆ? ಎಂದು ಯೋಚಿಸಿ ಕೊನೆಗೆ ಮಾಚಿದೇವರು ಹೇಳಿದರು : "ಮೂರು ತಿಂಗಳ ಹಿಂದೆ ಅವರೊಂದು ದಿನ ಮಹಮನೆಗೆ ಬಂದರು. ಅನುಭವಮಂಟಪದ ಪ್ರಚಾರ ಸಭೆಗಳಲ್ಲಿ ಶೈವಧರ್ಮವನ್ನು ಕುರಿತು ಕೆಲವು ವಾರಗಳು ಭಾಷಣ ಮಾಡಿದರು. ಅಷ್ಟರಲ್ಲಿ ಚಾಲುಕ್ಯ ಅಧಿಪತಿ ಜಗದೇಕ ಮಲ್ಲರಸರಿಗೆ ಧರ್ಮೋಪದೇಶಕರ ಅವಶ್ಯಕತೆ ಇದೆಯೆಂದು ಕೇಳಿ ನಾವು ಅವರನ್ನು ರಾಜಗೃಹಕ್ಕೆ ಕಳುಹಿಸಿದೆವು. ಆಮೇಲೆ ಅವರ ವಿಚಾರ ತಿಳಿಯದು.”
{{gap}}'ನಿಮ್ಮ ಸಂಗಡ ಅವರು ವಲಸೆ ಬರಲಿಲ್ಲವೆ?”
{{gap}}ಅಪರಿಚಿತ ಯತಿ ಪುನಃ ಕೇಳಿದನು.
{{gap}}“ಬರುವುದಾಗಿ ಹೇಳಿ ಕಳುಹಿಸಿದ್ದರು. ಆದರೆ ಬರಲಿಲ್ಲ. ನೀವವರನ್ನು ಕಲ್ಯಾಣದ ರಾಜಗೃಹದಲ್ಲಿ ಹುಡುಕಿರಿ, ಅಣ್ಣ. ಅವರು ಅಲ್ಲಿಯೇ ಇರಬೇಕು,”
{{gap}}ಎಂದು ಮಾಚಿದೇವರು ಮುಕ್ತಾಯದ ದನಿಯಿಂದ ಹೇಳಿದರು. ಈ ಸೂಚನೆ ತಿಳಿದು ಕುಹಕದ ನಗೆ ಬೀರಿ ಅಪರಿಚಿತನು, “ನನ್ನ ಮೇಲೆ ಸಿಟ್ಟಾಗಬೇಡಿರಿ, ಅಣ್ಣ. ಬಂದ ಕೆಲಸ ಮುಗಿಸದೆ ಹೊರಡುವ ಅಭ್ಯಾಸವಿಲ್ಲ ನನಗೆ. ಈಗ ನನ್ನ ಸಹೋದರ ರಾಜಗೃಹದಲ್ಲಿಲ್ಲವೆಂದು ತಿಳಿದಿದೆ. ಯಾರ ಧರ್ಮೋಪದೇಶಕನಾಗಿ ಅವನು ಅಲ್ಲಿಗೆ ಹೋದನೋ ಆ ಚಾಲುಕ್ಯ ಚಕ್ರೇಶ್ವರರು ಇಂದು ಮುಂಜಾವಿನಲ್ಲಿ ಸ್ವರ್ಗವಾಸಿಗಳಾದರು. ಆಗಲೇ ಅವರ ಅಂತ್ಯಕರ್ಮಗಳೂ ಮುಗಿದವು” ಎಂದನು.
{{gap}}ನೆನ್ನಿನ ರಾತ್ರಿ ಚಾಲುಕ್ಯ ಸರ್ವಾಧಿಕಾರಿ ಬಿಜ್ಜಳನ ಕೊಲೆ! ಇಂದು ಮುಂಜಾವಿನಲ್ಲಿ ಚಾಲುಕ್ಯ ಅರಸು ಜಗದೇಕಮಲ್ಲನ ಅಂತ್ಯ ಈ ಎರಡು ವಿಪತ್ತುಗಳೂ ಏಕಕಾಲದಲ್ಲಿ ಕಲ್ಯಾಣಕ್ಕೆ ಒದಗಿದ್ದು ಹೇಗೆ? ಎರಡು ಘಟನೆಗಳಿಗೆ ಪರಸ್ಪರ ಸಂಬಂಧವಿದೆಯೆ?
{{gap}}ಮಾಚಿದೇವರು ಸ್ತಂಭಿತರಾದರು. ಕ್ರಾಂತಿಕಾರಕ ಅಜ್ಞಾತ ಪ್ರಕರಣವೊಂದು ರೂಪುತಳೆದು ಎದುರಿಗೆ ನಿಂತಂತೆ ಚೆನ್ನಬಸವಣ್ಣನವರು ಬೆಬ್ಬೆರಗಾಗಿ ಅಪರಿಚಿತ ಯತಿಯ ಮುಖ ನೋಡುತ್ತಿದ್ದರು.
{{gap}}ಅದುವರೆಗೆ ಮೌನವಾಗಿದ್ದ ಸಿದ್ದರಾಮೇಶ್ವರರು ಅಪರಿಚಿತನ ಕಡೆ ತಿರುಗಿ ತುಸು ಗಡುಸಾದ ದನಿಯಿಂದ, "ಈ ದುರ್ವಾರ್ತೆ ತಂದ ನೀನು ಯಾರು ಕಪಟ ಜಂಗಮ? ನಿನ್ನ ಈ ವೇಷ ನಮ್ಮನ್ನು ವಂಚಿಸಲಾರದು,” ಎಂದರು.
{{gap}}“ಈಗ ಅಣ್ಣನವರ ಮಹಿಮೆ ಅಭಿವ್ಯಕ್ತವಾಯಿತು,” ಎಂದು ಹೇಳಿ ಅಪರಿಚಿತನು<noinclude></noinclude>
o1nb31dym45qwfezhowj3dr1o6g0j9g
321006
320999
2026-05-20T03:22:26Z
Shreesha Sharma
7840
/* Validated */
321006
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{rh|left=ಮಹಾಪ್ರಸ್ಥಾನ|center=|right=೪೧೧}}
{{gap}}ಈ ಅಪರಿಚಿತ ಯತಿ ನಿಜವಾಗಿ ಬ್ರಹೇಂದ್ರ ಶಿವಯೋಗಿಯ ಸಹೋದರನೆ? ಅವನ ಪ್ರಶ್ನೆಗೆ ಉತ್ತರ ಕೊಡುವುದು ಉಚಿತವೆ? ಎಂದು ಯೋಚಿಸಿ ಕೊನೆಗೆ ಮಾಚಿದೇವರು ಹೇಳಿದರು : "ಮೂರು ತಿಂಗಳ ಹಿಂದೆ ಅವರೊಂದು ದಿನ ಮಹಮನೆಗೆ ಬಂದರು. ಅನುಭವಮಂಟಪದ ಪ್ರಚಾರ ಸಭೆಗಳಲ್ಲಿ ಶೈವಧರ್ಮವನ್ನು ಕುರಿತು ಕೆಲವು ವಾರಗಳು ಭಾಷಣ ಮಾಡಿದರು. ಅಷ್ಟರಲ್ಲಿ ಚಾಲುಕ್ಯ ಅಧಿಪತಿ ಜಗದೇಕ ಮಲ್ಲರಸರಿಗೆ ಧರ್ಮೋಪದೇಶಕರ ಅವಶ್ಯಕತೆ ಇದೆಯೆಂದು ಕೇಳಿ ನಾವು ಅವರನ್ನು ರಾಜಗೃಹಕ್ಕೆ ಕಳುಹಿಸಿದೆವು. ಆಮೇಲೆ ಅವರ ವಿಚಾರ ತಿಳಿಯದು.”
{{gap}}'ನಿಮ್ಮ ಸಂಗಡ ಅವರು ವಲಸೆ ಬರಲಿಲ್ಲವೆ?”
{{gap}}ಅಪರಿಚಿತ ಯತಿ ಪುನಃ ಕೇಳಿದನು.
{{gap}}“ಬರುವುದಾಗಿ ಹೇಳಿ ಕಳುಹಿಸಿದ್ದರು. ಆದರೆ ಬರಲಿಲ್ಲ. ನೀವವರನ್ನು ಕಲ್ಯಾಣದ ರಾಜಗೃಹದಲ್ಲಿ ಹುಡುಕಿರಿ, ಅಣ್ಣ. ಅವರು ಅಲ್ಲಿಯೇ ಇರಬೇಕು,”
{{gap}}ಎಂದು ಮಾಚಿದೇವರು ಮುಕ್ತಾಯದ ದನಿಯಿಂದ ಹೇಳಿದರು. ಈ ಸೂಚನೆ ತಿಳಿದು ಕುಹಕದ ನಗೆ ಬೀರಿ ಅಪರಿಚಿತನು, “ನನ್ನ ಮೇಲೆ ಸಿಟ್ಟಾಗಬೇಡಿರಿ, ಅಣ್ಣ. ಬಂದ ಕೆಲಸ ಮುಗಿಸದೆ ಹೊರಡುವ ಅಭ್ಯಾಸವಿಲ್ಲ ನನಗೆ. ಈಗ ನನ್ನ ಸಹೋದರ ರಾಜಗೃಹದಲ್ಲಿಲ್ಲವೆಂದು ತಿಳಿದಿದೆ. ಯಾರ ಧರ್ಮೋಪದೇಶಕನಾಗಿ ಅವನು ಅಲ್ಲಿಗೆ ಹೋದನೋ ಆ ಚಾಲುಕ್ಯ ಚಕ್ರೇಶ್ವರರು ಇಂದು ಮುಂಜಾವಿನಲ್ಲಿ ಸ್ವರ್ಗವಾಸಿಗಳಾದರು. ಆಗಲೇ ಅವರ ಅಂತ್ಯಕರ್ಮಗಳೂ ಮುಗಿದವು” ಎಂದನು.
{{gap}}ನೆನ್ನಿನ ರಾತ್ರಿ ಚಾಲುಕ್ಯ ಸರ್ವಾಧಿಕಾರಿ ಬಿಜ್ಜಳನ ಕೊಲೆ! ಇಂದು ಮುಂಜಾವಿನಲ್ಲಿ ಚಾಲುಕ್ಯ ಅರಸು ಜಗದೇಕಮಲ್ಲನ ಅಂತ್ಯ ಈ ಎರಡು ವಿಪತ್ತುಗಳೂ ಏಕಕಾಲದಲ್ಲಿ ಕಲ್ಯಾಣಕ್ಕೆ ಒದಗಿದ್ದು ಹೇಗೆ? ಎರಡು ಘಟನೆಗಳಿಗೆ ಪರಸ್ಪರ ಸಂಬಂಧವಿದೆಯೆ?
{{gap}}ಮಾಚಿದೇವರು ಸ್ತಂಭಿತರಾದರು. ಕ್ರಾಂತಿಕಾರಕ ಅಜ್ಞಾತ ಪ್ರಕರಣವೊಂದು ರೂಪುತಳೆದು ಎದುರಿಗೆ ನಿಂತಂತೆ ಚೆನ್ನಬಸವಣ್ಣನವರು ಬೆಬ್ಬೆರಗಾಗಿ ಅಪರಿಚಿತ ಯತಿಯ ಮುಖ ನೋಡುತ್ತಿದ್ದರು.
{{gap}}ಅದುವರೆಗೆ ಮೌನವಾಗಿದ್ದ ಸಿದ್ದರಾಮೇಶ್ವರರು ಅಪರಿಚಿತನ ಕಡೆ ತಿರುಗಿ ತುಸು ಗಡುಸಾದ ದನಿಯಿಂದ, "ಈ ದುರ್ವಾರ್ತೆ ತಂದ ನೀನು ಯಾರು ಕಪಟ ಜಂಗಮ? ನಿನ್ನ ಈ ವೇಷ ನಮ್ಮನ್ನು ವಂಚಿಸಲಾರದು,” ಎಂದರು.
{{gap}}“ಈಗ ಅಣ್ಣನವರ ಮಹಿಮೆ ಅಭಿವ್ಯಕ್ತವಾಯಿತು,” ಎಂದು ಹೇಳಿ ಅಪರಿಚಿತನು<noinclude></noinclude>
mb17vxxapm80hqali67s627tlm8ptvf
ಪುಟ:ಕ್ರಾಂತಿ ಕಲ್ಯಾಣ.pdf/೪೨೩
104
86373
320998
203697
2026-05-20T03:12:56Z
Shreelatha.Halemane
7642
/* Proofread */
320998
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|left=೪೧೦|center=|right=ಕ್ರಾಂತಿ ಕಲ್ಯಾಣ}}
ತಿರುಗಿ, “ಗಂಗಾದೇವಿಯವರನ್ನೇಕೆ ಸಂಗಡ ಕರೆತರಲಿಲ್ಲ, ಅಣ್ಣ ?” ಎಂದು ಕೇಳಿದಳು.
{{gap}}“ಅವಸರ ಪ್ರವಾಸದ ಆಯಾಸ ಸಹಿಸುವ ಶಕ್ತಿ ಈಗವಳಿಗಿಲ್ಲ, ಅಕ್ಕನವರೆ. ಆರೋಗ್ಯ ಸರಿಯಾಗಿಲ್ಲದೆ ಈಗೆರಡು ದಿನಗಳಿಂದ ಹಾಸಿಗೆ ಹಿಡಿದು ಸಮೀಪ ಗ್ರಾಮದ ಗೌಡರ ಮನೆಯಲ್ಲಿದ್ದಾಳೆ,” ಎಂದು ಮಾರಯ್ಯ ಉತ್ತರಿಸಿದರು.
{{gap}}ಶಿಬಿರದ ಗಣಾಚಾರಿ ನಾಯಕನು ಅಪರಿಚಿತರಿಬ್ಬರನ್ನು ಸಂಗಡ ಕರೆತರುತ್ತಿರುವುದನ್ನು ಕಂಡು ನಾಗಲಾಂಬೆ ಅಲ್ಲಿಂದ ಸರಿದಳು.
{{gap}}ಅಪರಿಚಿತರಲ್ಲೊಬ್ಬನ ಕಪಿನಿ ಅಂಗವಸ್ತ್ರಗಳು, ನೀಳವಾದ ಜಟೆ, ಗಡ್ಡ, ಕೈಯಲ್ಲಿ ಹಿಡಿದಿದ್ದ ಕಮಂಡಲು, ಕಂಕುಳಲ್ಲಿದ್ದ ಯೋಗದಂಡ, ಇವು ಅವನು ಯಾವುದೋ ವಿಶಿಷ್ಟ ಸಂಪ್ರದಾಯದ ಶೈವಮತಿ ಎಂಬುದನ್ನು ತಿಳಿಸುತ್ತಿತ್ತು. ಸಂಗಡಿದ್ದ ಯುವಕನು ಅವನ ಸೇವಕನೋ ಅಂತೇವಾಸಿಯೋ ಆಗಿದ್ದನು.
{{gap}}“ಇವರು ಸಿದ್ದರಾಮೇಶ್ವರ ಶಿವಯೋಗಿಗಳನ್ನು ನೋಡಲು ಬಂದಿದ್ದಾರೆ, ಅಣ್ಣ” ಎಂದು ನಾಯಕನು ಪರಿಚಯ ಹೇಳಿದನು.
{{gap}}ಶೈವಯತಿ ಸಿದ್ದರಾಮೇಶ್ವರರಿಗೆ ವಂದಿಸಿ, “ನಿಮಗೆ ನನ್ನ ನೆನಪಿದೆಯೆ, ಅಣ್ಣನವರೇ?” ಎಂದು ಕೇಳಿದನು.
{{gap}}ಸಿದ್ಧರಾಮೇಶ್ವರರು ಉತ್ತರ ಕೊಡಲಿಲ್ಲ. ಅವರ ತೀಕ್ಷ್ಮ ದೃಷ್ಟಿ ಅಗ್ನಿಜ್ವಾಲೆಯಂತೆ ಹೊಸಬನ ಮೇಲೆ ಬಿದ್ದಿತ್ತು.
{{gap}}ಮಾಚಿದೇವರು ಅವರನ್ನು ಕಂಡು ಅಚ್ಚರಿಯಿಂದ, “ಕೆಲವು ದಿನಗಳ ಹಿಂದೆ ಮಹಮನೆಯಲ್ಲಿದ್ದ ಬ್ರಹೇಂದ್ರ ಶೀವಯೋಗಿಗಳಲ್ಲವೆ ನೀವು? ನಿಮ್ಮ ಸಂಗಡಿರುವವನು ನಿಮ್ಮ ಅಂತೇವಾಸಿ ಹರೀಶ ರುದ್ರ !” ಎಂದರು.
{{gap}}ಅಪರಿಚಿತ ಯತಿ ಕೃತಕ ನಗೆ ಬೀರಿ ತಲೆಯಾಡಿಸಿ ಹೇಳಿದನು : “ನಾನು ಬ್ರಹೇಂದ್ರ ಶಿವಯೋಗಿಯಲ್ಲ, ಮಾಚಿದೇವಯ್ಯನವರೆ. ಅವನ ಅವಳಿ ಸಹೋದರ. ಇಬ್ಬರೂ ಏಕಕಾಲದಲ್ಲಿ ದೀಕ್ಷೆ ತೆಗೆದುಕೊಂಡೆವು. ಈಗ ಕೆಲವು ದಿನಗಳ ಹಿಂದೆ ನನ್ನ ಸಹೋದರ ಕಲ್ಯಾಣಕ್ಕೆ ಹೋಗುವುದಾಗಿ ಹೇಳಿ ಆಶ್ರಮ ಬಿಟ್ಟವನು ಇದುವರೆಗೆ ಹಿಂದಿರುಗಿಲ್ಲ. ಹುಡುಕುತ್ತಾ ನಾವಿಲ್ಲಿಗೆ ಬಂದೆವು. ಅವನ ವಿಚಾರ ನಿಮಗೇನಾದರೂ ತಿಳಿದಿದೆಯೆ?”
{{gap}}ವೇಷವಿನ್ಯಾಸಗಳಲ್ಲಿ ಬ್ರಹ್ಮಂದ್ರ ಶೀವಯೋಗಿಯಂತೆ ಕಂಡರೂ ಅವನೇ ಬೇರೆ, ಇವನೇ ಬೇರೆ ಎಂದು ಮಾಚಿದೇವರು ತಿಳಿದರು. ನಡೆ ನುಡಿ ಕಂಠಗಳಲ್ಲಿ ಸಾಕಷ್ಟು ವ್ಯತ್ಯಾಸವಿತ್ತು.<noinclude></noinclude>
chc4d3lex9kph3zr8etsd69xpvs2c2c
321005
320998
2026-05-20T03:22:13Z
Shreesha Sharma
7840
/* Validated */
321005
proofread-page
text/x-wiki
<noinclude><pagequality level="4" user="Shreesha Sharma" /></noinclude>________________
{{rh|left=೪೧೦|center=|right=ಕ್ರಾಂತಿ ಕಲ್ಯಾಣ}}
ತಿರುಗಿ, “ಗಂಗಾದೇವಿಯವರನ್ನೇಕೆ ಸಂಗಡ ಕರೆತರಲಿಲ್ಲ, ಅಣ್ಣ ?” ಎಂದು ಕೇಳಿದಳು.
{{gap}}“ಅವಸರ ಪ್ರವಾಸದ ಆಯಾಸ ಸಹಿಸುವ ಶಕ್ತಿ ಈಗವಳಿಗಿಲ್ಲ, ಅಕ್ಕನವರೆ. ಆರೋಗ್ಯ ಸರಿಯಾಗಿಲ್ಲದೆ ಈಗೆರಡು ದಿನಗಳಿಂದ ಹಾಸಿಗೆ ಹಿಡಿದು ಸಮೀಪ ಗ್ರಾಮದ ಗೌಡರ ಮನೆಯಲ್ಲಿದ್ದಾಳೆ,” ಎಂದು ಮಾರಯ್ಯ ಉತ್ತರಿಸಿದರು.
{{gap}}ಶಿಬಿರದ ಗಣಾಚಾರಿ ನಾಯಕನು ಅಪರಿಚಿತರಿಬ್ಬರನ್ನು ಸಂಗಡ ಕರೆತರುತ್ತಿರುವುದನ್ನು ಕಂಡು ನಾಗಲಾಂಬೆ ಅಲ್ಲಿಂದ ಸರಿದಳು.
{{gap}}ಅಪರಿಚಿತರಲ್ಲೊಬ್ಬನ ಕಪಿನಿ ಅಂಗವಸ್ತ್ರಗಳು, ನೀಳವಾದ ಜಟೆ, ಗಡ್ಡ, ಕೈಯಲ್ಲಿ ಹಿಡಿದಿದ್ದ ಕಮಂಡಲು, ಕಂಕುಳಲ್ಲಿದ್ದ ಯೋಗದಂಡ, ಇವು ಅವನು ಯಾವುದೋ ವಿಶಿಷ್ಟ ಸಂಪ್ರದಾಯದ ಶೈವಮತಿ ಎಂಬುದನ್ನು ತಿಳಿಸುತ್ತಿತ್ತು. ಸಂಗಡಿದ್ದ ಯುವಕನು ಅವನ ಸೇವಕನೋ ಅಂತೇವಾಸಿಯೋ ಆಗಿದ್ದನು.
{{gap}}“ಇವರು ಸಿದ್ದರಾಮೇಶ್ವರ ಶಿವಯೋಗಿಗಳನ್ನು ನೋಡಲು ಬಂದಿದ್ದಾರೆ, ಅಣ್ಣ” ಎಂದು ನಾಯಕನು ಪರಿಚಯ ಹೇಳಿದನು.
{{gap}}ಶೈವಯತಿ ಸಿದ್ದರಾಮೇಶ್ವರರಿಗೆ ವಂದಿಸಿ, “ನಿಮಗೆ ನನ್ನ ನೆನಪಿದೆಯೆ, ಅಣ್ಣನವರೇ?” ಎಂದು ಕೇಳಿದನು.
{{gap}}ಸಿದ್ಧರಾಮೇಶ್ವರರು ಉತ್ತರ ಕೊಡಲಿಲ್ಲ. ಅವರ ತೀಕ್ಷ್ಮ ದೃಷ್ಟಿ ಅಗ್ನಿಜ್ವಾಲೆಯಂತೆ ಹೊಸಬನ ಮೇಲೆ ಬಿದ್ದಿತ್ತು.
{{gap}}ಮಾಚಿದೇವರು ಅವರನ್ನು ಕಂಡು ಅಚ್ಚರಿಯಿಂದ, “ಕೆಲವು ದಿನಗಳ ಹಿಂದೆ ಮಹಮನೆಯಲ್ಲಿದ್ದ ಬ್ರಹೇಂದ್ರ ಶೀವಯೋಗಿಗಳಲ್ಲವೆ ನೀವು? ನಿಮ್ಮ ಸಂಗಡಿರುವವನು ನಿಮ್ಮ ಅಂತೇವಾಸಿ ಹರೀಶ ರುದ್ರ !” ಎಂದರು.
{{gap}}ಅಪರಿಚಿತ ಯತಿ ಕೃತಕ ನಗೆ ಬೀರಿ ತಲೆಯಾಡಿಸಿ ಹೇಳಿದನು : “ನಾನು ಬ್ರಹೇಂದ್ರ ಶಿವಯೋಗಿಯಲ್ಲ, ಮಾಚಿದೇವಯ್ಯನವರೆ. ಅವನ ಅವಳಿ ಸಹೋದರ. ಇಬ್ಬರೂ ಏಕಕಾಲದಲ್ಲಿ ದೀಕ್ಷೆ ತೆಗೆದುಕೊಂಡೆವು. ಈಗ ಕೆಲವು ದಿನಗಳ ಹಿಂದೆ ನನ್ನ ಸಹೋದರ ಕಲ್ಯಾಣಕ್ಕೆ ಹೋಗುವುದಾಗಿ ಹೇಳಿ ಆಶ್ರಮ ಬಿಟ್ಟವನು ಇದುವರೆಗೆ ಹಿಂದಿರುಗಿಲ್ಲ. ಹುಡುಕುತ್ತಾ ನಾವಿಲ್ಲಿಗೆ ಬಂದೆವು. ಅವನ ವಿಚಾರ ನಿಮಗೇನಾದರೂ ತಿಳಿದಿದೆಯೆ?”
{{gap}}ವೇಷವಿನ್ಯಾಸಗಳಲ್ಲಿ ಬ್ರಹ್ಮಂದ್ರ ಶೀವಯೋಗಿಯಂತೆ ಕಂಡರೂ ಅವನೇ ಬೇರೆ, ಇವನೇ ಬೇರೆ ಎಂದು ಮಾಚಿದೇವರು ತಿಳಿದರು. ನಡೆ ನುಡಿ ಕಂಠಗಳಲ್ಲಿ ಸಾಕಷ್ಟು ವ್ಯತ್ಯಾಸವಿತ್ತು.<noinclude></noinclude>
o9qf8gcmnzbt7rtp5lq1sva713r85sp
ಪುಟ:ಕ್ರಾಂತಿ ಕಲ್ಯಾಣ.pdf/೪೨೭
104
86374
321002
203698
2026-05-20T03:20:54Z
Shreelatha.Halemane
7642
/* Proofread */
321002
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|left=೪೧೪|center=|right=ಕ್ರಾಂತಿ ಕಲ್ಯಾಣ}}
{{gap}}“ಶರಣರು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ, ಕರ್ಣದೇವರಸರೆ. ನಮ್ಮಿಂದ ನಿಮಗಾವ ಸಹಾಯವೂ ದೊರಕಲಾರದು.”- ನಿರ್ಧಾರಕ ಕಂಠದಿಂದ ಮಾಚಿದೇವರು ಉತ್ತರ ಕೊಟ್ಟರು.
{{gap}}ಕರ್ಣದೇವ ಅಪ್ರತಿಭನಾಗಿ ಚೆನ್ನಬಸವಣ್ಣನವರ ಕಡೆ ನೋಡಿದನು.
{{gap}}“ಮಾಚಿದೇವರ ಅಭಿಪ್ರಾಯವೇ ನನ್ನ ಅಭಿಪ್ರಾಯ, ಒಂದು ಸಾರಿ ಸರ್ಪದ್ರಷ್ಟರಾದವರು ಮುಂದೆ ಯಾವಾಗಲೂ ಹುತ್ತದ ಬಳಿ ಹೋಗುವುದಿಲ್ಲ. ಬಿಜ್ಜಳ ರಾಯರು ನನ್ನನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ಕಲಚೂರ್ಯ ರಾಜಿಕದ ಪರಿಚಯ ಮಾಡಿಕೊಟ್ಟಿದ್ದಾರೆ. ನಾವು ಕಲ್ಯಾಣವನ್ನು ಬಿಟ್ಟು ವಲಸೆ ಬರಲು ಆ ದುರದೃಷ್ಟಕರ ಅನುಭವವೇ ಕಾರಣ. ಮುಂದೆ ಶರಣರನ್ನು ರಾಜಕದಿಂದ ದೂರವಾಗಿಡಲು ಸರ್ವಪ್ರಯತ್ನ ಮಾಡುತ್ತೇನೆ,” ಎಂದರು ಚೆನ್ನಬಸವಣ್ಣನವರು.
{{gap}}“ನಿಮ್ಮ ಉತ್ತರಗಳು ನನ್ನನ್ನು ಸ್ತಂಭಿತಗೊಳಿಸಿವೆ, ಅಯ್ಯಗಳೇ. ಅಣ್ಣನ ಅಪರಾಧಕ್ಕಾಗಿ ತಮ್ಮನನ್ನು ಶಿಕ್ಷಿಸುವುದು ಯಾವ ಧರ್ಮ? ನಾನು ನಿಮ್ಮನ್ನು ಮಂತ್ರಿಯಾಗಲು ಕರೆಯುತ್ತಿಲ್ಲ. ಶರಣರು ರಾಜಿಕಕ್ಕೆ ಪ್ರವೇಶಿಸಲು ಹೇಳುತ್ತಿಲ್ಲ. ನೀವು ದಯಮಾಡಿ ವಲಸೆಯ ನಿರ್ಧಾರವನ್ನು ತ್ಯಜಿಸಿ ಕಲ್ಯಾಣಕ್ಕೆ ಹಿಂದಿರುಗಬೇಕಾಗಿ ನನ್ನ ಪ್ರಾರ್ಥನೆ. ಅದರಿಂದ ನಗರದಲ್ಲಿ ನನ್ನ ಕೈ ಮೇಲಾಗುವುದು. ಮಾಧವ ನಾಯಕನ ದುರಾಡಳಿತವನ್ನು ತಡೆಯಲು ನಾನು ಶಕ್ತನಾಗುವೆನು,” ಎಂದು ಕರ್ಣದೇವ ಪುನಃ ಹೇಳಿದನು.
{{gap}}ಚೆನ್ನಬಸವಣ್ಣನವರು ಉತ್ತರ ಕೊಡಲಿಲ್ಲ. ಮುಖ ತಿರುಗಿಸಿ ತಮ್ಮ ಧರ್ಮ ಚಿಂತನೆಯಲ್ಲಿ ಮಗ್ನರಾದರು.
{{gap}}ಅವರ ಪರವಾಗಿ ಮಾಚಿದೇವರು ಉತ್ತರ ಕೊಟ್ಟರು : “ನಾವು ವಲಸೆ ಹೊರಟು ಆಂಜನೇಯ ಹೊಳೆ ದಾಟಿ ಆಗಲೆ ಕೊಂಚ ದೂರ ಬಂದಿದ್ದೇವೆ, ಕರ್ಣದೇವರಸರೆ, ಈಗ ಪುನಃ ಕಲ್ಯಾಣಕ್ಕೆ ಹಿಂದಿರುಗುವುದು, ಬೇಡವೆಂದು ಉಗುಳಿದ್ದನ್ನು ಪುನಃ ತೆಗೆದು ಬಾಯಿಗಿಟ್ಟುಕೊಂಡಂತೆ. ಅಂತಹ ಹೊಲಸು ಶರಣರಿಗೆ ತ್ರಿಕಾಲದಲ್ಲಿಯೂ ಸಲ್ಲ.”
{{gap}}ಕರ್ಣದೇವ ಯೋಚಿಸುತ್ತ ಕುಳಿತನು.
{{gap}}ಮೋಳಿಗೆ ಮಾರಯ್ಯನವರು ಅವನ ನೆರವಿಗೆ ಬಂದು ಹೇಳಿದರು : “ಶರಣರು ರಾಜಸತ್ತೆಯಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ, ಕರ್ಣದೇವರಸರೆ. ಅವರು ವಲಸೆ ಹೊರಟಿರುವುದು ಯಾವ ಒಬ್ಬ ಅರಸನ ಅಥವಾ ಪ್ರಭುತ್ವದ ವಿರುದ್ಧವಾಗಿ ಅಲ್ಲ-ಎಲ್ಲ ಕಾಲ, ಎಲ್ಲ ದೇಶಗಳ ರಾಜಸತ್ತೆಗೆ ತಮ್ಮ ವಿರೋಧದ<noinclude></noinclude>
gt25o63ruvzgexvshwc1u4g9wjwu9ws
321009
321002
2026-05-20T03:23:02Z
Shreesha Sharma
7840
/* Validated */
321009
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|left=೪೧೪|center=|right=ಕ್ರಾಂತಿ ಕಲ್ಯಾಣ}}
{{gap}}“ಶರಣರು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ, ಕರ್ಣದೇವರಸರೆ. ನಮ್ಮಿಂದ ನಿಮಗಾವ ಸಹಾಯವೂ ದೊರಕಲಾರದು.”- ನಿರ್ಧಾರಕ ಕಂಠದಿಂದ ಮಾಚಿದೇವರು ಉತ್ತರ ಕೊಟ್ಟರು.
{{gap}}ಕರ್ಣದೇವ ಅಪ್ರತಿಭನಾಗಿ ಚೆನ್ನಬಸವಣ್ಣನವರ ಕಡೆ ನೋಡಿದನು.
{{gap}}“ಮಾಚಿದೇವರ ಅಭಿಪ್ರಾಯವೇ ನನ್ನ ಅಭಿಪ್ರಾಯ, ಒಂದು ಸಾರಿ ಸರ್ಪದ್ರಷ್ಟರಾದವರು ಮುಂದೆ ಯಾವಾಗಲೂ ಹುತ್ತದ ಬಳಿ ಹೋಗುವುದಿಲ್ಲ. ಬಿಜ್ಜಳ ರಾಯರು ನನ್ನನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡು ಕಲಚೂರ್ಯ ರಾಜಿಕದ ಪರಿಚಯ ಮಾಡಿಕೊಟ್ಟಿದ್ದಾರೆ. ನಾವು ಕಲ್ಯಾಣವನ್ನು ಬಿಟ್ಟು ವಲಸೆ ಬರಲು ಆ ದುರದೃಷ್ಟಕರ ಅನುಭವವೇ ಕಾರಣ. ಮುಂದೆ ಶರಣರನ್ನು ರಾಜಕದಿಂದ ದೂರವಾಗಿಡಲು ಸರ್ವಪ್ರಯತ್ನ ಮಾಡುತ್ತೇನೆ,” ಎಂದರು ಚೆನ್ನಬಸವಣ್ಣನವರು.
{{gap}}“ನಿಮ್ಮ ಉತ್ತರಗಳು ನನ್ನನ್ನು ಸ್ತಂಭಿತಗೊಳಿಸಿವೆ, ಅಯ್ಯಗಳೇ. ಅಣ್ಣನ ಅಪರಾಧಕ್ಕಾಗಿ ತಮ್ಮನನ್ನು ಶಿಕ್ಷಿಸುವುದು ಯಾವ ಧರ್ಮ? ನಾನು ನಿಮ್ಮನ್ನು ಮಂತ್ರಿಯಾಗಲು ಕರೆಯುತ್ತಿಲ್ಲ. ಶರಣರು ರಾಜಿಕಕ್ಕೆ ಪ್ರವೇಶಿಸಲು ಹೇಳುತ್ತಿಲ್ಲ. ನೀವು ದಯಮಾಡಿ ವಲಸೆಯ ನಿರ್ಧಾರವನ್ನು ತ್ಯಜಿಸಿ ಕಲ್ಯಾಣಕ್ಕೆ ಹಿಂದಿರುಗಬೇಕಾಗಿ ನನ್ನ ಪ್ರಾರ್ಥನೆ. ಅದರಿಂದ ನಗರದಲ್ಲಿ ನನ್ನ ಕೈ ಮೇಲಾಗುವುದು. ಮಾಧವ ನಾಯಕನ ದುರಾಡಳಿತವನ್ನು ತಡೆಯಲು ನಾನು ಶಕ್ತನಾಗುವೆನು,” ಎಂದು ಕರ್ಣದೇವ ಪುನಃ ಹೇಳಿದನು.
{{gap}}ಚೆನ್ನಬಸವಣ್ಣನವರು ಉತ್ತರ ಕೊಡಲಿಲ್ಲ. ಮುಖ ತಿರುಗಿಸಿ ತಮ್ಮ ಧರ್ಮ ಚಿಂತನೆಯಲ್ಲಿ ಮಗ್ನರಾದರು.
{{gap}}ಅವರ ಪರವಾಗಿ ಮಾಚಿದೇವರು ಉತ್ತರ ಕೊಟ್ಟರು : “ನಾವು ವಲಸೆ ಹೊರಟು ಆಂಜನೇಯ ಹೊಳೆ ದಾಟಿ ಆಗಲೆ ಕೊಂಚ ದೂರ ಬಂದಿದ್ದೇವೆ, ಕರ್ಣದೇವರಸರೆ, ಈಗ ಪುನಃ ಕಲ್ಯಾಣಕ್ಕೆ ಹಿಂದಿರುಗುವುದು, ಬೇಡವೆಂದು ಉಗುಳಿದ್ದನ್ನು ಪುನಃ ತೆಗೆದು ಬಾಯಿಗಿಟ್ಟುಕೊಂಡಂತೆ. ಅಂತಹ ಹೊಲಸು ಶರಣರಿಗೆ ತ್ರಿಕಾಲದಲ್ಲಿಯೂ ಸಲ್ಲ.”
{{gap}}ಕರ್ಣದೇವ ಯೋಚಿಸುತ್ತ ಕುಳಿತನು.
{{gap}}ಮೋಳಿಗೆ ಮಾರಯ್ಯನವರು ಅವನ ನೆರವಿಗೆ ಬಂದು ಹೇಳಿದರು : “ಶರಣರು ರಾಜಸತ್ತೆಯಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ, ಕರ್ಣದೇವರಸರೆ. ಅವರು ವಲಸೆ ಹೊರಟಿರುವುದು ಯಾವ ಒಬ್ಬ ಅರಸನ ಅಥವಾ ಪ್ರಭುತ್ವದ ವಿರುದ್ಧವಾಗಿ ಅಲ್ಲ-ಎಲ್ಲ ಕಾಲ, ಎಲ್ಲ ದೇಶಗಳ ರಾಜಸತ್ತೆಗೆ ತಮ್ಮ ವಿರೋಧದ<noinclude></noinclude>
op08p6x2adtuykvp24xeizs0vfvyktc
ಪುಟ:ಕ್ರಾಂತಿ ಕಲ್ಯಾಣ.pdf/೪೨೬
104
86375
321001
203699
2026-05-20T03:19:10Z
Shreelatha.Halemane
7642
/* Proofread */
321001
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|left=ಮಹಾಪ್ರಸ್ಥಾನ|center=|right=೪೧೩}}
{{gap}}ಸಿದ್ದರಾಮೇಶ್ವರರು ಸಹಾನುಭೂತಿಯ ಮೆಲ್ಲನಿಯಿಂದ ಕರ್ಣದೇವನನ್ನು ಪ್ರಶ್ನಿಸಿದರು.
{{gap}}ಕರ್ಣದೇವ ಕೇಳಿದನು : “ಅಣ್ಣನ ದುರ್ಮರಣದಿಂದ ಕಲ್ಯಾಣದ ಪರಿಸ್ಥಿತಿ ಹದಗೆಟ್ಟಿತ್ತು. ಜಗದೇಕಮಲ್ಲನ ಮೃತ್ಯುವಿನಿಂದ ಅದು ವಿಷಮಾವಸ್ಥೆಗೇರುತ್ತದೆ. ಚಾಲುಕ್ಯ ಅರಸೊತ್ತಿಗೆ, ರಾಜ್ಯದ ಸರ್ವಾಧಿಕಾರ, ಇವೆರಡಕ್ಕೂ ಏಕಕಾಲದಲ್ಲಿ ಸ್ಪರ್ಧೆ ಪ್ರಾರಂಭವಾಗುತ್ತದೆ. ಯುದ್ಧವೂ ನಡೆಯುವುದು. ಈ ಸಂದರ್ಭದಲ್ಲಿ ನೀವು ನನಗೆ ನೆರವಾಗಬೇಕಾಗಿ ಬೇಡುತ್ತೇನೆ. ಅಣ್ಣ ಬಿಜ್ಜಳನು ಉದ್ದೇಶಿಸಿದಂತೆ ತೈಲಪ ಮಹಾರಾಜರ ಕ್ಷೇತ್ರಜ ಪುತ್ರ ಕುಮಾರ ಪ್ರೇಮಾರ್ಣವನು ಅರಸೊತ್ತಿಗೆಯೇರಲಿ. ನನಗೆ ರಾಜ್ಯದ ಸರ್ವಾಧಿಕಾರ ಸಿಕ್ಕಿದರೆ ಸಾಕು. ಅದಕ್ಕಾಗಿ ನಿಮ್ಮ ಆಶೀರ್ವಾದ ಬೇಡಲು ಬಂದಿದ್ದೇನೆ.”
{{gap}}“ನಮ್ಮ ಆಶೀರ್ವಾದ ನಿನಗೆ ಸರ್ವಾಧಿಕಾರ ಕೊಡಿಸಬಲ್ಲುದೆ, ಕರ್ಣದೇವ? ಎಲ್ಲವನ್ನೂ ತೊರೆದ ನಿರಾಭಾರಿ ಜಂಗಮ ನಾನು.” -ಸಿದ್ದರಾಮೇಶ್ವರರು ನುಡಿದರು ಅನಾಸಕ್ತಿಯಿಂದ.
{{gap}}ಕರ್ಣದೇವ ಅದನ್ನು ಗಮನಿಸಲಿಲ್ಲ. ಉತ್ಸಾಹದ ಭರದಲ್ಲಿ ಮುಂದುವರಿದು ಹೇಳಿದನು : "ಈಗ ಮಾಧವನಾಯಕನು ತಾನೇ ಸರ್ವಾಧಿಕಾರಿಯಾಗಲು ಪ್ರಯತ್ನಿಸುತ್ತಿದ್ದಾನೆ, ಅಣ್ಣನವರೆ. ಸೈನ್ಯದ ಬಹುಭಾಗ ಅವನ ಅಧೀನದಲ್ಲಿದೆ. ಶರಣ ಧರ್ಮದಲ್ಲಿ ಬದ್ಧದ್ವೇಷಿಯಾದ ಅವನು ಸರ್ವಾಧಿಕಾರಿಯಾಗುವುದು ನಿಮಗಿಷ್ಟವೆ? ನೀವು ನನ್ನ ಕಡೆಗಿರುವಿರೆಂದು ತಿಳಿದರೆ ಸಾಕು, ಮಾಧವನಾಯಕನ ಸೈನ್ಯದಲ್ಲಿ ಅರ್ಧಭಾಗ ಅವನನ್ನು ಬಿಟ್ಟು ನನ್ನನ್ನು ಸೇರುವುದು. ಕುಮಾರ ಸೋಮೇಶ್ವರನು ಮಂಗಳವೇಡೆಯಿಂದ ಬರುವಷ್ಟರಲ್ಲಿ ಮಾಧವ ನಾಯಕನನ್ನು ನಾನು ಸೋಲಿಸುವೆನು. ಕಲ್ಯಾಣ ನಿರಾಪದವಾಗುವುದು.”
{{gap}}ಸಿದ್ದರಾಮೇಶ್ವರರ ಮುಖದಲ್ಲಿ ಅವಿಶ್ವಾಸದ ಮಿದುನಗೆ ಮೂಡಿತು. “ನೀನು ಮರಳ ಮೇಲೆ ಮನೆ ಕಟ್ಟುತ್ತಿರುವೆ, ಕರ್ಣದೇವ. ನೀವು ಬಸವಣ್ಣನವರನ್ನು ಹೊರಗೆ ಕಳುಹಿಸಿದಾಗಲೆ ಕಲ್ಯಾಣದ ಸೌಭಾಗ್ಯ ನಾಶವಾಯಿತು. ಪುನಃ ಅದನ್ನು ಹಿಂದಕ್ಕೆ ತರುವೆನೆಂಬುದು ಫಲಿಸದ ಆಸೆ. ಅಲ್ಲದೆ....ಶರಣರ ವಿಚಾರದಲ್ಲಿ ಅಧಿಕಾರದಿಂದ ಮಾತಾಡಬಲ್ಲವರು ಈ ಮಾಚಿದೇವರು ಮತ್ತು ಚೆನ್ನಬಸವಣ್ಣನವರು. ನೀನು ಅವರ ಸಹಾನುಭೂತಿಗಾಗಿ ಪ್ರಯತ್ನಿಸು,” ಎಂದರು ಅವರು.
{{gap}}ಚೆನ್ನಬಸವಣ್ಣನವರು ಮೌನವಾಗಿ ಧರ್ಮರಕ್ಷಣೆಗೆ ಮುಂದೆ ಅನುಸರಿಸಬೇಕಾದ ಕಾರ್ಯವಿಧಾನವನ್ನು ಚಿಂತಿಸುತ್ತಿದ್ದರು.<noinclude></noinclude>
qebx8xq7j005mjwe3ooigkqapuxatb5
321008
321001
2026-05-20T03:22:48Z
Shreesha Sharma
7840
/* Validated */
321008
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|left=ಮಹಾಪ್ರಸ್ಥಾನ|center=|right=೪೧೩}}
{{gap}}ಸಿದ್ದರಾಮೇಶ್ವರರು ಸಹಾನುಭೂತಿಯ ಮೆಲ್ಲನಿಯಿಂದ ಕರ್ಣದೇವನನ್ನು ಪ್ರಶ್ನಿಸಿದರು.
{{gap}}ಕರ್ಣದೇವ ಕೇಳಿದನು : “ಅಣ್ಣನ ದುರ್ಮರಣದಿಂದ ಕಲ್ಯಾಣದ ಪರಿಸ್ಥಿತಿ ಹದಗೆಟ್ಟಿತ್ತು. ಜಗದೇಕಮಲ್ಲನ ಮೃತ್ಯುವಿನಿಂದ ಅದು ವಿಷಮಾವಸ್ಥೆಗೇರುತ್ತದೆ. ಚಾಲುಕ್ಯ ಅರಸೊತ್ತಿಗೆ, ರಾಜ್ಯದ ಸರ್ವಾಧಿಕಾರ, ಇವೆರಡಕ್ಕೂ ಏಕಕಾಲದಲ್ಲಿ ಸ್ಪರ್ಧೆ ಪ್ರಾರಂಭವಾಗುತ್ತದೆ. ಯುದ್ಧವೂ ನಡೆಯುವುದು. ಈ ಸಂದರ್ಭದಲ್ಲಿ ನೀವು ನನಗೆ ನೆರವಾಗಬೇಕಾಗಿ ಬೇಡುತ್ತೇನೆ. ಅಣ್ಣ ಬಿಜ್ಜಳನು ಉದ್ದೇಶಿಸಿದಂತೆ ತೈಲಪ ಮಹಾರಾಜರ ಕ್ಷೇತ್ರಜ ಪುತ್ರ ಕುಮಾರ ಪ್ರೇಮಾರ್ಣವನು ಅರಸೊತ್ತಿಗೆಯೇರಲಿ. ನನಗೆ ರಾಜ್ಯದ ಸರ್ವಾಧಿಕಾರ ಸಿಕ್ಕಿದರೆ ಸಾಕು. ಅದಕ್ಕಾಗಿ ನಿಮ್ಮ ಆಶೀರ್ವಾದ ಬೇಡಲು ಬಂದಿದ್ದೇನೆ.”
{{gap}}“ನಮ್ಮ ಆಶೀರ್ವಾದ ನಿನಗೆ ಸರ್ವಾಧಿಕಾರ ಕೊಡಿಸಬಲ್ಲುದೆ, ಕರ್ಣದೇವ? ಎಲ್ಲವನ್ನೂ ತೊರೆದ ನಿರಾಭಾರಿ ಜಂಗಮ ನಾನು.” -ಸಿದ್ದರಾಮೇಶ್ವರರು ನುಡಿದರು ಅನಾಸಕ್ತಿಯಿಂದ.
{{gap}}ಕರ್ಣದೇವ ಅದನ್ನು ಗಮನಿಸಲಿಲ್ಲ. ಉತ್ಸಾಹದ ಭರದಲ್ಲಿ ಮುಂದುವರಿದು ಹೇಳಿದನು : "ಈಗ ಮಾಧವನಾಯಕನು ತಾನೇ ಸರ್ವಾಧಿಕಾರಿಯಾಗಲು ಪ್ರಯತ್ನಿಸುತ್ತಿದ್ದಾನೆ, ಅಣ್ಣನವರೆ. ಸೈನ್ಯದ ಬಹುಭಾಗ ಅವನ ಅಧೀನದಲ್ಲಿದೆ. ಶರಣ ಧರ್ಮದಲ್ಲಿ ಬದ್ಧದ್ವೇಷಿಯಾದ ಅವನು ಸರ್ವಾಧಿಕಾರಿಯಾಗುವುದು ನಿಮಗಿಷ್ಟವೆ? ನೀವು ನನ್ನ ಕಡೆಗಿರುವಿರೆಂದು ತಿಳಿದರೆ ಸಾಕು, ಮಾಧವನಾಯಕನ ಸೈನ್ಯದಲ್ಲಿ ಅರ್ಧಭಾಗ ಅವನನ್ನು ಬಿಟ್ಟು ನನ್ನನ್ನು ಸೇರುವುದು. ಕುಮಾರ ಸೋಮೇಶ್ವರನು ಮಂಗಳವೇಡೆಯಿಂದ ಬರುವಷ್ಟರಲ್ಲಿ ಮಾಧವ ನಾಯಕನನ್ನು ನಾನು ಸೋಲಿಸುವೆನು. ಕಲ್ಯಾಣ ನಿರಾಪದವಾಗುವುದು.”
{{gap}}ಸಿದ್ದರಾಮೇಶ್ವರರ ಮುಖದಲ್ಲಿ ಅವಿಶ್ವಾಸದ ಮಿದುನಗೆ ಮೂಡಿತು. “ನೀನು ಮರಳ ಮೇಲೆ ಮನೆ ಕಟ್ಟುತ್ತಿರುವೆ, ಕರ್ಣದೇವ. ನೀವು ಬಸವಣ್ಣನವರನ್ನು ಹೊರಗೆ ಕಳುಹಿಸಿದಾಗಲೆ ಕಲ್ಯಾಣದ ಸೌಭಾಗ್ಯ ನಾಶವಾಯಿತು. ಪುನಃ ಅದನ್ನು ಹಿಂದಕ್ಕೆ ತರುವೆನೆಂಬುದು ಫಲಿಸದ ಆಸೆ. ಅಲ್ಲದೆ....ಶರಣರ ವಿಚಾರದಲ್ಲಿ ಅಧಿಕಾರದಿಂದ ಮಾತಾಡಬಲ್ಲವರು ಈ ಮಾಚಿದೇವರು ಮತ್ತು ಚೆನ್ನಬಸವಣ್ಣನವರು. ನೀನು ಅವರ ಸಹಾನುಭೂತಿಗಾಗಿ ಪ್ರಯತ್ನಿಸು,” ಎಂದರು ಅವರು.
{{gap}}ಚೆನ್ನಬಸವಣ್ಣನವರು ಮೌನವಾಗಿ ಧರ್ಮರಕ್ಷಣೆಗೆ ಮುಂದೆ ಅನುಸರಿಸಬೇಕಾದ ಕಾರ್ಯವಿಧಾನವನ್ನು ಚಿಂತಿಸುತ್ತಿದ್ದರು.<noinclude></noinclude>
2o73o50wqj44lv7rthy70xlaacuarkz
ಪುಟ:ಕ್ರಾಂತಿ ಕಲ್ಯಾಣ.pdf/೪೩೬
104
86381
321011
203706
2026-05-20T03:28:14Z
Shreesha Sharma
7840
/* Proofread */
321011
proofread-page
text/x-wiki
<noinclude><pagequality level="3" user="Shreesha Sharma" /></noinclude>________________
{{rh|left=ಮಹಾಪ್ರಸ್ಥಾನ|center=|right=೪೨೩}}
{{gap}}ಸ್ಥಳಗಳನ್ನು ಮುಟ್ಟಲು ಶಕ್ತನಾಗಲೆಂಬುದೇ ಅವರ ಕರುಣೆಯ ಉದ್ದೇಶ.”
{{gap}}ಈ ರೀತಿ ಪ್ರವಚನ ಸುಮಾರು ಅರ್ಧಪ್ರಹರ ಕಾಲ ನಡೆದ ಮೇಲೆ ಸಭೆಯ ಅಂಚಿನಲ್ಲಿ ಅಪ್ಪಣ್ಣ ನಿಂತಿರುವುದನ್ನು ಬಸವಣ್ಣನವರು ಗಮನಿಸಿ ಸನ್ನೆ ಮಾಡಿ ಹತ್ತಿರ ಕರೆದು, “ಯಾವಾಗ ಬಂದೆ, ಅಪ್ಪಣ್ಣ ? ಕಲ್ಯಾಣದ ಸುದ್ದಿಯೇನು?” ಎಂದು ಕೇಳಿದರು.
{{gap}}ಅಪ್ಪಣ್ಣ ನಿರುತ್ತರನಾಗಿ ಕಣ್ಣೀರು ಸುರಿಸುತ್ತ ಮೌನವಾಗಿ ನಿಂತನು. ಏನೋ ಅನರ್ಥ ನಡೆದಿದೆಯೆಂದು ತಿಳಿದು ಬಸವಣ್ಣನವರು ತುಸು ಗಂಭೀರವಾಗಿ, “ಏನಾಗಿದೆ ಹೇಳು, ಅಪ್ಪಣ್ಣ? ಆದುದನ್ನು ತಪ್ಪಿಸಲು, ಆಗಬೇಕಾದ್ದನ್ನು ತಡೆಯಲು ಕೂಡಲ ಸಂಗಮದೇವನೊಬ್ಬನಿಗಲ್ಲದೆ ಮತ್ತಾರಿಗೂ ಅಳವಲ್ಲ,” ಎಂದರು.
{{gap}}ಬಸವಣ್ಣನವರ ಮೃದು ಕಂಠ, ಅವರ ಮಾತುಗಳಲ್ಲಿ ಅಭಿವ್ಯಕ್ತವಾಗಿದ್ದ ಅನುಕಂಪದ ಹೊಲಬು, ಅಪ್ಪಣ್ಣನಿಗೆ ಚೈತನ್ಯವನ್ನು ಕೊಟ್ಟವು. ಉಕ್ಕಿ ಬರುತ್ತಿದ್ದ ಅಳುವನ್ನು ತಡೆದು ಅವನು ಗದ್ಗದ ಕಂಠದಿಂದ, “ಶರಣರು ಮಹಮನೆಯನ್ನು ಬಿಟ್ಟರು, ಅಣ್ಣನವರೆ. ಕಲ್ಯಾಣವನ್ನು ಶರಣರು ತ್ಯಜಿಸಿದರು. ಅವರು ಆಂಜನೆಯ ಹೊಳೆ ದಾಟಿ, ಗಣಾಚಾರಿ ಯೋಧರ ಶಿಬಿರ ಸೇರಿದ ಮೇಲೆ ನಾನು, ಚೆನ್ನಬಸವಣ್ಣನವರ ಅನುಮತಿ ಪಡೆದು ಇಲ್ಲಿಗೆ ಬಂದೆ. ಶರಣರು ಕಲ್ಯಾಣವನ್ನು ಬಿಟ್ಟ ರಾತ್ರಿ ಕಲಚೂರ್ಯ ಅರಮನೆಯಲ್ಲಿ...”
{{gap}}ಅಪ್ಪಣ್ಣ ಪುನಃ ತಡವರಿಸಿದನು. ಬಸವಣ್ಣನವರು ತಲೆಯೆತ್ತಿ, “ಕಲಚೂರ್ಯ ಅರಮನೆಯಲ್ಲಿ ಏನಾಯಿತು, ಅಪ್ಪಣ್ಣ?” ಎಂದು ಪುನಃ ಕೇಳಿದರು.
{{gap}}“ಬಿಜ್ಜಳರಾಯರು ಕೊಲೆ ಮಾಡಲ್ಪಟ್ಟರು, ಅಣ್ಣನವರೆ?”
{{gap}}ನುಡಿಯುತ್ತಿದ್ದಂತೆ ಅಪ್ಪಣ್ಣನ ಗಂಟಲು ಕಟ್ಟಿತು, ದೇಹ ಕಂಪಿಸಿತು.
ಈ ಮಾತುಗಳು, ಬಸವಣ್ಣನವರು ಕುಳಿತಿದ್ದ ವೇದಿಕೆಯ ಹತ್ತಿರ ಸಣ್ಣ ದನಿಯಲ್ಲಿ ನಡೆಯಿತಾದರೂ ಒಬ್ಬರಿಂದೊಬ್ಬರಿಗೆ ಹರಡಿ ಕೆಲವೇ ಕ್ಷಣಗಳಲ್ಲಿ ಸಭೆಯಲ್ಲಿ ಎಲ್ಲ ಕಡೆ ಪ್ರಚಾರವಾಯಿತು. ಸ್ತಂಭಿತರಂತೆ ಸಭೆಯಲ್ಲಿದ್ದವರೆಲ್ಲ ಮೌನವಾಗಿ ಕುಳಿತರು. -
{{gap}}ಬಸವಣ್ಣನವರು ಕೊಂಚ ಹೊತ್ತು ಯೋಚಿಸುತ್ತಿದ್ದು ಬಳಿಕ, “ನೀನು ಇಲ್ಲಿಯೇ ಕುಳಿತಿರು, ಅಪ್ಪಣ್ಣ, ಪ್ರವಚನ ಮುಗಿದ ಮೇಲೆ ಉಳಿದ ವಿಚಾರ, ಎಂದು ಹೇಳಿ ಅರ್ಧಕ್ಕೆ ನಿಂತಿದ್ದ ಪ್ರವಚನವನ್ನು ಮುಂದುವರಿಸಲು ಸಿದ್ಧರಾದರು.
{{gap}}- ಆದರೆ ಶೃತಿ ತಪ್ಪಿದ ವಾಗ್ಗೇಯಕಾರನಂತೆ ಬಸವಣ್ಣನವರು ಹೆಜ್ಜೆ ಹೆಜ್ಜೆಗೆ ತಡವರಿಸಿದರು. ಸರಿಯಾದ ಶಬ್ದಗಳನ್ನು ಹುಡುಕುವುದರಲ್ಲಿ, ಅಗತ್ಯದ<noinclude></noinclude>
03mnofblexsswikximi87xa8hz1onsm
321017
321011
2026-05-20T03:36:26Z
Shreelatha.Halemane
7642
/* Validated */
321017
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|left=ಮಹಾಪ್ರಸ್ಥಾನ|center=|right=೪೨೩}}
{{gap}}ಸ್ಥಳಗಳನ್ನು ಮುಟ್ಟಲು ಶಕ್ತನಾಗಲೆಂಬುದೇ ಅವರ ಕರುಣೆಯ ಉದ್ದೇಶ.”
{{gap}}ಈ ರೀತಿ ಪ್ರವಚನ ಸುಮಾರು ಅರ್ಧಪ್ರಹರ ಕಾಲ ನಡೆದ ಮೇಲೆ ಸಭೆಯ ಅಂಚಿನಲ್ಲಿ ಅಪ್ಪಣ್ಣ ನಿಂತಿರುವುದನ್ನು ಬಸವಣ್ಣನವರು ಗಮನಿಸಿ ಸನ್ನೆ ಮಾಡಿ ಹತ್ತಿರ ಕರೆದು, “ಯಾವಾಗ ಬಂದೆ, ಅಪ್ಪಣ್ಣ ? ಕಲ್ಯಾಣದ ಸುದ್ದಿಯೇನು?” ಎಂದು ಕೇಳಿದರು.
{{gap}}ಅಪ್ಪಣ್ಣ ನಿರುತ್ತರನಾಗಿ ಕಣ್ಣೀರು ಸುರಿಸುತ್ತ ಮೌನವಾಗಿ ನಿಂತನು. ಏನೋ ಅನರ್ಥ ನಡೆದಿದೆಯೆಂದು ತಿಳಿದು ಬಸವಣ್ಣನವರು ತುಸು ಗಂಭೀರವಾಗಿ, “ಏನಾಗಿದೆ ಹೇಳು, ಅಪ್ಪಣ್ಣ? ಆದುದನ್ನು ತಪ್ಪಿಸಲು, ಆಗಬೇಕಾದ್ದನ್ನು ತಡೆಯಲು ಕೂಡಲ ಸಂಗಮದೇವನೊಬ್ಬನಿಗಲ್ಲದೆ ಮತ್ತಾರಿಗೂ ಅಳವಲ್ಲ,” ಎಂದರು.
{{gap}}ಬಸವಣ್ಣನವರ ಮೃದು ಕಂಠ, ಅವರ ಮಾತುಗಳಲ್ಲಿ ಅಭಿವ್ಯಕ್ತವಾಗಿದ್ದ ಅನುಕಂಪದ ಹೊಲಬು, ಅಪ್ಪಣ್ಣನಿಗೆ ಚೈತನ್ಯವನ್ನು ಕೊಟ್ಟವು. ಉಕ್ಕಿ ಬರುತ್ತಿದ್ದ ಅಳುವನ್ನು ತಡೆದು ಅವನು ಗದ್ಗದ ಕಂಠದಿಂದ, “ಶರಣರು ಮಹಮನೆಯನ್ನು ಬಿಟ್ಟರು, ಅಣ್ಣನವರೆ. ಕಲ್ಯಾಣವನ್ನು ಶರಣರು ತ್ಯಜಿಸಿದರು. ಅವರು ಆಂಜನೆಯ ಹೊಳೆ ದಾಟಿ, ಗಣಾಚಾರಿ ಯೋಧರ ಶಿಬಿರ ಸೇರಿದ ಮೇಲೆ ನಾನು, ಚೆನ್ನಬಸವಣ್ಣನವರ ಅನುಮತಿ ಪಡೆದು ಇಲ್ಲಿಗೆ ಬಂದೆ. ಶರಣರು ಕಲ್ಯಾಣವನ್ನು ಬಿಟ್ಟ ರಾತ್ರಿ ಕಲಚೂರ್ಯ ಅರಮನೆಯಲ್ಲಿ...”
{{gap}}ಅಪ್ಪಣ್ಣ ಪುನಃ ತಡವರಿಸಿದನು. ಬಸವಣ್ಣನವರು ತಲೆಯೆತ್ತಿ, “ಕಲಚೂರ್ಯ ಅರಮನೆಯಲ್ಲಿ ಏನಾಯಿತು, ಅಪ್ಪಣ್ಣ?” ಎಂದು ಪುನಃ ಕೇಳಿದರು.
{{gap}}“ಬಿಜ್ಜಳರಾಯರು ಕೊಲೆ ಮಾಡಲ್ಪಟ್ಟರು, ಅಣ್ಣನವರೆ?”
{{gap}}ನುಡಿಯುತ್ತಿದ್ದಂತೆ ಅಪ್ಪಣ್ಣನ ಗಂಟಲು ಕಟ್ಟಿತು, ದೇಹ ಕಂಪಿಸಿತು.
ಈ ಮಾತುಗಳು, ಬಸವಣ್ಣನವರು ಕುಳಿತಿದ್ದ ವೇದಿಕೆಯ ಹತ್ತಿರ ಸಣ್ಣ ದನಿಯಲ್ಲಿ ನಡೆಯಿತಾದರೂ ಒಬ್ಬರಿಂದೊಬ್ಬರಿಗೆ ಹರಡಿ ಕೆಲವೇ ಕ್ಷಣಗಳಲ್ಲಿ ಸಭೆಯಲ್ಲಿ ಎಲ್ಲ ಕಡೆ ಪ್ರಚಾರವಾಯಿತು. ಸ್ತಂಭಿತರಂತೆ ಸಭೆಯಲ್ಲಿದ್ದವರೆಲ್ಲ ಮೌನವಾಗಿ ಕುಳಿತರು. -
{{gap}}ಬಸವಣ್ಣನವರು ಕೊಂಚ ಹೊತ್ತು ಯೋಚಿಸುತ್ತಿದ್ದು ಬಳಿಕ, “ನೀನು ಇಲ್ಲಿಯೇ ಕುಳಿತಿರು, ಅಪ್ಪಣ್ಣ, ಪ್ರವಚನ ಮುಗಿದ ಮೇಲೆ ಉಳಿದ ವಿಚಾರ, ಎಂದು ಹೇಳಿ ಅರ್ಧಕ್ಕೆ ನಿಂತಿದ್ದ ಪ್ರವಚನವನ್ನು ಮುಂದುವರಿಸಲು ಸಿದ್ಧರಾದರು.
{{gap}}- ಆದರೆ ಶೃತಿ ತಪ್ಪಿದ ವಾಗ್ಗೇಯಕಾರನಂತೆ ಬಸವಣ್ಣನವರು ಹೆಜ್ಜೆ ಹೆಜ್ಜೆಗೆ ತಡವರಿಸಿದರು. ಸರಿಯಾದ ಶಬ್ದಗಳನ್ನು ಹುಡುಕುವುದರಲ್ಲಿ, ಅಗತ್ಯದ<noinclude></noinclude>
380w97r9g2jck7fyevs0prtctszp537
ಪುಟ:ಕ್ರಾಂತಿ ಕಲ್ಯಾಣ.pdf/೪೩೫
104
86382
321010
203707
2026-05-20T03:25:22Z
Shreesha Sharma
7840
/* Proofread */
321010
proofread-page
text/x-wiki
<noinclude><pagequality level="3" user="Shreesha Sharma" /></noinclude>{{rh|left=೪೨೨|center=|right=ಕ್ರಾಂತಿ ಕಲ್ಯಾಣ}}
{{gap}}“ಕವಿತೆಯ ಅಮೃತ ಬಿಂದುಗಳಂತೆ ಕಿವಿಗಳಲ್ಲಿ ಪುಟಿಸುವ ಈ ಮೂರು ವಚನಗಳು ಪ್ರಭುದೇವರ ಅನುಭಾವದ ಆಣಿಮುತ್ತುಗಳಂತೆ ಬೆಳಗುತ್ತವೆ. ಅವುಗಳನ್ನು ಅರ್ಥವಿಸುವುದೆಂದರೆ ಮೂಗು ಅರಿತ ಪರಿಮಳವನ್ನು ಬಾಯಿ ಚಪ್ಪರಿಸಿದಂತೆ, ನಾಲಿಗೆ ಅರಿತ ಸಿಹಿಯನ್ನು ಮೂಗು ಆಘ್ರಾಣಿಸಿದಂತೆ, ನಿರರ್ಥಕ ಪರಿಶ್ರಮ. ಆದರೂ ನಿಮಗಾಗಿ ಆ ಕಾರ್ಯ ಮಾಡುತ್ತಿದ್ದೇನೆ,
{{gap}}“ದೇಹವೆಂಬ ತೆರೆಯ ಮರೆಯಲ್ಲಿರುವ ಜೀವನು, ಪರಬ್ರಹ್ಮನ ಅಂಶವೆಂದು ತಿಳಿದು, ಆ ಜೀವ ಬ್ರಹ್ಮರು ಒಂದೇ ವಸ್ತುವೆಂಬ ತತ್ವವನ್ನು ಅನುಭಾವದಿಂದ ಅರಿತಾಗ ಪೂಜಿಸುವ ಭಕ್ತನಾರು? ಪೂಜೆಗೊಂಬ ದೇವನಾರು? ಜೀವನೇ ಬ್ರಹ್ಮ ಬ್ರಹ್ಮನೇ ಜೀವ, ಎಂಬ ಅದೈತ ಭಾವನೆ ಉಂಟಾದ ಬಳಿಕ ನೀನು ನಾನೆಂಬ ದೈತಭಾವನೆ ಉಳಿಯುವುದಿಲ್ಲ-ಎಂದು ಮೊದಲ ವಚನದ ತಾತ್ಪರ್ಯ.
{{gap}}- “ಜೀವಾತ್ಮ ಪರಮಾತ್ಮರು ಒಂದೇ ಎಂಬ ಭಾವದಿಂದ ನೆನಪು ಅಳಿದಾಗ “ನೆನೆ ನೆನೆ” ಎಂದರೆ ನಾನು ಯಾರನ್ನು ನೆನೆಯಲಿ. ಅರಿಯಬೇಕಾದ ವಸ್ತುವಾಗಲಿ, ಅರಿಯುವವನಾಗಲಿ ಇಲ್ಲದ್ದರಿಂದ ಈಗ ನನ್ನ ಕಾಯವೇ ಕೈಲಾಸ, ಮನಸ್ಸೇ ಲಿಂಗ, ತನುವೇ ಸೆಜ್ಜೆ ನೆನೆಯಲು ವಸ್ತುವಿಲ್ಲ, ನೆನೆಯುವ ಭಕ್ತನಿಲ್ಲ. ಆತ್ಮನಲ್ಲಿ ಬ್ರಹವೂ ಬ್ರಹ್ಮನಲ್ಲಿ ಆತ್ಮವೂ ಬೆರೆತು, ಎರಡಾಗಿದ್ದದ್ದು ಒಂದೇ ಆಯಿತು, ಎಂದು ಎರಡನೆಯ ವಚನದ ತಾತ್ಪರ್ಯ.
{{gap}}ಮೂರನೆಯ ವಚನ ಕಾವ್ಯಮಯವಾಗಿದೆ. ತುಂಬಿ ಎಂಬ ಪದವನ್ನು ಪ್ರಭುದೇವರು ಈ ವಚನದಲ್ಲಿ ಬೇರೆ ಬೇರೆ ಅರ್ಥದಲ್ಲಿ ಪ್ರಯೋಗಿಸಿದ್ದಾರೆ. ಗಿಡದ ಮೇಲಿನ ಚೆಲುವಾದ ತುಂಬೆ ಹೂವಿನಂತೆ ದೇಹದಲ್ಲಿ ಆತ್ಮವೆಂಬ ಹೂವು ಅರಳಿದೆ, ನೋಡು, ಆತ್ಮನಲ್ಲಿ ಪರಮಾತ್ಮನು, ಪರಮಾತ್ಮನಲ್ಲಿ ಆತ್ಮನು, ಒಂದರೊಡನೊಂದು ಬೆರೆಯುವುದೇ ಆತ್ಮದ ಅರಳುವಿಕೆ. ಈ ಸ್ಥಿತಿಯಲ್ಲಿ ಶರಣನು ಅಖಂಡ ಪರಿಪೂರ್ಣ ಪರಬ್ರಹ್ಮವೇ ತಾನಾಗಿ ಶಿವೋಹಂ ಶಿವೋಹಂ ಎಂದಾಗ ಆ ಅರಿವಿನಿಂದಾದ ಮಹದಹಂಕಾರವನ್ನು ಕಳೆಯಲು ದಾಸೋಹಂ ಭಾವದಿಂದ ಮತ್ತೆ ಆ ಅಖಂಡ ಪರಿಪೂರ್ಣಕ್ಕೆರಗಿ, ಭಾವನಿಬ್ಬೆರಗಾಗಿ, ನಿರಹಂಭಾವದ ಮಹಾಘನಪರಿಪೂರ್ಣತೆಯನ್ನು ಪಡೆಯುವುದು ಎಂದು ಕೊನೆಯ ವಚನದ ಭಾವಾರ್ಥ:
{{gap}}“ಈ ಮೂರು ವಚನಗಳಲ್ಲಿ ಪ್ರಭುದೇವರು ತಮ್ಮ ದಿವ್ಯಾನುಭಾವದ ಸಾರವನ್ನು ನಿರೂಪಿಸಿದ್ದಾರೆ. ಪ್ರಾಣಲಿಂಗಿ ಸ್ಥಳವನ್ನಡರಿದ ಶರಣನು ಈ ವಚನಗಳ ಚಿಂತನ ಮಂಥನಗಳಿಂದ ತನ್ನ ಸಾಧನೆಯ ಮುಂದಿನ ಹಂತಗಳಾದ ಶರಣ ಐಕ್ಯ<noinclude></noinclude>
h9vln5i17rj6o6vy8zeqa4nynst9wdc
321016
321010
2026-05-20T03:36:09Z
Shreelatha.Halemane
7642
/* Validated */
321016
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೪೨೨|center=|right=ಕ್ರಾಂತಿ ಕಲ್ಯಾಣ}}
{{gap}}“ಕವಿತೆಯ ಅಮೃತ ಬಿಂದುಗಳಂತೆ ಕಿವಿಗಳಲ್ಲಿ ಪುಟಿಸುವ ಈ ಮೂರು ವಚನಗಳು ಪ್ರಭುದೇವರ ಅನುಭಾವದ ಆಣಿಮುತ್ತುಗಳಂತೆ ಬೆಳಗುತ್ತವೆ. ಅವುಗಳನ್ನು ಅರ್ಥವಿಸುವುದೆಂದರೆ ಮೂಗು ಅರಿತ ಪರಿಮಳವನ್ನು ಬಾಯಿ ಚಪ್ಪರಿಸಿದಂತೆ, ನಾಲಿಗೆ ಅರಿತ ಸಿಹಿಯನ್ನು ಮೂಗು ಆಘ್ರಾಣಿಸಿದಂತೆ, ನಿರರ್ಥಕ ಪರಿಶ್ರಮ. ಆದರೂ ನಿಮಗಾಗಿ ಆ ಕಾರ್ಯ ಮಾಡುತ್ತಿದ್ದೇನೆ,
{{gap}}“ದೇಹವೆಂಬ ತೆರೆಯ ಮರೆಯಲ್ಲಿರುವ ಜೀವನು, ಪರಬ್ರಹ್ಮನ ಅಂಶವೆಂದು ತಿಳಿದು, ಆ ಜೀವ ಬ್ರಹ್ಮರು ಒಂದೇ ವಸ್ತುವೆಂಬ ತತ್ವವನ್ನು ಅನುಭಾವದಿಂದ ಅರಿತಾಗ ಪೂಜಿಸುವ ಭಕ್ತನಾರು? ಪೂಜೆಗೊಂಬ ದೇವನಾರು? ಜೀವನೇ ಬ್ರಹ್ಮ ಬ್ರಹ್ಮನೇ ಜೀವ, ಎಂಬ ಅದೈತ ಭಾವನೆ ಉಂಟಾದ ಬಳಿಕ ನೀನು ನಾನೆಂಬ ದೈತಭಾವನೆ ಉಳಿಯುವುದಿಲ್ಲ-ಎಂದು ಮೊದಲ ವಚನದ ತಾತ್ಪರ್ಯ.
{{gap}}- “ಜೀವಾತ್ಮ ಪರಮಾತ್ಮರು ಒಂದೇ ಎಂಬ ಭಾವದಿಂದ ನೆನಪು ಅಳಿದಾಗ “ನೆನೆ ನೆನೆ” ಎಂದರೆ ನಾನು ಯಾರನ್ನು ನೆನೆಯಲಿ. ಅರಿಯಬೇಕಾದ ವಸ್ತುವಾಗಲಿ, ಅರಿಯುವವನಾಗಲಿ ಇಲ್ಲದ್ದರಿಂದ ಈಗ ನನ್ನ ಕಾಯವೇ ಕೈಲಾಸ, ಮನಸ್ಸೇ ಲಿಂಗ, ತನುವೇ ಸೆಜ್ಜೆ ನೆನೆಯಲು ವಸ್ತುವಿಲ್ಲ, ನೆನೆಯುವ ಭಕ್ತನಿಲ್ಲ. ಆತ್ಮನಲ್ಲಿ ಬ್ರಹವೂ ಬ್ರಹ್ಮನಲ್ಲಿ ಆತ್ಮವೂ ಬೆರೆತು, ಎರಡಾಗಿದ್ದದ್ದು ಒಂದೇ ಆಯಿತು, ಎಂದು ಎರಡನೆಯ ವಚನದ ತಾತ್ಪರ್ಯ.
{{gap}}ಮೂರನೆಯ ವಚನ ಕಾವ್ಯಮಯವಾಗಿದೆ. ತುಂಬಿ ಎಂಬ ಪದವನ್ನು ಪ್ರಭುದೇವರು ಈ ವಚನದಲ್ಲಿ ಬೇರೆ ಬೇರೆ ಅರ್ಥದಲ್ಲಿ ಪ್ರಯೋಗಿಸಿದ್ದಾರೆ. ಗಿಡದ ಮೇಲಿನ ಚೆಲುವಾದ ತುಂಬೆ ಹೂವಿನಂತೆ ದೇಹದಲ್ಲಿ ಆತ್ಮವೆಂಬ ಹೂವು ಅರಳಿದೆ, ನೋಡು, ಆತ್ಮನಲ್ಲಿ ಪರಮಾತ್ಮನು, ಪರಮಾತ್ಮನಲ್ಲಿ ಆತ್ಮನು, ಒಂದರೊಡನೊಂದು ಬೆರೆಯುವುದೇ ಆತ್ಮದ ಅರಳುವಿಕೆ. ಈ ಸ್ಥಿತಿಯಲ್ಲಿ ಶರಣನು ಅಖಂಡ ಪರಿಪೂರ್ಣ ಪರಬ್ರಹ್ಮವೇ ತಾನಾಗಿ ಶಿವೋಹಂ ಶಿವೋಹಂ ಎಂದಾಗ ಆ ಅರಿವಿನಿಂದಾದ ಮಹದಹಂಕಾರವನ್ನು ಕಳೆಯಲು ದಾಸೋಹಂ ಭಾವದಿಂದ ಮತ್ತೆ ಆ ಅಖಂಡ ಪರಿಪೂರ್ಣಕ್ಕೆರಗಿ, ಭಾವನಿಬ್ಬೆರಗಾಗಿ, ನಿರಹಂಭಾವದ ಮಹಾಘನಪರಿಪೂರ್ಣತೆಯನ್ನು ಪಡೆಯುವುದು ಎಂದು ಕೊನೆಯ ವಚನದ ಭಾವಾರ್ಥ:
{{gap}}“ಈ ಮೂರು ವಚನಗಳಲ್ಲಿ ಪ್ರಭುದೇವರು ತಮ್ಮ ದಿವ್ಯಾನುಭಾವದ ಸಾರವನ್ನು ನಿರೂಪಿಸಿದ್ದಾರೆ. ಪ್ರಾಣಲಿಂಗಿ ಸ್ಥಳವನ್ನಡರಿದ ಶರಣನು ಈ ವಚನಗಳ ಚಿಂತನ ಮಂಥನಗಳಿಂದ ತನ್ನ ಸಾಧನೆಯ ಮುಂದಿನ ಹಂತಗಳಾದ ಶರಣ ಐಕ್ಯ<noinclude></noinclude>
gnvjy9em96jwhd8nja5o7kgovfppe4o
ಪುಟ:ಕ್ರಾಂತಿ ಕಲ್ಯಾಣ.pdf/೪೪೦
104
86390
321015
203715
2026-05-20T03:34:24Z
Shreesha Sharma
7840
/* Proofread */
321015
proofread-page
text/x-wiki
<noinclude><pagequality level="3" user="Shreesha Sharma" /></noinclude>________________
{{rh|left=ಮಹಾಪ್ರಸ್ಥಾನ|center=|right=೪೨೭}}
ಕೇಳು ಕೂಡಲ ಸಂಗಮದೇವಾ.
ಮರಣವೇ ಮಹಾನವಮಿ !”
{{gap}}“ವಿಪತ್ತು ಎದುರಾದಾಗ ಹೆದರಿ ಓಡುವುದರಿಂದ ಧೈರ್ಯವಾಗಿ ನಿಂತು ಪರಿಸ್ಥಿತಿಯನ್ನು ಎದುರಿಸುವುದು ಶರಣನ ಕರ್ತವ್ಯವೆಂದು ಸ್ಪಷ್ಟವಾಗಿ ತಿಳಿಸಿದೆ. ಮೃತ್ಯು ಎದುರಾದರೂ ಕಲ್ಯಾಣವನ್ನು ಬಿಡಲಾಗದೆಂದು ಹೇಳಿದೆ. ರಾಜನಿಂದ ನಿರ್ವಾಸಿತನಾಗಿ, ರಾಜಧಾನಿಯಿಂದ ದೂರವಾದ ಈ ಅಪ್ರಸಿದ್ದ ಗ್ರಾಮದ ಗುರುಕುಲದಲ್ಲಿ ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಯಂತೆ ಬದುಕು ನಡೆಸುತ್ತಿರುವ ನಾನು ಇದಕ್ಕಿಂತ ಹೆಚ್ಚಿಗೆ ಮಾಡುವುದೇನಿದೆ? ಮೂರು ದಿನಗಳ ಹಿಂದೆ, ತಮ್ಮ ಪೂರ್ವ ನಿರ್ಧಾರದಂತೆ ಶರಣರು ಕಲ್ಯಾಣವನ್ನು ತ್ಯಜಿಸಿ ವಲಸೆ ಹೊರಟ ಸುದ್ದಿ ಕೇಳಿದಾಗ ನನ್ನ ಅಂತರಂಗ ಅಳುಕಿತು, ಭವಿಷ್ಯದ ಭೀತಿಯಿಂದ.
{{gap}}“ಶರಣರು ಕಲ್ಯಾಣವನ್ನು ಬಿಟ್ಟ ದಿನವೇ ಬಿಜ್ಜಳರಾಯರ ಕೊಲೆ ನಡೆದದ್ದು ನಮ್ಮ ದುರಾದೃಷ್ಟ. ಈ ರಾಜಕೀಯ ಘಟನೆಯಲ್ಲಿ ಶರಣರ ಪಾತ್ರವೇನು? ಹತ್ಯೆ ನಡೆಯುವುದೆಂದು ಮೊದಲೇ ತಿಳಿದು ಅವರು ವಲಸೆ ಹೊರಟರೆ? ಇವೇ ಮುಂತಾದ ಪ್ರಶ್ನೆಗಳು ಈ ಸಂಬಂಧದಲ್ಲಿ ಸಹಜವಾಗಿ ಉದ್ಭವಿಸುತ್ತವೆ. ಇವುಗಳಿಗೆ ಸಮರ್ಪಕವಾದ ಉತ್ತರ ಕೊಡಲು ಶರಣರು ಸಿದ್ದರಾಗಬೇಕು. ಧಾರ್ಮಿಕ ಹಿತಾಸಕ್ತಿಗಳ ಸಾಧನೆಗಾಗಿ ಬಿಜ್ಜಳರಾಯರ ಸರ್ವಾಧಿಕಾರವನ್ನು ಕೊನೆಗಾಣಿಸುವ, ಆ ಸ್ಥಾನದಲ್ಲಿ ಚಾಲುಕ್ಯ ಪ್ರಭುತ್ವವನ್ನು ಪುನಃಪ್ರತಿಷ್ಠಿಸುವ ಉದ್ದೇಶ ಶರಣರಿಗೆ ಯಾವಾಗಲೂ ಇರಲಿಲ್ಲವೆಂದು ನಾನು ದೃಢವಾಗಿ ಹೇಳುತ್ತೇನೆ. ಬಿಜ್ಜಳರಾಯರು ನಮಗೆ ತಿಳಿಯದ ಯಾವುದೋ ರಾಜಿಕ ಸಂಚಿನ ಫಲವಾಗಿ ಕೊಲೆಯಾದರೆಂದು ನನ್ನ ವಿಶ್ವಾಸ. ಬಿಜ್ಜಳರಾಯರ ವಿರುದ್ಧ ಇಂತಹ ಸಂಚು ನಡೆಯುತ್ತಿತ್ತೆಂಬುದು ಎಲ್ಲರಿಗೂ ತಿಳಿದಿತ್ತು. ಶರಣರು ವಲಸೆ ಹೊರಟ ದಿನವೇ ಈ ಕೃತ್ಯ ನಡೆದದ್ದು ಒಂದು ಕಾಕತಾಳೀಯ ಘಟನೆ. ಇದರಿಂದ ಒದಗಬಹುದಾದ ದುಷ್ಪರಿಣಾಮಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ರಾಜಕೀಯದಿಂದ ಯಾವಾಗಲೂ ದೂರವಾಗಿರಲು ಶರಣರು ಈಗ ಎಲ್ಲ ಪ್ರಯತ್ನಗಳನ್ನೂ ಮಾಡಬೇಕಾಗಿದೆ. ಅದಕ್ಕೆ ಬೇಕಾದ ಶಕ್ತಿ ಸಂಯಮಗಳನ್ನು ಕೂಡಲ ಸಂಗಮದೇವನು ಅವರಿಗೆ ಕರುಣಿಸಲಿ.
{{gap}}ಈ ವಿಷಾದಕರ ದುಃಖಪೂರ್ಣ ಪ್ರಸಂಗದಲ್ಲಿ ನನ್ನ ಮನವಿಯಿದು
ನಿಮ್ಮ ಬಂಟರ ಬಂಟ ನಾನಯ್ಯ,
ನಿಮ್ಮ ಲೆಂಕರ ಲೆಂಕ ನಾನಯ್ಯ<noinclude></noinclude>
9wqsosl0ck7ppohhtbc3c8irdouvurx
321021
321015
2026-05-20T03:37:15Z
Shreelatha.Halemane
7642
/* Validated */
321021
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|left=ಮಹಾಪ್ರಸ್ಥಾನ|center=|right=೪೨೭}}
ಕೇಳು ಕೂಡಲ ಸಂಗಮದೇವಾ.
ಮರಣವೇ ಮಹಾನವಮಿ !”
{{gap}}“ವಿಪತ್ತು ಎದುರಾದಾಗ ಹೆದರಿ ಓಡುವುದರಿಂದ ಧೈರ್ಯವಾಗಿ ನಿಂತು ಪರಿಸ್ಥಿತಿಯನ್ನು ಎದುರಿಸುವುದು ಶರಣನ ಕರ್ತವ್ಯವೆಂದು ಸ್ಪಷ್ಟವಾಗಿ ತಿಳಿಸಿದೆ. ಮೃತ್ಯು ಎದುರಾದರೂ ಕಲ್ಯಾಣವನ್ನು ಬಿಡಲಾಗದೆಂದು ಹೇಳಿದೆ. ರಾಜನಿಂದ ನಿರ್ವಾಸಿತನಾಗಿ, ರಾಜಧಾನಿಯಿಂದ ದೂರವಾದ ಈ ಅಪ್ರಸಿದ್ದ ಗ್ರಾಮದ ಗುರುಕುಲದಲ್ಲಿ ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಯಂತೆ ಬದುಕು ನಡೆಸುತ್ತಿರುವ ನಾನು ಇದಕ್ಕಿಂತ ಹೆಚ್ಚಿಗೆ ಮಾಡುವುದೇನಿದೆ? ಮೂರು ದಿನಗಳ ಹಿಂದೆ, ತಮ್ಮ ಪೂರ್ವ ನಿರ್ಧಾರದಂತೆ ಶರಣರು ಕಲ್ಯಾಣವನ್ನು ತ್ಯಜಿಸಿ ವಲಸೆ ಹೊರಟ ಸುದ್ದಿ ಕೇಳಿದಾಗ ನನ್ನ ಅಂತರಂಗ ಅಳುಕಿತು, ಭವಿಷ್ಯದ ಭೀತಿಯಿಂದ.
{{gap}}“ಶರಣರು ಕಲ್ಯಾಣವನ್ನು ಬಿಟ್ಟ ದಿನವೇ ಬಿಜ್ಜಳರಾಯರ ಕೊಲೆ ನಡೆದದ್ದು ನಮ್ಮ ದುರಾದೃಷ್ಟ. ಈ ರಾಜಕೀಯ ಘಟನೆಯಲ್ಲಿ ಶರಣರ ಪಾತ್ರವೇನು? ಹತ್ಯೆ ನಡೆಯುವುದೆಂದು ಮೊದಲೇ ತಿಳಿದು ಅವರು ವಲಸೆ ಹೊರಟರೆ? ಇವೇ ಮುಂತಾದ ಪ್ರಶ್ನೆಗಳು ಈ ಸಂಬಂಧದಲ್ಲಿ ಸಹಜವಾಗಿ ಉದ್ಭವಿಸುತ್ತವೆ. ಇವುಗಳಿಗೆ ಸಮರ್ಪಕವಾದ ಉತ್ತರ ಕೊಡಲು ಶರಣರು ಸಿದ್ದರಾಗಬೇಕು. ಧಾರ್ಮಿಕ ಹಿತಾಸಕ್ತಿಗಳ ಸಾಧನೆಗಾಗಿ ಬಿಜ್ಜಳರಾಯರ ಸರ್ವಾಧಿಕಾರವನ್ನು ಕೊನೆಗಾಣಿಸುವ, ಆ ಸ್ಥಾನದಲ್ಲಿ ಚಾಲುಕ್ಯ ಪ್ರಭುತ್ವವನ್ನು ಪುನಃಪ್ರತಿಷ್ಠಿಸುವ ಉದ್ದೇಶ ಶರಣರಿಗೆ ಯಾವಾಗಲೂ ಇರಲಿಲ್ಲವೆಂದು ನಾನು ದೃಢವಾಗಿ ಹೇಳುತ್ತೇನೆ. ಬಿಜ್ಜಳರಾಯರು ನಮಗೆ ತಿಳಿಯದ ಯಾವುದೋ ರಾಜಿಕ ಸಂಚಿನ ಫಲವಾಗಿ ಕೊಲೆಯಾದರೆಂದು ನನ್ನ ವಿಶ್ವಾಸ. ಬಿಜ್ಜಳರಾಯರ ವಿರುದ್ಧ ಇಂತಹ ಸಂಚು ನಡೆಯುತ್ತಿತ್ತೆಂಬುದು ಎಲ್ಲರಿಗೂ ತಿಳಿದಿತ್ತು. ಶರಣರು ವಲಸೆ ಹೊರಟ ದಿನವೇ ಈ ಕೃತ್ಯ ನಡೆದದ್ದು ಒಂದು ಕಾಕತಾಳೀಯ ಘಟನೆ. ಇದರಿಂದ ಒದಗಬಹುದಾದ ದುಷ್ಪರಿಣಾಮಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ರಾಜಕೀಯದಿಂದ ಯಾವಾಗಲೂ ದೂರವಾಗಿರಲು ಶರಣರು ಈಗ ಎಲ್ಲ ಪ್ರಯತ್ನಗಳನ್ನೂ ಮಾಡಬೇಕಾಗಿದೆ. ಅದಕ್ಕೆ ಬೇಕಾದ ಶಕ್ತಿ ಸಂಯಮಗಳನ್ನು ಕೂಡಲ ಸಂಗಮದೇವನು ಅವರಿಗೆ ಕರುಣಿಸಲಿ.
{{gap}}ಈ ವಿಷಾದಕರ ದುಃಖಪೂರ್ಣ ಪ್ರಸಂಗದಲ್ಲಿ ನನ್ನ ಮನವಿಯಿದು
ನಿಮ್ಮ ಬಂಟರ ಬಂಟ ನಾನಯ್ಯ,
ನಿಮ್ಮ ಲೆಂಕರ ಲೆಂಕ ನಾನಯ್ಯ<noinclude></noinclude>
4z9vwtn2l6n2kyg5foketoncwlfke1k
ಪುಟ:ಕ್ರಾಂತಿ ಕಲ್ಯಾಣ.pdf/೪೩೮
104
86391
321013
203716
2026-05-20T03:31:34Z
Shreesha Sharma
7840
/* Proofread */
321013
proofread-page
text/x-wiki
<noinclude><pagequality level="3" user="Shreesha Sharma" /></noinclude>________________
{{rh|left=ಮಹಾಪ್ರಸ್ಥಾನ|center=|right=೪೨೫}}
ಅನಂತವಾದರೂ ನನ್ನದಾಗಿ ಏನೂ ಇರುವುದಿಲ್ಲ. ಮಿಥಿಲಾನಗರ ಸುಟ್ಟು ಹೋದರೆ ನನ್ನದೇನೂ ಸುಟ್ಟುಹೋಗುವುದಿಲ್ಲ' ಎಂದು ಜಂಭದಿಂದ ಹೇಳಿದ ಒಬ್ಬ ಸನ್ಯಾಸಿ ತನ್ನ ಚೀವರ ಕಮಂಡಲುಗಳನ್ನು ಕಳೆದುಕೊಂಡಾಗ ಎರಡು ಕಣ್ಣುಗಳಿಂದಲೂ ಅತ್ತು, ಆಶ್ರಮವಾಸಿಗಳೆಲ್ಲರ ಅಪಹಾಸ್ಯಕ್ಕೆರವಾದನೆಂದು ಆ ಕಥೆ ಮುಗಿಯುತ್ತದೆ.
{{gap}}“ಅಸಂಗ್ರಹ ನಿರ್ಮೋಹ ನಿರ್ಮಮತೆಗಳನ್ನು ಪ್ರಯತ್ನಪೂರ್ವಕವಾಗಿ ಅಭ್ಯಾಸ ಮಾಡಿಕೊಳ್ಳಲು ಪ್ರಯತ್ನಿಸಿದ ನಾನು, ಕಲ್ಯಾಣವನ್ನು ಬಿಟ್ಟು ಕೂಡಲಸಂಗಮಕ್ಕೆ ಬಂದಾಗ ಆ ಎಲ್ಲ ಬಂಧನಗಳಿಂದ ವಿಮುಕ್ತನಾದನೆಂದು ಭಾವಿಸಿದ್ದೆ. ಆ ಭ್ರಮೆ ಇಂದು ಹರಿಯಿತು. ಕಲ್ಯಾಣವು ನನ್ನ ಚೀವರ, ಬಿಜ್ಜಳರಾಯರು ನನ್ನ ಕಮಂಡಲು. ಅವೆರಡನ್ನು ಕಳೆದುಕೊಂಡು ಕಣ್ಣೀರಿಡುತ್ತ ಈಗ ನಾನು ನಿಮ್ಮ ಮುಂದೆ ನಿಂತಿದ್ದೇನೆ. ಬಿಜ್ಜಳನಿಲ್ಲದ ಕಲ್ಯಾಣ, ಕಲ್ಯಾಣವನ್ನು ಬಿಟ್ಟ ಶರಣರು, ನನ್ನ ಎಲ್ಲ ಸಾಧನೆ ಸಂಕಲ್ಪಗಳು ವಿಫಲವಾದುದರ ಪ್ರತೀಕ.
{{gap}}“ಆರು ವರ್ಷಗಳ ಹಿಂದೆ ಬಿಜ್ಜಳರಾಯರು ಚಾಲುಕ್ಯ ಅರಸೊತ್ತಿಗೆಯನ್ನು ತಮ್ಮ ಅಂಕೆಯಲ್ಲಿಟ್ಟುಕೊಂಡು, ರಾಜ್ಯವನ್ನೇ ಅಪಹರಿಸಲು ಯೋಚಿಸುತ್ತಿರುವರೆಂಬ ಸಂದೇಹ ಹುಟ್ಟಿದ ಕೂಡಲೆ ನಾನು ಸ್ವಯಂ ಪ್ರೇರಣೆಯಿಂದ ಮಂತ್ರಿ ಪದವಿಯನ್ನು ಬಿಟ್ಟುಕೊಟ್ಟು ಅಧಿಕಾರ ನಿವೃತ್ತನಾದೆ. ಅಲ್ಲಿಂದೀಚೆಗೆ ಬಿಜ್ಜಳರಾಯರೊಡನೆ ನನಗೆ ರಾಜಕೀಯವಾಗಿ ಯಾವ ಸಂಬಂಧವೂ ಇರುವುದಿಲ್ಲ. ರಾಜಕೀಯದಿಂದ ದೂರವಾಗಿದ್ದ, ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ದಿನ ದಿನಕ್ಕೆ ಹೆಚ್ಚು ಆಸಕ್ತಿ ವಹಿಸುವುದು ಆಗ ನನ್ನ ಉದ್ದೇಶವಾಗಿತ್ತು. ತ್ರಿಕರಣ ಪೂರ್ವಕವಾಗಿ ನಾನು ಅದರಂತೆ ನಡೆದಿರುವೆನೆಂದು ನಿಮ್ಮ ಮುಂದೆ ನಿಂತು ಧೈರ್ಯವಾಗಿ ಹೇಳುತ್ತೇನೆ. ಈ ಕಾರಣದಿಂದ ಬಿಜ್ಜಳರಾಯರ ರಾಜಕೀಯ ಚಟುವಟಿಕೆಗಳನ್ನು ಕುರಿತು ದೀರ್ಘವಾಗಿ ಪ್ರಸ್ತಾಪಿಸಲು ನಾನು ಅಸಮರ್ಥನೂ, ಅನಧಿಕಾರಿಯೂ ಆಗಿದ್ದೇನೆ.
{{gap}}“ಬಿಜ್ಜಳರಾರರು ಚತುರರೂ, ದಕ್ಷರೂ ಆದ ಆಡಳಿತಗಾರರು. ಸಮಯೋಚಿತವಾದ ಅವರ ಜಾಣೆಯಿಂದ ಚಾಲುಕ್ಯ ರಾಜ್ಯಕ್ಕೆ ಒದಗಿದ್ದ ಅಂತರ್ಯುದ್ಧ, ಅನೇಕ ಆರ್ಥಿಕ ಅಪಘಾತಗಳು ಪರಿಹಾರವಾದವು. ಅದಕ್ಷರೂ, ಅನುಭವವಿಲ್ಲದವರೂ, ವಿಲಾಸಕ್ತರೂ ಆದ ರಾಜರು ಅರಸೊತ್ತಿಗೆ ಏರಿದಾಗ ರಾಜ್ಯಕ್ಕೆ ಆಗುವ ಹಾನಿಯನ್ನು ಧರ್ಮಶಾಸ್ತ್ರಗಳು ವಿಫುಲವಾಗಿ ವರ್ಣಿಸಿವೆ. ಚಾಲುಕ್ಯರಾಜ್ಯ ಅಂತಹ ವಿಪತ್ತಿನಲ್ಲಿದ್ದಾಗ ಬಿಜ್ಜಳರಾಯರು ಅಧಿಕಾರ ಸೂತ್ರ ವಹಿಸಿಕೊಂಡರು. ಹನ್ನೆರಡು ವರ್ಷಗಳ ದಕ್ಷ ಆಡಳಿತದಿಂದ ರಾಜ್ಯದ ಸಂಪತ್ತು<noinclude></noinclude>
lq06x17q7zs5ktkichyiu8mrx0f33z0
321019
321013
2026-05-20T03:36:49Z
Shreelatha.Halemane
7642
/* Validated */
321019
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|left=ಮಹಾಪ್ರಸ್ಥಾನ|center=|right=೪೨೫}}
ಅನಂತವಾದರೂ ನನ್ನದಾಗಿ ಏನೂ ಇರುವುದಿಲ್ಲ. ಮಿಥಿಲಾನಗರ ಸುಟ್ಟು ಹೋದರೆ ನನ್ನದೇನೂ ಸುಟ್ಟುಹೋಗುವುದಿಲ್ಲ' ಎಂದು ಜಂಭದಿಂದ ಹೇಳಿದ ಒಬ್ಬ ಸನ್ಯಾಸಿ ತನ್ನ ಚೀವರ ಕಮಂಡಲುಗಳನ್ನು ಕಳೆದುಕೊಂಡಾಗ ಎರಡು ಕಣ್ಣುಗಳಿಂದಲೂ ಅತ್ತು, ಆಶ್ರಮವಾಸಿಗಳೆಲ್ಲರ ಅಪಹಾಸ್ಯಕ್ಕೆರವಾದನೆಂದು ಆ ಕಥೆ ಮುಗಿಯುತ್ತದೆ.
{{gap}}“ಅಸಂಗ್ರಹ ನಿರ್ಮೋಹ ನಿರ್ಮಮತೆಗಳನ್ನು ಪ್ರಯತ್ನಪೂರ್ವಕವಾಗಿ ಅಭ್ಯಾಸ ಮಾಡಿಕೊಳ್ಳಲು ಪ್ರಯತ್ನಿಸಿದ ನಾನು, ಕಲ್ಯಾಣವನ್ನು ಬಿಟ್ಟು ಕೂಡಲಸಂಗಮಕ್ಕೆ ಬಂದಾಗ ಆ ಎಲ್ಲ ಬಂಧನಗಳಿಂದ ವಿಮುಕ್ತನಾದನೆಂದು ಭಾವಿಸಿದ್ದೆ. ಆ ಭ್ರಮೆ ಇಂದು ಹರಿಯಿತು. ಕಲ್ಯಾಣವು ನನ್ನ ಚೀವರ, ಬಿಜ್ಜಳರಾಯರು ನನ್ನ ಕಮಂಡಲು. ಅವೆರಡನ್ನು ಕಳೆದುಕೊಂಡು ಕಣ್ಣೀರಿಡುತ್ತ ಈಗ ನಾನು ನಿಮ್ಮ ಮುಂದೆ ನಿಂತಿದ್ದೇನೆ. ಬಿಜ್ಜಳನಿಲ್ಲದ ಕಲ್ಯಾಣ, ಕಲ್ಯಾಣವನ್ನು ಬಿಟ್ಟ ಶರಣರು, ನನ್ನ ಎಲ್ಲ ಸಾಧನೆ ಸಂಕಲ್ಪಗಳು ವಿಫಲವಾದುದರ ಪ್ರತೀಕ.
{{gap}}“ಆರು ವರ್ಷಗಳ ಹಿಂದೆ ಬಿಜ್ಜಳರಾಯರು ಚಾಲುಕ್ಯ ಅರಸೊತ್ತಿಗೆಯನ್ನು ತಮ್ಮ ಅಂಕೆಯಲ್ಲಿಟ್ಟುಕೊಂಡು, ರಾಜ್ಯವನ್ನೇ ಅಪಹರಿಸಲು ಯೋಚಿಸುತ್ತಿರುವರೆಂಬ ಸಂದೇಹ ಹುಟ್ಟಿದ ಕೂಡಲೆ ನಾನು ಸ್ವಯಂ ಪ್ರೇರಣೆಯಿಂದ ಮಂತ್ರಿ ಪದವಿಯನ್ನು ಬಿಟ್ಟುಕೊಟ್ಟು ಅಧಿಕಾರ ನಿವೃತ್ತನಾದೆ. ಅಲ್ಲಿಂದೀಚೆಗೆ ಬಿಜ್ಜಳರಾಯರೊಡನೆ ನನಗೆ ರಾಜಕೀಯವಾಗಿ ಯಾವ ಸಂಬಂಧವೂ ಇರುವುದಿಲ್ಲ. ರಾಜಕೀಯದಿಂದ ದೂರವಾಗಿದ್ದ, ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ದಿನ ದಿನಕ್ಕೆ ಹೆಚ್ಚು ಆಸಕ್ತಿ ವಹಿಸುವುದು ಆಗ ನನ್ನ ಉದ್ದೇಶವಾಗಿತ್ತು. ತ್ರಿಕರಣ ಪೂರ್ವಕವಾಗಿ ನಾನು ಅದರಂತೆ ನಡೆದಿರುವೆನೆಂದು ನಿಮ್ಮ ಮುಂದೆ ನಿಂತು ಧೈರ್ಯವಾಗಿ ಹೇಳುತ್ತೇನೆ. ಈ ಕಾರಣದಿಂದ ಬಿಜ್ಜಳರಾಯರ ರಾಜಕೀಯ ಚಟುವಟಿಕೆಗಳನ್ನು ಕುರಿತು ದೀರ್ಘವಾಗಿ ಪ್ರಸ್ತಾಪಿಸಲು ನಾನು ಅಸಮರ್ಥನೂ, ಅನಧಿಕಾರಿಯೂ ಆಗಿದ್ದೇನೆ.
{{gap}}“ಬಿಜ್ಜಳರಾರರು ಚತುರರೂ, ದಕ್ಷರೂ ಆದ ಆಡಳಿತಗಾರರು. ಸಮಯೋಚಿತವಾದ ಅವರ ಜಾಣೆಯಿಂದ ಚಾಲುಕ್ಯ ರಾಜ್ಯಕ್ಕೆ ಒದಗಿದ್ದ ಅಂತರ್ಯುದ್ಧ, ಅನೇಕ ಆರ್ಥಿಕ ಅಪಘಾತಗಳು ಪರಿಹಾರವಾದವು. ಅದಕ್ಷರೂ, ಅನುಭವವಿಲ್ಲದವರೂ, ವಿಲಾಸಕ್ತರೂ ಆದ ರಾಜರು ಅರಸೊತ್ತಿಗೆ ಏರಿದಾಗ ರಾಜ್ಯಕ್ಕೆ ಆಗುವ ಹಾನಿಯನ್ನು ಧರ್ಮಶಾಸ್ತ್ರಗಳು ವಿಫುಲವಾಗಿ ವರ್ಣಿಸಿವೆ. ಚಾಲುಕ್ಯರಾಜ್ಯ ಅಂತಹ ವಿಪತ್ತಿನಲ್ಲಿದ್ದಾಗ ಬಿಜ್ಜಳರಾಯರು ಅಧಿಕಾರ ಸೂತ್ರ ವಹಿಸಿಕೊಂಡರು. ಹನ್ನೆರಡು ವರ್ಷಗಳ ದಕ್ಷ ಆಡಳಿತದಿಂದ ರಾಜ್ಯದ ಸಂಪತ್ತು<noinclude></noinclude>
pn9g72i4ipex22j7mip03th5ufnguav
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೭
104
86473
321298
233387
2026-05-20T09:04:05Z
Shreelatha.Halemane
7642
/* Validated */
321298
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೭೩}}</br>
{{gap}}ಶತ್ರು ಸಮೂಹವನ್ನು ನಾಶಗೊಳಿಸುವ ಆ ವಿಷ್ಣುವಿಗೆ ಭೃಗುವು ಶಾಪ ಕೊಟ್ಟನು: "ಎಲೈ ಜನಾರ್ಧನನೇ, ಅವಧ್ಯಳಾದ ನನ್ನ ಪತ್ನಿಯನ್ನು ನೀನು ಕೋಪಾ ವೇಗದಲ್ಲಿ ವಧಿಸಿರುವೆ: ಅದಕ್ಕಾಗಿ ನೀನು ಮನುಷ್ಯಲೋಕದಲ್ಲಿ ಜನ್ಮತಾಳುವೆ; ಅಲ್ಲಿ ಅನೇಕ ವರುಷಗಳ ಕಾಲ ಪತ್ನಿಯ ವಿಯೋಗದ ದುಃಖವು ಪ್ರಾಪ್ತ ವಾಗುವುದು."</br>
{{gap}}ಶಾಪವನ್ನು ಕೊಟ್ಟ ನಂತರ ಭೃಗುವು ನೊಂದುಕೊಂಡನು. ಆತನು ವಿಷ್ಣುವನ್ನು ಪೂಜಿಸಿ ಸಂತೋಷಿಸಿದನು. ಭಕ್ತವತ್ಸಲನಾದ ವಿಷ್ಣುವು, ಆಗ "ಲೋಕಕಲ್ಯಾಣಕ್ಕಾಗಿ ಈ ಶಾಪವನ್ನು ಅಂಗೀಕರಿಸಲೇಬೇಕು" ಎಂದನು. ದುರ್ವಾಸನು ರಾಜನಿಗೆ "ಸಾಕ್ಷಾತ್ ವಿಷ್ಣುವು ನಿನ್ನ ಪುತ್ರನಾಗಿ 'ರಾಮ'ನೆಂದು ಹುಟ್ಟಿ ಬಂದಿದ್ದಾನೆ. ಆತನು ಮೂರೂ ಲೋಕದಲ್ಲಿ ಖ್ಯಾತಿಗೊಳ್ಳುವನು. ಭೃಗುವಿನ ಶಾಪದ ವಿಪುಲ ಫಲವು ಆತನಿಗೆ ಲಭಿಸುವದು. ಬಹುಕಲದವರೆಗೆ ಅಯೋಧ್ಯಾಪತಿಯಾಗಿ ಬಾಳುವನು; ಹನ್ನೊಂದು ಸಾವಿರ ವರ್ಷಗಳ ಕಾಲ ರಾಜ್ಯವನ್ನಾಳಿ ಆತನು ಬ್ರಹ್ಮಲೋಕಕ್ಕೆ ತೆರಳುವನು. ಅಶ್ಚಮೇಧ ಯಜ್ಞವನ್ನು ಅನೇಕಾವರ್ತಿ ಆಚರಿಸಿ ರಾಜವಂಶದ ಉತ್ಥಾಪನೆಯನ್ನು ಮಾಡುವನು."
<small><poem>
'''ಅವಧ್ಯಾಂ ಸ್ತ್ರೀತ್ವಾದೃಷಿಪತ್ನೀತ್ವಾಚ್ಚ ವಧಾನರ್ಹಾಮ್ |'''</small></poem></br>
{{center|'''೪೯. ಇಬ್ಬರು ಬ್ರಾಹ್ಮಣರು < ನೃಗರಾಜ'''}}
{{center|'''ಉತ್ತರಕಾಂಡ/೫೩'''}}
{{gap}}ಸೀತೆಯನ್ನು ತ್ಯಜಿಸಬೇಕೆಂದು ನಿಶ್ಚಯಿಸಿದ ನಂತರ ರಾಮನು, ಅವಳನ್ನು ವಾಲ್ಮೀಕಿಯ ಆಶ್ರಮದ ಹತ್ತಿರ ಬಿಟ್ಟುಬರುವ ದುಸ್ತರ ಕಾರ್ಯವನ್ನು ಲಕ್ಷ್ಮಣನಿಗೆ ವಹಿಸಿದನು. ಸೀತೆಯನ್ನು ಕಳುಹಿಸಿ ಮರಳಿದ ಲಕ್ಷ್ಮಣನು ರಾಮನಿಗೆ ಭೇಟಿ ಯಾದಾಗ ಆತನು ಅತ್ಯಂತ ಖಿನ್ನನಾಗಿದ್ದನ್ನು ಕಂಡನು. ಕಳೆದ ನಾಲ್ಕು ದಿನಗಳಲ್ಲಿ ಅವನು ಯಾವ ಪ್ರಜಾಕಾರ್ಯವನ್ನೂ ಮಾಡಿರಲಿಲ್ಲ. ಈ ಸಂಗತಿಯು ರಾಮನಿಗೆ ಕಾಡುತ್ತಿತ್ತು. ಲಕ್ಷ್ಮಣನು ಆತನಿಗೆ ಸಮಾಧಾನಪಡಿಸಿದನು. ಆಗ, ಪುರಜನರ ಕಾರ್ಯಗಳನ್ನು ನೆರವೇರಿಸದೆ ಇರುವ ರಾಜನ ಗತಿ ಏನಾಗುತ್ತದೆ ಎಂಬುದರ ಬಗ್ಗೆ ರಾಮನು ಲಕ್ಷ್ಮಣನಿಗೆ ನೃಗರಾಜನ ಕಥೆಯನ್ನು ಹೇಳಿದನು.</br>
{{gap}}ಪೂರ್ವದಲ್ಲಿ ಮಹಾಯಶಸ್ವಿಯಾದ, ಬ್ರಾಹ್ಮಣಪ್ರಿಯನಾದ, ಸತ್ಯವಚನಿಯಾದ, ಶಬ್ದಾರ್ಥದಿಂದ ಹಾಗೂ ನಿಜಾರ್ಥದಿಂದ 'ಭೂಪಾಲ'ನೆಂದೆನಿಸಿಕೊಳ್ಳುವ,<noinclude></noinclude>
lyd3mpa6e5yajon0ch15nrs4tw9t2i3
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೨
104
86616
321285
233092
2026-05-20T08:54:58Z
Shreelatha.Halemane
7642
/* Validated */
321285
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೫೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
{{center|'''೪೦. ವಿಶ್ರವಾ < ರಾವಣ'''}}
{{center|'''ಉತ್ತರಕಾಂಡ/೧೧'''}}
{{gap}}ರಾವಣ-ಮಂಡೋದರಿಯ ವಿವಾಹದ ವಿಷಯವನ್ನು ಅಗಸ್ತ್ಯಮುನಿಯು ರಾಮನಿಗೆ ಹೇಳುತ್ತಾಣೆ:</br>
{{gap}}ತನ್ನ ಮಂತ್ರಿಯಾದ ಪ್ರಹಸ್ತನನ್ನು ರಾವಣನು, ಕುಬೇರನ ಬಳಿಗೆ ಕಳುಹಿಸಿ ಲಂಕಾಪಟ್ಟಣದ ಬೇಡಿಕೆಯನ್ನು ಮುಂದಿಟ್ಟನು. ಆಗ ಕುಬೇರನು ತನ್ನ ಪಿತನಾದ 'ವಿಶ್ರವಾ'ನ ಸಲಹೆಯನ್ನು ಕೇಳಿದಾಗ, ಆತನು ಲಂಕೆಯನ್ನು ರಾವಣನಿಗೆ ಅರ್ಪಿಸಿ, ಕುಬೇರನು ಕೈಲಾಸ ಪರ್ವತದಲ್ಲಿ ವಾಸವಿರಬೇಕೆಂದು ಹೇಳಿದನು. ಇಷ್ಟೇ ಅಲ್ಲದೆ, ಈ ಪೂರ್ವದಲ್ಲಿಯೂ ರಾವಣನು ತನ್ನ ಬಳಿಯಲ್ಲಿಯೂ ಲಂಕಾ ಪಟ್ಟಣವನ್ನು ಬೇಡಿದ್ದನೆಂದು ಹೇಳಿದನು. 'ಲಂಕೆಯ ಬಗ್ಗೆ ಇಷ್ಟೊಂದು ಅಭಿಲಾಷೆಯನ್ನಿಟ್ಟು ಕೊಂಡರೆ ಅದು ನಿನ್ನ ನಾಶಕ್ಕೆ ಕಾರಣವಾಗುತ್ತದೆ' ಎಂದು ವಿಶ್ರವನು ರಾವಣನಿಗೆ ಸ್ಪಷ್ಟವಾಗಿ ಹೇಳಿದ್ದನು. ವರಪ್ರಾಪ್ತಿಯಿಂದ ಉನ್ಮತ್ತನಾದ ರಾವಣನು ವಿಶ್ರವನ ಉಪದೇಶವನ್ನು ಕಡೆಗಾಣಿಸಿದನು. ವಿಶ್ರವನು ಈ ರೀತಿ ಹೇಳುತ್ತಾನೆ:
<poem><small>
'''ನ ವೇತ್ತಿ ಮಮ ಶಾಪಾಚ್ಚ ಪ್ರಕೃತಿಂ ದಾರುಣಾಂ ಗತಃ ‖೪೦‖'''</poem></small></br>
{{gap}}"ನನ್ನ ಶಾಪದಿಂದ ಆತನ ಸ್ವಭಾವವು ಕ್ರೂರವಾಗಿದೆ."</br></br>
{{center|'''ಉತ್ತರಕಾಂಡ/೧೨'''}}
{{gap}}ರಾವಣನು ಬೇಟೆಯಾಡಲು ಒಂದು ಜನರಹಿತ ಕಾನನದಲ್ಲಿ ಅಲೆಯುತ್ತಿದ್ದಾಗ, ತನ್ನ ಕನ್ಯೆಯೊಡನಿದ್ದ ಮಯನೆಂಬ ದೈತ್ಯನನ್ನು ಕಂಡನು. ಏಕಾಕಿಯಾಗಿದ್ದ ಮಯನನ್ನು ಸಂಧಿಸಿ ರಾವಣನು ಆತನ ಕುಲವನ್ನು ಕೇಳಿದನು. ಆಗ ಮಯನು ಈ ರೀತಿಯಿಂದ ಉತ್ತರಿಸಿದನು: "ದೇವತೆಗಳು ನನಗೆ 'ಹೇಮಾ' ಎಂಬ ಅಪ್ಸರೆಯನ್ನು ಕೊಟ್ಟರು. ಅವಳಲ್ಲಿ ನಾನು ಸಹಸ್ರಾರು ವರ್ಷಗಳ ಕಾಲ ನಿರತನಾಗಿದ್ದೆ; ಒಮ್ಮೆ ಆಕೆಯು ದೇವತಾಕಾರ್ಯಕ್ಕೆಂದು ದೇವಲೋಕಕ್ಕೆ ಹೋದವಳು ಹದಿಮೂರು ವರ್ಷಗಳು ಕಳೆದರೂ ಮರಳಿ ಬರಲಿಲ್ಲ. ಅವಳಿಂದ ಹುಟ್ಟಿದ ಈ ಕನ್ಯೆಯು ಈಗ ವಿವಾಹಯೋಗ್ಯವಾಗಿದ್ದಾಳೆ. ಹೇಮಾ ಇವಳ ವಿರಹದಿಂದ ವ್ಯಾಕುಲಗೊಂಡ ನಾನು ವರಸಂಶೋಧನೆಗಾಗಿ ಅಲ್ಲಲ್ಲಿ ಸುತ್ತುತ್ತ ಸಾಂಪ್ರತ ಇಲ್ಲಿಗೆ ಬಂದಿದ್ದೇನೆ" ಇಷ್ಟೊಂದು ನುಡಿದು ಮಯನು ರಾವಣನಿಗೆ ಆತನ ಮಾಹಿತಿಯನ್ನು ಹೇಳಲು ವಿನಂತಿಸಿದನು.<noinclude></noinclude>
b2p95lqe22rerx2uqh2mj830g64ytoc
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೩
104
86617
321286
233114
2026-05-20T08:55:50Z
Shreelatha.Halemane
7642
/* Validated */
321286
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೫೯}}</br>
{{gap}}ರಾವಣನು ತಾನು ಪೌಲಸ್ತ್ಯಪುತ್ರ ದಶಗ್ರೀವನೆಂದು ಹೇಳಿದನು.
<poem><small>
'''ಸ ಹಿ ತಸ್ಯ ಮಯೋ ರಾಮ ಶಾಪಾಭಿಜ್ಞಸ್ತಪೋಧನಾತ್ ‖೨೦‖'''
'''ವಿದಿತ್ವಾ ತೇನ ಸಾ ದತ್ತಾ ತಸ್ಯ ಪೈತಾಮಹಂ ಕುಲಮ್ ‖೨೧‖'''</poem></small></br>
{{gap}}'ಭೀಕರತನವೇ ನಿನ್ನ ಸಹಜ ಗುಣವಾಗುವದು' ಎಂದು ರಾವಣನಿಗೆ ವಿಶ್ರವನಿಂದ ದೊರೆತ ಶಾಪದ ಮಾಹಿತಿಯು ಮಯನಿಗಿತ್ತು. ಹೀಗಿದ್ದರೂ, ರಾವಣನ ಪಿತಾಮಹನ ಕುಲಖ್ಯಾತಿಯನ್ನು ಗಮನಿಸಿ ತನ್ನ ಕನ್ಯೆಯಾದ ಮಂಡೋದರಿಯನ್ನು ಶಾವಣನಿಗೆ ಅರ್ಪಿಸಿದನು. ಈ ಕನ್ಯೆಯೇ ಮಂಡೋದರಿ! ರಾವಣನು ಅಗ್ನಿಸಾಕ್ಷಿಯಾಗಿ ಅವಳನ್ನು ಪತ್ನಿಯೆಂದು ಸ್ವೀಕರಿಸಿದನು.</br>
{{gap}}ವಿಶ್ರವನು ಯಾವ ಕಾರಣಕ್ಕಾಗಿ ರಾವಣನನ್ನು ಶಪಿಸಿದ್ದನು? ಎಂಬುದು ಸ್ಪಷ್ಟವಿಲ್ಲ. ಬಹುಶಃ ಇದರ ಸಂಬಂಧವು ವಿಶ್ರವಾ < ಕೈಕಸಿ ಶಾಪದೊಡನೆ ಇರಬೇಕು. ಶಪ ಕ್ರಮಾಂಕ ೩೯.</br></br>
{{center|'''೪೧. ಪಾರ್ವತಿ < ಕುಬೇರ'''}}
{{center|'''ಉತ್ತರಕಾಂಡ/೧೩'''}}
{{gap}}ಅಗಸ್ತ್ಯಮುನಿಯು ರಾವಣನ ದುರ್ವರ್ತನೆಯ ಬಗ್ಗೆ ರಾಮನಿಗೆ ಹೇಳುತ್ತಾನೆ. ಕುಬೇರನು ತನ್ನ ದೂತನ ಮುಖಾಂತರ ರಾವಣನಿಗೆ ಉಪದೇಶಿಸಿದ್ದನ್ನು ದೂತನು ನುಡಿಯುತ್ತಾನೆ:</br>
{{gap}}ದೇವಾದಿಗಳನ್ನು, ಋಷಿ, ಯಕ್ಷ, ಗಂಧರ್ವರನ್ನು ಹೊಡೆಯುವದು-ಬಡೆಯುವುದು, ನಂದನ ಮುಂತಾದ ಉದ್ಯಾನಗಳನ್ನು ಧ್ವಂಸಗೊಳಿಸುವದು, ನದಿ-ಪರ್ವತ-ವೃಕ್ಷಗಳನ್ನು ನಾಶಗೊಳಿಸುವದು, ಇವೇ ಮೊದಲಾದ ರಾವಣನ ದುಷ್ಕೃತ್ಯಗಳನ್ನು ಕೇಳಿದ ಕುಬೇರನು, ತನ್ನ ದೂತನೊಬ್ಬನನ್ನು ಲಂಕೆಗೆ ಕಳುಹಿಸಿ, ಸದ್ವರ್ತನೆಯಿಂದಿರಲು ರಾವಣನಿಗೆ ಉಪದೇಶಿಸಿದ್ದಾನೆ. ಈ ಸಂದರ್ಭದಲ್ಲಿ ತಾನು ಸ್ವತಃ ನಿರ್ದೋಷಿಯಾಗಿದ್ದರೂ ಪಾರ್ವತಿಯ ಕೋಪಕ್ಕೆ ಯಾವ ರೀತಿ ಬಲಿಯಾದೆ ಎಂಬುದರ ಉದಾಹರಣೆಯನ್ನು ಕುಬೇರನು ಕೊಟ್ಟಿದ್ದಾನೆ. ಸಂದೇಶವನ್ನು ದೂತನು ರಾವಣನಿಗೆ ಈ ರೀತಿ ಹೇಳುತ್ತಾನೆ:</br>
{{gap}}"ನಿನ್ನ ಬಂಧುವಿನ ಸಂದೇಶವನ್ನು ಇದ್ದಕ್ಕಿದ್ದಂತೆ ನಾನು ನಿನಗೆ ಹೇಳುತ್ತೇನೆ. ಮಾತಾಪಿತೃಗಳ ಕುಲ ಮತ್ತು ಅಚರಣೆಯನ್ನು ಅನುಸರಿಸಿ ನೀನು ಸದ್ವರ್ತನಿ ಯಾಗಿರು; ನಿನ್ನಿಂದ ಇನ್ನು ಮುಂದೆ ಪಾತಕಗಳು ನಡೆಯದಿರಲಿ. ನಿನ್ನ ಎಲ್ಲ<noinclude></noinclude>
o8w2c0oj90xgq2jonnl5i9luospcmfd
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೯
104
86660
321246
233649
2026-05-20T07:53:30Z
Shreelatha.Halemane
7642
/* Validated */
321246
proofread-page
text/x-wiki
<noinclude><pagequality level="4" user="Shreelatha.Halemane" />{{rh|||೧೦೫}}</noinclude>{{center|'''೧. ವಾಲ್ಮೀಕಿ < ನಿಷಾದ'''</br>'''ಬಾಲಕಾಂಡ/೨'''}}
{{gap}}ಒಮ್ಮೆ ವಾಲ್ಮೀಕಿ ಋಷಿಯು ಭರದ್ವಾಜನೆಂಬ ತನ್ನ ಶಿಷ್ಯನೊಡನೆ ತಮಸಾ ನದಿಯ ತೀರದ ವನದಲ್ಲಿ ಸ್ನಾನಸಂಧ್ಯಾವಂದನೆಗೆ ತಕ್ಕ ಸ್ಥಳವನ್ನು ಹುಡುಕುತ್ತಿದ್ದನು. ಆಗ ಯಾವ ಆಧಿವ್ಯಾಧಿಗಳ ಚಿಂತೆಯೂ ಇರದ ಕಾಮಕೇಳಿಯಲ್ಲಿ ತೊಡಗಿದ ಕ್ರೌಂಚಪಕ್ಷಿಗಳ ಒಂದು ಜೊತೆಯು ಕಾಣಿಸಿಕೊಂಡಿತು. ವಾಲ್ಮೀಕಿಯು ಇದನ್ನು ನೋಡುತ್ತಿದ್ದರೂ, ಅದನ್ನು ಲೆಕ್ಕಿಸದೇ ಪಾಪಬುದ್ಧಿಯ ನಿಷಾದನು, ನಿಷ್ಕಾರಣ ವೈರವನ್ನು ತಳೆದು ಆ ಜೊತೆಯಲ್ಲಿಯ ಗಂಡಿಗೆ ಗುರಿಯಿಟ್ಟನು. ಬಿಟ್ಟ ಬಾಣವು ಮರ್ಮಸ್ಥಳಕ್ಕೆ ತಗುಲಿ ಅದು ತಕ್ಷಣ ನೆಲಕ್ಕುರುಳಿತು; ದೇಹವೆಲ್ಲ ರಕ್ತರಂಜಿತವಾಗಿತ್ತು. ಪ್ರಾಣಾಂತಿಕ ವೇದನೆಯಿಂದ ಕಸಿವಿಸಿಗೊಳ್ಳುತ್ತಿದ್ದ ತನ್ನ ಪ್ರಿಯಕರನನ್ನು ಕಂಡು ಹೆಣ್ಣು ಕ್ರೌಂಚವು ಕರುಣಸ್ವರದಿಂದ ರೋದಿಸತೊಡಗಿತು. ತಲೆಯ ಮೇಲೆ ಆರಕ್ತವರ್ಣದ ತುರಾಯಿಯುಳ್ಳ ಕಾಮಪರವಶನಾದ, ಹಗಲಿರುವಳು ಜೊತೆಜೊತೆಯಾಗಿರುತ್ತಿದ್ದ ತನ್ನ ಪ್ರಿಯಕರನ ಆ ಅವಸ್ಥೆಯನ್ನು ಕಂಡು, ಆ ಹೆಣ್ಣು ಹಕ್ಕಿಯು ಬಲು ವ್ಯಾಕುಲಗೊಂಡಿತು. ಪ್ರಿಯಕರನ ಅಗಲುವಿಕೆಯು ಅಸಹನೀಯವಾಯಿತು. ಈ ದೃಶ್ಯವನ್ನು ಕಂಡ ವಾಲ್ಮೀಕಿಗೆ ಹೇಳಲಾಗದ ವ್ಯಥೆಯಾಯಿತು. ರೋದಿಸುತ್ತಿದ್ದ ಆ ಪಕ್ಷಿಣಿಯನ್ನು ಕಂಡಾಗ, ಈ ಪರಿ ಕಾಮಪರವಶವಾದ ಪಕ್ಷಿಯನ್ನು ವಧಿಸುವುದು 'ಅಧರ್ಮ'ವೆಂದೆನಿಸಿದ ವಾಲ್ಮೀಕಿಯ ಮುಖದಿಂದ ಈ ಉದ್ಗಾರವು ಹೊರಬಂದಿತು:
<small><poem>
'''ಮಾ ನಿಷಾದ ಪ್ರತಿಷ್ಠಾಂ ತ್ವಮಗಮ: ಶಾಶ್ವತೀಃ ಸಮಾಃ |'''
'''ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ॥೧೫॥*'''</small></poem>
{{bar}}<br>
{{gap}}*ಈ ಶ್ಲೋಕದ ವಿವಿಧ ಅನುವಾದಗಳಲ್ಲಿ ಸಾಕಷ್ಟು ಭಿನ್ನತೆಯು ಕಂಡುಬರುತ್ತದೆ:</br>
{{gap}}(೧) ಪಂ. ಶ್ರೀ ದಾ. ಸಾತವಳೇಕರ ಇವರ ಅನುವಾದವು ಕೈ, ಕಾಶೀನಾಥಶಾಸ್ತಿ ಲೇಲೆ ಇವರು ಮಾಡಿದ ಅನುವಾದದಂತೆ ಇದೆ. ಅದರಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲ.</br>
{{gap}}(೨) ಡಾ|| ಶ್ರೀನಿವಾಸ ಅಯ್ಯಂಗಾರ ಮತ್ತು ವಿದ್ವಾನ್ ಎಸ್. ರಂಗನಾಥಶರ್ಮ ಇವರು ಮಾಡಿದ ವಾಲ್ಮೀಕಿರಾಮಾಯಣದ ಕನ್ನಡದಲ್ಲಿಯ ಈ ಶ್ಲೋಕಾರ್ಥಗಳು ಕೈ. ಕಾಶೀನಾಥಶಾಸ್ತ್ರಿ ಲೇಲೆ ಇವರು ಮಾಡಿದ ಅನುವಾದದ ಅರ್ಥಕ್ಕೆ ಹೋಲುತ್ತವೆ.</br><noinclude></noinclude>
t1wq5nag7s0lguw3w3dy7pny07rbh26
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೩೦
104
86661
321247
279831
2026-05-20T07:53:45Z
Shreelatha.Halemane
7642
/* Validated */
321247
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೧೦೬|right=ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರಗಳು}}</noinclude>{{gap}}"ಎಲೈ ನಿಷಾನನೇ! ಕಾಮಪರವಶವಾಗಿದ್ದ ಕ್ರೌಂಚ-ಜೊತೆಯಲ್ಲಿಯ ಒಂದನ್ನು ನೀನು ಕೊಂದಿರುವೆ; ಕಾರಣ ನೀನು ಬಹಳ ವರ್ಷಗಳವರೆಗೆ ಬದುಕಬಾರದು."
{{gap}}ಈ ಶ್ಲೋಕವನ್ನು ಉಚ್ಚರಿಸಿದೊಡನೆಯೇ ವಾಲ್ಮೀಕಿಯು ಚಿಂತ್ತಾಗ್ರಸ್ತನಾದನು. ತಪಸ್ಸನ್ನು ನಾಶಗೊಳಿಸುವ ಶಾಪವಾಣಿಯು ತನ್ನ ಮುಖದಿಂದ ಹೊರಬಂದದಕ್ಕೆ ನೊಂದುಕೊಂಡನು. "ಚರಣಬದ್ದವಾದ, ಸಮ ಅಕ್ಷರಗಳುಳ್ಳ ಛಂದೋಬದ್ಧವಾದ, ಅಕ್ಷರರಚನಾದೋಷರಹಿತವಾದ ವೀಣೆಯ ಶ್ರುತಿಯೊಡನೆ ಹಾಡಲು ಯೋಗ್ಯವಾದ ಈ ಶ್ಲೋಕವು ನಾನು ಶೋಕಾಕುಲನಿದ್ದಾಗ ನನ್ನ ಮುಖದಿಂದ ತಾನಾಗಿಯೇ ಬಂದಿದೆ; ಅದು ಅಕೀರ್ತಿಕಾರಕವಾಗದೇ ಕೀರ್ತಿರೂಪವಾಗಲಿ" ಎಂದು ತನ್ನ ಶಿಷ್ಯನಿಗೆ ಹೇಳಿದನು. ಶಿಷ್ಯನು ಸಮ್ಮತಿಸಿ ಅಹುದೆಂದು ತಲೆಬಾಗಿಸಿದಾಗ ಋಷಿಯು ಸಂತೋಷಗೊಂಡರು; ನಂತರವೂ ಈ ಶ್ಲೋಕವು ಆತನ ಮನಸ್ಸಿನಲ್ಲಿ ತಾಳ ಹಾಕುತ್ತಲೇ ಇತ್ತು. ಈ ರೀತಿ ಅಸ್ವಸ್ಥ ಮನಃಸ್ಥಿತಿಯಲ್ಲಿದ್ದಾಗ ವಾಲ್ಮೀಕಿಗೆ ಬ್ರಹ್ಮದೇವನು ಪ್ರತ್ಯಕ್ಷನಾಗಿ ಇಂತೆಂದನು: "ನೀನು ರಚಿಸಿದ ಈ ಶ್ಲೋಕವು ಯಶೋರೂಪ ವಾಗುವದು; ಅದರಲ್ಲಿ ಸಂದೇಹವಿಲ್ಲ. ಎಲೈ ಬ್ರಹ್ಮಜ್ಞನೇ, ನನ್ನ ಇಷ್ಟಾನುಸಾರ ವಾಗಿಯೇ ನಿನ್ನಲ್ಲಿ ಸರಸ್ವತಿಯು ಒಲಿದಿದ್ದಾಳೆ; ಆದ್ದರಿಂದ ಋಷಿವರ್ಯರೇ, ನೀನು ರಾಮನ ಸಂಪೂರ್ಣ ಚರಿತ್ರೆಯನ್ನು ಬಣ್ಣಿಸು! ಜಗತ್ತಿನಲ್ಲೆಲ್ಲ ಮನೋಹರನು,
{{bar}}
{{right|
(೩) ಹೇ ವಿಷಾದನೆ! ಕೌಂಚ-ಜೊತೆಯಲ್ಲಿಯ ಕಾಮಮೋಹಿತವಾದ ಒಂದನ್ನು ನೀನು ಕೊಂದೆ; ಅದಕ್ಕಾಗಿ ಇನ್ನು ಮುಂದೆ ಎಂದೆಂದಿಗೂ ನಿನಗೆ ಪ್ರತಿಷ್ಠೆಯು ದೊರೆಯಲಾರದು.<br />
-ವಾಲ್ಮೀಕಿ ರಾಮಾಯಣ, ಸಮಗ್ರ ಮರಾಠಿ ಅನುವಾದ, ಖಂಡ ೧, ಪು.೫<br />
ಶ್ರೀರಾಮಕೋಶ ಮಂಡಳ, ಪುಣೆ.<br />
(೪) "ನಿಷಾದನೇ! ನಿನಗೆ ಎಂದೆಂದಿಗೂ ಶಾಂತಿ ದೊರೆಯಲಾರದು! ಏಕೆಂದರೆ ನೀನು ಕ್ರೌಂಚ ಪಕ್ಷಿಯ ಜೋಡಿಯಲ್ಲಿಯ ಕಾಮಮೋಹಿತವಾದ ಗಂಡುಹಕ್ಕಿಯನ್ನು, ಅದರ ಯಾವ ಅರಾಪಧವೂ ಇರದಾಗ, ಕೊಂದೆ.'<br />
-ಡಾ. ಪ, ನ, ಜೋಶಿ, ಸ್ವಾರ್ಥ ವಾಲ್ಮೀಕಿರಾಮಾಯಣ, ಖಂಡ ೧;<br />
ಗೀತಾ ಪ್ರೆಸ್, ಗೋರಖಪುರದ ಹಿಂದೀ ಅನುವಾದವೂ ಇದೆ ಅರ್ಥದ್ದಿದೆ.}}
<br clear="all" />
<poem>
(೫) No farme be thine for endless time,
Because, base outcast, of thy crime,
Whowe cruel hand was fa in to slay,
One of this gentle pair at play! </poem>
{{gap}}-Ralph T. H. Griffith; Ramayan of Valmiki, p.7.</br><noinclude></noinclude>
culk3rkxgkyfzgo7egkftpgngq7dmtz
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೪೪
104
86675
321248
279834
2026-05-20T07:55:46Z
Shreelatha.Halemane
7642
/* Validated */
321248
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೨೦|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
{{gap}}“ಯಾವ ಆಹಾರವಿರದೇ ಕೇವಲ ವಾಯುಭಕ್ಷಣೆ ಮಾಡಿ ನೀನು ಸಾವಿರಾರು ವರ್ಷಗಳವರೆಗೆ ಬೂದಿಯಲ್ಲಿ ಬಿದ್ದು ನರಳುವೆ. ಯಾವ ಪ್ರಾಣಿಗಳ ಕಣ್ಣಿಗೂ ಬೀಳದೇ ನೀನು ಈ ಆಶ್ರಮದಲ್ಲಿ ಬಿದ್ದಿರುವೆ; ಜಯಿಸಲಸಾಧ್ಯನಾದ ದಶರಥಪುತ್ರ ರಾಮನು ಈ ಘೋರಕಾನನವನ್ನು ಪ್ರವೇಶಿಸಿದಾಗ,ಹೇ ದುರಾಚಾರಿಣಿ, ಲೋಭ ಮೋಹಗಳನ್ನು ಕಳೆದುಕೊಂಡ ನೀನು ಆತನಿಗೆ ಆದರಾತಿಥ್ಯವನ್ನು ಸಲ್ಲಿಸಿ ಶುದ್ಧಳಾಗುವೆ.ಅನಂತರ ಸ್ವ-ಸ್ವರೂಪವನ್ನು ತಾಳಿ ನನ್ನೊಡನೆ ಆನಂದದಿಂದ ಬಾಳುವೆ” ಎಂಬ ಶಾಪವನ್ನು ಗೌತಮನು ಕೊಟ್ಟನು.
{{gap}}ವಿಶ್ವಾಮಿತ್ರನ ಅಪ್ಪಣೆಯಂತೆ ರಾಮನು ಭಾಗ್ಯವತಿಯಾದ ಆ ಅಹಲ್ಯೆಯನ್ನು ಅವಲೋಕಿಸಿದನು. ಆ ಅಹಲ್ಯೆಯ ತಪದ ಪ್ರಭಾವವು ಎಲ್ಲೆಡೆಯಲ್ಲಿಯೂ ಹರಡಿತ್ತು. ಗೌತಮನ ಶಾಪದಿಂದ ಅವಳು ಯಾರ ದೃಷ್ಟಿಗೂ ಬೀಳುವಂತಿರಲಿಲ್ಲ.ಶಾಪಮುಕ್ತಳಾದೊಡನೆ ಅವಳು ಎಲ್ಲರಿಗೂ ಕಾಣುವಂತಾದಳು. ಅವಳು ಈಗ ತೇಜಸ್ವಿನಿಯಾಗಿದ್ದಳು. ರಾಮ-ಲಕ್ಷ್ಮಣರು ಆನಂದದಿಂದ ಪಾದ ಮುಟ್ಟಿ ನಮಸ್ಕರಿಸಿದರು. ಆಕೆಯೂ ಅಭಿನಂದಿಸಿದಳು. ಅರ್ಘ್ಯಪಾದ್ಯಾದಿಗಳಿಂದ ಅವರನ್ನು ಸತ್ಕರಿಸಿದಳು.ರಾಮ-ಲಕ್ಷ್ಮಣರು ಅದನ್ನು ಸ್ವೀಕರಿಸಿದರು. ಮಹಾತೇಜಸ್ವಿಯಾದ ಗೌತಮನು ಅಹಲ್ಯೆಯೊಡನೆ ಸುಖವಾಗಿ ಬಾಳಿದನು.ಗೌತಮನ ಪೂಜಾ ಸತ್ಕಾರವನ್ನು ಪಡೆದು ರಾಮನು ಮಿಥಿಲಾನಗರದತ್ತ ಪ್ರಯಾಣ ಬೆಳೆಸಿದನು.
{{center|'''ಉತ್ತರಕಾಂಡ/೩೦'''}}
{{gap}}ಇಂದ್ರನನ್ನು ಶಪಿಸಿದ ನಂತರ ಗೌತಮನು ತನ್ನ ಪತ್ನಿಯಾದ ಅಹಲೈಯನ್ನು ಈ ರೀತಿ ಧಿಕ್ಕರಿಸಿದರು:
<br clear="all" />
<poem>
'''ದುರ್ವಿನೀತೇ ವಿನಿಧ್ವಂಸ ಮಮಾಶ್ರಮಸಮೀಪತ:||೩೬||'''
'''ರೂಪವನಸುಪನ್ನಾ ಯಸ್ಮಾತ್ಮನವಸ್ಥಿತಾ|'''
'''ತಸ್ಮಾದ್ರೂಪವತೀ ಲೋಕೇ ನ ತ್ವಮೇಕಾ ಭವಿಷ್ಯತಿ||೩೭||'''
'''ರೂಪಂ ಚ ತೇ ಪ್ರಜಾಃ ಸರ್ವಾ ಗಮಿಷ್ಯಂತಿ ನ ಸಂಶಯಃ ||೩೮||'''
</poem>
{{gap}}“ಎಲೈ ದುರಾಚಾರಿಣಿಯೇ, ನನ್ನ ಆಶ್ರಮದ ಬಳಿಯಲ್ಲಿಯೇ ನೀನು ಧ್ವಂಸಳಾಗು: ರೂಪಯೌವನದ ಸಂಪನ್ನೆಯಾದ ನೀನು ಸ್ಥಿರಚಿತ್ತಳಾಗಿ ಉಳಿಯಲಿಲ್ಲ. ಹೀಗಾದ್ದರಿಂದ ಈ ಜಗತ್ತಿನಲ್ಲಿ ನೀನೊಬ್ಬಳೇ ರೂಪವತಿಯಾಗಿ ಇರಲಾರೆ; ಸೌಂದರ್ಯವೆಲ್ಲವೂ ಒಂದೆಡೆಯಾದರೆ ಅನರ್ಥಕ್ಕೆ ಕಾರಣ;<noinclude></noinclude>
9pwcniadnen98kc95c19zpvdojad5um
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೨
104
88429
321331
279656
2026-05-20T09:14:16Z
Shreelatha.Halemane
7642
/* Validated */
321331
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೨೫೮|center=|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
<br/>
{{gap}}ಹೀಗೆ ನುಡಿದು ಮಹಾತೇಜಸ್ವಿಯಾದ ಕಶ್ಯಪನು ಅವಳ ಮೈಸಿರಿಯನ್ನು<br/>ಸ್ಪರ್ಶಿಸಿದನು. ಸಮಾಗಮದ ನಂತರ 'ಶುಭವಾಗಲಿ!' ಎಂದು ಹಾರೈಸಿ ಆತನು<br/>ತಪಸ್ಸಿಗಾಗಿ ತೆರಳಿದನು.<br/>
{{gap}}ದಿತಿಗೆ ಅತಿಶಯ ಆನಂದವಾಯಿತು. ಅವಳು ಉಗ್ರತಪಸ್ಸನ್ನು ಕೈಗೊಂಡಳು.<br/>ಆ ಸಮಯದಲ್ಲಿ ಇಂದ್ರನು ದಿತಿಗೆ ಉತ್ಕೃಷ್ಟಸೇವೆಯನ್ನು ಸಲ್ಲಿಸಿದನು. ಸಾವಿರ<br/>ವರ್ಷಗಳ ತಪಸ್ಸು ಪೂರ್ಣವಾಗಲು ಕೇವಲ ಹತ್ತು ವರ್ಷಗಳು ಉಳಿದಾಗ<br/>ಆಕೆಯು ಸಂತೋಷಭರಿತಳಾಗಿ ಇಂದ್ರನಿಗೆ ಇಂತೆಂದಳು- “ಹೇ ಸುರಶ್ರೇಷ್ಠನೇ,<br/>ನಿನ್ನ ಸೇವೆಯಿಂದ ನಾನು ಸಂತೋಷಗೊಂಡಿದ್ದೇನೆ. ನಿನ್ನನ್ನು ವಧಿಸಲೆಂದು<br/>ಬಯಸಿದ ಪುತ್ರನು ಹುಟ್ಟದೇ ನಿನಗೆ ಜಯವನ್ನುಂಟುಮಾಡುವ ಪುತ್ರನು ನನಗೆ<br/>ಆಗಲಿ!”<br/>
{{gap}}'''ವರೋ ವರ್ಷಸಹಸ್ರಾಂತೇ ಮಮ ದತ್ತಃ ಸುತಂ ಪ್ರತಿ ॥೧೫॥'''
<br/>
{{gap}}ಮಹಾತ್ಮನಾದ ನಿನ್ನ ಪಿತನಿಗೆ ಪ್ರಾರ್ಥಿಸಿಕೊಂಡಾಗ ಆತನು “ಸಾವಿರ<br/>ವರ್ಷಗಳ ನಂತರ ನಿನಗೆ ಪುತ್ರನು ಹುಟ್ಟುವನು!” ಎಂಬ ವರವನ್ನು ಕೊಟ್ಟಿದ್ದಾನೆ.<br/>
{{gap}}ಹೀಗಿರುವಾಗ ಒಂದು ಮಧ್ಯಾಹ್ನದ ಸಮಯದಲ್ಲಿ ಸೂರ್ಯನು<br/>ನಡುನೆತ್ತಿಯ ಮೇಲೇರಿದಾಗ ದಿತಿಯು ತಲೆದಿಂಬಿನತ್ತ ಪಾದಗಳನ್ನಿರಿಸಿ ನಿದ್ರೆ<br/>ಹೋದಳು. ಈ ವರ್ತನೆಯಿಂದ ಅವಳಲ್ಲಿಯ ಶುಚಿರ್ಭೂತತನವು ಇಲ್ಲದಾಯಿತು.<br/>ಇದರಿಂದ ಇಂದ್ರನಿಗೆ ಆನಂದವಾಗಿ, ಆತನು ಆಕೆಯ ಶರೀರದಲ್ಲಿ ಜಾಗರೂಕತೆ<br/>ಯಿಂದ ಪ್ರವೇಶಿಸಿ ಅವಳ ಗರ್ಭವನ್ನು ಏಳು ಭಾಗಗಳಲ್ಲಿ ತುಂಡರಿಸಿದನು.<br/>ಆಗ ಆ ಗರ್ಭವು ಅಳತೊಡಗಿತು. ಆ ರೋದನವನ್ನು ಕೇಳಿ ದಿತಿಯು 'ಮಾರುದ!'<br/>'ಮಾರುದ!' ಎಂದಳು. ಗರ್ಭವನ್ನು ನಾಶಪಡಿಸಬಾರದೆಂದು ಅವಳು ಇಂದ್ರನಿಗೆ<br/>ಹೇಳಿದನು. ಆಗ ಆತನು ಅವಳ ದೇಹದಿಂದ ಹೊರಗೆ ಬಂದು ಈ ರೀತಿ<br/>ನುಡಿದನು- "ಪಾದಗಳನ್ನಿಡುವ ಜಾಗದಲ್ಲಿ ನೀನು ತಲೆ ಇಟ್ಟು ಮಲಗಿದ<br/>ಕಾರಣ ನಿನ್ನಲ್ಲಿ ಅಶುಚಿಯುಂಟಾಯಿತು. ನಿನ್ನ ಈ ನ್ಯೂನತೆಯನ್ನು ಗಮನಿಸಿ<br/>ಯುದ್ಧದಲ್ಲಿ ನನ್ನನ್ನು ವಧಿಸಬಹುದಾದ ನಿನ್ನ ಪುತ್ರನನ್ನು ನಾನು ಏಳು ಭಾಗಗಳಲ್ಲಿ<br/>ತುಂಡರಿಸಿರುವೆನು; ಅದಕ್ಕೆ ಕ್ಷಮಿಸು!"<br/>
{{gap}}ಇದನ್ನು ಕೇಳಿದ ನಂತರ ದಿತಿಯು ಇಂದ್ರನಿಗೆ ಹೀಗೆಂದಳು:<br/>
{{gap}}“ನೀನು ಮಾಡಿದ ಸಂಗತಿಯು ಇಬ್ಬರಿಗೂ ಹಿತಕರವಾಗಬೇಕು; ಈ<br/>ಏಳು ಪುತ್ರರು ಏಳು ಮರುದ್ಗಣರ ಸ್ಥಾನವನ್ನು ಕಾಪಾಡಲಿ.” ಈ ಇಚ್ಛೆಯನ್ನು<br/><noinclude></noinclude>
2j99n0xelem1dncs7jj1f38sttvro9l
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೮
104
89036
321301
233398
2026-05-20T09:04:33Z
Shreelatha.Halemane
7642
/* Validated */
321301
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೭೪|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
'ನೃಗ'ನೆಂಬ ರಾಜನಿದ್ದನು. ಒಮ್ಮೆ ಪುಷ್ಕರತೀರ್ಥದಲ್ಲಿ ಸುವರ್ಣಭೂಷಿತ ಕೋಟ್ಯಾವಧಿ ಹಸುಗಳನ್ನು ಅವುಗಳ ಕರುಗಳ ಜೊತೆಗೆ ಆತನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನು. ಅದೇ ಸಮಯದಲ್ಲಿ ಹೊಲದಲ್ಲಿ ಭೂಮಿಗೆ ಬಿದ್ದ ಧಾನ್ಯ-ಕಣಗಳನ್ನು ಮೇಯ್ದು ಜೀವಿಸುವ ಒಂದು ಹಸುವು ಒಬ್ಬ ಬಡಬ್ರಾಹ್ಮಣದಾಗಿತ್ತು; ಈ ಹಸುವು ಆ ದಾನ ಕೊಡಲಿದ್ದ ಕೋಟ್ಯಾವಧಿ ಹಸುಗಳ ಮಂದೆಯನ್ನು ಸೇರಿಕೊಂಡಿತ್ತು; ರಾಜನು ಇದನ್ನು ಅರಿಯದೇ ಈ ಹಸುವನ್ನೂ ಒಬ್ಬ ಬ್ರಾಹ್ಮಣನಿಗೆ ದಾನವಾಗಿ ಕೊಟ್ಟನು. ತನ್ನ ಕಳೆದುಕೊಂಡ ಹಸುವನ್ನು ಆ ಬಡಬ್ರಾಹ್ಮಣನು ಎಲ್ಲೆಡೆಯಲ್ಲಿಯೂ ಹುಡುಕಿದನು. ಸಾಕಷ್ಟು ಸಮಯವು ಕಳೆಯಿತು. ಇದೇ ರೀತಿ ಶೋಧಾರ್ಥವಾಗಿ ಅಲೆಯುತ್ತ ಬ್ರಾಹ್ಮಣನು ಕನಖಲ ತೀರ್ಥಕ್ಕೆ ಹೋದನು. ಅಲ್ಲಿ ತನ್ನ ಹಸು ಕರುವಿನೊಂದಿಗೆ ಬೇರೊಬ್ಬ ಬ್ರಾಹ್ಮಣನ ಬಳಿ ಇರುವುದನ್ನು ಕಂಡನು.</br>
{{gap}}"ಶಬಲೆ! ಇಲ್ಲಿ ಬಾ!" ಎಂದು ಕರೆದ ಕ್ಷಣವೇ ಆ ಹಸು ಧ್ವನಿಯನ್ನು ಗುರುತಿಸಿ ಈ ಬಡಬ್ರಾಹ್ಮಣನ ಬಳಿ ಬಂದಿತು. ಆಗ ಈ ಹಸುವನ್ನು ದಾನವಾಗಿ ಪಡೆದ ಬ್ರಾಹ್ಮಣನು "ರಾಜನಿಂದ ಇದು ದಾನವಾಗಿ ದೊರೆತಿದೆ" ಎಂದು ತಿಳಿಸಿದನು. ಆ ಇಬ್ಬರಲ್ಲಿ ಬಹಳ ಸಮಯದವರೆಗೆ ವಾದ ನಡೆಯಿತು. ಇಬ್ಬರೂ ತಮ್ಮ ತಮ್ಮ ಹೇಳಿಕೆಗಳನ್ನು ಪ್ರತಿಪಾದಿಸಹತ್ತಿದರು. ಕೊನೆಗೆ ರಾಜನನ್ನು ಸಮಕ್ಷಮ ಕಂಡು ತೀರ್ಮಾನಿಸಬೇಕೆಂದು ನಿಶ್ಚಯಿಸಿದರು. ಗೋಪ್ರದಾನಮಾಡಿದ ರಾಜನ ಬಳಿ ಇಬ್ಬರೂ ಹೋದಾಗ ರಾಜನ ಭೇಟಿಯೇ ಆಗಲಿಲ್ಲ. ದೀರ್ಘಸಮಯದವರೆಗೆ ಅವರು ರಾಜದ್ವಾರದಲ್ಲಿ ಕಾಯ್ದು ಕುಳಿತಿರಬೇಕಾಯಿತು. ಆಗ ಸಿಟ್ಟಾಗಿ ಅವರು ಈ ರೀತಿ ಉದ್ಗರಿಸಿದರು-
<small><poem>
'''ಅರ್ಥಿನಾಂ ಕಾರ್ಯಸಿದ್ಧ್ಯರ್ಥಂ ಯಸ್ಮಾತ್ತ್ವಂ ನೈಷಿ ದರ್ಶನಮ್ ‖೧೮‖'''
'''ಅದೃಶ್ಯಃ ಸರ್ವಭೂತಾನಾಂ ಕೃಕಲಾಸೋ ಭವಿಷ್ಯಸಿ |'''
'''ಬಹುವರ್ಷಸಹಸ್ರಾಣಿ ಬಹುವರ್ಷಶತಾನಿ ಚ ‖೧೯‖'''
'''ಶ್ವಭ್ರೇ ತ್ವಂ ಕೃಕಲೀಭೂತೋ ದೀರ್ಘಖಾಲಂ ನಿವತ್ಸ್ಯಸಿ |'''
'''ಉತ್ಪತ್ಸ್ಯತೇ ಹಿ ಲೋಕೇsಸ್ಮಿನ್ಯದೂನಾಂ ಕೀರ್ತಿವರ್ಧನಃ ‖೨೦‖'''
'''ವಾಸುದೇವ ಇತಿ ಖ್ಯಾತೋ ವಿಷ್ಣುಃ ಪುರುಷವಿಗ್ರಹಃ |'''
'''ಸ ತೇ ಮೋಕ್ಷಯಿತಾ ಶಾಪಾದ್ರಾಜಂಸ್ತಸ್ಮಾದ್ ಭವಿಷ್ಯಸಿ ‖೨೧‖'''
'''ಕೃತಾ ಚ ತೇನ ಕಾಲೇನ ನಿಷ್ಕೃತಿಸ್ತೇ ಭವಿಷ್ಯತಿ ‖೨೨‖'''</small></poem><noinclude></noinclude>
qehwyiq38hps3rj1ofqa5m23xt2lakg
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೯
104
89037
321303
233412
2026-05-20T09:05:11Z
Shreelatha.Halemane
7642
/* Validated */
321303
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೭೫}}</br>
{{gap}}"ಸಹಾಯವನ್ನು ಕೋರಿ ಬಂದವರ ಕಾರ್ಯಗಳನ್ನು ಪೂರೈಸಲು ನೀನು ಹೊರಗೆ ಬರುತ್ತಿಲ್ಲ; ಹೇ ರಾಜನೆ, ನೀನು ಸಕಲಪ್ರಾಣಿಗಳಿಗೆ ಅದೃಶ್ಯನಾಗಿರುವ 'ಓತಿಕೇತ'ನಾಗುವೆ; ನೂರಾರು ಸಾವಿರಾರು ವರ್ಷಗಳವರೆಗೆ ಓತಿಕೇತನಾಗಿ ಬಿಲದಲ್ಲಿ ವಾಸಿಸುವೆ; ಈ ಜಗತ್ತಿನಲ್ಲಿ ಯಾದವರ ಕೀರ್ತಿಯನ್ನು ವರ್ಧಿಸುವ ವಿಷ್ಣುವು ಪುರುಷದೇಹವನ್ನುಧರಿಸಿ ವಾಸುದೇವನೆಂದು ಜನಿಸುವನು. ಹೇ ರಾಜನೇ, ಆತನು ನಿನ್ನನ್ನು ಈ ಶಾಪದಿಂದ ಮುಕ್ತಗೊಳಿಸುವನು; ಸಾರಾಂಶದಲ್ಲಿ, ನೀನು ಈಗ 'ಓತಿಕೇತ'ನಾಗುವೆ; ನಿನ್ನ ಪಾಪ ಪರಿಹಾರವಾಗಲು ಇಷ್ಟೊಂದು ದೀರ್ಘ ಕಾಲವು ಬೇಕಾಗುವದು."</br>
{{gap}}ರಾಜನಿಗೆ ಶಾಪ ಕೊಟ್ಟು ಆ ಇಬ್ಬರು ಬ್ರಾಹ್ಮಣರು ಸ್ವಸ್ಥಚಿತ್ತರಾದರು. ಆ ಹಸು, ಸೋತು ಬಡವಾಗಿದ್ದುದರಿಂದ ಅಗ್ನಿಹೋತ್ರಿ ಬ್ರಾಹ್ಮಣನು ಆ ಇನ್ನೊಬ್ಬ ಬ್ರಾಹ್ಮಣನಿಗೆ ಆ ಹಸುವನ್ನು ಕೊಟ್ಟುಬಿಟ್ಟನು. ಇತ್ತ ರಾಜನು ಆ ಭಯಂಕರ ಶಾಪಕ್ಕೆ ಗುರಿಯಾದನು. ಅಲ್ಪ ಅಪರಾಧಕ್ಕೆ ರಾಜನಿಗೆ ಘೋರ ಶಾಪವಾಯಿತೆಂದು ಲಕ್ಷ್ಮಣನಿಗೆ ಎನಿಸಿತು.</br>
{{gap}}ಬ್ರಾಹ್ಮಣರ ಉದ್ಗಾರಗಳಲ್ಲಿಯ ಉತ್ತರಾರ್ಧವು ಉಃಶಾಪದಂತಿದೆ. ಸಾಮಾನ್ಯವಾಗಿ ಉಃಶಾಪವು ಯಾಚಿತವಾಗಿರುತ್ತದೆ. ನೃಗರಾಜನು ಉಃಶಾಪವನ್ನು ಬೇಡಿರಲಿಲ್ಲವಾದರೂ ಶಾಪಮುಕ್ತಿಯ ಬಗ್ಗೆ ಬ್ರಾಹ್ಮಣರು ತಾವಾಗಿಯೇ ಹೇಳಿದ್ದಾರೆ.</br>
{{gap}}ರಾಜರ ಅಪರಾಧದ ಸಂಬಂಧವಾಗಿ ನೃಗರಾಜನ ಕಥೆಯನ್ನು ಲಕ್ಷ್ಮಣನಿಗೆ ಹೇಳಿದ ನಂತರ ರಾಮನು ನಿಮಿರಾಜನ ಇನ್ನೊಂದು ಕಥೆಯನ್ನು ಹೇಳುತ್ತಾನೆ:</br></br>
{{center|'''೫೦. ವಸಿಷ್ಠ < ನಿಮಿರಾಜ'''}}
{{center|'''ಉತ್ತರಕಾಂಡೆ/೫೫'''}}
{{gap}}'ನಿಮಿ'ಯಂ ಇಕ್ಷ್ವಾಕುವಿನ ಹನ್ನೆರಡನೆಯ ಪುತ್ರನು. ಆತನು ಶೂರನೂ, ಧರ್ಮ ಪರಾಯಣನೂ ಅಗಿದ್ದನು. ಗೌತಮ ಮುನಿಯ ಆಶ್ರಮದ ಹತ್ತಿರ ಅಮರಾವತಿಯಂತೆ ಕಂಗೊಳಿಸುವ 'ವೈಜಯಂತ' ಎಂಬ ನಗರವನ್ನು ನಿರ್ಮಿಸಿದನು. ಪಿತನ ಮನಸ್ಸಿಗೆ ಆನಂದವನ್ನುಂಟುಮಾಡಲು ದೀರ್ಘಯಾಘವನ್ನು ಮಾಡಬೇಕೆಂಬ ಇಚ್ಛೆ ಆತನಿಗಾಯಿತು. ಪಿತನ ಸಲಹೆಯಂತೆ ನಿಮಿಯಂ ಬ್ರಹ್ಮರ್ಷಿ ಶ್ರೇಷ್ಠನಾದ ವಸಿಷ್ಠನಿಗೆ ಯಜ್ಞದ ಪ್ರಥಮ ಪೌರೋಹಿತ್ಯವನ್ನು ಅರ್ಪಿಸಿದನು.<noinclude></noinclude>
bkr7mrcty6h20346cs43yd2wivj2h40
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೦
104
89038
321305
233425
2026-05-20T09:06:03Z
Pragathi. BH
7585
/* Validated */
321305
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೭೬|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಅದೇ ರೀತಿ ಅತ್ರಿ, ಅಂಗೀರಸ, ಭೃಗು ಮೊದಲಾದ ಋಷಿಗಳಿಗೂ ಅರ್ಪಿಸಿದನು. ಅದಕ್ಕೆ "ಇಂದ್ರನು ನನಗೆ ಈ ಮೊದಲೇ ಪೌರೋಹಿತ್ಯವನ್ನು ಕೊಟ್ಟಿರುವ ಕಾರಣ ನೀನು ಆತನ ಯಾಗ ಮುಗಿಯುವವರೆಗೆ ಕಾಯಬೇಕು!" ಎಂದು ವಸಿಷ್ಠನು ಹೇಳಿಕಳುಹಿಸಿದನು. ಆಗ ನಿಮಿರಾಜನು ವಸಿಷ್ಠನ ಪೌರೋಹಿತ್ಯವನ್ನು ಗೌತಮನಿಗೆ ಒಪ್ಪಿಸಿ ತಾನು ಹಿಮಾಲಯದ ಬಳಿಯಲ್ಲಿ ತನ್ನ ಯಾಗವನ್ನಾ ರಂಭಿಸಿದನು. ಈ ಯಾಗಕ್ಕಾಗಿ ಐದುಸಾವಿರ ವರ್ಷ ಅವಧಿಯ ದೀಕ್ಷೆಯನ್ನು ತೆಗೆದುಕೊಂಡನು. ಇಂದ್ರನ ಯಾಗವು ಮುಗಿದನಂತರ ವಸಿಷ್ಠ ಋಷಿಯು ರಾಜನ ಯಜ್ಞವನ್ನು ನೆರವೇರಿಸಲು ಬಂದಾಗ ಆ ಸ್ಥಳದಲ್ಲಿ ಗೌತಮನನ್ನು ಕಂಡು ವಸಿಷ್ಠನು ಕೋಪಗೊಂಡನು. ರಾಜನ ಭೇಟಿಗಾಗಿ ಕೆಲವು ಸಮಯ ಕಾಯ್ದನು. ಆ ದಿನ ರಾಜನು ವಿಪರೀತ ನಿದ್ರೆಯಲ್ಲಿದ್ದನು. ಭೇಟಿಯಾಗಲಿಲ್ಲವಾದ್ದರಿಂದ ವಸಿಷ್ಠನಿಗೆ ಇನ್ನೆಷ್ಟು ರೇಗಿತು- ಆತನು ಈ ರೀತಿ ಉಚ್ಚರಿಸಿದನು:
<small><poem>
'''ಯಸ್ಮಾತ್ತ್ವಮನ್ಯಂ ವ್ರತವಾನ್ಮಾಮವಜ್ಞಾಯ ಪಾರ್ಥಿವ |'''
'''ಚೇತನೇನ ವಿನಾಭೂತೋ ದೇಹಸ್ತೇ ಪಾರ್ಥಿವೈಷ್ಯತಿ ‖೧೭‖'''</small></poem></br>{{gap}}"ಎಲೈ ರಾಜನೇ, ನನ್ನನ್ನು ಕಡೆಗಣಿಸಿ ನೀನು ಬೇರೆ ಪುರೋಹಿತನನ್ನು ಕಂಡುಕೊಂಡಿರುವೆ; ಅದಕ್ಕಾಗಿ ನಿನ್ನ ದೇಹವು ಅಚೇತನವಾಗಲಿ!"</br>{{gap}}ನಿದ್ರೆಯಿಂದ ಎಚ್ಚತ್ತಾಗ ವಸಿಷ್ಠನ ಶಾಪವು ನಿಮಿರಾಜನಿಗೆ ತಿಳಿಯಿತು. ಆತನು ಕೋಪದಿಂದ ಉರಿದೆದ್ದನು. ವಸಿಷ್ಠನಿಗೆ ಪ್ರತಿಶಾಪವನ್ನು ಕೊಟ್ಟನು. ಹೀಗಾಗಿ ಇಬ್ಬರೂ ತಮ್ಮ ಸ್ಥೂಲದೇಹಗಳನ್ನು ಕಳೆದುಕೊಂಡರು.</br>{{gap}}ನಿಮಿರಾಜ < ವಸಿಷ್ಠ ಶಾಪ ಕ್ರ. ೫೧ ನೋಡಿರಿ.</br></br>{{center|'''೫೧. ನಿಮಿರಾಜ < ವಸಿಷ್ಠ'''}}{{center|'''ಉತ್ತರಕಾಂಡ/೫೫'''}}{{gap}}ವಸಿಷ್ಠ < ನಿಮಿರಾಜ ಶಾಪ ಕ್ರ. ೫೦</br>{{gap}}ನಿದ್ರೆಯಿಂದ ಎಚ್ಚತ್ತಾಗ ವಸಿಷ್ಠನ ಶಾಪದಿಂದ ಕೋಪಗೊಂಡ ನಿಮಿರಾಜನು ವಸಿಷ್ಠನಿಗೆ ಪ್ರತಿಶಾಪವನ್ನಿತ್ತನು:
<small><poem>
'''ಅಜಾನತಃ ಶಯಾನಸ್ಯ ಕ್ರೋಧೇನ ಕಲುಷೀಕೃತಃ |'''
'''ಉಕ್ತವಾನ್ ಮಮ ಶಾಪಾಗ್ನಿಂ ಯಮದಂಡಮಿವಾಷರಮ್ ‖೧೯‖'''</small></poem><noinclude></noinclude>
hsbzhfibzoqmz7646650l4k6nqatljx
321306
321305
2026-05-20T09:06:06Z
Shreelatha.Halemane
7642
/* Validated */
321306
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೭೬|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
ಅದೇ ರೀತಿ ಅತ್ರಿ, ಅಂಗೀರಸ, ಭೃಗು ಮೊದಲಾದ ಋಷಿಗಳಿಗೂ ಅರ್ಪಿಸಿದನು. ಅದಕ್ಕೆ "ಇಂದ್ರನು ನನಗೆ ಈ ಮೊದಲೇ ಪೌರೋಹಿತ್ಯವನ್ನು ಕೊಟ್ಟಿರುವ ಕಾರಣ ನೀನು ಆತನ ಯಾಗ ಮುಗಿಯುವವರೆಗೆ ಕಾಯಬೇಕು!" ಎಂದು ವಸಿಷ್ಠನು ಹೇಳಿಕಳುಹಿಸಿದನು. ಆಗ ನಿಮಿರಾಜನು ವಸಿಷ್ಠನ ಪೌರೋಹಿತ್ಯವನ್ನು ಗೌತಮನಿಗೆ ಒಪ್ಪಿಸಿ ತಾನು ಹಿಮಾಲಯದ ಬಳಿಯಲ್ಲಿ ತನ್ನ ಯಾಗವನ್ನಾ ರಂಭಿಸಿದನು. ಈ ಯಾಗಕ್ಕಾಗಿ ಐದುಸಾವಿರ ವರ್ಷ ಅವಧಿಯ ದೀಕ್ಷೆಯನ್ನು ತೆಗೆದುಕೊಂಡನು. ಇಂದ್ರನ ಯಾಗವು ಮುಗಿದನಂತರ ವಸಿಷ್ಠ ಋಷಿಯು ರಾಜನ ಯಜ್ಞವನ್ನು ನೆರವೇರಿಸಲು ಬಂದಾಗ ಆ ಸ್ಥಳದಲ್ಲಿ ಗೌತಮನನ್ನು ಕಂಡು ವಸಿಷ್ಠನು ಕೋಪಗೊಂಡನು. ರಾಜನ ಭೇಟಿಗಾಗಿ ಕೆಲವು ಸಮಯ ಕಾಯ್ದನು. ಆ ದಿನ ರಾಜನು ವಿಪರೀತ ನಿದ್ರೆಯಲ್ಲಿದ್ದನು. ಭೇಟಿಯಾಗಲಿಲ್ಲವಾದ್ದರಿಂದ ವಸಿಷ್ಠನಿಗೆ ಇನ್ನೆಷ್ಟು ರೇಗಿತು- ಆತನು ಈ ರೀತಿ ಉಚ್ಚರಿಸಿದನು:
<small><poem>
'''ಯಸ್ಮಾತ್ತ್ವಮನ್ಯಂ ವ್ರತವಾನ್ಮಾಮವಜ್ಞಾಯ ಪಾರ್ಥಿವ |'''
'''ಚೇತನೇನ ವಿನಾಭೂತೋ ದೇಹಸ್ತೇ ಪಾರ್ಥಿವೈಷ್ಯತಿ ‖೧೭‖'''</small></poem></br>
{{gap}}"ಎಲೈ ರಾಜನೇ, ನನ್ನನ್ನು ಕಡೆಗಣಿಸಿ ನೀನು ಬೇರೆ ಪುರೋಹಿತನನ್ನು ಕಂಡುಕೊಂಡಿರುವೆ; ಅದಕ್ಕಾಗಿ ನಿನ್ನ ದೇಹವು ಅಚೇತನವಾಗಲಿ!"</br>
{{gap}}ನಿದ್ರೆಯಿಂದ ಎಚ್ಚತ್ತಾಗ ವಸಿಷ್ಠನ ಶಾಪವು ನಿಮಿರಾಜನಿಗೆ ತಿಳಿಯಿತು. ಆತನು ಕೋಪದಿಂದ ಉರಿದೆದ್ದನು. ವಸಿಷ್ಠನಿಗೆ ಪ್ರತಿಶಾಪವನ್ನು ಕೊಟ್ಟನು. ಹೀಗಾಗಿ ಇಬ್ಬರೂ ತಮ್ಮ ಸ್ಥೂಲದೇಹಗಳನ್ನು ಕಳೆದುಕೊಂಡರು.</br>
{{gap}}ನಿಮಿರಾಜ < ವಸಿಷ್ಠ ಶಾಪ ಕ್ರ. ೫೧ ನೋಡಿರಿ.</br></br>
{{center|'''೫೧. ನಿಮಿರಾಜ < ವಸಿಷ್ಠ'''}}
{{center|'''ಉತ್ತರಕಾಂಡ/೫೫'''}}
{{gap}}ವಸಿಷ್ಠ < ನಿಮಿರಾಜ ಶಾಪ ಕ್ರ. ೫೦</br>
{{gap}}ನಿದ್ರೆಯಿಂದ ಎಚ್ಚತ್ತಾಗ ವಸಿಷ್ಠನ ಶಾಪದಿಂದ ಕೋಪಗೊಂಡ ನಿಮಿರಾಜನು ವಸಿಷ್ಠನಿಗೆ ಪ್ರತಿಶಾಪವನ್ನಿತ್ತನು:
<small><poem>
'''ಅಜಾನತಃ ಶಯಾನಸ್ಯ ಕ್ರೋಧೇನ ಕಲುಷೀಕೃತಃ |'''
'''ಉಕ್ತವಾನ್ ಮಮ ಶಾಪಾಗ್ನಿಂ ಯಮದಂಡಮಿವಾಷರಮ್ ‖೧೯‖'''</small></poem><noinclude></noinclude>
s2y7klfrjpvyd5qgiuihtxpkuv45xqk
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೧
104
89039
321307
279838
2026-05-20T09:06:16Z
Pragathi. BH
7585
/* Validated */
321307
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಶಾಪವಾಣಿ|right=೧೭೭}}
<small><poem>
'''ತಸ್ಮಾತ್ತವಾಪಿ ಬ್ರಹ್ಮರ್ಷೇ ಚೇತನೇನ ವಿನಾಕೃತಃ'''
'''ದೇಹಃ ಸ ಸುಚಿರಪ್ರಖ್ಯೋ ಭವಿಷ್ಯತಿ ನ ಸಂಶಯಃ ‖೨೦‖'''</small></poem></br>
{{gap}}"ನೀವು ಬಂದಿರುವದು ನನಗೆ ಗೊತ್ತಿರದೆ, ನಾನು ನಿದ್ರಾವಶನಿದ್ದ ಸಮಯದಲ್ಲಿ, ಕ್ರೋಧವಶರಾಗಿ ನೀವು ಪ್ರತಿಯಮದಂಡದಂತಿರುವ ಶಾಪಾಗ್ನಿಯನ್ನು ನನ್ನ ಮೇಲೆ ಬಿಟ್ಟಿದ್ದೀರಿ; ಅದಕ್ಕಾಗಿ ಹೇ ಬ್ರಹ್ಮರ್ಷಿ, ನಿಮ್ಮ ಅತಿಮನೋಹರವಾದ ದೇಹವು ನಿಃಸಂಶಯವಾಗಿ ಅಚೇತನಗೊಳ್ಳಲಿ!"<br />
{{gap}}ನೃಪಶ್ರೇಷ್ಠನು ಮತ್ತು ದ್ವಿಜಶ್ರೇಷ್ಠನು ಒಬ್ಬರಿಗೊಬ್ಬರು ಶಪಿಸಿದ ಕಾರಣ ಅವರು ಇಬ್ಬರೂ ಸ್ಥೂಲದೆಹವಿರಹಿತರಾದರು.</br>
{{gap}}ಈ ಎರಡು ಶಾಪಗಳು ಇನ್ನಿತರ ಶಾಪಗಳಂತೆ ಇಲ್ಲ. ಶಾಪಕ್ಕೆ ಸರಿಯಾಗಿ ಪ್ರತಿಶಾಪವಿದೆ; ಆ ಪ್ರತಿಶಾಪವು ಶಾಪಕ್ಕೆ ಸಮನಾಗಿ ಇದೆ. ಈ ರೀತಿಯ ಉದಾಹರಣೆಯು ವಾಲ್ಮೀಕಿರಾಮಾಯಣದಲ್ಲಿ ಇದೊಂದೇ ಆಗಿದೆ. ವಸಿಷ್ಠನು ಸೌದಾಸರಾಜನಿಗೆ ಶಾಪ ಕೊಟ್ಟಾಗ (ಉತ್ತರಕಾಂಡ/೬೫) ಸೌದಾಸರಾಜನು ಶಾಪ ಕೊಡಲುದ್ಯುಕ್ತನಾಗಿ ಕೈಯಲ್ಲಿ ಉದಕವನ್ನು ಸಹ ಹಿಡಿದಿದ್ದನು. "ಪುರೋಹಿತನಿಗೆ ಶಾಪಕೊಡುವದು ಸೂಕ್ತವಲ್ಲ" ಎಂದು ಸೌದಾಸನ ಪತ್ನಿಯು ಉಪದೇಶಿಸಿದ್ದರಿಂದ ನಿಜದಲ್ಲಿ ಸೌದಾಸನು ಶಾಪವನ್ನು ಕೊಡಲಿಲ್ಲ. ಹೀಗಾದ್ದರಿಂದ ವಸಿಷ್ಠ < ನಿಮಿರಾಜ ಮತ್ತು ನಿಮಿರಾಜ < ವಸಿಷ್ಠ ಇವರ ಶಾಪ-ಪ್ರತಿಶಾಪ ಇವುಗಳ ಒಂದೇ ಉದಾಹರಣೆ ಕಂಡುಬರುತ್ತದೆ.</br></br>
{{center|'''೫೨. ಮಿತ್ರ < ಊರ್ವಶೀ'''<br />'''ಉತ್ತರಕಾಂಡ/೫೬'''}}
{{gap}}ವಸಿಷ್ಠ ಮತ್ತು ನಿಮಿರಾಜ ಇವರು ಪರಸ್ಪರರಿಗೆ ಶಾಪಕೊಟ್ಟು ದೇಹವಿಲ್ಲದಂತಾದರು. ಅವರಿಗೆ ಪುನಃ ದೇಹಪ್ರಾಪ್ತಿ ಹೇಗಾಯಿತು? ಎಂದು ಲಕ್ಷ್ಮಣನು ಕೇಳಿದನು. ರಾಮನು ಅದಕ್ಕೆ ಉತ್ತರಿಸುತ್ತಾನೆ:</br>
{{gap}}ದೇಹವಿಲ್ಲದ ಅವರಿಬ್ಬರೂ ವಾಯುರೂಪವನ್ನು ಹೊಂದಿ ಸ್ವಯಂಭೂ ಆದ ಬ್ರಹ್ಮನ ಬಳಿ ಹೋದರು. ನಮಸ್ಕರಿಸಿ ವಸಿಷ್ಠನು ಈ ರೀತಿ ಎಂದನು: "ದೇಹವಿರದೇ ಇದ್ದ ಕಾರಣ ಕಾರ್ಯಲೋಪವಾಗುತ್ತಿದೆ; ಆದ್ದರಿಂದ ನನಗೆ ಎರಡನೇ ದೇಹವು ಲಭಿಸುವಂತೆ ಕರುಣಿಸಿರಿ." ಆಗ ಬ್ರಹ್ಮದೇವನು "ಎಳೈ ಮಹಾಕೀರ್ತಿವಂತನಾದ ವಸಿಷ್ಠನೇ, ಮಿತ್ರ ವರುಣರ ತೇಜಸ್ಸಿನಲ್ಲಿ ನೀನು<noinclude></noinclude>
fmsa4641y2cizh6l6t779mllx0gt0jb
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೨
104
89040
321308
233464
2026-05-20T09:06:30Z
Pragathi. BH
7585
/* Validated */
321308
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೭೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಪ್ರವೇಶಿಸು! ನೀನು ಅಲ್ಲಿಯೂ ಅಯೋನಿಸಂಭವನಾಗುವೆ." ಇದನ್ನು ಕೇಳಿ ವಸಿಷ್ಠನು ಬ್ರಹ್ಮದೇವನಿಗೆ ಪ್ರದಕ್ಷಿಣೆ ಹಾಕಿ ವರುಣಲೋಕಕ್ಕೆ ಹೋದನು.</br>{{gap}}ಅದೇ ಸಮಯಕ್ಕೆ ಮಿತ್ರನು ಕ್ಷೀರಸಾಗರಸ್ವರೂಪ ವರುಣರೂಪವನ್ನು ಹೊಂದಿ ದೇವತೆಗಳಿಗೂ ಪ್ರಿಯನಾಗಿದ್ದನು. ಅವನು ವರುಣನ ಅಧಿಕಾರವನ್ನು ನಡೆಯಿಸುತ್ತಿದ್ದನು. ಒಮ್ಮೆ 'ಉರ್ವಸಿ' ಎಂಬ ಅಪ್ಸರೆಯು ಗೆಳತಿಯರೊಡನೆ ಅಲ್ಲಿಗೆ ಬಂದಳು. ಅವಳನ್ನು ವೀಕ್ಷಿಸಿ ವರುಣನಿಗೆ ಪರಮಾನಂದವಾಯಿತು. ಆತನ ಕಾಮವಾಸನೆಯು ಉದ್ದೀಪಿತವಾಗಿ ಅವನು ಊರ್ವಸಿಯೊಡನೆ ರತಿಕ್ರೀಡೆಯನ್ನು ಬಯಸಿದನು. ಆಗ ಉರ್ವಸಿಯು "ನಾನು ಮಿತ್ರನ ಬೇಡಿಕೆಯನ್ನು ಈ ಮೊದಲೇ ಒಪ್ಪಿಕೊಂಡಿದ್ದೇನೆ" ಎಂದು ವಿನಯದಿಂದ ಹೇಳಿದಳು. ಆಗ ವರುಣನು "ನನ್ನೊಡನೆ ಸಮಾಗಮ ಮಾಡುವ ಇಚ್ಛೆಯು ನಿನಗಿರದಿದ್ದರೆ ನಿನಗಾಗಿ ಉತ್ಸರ್ಗ ಮಾಡಿದ ತೇಜಸ್ಸನ್ನು ಕುಂಭದಲ್ಲಿ ಹಾಕುತ್ತೆನೆ" ಎಂದನು.</br>{{gap}}ಉರ್ವಸಿಯು ಅದಕ್ಕೆ ಒಪ್ಪಿಕೊಂಡಳು. ವರುಣನು ಆಕೆಯನ್ನು ಪ್ರೀತಿಸುತ್ತಿದ್ದನು. ಆಕೆಯು ವರುಣನನ್ನು ಪ್ರೀತಿಸುತ್ತಿದ್ದರೂ ಆಗ ಅವಳ ದೇಹವು ಮಿತ್ರನ ಅಂಕಿತದಲ್ಲಿತ್ತು. ಹೀಗಾಗಿ ವರುಣನು ತನ್ನ ತೇಜಸ್ಸನ್ನು ಕುಂಭಕ್ಕೆ ಹಾಕಿದನು. ಊರ್ವಸಿಯು ಆ ನಂತರ ಮಿತ್ರನ ಬಳಿಗೆ ಹೋದಳು. ಆಗ ಅವನು ಕೋಪಗೊಂಡು ಈ ರೀತಿ ಅಂದನು.
<small><poem>
'''ಮಯಾಭಿಮಂತ್ರಿತಾ ಪೂರ್ವಂ ಕಸ್ಮಾತ್ತ್ವಮವಸರ್ಜತಾ |'''
'''ಪತಿಮನ್ಯಂ ವೃತವತೀ ಕಿಮರ್ಥಂ ದುಷ್ಟಚಾರಿಣೀ ‖೨೩‖'''
'''ಅನೇನ ದುಷ್ಕೃತೇನ ತ್ವಂ ಮತ್ಕ್ರೋಧಕಲುಷೀಕೃತಾ |'''
'''ಮನುಷ್ಯಲೋಕಮಾಸ್ಥಾಯ ಕಂಚಿತ್ಕಾಲಂ ನಿವತ್ಸ್ಯಸಿ ‖೨೪‖'''
'''ಬುಧಸ್ಯ ಪುತ್ರೋರಾಜರ್ಷಿಃ ಕಾಶೀರಾಜಃ ಪುರೂರವಾಃ |'''
'''ತಮಭ್ಯುಗಚ್ಛ ದುರ್ಬುದ್ಧೇ ಸ ತೇ ಭರ್ತಾ ಭವಿಷ್ಯತಿ ‖೨೫‖'''</small></poem></br>{{gap}}"ಹೇ ದುರಾಚಾರಿಣಿ, ನಾನು ನಿನ್ನನ್ನು ಮೊದಲೇ ಆಹ್ವಾನಿಸಿದ್ದರೂ ನೀನು ನನ್ನನ್ನು ಹೇಗೆ ತ್ಯಜಿಸಿದೆ? ಅನ್ಯಪತಿಯನ್ನು ಹೇಗೆ ಸ್ವೀಕರಿಸಿದೆ? ಈ ಪಾತಕದಿಂದ ನೀನು ನನ್ನ ಕೋಪಕ್ಕೆ ಬಲಿಯಾಗುವೆ. ಮನುಷ್ಯಲೋಕದಲ್ಲಿ ನೀನು ಕೆಲವು ಕಾಲ ವಾಸವಾಗುವೆ. ರಾಜರ್ಷಿಯಾದ ಬುಧಪುತ್ರ ಕಾಶಿರಾಜನಾದ ಪುರೂರವನ ಬಳಿ ನೀನು ಹೋಗು! ಅವನು ನಿನ್ನ ಪತಿಯಾಗುವನು."<noinclude></noinclude>
oy3crtotpc76mcaazgfv3ovlijz6h5z
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೩
104
89041
321309
233487
2026-05-20T09:06:41Z
Pragathi. BH
7585
/* Validated */
321309
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಶಾಪವಾಣಿ|right=೧೭೯}}</br>{{gap}}ಮಿತ್ರನ ಶಾಪದಂತೆ ಉರ್ವಶಿಯು ಮನುಷ್ಯ ಲೋಕದಲ್ಲಿರುವ ಪುರೂರವ ರಾಜನತ್ತ ಹೋದಳು. ಕೆಲವು ನಿರ್ಬಂಧಗಳನ್ನು ಹಾಕಿ ಅವನ ಜೊತೆ ಇದ್ದಳು.</br></br>{{center|'''೫೩. ಭಾರ್ಗವ < ಯಯಾತಿ'''}}
{{center|'''ಉತ್ತರಕಾಂಡ/೫೮'''}}{{gap}}"ನಿಮಿರಾಜನು ಶೂರನು, ಕ್ಷತ್ರಿಯನು, ವಿಶೇಷದಲ್ಲಿ ದೀಕ್ಷೆಯನ್ನು ಕೈಕೊಂಡವನಾಗಿದ್ದನು. ಹೀಗಿರುವಾಗ ವಸಿಷ್ಠ ಮುನಿಯೊಡನೆ ಆತನು ಸರಿಯಾಗಿ ವರ್ತಿಸಲಿಲ್ಲ" ಎಂಬ ತನ್ನ ಅನಿಸಿಕೆಯನ್ನು ಲಕ್ಷ್ಮಣನು ರಾಮನಿಗೆ ನುಡಿದನು. ರಾಮನು ಅದಕ್ಕೆ "ಕ್ಷಮಾವೃತ್ತಿಯು ಎಲ್ಲರಲ್ಲಿ ಇರುತ್ತದೆ ಎಂದು ಹೇಳಲಾಗುವದಿಲ್ಲ. ರೋಷವು ತುಂಬ ದುಃಸಹವಾದದ್ದು" ಎಂದು ಹೇಳಿ ಅದನ್ನು ಪುಷ್ಟಿಸಲು ಯಯಾತಿಯ ಶಾಪದ ಕಥೆಯನ್ನು ಹೇಳಿದನು.</br>{{gap}}ನಹುಷಪುತ್ರನಾದ ಯಯಾತಿಯು ಸತ್ವಗುಣಸಂಪನ್ನನಾಗಿದ್ದನು. ಆತನಿಗೆ ಶರ್ಮಿಷ್ಠೆ ಹಾಗೂ ದೇವಯಾನಿ ಎಂಬ ಇಬ್ಬರು ಪತ್ನಿಯರಿದ್ದರು. ಶರ್ಮಿಷ್ಠೆಗೆ ಪುರು ಮತ್ತು ದೇವಯಾನಿಗೆ ಯದು ಈ ರೀತಿ ಇಬ್ಬರು ಪುತ್ರರಿದ್ದರು. ಪುರುವಿನ ಸಹಜಗುಣಗಳಿಂದಲೂ, ಶರ್ಮಿಷ್ಠೆಯನ್ನು ಯಯಾತಿಯು ಅಧಿಕಪ್ರೀತಿಸುತ್ತಿದ್ದ ಕಾರಣದಿಂದಲೂ ಪುರುವು ಯಯಾತಿಗೆ ಅಧಿಕಪ್ರೀತಿಯವನಾಗಿದ್ದನು. ಈ ಸಂಗತಿಯು ಯದುವನ್ನು ಕಾಡುತ್ತಿತ್ತು. ಯದುವು ಒಮ್ಮೆ ತಾಯಿಯಾದ ದೇವಯಾನಿಗೆ ಈ ರೀತಿ ಎಂದನು: "ನೀನು ಭಾರ್ಗವಕುಲದಲ್ಲಿ ಹುಟ್ಟಿ ಈ ರೀತಿ ದುಃಖ, ಅವಮಾನಗಳನ್ನು ಸಹಿಸುತ್ತಿರುವಿ; ಇದನ್ನು ಸಹಿಸುವ ಬದಲು ನಾವಿಬ್ಬರೂ ಅಗ್ನಿಪ್ರವೇಶ ಮಾಡೋಣ! ದೈತ್ಯಕನ್ಯೆಯಾದ ಶರ್ಮಿಷ್ಠೆಯೊಡನೆ ರಾಜನು ಬೇಕಾದಷ್ಟು ಕಾಲ ಬಾಳಲಿ! ಅಗ್ನಿ ಪ್ರವೇಶ ಮಾಡುವದು ನಿನಗೆ ಇಷ್ಟವಿರದಿದ್ದರೆ ನನಗಾದರೂ ಅನುಮತಿಯನ್ನು ಕೊಡು! ಇನ್ನು ಮುಂದೆ ಈ ಬಗೆಯ ಅವಮಾನವನ್ನು ನಾನು ಸಹಿಸಲಾರೆನು. ನಾನು ಪ್ರಾಣತ್ಯಾಗವನ್ನು ಮಾಡುವದು ಖಂಡಿತ" ಎಂದನು. ಪುತ್ರನ ಸಂತಾಪದ ನುಡಿಗಳು ತಾಯಿಯ ಹೃದಯಕ್ಕೆ ತಾಗಿದವು. ಆಕೆಗೆ ವಿಪರೀತ ಸಿಟ್ಟು ಬಂದಿತು. ಪಿತನಾದ ಶುಕ್ರಾಚಾರ್ಯನ ಸ್ಮರಣೆಯನ್ನು ಅವಳು ಮಾಡುತ್ತಲೇ ಅವನು ಕೂಡಲೇ ಅಲ್ಲಿಗೆ ಬಂದನು. ದೇವಯಾನಿಯ ದುಃಖಾವಸ್ಥೆಯನ್ನು ಕಂಡು ವ್ಯಥಿತನಾದನು. ದುಃಖದ ಕಾರಣವನ್ನು ಕೇಳಿದಾಗ ಅವಳು "ನಾನು ಅಗ್ನಿಪ್ರವೇಶ ಮಾಡಲಿರುವೆ.<noinclude></noinclude>
g4agzdj5lkx6xht1kulksan3jyklyzn
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೪
104
89042
321310
233499
2026-05-20T09:06:54Z
Pragathi. BH
7585
/* Validated */
321310
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೮೦|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ನೀರಿನಲ್ಲಾದರೂ ಮುಳುಗುವೆ; ಇಲ್ಲವೇ ವಿಷವನ್ನು ಕುಡಿದು ಪ್ರಾಣತ್ಯಾಗವನ್ನು ಮಾಡಲಿರುವೆ! ನನಗಾಗುವ ಮಾನಹಾನಿಯನ್ನು ಸಹಿಸುವದು ನನ್ನಿಂದಾಗದು. ನನ್ನ ದುಃಖದ ಸುಳಿವೇ ನಿಮಗಿಲ್ಲ. ಆದ್ದರಿಂದ ಯಯಾತಿಯ ಸದಾವಕಾಲವೂ ನನ್ನನ್ನು ಅವಮಾನಿಸುತ್ತಾನೆ. ಯಾವ ಮರ್ಯಾದೆಯನ್ನೂ ನನಗೆ ಕೊಡುವುದಿದಲ್ಲ" ಎಂದು ಹೇಳಿದಳು. ಮಗಳ ಈ ನುಡಿಗಳನ್ನು ಕೇಳಿ ಶುಕ್ರಾಚಾರ್ಯನು ಸಿಟ್ಟಾಗಿ ಯಯಾತಿಗೆ ಈ ರೀತಿ ಶಾಪವನ್ನು ಸುರಿದನು:
<small><poem>
'''ಯಸ್ಮಾನ್ಮಾಮವಜಾನೀಷೇ ನಾಹುಷ ತ್ವಂ ದುರಾತ್ಮವಾನ್ |'''
'''ವಯಸಾ ಜರಯಾ ಜೀರ್ಣಃ ಶೈಥಿಲ್ಯಮುಪಯಾಸ್ಯಸಿ ‖೨೩‖'''</small></poem></br>{{gap}}"ಎಲೈ ನಹುಷಪುತ್ರನೇ, ನೀನು ನನ್ನನ್ನು ಕಡೆಗಾಣಿಸಿರುವೆಯಾದ್ದರಿಂದ ದುರಾತ್ಮನಾದ ನೀನು ಸದ್ಯ ಇಳಿವಯಸ್ಸಿನವನು, ವೃದ್ಧನು, ದುರ್ಬಲನೂ ಆಗುವೆ."</br>{{gap}}ಕ್ಷಾತ್ರಧರ್ಮವನ್ನು ಅನುಸರಿಸಿ ಯಯಾತಿಯು ಭಾರ್ಗವ-ಶುಕ್ರಾಚಾರ್ಯನ ಶಾಪವನ್ನು ತಾಳಿಕೊಂಡನು.</br></br>{{center|'''೫೪. ಯಯಾತಿ < ಯದು'''}}{{center|'''ಉತ್ತರಕಾಂಡ/೫೯'''}}{{gap}}ಭಾರ್ಗವ ಶುಕ್ರಾಚಾರ್ಯನು ಯಯಾತಿಗೆ ಶಾಪವನ್ನು ಕೊಟ್ಟ ನಂತರ ಶಾಪದ ವಾರ್ಧಕ್ಯವನ್ನು ಸ್ವೀಕರಿಸಲು ತನ್ನ ಇಬ್ಬರೂ ಪುತ್ರರಿಗೂ ಯಯಾತಿಯು ಹೇಳಿದಾಗ ಪುರುವು ಅದನ್ನು ಸ್ವೀಕರಿಸಿದನು; ಯದುವು ಅದನ್ನು ನಿರಾಕರಿಸಿದನು. ಆಗ ಯಯಾತಿಯು ಯದುವಿಗೆ ಶಾಪವನ್ನು ನುಡಿದ ವೃತ್ತಾಂತವನ್ನು ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ:</br>{{gap}}ಯಯಾತಿಗೆ ಮುಪ್ಪು ಬಂದದ್ದರಿಂದ ಆತನು ಬಹಳ ದುಃಖಕ್ಕೊಳಗಾದನು. ತನ್ನ ವೃದ್ಧತ್ವವನ್ನು ಕೆಲಕಾಲ ಸ್ವೀಕರಿಸಲು ಮತ್ತು ತಾರುಣ್ಯವನ್ನು ಒದಗಿಸಲು ಯಯಾತಿಯು ದೇವಯಾನಿಯ ಪುತ್ರನಾದ ಯದುವಿಗೆ: "ನನ್ನ ಈ ಘೋರ ವೃದ್ಧಾಪ್ಯವನ್ನು ನೀನು ಸ್ವೀಕರಿಸು; ಅಂದರೆ ನಾನು ವಿಷಯೋಪಭೋಗಗಳಲ್ಲಿ ನಿರತನಾಗುವೆ. ನನ್ನ ವಿಷಯಲಾಲಸೆ ಇನ್ನೂ ತೃಪ್ತಿಗೊಂಡಿಲ್ಲ. ರತಿಕ್ರೀಡೆಯನ್ನು ಇನ್ನೂ ಕೆಲವು ಕಾಲ ಅನುಭವಿಸಿ, ನಾನು ನನ್ನ ಮುಪ್ಪನ್ನು ಮರಳಿ ನಿನ್ನಿಂದ ಸ್ವೀಕರಿಸುವೆ" ಎಂದನು. ತಂದೆಯ ಮಾತನ್ನು ಕೇಳಿ ಯದುವು "ನೀವು ನನಗೆ<noinclude></noinclude>
4pm24fy9oq3mqwe0fipvfs9qcp2urso
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೫
104
89043
321311
233579
2026-05-20T09:07:00Z
Shreelatha.Halemane
7642
/* Validated */
321311
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೮೧}}</br>
ಸಕಲ ಐಶ್ವರ್ಯಗಳಿಂದ ದೂರವಿರಿಸಿದ್ದೀರಿ; ಆದ್ದರಿಂದ ನಿಮ್ಮ ಪ್ರಿಯಪುತ್ರನಾದ ಪುರುವು ಈ ನಿಮ್ಮ ವೃದ್ಧತ್ವವನ್ನು ಸ್ವೀಕರಿಸಲಿ! ನೀವು ಇಂದಿನವರೆಗೆ ನನಗೆ ಎಂದೂ ಹತ್ತಿರ ಬರಗೊಡಲಿಲ್ಲ. ನೀವು ಪ್ರತಿದಿನ ಯಾರ ಜೊತೆಗೂಡಿ ಭೋಜನವನ್ನು ಮಾಡುತ್ತೀರೋ ಅವರಲ್ಲಿಯ ಒಬ್ಬರು ನಿಮ್ಮ ವೃದ್ಧತ್ವವನ್ನು ಅಂಗೀಕರಿಸಬೇಕು."- ಈ ರೀತಿ ಎಂದನು. ಶರ್ಮಿಷ್ಠೆಯ ಪುತ್ರನಾದ ಪುರುವಿಗೆ ಕೇಳಿದಾಗ ಆತನು ತನ್ನ ತಾರುಣ್ಯವನ್ನು ತಂದೆಗೆ ಅರ್ಪಿಸಿ ಆತನ ವೃದ್ಧತ್ವವನ್ನು ತಾನು ಅಂಗೀಕರಿಸಿದನು. ಯಯಾತಿಯು ಆನಂದಭರಿತನಾದನು. ಆದರೆ ಯದುವಿನ ನುಡಿಗಳಿಂದ ಆತನು ಕೋಪಗೊಂಡಿದ್ದನು; ಯದುವಿಗೆ ಈ ರೀತಿ ಶಪಿಸಿದನು:
<small><poem>
'''ರಾಕ್ಷಸಸ್ತ್ವಂ ಮಯಾ ಜಾತಃ ಕ್ಷತ್ರರೂಪೋ ದುರಾಸದಃ |'''
'''ಪ್ರತಿಹಂಸಿ ಮಮಾಜ್ಞಾಂ ತ್ವಂ ಪ್ರಜಾರ್ಥೇ ವಿಫಲೋ ಭವ ‖೧೪‖'''
'''ಪಿತರಂ ಗುರುಭೂತಂ ಮಾಂ ಯಸ್ಮಾತ್ತ್ವಮವಮನ್ಯಸೇ |'''
'''ರಾಕ್ಷಸಾನ್ಯಾತುಧಾನಾಂಸ್ತ್ವಂ ಜನಯಿಷ್ಯಸಿ ದಾರುಣಾನ್ ‖೧೫‖'''
'''ನ ತು ಸೋಮಕುಲೋತ್ಪನ್ನೇ ವಂಶೇ ಸ್ಥಾಸ್ಯತಿ ದುರ್ಮತೇಃ |'''
'''ವಂಶೋsಪಿ ಭವತಸ್ತುಲ್ಯೋ ದುರ್ವಿನೀತೋ ಭವಿಷ್ಯತಿ ‖೧೬‖'''</small></poem></br>
{{gap}}"ನೀನು, ನನ್ನಿಂದ ಕ್ಷತ್ರಿಯನಾಗಿದ್ದರೂ ಮಹಾಭಯಂಕರ ರಾಕ್ಷಸನಾಗಿ ಹುಟ್ಟಿರುವೆ. ನನ್ನ ಆಜ್ಞೆಯನ್ನು ಮೀರಿದ ಕಾರಣ ಸಂತಾನವಿಫಲನಾಗುವೆ. ಗುರುಸ್ಥಾನದಲ್ಲಿದ್ದ ಪಿತನನ್ನು ನೀನು ಅವಮಾನಿಸಿರುವೆ; ಆದ್ದರಿಂದ ಘೋರ ರಾಕ್ಷಸರನ್ನೂ ಯಾತುಧಾನರನ್ನೂ ನೀನು ನಿರ್ಮಿಸುವೆ. ದುಷ್ಟನಾದ ನಿನ್ನ ಸಂತತಿಯು ಸೋಮವಂಶದಲ್ಲಿ ಜೀವಿಸಿರಲಾರದು. ನಿನ್ನಂತೆಯೇ ನಿನ್ನ ಪೀಳಿಗೆಯೂ ಉದ್ಧಟವಾಗುವದು."</br>
{{gap}}ಈ ರೀತಿ ಶಾಪವನ್ನು ಯದುವಿಗೆ ಕೊಟ್ಟನು; ಪುರುವಿನಿಂದ ತಾರುಣ್ಯವನನ್ನು ಪಡೆದು ಸಾವಿರಾರು ಯಾಗಗಳನ್ನು ಯಯಾತಿಯು ಮಾಡಿದನು. ಆ ನಂತರ ಪುರುವಿನಲ್ಲಿ ಠೇವಣಿಯಾಗಿಟ್ಟಿದ್ದ ವಾರ್ಧಕ್ಯವನ್ನು ತಾನು ಮರಳಿ ಪಡೆದನು. ಪುರುವಿನ ತಾರುಣ್ಯವನ್ನು ಆತನಿಗೆ ಪುನಃ ಕೊಟ್ಟು ಆತನ ರಾಜ್ಯಾಭಿಷೇಕವನ್ನು ಪೂರೈಸಿದನು.<noinclude></noinclude>
b5xpzh3yflqpl7jqjvta1j4rsvod5im
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೧೬
104
89229
321237
233235
2026-05-20T07:47:55Z
Shreelatha.Halemane
7642
/* Validated */
321237
proofread-page
text/x-wiki
<noinclude><pagequality level="4" user="Shreelatha.Halemane" />{{rh|೯೨||ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</noinclude>{{gap}}ಈ ರೀತಿ ಶೋಕಸಂತಪ್ತಳಾದ ಸೀತೆಯು ಬಗೆಬಗೆಯಿಂದ ಆಲೋಚಿಸಿ
ತನ್ನ ವೇಣೀಗ್ರಥನದಿಂದ (ಮಂಡಿಯನ್ನು ಕಟ್ಟುವ ನಾರು) “ನಾನು ಕೂಡಲೇ
ಯಮಸದನವನ್ನು ತಲುಪುವೆ" ಎಂದು ಹೇಳಿ ಮರದ ರೆಂಬೆಯನ್ನು ಕೈಯಲ್ಲಿ
ಹಿಡಿದು ಪ್ರಾಣತ್ಯಾಗ ಮಾಡುವವಳಿದ್ದಳು.<sup>೬೬</sup> ಅಷ್ಟರಲ್ಲಿ ಸೀತೆಯ ಹಾಗುರಾಮಾಯಣದ ಸುದೈವದಿಂದ ಆಕೆಗೆ ಕೆಲವು ಶುಭಶಕುನಗಳಾದವು. ಅವಳ
ಮನೋಧೈರ್ಯವು ಬೆಳೆಯಿತು. ಆತ್ಮಹತ್ಯೆಯ ವಿಚಾರವನ್ನು ಮುಂದೂಡಿದಳು.
ರಾವಣನ ವಧೆ ರಾಮನಿಂದಾಗುವವರೆಗೆ ಸೀತೆ ಹಾಗೂ ರಾವಣ ಇಬ್ಬರೂ
ಜೀವಿಸಿರುವುದು ಮತ್ತು ಸೀತೆಯು ಭ್ರಷ್ಟಳಾಗದೇ ಉಳಿದಿರುವುದು ಕಥೆಗೆ
ಅವಶ್ಯಕವಾಗಿತ್ತು. ಅವಳ ಸಾವು ಕಥೆಗೆ ಪೋಷಕವಾಗುತ್ತಿರಲಿಲ್ಲ. ಸಮಯಕ್ಕೆ
ಸರಿಯಾಗಿ ಶುಭಶಕುನಗಳನ್ನು ಯೋಜಿಸಿ, ಸೀತೆಯ ಆತ್ಮಾರ್ಪಣೆಯ ಪ್ರಯತ್ನವನ್ನು
ವಿಫಲಗೊಳಿಸಲಾಗಿದೆ. ಇನ್ನೊಂದು ಸಂದರ್ಭದಲ್ಲಿ ಸೀತೆ ಆಮರಣ ಉಪವಾಸವನ್ನು ಪ್ರಾರಂಭಿಸಿದಾಗ ಬ್ರಹ್ಮದೇವನಿಗೆ ಚಿಂತೆಯಾಯಿತು. ಅತನು ಹವಿಷ್ಯಾನ್ನವನ್ನು
ಸೀತೆಗೆ ತಲುಪಿಸಲೆಂದು ಇಂದ್ರನನ್ನು ಲಂಕೆಗೆ ಕಳಿಸಿದನು. ಅನಂತಕಾಲದವರೆಗೆ
ನೀರು, ಆಹಾರವಿರದೇ ಮನುಷ್ಯನನ್ನು ಜೀವಂತವಾಗಿರಿಸುವ ಅದ್ಭುತಶಕ್ತಿಯು
ಹವಿಷ್ಯಾನದಲ್ಲಿರುತ್ತದೆ. ಸೀತೆಯು ಈ ಹವಿಸ್ಕಾನ್ನವನ್ನು ಸ್ವೀಕರಿಸಿದ್ದರಿಂದ ಆಕೆಯ
ಆಮರಣ ಉಪವಾಸವು ವಿಫಲಗೊಂಡಿತು. ಹೀಗಾಗಿ ಅವಳ ಆತ್ಮಹತ್ಯೆಯ
ಎರಡನೆಯ ಪ್ರಯತ್ನವೂ ಸಫಲವಾಗಲಿಲ್ಲ.
'''ಪಾತಿವ್ರತ್ಯದವೆಂದು ಹೇಳಲ್ಪಟ್ಟ ಫಲ-ಬಲಗಳು'''</br>
{{gap}}ರಾವಣನ ಇಚ್ಛೆಗೆ ಶರಣಾಗುವ ಹೊರತು ಸೀತೆಗೆ ವಿಧಿಯಿರಲಿಲ್ಲ; ಆತನ
ವಧೆಯಾಗುವವರೆಗೆ ಶೀಲವನ್ನು ಕಾಯ್ದುಕೊಂಡು ಸೀತೆಯು ಜೀವಿಸಿರುವಂತೆ
ಮಾಡುವ ಜಟಿಲ ಸಮಸ್ಯೆ ವಾಲ್ಮೀಕಿಯದಾಗಿತ್ತು. ಭಾರತೀಯ ಜೀವನಕ್ರಮದಲ್ಲಿ
ಪಾತಿವ್ರತ್ಯಕ್ಕೆ ಅತಿ ಘನತೆ-ಗೌರವಗಳುಂಟು. ಪತಿವ್ರತೆಯು ಅಸಾಧ್ಯವಿದ್ದುದನ್ನು
ಸಾಧಿಸುವ ಶಕ್ತಿಯನ್ನು ಹೊಂದಿರುತ್ತಾಳೆ ಎಂಬ ಶ್ರದ್ಧೆ ಎಲ್ಲರಲ್ಲಿತ್ತು. ಪ್ರತಿಕೂಲ
ಪರಿಸ್ಥಿತಿಯಲ್ಲಿ ಕೂಡ ತನ್ನ ಪಾತಿವ್ರತ್ಯದ ಫಲದಿಂದ ಭ್ರಷ್ಟಳಾಗದೆಯೆ ಲಂಕೆಯಲ್ಲಿ
ಸಹಜವಾಗಿ ಇರಬಹುದಿತ್ತೆಂಬ ನಂಬಿಕೆಯು, ಕುರುಡುನಂಬಿಕೆ ಎಂದೆನನ್ಬಹುದು.
ಇದಕ್ಕೆ ಯಾವ ಆಧಾರವೂ ಇಲ್ಲ. ಸೀತೆ (ಉತ್ತರಕಾಂಡದಲ್ಲಿಯ), ಅಹಲ್ಯೆ
{{bar}}<br>
{{gap}}<small>೬೬. ಸುಂದರಕಾಂಡ, ೨೮.</small><noinclude></noinclude>
9peebx81hc75w4kozkh4gsfq1orhvtj
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೧೭
104
89230
321238
233237
2026-05-20T07:48:52Z
Shreelatha.Halemane
7642
/* Validated */
321238
proofread-page
text/x-wiki
<noinclude><pagequality level="4" user="Shreelatha.Halemane" />{{rh|ಶಾಪಾದಪಿ ವರಾದಪಿ!||೯೩}}</noinclude>ಮತ್ತು ದೌಪದಿ ಈ ಮೂವರೂ ಪತಿವ್ರತೆಯರು ತಮ್ಮ ಶೀಲವನ್ನು ಕಳೆದುಕೊಳ್ಳುವ
ಸಂಕಟವನ್ನು ಎದುರಿಸಿದ್ದಾರೆ. ಅಹಲ್ಯೆಯು ಈ ಸಂಕಟಕ್ಕೆ ಬಲಿಯಾದಳು.
ಸೀತೆ ಮತ್ತು ದ್ರೌಪದಿ ಈರ್ವರು ಸಂಕಟದಿಂದ ಪಾರಾದರು. ಅವರಿಗೆ ದೊರೆತ
ಯಶಸ್ಸು ಪಾತಿವ್ರತ್ಯದ ಫಲವಾಗಿಯೋ ಅಥವಾ ಇನ್ನಾವ ಬೇರೆ ಕಾರಣದಿಂದಲೋ
ಎಂಬುದನ್ನು ಸರಿಯಾಗಿ ಪರಿಶೀಲಿಸಬೇಕು. ಗೌತಮನ ವೇಷಧಾರಿಯಾದವನು
ಆಶ್ರಮಕ್ಕೆ ಬಂದಾಗ ಇಂದ್ರನು ಪರಪುರುಷನೆಂದು ಅಹಲ್ಯೆಗೆ ಗೊತ್ತಿರಲಿಲ್ಲ.
<small><poem>
'''ಅಜ್ಞಾನಾದ್ಘರ್ಷಿತಾ ವಿಪ್ರ ತ್ವದ್ರೂಪೇಣ ದಿವೌಕಸಾ |'''
{{Right|'''(ಉತ್ತರಕಾಂಡ, ೩೦-೪೦)}}'''</small></poem>
{{gap}}ಅಹಲ್ಯೆಯ ಈ ಹೇಳಿಕೆಯನ್ನು ನಂಬಿದರೂ ಇಂದ್ರನ ಸ್ಪರ್ಶದ ನಂತರವೂ
ಅದು ಪರಪುರುಷನ ಸ್ಪರ್ಶ ಎಂಬ ಸಂಗತಿಯು ಅವಳಿಗೆ ತಿಳಿಯಲಿಲ್ಲವೆನ್ನಬೇಕೆ?
ಅವಳಲ್ಲಿಯ ಪಾತಿವ್ರತ್ಯದ ಬಲವು, ಇಂದ್ರನನ್ನು ದೂರವಿರಿಸಲು ಏಕೆ ಅಸಮರ್ಥವಿತ್ತು? ಅದು ನಿಜವಾಗಿ ಶಕ್ತಿಯುತವಾಗಿದ್ದರೆ ಅಹಲೈಯನ್ನು ಮುಟ್ಟಿದೊಡನೆ
ಇಂದ್ರನು ಸುಟ್ಟು ಬೂದಿಯಾಗಬೇಕಿತ್ತು. ಪಾತಿವ್ರತ್ಯದ ಫಲರೂಪವಾಗಿ ಇಂದ್ರನಿಗೆ
ಯಾವ ಶಿಕ್ಷೆಯೂ ಆಗಲಿಲ್ಲ. ಇಂದ್ರನಿಗೆ ನಂತರ ದೊರೆತ ಶಿಕ್ಷೆಯು ಗೌತಮನ
ತಪಸ್ಸಾಮರ್ಥ್ಯದಿಂದ ಹೊರತು ಅಹಲ್ಯೆಯ ಪಾತಿವ್ರತ್ಯದಿಂದಲ್ಲ. ಇದು
ನಿಜವಲ್ಲವೆಂದು ಗ್ರಹಿಸಿದರೆ ಉತ್ತರಕಾಂಡದಲ್ಲಿಂಯ ಅಹಲ್ಯೆಯ ಕಥಾಭಾಗವು
'ಸುಳ್ಳು' ಎಂದಾಗುತ್ತದೆ. ಬಾಲಕಾಂಡದ ಕಥೆಯು ನಿಜವಿದ್ದರೆ ಇಂದ್ರನು ಬಂದದ್ದು
ಅವಳಿಗೆ ಗೊತ್ತಿದ್ದ ಸಂಗತಿ; ಆದ್ದರಿಂದ ವ್ಯಭಿಚಾರಿಣಿ ಎನಿಸುತ್ತಾಳೆ. ಭೀಮನು
ಮೊದಲೇ ಯೋಜಿಸಿದಂತೆ ನೃತ್ಯಶಾಲೆಯಲ್ಲಿ ಕುಳಿತಿರದಿದ್ದರೆ ದ್ರೌಪದಿಯು
ಕೀಚಕನ ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಳು; ಇಲ್ಲವೇ ಮರಣವನ್ನಪ್ಪಿಕೊಳ್ಳುತ್ತಿದ್ದಳು.
ದ್ರೌಪದಿಯ ಶೀಲರಕ್ಷಣೆಯಾದದ್ದು ಕೇವಲ ಭೀಮನ ಬುದ್ಧಿಚಾತುರ್ಯದ ಮೂಲಕ,
ಆತನ ಪರಾಕ್ರಮದ ಮೂಲಕವೇ ಹೊರತು ದ್ರೌಪದಿಯ ಪಾತಿವ್ರತ್ಯದಿಂದಲ್ಲ.
ಅಹಲ್ಯೆ ಮತ್ತು ದ್ರೌಪದಿಯರಲ್ಲಿ ಪಾತಿವ್ರತ್ಯದ ತೇಜಸ್ಸು ಸ್ವಲ್ಪ ಮಟ್ಟಿಗೆ ಇತ್ತೆಂದು
ಊಹಿಸಿದರೂ ಅದರ ಬಲದಿಂದ ಸ್ವಂತದ ಶೀಲರಕ್ಷಣೆಯು ಸಾಧ್ಯವಿರಲಿಲ್ಲವೆಂದು
ಸ್ಪಷ್ಟವಾಗುತ್ತದೆ.</br>
{{gap}}ಶೀಲವನ್ನು ಕಾಯ್ದುಕೊಳ್ಳಲು ಕೇವಲ ಪಾತಿವ್ರತ್ಯವು ಸಾಲದೆಂದು ಸೀತೆಯು
ಅರಿತಿದ್ದಳು. ಶೀಲವನ್ನು ಕಳೆದುಕೊಳ್ಳುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದು
ಒಳಿತೆಂದು ಅವಳು ಭಾವಿಸಿರಬಹುದು. ಅವಳ ಆತ್ಮಹತ್ಯೆಯ ಎರಡು ಪ್ರಯತ್ನಗಳು<noinclude></noinclude>
2b2jsbc1puvfa9ug46r035tngq44bqx
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೧೮
104
89231
321239
233240
2026-05-20T07:49:33Z
Shreelatha.Halemane
7642
/* Validated */
321239
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೯೪|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</noinclude>ವಿಫಲಗೊಂಡವು. ಸೀತೆಯಲ್ಲಿ ಪಾತಿವ್ರತ್ಯದ ಅದ್ಭುತ ತೇಜಸ್ಸಿತ್ತೆಂಬ ಅಭಿಪ್ರಾಯವನ್ನು ಮಂಡೋದರಿಯು ಹೊಂದಿದ್ದಳು. ರಾವಣನ ವಧೆಯಾದ ನಂತರ ಶೋಕ ಸಂತಪ್ತಳಾದ ಅವಳು ಈ ರೀತಿ ನುಡಿದಿದ್ದಾಳೆ:
<small><poem>
'''ಅಪ್ರಾಪ್ಯ ತಂ ಚೈವ ಕಾಮಂ ಮೈಥಿಲೀಸಂಗಮೇ ಕೃತಮ್ |'''
'''ಪತಿವ್ರತಾಯಾಸ್ತಪಸಾ ನೂನಂ ದಗ್ಧೋsಸಿ ಮೇ ಪ್ರಭೋ ‖'''
'''ತದೈವ ಯನ್ನ ದಗ್ಧಸ್ತ್ವಂ ಘರ್ಘಯಂಸ್ತನುಮಧ್ಯಮಾಮ್ |'''
'''ದೇವಾ ಬಿಭ್ಯತಿ ತೇ ಸರ್ವೇ ಸೇಂದ್ರಾಃ ಸಾಗ್ನಿಪುರೋಗಮಾಃ ‖'''</poem></small>
{{gap}}“ಹೇ ಪ್ರಭೋ! ಮಿಥಿಲೆಯ ರಾಜಕುಮಾರಿಯಲ್ಲಿ ಆಸಕ್ತನಾಗಿ ಸಮಾಗಮವನ್ನು ಬಯಸಿದ ನಿನ್ನ ಮನೋರಥವು ಸಿದ್ಧಿಸಲಿಲ್ಲ. ಆ ಪತಿವ್ರತೆಯ ತಪಸ್ಸಿನ ತೇಜಸ್ಸಿನಿಂದ ನೀನು ಸುಟ್ಟುಹೋದೆ; ಯಾವ ಗಳಿಗೆಯಲ್ಲಿ ನೀನು ಅವಳನ್ನು ಸ್ಪರ್ಶಿಸಿದೆಯೋ ಅದೇ ಕ್ಷಣದಲ್ಲಿ ನಿನ್ನ ದೇಹವು ಸುಟ್ಟು ಭಸ್ಮವಾಗಬೇಕಿತ್ತು; ಆದರೆ ಇಂದ್ರ, ಅಗ್ನಿ, ದೇವತೆಗಳು ನಿನಗೆ ಭಯಪಡುತ್ತಿದ್ದುದರಿಂದ ನೀನು ಆಗ ಸಾಯಲಿಲ್ಲ.”<sup>೬೭</sup> ಈ ರೀತಿ ಓರ್ವ ಪವಿತ್ರೆಯು ಇನ್ನೋರ್ವ ಸಾಮಾನ್ಯ ಪತಿವ್ರತೆಯನ್ನು ಹೊಗಳಿ ನುಡಿದದ್ದು ಬಹಳ ಮನಸ್ಸೆಳೆಯುವಂತಿದ್ದರೂ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವದು ಉಚಿತವೆನಿಸುತ್ತದೆ. ಪತಿವ್ರತೆಯ ಬಳಿ ತೇಜಸ್ಸಿನ ಪ್ರಭಾವವಿರುತ್ತದೆ ಎಂದು ಮನ್ನಿಸಿದರೆ, ರಾವಣನ ಅಧಃಪತನವನ್ನು
ಮಂಡೋದರಿಯು ಸ್ವಲ್ಪವಾದರೂ ಏಕೆ ತಡೆಯಲಿಲ್ಲ? ಮಂಡೋದರಿಯು ಪತಿವ್ರತೆ; ಅವಳ ಪಾತಿವ್ರತ್ಯವನ್ನು ಶಂಕಿಸುವ ಒಂದು ಉಲ್ಲೇಖವೂ ರಾಮಾಯಣದಲ್ಲಿಲ್ಲ. ಸೀತೆಯ ಸ್ಪರ್ಶವಾಗುತ್ತಲೇ ರಾವಣನು ಸುಟ್ಟುಹೋಗಲಿಲ್ಲ; ರಾವಣನ ಘನತೆಯೇ ಇದಕ್ಕೆ ಕಾರಣವೆಂದು ನಂಬಿದರೆ, ವಿರಾಧನು ರಾಮಲಕ್ಷ್ಮಣರ ಸಮ್ಮುಖದಲ್ಲಿಯೇ ಸೀತೆಯನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡಾಗ ಆ ವಿರಾಧನೇಕೆ ಭಸ್ಮವಾಗಲಿಲ್ಲ? ವಿರಾಧನ ಬಳಿ ಅದಾವ ಶಕ್ತಿ ಇತ್ತು? ವಿರಾಧನು ಅಷ್ಟಕ್ಕೇ ನಿಲ್ಲದೆ-
<small><poem>
'''ಕಥಂ ತಾಪಸಯೋರ್ವಾಂ ಚ ವಾಸಃ ಪ್ರಮದಯಾ ಸಹ |'''
'''ಅಧರ್ಮಚಾರಿಣೌ ಪಾಪೌ ಕೌ ಯುವಾಂ ಮುನಿದೂಷಕೌ |'''
'''ಇಯಂ ನಾರೀ ವರಾರೋಹಾ ಮಮ ಭಾರ್ಯಾ ಭವಿಷ್ಯತಿ ||'''</poem></small>
{{bar}}<br>
{{gap}}<small>೬೭. ಸುಂದರಕಾಂಡ, ೧೧೧.</small><br><noinclude></noinclude>
n752wlh4mdjiwdbcdn0ltrigjwu7sx1
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೧೯
104
89232
321240
233242
2026-05-20T07:50:02Z
Shreelatha.Halemane
7642
/* Validated */
321240
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಶಾಪಾದಪಿ ವರಾದಪಿ!|right=೯೫}}</noinclude>
{{gap}}“ತರುಣಳಾದ ಈ ಸ್ತ್ರೀಯನ್ನು ಕಟ್ಟಿಕೊಂಡು ತಪಸ್ವಿಗಳೆನಿಸುವ ನೀವು
ಯಾವ ರೀತಿ ಕಾಡಿನಲ್ಲಿ ವಾಸಿಸುತ್ತೀರಿ? ಈ ಮುನಿವೇಷಕ್ಕೆ ಸಲ್ಲದ ಆಯುಧಗಳನ್ನು
ಧರಿಸಿ ಒಂದೇ ಸ್ತ್ರೀಯನ್ನು ಉಪಯೋಗಿಸುವ ಅಧಮರು ನೀವು; ಪಾಪಿಗಳು,
ಮುನಿವೇಷಕ್ಕೆ ಕಲಂಕವನ್ನು ತರುವಂಥವರು, ನೀವು ಯಾರು? ವಿವಾಹವಾಗಲು
ಯೋಗ್ಯವಿರುವ ಇವಳು ನನ್ನ ಪತ್ನಿಯಾಗುವಳು!” (ಅರಣ್ಯಕಾಂಡ, ೨, ೧೧-೧೩)</br>
{{gap}}ಈ ಬಗೆಯಾಗಿ ಪತಿವ್ರತೆಯನ್ನು ನಿಂದಿಸುವ ಉದ್ಗಾರಗಳು ಪತಿವ್ರತೆಯಾದ ಸೀತೆಯ ಕಿವಿಗಳಿಗೆ ಬಿದ್ದಾಗ ಅವಳ ಪಾತಿವ್ರತ್ಯದ ತೇಜವು ಏಕೆ ಪ್ರಕಟವಾಗಲಿಲ್ಲ? ಕಾಗೆಯ ರೂಪವನ್ನು ತಾಳಿ ಬಂದ ಇಂದ್ರಪುತ್ರನು ಸೀತೆಯ ಸ್ತನಗಳೊಡನೆ ಚೇಷ್ಟೆ ನಡೆಸಿದಾಗ ಪಾತಿವ್ರತ್ಯದ ತೇಜಸ್ಸು ಏಕೆ ಹೊರಬರಲಿಲ್ಲವೆಂಬುದು ಆಶ್ಚರ್ಯದ ಸಂಗತಿಯಾಗಿದೆ. ಇಂದ್ರಪುತ್ರನಿಂದ ನಡೆದ ಶೃಂಗಾರ
ಚೇಷ್ಟೆಗಳ ವಿವರಣೆಯನ್ನು ಸೀತೆಯು ತಾನಾಗಿ ಹನುಮಂತನಿಗೆ ಹೇಳಿದ್ದಾಳೆ.
ಅದು ವಿಶ್ವಸನೀಯವಲ್ಲವೆಂದು ಹೇಗೆ ಹೇಳಲು ಸಾಧ್ಯ?<sup>೬೮</sup> ವಿರಾಧನಂತಹ
ರಾಕ್ಷಸನಿಗೆ ಸರಿಯಾದ ಶಿಕ್ಷೆಯನ್ನು ವಿಧಿಸುವುದಂತೂ ದೂರವಿರಲಿ, ಸಾಮಾನ್ಯ
ಕಾಗೆಯನ್ನು ಶಿಕ್ಷಿಸುವದು ಸಹ ಅವಳಿಂದಾಗಲಿಲ್ಲ. ಹೀಗಿರುವದರಿಂದ ಪಾತಿವ್ರತ್ಯದ
ಫಲ-ಬಲಗಳ ಅನುಬವವು ಒಮ್ಮೆಯೂ ಕಂಡುಬಂದಿಲ್ಲ; ಅಂದಬಳಿಕ
ಮಂಡೋದರಿಯ ಉದ್ಗಾರಗಳನ್ನು ವಿಶೇಷಗಂಭೀರವಾಗಿ ವಿಶ್ಲೇಷಿಸುವ ಅವಶ್ಯಕತೆ
ಇಲ್ಲ.</br>
{{gap}}ಪಾತಿವ್ರತ್ಯದ ಶಕ್ತಿಯ ಬಗ್ಗೆ ಸೀತೆಯ ಉದ್ಗಾರಗಳನ್ನು ಲಕ್ಷ್ಯಿಸಿ ಅವುಗಳಲ್ಲಿಯ
ನಿಜಾಂಶವನ್ನು ಪರಿಶೋಧಿಸಬೇಕು.</br>
<small><poem>
'''ಅಸಂದೇಶಾತ್ತು ರಾಮಸ್ಯ ತಪಶ್ಚಾನುಪಾಲನಾತ್ |'''
'''ನ ತ್ವಾಂ ಕುರ್ಮಿ ದಶಗ್ರೀವ ಭಸ್ಮ ಭಸ್ಮಾರ್ಹತೇಜಸಾ ||'''</small></poem>
{{gap}}“ರಾಮನ ಆಜ್ಞೆಯಿರದ ಕಾರಣ ಮತ್ತು ತಪಸ್ಸಿನ ಪರಿಪಾಲನೆಯೇ ಒಂದು
ಕರ್ತವ್ಯವಾಗಿದ್ದುದರಿಂದ ಪಾತಿವ್ರತ್ಯದ ತೇಜಸ್ಸಿನಿಂದ ನಿನ್ನನ್ನು ಸುಟ್ಟು ಭಸ್ಮ
ಮಾಡುವುದು ಸಾಧ್ಯವಿದ್ದರೂ ನಾನು ಆ ರೀತಿ ಮಾಡುವುದಿಲ್ಲ.”<sup>೬೦</sup> ಈ ಮರಾಠಿ
{{bar}}<br>
{{gap}}<small>೬೮. ಸುಂದರಕಾಂಡ, ೩೮.</small></br>
{{gap}}<small>೬೯. ಸುಂದರಕಾಂಡ, ೨೨.</small></br><noinclude></noinclude>
na3kn1vmksvza153mg5i9t4p0i6xi4s
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೦
104
89233
321241
233244
2026-05-20T07:50:42Z
Shreelatha.Halemane
7642
/* Validated */
321241
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=೯೬|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</noinclude>ಅನುವಾದದಲ್ಲಿ ಪಾತಿವ್ರತ್ಯ ಶಬ್ದವು ಸರಿಯಲ್ಲ. ವಾಲ್ಮೀಕಿಯು ಪಾತಿವ್ರತ್ಯವನ್ನು
ಉಲ್ಲೇಖಿಸಿಲ್ಲ; ತದ್ವಿರುದ್ಧ ತಪಸ್ಸು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾನೆ. ಗೀತಾ
ಪ್ರೆಸ್ ಗೋರಖಪುರ (ಹಿಂದಿ) ಮತ್ತು ಡಾ|| ಶ್ರೀನಿವಾಸ ಅಯ್ಯಂಗಾರ್ ಇವರ
ಕನ್ನಡ ಅನುವಾದದಲ್ಲಿ 'ಪಾತಿವ್ರತ್ಯ'ವನ್ನು ಉಲ್ಲೇಖಿಸಿಲ್ಲ. ರಾವಣನನ್ನು
ಸುಟ್ಟುಹಾಕುವ ಸೀತೆಯ ನುಡಿಯು ಓಜಸ್ಸಿನೆಂದೆನಿಸಿದರೂ ಕೃತಿಯಲ್ಲಿ
ಯಾವ ಪ್ರಭಾವವನ್ನೂ ಬೀರಲಿಲ್ಲ. ಸೀತೆಯ ಸ್ವಂತ ಹೇಳಿಕೆಯಂತೆ, ಅವಳಲ್ಲಿ
ಬೇರೆ ಯಾವದೇ ಬಗೆಯ ಸಾಮರ್ಥ್ಯವಿದ್ದರೂ ಅದು ತಪಸ್ಸಿನಿಂದ ದೊರೆತ
ಫಲವಾಗಿದೆ.
'''ರಾವಣನು ಎಸಗಿದ ಬಲಾತ್ಕಾರಗಳು'''<br>
{{gap}}ಸ್ತ್ರೀಯರ ಮೇಲೆ ಬಲಾತ್ಕಾರವನ್ನು ಮಾಡುವುದರಲ್ಲಿ ರಾವಣನದು ಎತ್ತಿದ
ಕೈ. ಅಷ್ಟೇ ಅಲ್ಲದೆ ಅದು ಅವನ ಚಟವಾಗಿತ್ತು. ಲಂಕೆಯಲ್ಲಿಯ ಹಾಗೂ
ಇನ್ನಿತರ ನಾರಿಯರನ್ನು ಆತನು ಮನಬಂದಂತೆ ಉಪಭೋಗಿಸಿದ್ದಾನೆ. ಸ್ತ್ರೀಯರನ್ನು
ಕೆಡಿಸುವದು, ತನ್ನ ಮನಸೇಚ್ಛೆಯಂತೆ ಬಲಾತ್ಕರಿಸುವದು ಪಾಪಕರ್ಮವೆಂದು
ಆತನು ಈ ರೀತಿ ಹೇಳಿದ್ದಾನೆ:
<small><poem>
'''ಸ್ವಧರ್ಮೋ ರಕ್ಷಸಾಂ ಭೀರಂ ಸರ್ವದೈವ ನ ಸಂಶಯಃ |'''
'''ಗಮನಂ ವಾ ಪರಸ್ತ್ರೀಣಾಂ ಹರಣಂ ಸಂಪ್ರಮಥ್ಯ ವಾ ||'''</small></poem>
{{gap}}“ಬಲಾತ್ಕಾರದಿಂದ ಪರಸ್ತ್ರೀಯರನ್ನು ಅಪಹರಿಸುವುದು ಮತ್ತು ಅವರನ್ನು
ಉಪಭೋಗಿಸುವುದು ಸದಾಕಾಲ ರಾಕ್ಷಸರ ಕುಲಧರ್ಮ."<sup>೭೦</sup> ರಾವಣನ ಈ ಅಧರ್ಮ ಕೃತ್ಯವು ಆತನ ಕ್ರೌರ್ಯಕ್ಕಿಂತ ಮಿಗಿಲಾಗಿ ಸ್ತ್ರೀಯರನ್ನು ಹಿಂಸಿಸುತ್ತಿತ್ತು.
ಸ್ತ್ರೀಯರನ್ನು ಬಲಾತ್ಕರಿಸುವಾಗ ಅವರ ಪತಿಯರ, ಆಪ್ತೇಷ್ಟರ ಪರಿವೆ ಅವನಿಗಿರುತ್ತಿರಲಿಲ್ಲ. ಅವರ ಪತಿಯರನ್ನು ಕೊಂದು ಅವರನ್ನು ವಿಧವೆಯರನ್ನಾಗಿ
ಮಾಡುವುದಲ್ಲದೇ ಅವರ ಆಪ್ತೇಷ್ಟರನ್ನು ಕೊಂದು ಅವರನ್ನು ಪೂರ್ಣ
'ನಿರಾಶ್ರಿತೆ'ಯರನ್ನಾಗಿ ಮಾಡುತ್ತಿದ್ದನು. ಈತನಿಂದ ಭ್ರಷ್ಟರಾದ ಅನೇಕ ಸಾಧ್ವಿಯರು
ಶ್ರೇಷ್ಠರಾಗಿದ್ದರು. ಅವರ ಬಗ್ಗೆ ಮಂಡೋದರಿಯ ಉದ್ಗಾರಗಳು ಸೂಚಕವಾಗಿವೆ:
{{bar}}<br>
{{gap}}<small>೭೦. ಸುಂದರಕಾಂಡ, ೨೦.</small></br><noinclude></noinclude>
l44lxu52w5dkccja374fxie17v8lnlz
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೧
104
89234
321242
233319
2026-05-20T07:51:14Z
Shreelatha.Halemane
7642
/* Validated */
321242
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ಶಾಪಾದಪಿ ವರಾದಪಿ!|right=೯೭}}</noinclude><small><poem>
'''ಯಾಸ್ತ್ವಯಾ ವಿಧವಾ ರಾಜನ್ಕೃತಾ ನೈಕಾಃ ಕುಲಸ್ತ್ರಿಯಃ ||'''
'''ಪತಿವ್ರತಾಧರ್ಮರತಾ ಗುರುಶುಶ್ರೂಷಣೇ ರತಾಃ |'''
'''ತಾಭಿಃ ಶೋಕಾಭಿತಪ್ತಾಭಿಃ ಶಪ್ತಃ ಪರವಶಂ ಗತಃ ||'''</small></poem>
{{gap}}“ಹೇ ರಾಜಶ್ರೇಷ್ಠನೇ! ಯಾವ ಕುಲಸ್ತ್ರೀಯರನ್ನು ನೀನು ವಿಧವೆಯರನ್ನಾಗಿ
ಮಾಡಿದೆಯೋ, ಅವರೆಲ್ಲರೂ ಪತಿವ್ರತೆಯರು, ಧರ್ಮಿಷ್ಟರು, ಗುರುಸೇವೆಯಲ್ಲಿ
ಆಸಕ್ತಿಯುಳ್ಳವರಿದ್ದರು. ಶೋಕಾನ್ವಿತರಾದ ಆ ಸ್ತ್ರೀಯರು ನಿನ್ನನ್ನು ಶಪಿಸಿದ ಕಾರಣ
ನೀನು ಶತ್ರುವಿನ ವಶವಾದೆ.”<sup>೭೧</sup> ಈ ಸಾಧ್ವಿಯರು ಶಾಪಗಳನ್ನು ನುಡಿದಾಗ ಸ್ವರ್ಗದಲ್ಲಿ
ದುಂದುಭಿಗಳು ಮೊಳಗಿದುವು. ಪುಷ್ಪವೃಷ್ಟಿಯಾಯಿತು ಎಂಬ ವರ್ಣನೆ ಇದೆ.<sup>೭೨</sup>
ಇಂಥ ಸ್ತ್ರೀಯರು ಶ್ರೇಷ್ಠ ಪತಿವ್ರತೆಯರಿದ್ದರೆಂಬುದರಲ್ಲಿ ಸಂದೇಹವಿಲ್ಲ ವಾದರೂ
ತಮ್ಮ ಶೀಲವನ್ನು ಕಾಯ್ದುಕೊಳ್ಳುವುದರಲ್ಲಿ ವಿಫಲರಾದರೆಂದು ಹೇಳಬಹುದು.
ಪಾತಿವ್ರತ್ಯ-ಸದ್ವರ್ತನೆ ಇವುಗಳಿಂದ ಲಭಿಸುವ ಬಲ, ತೇಜಸ್ಸು ಇವು ಬಹಳ
ಸ್ತಿಮಿತವಾಗಿರುತ್ತವೆ. ಅವುಗಳಿಂದ ಶೀಲರಕ್ಷಣೆಯು ಸಾಧ್ಯವಿಲ್ಲವೆಂಬ ಸಂಗತಿಯು
ಮೇಲಿನ ಉದಾಹರಣೆಗಳಿಂದ ಸ್ಪಷ್ಟವಾಗುತ್ತದೆ. ಪಾತಿವ್ರತ್ಯವೆಂಬುದು ಎಷ್ಟೇ
ಉಚ್ಚಮಟ್ಟದ ಗುಣವೆನಿಸಿದರೂ ಅದರಿಂದ 'ಶೀಲರಕ್ಷಣೆ' ಸಾಧ್ಯವಿಲ್ಲ.
'''ತಾಪ-ವರಗಳ ಯೋಜನಾಚಾತುರ್ಯ'''<br>
{{gap}}ಸೀತೆಯು ನಿರಾಧಾರೆ, ಅಸಹಾಯಕಳಾಗಿದ್ದಳು. ಅವಳ ಈ ಸ್ಥಿತಿಯನ್ನು ಗಮನಿಸಿ
ವಾಲ್ಮೀಕಿ ಬಹುಕೌಶಲ್ಯಪೂರ್ಣವಾಗಿ ರಾವಣನಿಗೆ ಶಾಪಗಳನ್ನು ಯೋಚಿಸಿ ಸೀತೆಯ
ಶೀಲರಕ್ಷಣೆಯನ್ನು ಸಾಧಿಸಿದ್ದಾನೆ. ರಾವಣನಿಗೆ ದೊರೆತ ಶಾಪವೆಂದರೆ, ಸೀತೆಯು
ಭ್ರಷ್ಟಳಾಗದೇ ಉಳಿಯುವ ಪ್ರಭಾವಶಾಲೀ, ಸಹಜ ಸರಳ ಉಪಾಯವೆಂದು
ವಾಲ್ಮೀಕಿಯು ಅರಿತುಕೊಂಡಿದ್ದನು. ವಾಲ್ಮೀಕಿಯ ಪೂರ್ವನಿಯೋಜನೆಯಿಂದ
ರಾವಣನಿಗೆ ಶಾಪಗಳು ದೊರೆತಿವೆ. ಒಟ್ಟು ಏಳು ಶಾಪಗಳು ರಾವಣನಿಗೆ ದೊರೆತ
ಉಲ್ಲೇಖವು ರಾಮಾಯಣದಲ್ಲಿ ಕಂಡುಬರುತ್ತದೆ. ಇವುಗಳಲ್ಲಿಯ ನಾಲ್ಕು ಶಾಪಗಳು
ಪರಸ್ತ್ರೀ ಅಭಿಲಾಷೆ, ಬಲಾತ್ಕಾರ ಇವುಗಳಿಗೆ ಸಂಬಂಧಿತವಾಗಿವೆ.<sup>೭೩</sup> ಮೇಲೆ
ವಿವರಿಸಿದ ಹಲವು ಪತಿವ್ರತೆಯರ ಶಾಪಗಳ ಹೊರತಾಗಿ, ಬ್ರಹ್ಮ ಹಾಗೂ<br>
{{bar}}<br>
{{gap}}{{smaller|೭೧. ಯುದ್ಧಕಾಂಡ, ೧೧೧.}}<br>
{{gap}}{{smaller|೭೨. ಉತ್ತರಕಾಂಡ, ೨೪.}}<br>
{{gap}}{{smaller|೭೩. ಶಾಪ ಕ ೩೫, ೪೩, ೪೬.}}<br><noinclude></noinclude>
i74hlxrg84epv06wmd1d6bk04iey4uu
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೨
104
89235
321243
233321
2026-05-20T07:51:41Z
Shreelatha.Halemane
7642
/* Validated */
321243
proofread-page
text/x-wiki
<noinclude><pagequality level="4" user="Shreelatha.Halemane" />{{rh|೯೮||ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</noinclude>ನಲಕೂಬರನು ಕೊಟ್ಟ ಘೋರಶಾಪಗಳು, ವೇದವತಿಯು ಮಾಡಿದ ಘೋರ
ಪ್ರತಿಜ್ಞೆ ಇವೆಲ್ಲವುಗಳಿಂದ ರಾವಣನು ಮಿಸುಕಾಡ ದಂತಾಯಿತು. ಈ ಕಾರಣದಿಂದ
ಹತ್ತಿರದ ಸೀತೆಯನ್ನು ದೂರವಿರಿಸಬೇಕಾಯಿತು; ಅವನಿಗೆ ಲಭಿಸುವಂತಿರಲಿಲ್ಲ;
ಸೀತೆಯು ದುರ್ಲಭಳಾದಳು. ತನ್ನ ತಪೋಬಲವು ಉಡುಗಬಾರದೆಂದು
ವೇದವತಿಯು ರಾವಣನಿಗೆ ಶಾಪವನ್ನು ಕೊಡಲಿಲ್ಲ; ಆದರೆ, ಅವಳು ಉಚ್ಚರಿಸಿದ
ಪ್ರತಿಜ್ಞೆಯು ಶಾಪಕ್ಕಿಂತ ತೀಕ್ಷ್ಣವಾಗಿದೆ. ವೇದವತಿಯು ಓರ್ವ ತಪಸ್ವಿನಿಯಾಗಿದ್ದಳು.
ಅವಳು ಅಗ್ನಿಯನ್ನು ಪ್ರವೇಶಿಸಿ ಮೃತ್ಯುವನ್ನಪ್ಪುವಾಗ ಪ್ರತಿಜ್ಞೆಯನ್ನು ನುಡಿದ
ಕಾರಣ ಅದರ ಪ್ರಭಾವ, ಪ್ರಖರತೆ ತುಂಬಾ ಅಧಿಕಗೊಂಡಿದೆ. ಪುಂಜಿಕಸ್ಥಲೆಯನ್ನು
ಬಲಾತ್ಕರಿಸಿದ ಕಾರಣ ಬ್ರಹ್ಮದೇವನು ರಾವಣನಿಗೆ ಶಾಪವನ್ನು ಕೊಟ್ಟಿದ್ದಾನೆ.
ರಂಭೆಯ ಮೇಲೆ ಬಲಾತ್ಕಾರವನ್ನು ಎಸಗಿದ ಕಾರಣ ನಲಕೂಬರನೂ ರಾವಣನನ್ನು
ಶಪಿಸಿದ್ದಾನೆ. ಈ ಎರಡೂ ಶಾಪಗಳ ಸ್ವರೂಪ, ಪರಿಣಾಮ ಒಂದೇ
ರೀತಿಯದಾಗಿದೆ; ವ್ಯತ್ಯಾಸವಿರುವುದು ಅವುಗಳ ವಿವರಗಳಲ್ಲಿ ಮಾತ್ರ; ಈ ಎರಡೂ
ಶಾಪಗಳು ಕಟ್ಟಳೆಯವಾಗಿವೆ. ಬ್ರಹ್ಮದೇವನ ಶಾಪದ ಭಯವು ರಾವಣನಿಗೆ
ಹಗಲಿರುಳೂ ಕಾಡುತ್ತಿತ್ತು. ರಾವಣನು ತನಗಿದ್ದ ಭೀತಿಯನ್ನು ಮಂತ್ರಿಯಾದ
ಮಹಾಪಾರ್ಶ್ವನ ಬಳಿ ತೋಡಿಕೊಂಡಿದ್ದಾನೆ.<br>
{{gap}}ಮಹಾಪಾರ್ಶ್ವನು ರಾವಣನಿಗೆ ಕುಕ್ಕುಟ ರೀತಿಯಿಂದ ಸೀತೆಯನ್ನು
ಬಲಾತ್ಕರಿಸಿ ಭೋಗಿಸಬೇಕೆಂಬ ಸಲಹೆಯನ್ನಿತ್ತನು; ಅದರಿಂದಾಗುವ ಪರಿಣಾಮಗಳನ್ನು ಎದುರಿಸುವ ಬಲವು ರಾವಣನ ಬಳಿಯಿದೆ ಎಂದು ಮುಂತಾಗಿ
ಹೊಗಳಿದನು. ಆಗ ರಾವಣನು ತಾನು ಪುಂಜಿಕಸ್ಥಲೆಯನ್ನು ಬಲಾತ್ಕರಿಸಿದಾಗ
ಬ್ರಹ್ಮದೇವನಿಂದ ಹೊಂದಿದ, ಈವರೆಗೆ ರಹಸ್ಯವಾಗಿಟ್ಟ ಶಾಪದ ವಿಷಯವನ್ನು
ಮಹಾಪಾರ್ಶ್ವನಿಗೆ ಏಕಾಂತದಲ್ಲಿ ಹೇಳಿದನು:<sup>೭೪</sup>
<small><poem>
'''ಇತ್ಯಹಂ ತಸ್ಯ ಶಾಪಸ್ಯ ಭೀತಃ ಪ್ರಸಭಮೇವ ತಾಮ್ |'''
'''ನಾರೋಹಯೇ ಬಲಾತ್ಸೀತಾಂ ವೈದೇಹೀಂ ಶಯನೇ ಶುಭೇ ||'''</small></poem>
{{gap}}“ಈ ರೀತಿ ಬ್ರಹ್ಮನ ಶಾಪಕ್ಕೆ ತುಂಬಾ ಹೆದರಿಕೊಂಡ ನಾನು ವಿದೇಹ
ಕನ್ಯಯಾದ ಸೀತೆಯನ್ನು ಶುಭಶಯ್ಯೆಯ ಮೇಲೆ ಭೋಗಿಸಲು ಅಸಮರ್ಥನಾಗಿದ್ದೇನೆ” ಎಂದು ಸ್ವತಃ ರಾವಣನು ಹೇಳಿದ್ದಾನೆ.</br>
{{bar}}</br>
{{gap}}೭೪. ಯುದ್ಧಕಾಂಡ, ೧೩.<noinclude></noinclude>
7vzbruv45w54x35gbmeyytjzhwwsq6g
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೪
104
89236
321244
233325
2026-05-20T07:52:30Z
Shreelatha.Halemane
7642
/* Validated */
321244
proofread-page
text/x-wiki
<noinclude><pagequality level="4" user="Shreelatha.Halemane" />{{rh|೧೦೦||ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</noinclude><small><poem>
'''ಯಸಿ ಹ್ಯಕಾಮಾ ಮಾ ಸೇವೇತ ಸ್ತ್ರಿಯಮನ್ಯಾಮಪಿ ಧ್ರುವಮ್ |'''
'''ಶತಧಾsಸ್ಯ ಫಲೇನ್ಯೂರ್ಧಾ ಇತ್ಯುಕ್ತ: ಸೋsಭವತ್ ಪುರಾ ||೩೪||'''
{{Right|'''(ವನಪರ್ವ, ೨೯೧)'''}}</small></poem>
{{gap}}“ಅವನಲ್ಲಿ ಆಸಕ್ತಿಯಿರದ ಯಾವ ಯಾವ ಪರಸ್ತ್ರೀಯನ್ನು ಆತನು
ಬಲಾತ್ಕಾರದಿಂದ ಭೋಗಿಸಿದರೆ ಆತನ ಶಿರಸ್ಸು ಸಹಸ್ರ ಹೋಳಾಗುವದು” ಎಂಬ
ಶಾಪವನ್ನು ಮೊದಲೇ ಕೊಡಲಾಗಿತ್ತು. ಬ್ರಹ್ಮದೇವನು ಸೀತೆಗೆ ಈ ವಿಧದ
ಆಶ್ವಾಸನೆಯನ್ನು ಕೊಟ್ಟ ಕಾರಣ- ಸೀತೆಯು ಲಂಕೆಯಲ್ಲಿದ್ದರೂ ಭ್ರಷ್ಟಳಾಗದೇ
ಉಳಿದಿರುವುದರ ಶ್ರೇಯವು. ಅವಳ ಪಾತಿವ್ರತ್ಯಕ್ಕಿರದೆ, ರಾವಣನಿಗೆ ದೊರೆತ
ಶಾಪಗಳ ಮೂಲಕವೆಂದು ಹೇಳಬಹುದು.
'''ಉಪಸಂಹಾರ'''<br>
{{gap}}ಐಹಿಕ ಸುಖಸಮೃದ್ಧಿಗಾಗಿ ಮತ್ತು ದುಃಖನಿವಾರಣೆಗಾಗಿ ಮಾನವನು
ಸತತ ಪ್ರಯತ್ನಗಳನ್ನು ನಡೆಸಿರುತ್ತಾನೆ. ಇದು ಆತನ ಬಲವತ್ತರವಾದ ಸ್ವಾಭಾವಿಕ
ಪ್ರವೃತ್ತಿಯಾಗಿದೆ. ತನ್ನ ಉದ್ದಿಷ್ಟಗಳನ್ನು ಸಾಧ್ಯಮಾಡಿಕೊಳ್ಳಲು ಆತನು ಎಲ್ಲ
ಶಕ್ತಿಗಳನ್ನು ಬಳಸುತ್ತಾನೆ. ಹೀಗೆ ಮಾಡಿಯೂ ಧ್ಯೇಯಗಳು ಕೈಗೂಡದಿದ್ದರೆ,
ಪ್ರಯತ್ನಗಳು ವಿಫಲ ಎಂದೆನಿಸಿದಾಗ ಆತನು ಮಾನವೇತರ ಅಥವಾ ಅತಿಮಾನವೀ,
ಮಹಾಮಾನವೀಶಕ್ತಿಗಳಿಗೆ ಶರಣುಹೋಗುತ್ತಾನೆ. ವಿಜ್ಞಾನದಲ್ಲಿ ಪ್ರಗತಿಯಾದಂತೆ
ಅಸಾಧ್ಯವೆನಿಸಿದ ಸಂಗತಿಗಳು ಸಾಧ್ಯವಾಗಿವೆ; ಸಹಜವಾಗಿ, ಸುಲಭವಾಗಿ
ದೊರೆಯುವಂತಾಗಿವೆ. ಇಂದಿನ ಐಹಿಕ ಜೀವನವು ವಿವಿಧ ರೀತಿಯಿಂದ
ಸಮೃದ್ಧವಾಗಿದೆ. ಇಷ್ಟೆಲ್ಲ ಸಾಧಿಸಿದ್ದರೂ ಮಾನವೇತರ ಶಕ್ತಿ ಸಾಮರ್ಥ್ಯದ ಬಗ್ಗೆ
ಅವನಿಗಿದ್ದ ಶ್ರದ್ಧೆ, ಕುತೂಹಲ ಕಡಿಮೆಯಾಗಿಲ್ಲ. ಕೆಲವು ಸುಶಿಕ್ಷಿತ ಸುಸಂಸ್ಕೃತ
ಬುದ್ಧಿನಿಷ್ಠರನ್ನು ಬಿಟ್ಟರೆ ಬಹುಸಂಖ್ಯ ಜನರು ಈ ಸಾಮರ್ಥ್ಯವನ್ನು ಹೆಚ್ಚಾಗಿ
ನಂಬುತ್ತಾರೆ. ಐಹಿಕ ಉದ್ದಿಷ್ಟ ಅಭಿಲಾಷೆಗಳ ಪೂರ್ತಿಗಾಗಿ ಜನರು ಇಂದು
ಕೂಡ ಸತ್ಯನಾರಾಯಣವ್ರತವನ್ನಾಚರಿಸುತ್ತಾರೆ; ಹರಕೆಗಳನ್ನು ಬೇಡಿಕೊಳ್ಳುತ್ತಾರೆ;
ವ್ರತನಿಯಮಗಳನ್ನು ಕೈಕೊಳ್ಳೂತ್ತಾರೆ; ದೇವರಿಗೆ ಬೇಡಿಕೊಳ್ಳುತ್ತಾರೆ. ಮಠ-ಮಂದಿರಗಳಲ್ಲಿ ಭಕ್ತಾದಿಗಳ ದಟ್ಟಣೆಯಾಗುತ್ತಿರುವುದು ಐಹಿಕ ಲಾಭಕ್ಕಾಗಿಯೇ
ಎಂದೆನ್ನಬಹುದು. ಆತ್ಮೋದ್ಧಾರಕ್ಕಾಗಿ ಹೋಗುವವರು ಅತಿವಿರಳವಿರುತ್ತಾರೆ.<noinclude></noinclude>
jhjsjhkbkl0efws0m6lgme62c6p9x2n
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೫
104
89237
321245
233327
2026-05-20T07:53:01Z
Shreelatha.Halemane
7642
/* Validated */
321245
proofread-page
text/x-wiki
<noinclude><pagequality level="4" user="Shreelatha.Halemane" />{{rh|ಶಾಪಾದಪಿ ವರಾದಪಿ!||೧೦೧}}</noinclude>{{gap}}ವ್ಯಾಸ-ವಾಲ್ಮೀಕಿಯರಂಥ ಮಹಾಪುರುಷರು ತಮ್ಮ ಗ್ರಂಥರಚನೆಯಲ್ಲಿ
ಶಾಪ-ವರಗಳನ್ನು ಮುಕ್ತಹಸ್ತದಿಂದ ಬಳಸಿದ್ದಾರೆ. ಶಾಪ-ವರಗಳ ಸಂಕಲ್ಪನೆಯು
ಮಾನವನ ಪ್ರವೃತ್ತಿಗೆ ಸಂಬಂಧಿತವಾಗಿದೆ. ಇವು ಕಥೆಯಿಂದ ತೆಗೆದುಹಾಕುವಂತಿಲ್ಲ.
ಋಷಿಗಳ ಬುದ್ಧಿಯ ಕೌಶಲ್ಯದಿಂದ ಅವು ಕೃತ್ರಿಮವೆಂದೆನಿಸುವುದಿಲ್ಲ. ಕೆಲವು
ಶಾಪ-ವರಗಳನ್ನಂತೂ ಕಥೆಯಿಂದ ಬಿಟ್ಟುಕೊಡುವದು ಸುತರಾಂ ಸಾಧ್ಯವಿಲ್ಲ.
ಅವುಗಳ ಯೋಜನಕತೆಯು ಮಹತ್ತ್ವದ್ದಾಗಿದೆ. ಶ್ರೀ ಮ.ರಂ. ಶಿರವಾಡಕರ
ಎಂಬವರು ಮಹಾಭಾರತದ ಸಂದರ್ಭದಲ್ಲಿ ಈ ರೀತಿ ಬರೆದಿದ್ದಾರೆ:</br>
{{gap}}“ವರ ಹಾಗೂ ಶಾಪ ಇವು ಲೇಖಕರ ಕಲ್ಪನಾವಿಲಾಸದ ಆವಿಷ್ಕೃತಿಯಾಗಿವೆ.
ಇದೊಂದು ಪ್ರಕಾರದ ಭಾಷೆಯಲ್ಲಿಯ ಅಲಂಕಾರವೆಂದೆನ್ನಬಹುದು. ಅವುಗಳ
ಉಗಮವು ಕರ್ಮವಾದದಲ್ಲಿ ಸಿದ್ಧಾಂತದಿಂದಾಗಿದೆ.<sup>೭೫</sup> ಈ ವಿಧಾನವನ್ನು ಸ್ವಲ್ಪಮಟ್ಟಿಗೆ ವಿವರವಾಗಿ ಅಭ್ಯಸಿಸಬೇಕು. ಕಲ್ಪನಾವಿಲಾಸ ಅಥವಾ ಅಲಂಕಾರ ಇವುಗಳಿಂದ ಲೇಖನ ಸೌಂದರ್ಯವು ವರ್ಧಿಸುತ್ತದೆ; ಅವುಗಳ ಅಭಾವವಿದ್ದರೆ ಸೌಂದರ್ಯ ಹಾನಿಯಾಗುತ್ತದೆ; ಆದರೆ ಅವು ಬೇರ್ಪಡಿಸದಂಥ ಭಾಗವಾಗುವುದಿಲ್ಲ. ಶಾಪ-ವರಗಳು ಯಾವಾಗಲೂ ಹೊರಗಿನವು; ಅವುಗಳನ್ನು ಸೇರಿಸಿ
ಕೊಳ್ಳಬಹುದು ಇಲ್ಲವೇ ತೆಗೆದುಹಾಕಬಹುದು; ಏಕೆಂದರೆ ಅವು ಕೃತ್ರಿಮವಾಗಿರುತ್ತವೆ. ಅಂತರಂಗದೊಡನೆ ಬೆರೆತಿರುವುದಿಲ್ಲ; ಸಾಮರಸ್ಯವನ್ನು ಹೊಂದುವದಿಲ್ಲ.
ನಿಜವಾಗಿ ಶಾಪ-ವರಗಳು ಈ ರೀತಿಯಾಗಿವೆಯೇ? ರಾಮಾಯಣದಲ್ಲಿಯ
ದಶರಥನು ಕೈಕೇಯಿಗೆ ಕೊಟ್ಟ ವರಗಳನ್ನು ತೆಗೆದುಹಾಕಬಹುದೇ? ಹಾಗೆ
ಮಾಡಿದರೆ ಕಥೆಯಲ್ಲಿ ಉಳಿಯುವದಾದರೂ ಏನು? ಬ್ರಹ್ಮದೇವನು ರಾವಣನಿಗೆ
ಕೊಟ್ಟ ವರ ಮತ್ತು ಶಾಪಗಳು ಆಲಂಕಾರಿಕವಾಗಿವೆಯೇ? ಅವುಗಳನ್ನು ಬಿಟ್ಟು
ಕೊಟ್ಟರೆ ಕಥೆಯ ಪಾಡೇನಾಗಬಹುದು? ಬ್ರಹ್ಮನ ಶಾಪದ ಭಯವು ರಾವಣನಿಗೆ
ಎಷ್ಟೊಂದಿತ್ತು ಎಂಬುದನ್ನು ಗಮನಿಸಿದ್ದೇವೆ. ಈ ಶಾಪದ ಜೊತೆ ನಲಕೂಬರನು
ಕೊಟ್ಟ ಶಾಪ ಮತ್ತು ವೇದವತಿಯ ಪ್ರತಿಜ್ಞೆ, ಇವು ಇರದಿದ್ದರೆ ಸೀತೆಯ ಶೀಲರಕ್ಷಣೆ
ಸಾಧ್ಯವಿತ್ತೆ? ಶಾಪ-ವರಗಳು ರಾಮಕಥೆಯಲ್ಲಿ ಇರದಿದ್ದರೆ ಈಗ ನಾವು ಕಾಣುತ್ತಿರುವ
ರಾಮಾಯಣವು ಇರುತ್ತಿರಲಿಲ್ಲ. ಶಾಪ-ವರಗಳು ಕರ್ಮವಾದದ ಸಿದ್ಧಾಂತದಿಂದ
ನಿರ್ಮಿತವಾಗಿರದೆ ಅವು ಜನಮಾನಸದ ಪ್ರವೃತ್ತಿಯಿಂದ, ಮಾನವನ ಸ್ವಭಾವ
ಧರ್ಮವಿಶೇಷದಿಂದ ನಿರ್ಮಿತವಾಗಿವೆ. ಮಾನವೇತರ ಶಕ್ತಿಯಲ್ಲಿ ಆತನಿಗೆ ಶ್ರದ್ಧೆ</br>
{{bar}}<br>
{{gap}}೭೫. ಹಸ್ತಿನಾಪುರ.</br><noinclude></noinclude>
a3e49ukxr96o5ojtif9omxatjv5cjfk
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೧
104
89241
321249
233279
2026-05-20T07:57:15Z
Shreelatha.Halemane
7642
/* Validated */
321249
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೨೭}}</br>ಮನೋವಾಂಛಿತವನ್ನು ನೆರವೇರಿಸಿರಿ! ಸತ್ಕರ್ಮನಿರತರಾದ ನೀವು ಧರ್ಮನಿಷ್ಠರಾಗಿದ್ದೀರಿ; ನೀವು ಯಜ್ಞಬಲಿಪಶುವಾಗಿ ಅಂಬರೀಷನ ಯಜ್ಞಾಗ್ನಿಯನ್ನು ತೃಪ್ತಿಗೊಳಿಸಿರಿ; ಆಗ ದೇವತೆಗಳು ಪ್ರಸನ್ನರಾಗುವರು; ಯಜ್ಞವು ನಿರ್ವಿಘ್ನವಾಗಿ ನೆರವೇರಿ ಶುನಃಶೇಪನು ಸನಾಥನಾಗುವನು." ಈ ಬಗೆಯ ವಿಶ್ವಾಮಿತ್ರನ ಮಾತುಗಳನ್ನು ಕೇಳಿ ಮಧುಚ್ಛಂದಾದಿ ಆತನ ಪುತ್ರರು ನಗುನಗುತ್ತ ಈ ರೀತಿ ನುಡಿದರು:</br>
{{gap}}"ಹೇ ಪ್ರಭೋ! ನೀನು ನಿನ್ನ ಪುತ್ರನನ್ನು ಬಲಿಕೊಟ್ಟು ಇನ್ನೊಬ್ಬರ ಪುತ್ರನನ್ನು ರಕ್ಷಿಸುವುದೇಕೆ? ನಿನ್ನ ಈ ಕೃತ್ಯವು ಊಟದಲ್ಲಿ ನಾಯಿಯ ಮಾಂಸವನ್ನು ಸ್ವೀಕರಿಸಿದಷ್ಟು ಅಯೋಗ್ಯವಾಗಿದೆ!"</br>{{gap}}ಈ ರೀತಿ, ತನ್ನ ಆಜ್ಞೆಯನ್ನು ಉಲ್ಲಂಘಿಸುವ, ತನ್ನ ಪುತ್ರರ ನುಡಿಗಳನ್ನು ಕೇಳಿ ವಿಶ್ವಾಮಿತ್ರನು ಕ್ರೋಧಾವಿಷ್ಟನಾಗಿ ಈ ರೀತಿ ನುಡಿದನು:
<small><poem>
'''ನಿಃಸಾಧ್ವಸಮಿದಂ ಪ್ರೋಕ್ತಂ ಧರ್ಮಾದಪಿ ವಿಗರ್ಹಿತಮ್ |'''
'''ಅತಿಕ್ರಮ್ಯ ತು ಮದ್ವಾಕ್ಯಂ ದಾರುಣಂ ರೋಮಹರ್ಷಣಮ್ ‖೧೬‖'''
'''ಶ್ವಮಾಂಸಭೋಜಿನಃ ಸರ್ವೇ ವಾಸಿಷ್ಠಾ ಇವ ಜಾತಿಷು |'''
'''ಪೂರ್ಣವರ್ಷಸಹಸ್ರಂ ತು ಪೃಥಿವ್ಯಾಮನುವತ್ಸ್ಯಥ ‖೧೭‖'''</small></poem>
</br>{{gap}}“ನನ್ನ ಆಜ್ಞೆಯನ್ನು ಮೀರಿ, ಮೈನಡುಕಬರುವಂಥ ಭಾಷಣವನ್ನು ನೀವು ನನ್ನ ಭಯವಿಲ್ಲದೇ ಮಾಡಿದ್ದೀರಿ; ಧರ್ಮದೃಷ್ಟಿಯಿಂದಲೂ ನಿಮ್ಮ ಭಾಷಣವು ಹೇಯವಾದಷ್ಟು; ಈ ಕಾರಣದಿಂದ ನೀವೆಲ್ಲರೂ ನಾಯಿಯ ಮಾಂಸವನ್ನು ತಿಂದುಕೊಂಡು ಮುಷ್ಟಿಕ ಜಾತಿಯವರಾಗಿ ಬಾಳುವಿರಿ! ವಸಿಷ್ಠ ಪುತ್ರರಂತೆ ಒಂದು ಸಾವಿರ ವರ್ಷಗಳ ಪರ್ಯಂತ ಭೂಲೋಕದಲ್ಲಿ ವಾಸವಾಗಿರುವಿರಿ!”</br></br>
{{center|'''೧೮. ವಿಶ್ವಾಮಿತ್ರ < ರಂಭೆ'''}}{{center|'''ಬಾಲಕಾಂಡ/೬೪'''}}
{{gap}}ವಿಶ್ವಾಮಿತ್ರನ ಸಾಮರ್ಥ್ಯ, ತಪೋನಿಷ್ಠೆ ಎಷ್ಟೊಂದು ಪ್ರಖರವಿತ್ತೆಂಬುದನ್ನು ಶತಾನಂದನು ರಾಮನಿಗೆ ತಿಳಿಸುತ್ತಾನೆ:</br>
{{gap}}'ಬ್ರಹ್ಮರ್ಷಿ' ಎಂದೆನಿಸಿಕೊಳ್ಳುವ ಉತ್ಕಟ ಇಚ್ಛೆಯಿಂದ ವಿಶ್ವಾಮಿತ್ರನು ಉಗ್ರ ತಪಸ್ಸನ್ನು ಕೈಕೊಂಡನು. ಆಗ ಇಂದ್ರಾದಿ ದೇವತೆಗಳು ತೊಂದರೆ-ತಾಪಗಳಿಗೆ<noinclude></noinclude>
lzds1dsznqayqrvo6defgj5vof2tl0n
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೨
104
89242
321250
233280
2026-05-20T07:57:47Z
Shreelatha.Halemane
7642
/* Validated */
321250
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೨೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಈಡಾದರು. ವಿಶ್ವಾಮಿತ್ರನ ತಪೋಭಂಗವನ್ನು ಮಾಡಲೋಸುಗ ಇಂದ್ರನು ರಂಭೆ ಎಂಬ ಅಪ್ಸರೆಯನ್ನು ಯೋಜಿಸಿದನು. "ನೀನು ನಿನ್ನ ಸೌಂದರ್ಯದಿಂದ ವಿಶ್ವಾಮಿತ್ರನನ್ನು ಮೋಹಗೊಳಿಸಿ, ಅವನನ್ನು ವಿಷಯಾಸಕ್ತನನ್ನಾಗಿ ಮಾಡು! ಆತನ ತಪೋಭಂಗವೆಂದರೆ ಒಂದು ದೇವತಾಕಾರ್ಯ; ಈ ದುಸ್ತರವಾದ ಕಾರ್ಯವು ನಿನ್ನಿಂದಾಗಲಿದೆ" ಎಂದು ಇಂದ್ರನು ಆಕೆಗೆ ಹೇಳಿದನು. ಇಂದ್ರನ ಮಾತನ್ನು ಕೇಳಿ ರಂಭೆಯು ಲಜ್ಜಿತಳಾದಳು; ಭಯಗೊಂಡಳು; ವಿಶ್ವಮಿತ್ರನ ಕಠೋರವೃತ್ತಿಯ ಕಲ್ಪನೆ ಅವಳಿಗಿತ್ತು. ಈ ದುಸ್ತರ ಕಾರ್ಯವನ್ನು ನೆರವೇರಿಸಲು ತನ್ನನ್ನು ನೇಮಿಸಬಾರದೆಂದು ಬೇಡಿಕೊಂಡಳು; ಆದರೆ, ಇಂದ್ರನು ಆಕೆಗೆ ಅಭಯವನ್ನು ನೀಡಿದನು. ಕೋಗಿಲೆಯ ರೂಪದಲ್ಲಿ ತಾನು ಮನ್ಮಥನೊಡನೆ ಆಕೆಯ ನಿಕಟದಲ್ಲಿ ಇರುವ ಆಶ್ವಾಸನೆಯನ್ನಿತ್ತನು. ವಿಶ್ವಾಮಿತ್ರನ ತಪೋಭಂಗವನ್ನು ಮಾಡಲು ರಂಭೆಗೆ ಆಜ್ಞಾಪಿಸಿದನು.</br>
{{gap}}ಅನುಪಮ ರೂಪವನ್ನು ಧರಿಸಿ ರಂಭೆಯು ವಿಶ್ವಾಮಿತ್ರನನ್ನು ಮೋಹಿಸುವ ಹೊಂಚನ್ನು ಹಾಕಿದಳು. ಕೋಗಿಲೆಯ ಇಂಪಾದ ಧ್ವನಿಯನ್ನು ಕೇಳಿ ವಿಶ್ವಾಮಿತ್ರನು ಉಲ್ಲಸಿತನಾದನು. ತುಸು ಸಮಯದ ನಂತರ ಲಾವಣ್ಯವತಿಯಾದ ರಂಭೆಯು ಆತನಿಗೆ ಕಾಣಿಸಿಕೊಂಡಳು; ಆಗ ಅವನಿಗೆ ಸಂದೇಹವುಂಟಾಯಿತು. ತನ್ನ ತಪೋಭಂಗಕ್ಕಾಗಿ ಇಂದ್ರನು ಈ ಕಾರಸ್ಥಾನವನ್ನು ರಚಿಸಿದ್ದಾನೆಂದು ಮನ ದಟ್ಟಾಗುತ್ತಲೇ ಆತನು ರಂಭೆಗೆ ಶಾಪವನ್ನು ಕೊಟ್ಟನು-
<small><poem>
'''ಯನ್ಮಾಂ ಲೋಭಯಸೇ ರಂಭೇ ಕಾಮಕ್ರೋಧಜಯೈಷಿಣಮ್ |'''
'''ದಶವರ್ಷಸಹಸ್ರಾಣಿ ಶೈಲೀ ಸ್ಥಾಸ್ಯಸಿ ದುರ್ಭಗೇ ‖೧೨‖'''
'''ಬ್ರಾಹ್ಮಣಃ ಸುಮಹಾತೇಜಾಸ್ತಪೋಬಲಸಮನ್ವಿತಃ |'''
'''ಉದ್ಧರಿಷ್ಯತಿ ರಂಭೇ ತ್ವಾಂ ಮತ್ಕ್ರೋಧಕಲುಷೀಕೃತಾಮ್ ‖೧೩‖'''</small></poem>
</br>
{{gap}}"ಎಲೈ ರಂಭೆಯೇ! ಕಾಮಕ್ರೋಧಗಳನ್ನು ನಿಗ್ರಹಿಸುವ ಆಕಾಂಕ್ಷೆಯನ್ನಿಟ್ಟುಕೊಂಡ ನನ್ನನ್ನು ಮೋಹಕ್ಕೆ ಎಳೆಯುತ್ತಿರುವಿ; ಕಾರಣ, ಎಲೌ ದುರ್ಭಗೆ! ಹತ್ತು ಸಾವಿರ ವರ್ಷಗಳವರೆಗೆ ನೀನು ಕಲ್ಲಾಗಿ ಬಿದ್ದಿರುವೆ. ನನ್ನ ಕ್ರೋಧದಿಂದ ಪೀಡಿತಳಾದ ನಂತರ ನಿನ್ನ ಉದ್ಧಾರವು ಮಹಾತೇಜಸ್ವಿಯಾದ, ತಪೋಬಲವುಳ್ಳ ಒಬ್ಬ ಬ್ರಾಹ್ಮಣನಿಂದಾಗುವುದು." ರಂಭೆಯು ಕೂಡಲೇ ಕಲ್ಲಾಗಿ ಬಿದ್ದಳು. ಕೋಪವನ್ನು ತಡೆಹಿಡಯಲಾಗಲಿಲ್ಲವೆಂದು ವಿಶ್ವಾಮಿತ್ರನಿಗೆ ಪಶ್ಚಾತ್ತಾಪವಾಯಿತು.<noinclude></noinclude>
9wasem2s1exx83d5zvm6l1stad6zfrt
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೩
104
89243
321251
232787
2026-05-20T07:58:24Z
Shreelatha.Halemane
7642
/* Validated */
321251
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೨೯}}</br>
{{gap}}ಶಾಪದ ಉತ್ತರಾರ್ಧವು ಪಶ್ಚಾತ್ತಾಪದ ಪರಿಣಾಮರೂಪವಾಗಿದೆ. ಉಃಶಾಪವು ಸಾಮಾನ್ಯವಾಗಿ ಯಾಚಿತವಿರುತ್ತದೆ; ಆದರೆ ರಂಭೆಯು ಅದನ್ನು ಬೇಡಿಕೊಳ್ಳುವ ಮೊದಲೇ ಈ ಉಃಶಾಪವನ್ನು ಕೊಟ್ಟ ಕಾರಣ ಅದು ಅಯಾಚಿತ ಉಃಶಾಪವಾಗಿದೆ.</br></br>
{{center|'''೧೯. ಕೌಸಲ್ಯಾ < ರಾಮ'''}}{{center|'''ಅಯೋಧ್ಯಾಕಾಂಡ/೨೧'''}}
{{gap}}ದಶರಥ ರಾಜನಿಂದ ಕೈಕೇಯಿಯು ಪಡೆದ ವರಗಳನುಸಾರ ರಾಮನು ವನವಾಸಕ್ಕೆ ಹೋಗುವದೆಂದು ನಿಶ್ಚಯಿಸಿದನು. ತನ್ನ ಮಾತೆಯ ಅನುಮತಿಯನ್ನು ಪಡೆಯಲು ಆತನು ಲಕ್ಷ್ಮಣನೊಡನೆ ಕೌಸಲ್ಯೆಯತ್ತ ಬಂದನು. ಲಕ್ಷ್ಮಣ ಮತ್ತು ಕೌಸಲ್ಯೆ ಇಬ್ಬರೂ ರಾಮನನ್ನು ಆತನ ನಿಶ್ಚಯದಿಂದ ಪರಾವೃತ್ತಗೊಳಿಸಬೇಕೆಂದು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲಗೊಂಡವು. ರಾಮನ ದೃಢನಿಶ್ಚಯವನ್ನು ತಿಳಿದುಕೊಂಡು ಕೌಸಲ್ಯೆಯು ಕೊನೆಯ ಮಾತೆಂದು (ಅಂತ್ಯದಲ್ಲಿ) ಈ ರೀತಿ ಎಂದಳು:</br>
{{gap}}"ಎಲೈ ಧರ್ಮನಿಷ್ಟನೇ! ನೀನು ಧರ್ಮಜ್ಞನು; ಕಾರಣ ನನ್ನ ಆಜ್ಞೆಯನ್ನು ಪರಿಪಾಲಿಸುವ ಧರ್ಮವನ್ನಾಚರಿಸಬೇಕಿದ್ದರೆ ರಾಜ್ಯವನ್ನು ತ್ಯಜಿಸಿ ನೀನು ಇಲ್ಲಿಯೇ ಇರು! ನನ್ನ ಶುಶ್ರೂಷೆಯಲ್ಲಿ ತೊಡಗಿ 'ಮಾತೃಸೇವೆ'ಯಂಥ ಶ್ರೇಷ್ಠಧರ್ಮವನ್ನಾಚರಿಸು. ಎಲೈ ಕಂದನೇ! ಮಾತೃಸೇವೆಯಲ್ಲಿ ನಿರತನಾಗಿ ಸ್ವಗೃಹದಲ್ಲಿಯೇ ಶುದ್ಧನಾಗಿದ್ದ ಕಾಶ್ಯಪನು ಮಹಾತಪಸ್ಸಿನಿಂದ ಯುಕ್ತನಾಗಿ ಮಾತೃಸೇವೆಯ ಫಲದಿಂದ
ಸ್ವರ್ಗಕ್ಕೆ ಹೋದನು. ದಶರಥರಾಜನು ಯಾವ ರೀತಿ ನಿನಗೆ ಪೂಜ್ಯನೋ ಅದೇ ರೀತಿ ಘನತೆಗೌರವಗಳಲ್ಲಿ ನಾನು ಸಹ ನಿನಗೆ ಪೂಜ್ಯಳು; ಆದ್ದರಿಂದ ನಾನು ಅನುಮತಿಯನ್ನು ಕೊಡಲಾರೆ; ನೀನು ವನಕ್ಕೆ ಹೋಗಬೇಡ! ನಿನ್ನನ್ನು ಅಗಲಿದ ನಂತರ ನನ್ನ ಬಾಳಿನ ಪ್ರಯೋಜನವಾದರೂ ಏನು? ತೃಷಭಕ್ಷಣೆ ಮಾಡಿದರೂ ನಿನ್ನೊಡನೆ ಇರುವದು ಕ್ಷೇಮಕರವಿರುತ್ತದೆ. ಇಷ್ಟು ಹೇಳಿಯೂ ನೀನು, ಶೋಕಾಕುಲಳಾದ ನನ್ನನ್ನು ತೊರೆದು ಕಾಡಿಗೆ ಹೋದರೆ, ನಾನು ಅಹಾರ-ಪಾನೀಯಗಳನ್ನು ತ್ಯಜಿಸಿ ಮರಣವನ್ನು ಕಾಯುವೆ; ನಿನ್ನ ವಿಯೋಗವಾದನಂತರ ನಾನು ಜೀವಿಸಿರಲು ಶಕ್ತಳಾಗಲಾರೆ!
<poem><small>
'''ತತಸ್ತ್ವಂ ಪ್ರಾಪ್ಸ್ಯಸೇ ಪುತ್ರ ನಿರಯಂ ಲೋಕವಿಶ್ರುತಮ್ |'''
'''ಬ್ರಹ್ಮಹತ್ಯಾಮಿವಾಧರ್ಮಾತ್ಸಮುದಃ ಸರಿತಾಂ ಪತಿಃ ॥೨೮॥'''</poem></small><noinclude></noinclude>
a1h7gwcn28n4zbxe53okkdqvi3i6uf5
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೪
104
89244
321252
232802
2026-05-20T07:59:15Z
Shreelatha.Halemane
7642
/* Validated */
321252
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೩೦|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
{{gap}}ಈ ರೀತಿ ನಡೆದರೆ, ಮಾತೆಗೆ ದುಃಖವನ್ನು ಕೊಟ್ಟ ಕಾರಣಕ್ಕಾಗಿ, ಅದು ಅಧರ್ಮವೆಂದೆನಿಸಿ ಸಿಂಧುಪತಿಯಾದ ಸಮುದ್ರನಿಗೆ ಬ್ರಹ್ಮಹತ್ಯೆಯ ಪಾಪವು ತಗುಲಿತು. ಅದೇ ರೀತಿ ರಾಮನೇ, ಲೋಕಕುಖ್ಯಾತ ನರಕವು ನಿನಗೆ ಪ್ರಾಪ್ತವಾಗುವುದು."</br>
{{gap}}ಇದಕ್ಕೆ ಶಾಪವೆಂದೆನ್ನಬೇಕೆ? ಪ್ರತ್ಯಕ್ಷದಲ್ಲಿ ಶಾಪವನ್ನು ಕೊಟ್ಟಿಲ್ಲ. ಹೀಗಿದ್ದರೂ ಶಾಪದ ಸ್ವರೂಪವು ಸ್ಪಷ್ಟವಾಗಿದೆ.</br>
{{gap}}ಇದು ಕಟ್ಟಳೆಯ ಶಾಪ. ಕಟ್ಟಳೆಯನ್ನು ಅಲಕ್ಷಿಸಿದ್ದರೂ ಶಾಪದ ಪರಿಣಾಮವು ಆಗಲಿಲ್ಲ; ಇದರಿಂದ ಒಂದು ಸುಗತಿಯು ಮನಸ್ಸಿನಲ್ಲಿ ಬರುತ್ತದೆ. ಶಾಪ ಕೊಡುವ ಅರ್ಹತೆಯು ಕೌಸಲ್ಯೆಗೆ ಇರಲಿಲ್ಲ; ಅಥವಾ ಪುತ್ರನ ವಿಯೋಗವನ್ನು ಸಹಿಸುವದು, ಯಾವ ಪರಿಸ್ಥಿತಿಯಲ್ಲಿಯೂ ಕೌಸಲ್ಯೆಗೆ ಸಾಧ್ಯವಿರಲಿಲ್ಲ; ಕಾರಣ ಆಕೆಯು ಅತ್ಯಂತ ತೀಕ್ಷ್ಣವಾದ ಶಬ್ದಗಳಲ್ಲಿ ತನ್ನ ಮನೋಗತವನ್ನು ವ್ಯಕ್ತಪಡಿಸಿದ್ದಾಳೆಂದು ತಿಳಿಯಬೇಕಾಗುತ್ತದೆ.</br></br>
{{center|'''೨೦. ದಶರಥ < ಕೈಕೇಯಿ, ಭರತ'''}}
{{center|'''ಅಯೋಧ್ಯಾಕಾಂಡ/೪೨'''}}
{{gap}}ವನವಾಸಕ್ಕೆ ತೆರಳಿದ ಶ್ರೀರಾಮನ ರಥದ ಧೂಳಿಯು ದೃಷ್ಟಿಪಥದಲ್ಲಿರುವವರೆಗೂ ದಶರಥರಾಜನು ಅದರತ್ತ ನೆಟ್ಟದಿಟ್ಟಿಯುಳ್ಳವನಾಗಿ ನಿಂತಿದ್ದನು. ನಂತರ ಖಿನ್ನನಾಗಿ ನೆಲಕ್ಕೆ ಉರುಳಿದನು. ಕೌಸಲ್ಯೆಯು ಆತನನ್ನು ಎಬ್ಬಿಸಿ ಬಲತೋಳನ್ನು ಹಿಡಿದುಕೊಂಡು ನಗರದತ್ತ ಮರಳಿದಳು. ಆಗ ಕೈಕೇಯಿಯು ದಶರಥನ ಎಡದಲ್ಲಿದ್ದಳು.</br>{{gap}}ಕ್ಷುಬ್ಧಮನಸ್ಸಿನಿಂದ ದಶರಥನು ಕೈಕೇಯಿಗೆ ಈ ರೀತಿ ಎಂದನು:
<poem><small>
'''ಕೈಕೇಯಿ ಮಾಮಕಾಂಗಾನಿ ಮಾ ಸ್ಪ್ರಾಕ್ಷೀಃ ಪಾಪನಿಶ್ಚಯೇ |'''
'''ನ ಹಿ ತ್ವಾಂ ದ್ರುಷ್ಟುಮಿಚ್ಛಾಮಿ ನ ಭಾರ್ಯಾ ನ ಚ ಬಾಂಧವೀ ‖೬‖'''
'''ಯೇ ಚ ತ್ವಾಮನುಜೀವಂತಿ ನಾಹಂ ತೇಷಾಂ ನ ತೇ ಮಮ |'''
'''ಕೇವಲಾರ್ಥಪರಾಂ ಹಿ ತ್ವಾಂ ತ್ಯಕ್ತಧರ್ಮಾಂ ತ್ಯಜಾಮ್ಯಹಮ್ ‖೭‖'''
'''ಅಗೃಹ್ಣಾಂ ಯಶ್ಚ ತೇ ಪಾಣೆಮಗ್ನಿಂ ಪರ್ಯಣಯಂ ಚ ಯತ್ |'''
'''ಅನುಜಾನಾಮಿ ತತ್ಸರ್ವಮಸ್ಮಿಲ್ಲೋಕೇ ಪರತ್ರ ಚ ‖೮‖'''
'''ಭರತಶ್ಚೇತ್ಪ್ರತೀತಃ ಸ್ಯಾದ್ರಾಜ್ಯಂ ಪ್ರಾಪ್ಯೇತದವ್ಯಯಮ್ |'''
'''ಯನ್ಮೇ ಸ ದದ್ಯಾತ್ಪಿತ್ರರ್ಥಂ ಮಾ ಮಾಂ ತದ್ ದತ್ತಮಾಗಮತ್ ‖೯‖'''</poem></small><noinclude></noinclude>
m6sknou3kc50aiwp3al6wla8vlgej86
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೫
104
89245
321253
232820
2026-05-20T08:00:01Z
Shreelatha.Halemane
7642
/* Validated */
321253
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೩೧}}</br>{{gap}}"ಎಲೈ ಕೈಕೇಯಿ, ನೀನು ನನ್ನನ್ನು ಸ್ಪರ್ಶಿಸಬೇಡ; ಎಲೈ ಪಾಪನಿಶ್ಚಯಿ! ನಿನ್ನ ಮುಖಾವಲೋಕನವು ನನಗೆ ಇಷ್ಟವಿಲ್ಲ. ನೀನು ನನ್ನ ಹೆಂಡತಿಯಲ್ಲ; ಯಾವ ಆಪ್ತ ಸಂಬಂಧಿಕಳೂ ಅಲ್ಲ. ನಿನ್ನನ್ನು ಆಶ್ರಯಿಸಿರುವವರೊಡನೆ ನನಗೆ ಯಾವ ಸಂಬಂಧವೂ ಇಲ್ಲ. ಧರ್ಮವನ್ನು ತ್ಯಜಿಸಿ ಕೇವಲ ಸ್ವಾರ್ಥವನ್ನು ಸಾಧಿಸುವ ನಿನ್ನನ್ನು ನಾನು ತ್ಯಜಿಸಿದ್ದೇನೆ. ನಿನ್ನ ಪಾಣಿಗ್ರಹಣ, ನಿನ್ನಿಂದ ಅಗ್ನಿಗೆ ಹಾಕಿಸಿದ ಪ್ರದಕ್ಷಿಣೆ ಇವುಗಳಿಗೆ ಇಹ-ಪರದಲ್ಲಿ ಇನ್ನು ಮುಂದೆ ಯಾವ ಅರ್ಥವೂ ಉಳಿಯಲಿಲ್ಲ. ಈ ಅಕ್ಷಯರಾಜ್ಯವನ್ನು ಪಡೆದು ಭರತನು ಸಂತೋಷಗೊಂಡು, ಪಿತನೆಂದು ನನಗಾಗಿ ಆಚರಿಸುವ ಆತನ ಶ್ರಾದ್ಧಾದಿಗಳು ನನಗೆ ತಲುಪದಿರಲಿ!"</br>
{{gap}}ದಶರಥನ ಈ ಉದ್ಗಾರಗಳನ್ನು ವಾಲ್ಮೀಕಿಯು ಶಾಪವೆಂದೆಣಿಸಿಲ್ಲ; ಆದರೆ ಅವು ಶಾಪದ ನುಡಿಗಳೇ ಆಗಿವೆ. ಸ್ವರ್ಗಸ್ಥನಾದ ದಶರಥರಾಜನು ಮಹಾದೇವನ ಅಪ್ಪಣೆಯ ಅನುಸಾರ ವಿಮಾನದಿಂದ ರಾಮಲಕ್ಷ್ಮಣರ ಭೇಟಿಗೆಂದು ಬಂದಾಗ, ರಾಮನು ದಶರಥನಿಗೆ ವಿನಂತಿಸಿದ್ದಾನೆ; ಅದರಲ್ಲಿ ಈ ಉದ್ಗಾರಗಳಿಗೆ 'ಶಾಪ'ವೆಂಬ ಶಬ್ದವನ್ನು ಬಳಸಲಾಗಿದೆ.</br></br>{{center|'''ಯುದ್ಧಕಾಂತ/೧೧೯'''}}
<poem><small>
'''ಕುರು ಪ್ರಸಾದಂ ಧರ್ಮಜ್ಞ ಕೈಕೇಯ್ಯಾ ಭರತಸ್ಯ ಚ ‖೨೫‖'''
'''ಸಪುತ್ರಾಂ ತ್ವಾಂ ತ್ಯಜಾಮೀತಿ ಯದುಕ್ತಾ ಕೈಕಯೇಂ ತ್ವಯಾ |'''
'''ಸ ಶಾಪಃ ಕೈಕೇಯೀಂ ಘೋರಃ ಸಪುತ್ರಾಂ ಸ್ಪೃಶೇತ್ಪ್ರಭೋ ‖೨೬‖'''</poem></small></br>
{{gap}}“ಎಲೈ ದರ್ಮಜ್ಞರೇ! ಕೈಕೇಯಿಗೆ ಮತ್ತು ಭರತನಿಗೆ ಕೃಪೆ ಮಾಡಿರಿ! ಪುತ್ರ ಸಮೇತ ನಾನು ನಿನ್ನನ್ನು ತ್ಯಜಿಸುತ್ತೇನೆ ಎಂದು ಕೈಕೇಯಿಗೆ ಹೇಳಿದಿರಿ; ಈ ಘೋರಶಾಪವು ಕೈಕೇಯಿಗೆ ಅಥವಾ ಆಕೆಯ ಪುತ್ರನಾದ ಭರತನಿಗೆ ತಾಗದಿರಲಿ!”</br>{{gap}}ರಾಮನ ಈ ಮೇಲಿನ ಬಿನ್ನಪವನ್ನು ದಶರಥನು ಮನ್ನಿಸಿದನು.</br>
{{gap}}ಇದು ಕಟ್ಟಳೆಯ ಶಪವಿದೆ.</br></br>
{{center|'''೨೧. ಶ್ರಾವಣ < ದಶರಥ'''}
{{center|'''ಅಯೋಧ್ಯಾಕಾಂಡ/೬೩'''}}
{{gap}}ರಾಮನು ವನವಾಸಕ್ಕೆ ಹೋಗಲಿರುವೆನೆಂದು ಶೋಕಾಕುಲನಾಗಿದ್ದ ದಶರಥನು ಕೈಕೇಯಿಗೆ ತನ್ನ ಪೂರ್ವಚರಿತ್ರೆಯಲ್ಲಿಯ ಒಂದು ಪ್ರಸಂಗವನ್ನು ಹೇಳುತ್ತಾನೆ:<noinclude></noinclude>
gdy6w5xay1ru10csxp6s5w2deccvkck
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೬
104
89246
321254
232856
2026-05-20T08:00:54Z
Shreelatha.Halemane
7642
/* Validated */
321254
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೩೨|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
{{gap}}ವೃದ್ಧರಾದ, ಅಂಧರಾಗಿದ್ದ ತಂದೆತಾಯಿಗಳಿಗಾಗಿ ಜಲಾಶಯದಿಂದ ನೀರನ್ನು ತರಲು ಕೊಡವನ್ನು ತೆಗೆದುಕೊಂಡು ಶ್ರಾವಣನು ಹೋಗಿದ್ದನು. ಅಲ್ಲಿ ದಶರಥ ರಾಜನು ಬೇಟೆಯಾಡಲು ಕಾಡಿಗೆ ಬಂದಿದ್ದನು. ದಶರಥನು ಬಿಟ್ಟ ಬಾಣವು ಶ್ರಾವಣನ ಮರ್ಮ ಸ್ಥಾನಕ್ಕೆ ತಗುಲಿ ಅವನು ಗಾಯಗೊಂಡನು. ಶ್ರಾವಣನ ವಿಲಾಪವನ್ನು ಕೇಳಿದೊಡನೆ ದಶರಥನಿಗೆ ತನ್ನಿಂದ ನಡೆದ ತಪ್ಪಿನ ಅರಿವಾಯಿತು. ಆ ವಿಲಾಪದ ಧ್ವನಿಯನ್ನು ಸಮೀಪಿಸಿದಾಗ, ಗಾಯಗೊಂಡ ಶ್ರಾವಣನು ಮರಣಣೋನ್ಮುಖವಾಗಿ ಕಸಿವಿಸಿಪಡುತ್ತಿದ್ದುದನ್ನು ದಶರಥನು ಕಂಡನು. ಅಂಥ ಅವಸ್ಥೆಯಲ್ಲಿದ್ದ ಶ್ರಾವಣನು ದಶರಥನಿಗೆ ಬಿನ್ನೈಸಿ ಇಂತೆಂದನು: “ನಾನು ನೀರು ತೆಗೆದುಕೊಂಡು ಹೋಗಲು ತುಂಬಾ ಸಮಯವಾದ್ದರಿಂದ ನನ್ನ ತಾಯಿ-ತಂದೆಯರು ಬಹಳ ಚಿಂತಾತುರರಾಗಿರಬಹುದೆಂಬ ಭಯವು ನನಗಿದೆ: ಕಾರಣ ರಾಜನೇ, ನೀನು ಬೇಗ ಹೋಗಿ ನೀರನ್ನು ಕೊಡು; ನಡೆದ ಸಮಾಚಾರವನ್ನು ಅವರಿಗೆ ತಿಳಿಸು!” ಎಂದು ಹೇಳಿದನು. ಹರಡುವ ಅಗ್ನಿ ಜ್ವಾಲೆಯು ಯಾವ ರೀತಿ ಅಡವಿಯನ್ನೆಲ್ಲ ಸುಟ್ಟುಹಾಕುತ್ತದೆಯೋ ಅದೇ ರೀತಿ ನನ್ನ ತಂದೆಯು ಕ್ರೋಧಗೊಂಡು ನಿನ್ನನ್ನು ದಹಿಸದಿರಲಿ! ಎಂಬ ಸದಿಚ್ಛೆಯನ್ನು ಸಹ ಶ್ರಾವಣನು ದಶರಥನ ಮುಂದೆ ಪ್ರಕಟಿಸಿದನು. ತನ್ನ ತಂದೆಯಿದ್ದ ಆಶ್ರಮದ ಕಾಲುದಾರಿಯನ್ನು ದಶರಥನಿಗೆ ಕೈಮಾಡಿ ತೋರಿಸಿ ಈ ರೀತಿ ಅಂದನು:
<poem><small>
'''ತಂ ಪ್ರಸಾದಯ ತ್ವಂ ನ ತ್ವಾ ಸಂಕುಪಿತಃ ಶಪೇತ್ ‖೪೫‖'''</poem></small></br>
{{gap}}"ನನ್ನ ತಂದೆಯು ಸಿಟ್ಟಾಗಿ ಶಾಪವನ್ನು ಕೊಡದಂತೆ ನೀನು ಹೋಗಿ ಉಪಚರಿಸು!" ಶ್ರಾವಣನ ಈ ಮಾತನ್ನು ಕೇಳಿ, ಆತನ ಹೇಳಿಕೆಯಂತೆ ಆತನ ಶರೀರದಲ್ಲಿ ನೆಟ್ಟ ಬಾಣವನ್ನು ಹೊರಕ್ಕೆಳೆದ ನಂತರ ತುಸು ಸಮಯದಲ್ಲಿ ಶ್ರಾವಣನು ಅಸುನೀಗಿದನು.</br>
{{gap}}ನಿಜದಲ್ಲಿ ಶಾಪ ಇನ್ನೂ ನುಡಿದಿರಲಿಲ್ಲ; ಆದರೆ ಶಾಪ ಕೊಡಬಹುದೆಂಬ ಭಯವನ್ನು ವ್ಯಕ್ತಮಾಡಲಾಗಿದೆ. ಹೀಗಿರುವುದರಿಂದ ಶಾಪದ ಸ್ವರೂಪವು ಸ್ಪಷ್ಟವಿಲ್ಲ.</br>
{{gap}}ಇದು ಕಟ್ಟಳೆಯ ಶಾಪವಾಗಿದೆ.<noinclude></noinclude>
tekdk282uwa8wb3xoo7dklo6axce7y0
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೬೯
104
89258
321255
232870
2026-05-20T08:01:37Z
Shreelatha.Halemane
7642
/* Validated */
321255
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೪೫}}</br>
{{center|'''೩೧. ಮತಂಗ < ವಾಲಿ, ವಾನರ'''}}
{{center|'''ಕಿಷ್ಕಿಂಧಾಕಾಂಡ/೧೧'''}}
{{gap}}ವಾಲಿಯ ಪ್ರಚಂಡ ಪೌರುಷ, ಸಾಮರ್ಥ್ಯ, ಧೈರ್ಯಗಳ ಬಗ್ಗೆ ಸುಗ್ರೀವನು ರಾಮನಿಗೆ ಹೇಳುತ್ತಿದ್ದಾನೆ:</br>
{{gap}}"ವರಪ್ರಾಪ್ತಿಯಾದನಂತರ ದುಂದುಭಿ ಎಂಬ ರಾಕ್ಷಸನು ಉನ್ಮತ್ತನಾಗಿದ್ದನು. ತನ್ನ ಶಕ್ತಿ ಬಲಗಳ ಬಗ್ಗೆ ಆತನಿಗೆ ಬಹಳ ಜಂಬವುಂಟಾಗಿತ್ತು. ಕಾಳಗದಲ್ಲಿ ತನ್ನನ್ನು ಸೋಲಿಸುವವರು ಯಾರೂ ಇಲ್ಲ. ತಾನು ಅಜಿಂಕ್ಯನೆಂಬ ಅಹಂಕಾರದಿಂದ ಮೆರೆಯುತ್ತಿದ್ದನು. ಆತನು ಸಮುದ್ರ ರಾಜನನ್ನು ಯುದ್ಧಕ್ಕೆ ಆಹ್ವಾನಿಸಿದನು. ಸಮುದ್ರರಾಜನು 'ನಿನ್ನೊಡನೆ ಯುದ್ಧ ಮಾಡಲುನಾನು ಶಕ್ತನಲ್ಲ; 'ಹಿಮವಾನ' ಪರ್ವತರಾಜನು ನಿನ್ನೊಡನೆ ಯುದ್ಧಕ್ಕೆ ತಕ್ಕವನು" ಎಂದು ಹೇಳಿದನು. ದುಂದುಭಿಯು 'ಹಿಮವಾನ'ನನ್ನು ಯುದ್ದಕ್ಕೆ ಆಹ್ವಾನಿಸಿದನು. "ತಪಸ್ವಿಗಳಿಗೆ ಆಶ್ರಯಸ್ಥಾನನಾದ ನಾನು ರಣರಂಗದಲ್ಲಿ ಪ್ರವೀಣನಲ್ಲ; ಕಿಷ್ಕಿಂಧಾ ಪಟ್ಟಣದಲ್ಲಿರುವ ವಾಲಿಯು ನಿನಗೆ ಸಾಟಿಯಾದ ಏಕಮೇವ ವೀರನಿದ್ದಾನೆಂದು" ಹೇಳಿದನು. ದುಂದುಭಿಯು ಕೋಣದ ರೂಪವನ್ನು ಧರಿಸಿ ಕಿಷ್ಕಿಂಧೆಯ ಬಳಿಯಲ್ಲಿಯ ಮರಗಿಡಗಳನ್ನು ಧ್ವಂಸಗೊಳಿಸುತ್ತ, ಭೂಮಿಯು ನಡುಗುವಂತೆ ಭೀಕರವಾಗಿ ಗುಟುರುಹಾಕುತ್ತ ವಾಲಿಯ ಬಳಿ ಬಂದನು. ಅದನ್ನು ಕೇಳಿ ವಾಲಿಯು ಆತನಿಗೆ ಎದುರಾದನು. ದುಂದುಭಿಯ ಅತಿಶಯ ಉನ್ಮತ್ತ, ಉದ್ಧಟ ಮಾತುಗಳನ್ನು ಕೇಳಿ ವಾಲಿಯು ದುಂದುಭಿಯನ್ನು ಕೊಂಬುಗಳಿಂದ ಎತ್ತಿ ದೂರಕ್ಕೆ ಎಸೆದನು. ಚೆನ್ನಾಗಿ ಒದೆ ಹಾಕಿ, ಮುಷ್ಟಿಗಳಿಂದ ಗುದ್ದಿ, ಮೊಳಕಾಲಿನಿಂದ ಜಜ್ಜಿ, ಮರಗಳಿಂದ ಹೊಡೆದು ಆತನನ್ನು ಹಣ್ಣುಗಾಯಿ-ನೀರುಗಾಯಿಯನ್ನಾಗಿ ಮಾಡಿದನು. ದುಂದುಭಿಯ ಕಿವಿಮೂಗುಗಳಿಂದ ರಕ್ತಸ್ರಾವವಾಗಹತ್ತಿತು. ಆಗ ವಾಲಿಯು ಆತನನ್ನು ಸಾಯಿಸಿ ಯೋಜನದಷ್ಟು ದೂರ ಎಸೆದಾಗ, ಆ ಕೋಣದ ಬಾಯಿಂದ ತೊಟಕುತ್ತಿದ್ದ ರಕ್ತದ ಹನಿಗಳು ಮತಂಗ ಋಷಿಯ ಆಶ್ರಮದಲ್ಲಿ ಬಿದ್ದವು. ಇದನ್ನು ವೀಕ್ಷಿಸಿದ ಋಷಿಗೆ ತಾಳಲಾರದ ಕೋಪ ಬಂದಿತು. ನಡೆದುದೇನೆಂಬುದನ್ನು ನೋಡಿದಾಗ ಗುಡ್ಡದ ಗಾತ್ರದಷ್ಟು ಒಂದು ಕೋಣವು ಕುಸಿದುಬಿದ್ದದ್ದು ಕಂಡಿತು. ಈ ಕೃತ್ಯವು ಕಪಿಯದೆಂದು ಮುನಿಯು ತಪೋಬಲದಿಂದ ಅರಿತುಕೊಂಡು ಆ ವಾನರನಿಗೆ ಶಪಿಸಿದನು:
<poem><small>
'''ಇಹ ತೇನಾಪ್ರವೇಷ್ಟವ್ಯಂ ಪ್ರವಿಷ್ಟಸ್ಯ ವಧೋ ಭವೇತ್ |'''
'''ಮತ್ಸಂಶ್ರಯಂ ಯೇನ ದೂಷಿತಂ ರುಧಿರಸ್ರವೈಃ ‖೫೩‖'''</poem></small><noinclude></noinclude>
5jyyn0dvazobdjzh7b9g8bhec60wta6
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೦
104
89259
321256
232906
2026-05-20T08:01:59Z
Shreelatha.Halemane
7642
/* Validated */
321256
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೪೬|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
<poem><small>
'''ಕ್ಷಿಪತಾ ಪಾದಪಾಶ್ಚೇಮೇ ಸಂಭಗ್ನಾಶ್ವಾಸುರೀಂ ತನುಮ್ |'''
'''ಸಮಂತಾದಾಶ್ರಮಂ ಪೂರ್ಣಂ ಯೋಜನಂ ಮಾಮಕಂ ಯದಿ ‖೫೪‖'''
'''ಆಗಮಿಷ್ಯತಿ ದುರ್ಬುದ್ಧಿರ್ವ್ಯಕ್ತಂ ಸ ನ ಭವಿಷ್ಯತಿ |'''
'''ಯೇ ಚಾಸ್ಯ ಸಚಿವಾಃ ಕೇಚಿತ್ಸಂಶ್ರಿತ ಮಾಮಕಂ ವನಮ್ ‖೫೫‖'''
'''ನ ಚ ತೈರಿಹ ವಸ್ತವ್ಯಂ ಶ್ರುತ್ವಾ ಯಾಂತು ಯಥಾಸುಖಮ್ |'''
'''ತೇsಪಿ ವಾ ಯದಿ ತಿಷ್ಠಂತಿ ಶಪಿಷ್ಯೇ ತಾನಪಿ ಧ್ರುವಮ್ ‖೫೬‖'''
'''ವನೇಸ್ಮಿನ್ಮಾಮಕೇ ನಿತ್ಯಂ ಪುತ್ರವತ್ಪರಿರಕ್ಷಿತೇ |'''
'''ಪತ್ರಾಂಕುರವಿನಾಶಾಯ ಫಲಮೂಲಭವಾಯ ಚ ‖೫೭‖'''
'''ದಿವಸಶ್ಚಾದ್ಯ ಮರ್ಯಾದಾ ಯಂ ದ್ರಷ್ಟ್ವಾ ಶ್ಲೋsಸ್ಮಿ ವಾನರಮ್ |'''
'''ಬಹುವರ್ಷಸಹಸ್ರಾಣಿ ಸ ವೈ ಶೈಲೋ ಭವಿಷ್ಯತಿ ‖೫೮‖'''</poem></small></br>
{{gap}}"ಯಾರಿಂದ ಈ ದುಷ್ಕರ್ಮವು ನಡದಿದೆಯೋ ಆತನು ಈ ಸ್ಥಳವನ್ನು ಪ್ರವೇಶಿಸಕೂಡದು. ನನ್ನ ಆಶ್ರಮದ ಸುತ್ತಲಿರುವ ವನವನ್ನು ರಕ್ತಸ್ರಾವದಿಂದ ಯಾವನು ದೂಷಿತಗೊಳಿಸಿದನೋ ಅವನು ಇಲ್ಲಿ ಪ್ರವೇಶಿಸಿದರೆ ಅವನು ಸತ್ತು ಹೋಗುವನು. ರಾಕ್ಷಸರ ದೇಹವನ್ನು ಇಲ್ಲಿಗೆ ಎಸೆಯುವಾಗ ಯಾವನು ಈ ವೃಕ್ಷಗಳನ್ನು ಮುರಿದುಹಾಕಿದ್ದಾನೆಯೋ ಆತನು ನನ್ನ ಆಶ್ರಮದಿಂದ ಒಂದು ಯೋಜನ ಅಂತರದಲ್ಲಿರಬೇಕು. ಅದಕ್ಕೂ ಹತ್ತಿರದಲ್ಲಿ ಬಂದರೆ ಆ ದುರ್ಬುದ್ಧಿಯು ಜೀವಸಹಿತ ಉಳಿಯಲಾರನು. ಅವನ ಮಂತ್ರಿಗಳು ಯಾರಾದರೂ ಈಗ ನನ್ನ ವನದಲ್ಲಿ ಆಶ್ರಯಿಸುತ್ತಿದ್ದರೆ ನನ್ನ ಈ ವಚನಗಳನ್ನು ಕೇಳಿ ಕೂಡಲೇ ಇಲ್ಲಿ ಉಳಿಯದೇ ಮನಬಂದೆಡೆ ಹೊರಟುಹೋಗಬೇಕು. ಅವರು ಇಲ್ಲಿಯೇ ಉಳಿದರೆ, ನಾನು ಅವರಿಗೂ ಶಾಪಕೊಡುವೆ. ಸ್ವಂತ ಮಗನನ್ನು ಪೋಷಿಸುವಂತೆ ನಾನು ಈ ವನವನ್ನು ನೋಡಿಕೊಂಡಿದ್ದೇನೆ. ಈ ವನದಲ್ಲಿ ಕಪಿಗಳ ಆಗಮನವು ಹಣ್ಣು, ಚಿಗುರು, ಎಲೆ, ಬೇರು ಇವೆಲ್ಲವುಗಳ ನಾಶಕ್ಕೆ ಕಾರಣವಾಗುತ್ತದೆ. ಒಂದು ದಿನದ ಅವಕಾಶವನ್ನು ಕೊಡುತ್ತೇನೆ. ವಾಲಿಯ ಸಂಬಂಧವಿದ್ದ ವಾನರನು ನನ್ನ ಕಣ್ಣಿಗೆ ನಾಳೆಯಿಂದ ಬಿದ್ದರೆ ಆತನು ಬಹುವರ್ಷಗಳವರೆಗೆ ಪರ್ವತವಾಗಿ ಬೀಳುವನು."</br>
{{gap}}ಈ ಶಾಪವಾಣಿಯನ್ನು ಅರಿತು ವಾಲಿಯು ಭಯಭೀತನಾದನು. ಅವನು ಆಶ್ರಮಕ್ಕೆ ಹೋಗಿ ಮತಂಗಋಷಿಯನ್ನು ಪ್ರಾರ್ಥಿಸಿದನು; ಆದರೆ ಮತಂಗನು ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ; ಅಂದಿನಿಂದ ವಾಲಿಯು ಋಷ್ಯ ಮೂಕ ಪರ್ವತದ ಸಮೀಪಕ್ಕೆ ಹೋಗದಂತಾದನು.<noinclude></noinclude>
gxbtgo4ngbpj6a0dn0afp312uu7nrv1
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೨
104
89261
321257
232919
2026-05-20T08:02:59Z
Shreelatha.Halemane
7642
/* Validated */
321257
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೪೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಇರಲಿಲ್ಲ; ನದಿಗಳಲ್ಲಿ ನೀರು ಇರಲಿಲ್ಲ. ಕೋಣ, ಆನೆ, ಹುಲಿ ಮೊದಲಾದ ಪ್ರಾಣಿಗಳು, ಪಕ್ಷಿಗಳು ಕೂಡ ಇರಲಿಲ್ಲ. ಇಂಥ ಬರಡಾದ ವನಪ್ರದೇಶದಲ್ಲಿ 'ಕಂಡು' ಎಂಬ ತಪೋಧನನಾದ ಋಷಿಯು ವಾಸವಾಗಿದ್ದನು. ಈ ಋಷಿಯ ಹತ್ತು ವರ್ಷ ಪ್ರಾಯದ ಮಗನು ಮರಣಹೊಂದಿದ್ದನು; ಈ ಕಾರಣದಿಂದ ಋಷಿಯು ಕ್ರುದ್ಧನಾಗಿದ್ದನು. ಆತನ ಸಿಟ್ಟು ಮತ್ತು ತಪಸ್ಸಿನ ನಿಯಮಗಳು ಬಹಳೇ ಕಠೋರವಿದ್ದುದರಿಂದ ಅವನ ಕಣ್ಣೆದುರಿಗೆ ಹೋಗುವ ಧೈರ್ಯವು ಯಾರಿಗೂ ಇರಲಿಲ್ಲ.
<poem><small>
'''ತೇನ ಧರ್ಮಾತ್ಮನಾ ಶಪ್ತಂ ಕೃತ್ಸ್ನಂ ತತ್ರ ಮಹದ್ವನಮ್ ‖೧೪‖'''
'''ಅಶರಣ್ಯಂ ದುರಾಧರ್ಷಂ ಮೃಗಪಕ್ಷಿವಿವರ್ಜಿತಮ್ ‖೧೫‖'''</poem></small></br>
{{gap}}"ಈ ಪ್ರಚಂಡ ವನವು ಮೃಗರಹಿತ, ಪಕ್ಷಿರಹಿತವಾಗುವದು; ಇದು ಯಾರಿಗೂ, ಆಶ್ರಯಸ್ಥಾನವಾಗಲಾರದು; ಈ ವನದಲ್ಲಿ ಪ್ರವೇಶಿಸುವದು ದುಸ್ತರವಾಗುವದು" ಎಂಬ ಶಾಪವನ್ನು ಆ ಮಹಾತ್ಮನಾದ ಋಷಿಯು ಈ ವನಕ್ಕೆ ಕೊಟ್ಟಿದ್ದನು.</br>
{{gap}}ಇಂಥ ಭೀಕರ ಪ್ರದೇಶದಲ್ಲಿಯೂ ಪ್ರವೇಶಿಸಿ ಹನುಮಂತನು ಸೀತೆಯನ್ನು ಶೋಧಿಸಿದನು; ಆದರೆ ಸೀತೆಯು ಅಥವಾ ರಾವಣನ ಸುಳಿವು ಸಿಗಲಿಲ್ಲ.</br>
{{gap}}ಈ ವನದ ಹೆಸರಿನ ಉಲ್ಲೇಖವಿಲ್ಲ.</br></br>
{{center|'''೩೩. ಋಷಿ < ಪುಂಜಿಕಸ್ಥಲಾ'''}}
{{center|'''ಕಿಷ್ಕಿಂಧಾಕಾಂಡ/೬೬'''}}
{{gap}}ಜಾಂಬವಾನನು ಹನುಮಂತನ ಜನ್ಮದ ಕಥೆಯನ್ನು ಆತನಿಗೆ ಹೇಳುತ್ತಾನೆ:</br>
{{gap}}"ಅಂಜನಾ (ಅಂಜನಿ) ಇವಳು ಕೇಸರಿ ಎಂಬ ವಾನರನ ಪತ್ನಿ. ಪೂರ್ವ ಜನ್ಮದಲ್ಲಿ ಅವಳು ಪೂಜಿಕಸ್ಥಲಾ ಎಂಬ ಹೆಸರಿನ ಖ್ಯಾತ ಅಪ್ಸರೆಯಾಗಿದ್ದಳು.
<poem><small>
'''ವಿಖ್ಯಾತಾ ತ್ರಿಷು ಲೋಕೇಷು ರೂಪೇಣಾಪ್ರತಿಮಾ ಭುವಿ |'''
'''ಅಭಿಶಾಪಾದಭೂತ್ತಾತ ಕಪಿತ್ವೇ ಕಾಮರೂಪಿಣೀ ‖೯‖'''</poem></small></br>
{{gap}}"ಇಡೀ ಭೂಲೋಕದಲ್ಲಿ ಅವಳು ಅತ್ಯಂತ ರೂಪವತಿಯೆಂದು ತ್ರಿಲೋಕದಲ್ಲಿ ಖ್ಯಾತಿ ಹೊಂದಿದ್ದಳು. ಋಷಿಯ ಶಾಪದಿಂದ ಅವಳು ವಾನರಜನ್ಮವನ್ನು ಪಡೆದಿದ್ದಳು. ಏಕೆಂದರೆ, ಅವಳು ಆ ಋಷಿಯನ್ನು ಅವಮಾನಿಸಿದ್ದಳು."<noinclude></noinclude>
1iabsz0xrsysxav8d7ugchauk6cxc9e
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೩
104
89262
321258
232927
2026-05-20T08:04:07Z
Shreelatha.Halemane
7642
/* Validated */
321258
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೪೯}}</br>
{{gap}}ಈ ಶಾಪವಿದ್ದರೂ ಅವಳು ತನ್ನ ಇಚ್ಛೆಯನುಸಾರ ರೂಪವನ್ನು ಬದಲಾಯಿಸ ಬಹುದಿತ್ತು. ಒಮ್ಮೆ ಅವಳು ಒಂದು ಪರ್ವತದ ತುದಿಯಲ್ಲಿದ್ದಾಗ ವಾಯುವು ಆಕೆಯ ವಸ್ತ್ರವನ್ನು ಹಾರಿಸಿದನು. ಆಕೆಯ ಸುಂದರವಾದ ಅಂಗಾಂಗಗಳನ್ನು ಕಂಡು ಕಾಮಪರವಶನಾದ ವಾಯುವು, ಆಕೆಯನ್ನು ಆಲಿಂಗಿಸಿ ತನ್ನ ತೇಜಸ್ಸನ್ನು (ವೀರ್ಯ) ಅವಳಲ್ಲಿ ಸ್ಥಾಪಿಸಿದನು. ಆಗ ಅವಳು ಗೊಂದಲಕ್ಕೀಡಾದಳು. ಪಾತಿವ್ರತ್ಯವು ಭ್ರಷ್ಟವಾಯಿತೆಂಬ ಭೀತಿಯು ಅವಳಿಗಾಯಿತು. ಆ ಭೀತಿಯು ವ್ಯರ್ಥವಾಗಿದೆ ಎಂದು ವಾಯುವು ಆಕೆಗೆ ತಿಳಿಸಿ ಹೇಳಿದನು. "ಮಾನಸಿಕ ಭೋಗದಿಂದ ತನ್ನ ತೇಜಸ್ಸನ್ನು ಅವಳಲ್ಲಿ ಇಟ್ಟ ಕಾರಣ ಆಕೆಗೆ ಅತ್ಯಂತ ಶೂರವೀರನಾದ, ಮಹಾತೇಜಸ್ವಿಯಾದ, ಬುದ್ಧಿವಂತನಾದ, ಪರಾಕ್ರಮಿಯಾದ ಮಗನು ಹುಟ್ಟುವನು; ವಾಯುವಿನಂತೆ ಅವನು ಗಗನದಲ್ಲಿ ಸಂಚರಿಸಬಲ್ಲನು. ಸಮುದ್ರವನ್ನು ಉಲ್ಲಂಘಿಸಬಲ್ಲನು" ಎಂಬ ಆಶ್ವಾಸನೆಯನ್ನು ಆಕೆಗೆ ಕೊಟ್ಟನು. ಅಕೆಯ ಮಗನೆಂದರೆ ಹನುಮಂತ.</br>
{{gap}}ಈ ಶಾಪವನ್ನು ಕೊಟ್ಟ ಋಷಿಯ ಹೆಸರಿನ ಉಲ್ಲೇಖವಿಲ್ಲ. ಯಾವ ಕಾರಣಕ್ಕಾಗಿ ಶಾಪವನ್ನು ಕೊಟ್ಟಿದ್ದನು ಎಂಬುದರ ಮಾಹಿತಿಯೂ ಇಲ್ಲ. ಆಕೆಯ ಬಿನ್ನಹದ ಮೇರೆಗೆ ಋಷಿಯು ಉಃಶಾಪವನ್ನು ಕೊಟ್ಟಿದ್ದಾನೆ; ಆದ್ದರಿಂದ ಅವಳು ತನ್ನ ಇಷ್ಟದಂತೆ ವಾನರರೂಪವನ್ನು ಇಲ್ಲವೇ ಮನುಷ್ಯ ರೂಪವನ್ನು ಧರಿಸ ಬಹುದಿತ್ತು.</br>
{{gap}}(ಶ್ರೀರಾಮಕೋಶಾಂತರ್ಗತ ಹನುಮಾನಕೋಶ, ಪು.೨)</br></br>
{{center|'''೩೪. ? < ಲಂಕಾದೇವಿ'''}}
{{center|'''ಸುಂದರಕಾಂಡ/೩'''}}
{{gap}}ಲಂಕಾದೇವಿಯು ಹನುಮಂತನಿಗೆ ತನ್ನ ಚರಿತ್ರೆಯನ್ನು ಹೇಳುತ್ತಾಳೆ:</br>
{{gap}}ಹನುಮಂತನು ಲಂಕೆಯತ್ತ ಹಾರಿ ಹೋಗುತ್ತಿದ್ದಾಗ ಲಂಕಾನಗರಿಯು ಅಕರಾಳ ವಿಕರಾಳ ಸ್ತ್ರೀರೂಪವನ್ನು ಧರಿಸಿ, ಭಯಂಕರವಾಗಿ ಗರ್ಜಿಸುತ್ತ ಹನುಮಂತನ ಮುಂದೆ ಬಂದು ನಿಂತಳು. ರಾವಣನ ಸೈನ್ಯದಿಂದ ರಕ್ಷಿಸಲ್ಪಡುತ್ತಿದ್ದ ಲಂಕೆಯಲ್ಲಿ ಹನುಮಂತನಿಗೆ ಪ್ರವೇಶವು ಸಾಧ್ಯವಿಲ್ಲವೆಂದು ನಿಖರವಾಗಿ ಹೇಳಿದಳು. ಹನುಮಂತನ ಆಗಮನದ ಉದ್ದೇಶವನ್ನು ಅವಳು ಕೇಳಿದಾಗ, ಆತನು 'ಸತ್ಯವನ್ನು ಹೇಳುವೆ' ಎಂಬ ಆಶ್ವಾಸನೆಯನ್ನು ಕೊಟ್ಟು, ಅವಳು ಯಾರೆಂಬುದನ್ನು ಮೊದಲು ಹೇಳಬೇಕೆಂದು ಆಗ್ರಹಪಟ್ಟನು. ಅವಳು ಕೋಪಗೊಂಡು ಈ ರೀತಿ ಅಂದಳು:<noinclude></noinclude>
hnqdmuabs6q6v6ivuiodlin4h8awxqx
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೪
104
89263
321259
232942
2026-05-20T08:04:29Z
Shreelatha.Halemane
7642
/* Validated */
321259
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೫೦|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>"ನಾನು ಅಜಿಂಕ್ಯಳು; ಮಹಾತ್ಮನಾದ, ರಾಕ್ಷಸಾಧಿಪತಿಯಾದ ರಾವಣನ ಆಜ್ಞೆಯನ್ನು ಪಾಲಿಸುತ್ತಿದ್ದೇನೆ. ಅವನ ಆಜ್ಞೆಯಂತೆ ನಾನು ಲಂಕಾಪಟ್ಟಣವನ್ನು ರಕ್ಷಿಸುತ್ತಿದ್ದೇನೆ. ನನ್ನನ್ನು ಕಡೆಗಣಿಸಿ ನೀನು ಈ ನಗರವನ್ನು ಪ್ರವೇಶಿಸುವದು ಎಂದಿಗೂ ಸಾಧ್ಯವಿಲ್ಲ. ಇಂದು ನನ್ನಿಂದ ನಿನ್ನ ವಧೆಯಾಗಲಿರುವದು. ನೀನು ಅಸುನೀಗಿ ದೀರ್ಘವಾಗಿ ನಿದ್ರಿಸುವೆ. ನಾನೇ ಲಂಕಾದೇವಿ" ಎಂದಳು. ಆಗ ಹನುಮಂತನು, 'ಲಂಕಾ ನಗರವನ್ನು ಸುಮ್ಮನೆ ನೋಡಿಕೊಂಡು ಹೋಗುವ ಇಚ್ಛೆ ನನಗಿದೆ' ಎಂದು ಪ್ರಕಟಿಸಿದಾಗ ಆಕೆಯು ಭಯಂಕರವಾಗಿ ಗರ್ಜಿಸಿ ಆತನಿಗೆ ಬಲವಾದ ಏಟನ್ನು ಕೊಟ್ಟಳು. ಆಕೆಯು 'ಸ್ತ್ರೀ' ಇದ್ದುದರಿಂದ ಕೊಲ್ಲಬಾರದೆಂದು ಹನುಮಂತನೂ ಆಕೆಯ ಕೆನ್ನೆಗೆ ಬಲವಾಗಿ ಹೊಡೆದನು. ಆ ಏಟಿನಿಂದ ಹತಬಲಳಾಗಿ ಆ ನಿಶಾಚರಿಯು ಭೂಮಿಗೆ ಧೊಪ್ಪನೆ ಬಿದ್ದಳು. ಹನುಮಂತನಿಗೆ ಅವಳ ಬಗ್ಗೆ ಕನಿಕರವುಂಟಾಯಿತು. ಅವಳು ಬಿಕ್ಕಿಬಿಕ್ಕಿ ಅಳುತ್ತ ತನ್ನ ಪರಾಜಯವನ್ನು ಒಪ್ಪಿಕೊಂಡಳು. ಹನುಮಂತನಿಗೆ ಪ್ರಸನ್ನನಾಗಲು ಪ್ರಾರ್ಥಿಸಿ "ಅತಿಬಲಾಢ್ಯ ಪುರುಷರಿಗೆ ಶೋಭಿಸುವ ಹಾಗೆ ಶಾಸ್ತ್ರಮರ್ಯಾದೆಯನ್ನನುಸರಿಸಿ ಕ್ಷಮೆ ತೋರಬೇಕೆಂದು" ಹನುಮಂತನನ್ನು ಯಾಚಿಸಿದಳು ಮತ್ತು ಮುಂದೆ ಈ ರೀತಿ ಹೇಳಿದಳು: 'ಬ್ರಹ್ಮದೇವನು ನನಗೆ ವರವನ್ನು ಕೊಟ್ಟಿದ್ದಾನೆ. ಯಾವ ವಾನರನು ಎಂದು ತನ್ನ ಶೌರ್ಯದಿಂದ ನಿನ್ನನ್ನು ಸೋಲಿಸುವನೋ ಅಂದಿನಿಂದ ರಾಕ್ಷಸ ಕುಲಕ್ಕೆ ಭಯವಿದೆ.' ನಿನ್ನ ಭೇಟಿಯಿಂದ ಆ ಸಮಯವು ಬಂದೊದಗಿದೆ. ಸೀತೆಯ ನಿಮಿತ್ತದಿಂದ ದುರಾತ್ಮನಾದ ರಾವಣನ ಮತ್ತು ಸಕಲ ರಾಕ್ಷಸರ ವಿನಾಶಕಾಲವು ಸಮೀಪಿಸಿದೆ. ಎಲೈ ಹನುಮಂತನೇ, ನೀನು ಲಂಕಾನಗರವನ್ನು ಪ್ರವೇಶಿಸು; ನಿನ್ನ ಇಷ್ಟಕಾರ್ಯವನ್ನು ಪೂರೈಸು!" ಎಂದು ಲಂಕಾದೇವಿಯು ಹೇಳಿದಳು.
<poem><small>
'''ಪ್ರವಿಶ್ಯ ಶಾವೋಪಹತಾಂ ಹರೀಶ್ವರ |'''
'''ಪುರೀಂ ಶುಭಾಂ ರಾಕ್ಷಸಮುಖ್ಯಪಾಲಿತಾಮ್ ‖೫೧‖'''</poem></small></br>
{{gap}}ಪ್ರಮುಖ ರಾಕ್ಷಸರಿಂದ ರಕ್ಷಿಸಲ್ಪಟ್ಟ, ಶಾಪಗ್ರಸ್ತವಾದ ಆ ನಗರವನ್ನು ಪ್ರವೇಶಿಸು. ಲಂಕಾದಹನದ ವರ್ಣನೆಯಲ್ಲಿಯೂ ಈ ಕೆಳಗಿನ ಉಲ್ಲೇಖವು ಕಂಡುಬರುತ್ತದೆ:
<poem><small>
'''ಹನೂಮತಃ ಕ್ರೋಧಬಲಾಭಿಭೂತಾ |'''
'''ಬಭೂವ ಶಾವೋಪಹತೇವ ಲಂಕಾ ‖'''</poem></small>{{gap|18em}}'''(ಸುಂದರಕಾಂಡ, ೫೪-೪೧)'''<noinclude></noinclude>
nu10ezjm99rc8p4pd4kn0kxrhk33vz2
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೫
104
89264
321260
233025
2026-05-20T08:05:18Z
Shreelatha.Halemane
7642
/* Validated */
321260
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೫೧}}</br>
{{gap}}ಹನುಮಂತನ ಕ್ರೋಧದಿಂದ ಮತ್ತು ಬಲದಿಂದ ಪೀಡಿತವಾದ ಅ ಲಂಕಾ ನಗರವು ಅಗ್ನಿಜ್ವಾಲೆಗಳಿಂದ ಮುಸುಕಿಹೋಯಿತು. ಯೋಧರೆಲ್ಲರೂ ಚೆಲ್ಲಾಪಿಲ್ಲಿಯಾದರು. ಲಂಕಾನಗರವು ಶಾಪದಗ್ಧವಾದಂತೆ ಕಂಡಿತು.</br>
{{gap}}'ಶಾಪೋಪಹತ'ವೆಂದು ಲಂಕೆಯ ಉಲ್ಲೇಖವು ರಾಮಾಯಣದಲ್ಲಿ ಬಂದಿದ್ದರೂ, ಅದಕ್ಕೆ ಯಾರು ಶಾಪ ಕೊಟ್ಟರು? ಏಕೆ ಕೊಟ್ಟರು? ಎಂಬ ಸಂಗತಿಗಳು ಸ್ಪಷ್ಟವಾಗಿಲ್ಲ. ಶಾಪಮುಕ್ತಿಯ ಸಮಯವು ನಿರ್ಧರಿತವಿದ್ದರೂ ಶಾಪದ ಸ್ವರೂಪವು ಏನಿತ್ತೆಂಬುದು ಸ್ಪಷ್ಟವಗಿಲ್ಲ.</br></br>
{{center|'''೩೫. ಬ್ರಹ್ಮದೇವನು < ರಾವಣ'''}}
{{center|'''ಯುದ್ಧಕಾಂಡ/ ೧೩'''}}
{{gap}}ರಾವಣನು ತನ್ನ ಜೀವನದಲ್ಲಿಯ ಒಂದು ಅತಿಗೌಪ್ಯವಿದ್ದ ಘಟನೆಯನ್ನು ಮಹಾಪಾರ್ಶ್ವನ ಮುಂದೆ ಹೇಳುತ್ತಾನೆ:</br>
{{gap}}ಸೀತೆಯನ್ನು ಅಪಹರಿಸಿ ತಂದನಂತರ ಆಕೆಯನ್ನು ಭದ್ರವಾದ ಕಾವಲಿನಲ್ಲಿ ಇಡಲಾಗಿತ್ತು. ಸೀತೆಯ ವಿಷಯದಲ್ಲಿ ರಾವಣನು ಕಾಮಾತುರನಾಗಿ ಪೀಡಿತನಾಗಿದ್ದನು. ಆಗ ಆತನು ರಾಜಸಭಿಕರನ್ನು ಕರೆದು ತನ್ನ ಮನೋಗತವನ್ನು ಪ್ರಕಟಿಸಿದನು. ಆಗ ಆತನ ನಿಷ್ಠೆಯಲ್ಲಿದ್ದವರು ಆತನ ಇಚ್ಛೆಗೆ ತಲೆದೂಗಿದರು. ರಾಮನನ್ನು ವಧಿಸಿ, ಸೀತೆಯು ಸದಾವಕಾಲವೂ ರಾವಣನ ಭೋಗಕ್ಕೆ ದೊರಕುವಂತೆ ಮಾಡುವ ಪ್ರತಿಜ್ಞೆಯನ್ನು ಕುಂಭಕರ್ಣನು ಮಾಡಿದನು. ಒಬ್ಬ ಮಂತ್ರಿಯಾದ ಮಹಾಪಾರ್ಶ್ವನೆಂಬಾತನು, ರಾವಣನು ಸೀತೆಯನ್ನು ಬಲಾತ್ಕರಿಸಬೇಕೆಂದು ಪ್ರೋತ್ಸಾಹಿಸಿದನು. ಆ ಸಂದರ್ಭದಲ್ಲಿ ರಾವಣನು ಆತನಿಗೆ ಈ ರೀತಿ ಹೇಳಿದನು: 'ಹಿಂದೊಮ್ಮೆ ಗಗನದಲ್ಲಿಯ ಅಗ್ನಿಜ್ವಾಲೆಯಂತಿದ್ದ ಪುಂಜಿಕಸ್ಥಲೆ ಎಂಬ ಅಪ್ಸರೆಯು ನನ್ನ ಭೀತಿಯಿಂದ ಮರೆಮರೆಯಾಗಿ, ಬ್ರಹ್ಮದೇವನ ಸ್ಥಾನಕ್ಕೆ ಹೋಗುತ್ತಿರುವದನ್ನು ನಾನು ಕಂಡೆನು; ಕೂಡಲೇ ನಾನು ಅವಳನ್ನು ಬಲಾತ್ಕಾರದಿಂದ ಭೋಗಿಸಿ ವಸ್ತ್ರಹೀನಳನ್ನಾಗಿ ಮಾಡಿಬಿಟ್ಟೆನು. ಆಗ ಕಮಲಿನಿಯಂತೆ ಕಂಪಿಸುತ್ತ ಅವಳು ಬ್ರಹ್ಮಲೋಕಕ್ಕೆ ಹೋದಳು. ನನ್ನ ಕೃತ್ಯವು ಬ್ರಹ್ಮನಿಗೆ ತಿಳಿದಾಗ ಆತನು ಸಿಟ್ಟಿನಿಮದ ಈ ರೀತಿ ನುಡಿದನು-
<poem><small>
'''ಅದ್ಯಪ್ರಭೃತಿ ಯಾಮನ್ಯಾಂ ಬಲಾನ್ನಾರೀಂ ಗಮಿಷ್ಯಸಿ |'''
'''ತದಾ ತೇ ಶತಧಾ ಮೂರ್ಧಾ ಫಲಿಷ್ಯತಿ ನ ಸಂಶಯಃ ‖೧೪‖'''</poem></small><noinclude></noinclude>
03yg1g8deeygszzi1ue44qxsslk3uub
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೬
104
89265
321261
233035
2026-05-20T08:05:57Z
Shreelatha.Halemane
7642
/* Validated */
321261
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೫೨|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
{{gap}}"ಈ ದಿನದಿಂದ ಯಾವದೇ ಪರಸ್ತ್ರೀಯನ್ನು ಬಲಾತ್ಕಾರದಿಂದ ಭೋಗಿಸಿದರೆ ತಕ್ಷಣ ನಿನ್ನ ತಲೆ ನೂರು ಹೋಳಾಗಿ ಸಿಡಿದುಹೋಗುವುದರಲ್ಲಿ ಸಂದೇಹವಿಲ್ಲ."</br>
{{gap}}ಈ ರೀತಿಯ ಬ್ರಹ್ಮದೇವನ ಶಾಪಕ್ಕೆ ರಾವಣನು ಭಯಪಟ್ಟ ಕಾರಣ, ವಿದೇಹದ ರಾಜಕನ್ಯೆಯಾದ ಸೀತೆಯನ್ನು ಶುಭಶಯ್ಯೆಯಲ್ಲಿ ಉಪಭೋಗಿಸಲು ಅಸಮರ್ಥನಾದನು.</br>
{{gap}}ಇದು ಕಟ್ಟಳೆಯ ಶಾಪವಾಗಿದೆ.</br></br>
{{center|'''೩೬. ಶುಕ < ರಾಮ'''}}
{{center|'''ಯುದ್ಧಕಾಂಡ/೨೦'''}}
{{gap}}ರಾವಣನನ್ನು ವಧಿಸುವ ಕಾಯಕದಲ್ಲಿ ರಾಮನಿಗೆ ಸಹಾಯ ಮಾಡಲು ಸುಗ್ರೀವನು ತನ್ನ ಸೈನ್ಯವನ್ನು ಸಮುದ್ರತೀರಕ್ಕೆ ತಂದು ಇರಿಸಿದನು. ರಾವಣನ ಗುಪ್ತಚರನಾದ ಶಾರ್ದೂಲನು, ಮುಂಬರಲಿದ್ದ ಆಕ್ರಮಣದ ಮುನ್ಸೂಚನೆಯನ್ನು ರಾವಣನಿಗೆ ಕೊಟ್ಟನು. ರಾವಣನಿಗೆ ತುಂಬಾ ಕೋಪವುಂಟಾಗಿದ್ದರೂ ಸುಗ್ರೀವನೊಡನೆ ಸಾಮೋಪಚಾರಕ್ಕಾಗಿ 'ಶುಕ'ನೆಂಬ ರಾಕ್ಷಸನನ್ನು ದೂತನನ್ನಾಗಿ ಕಳುಹಿಸಿದನು. ಶುಕನು ಪಕ್ಷಿಯ ವೇಷವನ್ನು ಧರಿಸಿ, ರಾವಣನ ಹೇಳಿಕೆಯನ್ನು ಸ್ಪಷ್ಟವಾಗಿ ಸುಗ್ರೀವನಿಗೆ ತಿಳಿಸಿದನು. ಆ ಸಮಯದಲ್ಲಿ ವಾನರರು ಆ ಪಕ್ಷಿಯ ಗರಿಗಳನ್ನು ಕಿತ್ತು ಪಕ್ಷಿಗೆ ಉಪದ್ರವ ಕೊಡಲು ಆರಂಭಿಸಿದರು. ತಾನು ದೂತನೆಂದು ಬಂದಿರುವುದರಿಂದ ಈ ರೀತಿ ಉಪಟಳವನ್ನು ಕೊಡುವದು ಸರಿಯಲ್ಲವೆಂದನು. ಇದನ್ನು ಕೇಳಿ ರಾಮನು, 'ಆತನಿಗೆ ಉಪದ್ರವವನ್ನು ಮಾಡಕೂಡದು!' ಎಂದು ವಾನರರಿಗೆ ನಿಷ್ಠುರವಾಗಿ ಹೇಳಿದನು. ಶುಕನು ದೂತನಾಗಿರದೇ ರಾವಣನ ಗುಪ್ತಚರನಾಗಿರಬೇಕೆಂಬ ಸಂದೇಹವು ಅಂಗದನಿಗಾಯಿತು. ಸುಗ್ರೀವನಿಗೆ ಅದನ್ನು ನುಡಿದನು. ಅಷ್ಟೇ ಅಲ್ಲದೇ ಶುಕನನ್ನು ಲಂಕೆಗೆ ಮರಳಿ ಹೋಗಗೊಡದೇ ಸೆರೆ ಹಿಡಿಯಬೇಕೆಂದು ಸ್ಪಷ್ಟ ಮತವನ್ನಿತ್ತನು. ಆಗ ಸುಗ್ರೀವನ ಆಜ್ಞೆಯಿಂದ ವಾನರರು ಆಕಾಶದತ್ತ ಹಾರಿ ಶುಕಪಕ್ಷಿರೂಪಧಾರಿಯಾದ ರಾಕ್ಷಸನನ್ನು ಬಂಧಿಸಿ, ಆತನಿಗೆ ಗಾಸಿಗೊಳಿಸಹತ್ತಿದರು. ಆಗ ಶುಕನು ರಾಮನಿಗೆ ಇಂತೆಂದನು-</br>{{gap}}'ಈ ಕಪಿಗಳು ನನ್ನ ಗರಿಗಳನ್ನು ಕೀಳುತ್ತಿದ್ದಾರೆ; ನನ್ನ ಕಣ್ಣುಗಳಿಗೆ ತಿವಿಯುತ್ತಿದ್ದಾರೆ.' ಕಾರಣ-<noinclude></noinclude>
3sohwlj6kilxnxekihez8okyejd2255
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೭
104
89266
321262
233049
2026-05-20T08:06:42Z
Shreelatha.Halemane
7642
/* Validated */
321262
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೫೩}}
<poem><small>
'''ಯಾಂ ಚ ರಾತ್ರಿ ಮರಿಷ್ಯಾಮಿ ಜಾಯೇ ರಾತ್ರಿಂ ಚ ಯಮಹಮ್ |'''
'''ಏತಸ್ಮಿನ್ನಂತರೇ ಕಲೇ ಯನ್ಮಯಾ ಹ್ಯಶುಭಂ ಕೃತಮ್ |'''
'''ಸರ್ವಂ ತದುಪಪದ್ಯೇಥಾ ಜಹ್ಯಾಂ ಚೇದ್ಯದಿ ಜೀವಿತಮ್ ‖೩೩‖'''</poem></small></br>
{{gap}}"ನನ್ನ ಹುಟ್ಟಿನಿಂದ ಸಾಯುವವರೆಗೆ ನನ್ನಿಂದ ನಡೆದ ಪಾತಕಗಳು, ನಾನು ಇಲ್ಲಿ ಸತ್ತರೆ, ನಿನಗೆ ಅಂಟಿ" ಎಂದನು.</br>
{{gap}}ಆತನ ಆಕ್ರೋಶವನ್ನು ಕೇಳಿ ರಾಮನಿಗೆ ಕನಿಕರವೆನಿಸಿತು. "ಆಗಮಿಸಿದ ದೂತನನ್ನು ಬಿಡುಗಡೆ ಮಾಡಿರಿ" ಎಂದು ವಾನರರಿಗೆ ಆಜ್ಞಾಪಿಸಿದನು.</br>
{{gap}}ಇದು ಶಾಪವೋ? ಕಳವಳದ ಉದ್ಗಾರವೋ? ಶಾಪವಿದ್ದರೆ ಅದನ್ನು ಕಟ್ಟಳೆಯದೆನ್ನಬಹುದು. ಅದನ್ನು ಕೊಡುವ ಸಿದ್ಧಿಯು ಶುಕನಿಗೆ ಎಲ್ಲಿಂದ ಬಂದಿತು? ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.</br></br>
{{center|'''೩೭. ಬ್ರಹ್ಮದೇವ < ಕುಂಭಕರ್ಣ'''}}
{{center|'''ಯುದ್ಧಕಾಂಡ/೬೧'''}}
{{gap}}ರಾಮನ ವಿನಂತಿಯ ಮೇರೆಗೆ ವಿಭೀಷಣನು ಕುಂಭಕರ್ಣನ ಬಗ್ಗೆ ಹೇಳುತ್ತಾನೆ:</br>
{{gap}}ಕುಂಭಕರ್ಣನು ವಿಶ್ರವಸನ ಪರಾಕ್ರಮಿಯಾದ ಪುತ್ರನು; ಬೇರೆ ಯಾವ ರಾಕ್ಷಸನೂ ಆತನಿಗೆ ಸಾಟಿಯಲ್ಲ; ಆತನು ಸಂಗ್ರಾಮದಲ್ಲಿ ದೇವದಾನವರನ್ನು, ಭುಜಂಗ, ರಾಕ್ಷಸ, ಯಕ್ಷ, ಗಂಧರ್ವ, ಪನ್ನಗ, ವಿದ್ಯಾಧರ ಆದಿ ಎಲ್ಲವನ್ನೂ ಸೋಲಿಸಿದ್ದಾನೆ. ಕುಂಭಕರ್ಣನನ್ನು ವಧಿಸುವದು ದೇವತೆಗಳಿಗೂ ಸಾಧ್ಯವಾಗಿಲ್ಲ. ರಾಕ್ಷಸರಲ್ಲಿ ಆತನು ಅತ್ಯಂತ ತೇಜಸ್ವಿಯೂ, ವರಪ್ರಾಪ್ತಿಯಿಂದ ತುಂಬಾ ಬಲಶಾಲಿಯೂ ಆಗಿದ್ದಾನೆ. ರಣರಂಗದಲ್ಲಿ ಆತನು ಇಂದ್ರನ ಐರಾವತದ ದಂತವನ್ನು ಮುರಿದಿದ್ದಾನೆ. ಸಾವಿರಾರು ಜನರನ್ನು ಆತನು ಭಕ್ಷಿಸಲು ಪ್ರಾರಂಭಿಸಿದಾಗ ಭಯಗೊಂಡ ಪ್ರಜೆಗಳು ಇಂದ್ರನಿಗೆ ಮೊರೆಹೋದರು. ಇಂದ್ರನು ವಜ್ರಪ್ರಹಾರವನ್ನು ಮಾಡಿದರೂ, ಪ್ರಜೆಗಳಿಗೆ ಇನ್ನೂ ಅಧಿಕ ತಾಪವನ್ನು ಕೊಡಲಾರಂಭಿಸಿದನು. ಇಂದ್ರನನ್ನೂ ಹತಬಲನನ್ನಾಗಿ ಮಾಡಿದನು. ಆಗ ಇಂದನು, ದೇವದಾನವರ ಸಮೇತ ಬ್ರಹ್ಮದೇವನ ಬಳಿಗೆ ಹೋದನು. ಕುಂಭಕರ್ಣನ ನೀಚತ್ವ, ಆತನು ನಡೆಯಿಸಿದ ಪ್ರಜೆಗಳ ಸ್ವಾಹಾಕಾರ, ಪರಸ್ತ್ರೀಯರ ಅಪಹರಣ, ಇವೆಲ್ಲ ಸಂಗತಿಗಳನ್ನು ವಿವರಿಸಿದನು. ಇದೇ ರೀತಿ ಮುಂದುವರೆದರೆ ಪ್ರಪಂಚವೇ<noinclude></noinclude>
qgb95q45bg5imyzkefep0kirfko878o
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೮
104
89267
321263
233061
2026-05-20T08:07:12Z
Shreelatha.Halemane
7642
/* Validated */
321263
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೫೪|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಶೂನ್ಯವಾಗಬಹುದೆಂಬ ಭೀತಿಯನ್ನು ವ್ಯಕ್ತಪಡಿಸಿದನು. ಇಂದ್ರನ ಭಾಷಣವನ್ನು ಕೇಳಿ ಬ್ರಹ್ಮದೇವನು ರಾಕ್ಷಸರನ್ನು ಕರೆಯಿಸಿ ಕುಂಭಕರ್ಣನತ್ತ ನೋಡಿದನು. ಕುಂಭಕರ್ಣನನ್ನು ನೋಡುತ್ತಲೇ ಬ್ರಹ್ಮನ ಎದೆ ಝಲ್ಲೆಂದಿತು. ಹೀಗಾದರೂ ಆತನು ಕುಂಭಕರ್ಣಿಗೆ ಇಂತೆಂದನು-
<poem><small>
'''ಧ್ರುವಂ ಲೋಕವಿನಾಶಾಯ ಪೌಲಸ್ತ್ಯೇನಾಸಿ ನಿರ್ವಿತಃ |'''
'''ತಸ್ಮಾತ್ತ್ವಮದ್ಯಪ್ರಭೃತಿ ಮೃತಕಲ್ಪಃ ಶಯಿಷ್ಯಸೇ ‖೨೪‖'''</poem></small></br>
{{gap}}"ವಿಶ್ರವಸನು ನಿಃಸಂದೇಹವಾಗಿ ನಿನ್ನನ್ನು ಲೋಕನಾಶಕ್ಕಾಗಿ ಹುಟ್ಟಿಸಿದ್ದಾನೆ. ನೀನು ಇಂದಿನಿಂದ ಮೃತನಾದವನಂತೆ ನಿದ್ರಾವಸ್ಥೆಯಲ್ಲಿರುವೆ."</br>
{{gap}}ಕುಂಭಕರ್ಣನು ಬ್ರಹ್ಮದೇವನಿಗೆ ಸಾಷ್ಟಾಂಗ ಹಾಕಿದನು. ಬ್ರಹ್ಮದೇವನ ಈ ಶಾಪವಾಣಿಯನ್ನು ಕೇಳಿ ರಾವಣನು ಈ ರೀತಿ ನುಡಿದನು: "ನಿಮ್ಮ ಸ್ವಂತ ಮೊಮ್ಮಗನಿಗೆ ಈ ರೀತಿ ಶಾಪ ಕೊಡುವದು ಯೋಗ್ಯವಲ್ಲ. ನಿಮ್ಮ ಮಾತು ಎಂದೂ ಸುಳ್ಳಾಗುವದಿಲ್ಲ. ಕುಂಭಕರ್ಣನು ನಿದ್ದೆಯಲ್ಲಿಯೇ ಉಳಿಯುವನು; ಆದರೆ, ಆತನು ನಿದ್ರಿಸಿರುವ ಹಾಗೂ ಎಚ್ಚರಿರುವ ಕೆಲವು ಕಾಲಾವಧಿಯನ್ನು ನೀವು ನಿರ್ಧರಿಸಬೇಕು." ರಾವಣನ ಈ ಪ್ರಾರ್ಥನೆಯನ್ನು ಕೇಳಿ ಬ್ರಹ್ಮದೇವನು ಈ ರೀತಿ ಹೇಳಿದನು:
<poem><small>
'''ಶಯಿತಾ ಹ್ಯೇಷ ಷಣ್ಮಸಾನೇಕಾಹಂ ಜಾಗರಿಷ್ಯತಿ ‖೨೮‖'''
'''ಏಕೇನಾಹ್ನಾ ತ್ವಸೌ ವೀರಶ್ವರನ್ ಭೂಮಿಂ ಬುಭುಕ್ಷಿತಃ |'''
'''ವ್ಯಾತ್ತಾಸ್ಯೋ ಭಕ್ಷಯೇಲ್ಲೋಕಾನ್ ಸಂವೃದ್ಧ ಇವ ಪಾವಕಃ ‖೨೯‖'''</poem></small></br>{{gap}}"ತೀರ ಕಡಿಮೆ ಎಂದರೆ ಆರು ತಿಂಗಳವರೆಗಾದರೂ ಈತನು ಸತತವಾಗಿ ನಿದ್ರಿಸಿದ ನಂತರ ಒಂದು ದಿನದ ಮಟ್ಟಿಗೆ ಎಚ್ಚರವಾಗಿರುವನು. ಈ ಒಂದು ದಿನದಲ್ಲಿ ಹಸಿದ ಈ ವೀರನು 'ಆ' ಎಂದು ಬಾಯಿ ತೆರೆದು ಭೂಮಿಯ ಮೇಲೆ ಸಂಚರಿಸಿದಾಗ ಪಸರಿಸುತ್ತಿದ್ದ ಅಗ್ನಿಜ್ವಾಲೆಯಂತೆ ಜನರನ್ನು ಭಕ್ಷಿಸುತ್ತ ಸಾಗುವನು."</br>
{{gap}}ರಾವಣನ ಬಿನ್ನಹದ ಮೇರೆಗೆ ಆಡಿದ ಬ್ರಹ್ಮದೇವನ ನುಡಿಗಳು ಉಃಶಾಪದಂತಾಗಿವೆ. ಈ ಸಂದರ್ಭದಲ್ಲಿ ಶಾಪಪಡೆದ ಕುಂಭಕರ್ಣನು ಉಃಶಾಪವನ್ನು ಬೇಡಿರದೇ, ಕುಂಭಕರ್ಣನ ಪರವಾಗಿ ರಾವಣನು ಉಃಶಾಪವನ್ನು ಬೇಡಿ ಕೊಂಡಿದ್ದಾನೆ.<noinclude></noinclude>
32rvpj4s7zo75tlybeihlifnhpee91s
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೯
104
89278
321264
233072
2026-05-20T08:08:03Z
Shreelatha.Halemane
7642
/* Validated */
321264
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೫೫}}</br>
{{center|'''೩೮. ಪುಲಸ್ತ್ಯ < ತೃಣಬಿಂದುಕನ್ಯೆಯರು'''}}
{{center|'''ಉತ್ತರಕಾಂಡ/೨'''}}
{{gap}}ರಾಮನಿಗೆ ಅಗಸ್ತ್ಯ ಋಷಿಯು ವಿಸ್ರವಾಮುನಿಯ ಜನ್ಮದ ಕಥೆಯನ್ನು ಹೇಳುತ್ತಾನೆ:</br>
{{gap}}ಕೃತಯುಗದಲ್ಲಿ ಪ್ರಜಾಪತಿಯ ಪುತ್ರರಾದ 'ಪುಲಸ್ತ್ಯ' ಎಂಬ ಬ್ರಹ್ಮರ್ಷಿ ಇದ್ದನು. ಧರ್ಮ, ಶೀಲಗಳಿಂದ ಆತನು ದೇವತೆಗಳಿಗೆ ಪ್ರಿಯನಾಗಿದ್ದನು. ಮೇರು ಪರ್ವತದ ಸಮೀಪದಲ್ಲಿದ್ದ ತೃಣಬಿಂದುವಿನ ಆಶ್ರಮದಲ್ಲಿ ತಪಸ್ಸಿಗಾಗಿ ನೆಲೆಸಿದ್ದನು. ಅನೇಕ ನಾಗ ಕನ್ಯೆಯರು, ಋಷಿಕನ್ಯೆಯರು, ರಾಜರ್ಷಿಕನ್ಯೆಯರು, ಅಪ್ಸರೆಯರು ಕ್ರೀಡಿಸುತ್ತ ಈ ಆಶ್ರಮದ ಬಳಿಗೆ ಬಂದರು. ಅವರು ಆಗಾಗ ಅಲ್ಲಿಗೆ ಬಂದು ನೃತ್ಯಗಾಯನದಲ್ಲಿ ತೊಡಗುತ್ತಿದ್ದರು. ಈ ಯೌವನೆಯರ ಆಗಮನದಿಂದ ಪುಲಸ್ತ್ಯ ಋಷಿಯ ತಪಸ್ಸಿನಲ್ಲಿ ವಿಘ್ನ ಉಂಟಾಗುತ್ತಿದ್ದುದರಿಂದ ಆತನು ಕ್ರುದ್ಧನಾದನು; ಮತ್ತು 'ಯಾವ ಕನ್ಯೆಯು ನನ್ನ ಕಣ್ಣಿಗೆ ಬೀಳುವಳೋ ಅವಳು ಗರ್ಭಿಣಿಯಾಗುವಳು' ಎಂದು ಉಚ್ಚರಿಸಿದನು.
<poem><small>
'''ಯಾ ಮೇ ದರ್ಶನಮಾಗಚ್ಛೇತ್ಸಾ ಗರ್ಭಂ ಧಾರಯಿಷ್ಯತಿ ‖೧೩‖'''</poem></small></br>
{{gap}}ಈ ಬ್ರಹ್ಮ ಶಾಪಕ್ಕೆ ಹೆದರಿ ಆ ಕನ್ಯೆಯರು ಆ ಪ್ರದೇಶಕ್ಕೆ ಹೋಗುವುದನ್ನು ನಿಲ್ಲಿಸಿದರು; ಆದರೆ ಈ ಶಾಪವನ್ನು ಕೇಳದೇ ಇದ್ದ 'ತೃಣಬಿಂದು' ಎಂಬಾತನ ಕನ್ಯೆಯು ಆ ಪ್ರದೇಶದ ಹತ್ತಿರ ಹೋದಾಗ ಅಲ್ಲಿ ಒಬ್ಬ ಸಖಿಯೂ ಕಣ್ಣಿಗೆ ಬೀಳಲಿಲ್ಲ. ಅವಳು ಸಂಕೋಚವಿಲ್ಲದೇ ಅಲ್ಲಿ ಸುತ್ತಾಡುತ್ತಿದ್ದಾಗ, ಋಷಿಯ ಕಣ್ಣಿಗೆ ಬಿದ್ದಳು. ತಕ್ಷಣ ಅವಳ ದೇಹವು ಬಿಳಿಚಿಕೊಂಡಿತು. ಅವಳು ಗರ್ಭವತಿಯಾದಳು. ಈ ಪರಿಯ ಅನರ್ಥವುಂಟಾದ್ದರಿಂದ ಅವಳು ಕಂಗೆಟ್ಟು ಆಶ್ರಮದಲ್ಲಿದ್ದ ತನ್ನ ತಂದೆಯ ಮುಂದೆ ಬಂದು ನಿಂತಳು. ಅವಳು ಅವಸ್ಥೆಯನ್ನು ಕಂಡು, ಕೇಳಿ ವಿಚಾರಿಸಿಕೊಂಡ ನಂತರ ಆತನು ಧ್ಯಾನಸ್ಥನಾದನು. ಆತನಿಗೆ ಎಲ್ಲ ಸಂಗತಿಗಳು ಸ್ಪಷ್ಟವಾದವು. ಕನ್ಯೆಯನ್ನು ಜೊತೆಮಾಡಿಕೊಂಡು ಅತನು ಪುಲಸ್ತ್ಯ ಋಷಿಯತ್ತ ಹೋಗಿ ಈ ರೀತಿ ಅಂದನು-</br>
{{gap}}"ಭಗವನ್! ಸ್ವಗುಣಗಳಿಂದ ಭೂಷಿತಳಾದ ಈ ನನ್ನ ಕನ್ಯೆಯನ್ನು ಸ್ವೀಕರಿಸಿರಿ! ಹೇ ಮಹರ್ಷಿಯೇ, ತನಾಗಿ ಮನೆಗೆ ಬಂದ ಇದೊಂದು ಭಿಕ್ಷೆ; ತಪಸ್ಸಿನಿಂದ ಉಂಟಾಗುವ ಆಯಾಸವನ್ನು ಈ ಕನ್ಯೆಯು ನಿಮ್ಮ ಸೇವೆ ಮಾಡಿ ಕಳೆಯತ್ತಾಳೆ." ಈ ಹೇಳಿಕೆಯನ್ನು ಪುಲಸ್ತ್ಯನು ಸಮ್ಮತಿಸಿದನು. ಅವಳ ಸೇವೆ,<noinclude></noinclude>
4mf4iofm51ya59ea2g2ai5yugmleynh
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೧೪
104
89309
321312
279836
2026-05-20T09:07:35Z
Shreelatha.Halemane
7642
/* Validated */
321312
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೯೦|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
ಪಾಪಕ್ಕಾಗಿ ಪಾಪಕರ್ಮದ ಫಲವು ದುರ್ಬುದ್ದಿಯಾದ ರಾಜನಿಗೆ ಪ್ರಾಪ್ತವಾಗುವುದು.
ಸ್ವಲ್ಪದರಲ್ಲಿ ಪಾತಕಿಯಾದ ಈ ದುಷ್ಟಬುದ್ದಿಯ ರಾಜನು, ಪುತ್ರ ಸೈನ್ಯ ವಾಹನಗಳ
ಸಮೇತ ಏಳು ದಿನಗಳಲ್ಲಿ ವಧೆಯಾಗುವನು.”
{{gap}}ಈ ಶಾಪವನ್ನು ನುಡಿದ ನಂತರ ಮುನಿಯು, ಆಶ್ರಮವಾಸಿಗಳಿಗೆ ಆ
ರಾಜ್ಯದ ಸೀಮೆಯನ್ನು ಬಿಟ್ಟುಹೋಗಲು ಹೇಳಿದನು. ಏಳು ದಿವಸಗಳಲ್ಲಿ
ದಂಡರಾಜನ ರಾಜ್ಯವು, ಸೇವಕರು, ಸೈನ್ಯವು, ವಾಹನಗಳು ಸುಟ್ಟುಬೂದಿ
ಯಾದವು.
{{center|'''೬೦. ಭಾರ್ಗವ < ದಂಡಕಾರಣ್ಯ'''<br />'''ಉತ್ತರಕಾಂಡ/೮೧'''}}
{{gap}}ದಂಡಕಾರಣ್ಯವು ಜನರಹಿತವಾಗಲು ಕಾರಣವಾವುದು? ಎಂದು ರಾಮನು
ಪ್ರಶ್ನಿಸಿದಾಗ, ಅಗಸ್ಯನು ಈ ರೀತಿ ತಿಳಿಸುತ್ತಾನೆ.
ಭಾರ್ಗವ < ದಂಡ ಶಾಪದ ಬಗ್ಗೆ ಈ ಮೊದಲು ಹೇಳಿಯಾಗಿದೆ.
ಶಾಪಕ್ರಮಾಂಕ ೫೯.
{{gap}}ಧರ್ಮಯುಕ್ತ ಕೃತಯುಗದಲ್ಲಿ ರಾಜನು ತದ್ವಿರುದ್ಧವಾಗಿ ವರ್ತಿಸಿದ್ದರಿಂದ
ಆತನು ವಾಸವಿದ್ದ ಪ್ರದೇಶಕ್ಕೂ-ದಂಡಕಾರಣ್ಯಕ್ಕೂ ಭಾರ್ಗವನು ಶಾಪವನ್ನು
ಕೊಟ್ಟನು:
<poem>
'''ಸಮಂತಾದ್ಯೋಜನಶತಂ ವಿಷಯಂ ಚಾಸ್ಯ ದುರ್ಮತೇಃ |'''
'''ಧಕ್ಷ್ಯತೇ ಪಾಂಸುವರ್ಷೇಣ ಮಹತಾ ಪಾಕಶಾಸನಃ ||೮||'''
'''ಸರ್ವಸತ್ವಾನಿ ಯಾನೀಹ ಸ್ಥಾವರಾಣಿ ಚರಾಣಿ ಚ |'''
'''ಮಹತಾ ಪಾಂಸುವರ್ಷೇಣ ವಿಲಯಂ ಸರ್ವತೋಗಮನ್||೯||'''
'''ದಂಡಸ್ಯ ವಿಷಯೋ ಯಾವತ್ತಾವತ್ಸರ್ವಂ ಸಮುಚ್ಚಯಮ್ |'''
'''ಪಾಂಸುವರ್ಷಮಿವಾಲಕ್ಷ್ಯಂ ಸಪ್ತರಾತ್ರಂ ಭವಿಷ್ಯತಿ ||೧೦||'''
</poem>
{{gap}}“ದುರ್ಬುದ್ದಿಯಾದ ಈ ರಾಜನ ಪ್ರದೇಶದ ಸುತ್ತುಮುತ್ತಲಿನ ನೂರು
ಯೋಜನಗಳವರೆಗೆ ಇಂದ್ರನು ಧೂಳಿಯ ವೃಷ್ಟಿಗರೆದು ಆ ಪ್ರದೇಶವನ್ನು
ನಾಶಪಡಿಸುವನು. ಈ ಪ್ರದೇಶದಲ್ಲಿಯ ಚರಾಚರಪ್ರಾಣಿಗಳೆಲ್ಲವೂ ಪ್ರಚಂಡ
ಧೂಳಿಯ ದೃಷ್ಟಿಯಿಂದ ಸರ್ವತೋಪರಿ ನಾಶಹೊಂದುವವು; ದಂಡರಾಜನ<noinclude></noinclude>
obxzmzodwzsj0sbzt2olzl5jw1vvhyv
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೧೯
104
89359
321314
279839
2026-05-20T09:08:29Z
Shreelatha.Halemane
7642
/* Validated */
321314
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=ಶಪಥ, ಸತ್ಯಕ್ರಿಯೆ|center=|right=೧೯೫}}
{{center|'''೧. ಶಪಥ : ರಾಮ < ಲಕ್ಷ್ಮಣ'''<br />ಅರಣ್ಯಕಾಂಡ}}
{{gap}}ಖರನೆಂಬ ರಾಕ್ಷಸನ ಸೈನ್ಯದೊಡನೆ ತುಮುಲಯುದ್ಧವು ನಡೆದಾಗ ಖರನು
ರಾಮನ ಆಶ್ರಮದತ್ತ ಸಾಗಿಬರುತ್ತಿದ್ದನು. ಆಗ ರಾಮನಿಗೆ, ಪ್ರಜೆಗಳಿಗೆ ಅನಿಷ್ಟ
ಕರವಾದ ಅನೇಕ ಉತ್ಪಾತಗಳು ಕಂಡುಬಂದಿದ್ದರಿಂದ ಆತನು ಬಹಳ
ಖಿನ್ನನಾಗಿದ್ದನು. ಆಗಸದಲ್ಲಿ ರಕ್ತದ ಸುರಿಮಳೆಗರೆಯುವ ಧೂಸರ ಬಣ್ಣದ
ಮೋಡಗಳು ನೆರೆದಿದ್ದವು. ಕೆಲವು ಶುಭಶಕುನಗಳು ವಿಜಯವನ್ನು ಸೂಚಿಸುತ್ತಿದ್ದರೂ,
ಆಗಬಹುದಾದ ಅನರ್ಥವನ್ನು ತಪ್ಪಿಸಲು ರಾಮನು, ಲಕ್ಷ್ಮಣನಿಗೆ ಧನುಷ್ಯ
ಬಾಣಗಳನ್ನು ಎತ್ತಿಕೊಂಡು, ಸೀತೆಯನ್ನು ಕರೆದುಕೊಂಡು, ದಟ್ಟಮರಗಳಲ್ಲಡಗಿದ
ಪರ್ವತದಲ್ಲಿಯ ಗುಪ್ತವಾದ ಗುಹೆಗೆ ಹೋಗಿ ಅವಿತುಕೊಳ್ಳಲು ಹೇಳಿದನು.
ಈ ಆಜ್ಞೆಯನ್ನು ಲಕ್ಷ್ಮಣನು ಚಾಚೂ ತಪ್ಪದೇ ಪಾಲಿಸಬೇಖೆಂದು ಹೇಳುವಾಗ
ರಾಮನು ಹೀಗೆಂದನು-
{{center|'''ಪ್ರತಿಕೂಲಿತುಮಿಚ್ಛಾಮಿ ನ ಹಿ ವಾಕ್ಯಮಿದಂ ತ್ವಯಾ l'''<br />'''ಶಾಪಿತೋ ಮಮ ಪಾದಾಭ್ಯಾಂ ಗಮ್ಯತಾಂ ವತ್ಸ ಮಾ ಚಿರಮ್'''ll೧೩ll}}
{{gap}}“ನನ್ನ ಹೇಳಿಕೆಗೆ ನೀನು ಪ್ರತಿಕೂಲನಾಗಿರುವದು ನನಗೆ ಇಷ್ಟವಿಲ್ಲ; ವತ್ಸನೇ,
ನನಗೆ ನನ್ನ ಪಾದದ ಶಪಥವಿದೆ: ನೀನು ಸೀತೆಯನ್ನು ಕರೆದುಕೊಂಡು ಹೋಗು;
ತಡಮಾಡಬೇಡ!”
{{gap}}ಈ ಎಲ್ಲ ರಾಕ್ಷಸರನ್ನು ವಧಿಸಲು ಲಕ್ಷ್ಮಣನು ಶಕ್ತನಿದ್ದ ಸಂಗತಿಯು
ರಾಮನಿಗೆ ಗೊತ್ತಿದ್ದರೂ, ರಾಮನು ಈ ಕಾರ್ಯವನ್ನು ತಾನೇ ಸ್ವತಃ ಕೈಕೊಂಡನು.
ಲಕ್ಷ್ಮಣನಿಗೆ ಮಾತನಾಡಲು ಯಾವ ಅವಸರವನ್ನೂ ಕೊಡಲಿಲ್ಲ.
{{center|'''೨. ಶಪಥ: ಸೀತಾ < ಅಗ್ನಿ'''<br />ಸುಂದರಕಾಂಡ/೫೩}}
{{gap}}ಸಭೆಯಲ್ಲಿ ಕರೆತರಲಾದ ಹನುಮಂತನನ್ನು ಕಂಡು ರಾವಣನು ಅಳುಕಿದನು.
ಪೂರ್ವದಲ್ಲಿ ನಂದಿಕೇಶ್ವರನು ಕೊಟ್ಟ ಶಾಪದ ಸ್ಮರಣೆ ರಾವಣನಿಗಾಯಿತು.
ಹನುಮಂತನನ್ನು ವಧಿಸಬೇಕೆಂದು ಯೋಚಿಸಿದನು. ಆಗ ಹನುಮಂತನು ತಾನು<noinclude></noinclude>
s17u7c4nyadmxlvulxzues71g7qwdsv
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೧೫
104
89360
321313
279837
2026-05-20T09:07:56Z
Shreelatha.Halemane
7642
/* Validated */
321313
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=ಶಾಪವಾಣಿ|center=|right=೧೯೧}}
ಸಮಸ್ತ ಪ್ರದೇಶವು ಧೂಳಿಯ ದೃಷ್ಟಿಯಿಂದ, ಧೂಳಿಯ ರಾಶಿರಾಶಿಗಳಲ್ಲಿ,
ಏಳು ದಿನಗಳಲ್ಲಿ ಅಡಗಿಹೋಗುವುದು.”
{{center|'''೬೧. ದುರ್ವಾಸ < ಲಕ್ಷ್ಮಣ'''<br />'''ಉತ್ತರಕಾಂಡ/೧೦೫'''}}
{{gap}}ರಾಮನ ಅವತಾರಕಾರ್ಯವು ಮುಗಿಯುತ್ತ ಬಂದಿತ್ತು. ಆತನು ಈ
ನಂತರ ಏನು ಮಾಡುವದಿದೆ? ಎಂಬ ಬಗ್ಗೆ ಮಹತ್ವದ ಸಂದೇಶವನ್ನು ಕೊಂಡು
ಬ್ರಹ್ಮನ ಆಜ್ಞೆಯಂತೆ ಪ್ರತ್ಯಕ್ಷ ಕಾಲಪುರುಷನು ರಾಮನಿಗೆ ಭೇಟಿಯಾಗಲು
ಬಂದಿದ್ದನು. ತಂದ ಸಂದೇಶವನ್ನು ರಾಮನು ಏಕಾಂತದಲ್ಲಿ ಕೇಳಿಕೊಳ್ಳಬೇಕೆಂದು
ಕಾಲನು ಸ್ಪಷ್ಟವಾಗಿ ತಿಳಿಸಿದನು. ಆಗ ಅಲ್ಲಿದ್ದ ದ್ವಾರಪಾಲಕರನ್ನು ದೂರವಿರಿಸಿ
ಅಲ್ಲಿ ಲಕ್ಷ್ಮಣನಿಗೆ ಕಾಲವು ನಿಲ್ಲಲು ರಾಮನು ಹೇಳಿದನು. ಯಾರನ್ನೂ ಒಳಗೆ
ಬಿಡಕೂಡದೆಂದು ಅಪ್ಪಣೆ ಮಾಡಿದನು. ರಾಮ ಮತ್ತು ಕಾಲಪುರುಷ ಇವರಲ್ಲಿಯ
ಸಂಭಾಷಣೆಯನ್ನು ಕೇಳಿಕೊಂಡವರಿಗೆ ಮೃತ್ಯು ದಂಡವನ್ನು ವಿಧಿಸುವದಾಗಿ
ರಾಮನು ಕಾಲನಿಗೆ ಆಶ್ವಾಸನೆಯನ್ನಿತ್ತನು.
{{gap}}ಲಕ್ಷ್ಮಣನು ರಾಮನ ಆಜ್ಞೆಯನ್ನು ಬಹು ಎಚ್ಚರಿಕೆಯಿಂದ ಪಾಲಿಸುತ್ತಿದ್ದಾಗ,ದುರ್ವಾಸ ಋಷಿಯು ರಾಮನನ್ನು ಕಾಣಬೇಕೆಂದು ಬಂದನು. ಲಕ್ಷ್ಮಣನು ಆತನಿಗೆ ನಮಸ್ಕರಿಸಿ ಸ್ವಲ್ಪ ಸಮಯ ತಡೆಯಲು ಹೇಳಿದನು. ರಾಮನು ಮಹತ್ವದ ಕಾರ್ಯದಲ್ಲಿರುವುದರಿಂದ ಸ್ವಲ್ಪ ಸಮಯ ಕಾಯಬೇಕಾಗಬಹುದೆಂದು
ವಿನಂತಿಸಿದನು. ಲಕ್ಷ್ಮಣನ ಈ ಮಾತುಗಳಿಂದ ದುರ್ವಾಸ ಋಷಿಯ ಕೋಪವು
ನೆತ್ತಿಗೇರಿತು. ಕೆರಳಿದ ಕಣ್ಣುಗಳಿಂದ ಆತನು ಲಕ್ಷ್ಮಣನಿಗೆ ಇಂತೆಂದನು:
<poem>
''' ಆಸ್ಮಿನ್ಕ್ಷಣೇ ಮಾ ಸೌಮಿತ್ರೇ ರಾಮಾಯ ಪ್ರತಿವೇದಯ |'''
'''ಅಸ್ಮಿನ್ಕ್ಷಣೇ ಮಾಂ ಸೌಮಿತ್ರೇನ ನಿವೇದಯಸೇ ಯದಿ |'''
'''ವಿಷಯ ತ್ವಾಂ ಪುರಂ ಚೈವ ಶಪಿಷ್ಟೇ ರಾಘವಂ ತಥಾ ||೬||'''
'''ಭರತಂ ಚೈವ ಸೌಮಿತ್ತೇ ಯುಷ್ಮಾಕಂ ಯಾ ಚ ಸಂತತಿಃ |'''
'''ನ ಹಿ ಶಕ್ಷ್ಯಾಮ್ಯಹಂ ಭೂಯೋ ಮನ್ಯುಂ ಧಾರಾಯಿತುಂ ಹೃದಿ ||೭||'''
</poem>
“ಎಲೈ ಸುಮಿತ್ರಾ ನಂದನನೇ, ಈ ಕ್ಷಣ ನಾನು ಬಂದಿರುವೆನೆಂದು
ರಾಮನಿಗೆ ತಿಳಿಸು! ನಾನು ಬಂದಿರುವದನ್ನು ರಾಮನು ಕೂಡಲೇ ಗಮನಿಸದಿದ್ದರೆ
ನಿನಗೆ, ಅಯೋಧ್ಯಾ ನಗರಕ್ಕೆ ಈ ದೇಶಕ್ಕೆ ಮತ್ತು ರಾಮನಿಗೆ ನಾನು ಶಾಪವನ್ನು<noinclude></noinclude>
m73c6k7ryff25fl6qyu1dlib9ty2ent
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೧
104
89423
321265
233083
2026-05-20T08:08:51Z
Shreelatha.Halemane
7642
/* Validated */
321265
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೫೭}}</br>
{{gap}}ತಂದೆಯ ಹೇಳಿಕೆಯಂತೆ ಆ ಕನ್ಯೆಯು, ವಿಶ್ರವಾ ಮುನಿಯ ತಪಸ್ಸನ್ನು ಆಚರಿಸುತ್ತಿದ್ದ ಸ್ಥಳಕ್ಕೆ ಹೋಗಿ ಆತನೆದುರು ನಿಂತಳು. ಆಕೆಯ ಬರುವಿಕೆಯ ಕಾರಣವನ್ನು ಮುನಿಯು ವಿಚಾರಿಸಿದಾಗ, ಕೈಕಸಿಯು ವಿನಯದಿಂದ ಈ ರೀತಿ ಹೇಳಿದಳು:</br>
{{gap}}"ಹೇ ಮುನಿಶ್ರೇಷ್ಠರೇ! ನಾನು ಇಲ್ಲಿಗೆ ಬಂದ ಉದ್ದೇಶವನ್ನು ತಪಃಪ್ರಭಾವದಿಂದ ನೀವೇ ಅರಿತುಕೊಳ್ಳಿರಿ! ಹೇ ಬ್ರಹ್ಮರ್ಷಿ, ತಂದೆಯ ಆಜ್ಞೆಯಂತೆ ನಾನು ಇಲ್ಲಿ ಬಂದಿದ್ದೇನೆಂದು ತಿಳಿಯಬೇಕು; ನನ್ನ ಹೆಸರು ಕೈಕಸಿ, ಮಿಕ್ಕ ವಿಷಯವನ್ನು ನೀವೇ ಅರಿತುಕೊಳ್ಳುವಿರಿ!”</br>
{{gap}}ವಿಶ್ರವಾ ಈತನು ಧ್ಯಾನಸ್ಥನಾಗಿ ಆಕೆಯ ಆಗಮನದ ಉದ್ದೇಶವನ್ನು ತಿಳಿದುಕೊಂಡನು. ಆತನು ಕೈಕಸಿಗೆ ಈ ರೀತಿ ನುಡಿದನು:
<poem><small>
'''ಸುತಾಭಿಲಾಷೊ ಮತ್ತಸ್ತೇ ಮತ್ತಮಾತಂಗಗಾಮಿನೀ |'''
'''ದಾರುಣಾಯಾಂ ತು ವೇಲಾಯಾಂ ಯಸ್ಮಾತ್ತ್ವಂ ಮಾಮುಪಸ್ಥಿತಾ ‖೨೨‖'''
'''ಶ್ರುಣು ತಸ್ಮಾತ್ಸುತಾನ್ಭದ್ರೇ ಯಾದೃಶಾನ್ವನಯಿಷ್ಯಸಿ |'''
'''ದಾರುಣಾನ್ದಾರುಣಾಕಾರಾನ್ದಾರುಣಾಭಿಜನಪ್ರಿಯಾನ್ ‖೨೩‖'''
'''ಪ್ರಸವಿಷ್ಯಸಿ ಸುಶ್ರೋಣಿ ರಾಕ್ಷಾಸಾಂ ಕ್ರೂರಕರ್ಮಣಃ ‖೨೪‖'''</poem></small></br>
{{gap}}"ಎಲೈ ಮತ್ತ ಗಜಗಾಮಿನಿಯೇ, ನನ್ನಿಂದ ಪುತ್ರರನ್ನು ಪಡೆಯಲೆಂದು ನೀನು ಬಂದಿರುವೆ; ಆದರೆ, ನೀನು ಬಂದ ಸಮಯವು ತೀರ ಕ್ರೂರ ಗಳಿಗೆಯಾಗಿದೆ; ಆದ್ದರಿಂದ ನೀನು ಎಂತಹ ಮಕ್ಕಳನ್ನು ಹೊಂದುವೆ ಎಂಬುದನ್ನು ಆಲಿಸು! ಸ್ವಭಾವದಿಂದಲೂ ಸೌಷ್ಠವದಿಂದಲೂ ಭಯಕಾರಿಯಾಗಿರುವವರು, ಕ್ರೂರಭಾಂಧವರನ್ನು ಬಯಸುವವರು, ಮತ್ತು ಕ್ರೂರ ಕರ್ಮಗಳನ್ನು ಮಾಡುವವರು, ಅಂತಹ ರಾಕ್ಷಸರು ನಿನಗೆ ಹುಟ್ಟುವರು."</br>
{{gap}}ಮುನಿಯ ಈ ಮಾತನ್ನು ಕೇಳಿ ವಿನಯದಿಂದ ಈ ರೀತಿ ಎಂದಳು: "ಹೇ ಭಗವನ್, ತಮ್ಮಂಥ ಬ್ರಹ್ಮಜ್ಞರಿಂದ ಈ ಪರಿಯ ದುರಾಚಾರಿ ಪುತ್ರರನ್ನು ಪಡೆಯುವ ಇಚ್ಛೆ ನನಗಿಲ್ಲ; ನೀವು ನನಗೆ ದಯೆ ತೋರಿರಿ!"</br>
{{gap}}ಆಕೆಯ ಬಿನ್ನಹವನ್ನು ಮನ್ನಿಸಿ, ಮುನಿಯು ಈ ರೀತಿ ಉತ್ತರಿಸಿದನು- "ನಿನ್ನ ಕೊನೆಯ ಮಗನು ನನ್ನ ವಂಶಕ್ಕೆ ಅನುರೂಪವಾದನೂ ಧರ್ಮಾತ್ಮನೂ ಆಗುವನು." ಕಾಲಕ್ರಮೇಣ ಕೈಕಸಿಗೆ ರಾವನ, ಕುಂಭಕರ್ಣ, ಶೂರ್ಪನಖಿ ಮತ್ತು ವಿಭೀಷಣ ಎಂಬ ಮಕ್ಕಳಾದರು.</br>
{{gap}}ಕೈಕಸಿಯ ಬಿನ್ನಹವು ಯಾಚಿತ ಉಃಶಾಪದಂತಿದೆ.<noinclude></noinclude>
j4il70nyjxh88d2xbk19jnautromo5a
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೪
104
89424
321287
233151
2026-05-20T08:56:37Z
Shreelatha.Halemane
7642
/* Validated */
321287
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೬೦|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಕುಚೋದ್ಯಗಳು ನನ್ನ ಕಿವಿಗೆ ಬಂದಿವೆ. ನಿನ್ನ ಪಾರುಪತ್ಯಕ್ಕಾಗಿ ದೇವತೆಯರು ಸಜ್ಜಾಗುತ್ತಿದ್ದಾರೆ. ಕಠೋರ ವ್ರತವನ್ನಾಚರಿಸುತ್ತಿದ್ದ ಶುದ್ಧ, ಜಿತೇಂದ್ರಿಯನಾದ ನಾನು, ನಿಷ್ಕಾರುಣವಾಗಿ ಪಾರ್ವತಿಯ ರೋಷಕ್ಕೆ ಬಲಿಯಾದೆ. ನಾನು ಧರ್ಮಾ ಚರಣೆಗೆಂದು ಹಿಮಾಲಯ ಪರ್ವತಕ್ಕೆ ಹೋದಾಗ ಪಾರ್ವತಿ-ಪರಮೇಶ್ವರರ ದರ್ಶನವು ನನಗಾಯಿತು. ಅನುಪಮಲಾವಣ್ಯವತಿಯಾದ ಈ ಸ್ತ್ರೀಯತ್ತ ಬೇರೆ ಯಾವ ಉದ್ದೇಶವಿರದೇ ಕೇವಲ ಕುತೂಹಲದಿಂದ- ನಾನು ಎಡಗಣ್ಣಿನಿಂದ ನೋಡಿದ ಕ್ಷಣವೇ-
<poem><small>
'''ದೇವ್ಯಾ ದಿವ್ಯಪ್ರಭಾವೇಣ ದಗ್ಧಂ ಸವ್ಯಂ ಮಮೇಕ್ಷಣಮ್ |'''
'''ರೇಣುಧ್ವಸ್ತಮಿವ ಜ್ಯೋತಿಃ ಪಿಂಗಲತ್ವಮುಪಾಗತಮ್ ‖೨೪‖'''</poem></small></br>
{{gap}}ದೇವಿಯ ದಿವ್ಯಪ್ರಭಾವದಿಂದ ನನ್ನ ಎಡಗಣ್ಣು ಸುಟ್ಟು ಭಸ್ಮವಾಯಿತು. ಬಲಗಣ್ಣು ಕೊಳೆ ಸೇರಿಕೊಂಡು ಕಂದುಬಣ್ಣದ್ದಾಯಿತು.</br>
{{gap}}ಆನಂತರ ನಾನು ತಪಸ್ಸಿನಿಂದ ಮಹಾದೇವನನ್ನು ಪ್ರಸನ್ನಗೊಳಿಸಿದೆನು. ಆತನ ಸ್ನೇಹವನ್ನು ಪಡೆದೆನು; ಆದರೆ ಏಕಾಕ್ಷ, ಪಿಂಗಲ ಎಂಬ ಹೆಸರು ನನಗೆ ದೃಢವಾಯಿತು. ಆದಕಾರಣ ಹೇ ರಾವಣನೇ, ನೀನು ಪಾಪಕೃತ್ಯಗಳಿಂದ ದೂರವಾಗಿರು! ಕುಲಕ್ಕೆ ಕಲಂಕವನ್ನು ತರುವ ಯಾವ ಕಾರ್ಯವನ್ನೂ ಮಾಡಬೇಡ!"</br>
{{gap}}ದೂತನ ಈ ಭಾಷಣವನ್ನು ಕೇಳಿ ರಾವಣನು ಕೋಪಗೊಂಡನು. ದೂತನ ಸಮೇತ ಕುಬೇರನನ್ನು ಯಮಸದನಕ್ಕೆ ಕಳುಹಿಸುವ ಪ್ರತಿಜ್ಞೆಯನ್ನು ಮಾಡಿ, ಆ ದೂತನನ್ನು ಕೊಂದುಬಿಟ್ಟನು.</br>
{{gap}}ಈ ಶಾಪವು ಸಂಶಯಾಸ್ಪದವಿದೆ. ಕುಬೇರನ ಎಡಗಣ್ಣು ಸುಟ್ಟುಹೋಗಿದ್ದು ಮತ್ತು ಬಲಗಣ್ಣು ಕಂದುಬಣ್ಣಕ್ಕೆ ತಿರುಗಿದ್ದು, ಪಾರ್ವತಿಯ ದಿವ್ಯತೇಜಸ್ಸಿನಿಂದಲೋ ಅಥವಾ ಶಾಪದಿಂದಲೋ? ಪಾರ್ವತಿಯು ಶಾಪವನ್ನು ಉಚ್ಚರಿಸಲಿಲ್ಲ; ಶಾಪವು ಒಂದು ವಾಚಾ-ಶಕ್ತಿಯಾಗಿರುತ್ತದೆ; ಅಂದಬಳಿಕ ಮೇಲಿನ ಘಟನೆಯು ಶಾಪ ವೆಂದಾಗಲಾರದು.</br></br>
{{center|'''೪೨. ನಂದೀಶ್ವರ < ರಾವಣ'''}}
{{center|'''ಉತ್ತಕರಾಂಡ/೧೬'''}}
{{gap}}ರಾವಣನಿಗೆ ನಂದಿಯು ಕೊಟ್ಟ ಶಾಪದ ವೃತ್ತಾಂತವನ್ನು ಅಗಸ್ತ್ಯನು ರಾಮನಿಗೆ ಹೇಳುತ್ತಾನೆ:<noinclude></noinclude>
h16uf30qwu5gll0ifwa9b007ejck62v
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೫
104
89425
321288
233166
2026-05-20T08:56:59Z
Shreelatha.Halemane
7642
/* Validated */
321288
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೬೧}}</br>
{{gap}}ಕುಬೇರನನ್ನು ಜಯಿಸಿದ ನಂತರ ರಾವಣನು ಕುಬೇರನ ಪುಷ್ಪಕ ವಿಮಾನದಲ್ಲಿ ಸಂಚರಿಸುತ್ತ ಒಂದು ಪರ್ವತದ ಮೇಲೆ ಬಂದು ಇಳಿದನು. ಇಷ್ಟದಂತೆ ಸಂಚರಿಸುವ ಆ ವಿಮಾನವು ಆ ಪರ್ವತದ ಮೇಲೆ ಬಂದು ನಿಂತು ಬಿಟ್ಟಿತು. ಕುಬೇರನೊಡನಿದ್ದ ವಿಮಾನದ ಸಂಬಂಧವು ಕಡಿದುಹೋಗಿದ್ದರಿಂದ ಹೀಗಾಗಿರಬಹುದೆಂದು ಮಾರೀಚನಿಗೆ ಅನಿಸಿತು. ಅದೇ ಸಮಯದಲ್ಲಿ ಕಪ್ಪು ಮತ್ತು ಕಂದುಬಣ್ಣದಿಂದ ಕೂಡಿದ, ದೃಢಕಾಯ, ಕುಳ್ಳ, ಮುಂಡಿಸಿದ ತಲೆಯುಳ್ಳ, ಚೋಟುಬಾಹುಗಳಿದ್ದ, ಪ್ರಚಂಡ ಹಾಗೂ ಭಯಂಕರನೆನಿಸುವ ಶಂಕರನ ಸೇವಕನಾದ ನಂದೀಶ್ವರನು ವಾನರರೂಪವನ್ನು ಧರಿಸಿ ರಾವಣನ ಮುಂದೆ ನಿಂತು, ಮುಂದೆ ಹೋಗಲು ಅಡ್ಡಿ ಮಾಡಿದನು. 'ಪರ್ವತದ ಮೇಲೆ ಶಂಕರನ ಕ್ರೀಡೆ ನಡೆಯುತ್ತಿರಲು ಅಲ್ಲಿ ಯಾರಿಗೂ ಪ್ರವೇಶವಿಲ್ಲ!' ಎಂದು ಹೇಳಿದನು. 'ಈ ಶಂಕರನು ಯಾರು?' ಎಂದು ರಾವಣನು ಉದ್ಧಟನಾಗಿ ಕೇಳಿದನು. ಕೈಯಲ್ಲಿ ಝಳಪಿಸುವ ತ್ರಿಶೂಲವಿದ್ದ ನಂದಿಯು ಪ್ರತಿಶಂಕರನಂತೆ ವಿರಾಜಿಸುತ್ತಿದ್ದನು. ರಾವಣನ ಉದ್ಧಟತನವನ್ನು ಸಹಿಸದೇ ಆತನು ಕ್ರುದ್ಧನಾದನು. ಆ ರಾಕ್ಷಸನಿಗೆ ಈ ರೀತಿ ಅಂದನು-
<poem><small>
'''ಯಸ್ಮಾದ್ವಾನರರೂಪಂ ಮಾಮವಜ್ಞಾಯ ದಶಾನನ |'''
'''ಅಶನೀಪಾತಸಂಕಾಶಮಪಹಾಸಂ ಪ್ರಯುಕ್ತವನ್ ‖೧೬‖'''
'''ತಸ್ಮಾನ್ಮದ್ವೀರ್ಯಸಂಯುಕ್ತಾ ಮದ್ರೂಪಸಮತೇಜಸಃ |'''
'''ಉತ್ಪತ್ಸ್ಯಂತಿ ವರ್ಧಾರ್ಥಂ ಹಿ ಕುಲಸ್ಯ ತವ ವಾನರಾಃ ‖೧೭‖'''
'''ನಖದಂಷ್ಟ್ರಾಯುಧಾಃ ಕ್ರೂರಾ ಮನಃಸಂಪಾತರಂಹಸಃ |'''
'''ಯುರ್ದಧೋನ್ಮತ್ತಾ ಬಲೋದ್ರಿಕ್ತಾಃ ಶೈಲಾ ಇವ ವಿಸರ್ಪಿಣಃ ‖೧೮‖'''
'''ತೇ ತವ ಪ್ರಬಲಂ ದರ್ಪಮುತ್ಸೇಧಂ ಚ ಪೃಥಗ್ವಿಧಮ್ |'''
'''ವ್ಯಪನೇಷ್ಯಂತಿ ಸಂಭೂಯ ಸಹಾಮಾತ್ಯಸುತಸ್ಯ ಚ ‖೧೯‖'''
'''ಕಿಂ ತ್ವಿದಾನೀಂ ಮಯಾ ಶಕ್ಯಂ ಹಂತುಂ ತ್ವಾಂ ಹೇ ನಿಶಾಚರ |'''
'''ನ ಹಂತವ್ಯೋ ಹತಸ್ತ್ವಂ ಹಿ ಪೂರ್ವಮೇವ ಸ್ವಕರ್ಮಭಿಃ ‖೨೦‖'''</poem></small></br>
{{gap}}"ಎಲೈ ದಶಾನನನೇ, ವಾನರರೂಪವನ್ನು ಧರಿಸಿದ ನನ್ನ ಅವಜ್ಞೆ ಮಾಡಿ ಸಿಡಿಲಿನಂತೆ ಆರ್ಭಟಿಸಿ ಅವಮರ್ಯಾದೆಯಾಗಿ ನಕ್ಕಿರುವೆ; ಆದ್ದರಿಂದ ನನ್ನ ವೀರ್ಯವನ್ನು ಹೊಂದಿದ, ನನ್ನ ಹಾಗೆ ಪ್ರಭೆಯುಳ್ಳ, ರೂಪವಂತ ವಾನರರು ನಿನ್ನ ಕುಲದ ಸಂಹಾರಕ್ಕಾಗಿ ಹುಟ್ಟುವರು. ಎಲೈ ಕ್ರೂರನೇ, ತಮ್ಮ ಉಗುರುಗಳನ್ನು<noinclude></noinclude>
l7pnvreo1s2vy4vt1yvztpa2uhuwu6p
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೮
104
89426
321289
233258
2026-05-20T08:57:56Z
Shreelatha.Halemane
7642
/* Validated */
321289
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೬೪|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
ಜೀವಿಸಿರುವ ಆಸೆ ಇಲ್ಲ, ಎಲೈ ರಾಕ್ಷಸನೇ, ನಿನ್ನ ಎದುರೇ ನಾನು ಅಗ್ನಿಪ್ರವೇಶ ಮಾಡುತ್ತೇನೆ."
<small><poem>
'''ಯಸ್ಮಾತ್ತು ಘರ್ಷಿತಾ ಚಾಹಂ ತ್ವಯಾ ಪಾಪತ್ಮನಾ ವನೇ ‖೩೧‖'''
'''ತಸ್ಮಾತ್ತವ ವಧಾರ್ಥಂ ಹಿ ಸಮುತ್ಪತ್ಸ್ಯೇ ಹ್ಯಹಂ ಪುನಃ |'''
'''ನ ಹಿ ಶಕ್ಯಂ ಸ್ತ್ರಿಯಾ ಹಂತುಂ ಪುರುಷಃ ಪಾಪನಿಶ್ಚಯಃ ‖೩೨‖'''
'''ಶಾಪೇ ತ್ವಯಿ ಮಯೋತ್ಸೃಷ್ಟೇ ತಪಸಶ್ಚ ವ್ಯಯೋ ಭವೇತ್ |'''
'''ಯದಿ ತ್ವಸ್ತಿ ಮಯಾ ಕಿಂಚಿತ್ಕೃತಂ ದತ್ತಂ ಹುತಂ ತಥಾ ‖೩೩‖'''
'''ತಸ್ಮಾತ್ತ್ವನಯೋನಿಜಾ ಸಾಧ್ವೀ ಭವೇಯಂ ಧರ್ಮಿಣಃ ಸುತಾ ‖೩೪‖'''</small></poem></br>
{{gap}}"ದುರಾತ್ಮನಾದ ನೀನು ಕಾಡಿನಲ್ಲಿ ನನ್ನನ್ನು ಎಳೆದಾಡಿದ್ದೀಯಾ! ನಿನ್ನ ವಧೆಗಾಗಿ ನಾನು ಈ ಭೂಮಿಯಲ್ಲಿ ಮರಳಿ ಜನ್ಮತಾಳುವೆ. ಪಾಪಾತ್ಮ ಪುರುಷನ ವಧೆಯು ನನ್ನಂತಹ ಸ್ತ್ರೀಯಿಂದಾಗದು. ನಾನು ನಿನಗೆ ಶಾಪ ಕೊಟ್ಟರೆ ನನ್ನ ತಪಸ್ಸು ಕ್ಷೀಣಿಸುವದು. ಈವರೆಗೆ ನಾನು ತಪಸ್ಸನ್ನಾಚರಿಸಿದ್ದರೆ, ದಾನ, ಹವನ ಕರ್ಮಗಳನ್ನು ಆಚರಿಸಿದ್ದರೆ, ಆ ಪುಣ್ಯಪ್ರಭಾವದಿಂದ ನಾನು ಒಬ್ಬ ಧರ್ಮನಿಷ್ಠನ 'ಅಯೋನಿಜಾತ' ಸಾಧುಕನ್ಯೆಯಾಗುವೆ."</br>
{{gap}}ಹೀಗೆ ಉಚ್ಚರಿಸಿ ಅವಳು ಪ್ರಜ್ವಲಿತ ಅಗ್ನಿಯಲ್ಲಿ ಧುಮುಕಿದಳು. ಆಗ ಆಕಾಶದಿಂದ ಪುಷ್ಪವೃಷ್ಟಿಯಯಿತು.</br></br>
{{center|'''ಯುದ್ಧಕಾಂಡ/೬೦'''}}
{{gap}}ರಾಮನ ಬಾಣಗಳ ಭೀತಿಯಿಂದ ಗ್ರಸ್ತನಾದ ರಾವಣನಿಗೆ, ಅಗ್ನಿಪ್ರವೇಶ ಮಾಡುವಾಗ ವೇದವತಿಯು ತೆಗೆದ ಉದ್ಗಾರಗಳ ಸ್ಮರಣೆಯಾಯಿತು.
<small><poem>
'''ಶಪ್ತೊsಹಂ ವೇದವತ್ಯಾ ಚ ಯಥಾ ಸಾ ಘರ್ಷಿತಾ ಪುರಾ ‖೧೦‖'''
'''ಸೇಯಂ ಸೀತಾ ಮಹಾಭಾಗಾ ಜಾತಾ ಜನಕನಂದಿನೀ ‖೧೧‖'''</small></poem></br>
{{gap}}"ಹಿಂದೆ ವೇದವತಿಯನ್ನು ಬಲಾತ್ಕರಿಸಿದ್ದರಿಂದ ಅವಳು ಶಾಪವನ್ನು ಕೊಟ್ಟಿದ್ದಾಳೆ. ಆ ವೇದವತಿಯೇ ಮಹಾಭಾಗ್ಯವತಿಯಾದ, ಜನಕಕನ್ಯೆಯಾದ ಸೀತೆಯಾಗಿದ್ದಾಳೆ."</br>
{{gap}}ಉತ್ತರಕಾಂಡದಲ್ಲಿಯ ವೇದವತಿಯ ಉದ್ಗಾರಗಳು ಶಾಪದಂತಿದ್ದರೂ ಸಂಪಾದಿಸಿದ ತಪಸ್ಸಿನ ಫಲವು ವ್ಯಯವಾಗಬಾರದೆಂದು ಅವಳು ಶಾಪ<noinclude></noinclude>
ju21w700xbd83093nmipfr3cthw3in0
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೯
104
89427
321290
233276
2026-05-20T08:58:33Z
Shreelatha.Halemane
7642
/* Validated */
321290
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೬೫}}</br>ಕೊಡುವದನ್ನು ತಡೆದಳು ಎಂಬುದು ಸ್ಪಷ್ಟವಿದೆ. ಹೀಗಿದ್ದರೂ ಯುದ್ಧಕಾಂಡದಲ್ಲಿಯ ಉಲ್ಲೇಖದಂತೆ ವೇದವತಿಯ ಶಾಪದ ಸ್ಮರಣೆಯು ರಾವಣನಿಗಾಗಿದೆ. ಆತನು ಅದಕ್ಕೆ ಶಾಪವೆಂದಿದ್ದಾನೆ; ಆದ್ದರಿಂದ ವೇದತಿಯ ಉದ್ಗಾರಗಳು ಶಾಪ-ಸಮವಿದ್ದರೂ ಅವುಗಳನ್ನು ಶಾಪವಾಣಿ ಎಂದು ಗೃಹಿಸಬೇಕೆ? ಇದನ್ನು ನಿರ್ಧರಿಸುವದು ಕಠಿಣವಿದೆ. ಅವಳ ಉದ್ಗಾರದಲ್ಲಿಯ ಉತ್ತರಾರ್ಧವು ಮಾತ್ರ ಪೂರ್ಣವಾಗಿ ಸತ್ಯಕ್ರಿಯೆಯಾಗಿದೆ.</br>
{{gap}}ವೇದವತಿಯಂತೆ, ಉಮಾ, ನಂದಿಕೇಶ್ವರ, ರಂಭಾ ಮತ್ತು ವರುಣಕನ್ಯೆಯರ ಉದ್ಗಾರಗಳ ಸ್ಮರಣ ರಾವಣನಿಗಾಯಿತು.</br></br>
{{center|'''೪೪. ಅನರಣ್ಯ < ರಾವಣ'''}}
{{center|'''ಉತ್ತರಕಾಂಡ/೧೯'''}}
{{gap}}ಅನರಣ್ಯನು ರಾವಣನಿಗೆ ಕೊಟ್ಟ ಶಾಪದ ಬಗ್ಗೆ ಅಗಸ್ತ್ಯಮುನಿಯು ರಾಮನಿಗೆ ಹೇಳುತ್ತಾನೆ:</br>
{{gap}}'ಮರುತ್ತ' ರಾಜನನ್ನು ಜಯಿಸಿದ ನಂತರ ರಾವಣನು, "ನನ್ನೊಡನೆ ಯುದ್ಧ ಮಾಡಿರಿ; ಇಲ್ಲವೇ ಪರಾಜಯವನ್ನು ಒಪ್ಪಿಕೊಳ್ಳಿರಿ!" ಎಂದು ಆಹ್ವಾನಿಸುತ್ತ ಅನೇಕ ಪಟ್ಟಣಗಳತ್ತ ಹೋದನು. ದುಷ್ಯಂತ, ಸುರಥ, ಗಾಧಿ, ಗಯ ಮೊದಲಾದ ರಾಜರು ತಮ್ಮ ಮತ್ತು ರಾವಣನ ಬಲಾಬಲಗಳನ್ನು ಅರಿತು ತಮ್ಮ ಪರಾಭವವನ್ನು ಒಪ್ಪಿಕೊಂಡರು. ಆ ಸಮಯದಲ್ಲಿ ಅಯೋಧ್ಯೆಯಲ್ಲಿ ಇಕ್ಷ್ವಾಕುಕುಲೋತ್ಪನ್ನನಾದ 'ಅನರಣ್ಯ' ರಾಜನು ಆಳುತ್ತಿದ್ದನು. ರಾವಣನು ಯುದ್ದಕ್ಕೆ ಆಹ್ವಾನಿಸಿದಾಗ ಆತನು ಅದನ್ನು ಸ್ವೀಕರಿಸಿದನು. ಕಾಳಗದಲ್ಲಿ ಅನರಣ್ಯನು ರಾವಣನ ಮೇಲೆ ಬಾಣಗಳ ಮಳೆಗರೆದನು; ಆದರೆ ಇದರಿಂದ ರಾವಣನಿಗೆ ಕೊಂಚವೂ ಅಪಾಯ ಆಗಲಿಲ್ಲ; ಅದರ ಬದಲು ರಾವಣನ ಹಸ್ತಪ್ರಹಾರದಿಂದ ಅನರಣ್ಯನು ರಥದಿಂದ ನೆಗೆದು ಭೂಮಿಗೆ ಬಿದ್ದನು. ಆಗ ರಾವಣನು ಅಪಹಾಸದಿಂದ "ನನ್ನೊಡನೆ ದ್ವಂದ್ವಕ್ಕೆ ನಿಲ್ಲುವವರು ಈ ತ್ರಿಲೋಕಗಳಲ್ಲಿ ಯಾರೂ ಇಲ್ಲ; ವಿಷಯಲೋಲುಪನಾಗಿದ್ದ ನೀನು ನನ್ನ ಬಲದ, ಸಾಮರ್ಥ್ಯದ ಸಂಗತಿಯನ್ನು ಕೇಳಿಲ್ಲವೆಂದು ತೋರುತ್ತದೆ" ಎಂದನು. ಆಗ ಮುಮುರ್ಷೂ ಅನರಣ್ಯನು- "ಆತ್ಮಪ್ರಶಂಸೆಯನ್ನು ಮಾಡಿ ಕೊಳ್ಳುವಂಥ ನಿನ್ನಿಂದ ನನಗೆ ಮೃತ್ಯು ಬಾರದೇ ಸಾಕ್ಷಾತ್ ಕಾಲನೇ ನನ್ನನ್ನಾ ವರಿಸಿದ್ದಾನೆ. ನೀನು ಕೇವಲ ನಿಮಿತ್ತಮಾತ್ರನಾಗಿರುವೆ. ನಾನು ಯುದ್ಧದಿಂದ ಕಾಲುತೆಗೆದಿಲ್ಲ; ಯುದ್ಧಕಾಲದಲ್ಲಿಯೇ ನೀನು ನನ್ನನ್ನು ವಧಿಸುತ್ತಿರುವೆ. ನಿನ್ನ<noinclude></noinclude>
qehmekobzqxu9n9t24yhsdc0wiqzfzi
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೦
104
89428
321291
233290
2026-05-20T08:59:06Z
Shreelatha.Halemane
7642
/* Validated */
321291
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೬೬|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
ನುಡಿಗಳಿಂದ ಇಕ್ಷ್ವಾಕುಕುಲವನ್ನು ನೀನು ಅವಮಾನಗೊಳಿಸಿರುವೆ; ಆದ್ದರಿಂದ ನಾನು ನಿನಗೆ ಈ ಸಂಗತಿಯನ್ನು ಹೇಳಿಡುತ್ತೇನೆ-
<small><poem>
'''ಯದಿ ದತ್ತಂ ಯದಿ ಹುತಂ ಯದಿ ಮೇ ಸುಕೃತಂ ತಪಃ |'''
'''ಯದಿ ಗುಪ್ತಾಃ ಪ್ರಜಾಃ ಸಮ್ಯಕ್ತದಾ ಸತ್ಯಂ ವಚೋಸ್ತು ಮೇ ‖೨೯‖'''
'''ಉತ್ಪತ್ಸ್ಯತೇ ಕುಲೇ ಹ್ಯಸ್ಮಿನ್ನಿಕ್ಷ್ವಾಕೂಣಾಂ ಮಹಾತ್ಮನಾಮ್ |'''
'''ರಾಮೋ ದಾಶರಥಿರ್ನಾಮ ಸ ತೇ ಪ್ರಾಣಾನ್ಹರಿಷ್ಯತಿ ‖೩೦‖'''</small></poem>
{{gap}}"ನಾನು ದಾನ ಮಾಡಿದ್ದರೆ, ಹವನ ಮಾಡಿದ್ದರೆ, ಒಳ್ಳೆಯ ತಪಸ್ಸನ್ನಾ ಚರಿಸಿದ್ದರೆ ಪ್ರಜೆಗಳ ಪರಿಪಾಲನೆಯನ್ನು ಉತ್ತಮವಾಗಿ ಮಾಡಿದ್ದರೆ, ನನ್ನ ಈ ನುಡಿಗಳು ಸತ್ಯವಾಗುವುವು. ಮಹಾತ್ಮನಾದ ಇಕ್ಷ್ವಾಕುವಿನ ಈ ಕುಲದಲ್ಲಿ ದಶರಥನ ಪುತ್ರನಾಗಿ ರಾಮನೆಂಬುವನು ಜನ್ಮತಾಳುವನು ಮತ್ತು ಆತನು ನಿನ್ನ ಪ್ರಾಣ ಹರಣವನ್ನು ಮಾಡುವನು."</br></br>
{{center|'''ಯುದ್ಧಕಾಂಡ/೬೦'''}}
{{gap}}ರಾಮನ ಬಾಣಗಳಿಂದ ಭಯಗೊಂಡ ರಾವಣನಿಗೆ ಬ್ರಹ್ಮದೇವನಿಂದ ಪಡೆದ ವರಗಳ ನೆನಪಾಯಿತು. ಆತನು ದೇವ, ದಾನವ, ಯಕ್ಷ, ರಾಕ್ಷಸ, ಪನ್ನಗರಿಂದ ತನ್ನ ವಧೆಯು ಸಾಧ್ಯವಾಗಬಾರದೆಂದು ಬೇಡಿಕೊಂಡಿದ್ದನು. ರಾವಣನಿಗೆ ಮಾನವರ ಗಣನೆಯೇ ಇರಲಿಲ್ಲ. ಮಾನವರನ್ನು ಜಯಿಸುವದು ಸಹಜಸಾಧ್ಯವೆಂಬ ನಂಬಿಕೆ ಆತನದಿತ್ತು; ಆದ್ದರಿಂದ ವರವನ್ನು ಬೇಡುವಾಗ ಆತನು ಮಾನವನ ಉಲ್ಲೇಖವನ್ನು ಮಾಡಿರಲಿಲ್ಲ. ಆಗ ಬ್ರಹ್ಮದೇವನು "ಮಾನವರಿಂದ ನಿನಗೆ ಭಯವಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೋ!" ಎಂದು ರಾವಣನಿಗೆ ಸ್ಪಷ್ಟವಾಗಿ ಹೇಳಿದ್ದನು. "ಮಹೇಂದ್ರ ಸಮನಾದ ನನ್ನನ್ನು ಈ ಮಾನವನು ಸೋಲಿಸಿದ್ದಾನೆ; ನಾನು ಆಚರಿಸಿದ ಉಗ್ರ ತಪಸ್ಸು ವ್ಯರ್ಥವಾಯಿತು!” ಎಂಬ ದುಃಖವು ರಾವಣನಿಗಾಯಿತು, ದಶರಥ ಪುತ್ರನಾದ ರಾಮನಿಂದ ತನಗೆ ಭಯವಿದೆ ಎಂಬುದರ ಮನವರಿಕೆಯಾಯಿತು. ವೇದವತಿ, ಉಮೆ, ರಂಭೆ, ನಂದಿಕೇಶ್ವರ, ವರುಣಕನ್ಯೆಯರ ವಚನಗಳು ಜ್ಞಾಪಕಕೆ ಬಂದವು. ಹಿಂದೆ ಇಕ್ಷ್ವಾಕು ಕುಲೋತ್ಪನ್ನ ಅನರಣ್ಯನು ಕೊಟ್ಟ ಶಾಪದ ಸ್ಮರಣೆಯೂ ಆಯಿತು.
<small><poem>
'''ಉತ್ಪತ್ಸ್ಯತಿ ಹಿ ಮದ್ವಂಶೆ ಪುರುಷೋ ರಾಕ್ಷಸಾಧಮ |'''
'''ಯಸ್ತ್ವಾಂ ಸಪುತ್ರಂ ಸಾಮಾತ್ಯಂ ಸಬಲಂ ಸಾಶ್ವಸಾರಥಿಯಮ್ ‖೯‖'''
'''ನಿಹನಿಷ್ಯತಿ ಸಂಗ್ರಾಮೇ ತ್ವಾಂ ಕುಲಾಧಮ ದುರ್ಮತೇ ‖೧೦‖'''</small></poem><noinclude></noinclude>
n2kb9l9jr0hveh4n7mr18b83hd7hkpo
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೧
104
89429
321292
233300
2026-05-20T09:00:01Z
Shreelatha.Halemane
7642
/* Validated */
321292
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೬೭}}</br>
{{gap}}"ಎಲೈ ರಾಕ್ಷಸಾಧಮನೇ, ಹೇ ಕುಲಾಧಮನೇ, ಹೇ ದುರ್ಮತಿಯೇ, ನನ್ನ ಕುಲದಲ್ಲಿ ಒಬ್ಬ ಪುರುಷನು ಜನ್ಮತಾಳುವನು. ಆತನು ರಣರಂಗದಲ್ಲಿ, ನಿನ್ನ ಪುತ್ರ, ಅಮಾತ್ಯ, ಸೈನ್ಯ. ಅಶ್ವ ಮತ್ತು ಸಾರಥಿ ಇವರೆಲ್ಲರೊಡನೆ ನಿನ್ನನ್ನು ವಧಿಸುವನು" ಎಂಬ ಶಾಪವನ್ನು ಅನರಣ್ಯನು ಕೊಟ್ಟಿದ್ದನು.</br>
{{gap}}ಅನರಣ್ಯನ ಉದ್ಗಾರದಲ್ಲಿ ಶಪಥ-ಸತ್ಯಕ್ರಿಯೆ ಮತ್ತು ಶಾಪ ಇವೆಲ್ಲವುಗಳ ಅಂತರ್ಭಾವವಿದೆ. ಉದ್ಗಾರದಲ್ಲಿಯ ಮೊದಲಿನ ಭಾಗವು (ಉತ್ತರಕಾಂಡ ೧೯/೨೯) ಶಪಥವು ಸತ್ಯಕ್ರಿಯೆ (ಯುದ್ಧಕಾಂಡ ೬೦/೯-೧೦ ಮತ್ತು ಉತ್ತರಕಾಂಡ ೧೯/೩೦), ಶೇಷ ಭಾಗವು ಶಾಪವಾಗಿದೆ.</br></br>
{{center|'''೪೫. (ಅನೇಕ) ಪತಿವ್ರತೆಯರು < ರಾವಣ'''}}
{{center|'''ಉತ್ತರಕಾಂಡ/೨೪'''}}
{{gap}}ಅನೇಕ ಪತಿವ್ರತೆಯರು ರಾವಣನಿಗೆ ಕೊಟ್ಟ ಶಾಪಗಳ ಮಾಹಿತಿಯನ್ನು ಅಗಸ್ತ್ಯ ಮುನಿಯು ರಾಮನಿಗೆ ಹೇಳುತ್ತಿದ್ದಾನೆ:</br>
{{gap}}ದೇವ, ದಾನವ, ರಾಜರ್ಷಿ, ರಾಕ್ಷಸ, ಯಕ್ಷ, ಅಸುರ, ಮಾನವ ಮೊದಲಾದವರ ಸುಂದರ ಸ್ತ್ರೀಯರು ಕಣ್ಣಿಗೆ ಬೀಳುತ್ತಲೇ ಅವರ ಆಪ್ತಬಾಂಧವರನ್ನು ಕೊಂದು ರಾವಣನು ಅವರನ್ನು ತನ್ನ ವಿಮಾನದಲ್ಲಿ ಸೆರೆಯಲ್ಲಿಡಲಾರಂಭಿಸಿದನು. ಹೀಗೆ ಅನೇಕ ಸ್ತ್ರೀಯರನ್ನು ಬಂಧನದಲ್ಲಿಟ್ಟನು. ಆ ಸ್ತ್ರೀಯರು ಪರಮದುಃಖಿತರಾಗಿದ್ದರು. ಆಪ್ತೇಷ್ಟರ ವಧೆಯಾದ್ದರಿಂದ ಚಿಂತೆಗೊಳಗಾಗಿದ್ದರು. ರಾವಣನ ಬಗ್ಗೆ ಅವರಿಗೆ ತುಂಬ ಭಯವೆನ್ನಿಸುತ್ತಿತ್ತು. ತಮ್ಮ ವಿಧಿಯನ್ನು ದೂಷಿಸುತ್ತ ಅವರು ಹೇಗೋ ಬಾಳುತ್ತಿದ್ದರು. ತಮ್ಮ ದುಃಖಕ್ಕೆ ಕೊನೆಯೇ ಇಲ್ಲವೆಂದುಕೊಂಡಿದ್ದರು. ಪರಸ್ತ್ರೀಯರನ್ನು ಬಲಾತ್ಕರಿಸುವ ರಾವಣನ ಕೃತಿಯಿಂದ ಅವರು ಕ್ರೋಧಯುಕ್ತರಾಗಿದ್ದರು.
<small><poem>
'''ಯಸ್ಮಾದೇಷ ಪರಕ್ಯಾಸು ರಮತೇ ರಾಕ್ಷಸಾಧಮಃ ‖೨೦‖'''
'''ತಸ್ಮಾದ್ವೈ ಸ್ತ್ರೀಕೃತೇನೈವ ವಧಂ ಪ್ರಾಪ್ಸ್ಯತಿ ದುರ್ಮತಿಃ ‖೨೧‖'''</small></poem></br>
{{gap}}"ಈ ರಾಕ್ಷಸಾಧಮನು ಪರಸ್ತ್ರೀಯರ ಸಂಗದಲ್ಲಿ ವಿಹರಿಸುತ್ತಿದ್ದಾನೆ; ಆದ್ದರಿಂದ ಓರ್ವ ಸ್ತ್ರೀಯ ಕಾರಣದಿಂದಲೇ ಈ ದುರ್ಬುದ್ಧಿಯ ರಾಕ್ಷಸನ ವಧೆಯಾಗುವದು" ಎಂಬ ಶಾಪವನ್ನು ಆ ಸ್ತ್ರೀಯರು ರಾವಣನಿಗೆ ಕೊಟ್ಟರು.<noinclude></noinclude>
5gj31922c6o6dkcsjact8vgjlke6ad7
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೨
104
89430
321293
233315
2026-05-20T09:00:49Z
Shreelatha.Halemane
7642
/* Validated */
321293
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೬೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
{{gap}}ಆ ಪತಿವ್ರತೆಯರು ಈ ರೀತಿ ನುಡಿದಾಗ ಸ್ವರ್ಗದಲ್ಲಿ ದುಂದುಭಿಗಳು ಮೊಳಗಿದವು, ಪುಷ್ಪವೃಷ್ಟಿಯಾಯಿತು. ಪತಿವ್ರತೆಯರ ಶಾಪದಿಂದ ರಾವಣನ ತೇಜಸ್ಸು, ಪ್ರಭೆ ಇಲ್ಲದಾಗಿ ಕಳಾಹೀನನಾದನು. ಆ ಸ್ತ್ರೀಯರೊಡನೆ ಇರುವದು ಆತನಿಗೆ ಸರಿ ಎನಿಸಲಿಲ್ಲ.</br></br>
{{center|'''ಯುದ್ಧಕಾಂಡ/೧೧೧'''}}
{{gap}}ರಾವಣನ ವಧೆಯನಂತರ ಮಂಡೋದರಿಯ ಶೋಕಾಲಾಪದಲ್ಲಿ ಈ ಶಾಪದ ಉಲ್ಲೇಖವಿದೆ.
<small><poem>
'''ಯಾಸ್ತ್ವಯಾ ವಿಧವಾ ರಾಜನ್ಕೃತಾ ನೈಕಾಃ ಕುಲಸ್ತ್ರಿಯಃ ‖೬೪‖'''
'''ಪ್ರತಿವ್ರತಾಧರ್ಮರತಾ ಗುರುಶುಶ್ರೂಷಣೇ ರತಾಃ |'''
'''ತಾಭಿಃ ಶೋಕಾಭಿತಪ್ತಾಭಿಃ ಶಪ್ತಃ ಪರವಶಂ ಗತಃ ‖೬೫‖'''
'''ತ್ವಯಾ ವಿಪ್ರಕೃತಾಭಿಶ್ಚ ತದಾ ತಪ್ತಸ್ತದಾಗತಮ್ |'''
'''ಪ್ರವಾದಃ ಸತ್ಯಮೇವಾಯಂ ತ್ವಾಂ ಪ್ರತಿ ಪ್ರಾಯಶೋ ನೃಪಃ ‖೬೬‖'''</small></poem></br>
{{gap}}"ಹೇ ರಾಜಶ್ರೇಷ್ಠನೇ, ಯಾವ ಅನೇಕ ಕುಲಸ್ತ್ರೀಯರನ್ನು ನೀನು ವಿಧವೆಯರನ್ನಾಗಿ ಮಾಡಿರುವೆಯೋ ಅವರೆಲ್ಲರೂ ಪತಿವ್ರತೆಯರು, ಧರ್ಮತತ್ಪರರು. ಗುರುಸೇವೆಯಲ್ಲಿ ಸತತ ದಕ್ಷರಾಗಿದ್ದರು. ಶೋಕಾವೇಗದಿಂದ ಆ ಸ್ತ್ರೀಯರು ನಿನ್ನನ್ನು ಶಪಿಸಿದ ಕಾರಣ ನೀನು ಶತ್ರುವಿನ ಅಧೀನನಾದೆ. ನಿನ್ನಿಂದ ಕಾಡಿಸಲ್ಪಟ್ಟ ಪತಿವ್ರತಾಸ್ತ್ರೀಯರು ಅಂದು ಕೊಟ್ಟ ಶಾಪದ ಫಲವು ಸಾಂಪ್ರತು ದೊರಕಿದೆ." 'ಪತಿವ್ರತೆಯರ ಕಣ್ಣೀರು ಅನರ್ಥಕ್ಕಳೆಯದೇ ಭೂಮಿಗೆ ಬೀಳುವುದಿಲ್ಲ' ಎಂಬ ನಾಣ್ಣುಡಿಯು ರಾವಣನ ಸಂದರ್ಭದಲ್ಲಿ ಸತ್ಯವಾಗಿದೆ.</br></br>
{{center|'''೪೬. ನಲಕೂಬರ < ರಾವಣ'''}}
{{center|'''ಉತ್ತರಕಾಂಡ ೨೬'''}}
{{gap}}ನಲಕೂಬರನು ರಾವಣನಿಗೆ ಕೊಟ್ಟ ಶಾಪದ ವೃತ್ತಾಂತವನ್ನು ಅಗಸ್ತ್ಯ ಋಷಿಯು ರಾಮನಿಗೆ ವಿವರಿಸುತ್ತಿದ್ದಾನೆ:</br>
{{gap}}ಒಮ್ಮೆ ರಾವಣನು ಕೈಲಾಸಪರ್ವತದಲ್ಲಿ ವಿಹರಿಸುತ್ತಿದ್ದಾಗ, ದಿವ್ಯಭೂಷಣಗಳಿಂದ ಅಲಂಕೃತಳಾದ, ಚಂದ್ರಮುಖಿಯಾದ ರಂಭೆಯು ಆತನ ಕಣ್ಣಿಗೆ ಬಿದ್ದಳು. ಲಾವಣ್ಯವತಿಯಾದ ಅವಳು ಚಂದನದ ಲೇಪನವನ್ನು ಹಚ್ಚಿಕೊಂಡಿದ್ದಳು. ಕಲ್ಪವೃಕ್ಷದ<noinclude></noinclude>
d5czilk9w54ifeadohtxvvis8yxwrgs
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೩
104
89431
321294
233345
2026-05-20T09:01:16Z
Shreelatha.Halemane
7642
/* Validated */
321294
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೬೯}}</br>
ಕುಸುಮಗಳಿಂದ ಆಕೆಯು ತನ್ನ ಕೇಶರಾಸಿಯನ್ನು ಶೃಂಗರಿಸಿಕೊಂಡಿದ್ದಳು. ದಿವ್ಯರತಿಸುಖದ ಉಪಭೋಗವನ್ನು ಪಡೆಯಲು ಅವಳು ಹೊರಟಿದ್ದಳು. ನೀಲವರ್ಣದ ಉಡುಪಿನಿಂದ ಪರಮಸುಂದರಿಯಾಗಿ ಕಾಣುತ್ತಿದ್ದಳು. ಮನ್ಮಥನ ಶರಗಳಿಂದ ಪೀಡಿತನಾದ ರಾವಣನು ಆಕೆಯ ಕೈಹಿಡಿದು, "ಎಲೈ ಸುಂದರೀ, ಎಲ್ಲಿಗೆ ಹೊರಟಿರುವೆ? ಯಾರ ಬಳಿ ಹೋಗಲಿರುವೆ?" ಎಂದು ಕೇಳಿ ಅವಳಿಂದ ರತಿಸುಖವನ್ನು ಬಯಸಿದನು.</br>
{{gap}}ಲಜ್ಜಾಯುಕ್ತೆಯಾಗಿ ರಂಭೆಯು ಭಯಭೀತಳಾದಳು. ಅವಳು ರಾವಣನಿಗೆ ವಿನಯಪೂರ್ವಕವಾಗಿ ಈ ರೀತಿ ಎಂದಳು: "ನನ್ನೊಡನೆ ಈ ರೀತಿ ಮಾತನಾಡುವುದು ನಿಮಗೆ ಯೋಗ್ಯವಲ್ಲ. ನೀವು ನನ್ನ ಮಾವಂದಿರು; ನನ್ನನ್ನು ರಕ್ಷಿಸುವದು ನಿಮ್ಮ ಕರ್ತವ್ಯ, ಧರ್ಮದಲ್ಲಿ ಬ್ರಾಹ್ಮಣನು, ವೀರತ್ವದಲ್ಲಿ ಕ್ಷತ್ರಿಯನು, ಕ್ರೋಧದಲ್ಲಿ ಅಗ್ನಿಯು ಮತ್ತು ಕ್ಷಮೆ ತೋರುವದರಲ್ಲಿ ಪೃಥ್ವಿಗೆ ಸಮಾನ, ಕುಬೇರನ ಪುತ್ರನಾದ ನಲಕೂಬರನು ನನ್ನ ಪ್ರಿಯಕರನಾಗಿದ್ದಾನೆ. ಈ ಶೃಂಗಾರವನ್ನು ಮಾಡಿಕೊಂಡು ಸಂಕೇತದ ಪ್ರಕಾರ ನಾನು ಆತನ ಬಳಿಗೆ ಹೋಗುತ್ತಿದ್ದೇನೆ; ನನಗಾಗಿ ಆತನು ಕಾಯುತ್ತಿರುತ್ತಾನೆ; ಆದಕಾರಣ ನನ್ನನ್ನು ಕೂಡಲೇ ಹೋಗಲು ಬಿಡಿ! ನಾನು ಅವನ ಬಳಿ ಹೋಗುತ್ತೇನೆ." ಈ ಮಾತನ್ನು ಕೇಳಿ ರಾವಣನು "ನೀನು ನನ್ನ ಸೊಸೆಯೆಂದುಕೊಂಡರೂ ನೀನು ಓರ್ವ ಅಪ್ಸರೆ; ಜನಸಾಮಾನ್ಯರ ನಿಯಮಗಳು ನಿನಗೆ ಅನ್ವಯಿಸುವದಿಲ್ಲ. ಅಪ್ಸರೆಯರಿಗೆ ಪತಿ ಇರುವದಿಲ್ಲ; ದೇವತೆಗಳಿಗೆ ಒಂದೇ ಪತ್ನಿ ಇರುವದಿಲ್ಲ." ಹೀಗೆಂದು ಬಲಾತ್ಕಾರ ಮಾಡಿ ರಂಭೆಯನ್ನು ಉಪಭೋಗಿಸಿದನು. ಲಜ್ಜಾ-ಭಯಗಳಿಂದ ರಂಭೆಯು ಕಂಪಿಸುತ್ತ ನಲಕೂಬರನ ಹತ್ತಿರ ಹೋದಳು. ಅವನ ಪಾದಕ್ಕೆ ಬಿದ್ದು ನಡೆದ ವೃತ್ತಾಂತವನ್ನು ಅವನಿಗೆ ಅರುಹಿದಳು. ಅದನ್ನು ಕೇಳಿ ನಲಕೂಬರನು ಕ್ರೋಧವಿವಶನಾದನು. ಕೈಯಲ್ಲಿ ಉದಕವನ್ನು ಎತ್ತಿಕೊಂಡು ಆಚಮನ ಮಾಡಿದನು-
<small><poem>
'''ಉತ್ಸಸರ್ಜ ತದಾ ಶಾಪಂ ರಾಕ್ಷಸೇಂದ್ರಾಯ ದಾರುಣಮ್ |'''
'''ಅಕಾಮಾ ತೇನ ಯಸ್ಮಾತ್ತ್ವಂ ಬಲಾದ್ ಭದ್ರೇ ಪ್ರಘರ್ಷಿತಾ ‖೫೪‖'''
'''ತಸ್ಮಾತ್ಸ ಯುವತೀಮನ್ಯಾಂ ನಾಕಾಮಾನುಪಯಾಸ್ಯತಿ |'''
'''ಯದಾ ಹ್ಯಕಾಮಾಂ ಕಾಮಾರ್ತೋ ಘರ್ಷಯಿಷ್ಯತಿ ಯೋಷಿತಾಮ್ ‖೫೫‖'''
'''ಮೂರ್ಧಾ ತು ಸಪ್ತಧಾ ತಸ್ಯ ಶಕಲೀಭವಿತಾ ತದಾ ‖೫೬‖'''</small></poem><noinclude></noinclude>
kq10dkugtfkvkvcihc4ao5suxuo1o34
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೪
104
89432
321295
233354
2026-05-20T09:02:00Z
Shreelatha.Halemane
7642
/* Validated */
321295
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೭೦|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
{{gap}}"ಎಲೈ ಕಲ್ಯಾಣೀ, ನಿನ್ನ ಇಚ್ಛೆಯಿರದಾಗ ಅವನು ನಿನ್ನನ್ನು ಬಲಾತ್ಕಾರದಿಂದ ಭೋಗಿಸಿದ್ದಾನೆ; ಇನ್ನು ಮುಂದೆ ಪುನಃ ಎಂದೂ ಸಮ್ಮತಿ ಇಲ್ಲದ ತರುಣಿಯೊಡನೆ ಆತನು ಸಮಾಗಮ ನಡೆಸಲಾರನು; ಕಾಮಪೀಡಿತನಾಗಿ ಇವನು ಇಚ್ಛೆ ಇಲ್ಲದ ಸ್ತ್ರೀಯ ಮೇಲೆ ಬಲಾತ್ಕಾರ ನಡೆಯಿಸಿದರೆ ಈತನ ತಲೆ ಸಿಡಿದು ಏಳು ಹೋಳಾಗುವುದು!" ಎಂದು ನಲಕೂಬರನು ರಾವಣನಿಗೆ ಶಾಪವನ್ನು ಕೊಟ್ಟನು.</br>
{{gap}}"ನಾನು ವೈಶ್ರವಣಪುತ್ರನಾದ ನಲಕೂಬರನೊಡನೆ ಕ್ರೀಡೆಯ ಸಂಕಲ್ಪವನ್ನು ಮಾಡಿರುವದರಿಂದ ಇಂದು ನಾನು ಆತನ ಭಾರ್ಯೆಯಾಗಿದ್ದೇನೆ. ಆದ್ದರಿಂದ ನಾನು ನಿಮ್ಮ ಸೊಸೆ." ರಂಭೆಯ ನುಡಿಯ ಈ ಉಲ್ಲೇಖವು ಶ್ರೀರಾಮಕೋಶ, ಖಂಡ ೧, ಭಾಗ ೧, ಪೃಷ್ಟಸಂಖ್ಯೆ ೬೮ರಲ್ಲಿದೆ. 'ನಾನು ಇಂದು ಅವನ ಭಾರ್ಯೆ' ಎಂಬ ಉಲ್ಲೇಖವನ್ನು ವಾಲ್ಮೀಕಿಯು ಮಾಡಿಲ್ಲ.</br>
{{gap}}ಧಮ್ತಸ್ತೇ ಸುತಸ್ಯಾಹಂ ಭಾರ್ಯಾ... ನಾನು ಧರ್ಮದಿಂದ ನಿಮ್ಮ ಮಗನ ಭಾರ್ಯೆಯಾಗಿದ್ದೇನೆ.
<small><poem>
'''ಯಥಾ ತಸ್ಯ ಹಿ ನಾನ್ಯಸ್ಯ ಭಾವೋ ಮಾಂ ಪ್ರತಿನಿಷ್ಠತಿ ‖'''</small></poem></br>
{{gap}}ಅವನನ್ನು ಪ್ರೀತಿಸುವಂತೆ ನಾನು ಬೇರೆ ಯಾರನ್ನೂ ಪ್ರೀತಿಸುವದಿಲ್ಲ. ಇದು ಸತ್ಯವಾದದ್ದು. ಶ್ಲೋಕದ ಈ ಚರಣಗಳನ್ನು ಗಮನಿಸಿದರೆ ಶ್ರೀರಾಮ ಕೋಶಕಾರರು ಯೋಜಿಸಿದ 'ಇಂದು' ಎಂಬ ಶಬ್ದದ ಬಳಕೆಯು ಸೂಕ್ತವೆನಿಸದು.</br></br>
{{center|'''೪೭. ಮುನಿಗಳು < ಹನುಮಾನ'''}}
{{center|'''ಉತ್ತರಕಾಂಡ/೩೬'''}}
{{gap}}ಹನುಮಂತನ ಗತಿ, ಮಂತಿ ಮತ್ತು ಬಲಕ್ಕೆ ಸರಿಸಮಾನರಾದವರು ಯಾರೊಬ್ಬರೂ ಇರಲಿಲ್ಲ. ಹೀಗಿದ್ದರೂ, ತನ್ನ ಬಲದ ಅರಿವು ಆತನಿಗೆ ಇರಬಾರದೆಂದು ಮುನಿಗಳು ಶಾಪವನ್ನು ಕೊಟ್ಟಿದ್ದಾರೆ. ಈ ಕಥೆಯನ್ನು ಅಗಸ್ತ್ಯ ಋಷಿಯು ರಾಮನಿಗೆ ಹೇಳುತ್ತಾನೆ.</br>
{{gap}}ವರದಿಂದ ದೊರೆತ ಬಲದಿಂದ ಹನುಮಂತನು ಅಪಾರ, ಅಗಾಧ ಸಮುದ್ರದಂತಿದ್ದಾನೆ. ಆತನ ವೇಗವು ದಿನದಿನಕ್ಕೆ ವರ್ಧಿಸುತ್ತಿದೆ. ಮಹರ್ಷಿಗಳ ಆಶ್ರಮದಲ್ಲಿ ನಿಸ್ಸಂಕೋಚವಾಗಿ ಸಂಚರಿಸಿ ಈತನು ಯಜ್ಞಪಾತ್ರಗಳನ್ನು, ಅಗ್ನಿ,<noinclude></noinclude>
3odlodjhov1e98c0hiuzin9gt32712x
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೫
104
89433
321296
233365
2026-05-20T09:02:38Z
Shreelatha.Halemane
7642
/* Validated */
321296
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಶಾಪವಾಣಿ|right=೧೭೧}}</br>
ವಲ್ಕಲಗಳನ್ನು ಭಗ್ನಗೊಳಿಸುವದು, ಧ್ವಂಸಗೊಳಿಸುವದು ಮುಂತಾದವುಗಳನ್ನು ಮಾಡುತ್ತಾನೆ. ಬ್ರಹ್ಮದಂಡದಿಂದ ಕೂಡ ಆತನ ವಧೆಯಾಗುವಂತಿಲ್ಲ. ಹೀಗಿದ್ದುದರಿಂದ ಋಷಿಗಳು ಆತನ ಅತಿಕ್ರಮಣವನ್ನು ಸಹಿಸುತ್ತಿದ್ದರು. ತಂದೆಯಾದ ಕೇಸರಿ ಹಾಗೂ ವಾಯು ಇದನ್ನು ನಿಷೇಧಿಸಿದರು. ಹನುಮಂತನು ಮರ್ಯಾದೆಯನ್ನು ಮೀರುತ್ತಿದ್ದನು. ಭೃಗು ಹಾಗೂ ಅಂಗೀರಸ ವಂಶದಲ್ಲಿಯ ಋಷಿಗಳು ಅವನ ಈ ಕಪಿಚೇಷ್ಟೆಗಳಿಂದ ಸಿಟ್ಟಾದರು; ಆದರೆ ಹನುಮಂತನನ್ನು ನಾಶಗೊಳಿಸುವ ಇಚ್ಛೆಯನ್ನು ಇಟ್ಟುಕೊಳ್ಳದೇ ಮತ್ತು ಹೆಚ್ಚಾದ ಕೋಪವನ್ನು ವ್ಯಕ್ತಮಾಡದೇ ಅವರು ಈ ರೀತಿ ನುಡಿದರು:
<small><poem>
'''ಬಾಧಸೇ ಯತ್ಸಮಾಶ್ರಿತ್ಯ ಬಲಮಸ್ಮಾದ್ಪ್ಲವಂಗಮ ‖೩೪‖'''
'''ತದ್ದೀರ್ಘಕಾಲಂ ವೇತ್ತಾಸಿ ನಾಸ್ಮಾಕಂ ಶಾಪಮೋಹಿತಃ |'''
'''ಯದಾ ತೇ ಸ್ಮಾರ್ಯತೇ ಕೀರ್ತಿಸ್ತದಾ ತೇ ವರ್ಧತೇ ಬಲಮ್ ‖೩೫‖'''</small></poem></br>
{{gap}}"ಹೇ ಕಪಿಯೇ, ಬಲದ ಆಶ್ರಯದಿಂದ ನೀನು ನಮ್ಮನ್ನು ಕಾಡುತ್ತಿರುವಿ; ನಮ್ಮ ಶಾಪದಿಂದ ಬಹುಕಾಲದವರೆಗೆ ಆ ಬಲದ ಜ್ಞಾಪಕವು ನಿನಗೆ ಇರಲಾರದು. ನಿನ್ನ ಯೋಗ್ಯತೆಯ ಬಗ್ಗೆ ಯಾರಾದರೂ ನಿನಗೆ ಜ್ಞಾಪಿಸಿಕೊಟ್ಟರೆ ಅಂದಿನಿಂದ ನಿನ್ನ ಒಲವು ಪುನಃ ವೃದ್ಧಿಂಗತವಾಗುವದು."</br>
{{gap}}ಮಹರ್ಷಿಗಳ ಈ ಉದ್ಗಾರಗಳಿಂದ ಹನುಮಂತನಿಗೆ ಸ್ವಸಾಮರ್ಥ್ಯದ ಅರಿವು ಉಳಿಯಲಿಲ್ಲವಾದ್ದರಿಂದ ಆತನು ಸೌಮ್ಯವೃತ್ತಿಯವನಾಗಿ ಆಶ್ರಮಗಳಲ್ಲಿ ಸಂಚರಿಸಹತ್ತಿದನು. ವಾಲಿ ಮತ್ತು ಸುಗ್ರೀವರಲ್ಲಿ ಹಗೆತನ ಉಂಟಾದಾಗ ಹನುಮಂತನಿಗೆ ತನ್ನಲ್ಲಿದ್ದ ಬಲದ ಸ್ಮರಣೆ ಇರಲಿಲ್ಲವಾದ್ದರಿಂದ ವಾಲಿಯ ಪಾರುಪತ್ಯವನ್ನು ಮಾಡುವದು ಆತನಿಂದಾಗಲಿಲ್ಲ.</br>
{{gap}}ಶಾಪದ ಈ ಉತ್ತರಭಾಗವು ಉಃಶಾಪದಂತಿದೆ. ಅದು ಅಯಾಚಿತವಿದೆ. ಉಃಶಾಪವು ಸಾಮಾನ್ಯವಾಗಿ ಯಾಚಿತವಿರುತ್ತದೆ; ಆದರೆ ಹನುಮಂತನು ಉಃಶಾಪವನ್ನು ಬೇಡಿಕೊಂಡ ದಾಖಲೆಯಿಲ್ಲ.</br></br>{{center|'''ಉತ್ತರಕಾಂಡ/೩೫'''}}
<small><poem>
'''ಅಮೋಘಶಾಪೈಃ ತಾಪಸ್ತು ಮುನಿಭಿಃ ಪುರಾ |'''
'''ನ ವೇತ್ತಾ ಹಿ ಬಲಂ ಸರ್ವಂ ಬಲೀ ಸನ್ನರಿಮರ್ದನ ‖೧೬‖'''</small></poem><noinclude></noinclude>
9rzbaq0t0nlvh6iz8jjfft63rsmiyqh
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೬
104
89434
321297
233379
2026-05-20T09:03:23Z
Shreelatha.Halemane
7642
/* Validated */
321297
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೧೭೨|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
{{gap}}ಅಗಸ್ತ್ಯ ಮುನಿಯು ರಾಮನಿಗೆ ಈ ರೀತಿ ಹೇಳುತ್ತಿದ್ದಾನೆ: "ಹೇ ಶತ್ರುನಾಶಕನೆ, ಹನುಮಂತನು ಬಲಶಾಲಿಯಾಗಿದ್ದರೂ ತನ್ನಲ್ಲಿರುವ ಬಲದ ಅರಿವು ಆತನಿಗೆ ಇರಲಾರದು. ಆಡಿದ ಶಾಪವು ಸುಳ್ಳಾಗದಿರುವಂಥ ಮುನಿಗಳಿಂದ ಈ ಶಾಪವು ಹನುಮಂತನಿಗೆ ದೊರಕಿದೆ."</br>
{{gap}}ಇದು ಕೇವಲ ಪುನರುಲ್ಲೇಖವಾಗಿದೆ.</br></br>
{{center|'''೪೮. ಭೃಗು < ವಿಷ್ಣು'''}}
{{center|'''ಉತ್ತರಕಾಂಡ/೫೧'''}}
{{gap}}ಹಿಂದೆ ದುರ್ವಾಸಮನಿಯು ಹೇಳಿದ ಒಂದು ಕಥೆಯನ್ನು ಸಾರಥಿಯಾದ ಸುಮಂತ್ರನು ಲಕ್ಷ್ಮಣನಿಗೆ ಹೇಳುತ್ತಿದ್ದಾನೆ:</br>
{{gap}}ಒಮ್ಮೆ ದಶರಥರಾಜನು ವಸಿಷ್ಠ ಮುನಿಯ ಆಶ್ರಮಕ್ಕೆ ಹೋಗಿದ್ದನು. ಅಲ್ಲಿ ದುರ್ವಾಸ ಋಷಿಯ ದರ್ಶನವಾಯಿತು. ವರ್ಷಾಕಾಲದ ವಾಸಕ್ಕಾಗಿ ದುರ್ವಾಸ ಋಷಿಯು ಅಲ್ಲಿಗೆ ಬಂದಿದ್ದನು. ಆ ಇಬ್ಬರೂ ಋಷಿಗಳನ್ನು ರಾಜನು ಅಭಿವಾದಿಸಿದನು. ಅವರು ಸಹ ರಾಜನಿಗೆ ಯಥೋಚಿತ ಸ್ವಾಗತವನ್ನು ಬಯಸಿದರು. ದಶರಥರಾಜನು ದುರ್ವಾಸ ಋಷಿಯನ್ನು ಕುರಿತು ಈ ರೀತಿ ಪ್ರಶ್ನಿಸಿದನು: "ನಮ್ಮ ವಂಶವು ಎಷ್ಟು ಕಾಲದವರೆಗೆ ನಡೆಯುವದು? ರಾಮನ ಆಯುಸ್ಸು ಎಷ್ಟಿದೆ? ಇತರ ಪುತ್ರರ ಆಯುರ್ಮರ್ಯಾದೆ ಎಷ್ಟೆಷ್ಟಿದೆ? ರಾಮನ ಮಕ್ಕಳು ಎಷ್ಟು ಕಾಲ ಜೀವಿಸುವರು? ಈ ಬಗ್ಗೆ ಹೇಳಬೇಕು" ಎಂದು ಪ್ರಾರ್ಥಿಸಿಕೊಂಡನು. ಆಗ ದುರ್ವಾಸನು ಪೂರ್ವವೃತ್ತಾಂತವನ್ನು ಹೇಳಿದನು:</br>
{{gap}}ದೇವ, ದೈತ್ಯರಲ್ಲಿ ಯುದ್ಧ ನಡೆದಾಗ ದೇವತೆಗಳು ದೈತ್ಯರನ್ನು ಹೀಯಾಳಿಸ ಹತ್ತಿದರು. ಆಗ ದೈತ್ಯರು ಭೃಗುಪತ್ನಿಯ ಆಶ್ರಯವನ್ನು ಪಡೆದರು. ಅವಳು ದೈತ್ಯರಿಗೆ ಅನುಭವವನ್ನಿತ್ತಳು. ದೈತ್ಯರು ಆಕೆಯ ರಕ್ಷಣೆಯಲ್ಲಿರುವುದನ್ನು ಕಂಡು ವಿಷ್ಣುವಿಗೆ ರೇಗಿತು. ಆತನು ತನ್ನ ಚಕ್ರದಿಂದ ಭೃಗುಪತ್ನಿಯ ಶಿರವನ್ನು ಹಾರಿಸಿದನು. ಪತ್ನಿಯ ವಧೆಯಾಗಿದ್ದನ್ನು ಕಂಡು ಭೃಗುವು ಅತ್ಯಂತ ಕ್ರೋಧಾವಿಷ್ಟನಾದನು.
<small><poem>
'''ಶಶಾಪ ಸಹಸಾ ಕ್ರುದ್ಧೋ ವಿಷ್ಣುಂ ರಿಪುಕುಲಾರ್ದನಮ್ ‖೧೪‖'''
'''ಯಸ್ಮಾದವಧ್ಯಾಂ ಮೇ ಪತ್ನೀಂ ಅವಧೀಃ ಕ್ರೋಧಮೂರ್ಚ್ಛಿತಃ |'''
'''ತಸ್ಮಾತ್ತ್ವಂ ಮಾನುಷೇ ಲೋಕೇ ಜನಯಿಷ್ಯಸಿ ಜನಾರ್ದನ ‖೧೫‖'''
'''ತತ್ರ ಪತ್ನೀವಿಯೋಗಂ ತ್ವಂ ಪ್ರಾಪ್ಸ್ಯಸೇ ಬಹುವಾರ್ಷಿಕಮ್ ‖೧೬‖'''</small></poem><noinclude></noinclude>
rmcupkj9hwqlzy0e6v0kfsiqgub6asr
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೨೧
104
89435
321315
242302
2026-05-20T09:09:11Z
Pragathi. BH
7585
/* Validated */
321315
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಶಪಥ, ಸತ್ಯಕ್ರಿಯೆ|right=೧೯೭}}</br>{{center|'''೩. ರಾಮನ ಶಪಥ'''}}{{center|'''ಯುದ್ಧಕಾಂಡ/೧೯'''}}{{gap}}ರಾಮನು ವಿಭೀಷಣನಿಗೆ ಶಪಥಪೂರ್ವಕವಾಗಿ ಹೇಳುತ್ತಿದ್ದಾನೆ. ವಿಭೀಷಣನು ರಾಮನಿಗೆ ಶರಣು ಬಂದಾಗ ರಾಮನು ಅವನಿಗೆ ಅಭಯ ವನ್ನಿತ್ತನು. ರಾಕ್ಷಸರ ಬಲಾಬಲದ ನಿಜವಾದ ಮಾಹಿತಿಯನ್ನು ತಿಳಿಸಲು ವಿನಂತಿಸಿದನು. “ಬ್ರಹ್ಮದೇವನ ವರದಿಂದ ರಾವಣನ ವಧೆಯಾಗುವಂತಿಲ್ಲ; ಕುಂಭಕರ್ಣನು ಬಹಳ ಬಲಾಢ್ಯ ನಾಗಿದ್ದಾನೆ; ಇಂದ್ರಜಿತವು ಯುದ್ಧದಲ್ಲಿ ಅತಿನಿಪುಣನಿದ್ದಾನೆ” ಎಂದು ಹೇಳಿ ವಿಭೀಷಣನು, ಮಹೋದರ ಮಹಾ ಪಾರ್ಶ್ವಾದಿ ಅನ್ಯರಾಕ್ಷಸರ ಶಕ್ತಿ ಸಾಮರ್ಥ್ಯದ ಸವಿಸ್ತರ ಕಲ್ಪನೆಯನ್ನು ರಾಮನಿಗೆ ಮಾಡಿಕೊಟ್ಟನು. ಇದನ್ನು ಕೇಳಿಕೊಂಡು ರಾಮನು ಸಂತೋಷಗೊಂಡು, ತುಸು ಆಲೋಚಿಸಿ ಈ ರೀತಿ ನುಡಿದನು: “ನೀನು ಹೇಳಿದ ಸಂಗತಿಯು ನನಗೆ ಅರ್ಥವಾಯಿತು.”<small><poem>{{gap|3em}}'''ಅಹಂ ಹತ್ವಾ ದಶಗ್ರೀವಂ ಸಪ್ರಹಸ್ತಂ ಸಹಾತ್ಮಜಮ್ |'''
{{gap|3em}}'''ರಾಜಾನಂ ತ್ವಾಮ ಕರಿಷ್ಯಾಮಿ ಸತ್ಯಮೇತಚ್ಛೃಣೋತು ಮೇ ‖೧೯‖'''
{{gap|3em}}'''ರಸಾತಲಂ ವಾ ಪ್ರತಿರೇತ್ಪಾತಾಲಂ ವಾಪಿ ರಾವಣಃ |'''
{{gap|3em}}'''ಪಿತಾಮಹಸಕಾಶಂ ವಾ ನ ಮೇ ಜೀವನ್ವಿಮೋಕ್ಷ್ಯತೇ ‖೨೦‖'''
{{gap|3em}}'''ಅಹತ್ವಾ ರಾವಣಂ ಸಂಖ್ಯೇ ಸಪುತ್ರಜನಬಾಂಧವಮ್ |'''
{{gap|3em}}'''ಅಯೋಧ್ಯಾಂ ನ ಪ್ರವೇಕ್ಷ್ಯಾಮಿ ತ್ರಿಭಿಸ್ತೈರ್ಭ್ರಾತೃಭಿಃ ಶಪೇ ‖೨೧‖'''</small></poem></br>{{gap}}“ಪ್ರಹಸ್ತ ಹಾಗೂ ಪುತ್ರರ ಸಮೇತ ನಾನು ರಾವಣನನ್ನು ವಧಿಸಿ ನಿನಗೆ ಪಟ್ಟ ಕಟ್ಟುವೆ; ನನ್ನ ಈ ಸತ್ಯವಚನವನ್ನು ನೀನು ಆಲಿಸು! ರಾವಣನು ರಸಾತಳಕ್ಕೆ ಹೋಗಲಿ, ಪಾತಾಳವನ್ನು ನುಗ್ಗಲಿ, ಅಥವಾ ಬ್ರಹ್ಮದೇವನತ್ತ ಧಾವಿಸಲಿ, ಎಲ್ಲಿ ಹೋದರೂ ನನ್ನಿಂದ ಪಾರಾಗಿ ಜೀವಿತವಾಗಿ ಉಳಿಯಲಾರ! ಪುತ್ರರು, ಸ್ವಜನ ಬಾಂಧವರೊಂದಿಗೆ ಆ ರಾವಣನನ್ನು ಸಾಂಪ್ರತ ಸಂಗ್ರಾಮದಲ್ಲಿ ವಧಿಸದೇ ನಾನು ಅಯೋಧ್ಯೆಯನ್ನು ಪ್ರವೇಶಿಸಲಾರೆನು; ನನ್ನ ಮೂರು ತಮ್ಮಂದಿರ ಆಣೆಯಿಟ್ಟು ನಾನು ಇದನ್ನು ಹೇಳುತ್ತೇನೆ” ಎಂದು ರಾಮನು ನುಡಿದನು.</br>{{gap}}ಇದನ್ನು ಕೇಳಿ ವಿಭೀಷಣನು ರಾಮನಿಗೆ ವಂದಿಸಿದನು. ರಾಕ್ಷಸರನ್ನು ವಧಿಸಲು ಲಂಕೆಯ ಮೇಲೆ ದಂಡೆತ್ತಿ ಬರಲು ಸಹಾಯವನ್ನು ನೀಡುವೆನೆಂದು ಒಪ್ಪಿಕೊಂಡನು. ರಾಮನಿಗೆ ಅತಿಶಯ ಆನಂದವೆನಿಸಿತು. ಸಮುದ್ರದಿಂದ ನೀರನ್ನು<noinclude></noinclude>
fhwpt79fvzuoniykiw18l4x3i7b46z3
321316
321315
2026-05-20T09:09:11Z
Shreelatha.Halemane
7642
/* Validated */
321316
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಶಪಥ, ಸತ್ಯಕ್ರಿಯೆ|right=೧೯೭}}</br>
{{center|'''೩. ರಾಮನ ಶಪಥ'''}}
{{center|'''ಯುದ್ಧಕಾಂಡ/೧೯'''}}
{{gap}}ರಾಮನು ವಿಭೀಷಣನಿಗೆ ಶಪಥಪೂರ್ವಕವಾಗಿ ಹೇಳುತ್ತಿದ್ದಾನೆ. ವಿಭೀಷಣನು ರಾಮನಿಗೆ ಶರಣು ಬಂದಾಗ ರಾಮನು ಅವನಿಗೆ ಅಭಯ ವನ್ನಿತ್ತನು. ರಾಕ್ಷಸರ ಬಲಾಬಲದ ನಿಜವಾದ ಮಾಹಿತಿಯನ್ನು ತಿಳಿಸಲು ವಿನಂತಿಸಿದನು. “ಬ್ರಹ್ಮದೇವನ ವರದಿಂದ ರಾವಣನ ವಧೆಯಾಗುವಂತಿಲ್ಲ; ಕುಂಭಕರ್ಣನು ಬಹಳ ಬಲಾಢ್ಯ ನಾಗಿದ್ದಾನೆ; ಇಂದ್ರಜಿತವು ಯುದ್ಧದಲ್ಲಿ ಅತಿನಿಪುಣನಿದ್ದಾನೆ” ಎಂದು ಹೇಳಿ ವಿಭೀಷಣನು, ಮಹೋದರ ಮಹಾ ಪಾರ್ಶ್ವಾದಿ ಅನ್ಯರಾಕ್ಷಸರ ಶಕ್ತಿ ಸಾಮರ್ಥ್ಯದ ಸವಿಸ್ತರ ಕಲ್ಪನೆಯನ್ನು ರಾಮನಿಗೆ ಮಾಡಿಕೊಟ್ಟನು. ಇದನ್ನು ಕೇಳಿಕೊಂಡು ರಾಮನು ಸಂತೋಷಗೊಂಡು, ತುಸು ಆಲೋಚಿಸಿ ಈ ರೀತಿ ನುಡಿದನು: “ನೀನು ಹೇಳಿದ ಸಂಗತಿಯು ನನಗೆ ಅರ್ಥವಾಯಿತು.”
<small><poem>
{{gap|3em}}'''ಅಹಂ ಹತ್ವಾ ದಶಗ್ರೀವಂ ಸಪ್ರಹಸ್ತಂ ಸಹಾತ್ಮಜಮ್ |'''
{{gap|3em}}'''ರಾಜಾನಂ ತ್ವಾಮ ಕರಿಷ್ಯಾಮಿ ಸತ್ಯಮೇತಚ್ಛೃಣೋತು ಮೇ ‖೧೯‖'''
{{gap|3em}}'''ರಸಾತಲಂ ವಾ ಪ್ರತಿರೇತ್ಪಾತಾಲಂ ವಾಪಿ ರಾವಣಃ |'''
{{gap|3em}}'''ಪಿತಾಮಹಸಕಾಶಂ ವಾ ನ ಮೇ ಜೀವನ್ವಿಮೋಕ್ಷ್ಯತೇ ‖೨೦‖'''
{{gap|3em}}'''ಅಹತ್ವಾ ರಾವಣಂ ಸಂಖ್ಯೇ ಸಪುತ್ರಜನಬಾಂಧವಮ್ |'''
{{gap|3em}}'''ಅಯೋಧ್ಯಾಂ ನ ಪ್ರವೇಕ್ಷ್ಯಾಮಿ ತ್ರಿಭಿಸ್ತೈರ್ಭ್ರಾತೃಭಿಃ ಶಪೇ ‖೨೧‖'''</small></poem></br>
{{gap}}“ಪ್ರಹಸ್ತ ಹಾಗೂ ಪುತ್ರರ ಸಮೇತ ನಾನು ರಾವಣನನ್ನು ವಧಿಸಿ ನಿನಗೆ ಪಟ್ಟ ಕಟ್ಟುವೆ; ನನ್ನ ಈ ಸತ್ಯವಚನವನ್ನು ನೀನು ಆಲಿಸು! ರಾವಣನು ರಸಾತಳಕ್ಕೆ ಹೋಗಲಿ, ಪಾತಾಳವನ್ನು ನುಗ್ಗಲಿ, ಅಥವಾ ಬ್ರಹ್ಮದೇವನತ್ತ ಧಾವಿಸಲಿ, ಎಲ್ಲಿ ಹೋದರೂ ನನ್ನಿಂದ ಪಾರಾಗಿ ಜೀವಿತವಾಗಿ ಉಳಿಯಲಾರ! ಪುತ್ರರು, ಸ್ವಜನ ಬಾಂಧವರೊಂದಿಗೆ ಆ ರಾವಣನನ್ನು ಸಾಂಪ್ರತ ಸಂಗ್ರಾಮದಲ್ಲಿ ವಧಿಸದೇ ನಾನು ಅಯೋಧ್ಯೆಯನ್ನು ಪ್ರವೇಶಿಸಲಾರೆನು; ನನ್ನ ಮೂರು ತಮ್ಮಂದಿರ ಆಣೆಯಿಟ್ಟು ನಾನು ಇದನ್ನು ಹೇಳುತ್ತೇನೆ” ಎಂದು ರಾಮನು ನುಡಿದನು.</br>
{{gap}}ಇದನ್ನು ಕೇಳಿ ವಿಭೀಷಣನು ರಾಮನಿಗೆ ವಂದಿಸಿದನು. ರಾಕ್ಷಸರನ್ನು ವಧಿಸಲು ಲಂಕೆಯ ಮೇಲೆ ದಂಡೆತ್ತಿ ಬರಲು ಸಹಾಯವನ್ನು ನೀಡುವೆನೆಂದು ಒಪ್ಪಿಕೊಂಡನು. ರಾಮನಿಗೆ ಅತಿಶಯ ಆನಂದವೆನಿಸಿತು. ಸಮುದ್ರದಿಂದ ನೀರನ್ನು<noinclude></noinclude>
j2320shih0eufm3ay99sjx2m3xovzah
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೨೨
104
89436
321317
242314
2026-05-20T09:09:26Z
Pragathi. BH
7585
/* Validated */
321317
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೯೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ತಂದು ವಿಭೀಷಣನಿಗೆ ರಾಕ್ಷಸರ ರಾಜನೆಂದು ರಾಜ್ಯಾಭಿಷೇಕವನ್ನು ನಡೆಸಲು ಲಕ್ಷ್ಮಣನಿಗೆ ಹೇಳಿದನು.</br></br>{{center|'''೪. ಶಪಥ: ಲಕ್ಷ್ಮಣ < ಬಾಣ'''}}{{center|'''ಯುದ್ಧಕಾಂಡ/೯೧'''}}{{gap}}ಅತಿಭಯಂಕರ ಯುದ್ಧವು ಲಕ್ಷ್ಮಣ ಹಾಗೂ ಇಂದ್ರಜಿತುವಿನಲ್ಲಿ ನಡೆದಿತ್ತು; ಮೈ ನವಿರೇಳುವಂತಹದಾಗಿತ್ತು. ಲಕ್ಷ್ಮಣನು ಇಂದ್ರಜಿತುವಿನ ಎಲ್ಲ ಬಾಣಗಳನ್ನು ವ್ಯರ್ಥಗೊಳಿಸಿದನು. ಪೂರ್ವದಲ್ಲಿ ಸುರಾಸುರರಲ್ಲಿ ಯುದ್ಧ ನಡೆದಾಗ ಯಾವ ಬಾಣದಿಂದ ಇಂದ್ರನು ಅಸುರರನ್ನು ಜಯಿಸಿದ್ದನೋ ಅಂತಹ ಸರ್ಪವಿಷ ಪೂರಿತದಂಥ, ದೇವತೆಗಳಿಗೆ ಪ್ರಿಯವಾದಂಥ ಒಂದು ಬಾಣವನ್ನು ಐಂದ್ರಾಸ್ತ್ರದಿಂದ ಮಂತ್ರಿಸಿ ಲಕ್ಷ್ಮಣನು ತನ್ನ ಶ್ರೇಷ್ಠ ಬಿಲ್ಲಿಗೆ ಹೂಡಿದನು. ತನ್ನ ಇಷ್ಟಾರ್ಥವು ಫಲಿಸಬೇಕೆಂದು ಆ ಬಾಣಕ್ಕೆ ಉದ್ದೇಶಿಸಿ ಹೀಗೆಂದನು-</br>{{gap}}ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಾಶರಥಿರ್ಯದಿ |</br>{{gap}}ಪೌರುಷೇ ಚಾಪ್ರತಿದ್ವಂದ್ವಸ್ತದೈನಂ ಜಹಿ ರಾವಣಿಮ್ ‖೬೯‖</br></br>{{gap}}“ದಾಶರಥಿ ರಾಮನು ಧರ್ಮಾತ್ಮನಾಗಿದ್ದರೆ, ಸತ್ಯವಚನಿಯಾಗಿದ್ದರೆ, ಅತುಲಪರಾ ಕ್ರಮಿಯಾಗಿದ್ದರೆ, ಎಲೈ ಬಾಣವೇ, ನೀನು ಈ ರಾವಣಪುತ್ರನನ್ನು ವಧಿಸು!”</br></br>{{center|'''೫. ರಾಮನ ಶಪಥ'''}}{{center|'''ಉತ್ತರಕಾಂಡ/೪೫'''}}{{gap}}ಸೀತೆಯು ಅಗ್ನಿದಿವ್ಯವ್ನಾಚರಿಸಿ ತನ್ನ ನಿಷ್ಕಲಂಕಚಾರಿತ್ರ್ಯವನ್ನು ಸಿದ್ಧಮಾಡಿ ತೋರಿಸಿದ್ದರೂ, ಅವಳು ಪರಿಶುದ್ಧಳು, ಪೂರ್ಣ ನಿರ್ದೋಷಿಯೆಂಬ ಮನವರಿಕೆ ರಾಮನಿಗೆ ಆಗಿದ್ದರೂ, ಸೀತೆಯ ಬಗ್ಗೆ ಪ್ರಜಾಜನರ ಮನಸ್ಸಿನಲ್ಲಿಯ ಸಂಶಯವು ಕಳೆದಿರಲಿಲ್ಲ. ರಾಮನ ಬಗ್ಗೆ ಮತ್ತು ಸೀತೆಯ ಬಗ್ಗೆ ಜನರಲ್ಲಿಯ ಪಿಸುಮಾತುಗಳನ್ನು ಸಹಿಸಿಕೊಳ್ಳುವುದು ರಾಮನಿಗೆ ಸಾಧ್ಯವಿರಲಿಲ್ಲ. ರಾಜನ ಕರ್ತವ್ಯದ ದೃಷ್ಟಿಯಿಂದ ಲೋಕನಿಂದೆಗೆ ಅಸಾಧಾರಣ ಮಹತ್ವವಿತ್ತು; ಅದನ್ನು ಅಲಕ್ಷಿಸುವುದು ಆತನಿಗೆ ಸಾಧ್ಯವಿರಲಿಲ್ಲ. ನಿಂದೆಗೆ ಗುರಿಯಾದವನು ನಿಂದೆ ಅಳಿಯುವವರೆಗೆ ನರಕದಲ್ಲಿ ಬಿದ್ದಿರುತ್ತಾನೆ ಎಂಬ ಶ್ರದ್ಧೆ ಆತನದಾಗಿತ್ತು. ಪತ್ನಿಯೆಂದು<noinclude></noinclude>
5i4nr9ki4wzammh7cvdin3453ivx5vb
321320
321317
2026-05-20T09:09:59Z
Shreelatha.Halemane
7642
/* Validated */
321320
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೧೯೮|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ತಂದು ವಿಭೀಷಣನಿಗೆ ರಾಕ್ಷಸರ ರಾಜನೆಂದು ರಾಜ್ಯಾಭಿಷೇಕವನ್ನು ನಡೆಸಲು ಲಕ್ಷ್ಮಣನಿಗೆ ಹೇಳಿದನು.</br></br>
{{center|'''೪. ಶಪಥ: ಲಕ್ಷ್ಮಣ < ಬಾಣ'''}}
{{center|'''ಯುದ್ಧಕಾಂಡ/೯೧'''}}
{{gap}}ಅತಿಭಯಂಕರ ಯುದ್ಧವು ಲಕ್ಷ್ಮಣ ಹಾಗೂ ಇಂದ್ರಜಿತುವಿನಲ್ಲಿ ನಡೆದಿತ್ತು; ಮೈ ನವಿರೇಳುವಂತಹದಾಗಿತ್ತು. ಲಕ್ಷ್ಮಣನು ಇಂದ್ರಜಿತುವಿನ ಎಲ್ಲ ಬಾಣಗಳನ್ನು ವ್ಯರ್ಥಗೊಳಿಸಿದನು. ಪೂರ್ವದಲ್ಲಿ ಸುರಾಸುರರಲ್ಲಿ ಯುದ್ಧ ನಡೆದಾಗ ಯಾವ ಬಾಣದಿಂದ ಇಂದ್ರನು ಅಸುರರನ್ನು ಜಯಿಸಿದ್ದನೋ ಅಂತಹ ಸರ್ಪವಿಷ ಪೂರಿತದಂಥ, ದೇವತೆಗಳಿಗೆ ಪ್ರಿಯವಾದಂಥ ಒಂದು ಬಾಣವನ್ನು ಐಂದ್ರಾಸ್ತ್ರದಿಂದ ಮಂತ್ರಿಸಿ ಲಕ್ಷ್ಮಣನು ತನ್ನ ಶ್ರೇಷ್ಠ ಬಿಲ್ಲಿಗೆ ಹೂಡಿದನು. ತನ್ನ ಇಷ್ಟಾರ್ಥವು ಫಲಿಸಬೇಕೆಂದು ಆ ಬಾಣಕ್ಕೆ ಉದ್ದೇಶಿಸಿ ಹೀಗೆಂದನು-</br>
{{gap}}ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಾಶರಥಿರ್ಯದಿ |</br>
{{gap}}ಪೌರುಷೇ ಚಾಪ್ರತಿದ್ವಂದ್ವಸ್ತದೈನಂ ಜಹಿ ರಾವಣಿಮ್ ‖೬೯‖</br></br>
{{gap}}“ದಾಶರಥಿ ರಾಮನು ಧರ್ಮಾತ್ಮನಾಗಿದ್ದರೆ, ಸತ್ಯವಚನಿಯಾಗಿದ್ದರೆ, ಅತುಲಪರಾ ಕ್ರಮಿಯಾಗಿದ್ದರೆ, ಎಲೈ ಬಾಣವೇ, ನೀನು ಈ ರಾವಣಪುತ್ರನನ್ನು ವಧಿಸು!”</br></br>
{{center|'''೫. ರಾಮನ ಶಪಥ'''}}
{{center|'''ಉತ್ತರಕಾಂಡ/೪೫'''}}
{{gap}}ಸೀತೆಯು ಅಗ್ನಿದಿವ್ಯವ್ನಾಚರಿಸಿ ತನ್ನ ನಿಷ್ಕಲಂಕಚಾರಿತ್ರ್ಯವನ್ನು ಸಿದ್ಧಮಾಡಿ ತೋರಿಸಿದ್ದರೂ, ಅವಳು ಪರಿಶುದ್ಧಳು, ಪೂರ್ಣ ನಿರ್ದೋಷಿಯೆಂಬ ಮನವರಿಕೆ ರಾಮನಿಗೆ ಆಗಿದ್ದರೂ, ಸೀತೆಯ ಬಗ್ಗೆ ಪ್ರಜಾಜನರ ಮನಸ್ಸಿನಲ್ಲಿಯ ಸಂಶಯವು ಕಳೆದಿರಲಿಲ್ಲ. ರಾಮನ ಬಗ್ಗೆ ಮತ್ತು ಸೀತೆಯ ಬಗ್ಗೆ ಜನರಲ್ಲಿಯ ಪಿಸುಮಾತುಗಳನ್ನು ಸಹಿಸಿಕೊಳ್ಳುವುದು ರಾಮನಿಗೆ ಸಾಧ್ಯವಿರಲಿಲ್ಲ. ರಾಜನ ಕರ್ತವ್ಯದ ದೃಷ್ಟಿಯಿಂದ ಲೋಕನಿಂದೆಗೆ ಅಸಾಧಾರಣ ಮಹತ್ವವಿತ್ತು; ಅದನ್ನು ಅಲಕ್ಷಿಸುವುದು ಆತನಿಗೆ ಸಾಧ್ಯವಿರಲಿಲ್ಲ. ನಿಂದೆಗೆ ಗುರಿಯಾದವನು ನಿಂದೆ ಅಳಿಯುವವರೆಗೆ ನರಕದಲ್ಲಿ ಬಿದ್ದಿರುತ್ತಾನೆ ಎಂಬ ಶ್ರದ್ಧೆ ಆತನದಾಗಿತ್ತು. ಪತ್ನಿಯೆಂದು<noinclude></noinclude>
5fihrdx69hm0hh7xf0v3n8p4gf49ib3
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೨೩
104
89437
321318
244299
2026-05-20T09:09:38Z
Pragathi. BH
7585
/* Validated */
321318
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಶಪಥ, ಸತ್ಯಕ್ರಿಯೆ|right=೧೯೯}}</br>ಸೀತೆಯಲ್ಲಿ ಆತನಿಗೆ ಅಪಾರಪ್ರೀತಿಯಿದ್ದರೂ ಅವಳು ಅರಮನೆಯಲ್ಲಿರುವದು ಜನನಿಂದೆಯ ವಿಷಯವಾಗಿತ್ತು. ರಾಮನು ರಾಜನಾದ್ದರಿಂದ, ಸೀತೆಯನ್ನು ತ್ಯಜಿಸುವದು ತನ್ನ ಪರಮಕರ್ತವ್ಯವೆಂದು ತಿಳಿದಿದ್ದನು. ಅವಳು ಗರ್ಭಿಣಿಯಿದ್ದರೂ ಅವಳನ್ನು ಬಿಟ್ಟುಕೊಡಲು ನಿರ್ಧರಿಸಿದನು. ತನ್ನ ಈ ಆಚರಣೆಯು, ತನ್ನ ಇಚ್ಛೆಯು ಪ್ರಜೆಗಳಿಗೆ, ನೆಂಟಸ್ಥರಿಗೆ ಹಿಡಿಸಲಿಕ್ಕಿಲ್ಲ ಎಂದು ರಾಮನಿಗೆ ಅನಿಸುತ್ತಿತ್ತು. “ದೇಶದ ಗಡಿಯಾಚೆ ವಾಲ್ಮೀಕಿ ಆಶ್ರಮದ ಬಳಿ, ಗಂಗಾತೀರದೆಡೆ ಸೀತೆಯನ್ನು ಬಿಟ್ಟು ಬಾ!” ಎಂದು ಅತಿಕಠೋರ ಶಬ್ದಗಳಲ್ಲಿ ರಾಮನು ಲಕ್ಷ್ಮಣನಿಗೆ ಅಪ್ಪಣೆಯಿತ್ತನು. ಸೀತೆಯ ಪರವಾಗಿ ಯಾವ ಹೇಳಿಕೆಯನ್ನೂ ಕಿವಿಗೆ ಹಾಕಿಕೊಳ್ಳಲು ರಾಮನು ಸಿದ್ಧನಿರಲಿಲ್ಲ. ತನ್ನ ನಿರ್ಣಯದ ವಿರುದ್ಧವಾಗಿ ಯಾರೂ ನಿಲ್ಲಬಾರದೆಂದು ಆತನು ಈ ರೀತಿ ಶಪಥ ಮಾಡಿದನು-</br><small><poem>{{gap|3em}}'''ಶಾಪಿತಾ ಹಿ ಮಯಾ ಯೂಯಂ ಪಾದಾಭ್ಯಾಂ ಜೀವಿತೇನ ಚ |'''
{{gap|3em}}'''ಯೇ ಮಾಂ ವಾಕ್ಯಾಂತರೇ ಬ್ರೂಯುರನುನೇತುಂ ಕಥಂಚನ ‖೨೧‖'''
{{gap|3em}}'''ಅಹಿತಾ ನಮ ತೇ ನಿತ್ಯಂ ಮದಭೀಷ್ಟವಿಘಾತನಾಳ್ ‖೨೨‖'''</small></poem></br>{{gap}}“ನಾನು ನನ್ನ ಪಾದಗಳ ಮತ್ತು ನನ್ನ ಪ್ರಾಣದ ಶಪಥವನ್ನು ಹಾಕಿದ್ದೇನೆ, ನನ್ನ ಹೇಳಿಕೆಯ ವಿರುದ್ಧ ನನ್ನನ್ನು ಸಮಾಧಾನಪಡಿಸಲು ಯಾರಾದರೂ ಯಾವ ಮಾತುಗಳನ್ನಾಡಿದರೂ ಅದರಿಂದ ನನ್ನ ಇಷ್ಟಾರ್ಥಕ್ಕೆ ಆತಂಕವಾಗುವದರಿಂದ ಅವರು ಸದಾ ಕಾಲವೂ ನನಗೆ ಶತ್ರುಗಳಂತಾಗುವರು.”</br>{{gap}}ರಾಮನ ಈ ಶಪಥದಿಂದ ಲಕ್ಷ್ಮಣ ಹಾಗೂ ಇತರರೆಲ್ಲರೂ ಉತ್ತರಿಸದಂತಾದರು. ಒಂದಕ್ಷರವನ್ನು ನುಡಿಯಲು ಕೂಡ ಯಾರಿಗೂ ಅವಕಾಶವನ್ನು ಕೊಡಲಿಲ್ಲ.</br></br>{{center|'''೬. ಸೀತೆಯು ಪರಿಶುದ್ಧಳಿದ್ದ ಬಗ್ಗೆ ವಾಲ್ಮೀಕಿಯ ಶಪಥ'''}}{{center|'''ಉತ್ತರಕಾಂಡ/೬೫'''}}{{gap}}ರಾಮನ ಅಶ್ವಮೇಧ ಯಜ್ಞ ನಡೆದ ಸಮಯದಲ್ಲಿ, ವಾಲ್ಮೀಕಿಯು ಲವಕುಶರಿಗೆ ರಾಮಾಯಣವನ್ನು ಹಾಡಲು ಆಜ್ಞಾಪಿಸಿದನು. ಋಷಿವೃಂದದ, ರಾಜರುಗಳ, ವೇದಜ್ಞರ ಸಮ್ಮುಖದಲ್ಲಿ, ಆ ಬಾಲಕರು ರಾಮಾಯಣದ ಇಪ್ಪತ್ತು ಸರ್ಗಗಳನ್ನು ಇಂಪಾದ ಸ್ವರದಲ್ಲಿ ತಾಲ-ಲಯಬದ್ಧವಾಗಿ ಹಾಡಿದರು. ರಾಮನ ಸಹಿತ ಸಭಿಕರೆಲ್ಲರೂ ಅದನ್ನು ಕೇಳಿ ಆಶ್ಚರ್ಯಭರಿತರಾದರು ಪ್ರೋತ್ಸಾಹಿಸಲೆಂದು ಈ<noinclude></noinclude>
p556tun8atcqucnx9irz7rxyfasw4jb
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೨೪
104
89438
321319
249082
2026-05-20T09:09:52Z
Pragathi. BH
7585
/* Validated */
321319
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=೨೦೦|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>ಕುಮಾರರಿಗೆ ಸಂಭಾವನಾ ದ್ರವ್ಯವನ್ನು ಮತ್ತು ಅವರಿಗೆ ಇಷ್ಟವಿದ್ದುದನ್ನು ಕೊಡಲು ರಾಮನು ಅಪ್ಪಣೆ ಕೊಟ್ಟನು. ಆ ಕುಮಾರರು ಅದು ಯಾವದನ್ನೂ ಸ್ವೀಕರಿಸಲು ನಿರಾಕರಿಸಿದರು.</br>{{gap}}ಈ ಕಾವ್ಯವನ್ನು ಯಾರಿಂದ ಪಡೆದಿರುವಿರಿ? ಈ ಕವಿಯು ಯಾರು? ಈ ಕವಿಯ ನಿವಾಸಸ್ಥಾನದಲ್ಲಿದೆ? ಕಾವ್ಯಶ್ಲೋಕಗಳ ಸಂಖ್ಯೆ ಎಷ್ಟು? ಎಂದು ಮುಂತಾಗಿ ರಾಮನು ಕೇಳಿದ ಪ್ರಶ್ನೆಗಳಿಗೆ ಈ ಕುಮಾರರು-</br>{{gap}}"ಈ ಕಾವ್ಯದಲ್ಲಿ ನಿನ್ನ ಚರಿತ್ರೆಯನ್ನು ಸಂಪೂರ್ಣವಾಗಿ ರೂಪಿಸಲಾಗಿದೆ. ಈ ಕಾವ್ಯವನ್ನು ರಚಿಸಿದ ಕವಿಗಳೆಂದರೆ ಭಗವಾನ್ ವಾಲ್ಮೀಕಿ ಮುನಿಗಳು; ಅವರು ಸಾಂಪ್ರತ ಯಜ್ಞಭೂಮಿಗೆ ಬಂದಿದ್ದಾರೆ. ಈ ಕಾವ್ಯಖಂಡದಲ್ಲಿ ಉತ್ತರ ಕಾಂಡವನ್ನೊಳಗೊಂಡು ಏಳು ಕಾಂಡಗಳು, ಐದುನೂರು ಸರ್ಗಗಳು, ಇಪ್ಪತ್ತು ನಾಲ್ಕು ಸಹಸ್ರ ಶ್ಲೋಕಗಳು ರಚಿತವಾಗಿವೆ. ಇದು ಪೂರ್ಣ ರಾಮಚರಿತ್ರೆಯಾಗಿದೆ” ಎಂದು ತಿಳಿಸಿದರು. ಅದನ್ನು ಕೇಳುವ ಇಚ್ಛೆಯನ್ನು ರಾಮನು ಪ್ರಕಟಿಸಿದಾಗ ಅವರು ಸಂಪೂರ್ಣ ರಾಮಾಯಣವನ್ನು ಹಾಡಿ ತೋರಿಸಿದರು. ಈ ಲವ-ಕುಶರು ಸೀತೆಯ ಪುತ್ರರು ಎಂದು ತಿಳಿದಬಂದ ನಂತರ, ರಾಮನು ವಾಲ್ಮೀಕಿಮುನಿಗಳಿಗೆ ಸೇವಕರಿಂದ ಸಂದೇಶವನ್ನು ಕಳುಹಿಸಿದನು.</br><small><poem>{{gap|3em}}'''ಯದಿ ಶುದ್ಧಸಮಾಚಾರಾ ಯದಿ ವಾ ವೀತಕಲ್ಮಷಾ |</br>{{gap|3em}}ಕರೋತ್ವಿಹಾತ್ಮನಃ ಶುದ್ಧಿ ಮನುಮಾನ್ಯ ಮಹಾಮುನಿಮ್ ॥೪॥'''</small></poem></br>{{gap}}“ಸೀತೆಯ ಆಚರಣೆಯು ಮೂಲತಃ ಶುದ್ಧವಾಗಿದ್ದರೆ ಅಥವಾ ಆಶ್ರಮದಲ್ಲಿ ವಾಸ ಮಾಡಿದ್ದರಿಂದ ದೋಷರಹಿತಳಾಗಿದ್ದರೆ, ಮಹರ್ಷಿಗಳ ಅನುಜ್ಞೆಯನ್ನು ಪಡೆದು ಅವಳು ತನ್ನ ಪಾವಿತ್ರ್ಯದ ಬಗ್ಗೆ ಇಲ್ಲಿ ಶಪಥ ಮಾಡಬೇಕು!”</br>{{gap}}ವಾಲ್ಮೀಕಿ ಮುನಿಗಳ ಮತ್ತು ಸೀತೆಯ ಅಭಿಪ್ರಾಯಗಳನ್ನು ಅರಿತುಕೊಂಡ ನಂತರ ರಾಮನು ಮತ್ತೆ ಹೇಳಿಕಳುಹಿಸಿದನು:</br><small><poem>{{gap|3em}}'''ಶ್ವಃ ಪ್ರಭಾತೇ ತು ಶಪಥಂ ಮೈಥಿಲೀ ಜನಕಾತ್ಮಜಾ |'''</br>{{gap|3em}}'''ಕರೋತು ಪರಿಷನ್ಮಧ್ಯೇ ಶೋಧನಾರ್ಥಂ ಮಮೈವ ಚ ǁ೬ǁ'''</small></poem></br>{{gap}}“ನಾಳೆಯ ಬೆಳಿಗ್ಗೆ ಜನಕನ ಕನ್ಯೆಯಾದ ಮೈಥಿಲಿಯು ಸಭೆಗೆ ಬಂದು ನನ್ನ ಮತ್ತು ನನ್ನ ಮೇಲೆ ಬಂದ ಆಪಾದನೆಯನ್ನು ದೂರಮಾಡಲು ಶಪಥ ಮಾಡಬೇಕು!” ಈ ಶಪಥವನ್ನು ಕೇಳಲು ಗುರುಜನರು, ರಾಜರುಗಳು, ಶಿಷ್ಯಂದಿರ<noinclude></noinclude>
qobcmsqe1m2ddltwa2ynef9zyppra8z
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೨೫
104
89439
321321
249094
2026-05-20T09:10:03Z
Pragathi. BH
7585
/* Validated */
321321
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಶಪಥ, ಸತ್ಯಕ್ರಿಯೆ|right=೨೦೧}}</br>ಸಮೂಹ ಮತ್ತು ಇನ್ನು ಯಾರು ಬೇಕಾದರೂ ಬಂದು ನೋಡಲು ಎಲ್ಲರಿಗೂ ಮುಕ್ತತೆಯಿತ್ತು.</br>{{gap}}"ಸ್ತ್ರೀಯಾದವಳಿಗೆ ಪತಿಯೇ ಪರಮದೈವವಿದ್ದುದರಿಂದ ರಾಮನ ಹೇಳಿಕೆಯಂತೆ ಅವಳು ನಡೆದುಕೊಳ್ಳುವಳು” ಎಂಬ ಭರವಸೆಯನ್ನು ವಾಲ್ಮೀಕಿಯು ಕೊಟ್ಟನು.</br></br>{{center|'''ಉತ್ತರಕಾಂಡ/೯೬'''}}
{{gap}}ನಿಶ್ಚಯಗೊಳಿಸಿದ ತಿಥಿಯ ದಿನ ಸರಿಯಾಗಿ ವಾಲ್ಮೀಕಿಮುನಿಯು ಸೀತೆಯನ್ನು ಕರೆದುಕೊಂಡು ಜನರ ಸಭೆಗೆ ಆಗಮಿಸಿದನು. ವಾಲ್ಮೀಕಿಮುನಿಯು ರಾಮನಿಗೆ ಇಂತೆಂದನು- “ಹೇ ದಾಶರಥೇ, ಲೋಕಾಪವಾದಕ್ಕಾಗಿ ನೀನು ಯಾವಳನ್ನು ನನ್ನ ಆಶ್ರಮದ ಬಳಿ ತ್ಯಜಿಸಿದೆಯೋ, ಅವಳೇ ಈ ಧರ್ಮನಿರತೆ ಪತಿವ್ರತೆ ಸೀತೆ; ಲೋಕಾಪವಾದಕ್ಕೆ ತಲ್ಲಣಗೊಂಡಿರುವ ನಿನಗೆ ಮನವರಿಕೆ ಮಾಡಿಕೊಡಲು ಸಿದ್ಧಳಿದ್ದಾಳೆ. ನೀನು ಅವಳಿಗೆ ಅನುಮತಿಯನ್ನು ಕೊಡು. ಅವಳಿಜವಳಿ ಮಕ್ಕಳಾದ ಈ ಜಾನಕೀಪುತ್ರರು ನಿನ್ನ ಅಜಿಂಕ್ಯ ಪುತ್ರರೇ ಆಗಿದ್ದಾರೆ.
ಈ ಸತ್ಯವನ್ನು ನಾನು ನುಡಿಯುತ್ತಿದ್ದೇನೆ. ನಾನು ಪ್ರಾಚೇತಸನ ಹತ್ತನೆಯ ಪುತ್ರನು, ಅಸತ್ಯ ನುಡಿಯುವದು ನನ್ನ ಸ್ಮರಣೆಯಲ್ಲೂ ಇಲ್ಲ. ಈ ಪುತ್ರರು ನಿನ್ನ ಪುತ್ರರೇ ಇದ್ದಾರೆ. ನನ್ನ ಪಂಚೇಂದ್ರಿಯಗಳ ಮತ್ತು ಆರನೆಯದಾದ ಮನಸ್ಸಿನ ಯೋಗದಿಂದ- 'ಈ ಸೀತೆಯು ಪರಿಶುದ್ಧಳು' ಎಂದು ಮನಗಂಡನಂತರವೇ ನಾನು ಅವಳನ್ನು ಬರಮಾಡಿಕೊಂಡಿದ್ದೆ. ಇವಳ ವರ್ತನೆಯು ಶುದ್ಧವಾಗಿದೆ; ಇವಳು ಪಾಪರಹಿತಳು; ಇವಳಿಗೆ ಪತಿಯೇ ಪರಮದೈವವೆಂದಿದೆ.”</br><small><poem>{{gap|3em}}'''ಬಹುವರ್ಷಸಹಸ್ರಾಣಿ ತಪಶ್ಚರ್ಯಾ ಮಯಾ ಕೃತಾ |</br>{{gap|3em}}ನೋಪಾಶ್ನೀಯಾಂ ಫಲಂ ತಸ್ಯಾ ದುಷ್ಟೇಯಂ ಯದಿ ಮೈಥಿಲೀ ǁ೨೦ǁ</br>{{gap|3em}}ಮನಸಾ ಕರ್ಮಣಾ ವಾಚಾ ಭೂತಪೂರ್ವಂ ನ ಕಿಲ್ಬಿಷಮ್ |</br>{{gap|3em}}ತಸ್ಯಾಹಂ ಪಲಮಶ್ನಾಮಿ ಅಪಾಪಾ ಮೈಥಿಲೀ ಯೆಇ ǁ೨೧ǁ'''</br></br></small></poem>{{gap}}“ಈ ಮೈಥಿಲಿಯು ದೋಷಿಯಾಗಿದ್ದಲ್ಲಿ ಸಹಸ್ರಾರು ವರ್ಷಗಳ ನನ್ನ ತಪಸ್ಸಿನ ಫಲವು ನನಗೆ ಲಭಿಸದಿರಲಿ! ಮೈಥಿಲಿಯು ಪಾಪರಹಿತವಾಗಿದ್ದಲ್ಲಿ ಮಾತ್ರ, ನನ್ನಿಂದ ಕಾಯಾ ವಾಚಾ ಮನಸಾ ನಡೆಯದಿದ್ದ ಪಾತಕಗಳ ಫಲವು ನನಗೆ ಪ್ರಾಪ್ತವಾಗಲಿ!”<noinclude></noinclude>
thqjpuqhe0n4nddrm4aqb372p5avk1b
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೨೭
104
89441
321322
279842
2026-05-20T09:10:19Z
Pragathi. BH
7585
/* Validated */
321322
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=ಶಪಥ, ಸತ್ಯಕ್ರಿಯೆ|center=|right=೨೩}}
{{gap}}ಕಾಯಾ ವಾಚಾ ಮನಸಾ ನಾನು ರಾಮನನ್ನೇ ಅರ್ಚಿಸಿದ್ದರೆ ಈ ವಿಷ್ಣು
ಮತಿಯಾದ ಭೂದೇವಿಯು ನನಗೆ ಬಾಗಿಲನ್ನು ತೆರೆಯಲಿ!<br />
{{gap}}ರಾಮನನ್ನು ಬಿಟ್ಟು ಬೇರೆ ಪುರುಷನ ಪರಿಚಯವೂ ನನಗಿಲ್ಲವೆಂಬುದು
ನಿಜವಿದ್ದರೆ ವಿಷ್ಣುಪತ್ನಿಯಾದ ಈ ಭೂದೇವಿಯು ನನಗೆ ಪ್ರವೇಶವನ್ನು ಕೊಡಲಿ!”<br />
{{gap}}ಸೀತೆಯು ಈ ಶಪಥವನ್ನು ಉಚ್ಚರಿಸುತ್ತಲೇ ಭೂಮಿಯಿಂದ ಒಂದು
ದಿವ್ಯ ಸಿಂಹಾಸನವು ಮೇಲೆ ಬಂದಿತು. ಆ ಸಿಂಹಾಸನದಲ್ಲಿ ಪ್ರತ್ಯಕ್ಷ ಭೂದೇವಿಯೇ
ಇದ್ದಳು. ಅವಳು ಸೀತೆಯನ್ನು ಕೈಗಳಿಂದ ಎತ್ತಿಕೊಂಡಳು. ಅವಳನ್ನು ಅಭಿವಂದಿಸಿ
ಸಿಂಹಾಸನದಲ್ಲಿ ಕುಳ್ಳಿರಿಸಿಕೊಂಡಳು. ಸಿಂಹಾಸನಾರೂಢ ಸೀತೆಯು ಪಾತಾಳವನ್ನು
ಪ್ರವೇಶಿಸುತ್ತಿದ್ದಂತೆ ಅವಳ ಮೇಲೆ ದಿವ್ಯಪುಷ್ಪವೃಷ್ಟಿಯಾಯಿತು. ಜನರು “ಭಲೆ!
ಭಲೆ?” ಎಂದು ಉದ್ಗರಿಸಿದರು.<br />
{{gap}}ಇದು ಸತ್ಯಕ್ರಿಯೆ ಇದೆ.<noinclude></noinclude>
0ygty5ifddka3seqvsrpibzf3dbfrl3
321323
321322
2026-05-20T09:10:30Z
Shreelatha.Halemane
7642
/* Validated */
321323
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=ಶಪಥ, ಸತ್ಯಕ್ರಿಯೆ|center=|right=೨೩}}
{{gap}}ಕಾಯಾ ವಾಚಾ ಮನಸಾ ನಾನು ರಾಮನನ್ನೇ ಅರ್ಚಿಸಿದ್ದರೆ ಈ ವಿಷ್ಣು
ಮತಿಯಾದ ಭೂದೇವಿಯು ನನಗೆ ಬಾಗಿಲನ್ನು ತೆರೆಯಲಿ!<br />
{{gap}}ರಾಮನನ್ನು ಬಿಟ್ಟು ಬೇರೆ ಪುರುಷನ ಪರಿಚಯವೂ ನನಗಿಲ್ಲವೆಂಬುದು
ನಿಜವಿದ್ದರೆ ವಿಷ್ಣುಪತ್ನಿಯಾದ ಈ ಭೂದೇವಿಯು ನನಗೆ ಪ್ರವೇಶವನ್ನು ಕೊಡಲಿ!”<br />
{{gap}}ಸೀತೆಯು ಈ ಶಪಥವನ್ನು ಉಚ್ಚರಿಸುತ್ತಲೇ ಭೂಮಿಯಿಂದ ಒಂದು
ದಿವ್ಯ ಸಿಂಹಾಸನವು ಮೇಲೆ ಬಂದಿತು. ಆ ಸಿಂಹಾಸನದಲ್ಲಿ ಪ್ರತ್ಯಕ್ಷ ಭೂದೇವಿಯೇ
ಇದ್ದಳು. ಅವಳು ಸೀತೆಯನ್ನು ಕೈಗಳಿಂದ ಎತ್ತಿಕೊಂಡಳು. ಅವಳನ್ನು ಅಭಿವಂದಿಸಿ
ಸಿಂಹಾಸನದಲ್ಲಿ ಕುಳ್ಳಿರಿಸಿಕೊಂಡಳು. ಸಿಂಹಾಸನಾರೂಢ ಸೀತೆಯು ಪಾತಾಳವನ್ನು
ಪ್ರವೇಶಿಸುತ್ತಿದ್ದಂತೆ ಅವಳ ಮೇಲೆ ದಿವ್ಯಪುಷ್ಪವೃಷ್ಟಿಯಾಯಿತು. ಜನರು “ಭಲೆ!
ಭಲೆ?” ಎಂದು ಉದ್ಗರಿಸಿದರು.<br />
{{gap}}ಇದು ಸತ್ಯಕ್ರಿಯೆ ಇದೆ.<noinclude></noinclude>
sizw8i3i2qe47a8cvxqdzcphi2nvn8q
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೩೧
104
89444
321324
279844
2026-05-20T09:11:01Z
Pragathi. BH
7585
/* Validated */
321324
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=ವರದಾನ|center=|right=೨೦೭}}
{{center|'''೧. ದಶರಥ < ಕೈಕೇಯಿ'''<br />ಬಾಲಕಾಂಡ/೧}}
{{gap}}ಅತುಲಪರಾಕ್ರಮಿಯೂ, ಬಹುಗುಣಸಂಪನ್ನನೂ, ಪ್ರಜಾದಕ್ಷನೂ, ಜ್ಯೇಷ್ಠ
ಪ್ರಿಯ ಪುತ್ರನೂ ಆದ ರಾಮನಿಗೆ, ಪ್ರಜೆಗಳ ಇಚ್ಛಾನುಸಾರವಾಗಿ ಯುವ
ರಾಜ್ಯಾಭಿಷೇಕವನ್ನು ಮಾಡಬೇಕೆಂದು ದಶರಥರಾಜನು ಹವಣಿಸಿದನು; ಅದಕ್ಕಾಗಿ
ಆವಶ್ಯಕವಿದ್ದ ಸಾಹಿತ್ಯ ಸಾಮಗ್ರಿಯನ್ನು ಕಲೆಹಾಕಿಸಿದನು. ಅದನ್ನು ಕಂಡು-<br />
{{gap}}ಪೂರ್ವಂ ದತ್ತವರಾ ದೇವೀ ವರಮೇನಮಯಾಚತ ||<br />
{{gap}}ವಿವಾಸನಂ ಚ ರಾವಸ್ಯ ಭರತಸ್ಯಾಭಿಷೇಚನಮ್ ||೨೨||
{{gap}}ಪೂರ್ವದಲ್ಲಿ ಯಾರಿಗೆ ವರಗಳನ್ನು ಕೊಡುವೆನೆಂದು (ದಶರಥರಾಜನು)
ಆಶ್ವಾಸನೆಯನ್ನು ಕೊಟ್ಟಿದ್ದನೋ, ಆ (ಕೈಕೇಯಿ ಎಂಬ ಆತನ) ಹೆಂಡತಿಯು,
ರಾಮನಿಗೆ (ಹದಿನಾಲ್ಕು ವರ್ಷ) ವನವಾಸ, ಮತ್ತು ಭರತನಿಗೆ (ಯುವರಾಜ್ಯ)
ಅಭಿಷೇಕ (ಮಾಡಬೇಕು) ಎಂಬ ವರವನ್ನು ಬೇಡಿದಳು.
{{center|'''ಅಯೋಧ್ಯಾಕಾಂಡ/೯'''}}
{{gap}}ದಶರಥರಾಜನು ಕೈಕೇಯಿಗೆ ವರ ಕೊಡಬೇಕಾಗಿದ್ದ ಸಂಗತಿಯು ಮಂಥರೆಗೆ
ಮೊದಲು ಗೊತ್ತಿರಲಿಲ್ಲ; ಕೈಕೇಯಿಯು ತಾನಾಗಿ ಅವಳಿಗೆ ಯಾವಾಗಲೋ
ಹೇಳಿದ್ದಳು. ಈಗ ಮಂಥರೆಯು ಕೈಕೇಯಿಗೆ ಆ ವರಗಳ ಜ್ಞಾಪಕವನ್ನು
ಮಾಡಿಕೊಡುತ್ತಾಳೆ.<br />
{{gap}}ದಂಡಕಾರಣ್ಯದಲ್ಲಿಯ 'ವೈಜಯಂತಿ ಎಂಬ ಪಟ್ಟಣದಲ್ಲಿ 'ತಿಮಿಧ್ವಜ'ನೆಂಬ
(ಶಂಬರ) ದೈತ್ಯನು ರಾಜ್ಯವಾಳುತ್ತಿದ್ದನು. ಆತನು ಮಾಯಾವಿದ್ಯೆಯಲ್ಲಿ
ಪಳಗಿದವನಿದ್ದನು. ಆತನು ದೇವಗಣರನ್ನು ಕೂಡಿದ ಇಂದ್ರನೊಡನೆ ಕಾಳಗವನ್ನು
ಪ್ರಾರಂಭಿಸಿದನು. ಯುದ್ಧದಲ್ಲಿ ಗಾಯಗೊಂಡವರನ್ನು ಆತನು ಎಳೆದೊಯ್ದು
ಹಿಂಸಿಸಿ ಪ್ರಾಣತೆಗೆಯುತ್ತಿದ್ದನು. ದಶರಥರಾಜನು ಬಲು ಶೌರ್ಯಸಾಹಸದಿಂದ
ಆ ರಾಕ್ಷಸರನ್ನು ಎದುರಿಸಿದನು; ಆದರೆ ಅವರು ಈತನ ಅಂಗಾಂಗಗಳನ್ನು
ಗಾಯಗೊಳಿಸಿ ಊನತೆಯನ್ನುಂಟುಮಾಡಿದರು. ಅಂಥ ಸಮಯದಲ್ಲಿ<noinclude></noinclude>
su3uqw4c6f06zpfn8mbh6g5jr7enjv6
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೩೨
104
89445
321326
279845
2026-05-20T09:11:31Z
Pragathi. BH
7585
/* Validated */
321326
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೨೦೮|center=|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
ಕೈಕೇಯಿಯು ಚಾಕಚಕ್ಯತೆಯಿಂದ ದಶರಥರಾಜನನ್ನು ರಣರಂಗದಾಚೆ ಕರೆದೊಯ್ದು
ಆತನನ್ನು ರಕ್ಷಿಸಿದಳು. ಆ ಸಂದರ್ಭವನ್ನು ಜ್ಞಾಪಿಸಿಕೊಟ್ಟು ಮಂಥರೆಯು-<br />
{{center|'''ತುಷ್ಟೇನ ತೇನ ದತ್ತ ತೇ ದೈ ವರೌ ಶುಭದರ್ಶನೇ l'''<br />'''ಸ ತ್ವಯೋಕ್ತಃ ಪತಿರ್ದೇವಿ ಯದೇಚ್ಛೆಯಂ ತದಾ ವರಮ್ ll೧೭ll'''}}
{{gap}}“ಸಂತುಷ್ಟನಾದ ರಾಜನು ನಿನಗೆ ವರಗಳನ್ನು ಕೊಡಬಯಸಿದಾಗ “ನನ್ನ
ಇಚ್ಚೆಯಾದಾಗ ನಾನು ವರಗಳನ್ನು ಬೇಡಿಕೊಳ್ಳುವೆ'ನೆಂದು ನೀನು ಆತನಿಗೆ
ಹೇಳಿರುವಿ; ಎಂದು ನನ್ನ ಮುಂದೆ ಮಾತನಾಡಿದ್ದೆ. ಈಗ ನೀನು ನಿನ್ನ ಪತಿಯನ್ನು
ಒಲಿಸಿಕೊಂಡು; ರಾಮನ ಯುವರಾಜ್ಯಾಭಿಷೇಕದಿಂದ ಪರಾವೃತ್ತಗೊಳಿಸು!
ಭರತನಿಗೆ ರಾಜ್ಯಾಭಿಷೇಕ ಮತ್ತು ರಾಮನಿಗೆ ಹದಿನಾಲ್ಕು ವರ್ಷ ವನವಾಸ, ಈ
ಎರಡು ವರಗಳನ್ನು ಬೇಡಿಕೊ?” ಎಂದು ಕೈಕೇಯಿಗೆ ಸಲಹೆಯಿತ್ತಳು.<br />
{{gap}}ಮಂಥರೆಯು ಮತ್ತೆ ಮುಂದೆ- 'ಕೈಕೇಯಿಯೇ, ದೇವದಾನವರ ಯುದ್ದ
ಪ್ರಸಂಗದಲ್ಲಿ ದಶರಥನು ವರಗಳನ್ನು ಕೊಟ್ಟದ್ದನ್ನು ನೀನು ಆತನಿಗೆ ಜ್ಞಾಪಿಸು!
ಆಗ ನಿನ್ನ ಆಸೆಯು ಬಯಲಾಗಲಾರದು! ರಾಜನು ಶಯ್ಯೆಯಿಂದೆದ್ದು ವರ
ನೀಡುವ ಸಮಯಕ್ಕೆ ಶಪಥ ಹಾಕಿ ಆತನನ್ನು ವಚನಬದ್ಧನನ್ನಾಗಿ ಮಾಡು!
ಮತ್ತು-<br />
{{center|'''ರಾಮಪ್ರವ್ರಜನಂ ದೂರ ನವವಷ್ರಾಣಿ ಪಂಚ ಚ l'''<br />'''ಭರತಃ ಕ್ರಿಯತಾಂ ರಾಜಾ ಪೃಥಿವ್ಯಾಂ ಪಾರ್ಥಿವರ್ಷಭ ll೩೦ll'''}}
{{gap}}- 'ಹೇ ರಾಜಾಧಿರಾಜನೇ, ಹದಿನಾಲ್ಕು ವರ್ಷಗಳವರೆಗೆ ರಾಮನಿಗೆ ದೂರ
ಅಡವಿಗೆ ಕಳುಹಿಸಿ, ಭರತನಿಗೆ ಪೃಥ್ವಿಯ ರಾಜ್ಯವನ್ನು ಕೊಡು” ಎಂದು ನೀನು
ಅವನಲ್ಲಿ ಬೇಡಿಕೊ!”<br />
{{gap}}ರಾಮನು ಹದಿನಾಲ್ಕು ವರ್ಷ ದೂರ ಹೋಗುವದರಿಂದ ಭರತನ ರಾಜ್ಯವು
ಸುಭದ್ರವಾಗುವದೆಂದು ನಂಬಿಸಲು ಪ್ರಯಾಸಪಟ್ಟಳು.
{{center|'''ಅಯೋಧ್ಯಾಕಾಂಡ/೧೧.'''}}<br />
{{gap}}ವರಗಳನ್ನು ಕೇಳಿಕೊಳ್ಳುವಾಗ ಕೈಕೇನಿಯು ದಶರಥನಿಗೆ ಹೀಗೆ ನುಡಿದಳು-<br />
{{center|'''ಯಥಾ ಕ್ರಮೇಣ ಶಪಸೇ ವರಂ ಮಮ ದದಾಸಿ ಚ ll|೧೩ll'''}}<noinclude></noinclude>
6gqu1k69wzp9hejfhc3yg9k3hrrduqi
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೩೩
104
89446
321328
279846
2026-05-20T09:12:13Z
Pragathi. BH
7585
/* Validated */
321328
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=ವರದಾನ|center=|right=೨೦೯}}
{{gap}}“ನೀನು ಮೊದಲು ಪ್ರಿಯಪುತ್ರನ ಶಪಥ ಮಾಡಿ ಮತ್ತು ನಂತರ ನಿನ್ನ
ಪುಣ್ಯದ ಶಪಥವನ್ನು ಮಾಡಿ, ನನಗೆ ವರಗಳನ್ನು ಕೊಡುತ್ತಿರುವೆ. ಈ ಇಂದ್ರಾದಿ
ಮೂವತ್ತುಮೂರು ಕೋಟಿ ದೇವತೆಗಳು ಇದನ್ನು ಕೇಳಿಡಲಿ! ಅದೇ ರೀತಿ
ಚಂದ್ರ, ಸೂರ್ಯ, ಆಕಾಶ, ಗ್ರಹಗಳು, ರಾತ್ರಿ ದಿವಸ, ದಿಶೆಗಳೂ, ಈ ಜಗತ್ತು,
ಈ ಪೃಥ್ವಿಯು, ಗಂಧರ್ವ ಮತ್ತು ರಾಕ್ಷಸರನ್ನೊಳಗೊಂಡ ಸ್ವರ್ಗದಲ್ಲಿಯ
ದೇವತೆಗಳು, ನಿಶಾಚರಪ್ರಾಣಿಗಳು, ಗೃಹ ದೇವತೆ, ಮತ್ತು ಇತರ ಪ್ರಾಣಿಮಾತ್ರರು
ನಿನ್ನ ಈ ಪ್ರತಿಜ್ಞೆಯ ಭಾಷಣವನ್ನು ಆಲಿಸಲಿ!” ಹೀಗೆ ದಶರಥನ ಸತ್ಯತೆಯ
ಪ್ರತಿಜ್ಞಾನಿಷ್ಟೆಯ ಗುಣಗಳನ್ನು ಹೊಗಳುತ್ತ ಅವಳು ನುಡಿದದ್ದು- “ಹೇ ರಾಜನೇ,
ಪೂರ್ವವೃತ್ತಾಂತವನ್ನು ಸ್ಮರಿಸು! ದೇವದಾನವರ ಆ ಸಂಗ್ರಾಮದಲ್ಲಿ ಶಂಬರನೆಂಬ
ದೈತ್ಯನು ನಿನ್ನನ್ನು ಸದೆಬಡಿದನು- ನಿನ್ನನ್ನು ಜೀವಸಹಿತ ಬಿಟ್ಟನಷ್ಟೇ, ಆಗ-<br />
<poem>
'''ತತ್ರ ಚಾಪಿ ಮಯಾ ದೇವ ಯತ್ತ್ವಂ ಸಮಭಿರಕ್ಷಿತಃ |'''
'''ಜಾಗ್ರತ್ಯಾ ಯತಮಾನಾಯಾಸ್ತತೋ ಮೇ ಪ್ರದದೌ ವರೌ ||೧೯|l'''
'''ತೌ ದತ್ತೌ ಚ ವರೌ ದೇವ ನಿಕ್ಷೇಪೌ ಮೃಗಯಾಮ್ಯಹಮ್ ||'''
'''ತವೈವ ಪೃಥಿವೀಪಾಲ ಸಕಾಶೇ ರಘುನಂದನ l|೨೦||'''
'''ತತ್ಪ್ರಿತಿಶ್ರುತ್ಯ ಧರ್ಮೇಣ ಚೇದ್ ದಾಸ್ಯಸಿ ಮೇ ವರಮ್ ||'''
'''ಅದ್ವೈತ ಹಿ ಪ್ರಹಾಸ್ಯಾಮಿ ಜೀವಿತಂ ತ್ವದ್ ವಿಮಾನಿತಾ ll೨೧ll'''
</poem>
{{gap}}“ಎಚ್ಚರಿಕೆ ವಹಿಸಿ ನಾನು ನಿನ್ನನ್ನು ರಕ್ಷಿಸಿದೆ; ನಿನ್ನ ಪ್ರಾಣವನ್ನು ಕಾಪಾಡಲು
ಧಡಪಡಿಸಿದೆ; ಆದ್ದರಿಂದ ನೀನು ನನಗೆ ಎರಡು ವರಗಳನ್ನು ಕೊಟ್ಟೆ ಆ
ವರಗಳನ್ನು ಬೇಡಿಕೊಳ್ಳದೇ ನಿನ್ನ ಬಳಿಯಲ್ಲಿಯೇ ಠೇವಣಿಯಾಗಿ ಇಟ್ಟಿದ್ದೆ;
ಇಂದು ನಾವು ಅವುಗಳನ್ನು ಬೇಡುತ್ತಿದ್ದೇನೆ. ಧರ್ಮದ ಶಪಥವನ್ನು ಮಾಡಿಯೂ
ನೀನು ವರಗಳನ್ನು ಕೊಡದಿದ್ದರೆ, ನಿನ್ನಿಂದ ಅವಮಾನವಾಯಿತೆಂದು ಬಗೆದು
ಈ ದಿನವೇ ಪ್ರಾಣತ್ಯಾಗವನ್ನು ಮಾಡುವೆ.”<br />
{{gap}}ತನ್ನ ವಾಕ್ಚಾತುರ್ಯದಿಂದ ಮೋಹಗೊಂಡು ವರಗಳನ್ನು ಕೊಡಲು
ಸಿದ್ದನಾದ ದಶರಥನನ್ನು ಕೈಕೇಯಿಯು ವಚನಾಧೀನನನ್ನಾಗಿ ಮಾಡಿದಳು.
ರಾಜನು ವಚನಭಂಗವನ್ನು ಮಾಡಲಾರನೆಂದು ಮನದಟ್ಟಾದ ನಂತರ ಅವಳು
ಈ ರೀತಿ ಅಂದಳು-<br />
<poem>
'''ವರೌ ದೇ ತ್ವಯಾ ದೇವ ತದಾ ದತ್ತೌ ಮಹೀಪತೇ ll೨೩ll'''
'''ತೌ ತಾವದಹಮದ್ಯೈವ ವಕ್ಷ್ಯಾಮಿ ಶಣು ಮೇ ವಚಃ l'''
</poem><noinclude></noinclude>
aj9pudhcdsjqtyfidclphrj4fj3yl92
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೭೬
104
89457
321325
233612
2026-05-20T09:11:29Z
Shreelatha.Halemane
7642
/* Validated */
321325
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೨೫೨|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
<small><poem>
'''ಪುತ್ರತ್ವಂ ಗಚ್ಛ ಭಗವನ್ನದಿತ್ಯಾ ಮಮ ಚಾನಘ ‖೧೬‖'''
'''ಭ್ರಾತಾ ಭವ ಯವೀಯಾಂಸ್ತ್ವಂ ಶಕ್ರಸ್ಯಾಸುರಸೂದನ |'''
'''ಶೋಕಾರ್ತಾನಾಂ ತು ದೇವಾನಾಂ ಸಾಹಾಯ್ಯಂ ಕರ್ತುಮರ್ಹಸಿ ‖೧೭‖'''
'''ಅಯಂ ಸಿದ್ಧಾಶ್ರಮೋ ನಾಮ ಪ್ರಸಾದಾತ್ತೇ ಭವಿಷ್ಯತಿ ‖೧೮‖'''</small></poem></br>
{{gap}}"ಹೇ ವರಪ್ರದನೇ, ಅದಿತಿಯು, ದೇವತೆಯರು ಮತ್ತು ನಾನು ಕೂಡಿ, ಪ್ರಾರ್ಥಿಸಿದ ವರವನ್ನು ನೀವು ಪ್ರಸನ್ನರಾಗಿ ನನಗೆ ಕೊಡಿರಿ! ಹೇ ಸುವ್ರತನೇ, ಹೇ ಭಗವನ್, ಹೇ ಪಾಪರಹಿತನೇ, ನೀವು ನನ್ನ ಮತ್ತು ಅದಿತಿಯ ಪುತ್ರನಾಗಿ ಜನಿಸಿರಿ! ಹೇ ದೈತ್ಯನಾಶಕನೇ, ನೀವು ಇಂದ್ರನ ತಮ್ಮನೆಂದು ಆಗಿರಿ! ಮತ್ತು ಶೋಕಗ್ರಸ್ತರಾದ ದೇವತೆಗಳಿಗೆ ಸಹಾಯವನ್ನು ನೀಡಿರಿ! ನಿಮ್ಮ ಕರುಣೆಯಿಂದ ಈ ಪ್ರದೇಶವು ಸಿದ್ಧಾಶ್ರಮವೆಂದು ಖ್ಯಾತಿಗೊಳ್ಳುವದು."- ಈ ರೀತಿ ನುಡಿದನು.</br>
{{gap}}ಕಶ್ಯಪ ಮುನಿಯ ಪ್ರಾರ್ಥನೆಯನುಸಾರ ವಿಷ್ಣುವು ಅದಿತಿಯ ಹೊಟ್ಟೆಯಲ್ಲಿ ಹುಟ್ಟಿದನು. 'ವಾಮನ'ನಾಗಿ ಬಲಿಯನ್ನು ಪಾತಾಳಕ್ಕೆ ಅದುಮಿದನು.</br>
{{gap}}ಇದು 'ಯಾಚಿತ' ವರವಾಗಿದೆ.</br></br>
{{center|'''೧೦. ಚೂಲಿ < ಸೋಮದಾ'''}}
{{center|'''ಬಾಲಕಾಂಡ/೩೩'''}}
{{gap}}ಕುಶನಾಭನು ತನ್ನ ಕನ್ಯೆಯರಿಗೆ ತಿಳಿಸಿ, ಹೇಳಿ ಅವರ ವಿವಾಹವನ್ನು ಬ್ರಹ್ಮ ದತ್ತನೊಡನೆ ಮಾಡಿಕೊಟ್ಟ ಕಥೆಯನ್ನು ವಿಶ್ವಾಮಿತ್ರನು ರಾಮನಿಗೆ ಹೇಳುತ್ತಿದ್ದಾನೆ.</br>
{{gap}}ಒಮ್ಮೆ ಕುಶನಾಭನ ನೂರು ಕನ್ಯೆಯರು ಉತ್ತಮ ಅಲಂಕಾರಗಳನ್ನು ಧರಿಸಿ ಒಂದು ಉಪವನದಲ್ಲಿ ನೃತ್ಯ-ಗಾಯನಾದಿಗಳಲ್ಲಿ ತೊಡಗಿದ್ದಾಗ ವಾಯುವು ಅವರನ್ನು ಕಂಡನು. ಅವರ ತಾರುಣ್ಯಕ್ಕೆ, ಸೌಂದರ್ಯಕ್ಕೆ ಮೋಹಿತನಾದ ವಾಯುವು ಅವರನ್ನು "ನನ್ನ ಭಾರ್ಯೆಯರಾಗಿರಿ!" ಎಂದು ವಿನಂತಿಸಿದನು. ಆ ಕನ್ಯೆಯರು ಅದನ್ನು ನಿರಾಕರಿಸಿದರು. ಆಗ ಕೋಪಗೊಂಡ ವಾಯುವು ಅವರ ಅಂಗಭಂಗ ಮಾಡಿದ್ದರಿಂದ ಅವರ ರೂಪ ಲಾವಣ್ಯವು ನಶಿಸಿ ಅವರು ಕುಬ್ಜೆಯರಾದರು.</br>
{{gap}}ಹೀಗೆ ಅಂಗಭಂಗದಿಂದ ಲಜ್ಜೆಗೊಂಡ, ಭಯಭೀತರಾದ ಆ ಕುಶಕನ್ಯೆಯರು ನಡೆದುದೆಲ್ಲವನ್ನೂ ತಮ್ಮ ತಂದೆಗೆ ಹೇಳಿದರು. ಅವರ ಕರುಣಾಜನಕ ಸ್ಥಿತಿಯನ್ನು ಕಂಡು ಕುಶನಾಭನಿಗೂ ವ್ಯಥೆಯಾಯಿತು. ಕುಶಕನ್ಯೆಯರಲ್ಲಿ ಶಾಪ ಕೊಡುವ<noinclude></noinclude>
7d5hddhskcy3e0mzcxfp9v67tcmjdby
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೭೭
104
89458
321327
233681
2026-05-20T09:11:57Z
Shreelatha.Halemane
7642
/* Validated */
321327
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ವರದಾನ|right=೨೫೩}}</br>ಸಾಮರ್ಥ್ಯವಿದ್ದರೂ ಅವರು ತೋರಿದ ಕ್ಷಮಾಶೀಲವೃತ್ತಿಯನ್ನು ತುಂಬ ಶ್ಲಾಘಿಸಿದನು. ದಾನ, ಸತ್ಯ, ಯಜ್ಞ, ಯಶ ಮತ್ತು ಧರ್ಮ ಇವೆಲ್ಲವೂ ಕ್ಷಮೆಯಲ್ಲಿ ಅಂತರ್ಭೂತವಾಗಿರುವದರಿಂದ, ಕ್ಷಮೆಯು ಜಗತ್ತಿನ ಪ್ರಮುಖ ಆಧಾರವೆಂಬ ಶ್ರದ್ಧೆಯು ಕುಶನಾಭನದಾಗಿತ್ತು. ಅವನು ತನ್ನ ಪುತ್ರಿಯರಿಗೆ ಸಮಾಧಾನ ಹೇಳಿದನು. ಆತನು ಮಂತ್ರಿಮಂಡಲದವರೊಡನೆ ವಿಚಾರವಿನಿಮಯ ಮಾಡಿ, ಕನ್ಯೆಯರಿಗಾಗಿ ತಕ್ಕ ವರಸಂಶೋಧನೆಯನ್ನು ಪ್ರಾರಂಭಿಸಿದನು. ಆಗ ಮಹಾ ತೇಜಸ್ಸುಳ್ಳ, ಊರ್ಧ್ವರೇತನಾದ, ಸದಾಚಾರಸಂಪನ್ನನಾದ 'ಚೂಲಿ' ಎಂಬ ಮಹರ್ಷಿಯು ಬ್ರಹ್ಮಪ್ರಾಪ್ತಿಗಾಗಿ ತಪಸ್ಸನ್ನಾಚರಿಸುತ್ತಿದ್ದನು. ಅವಳ ಸೌಜನ್ಯ ಗಂಧರ್ವಿಯೊಬ್ಬಳು ಆತನಿಗೆ ಅನನ್ಯ ಸೇವೆಯನ್ನು ಸಲ್ಲಿಸುತ್ತಿದ್ದಳು. ಅವಳ ಸೌಜನ್ಯಶೀಲ, ನಿಷ್ಠಾಪೂರ್ಣ ಸೇವೆಯಿಂದ ಈ ಮುನಿಯ ಪ್ರಸನ್ನನಾಗಿ ಆಕೆಗೆ ಹೀಗೆಂದನು-
<small><poem>
'''ಪರಿಶುಷ್ಟೋsಸ್ಮಿ ಭದ್ರಂ ತೇ ಕಿರಂ ಕರೋಮಿ ತವ ಪ್ರಿಯಮ್ ‖೧೪‖'''</small></poem></br>
{{gap}}"ನಿನಗೆ ಮಂಗಳವಾಗಲಿ! ನಿನಗೆ ಪ್ರಿಯವಾಗಿರುವ ಯಾವುದನ್ನು ಮಾಡಲಿ?" ಮುನಿಯು ಈ ರೀತಿ ಸಂತುಷ್ಟನಿರುವದನ್ನು ಕಂಡು ಅವಳು ಈ ರೀತಿ ನುಡಿದಳು-
<small><poem>
'''ಲಕ್ಷ್ಯಾ ಸಮುದಿತೋ ಬ್ರಾಹ್ಮ್ಯಾ ಬ್ರಹ್ಮಭೂತೋ ಮಹಾತಪಾಃ |'''
'''ಬ್ರಾಹ್ಮೇಣ ತಪಸಾ ಯುಕ್ತಂ ಪುತ್ರಮಿಚ್ಛಾಮಿ ಧಾರ್ಮಿಕಮ್ ‖೧೬‖'''
'''ಅಪತಿಶ್ಚಾಸ್ಮಿ ಭದ್ರಂ ತೇ ಭಾರ್ಯ ಚಾಸ್ಮಿ ನ ಕಸ್ಯಚಿತ್ |'''
'''ಬ್ರಾಹ್ಮೇಣೋಪಗತಾಯಾಶ್ಚ ದಾತುಮರ್ಹಸಿ ಮೇ ಸುತಮ್ ‖೧೭‖'''
'''ತಸ್ಯಾಃ ಪ್ರಸನ್ನೋ ಬ್ರಹ್ಮರ್ಷಿರ್ದದೌ ಬ್ರಾಹ್ಯಮನುತ್ತಮಮ್ |'''
'''ಬ್ರಹ್ಮದತ್ತ ಇತಿ ಖ್ಯಾತಂ ಮಾನಸಂ ಚೂಲಿನಃ ಸುತಮ್ ‖೧೮‖'''</small></poem></br>
{{gap}}"ಹೇ ಮಹಾತಪಸ್ವಿ, ನೀವು ನಿಮ್ಮ ಬ್ರಹ್ಮತೇಜದಿಂದ ಕೇವಲ ಬ್ರಹ್ಮ ಸ್ವರೂಪರಾಗಿರುವಿರಿ; ಅದಕ್ಕಾಗಿ ಬ್ರಹ್ಮತಪದಿಂದ ಯುಕ್ತನಾದ ಧಾರ್ಮಿಕ ಪುತ್ರನು ಆಗಬೇಕೆಂಬ ಇಚ್ಛೆಯು ನನ್ನದಿದೆ. ಹೇ ಮುನಿಯೇ, ದೇವರು ನಿಮಗೆ ಒಳಿತನ್ನು ಮಾಡಲಿ! ನನಗೆ ಪತಿ ಇರುವದಿಲ್ಲ; ಈ ನಂತರವೂ ಹೀಗೆಯೇ ಉಳಿಯಬೇಕೆಂದು ಬಯಸುತ್ತೇನೆ. ನಾನು ಯಾರೊಬ್ಬರ ಪತ್ನಿಯಾಗಬಯಸುವುದಿಲ್ಲ. ಹೀಗಿರುವ ನನಗೆ ಬ್ರಹ್ಮ ಸಂಬಂಧಿತ ಉಪಾಯದಿಂದ ಒಬ್ಬ ಪುತ್ರನನ್ನು ಪಡೆಯುವಂತೆ<noinclude></noinclude>
cm5k5ttut51ubawhn42wuuw2cbvapq9
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೭೮
104
89459
321329
234779
2026-05-20T09:12:42Z
Shreelatha.Halemane
7642
/* Validated */
321329
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=೨೫೪|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}</br>
ಮಾಡಿರಿ! ನಾನು ನಿಮಗೆ ಶರಣು ಬಂದಿದ್ದೇನೆ."</br>
{{gap}}ಅವಳ ಪ್ರಾರ್ಥನೆಯನ್ನು ಕೇಳಿ, ಆ ಮಹರ್ಷಿಯು ಬ್ರಹ್ಮವಿಷಯದ ತಪಸ್ಸಿದ್ಧಿಯಿಂದ 'ಬ್ರಹ್ಮದತ್ತ'ನೆಂಬ ಮಾನಸಪುತ್ರನನ್ನು ಆಕೆಗೆ ಕೊಟ್ಟನು. ಚೂಲಿಯು ಈ ಯಾಚಿತ ವರವನ್ನು ಸೋಮದೆಗೆ ಪ್ರಸನ್ನನಾಗಿ ಕೊಟ್ಟಿದ್ದಾನೆ. ಅವನು ಅವಳಿಗೆ ವರವನ್ನು ಬೇಡಲು ಹೇಳಿದನು.</br></br>
{{center|'''೧೧. ಭೃಗು < ಸಗರ, ಕೇಶಿನಿ, ಸುಮತಿ'''}}
{{center|'''ಬಾಲಕಾಂಡ/೩೮'''}}
{{gap}}ವಿಶ್ವಾಮಿತ್ರನು ರಾಮನಿಗೆ ಸಗರ ರಾಜನ ವೃತ್ತಾಂತವನ್ನು ಹೇಳುತ್ತಿದ್ದಾನೆ-</br>
{{gap}}ಪೂರ್ವದಲ್ಲಿ 'ಸಗರ'ನೆಂಬ ಧರ್ಮಾತ್ಮನು ಅಯೋಧ್ಯೆಯ ರಾಜನಾಗಿದ್ದನು; ಆತನಿಗೆ ಮಕ್ಕಳಿರಲಿಲ್ಲವಾದ್ದರಿಂದ ಸಂತಾನಪ್ರಾಪ್ತಿಗಾಗಿ ತುಂಬ ಹಂಬಲಿಸುತ್ತಿದ್ದನು. ಧರ್ಮ ನಿಷ್ಠೆಯುಳ್ಳ, ಸತ್ಯವಚನಿಯಾದ, ವಿದರ್ಭರಾಜಕನ್ಯೆಯಾದ ಕೇಶಿನಿಯು ಆತನ ಹಿರಿಯ ಮಡದಿಯಾಗಿದ್ದಳು. 'ಅರಿಷ್ಟನೇಮಿ'ಯ ಕನ್ಯೆಯಾದ ಸುಮತಿಯು ಆತನ ಎರಡನೆಯ ಮಡದಿಯಾಗಿದ್ದಳು. ಈ ಈರ್ವರನ್ನೂ ಕೂಡಿಕೊಂಡು ಸಗರರಾಜನು, ಹಿಮಾಲಯದ ಸಮೀಪದಲ್ಲಿರುವ 'ಭೃಗು-ಪ್ರಸ್ರವಣ' ಪರ್ವತದ ಮೇಲೆ ತಪಸ್ಸನ್ನಾಚರಿಸಿದನು. ಒಂದು ನೂರು ವರ್ಷಗಳ ತಪಸ್ಸನ್ನಾಚರಿಸಿದ ನಂತರ ಭೃಗುಮುನಿಯು ಸಂತುಷ್ಟನಾಗಿ ಇಂತೆಂದನು-
<small><poem>
'''ಸಗರಾಯ ವರಂ ಪ್ರಾದಾದ್ ಭೃಗುಃ ಸತ್ಯವತಾಂ ವರಃ ‖೬‖'''
'''ಅಪತ್ಯಲಾಭಃ ಸುಮಹಾನ್ಭವಿಷ್ಯತಿ ತವಾನಘ |'''
'''ಕೀರ್ತಿಂ ಚಾಪ್ರತಿಮಾಂ ಲೋಕೇ ಪ್ರಾಪ್ಸ್ಯಸೇ ಪುರುಷರ್ಷಭ ‖೭‖'''
'''ಏಕಾ ಜನಯಿತಾ ತಾತ ಪುತ್ರಂ ವಂಶಕರಂ ತವ |'''
'''ಷಷ್ಠಿ ಪುತ್ರಸಹಸ್ರಾಣಿ ಅಪರಾ ಜನಯಿಷ್ಯತಿ ‖೮‖'''</small></poem></br>
{{gap}}ಸತ್ಯವನ್ನು ನುಡಿಯುವುದರಲ್ಲಿ ಶ್ರೇಷ್ಠನಾಗಿದ್ದ ಭೃಗು ಮಹರ್ಷಿಯ ಸಗರ ರಾಜನಿಗೆ ಈ ರೀತಿ ವರವನ್ನು ಕೊಟ್ಟನು: "ಹೇ ಪಾಪರಹಿತನೇ, ನಿನಗೆ ಒಳ್ಳೆಯ ಸಂತಾನವಾಗುವದು. ಲೋಕದಲ್ಲಿ ನಿನಗೆ ಅಪ್ರತಿಮ ಕೀರ್ತಿಯು ದೊರೆಯುವುದು. ಹೇ ಸಗರನೇ, ನಿನ್ನ ಓರ್ವ ಪತ್ನಿಗೆ ವಂಶತಾರಕ ಮಗನು ಜನಿಸುವನು, ಇನ್ನೊಬ್ಬಳಿಗೆ ಅರವತ್ತು ಸಾವಿರ ಗಂಡುಮಕ್ಕಳಾಗುವರು."<noinclude></noinclude>
t0ni6xh357d4ovmdd25w4lngxoe553j
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೭೯
104
89460
321330
234797
2026-05-20T09:13:21Z
Shreelatha.Halemane
7642
/* Validated */
321330
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ವರದಾನ|right=೨೫೫}}</br>
{{gap}}ಭೃಗು ಮುನಿಯ ವಚನವನ್ನು ಕೇಳಿ ಸಂತುಷ್ಟರಾದ ಸಗರಪತ್ನಿಯರು, ಒಬ್ಬ ಮಗನು ಅವರೀರ್ವರಲ್ಲಿ ಯಾರಿಗೆ ಹುಟ್ಟುವನು? ಅರವತ್ತು ಸಾವಿರ ಪುತ್ರರು ಯಾರಿಗೆ ಹುಟ್ಟಲಿರುವರು? ಎಂಬುದನ್ನು ಅರಿತುಕೊಳ್ಳುವ ಆಸೆಯನ್ನು ವ್ಯಕ್ತಪಡಿಸಿದರು. ಆಗ ಮುನಿಯು ಅವರಿಬ್ಬರ ಇಚ್ಛೆಗೆ ಬಗ್ಗೆ ವಿಚಾರಿಸಿದನು.
<small><poem>
'''ಏಕೋ ವಂಶಕರೋ ವಾಸ್ತು ಬಹವೋ ವಾ ಮಹಾಬಲಾಃ |'''
'''ಕೀರ್ತಿಮಂತೋ ಮಹೋತ್ಸಾಹಾಂ ಕಾ ವಾ ಕಂ ವರಮಿಚ್ಛತಿ ‖೧೨‖'''</small></poem></br>
{{gap}}ವಂಶತಾರಕ ಪುತ್ರನು ಬೇಕಿದ್ದರೆ ಒಬ್ಬನೇ ಹುಟ್ಟುವನು. ಕೀರ್ತಿಕರ, ಉತ್ಸಾಹವುಳ್ಳ ಮಹಾಬಲಾಢ್ಯ ಪುಷ್ಕಳ ಪುತ್ರರು ಹುಟ್ಟುವರು.</br>
{{gap}}ಕೇಶಿನಿಯು ವಂಶತಾರಕ ಒಬ್ಬ ಪುತ್ರನನ್ನು ಬೇಡಿಕೊಂಡಳು. ಸುಮತಿಯು ಅರವತ್ತು ಸಾವಿರ ಪುತ್ರರನ್ನು ಬೇಡಿಕೊಂಡಳು. ಕೇಶಿನಿಗೆ 'ಅಸಮಂಜಸ'ನೆಂಬ ಒಬ್ಬ ಮಗನು ಹುಟ್ಟಿದನು. ಸುಮತಿಗೆ ಒಂದು 'ಗರ್ಭತುಂಬ'ವಾಯಿತು. ಆ ತುಂಬವು ಒಡೆದು ಅದರಿಂದ ಅರವತ್ತು ಸಾವಿರ ಪುತ್ರರು ಹೊರಬಂದರು.</br>
{{gap}}ಇದು 'ಯಾಚಿತ' ವರವಾಗಿದೆ.</br></br>
{{center|'''೧೨. ಬ್ರಹ್ಮದೇವ < ಭಗೀರಥ'''}}
{{center|'''ಬಾಲಕಾಂಡ/೪೨'''}}
{{gap}}ಗಂಗೆಯನ್ನು ದೊರಕಿಸಲು ಭಗೀರಥನು ಆಚರಿಸಿದ ತಪಸ್ಸಿನ ಬಗ್ಗೆ ವಿಶ್ವಾಮಿತ್ರನು ರಾಮನಿಗೆ ತಿಳಿಸುತ್ತಿದ್ದಾನೆ.</br>
{{gap}}ಧರ್ಮನಿಷ್ಠನಾದ ಭಗೀರಥನಿಗೆ ಸಂತಾನವಿಲ್ಲದ ಕಾರಣ ಆತನು ತನ್ನ ರಾಜ್ಯವನನು ಮತ್ತು ಪ್ರಜೆಗಳನ್ನು ಮಂತ್ರಿಗಳ ಆಡಳಿತಕ್ಕೆ ಒಪ್ಪಿಸಿ, ಗಂಗೆಯನ್ನು ಪಡೆದು ಪಿತೃಗಳಿಗೆ ಸರ್ಗವನ್ನು ದೊರಕಿಸಿಕೊಡಬೇಕೆಂಬ ಉದ್ದೇಶಿದಿಂದ ಗೋಕರ್ಣದಲ್ಲಿ ದೀರ್ಘತಪಸ್ಸನ್ನಾರಂಭಿಸಿದನು. ಪಂಚಾಗ್ನಿ ಸಾಧನೆಯನ್ನು ಕೈಕೊಂಡು ಆತನು ತಿಂಗಳಿಗೊಂದು ಸಲ ಮಾತ್ರ ಆಹಾರವನ್ನು ಭಗವಂತನಾದ ಬ್ರಹ್ಮದೇವನು ಪ್ರಸನ್ನನಾಗಿ ದೇವಗಣ ಸಮೇತನಾಗಿ ಭಗೀರಥನ ಭೇಟಿಗಾಗಿ ಬಂದು ಈ ರೀತಿ ಎಂದನು-
<small><poem>
'''ಭಗೀರಥ ಮಹಾರಾಜ ಪ್ರೀತಸ್ತೇsಹಂ ಜನಾಧಿಪ |'''
'''ತಪಸಾ ಚ ಸುತಪ್ತೇನ ವರಂ ವರಯ ಸುವ್ರತ ‖೧೬‖'''</small></poem><noinclude></noinclude>
3dliktsm2mhlfv76rwr86rh9nf1f6wc
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೩
104
89462
321334
279669
2026-05-20T09:15:36Z
Shreelatha.Halemane
7642
/* Validated */
321334
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=ವರದಾನ|center=|right=೨೫೯}}
<br />ಇಂದ್ರನು ಮನ್ನಿಸಿದನು. ಈ ಏಳು ಪುತ್ರರು ಮಾರುತ್ರೆಂದು ಖ್ಯಾತಿ<br/>ಪಟ್ಟರು.<br/>
{{gap}}ಇದು ಕಟ್ಟಳೆಯ 'ಯಾಚಿತ' ವರವಾಗಿದೆ.
<br/>
{{gap}}೧೫. ಶಂಕರ < ವಿಶ್ವಾಮಿತ್ರ<br/>{{gap}}ಬಾಲಕಾಂಡ/೫೫<br/>
{{gap}}ವಿಶ್ವಾಮಿತ್ರನಿಗೆ ಯಾವ ರೀತಿಯಲ್ಲಿ ಅಸ್ತ್ರಗಳು ದೊರೆತವೆಂಬ ಬಗ್ಗೆ<br/>ಶತಾನಂದನು ರಾಮನಿಗೆ ಹೇಳುತ್ತಿದ್ದಾನೆ.<br/>
{{gap}}ವಸಿಷ್ಠನ ಕಾಮಧೇನುವನ್ನು ವಿಶ್ವಾಮಿತ್ರನು ಬಲವಂತದಿಂದ ಎಳೆದೊಯ್ದಾಗ<br/>ಕಾಮಧೇನುವಿನ 'ಅಂಬಾ; ಎಂಬ ಕರೆಯಿಂದ ಕಾಂಬೋಜ ಹಾಗೂ ಅವಳ<br/>ಆವಯವಗಳಿಂದ ಬರ್ಬರ, ಯವನ, ಶಕ ಮತ್ತು ಮೇಚ್ಛ, ಹಾರಿತ, ಕಿರಾತ<br/>ಮುಂತಾದವರು ಉಂಟಾಗಿ ವಿಶ್ವಾಮಿತ್ರನ ಸೈನ್ಯವೆಲ್ಲವನ್ನೂ ನಾಶಗೊಳಿಸಿದರು.<br/>ಆಗ ಕೋಪಗೊಂಡ ವಿಶ್ವಾಮಿತ್ರನ ಪುತ್ರರು ವಸಿಷ್ಠನ ಮೇಲೆ ಏರಿಹೋದರು.<br/>ಆಗ ವಸಿಷ್ಠನು ಕೇವಲ ತನ್ನ ಹೂಂಕಾರದಿಂದಲೇ ಅವರನ್ನು ಸುಟ್ಟುಹಾಕಿದನು.<br/>ಸೈನ್ಯ ಹಾಗೂ ಮಕ್ಕಳು ನಾಶಗೊಂಡಿದ್ದನ್ನು ನೋಡಿ ವಿಶ್ವಾಮಿತ್ರನು ನಾಚಿಕೆಯಿಂದ<br/>ಕಳೆಹೀನನಾದನು. ರಾಜನನ್ನು ತನ್ನ ಒಬ್ಬ ಮಗನಿಗೆ ಒಪ್ಪಿಸಿ ವಿಶ್ವಾಮಿತ್ರನು
<br/>ತಪಶ್ಚಯೆಗಾಗಿ ವನಕ್ಕೆ ತೆರಳಿದನು. ಶಿವನನ್ನು ಪ್ರಸನ್ನಗೊಳಿಸಲು ಆತನು<br/>ಉಗ್ರತಪಸ್ಸನ್ನು ಆಚರಿಸಿದನು. ಪ್ರಸನ್ನನಾದ ಶಂಕರನು ಆತನಿಗೆ ದರ್ಶನವನ್ನು<br/>ಕೊಟ್ಟು ಇಂತೆಂದನು-<br/>
{{gap}}'''ಕಿಮರ್ಥಂ ತಪ್ಯಸೇ ರಾಜನ್ಬ್ರೂಹಿ ಯತ್ತೇ ವಿವಕ್ಷಿತಮ್।'''
{{gap}}'''ವರದೋsಸ್ಮಿ ವರೋ ಯಸ್ತೇ ಕಾಂಕ್ಷಿತಃ ಸೋsಭಿಧೀಯತಾಮ್ ॥೧೪॥'''
<br/>
{{gap}}“ಹೇ ರಾಜನೇ, ಏತಕ್ಕಾಗಿ ನೀನು ತಪಸ್ಸನ್ನಾಚರಿಸುತ್ತಿರುವೆ? ನಿನಗೆ ಏನು<br/>ಬೇಕಾಗಿದೆ? ನಾನು ವರವನ್ನು ಕೊಡಲು ಸಿದ್ಧನಾಗಿದ್ದೇನೆ. ಇಷ್ಟವಾದಂಥ ವರವನ್ನು
<br/>ಬೇಡಿಕೊ!”<br/>
{{gap}}'''ಯದಿ ತುಷ್ಟೋ ಮಹಾದೇವ ಧನುರ್ವೇದೋ ಮಮಾನಘ ।'''<br/>{{gap}}'''ಸಾಂಗೋಪಾಂಗೋಪನಿಷದಃ ಸರಹಸ್ಯಃ ಪ್ರದೀಯತಾಮ್ ॥೧೬॥'''<br/>{{gap}}'''ಯಾನಿ ದೇವೇಷು ಚಾಸ್ತ್ರಾಣಿ ದಾನವೇಷು ಮಹರ್ಷಿಷು ।'''<br/>{{gap}}'''ಗಂಧರ್ವಯಕ್ಷರಕ್ಷಃಸು ಪ್ರತಿಭಾಂತು ಮಮಾನಘ ॥೧೭॥'''<br/><noinclude></noinclude>
42d4s10e0uf5527bl0t8ae1oi7x8vx7
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೪
104
89464
321337
279684
2026-05-20T09:16:20Z
Shreelatha.Halemane
7642
/* Validated */
321337
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೨೬೦|center=|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
<br/>{{gap}}'''ತವ ಪ್ರಸಾದಾದ್ಭವತು ದೇವದೇವ ಮಮೇಪ್ಸಿತಮ್ ॥'''<br/>{{gap}}'''ಏವಮಸ್ತ್ವಿತಿ ದೇವೇಶೋ ವಾಕ್ಯಮುಕ್ತ್ವಾ ಗತಸ್ತದಾ ॥೧೮॥'''
<br/>
{{gap}}'ಹೇ ಮಹದೇವರೇ, ಹೇ ಪಾಪರಹಿತರೇ, ನೀವು ಸಂತುಷ್ಟರಾಗಿದ್ದರೆ,<br/>ಅಂಗ, ಪ್ರತ್ಯಂಗ, ಮಂತ್ರ ಮತ್ತು ರಹಸ್ಯ ಇವುಗಳನ್ನು ಒಳಗೊಂಡ ಧನುರ್ವೇದವನ್ನು<br/>ನನಗೆ ಕರುಣಿಸಿರಿ! ಹೇ ಪಾಪರಹಿತರೇ, ದೇವತೆಗಳು, ದಾನವರು, ಮಹರ್ಷಿಗಳು,<br/>ಗಂಧರ್ವರು, ಯಕ್ಷರು ಮತ್ತು ರಾಕ್ಷಸರು ಇವರ ಬಳಿಯಿದ್ದ ಅಸ್ತ್ರಗಳ ಸ್ಫೂರ್ತಿಯು<br/>ನನಗಾಗಲಿ! ಭೋ ದೇವಾಧಿದೇವರೆ, ನಿಮ್ಮ ಕೃಪಾಪ್ರಸಾದದಿಂದ ನನ್ನ ಇಚ್ಛೆಯು<br/>ಈಡೇರಲಿ!”<br/>
{{gap}}ಆಗ ಶಿವನು 'ತಥಾಸ್ತು' ಎಂದು ನುಡಿದು ಸಮ್ಮತಿಸಿದನು.<br/>
{{gap}}ಈ ವರವನ್ನು ಪಡೆದ ನಂತರ ವಸಿಷ್ಠರ ನಾಶವಾಯಿತೆಂದು ವಿಶ್ವಾಮಿತ್ರನು<br/>ಭಾವಿಸಿದನು. ದಹಿಸುವಂತಹ ಅಸ್ತ್ರಗಳನ್ನು ಪ್ರಯೋಗಿಸಿ ವಸಿಷ್ಠರ ಆಶ್ರಮಕ್ಕೆ<br/>ತೊಂದರೆ ಕೊಡಲಾರಂಭಿಸಿದನು. ಆಗ ವಸಿಷ್ಠರ ಆಶ್ರಮದಲ್ಲಿಯ ಸಕಲ<br/>ಪ್ರಾಣಿಮಾತ್ರರು ಭಯದಿಂದ ದಿಕ್ಕುಪಲಾಗಿ ಓಡತೊಡಗಿದರು. ತುಸುಕಾಲದಲ್ಲಿಯೇ<br/>ವಸಿಷ್ಟರ ಆಶ್ರಮವು ನೀರವವಾಯಿತು.<br/>
{{gap}}ಇದು 'ಯಾಚಿತ' ವರವಾಗಿದೆ.<br/>
{{center|'''೧೬. ಬ್ರಹ್ಮದೇವ < ವಿಶ್ವಾಮಿತ್ರ'''}}
{{center|'''ಬಾಲಕಾಂಡ/೬೫'''}}
{{gap}}ವಿಶ್ವಾಮಿತ್ರನಿಗೆ ಬ್ರಹ್ಮರ್ಷಿಪದವು ಹೇಗೆ ಲಭಿಸಿತೆಂಬುದನ್ನು ಕುರಿತು<br/>ಶತಾನಂದನು ರಾಮನಿಗೆ ಹೇಳುತ್ತಿದ್ದಾನೆ.<br/>
{{gap}}ಕ್ಷಾತ್ರತೇಜಸ್ಸಿಗಿಂತ ಬ್ರಹ್ಮತೇಜಸ್ಸು ಹೆಚ್ಚು ಪ್ರಭಾವಶಾಲಿಯಾದದ್ದು ಎಂಬುದನ್ನು<br/>ಅರಿತುಕೊಂಡ ನಂತರ, ತಾನೂ ಬ್ರಹ್ಮರ್ಷಿಯಾಗಬೇಕೆಂಬ ಉದ್ದೇಶದಿಂದ<br/>ವಿಶ್ವಾಮಿತ್ರನು ಘೋರ ತಪಸ್ಸನ್ನು ಕೈಗೊಂಡನು. ಮೌನವ್ರತಸ್ಥನಾಗಿ<br/>ಶ್ವಾಸೋಚ್ಛ್ವಾಸವನ್ನು ಅವರೋಧಿಸಿ ಒಂದು ಸಾವಿರ ವರ್ಷಗಳ ತಪಸ್ಸನ್ನು<br/>ಆಚರಿಸಿದ ನಂತರ ಆತನ ಶಿರಸ್ಸಿನಿಂದ ಹೊಗೆಯು ಹೊರಬರಹತ್ತಿತು. ಆ<br/>ಹೊಗೆಯಿಂದ ಮೂರೂ ಲೋಕಗಳು ಗೊಂದಲಕ್ಕೀಡಾದವು. ದೇವತೆಗಳು,<br/>ಋಷಿಗಳು, ಗಂಧರ್ವರು, ಪನ್ನಗರು, ಉರಗಗಳು, ರಾಕ್ಷಸರು, ಎಲ್ಲರೂ ತಪಸ್ಸಿನ<br/>ತೇಜಸ್ಸಿನಿಂದ ದಂಗುಬಡೆದು ಮೋಹಿತರಾದರು. ಸೂರ್ಯನು ಕಳೆಗುಂದಿದನು.<br/><noinclude></noinclude>
tgmiveijuovxx7nkk7mw7rdjvm7wpoi
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೫
104
89465
321339
279698
2026-05-20T09:16:50Z
Shreelatha.Halemane
7642
/* Validated */
321339
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=ವರದಾನ|center=|right=೨೬೧}}
<br/>ಆಗ ಎಲ್ಲರೂ ಬ್ರಹ್ಮನ ಬಳಿಗೆ ಹೋಗಿ ಇಂತೆಂದರು: “ತಪಸ್ಸಿನ ಪ್ರಭಾವದಿಂದ<br/>ವಿಶ್ವಾಮಿತ್ರನ ಮಹಾತ್ಮ್ಯವು ವರ್ಧಿಸುತ್ತಿವೆ. ಕಾಮಕ್ರೋಧಾದಿ ಲೋಪದೋಷಗಳು<br/>ವಿಶ್ವಾಮಿತ್ರನಲ್ಲಿ ಕಂಡುಬರುತ್ತಿಲ್ಲ. ಹೀಗಿರುವಾಗ ಆತನ ಮನಸ್ಸಿನಲ್ಲಿಯ ಇಚ್ಛೆಯು<br/>ಈಡೇರದಿದ್ದರೆ, ಸಕಲ ಪ್ರಾಣಿಗಳನ್ನು ಸಮಸ್ತ ಸ್ಥಾವರ-ಜಂಗಮ ತ್ರೈಲೋಕ್ಯವು<br/>ನಾಶಕ್ಕೀಡಾಗಬಹುದು. ಈ ಅಗ್ನಿಸಮನಾದ ಮುನಿಯನ್ನು ಹೇಗಾದರೂ ಮಾಡಿ<br/>ಪ್ರಸನ್ನಗೊಳಿಸಬೇಕು. ಆತನಿಗೆ ದೇವಲೋಕವು ಬೇಕಿದ್ದರೆ ಅದನ್ನು ಸಹ ಕೊಟ್ಟು<br/>ಬಿಡಬೇಕು. ತ್ರೈಲೋಕಕ್ಕೆ ಆಗಬಹುದಾದ ನಾಶವನ್ನು ತಡೆಯಬೇಕು.” ದೇವತೆ<br/>ಗಳೆಲ್ಲರ ವಿನಂತಿಯನ್ನು ಮನ್ನಿಸಿ ಬ್ರಹ್ಮಾದಿ ಸಕಲರು ವಿಶ್ವಮಿತ್ರನಿಗೆ ಈ ರೀತಿ<br/>ನುಡಿದರು.<br/
>{{gap}}'''ಬ್ರಹ್ಮರ್ಷೇ ಸ್ವಾಗತಃ ತೇsಸ್ತು ತಪಸಾ ಸ್ಮ ಸುತೋಷಿತಾಃ ॥೧೯॥'''<br/>{{gap}}'''ಬ್ರಾಹ್ಮಣ್ಯಂ ತಪಸೋಗ್ರೇಣ ಪ್ರಾಪ್ತವಾನಸಿ ಕೌಶಿಕ ।'''<br/>{{gap}}'''ದೀರ್ಘಮಾಯುಶ್ಚ ತೇ ಬ್ರಹ್ಮನ್ದದಾಮಿ ಸಮರುದ್ಗಣಃ ॥೨೦॥'''<br/>{{gap}}'''ಸ್ವಸ್ತಿ ಪ್ರಾಪ್ನುಹಿ ಭದ್ರಂ ತೇ ಗಚ್ಛ ಸೌಮ್ಯ ಯಥಾಸುಮ್ ॥೨೧॥'''
<br/>
{{gap}}“ಹೇ ಬ್ರಹ್ಮರ್ಷೇ, ನಿನಗೆ ಸುಸ್ವಾಗತ! ನಿನ್ನ ತಪಸ್ಸಿನಿಂದ ನಾವು ತುಂಬಾ<br/>ಸಂತೋಷಗೊಂಡಿದ್ದೇವೆ. ಹೇ ಕುಶಿಕ ವಂಶಜನೇ, ನಿನ್ನ ಉಗ್ರ ತಪಸ್ಸಿನಿಂದ<br/>ನಿನಗೆ ಬ್ರಾಹ್ಮಣತ್ವವು ದೊರೆತಿದೆ. ಹೇ ಬ್ರಹ್ಮನ್, ಮರುದ್ಗಣಸಮೇತರಾಗಿ ನಿನಗೆ<br/>ದೀರ್ಘ ಆಯುಸ್ಸನ್ನು ಕೊಡುತ್ತೇವೆ. ಹೇ ಸತ್ವಗುಣಸಂಪನ್ನನೆ, ನಿನಗೆ ಸುಖವು<br/>ದೊರೆಯಲಿ! ನಿನಗೆ ಶುಭವಾಗಲಿ! ತಪಶ್ಚರ್ಯೆಯನ್ನು ಕೊನೆಗೊಳಿಸಿ ನಿನಗೆ<br/>ಇಷ್ಟವಿದ್ದ ಕಡೆಗೆ ಪ್ರಯಾಣ ಮಾಡು!” ಇದನ್ನು ಆಲೈಸಿದ ವಿಶ್ವಮಿತ್ರನು ಬಹಳ<br/>ಸಂತೋಷಭರಿತನಾದನು. ದೇವತೆಗಳಿಗೆ ವಂದಿಸಿ ಹೀಗೆಂದನು-<br/
>{{gap}}'''ಬ್ರಾಹ್ಮಣ್ಯಂ ಯದಿಮೇ ಪ್ರಾಪ್ತಂ ದೀರ್ಘಮಾಯಸ್ತಥೈವ ಚ ॥೨೨॥'''<br/>{{gap}}'''ಓಂಕಾರರೋsಥ ವಷಟ್ಕಾರೋ ವೇದಾಶ್ಚ ವರಯಂತು ಮಾಮ್ ।'''<br/>{{gap}}'''ಕ್ಷತ್ರವೇದಾವಿದಾಂ ಶ್ರೇಷ್ಠೋ ಬ್ರಹ್ಮವೇದವಿದಾಮಪಿ ॥೨೩॥'''<br/>{{gap}}'''ಬ್ರಹ್ಮಪುತ್ರೋ ವಸಿಷ್ಠೋ ಮಾಮೇವಂ ವದತು ದೇವತಾಃ ।'''<br/>{{gap}}'''ಯದ್ಯೇವಂ ಪರಮಃ ಕಾಮಃ ಕೃತೋ ಯಾಂತು ಸುರರ್ಷಭಾ: ॥೨೪॥'''
<br/>{{gap}}“ಬ್ರಾಹ್ಮಣ್ಯವು ಮತ್ತು ದೀರ್ಘಾಯಸ್ಸು ನನಗೆ ಪ್ರಾಪ್ತವಾಗಿದ್ದಲ್ಲಿ ಓಂಕಾರ”<br/>ವಷಟ್ಕಾರ ಮತ್ತು ವೇದಗಳು ನನಗೆ ವರಪ್ರದವಾಗಲಿ! ಸಾರಾಂಶದಲ್ಲಿ,<br/><noinclude></noinclude>
rp6ix41m23xhmmkd567zsofiihgdcc1
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೬
104
89466
321340
279712
2026-05-20T09:17:21Z
Shreelatha.Halemane
7642
/* Validated */
321340
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೨೬೨|center=|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
<br/>ಅಧ್ಯಾಪನವನ್ನು ಮಾಡುವ ಯಜ್ಞಯಾಗಗಳನ್ನು ನೆರವೇರಿಸುವ ಅಧಿಕಾರವು<br/>ನನಗೆ ಪ್ರಾಪ್ತವಾಗಲಿ! ಇದಲ್ಲದೆ, ಧನುರ್ವಿದ್ಯೆಯನ್ನು ಅರಿತವರಲ್ಲಿ ಶ್ರೇಷ್ಠನೆನಿಸಿ<br/>ಕೊಂಡ ಬ್ರಹ್ಮಪುತ್ರನಾದ ವಸಿಷ್ಠನು ನನಗೆ 'ಬ್ರಾಹ್ಮಣ'ನೆಂದು ಸಂಬೋಧಿಸಲಿ.<br/>ಈ ರೀತಿ ನನ್ನ ಮನೋರಥವು ಸಾರ್ಥಕವಾಗಿದ್ದರೆ, ಸುರಶ್ರೇಷ್ಠರೇ, ನೀವು ನಿಮ್ಮ<br/>ಸ್ಥಾನಗಳಿಗೆ ಮರಳಬಹುದು.”<br/>
{{gap}}ವಸಿಷ್ಠನು ವಿಶ್ವಾಮಿತ್ರನನ್ನು 'ಬ್ರಹ್ಮರ್ಷಿ' ಎಂದು ಕರೆಯಬೇಕೆಂದು ದೇವತೆಗಳು<br/>ಸಾಕಷ್ಟು ಪ್ರಯತ್ನಪಟ್ಟರು. ಆಗ ವಸಿಷ್ಠನು, ಅವರ ವಿನಂತಿಯನ್ನು ಮನ್ನಿಸಿ<br/>ವಿಶ್ವಾಮಿತ್ರನೊಡನೆ ಮಿತ್ರತ್ವವನ್ನು ಸಂಪಾದಿಸಿದನು.<br/>{{gap}}'''ಬ್ರಹ್ಮರ್ಷಿಸ್ತ್ವಂ ನ ಸಂದೇಹಃ ಸರ್ವಂ ಸಂಪದ್ಯತೇ ತವ ॥೨೬॥'''
<br/>
{{gap}}“ನೀನು ಬ್ರಹ್ಮರ್ಷಿಯಾದೆ. ಇದರಲ್ಲಿ ಯಾವ ಸಂದೇಹವೂ ಇಲ್ಲ.<br/>ಬ್ರಾಹ್ಮಣತ್ವವನ್ನು ಹೊಂದಲು ಆವಶ್ಯಕವಿದ್ದ ಎಲ್ಲ ಸಂಗತಿಗಳೂ ನಿನಗೆ ಲಬ್ಧವಾಗಿವೆ”<br/>ಎಂದು ವಿಶ್ವಾಮಿತ್ರನಿಗೆ ಹೇಳಿ ದೇವತೆಗಳು ಸ್ವಸ್ಥಾನಕ್ಕೆ ತೆರಳಿದರು.<br/>
{{gap}}ಇದು 'ಯಾಚಿತ' ವರವಾಗಿದೆ.
<br/>{{center|'''೧೭. ಕೈಕೇಯಿ < ಮಂಥರೆ'''}}
{{center|'''ಅಯೋಧ್ಯಾಕಾಂಡ/೭'''}}
{{gap}}'ರಾಮನಿಗೆ ಯುವರಾಜ್ಯ ಅಭಿಷೇಕ ನಡೆಯಲಿದೆ' ಎಂಬ ದುಷ್ಟ<br/>ವಾರ್ತೆಯನ್ನು ಕೈಕೇಯಿಗೆ ತಿಳಿಸಿ, ಆಕೆಯನ್ನು ಸಕಾಲದಲ್ಲಿ ಎಚ್ಚರಿಸುವ<br/>ಪ್ರಯತ್ನವನ್ನು ಮಂಥರೆಯು ಮಾಡಿದಳು. ಅದು ವಿಫಲವಾಯಿತು. ಈ<br/>ವಾರ್ತೆಯನ್ನು ಕೇಳಿ ಕೈಕೇಯಿಗೆ ತುಂಬಾ ಸಂತೋಷವಾಯಿತು. ಕೈಕೇಯಿಯ<br/>ಮುಂದಿನ ಜೀವನದ ಬಗ್ಗೆ ಯೋಚಿಸಿದರೆ ಈ ವಾರ್ತೆಯು ಎಷ್ಟೊಂದು<br/>ಆರಂಭವಾಗಿದೆ? ಭಯಾನಕವಾಗಿದೆ? ಯಾವ ರೀತಿ ಕೈಕೇಯಿಯ ಜೀವನವನ್ನು<br/>ಹಾಳುಮಾಡುವಂತಹದಿದೆ? ಎಂಬೆಲ್ಲ ಸಂಗತಿಗಳನ್ನು ತಿಳಿಸಿ ಹೇಳಲು<br/>ಮಂಥರೆಯು ಪ್ರಯಾಸಪಟ್ಟಳು. ಕೈಕೇಯಿಗೆ ಅವಳ ಹಿತದ ನಾಲ್ಕು ಮಾತುಗಳನ್ನು<br/>ಪರಿಪರಿಯಾಗಿ ಹೇಳಿದಳು; ಆದರೆ ಕೈಕೇಯಿಗೆ ಯಾವ ಮಾತೂ ಹಿಡಿಸಲಿಲ್ಲ.<br/>ಅಷ್ಟೇ ಅಲ್ಲದೆ, ಈ ಒಳ್ಳೆಯ ವಾರ್ತೆಯನ್ನು ಕೇಳಿಕೊಂಡು ಮಂಥರೆಗೆ 'ಶುಭ'<br/>ಎಂಬ ದಿವ್ಯ ಆಭರಣವನ್ನು ಕೊಟ್ಟಳು. ಇನ್ನೂ ಏನಾದರೂ ಕೊಡಬೇಕೆಂಬ<br/>ಸಮಸ್ಯೆ ಸಹ ಕೈಕೇಯಿಯ ಮುಂದೆ ಇತ್ತು. ರಾಮ ಮತ್ತು ಭರತ ಇವರಲ್ಲಿ<br/><noinclude></noinclude>
8nngh0jgmtovefv7tul2b8qxa4tgpon
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೮
104
89467
321344
279735
2026-05-20T09:19:07Z
Shreelatha.Halemane
7642
/* Validated */
321344
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=೨೬೪|center=|right=ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು}}
<br/>ಭಿಷೇಕವನ್ನು ದಶರಥನು ಗೊತ್ತುಪಡಿಸಿದಾಗ ಮಂಥರೆಯು ಕೈಕೇಯಿಯ<br/>ಮತ್ಸರವನ್ನು ಕೆರಳಿಸಿದಳು. ಪೂರ್ವದಲ್ಲಿ ಕೊಡಬಯಸಿದ ಎರಡು ವರಗಳನ್ನು<br/>ಬೇಡಿಕೊಳ್ಳಲು ಇದೇ ತಕ್ಕ ಸಮಯವೆಂದು ಕೈಕೇಯಿಯು ಭಾವಿಸಿ ದಶರಥನ<br/>ಬಳಿ ವರಗಳನ್ನು ಬೇಡುವದೆಂದು ನಿರ್ಧರಿಸಿದಳು. ವರಗಳನ್ನು ಬೇಡುವ ಮೊದಲು<br/>ವಚನವನ್ನು ಪೂರಯಸುವ ಶಪಥವನ್ನು ದಶರಥನಿಂದ ಮಾಡಿಸಿದಳು. ಅಷ್ಟೇ<br/>ಅಲ್ಲದೆ, ಸತ್ಯಪ್ರತಿಜ್ಞನೂ, ಮಹಾತೇಜಸ್ವಿಯೂ, ಧರ್ಮಜ್ಞನೂ, ಸತ್ಯ ವಚನಿಯೂ,<br/>ಶುದ್ಧಾಚರಣೆಯುಳ್ಳವನೂ ಆದ ರಾಜನು ನನಗೆ ವರವನ್ನು ಕೊಡಲಿದ್ದಾನೆಂದು<br/>ಎಲ್ಲ ದೇವತೆಗಳೆದುರು ಸಾರಿ ಹೇಳಿದಳು. ಕಾಮಮೋಹಿತ ನಾಗಿ, ವರಗಳನ್ನು<br/>ಕೊಡಲು ಉದ್ಯುಕ್ತನಾದ ರಾಜನನ್ನು ಮೊದಲು ವಚನ ಬದ್ಧನನ್ನಾಗಿ ಮಾಡಿ, ಆಮೇಲೆ<br/>ರಾಮನಿಗೆ ವನವಾಸ ಮತ್ತು ಭರತನಿಗೆ ಯುವ ರಾಜ್ಯಾಬಿಷೇಕ ಎಂಬೆರಡು<br/>ವರಗಳನ್ನು ಬೇಡಿಕೊಂಡಳು. ಕೈಕೇಯಿಯು ಆಡಿದ ನುಡಿಗಳನ್ನು ಕೇಳಿ ದಶರಥ<br/>ರಾಜನು ಮೂರ್ಛೆ ಹೋದನು. ಪ್ರಜ್ಞೆ ಮರಳಿದಾಗ ದಶರಥರಾಜನು ಕೈಕೇಯಿಯ<br/>ಮೇಲೆ ಕೋಪಗೊಂಡು ಅತಿಯಾಗಿ ತೆಗಳಿದನು. ಆಕೆಗೆ ವರಗಳನ್ನು ಕೊಟ್ಟಿದ್ದಕ್ಕಾಗಿ<br/>ಪರಮಪಶ್ಚಾತ್ತಾಪಪಟ್ಟನು. ಹಲವಾರು ರೀತಿಯಿಂದ ಆಕೆಯ ಮನವೊಲಿಸಲು<br/>ಪ್ರಯತ್ನಪಟ್ಟು ವಿಫಲಗೊಂಡನು. ಅವನ ಮಾತುಗಳ ಎಳ್ಳಷ್ಟೂ ಪರಿಣಾಮವು<br/>ಕೈಕೇಯಿಯ ಮೇಲೆ ಆಗಲಿಲ್ಲ. ಇದಕ್ಕೆ ಪ್ರತಿಯಾಗಿ ಕೊಟ್ಟ ವಚನವನ್ನು ಪಾಲಿಸ<br/>ದಿರುವ ದಶರಥನನ್ನು ಬಿರುನುಡಿಗಳಿಂದ ಈ ರೀತಿ ಧಿಕ್ಕರಿಸಿದಳು-<br/>
{{gap}}“ಸತ್ಯಪ್ರತಿಜ್ಞರಾದ ಪುರುಷರು ಕೊಟ್ಟ ವಚನವನ್ನು ಪಾಲಿಸಲು ಎಷ್ಟೊಂದು<br/>ಅಪೂರ್ವ ತ್ಯಾಗವನ್ನು ಮಾಡಿದ್ದಾರೆ ಎಂಬುದನ್ನು ಅವಳು ಉದಾಹರಣೆಗಳನ್ನು<br/>ಕೊಟ್ಟು ಹೇಳಿದಳು. ವಚನಭಂಗವು ಕುಲಕ್ಕೆ ಕಲಂಕವನ್ನು ತರುವಂತಹದು<br/>ಎಂದು ನಿಖರವಾಗಿ ಹೇಳಿದಳು. ಈ ಸಂದರ್ಭದಲ್ಲಿ ಅವಳು 'ಶಿಬಿರಾಜ',<br/>'ಸಮುದ್ರ' ಮತ್ತು 'ಅಲರ್ಕ' ರಾಜನ ಉದಾಹರಣೆಗಳನ್ನು ಕೊಟ್ಟಳು.<br/>
{{gap}}ಅಲರ್ಕರಾಜನು ಒಬ್ಬ ಕುರುಡನಾದ ಬ್ರಾಹ್ಮಣನಿಗೆ ವರವನ್ನು<br/>ಕೊಡ ಬಯಸಿದನು. ಆಗ ಆ ಅಂಧನಾದ ಬ್ರಾಹ್ಮಣನು ರಾಜನ ಕಣ್ಣುಗಳನ್ನೇ<br/>ಬೇಡಿದನು. ಆಗ-<br/>
{{gap}}'''ಅಲರ್ಕಶ್ಚಕ್ಷುಷೀ ದತ್ತ್ವಾ ಜಗಾಮ ಗತಿಮುತ್ತಮಾಮ್ ॥೪೩॥'''<br/>
{{gap}}ಅಲರ್ಕ ರಾಜನು ತನ್ನ ವಚನವನ್ನು ಪೂರೈಸಲು ತನ್ನ ಕಣ್ಣುಗಳನ್ನು ಆ<br/>ಬ್ರಾಹ್ಮಣನಿಗೆ ಕೊಟ್ಟು ಸದ್ಗತಿಯನ್ನು ಪಡೆದನು.<br/>
{{gap}}ಇದು 'ಅಯಾಚಿತ' ವರವಾಗಿದೆ.<br/><noinclude></noinclude>
8yg53wdpufxllo5ttuhjj899p6o93pc
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೮೭
104
89468
321342
279725
2026-05-20T09:18:22Z
Shreelatha.Halemane
7642
/* Validated */
321342
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=ವರದಾನ|center=|right=೨೬೩}}
<br/>ಯಾವ ಭೇದಭಾವವೂ ಅವಳಲ್ಲಿರಲಿಲ್ಲ. ರಾಮನಿಗೆ ಯುವರಾಜ್ಯಾಭಿಷೇಕವಾಗಲಿದೆ<br/>ಎಂಬ ಸಂಗತಿಯನ್ನು ತಿಳಿದು ಕೈಕೇಯಿಯು ಸಂತೋಷಗೊಂಡು ಮಂಥರೆಗೆ<br/>ಈ ರೀತಿ ಎಂದಳು-<br/>
{{gap}}'''ನ ಮೇ ಪರಂ ಕಿಂಚದಿತೋ ವರಂ ಪುನಃ ।'''<br/>
{{gap}}'''ಪ್ರಿಯಂ ಪ್ರಿಯಾರ್ಹೇ ಸುವಚಂ ವಚೋsಮೃತಮ್ ।'''<br/
{{gap}}'''ತಥಾ ಹ್ಯವೋಚಸ್ತ್ವಮತಃ ಪ್ರಿಯೋತ್ತರಂ ।'''<br/>
{{gap}}'''ವರಂ ಪರಂ ತೇ ಪ್ರದದಾಮಿ ತಂ ವೃಣು ॥೩೬॥'''
<br/>{{gap}}“ಎಲೈ ದಾನಯೋಗ್ಯಳಾದ ಪ್ರಿಯ ಮಂಥರೆಯೇ, ಈಗ ನೀನು ತಂದ<br/>ಪ್ರಿಯವಾರ್ತೆಗಿಂತ ಇನ್ನು ಬೇರೆ ಯಾವ ಸಂಗತಿಯೂ ನನಗೆ ಹೆಚ್ಚು ಸಂತೋಷ<br/>ಕಾರಕವಾಗಿಲ್ಲ. ಅಮೃತಕ್ಕೆ ಸಮವಾದ ಈ ವಾರ್ತೆಯನ್ನು ನೀನು ನನಗೆ ತಿಳಿಸಿರುವೆ.<br/>ಹೀಗಿರುವುದರಿಂದ ಈ ಸಂತೋಷದ ಸುದ್ದಿಯನ್ನು ಕೇಳಿ, ನಾನು ನಿನಗೆ ಶ್ರೇಷ್ಠ<br/>ವರವನ್ನು ಕೊಡಲಿರುವೆ. ನೀನು ಬೇಡಿಕೊ!!”<br/>
{{gap}}ನಿಜದಲ್ಲಿ ಈ ವರವನ್ನು ಕೈಕೇಯಿಯು ಕೊಡಲಿಲ್ಲ. ಮಂಥರೆಯು ಅದನ್ನು<br/>ಸ್ವೀಕರಿಸಲೂ ಇಲ್ಲ. ವರವನ್ನು ಮಂಥರೆಯು ಬೇಡದೇ ಇದ್ದರೂ ಸಂತೋಷ<br/>ಗೊಂಡ ಕೈಕೇಯಿಯು ಅದನ್ನು ಕೊಡಬಯಸಿದ್ದಳು; ಆದ್ದರಮದ ಇದು<br/>'ಅಯಾಚಿತ' ವರವಾಗಿದೆ. ಕೈಕೇಯಿಯು ಮಂಥರೆಗೆ ಕೊಟ್ಟ 'ಶುಭ'ವೆಂಬ<br/>ಆಭರಣವು ಅನುಗ್ರಹವಾಗಿದೆ; ವರವಲ್ಲ.
<br/>{{center|'''೧೮. ಅಲರ್ಕ < ಅಂಧಬ್ರಾಹ್ಮಣ'''}}
{{center|'''ಅಯೋಧ್ಯಾಕಾಂಡ/೧೨'''}}
{{gap}}ಒಮ್ಮೆ ವಚನವನ್ನು ಕೊಟ್ಟ ನಂತರ ಅದನ್ನ ಪೂರೈಸಲು ಯಾವ ತ್ಯಾಗವನ್ನು<br/>ಮಾಡಲು ಸಿದ್ದರಿರಬೇಕು ಎಂಬುದನ್ನು ಮನವರಕೆ ಮಾಡಿಕೊಳ್ಳಲು ಕೈಕೇಯಿಯು<br/>ದಶರಥನಿಗೆ ಹಲವು ಉದಾರಹಣೆಗಳನ್ನು ಹೇಳುತ್ತಿದ್ದಾಳೆ.<br/>
{{gap}}ದೇವ-ದಾನವರಲ್ಲಿ ನಡೆದ ಸಂಗ್ರಾಮದ ಸಮಯದಲ್ಲಿ ರಥದ ಗಾಲಿಯ<br/>ಅಚ್ಚು ಮುರಿದಿತ್ತು. ಆಗ ಕೈಕೇಯಿಯು ತನ್ನ ಸ್ವಂತದ ಕೈಯನ್ನು ಅಲ್ಲಿ ಸೇರಿಸಿ<br/>ದಶರಥನಿಗೆ ಜಯವಾಗುವಷ್ಟು ಸಹಾಯವನ್ನು ಮಾಡಿದ್ದಳು. ಆಗ ಸಂತೋಷ<br/>ಗೊಂಡ ದಶರಥನು ಕೊಡಬಯಸಿದ ಎರಡು ವರಗಳನ್ನು 'ಸಮಯ ಬಂದಾಗ<br/>ಕೇಳಿಕೊಳ್ಳುವೆ' ಎಂದು ಕೈಕೇಯಿಯು ಹೇಳಿದ್ದಳು. ರಾಮನಿಗೆ ಯುವರಾಜ್ಯಾ<br/><noinclude></noinclude>
bywy6rs0glcv541lvw8rjoixxkjr8lj
ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೫
104
89529
321346
233687
2026-05-20T09:19:30Z
Shreelatha.Halemane
7642
/* Validated */
321346
proofread-page
text/x-wiki
<noinclude><pagequality level="4" user="Shreelatha.Halemane" />{{rh|center=|left=ವ್ಯಕ್ತಿ ವಿಶೇಷ|right=೪೪೧}}</noinclude>ವಧಿಸುವುದರಲ್ಲಿ ರಾಮನಿಗೆ ನೆರವಾದನು. ರಾವಣನನ್ನು ವಧಿಸಲು ಬ್ರಹ್ಮದೇವನು
ಕೊಟ್ಟ ಅಸ್ತ್ರಗಳನ್ನು ಉಪಯೋಗಿಸಬೇಕೆಂದು ರಾಮನಿಗೆ ಜ್ಞಾಪಿಸಿದನು. ರಾವಣನ
ವಧೆಯಾದನಂತರ ರಾಮನು ಮಾತಲಿಯನ್ನು ಗೌರವಿಸಿದನು.</br>
{{gap}}ಅರ್ಜುನನನ್ನು ಇಂದ್ರನ ಆಜ್ಞೆಯನುಸಾರ ಸ್ವರ್ಗಕ್ಕೆ ಕರೆತಂದವನು ಮಾತಲಿ.
'''೯೮. ಮಾಂಧಾತ'''</br>
{{gap}}ಇವನು ಯುವನಾಶ್ವ ಎಂಬ ರಾಜನ ಮಗ. ರಾಜ್ಯದಲ್ಲಿ ಬರಗಾಲ
ವುಂಟಾದಾಗ ಈತನು ಉಗ್ರತಪಸ್ಸನ್ನು ಕೈಗೊಂಡು 'ಪದ್ಮಾ' ಎಂಬ ಏಕಾದಶೀ
ವ್ರತವನ್ನಾಚರಿಸಿ ಬರಗಾಲದ ನಿವಾರಣೆ ಮಾಡಿದನು. ಪಾಪಾಚರಣೆಯನ್ನು
ಮಾಡಿದ ಶ್ರಮಣ ಎಂಬುವನಿಗೆ ಇವನು ಕಠಿಣಶಿಕ್ಷೆ ವಿಧಿಸಿದನೆಂದು ರಾಮನು
ವಾಲಿಗೆ ಹೇಳಿದ್ದನು. ಮಾಂಧಾತನಿಗೆ ನೂರು ಜನ ಹೆಂಡತಿಯರಿದ್ದರೂ
ಮಕ್ಕಳಾಗಲಿಲ್ಲ. ಅದಕ್ಕಾಗಿ ಇವನು ತುಂಬಾ ಕೊರಗುತ್ತಿದ್ದನು. ಪುತ್ರ ಪ್ರಾಪ್ತಿಗಾಗಿ
ಇವನು ಋಷಿಗಳಿಂದ ಯಜ್ಞವನ್ನು ಮಾಡಿಸಿದನು. ಋಷಿಗಳು ರಾಣಿಯರಿಗೆ
ಪುತ್ರಪ್ರಾಪ್ತಿಯಾಗಬೇಕೆಂದು ಸಿದ್ದಪಡಿಸಿದ ಜಲವನ್ನು (ಪೃಷರಾಜ್ಯ) ಮಾಂಧಾತನು
ಬಾಯಾರಿಕೆಯಾಯಿತೆಂದು ಕುಡಿದನು. ಆಗ ಇವನಿಗೆ ಗರ್ಭದಾರಣೆಯಾಯಿತು.
ಗರ್ಭವು ಚೆನ್ನಾಗಿ ಉದರದಲ್ಲಿ ಬೆಳೆದಾಗ, ಋಷಿಗಳು ಈತನ ಕುಕ್ಷಿಯನ್ನು
ಛೇದಿಸಿ ಬಾಲಕನನ್ನು ಹೊರತೆಗೆದರು. ಇಂದ್ರನು ತನ್ನ ಹೆಬ್ಬೆರಳನ್ನು ಮಗುವಿನ
ಬಾಯಿಗೆ ಚೀಪಲು ಕೊಟ್ಟು ಆ ಬಾಲಕನನ್ನು ಸಂರಕ್ಷಿಸಿದನು. ಮಾಂಧಾತನು
ತುಂಬಾ ಬಲಶಾಲಿ ಮತ್ತು ವಿದ್ಯಾಪ್ರವೀಣ, ತಪೋಬಲದಿಂದ ಇವನಿಗೆ ಹಲವಾರು
ಶಸ್ತ್ರಾಸ್ತ್ರಗಳು ಲಭಿಸಿದ್ದವು. ಸಕಲ ಭೂಲೋಕವನ್ನೂ ಗೆದ್ದುಕೊಂಡು ಇವನು
ರಾಜಸೂಯ, ಅಶ್ವಮೇಧಾರಿ ಯಜ್ಞಗಳನ್ನು ನೆರವೇರಿಸಿದನು. ಅನಂತರ ಇವನಿಗೆ
ತನ್ನ ಪರಾಕ್ರಮದ ಗರ್ವವುಂಟಾಯಿತು; ಇಂದ್ರನ ಅರ್ಧಸಿಂಹಾಸನವು ದೊರೆಯ
ಬೇಕೆಂಬ ಅಭಿಲಾಷೆಯು ಇವನಿಗಾಯಿತು. ಇಂದ್ರನು ಇವನನ್ನು ಯುದ್ಧಕ್ಕೆ
ಆಹ್ವಾನಿಸಿ, ಲವಣಾಸುರನೊಡನೆ ಯುದ್ಧ ಮಾಡಲು ಹೇಳಿದನು. ಈ ಯುದ್ಧದಲ್ಲಿ
ಮಾಂಧಾತನು ಮಡಿದನು. ಮಾಂಧಾತನು ಕ್ಷತ್ರಿಯನಾಗಿ ಹುಟ್ಟಿದ್ದರೂ ಬ್ರಾಹ್ಮಣ
ನಾದನು. ಇವನು ರಾವಣನನ್ನು ಸೋಲಿಸಿದ್ದನು. 'ಶಶಬಿಂದು'ವಿನ ಕನ್ಯಯಾದ
ಬಿಂದುಮತಿಯೊಡನೆ ಈತನ ವಿವಾಹವಾಗಿತ್ತು. ಇವಳಿಂದ ಮುಚುಕುಂದ,
ಅಂಬರೀಷ, ಪುರುಕುತ್ಸ ಎಂಬ ಮೂರು ಜನ ಪುತ್ರರು ಹುಟ್ಟಿದರು. ಅಲ್ಲದೆ
ಇವನಿಗೆ ಐವತ್ತು ಮಂದಿ ಕನೈಯರಿದ್ದರು. ಒಮ್ಮೆ ಒಬ್ಬ ಋಷಿಯು ಮಾಂಧಾತನಿಗೆ<noinclude></noinclude>
iyxabshcxukx5m9gv68z686b1ahrx4y
ಪುಟ:Praantabhaashhe-Rashhtrabhaashhe.pdf/೧೧
104
89980
321166
308663
2026-05-20T06:44:28Z
Pragathi. BH
7585
/* Validated */
321166
proofread-page
text/x-wiki
<noinclude><pagequality level="4" user="Pragathi. BH" /></noinclude>{{center|— ೬—}}
ಪೂರ್ವ ಸಂಸ್ಕಾರಗಳ ಸಂಗ್ರಹವನ್ನೆಲ್ಲ ಸರ್ವಅನುಭವಗಳ ಸಾರವನ್ನೆಲ್ಲ
ಪರಂಪರೆಯಿಂದ ಹಿರಿಯರು ಕಿರಿಯರಿಗೆ ಕೈಯೆತ್ತಿ ಕೊಡಲು ಅನುವಾಯಿತು.
{{gap}}ಈ ದೃಷ್ಟಿಯಿಂದ ನೋಡಿದರೆ ಮನುಷ್ಯನ ವಿಕಾಸದ ಇತಿಹಾಸದಲ್ಲಿ,
ಮಾನವ ಸಂಸ್ಕೃತಿಯ ಬೆಳವಣಿಗೆಯ ಚರಿತ್ರೆಯಲ್ಲಿ ಭಾಷೆ ಬರೆಹಗಳಿಗೆ
ಅತ್ಯಂತ ಪ್ರಮುಖ ಸ್ಥಾನವು ದೊರೆಯುವದು ಅಥವಾ ಭಾಷ ಬರಹಗಳು
ಇಲ್ಲದೆ ಹೋಗಿದ್ದರೆ, ಸಂಸ್ಕೃತಿ ಪ್ರಗತಿಗಳ ಸಂಗ್ರಹ ಮತ್ತು ಪ್ರಸಾರ ಈ
ಪ್ರಕಾರ ವ್ಯವಸ್ಥಿತವಾಗಿ ವೇಗದಿಂದ ಆಗುತ್ತಿರಲಿಲ್ಲ ಎಂದು ಧಾರಾಳವಾಗಿ
ಹೇಳಬಹುದು
{{center|'''ಯಾವ ಭಾಷೆ ?'''}}
ಜಗತ್ತಿನಲ್ಲಿ ಭಾಷೆ ಒಂದೇ ಇಲ್ಲ. ಕನಿಷ್ಟ ಸಾವಿರಾರು ಬಾಯಿ ಭಾಷೆ
ಬರೆಹದ ಭಾಷೆಗಳು ಇವೆ. ಅವುಗಳಲ್ಲಿ ನೂರಕ್ಕೆ ತೊಂಬತ್ತರಷ್ಟು ಲಿಪಿರಹಿತ
ಎದ್ದು ಸಣ್ಣ ಸಣ್ಣ ಮಾನವೀ ಗುಂಪುಗಳು ಮಾತಾಡುವಂತವು ಇವೆ. ಇ೦ಥ
ಅಲ್ಪ ಸಂಖ್ಯರು ಸಾಮಾನ್ಯವಾಗಿ ತಮ್ಮ ನೆರೆಯಲ್ಲಿರುವ ಲಿಪಿಬದ್ಧ ಭಾಷೆ
ಯನ್ನು ತಮ್ಮ ಸಾಂಸ್ಕೃತಿಕ ಭಾಷೆಯನ್ನಾಗಿ ಮಾಡಿಕೊಂಡಿರುವದು ಕಂಡು
ಬರುವದು, ಬಾಯಿ ಭಾಷೆಗಳಲ್ಲಿ ಇಂಥ ಸಾಹಿತ್ಯಾದಿಗಳು ನಿರ್ಮಾಣವಾಗಿಲ್ಲ
ನಿರ್ಮಾಣವಾಗಲು ಈಗ ಅನುಕೂಲವಿಲ್ಲ. ಪ್ರತಿನಿತ್ಯದ ಸಾಮಾನ್ಯ ಪ್ರಾಣಿ
ಜೀವನಕ್ಕೆ ಅವಶ್ಯವಿರುವ ಶಬ್ದ ಭಾಂಡಾರವು ಮಾತ್ರ ಆ ಭಾಷೆಗಳಲ್ಲಿರುವದು.
ಲಿಪಿಬದ್ದವಾಗಿ ಗ್ರಂಥಸ್ಥವಾದ ಭಾಷೆಗಳು ಜಗತ್ತಿನಲ್ಲಿ ಸುಮಾರು ೨೦೦
ಇರಬಹುದು. ಅವೆಲ್ಲವುಗಳನ್ನು ಒಬ್ಬನೆ ಮನುಷ್ಯನು ಅರಿತಿರುವದು ಸಾಧ್ಯ
ವಿಲ್ಲ. ಹಾಗೆ ಅರಿಯಬೇಕಾದರೆ ಇಡೀ ಜೀವನವನ್ನೆಲ್ಲ ಬರೀ ಭಾಷೆಗಳನ್ನು
ಕಲಿಯುವುದರಲ್ಲಿಯೇ ಕಳೆಯಬೇಕಾದೀತು. ಅದು ಬರೀ ಕಷ್ಟ ನಾದ್ಯವಷ್ಟೇ
ಅಲ್ಲ, ಅಶಕ್ಯವೂ ಅವ್ಯವಹಾರವೂ ಅಯೋಗ್ಯವೂ ಇರುವದು. ನಾನಾನ್ಯತಃ
ಮನುಷ್ಯನು ತಾನು ಯಾವ ಪ್ರದೇಶದಲ್ಲಿ ಇಲ್ಲವೆ ಪ್ರಾಂತದಲ್ಲಿರುವನೊ
ಯಾವ ಜನರಲ್ಲಿ ವಾಸಿಸುವನೂ ಆಯಾ ಭಾಷೆಯನ್ನು ಚನ್ನಾಗಿ ಕಲಿತು
ಕೊಂಡರೆ ಸಾಕಾಗುವದು. ಭಾಷೆ, ಭಾಷಾಶಾಸ್ತ್ರ, ಭಾಷೆಯ ವ್ಯುತ್ಪತ್ತಿ
ಮುಂತಾದವುಗಳ ಅಭ್ಯಾಸ ಮಾಡುವ ಪಂಡಿತರು ಇಲ್ಲವೆ ವಿಜ್ಞಾನಾದಿಗ
ಳನ್ನು ಅಭ್ಯಸಿಸುವರು ದೇಶಪರ್ಯಟಕರು ಹೆಚ್ಚು ಭಾಷೆಗಳನ್ನು ಕಲಿತರೆ ಕಲಿ<noinclude></noinclude>
stt3cgiuu9i8suzwii3uc18a2t99a9p
ಪುಟ:Praantabhaashhe-Rashhtrabhaashhe.pdf/೧೫
104
89989
321170
308668
2026-05-20T06:46:36Z
Pragathi. BH
7585
/* Validated */
321170
proofread-page
text/x-wiki
<noinclude><pagequality level="4" user="Pragathi. BH" /></noinclude>{{center|— ೧೦—}}
ಗಳ ಶಕ್ತಿಯ ಅಪವ್ಯಯವಾಗುವದು, ವಿಕಾಸಶಕ್ತಿ ಕುಂಠಿತವಾಗುವದು ಎಂದು
ಸ್ಪಷ್ಟವಾಗಿ ಹೇಳಿರುವರು. ನಮ್ಮ ಮಿದುಳಿನಲ್ಲಿ ಸ್ಪೂರ್ತಿಯಿಂದ ಮಿಂಚಿನಂತೆ
ಹೊಳೆಯುವ ಹೊಸ ವಿಚಾರಗಳು ನಮ್ಮ ಅಂತಃಕರಣದಲ್ಲಿ ಪ್ರಸಂಗವಶಾತ್
ಉಕ್ಕಿ ಬರುವ ಭಾವನೆಗಳು ನಮ್ಮ ಸ್ವಭಾಷೆಯಲ್ಲಿಯೆ ಬರಬಲ್ಲವು. ಎಚ್.
ಎನ್. ಬೋಫರ್ ಎಂಬ ಪ್ರಸಿದ್ದ ಇಂಗ್ಲೀಷ ಲೇಖಕನು ಇದೇ ಮಾತನ್ನು
ಹೇಳುವಾಗ, 'ನಮ್ಮ ಭಾವನೆಗಳನ್ನು ನಿಜವಾಗಿ ಒಂದೇ ಒಂದು ಭಾಷೆಯಲ್ಲಿ
ಚನ್ನಾಗಿ ಚಿತ್ರಿಸಬಲ್ಲೆವು, ಅದೆಂದರೆ ಸ್ವಭಾಷೆ, ಒಂದೇ ಭಾಷೆಯ
ಸೂಕ್ಷ್ಮಗರ್ಭಿತಾರ್ಥ, ಸೂಚಿತಾರ್ಥ, ಮುಂತಾದವುಗಳು ನಮಗೆ ಪೂರ್ಣವಾಗಿ
ತಿಳಿಯಬಲ್ಲವು. ಆ ಭಾಷೆಯೆಂದರೆ ನಮ್ಮ ಮಾತೃಭಾಷೆ, ತಾಯಿಯ ತೊಡೆ
ಯಲ್ಲಿರುವಾಗ ತೊದಲುತ್ತ ಕಲಿತ ಭಾಷೆಯದು. ಅದು ನಮ್ಮ ಪ್ರಾರ್ಥನೆಯ
ಭಾಷೆ, ದೇವರಿಗೆ ಮೊರೆಯಿಡುವ ಭಾಷೆ. ನಮ್ಮ ಸುಖದುಃಖದ ಪ್ರಥಮ
ಅಭಿವ್ಯಕ್ತಿಯು, ನಮ್ಮ ಭಾವನೆಗಳ ಪ್ರಥಮ ಸ್ಪೋಟವು ನಮ್ಮ ತಾಯ್ತು?
ಯಲ್ಲಿಯೆ ಆಯಿತು, ಆ ಭಾಷೆ ಬಿಟ್ಟು ಇನ್ನಾವುದನ್ನಾದರೂ ಬೋಧ ಭಾಷೆ
ಮಾಡಲೆತ್ನಿಸುವುದೆಂದರೆ ವಿದ್ಯಾರ್ಥಿಗಳನ್ನು ಹೈರಾಣಮಾಡಿದಂತೆ. ಇಷ್ಟೇ
ಅಲ್ಲ ಅವರ ಮನಸಿನ ಸ್ವತಂತ್ರ ಹರಿದಾಟವನ್ನೆ ತಡೆದಂತೆ,' ಎಂದಿದ್ದಾನೆ.
ಈ ಎಲ್ಲ ಮಾತುಗಳನ್ನು ಪರಿಶೀಲಿಸಿದರೆ ಪ್ರಾ೦ತಿಕ ಭಾಷೆಗಳನ್ನು ದುರಕ್ಷಿಸ
ವದು ಎಂಥ ಘೋರ ಅಪರಾಧವಿರುವದೆಂಬುದು ವ್ಯಕ್ತವಾಗುವದು.
{{gap}}ಹಿಂದುಸ್ತಾನದಲ್ಲಿಯ ಹಲವೊಂದು ಪ್ರಾಂತಿಕ ಭಾಷೆಗಳು ಈ ಕ್ಷಣಕ್ಕೆ
ಸಾಕಷ್ಟು ಪುಷ್ಟವಿರಲಿಕ್ಕಿಲ್ಲ. ಹಾಗಿದ್ದ ಕ್ಷಣಕ್ಕೆ ನಾವು ಪರಕೀಯವಾದ
ಇಂಗ್ಲೀಷ ಭಾಷೆಯನ್ನಪ್ಪಿಕೊಳ್ಳಲು ಹೋಗುವದು ತಪ್ಪು. ಮನೆಯವಳು
ಮಾಡುವ ಅಡಿಗೆಗೆ ತಡವಿದ್ದರೆ ನಾವು ಸ್ವಲ್ಪ ಸಮಾಧಾನದಿಂದ ತಡೆಯ
ಬೇಕು ಹೊರತು ನಂಬರ ಮನೆಗೆ ಊಟಕ್ಕೆ ಹೋಗುವದು ಸಮಂಜಸವಾಗ
ಲಾರದು. ನಮ್ಮಲ್ಲಿಯ ಪ್ರಾಂತೀಯ ಭಾಷೆಗಳೆಲ್ಲ ಪ್ರಗತಿಶೀಲವೂ ಜೀವಂ
ತವೂ ಇರುವವು. ನಿಜವಾಗಿ ನೋಡಿದರೆ ಜನರ ಬಾಯೊಳಗೆ ಇರುವ ಪ್ರತಿ
ಯೊಂದು ಭಾಷೆಯು ಒಂದು ಜೀವಂತ ವಸ್ತು ಎಂದು ನಾವು ಭಾವಿಸಲು
ಅಡ್ಡಿ ಇಲ್ಲ. ಆಯಾ ಜನರು ಎಷ್ಟು ಚಟುವಟಿಕೆಯುಳ್ಳವರೂ, ಜೀವಂತರೊ,<noinclude></noinclude>
4uud4zr105x7w2mpu82gfl9j43u6sej
ಪುಟ:Praantabhaashhe-Rashhtrabhaashhe.pdf/೧೬
104
89990
321171
308669
2026-05-20T06:47:40Z
Pragathi. BH
7585
/* Validated */
321171
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೧೧—}}
ವಿಕಸನ ಶೀಲರೂ ಆದೆ: ಪ್ರಮಾಣದಲ್ಲಿ ಅವರ ಭಾಷ ಪ್ರಗತಿ ಪರವಿರುವದು.
ನಿತ್ಯ ಉಪಯೋಗದ ಮೂಲಕ, ಅನ್ಯ ಭಾಷೆಗಳೊಡನೆ ಆಗುವ ತಿಕ್ಕಾಟ ಬರುವ
ಸಂಬಂಧಗಳ ವಲಕ ಹೊಸ ವಿಚಾರ ಮತ್ತು ಭಾವನೆಗಳ ಪ್ರಕಟನೆ
ಗಾಗಿ ಹೊಸ ಶಬ್ದಗಳ ರಚನೆಯ ಅವಶ್ಯಕತೆಯ ಮೂಲಕ ಜೀವಂತ ಭಾಷೆ
ಒಂದು ಹರಿಯುವ ನದಿಯಂತೆ ಇರುವದು, ಹೊಸ ಶಬ್ದ ನಿರಾಣ, ಹೊಸ
ಸಾಹಿತ್ಯ ರೂಪ ಧಾರಣ ಇವು ಭಾಷೆಯ ಜೀವಂತತನದ ಮುಖ್ಯ ಲಕ್ಷಣಗ
೪ಂದು ಹೇಳಬಹುದು ಇವೆರಡಿಲ್ಲದೆ ಯಾವ ಭಾಷೆಯೂ ಬದುಕಿ ಬಾಳಲಾ
ರದು, ಸ್ವಾವಲಂಬಿಯಾಗಲಾರದು; ಮುಂದಡಿಯಿಡುವದಂತೂ ದೂರನೆ
ಉಳಿಯಿತು.
{{center|'''ಭಾಷಾನ ಗುಣ ಪ್ರಾಂತ'''}}
{{gap}}ಜೀವನದಲ್ಲಿ ಭಾಷೆಗೆ ಇದ್ದ ಶ್ರೇಷ್ಠ ಸ್ಥಾನ, ಹಿಂದುಸ್ತಾನದಲ್ಲಿ ಜೀವಂತ
ವಿರುವ ಪ್ರಾಂತೀಯ ಭಾಷೆಗಳ ಮಹತ್ವ, ಆಯಾ ಜನರ ವಿಕಾಸ ಆಯಾ
ಭಾಷೆಗಳ ಮುಖಾಂತರವೆ ಆಗುವದು ಸ್ವಾಭಾವಿಕ ಎಂ ಎಲ್ಲ ಮಾತುಗ
ಳನ್ನು ಲಕ್ಷಿಸಿ ಕಾಂಗ್ರೆಸ್ಸು ತನ್ನ ಕಾರಭಾರದ ಮಟ್ಟಿಗೆ ಭಾಷಾನುಗುಣ
ಪ್ರಾಂತಗಳನ್ನು ೧೯೨೦ರಲ್ಲಿ ಮಾಡಿಯೆಬಿಟ್ಟಿತು. ಸ್ವರಾಜ್ಯದಲ್ಲಿ ಭಾಷಾ
ನುಗುಣ ಪ್ರಾಂತ್ಯಗಳೇ ಏರೊಡಬೇಕು ಎಂದು ಅದು ಸಾರಿತು, ತಾನು
ಮಾಡಿದ ಸ್ವರಾಜ್ಯ ಘಟನೆಯಲ್ಲಿ ಆ ರೀತಿ ಇರಬೇಕೆಂದು ಪ್ರಚಾರಮಾಡಿತು.
ಕೇವಲ ಭೌಗೋಲಿಕ, ಆಜ್ಜಿಕ, ರಾಜಕೀಯ ದೃಷ್ಟಿಯಿಂದ ಪ್ರಾಂತಗಳನ್ನು
ಏತ್ಪಡಿಸುವ ವೆಂದರೆ ಬಹಳ ಕೃತ್ರಿಮವಾಗುವದು, ಪ್ರಾಂತವೆಂದರೆ ಅಲ್ಲಿರುವ
ಗುಡ್ಡ, ಗಿಡ ಅಥವಾ ನದಿ, ಕೆರೆಯಲ್ಲ, ಅಲ್ಲಿಯ ಬೆಳೆ ಖನಿಜಗಳಲ್ಲ, ಪ್ರಾಂತ
ವೆಂದರೆ ಅಲ್ಲಿಯ ಜನರು. ಅವರಲ್ಲಿ ಒಂದು ಬಗೆಯ ಏಕೋಭಾವ, ಸಮd
ಸತ ವಿಚಾರಗಳ ಏಕರೂಪತೆ ನೆಲೆಗೊಳ್ಳಬೇಕಾದರೆ ಏಕ ಭಾಷೆಯು ಆ
ಕೆಲಸಕ್ಕೆ ಉಪಕಾರಕವಾಗಬಲ್ಲದು. ಒಂದು ಪ್ರಾಂತದ ಶಿಕ್ಷಣ, ವ್ಯವಹಾರ,
ರಾಜ್ಯ ಕಾರಭಾರ, ಸಭೆಸಮ್ಮೇಲನಾದಿ ಸಾಲ್ವಜನಿಕ ಚಟುವಟಿಕೆಗಳು ಎಲ್ಲ
ಸುಸೂತ್ರ ಸಾಗಬೇಕಾದರೆ, ಅವೆಲ್ಲವುಗಳಲ್ಲಿ ಅಲ್ಲಿಯ ಜನಸಾಮಾನ್ಯರು
ರುಚಿಕೊಂಡು ಭಾಗವಹಿಸಬೇಕಾದರೆ, ಅಲ್ಲಿಯ ಜನರು ಒಂದೇ ಭಾಷೆಯವರಿ<noinclude></noinclude>
a3k5z1qtw72c0eaukqybx0tnkxfznoq
ಪುಟ:ಜಾಗರದ ಜೋಶಿ.pdf/೫೭
104
99267
320914
277810
2026-05-19T17:39:01Z
Pragathi. BH
7585
/* Validated */
320914
proofread-page
text/x-wiki
<noinclude><pagequality level="4" user="Pragathi. BH" /></noinclude>ಅರ್ಥಕ್ಕೆ ತಲೆದೂಗಿದ ಪ್ರೇಕ್ಷಕವೃಂದ ತಾಳಮದ್ದಳೆಯನ್ನು ಉತ್ತರ ಅಮೇರಿಕಾಕ್ಕೆ ತ೦ದಿದ್ದಕ್ಕಾಗಿ ಜೋಶಿಯವರನ್ನು ಹೃತ್ಪೂರ್ವಕ ಅಭಿನಂದಿಸಿತು. ಕನ್ನಡಿಗ ಎ೦.ಪಿ
ಶ್ರೀ ಚಂದ್ರ ಆರ್ಯ ಅವರು ಕನ್ನಡ ಕಲೆ ಯಕ್ಷಗಾನವನ್ನು ಕೆನಡಾದಲ್ಲಿ ಹೆಚ್ಚು,ಮೇಳದ ಮತ್ತು ಜೋಶಿಯವರ ಪ್ರಯತ್ನ ಮುಂದುವರಿಯಲಿ ಎ೦ದು ಹಾರೈಸಿದರು.
{{gap}}
ಸನ್ಮಾನ ಸ್ವೀಕರಿಸಿ ಸರಣಿಯ ಸಮಾರೋಪದ ಕುರಿತು ಮಾತನಾಡುತ್ತಾ ಜೋಶಿಯವರು ಸರಣಿಯನ್ನು ಸಂಯೋಜಿಸಿದ ಯಕ್ಷಮಿತ್ರರನ್ನೂ ಮತ್ತು ಕಾರ್ಯಕ್ರಮವನ್ನು ಕನ್ನಡ ಕೂಟವನ್ನು ಶ್ಲಾಘಿಸಿ ತಾಳಮದ್ದಳೆಯಲ್ಲಿ ಸಹಕರಿಸಿದ ಕಲಾವಿದರು ಮತ್ತು ಸಂಯೋಜಕರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ವಿದೇಶದಲ್ಲಿ ಮೊಟ್ಟಮೊದಲ ಸ೦ಪೂರ್ಣ ಯಕ್ಷಗಾನ ಮೇಳವನ್ನು ಸ್ಥಾಪಿಸುವುದು ದೊಡ್ಡ ಕೆಲಸ ಎಂದು ಶುಭ ಕೋರಿದರು. ನೂರಾರು ವರ್ಷಗಳಿಂದ ಯಕ್ಷಗಾನ ಕಲೆಯಲ್ಲಿ ಏನು ಬೆಳೆದಿದೆಯೋ ಅದರ ಫಲವಾಗಿ ಕಲಾವಿದರಾದ ತನ್ನಂತಹವರಿಗೆ ಅವಕಾಶ ಮತ್ತು ಗೌರವ ಸಲ್ಲುತ್ತಿದೆ.ಕಲಾವಿದರ ಕಾಲು ಹಿರಿಯ ಕಲಾವಿದರ ಭುಜದ ಮೇಲೆ ಇರುವುದರಿಂದ ನಾವು ಮೇಲೆ ಕಾಣುವುದು. ಅನೇಕ ಗ್ರಂಥಗಳಿಗೆ ಮತ್ತು ಕಲಾವಿದರಿಗೆ ನಾನು ಋಣಿ ಎ೦ದರು.</br>
{{gap}}
ಸುಮಾರು ಜೂನ್ ಮೂರರಿಂದ ಪ್ರಾರಂಭವಾದ ಡಾ. ಜೋಶಿಯವರ ಕೆನಡಾ ತಿರುಗಾಟ ಟೊರೆಂಟೋದ ತಾಳಮದ್ದಳೆ 'ಭೀಷ್ಮಪರ್ವ'ದೊಂದಿಗೆ ಆರಂಭವಾಯಿತು.ಬಹುಶಃ ಇದು ಕೆನಡಾದಲ್ಲಿ ಸಂಪೂರ್ಣ ಹಿಮ್ಮೇಳದೊಡನೆ ನಡೆದ ಮತ್ತು ವೃತ್ತಿಪರ ಅರ್ಥದಾರಿಗಳು ಭಾಗವಹಿಸಿದ ಮೊಟ್ಟಮೊದಲ ತಾಳಮದ್ದಳೆ. ವಿಶೇಷ ಎ೦ದರೆ ತಾಳಮದ್ದಳೆ ಮತ್ತು ಯಕ್ಷಗಾನವನ್ನು ನಡೆಸಿಕೊಟ್ಟದ್ದು ಉತ್ತರ ಅಮೇರಿಕಾದ್ದೇ ಆದ ಯಕ್ಷಮಿತ್ರ ಟೊರೆಂಟೋ ಮೇಳ,ಯಕ್ಷಮಿತ್ರ ಟೊರೆಂಟೊ ಮೇಳ 2009 ರಲ್ಲಿ ಕೆನಡಾದಲ್ಲಿ ಸ್ಥಾಪಿತವಾದ ಭಾರತದ ಹೊರಗಿರುವ ಏಕೈಕ ಹಿಮ್ಮೇಳ, ಮ್ಮುಮೇಳ ವೇಷಭೂಷಣ ಇತ್ಯಾದಿಗಳಿಂದ ಸುಸಜ್ಜಿತವಾದ ವಿದೇಶೀ ಯಕ್ಷಗಾನ ಮೇಳವಾಗಿದ್ದು ಡಾ. ಜೋಶಿಯವರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸಿತ್ತು. ಯಕ್ಷಗಾನದ ಶ್ರೇಷ್ಠ ಕವಿಯಾದ ದೇವಿದಾಸ ರಚಿತ ಕೃಷ್ಣಸಂಧಾನ ಮತ್ತು ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ ಭೀಷ್ಮ ಪರ್ವದ ಆಯ್ದ ಪದ್ಯಗಳನ್ನು ಸಂಯೋಜಿಸಿ 'ಭೀಷ್ಮ ಭಕ್ತಿ' ತಾಳಮದ್ದಳೆ ನಡೆಯಿತು. ಭೀಷ್ಮನಾಗಿ ಡಾ. ಜೋಶಿಯವರು ಭಕ್ತಶ್ರೇಷ್ಠ ಭೀಷ್ಮನ ಪಾತ್ರವನ್ನು ಸೃಷ್ಟಿಸಿದರು.ಯಕ್ಷಮಿತ್ರದ ಕಲಾವಿದರುಗಳಾದ ವಿನಾಯಕ ಹೆಗಡೆ ಮತ್ತು ರಾಘವೇಂದ್ರ ಕಟ್ಟಿನಕೆರೆ ಭಾಗವತಿಕೆ ಮಾಡಿ ಶ್ರೀಧರ ಮಧ್ಯಸ್ಥ ಮದ್ದಳೆ ನುಡಿಸಿ ಹಿಮ್ಮೇಳ ನಡೆಸಿಕೊಟ್ಟರು.ನವೀನ ಹೆಗಡೆ ಕೌರವನಾಗಿ, ಕವಿರಾಯ
ಉಡುಪ ಕೃಷ್ಣನಾಗಿ, ನಾಗಭೂಷಣ ಮಧ್ಯಸ್ಥಅರ್ಜುನನಾಗಿ, ಕೃಷ್ಣಪ್ರಸಾದ ಬಾಳಿಕೆ ಕರ್ಣನಾಗಿ ಪ್ರೇಕ್ಷಕರು ಮೆಚ್ಚುವಂತೆ ಅರ್ಥ ಹೇಳಿದರು. ನಂತರ ಯಕ್ಷಗಾನ ವಾಲಿವಧೆ ಪ್ರಸ್ತುತಪಡಿಸಲಾಯಿತು. ವಾಲಿವಧೆಯಲ್ಲಿ ನವೀನ ಹೆಗಡೆ ವಾಲಿಯಾಗಿ, ಶ್ರೀಕಾಂತ ಹೆಗಡೆ ರಾಮನಾಗಿಯೂ ಕೃಷ್ಣಪ್ರಸಾದ
{{center|ಜಾಗರದ ಜೋಶಿ / 50}}<noinclude></noinclude>
7y1ne7i24yw5wv4hmdzlw0rrxob8l7u
ಪುಟ:ಜಾಗರದ ಜೋಶಿ.pdf/೧೨೪
104
99268
320894
277715
2026-05-19T17:27:23Z
Pragathi. BH
7585
/* Validated */
320894
proofread-page
text/x-wiki
<noinclude><pagequality level="4" user="Pragathi. BH" /></noinclude>ಹಿಡಿತವುಳ್ಳ,ಯಕ್ಷಗಾನದ ಕುರಿತು ಪ್ರೀತಿಯುಳ್ಳ ನಿರ್ದೇಶಕ-ನಿರ್ಮಾಪಕರಿಂದ ಇಂತಹ ಕೆಲಸ ಆಗಬೇಕು.ಈ ರೀತಿಯ ವ್ಯವಸ್ಥಿತ ಕಾರ್ಯವು ಯಕ್ಷಗಾನವನ್ನು ಬೇರೆ ಬೇರೆ ಮಟ್ಟಗಳಲ್ಲಿ ಬಿಂಬಿಸಿ ಪ್ರಚಾರ ಪ್ರಸಾರ ಪಡೆಸಲು ಅತ್ಯುತ್ತಮ ಸಾಧನವಾಗುವುದು. ಅದಕ್ಕಾಗಿ ಯಕ್ಷಗಾನವೂ ಹೆಚ್ಚು ಸೂಕ್ಷ್ಮವಾಗಿ, ಸೂಕ್ತ ಪರಿಪಾಕಕ್ಕೆ ಸಿದ್ಧವಾಗಬೇಕಾದುದು ಅಗತ್ಯ.
'''ಸಹಕಾರ ಜಾಲ'''
{{gap}}ಯಕ್ಷಗಾನದ ಬಗೆಗೆ ಶೈಕ್ಷಣಿಕ ಕಾರ್ಯ, ಪರಿಕಲ್ಪನಾತ್ಮಕವಾದ ಕೆಲಸಗಳನ್ನು ಮಾಡುವ ಸಂಸ್ಥೆಗಳೊಳಗೆ ರಾಷ್ಟ್ರೀಯ.ಅಂತಾರಾಷ್ಟ್ರೀಯ ಮಟ್ಟದ ಕೆಲಸಗಳಿಗಾಗಿ ಒಂದು ಸಹಕಾರ ಜಾಲವನ್ನು (Co-operation Network) ಸ್ಥಾಪಿಸಿಕೊಳ್ಳಬಹುದು.ಅದರ ಮೂಲಕ ಮಾಹಿತಿ ಸಂಗ್ರಹ. ವಿನಿಮಯ ಮತ್ತು ವಿವಿಧ ರೀತಿಯ ಕಾರ್ಯಕ್ರಮಗಳ ರೂಪೀಕರಣದ ಒಂದು ವ್ಯವಸ್ಥೆಯನ್ನು ಯೋಜಿಸಿ ಕಾರ್ಯಗತಗೊಳಿಸುವುದು. ಯಕ್ಷಗಾನಕ್ಕೆ ಹಲವು ಹಂತಗಳಲ್ಲಿ ಬೇಡಿಕೆ ಇದೆ, ಅವುಗಳನ್ನು ಬೆಳೆಸಿಕೊಳ್ಳಲು ಇಂತಹ ಒಂದು
ವ್ಯವಸ್ಥೆ ಅಗತ್ಯವಿದೆ.
'''ಸಂಘಟಕ ಮುಖ್ಯರ ಧೋರಣೆ'''
{{gap}}ಯಕ್ಷಗಾನ ಮೇಳಗಳನ್ನು ಹೊಂದಿರುವ ದೇವಾಲಯಗಳು, ಮೇಳಗಳ ಸಂಘಟಕರೂ ಯಕ್ಷಗಾನದ ಸ್ವರೂಪ ರಕ್ಷಣೆ, ಗುಣಮಟ್ಟ ರುಚಿ-ಶುದ್ಧಿಗಳನ್ನು ಕಾಪಾಡುವ,ಬೆಳೆಸುವ ಹೊಣೆ ಉಳ್ಳವರು. ಈ ಘಟಕಗಳೆ ಈ ಕಥೆಯ ಉಳಿವು ಬೆಳವಣಿಗೆಗೆ ಮುಖ್ಯ ಆಧಾರ. ಇವರು ಯಕ್ಷಗಾನ ಸ್ವರೂಪಕ್ಕೆ, ಗುಣಮಟ್ಟಕ್ಕೆ ಖಚಿತ ಬದ್ಧತೆಯನ್ನು,ವ್ಯವಸ್ಥಿತ ಸಾಂಸ್ಕೃತಿಕ ಧೋರಣೆಯನ್ನು ರೂಪಿಸುವುದು ಅತ್ಯಗತ್ಯವಾಗಿದೆ. ಹರಕೆದಾರರ,ಪ್ರಾಯೋಜಕರ ವಿಚಿತ್ರವಾದ, ಕಲೋಚಿತವಲ್ಲದ ಅಪೇಕ್ಷೆಗಳನ್ನು ಪೂರೈಸುತ್ತಾ ಹೋದರೆ ಕಲಾರೂಪ ಉಳಿಯಲಾರದು. “ನಮ್ಮ ಧೋರಣೆ ಹೀಗೆ, ಅದಕ್ಕೆ ಬದ್ಧರಾಗಿ ಭಕ್ತ ಜನರು ಹರಕೆ ಆಟಗಳನ್ನು ಆಡಿಸಬೇಕು” ಎಂಬ ಖಚಿತ ನಿಲುವನ್ನು ಮೇಳದ ಸಂಘಟಕರು ಹೊಂದುವುದು ಕಲೆಯ ದೃಷ್ಟಿಯಿಂದ ಅನಿವಾರ್ಯ.ಕಲಾವಿದರನ್ನು ಸಿದ್ಧಪಡಿಸುವ ಕೇಂದ್ರಗಳಿಂದ ಬರುವವರು ಮೇಳಗಳಲ್ಲಿ ಕಲಾವಿದರಾಗುವುದರಿಂದ,
ಮೇಳಗಳಿಗೆ ಶಿಕ್ಷಣ ಕೇಂದ್ರಗಳಿಗೆ ಬೆಂಬಲ ನೀಡುವ ನೈತಿಕ ಕರ್ತವ್ಯವಿದ್ದು, ಅದನ್ನು ಉದಾರವಾಗಿ ನಡೆಸಬೇಕಾಗಿದೆ. ಮೇಳ ಸಂಘಟಕರೆ ದಯವಿಟ್ಟು ಜಾಗೃತರಾಗಿರಿ.
{{gap}}ಕಲೆಯ ವಿಷಯದಲ್ಲಿ ಜನರ ಅಭಿರುಚಿ ಎಂಬ ಸ್ಥುಲವಾದ ಆಧಾರ ಇದ್ದರೂ,ಕಲೆಯನ್ನು ಉಳಿಸಿ, ಮುಂದಿನ ಜನಾಂಗಕ್ಕೆ ದಾಟಿಸುವ ಮೊದಲ ಹೊಣೆ ಕಲಾವಿದನದ್ದು ಎಂಬುದನ್ನು ಕಲಾವಿದರು ಮನಗಾಣಬೇಕು. ಇಲ್ಲಿ ಕಲಾವಿದರ ಜವಾಬ್ದಾರಿ
ಮೊದಲನೆಯದು.
{{center|ಜಾಗರದ ಜೋಶಿ / 117}}<noinclude></noinclude>
g4yyvv36buh5xfqp8kqn0nud6ayo62x
ಪುಟ:ಜಾಗರದ ಜೋಶಿ.pdf/೬೫
104
99269
320975
277821
2026-05-20T02:47:11Z
Shreelatha.Halemane
7642
/* Validated */
320975
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಮುಂದುವರಿಯುವ ದೃಷ್ಟಿಯಿಂದ ಅತ್ಯವಶ್ಯ.</br>
{{gap}}ಪತ್ರಿಕೆಗಳನ್ನು ನೋಡಿದರೆ ಯಕ್ಷಗಾನದ ಬಗೆಗೆ ಚಿಕ್ಕ, ದೊಡ್ಡ ಲೇಖನಗಳನ್ನು ಬರೆದ ವರು ಸುಮಾರು ಐನೂರು ಮಂದಿ ಇರಬಹುದು. ಸಾಂದರ್ಭಿಕವಾಗಿ ಒಂದೊಂದೇ ಲೇಖನಗಳನ್ನು ಬರೆದು ಲೇಖಕರಲ್ಲದೆಯೂ ಲೇಖಕರಾದವರು ಸುಮಾರು ಅಷ್ಟೇ ಸಂಖ್ಯೆಯಲ್ಲಿರಬಹುದು. ನನ್ನ 'ಯಕ್ಷಗಾನ ಗ್ರಂಥಸೂಚಿ'ಯಲ್ಲಿರುವ ಯಕ್ಷಗಾನದ ಬರಹಗಾರರ ಸೂಚಿಯಲ್ಲಿ 755 ಹೆಸರುಗಳು ದಾಖಲಾಗಿವೆ. (2006), ಈಗ (2016ರಲ್ಲಿ) ಈ ಸಂಖ್ಯೆ ಸುಮಾರು 1500ರಷ್ಟು ದಾಟಿರಬಹುದೆ೦ದು ಊಹಿಸುವಂತಿದೆ. ಇಷ್ಟು ಸಂಖ್ಯೆಯ ಬರಹಗಾರರೊಳಗೆ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ರಚಿಸಿದವರು ಕೆಲವರೇ ಆದರೂ ಇದೊಂದು ಸಣ್ಣ ವಲಯದಲ್ಲಿ ಈ ಕ್ಷೇತ್ರ ಎಷ್ಟು ಮಂದಿಗೆ ಬರವಣಿಗೆಯ ಮತ್ತು ವಿಷಯ ದಾಖಲಾತಿಯ ಪ್ರೇರಣೆಯನ್ನು ನೀಡಿದೆ ಎಂದರೆ ಆಶ್ಚರ್ಯವಾಗುತ್ತದೆ.<br/>
{{gap}}ಇದು ಯಕ್ಷಗಾನದ ವಿಶಿಷ್ಟವಾದ ಶಕ್ತಿ ಮತ್ತು ಆಕರ್ಷಣೆಯೆಂದೇ ಹೇಳಬೇಕಾಗುತ್ತದೆ. ಯಕ್ಷಗಾನದ ಈ ಶಕ್ತಿಯ ಒಳಮರ್ಮಗಳೇನೆಂಬುದನ್ನು ತಿಳಿಯುವ ಪ್ರಯತ್ನವೇ ಜೊಶಿಯವ ರ ಎಲ್ಲ ಬರವಣಿಗೆಗಳ ಹಿಂದಿನ ಮುಖ್ಯ ಉದ್ದೇಶ. ಈ ಶಕ್ತಿಯನ್ನು ತಿಳಿಯುವಲ್ಲಿ, ಅರ್ಥಮಾಡಿಕೊಳ್ಳುವಲ್ಲಿ ನಾವು ಎಡವಬಾರದೆಂಬುದು ಅವರ ಕಾಳಜಿ. ಇದರಲ್ಲಿ ಇನ್ನೂ ತಿಳಿಯುವ ಭಾಗ ಬಹಳ ಇದೆ - ಈಗ ತಿಳಿದುದು ಅಂಶ ಮಾತ್ರ ಎಂಬ ನಿಲುವಿನಲ್ಲಿ ವಿಮರ್ಶೆಯ ವಿನಯವಿದೆ. ಇನ್ನಷ್ಟು ತಿಳಿಯಲು ವಿಸ್ತಾರವಾದ ಅಧ್ಯಯನ, ದೇಶದ ಮತ್ತು ವಿಶ್ವದ ಕಲಾಪ್ರಕಾರಗಳ ಪರಿಜ್ಞಾನ ಇರಲೇಬೇಕೆಂಬ ನಿಲುವಿನಲ್ಲಿ ವಾಸ್ತವತೆಯ ಅರಿವಿದೆ.
{{gap}}ಈ ಹಿನ್ನೆಲೆಯಿಂದ 'ಮುಡಿ'ಯ ಲೇಖನಗಳನ್ನೂ, ಇತರ ಕೃತಿಗಳ ಲೇಖನಗಳನ್ನೂ ಗಮನಿಸಬೇಕು. ಅವರ ಯಕ್ಷಗಾನ ಸಂಬಂಧಿಯಾದ ಎಲ್ಲ ಬರವಣಿಗೆಗಳು ಯಕ್ಷಗಾನವೆಂಬ ನಮ್ಮ ನಾಡಿನ ಅತ್ಯಾಶ್ಚರ್ಯಕರವಾದ ಕಲಾಸಂಪ್ರದಾಯವೊಂದನ್ನು 'ಅಡಿಯಿಂದ ಮುಡಿಯ ವರೆಗೆ' ಸಮಗ್ರವಾಗಿ ನೋಡುವ ಪ್ರಯತ್ನ. ಈ ಪ್ರಯತ್ನದಲ್ಲಿ ಅವರ ಇನ್ನಷ್ಟು ಲೇಖನಗ ಳು ಬರಲಿ; ಕೃತಿಗಳು ಬರಲಿ, ಲೇಖನಗಳನ್ನು ಬರೆಯುವ ಮತ್ತು ಹೊಸ ಹೊಳಹುದನ್ನ ನೀ ಡುವ ಚಿಂತನಶಕ್ತಿಯೂ, ಅಧ್ಯಯನ ಬಲವೂ ಅವರಿಗಿದೆ. ಹೊಳೆದುದನ್ನು ಸ್ಪಷ್ಟವಾಗಿ ನಿ ರೂಪಿಸುವ ಅಭಿವ್ಯಕ್ತಿ ಸಾಮರ್ಥ್ಯವೂ ಇದೆ. ಆದುದರಿಂದ ಅವರ ಮೂಲಕ ಹೆಚ್ಚಿನ ಬರವ ಣಿಗೆಯನ್ನು ನಿರೀಕ್ಷಿಸುವುದು ತಪ್ಪಲ್ಲ. ಈ ಲೇಖನಗಳನ್ನೆಲ್ಲಓದುವವರ ಸಂಖ್ಯೆ ಕಡಿಮೆಯೇ ಇರಬಹುದು. ಆದರೆ ಇವುಗಳ ನಿಜವಾದ ಬೆಲೆಯನ್ನು ಕಾಲವು ತಿಳಿಸಿಕೊಟ್ಟೀತು.<br/>
{{gap}}'''(ಉಡುಪಿ ಯಕ್ಷಗಾನ ಕೇಂದ್ರದ ನೂತನ ಭವನ 'ಶಿವಪ್ರಭಾ' ಉದ್ಘಾಟನೆಯ ಸಮಾರ೦ಭದಲ್ಲಿ (2006) ಬಿಡುಗಡೆಗೊ೦ಡ ಡಾ.ಎಂ.ಪ್ರಭಾಕರ ಜೋಶಿಯವರ 'ಮುಡಿ' ಯಕ್ಷಗಾನ ಲೇಖನ ಸಂಕಲನ ಕೃತಿಯ ಪರಿಚಯ ಭಾಷಣದ ಪರಿಷ್ಕೃತ ವಿಕೃತ ರೂಪ)'''
{{center|ಜಾಗರದ ಜೋಶಿ / 58}}<noinclude></noinclude>
7e3c415kcpbhcxme6nymgjt35pqnwio
ಪುಟ:ಜಾಗರದ ಜೋಶಿ.pdf/೧೨೫
104
99272
320895
277745
2026-05-19T17:27:42Z
Pragathi. BH
7585
/* Validated */
320895
proofread-page
text/x-wiki
<noinclude><pagequality level="4" user="Pragathi. BH" /></noinclude>'''ಕಲಾವಿದರ ಹಿತರಕ್ಷಣೆ'''
{{gap}}ಕಲೆಯ ಬಗೆಗೆ ವಿಮರ್ಶಿಸುವಾಗ ನಾವು ಕಲಾವಿದರನ್ನು ಮರೆತು,ಆತನ ಸಮಸ್ಯೆಗಳನ್ನು ಬದಿಗಿರಿಸಿ ಮಾತಾಡುವಂತಿಲ್ಲ. ಯಕ್ಷಗಾನವೆಂಬುದು ಒಂದು ಕಷ್ಟದ ಕಸುಬು.ಊರಿಂದೂರಿಗೆ ತಿರುಗುವ,ನಿದ್ದೆಗೆಟ್ಟು ದುಡಿಯುವ ಉದ್ಯೋಗ,ಕಲಾವಿದರನ್ನು
ರಂಗದಲ್ಲಿ ಕಂಡು ಸಂತೋಷಿಸುವ ನಾವು, ಆತನ ಕಷ್ಟಕಾಲದಲ್ಲಿ ನೆರವಾಗುವುದೂ ಅಗತ್ಯ. ಕಲಾವಿದರ ಜೀವನಕ್ಕೆ ಭದ್ರತೆ,ನಿವೃತ್ತಿ ಜೀವನಕ್ಕೆ ಆಧಾರಗಳನ್ನು ಒದಗಿಸುವ ಬಹು ದೊಡ್ಡ ಕಾವ್ಯವನ್ನು ಮೇಳಗಳು, ದೇವಾಲಯಗಳು, ಸರಕಾರ, ಸಂಸ್ಥೆಗಳು ಸಮಾಜ ಎಲ್ಲರೂ ಕೈಗೊಳ್ಳುವುದು ಅಗತ್ಯ. ಕೆಲವು ಕ್ಷೇತ್ರಗಳೂ, ಮೇಳಗಳು ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ. (ಉದಾ - ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕಟೀಲು ಕ್ಷೇತ್ರದ ಮೇಳಗಳು.)
'''ಮಾದರಿಗಳು'''
{{gap}}ಕಲಾವಿದರನ್ನು ಒಂದು ಸಂಘಟನೆಗೊಳಪಡಿಸಿ, ಅವರಿಗಾಗಿ ಆಪತ್ ಸಹಾಯ ಇನ್ಸೂರೆನ್ಸ್, ಬಸ್ ಪ್ರಯಾಣಗಳಲ್ಲಿ ರಿಯಾಯಿತಿ ವ್ಯವಸ್ಥೆ ಮುಂತಾದ ಭದ್ರತಾ ಕಲ್ಯಾಣ, ಶಿಕ್ಷಣಕ್ಕೆ ನೆರವು ಕಾರ್ಯಕ್ರಮಗಳನ್ನು ರೂಪಿಸಿ, ನಡೆಸುತ್ತಿರುವ ಉಡುಪಿಯ 'ಯಕ್ಷಗಾನ ಕಲಾರಂಗ'ದ ಯಕ್ಷನಿಧಿಯ ಒಂದು ದಶಕದ ಕಾರ್ಯವು ದೇಶದ ಸಾಂಪ್ರದಾಯಿಕ ರಂಗಭೂಮಿಗೆ
ಮಾದರಿಯಾಗಿರುವ ಒಂದು ಅಸಾಮಾನ್ಯ ಯೋಜನೆಯಾಗಿದೆ.
ಇದರ ಹಿಂದೆ ಇರುವ ಚಿಂತನೆ, ಸಾಮರ್ಥ್ಯ, ಕಾರ್ಯತತ್ಪರತೆ, ತ್ಯಾಗ, ಬದ್ಧತೆಗಳು ಅತ್ಯಂತ ಪ್ರಶಂಸಾರ್ಹವಾಗಿವೆ. ಈ ನಿಧಿಯು ಇನ್ನಷ್ಟು ವಿಸ್ತಾರವಾಗಿ ಕಾರ್ಯವ್ವಿಸ್ತಾರ ಪಡೆದು ಯಕ್ಷಗಾನದ ಉದ್ಯೋಗಕ್ಕೆ ಭದ್ರತೆಯನ್ನು ನೀಡುವಂತಾಗಲಿ.
{{gap}}ಕಲಾರಂಗದ ಸಹಕಾರದೊಂದಿಗೆ ಉಡುಪಿಯ ಶಾಸಕ ಶ್ರೀ ಕೆ. ರಘುಪತಿ ಭಟ್ಟರು ರೂಪಿಸಿರುವ 'ಯಕ್ಷ ಶಿಕ್ಷಣ ಟ್ರಸ್ಟ್' ಒಂದು ಬೃಹತ್ ಯೋಜನೆ. ಶಾಲಾ ವಿದ್ಯಾರ್ಥಿಗಳ ಮಟ್ಟದಲ್ಲಿ ಯಕ್ಷಗಾನ ಶಿಕ್ಷಣದ ಮೂಲಕ ಅಭಿರುಚಿ, ನಿರ್ಮಾಣ ಪ್ರೋತ್ಸಾಹ, ಸಂವರ್ಧನ ಕಾರ್ಯದಲ್ಲಿ ದಾಖಲೆಯ ಉಪಕ್ರಮವಾಗಿದೆ.
'''ಸ್ಥಾಯಿ ಪ್ರದರ್ಶನ ವ್ಯವಸ್ಥೆ'''
{{gap}}ಯಕ್ಷಗಾನದ ಬಗೆಗೆ ಆಸಕ್ತರಾಗಿರುವ ಕಲಾಪ್ರೇಮಿಗಳು, ವಿಶೇಷತಃ ಬೇರೆ ಊರುಗಳ, ಪ್ರಾಂತ್ಯಗಳ ಮತ್ತು ಪರದೇಶಗಳ ಆಸಕ್ತರು. ನಮ್ಮ ಪ್ರದೇಶದಲ್ಲಿ ಬಂದಾಗ ಅಪೇಕ್ಷಿಸುವ ಒಂದು ವಿಷಯ, ಯಕ್ಷಗಾನ ಪ್ರದರ್ಶನವು ಒಂದು ಕಡೆ ಸ್ಥಾಯಿಯಾಗಿ
ಸಿಗುವ ವ್ಯವಸ್ಥೆ, ಸಾಂಪ್ರದಾಯಿಕ ಸ್ವರೂಪದ, ಪ್ರೇಕ್ಷಕ ಸ್ನೇಹಿಯಾದ, ಮಿತ ಅವಧಿಯ ಅಂತಹ ಪ್ರದರ್ಶನಗಳನ್ನು ಕರಾವಳಿಯ ಎರಡು ಮೂರು ಕ್ಷೇತ್ರಗಳಲ್ಲಿ ಖಾಯಂ ಆಗಿ ಏರ್ಪಡಿಸಬಹುದಾಗಿದೆ. ಇದರಲ್ಲಿ ವಿವಿಧ ಮೇಳಗಳು, ನಿಶ್ಚಿತ ನಿಯಮ ಮತ್ತು
{{center|ಜಾಗರದ ಜೋಶಿ / 118}}<noinclude></noinclude>
p1epmi9j4nnam0wjyj4hclkbzc8c0qp
ಪುಟ:ಜಾಗರದ ಜೋಶಿ.pdf/೮೨
104
99273
320986
277651
2026-05-20T02:54:32Z
Shreelatha.Halemane
7642
/* Validated */
320986
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಸಮೀಕರಣ ಮಾಡಿದಾಗ ಅದು ಸಾಮಗ್ರಿಗಳ ರೂಪದಲ್ಲಿ, ಕ್ರಿಯೆಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಯಕ್ಷಗಾನದ ವೇಷಭೂಷಣಗಳ ಸಾಮಗ್ರಿಗಳು, ಕುಣಿತ ಮತ್ತು ಮಾತುಗಾರಿಕೆಯ ನಡೆ - ಇವು ಹೇಗೆ ಪ್ರಕೃತಿಪ್ರೇರಿತ ಎನ್ನುವುದನ್ನು ವಿಶಿಷ್ಟ ಒಳನೋಟಗಳ ಮೂಲಕ ಚರ್ಚಿಸಲಾಗಿದೆ. ಯಕ್ಷಗಾನ ಪ್ರಸಂಗಗಳಲ್ಲಿ ಪ್ರಕಟವಾಗುವ ಭಾವಗಳು,
ಕ್ರಿಯೆಗಳು ಹೇಗೆ ನಿಜ ಜೀವನದವು ಎನ್ನುವುದರ ಸೂಚನೆಯೂ ಇಲ್ಲಿದೆ. ವಾಸ್ತವಿಕತೆ ಮತ್ತು ಫ್ಯಾಂಟಸಿಗಳ ವೈರುಧ್ಯವನ್ನು ಯಕ್ಷಗಾನದ ರಚನೆಯ ಒಳಗಡೆ ವಿವರಿಸುವ ಯತ್ನವನ್ನು ಇಲ್ಲಿ ಮಾಡಲಾಗಿದೆ. ಕಾಲದ ವಿಭಜನೆಯು ಯಕ್ಷಗಾನದ ಆಕೃತಿಯನ್ನು ರೂಪಿಸಿದ ಕ್ರಮವನ್ನೂ ವಿಶ್ಲೇಷಿಸಲಾಗಿದೆ. ಈ ದೃಷ್ಟಿಯಿಂದ, ನಮಗೆ ಗೊತ್ತಿರುವ ಸಂಗತಿಗಳನ್ನೇ ನಿರ್ದಿಷ್ಟ ರಚನೆಗಳ ರೂಪದಲ್ಲಿ ಬೇರ್ಪಡಿಸಿ ಯಕ್ಷಗಾನವನ್ನು ಅಧ್ಯಯನ ಮಾಡಿರುವ ಈ ಕ್ರಮವು ಪರಿಚಿತ ಅಂಶಗಳ ಅಪರಿಚಿತ ಮುಖಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಂತಹ ರಾಚನಿಕ ಅಧ್ಯಯನವು ನಿಸರ್ಗ ಮತ್ತು ಸಂಸ್ಕೃತಿ (Nature and Culture)ಗಳ ಸಂಬಂಧದಲ್ಲಿ ಮೊದಲನೆಯದರಿಂದ ಎರಡನೆಯದು ಪ್ರೇರಿತ
ಎಂದು ಮಾತ್ರ ನೋಡುತ್ತದೆ. ಹೀಗಾಗಿ 'ಅನುಕರಣ ತತ್ವ' (Theory of
memories)ದ ಮಿತಿಯು ಈ ರೀತಿಯ ಅಧ್ಯಯನ ವಿಧಾನಕ್ಕೂ ಇದೆ.
{{gap}}ತಾಳಮದ್ದಲೆಯ ಹಿಮ್ಮೇಳವನ್ನು ಕುರಿತ ಲೇಖನವು ಈಗಾಗಲೇ ಜೋಶಿ ಬರೆದಿರುವ ತಾಳಮದ್ದಳೆಯ ಮಾತುಗಾರಿಕೆ, ತಾಳಮದ್ದಳೆ, ಅರ್ಥಗಾರಿಕೆ ಇಂತಹ ಲೇಖನಗಳ ಜತೆ ಓದಬೇಕಾದ ಪ್ರಬಂಧ. ಸಾಮಾನ್ಯವಾಗಿ ತಾಳಮದ್ದಳೆ ಕುರಿತ ಚರ್ಚೆಗಳಲ್ಲಿ ಮಾತುಗಾರಿಕೆಯನ್ನು ಮಾತ್ರ ಒಂದು ಪ್ರತ್ಯೇಕಿತ ಚಟುವಟಿಕೆಯಾಗಿ ಹೆಚ್ಚಿನವರು ಪರಿಗಣಿಸಿದ್ದಾರೆ. ಆದರೆ ತಾಳಮದ್ದಳೆಯನ್ನು 'ಒಂದು ರಂಗಭೂಮಿ' ಅನ್ನುವ ಸಮಗ್ರ ದೃಷ್ಟಿಕೋನದಿಂದ ಅಧ್ಯಯನ ಮಾಡಿದ ಈ ಲೇಖನವು ಜಾನಪದದ ಪ್ರದರ್ಶನ ಸಿದ್ಧಾಂತದ ಹಿನ್ನೆಲೆಯಲ್ಲಿ ಬಹಳ ಮಹತ್ವದ್ದು. ಜನಪದ ಕತೆಗಳನ್ನು ಹೇಳುವ ಸಂದರ್ಭಗಳನ್ನು ಕೂಡಾ ಒಂದು ಪ್ರದರ್ಶನ ಎಂದು ಅಧ್ಯಯನ ನಡೆಸುತ್ತಿರುವ ಇಂದಿನ ಸಂದರ್ಭದಲ್ಲಿ ಈ ಲೇಖನ ತನ್ನ ವ್ಯಾಪಕ ಸಾಮಗ್ರಿಗಳ ಮತ್ತು ವೈಜ್ಞಾನಿಕ ವಿಶ್ಲೇಷಣೆಯ ಕಾರಣಕ್ಕಾಗಿ ಪ್ರದರ್ಶನ ಸಿದ್ಧಾಂತಕ್ಕೆ ಹೊಸ ಆಯಾಮವನ್ನು ಸೇರಿಸಲು
ಸಮರ್ಥವಾಗಿದೆ. ಪುಟ 31, 32ರಲ್ಲಿ 'ಕರ್ಣಾರ್ಜುನ ಪ್ರಸಂಗ'ದ ನಿದರ್ಶನದ ಮೂಲಕ, ರೇಖಾಚಿತ್ರಗಳ ನೆರವಿನಿಂದ ವಿವರಿಸಿದ ವಿಧಾನವು ಜಾನಪದದಂತಹ ಕ್ಷೇತ್ರಗಳಲ್ಲೂ ಅನ್ವಯಿಸಬಹುದಾದ ಒಂದು ಹೊಸ ಶೋಧವಾಗಿದೆ.
{{gap}}ತುಳು ಯಕ್ಷಗಾನದ ವಿಮರ್ಶೆಯು ಯಕ್ಷಗಾನ ಮತ್ತು ತುಳು ಎರಡು ಕ್ಷೇತ್ರಗಳಲ್ಲೂ ಒಂದು ವಿವಾದದ ವಿಷಯ. ಈ ಚರ್ಚೆಯಲ್ಲಿ ಸಾಮಾನ್ಯವಾಗಿ ಕಾಣಿಸುವುದು ಎರಡು ಅತಿರೇಕಗಳ ತುದಿಗಳು ಮಾತ್ರ ಒಂದು. ಯಕ್ಷಗಾನ ಪರಂಪರೆಗೆ ತುಳು ಭಾಷೆಯು ವಿರೋಧಿ ಅನ್ನುವುದು. ಇನ್ನೊಂದು, ತುಳುವಿನ ಅಭಿಮಾನದ ಪ್ರಕಟನೆ. ಈ ಎರಡೂ ಭಾವುಕತೆಗಳನ್ನು ಕಳಚಿಕೊಂಡು, ತುಳು ಯಕ್ಷಗಾನವನ್ನು ಸಮೀಕ್ಷಿಸುವ ವಿಮರ್ಶಿಸುವ
{{rh|center=ಜಾಗರದ ಜೋಶಿ / 75 }}<noinclude></noinclude>
o007n293zjhimusktg47f24qdi6kk9s
ಪುಟ:ಜಾಗರದ ಜೋಶಿ.pdf/೧೨೬
104
99274
320896
277809
2026-05-19T17:28:06Z
Pragathi. BH
7585
/* Validated */
320896
proofread-page
text/x-wiki
<noinclude><pagequality level="4" user="Pragathi. BH" /></noinclude>ನಿಬಂಧನೆಗಳಿಗೆ ಒಳಪಟ್ಟು, ಪರ್ಯಾಯಕ್ರಮದಿಂದ ಪ್ರದರ್ಶನಗಳನ್ನು ನೀಡಿ ನಿರ್ವಹಿಸ ಬಹುದಾಗಿದೆ. ಆ ಕ್ಷೇತ್ರವು ಅದರ ಸಮನ್ವಯವನ್ನು ವ್ಯವಸ್ಥೆ ಮಾಡಬಹುದು. ಈ ವ್ಯವಸ್ಥೆಯು ಕಲಾ ಪ್ರಸಾರಕ್ಕೆ ದೊಡ್ಡ ಕೊಡುಗೆ ನೀಡಲಿದೆ.
'''ಸಂಶೋಧನೆ'''
{{gap}}ಯಕ್ಷಗಾನದ ಸಂಶೋಧನೆಗೆ ಸುಮಾರು ಒಂದು ಶತಮಾನದ ಇತಿಹಾಸವಿದೆ.ಹಲವು ಉತ್ತಮ ಕೃತಿಗಳು, ನೂರಾರು ಪ್ರಬಂಧಗಳು, ಇಪ್ಪತ್ತರಷ್ಟು ಡಾಕ್ಟರೇಟ್ಬ ಬರಹಗಳು ಬಂದಿದ್ದು, ಒಟ್ಟಿನಲ್ಲಿ ಸಂಶೋಧನೆಯ ಗುಣಮಟ್ಟ ಚೆನ್ನಾಗಿದೆ, ಬಹುಪಾಲು ಕೃತಿಗಳು ಉತ್ತಮ ಮಟ್ಟದಲ್ಲಿವೆ. ಆದರೆ ಇನ್ನು ಮುಂದಕ್ಕೆ ಯಕ್ಷಗಾನ ಸಂಶೋಧನೆಯ,ಹೆಚ್ಚು ರಂಗೋಪಯೋಗಿ ಮತ್ತು ಅನ್ವಯಿಕವಾಗುವ ಅಗತ್ಯವಿದೆ. ಪುನಾರಚನೆ,ಪ್ರಾಯೋಗಿಕತೆ ಮತ್ತು ಅಭಿವ್ಯಕ್ತಿಯಲ್ಲಿ ಸಾಧ್ಯತೆಗಳ ವಿಸ್ತಾರದ ದೃಷ್ಟಿಯಿಂದ ಸಂಶೋಧನೆಯ ಯಕ್ಷಗಾನದ ಸ್ಥಿರೀಕರಣ-ಪರಿಷ್ಕರಣ ಮತ್ತು ವಿಸ್ತರಣಕ್ಕೆ ನೆರವಾದರೆ ಅವು ಸಾರ್ಥಕ.
'''ಅಕಾಡೆಮಿಯ ಕಾರ್ಯ'''
{{gap}}ಇದೀಗ ನಮಗೆ ಕರ್ನಾಟಕ ಬಯಲಾಟ ಅಕಾಡೆಮಿ ದೂರಕಿದೆ. ಆ ಕುರಿತು ನಾವು ಹೆಮ್ಮೆ ಪಡುವುದರ ಜೊತೆಗೆ ವಾಸ್ತವವಾಗಿ ಚಿಂತಿಸಬೇಕು. ಕರ್ನಾಟಕದ ಹಲವು ಬಯಲಾಟ ಪ್ರಕಾರಗಳು ಸೇರಿ ದೊಡ್ಡ ಗಾತ್ರದ ಒಂದು ರಂಗಭೂಮಿಯು ಅದರ ವ್ಯಾಪ್ತಿಯೊಳಗೆ ಬರುತ್ತದೆ. ಅಕಾಡೆಮಿ ಇದೀಗ ರೂಪಿತವಾಗಿದೆ. ಅವು ಆರಂಭಿಕ ಸಮಸ್ಯೆಗಳು, ಆರ್ಥಿಕ ಮಿತಿಗಳು, ಸಾಧ್ಯತೆಯ ಮಿತಿಗಳ ಮಧ್ಯೆ ಕೆಲಸ ಮಾಡಬೇಕಾಗಿದೆ.
{{gap}}ಅಕಾಡೆಮಿಯು ಅಕಾಡೆಮಿಕ್ ಮತ್ತು ಉತ್ಸವಾದಿ ಅಲಂಕಾರಿಕ ಕಾರ್ಯಗಳೆಂಬ ಎರಡು ಬಗೆಯ ಮುಖಗಳಿಂದ ಕಾರ್ಯನಿರತವಾಗುವಂತಹುದು. ಅಕಾಡೆಮಿಯ ಮಿತಿಗಳೇನಿದ್ದರೂ, ಅದು ಮಾಡುವ ಕೆಲಸಗಳಿಗೆ, ಅದು ಕೊಡುವ ಪ್ರಶಸ್ತಿಗಳಿಗೆ ಪ್ರತ್ಯೇಕ ಮಾನ್ಯತೆ ಇದೆ. ನಿರೀಕ್ಷೆಗಳೂ ವಿಶೇಷವಾಗಿರುತ್ತವೆ. ಈ ಅರಿವಿನಿಂದ ಅದು ಕೆಲಸ ಮಾಡುವಂತಹುದು. ಅದರ ಕಾರ್ಯ, ಮನ್ನಣೆ ಪ್ರಶಸ್ತಿಗಳು, ಮುಖ್ಯವಾಗಿ ಸಾಂಕೇತಿಕ. ಅದು ಕಲೆಯಲ್ಲಿ ಆಗಬೇಕಾಗಿರುವ ವಿವಿಧ ಕಾರ್ಯಗಳಿಗೆ, ಮಧ್ಯವರ್ತಿ ಸಂಯೋಜಕ ಶಕ್ತಿಯಾಗಿ, ಪ್ರೇರಕ ಸಂಘಟಕ (ನೋಡಲ್) ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸಬೇಕು. ರಾಜ್ಯ, ಕೇಂದ್ರ ಸರಕಾರಗಳು, ಖಾಸಗಿ ವ್ಯವಸ್ಥೆಗಳ ಸಹಾಯ,ಸಮಾನ ಆಸಕ್ತ ಅಧ್ಯಯನ ಪೀಠ ಇತ್ಯಾದಿಗಳಿಂದ ವಿಚಾರ, ಸಂಪನ್ಮೂಲಗಳನ್ನು ಕ್ರೋಢೀಕರಿಸಿ;ಅದನ್ನು ವಿಧಾಯಕವಾಗಿ ಬಳಸುವಂತಹುದು, ನೂತನ ಪರಿಕಲ್ಪನೆಗಳನ್ನು ಚಾಲ್ತಿಗೊಳಿಸುವಂತಹುದು,ವ್ಯವಸಾಯ ರಂಗಕ್ಕೆ ಸೂಚನಾತ್ಮಕ ಮಾರ್ಗದರ್ಶನ,ಮಸುಕಾಗಿರುವ ಪ್ರಕಾರಗಳ ಉಜ್ವಲೀಕರಣ-ಇವು ಅಕಾಡೆಮಿಯ ಕಾರ್ಯಗಳು.
{{center|ಜಾಗರದ ಜೋಶಿ / 119}}<noinclude></noinclude>
1vzdeep1nk35w68a3mkdd9fgvvc9x95
ಪುಟ:ಜಾಗರದ ಜೋಶಿ.pdf/೪೯
104
99279
320909
278054
2026-05-19T17:37:03Z
Pragathi. BH
7585
/* Validated */
320909
proofread-page
text/x-wiki
<noinclude><pagequality level="4" user="Pragathi. BH" /></noinclude>ಎದುರಾಳಿಯನ್ನು ಇಕ್ಕಟ್ಟಿಗೆ ಸಿಲುಕಿಸುವುದರೊಂದಿಗೆ ಸಹಜ ಸಿದ್ಧಾಂತವನ್ನು ಒರೆಗೆ ಹಚ್ಚಿ, ಆ ಸಿದ್ದಾಂತದ ಪರೋಕ್ಷ ಪ್ರತಿಪಾದನೆ ಹೇಗೆ ಸಾಧ್ಯ ಎಂದು ತೋರುವಂತಹ ಪಾತ್ರಗಳು, ಅದು ಅಂಗದ ಸಂಧಾನದ 'ಪ್ರಹಸ್ತ', ವಾಮನ ಚರಿತ್ರೆ, ಕಚದೇವಯಾನೆ ಮುಂತಾದ ಪ್ರಸಂಗಗಳ 'ಶುಕ್ರಾಚಾರ್ಯ', ಸತ್ಯ ಹರಿಶ್ಚಂದ್ರದ 'ವಿಶ್ವಾಮಿತ್ರ', ಭೀಷ್ಮ ಪರ್ವದ 'ಕೌರವ ಹೀಗೆ ಹಲವು ಪಾತ್ರಗಳು ವಿಶಿಷ್ಟ ನಿಲುವಿಗೆ ಬದ್ಧವಾದ ಪಾತ್ರಗಳ ನಿರ್ವಹಣೆಗೆ ವಿಶೇಷ ಅರ್ಹತೆಗಳೊಂದಿಗೆ ಸಿದ್ಧಹಸ್ತರು.<br>
{{gap}}ಇವರ ಪ್ರತಿಭೆಯನ್ನು ಕೇವಲ ಪಾತ್ರ ನಿರ್ವಹಣೆಯಿಂದ ಮಾತ್ರ ತುಲನೆ ಮಾಡುವುದಕ್ಕೆ ಅಸಾಧ್ಯ. ಯಕ್ಷಗಾನದ ವಿಷಯಕ್ಕೆ ಬಂದಾಗ ಹಲವು ಮುಖಗಳಲ್ಲಿ ಜೋಷಿಯವರ ಹೆಸರು ಬಹಳಷ್ಟು ಬರೆಯಲ್ಪಟ್ಟಿದೆ. ಇದು ಯಕ್ಷಗಾನ ಅಭಿಮಾನದ ಪ್ರಾಮಾಣಿಕ ದ್ಯೋತಕ, ತಾಳಮದ್ದಲೆ ಅರ್ಥದಾರಿಗಳಾಗಿ ಇಂದು ಹಿರಿಯ ಕಲಾವಿದರಾಗಿ ಜೋಶಿಯವರು ಮುಂದಿದ್ದಾರೆ.
{{gap}}ಯಕ್ಷಗಾನದ ಅರ್ಥಗಾರಿಕೆ ಪರಂಪರೆಗಳಲ್ಲಿ ರೂಪ ಹಲವಿದೆ. ಸಾಮಗದ್ವಯರ ಶೈಲಿ ಒಂದಾದರೆ ಶೇಣಿಯವರು ಮತ್ತು ದೇರಾಜೆ ಸೀತಾರಾಮಯ್ಯನವರು ರೂಪಿಸಿದ ಪರಂಪರೆ ಮತ್ತೊಂದು, ತಮ್ಮ ವಿದ್ವತ್ತಿನಿಂದಲೇ ಸಾಂಪ್ರದಾಯಿಕ ಅರ್ಥಗಾರಿಕೆಯಲ್ಲಿ ಹೆಸರಾದ ಪೆರ್ಲ ಕೃಷ್ಣ ಭಟ್, ಕುಂಬಳೆ ಸುಂದರ ರಾವ್.ಹೀಗೆ ಹಲವು ಮುಖಗಳ ವೈವಿಧ್ಯತೆಯಲ್ಲಿ ಜೋಶಿಯವರ ಶೈಲಿ ತೀರ ಭಿನ್ನವಾಗಿ ನಿಲ್ಲುತ್ತದೆ.<br>
{{gap}}“ಕರ್ಮಬಂಧ' ಪ್ರಸಂಗದ 'ಕೌರವ'ನ ಪಾತ್ರ ವಹಿಸುತ್ತಾ ಜೋಶಿಯವರು, ಅಜ್ಜ ಭೀಷ್ಮನ ಜತೆಗಿನ ಸಂವಾದದ ಒಂದು ಸಂದರ್ಭ : “ಗಾಂಧಾರಿ ಸಿಟ್ಟಿನಲ್ಲಿ ತನ್ನ ಬಸುರನ್ನು ಬಡಿದು ಆ ಬಸುರಿನ ನಂಜು ಸಿಡಿದು ಕೌರವರು ನೂರು ಮಂದಿಯಾದರು” ಎಂದು ಭೀಷ್ಮ ಮೊದಲೇ ಹೇಳಿರುತ್ತಾನೆ. ಅದಕ್ಕೆ ಪ್ರತಿಯಾಗಿ ಇವರ ಕೌರವ ಹೇಳುವ ಮಾತು<br>
{{gap}}“ನನ್ನ ತಮ್ಮಂದಿರು ಹುಟ್ಟಿದ್ದಲ್ಲ. ತಾಯಿಯ ನಂಜು ಸುರಿದು ಚೂರು ಚೂರಾಗಿ ಬಿದ್ದದ್ದು ಅಂತ ಹೇಳುವವರಿದ್ದಾರೆ. ಅದೆಲ್ಲ ಹೇಳುವುದೇ ನಂಜಿನಿಂದ. ಅದೆಲ್ಲ ಪ್ರೀತಿಯಿದ್ದರೆ ಒಂದು ತರಹ ಕಾಣುವುದು. ಅವರನ್ನು ಆಗುವುದಿಲ್ಲ ಅಂತಾ ಅದ್ರೆ ಹಾಗೆ ಕಾಣುವುದು. ಅವತಾರ ಪುರುಷರ ಹುಟ್ಟೆಲ್ಲವೂ ವಿಚಿತ್ರ ಅಲ್ಲವೇ ಅಜ್ಜಾ? ನೀವು, ನಾನು, ಕೃಷ್ಣ, ಧರ್ಮರಾಯ, ಈಗಿನ ಕಾಲದಲ್ಲಿ ಎಲ್ಲ ವಿಚಿತ್ರವಾಗಿ ಹುಟ್ಟಿದವರು.”<br>
{{gap}}ಒಬ್ಬನೇ ನಿಶಿತಕಾಲದಲ್ಲಿ ಬಂದೆಯಾ ಅಂತ 'ಭೀಷ್ಮ' ಕೇಳಿದಾಗ 'ಕೌರವ'ನ ಮಾತು ಹೀಗಿದೆ – “ಯಾರೇ ಒಬ್ಬ ಭೀಷ್ಮನಲ್ಲಿಗೆ ಹೋಗುತ್ತಾನೆ ಅಂತ ಸುದ್ದಿಯಾದರೆ ಸಾಕು, ಈ ಕಾಲದಲ್ಲಿ ಅವನ ಸುದ್ದಿಗೆ ಯಾರೂ ಹೋಗುವುದಿಲ್ಲ. ಹಾಗಾಗಿ ನಾನು ಬರುವ ಮೊದಲೆ ಎಲ್ಲ ಪ್ರಚಾರ ಮಾಡಿ ಬಂದಿದ್ದೇನೆ, ಭೀಷ್ಮನಲ್ಲಿಗೆ ಹೋಗೇನೆ ಅಂತ. ಭೀಷ್ಮನಲ್ಲಿಗೆ ಹೋಗ್ತಾನೆ ಎಂಬ ಸುದ್ದಿಯೇ ಅಷ್ಟೊಂದು ಭದ್ರತೆ?”. ಆವಾಗ ಭೀಷ್ಮ ಆ ಮಾತಿಗೆ ಅವಿಶ್ವಾಸವನ್ನು ವ್ಯಕ್ತ ಪಡಿಸುತ್ತಾ ಹೇಳುತ್ತಾನೆ - “ಆ ಮಾತಿನಲ್ಲಿ ವಿಶ್ವಾಸ
{{rh|center=ಜಾಗರದ ಜೋಶಿ / 42}}<noinclude></noinclude>
1yfnjm8r0iuvyoo96r0f0z79woc7xx4
ಪುಟ:ಜಾಗರದ ಜೋಶಿ.pdf/೧೨೭
104
99280
320897
277924
2026-05-19T17:28:19Z
Pragathi. BH
7585
/* Validated */
320897
proofread-page
text/x-wiki
<noinclude><pagequality level="4" user="Pragathi. BH" /></noinclude>{{gap}}ಯಕ್ಷಗಾನ ಕಲೆಗೆ ಪೋಷಕವಾಗಬಹುದಾದ ಹಲವು ಪ್ರಯೋಜನಗಳು ಕೇಂದ್ರ ಸರಕಾರದ ಜವಳಿ ಇಲಾಖೆ, ಕರಕುಶಲ ವಿಭಾಗ, ಶಿಕ್ಷಣ ಇಲಾಖೆ, ಸಂಸ್ಕೃತಿ ಇಲಾಖೆಗಳಲ್ಲೂ ರಾಜ್ಯ ಸರಕಾರದ ಯೋಜನೆಗಳಲ್ಲೂ ಇವೆ. ಆ ಕುರಿತು ಒಂದು ಸಾಧಾರಣ ಸಮೀಕ್ಷೆಯನ್ನು ಅಕಾಡೆಮಿ ನಡೆಸಬೇಕೆಂದು ಕೋರುತ್ತೇನೆ. ಪುನಾರಚನೆ ಪುನರುಜ್ಜೀವನದ ಅಗತ್ಯ ಬಯಲಾಟಗಳಿಗೆ ಹೆಚ್ಚು ಇದೆ. (ದೊಡ್ಡಾಟ, ಮೂಡಲಪಾಯ, ಗಟ್ಟದಕೋರೆ,ಸಣ್ಣಾಟ ಪ್ರಕಾರಗಳಿಗೆ).
'''ಶಿಕ್ಷಣ ಸ್ವರೂಪ'''
{{gap}}ಹಿಂದೆ ಯಕ್ಷಗಾನ ಶಿಕ್ಷಣವು-ಸಾಂಪ್ರದಾಯಿಕ ರೂಪದಲ್ಲಿ ಮೇಳಗಳ ತಿರುಗಾಟದಲ್ಲಿ,ಮಳೆಗಾಲದ 'ನಾಟ್ಯಾಭ್ಯಾಸ'ಗಳಲ್ಲಿ ಜರುಗುತ್ತಿತ್ತು. 1970ರ ಈಚೆಗೆ ಯಕ್ಷಗಾನ ಶಿಕ್ಷಣ ಕೇಂದ್ರಗಳು ರೂಪುಗೊಂಡವು. ಇದೀಗ ಕೇಂದ್ರಗಳಿಗೆ ವಿದ್ಯಾರ್ಥಿಗಳ ಕೊರತೆ ಬಂದಿದೆ.ಯಕ್ಷಗಾನವು ಉದ್ಯೋಗವಾಗಿ ಆಕರ್ಷಣವಾಗಿ ಉಳಿದಿಲ್ಲ. ಹಿಂದೆಯೂ ಇಂದೂ ವಿದ್ಯಾರ್ಥಿಗಳೆಲ್ಲರೂ ಪೂರ್ಣ 'ಸ್ಕಾಲರ್ಶಿಪ್' ಮೂಲಕ ಕಲಿತವರು. ಯಕ್ಷಗಾನ
ಕೇಂದ್ರಗಳ ಪಾಠಪಟ್ಟಿ, ಕಲಿಸುವ ವಿಧಾನ ಮತ್ತು ವಿದ್ಯಾರ್ಥಿ ನೋಂದಣಿಯಲ್ಲಿ ಬದಲಾವಣೆಗಳಿಗೆ ಇರುವ ಅವಕಾಶಗಳನ್ನು ಪರಿಶೀಲಿಸಬಹುದಾಗಿದೆ. ಪಾಠಪಟ್ಟಿಯಲ್ಲಿ ಸಾಂಪ್ರದಾಯಿಕ ಕಲೆಗಳ ಬಗೆಗಿನ ತಾತ್ವಿಕ ಚಿಂತನೆ, ಶೈಲಿ ವಿಚಾರ, ಕಲಾ ವಿಮರ್ಶೆ,ಅನ್ಯ ಸಮಾನ ಕಲೆಗಳ ಪರಿಚಯ, ನಿರ್ದೇಶನ ತತ್ವಗಳನ್ನು ಮತ್ತು ಅರ್ಥಗಳನ್ನು ಸಾಧಿಸಿದರೆ ಹೆಚ್ಚು ಸಮಗ್ರವಾಗುತ್ತದೆ. ಕೇಂದ್ರಗಳಲ್ಲಿ ಅರ್ಥಗಾರಿಕೆಯ ಕುರಿತು ಇನ್ನೂ ಲಕ್ಷ ನೀಡುವುದು ಅಗತ್ಯ.ಅಂತೆಯೇ, ಆಸಕ್ತರಿಗಾಗಿ ಕೇಂದ್ರಗಳಲ್ಲಿ ಸಾಯಂಕಾಲದ ತರಗತಿಗಳು, ವಾರದ ಪಾಠ, ಸಂಕ್ಷಿಪ್ತ ಕಾರ್ಯಕ್ರಮ (Crash Program) ವಿದ್ಯಾರ್ಥಿಗಳಿರುವಲ್ಲಿಗೆ ಗುರುಗಳು ಹೋಗಿ ಪಾಠ ಮಾಡುವ ಕಿರು ಕೋರ್ಸ್ ಮೊದಲಾದುವುಗಳ ಮೂಲಕ ಹೆಚ್ಚು ಜನರು ಕಲೆಯನ್ನು ಕಲಿಯುವ ಹಾಗೆ ರೂಪಿಸಲು ಸಾಧ್ಯ. ಇದು ವಿಸ್ತರಣದ ಒಂದು ರೂಪ.
'''ಮಹಾರೂಪಕ'''
{{gap}}ಸಹ್ಯಾದ್ರಿ, ಶ್ರೀಗಂಧ, ಪಂಪನಾರಣಪ್ಪನವರ ಕಾವ್ಯಗಳು ಇವೆಲ್ಲ ಕನ್ನಡದ ಹೆಮ್ಮೆಯ ಚೇತನಗಳೆಂಬ ಮಾತಿದೆ. ಅವುಗಳನ್ನು ಒಳಗೊಂಡಂತೆ, ಅಲ್ಲ ಮೀರಿ ನಿಲ್ಲುವ ಕನ್ನಡನಾಡಿನ ಸಂಸ್ಕೃತಿಯ ಮಹಾರೂಪ, ಮಹಾರೂಪಕ-ಯಕ್ಷಗಾನ.ನಾಡಿನ ನೆಲಜಲ ಇತಿಹಾಸಗಳ, ಕಾವೇರಿ, ಗೋದಾವರಿಗಳ, ಕೆಂಪು-ಕಪ್ಪು-ಬಿಳಿ ಮಣ್ಣುಗಳ,ಲೌಕಿಕ-ಭಾರತೀಯ, ವಿಶ್ವ ಮತ್ತು ಸ್ಥಳೀಯ ಸಂವೇದನೆಗಳ, ಕನ್ನಡದೊಳಗಿನ ಕನ್ನಡಗಳ,
ತುಳು ಕೊಂಕಣಿ ಮತಿಯೊಳಗಣ ಸಾರ ಮಧು ಅದು. ಲೋಕಧರ್ಮಿಗಳ ವಿಚಿತ್ರ
{{center|ಜಾಗರದ ಜೋಶಿ / 120}}<noinclude></noinclude>
1unfvf1i5dvr3sey6ytpdgb99m3ay1e
ಪುಟ:ಜಾಗರದ ಜೋಶಿ.pdf/೩೩
104
99281
320970
278005
2026-05-20T02:43:03Z
Shreelatha.Halemane
7642
320970
proofread-page
text/x-wiki
<noinclude><pagequality level="4" user="Moksha S C" /></noinclude>ಗುಣಮಟ್ಟ ಎರಡರಲ್ಲೂ ಮಹತ್ವದ್ದು...<br>
{{gap}}...ಇವರ ಕಲಾವಿದರ ಕುರಿತಾದ ವಿವರಗಳು, ಸಂಘಟಕರಿಗೆ ನೀಡುವ ಸಲಹೆ ಮಾರ್ಗದರ್ಶನಗಳು, ಇತರರಿಗೆ ಬೇಸರಿಕೆ ಬಾರದಂತೆ ಯಾವುದೇ ವಿಷಯದ ಬಗ್ಗೆ ಮಾತನಾಡಬಲ್ಲ ವಾಗ್ದಾಲಗಳು - ಈ ಎಲ್ಲವುಗಳಿಂದಾಗಿ ಎಲ್ಲರ ಪ್ರೀತಿಗೆ ಪಾತ್ರರು.ಸರಕಾರದಿಂದ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಜೋಶಿಯವರು ಪಡೆದಿರುವುದು ನಿಜ. ಯಕ್ಷಗಾನೋದ್ಧಾರದ ಸಾಂಘಿಕ ಪ್ರಯತ್ನದಲ್ಲಿ ಸರಕಾರವು ಇವರ ಸಾಮರ್ಥ್ಯವನ್ನು ಇನ್ನೂ ಸರಿಯಾಗಿ ಗುರುತಿಸಿ ಬಳಸಿಲ್ಲ ಎನ್ನುವುದು ಒಪ್ಪಬಹುದಾದ ಸಂಗತಿ, ತಾನು ಪ್ರತಿಪಾದಿಸುವ ಯಾವುದೇ ವಿಷಯದ ಬಗ್ಗೆ ಸೈದ್ಧಾಂತಿಕವಾಗಿ, ಶಾಸ್ತ್ರೀಯ ಶಿಸ್ತಿನಿಂದ ಚಿಂತಿಸುವ ಕೆಲವರಲ್ಲಿ ಒಬ್ಬರು.
{{Right|('''ಕೃಪೆ : ವಾಗರಿ, ಈ ಕಲಾರಂಗ ಉಡುಪಿ - 2009''')}}
''''ಯಕ್ಷಗಾನದ ಅತಿ ವೈಭವೀಕರಣ ವಿಷಾದಕರ''''
{{gap}}“ಮಂಗಳೂರು ವಿವಿಯಲ್ಲಿ ನೀಡುವ ಯಕ್ಷಪ್ರಶಸ್ತಿಗೆ ಹೆಚ್ಚಿನ ಪ್ರಾಮುಖ್ಯ
{{gap}}ವಿದೆ. ಸಾಂಪ್ರದಾಯಿಕ ಕಲೆಗಳಲ್ಲಿ ಒಂದಾಗಿರುವ ಯಕ್ಷಗಾನಕ್ಕೆ
{{gap}}ನೂರಾರು ವರ್ಷಗಳ ಇತಿಹಾಸವಿದೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ
{{gap}}ಯಕ್ಷಗಾನ ವಿಕಾರ ವೈಭವೀಕರಣಗೊಳ್ಳುತ್ತಿರುವುದು ವಿಷಾದನೀಯ
{{gap}}ಸಂಗತಿಯಾಗಿದೆ. ಯಕ್ಷಗಾನದಲ್ಲಿ ಬೆಳಕು-ಜ್ಞಾನ ಎಂಬ ಮಾತಿದೆ.
{{gap}}ಯಾವುದೇ ಕಲೆಯಲ್ಲಿ ವೈವಿಧ್ಯ ಹಾಗೂ ಅದರ ಬಗ್ಗೆ ಪ್ರಯೋಗಗಳು
{{gap}}ಬೇಕು. ಆದರೆ ಯಾವುದೇ ಕಾರಣಕ್ಕೂ ಅದರ ಸಾಹಿತ್ಯ ಹಾಗೂ
{{gap}}ಕುಣಿತದಲ್ಲಿ ಬದಲಾವಣೆಗಳಾಗಬಾರದು. ಸಾಂಪ್ರದಾಯಿಕ ಕಲೆಯಲ್ಲಿ
{{gap}}ಅನಾವಶ್ಯಕವಾದ ಅಂಶವನ್ನು ಒಳಗೆ ಬರುವಂತಹ ಕೆಲಸ
{{gap}}ಮಾಡಬಾರದು."
'''ಯಕ್ಷಮಂಗಲ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲ...'''
{{center|ಜಾಗರದ ಜೋಶಿ / 26}}<noinclude></noinclude>
oet1usrgj03aaz96hukzkbsqfzmfcrw
ಪುಟ:ಜಾಗರದ ಜೋಶಿ.pdf/೪೧
104
99284
320971
277639
2026-05-20T02:44:14Z
Shreelatha.Halemane
7642
/* Validated */
320971
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಅಲ್ಲಿ ರಸಿಕತೆ ಪ್ರೌಢವಾಗಿದೆ. ಮಾತುಮಾತಿಗೆ ನಗುವುದು,ಚಪ್ಪಾಳೆಗಳು ಇಲ್ಲವೇ ಇಲ್ಲ! ಒಂದು ಕಲೆಯಾಗಿ ಸ್ವೀಕರಿಸಿದ್ದಾರೆ.”<br>
{{gap}}2015 ಆಗಸ್ಟ್ 29ರಿಂದ ಸೆಪ್ಟೆಂಬರ್ 19ರ ತನಕ ಸೈಂಟ್ ಲೂವಿಸ್,ಚಿಕಾಗೋ,ಮೇರಿಲ್ಯಾಂಡ್, ಸನ್ ಜೋಸ್, ಬರ್ಕ್, ಹೂಸ್ಟನ್, ಮೈಮಿ..ಗಳಲ್ಲಿ ತಾಳಮದ್ದಳೆ.ಕಾರ್ಯಕ್ರಮದ ಆರಂಭಕ್ಕೆ ಔಚಿತ್ಯದ ಕುರಿತು ಸಂಘಟಕರಿಂದ ಮಾತು. ನಂತರಕೂಟ. ಕೊನೆಗೆ 'ನೀವು ಊರಿಗೆ ಮರಳಿದಾಗ ಯಕ್ಷಗಾನಕ್ಕೆ ನೀಡಬಹುದಾದ ಪ್ರೋತ್ಸಾಹ'ದ ಟಿಪ್ಗಳ ಪ್ರಸ್ತುತಿ. ವ್ಯವಸ್ಥಿತವಾದ ಆಯೋಜನೆ.<br>
{{gap}}ಕೂಟಗಳಲ್ಲದೆ ಮಂಕುತಿಮ್ಮನ ಕಗ್ಗ, ಗಣೇಶ ಮತ್ತು ಗುರು.. ಈ ವಿಚಾರಗಳ ಉಪನ್ಯಾಸ, ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಕಾರ್ಯಕ್ರಮವನ್ನು ಸಂಸ್ಕೃತವಿದ್ವಾಂಸ ಪ್ರೊ.ರಾಬರ್ಟ್ ಗೋಲ್ಡ್ಮನ್ ಸಂಘಟಿಸಿದ್ದರು. 1970ರ ಸುಮಾರಿಗೆಇದೇ ವಿವಿಯ ವಿದ್ಯಾರ್ಥಿನಿ ಮಾರ್ತಾ ಆಸ್ಟನ್ ಸಿಕೋರಾ ಕನ್ನಾಡಿಗೆ ಬಂದಿದ್ದರು.ಯಕ್ಷಗಾನದ ವಿಶೇಷ ಅಧ್ಯಯನ ಮಾಡಿದ್ದು ಗಮನೀಯ, ಸರಣಿಯ ಕೆಲವು ಕಾರ್ಯಕ್ರಮಗಳಲ್ಲಿ ಮಾರ್ತಾ ಉಪಸ್ಥಿತರಿದ್ದುದು ಗಮನಾರ್ಹ.<br>
{{gap}}ಒಟ್ಟೂ ಸರಣಿ ಕೂಟದ ಪುಳಕವನ್ನು ಹೊತ್ತು ತಂದ ಜೋಶಿ ಹೇಳುವುದುಹೀಗೆ: ಹತ್ತೋ ಇಪ್ಪತ್ತು ವರುಷದ ಹಿಂದೆ ಹೋಗಬೇಕಿತ್ತು. ಯಕ್ಷಗಾನ, ಕರಾವಳಿಮತ್ತು ಅಲ್ಲಿನ ಮನಸ್ಸುಗಳನ್ನು ಒಂದುಗೂಡಿಸುವ ಚಿಕ್ಕ ಹೆಜ್ಜೆಯೂರಬಹುದಿತ್ತು ಅನ್ನಿಸುತ್ತದೆ.ಏನು ಮಾಡಲಿ, ಕಾಲ ಮಿಂಚಿಹೋಯಿತು. ಒಂದೆಡೆ ಸಮೃದ್ದ ಕಲಾ ಮಜಲು,ಇನ್ನೊಂದೆಡೆ ಅದು ಬೇಕೆಂಬ ಹಪಾಹಪಿ-ಈ ಎರಡೂ ದಡಗಳನ್ನು ಸೇರಿಸಬಹುದಿತ್ತು!<br>
{{gap}}ಮಂಗಳೂರು, ಮೂಡುಬಿದಿರೆ, ಕಾರ್ಕಳ.. ಮೊದಲಾದ ಪ್ರದೇಶಗಳಲ್ಲಿದ್ದ ಈಗ ಅಲ್ಲಿನವರಾದ ಆಪ್ತರ, ಬಂಧುಗಳ ಭೇಟಿ, ಚಿಕಾಗೋದಲ್ಲಿ ಹಿರಿಮಗಳು ಶ್ವೇತಾಸೂರ್ಯನಾರಾಯಣ, ವರ್ಜೀನಿಯಾದಲ್ಲಿ ಕಿರಿ ಮಗಳು ಸ್ವಾತಿ ಕಾರ್ತಿಕ್ ಕುಟುಂಬವಾಸ್ತವ್ಯವಿದೆ. ಅವರೊಂದಿಗೆ ಕಳೆಯಲು ಜೋಶಿ ಮೊದಲ ಬಾರಿಗೆ ಅಮೇರಿಕಾಕ್ಕೆ ಹೋಗಿದ್ದರು. ಆದರೆ ಯಕ್ಷಗಾನವು ಅಲ್ಲೂ ಅವರನ್ನು ಕಾಲಯಾಪನೆಗೆ ಬಿಟ್ಟಿಲ್ಲ!“ನನ್ನ ನಿರೀಕ್ಷೆಗೂ ಮೀರಿದ ಗೌರವ, ಊಹಿಸದ ರೀತಿಯ ಸ್ಪಂದನ. ಇದೆಲ್ಲ ಬೆಳೆದು ನಿಂತ
ಯಕ್ಷಗಾನ ಕಲೆಗೆ ಸಂದ ಮಾನ. ನಾನು ಅದರ ಪ್ರತಿನಿಧಿಯಷ್ಟೇ. ಕಲೆಯನ್ನು ಪ್ರೀತಿಸುವ ಅಪ್ಪಟ ಸಹೃದಯರ ಋಣವನ್ನು ಹೇಗೆ ತೀರಿಸಲಿ” ಎನ್ನುವಾಗ ಭಾವುಕರಾಗುತ್ತಾರೆ.<br>
{{gap}}ಪ್ರವಾಸ ಮುಗಿಸಿ ಮರಳಿದಾಗ ಕಂಪ್ಯೂನಲ್ಲಿ ರಾಶಿ ರಾಶಿ ಮಿಂಚಂಚೆಗಳು,ಕಾರ್ಯಕ್ರಮದ ಹಿಮ್ಮಾಹಿತಿಗಳು. “ನನಗೊಂದು ಹೊಸ ಅನುಭವ. ವಿದೇಶಿ ಬಂಧುಗಳ ಕೃತಜ್ಞತೆಯ ಭಾರವನ್ನು ಹೊತ್ತು ದೇಶಕ್ಕೆ ಮರಳಿದ್ದೇನೆ. ಇನ್ನೊಂದೆರಡು ತಿಂಗಳುಇರುತ್ತಿದ್ದರೆ ಕೂಟಗಳ, ಸಂಪರ್ಕಗಳ ಸಂಖ್ಯೆ ಹಿರಿದಾಗುತ್ತಿತ್ತು.” ಎನ್ನುತ್ತಾ ಮಾತುಕತೆಗೆ ಮುಕ್ತಾಯ ಹಾಡುತ್ತಾರೆ, “ಆಟವೇ ಮಾತ್ರ ಒಂದು ಫಾರ್ಮ್ ಅಲ್ಲ, ತಾಳಮದ್ದಳೆಯೂ
ಒಂದು ಫಾರ್ಮ್ ಎಂದು ತಿಳಿಸಲು ಈ ಟೂರ್ನಿಂದ ಸಾಧ್ಯವಾಯಿತು.”<br>
'''(ಪ್ರಜಾವಾಣಿಯ 'ದಧಿಗಿಣತೋ' ಅಂಕಣ/26-12-2015)'''
'''ಜಾಗರದ ಜೋಶಿ / 34'''<noinclude></noinclude>
eiiguhx74ufppd1keillggdsjfkrirk
ಪುಟ:ಜಾಗರದ ಜೋಶಿ.pdf/೧೨೮
104
99287
320898
277926
2026-05-19T17:28:34Z
Pragathi. BH
7585
/* Validated */
320898
proofread-page
text/x-wiki
<noinclude><pagequality level="4" user="Pragathi. BH" /></noinclude>ಮಿಶ್ರಣ, ಧಾರ್ಮಿಕ ಉದಾರೀಕರಣ, ಭಕ್ತಿ-ಶಕ್ತಿ, ಸತ್ವ-ಕ್ಷಾತ್ರಗಳ, ನಯದೋಗುಗಳ ಜೋಡಣೆ, ಶಾಸ್ತ್ರ-ಜನಪದಗಳ ವಿಭಾಗವನ್ನು ಮೀರಿದ ನಿಜದ ದೇಸಿ.
{{gap}}ನೀತಿ ಸಂಸ್ಕೃತಿ, ಚಿಂತನ, ರಂಜನ, ಪಾಂಡಿತ್ಯ, ಕಾವ್ಯಾತ್ಮಕತೆ, ಶಿಕ್ಷಣ-ರಸ, ವಾಚಾಳಿತನ-ಮೌನ ಅಭಿನಯ-ಅಭಿನವಗಳ ಪದರು ಪದರಿನ ಸಮನ್ವಯ ಜೀವನ ದರ್ಶನಗ್ರತಿಥವಾದ ನಾಡದೇವಿಯ ಓಲೆ, ಕನ್ನಡ ವಾಗ್ಮಿತೆಯ, ಅಭಿವ್ಯಕ್ತಿ ಶಕ್ತಿಯ ವೈಭವದ ಸಾಕಾರ, ನಾಡ ಶಾಲೆ, ರಾತ್ರಿ ವಿದ್ಯಾಲಯ, ನಮ್ಮ ಬದುಕಿನ ರೀತಿಯ,ಸಂಸ್ಕೃತಿ ಸಾರದ ರಕ್ಷಣಾಸ್ಥಾನ, ಅವಿಚಾರಿತ ಆಧುನಿಕತೆಯ ಉಬ್ಬರದೆದುರಿನ
ಅಡಗುದಾಣ, ಗುರಾಣಿ ಮತ್ತು ಕಮ್ಮಟ, ಬದುಕಿನ ಕಿನ್ನೋಟ-ಮುನ್ನೋಟ, ಅತಿಶ್ರದ್ಧೆ,ಅತಿ ತರ್ಕಗಳೆರಡನ್ನೂ ಅವಲಂಬಿಸಿದೆ. ನಮ್ಮ ಸರ್ವಶಕ್ತಿಯನ್ನು ಬಳಸಿ, ಇದನ್ನು ಉಳಿಸಿಕೊಳ್ಳೋಣ, ಬೆಳೆಸೋಣ, ಬೆಳೆಸೋಣ, ಮತ್ತೊಮ್ಮೆ ಎಲ್ಲರಿಗೂ ವಂದನೆಗಳು.
{{Right|ಕರ್ನಾಟಕ ಸಾಂಸ್ಕೃತಿಕ ಕಲಾ ಪರಿಷತ್ತು}}
{{Right|ಬೆಂಗಳೂರಿನಲ್ಲಿ ಸಂಘಟಿಸಿದ ಐದನೆಯ ಯಕ್ಷಗಾನ ಸಮ್ಮೇಳನ ಅಧ್ಯಕ್ಷೀಯ}}
{{Right|ಭಾಷಣ – ಜನವರಿ 2011}}
{{center|ಜಾಗರದ ಜೋಶಿ /121}}<noinclude></noinclude>
o393yfjbv3oxtxwg06q4bw81h24a3s9
ಪುಟ:ಜಾಗರದ ಜೋಶಿ.pdf/೧೩೧
104
99288
320901
277670
2026-05-19T17:30:01Z
Pragathi. BH
7585
/* Validated */
320901
proofread-page
text/x-wiki
<noinclude><pagequality level="4" user="Pragathi. BH" /></noinclude>{{gap}} “ಒಂದು ಕಥಾ ಪ್ರಸಂಗವನ್ನು ಅದರ ಸಾಹಿತ್ಯದಿಂದ ರಂಗಪ್ರದರ್ಶನದ ವರೆಗೆ ಹಲವಾರು ಮಜಲುಗಳಲ್ಲಿ ಸೂಕ್ಷ್ಮವಾಗಿ ವಿವೇಚಿಸಿ ಯಕ್ಷಗಾನವೆಂಬ ಸಂಕೀರ್ಣ ಕಲಾ ಮಾಧ್ಯಮದ ವಿವಿಧ ಆಯಾಮಗಳನ್ನು ಆಳವಾಗಿ ವಿವೇಚಿಸಿ ವಿದ್ವತ್ತೂರ್ಣವಾದ ಮಹಾ ಪ್ರಬಂಧವನ್ನು ಈ ಸಂಶೋಧಕರು ರಚಿಸಿದ್ದಾರೆ. ಒಬ್ಬ ಕಲಾವಿದನ ದೃಷ್ಟಿ, ವಿಮರ್ಶಕನ ದೃಷ್ಟಿ,ಪ್ರದರ್ಶನದ ತಾಂತ್ರಿಕತೆಯ ಹಾಗೂ ಕಲಾತ್ಮಕತೆಯ ವಿವರಣೆಗಳು ಎಲ್ಲ ಸಮನ್ವಯಗೊಂಡು ಈ ಕಲಾ ಮಾಧ್ಯಮದ ಸಮಗ್ರತೆಯ ಬಗ್ಗೆ ನಡೆಸಿದ ಆಳವಾದ ಚಿಂತನೆ ಇಲ್ಲಿ ಕಂಡುಬರುತ್ತದೆ ಯಕ್ಷಗಾನದ ವಿಮರ್ಶಾ ಕ್ಷೇತ್ರದಲ್ಲಿ ಇನ್ನು ಮುಂದೆ ಆಗಬೇಕಾದ ಅಧ್ಯಯನಗಳ ಸಾಧ್ಯತೆಗಳ ಬಗ್ಗೆಯೂ ಖಚಿತವಾದ ಅಭಿಪ್ರಾಯಗಳನ್ನು ಕೊಡಲಾಗಿದೆ. ಇದೊಂದು ಮಾದರಿ ಆಧ್ಯಯನವಾಗಿದೆ. ಹಲವಾರು ಅಧ್ಯಯನ ಪ್ರಕಾರಗಳಿಗೆ ಈ ಕೃತಿ ಪ್ರೇರಣೆ ನೀಡಬಹುದಾಗಿದೆ.”
{{right|'''- ಡಾ.ಯು.ಪಿ.ಉಪಾಧ್ಯಾಯ'''}}
{{right|ಪ್ರಾಧ್ಯಾಪಕರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ,ಉಡುಪಿ}}
{{right|ಜೋಶಿಯವರ ಪಿಎಚ್.ಡಿ. ಮಾರ್ಗದರ್ಶಕರು}}
{{gap}}'ಕೃಷ್ಣ ಸಂಧಾನ : ಪ್ರಸಂಗ ಮತ್ತು ಪ್ರಯೋಗ'-“ಇದು ಸಂಶೋಧನ ವಿಧಾನಕ್ಕೆ ಅನುಸಾರವಾಗಿ ಸಿದ್ಧಗೊಂಡ ಅಚ್ಚುಕಟ್ಟಾದ ಸಂಶೋಧನ ಪ್ರಬಂಧವಾಗಿದೆ. ಸಂಶೋಧಕರು ವಿಶೇಷ ಶ್ರಮವಹಿಸಿ ತಮ್ಮ ಸಂಶೋಧನ ಪ್ರಬಂಧಕ್ಕೆ ಅಗತ್ಯವಾದ ಎಲ್ಲ ಮಾಹಿತಿಗಳನ್ನೂ ಕಲೆಹಾಕಿ, ಕ್ರಮವಾಗಿ ಅವುಗಳನ್ನು ವರ್ಗೀಕರಿಸಿ ವಿಮರ್ಶಾತ್ಮಕ ಹಾಗೂ ತೌಲನಿಕ ದೃಷ್ಟಿಯಿಂದ ವಿಶ್ಲೇಷಿಸಿದ್ದಾರೆ. ಆರಿಸಿಕೊಂಡ ವಿಷಯದ ಮೇಲೆ ಸಂಶೋಧಕರಿಗಿರುವ ಆಸಕ್ತಿ, ಆಳವಾದ ಅನುಭವ, ವಿಷಯಗಳ ವಿಶ್ಲೇಷಣೆಯಲ್ಲಿರುವ ಸೂಕ್ಷ್ಮದೃಷ್ಟಿ.. ಮುಂತಾದವು ಪ್ರಬಂಧದ ಉದ್ದಕ್ಕೂ ಎದ್ದು ಕಾಣುತ್ತದೆ. ಪ್ರತಿಯೊಂದು ಅಂಶವನ್ನೂ ಎಲ್ಲಾ ದೃಷ್ಟಿಗಳಿಂದಲೂ ವಿವರಾತ್ಮಕವಾಗಿ ವಿಶ್ಲೇಷಣೆ ನಡೆಸಿರುವುದು ಈ ಪ್ರಬಂಧದ ವೈಶಿಷ್ಟ್ಯವಾಗಿದೆ ಯಕ್ಷಗಾನ ಸಂಶೋಧನ ಕ್ಷೇತ್ರದಲ್ಲಿ ಇದೊಂದು ಮಾದರಿಯಾದ ಪ್ರಬಂಧವೆನ್ನಬಹುದು.”
{{right|'''-ಡಾ.ಶ್ರೀಕೃಷ್ಣಭಟ್ ಅರ್ತಿಕಜೆ'''}}
{{right|ಕನ್ನಡ ವಿಭಾಗದ ಮುಖ್ಯಸ್ಥರು, ಮದರಾಸುವಿಶ್ವವಿದ್ಯಾನಿಲಯ}}
{{gap}}ವೃತ್ತಿಯಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿ ನಿವೃತ್ತರು. ಯಕ್ಷಗಾನ ಅವರಿಗೆ ಹೆಸರು ತಂದಿತ್ತ ಕ್ಷೇತ್ರ. ಡಾ.ಶೇಣಿ ಗೋಪಾಲಕೃಷ್ಣ ಭಟ್ಟರ ಬಳಿಕದ ತಲೆಮಾರಿನ ಶ್ರೇಷ್ಠ ಅರ್ಥದಾರಿ, ಕೋಟ ಶಿವರಾಮ ಕಾರಂತರ ಬಳಿಕ ಕ್ಷೇತ್ರದ ಸಂಶೋಧನೆ, ಅಧ್ಯಯನದಲ್ಲಿ ರಾಜ್ಯ, ದೇಶ, ವಿದೇಶಗಳ ವಿದ್ವಾಂಸರಿಗೂ ಬೇಕಾದವರು. ಯಾವುದೇ ವಿಷಯ ಕೇಳಿದರೂ ಅದರ ಸಮೂಲಾಗ್ರ ಅರಿವು ಕೊಡಬಲ್ಲ ಸಮರ್ಥ ಗುರು. ಮತ್ತೆ ಮತ್ತೆ
{{rh|ಜಾಗರದ ಜೋಶಿ124}}<noinclude></noinclude>
ej5uuw8kyo47ao3izgt7k0hey59hka0
ಪುಟ:ಜಾಗರದ ಜೋಶಿ.pdf/೩೫
104
99289
320964
278017
2026-05-20T02:35:00Z
Shreelatha.Halemane
7642
/* Validated */
320964
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಜಿ.ಎಸ್. ಹೆಗಡೆ, ಡಾ. ಜಿ.ಎಸ್. ಭಟ್ ಸುಳ್ಯ, ಡಾ. ಕೆ.ಎಂ. ರಾಘವ ನಂಬಿಯಾರ್..
ಹೀಗೆ ವಿಮರ್ಶಾ ಕ್ಷೇತ್ರದ ಹಲವರನ್ನು ಹೆಸರಿಸಬಹುದು.<br>
'''* ತಾವು ಕಂಡಂತೆ ಯಕ್ಷಗಾನದಲ್ಲಿ ವಿಮರ್ಶಾ ಸ್ವರೂಪ ಹೇಗಿರಬೇಕು?'''<br>
{{gap}}ಕಲೆ ಹೇಗೋ ಬೆಳೆಯುತ್ತಾ ಇರುತ್ತದೆ. ವಿಮರ್ಶೆ ಮತ್ತೊಂದು ಕಡೆಯಿಂದ
ಬೆಳೆಯುತ್ತಾ ಇರುತ್ತದೆ. ಕಲಾವಿದನಿಗೆ ವಿಮರ್ಶಕನಿಂದ ಒಳ್ಳೆಯ ಅಭಿಪ್ರಾಯ
ಪಡೆಯಬೇಕು, ಮೆಚ್ಚಬೇಕು ಎಂದು ಮಾನಸಿಕವಾಗಿ ಇರುತ್ತದೆ. 'ನಾನು ಏನು ಬೇಕಾದರೂ
ಮಾಡುತ್ತೇನೆ. ಜನ ನನ್ನನ್ನು ಮೆಚ್ಚಿದ್ದಾರೆ. ನಾನು ವ್ಯವಸಾಯಿ ಕಲಾವಿದ' ಎಂದು
ಹೇಳುವವರೂ ಇದ್ದಾರೆ. ಅವರೂ ಒಳಗಿನಿಂದ ವಿಮರ್ಶಕನ ಅಭಿಪ್ರಾಯಕ್ಕೆ ಬೆಲೆ
ಕೊಡುತ್ತಾರೆ. ಒಂದು ಪ್ರದರ್ಶನದಲ್ಲಿ ಎತ್ತಿದ ದೋಷವನ್ನು ಮತ್ತೊಂದು ಪ್ರದರ್ಶನದಲ್ಲಿ
ಸರಿಪಡಿಸಿಕೊಳ್ಳವ ಹೊಣೆಗಾರಿಕೆ ಕಲಾವಿದನಿಗೆ ಇರಬೇಕು, ವಿಮರ್ಶೆಗೂ ಮರು
ವಿಮರ್ಶೆ ಬೇಕು. ಅದು 'ಆಚಾರ್ಯ ಪೀಠ'ವಾಗಬಾರದು. ಯಕ್ಷಗಾನದ ಸಂಶೋಧನೆಗೆ
ವಿಮರ್ಶೆಯ ಬಲವಾದ ಅಡಿಪಾಯ ಬೇಕು. ಪ್ರೀತಿ ಬೇಕು. ನಿರ್ಭೀತಿ ಬೇಕು.
ಮಾಧ್ಯಮದ ಎಚ್ಚರವಿಲ್ಲದೆ ಮಾಡುವ ವಿಮರ್ಶೆ 'ಒಟ್ಟಾರೆ ವಿಮರ್ಶೆ'ಯಾಗುತ್ತದೆ.
ಅದರಿಂದ ರಂಗಕ್ಕೆ ಪ್ರಯೋಜನವಿಲ್ಲ. ವಿಮರ್ಶಾ ಪಂಥ ಬೆಳೆಯುತ್ತಿದೆ.<br>
'''*ಕಲಾವಿದರು ವಿಮರ್ಶೆಯನ್ನುಹೇಗೆ ಸ್ವೀಕರಿಸಿದರು?'''<br>
{{gap}}ಲಾವಿದರು ವಿಮರ್ಶೆಯನ್ನು ಸ್ವೀಕರಿಸುವ ರೀತಿ ಬೇರೆ. ತಜ್ಞರು ಸ್ವೀಕರಿಸುವ
ರೀತಿ ಬೇರೆ, ಕಲಾವಿದರು ವ್ಯಕ್ತಿ ಪರಿಚಯಗಳನ್ನು ಬಹಳ ಪ್ರೀತಿಯಿಂದ ಓದುತ್ತಾರೆ.
ಆದರೆ ಅಭಿಪ್ರಾಯಗಳನ್ನು ಅಷ್ಟಾಗಿ ಓದುವುದಿಲ್ಲ. 'ಅವನು ವೇಷ ಮಾಡ್ತಾನೋ?',
“ಅವನಿಗೆ ತಿರುಗಾಟ ಮಾಡಿದ ಅನುಭವ ಉಂಟೋ..?”.. ಎಂಬ ಪ್ರತಿಕ್ರಿಯೆ ನೀಡುತ್ತಾರೆ,
ವಿಮರ್ಶಕನು ಕುಣಿಯಬೇಕಾಗಿಲ್ಲ. ಹಾಡಬೇಕಾಗಿಲ್ಲ. ವೇಷ ತೊಡಬೇಕಾಗಿಲ್ಲ ಎಂಬ
ತಿಳಿವಳಿಕೆ ಇದ್ದರೂ, ಅವರು ಅದನ್ನು ಒಪ್ಪುವುದಿಲ್ಲ. ವಿಮರ್ಶಕರ ಅಭಿಪ್ರಾಯವು
ಯಕ್ಷಗಾನದ ಒಳಗಿದ್ದವರಿಗೆ 'ಇದು ಗೊತ್ತಿದ್ದ ವಿಷಯವೇ' ಎಂದಾದ್ರೆ ಹೊರಗಿನವರಿಗೆ'ಅದು ಯಕ್ಷಗಾನದ್ದು, ನಮಗೆ ಬೇಡ' ಎಂಬ ಭಾವ. ಹಾಗಾಗಿ ಯಕ್ಷಗಾನದ ವಿಮರ್ಶೆ
ಗಂಭೀರವಾಗಿ ಇನ್ನೂ ಪರಿಗಣಿತವಾಗಿಲ್ಲ.<br>
'''* ವಿಮರ್ಶೆಯ ಕ್ಷೇತ್ರಾಧ್ಯಯನದ ತಮ್ಮ ಅನುಭವ?'''<br>೦
{{gap}}ನಾನು ಸ್ವತಃ ಅರ್ಥದಾರಿಯಾಗಿ, ಯಕ್ಷಗಾನದಲ್ಲಿ ಪ್ರವೃತ್ತನಾಗಿದ್ದು, ತೆಂಕು-
ಬಡಗು ತಿಟ್ಟುಗಳಲ್ಲಿ ಏಕಪ್ರಕಾರವಾದ ಸಂಪರ್ಕವು ಯಕ್ಷಗಾನದ ವಿಮರ್ಶೆಯ
ಕ್ಷೇತ್ರಾಧ್ಯಯನಕ್ಕೆ ಸಹಕಾರಿಯಾಗಿತು. ಸಂಪರ್ಕ, ತಿರುಗಾಟ, ಅಧ್ಯಯನಗಳಿಗೆ ಸುಲಲಿತ
ವಾಯಿತು. ಇಷ್ಟು ವ್ಯಾಪಕ ಸಂಪರ್ಕ ಇಟ್ಟುಕೊಳ್ಳದೆ ವಿಮರ್ಶೆ ಸಾಧ್ಯವಿಲ್ಲ. ವಿಮರ್ಶೆಯಲ್ಲಿ
{{rh|center=ಜಾಗರದ ಜೋಶಿ / 28}}<noinclude></noinclude>
q25n4kap6aw97swoq4hmypxgx91m8pj
ಪುಟ:ಜಾಗರದ ಜೋಶಿ.pdf/೫೮
104
99290
320915
277861
2026-05-19T17:39:30Z
Pragathi. BH
7585
/* Validated */
320915
proofread-page
text/x-wiki
<noinclude><pagequality level="4" user="Pragathi. BH" /></noinclude>ಬಾಳಿಕೆ ಲಕ್ಷ್ಮಣನಾಗಿಯೂ, ಮಧುಸೂದನ ಭಟ್ ಬ್ರಾಹ್ಮಣನಾಗಿಯೂ ಕವಿರಾಜ
ಉಡುಪ ಹನುಮಂತ ಮತ್ತು ಕು. ವಿಶಾಲ ಭಟ್ ಅಂಗದನಾಗಿ ಅರ್ಥ ಹೇಳಿ
ತಾಳಮದ್ದಳೆಯನ್ನು ಸಂಪನ್ನಗೊಳಿಸಿದರು. ಮೇಳದ ಯಜಮಾನರಾದ ಶ್ರೀ ಪರಮೇಶ್ವರಭಟ್ ದೊಡ್ಡಮಾಣಿ ಮತ್ತು ಟೊರೆಂಟೋ ಕನ್ನಡ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾಜಯರಾಮ ಮತ್ತು ಪದಾಧಿಕಾರಿಗಳು ಭಾರತದಿಂದ ಬಂದು ಕೆನಡಾಕ್ಕೆ ಕನ್ನಡ ತಾಳಮದ್ದಳೆ ಪರಿಚಯಿಸಿದ ಡಾ. ಎಂ. ಪ್ರಭಾಕರ ಜೋಶಿಯವರನ್ನು ಸನ್ಮಾನಿಸಿ ಮಾನಪತ್ರ ನೀಡಿ ಗೌರವಿಸಿದರು.</br>
{{gap}}
ಇದಲ್ಲದೇ ಈ ಸರಣಿಯ ಅಂಗವಾಗಿ ಶೃಂಗೇರಿ ವಿದ್ಯಾಭಾರತಿ ಪ್ರತಿಷ್ಠಾನ
“ಗೀತೆಯ ಬೆಳಕು' ಎಂಬ ಜೋಶಿಯವರ ಕನ್ನಡ-ಇಂಗ್ಲಿಷ್ ಉಪನ್ಯಾಸ ಏರ್ಪಡಿಸಿತ್ತು.ಕೆನಡಾದಲ್ಲಿ ನಾಟ್ ನಾಟ್ ಎಂಬ ಕನ್ನಡ ಚಲನಚಿತ್ರ ಹೊರತರುತ್ತಿರುವ ನಿರ್ದೇಶಕರುಗಳಾದ ಶ್ರೀಮತಿ ಬೃಂದಾ ಮತ್ತು ಶ್ರೀ ಮುರಳಿ ಇವರು ಜೋಶಿಯವರ ಭಾರತೀಯ ದರ್ಶನಗಳ ಪರಿಚಯ ಎಂಬ ಕಾರ್ಯಾಗಾರ ಒಂದನ್ನು ಯಕ್ಷಮಿತ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದರು. ಇದಲ್ಲದೇ ಯಕ್ಷಗಾನ ಪದಕೋಶವನ್ನು ಬರೆದು ಕನ್ನಡ ಯಕ್ಷಗಾನದ ಹಿರಿಯ ತಜ್ಞರೆಂದೇ ಗುರುತಿಸಲ್ಪಡುವ ಡಾ. ಎಂ. ಪ್ರಭಾಕರ ಜೋಶಿಯವರು ಯಕ್ಷಗಾನ ಪ್ರದರ್ಶನದ ಮೌಲ್ಯವರ್ಧನ ಶಿಬಿರವನ್ನು ನಡೆಸಿಕೊಟ್ಟು ಯಕ್ಷಗಾನದ ಗುಣಮಟ್ಟವನ್ನು ಹೆಚ್ಚಿಸುವುದು ಹೇಗೆ, ಔಚಿತ್ಯ, ಅರ್ಥ ಇತ್ಯಾದಿಗಳ ಬಗ್ಗೆ ವಿವರಿಸಿದರು. ಒಟ್ಟಾರೆ ಕಾರ್ಯಕ್ರಮಗಳಿಗೆ 300ಕ್ಕೂ ಹೆಚ್ಚು ಜನ ಸೇರಿ ಯಶಸ್ವಿಗೊಳಿಸಿದರು. ಇದೆಲ್ಲದರ ಚಿತ್ರೀಕೃತ ಆವೃತ್ತಿ ಅಂತರ್ಜಾಲದಲ್ಲಿ ಸದ್ಯದಲ್ಲಿ ಲಭ್ಯವಾಗಲಿದ್ದು ಆಸಕ್ತರು ನೋಡಬಹುದು.
{{right|'''ಕೆನಡಾ ಪ್ರತಿನಿಧಿ'''
(ಯಕ್ಷಮಿತ್ರ ಕಲಾರಂಗ ಪರವಾಗಿ)}}
{{center|ಜಾಗರದ ಜೋಶಿ / 51 48424}}<noinclude></noinclude>
emevh726ek4ieqmyxcfo3ux45h3oepy
320917
320915
2026-05-19T17:41:01Z
Pragathi. BH
7585
/* Proofread */
320917
proofread-page
text/x-wiki
<noinclude><pagequality level="3" user="Pragathi. BH" /></noinclude>ಬಾಳಿಕೆ ಲಕ್ಷ್ಮಣನಾಗಿಯೂ, ಮಧುಸೂದನ ಭಟ್ ಬ್ರಾಹ್ಮಣನಾಗಿಯೂ ಕವಿರಾಜ
ಉಡುಪ ಹನುಮಂತ ಮತ್ತು ಕು. ವಿಶಾಲ ಭಟ್ ಅಂಗದನಾಗಿ ಅರ್ಥ ಹೇಳಿ
ತಾಳಮದ್ದಳೆಯನ್ನು ಸಂಪನ್ನಗೊಳಿಸಿದರು. ಮೇಳದ ಯಜಮಾನರಾದ ಶ್ರೀ ಪರಮೇಶ್ವರಭಟ್ ದೊಡ್ಡಮಾಣಿ ಮತ್ತು ಟೊರೆಂಟೋ ಕನ್ನಡ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾಜಯರಾಮ ಮತ್ತು ಪದಾಧಿಕಾರಿಗಳು ಭಾರತದಿಂದ ಬಂದು ಕೆನಡಾಕ್ಕೆ ಕನ್ನಡ ತಾಳಮದ್ದಳೆ ಪರಿಚಯಿಸಿದ ಡಾ. ಎಂ. ಪ್ರಭಾಕರ ಜೋಶಿಯವರನ್ನು ಸನ್ಮಾನಿಸಿ ಮಾನಪತ್ರ ನೀಡಿ ಗೌರವಿಸಿದರು.</br>
{{gap}}
ಇದಲ್ಲದೇ ಈ ಸರಣಿಯ ಅಂಗವಾಗಿ ಶೃಂಗೇರಿ ವಿದ್ಯಾಭಾರತಿ ಪ್ರತಿಷ್ಠಾನ
“ಗೀತೆಯ ಬೆಳಕು' ಎಂಬ ಜೋಶಿಯವರ ಕನ್ನಡ-ಇಂಗ್ಲಿಷ್ ಉಪನ್ಯಾಸ ಏರ್ಪಡಿಸಿತ್ತು.ಕೆನಡಾದಲ್ಲಿ ನಾಟ್ ನಾಟ್ ಎಂಬ ಕನ್ನಡ ಚಲನಚಿತ್ರ ಹೊರತರುತ್ತಿರುವ ನಿರ್ದೇಶಕರುಗಳಾದ ಶ್ರೀಮತಿ ಬೃಂದಾ ಮತ್ತು ಶ್ರೀ ಮುರಳಿ ಇವರು ಜೋಶಿಯವರ ಭಾರತೀಯ ದರ್ಶನಗಳ ಪರಿಚಯ ಎಂಬ ಕಾರ್ಯಾಗಾರ ಒಂದನ್ನು ಯಕ್ಷಮಿತ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದರು. ಇದಲ್ಲದೇ ಯಕ್ಷಗಾನ ಪದಕೋಶವನ್ನು ಬರೆದು ಕನ್ನಡ ಯಕ್ಷಗಾನದ ಹಿರಿಯ ತಜ್ಞರೆಂದೇ ಗುರುತಿಸಲ್ಪಡುವ ಡಾ. ಎಂ. ಪ್ರಭಾಕರ ಜೋಶಿಯವರು ಯಕ್ಷಗಾನ ಪ್ರದರ್ಶನದ ಮೌಲ್ಯವರ್ಧನ ಶಿಬಿರವನ್ನು ನಡೆಸಿಕೊಟ್ಟು ಯಕ್ಷಗಾನದ ಗುಣಮಟ್ಟವನ್ನು ಹೆಚ್ಚಿಸುವುದು ಹೇಗೆ, ಔಚಿತ್ಯ, ಅರ್ಥ ಇತ್ಯಾದಿಗಳ ಬಗ್ಗೆ ವಿವರಿಸಿದರು. ಒಟ್ಟಾರೆ ಕಾರ್ಯಕ್ರಮಗಳಿಗೆ 300ಕ್ಕೂ ಹೆಚ್ಚು ಜನ ಸೇರಿ ಯಶಸ್ವಿಗೊಳಿಸಿದರು. ಇದೆಲ್ಲದರ ಚಿತ್ರೀಕೃತ ಆವೃತ್ತಿ ಅಂತರ್ಜಾಲದಲ್ಲಿ ಸದ್ಯದಲ್ಲಿ ಲಭ್ಯವಾಗಲಿದ್ದು ಆಸಕ್ತರು ನೋಡಬಹುದು.
{{right|'''ಕೆನಡಾ ಪ್ರತಿನಿಧಿ'''
(ಯಕ್ಷಮಿತ್ರ ಕಲಾರಂಗ ಪರವಾಗಿ)}}
{{center|ಜಾಗರದ ಜೋಶಿ / 51 48424}}<noinclude></noinclude>
20qt2geqe9hif300w9nlaqsmlno3xlj
320974
320917
2026-05-20T02:46:29Z
Shreelatha.Halemane
7642
/* Validated */
320974
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಬಾಳಿಕೆ ಲಕ್ಷ್ಮಣನಾಗಿಯೂ, ಮಧುಸೂದನ ಭಟ್ ಬ್ರಾಹ್ಮಣನಾಗಿಯೂ ಕವಿರಾಜ
ಉಡುಪ ಹನುಮಂತ ಮತ್ತು ಕು. ವಿಶಾಲ ಭಟ್ ಅಂಗದನಾಗಿ ಅರ್ಥ ಹೇಳಿ
ತಾಳಮದ್ದಳೆಯನ್ನು ಸಂಪನ್ನಗೊಳಿಸಿದರು. ಮೇಳದ ಯಜಮಾನರಾದ ಶ್ರೀ ಪರಮೇಶ್ವರಭಟ್ ದೊಡ್ಡಮಾಣಿ ಮತ್ತು ಟೊರೆಂಟೋ ಕನ್ನಡ ಸಂಘದ ಅಧ್ಯಕ್ಷೆ ಶ್ರೀಮತಿ ಉಷಾಜಯರಾಮ ಮತ್ತು ಪದಾಧಿಕಾರಿಗಳು ಭಾರತದಿಂದ ಬಂದು ಕೆನಡಾಕ್ಕೆ ಕನ್ನಡ ತಾಳಮದ್ದಳೆ ಪರಿಚಯಿಸಿದ ಡಾ. ಎಂ. ಪ್ರಭಾಕರ ಜೋಶಿಯವರನ್ನು ಸನ್ಮಾನಿಸಿ ಮಾನಪತ್ರ ನೀಡಿ ಗೌರವಿಸಿದರು.</br>
{{gap}}ಇದಲ್ಲದೇ ಈ ಸರಣಿಯ ಅಂಗವಾಗಿ ಶೃಂಗೇರಿ ವಿದ್ಯಾಭಾರತಿ ಪ್ರತಿಷ್ಠಾನ
“ಗೀತೆಯ ಬೆಳಕು' ಎಂಬ ಜೋಶಿಯವರ ಕನ್ನಡ-ಇಂಗ್ಲಿಷ್ ಉಪನ್ಯಾಸ ಏರ್ಪಡಿಸಿತ್ತು.ಕೆನಡಾದಲ್ಲಿ ನಾಟ್ ನಾಟ್ ಎಂಬ ಕನ್ನಡ ಚಲನಚಿತ್ರ ಹೊರತರುತ್ತಿರುವ ನಿರ್ದೇಶಕರುಗಳಾದ ಶ್ರೀಮತಿ ಬೃಂದಾ ಮತ್ತು ಶ್ರೀ ಮುರಳಿ ಇವರು ಜೋಶಿಯವರ ಭಾರತೀಯ ದರ್ಶನಗಳ ಪರಿಚಯ ಎಂಬ ಕಾರ್ಯಾಗಾರ ಒಂದನ್ನು ಯಕ್ಷಮಿತ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದರು. ಇದಲ್ಲದೇ ಯಕ್ಷಗಾನ ಪದಕೋಶವನ್ನು ಬರೆದು ಕನ್ನಡ ಯಕ್ಷಗಾನದ ಹಿರಿಯ ತಜ್ಞರೆಂದೇ ಗುರುತಿಸಲ್ಪಡುವ ಡಾ. ಎಂ. ಪ್ರಭಾಕರ ಜೋಶಿಯವರು ಯಕ್ಷಗಾನ ಪ್ರದರ್ಶನದ ಮೌಲ್ಯವರ್ಧನ ಶಿಬಿರವನ್ನು ನಡೆಸಿಕೊಟ್ಟು ಯಕ್ಷಗಾನದ ಗುಣಮಟ್ಟವನ್ನು ಹೆಚ್ಚಿಸುವುದು ಹೇಗೆ, ಔಚಿತ್ಯ, ಅರ್ಥ ಇತ್ಯಾದಿಗಳ ಬಗ್ಗೆ ವಿವರಿಸಿದರು. ಒಟ್ಟಾರೆ ಕಾರ್ಯಕ್ರಮಗಳಿಗೆ 300ಕ್ಕೂ ಹೆಚ್ಚು ಜನ ಸೇರಿ ಯಶಸ್ವಿಗೊಳಿಸಿದರು. ಇದೆಲ್ಲದರ ಚಿತ್ರೀಕೃತ ಆವೃತ್ತಿ ಅಂತರ್ಜಾಲದಲ್ಲಿ ಸದ್ಯದಲ್ಲಿ ಲಭ್ಯವಾಗಲಿದ್ದು ಆಸಕ್ತರು ನೋಡಬಹುದು.
{{right|'''ಕೆನಡಾ ಪ್ರತಿನಿಧಿ'''
(ಯಕ್ಷಮಿತ್ರ ಕಲಾರಂಗ ಪರವಾಗಿ)}}
{{center|ಜಾಗರದ ಜೋಶಿ / 51 48424}}<noinclude></noinclude>
sqw9milnyzuf8spx6np74oy37fg7z2z
ಪುಟ:ಜಾಗರದ ಜೋಶಿ.pdf/೪೨
104
99291
320972
277660
2026-05-20T02:45:15Z
Shreelatha.Halemane
7642
/* Validated */
320972
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Css image crop
|Image = ಜಾಗರದ_ಜೋಶಿ.pdf
|Page = 42
|bSize = 378
|cWidth = 75
|cHeight = 120
|oTop = 68
|oLeft = 2
|Location = left
|Description =
}}
'''ಕೆನಡಾ ಯಕ್ಷಮಿತ್ರರ'''
ಅರ್ಥಪೂರ್ಣ ಪಯಣ'''
'''Yakshamitra |'''
'''Toranto, Canada'''
'''ನಾ ಕಾರಂತ ಪೆರಾಜೆ'''
'''“ವಿದೇಶದಲ್ಲೂ ಅತ್ಯಂತ ಸುಸಜ್ಜಿತ ಯಕ್ಷಗಾನ ಮೇಳವಿದೆ.”<br>
{{gap}}ಯಕ್ಷಗಾನ ವಿದ್ವಾಂಸ, ಆರ್ಥದಾರಿ ಡಾ.ಎಂ.ಪ್ರಭಾಕರ ಜೋಶಿ
ಯವರು ಕೆನಡಾದಿಂದ ಮಿಂಚಂಚೆ ಕಳುಹಿಸಿದರು. ವಿನೋದಕ್ಕೆ
ಅಂದಿರಬಹುದೆಂದು ಮರೆತುಬಿಟ್ಟಿದ್ದೆ. ವಾರದಲ್ಲೇ ಕಾರ್ಯಕ್ರಮಗಳ
ರಾಶಿ ರಾಶಿ ಚಿತ್ರಗಳು ಕಂಪ್ಯೂನ ಇನ್ಬಾಕ್ಸಿನಲ್ಲಿತ್ತು. “ಯಕ್ಷಗಾನವು
ಇರುನೆಲೆಯಲ್ಲಿ ಇನ್ನೂ ಅಭಿವೃದ್ಧಿಯಾಗಬೇಕೆನ್ನುವ ತಿಳಿವಳಿಕೆ ಪ್ರಬಲ
ವಾಗಿ ಮೂಡಬೇಕು. ಅಲ್ಲಿ ಈಗಲೇ ಅದು ಬೇರುಬಿಟ್ಟಿರುವುದು ಖುಷಿ
ತಂದಿದೆ,” ಎಂದು ಮಾತಿಗಿಳಿದರು.<br>
{{gap}}ಕೆನಡಾ ಟೊರೆಂಟೋದ 'ಯಕ್ಷ ಮಿತ್ರ' ಸಂಘಟನೆಯು ಪೂರ್ಣ
ಪ್ರಮಾಣದ ಮೇಳ ಸ್ವರೂಪದಲ್ಲಿದೆ. ಪ್ರಾಯಃ ಅದಕ್ಕೀಗ ದಶಮಾನದ
ಖುಷಿ, ಸಾಗರ ಮೂಲದ ರಾಘವೇಂದ್ರ ಕಟ್ಟಿನಕೆರೆ ನಿರ್ದೇಶಕರು.
ವರುಷಕ್ಕೆ ಏನಿಲ್ಲವೆಂದರೂ ಇಪ್ಪತ್ತರಿಂದ ಇಪ್ಪತೈದು ಆಟಗಳು. 2016
ಜೂನ್ 2ರಿಂದ 14ರ ತನಕ ಜೋಶಿಯವರ ಪ್ರವಾಸ. ಐದಾರು
ದಿವಸ ಟೊರೆಂಟೋ, ಒಟ್ಟಾವಾ, ಮೋಂಟ್ರಿಯಲ್ಗಳಲ್ಲಿ ಯಕ್ಷಗಾನದ್ದೇ
ಕಾರ್ಯಕ್ರಮ.<br>
{{gap}}ಟೊರೆಂಟೋದ ಕಾರ್ಯಕ್ರಮಕ್ಕೆ ಹೊರಗಿನಿಂದ ಆಮದು
ಕಲಾವಿದರಿಲ್ಲ. ಜೋಶಿ ಮಾತ್ರ ಅತಿಥಿ. ಮಿಕ್ಕವರೆಲ್ಲಾ ಅಲ್ಲೇ ಸಿದ್ಧ
ಜಾಗರದ ಜೋಶಿ # 35'''<noinclude></noinclude>
5uo9utfj3reiutoxjvz04c5bk6a2t1d
ಪುಟ:ಜಾಗರದ ಜೋಶಿ.pdf/೧೨೯
104
99293
320899
277932
2026-05-19T17:28:54Z
Pragathi. BH
7585
/* Validated */
320899
proofread-page
text/x-wiki
<noinclude><pagequality level="4" user="Pragathi. BH" /></noinclude>{{center|'''ಅಭಿಮತ'''}}
{{gap}}ನಮ್ಮ ಜೋಶಿ, ಅರ್ಥದಾರಿ ಮಾತ್ರವಲ್ಲ, ಅರ್ಥವಾಗುವ ಅರ್ಥದಾರಿ.. ಪ್ರಸಂಗ,ಪಾತ್ರ ಮತ್ತು ಇದಿರಾಳಿಯ ಮಾತಿನ ದಿಕ್ಕು ದೆಸೆ ಅರ್ಥೈಸಿ, ಅರ್ಥ ಹೇಳುವ ಕಲೆಯನ್ನು ಅರ್ಥ ಮಾಡಿಕೊಂಡ ಅರ್ಥದಾರಿ.
{{Right|'''-ಡಾ. ಶೇಣಿ ಗೋಪಾಲಕೃಷ್ಣ ಭಟ್ (ದಿ.)'''}}
{{Right|(ಆಲಂತಡ್ಕ ಗಣೇಶೋತ್ಸವ ಸಂಮಾನದಲ್ಲಿ ಅಧ್ಯಕ್ಷರಾಗಿ)}}
{{gap}}..ಜೋಶಿ ಕೂಟದಲ್ಲಿದ್ದರೆ ಸಾಕು, ನಮಗೆ ನಿರ್ಭೀತಿ.. ಪ್ರಸಂಗ ಸಂಪಾದನೆ,ಮಾರ್ಗದರ್ಶನ, ಜತೆಗಾರರನ್ನು ಎತ್ತಿ ಹಿಡಿದು ಸುಧಾರಿಸುವ ವಿಧಾನ, ಸಂವಾದದ ಅಂದ.. ಎಲ್ಲದರಲ್ಲೂ ನಮಗೆ ಸಲೀಸು, ದಾರಿ ಸುಗಮ.
{{Right|'''- ದಿ. ವಿದ್ವಾನ್ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ'''}}
{{Right|(ಕಿನ್ನಿಗೋಳಿಯ ಭಾಷಣವೊಂದರಲ್ಲಿ)}}
{{gap}} ದಕ್ಷಿಣ ಕನ್ನಡದ ವಿದ್ವತ್ಪರಂಪರೆಯಲ್ಲಿ ಶ್ರೇಷ್ಠರಾದ ಸೇಡಿಯಾಪು, ಕುಕ್ಕಿಲ, ತೆಕ್ಕುಂಜ,ಮುಳಿಯರ ಸಾಲಿನಲ್ಲೂ; ಶ್ರೇಷ್ಠ ಕಲಾವಿದರಾದ ಸಾಮಗ, ಶೇಣಿ ಅವರೊಂದಿಗೂ ಗಣನೆಗೆ ಸಲ್ಲುವವರು ಎಂಬುದು ಜೋಶಿಯವರ ವೈಶಿಷ್ಟ, ಹಿರಿಮೆ.
{{Right|'''- ಪ್ರೊ ಮಲ್ಲೇಪುರಂ ಜಿ. ವೆಂಕಟೇಶ್'''}}
{{Right|(ಬೆಂಗಳೂರಿನ ಸಂಮಾನದಲ್ಲಿ)}}
{{gap}}'ಕೃಷ್ಣ ಸಂಧಾನ : ಪ್ರಸಂಗ ಮತ್ತು ಪ್ರಯೋಗ'-ಒಂದು ಯಕ್ಷಗಾನ ಕೃತಿಯನ್ನು ಸೂಕ್ಷ್ಮಾತಿಸೂಕ್ಷ್ಮ ವಿಶ್ಲೇಷಣೆಗೆ ಅಳವಡಿಸಿರುವ ಪ್ರಥಮ ಪ್ರಯತ್ನವಾಗಿದೆ. ವಿಷಯದ ತಲಸ್ಪರ್ಶಿಯಾದ ಅಧ್ಯಯನ ಇಲ್ಲಿ ಕಂಡುಬಂದಿದೆ. ಪ್ರತಿಯೊಂದು ಸಂದರ್ಭವನ್ನೂ ಎಳೆಎಳೆಯಾಗಿ ಬಿಡಿಸಿ ಅದರಲ್ಲಿರುವ ರಸಭಾವಗಳನ್ನು ಎತ್ತಿ ತೋರಿಸಿದ್ದಾರೆ. ವ್ಯಾಪಕ ಕ್ಷೇತ್ರ ಕಾರ್ಯ, ದೀರ್ಘಕಾಲದ ಸ್ವಾನುಭವ, ವಿಮರ್ಶಾತ್ಮಕ ದೃಷ್ಟಿ-ಇವುಗಳ
ಹಿನ್ನೆಲೆಯಲ್ಲಿ ರೂಪುಗೊಂಡಿರುವ ಪ್ರಸ್ತುತ ಮಹಾಪ್ರಬಂಧ ಮಹತ್ವಪೂರ್ಣವಾಗಿದೆ."
{{Right|'''- ಡಾ. ಬಸವರಾಜ ಮಲಶೆಟ್ಟಿ, (ದಿ.)'''}}
{{Right|ಪ್ರಾಧ್ಯಾಪಕರು, ವಿಜಯನಗರ ಕಾಲೇಜು, ಹೊಸಪೇಟೆ}}
{{gap}}..ಜೋಶಿಯವರು ಸಂಪಾದಿಸಿದ 'ಕುಕ್ಕಿಲ ಸಂಪುಟ' - ದಿ.ಕುಕ್ಕಿಲ ಕೃಷ್ಣ ಭಟ್ಟರ ಬರಹಗಳ ಸಂಗ್ರಹವು, ಓರ್ವ ಶ್ರೇಷ್ಠ ಸಂಶೋಧಕನ ಬರಹಗಳ ಮಹತ್ವದ ಆಕರವಾಗಿದ್ದು ಸಂಶೋಧನ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯಾಗಿರುವುದು.
{{Right|'''- ದಿ. ಪ್ರೊ. ಎಂ.ಎಂ. ಕುಲಬರ್ಗಿ'''}}
{{center|ಜಾಗರದ ಜೋಶಿ / 122}}<noinclude></noinclude>
23xzlzycpwugjwtqexz7x1viy17y8mv
ಪುಟ:ಜಾಗರದ ಜೋಶಿ.pdf/೩೬
104
99295
320965
278018
2026-05-20T02:35:45Z
Shreelatha.Halemane
7642
/* Validated */
320965
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಐಚ್ಛಿಕವಾದ ವ್ಯಾಪಕತೆ, ನಿಲುವು ಬೇಕು. ಯಕ್ಷಗಾನದ ವಿಷಯಗಳನ್ನು ಒಂದು
'ವಿದ್ಯಮಾನ' ಎಂದು ಸ್ವೀಕರಿಸಬೇಕು. ವಿಮರ್ಶಕ ದಾಖಲಾತಿಗೆ ತೊಡಗಿದಾಗ ಇತ್ಯಾತ್ಮಕ,
ನೇತ್ಯಾತ್ಮಕ ವಿಚಾರಗಳೆರಡನ್ನೂ ಗಮನಿಸಬೇಕು. ವಿಮರ್ಶೆಯನ್ನು ಯಾರು ಒಳಗಿದ್ದು
ಕೊಂಡೇ ಮಾಡುತ್ತಾನೋ, ಅವನ ಬಗ್ಗೆ ಬಹಳಷ್ಟು ವಿಶ್ವಾಸ, ನಂಬುಗೆಗಳು ಬರುತ್ತವೆ.
ನನ್ನನ್ನು ಕಲಾವಿದರು ವಿಶ್ವಾಸದಿಂದ ನೋಡಿದ್ದಾರೆ.<br>
'''* ಪತ್ರಿಕೆಗಳಲ್ಲಿ ತಮ್ಮ ವಿಶಿಷ್ಟ 'ವ್ಯಕ್ತಿ ಪರಿಚಯ' ಬರಹಗಳು ಜನಪ್ರಿಯ. ಇಂತಹ ಲೇಖನಗಳನ್ನು ಬರೆಯುವಾಗ ಯಾವ ಮಾನದಂಡವನ್ನು ತಾವು ಬಳಸುತ್ತಿದ್ದೀರಿ?ಇದು ಕಲೆಯ ಬೆಳವಣಿಗೆಗೆ ಹೇಗೆ ಸಹಕಾರಿ?'''<br>
{{gap}}ಬೇರೆ ರಂಗದ ಕಲಾವಿದರನ್ನು ಹೇಗೆ ಪರಿಚಯಿಸುತ್ತಾರೆ ಎಂಬ ತಿಳಿವಳಿಕೆ
ಬೇಕು. ಕಲಾವಿದರ ಪರಿಚಯ ಕಲೆಯ ಪ್ರತಿಷ್ಠೆಗೆ ಕಾರಣ. ಇದು ಅವನನ್ನು ಮೆಚ್ಚುವ
ವರ್ಗಕ್ಕೆ ಅಭಿಮಾನಿಗಳಿಗೆ ಸಂತೋಷವಾಗುತ್ತದೆ. ವ್ಯಕ್ತಿಪರಿಚಯವನ್ನು ಓದಿಯೇ ಆಟ
ನೋಡಲು, ತಾಳಮದ್ದಳೆಗೆ ಅರ್ಥ ಕೇಳಲು ಬರುವುದಿದೆ. ಅಲ್ಲದೆ ಬಹುಕಾಲ ರಂಗದಲ್ಲಿ
ದುಡಿದ ಕಲಾವಿದನಿಗೆ, 'ನಾನು ಮಾಧ್ಯಮದಲ್ಲಿ ಗುರುತಿಸಲ್ಪಟ್ಟೆ' ಎಂಬ ಸಂತೃಪ್ತಿ.
ಇಂತಹ ಪರಿಚಯ ಲೇಖನಗಳನ್ನು ಬರೆಯುವಾಗ ಬರಹಗಾರನು ಕಲಾವಿದನ
ಸ್ವಭಾವ, ಸ್ವರೂಪ, ಕಲಾ ವ್ಯವಸಾಯ ಮತ್ತು ಗುಣ-ದೋಷಗಳನ್ನು ಗುರುತಿಸಬೇಕು.
'ಅವನ ಹಾಗೆ ಇವನಲ್ಲ' ಅಂತ ತೋರಿಸಬೇಕು. ಈ ಹಿನ್ನೆಲೆಯಲ್ಲಿ ನಾನು, ನನಗೆ
ಸಂತೋಷ ಕೊಟ್ಟ, ನಾನು ಒಳಗಿನವನಾಗಿದ್ದು ಹೊರಗಿದ್ದುಕೊಂಡು ಹೇಗೆ ಬರೆಯುವುದು
ಎಂಬುದನ್ನು ಆಲೋಚನೆ ಮಾಡಿ ವ್ಯಕ್ತಿ ಪರಿಚಯ ಬರೆದೆ. ಹೆಚ್ಚಿನವರು ಸ್ವೀಕರಿಸಿದ್ದಾರೆ.
ಕೆಲವರು ಆಕ್ಷೇಪಿಸಿದ್ದಾರೆ.
'''* ವ್ಯಕ್ತಿ ಪರಿಚಯ, ವಿಮರ್ಶಾ ಬರೆಹಗಳನ್ನು ಮಾಧ್ಯಮಗಳು ಹೇಗೆ ಸ್ವೀಕರಿಸಿದುವು?'''<br>
{{gap}}ವಸ್ತುವಿನಿಂದ ಲೇಖಕನಿಗೆ ಮಹತ್ವ ಬರುತ್ತದೆ ಲೇಖನದಿಂದ ವಸ್ತುವಿಗೆ ಮಹತ್ವ
ಬರುತ್ತದೆ. ಹಿಂದೆ 'ನವಭಾರತ' ದಿನಪತ್ರಿಕೆಯಲ್ಲಿ ಜರುಗಿದ ತಾಳಮದ್ದಳೆಗಳ 'ಬಿಸಿ'ಯ
ಬಗ್ಗೆ ವಿಮರ್ಶೆ, ಬರೆಹಗಳು ಪ್ರಕಟವಾಗುತ್ತಿದ್ದುವು. ಈ ಕುರಿತು ಚರ್ಚೆಗಳಾಗುತ್ತಿದ್ದವು.
ಜನರು ಕುತೂಹಲದಿಂದ ಅವನ್ನು ಸ್ವೀಕರಿಸಿದರು. ಪತ್ರಿಕೆಗೆ ಅದೊಂದು ಬೇರೆಯೇ
ವಿಧದ ಮಾರುಕಟ್ಟೆ ಸೃಷ್ಟಿಸಿತು. ಯಕ್ಷಗಾನಕ್ಕೂ ಪ್ರಚಾರ ಸಿಕ್ಕಿತು.<br>
{{gap}}ಕಳೆದ ಮೂವತ್ತೈದು ವರುಷಗಳಿಂದ ಉದಯವಾಣಿಯಲ್ಲಿ ವ್ಯಕ್ತಿ ಪರಿಚಯ,
ವಿಮರ್ಶೆ, ನಾಟ್ಯಶಾಸ್ತ್ರಕ್ಕೂ ಯಕ್ಷಗಾನಕ್ಕೂ ಸಂಬಂಧ, ಸಂಗೀತ-ಯಕ್ಷಗಾನ, ಛಂದಸ್ಸು,
ಅಭಿನಯ.. ಹೀಗೆ ಗರಿಷ್ಠ ತಾಂತ್ರಿಕಾಂಶಗಳ ಕುರಿತ ಬರಹಗಳು ಪ್ರಕಟವಾಗಿವೆ.
ಮಣಿಪಾಲದ ಪೈ ಬಳಗದ ದೊಡ್ಡ ಕೊಡುಗೆಯಿದು. ಈ ಅಂಕಣವನ್ನು ಆರಂಭಿಸಿದ
ಈಶ್ವರಯ್ಯ ಅವರ ವೈಯಕ್ತಿಕ ಆಸಕ್ತಿ ಮರೆಯುವಂತಹುದಲ್ಲ. ಯಕ್ಷಗಾನ ವಿಮರ್ಶೆಯ
{{rh|center=ಜಾಗರದ ಜೋಶಿ / 29}}<noinclude></noinclude>
3ntkj5cqa8mydvnp6guzaea5468fcsk
ಪುಟ:ಜಾಗರದ ಜೋಶಿ.pdf/೭೩
104
99297
320978
277711
2026-05-20T02:49:30Z
Shreelatha.Halemane
7642
/* Validated */
320978
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಇನ್ನೇನು ಸಿಕ್ಕಿತು ಎಂದು ತೋರುವ ದಿಗಂತದಂತೆ. ಈ ವಿದ್ಯಮಾನ ಭಾರತೀಯ ಕಲೆಗಳಿಗೆ ಹೇಗೆ, ಹಾಗೆ ಭಾರತೀಯ ಸಮಾಜಕ್ಕೂ ಸಲ್ಲುವುದೆಂದು ತೋರುತ್ತದೆ.<br>
{{gap}}ಆತ್ಮ ಅಥವಾ ಮನಸ್ಸು ಮೈಯಲ್ಲಿ ಮನೆ ಮಾಡಿದಂತೆ, ಶಾಸ್ತ್ರದ ಮೊನಚಾದ ಕಟ್ಟುಪಾಡುಗಳ ನಡುವೆ ಕನಸಿನ ಲೋಕವೊಂದು ಮೈತೋರುವುದು ನಮ್ಮ ಯಕ್ಷಗಾನದ ಪ್ರೇಕ್ಷಕರಿಗೆ ನಿತ್ಯಾನುಭವ. ಆದ್ದರಿಂದಲೇ ಇಂಥ ಧ್ಯಾನಸದೃಶ ರಸಾನುಭವವನ್ನು ಕೊಡತಕ್ಕ ಕಲೆಗಳು 'ವಿಮರ್ಶಕ'ನೆಂಬ ಮೂರನೆಯ ಮನುಷ್ಯನನ್ನು ಸಹಿಸುವುದಿಲ್ಲ.<br>
{{gap}}ಕಲೆ ಎಂದೇನು? ಸಮಗ್ರ ಭಾರತೀಯ ಸಾಹಿತ್ಯಕ್ಕೆ ಮನಸ್ಸು ನೆಟ್ಟಿರುವುದೇ 'ಸರಸ್ವತ್ಯಾಸತ್ವಂ ಕವಿ ಸಹೃದಯಾಖ್ಯಂವಿಜಯತೇ' ಎಂಬ ಹೇಳಿಕೆಯಲ್ಲಿ ಕವಿ ಮತ್ತು ಸಹೃದಯ - ಇವರನ್ನು ಬಿಟ್ಟು ಮೂರನೆಯ ಬಣವಿಲ್ಲ. ಇದ್ದರೆ ಆ ಹೊರಗಿನವರಿಗೆ ಇಲ್ಲಿ ಪ್ರವೇಶ ಇಲ್ಲ.<br>
{{gap}}ಅಂದರೆ ಏನು?<br>
{{gap}}ವಿಮರ್ಶಕ ಮೂರನೆಯ ಮನುಷ್ಯನೇ ಅಲ್ಲ. ಸಹೃದಯನದ್ದೇ ಚಾಚಿದ ಇನ್ನೊಂದು ಮೈ ವಿಮರ್ಶಕ. ರಸಾನುಭವದ ಇನ್ನೊಂದು ಮಗ್ಗುಲೇ ವಿಮರ್ಶೆ.ಆದುದರಿಂದ ಮೊದಲು ಸಹೃದಯನಾಗಿ ಒಳಗೆ ಬಾ. ಆಮೇಲೆ ಟೀಕಿಸು.. ಟಿಪ್ಪಣಿಸು.. ಖಂಡಿಸು..ಮಂಡಿಸು. ಆದರೂ ಮನೆಯೊಳಗಿನವನಾಗಿಯೇ ಇರು - ಎನ್ನುವ ಪ್ರೀತಿಯ ಒತ್ತಾಯವನ್ನು ತರುತ್ತದೆ ನಮ್ಮ ಕಲೆ, ನಮ್ಮ ಸಾಹಿತ್ಯ.<br>
{{gap}}ಇಂಥ ವಿಮರ್ಶೆಯಲ್ಲಿ ಬುಧ್ದಿ ಹರಿತವಾಗಿಯೇ ಕೆಲಸ ಮಾಡುತ್ತದೆ. ಆದರೆ ಈ ಝಳಪಿಸುವಿಕೆಯಲ್ಲಿ ರಸಾವರಣ ಹರಿಯದಂತೆ ವಿಮರ್ಶಕನ ಸಂವೇದನೆ ಪಹರೆ ಕೊಡುತ್ತಿರುತ್ತದೆ. ಇದು ಹೇಗೆಂದರೆ pole vault ಎಂಬ ಉದ್ಧಂಡ ಜಿಗಿತದ ಕ್ರೀಡೆಯ ಹಾಗೆ. ಉದ್ದದ ಬಿದಿರಿನ ಕೋಲೊಂದನ್ನು ಹಿಡಿದು ಧಾವಿಸುತ್ತ, ಅದನ್ನು ನೆಲಕ್ಕೂರಿ ಆ ರಭಸಕ್ಕೆ ಎತ್ತರಕ್ಕೆ ಏರುತ್ತೀರಿ. ಇನ್ನೂ ಎತ್ತರದಲ್ಲಿ ಅಡ್ಡ ದಂಡವೊಂದು ಗುರುತಾಗಿ ಇರುತ್ತದೆ. ಅದರ ಹತ್ತಿರ ಬಂದಾಗ ನಿಮ್ಮನ್ನು ಇಷ್ಟು ಮೇಲಕ್ಕೆತ್ತಿದ ಬಿದಿರಕೋಲನ್ನು
ಕೈಬಿಟ್ಟು ದಂಡದಾಚೆ ಜಿಗಿಯುತ್ತೀರಿ. ಯಾವುದೋ ಮೋಹದಿಂದ ಕೋಲನ್ನು ಕೈ ಬಿಡಲಿಲ್ಲವೋ ಅದೇ ನಿಮ್ಮನ್ನು ಈಚೆಯ ನೆಲಕ್ಕೆ ಕೆಡವುತ್ತದೆ. ಕೈಬಿಟ್ಟು ಜಿಗಿದಿರೋ ಆಚೆಯ ಬಯಲು ನಿಮ್ಮದು. ಸಿದ್ಧಿ ನಿಮ್ಮದು.<br>
{{gap}}ವಿಮರ್ಶೆಯಲ್ಲಿ ಬುದ್ದಿ ಆ ಬಿದಿರ ಕೋಲಿನ ಹಾಗೆ. ಎತ್ತರಕ್ಕೇರುವುದಕ್ಕೆ. ಜಿಗಿತಕ್ಕೆ ವೇಗ ಕೊಡುವುದಕ್ಕದು ಬೇಕೇ ಬೇಕು. ಆದರೆ ವಿಶ್ಲೇಷಕ ಬುದ್ಧಿಯನ್ನು ಕೈಬಿಡಬೇಕಾದ ಘಟ್ಟವೂ ಒಂದಿದೆ. ಅಡ್ಡ ದಂಡವೇ ನೀವು ಅದರ ಹತ್ತಿರವಾದಂತೆ ಕೋಲನ್ನು ಕೈಬಿಟ್ಟು ತನ್ನಾಚೆ ಧುಮುಕುವಂತೆ ಆಹ್ವಾನಿಸುತ್ತದೆ. ಕಲಾನುಭವದಲ್ಲಿ ಈ ಘಟ್ಟವನ್ನು ಗುರುತಿಸುವುದಕ್ಕೂ ವಿಮರ್ಶೆ ಬೇಕೆನ್ನುವುದು ಅದರ ಮಹತ್ತು ಮತ್ತು ಮಿತಿ.<br>
{{gap}}ಈ ನನ್ನ ಪ್ರಿಯ ಗೆಳೆಯ ಪ್ರಭಾಕರ ಜೋಶಿ ಇಂಥ ಒಳಗಿನ ವಿಮರ್ಶಕರಾಗಿದ್ದಾರೆ ಎನ್ನುವುದು ತುಂಬು ಸಂತಸದ ಸಂಗತಿ. ಅವರ ಬುದ್ಧಿ ಕೂರಲಗಿನಂತಿದ್ದರೂ ಅವರು
{{rh|center=ಜಾಗರದ ಜೋಶಿ / 66}}<noinclude></noinclude>
krh184bzuh8rcvpyvji3ll4rldajgt6
ಪುಟ:ಜಾಗರದ ಜೋಶಿ.pdf/೫೦
104
99298
320910
278056
2026-05-19T17:37:22Z
Pragathi. BH
7585
/* Validated */
320910
proofread-page
text/x-wiki
<noinclude><pagequality level="4" user="Pragathi. BH" /></noinclude>ಬರುವುದಿಲ್ಲ ನನಗೆ ನೀನು ನಿನ್ನ ಮುಖ ನೋಡು.” <br>
{{gap}}ಕೌರವನ ಪ್ರತಿಕ್ರಿಯೆ ಹೀಗಿರುತ್ತದೆ - “ನನ್ನ ಮುಖ, ಅದು ನನಗೇ ಕಾಣುವುದಿಲ್ಲ. ಕಷ್ಟ ಅದು. ಮತ್ತೆ ಕನ್ನಡಿ, ನಿಮ್ಮ ಮುಂದೆ ನೋಡ್ಲಿಕ್ಕೆ ಸಿದ್ದನಿಲ್ಲ ನಾನು.” ಭೀಷ್ಮ ಛೇಡಿಸುತ್ತಾನೆ – “ನಿನಿಗೆ ನೋಡ್ಲಿಕ್ಕೆ ಕನ್ನಡಿಯಾದರೂ ಕಾಣಬಹುದು. ನಿನ್ನ ಅಪ್ಪನಿಗೆ ಪ್ರತಿಬಿಂಬ ಬಿಡು, ಕನ್ನಡಿಯೇ ಕಾಣುವುದಿಲ್ಲ..! ನಾನು ದೋಷ ಹೇಳಿದ್ದಲ್ಲ ಸ್ಥಿತಿ ಹೇಳಿದ್ದು.”<br>
{{gap}}ಕೌರವನ ಪ್ರತಿಕ್ರಿಯೆ ಹೀಗಿರುತ್ತದೆ “ನಾನು ಉತ್ತರಿಸುವುದಿಲ್ಲ. ಒಬ್ಬನು ಅಂಧನಾಗಿರುವುದು ಹಾಸ್ಯಕ್ಕೆ ವಿಷಯವಾಗುತ್ತದೆ ಎಂದಾದರೆ ಕ್ಷಮಿಸ್ಬೇಕು,ನಾನು ಅಭಿಮಾನದಿಂದ ಹೇಳ್ತೇನೆ, ನಾನು ಕುರುಡನ ಮಗ, ಅಂದರೆ ಒಂದು ಮಾತು.
ಕುರುಡರಿಗೆ ನೂರು ಮಕ್ಕಳಾದರೆ, ಕಣ್ಣಿದ್ದವರಿಗೆ ಎಷ್ಟಾಗಬೇಕು? ಲೋಕದಲ್ಲಿ ಒಂದು ಪ್ರಶ್ನೆ. ಆದರೆ ಕಣ್ಣಿಂದ ಮಕ್ಕಳಾಗುವುದಲ್ಲ. ಅದು ಅವನವನ ಸಾಮರ್ಥ್ಯದಿಂದ..”<br>
{{gap}}ಮುಂದೆ ಇದೇ ಪ್ರಸಂಗದಲ್ಲಿ - “ಪೊರೆಯುವ ಮಹಿಮನು ವಿಪಿನಾಂತರದೊಳು ಚಲಿಸುವ..” ಎಂಬ ಪದಕ್ಕೆ ಕೌರವನ ಅರ್ಥದ ವಿತಂಡವಾದದ ಮಂಡನೆಯ ಸೊಗಸು ಹೀಗಿದೆ. “ಪಾಂಡವರು ಧರ್ಮಾತ್ಮರಾದ್ದರಿಂದ ಕೃಷ್ಣ ಅವರ ಕಡೆಗೆ ಇದ್ದಾನೆ. ಇದು
ಭಾಗವತ ಧರ್ಮ, ಪುಸ್ತಕದಲ್ಲಿ ಬರೆದಿಟ್ಟಿದೆ ಆದರೆ ಇದು ಹಳತಾಗಿ ವರ್ಷ ಎಷ್ಟಾಯಿತು? ಭಕ್ತರನ್ನು ಕಾಪಾಡುತ್ತಾನೆ ಎಂಬುದು ಪುಸ್ತಕದ ಮಾತು. ಅದು ಧೈರ್ಯಕ್ಕೆ ಬೇಕು. ದೇವರಿದ್ದಾನೆ... ಕಾಪಾಡ್ತಾನೆ. ಆದರೆ ವಾಸ್ತವದಲ್ಲಿ ಹಾಗಿಲ್ಲ. ಪಾಂಡವರನ್ನು ಮುಳುಗಿಸ್ತಾನೆ, ಅವರಿಗೆ 'ಸ್ವಯ' ಇಲ್ಲ. ದೃಷ್ಟದಲ್ಲಿ ಪಾಲಿಸಿದ ಹಾಗೆ ಕಾಣುವುದು ಅದು. ಅದೃಷ್ಟದಲ್ಲಿ ದೇವರಿರುವುದು ನನ್ನ ಕಡೆ, ಭಕ್ತರ ಅವಸ್ಥೆ ಹೀಗಾದರೆ ಇನ್ನು ಭಕ್ತರ ಸಂತಾನ
ಹುಟ್ಟಲಿಕ್ಕಿಲ್ಲ. ಯಾಕೆ? ಪೊರೆಯುವ ಮಹಿಮನು, ಹೌದೋ? ಪರಮಾತ್ಮನ ಪರಮಭಕ್ತರು, ಸದಾ ಅವನಿಂದ ಪೊರೆಯಲ್ಪಡತಕ್ಕವರು, ಯಾವಾಗಲೂ ಅವನ ಅನುಗ್ರಹಕ್ಕೆ
ಒಳಗಾದವರು, ಹುಟ್ಟಿದ್ದು ಕಾಡಿನಲ್ಲಿ, ಪಾಂಡವ ವಿರೋಧಿಯಾಗಿ, ಪಾಂಡವರ ಉತ್ಕರ್ಷವನ್ನು ಸಹಿಸದ, ನೀವು ಹೇಳುವಂತೆ ಭೂಭಾರಕ್ಕೆ ಕಾರಣನಾದ, ಕಂಸನಂತೆ ಕೆಟ್ಟವನಾದ ನಾನು ಹುಟ್ಟಿದ್ದು ಅರಮನೆಯಲ್ಲಿ, ಹದಿನಾರು ವರ್ಷದ ವರೆಗೆ ಗೆಡ್ಡೆಗೆಣಸು
ತಿಂದುಕೊಂಡು, ಋಷಿಗಳ ಜತೆಗೆ ಕಳೆದವರು; ಅವರಿಗೆ ಅಜ್ಜನ ಮಾವನು, ಗುರುಗಳ ಮಾತನಾಡುವ ಯೋಗ ಉಂಟಾ? ಬಂಗಾರದ ಬತ್ತವನ್ನು ಬಾಯಲ್ಲಿಟ್ಟುಕೊಂಡು ಹಂಸತೂಲಿಕಾ ತಲ್ಪದಲ್ಲಿ ಮಲಗಿದವ ನಾನು. ಈಗಲೂ ಹೇಳೇನೆ. ಏಳು ಹಂಸತೂಲಿಕ
ತಲ್ಪದ ಅಡಿಯಲ್ಲಿ ಒಂದು ಮುಳ್ಳು ಇದ್ದರೆ ಮೇಲೆ ಮಲಗಿದ ನನಗೆ ಮೈಗೆ ತಾಗ್ತದೆ. ನನಗೆ ನಿದ್ದೆ ಬರುವುದಿಲ್ಲ. ಅಷ್ಟು ಸುಖದಲ್ಲಿ ಬೆಳೆದವನು. ಅಯ್ತು ಇಲ್ಲಿಗೆ ಬಂದರು, ಇರಲಿ ಪಾಪ ಅಂತ ನೀವು ಹೇಳಿದಿರಿ. ನಾನು ಹೇಳಿದೆ. ದೊಡ್ಡ ಮನೆಯಲ್ಲವೋ? ನೂರು ಏನು? ನೂರ ಐದು ಏನು? ಇದ್ದರು ಇಲ್ಲಿ. ಏನು ಮಾಡಿದರು? ಭಕ್ತರು ಮಾಡುವ ಕೆಲಸ. ಮರದಿಂದ ಬೀಳಿಸುವುದು, ನೀರಲ್ಲಿ ಮುಳುಗಿಸುವುದು. ಹೊಯಿಗೆಯಲ್ಲಿ
{{rh|center=ಜಾಗರದ ಜೋಶಿ / 43}}<noinclude></noinclude>
f0awre9vift1usqjz85i1gkmsho2lsm
ಪುಟ:ಜಾಗರದ ಜೋಶಿ.pdf/೪೩
104
99299
320905
278051
2026-05-19T17:34:38Z
Pragathi. BH
7585
/* Validated */
320905
proofread-page
text/x-wiki
<noinclude><pagequality level="4" user="Pragathi. BH" /></noinclude>ರಾದವರು. ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ. ಯಾವ ಪಾತ್ರವನ್ನು ಯಾವ ಕೋನದಲ್ಲಿ ಚಿತ್ರಿಸಬೇಕೆನ್ನುವ ಪೂರ್ವಭಾವಿ ತರಬೇತಿಗಳು ಪ್ರದರ್ಶನದ ಒಟ್ಟಂದಕ್ಕೆ ಪೂರಕ. 'ರಾವಣ ವಧೆ ಮತ್ತು ಭೀಷ್ಮ ಪರ್ವ' ಪ್ರಸಂಗಗಳ ತಾಳಮದ್ದಳೆ.
ಜೋಶಿಯವರಿಗೆ 'ರಾವಣ ಮತ್ತು ಭೀಷ್ಮ'ನ ಪಾತ್ರ. ಮೇಳದಿಂದ 'ವಾಲಿ ವಧೆ' ಪ್ರಸಂಗದ ಪ್ರದರ್ಶನ.<br>
{{gap}}ನಮ್ಮಲ್ಲಿ ಧ್ವನಿವರ್ಧಕದ ವಿಪರೀತ ಬೊಬ್ಬಾಟದಿಂದಾಗಿ ಯಕ್ಷಗಾನವನ್ನು ವೀಕ್ಷಿಸುವುದು, ಆಲಿಸುವುದು ತೀರಾ ಹಿಂಸೆ! ಎಲ್ಲಿಯವರೆಗೆ ಅಂದರೆ ಧ್ವನಿಯ ಅಟ್ಟಹಾಸಕ್ಕೆ ಪ್ರೇಕ್ಷಕರೇ ಎದ್ದು ಹೋಗಿರುವುದನ್ನು ನೋಡಿದ್ದೇನೆ. ಕಲಾವಿದರಿಗೆ ವಾಲ್ಯೂಮ್ ಹೈ
ಮತ್ತು ಶಾರ್ಪ್ ಕೊಟ್ಟಷ್ಟು ಸಂತೃಪ್ತಿ. ಎಷ್ಟೋ ಸಲ ಭಾಗವತಿಕೆಯನ್ನು ಚೆಂಡೆ, ಮದ್ದಳೆಗಳ ನುಡಿತಗಳು ನುಂಗಿಬಿಡುತ್ತವೆ! “ಟೊರೆಂಟೋದ ಧ್ವನಿವರ್ಧಕ ವ್ಯವಸ್ಥೆ
ತುಂಬಾ ಖುಷಿಯಾಯಿತು. ಕಾರ್ಯಕ್ರಮಕ್ಕೆ ಒಂದರ್ಧ ಗಂಟೆ ಮೊದಲು ಮೈಕ್ ಬ್ಯಾಲೆನ್ಸ್ ಮಾಡಿಬಿಡುತ್ತಾರೆ. ಮಧ್ಯೆ ಮಧ್ಯೆ ಏರಿಸುವ, ಇಳಿಸುವ ಪ್ರಕ್ರಿಯೆ ಇಲ್ಲ. ನಮ್ಮಲ್ಲೂ ಇಂತಹ ಪ್ರಕ್ರಿಯೆಗಳು ಯೋಚಿಸಬೇಕು.”<br>
{{gap}}ಕನ್ನಡ ಮೂಲದ ಸೀಮಿತ ಪ್ರೇಕ್ಷಕರು. ಜತೆಗೆ ರಂಗದ ಬಣ್ಣ, ನಡೆ, ಕುಣಿತದಲ್ಲಿ ಕಲೆಯನ್ನು ಕಂಡ ವಿದೇಶಿ ಕಲಾಪ್ರಿಯರು. ಪ್ರಸಂಗದ ಪದ್ಯ ಮತ್ತು ಭಾವಾರ್ಥವನ್ನು
ಪರದೆಯಲ್ಲಿ ಮೂಡಿಸುವ ತಾಂತ್ರಿಕ ವ್ಯವಸ್ಥೆಗಳು ಕನ್ನಡೇತರರಿಗೆ ಕಥೆಯನ್ನು ಅರ್ಥೈಸಲು ಸುಲಭವಾಗಿತ್ತು. ಕರಪತ್ರ, ಕಟೌಟ್ಗಳೆಲ್ಲಾ ಯಕ್ಷಗಾನೀಯ, ತಾಳಮದ್ದಳೆಗೆ ಎರಡು
ಗಂಟೆಯ ಕಾಲಾವಧಿ, ಹಿಮ್ಮಾಹಿತಿ ನೀಡುವ ಜಾಗೃತ ಪ್ರೇಕ್ಷಕ ವರ್ಗ, ಪ್ರಶೋತ್ತರಗಳ ಮೂಲಕ ಸಂದೇಹ ನಿವಾರಣೆ, “ವಾಲಿ ವಧೆ ಪ್ರಸಂಗದಲ್ಲಿ 'ವಾಲಿ-ತಾರೆ' ಪಾತ್ರಗಳ ಸಂವಾದವನ್ನು ಅನೇಕ ಮಂದಿ ಮೆಚ್ಚಿಕೊಂಡಿದ್ದರು. ರಾವಣ ಪಾತ್ರ ಮಾಡಿ ರಾಜನೀತಿಯಲ್ಲಿ ಹೇಗೆ ಮೈತ್ರಿ ಹುಟ್ಟುತ್ತದೆ ಎನ್ನುವ ತರ್ಕಗಳು ಜನ ಮುಟ್ಟಿದೆ. ಭೀಷ್ಮ ಪರ್ವದ 'ಭೀಷ್ಮ' ಪಾತ್ರ ಲೌಕಿಕ ಉದಾಹರಣೆಯನ್ನು ಕೊಡಬಹುದೇ ಎನ್ನುವ ಪ್ರಶ್ನೆಯನ್ನು ಎದುರಿಸಿದೆ.” ಎಂದು ಕೆನಡಾ ಕೂಟದ ಅನುಭವ ಹಂಚಿಕೊಳ್ಳುತ್ತಾರೆ;<br>
{{gap}}“ವೇಷ, ಸಂಪ್ರದಾಯದಲ್ಲಿ ರಾಜಿಯಿಲ್ಲದ ನಿಲುವು. ಮೆಚ್ಚಬೇಕಾದ ಪ್ರಗತಿ ಸಾಧಿಸಿದ್ದಾರೆ. ವಿದೇಶದಲ್ಲಿ ಯಕ್ಷಗಾನದ ಹೆಸರಿನಲ್ಲಿ ಏನೇನೋ ಮಾಡಿಲ್ಲ. ಅಲ್ಲಿ ರಂಗಭೂಮಿಯನ್ನು ಮೆಚ್ಚುವ ಕಣ್ಣಿದೆ. ಕಲಾರಸಿಕತೆಯ ಮಟ್ಟ ಚೆನ್ನಾಗಿದೆ. ರಂಗದಲ್ಲಿ
ಗಾಢ ಬೆಳಕಿಲ್ಲ. ಅವರು ತಂತ್ರಜ್ಞಾನವನ್ನು ಆಟಕ್ಕೆ ಅಳವಡಿಸಿದ್ದಾರೆ. ತರಬೇತಿಯಿದೆ. ಪ್ರತಿ ನಿಮಿಷವೂ ಯೋಚನೆ, ಯೋಜನೆ. ಮಧ್ಯೆ ಮಧ್ಯೆ ಪ್ರೇಕ್ಷಕರು ಎದ್ದು ಹೋಗುವುದಿಲ್ಲ.
ಶಿಳ್ಳೆ, ಚಪ್ಪಾಳೆಗಳಿಲ್ಲ. ಕಾರ್ಯಕ್ರಮದ ಕೊನೆಗೆ ದೀರ್ಘ ಕರತಾಡನದ ಪ್ರಶಂಸೆ.”<br>
{{gap}}ಪ್ರಜ್ಞಾಪೂರ್ವಕವಾದ ರಂಗಶಿಸ್ತು.ರಂಗಭೂಮಿಯನ್ನು ಬಳಸುವ ಕ್ರಮ, ನೃತ್ಯದ ತಿದ್ದುವಿಕೆ ಇನ್ನಷ್ಟು ಸುಧಾರಿಸಬೇಕಾಗಿದೆ. ಮಾಧ್ಯಮಗಳಲ್ಲಿ ಯಕ್ಷಗಾನ ಪರಿಚಯವಾಗಬೇಕು. ವಿಶ್ವ ಥಿಯೇಟರಿಗೆ ಅಲೌಕಿಕ ಕಲೆಯ ಸೊಬಗನ್ನು ತಿಳಿಸುವ ಕೆಲಸ ಆಗಬೇಕಾಗಿದೆ.
{{rh|center=ಜಾಗರದ ಜೋಶಿ / 36}}<noinclude></noinclude>
6ie6af5jgydkmzdmimqt91nf785wlu5
ಪುಟ:ಜಾಗರದ ಜೋಶಿ.pdf/೮೩
104
99300
320987
277699
2026-05-20T02:54:55Z
Shreelatha.Halemane
7642
/* Validated */
320987
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಮತ್ತು ಹೆಚ್ಚು ವ್ಯಾಪಕ ಅಧ್ಯಯನದ ಮೂಲಕ ಪುನಾರಚಿಸುವ ಆಲೋಚನೆಗಳು
ಇಲ್ಲಿನ ಲೇಖನದಲ್ಲಿವೆ. ಜೋಶಿಯವರು ಈ ಲೇಖನದಲ್ಲಿ ಯಾರನ್ನೂ ಮೆಚ್ಚಿಸುವ
ಅಥವಾ ತೆಗಳುವ ಕೆಲಸ ಮಾಡುವುದಿಲ್ಲ. ಆರಂಭದಲ್ಲಿ ಸೂಚಿಸಿದಂತೆ ಪರಂಪರೆ-
ಪ್ರಯೋಗಗಳ ನಿರಂತರ ಪ್ರಕ್ರಿಯೆಯಲ್ಲಿ ಇವರು ಆಸಕ್ತರಾಗಿರುವುದರಿಂದ, ಯಕ್ಷಗಾನ
ಮತ್ತು ತುಳು ಇವು ಒಂದು ರಂಗಭೂಮಿಯ ಆಕೃತಿಯಲ್ಲಿ ಮೈದಾಳುವಾಗ ಕಾಣಿಸುವ
ವೈರುಧ್ಯಗಳನ್ನು ಗ್ರಹಿಸುವ ಮತ್ತು ನಿವಾರಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ತುಳು
ಯಕ್ಷಗಾನ ನಿನ್ನೆ ಇಂದು ಇರುವ ರೀತಿಯಲ್ಲಿ 'ನಾಳೆ' ಇರಬಾರದು ಎನ್ನುವುದು ಈ
ಲೇಖನಕ್ಕೆ ಅನ್ವಯಿಕ ಆಯಾಮವನ್ನು ತಂದಿದೆ. ಅಂತಹ ಮೂರು ದಾರಿಗಳನ್ನು
(ಪುಟ 68, 69) ತೆರೆದು ತೋರಿಸಿ ಅವುಗಳಲ್ಲಿ ತಮ್ಮ ಆಯ್ಕೆಗಳನ್ನು ಸಕಾರಣವಾಗಿ
ಮುಂದಿಟ್ಟಿದ್ದಾರೆ. ಯಕ್ಷಗಾನದ ಬೇರೆ ಬೇರೆ ಅವಯವಗಳಲ್ಲಿ ತುಳು ಭಾಷೆ ಮತ್ತು
ಸಂಸ್ಕೃತಿ ಯಾವ ಯಾವ ಪ್ರಮಾಣದಲ್ಲಿ ಅಳವಡಿಬಹುದು ಎನ್ನುವುದನ್ನು
ನಿದರ್ಶನಗಳೊಂದಿಗೆ ಚರ್ಚಿಸಿರುವುದರಿಂದ ಈ ಲೇಖನವು ಸಾಮಾನ್ಯಕರಣಗೊಂಡ
ಯಾವುದೇ ಸೂತ್ರಗಳನ್ನು ಹೇಳದೆ, ಬದಲಾವಣೆಯು ಬಯಸುವ ಸಮಸ್ಯೆಗಳೊಡನೆ
ಮುಖಾಮುಖಿಯಾಗಿ ಸಂವಾದ ನಡೆಸುತ್ತದೆ.
{{gap}}ಯಕ್ಷಗಾನದ 'ಪಠ್ಯ'ವೊಂದನ್ನು ಪಠ್ಯ, ಸಂದರ್ಭ, ಸನ್ನಿವೇಶ ಮತ್ತು ಪ್ರದರ್ಶನಗಳ ಸಂಬಂಧ ದೃಷ್ಟಿಯಿಂದ ಸಮಗ್ರವಾಗಿ ಅಧ್ಯಯನ ಮಾಡಿದ 'ಶರಸೇತು ಬಂಧನ' ಲೇಖನವು ಯಕ್ಷಗಾನದ ವಿಮರ್ಶೆಯಲ್ಲೇ ಒಂದು ಮಹತ್ವದ ಬೆಳವಣಿಗೆ, ಈ
ಸಂಕಲನದಲ್ಲಿಯೇ, ತನ್ನ ವಸ್ತು ಮತ್ತು ನಿರ್ವಹಣೆಯಿಂದ ಇದು ಪ್ರತ್ಯೇಕವಾಗಿದ್ದು
ಗಮನಾರ್ಹವಾಗಿದೆ.
{{gap}}ಯಾವುದೇ ಜಾನಪದ ಪ್ರಕಾರದಲ್ಲಿ ಪಠ್ಯ ಮತ್ತು ಅದರ ಬಳಕೆಯ ಸಂದರ್ಭವನ್ನು ಹೊಂದಿಕೊಂಡು ಅರ್ಥಗಳು ಬದಲಾಗುತ್ತವೆ. ಇಲ್ಲಿ ಅರ್ಥಗಳು ನಿರ್ದಿಷ್ಟ ಸಂದರ್ಭಗಳ ಮೂಲಕ ನಮಗೆ ಸಂವಹನವಾಗುತ್ತದೆ. 'ಅರ್ಥ'ವೆಂದರೆ ಅನ್ವೇಷಿಸುವ ಒಂದು ವಸ್ತುವಲ್ಲ;
ಅದೊಂದು ಪ್ರಕ್ರಿಯೆ. ಅದು, ಒಂದು ಸನ್ನಿವೇಶ ಮತ್ತು ಅದರಿಂದ ಅನುಭವವನ್ನು
ಪಡೆಯುವ ವ್ಯಕ್ತಿಗಳ ನಡುವಿನ ಒಂದು ಪರಿವರ್ತನಶೀಲ ಸಂಬಂಧ. ಪಠ್ಯದಲ್ಲಿ
ಸಂಭವಿಸುವ ಬದಲಾವಣೆಗಳು, ಅರ್ಥದ ಬದಲಾವಣೆಗಳೊಂದಿಗೆ ಸಂಬಂಧ
ಪಟ್ಟಿರುತ್ತವೆ. ಕೆಲವೊಮ್ಮೆ ಪಠ್ಯದಲ್ಲಿಲ್ಲದ ಅರ್ಥಗಳು ಪ್ರದರ್ಶನದಲ್ಲಿ ಆಂಗಿಕ ಅಭಿನಯ
ಮತ್ತು ಮಾತಿನ ಏರಿಳಿತಗಳ ಮೂಲಕ ಪ್ರಕಟವಾಗಬಹುದು. ಈ ದೃಷ್ಟಿಯಿಂದ
'ಶರಸೇತು ಬಂಧನ' ಪ್ರಸಂಗವನ್ನು ಕುರಿತ ವಿಶ್ಲೇಷಣೆ ತಾಳಮದ್ದಲೆಯ ರಚನೆಯನ್ನು
ಕುರಿತು ಮಾಡಿದ ಬಹಳ ಮುಖ್ಯವಾದ ಒಂದು ಸಂಶೋಧನೆ. ಮುಂದಿನ ದಿನಗಳಲ್ಲಿ
ತಾಳಮದ್ದಳೆಗಳನ್ನು ಈ ದೃಷ್ಟಿಯಿಂದ ಅರ್ಥಮಾಡಿಕೊಂಡರೆ ಮತ್ತು ಅಧ್ಯಯನ
ಮಾಡಿದರೆ ಈ ವಿಶಿಷ್ಟ ರಂಗಭೂಮಿಯು ಸಾಧ್ಯತೆಗಳನ್ನು ಹಿಗ್ಗಿಸಬಹುದು.
{{gap}}ಮುಳಿಯ ತಿಮ್ಮಪ್ಪಯ್ಯನವರ ಅಪ್ರಕಟಿತ ಯಕ್ಷಗಾನ ಪ್ರಸಂಗ 'ಸೂರ್ಯಕಾಂತಿ
{{rh|center= ಜಾಗರದ ಜೋಶಿ / 76}}<noinclude></noinclude>
rde9eba46cbe41wd5gv9bqdh27ajq2j
ಪುಟ:ಜಾಗರದ ಜೋಶಿ.pdf/೧೩೦
104
99301
320900
277940
2026-05-19T17:29:36Z
Pragathi. BH
7585
/* Validated */
320900
proofread-page
text/x-wiki
<noinclude><pagequality level="4" user="Pragathi. BH" /></noinclude>{{gap}}ಭಾರತೀಯ ದರ್ಶನ ಶಾಸ್ತ್ರವನ್ನು ಅದರ ಗಹನತೆಯನ್ನು ಬಿಡದೆ, ಸರಳವಾಗಿ ನಿರೂಪಿಸಿದ ಡಾ.ಜೋಶಿ ಮತ್ತು ಪ್ರೊ.ಎಂ.ಎ.ಹೆಗಡೆಯವರ ಬರಹಗಳ ರೀತಿ ವಿಶಿಷ್ಟವಾದುದು.
{{Right|'''- ಎ. ಈಶ್ವರಯ್ಯ'''}}
{{Right|(ಭಾರತೀಯ ತತ್ವಶಾಸ್ತ್ರ ಗ್ರಂಥದಲ್ಲಿ)}}
{{gap}}ಅಧ್ಯಾಪನ, ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಒಲವು, ಅಭಿಮಾನ, ವಿದ್ವತ್ತು ವ್ಯಕ್ತಿತ್ವ, ವಿವಿಧ ಅಭಿರುಚಿಗಳು, ಸರಳತೆಗಳಲ್ಲಿ ಜೋಶಿಯವರು ಓರ್ವ ಅಸಾಮಾನ್ಯ ಮಾದರಿ ವ್ಯಕ್ತಿ.
{{Right|'''ಪ್ರಾ.ಶ್ರೀಮತಿ ಸುಶೀಲಾ ಆರ್.ರಾವ್'''}}
{{Right|ಸಹೋದ್ಯೋಗಿ, ಲೇಖಕಿ}}
{{Right|ಉಡುಪಿ}}
{{gap}}... ಯಾವ ವಿಚಾರವನ್ನಾದರೂ ಒಂದೇ ಮಗ್ಗುಲಿನಿಂದ ನೋಡುವವರಲ್ಲ.ಒಳ್ಳೆಯ ವಿಚಾರದ ಕೆಟ್ಟ ಮುಖಗಳನ್ನೂ, ಕೆಟ್ಟ ವಿಚಾರದ ಮುಖಗಳನ್ನೂ ನಿರ್ಲಿಪ್ತವಾಗಿ ನೋಡಬಲ್ಲರು. ಎಷ್ಟೇ ಕೆಟ್ಟ ಕಲಾವಿದನಾದರೂ ಅವರಿಗೆ ಅಲ್ಲೊಂದು ಒಳ್ಳೆಯ ಅಂಶ ಕಾಣಸಿಗುತ್ತದೆ. ದೊಡ್ಡ ಕಲಾವಿದರ ದೌರ್ಬಲ್ಯಗಳೂ ಅವರಿಗೆ ತಿಳಿದಿದೆ. ಕಲಾವಿದನಾಗಿ ಅವರದು ಕಣ್ಣಿಗೆ ಕಟ್ಟುವ ಪಾತ್ರ ಚಿತ್ರಣವಲ್ಲ. ಆದರೂ ತೀಕ್ಷವಾದ ವೈಚಾರಿಕತೆ,ಪಾತ್ರದ ಒಳನೋಟ, ಹಾಸ್ಯಮಯ ಅಭಿವ್ಯಕ್ತಿಯಿಂದ ಅವರು ಎಲ್ಲರನ್ನೂ ಸೆಳೆಯುತ್ತಾರೆ.ಮತ್ತೆ ಮತ್ತೆ ಬೇಕೆನಿಸುತ್ತಾರೆ.
{{gap}}ಅವರ ಭಾಷಾ ಜ್ಞಾನದ ಹರಹೂ ದೊಡ್ಡದೆ. ಕನ್ನಡ, ತುಳು, ಕೊಂಕಣಿ, ಹಿಂದಿ,ಇಂಗ್ಲಿಷ್, ಸಂಸ್ಕೃತ, ಮರಾಠಿ ಮುಂತಾದ ಭಾಷೆಗಳಲ್ಲದೆ ಉಪಭಾಷೆಗಳಾದ ಹವ್ಯಕ,ಶಿವಳ್ಳಿ, ಚಿತ್ಪಾವನಿ ಮೊದಲಾದ ಉಪಭಾಷೆಗಳಲ್ಲೂ ನಿರಾಯಾಸವಾಗಿ ವ್ಯವಹರಿಸಬಲ್ಲರು.ಅವುಗಳ ಒಂದೊಂದು ಶಬ್ದ, ವ್ಯುತ್ಪತ್ತಿ, ಬೇರೆ ಭಾಷೆಗಳಲ್ಲಿ ಅವುಗಳಿಗೆ ಸಂವಾದಿ ಶಬ್ದಗಳು, ಅವುಗಳು ಹುಟ್ಟಿದ ಬಗೆ ಇತ್ಯಾದಿ ಎಲ್ಲವೂ ಅವರ ಚಿಂತನೆಗೆ ವಸ್ತುಗಳೆ,ಅವರು ಶೀಘ್ರಕೋಪಿಗಳಾದರೂ ದೀರ್ಘಕೋಪಿಗಳಲ್ಲ. ಹಿರಿಯರಾದ ಶೇಣಿಯವರಿಂದ
ಹಿಡಿದು ಹಲವು ಹಿರಿಕಿರಿಯರ ಜೊತೆಗೂ ಜಗಳವಾಡಿದ್ದಾರೆ. ಆದರೆ ಯಾರೊಂದಿಗೂ ಮುನಿಸು ಇರಿಸಿಕೊಂಡವರಲ್ಲ...
{{Right|'''-ವೆಂಕಟರಾಮ ಭಟ್ಟ, ಸುಳ್ಯ'''}}
{{Right|ಪ್ರಾಚಾರ್ಯರು, ಪ್ರತಿಭಾ ವಿದ್ಯಾಲಯ}}
{{Right|ಶ್ರೀರಾಮ ಪೇಟೆ, ಸುಳ್ಯ - 574239}}
{{center|ಜಾಗರದ ಜೋಶಿ / 123}}<noinclude></noinclude>
qtnu9x7nlpm0pinozy6m3x4cfme11kd
ಪುಟ:ಜಾಗರದ ಜೋಶಿ.pdf/೫೯
104
99303
320916
277897
2026-05-19T17:40:40Z
Pragathi. BH
7585
/* Validated */
320916
proofread-page
text/x-wiki
<noinclude><pagequality level="4" user="Pragathi. BH" /></noinclude>
{{center|'''ಅತ್ರಿ ಬುಕ್ ಸೆಂಟರ್'''}}
ಮುಖಪುಟ ಪರಿಚಯ ಪುಸ್ತಕವಿಭಾಗ ನಕ್ಷಾಸಂಗ್ರಹ ಚಿತ್ರಪುಟ
ಧ್ವನಿಯಲೋಕ
'''ಫೇಸ್ಬುಕ್ನಲ್ಲಿ ನಾವು'''
{{{{Left|Css image crop
|Image = ಜಾಗರದ_ಜೋಶಿ.pdf
|Page = 59
|bSize = 386
|cWidth = 26
|cHeight = 32
|oTop = 122
|oLeft = 117
|Location = center
|Description =
}}}}
Athree...
Like Page
ಅಮೇರಿಕಾದಿಂದ ಪ್ರಭಾಕರ ಜೋಶಿ ಬರೆಯುತ್ತಾರೆ
ಜಿ.ಎನ್. ಅಶೋಕವರ್ಧನ
ನಾಗರಪಂಚಮಿಯಂದು ಪಣಂಬೂರಿನ ನಂದನೇಶ್ವರ ದೇವಳದ
ತಾಳಮದ್ದಳೆಗೆ ಹೋಗಿದ್ದೆ. ಅಲ್ಲಿನ ರಂಗಸ್ಥಳದ ಬೆಂಬರಹ ಪ್ರಭಾಕರ
ಜೋಶಿಯವರನ್ನು ಮೊದಲು ಕಾಣಿಸಿತ್ತು. ಆದರೆ ಸಂಘಟಕರು
ಸ್ವಾಗತದಲ್ಲೇ ಜೋಶಿಯವರ ಅನಿವಾರ್ಯ ಗೈರುಹಾಜರಿಯನ್ನು
ಘೋಷಿಸಿದಾಗ, ತಿಂಗಳ ಹಿಂದೆ ಅವರು ಹೇಳಿದ್ದು ನೆನಪಾಯ್ತು
“ಕಡೆಗೂ ನಾನು ಅಮೇರಿಕಾಕ್ಕೆ ಒಮ್ಮೆ ಹೋಗಿಬರುವುದೆಂದು ನಿಘಂಟು
ಮಾಡಿದೆ ಮಾರಾಯ್ತಿ!” ಜೋಶಿಯವರ ಇಬ್ಬರೂ ಮಗಳಂದಿರು
ಅಮೇರಿಕಾ ವಾಸಿಗಳು, ಸುಚೇತಾ ಜೋಶಿಯವರು (ಶ್ರೀಮತಿ ಪ್ರಭಾಕರ
ಜೋಶಿ) ತನ್ನ ಅಧ್ಯಾಪಕ ವೃತ್ತಿಯ ನಡುವೆಯೂ ಮಗಳಂದಿರ
ಬಾಣಂತನ ಸುಧಾರಿಸಲು ಒಂಟಿಯಾಗಿ ಅಮೇರಿಕಾಕ್ಕೆ ಹೋಗಿ
ಬರುವುದನ್ನು ರೂಢಿಸಿಕೊಂಡು ಕೆಲವು ವರ್ಷಗಳೇ ಸಂದಿವೆ. ಆದರೆ
ಪ್ರಭಾಕರ ಜೋಶಿ ತನ್ನ ಯಕ್ಷಗಾನ ಕೇಂದ್ರಿತ ಬಹುಮುಖೀ ಚಟುವಟಿಕೆ
ಯನ್ನು ಬದಿಗೊತ್ತಿ ಇದುವರೆಗೂ ವಿದೇಶಯಾನ ಬಯಸಿರಲಿಲ್ಲ.
66
...
{{gap}}ಮೊನ್ನೆ ಶುಕ್ರವಾರದ ನನ್ನ ಜಾಲತಾಣದ ಸೈಕಲ್ ಲೇಖನಕ್ಕೆ
ಜೋಶಿಯವರ ಚುಟುಕು ಪ್ರತಿಕ್ರಿಯೆ ಬಂತು. ಅದಕ್ಕೆ ನಾನು ವೈಯಕ್ತಿಕ
ಪತ್ರ ಬರೆಯುತ್ತಾ ಒಂದು ಯೋಚನೆಯನ್ನು ಹೀಗೆ ವಿಸ್ತರಿಸಿದೆ:
ನೀವು ಅಮೇರಿಕಾ ತಲಪಿಯಾಯ್ತು ಎಂದು ಭಾವಿಸುತ್ತೇನೆ... ನೀವು
ಅಲ್ಲಿನ ಸಾಂಸ್ಕೃತಿಕ ಕಲಾಪಗಳಲ್ಲಿ ತೊಡಗಿಕೊಂಡಾಗ, ವಿವರಣಾತ್ಮಕ
ಟಿಪ್ಪಣಿಗಳನ್ನು ಹೀಗೇ ಮಿಂಚಂಚೆ ಮೂಲಕ ಕಳಿಸುತ್ತಿದ್ದರೆ ನಾನಿಲ್ಲಿ
ಸಾರ್ವಜನಿಕಗೊಳಿಸಬಲ್ಲೆ”. ಇದನ್ನು ಒಪ್ಪಿಕೊಂಡು ಅವರು ಮೊದಲು
ಜಾಗರದ ಜೋಶಿ | 52<noinclude></noinclude>
o85ngi10xgzsb8nxffuexulk60oq4k4
ಪುಟ:ಜಾಗರದ ಜೋಶಿ.pdf/೮೪
104
99306
320988
277886
2026-05-20T02:55:51Z
Shreelatha.Halemane
7642
/* Validated */
320988
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಕಲ್ಯಾಣ'ವನ್ನು ಪರಿಚಯ ಮಾಡಿಕೊಡುವುದರ ಜೊತೆಗೆ ತಿಮ್ಮಪ್ಪಯ್ಯನವರ ಯಕ್ಷಗಾನ
ಸಂಶೋಧನೆಯ ಸ್ವರೂಪವನ್ನು 'ಮುಳಿಯರ ಪಾರ್ತಿಸುಬ್ಬ ಮತ್ತು ಸೂರ್ಯಕಾಂತಿ
ಕಲ್ಯಾಣ' ಲೇಖನದಲ್ಲಿ ವಿವರಿಸಲಾಗಿದೆ.
{{gap}}'ಅರ್ಥಗಾರಿಕೆ - ಪರಂಪರೆ, ಪ್ರಯೋಗ' ಈ ಲೇಖನವು ಈಗಾಗಲೇ ನಾನು
ಉಲ್ಲೇಖಿಸಿದ 'ಶರಸೇತು ಬಂಧನ' ಲೇಖನದ, ತಾತ್ವಿಕ ತಳಹದಿಯಾಗಿರುವ ಒಂದು
ಆಶಯ ಪ್ರಬಂಧ, ಪಠ್ಯ, ಸಂದರ್ಭ, ಪ್ರದರ್ಶನ ಮತ್ತು ಪ್ರೇಕ್ಷಕವರ್ಗ ಈ ಸಂಬಂಧಗಳ
ದೃಷ್ಟಿಯಿಂದ, ಯಕ್ಷಗಾನ ಪ್ರಸಂಗಗಳ ಪುರಾಣದ ಘಟನೆಗಳಿಗೆ ಹೊಸ ಅರ್ಥಗಳು
ಪ್ರಾಪ್ತವಾಗುವ ಬಗೆಗಳನ್ನು ವಿವೇಚಿಸಲಾಗಿದೆ.
{{gap}}ಯಕ್ಷಗಾನ ರಂಗಭೂಮಿಯ ಬೆಳವಣಿಗೆಗಳನ್ನು ಚರ್ಚಿಸುವವರೆಲ್ಲ ಸಾಮಾನ್ಯವಾಗಿ
ವೃತ್ತಿಮೇಳಗಳನ್ನು ಮಾತ್ರ ಗಮನಿಸುತ್ತಾರೆ. ಆದರೆ ಕರಾವಳಿಯಲ್ಲಿ ಹವ್ಯಾಸಿ ಮೇಳಗಳು
ಕೂಡಾ ಯಕ್ಷಗಾನದ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿವೆ. ಹವ್ಯಾಸಿಗಳ
ಭಿನ್ನ ಬಗೆಗಳನ್ನು ನಿದರ್ಶನಗಳೊಂದಿಗೆ ಹೇಳುವುದರ ಜತೆಗೆಯೇ ಅವರ ಸಮಸ್ಯೆಗಳನ್ನು
ವಿವರವಾಗಿ ಇಲ್ಲಿ ಪಟ್ಟಿ ಮಾಡಲಾಗಿದೆ. ಇವು ಆರ್ಥಿಕ, ಸಂಘಟನಾತ್ಮಕ ಮತ್ತು ಕಲಾ
ಸಂಬಂಧಿ ಸಮಸ್ಯೆಗಳು, ಈ ಸಮಸ್ಯೆಗಳ ನಿವಾರಣೆಗೆ ಏನು ಕಾರ್ಯಕ್ರಮಗಳನ್ನು
ಕೈಗೊಳ್ಳಬಹುದೆಂಬ ಕೆಲವು ನಿರ್ದಿಷ್ಟ ಮೌಖಿಕ ಸೂಚನೆಗಳು ಪ್ರಾಯೋಗಿಕ
ಮಹತ್ವವುಳ್ಳವುಗಳಾಗಿವೆ.
{{gap}}'ಸೃಜನಶೀಲತೆಯ ಸಂದರ್ಭ' ಲೇಖನವು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಕೆಲವು
ಅಭಿಪ್ರಾಯವನ್ನು ಕೊಡುತ್ತದೆ. ಆದರೆ ಇಂತಹ ಅಭಿಪ್ರಾಯಗಳು ಒಂದು ತಾತ್ವಿಕ
ಸ್ವರೂಪವನ್ನು ಇಲ್ಲಿ ಪಡೆದಿಲ್ಲ. ಇದೇ ವಿಷಯವನ್ನು ಎತ್ತಿಕೊಂಡು, ಅನುಕರಣ
ತತ್ವದ ಮಿತಿಗಳನ್ನು ಚರ್ಚಿಸಿ ಯಕ್ಷಗಾನವನ್ನು ಅಧ್ಯಯನ ಮಾಡಬಹುದು. ಏಕೆಂದರೆ
ಅನುಕರಣ, ಅನುಸರಣ, ಸೃಜನಶೀಲತೆ ಇವು ರೂಢಿಯಲ್ಲಿ ಬಳಕೆಯಾಗುತ್ತಿರುವುದು
ತೀರ ಸರಳ ಅರ್ಥಗಳಲ್ಲಿ ಮಾತ್ರ.
{{gap}}ಯಕ್ಷಗಾನ ಸಂಬಂಧಿಯಾದ ಕೆಲವು ಸಂಶೋಧನ ಟಿಪ್ಪಣಿಗಳು ಮತ್ತು ಮಾಹಿತಿಗಳು ಉಪಯುಕ್ತವಾಗಿವೆ. ಅನೇಕ ಹೊಸ ಮಾಹಿತಿಗಳ ಸಂಗ್ರಹ ಇಲ್ಲಿ ದೊರೆಯುತ್ತವೆ. ಯಕ್ಷಗಾನವನ್ನು ಕುರಿತು 'ವಿಷಯ ಮಾಹಿತಿ ಕೋಶ'ವನ್ನು ಸಿದ್ಧಪಡಿಸುವ ಅವಶ್ಯಕತೆ ಇದೆ. ಈ ಕೆಲಸವನ್ನು ಜೋಶಿಯವರು ಮಾಡಬೇಕು ಎನ್ನುವುದು ನನ್ನ ಅಪೇಕ್ಷೆ. ನಮ್ಮ ಅನೇಕ ಸಂಶೋಧನೆಗಳು ಸಮರ್ಪಕವಾದ ಮಾಹಿತಿಗಳ ಕೊರತೆಯಿಂದ ತಪ್ಪು ದಾರಿಗಳಲ್ಲಿ ಚಲಿಸುತ್ತವೆ. ಈ ಕಾರಣಕ್ಕಾಗಿಯೂ ಇಂತಹ ಕೋಶ ತೀರಾ ಅಗತ್ಯವಾಗಿದೆ.
{{gap}} ಪ್ರಭಾಕರ ಜೋಶಿಯವರ 'ಮಾರುಮಾಲೆ'ಗೆ ಮುನ್ನುಡಿಯ ರೂಪದಲ್ಲಿ ಈ
ಕೆಲವು ಅಭಿಪ್ರಾಯಗಳನ್ನು ಹೇಳುವುದು ನನಗೆ ಸಂತೋಷದ ಸಂಗತಿ, ಜೋಶಿಯವರ
ಗ್ರಂಥಕ್ಕೆ ಮುನ್ನುಡಿಯನ್ನು ಬರೆದಿರುವುದಕ್ಕೆ ನನ್ನ ಬಗೆಗಿನ ಅವರ ಪ್ರೀತಿ ವಿಶ್ವಾಸಗಳೇ
{{rh|center=ಜಾಗರದ ಜೋಶಿ / 77 }}<noinclude></noinclude>
1e09kteuo4q6nef7afovpktohx48zsr
ಪುಟ:ಜಾಗರದ ಜೋಶಿ.pdf/೧೩೨
104
99307
320902
277685
2026-05-19T17:30:13Z
Pragathi. BH
7585
/* Validated */
320902
proofread-page
text/x-wiki
<noinclude><pagequality level="4" user="Pragathi. BH" /></noinclude>{{gap}}ಕೇಳಿಸಬೇಕೆಂಬಂಥ ಮಾತುಗಾರ, ಪಂಥಗಳ ಹಂಗಿಲ್ಲದ, ಯಾವ ದಾಕ್ಷಿಣ್ಯಕ್ಕೂ ಬಗ್ಗದ ಸಂಶೋಧಕ, ವಸ್ತುನಿಷ್ಠ ಚಿಂತಕ - ಎಲ್ಲಕ್ಕೂ ಮಿಗಿಲಾಗಿ ಮಗು ಮನಸ್ಸಿನ ಸ್ನೇಹಜೀವಿ.ಡಾ.ಜೋಶಿಯವರ ಬದುಕಿನ ಕತೆಯೆಂದರೆ ಅದು ಯಕ್ಷಗಾನದ ಆರೇಳು ದಶಕಗಳ ಚರಿತ್ರೆಯೂ ಹೌದು. ಒಂದು ಕಾಲದ ತಾಳಮದ್ದಳೆ ಲೋಕದ ಇತಿಹಾಸವೂ ಹೌದು...
{{right|-'''ಚಂದ್ರಶೇಖರ ಮಂಡೆಕೋಲು'''}}
{{right|(ಕಾಂತಾವರದ 'ನಾಡಿಗೆ ನಮಸ್ಕಾರ' ಮಾಲಿಕೆ ಕೃತಿಯಲ್ಲಿ)}}
{{gap}]ಯಕ್ಷಗಾನಕ್ಕೊಬ್ಬನೇ ಜೋಶಿ, ವ್ಯಕ್ತಿತ್ವ, ಪಾಂಡಿತ್ಯ, ಕೇಳಿದಾಗಲೆಲ್ಲಾ ಸಹಕಾರ,ಅರ್ಥಗಾರಿಕೆಯ ಸೊಗಸು, ವ್ಯಕ್ತಿತ್ವ, ಸ್ನೇಹಶೀಲತೆ ಎಲ್ಲದರಲ್ಲೂ ಜೋಶಿ.
{{right|***'''ಉಜಿರೆ ಅಶೋಕ ಭಟ್ ಎನ್.'''}}
{{right|(ಭಾಷಣವೊಂದರಲ್ಲಿ)}}
{{gap}}... ಎದುರಾಳಿ ಯಾವುದೇ ವಾದ, ವಿವಾದ ಮಾಡಿದರೂ, ಜೋಶಿಯವರ ಬತ್ತಳಿಕೆಯಿಂದ ಕೂಡಲೇ ಉತ್ತರ ಬರುತ್ತದೆ. ಅದೂ ಸಕಾರಣ, ಸಾಧಾರವಾಗಿ,ನಗುನಗುತ್ತಾ ಅರ್ಥ ಹೇಳುವ ಡಾ.ಜೊಶಿಯವರು, ಎದುರು ಅರ್ಥದಾರಿಗಳು ಅಬದ್ಧ ಮಂಡನೆ, ಕುತರ್ಕ, ಪ್ರಸಂಗ ಮೀರಿದ ವಾದ ಮಾಡಿದರೆ, ಅಲ್ಲೇ ಅವರನ್ನು ತಿದ್ದುವ ಶೈಲಿ ಅನುಕರಣೀಯ. ಇವರ ಅರ್ಥದಲ್ಲಿ ನವರಸಗಳ ಪ್ರಸ್ತುತಿಯಿದ್ದರೂ, ಹಾಸ್ಯರಸವೇ ಪ್ರೇಕ್ಷಕರನ್ನು ಅಪಾರವಾಗಿ ರಂಜಿಸುವುದು.. ಪ್ರಸಂಗದಲ್ಲಿ ಬರುವ ಎಲ್ಲಾ ಕಲಾವಿದರಿಗೂ ಅವಕಾಶ ದೊರಕಬೇಕು ಎಂಬ ಆಶಯ, ಕಾಳಜಿ, ಸಂಘಟಕರಿಗೂ, ತಪ್ಪಿದರೆ, ಕೂಡಲೇ ತಿಳಿಸುವುದು ಅವರ ಕ್ರಮ....
{{right|-''' ಎಂ. ಶಾಂತಾರಾಮ ಕುಡ್ವ, ಮೂಡುಬಿದಿರೆ'''}}
{{gap}}“ಡಾ.ಪ್ರಭಾಕರ ಜೋಶಿಯವರು ಯಕ್ಷಗಾನ ವಿದ್ವಾಂಸ, ತಾಳಮದ್ದಳೆ ಅರ್ಥಧಾರಿ, ಯಕ್ಷಗಾನ ಲೇಖಕ-ವಿಮರ್ಶಕ” ಎಂದು ಅವರನ್ನು ಯಕ್ಷಗಾನಕ್ಕೆ ಸೀಮಿತಗೊಳಿಸುವುದು, ಅವರನ್ನು ಸರಿಯಾಗಿ ತಿಳಿದಂತಲ್ಲ. ಅವರು ರಂಗಭೂಮಿಯ ವಿವಿಧ ಪ್ರಕಾರಗಳನ್ನು
ಅಧ್ಯಯನ ಮಾಡಿದವರು. ಸಾಹಿತ್ಯದ ವಿವಿಧ ಮಜಲುಗಳನ್ನು ಸ್ಪರ್ಶಿಸಿದವರು. ಅಷ್ಟೇ ಅಲ್ಲದೇ ಆಂಗ್ಲಸಾಹಿತ್ಯವನ್ನೂ ಓದಿಕೊಂಡವರು. ಆದ್ದರಿಂದಲೇ ಅವರು ಯಕ್ಷಗಾನದ ಬಗೆಗೆ ಅಧಿಕೃತವಾಗಿ ಮಾತಾಡಬಲ್ಲವರು, ಬರೆಯಬಲ್ಲವರು, ವಿಮರ್ಶಿಸಬಲ್ಲವರು.
{{gap}}ಐವತ್ತಕ್ಕೂ ಹೆಚ್ಚು ವರ್ಷಗಳಿಂದ 'ದೇರಾಜೆಯವರ' ಮನೆಯ ಆತ್ಮೀಯ ಸದಸ್ಯರು.ಡಾ.ಜೋಶಿಯವರ ಕುರಿತು, ಐವತ್ತು ವರ್ಷ ಹಿಂದೆಯೇ ನನ್ನ ತೀರ್ಥರೂಪರಾದ ದೇರಾಜೆ ಸೀತಾರಾಮಯ್ಯನವರು ಮೆಚ್ಚುಗೆಯಿಂದ...
{{gap}}“ಜೋಶಿಯ ತಲೆಯೆಂಬ ಕಾರ್ಖಾನೆ ಬಹಳ ವಿಶೇಷದ್ದು, ಯಕ್ಷಗಾನ ಕ್ಷೇತ್ರದಲ್ಲೇ
{{center|}}ಜಾಗರದ ಜೋಶಿ/125<noinclude></noinclude>
hazy75grmclmt8r8k3h2zd2rb6kodna
ಪುಟ:ಜಾಗರದ ಜೋಶಿ.pdf/೪೪
104
99310
320906
278052
2026-05-19T17:35:04Z
Pragathi. BH
7585
/* Validated */
320906
proofread-page
text/x-wiki
<noinclude><pagequality level="4" user="Pragathi. BH" /></noinclude>ಕೆನಡಾ, ಅಮೇರಿಕಾದಂತಹ ವಿದೇಶ ನೆಲದಲ್ಲಿ ದುಡಿಯುವ ಕೈಗಳಿಗೆ ಉಣ್ಣಲು ಪುರುಸೊತ್ತಿಲ್ಲ! ಉದ್ಯೋಗದ ಧಾವಂತದಲ್ಲಿ ಇಂತಹ ಆಸಕ್ತಿಗಳಿಗೆ ಸಮಯವನ್ನು ಹೊಂದಿಸುವುದು ದೊಡ್ಡ ಸವಾಲಿನ ಕೆಲಸ.<br>
{{gap}}“ನಮ್ಮಲ್ಲಿಗೆ ತಾಳಮದ್ದಳೆ ತಂಡವನ್ನು ತನ್ನಿ” ಎನ್ನುವ ಬೇಡಿಕೆಯನ್ನು ಜೋಶಿಯವರಲ್ಲಿ ಮುಂದಿಟ್ಟರಂತೆ. “ಇಲ್ಲಿಂದ ಒಯ್ಯುವುದು ದೊಡ್ಡದಲ್ಲ. ಆದರೆ ಅವರನ್ನು ತಯಾರು ಮಾಡಿ, ಅವರಿಂದಲೇ ಪ್ರದರ್ಶನ, ತಾಳಮದ್ದಳೆ ಏರ್ಪಡಿಸುವುದರಿಂದ ಕಲೆಯ ವಿಸ್ತರಣೆ ಸಾಧ್ಯ” ಎನ್ನುತ್ತಾರೆ. ಸಾಂಸ್ಕೃತಿಕ ಮುಂದುವರಿಕೆ ವಿದೇಶಿ ನೆಲದಲ್ಲೂ ಆಗುತ್ತಾ ಇರುವುದು ಶ್ಲಾಘ್ಯ, ಸಣ್ಣ ಮಕ್ಕಳೂ ಯಕ್ಷಗಾನವನ್ನು ಆಸಕ್ತಿಯಿಂದ ನೋಡುತ್ತಾರೆ.<br>
{{gap}}'ವಾಲಿ ವಧೆ' ಪ್ರದರ್ಶನಕ್ಕೆ ಮುನ್ನ 'ಮೌಲ್ಯವರ್ಧನಾ ಶಿಬಿರ' ಜರುಗಿತ್ತು. ವೇಷಗಳ ಪ್ರವೇಶ, ರಂಗಚಲನೆ, ವಾಲಿಯನ್ನು ತಾರೆ ತಡೆಯುವ ರೀತಿ, ಯುದ್ಧಗಳು,ಕೊರಿಯೋಗ್ರಫಿಯ ಬಳಕೆ, ಅರ್ಥಗಾರಿಕೆಯ ಪ್ರಸ್ತುತಿ... ಇವೇ ಮೊದಲಾದ ಮೂಲಭೂತ
ಅಂಶಗಳ ಹೂರಣವನ್ನಿಟ್ಟುಕೊಂಡ ಕಾರ್ಯಸೂಚಿ. “ಈ ರೀತಿಯ ಸಮಾಲೋಚನೆಗಳು ಪ್ರದರ್ಶನದ ಯಶಕ್ಕೆ ಸಹಕಾರಿ. ನಮ್ಮಲ್ಲೂ ಇಂತಹ ಮನಃಸ್ಥಿತಿಗಳನ್ನು ರೂಪಿಸಿಕೊಳ್ಳಲೇಬೇಕಾಗಿದೆ,” ಎನ್ನುವ ಆಗ್ರಹ ಜೋಶಿಯವರದು.<br>
{{gap}}ವಿನಾಯಕ ಹೆಗಡೆ, ಪರಮ್ ಭಟ್, ರಘು ಕಟ್ಟಿನಕೆರೆ, ನವೀನ್ ಹೆಗಡೆ, ಶ್ರೀಕಾಂತ ಹೆಗಡೆ, ನಾಗಭೂಷಣ ಮಧ್ಯಸ್ಥ, ಉದಯ ಶಾಸ್ತ್ರಿ, ವಿಷ್ಣು ಭಟ್-ಟೊರೆಂಟೋ ಮೇಳದ ಸಾರಥಿಗಳು, ಕಲ್ಲಭಾಗ್ ವಿನಾಯಕ್ ಹೆಗಡೆ, ರಘು ಕಟ್ಟಿನಕೆರೆ – ಭಾಗವತರು.
ಎಲ್ಲರೂ ಕನ್ನಾಡಿನವರೇ. ದೂರದಲ್ಲಿದ್ದರೂ ಯಕ್ಷಗಾನದ ಆಸಕ್ತಿಯನ್ನು ಬಿಡದೆ ತಂಡ ಕಟ್ಟಿರುವುದು ಇತರರಗೆ ಸ್ಫೂರ್ತಿ.<br>
{{gap}}“ಇನ್ನೊಮ್ಮೆ ಕೆನಡಾಕ್ಕೆ ಹೋಗುವ ಅವಕಾಶ ಸಿಕ್ಕರೆ ಹೇಗೆ ಸಿದ್ಧತೆ ಮಾಡಿಕೊಳ್ಳುತೀರಿ?” ಎನ್ನುವ ಕೀಟಲೆ ಪ್ರಶ್ನೆಗೆ ಜೋಶಿಯವರ ಉತ್ತರ ನೋಡಿ, “ಎರಡೂವರೆ ಗಂಟೆ ತಾಳಮದ್ದಳೆಯನ್ನು ಹೇಗೆ ಕ್ರಿಸ್ಟ್ ಆಗಿ ಕೊಡಬಹುದು. ಅಲ್ಲಿನ ಕಲಾವಿದರನ್ನು ಹೇಗೆ ಜೋಡಿಸಬಹುದು ಎನ್ನುವ ಯೋಚನೆಯಿದೆ,” ಎಂದರು. ಕೆನಡಾದ ಆದಿವಾಸಿಗಳ ಕಥೆಯನ್ನು ಯಕ್ಷಗಾನಕ್ಕೆ ಅಳವಡಿಸುವ ದೊಡ್ಡ ಯೋಜನೆಯು ಯಕ್ಷಮಿತ್ರಕ್ಕಿದ್ದು ಜೋಶಿ ಬೆಂಬಲ ನೀಡಿದ್ದಾರೆ.<br>
{{gap}}ಕಡಲಾಚೆ ಹಾರಿದ ಜೋಶಿಯವರಿಗೆ ಯಕ್ಷಗಾನವನ್ನು ಮರೆತು ಕುಟುಂಬದೊಂದಿಗೆ ಹಾಯಾಗಿ ವಿಹರಿಸಬಹುದಿತ್ತು, ಆದರೆ ಅಲ್ಲಿನ ಅಭಿಮಾನಿಗಳು ಪ್ರೀತಿಯ ಹಗ್ಗದಿಂದ ಕಟ್ಟಿಬಿಟ್ಟರು. ಜೋಶಿಯವರೊಂದಿಗೆ ಮಾತನಾಡುತ್ತಾ ಇದ್ದಂತೆ ನನಗೆ ಅರಿವಾದುದು ಇಷ್ಟು - “ಪ್ರದರ್ಶನದ ಪೂರ್ವಭಾವಿಯಾಗಿ ಸಮಾಲೋಚನೆ ಮಾಡಿಕೊಂಡರೆ ಉತ್ತಮವಾದ ಪ್ರದರ್ಶನವನ್ನು ಯಕ್ಷಗಾನೀಯವಾಗಿ ಕೊಡಬಹುದು. ನಮ್ಮಲ್ಲಿ ಯಾಕೆ
ಸಾಧ್ಯವಾಗುತ್ತಿಲ್ಲ?”<br>
{{rh|center='''(ಪ್ರಕಟ : ಪ್ರಜಾವಾಣಿಯ 'ದಧಿಗಿಣತೋ' ಅಂಕಣ / 2-9-2016)'''}}
{{rh|center=ಜಾಗರದ ಜೋಶಿ / 37}}<noinclude></noinclude>
8min6usrlxmg01x9pvqb55or0sghb5a
ಪುಟ:ಜಾಗರದ ಜೋಶಿ.pdf/೬೬
104
99313
320976
277917
2026-05-20T02:47:55Z
Shreelatha.Halemane
7642
/* Validated */
320976
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{larger|'''ಜೋಶಿಯವರ ಅಕ್ಷರಯಾನ'''}}<br/>
'''ಕೃಷ್ಣಪ್ರಕಾಶ ಉಳಿತ್ತಾಯ'''
'''ನಾಡು ಕಂಡ 'ವಿದ್ವಾಂಸ-ಡಾ. ಎಂ. ಪ್ರಭಾಕರ ಜೋಶಿ' ಅವರ ಕೆಲವು ಕೃತಿಗಳ ಪರಿಚಯಾತ್ಮಕ ಸೊಲ್ಲು ಇಲ್ಲಿದೆ.<br/>'''
'''ಯಕ್ಷಗಾನ ಸ್ಥಿತಿಗತಿ'''<br/>
{{gap}}ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ, ಯಕ್ಷಗಾನದ ಚಿಂತನಾ ಕ್ರಮಕ್ಕೆ ಹೊಸತೊಂದು ಆಯಾಮ ಕೊಟ್ಟವರು ಡಾ.ಪ್ರಭಾಕರ ಜೋಶಿಯವರು. ಇವರು ಯಕ್ಷಗಾನ ಕ್ಷೇತ್ರದ ಒಂದು ಗಟ್ಟಿ ಧ್ವನಿ. ಅವರ ಈಚೆಗಿನ ಕೃತಿ 'ಯಕ್ಷಗಾನ ಸ್ಥಿತಿಗತಿ'ಯ ಇಪ್ಪತ್ತೆರಡು ಬರಹ ಇದನ್ನು ಶ್ರುತಪಡಿಸುತ್ತದೆ. ವೇಷ ಕಟ್ಟುವುದರಿಂದ ಹಿಡಿದು ಚುಟ್ಟಿ ಇಡುವವರೆಗೆ; ಚಕ್ರತಾಳ ಹಿಡಿಯುವುದರಿಂದ ತೊಡಗಿ ಗಾನದ ವರೆಗಿನ ಮಾಹಿತಿ ತನ್ನೊಳಗು ಮಾಡಿಕೊಂಡು, ಯಕ್ಷಗಾನದ ಸರ್ವಂಕಷ ಅರಿವಿನೊಡನೆ ಅರಳಿನಿಂತ ಜೋಶಿಯವರು ಯಕ್ಷಗಾನ ಕ್ಷೇತ್ರದ ಬಹುದೊಡ್ಡ ಸೊತ್ತು. ಈ ಕೃತಿ ನಮ್ಮ ಆಲೋಚನೆಯನ್ನು ಹೆಚ್ಚು ಮಾಡುವಲ್ಲಿ ಸಂಶಯವಿಲ್ಲ. ಜೋಶಿಯವರು ವಿವಿಧ ಕಡೆಗಳಲ್ಲಿ ಮಾಡಿದ ಉಪನ್ಯಾಸ, ಲೇಖನಗಳ ಸಂಕಲನವೇ 'ಯಕ್ಷಗಾನ ಸ್ಥಿತಿ ಗತಿ' ಕೃತಿ. ಈ ಬರಹ ಗುಚ್ಚದ ಸ್ಕೂಲ ಅವಲೋಕನ.<br/>
{{gap}}'ರಂಗ ಭಾಷೆ' ಅದರ ಪ್ರಾಮುಖ್ಯತೆ. ಅದರ ಅರಿವು ಮತ್ತು ಅದು ಒಂದು ಕಲೆಯ ಅರ್ಥೈಸುವಿಕೆಯಲ್ಲಿ ಮಾಡುವ ಉಪಕಾರ ಇವುಗಳನ್ನೆಲ್ಲಾ ವ್ಯಾಖ್ಯಾನಿಸುತ್ತಾ ಗಂಭೀರವಾಗಿ ಯಕ್ಷಗಾನದ ರಂಗ ಭಾಷೆಯನ್ನು ಕುರಿತು ಪ್ರಥಮ ಅಧ್ಯಾಯದಲ್ಲಿ ಹೇಳುತ್ತಾರೆ. “ರಂಗದ ಒಂದು ಸರಳ ಪೀಠ(ರಥ)ವೇ ರಥ, ಪರ್ವತ, ದೇವಾಲಯ, ಆಕಾಶ ಎಲ್ಲವೂ ಆಗಬಹುದು. ಕಲೆಯ ಸಿರಿತನ ಹೊರತು ಬಡತನವಲ್ಲ. ಅದರ ಬದಲು ವಾಸ್ತವದ ಸೀನು ಸೀನರಿಗಳನ್ನು ತಂದರೆ ಅದು ವಿಕೃತಿ ಕಲಾಸ್ವಭಾವ ವಿರೋಧಿಯಾಗುತ್ತದೆ”.
{{center|'''ಜಾಗರದ ಜೋಶಿ / 59'''}}<noinclude></noinclude>
0no31nxzwdi4yoseejpil135ls2bjd8
ಪುಟ:ಜಾಗರದ ಜೋಶಿ.pdf/೫೨
104
99316
320911
278057
2026-05-19T17:37:45Z
Pragathi. BH
7585
/* Validated */
320911
proofread-page
text/x-wiki
<noinclude><pagequality level="4" user="Pragathi. BH" /></noinclude>ಮಿಶ್ರಣ ಬೆರೆತಾಗ (ಇದು ಭಾಷಣ, ಪ್ರವಚನಗಳಲ್ಲಿಯೂ ಧಾರಾಳವಾಗಿ ಅನುಭವಿಸಬಹುದು) ಅರ್ಥಗಾರಿಕೆ ಅಷ್ಟು ಸುಲಭವೇ ಅಂತ ಅನ್ನಿಸಿಬಿಡುತ್ತದೆ. ಪ್ರತಿಯೊಂದು ಪಾತ್ರ ಕಟ್ಟುವಾಗಲೂ ಯಕ್ಷಗಾನ ಕಲೆಯ ಬಗೆಗಿನ ಪ್ರಾಮಾಣಿಕ ಕಾಳಜಿ ಅನುಭವಕ್ಕೆ
ಬರುತ್ತದೆ. ಅದು ಕಿರಿಯ ಕಲಾವಿದರಿಗೆ ಸಹಕಾರಿ.<br />
{{gap}}ಸಮಗ್ರ ಯಕ್ಷಗಾನದ ವಿಚಾರಕ್ಕೆ ಬಂದರೆ, ಜೋಶಿಯವರು ಹಲವಾರು ವಾಘೆಯನ್ನು ಹಿಡಿದ ಸಾರಥಿಯಂತೆ ಕಂಡುಬರುತ್ತಾರೆ. ವಿಮರ್ಶಕ, ಬರಹಗಾರ, ಅಂಕಣಕಾರ,ಯಕ್ಷಗಾನದ ಪ್ರಾಮಾಣಿಕ ಚಿಂತಕ, ಸಣ್ಣ ಚಟುವಟಿಕೆಯನ್ನೂ ಸಹ ಬೆನ್ನು ತಟ್ಟುವ
ಪ್ರೇರಕ ಮನೋಭಾವ, ಹಾಗಾಗಿ ಇವರ ಪ್ರತಿಭೆಯನ್ನುಅರ್ಥಗಾರಿಕೆಗೆ ಮಾತ್ರ ಸೀಮಿತಗೊಳಿಸುವ ಹಾಗಿಲ್ಲ.ಪ್ರಾಧ್ಯಾಪಕರಾಗಿ ಅಧ್ಯಾಪನದ ಬಹಳಷ್ಟು ಗುಣಗಳು ಯಕ್ಷಗಾನದ ಉನ್ನತಿಗೂ ಸಹಕಾರಿಯಾಗಿದೆ. ಇವರು ಭಾಷಣಕ್ಕೆ ನಿಂತರೆ ನೆರೆದ ಸಭೆಯಲ್ಲಿ ಕಿವಿಗಳು ನೆಟ್ಟಗಾಗುತ್ತವೆ. ಅಂತಹ ಆಕರ್ಷಕ ಸರಳ ಶೈಲಿಯದು. ಯಕ್ಷಗಾನದ ಬಹಳಷ್ಟು ಕಲಾವಿದರಿಗೆ ಅಭಿನಂದನಾ ಭಾಷಣವನ್ನು ಮಾಡಿದ ದೊಡ್ಡ ಮನಸ್ಸು ಇವರದ್ದು.<br />
{{gap}}ಯಕ್ಷಗಾನದಲ್ಲಿ ಹಲವಾರು ಹವ್ಯಾಸಗಳನ್ನು ಹುಟ್ಟು ಹಾಕಿ ಬೆಳೆಸಿದವರು. ಸಂಶೋಧಕರಾಗಿ, ಲೇಖಕರಾಗಿ ಕಲೆಯ ಕೋನ ಕೊನವನ್ನು ಎಳೆದು, ಬರೆದು ತೋರಿಸಿದವರು. ತಾಳಮದ್ದಲೆಯ ಅರ್ಥಗಾರಿಕೆಗೆ ಪ್ರಸಿದ್ಧಿಯಾದರೂ ಗೆಜ್ಜೆ ಕಟ್ಟಿ ಕುಣಿದದ್ದನ್ನೂ ಕಂಡಿದ್ದೇನೆ, ಒಂದು ವಿದ್ಯಾಸಂಸ್ಥೆಯ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿ ಯಕ್ಷಗಾನದಂತಹ ಕಲೆಯಲ್ಲಿ ಇವರು ತಳೆದ ಆಸಕ್ತಿ ನಿಜಕ್ಕೂ ಯಕ್ಷಗಾನವು ವಿದ್ಯಾಸಂಪನ್ನರ ಕಲೆ ಎಂದು ಕರೆಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ<br />.
{{gap}}ಹಲವರು ಯಕ್ಷಗಾನದಲ್ಲಿ ತಮ್ಮ ಸಾಧನೆಯಿಂದ ಡಾಕ್ಟರೇಟ್' ಪಡೆದಿರಬಹುದು. ಇದೆಲ್ಲಕ್ಕಿಂತ ಭಿನ್ನವಾದ ಪದವಿ ಗ್ರಹಣ ಜೋಶಿಯವರದ್ದು, ಡಾಕ್ಟರೇಟ್ ಎಂಬ ಶಬ್ದಕ್ಕೆ ಹೆಚ್ಚು ಹತ್ತಿರವಾಗಬಲ್ಲ ಸೇವೆ ಇವರದ್ದು, ಯಕ್ಷಗಾನದ ವಿಷಯಕ್ಕೆ ಸಂಬಂಧಿಸಿದಂತೆ' ಯಕ್ಷಗಾನದ ಡಾಕ್ಟರ್' ಆಗಿಯೇ ಇವರ ಸೇವೆ ಪರಿಗಣಿಸಲ್ಪಡುತ್ತದೆ ಎನ್ನುವುದೇ ಸೂಕ್ತ. ಒಬ್ಬ ಸಮರ್ಥ ಡಾಕ್ಟರ್ ಅಥವಾ ವೈದ್ಯ ಅನ್ನಿಸಿಕೊಳ್ಳುವುದು ದೇಹದ ಒಳಗೆ ಹೊರಗೆ ತಿಳಿದುಕೊಂಡಾಗ, ಹಾಗಾಗಿ ಯಕ್ಷಗಾನದ ಒಳ-ಹೊರಗು ಬಲ್ಲ ಇವರನ್ನು ಆ ಮಟ್ಟಿಗೆ ಇವರು ಸಮರ್ಥ ಡಾಕ್ಟರ್ ಎನಿಸಿಕೊಳ್ಳುವುದಕ್ಕೆ ಹೆಚ್ಚು ಅರ್ಹರಾಗಿರುತ್ತಾರೆ.
{{center|ಜಾಗರದ ಜೋಶಿ / 45}}<noinclude></noinclude>
2bi9bn3cdzw3xyn2owi6phqmqu2qvih
ಪುಟ:ಜಾಗರದ ಜೋಶಿ.pdf/೪೫
104
99317
320907
277999
2026-05-19T17:35:21Z
Pragathi. BH
7585
/* Validated */
320907
proofread-page
text/x-wiki
<noinclude><pagequality level="4" user="Pragathi. BH" /></noinclude>'''ಬಹುಶ್ರುತ ವಿದ್ವಾಂಸ'''<br>
{{Css image crop
|Image = ಜಾಗರದ_ಜೋಶಿ.pdf
|Page = 45
|bSize = 395
|cWidth = 161
|cHeight = 177
|oTop = 113
|oLeft = 231
|Location = center
|Description =
}}
'''ಎನ್. ಸುಬ್ರಹ್ಮಣ್ಯ ಬೈಪಾಡಿತ್ತಾಯ'''<br>
ತಾಳಮದ್ದಳೆ ಕ್ಷೇತ್ರದಲ್ಲಿ ಕರಾವಳಿಯ ಅಂಗ್ರಪಂಕ್ತಿಯ ಕಲಾವಿದ<br>
ಡಾ.ಜೋಶಿಯವರು. ತಮ್ಮ ಆಳವಾದ ಅಧ್ಯಯನ ಅನುಭವದಿಂದ<br>
ಯಾವುದೇ ಪಾತ್ರಗಳನ್ನು ಯಶಪ್ರದವಾಗಿ ನಿರ್ವಹಿಸಬಲ್ಲರು. 'ಲಕ್ಷ<br>
ಮೋದಕ ಹವನ, ವಿದ್ವಾಂಸನನ್ನು ಹುಲಿ ಸದೆಬಡಿಯುವುದು, ಬೆಲ್ಲದ<br>
ಗಣಪತಿ..' ಮುಂತಾದ ಬಹು ಸ್ವಾರಸ್ಯದ ಚುಟುಕು ದೃಷ್ಟಾಂತಗಳು<br>
ಇವರ ಶೈಲಿಯ ಮಾದರಿಗಳು, ರಾವಣ, ಕೌರವ, ವಾಲಿ, ಕಂಸ<br>
ಮೊದಲಾದ ಖಳನಾಯಕ ಪಾತ್ರಗಳ ಅರ್ಥಗಾರಿಕೆ ಇವರಿಗೆ ಹೆಚ್ಚು<br>
ಒಪ್ಪುತ್ತದೆ. “ಪ್ರಭಾಕರ ಜೋಶಿಯವರು; ಶೇಣಿ ಗೋಪಾಲಕೃಷ್ಣ ಭಟ್,<br>
ಸಾಮಗ ಸಹೋದರರು ಹಾಗೂ ಪಂಡಿತ ಪೆರ್ಲ ಕೃಷ್ಣ ಭಟ್ಟರಿಗಿಂತ<br>
ಎಷ್ಟೋ ಎಳೆಯವರಾದರೂ ಅವರೆಲ್ಲರ ಜೊತೆಯಲ್ಲಿ ಸರಿದೊರೆಯಾಗಿ<br>
ಅರ್ಥಹೇಳುವ ಪ್ರತಿಭಾ ಸಂಪನ್ನ” ಎಂಬುದಾಗಿ ನಮ್ಮ ನಾಡಿನ<br>
ಸಾಂಸ್ಕೃತಿಕ ರಾಯಭಾರಿ ದಿ.ಪ್ರೊ.ಕು.ಶಿ.ಹರಿದಾಸ ಭಟ್ಟರು, ಡಾ. ಜೋಶಿ<br>
ಯವರ 'ಕೃಷ್ಣ ಸಂಧಾನ' ಕೃತಿಗೆ ಬರೆದ ಮುನ್ನುಡಿಯಲ್ಲಿ ಕೊಂಡಾಡಿದ್ದಾರೆ.<br>
ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.<br>
{{center|ಜಾಗರದ ಜೋಶಿ / 38}}<noinclude></noinclude>
4lxcnueegyhz03mpaxyvx4ybus7xl0p
ಪುಟ:ಜಾಗರದ ಜೋಶಿ.pdf/೬೭
104
99318
320977
277923
2026-05-20T02:48:43Z
Shreelatha.Halemane
7642
/* Validated */
320977
proofread-page
text/x-wiki
<noinclude><pagequality level="4" user="Shreelatha.Halemane" /></noinclude>
{{gap}}ಇಂದಿನ ಅತ್ಯಾಧುನಿಕತೆಯಲ್ಲಿ ಯಕ್ಷಗಾನವನ್ನು ಪ್ರಭಾವಿಸುವ ಹಲವಾರು ಸನ್ನಿವೇಶಗಳಲ್ಲಿ ಕತೆ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡೇ ಅಥವಾ ಬಾಹ್ಯದಿಂದ ಸ್ವೀಕರಿಸುವ ಪ್ರಕ್ರಿಯೆಯಲ್ಲಿರಬೇಕಾದ ಜಾಗ್ರತೆ ಮತ್ತು ಅಗತ್ಯತೆಯನ್ನು ಜೋಶಿಯವರು
ಹೇಳುತ್ತಾರೆ “ತನ್ನತನವನ್ನು ಜಿಗುಟುತನದಿಂದ ಕಾಪಾಡಿಕೊಳ್ಳುತ್ತಾ ಸ್ವೀಕೃತ ಪ್ರಭಾವಗಳನ್ನು ಅರಗಿಸಿ ತನ್ನ ರೂಪದಲ್ಲಿ ಎರಕಗೊಳಿಸುತ್ತಾ ತನ್ನೊಳಗಿಂದ ಬೆಳೆಯುತ್ತಾ ನಾಜೂಕಾಗುತ್ತಾ ಹೊಸ ವಸ್ತು ಆಶಯ ಅಭಿವ್ಯಕ್ತಿಗಳತ್ತ ಸತತವಾಗಿ ತುಡಿಯಬೇಕಾದುದು ಕಲೆಗೆ ಸಹಜ. ಅದಕ್ಕೆ ತನ್ನ ಹೆಮ್ಮೆ ಮತ್ತು ಅತೃಪ್ತಿ ಎರಡೂ ಬೇಕು. ಅದು ವಿಕಾಸಕ್ಕೆ ಪ್ರೇರಕವಾದ ದ್ವಂದ್ವಾತ್ಮಕ ಶಕ್ತಿ”.<br/>
{{gap}}ಯಕ್ಷಗಾನದ ಹಾಡುಗಾರಿಕೆಯನ್ನು ವಿವೇಚಿಸುತ್ತಾ ಡಾ.ಪ್ರಭಾಕರ ಜೋಶಿಯವರೆನ್ನುವುದು - “ಯಕ್ಷಗಾನ ಸಂಗೀತವೆನ್ನುವುದು ಕರ್ಣಾಟಕೀ ಸಂಗೀತದ ಒಂದು ಪ್ರಾಚೀನ ಘನೀಕೃತ ರೂಪವೆಂದು. ವೆಂಕಟಮುಖಿಯ ಎಪ್ಪತ್ತೆರಡು ಮೇಳಕರ್ತ ರಾಗಗಳ ವಿಭಾಗೀಕರಣಕ್ಕಿಂತಲೂ ಮೊದಲೇ ಇದ್ದ ಈ ಶೈಲಿಯಲ್ಲಿ ಸುಮಾರು ನಲವತ್ತರಷ್ಟು ರಾಗಗಳ ಬಳಕೆ ಇದ್ದುದು ಕಾಲ ಕಾಲಕ್ಕೆ ಸೇರ್ಪಡೆ, ಪರಿವರ್ತನೆಗಳಾಗಿವೆ ಯಾದರೂ ಈಗಲೂ ಇದು 'ಯಕ್ಷಗಾನ ಸಂಗೀತ' ಎಂದು ಹೇಳುವ ಸ್ಪಷ್ಟರೂಪ ಅದಕ್ಕೆ ಉಳಿದು ಬಂದಿದೆ”.<br/>
{{gap}}ಯಕ್ಷಗಾನ ತೆಂಕಣ ಮಟ್ಟಿನ ಹಿಮ್ಮೇಳದ ನೈತಿಕ ಕೇಂದ್ರದ personification ಆದ ನೆಡ್ಲೆ ನರಸಿಂಹ ಭಟ್ಟರ ಈ ಹೇಳಿಕೆಯನ್ನು ಡಾ. ಜೋಶಿಯವರು ಭಾಗವತಿಕೆಯ ಕುರಿತು ವಿವೇಚಿಸುವಾಗ ಹೇಳುತ್ತಾರೆ: “ಹಿಮ್ಮೇಳವನ್ನು ರಿಪೇರಿ ಮಾಡಬೇಕು". ಜೋಶಿಯವರು ಹೀಗೆ ಹೇಳುತ್ತಾರೆ. “..ಭಾಗವತನ ಸ್ಥಾನವು ಮುಖ್ಯವೆಂದು ಹೇಳುವಾಗ ಆತನ ಹೊಣೆಯನ್ನು ನಿರ್ವಹಿಸಲು ಬೇಕಾದಂತಹ ಅರಿವು ಮತ್ತು ಅಭ್ಯಾಸಗಳೇ ಮುಖ್ಯವೆಂಬುದು ಭಾವ. ವ್ಯಕ್ತಿಗತವಾಗಿ ಆತನೇ ಕೇಂದ್ರವಲ್ಲ. ಪ್ರದರ್ಶನ ಕಲಾಕೃತಿಯಾಗಲು ಹಿಮ್ಮೇಳದವರಿಗೆ ತಮ್ಮ ಕೆಲಸವೇನು, ತಿಳಿವು ಸಿದ್ಧತೆ ಇಲ್ಲದಾಗ ಹಿಮ್ಮೇಳವೇ ಗೊಂದಲಗಳಿಗೆ ಕಾರಣವಾಗುತ್ತದೆ. ಡಾ.ಜೋಶಿಯವರು ಗಂಭೀರವಾದ ಆತಂಕವನ್ನು ವ್ಯಕ್ತಪಡಿಸುತ್ತಾರೆ. “ಹಿಮ್ಮೇಳಕ್ಕೆ ತಾನೇನೆಂಬ ಅರಿವಿಲ್ಲ, ತಾನೇನು ಅಲ್ಲವೋ ಆದಾಗುವ ಆಸೆ”. ಭಾಗವತಿಕೆಯ ಮೇಲೆ ಇತರ ಪ್ರಭಾವಗಳನ್ನು ವಿಶ್ಲೇಷಿಸುತ್ತಾ ...:”ಯಕ್ಷಗಾನದ ಪದ್ಯಗಳ ಸಹಜ ಛಂದೋಲಯದ ಅಂದ, ಸಂಧಿ, ಸಮಾಸ ಬಂಧದ ಸೊಗಸು, ಉಚ್ಚಾರ ನಿಖರತೆಯ ರೂಪವು (ಹೇಳುವಣಿಗೆ) ಚೂರು ಚೂರಾಗಿ ರೇಷ್ಮೆ ಬಟ್ಟೆಯೊಂದನ್ನು ಏಳೆಂಟು ಕಡೆ ಹರಿದು ಅದರಲ್ಲಿ ಆನೆ ಕುದುರೆ ಬೊಂಬೆ ಮಾಡುವ ಮಕ್ಕಳಾಟಿಕೆಯಂತೆ ಕಾಣುತ್ತದೆ -- ಹೊಸ ಹಾಡುಗಾರಿಕೆ, ಈ 'ಹೊಸ ಪದ್ಧತಿ(?) ತೆಂಕು ಬಡಗು ತಿಟ್ಟುಗಳನ್ನೆಲ್ಲ ವ್ಯಾಪಿಸಿರುವುದು ಆಘಾತಕಾರಿ.<br/>
{{gap}}ಯಕ್ಷಗಾನದಲ್ಲಿ ವಸ್ತು ಮಂಡನೆ ಎಂಬ ಪ್ರಬಂಧದಲ್ಲಿ ಮುಖ್ಯವಾಗುವುದು ಡಾ.ಜೋಶಿಯವರು ಪ್ರಸ್ತಾವಿಸಿದ ಯಕ್ಷಗಾನವೆಂಬುದು ಶೈಲಿ ಬದ್ಧವಾದ (stylized,<br/>
{{center|ಜಾಗರದ ಜೋಶಿ / 60}}<noinclude></noinclude>
7sjqp34oa3l1ngspi4wjgo0nbz6na7g
ಪುಟ:ಜಾಗರದ ಜೋಶಿ.pdf/೫೩
104
99325
320912
277993
2026-05-19T17:38:01Z
Pragathi. BH
7585
/* Proofread */
320912
proofread-page
text/x-wiki
<noinclude><pagequality level="3" user="Pragathi. BH" /></noinclude>
{{center|'''ಶೇಣಿ ಹಾಗೂ ಪ್ರಚಲಿತ'''}}
{{center|'''ಯುಗಗಳ ಕೊಂಡಿ'''}}
{{Right|{{Css image crop
|Image = ಜಾಗರದ_ಜೋಶಿ.pdf
|Page = 53
|bSize = 374
|cWidth = 176
|cHeight = 171
|oTop = 123
|oLeft = 198
|Location = center
|Description =
}}}}
{{center|'''ಎಂ. ಶಾಂತಾರಾಮ ಕುಡ್ವ'''}}
{{gap}}ಡಾ. ಎಂ. ಪ್ರಭಾಕರ ಜೋಶಿಯವರು ತಾಳಮದ್ದಳೆ ಕ್ಷೇತ್ರದ
ಶೇಣಿಯುಗ ಹಾಗೂ ಈಗಿನ ಪ್ರಚಲಿತ ಯುಗಗಳೆರಡರ ನಡುವಿನ
ಕೊಂಡಿ. ವಿಶಾಲ ಹಾಗೂ ದೃಢವಾದ ಪಾಂಡಿತ್ಯದ ಆಗರ, ಯಕ್ಷಗಾನದ
ಪ್ರಥಮ ಜಾಲತಾಣ www.yakshagana.comನ ಸ್ಥಾಪಕರು.
{{gap}}ಡಾ.ಜೋಶಿಯವರ ಅರ್ಥಗಾರಿಕೆ ಸುಂದರ ಹಾಗೂ ಆಕರ್ಷಕ.
ಗೌರವರ್ಣದ, ಶುಭ್ರ ಫೈರಾನ್, ಕಾಶ್ಮೀರಿ ಶಾಲು ಧರಿಸಿ, ಕನ್ನಡಕಧಾರಿ
ಯಾಗಿ ವೇದಿಕೆಯಲ್ಲಿ ಅರ್ಥಕ್ಕೆ ಕುಳಿತರೆಂದರೆ, ಅಂದು ಪ್ರೇಕ್ಷಕರಿಗೆ
ಸಾಹಿತ್ಯದ ರಸದೌತಣ, ಯಾವುದೇ ಪಾತ್ರಗಳನ್ನಾದರೂ ಸಮರ್ಥವಾಗಿ
ನಿರ್ವಹಿಸಬಲ್ಲ ಸಮರ್ಥ, ಸಂದರ್ಭೋಚಿತವಾಗಿ ಗಾದೆ, ಒಗಟು,
ಮಂಡಿಗೆ ಗಾದೆ, ಸುಭಾಷಿತ, ಸಮಕಾಲೀನ ಸಾಹಿತ್ಯಗಳ ಬಳಕೆ,
ಸಂಸ್ಕೃತ ಶ್ಲೋಕಗಳನ್ನು ತಮ್ಮ ಅರ್ಥಗಾರಿಕೆಯಲ್ಲಿ ಅಳವಡಿಸಿ, ಪಾತ್ರ
ಪೋಷಣೆ ಮಾಡುವುದರಲ್ಲಿ ಜೋಶಿಯವರಿಗೆ ಸಮಾನ ಯಾರೂ
ಇಲ್ಲ ಎಂದರೆ, ಅದು ಉತ್ತೇಕ್ಷೆಯ ಮಾತಾಗದು.<br />
{{gap}}ಎದುರಾಳಿ ಯಾವುದೇ ವಾದ, ವಿವಾದ ಮಾಡಿದರೂ, ಜೋಶಿ
{{center|ಜಾಗರದ ಜೋಶಿ / 46}}<noinclude></noinclude>
m45zsp2kaobra8tlbgme56w0p1djg8m
320973
320912
2026-05-20T02:45:56Z
Shreelatha.Halemane
7642
/* Validated */
320973
proofread-page
text/x-wiki
<noinclude><pagequality level="4" user="Shreelatha.Halemane" /></noinclude>
{{center|'''ಶೇಣಿ ಹಾಗೂ ಪ್ರಚಲಿತ'''}}
{{center|'''ಯುಗಗಳ ಕೊಂಡಿ'''}}
{{Right|{{Css image crop
|Image = ಜಾಗರದ_ಜೋಶಿ.pdf
|Page = 53
|bSize = 374
|cWidth = 176
|cHeight = 171
|oTop = 123
|oLeft = 198
|Location = center
|Description =
}}}}
{{center|'''ಎಂ. ಶಾಂತಾರಾಮ ಕುಡ್ವ'''}}
{{gap}}ಡಾ. ಎಂ. ಪ್ರಭಾಕರ ಜೋಶಿಯವರು ತಾಳಮದ್ದಳೆ ಕ್ಷೇತ್ರದ
ಶೇಣಿಯುಗ ಹಾಗೂ ಈಗಿನ ಪ್ರಚಲಿತ ಯುಗಗಳೆರಡರ ನಡುವಿನ
ಕೊಂಡಿ. ವಿಶಾಲ ಹಾಗೂ ದೃಢವಾದ ಪಾಂಡಿತ್ಯದ ಆಗರ, ಯಕ್ಷಗಾನದ
ಪ್ರಥಮ ಜಾಲತಾಣ www.yakshagana.comನ ಸ್ಥಾಪಕರು.
{{gap}}ಡಾ.ಜೋಶಿಯವರ ಅರ್ಥಗಾರಿಕೆ ಸುಂದರ ಹಾಗೂ ಆಕರ್ಷಕ.
ಗೌರವರ್ಣದ, ಶುಭ್ರ ಫೈರಾನ್, ಕಾಶ್ಮೀರಿ ಶಾಲು ಧರಿಸಿ, ಕನ್ನಡಕಧಾರಿ
ಯಾಗಿ ವೇದಿಕೆಯಲ್ಲಿ ಅರ್ಥಕ್ಕೆ ಕುಳಿತರೆಂದರೆ, ಅಂದು ಪ್ರೇಕ್ಷಕರಿಗೆ
ಸಾಹಿತ್ಯದ ರಸದೌತಣ, ಯಾವುದೇ ಪಾತ್ರಗಳನ್ನಾದರೂ ಸಮರ್ಥವಾಗಿ
ನಿರ್ವಹಿಸಬಲ್ಲ ಸಮರ್ಥ, ಸಂದರ್ಭೋಚಿತವಾಗಿ ಗಾದೆ, ಒಗಟು,
ಮಂಡಿಗೆ ಗಾದೆ, ಸುಭಾಷಿತ, ಸಮಕಾಲೀನ ಸಾಹಿತ್ಯಗಳ ಬಳಕೆ,
ಸಂಸ್ಕೃತ ಶ್ಲೋಕಗಳನ್ನು ತಮ್ಮ ಅರ್ಥಗಾರಿಕೆಯಲ್ಲಿ ಅಳವಡಿಸಿ, ಪಾತ್ರ
ಪೋಷಣೆ ಮಾಡುವುದರಲ್ಲಿ ಜೋಶಿಯವರಿಗೆ ಸಮಾನ ಯಾರೂ
ಇಲ್ಲ ಎಂದರೆ, ಅದು ಉತ್ತೇಕ್ಷೆಯ ಮಾತಾಗದು.<br />
{{gap}}ಎದುರಾಳಿ ಯಾವುದೇ ವಾದ, ವಿವಾದ ಮಾಡಿದರೂ, ಜೋಶಿ
{{center|ಜಾಗರದ ಜೋಶಿ / 46}}<noinclude></noinclude>
85tkko0aj9o8l4z4lfyzzo38i6j9em2
ಪುಟ:ಜಾಗರದ ಜೋಶಿ.pdf/೪೬
104
99326
320908
278053
2026-05-19T17:36:08Z
Pragathi. BH
7585
/* Validated */
320908
proofread-page
text/x-wiki
<noinclude><pagequality level="4" user="Pragathi. BH" /></noinclude>'''* ಈ ಸಾಂಸ್ಕೃತಿಕ ನೆಲೆಯಲ್ಲಿ ತಮ್ಮ ಮನೆತನದ ಹಿನ್ನೆಲೆಯ ಕುರಿತು ಒಂದಿಷ್ಟು ಹೇಳಬಹುದು?'''<br>
{{gap}}ನಮ್ಮ ಅಜ್ಜ ಅನಿರುದ್ದ ಭಟ್ಟರಿಗೆ ತೆಂಕು ಹಾಗೂ ಬಡಗುತಿಟ್ಟು ಯಕ್ಷಗಾನದ ಮದ್ದಳೆ ವಾದನದ ಅನುಭವವಿತ್ತು. ತಂದೆ ನಾರಾಯಣ ಜೋಶಿಯವರು ಮರಾಠಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಚಿಕ್ಕಪ್ಪ ಲಕ್ಷ್ಮಣ ಜೋಶಿಯವರಿಗೆ
ಭಾಷಣ ಮಾಡುವುದರಲ್ಲಿ ದೊಡ್ಡ ಹೆಸರಿತ್ತು, ಬಂಧುಗಳಾದ ಶಂಕರ ಡೋಂಗ್ರೆ ಶಂಕರ ಜೋಶಿ ಇವರಿಂದ ಅರ್ಥಗಾರಿಕೆಯ ಪ್ರಚೋದನೆಯಾಯಿತು. ಹೀಗಾಗಿ ಬಾಲ್ಯದಲ್ಲಿ ನನಗೆ ಬಲವಾದ ಆಸಕ್ತಿ ಮೂಡಿತು.<br>
'''* ತಾವು ಆಟ-ಕೂಟಗಳ ವೇದಿಕೆಗಳಲ್ಲಿ ಕಾಣಿಸಿಕೊಂಡ ಆರಂಭದ ಸನ್ನಿವೇಶ?'''<br>
{{gap}}ಕಾರ್ಕಳ ತಾಲೂಕಿನ ಮಾಳ ಎಂಬ ಗ್ರಾಮದ ಪರಶುರಾಮ ಯಕ್ಷಗಾನ ಸಂಘ ಹಾಗೂ ಕಾರ್ಕಳ ಅನಂತಶಯನ, ವೆಂಕಟರಮಣ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ವಾರದ ತಾಳಮದ್ದಳೆಯಲ್ಲಿ ಪಾಲ್ಗೊಳ್ಳುತ್ತಿದ್ದೆ. ನಲ್ಲೂರು ಭುಜಬಲಿ ಅತಿಕಾರಿ, ಎಸ್. ಕೃಷ್ಣರಾಯರು, ಶೇಡಿ ಗಣಪತಿ ಭಟ್ಟರೇ ಮೊದಲಾದ ಶ್ರೇಷ್ಠರ ಮಧ್ಯದಲ್ಲಿ ಒಂದೆರಡು ಪದ್ಯಗಳ ಸಣ್ಣ ಅರ್ಥವನ್ನು ಹೇಳಲಾರಂಭಿಸಿದೆ. ಸುಮಾರು 1967ರ ವೇಳೆ ನಮ್ಮ ಬಂಧುಗಳಾದ ಮುಂಡಾಜೆ ರಾಮಚಂದ್ರ ಭಟ್ಟರ ಮನೆಯಲ್ಲಿ ನಡೆದ 'ಕೃಷ್ಣ ಸಂಧಾನ' ತಾಳಮದ್ದಳೆಯಲ್ಲಿ ದೇರಾಜೆ ಸೀತಾರಾಮಯ್ಯನವರ 'ಕೃಷ್ಣನಿಗೆ ನನ್ನ ಕೌರವ; 1968ರಿಂದ ಶೇಣಿಯವರು ಹಾಗೂ ದೊಡ್ಡ ಸಾಮಗರ ಜೊತೆ ಅರ್ಥ ಹೇಳಲಾರಂಭಿಸಿದೆ.<br>
'''* ಹಿಂದಿನ ಕಾಲದ ತಾಳಮದ್ದಳೆ ವ್ಯವಸ್ಥೆಯ ಕುರಿತು...'''<br>
{{gap}}ಸುಮಾರು 1925ರ ವರೆಗೆಲ್ಲ ಈಗಿನ ಸ್ಥಿತಿಗಿಂತ ತುಂಬಾ ಸರಳವಾಗಿತ್ತು. ಪ್ರಚಾರ ವ್ಯವಸ್ಥೆ, ಪ್ರತ್ಯೇಕ ವೇದಿಕೆ, ಧ್ವನಿವರ್ಧಕ ಇದಾವುದೂ ಇಲ್ಲದೆ ಅನೌಪಚಾರಿಕ ಚಟುವಟಿಕೆಯಂತಿತ್ತು. ವಾರ್ಷಿಕೋತ್ಸವ, ಮದುವೆ, ಪೂಜೆ, ಪುಣ್ಯತಿಥಿ ಇಂತಹ
ಸಂದರ್ಭಗಳಲ್ಲಿ ಸೇರಿದ ನೆಂಟರಿಷ್ಟರಲ್ಲೇ ಕಲಾವಿದರನ್ನು ಆಯ್ಕೆಗೊಳಿಸಿ ಚಾವಡಿ ತಾಳಮದ್ದಳೆ ನಡೆಯುತ್ತಿತ್ತು. ಕಾಲಕ್ರಮೇಣ ಸಂಘಟನಾ ಸ್ವರೂಪಗಳು ಬದಲಾದುವು. ಕಲಾಭಿರುಚಿಯುಳ್ಳ ಪ್ರೇಕ್ಷಕ ವರ್ಗವೂ ವಿಸ್ತಾರಗೊಂಡವು. ಅರ್ಥಗಾರಿಕೆಯೂ
ವಿಕಾಸೋನ್ಮುಖವಾಗಿದೆ. ಸಂವಾದ ಪ್ರಧಾನವೆನಿಸಿ ಜನಪ್ರಿಯ ಜನಪದ ಕಲೆಯಾಗಿ ಬೆಳೆದಿದೆ.
'''* ತಮ್ಮ ಅನೇಕ ಸಾಧನೆಗಳಲ್ಲಿ ಒಂದೆನಿಸಿರುವ 'ಶ್ರೀಕೃಷ್ಣ ಸಂಧಾನ' ಸಂಶೋಧನಾ ಗ್ರಂಥ ರಚನೆಗೆ ಮನಮಾಡಿದ ಬಗೆ?'''<br>
{{gap}}ದೇವಿದಾಸನೆಂಬ ಪ್ರಸಿದ್ಧ ಕವಿಯ ಕೃತಿಯು ಬಹು ಜನಪ್ರಿಯವೆನಿಸಿದೆ. ಇದಕ್ಕೆ
{{rh|center=-ಜಾಗರದ ಜೋಶಿ / 39}}<noinclude></noinclude>
adf5wm2eyfkgpagpudn87325vmv6j4n
ಪುಟ:ಜಾಗರದ ಜೋಶಿ.pdf/೫೫
104
99330
320913
277822
2026-05-19T17:38:33Z
Pragathi. BH
7585
/* Validated */
320913
proofread-page
text/x-wiki
<noinclude><pagequality level="4" user="Pragathi. BH" /></noinclude>ಈಗಿನ ಭೇದಗಳ ಕುರಿತು ಯಾವುದೇ ಪ್ರಶ್ನೆ ಎದುರಾದರೆ, ತಕ್ಷಣ ಉತ್ತರಿಸಬಲ್ಲಪಾಂಡಿತ್ಯ. ಸರಿ - ತಪ್ಪುಗಳ ವಿಮರ್ಶೆಯನ್ನು ಇವರಷ್ಟು ಸಮರ್ಥವಾಗಿ ಮಾಡುವವರು ವಿರಳ. ಯಕ್ಷಗಾನದಲ್ಲಿ ಸುಧಾರಣೆಯ ಹೆಸರಲ್ಲಿ ಮೂಲಸ್ವರೂಪಕ್ಕೆ ಧಕ್ಕೆಯಾದ ಸಂದರ್ಭಗಳಲೆಲ್ಲಾ, ಅದನ್ನು ವಿರೋಧಿಸಿದ್ದಾರೆ. ಕೆಲವೊಮ್ಮೆ ಖಾರವಾಗಿ ಮಾತಾಡಿದರೂ,ಕೂಡಲೇ ಸೌಮ್ಯವಾಗಿ ವರ್ತಿಸಿ, ಯಾರೊಂದಿಗೂ ವಿರೋಧ ಹೊಂದಿಲ್ಲದ ಜೋಶಿಯವರು ಕೂಟದಲ್ಲಿದ್ದರೆ ಸಹಕಲಾವಿದರಿಗೆ ಉತ್ಸಾಹ.<br />
{{gap}}(ಕೃಪೆ : ಬಯಲಾಟ ಡಾಟ್ ಕಾಮ್ ಜಾಲತಾಣದಲ್ಲಿ ಪ್ರಕಟಿತ -ಆಯ್ದ ಭಾಗವಿದು)<br />
{{border|
“ಪಾಯಸವನ್ನು ಆಕರ್ಷಕಗೊಳಿಸಲು, ಅದಕ್ಕೆ ಬೆಳ್ಳುಳ್ಳಿ ಒಗ್ಗರಣೆ ಕೊಡುವುದು ಪಾಕ ಸುಧಾರಣೆ ಅಲ್ಲ. ರುಚಿ ಕೆಡಿಸುವ ಕೃತ್ಯ. ಯಕ್ಷಗಾನದಲ್ಲೂ ಇಂತಹ ಹಲವು ಸಂಕರಗಳು ಆಗುತ್ತಿವೆ.”
{{right|'''ಕಟೀಲನಲ್ಲಿ ಜರಗಿದ ಸಂಮಾನ ಸ್ವೀಕಾರದಲ್ಲಿ'''}}
}}
{{center|ಜಾಗರದ ಜೋಶಿ / 48}}<noinclude></noinclude>
r49ehqmazdv1121s8h1ll4wts2ivtnn
ಪುಟ:ಜಾಗರದ ಜೋಶಿ.pdf/೧೩೫
104
99341
320904
277547
2026-05-19T17:32:32Z
Pragathi. BH
7585
/* Proofread */
320904
proofread-page
text/x-wiki
<noinclude><pagequality level="3" user="Pragathi. BH" /></noinclude>ಡಾ. ಬಿ.ಎ. ವಿವೇಕ.ರೈ
ಬಹುಶ್ರುತ ವಿದ್ವಾಂಸ, ಸಾಹಿತಿ,
ಸಂಶೋಧಕರು
'ಸುಯಿಲ್', ಜಪ್ಪು ಕುತ್ಪಾಡಿ,
ಮಂಗಳೂರು 575 002
-
ಡಾ. ಅಮೃತ ಸೋಮೇಶ್ವರ
ಕವಿ, ವಿದ್ವಾಂಸ, ಸಾಹಿತಿ, ಸಂಶೋಧಕರು
'ಒಲುಮೆ', ಕೋಟೆಕಾರು
ಮಂಗಳೂರು ತಾಲೂಕು
-
ಡಾ.ಪುರುಷೋತ್ತಮ ಬಿಳಿಮಲೆ
ಪೂರ್ವ ನಿರ್ದೇಶಕರು,
575 022
ಭಾರತೀಯ ಅಧ್ಯಯನದ ಅಮೇರಿಕನ್
ಸಂಸ್ಥೆ (AIIS)
ಮುಖ್ಯಸ್ಥರು, ಕನ್ನಡ ಅಧ್ಯಯನ ಪೀಠ
ಜೆಎನ್ಯು, ನವದೆಹಲಿ
ಪ್ರೊ. ಕೆ. ಚಿನ್ನಪ್ಪ ಗೌಡ
ಪ್ರಾಧ್ಯಾಪಕ, ಜಾನಪದತಜ್ಞ
'ಸಿರಿಬಾಮ'
ಅಸೈಗೋಳಿ ಅಂಚೆ, ಮಂಗಳೂರು
ಪ್ರೊ. ಕು.ಶಿ. ಹರಿದಾಸ್ ಭಟ್ಟ (ದಿ.)
ಅಗ್ರಗಣ್ಯ ಲೇಖಕ, ಸಂಸ್ಕೃತಿತಜ್ಞ, ಸಂಘಟಕ
ಉಡುಪಿ
ಪ್ರೊ ಉದ್ಯಾವರ ಮಾಧವ ಆಚಾರ್ಯ
ಕವಿ, ರಂಗತಜ್ಞ, ವಿಮರ್ಶಕರು
'ವ್ಯಾಸ'
ಚಿಟ್ಟಾಡಿ, ಉಡುಪಿ - 576 010
ಜಿ.ಎನ್. ಅಶೋಕವರ್ಧನ
'ಅಭಯಾದ್ರಿ'
ಪಿಂಟೋ ಓಣಿ
ಕರಂಗಲಪಾಡಿ
-
575003
ಜಾಗರದ ಜೋಶಿ / 128<noinclude></noinclude>
8wkmzpyp7a302jh7qbfyfjwitnc6s6y
ಪುಟ:ಜಾಗರದ ಜೋಶಿ.pdf/೧೩೩
104
99355
320903
277720
2026-05-19T17:30:41Z
Pragathi. BH
7585
/* Validated */
320903
proofread-page
text/x-wiki
<noinclude><pagequality level="4" user="Pragathi. BH" /></noinclude>ಇಷ್ಟು ವಿಪುಲವಾಗಿ ಓದಿದವರಿಲ್ಲ. ಯಕ್ಷಗಾನಕ್ಕೊಬ್ಬ ತಜ್ಞ ವಿಮರ್ಶಕ ಸಿಕ್ಕಿದ್ದಾನೆ, ನಮ್ಮ ಜೋಶಿ ಮುಂದೆ ದೊಡ್ಡ ಹೆಸರು ಪಡೆದೇ ಪಡೆಯುತ್ತಾನೆ...” ಅಂತ ಹೇಳಿದ್ದು ನನಗಿನ್ನೂ ನೆನಪಿದೆ.
{{right|'''- ವಿಟ್ಲದಿಂದ ಮೂರ್ತಿ ದೇರಾಜೆ}}
{{center|'''ಅನನ್ಯ - ಅರ್ಥವಂತಿಕೆ'''}}
{{gap}}“ಅರ್ಥವಂತಿಕೆ, ಅರ್ಥದಾರಿಕೆ – ಅರ್ಥವಿವರಣೆ” – ಯಕ್ಷಗಾನ ತಾಳಮದ್ದಳೆಯಲ್ಲಿ ಪಾತ್ರಧಾರಿಯ – ಅಥವಾ ಪಾತ್ರವಚನ ಶಿಲ್ಪಿಯನ್ನು ಪರಿಭಾಷಿಸಲು ಉಪಯೋಗಿಸುವ ವ್ಯಾಖ್ಯಾನ ಪದಗಳು, ಆದರೆ ಡಾ|| ಪ್ರಭಾಕರ ಜೋಶಿಯವರನ್ನು ಇಂತಹ ಒಂದು ಕಪಿಮುಷ್ಠಿಯೊಳಗೆ ಹಿಡಿದಿರುವುದು ಅಸಾಧ್ಯ. ಸ್ವಯಂ ಸಂವಾದಿಯಾಗಿ, ಸ್ವಯಂ
ಅನುಭಾವೀ ಸಂವೇದನೆಯ ಮೂಲಕ, ಮಾತಿನ ಅಕ್ಷರಗಳಲ್ಲಿ ಒಂದು ಪಾತ್ರವನ್ನು ಕಡೆಯುವವರು ಡಾ|| ಜೋಶಿ, ಇಂತಹ 'ಕಡೆಯುವ' ಸಂದರ್ಭದಲ್ಲಿ ಅವರದ್ದು ಭಾವನಿರ್ಲಿಪ್ತ ಶಿಲ್ಪ ನಿರ್ಮಾಣ, ಅದು ಕೌರವ-ಕೃಷ್ಣ, ವಾಲಿ-ರಾಮ, ಅರ್ಜುನ-ಸುಧನ್ವ, ಪ್ರಹಸ್ತ-ಅಂಗದ ಇಂತಹ ಯಾವುದೇ ವಾಚ್ಯಾನುಕೂಲ ಪಾತ್ರಗಳಿರಲೀ,
ಅವುಗಳನ್ನು ಕೆತ್ತುವಾಗ ಅವರು ನಿರ್ಮಿಸುವುದು ಒಂದು ಧ್ವನ್ಯಾಲೋಕ. ವಿಡಂಬನೆ- ವಿಮರ್ಶೆ-ವ್ಯಂಗ್ಯಗಳು ಕೊಡುವ ರಂಜನೆಗಳ ಒಳ ಹೊಕ್ಕಾಗ ಅವರು ದರ್ಶಿಸುವುದು.ಕೇಳುಗರು ಬಾಹ್ಯ ಪ್ರತಿಕ್ರಿಯೆಯಲ್ಲಿ ತಲೆದೂಗಿಯಾರು! ಆದರೆ ಚಿಂತನೆ, ಭಾವ ಪ್ರತಿಕ್ರಿಯೆಯಲ್ಲಿ ಮನದೂಗಿಯಾರು! ಆದಕಾರಣ ಡಾ|| ಪ್ರಭಾಕರ ಜೋಶಿಯವರ 'ಅರ್ಥವಂತಿಕೆ' – ಅನುರಣಿಸುವುದು 'ತಾಳಮದ್ದಳೆ'ಯ ಪ್ರಸಂಗ
ಮುಗಿದ ಬಳಿಕ! ಅನೇಕ ವಾಚಸ್ಪತಿಗಳಿಂದ ಶ್ರೀಮಂತಗೊಂಡ ತಾಳಮದ್ದಳೆಯ ಪ್ರಪಂಚದಲ್ಲಿ - ಸುಲಭದಲ್ಲಿ ಗಿಟ್ಟದ, ಆದರೆ ಸುಲಭವಾಗಿಯೂ ಅರಗಿಸಿಕೊಳ್ಳಲು ಸಾಧ್ಯವಾಗುವ ಅರ್ಥ ಸಿರಿವಂತಿಕೆ. ಡಾ|| ಪ್ರಭಾಕರ ಜೋಶಿಯವರದ್ದು.ಅವರೊಂದು ಅನನ್ಯ! ಅದ್ಭುತ. ಭಾವ ಮತ್ತು ವಿಚಾರ ಪ್ರಪಂಚಗಳಲ್ಲಿ ಜೊತೆಜೊತೆಗೆ ನಡೆದಾಡಬಲ್ಲ,
ಕುಣಿದು ಕುಣಿಸಬಲ್ಲ ಅಕ್ಷರಶಿಲ್ಪಿ...
{{right|ಪ್ರೊ. ಕೆ.ಇ. ರಾಧಾಕೃಷ್ಣ}}
{{right|ಶಿಕ್ಷಣತಜ್ಞ, ಕವಿ, ಬೆಂಗಳೂರು}}
{{Right|(ಬೆಂಗಳೂರು ಸಂಮಾನದ ಭಾಷಣದಿಂದ)}}
{{center|ಜಾಗರದ ಜೋಶಿ / 126}}<noinclude></noinclude>
7vboh7f14iimvx1x2rbt359kvrvdh95
ಪುಟ:ಜಾಗರದ ಜೋಶಿ.pdf/೮೫
104
99356
320989
277936
2026-05-20T02:56:15Z
Shreelatha.Halemane
7642
/* Validated */
320989
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಕಾರಣ. ಯಕ್ಷಗಾನವನ್ನು ಕುರಿತ ಇವರ ಸಂಶೋಧನ ಬರಹಗಳನ್ನು ಅಧ್ಯಯನ ಮಾಡಿದ ವಿದ್ಯಾರ್ಥಿ ನಾನು. ಯಕ್ಷಗಾನದ ಬಗೆಗಿನ ನನ್ನ ತಿಳುವಳಿಕೆಯನ್ನು ಈ ಲೇಖನಗಳು ವಿಸ್ತರಿಸಿವೆ ಮತ್ತು ಬದಲಾಯಿಸಿವೆ. ಈ ಗ್ರಂಥದಲ್ಲಿನ ಅಧ್ಯಯನ ಶೀಲತೆ, ವಿಷಯ ಪ್ರತಿಪಾದನೆ ಮಾಡುವ ಕ್ರಮ, ಯಕ್ಷಗಾನವನ್ನು ಕುರಿತ ಪ್ರಾಮಾಣಿಕ ಕಳಕಳಿ- ಇವುಗಳಿಂದಾಗಿ ಈ ಸಂಶೋಧನ ಗ್ರಂಥವು ಅನ್ವಯಿಕ ರೂಪದ್ದು ಮತ್ತು ಮಾನವಿಕ ಮೌಲ್ಯಗಳುಳ್ಳದ್ದು. ಕನ್ನಡ ಸಂಶೋಧನೆಯ ಆರೋಗ್ಯಕರವಾದ ಪ್ರವೃತ್ತಿಯ ಒಂದು ಮುಖ್ಯ ದಾಖಲೆ ಈ ಗ್ರಂಥದ ಮೂಲಕ ಆಗಿದೆ ಎನ್ನುವುದು ಸಂಶೋಧನೆ ಮತ್ತು
ರಂಗಭೂಮಿಯಲ್ಲಿ ಆಸಕ್ತರಾದವರಿಗೆ ಭರವಸೆ ಕೊಡುವ ಅಂಶ.
{{rh|center= ಜಾಗರದ ಜೋಶಿ / 78 }}<noinclude></noinclude>
sl2a5yib9g22pb9t9pwhwx3d7ogl9lc
ಪುಟ:ಜಾಗರದ ಜೋಶಿ.pdf/೭೪
104
99372
320979
277756
2026-05-20T02:50:01Z
Shreelatha.Halemane
7642
/* Validated */
320979
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಬಲ್ಲರು : ನೀರನ್ನು, ಗಾಳಿಯನ್ನು, ಬಿಸಿಲನ್ನು ಅದು ಕತ್ತರಿಸಲಾರದು.
ಕಲೆಯ ಈ ಇಡೀ ವಾತಾವರಣದಲ್ಲಿ eco-systemನಲ್ಲಿ ಒಂದಾಗುವುದೇ ವಿಮರ್ಶಕನಾಗ ಬೇಕಾದರೆ ಮೊದಲ ಅರ್ಹತೆ. ಆದ್ದರಿಂದಲೇ ಯಕ್ಷಗಾನದ ಅತ್ಯುತ್ತಮ ವಿಮರ್ಶಕರಾದ ಜೋಶಿ, ತಾವು ಬದಲಾವಣೆಗೆ ಎಷ್ಟು ಪರವಾಗಿದ್ದಾಗಲೂ ಯಕ್ಷಗಾನದ ರೂಪಕ್ಕೆ,ರಸಾವರಣಕ್ಕೆ ಅಷ್ಟೇ ತೀವ್ರವಾದ ನಿಷ್ಠೆ ತೋರಿದ್ದಾರೆ. ಬುದ್ಧಿಯ ಹರಿತದಂತೆ,ಸಂವೇದನೆಯ ಸೂಕ್ಷತೆಗೂ 'ಜಾಗರ'ದ ಪುಟ ಪುಟಗಳಲ್ಲಿ ರುಜುವಾತಿದೆ.<br>
{{gap}}ಈ ಸಂಗ್ರಹದ ಅತ್ಯುತ್ತಮ ಲೇಖನವನ್ನು ಹುಡುಕಿದೆ. ಇಲ್ಲಿ ತಾಳಮದ್ದಳೆಯ ಒಳಹೊರಗನ್ನು ಹಿಡಿದ 'ತಾಳಮದ್ದಳೆ' ಎಂಬ ಬರಹ ಇದೆ. ಯಕ್ಷಗಾನ ಮೇಳಗಳನ್ನು ಕುರಿತಂತೆ ಅಪಾರ ಮಾಹಿತಿ, ವ್ಯಾಖ್ಯಾನಗಳಿವೆ. ಅರ್ಥಗಾರಿಕೆಯ ಸಮೀಕ್ಷೆಯಿದೆ. ಎಲ್ಲದರಲ್ಲೂ ಜೋಶಿಯವರ ಸೂಕ್ಷ್ಮ ಗ್ರಹಣಶಕ್ತಿ, ಪಾಂಡಿತ್ಯ ಪ್ರತಿಭೆ ಹರಿದಾಡಿದೆ.ನನಗೆ ತೀರ-ತೀರ ಮೆಚ್ಚುಗೆಯಾದ ಬರಹ 'ಯಕ್ಷಗಾನ ಪರಂಪರೆ' ಮತ್ತು 'ನಾಲ್ಕು ವೇಷಗಳು', ಆಲೋಚನೆ ಮತ್ತು ಒಳನೋಟ ಇಲ್ಲಿ ಹದವರಿತು ಸೇರಿವೆ. 1973ರಷ್ಟು ಹಿಂದೆಯೇ 'ನಾಲ್ಕು ವೇಷಗಳು' ಎಂಬ ಬರಹ ಜೋಶಿ ಬರೆದರೇ ಎಂದು ವಿಸ್ಮಯವಾಗುತ್ತದೆ.<br>
{{gap}}ಚಟುವಟಿಕೆಯ ಮುದ್ದೆಯಾಗಿರುವ ಗೆಳೆಯ ಜೋಶಿ ಮುನ್ನುಗ್ಗುವ ಸಾಹಸಿಗಳು.ಧೈರ್ಯ, ಸಾಹಸ, ಕ್ರಿಯಾಶೀಲತೆ ಇದ್ದಲ್ಲಿ ದೈವಕೃಪೆ ತಾನಾಗಿ ಒದಗಿ ಬರುತ್ತದೆ ಎನ್ನುತ್ತಾರಲ್ಲ - ಹಾಗೆ ವಿದ್ವತ್ತು, ಸೂಕ್ಷ್ಮತೆ. ಪ್ರಾಮಾಣಿಕ ಶ್ರಮ ಇದ್ದಲ್ಲಿ ಒಳನೋಟವೂ ಇಕೋ ಎಂದು ಒದಗಿ ಬರುತ್ತದೆ. ಅಲ್ಲದೆ ಪ್ರಕೃತಿಯ ಭಾಗವಾಗಿಯೇ ಪ್ರಕೃತಿಯನ್ನು ತಿಳಿಯಬೇಕಾದಂತೆ, ಯಕ್ಷಗಾನದ ಆವರಣದಲ್ಲೇ ತಾನು ಅವಿಭಾಜ್ಯವಾಗಿ ಸೇರಿ ಅದನ್ನು ಗ್ರಹಿಸಲೆತ್ನಿಸುವ ಇಂಥ ಮೊದಲ ದರ್ಜೆಯ ವಿಮರ್ಶಕರಿಗಲ್ಲದೆ ಇನ್ನಾರಿಗೆ ಕಲೆ ತನ್ನ ಅಂತರಂಗವನ್ನು ತೆರೆಯಬೇಕು?<br>
{{gap}}ಜೋಶಿಯವರ 'ಜಾಗರ'ದ ನೋಟಕ್ಕೆ ಇನ್ನಷ್ಟು ಸೂಕ್ಷ್ಮತೆ, ವಿಸ್ತಾರ ಒದಗಲಿ.ಆಳದ ನಿಕ್ಷೇಪಗಳು ಇನ್ನೂ ಪತ್ತೆಯಾಗಲಿ. ವಿಮರ್ಶೆಯ ಕ್ಷೇತ್ರ ಸಮೃದ್ಧವಾಗಲಿ ಎಂದು ಮನಸಾರೆ ಹಾರೈಸುತ್ತೇನೆ.
{{rh|center=ಜಾಗರದ ಜೋಶಿ / 67}}<noinclude></noinclude>
41u1kk7jdl2qfpruk1g71xoqvjs1lxi
ಪುಟ:ಜಾಗರದ ಜೋಶಿ.pdf/೭೫
104
99373
320980
277818
2026-05-20T02:51:36Z
Shreelatha.Halemane
7642
/* Validated */
320980
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Css image crop
|Image = ಜಾಗರದ_ಜೋಶಿ.pdf
|Page = 75
|bSize = 383
|cWidth = 135
|cHeight = 182
|oTop = 6
|oLeft = 14
|Location = left
|Description =
}}
{{rh|center=ಕೇದಗೆ, 1998}}
{{rh|center=ಚಿತ್ರಾ ಪ್ರಕಾಶನ, ಮಂಗಳೂರು}}<br>
{{rh|center='''ತಲಸ್ಪರ್ಶಿ ಅಧ್ಯಯನಕ್ಕೆ ಒಂದು ಬುನಾದಿ'''}}<br>
{{rh|right='''ಡಾ. ಕೆ.ಎಂ. ರಾಘವ ನಂಬಿಯಾ'''}}
'ಕೇದಗೆ' ಬಲು ತೀಕ್ಣವಾದ ಪರಿಮಳವಿರುವ ಹೂ ಎಸಳು. ತುಳುನಾಡಿನ ತಾಯಂದಿರಿಗೆ ಬಹಳ ಇಷ್ಟವಾಗಿರುವಂಥದು. ಇದಕ್ಕೂ ಯಕ್ಷಗಾನಕ್ಕೂ ಏನು ಸಂಬಂಧ? ಯಕ್ಷಗಾನದಲ್ಲಿ 'ಕೇದಗೆ ಮುಂದಲೆ' ಎಂಬ ಶಿರೋಭೂಷಣವಿದೆ. 'ಕೇದಗೆ' ಎಂಬ ಆಭರಣದ ಜಾಗದಲ್ಲಿ ಹಿಂದೆ ಕೇದಗೆ ಎಸಳುಗಳನ್ನು ಸಿಂಗರಿಸುತ್ತಿದ್ದರಂತೆ. ಇಷ್ಟರಿಂದ ನಿಮ್ಮ ಕೈಯಲ್ಲೀಗ ತೆರೆದುಕೊಂಡಿರುವ, ಗೆಳೆಯ ಎಂ.ಪ್ರಭಾಕರ ಜೋಶಿ ಅವರ ಹೊತ್ತಗೆಯ ಹೆಸರಿಗೆ ವಿಶೇಷ ಅರ್ಥ ಹುಟ್ಟಿತೆನ್ನಲಾಗದು.<br>
{{gap}}ಯಕ್ಷಗಾನ ರಂಗದಲ್ಲಾಗುವ ಭಾವಾಭಿವ್ಯಂಜನಕ್ಕೆ ಇತರ ರಂಗಪ್ರಕಾರಗಳಲ್ಲಿ ಕಾಣಸಿಗದ ತೀಕ್ಣತೆ ಇದೆ-ಕೇದಗೆಯ ಪರಿಮಳದಂತೆ.ಇಲ್ಲಿ, ಈ ಹೊತ್ತಗೆಯಲ್ಲಿ,ಬಲು ನಿಶಿತವಾದ ವೈಚಾರಿಕ ಸೀಳುನೋಟಗಳಿಂದ, ಯಕ್ಷಗಾನದ ಲಕ್ಷಲಕ್ಷಣಗಳನ್ನು,ಬೇಕು-ಬೇಡಗಳನ್ನು ಸಮೀಕ್ಷಿಸುವ ಕೆಲಸವನ್ನು ಜೋಶಿ ಮಾಡಿದ್ದಾರೆ. ಈ ಅರ್ಥದಲ್ಲಿ ಈ ಗ್ರಂಥಕ್ಕೆ 'ಕೇದಗೆ' ಅನ್ವರ್ಥವಾದ ಹೆಸರು.<br>
{{gap}}ತನ್ನ ಮೊದಲ ಪ್ರಬಂಧ ಸಂಕಲನ (ಜಾಗರ)ಕ್ಕೆ ರಾಜ್ಯ ಮಟ್ಟದ
ಪ್ರಶಸ್ತಿಯನ್ನು ಗೆದ್ದುಕೊಂಡಿರುವ ಜೋಶಿ ಅವರ ಈ 'ಕೇದಗೆ' ಇನ್ನಾವ ಮುಡಿಯನ್ನು ಅಲಂಕರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
{{rh|center=ಜಾಗರದ ಜೋಶಿ / 68}}<noinclude></noinclude>
7dv51uvmwsbtxcufywl7ln1msz9ni1i
ಪುಟ:ಜಾಗರದ ಜೋಶಿ.pdf/೭೭
104
99378
320981
277958
2026-05-20T02:52:15Z
Shreelatha.Halemane
7642
/* Validated */
320981
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಜನಾಂಗ ಭೇದವಿಲ್ಲದೆ ಒಂದು ಕೋಮಟಿ ಸಮುದಾಯವಾಗಿ ರ್ಮಾಡುತ್ತಿದೆ.<br>
{{gap}}ಆಡಳಿತ ಮತ್ತು ವಾಣಿಜ್ಯ ಇವುಗಳನ್ನು ಅವಿನಾಭಾವ ಸಂಬಂಧದೊಳಗೆ ತುರುಕಿದ ಬ್ರಿಟಿಷ್ ರಾಜ್ಯ ಪದ್ಧತಿಯನ್ನು ಭಾರತೀಯ ಶ್ರೀಮಂತವರ್ಗ ರಕ್ತಗತಗೊಳಿಸಿದ ಬಗೆಗೆ ಬೆರಗಾಗಬೇಕು. ಲಾಭ – ನಷ್ಟ ಪರಿಗಣನೆ ಮಾತ್ರ ಅಂತಿಮವೆಂದುಕೊಳ್ಳುವ ವಾಣಿಜ್ಯಪರತೆ ಯಕ್ಷಗಾನದಂಥ ಸಂಪ್ರದಾಯನಿಷ್ಠ ರಂಗಭೂಮಿಯನ್ನು ಕೂಡಾ ಹೇಗೆ ಕಬಳಿಸುತ್ತದೆ ಎಂಬುದಕ್ಕೆ ಕಳೆದ ಮೂರು ದಶಕಗಳ ಕಾಲ ವೃತ್ತಿಪರ ಮೇಳಗಳ ಬಯಲಾಟವನ್ನು
ಕಂಡವರು ಸಾಕ್ಷಿಯಾಗಿ ನಿಲ್ಲುತ್ತಾರೆ. ಕಟೀಲು, ಮಂದಾರ್ತಿಗಳಂಥ ವರ್ಷವರ್ಷವೂ ಆಟದ ಹರಕೆಗಳನ್ನು ತೀರಿಸಲು ಬಾಕಿ ಉಳಿಸಿಕೊಳ್ಳುವ ಬಯಲಾಟದ ಮೇಳಗಳು ಕೂಡಾ ವ್ಯಾಪಾರಿ ದೃಷ್ಟಿಯಿಂದ ಹೊರತಾಗಿ ಉಳಿದಿಲ್ಲ ಎಂಬುದು ಆತಂಕಕಾರಿ.
ಅಂಥ ಘಟನೆಗಳ ಪ್ರತ್ಯಕ್ಷದರ್ಶಿಯೊಬ್ಬನ ಸಾಕ್ಷ್ಯವಾಗಿಯೂ 'ಕೇದಗೆ' ನಿಮ್ಮ ನ್ಯಾಯಾಲಯದಲ್ಲಿ ತೆರೆದುಕೊಳ್ಳುತ್ತದೆ.<br>
{{gap}}'ಕರಾವಳಿಯ ಯಕ್ಷಗಾನ' ಪ್ರಬಂಧದಲ್ಲಿ ಯಕ್ಷಗಾನದ ಮೂಲವನ್ನು ಅರಸುವ ಪ್ರಯತ್ನ ಮಾಡುತ್ತ, ಯಾವುದರಿಂದ ಯಾವುದು? ಬಡಗಿನಿಂದ ತೆಂಕೇ? ತೆಂಕಿನಿಂದ ಬಡಗೇ? ಕಥಕ್ಕಳಿಯಿಂದ ಯಕ್ಷಗಾನವೇ? ಯಕ್ಷಗಾನದಿಂದ ಕಥಕ್ಕಳಿಯೇ? ಈ
ಬಗೆಯ ಕುರುಡು ಅನ್ವೇಷಣೆಯ ದಾರಿ ಹಿಡಿಯದೆ ಜೋಶಿ ಅವರು ಹೆಚ್ಚು ಅರ್ಥಪೂರ್ಣ ವಿವೇಚನೆಗೆ ಹೋಗಿದ್ದಾರೆ. ಅದಿ ದ್ರಾವಿಡ ಭಾಷೆಯೊಂದು ತುಳು, ತಮಿಳು, ಕನ್ನಡ, ತೆಲುಗು ,ಮಲಯಾಳ ಹೀಗೆ ಪ್ರತ್ಯೇಕ ಭಾಷೆಗಳಾಗಿ ವಿಭಜನಗೊಳ್ಳುವುದಕ್ಕೆ ಒಂದು ಅಥವಾ ಹಲವು ಐತಿಹಾಸಿಕ ಸಂದರ್ಭ ಇರುವುದಾದರೆ, ಮೂಲ ದ್ರಾವಿಡ
ರಂಗಕಲೆಯೆಂದು 'ಯಕ್ಷಗಾನದ ಪ್ರಭೇದಗಳು', ಕಥಕಳಿ, ತೆರುಕೂತ್, ತೆಯ್ಯಂ, ಭೂತಕೋಲ, ಕ್ಯಾಂಡಿ (ಸಿಂಹಳ) ನೃತ್ಯಗಳಾಗಿಯೂ ವಿಭಜನ ಹೊಂದುವುದು ಹಾಗೂ ಆ ಬಗೆಯಲ್ಲಿ ಪ್ರತ್ಯೇಕ ಎತ್ತರಗಳಿಗೆ ವಿಕಾಸಗೊಳ್ಳುವುದು ಸಂಭವನೀಯ.ಮೇಲೆ ಹೇಳಿದ ಎಲ್ಲ ರಂಗಪ್ರಕಾರಗಳಲ್ಲೂ ಸೋದರತೆಯನ್ನು ನಿಚ್ಚಳವಾಗಿ ಕಾಣಬಹುದು.ಪ್ರತ್ಯೇಕಗೊಂಡ ಬಳಿಕವೂ ಪರಸ್ಪರ ಪ್ರಭಾವಕ್ಕೊಳಗಾದುದನ್ನೂ ನಾವು ಗುರುತಿಸಬಹುದು.ಇವೆಲ್ಲ ಕಲೆಗಳಲ್ಲೂ 'ತೆಂಕು', 'ಬಡಗು' ಶೈಲಿಗಳು ಇರುವುದು ಸಾಮಾನ್ಯ. ಈ ಸಂದರ್ಭದಲ್ಲಿ ಕೇರಳದ 'ಪಾಡಯಣಿ' ಎನ್ನುವ ಆರಾಧನಾ ಕಲೆಯನ್ನು ಕೂಡಾ ನೋಡುವುದು ಬಹಳ ಉಪಯುಕ್ತವಾದೀತು. ಬಹುಶಃ ಪ್ರಾಗ್ದ್ರಾವಿಡ ಕಲೆಯ ಪಳೆಯುಳಿಕೆ ಅದಾಗಿರಬೇಕು ಎಂದು ತರ್ಕಿಸಲು ಎಡೆಯಿದೆ.<br>
{{gap}}ಯಕ್ಷಗಾನದ ಪೂರ್ವರೂಪ ನಿರ್ಣಯದಲ್ಲಿ ಬಹುವಾಗಿ ಉಪಕರಿಸುವ ಇನ್ನೊಂದು ಪುರಾವೆಯನ್ನು ಜೋಶಿಯವರ ಲೇಖನಕ್ಕೆ ಪೂರಕವಾಗಿ ಸೇರಿಸಬಹುದು. ಅದು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಣಸಿಕ್ಕಿರುವ ಪ್ರಾಚೀನ ಯಕ್ಷಗಾನದ
ಗೊಂಬೆಗಳು. ಘಟ್ಟದ ಮೇಲಿನ ಗೊಂಬೆಯಾಟಕ್ಕೂ ಅಲ್ಲಿನ ಬಯಲಾಟಕ್ಕೂ ವೇಷಭೂಷಣದಲ್ಲಿ ಸಾಮ್ಯವಿದೆ. ಉಪ್ಪಿನಕುದ್ರು ಕೊಗ್ಗ ಕಾಮತರ ಗೊಂಬೆಯಾಟಕ್ಕೂ,
{{rh|center=ಜಾಗರದ ಜೋಶಿ / 70}}<noinclude></noinclude>
b5xn89yo3k1nz5cdv3kkdt3cuk4owit
ಪುಟ:ಜಾಗರದ ಜೋಶಿ.pdf/೩೦
104
99379
320967
278009
2026-05-20T02:36:48Z
Shreelatha.Halemane
7642
/* Validated */
320967
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಮಾರ್ಗದರ್ಶಕ ದೀಪ, ಜೋಶಿಯವರ 'ಜಾಗರ', ಕೇದಗೆ', 'ಮುಡಿ' ಮೊದಲಾದ ವಿಮರ್ಶಾ ಕೃತಿಗಳು ಅಸಾಮಾನ್ಯ ಒಳನೋಟಗಳಿಂದ ಕೂಡಿವೆ. ಯಕ್ಷಗಾನಕ್ಕೆ ಸಂಬಂಧಿಸಿ ಅಧ್ಯಯನಕ್ಕೆ ಮುಂದಾಗುವವರು ಅಭ್ಯಸಿಸಲೇ ಬೇಕಾದ ಗ್ರಂಥಗಳಿವು. ತಮ್ಮ ವಿಮರ್ಶಾ ಕಾರ್ಯಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ವಿಮರ್ಶಾ ಪಥವೊಂದನ್ನು ನಿರ್ಮಿಸಿಕೊಟ್ಟ ಆಚಾರ್ಯ ಪುರುಷ ಅವರು.<br>
{{gap}}ಅರ್ಥದಾರಿಯಾಗಿ ತನ್ನ ವಿಶಿಷ್ಟ ಶೈಲಿಯಿಂದ ಪ್ರಸಿದ್ಧಿ ಗಳಿಸಿರುವ ಜೋಶಿಯವರ ಅರ್ಥಗಾರಿಕೆಗೆ ತಾಳಮದ್ದಳೆ ರಂಗದಲ್ಲಿ ಪ್ರತ್ಯೇಕ ಸ್ಥಾನವಿದೆ. ದರ್ಶನ ಶಾಸ್ತ್ರಗಳ ವ್ಯಾಪಕ ಅಧ್ಯಯನ ಮಾಡಿದ್ದು ಆ ಕುರಿತೂ ಕೃತಿ ರಚಿಸಿದವರು. ಅನೇಕ ಗ್ರಂಥಗಳ ಸಂಪಾದಕರು, ಸಂಘ ಸಂಸ್ಥೆಗಳಿಗೆ ಸಲಹಾಕಾರರು.<br>
{{gap}}ಅತ್ಯುತ್ತಮ ಭಾಷಣಾಕಾರರಾದ ಜೋಶಿಯವರ ಭಾಷಣ ಕೇಳುವುದು ಒಂದು ಸುಂದರ ಅನುಭೂತಿ, ಗಾಂಭೀರ್ಯ, ವ್ಯಂಗ್ಯ, ವಿನೋದ, ತಲಸ್ಪರ್ಶಿ ದೃಷ್ಟಿಕೋನ,ಹೊಸ ಕಾಣೆಗಳ ಪಾಕವದು. ಕೆಲವು ವರ್ಷಗಳ ಹಿಂದೆ ಅಕಾಡೆಮಿಯಿಂದರ ಸದಸ್ಯತ್ವಕ್ಕೆ ಸರಕಾರ ಅವರ ನಾಮನಿರ್ದೇಶನ ಮಾಡಿದಾಗ ಅದರ ಆಕರ್ಷಣೆಯಿಂದ ದೂರವುಳಿದ ನಿರ್ಲಿಪ್ತ. ಇತ್ತೀಚೆಗೆ ಪಾರ್ತಿಸುಬ್ಬ ಪ್ರಶಸ್ತಿಗೆ ಪಾತ್ರರಾದ ಡಾ. ಜೋಶಿ ಯಕ್ಷಗಾನದ ಹಿರಿಮೆ.<br>
{{Right|'''(ಕೃಪೆ : ಮಂಚಿ ಸಮಾಚಾರ)'''}}
“ಯಕ್ಷಗಾನದ ಹಿರಿಮೆಯ ಚಿಂತಾಮಣಿ ಕಡ್ಡಿ, ನಮ್ಮ ಕಿವಿಯ ಮೇಲೇ
ಇದೆ; ಆದರೆ, ನಮಗೆ ಗೊತ್ತಿಲ್ಲ, ಯಕ್ಷಗಾನವನ್ನು ಸಿನೆಮಾ, ನಾಟಕ
ಮಾಡುವುದಲ್ಲ. ಯಕ್ಷಗಾನದ ಗರ್ನಾಲು, ಬ್ಯಾಂಡು ಮಾರಕ, ಅತಿ
ವಿಸ್ತಾರವಾದ, ಅಪಾರ ಸಾಧ್ಯತೆ, ಸಾಮರ್ಥ್ಯ ಹೊಂದಿರುವ
ಯಕ್ಷಗಾನದಲ್ಲಿ ಏನೇ ಬದಲಾವಣೆ ಮಾಡುವುದಿದ್ದರೂ ಅದು ಯಕ್ಷಗಾನ
ಎಂಬ ಮಾಧ್ಯಮ ಮೀರಬಾರದು.”
'''ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಉಪನ್ಯಾಸದಲ್ಲಿ'''
{{center|ಜಾಗರದ ಜೋಶಿ / 23}}<noinclude></noinclude>
3cs105j71rnacb7yw0vl6kkh84b66l7
ಪುಟ:ಜಾಗರದ ಜೋಶಿ.pdf/೭೮
104
99381
320982
277972
2026-05-20T02:52:41Z
Shreelatha.Halemane
7642
/* Validated */
320982
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಬಡಗುತಿಟ್ಟಿನ ಬಯಲಾಟಕ್ಕೂ ರೂಪದಲ್ಲಿ ಹೋಲಿಕೆಯಿದೆ. ಇವೆರಡು ನಿಜವಾದರೆ ಕಾರ್ಕಳದ ಗೊಂಬೆಗಳಿಗೂ ಆ ಕಾಲದ ಬಯಲಾಟಕ್ಕೂ ಸಾರೂಪ್ಯ ಇರಲೇ ಬೇಕು.ಅದು ಸತ್ಯವಾದರೆ ಶತಮಾನಗಳ ಹಿಂದೆ ದಕ್ಷಿಣ ಕನ್ನಡದ ಒಂದು ಭಾಗದಲ್ಲಿ ಇದ್ದ
ಪ್ರಾಚೀನ ಯಕ್ಷಗಾನದ ವೇಷಚಿತ್ರವು ಆ ಗೊಂಬೆಗಳಲ್ಲಿ ಇದೆ ಎಂದರ್ಥ. ಕುಂಬಳೆ ಸೀಮೆಗೆ ಕನ್ನಡಿಗರ ದಂಡು ಯಕ್ಷಗಾನವನ್ನು ಒಯ್ದುದು ನಿಜವಾದರೆ ಅದು ಕಾರ್ಕಳವನ್ನು ಹಾದೇ ಹೋಗಿರಬೇಕು, ಕರಾವಳಿಗೂ ಘಟ್ಟದ ಮೇಲುಭಾಗಕ್ಕೂ ಇದ್ದ ಒಂದು ಪ್ರಾಚೀನ ಸಂಪರ್ಕ ದಾರಿ ಆಗುಂಬೆ - ಕಾರ್ಕಳ<br>
{{gap}}'ಕಲೆ ಮತ್ತು ವ್ಯವಸಾಯ' ಪ್ರಬಂಧದಲ್ಲಿ ರಂಗಭೂಮಿಯ ಹಾಗೂ ಗೊಂಬೆಯಾಟದ ಉಳಿವಿಗೆ ಉಪಯುಕ್ತ ಸಲಹೆಗಳನ್ನಿಟ್ಟಿದ್ದಾರೆ. ಜೋಶಿ ಆಂದಂತೆ ವಾಣಿಜ್ಯೀಕರಣದಿಂದ
ತೆಂಕುತಿಟ್ಟು ಪರಿವರ್ತನೆಗೆ ಒಳಪಟ್ಟುದು ನಿಜ. ಆದರೆ ಬಡಗು ಕೂಡಾ ಅದೇ ರೀತಿಯ ಇನ್ನೊಂದು ವ್ಯಾಪಾರಿ ಪಿಡುಗಿಗೆ ಒಳಗಾಗಿದೆ. ಇಲ್ಲಿ ಕಾಲ್ಪನಿಕ ಸತ್ವಹೀನ ಕಥಾನಕಗಳನ್ನು ಪ್ರಸಂಗವಾಗಿಸಿ ಬಯಲಾಟದ ರೂಪವಿಶೇಷವನ್ನು ಅಪಮೌಲ್ಯ ಗೊಳಿಸಿರುವುದು ಅಷ್ಟೇ ಸತ್ಯ. ಬಡಗಿನ ಹಳೆಯ ಭಾಗವತರು, ಮದ್ದಳೆಗಾರರು ಇಂದು ನೇರ ರಂಗಸ್ಥಳಕ್ಕೆ ಹೋಗಿ 'ಕಸುಬು' ಮಾಡಲಾರದ ಸ್ಥಿತಿಯನ್ನು ತಮ್ಮ ಕಣ್ಣೆದುರೇ ಕಂಡು ಅಸಹಾಯಕರಾಗಿದ್ದಾರೆ. ಒಂದು ರಂಗಭೂಮಿಯಿಂದ ಇನ್ನೊಂದು
ಕವಲು ಹೇಗೆ ಹುಟ್ಟಿಕೊಳ್ಳುತ್ತದೆ ಎಂಬುದಕ್ಕೆ ನಮ್ಮ ಕಣ್ಣೆದುರೇ ಎದ್ದು ಬಂದ ತುಳು ಯಕ್ಷಗಾನವೇ ನಿದರ್ಶನವಾಗುತ್ತದೆ.<br>
{{gap}}'ಪ್ರಸಂಗ ರಚನೆ : ರಂಗದೃಷ್ಟಿ' : ಜೋಶಿ ಅವರ ವಿವರವಾದ ಪೃಥಕ್ಕರಣ, ಸೂಕ್ಷ್ಮ ವಿವೇಚನೆಗೆ ಕನ್ನಡಿಯಾಗಿದೆ. ಈ ಪ್ರಬಂಧದಲ್ಲಿ ಅಂತೆಯೇ 'ತಾಳಮದ್ದಳೆಯ ಮಾತುಗಾರಿಕೆ' ಹಾಗೂ 'ಅರ್ಥಗಾರಿಕೆ : ಸೃಜನಶೀಲದೃಷ್ಟಿ' ಇವುಗಳಲ್ಲೂ ಪ್ರಸಂಗ ಕೃತಿ ಹಾಗೂ ಅರ್ಥದಾರಿಯ ಸಂಬಂಧಗಳನ್ನು ಸೂಕ್ಷ್ಮವಾಗಿ ಸೀಳಿ ನೋಡಲಾಗಿದೆ.ಇವುಗಳನ್ನೆಲ್ಲ ಹಾದು ಹೋಗುವಾಗ ಸಹಮತದ ನಡುವೆ ಪ್ರಶ್ನೆಯೊಂದು ಎದ್ದು ನಿಲ್ಲುತ್ತದೆ. ಅದು ಪ್ರಸಂಗದ ಆಶಯವನ್ನು ತಿದ್ದಲು ಅರ್ಥದಾರಿಗೆ ಎಷ್ಟರ ಮಟ್ಟಿನ
ಸ್ವಾತಂತ್ರ್ಯ ಇದೆ ಎಂಬುದು “... ಸೃಜನಶೀಲ ಅರ್ಥದಾರಿ ಪ್ರಸಂಗದ ಆಶಯವನ್ನು, ಹಂದರವನ್ನು ಮೀರಿ ನಡೆಯುತ್ತಾನೆ.” (ಪುಟ 64) ಇಲ್ಲಿ ಮೀರುವುದರ ಅಗತ್ಯದ ಜೊತೆಗೆ ಮೀರುವಿಕೆಯ ಮಿತಿಗಳನ್ನೂ ಸ್ಪಷ್ಟಪಡಿಸಿದ್ದರೆ ಒಳ್ಳೆಯದಿತ್ತು. ಇಲ್ಲವಾದರೆ
ಪ್ರಸಂಗವೆಂಬುದು ಅರ್ಥದಾರಿಗಳು ತಮಗೆ ಬೇಕಾದಂತೆ ಎತ್ತಬಹುದಾದ ಕೈಗೂಸಾಗುವ ಭಯವಿದೆ. ಪ್ರಸಂಗದ ಆಶಯವನ್ನು ಹೆಚ್ಚು ವ್ಯಾಪಕತೆಗೆ ವಿಕಾಸಗೊಳಿಸುವುದಾದರೆ ಅಥವಾ ಆಧುನಿಕ ಪರಿಭಾಷೆಯಲ್ಲಿ ಹೆಚ್ಚು ಪ್ರಗತಿಪರವಾಗಿ ಮೆರೆಯಿಸುವುದಾದರೆ
ಜೋಶಿ ಅವರ ಅಭಿಪ್ರಾಯ ಸ್ವೀಕರಾರ್ಹ, ಪ್ರಸಂಗದ ಆಶಯದಿಂದ ಪ್ರತ್ಯೇಕವಾದ ಮತ್ತು ಹೊಂದಿಕೆ ಇಲ್ಲದ ಆಶಯವನ್ನು ಬಿಂಬಿಸಹೊರಟರೆ 'ಅರ್ಥ' ವಿರೋಧಾಭಾಸದ ನಿದರ್ಶನವಾಗುತ್ತದೆ. ಇಂಥಲ್ಲಿ ಪ್ರತ್ಯೇಕ ಪ್ರಸಂಗ ರಚಿಸಿ ಪ್ರದರ್ಶಿಸುವುದೇ ಸೂಕ್ತ.
{{rh|center=ಜಾಗರದ ಜೋಶಿ / 71}}<noinclude></noinclude>
mgaozxb0wmg4shjf5fei5zzgdcbze61
ಪುಟ:ಜಾಗರದ ಜೋಶಿ.pdf/೩೧
104
99382
320969
278010
2026-05-20T02:37:39Z
Shreelatha.Halemane
7642
/* Validated */
320969
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|'''ವಿಮರ್ಶಾ ಶಿಸ್ತಿನ ಚಿಂತಕ'''}}
{{Css image crop
|Image = ಜಾಗರದ_ಜೋಶಿ.pdf
|Page = 31
|bSize = 374
|cWidth = 147
|cHeight = 170
|oTop = 119
|oLeft = 225
|Location = center
|Description ='''ಪ್ರೊ. ಎಂ.ಎಲ್. ಸಾಮಗ'''
}}
{{gap}}ಸುಮಾರು ಮೂವತ್ತೈದು ವರುಷಗಳ ಹಿಂದೆ ಮಂಗಳೂರಿನಲ್ಲಿಒಂದು<br>
{{gap}}ತಾಳಮದ್ದಳೆ, ಡಾ. ಗುಂಡಿ ಚಂದ್ರಶೇಖರ ಐತಾಳರು ಪ್ರಭಾಕರ ಜೋಶಿ<br>
{{gap}}ಯವರನ್ನು ಪರಿಚಯಿಸುತ್ತ ಭವಿಷ್ಯ ನುಡಿದಿದ್ದರು - “ಶೇಣಿಯವರ<br>
{{gap}}ಉತ್ತರಾಧಿಕಾರಿಯಾಗುವ ಸರ್ವಸಾಧ್ಯತೆಗಳು ಪ್ರಭಾಕರ ಜೋಶಿಯವ<br>
{{gap}}ರಲ್ಲಿವೆ.”<br>
{{gap}}{{gap}}ಡಾ. ಶೇಣಿಯರ ಅನಂತರದ ತಾಳಮದ್ದಳೆ ಯುಗದಲ್ಲಿ ಶೇಣಿ,<br>
{{gap}}ಸಾಮಗರಿಗಿಂತ ಭಿನ್ನ ಅರ್ಥದಾರಿಯಾಗಿ ಅರ್ಹತೆ ಗಳಿಸಿಕೊಂಡಿದ್ದಾರೆ<br>
{{gap}}ಎಂಬುದು ಕಲಾಭಿಮಾನಿಗಳೆಲ್ಲರ ಅಭಿಪ್ರಾಯ, ಸ್ವತಃ ಯಕ್ಷಗಾನಕ್ಕೆ<br>
{{gap}}ಕಾಯಕಲ್ಪ ಮಾಡಿ ಅದರ ಪುನರುತ್ಥಾನ ಸಾಧಿಸಿದ ಡಾ.ಶಿವರಾಮ<br>
{{gap}}ಕಾರಂತರ ಹೆಸರು ಯಕ್ಷಗಾನದೊಂದಿಗೆ ನವೀಕರಣ ಗೊಂಡ ಕಾಲ<br>
{{gap}}ವೊಂದಿತ್ತು. ಈಗ ಯಕ್ಷಚಿಂತನೆಗೆ ಜೋಶಿಯವರ ಹೆಸರು ಪರ್ಯಾಯ<br>
{{gap}}ಪದವಾಗುತ್ತಿದೆ. ಯಾಕೆಂದರೆ ಜೋಶಿಯವರಷ್ಟು ವ್ಯಾಪಕವಾಗಿ<br> {{gap}}ಯಕ್ಷಗಾನ ಅಂಗೋಪಾಂಗಗಳ ಬಗ್ಗೆ ಬರೆದವರು, ಮಾತನಾಡಿದವರು,<br> {{gap}}ಯಕ್ಷಗಾನ ತಾಳಮದ್ದಳೆಗಳಲ್ಲಿ ಭಾಗವಹಿಸಿದವರು ಇನ್ನೊಬ್ಬರಿಲ್ಲ.
{{center|ಜಾಗರದ ಜೋಶಿ / 24}}<noinclude></noinclude>
fodzry9t8j62273lb1r416hdwufeu0d
ಪುಟ:ಜಾಗರದ ಜೋಶಿ.pdf/೭೯
104
99385
320983
277973
2026-05-20T02:53:05Z
Shreelatha.Halemane
7642
/* Validated */
320983
proofread-page
text/x-wiki
<noinclude><pagequality level="4" user="Shreelatha.Halemane" /></noinclude>
{{gap}}ಒಟ್ಟಿನಲ್ಲಿ 'ಕೇದಗೆ' ಯಕ್ಷಗಾನದ ತಲಸ್ಪರ್ಶಿ ಅಧ್ಯಯನಕ್ಕೆ ಒಂದು ಬುನಾದಿಯನ್ನು ಹಾಕಿಕೊಟ್ಟಿದೆ. ಇವತ್ತು ಯಕ್ಷಗಾನವು ಡಾಕ್ಟರೇಟ್ ಬಿರುದಿಗಾಗಿ ಅಭ್ಯಸಿಸಲು ಅರ್ಹವಾದ ವಿಷಯವಾಗಿದೆ. ಯಕ್ಷಗಾನ ಪ್ರಸಂಗವು ಕಾಲೇಜಿನಲ್ಲಿ ಪಠ್ಯಪುಸ್ತಕವಾಗಿದೆ. ಇಂಥಲ್ಲಿ ವಿಮರ್ಶಾ ಸಾಹಿತ್ಯ ಈ ರಂಗದಲ್ಲಿ ಬರುವುದು ದ್ರವ್ಯದೃಷ್ಟಿಯಲ್ಲಿ ಲಾಭಕರ ಅಲ್ಲವಾದರೂ ತೀರಾ ಅಗತ್ಯ. ಕಲಾವಿದರು ಸಿದ್ಧಗೊಳ್ಳುವ ರೀತಿಯು ಈಚೆಗೆ ಬದಲಾಗಿದೆ. ವಿವಿಧ ಯಕ್ಷಗಾನ ಕೇಂದ್ರಗಳಿಂದ ಹೊರಬರುವ ಕಲಾವಿದರಿಗೆ ಇಂಥ ಗ್ರಂಥಗಳು ಕೈದೀವಿಗೆಯಾಗುತ್ತದೆ. ಕಲಾವಿದರಿಗೆ ತಮ್ಮ 'ಕಸುಬಿ'ನ ಬೆಲೆ ಗೊತ್ತಾಗುತ್ತದೆ. ಇದು ಕಲಾವಿದರಲ್ಲಿ, ಮೇಳ ಸಂಘಟಕನಲ್ಲಿ ಒಮ್ಮೆ ಮೂಡಿತಾದರೆ ಸಂಸ್ಕೃತಿಯ ಅಭ್ಯುದಯ
ಅರಂಭವಾಯಿತೆಂದೇ ಅರ್ಥ. ಅದುವೇ 'ಜಾಗರ', 'ಕೇದಗೆ'ಗಳ ಅಂತಿಮ ಗುರಿ.
{{rh|right=(19-12-1986)}}
{{rh|center=ಜಾಗರದ ಜೋಶಿ / 72}}<noinclude></noinclude>
0elkdw6vh3umyowo568x52zvmgvb845
ಪುಟ:ಜಾಗರದ ಜೋಶಿ.pdf/೮೦
104
99389
320984
277976
2026-05-20T02:53:31Z
Shreelatha.Halemane
7642
/* Validated */
320984
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Css image crop
|Image = ಜಾಗರದ_ಜೋಶಿ.pdf
|Page = 80
|bSize = 381
|cWidth = 120
|cHeight = 179
|oTop = 8
|oLeft = 15
|Location = left
|Description =
}}
{{gap}}ಮಾರುಮಾಲೆ, 1990,
{{gap}}ನ್ಯೂಸ್ಟಾರ್ ಪಬ್ಲಿಕೇಶನ್ಸ್, ಬೆಂಗಳೂರು
'''ಪರಿಚಿತ ಅಂಶಗಳ ಅಪರಿಚಿತ ಮುಖಗಳು'''
'''ಡಾ. ಬಿ.ಎ. ವಿವೇಕ ರೈ'''
ಮಿತ್ರ ಎಂ. ಪ್ರಭಾಕರ ಜೋಶಿ ಅವರು ಕನ್ನಡದ ಇಂದಿನ ಯಕ್ಷಗಾನ ವಿಮರ್ಶಕರಲ್ಲಿ ಅಗ್ರಗಣ್ಯರು. ತಮ್ಮ 'ಜಾಗರ' ಮತ್ತು 'ಕೇದಗೆ' ಎಂಬ ಎರಡು ಗ್ರಂಥಗಳ ಮೂಲಕ ಕರಾವಳಿಯ ಯಕ್ಷಗಾನದ ಕುರಿತು ಮಹತ್ವದ ಅನೇಕ ಹೊಸ ಮಾತುಗಳನ್ನು ಹೇಳಿದ್ದಾರೆ. ಯಕ್ಷಗಾನ ತಾಳಮದ್ದಳೆಯ ಶ್ರೇಷ್ಠ ಹಾಗೂ ಪ್ರಸಿದ್ಧ ಅರ್ಥದಾರಿಯಾಗಿರುವ ಜೋಶಿಯವರು ಯಕ್ಷಗಾನದ ಗಂಭೀರ ವಿಮರ್ಶಕರೂ ಆಗಿರುವುದು ಅಪೂರ್ವ ಸಂಗತಿ.<br>
{{gap}}ಯಕ್ಷಗಾನದಂತಹ ಜನಪ್ರಿಯ ರಂಗಭೂಮಿಯ ಕಲಾವಿದ
ರೊಬ್ಬರು ತಮ್ಮ ಕಲೆಯ ಬಗ್ಗೆ ಸಹಜವಾಗಿಯೇ ಅತಿ ಮಮತೆಯನ್ನೂ, ಉತ್ಸಾಹವನ್ನೂ, ಅಭಿಮಾನವನ್ನೂ ಹೊಂದಿರುತ್ತಾರೆ. ಆ ಕಲೆಯ ಹೊರಗೆ ನಿಂತುಕೊಂಡು ಸಾಧ್ಯತೆ ಹಾಗೂ ಮಿತಿಗಳನ್ನು ಗುರುತಿಸುವುದು, ಅದರ ಬದಲಾವಣೆಗಳ ಒಳಿತು ಕೆಡುಕುಗಳನ್ನು ಮೌಲ್ಯಮಾಪನ ಮಾಡುವುದು ಸಾಮಾನ್ಯವಾಗಿ ಅವರಿಗೆ ಸಾಧ್ಯವಾಗುವುದಿಲ್ಲ. ಆದರೆ ಜೋಶಿಯವರು ಕಲಾವಿದ ಮತ್ತು ವಿಮರ್ಶಕ ಎರಡೂ ಆಗಿರುವುದರಿಂದ ಅವರ ಅರ್ಥಗಾರಿಕೆಗೆ ವಿಮರ್ಶನದ ಮೂಲಕ ಹೊಸತನ ಪ್ರಾಪ್ತವಾಗಿ, ಅದು ಪ್ರದರ್ಶನದಿಂದ ಪ್ರದರ್ಶನಕ್ಕೆ ಸಾಧ್ಯತೆಗಳನ್ನು ಶೋಧಿಸುತ್ತಾ ಹೋಗುತ್ತದೆ.
{{rh|center=ಜಾಗರದ ಜೋಶಿ / 73}}<noinclude></noinclude>
podbr42h8dd83xz0csn411dyamgsdje
ಪುಟ:ಜಾಗರದ ಜೋಶಿ.pdf/೮೧
104
99391
320985
277977
2026-05-20T02:54:06Z
Shreelatha.Halemane
7642
/* Validated */
320985
proofread-page
text/x-wiki
<noinclude><pagequality level="4" user="Shreelatha.Halemane" /></noinclude>
{{gap}}ವಿಮರ್ಶೆಯು ರಂಗದ ಅನುಭವಗಳ ಆಧಾರ ಸಾಮಗ್ರಿಗಳ ಬಲದಿಂದ ವ್ಯಾಖ್ಯಾನ ಮತ್ತು ವಿವರಣೆಗಳ ಶಿಸ್ತನ್ನು ರೂಢಿಸಿಕೊಳ್ಳುತ್ತದೆ. ಈ ದೃಷ್ಟಿಯಿಂದ ಜೋಶಿಯವರ ಅರ್ಥಗಾರಿಕೆಯು ಬೆಳವಣಿಗೆಗೂ, ಅವರ ಯಕ್ಷಗಾನ ವಿಮರ್ಶೆಯ
ಬೆಳವಣಿಗೆಗೂ ಸಾವಯವ ಸಂಬಂಧವನ್ನು ಗುರುತಿಸಬಹುದು. ಪ್ರಸ್ತುತ ಕೃತಿ 'ಮಾರುಮಾಲೆ'ಯಲ್ಲಿ ಜೋಶಿಯವರು ಚರ್ಚಿಸುವ ಅನೇಕ ಸಂಗತಿಗಳು 'ಜಾಗರ' ಮತ್ತು 'ಕೇದಗೆ' ಗ್ರಂಥಗಳಲ್ಲೂ ವಿಮರ್ಶೆಗೆ ಒಳಗಾಗಿದೆ. ಆದರೆ ಅದು ಆ ಲೇಖನಗಳ ಪುನರಾವರ್ತನೆಯಾಗದೆ, ಸಂಶೋಧನೆಯ ಮುಖ್ಯ ಲಕ್ಷಣವಾದ ಬೆಳವಣಿಗೆ ರೂಪದ್ದಾಗಿದೆ ಎಂಬುದು ಮಹತ್ವದ ಅಂಶ. ಈ ಸಂಕಲನದಲ್ಲಿನ 'ತಾಳಮದ್ದಳೆಯ ಹಿಮ್ಮೇಳ','ತುಳು ಯಕ್ಷಗಾನ : ನಿನ್ನೆ, ಇಂದು, ನಾಳೆ', 'ಅರ್ಥಗಾರಿಕೆ : ಪರಂಪರೆ
ಮತ್ತು ಪ್ರಯೋಗ', 'ಪರಂಪರೆ ಮತ್ತು ಪ್ರಯೋಗ', 'ಸೃಜನಶೀಲತೆಯ ಸಂದರ್ಭ' - ಈ ಲೇಖನಗಳನ್ನು ಈ ದೃಷ್ಟಿಯಿಂದ ವಿಶೇಷವಾಗಿ ಗಮನಿಸಬಹುದು.<br>
{{gap}}ಜೋಶಿಯವರ ಯಕ್ಷಗಾನ ವಿಮರ್ಶೆಯ ಲೇಖನಗಳಲ್ಲಿ ಅವರನ್ನು ಬಹಳವಾಗಿ ಕಾಡಿದ ಸಮಸ್ಯೆ ಅಂದರೆ ಪರಂಪರೆ ಮತ್ತು ಪ್ರಯೋಗಗಳ ಸಂಬಂಧದ ಸ್ವರೂಪ ಹೇಗಿರಬೇಕು ಎಂಬುದು. ಅವರ ಹೆಚ್ಚಿನ ಲೇಖನಗಳಲ್ಲಿ ಈ ಪ್ರಶ್ನೆಯು ಬೇರೆ ಬೇರೆ ರೂಪಗಳಲ್ಲಿ ಮತ್ತು ನೆಲೆಗಳಲ್ಲಿ ಕಾಣಿಸಿಕೊಂಡಿದೆ. ಇದನ್ನು ಜೋಶಿಯವರ ವಿಮರ್ಶೆಯ ಬಹಳ ಮುಖ್ಯವಾದ ತಾತ್ವಿಕ ತಳಹದಿ ಎಂದು ಭಾವಿಸುತ್ತೇನೆ. ಯಕ್ಷಗಾನದಂತಹ ರಂಗಭೂಮಿಯು ಕಲೆಯನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರಿಸಬೇಕು ಮತ್ತು
ಅದಕ್ಕಾಗಿ ಈ ಕಲೆಗೆ ಸಂಬಂಧಪಟ್ಟ ಎಲ್ಲಾ ಕ್ಷೇತ್ರಗಳವರು ತಮ್ಮ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕು ಎನ್ನುವ ಕಾಳಜಿಯು ಒಂದು ಜೀವಂತ ರಂಗಭೂಮಿಯು ಬೆಳವಣಿಗೆಯಲ್ಲಿ ಬಹಳ ಮಹತ್ವದ ಅಂಶ. ಆದ್ದರಿಂದಲೇ ಇಲ್ಲಿನ ವಿಮರ್ಶಾ ಲೇಖನಗಳು
ಕೇವಲ ಸೈದ್ಧಾಂತಿಕ ಸ್ವರೂಪದವು ಅಲ್ಲ; ಅವು ನಿರ್ದಿಷ್ಟ ತಾತ್ವಿಕ ತಳಹದಿಯುಳ್ಳ ಪ್ರಾಯೋಗಿಕ ಮೌಲ್ಯ ಹೊಂದಿರುವವು. ಹೀಗೆ ರಂಗದಿಂದ ಆಧಾರ ಸಾಮಗ್ರಿಗಳನ್ನು ಎತ್ತಿಕೊಂಡು ಅವನ್ನು ಪರಿಶೀಲಿಸಿ, ಪರಿಷ್ಕರಿಸಿ ಮತ್ತೆ ರಂಗಕ್ಕೆ ಕೊಟ್ಟು, ಅದನ್ನು ಪೋಷಿಸುವ – ಪರಿಷ್ಕರಿಸುವ ಒಂದು ವರ್ತುಲದ ಮಾದರಿಯಲ್ಲಿ ಇಲ್ಲಿನ ಲೇಖನಗಳ ರಚನೆಯಿದೆ. ಯಕ್ಷಗಾನ ರಂಗಭೂಮಿಯಲ್ಲಿ ಭಾಗವತರು ಸ್ಕೂಲವಾಗಿ ಮಾಡುವ ಕೆಲಸವನ್ನು, ಯಕ್ಷಗಾನ ವಿಮರ್ಶೆಯಲ್ಲಿ ಹೆಚ್ಚು ಸೂಕ್ಷ್ಮವಾಗಿ ಜೋಶಿಯವರು ಮಾಡಿದ್ದಾರೆ. ಹೀಗಾಗಿ ಜೋಶಿಯವರು ಒಬ್ಬ 'ವಿಮರ್ಶಕ-ಭಾಗವತ'.<br>
{{gap}}“ಕರಾವಳಿ ಯಕ್ಷಗಾನ – ನೈಸರ್ಗಿಕ ಹಿನ್ನೆಲೆ' ಲೇಖನವು ರಾಚನಿಕ ಅಧ್ಯಯನದ ಮಾದರಿಯುಳ್ಳದ್ದು. ಆದ್ದರಿಂದ ಆ ಅಧ್ಯಯನ ಕ್ರಮದ ವಿಶಿಷ್ಟ ಒಳನೋಟಗಳೂ ಕೆಲವು ಮಿತಿಗಳೂ ಈ ಲೇಖನಕ್ಕೂ ಇವೆ. ನಿಸರ್ಗ ಮತ್ತು ಸಂಸ್ಕೃತಿ ಇವುಗಳ
ಸಂಬಂಧಗಳು ಮನುಷ್ಯನ ಬದುಕಿನ ಬೇರೆ ಬೇರೆ ವಿನ್ಯಾಸಗಳನ್ನು ರೂಪಿಸಿದುದನ್ನು ಜಾನಪದಲ್ಲಿ ರಾಚನಿಕ ವಿಮರ್ಶಕರು ಚರ್ಚಿಸಿದ್ದಾರೆ. ನಿಸರ್ಗವನ್ನು ಮತ್ತು ಸಹಜತೆಯನ್ನು
{{rh|center=ಜಾಗರದ ಜೋಶಿ / 74}}<noinclude></noinclude>
89anlqmxwqxricv6i2e14ztv7dtbtu4
ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು
4
101285
320858
320671
2026-05-19T14:36:24Z
A826
6806
320858
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 35580<br><small>ದತ್ತಾಂಶ ಪಡೆದ ಸಮಯ: 2026-05-19 13:22:18 UTC / 2026-05-19 18:52:18 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Shreelatha.Halemane|Shreelatha.Halemane]] || 0 || 0 || 6644 (9264) || 0 || 0 || 4729 || 786 (1572) || 1005 (3015) || 6926 || '''9264'''
|-
| 2 || [[Special:Contributions/Pragathi. BH|Pragathi. BH]] || 0 || 0 || 7613 (8282) || 0 || 0 || 6976 || 135 (270) || 478 (1434) || 8118 || '''8282'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 3026 (4043) || 0 || 0 || 1954 || 358 (716) || 347 (1041) || 3500 || '''4043'''
|-
| 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 528 (1254) || 0 || 0 || 70 || 63 (126) || 390 (1170) || 654 || '''1254'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 180 (226) || 25 || 0 || 2 || 2 (4) || 27 (81) || 10958 || '''249'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 10 || [[Special:Contributions/Hariprasad Shetty10|Hariprasad Shetty10]] || 0 || 0 || 69 (147) || 0 || 0 || 0 || 19 (38) || 33 (99) || 296 || '''147'''
|-
| 11 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109'''
|-
| 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 18 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 19 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 20 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 21 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 22 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 25 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
3lklywwg378hd5wie2r8u8ias2ruoxf
320920
320858
2026-05-19T17:44:55Z
A826
6806
320920
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 37172<br><small>ದತ್ತಾಂಶ ಪಡೆದ ಸಮಯ: 2026-05-19 17:43:46 UTC / 2026-05-19 23:13:46 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Shreelatha.Halemane|Shreelatha.Halemane]] || 0 || 0 || 6803 (9480) || 0 || 0 || 4890 || 801 (1602) || 1028 (3084) || 7199 || '''9480'''
|-
| 2 || [[Special:Contributions/Pragathi. BH|Pragathi. BH]] || 0 || 0 || 8671 (9415) || 0 || 0 || 7983 || 138 (276) || 527 (1581) || 9192 || '''9415'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 3205 (4222) || 0 || 0 || 2097 || 358 (716) || 347 (1041) || 3724 || '''4222'''
|-
| 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 528 (1254) || 0 || 0 || 70 || 63 (126) || 390 (1170) || 654 || '''1254'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 193 (241) || 26 || 0 || 5 || 4 (8) || 28 (84) || 10974 || '''265'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 10 || [[Special:Contributions/Hariprasad Shetty10|Hariprasad Shetty10]] || 0 || 0 || 70 (148) || 0 || 0 || 0 || 19 (38) || 33 (99) || 296 || '''148'''
|-
| 11 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109'''
|-
| 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
32o30cs6beqn4xgfo3o5q5yka1wazxm
320963
320920
2026-05-20T02:29:44Z
A826
6806
320963
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 37215<br><small>ದತ್ತಾಂಶ ಪಡೆದ ಸಮಯ: 2026-05-20 02:28:28 UTC / 2026-05-20 07:58:28 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 8707 (9509) || 0 || 0 || 7983 || 138 (276) || 563 (1689) || 9235 || '''9509'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 6803 (9480) || 0 || 0 || 4890 || 801 (1602) || 1028 (3084) || 7199 || '''9480'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 3205 (4222) || 0 || 0 || 2097 || 358 (716) || 347 (1041) || 3724 || '''4222'''
|-
| 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 528 (1254) || 0 || 0 || 70 || 63 (126) || 390 (1170) || 654 || '''1254'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 193 (241) || 26 || 0 || 5 || 4 (8) || 28 (84) || 10974 || '''265'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 10 || [[Special:Contributions/Hariprasad Shetty10|Hariprasad Shetty10]] || 0 || 0 || 70 (148) || 0 || 0 || 0 || 19 (38) || 33 (99) || 296 || '''148'''
|-
| 11 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109'''
|-
| 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
qen83emg57d288px0enqyq2cotsn8v1
ಪುಟ:Praantabhaashhe-Rashhtrabhaashhe.pdf/೫೦
104
107290
321211
309040
2026-05-20T07:03:41Z
Shreesha Sharma
7840
/* Validated */
321211
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೪೫—}}
'ಹಿಂದಿ ಪ್ರಚಾರಸಭೆ' ಎಂಬ ಸಂಸ್ಥೆಯನ್ನು ಸ್ಪಾಪಿಸಿದರು. ಮುಂದೆ
ಅಸಹಕಾರದ ಚಳವಳಿಯ ಕಾಲಕ್ಕೆ ಹಿಂದು ಮುಸಲ್ಮಾನರಲ್ಲಿ ಹಾಗೂ ಉತ್ತರ
ದಕ್ಷಿಣ ಹಿಂದುಸ್ತಾನದಲ್ಲಿ ಪ್ರಚಂಡ ಪ್ರಚಾರಕಾರ್ಯವನ್ನು ಕೈಕೊಳ್ಳುವ
ಪ್ರಸಂಗವು ಅವರ ಮೇಲೆ ಬಂದಿತು. ಆಗ ಹಿಂದುಸ್ತಾನಿಯ ಅವಶ್ಯಕತೆಯು
ಅವರಿಗೆ ಮತ್ತಷ್ಟು ಪ್ರತೀತವಾಯಿತು ಸಾಗರೋತ್ತರ ಹಿಂದಿ ಬಾಂಧವರ
ಬಗ್ಗೆ ಗಾಂಧೀಜಿಯವರು ಕಾಂಗ್ರೆಸ್ ಅಧಿವೇಶನಗಳಲ್ಲಿ ಮಾತಾಡಿದಾಗೆಲ್ಲ
ಅವರು ಬಹುಶಃ ಹಿಂದುಸ್ಥಾನಿಯಲ್ಲಿಯೇ ಮಾತಾಡುತ್ತ ಬಂದಿದ್ದರು.
ಇಂಗ್ಲೀಷ ಮಾತಾಡಲೆಬೇಕೆಂದಲ್ಲಿ ಹಿಂದುಸ್ತಾನಿಯಲ್ಲಿ ಮಾತಾಡುವಂತೆ
ಮಾತಾಡಿ ಬಳಿಕ ಅವಶ್ಯವಿದ್ದಷ್ಟು ಇಂಗ್ಲೀಷ ಮಾತನಾಡುತ್ತಿದ್ದರು. ಹೀಗೆ
ಅವರು ಪ್ರತ್ಯಕ್ಷ ಆಚರಣೆಯ ಮೂಲಕವ ಹಿಂದುಸ್ತಾನಿಯ ಪ್ರಚಾರವನ್ನು
ನಡೆಸಿದ್ದರು. ಎಪ್ರಿಲ ೧೯೨೦ರಲ್ಲಿ ಅವರು ಆಲ್ ಇಂಡಿಯಾ ಹೋಮರೂಲ
ಲೀಗದ ಅಧ್ಯಕ್ಷಸ್ಥಾನವನ್ನು ಸ್ವೀಕರಿಸಿದರು. ಆಗ ಅವರು ಕೊಟ್ಟ ಹೇಳಿಕೆ
ಯಲ್ಲಿ ಈ ಭಾಷಾನುಗುಣ ಪ್ರಾಂತರಚನೆ ಹಾಗೂ ರಾಷ್ಟ್ರ ಭಾಷೆಯೆಂದು
ಹಿಂದುಸ್ತಾನಿಯ ಸ್ವೀಕಾರ' ಈ ಮಾತುಗಳು ಮುಖ್ಯವಾಗಿರುವವು. ಲೋಕ
ಮಾನ್ಯರು ಕೂಡ : ಭಾಷಾನುಗುಣವಾಗಿ ಪ್ರಾಂತಗಳ ಪುನಭಜನೆ ಹಾಗೂ
ರಾಷ್ಟ್ರಭಾಷೆಯ ಪ್ರಚಾರಾದಿ ಸಾಧನಗಳ ಮೂಲಕ ರಾಷ್ಟ್ರೀಯ ಐಕ್ಯ
ಸಾಧನೆ ” ಎಂಬ ಉದ್ದೇಶಗಳನ್ನು ಡೆಮಾಕ್ರೆಟಿಕ್ ಸ್ವರಾಜ್ಯ ಪಕ್ಷದ
ಘೋಷಣೆಯಲ್ಲಿ ಸೇರಿಸಿದ್ದರು. ೧೯೨೦ರಲ್ಲಿ ಆದ ನಾಗರ ಕಾಂಗ್ರೆಸ್ಸಿನ
ಘಟನೆ ಮಾಲ್ಪಟ್ಟಿತು. ಆಗ ಹಿಂದುಸ್ತಾನಿ ಇದು ಕಾಂಗ್ರೆಸ್ಸಿನ ಅಧಿಕೃತ
ಭಾಷೆ, ದೇಶದ ರಾಷ್ಟ್ರಭಾಷೆ ಆಯಿತು. ಭಾಷಾನುಗುಣ ಕಾಂಗ್ರೆಸ್ ಪ್ರಾಂತ
ಗಳಾಗಿ ಪ್ರಾಂತಿಕ ಭಾಷೆಗಳಿಗೂ ಕಾಂಗ್ರೆಸ್ ಘಟನೆಯಲ್ಲಿ ಆಯಾ ಪ್ರಾಂತ
ಗಳಲ್ಲಿಯ ಮುಖ್ಯ ಭಾಷೆಗಳೆಂದು ಸ್ಥಾನವು ದೊರಕಿತು ಮುಂದೆ ಅಸಹಕಾರ
ಚಳವಳಿ, ಗಾಂಧೀಜಿಯವರ ಸೆರೆ ಮತ್ತು ಅವರಿಗೆ ಶೀಕ್ಷೆ, ಅವರ ಬಿಡುಗಡೆ
ಮುಂತಾದವುಗಳು ನಡೆದವು. ೧೯೨೪ರಲ್ಲಿ ಅವರು ಬೆಳಗಾವಿಯಲ್ಲಿ ನೆರೆದ
ಕಾಂಗ್ರೆಸ್ಸಿನ ಅಧ್ಯಕ್ಷರಾದರು. ಅಂದಿನಿಂದ ನಿಧಾಯಕ ಕಾರ್ಯದತ್ತ ಅವರು
ಹೆಚ್ಚು ಲಕ್ಷ್ಯಗೊಡಹತ್ತಿದರು ೧೯೨೫ರಲ್ಲಿ ಕಾಂಗ್ರೆಸ್ಸು ಹಿಂದುಸ್ತಾನಿಯ
ಪ್ರಚಾರದ ಬಗ್ಗೆ ಒಂದು ಪ್ರತ್ಯೇಕ ಗೊತ್ತುವಳಿ ಮಾಡಿತು. ಪಂಚದಶವಿಧ<noinclude></noinclude>
ochap3fq7mge7u1pl5i70yao9wpvzr7
ಪುಟ:Praantabhaashhe-Rashhtrabhaashhe.pdf/೧೮
104
107293
321174
308671
2026-05-20T06:49:33Z
Pragathi. BH
7585
/* Validated */
321174
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೧೩—}}
ಮುಂತಾದವುಗಳೆಲ್ಲ. ನಾಟಕ ಮಹಾಕಾವ್ಯ, ಚ೦ಪೂ ಇತ್ಯಾದಿ ಸಾಹಿತ್ಯ
ರೂಪಗಳೆಲ್ಲ ಶುದ್ಧ ಸಂಸ್ಕೃತದಿಂದ ಕೊ೦ಡವುಗಳು. ತವರುಮನೆಯ
ವಸ್ತುಗಳನ್ನು ಪಡೆಯಲು ಮನೆಗಳಿಗೆ ಯಾವದೇ ಬಗೆಯ ಸಂಕೋಚವಿರ
ಲಾರದು, ಅಂದಬಳಿಕ ಸಂಸ್ಕೃತದಿಂದ ಬೇಕಾದ ಮಾತುಗಳನ್ನೆತ್ತಲು ಕನ್ನ
ಡಕ್ಕೆ ಸಂಕೋಚವೇಕೆ ? ಮುಂದೆ ಪರಿಯನ್ ಆಥವಾ ಫಾರಸೀ ಭಾಷೆಯ
ಸಂಬಂಧ ಬಂದಾಗ ನಾವು ಹಲವು ಉದ್ದು, ಅರಿಬೀ, ಫಾರಸೀ ಶಬ್ದಗಳನ್ನು
ಆತ್ಮಸಾಜ್ ಮಾಡಿಕೊಂಡೆವು. ಜರೂರ, ದರಬಾರ, ಜಮೀನ ಕಚೇರಿ,
ದವಾಖಾನೆ ಫೌಜದಾರ, ಅಗ್ನಿ ಇತ್ಯಾದಿ ತೀರ ರೂಢಿಯಲ್ಲಿರುವ ಶಬ್ದಗಳು
ಆಬಗೆಯವು. ಮರಾಠಿಯಂತೂ ನಮ್ಮ ನೆರೆ ಭಾಷೆ, ಈಗ ಸದ್ಯಕ್ಕೆ
ಇಂಗ್ಲೀಷ ಭಾಷೆಯೊಡನೆ ನಮ್ಮ ರಾಜಕೀಯ ದಾಸ್ಯದ ಮೂಲಕ
ಬಹಳ ಸಂಬಂಧ ಬಂದಿದೆ. ಆಕಾರಣದಿಂದ ಅದರಿಂದಲೂ ನಾವು ಅನೇಕ ಶಬ್ದ
ಗಳನ್ನೂ ಸಾಹಿತ್ಯ ರೂಪಗಳನ್ನು ಪಡೆದಿದ್ದೇವೆ, ಪಡೆಯುತ್ತಲಿದ್ದೇವೆ.
ಸ್ಟೇಶನ್, ಸಿನೇಮಾ, ಇಂಜಿನ್, ಮೋಟರ, ಆಸ್ಪತ್ರೆ ಮುಂತಾದ ಶಬ್ದಗ
ಳನ್ನು ನಮ್ಮವನ್ನಾಗಿ ಮಾಡಿಕೊಂಡಿದ್ದೇವೆ. ಈ ಬಗೆಯ ಉಪಕ್ರಮದ
ಮೂಲಕ ನಮ್ಮ ಭಾಷೆ ಕೆಟ್ಟಿದೆ ಎಂದು ತಿಳಿಯುವದಾಗಲಿ, ದುಲವಿದೆ
ಎಂದು ಭಾವಿಸುವದಾಗಲಿ ತಪ್ಪಾಗುವದು. ಯಾಕಂದರೆ ಈ ಪದ್ಧತಿಯು
ಅತ್ಯಂತ ಸ್ವಾಭಾವಿಕವು, ಎಲ್ಲ ಜೀವಂತ ಭಾಷೆಗಳೂ ಈ ಮಾತನ್ನೆ ಮಾಡೇ
ಮಾಡುತ್ತವೆ. ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇರಬಹುದು, ಸ್ವಭಾಷೆ
ಯಲ್ಲಿ ಹೊಸ ಶಬ್ದಗಳನ್ನು ನಿಲ್ದಾಣಮಾಡುವ ಸಾಮಥ್ಯವನ್ನು ಕುಗ್ಗಿ ಸದೆ
ಕಳಕೊಳ್ಳದೆ, ಅವಶ್ಯವಾದ ಅಥವಾ ಸ್ವಾಭಾವಿಕವಾಗಿ ಪ್ರಯತ್ನ ಎಲ್ಲದೆ ಬೇರೆ
ಭಾಷೆಗಳಲ್ಲಿಯ ಶಬ್ದಗಳನ್ನು ಉಪಯೋಗಿಸುವದು ಅನಿವಾಕ್ಯವೂ ಕ್ರಮ
ಪ್ರಾಪ್ತವೂ ಇರುವದು.
{{gap}}ಕನ್ನಡ ಭಾಷೆಯ ಭೂತಕಾಲವು ಅತ್ಯಂತ ಉಜ್ವಲವಿರುವದೆಂಬದು
ಅದರ ಇತಿಹಾಸದ ಮೇಲಿಂದ ಸಹಜವಾಗಿ ತಿಳಿಯುವಂತಿದೆ. ಕದ೦ಬರ
ಅ೦ದರೆ ೫ನೆಯ ಶತಮಾನದಿಂದ ಅದು ಒಂದೇ ಸವನಾಗಿ ಅನೇಕ ರಾಜ
ವಂಶಗಳ ಭಾಷೆಯಾದುದರಿಂದ ಅದು ಕರಟಕದಲ್ಲಿ ರಾಜ ಭಾಷೆಯೂ<noinclude></noinclude>
f2r1hbh0hlt1f4wst70cxqptux6oyy4
ಪುಟ:Praantabhaashhe-Rashhtrabhaashhe.pdf/೧೭
104
107299
321173
308670
2026-05-20T06:49:14Z
Pragathi. BH
7585
/* Validated */
321173
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೧೨ —}}
ದ್ದರೆಯೆ ಅನುಕೂಲ, ಹೀಗಾದರೆ ಮಾತ್ರ ಅಲ್ಲಿ ನಿಜವಾದ ಲೋಕಸ
ನೆಲೆಗೊಳ್ಳಬಲ್ಲದು, ಈ ಎಲ್ಲ ಮಾತುಗಳನ್ನು ಅನುಲಕ್ಷಿಸಿಯ ಕಾಂಗ್ರೆಸ್ಸು
ಭಾಷಾನುಗುಣ ಪ್ರಾಂತರಚನೆಯ ಛಲವನ್ನು ತೊಟ್ಟಿದೆ.
{{center|'''ಕನ್ನಡ ಭಾಷೆ'''}}
{{gap}}ಭಾಷೆ, ಪ್ರಾಂತ ಭಾಷೆ, ಭಾಷಾನುಗುಣ ಪ್ರಾಂತ ಇವುಗಳ ಮಹತ್ವ
ವನ್ನು ಹೇಳಿದ್ದಾಯಿತು. ಇನ್ನು ಕಾಟಕ ಪ್ರಾಂತದ ಭಾಷೆಯಾದ ಕನ್ನ
ಡದ ಬಗ್ಗೆ ನಾಲ್ಕು ಮಾತು ಹೇಳುವದಶ್ಯ. ಆಮೇಲೆ ಪ್ರತಿಯೊಂದು ಪ್ರಾಂ
ತೀಯ ಭಾಷೆಯ ಬಗ್ಗೆ ಆಯಾ ಪ್ರಾಂರತದವರ ಕತ್ರವ್ಯವನ್ನು ಹೇಳುವ
ದೃಷ್ಟಿಯಿಂದ ಕನ್ನಡದ ಬಗ್ಗೆ ನಮ್ಮ ನಮ್ಮ ಕತ್ರವ್ಯದ ದಿಗ್ಧರನವನ್ನು
ಇಲ್ಲಿ ಮಾಡುವ ವಿಚಾರವಿದೆ.
{{gap}}ಹಿಂದುಸ್ತಾನದಲ್ಲಿ ಬಹಳವೆಂದರೆ ೧೫ ಮುಖ್ಯ ಪ್ರಾಂತಿಕ ಭಾಷೆಗಳಿವೆ.
ಅವುಗಳಲ್ಲಿ ಕನ್ನಡವು ಬಹಳ ಹಳೆಯದು. ಇದಕ್ಕೆ ಕನಿಷ್ಟ ಎರಡು ನಾವಿರ
ವರುಷಗಳ ಇತಿಹಾಸವು ಇರುವದು. ಈ ರಾಷ್ಟ್ರದಲ್ಲಿ ಎರಡು ವರದ ಭಾಷೆ
ಗಳಿವೆ. ಒಂದು ದ್ರಾವಿಡ ವರ, ಇನ್ನೊಂದು ಸಂಸ್ಕೃತ ವರ. ಕನ್ನಡ,
ತಮಿಳು, ತೆಲುಗು, ಮತ್ತು ಮಲಯಾಳಿ ಈ ದಕ್ಷಿಣ ಹಿಂದುಸ್ತಾನದ ನಾಲ್ಕು
ಭಾಷೆಗಳು ದ್ರಾವಿಡ ವರಕ್ಕೆ ಸೇರಿದವುಗಳು. ಉಳಿದವೆಲ್ಲ ಹೆಚ್ಚು ಕಡಿಮೆ
ಸಂಸ್ಕೃತ ವರಕ್ಕೆ ಸೇರಿದವುಗಳು. ಕನ್ನಡವು ತನ್ನ ಭಾಷಾಸಹೋದರಿಯ
ರಿಂದ ಅನೇಕ ಶಬ್ದಗಳನ್ನೆತ್ತಿದ್ದಲ್ಲದೆ ಸಂಸ್ಕೃತದಿಂದ ಚನ್ನಾಗಿ ಪುಷ್ಟಿ ಪಡೆದಿದೆ
ಕನ್ನಡವು ಸಂಸ್ಕೃತಜನ್ಯವಲ್ಲದಿದ್ದರೂ ಸಂಸ್ಕೃತಪುಷ್ಟವಿರುವದೆಂಬಲ್ಲಿ ಸಂಶಯ
ವಿಲ್ಲ. ಈ ಹೊತ್ತು ಯಾವದೆ ಧಾತ್ಮಿಕ, ಸಂಸ್ಕೃತಿಕ, ವೈಜ್ಞಾನಿಕ
ವಿಚಾರಗಳನ್ನು ನಾವು ವ್ಯಕ್ತಗೊಳಿಸಬೇಕಾಗಿದ್ದರೆ, ನೂರಕ್ಕೆ ಅರವತ್ತ
ಕ್ಕಿಂತ ಹೆಚ್ಚು ಸಂಸ್ಕೃತ ತತ್ಸಮ ಇಲ್ಲವೆ ತದ್ಭವ ಶಬ್ದಗಳನ್ನು ಉಪಯೋಗಿಸ
ಬೇಕಾಗುವದು ನಮ್ಮ ವ್ಯಾಕರಣ ಕೆಲ ಮಟ್ಟಿಗೆ ಬೇರೆ ಇದ್ದರೂ ಅದನ್ನು
ಬರೆಯವ ರೀತಿ, ಅಲಂಕಾರ ಶಾಸ್ತ್ರ, ನಮ್ಮ ಛಂದಸ್ಸಿನ ಬಹುಭಾಗ, ಶೈಲಿ,
ಸಾಹಿತ್ಯರೂಪಗಳು ಮುಂತಾದವು ಸಂಸ್ಕೃತದಿಂದ ಎತ್ತಿದವುಗಳು. ಕಂದ್ರ
ಷಟ್ಟದಿ, ಚೌಪದಿ, ತ್ರಿಪದಿ, ರಗಳೆ ಮುಂತಾದ ಹಲವು ಬಿಟ್ಟರೆ ಅನೇಕ ವೃತ್ತ<noinclude></noinclude>
569t3zzsuum8p8ol8fdndui6ammicyx
ಪುಟ:Praantabhaashhe-Rashhtrabhaashhe.pdf/೨೩
104
107309
321182
308696
2026-05-20T06:53:32Z
Pragathi. BH
7585
/* Validated */
321182
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೧೮—}}
{{gap}}ಭಾಷೆ ಸಾಧ್ಯವಲ್ಲ, ಸಾಧನವು ಮಾತ್ರ. ಶಾಂತ, ಪುಷ್ಟ, ತುಷ್ಟ, ಸಮರ
ವೀರವತ್ತರ, ಶ್ರೇಷ್ಠ ಸಮಾಜ ನಿಲ್ದಾಣವೆ ಸಾಧ್ಯವು. ಬೇಗ ಸಾಧಿಸ
ಬೇಕಾದರೆ ಸಾಧನವು ಉತ್ತಮವಿರಬೇಕು. ಸುಲಭಶಬ್ದ ಭಾಂಡಾರ,
ಉತ್ತಮ ನಿಘಂಟು, ಮುಂತಾದವುಗಳ ನಿರಿತಿ, ಸುಂದರ ಶೈಲಿಯ ಪ್ರಚಾರ,
ಸುಬದ್ಧ ವ್ಯಾಕರಣಾದಿಗಳ ಲೇಖನ ಲಿಪಿಬದ್ಧ ಭಾಷೆಯ ಏಕರೂಪತೆ
ತರುವಿಕೆ, ಲಿಪಿ ಸಾಧಾರಣೆ, ಒಳ್ಳೆ ಅಚ್ಚು ಕೂಟಗಳ ಸ್ಟಾಪನೆ ಇತ್ಯಾದಿ ಸಾಧನ
ಗಳಿಂದ ಭಾಷಾ ಸಾಧನವನ್ನು ಉತ್ತಮಗೊಳ್ಳಲಿಕ್ಕಬೇಕು. ಇದು ಆಯ್ದ ನೆಯ
ಕರ್ತವ್ಯವು.
{{gap}}ವಕ್ಷ್ಯತ್ವ, ಲೇಖನ, ಲಾವಣಿ, ಕಾವ್ಯಗಾಯನ ಮುಂತಾದವುಗಳಲ್ಲಿ
ಕಾಲಕಾಲಕ್ಕೆ ಸ್ಪರ್ಧೆಗಳನ್ನೇ ಡಿಸಿ ಇಲ್ಲವೆ ಇತರ ರೀತಿಯಿಂದ ಜನಸಾಮಾನ್ಯ
ರಲ್ಲಿ ಭಾಷೆಯ ಬಗ್ಗೆ ಉತ್ಸಾಹಯುಕ್ತ ಪ್ರಯತ್ನ ಮಾಡುವ ಪ್ರವೃತ್ತಿಯನ್ನು
ಉಂಟುಮಾಡಬೇಕು. ಇವುಗಳಿ೦ದ ಭಾಷೆಯ ಸಾಮ, ಸೌಂದರಗಳ
ಪ್ರದ ನವೂ ಆಗುವದು ಇದು ಆರನೆಯ ಕೆಲಸ
{{gap}}ಈ ಬಗೆಯಾಗಿ ತಮ್ಮ ಭಾಷೆಯ ಅತ್ಯುನ್ನತಿಯನ್ನು ಸಾಧಿಸಲು
ಪ್ರಾಂತಿಕರು ಯತ್ನಿಸುತ್ತ ಹೋಗಬೇಕು ಆದರೆ ಭಾಷೆಯಿದು ನಮ್ಮ ಮನ
ಸಿನ, ನಮ್ಮ ಜೀವನದ ಬಿಂಬವು. ನಮ್ಮ ಮನಸು ಹಾಗೂ ಜೀವನದ ಮಟ್ಟು
ಎಷ್ಟೋ ಅಷ್ಟೇ ನಮ್ಮ ಭಾಷೆ ಏರಬಲ್ಲದು ಎಂಬ ಮಾತನ್ನು ಲಕ್ಷದಲ್ಲಿಟ್ಟು
ಕೊಂಡು ನಡೆಯಬೇಕು ಅವುಗಳ ಮಟ್ಟನ್ನೇರಿಸುವದು ಎಲ್ಲಕ್ಕೂ ಶ್ರೇಷ್ಠ
ಕರ್ತವ್ಯವು.
{{center|'''ದುರ್ಲಕ್ಷದಿಂದ ಹಾನಿ'''}}
{{gap}}ಯಾವ ಪ್ರಾಂತವು ತನ್ನ ಭಾಷೆಯ ಯೋಗ್ಯ ಮತ್ತು ಸತತ ಉಪ
ಯೋಗ, ಸುಧಾರಣೆ, ಪ್ರಸಾರ ಇವುಗಳತ್ತ ದುರಕ್ಷ ಮಾಡುವದೊ ಅದು
ಬಹಳ ದೊಡ್ಡ ಹಾನಿಗೆ ಈಡಾಗುವದು. ಈಗ ನೂರಾರು ವರುಷಗಳಿಂದ
ನಾವು ಕೇವಲ ಪರಕೀಯವಾದ ಆಂಗ್ಲ ಭಾಷೆಗೆ ಉಚ್ಚ ಸ್ಥಾನವನ್ನು ಕೊಟ್ಟು
ಪ್ರಾಂತಿಕ ಭಾಷೆಗಳನ್ನು ಹೀನಾಯಿಸುತ್ತ ಬಂದುದರಿಂದ ನಮಗೆ ಅಪಾರ<noinclude></noinclude>
eid1nfzhh5fmrtqn6r94c1h75xjmd3c
ಪುಟ:Praantabhaashhe-Rashhtrabhaashhe.pdf/೨೬
104
107311
321186
308717
2026-05-20T06:55:47Z
Pragathi. BH
7585
/* Validated */
321186
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೨೧—}}
ಸ್ವಭಾಷೆಯಲ್ಲಿಯೇ ತಮ್ಮ ವಿಚಾರ ಮತ್ತು ಭಾವನೆಗಳನ್ನು ಜನ ಸಾಮಾನ್ಯ
ರಿಗೆ ಹೇಳಲಿಕ್ಕೆ ಬೇಕೆಂಬ ಸ್ಪೂರ್ತಿ ಇದೊಂದು ಪ್ರಾಂತೀಯ ಭಾಷೆಯ
ಲ್ಲಿಯೇ ಎಲ್ಲ ವ್ಯವಹಾರಗಳು ಸ್ವಾಭಾವಿಕವಾಗಿಯೇ ನಡೆದಿದ್ದರೆ ಪ್ರಶ್ನೆಯೆ
ಉಂಟಾಗುವದಿಲ್ಲ. ಆದರೆ ಯಾವದೆ ಐತಿಹಾಸಿಕ ರಾಜಕೀಯ ಇಲ್ಲವೆ
ಇತರ ಕಾರಣಗಳ ಮೂಲಕ ಬೇರೆ ಭಾಷೆಗಳ ವರ್ಚಸ್ಸು ನಡೆಯುತ್ತಿದ್ದರೆ
ಪ್ರಾಂತೀಯ ಮುಖಂಡರು ಮತ್ತು ವಿಚಾರವಂತರು ಅವನ್ನು ತಡೆಗಟ್ಟ
ಬೇಕಾಗುವದು ಹಾಗೂ ಭಾಷೆಯ ಬೆಳವಣಿಗೆಯಲ್ಲಿ ತೊಡಗಬೇಕಾಗುವದು,
ಕಾಟಕದ ವಿಷಯದಲ್ಲಿ ಹೀಗೆಯೆ ಆಯಿತು ಎಂದು ಹೇಳಬಹುದು.
{{gap}}ಒಂದು ಕಾಲಕ್ಕೆ ಕರ್ನಾಟಕದಲ್ಲಿ ಕನ್ನಡಕ್ಕಿಂತ ಸಂಸ್ಕೃತಕ್ಕೆ ಮನ್ನಣೆ ಹೆಚ್ಚು
ಇತ್ತು. ಆದರೆ ಜನಜಾಗ್ರತಿ ಹೆಚ್ಚು ಆಗುತ್ತ ಹೋದಂತೆ ಕನ್ನಡದ ಪ್ರಸಾ
ರವು ಅನಿವಾರವಾಯಿತು. ಕನ್ನಡ ಕವಿಗಳು ಕನ್ನಡದಲ್ಲಿ ಏನು ಕಡಿಮೆ ಇದೆ,
'ಸಂಸ್ಕೃತದಲ್ಲಿನ್ನೇನು ಹೆಚ್ಚು ಇದೆ, ಎಂದು ಆವ್ಹಾನ ಕೊಟ್ಟು ಕೊಟ್ಟು ಕನ್ನಡ
ವನ್ನು ಕಾಟಕಸ್ಪರ ಹೃದಯಪೀಠದಲ್ಲಿ ಸ್ಥಿರವಾಗಿ ಸ್ಥಾಪಿಸಿದರು. ಇಲ್ಲಿ
ಮುಸಲ್ಮಾನರ ರಾಜ್ಯವಾದಾಗ ಫಾರಸಿ ಉದ್ದುಗಳು ಸ್ವಲ್ಪು ತಲೆಯೆತ್ತಿದವು.
ಆದರೆ ಕನ್ನಡವನ್ನು ಕುಗ್ಗಿಸುವ ಸಾಮಥ್ಯವು ಅವುಗಳಲ್ಲಿರಲಿಲ್ಲ.
ಹಲವೊಂದು ಶಬ್ದಗಳನ್ನು ಮಾತ್ರ ಅವು ಕನ್ನಡಕ್ಕೆ ಕೊಟ್ಟವು ಇತ್ತ ಮರಾಠಿ
ಅತ್ತ ತೆಲುಗಿನ ವಸ್ಸು ಸ್ವಲ್ಪ ನಡೆಯಿತು. ಆದರೆ ಎಲ್ಲಕ್ಕು ಹೆಚ್ಚಾಗಿ
ಘಾತಕವಾದ ವರಸ್ಸು ಇಂಗ್ಲಿಷಿನದೆ ಯಾಕಂದರೆ ಅದು ಕೇವಲ ರಾಜಭಾಷೆ
ಆಗಿ ಸುಮ್ಮನಿರಲಿಲ್ಲ, ಸಾಂಸ್ಕೃತಿಕ ಭಾಷೆ ಎನಿಸಿ ಸಮಾಧಾನ ಪಡಲಿಲ್ಲ.
ತರುಣ ಪೀಳಿಗೆಯ ಬೋಧಭಾಷೆಯಾಗಿಬಿಟ್ಟಿತು. ಶಿಕ್ಷಣ ಸಂಸ್ಕಾರ ಬೇಕಾ
ದರೆ ಆ ಭಾಷೆಯಲ್ಲಿ ಪಡೆಯಬೇಕು, ಇಲ್ಲದಿದ್ದರೆ ಇಲ್ಲೇ ಇಲ್ಲ ಈ ಸ್ಥಿತಿ
ಯುಂಟಾಯಿತು.
{{gap}}ಸ್ವದೇಶಿ ಚಳವಳಿಯ ಮೂಲಕ ಕರಾಟಕದಲ್ಲಿ ರಾಷ್ಟ್ರೀಯ ಜಾಗ್ರತಿ
ಯಾಗುತ್ತ ಹೋದಂತೆ ಕನ್ನಡದ ಉಪಯೋಗವನ್ನೆ ಹೆಚ್ಚು ಮಾಡುವ ಹವಣು
ಬೆಳೆಯಲಾರಂಭಿಸಿತು. ಕನ್ನಡ ಲೇಖನ, ಅಚ್ಚುಕೂಟ, ವೃತ್ತ ಪತ್ರ,
ರಾಷ್ಟ್ರೀಯ ಶಾಲೆಗಳಲ್ಲಿ ಕನ್ನಡ ಮಾಧ್ಯಮದಿಂದ ಶಿಕ್ಷಣ ಇವು ಬೆಳೆಯ<noinclude></noinclude>
2k15hrlx3s1fmqnbt9e3k1rh9j1e9by
ಪುಟ:Praantabhaashhe-Rashhtrabhaashhe.pdf/೨೮
104
107317
321188
308733
2026-05-20T06:56:44Z
Pragathi. BH
7585
/* Validated */
321188
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೨೩—}}
ರೂಪತೆಗೂ ಪ್ರಸಾರಕ್ಕೂ ಬಹಳ ಉತ್ತೇಜನ ದೊರೆತಿದೆ ತಾತ್ಸರವೇನಂದರೆ,
ಜನಸಾಮಾನ್ಯರ ಹಿತವನ್ನೆ ಮುಖ್ಯ ಧೈಯವನ್ನಾಗಿಟ್ಟುಕೊಂಡ ಕಾಂಗ್ರೆಸ್ಸು
ಸ್ವಾಭಾವಿಕವಾಗಿಯೇ ಭಾಷಾನುಗುಣ ಪ್ರಾಂತರಚನೆಯ
ಮೂಲಕ ಪ್ರಾಂತೀಯ ಭಾಷೆಗಳಿಗೆ ಪ್ರೋತ್ಸಾಹ ಕೊಡುವ ಕಾವ್ಯವನ್ನು ಒಳ್ಳೆ ಯಶಸ್ವಿತೆ
ಯಿಂದ ಮಾಡುತ್ತ ಬಂದಿದೆ. ಎಲ್ಲ ಪ್ರಾಂತಗಳಲ್ಲಿಯ ಈಚೆಗಿನ ಭಾಷಾ
ಜಾಗ್ರತಿ ಹಾಗೂ ಭಾಷಾಪ್ರಗತಿಯೆ ಈ ಮಾತಿಗೆ ಸಾಕ್ಷಿ, ಕಾಂಗ್ರೆಸ್ಸು ಅಧಿ
ಕಾರಾರೂಢವಿದ್ದಾಗ ಅಕ್ಷರ ಪ್ರಸಾರ, ಹೆಚ್ಚು ಶಾಲೆಗಳ ಸ್ಥಾಪನೆ ಮುಂತಾದ
ಕಾಠ್ಯಕ್ರಮಗಳನ್ನು ದೊಡ್ಡ ಪ್ರಮಾಣದ ಮೇಲೆ ಕೈಕೊಂಡು ಅದೇ ಕಾರ
ವನ್ನು ಮುಂದೆ ಸಾಗಿಸಿತು. ಪೂರ ಸ್ವರಾಜ್ಯವು ಪ್ರಾಪ್ತವಾದೊಡನೆ ಭಾಷೆ
ಗನುಗುಣವಾದ ಆಡಳಿತದ ಪ್ರಾಂತಗಳು ನಿರಾಣವಾಗಿ ಆಯಾ ಪ್ರಾಂತ್ಯಗಳಲ್ಲಿ
ಪ್ರಾಂತಿಕ ಭಾಷೆಗಳೆ ಪಟ್ಟದರಸಿಗಳಾಗಿ ಮೆರೆಯುವವೆಂಬಲ್ಲಿ ಸಂಶಯವಿಲ್ಲ.
{{center|ವಿಧಾಯಕ ಕಾರ್ಯಗಳಲ್ಲಿ ಒಂದು}}
{{gap}}ಕಾಂಗ್ರೆಸ್ಸು ಪ್ರಧಾನವಾಗಿ ರಾಜಕೀಯ ಧೈಯವನ್ನು ಸಾಧಿಸಲು
ಹೊರಟ ಸಂಸ್ಥೆ. ಆದರೂ ಸದೃಷ್ಟಿಯಿಂದ ರಾಷ್ಟ್ರದ ಪುನರುಜ್ಜೀವನ
ಮಾಡುವದೆ ಅದರ ಹೇತುವೆಂಬುದು ಅದು ಕೈಕೊಂಡ ವ್ಯಾಪಕ ಕ ಪ್ರಣಾ
ಲಿಯ ಮೇಲಿಂದ ಕಂಡುಬರುವದು. ಕಾಂಗ್ರೆಸ್ಸಿನ ಪಂಚದಶವಿಧ ಕಾರ್ಯ
ಕ್ರಮವೆ ಇದಕ್ಕೆ ಸಾಕ್ಷಿ. ಪ್ರಾಂತ ಭಾಷೆಯ ಸೇವೆ, ರಾಷ್ಟ್ರಭಾಷೆಯ ಪ್ರಸಾರ
ಇವೆರಡೂ ಅದರಲ್ಲಿವೆ. ಗಾಂಧೀಜಿಯವರು ೧೯೪೦ರಲ್ಲಿ ಪ್ರಕಟಿಸಿದ ತಮ್ಮ
'ವಿಧಾಯಕ ಕಾರ್ಯಕ್ರಮ' ಎಂಬ ಪುಸ್ತಿಕೆಯಲ್ಲಿ ಈ ಕೆಳಗಿನ ಮಾತುಗಳನ್ನು
ಹೇಳಿರುವರು, 'ಸಾಮಾನ್ಯತಃ ನಾವು ಮಾತೃ ಭಾಷೆಗಿಂತ ಆಂಗ್ಲ ಭಾಷೆ' ಯನ್ನು
ಹೆಚ್ಚು ಪ್ರೀತಿಸಿರುವೆವು. ಅವರಿಂದ ರಾಜಕೀಯ ವಿಚಾರವುಳ್ಳ ಸುಶಿಕ್ಷಿತರ
ಹಾಗೂ ಜನಸಾಮಾನ್ಯರ ನಡುವೆ ಅತ್ಯಂತ ಭಿನ್ನ ಭಾವವುಂಟಾಗಿದೆ. ಸುಶಿಕ್ಷಿ
ತರದೊಂದು ಪ್ರತ್ಯೇಕ ಜಾತಿಯ ಆದಂತಾಗಿದೆ. ಪ್ರಾಂತೀಯ ಭಾಷೆಗಳಿಗೆ
ಬಹಳ ದೊಡ್ಡ ಪೆಟ್ಟು ಬಿದ್ದು ಅವು ಸಾಕಷ್ಟ ಪ್ರಗತಿಹೊಂದದೆ ಕುಗ್ಗಿ ನಿಂತಿವೆ.
ಅನೇಕ ಸಾರಿ ಗಹನವಿಚಾರಗಳನ್ನು ನಮ್ಮ ಭಾಷೆಗಳಲ್ಲಿ ವ್ಯಕ್ತ ಮಾಡುವದೆ
ಅಸಾಧ್ಯವಾಗುತ್ತದೆ. ವೈಜ್ಞಾನಿಕ ಶಬ್ದಗಳಿಗೆ ನಮ್ಮಲ್ಲಿ ಸಾಕಷ್ಟು ಸಾರಿ<noinclude></noinclude>
40ztemwu7s30e6x9d21lcjmb4s14qwb
ಪುಟ:Praantabhaashhe-Rashhtrabhaashhe.pdf/೨೧
104
113097
321179
308675
2026-05-20T06:52:03Z
Pragathi. BH
7585
/* Validated */
321179
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೧೬—}}
ವಾಗುವದಿಲ್ಲ,ಯಾವುದರಿಂದ ಧರ್ಮಬೋಧವಾಗುವದೊ, ಧರ್ಮಜಾಗ್ರತಿ
ಯುಂಟಾಗುವದೊ, ಧರ್ಮಸ್ಪೂರ್ತಿ ಸ್ಪುರಿಸುವದೊ ಅದೇ ಧಾರ್ಮಿಕ
{{center|'''ನಮ್ಮ ಕರ್ತವ್ಯ'''}}
ಪ್ರಾಂತಿಕ ಭಾಷೆಗಳು ಇಷ್ಟು ಮಹತ್ವದವು ಎಂದ ಬಳಿಕ ಅವುಗಳನ್ನು
ಕುರಿತು ಆಯಾ ಪ್ರಾಂತದವರ ಕತ್ರವ್ಯಗಳೂ ವಿಶೇಷ ಹೊಣೆಗಾರಿಕೆಯ
ಬರುವವು. ನನ್ನ ಭಾಷೆ ಸತ್ವತೋಪರಿ ಪುಷ್ಟವೂ, ಪಾಷ್ಟವೂ ಸುಂದರವೂ
ಆಗಿ ಸತ್ತ ಸಾಧನವಾಗುವಂತೆ ನಾವು ಹೆಣಗಲಿಕ್ಕೆ ಬೇಕು. ಕನ್ನಡದ
ಬಗ್ಗೆ ಕಾಟ ಕಸ್ಥರು ಏನು ಮಾಡಬೇಕು. ಇದನ್ನು ಸಂಕ್ಷೇಪದಿಂದ ಇಲ್ಲಿ
ನೋಡಬಹುದು
ಮೊದಲನೆಯ ಮಾತೆಂದರೆ, ಕರಾಟಕದ ಸಾಂಗೀನ ಉನ್ನತಿ-
ಉದ್ಧಾರಗಳನ್ನು ಅನುಲಕ್ಷಿಸಿ ಕನ್ನಡ ಭಾಷೆಯ ಪ್ರಸಾರದ ಮಹತ್ವವನ್ನು
ನಾವು ತಿಳಿದುಕೊಳ್ಳಲಿಕ್ಕೆ ಬೇಕು, ಕನ್ನಡ ನುಡಿಯ ಬಗ್ಗೆ ಅತ್ಯಂತ ಪ್ರೇಮಾ
ದರಗಳನ್ನು ತಾಳಲಿಕ್ಕೆ ಬೇಕು, ನಿಜವಾದ ಪ್ರೇಮವಿರದಿದ್ದರೆ, ನಿಃಸ್ವಾರ
ಸೇವೆಯು ನಮ್ಮಿಂದಾಗದು. ನಮ್ಮ ಭಾಷೆಯ ಪ್ರೇಮವೆಂದರೆ ಅನ್ಯನೆರೆ
ಹೊರೆಭಾಷೆಗಳ ದ್ವೇಷ ತಲ್ಲ. ಇಷ್ಟೇ ಅಲ್ಲ ಸ್ವಭಾಷೆಯ ಪ್ರೇಮ ಅನ್ಯಭಾಷಾ
ಪ್ರೇಮ ಇವು ಪರಸ್ಪರವಿರೋಧಿಯಲ್ಲ. ಆದರೆ ಅನ್ಯಭಾಷಾಪ್ರೇಮ ಇದರ
ಅಲ್ಪಸ್ವಭಾಷಾತ್ಯಾಗ ಇಲ್ಲವೆ ಸ್ವಭಾಷೆಯ ಕಡೆಗೆ ದುರಕ್ಷ ಇಲ್ಲವೆ ಸ್ವಭಾಷೆಯ
ವಿಷಯದಲ್ಲಿ ಇದ್ದ ನಮ್ಮ ಹಕ್ಕು ಬಾಭ್ಯತೆಗಳ ಬಲಿದಾನ ಎಂದು ಯಾರೂ
ತಿಳಿಯಕೂಡದು. ಮೇಲಾಗಿ ನಮ್ಮ ಪ್ರೇಮಾದರಗಳು ಸಾಧಾರವಿರಬೇಕು.
ನಮ್ಮ ಸ್ವಾಭಿಮಾನವು ಆಳವಾದ ಜ್ಞಾನದಿಂದ ಪ್ರೇರಿತವಿರಬೇಕು. ತಾತ್ಕಾ
ಲಿಕ ಭಾವನಾವಶತೆ ನಮಗೆ ಉಪಯುಕ್ತವಾಗಲಾರದು ಸಾಧಾರ ಮತ್ತು
ಸಜ್ಞಾನವಿದ್ದ ಅಭಿಮಾನ-ಪ್ರೇಮಾದರಗಳೆ ನಮಗೆ ಅನಂತ ಕಷ್ಟ ನಷ್ಟಗಳನ್ನು
ಸಹಿಸಿಯ ಮುಂದರಿಯುವ ಸಾಮಥ್ಯವನ್ನು ಕೊಡಬಲ್ಲವು. ಅರಾಕ್
ನಮ್ಮ ನುಡಿಯ ಇತಿಹಾಸ, ಸೌಂದಯ್ಯ, ಸೌಷ್ಟವಗಳು, ಬಲಾಬಲಗಳು, ಗುಣ
ದೋಷಗಳು, ಚೆನ್ನಾಗಿ ಮತ್ತು ಸಾಕಷ್ಟು ಗೊತ್ತಿರಬೇಕು. ಅಂದರೆಯೇ
ನಮ್ಮಿಂದ ಆ ಭಾಷೆಯ ನಿಜವಾದ ಸೇವೆಯಾಗುವದು.<noinclude></noinclude>
6ep5ttrirjf68pfmf2s8mni98d91824
ಪುಟ:Praantabhaashhe-Rashhtrabhaashhe.pdf/೨೨
104
113098
321181
308676
2026-05-20T06:52:53Z
Pragathi. BH
7585
/* Validated */
321181
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೧೩—}}
{{gap}}ನಮ್ಮ ನುಡಿಯ ಬಗ್ಗೆ ನಮ್ಮ ಭಾಷಾ ಬಾಂಧವರಲ್ಲಿ, ನೆರೆಹೊರೆಯವ
ರಲ್ಲಿ, ಪರದೇಶದವರಲ್ಲಿ ಅಜ್ಞಾನದ ಮೂಲಕ ಏನಾದರೂ ತಪ್ಪು ತಿಳಿವಳಿಕೆ
ಗಳಿದ್ದರೆ, ಉದಾಸೀನತೆ ತಿರಸ್ಕಾರಗಳು ಉಂಟಾಗಿದ್ದರೆ, ಅವುಗಳನ್ನು ನಿಜ
ಜ್ಞಾನದ ನಿವೇದನದಿಂದ ನಿರೂಲಗೊಳಿಸುವದು ಎರಡನೆಯ ಕತ್ರವ್ಯವು
ಯಾವ ಅಜ್ಞಾನ ಎಲ್ಲಿಯೂ ಕ್ಷಮ್ಯವಿಲ್ಲ. ಆದರೆ ನಮ್ಮ ಪ್ರಾಂತದಲ್ಲಿಯೆ
ಇರುವವರಲ್ಲಿ ನಮ್ಮ ಭಾಷೆಯ ಬಗ್ಗೆ ಅಜ್ಞಾನವಿದ್ದರೆ ಅದು ತೀರ ಅಕ್ಷಮ್ಯವು.
ತಾಯಿ ನಾಡಿನ ಅಜ್ಞಾನವು ಅಕ್ಷಮ್ಯವಿದ್ದಷ್ಟೆ ಆಯಾ ಪ್ರಾಂತದ ತಾಯಿ
ನುಡಿಯ ಅಜ್ಞಾನವೂ ಅಕ್ಷಮ್ಯವಿರುವದು. ಅಜ್ಞಾನ, ತನ್ಮೂಲಕ ಉಂಟಾದ
ಅನಾಸ್ಥೆ ಅನಾದಾರಗಳ ದ್ರೋಹದ ಮೂಲ ಕಾರಣಗಳು. ಕನ್ನಡವೆ ಮಾತೃ
ಭಾಷೆ ಇದ್ದವರಲ್ಲಿ ಅಜ್ಞಾನ ಅನಾಸ್ಥೆಗಳಿದ್ದರಂತೂ ಅದೊಂದು ದೊಡ್ಡ ಅಪ
ರಾಧವೇ ಸೈ. ಈ ಬಗೆಯ ಅನರ ಪರಂಪರೆಗೆ ಕಾರಣವಾಗಬಹುದಾದ ಅಜ್ಞಾನ
ವನ್ನು ಹೋಗಲಾಡಿಸುವದು ಪ್ರತಿಯೊಬ್ಬ ಪ್ರಾಂತಿಕನ ಕರ್ತವ್ಯವಿರುವದು.
{{gap}}ಮೂರನೆಯ ಮಾತೆಂದರೆ ಇನ್ನೊಂದೆಡೆಗೆ ಈ ಮೊದಲೆ ಕಾಣಿಸಿದ ಕ್ಷೇತ್ರ
ಗಳಲ್ಲೆಲ್ಲ ತಪ್ಪದೆ ಕನ್ನಡದ ಉಪಯೋಗ ನಡೆಯುವಂತೆ ಪ್ರಯತ್ನ ಪಡುವದು,
ಹಾಗೆ ಮಾಡದೆ ಹೋದರೆ, ಆಚಾರ ಹೇಳಲಿಕ್ಕೆ ಬದನೇಕಾಯಿ ತಿನ್ನಲಿಕ್ಕೆ,
ಎಂಬ ನ್ಯಾಯದಂತೆ ಆಗುವದು, ಯಾವದೆ ತತ್ವದ ಜೀವಾಳವು ಅದರ
ಉಚ್ಚಾರ ಪ್ರಚಾರ ಪ್ರತಿವಾದನಾದಿಗಳಲ್ಲಿರದೆ ಆದರ ನಿಷಾಪೂವ್ವಕ ಆಚಾರ
ಗಲ್ಲಿಯೆ ಇರುವದು.
{{gap}}ಇಷ್ಟೆಲ್ಲ ಮಾಡಿ ಜನಸಾಮಾನ್ಯರಲ್ಲಿ ಭಾಷೆಯ ಸಾರತ್ರಿಕ ಪ್ರಸಾರ
ಮಾಡದೆ ಹೋದರೆ ಅಡಿಗೆ ಮಾಡಿ ಮನೆ ಮಕ್ಕಳಿಗೆ ನೀಡದೆ ಹೋದಂತೆ ಆಗು
ವದು. ಆದುದರಿಂದ ಸಾತ್ವಿಕ ಧಾರ ಮೂಲ ಶಿಕ್ಷಣ, ಅಕ್ಷರಪ್ರಸಾರ
ಸುಲಭ ರುಚಿಕಟ್ಟಾದ ಆರೋಗ್ಯಕರ ವಾಹ್ಮಯದ ನಿಲ್ದಾಣ ಇವೆಲ್ಲ ನಡೆಯ
ಲಿಕ್ಕೆ ಬೇಕು. ಹಳ್ಳಿ ಹಳ್ಳಿಗಳಲ್ಲಿ ಸಹ ವಾಚನಾಲಯಗಳ ಹಾಗೂ ಚರಪುಸ್ತ
ಕಾಲಯಗಳ ಪನೆ ಅವಶ್ಯ. ಅದೇ ರೀತಿ ನಾಟಕ, ಪುರಾಣ, ಕೀತ್ರನೆ,
ಭಜನೆ, ದೊಡ್ಡಾಟ, ಜನಪದ ಸಾಹಿತ್ಯ ಮುಂತಾದವುಗಳ ಕಡೆಗೆ ಸಾಕಷ್ಟು
ಲಕ್ಷಗೊಟ್ಟು ಭಾಷೆಯ ಪ್ರಸಾರಕ್ಕಾಗಿ ಅವುಗಳ ಯೋಗ್ಯ ಉಪಯೋಗವನ್ನು
ಮಾಡಿಕೊಳ್ಳಲಿಕ್ಕೆ ಬೇಕು. ಇದು ನಾಲ್ಕನೆಯ ಕರ್ತವ್ಯವು.<noinclude></noinclude>
k37un38gxwu42lco29rhu5o6a45jryt
ಪುಟ:Praantabhaashhe-Rashhtrabhaashhe.pdf/೨೯
104
113890
321189
308740
2026-05-20T06:57:03Z
Pragathi. BH
7585
/* Validated */
321189
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೨೪—}}
ಭಾಷಿಕ ಶಬ್ದಗಳು ಇನ್ನೂ ನಿರ್ಮಾಣವಾಗಿಲ್ಲ. ಈ ಪರಿಸ್ಥಿತಿಯ ಮೂಲಕ
ಬಹಳ ಅನರ್ಥವುಂಟಾಗಿದೆ. ಆಧುನಿಕ ವಿಚಾರಗಳಿಗೆ ಜನಸಾಮಾನ್ಯರು
ಎರವಾಗಿದ್ದಾರೆ. ಪ್ರಾಂತಿಕ ಭಾಷೆಗಳತ್ತ ನಾವು ಮಾಡಿದ ದುರಕ್ಷದ
ಮೂಲಕ ನನಗೆ ಆದ ಹಾನಿ ಎಷ್ಟೆಂಬದನ್ನು ನಾವು ಸರಿಯಾಗಿ ಈಗಲೆ
ಅಳೆದು ನೋಡಲಾರೆವು. ಅದು ಮುಂದೆ ಇನ್ನೂ ಹೆಚ್ಚೆಚ್ಚು ಪ್ರಶವಾಗು
ನದು. ಈ ಕೇಡನ್ನು ನಾವು ಬೇಗನೆ ತಡೆಯದೆ ಹೋದರೆ ಜನಸಾಮಾ
ನ್ಯರು ಕೊನೆಯ ವರೆಗೆ ಅಜ್ಞಾನದಲ್ಲಿಯೇ ಕೊಳೆಯಬೇಕಾಗುವದು. ಈ ಸ್ಥಿತಿ
ಯಲ್ಲಿ ಅವರು ಸ್ವರಾಜ್ಯರಚನೆಗೆ ಯಾವ ಸಹಾಯವನ್ನು ಮಾಡಲಾರರು,
ಅಹಿಂಸೆಯ ತಳಹದಿಯ ಮೇಲೆ ಕಟ್ಟಿದ ಸ್ವರಾಜ್ಯವೆಂದರೆ ಪ್ರತಿಯೊಬ್ಬನು
ಸ್ವಾತಂತ್ರ್ಯದ ಚಳವಳಿಯಲ್ಲಿ ಧುಮುಕಿ ಸ್ವತಃ ಭಾಗವಹಿಸಿ ಗೆದ್ದ ಸ್ವರಾಜ್ಯ
ಎಂಬ ಮಾತು ಅಡಕವಾಗಿದೆ. ನಾವು ಕೈಕೊಳ್ಳುವ ಪ್ರತಿಯೊಂದು ಕ್ರಮ,
ನಾವು ಇಡುವ ಒಂದೊಂದು ಹೆಜ್ಜೆ, ಅವುಗಳಿಂದ ಧ್ವನಿತವಾಗುವ ಎಲ್ಲ
ಮಾತುಗಳು ಜನರಿಗೆ ಪೂರವಾಗಿ ತಿಳಿಯದೆ ಹೋದರೆ ಅವರು ಚಳವಳಿಯಲ್ಲಿ
ಪೂರ ರೀತಿಯಿಂದ ಭಾಗವಹಿಸುವ ಬಗೆಯಾವದು? ಅವರ 'ಭಾಷೆಯಲ್ಲಿಯೆ
ನಾವು ಎಲ್ಲವನ್ನೂ ತಿಳಿಸಿಕೊಡದಿದ್ದರೆ ಅವರು ಭಾಗವಹಿಸುವದು ಅಶಕ್ಯವು;
ಇದೇ ಸಂದರದಲ್ಲಿ ಬಾಬುರಾಜೇಂದ್ರಪ್ರಸಾದರು ತಮ್ಮ ಪುಸ್ತಿಕೆಯಲ್ಲಿ
ಬರೆದುದೇನಂದರೆ, “ತನ್ನ ವಿಕಾಸ, ತನ್ನ ಸಂಸ್ಕೃತಿಯ ಸಂರಕ್ಷಣ, ತನ್ನ
ಅತ್ಯಂತ ಆಂತರಿಕ ವಿಚಾರಗಳ ನಿವೇದನ ಈ ದೃಷ್ಟಿಯಿಂದ ಮಾತೃಭಾಷೆಯ
ಕೃಷಿಯು ಅತ್ಯವಶ್ಯವು. ನಮ್ಮ ಪ್ರಾಂತೀಯ ಭಾಷೆಗಳೇ ಈ ಕಾವ್ಯವನ್ನು
ಮಾಡಬಲ್ಲವು. ಕಾಲಚಕ್ರದ ಹಾವಳಿಯನ್ನೆದುರಿಸಿ ಆ ಭಾಷೆಗಳ ಜೀವನದ
ಆಧ್ಯಾತ್ಮಿಕ, ನೈತಿಕ ಮೂಲ್ಯಗಳನ್ನು ಈವರೆಗೆ ಉತ್ತಮ ರೀತಿಯಿಂದ
ಸಂರಕ್ಷಿಸಿ ಎತ್ತಿಹಿಡಿದಿವೆ. ನಾವು ಈ ಪಿತ್ರಾಶ್ಚಿತವನ್ನು ಕಾಪಾಡುವದಲ್ಲದೆ
ಅದನ್ನು ಇನ್ನೂ ಹೆಚ್ಚಿಸಲಿಕ್ಕೆ ಬೇಕು. ಪ್ರಾಂತೀಯ ಹಾಗೂ ರಾಷ್ಟ್ರೀಯ
ಭಾಷೆಗಳಲ್ಲಿ ತಿಕ್ಕಾಟವುಂಟಾಗಲು ನನಗಂತೂ ಏನೂ ಕಾರಣ ಕಾಣುವದಿಲ್ಲ.
ಹೆಗಲಿಗೆ ಹೆಗಲು ಹಚ್ಚಿ ಅವು ತಮ್ಮ ತಮ್ಮ ಕಾವ್ಯಗಳನ್ನು ಮಾಡುತ್ತ,
ಪರಸ್ಪರರ ಸಂಪದಿಂದ ಎರಡೂ ಬೆಳೆಯುತ್ತ ಹೋಗಲಿಕ್ಕೆ ಬೇಕು. ಪ್ರತಿ
ಯೊಬ್ಬನು ತನ್ನ ಭಾಷೆಯನ್ನು ಚನ್ನಾಗಿ ಅರಿಯುವರು ಅತ್ಯವಶ್ಯ.”<noinclude></noinclude>
jsg2um6ct5yyoppj3mjwy2tk9zwqqz8
ಪುಟ:Praantabhaashhe-Rashhtrabhaashhe.pdf/೩೦
104
113891
321190
308748
2026-05-20T06:57:38Z
Pragathi. BH
7585
/* Validated */
321190
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೨೫—}}
{{gap}}ಈ ದೃಷ್ಟಿಯಿಂದ ನೋಡಿದರೆ ಪ್ರಾಂತೀಯ ಭಾಷೆಗಳ ಸೇವೆ ಮಾಡು
ವುದು ಎಂದರೆ ಒಂದು ವಿಧಾಯಕ ಕಾರ್ಯಕ್ರಮದಲ್ಲಿ ನಿರತವಿದ್ದಂತೆಯೆ. ಈ
ಸೇವೆ ಕಾಂಗ್ರೆಸ್ಸಿನ ಮನ್ನಣೆಗೆ ಪಾತ್ರವು, ಗಾಂಧೀಜಿಯವರಿಗೆ ಇಷ್ಟವು,
ರಾಷ್ಟ್ರಕ್ಕೆ ಮತ್ತು ಪ್ರಾಂತಕ್ಕೆ ಅವಶ್ಯವು.
{{center|'''ಪ್ರಾಂತ ಭಾಷೆ, ಇತರ ಭಾಷೆಗಳು'''}}
{{gap}}ನಮ್ಮ ಹಿಂದುಸ್ತಾನ ರಾಷ್ಟ್ರವು ಅತ್ಯಂತ ವಿಶಾಲವಿರುವದರಿಂದ ಅದು
ಹಲವು ಸಣ್ಣ ದೊಡ್ಡ ಪ್ರಾಂತಗಳಿಂದ ಕೂಡಿದ್ದಾಗಿದೆ. ಅತಿ ದೊಡ್ಡ
ಪ್ರಮಾಣದಲ್ಲಿ ಬಹು ಸಂಖ್ಯರಿರುವವರ ಭಾಷೆಯೆ ಆಯಾ ಪ್ರಾಂತದ ಭಾಷೆ
ಇರುವದೆಂಬುದು ನಿಜ ಆ ಭಾಷೆಯೆ ಅಲ್ಲಿ ಪ್ರಧಾನ ಭಾಷೆಯೆಂಬುದು ನಿ
ವಾದವು. ಆ ಭಾಷೆಯ ಮುಖಾಂತರವೆ ಅಲ್ಲಿಯ ಜನಸಾಮಾನ್ಯರ ಏಳಿಗೆ
ಆಗಬಲ್ಲದು ಎಂಬುದು ಸ್ವಯಂ ಸಿದ್ಧವು. ಹೀಗಿದ್ದರೂ ಪ್ರಾಂತದಲ್ಲಿ
ಪ್ರಾಂತ ಭಾಷೆಯೊಡನೆ ಅನ್ಯ ಭಾಷೆಗಳ ಸಂಬಂಧವು ಬಂದೇ ಬರುವದು.
ಒಂದು ಪ್ರಾಂತವೆಂದರೆ ಜಗತ್ತಿಗೆ ಸಂಬಂಧವಿಲ್ಲದ ನಡುಗಡ್ಡೆಯಲ್ಲಿ ಅಥವಾ
ಅನ್ಯಭಾಷೆಗಳ ಸಂಪದ್ಯವೆ ಇಲ್ಲದ ಪ್ರದೇಶ ವಿಶೇಷವಲ್ಲ. ಆದುದರಿಂದ ಸಂ
ಬಂಧ ಬರುವ ಆಯಾ ಭಾಷೆಗಳ ಸ್ಥಾನಮಾನಗಳಾವು, ಕಾವ್ಯ ಹಾಗೂ
ಮಾದಗಳಾವು ಇದನ್ನು ಸ್ಪಷ್ಟಗೊಳಿಸುವದು ಅತ್ಯವಶ್ಯವಿರುವದು.
{{gap}}ಪ್ರಾಂತೀಯ ಭಾಷೆ ಎಂದು ಯಾವುದಕ್ಕೆನ್ನ ಬೇಕು ಇದು ಮೇಲೆಯೆ
ಹೇಳಲಾಗಿದೆ. ಇಲ್ಲಿ ಕನ್ನಡವನ್ನು ಕುರಿತೇ ವಿಚಾರಿಸುವ, ಅದರೊಡ
ನೆಯೆ ನಮ್ಮ ನಿಕಟ ಸಂಬಂಧವಿರುವದು.
{{gap}}ಕನ್ನಡ ಅಥವಾ ಕನ್ನಡದ ಉಪಭಾಷೆಗಳಾದ ತುಳು, ಬಡಗು,
ಕೊಡಗು ಮುಂತಾದ ಭಾಷೆಗಳನ್ನಾಡುವ ಅತಿ ಸಂಖ್ಯ ಜನರು ಯಾವ ಭೂ
ಭಾಗದಲ್ಲಿ ಮನೆ ಮಾಡಿಕೊಂಡಿರುವರೋ ಅದೇ ಕಾಟಕ ಪ್ರಾಂತವು. ಇಲ್ಲಿ
ಕನ್ನಡವೆ ಪ್ರಾಂತ ಭಾಷೆ, ತುಳು, ಕೊಡಗು, ಬಡಗು ಇವು ಉಪಭಾಷೆಗ
ಳಿರುವುದರಿಂದ ಅದು ಕನ್ನಡ ವರಕ್ಕೆ ಸೇರಿದವುಗಳು. ಹಿಂದೂ ರಾಷ್ಟ್ರದ
ಗಡಿಯ ಹೊರಗಿನ ಭಾಷೆಗಳಷ್ಟೇ ನಮಗೆ ಪರಭಾಷೆಗಳು ಉದಾಹರಣೆಗಾಗಿ
ಇಂಗ್ಲೀಷ್, ಫ್ರೆಂಚ, ಜನ್ಮನ್, ರಶಿಯನ್ ಇವು ನಮಗೆ ಪರಭಾಷೆಗಳು<noinclude></noinclude>
7hlpb4fenr8vtt23jo4fovvghvphu9v
ಪುಟ:Praantabhaashhe-Rashhtrabhaashhe.pdf/೩೧
104
113892
321180
308756
2026-05-20T06:52:45Z
Shreelatha.Halemane
7642
321180
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|—೨೬—}}
ಹಿಂದುಸ್ತಾನದ ಗಡಿಯೊಳಗಿನ ಯಾವ ಭಾಷೆಗಳೂ ನಮಗೆ ಪರಭಾಷೆಗಳಲ್ಲ,
ಅವೆಲ್ಲ ಸಹೋದರ ಭಾಷೆಗಳು, ಭ್ರಾತೃಭಾಷೆಗಳು; ಅವುಗಳಿಗೆ ಪರಭಾಷೆ
ಎನ್ನುವದು ಬಹಳ ದೊಡ್ಡ ತಪ್ಪು. ಯಾವದೇ ಹಿಂದೀಯನಿಗೆ 'ಪರಕೀಯ
ಎನ್ನುವದು ಎಷ್ಟು ತಪ್ಪೋ ಅಷ್ಟೇ ಇದಾದರೂ ತಪ್ಪಾಗುವದು. ಕರಾಟಕದ
ಗಡಿಗುಂಟ ಇರುವ ತಮಿಳು, ತೆಲುಗು, ಮಲಿಯಾಳ ಮತ್ತು ಮರಾಠಿ ಭಾಷೆ
ಗಳು ನೆರೆಭಾಷೆಗಳು. ಹಿಂದುಸ್ತಾನಿಯು ರಾಷ್ಟ್ರ ಭಾಷೆಯು, ಸಂಸ್ಕೃತವು
ಕನ್ನಡದ ಮಟ್ಟಿಗೆ ಪೋಷಕಭಾಷೆ, ನಮ್ಮ ಸಂಸ್ಕೃತಿಯ ಭಾಷೆ, ಈ ಎಲ್ಲ
ಭಾಷೆಗಳ ಸಂಪಠ್ಯವು ಕನ್ನಡಕ್ಕೆ ಒಂದಿಲ್ಲೊಂದು ಬಗೆಯಿಂದ ಆಗುತಿರುವದ
ರಿಂದ ಇವುಗಳ ನಾವು ಯಾವ ದೃಷ್ಟಿಯಿಂದ ನೋಡ ಬೇಕು, ಇವುಗಳ
ಸಂಬಂಧವನ್ನು ಯಾವ ರೀತಿ ಇಟ್ಟುಕೊಳ್ಳಬೇಕು, ಇವುಗಳ ಹಕ್ಕು ಬಾಧ್ಯತೆ
ಗಳಾವು, ಈ ಮಾತುಗಳನ್ನು ನಿಶ್ಚಯಿಸುವದು ಅವಶ್ಯವು.
{{gap}}ಕನ್ನಡದ ಉಪಭಾಷೆಗಳಾದ ತುಳು, ಕೊಡಗು, ಬಡಗು ಇವು ಲಿಪಿ
ಬದ್ಧವಿಲ್ಲ. ಇದ್ದ ಬಾಯಿಮಾತುಗಳು ಮಾತ್ರ. ಇವುಗಳನ್ನಾಡುವವರ
ಸಂಖ್ಯೆಯೂ ಬಹಳ ದೊಡ್ಡದಿಲ್ಲ. ಈ ಭಾಷೆಯಾಡುವವರೆಲ್ಲರಿಗೂ ಕನ್ನಡವು
ಜೋಡು ಭಾಷೆ ಇದ್ದಂತಿದೆ ಆದರೂ ಅವರು ಸಾಕಷ್ಟು ಪ್ರಮಾಣದಲ್ಲಿ
ಅಂದರೆ ನೂರರಲ್ಲಿ ೨೦ - ೩೦ ಇರುವಲ್ಲಿ ಅವರಿಗೆ ಅವರ ಭಾಷೆಯಲ್ಲಿಯ ಪ್ರಾಥ
ಮಿಕ ಶಿಕ್ಷಣವು ಅವಶ್ಯವೆಂದು ಕಂಡರೆ ಹಾಗೆ ಮಾಡಲು ಅಡ್ಡಿ ಇರಕೂಡದು
ಆದರೆ ಜೊತೆಗೆ ಪ್ರಾಂತಭಾಷೆಯ ಪರಿಚಯವು ಕಡ್ಡಾಯವಾಗಿ ಆಗುವಂತೆ
ಮಾಡಲಿಕ್ಕೆ ಬೇಕು.
{{gap}}ಇನ್ನು ತಮಿಳು, ತೆಲಗು, ಮಲಿಯಾಳಿ ಮತ್ತು ಮರಾಠಿ ಇವು
ಕನ್ನಡದ ನೆರೆಭಾಷೆಗಳು. ಇವುಗಳೊಡನೆ ನೆರೆಹೊರೆಯ ಬಾಂಧವ್ಯದ
ಸಂಬಂಧವನ್ನು ನಾವು ಇಟ್ಟು ಕೊಳ್ಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ನಮಗೆ
ಶೇಕ್ಸ್ ಪೀಯರ, ಮಿಲ್ಟನ್ ಇವರ ಜ್ಞಾನವು ಹೆಚ್ಚು ಇರುತ್ತದೆ ಹೊರತು
ಪ್ರಸಿದ್ಧ ಕುರಳ್ ಗ್ರಂಥದ ಇಲ್ಲವೆ ತ್ಯಾಗರಾಜನ ಕೀರ್ತನೆಗಳು ಅಥವಾ ತುಕಾ
ರಾಮ ರಾಮದಾಸರ ಲೇಖಗಳ ಪರಿಚಯವು ನಮಗೆ ಇರುವದಿಲ್ಲ. ಈ
ಬಗೆಯ ಅಜ್ಞಾನದ ಮೂಲಕವೇ ನಮ್ಮ ನೆರೆಹೊರೆಯವರ ಬಗ್ಗೆ ನಮ್ಮ ಮನ<noinclude></noinclude>
3u6tew8f7559ozzl14n6hjm76kdv6j5
321191
321180
2026-05-20T06:58:12Z
Pragathi. BH
7585
/* Validated */
321191
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೨೬—}}
ಹಿಂದುಸ್ತಾನದ ಗಡಿಯೊಳಗಿನ ಯಾವ ಭಾಷೆಗಳೂ ನಮಗೆ ಪರಭಾಷೆಗಳಲ್ಲ,
ಅವೆಲ್ಲ ಸಹೋದರ ಭಾಷೆಗಳು, ಭ್ರಾತೃಭಾಷೆಗಳು; ಅವುಗಳಿಗೆ ಪರಭಾಷೆ
ಎನ್ನುವದು ಬಹಳ ದೊಡ್ಡ ತಪ್ಪು. ಯಾವದೇ ಹಿಂದೀಯನಿಗೆ 'ಪರಕೀಯ
ಎನ್ನುವದು ಎಷ್ಟು ತಪ್ಪೋ ಅಷ್ಟೇ ಇದಾದರೂ ತಪ್ಪಾಗುವದು. ಕರಾಟಕದ
ಗಡಿಗುಂಟ ಇರುವ ತಮಿಳು, ತೆಲುಗು, ಮಲಿಯಾಳ ಮತ್ತು ಮರಾಠಿ ಭಾಷೆ
ಗಳು ನೆರೆಭಾಷೆಗಳು. ಹಿಂದುಸ್ತಾನಿಯು ರಾಷ್ಟ್ರ ಭಾಷೆಯು, ಸಂಸ್ಕೃತವು
ಕನ್ನಡದ ಮಟ್ಟಿಗೆ ಪೋಷಕಭಾಷೆ, ನಮ್ಮ ಸಂಸ್ಕೃತಿಯ ಭಾಷೆ, ಈ ಎಲ್ಲ
ಭಾಷೆಗಳ ಸಂಪಠ್ಯವು ಕನ್ನಡಕ್ಕೆ ಒಂದಿಲ್ಲೊಂದು ಬಗೆಯಿಂದ ಆಗುತಿರುವದ
ರಿಂದ ಇವುಗಳ ನಾವು ಯಾವ ದೃಷ್ಟಿಯಿಂದ ನೋಡ ಬೇಕು, ಇವುಗಳ
ಸಂಬಂಧವನ್ನು ಯಾವ ರೀತಿ ಇಟ್ಟುಕೊಳ್ಳಬೇಕು, ಇವುಗಳ ಹಕ್ಕು ಬಾಧ್ಯತೆ
ಗಳಾವು, ಈ ಮಾತುಗಳನ್ನು ನಿಶ್ಚಯಿಸುವದು ಅವಶ್ಯವು.
{{gap}}ಕನ್ನಡದ ಉಪಭಾಷೆಗಳಾದ ತುಳು, ಕೊಡಗು, ಬಡಗು ಇವು ಲಿಪಿ
ಬದ್ಧವಿಲ್ಲ. ಇದ್ದ ಬಾಯಿಮಾತುಗಳು ಮಾತ್ರ. ಇವುಗಳನ್ನಾಡುವವರ
ಸಂಖ್ಯೆಯೂ ಬಹಳ ದೊಡ್ಡದಿಲ್ಲ. ಈ ಭಾಷೆಯಾಡುವವರೆಲ್ಲರಿಗೂ ಕನ್ನಡವು
ಜೋಡು ಭಾಷೆ ಇದ್ದಂತಿದೆ ಆದರೂ ಅವರು ಸಾಕಷ್ಟು ಪ್ರಮಾಣದಲ್ಲಿ
ಅಂದರೆ ನೂರರಲ್ಲಿ ೨೦ - ೩೦ ಇರುವಲ್ಲಿ ಅವರಿಗೆ ಅವರ ಭಾಷೆಯಲ್ಲಿಯ ಪ್ರಾಥ
ಮಿಕ ಶಿಕ್ಷಣವು ಅವಶ್ಯವೆಂದು ಕಂಡರೆ ಹಾಗೆ ಮಾಡಲು ಅಡ್ಡಿ ಇರಕೂಡದು
ಆದರೆ ಜೊತೆಗೆ ಪ್ರಾಂತಭಾಷೆಯ ಪರಿಚಯವು ಕಡ್ಡಾಯವಾಗಿ ಆಗುವಂತೆ
ಮಾಡಲಿಕ್ಕೆ ಬೇಕು.
{{gap}}ಇನ್ನು ತಮಿಳು, ತೆಲಗು, ಮಲಿಯಾಳಿ ಮತ್ತು ಮರಾಠಿ ಇವು
ಕನ್ನಡದ ನೆರೆಭಾಷೆಗಳು. ಇವುಗಳೊಡನೆ ನೆರೆಹೊರೆಯ ಬಾಂಧವ್ಯದ
ಸಂಬಂಧವನ್ನು ನಾವು ಇಟ್ಟು ಕೊಳ್ಳಬೇಕು. ಸದ್ಯದ ಪರಿಸ್ಥಿತಿಯಲ್ಲಿ ನಮಗೆ
ಶೇಕ್ಸ್ ಪೀಯರ, ಮಿಲ್ಟನ್ ಇವರ ಜ್ಞಾನವು ಹೆಚ್ಚು ಇರುತ್ತದೆ ಹೊರತು
ಪ್ರಸಿದ್ಧ ಕುರಳ್ ಗ್ರಂಥದ ಇಲ್ಲವೆ ತ್ಯಾಗರಾಜನ ಕೀರ್ತನೆಗಳು ಅಥವಾ ತುಕಾ
ರಾಮ ರಾಮದಾಸರ ಲೇಖಗಳ ಪರಿಚಯವು ನಮಗೆ ಇರುವದಿಲ್ಲ. ಈ
ಬಗೆಯ ಅಜ್ಞಾನದ ಮೂಲಕವೇ ನಮ್ಮ ನೆರೆಹೊರೆಯವರ ಬಗ್ಗೆ ನಮ್ಮ ಮನ<noinclude></noinclude>
g69bc7db9srscfgi5n5r33yszpcs0x7
ಪುಟ:Praantabhaashhe-Rashhtrabhaashhe.pdf/೩೨
104
113893
321192
308766
2026-05-20T06:58:49Z
Pragathi. BH
7585
/* Validated */
321192
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೨೭—}}
ಸ್ಸಿನಲ್ಲಿ ವಿಕಲ್ಪಗಳುಂಟಾಗುವ ಸಂಭವವು ಇರುವದು. ಅವರೊಡನೆ ನೃಥಾ
ತಿಕ್ಕಾಟಗಳೂ ಆಗಬಲ್ಲವು ಈ ಬಗೆಯ ಅಜ್ಞಾನವು ಅಕ್ಷಮ್ಯ ವಿರುವದು,
ಇದು ನಮ್ಮ ಸದೋಷ ಶಿಕ್ಷಣದ ಘೋರಪರಿಣಾಮವು. ಇನ್ನು ಈ ನೆರೆ
ಭಾಷೆಗಳು ಯಾರ ಮಾತೃಭಾಷೆಯೊ ಅವರು ಕರಾಟಕಪ್ರಾಂತದಲ್ಲಿ ಕಾಯಂ
ವಸತಿಗಾಗಿ ಬಂದು ನಿಂತುಕೊಂಡರೆ ಅವರು ಕನ್ನಡಕ್ಕೆ ಪ್ರಾಂತಭಾಷೆ ಎಂದು
ಮನ್ನಣೆ ಕೊಟ್ಟು ಅದಕ್ಕೆ ಪ್ರಾಧಾನ್ಯ ಕೊಡಬೇಕಾದೀತು. ಅವರೂ ಸಾಕಷ್ಟು ಸಂಖ್ಯೆಯಲ್ಲಿದ್ದಲ್ಲಿ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿಯೆ
ಆಗಬೇಕೆಂದೆನಿಸಿದರೆ ಆ ವ್ಯವಸ್ಥೆ ಮಾಡಬಹುದು ಆದರೆ ಅಲ್ಲಿಯ ಪ್ರಾಂತ
ಭಾಷೆಯ ಪರಿಚಯವು ಅವಶ್ಯ ಮುಸಲ್ಮಾನಬಾಂಧವರಿಗೂ ಇದೇ ಮಾತು
ಅನ್ವಯಿಸುವದು. ಮೇಲಿನ ವರಗಳಲ್ಲಿ ಬೋಧಭಾಷೆ ಕನ್ನಡವೇ ಇರ
ಬಲ್ಲದು ಬೇರೆ ಭಾಷೆಯವರ ಸಂಖ್ಯೆ ಸಾಕಷ್ಟಿದ್ದಲ್ಲಿ ದ್ವಿತೀಯ ಭಾಷೆ ಎಂದು
ಅದಕ್ಕೆ ಸ್ಥಾನವು ದೊರೆಯಬಲ್ಲದು. ಉಚ್ಚ ಶಿಕ್ಷಣವು ಕನ್ನಡದಲ್ಲಿಯೆ ಕೊಡ
ಲಾಗುವದು.
{{gap}}ಹಿಂದುಸ್ತಾನಿಯು ಅ೦ತರ್ ಪ್ರಾಂತೀಯ ಅಥವಾ ರಾಷ್ಟ್ರಭಾಷೆ, ಕನ್ನ
ಡದ ಪರಿಚಯವು ಸಾಕಷ್ಟು ಆದಬಳಿಕ ವ್ಯವಹಾರಕ್ಕೆ ಅವಶ್ಯವಿದ್ದ ಮಟ್ಟಿಗೆ
ಹಿಂದುಸ್ತಾನಿಯ ಪರಿಚಯ ಮಾಡಿಕೊಡುವದು ಅವಶ್ಯ. ಮಾಧ್ಯಮಿಕ
ಶಾಲೆಗಳಲ್ಲಿ ಅವಶ್ಯವೆನಿಸಿದವರು ಅದನ್ನು ದ್ವಿತೀಯ ಭಾಷೆಯೆಂದು ಕಲಿಯಲು
ಆಸ್ಪದವಿರಬೇಕು, ಉಚ್ಚ ಶಿಕ್ಷಣ ಕ್ರಮದಲ್ಲಿ ಅದು ಅವಶ್ಯ ದ್ವಿತೀಯಭಾಷೆ
ಯಾಗಬಲ್ಲದು ಆದರೆ ಕನ್ನಡವೆ ಬೋಧಭಾಷೆ ಇರಬೇಕೆನ್ನುವದನ್ನು
ಯಾರೂ ಮರೆಯಕೂಡದು.
{{gap}}ಇನ್ನು ಸಂಸ್ಕೃತ ಇದು ನಮ್ಮ ಸಾಂಸ್ಕೃತಿಕ ಭಾಷೆಯೂ ಆಹುದು,
ನಮ್ಮ ಪೋಷಕ ಭಾಷೆಯೂ ಆಹುದು ಆದುದರಿಂದ ಮಾಧ್ಯಮಿಕ ಶಾಲೆ
ಗಳಲ್ಲಿ ಅದೊಂದು ದ್ವಿತೀಯ ಭಾಷೆಯೆಂದುಕೊಂಡು ಅಭ್ಯಸಿಸುವವರಿಗೆ
ಅವಕಾಶವಿರಬೇಕು. ಉಚ್ಚ ಶಿಕ್ಷಣ ಪಡೆಯುವವರಾದರೂ ಅದರ ವಿಶೇಷ
ಅಭ್ಯಾಸಮಾಡಲಿಚ್ಛಿಸಿದರೆ ಅವರಿಗೆ ಎಲ್ಲ ಅನುಕೂಲತೆಗಳನ್ನು ಒದಗಿಸಿ
ಕೊಡಬೇಕು.<noinclude></noinclude>
17a0ay98plakvexrgt271tzawtvviko
ಪುಟ:Praantabhaashhe-Rashhtrabhaashhe.pdf/೩೩
104
113894
321193
308773
2026-05-20T06:59:30Z
Pragathi. BH
7585
/* Validated */
321193
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೨೮—}}
{{gap}}ಈ ಎಲ್ಲ ಮಾತುಗಳು ಹಿಂದುಸ್ತಾನದಲ್ಲಿಯ ಭಾಷೆಗಳ ಬಗ್ಗೆ ಆದವು
ಇನ್ನು ಪರಭಾಷೆಗಳ ವಿಷಯ, ಹಿಂದುಸ್ತಾನವು ಅನೇಕ ದೇಶಗಳೊಡನೆ ತನ್ನ
ಸಂಬಂಧವನ್ನಿಟ್ಟು ಕೊಳ್ಳಬೇಕಾಗುವದು. ಆ ಕೆಲಸಕ್ಕೆ ಇಂಗ್ಲೀಷಭಾಷೆ ಬಹಳ
ಉಪಯುಕ್ತವು. ಚೀನ ಜಪಾನದವರು ಕೂಡ ಈಗ ಉಚ್ಚವಗಳಲ್ಲಿ
ಇಂಗ್ಲೀಷ ಭಾಷೆಯನ್ನು ದ್ವಿತೀಯಭಾಷೆಯೆಂದು ಕಲಿಯುವರು.
ನಾವಾದರೂ ಹಾಗೆಯೆ ಮಾಡಬೇಕಾಗುವದು ವ್ಯಾಪಾರಉದ್ಯೋಗಗಳಲ್ಲಿ ತೊಡಗ
ಬೇಕೆನ್ನುವವರು, ವಿಜ್ಞಾನಾದಿಗಳನ್ನು ಕಲಿಯಬೇಕನ್ನುವವರು, ಪರದೇಶ
ಗಳಿಗೆ ತೆರೆಳಬೇಕೆನ್ನುವವರು ಇಂಗ್ಲೀಷ ಇಲ್ಲವೆ ಫ್ರೆಂಚ ಮುಂತಾದ ಭಾಷೆ
ಗಳನ್ನು ಕಲಿಯುವದು ಅವಶ್ಯವಾಗುವದು.
{{gap}}ಈ ರೀತಿ ಆಯಾ ಭಾಷೆಗಳ ವಿಷಯದಲ್ಲಿ ಕನ್ನಾಟಕದವರು ತಮ್ಮ
ಧೋರಣೆಯನ್ನಿಡಬೇಕಾಗುವದು. ಈ ಎಲ್ಲ ಮಾತುಗಳು ಒಮ್ಮೆಲೆ ಆಗ
ಬಹುದೆಂದು ಹೇಳುವದು ಅಸಾಧ್ಯ. ಆದರೆ ಈ ದಿಕ್ಕಿನಿಂದ ನಾವು ಸಾಗ
ಬೇಕಾಗಿದೆ ಎಂಬದು ನಿಶ್ಚಿತ. ಮೇಲಾಗಿ ಮೇಲೆ ಹೇಳಿದ ಮಾತುಗಳು
ಕೊನೆಯನೆಂದು ಯಾರೂ ತಿಳಿಯಕೂಡದು. ಅವು ದಿಗ್ದರನರೂಪವಾಗಿವೆ.
ಅನುಭವದಿಂದ, ವಿಚಾರವಿನಿಮಯದಿಂದ, ಚಿಟ್ಟೆಯಿಂದ ಇವುಗಳಲ್ಲಿ ಹಲಕೆಲವು
ಮಾರಾಟುಗಳನ್ನು ಮಾಡಬೇಕಾಗಿ ಬರಬಹುದು ಆದರೆ ಆ ಎಲ್ಲ ಮಾಕ್ಸಾಟ
ಗಳು ವಿವರಗಳಿಗೆ ಸಂಬಂಧಿಸಿದವು. ಸಿದ್ಧಾಂತದಲ್ಲಿ ಹೆಚ್ಚು ಕಡಿಮೆ
ಯಾವುದೂ ಇಲ್ಲ, ಸಿದ್ಧಾಂತಗಳನ್ನು ಸ್ಥಿರವಿಟ್ಟು ತಪಶೀಲುಗಳಲ್ಲಿ ಅಷ್ಟಿಷ್ಟು
ಹೆಚ್ಚು ಕಡಿಮೆ ಮಾಡಲೇಬೇಕಾಗುವದು, ಅದು ಯಾವದೇ ರೀತಿ
ಬಾಧಕವಲ್ಲ.
{{gap}}ಇನ್ನು ಪ್ರಾಂತಕ್ಕೆ ಒಂದು ಭಾಷೆ ಇದ್ದಂತೆ ರಾಷ್ಟ್ರಕ್ಕೆ ಒಂದು ಭಾಷೆ
ಅವಶ್ಯ, ಪ್ರಾಂತ ಪ್ರಾಂತಗಳಲ್ಲಿಯ ವ್ಯವಹಾರಕ್ಕೆ, ರಾಷ್ಟ್ರದ ಗೌರವಕ್ಕೆ,
ನಮ್ಮ ರಾಷ್ಟ್ರದಲ್ಲಿಯದೆ ಆದ ಒಂದು ಭಾಷೆಯನ್ನು ನಾವು ರಾಷ್ಟ್ರ ಭಾಷೆ
ಯನ್ನಾಗಿ ಮಾಡಿಕೊಳ್ಳಬೇಕು. ಆ ವಿಷಯದತ್ತ ಇನ್ನು ಹೊರಳುವ.
{{center|———}}<noinclude></noinclude>
4e1hmv45nvwj8va5b5mlvm6dxcrqfvs
ಪುಟ:Praantabhaashhe-Rashhtrabhaashhe.pdf/೩೪
104
113895
321194
308782
2026-05-20T06:59:45Z
Pragathi. BH
7585
/* Validated */
321194
proofread-page
text/x-wiki
<noinclude><pagequality level="4" user="Pragathi. BH" /></noinclude>{{center|'''೨ ರಾಷ್ಟ್ರಭಾಷೆ'''}}
{{center|'''ಅವಶ್ಯಕತೆ.'''}}
ಇಸವಿ ಸನ್ ೧೯೦೬-೧೯೦೮ ರ ಸುಮಾರಕ್ಕೆ ನಡೆದ ಒಂದು ಘಟನೆ
ರಾಷ್ಟ್ರೀಯ ನವಜಾಗ್ರತಿಯು ಹಿಂದುಸ್ಥಾನದಲ್ಲೆಲ್ಲ ಸಂಚರಿಸಿತ್ತು. ಹಿಂದಿ
ತರುಣರು ಚೇತರಿಸಿ ರಾಷ್ಟ್ರಾಭಿಮಾನದಿಂದ ಪ್ರೇರಿತರಾಗಿ ದೇಶೋದ್ಧಾರಕ್ಕಾಗಿ
ಏನು ಮಾಡಬೇಕು ಏನು ಬಿಡಬೇಕು ಎಂಬ ಆತುರದಿಂದ ನಿತ್ಯ ಚಿಂತನದಲ್ಲಿ
ಮಗ್ನರಾಗಿದ್ದರು. ಬ್ರಿಟಿಶರ ಗುಲಾಮಗಿರಿಯಿಂದ ಮುಕ್ತರಾಗಬೇಕೆಂಬ
ಒಂದೇ ಒಂದು ಹಂಬಲ ಅನೇಕರಲ್ಲಿ ಒಡಮೂಡಿತ್ತು. ವರದೇಶಗಳಿಗೆ
ಹೋದ ಹಿಂದಿ ವಿದ್ಯಾಕ್ಸಿಗಳಲ್ಲಿಯ ಕತ್ರವ್ಯ ಜಾಗ್ರತಿಯಾಗಿತ್ತು. ಹೀಗೆ
ವಾತಾವರಣವಿರುವಾಗ ಲಂಡನ್ ಪಟ್ಟಣದಲ್ಲಿ ಒಂದು ಅಟ್ಟದ ಮೇಲೆ
ಹತ್ತೆಂಟು ಹಿಂದೀ ವಿದ್ಯಾರಿಗಳು ಒಂದು ಆದಿತ್ಯವಾರ ದಿನ ಸಭೆಗೂಡಿದರು.
ತಮ್ಮ ಆಶೆ ಆಕಾಂಕ್ಷೆಗಳೊಡನೆ ಸಹಾನುಭೂತಿಯುಳ್ಳ ಹಾಗೂ ಸಮದು:ಬಿ
ಗಳಾದ ಒಬ್ಬಿಬ್ಬ ಆಯರಿಶ ವಿದ್ಯಾರಿಗಳನ್ನೂ ಅವರು ಆಮಂತ್ರಿಸಿದ್ದರು.
ಚಹಾಪಾನವಾದ ಬಳಿಕ ಮಾತಿಗೆ ಮಾತು ನಡೆದು ಹಿಂದುಸ್ತಾನದ ಏಳಿಗೆಯ
ಚಟ್ಟೆ ಮೊದಲು ಮಾಡಿತು. ವಿದ್ಯಾಗಳಲ್ಲಿ ಬಂಗಾಲಿ, ಪಂಜಾ, ಮರಾಠಿ,
ಗುಜರಾಥಿ, ಕಾಟಕಿ ಮುಂತಾದವರಿದ್ದರು. ಅವರೆಲ್ಲರೂ ಇಂಗ್ಲಿಷದಲ್ಲಿಯೆ
ಮಾತಾಡುತ್ತಿದ್ದರು. ಒಳ್ಳೆ ಆವೇಶದಿಂದ ಎಲ್ಲರೂ ಮಾತಾಡುತ್ತಿರುವಾಗ ಆ
ಆಯರಿತ ವಿದ್ಯಾಸ್ಥಿಯು ಒಮ್ಮೆಲೆ ಅಂದದ್ದು, ರಾಷ್ಟ್ರ, ರಾಷ್ಟ್ರದ ಉದ್ಧಾರ
ಎಂಬ ದೊಡ್ಡ ದೊಡ್ಡ ಮಾತಗಳನ್ನಾಡುತ್ತಿರುವಿರಿ, ನೀವು ರಾಷ್ಟ್ರಭಾಷೆ
ಯಲ್ಲಿ ಏಕೆ ಮಾತಾಡುವದಿಲ್ಲ ?? ಅವರ ಚ ಕ್ಷಣಹೊತ್ತು ನಿಂತಿತು,
ಎಲ್ಲರೂ ಬೆಪ್ಪಾಗಿ ಕುಳಿತರು. ಪ್ರಾಂತಿಕ ಭಾಷೆಗಳಲ್ಲಿ ಮಾತಾಡಬೇಕೆಂದರೆ
ಅವು ಪರಸ್ಪರರಿಗೆ ತಿಳಿಯುವದಿಲ್ಲ. ತಮ್ಮನ್ನು ದಾಸ್ಯಕ್ಕೀಡು ಮಾಡಿದ
ಬ್ರಿಟಿಶರ ಭಾಷೆಯನ್ನು ಪ್ರಯೋಗಿಸುವದು ನಾಚಿಕೆಗೇಡು ಎನಿಸಲಾರಂಭಿಸಿತು.
ಅಷ್ಟರಲ್ಲಿ ಮತ್ತೆ ಆ ಆಯರಿತ ಸ್ನೇಹಿತನು ನಮ್ಮ ಮುಖಂಡರು ಮೊದಲ
ಆಯ ಭಾಷೆಯ ಉದ್ಧಾರವನ್ನು ನಡೆಸಿದರು. ನಮ್ಮ ನಮ್ಮೊಳಗೆ ಮಾತಾ
ಡುವಾಗ ದಾಸ್ಯದ ಕುರುಹಾದ ಈ ಆಂಗ್ಲ ಭಾಷೆ ಏಕೆ ಎಂದರು. ತಮ್ಮ<noinclude></noinclude>
tp14zrl6g6hsjm75xgl46vjyt5g527y
ಪುಟ:Praantabhaashhe-Rashhtrabhaashhe.pdf/೩೫
104
113896
321196
308792
2026-05-20T07:00:02Z
Pragathi. BH
7585
/* Validated */
321196
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೩೦—}}
ವ್ಯವಹಾರವನ್ನೆಲ್ಲ ಆಯರ್ ಭಾಷೆಯಲ್ಲಿಯೆ ಮಾಡಬೇಕೆಂದು ಗೊತ್ತು ಮಾಡಿ
ಎಂದನು. “ನಿಮಗೆ ತಿಳಿಯಲು ಇಂಗ್ಲೀಷದಲ್ಲಿ ಮಾತನಾಡು
ತ್ತೇವೆ ? ಎಂದು ತಟ್ಟನೆ ಒಬ್ಬ ಹಿಂದೀ ವಿದ್ಯಾರ್ಥಿಯು ಅಂದನು ಆದರೆ
ಅದು ಕೇವಲ ಮಾತಿಗೆ ಮರು ಮಾತು. ಎಲ್ಲರ ಕಣ್ಣಿನಲ್ಲಿಯೂ ಅಂಜನ
ಹಾಕಿದಂತೆ ಆಯಿತು. ತಮಗೊಂದು ರಾಷ್ಟ್ರಭಾಷೆ ಬೇಕು ಹಿಂದುಸ್ತಾ
ನಿಯು ಆ ಭಾಷೆ ಆಗಬಲ್ಲದು ಎಂಬುದು ಅವರಿಗೆ ಹೊಳೆಯಿತು.
{{center|'''ಮುಖಂಡರ ಮತ'''}}
{{gap}}ಭಾರತೀಯ ಮುಖಂಡತ್ವದ ಹೊಣೆ ಹೊತ್ತ ಬಳಿಕ ಲೋಕಮಾನ್ಯರು
ರಾಷ್ಟ್ರಭಾಷೆಯ ಮಹತ್ವವನ್ನರಿತ ಆ ಭಾಷೆಯಲ್ಲಿ ಮಾತಾಡಲು ಪ್ರಾರಂಭ
ಮಾಡಿದ್ದರು. ೧೯೧೬-೧೭ರಲ್ಲಿ ಲಖನೌ ಕಾನಪೂರ ಕಡೆಗೆ ಸಂಚಾರ ಬೆಳೆಸಿ
ದಾಗ ಮೊದಲಿನಂತೆ ಇಗ್ಲೀಷ್ ಮಾತಾಡದೆ ಅವರು ಹಿಂದುಸ್ತಾನಿಯಲ್ಲಿಯೇ
ಮಾತಾಡಿದರು. ಗಾಂಧಿಜೀಯವರಂತೂ ರಾಷ್ಟ್ರಭಾಷಾ ಪ್ರಚಾರವೆಂಬ
ದೊಂದು ಕಾಠ್ಯಕ್ರಮವನ್ನೆ ಮೊದಲಿನಿಂದ ಇಟ್ಟು ಕೊಂಡಿರುವರು. ೧೯೨೫
ರಲ್ಲಿ ಕಾಂಗ್ರೆಸ್ಸು ಹಿಂದುಸ್ತಾನಿಯೆ ರಾಷ್ಟ್ರಭಾಷೆಯೆಂದೂ ಕಾಂಗ್ರೆಸ್ಸಿಗರು
ಅದರ ಪ್ರಚಾರವನ್ನು ಮಾಡಬೇಕೆಂದೂ ಗೊತ್ತುವಳಿ ಮಾಡಿತು. ಗಾಂಧಿ
ಪ್ರಣೀತ ಹಾಗೂ ಕಾಂಗ್ರೆಸ್ ಸ್ವೀಕೃತ ವಿಧಾಯಕ ಕಾಠ್ಯಕ್ರಮಗಳಲ್ಲಿ ಪ್ರಾಂತ
ಭಾಷಾಪ್ರೇಮ ಮತ್ತು ರಾಷ್ಟ್ರ ಭಾಷಾ ಪ್ರಚಾರ ಇವೆರಡೂ ಅವಳಿ ಜವಳಿ
ಯಾಗಿರುವವು. ಗಾಂಧಿಜೀಯವರು ೧೯೪೦ ರಲ್ಲಿ ಬರೆದ ವಿಧಾಯಕ ಕಾರ
ಕ್ರಮ' ಎಂಬ ಪುಸ್ತಿಕೆಯಲ್ಲಿ ಈ ಬಗ್ಗೆ ಅಂದದ್ದೇನಂದರೆ, ಅಖಿಲ ಭಾರ
ತೀಯ ಅಥವಾ ಅಂತ ಪ್ರಾಂತೀಯ ಬಳಿಕೆಗಾಗಿ ಹಿಂದುಸ್ತಾನದಲ್ಲಿಯೆ
ಹುಟ್ಟಿದ ಒಂದು ಭಾಷೆ ನಮಗೆ ಬೇಕು. ಅದು ಈಗಾಗಲೆ ಬಹುಸಂಖ್ಯೆಗೆ
ತಿಳಿಯುತಿರಬೇಕು, ಇತರರು ಅನಾಯಾಸವಾಗಿ ಕಲಿಯಲು ಸಾಧ್ಯವಿರಬೇಕು,
ನಿವಾದವಾಗಿ ಹಿಂದುಸ್ತಾನಿಯು ಅಂಥ ಭಾಷೆಯು, ಉತ್ತರಹಿಂದುಸ್ತಾನದ
ಹಿಂದುಮುಸಲ್ಮಾನಬಾಂಧವರ ಸಾಮಾನ್ಯಭಾಷೆಯದು. ಫಾರಸೀಲಿಪಿಯಲ್ಲಿ
ಅದು ಬರೆಯಲ್ಪಟ್ಟಾಗ ಅದಕ್ಕೆ ಊರು ಎನ್ನುವರು. ೧೯೨೫ರಲ್ಲಿ ಕಾಂಗ್ರೆಸ್ಸಿ
ನವರು ಸ್ವೀಕರಿಸಿದ ತಮ್ಮ ಪ್ರಸಿದ್ಧ ಗೊತ್ತುವಳಿಯಲ್ಲಿ ಅದಕ್ಕೆ ಹಿಂದುಸ್ತಾನಿ<noinclude></noinclude>
njfm34vveky3dyozs7ll4chia6nhvgq
ಪುಟ:Praantabhaashhe-Rashhtrabhaashhe.pdf/೩೬
104
113897
321197
308797
2026-05-20T07:00:23Z
Pragathi. BH
7585
/* Validated */
321197
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೩೧—}}
ಎಂದಿರುವರು. ಅಂದಿನಿಂದ ತತ್ವತಃ ಹಿಂದುಸ್ತಾನಿಯೇ ನಮ್ಮ ರಾಷ್ಟ್ರ ಭಾಷೆ...
ಇಂಗ್ಲೀಷದ ಮೋಹಿನಿಯಿಂದ ನಾವು ಇನ್ನೂ ಮುಕ್ತರಾಗಿಲ್ಲ. ಆಮೂಲಕ
ಸ್ವರಾಜ್ಯದತ್ತ ನಾವು ಸಾಕಷ್ಟು ವೇಗದಿಂದ ಸಾಗಲೊಲ್ಲೆವು ಇಂಗ್ಲೀಷ ಕಲಿ
ಯಲು ನಾವು ಕಳೆಯುವ ವರುಷಗಳಷ್ಟು ತಿಂಗಳಗಳನ್ನು ಹಿಂದುಸ್ತಾನಿ
ಅಭ್ಯಸಿಸಲು ಕಳೆಯದೆ ಹೋದರೆ ಜನಸಾಮಾನ್ಯರಬಗ್ಗೆ ಇದ್ದ ನನ್ನ ಪ್ರೇಮವು
ಅಷ್ಟಕ್ಕಷ್ಟೇ ಎಂದು ಹೇಳಬಹುದು ಇದೇ ಸಂದರದಲ್ಲಿ ಬಾಬು ರಾಜೇಂದ್ರ
ಪ್ರಸಾದರು ಅನ್ನುವದೇನಂದರೆ 'ನಮ್ಮ ರಾಷ್ಟ್ರದಂಥ ವಿಶಾಲ ರಾಷ್ಟ್ರಕ
ಪ್ರಾಂತ ಪ್ರಾಂತಗಳ ವ್ಯವಹಾರಕ್ಕಾಗಿ ಹಾಗೂ ರಾಷ್ಟ್ರೀಯ ಕಾರಗಳಿಗಾಗಿ
ಒಂದು ರಾಷ್ಟ್ರ ಭಾಷೆ ಬೇಕು ಅದು ಎಲ್ಲರೂ ಸಹಜವಾಗಿ ಕಲಿತು ತಿಳಿದು
ಕೊಳ್ಳುವಂತಹದಿರಬೇಕು ಸದ್ಯದಲ್ಲಿ ಉತ್ತರ ಹಾಗೂ ಮಧ್ಯಹಿಂದುಸ್ತಾನದ
ಬಹು ಸಂಖ್ಯ ಜನರು ಹಿಂದುಸ್ತಾನಿಯನ್ನು ಸಹಜವಾಗಿ ತಿಳಿದುಕೊಳ್ಳಬಲ್ಲರು
ಅವರಿಗೆ ಅದನ್ನು ಸರಿಯಾಗಿ ಮಾತಾಡಲು ಬರದಿದ್ದರೂ ಚಿಂತೆಯಿಲ್ಲ. ಒಂದು
ಸಾನಿಯ ಶಬ್ದ ಭಾ೦ ಡಾ ರ ಹಾಗೂ ಹಿಂದುಸ್ತಾನದಲ್ಲಿಯ ಇತರ
ಭಾಷೆಗಳ ಶಬ್ದ ಭಾ೦ಡಾರ ಇವು ಬಹುಮಟ್ಟಿಗೆ ಒಂದೇ ಇರುವವು.
ಇದೊಂದು ನಮ್ಮ ಸುದೈವ. ಈ ಪರಿ ಹಿಂದುಸ್ತಾನಿಗೆ ಇಬ್ಬಗೆಯ ಅನುಕೂಲತೆ
ಇರುವದು ಹಿಂದುಸ್ಥಾನದ ಅಕ್ಷದಷ್ಟು ಜನರಿಗೆ ಅದು ಚನ್ನಾಗಿ ತಿಳಿಯುವದು
ಮತ್ತು ಹೆಚ್ಚು ಕಡಿಮೆ ಪ್ರಮಾಣದಲ್ಲಿ ಅದರ ಶಬ್ದ ಭಾಂಡಾರ ಹಾಗೂ ಇತರ
ಭಾರತೀಯ ಭಾಷೆಗಳ ಶಬ್ದ ಭ೦ಡಾರ ಇವು ಸಾಮಾನ್ಯವಿರುವವು. ಈ
ಹಿಂದುಸ್ತಾನಿಯೆಂಬುದೆ ನಮ್ಮ ರಾಷ್ಟ್ರಭಾಷೆ ಎಂದು ಮನ್ನಿಸಲಾಗಿದೆ...
ಆದುದರಿಂದ ಈ ಭಾಷೆಯನ್ನು ಕಲಿಯುವದು ಮತ್ತು ನಾಗರಿ ಊಲಿಸಿ
ಗಳಲ್ಲಿ ಅದನ್ನು ಓದಲು ಬರೆಯಲು ಸಮರವಾಗುವದು ನಮ್ಮೆಲ್ಲರ ಕತ್ರವ್ಯ
ಏರುವದು.
{{gap}}೧೯೨೫ರಲ್ಲಿ ಪಾಸಾದ ಕಾಂಗ್ರೆಸ್ ಗೊತ್ತುವಳಿಯ ಮುಖ್ಯಾಂಶವು
ಏನೆಂದರೆ, ಉತ್ತರ ಹಿಂದುಸ್ತಾನದ ಹಿಂದುಮುಸಲ್ಮಾನ ಜನಸಾನ ನ್ಯರಿಗೆ ತಿಳಿ
ಯುವ ಮತ್ತು ಅವರು ಉಪಯೋಗಿಸುವ ಹಾಗೂ ನಾಗರಿ ಮತ್ತು ಉಟ್ಟ
ಲಿಪಿಗಳಲ್ಲಿ ಬರೆಯಲಾಗುತ್ತಿರುವ ಹಿಂದುಸ್ತಾನಿಯು ರಾಷ್ಟ್ರಭಾಷೆಯೆಂದು
ಮನ್ನಿಸಲಾಗಿದೆ. ಅಖಿಲಭಾರತೀಯ ಸ್ವರೂಪದ ಕಾಂಗ್ರೆಸ್ಸಿನ ಎಲ್ಲ ವ್ಯವ
ಹಾರಗಳಲ್ಲಿ ಈ ಭಾಷೆಯನ್ನೆ ಉಪಯೋಗಿಸಬೇಕು ಮತ್ತು ಇದರ ಪ್ರಸಾರ<noinclude></noinclude>
pqqgxqrxy7zsjkijmxp8ty6qhirjvuh
ಪುಟ:Praantabhaashhe-Rashhtrabhaashhe.pdf/೩೭
104
113898
321200
308805
2026-05-20T07:01:03Z
Pragathi. BH
7585
/* Validated */
321200
proofread-page
text/x-wiki
<noinclude><pagequality level="4" user="Pragathi. BH" /></noinclude>{{center|೩೨}}
ಮಾಡಬೇಕು, ಕಾಂಗ್ರೆಸ್ಸಿನ ಘಟನೆಯಲ್ಲಿಯೆ ಹಿಂದುಸ್ತಾನಿ ರಾಷ್ಟ್ರಭಾಷೆ
ಇರಬೇಕು, ಪ್ರಾಂತಿಕ ಭಾಷೆಗಳು ಪ್ರಾಂತದಲ್ಲಿ ಪ್ರಧಾನವಿರಬೇಕು, ಎಂದು
ಸ್ಪಷ್ಟ ಉಲ್ಲೇಖವಿರುವದು.
{{gap}}ಇದಲ್ಲದೆ ಕಾಲಕಾಲಕ್ಕೆ ಮಹಾತ್ಮಾಗಾಂಧಿಯವರು ಹಾಗೂ ಪಂಡಿತ
ಜವಾಹರಲಾಲ, ಮಲಾನಾ ಅಬುಲ್ ಕಲಾಮ ಆಜಾದ ಮುಂತಾದ
ಕಾಂಗ್ರೆಸ್ ಮುಖಂಡರು, ಝಕೀರಹುಸೇನರಂಥ ಶಿಕ್ಷಣಜ್ಞರು, ತೇಜ
ಬಹಾದ್ದೂರ ಸಪ್ಪುರಂಥ ಮಂದಪಕ್ಷದವರು, ಭಗವಾನದಾಸರಂಥ ತತ್ವ
ಜ್ಞಾನಿಗಳು, ಸರ್ ರಾಧಾಕೃಷ್ಣರಂಥ ವಿದ್ವಾಂಸರು ಹಿಂದುಸ್ತಾನಿಯ ಅವಶ್ಯ
ಕತೆಯ ಬಗ್ಗೆ ಒತ್ತಿ ಒತ್ತಿ ಹೇಳುತ್ತ ಬಂದಿರುವರು,
{{center|'''ರಾಷ್ಟ್ರಭಾಷೆಯ ಲಕ್ಷಣ'''}}
{{gap}}ಹಿಂದುಸ್ತಾನವು ಒಂದು ಚಿಕ್ಕದಾದ ರಾಷ್ಟ್ರವಾಗಿದ್ದರೆ ಅಥವಾ ಎರಡು
ಮೂರೇ ಭಾಷೆಗಳು ದೇಶದಲ್ಲಿ ಪ್ರಚಲಿತವಿದ್ದರೆ ರಾಷ್ಟ್ರಭಾಷೆಯ ಪ್ರಶ್ನೆ
ಉಂಟಾಗುತ್ತಿರಲಿಲ್ಲ. ಸ್ವತಂಡದಲ್ಲಿ ಪ್ರಚಲಿತವಿದ್ದ ಜಲ್ಮನ್, ಫ್ರೆಂಚ್,
ಇಟಾಲಿಯನ್ ಮೂರು ಭಾಷೆಗಳು ರಾಷ್ಟ್ರಭಾಷೆಗಳೆನಿಸುವವು.ಸರಕಾರೀ
ಪತ್ರಕಗಳು ಮರೂ ಭಾಷೆಯಲ್ಲಿ ಹೊರಡುವವು ಆದರೆ ಹಿಂದುಸ್ತಾನ
ದಲ್ಲಿ ಕನಿಷ್ಟ ಹದಿನಾಲ್ಕು ಒಳ್ಳೆ ಸುಷ್ಟ ಪುಷ್ಟ ಪ್ರಾಂತೀಯ ಭಾಷೆಗಳಿವೆ. ಅವೆ
ಇವುಗಳನ್ನು ರಾಷ್ಟ್ರ ಭಾಷೆಗಳೆಂದು ಮನ್ನಿಸಿದರೆ ಅನವಸ್ಥೆಯುಂಟಾಗುವದು,
ಈ ಎಲ್ಲ ಪ್ರಾಂತಗಳೂ ಒಂದೇ ರಾಷ್ಟ್ರದ ಅಂಗಾಂಗಗಳು ನಾಳೆ ಈ ಎಲ್ಲ ಪ್ರಾಂತಗಳಿಂದ ಆರಿಸಿಬಂದ ಪ್ರತಿನಿಧಿಗಳು ಪ್ರಜಾಸಭೆಯಲ್ಲಿ ಯಾವ ಭಾಷೆ ಯನ್ನಾಡಬೇಕು, ಮಧ್ಯವ ಸರಕಾರದ ಪ್ರಕಟನೆ ಪತ್ರಕಗಳು ಯಾವ ನುಡಿಯಲ್ಲಿರಬೇಕು, ಅಖಿಲ ಭಾರತೀಯ ಸ್ವರೂಪದ ಸಭೆಸಮ್ಮೇಳನಗಳ ಕಾರ ಕಲಾಪಗಳು ಯಾವ ಭಾಷೆಯಲ್ಲಿ ನಡೆಯಬೇಕು ಪ್ರಾಂತಿಕ ಭಾಷೆಯ
ಮುಖಾಂತರ ಶಿಕ್ಷಣಕೊಡುವ ವಿಶ್ವವಿದ್ಯಾಲಯಗಳಲ್ಲಿ ಬಾಂಧವ್ಯ ಬೆಳೆಸಬೇಕಾದರೆ ಯಾವ ನುಡಿಯ ಮೂಲಕ ಈ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟ ತೀರಬೇಕಾಗುವದು. ಒಂದು ಸಾಮಾನ್ಯ ಭಾಷೆ ಬೇಕು ಎಂಬುದೆ ಆ ಉತ್ತರ<noinclude></noinclude>
infq79f8y80mexwmub9skc3svfo5ae1
ಪುಟ:Praantabhaashhe-Rashhtrabhaashhe.pdf/೩೮
104
113899
321202
308814
2026-05-20T07:01:16Z
Pragathi. BH
7585
/* Validated */
321202
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೩೩—}}
ಈ ವಿಷಯದಲ್ಲಿ ನಾವು ಸ್ವಲ್ಪ ಇತಿಹಾಸದತ್ತ ನೋಡುವದು ಅವಶ್ಯ.
ಹಿಂದುಸ್ತಾನವು ಒಂದೇ ರಾಷ್ಟ್ರವೆಂದು ಬೆಳೆಯ ಬಂದಿದೆ. ಆದುದರಿಂದ
ಅಂತರ್ ಪ್ರಾಂತೀಯ ಬಳಕೆಗಾಗಿ ಒಂದಿಲ್ಲೊಂದು ಭಾಷೆ ಇಲ್ಲಿ ಪ್ರಚಾರ
ದಲ್ಲಿದ್ದೇ ಇದೆ. ವಾಹನ ಸೌಕರ್ಯಾದಿಗಳಾಗಲಿ, ವ್ಯಾಪಾರಾದಿಗಳಾಗಲಿ, ಈ
ಮೊದಲು ಹಿಂದುಸ್ತಾನದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿರಲಿಲ್ಲ. ಅಖಿಲ
ಭಾರತೀಯ ಸ್ವರೂಪದ ಚಟುವಟಿಕೆಗಳಲ್ಲಿ ಆಗ ಬಹುಜನರು ಭಾಗವಹಿಸು
ತ್ತಿರಲಿಲ್ಲ. ಆದರೂ ಧರ್ಮಚರ್ಚೆ, ವಾಂಗ್ಮಯ, ಸಂಸ್ಕೃತಿ ವಿಷಯಗಳು ಇವು
ಗಳಲ್ಲಿ ಆಸೇತು ಹಿಮಾಚಲ ಪಂಡಿತರು ಭಾಗವಹಿಸುತ್ತಿದ್ದರು. ಅವರು ಸಂಸ್ಕೃತವನ್ನೆ ಸಾಮಾನ್ಯ ಭಾಷೆ ಮಾಡಿಕೊಂಡಿದ್ದರು. ಅಖಿಲ ಭಾರತೀಯ
ಸ್ವರೂಪದ ಗ್ರಂಥರಚನೆ ಮಾಡಬೇಕಾದರೆ, ಚ-ಸಭೆ ಸಮ್ಮೇಲನಗಳನ್ನು
ನಡೆಸಬೇಕಾದರೆ ಸಂಸ್ಕೃತದಲ್ಲಿಯೆ ನಡೆಸುತಿದ್ದರು. ಈ ರೀತಿ ಪುರಾತನ
ಕಾಲದಿಂದ ಹತ್ತೊಂಬತ್ತನೆ ಶತಮಾನದ ವರೆಗೆ ಸಂಸ್ಕೃತವು ನಮ್ಮ
ಸಾಂಸ್ಕೃತಿಕ ಭಾಷೆಯಾಗಿತ್ತು. ನಡುವೆ ಚೀಣ, ಹೂಣ, ಶಕರು ಬಂದರು,
ಹೋದರು, ನುಸಲ್ಮಾನರೂ ೫-೬ ಶತಕಗಳ ವರೆಗೆ ಏಕಾಧಿಪರಾಗಿ
ಆಳಿದರು. ಆದರೂ ಸಂಸ್ಕೃತಕ್ಕೆ ಅಳಿಗಾಲವುಂಟಾಗಲಿಲ್ಲ. ಪ್ರಾಂತಭಾಷೆ
ಗಳು ತಮ್ಮ ವರಿಯಿಂದ ಪ್ರಗತಿಹೊಂದುತ್ತ ಬಂದರೂ ಹಿಂದುಸ್ತಾನದ
ಸಂಸ್ಕೃತ ಜನರನ್ನು ಸಂಸ್ಕೃತ ಭಾಷೆಯೆ ಏಕಸದಿಂದ ಸಂಬಂಧಿಸುತ್ತ
ಬಂದಿತ್ತು. ಸಂಸ್ಕೃತದಲ್ಲಿರುವ ವೇದೋ ಸನಿಷತ್ತುಗಳು, ರಾಮಾಯಣ
ಮಹಾಭಾರತಾದಿ ಪುರಾಣಗಳು, ಪಾರಾಶರ ಯಾಜ್ಞವಲ್ಕಾ ದಿಸ್ತ್ರತಿಗಳು,
ಶೈವವೈಷ್ಣವಶಾಸ್ತ್ರ ಆಗಮಗಳು, ಕಾಲಿದಾಸ ಭವಭೂತಿ ಮಾಘಾದಿ ಕವಿ
ಶ್ರೇಷ್ಠರ ಕೃತಿಗಳು, ವಾಗಟ ಶುಶ್ರುತಾದಿಗಳು ಬರೆದ ಆಯುದ್ವೇದೀಯ
ಗ್ರಂಥಗಳು, ಇವಲ್ಲದೆ ಅನೇಕ ಶಾಸ್ತ್ರೀಯ ವ್ಯವಹಾರಿಕ ಸಂಸ್ಕೃತ ಗ್ರಂಥಗಳು
ಪ್ರಾಂತೀಯ ಲೇಖಕರಿಗೆ ಸರಿಗೊಟ್ಟು ಪ್ರೇರಕವಾಗಿವೆ. ಪ್ರಾಂತಭಾಷೆ
ಗಳು ಎಷ್ಟೇ ಬೆಳೆದರೂ ಆದ ತಳದಲ್ಲಿ ಗುಪ್ತ ಸರಸ್ವತಿ ನದಿಯಂತೆ
ಸಂಸ್ಕೃತದ ಸುಳಿವು ಒಂದೇ ಸವನೆ ಸಂಜೀವಿನಿಯಂತೆ ತನ್ನ ಕಾವ್ಯವನ್ನು
ಮಾಡುತ್ತಲೆ ಬಂದಿದೆ. ಪರಾಯದಿಂದ ಈ ಮಾತು ಏಕಭಾಷೆಯ ಅವಶ್ಯ
ಕತೆಯನ್ನೆ ಸಿದ್ಧ ಮಾಡುವದು.<noinclude></noinclude>
et5bp7plnxchun3gfbmbbcffc5nsadm
ಪುಟ:Praantabhaashhe-Rashhtrabhaashhe.pdf/೩೯
104
113900
321204
308821
2026-05-20T07:01:44Z
Pragathi. BH
7585
/* Validated */
321204
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೩೪—}}
{{gap}}ಮುಸಲ್ಮಾನ ಅರಸರು ಮತ್ತು ಬಾದಶಹರು ಹಿ೦ದು ಸ್ಥಾನದಲ್ಲಿ ಆಳಲು
ಆರಂಭಿಸಿದಂದಿನಿಂದ ಇಲ್ಲಿ ದರಬಾರಗಳಲ್ಲಿ ಕಚೇರಿಗಳಲ್ಲಿ, ರಾಜಕೀಯ ಪತ್ರ
ವ್ಯವಹಾರಗಳಲ್ಲಿ ಫಾಸಿಯ ಪ್ರವೇಶವಾಯಿತು. ಆ ಮೂಲಕ ಪಟ್ಟಣ
ಗಳಲ್ಲಿ ಅಥವಾ ರಾಜಧಾನಿಗಳಲ್ಲಿ ಅದರ ಪ್ರಚಾರವು ಆಯಿತು. ಆದರೂ
ಸಂಸ್ಕೃತಕ್ಕೆ ಅಥವಾ ಪ್ರಾಂತೀಯ ಭಾಷೆಗಳಿಗೆ ಅದರಿಂದ ವಿಶೇಷ ಪೆಟ್ಟು
ತಗಲಲಿಲ್ಲ. ಯಾಕಂದರೆ ಶಿಕ್ಷಣ ಸಂಸ್ಥೆಗಳಲ್ಲಿ ಅದು ಪ್ರವೇಶಮಾಡಿ ಆಕ್ರ
ಮಣದ ಧೋರಣವನ್ನು ಸ್ವೀಕರಿಸಲಿಲ್ಲ.
{{gap}}ಆಂಗ್ಲರು ಇಲ್ಲಿ ಕಾಲಿಟ್ಟಂದಿನಿಂದ ಮಾತ್ರ, ವಿಶೇಷತಃ ಇಂಗ್ಲೀಷ
ಶಿಕ್ಷಣದ ಆಕ್ರಮಣವು ಆದಂದಿನಿಂದ ಸಂಸ್ಕೃತ, ಫಾರಸಿ ಹಾಗೂ
ಪ್ರಾಂತೀಯ ಭಾಷೆಗಳು ಇವೆಲ್ಲಕ್ಕೂ ಅಧ್ರ ಚಂದ್ರ ದೊರಕಿತು,ಈ ಪರಿ
ಇಲ್ಲಿಯ ಭಾಷೆಗಳಿಗೆ ಪೆಟ್ಟು ಬಿದ್ದಿದ್ದರೂ ಕೆಲಮಟ್ಟಿಗೆ ಸದ್ಯಕ್ಕೆ ಇಂಗ್ಲೀಷು
ರಾಷ್ಟ್ರಭಾಷೆಯ ಕೆಲಸವನ್ನು ಮಾಡುತಿದೆ, ಆದರೆ ಅದಕ್ಕೆ ಭವಿಷ್ಯದಲ್ಲಿ
ಎಡೆಯಿಲ್ಲ. ಈಗ ನೂರೈವತ್ತು ವರುಷಗಳಲ್ಲಿ ಅದು ಮಾಡಿದ ಪ್ರಗತಿಯನ್ನು
ನೋಡಿದರೆ ತೀರ ನಿರಾಶೆಯಾಗುವದು. ಮೇಲಾಗಿ ಅದು ಜನಸಾಮಾನ್ಯರ
ಭಾಷೆಯಾಗಿ ಮೆರೆಯಲಾರದು, ತಾನು ಪ್ರಸಾರಹೊಂದುವಾಗ ಅದು
ಸಂಸ್ಕೃತ ಫಾರಸಿಗಳಿಗೆ, ಪ್ರಾಂತೀಯ ಭಾಷೆಗಳಿಗೆ ಕೊಟ್ಟ ಪ್ರಚಂಡ ಧಕ್ಕೆ
ಯನ್ನು ಲಕ್ಷಕ್ಕೆ ತಂದರೆ, ನಮ್ಮ ಜನರ ಮೇಲೆ ಹೇರಿದ ವಿಚಾರದಾಸ್ಯವನ್ನು
ಅನುಲಕ್ಷಿಸಿದರೆ ಅದು ನಮ್ಮ ರಾಷ್ಟ್ರ ಭಾಷೆಯಾಗುವದು ಶಕ್ಯವಿಲ್ಲ, ಇಷ್ಟ
ವಿಲ್ಲ. ಆದುದರಿಂದ ನಮಗೆ ಬೇಕಾದ ರಾಷ್ಟ್ರಭಾಷೆ ಮೊದಲು ಒಮ್ಮೆ
ಇದ್ದ ಸಂಸ್ಕೃತವೂ ಅಲ್ಲ ಯಾಕಂದರೆ ಅದು ಈ ಹೊತ್ತು ಜೀವಂತ ಭಾಷೆ
ಯಲ್ಲ, ಅದು ಗಡಚಾಗಿದೆ; ಫಾರಸಿಯೂ ಅಲ್ಲ, ಯಾಕೆಂದರೆ ಅದು ಎಂದೂ
ಇಲ್ಲ ಬದ್ಧಮೂಲವಾಗಿಲ್ಲ, ಆಗುವದು ಸಾಧ್ಯವೂ ಇಲ್ಲ; ನಮ್ಮಲ್ಲಿಯ ಭಾಷೆ
ಗಳೊಡನೆ ಅದರ ಯಾವ ಬಗೆಯ ಬಾಂಧವ್ಯವೂ ಇಲ್ಲ. ಇಂಗ್ಲೀಷಂತೂ
ಸತ್ವಥಾ ಸಲ್ಲದು. ಅದು ನಮಗೆ ಈ ವರೆಗೆ ಸ್ವಲ್ಪ ಉಪಕಾರಮಾಡಿದ್ದರೂ
ಅದರ ನೂರುಪಟ್ಟು ಅಪಕಾರಮಾಡಿದೆ. ಅದು ಪರಕೀಯ, ನಮ್ಮ ರಾಷ್ಟ್ರದ
ಹೊರಗಿನದು ಎಂದು ಬೇಡ, ಅದಕ್ಕೂ ನಮ್ಮ ಭಾಷೆಗಳಿಗೂ ಏನೂ ಸಾಮ್ಯ
ಸಾದೃಶ್ಯಗಳಿಲ್ಲವೆಂದು ಬೇಡ, ಅದನ್ನು ಕಲಿಯಲು ಶಕ್ತಿಧನವೇಳೆ ಅತಿ
ಬೇಕಾಗುವದೆಂದು ಬೇಡ, ಅದರಲ್ಲಿ ನಮ್ಮ ಸಂಸ್ಕೃತಿ ಪರಂಪರೆಗಳ ಗಂಧವು<noinclude></noinclude>
nudvjypvamldnjo7yqjleljb73ltqwe
ಪುಟ:Praantabhaashhe-Rashhtrabhaashhe.pdf/೪೦
104
113901
321198
308824
2026-05-20T07:00:46Z
Shreesha Sharma
7840
/* Validated */
321198
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೩೫—}}
ಕೂಡ ಇಲ್ಲವೆಂದು ಬೇಡ, ಅದು ನಮಗೆ ಸಲ್ಲದ ತನ್ನದೇ ಆದ ಒಂದು
ವಿಚಾರಪ್ರಣಾಲಿಯ ವಾಹನವಾಗಿರುವುದರಿಂದ ನಮಗೆ ಬೇಡ, ಅದು ನಮ್ಮ
ವಾಸ್ಯದ ಕುರುಹು ಇರುವುದರಿಂದ ಬೇಡ, ರಾಷ್ಟ್ರೀಯವೆನಿಸಬೇಕಾದ
ನಮ್ಮ ರಾಷ್ಟ್ರ ಭಾಷೆ ನಮ್ಮ ರಾಷ್ಟ್ರದಲ್ಲಿಯದೆ ಇರಬೇಕು, ನಮ್ಮ ಸಂಸ್ಕೃತಿ
ಪರಂಪರೆಯಲ್ಲಿಯ ವಿಚಾರವೈಭವವನ್ನು ವ್ಯಕ್ತಗೊಳಿಸಲು ಸಮರವಿರಬೇಕು,
ಅದು ಈಗಾಗಲೆ ಬಹುಜನರಲ್ಲಿ ಪ್ರಚಲಿತವಿರಬೇಕು, ಇತರರಲ್ಲಿ ಪ್ರಚಲಿತ
ನಿಲ್ಲದಿದ್ದರೂ ಪರಿಚಿತವಿರಬೇಕು, ನನಗೆ ಸವಿಾಪದ್ದೆ ನಿಸಬೇಕು, ಎಲ್ಲರೂ
ಕಲಿಯಲು ಸುಲಭವಿರಬೇಕು, ರಾಷ್ಟ್ರದ ಮಧ್ಯ ಪ್ರದೇಶದ್ದಿದ್ದರೆ ಮತ್ತಷ್ಟು
ಅನುಕೂಲ.
{{gap}}ಈ ಎಲ್ಲ ಗುಣಗಳು ಅಥವಾ ಲಕ್ಷಣಗಳು ಒಂದು ಒಂದುಸ್ತಾನಿಯಲ್ಲಿಯೆ
ಇರುವವು. ಅದು ನಮ್ಮ ರಾಷ್ಟ್ರದಲ್ಲಿಯ ಮಧ್ಯದೇಶದಲ್ಲಿ ಪ್ರಾಕೃತದಿಂದ
ಹುಟ್ಟಿ ಬೆಳೆದುಬಂದ ಭಾಷೆ, ಸಂಸ್ಕೃತ, ಭಾರಸಿ, ಅರಬಿಗಳಿಂದ ಅದು
ಪುಷ್ಟವು ಹಿಂದು ಮಸಲ್ಮಾನ ಲೇಖಕರಿಬ್ಬರೂ ಅದನ್ನು ನೀರೆರೆದು ಮರ
ನನ್ನಾಗಿ ಮಾಡಿದ್ದಾರೆ ಈ ಹೊತ್ತು ಅದು ಸುಮಾರು ೧೨ಕೋಟಿ ಜನರ
ಮಾತೃ ಭಾಷೆಯಾಗಿವೆ ಇನ್ನು ೧ಕೋಟಿ ಜನರು ತತ್ಸದೃಶಭಾಷೆಯನ್ನಾಡು
ತಿರುವುದರಿಂದ ಅದು ಅವರಿಗೂ ತಿಳಿಯಲು ಕಠಿಣವಾಗದು. ಇನ್ನು
ಮೂರು ನಾಲ್ಕು ಕೋಟಿ ಜನರಿಗೆ ಆದು ನಿಕಟಸಿರುವದರಿಂದ ಅವರಿಗೆ ಪರಿಚಿ
ತವು, ದಕ್ಷಿಣ ಹಿ - ದುಸ್ಥಾನದದಲ್ಲಿ ಕೂಡ ಪಟ್ಟಣಗಳಲ್ಲಿಯ ಹಲವು
ಮುಸಲ್ಮಾನ ಬಾಂಧವರು, ಆ ಭಾಷೆಯನ್ನಾಡುತ್ತಿರುವುದರಿಂದ ಅದರ ಸುಳಿವು
ಅಲ್ಲಿಯೂ ಇದೆ. ಗುಜರಾಧಿ ಮರಾಠಿ ಜನರಿಗೆ ಆಮ ಕಲಿಯಲು ಸುಲಭ.
ದ್ರಾವಿಡದೇಶಗಳಲ್ಲಿ ಅದು ಸ್ವಲ್ಪ ಗಡಚೆನಿಸುವದು. ಒಂದೊಪ್ಪತ್ತು
ಈ ಭಾಷೆಯನ್ನು ಬಿಟ್ಟು ಇನ್ನೊಂದನ್ನು ರಾಷ್ಟ್ರ ಭಾಷೆ ಮಾಡಬೇಕೆಂದು
ಯೋಚಿಸಿದರೆ ಅದು ಸಾಧ್ಯವಾಗದ ಮಾತು. ಆರು ಕೋಟಿ ಜನರಿಗೆ
ಮಾತ್ರ ಬಂಗಾಲಿ ಬರುವದು. ಒ೦ಗಾಲಿ ಭಾಷೆ ಆಸಾಮಿಗಳಿಗೆ ಸ್ವಲ್ಪ
ಪರಿಚಿತ, ಇನ್ನುಳಿದವರಿಗೆ ತೀರ ಅಪರಿಚಿತ. ಮರಾಠಿ, ತೆಲುಗು ಮುಂತಾದ
ಭಾಷೆಯನ್ನಾಡುವವರಾರೂ ಮೂರು ಕೋಟಿಗಿಂತ ಮಿಕ್ಕಿಲ್ಲ. ಹೀಗಿರುವಾಗ
ಹಿಂದುಸ್ತಾನಿಯೆ ನಮ್ಮ ರಾಷ್ಟ್ರಭಾಷೆ ಆಗಬಲ್ಲದು. ಇದಲ್ಲದೆ ಈಗಾಗಲೆ<noinclude></noinclude>
rsbi8wcuw0oe8c9ecqsgonuz4be45ca
ಪುಟ:Praantabhaashhe-Rashhtrabhaashhe.pdf/೪೧
104
113902
321199
309027
2026-05-20T07:01:00Z
Shreesha Sharma
7840
/* Validated */
321199
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೩೬—}}
ಮೂವತ್ತು ವರುಷ ಆ ಪ್ರಚಾರ ಸತತ ನಡೆದಿದೆ. ದಕ್ಷಿಣಂದುಸ್ತಾನದಲ್ಲಿ
ಕೂಡ ಪ್ರಚಾರಕಾರ ನಡೆದು ಸುಮಾರು ಇಪ್ಪತ್ತೇಳು ವರುಷಗಳಾಗಿ
ಹೋದವು. ಮಂದಗತಿಯಿಂದಾದರೂ ಅದರ ಪ್ರಗತಿಯು ನಡೆದಿದೆ. ಅಂದ
ಬಳಿಕ ಈಗ ಬೇರೆ ಪ್ರಯತ್ನ ಮಾಡಲು ಯಾವ ಕಾರಣವೂ ಇಲ್ಲ, ಯಾವ
ಅನುವೂ ಇಲ್ಲ.
{{center|'''ಹಿಂದುಸ್ತಾನ ಒಂದೇ ರಾಷ್ಟ್ರ'''}}
{{gap}}ಹಿಂದುಸ್ತಾನವು ಒಂದೇ ರಾಷ್ಟ್ರವಲ್ಲ, ಅದೊಂದು ದೊಡ್ಡ ಖಂಡ,
ಅನೇಕ ರಾಷ್ಟ್ರಗಳ ಗುಂಪು, ಅನೇಕ ಭಾಷೆ ಜಾತಿ, ಧಮ್ಮ, ಸಂಸ್ಕೃತಿಗಳು
ಅಲ್ಲಿರುವವು. ಒಂದೊಂದು ಪ್ರಾಂತವು ಒಂದು ರಾಷ್ಟ್ರವಿದ್ದಂತೆ ಇದೆ, ಅವು
ಗಳ ಹಿತಸಂಬಂಧಗಳು ಬೇರೆ ಬೇರೆ ಇರುವವು, ಪರಸ್ಪರ ವಿರೋಧ ವೈಮ
ನಸ್ಸುಗಳು ಪ್ರಾಂತಾಂತಗಳಲ್ಲಿ ಧರಧರಗಳಲ್ಲಿ ತುಂಬಿರುವವು ಇತ್ಯಾದಿ
ಮಿಥ್ಯಾ ಭಾವನೆಗಳನ್ನು ಹಲವು ಪರಕೀಯ ಲೇಖಕರು ಹಾಗೂ ನಮ್ಮ ಹಿತ
ಶತ್ರುಗಳಾದ ಬ್ರಿಟಿಶ ಆಳರಸರು ಹರಡಿರುವರು ಅವರ ಅಂಧಾನುಕರಣ
ಮಾಡುವ ಕೆಲವು ಹಿಂದೀಯರು ಕೂಡ ಇದೇ ಕಲ್ಪನೆಗಳನ್ನು ತಲೆಯಮೇ
ಬಿಟ್ಟು ಕೊಂಡು ಕುಣಿಯುವರು. ಇಲ್ಲಿ ಸತತ ಅನೈಕ್ಯ, ಒಡಕು, ಒಳಜಗಳ
ಗಳು ನಡೆಯಬೇಕೆಂದು ಪರಕೀಯ ಸತ್ತಾಧಾರಿಗಳು ಬಯಸುವದು ಸ್ವಾಭಾ
ವಿಕ, ಆದರೆ ಈ ಬಗೆಯ ಮೋಸದಿಂದ ನಾವು ಮುಕ್ತರಾಗುವದು ಅವಶ್ಯ.
ಈಚೆಗೆ ಹಲವು ಮುಸಲ್ಮಾನ ಬಾಂಧವರು ಈ ರಾಷ್ಟ್ರದಲ್ಲಿ ಹಿಂದೂ ಮುಸ
ಲ್ಮಾನ ಎಂಬ ಎರಡು ರಾಷ್ಟ್ರಗಳಿರುವನೆಂದು ಪ್ರತಿಪಾದಿಸುತ್ತಿರುವರು.
ಅದೇ ರೀತಿ ವರ ಕಲಹವನ್ನು ಹೂಡಬೇಕೆನ್ನುವವರು, ಇದ್ದವರು ಇಲ್ಲದವರು
ಎಂಬ ಎರಡು ಪರಸ್ಪರ ವಿರೋಧಿವರಗಳು ದೇಶದಲ್ಲಿರುವರೆಂದು ಸಾರು
ವರು. ಈ ಜಾಡಿನ ಜಾಲವನ್ನೆಲ್ಲ ತನ್ನ ಅಮೃತಹಸ್ತದಿಂದ ಸವರಿ ಕಾಂ
ಗ್ರೆಸ್ಸು, ಹಿಂದುಸ್ತಾನವೆಂಬುದೊಂದೇ ಒಂದು ರಾಷ್ಟ್ರ, ಪ್ರಾಂತಗಳೆಲ್ಲ
ಸಹೋದರರು, ಹಿಂದೂ ಮುಸಲ್ಮಾನರು ಒಂದೇ ಹಿತಸಂಬಂಧವುಳ್ಳವರು,
ಅಖಂಡವಾಗಿ ಈ ದೇಶದಲ್ಲಿ ಹರಿಯುತಿರುವ ಸಂಸ್ಕೃತಿಗಂಗೆಯು ಒ೦ದೇ
ಒಂದು, ಜಾತಿ-ಮತ-ಪಂಥಗಳ ಸಮನ್ವಯ ಭೂಮಿ ಇದು ಸಿರಿವಂತರ<noinclude></noinclude>
cblnyma727ugguwbdc863fwwme8rj11
ಪುಟ:Praantabhaashhe-Rashhtrabhaashhe.pdf/೪೨
104
113903
321201
309028
2026-05-20T07:01:15Z
Shreesha Sharma
7840
/* Validated */
321201
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೩೭—}}
ಬಡವರ ನಡುವೆ ಇರುವ ವಿಷಮತೆಗಳು ಸಹಜವಾಗಿ ಸಹರಿಸುವ ಸಾಮ
ರವು ನಮ್ಮಲ್ಲಿದೆ, ಆಸೇತು ಹಿಮಾಚಲ ವಾಸಿಸುತ್ತಿರುವ ನಾಲ್ವತ್ತು ಕೋಟಿ
ಒಂದೇ ಜನಾಂಗ, ಎಲ್ಲರ ಕಲ್ಯಾಣವನ್ನು ಸಾಧಿಸಿ, ಸದಯವನ್ನು
ಪ್ರಸ್ಥಾಪಿಸುವದೆ ತನ್ನ ಗುರಿ ಎಂದು ಸಾರಿ, ಆ ಬಗೆಯ ಕಾಠ್ಯಕ್ರಮಗಳನ್ನ
ಟ್ಟುಕೊಂಡು ತನ್ನ ಕೆಲಸದಲ್ಲಿ ನಿಮಗ್ನನಾಗಿರುವದು. ಈಗ ಎರಡು ಮೂರು
ಸಾವಿರ ವರುಷಗಳಿಂದ ಹಿಂದುಸ್ತಾನಕ್ಕೆ ಬಂದು ಹೋದ ಪರಕೀಯರೆಲ್ಲರು
ಇದು ಒಂದೇ ರಾಷ್ಟ್ರ ಎಂದು ಹೇಳುತ್ತ ಬಂದಿರುವರು. ಇಲ್ಲಿ ಸಾಕಷ್ಟು
ವಿವಿಧತೆ ಇದೆ. ಆದರೆ ಆ ವಿವಿಧತೆಯಲ್ಲಿ ಒಂದು ಸ್ಪಷ್ಟವಾಗಿ ಒಡಮೂಡಿದ
ಏಕಸೂತ್ರತೆ ಇದೆ. ಈಗ ರೂಪುಗೊಂಡು ನಿಂತ ನಮ್ಮ ಸಂಸ್ಕೃತಿಯ ಹಲ
ವೊಂದು ಸಂಗತಿಗಳಲ್ಲಿ, ಹಿಂದುಸ್ತಾನಿ ಭಾಷೆ ವಾಸ್ತುಶಿಲ್ಪ, ಸಂಗೀತ,
ಚಿತ್ರಕಲೆ, ಶಾಸನಶಾಸ್ತ್ರ ಮುಂತಾದವುಗಳಲ್ಲಿ ಹಿಂದೂ ಮುಸಲ್ಮಾನರಿಬ್ಬರೂ
ಭಾಗವಹಿಸಿ ಅವುಗಳನ್ನು ಬೆಳೆಸಿದ್ದಾರೆ. ಹೋದ ೧೫೧ ವರುಷಗಳಿಂದ
ಇಡೀ ಹಿಂದುಸ್ತಾನವು ಒಂದೇ ಆಡಳಿತಕ್ಕೆ, ಸುಖದುಃಖಗಳಿಗೆ ಒಳಗಾಗಿ
ಒಂದೇ ಬಗೆಯ ರಾಜ ಕೀಯ ಅರಿಕ, ವೈಜ್ಞಾನಿಕ ಹಿತಸಂಬಂಧಗಳನ್ನು
ಬೆಳೆಸಿಕೊಂಡು ಬಂದಿದೆ. ನೈಸರಿಕ ಭೌಗೋಲಿಕ ಭೂವಿಭಾಗಣೆ, ಲಷ್ಕರ್
ಸಂರಕ್ಷಣ ಈ ದೃಷ್ಟಿಯಿಂದಲೂ ಹಿಂದುಸ್ತಾನವು ಒಂದೇ ರಾಷ್ಟ್ರವಿರುವದು.
ಹಿಂದಿನ ಮಾತುಗಳು ಹಾಗಿರಲಿ, ಈಗ ನಾವು ಹಿಂದನಾಸಿಗಳೆಲ್ಲರೂ ಒ೦ದೇ
ಒಂದು ಶೋಷಣ ಪ್ರಧಾನ ರಾಜ್ಯ ಸತ್ತೆಗೆ ಗುರಿಯಾಗಿ ಅತೀವ ದಾಸ್ಯದ ಸಮ
ದುಃಖವನ್ನು, ಘೋರವಾದ ಅಪನಾವನವನ್ನು ಸಹಿಸಿ ತಲ್ಲಣಗೊಳ್ಳುತಿರು
ವೆವು. ಆ ದಾಸ್ಯದಿಂದ ಮುಕ್ತರಾಗಲು ಯತ್ನಿಸುತಿರುವೆವ. ಈ ಆಯಕಟ್ಟಿನ
ಸಂದರದಲ್ಲಿ ಒಡಕಿನ ಇಲ್ಲವೆ ಭೇದಭಾವದ ಬೀಜಗಳನ್ನು ಬಿತ್ತಲಿಕ್ಕೆ ಸು
ವದೆಂದರೆ ಇಡೀ ಜನಾಂಗದ ವಿರುದ್ಧ ಮತ್ತು ತಮ್ಮ ವಿರುದ್ಧ ಸಹ ದ್ರೋಹ
ವನ್ನಾಚರಿಸಿದಂತೆಯೆ ಸೈ, ನಮ್ಮ ನಮ್ಮೊಳಗೆ ಯಾವದೇ ವಿವಿಧತೆ,
ವಿರೋಧ ಇದ್ದರೂ ಅದನ್ನು ಸರಿಪಡಿಸಲು ನಾವೇ ಹೆಣಗಬೇಕು ಹೊರತು
ಅನ್ಯರನ್ನು ಆ ಕೆಲಸಕ್ಕೆ ಕರೆದರೆ ಅವರು ನಮ್ಮಿಬ್ಬರ ತಲೆಯಮೇಲೂ ಕೈ
ಯಾಡಿಸಿ ಬಿಡುವರು.
{{center|——}}<noinclude></noinclude>
mtht236e6e5krgjav5bzxjpcaqesphx
ಪುಟ:Praantabhaashhe-Rashhtrabhaashhe.pdf/೪೩
104
113904
321203
309029
2026-05-20T07:01:34Z
Shreesha Sharma
7840
/* Validated */
321203
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|'''ರಾಷ್ಟ್ರೀಯತೆಯ ಪ್ರತೀಕ'''}}
{{gap}}ಹೀಗಿರುವಾಗ ನಮ್ಮ ಪ್ರಾಂತಗಳ ನಡುವೆ ಒಂದು ಸಾಮಾನ್ಯ
ಭಾಷೆಯ ಸೇತುವೆಯನ್ನು ಕಟ್ಟಿ, ನಮ್ಮ ಸಂಸ್ಕೃತಿ ಒಂದಿದ್ದಂತೆ, ನಮ್ಮ ಹಿತ
ಸಂಬಂಧಗಳು ಒಂದಿದ್ದಂತೆ ನಮ್ಮ ರಾಷ್ಟ್ರದ ಭೂಜಲವಾಯು ಆಕಾಶಗಳು
ಒಂದಿರುವಂತೆ ನಮ್ಮ ರಾಷ್ಟ್ರದ ಭಾಷೆಯೂ ಒಂದಿದೆ ಎನ್ನಲು ಅವಕಾಶವ
ನ್ನುಂಟು ಮಾಡುವದು ನಮ್ಮ ಕತ್ರವ್ಯವಿರುವದು, ಹಾಗೆ ಮಾಡದೆ ಹೋದರೆ
ನಮ್ಮ ತಾಯಿಯ ಕಣ್ಣು, ಮೂಗು, ಮುಖಮುದ್ರೆ ನಕ್ಷತ್ರದಂತೆ ಇವೆ,
ಆಕೆ ಲೋಕಸುಂದರಿ, ಆದರೆ ಆಕೆ ಮೂಕ ಎಂದು ಹೇಳಿದಂತಾಗುವದು.
ಹಿಂದುಸ್ತಾನಿ ಎಂಬುದು ಕೇವಲ ಒಂದು ಭಾಷೆಯ ವಿಷಯವಿದ್ದರೆ ಅದಕ್ಕೆ
ನಾವು ಅಷ್ಟೊಂದು ಮಹತ್ವ ಕೊಡುವ ಕಾರಣಪಿರಲಿಲ್ಲ. ಅದರೊಡನೆ
ನಾವು ಏಕರಾಷ್ಟ್ರೀಯತೆಯ ಭಾವವನ್ನು, ರಾಷ್ಟ್ರೀಯ ಜಾಗ್ರತಿಯನ್ನು
ಕರಡಬೇಕೆನ್ನುತ್ತೇವೆ ವರಕೀಯರ ಭಾಷಾಪ್ರಭುತ್ವವನ್ನು ತಳ್ಳಬೇಕೆನ್ನು
ತೇವೆ. ನನ್ನದೇ ಒಂದು ಆದ ರಾಷ್ಟ್ರಭಾವ ನಮಗಿದೆ ಎಂಬ ಅಭಿಮಾನ
ವನ್ನು ಹುಟ್ಟಿಸಬೇಕೆನ್ನು ತ್ತೇನೆ. ಹಿಂದೂ ಮುಸಲ್ಮಾನರ ಬಾಂಧವ್ಯವನ್ನು
ಸಾಧಿಸಬೇಕೆನ್ನುತ್ತೇನೆ ನಾವು ಕೇವಲ ಪ್ರಾಂತಗಳಲ್ಲಿ, ಪ್ರಾಂತಗಳ ಆಚೆಗೆ
ಪ್ರಾಂತಗಳಿಗಿಂತ ಶ್ರೇಷ್ಟನಾದ ಒಂದು ರಾಷ್ಟ್ರದವು ಎಂಬುದನ್ನು ಅನುಭ
ಪಿಸಬೇಕೆನ್ನುತ್ತೇವೆ. ಅಲ್ಲಿ ಇಲ್ಲಿ ಪ್ರಾಂತದ ದುರಭಿಮಾನವು ಹೆಚ್ಚುತ್ತಿದ್ದರೆ
ಅದನ್ನು ಸರಿಯಾಗಿ ಆಳತೆಯಲ್ಲಿಡಬೇಕೆನ್ನುತ್ತೇವೆ. ಈ ಎಲ್ಲ ಮಾತುಗಳ
ಗಾಗಿ ನನಗೆ ಹಿಂದುಸ್ತಾನಿ ಎಂಬ ರಾಷ್ಟ್ರ ಭಾಷೆ ಬೇಕು. ಹಿಂದುಸ್ತಾನಿ
ಯು ಈ ಎಲ್ಲವಗಳ ಪ್ರತೀಕವು ಆಗುವದರಿಂದಲೆ ಅದಕ್ಕೆ ಅಷ್ಟು ಮಹತ್ವವು.
{{center|'''ಹಿಂದುಸ್ತಾನಿಯ ಇತಿಹಾಸ'''}}
{{gap}}ಇನ್ನು ಹಿಂದುಸ್ತಾನಿಯ ಸ್ವಲ್ಪ ಇತಿಹಾಸವನ್ನು ನೋಡುವದು ಅಪ್ರ
ಸ್ತುತವಾಗಲಿಕ್ಕಿಲ್ಲ, ಮೂಲತಃ ಈ ಭಾಷೆ ಹಿಂದುಸ್ತಾನದಲ್ಲಿಯೆ ಹಿಂದುಸ್ತಾ
ನದ ಭಾಷೆಗಳಿಂದಲೆ ಹುಟ್ಟಿದುದು. ಕ್ರಿಸ್ತಶಕದ ೧೦೦೦ ದ ಸುಮಾರಕ್ಕೆ
ಗಂಗಾನದಿಯ ವಿಶಾಲವಾದ ಪಾತ್ರದ ಗುಂಟ ಪ್ರಯಾಗದಿಂದ ಕಾಶಿಯವರೆಗೆ<noinclude></noinclude>
7cxufudwwf8ljmmuh6f9on7fhexxyeo
ಪುಟ:Praantabhaashhe-Rashhtrabhaashhe.pdf/೪೪
104
113905
321205
309030
2026-05-20T07:01:52Z
Shreesha Sharma
7840
/* Validated */
321205
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೩೯—}}
ದಟ್ಟಾಗಿ ವಾಸವಾಗಿದ್ದ ಜನರ ಶೌರಸೇನಿ, ಅರ್ಧಮಾಗಧಿ ಎಂಬ ಪ್ರಾಕೃತ
ಭಾಷೆಗಳಿಂದ ಈ ಹಿಂದುಸ್ತಾನಿ ಎಂಬುದು ಮೊದಲು ಉಗಮಹೊಂದಿತು.
ಅದಕ್ಕೂ ಮೊದಲು ಹಿಂದಿ' ಅಥವಾ 'ಹಿಂದುಸ್ತಾನಿ” ಎಂಬ ಭಾಷೆ ಅಥವಾ
ಹೆಸರು ಅಸ್ತಿತ್ವದಲ್ಲಿದ್ದಂತೆ ಕಂಡುಬರುವದಿಲ್ಲ. ' ಬೀಸಿಲ ದೇವ ರಾಸೋ'
ಮತ್ತು ಪೃಥ್ವಿರಾಜ ರಾಸೋ ' ಎಂಬ ವೀರ ಕಾವ್ಯಗಳು ೧೨ನೆ ಶತಮಾನ
ದಲ್ಲಿ ಬರೆಯಲಾದವು ಇವೇ ಈ ಭಾಷೆಯ ಪ್ರಧಮ ಸಾಹಿತ್ಯ ಪ್ರಯತ್ನಗಳು
ಇವುಗಳಿಗೆ ಚಾರಣ ಕಾವ್ಯಗಳುಎಂಬ ಹೆಸರು ಇರುವದು.
ಭಟ್ಟಂಗಿಗಳು ಹಾಡತಕ್ಕ ವೀರರ ಪ್ರಶಂಸಾಪರ ಕಾವ್ಯಗಳಿವು. ಮುಂದೆ
ವಿದ್ಯಾಪತಿ, ಕಬೀರ, ಅಮೀರ, ಖುಶ್ರು, ಬಾಕೋರ, ಆಗಾ ಮುಂತಾದ ಕವಿ
ಗಳೂ ಗಝನವಿ ಎಂಬ ನಿಘಂಟುಕಾರನೂ ೧೬ನೆ ಶತಮಾನದ ಪ್ರಾರಂಭದ
ವರೆಗೆ ಆಗಿಹೋದರು. ಪ್ರಥಮದಲ್ಲಿ 'ಹಿಂದಿ', 'ಹಿಂದು', ಅಥವಾ 'ಹಿಂದು
ಸಾನಿ' ಎಂಬದು ಒಂದೇ ಇದ್ದರೂ ಅದರಲ್ಲಿ ಮುಖ್ಯವಾಗಿ ಅವಧಿ ಮತ್ತು
ವ್ರಜ ಭಾಷೆ ಎಂಬ ಎರಡು ಪರಾಯಗಳಾದವು ಇವೆರಡರಲ್ಲಿ ಸಾಕಷ್ಟು
ಸಾಹಿತ್ಯವು ೧೫೦೦-೧೮೦೦ರ ವರೆಗೆ ನಿರಾಣವಾಯಿತು ಪದ್ಮಾವತ ಹಾಗೂ
ತುಲಸೀದಾಸಕೃತ ಶ್ರೀರಾಮಚರಿತ ಮಾನಸ ಎಂಬ ಗ್ರಂಥಗಳು *ತಿಶಯ
ಪ್ರಸಿದ್ಧವಿರುವವು. ಇವು ಈ ಭಾಷೆಗೆ ಸ್ಥಿರರೂಪವನ್ನು ಕೊಟ್ಟಿದ್ದ. ಇದೇ
ಕಾಲದಲ್ಲಿ ಕೇಶವದಾಸ, ಮಾರಾಬಾಯಿ, ಸೂರದಾಸ, ರಹೀಮ ರಸಖಾನ,
ದೇವ, ಮತಿರಾಮ, ಜೈಸೀ, ಆನಿಸ್ ಮುಂತಾದ ಕವಿಗಳು ಶ್ರೇಷ್ಟ ಮತ್ತು
ವಿವಿಧ ಕಾವ್ಯಗಳನ್ನು ಬರೆದರು. ಈ ಭಾಷೆ ಮುಖ್ಯವಾಗಿ ಬೆಳೆದ ಕ್ಷೇತ್ರ
ವೆಂದರೆ, ಪಶ್ಚಿಮದಲ್ಲಿ ಜೆಸಲ್ ಮರ, ಉತ್ತರಪಶ್ಚಿಮದಲ್ಲಿ ಉದಾಲಾ, ಉತ್ತರ
ದಲ್ಲಿ ಸಿಮ್ಲಾದಿಂದ ನೇಪಾಲದ ವರೆಗಿನ ಹಿಮಾ ಚಲದ ದಕ್ಷಿಣಭಾಗ, ಪೂರೈ
ದಲ್ಲಿ ಭಾಗಲಪೂರ, ದಕ್ಷಿಣ ಪೂತ್ವದಲ್ಲಿ ರಾಯಪೂರ, ಮತ್ತು ದಕ್ಷಿಣ ಪಶ್ಚಿಮ
ದಲ್ಲಿ ಖಾಂಡವಾ ಈ ಪಟ್ಟಣಗಳಿಂದ ಸೀಮಿತವಾದ ಪ್ರದೇಶದಲ್ಲಿ ಈ ಭಾಷೆ
ಬೆಳೆಯಿತು.
{{gap}}ಇತ್ತ ಈ ಭಾಷೆ ಹೀಗೆ ಪ್ರಗತಿ ಹೊಂದುತ್ತಿರುವಾಗಲೆ ೧೬, ೧೭, ೧೮ನೇ
ಶತಮಾನಗಳಲ್ಲಿ ಮುಸಲ್ಮಾನ ಆರಸರ ಮತ್ತು ಬಾದಶಹರ ವರ್ಚಸ್ಸು ಅಲ್ಲಲ್ಲಿ<noinclude></noinclude>
2qapcu2afe24mv268sfvk40vc5oqmj8
ಪುಟ:Praantabhaashhe-Rashhtrabhaashhe.pdf/೪೫
104
113906
321206
309031
2026-05-20T07:02:07Z
Shreesha Sharma
7840
/* Validated */
321206
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೪೦—}}
ಹೆಚ್ಚಾಗುತ್ತ ನಡೆದಿತ್ತು. ಅವರು ಎಲ್ಲೇ ಆಳಿದರೂ ಫಾರಸಿಯನ್ನು ತಮ್ಮ
ದರಬಾರ ಭಾಷೆಯನ್ನಾಗಿ ಉಪಯೋಗಿಸುತ್ತಿದ್ದರು; ಆ ಮೂಲಕ
ಪಟ್ಟಣಗಳಲ್ಲಿ ಹಾಗೂ ದರಬಾರಿ ಜನರಲ್ಲಿ ಅದರ ಪ್ರಸಾರವಾಗುತ್ತ ನಡೆ
ದಿತ್ತು, ಅದು ಜನಸಾಮಾನ್ಯರ ಭಾಷೆ ಎಂದೂ ಆಗಲಿಲ್ಲ. ಅವರ ಭಾಷೆಯು
ಹಿಂದಿಯೇ ಉಳಿಯಿತು. ೧೨ನೆ ಶತಮಾನದಿಂದಲೆ ಹಿಂದಿ ಭಾಷೆಯಲ್ಲಿ ಹಲ
ಕೆಲವ ಫಾರಸಿ, ಅರಬೀ ಶಬ್ದ ಗಳು ಮುಸಲ್ಮಾನರ ಸಂಪದಿಂದ ಬರಲಾರಂ
ಭಿಸಿದ್ದುವು. ಮುಸಲ್ಮಾನರು ಅದೇ ಭಾಷೆಯಲ್ಲಿ ಜನಸಾಮಾನ್ಯರೊಡನೆ
ಮಾತಾಡ ಬೇಕಾಗುತ್ತಿತ್ತು. ಬರಬರುತ್ತ ಅದಕ್ಕೆಯ ಖಡೀ ಬೋಲಿ ಎಂಬ
ಹೆಸರಾಯಿತು. ವಿಶೇಷತಃ ದಿಲ್ಲಿ ಮತ್ತು ಮಿರತದ ಸುತ್ತು ಮುತ್ತು ಮಾತಾಡ
ಲಾದ ಭಾಷೆಗೆ ಈ ಹೆಸರಾಯಿತು.
{{gap}}ಹಿಂದು ಮುಸಲ್ಮಾನರ ಸಂಸರವು ಹೆಚ್ಚುತ್ತ ಹೋದಂತೆ ಈ ಖಡೀ
ಬೋಲಿ ಎಂಬದರಲ್ಲಿ ಫಾರಸಿ ಮುಂತಾದ ಶಬ್ದಗಳೂ ಹಲವು ಫಾರಸೀ
ವಾಚಾರಗಳೂ ಬಂದು ಸೇರಿದವು. ವಿಶೇಷತಃ ಲಷ್ಕರಿ ಠಾಣ್ಯಗಳಿದ್ದಲ್ಲಿ
ಸಂತೆ ಪೇಟೆಗಳಿದ್ದಲ್ಲಿ ಮಾತಾಡಲಾಗುವ ಭಾಷೆಯ ಸ್ವರೂಪವು ಸ್ವಲ್ಪ ಗ್ರಂಥ
ಸ್ವ ಭಾಷೆಗಿಂತ ಬದಲಾಗಿ ಆ ಬದಲಾದ ಭಾಷೆಯಲ್ಲಿಯೂ ಗ್ರಂಥ ರಚನೆ
ನಡೆಯಿತು. ಆ ಭಾಷೆಗೆ ಹಲವರು ಉರು' ಅಂದರೆ ಸೈನ್ಯ, ಸೈನ್ಯದ ಪಾಳ್ಯ,
ಸೈನ್ಯದ ವಾಳ್ಯದಲ್ಲಿ ಹುಟ್ಟಿದ ಭಾಷೆ ಎಂದು ಅನ್ನಲಾರಂಭಿಸಿದರು. “ಉರು
ಶಬ್ದವನ್ನು ಮೊದಲು ಮುಶಾಫಿ ಎಂಬವನು ೧೮ನೆ ಶತಮಾನದ ಪ್ರಾರಂಭ
ದಲ್ಲಿ ಉಪಯೋಗಿಸಿರಬೇಕು. ೧೭೫೨ರಲ್ಲಿ, ೧೭೫೪ರಲ್ಲಿ, ಮುಂದೆ ೧೭೭೦ರಲ್ಲಿ
ಜಬಾನ್ ಈ- ಊರು ಉದ್ದು ಭಾಷೆ' ಎಂಬ ಉಲ್ಲೇಖವು ಬೇರೆ ಬೇರೆ
ಕಡೆಗೆ ದೊರೆಯುವದು. ಇದಕ್ಕೆಯೆ ಹಲವರು ಹಿಂದುಸ್ತಾನಿ (ವಜಾಹಿ
೧೬೩೫ರಲ್ಲಿ) ಎನ್ನುತ್ತಿದ್ದರು. ೧೬-೧೭ನೆ ಶತಮಾನಗಳಲ್ಲಿ ಹಿಂದುಸ್ತಾನಿ
ಎಂಬ ಹೆಸರು ರೂಢವಿತ್ತು ಎಂದು ಹೇಳಬಹುದು. ಪಾಶ್ಚಾತ್ಯ ಪ್ರವಾಸಿ
ಗಳು ಸಹ (ಪರಿ -೬, ಯರ ೧೬೭೩, ಕೆಟೆಲೆಯರ ೧೭೨೫) ಈ ಭಾಷೆ
ಯನ್ನು ಹಿಂದುಸ್ತಾನಿ ಎಂದೆ ಸಂಭೋದಿಸುತ್ತಿದ್ದರೂ ಈ ರೀತಿ ಹಿಂದಿ,
ಹಿಂದವಿ, ಹಿಂದುಸ್ತಾನಿ, ಖಡೀ ಬೋಲಿ, ಊರು ಇವೆಲ್ಲ ಸಾಧಾರಣವಾಗಿ
ಸಮಾನಾತ್ಮಕವಾಗಿಯೇ ಉಪಯೋಗಿಸಲಾಗುತ್ತಿದ್ದವೆಂದರೆ ತಪ್ಪಾಗಲಿಕ್ಕಿಲ್ಲ.<noinclude></noinclude>
l5ged85myqgtx2fds2oidhaufw0ui7j
ಪುಟ:Praantabhaashhe-Rashhtrabhaashhe.pdf/೪೬
104
113907
321207
309032
2026-05-20T07:02:29Z
Shreesha Sharma
7840
/* Validated */
321207
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೪೧—}}
ಹಿಂದು (ಸಿಂಧು ನಡದ ಪ್ರದೇಶದಲ್ಲಿರುವವರು), ಹಿಂದಿ, ಹಿಂದವಿ,ಹಿಂದುಸ್ತಾನಿ
ಈ ಹೆಸರುಗಳನ್ನು ಹೊರಗಿನಿಂದ ಬಂದವರು, ಮುಸಲ್ಮಾನರು ಮೊದಲು
ಉಪಯೋಗಿಸಿದರು ಎಂದು ಹೇಳಲು ಅಡ್ಡಿಯಿಲ್ಲ.
{{gap}}ಇಲ್ಲಿಯ ವರೆಗೆ ಸರಿಹೋಯಿತು. ಮುಂದೆ ಬ್ರಿಟಿಶರ ಪ್ರವೇಶವಾಗಿ
ಅವರ ಹಸ್ತಕ್ಷೇಪಕ್ಕೆ ಪ್ರಾರಂಭವಾಯಿತು ಆ ಕಾಲಕ್ಕೆ ಅಂದರೆ ಸುಮಾರು
೧೯ನೆ ಶತಮಾನದ ಪ್ರಾರಂಭಕ್ಕೆ ಹಿಂದುಸ್ತಾನಿಯ ಸ್ಥಿತಿಯು ಏನಿತ್ತೆಂದರೆ,
ಅದರಲ್ಲಿ ಫಾರಸಿ, ಅರಬಿ, ಸಂಸ್ಕೃತ ಈ ಮೂರೂ ಭಾಷೆಗಳಲ್ಲಿಯ ಸುಲಭ
ಶಬ್ದಗಳ ಸಂಮಿಶ್ರ ಉಪಯೋಗವು ನಡೆಯುತಿತ್ತು. ಹಿಂದು ಮುಸಲ್ಮಾನ
ರಿಬ್ಬರೂ ಯಾವದೇ ಸಂಕೋಚ, ಭೇದಭಾವ, ಅಭಿನಿವೇಶ ಇಲ್ಲದೆ ಆ
ಭಾಷೆಯನ್ನು ಉಪಯೋಗಿಸುತ್ತಿದ್ದರು. ಅದು ಜನಸಾಮಾನ್ಯರಲ್ಲಿ ರೂಢ
ವಾಗುತ್ತ ನಡೆದಿತ್ತು. ಆ ಭಾಷೆಯ ರಚನೆ, ವ್ಯಾಕರಣ, ಕಟ್ಟು, ಇವೆಲ್ಲ
ಮೂಲ ಪ್ರಾಕೃತದಿಂದ ಹುಟ್ಟಿ ಬೆಳೆದು ಬಂದಿದ್ದವು. ನಾಗರಿ ಹಾಗೂ
ಫಾರಸೀ ಹೀಗೆ ಎರಡೂ ಲಿಪಿಯಲ್ಲಿ ಅದು ಬರೆಯಲಾಗುತಿತ್ತು. ಇದೇ ಭಾಷೆ
ಯಲ್ಲಿ ಮುಂದೆ ಎರಡು ಪ್ರವೃತ್ತಿಗಳು ಉಂಟಾಗಿ ಅವು ಪ್ರಬಲವಾಗುತ್ತ
ನಡೆದವು. ಒಂದು ಪ್ರವೃತ್ತಿಯ ಮೂಲಕ ಈ ಭಾಷೆಯ ಶಾಖೆಯೊಂದು
ಸಂಸ್ಕೃತ ಪ್ರಧಾನವಾಗಿ ನಾಗರಿಯಲ್ಲಿಯೇ ಬರೆಯುವ ಹಟಹಿಡಿದು ಹಿಂದಿ
ಎನಿಸಲಾರಂಭಿಸಿತು. ಇನ್ನೊಂದು ಪ್ರವೃತ್ತಿಯ ಮೂಲಕ ಫಾರಸಿ ಲಿಪಿ
ಯನ್ನೆ ಉಪಯೋಗಿಸುತ್ತ ಊರು ಎನಿಸಲಾರಂಭಿಸಿತು. ಬರಬರುತ್ತ ಈ
ಭಿನ್ನ ಪ್ರವೃತ್ತಿಗಳಿಗೆ ಹಿಂದು ಮುಸಲ್ಮಾನರ ಭೇದಭಾವದ ಬೆಂಬಲವು
ದೊರೆಯಿತು.
{{gap}}ಹೀಗಾಗುವ ಕಾರಣಗಳೇನು ? ೧೯ನೆ ಶತಮಾನದ ಪ್ರಾರಂಭದ ವರೆಗೆ
ಏಕರೂಪವಾಗಿ ಹರಿಯುತ್ತ ಬಂದ ಹಿಂದುಸ್ತಾನಿಯ ಪ್ರವಾಹವು ಒಡೆದು
ಹೋಳಾಗಿ ಹಿಂದಿ ಊರು ಎಂದು ಎರಡು ಕಾಲುವೆಗಳಲ್ಲಿ ಏಕೆ ಹರಿಯಲಾ
ರಂಭಿಸಿತು? ಎಂದಿನಂತೆ ಭೇದಭಾವನೆ ಹಾಗೂ ಒಡಕು ಹುಟ್ಟಿಸುವದರಲ್ಲಿ
ನಿಷ್ಣಾತರಿರುವ ಬ್ರಿಟಿಶರ ಕೈವಾಡವು ಇದರಲ್ಲಿಯೂ ಕಂಡುಬರುತಿರುವದು.
ಕಲಕತ್ತೆಯ ಮೋರ್ವ ವುಯಿಲ್ಯಮ ಕಾಲೇಜದ ಪ್ರಾಧ್ಯಾಪಕರು ಹಲವರ<noinclude></noinclude>
743mczd7to4ja6i05hc4q0l8qop5r2v
ಪುಟ:Praantabhaashhe-Rashhtrabhaashhe.pdf/೪೭
104
113908
321208
309033
2026-05-20T07:02:47Z
Shreesha Sharma
7840
/* Validated */
321208
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೪೨—}}
ಮತ್ತು ಜಾನ್ ಗಿಲ್ ಕ್ರಾಯಿಸ್ಟರು ಹಿಂದುಗಳ ಸಲುವಾಗಿ ಸಂಸ್ಕೃತ ಪ್ರಧಾನ
ವಾಗ್ಮಯವನ್ನು ನಿರ್ಮಿಸುವ ಹೊಣೆಯನ್ನು ೧೯ನೆ ಶತಮಾನದ ಪ್ರಾರಂಭಕ್ಕೆ
ಹೊತ್ತರು. ಅವರು ಲಲ್ಲುಲಾಲ ಮತ್ತು ಸದಾಲಮಿಶ್ರ ಎಂಬ ಇಬ್ಬರನ್ನು
ಆ ಕೆಲಸಕ್ಕೆ ನೇಮಿಸಿದರು. ಅವರು ಪ್ರೇಮಸಾರ ಮುಂತಾದ ಹಲವು ಗ್ರಂಥ
ಗಳನ್ನು ರಚಿಸಿದರು.ಅರಬೀ ಫಾರಸೀ ಶಬ್ದಗಳನ್ನು ಅದಷ್ಟು ಕಿತ್ತಿ ಹಾಕಿ
ಅವುಗಳ ಬದಲು ಸಂಸ್ಕೃತ ಶಬ್ದಗಳನ್ನು ಹಾಕುವದೆ ಅವರ ಉದ್ಯೋಗ
ವಾಗಿತ್ತು. ಮಿ, ಕೇ ಎಂಬವರು ಹಾಗೂ ಶ್ರೀ. ಗುಲೇರಿಯವರು ಈ ಪ್ರಯ
ತ್ನದ ಉಲ್ಲೇಖವನ್ನು ತಮ್ಮ ಲೇಖನಗಳಲ್ಲಿ (ಹೆರಿಟೇಜ ಆಫ್ ಇಂಡಿಯಾ,
ಹಿಂದಿ ಲಿಟರೇಚರ ಮತ್ತು ನಾಗರೀ ಪ್ರಚಾರಿಣಿ ಪತ್ರಿಕಾ, ೧೯೨೧)
ಮಾಡಿರುವರು. ಈ ಪ್ರವೃತ್ತಿಗೆ ಬ್ರಿಟಿಶ್ ಪಂಡಿತರು ಕಾರಣರಾದುದಕ್ಕೆ
ಭಾಷಾಶಾಸ್ತ್ರಜ್ಞನಾದ ಗ್ರಿಯರಸನ್ನ ನು ಒಂದೆಡೆ ತನ್ನ ವಿಷಾದವನ್ನು ವ್ಯಕ್ತ
ಮಾಡಿರುವನು. ಅವನು ಇದಕ್ಕೆ ಅಡ್ಡದಾರಿಗೆ ಹೋಗುವ ಪ್ರಯತ್ನ ಎಂದಿ
ದ್ದಾನೆ. ಏನೇ ಇರಲಿ, ಈ ಪ್ರವೃತ್ತಿಯೊಡನೆಯೆ ಮುಸಲ್ಮಾನರಲ್ಲಿ ಅರಬೀ
ಫಾರಸೀ ಶಬ್ದಗಳನ್ನು ಹೆಚ್ಚು ಉಪಯೋಗಿಸುವ ಪ್ರಘಾತ ಬೆಳೆಯುತ್ತ ನಡೆ
ಯಿತು. ಹೀಗಾಗಿ ಹಿಂದಿ-ಊರು ವಾದವು ಅಸ್ತಿತ್ವದಲ್ಲಿ ಬಂದಿತು.
{{gap}}ನಿಜವಾಗಿ ನೋಡಿದರೆ ಹಿಂದುಸ್ತಾನಿಯೆ ಮುಖ್ಯ ಭಾಷೆ. ಹಿಂದೀ
ಊರು ಇವೆರಡು ಅದರಲ್ಲಿಯ ಎರಡು ವಿಶಿಷ್ಟ ಪ್ರವೃತ್ತಿಗಳ ಮೂಲಕ
ಉಂಟಾದ ಶಾಖೆಗಳು ಯಾಕಂದರೆ ಯಾವದೇ ಭಾಷೆಯಲ್ಲಿ ಧ್ವನಿ, ವಾಕ್ಯ
ರಚನೆ, ವ್ಯಾಕರಣ ಇವು ಮುಖ್ಯ ಹೊರತು ಶಬ್ದಗಳು ಮುಖ್ಯವಲ್ಲ ಈ
ದೃಷ್ಟಿಯಿಂದ ಹಿಂದೀ ಊರು ಭಾಷೆಗಳು ಬೇರೆ ಎಂದು ಯಾವ ಭಾಷಾ
ಕೋವಿದನೂ ಅನ್ನಲಾರನು, ಕೇವಲ ಶಬ್ದಗಳಲ್ಲಿ ಭಿನ್ನತೆ ಇದೆ, ಅಷ್ಟರ
ಮೇಲಿಂದ ಅವು ಭಿನ್ನ ಭಾಷೆಗಳೆನಿಸಲಾರವು.
{{gap}}ಭಾಷಾಭಿಜ್ಞನಾದ ಗ್ರಿಯರಸನ್ನನು ಹಿಂದುಸ್ತಾನಿಯ ವ್ಯಾಖ್ಯೆಯನ್ನು
ಈ ರೀತಿ ಮಾಡಿರುವನು. ಹಿಂದುಸ್ತಾನಿಯು ಮೂಲತಃ ಉತ್ತರ ಗಂಗಾತಟಾ
ಕದ ಭಾಷೆಯು, ಅದು ಹಿಂದುಸ್ತಾನದ ರಾಷ್ಟ್ರಭಾಷೆಯೂ ಆಹುದು. ಅದನ್ನು
ಬರೆಯುವಾಗ ಫಾರಸಿ ಹಾಗೂ ನಾಗರೀ ಲಿಪಿಗಳೆರಡನ್ನು ಉಪಯೋಗಿಸಲು<noinclude></noinclude>
1v49a1fepb6luzzj8qor1o4744oe3kq
ಪುಟ:Praantabhaashhe-Rashhtrabhaashhe.pdf/೪೮
104
113909
321209
309034
2026-05-20T07:03:04Z
Shreesha Sharma
7840
/* Validated */
321209
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೪೩—}}
ಬರುವದು ಫಾರಸಿ ಇಲ್ಲವೆ ಸಂಸ್ಕೃತ ಶಬ್ದಗಳನ್ನೆ ಉಪಯೋಗಿಸಬೇಕೆಂಬ
ಛಲವಿಲ್ಲದೆ ಎರಡನ್ನೂ ಮಿತವಾಗಿ ಉಪಯೋಗಿಸಿ ಸಾಹಿತ್ಯವನ್ನು ಬರೆಯಲು
ಬರುವದು. ಯಾವ ಹಿಂದುಸ್ಥಾನಿಯಲ್ಲಿ ಫಾರಸೀ ಶಬ್ದಗಳು ಹೆಚ್ಚು ಉಪ
ಯೋಗಿಸಲಾಗಿವೆಯೊ ಅದಕ್ಕೆ ಉರ್ದು ಎಂಬ ಹೆಸರು. ಅದೇರೀತಿ ಯಾವ
ಹಿಂದುಸ್ತಾನಿಯಲ್ಲಿ ಸಂಸ್ಕೃತ ಶಬ್ದಗಳು ಹೆಚ್ಚೋ ಅದು ಹಿಂದೀ.
{{gap}}ಈ ಹಿಂದೀ ಉರ್ದುವಾದ ಮತ್ತು ಅದರ ಬಗ್ಗೆ ಇರತಕ್ಕ ನಮ್ಮ
ಧೋರಣ ಇದನ್ನು ಕುರಿತು ಯೋಗ್ಯ ಸ್ಥಾನದಲ್ಲಿ ವಿಚಾರಮಾಡಲಾಗುವದು.
ಇನ್ನು ಈ ಹಿಂದುಸ್ತಾನಿ ಪ್ರಚಾರದ ಚಳವಳಿಯ ರೂಪರೇಷೆಯನ್ನು ಸ್ವಲ್ಪ
ನೋಡುವ,
{{center|''ಹಿ೦ದುಸ್ತಾನಿ ಚಳವಳಿ'''}}
{{gap}}ಅಲ್ಲಲ್ಲಿ ಅನೇಕರಿಗೆ ರಾಷ್ಟ್ರ ಭಾಷೆ ಎಂಬುದೊಂದು ಬೇಕು ಎಂದು
ಎಷ್ಟೇ ಎನಿಸಿದರೂ ಅಖಿಲ ಭಾರತೀಯ ಸ್ವರೂಪದ ಚಳವಳಿಯನ್ನು
ಯಾರೂ ಕೈಕೊಳ್ಳಲಿಲ್ಲ. ಯುಕ್ತ ಪ್ರಾಂತ ಬಿಹಾರಗಳಲ್ಲಿ ಹಿಂದುಸ್ತಾನಿಯೆ
ಸಕಲ ಜನರ ಭಾಷೆಯಾಗಿದ್ದರೂ ಅದರಲ್ಲಿ ಮೇಲೆ ಹೇಳಿದ ಎರಡು ಪ್ರವೃತ್ತಿ
ಗಳು ಬಲವಾಗಿ ಬೆಳೆದು ಆ ವಾದಕ್ಕೊಂದು ಮೇಲಾಟದ ಅಥವಾ ತುರಸಿನ
ಸ್ವರೂಪವು ಬಂದುಬಿಟ್ಟಿತ್ತು. ಹಿಂದೂ ಮುಸಲ್ಮಾನ ವಾದದ ಬಣ್ಣವೂ
ಅದಕ್ಕೆ ಬಳಿದಂತಾಗಿತ್ತು. ಆದುದರಿಂದ ರಾಷ್ಟ್ರಭಾಷೆ ಎಂಬ ದೃಷ್ಟಿಯಿಂದ
ಹಿಂದುಸ್ತಾನಿಯತ್ತ ನೋಡುವ ಪ್ರವೃತ್ತಿಯೆ ಅಲ್ಲಿ ಕಂಡುಬರುತಿರಲಿಲ್ಲ.
ಅಥವಾ ಎರಡು ಪಕ್ಷದವರು ತಮ್ಮದೇ ರಾಷ್ಟ್ರಭಾಷೆ ಆಗಬೇಕೆಂದು ಇಚ್ಛಿಸು
ತಿದ್ದರು ಎಂದರೂ ಸಲ್ಲುವದು ಉತ್ತಮ ರೋಗಚಿಕಿತ್ಸಕರಂತೆ ಗಾಂಧೀಜಿ
ಯವರು ಹಿಂದುಸ್ತಾನದ ರೋಗನಿದಾನವನ್ನು ಮಾಡಿಕೊಡಲವಶ್ಯವಿದ್ದ
ಔಷಧಗಳಲ್ಲಿ ಹಿಂದುಸ್ತಾನಿ ಭಾಷೆಯೂ ಒಂದು ಅವಶ್ಯ ಎಂಬುದನ್ನು ಅವರು
ದಕ್ಷಿಣ ಆಫ್ರಿಕೆಯಲ್ಲಿರುವಾಗಲೆ ನಿಶ್ಚಯಿಸಿದರು. ಅಲ್ಲಿ ಮನೆಮಕ್ಕಳಿಗೆ
ಹಾಗೂ ಟಾಲಸ್ಟಾಯ ಫಾರ್ ಮತ್ತು ಫಿನಿಕ್ಸಪಾರದಲ್ಲಿರುವವರಿಗೆಲ್ಲ ಅವರು
ಮಾತೃಭಾಷೆಯಲ್ಲದೆ ಹಿಂದುಸ್ತಾನಿಯನ್ನೂ ಕಲಿಸುತ್ತಿದ್ದರು. ಅವರ<noinclude></noinclude>
3sd82a8kj7649iyyd1tu2y7golh34jp
ಪುಟ:Praantabhaashhe-Rashhtrabhaashhe.pdf/೪೯
104
113910
321210
309035
2026-05-20T07:03:21Z
Shreesha Sharma
7840
/* Validated */
321210
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೪೪—}}
ಹಿಂದುಸ್ತಾನಕ್ಕೆ ಬರುವದಕ್ಕೂ ಪೂತ್ವದಲ್ಲಿ ಎಷ್ಟೋ ವರುಷ ಅಂದರೆ
೧೯೦೮ರಲ್ಲಿಯೆ - ಹಿಂದಸ್ವರಾಜ್ಯ' ಎಂಬ ತಮ್ಮ ತತ್ವಗಳ ಬೀಜಭೂತವಾದ
ಪುಸ್ತಕವನ್ನು ಪ್ರಕಟಿಸಿದರು. ಆ ಪುಸ್ತಕದ ಶಿಕ್ಷಣ ಪ್ರಕರಣದಲ್ಲಿ ಅವರು,
* ತನ್ನ ಪ್ರಾಂತೀಯ ಭಾಷೆಯಲ್ಲದೆ ಪ್ರತಿಯೊಬ್ಬ ಹಿಂದೆವಾಸಿಯು ಹಿಂದೀ
(ಹಿಂದುಸ್ತಾನಿ) ಭಾಷೆಯೊಡನೆ ಪರಿಚಿತನಿರಬೇಕು... ಹಿಂದುಸ್ತಾನದ ರಾಷ್ಟ್ರ
ಭಾಷೆ ಹಿಂದೀ (ಹಿಂದುಸ್ತಾನಿ) ಇರಬೇಕು. ಅದನ್ನು ಫಾರಸಿ ಹಾಗೂ
ನಾಗರಿ ಲಿಪಿಯಲ್ಲಿ ಬರೆಯಬೇಕು. ಹಿಂದು ಮುಸಲ್ಮಾನರ ಸಂಬಂಧವು
ನಿಕಟವಾಗಿತ್ತ ಹೋಗುವದಕ್ಕಾಗಿ ಎರಡೂ ಲಿಪಿಗಳ ಉಪಯೋಗಮಾಡ
ಬೇಕು. ಹೀಗೆ ಮಾಡಿದರೆ ನಾವು ಇಂಗ್ಲೀಷನ್ನು ಬೇಗನೆ ಹೊರಗೆ ಹಾಕ
ಬಲ್ಲೆವು,' ಬರೆದಿರುವರು. ಮುಂದೆ ಹಿಂದುಸ್ತಾನಕ್ಕೆ ಬಂದಬಳಿಕ ೧೯೧೭ರಲ್ಲಿ
ಹಿಂದು ವಿಶ್ವವಿದ್ಯಾಲಯದ ಸ್ಥಾಪನೆಯ ಸಮಾರಂಭಕ್ಕೆ ಅವರು ಹೋಗಿದ್ದರು.
ಅಲ್ಲಿ ಅನೇಕ ರಾಜಾಮಹಾರಾಜರು, ವ್ಹಾಯಿಸರಾಯ ಮುಂತಾದ ಅಧಿ
ಕಾರಿಗಳು, ಆ್ಯನಿಬೆಝುಂಟ ಮುಂತಾದ ಮುಖಂಡರು, ಪಂಡಿತ ಮಾಲವೀಯ
ರಂತೂ ಸೈ ಇವರೆಲ್ಲರೂ ಕಾಶಿಯಲ್ಲಿ ಒಟ್ಟುಗೂಡಿದ್ದರು. ಆಗ ಎಲ್ಲರೂ
ಹಿಂದುಸ್ತಾನಿಯಲ್ಲಿ ಮಾತಾಡದೆ ಇಂಗ್ಲೀಷದಲ್ಲಿ ಮಾತಾಡುವ ಪ್ರಸಂಗಬರು
ವದು ಲಾಂಛನಾಸ್ಪದವೆಂದು ನೇರವಾಗಿ ನಿರ್ಭೀತಿಯಿಂದ ನುಡಿದರು.ಎಲ್ಲ
ರಿಗೂ ಅದೊಂದು ಬಹಳ ಧಾರಿಷ್ಟದ ಕೆಲಸವೆನಿಸಿತು ೧೯೧೬ ರಲ್ಲಿ ಒಮ್ಮೆ
ಅಧ್ಯಕ್ಷಪದದಲ್ಲಿ ನಾಯಿಸರಾಯರಿದ್ದ ಯುದ್ಧ ವಿಷಯಕ ಸಭೆಯಲ್ಲಿ
ಗಾಂಧೀಜಿಯವರು ಹಿಂದುಸ್ತಾನಿಯಲ್ಲಿಯೇ ಮಾತನಾಡಿದರು.ಅಂತಹ
ಮಹತ್ವದ ಸಭೆಯಲ್ಲಿ ನಮ್ಮ ಜನರು ಹಿಂದುಸ್ತಾನಿಯಲ್ಲಿ ಮಾತಾಡಿದುದು
ಅದೇ ಮೊದಲನೆಯ ಸಲ. ಅನೇಕರು ಆ ಬಗ್ಗೆ ಅವರನ್ನು ಅಭಿನಂದಿಸಿದರು,
ಅನೇಕರು ಅತ್ಯಾಶ್ಚರ್ಯವನ್ನು ವ್ಯಕ್ತ ಮಾಡಿದರು. ಅದು ಇಂಗ್ಲೀಷ
ಭಾಷೆಯ ಹಾಗೂ ಬ್ರಿಟಿಶ್ ರಾಜಕರ ಅಪಮಾನವೆಂದು ತಿಳಿದುಕೊಳ್ಳುವ
ಮಹಾಮೂರೂ ಹಲವರಿದ್ದರು ಆ ಕಾಲಕ್ಕೆ ಅಗರವಾಲ ಜಾತಿಯವರು
ಮಾತ್ರ ಅಲ್ಲಲ್ಲಿ ನಾಗರೀ ಪ್ರಚಾರಿಣೀಸಭೆಯ ಮುಖಾಂತರ ಹಿಂದಿಯ
ಪ್ರಚಾರವನ್ನು ಮಾಡುತ್ತಿದ್ದರು. ೧೯೧೮ರಲ್ಲಿ ಗಾಂಧೀಜಿಯವರು ತಮ್ಮ
ಮಗನಾದ ದೇವಿದಾಸನನ್ನು ಮದ್ರಾಸಕ್ಕೆ ಕಳುಹಿ ಅಲ್ಲಿ ದಕ್ಷಿಣಭಾರತ<noinclude></noinclude>
5d4g627ermfjw7d4rn069j43ad030e1
ಪುಟ:Praantabhaashhe-Rashhtrabhaashhe.pdf/೫೧
104
113911
321212
309054
2026-05-20T07:04:02Z
Shreesha Sharma
7840
/* Validated */
321212
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|೪೭}}
ವಿಧಾಯಕ ಕಾರ್ಯಕ್ರಮಗಳಲ್ಲಿ ಅದಕ್ಕೆ ಒಂದು ಪ್ರಮುಖಸ್ಥಾನವು ದೊರಕಿತು
ಕಾಂಗ್ರೆಸ್ಸು ಅಧಿಕಾರಾರೂಢವಾಗಿ ೧೯೩೭ರಿಂದ ೧೯೩೯ರ ಕೊನೆಯ ವರೆಗೆ
ಎಂಟು ಪ್ರಾಂತಗಳಲ್ಲಿ ಹಿಂದುಸ್ತಾನಿಗೆ ವಿವಿಧ ರೀತಿಯಿಂದ ಉತ್ತೇಜನ
ಕೊಟ್ಟಿತು ಅಕ್ಟೋಬರ ೧೯೩೭ರಲ್ಲಿ ಮೂಲಶಿಕ್ಷಣ ಪರಿಷತ್ತು ಗಾಂಧೀಜಿವರ
ಅಧ್ಯಕ್ಷತೆಯಲ್ಲಿ ಕೂಡಿತು.ಅದರ ಕಾರ್ಯ ಕಲಾಪಗಳು ಹಿಂದುಸ್ತಾನಿಯ
ಲ್ಲಿಯೆ ನಡೆಯತಕ್ಕದ್ದೆಂದು ಗಾಂಧಿಜೀಯರು ಪ್ರಥಮದಲ್ಲಿಯೆ ಹೇಳಿ
ಬಿಟ್ಟರು ಮೂಲ ಶಿಕ್ಷಣದ ಅಭ್ಯಾಸಕ್ರಮದಲ್ಲಿ ಮಾತೃಭಾಷೆಗೆ ಪ್ರಧಾನ
ಸ್ಥಾನವು ಕೊಡಲಾಗಿದ್ದು ಅದೇ ಬೋಧಭಾಷೆಯಾಗಬೇಕು ಎಂಬ ನಿರ್ಬಂಧ
ವಿರುವದು ಅದೇ ಕಾಲಕ್ಕೆ ಐದನೆ ಹಾಗೂ ಆರನೆ ಈಯತ್ತೆಯಲ್ಲಿರುವಾಗ
ಅಂದರೆ ವಿದ್ಯಾಯ ೧೨ನೆ ವರುಷ ಅವನಿಗೆ ಹಿಂದುಸ್ಥಾನಿಯ
ಪರಿಚಯ ನಾಗಬೇಕೆಂದು ಹೇಳಲಾಗಿರುವದು. ಇದು ರಾಷ್ಟ್ರಭಾಷೆ, ಹಿಂದೂ ಮುಸ
ಲ್ಮಾನರಿಬ್ಬರೂ ಕೂಡಿ ರೂಪುಗೊಳಿಸಿದ ಭಾಷೆ ಎಂಬ ಮಾತನ್ನು ವಿದ್ಯಾರ್ಥಿ
ಗಳಿಗೆ ವಿಶೇಷವಾಗಿ ಹೇಳಬೇಕೆಂದು ಸೂಚಿಸಲಾಗುವದು ಮು೦ದೆ ೧೯೩೮
ರಲ್ಲಿ ಕಾಂಗ್ರೆಸ್ಸು ಈ ಮೂಲ ಶಿಕ್ಷಣ ಯೋಜನೆಗೆ ಪೂರ ಸಮ್ಮತಿ ಕೊಟ್ಟು
ಪರ್ಯಾಯದಿಂದ ಹಿಂದುಸ್ತಾನಿಯ ಪ್ರಸಾರಕ್ಕೆ ಸೂಕ್ಷ್ಮ ಬೆಂಬಲ ಕೊಟ್ಟಿತು.
ಈ ಚಳವಳಿಯು ಈಗ ವಿರಾಟ ಸ್ವರೂಪವನ್ನು ತಾಳಿತು ಕಾಂಗ್ರೆಸ್ಸಿನ
ಅಧಿವೇಶನಗಳಲ್ಲಿ ಈಚೆಗೆ ಹಿಂದುಸ್ಥಾನಿಯ ಹೊರತು ಅನ್ಯಭಾಷೆ ಖಚಿ
ತವೆ ಕೇಳಿಸುವದು. ಕಾಂಗ್ರೆಸ್ ಕಾವ್ಯಕರ್ತರಲ್ಲಿ ಹಿಂದುಸ್ಥಾನಿ ಅಭ್ಯಾಸ
ಮಾಡದೆ ಇರುವವರು ಕ್ವಚಿತ. ಈಗ ಬಹುವಿಧದಿಂದ ಬಹುಮುಖದಿಂದ
ಅನೇಕ ಶಿಕ್ಷಣ ಸಂಸ್ಥೆಗಳ ಮುಖಾಂತರ ಹಾಗೂ ಅನ್ಯ ಹಿಂದುಸ್ಥಾನಿ ಪ್ರೆಮೀ
ಮಂಡಳಿಗಳಿಂದ ದೇಶದಲ್ಲಿ ಹಿಂದುಸ್ತಾನಿ ಪ್ರಸಾರವು ಅದರೊಡನೆ ರಾಷ್ಟ್ರೀಯ
ಭಾವನೆ, ಏಕರಾಷ್ಟ್ರೀಯತ್ವದ ಜಾಗೃತಿ, ನಮ್ಮ ಸಂಸ್ಕೃತಿ ಎಚ್ಚರ ಇವು ಅನಾಯಾಸವಾಗಿ ಬಹಳ ದೊಡ್ಡ ಪ್ರಮಾಣದಿಂದ ನಡೆದಿವೆ.
{{center|'''ಪ್ರಚಾರ ಮತ್ತು ಪ್ರಚಾರ- ಸಂಸ್ಥೆಗಳು'''}}
{{gap}}ಪ್ರಾಂತಗಳಲ್ಲಿಯ ಪ್ರಾಂತಿಕ ಭಾಷೆಗಳತ್ತ ಆತ್ಯಂತಿಕ ಲಕ್ಷವು ಪೂರೈಸ
ಲಾಗಬೇಕು ಎಂಬ ಮಾತು ನಿರ್ವಿವಾದವು. ಅದೇ ಕಾಲಕ್ಕೆ ಹಿಂದುಸ್ತಾನಿ<noinclude></noinclude>
406j8hcvlpnnd23trx917j1o5hnuk5w
ಪುಟ:Praantabhaashhe-Rashhtrabhaashhe.pdf/೫೨
104
113912
321213
309059
2026-05-20T07:04:15Z
Shreesha Sharma
7840
/* Validated */
321213
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೪೭—}}
ಪ್ರಚಾರದ ದುರ್ಲಕ್ಷ ಮಾಡಿ ನಡೆಯಲಾರದು. ಇಂಗ್ಲೀಷ್ ಸಾಮಾನ್ಯ
ಭಾಷೆಯಾಗಬಲ್ಲದು ಎಂಬ ಭ್ರಮ ಇನ್ನು ಯಾರಿಗಾದರೂ ಇದ್ದರೆ ಅವರು
ದುರಾರಾಧ್ಯರೆಂದೇ ಹೇಳಬಹುದು. ಬ್ರಿಟಿಷ್ ಸರಕಾರದವರೇ ಕುಳಿತು ತಮ್ಮ
ಸಾಮ್ರಾಜ್ಯವಾದಿ ಮನೋರಚನೆಗನುಗುಣವಾಗಿ ಅದರ ಪ್ರಸಾರವನ್ನು
ಈಗ ೧೫೦ ವರುಷ ಮಾಡುತ್ತಿದ್ದರೂ ಸಾವಿರದಲ್ಲಿ ಹನ್ನೆರಡು ಹದಿಮೂರು
ಜನರಿಗೆ ಮಾತ್ರ ಹರಕು ಮುರುಕು ಇಂಗ್ಲೀಷು ಈಗ ಬರುತಿರುವದು.
ಮೇಲಾಗಿ ಬ್ರಿಟಿಶ್ ಸಾಮ್ರಾಜ್ಯವು ಇಲ್ಲಿ ಶಾಶ್ವತವಲ್ಲ ಹಿಂದುಸ್ತಾನಕ್ಕೆ
ಸ್ವಾತಂತ್ರ್ಯ ಕೊಡುವದೆ ಬ್ರಿಟಿಶರ ಸ್ವೀಕೃತವಾದ ಧೈಯವಿರುವದೆಂದು
ಅವರೇ ಸಾರಿರುವರು. ಅಂದ ಬಳಿಕ ಇಂಗ್ಲಿಷವು ದಿನೇ ದಿನೇ ಸ್ಥಾನಭ್ರಷ್ಟ
ನಾಗದೆ ಗತಿಯಿಲ್ಲ. ಅದರ ರಾಷ್ಟ್ರ ವ್ಯಾಪಕ ಸ್ಥಾನವನ್ನು ಹಿಂದುಸ್ಥಾನಿಯೆ
ಪಡೆಯಬಲ್ಲದು. ಆದುದರಿಂದ ಯಾವ ಪ್ರಾಂತವು ಈಗ ಹಿಂದುಸ್ತಾನಿಯ
ಪ್ರಚಾರದಲ್ಲಿ ಹಿಂದುಳಿಯುವದೊ ಅದಕ್ಕೆ ಮುಂದರಿಯಲು
ಅಡ್ಡಿಯಾಗುವದು. ಮೊದಲನೆಯ ಮಾತೆಂದರೆ, ಆಯಾ ಪ್ರಾಂತಿಕ ಭಾಷೆ ಸಾಕಷ್ಟು
ಬರದೆ ಇರುವವನಿಗೆ ಅಂದರೆ ಕನಿಷ್ಟ ನಾಲ್ಕನೆ ಪುಸ್ತಕ ಓದಿ ತಿಳಿದುಕೊಳ್ಳು
ವಷ್ಟು ಜ್ಞಾನವಿಲ್ಲದವನಿಗೆ ಹಿಂದುಸ್ತಾನಿ ಕಲಿಸಬಾರದು ಹಂಗಾಮಿ ಹಿಂದು
ಸ್ನಾನಿ ಪರೀಕ್ಷೆಗಳೊಡನೆ ಆಯಾ ಪ್ರಾಂತಕ ಭಾಷೆಯ ಪರೀಕ್ಷಾ ಕಾಗದವೂ
ಒಂದು ಅವಶ್ಯವಿರಬೇಕು ಶಾಲೆ ಅಥವಾ ಶೈಕ್ಷಣಿಕ ಸಂಸ್ಥೆಗಳ ಮುಖಾಂತರ
ಹಿ೦ದುಸ್ತಾನಿಯ ಪ್ರಚಾರವು ನಡೆಯಬೇಕಾದರೆ ಸಾಮಾನ್ಯವಾಗಿ ವಿದ್ಯಾರಿ
ಗಳು ೧೨ ವರುಷದವರಾದ ಮೇಲೆ ಅವರಿಗೆ ಹಿಂದುಸ್ಥಾನಿಯ ಸಂಸ್ಕಾರ
ಮಾಡಲು ಅಡ್ಡಿ ಇಲ್ಲ. ಅಂದರೆ ಪ್ರಾಥಮಿ, ಶಾಲೆಗಳ ಅಂತ್ಯವರಗಳಲ್ಲಿ
ಹಾಗೂ ಮಾಧ್ಯಮಿಕ ಶಾಲೆಗಳ ಪ್ರಾಥಮಿಕ ವರಗಳಲ್ಲಿ ಹಿಂದುಸ್ತಾನಿಯ
ಸಾಮಾನ್ಯ ಪರಿಚಯವನ್ನು ಅವರಿಗೆ ಮಾಡಿಕೊಡಬೇಕು. ಮಾಧ್ಯಮಿಕ
ಶಾಲೆಗಳ ಉಚ್ಚ ವಗ್ಗಗಳಲ್ಲಿ ಅದನ್ನು ಐಚ್ಛಿಕ ದ್ವಿತೀಯ ಭಾಷೆ ಇಡ
ಬಹುದು, ಉಚ್ಚ ಶಿಕ್ಷಣದ ವರಗಳಲ್ಲಿ ಅಂದರೆ ವಯಸ್ಸಿನ ೧೬ ಮೀರಿದ
ಬಳಿಕ ಕಡ್ಡಾಯವಾಗಿ ದ್ವಿತೀಯ ಭಾಷೆಯೆಂದು ಅವರಿಗೆ ಹಿಂದುಸ್ತಾನಿ ಕಲಿ
ಸಬೇಕು. ಅದರ ಮಟ್ಟು ಸಾಧಾರಣ ಈಗಿನ ಮ್ಯಾಟ್ರಿಕ್ ವಿದ್ಯಾರಿಗೆ ಒರುವ
ಕನ್ನಡದಷ್ಟು ಇರಬೇಕು. ತಾನಾಗಿ ಮುಂದೆ ಅಭ್ಯಸಿಸಿ ಅವಶ್ಯವಿದ್ದರೆ ಬೆಳೆ<noinclude></noinclude>
0u29n70nxmyguvad7fdurj4trbmo603
ಪುಟ:Praantabhaashhe-Rashhtrabhaashhe.pdf/೫೩
104
113913
321214
309074
2026-05-20T07:04:30Z
Shreesha Sharma
7840
/* Validated */
321214
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೪೮—}}
ಸುವಷ್ಟು ಜ್ಞಾನವು ವಿದ್ಯಾರ್ಥಿಗೆ ಆಗಬೇಕು, ಹಿಂದುಸ್ತಾನಿ ಮಾತೃ ಭಾಷೆ
ಇದ್ದವರು ಅನ್ಯ ಪ್ರಾಂತಗಳಲ್ಲಿರುತಿದ್ದರೆ ಅವರು ಆಯಾ ಪ್ರಾಂತಿಕ ಭಾಷೆ
ಗಳನ್ನು ಕಲಿಯಲೇಬೇಕು. ಇದಲ್ಲದೆ ಐಚ್ಛಿಕವಾಗಿ ಹಿಂದುಸ್ತಾನಿ ಕಲಿ
ಯುವವರಿಗಾಗಿ ಹಂಗಾಮಿ ವರಗಳು, ಪರೀಕ್ಷೆಗಳು, ಸ್ಪರ್ಧೆಗಳು ಹಿಂದುಸ್ತಾನಿ
ಪ್ರೇಮಿ ಮಂಡಲಗಳಿಂದ ನಡೆಸಲ್ಪಡಬೇಕು ಸುಲಭ ಹಿಂದುಸ್ತಾನಿ
ಪುಸ್ತಕಗಳು, ಮಾಸಿಕಗಳು ಇತ್ಯಾದಿಗಳ ಪ್ರಸಾರವು ನಡೆಯಬೇಕು. ಅವು
ಗಳಲ್ಲಿ ಅಖಿಲ ಭಾರತೀಯ ದೃಷ್ಟಿಯಿಂದ ಅವಶ್ಯವಿರುವ ವಿಷಯಗಳ ಚರೆ,
ತೇಜಸ್ವಿ ರಾಷ್ಟ್ರೀಯತೆ ಉದ್ದೀಪನಗೊಳ್ಳುವಂಥ ವಿಚಾರಗಳು, ಮುಂತಾದವು
ಗಳು ಇರಬೇಕು. ಇದಲ್ಲದೆ ಚಲಚ್ಚಿತ್ರ ರೇಡಿಯೊ ಮುಂತಾದವುಗಳ
ಮುಖಾಂತರವೂ ಹಿಂದುಸ್ತಾನಿಯ ಪ್ರಚಾರವು ನಡೆದಿದೆ ಆ ಹಿಂದುಸ್ತಾನಿ
ಭಾಷೆ ಸರಿಯಾಗಿರುವಂತೆ ಅದೇ ರೀತಿ ಆಯಾ ವಿಷಯ ಮತ್ತು ಮಂಡನ
ಪದ್ಧತಿ ಆರೋಗ್ಯಕರರವಾದುದೂ ಜೀವನ ವಿಕಾಸಕ್ಕೆ ಪೋಷಕವಾದುದೂ
ಇರುವದೊ ಇಲ್ಲವೊ ಇದನ್ನು ನೋಡಿಕೊಳ್ಳಲಿಕ್ಕೆ ಬೇಕು.
{{gap}}ಪ್ರಚಾರ ಸಂಸ್ಥೆಗಳ ವಿಶೇಷ ಮಾಹಿತಿಯನ್ನು ಇಲ್ಲಿ ಕೊಡುವದು
ಸಾಧ್ಯವಿಲ್ಲ. ಹಿಂದಿ ಭಾಷಾ ಪ್ರಾಂತಗಳಲ್ಲಿ, ಆಹಿಂದೀ ಪ್ರಾಂತಗ
ಳಲ್ಲಿ, ದ್ರಾವಿಡ ಭಾಷಾ ಪ್ರಾಂತಗಳಲ್ಲಿ ಹೀಗೆ ಮೂರು ಕಡೆಗೆ ಬೇರೆ ಬೇರೆ
ರೀತಿ ಪ್ರಚಾರ ನಡೆದಿದೆ ಹಾಗೂ ಪ್ರಚಾರ ಸಂಸ್ಥೆಗಳಿವೆ ಶುದ್ಧ ಹಿಂದೀ
ಅಂದರೆ ಸಂಸ್ಕೃತ ಪ್ರಧಾನ ಹಿಂದುಸ್ತಾನಿ ಹಾಗೂ ಶದ್ಧ ಊರು ಅಂದರೆ
ಫಾರಸಿ ಅರಬ್ ಪ್ರಧಾನ ಹಿಂದುಸ್ತಾನಿ ಇವುಗಳ ಪ್ರಚಾರ ಮಾಡವವರು
ಕೂಡ ಪರಾಯದಿಂದ ಹಿಂದುಸ್ತಾನಿಯ ಪ್ರಚಾರವನ್ನು ಮಾಡುತ್ತಿರುವರು.
ಯಾಕಂದರೆ ಅವರ ಭಾಷೆಯ ಅಸ್ತಿವಾರ, ನರನಾಡಿಗಳು, ಹಿಂದುಸ್ತಾನಿಯೆ
ಇರುವವು ಆದರೆ ಆ ಪ್ರಚಾರವು ಹಿಂದು ಮುಸಲ್ಮಾನ ಎಂಬ ಜಾತೀಯ
ವಿರೋಧ ಭಾವನೆಯ ಮೂಲಕ ಮತ್ತು ಆ ಅಭಿನಿವೇಶದಿಂದ ನಡೆಯುತ್ತಿರು
ದರಿಂದ ಅದು ಇಷ್ಟುವಾದುದಿಲ್ಲ. ಆದರೆ ಅದಕ್ಕುಪಾಯವಿಲ್ಲ, ಆ ಬಗೆಯ
ದೊಡ್ಡ ಪ್ರಚಾರ ಸಂಸ್ಥೆಗಳೆಂದರೆ ಒಂದತ್ತ ಹಿಂದೀ ಸಾಹಿತ್ಯ ಸಮ್ಮೇಲನ
ಇನ್ನೊ೦ದತ್ತ ಅಂಜುಮನ್ ತರಕ್ಕಿ ಉರ್ದು. ಇಲ್ಲಿ ನಾವು ದ್ರಾವಿಡ<noinclude></noinclude>
dgwtip0gz9ejuh3sr10fp9dm1adddzr
ಪುಟ:Praantabhaashhe-Rashhtrabhaashhe.pdf/೫೪
104
113914
321215
309082
2026-05-20T07:04:46Z
Shreesha Sharma
7840
/* Validated */
321215
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೪೯—}}
ಭಾಷಾ ಪ್ರಾಂತಗಳಲ್ಲಿ ಇದ್ದ ಪ್ರಚಾರಸಂಸ್ಥೆಗಳನ್ನು ಕುರಿತು ಮಾತ್ರ ಎರಡು
ಶಬ್ದಗಳನ್ನು ಬರೆಯುವವು.
{{gap}}ಮದ್ರಾಸದಲ್ಲಿ ೧೯೧೮ರಲ್ಲಿ ಸ್ಥಾಪನವಾದ * ದಕ್ಷಿಣ ಭಾರತ ಹಿಂದೀ
( ಹಿಂದುಸ್ತಾನಿ ) ಪ್ರಚಾರ ಸಭೆ' ಗೆ ೧೯೪೩ ರಲ್ಲಿ ಇಪ್ಪತ್ತೈದು ವರುಷಗಳಾ
ದವು. ಆ ಪ್ರಸಂಗದಲ್ಲಿ ಅವರು ಹೊರಡಿಸಿದ ವರದಿಯ ಮೇರೆಗೆ ಆ ಸಭೆಯ
ಐದು ಶಾಖೆಗಳಿವೆ, ತಾಮಿಳನಾಡು, ಆಂಧ್ರ, ಕಾಟಕ, ಕೇರಳ ಹೀಗೆ ೪
ಪಾಂತಗಳಲ್ಲಿ ೪,ಒಂದು ಮದ್ರಾಸ ಪಟ್ಟಣದಲ್ಲಿ, ಆ ಸಭೆಯು ೨೫ ವರ್ಷಗಳಲ್ಲಿ
೧೩,೬೧,೦೬೦ ರೂಪಾಯಿ ವೆಚ್ಚ ಮಾಡಿದೆ, ೭೦೦೦೦ ರೂಪಾಯಿಯ ಕಟ್ಟಡ
ಗಳನ್ನು ಕಟ್ಟಿದೆ, ೧೫೦ ಪುಸ್ತಕಗಳನ್ನು ಪ್ರಕಟಿಸಿದೆ, ಅದರಿಂದ೧೪೩೬ ಸ್ನಾತ
ಕರು ( ಗ್ರಾಜ್ಯುಯೇಟರು ) ಹೊರಬಿದ್ದಿದ್ದಾರೆ. ೪೦೦ ಶಾಲೆಗಳಲ್ಲಿ ಹಿ೦ದು
ಸಾನಿ ಕಲಿಸಲಾಗುತ್ತಿದೆ, ೧೪೨೫ ಪ್ರಚಾರಕರಿದ್ದಾರೆ ೨೫೦೦ ಪ್ರಚಾರ
ಕೇಂದ್ರಗಳಿವೆ, ೮೦೦ ಪರೀಕ್ಷಾ ಕೇಂದ್ರಗಳಿವೆ, ಈವರೆಗೆ ೧,೭೨,೦೦೬ ಜನ
ಪರೀಕ್ಷೆಗೆ ಕುಳಿತಿದ್ದಾರೆ. ಕಾಟಕದ ಮುಖ್ಯ ಕಚೇರಿ ಧಾರವಾಡದಲ್ಲಿದ್ದು
ಮೈಸೂರ ರಿಯಾಸತ ಹಿಂದೀ ಪ್ರಚಾರ ಸಭೆಯ ಕಚೇರಿಯು ಬೆಂಗಳೂರಲ್ಲಿ
ರುವದು. ಕಾಟಕದಲ್ಲಿ ಸುಮಾರು ೧೦೦ ಶಾಲೆಗಳಲ್ಲಿ ಈಗ ಹಿಂದೀ ಕಲಿ
ಸಲಾಗುತಿದೆ; ಹಾಗೂ ೩೨೦ ಪ್ರಚಾರಕರು ಕಾರ ಮಾಡುತ್ತಿದ್ದಾರೆ. ವರು
ಷಕ್ಕೆ ಸಾಧಾರಣವಾಗಿ ೩೦೦೦ ಜನರು ಪರೀಕ್ಷೆಗೆ ಕೊಡುತ್ತಾರೆ. ಈ ಬಗೆ
ಯಾಗಿ ವಿವಿಧ ಸಂಸ್ಥೆ ಸಂಘಗಳಲ್ಲದೆ ಹಿಂದುಸ್ತಾನಿಯ ಪ್ರೇಮವಿದ್ದವರು
ಬೇರೆ ಬೇರೆ ಮಂಡಲಗಳ ಮುಖಾಂತರ ಪ್ರಕಾರ ಕೆಲಸವನ್ನು ನಡೆಸಿರುವರು.
{{center|'''ಹಲವು ವಾದಗಳು'''}}
{{gap}}ಈ ವರೆಗಿನ ಸಾಂಗೋಪಾಂಗ ವಿಚಾರದ ನಂತರ ಈ ಬಗ್ಗೆ ಪ್ರಚಲಿತ
ವಿರುವ ಹಲವು ವಾದಗಳ ದಿಗ್ದರನವನ್ನು ಇಲ್ಲಿ ಮಾಡುವದು ಅನುಚಿತವಾಗ
ಲಾರದು. ಆ ವಾದಗಳ ಪೂರ್ ಚರ್ ಇಲ್ಲವೆ ಎಲ್ಲ ಸಾಧಕಬಾಧಕ ಪ್ರಮಾಣ
ಇವುಗಳನ್ನು ಇಲ್ಲಿ ಕೊಡುವದಸಾಧ್ಯ. ಆದರೆ ಸಾಮಾನ್ಯ ವಾಚಕರಿಗೆ
ಅವುಗಳ ಜ್ಞಾನವಿರದಿರುವದು ಅಕ್ಷಮ್ಯವಿರುವದು. ಆದುದರಿಂದ ಸಂಕ್ಷೇಪ<noinclude></noinclude>
fn3x19435qmlc6hyrkemu4ip4d1p31i
ಪುಟ:Praantabhaashhe-Rashhtrabhaashhe.pdf/೫೫
104
113915
321216
309087
2026-05-20T07:04:54Z
Pragathi. BH
7585
/* Validated */
321216
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೫೦—}}
ದಿಂದ ಆ ವಾದಗಳ ಸ್ವರೂಪವನ್ನು ಇಲ್ಲಿ ಕೊಟ್ಟು, ಅವುಗಳ ಬಗ್ಗೆ ಕಾಂಗ್ರೆಸ್ಸಿನ
ದೃಷ್ಟಿ ಯಾವದಿರಬಲ್ಲದು ಎಂಬುದನ್ನು ಇಲ್ಲಿ ಸೂಚಿಸಲಾಗಿದೆ.
ಇಂಗ್ಲೀಷ ಭಾಷೆಯನ್ನೆ ರಾಷ್ಟ್ರಭಾಷೆಮಾಡಬೇಕು ಎಂದು ಹಲವರು
ಬಹಳ ಕಳಕಳಿಯಿಂದ ಹೇಳಿರುವರು ಅವರ ಬಗ್ಗೆ ತಮ್ಮ ಪೂರ ಸಹಾನು
ಭೂತಿ ಇದೆ. ಆ ಭಾಷೆಯ ಮಹತ್ವ, ಸಾಮ, ಸೌಂದರ್ಯ ಇವುಗಳ
ಬಗ್ಗೆ ಭಿನ್ನ ಮತವಿರಲಾರದು. ಆದರೂ ಅದನ್ನು ರಾಷ್ಟ್ರಭಾಷೆ ಮಾಡು
ವದು ಸಾಧ್ಯವಿಲ್ಲ. ಆ ಬಗ್ಗೆ ಈಗಾಗಲೆ ಹಲವು ಕಾರಣಗಳನ್ನು ನಾವು
ಅಲ್ಲಲ್ಲಿ ಕೊಟ್ಟಿದ್ದೇವೆ. ಇಂಗ್ಲೀಷದ ಸಂಪಠ್ಯವೆಂದರೆ ದೈವೀ ಅನುಗ್ರಹ,
ಇಂಗ್ಲೀಷಭಾಷೆಯ ಅಭ್ಯಾಸದಿಂದ ನಮಗೆ ಸ್ವರಾಜ್ಯ ಸ್ವಾತಂತ್ರಾದಿ ಕಲ್ಪನೆ
ಗಳು ಬಂದವು. ಇಂಗ್ಲೀಷರ ರಾಜ್ಯದಿಂದಲೆ ನಮ್ಮಲ್ಲಿ ಭೌತಿಕ ಸುಧಾರಣೆ
ಗಳುಂಟಾದವು ಇಲ್ಲದಿದ್ದರೆ ನಾವು ಕಾಡುಸ್ಥಿತಿಯಲ್ಲಿರುತಿದ್ದೆವು ಎಂದು
ತಿಳಿಯುವವರು ಮತ್ತು ಹೇಳುವವರು ಇನ್ನೂ ಹಲವರು ಇರುವರು. ಆದರೆ
ಇವರೆಲ್ಲ ಭ್ರಮವಾದಿಗಳು, ಚೀನ, ಜಪಾನ, ರಶಿಯಾ ಮುಂತಾದ ರಾಷ್ಟ್ರ
ಗಳಿಗೇನೂ ಬ್ರಿಟಿಶರ ಕರಿಗಾಲು ಹತ್ತಲಿಲ್ಲ. ಅವರೇನೂ ಇಂಗ್ಲೀಷ
ಮುಖಾಂತರ ತಮ್ಮ ಸ್ವಾತಂತ್ರ್ಯದ ಪಾಠಗಳನ್ನು ಕಲಿಯಲಿಲ್ಲ. ಅವರೇನೂ
ಪರರಾಷ್ಟ್ರಕ್ಕೆ ಗುಲಾಮರಾಗಿಯೆ ಸುಧಾರಣೆಯ ಮಾರವನ್ನು ಹಿಡಿಯಲಿಲ್ಲ.
ಆ ರಾಷ್ಟ್ರಗಳು ತಮ್ಮ ತಮ್ಮ ಪರಿಯಿಂದ ತಮ್ಮ ಭಾಷೆಗಳ ಮೂಲಕವೆ
ಅತ್ಯುಚ್ಚ ವಿಚಾರಶಿಖರವನ್ನು ಮುಟ್ಟಿ, ಸ್ವತಂತ್ರವಿದ್ದೇ ಪ್ರಗತಿಯನ್ನು
ಸಾಧಿಸಿವೆ. ಹಿಂದುಸ್ತಾನವೂ ಹಾಗೆ ಮಾಡಲು ಸಾಧ್ಯವಿರಲಿಲ್ಲ ಎಂದು
ಹೇಳಲಿಕ್ಕಾಗದು. ಇಂಗ್ಲೀಷಿನ ದಾಸ್ಯ ಹಾಗೂ ಇಂಗ್ಲೀಷರ ದಾಸ್ಯ ಇವೆ
ರಡೂ ಕಾರಣಾಂತರಗಳಿಂದ ನಮಗೆ ಒದಗಿದ್ದರೂ ಅವು ನಮ್ಮ ಹಿತಕ್ಕಾಗಿ
ಎಂದು ಪ್ರತಿಪಾದಿಸುವುದೆಂದರೆ ಶೃಂಖಲೆಗಳು ಅಲಂಕಾರಗಳೆಂದು, ಮನೆ
ಸೇರಿದ ಘಟಿಸಲ್ಪವು ಶುಭಕಾರಕವೆಂದು ವಾದಿಸಿದಂತೆಯೆ ಸೈ. ಇಂಗ್ಲೀಷನ್ನು
ಅಥವಾ ಇಂಗ್ಲೀಷರನ್ನು ನಾವು ದ್ವೇಷಿಸಬೇಕೆಂದು ಇದರ ಅಲ್ಲವಲ್ಲ ಆದರೆ
ಅವರು ಸಾಮ್ರಾಜ್ಯವಾದಿಗಳಾಗಿ ಯಾವದೇ ಬಗೆಯ ಶೋಷಕರಾಗಿ
ಇಲ್ಲಿರುವದು ಬೇಡ. ಅಲ್ಲಿಯ ವರೆಗೆ ಅವರ ಯಾವ ಸಂಬಂಧವೂ ನಮಗೆ<noinclude></noinclude>
t3p4ufk54bgvnt0tqatyigzd27t4ovt
321217
321216
2026-05-20T07:04:59Z
Shreesha Sharma
7840
/* Validated */
321217
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೫೦—}}
ದಿಂದ ಆ ವಾದಗಳ ಸ್ವರೂಪವನ್ನು ಇಲ್ಲಿ ಕೊಟ್ಟು, ಅವುಗಳ ಬಗ್ಗೆ ಕಾಂಗ್ರೆಸ್ಸಿನ
ದೃಷ್ಟಿ ಯಾವದಿರಬಲ್ಲದು ಎಂಬುದನ್ನು ಇಲ್ಲಿ ಸೂಚಿಸಲಾಗಿದೆ.
{{gap}}ಇಂಗ್ಲೀಷ ಭಾಷೆಯನ್ನೆ ರಾಷ್ಟ್ರಭಾಷೆಮಾಡಬೇಕು ಎಂದು ಹಲವರು
ಬಹಳ ಕಳಕಳಿಯಿಂದ ಹೇಳಿರುವರು ಅವರ ಬಗ್ಗೆ ತಮ್ಮ ಪೂರ ಸಹಾನು
ಭೂತಿ ಇದೆ. ಆ ಭಾಷೆಯ ಮಹತ್ವ, ಸಾಮ, ಸೌಂದರ್ಯ ಇವುಗಳ
ಬಗ್ಗೆ ಭಿನ್ನ ಮತವಿರಲಾರದು. ಆದರೂ ಅದನ್ನು ರಾಷ್ಟ್ರಭಾಷೆ ಮಾಡು
ವದು ಸಾಧ್ಯವಿಲ್ಲ. ಆ ಬಗ್ಗೆ ಈಗಾಗಲೆ ಹಲವು ಕಾರಣಗಳನ್ನು ನಾವು
ಅಲ್ಲಲ್ಲಿ ಕೊಟ್ಟಿದ್ದೇವೆ. ಇಂಗ್ಲೀಷದ ಸಂಪಠ್ಯವೆಂದರೆ ದೈವೀ ಅನುಗ್ರಹ,
ಇಂಗ್ಲೀಷಭಾಷೆಯ ಅಭ್ಯಾಸದಿಂದ ನಮಗೆ ಸ್ವರಾಜ್ಯ ಸ್ವಾತಂತ್ರಾದಿ ಕಲ್ಪನೆ
ಗಳು ಬಂದವು. ಇಂಗ್ಲೀಷರ ರಾಜ್ಯದಿಂದಲೆ ನಮ್ಮಲ್ಲಿ ಭೌತಿಕ ಸುಧಾರಣೆ
ಗಳುಂಟಾದವು ಇಲ್ಲದಿದ್ದರೆ ನಾವು ಕಾಡುಸ್ಥಿತಿಯಲ್ಲಿರುತಿದ್ದೆವು ಎಂದು
ತಿಳಿಯುವವರು ಮತ್ತು ಹೇಳುವವರು ಇನ್ನೂ ಹಲವರು ಇರುವರು. ಆದರೆ
ಇವರೆಲ್ಲ ಭ್ರಮವಾದಿಗಳು, ಚೀನ, ಜಪಾನ, ರಶಿಯಾ ಮುಂತಾದ ರಾಷ್ಟ್ರ
ಗಳಿಗೇನೂ ಬ್ರಿಟಿಶರ ಕರಿಗಾಲು ಹತ್ತಲಿಲ್ಲ. ಅವರೇನೂ ಇಂಗ್ಲೀಷ
ಮುಖಾಂತರ ತಮ್ಮ ಸ್ವಾತಂತ್ರ್ಯದ ಪಾಠಗಳನ್ನು ಕಲಿಯಲಿಲ್ಲ. ಅವರೇನೂ
ಪರರಾಷ್ಟ್ರಕ್ಕೆ ಗುಲಾಮರಾಗಿಯೆ ಸುಧಾರಣೆಯ ಮಾರವನ್ನು ಹಿಡಿಯಲಿಲ್ಲ.
ಆ ರಾಷ್ಟ್ರಗಳು ತಮ್ಮ ತಮ್ಮ ಪರಿಯಿಂದ ತಮ್ಮ ಭಾಷೆಗಳ ಮೂಲಕವೆ
ಅತ್ಯುಚ್ಚ ವಿಚಾರಶಿಖರವನ್ನು ಮುಟ್ಟಿ, ಸ್ವತಂತ್ರವಿದ್ದೇ ಪ್ರಗತಿಯನ್ನು
ಸಾಧಿಸಿವೆ. ಹಿಂದುಸ್ತಾನವೂ ಹಾಗೆ ಮಾಡಲು ಸಾಧ್ಯವಿರಲಿಲ್ಲ ಎಂದು
ಹೇಳಲಿಕ್ಕಾಗದು. ಇಂಗ್ಲೀಷಿನ ದಾಸ್ಯ ಹಾಗೂ ಇಂಗ್ಲೀಷರ ದಾಸ್ಯ ಇವೆ
ರಡೂ ಕಾರಣಾಂತರಗಳಿಂದ ನಮಗೆ ಒದಗಿದ್ದರೂ ಅವು ನಮ್ಮ ಹಿತಕ್ಕಾಗಿ
ಎಂದು ಪ್ರತಿಪಾದಿಸುವುದೆಂದರೆ ಶೃಂಖಲೆಗಳು ಅಲಂಕಾರಗಳೆಂದು, ಮನೆ
ಸೇರಿದ ಘಟಿಸಲ್ಪವು ಶುಭಕಾರಕವೆಂದು ವಾದಿಸಿದಂತೆಯೆ ಸೈ. ಇಂಗ್ಲೀಷನ್ನು
ಅಥವಾ ಇಂಗ್ಲೀಷರನ್ನು ನಾವು ದ್ವೇಷಿಸಬೇಕೆಂದು ಇದರ ಅಲ್ಲವಲ್ಲ ಆದರೆ
ಅವರು ಸಾಮ್ರಾಜ್ಯವಾದಿಗಳಾಗಿ ಯಾವದೇ ಬಗೆಯ ಶೋಷಕರಾಗಿ
ಇಲ್ಲಿರುವದು ಬೇಡ. ಅಲ್ಲಿಯ ವರೆಗೆ ಅವರ ಯಾವ ಸಂಬಂಧವೂ ನಮಗೆ<noinclude></noinclude>
psp0et4zh1anmbgrdjljfbgjd1u1ewn
ಪುಟ:Praantabhaashhe-Rashhtrabhaashhe.pdf/೫೬
104
113916
321222
309090
2026-05-20T07:05:37Z
Shreesha Sharma
7840
321222
proofread-page
text/x-wiki
<noinclude><pagequality level="4" user="A826" />{{center|—೫೧—}}</noinclude>ಇಷ್ಟವಿಲ್ಲ. ಆ ಅನಿಷ್ಟ ವೃತ್ತಿಯನ್ನು ಅವರು ಬಿಟ್ಟ ಕ್ಷಣವೆ ಅವರು ನಮ್ಮ ಮಿತ್ರರು, ಅಲ್ಲಿಯ ವರೆಗೆ ಪರಮ ಹಿತಶತ್ರುಗಳು, ಅವರ ಭಾಷೆಯಿಂದಲೂ ನಾವು ಲಾಭ ಪಡೆಯುವ ಆದರೆ ಅದನ್ನು ರಾಷ್ಟ್ರಭಾಷೆ ಮಾಡಿ ಅಲ್ಲ. ಅದರಲ್ಲಿಯ ಸತ್ಕೃಷ್ಟ ಗ್ರಂಥಗಳನ್ನು ಭಾಷಾಂತರಿಸಿ, ಅದರಲ್ಲಿಯ ಉಚ್ಚ ವೀರವತ್ತರವಾದ ವಿಚಾರಗಳನ್ನು ಆತ್ಮಸಾತ್ ಮಾಡಿಕೊಂಡು ಲಾಭಪಡೆ ಯುವ, ಅದನ್ನು ಬೋಧಭಾಷೆ ಮಾಡಿ ಅಲ್ಲ, ಅದನ್ನು ಅಂತರಾಷ್ಟ್ರೀಯ ವ್ಯವಹಾರಕ್ಕಾಗಿ, ವಿಜ್ಞಾನಾದಿಗಳ ಅಭ್ಯಾಸಕ್ಕಾಗಿ ಮೀಸಲಾಗಿಟ್ಟು ಅದರಿಂದ ಪ್ರಯೋಜನ ಪಡೆಯುವ
{{gap}}ಪ್ರಾಂತಭಾಷೆ, ರಾಷ್ಟ್ರ ಭಾಷೆ ಇವುಗಳ ನಡುವೆ ಹಲವೆಡೆಗೆ ವಿರೋಧವು ಕಂಡುಬರುವದು, ರಾಷ್ಟ್ರಭಾಷೆಯ ಪ್ರಚಾರದಿಂದ ಪ್ರಾಂತಭಾಷೆಗೆ ಪೆಟ್ಟು ಬೀಳುವದು, ಮೊದಲು ಪ್ರಾಂತಭಾಷೆ ಬಳಿಕ ರಾಷ್ಟ್ರ ಭಾಷೆಯ ವಿಷಯ ವನ್ನು ವಿಚಾರಿಸುವ, ರಾಷ್ಟ್ರ ಭಾಷೆ ನಮಗೇಕೆ ಇತ್ಯಾದಿ ಚಟ್ಟೆ ಎಷ್ಟೋ ಸಾರೆ ಏಳುವದು. ಇವೆರಡೂ ತಮ್ಮ ಮಯ್ಯಾದೆ ಹಾಗೂ ಕಾರ ಕ್ಷೇತ್ರಗಳನ್ನು ಕಾಯ್ದುಕೊಂಡಿದ್ದರೆ ಎರಡೂ ಪರಸ್ಪರ ಪೋಷಕವೆ ಆಗಬಲ್ಲವು. ಪ್ರಾಂತ ಭಾಷೆಗೆ ಪ್ರಥಮಸ್ಥಾನ, ಮುಖ್ಯಮಾನ ಎಂಬಲ್ಲಿ ಸಂಶಯವೆ ಇಲ್ಲ. ರಾಷ್ಟ್ರ ಭಾಷಾ ಪ್ರಚಾರಕರು ಈ ಮಾತನ್ನು ಲಕ್ಷದಲ್ಲಿಟ್ಟು ಕೊಂಡು ಪ್ರಾಂತಭಾಷೆಯ ಬಗ್ಗೆ ಚೆನ್ನಾಗಿ ಆಸ್ಥೆಯನ್ನು ವಹಿಸಲಿಕ್ಕೆ ಬೇಕು. ಪ್ರಾಂತ ಭಾಷೆಯತ್ತ ದುಲ್ಲ ಕ್ಷಮಾಡಿ ರಾಷ್ಟ್ರಭಾಷೆ ಬೆಳೆಸಬೇಕೆನ್ನುವವರು ಉಸುಬಿನ ತಳಹದಿಯ ಮೇಲೆ ಕಟ್ಟಡ ಕಟ್ಟುತ್ತಿರುವರು. ರಾಷ್ಟ್ರ ಭಾಷೆ ತಮ್ಮ ತಾಯಿ, ಪ್ರಾಂತ ಭಾಷೆ ಮಲತಾಯಿ ಎಂದು ಅವರು ತಿಯಕೂಡದು, ಅದೇ ರೀತಿ ಪ್ರಾಂತ ಭಾಷಾಭಿಮಾನಿಗಳೂ ರಾಷ್ಟ್ರ ಭಾಷೆಯ ಬಗ್ಗೆ ಮಾತೃಭಾವವನ್ನಿಟ್ಟು ಕೊಳ್ಳ ಲಿಕ್ಕೆ ಬೇಕು. ಒಬ್ಬಳು ತಾಯಿಯಾದರೆ ಇನ್ನೊಬ್ಬಳು ಚಿಗವ್ವ ಎಂಬ ಭಾವನೆಯಿಂದ ಇಬ್ಬರೂ ನಡಕೊಳ್ಳಬೇಕು. ನಾವಿಬ್ಬರೂ ಪರಕೀಯವಾದ ಇಂಗ್ಲೀಷ ಭಾಷೆಯ ದಾಸ್ಯದಿಂದ ಮುಕ್ತವಾಗಬೇಕಾಗಿದೆ ಎಂಬುದುರೇ ಮ ಕೂಡದು. ಹಿಂದುಸ್ತಾನವೆ೦ದರೊಂದು ಮೂರನೆ ವಟ್ಟದ ರೆಲ್ವೆನ್ನು ಬೃಯ ಅದರಲ್ಲಿ ಇಂಗ್ಲಿಷ್ ಟಿಕೇಟಲ್ಲದೆ ಬಂದು ಬಲಾತ್ಕಾರದಿಂದ ಇಡೀ<noinclude></noinclude>
q2g7cx0gr4dzjlhqk353we8bnxngs3n
ಪುಟ:Praantabhaashhe-Rashhtrabhaashhe.pdf/೫೭
104
113917
321230
309113
2026-05-20T07:09:08Z
Pragathi. BH
7585
321230
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೫೨—}}
ಒಂದು ಬಾಕು ಹಿಡಿದುಕೊಂಡು ಮಲಗಿಬಿಟ್ಟಿದೆ. ನಾವಿಬ್ಬರೂ ಸಾಂತ
ಭಾಷೆಗಳು ಹಾಗೂ ರಾಷ್ಟ್ರ ಭಾಷೆಗಳು ತಿಕೀಟು ಇದ್ದರೂ ಕೂಡಲು ಸ್ಥಳ
ವಿಲ್ಲದೆ ಗೇಣು ಚೋಟು ಜಾಗೆಗಾಗಿ ಪರಸ್ಪರ ಹೊಡೆದಾಡುತ್ತಿದ್ದೇವೆ, ಇಂಗ್ಲೀ
ಇನ್ನು ಚನ್ನಾಗಿ ಅಲ್ಲಾಡಿಸಿ ಎಬ್ಬಿಸಿ ತಿಕೀಟಿಲ್ಲದ್ದಕ್ಕಾಗಿ ಕೆಳಗಿಳಿಸಿಬಿಡುವೆನೆಂಬ
ಭಯಹಾಕಿ ಸರಿಯಾಗಿ ಕೂಡಿಸಿದರೆ ಇಬ್ಬರಿಗೂ ಇಂಬಾಗಿ ಕೂಡಲು ದೊರೆ
ಯುವದು. ಹಿಂದೂ ಮುಸಲ್ಮಾನರಿಬ್ಬರ ಡುಬ್ಬದ ಮೇಲೂ ಬ್ರಿಟಿಶರು
ಇನ್ನೂ ಥಡಿ ಬಿಗಿದು ಲಗಾಮು ಹಿಡಿದು ಕುಳಿತಿರುವಾಗ ಹಿಂದೂಸಭೆ
ಮುಸ್ಲಿಮ ಲೀಗದವರು ಪಾಕಿಸ್ತಾನ ಹಿಂದುಸ್ತಾನ ಎಂದು ಬಡಿದಾಡಿದಂತೆ
ಈ ಬಡಿದಾಟವಿದೆ. ಇದು ಪರಕೀಯರಿಗೆ ಅನುಕೂಲವೆ. ಸಾವಿರಾರು
ವರುಷಗಳಿಂದ ತನ್ನ ಸ್ಥಾನಮಾನಗಳನ್ನು ಕಾಯ್ದುಕೊಂಡು ಕಾಲೂರಿನಿಂತ
ಪ್ರಾಂತಭಾಷೆಗಳನ್ನು ಕದಲಿಸುವವರಾರು ಎಂಬ ಆತ್ಮವಿಶ್ವಾಸದಿಂದಲೂ
ಯಾವದೆ ಸಂಶಯ ಪಿಶಾಚಿಗೆ ಒಳಗಾಗದೆಯೂ ಪ್ರಾಂತ ಭಾಷಾ ಭಾಷಿಗಳು
ಸಾಗಬೇಕು. ರಾಷ್ಟ್ರ ಭಾಷಾ ಪ್ರಚಾರಕರು ತಮ್ಮ ನವೋತ್ಸಾಹದ ಅತಿರೇಕ
ದಿಂದ ತಾಳತಪ್ಪಿ ನಡೆಯದೆ ಪ್ರಾಂತಭಾಷೆಯ ಉದ್ಧಾರವೇ ರಾಷ್ಟ್ರಭಾಷೆಯ
ಪ್ರಕಾರದ ತಳಹದಿಯು, ಮೂಲಕೃಷಿ ಪ್ರಾಂತ ಭಾಷೆಯದು, ಅಡ್ಡ ಬೆಳೆ
ರಾಷ್ಟ್ರಭಾಷೆಯದು ಎಂಬದನ್ನು ಲಕ್ಷದಲ್ಲಿಟ್ಟುಕೊಂಡು ಮುಂದಡಿ
ಬೇಕು. ಅಂದರೆ ಪ್ರಾಂತಿಕ ಹಾಗೂ ರಾಷ್ಟ್ರೀಯ ಹಿತ ಸಾಧನದ ಸುಂದರ
ಸಮ್ಮೇಳವಾಗಬಲ್ಲದು.
{{gap}}ಹಿಂದಿ-ಊರು ಎಂಬದೊಂದು ಬಹಳ ದೊಡ್ಡ ವಾದವಿದೆ. ಅದರ
ಕಿಂಚಿತ್ ಕಲ್ಪನೆಯನ್ನು ಹಿಂದುಸ್ತಾನಿಯ ಇತಿಹಾಸವನ್ನು ಹೇಳುವಾಗ
ಕೊಡಲಾಗಿದೆ. ಸ್ವಾಭಾವಿಕವಾಗಿ ಈ ವಾದವು ಹಿಂದೀ ಊರು ಇವು ಮಾತೃ
ಭಾಷೆ ಪ್ರಾಂತಭಾಷೆಗಳಿದ್ದಲ್ಲಿ ಬಹಳ ತೀವ್ರಸ್ವರೂಪದವಾಗಿವೆ. ಎರಡೂ
ಬಣಗಳು ಆರೋಪಪ್ರತ್ಯಾರೋಪ ಮಾಡುವಲ್ಲಿ ನಿಮಗ್ನನಾಗಿರುವವು.
ಅವರ ತಪ್ಪು ಮೊದಲು, ಇವರ ತಪ್ಪು ಮೊದಲು ಎಂದು ನಿತ್ಯ
ವಾದವು ನಡೆಯುತಿದೆ. ಕ್ರಿಯೆ ಪ್ರತಿಕ್ರಿಯೆರೂಪವಾಗಿ ಹಿಂದಿ ಊದ್ದುವಾದ
ಗಳು ತಮ್ಮ ತಮ್ಮ ಭಾಷೆಯಲ್ಲಿ ಒಬ್ಬರು ಸಂಸ್ಕೃತವನ್ನು ಇನ್ನೊಬ್ಬರು
ಫಾರಸಿ ಅರಬಿಯನ್ನು ತುಂಬಲಾರಂಭಿಸಿರುವರು. ಲಿಪಿ ಬಗ್ಗೆಯೂ<noinclude></noinclude>
inwurcxenvtvp1s5pyn29qvxrtqvsn2
ಪುಟ:Praantabhaashhe-Rashhtrabhaashhe.pdf/೫೮
104
113918
321218
308860
2026-05-20T07:05:09Z
Pragathi. BH
7585
/* Validated */
321218
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೫೩—}}
ಒಬ್ಬರು ನಾಗರಿಯನ್ನೇ ಉಪಯೋಗಿಸುವರು. ಇನ್ನೊಬ್ಬರು ಊರು ಲಿಪಿ
ಯನ್ನೆ ಉಪಯೋಗಿಸುವರು. ಒಬ್ಬರು ಜರೂರ, ಕಚೇರಿ ಇಂಥ ರೂಢ
ವಿರುವ ಸುಲಭ ಊರು ಶಬ್ದಗಳನ್ನು ಕಿತ್ತಿ ಹಾಕಿ ಅವಶ್ಯ, ನ್ಯಾಯಾಸನ
ಎಂಬ ಕಠಿಣಶಬ್ದಗಳನ್ನು ಉಪಯೋಗಿಸಿದರೆ ಇನ್ನೊಬ್ಬರು ಭಾಷಾ, ಸಭಾ
ಮುಂತಾದ ಅತಿ ಸುಲಭ ಹಿಂದೀ ಶಬ್ದಗಳನ್ನು ತಪ್ಪಿ ಕೂಡ ಉಪಯೋಗಿಸುವ
ದಿಲ್ಲ, ನಾಗರೀ ಲಿಪಿಯ ಹೆಸರನ್ನು ಕೂಡ ಎತ್ತಗೊಡುವದಿಲ್ಲ. ಯಥಾರ
ವಾಗಿ ಎರಡೂ ಭಾಷೆಗಳು ಒಮ್ಮೆ ಅಂದರೆ ೧೯ನೆ ಶತಮಾನದ ಪ್ರಾರಂಭದ
ವರೆಗೆ ಒಂದೇ ಇದ್ದವು. ೧೨೩೫ರಲ್ಲಿ ಹಿಂದುಸ್ತಾನಿಯು (ಊರು ಲಿಪಿಯಲ್ಲಿ)
ಯುಕ್ತ ಪ್ರಾಂತ, ಬೇಹಾರಗಳಲ್ಲಿ ಕಚೇರಿಗಳ ಭಾಷೆಯಾಗಿತ್ತು. ೧೮೬೭ರಲ್ಲಿ
ಹಿಂದೀ ಚಳವಳಿಗೆ ಬಿಹಾರದಲ್ಲಿ ಪ್ರಾರಂಭವಾಯಿತು. ೧೯೦೦ರಲ್ಲಿ ಯುಕ್ತ
ಪ್ರಾಂತದಲ್ಲಿ ಹಿಂದೀ ಇದು ವೈಕಲ್ಪಿಕ ಕಚೇರಿ ಭಾಷೆಯಾಯಿತು. ೧೯೧೦ರಲ್ಲಿ
ಹಿಂದಿ ಸಾಹಿತ್ಯ ಸಮ್ಮೇಲನವು ಅಸ್ತಿತ್ವದಲ್ಲಿ ಬಂದಿತು. ಯುಕ್ತ ಪ್ರಾಂತ
ಹಾಗೂ ಬಿಹಾರಗಳಲ್ಲಿ ಹಿಂದೀ ಚಳವಳಿಯೂ ಬಹಳ ವೇಗದಿಂದ ಪಸರಿಸಿತು.
ಹಾಗೂ ಊರು ಹಿಂದೆ ಬೀಳುತ್ತ ನಡೆಯಿತು. ಇದರ ಸಾಕ್ಷಿಯೇನಂದರೆ,
೧೮೮೯-೯೯ರಲ್ಲಿ ಯುಕ್ತ ಪ್ರಾಂತದಲ್ಲಿ ೩೬೧ ೬೦ದಿ ಹಾಗೂ ೫೬೯ ಊರು
ಪುಸ್ತಕಗಳು ಬರೆಯಲಾದವು. ಅದೇ ೧೯೩೫-೩೬ರಲ್ಲಿ ೨೧೩೯ ಹಿಂದಿ
ಹಾಗೂ ೨೫೨ ಊರು ಪುಸ್ತಕಗಳು ಪ್ರಕಟಿಸಲಾದವು. ಹಿಂದಿಯ
ಪ್ರಗತಿ ಹೀಗೆ ನಡೆದಿರುವಾಗ ಅತ್ತ ಅಂಜುಮನ್ ತರಕ್ಕಿ ಊರು ಎಂಬ
ಸಂಸ್ಥೆಯ ಸ್ಥಾಪನೆ, ನೂರಕ್ಕೆ ೮೫ ಜನ ಊರು ತಿಳಿಯದವರಿದ್ದರೂ ಅವರ
ಮೇಲೆ ನಿಜಾಮ ಇಲಾಖೆಯಲ್ಲಿ ಊರುವಿನ ಜುಲುಮೆ, ಹಾಗೂ ಉಸ್ಮಾ
ನಿಯಾ ವಿಶ್ವವಿದ್ಯಾಲಯದ ಬೋಧಭಾಷೆ ಊರು ಇರುವಿಕೆ ಇವು
ನಡೆದಿವೆ. ಒಟ್ಟಿಗೆ ಈ ವಾದವು ವಿಕೋಪಕ್ಕೆ ಹೋಗುತಲಿದೆ
ಹಾಗೂ ಅದಕ್ಕೆ ಹಿಂದೂ ಮುಸಲ್ಮಾನ ತಂಟೆಯ ಬಣ್ಣ ಬಂದುದ
ರಿಂದ ಅಭಿನಿವೇಶ, ಕಟುತನ ಇವು ಆ ವಾದದಲ್ಲಿ ಸಾಕಷ್ಟು ಸೇರಿವೆ.
ಆದರೆ ನಾವು ಇದರಲ್ಲಿ ಸೇರುವ ಕಾರಣವೂ ಇಲ್ಲ, ಇದರಿಂದ ಗಾಬರಿಗೊಳ್ಳುವ
ಕಾರಣವೂ ಇಲ್ಲ. ಈ ಬಗ್ಗೆ ಅನೇಕರು ಸಾಂಗೋಪಾಂಗವಾಗಿ ಬರೆದಿರುವರು.
ಅವರೆಲ್ಲರ ವಿಚಾರಗಳನ್ನು ಸೂಕ್ಷ್ಮ ರೀತಿಯಿಂದ ಪರಿಶೀಲಿಸಿದರೆ ಈ ಕೆಳಗಿನ
ನಿಶ್ಚಯಕ್ಕೆ ನಾವು ಬರಬೇಕಾಗುವದು. ನಾವು ಈ ವಾದದಲ್ಲಿ ಸೇರಬಾರದು.<noinclude></noinclude>
p29ycmxqx638pqdbr9zjlgpxvwnfxc4
321219
321218
2026-05-20T07:05:19Z
Shreesha Sharma
7840
321219
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೫೩—}}
ಒಬ್ಬರು ನಾಗರಿಯನ್ನೇ ಉಪಯೋಗಿಸುವರು. ಇನ್ನೊಬ್ಬರು ಊರು ಲಿಪಿ
ಯನ್ನೆ ಉಪಯೋಗಿಸುವರು. ಒಬ್ಬರು ಜರೂರ, ಕಚೇರಿ ಇಂಥ ರೂಢ
ವಿರುವ ಸುಲಭ ಊರು ಶಬ್ದಗಳನ್ನು ಕಿತ್ತಿ ಹಾಕಿ ಅವಶ್ಯ, ನ್ಯಾಯಾಸನ
ಎಂಬ ಕಠಿಣಶಬ್ದಗಳನ್ನು ಉಪಯೋಗಿಸಿದರೆ ಇನ್ನೊಬ್ಬರು ಭಾಷಾ, ಸಭಾ
ಮುಂತಾದ ಅತಿ ಸುಲಭ ಹಿಂದೀ ಶಬ್ದಗಳನ್ನು ತಪ್ಪಿ ಕೂಡ ಉಪಯೋಗಿಸುವ
ದಿಲ್ಲ, ನಾಗರೀ ಲಿಪಿಯ ಹೆಸರನ್ನು ಕೂಡ ಎತ್ತಗೊಡುವದಿಲ್ಲ. ಯಥಾರ
ವಾಗಿ ಎರಡೂ ಭಾಷೆಗಳು ಒಮ್ಮೆ ಅಂದರೆ ೧೯ನೆ ಶತಮಾನದ ಪ್ರಾರಂಭದ
ವರೆಗೆ ಒಂದೇ ಇದ್ದವು. ೧೨೩೫ರಲ್ಲಿ ಹಿಂದುಸ್ತಾನಿಯು (ಊರು ಲಿಪಿಯಲ್ಲಿ)
ಯುಕ್ತ ಪ್ರಾಂತ, ಬೇಹಾರಗಳಲ್ಲಿ ಕಚೇರಿಗಳ ಭಾಷೆಯಾಗಿತ್ತು. ೧೮೬೭ರಲ್ಲಿ
ಹಿಂದೀ ಚಳವಳಿಗೆ ಬಿಹಾರದಲ್ಲಿ ಪ್ರಾರಂಭವಾಯಿತು. ೧೯೦೦ರಲ್ಲಿ ಯುಕ್ತ
ಪ್ರಾಂತದಲ್ಲಿ ಹಿಂದೀ ಇದು ವೈಕಲ್ಪಿಕ ಕಚೇರಿ ಭಾಷೆಯಾಯಿತು. ೧೯೧೦ರಲ್ಲಿ
ಹಿಂದಿ ಸಾಹಿತ್ಯ ಸಮ್ಮೇಲನವು ಅಸ್ತಿತ್ವದಲ್ಲಿ ಬಂದಿತು. ಯುಕ್ತ ಪ್ರಾಂತ
ಹಾಗೂ ಬಿಹಾರಗಳಲ್ಲಿ ಹಿಂದೀ ಚಳವಳಿಯೂ ಬಹಳ ವೇಗದಿಂದ ಪಸರಿಸಿತು.
ಹಾಗೂ ಊರು ಹಿಂದೆ ಬೀಳುತ್ತ ನಡೆಯಿತು. ಇದರ ಸಾಕ್ಷಿಯೇನಂದರೆ,
೧೮೮೯-೯೯ರಲ್ಲಿ ಯುಕ್ತ ಪ್ರಾಂತದಲ್ಲಿ ೩೬೧ ೬೦ದಿ ಹಾಗೂ ೫೬೯ ಊರು
ಪುಸ್ತಕಗಳು ಬರೆಯಲಾದವು. ಅದೇ ೧೯೩೫-೩೬ರಲ್ಲಿ ೨೧೩೯ ಹಿಂದಿ
ಹಾಗೂ ೨೫೨ ಊರು ಪುಸ್ತಕಗಳು ಪ್ರಕಟಿಸಲಾದವು. ಹಿಂದಿಯ
ಪ್ರಗತಿ ಹೀಗೆ ನಡೆದಿರುವಾಗ ಅತ್ತ ಅಂಜುಮನ್ ತರಕ್ಕಿ ಊರು ಎಂಬ
ಸಂಸ್ಥೆಯ ಸ್ಥಾಪನೆ, ನೂರಕ್ಕೆ ೮೫ ಜನ ಊರು ತಿಳಿಯದವರಿದ್ದರೂ ಅವರ
ಮೇಲೆ ನಿಜಾಮ ಇಲಾಖೆಯಲ್ಲಿ ಊರುವಿನ ಜುಲುಮೆ, ಹಾಗೂ ಉಸ್ಮಾ
ನಿಯಾ ವಿಶ್ವವಿದ್ಯಾಲಯದ ಬೋಧಭಾಷೆ ಊರು ಇರುವಿಕೆ ಇವು
ನಡೆದಿವೆ. ಒಟ್ಟಿಗೆ ಈ ವಾದವು ವಿಕೋಪಕ್ಕೆ ಹೋಗುತಲಿದೆ
ಹಾಗೂ ಅದಕ್ಕೆ ಹಿಂದೂ ಮುಸಲ್ಮಾನ ತಂಟೆಯ ಬಣ್ಣ ಬಂದುದ
ರಿಂದ ಅಭಿನಿವೇಶ, ಕಟುತನ ಇವು ಆ ವಾದದಲ್ಲಿ ಸಾಕಷ್ಟು ಸೇರಿವೆ.
ಆದರೆ ನಾವು ಇದರಲ್ಲಿ ಸೇರುವ ಕಾರಣವೂ ಇಲ್ಲ, ಇದರಿಂದ ಗಾಬರಿಗೊಳ್ಳುವ
ಕಾರಣವೂ ಇಲ್ಲ. ಈ ಬಗ್ಗೆ ಅನೇಕರು ಸಾಂಗೋಪಾಂಗವಾಗಿ ಬರೆದಿರುವರು.
ಅವರೆಲ್ಲರ ವಿಚಾರಗಳನ್ನು ಸೂಕ್ಷ್ಮ ರೀತಿಯಿಂದ ಪರಿಶೀಲಿಸಿದರೆ ಈ ಕೆಳಗಿನ
ನಿಶ್ಚಯಕ್ಕೆ ನಾವು ಬರಬೇಕಾಗುವದು. ನಾವು ಈ ವಾದದಲ್ಲಿ ಸೇರಬಾರದು.<noinclude></noinclude>
lq8vet1jb57bl97d7utg5462fsnpsk1
ಪುಟ:Praantabhaashhe-Rashhtrabhaashhe.pdf/೫೯
104
113919
321220
308859
2026-05-20T07:05:20Z
Pragathi. BH
7585
/* Validated */
321220
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೫೪—}}
ಸಂಸ್ಕೃತಪ್ರಧಾನ ಹಿಂದೀ ಇಲ್ಲವೆ ಅರಬೀ ಫಾರಸಿ ಪ್ರಧಾನ ಊರು ಇವು
ಗಳಲ್ಲಿ ಯಾವ ಪಕ್ಷವನ್ನೂ ನಾವು ಹಿಡಿಯಬಾರದು. ಅವುಗಳನ್ನು ವಿರೋ
ಧಿಸಲಿಕ್ಕೂ ಹೋಗಬಾರದು ಅವು ತಮ್ಮ ಪಾಡಿಗೆ ಅಳಿಯಲಿ, ಉಳಿಯಲಿ,
ಬೆಳೆಯಲಿ, ಏನೇ ಮಾಡಲಿ, ನಾವು ರಾಷ್ಟ್ರೀಯ ದೃಷ್ಟಿಯಿಂದ ವಿಚಾರಮಾಡು
ವವರು ಕೇವಲ ವ್ಯವಹಾರಿಕ ಭಾಷೆಯೆಂದು ಹಿಂದುಸ್ತಾನಿಯನ್ನು ಸ್ವೀಕರಿಸು
ತಿರುವೆವು ಯಾವ ಭಾಷೆಯಲ್ಲಿ ಪಕ್ಷಪಾತವಿಲ್ಲದೆ ಸಾದಾ ಸಂಸ್ಕೃತ, ಫಾರಸಿ,
ಅರಬೀ ಶಬ್ದಗಳ ಸಂಮಿಶ್ರಣವಿರುವದೊ, ಯಾವುದರಲ್ಲಿ ಉತ್ತಮ ಲೋಕ
ಪ್ರಿಯ ಹಿಂದೀ ಊರು ಲೇಖಕರು ಉಪಯೋಗಿಸಿದ ಶಬ್ದಗಳ ಬಳಿಕೆ ಮಾಡ
ಲಾಗುವದೋ, ಯಾವದು ಉತ್ತರಹಿಂದುಸ್ತಾನದ ಜನಸಾಮಾನ್ಯರಿಗೆ
ಮೌಲವಿ ಪಂಡಿತರಿಗಲ್ಲ, ಸಹಜವಾಗಿ ತಿಳಿಯುವದೋ, ಯಾವುದು ನಾಗರಿ
ಊರು ಎರಡೂ ಲಿಸಿಗಳಲ್ಲಿ ಬರೆಯಬರುವದೋ ಆ ಭಾಷೆಯನ್ನು ನಾವು
ಹಿಂದುಸ್ತಾನಿಯೆಂದು ಬಳಸಬೇಕು.
ಇನ್ನು ಲಿಪಿಯ ವಾದವೊಂದುಳಿಯಿತು. ಹಲವರು ರೋನುನ್
ಲಿಪಿಯ ಪ್ರತಿಪಾದಕರಿರುವರು. ಕೆಲವು ದೃಷ್ಟಿಯಿಂದ ಅದು ಸಮಂಜಸ
ವೆನಿಸಿದರೂ ಅದು ಸಾಧ್ಯವಾದ ವಿಷಯವಲ್ಲ. ಆ ಲಿಪಿ ಅಪೂಕ್ಷವಿರುವದು
ಪೂರ್ ಪರಕೀಯವಿರುವದು, ವ್ಯವಹಾರಿಕ ದೃಷ್ಟಿಯಿಂದ, ತಮ್ಮಲಿಪಿಯ
ಬಗ್ಗೆ ಇದ್ದ ಆತ್ಮೀಯತೆ ಅಭಿಮಾನಾದಿಗಳ ದೃಷ್ಟಿಯಿಂದ ಪರಕೀಯ
ಎಂಬುದು ಸಲ್ಲದು ಎಂಬ ದೃಷ್ಟಿಯಿಂದ, ಹಿಂದು ಮುಸಲ್ಮಾನ ಬಾಂಧವರ
ಭಾವನೆಗಳ ದೃಷ್ಟಿಯಿಂದ, ಲಿಪಿಯ ಪೂರತೆಯ ದೃಷ್ಟಿಯಿಂದ ನಾಗರಿ
ಊರು ಲಿಪಿಗಳೇ ಯೋಗ್ಯವಾದವುಗಳೆನ್ನ ಬೇಕಾಗುವದು. ಆ ಎರಡೂ
ಲಿಪಿಗಳಲ್ಲಿ ಅವಶ್ಯವಿದ್ದ ಸುಧಾರಣೆಗಳನ್ನು ಮಾಡಲು ಯಾವ ಅಡ್ಡಿಯೂ
ಇರಕೂಡದು. ಅಂದರಾಯಿತು. ಸದ್ಯಕ್ಕೆ ಒಂದೇ ಲಿಪಿಯ ಹಟವನ್ನು
ಹಿಡಿಯುವದರಲ್ಲಿ ಅರ್ಥವಿಲ್ಲ
{{center|'''ಕೊನೆಮಾತು'''}}
ಪ್ರಾಂತಭಾಷೆ, ರಾಷ್ಟ್ರಭಾಷೆ, ಇವುಗಳ ಬಗ್ಗೆ ಆದಷ್ಟು ಸಂಕ್ಷೇಪದಲ್ಲಿ
ನಾಲ್ಕು ಮಾತುಗಳನ್ನು ಬರದುದಾಯಿತು. ಎರಡೂ ಒಂದಕ್ಕೊಂದು ಪೋಷಕ,<noinclude></noinclude>
ht3zyr50y270106hj99q4subivfx5fo
321221
321220
2026-05-20T07:05:35Z
Pragathi. BH
7585
321221
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೫೪—}}
ಸಂಸ್ಕೃತಪ್ರಧಾನ ಹಿಂದೀ ಇಲ್ಲವೆ ಅರಬೀ ಫಾರಸಿ ಪ್ರಧಾನ ಊರು ಇವು
ಗಳಲ್ಲಿ ಯಾವ ಪಕ್ಷವನ್ನೂ ನಾವು ಹಿಡಿಯಬಾರದು. ಅವುಗಳನ್ನು ವಿರೋ
ಧಿಸಲಿಕ್ಕೂ ಹೋಗಬಾರದು ಅವು ತಮ್ಮ ಪಾಡಿಗೆ ಅಳಿಯಲಿ, ಉಳಿಯಲಿ,
ಬೆಳೆಯಲಿ, ಏನೇ ಮಾಡಲಿ, ನಾವು ರಾಷ್ಟ್ರೀಯ ದೃಷ್ಟಿಯಿಂದ ವಿಚಾರಮಾಡು
ವವರು ಕೇವಲ ವ್ಯವಹಾರಿಕ ಭಾಷೆಯೆಂದು ಹಿಂದುಸ್ತಾನಿಯನ್ನು ಸ್ವೀಕರಿಸು
ತಿರುವೆವು ಯಾವ ಭಾಷೆಯಲ್ಲಿ ಪಕ್ಷಪಾತವಿಲ್ಲದೆ ಸಾದಾ ಸಂಸ್ಕೃತ, ಫಾರಸಿ,
ಅರಬೀ ಶಬ್ದಗಳ ಸಂಮಿಶ್ರಣವಿರುವದೊ, ಯಾವುದರಲ್ಲಿ ಉತ್ತಮ ಲೋಕ
ಪ್ರಿಯ ಹಿಂದೀ ಊರು ಲೇಖಕರು ಉಪಯೋಗಿಸಿದ ಶಬ್ದಗಳ ಬಳಿಕೆ ಮಾಡ
ಲಾಗುವದೋ, ಯಾವದು ಉತ್ತರಹಿಂದುಸ್ತಾನದ ಜನಸಾಮಾನ್ಯರಿಗೆ
ಮೌಲವಿ ಪಂಡಿತರಿಗಲ್ಲ, ಸಹಜವಾಗಿ ತಿಳಿಯುವದೋ, ಯಾವುದು ನಾಗರಿ
ಊರು ಎರಡೂ ಲಿಸಿಗಳಲ್ಲಿ ಬರೆಯಬರುವದೋ ಆ ಭಾಷೆಯನ್ನು ನಾವು
ಹಿಂದುಸ್ತಾನಿಯೆಂದು ಬಳಸಬೇಕು.
{{gap}}ಇನ್ನು ಲಿಪಿಯ ವಾದವೊಂದುಳಿಯಿತು. ಹಲವರು ರೋನುನ್
ಲಿಪಿಯ ಪ್ರತಿಪಾದಕರಿರುವರು. ಕೆಲವು ದೃಷ್ಟಿಯಿಂದ ಅದು ಸಮಂಜಸ
ವೆನಿಸಿದರೂ ಅದು ಸಾಧ್ಯವಾದ ವಿಷಯವಲ್ಲ. ಆ ಲಿಪಿ ಅಪೂಕ್ಷವಿರುವದು
ಪೂರ್ ಪರಕೀಯವಿರುವದು, ವ್ಯವಹಾರಿಕ ದೃಷ್ಟಿಯಿಂದ, ತಮ್ಮಲಿಪಿಯ
ಬಗ್ಗೆ ಇದ್ದ ಆತ್ಮೀಯತೆ ಅಭಿಮಾನಾದಿಗಳ ದೃಷ್ಟಿಯಿಂದ ಪರಕೀಯ
ಎಂಬುದು ಸಲ್ಲದು ಎಂಬ ದೃಷ್ಟಿಯಿಂದ, ಹಿಂದು ಮುಸಲ್ಮಾನ ಬಾಂಧವರ
ಭಾವನೆಗಳ ದೃಷ್ಟಿಯಿಂದ, ಲಿಪಿಯ ಪೂರತೆಯ ದೃಷ್ಟಿಯಿಂದ ನಾಗರಿ
ಊರು ಲಿಪಿಗಳೇ ಯೋಗ್ಯವಾದವುಗಳೆನ್ನ ಬೇಕಾಗುವದು. ಆ ಎರಡೂ
ಲಿಪಿಗಳಲ್ಲಿ ಅವಶ್ಯವಿದ್ದ ಸುಧಾರಣೆಗಳನ್ನು ಮಾಡಲು ಯಾವ ಅಡ್ಡಿಯೂ
ಇರಕೂಡದು. ಅಂದರಾಯಿತು. ಸದ್ಯಕ್ಕೆ ಒಂದೇ ಲಿಪಿಯ ಹಟವನ್ನು
ಹಿಡಿಯುವದರಲ್ಲಿ ಅರ್ಥವಿಲ್ಲ
{{center|'''ಕೊನೆಮಾತು'''}}
{{gap}}ಪ್ರಾಂತಭಾಷೆ, ರಾಷ್ಟ್ರಭಾಷೆ, ಇವುಗಳ ಬಗ್ಗೆ ಆದಷ್ಟು ಸಂಕ್ಷೇಪದಲ್ಲಿ
ನಾಲ್ಕು ಮಾತುಗಳನ್ನು ಬರದುದಾಯಿತು. ಎರಡೂ ಒಂದಕ್ಕೊಂದು ಪೋಷಕ,<noinclude></noinclude>
iqdgat6kr38rz5x0rvm0gcir2hjultl
ಪುಟ:Praantabhaashhe-Rashhtrabhaashhe.pdf/೬೦
104
113920
321223
308858
2026-05-20T07:05:46Z
Pragathi. BH
7585
/* Validated */
321223
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೫೫—}}
ಸಹಕಾರಿ. ಎರಡರಿಂದಲೂ ಸಾಧಿಸತಕ್ಕ ಮಾತು ಒಂದೇ, ಜನಜಾಗ್ರತಿ
ಜನಜೀವನದ ವಿಕಾಸ, ಎರಡೂ ತಮ್ಮ ತಮ್ಮ ಕಾವ್ಯರಂಗದಲ್ಲಿ ಕೆಲಸ ಮಾಡಿ
ದರೆ ಅವು ಅವಿರೋಧದಿಂದ ಬೆಳೆದು ಎರಡಕ್ಕೂ ಸಾಮಾನ್ಯವಾದ ಸಾಧ್ಯ
ವನ್ನು ಸಾಧಿಸುವವು ಪ್ರಾಂತವೆಂಬುದು ರಾಷ್ಟ್ರದ ಅಂಗವು. ರಾಷ್ಟ್ರದ
ಹೊರತು ಪ್ರಾಂತವೆಂಬುದಕ್ಕೆ ಅರವಿಲ್ಲ. ರಾಷ್ಟ್ರವೆಂಬುದು ಪ್ರಾಂತಗಳ
ಸಂಘ, ಪ್ರಾಂತಗಳ ಹೊರತು ರಾಷ್ಟ್ರವೆಂಬುದಕ್ಕೆ ಅಲ್ಪವಿಲ್ಲ. ಅದೇ ರೀತಿ
ಪ್ರಾಂತಭಾಷೆಗೆ ರಾಷ್ಟ್ರಭಾಷೆಯ ಆಪೇಕ್ಷೆ ಇದೆ, ರಾಷ್ಟ್ರ ಭಾಷೆಗೆ ಪ್ರಾಂತ
ಭಾಷೆಯ ಅಪೇಕ್ಷೆ ಇದೆ. ಇವೆರಡನ್ನೂ ಹೊಂದಿಸಿಕೊಂಡು ಹೋಗುವದು
ಕ್ರಮಪ್ರಾಪ್ತವು. ದೂರದೃಷ್ಟಿಯ ಲಕ್ಷಣವು, ಸಂಘಟಿತ ತೇಜಸ್ವಿ ಜೀವ
ನಕ್ಕೆ ಅವಶ್ಯವು ಪ್ರಾಂತಗಳಲ್ಲಿ ವಿವಿಧತೆ ಇದೆ. ರಾಷ್ಟ್ರದಲ್ಲಿ ಏಕಸೂತ್ರತೆ
ಇದೆ. ಪ್ರಾಂತಗಳಲ್ಲಿ ಭಿನ್ನತೆ ಇದ್ದರೂ ಭೇದಭಾವವುಂಟಾಗಬಾರದೆಂದಿ
ದ್ದರೆ ಏಕರಾಷ್ಟ್ರೀಯತೆಯ ಛತ್ರವು ಅವಶ್ಯವು. ಒಂದೇ ಭೂಭಾಗ, ಒಂದೇ
ರಾಷ್ಟ್ರಧ್ವಜ, ಒಂದೇ - ರಾಷ್ಟ್ರಗೀತ, ಒಂದೇ ಸಮವಸ್ತ್ರ, ಒಂದೇ ಭಾವನೆ
ಹೇಗೋ ಹಾಗೆಯೇ ಒಂದೇ ರಾಷ್ಟ್ರ ಭಾಷೆ ಇದು ಏಕತೆಯ ಕುರುಹು. ಈ ಎಲ್ಲ
ಮಾತುಗಳನ್ನು ಆನುಲಕ್ಷಿಸಿ ಕಾಟಕಸ್ಥರು ನವಯುಗದಲ್ಲಿ ಕಾಲಿಡಲಿ,
ಜನರ ಅಂತಃಕರಣದ ತಂತಿಗಳನ್ನು ಮಿಡಿದು ಅದರಲ್ಲಿ ವೀರ ಸಂಗೀತವನ್ನು
ಹುಟ್ಟಿಸಲಿ ಅಜ್ಞಾನನಿರಸನ ಮೂಲಕ, ಜ್ಞಾನಪೂರಕ ಹೋರಾಡಿ
ಸ್ವತಂತ್ರ ಹಿಂದುಸ್ತಾನದಲ್ಲಿ ಏಕತಂತ್ರ ಕಾಟಕವನ್ನು ಪಡೆಯಲಿ.
ಕಾಂಗ್ರೆಸ್ಸು, ಸ್ವಾತಂತ್ರ್ಯದ ಅಧಿದೇವತೆಯಾದ ರಾಷ್ಟ್ರ ಸಭೆ ಎಲ್ಲರಿಗೂ ಬಲ
ತೇಜಸಾಹಸಗಳನ್ನು ಕೊಟ್ಟು ಅಖಂಡಸೇವೆ ಪಡೆಯಲಿ, ಹಿಂದುಸ್ತಾನ
ನೈತಿಕ ತೇಜಿಸ್ಸಿನ ತವರೂರಾಗಿ ಮೆರೆದು ಜಗತ್ತಿಗೆ ಮಾರ್ಗದಶ್ಯಕವಾಗಲಿ.<noinclude></noinclude>
7spyt6vsdfs9vujp1sra1fmpwtrnq6u
ಪುಟ:Praantabhaashhe-Rashhtrabhaashhe.pdf/೬೩
104
113923
321224
308847
2026-05-20T07:05:54Z
Shreesha Sharma
7840
/* Validated */
321224
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೫೮—}}
{{Right|ಭಾಷೆಯವರು}}
'' '' ೪೦೫೩ ದೇವನಾಗರಿ ಲಿಪಿ ಉಪಯೋಗಿಸುವರು
'' '' ೨೬೬೨ ದೇವನಾಗರಿಗೆ ಹೋಲುವ ಲಿಪಿ
ಉಪಯೋಗಿಸುವರು.
ಇದರ ಅಕ್ಷ ೧೦೦೦೦ದಲ್ಲಿ ೬೭೧೫ ಜನಕ್ಕೆ ದೇವನಾಗಿರಿ ಲಿಪಿ ಅನುಕೂಲ.
(ಡ) ಹಿಂದಿ ಮತ್ತು ಊರು ಭಾಷೆಗಳ ವ್ಯಾಕರಣ, ವಾಕ್ಯರಚನೆ,
ಕ್ರಿಯಾಪದಗಳು, ಉಪಸರಗಳು, ಸಮುಚ್ಚಾಯಕಗಳು, ಸತ್ವ
ನಾಮಗಳು, ಸ್ವರಪದ್ಧತಿ, ಶಬ್ದ ಮತ್ತು ಕ್ರಿಯಾಪದಗಳನ್ನು
ನಡೆಸುವದು ಎಲ್ಲಿ ಒಂದೇ ಇರುವವು. ಇನ್ನೂ ಶಬ್ದಗಳ
ವಿಷಯದಲ್ಲಿ ಈ ಕೆಳಗಿನ ಮಾತುಗಳು ನೋಡುವಂತಿವೆ.
ಊರು ನಿಘಂಟು ಫರಂಗ ಈ ಅಸಫಿ ಎಂಬದರಲ್ಲಿ ೫೦೦೦೦
ಶಬ್ದಗಳು ಕೊಡಲಾಗಿವೆ.ಅವುಗಳಲ್ಲಿ ಈ ಕೆಳಗಿನಂತೆ ಶಬ್ದ ಗಳಿವೆ:-
೭೫೮೪ ಅರಬೀ, ೬೦೪೧ ಫಾರಸಿ, ೫೫೪ ಸಂಸ್ಕೃತ, ೫೦೦
ಇಂಗ್ಲೀಷ, ಹಿಂದೀ ಶಬ್ದ ಸಾಗರ ಎಂಬ ಹಿಂದಿ ನಿಘಂಟುವಿನಲ್ಲಿ
ಇವೆಲ್ಲ ಹಿಂದೀ ಶಬ್ದಗಳೆಂದು ಸ್ವೀಕರಿಸಲಾಗಿದೆ.
(ಇ) ಮುಸಲ್ಮಾನರೆಂಬವರೆಲ್ಲರೂ ಊರು ಮಾತೃಭಾಷೆಯುಳ್ಳವ
ರಿಲ್ಲ, ಅಥವಾ ಹಿಂದುಗಳೆನ್ನುವರೆಲ್ಲರೂ ಹಿಂದೀ (ಸಂಸ್ಕೃ ತ
ಪ್ರಧಾನ) ಮಾತೃಭಾಷೆಯುಳ್ಳವರಿಲ್ಲ. ಉದಾ: ಬಂಗಾಲದ
೩ಕೋಟಿ ಮುಸಲ್ಮಾನರ ಮಾತೃಭಾಷೆ ಬಂಗಾಲಿ ಇರುವದು,
ಮಲಯಾಳದ ೩೦ ಲಕ್ಷ ಮುಸಲ್ಮಾನರು ಮಲಯಾಳಿ ಮಾತೃ
ಭಾಷೆಯುಳ್ಳವರು ಇರುವರು,
(ಈ) ಹಿಂದುಸ್ತಾನದಲ್ಲಿ ಅಕ್ಷರಸ್ಪರ ಪ್ರಮಾಣವು ನೂರಕ್ಕೆ ೧೨ವಾತ್ರ
ಇಂಗ್ಲೀಷ್ ಬಲ್ಲವರು ನೂರಕ್ಕೆ ೧೨೫ ಅಥವಾ ಸಾವಿರಕ್ಕೆ
೧೨ವರೆ ಮಾತ್ರ.
(ಈ) ಕರಾಟಕದಲ್ಲಿ ಪ್ರಚಾರದಲ್ಲಿರುವ ಉಪಭಾಷೆಗಳಾದ ಕೊಡಗು,
ಬಡಗು, ತುಳು ಮಾತಾಡುವವರ ಸಂಖ್ಯೆ ಸಾಧಾರಣವಾಗಿ
ಕೊಡಗರು, ೧೫೦೦೦೦, ಬಡಗರು೧೫೪೦೦೦, ತುಳು ೫೦೦೦೦೦<noinclude></noinclude>
668wted0nhigpvbyvrl764x8s9va8cb
ಪುಟ:Praantabhaashhe-Rashhtrabhaashhe.pdf/೬೪
104
113924
321225
308832
2026-05-20T07:06:05Z
Shreesha Sharma
7840
/* Validated */
321225
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|—೫೯—}}
{{center|'''ಓದಬೇಕಾದ ಪುಸ್ತಕಗಳು'''}}
1. History of the Congress by Pattabhi
2. Constructive Programme by M. K. Gandhi
3. Constructive Programme by Rajendra Prasad
4. National Language for India by Z. A. Ahmad
5. The Question of Language by Jawaharlal Nehru
6. Educational Reconstruction by Aryanayakam:
7. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮದ್ರಾಸ-ವರದಿ<noinclude></noinclude>
q97obvm9pf7e76mt7t6qss1yt616kei
ಪುಟ:Praantabhaashhe-Rashhtrabhaashhe.pdf/೮
104
113925
321228
308658
2026-05-20T07:07:07Z
Shreesha Sharma
7840
/* Validated */
321228
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|— ೩—}}
ವಿದ್ದಂತೆ ಜೀವನ ವಿಕಾಸಕ್ಕೆ ಭಾಷೆ ಅತ್ಯವಶ್ಯ. ಭಾಷೆಯೆಂಬುದು ಇರದಿದ್ದರೆ
ಅಥವಾ ಬೆಳೆಯದಿದ್ದರೆ ಮಾನವನ ಗತಿ ಏನಾಗುತ್ತಿತ್ತು? ಮೂಕ ಮಾನವೀ
ಸಮಾಜವು ಬೆಳೆದು, ಕಲಿತು, ಸುಧಾರಿಸಿ ಪ್ರಗತಿ ಪಥದಲ್ಲಿ ಮುಂದಡಿ ಇಡ
ಬಹುದಾಗಿತ್ತೆ ? ಈಗ ಒಮ್ಮೆಲೆ ಭಾಷೆ ಎಂಬುದು ಮಾಯವಾದರೆ ಮನುಷ್ಯನ ಪಾಡು ಏನಾಗುವದು ? ಒಂದೇ ಒಂದು ಪೆಟ್ಟಿಗೆ ಎಲ್ಲರೂ ಮೂಕಾಗಿ
ಬಿಟ್ಟರೆಂದು ಕಲ್ಪಿಸುವ ! ಮನುಷ್ಯ ಬೇರೆ ಯಲ್ಲ, ಮಂಗ ಬೇರೆಯಲ್ಲ ಎಂಬ
ಸ್ಥಿತಿ ಉಂಟಾಗುವದು, ಮಂಗ ಮುಂತಾದ ಪ್ರಾಣಿಗಳು ಸಾವಿರಾರು ವರು
ಷಗಳಿಂದ ಒಂದೇ ಸ್ಥಿತಿಯಲ್ಲಿರುವವು. ಹತ್ತು ಸಾವಿರ ವರುಷದಾಚೆಗಿನ
ಮಂಗ ಈ ಹೊತ್ತಿನ ಮಂಗ ಇವುಗಳಲ್ಲಿ ಯಾವ ಅಂತರವೂ ಇಲ್ಲ
ಇಲ್ಲದಂತಾದರೆ ಮನುಷ್ಯನ ಅವಸ್ಥೆಯೂ ಪಶುಗಳಂತೆಯೇ ಆಗುವದು.
ಅವನೂ ನಿತ್ಯ ಪಶುಜೀವನಕ್ಕೆ ಆಹಾರ ನಿದ್ರಾಭಯ ಮೈಥುನಗಳಿಗೆ ಅವಶ್ಯ
ವಿರುವ ನಾಲ್ಕು ಸನ್ನೆಗಳನ್ನು ಮಾಡುತ್ತ, ಹಕ್ಕಿಗಳಂತೆ ನಾಲ್ಕು ಕಿಲಬಿಲ
ಶಬ್ದಗಳನ್ನು ಚ್ಚರಿಸುತ್ತ ಕಾಲಕಳೆಯುವವನಾಗುವನು. ಅವನ ಪ್ರಗತಿಯಾ
ಗಲು, ವಿಕಾಸಹೊಂದಿ ಈಗಿನ ಮಟ್ಟಿಗೆ ಬರಲು ಭಾಷೆ ಎಂಬುದು ಅತ್ಯಂತ
ಪ್ರಬಲವಾದ ಸಾಧನವಾಗಿದೆಯೆಂಬಲ್ಲಿ ತಿಲಮಾತ್ರ ಸಂಶಯವಿಲ್ಲ. ಭಾಷೆಯ
ಸಹಾಯವಿಲ್ಲದೆ ನಮ್ಮ ವಿಚಾರವು ವೇಗದಿಂದ ಸಾಗಲಾರದು. ವಿಚಾರ
ಮುಂದರಿಯದಿದ್ದರೆ ನಮ್ಮ ಮತಿಯು ಕುಂಠಿತವಾಗುವದು. ಮತಿಯು ತಡೆ
ದರೆ ನಮ್ಮ ಪ್ರಗತಿ ನಿಂತು ಹೋಗುವದು. ಈ ರೀತಿ ಮಾನವೀ ಮನೋ
ವಿಕಾಸಕ್ಕೆ ಭಾಷೆಯ ಬೆಳವಣಿಗೆ ಮುಖ್ಯ ಸಾಧನವು ಎಂದರೆ ತಪ್ಪಾಗದು,
ಕ್ಷಣಹೊತ್ತು ಭಾಷೆಯ ಸಹಾಯವಿಲ್ಲದೆ ನಾವು ವಿಚಾರ ಮಾಡಲು ಯತ್ನಿಸಿ
ನೋಡಬೇಕು. ಅಂದರೆ ಮೇಲಿನ ಮಾತಿನ ಯ ಥಾಕೃತೆಯು ಅನುಭವಕ್ಕೆ
ಬರುವದು.
{{gap}}ಭಾಷೆಯು ವಿಚಾರಕ್ಕೆ ಸಹಾಯಕವಿರುವಂತೆ ನಮ್ಮ ಭಾವನೆ ಅಭಿವ್ಯ
ಕ್ತಿಗೂ ಇದು ಒಳ್ಳೆ ಸಾಧನವು, ವಿಚಾರ, ಭಾವನೆ, ಕಲ್ಪನೆ ಇವೆಲ್ಲ ಅಮೂರ್ತ,
ಅವ್ಯಕ್ತ ವಸ್ತುಗಳು. ಅವು ಕಣ್ಣಿಗೆ ಕಾಣವು, ಕಿವಿಗೆ ಕೇಳವು, ಹಿಡಿತಕ್ಕೆ
ಬರವು. ಅವೇ ಭಾಷಾರೂಪವನ್ನು ಧರಿಸಿದವೆಂದರೆ ನಮಗೆ ಸ್ಪಷ್ಟವಾಗುವವು.
ಕಣ್ಣಿಗೆ ಕಾಣದ ಆತ್ಮವು ದೇಹದ ಮೂಲಕ ಮೈದೋರುವಂತೆ ಮನಸು<noinclude></noinclude>
0joz1nzcbxyng8muuozccbuzfxtf0mw
ಪುಟ:Praantabhaashhe-Rashhtrabhaashhe.pdf/೭
104
113926
321227
308660
2026-05-20T07:06:54Z
Shreesha Sharma
7840
/* Validated */
321227
proofread-page
text/x-wiki
<noinclude><pagequality level="4" user="Shreesha Sharma" /></noinclude>ಕ್ಷಾಂತಿತವಾಗುತ್ತಿತ್ತು ಅವರ ಮುಖ ಅರಳುತ್ತಿತ್ತು. ಏನೋ ಒಂದು ಕಳ
ಕೊಂಡ ವಸ್ತು ಅವರಿಗೆ ದೊರೆತಷ್ಟು ಆನಂದವಾಗುತ್ತಿತ್ತು 'ಹೌಂದು,
ಕನ್ನಡ ಶಾಲೆಗಳಾದರೆ ನಮ್ಮ ಹುಡುಗರಿಗೆ ಹಬ್ಬ ಹಾಂಗೆ ಎಂದಾದೋತು?'
ಎಂದು ಎಲ್ಲರೂ ಕುತೂಹಲದಿಂದ ಕೇಳುತ್ತಿದ್ದರು.
{{gap}}ಬಡಗು ಕನ್ನಡದ ಕೇವಲ ಒಂದು ಉಪಭಾಷೆ. ಆದು ಬಾಯಿ ಭಾಷೆ
ಮಾತ್ರ. ಅದಕ್ಕೆ ಲಿಪಿ ಇಲ್ಲ. ಕನ್ನಡವೆ ಬಡಗರ ಸಾಂಸ್ಕೃತಿ - ಭಾಷೆ, ಆದು
ದರಿಂದ ಅಂದಚಂದ ಸವಿಗನ್ನಡದಲ್ಲಿ ಅವರೊಡನೆ ಮಾತಾಡಿದರೆ ಅವರಿಗೆ ಅತಿ
ಪ್ರೀತಿ, ವಿಶೇಷ ಉತ್ಸಾಹ, ಕಟ್ಟು ಕತ್ತಲೆಯಲ್ಲಿ ಗುರುತಿನ ಧ್ವನಿ ಕೇಳಿದಂತೆ,
ಕಾಡಡವಿಯಲ್ಲಿ ಸಂಗೀತದ ಸವಿಸ್ವರ ಕಿವಿಗೆ ಬಿದ್ದಂತೆ
{{gap}}ಈ ಅವರ ಕುತೂಹಲದ, ಹರುಷದ ಉತ್ಸಾಹದ ಗುಟ್ಟೇನು? ನೀಲಗಿರಿ
ಜಿಲ್ಲೆ ಮೈಸೂರವರ ಕೈ ಬಿಟ್ಟು ಬ್ರಿಟಿಶರ ಕೈವಶವಾದಂವಿನಿಂದ ಅದು ತಮಿಳು
ಭಾಷೆಯ ವಕ್ಷಸ್ಸಿಗೆ ಈಡಾಗಿದೆ. ಎಲ್ಲಿ ನೋಡಿದರೂ ತಮಿಳೇ ತಮಿಳು.
ಹೀಗೆ ಸುಮಾರು ನೂರು ವರುಷ ನಡೆಯುತ್ತ ಬಂದಿದ್ದ ರೂ ತಮಿಳು ಅಲ್ಲಿ
ನಾಟಿಲ್ಲ, ಕನ್ನಡ ಕಾಲುಕಿತ್ತಿಲ್ಲ. ಇಂದಿಗೂ ಅವರಿಗೆ ತಮಿಳು ಎಂದರೆ
ಎಡಚೆಡಚು, ತಲೆಶೂಲಿ, ಹಲ್ಲಲ್ಲದವರಿಗೆ ಕಡಲೆ ಕೊಟ್ಟ೦ತ. ಅವನ್ನು
ನೀರಲ್ಲಿ ನೆಸಿಸಿ ನುಣ್ಣಗೆ ಮಾಡಿ ತಿನ್ನ ಲೆತ್ನಿಸಬೇಕು. ಆದರೂ ಹೊಟ್ಟೆ ತುಂಬು
ವಂತಿಲ್ಲ ಸಮಾಧಾನವಾಗುವಂತಿಲ್ಲ. ಕನ್ನಡವೆಂದೊಡನೆ ಅವರಿಗೆ ಸುಲಿದ
ಬಾಳೆಯ ಹಣ್ಣು. ಇಷ್ಟು ಅಜಗಜಾಂತರ ಇದಕ್ಕೆ ಕಾರಣ ಒಂದೇ, ಕನ್ನಡ
ಅವರ ಮಾತಿಗೆ ಹೊಂದಿದುದು, ಅವರ ಪರಿಚಯದ ಮಾತು, ಅವರ ತಾಯ್ತು
ಡಿಗೆ ಸಂಬಂಧಿಸಿದ್ದು, ಇತರ ಭಾಷೆಗಳು ಅವರಿಗೆ ಅಪರಿಚಿತ, ಜನ ಸಾಮಾನ್ಯ
ರಿಗೆ ಅವರವರ ಪರಿಚಯದ ಭಾಷೆಯಲ್ಲಿಯೆ ವಿದ್ಯೆ ಬುದ್ಧಿಗಳನ್ನು ಕಲಿಸಿದರೆ
ಅದು ಒಗ್ಗುವದು. ಇಲ್ಲದಿದ್ದರೆ ಅರಗದು ಅವರಿಗೆ ಗಡಚಾಗುವದು. ಅವರು
ಹೆಚ್ಚಿನ ಜ್ಞಾನ, ವಿಕಾಸ, ಕತ್ವಗಳಿಗೆ ಎರವಾಗಿ ಕೇವಲ ಅಜ್ಞ, ಜಡ
ಜೀವನವನ್ನು ಕಳೆಯಬೇಕಾಗುವದು.
{{center|'''ಭಾಷೆ ಅಥವಾ ನುಡಿ'''}}
{{gap}}ಮಾನವೀ ಪ್ರಗತಿಯ ಇತಿಹಾಸದಲ್ಲಿ ಭಾಷೆಗೆ ಅಥವಾ ನುಡಿಗೆ ಅತ್ಯಂತ
ಮಹತ್ವದ ಸ್ಥಾನವಿರುವದು ಮೀನಿಗೆ ನೀರು, ಜೀವಕ್ಕೆ ಉಸಿರು ಅವಶ್ಯ<noinclude></noinclude>
9vpkm3u3hha1a0ig6x1xwlbbq772s20
ಪುಟ:Praantabhaashhe-Rashhtrabhaashhe.pdf/೨೪
104
113946
321183
308700
2026-05-20T06:54:01Z
Pragathi. BH
7585
/* Validated */
321183
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೧೯—}}
ಹಾನಿಯುಂಟಾಗಿದೆ. ಜಗತ್ತಿನ ಯಾವದೇ ರಾಷ್ಟ್ರದಲ್ಲಿ ಪರಭಾಷೆಯೆಂಬುದು
ಬೋಧ ಭಾಷೆ ಇಲ್ಲ. ಹಿಂದುಸ್ತಾನವೆ ಒಂದು ಅಂಥ ದವಿ ದೇಶವು.
ಬ್ರಿಟಿಶರ ಗುಲಾಮಗಿರಿಗೆ ಹಿಂದುಸ್ತಾನವು ಒಳಗಾದುದೆ ಈ ಸ್ಥಿತಿಗೆ ಕಾರಣ.
ನಮ್ಮ ತರುಣರ ಹತ್ತೆಂಟು ವರುಷಗಳು ಕೇವಲ ಒಂದು ಪರಕೀಯ ಭಾಷೆ
ಕಲಿಯುವುದರಲ್ಲಿಯೇ ಹಾಳಾಗಿ ಹೋಗುವವು. ವಿಚಾರಶಕ್ತಿ, ಕಲ್ಪನಾ
ಸಾಮರ ಮುಂತಾದವುಗಳ ಬೆಳವಣಿಗೆಗೆ ಕೃತ್ರಿಮ ತಡೆಯುಂಟಾಗುವದು.
ಭಾಷೆಯೆಂದರೆ ಕೇವಲ ಭಾಷೆಯಲ್ಲ. ಅದರೊಡನೆ ಅದರ ಗುಂಟಿ, ಆ
ಸಂಸ್ಕೃತಿ, ಆ ವಿಚಾರ ಪದ್ಧತಿ, ಆ ಮನೋರಚನೆ, ಆ ಪರಂಪರೆ ಇವೆಲ್ಲ
ಅನಿವಾರವಾಗಿ ಬಂದು ಸೇರುವವು. ಹೀಗಾಗಿ ನಮ್ಮ ತರುಣರು ವಿಚಾರ
ವಾಸ್ಯಕ್ಕೂ ಒಳಗಾಗುವರು. ನಮ್ಮ ಪ್ರಾಂತಿಕ ಭಾಷೆಗಳು ಹಾಗೂ ಅವು
ಗಳಲ್ಲಿ ಅಡಕವಾದ ಪೂರ ಪರಂಪರೆ ಸಂಸ್ಕೃತಿ ಮುಂತಾದವು ಮೂಲೆಗುಂಪು
ಆಗುವವು. ಅವುಗಳ ಬಗ್ಗೆ ನಮ್ಮಲ್ಲಿ ಒಂದು ಬಗೆಯ ಹೀನ ಬುದ್ಧಿಯು
ಉಂಟಾಗುವದು ಎಲ್ಲಕ್ಕೂ ಹೆಚ್ಚಿನ ಹಾನಿಯೆಂದರೆ ಇಂಗ್ಲೀಷ್ ಸುಶಿಕ್ಷಿತ
ರೆನಿಸಿಕೊಳ್ಳುವವರು ಜನಸಾಮ್ಯಾರೊಡನೆ ಬೆರೆಯದೆ ಆರಿಸಿಟ್ಟಂತೆ ಬೇರೆ
ಯುಳಿದು ಒಂದ ಪ್ರತ್ಯೇಕ ಜಾತಿಯವರಾದಂತೆ ವರಿಸುವರು, ಇದಲ್ಲದೆ
ತಮ್ಮ ವಿಚಾರಗಳನ್ನು ತಮ್ಮ ಭಾಷೆಯಲ್ಲಿ ಚನ್ನಾಗಿ ವ್ಯಕ್ತಮಾಡಲು ಅವರು
ಅಸಮಧ್ವರಾದುದು ಕಂಡುಬರುವದು. ಅವರು ಒಂದು ಬಗೆಯಿಂದ ಬ್ರಿಟ
ಶರ ಮಾನಸಪುತ್ರರಾಗಿ ಅವರ ರಾಜ್ಯಕಾರಭಾರದಲ್ಲಿ ಸಹಾಯಕರೂ ಅವರ
ಸಾಮ್ರಾಜ್ಯದ ಆಧಾರಸ್ತಂಭರೂ ಅವರ ವ್ಯಾಪಾರದ ಏಜಂಟರೂ ಆದಂತೆ
ಕಂಗೊಳಿಸುವರು. ಸುಮಾರು ೧೮೩೫ ರಲ್ಲಿ ಮೆಕಾಲೆ ಸಾಹೇಬರು ಹಿಂದು
ಸ್ನಾನದ ಶಿಕ್ಷಣ ಧೋರಣೆಯನ್ನು ನಿಶ್ಚಯಿಸಿದಂದಿನಿಂದ ಪ್ರಾಂತಿಕ ಭಾಷೆ
ಗಳತ್ತ ನಮ್ಮ ದುರಕ್ಷವಾಗುತ್ತ ನಡೆದಿದೆ. ಇನ್ನು ಇಂಗ್ಲೀಷ್ ಶಿಕ್ಷಣದಲ್ಲಿ
ಯಾದರೂ ಪ್ರಗತಿಯಾಗಿದೆಯೋ ಹೇಗೆ ಎಂಬುದನ್ನು ಪರೀಕ್ಷಿಸಿದರೆ ಈ
೧೧೦ ವರ್ಷಗಳಲ್ಲಿ ಇಂಗ್ಲೀಷ್ ಶಿಕ್ಷಿತರ ಪ್ರಮಾಣವು ನೂರಕ್ಕೆ ೧.೨೫ ಮಾತ್ರ
ಏರಿದೆ. ಹೀಗಾಗಿ ನಮ್ಮ ಸ್ಥಿತಿ 'ಇತೋಭ್ರಷ್ಟಸ್ತತೋಭ್ರಷ್ಟಃ' ಎಂಬಂತೆ
ಆಗಿದೆ.
{{gap}}ಸರಕಾರವು ಬದಲಾಗುವವರೆಗೆ ನಮಗೇನು ಮಾಡಲಿಕ್ಕಾಗುವದು<noinclude></noinclude>
ko396pcn1ldow8lc1zfy8nhapixp5gv
ಪುಟ:Praantabhaashhe-Rashhtrabhaashhe.pdf/೨೭
104
113963
321187
308722
2026-05-20T06:56:10Z
Pragathi. BH
7585
/* Validated */
321187
proofread-page
text/x-wiki
<noinclude><pagequality level="4" user="Pragathi. BH" /></noinclude>{{center|—೨೨—}}
ಲಾರಂಭಿಸಿದುವು. ಕನ್ನಡ ಲೇಖಕರ ಸಭೆಯೊಂದು ಧಾರವಾಡದಲ್ಲಿ ಕೂಡಿ
ಚರೆಗೆ ಪ್ರಾರಂಭವಾಯಿತು. ಆ ಮೊದಲು ವಿದ್ಯಾವರಕ ಸಂಘವೆಂಬದು
ಸ್ಥಾಪನವಾಗಿತ್ತು. ಮುಂದೆ ಕನ್ನಡ ಸಾಹಿತ್ಯ ಪರಿಷತ್ತು ನಿಲ್ದಾಣವಾಗಿ
ಜಾಗ್ರತಿಯ ಕೆಲಸವು ಮುಂದೆಸಾಗಿತು.
{{center|'''ಕಾಂಗ್ರೆಸ್ಸಿನ ಉತ್ತೇಜನ'''}}
{{gap}}ಭಾಷಾನುಗುಣ ಪ್ರಾಂತರಚನೆಯ ತತ್ವವನ್ನು ಕಾಂಗ್ರೆಸ್ಸು ತನ್ನ
ಘಟನೆಯಲ್ಲಿ ಸೇರಿಸುವದಕ್ಕು ಮೊದಲು ಲೋಕಮಾನ್ಯರು ತಮ್ಮ ಡೆಮಾ
ಕ್ರೆಟಿಕ್ ಸ್ವರಾಜ್ಯ ಪಕ್ಷದ ಘೋಷಣೆಯಲ್ಲಿ ಅದಕ್ಕೆ ಎಡೆಗೊಟ್ಟರು. ಆ
ತತ್ವಕ್ಕನುಸರಿಸಿ ಹಿಂದುಸ್ತಾನದಲ್ಲಿ ಆಡಳಿತದ ಪ್ರಾಂತಗಳ ಪುನರಚನೆಯಾಗ
ಬೇಕೆಂದು ಅವರು ಸಾರಿದರು. ಅವರು ಸ್ವತಃ ಅತ್ಯಂತ ಉಜ್ವಲ ಮರಾಠಿ
ಭಕ್ತರೂ ಆ ಭಾಷೆಯ ನಿಸ್ಸಿಮ ಸೇವಕರೂ ಇದ್ದರು. ಗಾಂಧೀಜಿಯವರು
ಕೂಡ ೧೯೧೯ರಲ್ಲಿ ತಾವು ಹೋಮ ಲ ಲೀಗದ ಅಧ್ಯಕ್ಷರಾದೊಡನೆ ಈ
ತತ್ವದ ಪ್ರಚಾರವನ್ನು ನಡೆಸಿದರು. ೧೯೨೨ರಲ್ಲಿಯ ಕಾಂಗ್ರೆಸ್ ಅಧಿವೇಶನದ
ನಂತರ ಈ ತತ್ವವು ಕಾಂಗ್ರೆಸ್ಸಿನ ಘಟನೆ ಮತ್ತು ಕಾರಭಾರದ ಮಟ್ಟಿಗೆ ಅಮಲಿ
ನಲ್ಲಿಯೆ ಬಂದುಬಿಟ್ಟಿತು, ಅದಕ್ಕೂ ಮೊದಲು ಬಿಹಾರಕ್ಕೆ ೧೯೦೮ರಲ್ಲಿ,
ಆಂಧ್ರಕ್ಕೆ ಮತ್ತು ಸಿಂಧಕ್ಕೆ ೧೯೧೭ರಲ್ಲಿ, ಕಾಂಗ್ರೆಸ್ ಪ್ರಾಂತಗಳು ದೊರೆ
ತಿದ್ದವು. ಕೃತ್ರಿಮ ರಾಜಕೀಯ ವಿಚ್ಛೇದನದ ಮೂಲಕ ಕರಾಟಕವು ೧೯
ಆಡಳಿತಗಳಲ್ಲಿ ಹರಿದು ಹಂಚಿಹೋಗಿದೆ. ತಾವು ಗೆಲ್ಲುತ್ತ ಹೋದಂತೆ
ಬ್ರಿಟಿಶರು ಕನ್ನಾಟಕದ ಭಾಗಗಳನ್ನು ಕೈಗೆ ಬಂದಂತೆ ಅತ್ತಿತ್ತ ಚಲ್ಲುತ್ತ
ಬಂದಿರುವರು. ಆದರೆ ೧೯೨೦ರಿಂದ ಎಲ್ಲ ಕಂಟಕಸ್ಥರಲ್ಲಿ ತಾವು ಒಂದು
ಎಂಬ ಏಕೋಭಾವನೆಯು ಬೆಳೆಯುತ್ತ ನಡೆದಿದೆ. ಸ್ವತಂತ್ರ ಭಾರತದ
ಬೇಡಿಕೆಯೊಡನೆ ಏಕತಂತ್ರ ಕಾಟಕದ ಬೇಡಿಕೆಯು ಪ್ರಬಲವಾಗುತ್ತ
ಬಂದಿದೆ. ರಾಜಕೀಯ, ಆಕ, ಸಾಂಸ್ಕೃತಿಕ ಚಟುವಟಿಕೆಗಳೆಲ್ಲ ಈಗ
ಅಖಿಲ ಕಂಟಕದ ತಳಹದಿಯ ಮೇಲೆ ನಡೆಯುವವಲ್ಲದೆ ಅವೆಲ್ಲ ಕನ್ನಡ
ದಲ್ಲಿ ನಡೆಯುವವು. ಕಾಟಕದ ಭಿನ್ನವಾದ ರಾಜಕೀಯ ವಿಭಾಗಗಳೆಲ್ಲ
ಅಸಾಮಾನ್ಯವಾದ ಬಳಿಕೆ ಬೆಳೆದಿದೆ ಕನ್ನಡ ಭಾಷೆಯ ಏಕೀಕರಣಕ್ಕೂ ಏಕ<noinclude></noinclude>
k6qie6afvteqw0q8fz2v41fimmw4otk