ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.3
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:Kalyaand-asvaami.pdf/೩೯
104
9266
321461
62092
2026-05-20T14:49:27Z
Shreelatha.Halemane
7642
/* Validated */
321461
proofread-page
text/x-wiki
<noinclude><pagequality level="4" user="Shreelatha.Halemane" />{{center|೩}}</noinclude>
{{gap}}ಅದು ಹುಣ್ಣಿಮೆಯ ಮಾರನೆಯ ಸಂಜೆ. ಚಂದಿರ ಎರಡು ಘಳಿಗೆ ತಡವಾಗಿ ಉದಿಸಿದ. ಪುಟ್ಟಬಸವನಾಗಲೆ ಹಿಂತಿರುಗಿದ್ದ. ಆತನ ಜತೆ ಯಲ್ಲೂ ಆನಂತರವೂ ಆರೆಂಟು ಜನ ಬಂದರು - ಮಹಾರಾಜರ ಆಪ್ತ ಕೋಟಯ ವೀರರನ್ನು ಕಾಣಲೆಂದು, ತಾವು ಗುಲಾಮರಾದ ದುರಂತ ಕಥೆಯನ್ನು ಕೇಳಲೆಂದು.<br />
{{gap}}ಬಲು ನಿಧಾನವಾಗಿ ಬಂದವನು ಚೆಟ್ಟಕುಡಿಯ. ಹಕ್ಕಿಗಳ ಚಿಲಿಪಿಲಿಗೆ ಪೊದೆಪೊದರುಗಳ ಸಂವಾದಕ್ಕೆ ಕಿವಿಗೊಡುತ್ತ, ವನದ ಭವ್ಯತೆಯಲ್ಲಿ ತನ್ನ ಇರುವಿಕೆಯನ್ನು ಮರೆಯಲೆತ್ನಿಸುತ್ತ, ಹೊತ್ತು ಕಳೆದಿದ್ದ ಆತನ ಹೃದಯ ಹಗುರವಾಗಿತ್ತು. ಈಗ ಜನ ನೆರೆದುದನ್ನು ನೋಡುತ್ತ ಆತನ ಮುಖ ಅರಳಿತು.<br />
{{gap}}" ಇವರೇ ಚೆಟ್ಟ ಕುಡಿಯ" ಎಂದ, ಉಳಿದವರ ಪರಿಚಯವನ್ನು ಆಗಲೇ ಮಾಡಿಕೊಟ್ಟಿದ್ದ ಪುಟ್ಟಬಸವ.<br />
{{gap}}ಜನ, ಗೌರವದಿಂದ ಚೆಟ್ಟಯನ್ನು ನೋಡಿದರು; ಆತನ ಭುಜದಿಂದ ಅದೇ ಆಗ ಕೆಳಕ್ಕಿಳಿದ ಬಂದೂಕನ್ನು ನೋಡಿದರು.<br />
{{gap}}__ ಹಾರುವ ಹಕ್ಕಿಯ ಕಣ್ಣಿಗೇ ಗುರಿ ಇಡುವ ಸಮರ್ಥ; ಅರಸರ ಶಿಕ್ಷಕ, ಆಪ್ತಮಿತ್ರ...<br />
{{gap}}ಆದರೆ, ಮುಗುಳುನಗೆಯ ಸರಸಸಲ್ಲಾಪದ ವಾತಾವರಣ ಅಲ್ಲಿರುವುದು ಸಾಧ್ಯವಿರಲಿಲ್ಲ. ಎಲ್ಲರನ್ನೂ ಒಂದಾಗಿ ಬಿಗಿದು ಕಟ್ಟುತ್ತಿದ್ದ ಭಾವವೇನೋ ಇತ್ತು ನಿಜ. ಹಾಗೆಯೇ ಅಲ್ಲಿಯೇ, ಪ್ರಭುತ್ವ ನಡೆಸಿತ್ತು-ಎಲ್ಲರ ಎದೆಗಳನ್ನು ಹಿಂಡುತ್ತಿದ್ದ ನೋವೂ ಕೂಡಾ.<br />
{{gap}}"ಬನ್ನಿ, ಬನ್ನಿ."<br />
{{gap}}ಜಗಲಿಯ ಗೋಡೆಗೊರಗಿ ಆ ನಾಲ್ವರೂ ಕೆಳಗೆ ಕುಳಿತರು. ಅವರಿಗೆದುರು, ಎಡದಲ್ಲಿ ಬಲದಲ್ಲಿ, ಅತ್ತ ಇತ್ತ, ಉಳಿದವರು ಜಾಗಹಿಡಿದರು. ದೂರ ದೂರ ಕುಳಿತಿದ್ದರೂ ಅವರೆಲ್ಲರ ದೃಷ್ಟಿಗಳು ಆ ನಾಲ್ವರ ಮೇಲೆಯೇ ನೆಟ್ಟಿದ್ದುವು. ಮೈಯೆಲ್ಲಾ ಕಿವಿಯಾಗಿತ್ತು ಅವರಿಗೆ,<noinclude><references/></noinclude>
tloez7t70jvvbs00blo09epqzs0qovm
ಪುಟ:Kalyaand-asvaami.pdf/೨೫
104
9270
321453
62075
2026-05-20T14:32:29Z
Shreelatha.Halemane
7642
/* Validated */
321453
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕತ್ತಲು ಕವಿದ ಕೊಡಗು|left=|right=೨೩}}
ವೀರಮ್ಮನನ್ನು ಒಯ್ದವರ ಊರಿನ, ಶ್ರೀಮಂಗಲನಾಡಿನ, ಹುಡುಗಿಯೇ ; - ಗಿರಿಜವ್ವ.
{{gap}}ಹೆಮ್ಮೆಯ ಅತ್ತೆಯಾಗಿ, ಮಗನೊಂದಿಗೆ ಸೊಸೆಯೊಂದಿಗೆ ಗಂಗವ್ವ, ಕಾಲ್ನಡಿಗೆಯ ಧೀರ್ಘ ಪ್ರವಾಸದ ಬಳಿಕ ಊರಿಗೆ ಮರುಳಿದಳು.
{{gap}}ಆಗಲೇ ಪುಟ್ಟಬಸವ ಹೇಳಿದುದು-
{{gap}}'ಒಬ್ಬೊಬ್ಬರಿಗೆ ಒಂದೊಂದು ಕುದುರೆ ಬೇಕು ನೋಡವ್ವ
{{gap}}{ತನ್ನ ಗಂಡ ಬಸವರಾಜಪ್ಪ ಸವಾರಿ ಮಾಡುತ್ತಿದ್ದ ಕುದುರೆ ಎಷ್ಟು ಸೊಗಸಾಗಿತ್ತು!}
{{gap}}ಡವಡವನೆ ಎದೆ ಹೊಡೆದುಕೊಳ್ಳುತಿದ್ದಂತೆ ಆಕೆ ಉತ್ತರವಿತ್ತಿದ್ದಳು:
{{gap}}'ಹುಂ! ಕುದುರೆಯಲ್ಲ, ಆನೆ ಬೇಕು .'
{{gap}}'ಆನೆ ಇದ್ದರೆ ಇನ್ನೂ ಪಸಂದಾಗಿರೆತೆ. ಎಲ್ಲರೂ ಒಟ್ಟಿಗೇ ಕುಂತ್ಕೋಬೌದು.'
{{gap}}ಮಾತಿನಲ್ಲಿ ಬಿಟ್ಟುಕೊಟ್ಟನೆ ಆತ?...ತನಗೆ ಗೊತ್ತೇ ಇರಲ್ಲಿಲ್ಲ.ಮದುವೆಯ ನಿಮಿತ್ತದ ಪ್ರವಾಸದಿಂದ ಆತನಿಗೆ ಹೊರ ಜಗತ್ತಿನೊಡನೆ ಸಂಪರ್ಕ ಲಭಿಸಿತ್ತು. ಆತನ ಕಿವಿಗೆ ಬಿದ್ದಿದ್ದುವು ಎಷ್ಟೋ ವಿಷಯಗಳು. ಒಳಗಿನ ಆಸೆಗಳೆಲ್ಲ ಗರಿಗೆದರಿದ್ದುವು.
{{gap}}ಒಂದು ಮಗನಾದ ಮೇಲೆ ಎಲ್ಲಿಗೂ ಹೋಗಲಾರ- ಎಂದು ಗಂಗವ್ವ ಲೆಕ್ಕ ಹಾಕಿದಳು, ವೀರಮ್ಮ ಹುಟ್ಟಿದ್ದಳೆಂದು ಬಸವರಾಜಪ್ಪನೇನು ಅಲೆದಾಟ ಬಿಡಲಿಲ್ಲವೆಂಬುದನ್ನು ಮರೆತು.
{{gap}}ಹುಡುಗಿ ಗಿರಿಜೆ ತಾಯಿಯಾಗುವ ದಿನವಂತು ದೂರವಿತ್ತು.ಪುಟ್ಟ ಬಸವ ಮಡಿಕೇರಿಗೊಮ್ಮೆ ಹೋಗಿಯೂ ಬಂದ. ಆಗ ತಾನು ಎಷ್ಟೊಂದು ಅತ್ತಿದ್ದಳು, ಪರಿಪರಿಯಾಗಿ ಕೇಳಿದ್ದಳು-ಹೇಳಿದ್ದಳು! ಒಂದು ಮಾತಿಗಾದರೂ ಬೆಲೆ ಕೊಟ್ಟನೆ ಆತ?
{{gap}}ಅದು ಕಿರಿಯ ವೀರರಾಜೇಂದ್ರ ಪಟ್ಟಕ್ಕೆ ಬಂದ ಕಾಲ. ಯುವಕನಾದ ರಾಜ, ಯುವಕರಾದ ಗೆಳೆಯರು. ಯಾವುದನ್ನು ಆಗಗೊಡಬಾರದೆಂದುಆಕೆ ಶಿವನಿಗೆ ಮೊರೆ ಇಟ್ಟಿದ್ದಳೊ ಅದು ಆಗಿಯೇ ಹೋಯಿತು. ಒಮ್ಮೆ ಪ್ರವಾಸ ಹೋದ ಪುಟ್ಟಬಸವ, ವೀರ ಯೋಧನಂತೆ ಪೋಷಾಕು<noinclude><references/></noinclude>
17w6nci6stsfry8ihum8nwdb5kek28s
ಪುಟ:Kalyaand-asvaami.pdf/೩೮
104
9274
321460
62091
2026-05-20T14:48:06Z
Shreelatha.Halemane
7642
/* Validated */
321460
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕಲ್ಯಾಣಸ್ವಾಮಿ|left=೩|right=}}
{{gap}}"ಅಡುಗೆ ಏನೇನು ಮಾಡಿಸೋಣ ನಂಜಯ್ಯನವರೆ?"<br />
{{gap}}ನಂಜಯ್ಯನೆಂದ:<br />
{{gap}}"ನೀವೂ ಸರಿ ಮನೆಯವರೇ ಆಗಿ ಹೋದಿರಿ. ಅತಿಥಿ ಸತ್ಕಾರದ ಯೋಚನೆಯೆ? ದಯವಿಟ್ಟು ಅಂಥದೊಂದೂ ಮಾಡ್ಬೇಡಿ."<br />
{{gap}}ಚೆಟ್ಟ ಕುಡಿಯನೂ ಧ್ವನಿ ಕೂಡಿಸಿದ :<br />
{{gap}}ಬರೇ ಅನ್ನ ಸಾರು ಸಾಕು ಅಣ್ಣ"<br />
{{gap}}--ಮಗನ ಅಭಿಪ್ರಾಯವನ್ನು ತಿಳಿದಾಗ ಗಂಗವ್ವ ಮೆಲ್ಲನೆ ನಿಟ್ಟುಸಿರು ಬಿಟ್ಟಳು.<br />
{{gap}}ಮಧ್ಯಾಹ್ನದ ಊಟವಾದ ಬಳಿಕ ಪುನಃ ನಿದ್ದೆ ಹೋಗಲು ಯಾರೂ ಇಷ್ಟಪಡಲಿಲ್ಲ.<br />
{{gap}}ಪುಟ್ಟಬಸವ ಹೇಳಿದ:<br />
{{gap}}" ಇಲ್ಲೇ ಪಕ್ಕದ ಹಳ್ಳಿಗೆ ಹೋಗಿಬರ್ತೀನಿ. ಕೂಗಳತೆ ದೂರದಲ್ಲಿ ಬೇರೆಯೂ ಒಂದೆರಡು ಮನೆಗಳು ಇದಾವೆ. ಅವರನ್ನೆಲ್ಲಾ ನೋಡ್ಕೋಂಡು ಬರ್ತೀನಿ."<br />
{{gap}}"ನಾನೂ ಬರ್ಲೇನು?" ಎಂದು ಕೇಳಿದ ನಂಜಯ್ಯ.<br />
{{gap}}"ಬೇಡ. ನೀವೆಲ್ಲಾ ಇಲ್ಲೇ ಇರಿ."<br />
{{gap}}"ಒಂದಷ್ಟು ಜನರನ್ನು ಕರಕೊಂಡು ಬಂದ್ಬಿಡಿ."<br />
{{gap}}"ನಾನು ಕರಿಯೋದೇನು? ಅವರಾಗೇ ಬರ್ತಾರೆ. ನೋಡ್ತಿರಿ."<br />
{{gap}}ಪುಟ್ಟಬಸವ ಹೋದ ಬಳಿಕ ನಂಜಯ್ಯ ಗಂಗವ್ವನೊಡನೆ ಮಾತನಾಡಿದ. ಕರ್ತುಕುಡಿಯ ಕುದುರೆಗಳಿಗೆ ಮಾಲೀಸು ಮಾಡಿದ, ಚಿಟ್ಟಿಯೊಬ್ಬನೇ ಬಂದೂಕನ್ನು ಹೆಗಲ ಮೇಲಿರಿಸಿ ಸುತ್ತುಮುತ್ತಲ ಕಾಡಿನ ಪರಿಚಯ ಮಾಡಿಕೊಳ್ಳಲೆಂದು ಕಾಲುಹಾಕಿದ.<noinclude><references/></noinclude>
sk9iymc38q7k99gt81ckfsb24uqe0la
ಪುಟ:Kalyaand-asvaami.pdf/೪೩
104
9280
321440
62107
2026-05-20T14:07:34Z
Shreelatha.Halemane
7642
/* Validated */
321440
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕತ್ತಲು ಕವಿದ ಕೊಡಗು|left=|right=೪೧}}
{{gap}}"ಈಗ ನಮಗೆ ರಕ್ಷಣೆಯ ಅಗತ್ಯವೇನೂ ಇಲ್ವಲ್ಲ."<br />
{{gap}}ನುರಿತ ರಾಜಕಾರಣಿ ಆ ಟೇಯ್ಲರ್,- ಬರಿಯ ವ್ಯಾಪಾರಿಯಲ್ಲ, ಸೇನಾನಿ ಮಾತ್ರವಲ್ಲ. ಆತನೆಂದ:<br />
{{gap}}"ಛೆ! ಛೆ! ನೀವು ತಪ್ಪು ತಿಳಿದುಕೊಂಡಿರಿ. ನಮ್ಮದು ಮಿತ್ರರೊಳಗಿನ ಒಪ್ಪಂದ. ನಮಗೆ ಕಷ್ಟ ಬಂದರೆ ನೀವು ಸಹಾಯ ಮಾಡಿರಿ. ನಿಮಗೆ ಕಷ್ಟ ಬಂದರೆ ನಾವು ಮಾಡುತ್ತೇವೆ."<br />
{{gap}}"ಹಾಗಾದರೆ ಆಗಬಹುದು." <br />
{{gap}}ಆ ಭೇಟಿಯ ಅಂತ್ಯದಲ್ಲಿ ಒಪ್ಪಂದವಾಯಿತು. 'ಶ್ರೀ ದೇವರು ಸೂರ್ಯ ಚಂದ್ರ ಭೂಮಿ ಸಾಕ್ಷಿಯಾಗಿ' ಪರಸ್ಪರ ಮೈತ್ರಿಯನ್ನು ಜಾಹೀರು ಮಾಡಿದ ಕರಾರು ಪತ್ರ ಸಿದ್ಧವಾಯಿತು. <br />
{{gap}}ಅದು ಸ್ನೇಹದ ಆಲಿಂಗನವಲ್ಲ; ಮರಣದ ಅಪ್ಪು ಹಿಡಿತ.<br />
{{gap}}ಪ್ರಾಮಾಣಿಕನಾದ ಸ್ನೇಹಪರನಾದ ವೀರರಾಜೇಂದ್ರ ಅವರನ್ನು ಊರಿಗೆ ಕರೆದ.<br />
{{gap}}"ಬನ್ನಿ ನಮ್ಮೂರಿಗೆ. ನಮ್ಮ ಆತಿಥ್ಯ ಸ್ವೀಕರಿಸಿ- ನಮ್ಮ ಕಾಡುಗಳಲ್ಲಿ ಬೇಟೆ ಸೊಗಸಾಗಿರ್ತೇತೆ. ಹೆಂಡತಿ ಮಕ್ಕಳನ್ನೂ ಕರಕೊಂಡು ಬನ್ನಿ. ನಾಲ್ಕು ದಿವಸ ಖುಷಿಯಾಗಿರಿ."<br />
{{gap}}ಅವರು ಬಂದರು. ಮಡಿಕೇರಿಯಲ್ಲಿ ಆಂಗ್ಲ ಅತಿಥಿಗಳಿಗಾಗಿ ಅರಸ ಒಂದು ನಿವಾಸವನ್ನೆ ಕಟ್ಟಿಸಿದ. ಬಂದವರು ಬೇಟೆಯಾಡಿದರು. ತಂಪಾದ ಹವಾಮಾನ ವಿಲಾಯತಿಯ ನೆನಪು ಮಾಡಿಕೊಟ್ಟಿತು ಅವರಿಗೆ, ಎಷ್ಟು ಆಯ ಕಟ್ಟಿನ ಭೂಭಾಗ! ಮಲೆಯಾಳದವರು, ಕನ್ನಡ ಜಿಲ್ಲೆಯವರು, ಪೂರ್ವಕ್ಕೆ ಮೈಸೊರು ಸೀಮೆಯವರು - ಎಲ್ಲರನ್ನೂ ಬಿಗಿಹಿಡಿತದಲ್ಲಿರಿಸಿಕೊಳ್ಳಲು ಅತ್ಯಗತ್ಯವಾದ ಪ್ರದೇಶ....<br />
{{gap}}ಅವರು ವೀರರಾಜೇಂದ್ರನಿಗೆಂದರು: <br />
{{gap}}"ನೀವು ಬೇಟೆಯಾಡುವಾಗ ನಮ್ಮವರ ಹಾಗೆ ಮಿಲಿಟರಿ ಪೋಷಾಕು ಧರಿಸಿದರೆ ಚೆನ್ನಾಗಿರುತ್ತದೆ."<br />
{{gap}}"ಹೌದೇ?"<br />
{{gap}}ಕೊಡಗಿನ ಅರಸು ಆಂಗ್ಲರಂತೆ ಉಡುಪು ಧರಿಸಿದ ಒಮ್ಮೊಮ್ಮೆ. ಅದೂ ಒಂದು ಠೀವಿ.<br /><noinclude><references/></noinclude>
fn34uvljtx8k58ytjsg1kl8z1k4wib4
ಪುಟ:Kalyaand-asvaami.pdf/೨೩
104
9290
321451
62072
2026-05-20T14:28:10Z
Shreelatha.Halemane
7642
/* Validated */
321451
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕತ್ತಲು ಕವಿದ ಕೊಡಗು|left=|right=೨೧}}
ಅಲ್ಲಿ ರಾತ್ರಿ, ಗೆಳೆಯರ ಬಳಗದಲ್ಲಿ ಆ ಮಾತು ಈ ಮಾತು ಹೊರಟಾಗ, ಒಂದು ಪ್ರಮಾದ ಸಂಭವಿಸಿತು. ಕುಡಿದು ಅಮಲೇರಿದವನೊಬ್ಬ ಅರಸನ ವಿಷಯವಾಗಿ ಲಘುವಾಗಿ ಮಾತನಾಡಿದ. ಅಲ್ಲಿಯೇ ಆತನ ಕೆನ್ನೆಗೆ ಏಟು ಬಿಗಿದ ಬಸವರಾಜಪ್ಪ. ಆದರೆ ಬೆಳಗಾಗುವುದರೊಳಗೆ ಬಸವರಾಜಪ್ಪನ ಕೊಲೆಯಾಗಿತ್ತು. ನಿದ್ದೆ ಹೋಗಿದ್ದವನ ಕತ್ತನ್ನೆ ಕಡಿದುಬಿಟ್ಟಿದ್ದರು. ಹಿಂದಿನ ರಾತ್ರೆ ಆತನಿಂದ ಅವಮಾನಿತನಾದವನ ಹಾಗೂ ಆತನ ಇಬ್ಬರು ಸಂಗಡಿಗರ ಪತ್ತೆಯೇ ಇರಲಿಲ್ಲ. ಅವರು ಆ ದೇಶವನ್ನೇ ಬಿಟ್ಟು ಮೈಸೂರಿನ ಕಡೆಗೆ ಓಡಿರಬೇಕೆಂಬುದು ಸ್ಪಷ್ಟವಾಗಿತ್ತು....
.
{{gap}}ಕರುಳು ಕಿತ್ತು ಬರುವಂತೆ ರೋದಿಸುತ್ತಿದ್ದ ಆ ಇಬ್ಬರು ಹೆಂಗಸರನ್ನೂ 'ಅವ್ವಾ, ಅಜ್ಜೀ' ಎನ್ನುತ್ತ ಆಳುತಿದ್ದ ಎಳೆಯ ಹುಡುಗಿಯನ್ನೂ ಸಂತೈಸಲೆತ್ನಿಸುತ್ತ ಓಲೆಕಾರ, ರಾಜರ ಇಸ್ತಿ ಹಾರನ್ನು ಓದಿ ಹೇಳಿದ್ದ.
{{gap}}ಅರಸರ ವಿಶೇಷ ಕರುಣೆಗೆ ಆ ಸಂಸಾರ ಪಾತ್ರವಾಗಿತ್ತು.ಆ ಪ್ರದೇಶವನ್ನೆಲ್ಲ ಬಸವರಾಜಪ್ಪನ ಕುಟುಂಬಕ್ಕೆ ಉಂಬಳಿಯಾಗಿ ರಾಜರು ಬಿಟ್ಟು ಕೊಟ್ಟಿದ್ದರು. ಒಂದು ಸಾವಿರ ವರಹದ ಹಣವಿತ್ತು ಜತೆಯಲ್ಲಿ.....
{{gap}}ಅದು ಎನಿದ್ದರೇನು? ಎಷ್ಟಿದ್ದರೇನು? ಹೆತ್ತತಾಯಿಗೆ ಮಗ ದೊರೆತನೆ? ಕಾಲನ ದೂತರು ಕಸಿದುಕೊಂಡಿದ್ದ ತನ್ನ ಕರಿಮಣಿಭಾಗ್ಯ ಮತ್ತೆ ಬಂತೆ? ವೀರಮ್ಮನಿಗೆ ತಂದೆ ಬಂದನೆ? ತನ್ನ ಬಸಿರಲ್ಲಿದ್ದ ಶಿಶುವಿಗೆ____
{{gap}}ಹಾಗೆ ಗಂಗವ್ವನಿಗೆ ಪುಟ್ಟಬಸವ ಹುಟ್ಟಿದ. ವೀರನೆಂದು ಹೆಸರಾಗಿದ್ದ ತಂದೆಯ ಮುಖವನ್ನೆ ಕಂಡರಿಯದ ಮಗು. ತನ್ನ ಮಗನೆ ಸೊಸೆಯ ಬಸಿರಲ್ಲಿ ಮತ್ತೆ ಜನ್ಮವೆತ್ತಿದನೆಂದು ಮುದುಕಿ ಭಾವಿಸಿ ಪುಟ್ಟ ಬಸವನ ಲಾಲನೆಪಾಲನೆ ಮಾಡಿದಳು. ಆ ಹುಡುಗ ಅಜ್ಜಿಯ ಬಾಯಿಯಿಂದ ಕೇಳಿದುದೆಲ್ಲ, ತಂದೆಯ ಸಾಹಸದ ವೀರ ಕಥೆಗಳನ್ನೇ.
{{gap}}ತೊದಲುಪದ ಮಾತಾಗಿ ಮಾರ್ಪಟ್ಟ ಮೊದಲಿನಿಂದಲೆ ಪುಟ್ಟಬಸವ ಹೇಳುತಿದ್ದ:
{{gap}}ದೊಡ್ಡೋನಾದಾಗ ನಾನು ರಾಜರ ಕಡಗೆ ಓಗ್ತೀನಿ. ಕುದುರೆ ಮೇಲೆ ಕುಂತ್ಕೋತೀನಿ. ನನ್ನ ಅಪ್ಪನ್ನ ಕೊಂದೋರ ಜತೆ ಯುದ್ಡ ಮಾಡ್ತೀನಿ.'<noinclude><references/></noinclude>
fh42iuif2eboq3rriqd1xtbkqthcog2
ಪುಟ:Kalyaand-asvaami.pdf/೨೪
104
9293
321452
62073
2026-05-20T14:29:49Z
Shreelatha.Halemane
7642
/* Validated */
321452
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕಲ್ಯಾಣಸ್ವಾಮಿ|left=೨೨|right=}}
{{gap}}ಮಗನ ಮಾತು ಕೇಳಿ ಆಗ ತನಗೆ ಹೆಮ್ಮೆ ಎನಿಸಿತ್ತು; ಭಯವೂ ಆಗಿತ್ತು
{{gap}}ಅನಂತರ ವೀರಮ್ಮನಿಗೆ ಮದುವೆಯಾಯಿತು. ಶ್ರೀಮಂಗಲನಾಡಿ ನಲ್ಲಿದ್ದ ಗಂಡನ ಮನೆಗೆ ಆಕೆ ಹೊರಟುಹೋದಳು.
{{gap}}ಅದು ಇಪ್ಪತ್ತೈದು ವರ್ಷಗಳ ಹಿಂದಿನ ಮಾತು.
{{gap}}ಹತ್ತಿರದ ಹಳ್ಳಿಯಿಂದ ಹೊಲೆಯರು ಬಂದು ಸಾಗುವಳಿಯ ಕೆಲಸದಲ್ಲಿ ನೆರವಾದರು.ಪುಟ್ಟಬಸವನಿಗೆ ಅಕ್ಷರಾಭ್ಯಾಸವಾಯಿತು. ವಾರಕ್ಕೊಮ್ಮೆ ನಾಲ್ಕು ಮೈಲಿಗಳ ದೂರದಿಂದ ಐಗಳೊಬ್ಬರು ಬಂದು ಆತನಿಗೆ ಪಾಠ ಹೇಳಿದರು.ಕವಣೆ ಬೀಸುವುದನ್ನು. ಮರವೇರುದನ್ನು, ಬೇಟಿಯಾಡುವುದನ್ನು ಗುರುಗಳಿಲ್ಲದೆಯೆ ಆತ ಕಲಿತ.
{{gap}}ಪುಟ್ಟಬಸವ ಹದಿನೈದರ ಹರೆಯದವನಾಗಿದ್ದಾಗ ಅಜ್ಜಿ ತೀರಿಕೊಂಡಳು.
{{gap}}ಆ ಬಳಿಕ ಮಗನೂ ತಾನೂ ಜತೆಯಾಗಿ ಕಳೆದ ದಿನಗಳು...
{{gap}}ತಂದೆಯಂತೆಯೆ ಹರವಾಗಿದ್ದ ಹಣೆ, ಜಡವಾಗಿಯೆ ಇದ್ದು ಒಮ್ಮಿಂದೊಮ್ಮೆಲೆ ತೀಕ್ಷ್ಣವಾಗುತ್ತಿದ್ದ ಕಣ್ಣುಗಳು, ಮಾಟವಾಗಿದ್ದ ಮೂಗು, ಎದ್ದು ತೋರುತಿದ್ದ ಗಲ್ಲ, ಎಣ್ಣೆಗಪ್ಪು ಮೈ. ಅಂಗಾಂಗಗಳೆಲ್ಲ ಹೃಷ್ಟಪುಷ್ಟವಾಗಿದ್ದುವು. ಆದರೂ ಲವಲವಿಕೆ ಇರಲಿಲ್ಲ ಹುಡುಗನಲ್ಲಿ.
{{gap}}ಅಜ್ಜಿ ಇದ್ದಷ್ಟು ಕಾಲವೂ ಮೊಮ್ಮಗನಿಗೆ ಹೇಳುತಿದ್ದಳು:
{{gap}}ನೀನು ಮನೆ ಬಿಟ್ಟು ಎಲ್ಲಿಗೂ ಓಗ್ಬಾರ್ದು;ಆಂ?"
{{gap}}ಗಂಗವ್ವ ಆ ಭಯವನ್ನು ಸೆರಗಿನಲ್ಲಿ ಕಟ್ಟಿಕೊಂಡೇ ಇದ್ದಳು. ಹರೆಯದ ಹೊಲೆಯರೊಡನೆ, ನೆರಹಳ್ಳಿಯ ಹೈದರೊಡನೆ, ಆತ ಮಾತನಾಡುತ್ತಿದ್ದಾಗಲೆಲ್ಲ ತಾಯಿ ಮರೆಯಲ್ಲಿ ನಿಂತು ಕಿವಿಗೊಡುತಿದ್ದಳು. ಅರಸರ, ಯುದ್ಡದ, ವೈರಿಗಳ ಮಾತೇನೋ ಇರುತ್ತಿತ್ತು. ಆದರೆ ಅದೆಲ್ಲಾ ಹಿರಿಯರು ಆಡುತಿದ್ದ ಮಾತುಕತೆಯ ಪ್ರತಿಧ್ವನಿ ಮಾತ್ರ....
{{gap}}ಮದುವೆಯಾಯಿತೆಂದರೆ ಮಗ ಎಲ್ಲಿಗೂ ಹೊರಡಲಾರ,ಎಂಬುದು ಗಂಗವ್ವನ ನಂಬಿಕೆಯಾಗಿತ್ತು. ಪುಟ್ಟಬಸವನಿಗಿನ್ನೂ ಇಪ್ಪತ್ತು ತುಂಬು ವುದಕ್ಕಿಲ್ಲ-ಆಗಲೆ ಆತ ಮದವಣಿಗನಾದ. ಆತನ ಕೈ ಹಿಡಿದುದು,<noinclude><references/></noinclude>
7g74cazphgda4md5awv6sulcbot92er
ಪುಟ:Kalyaand-asvaami.pdf/೨೪೩
104
9306
321471
97553
2026-05-20T15:06:11Z
Shreelatha.Halemane
7642
/* Validated */
321471
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಅಂಕದ ಪರದೆ ಇಳಿಯಿತು|left=|right=೨೩೯}}</noinclude>{{gap}}ಒಂದೇ ಹಾಡು ಯಾವಾಗಲು-ಅದೊಂದೇ ಹಾಡು.
{{gap}}ಗಿರಿಜಾ , ಬಸಿರಲ್ಲಿ ಪುಟ್ಟ ಬಸವನ ಅಂಶವನ್ನು ಹೊತ್ತಿದ್ದಳು ; ಹೃದಯದಲ್ಲಿ ಆಳವರಿಯದ ಅಂತ್ಯವಿಲ್ಲದ ನೋವನ್ನು.
<p style="text-indent: 1cm;">ಸ್ವಲ್ಪ ಸಮಯದ ಹಿಂದೆ ಸುದ್ದಿ ಕೇಳಿದ್ದುದು ಆಕೆಯೊಬ್ಬಳೇ,-ಅತ್ತೆಯಲ್ಲ.ಆಗ ಸಾಯಬೇಕೆನಿಸಿತ್ತು ಅವಳಿಗೆ , ತಾನೂ ನೇನುಹಾಕಿಕೊಂಡು. ಆದರೆ ಆಕೆಯ ಬಸಿರಲ್ಲಿತ್ತು ವಂಶವೃಕ್ಷದ ಕುಡಿ. ತನ್ನೊಡನೆ ಅದನ್ನು ಚಿವುಟಿ ಹಾಕುವ ಮನಸಗಲಿಲ್ಲ ಆ ಜೇವಕ್ಕೆ.</p>
<p style="text-indent: 1cm;">ಆಕೆಯೇನೋ ಸಯದೆ ಉಳಿದಳು. ಆದರೆ ತನ್ನ ಅತ್ತೆ , ನಿಜ ಸಂಗತಿ ತಿಳಿದಾಗ ಎದೆಯೊಡೆದು ಪ್ರಾಬಿಡಲಾರಳೆಂದು ಹೇಳುವುದು ಸಾದ್ಯವಿಲ್ಲ?</p>
<p style="text-indent: 1cm;">ಹಣೆಯ ಕುಂಕುಮವನ್ನು ಗಿತರಿಜಾ ಅಳಿಸಿದಳು , ಆ ವಿಷಯವಾಗಿ ಆಕ್ಷೇಪವೆತ್ತು ವಂತಿರಲಿಲ್ಲ ಕಣ್ಣು ಹಕಿದ ಮುದುಕಿ....</p>
<p style="text-indent: 1cm;">ಎಷ್ಟು ತಠಿನವಾಗಿದ್ದ ವಾರ್ತೆ! ಆಕೆ ಬಹಳ ದಿನ ನಂಬಲೇ ಇಲ್ಲ ಅದನ್ನು. ಕೊನೆಗೆ ಒಬ್ಬೊಬ್ಬರಾಗಿ ಆ ಹಳ್ಳಿಯವರು-ಅಲ್ಲಿ ಬದುಕಿ ಉಳಿದವರು-ಬಂದಿದ್ದರು. ಪ್ರತಿಯೊಬ್ಬರೂ ಅದೇ ವಾರ್ತೆಯನ್ನು ತಂದಿದ್ದರು.</p>
<p style="text-indent: 1cm;">ಸೋಮಯ್ಯನೂ ಬರಲ್ಲಿಲ್ಲ. ಒಟ್ಟು ಹದಿನಾಲ್ಕು ಜನರಿಗೆ ಗಲ್ಲಾಯಿತಂತೆ-ಹದಿನಾಲ್ಕು ಜನರಿಗೆ...</p>
<p style="text-indent: 1cm;">ಚಟ್ಟಯನ್ನೂ ಕಾರ್ತುವನ್ನೂ ದೋಣಿಯಲ್ಲಿ ತುಂಬಿ, ದೂರದ ಸಿಂಗಾಪುರ ಎನ್ನುವ ಯಾವುದೋ ಊರಿಗೆ ಒಯ್ದರಂತೆ..</p>
<p style="text-indent: 1cm;">ತಾನು ಕಂಡಿದ್ದ ಚನ್ನಯ್ಯ, ರಾಮಗೌಡ,..... ಪ್ರತಿಯೊಬ್ಬರನ್ನೂ ಕೊಂದೇಬಿಟ್ಟರು. </p>
<p style="text-indent: 1cm;">ಇನ್ನೆಷ್ಟೋಜನರಿಗೆ ಎಷ್ಟೆಷ್ಟೋ ವರ್ಷಗಳ ಕಾರಾಗೃಹ ವಾಸವಂತೆ....</p>
<p style="text-indent: 1cm;">ಅಯ್ಯೋ! ಹೀಗೂ ಆಗಬೇಕಾಗಿತ್ತೆ? ಇಂಥ ಶಿಕ್ಷೆಯನ್ನು ಕೊಡಬೇಕಾಗಿತ್ತು ದೇಚರು? ಯಾವ ತಪ್ಪಿಗೆ ಅಂತ ಈ ದಂಡನೆ?</p>
<p style="text-indent: 1cm;">...... ಬಸಿರಲ್ಲಿದ್ದ ಮಗು . ಗಂಡೇ. ಪುಟ್ಟಬಸವನ್ಂಥ ವೀರನಿಗೆ ಪುತ್ರಸಂತಾನವೇ. ಸಂದೇಹವೇನು? </p>
<p style="text-indent: 1cm;">ಆ ಜೀವಕ್ಕೋಸ್ಕರ ತನ್ನ ಬದುಕು.....</p>
<p style="text-indent: 1cm;">ಆದುದೇನೆಂಬುದನ್ನು ಅತ್ತೆಗೆ ಹೇಳಲೇಬಾರದೆಂದುಕೊಂಡಳು.<noinclude><references/></noinclude>
gtlia2b5b30xew7vas1552rdc8wc9o7
ಪುಟ:Kalyaand-asvaami.pdf/೨೪೪
104
9307
321472
90295
2026-05-20T15:07:11Z
Shreelatha.Halemane
7642
/* Validated */
321472
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಗಿರಿಜಾ , ಇತರರಿಂದುಮುದುಕಿಗೇನೂ ತಿಳಿಯದಂತೆಯೂ ನೋಡಿಕೊಂಡಳು.</p>
<p style="text-indent: 1cm;">ಮುದುಕಿಯ ಯೋಚನೆಗಳೋ ಕಡಿಕಡಿದು ಬಂದುವು . ಒಂದಕ್ಕೊಂದು ಸಂಬಂಧವಿರಲಿಲ್ಲ. ಮೆದುಳು ಸುಸೂತ್ರವಾಗಿ ಕೆಲಸ ಮಾಡಿತ್ತಲೇ ಇರಲಿಲ್ಲ.</p>
<p style="text-indent: 1cm;">ಮೂರು ತಿಂಗಳ ಮೇಲಾಯಿತು ಮಗ ಹೋಗಿ . ಇನ್ನೂ ಬರಲಿಲ್ಲವೆಂದರೆ? ಆಕೆ ಮಗನನ್ನು ಕುರಿತು ಆಕ್ಷೇಪಿಸಿದಳು :</p>
<p style="text-indent: 1cm;">'ಮನೇಲಿ ಹೆಂಡತಿ ಬಸುರಿ ಅನೋ ಗ್ಯಾನನಾದರೂ ಬೇಡವ ಇವನಿಗೆ. ?'ಮಗನ ವಿಷಯದಲ್ಲಿ ಕಾತರವೂ ಇತ್ತು ಆಕೆಗೆ .'ಪುತ್ತಬಸ್ಯ ಎಲಿದ್ದಾನೆ , ಊಟ ಉಪಚರ ಸರಿಯಾಗಿ ಆಗ್ತೇತೋ ಇಲ್ಲೋ.'</p>
<p style="text-indent: 1cm;">ಗರ್ಭಿಣಿ ಸೊಸೆಯ ನೆನಪಾದೊಡನೆ ಆಕೆ ಅನ್ನುತಿದ್ದಳು :</p>
<p style="text-indent: 1cm;">'ಬೆಚ್ಗೆ ಕಂಬಳಿ ಹೊವ್ಕೋ ಗಿರಿಜಾ , ಮಳೆಲಿ ಹಂಗೇ ಕೂತಿರ್ಬೇಡ.'</p>
<p style="text-indent: 1cm;">.....ರಾತ್ರೆ ಪ್ರತಿ ದಿನವೂ ಬಾಗಿಲ ಬಳಿ ಕುಳಿತು ನಿತ್ಯದ ಪಲ್ಲವಿಯನ್ನು ಹಡಿದ ಬಳಿಕ ನಿದ್ದೆ ಹೋಗುವ ಯತ್ನ....</p>
<p style="text-indent: 1cm;">ಅತ್ತೆಯ ಬಳಿಯಲ್ಲೆ ಇದ್ದ ಗಿರಿಜಾ ಉಗುಳು ನುಂಗಿ ಮೆಲ್ಲನೆ ಅಂದಳು ;</p>
<p style="text-indent: 1cm;">"ಏಳಿ ಅತ್ತೆಮ್ಮ . ಮಲಕ್ಕೊಳ್ಳಿ. ರಾತ್ರಿ ಭಾಳ ಆಯ್ತು."</p>
<p style="text-indent: 1cm;">ಗಂಗವ್ವ ಅಂದಳು ; "ನಡಿ ಮಗೂ , ಒಗಾನ.</p>
<p style="text-indent: 1cm;">ಸೊಸೆ ಎದ್ದು ನಿಂತು , ಒಳಕ್ಕೆ ಹೋಗಲು ಅತ್ತೆಗೆ ನೆರವಾದಳು . </p>
<p style="text-indent: 1cm;">ನೆಲದ ಜವುಗು ತಾಗದಿರಲೆಂದು ಹೊಣ ಹುಲ್ಲಿನ ಮೇಲೆ ಆಸಿದ್ದ ಚಾಪೆಗಳು ಅವರ ಹಾದಿ ನೋಡುತಿದ್ದವು . ಕೆಂಡವಿಲ್ಲದ ಬರಿಯ ಆಗ್ಗಿಷ್ಟಿಕೆಯೊಂದು ನಡುಮನೆಯಲಿತ್ತು .</p>
<p style="text-indent: 1cm;">ಮಲಗಿಕೊಳ್ಳುತ್ತ ಅತ್ತೆ ಅಂದಳು ; ಇವತ್ತು ಅಮಾವಾಸ್ಯೆ , ಮೇಲಿನ ಹುಣ್ಣಿಮೆ ದಿವಸ ಪುಟ್ಟಬಸ್ಯಾ ಊರಿಗೆ ಬರಬೌದು,ಅಲ್ಲವಾ?"</p>
<p style="text-indent: 1cm;">"ಹೊಂ , ಅತ್ತೆಮ್ಮ ,"ಎಂದಳು ಗಿರಿಜಾ ಕ್ಷೀಣಸ್ವರದಲ್ಲಿ.</p>
<p style="text-indent: 1cm;">ಅದರೆ ತನ್ನ ಸ್ವಾಮಿ ಇನ್ನೆಂದೂ ಬರಲಾರನೆಂಬುದು ಆಕೆಗೆ ಗೊತಿತ್ತು . ರಾಷ್ಟ್ರದ ಸ್ವಾತಂತ್ರ್ಯಾಕಗಿ ಜನತೆಯ ಕಲ್ಯಾಣಕ್ಕಗಿ ದೇಹವಿಟ್ಟು ಆ ಸ್ವಮಿ , ಬರಲಾಗದ ಊರಿಗೆ ತೆರಳಿದ್ದನೆಂಬುದು ಆ ಗಿರಿಜೆಗೆ ಗೊತ್ತಿತ್ತು.</p><noinclude><references/></noinclude>
afgms6tv37vo1pxt852dgicdn5td5iy
ಪುಟ:Kalyaand-asvaami.pdf/೧೧
104
9313
321429
62055
2026-05-20T13:45:35Z
Pragathi. BH
7585
/* Validated */
321429
proofread-page
text/x-wiki
<noinclude><pagequality level="4" user="Pragathi. BH" /></noinclude>{{center|೯}}
{{gap}}ನನ್ನ ದುಡಿಮೆಗೆ ಬುನಾದಿ ಹಾಗೂ ಸ್ಫೂರ್ತಿ-ಬಾಲ್ಯದಲ್ಲಿ ನಾನು ಕೇಳಿದ್ದ ಕಥೆ. ಅನಂತರದ ಸಿದ್ದತೆ-ಕೊಡಗು ಕನ್ನಡ ಜಿಲ್ಲೆಗಳ ಇತಿಹಾಸದ ವಾಚನ. ಬಳಿಕ ದೊರೆತ ನೆರೆವಿನ ಮೂಲ, ಕೊಡಗಿನ ಶಿಕ್ಷಣ ತಜ್ಙರಾದ ಶ್ರೀಯುತ ಡಿ.ಎನ್.ಕೃಷ್ಣಯ್ಯನವರು, ನನ್ನ ಕಥಾನಾಯಕನನ್ನು ಕುರಿತು ಬರೆದಿರುವ ಅಭ್ಯಾಸಪೂರ್ಣ ಲೇಖನ.ಜತೆಯಲ್ಲೆ ನಾನು ಓದಿ ಸಂತೋಷಪಟ್ಟದು, ಕನ್ನಡ ಜಿಲ್ಲೆಯ ಆಲೆಟ್ತಿಯ ಶ್ರೀಯುತ ರಾಮಣ್ಣ ಶಗ್ರಿತ್ತಾಯರ,[ಸಮರ್ಥ ಯಕ್ಷಗಾನಕವಿ 'ಆಲೆಟ್ಟ ರಾಮ'ರು] 'ಕಲ್ಯಾಣಪ್ಪನ ಕಾಟಕಾಯಿ' ಯಕ್ಷಗಾನ ಪ್ರಸಂಗದ ಹಸ್ತಪ್ರತಿ. ಕೊನೆಯದಾದರೂ ಬಲು ಮುಖ್ಯವಾದುದು, ನನ್ನ ಕಲ್ಪನೆಯ ಚಿತ್ರವನ್ನು ಪೂರ್ತಿಗೊಳಿಸಲು ರಾಷ್ಟಕವಿ ಗೋವಿಂದ ಪೈಯವರು ನೀಡಿದ ಅಮೂಲ್ಯ ನೆರವು.
{{gap}}ನನ್ನ ತೊಂದರೆಗಳಲ್ಲಿ ಪ್ರಧಾನವಾಗಿದ್ದುದು ಕಥಾನಾಯಕನ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಯೇ. ನಮ್ಮ ದೇಶವನ್ನು ಹಿಂಡಿ ಹಿಪ್ಪೆಮಾಡಿದ ವಿದೇಶೀಯ ಸುಲಿಗೆಗಾರರ ಪ್ರಕಾರ, ಕಲ್ಯಾಣಸ್ವಾಮಿಯೊಬ್ಬ ದರೋಡೆಗಾರ,ಸ್ವಾರ್ಥಸಾಧಕ, ಕಪಟಿ. ಅವರು ಬರೆದ ಇತಿಹಾಸದಿಂದ ಪ್ರಭಾವಿತರಾದ ಇನ್ನು ಕೆಲವರ ಅಭಿಪ್ರಾಯದಂತೆ, ಆತನೊಬ್ಬ ಹುಲು ಮಾನವ, ನಾಲ್ಕಾರು ಜನ ಸರದಾರರ ಕೈಗೊಂಬೆ....
#REDIRECT [[]]೧೮೫೭ರಲ್ಲಿ ರಾಷ್ಟ್ರದಾದ್ಯಂತ ನಡೆದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು 'ಸಿಪಾಯರ ದಂಗೆ' ಎಂದು ಕರೆದು ಇತಿಹಾಸ ಬರೆದವರು ಇಂಗ್ಲಿಷರು. ನಮ್ಮ ಹಿರಿಯರು ಓದಿರುವುದು ಆ ಚರಿತ್ರೆಯನ್ನೇ, ನಾವು ಓದಿರುವುದೂ ಅದನ್ನೇ. ಆದರೆ ಈಗ, ೧೮೫೭ರ ಹೋರಾಟಕ್ಕಿದ್ದ ಚಾರಿತ್ರಿಕ ಮಹತ್ವವನ್ನು ಅರ್ಥಮಾಡಿಕೊಳ್ಳಲು ನಾವು ಸಮರ್ಥರಾಗಿದ್ದೇವೆ. ಅಂತೆಯೇ, ಆ ಸಂಭವಕ್ಕೆ ಇಪ್ಪತ್ತೇ ವರ್ಷಗಳ ಹಿಂದಿನ ಕಲ್ಯಾಣಸ್ವಾಮಿಯ ಕಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ನಮಗೆ ಕಷ್ಟವಾಗಬಾರದು.
{{gap}}ಕಲ್ಯಾಣಪ್ಪ ಪುಂಡನೆಂಬುದಕ್ಕೆ ಯಾವ ಆಧಾರಗಳು ಇಲ್ಲ. ಆತ ಜನರನ್ನು ದೋಚಿದನೆಂದು ಯಾರು ಹೇಳುವುದಿಲ್ಲ. ಆತ ಯುದ್ಧ ಸಾರಿದುದು ಇಂಗ್ಲಿಷರ ವಿರುದ್ಧ. ಆತನ ಕಣ್ಣಿದ್ದುದು ಅವರ ಸೈನ್ಯದ ಮೇಲೆ, ಖಜಾನೆಯ ಮೇಲೆ. ತಮಗೆ ಕಂಟಕರಾಗಿದ್ದವರನ್ನು ನರಪಿಶಾಚಿಗಳೆಂದು ಸಾಮ್ರಾಜ್ಯವಾದಿಗಳು ಚಿತ್ರಿಸಿರುವುದು ಹೊಸ ವಿಷಯವಲ್ಲವಷ್ಟೆ?<noinclude><references/></noinclude>
60d6ifnbvr0bwcq2dlk1mymecqn723q
321430
321429
2026-05-20T13:46:08Z
Pragathi. BH
7585
321430
proofread-page
text/x-wiki
<noinclude><pagequality level="4" user="Pragathi. BH" /></noinclude>{{center|೯}}
{{gap}}ನನ್ನ ದುಡಿಮೆಗೆ ಬುನಾದಿ ಹಾಗೂ ಸ್ಫೂರ್ತಿ-ಬಾಲ್ಯದಲ್ಲಿ ನಾನು ಕೇಳಿದ್ದ ಕಥೆ. ಅನಂತರದ ಸಿದ್ದತೆ-ಕೊಡಗು ಕನ್ನಡ ಜಿಲ್ಲೆಗಳ ಇತಿಹಾಸದ ವಾಚನ. ಬಳಿಕ ದೊರೆತ ನೆರೆವಿನ ಮೂಲ, ಕೊಡಗಿನ ಶಿಕ್ಷಣ ತಜ್ಙರಾದ ಶ್ರೀಯುತ ಡಿ.ಎನ್.ಕೃಷ್ಣಯ್ಯನವರು, ನನ್ನ ಕಥಾನಾಯಕನನ್ನು ಕುರಿತು ಬರೆದಿರುವ ಅಭ್ಯಾಸಪೂರ್ಣ ಲೇಖನ.ಜತೆಯಲ್ಲೆ ನಾನು ಓದಿ ಸಂತೋಷಪಟ್ಟದು, ಕನ್ನಡ ಜಿಲ್ಲೆಯ ಆಲೆಟ್ತಿಯ ಶ್ರೀಯುತ ರಾಮಣ್ಣ ಶಗ್ರಿತ್ತಾಯರ,[ಸಮರ್ಥ ಯಕ್ಷಗಾನಕವಿ 'ಆಲೆಟ್ಟ ರಾಮ'ರು] 'ಕಲ್ಯಾಣಪ್ಪನ ಕಾಟಕಾಯಿ' ಯಕ್ಷಗಾನ ಪ್ರಸಂಗದ ಹಸ್ತಪ್ರತಿ. ಕೊನೆಯದಾದರೂ ಬಲು ಮುಖ್ಯವಾದುದು, ನನ್ನ ಕಲ್ಪನೆಯ ಚಿತ್ರವನ್ನು ಪೂರ್ತಿಗೊಳಿಸಲು ರಾಷ್ಟಕವಿ ಗೋವಿಂದ ಪೈಯವರು ನೀಡಿದ ಅಮೂಲ್ಯ ನೆರವು.
{{gap}}ನನ್ನ ತೊಂದರೆಗಳಲ್ಲಿ ಪ್ರಧಾನವಾಗಿದ್ದುದು ಕಥಾನಾಯಕನ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಪ್ರಶ್ನೆಯೇ. ನಮ್ಮ ದೇಶವನ್ನು ಹಿಂಡಿ ಹಿಪ್ಪೆಮಾಡಿದ ವಿದೇಶೀಯ ಸುಲಿಗೆಗಾರರ ಪ್ರಕಾರ, ಕಲ್ಯಾಣಸ್ವಾಮಿಯೊಬ್ಬ ದರೋಡೆಗಾರ,ಸ್ವಾರ್ಥಸಾಧಕ, ಕಪಟಿ. ಅವರು ಬರೆದ ಇತಿಹಾಸದಿಂದ ಪ್ರಭಾವಿತರಾದ ಇನ್ನು ಕೆಲವರ ಅಭಿಪ್ರಾಯದಂತೆ, ಆತನೊಬ್ಬ ಹುಲು ಮಾನವ, ನಾಲ್ಕಾರು ಜನ ಸರದಾರರ ಕೈಗೊಂಬೆ....
{{gap}}೧೮೫೭ರಲ್ಲಿ ರಾಷ್ಟ್ರದಾದ್ಯಂತ ನಡೆದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು 'ಸಿಪಾಯರ ದಂಗೆ' ಎಂದು ಕರೆದು ಇತಿಹಾಸ ಬರೆದವರು ಇಂಗ್ಲಿಷರು. ನಮ್ಮ ಹಿರಿಯರು ಓದಿರುವುದು ಆ ಚರಿತ್ರೆಯನ್ನೇ, ನಾವು ಓದಿರುವುದೂ ಅದನ್ನೇ. ಆದರೆ ಈಗ, ೧೮೫೭ರ ಹೋರಾಟಕ್ಕಿದ್ದ ಚಾರಿತ್ರಿಕ ಮಹತ್ವವನ್ನು ಅರ್ಥಮಾಡಿಕೊಳ್ಳಲು ನಾವು ಸಮರ್ಥರಾಗಿದ್ದೇವೆ. ಅಂತೆಯೇ, ಆ ಸಂಭವಕ್ಕೆ ಇಪ್ಪತ್ತೇ ವರ್ಷಗಳ ಹಿಂದಿನ ಕಲ್ಯಾಣಸ್ವಾಮಿಯ ಕಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ನಮಗೆ ಕಷ್ಟವಾಗಬಾರದು.
{{gap}}ಕಲ್ಯಾಣಪ್ಪ ಪುಂಡನೆಂಬುದಕ್ಕೆ ಯಾವ ಆಧಾರಗಳು ಇಲ್ಲ. ಆತ ಜನರನ್ನು ದೋಚಿದನೆಂದು ಯಾರು ಹೇಳುವುದಿಲ್ಲ. ಆತ ಯುದ್ಧ ಸಾರಿದುದು ಇಂಗ್ಲಿಷರ ವಿರುದ್ಧ. ಆತನ ಕಣ್ಣಿದ್ದುದು ಅವರ ಸೈನ್ಯದ ಮೇಲೆ, ಖಜಾನೆಯ ಮೇಲೆ. ತಮಗೆ ಕಂಟಕರಾಗಿದ್ದವರನ್ನು ನರಪಿಶಾಚಿಗಳೆಂದು ಸಾಮ್ರಾಜ್ಯವಾದಿಗಳು ಚಿತ್ರಿಸಿರುವುದು ಹೊಸ ವಿಷಯವಲ್ಲವಷ್ಟೆ?<noinclude><references/></noinclude>
ls7gdwjusiyh38wbot59bx42be39n1q
ಪುಟ:Kalyaand-asvaami.pdf/೧೨
104
9324
321431
62056
2026-05-20T13:46:59Z
Pragathi. BH
7585
/* Validated */
321431
proofread-page
text/x-wiki
<noinclude><pagequality level="4" user="Pragathi. BH" />{{center|೧೦}}</noinclude>ಅಂತಹ 'ನರಪಿಶಾಚಿ' ಕೊಡಗಿನ ಕಲ್ಯಾಣಪ್ಪ!
{{gap}}ರಾಜರಿಗೆ ಸಂಬಂಧಿಸಿದುದು ಮಾತ್ರ ಇತಿಹಾಸವೆಂದು ಭಾವಿಸಿದವರು ಬರೆದುದರಲ್ಲಿ, ಕಲ್ಯಾಣಪ್ಪನ ವಿಷಯವಾಗಿ ದೊರೆಯುವುದು ಎರಡು ಮೂರು ಸಾಲು ಮಾತ್ರ. ಯಾಕೆಂದರೆ, ಕಲ್ಯಾಣಸ್ವಾಮಿ ರಾಜವಂಶಸ್ಥನಲ್ಲ.
{{gap}}ಇಂಗ್ಲಿಷರು ಕೊಡಗಿನ ಮೇಲೆ ನಡೆಸಿದುದು ಅನ್ಯಾಯದ ಯುದ್ಧ. ಅರಸು ವೀರರಾಜೇಂದ್ರನಿಗೆ ಅವರು ಬಗೆದುದು ವಿಶ್ವಾಸದ್ರೋಹ. ಆತನನ್ನು ದೇಶಬಿಟ್ಟು ಓಡಿಸಿದ ವೈಖರಿ, ನಾಗರಿಕರಾದವರೆಲ್ಲ ನಾಚಿಕೆಯಿಂದ ತಲೆ ತಗ್ಗಿಸುವಂಥಾದ್ದು. ಅಂತಹ ಘಟನೆಯಿಂದ ಜನ ಕೋಪೋದ್ರಿಕ್ತರಾದರೆಂದು ಭಾವಿಸುವುದರಲ್ಲಿ ಏನೂ ತಪ್ಪಿಲ್ಲ.
{{gap}}ಗಣಪತಿ ಐಗಳ 'ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ'ದಲ್ಲಿ[೧೯೨೩]೨೬೦ನೆ ಪುಟದಲ್ಲಿ, 'ಕೊಡಗು ಸೇನಾಧಿಪತಿಯಾಗಿದ್ದ ಕಲ್ಯಾಣಪ್ಪನ...' ನಾಯಕತ್ವದಲ್ಲಿ ನಡೆದ 'ದಂಗೆ'ಯ ವಿವರವಿದೆ. ['ದಂಗೆ' ಎನ್ನುವ ಪದ ಅರ್ಥವ್ಯಾಪ್ತಿಯುಳ್ಳದೆಂಬುದನ್ನಂತೂ ನಾವೆಲ್ಲಾ ಬಲ್ಲೆವು!] ಕಲ್ಯಾಣಸ್ವಮಿಯು ಕೊಡಗು ಸೈನ್ಯದಲ್ಲಿ ದಳಪತಿಯಾಗಿದ್ದನೆಂಬುದೇ, ವೀರರಾಜನ ಆಪ್ತಕೋಟಿಯಲ್ಲೊಬ್ಬನಾಗಿದ್ದನೆಂಬುದೇ, ನನ್ನ ಅಭಿಪ್ರಾಯ ಕೂಡಾ.ಆತನನ್ನು ಸೇರಿದವರೂ ಪ್ರಮುಖರು. ಅರಸು ವೀರರಾಜನಿಗೆ ಬೇಟೆಯಲ್ಲಿ ಶಿಕ್ಷಕನಾಗಿದ್ದ, ಹಾರುವ ಹಕ್ಕಿಯ ಕಣ್ಣಿಗೇ ಗುರಿ ಹೊಡೆಯಲು ಸಮರ್ಥನಾಗಿದ್ದ, ಚೆಟ್ಟಕುಡಿಯನೂ ಆತನ ತಮ್ಮನೂ ಕಲ್ಯಾಣಸ್ವಾಮಿಯ ಜತೆಗಿದ್ದರು.ಕೊಡಗಿನ ಶರಣಾಗತಿಗೆ ಕಾರಣನಾಗಿದ್ದ ಬೋಪುದಿವಾನನ ಸಂಬಂಧಿಕರೇ ಕಲ್ಯಾಣಸ್ವಾಮಿಯನ್ನು ಕೂಡಿಕೊಂಡರು. ಪ್ರಖ್ಯಾತ ಸರದಾರನಾದ ಹುಲಿ ಕುಂದ ನಂಜಯ್ಯ, ವಿವಿಧನಾಡುಗಳ ಸುಭೇದಾರರು, ಮಾಜಿ ಉದ್ಯೋಗಸ್ಥರೆಷ್ಟೋ ಜನ ಆತನನ್ನು ಹಿಂಬಾಲಿಸಿದರು. ಕಲ್ಯಾಣಸ್ವಾಮಿಯದು ಕಳ್ಳಕಾಕರ ತಂಡವಾಗಿರಲಿಲ್ಲ ಎನ್ನುವುದಕ್ಕೆ ಇಷ್ಟು ಸಾಕು.
{{gap}}ಆ ಸೇನೆಯನ್ನು ಸೇರಿಕೊಂಡವರಂತೂ ನಾನಾ ಜಾತಿಗಳವರು. ವಿದೇಶೀಯರಿಗಿದಿರಾಗಿ, ಲಿಂಗಾಯತರು-ಒಕ್ಕಲಿಗರು, ಹಿಂದೂಗಳು-ಮುಸಲ್ಮಾನರು, ಒಂದಾಗಿ ಹೋರಾಡಿ ಆ ಪ್ರಕರಣ ಕನ್ನಡನಾಡು ಹೆಮ್ಮೆ ಪಡುವಂಥಾದ್ದು. [ಅದರಿಂದ ಇಂದೂ ಕೂಡಾ ನಾವು ಕಲಿಯಬಹುದಾದ, ಕಲಿಯಬೇಕಾದ, ಪಾಠ ಖಂಡಿತವಾಗಿಯೂ ಅಲ್ಪಪ್ರಮಾಣದ್ದಲ್ಲ!]<noinclude><references/></noinclude>
npgfv8el9xegdg3ydeekuoim6nkh1er
ಪುಟ:Kalyaand-asvaami.pdf/೪೪
104
9327
321441
62108
2026-05-20T14:09:54Z
Shreelatha.Halemane
7642
/* Validated */
321441
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕಲ್ಯಾಣಸ್ವಾಮಿ|left=೪೨|right=}}
{{gap}}ಅರಸನ ಮದುವೆಯ ಕಾಲದಲ್ಲಿ ಆಂಗ್ಲರ ಪ್ರತಿನಿಧಿಗೆ ಆಮಂತ್ರಣ ಹೋಯಿತು. ಬಂದವನು ಒಬ್ಬ ಸೈನ್ಯಾಧಿಕಾರಿ. ಆತನ ಜತೆಯಲ್ಲಿ ಪುಟ್ಟದೊಂದು ಸೈನ್ಯವೇ ಬಂದಿತ್ತು, ಮದುವೆ ನೋಡಲೆಂದು! ಅವರು ಮದುವೆಯನ್ನೂ ನೋಡಿದರು, ಅನಂತರ ಪಟ್ಟಾಭಿಷೇಕ ಕಾಲದಲ್ಲೂ ಪ್ರೇಕ್ಷಕರಾದರು. ಅದು ಸಾಲದೆಂದು, ಕೊಡಗಿನ ಸ್ಥಿತಿಗತಿಗಳ ವೀಕ್ಷಣೆಯನ್ನೂ ಮಾಡಿದರು!<br />
{{gap}}ಐರೋಪ್ಯರಿಗೆಂದೇ ವಿಶೇಷವಾಗಿ ನೇಮಿಸಿದ್ದ ಅಡುಗೆಯ ಭಟರು ರಾಜನ ಆಜ್ಞೆಯಂತೆ ನಿಮಿಷವೂ ಬಿಡುವಿಲ್ಲದೆ ದುಡಿದರು. ಇದು ತಮ್ಮ ಮನೆಯೆ ಎನ್ನುವಂತಾಯಿತು ಬಂದವರಿಗೆ.<br />
{{gap}}ಟಿಪ್ಪುವಿನ ಮೇಲೆ ಇಂಗ್ಲಿಷರು ಯುದ್ಧ ಸಾರಿದಾಗ, ಕೊಡಗಿನ ಮೂಲಕ ಸಾಗಿದ ಆಂಗ್ಲ ಸೇನೆಗೆ ಹೇರಳವಾಗಿ ದವಸ ಧಾನ್ಯ ಒದಗಿಸಿದ, ಕೊಡಗಿನ ಅರಸ. ಅದಕ್ಕೆ ದೊರೊತ ಪ್ರತಿಫಲವೆಂದರೆ ಮೈತ್ರಿ ಒಪ್ಪಂದದ ಪುನರ್ವಿಮರ್ಶೆ. ಅದರ ಪ್ರಕಾರ, ಕಂಪೆನಿಯ ಸ್ನೇಹ ಮತ್ತು ರಕ್ಷಣೆಗಾಗಿ ವರ್ಷಂಪ್ರತಿ ಇಪ್ಪತ್ತ ನಾಲ್ಕು ಸಾವಿರ ರೂಪಾಯಿಗಳನ್ನು ಇಂಗ್ಲಿಷರಿಗೆ 'ಸ್ವಂತ ಇಚ್ಛೆಯಿಂದ' ಕೊಡಲು ವೀರರಾಜೇಂದ್ರ ಒಪ್ಪಬೇಕಾಯಿತು!<br />
{{gap}}ಟಿಪ್ಪು ಬದುಕಿದ್ದಾಗಲೇ ಹಾಗೆ. ಆತ ಸೋತಮೇಲಂತೂ ಇಂಗ್ಲಿಷರನ್ನು ಹಿಡಿಯುವವರು ಯಾರಿದ್ದರು?<br />
{{gap}}ಅವರ 'ಮೈತ್ರಿಯ ಅಪ್ಪುಗೆ' ಹೆಚ್ಚು ಹೆಚ್ಚು ಗಾಢವಾಯಿತು.<br />
{{gap}}ಟಿಪ್ಪುವಿಗಿದಿರಾದ ಯುದ್ಧದಲ್ಲಿ ಇಂಗ್ಲಿಷರಿಗೆ ವೀರರಾಜೇಂದ್ರ ಸಹಾಯವಾಗಿ ನೀಡಿದ ಸಾಮಾನು ಸರಂಜಾಮಗಳ ಬೆಲೆ ನಾಲ್ಕು ಲಕ್ಷ ರೂಪಾಯಿ.<br />
{{gap}}ಇಂಗ್ಲಿಷರು ಅರಸನಿಗೆಂದರು:<br />
{{gap}}"ನಾವು ನಿಮಗೆ ಕೃತಜ್ಞರಾಗಿದ್ದೇವೆ."<br />
{{gap}}"ಆ ಹಣವನ್ನು ನೀವು ನಮಗೆ ಕೊಡಬೇಕಾದುದೇ ಇಲ್ಲ," ಎಂದ ವೀರರಾಜೇಂದ್ರ.<br />
{{gap}}"ಹಾಗಾದರೆ ನಾವು ನಿಮಗೆ ತುಂಬ ಕೃತಜ್ಞರಾಗಿದ್ದೇವೆ," ಎಂದರು ಆಂಗ್ಲರು.<br /><noinclude><references/></noinclude>
0vdfjz0p4j5vzth6u39ujvrz6y366zc
ಪುಟ:Kalyaand-asvaami.pdf/೯
104
9336
321446
62053
2026-05-20T14:17:07Z
Shreelatha.Halemane
7642
/* Validated */
321446
proofread-page
text/x-wiki
<noinclude><pagequality level="4" user="Shreelatha.Halemane" />{{center|೭}}</noinclude>{{gap}}ಐತಿಹಾಸಿಕ ಕಾದಂಬರಿಯ [ನಾಟಕದ ಇಲ್ಲವೆ ಕಥೆಯ]ಸೃಷ್ಟಿ, ಸಾಮಾಜಿಕ ವಸ್ತುವಿನ ಚಿತ್ರಣಕ್ಕಿಂತ ಹೆಚ್ಚು ಕಷ್ಟದ್ದು. ಯಾಕೆಂದರೆ, ಇಂದಿನ ಕಲ್ಪನೆಯ ಚಿತ್ರಕ್ಕೆ ಸ್ಫೂರ್ತಿ ನೀಡಲು ಅಸಂಖ್ಯ ಮಾದರಿಗಳಿರುತ್ತವೆ ಕಣ್ಣ ಮುಂದೆ. ನಿನ್ನೆಯ ಚಿತ್ರಣಕ್ಕೆ ಅಂತಹ ಮಾದರಿಗಳಿಲ್ಲ.
{{gap}}ಈ ತೊಂದರೆಯನ್ನು ತಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳುವವರೂ ಉಂಟು. ಅಂತಹ ಲೇಖಕರು ಇತಿಹಾಸದ ಹಣೆಪಟ್ಟಿ ಕಟ್ಟಿ ಜನರಿಗೆ ನೀಡುವುದು, ವೈಯಕ್ತಿಕ ಕಲ್ಪನೆಯ ಸುರಸಸೃಷ್ಟಿಯನ್ನು. ಆ ಕೃತಿಗಳನ್ನೋದಿ,ಅದೇ ತಮ್ಮ ಗತ ಜೀವನವೆಂದು,ನಿಜವಾದ ಇತಿಹಾಸವೆಂದು,ನಂಬಬೇಕು ಓದುಗರು! ಸಾಮಾಜಿಕ ಚಿತ್ರಣವನ್ನಾದರೋ ಎದುರಿಗಿರುವ ಮೂಲದೊಡನೆ ಹೋಲಿಸಿನೋಡಬಹುದು. ಆದರೆ, ಐತಿಹಾಸಿಕ ಚಿತ್ರಣದ ತುಲನೆಗೆ ಎಲ್ಲಿದೆ ತಕ್ಕಡಿ?
{{gap}}ಲೇಖಕ ಯಾವಾಗಲೂ ಸತ್ಯನಿಷ್ಠನೂ ಪ್ರಾಮಾಣಿಕನೂ ಆಗಬೇಕೆನ್ನುವುದು ಈ ಕಾರಣಕ್ಕಾಗಿಯೇ. ಅಂತಹ ಮೌಲ್ಯಗಳು ಬರೆಹಗಾರನ ಬದುಕಿನಲ್ಲಿದ್ದರೆ ಆತನಿಂದ ಅನ್ಯಾಯವಾಗುವ ಸಂದರ್ಭಗಳು ಕಡಿಮೆ.
{{gap}}ತಮ್ಮ ಹಿಂದಿನವರ ಬದುಕನ್ನು ತಿಳಿಯಲು ಜನರು ಕುತೂಹಲ ತೋರುವುದು ಸ್ವಾಭಾವಿಕ.ಆ ನೀರಡಿಕೆಯ ಶಮನಕ್ಕೆ ಬೇಕಾದುದು ಕೋಕಾಕೋಲಾ ಅಲ್ಲ, ಶುದ್ಧೋದಕ.
{{gap}}ಗತಕಾಲದ ಯಾವುದೋ ಒಂದು ಸಂಭವವನ್ನು ವಸ್ತುವಾಗಿ ಆರಿಸಿ ಕೃತಿ ರಚಿಸಲು ಹೊರಡುವ ಬರೆಹಗಾರನಿಗೆ ಸಂಶೋಧನೆಯ ದೃಷ್ಟಿ ಇರಬೇಕು. ಆ ಕಾಲ ಯಾವುದು? ಹೇಗಿತ್ತು ಆಗಿನ ಜನ ಜೀವನ? ಬೆಳಕು ಬೀರಬಲ್ಲ ಅವಶೇಷಗಳಿವೆಯೆ? ಆ ಸಮಯದ ಜಾನಪದ ಸಾಹಿತ್ಯವಿದೆಯೆ? ತಾಳೆಯ ಗರಿಗಳಲ್ಲಿ ಏನಾದರೂ ಅಡಗಿದೆಯೆ? ಆ ಕತೆ ಹೇಳುವ ಕಲ್ಲುಗಳಿವೆಯೆ?....ಹಾಗೆ ಆತ ಶ್ರಮವಹಿಸಿ ತಿಳಿಯಬೇಕಾದ ಸಂಗತಿಗಳು ಒಂದಲ್ಲ, ಎರಡಲ್ಲ.
{{gap}}ಅಷ್ಟೊಂದು ಸಂಗ್ರಹದ ಬಳಿಕ ದೊರೆತ ವಿಷಯಗಳಲ್ಲಿ ವಿರೋಧಾಭಾಸ ಕಂಡು ಬರಬಹುದು. ಆಗ, ಈ ದಿನದ ಬದುಕನ್ನೂ ನಾಳೆಯನ್ನೂ ಗಮನದಲ್ಲಿಟ್ಟು ನಿನ್ನೆಯನ್ನು ತಿಳಿಯಲು ಆತ ಯತ್ನಿಸಬೇಕು. ಅಪೂರ್ಣವಾಗಿದ್ದ ಕಡೆ ತರ್ಕಬದ್ಧ ರೀತಿಯಲ್ಲಿ ಚಿತ್ರವನ್ನು ಪೂರ್ಣಗೊಳಿಸಬೇಕು....<noinclude><references/></noinclude>
tge5knw5dmyhll6oborfib3j92p6fjp
ಪುಟ:Kalyaand-asvaami.pdf/೧೦
104
9337
321447
62054
2026-05-20T14:18:21Z
Shreelatha.Halemane
7642
/* Validated */
321447
proofread-page
text/x-wiki
<noinclude><pagequality level="4" user="Shreelatha.Halemane" />{{center|೮}}</noinclude>{{gap}}ಹಾಗೆ, ಭದ್ರ ಆಧಾರದ ಮೇಲೆ ಸಿದ್ಧವಾಗುತ್ತದೆ ಆತನ ಕಲಾಕೃತಿ.
{{gap}}ಇತಿಹಾಸಕಾರನಾದ ಸಂಶೋಧಕನಿಗೂ ಕಲಾವಿದನಾದ ಸಂಶೋಧಕನಿಗೂ ಇರುವ ವ್ಯತ್ಯಾಸವೇನು? ಮೊದಲನೆಯವನು,ದೊರೆತುದನ್ನಷ್ಟೆ ಶಾಸ್ತ್ರೀಯವಾಗಿ ಜೋಡಿಸಿ ದಾಖಲೆ ಮಾಡುತ್ತಾನೆ. ಎರಡನೆಯವನು ತನ್ನ ಕಲಾಪ್ರತಿಭೆಯಿಂದ ಆಗಿನ ಕಾಲದ ಬದುಕಿನ ಪುನರ್ ಸೃಷ್ಟಿಯನ್ನು ಸಾಹಿತ್ಯದಲ್ಲಿ ಸಾಧಿಸುತ್ತಾನೆ.
{{gap}}ಗತಜೀವನದ ಪುನರ್ ಸೃಷ್ಟಿಯೇ ಐತಿಹಾಸಿಕ ಸಾಹಿತ್ಯಕೃತಿಗಳಲ್ಲಿರಬೇಕಾದ ಪ್ರಧಾನ ಅಂಶ. ಆ ಸಂಬಂಧಲ್ಲೂ ವಾಸ್ತವವಾದದಿಂದಲೇ ಬರಹಗಾರ ಪ್ರಭಾವಿತನಾಗಬೇಕಾದುದು ಸಹಜ. ಪ್ರತಿಯೊಬ್ಬ ಲೇಖಕನಲ್ಲೂ ಮೂಲತ: ಇರಬೇಕಾದ ಸಮಾಜಪ್ರಜ್ಞೆ, ಅಂತಹ ಸಾಹಿತ್ಯಸೃಷ್ಟಿಯಲ್ಲೂ ಗಣನೀಯ ಪಾತ್ರ ವಹಿಸುತ್ತದೆ. ಮನೋವಿಶ್ಲೇಷಣೆಯಂತಹ ಪ್ರಾಚೀನವಲ್ಲದ ಪೃಥಕ್ಕರಣ ಸಾಧನ, ಗತಕಾಲದ ಪಾತ್ರಗಳಲ್ಲಿ ಹೆಚ್ಚು ಜೀವ ತುಂಬಲು ಸಹಾಯಕವಾಗುತ್ತದೆ.
{{gap}}ಈ ರೀತಿಯಾಗಿ ರಚಿತವಾಗುವ ಐತಿಹಾಸಿಕ ಹಿನ್ನಲೆಯುಳ್ಳ ಸಾಹಿತ್ಯ ಕೃತಿಗಳು ಹೆಚ್ಚು ಬೆಲೆಬಾಳುತ್ತವೆಂಬುದು ನನ್ನ ಅಭಿಮತ.
* * * * *
{{gap}}ಮೇಲಿನ ನೆಲೆಯಲ್ಲಿ ನಿಂತು ನಾನು ರಚಿಸಿರುವ ಕಾದಂಬರಿ 'ಕಲ್ಯಾಣ ಸ್ವಾಮಿ'. ಈ ಕೃತಿಯಲ್ಲಿ ನನ್ನ ಹಾರೈಕೆಗಳೆಲ್ಲ ಫಲಿಸಿವೆ ಎಂದು ನಾನು ಹೇಳಲಾರೆ. ಆದರೂ ಇಷ್ಟು ನಿಜಃ ಈ ಕೃತಿ ನನಗೆ ಪೂರ್ಣತೃಪ್ತಿಯನ್ನು ಕೊಡದೇ ಹೋದರೂ ತೀವ್ರವಾದ ಅತೃಪ್ತಿಗೇನೂ ಕಾರಣವಾಗಿಲ್ಲ.
{{gap}}ಇದು, ನೂರಿಪ್ಪತ್ತು ವರ್ಷಗಳಿಗೆ ಹಿಂದಿನ ಕಥೆ.ಕನ್ನಡ ಭೂಭಾಗವಾದ ಕೊಡಗು-ಕನ್ನಡ ಜಿಲ್ಲೆಗಳಿಗೆ ಸಂಬಂಧಿಸಿದುದು. ಭಾರತದ ಮೇಲೆ ಅಂಧಕಾರ ಕವಿಯತೊಡಗಿದ್ದ ಮುಚ್ಚಂಜೆಯ ಹೊತ್ತಿನಲ್ಲಿ ನಡೆದ ಘಟನೆ. ಪ್ರಾದೇಶಿಕ ಕಥೆಯಾದರೂ ರಾಷ್ತ್ರೀಯ ವ್ಯಾಪ್ತಿಯುಳ್ಳುದು.
{{gap}}ಅದನ್ನು ಬರೆಯಲು ಹೊರಟಾಗ, ನಾನು ಇದಿರಿಸಬೇಕಾಗಿದ್ದ ಎಡರು ತೊಡರುಗಳ ಪೂರ್ಣಕಲ್ಪನೆ ನನಗೆ ಇರಲೇ ಇಲ್ಲ. ನನಗಿದ್ದ ತಿಳಿವಳಿಕೆಯ ಆಧಾರದ ಮೇಲೆಯೇ ವಿಷಯ ಸಂಗ್ರಹಕ್ಕೆಂದು ಕೈಹಾಕಿದಾಗ, ಇದು ಪುಷ್ಪೋದ್ಯಾನದ ವಿಹಾರವಲ್ಲ,ಎಂಬುದು ಮನವರಿಕೆಯಾಯಿತು.<noinclude><references/></noinclude>
jcuflh9zwgadup46g9lvoqcanjfd9oy
ಪುಟ:Kalyaand-asvaami.pdf/೨೬
104
9338
321454
62076
2026-05-20T14:34:23Z
Shreelatha.Halemane
7642
/* Validated */
321454
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕಲ್ಯಾಣಸ್ವಾಮಿ |left=೨೪|right=}}
ಧರಿಸಿ, ಭುಜಕ್ಕೆ ಜೋಡು ನಳಿಗೆಯ ಕೋವಿಯನ್ನು ತೂಗಹಾಕಿ, ಕಂದು ಬಣ್ಣದ ಕುದುರೆಯನ್ನೇರಿ ಮರಳಿ ಬಂದ. ಮುಚ್ಚೆಂಜಾಯಾಗಿತ್ತು ಆಗ. ಸವಾರ ಯಾರೆಂದು ತಿಳಿಯದೆ ತವಕದಿಂದ ಹೊರಬಂದ ತಾಯಿಯನ್ನು ಕುರಿತು ಪುಟ್ಟಬಸವ ಹೇಳಿದ:
{{gap}}"ಅವ್ವ, ಯಾರು ಬಂದಾರೆ ನೋಡು. ಗುರುತು ಸಿಗ್ತೇತೇನು? '
{{gap}}ಆ ರಾತ್ರೆ ಆಕೆ ಬಹಳ ಹೊತ್ತು ಅತ್ತಿದ್ದಳು, - 'ಎಲ್ಲಾ ಶಿವನ ಚಿತ್ತ' ಎಂದು ದೇವರ ಮೇಲೆ ಭಾರ ಹಾಕುತ್ತಾ.
{{gap}}ಅಂದಿನಿಂದಲೂ ಹಾಗೆಯೇ. ಒಮ್ಮಿಂದೊಮ್ಮಲೆ ಪ್ರವಾಸ. ಮತ್ತೆ ಎಂದಾದರೊಮ್ಮೆ ಆಗಮನ. ಆಗ ಸ್ವಾಭಿಮಾನದ ಮಾತುಗಳು- ರಾಜರನ್ನು ಕುರಿತು, ರಾಜ್ಯವನ್ನು ಕುರಿತು.
{{gap}}ಒಮ್ಮೆ ಆತನೆಂದ:
'{{gap}}ಅವ್ವ, ಅಪ್ಪನ್ನ ಕೊಂದಿದ್ರು ನೋಡು. ಅವರೆಲ್ಲ ಈಗ ಇಂಗ್ಲೀಷರ ಕಡೆ ಇರಬೌದು ಅಂತೀನಿ.'
{{gap}}ಹುಟ್ಟುವುದಕ್ಕೆ ಮುಂಚೆಯೇ ಆಗಿದ್ದ ಗಾಯ ಮಗನ ಹೃದಯದಲ್ಲಿನ್ನೂ ಹಸಿರಾಗಿಯೇ ಇತ್ತು ಎಂದು ತಾಯಿಯ ಎದೆ ಉಬ್ಬಿತು.
{{gap}}ಅದರ ಮರುಕ್ಷಣವೆ, ಇಂತಹ ಯೋಚನೆಯಿಂದ ಮಗನಿಗೇನು ಆಪತ್ತು ಸಂಭವಿಸುವುದೋ ಎಂದು ಆಕೆ ಗಾಬರಿಯಾದಳು.<br />
{{gap}}"ಅವರು ಈಗೆಲ್ಲಿರ್ತಾರೋ ಪುಟ್ಟಬಸ್ಯಾ. ಮುದುಕರಾಗಿ ಸತ್ಹೋಗಿರ್ತಾರೆ! "
ನಿಜಾಂಶವೂ ಇತ್ತು ಆ ಮಾತಿನಲ್ಲಿ.
{{gap}}"ಅದೂ ಹೌದೆನ್ನು" ಎಂದ ಪುಟ್ಟಬಸವ.
{{gap}}ಒಮ್ಮೊಮ್ಮೆ ಸೊಸೆಯ ಮೇಲೆ ಗಂಗವ್ವನಿಗೆ ಸಿಟ್ಟು ಬರುತ್ತಿತ್ತು. ಸರಿಯಾದ ರೀತಿಯಲ್ಲಿ ಮಗನನ್ನು ಆಕೆ 'ನೋಡುಕೊಳುತ್ತಿಲ್ಲವೆಂಬುದೇ ಗಂಗವ್ವನ ಶಂಕೆ. ಆ ಸಂದೇಹಕ್ಕೆ ಆಧಾರವಿಲ್ಲವೆಂಬುದು ಸ್ಪಷ್ಟವಾದಾಗ 'ಬಂಜೆ ಹುಡುಗಿ' ಎಂದು ಒಂದೆರೆಡು ಸಾರೆ ಸೊಸೆಯನ್ನು ಹಳಿದಿದ್ದಳು. ಆದರೆ ಬೇಗನೆ ಆ ಘಟ್ಟಗಳೆಲ್ಲಾ ದಾಟಿ, ಆಬಾಧಿತವಾದ ಒಲವೇ ಗಿರಿಜವ್ವ<noinclude><references/></noinclude>
879hy1fg7jle5rot84k1duh6ts6jmju
ಪುಟ:Kalyaand-asvaami.pdf/೨೯
104
9348
321464
62079
2026-05-20T14:55:24Z
Shreelatha.Halemane
7642
/* Validated */
321464
proofread-page
text/x-wiki
<noinclude><pagequality level="4" user="Shreelatha.Halemane" />{{center|೨}}</noinclude>
{{gap}}ಆ ಇರುಳು ಕಳೆದು ಬೆಳಗಾದುದು ಎಂದಿನಂತೆಯೇ. ಗಂಗವ್ವನ ಮಗನ ಸುಳಿವಿರಲಿಲ್ಲ. ಮನೆಗೆ ಮರಳಲಿಲ್ಲ ಗಿರಿಜವ್ವನ ಸ್ವಾಮಿ.<br />
{{gap}}ಅಮಾವಾಸ್ಯೆಯ ಬಳಿಕ ಮತ್ತೆ ಹುಣ್ಣಿಮೆ ಬಂತು. ಆ ರಾತ್ರೆ ದಾಟಿ ಬೆಳಕು ಹರಿದುದು ಮಾತ್ರ ಎಂದಿಗಿಂತ ಭಿನ್ನವಾಗಿ.<br />
{{gap}}ಬಾಗಿಲು ತಟ್ಟಿದ ಸದ್ದಿಗೆ ಎಚ್ಚರಗೊಂಡ ಗಿರಿಜವ್ವ ಗಡಬಡಿಸಿ ಎದ್ದಳು. ಅತ್ತೆಗೆ ಆಗ ಗಾಢ ನಿದ್ದೆ. ಕತ್ತಲೆಯನ್ನು ದಿಟ್ಟಿಸಿ ದಿಟ್ಟಿಸಿ ಬಳಲಿದ್ದ ಆ ಕಣ್ಣುಗಳಿಗೆ ಆಗತಾನೆ ಜೊಂಪು ಹಿಡಿದಿತ್ತು.<br />
{{gap}}ಬಾಗಿಲ ಬಳಿಗೆ ಸರಿದು, ಎದೆಯ ಮೇಲಿನ ಸೆರಗು ಸರಿಪಡಿಸಿಕೊಳ್ಳುತ್ತ, ಗಿರಿಜವ್ವ ನಿಂತಳು. 'ಯಾರು?' ಎಂದು ಕೇಳಬೇಕೆನಿಸಿತು. ಆದರೆ ಗಂಟಿಲಿನಿಂದ ಸ್ವರ ಹೊರಡಲಿಲ್ಲ.<br />
{{gap}}ಪುನಃ ಬಾಗಿಲ ಸದ್ದು. ಜತೆಯಲ್ಲೇ ಕರೆ :<br />
{{gap}}"ಅವ್ವಾ!"<br />
{{gap}}ಕಣ್ಣು ತೆರೆದಿದ್ದ, ಗಿರಿಜೆಯ ದೇವರು! ಇನ್ನು ಕದ ತೆರೆಯಬೇಕು ತಾನು. ಆದರೆ ತನ್ನನ್ನು ಹೆಸರು ಹಿಡಿದು ಅವರು ಕರೆಯಬಾರದೆ? ಒಮ್ಮೆ ಕರೆಯಬಾರದೆ?<br />
{{gap}}"ಗಿರಿಜಾ!"<br />
{{gap}}ಗಿರಿಜವ್ವನ ಹೃದಯ ಕುಣಿಯಿತು. ಎವೆ ಮುಚ್ಚುವುದಕ್ಕೂ ಎಡೆ ಕೊಡದೆ ಆಕೆ ಆಗುಣಿ ತೆಗೆದಳು. ಕದ ಹಿಂದಕ್ಕೆ ಹರಿಯಿತು.
{{gap}}ತಿಂಗಳ ಬೆಳಕಿನಲ್ಲಿ ಕಾಣಿಸಿತು, ಜಗಲಿಯ ಮೇಲೆ ಎತ್ತರವಾಗಿ ನಿಂತಿದ್ದ ಪುಟ್ಟಬಸವನ ಆಕೃತಿ. ಗಂಡನೆಡೆಗೆ ಆಕೆ ಧಾವಿಸಿದಳು. ಕುಸಿದು ಬೀಳುವ ಹಾಗಾಯಿತು. ಆತನ ಮೊಣಕಾಲುಗಳನ್ನುಕೈಗಳಿಂದ ಸುತ್ತುವರಿದಳು ಗಿರಿಜವ್ವ. ಆಕೆಯ ಮುಂಗುರುಳನ್ನು ಮುಟ್ಟುತ್ತಾ ಒಲುಮೆ ತುಂಬಿದ ಧ್ವನಿಯಲ್ಲಿ ಪುಟ್ಟಬಸವನೆಂದ :<br />
{{gap}}"ಏಳು ಗಿರಿಜಾ. ನನ್ನ ಜತೇಲಿ ಸ್ನೇಹಿತರು ಬಂದವರೆ...."
{{gap}}ಗಾಬರಿಗೊಂಡು ಗಿರಿಜವ್ವ ಎದ್ದಳು ಆ ಸ್ಥಿತಿಯಲ್ಲಿ ತನ್ನನ್ನು ಹೊರ<noinclude><references/></noinclude>
m6aqzosp0jpqg2rk2rldyaninz0rbzj
ಪುಟ:Kalyaand-asvaami.pdf/೧೯
104
9351
321438
62064
2026-05-20T13:59:30Z
Pragathi. BH
7585
/* Validated */
321438
proofread-page
text/x-wiki
<noinclude><pagequality level="4" user="Pragathi. BH" />{{center|೧}}</noinclude>{{gap}}ದಟ್ಟೈಸಿದ್ದ ವನಸಿರಿಗೆ ಬೆಳುದಿಂಗಳ ಕ್ಷೀರಾಭಿಷೇಕವಾಗುತ್ತಿತ್ತು. ಕೊನೆಯಿಲ್ಲದೆ ಉಲಿಯುತ್ತಿದ್ದ ಎಲೆಗಳ ಮರೆಯಲ್ಲಿ ನಿಂತು ಚಂದಿರ ಆಡು ತ್ತಿದ್ದುದು ಕಣ್ನುಮುಚ್ಛಾಲೆಯಾಟ. ಕಾಡು ಕಡಿದು ಬಯಲು ಮಾಡಿದ್ದ ಕಡೆ ಮಾತ್ರ ಹಾಲು ಹೆಪ್ಪುಗಟ್ತಿ ನಿಂತಿತ್ತು. ಎತ್ತರದಲ್ಲಿ ಬಿಳಿಯ ಮೋಡಗಳು, ನಿಮಿಷವೂ ಬಿಡುವಿಲ್ಲವೆಂಬಂತೆ ಉತ್ತರಾಭಿಮುಖವಾಗಿ ಧಾವಿಸು ತ್ತಿದ್ದುವು. ವೃಕ್ಷರಾಶಿಗೆ ಕಚಗುಳಿ ಇಡುತ್ತ ಒಂದೇ ಸಮನೆ ಬೇಸುತ್ತಿತ್ತು ಕುಳಿರುಗಾಳಿ.
{{gap}}ನಡುಮನೆಯಲ್ಲಿ ಅಗ್ಗಿಷ್ಟಿಕೆ ಉರಿಯುತ್ತಿತ್ತು. ಕೆಂಡಗಳು ಮಿನುಗುತ್ತಿದ್ದುವು. ಅಲ್ಲಿಯೇ ಗೋಡೆಗೊರಗಿ ಕುಳಿತಿದ್ದಳು ಗಿರಿಜವ್ವ, ಮೌನವಾಗಿ.<br />
{{gap}}ಮುದುಕಿ ಮಾತ್ರ ಗೊಣಗುತ್ತಲೇ ಇದ್ದಳು. ಆಕೆ ಗಂಗವ್ವ. ಎರಡು ನರ್ಷಗಳಿಂದ ಮಗನ ಆಗಮನವನ್ನು ಇದಿರು ನೋಡುತ್ತಲೇ ಇದ್ದ ವೃಧ್ದ ಮಾತೆ.
{{gap}}ಕಂಬಳಿಯನ್ನು ಬಲವಾಗಿ ಹೊದೆಯುತ್ತ, ಗೋಡೆ ಹಿಡಿದು ನಿಂತು, ತಡವರಿಸುತ್ತ ಆಕೆ ಹೊರಬಂದಳು. ಹೊಸ್ತಿಲು ದಾಟಿದ ಬಳಿಕ ಜಗಲಿ ಬಂತೆ? ಇದು ಜಗಲಿಯೆ? ಅಥವಾ ಅಂಗಳಕ್ಕಿಳಿಯವ ಮೆಟ್ಟಲೆ? - ಎಂದು ಪಾದಗಳು ಶಂಕಿಸಿದುವು. ಪರೆ ಆವರಿಸಿದ್ದ ಕಣ್ಣುಗಳು, ಕತ್ತಲೆಯನ್ನು ಇರಿದು ನೋಡುವಂತೆ ಕಿರಿದುಗೊಳ್ಳುತ್ತ ದೂರಕ್ಕೆ ದಿಟ್ಟಿಸಿದುವು.<br />
{{gap}}ಹಾಗೆ ನೋಡಿ ಆಯಾಸವಾಗಲು, ನಿಟ್ಟುಸಿರು ಬಿಟ್ಟು, ಜಗಲಿಯ ಆಡ್ಡಗೋಡೆಯನ್ನು ಆಧರಿಸಿ ಆಕೆ ಆಲ್ಲಿಯೆ ನೆಲದ ಮೇಲೆ ಕುಳಿತಳು.
{{gap}}ಹೃದಯದ ಕಳವಳ ನಿತ್ಯದ ಪಲ್ಲವಿಯನ್ನು ಹೊರಗೆಡವಿತು :<br />{{gap}} "ಪುಟ್ಟಬಸ್ಯ ಬರಲಿಲ್ಲಲ್ಲೇ...ಬರಲಿಲ್ಲಲ್ಲೇ ಪುಟ್ಟಬಸ್ಯಾ.."<br />
{{gap}}ಕುಳಿತಲ್ಲಿಂದಲೆ ಗಿರಿಜವ್ವ ಹೇಳಿದಳು :<br />
{{gap}}"ಬಂದು ಮಲಕ್ಕೊಳ್ಳಿ ಅತ್ತೆಮ್ಮ. ರಾತ್ರಿ ಭಾಳ ಆಯ್ತು."<br />
ಸೊಸೆ ಹಾಗೆ ಕರೆದಳೆಂದು ಎದ್ದು ಬರುವವಳೆ ಗಂಗವ್ವ? ಆಕೆ ಅಳ<noinclude><references/></noinclude>
0a8wimcd9n208j2ddy8mlc8z9clsinf
ಪುಟ:Kalyaand-asvaami.pdf/೪೧
104
9353
321463
62105
2026-05-20T14:53:10Z
Shreelatha.Halemane
7642
/* Validated */
321463
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕತ್ತಲು ಕವಿದ ಕೊಡಗು|left=|right=೩೯}}
{{gap}}ಜಗಲಿಯ ಗೋಡೆಯಾಚೆಗೆ ಮರೆಯಲ್ಲಿ ಗಂಗವ್ವ ಗಿರಿಜೆಯರು ಕುಳಿತರು.<br />
{{gap}}ತಣ್ಣನೆ ಗಾಳಿ ಬೀಸಿತು. ಮರದೆಲೆಗಳಿಂದ ಕಚಕಚನೆ ಸದ್ಧು ಹೊರಟಿತು.<br />
{{gap}}ನಂಜಯ್ಯ ನಿಟ್ಟುಸಿರುಬಿಟ್ಟು ,ನೆಲವನ್ನೆ ನೋಡುತ್ತಲಿದ್ದು ,ಬಳಿಕ ತಲೆ ಎತ್ತಿ ಆರಂಭಿಸಿದ:<br />
{{gap}}"ಕೊಡಗಿನ ಕರ್ಮಕಥೆ ಕೇಳಿ ನಿಮಗೆ ಸಂಕಟವಾದೀತು. ನಾವೀಗ ಗುಲಾಮರು ಗೊತ್ತೈತಾ?ಮಾರಿ ಬೀದೀಲಿ ಹೋಗ್ತಿತ್ತು.ಅದನ್ನು ನಾವು ಮನೆಗೆ ಕರೆದ್ವಿ ..."<br />
* * * * * * * * * * * * * * * * * * * * * * * * * <br />
{{gap}}ಬೀದಿಯಲ್ಲಿ ಸಾಗುತಿತ್ತು ಮಾರಿ. ಕಲ್ಲೆಸೆದು 'ಶೂ' ಎಂದಿದ್ಧರೆ, ಹಾಗೆಯೇ ಅದು ಮುಂದಕ್ಕೆ ಹೋಗುವುದು ಸಾಧ್ಯವಿತ್ತು.ಆದರೆ ಕೊಡಗಿನ ಅರಸರು ಅದನ್ನು ಮನೆಗೆ - ಅರಮನೆಗೆ - ಕರೆದರು.<br />
{{gap}}ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ, ಇಬ್ಬರನ್ನೂ ಶಕ್ತಿ ಗುಂದಿಸಿ,ಮಧ್ಯೆ ತಮ್ಮ ಬಾವುಟವನ್ನು ಭದ್ರವಾಗಿ ನೆಡುತಿದ್ದ ಸಮರ್ಥರು ಇಂಗ್ಲಿಷರು. <br />
{{gap}}ಕೊಡಗಿನ ಅರಸರು ವೀರರಾಜೇಂದ್ರನೊಮ್ಮೆ ತನಗೋಸ್ಕರ ಒಂದು ಕುದುರೆಯನ್ನು ಕೊಳ್ಳಲೆಂದು ದೂತನನ್ನು ತಲಚೇರಿಗೆ ಕಳುಹಿದ. ಮುತ್ತು ಭಟ್ಟ ಕುದುರೆಯನ್ನು ಕೊಳ್ಳುವ ಯತ್ನದಲ್ಲಿದ್ದಾಗ, ಅಲ್ಲಿದ್ದ ಇಂಗ್ಲಿಷರಿಗೆ ಆ ವಿಷಯ ತಿಳಿಯಿತು. ಮುತ್ತು ಭಟ್ಟನನ್ನು ತಮ್ಮ ಅಧಿಕಾರಿಯ ಕಡೆಗೆ ನವುರು ಮಾತುಗಳ ನೆರವಿನಿಂದಲೆ ಅವರು ಕರೆದೊಯ್ಧರು.<br />
{{gap}}ಆ ಅಧಿಕಾರಿ ರಾಬರ್ಟ್ ಟೇಯ್ ಲರ್. ಆತನೆಂದಃ<br />
{{gap}}"ನಿಮ್ಮ ರಾಜರು ಕುಶಲವೊ?"<br />
{{gap}}"ದೇವರ ಕೃಪೆಯಿಂದ ಕುಶಲ."<br />
{{gap}}"ಕುದುರೆ ತಾನೆ ನಿಮ್ಮ ರಾಜರಿಗೆ ಬೇಕಾದ್ದು?"<br />
{{gap}}"ಹೌದು."<br />
{{gap}}"ಒಳ್ಳೇ ಅರಬ್ಬೀ ಕುದುರೆ ನಾವು ಉಚಿತವಾಗಿ ಕೊಡುತ್ತೇವೆ."<noinclude><references/></noinclude>
igsyk97y9js3z7isktxtkmb19corqoe
ಪುಟ:Kalyaand-asvaami.pdf/೩೦
104
9354
321465
62080
2026-05-20T14:56:37Z
Shreelatha.Halemane
7642
/* Validated */
321465
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಗಿದ್ದವರು ಆಗಲೆ ನೋಡಿದರೇನೋ ಎಂದು ಆಕೆಗೆ ಲಜ್ಜೆ ಎನಿಸಿತು.<br />
{{gap}}ಪುಟ್ಟಬಸವನೇ ಕೇಳಿದ :<br />
{{gap}}"ಅವ್ವಾ ಹುಷಾರಾಗಿದಾಳಾ?"<br />
{{gap}}"ಹೊಂ. ಎಬ್ಬಿಸ್ಲಾ?" ಎಂದಳು ಗಿರಿಜಾ.<br />
{{gap}}ತಾಯಿ ಎದ್ದಳೆಂದರೆ ಹರ್ಷಾತಿರೇಕದ ರೋದನಕ್ಕೆ ಮೊದಲು. ಅದನ್ನು ತಿಳಿಯದವನಲ್ಲ ಆತ.<br />
{{gap}}"ಈಗ್ಲೇ ಬೇಡ."<br />
{{gap}}ಆ ಎಲ್ಲ ಸುಖಕ್ಕೆ ತಾನೊಬ್ಬಳ್ಳೇ ಹಕ್ಕುದಾರಳಾಗುವುದು ಗಿರಿಜೆಗೂ ಇಷ್ಟವೆನಿಸಿತು. <br />
{{gap}}ಬಂದೂಕನ್ನು ಪುಟ್ಟಬಸವ ಗೋಡೆಯ ಮೂಲೆಗೆ ಒರಗಿ ನಿಲ್ಲಿಸುತ್ತಿದ್ದಂತೆ ಆಕೆ ಕೇಳಿದಳು :<br />
{{gap}}"ಈಗ ಏನು ಮಾಡ್ಲಿ? ರೊಟ್ಟಿ ತಟ್ಲಾ?"<br />
{{gap}}"ತಾಳು, ಅವರನ್ನ ಕೇಳಿ ಹೇಳ್ತೀನಿ."<br />
{{gap}}ಅಂಗಳಕ್ಕಿಳಿದ ಗಂಡನನ್ನು ಜಗಲಿಯ ಅಂಚಿನ ವರೆಗೂ ಹೆಂಡತಿ ಹಿಂಬಾಲಿಸಿ, ತನ್ನವನ ಸ್ನೇಹಿತರು ಯಾರೆಂಬುದನ್ನು ಇಣಕಿ ನೋಡಿದಳು. ಮರಗಳ ಕೆಳಗೆ ನಾಲ್ಕು ಕುದುರೆಗಳು ನಿಂತಿದ್ದುವು. ಅಂಗಳವನ್ನು ಆವರಸಿದ್ದ ಕಟ್ಟೆಯ ಮೇಲೆ ಕಾಲು ಚಾಚಿ ಮೂವರು ಕುಳಿತಿದ್ದರು.<br />
{{gap}}ಅವರ ಬಳಿ ಹೊಗುತ್ತ ಪುಟ್ಟಬಸವ ಕೇಳಿದ :<br />
{{gap}}"ನಂಜಯ್ಯ, ರೊಟ್ಟಿ ಮಾಡಿಸ್ಲಾ? ಏನ್ಹೇಳಿ?"<br />
{{gap}}"ಒಂದು ಬಿಂದಿಗೆ ನೀರು, ಒಂದು ಚಾಪೆ-ಇಷ್ಟೇ ಈಗ ಬೇಕಾದ್ದು. ಉಳಿದದ್ದೆಲ್ಲಾ ನಾಳೆ, ಎಚ್ಚರವಾದ್ಮೇಲೆ."<br />
{{gap}}ಉತ್ತರವಿತ್ತ ಸ್ವರ ಗಿರಿಜವ್ವನಿಗೆ ಪರಿಚಿತವಾಗಿರಲಿಲ್ಲ. ಆನಂತರ ಕೇಳಿಸಿದ ಇನ್ನೊಂದು ಧ್ವನಿಯೂ ಅಷ್ಟೇ. <br />
{{gap}}"ಇದೇ ಈಗ ಬೆಳ್ಳಿ ಮೂಡೈತೆ. ಸ್ವಲ್ಪ ಹೊತ್ತು ಸುಖವಾಗಿ ಮಲಕೋಬೌದಪ್ಪಾ."<br />
{{gap}}"ನಿಮ್ಮಿಷ್ಟ" ಎಂದ ಪುಟ್ಟಬಸವ.<br />
{{gap}}ಒಳಗಿನಿಂದ ಮಣ್ಣಿನ ಗಡಿಗೆಯಲ್ಲಿ ನೀರೂ ತಾಮ್ರದ ಬಿಂದಿಗೆಯೂ ಬಂದವು.<noinclude><references/></noinclude>
pmnbkff1ss8130ls4c43nsr0lvgi4ni
ಪುಟ:Kalyaand-asvaami.pdf/೨೦
104
9357
321444
62065
2026-05-20T14:15:14Z
Pragathi. BH
7585
321444
proofread-page
text/x-wiki
<noinclude><pagequality level="3" user="Lahariyaniyathi" />{{rh|center=ಕಲ್ಯಾಣ ಸ್ವಾಮಿ|left=೧೮|right=}}</noinclude>ತೊಡಗಿದಳು ಎಂದಿನಂತೆ. ಕ್ಷೀಣಧ್ವನಿಯ ರೋದನ. ಒಳಗಿನ ಸಂಕಟ ಕರಗಿ ಕುದಿದು ಸ್ವಲ್ಪ ಸ್ವಲ್ಪವೆ ಹೊರಕ್ಕೆ ಒಸರಿತು.
ಗಿರಿಜನ್ವನಿಗೂ ಗಂಟಲು ಒತ್ತರಿಸಿ ಬಿಕ್ಕುವಂತಾಯಿತು. ಆಕೆ ಎದ್ದು ಅತ್ತೆಯ ಬಳಿಗೆ ನಡೆದಳು. ಅಲ್ಲಿ ಆ ಹಣ್ಣು ಜೀವಕ್ಕೋತ್ತಿಕೊಂಡು ಕುಳಿತಳು.
ಗಂಗವ್ವನ ಸುಕ್ಕುಗಟ್ಟದ ಕೈ ಸೊಸೆಯ ತೋಳನ್ನು ಮುಟ್ಟಿತು; ಮೈಯನ್ನು ತಡವಿತು; ಮುಖದತ್ತ ಸರಿಯಿತು. ಆ ಕಣ್ಣುಗಳಲ್ಲಿ ಹನಿಯಾಡಿತೆಂದು, ಆಕೆ ಅಂದಳು.
"ನೀನ್ಯಾತಕ್ಕೆ ಅಳ್ತೀಯಾ? ಅಳಬೇಡ."
"ಇಲ್ಲ ಅತ್ತೆಮ್ಮ."
ಆ ಉತ್ತರವನ್ನು ಮಾತ್ರ ಅಳು ನಿರ್ಲಜ್ಜೆಯೆಂದ ಹಿಂಬಾಲಿಸಿತು.<br />
ಅತ್ತೆ ತನ್ನ ಬಡ ಬಾಹುನಿನಿಂದ ಸೊಸೆಯನ್ನು ಬಳಸಿ ತನ್ನೆಡೆಗೆ ಬರ ಸೆಳೆದಳು. ಎಳೆಯ ಮಗುವಾಗಿ ಮುದುಡಿಕೊಂಡು ಗಂಗವ್ವನ ಎದೆಯೊಳಗೆ ಮುಖವಿಟ್ಟಳು ಗಿರಿಜೆ.<br />
ಒಂದೇ ರೀತಿಯ ದು:ಖ ಎರಡು ಜೀವಗಳನ್ನೂ ಒಂದಾಗಿ ಬೆಸೆಯಿತು.
ಹೊರಗೆ ಸುಯ್ ಸುಯ್ಯೆಂದು ಸದ್ದುಮಾಡುತ್ತ ಬೀಸುತ್ತಲೇ ಇತ್ತು ಗಾಳಿ.
ಅತ್ತೆ ಕೇಳಿದಳು:
"ಇವತ್ತು ಹುಣ್ಣಿಮೆ ಅಲ್ಲವಾ?"
"ಹೊಂ. ಅತ್ತೆಮ್ಮ."
"ಯಾಕೆ, ತಿಂಗಳ ಬೆಳಕೇ ಇಲ್ವಲ್ಲಾ. ಮೋಡ ಮುಚ್ಕೊಂಡೈತಾ? ಮಳೆ ಬರೋ ಹಂಗೈತಾ?"
ಬೆಳಕು ಶುಭ್ರವಾಗಿತ್ತು. ಮೋಡ ಮುಚ್ಚಿರಲಿಲ್ಲ. ಬೇಸಗೆ ಅದೇ ಅಗ ಆರಂಭವಾಗಿದ್ದ ಆ ದಿನಗಳಲ್ಲಿ ಎಲ್ಲಿಯ ಮಳೆ? ಆದರೆ ಎದೆಕುದಿತ ದಿಂದ ವಿಚಾರ ಮಂಕಾಗಿದ್ದ, ವಯಸ್ಸಿನಿಂದ ದೃಷ್ಟಿ ಮಂದನಾಗಿದ್ದ, ಗಂಗವ್ವನ ಪಾಲಿಗೆ ಪ್ರತಿಯೊಂದೂ ತಿರುವುಮುರುವಾಗಿತ್ತು. ಅದನ್ನು ತಿಳಿ<noinclude><references/></noinclude>
675am16rq2h3kdi65xuq8vf5osfc3hk
321448
321444
2026-05-20T14:20:13Z
Shreelatha.Halemane
7642
/* Validated */
321448
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಕಲ್ಯಾಣ ಸ್ವಾಮಿ|left=೧೮|right=}}</noinclude>ತೊಡಗಿದಳು ಎಂದಿನಂತೆ. ಕ್ಷೀಣಧ್ವನಿಯ ರೋದನ. ಒಳಗಿನ ಸಂಕಟ ಕರಗಿ ಕುದಿದು ಸ್ವಲ್ಪ ಸ್ವಲ್ಪವೆ ಹೊರಕ್ಕೆ ಒಸರಿತು.
{{gap}}ಗಿರಿಜನ್ವನಿಗೂ ಗಂಟಲು ಒತ್ತರಿಸಿ ಬಿಕ್ಕುವಂತಾಯಿತು. ಆಕೆ ಎದ್ದು ಅತ್ತೆಯ ಬಳಿಗೆ ನಡೆದಳು. ಅಲ್ಲಿ ಆ ಹಣ್ಣು ಜೀವಕ್ಕೋತ್ತಿಕೊಂಡು ಕುಳಿತಳು.
{{gap}}ಗಂಗವ್ವನ ಸುಕ್ಕುಗಟ್ಟದ ಕೈ ಸೊಸೆಯ ತೋಳನ್ನು ಮುಟ್ಟಿತು; ಮೈಯನ್ನು ತಡವಿತು; ಮುಖದತ್ತ ಸರಿಯಿತು. ಆ ಕಣ್ಣುಗಳಲ್ಲಿ ಹನಿಯಾಡಿತೆಂದು, ಆಕೆ ಅಂದಳು.
{{gap}}"ನೀನ್ಯಾತಕ್ಕೆ ಅಳ್ತೀಯಾ? ಅಳಬೇಡ."
"ಇಲ್ಲ ಅತ್ತೆಮ್ಮ."
{{gap}}ಆ ಉತ್ತರವನ್ನು ಮಾತ್ರ ಅಳು ನಿರ್ಲಜ್ಜೆಯೆಂದ ಹಿಂಬಾಲಿಸಿತು.<br />
{{gap}}ಅತ್ತೆ ತನ್ನ ಬಡ ಬಾಹುನಿನಿಂದ ಸೊಸೆಯನ್ನು ಬಳಸಿ ತನ್ನೆಡೆಗೆ ಬರ ಸೆಳೆದಳು. ಎಳೆಯ ಮಗುವಾಗಿ ಮುದುಡಿಕೊಂಡು ಗಂಗವ್ವನ ಎದೆಯೊಳಗೆ ಮುಖವಿಟ್ಟಳು ಗಿರಿಜೆ.<br />
{{gap}}ಒಂದೇ ರೀತಿಯ ದು:ಖ ಎರಡು ಜೀವಗಳನ್ನೂ ಒಂದಾಗಿ ಬೆಸೆಯಿತು.
{{gap}}ಹೊರಗೆ ಸುಯ್ ಸುಯ್ಯೆಂದು ಸದ್ದುಮಾಡುತ್ತ ಬೀಸುತ್ತಲೇ ಇತ್ತು ಗಾಳಿ.
{{gap}}ಅತ್ತೆ ಕೇಳಿದಳು:
{{gap}}"ಇವತ್ತು ಹುಣ್ಣಿಮೆ ಅಲ್ಲವಾ?"
{{gap}}"ಹೊಂ. ಅತ್ತೆಮ್ಮ."
{{gap}}"ಯಾಕೆ, ತಿಂಗಳ ಬೆಳಕೇ ಇಲ್ವಲ್ಲಾ. ಮೋಡ ಮುಚ್ಕೊಂಡೈತಾ? ಮಳೆ ಬರೋ ಹಂಗೈತಾ?"
{{gap}}ಬೆಳಕು ಶುಭ್ರವಾಗಿತ್ತು. ಮೋಡ ಮುಚ್ಚಿರಲಿಲ್ಲ. ಬೇಸಗೆ ಅದೇ ಅಗ ಆರಂಭವಾಗಿದ್ದ ಆ ದಿನಗಳಲ್ಲಿ ಎಲ್ಲಿಯ ಮಳೆ? ಆದರೆ ಎದೆಕುದಿತ ದಿಂದ ವಿಚಾರ ಮಂಕಾಗಿದ್ದ, ವಯಸ್ಸಿನಿಂದ ದೃಷ್ಟಿ ಮಂದನಾಗಿದ್ದ, ಗಂಗವ್ವನ ಪಾಲಿಗೆ ಪ್ರತಿಯೊಂದೂ ತಿರುವುಮುರುವಾಗಿತ್ತು. ಅದನ್ನು ತಿಳಿ<noinclude><references/></noinclude>
hcggt3l32xywjp3kpdtz2h4xcj3syh4
ಪುಟ:Kalyaand-asvaami.pdf/೩೭
104
9359
321459
62089
2026-05-20T14:46:44Z
Shreelatha.Halemane
7642
/* Validated */
321459
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕತ್ತಲು ಕವಿದ ಕೊಡಗು|left=|right=೩೫}}
ಕರಗ್ತೇತೆ.ಈಗ ಉಸಿರು ಹಿಡಿದಿರ್ಬೇಕಲ್ಲಾ ಅಂತ ಒಂದಿಷ್ಟುತಿಂತೀವೆ.
{{gap}}"ರೊಟ್ಟಿ ಬಿಸಿಯಾಗಿತ್ತು ನಿಜ. ಆದರೆ ಪುಟ್ಟಬಸವನಿಗೂ ಅದ ಅಗತ್ಯವಿರಲಿಲ್ಲ.<br />
{{gap}}ಗಿರಿಜವ್ವ, ಎತ್ತಿಕೊಂಡಿದ್ದ ತಟ್ಟೆಯನ್ನು ಹಾಗೆಯೇ ಒಳಕ್ಕೊಯ್ದಳು.<br />
{{gap}}ಗಂಡಸರೆಲ್ಲ ಜಗಲಿಯ ಮೇಲೆ ಕುಳಿತರು.ಒಳಗಿನಿಂದ ವೀಳೆಯದೆಲೆ ಆಡಿಕೆ ಬಂದರೂ ಯಾರೂ ಅವುಗಳ ಗೋಜಿಗೆ ಹೋಗಲಿಲ್ಲ.
ನಂಜಯ್ಯ ಒಂದೆರಡು ಆಡಿಕೆ ಹೋಳುಗಳನ್ನಷ್ಟೆ ಆಯ್ಪು ಬಾಯಿಯೊಳಕ್ಕೆ ತುರುಕಿಕೊಂಡ.<br />
{{gap}}ಗಂಗವ್ವನ ಪಾಲಿಗೆ ಸಾವಿನ ಮನೆಯ ವಾತಾವರಣವೇರ್ಪಟ್ಟಿತ್ತು, ಅಲ್ಲಿ.ಮಗನು ಮನೆಗೆ ಮರಳಿದ ಸಂಭ್ರಮಕ್ಕೆ ಆಸ್ಪದವೇ ಇಲ್ಲದ ಹಾಗೆ ಕೆಟ್ಟ ಸುದ್ದಿಯ ಸೂತಕ ಮುಟ್ಟಿತ್ತು.ರಾಜರಿಗೆ ರಾಜ್ಯಕ್ಕೆ ಮಾತ್ರವಲ್ಲ,ತನ್ನ ಸಂಸಾರಕ್ಕೂ ಒದಗಿತ್ತು ಆಪತ್ತು.ಪುಟ್ಟಬಸವನ ತಂದೆಯ ದಿಂದಲೂ ಅರಮನೆಯ ಮರಕ್ಕೆ ಅಡರಿಯೇ ಬೆಳೆದಿತ್ತು,ಅವರ ವಂಶದ ಬಳ್ಳಿ. <br />
{{gap}}ಆ ಬೇಸರವೋ ಆಂಟು ಬುಡ್ಯ.ಗಿರಿಜೆಯ ಮುಖವೂ ಕಪ್ಪಿಟ್ಟಿತು. ಯುದ್ದ....ಸೋಲು, ಮತ್ತೆ ಯುದ್ದ ಮತ್ತೆ.........ಗಂಡ ಬಹಳ ದಿನ ಮನೆಯಲ್ಲಿ ಇರುವುದಿಲ್ಲನೆಂಬ ಶಂಕೆಯೊಂದು ಆಕೆಯ ಮನಸ್ಸಿನಲ್ಲಿ ಮೂಡಿ ಕೆಲ ನಿಮಿಷಗಳಲ್ಲೇ ಬಲಗೊಂಡಿತು.... <br />
{{gap}}ಮಧ್ಯಾಹ್ನ ಹಬ್ಬದಡುಗೆಯಾಗಬೇಕು ಎಂದಿದ್ದಳು ಗಂಗವ್ವ-ರೊಟ್ಟಿ ತಟ್ಟುತ್ತ ಒಲೆಯ ಮುಂದೆ ಕುಳಿತಿದ್ದಾಗ.ಬೆಳಗ್ಗೆ ಅತ್ತೆ ಮತ್ತು ಸೊಸೆ,ಆಗಬೇಕಾದ ಭಕ್ಷ್ಯಭೋಜ್ಯಗಳ ವಿಷಯ ಮಾತನಾಡಿದ್ದರು.ಈಗ-<br />
{{gap}}ಗಿರಿಜವ್ವ ಅತ್ತೆಯ ಬಳಿ ಸಾರಿದಳು.<br />
{{gap}}"ಅಡುಗೆ ಏನೇನು ಮಾಡಾನ ಅತ್ತೆಮ್ಮ?"<br />
{{gap}}ಸ್ವಲ್ಪ ಹೊತ್ತು ಸುಮ್ಮನಿದ್ದು ಗಂಗವ್ವ ಉತ್ತರನಿತ್ತಳು:<br />
{{gap}}"ನಿನ್ನ ಗಂಡನ್ನ ಕೇಳು".<br />
{{gap}}ಪುಟ್ಟಬಸವ,ಹೆಂಡತಿಯ ಪ್ರಶ್ನೆಗೆ ನೇರವಾಗಿ ಉತ್ತರ ಕೊಡದೆ ನಂಜಯ್ಯನ ಕಡೆಗೆ ತಿರುಗಿದ:<noinclude><references/></noinclude>
n38acy8bxfxbwawo0vdye70wzvru2ng
ಪುಟ:Kalyaand-asvaami.pdf/೪೨
104
9361
321439
62106
2026-05-20T14:02:51Z
Shreelatha.Halemane
7642
/* Validated */
321439
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕಲ್ಯಾಣಸ್ವಾಮಿ|left=೪೦|right=}}
{{gap}}ಬೇಡ..ಎನ್ನುವುದುಂಟೆ ಮುತ್ತುಭಟ್ಟ? ಉತ್ತರವೀಯಲು ಯೋಗ್ಯ ಪದಗಳಿಗಾಗಿ ಆತ ತಡವರಿಸುತಿದ್ದಂತೆ ಟೇಯ್ ಲರ್ ಹೇಳಿದ :<br />
{{gap}}"ನೀವು ನಮಗೆ ಉಚಿತವಾಗಿ ನಮ್ಮ ಫಿರಂಗಿ ಎಳೆಯುವುದಕ್ಕೊಸ್ಕರ ಒಂದು ಜತೆ ಒಳ್ಳೆ ಹೋರಿ ಕೊಡಬೇಕು."<br />
{{gap}}"ನಮ್ಮ ಮಹಾರಾಜರಿಗೆ ತಿಳಿಸ್ತೇನೆ. ಅವರು ಖಂಡಿತವಾಗಿ ಒಪ್ಪಬಹುದು."<br />
{{gap}}"ಹಾಗೇ ಮಾಡಿರಿ."<br />
{{gap}}ಬಳಿಕ ತನ್ನ ಸೇವಕರನ್ನು ಕುರಿತು ಆತನ ಆಜ್ಞೆ :<br />
{{gap}}"ಯಾರಲ್ಲಿ ? ರಾಜಮರ್ಯಾದೆಯಿಂದ ಇವರನ್ನು ಕಳಿಸಿಕೊಡಿ!"<br />
{{gap}}...ಹಾಗೆ ಕೊಡಗಿಗೆ ಬಂತು ಇಂಗ್ಲಿಷರ ಕುದುರೆ.ಕೊಡಗಿನ ಹೋರಿಗಳು ಬಯಲು ಭೂಮಿಗಿಳಿದು ಅವರ ಫಿರಂಗಿಗಳನ್ನೆಳೆದವು.<br />
{{gap}}ಮೊದಲು ಒಂದು ಕುದುರೆ. ಬಳಿಕ ಹಲವಾರು.<br />
{{gap}}ಅವರ ಫಿರಂಗಿಯೂ ಅಷ್ಟೆ. ಮೊದಲು ಒಂದು, ಬಳಿಕ ಹಲವಾರು.<br />
{{gap}}ವಿಶ್ವಾವಸು ಸಂವತ್ಸರದಲ್ಲಿ [೧೬೯೦ನೆಯ ಇಸವಿ] ಟೇಯ್ ಲರ್ ವೀರರಾಜೇಂದ್ರನನ್ನು ತಲಚೇರಿಗೆ ಕರೆದ. ಸ್ನೇಹ ಹಸ್ತ; ಆಧುನಿಕರಾದ ಆಂಗ್ಲರ ಪರಿಚಯ;ಸರಿಸಮಾನರಾಗಿ ನಿಂತು ಸಂಭಾಷಣೆ.<br />
{{gap}}"ನೋಡಿ ಮಹಾರಾಜರೆ, ಆ ಟಿಪ್ಪು ನಿಮಗೂ ವೈರಿ,ನಮಗೂ ವೈರಿ,ಆದ್ಧರಿಂದ ನಾವಿಬ್ಬರೂ ಮಿತ್ರರಾಗುವುದು ಸ್ವಾಭಾವಿಕ. ನಾನು ಹೇಳಿದ್ದು ಸರಿಯಷ್ಟೆ?ನೋಡಿ. ನಮ್ಮ ಕಂಪೆನಿ ನಿಮಗೆ ಪೂರ್ಣ ರಕ್ಷಣೆ ಕೊಡುತ್ತ ದೆ. ನಾವಿಬ್ಬರೂ ಒಂದು ಒಪ್ಪಂದ ಮಾಡಿಕೊಂಡುಬಿಡುವ. ಏನು ಹೇಳುತ್ತೀರಿ?"<br />
{{gap}}ಟಿಪ್ಪುವಿನ ಮೇಲೆ ಏರಿಹೋಗಲು ಹಾದಿಯಿದ್ದುದು ಕೊಡಗಿನ ಮೂಲಕವಾಗಿಯೆ. ಆ ಕಾರಣದಿಂದಲೆ ಕೊಡಗಿನ ರಾಜರ ಸ್ನೇಹ ಬೇಕಾಗಿತ್ತು ಬ್ರಿಟಿಷರಿಗೆ. ಟಿಪ್ಪುವನ್ನು ಸೋಲಿಸಿದ ಬಳಿಕ ---<br />
{{gap}}"ಆ ಒಳಮರ್ಮವನ್ನು ತಿಳಿಯಲಿಲ್ಲ ವೀರರಾಜೇಂದ್ರ. ಕಂಪೆನಿಯ ರಕ್ಷಣೆ ಎಂದರೆ ತನ್ನ ಸ್ವಾತಂತ್ರ್ಯ ನಷ್ಟವಾಗುವುದೇನೋ, ಎಂದು ಮಾತ್ರ ಆತ ಅಳುಕಿದ.<noinclude><references/></noinclude>
dzxzjubyhan3o7q90ak1jo7nph7q10x
ಪುಟ:Kalyaand-asvaami.pdf/೧೩
104
9372
321432
62057
2026-05-20T13:50:14Z
Pragathi. BH
7585
/* Validated */
321432
proofread-page
text/x-wiki
<noinclude><pagequality level="4" user="Pragathi. BH" />{{center|೧೧}}</noinclude>{{gap}}"೧೭೪೧ನೆಯ ಇಸವಿಯಲ್ಲಿ ಹುಟ್ಟಿದ ಮಂಗಳೂರಿನ ಬಾಸೆಲ್ ಮಿಶ್ಯನ್ ಛಾಪಖಾನೆಯಲ್ಲಿ 'ಕಲ್ಯಾಣಪ್ಪನ ಪ್ರಸಂಗ' ಎಂದು ಒಂದು ಯಕ್ಷಗಾನ ಪ್ರಸಂಗವು ಅಚ್ಚಾಗಿತ್ತು. ಅದನ್ನು ಕೂಡಲೆ ಇಂಗ್ಲಿಷ್ ಸರಕಾರವು ಕಂಡುಹಿಡಿದು ಅದರ ಪ್ರತಿಗಳನ್ನೆಲ್ಲ ಸುಟ್ಟುಹಾಕಿಸಿತಂತೆ."<br />
{{gap}}[ಗೋವಿಂದ ಪೈಯವರು ನನಗೆ ಬರೆದಿರುವ ಒಂದು ಪತ್ರದಿಂದ]
{{gap}}ಬಾಸೆಲ್ ಮಿಶ್ಯನಿನವರು ಇಂಗ್ಲಿಷರಲ್ಲ - ಜರ್ಮನರು, ಎಂಬುದನ್ನು ಗಮನದಲ್ಲಿಟ್ಟರೆ, ಮೇಲಿನ ಮಾಹಿತಿ ಅರ್ಥಪೂರ್ಣವಾಗಿ ಯಾರಿಗಾದರೂ ತೋರಲೇಬೇಕು. ಬರಿಯ ಕಳ್ಳನ ಕಥೆ ಎಂದಾದರೆ ಪ್ರತಿಗಳನ್ನು ಸುಟ್ಟು ಹಾಕುವ ಅಗತ್ಯ ಇಂಗ್ಲಿಷ್ ಸರಕಾರಕ್ಕೆ ಖಂಡಿತವಾಗಿಯೂ ಇರುತ್ತಿರಲಿಲ್ಲ.
ಕಲ್ಯಾಣಸ್ವಾಮಿಯ ಕಥೆ ಮುಗಿದ ಬಳಿಕ,ಇಂಗ್ಲಿಷರು ತೋರಿಸಿದ ಧೋರಣೆ ಯಾವುದು?
{{gap}}".....ಬೋಪುದಿವಾನನಿಗೂ ಆತನ ಜನರಿಗೂ ಕಂಪೆನಿ ಸರಕಾರದವರು..ಜಹಗೀರು ಭೂಮಿಗಳನ್ನೂ ಯುದ್ಧದಲ್ಲಿ ಸತ್ತು ಹೋದವರ ಕುಟುಂಬದವರಿಗೆ ಮೂರು ತಲೆಗಳವರೆಗೆ ಪೆನ್ಶನ್ನನ್ನೂ ಕಾಟಕಾಯಿಯಲ್ಲಿ. ಭಾಗವಹಿಸಿದರವರ ಯೋಗ್ಯತೆಗನುಸಾರವಾಗಿ ಚಿನ್ನ, ಬೆಳ್ಳಿ, ಪದಕಗಳನ್ನೂ ಕೊಟ್ಟರು. ಚಿನ್ನದ ಪದಕವು ಸರಪಣಿ ಸಮೀತ ಹನ್ನೊಂದೊವರೆ ತೊಲೆ ತೂಕವುಳ್ಳದ್ದಾಗಿದ್ದಿತ್ತು.ಆ ಪದಕದ ಒಂದು ಬದಿಯಲ್ಲಿ ಒಬ್ಬ ಕೊಡಗು ವೀರನು ಯುದ್ಧ ಮಾಡುವ ಹಾಗೆ ಅಚ್ಟೋತ್ತಿದೆ. ಇನ್ನೊಂದು ಬದಿಯಲ್ಲಿ ಪೀಚೆಕತ್ತಿ ಮತ್ತು ಒಡಿಕತ್ತಿಗಳನ್ನು ಒಂದು ಹಾರದಲ್ಲಿ ಕಟ್ಟಿ ಸಿಕ್ಕಿಸಿದ ಹಾಗೆ ಬಿಡಿಸಿದೆ. ಇದಲ್ಲದೆ ಆ ಪದಕದ ಒಂದು ಬದಿಯಲ್ಲಿ ಇಂಗ್ಲಿಷಿನಲ್ಲಿ "For distinguished conduct and loyalty to the British Government, Coorg. April 1837" ಎಂದು ಬರೆದಿದೆ. ಆದರೆ ತರ್ಜುಮೆಯು ಕನ್ನಡದಲ್ಲಿ ಇನ್ನೊಂದು ಬದಿಯಲ್ಲಿದೆ."
{{center|[ ಡಿ.ಎನ್ ಕೃಷ್ಣಯ್ಯನವರ ಲೇಖನದಿಂದ]}}<br />
{{gap}}ಕಳ್ಳನನ್ನು ಹಿಡಿದರೆಂಬ ಕಾರಣದಿಂದ 'ವೀರರಿಗೆ' ಇಷ್ಟೊಂದು ಸತ್ಕಾರ ಮಾಡಿದರೆಂದು ನಂಬುವುದು ಕಷ್ಟ.<noinclude><references/></noinclude>
dzysmqirqatlrgnw39zecn16vs0elol
ಪುಟ:Kalyaand-asvaami.pdf/೧೪
104
9375
321433
62058
2026-05-20T13:52:06Z
Pragathi. BH
7585
/* Validated */
321433
proofread-page
text/x-wiki
<noinclude><pagequality level="4" user="Pragathi. BH" />{{center|೧೨}}</noinclude>{{gap}}ಈ ಎಲ್ಲ ಅಂಶಗಳನ್ನು ಪರಿಗಣಿಸಿ, ನಿನ್ನೆ-ಎಂದು-ನಾಳೆಗಳನ್ನು ಬಂಧಿಸಿರುವ ಸೂತ್ರವನ್ನು ಗಮನಿಸಿ, ಕಥಾನಾಯಕ ಕಲ್ಯಾಣಸ್ವಾಮಿಯ ಪಾತ್ರವನ್ನೂ ಇತಿಹಾಸದಲ್ಲಿ ಉಲ್ಲೇಖವಿರುವ ಹಾಗೂ ಇಲ್ಲದ ಇತರ ಪಾತ್ರಗಳನ್ನೂ ನಾನು ಸೃಷ್ಟಿಸಿದ್ದೇನೆ. ಇಸಿಹಾಸದ ನಿರ್ಮಾತೃಗಳು ಜನರೇ ಎಂಬ ಸಾರ್ವಕಾಲಿಕಸತ್ಯವನ್ನು ಮರೆಯದೆ, ಈ ಕಾದಂಬರಿಯನ್ನು ರಚಿಸಿದ್ದೀನೆ.
{{center|* * * *}}
{{gap}}'ಕಲ್ಯಾಣಪ್ಪ' ನನ್ನ ಹೃದಯ ಸ್ನೇಹಿತ. ಅದ್ಭುತವಾದ ತಮ್ಮ ವರ್ಣನಾವೈಖರಿಯಿಂದ, ಮಾತಿನ ಮೋಡಿಯಿಂದ, ಸಾಹಿತ್ಯ ಪ್ರತಿಭೆಯಿಂದ ಆ ಕಥೆಯನ್ನು ಇಪ್ಪತ್ತು ವರ್ಷಗಳಿಗೆ ಹಿಂದೆಯೇ ನನ್ನ ಮನಸ್ಸಿನ ಮೇಲೆ ಅಚ್ಚೊತ್ತಿದ್ದವರು, ಬಾಲ್ಯದ ನನ್ನ ಅಧ್ಯಾಪಕರಾದ ಶ್ರೀಯುತ ಬಿ. ಶಂಕರ ನಾರಾಯಣರಾಯರು. ಅವರು ಆಗ ಹೇಳಿದ ಕಥೆಯ ನಿರ್ದಿಷ್ಟ ಸ್ವರೂಪವಾಗಲೀ, ವಿವರವಾಗಲೀ ಈಗ ನನಗೆ ನೆನಪಿಲ್ಲ. ಆದರೆ ಆ ಪದಬ್ರಹ್ಮ ಸೃಷ್ಟಿಸಿದ ಕಲ್ಯಾಣಪ್ಪನ ಪಾತ್ರ ಮಾತ್ರ, ಅನಂತರ ಮನಃಪಟಲದ ಮೇಲೆ ಹಲವು ಸಹಸ್ರ ಪಾತ್ರಗಳು ಸುಳಿದರೂ, ಅಚ್ಚಳಿಯದೆ ನಿಂತಿದೆ. ನನ್ನ ಈ ಬರವಣಿಗೆಗೆ ಆ ಕಥೆಯೇ ಮೂಲ ಸ್ಫೂರ್ತಿ.
{{gap}}ಎಂದಾದರೂ ಆ ವಸ್ತುವನ್ನು ಬಳಸಿಕೊಂಡು ಬರೆಯಬೇಕೆಂದು ನಿರ್ಧರಿಸಿದ್ದರೂ, ನಾನು 'ಕಾದಂಬರಿಕಾರ' ಎನಿಸಿಕೊಂಡ ಬಳಿಕ ಆ ವಿಷಯದ ಕಡೆಗೆ ನನ್ನ ಲಕ್ಷ್ಯವನ್ನೆಳೆದವರು ಬಾಲ್ಯ ಸ್ನೇಹಿತರಾದ ಶ್ರೀ ಶ್ರೀನಿವಾಸ ಪ್ರಭು.
{{gap}}ಆದರೆ ಆಗಲೀ, ಸಾಹಿತಿ ಸನ್ಮಾತ್ರ ಶ್ರೀ ರಾ. ವೆಂ. ಶ್ರೀ 'ಕಲ್ಯಾಣ ಸ್ವಾಮಿ' ಎಂಬ ಕಾದಂಬರಿ ಬರೆಯುವರೆಂದು ಪ್ರಕಟವಾಗಿತ್ತು. ಅವರ ಕಲ್ಯಾಣಸ್ವಾಮಿ ನನ್ನ ಕಲ್ಯಾಣಪ್ಪನೇ ಎಂದು ತಿಳಿಯಲು ಹೆಚ್ಚು ಕಾಲ ಹಿಡಿಯಲ್ಲ. ರಾ. ವೆಂ. ಶ್ರೀ. ಸಾಮಾನ್ಯವಾಗಿ ಬರೆಹಗಾರರ ಜಾತಿಯಲ್ಲಿ ಕಾಣಸಿಗದ ಸೌಹಾರ್ದ ಭಾವದಿಂದ, "ನೀವು ಬರೆಯಿರಿ, ನಾನು ಪ್ರಕಟಿಸುವ ಏರ್ಪಾಟು ಮಾಡುತ್ತೇನೆ." ಎಂದರು.
{{gap}}ವಸ್ತುವಿನ ಪ್ರಸ್ತಾಪ ಮಾಡಿದಾಗ ಕವಿ ಅಮ್ಮೆಂಬಳರು, ಶ್ರೀ ಬಿ. ಶಂಕರ<noinclude><references/></noinclude>
7rw4h98gcjcu0gudbxa95qh3ugs2i5e
ಪುಟ:Kalyaand-asvaami.pdf/೧೫
104
9404
321434
62059
2026-05-20T13:54:07Z
Pragathi. BH
7585
/* Validated */
321434
proofread-page
text/x-wiki
<noinclude><pagequality level="4" user="Pragathi. BH" />{{center|೧೩}}</noinclude>ಭಟ್ಟರು, ಶ್ರೀ ಪಿ.ಕೆ.ನಾರಾಯಣರು ನನಗೋಸ್ಕರ ತಮ್ಮ ನೆನಪುಗಳ ಭಂಡಾರಗಳನ್ನು ತಾವಾಗಿಯೇ ತೆರೆದರು.
{{gap}}ಬಾಲ್ಯಸ್ನೇಹಿತ ಶ್ರೀ ಮನಮೋಹನ ಪ್ರಭು, ಕೇಳಿದೊಡನೆಯೇ ಒಂದೆರಡು ಪುಸ್ತಕಗಳನ್ನು ಕಳುಹಿಕೂಟ್ಟರು
.
{{gap}}ವಿಷಯ ಸಂಗ್ರಹಕ್ಕೆಂದು ಮಡಿಕೇರಿಗೆ ಹೋದಾಗ, ನಿತ್ಯೋತ್ಸಾಹಿಯಾದ ಶ್ರೀ ಅನಂತಪದ್ಮನಾಭರಾಯರು, ಬರೆಹಗಾರ ಸೋದರ ಶ್ರೀ ಬಿ.ಡಿ.ಗಣಪತಿಯವರು, ಅವಿರಾಮ ಜೀವಿ ಶ್ರೀ ಕುಟ್ಟಪ್ಪನವರು, ಸಂತೋಷದಿಂದ ನನಗೆ ಸಲಹೆ ಸಹಾಯಗಳನ್ನು ನೀಡಿದರು.
{{gap}}ಶ್ರೀ ಡಿ.ಎನ್.ಕೃಷ್ಣಯ್ಯನವರು, ನನ್ನ ವಿಚಾರಗಳು ಸ್ಪುಟಗೊಳ್ಳಲು ನೆರವಾದರು. ಶ್ರೀ ಎ.ಆರ್.ಶಗ್ರಿತ್ತಾಯರು ತಮ್ಮ ಯಕ್ಷಗಾನ ಕೃತಿಯನ್ನು ಕಳುಹಿಕೊಟ್ಟರು. ಶ್ರೀ ಗೋವಿಂದಪೈಯವರಂತೂ ತಾವು ನೀಡಿದ ಅಮೂಲ್ಯ ಸಹಾಯದಿಂದ ನನ್ನನ್ನು ಮೂಕನಾಗಿ ಮಾಡಿದರು.
{{gap}}ಇವರೆಲ್ಲರಿಗೆ, ಸಂವತ್ಸರಗಳನ್ನು ಗುರುತುಹಚ್ಚಲು ನೆರವಾದ ಪಂಚಾಂಗ ಮಂದಿರದ ಶ್ರೀ ಶ್ರೀನಿವಾಸರಿಗೆ, ಶ್ರೀ ಗುರುರಾಜರಿಗೆ, ಬರವಣಿಗೆ ಸಾಗಿದ್ದಂತೆಯೆ 'ಬರೆದಾಯಿತೆ? ಅಚ್ಚಾಯಿತೆ?' ಎಂದು ಕೇಳುತ್ತ ಸ್ವಾಗತಾರ್ಹವಾದ 'ಕಿರುಕುಳ'ವನ್ನಿತ್ತ ಅನೇಕ ವಾಚಕ ಮಿತ್ರರಿಗೆ, ಬರೆದಂತೆಲ್ಲ ಓದಿದುದಕ್ಕೆ ಕಿವಿಗೂಟ್ಟು ಮೊದಲ ಪ್ರತಿಕ್ರಿಯೆ ವ್ಯಕ್ತಪಡಿಸಿದ ಒಡತಿ ಅನುಪಮಾಗೆ, ನಾನು ಕೃತಜ್ಞ....
{{gap}}ಮುಂದಿನ ವರ್ಷ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಶತಮಾನೋತ್ಸವವನ್ನು ಸ್ವತಂತ್ರ ಭಾರತ ಆಚರಿಸಲಿದೆ. ಆ ರಾಷ್ಟ್ರೀಯ ಉತ್ಸವಕ್ಕಿದು ಕನ್ನಡ ಬರೆಹಗಾರನಾದ ನನ್ನ ಕಾಣಿಕೆ....
{{gap}}'ಕಲ್ಯಾಣಸ್ವಾಮಿ'ಗೆ ಸಮಕಾಲೀನವಾಗಿದ್ದ ಇನ್ನೊಬ್ಬ ವ್ಯಕ್ತಿಯ ನೇತೃತ್ವದಲ್ಲಿ ನಡೆದ ಹೋರಾಟದ ರೋಮಾಂಚಕಾರಿ ಕಥೆಯೊಂದಿದೆ. ಸದ್ಯದಲ್ಲೇ ನಾನು ಬರೆಯಬೇಕೆಂದಿರುವ ಆ ಕಾದಂಬರಿಯ ಹೆಸರು 'ವೀರ ಅಪರಂಪ.' ಅದು 'ಕಲ್ಯಾಣಸ್ವಾಮಿ'ಗೆ ಸೋದರ ಕೃತಿ. ಅದನ್ನೂ ನನ್ನ ಓದುಗರು ಸ್ವಾಗತಿಸುವರೆಂದು ನಾನು ನಂಬಿದ್ದೇನೆ.
ಇದು ನನ್ನ ಮೊದಲನೆಯ ಐತಿಹಾಸಿಕ ಕಾದಂಬರಿ. ಮೊದಲನೆಯದು, ಕೊನೆಯದಲ್ಲ. ಕನ್ನಡನಾಡಿನ ಗತಕಾಲವನ್ನೆಲ್ಲ ಕಾದಂಬರಿಗಳ<noinclude><references/></noinclude>
cn2nbk67m56a7g133qhw5bgseb9jb01
321435
321434
2026-05-20T13:54:49Z
Pragathi. BH
7585
321435
proofread-page
text/x-wiki
<noinclude><pagequality level="4" user="Pragathi. BH" />{{center|೧೩}}</noinclude>ಭಟ್ಟರು, ಶ್ರೀ ಪಿ.ಕೆ.ನಾರಾಯಣರು ನನಗೋಸ್ಕರ ತಮ್ಮ ನೆನಪುಗಳ ಭಂಡಾರಗಳನ್ನು ತಾವಾಗಿಯೇ ತೆರೆದರು.
{{gap}}ಬಾಲ್ಯಸ್ನೇಹಿತ ಶ್ರೀ ಮನಮೋಹನ ಪ್ರಭು, ಕೇಳಿದೊಡನೆಯೇ ಒಂದೆರಡು ಪುಸ್ತಕಗಳನ್ನು ಕಳುಹಿಕೂಟ್ಟರು
{{gap}}ವಿಷಯ ಸಂಗ್ರಹಕ್ಕೆಂದು ಮಡಿಕೇರಿಗೆ ಹೋದಾಗ, ನಿತ್ಯೋತ್ಸಾಹಿಯಾದ ಶ್ರೀ ಅನಂತಪದ್ಮನಾಭರಾಯರು, ಬರೆಹಗಾರ ಸೋದರ ಶ್ರೀ ಬಿ.ಡಿ.ಗಣಪತಿಯವರು, ಅವಿರಾಮ ಜೀವಿ ಶ್ರೀ ಕುಟ್ಟಪ್ಪನವರು, ಸಂತೋಷದಿಂದ ನನಗೆ ಸಲಹೆ ಸಹಾಯಗಳನ್ನು ನೀಡಿದರು.
{{gap}}ಶ್ರೀ ಡಿ.ಎನ್.ಕೃಷ್ಣಯ್ಯನವರು, ನನ್ನ ವಿಚಾರಗಳು ಸ್ಪುಟಗೊಳ್ಳಲು ನೆರವಾದರು. ಶ್ರೀ ಎ.ಆರ್.ಶಗ್ರಿತ್ತಾಯರು ತಮ್ಮ ಯಕ್ಷಗಾನ ಕೃತಿಯನ್ನು ಕಳುಹಿಕೊಟ್ಟರು. ಶ್ರೀ ಗೋವಿಂದಪೈಯವರಂತೂ ತಾವು ನೀಡಿದ ಅಮೂಲ್ಯ ಸಹಾಯದಿಂದ ನನ್ನನ್ನು ಮೂಕನಾಗಿ ಮಾಡಿದರು.
{{gap}}ಇವರೆಲ್ಲರಿಗೆ, ಸಂವತ್ಸರಗಳನ್ನು ಗುರುತುಹಚ್ಚಲು ನೆರವಾದ ಪಂಚಾಂಗ ಮಂದಿರದ ಶ್ರೀ ಶ್ರೀನಿವಾಸರಿಗೆ, ಶ್ರೀ ಗುರುರಾಜರಿಗೆ, ಬರವಣಿಗೆ ಸಾಗಿದ್ದಂತೆಯೆ 'ಬರೆದಾಯಿತೆ? ಅಚ್ಚಾಯಿತೆ?' ಎಂದು ಕೇಳುತ್ತ ಸ್ವಾಗತಾರ್ಹವಾದ 'ಕಿರುಕುಳ'ವನ್ನಿತ್ತ ಅನೇಕ ವಾಚಕ ಮಿತ್ರರಿಗೆ, ಬರೆದಂತೆಲ್ಲ ಓದಿದುದಕ್ಕೆ ಕಿವಿಗೂಟ್ಟು ಮೊದಲ ಪ್ರತಿಕ್ರಿಯೆ ವ್ಯಕ್ತಪಡಿಸಿದ ಒಡತಿ ಅನುಪಮಾಗೆ, ನಾನು ಕೃತಜ್ಞ....
{{gap}}ಮುಂದಿನ ವರ್ಷ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಶತಮಾನೋತ್ಸವವನ್ನು ಸ್ವತಂತ್ರ ಭಾರತ ಆಚರಿಸಲಿದೆ. ಆ ರಾಷ್ಟ್ರೀಯ ಉತ್ಸವಕ್ಕಿದು ಕನ್ನಡ ಬರೆಹಗಾರನಾದ ನನ್ನ ಕಾಣಿಕೆ....
{{gap}}'ಕಲ್ಯಾಣಸ್ವಾಮಿ'ಗೆ ಸಮಕಾಲೀನವಾಗಿದ್ದ ಇನ್ನೊಬ್ಬ ವ್ಯಕ್ತಿಯ ನೇತೃತ್ವದಲ್ಲಿ ನಡೆದ ಹೋರಾಟದ ರೋಮಾಂಚಕಾರಿ ಕಥೆಯೊಂದಿದೆ. ಸದ್ಯದಲ್ಲೇ ನಾನು ಬರೆಯಬೇಕೆಂದಿರುವ ಆ ಕಾದಂಬರಿಯ ಹೆಸರು 'ವೀರ ಅಪರಂಪ.' ಅದು 'ಕಲ್ಯಾಣಸ್ವಾಮಿ'ಗೆ ಸೋದರ ಕೃತಿ. ಅದನ್ನೂ ನನ್ನ ಓದುಗರು ಸ್ವಾಗತಿಸುವರೆಂದು ನಾನು ನಂಬಿದ್ದೇನೆ.
ಇದು ನನ್ನ ಮೊದಲನೆಯ ಐತಿಹಾಸಿಕ ಕಾದಂಬರಿ. ಮೊದಲನೆಯದು, ಕೊನೆಯದಲ್ಲ. ಕನ್ನಡನಾಡಿನ ಗತಕಾಲವನ್ನೆಲ್ಲ ಕಾದಂಬರಿಗಳ<noinclude><references/></noinclude>
fow86fnlf5dqynyz654u7oeborm9mlx
ಪುಟ:Kalyaand-asvaami.pdf/೧೬
104
9449
321436
62061
2026-05-20T13:56:19Z
Pragathi. BH
7585
/* Validated */
321436
proofread-page
text/x-wiki
<noinclude><pagequality level="4" user="Pragathi. BH" />{{center|೧೪}}</noinclude>ರೂಪದಲ್ಲಿ ನಾನೊಬ್ಬನೇ ಪುನಃ ಸೃಷ್ಟಿಸಬೇಕೆಂಬ ಹಟ ನನಗಿಲ್ಲ. ಆದರೆ, 'ಕಲ್ಯಾಣಸ್ವಾಮಿ'ಯ ಜತೆಗೆ, ಇವತ್ತಿಗಾಗಿಯೂ ನಾಳೆಗಾಗಿಯೂ ಇನ್ನೂ ಕೆಲವನ್ನು ಬರೆದು, ಗತಕಾಲಕ್ಕೂ ನಮಗೂ ನಡುವೆ ಭದ್ರವಾದ ಕೊಂಡಿಗಳನ್ನು ಬೆಸೆಯಲು ನೆರವಾಗಬೇಕೆಂಬ ಅಪೇಕ್ಷೆ ಮಾತ್ರ ಬಲವಾಗಿದೆ.
{{gap}}ಇತರ ಕೃತಿಗಳ ವಿಷಯದಲ್ಲಿ ಹೇಗೆಯೋ ಹಾಗೆಯೇ ಈ ಕೃತಿಗೆ ಸಂಬಂಧಿಸಿಯೂ ಓದುಗರ ಪ್ರತಿಕ್ರಿಯೆಯನ್ನು ತಿಳಿಯಲು ನಾನು ಕುತೂಹಲಿಯಾಗಿದ್ದೇನೆ.
ಗಣೇಶ ಚತುರ್ಥಿ, ಸೆಪ್ಟೆಂಬರ್, ೧೯೫೬<br />
ವಾಣಿವಿಲಾಸ ಮೊಹಲ್ಲಾ <br />
ಮೈಸೂರು
{{Right|ನಿರಂಜನ}}<noinclude><references/></noinclude>
n3onmhyzcmck0c8c9017gnlynqe4w19
ಪುಟ:Kalyaand-asvaami.pdf/೪೭
104
9460
321445
62111
2026-05-20T14:15:35Z
Shreelatha.Halemane
7642
/* Validated */
321445
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕತ್ತಲು ಕವಿದ ಕೊಡಗು|left=|right=}}
{{gap}}ಭೂಮಿಯನ್ನೆಲ್ಲಾ ಅಳೆದು ಮಣ್ಣಿನ ಗುಣಕ್ಕೆ ಸರಿಯಾಗಿ ಕಂದಾಯ ನಿಗದಿ ಮಾಡಿ!"<br />
{{gap}}ಹಾಗೆ ಆ ಅಳತೆಯ ಕೋಲು ಲಿಂಗರಾಜ ಕೋಲಾಯಿತು; ನಿಗದಿಯಾದ ಕಂದಾಯ ಲಿಂಗರಾಜನ ಶಿಸ್ತು ಎಂದಾಯಿತು.<br />
{{gap}}ರೈತರಿಗೂ ಭೂಮಾಲಿಕರಿಗೂ ಇರುವ ಸಂಬಂಧವನ್ನು ನಿರ್ದಿಷ್ಟಗೊಳಿಸಿ ಐವತ್ತೆರಡು 'ಹುಕುಂ'ಗಳನ್ನು ಆ ರಾಜ ಹೊರಡಿಸಿದ. <br />
{{gap}}ಮಡಿಕೇರಿಯ ಅರಮನೆ ಸಿದ್ಧವಾಯಿತು. ಓಂಕಾರೇಶ್ವರ ದೇವಸ್ಥಾನದ ಸ್ಥಾಪನೆಯಾಯಿತು.<br />
{{gap}}ಉತ್ತಮವಾದ ಗುರಿಕಾರ, ಕುದುರೆ ಸವಾರ, ಆ ಅರಸು. ಒಂದು ವರ್ಷಕ್ಕಿರುವ ದಿನಗಳ ಸಂಖ್ಯೆಗಿಂತಲೂ ಹೆಚ್ಚು ಹುಲಿಗಳನ್ನು ಕೊಂದ ವೀರ<br />
ಆತನದು ಕೊಡಗು ದೇಶದಪ್ರಗತಿಯನ್ನು ಸಾಧ್ಯಗೊಳಿಸಿದ ದಕ್ಷತೆಯ ರಾಜ್ಯಭಾರ. <br />
{{gap}}ಕಂಪನಿಯ ಸರಕಾರದವರು ಬೇಟೆಯಾಡಲೇನೋ ಕೊಡಗಿಗೆ ಆಗಲೂ ಬಂದರು. ಆದರೆ ಅವರಿಗೆ ಗೊತ್ತಿತ್ತು-- ಲಿಂಗರಾಜನ ಕಾಲದಲ್ಲಿ ಕೊಡಗನ್ನು ಆಕ್ರಮಿಸುವುದು ಆಗದ ಮಾತೆಂಬುದು. <br />
{{gap}}...ತಂದೆಯ ಅನಂತರ ಪಟ್ಟಕ್ಕೆ ಬಂದ ವೀರರಾಜ ದಕ್ಷತೆಯಲ್ಲಿ ಲಿಂಗರಾಜನಿಗಿಂತ ಕಡಿಮೆಯವನಾಗಿರಲಿಲ್ಲ. ಬಿಸಿರಕ್ತದ ಯುವಕ. ಆದರೆ ಇಂಗ್ಲಿಷರ ದೃಷ್ಟಿಯಲ್ಲಿ ಆತ ಹಲವು ದುರ್ಗುಣಗಳ ಪ್ರತಿಮೂರ್ತಿಯಾಗಿದ್ದ. ಆ ದುರ್ಗುಣಗಳಲ್ಲಿ ಅತ್ಯಂತ ಪ್ರಧಾನವಾಗಿದ್ದುದು ಆತನ ಸ್ವಾಭಿಮಾನ, ಸ್ವಾತಂತ್ರ್ಯಪ್ರಿಯತೆ. <br />
{{gap}}ತಾತ ವೀರರಾಜೇಂದ್ರನ ದಿನಗಳಿಂದ ತನ್ನವರೆಗೆ ಕಾಲ ಪ್ರವಾಹ ಹರಿದ ಗತಿಯನ್ನು ಆತ ನಿರೀಕ್ಷೀಸಿದ್ದ. ಆಂಗ್ಲ್ರನ್ನು ಆತ್ಮೀಯ ಸ್ನೇಹಿತರೇಂದು ಕರೆದು ಅಪ್ಪಿಕೊಳ್ಳುವ ಅಗತ್ಯ ಚಿಕ್ಕವೀರರಾಜನಿಗೆ ತೋರಲಿಲ್ಲ. ಬರಿಯ ವ್ಯಾಪರಿಗಳಾಗಿರಲಿಲ್ಲ ಆ ಬಿಳಿಯ ಜನ. ಭಾರತದ ವಿಸ್ತೃತ ಭಾಗಗಳನ್ನೇ ಕಂಪನಿ ಸರ್ಕಾರ ಆಕ್ರಮಿಸಿತ್ತು. ತಕ್ಕಡಿಯ ತಟ್ಟೆಗಳನ್ನು ಕಳಚಿ, ಉಳಿದ ಬಡಿಗೆಯನ್ನೆ ದಂಡಾಯುಧವಾಗಿ ಬೀಸುತ್ತಿದ್ದರು ಬ್ರಿಟಿಷರು. <br /><noinclude><references/></noinclude>
6fr4oshq3esp6hl0cshkhowun24egnb
ಪುಟ:Kalyaand-asvaami.pdf/೧೦೪
104
9484
321467
90202
2026-05-20T14:59:29Z
Shreelatha.Halemane
7642
/* Validated */
321467
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಕಲ್ಯಾಣಸ್ವಾಮಿ|left=೧೦೦|right=}}</noinclude><p style="text-indent: 1cm;">"ಆಗಲಿ ಕರ್ತು,"ಎಂದ ಪುಟ್ಟ ಬಸವ.</p>
<p style="text-indent: 1cm;">ಆತನೂ ಉಡುಪು ಕಳಚಿ ಕೈಕಾಲು ತೊಳೆದು ಬಂದ.ತೇಗು ತೊಂದರೆಕೊಡುತ್ತಿತ್ತೆಂದು ಒಂದು ಲೋಟ ನೀರು ಕುಡಿದ.</p>
<p style="text-indent: 1cm;">"ದೀಪ ಆರಿಸ್ಲಾ?"ಎಂದು ಗಿರಿಜವ್ವ ಕೇಳಿದಳು.</p>
<p style="text-indent: 1cm;">"ಹೂಂ."</p>
<p style="text-indent: 1cm;">ಗಿರಿಜಾ 'ಫೂ'ಎಂದು ಉಸಿರುಬಿಟ್ಟಳು.ದೀಪ ಆರಿ ಹೋಯಿತು.ಆ ಕತ್ತಲೆಯಲ್ಲಿ ಪುಟ್ಟಬಸವ ಮೈಮುರಿದು 'ಶಿವಾ'ಎಂದು ದಿಂಬಿನ ಮೇಲೆ ತಲೆ ಇರಿಸಿದ.</p>
<p style="text-indent: 1cm;">ಆತನ ಮಗ್ಗುಲಲ್ಲೇ ಮಲಗಿಕೊಂಡ ಗಿರಿಜಾ,ಗಂಡನ ಎದೆಯ ವಿಸ್ತಾರದ ಮೇಲೆ ತನ್ನ ಅಂಗೈ ಇರಿಸಿದಳು.</p>
<p style="text-indent: 1cm;">ಆಕೆ ಕೇಳಿದಳು:</p.>
<p style="text-indent: 1cm;">"ಭಾರೀ ದಣಿವಾಗೈತಾ?"</p>
<p style="text-indent: 1cm;">"ದಣಿವು?ಏನು ಕಡಿದಿದೀನಿ ಅಂತ?ಸೋಮಯ್ಯನ ಮನೆವರೆಗೆ ಒಂದ್ಸಲ ಹೋಗ್ಬಂದ್ರೆ ಸುಸ್ತಾಗ್ತದಾ?"</p>
<p style="text-indent: 1cm;">"ಸಾವಿರ ಹರದಾರಿ ಸವಾರಿ ಮಾಡಿದ್ರೂ ನನ್ನ ರಾಜರಿಗೆ ಸುಸ್ತಾಗಾಕಿಲ್ಲ,ಅಲ್ವಾ?"</p>
<p style="text-indent: 1cm;">ರಾಜರು.ಪುಟ್ಟಬಸವ ಸಣ್ಣನೆ ನಕ್ಕ.ಹೆಂಡತಿಗೆ ಹೇಳಬೇಕು ತಾನು.ಆ ಜನರೆಲ್ಲ ತನ್ನಲ್ಲಿಟ್ಟಿದ್ದ ವಿಶ್ವಾಸ,ಕೈಗೊಳ್ಳಲಾದ ತೀರ್ಪು,ತಾನು ಹೊರಡಬೇಕಾದ ಪ್ರಮೇಯ...</p>
<p style="text-indent: 1cm;">ಹೇಗೆ ಆರಂಭಿಸಲೆಂದು ಆತ ಯೋಚಿಸುತ್ತಿದ್ದಂತೆ,ಒಳಗಿನಿಂದ ಗಂಗವ್ವನ ಸ್ವರ ಕೇಳಿಸಿತು:</p>
<p style="text-indent: 1cm;">"ಬಂದಿಯಾ ಪುಟ್ಟಬಸ್ಯಾ?ಬಂದಿಯಾ ಮಗನೇ?"</p>
<p style="text-indent: 1cm;">ನಿದ್ದೆಯಿಂದ ಮಸಕಾಗಿದ್ದ ಸ್ವರ </p>
<p style="text-indent: 1cm;">"ಹೂನವ್ವಾ.ನೀನು ಮಲಕೋ."</p>
<p style="text-indent: 1cm;">"ಹೂಂ"</p>
<p style="text-indent: 1cm;">ಸ್ವಲ್ಪ ಹೊತ್ತು ಮೌನ ನೆಲೆಸಿತು.ಬಳಿಕ ಗಿರಿಜಾ ಹೇಳಿದಳು:</p>
<p style="text-indent: 1cm;">"ಈಚೀಚೆಗೆ ಅತ್ತೆಯವರಿಗೆ ನಿಮ್ಮ ನೆನಪು ಜಾಸ್ತಿಯಾಗೇತೆ"</p><noinclude><references/></noinclude>
k8nq4yshgsfmsshb9thus4n3x0kwuh0
321468
321467
2026-05-20T15:00:13Z
Shreelatha.Halemane
7642
321468
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಕಲ್ಯಾಣಸ್ವಾಮಿ|left=೧೦೦|right=}}</noinclude><p style="text-indent: 1cm;">"ಆಗಲಿ ಕರ್ತು,"ಎಂದ ಪುಟ್ಟ ಬಸವ.</p>
<p style="text-indent: 1cm;">ಆತನೂ ಉಡುಪು ಕಳಚಿ ಕೈಕಾಲು ತೊಳೆದು ಬಂದ.ತೇಗು ತೊಂದರೆಕೊಡುತ್ತಿತ್ತೆಂದು ಒಂದು ಲೋಟ ನೀರು ಕುಡಿದ.</p>
<p style="text-indent: 1cm;">"ದೀಪ ಆರಿಸ್ಲಾ?"ಎಂದು ಗಿರಿಜವ್ವ ಕೇಳಿದಳು.</p>
<p style="text-indent: 1cm;">"ಹೂಂ."</p>
<p style="text-indent: 1cm;">ಗಿರಿಜಾ 'ಫೂ'ಎಂದು ಉಸಿರುಬಿಟ್ಟಳು.ದೀಪ ಆರಿ ಹೋಯಿತು.ಆ ಕತ್ತಲೆಯಲ್ಲಿ ಪುಟ್ಟಬಸವ ಮೈಮುರಿದು 'ಶಿವಾ'ಎಂದು ದಿಂಬಿನ ಮೇಲೆ ತಲೆ ಇರಿಸಿದ.</p>
<p style="text-indent: 1cm;">ಆತನ ಮಗ್ಗುಲಲ್ಲೇ ಮಲಗಿಕೊಂಡ ಗಿರಿಜಾ,ಗಂಡನ ಎದೆಯ ವಿಸ್ತಾರದ ಮೇಲೆ ತನ್ನ ಅಂಗೈ ಇರಿಸಿದಳು.</p>
<p style="text-indent: 1cm;">ಆಕೆ ಕೇಳಿದಳು:
<p style="text-indent: 1cm;">"ಭಾರೀ ದಣಿವಾಗೈತಾ?"</p>
<p style="text-indent: 1cm;">"ದಣಿವು?ಏನು ಕಡಿದಿದೀನಿ ಅಂತ?ಸೋಮಯ್ಯನ ಮನೆವರೆಗೆ ಒಂದ್ಸಲ ಹೋಗ್ಬಂದ್ರೆ ಸುಸ್ತಾಗ್ತದಾ?"</p>
<p style="text-indent: 1cm;">"ಸಾವಿರ ಹರದಾರಿ ಸವಾರಿ ಮಾಡಿದ್ರೂ ನನ್ನ ರಾಜರಿಗೆ ಸುಸ್ತಾಗಾಕಿಲ್ಲ,ಅಲ್ವಾ?"</p>
<p style="text-indent: 1cm;">ರಾಜರು.ಪುಟ್ಟಬಸವ ಸಣ್ಣನೆ ನಕ್ಕ.ಹೆಂಡತಿಗೆ ಹೇಳಬೇಕು ತಾನು.ಆ ಜನರೆಲ್ಲ ತನ್ನಲ್ಲಿಟ್ಟಿದ್ದ ವಿಶ್ವಾಸ,ಕೈಗೊಳ್ಳಲಾದ ತೀರ್ಪು,ತಾನು ಹೊರಡಬೇಕಾದ ಪ್ರಮೇಯ...</p>
<p style="text-indent: 1cm;">ಹೇಗೆ ಆರಂಭಿಸಲೆಂದು ಆತ ಯೋಚಿಸುತ್ತಿದ್ದಂತೆ,ಒಳಗಿನಿಂದ ಗಂಗವ್ವನ ಸ್ವರ ಕೇಳಿಸಿತು:</p>
<p style="text-indent: 1cm;">"ಬಂದಿಯಾ ಪುಟ್ಟಬಸ್ಯಾ?ಬಂದಿಯಾ ಮಗನೇ?"</p>
<p style="text-indent: 1cm;">ನಿದ್ದೆಯಿಂದ ಮಸಕಾಗಿದ್ದ ಸ್ವರ </p>
<p style="text-indent: 1cm;">"ಹೂನವ್ವಾ.ನೀನು ಮಲಕೋ."</p>
<p style="text-indent: 1cm;">"ಹೂಂ"</p>
<p style="text-indent: 1cm;">ಸ್ವಲ್ಪ ಹೊತ್ತು ಮೌನ ನೆಲೆಸಿತು.ಬಳಿಕ ಗಿರಿಜಾ ಹೇಳಿದಳು:</p>
<p style="text-indent: 1cm;">"ಈಚೀಚೆಗೆ ಅತ್ತೆಯವರಿಗೆ ನಿಮ್ಮ ನೆನಪು ಜಾಸ್ತಿಯಾಗೇತೆ"</p><noinclude><references/></noinclude>
pt8ijpkzitqk5yrm1ho4n90ejb6xffl
ಪುಟ:Kalyaand-asvaami.pdf/೪೫
104
9661
321442
62109
2026-05-20T14:12:00Z
Shreelatha.Halemane
7642
/* Validated */
321442
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕತ್ತಲು ಕವಿದ ಕೊಡಗು|left=|right=೪೩}}
{{gap}}...ಬ್ಯಾಂಕು - ಹಣವನ್ನು ಸುರಕ್ಷಿತವಾಗಿಡಲು ಎಂತಹ ಏರ್ಪಾಟು ಮಾಡಿದ್ದರು ಆ ಜನ!<br />
{{gap}}ಬೇಟೆಗೆಂದು ಬಂದ ಬ್ರಿಟಿಷ್ ಅಧಿಕಾರಿಯೊಬ್ಬ ಒಮ್ಮೆ ಕೇಳಿದ: <br />
{{gap}}"ಮಹಾರಾಜರೇ ನಮ್ಮ ಕಂಪನಿಯ ಬ್ಯಾಂಕಿನಲ್ಲಿ ನೀವು ಯಾಕೆ ಹಣವಿಡಬಾರದು?"<br />
{{gap}}ವೀರರಾಜೇಂದ್ರ ಉತ್ತರವಿತ್ತ:<br />
{{gap}}"ಆಗಲಿ ಯೋಚಿಸಿ ನೋಡ್ತೀವಿ." <br />
{{gap}}"ಯೋಚಿಸುವುದೇನಿದೆ?ನಿಮ್ಮ ಹಣ ಸುರಕ್ಷಿತವಾಗಿರುತ್ತದೆ.ಅಲ್ಲದೆ ನಾವು ಬಡ್ಡಿಯನ್ನು ಕೊಡುತ್ತೇವೆ." <br />
{{gap}}"ಆಗಲಿ ಆಗಲಿ ಬೇಗ ನಿಮ್ಮ ಬ್ಯಾಂಕಿನಲ್ಲಿ ಹಣವಿಡ್ತೀವಿ."<br />
{{gap}}ಅದಕ್ಕೊಂದು ಸಂದರ್ಭವೂ ಒದಗಿ ಬಂತು ಗಂಡು ಸಂತಾನವಿಲ್ಲದೆ ಸಾಯಬೇಕಾಗಿದ್ದ ಅರಸನನ್ನುಚಿಂತೆ ಅಡರಿತು. <br />
{{gap}}ಮೈಸೂರಿನ ರೆಸಿಡೆಂಟನಾದ ಕೋಲ್ ಒಮ್ಮೆ ಮಡಿಕೇರಿಗೆ ಆಗಮಿಸಿದಾಗ,ವೀರರಾಜೇಂದ್ರ ಆತನಿಗೆ ವೈಭವದ ಸತ್ಕಾರ ನೀಡಿದ.ಅರಮನೆಗೆ ಆತನನ್ನು ಕರೆದೊಯ್ದು ತನ್ನ ನಾಲ್ವರು ಹೆಣ್ಣುಮಕ್ಕಳ ಪರಿಚಯ ಮಾಡಿಸಿಕೊಟ್ಟ.<br />
{{gap}}"ಈಕೆ ದೇವಮ್ಮಾಜಿ,ನನ್ನ ಹಿರಿಯ ಮಗಳು.<br />
{{gap}}" "ಹೌ ಡು ಯು ಡು?" <br />
{{gap}}ತಂದೆ ಮಗಳಿಗೆ ನೆನಪು ಹುಟ್ಟಸಿದ:<br />
{{gap}}"ಮರೆತ್ಹೋಯ್ತಾ ಆಗ್ಲೇ ಹೇಳಿದ್ದು? ಬಗ್ಗಿ ನಮಸ್ಕಾರ ಮಾಡು."<br />
ಕೋಮಲ ಬಳ್ಳಿಯೊಂದು ನೇರವಾಗಿ ನಿಂತಿದ್ದ ಮರದೆದುರು ತುಸು ಬಾಗಿತು.<br />
{{gap}}ಕೋಲ್ ಹೇಳಿದ:<br />
{{gap}}"ಸಂತೋಷ,ಸಂತೋಷ." <br />
{{gap}}"ಈಕೆ ಎರಡನೆಯವಳು..." <br />
{{gap}}"ಅಕ್ಕನ ಹಾಗೆ ಇವಳೂ ಸುಂದರಿ. ನಿಮ್ಮ ಮಕ್ಕಳೆಲ್ಲಾ ಸುಂದರಿಯರು..."<noinclude><references/></noinclude>
mmswn61noqcaooie3rjrhf6nenm1gi2
ಪುಟ:Kalyaand-asvaami.pdf/೪೬
104
9662
321443
62110
2026-05-20T14:14:08Z
Shreelatha.Halemane
7642
/* Validated */
321443
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕಲ್ಯಾಣಸ್ವಾಮಿ|left=೪೪|right=}}
{{gap}}ಮಕ್ಕಳ ಸೌಂದರ್ಯಕ್ಕೆ ಸ್ಫುರದ್ರೂಪಿಯಾದ ತಾನೇ ಹೊಣೆ ಎಂಬಂತೆ,ವೀರರಾಜೇಂದ್ರ ನಸುನಕ್ಕ.<br />
{{gap}}ಕೋಲ್ ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿದ್ದ: ಈತನ ಬಳಿಕ ಸಿಂಹಾಸನವೇರಲು ರಾಜಕುಮಾರನಿಲ್ಲ.ಆಗ ಈ ದೇಶದ 'ರಕ್ಷಣೆ'ಯನ್ನು...<br />
{{gap}}ಅರಸು ಅಥಿತಿಯೊಡನೆ ಮುಖ್ಯವಾದ ವಿಷಯ ಪ್ರಸ್ತಾಪ ಮಾಡಿದ:<br />
{{gap}}"ನಮ್ಮದೊಂದು ಆಸೆಯಿದೆ.ಕಂಪನಿಯವರು ಅದನ್ನು ನಡೆಸಿಕೊಡ್ಬೇಕು.""ಏನದು,ಹೇಳೋಣಾಗಲಿ."ನಮ್ಮ ಆನಂತರ ನಮ್ಮ ಹಿರಿಯ ಮಗಳು ರಾಜ್ಯವಾಳಬೇಕೂಂತ ತೀರ್ಮಾನಿಸಿದೀವಿ.ಅದು ಸಾಧ್ಯವಾಗುವಂತೆ ಕಂಪನಿಯವರು ಸಹಾಯ ಮಾಡ್ಬೇಕು."<br />
{{gap}}ಕೋಲ್ ಸಂತೋಷದಿಂದ ನುಡಿದ:<br />
{{gap}}"ಆಗಲಿ ಅದಕ್ಕೇನಂತೆ?" <br />
{{gap}}"ನಮ್ಮ ಮಗಳ ಹೆಸರಿನಲ್ಲಿ ಆರು ಲಕ್ಷ ರೂಪಾಯಿ ನಿಮ್ಮ ಮದರಾಸು ಬ್ಯಾಂಕಿನಲ್ಲಿಡ್ತೀವಿ."<br />
{{gap}}"ಓಹೋ! ಆಗಬಹುದು!" <br />
{{gap}}"ಹಾಗೆಯೇ ಬೊಂಬಾಯಿಯಲ್ಲಿ ನಿಮ್ಮ ಹತ್ತಿರ ಹಣ ಇಡ್ತೀವಿ.<br />
{{gap}}"ಸಂತೋಷ!" <br />
{{gap}}...ಮುಂದೆ ಸ್ವಲ್ಪ ಸಮಯದಲ್ಲೇ ಅರಸು,ರಾಜಮುದ್ರೆಯನ್ನು ಮಗಳ ಕೈಗಿತ್ತು, ಕಾಲವಾದ. ಆ ಮನೆತನಕ್ಕೆ ನೆರವಾಗಬೇಕಾದುದು ತಮ್ಮ ಕರ್ತವ್ಯ ಎಂದೇನೂ ಇಂಗ್ಲಿಷರು ಭಾವಿಸಲಿಲ್ಲ. <br />
{{gap}}ದೇವಮ್ಮಾಜಿಯ ಪರವಾಗಿ ಆಡಳಿತ ವಹಿಸಿದ್ದ ಲಿಂಗರಾಜ, ಎರಡು ವರ್ಷಗಳ ಅವಧಿಯೊಳಗೇ,ಕೊಡಗಿಗೇ ತಾನೇ ರಾಜನೆಂದು ಸಾರಿದ. <br />
{{gap}}ಆತನ ಕಾಲದಲ್ಲಿ ರಾಜ್ಯದ ಎಲ್ಲೆ ಕಟ್ಟುಗಳು ಭದ್ರವಾದುವು.
{{gap}}ರಾಜನೆಂದ:
{{gap}}"ರೈತರು ಸುಖವಾಗಿರಬೇಕು.ಅದಕ್ಕೋಸ್ಕರ ಸಾಗುವಳಿ ಮಾಡುವ.<noinclude><references/></noinclude>
9iat8bw0205bwvalppvranotsg7o74a
ಪುಟ:Kalyaand-asvaami.pdf/೪೦
104
9666
321462
62103
2026-05-20T14:51:13Z
Shreelatha.Halemane
7642
/* Validated */
321462
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಕಲ್ಯಾಣಸ್ವಾಮಿ|left=೩೮|right=}}</noinclude>{{gap}}ನೆರೆದವರಲ್ಲಿ ಹಿರಿಯವನಾದ ಸೋಮಯ್ಯ ಹೇಳಿದ. <br />
{{gap}}"ನಮಗೆ ಇಲ್ಲಿಗೆ ಒಂದು ಸುದ್ದಿಯೂ ಬರ್ಲಿಲ್ಲ. ಇಂಥ ದೂರ ಪ್ರದೇಶಕ್ಕೆಲ್ಲ ಮೂರು ವರ್ಷಕ್ಕೊಮ್ಮೆ ಕಂದಾಯ ವಸೂಲಿಗೆ ಬರೋದು ಉಂಟು ನೋಡಿ. ಇಲ್ಲದಿದ್ದರೆ ವಸೂಲಿಯವರು ಬಂದಾಗಲಾದರೂ ನಮಗೆ ಗೊತ್ತಾಗ್ತಿತ್ತು."<br />
{{gap}}ಆ ಮಾತಿನ ಬಿಸಿ ಆರುವುದಕ್ಕೆ ಮುಂಚೆಯೆ ನಂಜುಯ್ಯನೆಂದ:<br />
{{gap}}"ಇನ್ನು ಕಂದಾಯ ಮಾತ್ರ ಅಲ್ಲ; ನಾವು ಬೆಳೆಸಿದ್ದನ್ನೆಲ್ಲ ಕಸಕೊಂಡು ಹೋಗ್ತಾರೆ!"<br />
{{gap}}"ಅದು ನೋಡ್ಕೊಳ್ಳಾನ," ಎಂದ ಊರವನು ಯಾರೋ.<br />
{{gap}}"ಕೆಂಪು ಮೋರೆಯೋನು ಇನ್ನು ಕುದುರೆ ಮೇಲೆ ಕೂತು ಬರ್ತಾನೆ. ಕೈಲಿ ಚಾಟ ಹಿಡಿದು, ನಮ್ಮ ಬೆನ್ನಿಗೆ ಬಾರಿಸಿ, 'ಬದ್ಮಾಷ!' ಅನ್ತಾನೆ.
ನಾವು ಇದಿರಾಡಿದರೆ ತುಪಾಕಿಯಿಂದ ಸುಟ್ಟು ಹಾಕ್ತಾನೆ!"<br />
{{gap}}"ಅವನು ವಾಪಸು ಹೋಗೋ ಆಸೆ ಇಟ್ಕೊಂಡು ಇಲ್ಲಿಗೆಲ್ಲಾ ಬರ್ತಾನಂತೊ?" ----ಹೂಂಕರಿಸುತ್ತ ಒಬ್ಬ ಆ ಮಾತನ್ನಾಡಿದ. <br />
{{gap}}ನಂಜಯ್ಯನ ಸ್ವರ ಧೃಡಗೊಂಡಿತು:<br />
{{gap}}"ವಾಪಾಸು ಹೋಗೋ ಆಸೆ ಇಟ್ಕೊಂಡು ಆರುಸಾವಿರ ಮೈಲಿ ದೂರದಿಂದಲೇ ಬಂದವನೇ ಆತ. ಅದನ್ನ ಮರೀಬ್ಯಾಡಿರಿ!"<br />
{{gap}}ಪುಟ್ಟಬಸವನೆಂದ:<br />
{{gap}}"ನಂಜಯ್ಯನವರೆ, ನಡೆದದ್ದು ಏನೂಂತ ನಮಮ್ ಊರಿನವರಿಗೆಲ್ಲ ತಿಳಿಸಿ; ಮಹಾರಾಜರ ಕೊನೆಯ ಸಂದೇಶವನ್ನೂ ಅವರಿಗೆ ಮುಟ್ಟಿಸಿ."<br />
{{gap}}ಸೋಮಯ್ಯನ ಸ್ವರ ಕೇಳಿಸಿತು:<br />
{{gap}}"ಹೌದು ಹೌದು. ಅದ್ಕಾಗಿಯೇ ನಾವು ಬಂದಿದ್ದೇವೆ. ಏನಾಯ್ತೂಂತ ಹೇಳಿ. ನಾವೇನು ಮಾಡಬೇಕೋ ಅಪ್ಪಣೆ ಕೊಡಿಸಿ."<br />
{{gap}}ಒಂದು ನಿಮಿಷ ನಂಜಯ್ಯ ಮೌನವಾಗಿದ್ದ. ಬಳಿಕ ಅಲ್ಲಿದ್ದವರನ್ನೆಲಾ ದಿಟ್ಟಿಸಿ ನೋಡಿದ. <br />
{{gap}}ಕಾಡಿನ ಅಂಚಿಗೆ ಅಂಟಿಕೊಂಡಿತ್ತು ಚಂದ್ರಬಿಂಬ. ಅದರ ಶೀತಲ ಕಿರಣಗಳು ಮೂಡಣಕ್ಕೆ ಇದಿರಾಗಿ ಕುಳಿತಿದ್ದ ಆ ನಾಲ್ವರ ಮೇಲೂ ಬಿದ್ದವು.<noinclude><references/></noinclude>
5ej3sgoxg9x5ifl4ptlmgr2qdvu63f7
ಪುಟ:Kalyaand-asvaami.pdf/೧೭
104
11009
321437
62062
2026-05-20T13:57:01Z
Pragathi. BH
7585
/* Validated */
321437
proofread-page
text/x-wiki
<noinclude><pagequality level="4" user="Pragathi. BH" /></noinclude>
{{center| ಕತ್ತಲು ಕವಿದ ಕೊಡಗು}}<noinclude><references/></noinclude>
e2nr2u4k9wbhqkf780g75f24jot26e9
ಪುಟ:Kalyaand-asvaami.pdf/೨೧
104
11015
321449
62067
2026-05-20T14:23:12Z
Shreelatha.Halemane
7642
/* Validated */
321449
proofread-page
text/x-wiki
<noinclude><pagequality level="4" user="Shreelatha.Halemane" /></noinclude>ದಿದ್ದ ಗಿರಿಜವ್ವ, ಅತ್ತೆಯ ಮನ ನೋಯಿಸಲಾರದೆ ಅಂದಳು:<br />
{{gap}}"ಹೂಂ"<br />
{{gap}}ಮಳೆ ಬಂದು ಮಗನನ್ನು ತೋಯಿಸಬಹುದೆಂದು ಮುದುಕಿಯ ಹೃದಯ ಕ್ಷಣಕಾಲ ಚಡಪಡಿಸಿತು. ಬಳಿಕ ಏನನ್ನೊ ನೆನಪುಮಾಡಿಕೊಳ್ಳುತ್ತ ಮನಸಿನಲ್ಲೆ ಆಕೆ ಗುಣಿಸಿ ನೋಡಿದಳು.<br />
{{gap}}"ಅಲ್ಲಾ, ಸುಗ್ಗಿ ಆದ್ಮೇಲಲ್ವಾ ಮಳೆ ಬರೋದು? ಮಾವಿನ ಕಾಯಿ ಬಲಿತೇ ಇಲ್ಲ ಇನ್ನೂ?"
{{gap}}ವಾಸ್ತವ ಪ್ರಪಂಚಕ್ಕೆ ಅತ್ತೆ ಇಳಿದಳೆಂದು ಸೊಸೆಗೆ ತುಸು ಸಮಾಧಾನವೆನಿಸಿತು.
{{gap}}"ಹೂಂ, ಬರೇ ಮೋಡ. ಮಳೆ ಬರೋ ಹಂಗಿಲ್ಲ." <br />
{{gap}}"ಬರದೇ ಇದ್ದರೆ ವಾಸಿ. ಪುಟ್ಟಬಸ್ಯಾ ಈಗೆಲ್ಲಿದಾನೋ? ಎಷ್ಟು ಕಷ್ಟವಾಗ್ತೇತೊ ಮಗನಿಗೆ?" <br />
{{gap}}ಎಂದಿನ ಜಾಡನ್ನೆ ಮತ್ತೆ ಹಿಡಿದ ವಿಚಾರಸರಣಿ.
{{gap}}ಸೊಸೆ ಮೌನವಾಗಿದ್ದಳೆಂದು ಅತ್ತೆಯೇ ಅಂದಳು:
{{gap}}" ಅಲ್ಲಾ, ಒಬ್ಬರಾದರೂ ಬರಬೇಡವಾ ಈ ದಾರಿಯಾಗಿ ? ಏನಾ ಯ್ತೂಂತ ಒಂದು ಸುದ್ದೀನಾದರೂ ಸಿಗಬೇಡವಾ? ಹಿಂಗೂ ಮಾಡ್ಬೌದಾ ಶಿವ?
{{gap}}ಆ ಮಾತನ್ನು ಗಿರಿಜೆಯೂ ಎಷ್ಟೋ ಸಾರೆ ಅಂದುಕೊಂಡಿದ್ದಳು. ಗಂಡ ಎಲ್ಲಿರುವನೆಂಬ ವಾರ್ತೆಯಾದರೂ ಬಂದಿದ್ದರೆ? ಅಷ್ಟರಿಂದಲೆ ಮನಸ್ಸಿಗೆ ಎಷ್ಟೋ ನೆಮ್ಮದಿ ದೊರೆಯುತ್ತಿತ್ತು.
{{gap}}ಭಾರವಾಗಿ ಬಾಗಿದ ತಲೆ ಅತ್ತೆಯ ತೊಡೆಯ ಮೇಲೆ ಒರಗಿತು.
{{gap}}ಕಂಬಳಿಯನ್ನು ಆಕೆಯ ಮೈಗೂ ಹೊದಿಸುತ್ತ ಗಂಗವ್ವ ಕೇಳಿದಳು:
{{gap}}"ನಿದ್ದೆ ಬಂತೇನೆ?"
{{gap}}"ಇಲ್ಲ."
{{gap}}ಹಗಲು ರಾತ್ರೆಗಳನ್ನು ಎಣಿಸುತ್ತ ಕಾಲ ಕಳೆಯುವವರಿಗೆ ಸರಿಯಾದ ನಿದ್ದೆಯಾದರೂ ಹೇಗೆ ಬರಬೇಕು? ಆ ವಿಶ್ರಾಂತಿ ಸುಖ, ಅವರ ಪಾಲಿಗೆ ಬಹಳ ಕಾಲದಿಂದಲೇ ಇಲ್ಲದೆ ಹೋದ ಸಿರಿವಂತಿಕೆ.<noinclude><references/></noinclude>
jhqocnts9fco2v1yqfe7b4qam9m7g6w
ಪುಟ:Kalyaand-asvaami.pdf/೨೭
104
11124
321455
62077
2026-05-20T14:37:14Z
Shreelatha.Halemane
7642
/* Validated */
321455
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕತ್ತಲು ಕವಿದ ಕೊಡಗು|left=|right=೨೫}}
ನಿಗೋಸ್ಕರ ಆಕೆಯ ಹೃದಯದಲ್ಲಿ ನೆಲೆ ನಿಂತಿತು,...<br />
{{gap}}-ತನ್ನ ತೊಡೆಯ ಮೇಲೆ ತಲೆ ಇರಿಸಿ ಮುದುಡಿ ಮಲಗಿದ್ದ ಸೊಸೆ ಗಿರಿಜವ್ವನನ್ನು ಗಂಗವ್ವ ದಿಟ್ಟಿಸಿ ನೋಡಿದಳು. ಏನು ಕಾಣಿಸುತಿತ್ತು ಕಣ್ಣಿಗೆ? ಕಪ್ಪಗೆ ಮುದ್ದೆಯಾಗಿದ್ದುದೇನೋ, ಅಷ್ಟೆ.,<br />
{{gap}}....ಮೂವತ್ತು ವರ್ಷಗಳಿಗೆ ಹಿಂದೆ ತಾನೂ ಹೀಗೆಯೇ ನಿದ್ದೆ ಹೋಗಿದ್ದೆ – ತನ್ನ ಅತ್ತೆಯ ತೊಡೆಯ ಮೇಲೆ.<br />
{{gap}}...ಅ ಕೆಟ್ಟ ದಿನಗಳನ್ನು ಯಾಕೆಂದು ನೆನೆಸಿಕೊಳ್ಳಬೇಕೀಗ? ಆ ನೆನಪಿನಿಂದ<br />
{{gap}}''ಗಿರಿಜಾ, ನಿದ್ದೆ ಬಂತೇನೆ?”<br />
{{gap}}ಉತ್ತರವಿಲ್ಲ. ಪುನಃ<br />
{{gap}}''ಏ ಗಿರಿಜಾ, ಏಳವಾ, ನಡಿ, ಒಳಕ್ಕೆ ಹೋಗಿ ಮಲಕ್ಕೊಳ್ತಾನ. ಕೇಳಿಸ್ತೇನೆ?"<br />
{{gap}}''ಆ..ಊ..? <br />
{{gap}}"ಏಳವ್ವಾ”<br />
{{gap}}ಗಡಬಡಿಸಿ ಗಿರಿಜವ್ವ ಎದ್ದಳು. ಗಾಬರಿಗೊಂಡು ಕಂಪಿಸುವ ಧ್ವನಿ ಯಲ್ಲಿ ಆಕೆ ಕೇಳಿದಳು.
{{gap}}“ ಬಂದರಾ ? ಏನಾಯ್ತು , ಏನಾಯ್ತು ?”<br />
{{gap}} ಬತ್ತಿದ್ದ ಕಣ್ಣ ಬಾವಿಗಳಿಂದ ಮತ್ತೆ ಒರತೆ ಚಿಮ್ಮಿದ ಹಾಗಾಯಿತು ಗಂಗವ್ವನಿಗೆ. ಅಕೆ ತನ್ನಷ್ಟಕ್ಕೆ ತಲೆಯಾಡಿಸಿ, ಸೊಸೆಯ ಮೈಮುಟ್ಟಿ ಹೇಳಿದಳು:
{{gap}}ಹೆದರ್ಕೊಂಡಿಯಾ? ಏಳು. ಮಾತಾಡ್ತಾ ಕುಂತಿದ್ವಿ. ಅಷ್ಟರಲ್ಲೆ ನೀನು ನಿದ್ದೆ ಮಾಡ್ಬುಟ್ಟೆ, ನಡಿ, ಒಳಕ್ಕೆ ಹೋಗಾನ, ಅಬ್ಬ! ಎಂಥ ಚಳಿ!”
{{gap}}ಪೂರ್ತಿ ಎಚ್ಚರಗೊಂಡ ಸೊಸೆ ಎದ್ದು ನಿಂತು, ಒಳಕ್ಕೆ ಹೋಗಲು ಅತ್ತೆಗೆ ನೆರವಾದಳು.<br />
{{gap}}ನೆಲದ ಜವುಗು ತಾಗದಿರಲೆಂದು ಒಣ ಹುಲ್ಲಿನ ಮೇಲೆ ಹಾಸಿದ ಚಾಪೆಗಳು ಅವರ ಹಾದಿ ನೋಡುತ್ತ ಹಾಗೆಯೇ ಇದ್ದವು, ಬೂದಿ ಮುಚ್ಚಿ ಪ್ರಕಾಶಹೀನವಾಗಿದ್ದವು ಅಗ್ಗಿಷ್ಟಿಕೆಯ ಕೆಂಡಗಳು.<noinclude><references/></noinclude>
dm0n6bw6p1q2mskv87vfef4p75b2j05
ಪುಟ:Kalyaand-asvaami.pdf/೧೦೨
104
11127
321466
152558
2026-05-20T14:57:30Z
Shreelatha.Halemane
7642
/* Validated */
321466
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಕಲ್ಯಾಣಸ್ವಾಮಿ|left=೯೮|right=}}</noinclude>ಕಂದು ಬಣ್ಣದ ಕುದುರೆಯೂ ಕರ್ತುಕುಡಿಯನದೂ ಮತ್ತೊಮ್ಮೆ ಹೇಂಕರಿಸಿದುವು.
{{gap}}ನಡುಮನೆಯಲ್ಲಿ ಸಣ್ಣಗೆ ಉರಿಯುತಿದ್ದ ಹಣತೆಯ ಬೆಳಕು, ಬಾಗಿಲ ಬಿರುಕಿನೆಡೆಯಿಂದ ಹೊರ ಬರಲು ಯತ್ನಿಸುತಿತ್ತು.
{{gap}}ತಾಯಿಗೆ ಎಚ್ಚರವಾಗಬಾರದೆಂದು ಪುಟ್ಟಬಸವ, ಮೆಲ್ಲನೆ ಬಾಗಿಲು ತಟ್ಟಿ ಮೆಲುಧ್ವನಿಯಲ್ಲಿ ಕರೆದ:
{{gap}}"ಗಿರಿಜಾ!"<noinclude><references/></noinclude>
hzubhsb53tt72t7lsozizqgael5o1up
ಪುಟ:Kalyaand-asvaami.pdf/೩೬
104
11129
321457
62087
2026-05-20T14:44:14Z
Shreelatha.Halemane
7642
/* Validated */
321457
proofread-page
text/x-wiki
<noinclude><pagequality level="4" user="Shreelatha.Halemane" />{{rh|centerಕಲ್ಯಾಣಸ್ವಾಮಿ|left=೩೪|right=}}</noinclude>ಬೆಳಗಿನ ಜಾವ ಹೇಳಿದ್ದನಲ್ಲ ಪುಟ್ಟಬಸವ? <br />
{{gap}}“ ಯಾಕೆ? ಏನಾಯ್ತು ಮಹಾರಾಜರಿಗೆ?”<br />
{{gap}}ಪುಟ್ಟಬಸವ ನಡುವೆ ಬಾಯಿ ಹಾಕಿ ಹೇಳಿದ :<br />
{{gap}}" ಇಲ್ಲಿಗಿನ್ನೂ ಸುದ್ದಿ ಬಂದೇ ಇಲ್ಲ, ನಂಜಯ್ಯನವರೆ."<br />
{{gap}}" ಹಾಗೇನು?" ಎಂದ ನಂಜಯ್ಯ, ಆಶ್ಚರ್ಯದಿಂದ,ಖೇದದಿಂದ.<br />
{{gap}}ತನ್ನ ಪ್ರಶ್ನೆಗೆ ಉತ್ತರ ಬರಲಿಲ್ಲವೆಂದು ತಾಯಿ ಮತ್ತೂ ಅಂದಳು :<br />
{{gap}}"ಎನಪ್ಪಾ ಅದು? ಹೇಳಬಾರದಾ?"<br />
{{gap}}ಪುಟ್ಟಬಸವನೆಂದ :<br />
{{gap}}ಕೊಡಗು ರಾಜ್ಯ ಇಂಗ್ಲಿಷರ ವಶವಾಯ್ತು ಅವ್ವಾ. ಆಗಲೆ ಎರಡು ವರ್ಷ ಆಗೋಯ್ತು, ಮಹಾರಾಜರು ಪರಿವಾರ ಸಮೇತ ಕಾಶಿಗೆ ತೀರ್ಥ ಯಾತ್ರೆ ಹೊರಟುಹೋದರು.”<br />
{{gap}}“ ಅಯ್ಯೋ ಶಿವನೇ!”<br />
{{gap}}ದಂಗು ಬಡಿದಹಾಗಾಯಿತು, ಗಂಗವ್ವನಿಗೆ ಮುಂದೇನನ್ನೂ ಯೋಚಿಸುವುದಾಗಲೇ ಇಲ್ಲ ಅವಳಿಂದ.<br />
{{gap}}ಆವಿಯೇಳುತಿದ್ದ ಬಿಸಿ ರೊಟ್ಟಿಗಳನ್ನು ತಟ್ಟೆಯಲ್ಲಿಟ್ಟು ತಂದ ಗಿರಿಜಾ ಮೂಕಳಾಗಿ ಅಲ್ಲಿಯೆ ನಿಂತಿದ್ದಳು. ಆಕೆಗೆ ಮಾತು ಕೇಳಿಸಿತು.<br />
{{gap}}ಕೈಯಲ್ಲಿದ್ದ ರೊಟ್ಟಿ ಮುಗಿದೊಡನೆ ಕುಡಿಯಸೋದರರೆದ್ದರು. ಅವರ ಮುಖದ ಮೇಲೆ ಗೆಲುವೇ ಇರಲಿಲ್ಲ, ಆವರ ನೆರಿಗೆಗೊಂಡಿದ್ದ ಹಣೆಗಳಲ್ಲಿ, ಹುಬ್ಬುಗಳಲ್ಲಿ, ಬೇಸರ ಕುಣಿಯುತಿತ್ತು.<br />
{{gap}}ಅವರು ಎದ್ದುದನ್ನು ನೋಡಿ, ತಾಯಿ ಆಡಬೇಕಾಗಿದ್ದ ಮಾತನ್ನು ಪುಟ್ಟಬಸವ ನುಡಿದ:<br />
{{gap}}“ಬಿಸಿ ರೊಟ್ಟಿ ಇನ್ನೂ ಒಂದೆರಡು ತಿನ್ನಬಾರದಾ? ಯಾಕೆ ಎದ್ದಿರಿ?" <br />
{{gap}}“ಇಲ್ಲಣ್ಣ ಸಾಕು. ತಿಂದದ್ದು ಜೀರ್ಣವೇ ಆಗೋದಿಲ್ಲ" ಎಂದ ಚೆಟ್ಟ.<br />
{{gap}}ನೀರು ಕುಡಿಯಲೆಂದು ತಂಬಿಗೆಯನ್ನು ಎತ್ತುತ್ತಾ ನಂಜಯ್ಯ ಹೇಳಿದ :<br />
{{gap}}“ ನನಗೂ ಸಾಕು. ಮನಸ್ಸಿಗೆ ಸ್ವಾಸ್ಥ್ಯ ಇದ್ದರೆ ಕಲ್ಲು ತಿಂದರೂ<noinclude><references/></noinclude>
evwryafo0ql5lc9a8oh99tpgg0w3wpb
321458
321457
2026-05-20T14:44:54Z
Shreelatha.Halemane
7642
321458
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಕಲ್ಯಾಣಸ್ವಾಮಿ|left=೩೪|right=}}</noinclude>ಬೆಳಗಿನ ಜಾವ ಹೇಳಿದ್ದನಲ್ಲ ಪುಟ್ಟಬಸವ? <br />
{{gap}}“ ಯಾಕೆ? ಏನಾಯ್ತು ಮಹಾರಾಜರಿಗೆ?”<br />
{{gap}}ಪುಟ್ಟಬಸವ ನಡುವೆ ಬಾಯಿ ಹಾಕಿ ಹೇಳಿದ :<br />
{{gap}}" ಇಲ್ಲಿಗಿನ್ನೂ ಸುದ್ದಿ ಬಂದೇ ಇಲ್ಲ, ನಂಜಯ್ಯನವರೆ."<br />
{{gap}}" ಹಾಗೇನು?" ಎಂದ ನಂಜಯ್ಯ, ಆಶ್ಚರ್ಯದಿಂದ,ಖೇದದಿಂದ.<br />
{{gap}}ತನ್ನ ಪ್ರಶ್ನೆಗೆ ಉತ್ತರ ಬರಲಿಲ್ಲವೆಂದು ತಾಯಿ ಮತ್ತೂ ಅಂದಳು :<br />
{{gap}}"ಎನಪ್ಪಾ ಅದು? ಹೇಳಬಾರದಾ?"<br />
{{gap}}ಪುಟ್ಟಬಸವನೆಂದ :<br />
{{gap}}ಕೊಡಗು ರಾಜ್ಯ ಇಂಗ್ಲಿಷರ ವಶವಾಯ್ತು ಅವ್ವಾ. ಆಗಲೆ ಎರಡು ವರ್ಷ ಆಗೋಯ್ತು, ಮಹಾರಾಜರು ಪರಿವಾರ ಸಮೇತ ಕಾಶಿಗೆ ತೀರ್ಥ ಯಾತ್ರೆ ಹೊರಟುಹೋದರು.”<br />
{{gap}}“ ಅಯ್ಯೋ ಶಿವನೇ!”<br />
{{gap}}ದಂಗು ಬಡಿದಹಾಗಾಯಿತು, ಗಂಗವ್ವನಿಗೆ ಮುಂದೇನನ್ನೂ ಯೋಚಿಸುವುದಾಗಲೇ ಇಲ್ಲ ಅವಳಿಂದ.<br />
{{gap}}ಆವಿಯೇಳುತಿದ್ದ ಬಿಸಿ ರೊಟ್ಟಿಗಳನ್ನು ತಟ್ಟೆಯಲ್ಲಿಟ್ಟು ತಂದ ಗಿರಿಜಾ ಮೂಕಳಾಗಿ ಅಲ್ಲಿಯೆ ನಿಂತಿದ್ದಳು. ಆಕೆಗೆ ಮಾತು ಕೇಳಿಸಿತು.<br />
{{gap}}ಕೈಯಲ್ಲಿದ್ದ ರೊಟ್ಟಿ ಮುಗಿದೊಡನೆ ಕುಡಿಯಸೋದರರೆದ್ದರು. ಅವರ ಮುಖದ ಮೇಲೆ ಗೆಲುವೇ ಇರಲಿಲ್ಲ, ಆವರ ನೆರಿಗೆಗೊಂಡಿದ್ದ ಹಣೆಗಳಲ್ಲಿ, ಹುಬ್ಬುಗಳಲ್ಲಿ, ಬೇಸರ ಕುಣಿಯುತಿತ್ತು.<br />
{{gap}}ಅವರು ಎದ್ದುದನ್ನು ನೋಡಿ, ತಾಯಿ ಆಡಬೇಕಾಗಿದ್ದ ಮಾತನ್ನು ಪುಟ್ಟಬಸವ ನುಡಿದ:<br />
{{gap}}“ಬಿಸಿ ರೊಟ್ಟಿ ಇನ್ನೂ ಒಂದೆರಡು ತಿನ್ನಬಾರದಾ? ಯಾಕೆ ಎದ್ದಿರಿ?" <br />
{{gap}}“ಇಲ್ಲಣ್ಣ ಸಾಕು. ತಿಂದದ್ದು ಜೀರ್ಣವೇ ಆಗೋದಿಲ್ಲ" ಎಂದ ಚೆಟ್ಟ.<br />
{{gap}}ನೀರು ಕುಡಿಯಲೆಂದು ತಂಬಿಗೆಯನ್ನು ಎತ್ತುತ್ತಾ ನಂಜಯ್ಯ ಹೇಳಿದ :<br />
{{gap}}“ ನನಗೂ ಸಾಕು. ಮನಸ್ಸಿಗೆ ಸ್ವಾಸ್ಥ್ಯ ಇದ್ದರೆ ಕಲ್ಲು ತಿಂದರೂ<noinclude><references/></noinclude>
gub29he59n4d9c1uk2jtfhdwruvl54z
ಪುಟ:Kalyaand-asvaami.pdf/೨೮
104
11133
321456
62078
2026-05-20T14:42:16Z
Shreelatha.Halemane
7642
321456
proofread-page
text/x-wiki
<noinclude><pagequality level="4" user="Lahariyaniyathi" /></noinclude>{{rh|center=ಕಲ್ಯಾಣಸ್ವಾಮಿ|left=೨೬|right=}}
{{gap}}ಮಲಗಿಕೊಳ್ಳುತ್ತ ಗಂಗವ್ವ ಹೇಳಿದಳು:
{{gap}}"ಹುಣ್ಣಿಮೆ ಇವತ್ತು. ಪ್ರಯಾಣಕ್ಕೆ ಚೆನ್ನಾಗಿರ್ತೇತೆ. ಹಿಂದೆ ಎಷ್ಟೋ ಸರ್ತಿ ಪುಟ್ಟಬಸ್ಯ ಹುಣ್ಣಿಮೆ ರಾತ್ರೇಲೆ ಬಂದಿದ್ದ, ಅಲ್ಲವಾ? ರಾತ್ರೆ ಕಳೆದು ಬೆಳಗಾಗೋದರೊಳಗೆ ಬಂದರೂ ಬರ್ಬೌದು, ಅಲ್ವೇನೆ?”
{{gap}}“ ಹೂಂ ಅತ್ತೆಮ್ಮ,” ಎಂದಳು ಗಿರಿಜವ್ವ, ಕತ್ತಿನವರೆಗೂ ತನ್ನ ಕಂಬಳಿಯನ್ನೆಳೆದುಕೊಳ್ಳುತ್ತ.
{{gap}}ಯಾಕಾಗಬಾರದು? ಬೆಳ್ಳಿ ಮೂಡುವ ಹೊತ್ತಿಗೆ ತನ್ನ ಸ್ವಾಮಿ ಬಂದರು ಬರಬಹುದು - ಎಂಬ ಆಸೆ ಇತ್ತು ಆಕೆಗೂ.<noinclude><references/></noinclude>
ordh85wrr6wfd4q8trsnbp5bfidu1xg
ಪುಟ:Kalyaand-asvaami.pdf/೨೪೦
104
11170
321470
90300
2026-05-20T15:01:50Z
Shreelatha.Halemane
7642
/* Validated */
321470
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಕಲ್ಯಾಣಸ್ವಾಮಿ|left=೨೩೬|right=}}</noinclude><p style="text-indent: 1cm;">ಉತ್ತರ ಹೇಳುವುದಾಗದೆ ಕಲ್ಯಾಣಸಾಮಿಯ ಕ೦ಠ ಬಿಗಿ, ಕ೦బని ತು೦ಬಲು ನಿರಾಕರಿಸಿದ ಕಣ್ಣಗಳು ಮಿನುಗಿದುವು.</p>
<p style="text-indent: 1cm;">ನಿರಂತರ ಆಶಾವಾದಿಯಾದ ರಾಮಗೌಡನೇ ಅಂದ:</p>
<p style="text-indent: 1cm;">“ಹೋಗಲಿ ಬಿಡಿ. ಇವತ್ತಲ್ಲದಿದ್ದರೆ ನಾಳೆ ಅಲ್ಲಿಯಾದರೂ ಒಟ್ಟಾಗಿಯೇ ಆಗ್ತಿವಿ!"</p>
<p style="text-indent: 1cm;">....ಊರು ಎಚ್ಚರುವುದಕ್ಕೆ ಮು೦ಚೆಯೆ ಆ ವೀರರಿಬ್ಬರನ್ನು, ಸೈನಿಕರ ಬಲವಾದ ಕಾವಲಿನಲ್ಲಿ,ಊರಿನ ಹೊರಗೆ-ಬಿಕ್ರನಕಟ್ಟೆ ಪದವಿಗೆ-ಒಯ್ದರು.</p>
<p style="text-indent: 1cm;">ಶಿಕ್ಷೆ ವಿಧಿಸಲು ಅವರು ಮಾಡುತಿದ್ದ ಸಿದ್ಧತೆಯನ್ನು ಕಲ್ಯಾಣಸಾಮಿ ನೋಡುತ್ತ ನಿ೦ತ.ಗು೦ಡು ತಗುಲಿದ್ದ ಆತನ ಬಲಗೈ ಜೋತಾಡುತಿದ್ದರೂ ಭುಜಗಳು ಇಳಿ ಬಿದ್ದಿರಲಿಲ್ಲ. ఆ ತಲೆ ಬಾಗಿರಲಿಲ್ಲ ಯಾರ ಎದುರಲ್ಲೂ.</p>
<p style="text-indent: 1cm;">ಮೆದುಳು ಜೀವ೦ತವಾಗಿ ತೀಕ್ಷ್ಣವಾಗಿಯೇ ಇತ್ತು ಎ೦ದಿನ೦ತೆ...</p>
<p style="text-indent: 1cm;">ಈ ಸಲದ ಯುದ್ಧ ಮುಗಿದ ಬಳಿಕ ಸದಾಕಾಲವೂ ತನ್ನ ಜತೆಯಲ್ಲೇ ಇರಬೇಕೆಂದಿದ್ದಳು ಗಿರಿಜಾ. ಹುಚ್ಚು ಹುಡುಗಿ! ಇನ್ನು ಆ ತಾಯಿ...</p>
<p style="text-indent: 1cm;">ಆ ಯೋಚನೆಯನ್ನು ಬದಿಗೆ ಸರಿಸಿ ಕಲ್ಯಾಣಸಾಮಿ ಒಮ್ಮೆಲೆ ಚೆಟ್ಟ-ಕತುರ್ರನ್ನು ಸ್ಮರಿಸಿಕೊ೦ಡ...</p>
<p style="text-indent: 1cm;">ವಿಜಯ..ಸೋಲು...ವೀರರಾಜೇ೦ದ್ರರೆಡೆಗೆ ದೂತರನ್ನು ಕಳುಹಿತ್ತು, ಅವರನ್ನು ಕರೆದು ತರಲು, ಈಗ ಈ ಗತಿ. ಸದ್ಯಃ ಅವರು ಹೊರಡದಿದ್ದರೆ ಸಾಕು. ಅಪಾಯ ತಟ್ಟದಿದ್ದರೆ ಸಾಕು....</p>
<p style="text-indent: 1cm;">ದೇಶದ ಸ್ವಾತಂತ್ರ್ಯಗಳಿಸಬೇಕೆನ್ನುವ ಆಸೆ, ಆಸೆಯಾಗಿಯೇ ಉಳಿಯಿತು ಕೊನೆಗೂ....</p>
<p style="text-indent: 1cm;">ತಬ್ಬಲಾಗದ ಮರದ ಬಲಿಷ್ಟ ಕೊಂಬೆಗಳಿಂದ ಎರಡು ಉರುಳುಗಳನ್ನು ಇಳಿಬಿಟ್ಟಿದ್ದರು.ಕೆಳಗೆ ತಾತ್ಕಾಲಿಕವಾದೊಂದು ಅಟ್ಟಣಿಗೆಯಿತ್ತು. ಸುತ್ತಲೂ ವೃತ್ತಾಕಾರವಾಗಿ ಸಶಸ್ತ್ರ ಸೈನಿಕರು ನಿ೦ತಿದ್ದರು.</p>
<p style="text-indent: 1cm;">ಹುರುಕು ಮುರುಕು ಹಿ೦ದೂಸ್ಥಾನಿಯಲ್ಲಿ ಆ ಸೈನ್ಯಾಧಿಪತಿ ಗರ್ಜಿಸಿದ:</p>
<p style="text-indent: 1cm;">"ಹತ್ತಿಸಿ ಮೇಲಕ್ಕೆ! ಸ್ವಾತಂತ್ರದ ರುಚಿ ನೋಡ್ಲಿ!”</p>
<p style="text-indent: 1cm;">ಸೈನಿಕರ ಬಲಾತ್ಕಾರಕ್ಕೆ ಆಸ್ಪದವಿಲ್ಲದಂತೆ ಕಲ್ಯಾಣಸಾಮಿಯೂ ಬ೦ಗರಾಜರೂ ತಾವಾಗಿಯೇ ಅಟ್ಟಣಿಗೆಯನ್ನೇರಿದರು.</p><noinclude><references/></noinclude>
2u9g9z0s4xsj8vl8o125419fmm2ob2k
ಪುಟ:Kalyaand-asvaami.pdf/೨೩೬
104
11239
321469
90342
2026-05-20T15:01:05Z
Shreelatha.Halemane
7642
/* Validated */
321469
proofread-page
text/x-wiki
<noinclude><pagequality level="4" user="Shreelatha.Halemane" />{{rh|center=ಕಲ್ಯಾಣಸ್ವಾಮಿ|left=೨೩೨|right=}}</noinclude><p style="text-indent: 1cm;">ಆ ಸ್ವರ ಬಂದ ದಿಕ್ಕಿನತ್ತ ಕಲ್ಯಾಣಸಾಮಿ ದೃಷ್ಟಿ ಹೊರಳಿಸುತಿದ್ದಂತೆ ಗುಂಡೊಂದು ಅತನ ಬಲಗೈಯನ್ನು ತಾಕಿತು. ಖಡ್ಗ ಬಿದ್ದುಹೋಯಿತು.</p>
<p style="text-indent: 1cm;">ಎಡಗೈಯಲ್ಲಿ ಅದನ್ನೆತ್ತಿಕೊಳ್ಳುತ್ತಾ ರೋಷಾವೇಷದಿಂದ ಕಲ್ಯಾಣಸಾಮಿ ಗರ್ಜಿಸಿದ;</p>
<p style="text-indent: 1cm;">ಪಾಪಿಗಳೇ! ಬನ್ನಿ ಧೈರ್ಯವಿದ್ದರೆ ಮುಂದಕ್ಕೆ !”</p>
<p style="text-indent: 1cm;">ಬಂದ ಇಬ್ಬರು ಗಾಯಗೊಂಡು ಉರುಳಿದರು.</p>
<p style="text-indent: 1cm;">ಆದರೆ ನಾಲ್ಕು ದಿಕ್ಕುಗಳಿಂದಲೂ ಮುತ್ತಿದ ಹತ್ತಾರು ಜನ ಆತನನ್ನು ಹಿಡಿದರು, ಹಿಡಿದು ಕೆಡವಿದರು.</p>
<p style="text-indent: 1cm;">ಕಿವಿಯೊಡೆಯುವಂತೆ ಹಾಹಾಕಾರವೆದ್ದಿತು ಸುತ್ತುಮುತ್ತಲಿಂದ. ಹೋರಾಡುವವರಿಗಿಂತಲೂ ಓಡುವವರ ಸಖ್ಯೆ ಹೆಚ್ಚಿತು.</p>
<p style="text-indent: 1cm;">ಬಂಗರಾಜ, ರಾಮಗೌಡ, ಅಣ್ಣಿ – ಎಲ್ಲರನ್ನೂ ಗಾಯಗೊಳಿಸಿ ಸೆರೆ ಹಿಡಿದರು ಬಿಳಿಯರು, ಅವರ ನೇತೃತ್ವದಲ್ಲಿದ್ದ ಕರಿಯರು.</p>
<p style="text-indent: 1cm;">ಒಂದೇ ಸಮನೆ ಉರಿಯುತ್ತ ಬಂದಿ ದೀವಟಿಗೆಯನ್ನು ನೆಲಕ್ಕೆಸೆದು, ಮಣ್ಣಲ್ಲಿ ತೀಡಿ, ಅರಿಸಿದರು.</p>
<p style="text-indent: 1cm;">ಧ್ವಜಸ್ತಂಭದ ಮೇಲಿದ್ದ ಸ್ವಾತಂತ್ರ ಬಾವುಟವನ್ನು ಕೆಳಕ್ಕೆಳೆದು, ಮೆಟ್ಟಿ, ತುಳಿದರು.</p><noinclude><references/></noinclude>
g3vzrwsa89eddldl9cyko7oueojei96
ಪುಟ:Kalyaand-asvaami.pdf/೨೨
104
15813
321450
62069
2026-05-20T14:26:22Z
Shreelatha.Halemane
7642
/* Validated */
321450
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕಲ್ಯಾಣಸ್ವಾಮಿ|left=೨೦|right=}}
{{gap}}ತನ್ನ ಮಟ್ಟಿಗೆ ಮಸಕಾಗಿದ್ದ ಬೆಳುದಿಂಗಳನ್ನು ದಿಟ್ಟಿಸುತ್ತ, ಕಾಡಿನ ಕಲರವಕ್ಕೆ ಕಿವಿಗೊಡುತ್ತ, ಗಂಗವ್ವ, ಹಳೆಯ ನೆನಪುಗಳ ಸಿಕ್ಯುಸಿಕ್ಕಾಗಿದ್ದ ಎಳೆಗಳನ್ನು ಒಂದೊಂದಾಗಿಯೆ ಬಿಡಿಸತೊಡಗಿದಳು...
{{gap}}-ಮೂವತ್ತು ವರುಷಗಳ ಹಿಂದೆ.
{{gap}}ಹಾಗೆಯೇ ಕಾದುಕುಳಿತಿದ್ದ ಅಂತಹದೇ ರಾತ್ರೆಗಳು. ಹತ್ತು ವರ್ಷ ವಯಸ್ಸಿನ ಮಗಳು ವೀರಮ್ಮ; ಪುಟ್ಟಬಸವನನ್ನು ಬಸಿರಲ್ಲಿ ಹೊತ್ತಿದ್ದ ತಾನು; ಹಾಗೂ ತನ್ನತ್ತೆ. ಗಟ್ಟಿ ಮುಟ್ಟಾಗಿದ್ದ ಜೀವ ಆ ವೃಧ್ದೆ. ಆಕೆ ತನ್ನ ಮಗನ ಹಾದಿ ನೋಡುತ್ತಿದ್ದಳು. ಆಳುತಿದ್ದ ದೊಡ್ಡ ವೀರರಾಜನ ಆಪ್ತ ಕೋಟಿಯಲ್ಲೊಬ್ಬ ಸರದಾರನಾಗಿದ್ದ ವೀರಮ್ಮನ ತಂದೆ. ಆತ ನಾಲ್ಕಾರು ತಿಂಗಳಿನಿಂದ ಮನೆಗೆ ಬಂದಿರಲಿಲ್ಲ.
{{gap}}'ಮನೇಲಿ ಹೆಂಡತಿ ಬಸುರಿ ಅನ್ನೋ ಗಾನವಾದರೂ ಬೇಡವಾ ఇವನಿಗೆ ? ಎನ್ನುತ್ತ ರೇಗಾಡುತ್ತಿದ್ದಳು ಅತ್ತೆ, 'ನೀನಾಕೆ ಎದ್ದು ಕೂತಿದೀಯಾ? ಹೋಗಿ ಮಲಗಿಕೊ' ಎಂದು ಸೊಸೆಗೆ ಹೇಳುತ್ತಿದ್ದಳು.
{{gap}}ಹಾಗೆ ಎಷ್ಟೋ ಹಗಲು ಎಷ್ಟೋ ಇರುಳು ಕಳೆದ ಬಳಿಕ...
{{gap}}ಒಂದು ದಿನ ಆಸ್ಥಾನದಿಂದ ಓಲೆಕಾರ ಬ೦ದ. ಆತ ತ೦ದುದು ವೀರಮ್ಮನ ತಂದೆ ತೀರಿಹೋದನೆಂಬ ವಾರ್ತೆಯನ್ನು.
{{gap}}ಬಸವರಾಜಪ್ಪನವರು ಎರಡು ವಾರಗಳಿಗೆ ಹಿಂದೆ ಅಪಮೃತ್ಯುವಿಗೆ ಗುರಿಯಾದರು ಅವ್ವಾವರೆ.'
{{gap}}ಅಪಮೃತ್ಯು? ವೀರ ಸರದಾರನಿಗೆ ಅಪಮೃತ್ಯು? ಏನಾಯಿತು ? ಅರಸನಿಗೆ ಪ್ರಿಯನಾಗಿದ್ದ ಆ ಧೀರನಿಗೆ ಏನಾಯಿತು? ಯಾವ ದುಷ್ಟನ ಖಡ್ಗ ಆತನ ಮೇಲೆರಗಿತು? ಯಾವ ನೀಚನ ಗುಂಡು ಆತನಿಗೆ ತಾಕಿತು?
{{gap}}ಹೇಳೋಕೆ ನಾಲಗೆ ಹೊರಳೋದಿಲ್ರವ್ವಾ. ಮಹಾರಾಜರು ಒಕ್ಕಣೆ ಬರಸವ್ರೆ'
{{gap}}ಅರಸರು ಒಕ್ಕಣೆ ಬರೆಸಿದ್ದರು:
{{gap}}'ನಮ್ಮ ನೆಚ್ಚಿನ ಮಿತ್ರರಾದ ಸರದಾರ ಬಸವರಾಜಪ್ಪನವರ ತಾಯಿ ಮತ್ತು ಹೆಂಡತಿ – ಇವರಿಗೆ.'
{{gap}}ರಾಜಕಾರ್ಯನಿಮಿತ್ತ ಬಸವರಾಜಪ್ಪ ನಾಲ್ಕುನಾಡಿಗೆ ಹೋಗಿದ್ದ.<noinclude></noinclude>
el35ff8q4smfxddazjvgg1ybiow7u71
ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೪೭
104
16081
321523
250631
2026-05-21T03:04:57Z
Pragathi. BH
7585
/* Validated */
321523
proofread-page
text/x-wiki
<noinclude><pagequality level="4" user="Pragathi. BH" />{{rh|೧೩೧}}</noinclude>'''ಪ್ರಕಟಿತ ಕೃತಿಗಳು :'''</br>
'''೧.ಕಾವ್ಯ'''</br>
{{TOC_page_listing|೧.ಮೂಕನಾಗಿ ಬಾಯಿ ಬಂದಾಗ| -೧೯೮೨}}
{{TOC_page_listing|೨. ಕಪ್ಪು ಕಾವ್ಯ|-೧೯೮೫}}
{{TOC_page_listing|೩. ಮೂರನೆಯ ಕಣ್ಣು|-೧೯೯೬}}
{{TOC_page_listing|೪. ನಾದ ನಿನಾದ|-೧೯೯೯}}
{{TOC_page_listing|೫. ಅನೀಲ ಆರಾಧನಾ (ಸಂಯುಕ್ತ ಕಾವ್ಯ)|-೨೦೦೨}}
{{TOC_page_listing|೬ ಸಿಲಿಕಾನ್ ಸಿಟಿ ಮತ್ತು ಕೋಗಿಲೆ|-೨೦೦೩}}
{{TOC_page_listing|೭. ಚಂಡಾಲ ಸ್ವರ್ಗಾರೋಹಣಂ|-೨೦೦೩}}
{{TOC_page_listing|೮. ಅರವಿಂದ ಮಾಲಗತ್ತಿಯವರ ಆಯ್ದ ಕವಿತೆಗಳು|-೨೦೦೪}}
{{TOC_page_listing|೯. ವಿಶ್ವತೋಮುಖ|-೨೦೧೦}}
{{TOC_page_listing|ಹೂ ಬಲುಭಾರ|-೨೦೧೦}}
{{TOC_page_listing|೧೦. The Dark Cormos (ಅನುವಾದಿತ ಕವನಗಳು)|-೨೦೦೯}}
'''೨ ಕಥೆ'''</br>
{{TOC_page_listing|ಮುಗಿಯದ ಕತೆಗಳು|-೨೦೦೦}}
'''೩. ಕಾದಂಬರಿ'''</br>
{{TOC_page_listing|ಕಾರ್ಯ |-೧೯೮೮}}
'''೪ ನಾಟಕ'''</br>
{{TOC_page_listing|೧. ಮಸ್ತಕಾಭಿಷೇಕ</br>|-೧೯೮೪}}
{{TOC_page_listing|೨. ಸಮುದ್ರದೊಳಗಣ ಉಪ್ಪು|-೧೯೯೯}}
'''೫. ವಿಚಾರ ಮತ್ತು ವಿಮರ್ಶೆ - ಸಂಶೋಧನೆ'''</br>
{{TOC_page_listing|೧. ಕನ್ನಡ ಸಾಹಿತ್ಯ ಮತ್ತು ದಲಿತ ಯುಗ|-೧೯೯೮}}
{{TOC_page_listing|೨. ದಲಿತ ಪ್ರಜ್ಞೆ : ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ|-೨೦೦೩}}
{{TOC_page_listing|೩. ಸಾಂಸ್ಕೃತಿಕ ದಂಗೆ|-೨೦೦೪}}
{{TOC_page_listing|೪. ಬೆಂಕಿ ಬೆಳದಿಂಗಳು|-೨೦೦೬}}
{{TOC_page_listing|. ದಲಿತ ಸಾಹಿತ್ಯ ಪ್ರವೇಶಿಕೆ|-೧೯೯೬}}
{{TOC_page_listing|೬. ಅಂತರ್ಜಾತಿಯ ವಿವಾಹ ಎಷ್ಟು ಪ್ರಗತಿಪರ?|-೧೯೯೬}}
{{TOC_page_listing|೭. ಪೂನಾಪ್ಯಾಕ್ಸ್ ಮತ್ತು ದಲಿತರೆತ್ತ ಸಾಗಬೇಕು?|-೧೯೯೮}}
{{TOC_page_listing|೮. ಭೀಮ ನಡೆಯ ಬೆಳಕು|-೨೦೦೬}}
{{TOC_page_listing|೯. ಸಾಹಿತ್ಯ ಸಾಕ್ಷಿ|-೨೦೦೯}}
{{TOC_page_listing|೧೦. ದಲಿತ ಸಾಹಿತ್ಯ ಪರ್ವ|-೨೦೦೯}}<noinclude></noinclude>
l0edkfm85xnlgbh9dihp65afxhzp3es
ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೪೮
104
16082
321524
250670
2026-05-21T03:20:59Z
Pragathi. BH
7585
/* Validated */
321524
proofread-page
text/x-wiki
<noinclude><pagequality level="4" user="Pragathi. BH" />{{rh|೧೩೨||ಗೌರ್ಮೆಂಟ್ ಬ್ರಾಹ್ಮಣ}}</noinclude>
'''೬. ಆತ್ಮ ಕಥೆ'''</br>
{{TOC_page_listing|೧. ಗೌರ್ಮೆಂಟ್ ಬ್ರಾಹ್ಮಣ|-೧೯೯೪}}
'''೭. ಜಾನಪದ - ಸಂಶೋಧನೆ'''</br>
{{TOC_page_listing|೧. ಆಣೀ ಪೀಣಿ (ಜಾನಪದ ಸಂಶೋಧನೆ)|-೧೯೮೨}}
{{TOC_page_listing|೩. ಜಾನಪದ ಶೋಧ (ಜಾನಪದ ಸಂಶೋಧನೆ)|-೧೯೮೫}}
{{TOC_page_listing|೪. ತುಳುವರ ಆಟಿ ಕಳೆಂಜ (ಜಾನಪದ ಸಂಶೋಧನೆ)|-೧೯೯೦}}
{{TOC_page_listing|೫. ಜನಪದ ಆಟಗಳು (ವಯಸ್ಕ ಶಿಕ್ಷಣದ ಕೃತಿ)|-೧೯೯೨}}
{{TOC_page_listing|೬. ತಾಳಿಕೋಟಿ ದ್ಯಾಮವ್ಯ (ವಯಸ್ಕರ ಶಿಕ್ಷಣದ ಕೃತಿ)|-೧೯೯೨}}
{{TOC_page_listing|೭. ಕೊರಗ ಜನಾಂಗ ಒಂದು ಅಧ್ಯಯನ (ಸಹ ಬರವಣಿಗೆ)|-೧೯೯೫}}
{{TOC_page_listing|೮.ಜಾನಪದ ಅಭಿಯಾನ(ಸಂಶೋಧನಾ ಲೇಖನಗಳು)|-೨೦೦೪}}
'''೮. ಸಂಶೋಧನೆ'''</br>
{{TOC_page_listing|೧. ಭೂತಾರಾಧನೆ-ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ|-೧೯೯೧}}
{{TOC_page_listing|೨. ದಲಿತ ಸಾಹಿತ್ಯ ಚಳುವಳಿಯ ತಾತ್ವಿಕ ಚಿಂತನೆ|-೧೯೯೧}}
{{TOC_page_listing|೩. ಪುರಾಣ-ಜಾನಪದ ಮತ್ತು ದೇಶಿವಾದ|-೧೯೯೮}}
{{TOC_page_listing|೪. ಜನಪದ ಆಟಗಳು (ಪಿಎಚ್.ಡಿ ಮಹಾಪ್ರಬಂಧ ಅಪ್ರಕಟಿತ)|-೧೮೯೭}}
'''೯. ಸಂಪಾದನೆ'''</br>
{{TOC_page_listing|೧. ಸಮಾವೇಶ (ಸಹ ಸಂಪಾದನೆ)|-೧೯೮೩}}
{{TOC_page_listing|೨. ನಾಲ್ಕು ದಲಿತೀಯ ಕಾದಂಬರಿಗಳು|-೧೯೯೧}}
{{TOC_page_listing|೩. ಅಂಬೇಡ್ಕರ್ ವಿಚಾರಧಾರೆ|-೧೯೯೨}}
{{TOC_page_listing|೪. ಅಂಬೇಡ್ಕರ್ ವಾದ - ಸಂವಾದ|-೧೯೯೩}}
{{TOC_page_listing|೫. ಗೋಮಾಳದಿಂದ ಗಂಗೋತ್ರಿಗೆ|-೧೯೯೭}}
{{TOC_page_listing|೬. ದಲಿತ ಸಾಹಿತ್ಯ ನೆಳೆ - ಹಿನ್ನಲೆ|-೧೯೯೮}}
{{TOC_page_listing|೭. ಕನ್ನಡ ಗ್ರಂಥೋದ್ಯಮ|-೧೯೯೮}}
{{TOC_page_listing|೮. ಜಾನಪದ ಸೈದ್ಧಾಂತಿಕ ಪ್ರಜ್ಞೆ ಮತ್ತು ದೇಶಿವಾದ|-೧೯೯೯}}
{{TOC_page_listing|೯. ಜಾನಪದ ಮೂಲ ತತ್ತ್ವಗಳು|-೨೦೦೦}}
{{TOC_page_listing|೧೦. ಕಾದಂಬರಿಗಳ ವಿಮರ್ಶೆ|-೨೦೦೦}}
{{TOC_page_listing|೧೧. ಮಲೆಯ ಮಹದೇಶ್ವರ|-೨೦೦೧}}
{{TOC_page_listing|೧೨. ಬೇವು ಬೆಲ್ಲ (ಸಹ ಸಂಪಾದನೆ)|-೨೦೦೧}}
{{TOC_page_listing|೧೩. ದಲಿತ ಮಾರ್ಗ (ವಿಮರ್ಶೆ)|-೨೦೦೨}}
{{TOC_page_listing|೧೪. ಅನೀಲ ಆರಾಧನ (ಸಂಯುಕ್ತ ಕಾವ್ಯ ಕವನ ಸಂಕಲನ|-೨೦೦೨}}
{{TOC_page_listing|೧೫. What Gandhi Says about Ambekdar (ಸಹ ಸಂ)|-೨೦೦೦}}<noinclude></noinclude>
0m4xjuqgck17qghzudr9np744f01qsr
ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೪೯
104
16083
321525
250698
2026-05-21T03:21:25Z
Pragathi. BH
7585
/* Validated */
321525
proofread-page
text/x-wiki
<noinclude><pagequality level="4" user="Pragathi. BH" />{{rh|||೧೩೩}}</noinclude>
'''೧೦. ಮಾಲಗತ್ತಿ ಅವರ ಸಾಹಿತ್ಯ ಕುರಿತ ಕೃತಿಗಳು'''</br>
{{TOC_page_listing|೧. 'ಕಾರ್ಯ' ವಿಮರ್ಶಾಲೋಕ|-೧೯೮೯}}
(ಕಾರ್ಯ ಕಾದಂಬರಿಯ ವಿಮರ್ಶೆಯ ಲೇಖನಗಳು)</br>
{{TOC_page_listing|೨. 'ದಲಿತಜ್ಞ'|-೨೦೦೦}}
(ಸಾಹಿತ್ಯದ ವಿಚಾರ ಸಂಕಿರಣ ಲೇಖನಗಳು)</br>
ಸಂ. ಡಾ. ಅರ್ಜುನ ಗೊಳಸಂಗಿ
{{TOC_page_listing|೩. ನೋವು ಹೆತ್ತ ಪ್ರೀತಿ|-೨೦೦೨}}
(ಗೌರ್ಮೆಂಟ್ ಬ್ರಾಹ್ಮಣ ಕೃತಿಯ ವಿಮರ್ಶಾ ಲೇಖನಗಳ ಸಂಕಲನ)</br>
ಸಂ: ಡಾ. ಅಪ್ಪಗೆರೆ ಸೋಮಶೇಖರ್</br>
ಡಾ. ಮಲ್ಲಿಗೆಹಳ್ಳಿ ನರೇಂದ್ರಕುಮಾರ್
{{TOC_page_listing|೪. ಪ್ರೊ. ಅರವಿಂದ ಮಾಲಗತ್ತಿ ಅವರ ಮಾರ್ಗ-ಸಾಹಿತ್ಯ|-೨೦೦೬}}
ಡಾ. ಕೆ. ಕೇಶವಶರ್ಮ</br>
{{TOC_page_listing|೫. ಪ್ರೊ. ಅರವಿಂದ ಮಾಲಗತ್ತಿ ಅವರ ಸಾಹಿತ್ಯ-ಚಿಂತನೆ|-೨೦೦೫}}
ಡಾ. ಶಂಕರೇಗೌಡ (ಪಿ.ಹೆಚ್.ಡಿ. ಮಹಾಪ್ರಬಂಧ)</br>
{{TOC_page_listing|೬. ಪ್ರೊ. ಅರವಿಂದ ಮಾಲಗತ್ತಿಯವರ ಕಾವ್ಯಾನುಸಂಧಾ|-೨೦೦೬}}
ಡಾ. ಕುಶಾಲ ಬರಗೂರು</br>
{{TOC_page_listing|೭ ಶಾರದೆಯ ಕುಣಿಸಿದ ಕವಿ - ಡಾ. ಅರವಿಂದ ಮಾಲಗತ್ತಿ|-೨೦೦೭}}
ಎಚ್ಚೆಸ್ಕೆ</br>
{{TOC_page_listing|೮. ಪಗಡೆಯ ಕೌದಿಯಲಿ ದೀಪಗಳು ಬೆಳಗಿ|-೨೦೦೯}}
(ಅಮಾ ಸಾಹಿತ್ಯದ ಸ್ತ್ರೀವಾದಿ ಅಧ್ಯಯನ)</br>
ಡಾ. ಎಸ್.ಡಿ. ಶಶಿಕಲಾ
{{TOC_page_listing|೯. ಕಾವ್ಯಮಂಥನ - ಸಂ. ಅರ್ಜುನ ಗೊಳಸಂಗಿ|-೨೦೦೯}}
{{TOC_page_listing|೧೦. ಮಾಲಗತ್ತಿ ಮಾತು ಮಥನ - ಜಿ.ಎಸ್. ಭಟ್ಟ|-೨೦೧೦}}
(ಪ್ರಶೋತ್ತರಗಳ ಮಾಲಿಕೆಯ ಕೃತಿ)</br>
{{TOC_page_listing|೧೧. ವಾದ ವಾಗ್ವಾದ ಸಂವಾದ - ಸಂ. ಬಿಗ್ಗೇಹಳ್ಳಿ ಪ್ರಭು|-೨೦೦೯}}
(ಸಂದರ್ಶನ ಹಾಗೂ ಸಂವಾದಗಳು)</br>
{{TOC_page_listing|೧೨. Depiction of poor in the wores of Aravind Malagatti</br>
by - Vijayakumar C.E.|-೨೦೦೮}}
೧೩. Two versions of dalit growing up : A Comparative</br>
Study of Vasanth Moon's Growing up untouchable</br>
in India and Aravind Malagattis Government<noinclude></noinclude>
hjalbutt37ldekqnpblelq5w0emgg32
ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೫೦
104
16084
321526
250728
2026-05-21T03:21:52Z
Pragathi. BH
7585
/* Validated */
321526
proofread-page
text/x-wiki
<noinclude><pagequality level="4" user="Pragathi. BH" />{{rh|೧೩೪||ಗೌರ್ಮೆಂಟ್ ಬ್ರಾಹ್ಮಣ}}</noinclude>
{{gap}}Brahmana</br>
{{gap}}By - Banshelkar Yashpal Murhari,</br>
{{TOC_page_listing|{{gap}}M. Phil Thesis Pandicherry University|-೨೦೦೮}}
'''೧೧.ಬೃಹತ್ ಗ್ರಂಥಗಳ ಸಂಪಾದನ ಕಾರ್ಯ'''
*ಕನ್ನಡ ವಿಶ್ವಕೋಶ (ಸಂ. ೧೪):</br>
{{gap}}ಪ್ರಧಾನ ಸಂಪಾದಕ</br>
{{gap}}ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿ.ವಿ. ೨೦೦೫
*'''ಕನ್ನಡ ವಿಶ್ವಕೋಶದ ೧೪ ಸಂಪುಟಗಳು : ಸಿ.ಡಿ. ರೂಪದಲ್ಲಿ'''
{{gap}}ಪ್ರಧಾನ ಸಂಪಾದಕ</br>
{{gap}}ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ.ವಿ. ೨೦೦೬
*ಕನ್ನಡ ವಿಷಯ ವಿಶ್ವಕೋಶ : ಕರ್ನಾಟಕ (ಪರಿಷ್ಕೃತ)
{{gap}}ಪ್ರಧಾನ ಸಂಪಾದಕ</br>
{{gap}}ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿ.ವಿ. ೨೦೦೫
*ಕನ್ನಡ ವಿಷಯ ವಿಶ್ವಕೋಶ : ಜಾನಪದ
{{gap}}ಪ್ರಧಾನ ಸಂಪಾದಕ</br>
{{gap}}ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ.ವಿ. ೨೦೦೬
*ಕನ್ನಡ ವಿಷಯ ವಿಶ್ವಕೋಶ : ಪ್ರಾಣಿ ವಿಜ್ಞಾನ
{{gap}}ಪ್ರಧಾನ ಸಂಪಾದಕ</br>
{{gap}}ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ.ವಿ. ೨೦೦೬
*ಎಫಿಗ್ರಾಫಿಯಾ ಕರ್ನಾಟಿಕಾ : (ಸಂ-೧೨)
{{gap}}ಪ್ರಧಾನ ಸಂಪಾದಕ</br>
{{gap}}ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ.ವಿ. ೨೦೦೬
*ಕುವೆಂಪು ಕೃತಿ ವಿಮರ್ಶೆ:
{{gap}}ಪ್ರಧಾನ ಸಂಪಾದಕ</br>
{{gap}}ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ.ವಿ. ೨೦೦೬
{{center|* * * * *}}<noinclude></noinclude>
7v52fo5an5bjnr8x3vinhblqyes6tly
ಪುಟ:ದೀಕ್ಷೆ.pdf/೧೬
104
19126
321479
277110
2026-05-20T17:34:30Z
Pragathi. BH
7585
/* Validated */
321479
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=೩|left=ದೀಕ್ಷೆ|right=343}}
ನವರಾತ್ರಿ ಕಳೆದು ದೀಪಾವಳಿ ಸಮೀಪಿಸುತ್ತಿತ್ತು. ಅದೊಂದು ಶನಿವಾರ ಸ೦ಜೆ, ವಾಚನಾಲಯದಿ೦ದ ತಂದಿದ್ದ ಇಂಗ್ಲಿಷ್ ಕಾದಂಬರಿಯನ್ನೋದುತ್ತ ಮುರಲೀ ಧರ ಹಾಸಿಗೆಯ ಸುರುಳಿಗೊರಗಿ ಚಾಪೆಯ ಮೇಲೆ ಕುಳಿತಿದ್ದ. ಕದ ತಟ್ಟಿದ.ಸದ್ದಾಯಿತು.<br />
{{gap}}ಬಾಗಿಲು ತೆರೆದಾಗ ಮುರಲೀಧರನ ಕಣ್ಣಿಗೆ ಬಿದ್ದುದು,
ದಾಟುತ್ತಲಿದ್ದ ಒಬ್ಬ ವ್ಯಕ್ತಿ. ಪ್ಯಾ೦ಟು, ಶರಟು, ಕ್ರಾಪು, ಗಡಿಯಾರ. ಮುಗುಳು ನಗೆಯೋ ಗಾ೦ಭೀರ್ಯವೋ ಎನ್ನುವುದು ಅರ್ಥವಾಗದಂತೆ ತುಟಿಗಳು ಕೊಂಕಿಸಿ ಬಿಗಿದುಕೊಂಡಿದ್ದುವು.<br />
{{gap}}ಮುರಲೀಧರ ಕೇಳಿದ:
{{gap}}"ಯಾರು ಬೇಕಾಗಿತ್ತು?"
ಆಗ೦ತುಕ ಉಚ್ಚರಿಸಿದುದು ಆತನ ಹೆಸರನ್ನೇ.ತೆರೆದ ತುಟಿಗಳು ಮೊದಲಿ ನಂತೆಯೇ ಮತ್ತೆ ಬಿಗಿದುಕೊಂಡುವು.
{{gap}}ಮುರಲೀಧರನೆಂದ:
{{gap}}“ನಾನೇ, ಬನ್ನಿ."
ಆ ಮನುಷ್ಯ ಒಳ ಬಂದ. ಪೀಠೋಪಕರಣಗಳಿಲ್ಲದ ಆ ಕೊಠಡಿಯನ್ನೊಮ್ಮೆ ಆತ ನಿರ್ವಿಕಾರ ದ್ರಿಷ್ಟಿಯಿ೦ದ ನೋಡಿದ.<br />
{{gap}}ಚಾಪೆಯ ಮೇಲೆ ಕುಳಿತರೆ ಪ್ಯಾ೦ಟು ಮುದುಡುವ ಸ೦ಭವ.
ಅದನ್ನು ಗಮನಿಸಿ, ತನ್ನ ಪೆಟ್ಟಿಗೆಯತ್ತ ಬೊಟ್ಟು ಮಾಡಿ,ಮುರಲೀಧರನೆಂದ:
{{gap}}"ಕೂತ್ಕೋಳ್ಳಿ."
{{gap}}ಕರವಸ್ತ್ರವನ್ನು ಹೊರತೆಗೆದು ಜಾಗರೂಕತೆಯಿಂದ ಬಿಡಿಸಿ ಪೆಟ್ಟಿಗೆಯ ಮೆಲೆ ಹಾಸಿ ಆತ ಕುಳಿತ.
ಬಳಿಕ ಪ್ರಶ್ನೆ ಬ೦ತು:
{{gap}}"ಒಬ್ಬರೇ ಇದೀರಾ ಇಲ್ಲಿ?"
{{gap}}"ಒಬ್ಬನೇ.."
{{gap}}ಯಾರು ಆತ, ಉಪಾಧಾಯನೆ? ಉಪನಾಸಕನೆ? ಸ್ವಲ್ಪ ಹೊತ್ತು ದಿಟ್ಟಿಸಿದ బಳಿಕ,' ಎಲ್ಲೋ ನೋಡಿದ್ದೀನಿ'ಅನಿಸಿತು.
{{gap}}ಆ ಮನುಷ್ಯನೆಂದ:
{{gap}}"ನಿಂತೇ ಇದೀರಲ್ಲ, ಕೂತ್ಕೋಳ್ಳಿ."
{{gap}} ಮುರಲೀಧರ, ಮನಸಿನೋಳಗೆ ಸಿಕ್ಕುಗಟ್ಟಿದ್ದ ಸಮಸ್ಯೆಯನ್ನು ಬಿಡಿಸಲಾಗದೆ,ಹಾಸಿಗೆಯ ಸುರುಳಿಯ ಮೇಲೆ ಗೋಡೆಗೊರಗಿ ಕುಳಿತ.<noinclude></noinclude>
tn7b04tzqus4npygp9p3qb35i19gdl4
321480
321479
2026-05-20T17:35:26Z
Pragathi. BH
7585
321480
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=೩|left=ದೀಕ್ಷೆ|right=343}}
ನವರಾತ್ರಿ ಕಳೆದು ದೀಪಾವಳಿ ಸಮೀಪಿಸುತ್ತಿತ್ತು. ಅದೊಂದು ಶನಿವಾರ ಸ೦ಜೆ, ವಾಚನಾಲಯದಿ೦ದ ತಂದಿದ್ದ ಇಂಗ್ಲಿಷ್ ಕಾದಂಬರಿಯನ್ನೋದುತ್ತ ಮುರಲೀ ಧರ ಹಾಸಿಗೆಯ ಸುರುಳಿಗೊರಗಿ ಚಾಪೆಯ ಮೇಲೆ ಕುಳಿತಿದ್ದ. ಕದ ತಟ್ಟಿದ.ಸದ್ದಾಯಿತು.<br />
{{gap}}ಬಾಗಿಲು ತೆರೆದಾಗ ಮುರಲೀಧರನ ಕಣ್ಣಿಗೆ ಬಿದ್ದುದು,
ದಾಟುತ್ತಲಿದ್ದ ಒಬ್ಬ ವ್ಯಕ್ತಿ. ಪ್ಯಾ೦ಟು, ಶರಟು, ಕ್ರಾಪು, ಗಡಿಯಾರ. ಮುಗುಳು ನಗೆಯೋ ಗಾ೦ಭೀರ್ಯವೋ ಎನ್ನುವುದು ಅರ್ಥವಾಗದಂತೆ ತುಟಿಗಳು ಕೊಂಕಿಸಿ ಬಿಗಿದುಕೊಂಡಿದ್ದುವು.<br />
{{gap}}ಮುರಲೀಧರ ಕೇಳಿದ:<br />
{{gap}}"ಯಾರು ಬೇಕಾಗಿತ್ತು?"<br />
ಆಗ೦ತುಕ ಉಚ್ಚರಿಸಿದುದು ಆತನ ಹೆಸರನ್ನೇ.ತೆರೆದ ತುಟಿಗಳು ಮೊದಲಿ ನಂತೆಯೇ ಮತ್ತೆ ಬಿಗಿದುಕೊಂಡುವು.<br />
{{gap}}ಮುರಲೀಧರನೆಂದ:<br />
{{gap}}“ನಾನೇ, ಬನ್ನಿ."<br />
ಆ ಮನುಷ್ಯ ಒಳ ಬಂದ. ಪೀಠೋಪಕರಣಗಳಿಲ್ಲದ ಆ ಕೊಠಡಿಯನ್ನೊಮ್ಮೆ ಆತ ನಿರ್ವಿಕಾರ ದ್ರಿಷ್ಟಿಯಿ೦ದ ನೋಡಿದ.<br />
{{gap}}ಚಾಪೆಯ ಮೇಲೆ ಕುಳಿತರೆ ಪ್ಯಾ೦ಟು ಮುದುಡುವ ಸ೦ಭವ.
ಅದನ್ನು ಗಮನಿಸಿ, ತನ್ನ ಪೆಟ್ಟಿಗೆಯತ್ತ ಬೊಟ್ಟು ಮಾಡಿ,ಮುರಲೀಧರನೆಂದ:<br />
{{gap}}"ಕೂತ್ಕೋಳ್ಳಿ."<br />
{{gap}}ಕರವಸ್ತ್ರವನ್ನು ಹೊರತೆಗೆದು ಜಾಗರೂಕತೆಯಿಂದ ಬಿಡಿಸಿ ಪೆಟ್ಟಿಗೆಯ ಮೆಲೆ ಹಾಸಿ ಆತ ಕುಳಿತ.
ಬಳಿಕ ಪ್ರಶ್ನೆ ಬ೦ತು:<br />
{{gap}}"ಒಬ್ಬರೇ ಇದೀರಾ ಇಲ್ಲಿ?"<br />
{{gap}}"ಒಬ್ಬನೇ.."<br />
{{gap}}ಯಾರು ಆತ, ಉಪಾಧಾಯನೆ? ಉಪನಾಸಕನೆ? ಸ್ವಲ್ಪ ಹೊತ್ತು ದಿಟ್ಟಿಸಿದ బಳಿಕ,' ಎಲ್ಲೋ ನೋಡಿದ್ದೀನಿ'ಅನಿಸಿತು.<br />
{{gap}}ಆ ಮನುಷ್ಯನೆಂದ:<br />
{{gap}}"ನಿಂತೇ ಇದೀರಲ್ಲ, ಕೂತ್ಕೋಳ್ಳಿ."<br />
{{gap}} ಮುರಲೀಧರ, ಮನಸಿನೋಳಗೆ ಸಿಕ್ಕುಗಟ್ಟಿದ್ದ ಸಮಸ್ಯೆಯನ್ನು ಬಿಡಿಸಲಾಗದೆ,ಹಾಸಿಗೆಯ ಸುರುಳಿಯ ಮೇಲೆ ಗೋಡೆಗೊರಗಿ ಕುಳಿತ.<noinclude></noinclude>
2pa7g23xhzmtgwlocqxdv36iluk0w54
ಪುಟ:ದೀಕ್ಷೆ.pdf/೧೭
104
19127
321481
277276
2026-05-20T17:38:01Z
Pragathi. BH
7585
/* Validated */
321481
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=344|center=|right=ಕನಸು}}
{{gap}}"ನನ್ನ ಗುರುತು ಸಿಗಲಿಲ್ಲ,ಅಲ್ವೆ?"<br />
{{gap}}"ಇಲ್ಲ."<br />
{{gap}}"ಶಂಕರಯ್ಯರ್ ಹೋಟ್ಲಿಗೆ ಆಗಾಗ್ಗೆ ನಾನು ಬರಾ ಇಲ್ತಿನಿ."<br />
{{gap}}ಹೌದು, ಅಲ್ಲಿಯೇ ಕಂಡಿದ್ದುದು. ಅಧಾಪಕವೃಂದದವನಲ್ಲ.<br />
{{gap}}"ಹೂ೦. అల్లి ನಿಮ್ಮನು ನೋಡಿದ ನೆನಪಿದೆ."<br />
{{gap}}ಕುಳಿತಲ್ಲೆ ಕೆಳಗೆ ಕಡ್ಡಿಯನ್ನೆಸೆಯಲು, ನಿಮಿಷದ ಬಳಿಕ ಬೂದಿ ಕೊಡುವಳು,
ಆತ ಹಿಂದುಮುಂದು ನೋಡಲಿಲ್ಲ. ಆ ಮನುಷ್ಯ ನೈರ್ಮಲ್ಯ ಯನಾಗಿದ್ದುದು ತನ್ನ ಪೋಷಾಕಿನ ವಿಷಯದಲ್ಲಿ ಮಾತ್ರ.<br />
{{gap}}"ನಿಮ್ಮ ತರಗತೀಲಿ ನಾರಣಪ್ಪ ಅಂತ ಒಬ್ಬ ಹುಡುಗ ಇದ್ದಾನೆ. ನೆಮಗೆ ಗೊತ್ತೆ?"<br />
{{gap}}ಈತ ನಾರಣಪ್ಪ ನ ಸಂಬಂಧಿಕನಿರಬೇಕೆಂದು ಊಹಿಸುತ್ತ ಮುರಲೀಧರನೆಂದ:<br />
{{gap}}"ಓಹೋ, ಆತ ನನ್ನ ಗ್ರೂಪೇ."<br />
{{gap}}"ಖಾದೀದು ಜುಬ್ಬ ಪಾಯಜಾಮ ಹಾಕ್ಕೋತಾನಲ್ಲ?"<br />
{{gap}}"ಹೌದು, ಅವನೇ. ಗೊತ್ತಾಯು."<br />
{{gap}}"ನಿಮ್ಮದೂ ಅದೇ ರೀತಿಯ ಡ್ರೆಸ್ಸು-ಗೊತ್ತಿದ್ದೇ ಇರುತ್ತೆ."<br />
{{gap}}ಆ ಮಾತಿನ ಸರಣಿ ಮುರಲೀಧರನಿಗೆ ತುಸು ವಿಚಿತ್ರವೆನಿಸಿತು. ಆತ ದ್ರಿಷ್ಟಿ ತಗ್ಗಿಸಿ ತನ್ನ ಉಡುಪಿಯನ್ನೊಮ್ಮೆ ನೋಡಿದ. ಬಳಿಕ,ಆ ವ್ಯಕ್ತಿಯ ನೋಟವನ್ನು ಸಂಭಂದಿಸಿದ.
{{gap}}"ಆದರೆ ನನ್ನದು ಖಾದಿಯಲ್ಲ, ಖಾದಿಗೆ ಬೆಲೆ ಜಾಸ್ತಿ."<br />
{{gap}}ಮತ್ತೊಮ್ಮೆ ಬರೋದಿ ಕೊಡವಿ ಆ ಮನುಷ್ಯ ನಸುನಕ್ಕ.<br />
{{gap}}ಅದು ನಿಜ. ಆದರು ನಾರಣಪ್ಪ ನಿಮ್ಮ ಸ್ನೆಹಿತ ಅನ್ನಿ ."<br />
{{gap}}ನಾರಣಪ್ಪ ಏನೊ ತಪ್ಪುಮಾಡಿರಬೇಕು, ಆತನ ಮನೆಯವರು ವಿಷಯ ತಿಳಿದುಕೊಳ್ಳಲು ,ಯತ್ನಿಸುತಿದ್ದರೆ ಎನಿಸಿತು ಮುರಲೀಧರನಿಗೆ.<br />
ಇತರ ವಿದ್ಯಾರ್ಥಿ ಗಳಿಗಿಂತ ಸ್ವಲ್ಪ ಭಿನ್ನನಾಗಿದೆ,
, ಏಕಾಂತಪ್ರಿಯನಾಗಿದ್ದ ,ನಾರಣಪ್ಪ , ಆತನ ಗಮನ ವನ್ನು ಸೆಳೆದಿದ್ದುದೇನೋ ನಿಜ. ಆದರೆ ಗೆಳೆತನ ಬೆಳೆದಿರಲಿಲ್ಲ. ಅದಕ್ಕೆ ಅದಕ್ಕೆ ಅವಕಾಶ ದೊರೆತಿರಲಿಲ್ಲ....<br />
{{gap}}"ಸ್ನೇಹಿತ ಅಂತ ಹೇಳಲಾರೆ. ನೋಡಿದೀನಿ ಅಷ್ಟೆ."<br />
{{gap}}"ನಿಮ್ಮ ಗಣಿತದ ಅಧಾಪಕರು ನನಗೆ ಗೊತ್ತು, ನೀವು ಶ್ರದ್ಧೆಯಿಂದ ವ್ಯಸಂಗ ಮಾಡೋ ವಿದ್ಯಾರ್ಥಿಯಂತ ಅವರು ಹೇಳಿದ್ರು."<br />
{{gap}}ಲಜ್ಜೆಯೆಂದ ಮುಖ ರಂಗೇರುವ ಪ್ರಮೇಯ.<br />
{{gap}}"ನನ್ನನು ಅವರು ಗುರುತಿಟ್ಟುಕೊಂಡಿರೋದೇ ಆಶ್ಚರ್ಯ."<noinclude></noinclude>
l47ho1cic6n35cs9s4ps6wpo7t5p7m8
ಪುಟ:ಮಿಂಚು.pdf/೧೯೮
104
20644
321475
206792
2026-05-20T15:16:44Z
Shreelatha.Halemane
7642
/* Validated */
321475
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=192|right=ಮಿ೦ಚು}}
{{gap}}“ಬಾಬಾಜಿಗೆ ಈಚೆಗೆ ಫೋನ್ ಮಾಡಿದ್ದಿರಾ ?”
{{gap}}"ಇల్ల. ಮು೦ದಿನ ತಿ೦ಗಳು ಅಲ್ಲಿಗೆ ಹೋಗಬೇಕೂ೦ತಿದೀನಿ..ಬ೦ದ್ಬಿಟ್ಟೆ-
ಅಲ್ಲೇ ಕಾದಿರು.” -
{{gap}}ಕುಟೀರದ ಜವಾನ ಬಾಗಿಲು ತೆರೆದ, ಪರಶುರಾಮ ತನ್ನ ಲೆಕ್ಕಾಚಾರವನ್ನು
ಮಾತಾಜಿಗೆ ತಿಳಿಸಿದ:
{{gap}}“ತಕ್ಷಣ ಹೊರಟರೆ ಇಪ್ಪತ್ತು ಮಿನಿಟು ಸಾಕು. ಈಗ ಟ್ರಾಫಿಕ್ ಇಲ್ಲ."
{{gap}}ಅವನ ತರ್ಕ ಸರಿಯಾಗಿತ್ತು. ಇಪ್ಪತ್ತು ಮಿನಿಟು ದಾಟುವುದರೊಳಗೇ
ನಕುಲದೇವಜಿಯ ಕಾರು ಬಂತು. ಅವರೇ ಎಡಬಾಗಿಲು ತೆರೆದು, ತಾನು ಸೀಟಿನ
ಮಧ್ಯಕ್ಕೆ ಸರಿದು, ನಮಸ್ಕರಿಸುತ್ತಿದ್ದ ಸೌದಾಮಿನಿಗೆ ಒಳ ಬರಹೇಳಿದರು. ಆಕೆ
ಕಾರು ಹತ್ತಿದಳು.
{{gap}}“ಇಷ್ಟು ಸಾಮಿಗೂಪ್ಯದ ಭಾಗ್ಯವಾದರೂ ಸಿಕ್ಕಿತಲ್ಲ.. (ಆಪ್ತ ಕಾರ್ಯದರ್ಶಿಗೆ)
ಕಪ್ಪ ಸೂಟ್ಕೇಸ್ ತಗೊಂಡು ಬಾ."
{{gap}}ಅದು ಬ೦ದು. ದ್ ಇಳಿದು ಹಿ೦ದಿನ ಬಲ ಬಾಗಿಲು ತೆರೆದ. ಸೂಟ್
ಕೇಸನ್ನು ನಕುಲದೇವ್ಜಿಯ ಪಾದದ ಬಳಿ ಇಟ್ಟ"
{{gap}}“ನೀವು ಲಾಕೋ ಮೆ ಏಕ್ ಇಸ್ತ್ರೀ,” ಎಂದ ನಕುಲದೇವ್.
{{gap}}“ಲಾಕ್ ಅಲ್ಲ. ಕರೋಡ್ ಇದೆ ಅದರಲ್ಲಿ. ರಂಗಧಾಮನನ್ನು ಇಲ್ಲಿಂದ ಬರಿಗೈ
ಯಲ್ಲಿ ಕಳಿಸಿ ನನಗೆ ಅನಾಯ ಮಾಡಿದ್ರಿ.”
{{gap}}“ಏರ್ಪಾಟು ಇರೋದೆ ಹಾಗೆ, ಎಲ್ಲ ರಾಜ್ಯಗಳಿಂದ ಖರೀದಿ ವ್ಯವಹಾರ
ನಡೆಯೋದು ದಿಲ್ಲಿಯ ಮೂಲಕವೇ, ರಂಗಧಾಮ ಹೇಳಲಿಲ್ಲವ? ನಾನು ತಿಳಿಸೋ
ದಕ್ಕೆ ಮರೆತೆ ಅಂತ ತೋರ್ತದೆ.”
{{gap}}ಏರ್ಪಾಟೇ ಹಾಗೆ ಎಂದಾದರೆ ಅಪಚಾರವೇನೂ ನಡೆದಿಲ್ಲ- ಎಂದು
ಸೌದಾಮಿನಿಗೆ ಒಂದು ಬಗೆಯ ಸಮಾಧಾನ.
{{gap}}“ಪ್ರಧಾನಿಯವರನ್ನ ನಾನು ನೋಡೋದಕ್ಕೆ ವೇಳೆ ಗೊತ್ಮಾಡ್ಕೊಡಿ."
{{gap}}“ಸಾಧ್ಯವೇ ಇಲ್ಲ, ಎರಡು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಎರಡು
ವಾರಗಳಿ೦ದ ಸಂದರ್ಶನಕ್ಕಾಗಿ ಕಾದಿದ್ದಾರೆ. ಲೋಕಸಭೆಯ ಮುಂದಿನ ಅಧಿವೇಶನಕ್ಕೆ
ಮುಂಚೆ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರಿಯಬೇಕು...ಅಂತ ಹೇಳ್ತಾ ಇದ್ದು.”
{{gap}}“ಕಿಷ್ಕಿ೦ಧಾ ಭವನದ ಶಂಕುಸ್ಥಾಪನೆ, ಪ್ರಧಾನಿಯ ಕಿಷ್ಕಿ೦ದ ಪ್ರವಾಸ ఎల్ల
ಮುಂದಕ್ಕೆ ಬಿದ್ದ ಹಾಗೆ." .
{{gap}}“ನಿಮ್ಮ ರಾಜ್ಯದ ವಿಷಯದಲ್ಲಿ ಸಿ.ಬಿ.ಐ. ವರದಿ ಬಂದಿದೆ, ಅದು ಪ್ರಧಾನಿ
ಕೈಯಲ್ಲಿದೆ. ಬೇರೆ ವರದಿಗಳೂ ಬಂದಿವೆ, ಪ್ರತಿಪಕ್ಷ ಸಲ್ಲಿಸಿದ ಆರೋಪಗಳ ಪಟ್ಟಿ
ಯನ್ನು ಕೆಳ ಹಂತದಲ್ಲೇ ನಾನು ಮೊಟ್ಟಿದೆ. ಆದರೆ, ನಮ್ಮ ಪಕ್ಷದವರಿಂದಲೇ ದೂರು
ಬಂದರೆ, ಒಂದಿಷ್ಟು ಗಮನ ಕೊಡದೆ ಇರೋದಕ್ಕಾಗೊಲ್ಲ.”<noinclude></noinclude>
2btzzgbgdlie37au44eppbxw6nmh2g6
ಪುಟ:ಮಿಂಚು.pdf/೧೯೯
104
20645
321478
206793
2026-05-20T15:21:57Z
Shreelatha.Halemane
7642
/* Proofread */
321478
proofread-page
text/x-wiki
<noinclude><pagequality level="3" user="Priya S John" /></noinclude>{{rh|center=|left=ಮಿ೦ಚು |right=193}}
“ಪ್ರಧಾನಿಯ ಆಪ್ತ ಕಾರ್ಯದರ್ಶಿಯ ಕೈಯಲ್ಲಿ ನನ್ನದೊಂದು ಮನವಿ
ಕೊಟ್ಟ ಹೋಗ್ಲೆನೆ.” -
“ನಿನ್ನಿಷ್ಟ"
“ರಾಷ್ಟಪಕ್ಷದ ಅಧ್ಯಕ್ಷರನ್ನು ಭೇಟಿಯಾಗಲಾ?" -
“ಬೇಡ, ಅವರಿಗಲೂ ಪ್ರಧಾನಿಗೂ ವಿರಸ, ನೀನು ಮುದುಕನನ್ನು ಭೇಟಿ
ಯಾದದ್ದು ಗೊತ್ತಾದರೆ ಪ್ರಧಾನಿ ಕೆಂಡವಾಗ್ದಾರೆ.”
“ನೀವೊಬ್ಬರೇ ನನ್ನ ಹಿತೈಷಿ, ನನಗೆ ಏನು ಸಲಹೆ ಕೊಡ್ರೀರಿ ?"
ನಕುಲದೇವ್ ಕೈಗಡಿಯಾರ ನೋಡಿದ.
“ನಿಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಿ: ಶಾಸಕರಲ್ಲಿ ಬಹುಸಂಖ್ಯಾಕರು ನಿಮ್ಮ
ಕಡೆ ಇರುವಂತೆ ನೋಡಿಕೊಳ್ಳಿ. ಅದಕ್ಕೆ ಏನೇನು ಕ್ರಮ ಅಗತ್ಯವೋ ಆ ಕ್ರಮ
ತೆಗೆದುಕೊಳ್ಳಿ.”
“ನೀವು ಕಾಶ್ಮೀರದಿಂದ ಬಂದ ಮೇಲೆ ಪ್ರಧಾನಿಗೆ ನನ್ನ ಪರವಾಗಿ ಒಂದು
ಮಾತು ಹೇಳಿ.' - *
“ಹೇಳದೆ ಇರ್ತೀನಾ ?”
“ಕಿಷ್ಕಿ೦ಧೆ ರಾಜ್ಯಪಾಲರಿಗೂ ಫೋನ್ ಮಾಡಿ. ಚೌಗುಲೆಯಿ೦ದ೦ತೂ ನಾನು
ಪೂರ್ಣ ಸಹಾಯ ನಿರೀಕ್ಷಿಸ್ತೇನೆ. ಆತನಿಗೂ ನೀವೊಮ್ಮೆ ಫೋನ್ ಮಾಡಿದರೆ ಕೃತಜ್ಞ
೪ಾಗ್ತೇನೆ.” - -
“ಭಿನ್ನಮತೀಯರ ಕಿರಿಚಾಟದಿಂದ ಗಾಬರಿಯಾದೆಯ? ರಾಜಕೀಯದಲ್ಲಿ
ಇದೆಲ್ಲ ಸಾಮಾನ್ಯ, ಮಿನಿ."
“ನನಗಿದೆಲ್ಲ ಹೊಸದು.”
“ಹೊತ್ತಾಯು, ಹೋಗ್ರಿಡ್ತೀನಿ. ಕಾಣಿಕೆಗಾಗಿ ಥಾಂಕ್ಸ್. ನನ್ನ ಮರುಕಾಣಿಕೇನ
ಮುಖ್ಯಮಂತ್ರಿಗಳ ಸಭೆಗೆ ನೀವು ಬಂದಾಗ ಸಲ್ಲಿಸ್ತೀನಿ."
ಸೌದಾಮಿನಿ ಇಳಿದಳು. ಬಾಗಿಲು ಮುಚ್ಚಿಕೊಂಡಿತು. ಅದರಲ್ಲಿ ಕಿಟಿಕಿ
ಗಾಜು ಭದ್ರವಾಗಿತ್ತು. ಮಾತನಾಡಿಯೂ ಪ್ರಯೋಜನವಿಲ್ಲ. ಆ ಮಾತು ಒಳಗಿನ
ವರಿಗೆ ಕೇಳಿಸುವುದಿಲ್ಲ. ಮೋಹಕ ನಗೆ ಬೀರಲು ಯತ್ನಿಸುತ್ತ ಕೈ ಜೋಡಿಸಿದಳು.
ಆತ ಅಂಗೈಯ ಬೆರಳು ತುದಿಗಳನ್ನು ತುಟಿಗೆ ಮುಟ್ಟಿಸಿದ.
* * *
ನಕುಲದೇವ ಹೋದ ಸ್ವಲ್ಪ ಹೊತ್ತಿನಲ್ಲೆ ಫೆರ್ನಾಂಡೀಸ್ ಮತ್ತು ಸಿತಾರಾ
ಬಂದರು. ರಾಷ್ತ್ರಾಪಕ್ಷದ ಕಾರ್ಯದರ್ಶಿ ಬ೦ದು ಹೋದರೆ೦ದು ತಿಳಿದಾಗ, ಕಿಷ್ಟಿಂಧೆಯ
ಮೇಲೆ ಕವಿದಿರುವ ಮೋಡಗಳು ಚೆದರಿ ಹೋಗಲೂಬಹುದು,'' ಎಂದುಕೊಂಡರು.
13<noinclude></noinclude>
s70mmc8u3j81glrnxfy4fd6oc94fd3f
ಪುಟ:ಮಿಂಚು.pdf/೨೧೧
104
20658
321540
248887
2026-05-21T04:33:48Z
Pragathi. BH
7585
/* Validated */
321540
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಿಂಚು|right=205}}
ಇದನ್ನು ಹತ್ತಿಕ್ಕೋದು ನಿಮಿಷದ ಕೆಲಸ. ಆದರೆ, ಪ್ರಜಾಪ್ರಭುತ್ವಕ್ಕೆ ನಾವು </br>
ಅಪಚಾರ ಮಾಡ್ತಿದೇವೆ ಅಂತ ಯಾರೂ ಭಾವಿಸಬಾರದಲ್ಲ ?....” </br>
{{gap}}ಇದೇ ಸರಣಿಯಲ್ಲಿ ಮಾತು ಮುಂದುವರಿಯಿತು, ಮಧ್ಯೆ ವಿದ್ಯಾಧರ ಎದ್ದು </br>
ಬಂದು ಸೌದಾಮಿನಿಯ ಕಿವಿಯಲ್ಲಿ ಪಿಸುನುಡಿ ಆಡಿದ, </br>
{{gap}}ಮುಖ್ಯಮಂತ್ರಿ : </br>
{{gap}}“ವಿದ್ಯಾಧರರು ಹೇಳಿದ ಗುಟ್ಟಿನ ಮಾತನ್ನು ಈಗ ರಟ್ಟು ಮಾಡ್ತೇನೆ. ಕೇಳಿ ! </br>
ನಮ್ಮ ಜತೆ ಈಗ ನೂರೈದು ಜನ ಇದ್ದಾರೆ. ಪರ ಊರುಗಳಿಂದ ಇನ್ನೂ ಇಪ್ಪತ್ತೈದು </br>
ಶಾಸಕರು ಬರಬೇಕಾಗಿದೆ. ಅವರೂ ಸೇರಿಕೊಂಡಾಗ ನಮ್ಮ ಬಲ ಎಷ್ಟಾಗ್ತದೆ </br>
ಅನ್ನೋದನ್ನು ನೀವೇ ಲೆಕ್ಕ ಹಾಕ್ಕೊಳ್ಳಿ. ಕುತಂತ್ರದಿಂದ ಸಂಪುಟ ಉರುಳಿಸೋದಕ್ಕೆ </br>
ಆಗೋದಿಲ್ಲ. ತಿಪ್ಪರಲಾಗ ಹಾಕಿದರೂ ಆಗೋದಿಲ್ಲ. ಇದು ಪಕ್ಷದ್ರೋಹ. ತಕ್ಕ </br>
ಫಲವನ್ನು ಅವರು ಅನುಭವಿಸಿಯೇ ಅನುಭವಿಸ್ತಾರೆ.” </br>
{{gap}}ನೆರೆದಿದ್ದವರು ಚಪ್ಪಾಳೆ ತಟ್ಟಿದರು. </br>
{{gap}}ವಿಶ್ವಂಭರನ ಉಪಾಹಾರ (ಚಪ್ಪರ, ಹೂವಿನಕುಚ್ಚು, ಎಲ್ಲ) 'ಅರಿಕೇಸರಿ', </br>
ಹೋಟೆಲಿನದು. </br>
{{gap}}ಸ್ಪೀಕರ್ ಇಲ್ಲಿಯೂ ಮಾತನಾಡದ ಅಧ್ಯಕ್ಷರಾದರು. ವಿಶ್ವಂಭರ ಧ್ವನಿವರ್ಧಕ </br>
ವನ್ನು ಚಾಕಚಕ್ಯದಿಂದ ಬಳಸಿದ. ಸೌದಾಮಿನಿ ಪುರಾಣ ಶ್ರೋತೃಗಳಿಗೆ ರಂಜನೆ </br>
ನೀಡಿತು. ಆಗಾಗ್ಗೆ ಚಪ್ಪಾಳೆಗಳು ಬಿದ್ದುವು. </br>
{{gap}}ಆತನೆಂದ : </br>
{{gap}}“ಇನ್ನು ಗಣಿತಕ್ಕೆ ಬರೋಣ. ವಿಧಾನಸಭಾಪತಿ ಪೀಠದಲ್ಲಿ ಕುಳಿತಾಗ ಅವರು </br>
ಸ್ಪೀಕರ್. ಆಗ ಅವರು ಅಗತ್ಯ ಬಿದ್ದಾಗ ತಮ್ಮ ಮತ ಕೂಡ ಚಲಾಯಿಸಬಹುದು. </br>
ಈಗ ಮಾನ್ಯ ಶಾಸಕರಾಗಿ ಹಿರಿಯ ರಾಜಕೀಯ ಮುತ್ಸದ್ದಿಯಾಗಿ ನಮ್ಮ ಲೆಕ್ಕ </br>
ಕ್ಕಿದ್ದಾರೆ. ಸಾದಾಮಿನಿ ಯಾನೆ ಮಾತಾಜಿ ಯಾನೆ ಬೇರೆ ಬೇರೆ ಹೆಸರುಗಳಿರುವ </br>
ಮುಖ್ಯಮಂತ್ರಿಯಲ್ಲಿ, ಅವರ ನಾಯಕತ್ವದಲ್ಲಿ ತಮಗೆ ವಿಶ್ವಾಸವಿಲ್ಲಾಂತ ಒಟ್ಟು </br>
ಎಂಬತ್ತು ಶಾಸಕರು ಇಗೋ ಈ ಹಾಳೆಗಳಲ್ಲಿ ಸಹಿ ಹಾಕಿದ್ದಾರೆ. ಎಲ್ಲ ಪಕ್ಷಗಳವರೂ </br>
ಸೇರಿ ಕಿಷ್ಕಿಂಧೆಯಲ್ಲಿ ಚುನಾಯಿತ ಪ್ರತಿನಿಧಿಗಳ ಒಟ್ಟು ಸಂಖ್ಯೆ ೧೬೧. ಅವರಲ್ಲಿ </br>
ಒಬ್ಬರು ಸಮತಾಪಕ್ಷದವರು, ಐವರು ಪ್ರಜಾಪಕ್ಷದವರು. ಉಳಿದವರೆಲ್ಲ ರಾಷ್ಟ್ರ </br>
ಪಕ್ಷದವರು, ೧೬೧ ರಿಂದ ೬ ಹೋದರೆ ಉಳಿದವರು ೧೫೫. ಅವರಿಂದ ೮೦ ಸಹಿ </br>
ಕಾರರನ್ನು ಇತ್ತ ಇಡಿ. ಮುಖ್ಯಮಂತ್ರಿಯವರ ಕಡೆ ಉಳಿಯುವವರು ಎಪ್ಪತ್ತೈದೇ </br>
ಜನ. ಪ್ರತಿಪಕ್ಷೀಯರನ್ನು ಬಿಡಿ ; ಆಡಳಿತ ಪಕ್ಷದಲ್ಲಿ ಈಗ ಮಾತಾಜಿಗೆ ಬಹುಮತ </br>
ವಿಲ್ಲ. ಅವರು ರಾಜೀನಾಮೆ ಕೊಡಬೇಕು. ಇಲ್ಲವೆ ಬರ್ತರ್ಫ್ ಮಾಡಿಸಿಕೊಳ್ಳಲು </br>
ಸೆರಗು ಬಿಗಿದುಕೊಳ್ಳಬೇಕು. (“ಹೀಯರ್ !” “ಹೀಯರ್ !”).<noinclude></noinclude>
4ggqc7mbkdfgcobykf48zprk8oqym54
321541
321540
2026-05-21T04:36:15Z
Pragathi. BH
7585
321541
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=|left=ಮಿಂಚು|right=205}}
ಇದನ್ನು ಹತ್ತಿಕ್ಕೋದು ನಿಮಿಷದ ಕೆಲಸ. ಆದರೆ, ಪ್ರಜಾಪ್ರಭುತ್ವಕ್ಕೆ ನಾವು
ಅಪಚಾರ ಮಾಡ್ತಿದೇವೆ ಅಂತ ಯಾರೂ ಭಾವಿಸಬಾರದಲ್ಲ ?....” </br>
{{gap}}ಇದೇ ಸರಣಿಯಲ್ಲಿ ಮಾತು ಮುಂದುವರಿಯಿತು, ಮಧ್ಯೆ ವಿದ್ಯಾಧರ ಎದ್ದು
ಬಂದು ಸೌದಾಮಿನಿಯ ಕಿವಿಯಲ್ಲಿ ಪಿಸುನುಡಿ ಆಡಿದ, </br>
{{gap}}ಮುಖ್ಯಮಂತ್ರಿ : </br>
{{gap}}“ವಿದ್ಯಾಧರರು ಹೇಳಿದ ಗುಟ್ಟಿನ ಮಾತನ್ನು ಈಗ ರಟ್ಟು ಮಾಡ್ತೇನೆ. ಕೇಳಿ !
ನಮ್ಮ ಜತೆ ಈಗ ನೂರೈದು ಜನ ಇದ್ದಾರೆ. ಪರ ಊರುಗಳಿಂದ ಇನ್ನೂ ಇಪ್ಪತ್ತೈದು
ಶಾಸಕರು ಬರಬೇಕಾಗಿದೆ. ಅವರೂ ಸೇರಿಕೊಂಡಾಗ ನಮ್ಮ ಬಲ ಎಷ್ಟಾಗ್ತದೆ
ಅನ್ನೋದನ್ನು ನೀವೇ ಲೆಕ್ಕ ಹಾಕ್ಕೊಳ್ಳಿ. ಕುತಂತ್ರದಿಂದ ಸಂಪುಟ ಉರುಳಿಸೋದಕ್ಕೆ
ಆಗೋದಿಲ್ಲ. ತಿಪ್ಪರಲಾಗ ಹಾಕಿದರೂ ಆಗೋದಿಲ್ಲ. ಇದು ಪಕ್ಷದ್ರೋಹ. ತಕ್ಕ
ಫಲವನ್ನು ಅವರು ಅನುಭವಿಸಿಯೇ ಅನುಭವಿಸ್ತಾರೆ.” </br>
{{gap}}ನೆರೆದಿದ್ದವರು ಚಪ್ಪಾಳೆ ತಟ್ಟಿದರು. </br>
{{gap}}ವಿಶ್ವಂಭರನ ಉಪಾಹಾರ (ಚಪ್ಪರ, ಹೂವಿನಕುಚ್ಚು, ಎಲ್ಲ) 'ಅರಿಕೇಸರಿ',
ಹೋಟೆಲಿನದು. </br>
{{gap}}ಸ್ಪೀಕರ್ ಇಲ್ಲಿಯೂ ಮಾತನಾಡದ ಅಧ್ಯಕ್ಷರಾದರು. ವಿಶ್ವಂಭರ ಧ್ವನಿವರ್ಧಕ
ವನ್ನು ಚಾಕಚಕ್ಯದಿಂದ ಬಳಸಿದ. ಸೌದಾಮಿನಿ ಪುರಾಣ ಶ್ರೋತೃಗಳಿಗೆ ರಂಜನೆ
ನೀಡಿತು. ಆಗಾಗ್ಗೆ ಚಪ್ಪಾಳೆಗಳು ಬಿದ್ದುವು. </br>
{{gap}}ಆತನೆಂದ : </br>
{{gap}}“ಇನ್ನು ಗಣಿತಕ್ಕೆ ಬರೋಣ. ವಿಧಾನಸಭಾಪತಿ ಪೀಠದಲ್ಲಿ ಕುಳಿತಾಗ ಅವರು
ಸ್ಪೀಕರ್. ಆಗ ಅವರು ಅಗತ್ಯ ಬಿದ್ದಾಗ ತಮ್ಮ ಮತ ಕೂಡ ಚಲಾಯಿಸಬಹುದು.
ಈಗ ಮಾನ್ಯ ಶಾಸಕರಾಗಿ ಹಿರಿಯ ರಾಜಕೀಯ ಮುತ್ಸದ್ದಿಯಾಗಿ ನಮ್ಮ ಲೆಕ್ಕ
ಕ್ಕಿದ್ದಾರೆ. ಸಾದಾಮಿನಿ ಯಾನೆ ಮಾತಾಜಿ ಯಾನೆ ಬೇರೆ ಬೇರೆ ಹೆಸರುಗಳಿರುವ
ಮುಖ್ಯಮಂತ್ರಿಯಲ್ಲಿ, ಅವರ ನಾಯಕತ್ವದಲ್ಲಿ ತಮಗೆ ವಿಶ್ವಾಸವಿಲ್ಲಾಂತ ಒಟ್ಟು
ಎಂಬತ್ತು ಶಾಸಕರು ಇಗೋ ಈ ಹಾಳೆಗಳಲ್ಲಿ ಸಹಿ ಹಾಕಿದ್ದಾರೆ. ಎಲ್ಲ ಪಕ್ಷಗಳವರೂ
ಸೇರಿ ಕಿಷ್ಕಿಂಧೆಯಲ್ಲಿ ಚುನಾಯಿತ ಪ್ರತಿನಿಧಿಗಳ ಒಟ್ಟು ಸಂಖ್ಯೆ ೧೬೧. ಅವರಲ್ಲಿ
ಒಬ್ಬರು ಸಮತಾಪಕ್ಷದವರು, ಐವರು ಪ್ರಜಾಪಕ್ಷದವರು. ಉಳಿದವರೆಲ್ಲ ರಾಷ್ಟ್ರ
ಪಕ್ಷದವರು, ೧೬೧ ರಿಂದ ೬ ಹೋದರೆ ಉಳಿದವರು ೧೫೫. ಅವರಿಂದ ೮೦ ಸಹಿ
ಕಾರರನ್ನು ಇತ್ತ ಇಡಿ. ಮುಖ್ಯಮಂತ್ರಿಯವರ ಕಡೆ ಉಳಿಯುವವರು ಎಪ್ಪತ್ತೈದೇ
ಜನ. ಪ್ರತಿಪಕ್ಷೀಯರನ್ನು ಬಿಡಿ ; ಆಡಳಿತ ಪಕ್ಷದಲ್ಲಿ ಈಗ ಮಾತಾಜಿಗೆ ಬಹುಮತ
ವಿಲ್ಲ. ಅವರು ರಾಜೀನಾಮೆ ಕೊಡಬೇಕು. ಇಲ್ಲವೆ ಬರ್ತರ್ಫ್ ಮಾಡಿಸಿಕೊಳ್ಳಲು
ಸೆರಗು ಬಿಗಿದುಕೊಳ್ಳಬೇಕು. (“ಹೀಯರ್ !” “ಹೀಯರ್ !”).<noinclude></noinclude>
9cv57zmu2sjmcwgh6asvm8wmt95uq39
ಪುಟ:ಮಿಂಚು.pdf/೨೧೨
104
20659
321542
320831
2026-05-21T04:37:36Z
Pragathi. BH
7585
321542
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=206|right=ಮಿಂಚು}}
{{gap}}ಲಕ್ಷ್ಮೀಪತಯ್ಯ ಅಂದರು : </br>
{{gap}}“ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಮಹಾಜನತೆ ಮೆರವಣಿಗೆಯಲ್ಲಿ ರಾಜ ಭವನಕ್ಕೆ ತೆರಳಿ ಮನವಿ ಸಲ್ಲಿಸಬೇಕು.” </br>
{{gap}}“ವಿಶ್ವಂಭರನೆಂದ ; </br>
{{gap}}ಅವರು ಕೇಂದ್ರಕ್ಕೆ ವರದಿ ಕಳಿಸಿಯೇ ಕಳಿಸ್ತಾರೆ. ಆದರೆ ನಮ್ಮ ಒಂದು
ನಿಯೋಗವೂ ದಿಲ್ಲಿಗೆ ಹೋಗಿ ವರಿಷ್ಠರನ್ನು ಕಾಣಬೇಕು.” </br>
{{gap}}ಹತ್ತಾರು ಸ್ವರಗಳು ಕೇಳಿಸಿದುವು : </br>
{{gap}}“ನೀವಿಬ್ಬರೇ ಸಾಕು, ನಾಳೆ ಸಂಜೆಯ ವಿಮಾನದಲ್ಲೇ ಹೋಗಿ,” </br>
{{gap}}ಉಪಾಹಾರ ಸಭೆಯ ವಿವರವನ್ನು ಒಬ್ಬ ಬೇಹುಗಾರ ತಂದ. </br>
{{gap}}“ಈ ಅಂಕೆ ಸಂಖ್ಯೆಗಳನ್ನು ನಾನು ನಂಬೋದಿಲ್ಲ, ಚಿತ್ರ ನಾಳೆ ಬದಲಾಗ್ತದೆ. ಮೆರವಣಿಗೆ ಏನು ಮಹಾ ? ಹುಶ್ ಎಂದರೆ ಸಾಕು. ಜನ ಜಮಾಯಿಸ್ತಾರೆ.”
ಎಂದು ಸೌದಾಮಿನಿ ತಣ್ಣನೆ ನುಡಿದಳು. ಒಳಗೆ ಮಾತ್ರ ಕಾವು ಏರುತ್ತಿತ್ತು. ಅಲ್ಲಿ
ಪರಿಸರ ಕಮರುತ್ತಿತ್ತು. </br>
{{gap}}ಆಪ್ತ ಕಾರ್ಯದರ್ಶಿಯನ್ನು ಕರೆದು ಅವಳೆಂದಳು : </br>
{{gap}}“ಇವತ್ತು ರಾತ್ರೆ ಆ ವಿಶ್ವಂಭರನನ್ನು ಕಾಣಬೇಕು, ಪರಶು.” </br>
{{gap}}ಅವರಿಗೆ ಫೋನ್ ಮಾಡ್ಲಾ ?” </br>
{{gap}}“ದಿಢೀರ್ ಪ್ರತ್ಯಕ್ಷ, ಹತ್ತು ಗಂಟೆಗೆ ರಕ್ಷಣಾ ಪೋಲೀಸರೂ ಇಲ್ಲದೆ, ಅಂಗ
ರಕ್ಷಕರೂ ಇಲ್ಲದೆ, ಅಡ್ರೆಸ್ ಸರಿಯಾಗಿ ಬರೆದಿಟ್ಕೊ.” </br>
{{gap}}“ಅಲ್ಲಿ ಬೇರೆಯವರು ಇದ್ದರೆ ?” </br>
{{gap}}“ಶಿಬಿರ ಅಂದ್ಮೇಲೆ ಯಾರಾದರೂ ಇದ್ದೇ ಇರ್ತಾರೆ. ದೊಡ್ಡದಲ್ಲ.” </br>
{{***|3|6em}}
{{gap}}ಬಾಗಿಲು ತೆರೆದಿತ್ತು. ಶಿಬಿರವಾಗಿ ಮಾರ್ಪಟ್ಟಿದ್ದ ಮನೆ. ಸೌದಾಮಿನಿ
ಬಿರುಗಾಳಿಯಂತೆ ಶಿಬಿರಕ್ಕೆ ನುಗ್ಗಿದಳು. ನೆರೆದಿದ್ದವರು ಅವಾಕ್ಕಾದರು. ಎಲಾ !
ಹೀಗೂ ಉಂಟೆ ? </br>
{{gap}}ನೆಲೆಸಿದ ಮೌನದಲ್ಲಿ ವಿಶ್ವಂಭರನೂ ಒಂದು ನಿಮಿಷ ಕಕ್ಕಾವಿಕ್ಕಿಯಾದ,
ಸಾವರಿಸಿಕೊಂಡು ಎದ್ದು ನಿಂತು ನಸು ನಕ್ಕು “ಸ್ವಾಗತ" ಅಂದ. </br>
{{gap}}“ನನ್ನ ಸಹಿಯೂ ಒಂದಿರಲಿ. ಎಂಬತ್ತೊಂದಾಗ್ತದೆ, ಗಣಿತ ಪ್ರಾಧ್ಯಾಪಕರೇ." </br>
{{gap}}“ಪೆನ್ ಕೊಡಲೆ ?” </br>
{{gap}}“ಎಲ್ಲಿ ನಿಮ್ಮ ಸ್ಟಡೀ ತೋರಿಸಿ.” </br>
{{gap}}“ಖಾಸಗಿ ಮಾತು ?”<noinclude></noinclude>
cwb04tjcbdqawnxstc7s6tyc2399flk
ಪುಟ:ಮಿಂಚು.pdf/೨೧೩
104
20660
321543
320832
2026-05-21T04:38:42Z
Pragathi. BH
7585
321543
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=|left=ಮಿಂಚು|right=207}}
{{gap}}"ಹ್ಞ." </br>
{{gap}}ತೆರೆ ಸರಿಸಿ ಒಳ ಕೊಠಡಿಗೆ ಪ್ರವೇಶ, </br>
{{gap}}“ಒಪ್ಪ ಓರಣ ಶಿಸ್ತು ನಿಮ್ಮಿಂದ ಕಲೀಬೇಕು. ಅಭಿನಂದನೆ ಯಾರಿಗೆ ಸಲ್ಲಿಸ
ಬೇಕು ? ನಿಮಗೊ ? ಶ್ರೀಮತಿಯವರಿಗೊ ?” </br>
{{gap}}“ಹೊರಗೆ ಜನ ಇದಾರೆ. ವಿಷಯಕ್ಕೆ ಬನ್ನಿ.” </br>
{{gap}}“ಅಂಗೈ ಚಾಚಿ.” </br>
{{gap}}ವಿಶ್ವಂಭರ ಬಲ ಅಂಗೈಯನ್ನು ಮುಂದಕ್ಕೆ ಚಾಚಿದ, ಅದಕ್ಕೆ ಸೌದಾಮಿನಿ ತನ್ನ ಅಂಗೈಯಿಂದ ಬಡೆದಳು, ಮೆಲ್ಲನೆ </br>
{{gap}}"ಇದು ವಾಗ್ದಾನ, ಸಂಪುಟವನ್ನು ಪುನರ್ ರಚಿಸ್ತೇನೆ, ನೀವು ಉಪ
ಮುಖ್ಯಮಂತ್ರಿ. ಎಲ್ಲ ತಣ್ಣಗಾದ ಮೇಲೆ ನಾನು ಸನ್ಯಾಸ ತಗೊಳ್ತೇನೆ, ಆಮೇಲೆ
ನೀವೆ__” </br>
{{gap}}“ಮುಖ್ಯಮಂತ್ರಿ ! ಎಷ್ಟು ಸರಳ ! ಈಗ ಈ ಸಹಿ ಸಂಗ್ರಹ ಇತ್ಯಾದಿ
ಬಿಟ್ಬಿಡ್ಬೇಕು ಅಲ್ವೆ ?” </br>
{{gap}}“ಒಪ್ಪಿಗೆ ಅನ್ನಿ.” </br>
{{gap}}“Sorry, ಮಾತಾಜಿ." </br>
{{gap}}“ಹಾಗಾದರೆ ನಾನು ಇಲ್ಲಿಗೆ ಬಂದೂ ಇಲ್ಲ, ನಿಮ್ಜತೆ ಮಾತಾಡಿಯೂ ಇಲ್ಲ,” </br>
{{gap}}“ಸರಿ.” </br>
{{gap}}ಹೊರಟ ಸೌದಾಮಿನಿಯನ್ನು ಬೀಳ್ಕೊಡಲು ವಿಶ್ವಂಭರ ಅಂಗಳಕ್ಕಿಳಿದ. ಅಲ್ಲಿ </br>
ಅಂದ : </br>
{{gap}}“ಬಾಡಿಗಾರ್ಡ್ ಇಲ್ಲದೆ ಬಂದಿದ್ದೀರಿ !” </br>
{{gap}}"ಇದು ಸ್ನೇಹದ ಮನೆ ವಿಶ್ವಂಭರ, ವೈರಿ ಶಿಬಿರ ಅಲ್ಲ.” </br>
{{gap}}“ದಾರಿಯಲ್ಲಿ ದುರ್ಜನರಿರ್ತಾರೆ. ಏನಾದರೂ ಆದರೆ ?” </br>
{{gap}}“ನನ್ನ ಕೂದಲು ಕೊಂಕಿದರೂ ಸಾಕು, ಅದಕ್ಕೆ ನೀವೇ ಕಾರಣ ಅಂತ ನಾಳೆ ಕಲ್ಯಾಣನಗರ ವಿಚಾರಿಸ್ಕೊಳ್ತದೆ.” </br>
{{gap}}“ಮೆಚ್ಚಿದೆ.” </br>
{{gap}}“ಮೆಚ್ಚಿದರೂ ಏನು ಪ್ರಯೋಜನ ? ಬರೀ ಮಾತಾಯಿತು, ಅಷ್ಟೆ.” </br>
{{gap}}ಕಾರು ಹೊರಟಿತು. ವಿಶ್ವಂಭರನ ಮನೆಯಲ್ಲಿನ ನಗೆಯ ಭೋರ್ಗರೆತ ಕಾರನ್ನು ಹಿಂಬಾಲಿಸಿತು. </br>
{{gap}}ಕಾರಿನಲ್ಲಿ ಸೌದಾಮಿನಿ ತನ್ನ ಖಿನ್ನತೆಯನ್ನು ಮರೆಮಾಡುತ್ತ ಕೇಳಿದಳು : </br>
{{gap}}“ಪರಶು, ನಾಯಕ್ ಮನೆಯ ವಿಳಾಸ ನೆನಪಿದೆಯಾ ?” </br>
{{gap}}ಇದೆ. ಹಿಂದೆ ರಾಷ್ಟ್ರಪಕ್ಷದ ಕಾರ್ಯಾಲಯದಿಂದ ಅಲ್ಲಿಗೆ ಹೋಗಿದ್ದೆ.” </br>
{{gap}}“ಡ್ರೈವರಿಗೆ ದಾರಿ ತೋರಿಸು..”<noinclude></noinclude>
7s8x6tvuzsxmwgn0al4gwswq9ajgf39
ಪುಟ:ಮಿಂಚು.pdf/೨೪೫
104
20692
321609
206839
2026-05-21T09:46:28Z
Pragathi. BH
7585
/* Validated */
321609
proofread-page
text/x-wiki
<noinclude><pagequality level="4" user="Pragathi. BH" />{{rh|center=ಮಿಂಚು|left=|right=239}}</noinclude>
{{gap}}ಯಾರೋ ಒಬ್ಬ ಶಾಸಕನೆಂದ:
“ಆ ಫ್ಯಾನ್ ಎಲ್ಲ ಬಂದ್ ಮಾಡ್ರೋ. ನಿದ್ದೆ ಬರ್ತೈತಿ....!"
ಬಹಳ ಜನ ನಕ್ಕರು.ಫ್ಯಾನುಗಳ ಜಾಲಗಳ ಚಾಲನೆ ಮುಂದುವರೆಯಿತು.
{{gap}}ನಕುಲದೇವರ ಸೂಚನೆಯಂತೆ ವಿಶ್ವಂಭರ ಮಾತನಾಡಲು ಎದ್ದ. ಸಾಯು
ತ್ತಿರುವ ಕುದುರೆಗೆ ಇನ್ನೆಷ್ಟು ಬಡೆಯಬಹುದು ಚಾಟಿಯಿಂದ? ರಹಸ್ಯ ಮತದಾನಕ್ಕೆ
ಒಪ್ಪಬಾರದು ಎಂದುಕೊಂಡ ವಿಶ್ವಂಭರ. ಸೌದಾಮಿನಿಯ ದುರಾಡಳಿತದ ಪುಟ್ಟ
ಚಿತ್ರ ಕೊಟ್ಟ. ಇಲ್ಲಿ ಪಕ್ಷದ ಭವಿತವ್ಯದ ಪ್ರಶ್ನೆ ಅಡಗಿದೆ, ಎಂದ. ತೀರಾ ಹಾಳಾಗು
ವುದಕ್ಕೆ ಮುನ್ನ ರಿಪೇರಿ ಕಾರ್ಯ ನಡೆಯಬೇಕು ಎಂದು ಸೂಚಿಸಿದ. ನಮ್ಮವರು
ಯಾರಿಗೂ ಅಧಿಕಾರ ವ್ಯಾಮೋಹವಿಲ್ಲ ; ನಮಗೆ ಬೇಕಾದ್ದು ಸುಗಮ ರಾಜ್ಯಾಡಳಿತ.
ಸಹಿ ಹಾಕಿರುವ ನಮ್ಮ ಎಂಬತ್ತು ಜನ ಮಾತ್ರವಲ್ಲ, ಎಲ್ಲರೂ ಈಗಿನ ಮುಖ್ಯ
ಮಂತ್ರಿಯಲ್ಲಿ ಅವಿಶ್ವಾಸ ಸೂಚಿಸಬೇಕೆಂದು ನಾನು ಕರೆ ಕೊಡುತ್ತೇನೆ. ಹೊಸ
ಅಧ್ಯಾಯ ಆರಂಭಿಸೋದಕ್ಕೆ ಇನ್ನು ಸಿದ್ಧರಾಗೋಣ.
{{gap}}ಈ ವಿಶ್ವಂಭರ ನಾಲಗೆ ಸಡಿಲ ಬಿಟ್ಟಿರಲಿಲ್ಲ. ತನ್ನ ಗತ ಜೀವನವನ್ನು ಕೆದಕ
ಬೇಡ-ಎಂದು ನಕುಲದೇವ್ಜಿ ಹಿತೋಕ್ತಿ ಆಡಿರಬಹುದು. (ಆಡಿದ್ದರು : 'ಇಂಥವ
ಳನ್ನು ಮುಖ್ಯಮಂತ್ರಿ ಮಾಡಿದೆವಲ್ಲ? ಪಕ್ಷದ ಮಾನ ಏನು ಉಳಿದ ಹಾಗಾಯಿತು?')<br />
{{gap}}ಅವನು ಕುಳಿತ ; ಇವಳು ಎದ್ದಳು.<br />
{{gap}}"ಹಲವು ಕನಸುಗಳೊಂದಿಗೆ ಈ ಸ್ಥಾನಕ್ಕೆ ಬಂದೆ ಈಗಲೂ ಆ ಕನಸುಗಳು
ಭದ್ರವಾಗಿವೆ.ನಿಮ್ಮೆಲ್ಲರ ವಿಶ್ವಾಸಕ್ಕೆ ಪಾತ್ರಳಾದ ನನ್ನನ್ನು ನೋಡಿ ಪ್ರಧಾನಿ ಹೇಳಿ
ದ್ದರು- 'ನೀನು ದೇಶದ ಪ್ರಥಮ ಮಹಿಳಾ ಮುಖ್ಯಮಂತ್ರಿ, ಎಲ್ಲ ಕಣ್ಣುಗಳೂ
ನಿನ್ನ ಮೇಲಿವೆ' ಇಲ್ಲ, ಮರೆತಿಲ್ಲ ನಾನು ಏನನ್ನೂ ಮರೆತಿಲ್ಲ. ಅಮಾಯಕ
ಶಾಸಕರಿಗೆ ಇಲ್ಲದ ಸಲ್ಲದ ಆಸೆ ತೋರಿಸಿ ನನ್ನ ವಿರುದ್ಧ ಎತ್ತಿಕಟ್ಟುವ ಪ್ರಯತ್ನ
ನಡೆಯಿತು. ಆದರೆ ಶಾಸಕರು ಅವರ ಬೋನಿಗೆ ಬಿದ್ದರೆ ? ಇಲ್ಲ-ಇಲ್ಲ ! ನನ್ನ
ಪಕ್ಷದ ಬಹುಸಂಖ್ಯಾಕ ಶಾಸಕರು ನನಗೇ ಬೆಂಬಲ ಕೊಡ್ತಾರೆ ಅನ್ನೋ ಭರವಸೆ
ನನಗಿದೆ. ರಾಜ್ಯದ ಏಳ್ಗೆಗೆ, ರಾಷ್ಟ್ರದ ಏಳ್ಗೆಗೆ ಬೇಕಾಗಿರುವುದು ಅರ್ಪಿತ ದುಡಿಮೆ,
ಆಚಲ ನಿಷ್ಠೆ, ಕಿಪ್ಕಿಂಧೆಯ ದರಿದ್ರ ಕೋಟೆಯನ್ನು ಕಂಡಾಗ ನನ್ನ ಹೃದಯ ಕರಗಿ
ನೀರಾಗ್ತದೆ. ನನ್ನ ಕಡೆಯವರು ಆತ್ಮಾಭಿಮಾನಿಗಳು. ದಯವಿಟ್ಟು ಒಂದು ವಿಷಯ
ನೆನಪಿಡಿ : ವಿಶ್ವಂಭರ ಹೊಸಬರು. ನಾನು ಅನುಭವಿ (ಒಂದು ಧ್ವನಿ :'ಮೊದಲು
ನೀವೂ ಹೊಸಬರಾಗಿದ್ರಿ') ಸಾರಿ ಹೇಳ್ತೇನೆ : ಈಗ ಹಳಬಳಾಗಿಲ್ಲ. ನನ್ನ ಪರಮ
ವಿಶ್ವಾಸಕ್ಕೆ ನೀವೆಲ್ಲರೂ ಪಾತ್ರರು ಅನ್ನೋದನ್ನು ತೋರಿಸಿಕೊಡಿ."<br />
{{gap}} -ಇದು ಸೌದಾಮಿನಿ ಆಡಿದ ಮಾತಿನ ಸಾರ <br />
{{gap}} ನಕುಲದೇವರ ಎದುರು ಸಭಾಂಗಣದಲ್ಲಿ ಮೌನ ಹೆಪ್ಪುಗಟ್ಟಿತು.<noinclude></noinclude>
ncitobx5zm3j01o4v73z60y6lb3el6a
321610
321609
2026-05-21T09:48:19Z
Pragathi. BH
7585
321610
proofread-page
text/x-wiki
<noinclude><pagequality level="4" user="Pragathi. BH" />{{rh|center=ಮಿಂಚು|left=|right=239}}</noinclude>
{{gap}}ಯಾರೋ ಒಬ್ಬ ಶಾಸಕನೆಂದ:
“ಆ ಫ್ಯಾನ್ ಎಲ್ಲ ಬಂದ್ ಮಾಡ್ರೋ. ನಿದ್ದೆ ಬರ್ತೈತಿ....!"
ಬಹಳ ಜನ ನಕ್ಕರು.ಫ್ಯಾನುಗಳ ಜಾಲಗಳ ಚಾಲನೆ ಮುಂದುವರೆಯಿತು.
{{gap}}ನಕುಲದೇವರ ಸೂಚನೆಯಂತೆ ವಿಶ್ವಂಭರ ಮಾತನಾಡಲು ಎದ್ದ. ಸಾಯು
ತ್ತಿರುವ ಕುದುರೆಗೆ ಇನ್ನೆಷ್ಟು ಬಡೆಯಬಹುದು ಚಾಟಿಯಿಂದ? ರಹಸ್ಯ ಮತದಾನಕ್ಕೆ
ಒಪ್ಪಬಾರದು ಎಂದುಕೊಂಡ ವಿಶ್ವಂಭರ. ಸೌದಾಮಿನಿಯ ದುರಾಡಳಿತದ ಪುಟ್ಟ
ಚಿತ್ರ ಕೊಟ್ಟ. ಇಲ್ಲಿ ಪಕ್ಷದ ಭವಿತವ್ಯದ ಪ್ರಶ್ನೆ ಅಡಗಿದೆ, ಎಂದ. ತೀರಾ ಹಾಳಾಗು
ವುದಕ್ಕೆ ಮುನ್ನ ರಿಪೇರಿ ಕಾರ್ಯ ನಡೆಯಬೇಕು ಎಂದು ಸೂಚಿಸಿದ. ನಮ್ಮವರು
ಯಾರಿಗೂ ಅಧಿಕಾರ ವ್ಯಾಮೋಹವಿಲ್ಲ ; ನಮಗೆ ಬೇಕಾದ್ದು ಸುಗಮ ರಾಜ್ಯಾಡಳಿತ.
ಸಹಿ ಹಾಕಿರುವ ನಮ್ಮ ಎಂಬತ್ತು ಜನ ಮಾತ್ರವಲ್ಲ, ಎಲ್ಲರೂ ಈಗಿನ ಮುಖ್ಯ
ಮಂತ್ರಿಯಲ್ಲಿ ಅವಿಶ್ವಾಸ ಸೂಚಿಸಬೇಕೆಂದು ನಾನು ಕರೆ ಕೊಡುತ್ತೇನೆ. ಹೊಸ
ಅಧ್ಯಾಯ ಆರಂಭಿಸೋದಕ್ಕೆ ಇನ್ನು ಸಿದ್ಧರಾಗೋಣ.
{{gap}}ಈ ವಿಶ್ವಂಭರ ನಾಲಗೆ ಸಡಿಲ ಬಿಟ್ಟಿರಲಿಲ್ಲ. ತನ್ನ ಗತ ಜೀವನವನ್ನು ಕೆದಕ
ಬೇಡ-ಎಂದು ನಕುಲದೇವ್ಜಿ ಹಿತೋಕ್ತಿ ಆಡಿರಬಹುದು. (ಆಡಿದ್ದರು : 'ಇಂಥವ
ಳನ್ನು ಮುಖ್ಯಮಂತ್ರಿ ಮಾಡಿದೆವಲ್ಲ? ಪಕ್ಷದ ಮಾನ ಏನು ಉಳಿದ ಹಾಗಾಯಿತು?')<br />
{{gap}}ಅವನು ಕುಳಿತ ; ಇವಳು ಎದ್ದಳು.<br />
{{gap}}"ಹಲವು ಕನಸುಗಳೊಂದಿಗೆ ಈ ಸ್ಥಾನಕ್ಕೆ ಬಂದೆ ಈಗಲೂ ಆ ಕನಸುಗಳು
ಭದ್ರವಾಗಿವೆ.ನಿಮ್ಮೆಲ್ಲರ ವಿಶ್ವಾಸಕ್ಕೆ ಪಾತ್ರಳಾದ ನನ್ನನ್ನು ನೋಡಿ ಪ್ರಧಾನಿ ಹೇಳಿ
ದ್ದರು- 'ನೀನು ದೇಶದ ಪ್ರಥಮ ಮಹಿಳಾ ಮುಖ್ಯಮಂತ್ರಿ, ಎಲ್ಲ ಕಣ್ಣುಗಳೂ
ನಿನ್ನ ಮೇಲಿವೆ' ಇಲ್ಲ, ಮರೆತಿಲ್ಲ ನಾನು ಏನನ್ನೂ ಮರೆತಿಲ್ಲ. ಅಮಾಯಕ
ಶಾಸಕರಿಗೆ ಇಲ್ಲದ ಸಲ್ಲದ ಆಸೆ ತೋರಿಸಿ ನನ್ನ ವಿರುದ್ಧ ಎತ್ತಿಕಟ್ಟುವ ಪ್ರಯತ್ನ
ನಡೆಯಿತು. ಆದರೆ ಶಾಸಕರು ಅವರ ಬೋನಿಗೆ ಬಿದ್ದರೆ ? ಇಲ್ಲ-ಇಲ್ಲ ! ನನ್ನ
ಪಕ್ಷದ ಬಹುಸಂಖ್ಯಾಕ ಶಾಸಕರು ನನಗೇ ಬೆಂಬಲ ಕೊಡ್ತಾರೆ ಅನ್ನೋ ಭರವಸೆ
ನನಗಿದೆ. ರಾಜ್ಯದ ಏಳ್ಗೆಗೆ, ರಾಷ್ಟ್ರದ ಏಳ್ಗೆಗೆ ಬೇಕಾಗಿರುವುದು ಅರ್ಪಿತ ದುಡಿಮೆ,
ಆಚಲ ನಿಷ್ಠೆ, ಕಿಪ್ಕಿಂಧೆಯ ದರಿದ್ರ ಕೋಟೆಯನ್ನು ಕಂಡಾಗ ನನ್ನ ಹೃದಯ ಕರಗಿ
ನೀರಾಗ್ತದೆ. ನನ್ನ ಕಡೆಯವರು ಆತ್ಮಾಭಿಮಾನಿಗಳು. ದಯವಿಟ್ಟು ಒಂದು ವಿಷಯ
ನೆನಪಿಡಿ : ವಿಶ್ವಂಭರ ಹೊಸಬರು. ನಾನು ಅನುಭವಿ (ಒಂದು ಧ್ವನಿ :'ಮೊದಲು
ನೀವೂ ಹೊಸಬರಾಗಿದ್ರಿ') ಸಾರಿ ಹೇಳ್ತೇನೆ : ಈಗ ಹಳಬಳಾಗಿಲ್ಲ. ನನ್ನ ಪರಮ
ವಿಶ್ವಾಸಕ್ಕೆ ನೀವೆಲ್ಲರೂ ಪಾತ್ರರು ಅನ್ನೋದನ್ನು ತೋರಿಸಿಕೊಡಿ."<br />
{{gap}} -ಇದು ಸೌದಾಮಿನಿ ಆಡಿದ ಮಾತಿನ ಸಾರ <br />
{{gap}} ನಕುಲದೇವರ ಎದುರು ಸಭಾಂಗಣದಲ್ಲಿ ಮೌನ ಹೆಪ್ಪುಗಟ್ಟಿತು.<noinclude></noinclude>
57po3fex6ush5d2e4xqswqx07j8qask
321611
321610
2026-05-21T09:48:54Z
Pragathi. BH
7585
321611
proofread-page
text/x-wiki
<noinclude><pagequality level="4" user="Pragathi. BH" />{{rh|center=ಮಿಂಚು|left=|right=239}}</noinclude>
{{gap}}ಯಾರೋ ಒಬ್ಬ ಶಾಸಕನೆಂದ:<br />
{{gap}}“ಆ ಫ್ಯಾನ್ ಎಲ್ಲ ಬಂದ್ ಮಾಡ್ರೋ. ನಿದ್ದೆ ಬರ್ತೈತಿ....!"
{{gap}}ಬಹಳ ಜನ ನಕ್ಕರು.ಫ್ಯಾನುಗಳ ಜಾಲಗಳ ಚಾಲನೆ ಮುಂದುವರೆಯಿತು. <br />
{{gap}}ನಕುಲದೇವರ ಸೂಚನೆಯಂತೆ ವಿಶ್ವಂಭರ ಮಾತನಾಡಲು ಎದ್ದ. ಸಾಯು
ತ್ತಿರುವ ಕುದುರೆಗೆ ಇನ್ನೆಷ್ಟು ಬಡೆಯಬಹುದು ಚಾಟಿಯಿಂದ? ರಹಸ್ಯ ಮತದಾನಕ್ಕೆ
ಒಪ್ಪಬಾರದು ಎಂದುಕೊಂಡ ವಿಶ್ವಂಭರ. ಸೌದಾಮಿನಿಯ ದುರಾಡಳಿತದ ಪುಟ್ಟ
ಚಿತ್ರ ಕೊಟ್ಟ. ಇಲ್ಲಿ ಪಕ್ಷದ ಭವಿತವ್ಯದ ಪ್ರಶ್ನೆ ಅಡಗಿದೆ, ಎಂದ. ತೀರಾ ಹಾಳಾಗು
ವುದಕ್ಕೆ ಮುನ್ನ ರಿಪೇರಿ ಕಾರ್ಯ ನಡೆಯಬೇಕು ಎಂದು ಸೂಚಿಸಿದ. ನಮ್ಮವರು
ಯಾರಿಗೂ ಅಧಿಕಾರ ವ್ಯಾಮೋಹವಿಲ್ಲ ; ನಮಗೆ ಬೇಕಾದ್ದು ಸುಗಮ ರಾಜ್ಯಾಡಳಿತ.
ಸಹಿ ಹಾಕಿರುವ ನಮ್ಮ ಎಂಬತ್ತು ಜನ ಮಾತ್ರವಲ್ಲ, ಎಲ್ಲರೂ ಈಗಿನ ಮುಖ್ಯ
ಮಂತ್ರಿಯಲ್ಲಿ ಅವಿಶ್ವಾಸ ಸೂಚಿಸಬೇಕೆಂದು ನಾನು ಕರೆ ಕೊಡುತ್ತೇನೆ. ಹೊಸ
ಅಧ್ಯಾಯ ಆರಂಭಿಸೋದಕ್ಕೆ ಇನ್ನು ಸಿದ್ಧರಾಗೋಣ.
{{gap}}ಈ ವಿಶ್ವಂಭರ ನಾಲಗೆ ಸಡಿಲ ಬಿಟ್ಟಿರಲಿಲ್ಲ. ತನ್ನ ಗತ ಜೀವನವನ್ನು ಕೆದಕ
ಬೇಡ-ಎಂದು ನಕುಲದೇವ್ಜಿ ಹಿತೋಕ್ತಿ ಆಡಿರಬಹುದು. (ಆಡಿದ್ದರು : 'ಇಂಥವ
ಳನ್ನು ಮುಖ್ಯಮಂತ್ರಿ ಮಾಡಿದೆವಲ್ಲ? ಪಕ್ಷದ ಮಾನ ಏನು ಉಳಿದ ಹಾಗಾಯಿತು?')<br />
{{gap}}ಅವನು ಕುಳಿತ ; ಇವಳು ಎದ್ದಳು.<br />
{{gap}}"ಹಲವು ಕನಸುಗಳೊಂದಿಗೆ ಈ ಸ್ಥಾನಕ್ಕೆ ಬಂದೆ ಈಗಲೂ ಆ ಕನಸುಗಳು
ಭದ್ರವಾಗಿವೆ.ನಿಮ್ಮೆಲ್ಲರ ವಿಶ್ವಾಸಕ್ಕೆ ಪಾತ್ರಳಾದ ನನ್ನನ್ನು ನೋಡಿ ಪ್ರಧಾನಿ ಹೇಳಿ
ದ್ದರು- 'ನೀನು ದೇಶದ ಪ್ರಥಮ ಮಹಿಳಾ ಮುಖ್ಯಮಂತ್ರಿ, ಎಲ್ಲ ಕಣ್ಣುಗಳೂ
ನಿನ್ನ ಮೇಲಿವೆ' ಇಲ್ಲ, ಮರೆತಿಲ್ಲ ನಾನು ಏನನ್ನೂ ಮರೆತಿಲ್ಲ. ಅಮಾಯಕ
ಶಾಸಕರಿಗೆ ಇಲ್ಲದ ಸಲ್ಲದ ಆಸೆ ತೋರಿಸಿ ನನ್ನ ವಿರುದ್ಧ ಎತ್ತಿಕಟ್ಟುವ ಪ್ರಯತ್ನ
ನಡೆಯಿತು. ಆದರೆ ಶಾಸಕರು ಅವರ ಬೋನಿಗೆ ಬಿದ್ದರೆ ? ಇಲ್ಲ-ಇಲ್ಲ ! ನನ್ನ
ಪಕ್ಷದ ಬಹುಸಂಖ್ಯಾಕ ಶಾಸಕರು ನನಗೇ ಬೆಂಬಲ ಕೊಡ್ತಾರೆ ಅನ್ನೋ ಭರವಸೆ
ನನಗಿದೆ. ರಾಜ್ಯದ ಏಳ್ಗೆಗೆ, ರಾಷ್ಟ್ರದ ಏಳ್ಗೆಗೆ ಬೇಕಾಗಿರುವುದು ಅರ್ಪಿತ ದುಡಿಮೆ,
ಆಚಲ ನಿಷ್ಠೆ, ಕಿಪ್ಕಿಂಧೆಯ ದರಿದ್ರ ಕೋಟೆಯನ್ನು ಕಂಡಾಗ ನನ್ನ ಹೃದಯ ಕರಗಿ
ನೀರಾಗ್ತದೆ. ನನ್ನ ಕಡೆಯವರು ಆತ್ಮಾಭಿಮಾನಿಗಳು. ದಯವಿಟ್ಟು ಒಂದು ವಿಷಯ
ನೆನಪಿಡಿ : ವಿಶ್ವಂಭರ ಹೊಸಬರು. ನಾನು ಅನುಭವಿ (ಒಂದು ಧ್ವನಿ :'ಮೊದಲು
ನೀವೂ ಹೊಸಬರಾಗಿದ್ರಿ') ಸಾರಿ ಹೇಳ್ತೇನೆ : ಈಗ ಹಳಬಳಾಗಿಲ್ಲ. ನನ್ನ ಪರಮ
ವಿಶ್ವಾಸಕ್ಕೆ ನೀವೆಲ್ಲರೂ ಪಾತ್ರರು ಅನ್ನೋದನ್ನು ತೋರಿಸಿಕೊಡಿ."<br />
{{gap}} -ಇದು ಸೌದಾಮಿನಿ ಆಡಿದ ಮಾತಿನ ಸಾರ <br />
{{gap}} ನಕುಲದೇವರ ಎದುರು ಸಭಾಂಗಣದಲ್ಲಿ ಮೌನ ಹೆಪ್ಪುಗಟ್ಟಿತು.<noinclude></noinclude>
mmgcng4t97w4b0qkb22q1ynwbpmyzrj
321612
321611
2026-05-21T09:49:24Z
Pragathi. BH
7585
321612
proofread-page
text/x-wiki
<noinclude><pagequality level="4" user="Pragathi. BH" />{{rh|center=ಮಿಂಚು|left=|right=239}}</noinclude>
{{gap}}ಯಾರೋ ಒಬ್ಬ ಶಾಸಕನೆಂದ:<br />
{{gap}}“ಆ ಫ್ಯಾನ್ ಎಲ್ಲ ಬಂದ್ ಮಾಡ್ರೋ. ನಿದ್ದೆ ಬರ್ತೈತಿ....!"
{{gap}}ಬಹಳ ಜನ ನಕ್ಕರು.ಫ್ಯಾನುಗಳ ಜಾಲಗಳ ಚಾಲನೆ ಮುಂದುವರೆಯಿತು. <br />
{{gap}}ನಕುಲದೇವರ ಸೂಚನೆಯಂತೆ ವಿಶ್ವಂಭರ ಮಾತನಾಡಲು ಎದ್ದ. ಸಾಯು
ತ್ತಿರುವ ಕುದುರೆಗೆ ಇನ್ನೆಷ್ಟು ಬಡೆಯಬಹುದು ಚಾಟಿಯಿಂದ? ರಹಸ್ಯ ಮತದಾನಕ್ಕೆ
ಒಪ್ಪಬಾರದು ಎಂದುಕೊಂಡ ವಿಶ್ವಂಭರ. ಸೌದಾಮಿನಿಯ ದುರಾಡಳಿತದ ಪುಟ್ಟ
ಚಿತ್ರ ಕೊಟ್ಟ. ಇಲ್ಲಿ ಪಕ್ಷದ ಭವಿತವ್ಯದ ಪ್ರಶ್ನೆ ಅಡಗಿದೆ, ಎಂದ. ತೀರಾ ಹಾಳಾಗು
ವುದಕ್ಕೆ ಮುನ್ನ ರಿಪೇರಿ ಕಾರ್ಯ ನಡೆಯಬೇಕು ಎಂದು ಸೂಚಿಸಿದ. ನಮ್ಮವರು
ಯಾರಿಗೂ ಅಧಿಕಾರ ವ್ಯಾಮೋಹವಿಲ್ಲ ; ನಮಗೆ ಬೇಕಾದ್ದು ಸುಗಮ ರಾಜ್ಯಾಡಳಿತ.
ಸಹಿ ಹಾಕಿರುವ ನಮ್ಮ ಎಂಬತ್ತು ಜನ ಮಾತ್ರವಲ್ಲ, ಎಲ್ಲರೂ ಈಗಿನ ಮುಖ್ಯ
ಮಂತ್ರಿಯಲ್ಲಿ ಅವಿಶ್ವಾಸ ಸೂಚಿಸಬೇಕೆಂದು ನಾನು ಕರೆ ಕೊಡುತ್ತೇನೆ. ಹೊಸ
ಅಧ್ಯಾಯ ಆರಂಭಿಸೋದಕ್ಕೆ ಇನ್ನು ಸಿದ್ಧರಾಗೋಣ.
{{gap}}ಈ ವಿಶ್ವಂಭರ ನಾಲಗೆ ಸಡಿಲ ಬಿಟ್ಟಿರಲಿಲ್ಲ. ತನ್ನ ಗತ ಜೀವನವನ್ನು ಕೆದಕ
ಬೇಡ-ಎಂದು ನಕುಲದೇವ್ಜಿ ಹಿತೋಕ್ತಿ ಆಡಿರಬಹುದು. (ಆಡಿದ್ದರು : 'ಇಂಥವ
ಳನ್ನು ಮುಖ್ಯಮಂತ್ರಿ ಮಾಡಿದೆವಲ್ಲ? ಪಕ್ಷದ ಮಾನ ಏನು ಉಳಿದ ಹಾಗಾಯಿತು?')<br />
{{gap}}ಅವನು ಕುಳಿತ ; ಇವಳು ಎದ್ದಳು.<br />
{{gap}}"ಹಲವು ಕನಸುಗಳೊಂದಿಗೆ ಈ ಸ್ಥಾನಕ್ಕೆ ಬಂದೆ ಈಗಲೂ ಆ ಕನಸುಗಳು
ಭದ್ರವಾಗಿವೆ.ನಿಮ್ಮೆಲ್ಲರ ವಿಶ್ವಾಸಕ್ಕೆ ಪಾತ್ರಳಾದ ನನ್ನನ್ನು ನೋಡಿ ಪ್ರಧಾನಿ ಹೇಳಿ
ದ್ದರು- 'ನೀನು ದೇಶದ ಪ್ರಥಮ ಮಹಿಳಾ ಮುಖ್ಯಮಂತ್ರಿ, ಎಲ್ಲ ಕಣ್ಣುಗಳೂ
ನಿನ್ನ ಮೇಲಿವೆ' ಇಲ್ಲ, ಮರೆತಿಲ್ಲ ನಾನು ಏನನ್ನೂ ಮರೆತಿಲ್ಲ. ಅಮಾಯಕ
ಶಾಸಕರಿಗೆ ಇಲ್ಲದ ಸಲ್ಲದ ಆಸೆ ತೋರಿಸಿ ನನ್ನ ವಿರುದ್ಧ ಎತ್ತಿಕಟ್ಟುವ ಪ್ರಯತ್ನ
ನಡೆಯಿತು. ಆದರೆ ಶಾಸಕರು ಅವರ ಬೋನಿಗೆ ಬಿದ್ದರೆ ? ಇಲ್ಲ-ಇಲ್ಲ ! ನನ್ನ
ಪಕ್ಷದ ಬಹುಸಂಖ್ಯಾಕ ಶಾಸಕರು ನನಗೇ ಬೆಂಬಲ ಕೊಡ್ತಾರೆ ಅನ್ನೋ ಭರವಸೆ
ನನಗಿದೆ. ರಾಜ್ಯದ ಏಳ್ಗೆಗೆ, ರಾಷ್ಟ್ರದ ಏಳ್ಗೆಗೆ ಬೇಕಾಗಿರುವುದು ಅರ್ಪಿತ ದುಡಿಮೆ,
ಆಚಲ ನಿಷ್ಠೆ, ಕಿಪ್ಕಿಂಧೆಯ ದರಿದ್ರ ಕೋಟೆಯನ್ನು ಕಂಡಾಗ ನನ್ನ ಹೃದಯ ಕರಗಿ
ನೀರಾಗ್ತದೆ. ನನ್ನ ಕಡೆಯವರು ಆತ್ಮಾಭಿಮಾನಿಗಳು. ದಯವಿಟ್ಟು ಒಂದು ವಿಷಯ
ನೆನಪಿಡಿ : ವಿಶ್ವಂಭರ ಹೊಸಬರು. ನಾನು ಅನುಭವಿ (ಒಂದು ಧ್ವನಿ :'ಮೊದಲು
ನೀವೂ ಹೊಸಬರಾಗಿದ್ರಿ') ಸಾರಿ ಹೇಳ್ತೇನೆ : ಈಗ ಹಳಬಳಾಗಿಲ್ಲ. ನನ್ನ ಪರಮ
ವಿಶ್ವಾಸಕ್ಕೆ ನೀವೆಲ್ಲರೂ ಪಾತ್ರರು ಅನ್ನೋದನ್ನು ತೋರಿಸಿಕೊಡಿ."<br />
{{gap}} -ಇದು ಸೌದಾಮಿನಿ ಆಡಿದ ಮಾತಿನ ಸಾರ <br />
{{gap}} ನಕುಲದೇವರ ಎದುರು ಸಭಾಂಗಣದಲ್ಲಿ ಮೌನ ಹೆಪ್ಪುಗಟ್ಟಿತು.<noinclude></noinclude>
dn6mdrwvorq9srfczfruav59qyr91rj
ಪುಟ:ಮಿಂಚು.pdf/೨೪೭
104
20694
321613
206841
2026-05-21T09:52:46Z
Pragathi. BH
7585
/* Validated */
321613
proofread-page
text/x-wiki
<noinclude><pagequality level="4" user="Pragathi. BH" />{{rh|center=|left=ಮಿಂಚು|right=241}}</noinclude>
ಧಕ್ಕೆಯಾಗದಂತೆ, ಕುಂದು ಬರದಂತೆ, ನಿವೃತ್ತರಾಗುತ್ತಿರುವ ನಾಯಕಿ ಹೊಸಬರ
ಹೆಸರನ್ನು ಸೂಚಿಸಬೇಕು. ಸೌದಾಮಿನಿಜಿ, ವಿಶ್ವಂಭರರ ಹೆಸರನ್ನು ಸೂಚಿಸ್ತೀರಾ?" <br />
{{gap}}“ಸಂತೋಷದಿಂದ ಹೆಸರು ಸೂಚಿಸ್ತಾ, ಐದು ನಿಮಿಷ ವಿಶ್ವಂಭರರ ಗುಣ
ಗಾನ ಮಾಡೋದಕ್ಕೆ ಅವಕಾಶ ಕೊಡಿ."<br />
{{gap}}“ಧಾರಾಳವಾಗಿ, ಐದಲ್ಲ ಹತ್ತು ನಿಮಿಷ ತಗೊಳ್ಳಿ." <br />
{{gap}}ಪ್ರಚಂಡ ಚಪ್ಪಾಳೆಯ ನಡುವೆ ಮುಗುಳುನಗುತ್ತಲೇ ಸೌದಾಮಿನಿ ಎದ್ದಳು;
ಸರಿಗೊಳಿಸಿದ ಧ್ವನಿವರ್ಧಕದೆದುರು ನಿಂತಳು. ಮುಖಗಳನ್ನು ಹುಡುಕುತ್ತ
ಹುಡುಕುತ್ತ ಕುಳಿತವರ ಮೇಲೆಲ್ಲ ಕಣ್ಣೋಡಿಸಿದಳು. ವೇದಿಕೆಯತ್ತ ತಿರುಗಿದಳು : <br />
{{gap}}“ರಾಷ್ಟ್ರದ ಹಿರಿಯ ನಾಯಕರಲ್ಲೊಬ್ಬರಾದ, ದೀರ್ಘಕಾಲದ ನನ್ನ ಆತ್ಮೀಯ
ಗೆಳೆಯರಾದ ಸನ್ಮಾನ್ಯ ನಕುಲದೇವ್ಜಿ,ಇದು ನನ್ನ ಪಾಲಿಗೆ ಅತ್ಯಂತ ಸಂತೋಷದ
ಘಳಿಗೆ, ವಿಶ್ವಂಭರರು ನನ್ನ ಮಟ್ಟಿಗೆ ನಿಜವಾಗಿಯೂ ಅಪರಿಚಿತರು, ಆದರೆ
ಅವರ ಚಟುವಟಿಕೆಯನ್ನು ಈಕ್ಷಿಸಿ ತೃಪ್ತಳಾಗಿದ್ದೇನೆ. ಅವರ ವಿಷಯದಲ್ಲಿ ನನಗೆ
ವಾತ್ಯಲ್ಯ, ಮಮತೆ. ಅವರನ್ನು ನನ್ನ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಅಪೇಕ್ಷೆ
ನನಗಿತ್ತು, ಆದರೆ ಏನೋ ಗಾಳಿ ಬೀಸಿ, ರಾಜ್ಯ ಪುರುಷನ ಕೂದಲು ಕೆದರಿತು.<br />
{{gap}}“ಪ್ರೀತಿಯ ಸಹೋದ್ಯೋಗಿ ವಿಶ್ವಂಭರರು ಒಂದೆರಡು ತಿಂಗಳ ಹಿಂದೆ ನನ್ನ
ಬಗ್ಗೆ ಒಂದು ಪುಸ್ತಕ ಬರೆದಿದ್ದರು. ಬಹಳ ಸ್ವಾರಸ್ಯ ಉಳ್ಳ ಕಥೆ. ನನ್ನನ್ನು ಕೇಳಿ
ದ್ದರೆ ಇನ್ನಷ್ಟು ಮಾಹಿತಿ ಕೊಡ್ತಿದ್ದೆ. ಓದುವುದಕ್ಕೆ ಪುಸ್ತಕ ಇನ್ನೂ ಹೆಚ್ಚು ಖುಶಿ
ನೀಡ್ತಿತ್ತು. ಒಬ್ಬ ಶಾಸಕ ಮುಖ್ಯಮಂತ್ರಿಯ ಜೀವನಕಥೆ ಬರೆದದ್ದು ಎಲ್ಲಿಯಾ
ದರೂ ಉಂಟಾ ? ನಕುಲದೇವ್ಜಿ ಇಂಗ್ಲಿಷಿನಲ್ಲಿ ಆ ಪುಸ್ತಕದ ಸಾರಾಂಶ ಮಾತ್ರ
ಓದಿದ್ದಾರೆ, ಪಧಾನಿಯೂ ಓದಿದ್ದಾರೆ.<br />
{{gap}}"ಹಿಂದೆ ರಾಷ್ಟ್ರಸಭಾ ಪಕ್ಷದಲ್ಲಿದ್ದ ಮುಖಂಡನೊಬ್ಬ 'ಅವಳನ್ನು ಕೋರ್ಟಿನ
ಕಟ್ಟೆ ಹತ್ತಿಸ್ತೀನಿ, ಬೆತ್ತಲೆ ಮಾಡ್ತೀನಿ' ಅಂತ ಗುಟ್ಟಿನಲ್ಲಿ ಅಂದರಂತೆ. ಆ ಕ್ಷಣಕ್ಕಾಗಿ
ನನ್ನ ಸೀರೆ ಕಾಯ್ತಾ ಇದೆ ! (ವಿಶ್ವಂಭರನೂ ನಕುಲದೇವನೂ ಪಿಸುಮಾತನಾಡಿ
ದರು, ನಿಲ್ಲಿಸಬೇಕಲ್ಲ ಇವಳ ಪ್ರವರ ? ನಕುಲದೇವ : 'ಸೌದಾಮಿನಿಜಿ, ಚುಟುಕು
ಮಾಡಿ') ಮೊಟಕು ಮಾಡಿದರೆ ಮಜಾ ಇರೋದಿಲ್ಲ-ನಿಮಗೆ ಗೊತ್ತಿಲ್ವ
ನಕುಲಣ್ಣ ? ನೀವೇ ದಯಪಾಲಿಸಿದ ಕಾಲಾವಕಾಶವನ್ನಾದರೂ ಕೊಡಿ.
(ಗದ್ದಲ : “ಅವರು ಮಾತಾಡಲಿ ! ಮಾತಾಡಲಿ !” “ಬೇಡ ! ಬೇಡ !” ಸದ್ದು
ಎಡದಿಂದಲೋ ? ಬಲದಿಂದಲೋ ? ಯಾವ ಸದ್ದು ಎಲ್ಲಿಂದ?) ಸ್ವತಂತ್ರ ಭಾರತ
ದಲ್ಲಿ ಬಡಪ್ರಾಣಿಗೂ ಹುಲ್ಲು ಮೇಯುವ, ಉಸಿರಾಡುವ ಹಕ್ಕಿದೆ. ನನಗಿಲ್ಲವಾ ?
ಮಾತು ಬರ್ತದೆ. ಅದನ್ನು ಆಡುವಂತಿಲ್ಲವಾ ? ಕಿಷ್ಕಿಂಧೆಯ ಮುಖ್ಯಮಂತ್ರಿ
ಯಾದ ನಾನು ಒಂದು ಕಾಲದಲ್ಲಿ ಪುಟ್ಟವ್ವನಾಗಿದ್ದೆ -ಅನಾಥಾಶ್ರಮ ನಡೆಸ್ತಿದ್ದ
ಸಮಾಜ ಸೇವಿಕೆ ಪುಟ್ಟವ್ವ ! (“ನಿಲ್ಲಿಸಿ! ನಿಲ್ಲಿಸಿ!” “ಮಾತಾಡಿ! ಮಾತಾಡಿ!")
16<noinclude></noinclude>
6napwsvzu2m12i5fu38qo2tyjaf1pce
ಪುಟ:ಸ್ವಾಮಿ ಅಪರಂಪಾರ.pdf/೯೩
104
21243
321498
206406
2026-05-21T02:15:41Z
Pragathi. BH
7585
/* Validated */
321498
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರಂಪಾರ
ಸರಕಾರ ನಂಬಿ, ಕಪಿತಾನ್ ಬ್ರೋನ್ ಸಾಹೇಬರ ಸಂಗಡ, ಇದೇ ಆಶ್ವಿಜ ಶುದ್ಧ ವಿಜಯ ದಶಮಿಯ ದಿವಸ ಕೊಡಗಿನಿಂದ ಹೊರಟು, ತಲಚೇರಿ ಕೋಟೆಗೆ ಹೋಗಿ, ದೊಡ್ಡ ದೊಡ್ಡ ಸರದಾರರ ಯಾವತು ಕಂಡು, ಭೇಟಿ ಆಗಿ, ದೋಸ್ತಿ ಪ್ರಸ್ತಾಪವನ್ನು ಮಾಡಿ, ಭಾಷಾ ಪತ್ರಿಕೆ ಪೂರ್ವೊತ್ರರವಾಗಿ ಮಾತನಾಡಿ, ಒಪ್ಪಿ, ಉಭಯ ಕಡೆಯಿಂದಲೂ ಭಾಷಾಪತ್ರಿಕೆ ಬರೆಸಿದ ಕ್ರಮವೆಂತೆಂದರೆ-"<br />
{{gap}}ಲಕ್ಷ್ಮಿನಾರಾಯಣ ತಲೆ ಎತ್ತಿ ಅರಸನ ಕಡೆ ನೋಡಿದ.<br />
{{gap}}"ಮುಂದುವರಿಸಿ"ಎ೦ದ ಚಿಕವೀರರಾಜ.<br />
{{gap}}"ಶ್ರೀಃ ಇಂಡ್ಯಪ್ರಾಂತ್ಯಕ್ಕೆ ಬಹುಮಾನಪಟ್ಟ ಇಂಗ್ರೇಜಿ ಕಂಪನಿ ಹೆಸರಿಗೆ ತಲಚೇರಿ ಕೋಟೆ ಮೇಜರ್ ರಾಬರ್ಟ್ ಟೇಲರು, ಸೇಂಗುಂದಮಾರು ಕೊಡಗಿನ ಹಾಲೇರಿ ವೀರರಾಜ ಅರಸುಗಳು, ತಮ್ಮ ಒಳಗೆ ಒಪ್ಪಿಗೆ ಆಗಿ, ಬರೆದುಕೊಟ್ಟ ನಂಬಿಕೆ ಕಾಗದದ ವಿವರ: ಒಂದನೇ ಕಲಂ : ಸೂರ, ಚಂದ್ರ ಇರುವ ಪಠ್ಯಂತರಕ್ಕೂ ಇಕ್ಕರ್ತರ ಕಡೆ ವಿಶ್ವಾಸಕ್ಕೂ ಹೆಚ್ಚು ಕಡಮೆ ಬಾರದಂತೆ ನಡೆದು ಬರುವಂಥಾದ್ದಕ್ಕೆ ಹೆಚ್ಚು ಕಡಮೆ ಬರಲಿಕ್ಕೆ ಇಲಾ, ಎರಡನೇ ಕಲಂ : ಟೀಪುಸುಲಾನನಿಗೂ ಅವನ ಕಡೆ ಇರುವ ಯಾವತ್ತೂ ಪಕ್ಷದವರಿಗೂ, ಎರಡೂ ಕಡೆಯ ವರು ಅವರು ನಮಗೆ ಶತು ಎಂತ ಭಾವಿಸಿಕೊಂಡು ಬರಬೇಕು. ಇಂಗ್ರೇಜರಿಗೂ ಅವನಿಗೂ ನಡೆದು ಬರುವಂತ ಲಡಾಯಿಯಲ್ಲು, ಅರಸುಗಳಿಗೆ ಸಮಯ ಸಿಕ್ಕಿದರೆ, ಶತುವಿಗೆ ತಮ್ಮಿಂದ ಆಗುವಷ್ಟು ನಾಶಮಾಡುವುದಕ್ಕೆ ಹಾಜರಾಗಿ ಇರಬೇಕು. ಬೇರೆ, ಕೊಡಗುಮಲೆ ದಾರಿ ಇಂಗ್ರೇಜರ ಪಾಳ್ಯ ಒಂದು ಸಮಯಕ್ಕೆ ಹೋಗುವಾಗ್ಗೆ ಸನ್ಮತ ಇರಬೇಕು. ಯಾತ ರಿಂದ ಎಂದರೆ, ಟೀಪುಸುಲ್ತಾನನ ಕಡೆಗೆ ಹೋಗುವ ಸಮಯ ಬಂದರೆ, ಆವಾಗ್ಗೆ ನಮ್ಮ ಪಾಳ್ಯದವರಿಗೆ ರಾತೀಪು, ಜೀನಸು, ನಿಮ್ಮ ಊರಿನಲ್ಲಿರುವಂಥಾದು ಸಕಾಯ ಕ್ರಯಕ್ಕೆ ಕೊಡಿಸಿ ಸಹಾಯ ಮಾಡಬೇಕು, ಘಟ್ಟದ ಮೇಲೆ ಟೀಪು ಊರಲ್ಲು ನಮಗೂ ಆತಗೂ ಲಡಾಯಿ ಆಗುವಾಗ್ಗೆ, ರಾಜರು ತಮಗೆ ಕೂಡಿದಷ್ಟು ಬಲ ತೆಗೆದುಕೊಂಡು, ಇಂಗ್ರೇಜರ ಕಡೆಯಲ್ಲು ಕೂಡಿ ಇರಬೇಕು. ಮೂರನೆ ಕಲಂ: ನಮ್ಮ ರಾಜ್ಯದಲ್ಲು ಕಂಪೆನಿಗೆ ಆಗುವಂಥ ಸರಕು ಮಾರ್ಯಾದೆಯ ಪ್ರಕಾರ ಸಕಾಯಕ್ರಯಕ್ಕೆ ಕಂಪೆನಿಗೆ ಕೊಡುವ ಬಗ್ಗೆ, ಒಪ್ಪಿಗೆ ಆಗಿ ಇದ್ದೇವೆ. ಬೇರೆ ಟೋಪಿಕಾರ ಜಾತಿಗೆ ಯಾರಿಗೂ ವಾಪಾರ ಮಾಡುವುದಕ್ಕೆ ಒಪ್ಪಿಗೆ ಇಲಾ, ನಾಲ್ಕನೇ ಕಲಂ: ಕಂಪೆನಿಗೆ ಅನ್ಯೋನ್ಯವಿಡಿದು ನಡೆದು ಬರುವಂಥ ಅರಸುಗಳ ಪ್ರಕಾರಕ್ಕೆ, ಟೀಪುಸುಲ್ತಾನನ ಒಂದು ಹುಕುಂ ನಿಮ್ಮ ಮೇಲೆ ನಡೆಯದಂತೆ ಕಂಪೆನಿಯಿಂದ ಆಗುವಂಥ ಪ್ರಯತ್ನಮಾಡಿ, ನಿಮ್ಮನ್ನು ಇರಿಸಿಕೊಳ್ಳುತ್ತೇವೆ, ಟೀಪಗೂ ನಮಗೂ ಒಂದು ವೇಳೆ ಒಳ್ಳಿತಾಗಿ ಹೋಗುತ್ತದೆಯಾದರೆ, ತಹನಾಮೆ ಬರೆದು ಇಡುವಾಗ್ಗೆ ಅದರಲ್ಲು, ಕೊಡಗಿನ ರಾಜರು ಕಂಪೆನಿಗೆ ಅನ್ಯೋನ್ಯವಿಡಿದು ನಡೆದು ಬರುವಂಥಾದ್ದು ಅವರ ಮೇಲೆ ಆತನು ಬಂದು ಜೋರಾವರಿಯು ನಡೆಸದಂತೆ ಅದರಲ್ಲು ಬರಸಿಯೇವು, ಐದನೇ ಕಲಂ: ರಾಜರಿಗೆ ಒಂದು ಸಮಯಕ್ಕೆ ಇಲ್ಲಿಗೆ ಬರಬೇಕಾದರೆ, ಅವರ ಕುಟುಂಬ ಮುಂತಾಗಿ, ಆ ಊರಲ್ಲಿರುವ ರೈತರ ಕುಟುಂಬ ಮುಂತಾಗಿ ಘಟ್ಟದ ಕೆಳಗೆ ಬಂದಲ್ಲಿ, ಇಲ್ಲಿಂದ ಒಂದು ಗಾಡದಿ ಸಿಪಾಯಿಗಳ ಕಳುಹಿಸಿಕೊಟ್ಟು, ದಾರಿಮಾರ್ಗದಲ್ಲಿ ಒಂದು ಅಟಕ ಆಗದಂತೆ ತಂದು, ತಲಚೇರಿಯಲ್ಲು ಒಂದು ಮನೆ ಸಹ ಬಿಡಿಸಿಕೊಟ್ಟ, ರಾಜಸ್ಥಿತಿ ಸೌಖ್ಯವಾಗುವ ಪರಿಯಂತರ ರಕ್ಷಣೆಯಮಾಡಿ, ನಿಲ್ಲಿಸಿಕೊಳ್ಳುತ್ತಾ ಇದೆ. ಪುನಃ ರಾಜಸ್ಥಿತಿ ಸೌಖ್ಯವಾಗುತ್ತಲೆ,<noinclude></noinclude>
bl90nsarq87c9tbs64cxtf7wiaa4wgf
321499
321498
2026-05-21T02:17:44Z
Pragathi. BH
7585
321499
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೯೧}}</noinclude>
ಸರಕಾರ ನಂಬಿ, ಕಪಿತಾನ್ ಬ್ರೋನ್ ಸಾಹೇಬರ ಸಂಗಡ, ಇದೇ ಆಶ್ವಿಜ ಶುದ್ಧ ವಿಜಯ ದಶಮಿಯ ದಿವಸ ಕೊಡಗಿನಿಂದ ಹೊರಟು, ತಲಚೇರಿ ಕೋಟೆಗೆ ಹೋಗಿ, ದೊಡ್ಡ ದೊಡ್ಡ ಸರದಾರರ ಯಾವತು ಕಂಡು, ಭೇಟಿ ಆಗಿ, ದೋಸ್ತಿ ಪ್ರಸ್ತಾಪವನ್ನು ಮಾಡಿ, ಭಾಷಾ ಪತ್ರಿಕೆ ಪೂರ್ವೊತ್ರರವಾಗಿ ಮಾತನಾಡಿ, ಒಪ್ಪಿ, ಉಭಯ ಕಡೆಯಿಂದಲೂ ಭಾಷಾಪತ್ರಿಕೆ ಬರೆಸಿದ ಕ್ರಮವೆಂತೆಂದರೆ-"<br />
{{gap}}ಲಕ್ಷ್ಮಿನಾರಾಯಣ ತಲೆ ಎತ್ತಿ ಅರಸನ ಕಡೆ ನೋಡಿದ.<br />
{{gap}}"ಮುಂದುವರಿಸಿ"ಎ೦ದ ಚಿಕವೀರರಾಜ.<br />
{{gap}}"ಶ್ರೀಃ ಇಂಡ್ಯಪ್ರಾಂತ್ಯಕ್ಕೆ ಬಹುಮಾನಪಟ್ಟ ಇಂಗ್ರೇಜಿ ಕಂಪನಿ ಹೆಸರಿಗೆ ತಲಚೇರಿ ಕೋಟೆ ಮೇಜರ್ ರಾಬರ್ಟ್ ಟೇಲರು, ಸೇಂಗುಂದಮಾರು ಕೊಡಗಿನ ಹಾಲೇರಿ ವೀರರಾಜ ಅರಸುಗಳು, ತಮ್ಮ ಒಳಗೆ ಒಪ್ಪಿಗೆ ಆಗಿ, ಬರೆದುಕೊಟ್ಟ ನಂಬಿಕೆ ಕಾಗದದ ವಿವರ: ಒಂದನೇ ಕಲಂ : ಸೂರ, ಚಂದ್ರ ಇರುವ ಪಠ್ಯಂತರಕ್ಕೂ ಇಕ್ಕರ್ತರ ಕಡೆ ವಿಶ್ವಾಸಕ್ಕೂ ಹೆಚ್ಚು ಕಡಮೆ ಬಾರದಂತೆ ನಡೆದು ಬರುವಂಥಾದ್ದಕ್ಕೆ ಹೆಚ್ಚು ಕಡಮೆ ಬರಲಿಕ್ಕೆ ಇಲಾ, ಎರಡನೇ ಕಲಂ : ಟೀಪುಸುಲಾನನಿಗೂ ಅವನ ಕಡೆ ಇರುವ ಯಾವತ್ತೂ ಪಕ್ಷದವರಿಗೂ, ಎರಡೂ ಕಡೆಯ ವರು ಅವರು ನಮಗೆ ಶತು ಎಂತ ಭಾವಿಸಿಕೊಂಡು ಬರಬೇಕು. ಇಂಗ್ರೇಜರಿಗೂ ಅವನಿಗೂ ನಡೆದು ಬರುವಂತ ಲಡಾಯಿಯಲ್ಲು, ಅರಸುಗಳಿಗೆ ಸಮಯ ಸಿಕ್ಕಿದರೆ, ಶತುವಿಗೆ ತಮ್ಮಿಂದ ಆಗುವಷ್ಟು ನಾಶಮಾಡುವುದಕ್ಕೆ ಹಾಜರಾಗಿ ಇರಬೇಕು. ಬೇರೆ, ಕೊಡಗುಮಲೆ ದಾರಿ ಇಂಗ್ರೇಜರ ಪಾಳ್ಯ ಒಂದು ಸಮಯಕ್ಕೆ ಹೋಗುವಾಗ್ಗೆ ಸನ್ಮತ ಇರಬೇಕು. ಯಾತ ರಿಂದ ಎಂದರೆ, ಟೀಪುಸುಲ್ತಾನನ ಕಡೆಗೆ ಹೋಗುವ ಸಮಯ ಬಂದರೆ, ಆವಾಗ್ಗೆ ನಮ್ಮ ಪಾಳ್ಯದವರಿಗೆ ರಾತೀಪು, ಜೀನಸು, ನಿಮ್ಮ ಊರಿನಲ್ಲಿರುವಂಥಾದು ಸಕಾಯ ಕ್ರಯಕ್ಕೆ ಕೊಡಿಸಿ ಸಹಾಯ ಮಾಡಬೇಕು, ಘಟ್ಟದ ಮೇಲೆ ಟೀಪು ಊರಲ್ಲು ನಮಗೂ ಆತಗೂ ಲಡಾಯಿ ಆಗುವಾಗ್ಗೆ, ರಾಜರು ತಮಗೆ ಕೂಡಿದಷ್ಟು ಬಲ ತೆಗೆದುಕೊಂಡು, ಇಂಗ್ರೇಜರ ಕಡೆಯಲ್ಲು ಕೂಡಿ ಇರಬೇಕು. ಮೂರನೆ ಕಲಂ: ನಮ್ಮ ರಾಜ್ಯದಲ್ಲು ಕಂಪೆನಿಗೆ ಆಗುವಂಥ ಸರಕು ಮಾರ್ಯಾದೆಯ ಪ್ರಕಾರ ಸಕಾಯಕ್ರಯಕ್ಕೆ ಕಂಪೆನಿಗೆ ಕೊಡುವ ಬಗ್ಗೆ, ಒಪ್ಪಿಗೆ ಆಗಿ ಇದ್ದೇವೆ. ಬೇರೆ ಟೋಪಿಕಾರ ಜಾತಿಗೆ ಯಾರಿಗೂ ವಾಪಾರ ಮಾಡುವುದಕ್ಕೆ ಒಪ್ಪಿಗೆ ಇಲಾ, ನಾಲ್ಕನೇ ಕಲಂ: ಕಂಪೆನಿಗೆ ಅನ್ಯೋನ್ಯವಿಡಿದು ನಡೆದು ಬರುವಂಥ ಅರಸುಗಳ ಪ್ರಕಾರಕ್ಕೆ, ಟೀಪುಸುಲ್ತಾನನ ಒಂದು ಹುಕುಂ ನಿಮ್ಮ ಮೇಲೆ ನಡೆಯದಂತೆ ಕಂಪೆನಿಯಿಂದ ಆಗುವಂಥ ಪ್ರಯತ್ನಮಾಡಿ, ನಿಮ್ಮನ್ನು ಇರಿಸಿಕೊಳ್ಳುತ್ತೇವೆ, ಟೀಪಗೂ ನಮಗೂ ಒಂದು ವೇಳೆ ಒಳ್ಳಿತಾಗಿ ಹೋಗುತ್ತದೆಯಾದರೆ, ತಹನಾಮೆ ಬರೆದು ಇಡುವಾಗ್ಗೆ ಅದರಲ್ಲು, ಕೊಡಗಿನ ರಾಜರು ಕಂಪೆನಿಗೆ ಅನ್ಯೋನ್ಯವಿಡಿದು ನಡೆದು ಬರುವಂಥಾದ್ದು ಅವರ ಮೇಲೆ ಆತನು ಬಂದು ಜೋರಾವರಿಯು ನಡೆಸದಂತೆ ಅದರಲ್ಲು ಬರಸಿಯೇವು, ಐದನೇ ಕಲಂ: ರಾಜರಿಗೆ ಒಂದು ಸಮಯಕ್ಕೆ ಇಲ್ಲಿಗೆ ಬರಬೇಕಾದರೆ, ಅವರ ಕುಟುಂಬ ಮುಂತಾಗಿ, ಆ ಊರಲ್ಲಿರುವ ರೈತರ ಕುಟುಂಬ ಮುಂತಾಗಿ ಘಟ್ಟದ ಕೆಳಗೆ ಬಂದಲ್ಲಿ, ಇಲ್ಲಿಂದ ಒಂದು ಗಾಡದಿ ಸಿಪಾಯಿಗಳ ಕಳುಹಿಸಿಕೊಟ್ಟು, ದಾರಿಮಾರ್ಗದಲ್ಲಿ ಒಂದು ಅಟಕ ಆಗದಂತೆ ತಂದು, ತಲಚೇರಿಯಲ್ಲು ಒಂದು ಮನೆ ಸಹ ಬಿಡಿಸಿಕೊಟ್ಟ, ರಾಜಸ್ಥಿತಿ ಸೌಖ್ಯವಾಗುವ ಪರಿಯಂತರ ರಕ್ಷಣೆಯಮಾಡಿ, ನಿಲ್ಲಿಸಿಕೊಳ್ಳುತ್ತಾ ಇದೆ. ಪುನಃ ರಾಜಸ್ಥಿತಿ ಸೌಖ್ಯವಾಗುತ್ತಲೆ,<noinclude></noinclude>
4v22jpujhn0cfjk934a18xmwb55kt0f
ಪುಟ:ಸ್ವಾಮಿ ಅಪರಂಪಾರ.pdf/೯೪
104
21244
321501
206407
2026-05-21T02:21:24Z
Pragathi. BH
7585
/* Validated */
321501
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೯೨|right=}}</noinclude>
ನಿಮ್ಮ ಊರಿಗೆ ಸಂಗಡ ಮನುಷ್ಯರ ಕೂಡಿಸಿ, ಚನಾಗಿ ಕಳುಹಿಕೊಡುವಲ್ಲಿ ಅಂತರವಿಲ್ಲಾ, ಈ ಕಾರಕ್ಕೆ ಅನ್ಯೋನ್ಯ ನಡೆದುಬರುವಲ್ಲಿ, ಎಂದಿಗೂ ಹೆಚ್ಚು ಕಡಿಮೆ ಬಾರದಂತೆ, ಇಕ್ಕರ್ತರಿಗೂ ಅಂತರ ಬರಲಿಕ್ಕಿಲಾ, ಈ ಕಾರಕ್ಕೆ ಎರಡು ಕಡೆಯವರಿಗೂ ಸಾಕ್ಷಿ: ల్చిద్వచారు, ಸೂರ, ಚಂದ್ರ, ಭೂಮಿ ಸಾಕ್ಷಿ. ಸಾಧಾರಣ ಸಂವತ್ಸರ ಆಶ್ವಿಜ ಬಹುಳ ೫ರಲ್ಲು, ತಲಚೇರಿಯಲ್ಲಿ ಇರುವಂಥ ಮೇಜರ್ ರಾಬರ್ಟ್ ಟೇಲರೂ ಕೊಡಗಿನ ಹಾಲೇರಿ ವೀರರಾಜೇಂದ್ರ ರಾಜರೂ ಒಂದು ಮನಸಾಗಿ ಈ ವರ್ಷ ಈ ತಿಂಗಳು ಈ ದಿನದಲ್ಲು ಬರೆದು ಇಟ್ಟ ನಿಶ್ಚಯ ಕಾಗದಕ್ಕೆ ನಮ್ಮ ಹೆಸರಲ್ಲು ಗುರ್ತುಹಾಕಿ, ಕಂಪೆನಿ ಮೋಹರ ಮಾಡಿ, ಎರಡು ಕಡೆಗೂ ಬರೆದುಕೊಟ್ಟ ಇದ್ದೇವೆ. ಶ್ರೀ ಶ್ರೀ ಶ್ರೀ ಶ್ರೀ ಶ್ರೀ"
{{gap}}ಲಕ್ಷ್ಮಿನಾರಾಯಣನ ಓದಿನುದ್ದಕ್ಕೂ ಬೋಪಣ್ಣ ಮಡಿಲಲ್ಲಿ ಅಂಗೈಗಳನ್ನಿರಿಸಿ ಗಂಭೀರ ವದನನಾಗಿ ಕುಳಿತ.. ಒಡಂಬಡಿಕೆಯ ದಾಖಲೆಯನ್ನು ತನ್ನ ಸಹೋದ್ಯೋಗಿ ಓದಿ ಮುಗಿಸಿದ ಮೇಲೂ ಆತ ಮುಖಭಾವವನ್ನು ಬದಲಿಸಲಿಲ್ಲ.<br />
{{gap}}ಒಮ್ಮೆ ಅರಸನ ಮುಖವನ್ನೂ ಒಮ್ಮೆ ಬೋಪಣ್ಣನ ಮುಖವನ್ನೂ ಲಕ್ಷ್ಮಿನಾರಾಯಣ ನೋಡಿದ.<br />
{{gap}}ದೀರ್ಘವಾಗಿ ಉಸಿರೆಳೆದು ಬಿಟ್ಟ ಚಿಕವೀರರಾಜನೆಂದ:<br />
{{gap}}"ಸಾಧಾರಣ ಸಂವತ್ಸರ ಅಂದರೆ ಇವತ್ತಿಗೆ ಸುಮಾರು ನಾಲ್ವತು ನಾಲ್ವತ್ತೆರಡು ವರ್ಷ ಆಯಿತು. ನಮ್ಮ ದೊಡ್ಡಪ್ಪನವರಿಗೂ ಇಂಗ್ರೇಜಿಯವರಿಗೂ ಆದ ಆ ಒಪ್ಪಂದಕ್ಕೆ ಶ್ರೀದೇವರು, ಸೂರ, ಚಂದ್ರ, ಭೂಮಿ ಸಾಕ್ಷಿ ಅಂತ ಹೇಳಲಿಲ್ಲ? ಶ್ರೀದೇವರನ್ನಿನ್ನೂ ಅವರು ಪದಚುತಿ ಮಾಡಿಲ್ಲ.. ಸೂರಗೋಲ ಉರೀತಾನೇ ಅದೆ, ಕೃಷ್ಣಪಕ್ಷ ಶುಕ್ಲಪಕ್ಷಗಳು ಈಗಲೂ ಅವೆ. ಭೂಮಿ ಮುಳುಗಿಲ್ಲ, ಅಂದ ಮೇಲೆ ಸಾಕ್ಷಿದಾರರೆಲ್ಲ ಅದಾರೆ ಅಂತಾಯು ಅಲ್ಲವ ಲಕ್ಷ್ಮಿನಾರಾಣಪ್ಪನವರೆ?”<br />
{{gap}}"నిజ ಮಹಾಸ್ವಾಮಿ."
{{gap}}"ಆದರೆ ಈ ನಲ್ವತು ವರ್ಷಗಳಲ್ಲಿ ನಮ್ಮ ಅವರ ಸಖ್ಯ ಯಾವ ಜಾಡು ಹಿಡಿದಿದೆ? ನಾವದನ್ನ ನೋಡಿರೋದಕ್ಕಿಂತಲೂ ಹೆಚ್ಚು ವರ್ಷ ನೀವು ಕಂಡಿದೀರಿ, ಟೀಪೂನ ಸೋಲಿ ಸೋದಕ್ಕೆ ನಮ್ಮ ದೊಡ್ಡಪ್ಪ ಇಂಗ್ರೇಜಿಯವರಿಗೆ ಬಾಳ ಸಹಾಯ ಮಾಡಿದರಂತಲ್ಲ? ಒಂದು ದಮಡಿ ಕೂಡಾ ತಕ್ಕೊಳ್ಳದೆ ಕರಾರು ಮಾಡಿದ್ದಕ್ಕಿಂತ ಹತು ಪಾಲು ಅಕ್ಕಿ ಜಮಾ ಯಿಸಿ ಕೊಟ್ಟರಂತಲ್ಲ? ಹಲವು ಸಹಸ್ರ ಹೋರಿ ಕುರಿ ಒದಗಿಸಿದರಂತಲ್ಲ? ಘಟ್ಟದ ಕೆಳಗಿನ ಮಲೆಯಾಳದಿಂದ ಪೆರಿಯಾಪಟ್ಟಣದ ಮಾರ್ಗವಾಗಿ ಮೈಸೂರಿಗೆ ಹೋಗೋಕೆ ದಾರಿ ಬಿಟ್ಟರಂತಲ್ಲ? ತಾವೂ ದಂಡು ತಕ್ಕೊಂಡು ಮೈಸೂರು ಸೀಮೆಯ ಮೇಲೆ ಬಿದ್ದರಂತಲ್ಲ ? ಇದಕ್ಕೆಲ್ಲ ಪ್ರತಿಫಲವಾಗಿ ಇಂಗ್ರೇಜಿಯವರು ನೀಡಿದ್ದೇನು?"<br />
{{gap}}ಲಕ್ಷ್ಮಿನಾರಾಯಣನೆಂದ:<br />
{{gap}}"ಟೀಪೂ ಸೋತ ಮೇಲೆ, 'ನೀವು ಆತಗೆ ಕಪ್ಪಕೊಡತಿದ್ದಿರಂತೆ. ಈಗ ವರ್ಷಕ್ಕೆ ಇಪ್ಪತ್ತನಾಲ್ಕು ಸಾವಿರ ರೂಪಾಯಿ ನಮಗೆ ಕೊಡಿರಿ'-ಅಂದರು."[[Category:]]
{{gap}}"ಹ್ಯ, ದೊಡ್ಡಪ್ಪ ಪ್ರತಿಭಟಿಸಿದ್ದರಿಂದ, ಹಣ ಬೇಡ–ಅದರ ಬದಲು ಒಂದು ಆನೆ ಸಾಕೂಂತಾಯು, ಮುಂದೆ ಆನೆ ಕೊಡೋದೂ ನಿಂತುಹೋಯು."<br />
{{gap}}ಬೋಪಣ್ಣ ತನ್ನ ಸಹೋದ್ಯೋಗಿಯ ಕಡೆ ನೋಡಿ ಅಂದ:<noinclude></noinclude>
iugvpwd2ryivhcu8okbef5a2z0f0ibv
ಪುಟ:ಸ್ವಾಮಿ ಅಪರಂಪಾರ.pdf/೯೫
104
21245
321502
206408
2026-05-21T02:26:50Z
Pragathi. BH
7585
321502
proofread-page
text/x-wiki
<noinclude><pagequality level="3" user="MANOJ KUMAR JUNE" />{{rh|center=ಸ್ವಾಮಿ ಅಪರಂಪಾರ|left=|right=೯೩}}</noinclude>
::"ಇಂಗ್ರೇಜಿಯವರು ಹಾಗೆ ಕೇಳಿದ್ದು ತಪ್ಪ ತಿಳಿವಳಿಕೆಯಿಂದ ಅನ್ನಿ." <br />::ಚಿಕವೀರರಾಜ ವ್ಯಂಗ್ಯ ಬೆರೆತ ಧనియుల్లి ಅ೦ದ :<br />
::"ನೀವು ಅವರ ಕಡೆ ವಾದಿಸತಾ ಅದೀರಲ್ಲ ಬೋಪಣ್ಣನವರೆ!"<br />
::"ಅಂಥಾದ್ದೇನಿಲ್ಲ. ಇದ್ದ ಸಂಗತಿ ಹೇಳ್ವೆ,"<br />
::“ನಾವು ಇಲ್ಲದ ಸಂಗತಿ ಆಡತಾ ಇಲ್ಲವಲ್ಲ?ಶ್ರೀದೇವರು ಸೂರ್ಯ, ಚಂದ್ರ, ಭೂಮಿ ಸಾಕ್ಷಿಯಾಗಿ ಒಡಂಬಡಿಕೆ ಮಾಡಿಕೊಂಡವರು ಅದನ್ನು ಪಾಲಿಸಬೇಕು. ಸ್ವತಂತ್ರ ರಾಜ್ಯ ಇದ್ದದು ಬೆಳಗಾಗೋದರೊಳಗೆ ಆಶ್ರಿತ ರಾಜ್ಯ ಹಾಗಾಗತದೆ? ಅವರೇನು ದೌಡು ಮಾಡಿ ಗೆದ್ದ ಸೀಮೇನಾ ಇದು ? ಕಾಪ್ರನ್ ಮಾಂಕ್, ಇಮಾನುಅಲ್ ಪೆರೀರಾ, ಸಾಮುಅಲ್ ಜೋಸೆಫ್–ಅವರೆಲ್ಲ ಬಂದು ಹೋದರಲ್ಲ? ಯಾಕೆ? ರಾಜ್ಯ ವ್ಯವಸ್ಥೆ ಹಾಗೆ ನಡದದೇಂತ ತಿಳಕೊಂಡು ಬನ್ನಿ-ಅಂದರಂತೆ. ನಮ್ಮದು ಹಾಗೇ ನಡೀಲಿ, ಆವರಿಗೇನು ?"
ಬೋಪಣ್ಣನೆಂದ:
"ಮಹಾಸ್ವಾಮಿಗಳ ಮನಸ್ಸು ತಿಳೀಲಿಲ್ಲ. ಏನು ಮಾಡಬೇಕು ಅಂತೀರಿ ?"
"ಹೇಳತೀನಿ. ತುಸ ಬಗ್ಗಿದರೆ ಸಾಕು, ಬೆನ್ನ ಮೇಲೆ ಕೂತೇವು ಅಂತಾರೆ. ಇಂಥಾದು ನಡೀಲಿಕ್ಕಿಲ್ಲ: ಸರಿಸಮಾನರೊಳಗೆ ಸಖ್ಯ-ಅಂತ ಸ್ಪಷ್ಟವಾಗಿ ಅನ್ನಬೇಕು. ಅರಮನೆ ಅಳಿಯ ಚನ್ನಬಸಪ್ಪ ಆ ಹೊರಗಿನವರ ಕೂಡೆ ಪತ್ರ ವ್ಯವಹಾರ ಮಡಗಿದ್ದಾರೆ ಅಂತ ನಮಗೆ ಸಂಶಯ, ಬೋಪಣ್ಣನವರು ಅವರಿಗೆ ಬುದ್ಧಿವಾದ ಹೇಳಬೇಕು. ಆ ಮೇಲೆ ಹಾಗಾಯಿತು ಹೀಗಾಯಿತು ಅಂತ ದೂರಬಾರದು."
ಬೋಪಣ್ಣನನ್ನು ಕೆಣಕಿದಂತಾಯಿತು.
"ಆತ ಪೂರ್ವಾಶ್ರಮದಲ್ಲಿ ಕೊಡವ ಅಂತ ನನಗೆ ಈ ಮಾತು ಹೇಳೋಣಾಗತದೆಯೊ?"
"ಛೆ! ಛೆ! ನೀವು ಅಂದರೆ ಅವನಿಗೆ ಗೌರವ. ಅರಮನೆಗೆ ಬರದಿದ್ದರೂ ನಿಮ್ಮಲ್ಲಿಗೆ ಬಂದು ಹೋಗತಾನೆ. ಒಂದು ಮಾತು ಹೇಳಿ ನೋಡಿ. ಆತ ಕೇಳಲಿಲ್ಲ ಅಂದರೆ ಮುಂದಿನದು ನಮಗೆ ಸೇರಿದ್ದು."
ಮೌನವೇ ಸಮ್ಮತಿ ಎನ್ನುವಂತೆ ಬೋಪಣ್ಣನೂ ಲಕ್ಷ್ಮಿನಾರಾಯಣನೂ ಕುಳಿತರು. ಅರಸನೆಂದ :
"ಕಡೆಯದಾಗಿ ಒಂದು ವಿಷಯ. ನಮ್ಮನ್ನು ಎದುರು ಹಾಕಿಕೊಳ್ಳೋ ಮೂರ್ಖತನ ಇಂಗ್ರೇಜಿಯವರು ಮಾಡಲಾರರು. ಒಂದು ಪಕ್ಷಕ್ಕೆ ಆ ದುರ್ಬುದ್ಧಿ ಅವರಿಗೆ ಉಂಟಾದ್ದೇ ಆದರೆ ನಮ್ಮ ರಾಜ್ಯದ ರಕ್ಷಣೆ ನಾವು ಮಾಡೋದಕ್ಕೆ ಶಕ್ತರಾಗಬೇಕು. ಈ ಮಾತು ಎಲ್ಲ ತಕ್ಕರಿಗೆ ಕಾರ್ಯಕಾರರಿಗೆ ಮುಟ್ಟಬೇಕು."
"ಸರಿ, ಅಷ್ಟೇ ಅಲ್ಲವಾ?" ಎಂದ ಬೋಪಣ್ಣ, ಏಳಲು ಸಿದ್ಧನಾಗಿ.
"ಅಷ್ಟೇ, ನೀವಿನ್ನು ಹೊರಡಬಹುದು. ಮಳೆಯೂ ನಿಂತಿದೆ." ಲಕ್ಷ್ಮಿನಾರಾಯಣ ತಾಳೆಗರಿಯ ಕಟ್ಟುಗಳನ್ನು ಮೊದಲಿದ್ದಂತೆ ಜೋಡಿಸಿ, ರೇಶಿಮೆಯ ಗಂಟುಕಟ್ಟಿ ಎದ್ದು, ಬೋಪಣ್ಣನನ್ನು ಹಿಂಬಾಲಿಸಿದ. ಮುಖಮಂಟಪದವರೆಗೂ ಚಿಕವೀರ ರಾಜ ಅವರ ಜತೆಗೆ ಬಂದ.
ಮಳೆ ನಿಂತು, ಕೆಳಗೆ ಚರಂಡಿಗಳಲ್ಲವೂ ಗುಡ್ಡದ ತಪ್ಪಲುಗಳಲ್ಲಾ ಜುಳುಜುಳು ನೀರು<noinclude></noinclude>
l8sx49vdt055vcyhan4ulfb0avjs3ns
321503
321502
2026-05-21T02:30:25Z
Pragathi. BH
7585
/* Validated */
321503
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=|right=೯೩}}</noinclude>
{{gap}}"ಇಂಗ್ರೇಜಿಯವರು ಹಾಗೆ ಕೇಳಿದ್ದು ತಪ್ಪ ತಿಳಿವಳಿಕೆಯಿಂದ ಅನ್ನಿ." <br />{{gap}}ಚಿಕವೀರರಾಜ ವ್ಯಂಗ್ಯ ಬೆರೆತ ಧనియుల్లి ಅ೦ದ :<br />
{{gap}}"ನೀವು ಅವರ ಕಡೆ ವಾದಿಸತಾ ಅದೀರಲ್ಲ ಬೋಪಣ್ಣನವರೆ!"<br />
{{gap}}"ಅಂಥಾದ್ದೇನಿಲ್ಲ. ಇದ್ದ ಸಂಗತಿ ಹೇಳ್ವೆ,"<br />
{{gap}}“ನಾವು ಇಲ್ಲದ ಸಂಗತಿ ಆಡತಾ ಇಲ್ಲವಲ್ಲ?ಶ್ರೀದೇವರು ಸೂರ್ಯ, ಚಂದ್ರ, ಭೂಮಿ ಸಾಕ್ಷಿಯಾಗಿ ಒಡಂಬಡಿಕೆ ಮಾಡಿಕೊಂಡವರು ಅದನ್ನು ಪಾಲಿಸಬೇಕು. ಸ್ವತಂತ್ರ ರಾಜ್ಯ ಇದ್ದದು ಬೆಳಗಾಗೋದರೊಳಗೆ ಆಶ್ರಿತ ರಾಜ್ಯ ಹಾಗಾಗತದೆ? ಅವರೇನು ದೌಡು ಮಾಡಿ ಗೆದ್ದ ಸೀಮೇನಾ ಇದು ? ಕಾಪ್ರನ್ ಮಾಂಕ್, ಇಮಾನುಅಲ್ ಪೆರೀರಾ, ಸಾಮುಅಲ್ ಜೋಸೆಫ್–ಅವರೆಲ್ಲ ಬಂದು ಹೋದರಲ್ಲ? ಯಾಕೆ? ರಾಜ್ಯ ವ್ಯವಸ್ಥೆ ಹಾಗೆ ನಡದದೇಂತ ತಿಳಕೊಂಡು ಬನ್ನಿ-ಅಂದರಂತೆ. ನಮ್ಮದು ಹಾಗೇ ನಡೀಲಿ, ಆವರಿಗೇನು ?"<br />
{{gap}}ಬೋಪಣ್ಣನೆಂದ:<br />
{{gap}}"ಮಹಾಸ್ವಾಮಿಗಳ ಮನಸ್ಸು ತಿಳೀಲಿಲ್ಲ. ಏನು ಮಾಡಬೇಕು ಅಂತೀರಿ ?"<br />
{{gap}}"ಹೇಳತೀನಿ. ತುಸ ಬಗ್ಗಿದರೆ ಸಾಕು, ಬೆನ್ನ ಮೇಲೆ ಕೂತೇವು ಅಂತಾರೆ. ಇಂಥಾದು ನಡೀಲಿಕ್ಕಿಲ್ಲ: ಸರಿಸಮಾನರೊಳಗೆ ಸಖ್ಯ-ಅಂತ ಸ್ಪಷ್ಟವಾಗಿ ಅನ್ನಬೇಕು. ಅರಮನೆ ಅಳಿಯ ಚನ್ನಬಸಪ್ಪ ಆ ಹೊರಗಿನವರ ಕೂಡೆ ಪತ್ರ ವ್ಯವಹಾರ ಮಡಗಿದ್ದಾರೆ ಅಂತ ನಮಗೆ ಸಂಶಯ, ಬೋಪಣ್ಣನವರು ಅವರಿಗೆ ಬುದ್ಧಿವಾದ ಹೇಳಬೇಕು. ಆ ಮೇಲೆ ಹಾಗಾಯಿತು ಹೀಗಾಯಿತು ಅಂತ ದೂರಬಾರದು."<br />
{{gap}}ಬೋಪಣ್ಣನನ್ನು ಕೆಣಕಿದಂತಾಯಿತು.<br />
{{gap}}"ಆತ ಪೂರ್ವಾಶ್ರಮದಲ್ಲಿ ಕೊಡವ ಅಂತ ನನಗೆ ಈ ಮಾತು ಹೇಳೋಣಾಗತದೆಯೊ?"<br />
{{gap}}"ಛೆ! ಛೆ! ನೀವು ಅಂದರೆ ಅವನಿಗೆ ಗೌರವ. ಅರಮನೆಗೆ ಬರದಿದ್ದರೂ ನಿಮ್ಮಲ್ಲಿಗೆ ಬಂದು ಹೋಗತಾನೆ. ಒಂದು ಮಾತು ಹೇಳಿ ನೋಡಿ. ಆತ ಕೇಳಲಿಲ್ಲ ಅಂದರೆ ಮುಂದಿನದು ನಮಗೆ ಸೇರಿದ್ದು."<br />
{{gap}}ಮೌನವೇ ಸಮ್ಮತಿ ಎನ್ನುವಂತೆ ಬೋಪಣ್ಣನೂ ಲಕ್ಷ್ಮಿನಾರಾಯಣನೂ ಕುಳಿತರು. ಅರಸನೆಂದ :<br />
{{gap}}"ಕಡೆಯದಾಗಿ ಒಂದು ವಿಷಯ. ನಮ್ಮನ್ನು ಎದುರು ಹಾಕಿಕೊಳ್ಳೋ ಮೂರ್ಖತನ ಇಂಗ್ರೇಜಿಯವರು ಮಾಡಲಾರರು. ಒಂದು ಪಕ್ಷಕ್ಕೆ ಆ ದುರ್ಬುದ್ಧಿ ಅವರಿಗೆ ಉಂಟಾದ್ದೇ ಆದರೆ ನಮ್ಮ ರಾಜ್ಯದ ರಕ್ಷಣೆ ನಾವು ಮಾಡೋದಕ್ಕೆ ಶಕ್ತರಾಗಬೇಕು. ಈ ಮಾತು ಎಲ್ಲ ತಕ್ಕರಿಗೆ ಕಾರ್ಯಕಾರರಿಗೆ ಮುಟ್ಟಬೇಕು."<br />
{{gap}}"ಸರಿ, ಅಷ್ಟೇ ಅಲ್ಲವಾ?" ಎಂದ ಬೋಪಣ್ಣ, ಏಳಲು ಸಿದ್ಧನಾಗಿ.
{{gap}}"ಅಷ್ಟೇ, ನೀವಿನ್ನು ಹೊರಡಬಹುದು. ಮಳೆಯೂ ನಿಂತಿದೆ." <br />{{gap}}ಲಕ್ಷ್ಮಿನಾರಾಯಣ ತಾಳೆಗರಿಯ ಕಟ್ಟುಗಳನ್ನು ಮೊದಲಿದ್ದಂತೆ ಜೋಡಿಸಿ, ರೇಶಿಮೆಯ ಗಂಟುಕಟ್ಟಿ ಎದ್ದು, ಬೋಪಣ್ಣನನ್ನು ಹಿಂಬಾಲಿಸಿದ. ಮುಖಮಂಟಪದವರೆಗೂ ಚಿಕವೀರ ರಾಜ ಅವರ ಜತೆಗೆ ಬಂದ.<br />
{{gap}}ಮಳೆ ನಿಂತು, ಕೆಳಗೆ ಚರಂಡಿಗಳಲ್ಲವೂ ಗುಡ್ಡದ ತಪ್ಪಲುಗಳಲ್ಲಾ ಜುಳುಜುಳು ನೀರು<noinclude></noinclude>
hev9mzbpah22wyjt6gfwpih7a1a0r16
ಪುಟ:ಸ್ವಾಮಿ ಅಪರಂಪಾರ.pdf/೯೬
104
21246
321504
206409
2026-05-21T02:36:22Z
Pragathi. BH
7585
321504
proofread-page
text/x-wiki
<noinclude><pagequality level="3" user="MANOJ KUMAR JUNE" />{{rh|center=ಸ್ವಾಮಿ ಅಪರಂಪಾರ|left=|right=}}</noinclude>
ಹರಿಯುತ್ತಿತ್ತು ಮನೆ ಮಾಡಗಳ ಮೇಲಿಂದ ಉಗಿ ಏಳುತ್ತಿತು, ಮೈ ತೊಳೆದುಕೊಂಡ ಹಸಿರು ಕಣ್ಣಿಗೆ ಹಬ್ಬವಾಗಿತು. ಚಿಕವೀರರಾಜನೆಂದ :
"ಗುಡುಗು, ಮಿಂಚು, ಮಸಲಧಾರೆ-ಯಾವುದಕ್ಕೂ ನಾವು ಹೆದರೋದಿಲ್ಲ. ಯಾಕೆ ? ಸ್ವಲ್ಪ ಹೊತ್ತಿನಲ್ಲೇ ಎಲ್ಲಾ ಶಾಂತವಾಗತದೆ ಅಂತ ನಾವು ಬಲ್ಲೆವು. ಹಾಗೆಯೇ, ಯಾವ ಗಂಡಾಂತರ ಒದಗಿದರೂ ನಾವು ರ್ಯದಿಂದ ಇರತೇವೆ. ಆ ಗಂಡಾಂತರ ಖಂಡಿತವಾಗಿ ಕಳೀತದೆ–ಅಂತ ನಮಗೆ ಗೊತ್ತದೆ."
ಅಬ್ಬಾಸ್ ಅಲಿ, ಅಪ್ಪಂಗಳದ ಅರಮನೆಯ ಸುತ್ತಲೂ ಪಹರೆ ಇಡುವುದು ಮೇಲುಎಂದು ಅರಸನಿಗೆ ಸಲಹೆ ಮಾಡಿದ ಆ ಸಂಬಂಧದ ಆಜ್ಞೆಯನ್ನು ಕೃತಿಗಿಳಿಸಲು ಬಸವ ಉದ್ಯುಕ್ತನಾದ.
ಆದರೆ ಕಾರ್ಯ ಮಿಂಚಿತು, ಚನ್ನಬಸಪ್ಪನಾಗಲೀ ದೇವಮಾಜಿಯಾಗಲೀ ಅರಮನೆ ಯಲ್ಲಿ ಇರಲಿಲ್ಲ. ಇಬ್ಬರು ಆಪ್ತ ಸೇವಕರನ್ನು ಸಂಗಡ ಕರೆದುಕೊಂಡು ಕುದುರೆಗಳನ್ನೇರಿ ಅವರು ಓಡಿಹೋಗಿದ್ದರು.
ಅದು ಸಂಭವಿಸಿದು ಹೀಗೆ :
ಅರಸನ ಭೇಟಿಯಿಂದ ಬೋಪಣ್ಣ ಮನೆಗೆ ಮರಳಿದನಷ್ಟೆ, ಆ ರಾತ್ರೆ ಚನ್ನಬಸಪ್ಪ ಅಲ್ಲಿಗೆ ಬಂದ.
"ದೊರೆಗೆ ನಿನ್ನ ಮೇಲೆ ಸಂಶಯ. ನೀನು ಹುಷಾರಾಗಿರಬೇಕು" ಎಂದ ಬೋಪಣ್ಣ
"ನನ್ನನ್ನು ಹಿಡಿದು ಕೋಟೆಮನೆಯಲ್ಲಿ ಕೂಡಹಾಕಬಹುದು ಅಂತಿರಾ?"
"ಹಾಗೂ ಮಾಡಬಹುದು, ತೋಫಿನ ಬಾಯಿಗಿಟ್ಟ ಸುಡಲೂಬಹುದು. ಯಾರು ಕಂಡ: ”
"ಒಳ್ಳೇದು. ಹಂಗಾರೆ ಸದ್ಯಕ್ಕೆ ಇದು ನಮ್ಮ-ನಿಮ್ಮ ಕಡೇ ಭೇಟಿ, ಇವತು ರಾತ್ರೆಯೇ ಮೈಸೂರು ಸೀಮೆಗೆ ಹೊರಟುಹೋಗತೇವೆ."
"ದುಡುಕಬೇಡ-ಆಂತಷ್ಟೇ ನಾ ಹೇಳೋದು."
"ಹೇಳೋಕೆ ಹೊಸದೇನೂ ಇಲ್ಲ, ಅನ್ನಿ, ಸರಿ, ಇಂಗ್ರೇಜಿ ದಂಡಿನ ಜತೆ ಬರತೀನಿ. ಆಗ ಕಾಣೂಣ."
"ಹೋಗಿ ಬಾ" ಎಂದ ಬೋಪಣ್ಣ,
ಅಪ್ಪಂಗಳವನ್ನು ಚನ್ನಬಸಪ್ಪ ತಲಪಿದ ಒಂದೆರಡು ಘಳಿಗೆಯಲ್ಲೇ, ನಾಲ್ಕು ಕುದುರೆ ಗಳು ಪೆರಿಯಾಪಟ್ಟಣದ ಕಡೆಗೆ ಹೊರಟುವು.
ಬೆಳಗ್ಗೆ ಅಪ್ಪಂಗಳಕ್ಕೆ ಬಂದ ರಾಜಭಟರಿಗೆ ಗಂಗಮ್ಮನೆಂದಳು :
"ನಮಗೆ ಒಂದೂ ತಿಳಿದು. ಅವರಿಲ್ಲ ಅನ್ನೋದು ಈಗಷ್ಟೇ ಗೊತಾಯು."
ಭಟರು ತಡವಿಲ್ಲದೆ ಮಡಕೇರಿಗೆ ಸುದ್ದಿ ತಲಪಿಸಿದರು.
ಚನ್ನಬಸಪ್ಪ ಪತ್ನಿಯೊಡನೆ ಇಂಗ್ಲೀಷರ ಸೀಮೆಗೇ ಓಡಿರಬೇಕೆಂಬ ಬಗೆಗೆ ಎಲ್ಲರದೂ<noinclude></noinclude>
a2ngqpgv2bm4l4ty56chxv0nspjbca7
321505
321504
2026-05-21T02:43:28Z
Pragathi. BH
7585
/* Validated */
321505
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೯೪|right=}}</noinclude>
ಹರಿಯುತ್ತಿತ್ತು ಮನೆ ಮಾಡಗಳ ಮೇಲಿಂದ ಉಗಿ ಏಳುತ್ತಿತು, ಮೈ ತೊಳೆದುಕೊಂಡ ಹಸಿರು ಕಣ್ಣಿಗೆ ಹಬ್ಬವಾಗಿತು. ಚಿಕವೀರರಾಜನೆಂದ :
{{gap}}"ಗುಡುಗು, ಮಿಂಚು, ಮಸಲಧಾರೆ-ಯಾವುದಕ್ಕೂ ನಾವು ಹೆದರೋದಿಲ್ಲ. ಯಾಕೆ ? ಸ್ವಲ್ಪ ಹೊತ್ತಿನಲ್ಲೇ ಎಲ್ಲಾ ಶಾಂತವಾಗತದೆ ಅಂತ ನಾವು ಬಲ್ಲೆವು. ಹಾಗೆಯೇ, ಯಾವ ಗಂಡಾಂತರ ಒದಗಿದರೂ ನಾವು ರ್ಯದಿಂದ ಇರತೇವೆ. ಆ ಗಂಡಾಂತರ ಖಂಡಿತವಾಗಿ ಕಳೀತದೆ–ಅಂತ ನಮಗೆ ಗೊತ್ತದೆ."<br />
{{center|೨೯}}
{{gap}}ಅಬ್ಬಾಸ್ ಅಲಿ, ಅಪ್ಪಂಗಳದ ಅರಮನೆಯ ಸುತ್ತಲೂ ಪಹರೆ ಇಡುವುದು ಮೇಲುಎಂದು ಅರಸನಿಗೆ ಸಲಹೆ ಮಾಡಿದ ಆ ಸಂಬಂಧದ ಆಜ್ಞೆಯನ್ನು ಕೃತಿಗಿಳಿಸಲು ಬಸವ ಉದ್ಯುಕ್ತನಾದ.
{{gap}}ಆದರೆ ಕಾರ್ಯ ಮಿಂಚಿತು, ಚನ್ನಬಸಪ್ಪನಾಗಲೀ ದೇವಮಾಜಿಯಾಗಲೀ ಅರಮನೆ ಯಲ್ಲಿ ಇರಲಿಲ್ಲ. ಇಬ್ಬರು ಆಪ್ತ ಸೇವಕರನ್ನು ಸಂಗಡ ಕರೆದುಕೊಂಡು ಕುದುರೆಗಳನ್ನೇರಿ ಅವರು ಓಡಿಹೋಗಿದ್ದರು.
ಅದು ಸಂಭವಿಸಿದು ಹೀಗೆ :
{{gap}}ಅರಸನ ಭೇಟಿಯಿಂದ ಬೋಪಣ್ಣ ಮನೆಗೆ ಮರಳಿದನಷ್ಟೆ, ಆ ರಾತ್ರೆ ಚನ್ನಬಸಪ್ಪ ಅಲ್ಲಿಗೆ ಬಂದ.<br />
{{gap}}"ದೊರೆಗೆ ನಿನ್ನ ಮೇಲೆ ಸಂಶಯ. ನೀನು ಹುಷಾರಾಗಿರಬೇಕು" ಎಂದ ಬೋಪಣ್ಣ <br />
{{gap}}"ನನ್ನನ್ನು ಹಿಡಿದು ಕೋಟೆಮನೆಯಲ್ಲಿ ಕೂಡಹಾಕಬಹುದು ಅಂತಿರಾ?"<br />
{{gap}}"ಹಾಗೂ ಮಾಡಬಹುದು, ತೋಫಿನ ಬಾಯಿಗಿಟ್ಟ ಸುಡಲೂಬಹುದು. ಯಾರು ಕಂಡ: ”
{{gap}}"ಒಳ್ಳೇದು. ಹಂಗಾರೆ ಸದ್ಯಕ್ಕೆ ಇದು ನಮ್ಮ-ನಿಮ್ಮ ಕಡೇ ಭೇಟಿ, ಇವತು ರಾತ್ರೆಯೇ ಮೈಸೂರು ಸೀಮೆಗೆ ಹೊರಟುಹೋಗತೇವೆ."<br />
{{gap}}"ದುಡುಕಬೇಡ-ಆಂತಷ್ಟೇ ನಾ ಹೇಳೋದು."<br />
{{gap}}"ಹೇಳೋಕೆ ಹೊಸದೇನೂ ಇಲ್ಲ, ಅನ್ನಿ, ಸರಿ, ಇಂಗ್ರೇಜಿ ದಂಡಿನ ಜತೆ ಬರತೀನಿ. ಆಗ ಕಾಣೂಣ."<br />
{{gap}}"ಹೋಗಿ ಬಾ" ಎಂದ ಬೋಪಣ್ಣ,<br />
{{gap}}ಅಪ್ಪಂಗಳವನ್ನು ಚನ್ನಬಸಪ್ಪ ತಲಪಿದ ಒಂದೆರಡು ಘಳಿಗೆಯಲ್ಲೇ, ನಾಲ್ಕು ಕುದುರೆ ಗಳು ಪೆರಿಯಾಪಟ್ಟಣದ ಕಡೆಗೆ ಹೊರಟುವು.<br />
{{gap}}ಬೆಳಗ್ಗೆ ಅಪ್ಪಂಗಳಕ್ಕೆ ಬಂದ ರಾಜಭಟರಿಗೆ ಗಂಗಮ್ಮನೆಂದಳು :<br />
{{gap}}"ನಮಗೆ ಒಂದೂ ತಿಳಿದು. ಅವರಿಲ್ಲ ಅನ್ನೋದು ಈಗಷ್ಟೇ ಗೊತಾಯು." <br />
{{gap}}ಭಟರು ತಡವಿಲ್ಲದೆ ಮಡಕೇರಿಗೆ ಸುದ್ದಿ ತಲಪಿಸಿದರು.<br />
{{gap}}ಚನ್ನಬಸಪ್ಪ ಪತ್ನಿಯೊಡನೆ ಇಂಗ್ಲೀಷರ ಸೀಮೆಗೇ ಓಡಿರಬೇಕೆಂಬ ಬಗೆಗೆ ಎಲ್ಲರದೂ<noinclude></noinclude>
jyjlkikqgb313yiui5yocv7uimxz79t
ಪುಟ:ಸ್ವಾಮಿ ಅಪರಂಪಾರ.pdf/೧೧೨
104
21262
321621
206425
2026-05-21T10:06:17Z
Pragathi. BH
7585
/* Validated */
321621
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರ೦ಪಾರ|lef=೧೧೦|right=}}</noinclude>
ತಕ್ಕ ದಂಡನೆ ಕೊಡಲಾಗುವುದು. ಚಿತ್ರದುರ್ಗ, ರಾಯದುರ್ಗ, ಮೈಸೂರು, ಬಳ್ಳಾರಿ, ಮಲಬಾರ್. ಕನ್ನಡ ಜಿಲ್ಲೆ ಮತ್ತಿತರ ಕೊಡಗಿನ ಸುತ್ತಮುತ್ತಲ ನಮ್ಮ ಪ್ರಜೆಗಳ ಸಂಬಂಧಿಕರು ಆ ರಾಜನಲ್ಲಿ ಊಳಿಗಕ್ಕಿದಾರೆ. ಅವರಿಗೆ ತಿಳಿಯಹೇಳುವುದಕ್ಕೋಸ್ಕರ ಹಾಗೂ ಅವರ ಹಿತರಕ್ಷಣೆಯ ದೃಷ್ಟಿಯಿಂದ ಮೇಲ್ಕನ ಪ್ರದೇಶಗಳಲ್ಲು. ಈ ಜಾಹಿರುನಾಮೆಯನ್ನು ಪ್ರಕಟಗೊಳಿಸಲಾಗುತ್ತಿದೆ."<br />
{{gap}}ಇದಕ್ಕೊಂದು ಪ್ರತುತ್ತರವನ್ನು ಚಿಕವೀರರಾಜೇಂದ್ರ ರಾಜ್ಯದಾದ್ಯಂತ ಡಂಗುರ ಹೊಡೆಸಿದ :<br />
{{gap}}"ತೊತ್ತಿನ ಮಕ್ಕಳಾದ ಇಂಗ್ರೇಜಿಯವರು ಹೊರಡಿಸಿರುವ ಜಾಹೀರುನಾಮೆಯೊಂದು ಘನತೆವೆತ್ತ ಹಾಲೇರಿ ಸಂಸ್ಥಾನದ ಮಹಾಸ್ವಾಮಿಯವರ ಗಮನಕ್ಕೆ ಬಂದಿದೆ. ಅವರು ಮಹಾದೇವನನ್ನು ಮರೆತು, ದುರಹಂಕಾರದಿಂದ ಮನಸ್ಸಿಗೆ ತೋಚಿದ್ದನ್ನೆಲಾ ಕಾಗದದ ಮೇಲೆ ಬರೆದು, ಹಾಲೇರಿ ಸಂಸ್ಥಾನದ ನಿವಾಸಿಗಳ ತಿಳಿವಳಿಕೆಗಾಗಿ ಗಡಿಯಲ್ಲಿ ಅಂಟಿಸಿದ್ದಾರೆ. ದುಷ್ಟರಾದ ಇಂಗ್ರೇಜಿಯವರ ಆ ಜಾಹೀರುನಾಮೆಯ ವಿವರ ಮಹಾದೇವನ ಕಿಂಕರರಾದ ನಾವು ಕಣ್ಣಿನಿಂದ ನೋಡುವುದಕ್ಕಾಗಲೀ ಕಿವಿಯಿ೦ದ ಕೆಳುವುದಕ್ಕಾಗಲೀ ಅರ್ಹವಾಗಿಲ್ಲ. ಅದನ್ನು ಬರೆದಂಥಾ ಮನುಷ್ಯನನ್ನು ಹಿಡಿದು ತಲೆ ಕಡಿದು ನಾವು ಶಾಸ್ತಿ ಮಾಡೇವು.
ಸಂಶಯವಿಲ್ಲಾ,<br />
{{gap}}"ಕಾಫರರಾದ ಪರಂಗಿಯರು ಹಿಂದೂಸ್ಥಾನವನ್ನು ನಾಶಮಾಡುತ್ತಿದ್ದಾರೆ. ಈಗ ಅವರಿಗೆ ಸಾವು ಸನ್ನಿಹಿತವಾಗಿರುವಾಗ ಯಾವ ಔಷಧಿಯಿಂದೇನು ಪ್ರಯೋಜನ ? ದೇವರು ನಮ್ಮ ಬೆ೦ಬಲಕ್ಕಿದ್ದಾನೆ..<br />
{{gap}}"ನಮ್ಮ ಕೂಡೆ ಯುದ್ಧ ನಡೆಸಲು ತೀರ್ಮಾನಿಸಿರುವ ಇಂಗ್ರೇಜಿಯವರು. ಯಾವಾಗಲೂ ತಮ್ಮ ಸೈನ್ಯದ ಮುಂದುಗಡೆ ಹಿಂದೂಸ್ಥಾನದ ಕೆಲವು ಕರಿಯ ಜನರನ್ನು ಕಳಿಸುತಾರೆ, ಲಡಾಯಿಯಲ್ಲಿ ಈ ಕರಿ ಜನರು ಮೊದಲು ಸಾಯಬೇಕೆಂಬುದೇ ಅವರ ಹಂಚಿಕೆಯಾಗಿರುತ್ತದೆ. ಆ ಧೂರ್ತರ ವಿರುದ್ಧ ಶಸಾಸ್ತ್ತು ಹಿಡಿದು ಹೋರಾಡಲು ನಾವು ದ್ರುಢಸ೦ಕಲ್ಪ ಮಾಡಿದ್ದೇವೆ. ಯಾರೇ ಆದರೂ ನಮ್ಮ ಬೆಂಬಲಕ್ಕೆ ಬರದೆ ತಟಸ್ಥವಾಗಿ ಉಳಿದರೆ, ಅದು ದೈವದ್ರೋಹವಾಗುವುದು. ಮುಂದೆ ಇಂಗ್ರೇಜಿಯವರ ಕೈಯಲ್ಲಿ ಅವರು ನಾಶವಾಗುವರು. ಈಗ ನಮ್ಮ ವೈರಿಗಳು ಆಮಿಷ ತೋರಿಸುತಾರೆ, ಒಂದು ಸಲ್ಲಬೇಕಾ ದಲ್ಲಿ ಹತು ಕೊಡುತ್ತೇವೆನ್ನುತಾರೆ. ಅವರ ಕಾರ್ಯಸಾಧನೆಯಾದ ಮೇಲೆ ಮಾತ್ರ ಪ್ರಜೆ ಗಳ ಪಾಡು ಕತ್ತೇ ಪಾಡಾಗುತ್ತದೆ. ಮರುಳು ಮಾತಿನ ಬಲೆಗೆ ಯಾರೂ ಬೀಳದಿರಲಿ ! ಸತ್ಯಮೇವ ಜಯತೇ, ಸತ್ಯಕ್ಕೆ ಜಯವಾಗುವುದಲ್ಲದೆ, ಅಸತ್ಯ ಅನಾಯಗಳಿಗಲ್ಲ! ಮಹಾ ದೇವನಿಗೆ ಮೆಚ್ಚುಗೆಯಾಗುವಂತೆ ಸ್ವಾತಂತ್ರ, ರಕ್ಷಣೆಗಾಗಿ ನಮ್ಮಪ್ರಜೆಗಳೆಲ್ಲ ಹೋರಾಡಲಿ!"<br />
{{gap}}ರಣನಿನಾದವಾಗಿತ್ತು, ಚಿಕವೀರರಾಜೇಂದ್ರನ ಪ್ರತಿಘೋಷಣೆ.<br />
{{center|೩೬}}
{{gap}}ಬೋಪಣ್ಣ ಭೇಟಿಗೆ ಬಂದಾಗ ಚಿಕವೀರರಾಜೇಂದ್ರನಿಗೆ ಆಶ್ಚರ್ಯವಾಯಿತು.<br />
{{gap}}"ನಾವಾಗಿ ಕರೆಸದೆ ಬರುವುದಿಲ್ಲ ಎಂದಿದ್ದಿರಿ, ಅಲ್ಲವೆ ದಿವಾನರೆ?"<br />
{{gap}}ಈ ಬೋಪಣ್ಣ ಹೊಸಬ. ಔದ್ಧತ್ಯದ ಸೋಂಕಿರಲಿಲ್ಲ, ಹೆಜ್ಜೆ ಹೆಜ್ಜೆಗೂ ವಿನಯ.<noinclude></noinclude>
6rtqgaqy1hwr96fyw6ip73r1pqoiv37
ಪುಟ:ಸ್ವಾಮಿ ಅಪರಂಪಾರ.pdf/೧೧೪
104
21264
321622
206427
2026-05-21T10:09:24Z
Pragathi. BH
7585
/* Validated */
321622
proofread-page
text/x-wiki
<noinclude><pagequality level="4" user="Pragathi. BH" /></noinclude>೧೧೨ ಸ್ವಾಮಿ ಅಪರ೦ಪಾರ
"ಅಬ್ಯಾಸ್ ಅಲಿ ಶಸ್ತ್ರಸಾಮಗ್ರಿಗಳ ಪೂರೈಕೆಯ ಉಸ್ತುವಾರಿ ನೋಡತಾನೆ. ಬಸವ ಸರ್ವಕಾರ್ಯಕಾರನಾಗಿ ನನ್ನ ಬಳಿ ಇರತಾನೆ."
"ನನ್ನನ್ನು ಮರೆತಿರಿ!"
"ನೀವು ಸಲಹೆಗಾರರಾಗಿ ರಾಜಧಾನಿಯಲ್ಲಿರತೀರಿ. ಲಕ್ಷ್ಮಿನಾರಾಣಪ್ಪನವರಂತೂ ರಣಚಂಡಿಯ ಭಕ್ತರಲ್ಲವಲ್ಲ, ನೀವೂ ನಾನೂ ಪ್ರಸಂಗ ಬಂದಾಗ ಕಣಕ್ಕಿಳಿಯೋವಾ."
"ಬೋಪು ಹೋರಾಡಿ ಸತ್ತ ಅಂತ ಜನರ ಬಾಯಿಂದ ಅನ್ನಿಸಿಕೊಳ್ಳತೇನೆ."
"ಸಾಯೋದಲ್ಲ–ಗೆಲ್ಲೋದು ಮುಖ್ಯ ಬೋಪಣ್ಣನವರೆ."
“ಆ ಬಗ್ಗೆ ಮಹಾಸ್ವಾಮಿಗಳಿಗೆ ಸಂಶಯವೇ ಬೇಡ.”
ಮುಂದೇನು ಹೇಳಬೇಕೆoದು ತೋಚದೆ, ಮುಗ್ಧ ಭಾವದಿಂದ, ಬೋಪಣ್ಣ ಕುಳಿತ.
"ಕೆಟ್ಟ ಮಾತು ಆಡಬಾರದು ಅಂತ ಸುಮ್ಮನಿದೀರೋ? ಯಾವುದಾದರೊ೦ದು. ರಂಗದಲ್ಲಿ ಸೋಲಾಯಿತು ಅನ್ನಿ. ಅದಕ್ಕೆ ಗೋಳಾಡಬೇಕಾದ್ದಿಲ್ಲ. ನಮ್ಮ ದೊಡ್ಡ ತ೦ದೆ ಯವರ ಕಾಲದಲ್ಲಿ ಏನಾಯಿತು ? ಮಡಕೇರಿಯನ್ನು ಹೈದರ್-ಟೀಪುಗಳು ಹಿಡಿಕೊ೦ಡ ಮೇಲೂ ನಾಲ್ಕುನಾಡು ಅರಮನೆಯಲ್ಲಿದ್ದುಕೊಂಡು ಅವರು ಹೋರಾಟ ಮುಂದುವರಿಸ ಲಿಲ್ಲ? ರಾಜ್ಯ ಆಳಲಿಲ್ಲ?"<br />
{{gap}}"ನಾನೂ ಅದನ್ನೇ ಹೇಳೋಣಾಂತಿದ್ದೆ, ಮಹಾರಾಣಿಯವರನ್ನೂ ರಾಜಕುಮಾರಿ ಯವರನ್ನೂ ನಾಲ್ಕುನಾಡು ಅರಮನೆಯಲ್ಲಿ ಮಡಗೋದು ಮೇಲು."<br />
{{gap}}"ಆ ವ್ಯವಸ್ಥೆ ನಾವು ಮಾಡಿಯೇ ಮಾಡತೇವೆ ."
ಬೋಪಣ್ಣ ಏಳುವ ಸೂಚನೆ ಕಂಡಿತು.<br />
{{gap}}"ದಿನಾಗಲೂ ಬೆಳಿಗ್ಗೆ ಬಂದು ಹೋಗುತ್ತಿರಿ. ದಿವಾನರೆ" ಎಂದ ಅರಸ.<br />
{{gap}}"ಅಪ್ಪಣೆ."<br />
{{gap}}"ರಾಜಕಾರ್ಯನಿಮಿತ್ತ ಮಧ್ಯರಾತ್ರಿಯಾದರೂ ಸರಿ ನಿಮ್ಮನ್ನೆಬ್ಬಿಸಿ ನಾವು ತೊಂದರೆ ಕೊಡಬಹುದು !"<br />
{{gap}}"ಮಹಾಸ್ವಾಮಿಯವರು ಪರಿಹಾಸ್ಯ ಮಾಡುತಾರೆ!"<br />
{{gap}}ಚಿಕವೀರರಾಜೇಂದ್ರ ನಗುತ್ತ ಎದ್ದ. ಆಗಲೆ ಎದ್ದು ನಿಂತಿದ್ದ ದಿವಾನನ ಬಳಿ ಸಾರಿ,
ಆತನ ಭುಜಗಳನ್ನು ಹಿಡಿದು. ಭಾವೋದ್ವೇಗದಿಂದ ಅವನೆಂದ:<br />
{{gap}}"ಆಗಲಿ. ಬೋಪಣ್ಣ. ಹೋಗಿ ಬನ್ನಿ."<br />
{{center|೨೭ }}
{{gap}}ಕೊಡಗನ್ನು ನುಗ್ಗಲು ಬಂದುದು ಆರು ಸಾವಿರ ಯೋಧರ ಸುಸಜ್ಜಿತ ಸೇನೆ. ರಾಜ್ಯದ ಮೇಲೆ ಅದು ದಾಳಿ ನಡೆಸಿದ್ದು ಐದು ದಿಕ್ಕುಗಳಿಂದ, ಕರ್ನಲ್ ಲಿಂಡ್ಸೆ ದಾಳಿಕಾರರ ಸರ್ವ ಸೇನಾಪತಿ, ಅವನ ಜತೆಗಾರನಾಗಿ ಬಂದವನು, ಕೊಡಗಿನ ವ್ಯವಹಾರಗಳಿಗಾಗಿ ಗವರ್ನರ್ ಜನರಲನ ರಾಜಕೀಯ ಏಜೆಂಟನೆಂದು ನೇಮಕಗೊಂಡ ಕರ್ನಲ್ ಫ್ರೇಸರ್.<br />
{{gap}}ಕೊಡಗಿನಲ್ಲಿ ವೀರ ಯೋಧರಿಗೆ ಅಭಾವವಿರಲಿಲ್ಲ. ಅಲ್ಲಿದ್ದುದೊ೦ದೇ ಕೊರತೆ. ಏಕಮತ್ಯದು. ರಾಜ್ಯದ ಶಕ್ತಿಯನ್ನೆಲ್ಲ ಒಂದುಗೂಡಿಸಿ, ಹೋರಾಡಿ, ಆಂಗ್ಲರನ್ನು ಸೋಲಿಸ ಬಹುದು–ಎಂದು ನಂಬಿದ್ದ ಚಿಕವೀರರಾಜೇಂದ್ರ. ಆದರೆ, ಬೋಪಣ್ಣ-ಪೊನ್ನಪ್ಪರ<noinclude></noinclude>
8cn3dmi5xq0bd5t39olgty63izb5141
321623
321622
2026-05-21T10:10:06Z
Pragathi. BH
7585
321623
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರ೦ಪಾರ|left=೧೧೨|right=}}</noinclude>
"ಅಬ್ಯಾಸ್ ಅಲಿ ಶಸ್ತ್ರಸಾಮಗ್ರಿಗಳ ಪೂರೈಕೆಯ ಉಸ್ತುವಾರಿ ನೋಡತಾನೆ. ಬಸವ ಸರ್ವಕಾರ್ಯಕಾರನಾಗಿ ನನ್ನ ಬಳಿ ಇರತಾನೆ."
"ನನ್ನನ್ನು ಮರೆತಿರಿ!"
"ನೀವು ಸಲಹೆಗಾರರಾಗಿ ರಾಜಧಾನಿಯಲ್ಲಿರತೀರಿ. ಲಕ್ಷ್ಮಿನಾರಾಣಪ್ಪನವರಂತೂ ರಣಚಂಡಿಯ ಭಕ್ತರಲ್ಲವಲ್ಲ, ನೀವೂ ನಾನೂ ಪ್ರಸಂಗ ಬಂದಾಗ ಕಣಕ್ಕಿಳಿಯೋವಾ."
"ಬೋಪು ಹೋರಾಡಿ ಸತ್ತ ಅಂತ ಜನರ ಬಾಯಿಂದ ಅನ್ನಿಸಿಕೊಳ್ಳತೇನೆ."
"ಸಾಯೋದಲ್ಲ–ಗೆಲ್ಲೋದು ಮುಖ್ಯ ಬೋಪಣ್ಣನವರೆ."
“ಆ ಬಗ್ಗೆ ಮಹಾಸ್ವಾಮಿಗಳಿಗೆ ಸಂಶಯವೇ ಬೇಡ.”
ಮುಂದೇನು ಹೇಳಬೇಕೆoದು ತೋಚದೆ, ಮುಗ್ಧ ಭಾವದಿಂದ, ಬೋಪಣ್ಣ ಕುಳಿತ.
"ಕೆಟ್ಟ ಮಾತು ಆಡಬಾರದು ಅಂತ ಸುಮ್ಮನಿದೀರೋ? ಯಾವುದಾದರೊ೦ದು. ರಂಗದಲ್ಲಿ ಸೋಲಾಯಿತು ಅನ್ನಿ. ಅದಕ್ಕೆ ಗೋಳಾಡಬೇಕಾದ್ದಿಲ್ಲ. ನಮ್ಮ ದೊಡ್ಡ ತ೦ದೆ ಯವರ ಕಾಲದಲ್ಲಿ ಏನಾಯಿತು ? ಮಡಕೇರಿಯನ್ನು ಹೈದರ್-ಟೀಪುಗಳು ಹಿಡಿಕೊ೦ಡ ಮೇಲೂ ನಾಲ್ಕುನಾಡು ಅರಮನೆಯಲ್ಲಿದ್ದುಕೊಂಡು ಅವರು ಹೋರಾಟ ಮುಂದುವರಿಸ ಲಿಲ್ಲ? ರಾಜ್ಯ ಆಳಲಿಲ್ಲ?"<br />
{{gap}}"ನಾನೂ ಅದನ್ನೇ ಹೇಳೋಣಾಂತಿದ್ದೆ, ಮಹಾರಾಣಿಯವರನ್ನೂ ರಾಜಕುಮಾರಿ ಯವರನ್ನೂ ನಾಲ್ಕುನಾಡು ಅರಮನೆಯಲ್ಲಿ ಮಡಗೋದು ಮೇಲು."<br />
{{gap}}"ಆ ವ್ಯವಸ್ಥೆ ನಾವು ಮಾಡಿಯೇ ಮಾಡತೇವೆ ."
ಬೋಪಣ್ಣ ಏಳುವ ಸೂಚನೆ ಕಂಡಿತು.<br />
{{gap}}"ದಿನಾಗಲೂ ಬೆಳಿಗ್ಗೆ ಬಂದು ಹೋಗುತ್ತಿರಿ. ದಿವಾನರೆ" ಎಂದ ಅರಸ.<br />
{{gap}}"ಅಪ್ಪಣೆ."<br />
{{gap}}"ರಾಜಕಾರ್ಯನಿಮಿತ್ತ ಮಧ್ಯರಾತ್ರಿಯಾದರೂ ಸರಿ ನಿಮ್ಮನ್ನೆಬ್ಬಿಸಿ ನಾವು ತೊಂದರೆ ಕೊಡಬಹುದು !"<br />
{{gap}}"ಮಹಾಸ್ವಾಮಿಯವರು ಪರಿಹಾಸ್ಯ ಮಾಡುತಾರೆ!"<br />
{{gap}}ಚಿಕವೀರರಾಜೇಂದ್ರ ನಗುತ್ತ ಎದ್ದ. ಆಗಲೆ ಎದ್ದು ನಿಂತಿದ್ದ ದಿವಾನನ ಬಳಿ ಸಾರಿ,
ಆತನ ಭುಜಗಳನ್ನು ಹಿಡಿದು. ಭಾವೋದ್ವೇಗದಿಂದ ಅವನೆಂದ:<br />
{{gap}}"ಆಗಲಿ. ಬೋಪಣ್ಣ. ಹೋಗಿ ಬನ್ನಿ."<br />
{{center|೨೭ }}
{{gap}}ಕೊಡಗನ್ನು ನುಗ್ಗಲು ಬಂದುದು ಆರು ಸಾವಿರ ಯೋಧರ ಸುಸಜ್ಜಿತ ಸೇನೆ. ರಾಜ್ಯದ ಮೇಲೆ ಅದು ದಾಳಿ ನಡೆಸಿದ್ದು ಐದು ದಿಕ್ಕುಗಳಿಂದ, ಕರ್ನಲ್ ಲಿಂಡ್ಸೆ ದಾಳಿಕಾರರ ಸರ್ವ ಸೇನಾಪತಿ, ಅವನ ಜತೆಗಾರನಾಗಿ ಬಂದವನು, ಕೊಡಗಿನ ವ್ಯವಹಾರಗಳಿಗಾಗಿ ಗವರ್ನರ್ ಜನರಲನ ರಾಜಕೀಯ ಏಜೆಂಟನೆಂದು ನೇಮಕಗೊಂಡ ಕರ್ನಲ್ ಫ್ರೇಸರ್.<br />
{{gap}}ಕೊಡಗಿನಲ್ಲಿ ವೀರ ಯೋಧರಿಗೆ ಅಭಾವವಿರಲಿಲ್ಲ. ಅಲ್ಲಿದ್ದುದೊ೦ದೇ ಕೊರತೆ. ಏಕಮತ್ಯದು. ರಾಜ್ಯದ ಶಕ್ತಿಯನ್ನೆಲ್ಲ ಒಂದುಗೂಡಿಸಿ, ಹೋರಾಡಿ, ಆಂಗ್ಲರನ್ನು ಸೋಲಿಸ ಬಹುದು–ಎಂದು ನಂಬಿದ್ದ ಚಿಕವೀರರಾಜೇಂದ್ರ. ಆದರೆ, ಬೋಪಣ್ಣ-ಪೊನ್ನಪ್ಪರ<noinclude></noinclude>
lsneyrb1wtf8d8921vzrgm08zoej1qh
ಪುಟ:ಸ್ವಾಮಿ ಅಪರಂಪಾರ.pdf/೧೧೫
104
21265
321624
206428
2026-05-21T10:14:51Z
Pragathi. BH
7585
/* Validated */
321624
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರ೦ಪಾರ|left=|right=೧೧೩}}</noinclude>
ಕಾರಸ್ಥಾನದಿಂದಾಗಿ, ರಾಜ್ಯದ ಅಗಸೆ ಬಾಗಿಲಿನಿಂದ ರಾಜಧಾನಿಯ ದಿಡ್ಡಿ ಬಾಗಿಲಿನವರೆಗೂ ರಕ್ಷಣೆಯ ದುರ್ಗ ಬಿರುಕುಬಿಟ್ಟಿತು. <br />
{{gap}}ಬೋಪಣ್ಣ ಆತ್ಮವಿಸ್ವಾಸದಿಂದ ದಾಳಿಕಾರರಿಗೆ ಸ೦ದೇಶ ಕಳುಹಿದ್ದ:<br />
{{gap}}“ಮುನ್ನುಗ್ಗಿ ಬನ್ನಿ. ನಮ್ಮವರು ಹೋರಾಡುವುದಿಲ್ಲ. ಶರಣಾಗುತ್ತಾರೆ.”
{{gap}}...ಪೂರ್ವಪಡೆ ಸ್ವತಃ ಲಿಂಡ್ಸೆಯ ನಾಯಕತ್ವದಲ್ಲಿ ಏಪ್ರಿಲ್ ೨ರಂದು ಬೆಟ್ಟದಪುರ ದಿಂದ ಹೊರಟು ಸುಲಕೊತ್ತಿಗೆ ಬಂದಿತು. ಕಾವೇರಿಯ ದಂಡೆಯನ್ನು ತಲಪಿತು. ಅದರ ಈಚೆಯ ದಡದಲ್ಲಿತು ಹೆಬ್ಬಾಲೆ. ಆ ದಡದುದ್ದಕ್ಕೂ ಐಯಣ್ಣನ ನೇತೃತ್ವದಲ್ಲಿ ಕೊಡಗಿನ ಸೈನಿಕರು ಮಣ್ಣಿನ ಗೋಡೆಯನ್ನೇರಿಸಿದ್ದರು. ಆ ಗೋಡೆಯಲ್ಲಿ ಗುಂಡು ಹಾರಿಸುವುದ ಕ್ಕೋಸ್ಕರ ರಂಧ್ರಗಳಿದ್ದುವು. ಗೋಡೆಯ ಮರೆಯಲ್ಲಿ ಬಂದೂಕು, ಭರ್ಚಿ, ಬಿಲ್ಲು ಬಾಣ ಗಳನ್ನು ಧರಿಸಿದ್ದ ಯೋಧರಿದ್ದರು.<br />
{{gap}}ಲಿಂಡ್ಸೆ ಆಕಾಶಕ್ಕೊಂದು ಗುಂಡು ಹಾರಿಸಿ, 'ನಾವು ಬಂದಿದೇವೆ' ಎಂದು ಸಾರಿದ. ಐಯಣ್ಣ ತಾನೊ೦ದು ಗುಂಡು ಹಾರಿಸಿ, 'ನಾವು ಸಿದ್ಧರಿದ್ದೇವೆ' ಎ೦ದ.<br />
{{gap}}ಬೋಪಣ್ಣ ಹೇಳಿಕಳುಹಿದ್ದನಲ್ಲ, ಕದನವಾಗದು ಎಂದು ?<br />
{{gap}}ತಮ್ಮ ದಂಡೆಯ ಮೇಲೆ ಆಂಗ್ಲರು ಬಿಳಿಯ ಬಾವುಟವನ್ನೇರಿಸಿದರು. ಒಬ್ಬ ಸೈನಿಕ ಅದನ್ನೆತ್ತಿಕೊಂಡು ನದಿಯನ್ನು ದಾಟಲೆತ್ನಿಸಿದ.ಸುಂಯ್ ಎಂದು ಒಂದು ಗುಂಡು ಬಾವುಟದಲ್ಲಿ ತೂತು ಕೊರೆಯಿತು.<br />
{{gap}}“ಫೈರ್!"<br />
{{gap}}ತೋಪುಗಳು ಮಾತನಾಡಿದುವು, ಸಿಡಿಗುಂಡುಗಳು ಸೀಮೋಲ್ಲಂಘನ ಮಾಡಿದುವು. ಹೂಂಕಾರ ಚೀತ್ಕಾರಗಳು ಶ್ರುತಿ ಹಿಡಿದುವು. ಮದ್ದುಗುಂಡುಗಳು ಕೆಡವಿದ ಗೋಡೆಯ ಮಣ್ಣು, ಕಾವೇರಿಯ ನೀರನ್ನು ಕಲಕಿತು. ನದಿ ದಾಟತೊಡಗಿದ್ದ ಆಂಗ್ಲ ಪಡೆಯ ಸೈನಿಕರ ರಕ್ತ ಮಲಿನ ನೀರಿನಲ್ಲಿ ಬೆರೆಯಿತು.<br />
{{gap}}ಕೊಡಗಿನ ಸೈನಿಕರು ರಾಮಸ್ವಾಮಿ ಕಣಿವೆಯತ್ತ ಹಿಂದಕ್ಕೆ ಸರಿದರು.<br />
{{gap}}ಮಾರನೆಯ ದಿನ ರಾಮಸ್ವಾಮಿ ದೇವಾಲಯದ ಆಯಕಟ್ಟಿನ ಸ್ಥಳದಿಂದ ಕೊಡಗು ದಳ ಪ್ರತಿಭಟಿಸಿತು. ಆದರೆ, ದೇಗುಲ ಪುಡಿಯಾದೀತೆಂಬ ಭಯವೆ ನುಗುತ್ತಿದ್ದವರಿಗೆ ?<br />
{{gap}}ಮುಂದೆ ಹಾರಂಗಿ ಇಂಗ್ಲಿಷರಿಗೆ ತಡೆಬಂಡೆಯಾಯಿತು. ಸಾವು ನೋವುಗಳನ್ನು ಗಮನಿಸದೆ ಅಲ್ಲಿಂದಲೂ ಕೊಡಗು ಸೈನಿಕರನ್ನು ಹಿಂದಕ್ಕೆ ಅಟ್ಟಲು ಬಿಳಿಯರ ದಂಡು ಪದೇ ಪದೇ ಯತ್ನಿಸಿತು. <br />
{{gap}}....ಪೂರ್ವಪಡೆಯ ಇನ್ನೊಂದು ಶಾಖೆ ಕರ್ನಲ್ ಸುಆರ್ಟ್ನನ ಹಿರಿತನದಲ್ಲಿ ದಾಳಿಯ ದಿನ ಪೆರಿಯಾಪಟ್ಟಣದಿಂದ ಹೊರಟುಬಂತು. ಕಾವೇರಿಯ ಈಚೆಯ ದಡದಲ್ಲಿ, ರಂಗಸಮುದ್ರದಲ್ಲಿ, ಕೊಡಗು ಸೈನ್ಯದ ತುಕ್ಕಡಿ ಇತ್ತು. ಅದರ ನಾಯಕ ಉತ್ತಯ್ಯ. ಬೋಪಣ್ಣನ ಪ್ರಭಾವಕ್ಕೊಳಗಾಗಿ ಆತನ ಮನಸ್ಸು ಕಲುಷಿತವಾಗಿತ್ತು, ಅವನು ನೀಡಿದ್ದು ನಾಮಮಾತ್ರ ಪ್ರತಿಭಟನೆ. ಆಚೆಯ ದಡದಿಂದ ತೋಪುಗಳು ಗರ್ಜಿಸತೊಡಗಿದಂತೆ ಉತ್ತಯ್ಯ ತನ್ನ ತುಕ್ಕಡಿಯೊಡನೆ ಒಳಪ್ರದೇಶಕ್ಕೆ ನಿರ್ಗಮಿಸಿದ.<br />
{{gap}}ಸುಅರ್ಟ್ ಕೊಂಡಗೇರಿಯಲ್ಲಿ ಕಾವೇರಿ ನದಿಯನ್ನುದಾಟಿ ವೀರರಾಜಪೇಟೆಯವರೆಗೂ ಯಾವ ತಡೆಯೂ ಇಲ್ಲದೆ ಮುಂದುವರಿದು ಬೀಡುಬಿಟ್ಟ, ಅಲ್ಲಿ ಪಶ್ಚಿಮದಿಂದ ಬರುವ<br />
8<noinclude></noinclude>
t9h02u2xekr6btau5mhqi2qxhj2ecor
ಪುಟ:ಸ್ವಾಮಿ ಅಪರಂಪಾರ.pdf/೧೧೬
104
21266
321626
206429
2026-05-21T10:17:53Z
Pragathi. BH
7585
/* Validated */
321626
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರ೦ಪಾರ|left=೧೧೪|right=}}</noinclude>೧೧೪ ಸ್ವಾಮಿ ಅಪರ೦ಪಾರ
ದ೦ಡಿನೊಡನೆ ಸಹಕರಿಸಿ, ಸಿದ್ದಾಪುರದ ಮಾರ್ಗವಾಗಿ ಮೈಸೂರಿನೊಡನೆ ಸ೦ಪರ್ಕ ಬೆಳೆಸಲು ಅವನು ಆಜ್ಞಪ್ತನಾಗಿದ್ದ.<br />
{{gap}}....ಉತ್ತರದ ಪಡೆಗೆ ಮುಖ್ಯಸ್ಥನಾಗಿದ್ದವನು ಕರ್ನಲ್ ವಾಫ್, ಏಪ್ರಿಲ್ ಮೊದಲ ದಿನವೇ ಹೊಸಕೋಟೆಯಿಂದ ಹೊರಟು, ಅಲ್ಲಿ ಕೊಡಗಿನ ಎಲ್ಲೆಯಾದ ಹೇಮಾವತಿ ಯನ್ನು ದಾಟಿ ಕೊಡ್ಲಿಪೇಟೆಯವರೆಗೂ ಯಾವ ಪ್ರತಿಭಟನೆಯೂ ಇಲ್ಲದೆ ಆ ತುಕ್ಕಡಿ ಮು೦ದುವರಿಯಿತು. <br />
{{gap}}ಕೊಡ್ಲಿಪೇಟೆಯಲ್ಲಿ ನಡೆದುದು ಪ್ರತಿಭಟನೆಯ ನಾಟಕ ಮಾತ್ರ, ಮುಂದೆ ಮುದ್ರ ವಳ್ಳಿಯಲ್ಲರೂ ಅಷ್ಟೆ, ಇನ್ನೇನು, ಹಾರಂಗಿಯಲ್ಲಿ ಪೂರ್ವಪಡೆಯನ್ನು ವಾಫ್ ಸೇರಬೇಕು ಎನ್ನುವಷ್ಟರಲ್ಲೇ ಅನಿರೀಕ್ಷಿತವಾಗಿ ಕಾಳಗ ಸಂಭವಿಸಿತು. ಮಾದಂಟ ಅಪ್ಪಚ್ಚು ಉದ್ದೇಶ ಪೂರ್ವಕವಾಗಿಯೇ ಹಿಮ್ಮೆಟ್ಟುತ್ತಿದ್ದಾನೆ ಎಂಬ ಶಂಕೆ ಅನೇಕ ಚಾವಡಿಕಾರರಲ್ಲಿ ಮೂಡಿ. ಕೊಡಗಿನ ಪಡೆಯಲ್ಲಿ ಗದ್ದಲವಾಯಿತು. ತನ್ನ ಮಾನರಕ್ಷಣೆಗಾಗಿ ಅಪ್ಪಚ್ಚು ಹೋರಾಡಲು ನಿರ್ಧರಿಸಿದ.<br />
{{gap}}ಆಗ ನಡೆದ ಆರು ಘಳಿಗೆಗಳ ನಿಕರದ ಕಾಳಗ ಕೊಡಗಿನ ಸೈನಿಕರೆಂತಹ ವೀರರೆಂಬು ದನ್ನು ತೋರಿಸಿಕೊಟ್ಟಿತು. ಕರ್ನಲ್ ಮಿಲ್ ಎಂಬಾತ ಕೊಡವನೊಬ್ಬನ ಗುಂಡಿಗೆ ಆಹುತಿ ಯಾದ. ರಾಬರ್ಟ್ ಸನ್,ಬಾಲಿ೦ಗ್ಟಣನ್ . ಎಂಬವರು ಧರೆಗೆ ಉರುಳಿದರು. ಬಿಳಿಯ ಪಡೆಯ ನೂರಾರು ಜನ ಹತರಾದರು, ದಳ ಮೂರು ಹರದಾರಿಗಳ ದೂರಕ್ಕೆ ಹಿಂದೆ ಸರಿಯಿತು. <br />
{{gap}}...ಪಶ್ಚಿಮದ ಪಡೆ ಕಣ್ಣಾನೂರಿನಿಂದ ಮಾರ್ಚ್ ತಿಂಗಳ ಕೊನೆಯ ದಿನವೇ ಕರ್ನಲ್ ಫಾಲ್ಸನ ನಾಯಕತ್ವದಲ್ಲಿ ಹೊರಟಿತು. ಹೆಗ್ಗಳ ಘಟ್ಟದ ಮೂಲಕ ವೀರರಾಜಪೇಟೆಯನ್ನು ತಲಪಿ ಮಡಕೇರಿಗೆ ಮುಂದುವರಿಯಬೇಕೆಂಬುದು ಆತನಿಗೆ ದೊರೆತಿದ್ದ ಆಜ್ಞೆ.<br />
{{gap}}ಸಾಧಾರಣ ಸಂವತ್ಸರದಲ್ಲಿ ಹೆಗ್ಗಳ ಘಟ್ಟದ ದಾರಿಯಾಗಿಯೇ ದೊಡ್ಡವೀರರಾಜೇಂದ್ರ ತಲಚೇರಿಗೆ ಇಳಿದುಹೋಗಿ. ಆಂಗ್ಲರೊಡನೆ ಸ್ನೇಹದ ಒಡಂಬಡಿಕೆಯನ್ನು ಮಾಡಿಕೊಂಡಿದ್ದ. ಇಂಗ್ಲಿಷರ ತೋಪುಗಳನ್ನು ಎಳೆಯುವುದಕ್ಕಾಗಿ ಆತ ನೀಡಿದ ಹೋರಿಗಳು ಆ ಘಟ್ಟದ ಮಾರ್ಗವಾಗಿಯೇ ಮಲೆಯಾಳದ ಬಯಲಿಗೆ ಇಳಿದಿದ್ದುವು. ಮುಂದೆ ಟೀಪುವನ್ನು ಸದೆಬಡಿ ಯುವುದಕ್ಕೋಸ್ಕರ ಆ ದಾರಿಯಾಗಿಯೇ ಇಂಗ್ಲಿಷ್ ದಂಡುಗಳು ಕೊಡಗಿಗೆ ಬಂದು ಮೈಸೂರಿಗೆ ಮುಂದುವರಿದಿದ್ದುವು.<br />
{{gap}}ಆ ಪರಿಚಿತ ಹಾದಿಯಲ್ಲಿ, ಅವರೀಗ ತಮ್ಮ ಹಳೆಯ ಮಿತ್ರನ ರಾಜ್ಯದ ಮೇಲೆ ದಾಳಿ ನಡೆಸಲು ಬ೦ದರು,<br />
{{gap}}ಆದರೆ ದಾರಿ ಸುಗಮವಾಗಿರಲಿಲ್ಲ. ಒಂದರ ಹಿಂದೆ ಒಂದಾಗಿ ಕಲ್ಲಿನ ಗೋಡೆಗಳು ಕಂಡುವು, ಭೀಮ ವೃಕ್ಷಗಳ ಕಾಂಡಗಳು ಹಾದಿಗಡ್ಡವಾಗಿ ಮಲಗಿದ್ದುವು. ಅವುಗಳ ಹಿಂದೆಯೂ ಕೊಡಗಿನ ಸೈನಿಕರಿದ್ದರು. ಇಕ್ಕೆಲಗಳಲ್ಲಿ ಕಾಡುಗಳಲ್ಲಾ ಅವರಿದ್ದರು.<br />
{{gap}}ವಾಸ್ತವವಾಗಿ ಕಾರ್ಯಕಾರ ಕಳಿಂಗಯ್ಯ ಅಡ್ಡಗೋಡೆಯ ಮೇಲೆ ಕುಳಿತಿದ್ದ: ಬೋಪಣ್ಣನ ಯೋಜನೆ ಕೈಗೂಡುವಂತಿದ್ದರೆ ಸಕಾಲದಲ್ಲಿ ತಾನು ಅವನ ಕಡೆಗೆ ಧುಮುಕಬೇಕು. ಅವನು ವಿಫಲನಾಗುವ ಹಾಗಿದ್ದರೆ, ಗಡಿ ರಕ್ಷಣೆಯನ್ನು ಮಾಡಿದ ವೀರ ಎಂದು ರಾಜನ ಹೊಗಳಿಕೆಗೆ ಪಾತ್ರನಾಗಬೇಕು.<br />
{{gap}}ಇದೊಂದನ್ನೂ ತಿಳಿಯದ ಸೈನಿಕರು, ಸ್ಟೈರ್ಯದಿಂದ ಕಲಿಗಳಾಗಿ ಹೋರಾಟ ನಡೆಸಿ<noinclude></noinclude>
oerc8vaupn9dwy0d9zls4z7ycvqs312
321627
321626
2026-05-21T10:18:16Z
Pragathi. BH
7585
321627
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರ೦ಪಾರ|left=೧೧೪|right=}}</noinclude>
ದ೦ಡಿನೊಡನೆ ಸಹಕರಿಸಿ, ಸಿದ್ದಾಪುರದ ಮಾರ್ಗವಾಗಿ ಮೈಸೂರಿನೊಡನೆ ಸ೦ಪರ್ಕ ಬೆಳೆಸಲು ಅವನು ಆಜ್ಞಪ್ತನಾಗಿದ್ದ.<br />
{{gap}}....ಉತ್ತರದ ಪಡೆಗೆ ಮುಖ್ಯಸ್ಥನಾಗಿದ್ದವನು ಕರ್ನಲ್ ವಾಫ್, ಏಪ್ರಿಲ್ ಮೊದಲ ದಿನವೇ ಹೊಸಕೋಟೆಯಿಂದ ಹೊರಟು, ಅಲ್ಲಿ ಕೊಡಗಿನ ಎಲ್ಲೆಯಾದ ಹೇಮಾವತಿ ಯನ್ನು ದಾಟಿ ಕೊಡ್ಲಿಪೇಟೆಯವರೆಗೂ ಯಾವ ಪ್ರತಿಭಟನೆಯೂ ಇಲ್ಲದೆ ಆ ತುಕ್ಕಡಿ ಮು೦ದುವರಿಯಿತು. <br />
{{gap}}ಕೊಡ್ಲಿಪೇಟೆಯಲ್ಲಿ ನಡೆದುದು ಪ್ರತಿಭಟನೆಯ ನಾಟಕ ಮಾತ್ರ, ಮುಂದೆ ಮುದ್ರ ವಳ್ಳಿಯಲ್ಲರೂ ಅಷ್ಟೆ, ಇನ್ನೇನು, ಹಾರಂಗಿಯಲ್ಲಿ ಪೂರ್ವಪಡೆಯನ್ನು ವಾಫ್ ಸೇರಬೇಕು ಎನ್ನುವಷ್ಟರಲ್ಲೇ ಅನಿರೀಕ್ಷಿತವಾಗಿ ಕಾಳಗ ಸಂಭವಿಸಿತು. ಮಾದಂಟ ಅಪ್ಪಚ್ಚು ಉದ್ದೇಶ ಪೂರ್ವಕವಾಗಿಯೇ ಹಿಮ್ಮೆಟ್ಟುತ್ತಿದ್ದಾನೆ ಎಂಬ ಶಂಕೆ ಅನೇಕ ಚಾವಡಿಕಾರರಲ್ಲಿ ಮೂಡಿ. ಕೊಡಗಿನ ಪಡೆಯಲ್ಲಿ ಗದ್ದಲವಾಯಿತು. ತನ್ನ ಮಾನರಕ್ಷಣೆಗಾಗಿ ಅಪ್ಪಚ್ಚು ಹೋರಾಡಲು ನಿರ್ಧರಿಸಿದ.<br />
{{gap}}ಆಗ ನಡೆದ ಆರು ಘಳಿಗೆಗಳ ನಿಕರದ ಕಾಳಗ ಕೊಡಗಿನ ಸೈನಿಕರೆಂತಹ ವೀರರೆಂಬು ದನ್ನು ತೋರಿಸಿಕೊಟ್ಟಿತು. ಕರ್ನಲ್ ಮಿಲ್ ಎಂಬಾತ ಕೊಡವನೊಬ್ಬನ ಗುಂಡಿಗೆ ಆಹುತಿ ಯಾದ. ರಾಬರ್ಟ್ ಸನ್,ಬಾಲಿ೦ಗ್ಟಣನ್ . ಎಂಬವರು ಧರೆಗೆ ಉರುಳಿದರು. ಬಿಳಿಯ ಪಡೆಯ ನೂರಾರು ಜನ ಹತರಾದರು, ದಳ ಮೂರು ಹರದಾರಿಗಳ ದೂರಕ್ಕೆ ಹಿಂದೆ ಸರಿಯಿತು. <br />
{{gap}}...ಪಶ್ಚಿಮದ ಪಡೆ ಕಣ್ಣಾನೂರಿನಿಂದ ಮಾರ್ಚ್ ತಿಂಗಳ ಕೊನೆಯ ದಿನವೇ ಕರ್ನಲ್ ಫಾಲ್ಸನ ನಾಯಕತ್ವದಲ್ಲಿ ಹೊರಟಿತು. ಹೆಗ್ಗಳ ಘಟ್ಟದ ಮೂಲಕ ವೀರರಾಜಪೇಟೆಯನ್ನು ತಲಪಿ ಮಡಕೇರಿಗೆ ಮುಂದುವರಿಯಬೇಕೆಂಬುದು ಆತನಿಗೆ ದೊರೆತಿದ್ದ ಆಜ್ಞೆ.<br />
{{gap}}ಸಾಧಾರಣ ಸಂವತ್ಸರದಲ್ಲಿ ಹೆಗ್ಗಳ ಘಟ್ಟದ ದಾರಿಯಾಗಿಯೇ ದೊಡ್ಡವೀರರಾಜೇಂದ್ರ ತಲಚೇರಿಗೆ ಇಳಿದುಹೋಗಿ. ಆಂಗ್ಲರೊಡನೆ ಸ್ನೇಹದ ಒಡಂಬಡಿಕೆಯನ್ನು ಮಾಡಿಕೊಂಡಿದ್ದ. ಇಂಗ್ಲಿಷರ ತೋಪುಗಳನ್ನು ಎಳೆಯುವುದಕ್ಕಾಗಿ ಆತ ನೀಡಿದ ಹೋರಿಗಳು ಆ ಘಟ್ಟದ ಮಾರ್ಗವಾಗಿಯೇ ಮಲೆಯಾಳದ ಬಯಲಿಗೆ ಇಳಿದಿದ್ದುವು. ಮುಂದೆ ಟೀಪುವನ್ನು ಸದೆಬಡಿ ಯುವುದಕ್ಕೋಸ್ಕರ ಆ ದಾರಿಯಾಗಿಯೇ ಇಂಗ್ಲಿಷ್ ದಂಡುಗಳು ಕೊಡಗಿಗೆ ಬಂದು ಮೈಸೂರಿಗೆ ಮುಂದುವರಿದಿದ್ದುವು.<br />
{{gap}}ಆ ಪರಿಚಿತ ಹಾದಿಯಲ್ಲಿ, ಅವರೀಗ ತಮ್ಮ ಹಳೆಯ ಮಿತ್ರನ ರಾಜ್ಯದ ಮೇಲೆ ದಾಳಿ ನಡೆಸಲು ಬ೦ದರು,<br />
{{gap}}ಆದರೆ ದಾರಿ ಸುಗಮವಾಗಿರಲಿಲ್ಲ. ಒಂದರ ಹಿಂದೆ ಒಂದಾಗಿ ಕಲ್ಲಿನ ಗೋಡೆಗಳು ಕಂಡುವು, ಭೀಮ ವೃಕ್ಷಗಳ ಕಾಂಡಗಳು ಹಾದಿಗಡ್ಡವಾಗಿ ಮಲಗಿದ್ದುವು. ಅವುಗಳ ಹಿಂದೆಯೂ ಕೊಡಗಿನ ಸೈನಿಕರಿದ್ದರು. ಇಕ್ಕೆಲಗಳಲ್ಲಿ ಕಾಡುಗಳಲ್ಲಾ ಅವರಿದ್ದರು.<br />
{{gap}}ವಾಸ್ತವವಾಗಿ ಕಾರ್ಯಕಾರ ಕಳಿಂಗಯ್ಯ ಅಡ್ಡಗೋಡೆಯ ಮೇಲೆ ಕುಳಿತಿದ್ದ: ಬೋಪಣ್ಣನ ಯೋಜನೆ ಕೈಗೂಡುವಂತಿದ್ದರೆ ಸಕಾಲದಲ್ಲಿ ತಾನು ಅವನ ಕಡೆಗೆ ಧುಮುಕಬೇಕು. ಅವನು ವಿಫಲನಾಗುವ ಹಾಗಿದ್ದರೆ, ಗಡಿ ರಕ್ಷಣೆಯನ್ನು ಮಾಡಿದ ವೀರ ಎಂದು ರಾಜನ ಹೊಗಳಿಕೆಗೆ ಪಾತ್ರನಾಗಬೇಕು.<br />
{{gap}}ಇದೊಂದನ್ನೂ ತಿಳಿಯದ ಸೈನಿಕರು, ಸ್ಟೈರ್ಯದಿಂದ ಕಲಿಗಳಾಗಿ ಹೋರಾಟ ನಡೆಸಿ<noinclude></noinclude>
o9xt2qyt7obgf7m8ldfiwok9mlfmni3
ಪುಟ:ಸ್ವಾಮಿ ಅಪರಂಪಾರ.pdf/೧೬೨
104
21312
321573
210394
2026-05-21T06:10:00Z
Pragathi. BH
7585
/* Validated */
321573
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ|right=|left=೧೬೦}}
{{gap}}ಮಂಜಣ್ಣನೆಂದ:</br>
{{gap}}“ಬರತಾರೆ, ಬರತಾರೆ. ಇಲ್ಲಿನ ಕಾಡುಮೃಗಗಳು ಸಾಧುಪ್ರಾಣಿಗಳ ಹಾಗಿರತವಂತೆ.
ದನ ಮೇಯಿಸೋರು ಯೋಳಿದ್ದು ಕೇಳಿವ್ನಿ, ಆಕಳ ಬಂದರೆ ಹುಲಿ ಅದನ್ನ ತಿನ್ನಾ</br>ಕಿಲ್ವಂತೆ."</br>
{{gap}}ಅಪರಂಪಾರ ಉದ್ಗರಿಸಿದ:</br>
{{gap}}“ಅದ್ಭುತ! ಇದು ಮಹಾದೇವನ ಮಾಯಾಸೃಷ್ಟಿ!"</br>
{{gap}}ಅವರು ಕೆರೆಯನ್ನು ಸಮಿಾಪಿಸಿದರು.</br>
{{gap}}ನೀರು ಸ್ವಚ್ಛವಾಗಿತ್ತು, ನಾಲ್ಕಾಳು ತಬ್ಬಿದರೂ ಮುಚ್ಚಲಾಗದಂತಹ ಬಲಿಷ್ಟ ಕಾಂಡ
ಗಳ ಆಲದ ಮರಗಳು ಕೆರೆಯ ದಂಡೆಯುದ್ದಕ್ಕೂ ನಾಲ್ಕಾರು ಕಡೆ ಇದ್ದುವು. ಯಾರೋ
ಇತ್ತೀಚೆಗೆ ಬಂದು ವಿಶ್ರಮಿಸಿ, ಅಡುಗೆ ಬೇಯಿಸಿ ಉಂಡು ಹೋಗಿದ್ದರೆಂಬುದಕ್ಕೆ ಸಾಕ್ಷಿ
ಯಾಗಿ, ಕಲ್ಲುಗಳನ್ನು ಜೋಡಿಸಿ ಮಾಡಿದ ಎರಡು ಒಲೆಗಳಿದ್ದುವು, ಕೆದರಿದ ಬೂದಿಯೂ
ಅರ್ಧ ಸುಟ್ಟ ಸೌದೆಗಳೂ ಅಲ್ಲಿದ್ದುವು.</br>
{{gap}}ನಕ್ಕು ಅಪರಂಪಾರಸ್ವಾಮಿಯೆಂದ :</br>
{{gap}}“ನೋಡಿದೆಯಾ ಶಂಕರಪ್ಪ ? ಮಹಾದೇವ ಮುಂಚಿತವಾಗಿ ವಿಭೂತಿ ಕಳಿಸಿದಾನೆ."</br>
{{gap}}ಅವರು ಕುದುರೆಗಳಿಂದ ಇಳಿದರು. ಮಂಜಣ್ಣ ಮೂರು ಅಶ್ವಗಳನ್ನೂ ಸಣ್ಣದೊಂದು</br>
ಗಿಡಕ್ಕೆ ಕಟ್ಟಿದ.</br>
{{gap}}ಅಪರಂಪಾರ ಜೋಳಿಗೆಯನ್ನು ದಂಡೆಯ ಮೇಲಿರಿಸಿ ನೀರಿನ ಬಳಿ ಸಾರಿದ. {{gap}}ಮಂಜಣ್ಣ ಅತ್ತಿತ್ತ ಅಲೆಯುತ್ತ ಒಂದು ಮರದ ಕೆಳಗೆ ನಿಂತು, ಮೇಲೆ ನೋಡಿದ.</br>
{{gap}}ಉತ್ಸಾಹದ ಧ್ವನಿಯಲ್ಲಿ ಅವನೆಂದ:</br>
{{gap}}"ಶಂಕರಣ್ಣ. ಬಿರ್ರನೆ ಬಾ. ಕೆಂಪು ಮೋರೆಯ ಒಂದು ಮುಜು ಕುಂತದೆ. ಮನುಷ್ಯನ
ಹಂಗೇ ಅದೇ. ಬಾ, ಬಾ !"</br>{{gap}}ನೀರಲ್ಲಿ ಪಾದಗಳನ್ನು ತೋಯಿಸಿಕೊಂಡಿದ್ದ ಅಪರಂಪಾರ ಗಟ್ಟಿಯಾಗಿ ಅಂದ ;</br>
{{gap}}“ಆ ಕೋತಿ ಸಾಕ್ಷಾತ್ ಹನುಮಂತ. ಇದು ಕಿಪ್ಕಿಂಧೆ. ಸಂಶಯವಿಲ್ಲ. ಬಂದೂಕು
ಎತ್ತಬೇಡ, ಶಂಕರಪ್ಪ."</br>
{{gap}}ಮಂಜಣ್ಣನ ಬಳಿಗೆ ಬಂದು ಮೇಲಕ್ಕೆ ನೋಡಿ ಶಂಕರಪ್ಪ ಕೇಳಿದ:</br>
{{gap}}"ಎಲ್ಲಿ ? ಕಾಣಿಸೋದಿಲ್ಲ."</br>
{{gap}}“ಅಕಾ_ಅಲ್ಲಿ."</br>
{{gap}}ಕ್ಷಣಾರ್ಧದಲ್ಲಿ ನಡೆದ ಘಟನೆ. ಮಂಜಣ್ಣ ಶಿಳ್ಳು ಹಾಕಿದ. ಶಂಕರಪ್ಪ ಹುಬ್ಬು ಗಂಟಿಕ್ಕಿ
ತಿರುಗುವುದರೊಳಗೆ, ತನ್ನ ತೋಳುಗಳಿಂದ ಅವನನ್ನು ಮಂಜಣ್ಣ ಬಲವಾಗಿ ಬಳಸಿ
ಹಿಡಿದುಕೊಂಡ</br>
{{gap}}"ಬಿಡು ! ಬಿಡು ! ಸೋಮಿಯೋರೆ ! ಘಾತ ! ಘಾತ !"</br>
{{gap}}-ಶಂಕರಪ್ಪ ಕೂಗಿ ನುಡಿದ.</br>
{{gap}}ಹೌಹಾರಿದ ಅಪರಂಪಾರ, ದಂಡೆಯ ಮೇಲೆ ಬಿಟ್ಟು ಬಂದಿದ್ದ ಜೋಳಿಗೆಯತ್ತ
ಧಾವಿಸಿ, ಸೂರಪ್ಪನಾಯಕ ಕಾಣಿಕೆಯಾಗಿ ಕೊಟ್ಟಿದ್ದ ಬಂದೂಕಿಗೆ ಕೈಹಾಕಿದ.</br>
{{gap}}ಅಷ್ಟರಲ್ಲೇ ಆರು ಜನ ಮರ ಪೊದೆಗಳಿಂದ ಹೊರಕ್ಕೆ ಬಂದಿದ್ದರು. ಮೂವರು</br><noinclude></noinclude>
m4fm7p7x3r3fqhhzjk1chgsn5hcacyb
ಪುಟ:ಸ್ವಾಮಿ ಅಪರಂಪಾರ.pdf/೧೬೩
104
21313
321574
210432
2026-05-21T06:12:08Z
Pragathi. BH
7585
/* Validated */
321574
proofread-page
text/x-wiki
<noinclude><pagequality level="4" user="Pragathi. BH" /></noinclude>{{gap}}{{rh|center=ಸ್ವಾಮಿ ಅಪರ೦ಪಾರ|left=|right=೧೬೧}}
ಶಂಕರಪ್ಪನನ್ನು ಸುತ್ತುವರಿದರು. ಮೂವರು ಅಪರಂಪಾರನನ್ನು ಹಿಡಿದರು. ಸ್ವಾಮಿ
ಎತ್ತಿದ ಕೈಬಂದೂಕನ್ನು ಒಬ್ಬ ಕಸಿದುಕೊಂಡ.</br>
{{gap}}ಶಂಕರಪ್ಪ ಪ್ರತಿಭಟಿಸಿದ: ಅಪರಂಪಾರ ತೋಳು ಬೀಸಿದ.</br>
{{gap}}ಆ ಜನರ ಮುಖಂಡನಂತೆ ಕಂಡವನೊಬ್ಬ ಗದರಿ ನುಡಿದ:</br>
{{gap}}"ತೆಪ್ಪಗಿರಿ! ಗದ್ದಲ ಮಾಡಿದರೆ ಇಲ್ಲೇ ಸುಟ್ಟುಹಾಕತೇವೆ."</br>
{{gap}}"ಮೂರ್ಖ! ಸುಡುವವನು ಹರನೊಬ್ಬನೇ!"</br>
{{gap}}–ಎಂದು ಗರ್ಜಿಸಿದ,ಅಪರಂಪಾರಸ್ವಾಮಿ.</br>
{{gap}}ಯಾರೋ ಅವನ ಮುಖಕ್ಕೆ ಗುದ್ದಿದರು.</br>
{{gap}}ಆ ಜನ ಸನ್ನದ್ಧರಾಗಿ ಬಂದಿದ್ದರು. ಅವರಲ್ಲಿ ಹುರಿಮಾಡಿದ ಹಗ್ಗಗಳಿದ್ದುವು.
ಕಬ್ಬಿಣದ ಸಂಕೋಲೆಯಿತ್ತು.</br>
{{gap}}ಶಂಕರಪ್ಪನನ್ನೂ ಅಪರಂಪಾರನನ್ನೂ ಅವರು ನೆಲಕ್ಕೆ ಕೆಡವಿದರು. ಬಾಯಿಗಳಿಗೆ ಬಟ್ಟೆ ತುರುಕಿದರು.</br>
{{gap}}ಶಂಕರಪ್ಪನನ್ನು ಒಂದು ಮರಕ್ಕೆ ಬಿಗಿದು ಬಲವಾಗಿ ಕಟ್ಟಿದರು. ಅಪರಂಪಾರನ ಕೈ
ಗಳಿಗೂ ಕಾಲುಗಳಿಗನೂ ಸಂಕೋಲೆ ತೊಡಿಸಿದರು.</br>
{{gap}}ಕುದುರೆಗಳು ಅಸಹಾಯವಾಗಿ ಕೆನೆದಾಡಿದುವು. ಹಗ್ಗಹರಿಯಲೆತ್ನಿಸಿದುವು.</br>
{{gap}}ಮಂಜಣ್ಣ ಅವುಗಳನ್ನು ಸಂತೈಸಿದ.</br>
{{gap}}ಆ ಜನರು ಅಪರಂಪಾರನ ಬಳಿಗೆ ಕುದುರೆಗಳನ್ನು ಎಳೆದು ತಂದರು.</br>
{{gap}}"ಈ ಕುದುರೆ" ಎಂದ ಮಂಜಣ್ಣ, ಅಪರಂಪಾರ ಕುಳಿತು ಬಂದಿದ್ದರ ಕಡೆಗೆ ಬೊಟ್ಟು</br>ಮಾಡಿ.</br>
{{gap}}ಆ ಜನರ ನಾಯಕ ಅದನ್ನೇರಿದ. ಅವನ ಬೆನ್ನಬಳಿ ಬೋರಲಾಗಿ ಅಪರಂಪಾರನನ್ನು
ಕೆಡವಿದರು. ಹಗ್ಗಗಳಿಂದ ಬಿಗಿದು ಜೀನಿಗೆ ಕಟ್ಟಿದರು. ಮಂಜಣ್ಣ ತನ್ನ ಕುದುರೆಯನ್ನು
ಹತ್ತಿದ.</br>
{{gap}}"ನ್ಯಾಮಣ್ಣ, ನೀನು ಬಂದ್ದಿಡು. ಉಳಿದೋರೆಲ್ಲ ಹಿಂದಿನಿಂದ ಬನ್ನಿ, ಎಂದ ಮುಖ್ಯಸ್ಥ.</br>
{{gap}}ಆತ ಹೆಸರು ಹಿಡಿದು ಕರೆದ ಮನುಷ್ಯ, ಶಂಕರಪ್ಪನ ಕುದುರೆಯನ್ನೇರಿದ.</br>
{{gap}}ತಾನು ಕೂಗಿ ಕರೆಯಬೇಕು, 'ಸ್ವಾಮಿಯೋರೆ-ಸ್ವಾಮಿಯೋರೆ' ಎನ್ನಬೇಕು
ಎಂದು ಶಂಕರಪ್ಪ ಚಡಪಡಿಸಿದ. ಆದರೆ ಧ್ವನಿ ಹೊರಬೀಳಲಿಲ್ಲ.</br>
{{gap}}ಕುದುರೆಗಳು ವೇಗವಾಗಿ ಹೊರಟು ಕಣ್ಮರೆಯಾದುದನ್ನೂ ತಂಡದ ಉಳಿದ ನಾಲ್ವರು
ಅವುಗಳನ್ನು ಹಿಂಬಾಲಿಸಿ ನಡೆದುಹೋದುದನ್ನೂ ಶಂಕರಪ್ಪ ಅಸಹಾಯನಾಗಿ ಪಿಳಿಪಿಳಿ
ಕಣ್ಣು ಬಿಡುತ್ತ ನೋಡಿದ.</br>
{{rh|center=೫೮|left=|right=}}
{{gap}}ಕೈದಿಯನ್ನು ಕಂಡ ಲೀಹಾರ್ಡಿ ತನಗಾದ ಆನಂದವನ್ನು ಬಚ್ಚಿಡಲು ಶಕ್ತನಾಗಲಿಲ್ಲ.
ಅವನು ಉದ್ಗರಿಸಿದ:</br>
{{gap}}“ಹುರ್ರಾ !”</br>
{{gap}}ದೂತರ ಮುಖ್ಯಸ್ಧ ಆರಿಕೆಮಾಡಿದ :</br>{{gap}} 1 l<noinclude></noinclude>
7b5vcpku9iwzfm1ivz7tx9mdqaonleu
ಪುಟ:ಸ್ವಾಮಿ ಅಪರಂಪಾರ.pdf/೧೬೪
104
21314
321575
210476
2026-05-21T06:14:03Z
Pragathi. BH
7585
/* Validated */
321575
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರ೦ಪಾರ|left=೧೬೨|right=}}
{{gap}}"ಇವನು ಕೈದಿ, ಜೀವಂತ ಹಿಡಿದು ತಂದಿದೇವೆ. ಇದು ಇವನಲ್ಲಿದ್ದ ಕೈಬಂದೂಕು:
ಇಂಗ್ರೇಜಿ ಸರಕಾರಕ್ಕೆ ಸೇರಿದ್ದು. ಹುಜೂರ್ ವಿರುದ್ಧ ದಂಗೆಯೆದ್ದರೆ ಏನಾಗತದೇಂತ
ಲೋಕಕ್ಕೆ ತಿಳಿಯಲಿ ಅಂತ ಇವನ ಸಂಗಡಿಗನನ್ನು ಮರಕ್ಕೆ ಕಟ್ಟಿಹಾಕಿದೆವು-”</br>
{{gap}}ಮಧ್ಯೆ ಬಾಯಿಹಾಕಿ ಲೀಹಾರ್ಡಿಯೆಂದ:</br>
{{gap}}"ಅವನು ಯಾರು ? ಯಾಕೆ ಕೊಲ್ಲಲಿಲ್ಲ ?"</br>
{{gap}}"ಒಬ್ಬ ಸಾಮಾನ್ಯ ಸೈನಿಕ,ಅಂಗರಕ್ಷಕ. ಕೊಲ್ಲದೇ ಇದ್ದರೂ ಅವನು ಸತ್ತಹಾಗೆಯೇ.
ಹುಲಿ ಬಂದು ತಿನ್ನುತದೆ. ಇಲ್ಲವಾದರೆ ಉಪವಾಸವಿದ್ದು ಕಣ್ಣು ಮುಚ್ಚುತಾನೆ. ಗುಂಡು
ಹಾರಿಸಬಾರದು, ವಿದ್ರೋಹಿಗಳ ದಂಡಿಗೆ ಸುಳಿವು ಸಿಗಬಾರದು-ಎಂದಿದ್ದಿರಿ. ಹಾಗೆಯೇ</br>
ಮಾಡಿದೇವೆ. ಸದ್ದು ಸಪ್ಪಳವಿಲ್ಲದೆ ಕೆಲಸ ಮುಗಿಸಿದೇವೆ.”</br>
{{gap}}"ಭೇಷಕ್ ! ಭೇಷಕ್ ! ನಿನ್ನನ್ನು ಸುಭೇದಾರನಾಗಿ ಮಾಡುತೇವೆ.”</br>
{{gap}}"ಖಾವಂದರ ಚಿತ್ತ."</br>
{{gap}}ಕೈಕಾಲುಗಳಲ್ಲಿ ಸರಪಣಿಯನ್ನು ಹೊತ್ತು ಅಪರಂಪಾರ ನಿಶ್ಚಲನಾಗಿ ನಿಂತ. ಅದು
ಅರಮನೆಯ ಸಭಾಭವನ. ಆಂಗ್ಲ ಪ್ರಭೃತಿಗಳ ತೈಲಚಿತ್ರಗಳು ಗೋಡೆಗಳಿಂದ ಕೆಳಕ್ಕೆ
ನೋಡಿ, "ನಾವು ಅಜೇಯರು!” ಎಂದು ಸಾರುತ್ತಿದುವು, ಬಿಳಿಯ ಸೈನಿಕರಿಂದ, ಅವರ
ಕರಿಯ ಬೆಂಬಲಿಗರಿಂದ, ದ್ವಾರಗಳು ತುಂಬಿದ್ದುವು.</br>
{{gap}}"ಅಪರಂಪಾರರನ್ನು ಬಂಧಿಸಿದರಂತೆ! ಸ್ವಾಮಿ ಅಪರಂಪಾರರನ್ನು ಬಂಧಿಸಿದರಂತೆ!"</br>
{{gap}}ಸುದ್ದಿ ದಳುರಿಯಾಗಿ ಮಡಕೇರಿಯಲ್ಲಿ ಹಬ್ಬಿತ್ತು. ಜನ ಅರಮನೆಯ ಎದುರು
ಸಹಸ್ರಗಟ್ಟಲೆಯಲ್ಲಿ ನೆರೆಯತೊಡಗಿದ್ದರು. ಒಳಗಿನ ಬೇಗುದಿ ಅಸಹಾಯವಾಗಿ ಹೆಪ್ಪ
ಗಟ್ಟುತ್ತಲಿತ್ತು. ಜನರ ಮುಖಗಳು ನಿಸ್ತೇಜವಾಗಿದ್ದುವು.</br>
{{gap}}ಬಂಧನದಲ್ಲಿ ಅಪರಂಪಾರನ ಧೀಮಂತ ವ್ಯಕ್ತಿತ್ವ ಇಮ್ಮಡಿಸಿತ್ತು. ಮುಷ್ಟಿಯ ಆಘಾತ
ದಿಂದ ಬೀಗಿಕೊಂಡಿದ್ದ ತುಟಿಗಳು, 'ಈತ ಅದಮ್ಮ' ಎಂಬ ಭಾವನೆಗೆ ಪುಟಗೊಡುತ್ತಿದ್ದುವು.</br>
{{gap}}ಲೀಹಾರ್ಡಿ ಆಣಕಿಸಿದ:</br>
{{gap}}“ಏಯ್, ಫಕೀರ್ ! ಏನಾಯಿತು ನಿನ್ನ ಬಂಡಾಯ?"</br>
{{gap}}ಅಪರಂಪಾರ ಅವನನ್ನು ದಿಟ್ಟಿಸಿ ನೋಡಿದನೇ ಹೊರತು ಉತ್ತರವೀಯಲಿಲ್ಲ.</br>
{{gap}}"ಮಾತಾಡೋ ! ಶಿವದ್ಯಾನಮಾಡತಾ ಇದೀಯೇನು? ಮೈಸೂರಿನವನಿಗೆ ಸಿಂಹಾಸನ,
ಇಕ್ಕೇರಿಯವನಿಗೆ ಪಟ್ಟ, ಚಿಕವೀರರಾಜನಿಗೆ ಗಾದಿ__ಕೊಡಿಸಿದೆಯಾ?"</br>
{{gap}}ಅಪರಂಪಾರ ತುಟಿಗಳನ್ನು ತೆರೆದ:</br>
{{gap}}“ಈ ಪ್ರಶ್ನೆಗೆ ಈ ಮೂರು ದೇಶಗಳ ಪ್ರಜೆಗಳು ಉತ್ತರ ಕೊಡುತಾರೆ, ಪ್ರಶ್ನಿಸು
ವವನು ನೀನು ಯಾರು ? ನಿನ್ನ ಅಧಿಕಾರವನ್ನು ನಾನು ಮಾನ್ಯ ಮಾಡುವುದಿಲ್ಲ. ದಿವಾನ
ರನ್ನು ಕರೆಸು.”</br>
{{gap}}“ಎಲಾ! ಏಕವಚನ ! ನೀನು ರಾಜಗುರು ಅಲ್ಲವಾ? ದಿವಾನರನ್ನು ಕರೆಸಬೇಕೆ?
ಅವರು ನಮ್ಮ ತುಕಡಿ ಜತೆಗೆ ಹಾರಂಗಿಗೆ ಹೋಗಿದಾರೆ! ತಿಳೀತೇನು ? ನಿನ್ನ ಭಕ್ತಾದಿ
ಗಳನ್ನು ಹಿಡಿಯೋದಕ್ಕೆ !”</br>
{{gap}}"ಹುಲುಮಾನವ! ಬಹಳ ಹಾರಾಡಬೇಡ! ಮಹಾದೇವನಿಚ್ಛೆ ಇದ್ದಂತಾಗದೆ!"</br>
{{gap}}ಅಪರಂಪಾರನ ಎಡಬಲಗಳಲ್ಲಿದ್ದ ಸಿಪಾಯರು ಗದರಿದರು :</br><noinclude></noinclude>
9gyedhh2o12w779tpg4dsk4be9sdw1f
ಪುಟ:ಸ್ವಾಮಿ ಅಪರಂಪಾರ.pdf/೧೬೫
104
21315
321576
210657
2026-05-21T07:23:35Z
Pragathi. BH
7585
/* Validated */
321576
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ|right=೧೬೩|left=}}
{{gap}}“ಬಾಯ್ಯುಚ್ಚು !”</br>{{gap}} ಅಪರಂಪಾರನೆಂದ:</br>{{gap}}“ಶಿವ-ಶಿವ-ಶಿವ...”</br> {{gap}}ಲೀಹಾರ್ಡಿ ಆಜ್ಞಾಪಿಸಿದ :</br>
{{gap}}“ಇವನನ್ನು ಕೋಟೆಮನೆಯೊಳಗಿಡಿ ! ಸಂಕೋಲೆ ಬಿಚ್ಚಬಾರದು ! ಮಾಯವಾದಾನು ! ಹುಷಾರ್ ! ಅದೇನು ಗದ್ದಲ ಹೊರಗೆ ? ಆ ಕುರಿಗಳನ್ನ ಚದರಿಸಿ. ತಂಟೆಮಾಡಿದವರನ್ನು</br> ಹಿಡಿದುಹಾಕಿ !”</br>
{{gap}}ಮದಗಜದಂತೆ ನಡೆಯುತ್ತಿದ್ದ ಅಪರಂಪಾರನನ್ನು ಅರಮನೆಯ ಹೆಬ್ಬಾಗಿಲಿನಿಂದ ಹೊರತಂದರು.</br>
{{gap}}ಅರ್ಥವಿಲ್ಲದ ಆರ್ತ ಪದವೊಂದು ಜನಜಂಗುಳಿಯಿಂದ ಹೊರಟಿತು. ಅವರ ನಿಟ್ಟುಸಿರುc ಭೋರೆಂದಿತು.</br>
{{gap}}ಅಪರಂಪಾರನನ್ನು ಕೋಟೆ ಮನೆಯ ಕಡೆಗೆ ಒಯ್ದರು. ಸ್ವಾತಂತ್ರ್ಯ ಹೋರಾಟದ</br> ಶಿಲ್ಪಿಯನ್ನು ತನ್ನೊಳಗೆ ಬಚ್ಚಿಟ್ಟು ಕಾರಾಗೃಹದ ಬಾಗಿಲು ಮುಚ್ಚಿಕೊಂಡಿತು...</br>{{gap}} ... ಕೋಟೆಮನೆ. ನೀರು ಆಹಾರ ಇಲ್ಲದೆ ನರಳಿದ ನೆಲ.</br>{{gap}} ಅಲ್ಲಿ ಅಂಗಾತ ಮಲಗಿದ್ದ ಅಪರಂಪಾರನನ್ನು ಆ ನೆನಪು ಕಾಡಿತು.</br>
{{gap}}ಯಾವ ಯುಗದ ಮಾತು ಅದು ?...ಆಗ ತಾನು ಜೀವದಾನ ಪಡೆಯದೆ ಇರುತ್ತಿದ್ದರೇ</br> ಒಳಿತಾಗುತ್ತಿತ್ತೇನೋ ?</br>
{{gap}}ಒಳಿತಾಗುತ್ತಿತ್ತೆ ? ಆಗ ತಾನು ಹುಳುವಾಗಿ ಸಾಯುತ್ತಿದ್ದೆ.</br>{{gap}} ಈಗ ? ಸತ್ತರೂ ಸರಿಯೆ. ತಾನು ಹುಲಿ__ಹುಲಿ.</br>
{{center|೫೯}}
{{gap}}ಅಪರಂಪಾರ ಸಂಘಟಿಸಿದ್ದ ಸ್ವಾತಂತ್ರ್ಯ ಸಂಗ್ರಾಮ ವಿಫಲವಾಯಿತು.</br> {{gap}}ಗೌಡಹಳ್ಳಿಯ ಶಿಬಿರಕ್ಕೆ ಸ್ವಾಮಿ ಬಾರದುದನ್ನು ಕಂಡು ಅಪ್ಪಯ್ಯ ಭಟರನ್ನು</br> ಪುಷ್ಕರಿಣಿಯ ಕಡೆಗೆ ಹಟ್ಟಿದ. ಅವರು ಕಟ್ಟುಗಳನ್ನು ಬಿಚ್ಚಿ, ಶಂಕರಪ್ಪನನ್ನು ಕೆಳಗಿಳಿಸಿ,</br> ಶೈತ್ಯೋಪಚಾರ ಮಾಡಿ ಶಿಬಿರಕ್ಕೆ ಕರೆತಂದರು.</br>
{{gap}}ಕೆಟ್ಟ ಸುದ್ದಿ ಎಷ್ಟು ಮುಚ್ಚಿಟ್ಟರೂ ಅಂಟುಜಾಡ್ಯದಂತೆ ಹಬ್ಬಿತು. ವೀರರ ಎದೆ ಕಲ್ಲಾಯಿತು ; ಅಳ್ಳೆದೆಯವರು ಅದುರಿದರು.</br>
{{gap}}ಅಪರಂಪಾರನನ್ನು ಹಿಡಿದೊಯ್ದವರು ಕುಂಪಣಿ ಸರಕಾರದ ಚಾಕರರೇ; ಹಿಂದಿನ </br> ರಾತ್ರೆ ತಾನು ಮಾತನಾಡಿಸಿದ ಮಂಜಣ್ಣ ಅವರಲ್ಲೊಬ್ಬ ; ಹಿಂದುಮುಂದು ನೋಡದೆ</br> ಸಿಂಹದ ಬಾಯಿಗೆ ಸ್ವಾಮಿಯವರನ್ನು ತಾನು ಒಡ್ಡಿದಂತಾಯಿತು ಎಂದು ಅಪ್ಪಯ್ಯ</br> ಪರಿತಪಿಸಿದ. ತನ್ನ ದುಃಖವನ್ನು ಹೊರಗೆ ತೋರ್ಪಡಿಸದೆ, ಮಲ್ಲಪ್ಪಗೌಡನ ಹಿರಿತನದಲ್ಲಿ</br> ನಾಲ್ವರು ಅಶ್ವಾರೋಹಿಗಳನ್ನು ಮಡಕೇರಿಯ ಕಡೆಗೆ ಆತ ಕಳುಹಿದ.</br>
{{gap}}ಅವನೆಂದ:</br> {{gap}}“ಬಿರುಗಾಳಿಯಂತೆ ಹೋಗಿ; ಆ ಧೂರ್ತರನ್ನು ತಡೆದು ನಿಲ್ಲಿಸಿ, ಸ್ವಾಮಿಯವರನ್ನ</br> ಬಿಡಿಸಿಕೊಳ್ಳೋಕಾಗತದೊ ನೋಡಿ.”</br><noinclude></noinclude>
0hymlmmilubnconmrymoray6doir3mn
321577
321576
2026-05-21T07:24:54Z
Pragathi. BH
7585
321577
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ|right=೧೬೩|left=}}
{{gap}}“ಬಾಯ್ಯುಚ್ಚು !”</br>{{gap}} ಅಪರಂಪಾರನೆಂದ:</br>{{gap}}“ಶಿವ-ಶಿವ-ಶಿವ...”</br> {{gap}}ಲೀಹಾರ್ಡಿ ಆಜ್ಞಾಪಿಸಿದ :</br>
{{gap}}“ಇವನನ್ನು ಕೋಟೆಮನೆಯೊಳಗಿಡಿ ! ಸಂಕೋಲೆ ಬಿಚ್ಚಬಾರದು ! ಮಾಯವಾದಾನು ! ಹುಷಾರ್ ! ಅದೇನು ಗದ್ದಲ ಹೊರಗೆ ? ಆ ಕುರಿಗಳನ್ನ ಚದರಿಸಿ. ತಂಟೆಮಾಡಿದವರನ್ನು</br> ಹಿಡಿದುಹಾಕಿ !”</br>
{{gap}}ಮದಗಜದಂತೆ ನಡೆಯುತ್ತಿದ್ದ ಅಪರಂಪಾರನನ್ನು ಅರಮನೆಯ ಹೆಬ್ಬಾಗಿಲಿನಿಂದ ಹೊರತಂದರು.</br>
{{gap}}ಅರ್ಥವಿಲ್ಲದ ಆರ್ತ ಪದವೊಂದು ಜನಜಂಗುಳಿಯಿಂದ ಹೊರಟಿತು. ಅವರ ನಿಟ್ಟುಸಿರುc ಭೋರೆಂದಿತು.</br>
{{gap}}ಅಪರಂಪಾರನನ್ನು ಕೋಟೆ ಮನೆಯ ಕಡೆಗೆ ಒಯ್ದರು. ಸ್ವಾತಂತ್ರ್ಯ ಹೋರಾಟದ ಶಿಲ್ಪಿಯನ್ನು ತನ್ನೊಳಗೆ ಬಚ್ಚಿಟ್ಟು ಕಾರಾಗೃಹದ ಬಾಗಿಲು ಮುಚ್ಚಿಕೊಂಡಿತು...</br>{{gap}} ... ಕೋಟೆಮನೆ. ನೀರು ಆಹಾರ ಇಲ್ಲದೆ ನರಳಿದ ನೆಲ.</br>{{gap}} ಅಲ್ಲಿ ಅಂಗಾತ ಮಲಗಿದ್ದ ಅಪರಂಪಾರನನ್ನು ಆ ನೆನಪು ಕಾಡಿತು.</br>
{{gap}}ಯಾವ ಯುಗದ ಮಾತು ಅದು ?...ಆಗ ತಾನು ಜೀವದಾನ ಪಡೆಯದೆ ಇರುತ್ತಿದ್ದರೇ ಒಳಿತಾಗುತ್ತಿತ್ತೇನೋ ?</br>
{{gap}}ಒಳಿತಾಗುತ್ತಿತ್ತೆ ? ಆಗ ತಾನು ಹುಳುವಾಗಿ ಸಾಯುತ್ತಿದ್ದೆ.</br>{{gap}} ಈಗ ? ಸತ್ತರೂ ಸರಿಯೆ. ತಾನು ಹುಲಿ__ಹುಲಿ.</br>
{{center|೫೯}}
{{gap}}ಅಪರಂಪಾರ ಸಂಘಟಿಸಿದ್ದ ಸ್ವಾತಂತ್ರ್ಯ ಸಂಗ್ರಾಮ ವಿಫಲವಾಯಿತು.</br> {{gap}}ಗೌಡಹಳ್ಳಿಯ ಶಿಬಿರಕ್ಕೆ ಸ್ವಾಮಿ ಬಾರದುದನ್ನು ಕಂಡು ಅಪ್ಪಯ್ಯ ಭಟರನ್ನು ಪುಷ್ಕರಿಣಿಯ ಕಡೆಗೆ ಹಟ್ಟಿದ. ಅವರು ಕಟ್ಟುಗಳನ್ನು ಬಿಚ್ಚಿ, ಶಂಕರಪ್ಪನನ್ನು ಕೆಳಗಿಳಿಸಿ, ಶೈತ್ಯೋಪಚಾರ ಮಾಡಿ ಶಿಬಿರಕ್ಕೆ ಕರೆತಂದರು.</br>
{{gap}}ಕೆಟ್ಟ ಸುದ್ದಿ ಎಷ್ಟು ಮುಚ್ಚಿಟ್ಟರೂ ಅಂಟುಜಾಡ್ಯದಂತೆ ಹಬ್ಬಿತು. ವೀರರ ಎದೆ ಕಲ್ಲಾಯಿತು ; ಅಳ್ಳೆದೆಯವರು ಅದುರಿದರು.</br>
{{gap}}ಅಪರಂಪಾರನನ್ನು ಹಿಡಿದೊಯ್ದವರು ಕುಂಪಣಿ ಸರಕಾರದ ಚಾಕರರೇ; ಹಿಂದಿನ ರಾತ್ರೆ ತಾನು ಮಾತನಾಡಿಸಿದ ಮಂಜಣ್ಣ ಅವರಲ್ಲೊಬ್ಬ ; ಹಿಂದುಮುಂದು ನೋಡದೆ</br> ಸಿಂಹದ ಬಾಯಿಗೆ ಸ್ವಾಮಿಯವರನ್ನು ತಾನು ಒಡ್ಡಿದಂತಾಯಿತು ಎಂದು ಅಪ್ಪಯ್ಯ ಪರಿತಪಿಸಿದ. ತನ್ನ ದುಃಖವನ್ನು ಹೊರಗೆ ತೋರ್ಪಡಿಸದೆ, ಮಲ್ಲಪ್ಪಗೌಡನ ಹಿರಿತನದಲ್ಲಿ ನಾಲ್ವರು ಅಶ್ವಾರೋಹಿಗಳನ್ನು ಮಡಕೇರಿಯ ಕಡೆಗೆ ಆತ ಕಳುಹಿದ.</br>
{{gap}}ಅವನೆಂದ:</br> {{gap}}“ಬಿರುಗಾಳಿಯಂತೆ ಹೋಗಿ; ಆ ಧೂರ್ತರನ್ನು ತಡೆದು ನಿಲ್ಲಿಸಿ, ಸ್ವಾಮಿಯವರನ್ನ ಬಿಡಿಸಿಕೊಳ್ಳೋಕಾಗತದೊ ನೋಡಿ.”</br><noinclude></noinclude>
6z23yldi6hn7l5llpa3a3yk9xp0srm4
ಪುಟ:ಸ್ವಾಮಿ ಅಪರಂಪಾರ.pdf/೧೬೬
104
21316
321567
206479
2026-05-21T05:32:46Z
Pragathi. BH
7585
/* Validated */
321567
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ |right=|left=೧೬೪}}
{{gap}}ಕುದುರೆಗಳು ಬಾಣಗಳಾದುವು. ಆದರೆ ಮುಂದಿದ್ದವರ ಬೆನ್ನು ಹಿಡಿಯಲು ಶಕ್ತ</br> ವಾಗಲಿಲ್ಲ.</br>
{{gap}}ದಂಡು ಹಾರಂಗಿಗೆ ಹೋಯಿತು. ಆದರೆ ವೆಂಕಟಪ್ಪನ ದಳವನ್ನು ಸೇರುವುದಕ್ಕೆ</br> ಮುನ್ನವೇ ಆಂಗ್ಲ ತುಕ್ಕಡಿಯನ್ನು ಕಂಡಿತು.</br>{{gap}}ನರಭಕ್ಷಕರ ತೋಪುಗಳು ಗರ್ಜಿಸಿದುವು. ಓಡಿದವರು ಅಡವಿಪಾಲಾದರು. ಹೋರಾಡಿ</br> ದವರು ಮಾಡಿದರು, ಬಂದಿಗಳಾದರು.</br>
{{gap}}ಆಂಗ್ಲ ತುಕ್ಕಡಿಯ ಇನ್ನೊಂದು ಭಾಗವಾಗಲೇ ವೆಂಕಟಪ್ಪನ ದಳವನ್ನು ಸುತ್ತು</br> ವರಿದಿತ್ತು.
{{center|'''{{gap}}* {{gap}}*{{gap}} *'''}}
{{gap}}ಹಿಂದೂಸ್ಥಾನದ ಗವರ್ನರ್ ಜನರಲ್ ಸಮಾಧಾನದ ನಿಟ್ಟುಸಿರನ್ನು ಬಿಟ್ಟ.</br> {{gap}}“ಅಪರಂಪಾರನನ್ನು ಬೆಂಗಳೂರಿಗೊಯ್ದು ಸೆರೆಯಲ್ಲಿಡಿ !”</br>{{gap}}__ಎಂದು ಆಜ್ಞೆ ಕಳುಹಿದ.</br>
{{center|{{gap}}* {{gap}}*{{gap}} *}}
{{gap}}ಅಶುಭ ವಾರ್ತೆ ಮೈಸೂರನ್ನು ತಲಪಿದಾಗ ಸ್ಟೋಕ್ಸ್ ಅಂದ :</br>{{gap}} “ಲೀಹಾರ್ಡಿ ಪರವಾಗಿಲ್ಲ.”</br>{{gap}} ಕೃಷ್ಣರಾಜ ನುಡಿದ :</br>{{gap}} “ಹೀಗಾಗದೇಂತ ನಮಗೆ ಮೊದಲೇ ಗೊತ್ತಿತ್ತು.”</br>{{gap}} ಬಸಪ್ಪಾಜಿಯೆಂದ :</br>{{gap}}“ಹೀಗೂ ಆಯ್ಕೆ? ಒಳ್ಳೆಯ ಮನುಷ್ಯರಿಗೆ ಯಾವಾಗಲೂ ಇಂಥದೇ ಗತಿಯೆ ?”</br>
{{center|{{gap}}* {{gap}}*{{gap}} *}}
{{gap}}ಗುರುಮೂರ್ತಪ್ಪನಿಂದ ಸುದ್ದಿ ತಿಳಿದ ಸೂರಪ್ಪನಾಯಕ ಮರುಗಿದ.</br>{{gap}} ಆತನೆಂದ:</br>{{gap}} “ಆದದ್ದಾಯಿತು. ಆದರೆ ಇದೇ ಕಥೆಯ ಕೊನೆ ಆಗಬಾರದು. ನಾನಿನ್ನೂ ಬದುಕಿದೇನೆ.”</br>
{{center|{{gap}}* {{gap}}*{{gap}} *}}
{{gap}}ವೇಲೂರಿನಲ್ಲಿ ಚಿಕವೀರರಾಜನ ಪರಿವಾರ ಕಂಬನಿ ಮಿಡಿಯಿತು.</br>{{gap}}ಅರಸನೊಡನೆ ರಾಣಿ ಗೌರಮ್ಮನೆಂದಳು :</br>{{gap}} “ನಾವು ನಿರ್ಭಾಗ್ಯರು.” </br>{{gap}}ವೇಲೂರಿನ ಕಲೆಕ್ಟರ್ ಚಿಕವೀರರಾಜನ ಭೇಟಿಗೆ ಬಂದು ನುಡಿದ :</br>{{gap}}
“ನೀವು ಕಂಪೆನಿ ಸರಕಾರದ ಅತಿಥಿಗಳಾಗಿ ಕಲಕತ್ತೆಗೋ ಕಾಶಿಗೂ ತೆರಳಿ ಮುಂದೆ</br>ಅಲ್ಲಿಯೇ ವಾಸಮಾಡಬೇಕು ಅಂತ ಗವರ್ನರ್ ಜನರಲರು ಅಪೇಕ್ಷೆಪಡುತಾರೆ.”</br>
{{center|{{gap}}* {{gap}}*{{gap}} *}}
{{gap}}ಅಪ್ಪಂಗಳದಲ್ಲಿ ಗಂಗಮ್ಮ ತಲೆ ಕೆದರಿಕೊಂಡು ಅತ್ತಳು; ನಕ್ಕಳು.</br>{{gap}} ತನ್ನಷ್ಟಕ್ಕೆ ಅವಳು ಗಟ್ಟಿಯಾಗಿ ಅಂದುಕೊಂಡಳು :</br>{{gap}} “ಹುಚ್ಚುಂಡೆ, ಹುಚ್ಚುಂಡೆ, ಇನ್ನೂ ಏನಾದರೂ ಉಳಿದೆದೆಯೇನೆ ?”</br><noinclude></noinclude>
46wnmv8xeojlc9gsvrdtii1xcto97y1
ಪುಟ:ಸ್ವಾಮಿ ಅಪರಂಪಾರ.pdf/೧೬೭
104
21317
321568
206480
2026-05-21T05:35:35Z
Pragathi. BH
7585
/* Validated */
321568
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರಂಪಾರ
{{gap}}ರಾಜಮ್ಮಾಜಿ ದೀರ್ಘವಾಗಿ ನಿಟ್ಟುಸಿರುಬಿಟ್ಟಳು. ಬಿಗಿದ ತುಟಿಗಳನ್ನು ಅವಳು ಎರಡು
ಮಾಡಲಿಲ್ಲ.
* * *
{{gap}}ನಂಜರಾಜಪಟ್ಟಣದಲ್ಲಿ, ಸುದ್ದಿ ಮುಟ್ಟಿದ ದಿನ ಪೂಜಾವಿಧಿಗಳನ್ನು ಪಂಚಾಕ್ಷರಿ ಮರೆತ.
ಕಳೆದ ಕೆಲ ದಿವಸಗಳಿಂದ ಶಿವಾಚಾರ್ಯರ ದೇಹಸ್ಥಿತಿ ಉಲ್ಬಣಿಸಿತು.
ಹೇಳಲೋ ಬೇಡವೋ ಎಂದು ಬಹಳ ಹೊತು ಅನಿಶ್ಚಿತತೆಯಲ್ಲಿ ಕಳೆದು ಕಡೆಗೆ
ಪಂಚಾಕ್ಷರಿಯೆಂದ:
{{gap}}"ಗುರುಗಳೇ, ಮಡಕೇರಿಯಿಂದ ಅಶುಭವಾರ್ತೆ ಬಂದಿದೆ."
ಶಿವಾಚಾರ್ಯರು ಮೌನವಾಗಿ ಶೂನ್ಯದತ್ತ ಬಿರುನೋಟ ಬೀರಿ, ಬಳಿಕ ಮೆಲ್ಲನೆ ತುಟಿ
ತೆರೆದು, "ನಾನು ಬಲ್ಲೆ" ಅಂದರು.
{{gap}}ಅದೇ ಅವರಾಡಿದ ಕೊನೆಯ ಮಾತಾಯಿತು.
* * *
ಆ ಘಟನೆ ನಡೆದುದು ಕ್ರಿಸ್ತಶಕ ಸಾವಿರದ ಎಂಟುನೂರ ಮೂವತ್ತೇಳರಲ್ಲಿ. ಅಂದರೆ
ಶಾಲಿವಾಹನ ಶಕ ಸಾವಿರದ ಏಳನೂರ ಐವತ್ತೊಂಬತ್ತು_ಹೇವಳಂಬಿ ಸಂವತ್ಸರ.
ಬಂಡಾಯದ ಪ್ರಮುಖರಿಗೆಲ್ಲ ಆಜೀವ ಕಾರಾಗೃಹವಾಸ ವಿಧಿಸಲ್ಪಟ್ಟಿತು. ಕೆಲವರಿಗೆ
ನಾಲ್ಕು, ಆರು, ಹತು ವರ್ಷಗಳ ಶಿಕ್ಷೆಯಾಯಿತು. ಬೇರೆ ಕೆಲವರು ತಪ್ಪಿಸಿಕೊಂಡರು.
ಅಪರಂಪಾರಸ್ವಾಮಿಯನ್ನು ಬೆಂಗಳೂರಿಗೆ ಒಯ್ದರು, ಎತ್ತಿನ ಬಂಡಿಯಲ್ಲಿ ರಾಜಕೈದಿ.
ಸುತ್ತಲೂ ಆಂಗ್ಲ ಕುದುರೆ ಸವಾರರು. ಅದರ ಹಿಂದೆ ಹಾಗೂ ಮುಂದೆ ಕರಿಯ
ಸಿಪಾಯರು. ಮಡಕೇರಿಯ ಜನರಿಗೆ ಸುಳಿವು ಸಿಗಬಾರದೆಂದು ಇವರ ಪಯಣ ಇರುಳಲ್ಲಿ
ಹೊರಟಿತು.
{{gap}}ಪೆರಿಯಾಪಟ್ಟಣದ ಹತ್ತಿರ ಇವರು ತಂಗಿದಾಗ, ಗಾಡಿಯ ತಟಿಕೆಯ ಸಂದಿಯೊಳಗಿಂದ
{{gap}}ಯಾರೋ ಆಗಾಗ್ಗೆ ಇಣಿಕಿ ನೋಡುತ್ತಿದ್ದಂತೆ ಅಪರಂಪಾರಸ್ವಾಮಿಗೆ ಭಾಸವಾಯಿತು.
{{gap}}ಆತ ತಟಿಕೆಯ ಬದಿಗೆ ಸರಿದು, ತೂತಿನಿಂದ ಹೊರ ನೋಡಿದ. ಎಲ್ಲರೂ ಸಮವಸ್ತ್ಯ
ಧರಿಸಿದ್ದ ಸಿಪಾಯರೇ.
ಮತ್ತೊಮ್ಮೆ ಒಂದು ಕಣ್ಣು ತಟಿಕೆಯ ಬಳಿ ಬಂತು.
ಸ್ವರವೊಂದು ಕೇಳಿಸಿತು:
{{gap}}"ಮಲ್ಲಪ್ಪಣ್ಣನೂ ನಾನೂ ಜತೆಯಾಗೇ ಅದೇವೆ."
ಕಣ್ಣು ದೂರ ಸರಿಯಿತು. ಅಪರಂಪಾರ ದಿಟ್ಟಿಸಿ ನೋಡಿದ, ಕುಂಪಣಿ ಸಿಪಾಯರ
ಉಡುಪೇ.
{{gap}}"ಶಂಕರಪ್ಪನದಲ್ಲವೆ ಸ್ವರ?” ಎಂದುಕೊಂಡ, ಅಪರಂಪಾರಸ್ವಾಮಿ.
{{gap}}ಆತ ಅಂತರ್ಮುಖಿಯಾಗಿ ಶಿವಧ್ಯಾನದಲ್ಲಿ ನಿರತನಾದ.
೬೦
{{gap}}ಹೇವಿಳಂಬಿ, ದಕ್ಷಿಣ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಬಲಗೊಂಡುದನ್ನು ಕಂಡ ಸಂವತ್ಸರ.
{{gap}}ಕೊಡಗು ಮೈಸೂರುಗಳಿಂದ ಪರಕೀಯರನ್ನು ಹೊಡೆದೋಡಿಸಲು ಅಪರಂಪಾರಸಾಮಿ<noinclude></noinclude>
o4jvxg66a6mrt3ttkji6yqbl418bwhm
321569
321568
2026-05-21T05:39:55Z
Pragathi. BH
7585
321569
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರಂಪಾರ
{{gap}}ರಾಜಮ್ಮಾಜಿ ದೀರ್ಘವಾಗಿ ನಿಟ್ಟುಸಿರುಬಿಟ್ಟಳು. ಬಿಗಿದ ತುಟಿಗಳನ್ನು ಅವಳು ಎರಡು
ಮಾಡಲಿಲ್ಲ.
* * *
{{gap}}ನಂಜರಾಜಪಟ್ಟಣದಲ್ಲಿ, ಸುದ್ದಿ ಮುಟ್ಟಿದ ದಿನ ಪೂಜಾವಿಧಿಗಳನ್ನು ಪಂಚಾಕ್ಷರಿ ಮರೆತ.<br />
{{gap}}ಕಳೆದ ಕೆಲ ದಿವಸಗಳಿಂದ ಶಿವಾಚಾರ್ಯರ ದೇಹಸ್ಥಿತಿ ಉಲ್ಬಣಿಸಿತು.<br />
{{gap}}ಹೇಳಲೋ ಬೇಡವೋ ಎಂದು ಬಹಳ ಹೊತು ಅನಿಶ್ಚಿತತೆಯಲ್ಲಿ ಕಳೆದು ಕಡೆಗೆ
ಪಂಚಾಕ್ಷರಿಯೆಂದ:<br />
{{gap}}"ಗುರುಗಳೇ, ಮಡಕೇರಿಯಿಂದ ಅಶುಭವಾರ್ತೆ ಬಂದಿದೆ."<br />
{{gap}}ಶಿವಾಚಾರ್ಯರು ಮೌನವಾಗಿ ಶೂನ್ಯದತ್ತ ಬಿರುನೋಟ ಬೀರಿ, ಬಳಿಕ ಮೆಲ್ಲನೆ ತುಟಿ
ತೆರೆದು, "ನಾನು ಬಲ್ಲೆ" ಅಂದರು.<br />
{{gap}}ಅದೇ ಅವರಾಡಿದ ಕೊನೆಯ ಮಾತಾಯಿತು.<br />
{{center| * * *}}
{{gap}}ಆ ಘಟನೆ ನಡೆದುದು ಕ್ರಿಸ್ತಶಕ ಸಾವಿರದ ಎಂಟುನೂರ ಮೂವತ್ತೇಳರಲ್ಲಿ. ಅಂದರೆ
ಶಾಲಿವಾಹನ ಶಕ ಸಾವಿರದ ಏಳನೂರ ಐವತ್ತೊಂಬತ್ತು_ಹೇವಳಂಬಿ ಸಂವತ್ಸರ.<br />
{{gap}}ಬಂಡಾಯದ ಪ್ರಮುಖರಿಗೆಲ್ಲ ಆಜೀವ ಕಾರಾಗೃಹವಾಸ ವಿಧಿಸಲ್ಪಟ್ಟಿತು. ಕೆಲವರಿಗೆ
ನಾಲ್ಕು, ಆರು, ಹತು ವರ್ಷಗಳ ಶಿಕ್ಷೆಯಾಯಿತು. ಬೇರೆ ಕೆಲವರು ತಪ್ಪಿಸಿಕೊಂಡರು.<br />
{{gap}}ಅಪರಂಪಾರಸ್ವಾಮಿಯನ್ನು ಬೆಂಗಳೂರಿಗೆ ಒಯ್ದರು, ಎತ್ತಿನ ಬಂಡಿಯಲ್ಲಿ ರಾಜಕೈದಿ.
ಸುತ್ತಲೂ ಆಂಗ್ಲ ಕುದುರೆ ಸವಾರರು. ಅದರ ಹಿಂದೆ ಹಾಗೂ ಮುಂದೆ ಕರಿಯ
ಸಿಪಾಯರು. ಮಡಕೇರಿಯ ಜನರಿಗೆ ಸುಳಿವು ಸಿಗಬಾರದೆಂದು ಇವರ ಪಯಣ ಇರುಳಲ್ಲಿ
ಹೊರಟಿತು.<br />
{{gap}}ಪೆರಿಯಾಪಟ್ಟಣದ ಹತ್ತಿರ ಇವರು ತಂಗಿದಾಗ, ಗಾಡಿಯ ತಟಿಕೆಯ ಸಂದಿಯೊಳಗಿಂದ<br />
{{gap}}ಯಾರೋ ಆಗಾಗ್ಗೆ ಇಣಿಕಿ ನೋಡುತ್ತಿದ್ದಂತೆ ಅಪರಂಪಾರಸ್ವಾಮಿಗೆ ಭಾಸವಾಯಿತು.
{{gap}}ಆತ ತಟಿಕೆಯ ಬದಿಗೆ ಸರಿದು, ತೂತಿನಿಂದ ಹೊರ ನೋಡಿದ. ಎಲ್ಲರೂ ಸಮವಸ್ತ್ಯ
ಧರಿಸಿದ್ದ ಸಿಪಾಯರೇ.<br />
{{gap}}ಮತ್ತೊಮ್ಮೆ ಒಂದು ಕಣ್ಣು ತಟಿಕೆಯ ಬಳಿ ಬಂತು.<br />
{{gap}}ಸ್ವರವೊಂದು ಕೇಳಿಸಿತು:<br />
{{gap}}"ಮಲ್ಲಪ್ಪಣ್ಣನೂ ನಾನೂ ಜತೆಯಾಗೇ ಅದೇವೆ."<br />
{{gap}}ಕಣ್ಣು ದೂರ ಸರಿಯಿತು. ಅಪರಂಪಾರ ದಿಟ್ಟಿಸಿ ನೋಡಿದ, ಕುಂಪಣಿ ಸಿಪಾಯರ
ಉಡುಪೇ.<br />
{{gap}}"ಶಂಕರಪ್ಪನದಲ್ಲವೆ ಸ್ವರ?” ಎಂದುಕೊಂಡ, ಅಪರಂಪಾರಸ್ವಾಮಿ.
{{gap}}ಆತ ಅಂತರ್ಮುಖಿಯಾಗಿ ಶಿವಧ್ಯಾನದಲ್ಲಿ ನಿರತನಾದ.<br />
{{center|೬೦}}
{{gap}}ಹೇವಿಳಂಬಿ, ದಕ್ಷಿಣ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಬಲಗೊಂಡುದನ್ನು ಕಂಡ ಸಂವತ್ಸರ.<br />
{{gap}}ಕೊಡಗು ಮೈಸೂರುಗಳಿಂದ ಪರಕೀಯರನ್ನು ಹೊಡೆದೋಡಿಸಲು ಅಪರಂಪಾರಸಾಮಿ<noinclude></noinclude>
fkflx51q70cr2iqtwj475lknj52bu7j
ಪುಟ:ಸ್ವಾಮಿ ಅಪರಂಪಾರ.pdf/೧೬೮
104
21318
321570
206481
2026-05-21T05:44:07Z
Pragathi. BH
7585
/* Validated */
321570
proofread-page
text/x-wiki
<noinclude><pagequality level="4" user="Pragathi. BH" /></noinclude> ೧೬೬ ಸ್ವಾಮಿ ಅಪರಂಪಾರ
ನಡೆಸಿದ ಯತ್ನ ವಿಫಲವಾಯಿತಲ್ಲ? ಕನ್ನಡ ಜಿಲ್ಲೆಯನ್ನು ಆಂಗ್ಲರ ಹಿಡಿತದಿಂದ ವಿಮುಕ್ತ
ಗೊಳಿಸಲು ಪುಟ್ಟಬಸವ ಮತ್ತು ಸಂಗಡಿಗರು ನಡೆಸಿದ ಪ್ರಯತ್ನಕ್ಕೂ ಅದೇ ಗತಿ
ಯಾಯಿತು.
{{gap}}ಪುಟ್ಟಬಸವ ಕಲ್ಯಾಣಸ್ವಮಿ ಎಂಬ ಹೆಸರನ್ನು ಹೊತ್ತು, ಸಂಪಾಜೆ ಘಟ್ಟದ ಮಾರ್ಗ
ವಾಗಿ ಸುಳ್ಳಕ್ಕಿಳಿದ. ಅವನ ಸುತ್ತಲೂ ಜಾತಿ ಮತಗಳ ವ್ಯತ್ಯಾಸವಿಲ್ಲದೆ ಜನ ನೆರೆದರು.
ಶಸ್ತ್ರಾಸ್ತ್ರಗಳಿಗಿಂತಲೂ ಅದಮ್ಯ ಉತ್ಸಾಹವೇ ಆ ಪಡೆಯ ಮೂಲನಿಧಿಯಾಗಿತು.
ಬ್ರಿಟಿಷರೂ ಅವರ ಹಸ್ತಕರೂ "ಕಲ್ಯಾಣಪ್ಪನ ದಂಡು ಬಂತು" ಎಂದು ಕಕಾವಿಕ್ಕಿ
ಯಾದರು. ಬೆಳ್ಳಾರೆ, ಪುತ್ತೂರು, ಬಂಟವಾಳಗಳ ದಾರಿಯಾಗಿ ಈ ದಂಡು ಮಂಗಳೂರನ್ನು
ತಲಪಿತು. ಅದನ್ನು ವಶಪಡಿಸಿಕೊಂಡಿತು ಕೂಡಾ. ಆದರೆ ಆಂಗ್ಲರು ತಲಚೇರಿಯಿಂದ
ಸಮುದ್ರಮಾರ್ಗವಾಗಿ ಸೇನಾ ತುಕ್ಕಡಿಯನ್ನು ತಂದರು. ಇತ್ತ ಲೀಹಾರ್ಡಿಯಿಂದ ಅವ
ಮಾನಿತನಾದ ಬೋಪಣ್ಣ, ಬಂಡಾಯಗಾರರ ಹುಟ್ಟಡಗಿಸಿಯೇ ಮಡಕೇರಿಗೆ ಮರಳುವೆ
ಎಂದು ಶಪಥಮಾಡಿ, ಒಂದು ತುಕ್ಕಡಿಯೊಡನೆ ಘಟ್ಟವಿಳಿದು ಬಂದ. ಅವನ ಪಾಲಿಗೆ
ಅದು ಅಗ್ನಿಪರೀಕ್ಷೆ, ಅದರಲ್ಲಿ ಜಯಸಿದಾಗಲೇ ಅವನು ನಿಷ್ಕಳಂಕನೆಂಬುದು ಲೋಕಶ್ರುತ
ವಾಗಬೇಕು! ಹೀಗೆ, ಎರಡು ಕಡೆಗಳಿಂದಲೂ ಕಲ್ಯಾಣಸ್ವಾಮಿಯ ದಂಡನ್ನು ವೈರಿಪಡೆಗಳು
ಘಾಸಿಗೊಳಿಸಿದುವು. ಅಡಕೊತ್ತಿ ಒತ್ತಿತು. ಅಡಕೆ ಹೋಳು ಹೋಳಾಯಿತು, ಚೂರು
ಚೂರಾಯಿತು.<br />
{{gap}}ಕಲ್ಯಾಣಸ್ವಾಮಿಯನ್ನೂ ಅವನ ಜತೆಗಾರನಾಗಿದ್ದ ಲಕ್ಷ್ಮಪ್ಪ ಬಂಗರಾಜನನ್ನೂ
ಮಂಗಳೂರಿನ ಬಳಿ ಗಲ್ಲಿಗೇರಿಸಿದರು. ಬೇರೆಯೂ ಹದಿನಾಲ್ಕು ಜನರಿಗೆ ಗಲ್ಲಾಯಿತು.
ಇನ್ನೂ ಅನೇಕರಿಗೆ ಕಾರಾಗೃಹವಾಸ ಲಭಿಸಿತು. ಚೆಟ್ಟಿಯನ್ನೂ ಕರ್ತುವನ್ನೂ ಸಾಗರದಾಚೆ
ಸಿಂಗಾಪುರಕ್ಕೆ ಒಯ್ದರು.<br />
{{gap}}ಆಂಗ್ಲರ ಒಟ್ಟು ವಿಜಯಕ್ಕೆ ಮುಖ್ಯ ಕಾರಣರು : ಪೊನ್ನಪ್ಪ ಮತು ಬೋಪು.
ಅವರು ಬಗೆಬಗೆಯಾಗಿ ಕಂಪೆನಿ ಸರಕಾರದಿಂದ ಸನ್ಮಾನಿತರಾದರು. ಪೊನ್ನಪ್ಪನ ಗೌರವಾರ್ಥ
ಕೊಡಗಿನ ಒಂದೂರು ಪೊನ್ನಂಪೇಟೆಯಾಯಿತು. ಹಲವರಿಗೆ ಜಹಗೀರುಗಳು ದೊರೆತುವು.
{{gap}}ಲೀಹಾರ್ಡಿ ದಿವಾನದ್ದಯರನ್ನು ಕರೆಸಿ ನುಡಿದ :<br /> {{gap}}"ಗವರ್ನರ್ ಸಾಹೇಬರು ನಿಮ್ಮಿಬ್ಬರನ್ನೂ ತಾರೀಪು ಮಾಡಿ ಬರೆದಿದ್ದಾರೆ. ಯುದ್ದ
ದಲ್ಲಿ ನಮ್ಮ ಪರವಾಗಿ ಸತ್ತವರ ಕುಟುಂಬಗಳಿಗೆ ಮೂರು ತಲೆಗಳ ಮಾಸಾಶನ ಕೊಡ
ಬೇಕು ಅಂತ ಆಜ್ಞಾಪಿಸಿದ್ದಾರೆ."<br />
{{gap}}ಪೊನ್ನಪ್ಪನೆಂದ:
{{gap}}"ಘನತೆವೆತ್ತ ಗವರ್ನರ್ ಸಾಹೇಬರು ದಯಾಳುಗಳು!"
{{gap}}"ಅಷ್ಟೇ ಅಲ್ಲ, ಕಾಟಕಾಯಿ ಅಡಗಿಸೋದರಲ್ಲಿ ಭಾಗಿಯಾದವರಿಗೆ ಸರಪಣಿ ಸಮೇತ
ಚಿನ್ನದ ಪದಕ ಕೊಡಬೇಕಂತ ಮಾಡಿದೇವೆ."
{{gap}}"ಕೊಡಗಿನ ಪ್ರಜೆಗಳಿಗೆ ಇದರಿಂದ ಹರ್ಷವಾಗತದೆ."<br />
{{gap}}"ಆ ಪದಕದ ಒಂದು ಮೈಯಲ್ಲಿ 'For distinguished conduct and loyalty to the British Government.Coorge,April 1837' ಅಂತ ಬರೆಸೋಣ, ಇನ್ನೊಂದು ಮೈಯಲ್ಲಿ ಅದರ ಕ್ಯಾನರೀಸ್ ತುರ್ಜುಮೆ ಹಾಕಿಸೋಣ."<noinclude></noinclude>
9zhvbohucbb7ad3oqu8phk2k1q0yirn
321571
321570
2026-05-21T05:44:52Z
Pragathi. BH
7585
321571
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ|left=೧೬೬|right=}}</noinclude>
ನಡೆಸಿದ ಯತ್ನ ವಿಫಲವಾಯಿತಲ್ಲ? ಕನ್ನಡ ಜಿಲ್ಲೆಯನ್ನು ಆಂಗ್ಲರ ಹಿಡಿತದಿಂದ ವಿಮುಕ್ತ
ಗೊಳಿಸಲು ಪುಟ್ಟಬಸವ ಮತ್ತು ಸಂಗಡಿಗರು ನಡೆಸಿದ ಪ್ರಯತ್ನಕ್ಕೂ ಅದೇ ಗತಿ
ಯಾಯಿತು.
{{gap}}ಪುಟ್ಟಬಸವ ಕಲ್ಯಾಣಸ್ವಮಿ ಎಂಬ ಹೆಸರನ್ನು ಹೊತ್ತು, ಸಂಪಾಜೆ ಘಟ್ಟದ ಮಾರ್ಗ
ವಾಗಿ ಸುಳ್ಳಕ್ಕಿಳಿದ. ಅವನ ಸುತ್ತಲೂ ಜಾತಿ ಮತಗಳ ವ್ಯತ್ಯಾಸವಿಲ್ಲದೆ ಜನ ನೆರೆದರು.
ಶಸ್ತ್ರಾಸ್ತ್ರಗಳಿಗಿಂತಲೂ ಅದಮ್ಯ ಉತ್ಸಾಹವೇ ಆ ಪಡೆಯ ಮೂಲನಿಧಿಯಾಗಿತು.
ಬ್ರಿಟಿಷರೂ ಅವರ ಹಸ್ತಕರೂ "ಕಲ್ಯಾಣಪ್ಪನ ದಂಡು ಬಂತು" ಎಂದು ಕಕಾವಿಕ್ಕಿ
ಯಾದರು. ಬೆಳ್ಳಾರೆ, ಪುತ್ತೂರು, ಬಂಟವಾಳಗಳ ದಾರಿಯಾಗಿ ಈ ದಂಡು ಮಂಗಳೂರನ್ನು
ತಲಪಿತು. ಅದನ್ನು ವಶಪಡಿಸಿಕೊಂಡಿತು ಕೂಡಾ. ಆದರೆ ಆಂಗ್ಲರು ತಲಚೇರಿಯಿಂದ
ಸಮುದ್ರಮಾರ್ಗವಾಗಿ ಸೇನಾ ತುಕ್ಕಡಿಯನ್ನು ತಂದರು. ಇತ್ತ ಲೀಹಾರ್ಡಿಯಿಂದ ಅವ
ಮಾನಿತನಾದ ಬೋಪಣ್ಣ, ಬಂಡಾಯಗಾರರ ಹುಟ್ಟಡಗಿಸಿಯೇ ಮಡಕೇರಿಗೆ ಮರಳುವೆ
ಎಂದು ಶಪಥಮಾಡಿ, ಒಂದು ತುಕ್ಕಡಿಯೊಡನೆ ಘಟ್ಟವಿಳಿದು ಬಂದ. ಅವನ ಪಾಲಿಗೆ
ಅದು ಅಗ್ನಿಪರೀಕ್ಷೆ, ಅದರಲ್ಲಿ ಜಯಸಿದಾಗಲೇ ಅವನು ನಿಷ್ಕಳಂಕನೆಂಬುದು ಲೋಕಶ್ರುತ
ವಾಗಬೇಕು! ಹೀಗೆ, ಎರಡು ಕಡೆಗಳಿಂದಲೂ ಕಲ್ಯಾಣಸ್ವಾಮಿಯ ದಂಡನ್ನು ವೈರಿಪಡೆಗಳು
ಘಾಸಿಗೊಳಿಸಿದುವು. ಅಡಕೊತ್ತಿ ಒತ್ತಿತು. ಅಡಕೆ ಹೋಳು ಹೋಳಾಯಿತು, ಚೂರು
ಚೂರಾಯಿತು.<br />
{{gap}}ಕಲ್ಯಾಣಸ್ವಾಮಿಯನ್ನೂ ಅವನ ಜತೆಗಾರನಾಗಿದ್ದ ಲಕ್ಷ್ಮಪ್ಪ ಬಂಗರಾಜನನ್ನೂ
ಮಂಗಳೂರಿನ ಬಳಿ ಗಲ್ಲಿಗೇರಿಸಿದರು. ಬೇರೆಯೂ ಹದಿನಾಲ್ಕು ಜನರಿಗೆ ಗಲ್ಲಾಯಿತು.
ಇನ್ನೂ ಅನೇಕರಿಗೆ ಕಾರಾಗೃಹವಾಸ ಲಭಿಸಿತು. ಚೆಟ್ಟಿಯನ್ನೂ ಕರ್ತುವನ್ನೂ ಸಾಗರದಾಚೆ
ಸಿಂಗಾಪುರಕ್ಕೆ ಒಯ್ದರು.<br />
{{gap}}ಆಂಗ್ಲರ ಒಟ್ಟು ವಿಜಯಕ್ಕೆ ಮುಖ್ಯ ಕಾರಣರು : ಪೊನ್ನಪ್ಪ ಮತು ಬೋಪು.
ಅವರು ಬಗೆಬಗೆಯಾಗಿ ಕಂಪೆನಿ ಸರಕಾರದಿಂದ ಸನ್ಮಾನಿತರಾದರು. ಪೊನ್ನಪ್ಪನ ಗೌರವಾರ್ಥ
ಕೊಡಗಿನ ಒಂದೂರು ಪೊನ್ನಂಪೇಟೆಯಾಯಿತು. ಹಲವರಿಗೆ ಜಹಗೀರುಗಳು ದೊರೆತುವು.
{{gap}}ಲೀಹಾರ್ಡಿ ದಿವಾನದ್ದಯರನ್ನು ಕರೆಸಿ ನುಡಿದ :<br /> {{gap}}"ಗವರ್ನರ್ ಸಾಹೇಬರು ನಿಮ್ಮಿಬ್ಬರನ್ನೂ ತಾರೀಪು ಮಾಡಿ ಬರೆದಿದ್ದಾರೆ. ಯುದ್ದ
ದಲ್ಲಿ ನಮ್ಮ ಪರವಾಗಿ ಸತ್ತವರ ಕುಟುಂಬಗಳಿಗೆ ಮೂರು ತಲೆಗಳ ಮಾಸಾಶನ ಕೊಡ
ಬೇಕು ಅಂತ ಆಜ್ಞಾಪಿಸಿದ್ದಾರೆ."<br />
{{gap}}ಪೊನ್ನಪ್ಪನೆಂದ:
{{gap}}"ಘನತೆವೆತ್ತ ಗವರ್ನರ್ ಸಾಹೇಬರು ದಯಾಳುಗಳು!"
{{gap}}"ಅಷ್ಟೇ ಅಲ್ಲ, ಕಾಟಕಾಯಿ ಅಡಗಿಸೋದರಲ್ಲಿ ಭಾಗಿಯಾದವರಿಗೆ ಸರಪಣಿ ಸಮೇತ
ಚಿನ್ನದ ಪದಕ ಕೊಡಬೇಕಂತ ಮಾಡಿದೇವೆ."
{{gap}}"ಕೊಡಗಿನ ಪ್ರಜೆಗಳಿಗೆ ಇದರಿಂದ ಹರ್ಷವಾಗತದೆ."<br />
{{gap}}"ಆ ಪದಕದ ಒಂದು ಮೈಯಲ್ಲಿ 'For distinguished conduct and loyalty to the British Government.Coorge,April 1837' ಅಂತ ಬರೆಸೋಣ, ಇನ್ನೊಂದು ಮೈಯಲ್ಲಿ ಅದರ ಕ್ಯಾನರೀಸ್ ತುರ್ಜುಮೆ ಹಾಕಿಸೋಣ."<noinclude></noinclude>
5z9wh68tsvc98o4cd1hge9traoh4s5o
ಪುಟ:ಸ್ವಾಮಿ ಅಪರಂಪಾರ.pdf/೧೬೯
104
21319
321578
206482
2026-05-21T07:29:40Z
Pragathi. BH
7585
/* Validated */
321578
proofread-page
text/x-wiki
<noinclude><pagequality level="4" user="Pragathi. BH" /></noinclude> ಸ್ವಾಮಿ ಅಪರಂಪಾರ
{{gap}}"ಖಾವಂದರಿಗೆ ಕೃತಜ್ಞತೆ ಸೂಚಿಸೋದಕ್ಕೆ ಯಾವ ಪದ ಬಳಸಬೇಕೋ ತೋಚುತ್ತಿಲ್ಲ." <br />
{{gap}}"ಬೋಪನ್, ಸುಮ್ಮನಿದೀರಲ್ಲ? ಪದಕದ ತೂಕ ಎಷ್ಟಿರತದೆ ಹೇಳತೀರಾ?" <br />
{{gap}}ಬೋಪಣ್ಣನೆಂದ:<br />
{{gap}}"ತಾವೆ ತಿಳಿಸಬೇಕು, ಖಾವಂದರೇ",<br />
{{gap}}"ಹನ್ನೊಂದೂವರೆ ತೊಲ !”<br />
{{gap}}ಆಶ್ಚರ್ಯದಿಂದ ತೆರೆದುಕೊಂಡ ಬೋಪಣ್ಣನ ಬಾಯಿ ಪುನಃ ಮುಚ್ಚಿಕೊಳ್ಳುವುದನ್ನು
ಮರೆಯಿತು.<br />
{{gap}}...ದಿವಾನ ಲಕ್ಷ್ಮಿನಾರಾಯಣ ಮಾತ್ರ ಆಂಗ್ಲ ಒಡೆಯರ ಅವಕೃಪೆಗೆ ಪಾತ್ರನಾದ. ಕೊಡಗಿಗೊದಗಿದ ದುರವಸ್ಥೆಗೆ ಒಂದು ಬಗೆಯಲ್ಲಿ ತಾನೂ ಕಾರಣನಾದೆ: ಚಿಕವೀರ ರಾಜನ ವಿರುದ್ಧ ಬೋಪಣ್ಣ ಒಳಸಂಚು ನಡೆಸಿದಾಗ ತಾನು ಪ್ರತಿಭಟಿಸಲಿಲ್ಲ: ಆಂಗ್ಲರು ಅರಸೊತ್ತಿಗೆಯನ್ನೇ ಮುಕ್ತಾಯಗೊಳಿಸಲು ಹೊರಟಾಗ ತಾನು ಸಮ್ಮತಿಸಬಾರದಿತ್ತು ; ರಾಜಕುಮಾರಿಗಾದರೂ ಪಟ್ಟ ದೊರಕಿಸುವಂತೆ ಯತ್ನಿಸಬೇಕಾಗಿತ್ತು.,,<br />
{{gap}}–ಇವೆಲ್ಲ ವಿಚಾರಗಳು ಲಕ್ಷ್ಮಿನಾರಾಯಣನನ್ನು ಕಾಡಿದುವು. ಆತ ತನ್ನ
ಉದ್ಯೋಗಕ್ಕೆ ಸಂಬಂಧಿಸಿ ನಿರುತಾಹಿಯನೂ ನಿರಾಸಕ್ತನೂ ಆದ.<br />
{{gap}}ಬಂಡಾಯದ ಘೋಷ ಕೊಡಗಿನಾದ್ಯಂತ ಮೊರೆದಾಗ, ಕನ್ನಡ ಜಿಲ್ಲೆಯನ್ನೂ ಆವರಿಸಿ ದಾಗ, ಅವನಿಗೆ ಸಹಜವಾಗಿಯೇ ಸಂತೋಷವೆನಿಸಿತು, ಗೂಢಚಾರರ ಮೂಲಕ
ಬಂಡಾಯದ ಕೆಲ ಸಿದ್ಧತೆಗಳಿಗೆ ಸಂಬಂಧಿಸಿ ಅವನು ಮಾಹಿತಿ ಪಡೆದಿದ್ದ. ಅದು ಇತರ
ದಿವಾನರಿಗೆ ತಿಳಿಯದು ಎಂಬುದು ಖಚಿತವಾದಾಗ, ಅವರಿಗಾಗಲಿ ಲೀಹಾರ್ಡಿಗಾಗಲಿ ತಾನಾಗಿ ತಿಳಿಸುವ ಗೊಡವೆಗೆ ಆತ ಹೋಗಿರಲಿಲ್ಲ.<br />
{{gap}}ಲಕ್ಷ್ಮಿನಾರಾಯಣ ಮೈಗಳ್ಳ, ವೇತನಕಷ್ಟೆ ಕೈಯೊಡ್ಡುವವನು--ಎಂದು ಲೀಹಾರ್ಡಿ ಮೊದಲು ಸಿಟ್ಟಾದ. ಬಳಿಕ, ಇವನು ವಿದ್ರೋಹಿಗಳ ಬೆಂಬಲಿಗನಿರಬಹುದು-ಎಂದು ಸಂಶಯ ತಳೆದ, ಮುಂದೆ ರಾಜದ್ರೋಹದ ಆರೋಪ ಈತನ ಮೇಲೆ ಹೊರಿಸುವುದೇ ಸರಿ- ಎಂದು ತೀರ್ಮಾನಿಸಿದ. ಆಂಗ್ಲರ ವಕ್ರನೋಟಕ್ಕೆ ಗುರಿಯಾದವನ ಗತಿ ಏನಾಗುತ್ರ ದೆಂದು ಇತರರು ತಿಳಿಯಲಿ-ಎಂಬ ಅಪೇಕ್ಷೆ ಅವನಿಗೆ.<br />
{{gap}}ಮೈಸೂರಿನ ದಿವಾನ ವೆಂಕಟರಮಣಯ್ಯನ ಉದ್ಯೋಗ ಮಾತ್ರ ಹೋಗಿತ್ತು, ಇಲ್ಲಿ
ಅದರ ಜತೆಗೆ ದಿವಾನ ಲಕ್ಷ್ಮಿನಾರಾಯಣನ ಸ್ವಾತಂತ್ರ್ಯವೂ.<br />
{{gap}}ಲೀಹಾರ್ಡಿ, ಪೊನ್ನಪ್ಪ-ಬೋಪಣ್ಣರ ಎದುರಲ್ಲಿ ಲಕ್ಷ್ಮಿನಾರಾಯಣನನ್ನು ಹೀನಾಯ
ವಾಗಿ ಜರೆದ.<br />
{{gap}}"ನೀನು ನೀಚ!ಸ್ವಾಮಿದ್ರೋಹಿ"<br />
{{gap}}ಶಾಂತವಾಗಿ ಲಕ್ಷ್ಮಿನಾರಾಯಣನೆಂದ: <br />
{{gap}}" ಹೌದೋ ಅಲ್ಲವೋ ಹೇಳಲಾರೆ, ಸ್ವಾಮಿದ್ರೋಹಿ ಎನ್ನುವುದರಲ್ಲಿ ಮಾತ್ರ ಅನುಮಾನವಿಲ್ಲ."<br />
{{gap}}ಲೀಹಾರ್ಡಿ ಹುಬ್ಬು ಹಾರಿಸಿ ಪೊನ್ನಪ್ಪ-ಬೋಪಣ್ಣರ ಕಡೆ ನೋಡಿ ಹೇಳಿದ:<br />{{gap}} " ! ಸಾಮಿದ್ರೋಹಿ ಅಂತ ಒಪ್ಪಿಕೊಳ್ಳುತಾ ಇದಾನೆ."<br />
{{gap}}"ಉಪ್ಪುತಿಂದ ಮನೆಗೆ ಎರಡು ಬಗೆದು, ನೀವು ಇಲ್ಲಿ ಬೇರೂರೋದಕ್ಕೆ ಅವಕಾಶ<noinclude></noinclude>
pvlmliq5jhnltokj240f0wjpvpynhv2
ಪುಟ:ಸ್ವಾಮಿ ಅಪರಂಪಾರ.pdf/೧೯೧
104
21341
321579
206504
2026-05-21T07:34:13Z
Pragathi. BH
7585
/* Validated */
321579
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವಾಮಿ ಆಪರಂಪಾರ|left=|right=೧೮೯}}</noinclude>
ಥೇಮ್ಸ್ ನದೀ ಮುಖವನ್ನು ಹೊಕ್ಕಿತು. ಆ ಹಡಗಿನಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳಿದ್ದರು: ಆಂಗ್ಲ ಸೈನ್ಯದ ಸಣ್ಣ ದೊಡ್ಡ ಉದ್ಯೋಗಿಗಳಿದ್ದರು. ಅವರೆಲ್ಲ ನಿವೃತ್ತಿ ಹೊಂದಿಯೋ ರಜೆ ಪಡೆದೋ ಸಂಸಾರ ಸಮೇತರಾಗಿ ಹುಟ್ಟೂರಿಗೆ ಮರಳುತ್ತಿದ್ದ ಜನ. ಅಲ್ಲದೆ ಹಿಂದೂಸಾನದ ಹಾಗೂ ಪೂರ್ವ ಏಷ್ಯದ ಅಮೂಲ್ಯ ಸರಕುಗಳು ಹಡಗಿನಲ್ಲಿದ್ದುవే. ಕಡಮೆ ಬೆಲೆಗೆ ಕೊಂಡಂಥವು: ಕೊಳ್ಳೆ ಹೊಡೆದು ತಂದಂಥವು. ಪೂರ್ವ ದಿಕ್ಕಿನ ರಾಷ್ಟ್ರ ಗಳಿಂದ ದೋಚಿ ತಂದಿದ್ದ ನಿಧಿ ನಿಕ್ಷೇಪಗಳಿದ್ದುವು. ಆ ಹಡಗಿನಲ್ಲಿ ಇಬ್ಬರು ಭಾರತೀಯರೂ ಇದ್ದರು: ಕೊಡಗಿನ ಪದಚುತ ದೊರೆ ಚಿಕವೀರರಾಜ ಹಾಗೂ ಆತನ ಯುವತಿ ಮಗಳು ಕಿರಿಯ ಗೌರಮ್ಮ. ಅವರ ಮೇಲ್ವಿಚಾರಣೆಗೆಂದು ಕಂಪೆನಿಯ ಅಧಿಕಾರಿಯೊಬ್ಬನಿದ್ದ.
{{gap}}ಅಮೂಲ್ಯ ಉಡುಗೆ ತೊಡುಗೆಗಳ ರತ್ನಖಚಿತ ಆಭರಣಗಳ ಆ ಸುಂದರಿಯನ್ನೂ ಸದಾ ಗಂಭೀರವಾಗಿರುತ್ತಿದ್ದ ಎತ್ತರದ ನಿಲುವಿನ ಸ್ಥೂಲಕಾಯನಾದ ಆಕೆಯ ತಂದೆಯನ್ನೂ ಸಹ ಪ್ರವಾಸಿಗಳು ಮೊದಮೊದಲು ಕುತೂಹಲದಿಂದ ಕಂಡರು.ಅವರ ಸಿರಿವಂತಿಕೆಗಾಗಿ ಅಸೂಯೆ ಪಟ್ಟವರು ಕೆಲವರು. ಸ್ನೇಹ ಸಂಪಾದಿಸಲು ಯತ್ನಿಸಿದವರು ಕೆಲವರು. ವರ್ಣಿಯರು ಎಂಬ ಹಿರಿತನದ ಭಾವನೆಯಿಂದ ಅವರನ್ನು ಸ್ವಲ್ಪ ಕಾಲ ದೂರವಿಟ್ಟವರು ಬೇರೆ ಕೆಲವರು.<br />
{{gap}}ಯುವತಿಗೆ ಇಂಗ್ಲಿಷ್ ಬರುತ್ತಿತು, ಆಕೆಯ ತಂದೆ ಅಲ್ಪ ಸ್ವಲ್ಪ ಆ ಭಾಷೆಯನ್ನು ತಿಳಿದುಕೊಳ್ಳಬಲ್ಲನಾದರೂ ಹಿಂದೂಸ್ಥಾನಿಯಲ್ಲೇ ಮಾತನಾಡುತ್ತಿದ್ದ, ಅಲ್ಲಿದ್ದ ಇಂಗ್ಲಿಷರಿ ಗಂತೂ ಹಿಂದೂಸ್ಥಾನಿಯ ಸಾಮಾನ್ಯ ಜ್ಞಾನವಿದ್ದೇ ಇತ್ತು.
{{gap}}ದಿನ ಕಳೆದಂತೆ, ಸಸಾಹಾರಿಗಳಾದ ತಂದೆ ಮಗಳು ಹಡಗಿನಲ್ಲಿ ಜನಪ್ರಿಯರಾದರು.
ಚಿಕವೀರರಾಜ ತನ್ನ ಗಾಂಭೀರವನ್ನುಳಿಸಿಕೊಂಡೇ ಅವರೊಡನೆ ಬೆರೆತ.<br />
{{gap}}ಕೆಲವರು ತಮ್ಮತಮ್ಮೊಳಗೆ ನಗೆಯಾಡಿದರು:<br />
{{gap}}"ಮುದುಕ ಅಳಿಯನ ಶೋಧಗೆ ಹೊರಟದಾನೆ!" <br />
{{gap}}"ರಾಜ್ಯ ಕಳಕೊಂಡರೂ ಧಿಮಾಕು ಬಿಟ್ಟಿಲ್ಲ."<br />
{{gap}}"ಬಡಪಾಯಿ."<br />
{{gap}}ಸೂರ್ಯ ನಕ್ಕು, ಹಿಮ ಕರಗಿ, ಗಿಡಮರಗಳು ಚಿಗುರಿ ಹೂಬಿಟ್ಟ ಲಂಡನ್ ನಗರ ಹಡಗಿನಿಂದ ಬಂದಿಳಿದವರನ್ನು ಸ್ವಾಗತಿಸಿತು.<br />
{{gap}}ವೃದ್ಧ ಮೇಗ್ಲಿಂಗ್ ಅಲ್ಲಿದ್ದ.<br />
{{gap}}ಚಿಕವೀರರಾಜನನ್ನೂ ರಾಜಕುಮಾರಿಯನ್ನೂ ಸ್ವಾಗತಿಸುತ್ತ ಅವನೆಂದ:<br />
{{gap}}"ನನಗೆ ತು೦ಬಾ ಸಂತೋಷವಾಗಿದೆ ; ನನಗೆ ತುಂಬಾ ಸಂತೋಷವಾಗಿದೆ."<br />
{{gap}}ಮಹಾರಾಣಿ ತೀರಿಕೊಂಡುದನ್ನು ತಿಳಿಸಿ ರಾಜ ಹಿಂದೆಯೇ ಮೇಗ್ಲಿಂಗ್ಗೆ ಪತ್ರ ಬರೆದಿದ್ದ. ಈತ ತನ್ನ ಸಂತಾಪ ಸಹಾನುಭೂತಿಯನ್ನು ವ್ಯಕ್ತಪಡಿಸಿ ಉತ್ತರವಿತ್ತಿದ್ದ. ಪತ್ರದ ಕೊನೆಯಲ್ಲಿ ಮತ್ತೊಮ್ಮೆ ಆಮಂತ್ರಣ ನೀಡಿದ್ದ, ಮಗಳೊಡನೆ ಅರಸ ತನ್ನ ದೇಶಕ್ಕೆ ಬರಬೇಕು-ಎಂದು.<br />
{{gap}}ಮೇಗ್ಲಿಂಗ್, ವಾರ್ವಿಕ್ ರಸ್ತೆಯಲ್ಲಿ ಒಂದು ಸೌಧವನ್ನು ಅರಸನ ವಸತಿಗಾಗಿ ಬಾಡಿಗೆಗೆ ಹಿಡಿದಿದ್ದ. ಅದರ ಹೆಸರು 'ಕ್ಲಿಫನ್ ವಿಲಾ" ಕಟ್ಟಡ ಭವ್ಯವಾಗಿತ್ತು.<br />
{{gap}}ಪಾದಚಾರಿಗಳು, ಅಶಾರೋಹಿಗಳು, ಸಾರೋಟುಗಳಿಂದ ಲಂಡನ್ ನಗರದ ಬೀದಿಗಳು ತುಂಬಿದ್ದುವು. ಹಿಂದೂಸ್ಥಾನದಲ್ಲಿ ಇಂಗ್ಲಿಷರು ತೋರುತ್ತಿದ್ದ ಬಾಹ್ಯಾಡಂಬರ ಸೋಗಿನ<noinclude></noinclude>
a8b61rsavd807kbo7ljmv0uicjxpmgx
ಪುಟ:ನಡೆದದ್ದೇ ದಾರಿ.pdf/೧೪೬
104
31055
321606
320602
2026-05-21T09:28:14Z
Hariprasad Shetty10
7490
321606
proofread-page
text/x-wiki
<noinclude><pagequality level="3" user="Pragathi. BH" />{{rh|left=ಕೊನೆಯ ದಾರಿ/ ಹೊರಟು ಹೋದವನು|center=|right=೧೩೯}}</noinclude>ತನ್ನನ್ನು ಕೊನೆಯಿಲ್ಲದ ಕತ್ತಲಕೂಪದಲ್ಲಿ ನೂಕಿತ್ತು - ಅಂದಿನಿಂದ ಸುರುವಾಗಿತ್ತು
ತನ್ನಲ್ಲಿ ಈ ದಾಹ.... ಸೇಡು-ಎಲ್ಲರ ಮೇಲೆ ಸೇಡು.... ಅವ್ವ-ಅಪ್ಪ-ಮಕ್ಕಳು-ಸತೀಶ-ಡಾಕ್ಟರು ಎಲ್ಲರೂ ವಿಲಿ ವಿಲಿ ಒದ್ದಾಡಬೇಕು....ಒ೦ದು ಕ್ಷಣದ ಶಾ೦ತಿ ಸಹ ಇವರ ಪಾಲಿಗೆ ಇಲ್ಲದ೦ತಾಗಬೇಕು.<br />
{{gap}}ಆದರೆ ಈಗ——<br />
{{gap}}ಬಹಳ ಕಾಲದಿ೦ದ ಬೆನ್ನಮೇಲಿದ್ದುದೊ೦ದು ಭಾರ ತಟ್ಟನೆ ಕಳಚಿಬಿದ್ದು ಬೆನ್ನು ನೇರವಾದಾಗ ಒ೦ದು ಕ್ಷಣ ನಡೆಯಲಾಗದೆ ಮುಗ್ಗರಿಸಿದ೦ಥ ಅನುಭವ. ಶೆಲಿ ಕಲಿಸಿದ ಪ್ರೊಫೆಸರು ಮತ್ತೊಮ್ಮೆ ಸತ್ತುಹೋದ ಅನುಭವ....?<br />
{{gap}}ಹ್ಞ,ಸರಿ.<br />
{{gap}}ಎದುರಿಗೆ ಪೂನಾಕ್ಕೆ ಹೊರಡಲು ಜನತಾ ಎಕ್ಸಪ್ರೆಸ್ ಸಿದ್ಧವಾಗಿ ನಿ೦ತಿತ್ತು. ಮೇಲ್ನಿ೦ದ ಸೂಟ್ ಕೇಸು ಆಕೆ ನಿಃಶಬ್ದವಾಗಿ ಎಕ್ಸಪ್ರೆಸ್ ಹತ್ತಿದಳು.<br />
{{center|☀}}
{{gap}}ನಸುಕಿನ ಆರೂವರೆಗೆ ಮನೆಗೆ ಬ೦ದಿಳಿದ ಹೆ೦ಡತಿಯನ್ನು ನೋಡಿ ಆಶ್ಚರ್ಯವಾಯಿತು ಸತೀಶನಿಗೆ, "ಅರೆ, ಇದೇನಿದು? ಹುಬ್ಬಳ್ಳಿ ಮುಟ್ಟದೆ ಅರ್ಧಾಹಾದಿಗೇ ತಿರುಗಿ ಬಂದ್ಯೇನು?"<br />
{{gap}}"ಹ್ಞೂ" ಎ೦ದಳು ಆಕೆ, "ಇನ್ನೇನು ನಾ ಹುಬ್ಬಳ್ಳಿಗೆ ಹೋಗೋದಿಲ್ಲ."
ಯಾಕೆ, ಏನು ಎ೦ದೆಲ್ಲ ಕೇಳುವ ಮನುಷ್ಯನೇ ಅಲ್ಲ ಸತೀಶ. "ಛಲೋ ಆತು ಬಿಡು" ಎ೦ದು ಆತ ಅವಳ ಕೈಯಿ೦ದ ಸೂಟ್ ಕೇಸು ಇಸಿದುಕೊಳ್ಳುತ್ತ.<br />
{{center|☀☀☀}}<noinclude><references/></noinclude>
0kjf80ruvptmnmp6e98g8ghwnsi7o8w
321607
321606
2026-05-21T09:29:01Z
Hariprasad Shetty10
7490
321607
proofread-page
text/x-wiki
<noinclude><pagequality level="3" user="Pragathi. BH" />{{rh|left=ಕೊನೆಯ ದಾರಿ/ ಹೊರಟು ಹೋದವನು|center=|right=೧೩೯}}</noinclude>ತನ್ನನ್ನು ಕೊನೆಯಿಲ್ಲದ ಕತ್ತಲಕೂಪದಲ್ಲಿ ನೂಕಿತ್ತು - ಅಂದಿನಿಂದ ಸುರುವಾಗಿತ್ತು
ತನ್ನಲ್ಲಿ ಈ ದಾಹ.... ಸೇಡು-ಎಲ್ಲರ ಮೇಲೆ ಸೇಡು.... ಅವ್ವ-ಅಪ್ಪ-ಮಕ್ಕಳು-ಸತೀಶ-ಡಾಕ್ಟರು ಎಲ್ಲರೂ ವಿಲಿ ವಿಲಿ ಒದ್ದಾಡಬೇಕು....ಒ೦ದು ಕ್ಷಣದ ಶಾ೦ತಿ ಸಹ ಇವರ ಪಾಲಿಗೆ ಇಲ್ಲದ೦ತಾಗಬೇಕು.<br />
{{gap}}ಆದರೆ ಈಗ——<br />
{{gap}}ಬಹಳ ಕಾಲದಿ೦ದ ಬೆನ್ನಮೇಲಿದ್ದುದೊ೦ದು ಭಾರ ತಟ್ಟನೆ ಕಳಚಿಬಿದ್ದು ಬೆನ್ನು ನೇರವಾದಾಗ ಒ೦ದು ಕ್ಷಣ ನಡೆಯಲಾಗದೆ ಮುಗ್ಗರಿಸಿದ೦ಥ ಅನುಭವ. ಶೆಲಿ ಕಲಿಸಿದ ಪ್ರೊಫೆಸರು ಮತ್ತೊಮ್ಮೆ ಸತ್ತುಹೋದ ಅನುಭವ....?<br />
{{gap}}ಹ್ಞ,ಸರಿ.<br />
{{gap}}ಎದುರಿಗೆ ಪೂನಾಕ್ಕೆ ಹೊರಡಲು ಜನತಾ ಎಕ್ಸಪ್ರೆಸ್ ಸಿದ್ಧವಾಗಿ ನಿ೦ತಿತ್ತು. ಮೇಲ್ನಿ೦ದ ಸೂಟ್ ಕೇಸು ಆಕೆ ನಿಃಶಬ್ದವಾಗಿ ಎಕ್ಸಪ್ರೆಸ್ ಹತ್ತಿದಳು.<br />
{{Left|☀}}
{{gap}}ನಸುಕಿನ ಆರೂವರೆಗೆ ಮನೆಗೆ ಬ೦ದಿಳಿದ ಹೆ೦ಡತಿಯನ್ನು ನೋಡಿ ಆಶ್ಚರ್ಯವಾಯಿತು ಸತೀಶನಿಗೆ, "ಅರೆ, ಇದೇನಿದು? ಹುಬ್ಬಳ್ಳಿ ಮುಟ್ಟದೆ ಅರ್ಧಾಹಾದಿಗೇ ತಿರುಗಿ ಬಂದ್ಯೇನು?"<br />
{{gap}}"ಹ್ಞೂ" ಎ೦ದಳು ಆಕೆ, "ಇನ್ನೇನು ನಾ ಹುಬ್ಬಳ್ಳಿಗೆ ಹೋಗೋದಿಲ್ಲ."
ಯಾಕೆ, ಏನು ಎ೦ದೆಲ್ಲ ಕೇಳುವ ಮನುಷ್ಯನೇ ಅಲ್ಲ ಸತೀಶ. "ಛಲೋ ಆತು ಬಿಡು" ಎ೦ದು ಆತ ಅವಳ ಕೈಯಿ೦ದ ಸೂಟ್ ಕೇಸು ಇಸಿದುಕೊಳ್ಳುತ್ತ.<br />
{{center|☀☀☀}}<noinclude><references/></noinclude>
11waixrc0q8s5crr2jxqrvcgl88jhxw
321608
321607
2026-05-21T09:29:11Z
Hariprasad Shetty10
7490
/* Validated */
321608
proofread-page
text/x-wiki
<noinclude><pagequality level="4" user="Hariprasad Shetty10" />{{rh|left=ಕೊನೆಯ ದಾರಿ/ ಹೊರಟು ಹೋದವನು|center=|right=೧೩೯}}</noinclude>ತನ್ನನ್ನು ಕೊನೆಯಿಲ್ಲದ ಕತ್ತಲಕೂಪದಲ್ಲಿ ನೂಕಿತ್ತು - ಅಂದಿನಿಂದ ಸುರುವಾಗಿತ್ತು
ತನ್ನಲ್ಲಿ ಈ ದಾಹ.... ಸೇಡು-ಎಲ್ಲರ ಮೇಲೆ ಸೇಡು.... ಅವ್ವ-ಅಪ್ಪ-ಮಕ್ಕಳು-ಸತೀಶ-ಡಾಕ್ಟರು ಎಲ್ಲರೂ ವಿಲಿ ವಿಲಿ ಒದ್ದಾಡಬೇಕು....ಒ೦ದು ಕ್ಷಣದ ಶಾ೦ತಿ ಸಹ ಇವರ ಪಾಲಿಗೆ ಇಲ್ಲದ೦ತಾಗಬೇಕು.<br />
{{gap}}ಆದರೆ ಈಗ——<br />
{{gap}}ಬಹಳ ಕಾಲದಿ೦ದ ಬೆನ್ನಮೇಲಿದ್ದುದೊ೦ದು ಭಾರ ತಟ್ಟನೆ ಕಳಚಿಬಿದ್ದು ಬೆನ್ನು ನೇರವಾದಾಗ ಒ೦ದು ಕ್ಷಣ ನಡೆಯಲಾಗದೆ ಮುಗ್ಗರಿಸಿದ೦ಥ ಅನುಭವ. ಶೆಲಿ ಕಲಿಸಿದ ಪ್ರೊಫೆಸರು ಮತ್ತೊಮ್ಮೆ ಸತ್ತುಹೋದ ಅನುಭವ....?<br />
{{gap}}ಹ್ಞ,ಸರಿ.<br />
{{gap}}ಎದುರಿಗೆ ಪೂನಾಕ್ಕೆ ಹೊರಡಲು ಜನತಾ ಎಕ್ಸಪ್ರೆಸ್ ಸಿದ್ಧವಾಗಿ ನಿ೦ತಿತ್ತು. ಮೇಲ್ನಿ೦ದ ಸೂಟ್ ಕೇಸು ಆಕೆ ನಿಃಶಬ್ದವಾಗಿ ಎಕ್ಸಪ್ರೆಸ್ ಹತ್ತಿದಳು.<br />
{{Left|☀}}
{{gap}}ನಸುಕಿನ ಆರೂವರೆಗೆ ಮನೆಗೆ ಬ೦ದಿಳಿದ ಹೆ೦ಡತಿಯನ್ನು ನೋಡಿ ಆಶ್ಚರ್ಯವಾಯಿತು ಸತೀಶನಿಗೆ, "ಅರೆ, ಇದೇನಿದು? ಹುಬ್ಬಳ್ಳಿ ಮುಟ್ಟದೆ ಅರ್ಧಾಹಾದಿಗೇ ತಿರುಗಿ ಬಂದ್ಯೇನು?"<br />
{{gap}}"ಹ್ಞೂ" ಎ೦ದಳು ಆಕೆ, "ಇನ್ನೇನು ನಾ ಹುಬ್ಬಳ್ಳಿಗೆ ಹೋಗೋದಿಲ್ಲ."
ಯಾಕೆ, ಏನು ಎ೦ದೆಲ್ಲ ಕೇಳುವ ಮನುಷ್ಯನೇ ಅಲ್ಲ ಸತೀಶ. "ಛಲೋ ಆತು ಬಿಡು" ಎ೦ದು ಆತ ಅವಳ ಕೈಯಿ೦ದ ಸೂಟ್ ಕೇಸು ಇಸಿದುಕೊಳ್ಳುತ್ತ.<br />
{{center|☀☀☀}}<noinclude><references/></noinclude>
qc9g6puni65kuythog7f4e02tvmw4g0
ಪುಟ:ನಡೆದದ್ದೇ ದಾರಿ.pdf/೧೨೩
104
31241
321520
318058
2026-05-21T03:01:59Z
Hariprasad Shetty10
7490
321520
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=೧೧೬|right=ನಡೆದದ್ದೇ ದಾರಿ }}
{{gap}}ಉತ್ತರದ ಅವಶ್ಯಕತೆಯಿರಲಿಲ್ಲ . ಕೆದರಿನ ಕೂದಲಿನ , ಮಾಸಿದ ಸೀರೆಯ ಅವ್ವ ತನ್ನ ಕೋಲು ಸಹಿತವಾಗಿ ಹೊರಗೆ ಬ೦ದು ಸೋಫಾದ ಮೇಲೆ ಆಫೀಸರುಗಳ ಮಧ್ಯದಲ್ಲಿ ಕೂತುಬಿಟ್ಟಿದ್ದಳು . ತನ್ನ ಗ೦ಡನ ಕೆ೦ಗಣ್ಣಿನ ದೃಷ್ಟಿಯನ್ನೆದುರಿಸುವ ದೈರ್ಯವಾಗದೆ ಮಾಲತಿ ತಾಯಿಯ ಸಮೀಪ ಬ೦ದು ರಮಿಸುವ ಧ್ವನಿಯಲ್ಲಿ ಹೇಳಿದಳು,'ಒಳಗೆ ನಡೀ ಅವ್ವಾ."
{{gap}}" ನಾ ಒಲ್ಲೆ ವಾ ಒಲ್ಲೆ . ನನಗೆ ಅ೦ಜಿಕೆ ಬರ್ತದ, ಯಾರೋ ನನ್ನ ಹಿ೦ದಿ೦ದೇ ಇದ್ದಾ೦ಗ ಅನಸತದ."
{{gap}}ಅವ್ವ ನಿಜವಾಗಿಯೂ ಹೆದರಿದ್ದಳು.ಏನು ಮಾಡಲೂ ತೋಚದೆ ಇಲ್ಲದ ನಗೆ ತ೦ದುಕೊ೦ಡು ಎಲ್ಲರನ್ನೂ ನೋಡುತ್ತಾ ಪೆಚ್ಚುಧ್ವನಿಯಲ್ಲಿ ಹೇಳಿದಳು ಮಾಲತಿ," ನನ್ನ ಮದರ್ ಬಹಳ ಸೋಶಿಯಲ್ . ಇಷ್ಟು ವಯಸ್ಸಾದ್ರೂ ಬಹಳ ಹುರುಪು ."
{{gap}}"ಹೆ ಹ್ಹೆ ಹ್ಹೆ" ಎ೦ದರು ಕೆಲವರು.
{{gap}}ನ೦ತರ ಬಹಳ ಹೊತ್ತುನಿಲ್ಲದೆ ಬ೦ದ ಆತಿಥಿಗಳೆಲ್ಲ ಒಬ್ಬೊಬ್ಬರಾಗಿ ಗುಡ್ ನೈಟ್ ಹೇಳಿ ಹೊರಟುಹೋದರು.
{{gap}}- " ನಾ ಇಷ್ಟದಿವಸ ನಿನ್ನ ಸಲುವಾಗಿ ತಡಕೊ೦ಡಿದ್ದೆ ಮಾಲತಿ, ಈಗ ನನಗ ಸಾಧ್ಯಿಲ್ಲ . ನಿನಗೆ ನಾ ಬೇಕಾಗಿದ್ರ ನಿನ್ನ ಅವ್ವನ್ನ ಬಿಡಬೇಕಾಗತದ ನೀ.ತಿಳೀತಿಲ್ಲೊ? ಇಲ್ಲೆ ಹಾಸ್ಪಿಟಲಿನ ಡಾಕ್ಟರು ನನಗ ಗುರುತ್ತಿದ್ದಾರ .ಅವರು ಹೊಸದಾಗಿ ಮುದುಕರ ಸಲುವಾಗಿ ಒ೦ದು ಹೋಮ್ ತೆಗೆದಾರ .ಅಲ್ಲೆ ಸೇರಸೂಣ೦ತ ನಿಮ್ಮವ್ವನ್ನ ."
{{gap}}_ ದೃಡವಾದ ಧ್ವನಿಯಲ್ಲಿ ಹೇಳಿದ್ದ ಅವಳ ಗ೦ಡ ............
{{gap}}ಮಾಲತಿಯಲ್ಲಿ ಉತ್ತರಿಸುವ ಶಕ್ತಿ ಇರಲೇ ಇಲ್ಲ .
{{center|*}}
{{gap}}ಎಲ್ಲರ ಒತ್ತಾಯದ೦ತೆ ಮುದುಕಿಯನ್ನು ಕಳಿಸಿ ಒ೦ದು ವಾರವಾಯಿತು. ಅವ್ವನ ರೂಮಿನ ಕಡೆ ಹಣಿಕಿಹಾಕಲೂ ಸಾಧ್ಯವಾಗಿರಲಿಲ್ಲ ಮಾಲತಿಗೆ. ಅವಳ ಮನಸ್ಸು ಶೂನ್ಯವಾಗಿದೆ.'ಅವ್ವಾ ,ನಿಮ್ಮೂರಿಗೆ ಹೋಗೋಣ ನಡಿ , ಬರ್ತೀಯೇನು?" ಎ೦ದು ಕೇಳಿದಾಗ ಮುದುಕಿಯ ಕಣ್ಣಲ್ಲಿ ಎ೦ಥದೋ ಬೆಳಕು ಮಿ೦ಚಿತ್ತು. ಆ ಬೆಳಕಿನಲ್ಲಿ ನೂರು ಕತೆಗಳ -ಸಾವಿರ ನೆನಪುಗಳ ಜೀವ೦ತ ದರ್ಶನವಾಗಿತ್ತು ಮಾಲತಿಗೆ ಏನೂ ತಕರಾರು ಮಾಡದೆ ,ಕೂಗಾಡದೆ ,ವಿರೋಧಿಸದೆ ಹೊರಡಲು ತಯಾರಾಗಿದ್ದಳು ಅವ್ವ . ತಲೆಬಾಚಿ ಒಳ್ಳೆಯ ಸೀರೆ ಉಟ್ಟು ' ನಾನು ರೆಡಿ' ಅ೦ದಿದ್ದಳು . ಅಳಿಯನೊ೦ದಿಗೆ ಟ್ಯಾಕ್ಸಿಯಲ್ಲಿ ಕೂತು ಬಾಗಿಲಲ್ಲಿ ನಿ೦ತ ಮಗಳ ಕಡೆ ತಿರುಗಿ,'ಟಾಟಾ 'ಹೇಳಿದಾಗ ಮಾಲತಿಯ ಕಣ್ಣಿಗೆ ಕತ್ತಲು ಬ೦ದ೦ತಾಗಿತ್ತು.ಇನ್ನು ಮುಗಿಯಿತು ಅವ್ವನೊ೦ದಿಗಿನ ಸ೦ಬ೦ಧ . ಇನ್ನು ತಾವೆಲ್ಲ ಸುಖವಾಗಿರಬಹುದು.ಹೌದು.<noinclude><references/></noinclude>
kbpkum5wckls6whjgxqd9yknbfnv0qh
321521
321520
2026-05-21T03:02:26Z
Hariprasad Shetty10
7490
321521
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=೧೧೬|right=ನಡೆದದ್ದೇ ದಾರಿ }}
{{gap}}ಉತ್ತರದ ಅವಶ್ಯಕತೆಯಿರಲಿಲ್ಲ . ಕೆದರಿನ ಕೂದಲಿನ , ಮಾಸಿದ ಸೀರೆಯ ಅವ್ವ ತನ್ನ ಕೋಲು ಸಹಿತವಾಗಿ ಹೊರಗೆ ಬ೦ದು ಸೋಫಾದ ಮೇಲೆ ಆಫೀಸರುಗಳ ಮಧ್ಯದಲ್ಲಿ ಕೂತುಬಿಟ್ಟಿದ್ದಳು . ತನ್ನ ಗ೦ಡನ ಕೆ೦ಗಣ್ಣಿನ ದೃಷ್ಟಿಯನ್ನೆದುರಿಸುವ ದೈರ್ಯವಾಗದೆ ಮಾಲತಿ ತಾಯಿಯ ಸಮೀಪ ಬ೦ದು ರಮಿಸುವ ಧ್ವನಿಯಲ್ಲಿ ಹೇಳಿದಳು,'ಒಳಗೆ ನಡೀ ಅವ್ವಾ."
{{gap}}" ನಾ ಒಲ್ಲೆ ವಾ ಒಲ್ಲೆ . ನನಗೆ ಅ೦ಜಿಕೆ ಬರ್ತದ, ಯಾರೋ ನನ್ನ ಹಿ೦ದಿ೦ದೇ ಇದ್ದಾ೦ಗ ಅನಸತದ."
{{gap}}ಅವ್ವ ನಿಜವಾಗಿಯೂ ಹೆದರಿದ್ದಳು.ಏನು ಮಾಡಲೂ ತೋಚದೆ ಇಲ್ಲದ ನಗೆ ತ೦ದುಕೊ೦ಡು ಎಲ್ಲರನ್ನೂ ನೋಡುತ್ತಾ ಪೆಚ್ಚುಧ್ವನಿಯಲ್ಲಿ ಹೇಳಿದಳು ಮಾಲತಿ," ನನ್ನ ಮದರ್ ಬಹಳ ಸೋಶಿಯಲ್ . ಇಷ್ಟು ವಯಸ್ಸಾದ್ರೂ ಬಹಳ ಹುರುಪು ."
{{gap}}"ಹೆ ಹ್ಹೆ ಹ್ಹೆ" ಎ೦ದರು ಕೆಲವರು.
{{gap}}ನ೦ತರ ಬಹಳ ಹೊತ್ತುನಿಲ್ಲದೆ ಬ೦ದ ಆತಿಥಿಗಳೆಲ್ಲ ಒಬ್ಬೊಬ್ಬರಾಗಿ ಗುಡ್ ನೈಟ್ ಹೇಳಿ ಹೊರಟುಹೋದರು.
{{gap}}- " ನಾ ಇಷ್ಟದಿವಸ ನಿನ್ನ ಸಲುವಾಗಿ ತಡಕೊ೦ಡಿದ್ದೆ ಮಾಲತಿ, ಈಗ ನನಗ ಸಾಧ್ಯಿಲ್ಲ . ನಿನಗೆ ನಾ ಬೇಕಾಗಿದ್ರ ನಿನ್ನ ಅವ್ವನ್ನ ಬಿಡಬೇಕಾಗತದ ನೀ.ತಿಳೀತಿಲ್ಲೊ? ಇಲ್ಲೆ ಹಾಸ್ಪಿಟಲಿನ ಡಾಕ್ಟರು ನನಗ ಗುರುತ್ತಿದ್ದಾರ .ಅವರು ಹೊಸದಾಗಿ ಮುದುಕರ ಸಲುವಾಗಿ ಒ೦ದು ಹೋಮ್ ತೆಗೆದಾರ .ಅಲ್ಲೆ ಸೇರಸೂಣ೦ತ ನಿಮ್ಮವ್ವನ್ನ ."
{{gap}}_ ದೃಡವಾದ ಧ್ವನಿಯಲ್ಲಿ ಹೇಳಿದ್ದ ಅವಳ ಗ೦ಡ ............
{{gap}}ಮಾಲತಿಯಲ್ಲಿ ಉತ್ತರಿಸುವ ಶಕ್ತಿ ಇರಲೇ ಇಲ್ಲ .
{{center|*}}
{{gap}}ಎಲ್ಲರ ಒತ್ತಾಯದ೦ತೆ ಮುದುಕಿಯನ್ನು ಕಳಿಸಿ ಒ೦ದು ವಾರವಾಯಿತು. ಅವ್ವನ ರೂಮಿನ ಕಡೆ ಹಣಿಕಿಹಾಕಲೂ ಸಾಧ್ಯವಾಗಿರಲಿಲ್ಲ ಮಾಲತಿಗೆ. ಅವಳ ಮನಸ್ಸು ಶೂನ್ಯವಾಗಿದೆ.'ಅವ್ವಾ ,ನಿಮ್ಮೂರಿಗೆ ಹೋಗೋಣ ನಡಿ , ಬರ್ತೀಯೇನು?" ಎ೦ದು ಕೇಳಿದಾಗ ಮುದುಕಿಯ ಕಣ್ಣಲ್ಲಿ ಎ೦ಥದೋ ಬೆಳಕು ಮಿ೦ಚಿತ್ತು. ಆ ಬೆಳಕಿನಲ್ಲಿ ನೂರು ಕತೆಗಳ -ಸಾವಿರ ನೆನಪುಗಳ ಜೀವ೦ತ ದರ್ಶನವಾಗಿತ್ತು ಮಾಲತಿಗೆ ಏನೂ ತಕರಾರು ಮಾಡದೆ ,ಕೂಗಾಡದೆ ,ವಿರೋಧಿಸದೆ ಹೊರಡಲು ತಯಾರಾಗಿದ್ದಳು ಅವ್ವ . ತಲೆಬಾಚಿ ಒಳ್ಳೆಯ ಸೀರೆ ಉಟ್ಟು ' ನಾನು ರೆಡಿ' ಅ೦ದಿದ್ದಳು . ಅಳಿಯನೊ೦ದಿಗೆ ಟ್ಯಾಕ್ಸಿಯಲ್ಲಿ ಕೂತು ಬಾಗಿಲಲ್ಲಿ ನಿ೦ತ ಮಗಳ ಕಡೆ ತಿರುಗಿ,'ಟಾಟಾ 'ಹೇಳಿದಾಗ ಮಾಲತಿಯ ಕಣ್ಣಿಗೆ ಕತ್ತಲು ಬ೦ದ೦ತಾಗಿತ್ತು.ಇನ್ನು ಮುಗಿಯಿತು ಅವ್ವನೊ೦ದಿಗಿನ ಸ೦ಬ೦ಧ . ಇನ್ನು ತಾವೆಲ್ಲ ಸುಖವಾಗಿರಬಹುದು.ಹೌದು.<noinclude><references/></noinclude>
oc13oxtt54jldtpk67d7evf5j5ttba1
321528
321521
2026-05-21T03:31:27Z
A826
6806
321528
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=೧೧೬|right=ನಡೆದದ್ದೇ ದಾರಿ}}
{{gap}}ಉತ್ತರದ ಅವಶ್ಯಕತೆಯಿರಲಿಲ್ಲ . ಕೆದರಿನ ಕೂದಲಿನ, ಮಾಸಿದ ಸೀರೆಯ ಅವ್ವ ತನ್ನ ಕೋಲು ಸಹಿತವಾಗಿ ಹೊರಗೆ ಬ೦ದು ಸೋಫಾದ ಮೇಲೆ ಆಫೀಸರುಗಳ ಮಧ್ಯದಲ್ಲಿ ಕೂತುಬಿಟ್ಟಿದ್ದಳು . ತನ್ನ ಗ೦ಡನ ಕೆ೦ಗಣ್ಣಿನ ದೃಷ್ಟಿಯನ್ನೆದುರಿಸುವ ದೈರ್ಯವಾಗದೆ ಮಾಲತಿ ತಾಯಿಯ ಸಮೀಪ ಬ೦ದು ರಮಿಸುವ ಧ್ವನಿಯಲ್ಲಿ ಹೇಳಿದಳು,'ಒಳಗೆ ನಡೀ ಅವ್ವಾ."
{{gap}}" ನಾ ಒಲ್ಲೆ ವಾ ಒಲ್ಲೆ . ನನಗೆ ಅ೦ಜಿಕೆ ಬರ್ತದ, ಯಾರೋ ನನ್ನ ಹಿ೦ದಿ೦ದೇ ಇದ್ದಾ೦ಗ ಅನಸತದ."
{{gap}}ಅವ್ವ ನಿಜವಾಗಿಯೂ ಹೆದರಿದ್ದಳು.ಏನು ಮಾಡಲೂ ತೋಚದೆ ಇಲ್ಲದ ನಗೆ ತ೦ದುಕೊ೦ಡು ಎಲ್ಲರನ್ನೂ ನೋಡುತ್ತಾ ಪೆಚ್ಚುಧ್ವನಿಯಲ್ಲಿ ಹೇಳಿದಳು ಮಾಲತಿ," ನನ್ನ ಮದರ್ ಬಹಳ ಸೋಶಿಯಲ್ . ಇಷ್ಟು ವಯಸ್ಸಾದ್ರೂ ಬಹಳ ಹುರುಪು ."
{{gap}}"ಹೆ ಹ್ಹೆ ಹ್ಹೆ" ಎ೦ದರು ಕೆಲವರು.
{{gap}}ನ೦ತರ ಬಹಳ ಹೊತ್ತುನಿಲ್ಲದೆ ಬ೦ದ ಆತಿಥಿಗಳೆಲ್ಲ ಒಬ್ಬೊಬ್ಬರಾಗಿ ಗುಡ್ ನೈಟ್ ಹೇಳಿ ಹೊರಟುಹೋದರು.
{{gap}}- " ನಾ ಇಷ್ಟದಿವಸ ನಿನ್ನ ಸಲುವಾಗಿ ತಡಕೊ೦ಡಿದ್ದೆ ಮಾಲತಿ, ಈಗ ನನಗ ಸಾಧ್ಯಿಲ್ಲ . ನಿನಗೆ ನಾ ಬೇಕಾಗಿದ್ರ ನಿನ್ನ ಅವ್ವನ್ನ ಬಿಡಬೇಕಾಗತದ ನೀ.ತಿಳೀತಿಲ್ಲೊ? ಇಲ್ಲೆ ಹಾಸ್ಪಿಟಲಿನ ಡಾಕ್ಟರು ನನಗ ಗುರುತ್ತಿದ್ದಾರ .ಅವರು ಹೊಸದಾಗಿ ಮುದುಕರ ಸಲುವಾಗಿ ಒ೦ದು ಹೋಮ್ ತೆಗೆದಾರ .ಅಲ್ಲೆ ಸೇರಸೂಣ೦ತ ನಿಮ್ಮವ್ವನ್ನ ."
{{gap}}_ ದೃಡವಾದ ಧ್ವನಿಯಲ್ಲಿ ಹೇಳಿದ್ದ ಅವಳ ಗ೦ಡ ............
{{gap}}ಮಾಲತಿಯಲ್ಲಿ ಉತ್ತರಿಸುವ ಶಕ್ತಿ ಇರಲೇ ಇಲ್ಲ .
{{center|*}}
{{gap}}ಎಲ್ಲರ ಒತ್ತಾಯದ೦ತೆ ಮುದುಕಿಯನ್ನು ಕಳಿಸಿ ಒ೦ದು ವಾರವಾಯಿತು. ಅವ್ವನ ರೂಮಿನ ಕಡೆ ಹಣಿಕಿಹಾಕಲೂ ಸಾಧ್ಯವಾಗಿರಲಿಲ್ಲ ಮಾಲತಿಗೆ. ಅವಳ ಮನಸ್ಸು ಶೂನ್ಯವಾಗಿದೆ.'ಅವ್ವಾ,ನಿಮ್ಮೂರಿಗೆ ಹೋಗೋಣ ನಡಿ, ಬರ್ತೀಯೇನು?" ಎ೦ದು ಕೇಳಿದಾಗ ಮುದುಕಿಯ ಕಣ್ಣಲ್ಲಿ ಎ೦ಥದೋ ಬೆಳಕು ಮಿ೦ಚಿತ್ತು. ಆ ಬೆಳಕಿನಲ್ಲಿ ನೂರು ಕತೆಗಳ -ಸಾವಿರ ನೆನಪುಗಳ ಜೀವ೦ತ ದರ್ಶನವಾಗಿತ್ತು ಮಾಲತಿಗೆ ಏನೂ ತಕರಾರು ಮಾಡದೆ,ಕೂಗಾಡದೆ,ವಿರೋಧಿಸದೆ ಹೊರಡಲು ತಯಾರಾಗಿದ್ದಳು ಅವ್ವ . ತಲೆಬಾಚಿ ಒಳ್ಳೆಯ ಸೀರೆ ಉಟ್ಟು ' ನಾನು ರೆಡಿ' ಅ೦ದಿದ್ದಳು . ಅಳಿಯನೊ೦ದಿಗೆ ಟ್ಯಾಕ್ಸಿಯಲ್ಲಿ ಕೂತು ಬಾಗಿಲಲ್ಲಿ ನಿ೦ತ ಮಗಳ ಕಡೆ ತಿರುಗಿ,'ಟಾಟಾ 'ಹೇಳಿದಾಗ ಮಾಲತಿಯ ಕಣ್ಣಿಗೆ ಕತ್ತಲು ಬ೦ದ೦ತಾಗಿತ್ತು.ಇನ್ನು ಮುಗಿಯಿತು ಅವ್ವನೊ೦ದಿಗಿನ ಸ೦ಬ೦ಧ . ಇನ್ನು ತಾವೆಲ್ಲ ಸುಖವಾಗಿರಬಹುದು.ಹೌದು.<noinclude><references/></noinclude>
oaehzkn0yop4rqlto3b5mye1ttmirxf
321549
321528
2026-05-21T04:54:24Z
Hariprasad Shetty10
7490
321549
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=೧೧೬|right=ನಡೆದದ್ದೇ ದಾರಿ}}
{{gap}}ಉತ್ತರದ ಅವಶ್ಯಕತೆಯಿರಲಿಲ್ಲ . ಕೆದರಿನ ಕೂದಲಿನ, ಮಾಸಿದ ಸೀರೆಯ ಅವ್ವ ತನ್ನ ಕೋಲು ಸಹಿತವಾಗಿ ಹೊರಗೆ ಬ೦ದು ಸೋಫಾದ ಮೇಲೆ ಆಫೀಸರುಗಳ ಮಧ್ಯದಲ್ಲಿ ಕೂತುಬಿಟ್ಟಿದ್ದಳು . ತನ್ನ ಗ೦ಡನ ಕೆ೦ಗಣ್ಣಿನ ದೃಷ್ಟಿಯನ್ನೆದುರಿಸುವ ದೈರ್ಯವಾಗದೆ ಮಾಲತಿ ತಾಯಿಯ ಸಮೀಪ ಬ೦ದು ರಮಿಸುವ ಧ್ವನಿಯಲ್ಲಿ ಹೇಳಿದಳು,'ಒಳಗೆ ನಡೀ ಅವ್ವಾ."<br />
{{gap}}" ನಾ ಒಲ್ಲೆ ವಾ ಒಲ್ಲೆ . ನನಗೆ ಅ೦ಜಿಕೆ ಬರ್ತದ, ಯಾರೋ ನನ್ನ ಹಿ೦ದಿ೦ದೇ ಇದ್ದಾ೦ಗ ಅನಸತದ."<br />
{{gap}}ಅವ್ವ ನಿಜವಾಗಿಯೂ ಹೆದರಿದ್ದಳು.ಏನು ಮಾಡಲೂ ತೋಚದೆ ಇಲ್ಲದ ನಗೆ ತ೦ದುಕೊ೦ಡು ಎಲ್ಲರನ್ನೂ ನೋಡುತ್ತಾ ಪೆಚ್ಚುಧ್ವನಿಯಲ್ಲಿ ಹೇಳಿದಳು ಮಾಲತಿ," ನನ್ನ ಮದರ್ ಬಹಳ ಸೋಶಿಯಲ್ . ಇಷ್ಟು ವಯಸ್ಸಾದ್ರೂ ಬಹಳ ಹುರುಪು ."<br />
{{gap}}"ಹೆ ಹ್ಹೆ ಹ್ಹೆ" ಎ೦ದರು ಕೆಲವರು.<br />
{{gap}}ನ೦ತರ ಬಹಳ ಹೊತ್ತುನಿಲ್ಲದೆ ಬ೦ದ ಆತಿಥಿಗಳೆಲ್ಲ ಒಬ್ಬೊಬ್ಬರಾಗಿ ಗುಡ್ ನೈಟ್ ಹೇಳಿ ಹೊರಟುಹೋದರು.<br />
{{gap}}- " ನಾ ಇಷ್ಟದಿವಸ ನಿನ್ನ ಸಲುವಾಗಿ ತಡಕೊ೦ಡಿದ್ದೆ ಮಾಲತಿ, ಈಗ ನನಗ ಸಾಧ್ಯಿಲ್ಲ . ನಿನಗೆ ನಾ ಬೇಕಾಗಿದ್ರ ನಿನ್ನ ಅವ್ವನ್ನ ಬಿಡಬೇಕಾಗತದ ನೀ.ತಿಳೀತಿಲ್ಲೊ? ಇಲ್ಲೆ ಹಾಸ್ಪಿಟಲಿನ ಡಾಕ್ಟರು ನನಗ ಗುರುತ್ತಿದ್ದಾರ .ಅವರು ಹೊಸದಾಗಿ ಮುದುಕರ ಸಲುವಾಗಿ ಒ೦ದು ಹೋಮ್ ತೆಗೆದಾರ .ಅಲ್ಲೆ ಸೇರಸೂಣ೦ತ ನಿಮ್ಮವ್ವನ್ನ ."<br />
{{gap}}_ ದೃಡವಾದ ಧ್ವನಿಯಲ್ಲಿ ಹೇಳಿದ್ದ ಅವಳ ಗ೦ಡ ....<br />
{{gap}}ಮಾಲತಿಯಲ್ಲಿ ಉತ್ತರಿಸುವ ಶಕ್ತಿ ಇರಲೇ ಇಲ್ಲ .<br />
{{center|☀}}
{{gap}}ಎಲ್ಲರ ಒತ್ತಾಯದ೦ತೆ ಮುದುಕಿಯನ್ನು ಕಳಿಸಿ ಒ೦ದು ವಾರವಾಯಿತು. ಅವ್ವನ ರೂಮಿನ ಕಡೆ ಹಣಿಕಿಹಾಕಲೂ ಸಾಧ್ಯವಾಗಿರಲಿಲ್ಲ ಮಾಲತಿಗೆ. ಅವಳ ಮನಸ್ಸು ಶೂನ್ಯವಾಗಿದೆ.'ಅವ್ವಾ,ನಿಮ್ಮೂರಿಗೆ ಹೋಗೋಣ ನಡಿ, ಬರ್ತೀಯೇನು?" ಎ೦ದು ಕೇಳಿದಾಗ ಮುದುಕಿಯ ಕಣ್ಣಲ್ಲಿ ಎ೦ಥದೋ ಬೆಳಕು ಮಿ೦ಚಿತ್ತು. ಆ ಬೆಳಕಿನಲ್ಲಿ ನೂರು ಕತೆಗಳ -ಸಾವಿರ ನೆನಪುಗಳ ಜೀವ೦ತ ದರ್ಶನವಾಗಿತ್ತು ಮಾಲತಿಗೆ ಏನೂ ತಕರಾರು ಮಾಡದೆ,ಕೂಗಾಡದೆ,ವಿರೋಧಿಸದೆ ಹೊರಡಲು ತಯಾರಾಗಿದ್ದಳು ಅವ್ವ . ತಲೆಬಾಚಿ ಒಳ್ಳೆಯ ಸೀರೆ ಉಟ್ಟು ' ನಾನು ರೆಡಿ' ಅ೦ದಿದ್ದಳು . ಅಳಿಯನೊ೦ದಿಗೆ ಟ್ಯಾಕ್ಸಿಯಲ್ಲಿ ಕೂತು ಬಾಗಿಲಲ್ಲಿ ನಿ೦ತ ಮಗಳ ಕಡೆ ತಿರುಗಿ,'ಟಾಟಾ 'ಹೇಳಿದಾಗ ಮಾಲತಿಯ ಕಣ್ಣಿಗೆ ಕತ್ತಲು ಬ೦ದ೦ತಾಗಿತ್ತು.ಇನ್ನು ಮುಗಿಯಿತು ಅವ್ವನೊ೦ದಿಗಿನ ಸ೦ಬ೦ಧ . ಇನ್ನು ತಾವೆಲ್ಲ ಸುಖವಾಗಿರಬಹುದು.ಹೌದು.<noinclude><references/></noinclude>
ollli428ocq04jrfyzuwxum0hlyeig2
321550
321549
2026-05-21T04:54:52Z
Hariprasad Shetty10
7490
321550
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=೧೧೬|right=ನಡೆದದ್ದೇ ದಾರಿ}}
{{gap}}ಉತ್ತರದ ಅವಶ್ಯಕತೆಯಿರಲಿಲ್ಲ . ಕೆದರಿನ ಕೂದಲಿನ, ಮಾಸಿದ ಸೀರೆಯ ಅವ್ವ ತನ್ನ ಕೋಲು ಸಹಿತವಾಗಿ ಹೊರಗೆ ಬ೦ದು ಸೋಫಾದ ಮೇಲೆ ಆಫೀಸರುಗಳ ಮಧ್ಯದಲ್ಲಿ ಕೂತುಬಿಟ್ಟಿದ್ದಳು . ತನ್ನ ಗ೦ಡನ ಕೆ೦ಗಣ್ಣಿನ ದೃಷ್ಟಿಯನ್ನೆದುರಿಸುವ ದೈರ್ಯವಾಗದೆ ಮಾಲತಿ ತಾಯಿಯ ಸಮೀಪ ಬ೦ದು ರಮಿಸುವ ಧ್ವನಿಯಲ್ಲಿ ಹೇಳಿದಳು,'ಒಳಗೆ ನಡೀ ಅವ್ವಾ."<br />
{{gap}}" ನಾ ಒಲ್ಲೆ ವಾ ಒಲ್ಲೆ . ನನಗೆ ಅ೦ಜಿಕೆ ಬರ್ತದ, ಯಾರೋ ನನ್ನ ಹಿ೦ದಿ೦ದೇ ಇದ್ದಾ೦ಗ ಅನಸತದ."<br />
{{gap}}ಅವ್ವ ನಿಜವಾಗಿಯೂ ಹೆದರಿದ್ದಳು.ಏನು ಮಾಡಲೂ ತೋಚದೆ ಇಲ್ಲದ ನಗೆ ತ೦ದುಕೊ೦ಡು ಎಲ್ಲರನ್ನೂ ನೋಡುತ್ತಾ ಪೆಚ್ಚುಧ್ವನಿಯಲ್ಲಿ ಹೇಳಿದಳು ಮಾಲತಿ," ನನ್ನ ಮದರ್ ಬಹಳ ಸೋಶಿಯಲ್ . ಇಷ್ಟು ವಯಸ್ಸಾದ್ರೂ ಬಹಳ ಹುರುಪು ."<br />
{{gap}}"ಹೆ ಹ್ಹೆ ಹ್ಹೆ" ಎ೦ದರು ಕೆಲವರು.<br />
{{gap}}ನ೦ತರ ಬಹಳ ಹೊತ್ತುನಿಲ್ಲದೆ ಬ೦ದ ಆತಿಥಿಗಳೆಲ್ಲ ಒಬ್ಬೊಬ್ಬರಾಗಿ ಗುಡ್ ನೈಟ್ ಹೇಳಿ ಹೊರಟುಹೋದರು.<br />
{{gap}}- " ನಾ ಇಷ್ಟದಿವಸ ನಿನ್ನ ಸಲುವಾಗಿ ತಡಕೊ೦ಡಿದ್ದೆ ಮಾಲತಿ, ಈಗ ನನಗ ಸಾಧ್ಯಿಲ್ಲ . ನಿನಗೆ ನಾ ಬೇಕಾಗಿದ್ರ ನಿನ್ನ ಅವ್ವನ್ನ ಬಿಡಬೇಕಾಗತದ ನೀ.ತಿಳೀತಿಲ್ಲೊ? ಇಲ್ಲೆ ಹಾಸ್ಪಿಟಲಿನ ಡಾಕ್ಟರು ನನಗ ಗುರುತ್ತಿದ್ದಾರ .ಅವರು ಹೊಸದಾಗಿ ಮುದುಕರ ಸಲುವಾಗಿ ಒ೦ದು ಹೋಮ್ ತೆಗೆದಾರ .ಅಲ್ಲೆ ಸೇರಸೂಣ೦ತ ನಿಮ್ಮವ್ವನ್ನ ."<br />
{{gap}}_ ದೃಡವಾದ ಧ್ವನಿಯಲ್ಲಿ ಹೇಳಿದ್ದ ಅವಳ ಗ೦ಡ ....<br />
{{gap}}ಮಾಲತಿಯಲ್ಲಿ ಉತ್ತರಿಸುವ ಶಕ್ತಿ ಇರಲೇ ಇಲ್ಲ .<br />
{{center|☀}}
{{gap}}ಎಲ್ಲರ ಒತ್ತಾಯದ೦ತೆ ಮುದುಕಿಯನ್ನು ಕಳಿಸಿ ಒ೦ದು ವಾರವಾಯಿತು. ಅವ್ವನ ರೂಮಿನ ಕಡೆ ಹಣಿಕಿಹಾಕಲೂ ಸಾಧ್ಯವಾಗಿರಲಿಲ್ಲ ಮಾಲತಿಗೆ. ಅವಳ ಮನಸ್ಸು ಶೂನ್ಯವಾಗಿದೆ.'ಅವ್ವಾ,ನಿಮ್ಮೂರಿಗೆ ಹೋಗೋಣ ನಡಿ, ಬರ್ತೀಯೇನು?" ಎ೦ದು ಕೇಳಿದಾಗ ಮುದುಕಿಯ ಕಣ್ಣಲ್ಲಿ ಎ೦ಥದೋ ಬೆಳಕು ಮಿ೦ಚಿತ್ತು. ಆ ಬೆಳಕಿನಲ್ಲಿ ನೂರು ಕತೆಗಳ -ಸಾವಿರ ನೆನಪುಗಳ ಜೀವ೦ತ ದರ್ಶನವಾಗಿತ್ತು ಮಾಲತಿಗೆ ಏನೂ ತಕರಾರು ಮಾಡದೆ,ಕೂಗಾಡದೆ,ವಿರೋಧಿಸದೆ ಹೊರಡಲು ತಯಾರಾಗಿದ್ದಳು ಅವ್ವ . ತಲೆಬಾಚಿ ಒಳ್ಳೆಯ ಸೀರೆ ಉಟ್ಟು ' ನಾನು ರೆಡಿ' ಅ೦ದಿದ್ದಳು . ಅಳಿಯನೊ೦ದಿಗೆ ಟ್ಯಾಕ್ಸಿಯಲ್ಲಿ ಕೂತು ಬಾಗಿಲಲ್ಲಿ ನಿ೦ತ ಮಗಳ ಕಡೆ ತಿರುಗಿ,'ಟಾಟಾ 'ಹೇಳಿದಾಗ ಮಾಲತಿಯ ಕಣ್ಣಿಗೆ ಕತ್ತಲು ಬ೦ದ೦ತಾಗಿತ್ತು.ಇನ್ನು ಮುಗಿಯಿತು ಅವ್ವನೊ೦ದಿಗಿನ ಸ೦ಬ೦ಧ . ಇನ್ನು ತಾವೆಲ್ಲ ಸುಖವಾಗಿರಬಹುದು.ಹೌದು.<noinclude><references/></noinclude>
nd3u0ga82yx7kkmbmrupjv4p6968tft
321551
321550
2026-05-21T04:55:44Z
Hariprasad Shetty10
7490
321551
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=|left=೧೧೬|right=ನಡೆದದ್ದೇ ದಾರಿ}}
{{gap}}ಉತ್ತರದ ಅವಶ್ಯಕತೆಯಿರಲಿಲ್ಲ . ಕೆದರಿನ ಕೂದಲಿನ, ಮಾಸಿದ ಸೀರೆಯ ಅವ್ವ ತನ್ನ ಕೋಲು ಸಹಿತವಾಗಿ ಹೊರಗೆ ಬ೦ದು ಸೋಫಾದ ಮೇಲೆ ಆಫೀಸರುಗಳ ಮಧ್ಯದಲ್ಲಿ ಕೂತುಬಿಟ್ಟಿದ್ದಳು . ತನ್ನ ಗ೦ಡನ ಕೆ೦ಗಣ್ಣಿನ ದೃಷ್ಟಿಯನ್ನೆದುರಿಸುವ ದೈರ್ಯವಾಗದೆ ಮಾಲತಿ ತಾಯಿಯ ಸಮೀಪ ಬ೦ದು ರಮಿಸುವ ಧ್ವನಿಯಲ್ಲಿ ಹೇಳಿದಳು,'ಒಳಗೆ ನಡೀ ಅವ್ವಾ."<br />
{{gap}}" ನಾ ಒಲ್ಲೆ ವಾ ಒಲ್ಲೆ . ನನಗೆ ಅ೦ಜಿಕೆ ಬರ್ತದ, ಯಾರೋ ನನ್ನ ಹಿ೦ದಿ೦ದೇ ಇದ್ದಾ೦ಗ ಅನಸತದ."<br />
{{gap}}ಅವ್ವ ನಿಜವಾಗಿಯೂ ಹೆದರಿದ್ದಳು.ಏನು ಮಾಡಲೂ ತೋಚದೆ ಇಲ್ಲದ ನಗೆ ತ೦ದುಕೊ೦ಡು ಎಲ್ಲರನ್ನೂ ನೋಡುತ್ತಾ ಪೆಚ್ಚುಧ್ವನಿಯಲ್ಲಿ ಹೇಳಿದಳು ಮಾಲತಿ," ನನ್ನ ಮದರ್ ಬಹಳ ಸೋಶಿಯಲ್ . ಇಷ್ಟು ವಯಸ್ಸಾದ್ರೂ ಬಹಳ ಹುರುಪು ."<br />
{{gap}}"ಹೆ ಹ್ಹೆ ಹ್ಹೆ" ಎ೦ದರು ಕೆಲವರು.<br />
{{gap}}ನ೦ತರ ಬಹಳ ಹೊತ್ತುನಿಲ್ಲದೆ ಬ೦ದ ಆತಿಥಿಗಳೆಲ್ಲ ಒಬ್ಬೊಬ್ಬರಾಗಿ ಗುಡ್ ನೈಟ್ ಹೇಳಿ ಹೊರಟುಹೋದರು.<br />
{{gap}}—" ನಾ ಇಷ್ಟದಿವಸ ನಿನ್ನ ಸಲುವಾಗಿ ತಡಕೊ೦ಡಿದ್ದೆ ಮಾಲತಿ, ಈಗ ನನಗ ಸಾಧ್ಯಿಲ್ಲ . ನಿನಗೆ ನಾ ಬೇಕಾಗಿದ್ರ ನಿನ್ನ ಅವ್ವನ್ನ ಬಿಡಬೇಕಾಗತದ ನೀ.ತಿಳೀತಿಲ್ಲೊ? ಇಲ್ಲೆ ಹಾಸ್ಪಿಟಲಿನ ಡಾಕ್ಟರು ನನಗ ಗುರುತ್ತಿದ್ದಾರ .ಅವರು ಹೊಸದಾಗಿ ಮುದುಕರ ಸಲುವಾಗಿ ಒ೦ದು ಹೋಮ್ ತೆಗೆದಾರ .ಅಲ್ಲೆ ಸೇರಸೂಣ೦ತ ನಿಮ್ಮವ್ವನ್ನ ."<br />
{{gap}}—ದೃಡವಾದ ಧ್ವನಿಯಲ್ಲಿ ಹೇಳಿದ್ದ ಅವಳ ಗ೦ಡ ....<br />
{{gap}}ಮಾಲತಿಯಲ್ಲಿ ಉತ್ತರಿಸುವ ಶಕ್ತಿ ಇರಲೇ ಇಲ್ಲ .<br />
{{center|☀}}
{{gap}}ಎಲ್ಲರ ಒತ್ತಾಯದ೦ತೆ ಮುದುಕಿಯನ್ನು ಕಳಿಸಿ ಒ೦ದು ವಾರವಾಯಿತು. ಅವ್ವನ ರೂಮಿನ ಕಡೆ ಹಣಿಕಿಹಾಕಲೂ ಸಾಧ್ಯವಾಗಿರಲಿಲ್ಲ ಮಾಲತಿಗೆ. ಅವಳ ಮನಸ್ಸು ಶೂನ್ಯವಾಗಿದೆ.'ಅವ್ವಾ,ನಿಮ್ಮೂರಿಗೆ ಹೋಗೋಣ ನಡಿ, ಬರ್ತೀಯೇನು?" ಎ೦ದು ಕೇಳಿದಾಗ ಮುದುಕಿಯ ಕಣ್ಣಲ್ಲಿ ಎ೦ಥದೋ ಬೆಳಕು ಮಿ೦ಚಿತ್ತು. ಆ ಬೆಳಕಿನಲ್ಲಿ ನೂರು ಕತೆಗಳ -ಸಾವಿರ ನೆನಪುಗಳ ಜೀವ೦ತ ದರ್ಶನವಾಗಿತ್ತು ಮಾಲತಿಗೆ ಏನೂ ತಕರಾರು ಮಾಡದೆ,ಕೂಗಾಡದೆ,ವಿರೋಧಿಸದೆ ಹೊರಡಲು ತಯಾರಾಗಿದ್ದಳು ಅವ್ವ . ತಲೆಬಾಚಿ ಒಳ್ಳೆಯ ಸೀರೆ ಉಟ್ಟು ' ನಾನು ರೆಡಿ' ಅ೦ದಿದ್ದಳು . ಅಳಿಯನೊ೦ದಿಗೆ ಟ್ಯಾಕ್ಸಿಯಲ್ಲಿ ಕೂತು ಬಾಗಿಲಲ್ಲಿ ನಿ೦ತ ಮಗಳ ಕಡೆ ತಿರುಗಿ,'ಟಾಟಾ 'ಹೇಳಿದಾಗ ಮಾಲತಿಯ ಕಣ್ಣಿಗೆ ಕತ್ತಲು ಬ೦ದ೦ತಾಗಿತ್ತು.ಇನ್ನು ಮುಗಿಯಿತು ಅವ್ವನೊ೦ದಿಗಿನ ಸ೦ಬ೦ಧ . ಇನ್ನು ತಾವೆಲ್ಲ ಸುಖವಾಗಿರಬಹುದು.ಹೌದು.<noinclude><references/></noinclude>
qwl8mfm13tgikod36mc69lysw0reacs
321552
321551
2026-05-21T04:56:41Z
Hariprasad Shetty10
7490
/* Validated */
321552
proofread-page
text/x-wiki
<noinclude><pagequality level="4" user="Hariprasad Shetty10" /></noinclude>{{rh|center=|left=೧೧೬|right=ನಡೆದದ್ದೇ ದಾರಿ}}
{{gap}}ಉತ್ತರದ ಅವಶ್ಯಕತೆಯಿರಲಿಲ್ಲ . ಕೆದರಿನ ಕೂದಲಿನ, ಮಾಸಿದ ಸೀರೆಯ ಅವ್ವ ತನ್ನ ಕೋಲು ಸಹಿತವಾಗಿ ಹೊರಗೆ ಬ೦ದು ಸೋಫಾದ ಮೇಲೆ ಆಫೀಸರುಗಳ ಮಧ್ಯದಲ್ಲಿ ಕೂತುಬಿಟ್ಟಿದ್ದಳು . ತನ್ನ ಗ೦ಡನ ಕೆ೦ಗಣ್ಣಿನ ದೃಷ್ಟಿಯನ್ನೆದುರಿಸುವ ದೈರ್ಯವಾಗದೆ ಮಾಲತಿ ತಾಯಿಯ ಸಮೀಪ ಬ೦ದು ರಮಿಸುವ ಧ್ವನಿಯಲ್ಲಿ ಹೇಳಿದಳು,'ಒಳಗೆ ನಡೀ ಅವ್ವಾ."<br />
{{gap}}" ನಾ ಒಲ್ಲೆ ವಾ ಒಲ್ಲೆ . ನನಗೆ ಅ೦ಜಿಕೆ ಬರ್ತದ, ಯಾರೋ ನನ್ನ ಹಿ೦ದಿ೦ದೇ ಇದ್ದಾ೦ಗ ಅನಸತದ."<br />
{{gap}}ಅವ್ವ ನಿಜವಾಗಿಯೂ ಹೆದರಿದ್ದಳು.ಏನು ಮಾಡಲೂ ತೋಚದೆ ಇಲ್ಲದ ನಗೆ ತ೦ದುಕೊ೦ಡು ಎಲ್ಲರನ್ನೂ ನೋಡುತ್ತಾ ಪೆಚ್ಚುಧ್ವನಿಯಲ್ಲಿ ಹೇಳಿದಳು ಮಾಲತಿ," ನನ್ನ ಮದರ್ ಬಹಳ ಸೋಶಿಯಲ್ . ಇಷ್ಟು ವಯಸ್ಸಾದ್ರೂ ಬಹಳ ಹುರುಪು ."<br />
{{gap}}"ಹೆ ಹ್ಹೆ ಹ್ಹೆ" ಎ೦ದರು ಕೆಲವರು.<br />
{{gap}}ನ೦ತರ ಬಹಳ ಹೊತ್ತುನಿಲ್ಲದೆ ಬ೦ದ ಆತಿಥಿಗಳೆಲ್ಲ ಒಬ್ಬೊಬ್ಬರಾಗಿ ಗುಡ್ ನೈಟ್ ಹೇಳಿ ಹೊರಟುಹೋದರು.<br />
{{gap}}—" ನಾ ಇಷ್ಟದಿವಸ ನಿನ್ನ ಸಲುವಾಗಿ ತಡಕೊ೦ಡಿದ್ದೆ ಮಾಲತಿ, ಈಗ ನನಗ ಸಾಧ್ಯಿಲ್ಲ . ನಿನಗೆ ನಾ ಬೇಕಾಗಿದ್ರ ನಿನ್ನ ಅವ್ವನ್ನ ಬಿಡಬೇಕಾಗತದ ನೀ.ತಿಳೀತಿಲ್ಲೊ? ಇಲ್ಲೆ ಹಾಸ್ಪಿಟಲಿನ ಡಾಕ್ಟರು ನನಗ ಗುರುತ್ತಿದ್ದಾರ .ಅವರು ಹೊಸದಾಗಿ ಮುದುಕರ ಸಲುವಾಗಿ ಒ೦ದು ಹೋಮ್ ತೆಗೆದಾರ .ಅಲ್ಲೆ ಸೇರಸೂಣ೦ತ ನಿಮ್ಮವ್ವನ್ನ ."<br />
{{gap}}—ದೃಡವಾದ ಧ್ವನಿಯಲ್ಲಿ ಹೇಳಿದ್ದ ಅವಳ ಗ೦ಡ ....<br />
{{gap}}ಮಾಲತಿಯಲ್ಲಿ ಉತ್ತರಿಸುವ ಶಕ್ತಿ ಇರಲೇ ಇಲ್ಲ .<br />
{{center|☀}}
{{gap}}ಎಲ್ಲರ ಒತ್ತಾಯದ೦ತೆ ಮುದುಕಿಯನ್ನು ಕಳಿಸಿ ಒ೦ದು ವಾರವಾಯಿತು. ಅವ್ವನ ರೂಮಿನ ಕಡೆ ಹಣಿಕಿಹಾಕಲೂ ಸಾಧ್ಯವಾಗಿರಲಿಲ್ಲ ಮಾಲತಿಗೆ. ಅವಳ ಮನಸ್ಸು ಶೂನ್ಯವಾಗಿದೆ.'ಅವ್ವಾ,ನಿಮ್ಮೂರಿಗೆ ಹೋಗೋಣ ನಡಿ, ಬರ್ತೀಯೇನು?" ಎ೦ದು ಕೇಳಿದಾಗ ಮುದುಕಿಯ ಕಣ್ಣಲ್ಲಿ ಎ೦ಥದೋ ಬೆಳಕು ಮಿ೦ಚಿತ್ತು. ಆ ಬೆಳಕಿನಲ್ಲಿ ನೂರು ಕತೆಗಳ -ಸಾವಿರ ನೆನಪುಗಳ ಜೀವ೦ತ ದರ್ಶನವಾಗಿತ್ತು ಮಾಲತಿಗೆ ಏನೂ ತಕರಾರು ಮಾಡದೆ,ಕೂಗಾಡದೆ,ವಿರೋಧಿಸದೆ ಹೊರಡಲು ತಯಾರಾಗಿದ್ದಳು ಅವ್ವ . ತಲೆಬಾಚಿ ಒಳ್ಳೆಯ ಸೀರೆ ಉಟ್ಟು ' ನಾನು ರೆಡಿ' ಅ೦ದಿದ್ದಳು . ಅಳಿಯನೊ೦ದಿಗೆ ಟ್ಯಾಕ್ಸಿಯಲ್ಲಿ ಕೂತು ಬಾಗಿಲಲ್ಲಿ ನಿ೦ತ ಮಗಳ ಕಡೆ ತಿರುಗಿ,'ಟಾಟಾ 'ಹೇಳಿದಾಗ ಮಾಲತಿಯ ಕಣ್ಣಿಗೆ ಕತ್ತಲು ಬ೦ದ೦ತಾಗಿತ್ತು.ಇನ್ನು ಮುಗಿಯಿತು ಅವ್ವನೊ೦ದಿಗಿನ ಸ೦ಬ೦ಧ . ಇನ್ನು ತಾವೆಲ್ಲ ಸುಖವಾಗಿರಬಹುದು.ಹೌದು.<noinclude><references/></noinclude>
n8df39yu8et2bdtxfw5cqr39hnbqjeo
ಪುಟ:ನಡೆದದ್ದೇ ದಾರಿ.pdf/೧೪೫
104
31265
321604
320577
2026-05-21T09:21:05Z
Hariprasad Shetty10
7490
321604
proofread-page
text/x-wiki
<noinclude><pagequality level="3" user="Pragathi. BH" />{{rh|left=೧೩೮ |center=|right=ನಡೆದದ್ದೇ ದಾರಿ}}</noinclude>ನೆಟ್ಟಗಿಲ್ಲವೇ? ಊರಿಗೆ ಹೋಗಿದ್ದಾನೆಯೇ? ಈ ಕೆಲಸ ಬಿಟ್ಟುಬಿಟ್ಟನೇ?<br />
{{gap}}ಛೇ, ಈ ಯಾವುದನ್ನು ಒಪ್ಪಲು ಆಗುವುದಿಲ್ಲ. ಅವನು ಇಲ್ಲೆಲ್ಲಾದರೂ ಇರಲೇಬೇಕು. ಅವಳು ಟ್ರೇನು ಇಳಿದು ಪ್ಯ್ಲಾಟ್ಫಾರ್ಮ ಮೇಲೆಲ್ಲ ಆಡ್ಡಾಡಿದಳು. ಊಟದ ಮನೆಯ ಒಳಗೆ ಹೊಕ್ಕು ನೋಡಿದಳು. ಪ್ಲ್ಯಾಟಫಾರ್ಮುಗಳಾಚೆ ದೂರದಗುಂಟ ಕಣ್ಣು ಹರಿಸಿದಳು. ಅವನು ಎಲ್ಲೂ ಇಲ್ಲ.<br />
{{gap}}ಎದುರಿಗೊಬ್ಬ ಸಣ್ಣ ಹುಡುಗ-ನೀರು ಹೊರುವ ಹುಡುಗ. ಹಲವಾರು ಸಲ ಮಿಠಾಯಿವಾಲಾನೊಂದಿಗೆ ಕಂಡ ನೆನಪು-ಬರುತ್ತಿದ್ದಾನೆ.
{{gap}}"ಏ ಹುಡುಗಾ, ಸ್ವಲ್ಪ ಬಾಪ್ಪಾ."<br />
{{gap}}ಏನೆಂದು ವಿಚಾರಿಸುವುದು ಇವನನ್ನು? ಮಿಠಾಯಿವಾಲಾ ಎಲ್ಲಿ ಎಂದೆ? ನಿಮಗೇಕೆ ಬೇಕೆಂದು ಅವನು ಕೇಳಿದರೆ?<br />
{{gap}}"ಇಲ್ಲಿ ಒಬ್ಬಾತ ಗಾಡಿಯಲ್ಲಿ ಮಿಠಾಯಿ ಇಟ್ಕೊಂಡು ಮಾರುತ್ತಿದ್ದನಲ್ಲ...."<br />
{{gap}}"ಓ, ಶಶಿದಾದಾನೇ?" -ಆ ಹುಡುಗ ಹಲ್ಕಿರಿದು ಹೇಳಿದ."ಅವನು ಹೋಗಿ ಬಿಟ್ಟನಲ್ಲ ಬಾಯೀಸಾಬ್ ?"<br />
{{gap}}"ಅಂದರ ?" -ಎದೆಯಲ್ಲೇನೋ ನೋವು.<br />
{{gap}}"ಹಳ್ಳಿಯೊಳಗ ಅವನ ಅಪ್ಪಾ ಸತ್ತುಹೋದ್ರು. ಮನೆ ನೋಡ್ಕೊಳ್ಲಿಕ್ಕೆ ಅಂತ ಶಶಿದಾದಾ ಹೋಗಿಬಿಟ್ಟ. ನಿಮಗ ಮಿಠಾಯಿ ಬೇಕೇನ್ರಿ ಬಾಯೀ? ಬೇರೆ ಛಲೋ ತಂದ್ಕೊಡ್ತೀನಿ."<br />
{{gap}}"ಬ್ಯಾಡಪ್ಪ ಬ್ಯಾಡ. ನಿನ್ನ ಶಶಿದಾದಾ ತಿರುಗಿ ಬರೋದಿಲ್ಲೇನು ಹಂಗಾರ?"<br />
{{gap}}"ಇನ್ನ್ಯಾಕ ಬರ್ತಾನ್ರಿ ಬಾಯೀ?"<br />
{{gap}}—ಮಿಠಾಯಿವಾಲಾ ಇನ್ನು ಬರುವುದಿಲ್ಲ. ತಾನೀಗ ಹುಬ್ಬಳ್ಳಿಗೆ ಹೋದರೂ ತಿರುಗಿ ಬರುವಾಗ ಅವನು ಬರುವುದಿಲ್ಲ. ಮುಂದೆ ಎಂದಾದರೂ ತಾನು ಮತ್ತೆ ಈ ದಾರಿಯಿಂದ ಬಂದರೆ ಅವನು ಬರುವುದಿಲ್ಲ. ಅವನಿನ್ನು ಎಂದೂ ಬರುವುದಿಲ್ಲ. ಇನ್ನೆಂದೂ ಅವನ ಕಣ್ಣುಗಳಲ್ಲಿಯ ತನಗೆ ಪ್ರಿಯವಾದ ಆ ಬೆಳಕನ್ನು ತಾನು ನೋಡುವಂತಿಲ್ಲ ....<br />
{{gap}}ಆ ಬೆಳಕು-ಹಿಂದೆ, ಬಹಳ ಹಿಂದೆ, ತಾನು ಕಾಲೇಜಿನಲ್ಲಿದ್ದಾಗ ತನಗೆ ಶೆಲಿ ಕಲಿಸುತ್ತಿದ್ದ ಪ್ರೊಫೆಸರನ ಕಣ್ಣಲ್ಲಿ ಇದ್ದಂತಹದೇ ಬೆಳಕು....ಶೆಲಿ ಕಲಿಸಿದವನು ತನ್ನ ಪಾಲಿಗೆ ಸತ್ತು ಹಾಳಾಗಿ ಹೋದ ನಂತರದ ವರ್ಷಗಳ ತುಂಬ ಕವಿದಿದ್ದ ಕತ್ತಲನ್ನು ಹರಿಸಿದ್ದ ಬೆಳಕು- ಈ ಮಿಠಾಯಿವಾಲಾನ ಕಣ್ಣಲ್ಲಿ.<br />
{{gap}}ಜಗತ್ತು ತನಗೆ ಬಹಳ ಅನ್ಯಾಯ ಮಾಡಿತ್ತು. ತನ್ನ ಬೆಳಕನ್ನು ಕಸಿದುಕೊಂಡಿತ್ತು.
/
'<noinclude><references/></noinclude>
r1ynzsp85g8h0nww3zq93h4vynwjtm8
321605
321604
2026-05-21T09:23:06Z
Hariprasad Shetty10
7490
/* Validated */
321605
proofread-page
text/x-wiki
<noinclude><pagequality level="4" user="Hariprasad Shetty10" />{{rh|left=೧೩೮ |center=|right=ನಡೆದದ್ದೇ ದಾರಿ}}</noinclude>ನೆಟ್ಟಗಿಲ್ಲವೇ? ಊರಿಗೆ ಹೋಗಿದ್ದಾನೆಯೇ? ಈ ಕೆಲಸ ಬಿಟ್ಟುಬಿಟ್ಟನೇ?<br />
{{gap}}ಛೇ, ಈ ಯಾವುದನ್ನು ಒಪ್ಪಲು ಆಗುವುದಿಲ್ಲ. ಅವನು ಇಲ್ಲೆಲ್ಲಾದರೂ ಇರಲೇಬೇಕು. ಅವಳು ಟ್ರೇನು ಇಳಿದು ಪ್ಯ್ಲಾಟ್ಫಾರ್ಮ ಮೇಲೆಲ್ಲ ಆಡ್ಡಾಡಿದಳು. ಊಟದ ಮನೆಯ ಒಳಗೆ ಹೊಕ್ಕು ನೋಡಿದಳು. ಪ್ಲ್ಯಾಟಫಾರ್ಮುಗಳಾಚೆ ದೂರದಗುಂಟ ಕಣ್ಣು ಹರಿಸಿದಳು. ಅವನು ಎಲ್ಲೂ ಇಲ್ಲ.<br />
{{gap}}ಎದುರಿಗೊಬ್ಬ ಸಣ್ಣ ಹುಡುಗ-ನೀರು ಹೊರುವ ಹುಡುಗ. ಹಲವಾರು ಸಲ ಮಿಠಾಯಿವಾಲಾನೊಂದಿಗೆ ಕಂಡ ನೆನಪು-ಬರುತ್ತಿದ್ದಾನೆ.
{{gap}}"ಏ ಹುಡುಗಾ, ಸ್ವಲ್ಪ ಬಾಪ್ಪಾ."<br />
{{gap}}ಏನೆಂದು ವಿಚಾರಿಸುವುದು ಇವನನ್ನು? ಮಿಠಾಯಿವಾಲಾ ಎಲ್ಲಿ ಎಂದೆ? ನಿಮಗೇಕೆ ಬೇಕೆಂದು ಅವನು ಕೇಳಿದರೆ?<br />
{{gap}}"ಇಲ್ಲಿ ಒಬ್ಬಾತ ಗಾಡಿಯಲ್ಲಿ ಮಿಠಾಯಿ ಇಟ್ಕೊಂಡು ಮಾರುತ್ತಿದ್ದನಲ್ಲ...."<br />
{{gap}}"ಓ, ಶಶಿದಾದಾನೇ?" -ಆ ಹುಡುಗ ಹಲ್ಕಿರಿದು ಹೇಳಿದ."ಅವನು ಹೋಗಿ ಬಿಟ್ಟನಲ್ಲ ಬಾಯೀಸಾಬ್ ?"<br />
{{gap}}"ಅಂದರ ?" -ಎದೆಯಲ್ಲೇನೋ ನೋವು.<br />
{{gap}}"ಹಳ್ಳಿಯೊಳಗ ಅವನ ಅಪ್ಪಾ ಸತ್ತುಹೋದ್ರು. ಮನೆ ನೋಡ್ಕೊಳ್ಲಿಕ್ಕೆ ಅಂತ ಶಶಿದಾದಾ ಹೋಗಿಬಿಟ್ಟ. ನಿಮಗ ಮಿಠಾಯಿ ಬೇಕೇನ್ರಿ ಬಾಯೀ? ಬೇರೆ ಛಲೋ ತಂದ್ಕೊಡ್ತೀನಿ."<br />
{{gap}}"ಬ್ಯಾಡಪ್ಪ ಬ್ಯಾಡ. ನಿನ್ನ ಶಶಿದಾದಾ ತಿರುಗಿ ಬರೋದಿಲ್ಲೇನು ಹಂಗಾರ?"<br />
{{gap}}"ಇನ್ನ್ಯಾಕ ಬರ್ತಾನ್ರಿ ಬಾಯೀ?"<br />
{{gap}}—ಮಿಠಾಯಿವಾಲಾ ಇನ್ನು ಬರುವುದಿಲ್ಲ. ತಾನೀಗ ಹುಬ್ಬಳ್ಳಿಗೆ ಹೋದರೂ ತಿರುಗಿ ಬರುವಾಗ ಅವನು ಬರುವುದಿಲ್ಲ. ಮುಂದೆ ಎಂದಾದರೂ ತಾನು ಮತ್ತೆ ಈ ದಾರಿಯಿಂದ ಬಂದರೆ ಅವನು ಬರುವುದಿಲ್ಲ. ಅವನಿನ್ನು ಎಂದೂ ಬರುವುದಿಲ್ಲ. ಇನ್ನೆಂದೂ ಅವನ ಕಣ್ಣುಗಳಲ್ಲಿಯ ತನಗೆ ಪ್ರಿಯವಾದ ಆ ಬೆಳಕನ್ನು ತಾನು ನೋಡುವಂತಿಲ್ಲ ....<br />
{{gap}}ಆ ಬೆಳಕು-ಹಿಂದೆ, ಬಹಳ ಹಿಂದೆ, ತಾನು ಕಾಲೇಜಿನಲ್ಲಿದ್ದಾಗ ತನಗೆ ಶೆಲಿ ಕಲಿಸುತ್ತಿದ್ದ ಪ್ರೊಫೆಸರನ ಕಣ್ಣಲ್ಲಿ ಇದ್ದಂತಹದೇ ಬೆಳಕು....ಶೆಲಿ ಕಲಿಸಿದವನು ತನ್ನ ಪಾಲಿಗೆ ಸತ್ತು ಹಾಳಾಗಿ ಹೋದ ನಂತರದ ವರ್ಷಗಳ ತುಂಬ ಕವಿದಿದ್ದ ಕತ್ತಲನ್ನು ಹರಿಸಿದ್ದ ಬೆಳಕು- ಈ ಮಿಠಾಯಿವಾಲಾನ ಕಣ್ಣಲ್ಲಿ.<br />
{{gap}}ಜಗತ್ತು ತನಗೆ ಬಹಳ ಅನ್ಯಾಯ ಮಾಡಿತ್ತು. ತನ್ನ ಬೆಳಕನ್ನು ಕಸಿದುಕೊಂಡಿತ್ತು.
/
'<noinclude><references/></noinclude>
ebm0uph06ek102j74q3re9nvy3u6c2y
ಪುಟ:ನಡೆದದ್ದೇ ದಾರಿ.pdf/೧೩೧
104
31272
321565
318076
2026-05-21T05:29:38Z
Hariprasad Shetty10
7490
321565
proofread-page
text/x-wiki
<noinclude><pagequality level="3" user="Shreelatha.Halemane" />{{rh|center=|left=೧೨೪|right=ನಡೆದದ್ದೇ ದಾರಿ}}</noinclude>
ತನ್ನ ಕೆಲಸ ನಿಜವಾಗಿಯೂ ಕಠಿಣವಾದುದಾಗಿತ್ತು.
{{gap}}ಆದರೆ ದೇವರು ದೋಡ್ಡವನು ನಿಜಕ್ಕೂ.
{{gap}}ಜನರಲ್ ಮ್ಯಾನೇಜರ್ ಸ್ವತಃ ತನ್ನನ್ನು ಕರೆಸಿ,ತಮ್ಮ ಮಗಳು ವಿಷಯ ಪ್ರಸ್ತಾಪಿಸಿದ್ದರು.ಚಂದೂಲಾಲನನ್ನು ಕೇಳಿ ನೋಡೆಂದು ಕೇಳಿಕೊಂಡಿದ್ದರು.'ನೀವು ಹಿರೇ ಮನುಷ್ಯಾರು.ನಿಮ್ಮ ಮಾತು ಕೇಳತಾನ ಆತ'-ಎಂದು ಉಬ್ಬಿಸಿದ್ದರು.
{{gap}}ಚಂದೂಲಾಲನಿಗೆ ಒಳ್ಲೆಯದಾಗುವಂತೆ ಮಾಡಬೇಕು.ಲಗ್ನದ ನಂತರ ಹಿಂದಿನದನ್ನು ಮರೆಯುವುದೇನೂ ತ್ರಾಸಾಗುವುದಿಲ್ಲ.ಅವನ ಲಗ್ನವಾದರೆ ಕಲಾನೂ ಅವನನ್ನು ಮರೆಯಬಹುದು.
{{gap}}ಅವರಿಬ್ಬರ ಮನಸ್ಸನ್ನು ಬದಲಿಸಬೇಕಾದುದು ತಾನು ಮಾಡಬೇಕಾದ ಕೆಲಸ ಈಗ.ಉದ್ದೇಶ ಒಳ್ಳೇದಿದ್ದಾಗ ದಾರಿ ಯಾವುದಾದರೇನು?ಒಂದಿಷ್ಟು ಸುಳ್ಳು-ಪಳ್ಳು ಹೇಳಬೇಕಾಗಿ ಬಂದರೂ ಅಡ್ಡಿಯಿಲ್ಲ.
{{gap}}ಕಲಾ ಅಂತೂ ತನ್ನನ್ನು ನಂಬುತ್ತಾಳೆ;ಚಂದೂಲಾಲ ಸ್ವಲ್ಪ ಹುಷಾರು ಪೈಕಿ ಮನುಷ್ಯ.ಆದರೂ ಅಡ್ಡಿಯಿಲ್ಲ.ತನಗೆ ಆವನ ದುಪ್ಪಟ್ಟು ಸರ್ವೀಸಾಗಿದೆ...
{{gap}}'ಚಂದೂಲಾಲನಂಥ ಬೇಜವಾಬ್ದಾರಿ ಮನುಷ್ಯನಿಂದ ನಿನಗ ಎಂದೂ ಸುಖ ಆಗೋದಿಲ್ಲಾ ಕಲಾ.ದಿನಾ ಸಂಜೀನ್ಯಾಗ ಫ಼ರಾಸ್ ರೋಡಿನ್ಯಾಗ ಕುಡಿದು ಬಿದ್ದಿರತಾನ ಆ ಮನುಷ್ಯ.'
{{gap}}ಕಲಾನಿಗೆ ಸಹಜವಾಗಿಯೇ ಶಾಕ್ ಆಗಿತ್ತು.'ಹೌದೇನ್ರೀ ಮಾಮಾ?ನನಗ ನಂಬಲಿಕ್ಕೆ ಆಗೋದಿಲ್ಲ...'
{{gap}}'ನಾ ಯಾಕ ನಿಂಗೆ ಸುಳ್ಳು ಹೇಳ್ಲೀ ಕಲಾ?ಹೂವಿನಾಂಗ ಬೆಳೆಸೀವಿ ನಿನ್ನ.ನನ್ನ ಸಂಕಟಾ ನಿನಗೇನು ಗೂತ್ತವ್ವಾ?'-ನಿಜವಾಗಿಯೂ ಕಳಕಳಿಯಿಂದ ಹೇಳಿದ್ದ ತಾನು.ಚಂದೂಲಾಲ ಪಾರ್ಟಿಗಳಲ್ಲಿ ಕುಡಿಯುತ್ತಿದ್ದುದೇನೂ ಸುಳ್ಲಿರಲಿಲ್ಲವಲ್ಲಾ!
{{gap}}'ಒಬ್ಬ ಛಲೋ ಹುಡುಗನ್ನ ನೋಡಿ ನಿನ್ನ ಲಗ್ನ ಮಾಡಿಕೊಟ್ಟು ನೀ ಸುಖದಿಂದ ಇರೋದು ನೋಡಿದಾಗ ನನಗೆ ಸಮಧಾನ.ನಿನ್ನ ಅಕ್ಕನಿಗೂ ಸಮಾಧಾನ.ಚಂದೂಲಾಲ ಪಾತರಗಿತ್ತಿ ಇದ್ದಾಂಗ.ನೀ ಸಣ್ಣಾಕಿ.ತಿಳಿವಳಿಕೆ ಇಲ್ಲ ದಾಕಿ.ಮೋಸ ಹೋಗಿ ದುಃಖ ಪಡಬಾರಧು ಅಂತ ಹೇಳಲಿಖ್ಹತ್ತೀನಿ.ನೀ ಕಣ್ಣೀರು ಹಾಕೋಹಾಂಗ ಆದರ ನಾವು ಹ್ಯಾಂಗ ಸಹಿಸೋಣವಾ?'
{{gap}}ಕಲಾನ ಧ್ವನಿ ಗದ್ಗದಿತವಾಯಿತು.'ಆಳಬ್ಯಾಡ್ರೀ ಮಾಮಾ,ನೀವು<noinclude><references/></noinclude>
mkpwxowyw22vq60x97fihmr31r4kfdq
321602
321565
2026-05-21T09:13:49Z
Hariprasad Shetty10
7490
321602
proofread-page
text/x-wiki
<noinclude><pagequality level="3" user="Shreelatha.Halemane" />{{rh|center=|left=೧೨೪|right=ನಡೆದದ್ದೇ ದಾರಿ}}</noinclude>—ತನ್ನ ಕೆಲಸ ನಿಜವಾಗಿಯೂ ಕಠಿಣವಾದುದಾಗಿತ್ತು.
{{center|☀☀☀}}
{{gap}}ಆದರೆ ದೇವರು ದೋಡ್ಡವನು ನಿಜಕ್ಕೂ.<br />
{{gap}}ಜನರಲ್ ಮ್ಯಾನೇಜರ್ ಸ್ವತಃ ತನ್ನನ್ನು ಕರೆಸಿ,ತಮ್ಮ ಮಗಳು ವಿಷಯ ಪ್ರಸ್ತಾಪಿಸಿದ್ದರು.ಚಂದೂಲಾಲನನ್ನು ಕೇಳಿ ನೋಡೆಂದು ಕೇಳಿಕೊಂಡಿದ್ದರು.'ನೀವು ಹಿರೇ ಮನುಷ್ಯಾರು.ನಿಮ್ಮ ಮಾತು ಕೇಳತಾನ ಆತ'-ಎಂದು ಉಬ್ಬಿಸಿದ್ದರು.<br />
{{gap}}ಚಂದೂಲಾಲನಿಗೆ ಒಳ್ಲೆಯದಾಗುವಂತೆ ಮಾಡಬೇಕು.ಲಗ್ನದ ನಂತರ ಹಿಂದಿನದನ್ನು ಮರೆಯುವುದೇನೂ ತ್ರಾಸಾಗುವುದಿಲ್ಲ.ಅವನ ಲಗ್ನವಾದರೆ ಕಲಾನೂ ಅವನನ್ನು ಮರೆಯಬಹುದು.<br />
{{gap}}ಅವರಿಬ್ಬರ ಮನಸ್ಸನ್ನು ಬದಲಿಸಬೇಕಾದುದು ತಾನು ಮಾಡಬೇಕಾದ ಕೆಲಸ ಈಗ.ಉದ್ದೇಶ ಒಳ್ಳೇದಿದ್ದಾಗ ದಾರಿ ಯಾವುದಾದರೇನು?ಒಂದಿಷ್ಟು ಸುಳ್ಳು-ಪಳ್ಳು ಹೇಳಬೇಕಾಗಿ ಬಂದರೂ ಅಡ್ಡಿಯಿಲ್ಲ.<br />
{{gap}}ಕಲಾ ಅಂತೂ ತನ್ನನ್ನು ನಂಬುತ್ತಾಳೆ;ಚಂದೂಲಾಲ ಸ್ವಲ್ಪ ಹುಷಾರು ಪೈಕಿ ಮನುಷ್ಯ.ಆದರೂ ಅಡ್ಡಿಯಿಲ್ಲ.ತನಗೆ ಆವನ ದುಪ್ಪಟ್ಟು ಸರ್ವೀಸಾಗಿದೆ...<br />
{{center|☀☀☀}}
{{gap}}'ಚಂದೂಲಾಲನಂಥ ಬೇಜವಾಬ್ದಾರಿ ಮನುಷ್ಯನಿಂದ ನಿನಗ ಎಂದೂ ಸುಖ ಆಗೋದಿಲ್ಲಾ ಕಲಾ.ದಿನಾ ಸಂಜೀನ್ಯಾಗ ಫ಼ರಾಸ್ ರೋಡಿನ್ಯಾಗ ಕುಡಿದು ಬಿದ್ದಿರತಾನ ಆ ಮನುಷ್ಯ.'<br />
{{gap}}ಕಲಾನಿಗೆ ಸಹಜವಾಗಿಯೇ ಶಾಕ್ ಆಗಿತ್ತು.'ಹೌದೇನ್ರೀ ಮಾಮಾ?ನನಗ ನಂಬಲಿಕ್ಕೆ ಆಗೋದಿಲ್ಲ...'<br />
{{gap}}'ನಾ ಯಾಕ ನಿಂಗೆ ಸುಳ್ಳು ಹೇಳ್ಲೀ ಕಲಾ?ಹೂವಿನಾಂಗ ಬೆಳೆಸೀವಿ ನಿನ್ನ.ನನ್ನ ಸಂಕಟಾ ನಿನಗೇನು ಗೂತ್ತವ್ವಾ?'-ನಿಜವಾಗಿಯೂ ಕಳಕಳಿಯಿಂದ ಹೇಳಿದ್ದ ತಾನು.ಚಂದೂಲಾಲ ಪಾರ್ಟಿಗಳಲ್ಲಿ ಕುಡಿಯುತ್ತಿದ್ದುದೇನೂ ಸುಳ್ಲಿರಲಿಲ್ಲವಲ್ಲಾ!<br />
{{gap}}'ಒಬ್ಬ ಛಲೋ ಹುಡುಗನ್ನ ನೋಡಿ ನಿನ್ನ ಲಗ್ನ ಮಾಡಿಕೊಟ್ಟು ನೀ ಸುಖದಿಂದ ಇರೋದು ನೋಡಿದಾಗ ನನಗೆ ಸಮಧಾನ.ನಿನ್ನ ಅಕ್ಕನಿಗೂ ಸಮಾಧಾನ.ಚಂದೂಲಾಲ ಪಾತರಗಿತ್ತಿ ಇದ್ದಾಂಗ.ನೀ ಸಣ್ಣಾಕಿ.ತಿಳಿವಳಿಕೆ ಇಲ್ಲ ದಾಕಿ.ಮೋಸ ಹೋಗಿ ದುಃಖ ಪಡಬಾರಧು ಅಂತ ಹೇಳಲಿಖ್ಹತ್ತೀನಿ.ನೀ ಕಣ್ಣೀರು ಹಾಕೋಹಾಂಗ ಆದರ ನಾವು ಹ್ಯಾಂಗ ಸಹಿಸೋಣವಾ?'<br />
{{gap}}ಕಲಾನ ಧ್ವನಿ ಗದ್ಗದಿತವಾಯಿತು.'ಆಳಬ್ಯಾಡ್ರೀ ಮಾಮಾ,ನೀವು<noinclude><references/></noinclude>
j37nwsoyfla8ct7kmtugj060xz179g5
321603
321602
2026-05-21T09:14:40Z
Hariprasad Shetty10
7490
/* Validated */
321603
proofread-page
text/x-wiki
<noinclude><pagequality level="4" user="Hariprasad Shetty10" />{{rh|center=|left=೧೨೪|right=ನಡೆದದ್ದೇ ದಾರಿ}}</noinclude>—ತನ್ನ ಕೆಲಸ ನಿಜವಾಗಿಯೂ ಕಠಿಣವಾದುದಾಗಿತ್ತು.
{{center|☀☀☀}}
{{gap}}ಆದರೆ ದೇವರು ದೋಡ್ಡವನು ನಿಜಕ್ಕೂ.<br />
{{gap}}ಜನರಲ್ ಮ್ಯಾನೇಜರ್ ಸ್ವತಃ ತನ್ನನ್ನು ಕರೆಸಿ,ತಮ್ಮ ಮಗಳು ವಿಷಯ ಪ್ರಸ್ತಾಪಿಸಿದ್ದರು.ಚಂದೂಲಾಲನನ್ನು ಕೇಳಿ ನೋಡೆಂದು ಕೇಳಿಕೊಂಡಿದ್ದರು.'ನೀವು ಹಿರೇ ಮನುಷ್ಯಾರು.ನಿಮ್ಮ ಮಾತು ಕೇಳತಾನ ಆತ'-ಎಂದು ಉಬ್ಬಿಸಿದ್ದರು.<br />
{{gap}}ಚಂದೂಲಾಲನಿಗೆ ಒಳ್ಲೆಯದಾಗುವಂತೆ ಮಾಡಬೇಕು.ಲಗ್ನದ ನಂತರ ಹಿಂದಿನದನ್ನು ಮರೆಯುವುದೇನೂ ತ್ರಾಸಾಗುವುದಿಲ್ಲ.ಅವನ ಲಗ್ನವಾದರೆ ಕಲಾನೂ ಅವನನ್ನು ಮರೆಯಬಹುದು.<br />
{{gap}}ಅವರಿಬ್ಬರ ಮನಸ್ಸನ್ನು ಬದಲಿಸಬೇಕಾದುದು ತಾನು ಮಾಡಬೇಕಾದ ಕೆಲಸ ಈಗ.ಉದ್ದೇಶ ಒಳ್ಳೇದಿದ್ದಾಗ ದಾರಿ ಯಾವುದಾದರೇನು?ಒಂದಿಷ್ಟು ಸುಳ್ಳು-ಪಳ್ಳು ಹೇಳಬೇಕಾಗಿ ಬಂದರೂ ಅಡ್ಡಿಯಿಲ್ಲ.<br />
{{gap}}ಕಲಾ ಅಂತೂ ತನ್ನನ್ನು ನಂಬುತ್ತಾಳೆ;ಚಂದೂಲಾಲ ಸ್ವಲ್ಪ ಹುಷಾರು ಪೈಕಿ ಮನುಷ್ಯ.ಆದರೂ ಅಡ್ಡಿಯಿಲ್ಲ.ತನಗೆ ಆವನ ದುಪ್ಪಟ್ಟು ಸರ್ವೀಸಾಗಿದೆ...<br />
{{center|☀☀☀}}
{{gap}}'ಚಂದೂಲಾಲನಂಥ ಬೇಜವಾಬ್ದಾರಿ ಮನುಷ್ಯನಿಂದ ನಿನಗ ಎಂದೂ ಸುಖ ಆಗೋದಿಲ್ಲಾ ಕಲಾ.ದಿನಾ ಸಂಜೀನ್ಯಾಗ ಫ಼ರಾಸ್ ರೋಡಿನ್ಯಾಗ ಕುಡಿದು ಬಿದ್ದಿರತಾನ ಆ ಮನುಷ್ಯ.'<br />
{{gap}}ಕಲಾನಿಗೆ ಸಹಜವಾಗಿಯೇ ಶಾಕ್ ಆಗಿತ್ತು.'ಹೌದೇನ್ರೀ ಮಾಮಾ?ನನಗ ನಂಬಲಿಕ್ಕೆ ಆಗೋದಿಲ್ಲ...'<br />
{{gap}}'ನಾ ಯಾಕ ನಿಂಗೆ ಸುಳ್ಳು ಹೇಳ್ಲೀ ಕಲಾ?ಹೂವಿನಾಂಗ ಬೆಳೆಸೀವಿ ನಿನ್ನ.ನನ್ನ ಸಂಕಟಾ ನಿನಗೇನು ಗೂತ್ತವ್ವಾ?'-ನಿಜವಾಗಿಯೂ ಕಳಕಳಿಯಿಂದ ಹೇಳಿದ್ದ ತಾನು.ಚಂದೂಲಾಲ ಪಾರ್ಟಿಗಳಲ್ಲಿ ಕುಡಿಯುತ್ತಿದ್ದುದೇನೂ ಸುಳ್ಲಿರಲಿಲ್ಲವಲ್ಲಾ!<br />
{{gap}}'ಒಬ್ಬ ಛಲೋ ಹುಡುಗನ್ನ ನೋಡಿ ನಿನ್ನ ಲಗ್ನ ಮಾಡಿಕೊಟ್ಟು ನೀ ಸುಖದಿಂದ ಇರೋದು ನೋಡಿದಾಗ ನನಗೆ ಸಮಧಾನ.ನಿನ್ನ ಅಕ್ಕನಿಗೂ ಸಮಾಧಾನ.ಚಂದೂಲಾಲ ಪಾತರಗಿತ್ತಿ ಇದ್ದಾಂಗ.ನೀ ಸಣ್ಣಾಕಿ.ತಿಳಿವಳಿಕೆ ಇಲ್ಲ ದಾಕಿ.ಮೋಸ ಹೋಗಿ ದುಃಖ ಪಡಬಾರಧು ಅಂತ ಹೇಳಲಿಖ್ಹತ್ತೀನಿ.ನೀ ಕಣ್ಣೀರು ಹಾಕೋಹಾಂಗ ಆದರ ನಾವು ಹ್ಯಾಂಗ ಸಹಿಸೋಣವಾ?'<br />
{{gap}}ಕಲಾನ ಧ್ವನಿ ಗದ್ಗದಿತವಾಯಿತು.'ಆಳಬ್ಯಾಡ್ರೀ ಮಾಮಾ,ನೀವು<noinclude><references/></noinclude>
1hdcok1o26v2u4hm645hdz67w4qgz5p
ಪುಟ:ನಡೆದದ್ದೇ ದಾರಿ.pdf/೧೩೭
104
31286
321544
84157
2026-05-21T04:42:46Z
Pragathi. BH
7585
/* Proofread */
321544
proofread-page
text/x-wiki
<noinclude><pagequality level="3" user="Pragathi. BH" /></noinclude> ಹೊರಟು ಹೋದವನು
ರಾತ್ರಿ ಹನ್ನೆರಡು ಗ೦ಟೆ ಈಗ.
ಮೇಲ್ ಟ್ರೇನ್ ಪೂನಾ ಸ್ಟೇಷನ್ ಬಿಟ್ಟು ಪೂರಾ ಒ೦ದು ತಾಸು ಕಳೆಯಿತು.
ಇನ್ನೂ ಲೋ೦ಡಾ ಬರಲು ಬಹಳಷ್ಟು ಹೊತ್ತು ಕಳೆಯಬೇಕು.ಏನು ಮಾಡುವುದು
ಅಲ್ಲಿಯ ತನಕ ರಾತ್ರಿಯೆಲ್ಲ ?
'ರಾತ್ರಿ ಖಿಡಕೀಬಾಗಲಾ ಹಾಕ್ಕೊ೦ಡೂ ನಿನ್ನ ಬರ್ಥ್ ಮಲಗಿಬಿಡು.
ಇಲ್ಲ೦ದರ ಗಾಳಿ ಬಡಿದು ತ೦ಪಾದೀತು.ಮು೦ಜಾನೆ ಮಿರಜ್ ಸ್ಟೇಷನ್ ದಾಗ ಚಹಾ
ತಗೋ.ಆಮಾಲ ಮಲಗಿಬಿಡು.ಇಲ್ಲ೦ದರ ಗಾಳಿ ಬಡಿದು ತ೦ಪಾದೀತು.ಮು೦ಜಾನೆ
ಮಿರಜ್ ಸ್ಟೇಷನ್ ದಾಗ ಚಹಾ ತಗೋ.ಆಮ್ಯ್ ಲೋ೦ಡಾದೊಳಗ ಊಟ...
ಸ್ಟೇಷನ್ನಿಗೆ ಕಳಿಸಲು ಬ೦ದಿದ್ದ ಸತೀಶ ಹೇಳಿದ್ದ. ಪ್ರತಿಸಲ ತಾನು ಹುಬ್ಬಳ್ಳಿಗೆ
ಹೊರಡುವಾಗ ಹೇಳುವ ಹಾಗೆ.ಬಹಳ ಕಾಳಜೀ ಮಾಡುವ ರಿಪಿರಿಪಿ ಗ೦ಡ ಆವನು.
ಆ೦ದಿದ್ದಳು ತಾನು,ಪ್ರತಿಸಲ ಆನ್ನುವ ಹಾಗೆ.ಟ್ರೇನ್ ಹೊರಟ ನ೦ತರ ಕಿಡಕಿ ತೆರೆದು ಭಾರ್ರನೆ ಬೀಸುತ್ತಿರುವ ಗಾಳಿಗೆ ಮುಖಕೊಟಟ್ಟು ಕೂತಿದ್ದಳು. ಪ್ರತಿಸಲ ಕೂಡುವ ಹಾಗೆ.
'ನಾಲ್ಕು ದಿವಸದಾಗ ತಿರುಗಿ ಬರೀಯಲ್ಲ ? ಟೆಲಿಗ್ರ್ಯಮ ಕೊಡಿಕ್ಕೆ ಮರೀಬ್ಯ್ಡ್.ನಾ ಸ್ಟೇಷನ್ನಿಗೆ ಬ೦ದಿರಿತ್ನಿ-ಆ೦ದಿದ್ದ ಅವನು.ಇದೂ ಪ್ರತಿಸಲ ಆನ್ನುವ ಹಾಗೆ.
'ಹುಬ್ಬಳ್ಳಿಯೊಳಲಗ ಏನದ ಆ೦ತ ವಾರ್ಷ ಎರಡುಮೂರು ಸರೆ ತಪ್ಪದ ಹೋಗೀಯೋ ಏನೋ! ತ೦ದೀತಾಯೀ ಇದ್ದಾಗ ಬ್ಯಾರೇ ಇದ್ದಾಗ ಬ್ಯಾರೇ ಇತ್ತು.ಈಗೇನದ ಅಲ್ಲೆ?
ಸುಮ್ಮನ ಆಯಾಸ ಮಾಡಕೋತೀ ಆ೦ದಿದ್ದ ಕೋನೆಗೆ ಟ್ರೇನ್ ಹೊರಡುವ ಸಮಯಕ್ಕೆ,ಇದೂ ಪ್ರತಿಸಲ ಆನ್ನುತ್ತಿದ್ದ ಹಾಗೆಯೇ; ತಮ್ಮಿಬ್ಬರ ಲಗ್ನವಾದ ನ೦ತರ ಕಳೆದ ಹನ್ನೆರಡು ವರ್ಷಗಳಲ್ಲಿ ಪ್ರತಿಸಲ ತಾನು ಹುಬ್ಬಳ್ಳಿಗೆ ಹೊರಡುವಾಗಲೂ ಅನ್ನುತ್ತಿದ್ದ ಹಾಗೆ.ಅವನ ಎಲ್ಲ ಮಾತಿಗೂ ಪ್ರೀತಿಯ ಎಚ್ಚರಿಕೆಗೂ ತನ್ನ ಪ್ರತಿಸಲದ ಉತ್ತರ ಬರೇ ಹ್ಞೂ ಹ್ಞೂ
ನೀರಾ ವಾಠಾರ ಸಾತಾರೆ-ಕತ್ತಲಲ್ಲಿ ಒ೦ದೋ೦ದೇ ಸ್ಟೇಷನ್ನುಗಳು ಸದ್ದಿಲ್ಲದೆ ಸರಿದು ಹೋಗುತ್ತಿವೆ.ತನೆಗೆ ಚಿರಪರಿಚಿತವಾಗಿರುವ ದಾರಿ ಇದು.<noinclude><references/></noinclude>
g1kaprdg2pmqzj5qydjgtizmv9vz2zc
ಪುಟ:ನಡೆದದ್ದೇ ದಾರಿ.pdf/೧೪೪
104
31639
321514
320576
2026-05-21T02:58:02Z
Hariprasad Shetty10
7490
321514
proofread-page
text/x-wiki
<noinclude><pagequality level="3" user="Pragathi. BH" />{{Left|ಕೊನೆಯ ದಾರಿ / ಹೊರಟು ಹೊದವನು}} {{Right|೧೩೭}}</noinclude>
ಮುಂದೆ ತಿಂಗಳುಗಳವರೆಗೆ ಸತೀಶ ಮಂಕಾಗಿದ್ದಿ. ಆ ಡಾಕ್ಟರನ ಪೆಚ್ಚು ಮುಖ ನೋಡಿದಾಗೆಲ್ಲ ಹಾಯೆನಿಸುತ್ತಿತ್ತು.
ಅವನು ವರ್ಜ್ಯವೆಂದು ಹೇಳಿದ್ದ ಪಪ್ಪಾಯಿಹಣ್ಣನ್ನು - ದೊಡ್ಡ ದೊಂದು ಪಪ್ಪಾಯಿ ಹಣ್ಣನ್ನು- ಯಾರಿಗೂ ಗೊತ್ತಾಗದ ಹಾಗೆ ಆಟ್ಟದ ಮೇಲೆ ಕೂತು ತಾನು ತೀಂದದ್ದು ಕಡೆಗೂ ಯಾರಿಗೂ ಗೊತ್ತಾಗಿರಲೇ ಇಲ್ಲ, ಹಹ್ಹಹ್ಹ....
ಇರುವ ಸುಖ ಸಾಲದೆಂದು ಮಕ್ಕಳೊಂದು ಕೇಡು. ಈ ಮಕ್ಕಳು ತನ್ನವೆಂದು ತನಗೆಂದೂ ಅನಿಸಿಲ್ಲ. ಮುಂದೆ ಪಾಪು ಹುಟ್ಟಿದಾಗ ಸತೀಶನಿಗೆಷ್ಟು ಖುಶಿ - ಎಂದೂ ಯಾರೂ ಮಾಡಲಾರದ್ದೇನನ್ನೋ ತಾನು ಮಾಡಿದಾಗ ಹಾಗೆ. ಆ ಮಗು ಸುಮ್ಮನೆ ಬಾಯಿ ಕಿಸಿದಾಗ, ಕೈಕಾಲು ಬಡಿದಾಗ, ಅರ್ಥವಾಗದ ಧ್ವನಿ ಹೊರಡಿಸಿದಾಗ ಇವನಿಗೆಷ್ಟು ಹೆಮ್ಮೆ - 'ನಮ್ಮ ಪಾಪು ಬಹಾಳ ಮೀಶ್ವಿವ್ಹಸ್, ಬಹಾಳ ಶಾಣೆ, ಬಹಾಳ- "ಜಗತ್ತಿನಲ್ಲಿಯ ಎಲ್ಲಾ ಹಡೆದವರಿಗೂ ಹೀಗೇ ಅನೀಸುತ್ತದೆ ಕಣೋ ಸತೀಶ - ಎಂದು ಹೇಳೀದ್ದರೆ...
ಹೆನ್ನೆರಡು ಗಂಟೆ.
ಬಿಸಿಲು ಹೆಚ್ಚಾಗುತ್ತಲೇ ಇದೆ. ಯಾವುದೋ ರೋಡ್ ಸ್ವೇಷನ್ ಮೇಲೆ ಗೂಡ್ಸ್ ಗಾಡಿ ಹಳಿ ತಪ್ಪಿದ್ದರಿಂದ ಒಂದು ತಾಸು ಸುಮ್ಮನೆ ತಡವಾಗಿ ಹೋಯಿತು. ಇಡೀ ರಾತ್ರಿ ನಿದ್ರೆ ಮಾಡದ್ದರಿಂದ ಕಣ್ಣು ಭಾರ,ತಲೆ ಭಾರ. ಈ ಸಲ ಹುಬ್ಬಳ್ಳಿಯಲ್ಲಿ ಹೆಚ್ಚು ದಿನ ನಿಲ್ಲಬಾರದು. ಕಂಪಾರ್ಟಾಮೆಂಟಿನಲ್ಲಿ ವಿಪರೀತ ಸೆಕೆ. ಫ್ಯಾನಿನ ಗಾಳಿಯಲ್ಲಿ ಉಗಿಯಾಗುತ್ತಿದೆ. ಹುಶ್, ಲೋಂಡಾ ಬರಬಾರದೆ....
ಅರ್ಧ ನಿದ್ದೆ, ಅರ್ಧ ಎಚ್ಚರ. ಟ್ರೇನು ನಿಂತಿದೆ. ಲೋಂಡಾ ಸ್ಟೇಷನ್.ಮಧ್ಯಾಹ್ನ ಎರಡು ಗಂಟೆಯಾಹಗಿರಬೇಕು. ಕಣ್ಣು ತೆರೆಯಲು ಮನಸ್ಸಿಲ್ಲ. "ಬಾಯಿಸಾಬ್ ಕೋ ಖಾನಾ ಲಾವ್ಱೂ? 'ನಿರೀಕ್ಛಿಸುತ್ತ ಹಾಗೇ ಕಣ್ಣು ಮುಚ್ಚಿ ಮಲಗಿದ್ದಳು ಆಕೆ.
ಜನರು ಹತ್ತುವ,ಇಳಿಯುವ ಗಡಿಬಿಡಿ. ಪೋರ್ಟರುಗಳ ಕೂಗಾಟ. ಚಹಾ-ಕಾಫಿ ಮಾರುವ ಹುಡುಗರ ಚೀರುದನಿ. ಯಾರದೋ ಮಗು ಅಳುವ ಸ್ವರ. ಯಾರೋ ಗಟ್ಟಿಯಾಗಿ ನಕ್ಕ ಹಾಗೆ. ಒಟ್ಟು ಗದ್ದಲೋ ಗದ್ದಲ....
ಆದರೆ ಊಹ್ಱೂ, ಮಿಠಯಿವಾಲಾ ಬಂದೇ ಇಲ್ಲ. ಆಕೆ ತಟ್ಟನೆ ಎದ್ದು ಕಿಡಿಕಿಯಿಂದ ಹೊರಗೆ ಹಣಿಕಿದಳು- ಪ್ಲ್ಯಾಟಫಾರ್ಮಿನ ಈ ಕೊನೆಯಿಂದ ಆ ಕೊನೆಯವರೆಗೂ, ಗದ್ದಲವೇನೋ ಬಹಳಷ್ಟಿತ್ತು. ಆದರೂ ಅವನು ಇದ್ದಿದ್ದರೆ ಇದ್ದಲ್ಲಿಂದಲೇ ತನ್ನ ಗಾಡಿ ಸಹಿತವಾಗಿ ಕಾಣಿಸುತ್ತಿದ್ದ. ಎಲ್ಲಿ ಅವನು? ಮೈಯಲ್ಲಿ<noinclude><references/></noinclude>
anrp8m3998e3v5rt0hxsq3tc6fzwbzq
321515
321514
2026-05-21T02:58:32Z
Hariprasad Shetty10
7490
321515
proofread-page
text/x-wiki
<noinclude><pagequality level="3" user="Pragathi. BH" />{{rh|left=|ಕೊನೆಯ ದಾರಿ / ಹೊರಟು ಹೊದವನುcenter=|right=೧೩೭}}</noinclude>
ಮುಂದೆ ತಿಂಗಳುಗಳವರೆಗೆ ಸತೀಶ ಮಂಕಾಗಿದ್ದಿ. ಆ ಡಾಕ್ಟರನ ಪೆಚ್ಚು ಮುಖ ನೋಡಿದಾಗೆಲ್ಲ ಹಾಯೆನಿಸುತ್ತಿತ್ತು.
ಅವನು ವರ್ಜ್ಯವೆಂದು ಹೇಳಿದ್ದ ಪಪ್ಪಾಯಿಹಣ್ಣನ್ನು - ದೊಡ್ಡ ದೊಂದು ಪಪ್ಪಾಯಿ ಹಣ್ಣನ್ನು- ಯಾರಿಗೂ ಗೊತ್ತಾಗದ ಹಾಗೆ ಆಟ್ಟದ ಮೇಲೆ ಕೂತು ತಾನು ತೀಂದದ್ದು ಕಡೆಗೂ ಯಾರಿಗೂ ಗೊತ್ತಾಗಿರಲೇ ಇಲ್ಲ, ಹಹ್ಹಹ್ಹ....
ಇರುವ ಸುಖ ಸಾಲದೆಂದು ಮಕ್ಕಳೊಂದು ಕೇಡು. ಈ ಮಕ್ಕಳು ತನ್ನವೆಂದು ತನಗೆಂದೂ ಅನಿಸಿಲ್ಲ. ಮುಂದೆ ಪಾಪು ಹುಟ್ಟಿದಾಗ ಸತೀಶನಿಗೆಷ್ಟು ಖುಶಿ - ಎಂದೂ ಯಾರೂ ಮಾಡಲಾರದ್ದೇನನ್ನೋ ತಾನು ಮಾಡಿದಾಗ ಹಾಗೆ. ಆ ಮಗು ಸುಮ್ಮನೆ ಬಾಯಿ ಕಿಸಿದಾಗ, ಕೈಕಾಲು ಬಡಿದಾಗ, ಅರ್ಥವಾಗದ ಧ್ವನಿ ಹೊರಡಿಸಿದಾಗ ಇವನಿಗೆಷ್ಟು ಹೆಮ್ಮೆ - 'ನಮ್ಮ ಪಾಪು ಬಹಾಳ ಮೀಶ್ವಿವ್ಹಸ್, ಬಹಾಳ ಶಾಣೆ, ಬಹಾಳ- "ಜಗತ್ತಿನಲ್ಲಿಯ ಎಲ್ಲಾ ಹಡೆದವರಿಗೂ ಹೀಗೇ ಅನೀಸುತ್ತದೆ ಕಣೋ ಸತೀಶ - ಎಂದು ಹೇಳೀದ್ದರೆ...
ಹೆನ್ನೆರಡು ಗಂಟೆ.
ಬಿಸಿಲು ಹೆಚ್ಚಾಗುತ್ತಲೇ ಇದೆ. ಯಾವುದೋ ರೋಡ್ ಸ್ವೇಷನ್ ಮೇಲೆ ಗೂಡ್ಸ್ ಗಾಡಿ ಹಳಿ ತಪ್ಪಿದ್ದರಿಂದ ಒಂದು ತಾಸು ಸುಮ್ಮನೆ ತಡವಾಗಿ ಹೋಯಿತು. ಇಡೀ ರಾತ್ರಿ ನಿದ್ರೆ ಮಾಡದ್ದರಿಂದ ಕಣ್ಣು ಭಾರ,ತಲೆ ಭಾರ. ಈ ಸಲ ಹುಬ್ಬಳ್ಳಿಯಲ್ಲಿ ಹೆಚ್ಚು ದಿನ ನಿಲ್ಲಬಾರದು. ಕಂಪಾರ್ಟಾಮೆಂಟಿನಲ್ಲಿ ವಿಪರೀತ ಸೆಕೆ. ಫ್ಯಾನಿನ ಗಾಳಿಯಲ್ಲಿ ಉಗಿಯಾಗುತ್ತಿದೆ. ಹುಶ್, ಲೋಂಡಾ ಬರಬಾರದೆ....
ಅರ್ಧ ನಿದ್ದೆ, ಅರ್ಧ ಎಚ್ಚರ. ಟ್ರೇನು ನಿಂತಿದೆ. ಲೋಂಡಾ ಸ್ಟೇಷನ್.ಮಧ್ಯಾಹ್ನ ಎರಡು ಗಂಟೆಯಾಹಗಿರಬೇಕು. ಕಣ್ಣು ತೆರೆಯಲು ಮನಸ್ಸಿಲ್ಲ. "ಬಾಯಿಸಾಬ್ ಕೋ ಖಾನಾ ಲಾವ್ಱೂ? 'ನಿರೀಕ್ಛಿಸುತ್ತ ಹಾಗೇ ಕಣ್ಣು ಮುಚ್ಚಿ ಮಲಗಿದ್ದಳು ಆಕೆ.
ಜನರು ಹತ್ತುವ,ಇಳಿಯುವ ಗಡಿಬಿಡಿ. ಪೋರ್ಟರುಗಳ ಕೂಗಾಟ. ಚಹಾ-ಕಾಫಿ ಮಾರುವ ಹುಡುಗರ ಚೀರುದನಿ. ಯಾರದೋ ಮಗು ಅಳುವ ಸ್ವರ. ಯಾರೋ ಗಟ್ಟಿಯಾಗಿ ನಕ್ಕ ಹಾಗೆ. ಒಟ್ಟು ಗದ್ದಲೋ ಗದ್ದಲ....
ಆದರೆ ಊಹ್ಱೂ, ಮಿಠಯಿವಾಲಾ ಬಂದೇ ಇಲ್ಲ. ಆಕೆ ತಟ್ಟನೆ ಎದ್ದು ಕಿಡಿಕಿಯಿಂದ ಹೊರಗೆ ಹಣಿಕಿದಳು- ಪ್ಲ್ಯಾಟಫಾರ್ಮಿನ ಈ ಕೊನೆಯಿಂದ ಆ ಕೊನೆಯವರೆಗೂ, ಗದ್ದಲವೇನೋ ಬಹಳಷ್ಟಿತ್ತು. ಆದರೂ ಅವನು ಇದ್ದಿದ್ದರೆ ಇದ್ದಲ್ಲಿಂದಲೇ ತನ್ನ ಗಾಡಿ ಸಹಿತವಾಗಿ ಕಾಣಿಸುತ್ತಿದ್ದ. ಎಲ್ಲಿ ಅವನು? ಮೈಯಲ್ಲಿ<noinclude><references/></noinclude>
03e66bfocblvm7zyl6tvngrag4heg9a
321516
321515
2026-05-21T02:58:55Z
Hariprasad Shetty10
7490
321516
proofread-page
text/x-wiki
<noinclude><pagequality level="3" user="Pragathi. BH" />{{rh|left=ಕೊನೆಯ ದಾರಿ / ಹೊರಟು ಹೊದವನು|center=|right=೧೩೭}}</noinclude>
ಮುಂದೆ ತಿಂಗಳುಗಳವರೆಗೆ ಸತೀಶ ಮಂಕಾಗಿದ್ದಿ. ಆ ಡಾಕ್ಟರನ ಪೆಚ್ಚು ಮುಖ ನೋಡಿದಾಗೆಲ್ಲ ಹಾಯೆನಿಸುತ್ತಿತ್ತು.
ಅವನು ವರ್ಜ್ಯವೆಂದು ಹೇಳಿದ್ದ ಪಪ್ಪಾಯಿಹಣ್ಣನ್ನು - ದೊಡ್ಡ ದೊಂದು ಪಪ್ಪಾಯಿ ಹಣ್ಣನ್ನು- ಯಾರಿಗೂ ಗೊತ್ತಾಗದ ಹಾಗೆ ಆಟ್ಟದ ಮೇಲೆ ಕೂತು ತಾನು ತೀಂದದ್ದು ಕಡೆಗೂ ಯಾರಿಗೂ ಗೊತ್ತಾಗಿರಲೇ ಇಲ್ಲ, ಹಹ್ಹಹ್ಹ....
ಇರುವ ಸುಖ ಸಾಲದೆಂದು ಮಕ್ಕಳೊಂದು ಕೇಡು. ಈ ಮಕ್ಕಳು ತನ್ನವೆಂದು ತನಗೆಂದೂ ಅನಿಸಿಲ್ಲ. ಮುಂದೆ ಪಾಪು ಹುಟ್ಟಿದಾಗ ಸತೀಶನಿಗೆಷ್ಟು ಖುಶಿ - ಎಂದೂ ಯಾರೂ ಮಾಡಲಾರದ್ದೇನನ್ನೋ ತಾನು ಮಾಡಿದಾಗ ಹಾಗೆ. ಆ ಮಗು ಸುಮ್ಮನೆ ಬಾಯಿ ಕಿಸಿದಾಗ, ಕೈಕಾಲು ಬಡಿದಾಗ, ಅರ್ಥವಾಗದ ಧ್ವನಿ ಹೊರಡಿಸಿದಾಗ ಇವನಿಗೆಷ್ಟು ಹೆಮ್ಮೆ - 'ನಮ್ಮ ಪಾಪು ಬಹಾಳ ಮೀಶ್ವಿವ್ಹಸ್, ಬಹಾಳ ಶಾಣೆ, ಬಹಾಳ- "ಜಗತ್ತಿನಲ್ಲಿಯ ಎಲ್ಲಾ ಹಡೆದವರಿಗೂ ಹೀಗೇ ಅನೀಸುತ್ತದೆ ಕಣೋ ಸತೀಶ - ಎಂದು ಹೇಳೀದ್ದರೆ...
ಹೆನ್ನೆರಡು ಗಂಟೆ.
ಬಿಸಿಲು ಹೆಚ್ಚಾಗುತ್ತಲೇ ಇದೆ. ಯಾವುದೋ ರೋಡ್ ಸ್ವೇಷನ್ ಮೇಲೆ ಗೂಡ್ಸ್ ಗಾಡಿ ಹಳಿ ತಪ್ಪಿದ್ದರಿಂದ ಒಂದು ತಾಸು ಸುಮ್ಮನೆ ತಡವಾಗಿ ಹೋಯಿತು. ಇಡೀ ರಾತ್ರಿ ನಿದ್ರೆ ಮಾಡದ್ದರಿಂದ ಕಣ್ಣು ಭಾರ,ತಲೆ ಭಾರ. ಈ ಸಲ ಹುಬ್ಬಳ್ಳಿಯಲ್ಲಿ ಹೆಚ್ಚು ದಿನ ನಿಲ್ಲಬಾರದು. ಕಂಪಾರ್ಟಾಮೆಂಟಿನಲ್ಲಿ ವಿಪರೀತ ಸೆಕೆ. ಫ್ಯಾನಿನ ಗಾಳಿಯಲ್ಲಿ ಉಗಿಯಾಗುತ್ತಿದೆ. ಹುಶ್, ಲೋಂಡಾ ಬರಬಾರದೆ....
ಅರ್ಧ ನಿದ್ದೆ, ಅರ್ಧ ಎಚ್ಚರ. ಟ್ರೇನು ನಿಂತಿದೆ. ಲೋಂಡಾ ಸ್ಟೇಷನ್.ಮಧ್ಯಾಹ್ನ ಎರಡು ಗಂಟೆಯಾಹಗಿರಬೇಕು. ಕಣ್ಣು ತೆರೆಯಲು ಮನಸ್ಸಿಲ್ಲ. "ಬಾಯಿಸಾಬ್ ಕೋ ಖಾನಾ ಲಾವ್ಱೂ? 'ನಿರೀಕ್ಛಿಸುತ್ತ ಹಾಗೇ ಕಣ್ಣು ಮುಚ್ಚಿ ಮಲಗಿದ್ದಳು ಆಕೆ.
ಜನರು ಹತ್ತುವ,ಇಳಿಯುವ ಗಡಿಬಿಡಿ. ಪೋರ್ಟರುಗಳ ಕೂಗಾಟ. ಚಹಾ-ಕಾಫಿ ಮಾರುವ ಹುಡುಗರ ಚೀರುದನಿ. ಯಾರದೋ ಮಗು ಅಳುವ ಸ್ವರ. ಯಾರೋ ಗಟ್ಟಿಯಾಗಿ ನಕ್ಕ ಹಾಗೆ. ಒಟ್ಟು ಗದ್ದಲೋ ಗದ್ದಲ....
ಆದರೆ ಊಹ್ಱೂ, ಮಿಠಯಿವಾಲಾ ಬಂದೇ ಇಲ್ಲ. ಆಕೆ ತಟ್ಟನೆ ಎದ್ದು ಕಿಡಿಕಿಯಿಂದ ಹೊರಗೆ ಹಣಿಕಿದಳು- ಪ್ಲ್ಯಾಟಫಾರ್ಮಿನ ಈ ಕೊನೆಯಿಂದ ಆ ಕೊನೆಯವರೆಗೂ, ಗದ್ದಲವೇನೋ ಬಹಳಷ್ಟಿತ್ತು. ಆದರೂ ಅವನು ಇದ್ದಿದ್ದರೆ ಇದ್ದಲ್ಲಿಂದಲೇ ತನ್ನ ಗಾಡಿ ಸಹಿತವಾಗಿ ಕಾಣಿಸುತ್ತಿದ್ದ. ಎಲ್ಲಿ ಅವನು? ಮೈಯಲ್ಲಿ<noinclude><references/></noinclude>
hwpnewykpzhsnb78jwuvfj3nwqdb34a
321517
321516
2026-05-21T03:00:04Z
Hariprasad Shetty10
7490
321517
proofread-page
text/x-wiki
<noinclude><pagequality level="3" user="Pragathi. BH" />{{rh|left=ಕೊನೆಯ ದಾರಿ / ಹೊರಟು ಹೊದವನು|center=|right=೧೩೭}}</noinclude>ಮುಂದೆ ತಿಂಗಳುಗಳವರೆಗೆ ಸತೀಶ ಮಂಕಾಗಿದ್ದಿ. ಆ ಡಾಕ್ಟರನ ಪೆಚ್ಚು ಮುಖ ನೋಡಿದಾಗೆಲ್ಲ ಹಾಯೆನಿಸುತ್ತಿತ್ತು.
{{gap}}ಅವನು ವರ್ಜ್ಯವೆಂದು ಹೇಳಿದ್ದ ಪಪ್ಪಾಯಿಹಣ್ಣನ್ನು - ದೊಡ್ಡ ದೊಂದು ಪಪ್ಪಾಯಿ ಹಣ್ಣನ್ನು- ಯಾರಿಗೂ ಗೊತ್ತಾಗದ ಹಾಗೆ ಆಟ್ಟದ ಮೇಲೆ ಕೂತು ತಾನು ತೀಂದದ್ದು ಕಡೆಗೂ ಯಾರಿಗೂ ಗೊತ್ತಾಗಿರಲೇ ಇಲ್ಲ, ಹಹ್ಹಹ್ಹ....
{{gap}}ಇರುವ ಸುಖ ಸಾಲದೆಂದು ಮಕ್ಕಳೊಂದು ಕೇಡು. ಈ ಮಕ್ಕಳು ತನ್ನವೆಂದು ತನಗೆಂದೂ ಅನಿಸಿಲ್ಲ. ಮುಂದೆ ಪಾಪು ಹುಟ್ಟಿದಾಗ ಸತೀಶನಿಗೆಷ್ಟು ಖುಶಿ - ಎಂದೂ ಯಾರೂ ಮಾಡಲಾರದ್ದೇನನ್ನೋ ತಾನು ಮಾಡಿದಾಗ ಹಾಗೆ. ಆ ಮಗು ಸುಮ್ಮನೆ ಬಾಯಿ ಕಿಸಿದಾಗ, ಕೈಕಾಲು ಬಡಿದಾಗ, ಅರ್ಥವಾಗದ ಧ್ವನಿ ಹೊರಡಿಸಿದಾಗ ಇವನಿಗೆಷ್ಟು ಹೆಮ್ಮೆ - 'ನಮ್ಮ ಪಾಪು ಬಹಾಳ ಮೀಶ್ವಿವ್ಹಸ್, ಬಹಾಳ ಶಾಣೆ, ಬಹಾಳ- "ಜಗತ್ತಿನಲ್ಲಿಯ ಎಲ್ಲಾ ಹಡೆದವರಿಗೂ ಹೀಗೇ ಅನೀಸುತ್ತದೆ ಕಣೋ ಸತೀಶ - ಎಂದು ಹೇಳೀದ್ದರೆ...
{{gap}}ಹೆನ್ನೆರಡು ಗಂಟೆ.
{{gap}}ಬಿಸಿಲು ಹೆಚ್ಚಾಗುತ್ತಲೇ ಇದೆ. ಯಾವುದೋ ರೋಡ್ ಸ್ವೇಷನ್ ಮೇಲೆ ಗೂಡ್ಸ್ ಗಾಡಿ ಹಳಿ ತಪ್ಪಿದ್ದರಿಂದ ಒಂದು ತಾಸು ಸುಮ್ಮನೆ ತಡವಾಗಿ ಹೋಯಿತು. ಇಡೀ ರಾತ್ರಿ ನಿದ್ರೆ ಮಾಡದ್ದರಿಂದ ಕಣ್ಣು ಭಾರ,ತಲೆ ಭಾರ. ಈ ಸಲ ಹುಬ್ಬಳ್ಳಿಯಲ್ಲಿ ಹೆಚ್ಚು ದಿನ ನಿಲ್ಲಬಾರದು. ಕಂಪಾರ್ಟಾಮೆಂಟಿನಲ್ಲಿ ವಿಪರೀತ ಸೆಕೆ. ಫ್ಯಾನಿನ ಗಾಳಿಯಲ್ಲಿ ಉಗಿಯಾಗುತ್ತಿದೆ. ಹುಶ್, ಲೋಂಡಾ ಬರಬಾರದೆ....
{{gap}}ಅರ್ಧ ನಿದ್ದೆ, ಅರ್ಧ ಎಚ್ಚರ. ಟ್ರೇನು ನಿಂತಿದೆ. ಲೋಂಡಾ ಸ್ಟೇಷನ್.ಮಧ್ಯಾಹ್ನ ಎರಡು ಗಂಟೆಯಾಹಗಿರಬೇಕು. ಕಣ್ಣು ತೆರೆಯಲು ಮನಸ್ಸಿಲ್ಲ. "ಬಾಯಿಸಾಬ್ ಕೋ ಖಾನಾ ಲಾವ್ಱೂ? 'ನಿರೀಕ್ಛಿಸುತ್ತ ಹಾಗೇ ಕಣ್ಣು ಮುಚ್ಚಿ ಮಲಗಿದ್ದಳು ಆಕೆ.
{{gap}}ಜನರು ಹತ್ತುವ,ಇಳಿಯುವ ಗಡಿಬಿಡಿ. ಪೋರ್ಟರುಗಳ ಕೂಗಾಟ. ಚಹಾ-ಕಾಫಿ ಮಾರುವ ಹುಡುಗರ ಚೀರುದನಿ. ಯಾರದೋ ಮಗು ಅಳುವ ಸ್ವರ. ಯಾರೋ ಗಟ್ಟಿಯಾಗಿ ನಕ್ಕ ಹಾಗೆ. ಒಟ್ಟು ಗದ್ದಲೋ ಗದ್ದಲ....
{{gap}}ಆದರೆ ಊಹ್ಱೂ, ಮಿಠಯಿವಾಲಾ ಬಂದೇ ಇಲ್ಲ. ಆಕೆ ತಟ್ಟನೆ ಎದ್ದು ಕಿಡಿಕಿಯಿಂದ ಹೊರಗೆ ಹಣಿಕಿದಳು- ಪ್ಲ್ಯಾಟಫಾರ್ಮಿನ ಈ ಕೊನೆಯಿಂದ ಆ ಕೊನೆಯವರೆಗೂ, ಗದ್ದಲವೇನೋ ಬಹಳಷ್ಟಿತ್ತು. ಆದರೂ ಅವನು ಇದ್ದಿದ್ದರೆ ಇದ್ದಲ್ಲಿಂದಲೇ ತನ್ನ ಗಾಡಿ ಸಹಿತವಾಗಿ ಕಾಣಿಸುತ್ತಿದ್ದ. ಎಲ್ಲಿ ಅವನು? ಮೈಯಲ್ಲಿ<noinclude><references/></noinclude>
ggxl1jx3zg5fd568k82oduuloiftf6x
321518
321517
2026-05-21T03:00:39Z
Hariprasad Shetty10
7490
321518
proofread-page
text/x-wiki
<noinclude><pagequality level="3" user="Pragathi. BH" />{{rh|left=ಕೊನೆಯ ದಾರಿ / ಹೊರಟು ಹೊದವನು|center=|right=೧೩೭}}</noinclude>ಮುಂದೆ ತಿಂಗಳುಗಳವರೆಗೆ ಸತೀಶ ಮಂಕಾಗಿದ್ದಿ. ಆ ಡಾಕ್ಟರನ ಪೆಚ್ಚು ಮುಖ ನೋಡಿದಾಗೆಲ್ಲ ಹಾಯೆನಿಸುತ್ತಿತ್ತು.<br />
{{gap}}ಅವನು ವರ್ಜ್ಯವೆಂದು ಹೇಳಿದ್ದ ಪಪ್ಪಾಯಿಹಣ್ಣನ್ನು - ದೊಡ್ಡ ದೊಂದು ಪಪ್ಪಾಯಿ ಹಣ್ಣನ್ನು- ಯಾರಿಗೂ ಗೊತ್ತಾಗದ ಹಾಗೆ ಆಟ್ಟದ ಮೇಲೆ ಕೂತು ತಾನು ತೀಂದದ್ದು ಕಡೆಗೂ ಯಾರಿಗೂ ಗೊತ್ತಾಗಿರಲೇ ಇಲ್ಲ, ಹಹ್ಹಹ್ಹ....<br />
{{gap}}ಇರುವ ಸುಖ ಸಾಲದೆಂದು ಮಕ್ಕಳೊಂದು ಕೇಡು. ಈ ಮಕ್ಕಳು ತನ್ನವೆಂದು ತನಗೆಂದೂ ಅನಿಸಿಲ್ಲ. ಮುಂದೆ ಪಾಪು ಹುಟ್ಟಿದಾಗ ಸತೀಶನಿಗೆಷ್ಟು ಖುಶಿ - ಎಂದೂ ಯಾರೂ ಮಾಡಲಾರದ್ದೇನನ್ನೋ ತಾನು ಮಾಡಿದಾಗ ಹಾಗೆ. ಆ ಮಗು ಸುಮ್ಮನೆ ಬಾಯಿ ಕಿಸಿದಾಗ, ಕೈಕಾಲು ಬಡಿದಾಗ, ಅರ್ಥವಾಗದ ಧ್ವನಿ ಹೊರಡಿಸಿದಾಗ ಇವನಿಗೆಷ್ಟು ಹೆಮ್ಮೆ - 'ನಮ್ಮ ಪಾಪು ಬಹಾಳ ಮೀಶ್ವಿವ್ಹಸ್, ಬಹಾಳ ಶಾಣೆ, ಬಹಾಳ- "ಜಗತ್ತಿನಲ್ಲಿಯ ಎಲ್ಲಾ ಹಡೆದವರಿಗೂ ಹೀಗೇ ಅನೀಸುತ್ತದೆ ಕಣೋ ಸತೀಶ - ಎಂದು ಹೇಳೀದ್ದರೆ...<br />
{{gap}}ಹೆನ್ನೆರಡು ಗಂಟೆ.<br />
{{gap}}ಬಿಸಿಲು ಹೆಚ್ಚಾಗುತ್ತಲೇ ಇದೆ. ಯಾವುದೋ ರೋಡ್ ಸ್ವೇಷನ್ ಮೇಲೆ ಗೂಡ್ಸ್ ಗಾಡಿ ಹಳಿ ತಪ್ಪಿದ್ದರಿಂದ ಒಂದು ತಾಸು ಸುಮ್ಮನೆ ತಡವಾಗಿ ಹೋಯಿತು. ಇಡೀ ರಾತ್ರಿ ನಿದ್ರೆ ಮಾಡದ್ದರಿಂದ ಕಣ್ಣು ಭಾರ,ತಲೆ ಭಾರ. ಈ ಸಲ ಹುಬ್ಬಳ್ಳಿಯಲ್ಲಿ ಹೆಚ್ಚು ದಿನ ನಿಲ್ಲಬಾರದು. ಕಂಪಾರ್ಟಾಮೆಂಟಿನಲ್ಲಿ ವಿಪರೀತ ಸೆಕೆ. ಫ್ಯಾನಿನ ಗಾಳಿಯಲ್ಲಿ ಉಗಿಯಾಗುತ್ತಿದೆ. ಹುಶ್, ಲೋಂಡಾ ಬರಬಾರದೆ....<br />
{{gap}}ಅರ್ಧ ನಿದ್ದೆ, ಅರ್ಧ ಎಚ್ಚರ. ಟ್ರೇನು ನಿಂತಿದೆ. ಲೋಂಡಾ ಸ್ಟೇಷನ್.ಮಧ್ಯಾಹ್ನ ಎರಡು ಗಂಟೆಯಾಹಗಿರಬೇಕು. ಕಣ್ಣು ತೆರೆಯಲು ಮನಸ್ಸಿಲ್ಲ. "ಬಾಯಿಸಾಬ್ ಕೋ ಖಾನಾ ಲಾವ್ಱೂ? 'ನಿರೀಕ್ಛಿಸುತ್ತ ಹಾಗೇ ಕಣ್ಣು ಮುಚ್ಚಿ ಮಲಗಿದ್ದಳು ಆಕೆ.<br />
{{gap}}ಜನರು ಹತ್ತುವ,ಇಳಿಯುವ ಗಡಿಬಿಡಿ. ಪೋರ್ಟರುಗಳ ಕೂಗಾಟ. ಚಹಾ-ಕಾಫಿ ಮಾರುವ ಹುಡುಗರ ಚೀರುದನಿ. ಯಾರದೋ ಮಗು ಅಳುವ ಸ್ವರ. ಯಾರೋ ಗಟ್ಟಿಯಾಗಿ ನಕ್ಕ ಹಾಗೆ. ಒಟ್ಟು ಗದ್ದಲೋ ಗದ್ದಲ....<br />
{{gap}}ಆದರೆ ಊಹ್ಱೂ, ಮಿಠಯಿವಾಲಾ ಬಂದೇ ಇಲ್ಲ. ಆಕೆ ತಟ್ಟನೆ ಎದ್ದು ಕಿಡಿಕಿಯಿಂದ ಹೊರಗೆ ಹಣಿಕಿದಳು- ಪ್ಲ್ಯಾಟಫಾರ್ಮಿನ ಈ ಕೊನೆಯಿಂದ ಆ ಕೊನೆಯವರೆಗೂ, ಗದ್ದಲವೇನೋ ಬಹಳಷ್ಟಿತ್ತು. ಆದರೂ ಅವನು ಇದ್ದಿದ್ದರೆ ಇದ್ದಲ್ಲಿಂದಲೇ ತನ್ನ ಗಾಡಿ ಸಹಿತವಾಗಿ ಕಾಣಿಸುತ್ತಿದ್ದ. ಎಲ್ಲಿ ಅವನು? ಮೈಯಲ್ಲಿ<noinclude><references/></noinclude>
32d9itm5bv1oox5z9buakr5i63dp7q1
321519
321518
2026-05-21T03:01:05Z
Hariprasad Shetty10
7490
/* Validated */
321519
proofread-page
text/x-wiki
<noinclude><pagequality level="4" user="Hariprasad Shetty10" />{{rh|left=ಕೊನೆಯ ದಾರಿ / ಹೊರಟು ಹೊದವನು|center=|right=೧೩೭}}</noinclude>ಮುಂದೆ ತಿಂಗಳುಗಳವರೆಗೆ ಸತೀಶ ಮಂಕಾಗಿದ್ದಿ. ಆ ಡಾಕ್ಟರನ ಪೆಚ್ಚು ಮುಖ ನೋಡಿದಾಗೆಲ್ಲ ಹಾಯೆನಿಸುತ್ತಿತ್ತು.<br />
{{gap}}ಅವನು ವರ್ಜ್ಯವೆಂದು ಹೇಳಿದ್ದ ಪಪ್ಪಾಯಿಹಣ್ಣನ್ನು - ದೊಡ್ಡ ದೊಂದು ಪಪ್ಪಾಯಿ ಹಣ್ಣನ್ನು- ಯಾರಿಗೂ ಗೊತ್ತಾಗದ ಹಾಗೆ ಆಟ್ಟದ ಮೇಲೆ ಕೂತು ತಾನು ತೀಂದದ್ದು ಕಡೆಗೂ ಯಾರಿಗೂ ಗೊತ್ತಾಗಿರಲೇ ಇಲ್ಲ, ಹಹ್ಹಹ್ಹ....<br />
{{gap}}ಇರುವ ಸುಖ ಸಾಲದೆಂದು ಮಕ್ಕಳೊಂದು ಕೇಡು. ಈ ಮಕ್ಕಳು ತನ್ನವೆಂದು ತನಗೆಂದೂ ಅನಿಸಿಲ್ಲ. ಮುಂದೆ ಪಾಪು ಹುಟ್ಟಿದಾಗ ಸತೀಶನಿಗೆಷ್ಟು ಖುಶಿ - ಎಂದೂ ಯಾರೂ ಮಾಡಲಾರದ್ದೇನನ್ನೋ ತಾನು ಮಾಡಿದಾಗ ಹಾಗೆ. ಆ ಮಗು ಸುಮ್ಮನೆ ಬಾಯಿ ಕಿಸಿದಾಗ, ಕೈಕಾಲು ಬಡಿದಾಗ, ಅರ್ಥವಾಗದ ಧ್ವನಿ ಹೊರಡಿಸಿದಾಗ ಇವನಿಗೆಷ್ಟು ಹೆಮ್ಮೆ - 'ನಮ್ಮ ಪಾಪು ಬಹಾಳ ಮೀಶ್ವಿವ್ಹಸ್, ಬಹಾಳ ಶಾಣೆ, ಬಹಾಳ- "ಜಗತ್ತಿನಲ್ಲಿಯ ಎಲ್ಲಾ ಹಡೆದವರಿಗೂ ಹೀಗೇ ಅನೀಸುತ್ತದೆ ಕಣೋ ಸತೀಶ - ಎಂದು ಹೇಳೀದ್ದರೆ...<br />
{{gap}}ಹೆನ್ನೆರಡು ಗಂಟೆ.<br />
{{gap}}ಬಿಸಿಲು ಹೆಚ್ಚಾಗುತ್ತಲೇ ಇದೆ. ಯಾವುದೋ ರೋಡ್ ಸ್ವೇಷನ್ ಮೇಲೆ ಗೂಡ್ಸ್ ಗಾಡಿ ಹಳಿ ತಪ್ಪಿದ್ದರಿಂದ ಒಂದು ತಾಸು ಸುಮ್ಮನೆ ತಡವಾಗಿ ಹೋಯಿತು. ಇಡೀ ರಾತ್ರಿ ನಿದ್ರೆ ಮಾಡದ್ದರಿಂದ ಕಣ್ಣು ಭಾರ,ತಲೆ ಭಾರ. ಈ ಸಲ ಹುಬ್ಬಳ್ಳಿಯಲ್ಲಿ ಹೆಚ್ಚು ದಿನ ನಿಲ್ಲಬಾರದು. ಕಂಪಾರ್ಟಾಮೆಂಟಿನಲ್ಲಿ ವಿಪರೀತ ಸೆಕೆ. ಫ್ಯಾನಿನ ಗಾಳಿಯಲ್ಲಿ ಉಗಿಯಾಗುತ್ತಿದೆ. ಹುಶ್, ಲೋಂಡಾ ಬರಬಾರದೆ....<br />
{{gap}}ಅರ್ಧ ನಿದ್ದೆ, ಅರ್ಧ ಎಚ್ಚರ. ಟ್ರೇನು ನಿಂತಿದೆ. ಲೋಂಡಾ ಸ್ಟೇಷನ್.ಮಧ್ಯಾಹ್ನ ಎರಡು ಗಂಟೆಯಾಹಗಿರಬೇಕು. ಕಣ್ಣು ತೆರೆಯಲು ಮನಸ್ಸಿಲ್ಲ. "ಬಾಯಿಸಾಬ್ ಕೋ ಖಾನಾ ಲಾವ್ಱೂ? 'ನಿರೀಕ್ಛಿಸುತ್ತ ಹಾಗೇ ಕಣ್ಣು ಮುಚ್ಚಿ ಮಲಗಿದ್ದಳು ಆಕೆ.<br />
{{gap}}ಜನರು ಹತ್ತುವ,ಇಳಿಯುವ ಗಡಿಬಿಡಿ. ಪೋರ್ಟರುಗಳ ಕೂಗಾಟ. ಚಹಾ-ಕಾಫಿ ಮಾರುವ ಹುಡುಗರ ಚೀರುದನಿ. ಯಾರದೋ ಮಗು ಅಳುವ ಸ್ವರ. ಯಾರೋ ಗಟ್ಟಿಯಾಗಿ ನಕ್ಕ ಹಾಗೆ. ಒಟ್ಟು ಗದ್ದಲೋ ಗದ್ದಲ....<br />
{{gap}}ಆದರೆ ಊಹ್ಱೂ, ಮಿಠಯಿವಾಲಾ ಬಂದೇ ಇಲ್ಲ. ಆಕೆ ತಟ್ಟನೆ ಎದ್ದು ಕಿಡಿಕಿಯಿಂದ ಹೊರಗೆ ಹಣಿಕಿದಳು- ಪ್ಲ್ಯಾಟಫಾರ್ಮಿನ ಈ ಕೊನೆಯಿಂದ ಆ ಕೊನೆಯವರೆಗೂ, ಗದ್ದಲವೇನೋ ಬಹಳಷ್ಟಿತ್ತು. ಆದರೂ ಅವನು ಇದ್ದಿದ್ದರೆ ಇದ್ದಲ್ಲಿಂದಲೇ ತನ್ನ ಗಾಡಿ ಸಹಿತವಾಗಿ ಕಾಣಿಸುತ್ತಿದ್ದ. ಎಲ್ಲಿ ಅವನು? ಮೈಯಲ್ಲಿ<noinclude><references/></noinclude>
sccqge07hhfhl4ol1grtitb65qr4j6u
ಪುಟ:ಸಂತಾಪಕ.djvu/೬೨
104
40289
321482
220888
2026-05-20T17:44:44Z
Pragathi. BH
7585
/* Validated */
321482
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಕರ್ಣಾಟಕ ಚಂದ್ರಿಕೆ.|left=೫೬|right=}}
{{rule}}
ಗೊರಕೆಗಳನ್ನು ಹಾಕುತ್ತಿದ್ದರು. ಕೆಲವರು ಉಸ್ಸ್ ಉಸ್ಸ್ ! ಎಂದು ನಿಟ್ಟುಸಿರನ್ನು ಬಿಡುತ್ತಿದ್ದರು. ಇನ್ನು ಕೆಲವರು ತಾವುತಾವು ಮಾಡಿದ ದುಷ್ಕಾರ್ಯಗಳನ್ನು ಅಪಲಾಪಿಸಿಕೊಂಡು ನ್ಯಾಯ್ಯಾಧೀಶನು ತಮ್ಮ ವಿಷಯದಲ್ಲಿ ಅನ್ಯಾಯ ಮಾಡಿದನೆಂದು ಹೇಳಿಕೊಳ್ಳುತ್ತಿದ್ದರು. ಮತ್ತೆ ಕೆಲವರು ಇನ್ನು ಮುಂದೆ ಇಂತಹ ಕಾರ್ಯವನ್ನು ಮಾಡುವುದಿಲ್ಲವೆಂದು ಹೇಳಿಕೊಳ್ಳುತ್ತಿದರು. ನಿದ್ರಾಂಗನೆಯು ಕಾಲಕ್ರಮವಾಗಿ ಎಲ್ಲರನ್ನು ವಶಮಾಡಿಕೊಂಡಳು. ಎಲ್ಲೆಲ್ಲಿಯೂ ನಿಶ್ಯಬ್ದವಾಯಿತು. ಪ್ರಕೃತಿಯು ವಿರಕ್ತನ ಮನಸ್ಸಿನಂತೆಯೂ, ಪತಿವ್ರತೆಯ ಮುಖದಂತೆಯೂ, ತರಂಗಹೀನವಾದ ಸಮುದ್ರದಂತೆಯೂ ಶಾಂತವಾಗಿದ್ದಿತು. ಈ ಸಮಯದಲ್ಲಿ ಒಬ್ಬ ಅಶ್ವಾ ರೋಹಿಯು ಕಾರಾಗೃಹದ ಪಶ್ಚಿಮದಿಕ್ಕಿನಲ್ಲಿ ಕುದುರೆಯನ್ನು ನಿಲ್ಲಿಸಿ ಒಳಕ್ಕೆ ಬಂದು ಒಂದುಬಾರಿ ಗಟ್ಟಿಯಾಗಿ ಆಕಳಿಸಿದನು. ಸೆರೆಮನೆಯಲ್ಲಿ ಯಾರೋ ಆಕಳಿಸಿದಂತೆ ಶಬ್ದವಾಯಿತು. ಆಗಂತುಕನು ಕೆಮ್ಮಿದನು.ಸೆರೆಮನೆಯಲ್ಲಿಯೂ ಯಾರೋ ಕೆಮ್ಮಿದರು. ಆಗಂತುಕನು ತನ್ನ ಸಮೀಪದಲ್ಲಿದ್ದ ಒಂದು ಗಂಟನ್ನು ಬಿಚ್ಚಿ ಒಂದು ನೂಲೇಣಿಯನ್ನು ತೆಗೆದುಕೊಂಡು ಸೆರೆಮನೆಯ ಗವಾಕ್ಷಕ್ಕೆ ಗುರಿಯಿಟ್ಟು ಎಸೆದನು. ಏಣಿಯು ಗವಾಕ್ಷದ ಸಲಾಕಿ ಗಳಿಗೆ ತಗುಲಿಕೊಂಡಿತು. ' ಆಗಂತುಕನು ಏಣಿಯಮೇಲೆ ಹತ್ತಿ ಗವಾಕ್ಷದ ಒಳಿಗೆ ಹೋಗಿ ಬಾಗಿಲನ್ನು ಒ೦ದುಬಾರಿ ಗುದ್ದಿದನು. ಬಾಗಿಲು ಒಡೆದುಹೋಯಿತು. ಆಗಂತುಕನು ತನ್ನ ಬಳಿಯಲ್ಲಿದ್ದ ಗಂಟನ್ನು ಒಳಕ್ಕೆ ಹಾಕಿಬೇಗಬೇಗನೆ ಅಲ್ಲಿಂದಿಳಿದು ನೂಲೇಣಿಯನ್ನು ಅಲ್ಲಿಯೇಬಿಟ್ಟು ಹೊರಗೆಬಂದನು. ಇವನು ಬರುವ ವೇಗಕ್ಕೆ ಕುದುರೆಯು ಬೆದರಿ ಓಡಲಾರಂಭಿಸಿತು.ಆಗಂತುಕನು ಹಿಂದಟ್ಟಿಹೋದನು. ಕುದುರೆಯು ಸಿಕ್ಕಲಿಲ್ಲ. ಆಗಂತುಕನು ಶ್ರಾಂತನಾಗಿ, ಮತ್ತೆ ಸೆರೆಮನೆಯ ಬಳಿಗೆ ಬಂದನು. ಇವನು ಬರುವುದರೊಳಗಾಗಿ ಆಜಾನುಬಾಹುವಾದ ಬಂದಿಯೊಬ್ಬನು ಗವಾಕ್ಷದಿಂದ ಹೊರಕ್ಕೆ ಬ೦ದು ನೂಲೇಣಿಯನ್ನು ಹೊರಕ್ಕೆ ತೆಗೆದು ಸುತ್ತುತ್ತಿದ್ದನು. ಆಗಂತುಕನು ಅವನ ಬಳಿಗೆ ಬಂದು ಕಿವಿಯಲ್ಲಿ ಏನೋ ಪಿಸುಮಾತುಗಳನ್ನಾಡಿದನು.ಬಂದಿಯು ತನ್ನ ಬಳಿಯಲ್ಲಿದ್ದ ಗಂಟನ್ನು ಆಗಂತುಕನ ಕೈಗೆ ಕೊಟ್ಟುಉತ್ತರಾಭಿಮುಖನಾಗಿ ಹೊರಟನು. ಇಬ್ಬರೂ ಹೋಗುತ್ತಿರುವಾಗ</br><noinclude></noinclude>
mx1fqsnyf595e70bkfgwtzmt9rsuu2b
ಪುಟ:ಸಂತಾಪಕ.djvu/೬೩
104
40290
321483
220901
2026-05-20T17:47:59Z
Pragathi. BH
7585
/* Validated */
321483
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಸಂತಾಪಕ.|left=|right=೫೭}}
{{rule}}
ಯಾರೋ ಹಿಂದುಗಡೆ ಬರುತ್ತಿದ್ದಂತೆ ಹೆಜ್ಜೆಯ ಶಬ್ದವಾಯಿತು. ಬಂದಿಯು ತಟ್ಟನೆ ತನ್ನ ಬಳಿಯಲ್ಲಿದ್ದ ಖಡ್ಗವನ್ನು ಹಿರಿದು ಹಿಂತಿರುಗಿದನು. ದೂರದಲ್ಲಿ ಯಾರೋ ಮೆಲ್ಲನೆ ನಡೆದು ಬರುತ್ತಿದ್ದಂತೆ ತೋರಿತು. ಬ೦ದಿಯೂ ಆಗಂತುಕನೂ ಸಮೀಪದಲ್ಲಿದ್ದ ಮರದ ಹಿಂದೆ ಅವಿತುಕೊಂಡರು. ಆ ಅಪರಿಚಿತ ವ್ಯಕ್ತಿಯು ಮರದ ಸಮೀಪಕ್ಕೆ ಬರಲು ಒಬ್ಬ ಸ್ತ್ರೀಯೆಂದು ಬೋಧೆಯಾಯಿತು. ಬ೦ದಿಯು ನಗುತ್ತಾಹೋಗಿ " ಪಾಟಲಿ ! ಇದೇನು ಅವೇಳೆಯಲ್ಲಿ ಬಂದೆ ? " ಎಂದು ಕೇಳಿದನು.</br>
{{gap}}ಪಾಠಕಮಹಾಶಯ ! ಬಂದಿಯೂ ಆಗಂತುಕನೂ ಸಂತಾಪಕ ನಂದಕುಮಾರರೆಂದು ನೀವು ಚೆನ್ನಾಗಿ ಬಲ್ಲಿರಷ್ಟೆ ? ಈ ಅಪರಿಚಿತವ್ಯಕ್ತಿಯು ಕಮಲಕುಮಾರಿಯ ಸಖಿ. ಕುಮಾರಿಯ ಪತ್ರಿಕೆಯನ್ನು ಸಂತಾಪಕನಿಗೆ ತಂದುಕೊಡಬೇಕೆಂದು ಸೆರೆಮನೆಯ ಸಮೀಪದಲ್ಲಿ ಸಮಯವನ್ನು ನಿರೀಕ್ಷಿಸುತ್ತಿರಲು, ಅವಳಿಗೆ ಸಂತಾಪಕ ನಂದಕುಮಾರರ ಚರ್ಯೆಯೆಲ್ಲಾ ತಿಳಿದುಬಂದಿತು. ಅವರಿಬ್ಬರೂ ಮುಂದೆ ಹೊರಡಲು ಇವಳೂ ಅವರನ್ನನುಸರಿಸಿಹೋದಳು. ಸಂತಾಪಕನು ಇವಳ ನಡೆಯಿಂದಲೇ ಇಂಥವಳೆಂಬುದನ್ನ ಗ್ರಹಿಸಿ ಮಾತನಾಡಿಸಲು ಪಾಟಲಿಕೆಯು ಪ್ರತ್ಯುತ್ತರವನ್ನುಕೊಡದೆ ಕುಮಾರಿಯ ಕಾಗದವನ್ನು ಅವನಕೈಗೆ ಕೊಟ್ಟು ಹಿ೦ತಿರುಗಿದಳು. ಸಂತಾಪಕನುನಂದಕುಮಾರನೊಡನೆ ಏನೋ ಹೇಳಿ ಕಳುಹಿಸಿ ತಾನು ಪಾಟಲಿಕೆಯನ್ನನುಸರಿಸಿ ಹೊರಟನು. ಮಾರ್ಗದಲ್ಲಿ ಇಬ್ಬರೂ ಏನೇನೋ ಮಾತುಗಳನ್ನಾಡುತ್ತಾ ಹೋದರು. ಪಾಟಲಿಕೆಯು ದತ್ತನ ಉಪವನದ ಮಾರ್ಗವಾಗಿ ಹೋಗಿ ಮನೆಯನ್ನು ಪ್ರವೇಶಿಸಿದಳು. ಸಂತಾಪಕನೂ ಅವಳೊಡನೆ ಪ್ರವೇಶಿಸಿದನು. ಪಾಟಲಿಕೆಯು ಕಮಲಕುಮಾರಿಯಿದ್ದ ಕಿರುಮನೆಯ ಬಾಗಿಲನ್ನು ತೆರೆದು ಸಂತಾಪಕನನ್ನು ಒಳಕ್ಕೆ ಕಳುಹಿಸಿ ತಾನು ಹೊರಗೆ ನಿಂತುಕೊಂಡಳು. ಕಮಲಕುಮಾರಿಯ ಘೋರವಾದ ಅವಸ್ಥೆಯನ್ನು ನೋಡಿದೊಡನೆಯೇ ಸಂತಾಪಕನ ಕಲ್ಲೆದೆಯೂ ಒಡೆದುಹೋಯಿತು.ದುಃಖದಿಂದ ಅವನ ಕ೦ಠವು ರುದ್ದವಾಯಿತು ಕಣ್ಣುಗಳಲ್ಲಿ ಧಾರಾಕಾರವಾಗಿ ನೀರು ಸುರಿಯಲುಪಕ್ರಮವಾಯಿತು. " ಕಮಲೆ ! ಕಮಲೆ ! "ಎಂಬ ಮಾತೊಂದಲ್ಲದೆ ಮತ್ತಾವ ಮಾತೂ ಅವನ ಬಾಯಿಂದ ಹೊರ</br><noinclude></noinclude>
pqae6gddeonb6a32dhk4e4bf6txe9ga
ಪುಟ:ಸಂತಾಪಕ.djvu/೬೪
104
40291
321485
220918
2026-05-20T17:51:59Z
Pragathi. BH
7585
/* Validated */
321485
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಕರ್ಣಾಟಕ ಚಂದ್ರಿಕೆ.|left=೫೮|right=}}
{{rule}}
ಡಲೇ ಇಲ್ಲ. ಕಮಲೆಯ ಕಣ್ಣಿನಿಂದಲೂ ವಾರಿಧಾರೆಯು ನಿರರ್ಗಳವಾಗಿ ಸುರಿದು ಹಾಸಿಗೆಯೆಲ್ಲ ತೋಯ್ದು ಹೋಯಿತು. ವಿಧಿಯು ಸುಮುಖನಾಗಿದ್ದಾಗ ಯಾವ ಕಿರುಮನೆಯು ನೂತನ ದಂಪತಿಗಳ ಶಯ್ಯಾಗೃಹವಾಗ ಬೇಕಾಗಿದ್ದಿತೋ ಆ ಗೃಹವು ವಿಧಿವಕ್ರತೆಯಿಂದ ಈ ದಿನ ಭಯಂಕರವಾದ ಪಿತೃವನವಾಗಿ ಪರಿಣಮಿಸಿತು. ಯಾವ ದಂಪತಿಗಳು ಏಕತ್ರ ಸೇರಿದೊಡ
ನೆಯೇ ಕೊನೆಮೊದಲಿಲ್ಲದ ಮಾತುಕತೆಗಳು ನಡೆಯಬೇಕಾಗಿದ್ದಿತೋ ಈದಿನ ಆ ದಂಪತಿಗಳು ಸೇರಿದೊಡನೆಯೇ ವಿಧಿವಕ್ರತೆಯಿಂದ ಮಾತೇ ಹೊರಡದಂತಾಗಿ ಹೋಯಿತು. ಕಮಲಕುಮಾರಿಯು ಅತಿಕಷ್ಟದಿ೦ದ ಒ೦ದು ಪಾರ್ಶ್ವಕ್ಕೆ ತಿರುಗಿ, ಸ್ವಲ್ಪ ನೀರು ಬೇಕೆಂದು ಸಂಜ್ಞೆ ಮಾಡಿದಳು. ಸಂತಾಪಕನು ಮುಮೂರ್ಷಾವಸ್ಥೆಯಲ್ಲಿದ್ದ ಆ ಕುಮಾರಿಗೆ ಸ್ವಲ್ಪಸ್ವಲ್ಪವಾಗಿ ನೀರನ್ನು ಕುಡಿಯಿಸಿದನು. ಸಂತಾಪಕನ ಜನ್ಮದಲ್ಲಿ ಇದೊಂದೇ ಪರೋಪಕಾರವು ನಡೆಯಬೇಕಾಗಿದ್ದುದು. ಅದೂ ಆಗಿಹೋಯಿತು. ಕುಮಾರಿಯು ಸ್ವಲ್ಪ ಚೇತರಿಸಿಕೊಂಡು ಮಾತನಾಡತೊಡಗಿದಳು. ಮರ್ಮಭೇದಿಯಾದ ಆ ಮಾತುಗಳನ್ನು ಬರೆಯುವೆವೆಂದರೆ ನಮ್ಮ ಮನವೊಪ್ಪಿದರೂಲೇಖನಿಯು ಹಿಂತೆಗೆಯುತ್ತಿರುವುದು. ಆದರೂ ಅವಳು ಕಡೆಯಲ್ಲಿ ಆಡಿದಮಾತುಗಳನ್ನು ಬರೆಯದಿದ್ದರೆ ಪಾಠಕರನ್ನು ವಂಚಿಸಿದಂತಾಗುವುದಾದುದರಿಂದ ಅದನ್ನು ಮಾತ್ರ ತಿಳಿಸುವೆವು :- " ಇದುವರೆಗೂ .........ಸೇರಿ.........ಆಶೆ......... ಈಗ.........ದೂರ..........ಈ ಜನ್ಮ...... .ನಿನ್ನ ಚರಣ......ಧನ್ಯೆ......ಮು೦ದೆ......ನೀನೇ ಪತಿ......ಎಂದೆಂದಿಗೂ......ದುಷ್ಕಾರ್ಯ......ಬೇಡ......ಪರೋಪಕಾರ.........ಇರು. ಹೋಗು. " ಇಷ್ಟು ಹೇಳಿ ಕುಮಾರಿಯು ಕಣ್ಣುಗಳನ್ನು ಮುಚ್ಚಿಕೊಂಡಳು. ಸಂತಾಪಕನ ಮನಸ್ಸು ಏನಾಗಿ ಹೋಯಿತೋ ನಾವುಬೇರೆಕಾಣೆವು. ಅವನು ಆ ಕಿರುಮನೆಯನ್ನು ಬಿಟ್ಟು ಹೊರಕ್ಕೆ ಬಂದನು.ಅಲ್ಲಿ ಪಾಟಲಿಕೆಯು ನಿಂತಿದ್ದಳು. ಸಂತಾಪಕನು ಅವಳೊಡನೆ ಯಾವ ಮಾತನ್ನೂ ಆಡದೆ ಉದ್ಯಾನವನದ ಮಾರ್ಗವಾಗಿ ಹೊರಟುಹೋದನು.ಸಂತಾಪಕನು ಹೊರಟುಹೋದ ತರುವಾಯ ಪಾಟಲಿಕೆಯು ಕಿರುಮನೆಯೊಳಕ್ಕೆ ಹೋದಳು. ಕುಮಾರಿಯ ಸಂಕಟವನ್ನು ನೋಡಲಾರದೆ ದೀಪವು</br><noinclude></noinclude>
liqf9uu35vz77kusl4j2xruqhysmxuk
ಪುಟ:ಕಥಾವಳಿ.djvu/೨೪
104
45084
321426
279308
2026-05-20T13:40:12Z
Shreelatha.Halemane
7642
/* Validated */
321426
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=|center=೯|right=}}
{{gap}}ಆ ಮಾರನೆಯ ದಿನ ನಾಗವಲ್ಲಿಯೇ ಹೊರಟಳು. ಪಟ್ಟಣದ ಜನರೆಲ್ಲರೂ ಗೋಳಿಟ್ಟರು. ಅರಮನೆಯಲ್ಲಿದ್ದವರ ದುಃಖವನ್ನ೦ತೂ ಹೇಳುವು
ದಕ್ಕೆ ಅಸಾಧ್ಯವು. ಆ ದಿನ ನಗಾರಿ ನೌಪತ್ತು ಆಗಲಿಲ್ಲ. ಊರಿನಲ್ಲಿ ಎಲ್ಲೆಲ್ಲಿ ನೋಡಿದರೂ ಜನರ ಗುಂಪು, ಪಿಸಿಪಿಸಿ ಮಾತು, ಜನರ ರೋದನಧ್ವನಿ,
ಈ ರೀತಿಯಲ್ಲಿದ್ದಿತು. ನಾಗವಲ್ಲಿಯು ತನ್ನ ಜತೆಯಲ್ಲಿ ಬರುತ್ತಿದ್ದ ಜನರ
ನನ್ನೆಲ್ಲಾ ಸಮಾಧಾನಗೊಳಿಸಿ, ಹಿಂದಕ್ಕೆ ಕಳುಹಿಸಿ, ತಾನೊಬ್ಬಳೇ ಆ
ಹುತ್ತವಿದ್ದಲ್ಲಿಗೆ ಹೊರಾಟಳು.
{{rh|left=|center='''೮. ನಾಗವಲ್ಲಿಯ ಕಥೆ.--(೪ನೆಯ ಭಾಗ್'''|right=}}
{{gap}}ನಾಗವಲ್ಲಿಯು, ತನ್ನ ಜನರನ್ನೆಲ್ಲಾ ಕಳುಹಿಸಿ, ಹೊರಟು ಸ್ವಲ್ಪ
ಹೊತ್ತಿನಲ್ಲಿಯೇ ಹುತ್ತವನ್ನು ಸೇರಿದಳು. ಅದನ್ನು ಸೀಳುವುದಕ್ಕೆ ಮುಂದೆ, ದೇವರನ್ನು ಪ್ರಾರ್ಥಿಸಿ, ಹುತ್ತಕ್ಕೆ ಪ್ರದಕ್ಷಿಣೆಮಾಡಿ, ಬಂಗಾರದ ಕತ್ತಿಯಿಂದ ಅದನ್ನು ಸೀಳಿದಳು. ಹುತ್ತವು ಎರಡು ಪಾಲಾಯಿತು. ಆಗ ಥಳಥಳಿ
ಸುವ ರತ್ನದ ಕವಚವನ್ನು ತೊಟ್ಟು, ವಜ್ರದ ಕಿರೀಟವನ್ನು ಇಟ್ಟು, ಅಗ್ನಿ
ಯಂತೆ ಪ್ರಕಾಶಿಸುವ ನಾಗರಾಜ ಕುಮಾರನು ಈಚೆಗೆ ಬಂದು, ಅವಳ
ಕೈಯನ್ನು ಹಿಡಿದುಕೊಂಡು, “ಪ್ರಿಯೆ ! ನನ್ನೊಡನೆ ನಡೆ” ಎಂದನು.
{{gap}}ನಾಗವಲ್ಲಿಯು ತನಗೆ ತಕ್ಕ ಗಂಡನು ಸಿಕ್ಕಿದುದಕ್ಕಾಗಿ ಬಹಳ
ಸಂತೋಷಗೊಂಡು, ನನ್ನ ತಂದೆ ತಾಯಿಗಳೂ ಇಷ್ಟ ಜನರೂ ನನ್ನನ್ನು
ಅಗಲಿ ಬಹಳವಾಗಿ ಚಿಂತಿಸುತ್ತಿರುವರು. ನನಗೆ ಲಭಿಸಿರುವ ಪುಣ್ಯ ವಿಶೇಷ
ವನ್ನು ಎಲ್ಲರಿಗೂ ತಿಳಿಸಿ ಅವರ ಮನಸ್ಸನ್ನು ಸಂತೋಷಪಡಿಸಿ ಬರುವುದಕೆ ಅಪ್ಪಣೆಯನ್ನು ಕೊಡಬೇಕು ಎಂದು ಪ್ರಾರ್ಥಿಸಿದಳು. ಅದಕ್ಕೆ ನಾಗರಾಜ ಕುಮಾರನು ಒಪ್ಪಿ 'ನಾನು ಇಲ್ಲಿ ಬಹಳ ಕಾಲ ನಿಲ್ಲುವುದಕ್ಕೆ ಇಲ್ಲ, ನೀನು ಊರಿಗೆ ಹೋಗಿ, ನಿಮ್ಮ ತಂದೆ ತಾಯಿಗಳೊಡನೆ ಮರುಗಳಿಗೆ ಎಂದರೆ
ಮರೇಗಳಿಗೆ ಇದ್ದು, ಹೊರಟು ಬಾ, ' ಎಂದು ಹೇಳಿ ಕಳುಹಿಸಿದನು.<noinclude></noinclude>
okb1rsgcwh9oueibn1sy1j4ipjhazc0
ಪುಟ:ಕಥಾವಳಿ.djvu/೪೨
104
45102
321473
279222
2026-05-20T15:09:53Z
Shreelatha.Halemane
7642
/* Proofread */
321473
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|೨೭}}
ತಡೆಯಲಾರದೆ ಓಡಲಾರಂಭಿಸಿದುವ, ಎಲ್ಲೆಲ್ಲೂ ಕೋಲಾಹಲ, ಜನರ ಗೋಳು, ಶೂರರ ಆರ್ಭಟ, ಅಭಿಮನ್ಯುವಿನ ಹುಂಕಾರ ಧ್ವನಿ ಇವೇ ತುಂಬಿದ್ದುವು.<br />
{{gap}}ಆಗ ದುರ್ಯೋಧನನು ಕಂಗೆಟ್ಟು ದ್ರೋಣಾಚಾರ್ಯರಲ್ಲಿಗೆ ಬಂದು,- ಒಂದು ಮಗುವಿಗೆ ನಾವು ಇಷ್ಟು ಹೆದರಬೇಕೆ ? ' ನಾನು ಕರ್ಣನನ್ನು ಸುಡುತ್ತಿದ್ದೆನು ನಮ್ಮ ತಂದೆಗೋಸ್ಕರ ಬಿಟ್ಟಿರುವೆನು. ದುಶ್ಯಾಸನನ ತಲೆಯನ್ನು ಚಂಡಾಡುತಿದ್ದೆನು. ನಮ್ಮ ದೊಡ್ಡಪ್ಪ ಭೀಮನಿಗೋಸ್ಕರ ಅವನನ್ನು ಉಳಿ ಸಿರುವೆನು' ಎಂದು ಅಭಿಮನ್ಯು ಹೇಳಿಕೊಳ್ಳುತ್ತಾ, ಸಿಂಹದ ಮರಿಯಂತೆ ಮೆರೆಯುತ್ತಿರುವನಲ್ಲ! ಏನು ಗತಿ ? ಪದಾತಿಗಳು ಓಡುವ ಯೋಜನೆಯನ್ನು ಮಾಡುತ್ತಿರುವರಲ್ಲ ! ಮುಂದೇನುಮಾಡುವುದು ?- ಎನ್ನಲು ಆಗ ದ್ರೋಣರು ಆಯ್ಯಾ ? ಅಭಿಮನ್ಯುವಿನ ಕೈಯಲ್ಲಿ ಆ ಬಿಲ್ಲು ಇರುವವರೆಗೂ ಅವನನ್ನು ಸೋಲಿಸಲು ನಮ್ಮಲ್ಲಿ ಯಾರಿಂದಲೂ ಸಾಧ್ಯವಲ್ಲ- ಎಂದರು. ಆಗ ಅವರಲ್ಲೊಬ್ಬನು, - ನೀವು ಅಭಿಮನ್ಯುವಿಗೆ ಇದಿರಾಗಿ ಯುದ್ಧ ಮಾಡಿರಿ, ನಾನು ಮೆಲ್ಲನೆ ಹಿಂದಿನಿಂದ ಅವನ ಬಿಲ್ಲನ್ನು ಕತ್ತರಿಸುವೆನು ಎಂದನು. ಆ ಹೇಡಿಯ ಸಲಹೆಗೆ ಆ ಮಹಾಶೂರರೆಲ್ಲರೂ ಒಪ್ಪಿದರು, ಅದೇ ಮೇರೆ ಮತ್ತೆ ಹೊಸ ರಥಗಳನ್ನೇರಿ, ಹೊಸ ಕವಚಗಳನ್ನು ತೊಟ್ಟು ಹೊಸ ಬಾಣಗಳನ್ನು ಹಿಡಿದು ಹೊಸ ಶೂರರಂತೆ ಎಲ್ಲರೂ ಒಟ್ಟಾಗಿ ಬಂದು ಒಂದೇ ಸಮನಾಗಿ ಬೆಳಗ್ಗಿನಿಂದಲೂ , ಅಸಹಯನಾಗಿ ಯುದ್ಧ ಮಾಡುತ್ತಿರುವ ಆ ಮಗುವಿನ ಮೇಲೆ ಬಿದ್ದರು, ಅಭಿಮನ್ಯುವು ಸ್ವಲ್ಪವೂ ಹಿಂದೆಗೆಯದೆ, ಬಾಣದ ಮಳೆಯನ್ನೇ ಅವರಮೇಲೆ ಕರೆದು, ಮತ್ತೆ ಬಾಣವನ್ನು ಹೂಡುತ್ತಿದ್ದನು. ಆಗ ಹಿಂದು ಗಡೆಯಿಂದ ಬಂದು ಶೂರನೊಬ್ಬನು ಬಿಲ್ಲಿನ ಹುರಿಯನ್ನು ಕತ್ತರಿಸಿದನು. ಅಭಿಮನ್ಯುವು ಹಿಂದಿರುಗಿ ನೋಡಿ," ಆ8 ! ಎಂತಹ ಶೂರ ” ಎಂದು ಬಿಲ್ಲನ್ನು ಬಿಸಾಟು, ಕತ್ತಿಯನ್ನು ಹಿರಿದು, ಶತ್ರುಗಳ ಮೇಲೆ ಬಿದ್ದನು. ಆಗ ಶತ್ರು ಗಳು ಹೊಡೆಯುತ್ತಿದ್ದ ಬಾಣಗಳನ್ನೆಲ್ಲಾ ಅಭಿಮನ್ಯು ಕತ್ತಿಯನ್ನು ತಿರುಗಿಸಿ ತಪ್ಪಿಸುತ್ತಿರಲು, ಒಂದು ಬಾಣವು ಬಂದು ಕೈಯನ್ನು ಕತ್ತರಿಸಿತು. ಆಗ ರಥದ ಚಕ್ರವನ್ನು ಒದೆದು ತೆಗೆದು, ಮೊಂಡುಕೈಯಿಂದಲೆ ತಿರುಗಿಸಿ ತಿರುಗಿಸಿ ಅಪ್ಪಳಿಸುತ್ತಿರಲು, ಇನ್ನೊಂದು ಕೈಯನ್ನೂ ಕತ್ತರಿಸಿದರು. ಅಪ್ಪಾದರೂ<noinclude></noinclude>
myr6ubx5p938fwm2ve1ax6znzwurx8x
ಪುಟ:ಕಥಾವಳಿ.djvu/೪೩
104
45103
321424
279393
2026-05-20T13:32:10Z
Shreelatha.Halemane
7642
/* Validated */
321424
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|'''೨೮'''}}
ಒಬ್ಬರನ್ನೂ ಹತ್ತಿರ ಸೇರಿಸದೆ ಇರಲು, ಒಬ್ಬ ವೀರನು ಬಂದು ಮುಷ್ಟಿ ಯುದ್ಧಕ್ಕೆ ಕರೆದನು. ಅದಕ್ಕೂ ಸಿದ್ಧನಾಗಿ ನಿಂತು ಮೊಂಡು ತೋಳುಗಳಿಂದ ಯುದ್ಧವನ್ನು ಮಾಡಿ ಶತ್ರುವನ್ನು ಬಲವಾಗಿ ಹೊಡೆದನು. ಅವನೂ ಒಂದು ಬಲವಾದ ಪೆಟ್ಟನ್ನು ಕೊಡಲು,ಶ್ರಾಂತನಾದ ಅಭಿಮನ್ಯುವು ಅಲ್ಲಿಯೇ ಪ್ರಾಣವನ್ನು ಬಿಟ್ಟನು. ಅವನ ಶತ್ರುವೂ ಅಭಿಮನ್ಯುವಿನ ಏಟಿನಿಂದ ರಕ್ತ ವನ್ನು ಕಾರಿ ಪ್ರಾಣವನ್ನು ಬಿಟ್ಟನು, ಬಾಲಕರಲ್ಲಿ ಶೂರನೆಂದರೆ ಇವನೇ ಅಲ್ಲವೆ ?<br />
{{center|'''೨೦, ಶಿವಾಜಿಮಹಾರಾಜ'''}}
{{gap}}ಸುಮಾರು ಇನ್ನೂರ ಐವತ್ತು ವರ್ಷಗಳ ಹಿಂದೆ ಮಹಾರಾಷ್ಟ್ರದೇಶ ವನ್ನು ಶಿವಾಜಿ ಮಹಾರಾಜನು ಆಳುತ್ತಿದ್ದನು. ಇವನು ಷಾಜಿಯ ಮಗನು. ಮಗುವಾಗಿದ್ದಾಗಲೇ ಇವನ ತಂದೆಯು ಇವನನ್ನು ಸಾಕಿ ಸಲುಹುವುದಕ್ಕೆ ತಕ್ಕ' ಏರ್ಪಾಟನ್ನು ಮಾಡಿನೆವು ಎಂಬ ಒಂದು ಪಟ್ಟಣದಲ್ಲಿ ಬಿಟ್ಟಿದ್ದನು. ಅಲ್ಲಿ ಹುಡುಗರ ಗುಂಪಿನಲ್ಲೆಲ್ಲಾ ಶಿವಾಜಿಯೇ ಮುಂದಾಳಾಗಿದ್ದನು. ಯಾವ ಆಟದಲ್ಲಿಯೂ ಶಿವಾಜಿಯೇ ಮುಂದು ; ಇವನು ಯಾವ ಕುದುರೆ ಯನ್ನಾದರೂ ಏರಲು ಶಕ್ತನಾಗಿದ್ದನು. ಗುರಿ ಕಟ್ಟಿ ಹೊಡೆವುದರಲ್ಲಿ ಶಿವಾಜಿಗೆ ಸಮರಾದ ಬಾಲಕರೇ ಆ ಊರಲ್ಲಿರಲಿಲ್ಲ. ಕತ್ತಿ ಕಠಾರಿಗಳನ್ನು ತಿರುಗಿಸುವುದರಲ್ಲಿ ಶಿವಾಜಿಯು ನಿಪ್ರಣನಾಗಿದ್ದನು. ಇವನಿಗೆ ರಾಮಾಯಣ ಮಹಾಭಾರತಗಳನ್ನು ಕೇಳುವುದರಲ್ಲಿ ಬಹು ಆದರ. ಆ ಪುರಾಣಗಳಲ್ಲಿ ಪ್ರಸಿದ್ಧಿಗೊಂಡ ಶೂರರಂತೆ ತಾನೂ ಹೆಸರುವಾಸಿಯಾಗಬೇಕೆಂಬುದು ಶಿವಾಜಿಯ ಆಶೆ. ಅಲ್ಲದೆ ಆಗಿನ ಕಾಲದಲ್ಲಿ ಪ್ರಬಲರಾಗಿದ್ದ ತುರುಕರನ್ನು ಹಿಂದೂ ದೇಶದಿಂದ ಓಡಿಸಿ, ಹಿಂದೂ ರಾಜ್ಯವನ್ನೂ, ಹಿಂದೂಧರ್ಮವನ್ನೂ ಸ್ಥಾಪಿಸ ಬೇಕೆಂಬುದೇ ಶಿವಾಜಿಯ ಸಂಕಲ್ಪ.
{{gap}}ತನಗೆ ಪ್ರಾಯವು ಬರಲು, ಶಿವಾಜಿಯು ತನ್ನ ಜತೆಗಾರರನ್ನು ಸೇರಿಸಿಕೊಂಡು, ಹತ್ತಿರ ಹತ್ತಿರ ಇದ್ದ ಹಳ್ಳಿ ಹಳ್ಳಿಗಳ ಮೇಲೆ ಬಿದ್ದು ಅವನ್ನು ಸ್ವಾಧೀನ ಮಾಡಿಕೊಂಡು, ಮೆಲ್ಲನೆ ಒಂದು ಕೋಟೆಯನ್ನು ಹಿಡಿದು ಅಲ್ಲಿ<noinclude></noinclude>
ni078nojb0c655nvwdc6o9sq0nvjqfo
ಪುಟ:ಕಥಾವಳಿ.djvu/೫೨
104
45112
321423
279313
2026-05-20T13:31:01Z
Shreelatha.Halemane
7642
/* Validated */
321423
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|left=|center=೩೭|right=}}
{{gap}}ಆಷ್ಟರಲ್ಲಿಯೆ ಸಮುದ್ರದ ಮಧ್ಯೆ ದೂರದಲ್ಲಿ ಒಂದು ಅರಮನೆಯು ಕಾಣಿಸಿತು. ಒಂದು ಕ್ಷಣ ದೃಷ್ಟಿಸಿ ನೋಡಲು ಅದು ಸೊಗಸಾದ ಏಳು ಪ್ಪರಿಗೆಯ ಮನೆಯೆಂದು ಗೊತ್ತಾಯಿತು. ಆಗ ದೊರೆಯು “ನಾನು ಸಾಯುವದೇನೋ ನಿಜ, ನಾನು ಸತ್ತರೆ ಅಳುವವರು ಯಾರು ? ಸಾಯು ವೆನೆಂಬ ಹೆದರಿಕೆಯಾಗಲಿ, ವ್ಯಸನವಾಗಲಿ ಯಾವುದೂ ನನಗೆ ಇಲ್ಲ' ಆದುದರಿಂದ ಹೇಗಾದರೂ ಆ ಅರಮನೆಯನ್ನು ಸೇರಬೇಕು' ಎಂದು ಯೋಚಿಸುತ್ತಿದ್ದನು.
{{gap}}ಅಷ್ಟರಲ್ಲಿಯೇ ಒಂದು ದೋಣಿಯು ದಡದ ಕಡೆಗೆ ಹೊಡೆದುಕೊಂಡು ಬರುತ್ತಿತ್ತು. ಅದನ್ನು ನೋಡಿ ಅದು ಬರುವುದನ್ನೇ ಕಾದಿದ್ದು, ಬಂದ ಮೇಲೆ ಅದನ್ನು ಹತ್ತಿ ಅರಮನೆಯಿದ್ದ ಕಡೆಗೆ ಹೊರಟನು. ಎಷ್ಟು ದೂರ ಹೋದರೂ, ಅರಮನೆಯು ಇನ್ನೂ ದೂರವಾಗಿ ಕಾಣುತ್ತಿತ್ತೇ ಹೊರತು ಸಿಕ್ಕುವಂತೆ ಇರಲಿಲ್ಲ. ಅಷ್ಟು ಹೊತ್ತಿಗೆ ಬಹು ಕತ್ತಲೆಯಾಯಿತು. ಅರಮನೆಯು ಸಿಕ್ಕಲಿಲ್ಲ, ನಡುಸಮುದ್ರ, ಆ ದೊರೆಯು ಏನು ಮಾಡ ಬೇಕು ? ಏನಾದರೂ ಆಗಲಿ 'ನಾನು ಸತ್ತರೆ ಅಳುವವರು ಯಾರು ? ಎಂದು ದೋಣಿಯನ್ನು ಮುಂದೆಮುಂದೆ ನಡೆಯಿಸಿಕೊಂಡು ಹೋದನು.{{gap}}
{{rh|left=|center=೨೫, ನಾಗಲೋಕ (೨ ನೆಯ ಭಾಗ4.)|right=}}
{{gap}}ಹಾಗೆ ಬಹುದೂರ ಹೋದ ಮೇಲೆ ದೋಣಿಯನ್ನು ಏನೋ ತಡೆ ದಂತೆ ಆಯಿತು. ಕೂಡಲೆ ದೋಣಿಯಿಂದ ಇಳಿದು ನೋಡುವಲ್ಲಿ ದಡವು ಸಿಕ್ಕಿದಂತೆ ಕಾಣಿಸಿತು. ದಡದಮೇಲೆ ಇಳಿದನು. ಅಷ್ಟು ಕತ್ತಲೆಯಾಗಿ ದ್ದರೂ ಅಲ್ಲಿ ನಿಲ್ಲದೆ ಆಗಲೇ ಹೊರಟನು. ಎಲ್ಲೆಲ್ಲೂ ಗಿಡಗಳು ಬೆಳೆದಿ ದ್ಗುವ, ದಾರಿಯೇ ಕಾಣದು. ಹಾವ ಹಲ್ಲಿಯ ಓಡಾಟದ ಶಬ್ದವು ಎಲ್ಲೆಲ್ಲೂ ತುಂಬಿದ್ದಿತು. ದುಂಬಿಗಳ ಚೀತ್ಕಾರವ ಕಿವಿ ಚಿಟ್ಟುಹಿಡಿಸುತ್ತಿ ದ್ವಿತು. ಇವನು ಯಾವುದಕ್ಕೂ ಅಂಜದೆ ಹೋಗುತ್ತಲೇ ಇದ್ದನು. ಆಗ<noinclude></noinclude>
gns3j5yv8nnbni57oc35szeha2rmsql
ಪುಟ:ಕಥಾವಳಿ.djvu/೫೩
104
45113
321425
279377
2026-05-20T13:36:36Z
Shreelatha.Halemane
7642
/* Validated */
321425
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|೩೮}}
ಸ್ವಲ್ಪ ದೂರದಲ್ಲಿ ಬೆಳಕು ಕಾಣಿಸಿತು. ಆ ಬೆಳಕನ್ನೆ ಗುರುತಾಗಿಟ್ಟು ಕೊಂಡು ಹೊರಟನು. ಹೋಗುಹೋಗುತ ಬೆಳಕು ದೊಡ್ಡದಾಗುತ್ತ ಬಂದಿತು, ಅಲ್ಲಿ ಒಂದು ಸಣ್ಣ ಕಾಲುದಾರಿ ಕಾಣಿಸಿತು.
{{gap}}ಆ ದಾರಿಯನ್ನೇ ಹಿಡಿದು ಹೋಗಲು, ಒಂದು ದೊಡ್ಡ ಮೈದಾನವೂ ಸಿಕ್ಕಿತು. ಆ ಮೈದಾನದಲ್ಲಿ ಸರೋದಯವಾಗಿರುವಂತೆ ಬೆಳಕು ತುಂಬಿದ್ದಿತು. ಇದೇನು ಆಶ್ಚರ್ಯ ! ಮಧ್ಯರಾತ್ರಿ, ಇಲ್ಲಿ ಈಗ ಸೂರ್ಯನು ಪ್ರಕಾಶಿಸುವಂತಿದೆ. ನೋಡೋಣ ಎಂದು ಇನ್ನೂ ಮುಂದೆ ಹೋದನು. ಮುಂದೆ ಹೋಗು ಹೋಗುತ್ತ ಸುವಾಸನೆಯಾಗಿ ತಂಗಾಳಿ ಬೀಸುತಿದ್ದಿತು. ಹಗಲಿನಲ್ಲಿ ಹೇಗೋಹಾಗೆ ಪಕ್ಷಿಗಳು ಸುಖವಾಗಿ ಧ್ವನಿ ಮಾಡುತ್ತ ಎಲ್ಲೆಲ್ಲೂ ಹಾರಾಡುತ್ತಿದ್ದವು, ಇವನ ಆಯಾಸವೆಲ್ಲಾ ಮರೆತು ಹೋಯಿತು, ಹಸಿವು ಬಾಯಾರಿಕೆಗಳೂ ನಿಂತು ಹೋದವು, ಮನಸ್ಸಿನಲ್ಲಿ ಉಲ್ಲಾಸವುಂಟಾಯಿತು.
{{gap}}ಇವನು ಹಾಗೆ ಬೆರಗಾಗಿ ನಿಂತಿದ್ದಾಗ ಮಹಾರಾಜನ ! ದಯೆ ಮಾಡು. ನೀನು ಬಹಳ ದೂರದಿಂದ ಆಯಾಸಪಟ್ಟು ಬಂದಿರುವಂತಿದೆ ಎಂಬ ಧ್ವನಿಯು ಕೇಳಿಬಂತು. ಆ ಧ್ವನಿ ಬಂದ ದಾರಿಯಲ್ಲಿ ಸ್ವಲ್ಪ ಮುಂದೆ ಹೋಗುತ್ತಾ ಒಬ್ಬ, ನಾಗಕನ್ಯೆಯು ಒಂದು ನವಿಲಿನ ಮೇಲೆ ಕುಳಿತಿದ್ದುದನ್ನು ನೋಡಿ ಅಲ್ಲಿಯೇ ನಿಂತನು. ಆ ನಾಗಕನ್ಯೆಯೊಡನೆ ಇದ್ದ ಸಖೀ ಜನರು 'ದಯಮಾಡಿ, ಮೃದುವಾಗಿರುವ ಈ ಹೂವಿನ ಹಾಸಿಗೆಯ ಮೇಲೆ ವಿಶ್ರಮಿಸಿಕೊಳ್ಳಿ, ನಿಮಗೆ ಬೇಕಾದುದನ್ನು ತಂದು ಕೊಡುವೆವು, ಸ್ವೀಕರಿಸಿ' ಎಂದು ಉಪಚರಿಸಿದರು. ರಾಜನು “ನನ್ನ ಕೋರಿಕೆಯೊಂದನ್ನು ನಿಮ್ಮ ರಾಣಿಯು ನೆರವೇರಿಸುವುದಾದರೆ, ನಿಮ್ಮ ಆದರವು ನನಗೆ ಹಿತವನ್ನುಂಟುಮಾಡುವದು ' ಎಂದನು. ಇವನ ಧೈರ್ಯಕ್ಕೆ ಮೆಚ್ಚಿ. ನಾಗಕನ್ಯೆಯು 'ನಿಮ್ಮ ಕೋರಿಕೆ ಏನು ? ಎಂದಳು. ರಾಜನು 'ನಾನ ಇಲ್ಲಿಯೇ ವಾಸಮಾಡಬೇಕೆಂದು ಬಂದಿರುವೆನು. ಅದಕ್ಕೆ ನೀವು ಒಪ್ಪ ಬೇಕು' ಎಂದನು.
{{gap}}ಆಗ ನಾಗಕನ್ಯೆಯು'ನೀವು ಇಲ್ಲಿ ಬಹಳ ಹೊತ್ತು ಇರಲಾಗದು.<noinclude></noinclude>
9lcie4ejqv5vdrl377tyvvfq0pvf9kk
ಪುಟ:ಕಥಾವಳಿ.djvu/೫೬
104
45116
321427
279390
2026-05-20T13:40:44Z
Pragathi. BH
7585
/* Validated */
321427
proofread-page
text/x-wiki
<noinclude><pagequality level="4" user="Pragathi. BH" /></noinclude>{{center|೪೧}}
{{gap}}ಹೀಗಿರುವಲ್ಲಿ ಆ ಗುಡಿಯ ಹಳೆಯ ಉಗ್ರಾಣದಲ್ಲಿ ಸೇರಿಕೊಂಡಿದ್ದ ಒಂದು ಇಲಿಯು ಹಾವಿನ ಬುಟ್ಟಿಯನ್ನು ನೋಡಿ ಕಾಳು ತುಂಬಿಟ್ಟಿರುವ ಬುಟ್ಟಿಯೆಂದು ಮೆಲ್ಲನೆ ಬಂದು, ಸ್ವಲ್ಪ ಸ್ವಲ್ಪವಾಗಿ ಆ ಬುಟ್ಟಿಯನ್ನು ಕೊರೆದು, ಬಹಳ ಆಶೆಯಿಂದ ಬುಟ್ಟಿಯೊಳಗೆ ನುಗ್ಗಿತು. ಹಸಿದಿದ್ದ ಹಾವಿಗೆ ಇಳಿಯನ್ನು ನೋಡಿ ಬಹುಸಂತೋಷವಾಯಿತು' ಅದು ಒಳಗೆ ಬಂದೊಡನೆ ಹಾವು ಫಕ್ಕನೆ ನುಂಗಿ, ಇಲಿಯು ಮಾಡಿದ ಕನ್ನದಿಂದ ಸರಸರನೆ ಹರಿದು ಹೋಗಿ, ಹತ್ತಿರವಿದ್ದ ಒಂದು ಹುತ್ತವನ್ನು ಸೇರಿತು.
{{gap}}ಇತ್ತಲಾಗಿ ಹಾವಾಡಿಗನು ಸ್ವಲ್ಪ ಚೇತರಿಸಿಕೊಂಡು ಎದ್ದು ನೋ ಡುವಲ್ಲಿ, ಬುಟ್ಟಿಯು ಬರಿದಾಗಿದ್ದಿತು. ಹಾವೇ ಬುಟ್ಟಿಯನ್ನು ಕೊರೆದು ಕೊಂಡು ಹೋಯಿತೆಂದು ಆಶ್ಚರ್ಯ ಪಡುತ್ತಿದ್ದನು.
{{center|'''೨೮.ಕಣಜ ಮತ್ತು ಜೇನುಹುಳು.'''}}
{{gap}}ಒಂದು ಪಾಳು ಗುಡಿಯ ಗೋಡೆಯ ಮೂಲೆಯಲ್ಲಿ ಒಂದು ಕಣ ಜವು ಗೂಡು ಕಟ್ಟಿಕೊಂಡು ಇದ್ದಿತು, ಒಂದು ಜೇನು ಹುಳುವು ಗೂಡು ಕಟ್ಟುವುದಕ್ಕೆ ಅನುಕೂಲವಾದ ಸ್ಥಳವನ್ನು ಹುಡುಕುತ್ತಾ ಹುಡುಕುತ್ತಾ, ಆ ಕಣಜದ ಗೂಡಿನ ಹತ್ತಿರಕ್ಕೆ ಬಂದಿತು. ಕಣಜವ ಜೇನು ಹುಳುವನ್ನು, ಕರೆದು, ಉಪಚರಿಸಿ, “ ಅಣ್ಯ ! ನಿನ್ನನ್ನು ಒಂದು ಮಾತು ಕೇಳಬೇಕೆಂದು ಇದ್ದೇನೆ ' ಎಂದಿತು, ಜೇನುಹುಳುವು ಅದಕ್ಕೆ “ ಅದೇನು ಕೇಳು, ತಿಳಿದಿದ್ದರೆ ಅಗತ್ಯವಾಗಿ ಹೇಳುತ್ತೇನೆ' ಎಂದಿತು.
{{gap}}ಆಗ ಕಣಜವು 'ಜನರು ನಿನ್ನನ್ನು ಕಂಡರೆ ಅದರಿಸುದೇಕೆ ? ನನ್ನ ನ್ನು ಹಿಂಸಿಸುವುದೇಕೆ ? ನಾವಿಬ್ಬರೂ ಒಂದೇ ರೀತಿಯಲ್ಲಿಲ್ಲವೆ ? ನಮ್ಮಿಬ್ಬರಿಗೂ ಚೆನ್ನಾದ ರೆಕ್ಕೆಗಳಿಲ್ಲವೆ ? ನಮ್ಮಿಬ್ಬರಿಗೂ ಸಿಹಿಯಾದ ಪದಾರ್ಥದಲ್ಲಿ ಪ್ರೀತಿಯಿಲ್ಲವೆ ? ನಮ್ಮ ಗೋಜಿಗೆ ಜನಗಳು ಬಂದರೆ ನಾವಿಬ್ಬರೂ ಕಚ್ಚ ವೆವಲ್ಲವೆ ? ಹೀಗಿರುವಾಗ, ನೀನು ಬಂದರೆ ನಿನಗೆ ಎಲ್ಲಾ ಅನುಕೂಲ<noinclude></noinclude>
mfhpsya3tt1wtat3u54dsy17idvq0xx
ಪುಟ:ಕಥಾವಳಿ.djvu/೬೦
104
45120
321428
279279
2026-05-20T13:41:48Z
Pragathi. BH
7585
/* Validated */
321428
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=|center={{larger|೪೫}}|right=}}
{{gap}}ವನ್ನಾಳಿ, ತರುವಾಯ ದೇವರು ಕೊಟ್ಟ ಶಾಶ್ವತಪದವಿಯನ್ನು ಸೇರಿ ಈ ಗಲೂ ಆಕಾಶದಲ್ಲಿ ಉತ್ತರದಿಕ್ಕಿನಲ್ಲಿ ನಿತ್ಯದಲ್ಲೂ ಒಂದೇ ಸ್ಥಳದಲ್ಲಿ ಪ್ರಕಾಶಿ ಸುತ್ತ ಧ್ರುವನಕ್ಷತ್ರವೆಂದು ಪ್ರಸಿದ್ಧಿಗೊಂಡಿರುವನು.
{{rh|left=|center={{larger|'''೩೧, ಕಣ್ಣೂ ತೆಂಗೂ.'''}}|right=}}
{{gap}} ಒಂದು ಕಬ್ಬಿನ ಗದ್ದೆ, ಅಲ್ಲಿ ಕಬ್ಬು ಬಹು ಚೆನ್ನಾಗಿಬೆಳೆದು ಗದ್ದೆಯ ಶುಂಬಾ ತುಂಬಿದ್ದಿತು. ಗದ್ದೆಯ ಬದುವಿನ ಮೇಲೆ ಒಂದೇ ಒಂದು ತೆಂಗಿನ ಗಿಡವು ಬೆಳೆದಿದ್ದಿತು. • ಅದರಲ್ಲಿಯೂ ಹದವಾದ ಎಳೆನೀರುಗಳು ತುಂಬಿ ದ್ದುವು.
{{gap}} ಒಂಟಿಯಾಗಿ ನಿಂತಿದ್ದ ತೆಂಗನ್ನ ನೋಡಿ, ಗುಂಪಗುಂಪಾಗಿ ಬೆಳೆ ದಿದ್ದ ಕಬ್ಬು ಅಪಹಾಸ್ಯ ಮಾಡಲು ತೊಡಗಿತು. ' ಎಲೈ ! ತೆಂಗೇ ನೀನು ಹುಟ್ಟಿ, ಇದುವರಿಗೆ ಹತ್ತು ಹನ್ನೆರಡು ವರ್ಷಗಳಾಗಿರಬಹುದು.
{{gap}}ನಿನ್ನಿಂದ ಏನು ಪ್ರಯೋಜನ ! ನೀನು ಬಿಟ್ಟಿರುವ ಫಲವು ಆಕಾಶದಲ್ಲಿರುವುದು. ನಿನ್ನ ಮೈಯೋ- ಶುದ್ಧ ಒರಟು; ನಿನ್ನನು ಹತ್ತಿ, ನಿನ್ನ ಫಲವನ್ನು ತೆಗೆ ದುಕೊಳ್ಳುವುದು ಎಲ್ಲರಿಗೂ ಸಾಧ್ಯವಲ್ಲ.
{{gap}}ಹೀಗಿರುವಾಗ ನೀನು ಹೆಮ್ಮೆ ಯಿಂದ ತಲೆಯನ್ನೆತ್ತಿಕೊಂಡು- ಬಾಯಾರಿದವರೆಲ್ಲರೂ ಬಂದು ನೋಡಿ; ದ್ರಾಕ್ಷೆ ಹಣ್ಣು ಸಿಕ್ಕದೆ ನರಿ ತಲೆಯನ್ನು ಜೋಲು ಹಾಕಿಕೊಂಡು ಹೋ ದಂತೆ, ಮುಖವನ್ನು ಒಣಗಿಸಿಕೊಂಡು ಹೋಗಿರಿ~ ಎಂಬಂತೆ ನಿಂತಿರುತ್ತೀ ಯೆ ! ನನ್ನನ್ನು ನೋಡು ! ನಾನು ಹುಟ್ಟಿದ ಒಂದು ವರ್ಷ ಒಂಬತ್ತು ತಿಂಗಳಲ್ಲಿಯೇ, ಎಷ್ಟು ಉಪಯೋಗವಾಗಿರುವೆನು, ನನ್ನ ಮೈಯೆಲ್ಲಾ ಸಿಹಿ, ಬುಡ ಮೊದಲು ಕೊನೆಯವರೆಗೂ ನಾನು ಜನರಿಗೆ ಬೇಕಾಗಿರುವೆನು.
{{gap}} ನಾನು ಆ ಮಹಾ ವಿಷ್ಣುವಿನ ಮಗನಾದ ಮನ್ಮಥನಿಗೆ ಬಿಲ್ಲಾಗಿರುವೆನು. ನನ್ನ ಗರಿಯೇ ನನ್ನನ್ನು ಕಾಪಾಡುವುದು, ನಾನು ಜನರಿಗೆ ನಾನಾ ತೆರ ದಲ್ಲಿ ಬೇಕಾಗಿರುವೆನು, ಬೇಕಾದರೆ ಜನರು ನನ್ನನ್ನು ಹಾಗೆಯೇ ಉಪ ಯೋಗಿಸಬಹುದು; ಇಲ್ಲವಾದರೆ ನನ್ನ ರಸವನ್ನು ತೆಗೆದು ಬೆಲ್ಲವನ್ನು ಮಾಡಬಹುದು, ನನ್ನ ಬೆಲ್ಲವನ್ನು ಚೆನ್ನಾಗಿ ಶೋಧಿಸಿ ದಿವ್ಯವಾದ ಸಕ್ಕರೆ ಯನ್ನು ಮಾಡಬಹುದು, ನನ್ನ ಸಿಪ್ಪೆಯನ್ನೂ ನನ್ನ ಗರಿಯನ್ನ ಒಲೆಗೆ<noinclude></noinclude>
tuqo3hsurrkk3rm191ns64bawt35t9w
ಪುಟ:ಕಥಾವಳಿ.djvu/೯೪
104
45154
321474
279448
2026-05-20T15:11:24Z
Shreelatha.Halemane
7642
/* Validated */
321474
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|'''೭೯'''}}
{{center|'''೫೨. ಪುಷ್ಪಮಂಜರಿಯ ಕಥೆ-೪ ನೆಯ ಭಾಗ.'''}} <br/>
{{gap}}ರಾಜಕುಮಾರನು ಮಾಯವಾದ ಆ ಕುದುರೆಯನ್ನು ಬಲವಾಗಿ ಹುಡು ಕಾಡಿದನು. ಎಲ್ಲಿಯೂ ಸಿಕ್ಕಲಿಲ್ಲ. ಆಗ ಅದುವರೆಗೂ ತಾನು ಪಟ್ಟ ಶ್ರಮ ವೆಲ್ಲವೂ ವ್ಯರ್ಥವಾಯಿತೆಂದು ಚಿಂತಿಸುತ ಕುಳಿತಿರುವಾಗ ತನ್ನ ಹತ್ತಿರದಲ್ಲಿದ್ದ ಆ ಕೈಗೋಲು ಕೆಳಕ್ಕೆ ಬಿದ್ದಿತು. ಆಗಲೆ ನೂರಾರು ಪಕ್ಷಿಗಳು ಬಂದುವು, ಪಕ್ಷಿರಾಜನಾದ ಗರುಡನು ಬಂದು, 'ನನ್ನಿ೦ದ ತಮಗೆ ಏನು ಆಗಬೇಕು ?' ಎಂದು ಕೇಳಿದನು.<br/>
{{gap}}ಆಗ ರಾಜಕುಮಾರನಿಗೆ, ಆ ಕೋಲನ್ನು ನೆಲಕ್ಕೆ ಗಟ್ಟಿಯಾಗಿ ಒಂದಾವೃತ್ತಿ ತಗುಲಿಸಿದರೆ, ಪಕ್ಷಿಗಳು ಬರುವುವು ಎಂದೂ, ಎರಡಾವೃತ್ತಿ ಹೊಡೆದರೆ ಮೃಗಗಳು ಬರುವುವೆಂದೂ, ಮೂರಾವೃತ್ತಿ ಹೊಡೆದರೆ ಮೊಸಳೆಗಳು ಬರುವುವೆಂದೂ, ಕಾಡಿನಲ್ಲಿ ಆ ಮುದುಕಿಯು ಅಂದು ಹೇಳಿದುದು ಜ್ಞಾಪಕಕ್ಕೆ ಬಂದಿತು, ಆಗ ಅವನು, ಎಲೈ ! ಪಕ್ಷಿರಾಜನೇ ! ನನ್ನ ಕುದುರೆಯು ಎಲ್ಲೋ ಮಾಯವಾಗಿರುವುದು, ನೀನು ಹುಡುಕಿಕೊಟ್ಟರೆ, ನಿನ್ನ ಉಪಕಾರವನ್ನು ನಾನು ಎಂದಿಗೂ ಮರೆಯೆನು' ಎಂದನು. ಗರುಡನು ಪಕ್ಷಿಸಮೂಹದೊಡನೆ ಹೊರಟು, ಸ್ವಲ್ಪ ಕಾಲದಲ್ಲಿಯೇ ಆ ಕುದುರೆಯನ್ನು ಹಿಡಿದು ತಂದುಕೊಟ್ಟನು. ರಾಜಕುಮಾರನು ಗರುಡನಿಗೆ ವಂದಿಸಿ, ಆ ಕುದುರೆಯನ್ನು ಹಿಡಿದುಕೊಂಡು ಹೋಗಿ ರಾಕ್ಷಸಿಗೆ ಕೊಟ್ಟನು. ಆ ರಾಕ್ಷಸಿಯು ಆಶ್ಚರ್ಯಪಟ್ಟಳು.<br/>
{{gap}}ಮಾರನೆಯ ಬೆಳಗ್ಗೆ,ಕುದುರೆಯನ್ನು ತೆಗೆದುಕೊಂಡು ಹೊರಟನು. ಕುದುರೆಯು ಅಂದೂ ಅದೃಶ್ಯವಾಯಿತು, ಆಗ ಮೃಗಗಳ ಸಹಾಯದಿಂದ ಕುದುರೆಯನ್ನು ಪಡೆದು ರಾಕ್ಷಸಿಗೆ ಒಪ್ಪಿಸಿದನು.<br/>
{{gap}}ಮರುದಿನ ಬೆಳಿಗ್ಗೆ ಮತ್ತೆ ಆ ಮಾಯದ ಕುದುರೆಯನ್ನು ತೆಗೆದು ಕೊಂಡುಹೋಗಲು ಸಿದ್ಧನಾಗಿದ್ದನು. ಅಗ ಪುಷ್ಪಮಂಜರಿಯು ಸರ್ರನೆ ಬಂದು, ಇವನ ಕಿವಿಯಲ್ಲಿ, 'ಸಾಯಂಕಾಲ ನೀನು ಕುದುರೆಯೊಡನೆ ಬ೦ದರೆ, ಈ ಕುದುರೆಯ ಮರಿಯನ್ನು ನನಗೆ ಕೊಡೆಂದು ರಾಕ್ಷಸಿಯನ್ನು ಬೇಡು,” ಎಂಬುದಾಗಿ ಹೇಳಿ, ಮಿಂಚಿನಂತೆ ಮಾಯವಾದಳು.ಆ ಮಾತು ಗಳನ್ನು ಕೇಳಿ, ಇನ್ನು ತನ್ನ ಕೆಲಸ ಕೈಗೂಡಿತೆಂದು ಹಿಗ್ಗಿ, ಆದಿನ ಮೊಸ<noinclude></noinclude>
eesiuctogre2dcchvkjcwx0id9g5jp8
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೮೨
104
45901
321476
161018
2026-05-20T15:18:57Z
Shreelatha.Halemane
7642
/* Validated */
321476
proofread-page
text/x-wiki
<noinclude><pagequality level="4" user="Shreelatha.Halemane" />{{center| 31}}</noinclude>ಳ್ಗೊಳದ ಪಂಡಿತ ದೋರ್ಬಲಿ ಶಾಸ್ತ್ರಿಗಳು, ಮೈಸೂರು ಎಂ.ಎ. ರಾಮಾ ನುಜಯ್ಯಂಗಾರ್ಯರು, ಎಳಂದೂರು ತಾಲ್ಲೂಕು ಅಗರದ ಸುಬ್ಬಾಸಂಗಿ ತರು, ಅಗರದ ನರಸಿಂಹಶಾಸ್ತ್ರಿಗಳು, ಕೊರಟಗೆರೆ ಸಬ್ತಾಲ್ಲೂಕು ಅಗ್ರ ಹಾರದ ಪಟೇಲ್: ಈಶ್ವರಯ್ಯನವರು, ಕುಣಿಗಲ್ ಹಿರಿಯಮರದ ಬಸವ ಲಿಂಗಯ್ಯನವರು, ಬೆಂಗಳೂರು ಶಾಸನದ ಇಲಾಖಾ ಬೊಮ್ಮರಸ ಹಂಡಿ ತರು, ಇವರುಗಳಲ್ಲಿದ್ದ ಪುಸ್ತಕಸಂಗ್ರಹಗಳು, ಇವುಗಳಲ್ಲಿ ದೊರೆತ ಪುಸುಕಗಳನ್ನೆಲ್ಲಾ ವರೀಕ್ಷಿಸಿ ನೋಡಿದನು ಅಲ್ಲದೆ ಶ್ರೀಮಂತರು ಕರ್ಣಾ ಟಕಭಾಷಾರತ್ನ ಕರಿಬಸವರಾಸ್ತಿಗಳು, ಮಾಗಡಿ ಕೆ. ರಾಮಸ್ವಾವ್ತಯ್ಯಂಗಾರ್ಯರು, ಮೈಸೂರು ಎಂ.ವಿ ಚಂದ್ರಶೇಖರ ಶಾಸ್ತ್ರಿಗಳು, ಬೆಂಗಳೂರು ಜೀರಿಗೆ ಬಸವಲಿಂಗಪ್ಪನವರು ಇವರುಗಳು ಕಳುಹಿಸಿಕೊಟ್ಟ, ಕೆಲವು ಪುಸ್ತಕಗಳನ್ನು ಪರಿಶೀಲಿಸಿದೆನು.ಇನ್ನು ಕೆಲವರು ಮಿತ್ರರು ತಮ್ಮಲ್ಲಿರುವ ಅಥವಾ ತನಗೆ ತಿಳಿದ ಕೆಲವು ಗ್ರಂಧಗಳ ವಿಷಯವಾಗಿ ಕಳುಹಿಸಿಕೊಟ್ಟ ಸೂಚನೆಗಳನ್ನು ವಿಮರ್ಶಿಸಿದೆನು. ಹೀಗೆ ನಾನು ಪರೀಕ್ಷಿಸಿದ ತಾಳಪತ್ರದ ಪುಸ್ತಕಗಳ ಸಂಖ್ಯೆ ಸುಮಾರು ಒಂದು ಸಾವಿರ ದಮೇಲಿರಬಹುದು. ಮೇಲೆ ಹೇಳಿದ ಎಲ್ಲಾ ಮಹನೀಯರುಗಳ ಉಪಕಾರವೂ ಚಿರಸ್ಮರಣೀಯವಾಗಿದೆ.
{{gap}}ಈ ಸಂಪುಟದಲ್ಲಿ 15ನೆಯ ಶತಮಾನದ ಆದಿಭಾಗದಿಂದ 17ನೆಯ ಶತಮಾನದ ಕೊನೆಯವರೆಗೆ ಬಾಳೆದ ಸುಮಾರು 350 ಕವಿಗಳ ಚರಿತೆ ಹೇಳದೆ ಈ ಕವಿಗಳಲ್ಲಿ ಸುಮಾರು 160 ಮಂದಿ ವೀರಶೈವರೂ 75 ಮಂದಿ ಜೈನರೂ 60 ಮಂದಿ ಬಾಹ್ಮಣರೂ 5) ಮಂದಿ ಇತರರೂ ಆಗಿ ದ್ದಾರೆ. ಇವರೆಲ್ಲರೂ ಉದ್ದಾಮಕವಿಗಳೆಂದು ಹೇಳಲಾಗುವುದಿಲ್ಲ. ನನ್ನ ತಿಳಿವಳಿಕೆಗೆ ಬಂದ ಪ್ರತಿಯೊಬ್ಬ ಗ್ರಂಥಕರ್ತನ ಹೆಸರೂ ಗ್ರಂಥದಲ್ಲಿ ಇರಬೇಕೆಂಬ ಉದ್ದೇಶದಿಂದ ಎಲ್ಲರನ್ನೂ ಸೇರಿಸಿದ್ದೇನೆ ಹೀಗೆ ಮಾಡದಿದ್ದರೆ ಅನೇಕ ಸಾಧಾರಣ ಕವಿಗಳ ಹೆಸರೇ ಮರೆತುಹೋಗುವುದರಲ್ಲಿ ಸಂಶಯವಿಲ್ಲ. ಈ ಗ್ರಂಥವು ಹಿಂದೆ ತಿಳಿಯದಿದ್ದ ಅನೇಕಕವಿಗಳ ಚರಿತೆಯನ್ನು ಒಳಗೊಂಡಿದೆ. ಈ ವಿಷಯವು ಗ್ರಂಥವನ್ನು ಕ್ರಮವಾಗಿ ಓದಿನೋಡಿದಲ್ಲಿ ಸ್ವತಃ ವ್ಯಕ್ತವಾಗುವುದರಿಂದ ಅದನ್ನು ಇಲ್ಲಿ ವಿವರಿಸಬೇಕಾದ ಆವಶ್ಯಕತೆಯಿಲ್ಲ. ಮೊದಲು 42 ಪುಟಗಳಲ್ಲಿ ಪ್ರಥಮ<noinclude></noinclude>
limzdexj79yabh5hmkpbn2gbv5leh79
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೮೫
104
45904
321477
160983
2026-05-20T15:20:02Z
Shreelatha.Halemane
7642
321477
proofread-page
text/x-wiki
<noinclude><pagequality level="3" user="Archana 1840568" /></noinclude>{{center|34}}
ಕನ್ನಡಕವಿಗಳ ಜಸಮಂ | ಕನ್ನಡಿಪೀಗ್ರಂಧದೊಂದನೆಯ ಸಂಪುಟಮಂ |
ಮುನ್ನಂ ಕನ್ನಡನಾಡಿನ | ಬಿನ್ನಣಿಗಳ್ಗೊಲ್ದು ಕಾಣೈಯಾಗರ್ಪಿಸಿದೆಂ |
ಇನ್ನಿತ್ತ ಮೆರೆದ ಕವಿಗಳ | ಸನ್ನು ತಚರಿತಾಬ್ಧಿಯಲ್ಲ ನಾನಳಿ'ವನಿತಂ |
ಕನ್ನಡಿಗರ ಮನಕೊಲವ | ಸ್ಪನ್ನಂ ಬಣ್ಣಿಸಿದೆನೆರಡನಸಂಪುಟದೊಳ್ | ಇದರಲ್ಲಿ ದೋಷವಿರ್ದೊಡೆ | ಸದಯರ್ ವಿಬುಧರ್'ಸಮಂತುತಿರ್ದುಗೆಮುದದಿಂ। ದಿದರಲ್ಲಿನಿಸಾನುಂ ಗುಣ | ಮೊದವಿದ್ರೊಡೆ ಮೆಚ್ಚಿ ಕೊಳ್ಗೆ ಸೌಹೃದದಿಂದಂ ||
ಶ್ರೀರಾಮಾನುಜಪದಸರ | ಸೀರುಹಷಟ್ಟದನನಂತದೇಶಿಕವಂಶ್ಯಂ ||
ನಾರಾಯಣಾರ್ಯತನುಭವ | ನೋರಂತೊರೆದಂ ನೃಸಿಂಹಕವಿಯಿಾಕೃತಿಯಂ ||
ರಾ. ನರಸಿಂಹಾಚಾರ್ಯ<noinclude></noinclude>
qeg88e6ikgvednhl0hfeliw1th6kzhy
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೦೮
104
46027
321581
160839
2026-05-21T08:46:17Z
Pragathi. BH
7585
/* Validated */
321581
proofread-page
text/x-wiki
<noinclude><pagequality level="4" user="Pragathi. BH" /></noinclude>ಶತಮಾನ]
{{center|ಪುರದ ಮಲ್ಲಯ್ಯ.}}
ರೆಂಬ ತೇಜದ ಶಿಷ್ಟತೆಯೇಕೆ ? ತಾನು ತಾನಾದಮತ್ತೆ ತನಗೇನೂ ಅನ್ಯವಿಲ್ಲಾ ಎಂದೆ ಭೌಂಭೇಶ್ವರ.<br />
{{center|48 ನಾಸ್ತಿನಾಥ }}
{{gap}}ಅನಲನು ಕೊಂಡ ಭೋಗಕ್ಕೆ ಪರಿಪ್ರಕಾರವುಂಟೆ ? ಶರಧಿ ಕೊಂಡ ಸಾಗರಕ್ಕೆ ಕುಲಹಿನ ತಲೆಯುಂಟೆ ? ಲಿಂಗವು ಮುಟ್ಟಿದ ಅಂಗಕ್ಕೆ ಪುಣ್ಯವೆಂಬುದು ಹುಸಿ ನಾಸ್ತಿನಾಧ.<br />
{{center|49 ಗೋಪತಿನಾಥವಿಶ್ವೇಶ್ವರ. }}
ಜೀವಕುಳವಯಿತ್ತು; ಜ್ಞಾನಕುಳವಮಿಯಿತ್ತು; ಭವಪಾಶ ಹಣಿಯಿತ್ತು; ಅಜ್ಞಾನ ಹಿಂಗಿತ್ತು; ಎಲೆಗೋಪತಿನಾಧವಿಶ್ವೇಶ್ವರಲಿಂಗ ನಿಮ್ಮತ್ತ ಮನವಾಯಿತ್ತೆನಗೆ; ಕೃಪೆಯ ಮಾಡು ಕೃಪೆಯ ಮಾಡು ಶಿವದೋ ಶಿವದೋ,<br />
{{center|50 ಅಭಿನವಮಲ್ಲಿಕಾರ್ಜುನ, }}
{{gap}}ನೆನೆಯಲರಿಯೆ ನಿರ್ಧರಿಸಲಿದೆ ಮನವಿಲ್ಲಾಗಿ, ಭಾವಿಸಲರಿಯ ಬೆರಸಲ ಈಿಯೆ ಭಾವನಿರ್ಭಾವವಾಯಿತ್ತಾಗಿ, ಧ್ಯಾನಮನವನರಿಯೆ'ಧ್ಯಾನಮನಾತೀಕ ತಾನೆಯಾಯಿತ್ತಾಗಿ, ಜ್ಞಾತೃಜ್ಞಾನಫೈಯಂಗಳೆಲ್ಲವ ವಿತಾ ಅಭಿನವಮಲ್ಲಿಕಾ ರ್ಜುನನಲ್ಲಿ ಪರಮಸುಖಿಯಾಗಿರ್ದೆ,<br />
{{center|51 ಶಂಭುಸೋಮನಾಥಲಿಂಗ }}
{{gap}}ಎನ್ನ ತ್ರಿವಿಧಾತ್ಮ ನಿಮ್ಮ ಹೆಂಡಿರು, ಸತ್ವರಜಸ್ತ ಮಂಗಳು ನಿಮ್ಮ ನೃತ್ಯರಯ್ಯಾ. ಅಂತಃಕರಣಚತುಷ್ಟಯಂಗಳು ನಿಮ್ಮ ಬಾಣಸಿಗರಯ್ಯಾ, ಅಷ್ಟ ಮದಂಗಳು ನಿಮ್ಮ ದಳವಾಯಿಗಳು, ನವರಸಂಗಳು ನಿಮ್ಮ ಭಂಡಾರಿಗಳಯ್ಯಾ, ದಶವಾಯುಗಳು ನಿಮ್ಮ ಛತ್ರಚಾಮರಸೀಗುರಿಗಳು, ಶಂಭುಸೋಮನಾಧಲಿಂಗ ನಿಮಗೆನ್ನ ಕಾಯ ಮುಂತಾಗಿ ಬಾಹ್ಯಾಂತರಡಿಂಗರಿಗರಯ್ಯಾ.<br />
{{center|52 ಸಿದ್ಧ ಸೋಮೇಶ.}}
{{gap}}ಉರಿ ಕಪ್ಪುರವ ಸೋಂಕಿದಂತೆನ್ನೊಳು ಬೆರಸಿರ್ಪ ಮಹಾಘನವನು ತೋರು ಪರಮಸುಖದೊಳಗಿರಿಸಿದ ಸಿದ್ದ ಸೋಮೇಶ ಕರುಣಾಮ್ರ್ಗುತಗುರುವೆ ಶರಣು.<br />
{{center|53 ಪುರದಮಲ್ಲಯ್ಯ. }}
{{gap}}ಒಳಗನರಹಿಸಿ ತಿಳುಹ | ಹೊರಗೆ ಬೋಧಿಸಿ: ನಿಲಿಸಿ | ಒಳಗು ಹೋಗೆಂದೆಂಬಿವೆರಡ ಕೆಡಿಸಿ 10.<noinclude></noinclude>
2wtxfrbikshr26lk657rznkugbzb6mx
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೦೯
104
46028
321582
160840
2026-05-21T08:51:43Z
Pragathi. BH
7585
/* Validated */
321582
proofread-page
text/x-wiki
<noinclude><pagequality level="4" user="Pragathi. BH" /></noinclude>124
{{center|ಕರ್ಣಾಟಕ ಕವಿಚರಿತೆ,}}
ಕಳೆಯ ಲಿಂಗದೊಳೊಚ್ಚ | ತವನೊಪ್ಪಗೊಳಿಸಿದಾ | ಕರುಣಿ ಗುರು ಪುರದಮಲ್ಲಯ್ಯಗುರುವೇ ||<br />
{{center|54 ಸದ್ಗುರು ಶಂಭುಸೋಮೇಶ್ವರ.}}
{{gap}} ಶಿವನೆ ಅಧಿಕನು ಶಿವಭಕ್ತನೆ ಕುಲಜನು ಶಿವನ ಪ್ರಸಾದದಿಂದಧಿಕವಾವುದಿಲ್ಲೆಂ. ದುದು ಶ್ರುತಿ, ಇದನಯತು ಸದ್ಗುರುಶಾಂಭುಸೊಮೆಶ್ವರನ ಭಜಿಸಿ ಪ್ರಸಾದವ ಸೇವನೆಯ ಮಾಡದಿರಲು ಅಘೋರನರಕ ತಪ್ಪದು<br />
{{center|55 ಸಂಗಪ್ರಭು. }}
{{gap}}ಒಡೆಯರಿಗೊಡವೆಯನೊಪ್ಪಿಸಿ ಶುದ್ದನು | ಎಡೆಯೊಳಗಾಮಾಡಿದುದಿಲ್ಲೆಂದಂ | ದೊಡಲವಗುಣವಡಗಿಸಿ ನಿರಹಂಭಾವದೊಳಗೆ ಸಲೆ ಸಂದು || ಮೃಡಶರಣರುಗಳ ಕಂಡವರಡಿಗಳ | ಹಿಡಿದು ಸದಾಸುಖಿಯಾಗಿರ್ಪರ ಮೆ | ಇಡಿಗಳೊಳಗೆ ಹಾವುಗೆಯಾಗಿರಿಸೆನ್ನನು ಸಂಗಪ್ರಭುವೇ ||
{{center|56 ಹಂಪೆಯ ವಿರುಪಯ್ಯ,}}
{{gap}}ದಶದಿಕ್ಕು ಸಚರಾಚರದೊಳಗೆಲ್ಲ ವಿವರಿಸಿ ನೋಡಲು ತನ್ನ ಯ, ಆಪರಾಪರ ಹಂಪೆಯವಿರುಪಯ್ಯನಲ್ಲದಿಲ್ಲವೆಂದು ಶ್ರುತಿ ಸಾಲಿ೦ತಿವೆ.<br />
{{center|57 ಹುಲಿಗೆರೆಯ ವರದಸೋಮೇಶ}}
{{gap}} ಮಾಯಾಸಂಗ್ರಹಮಲವ ತೊಳೆದು ನಿರ್ಮಾಯಸ್ವರೂಪವನೆಸಿ ಕಾವುದು ಹುಲಿಗೆಳಯ ವರದಸೋಮೇಶನ ಅಕ್ಷಯಾನಂದಪಾದೋದಕ,
{{center|58 ರೇಕನಾಥಯ್ಯ.}}
{{gap}} ಸತ್ತು ಸಂಯೋಗದಿಂದೆ ಭಕ್ತಿರತಿಯ ಕೂಡಲು ಸಮತೆಯೆಂಬ ಬಸುಕಾಗೆಲು ಪರಿಣಾಮವೆಂಬ ಮಗ ಹುಟ್ಟಲು ರೇಕನಾಧಯ್ಯನೆಂದು ಹೆಸರಿಟ್ಟರು.<br />
{{center|59 ಘನಗುರುಪ್ರಿಯಸೋಮನಾಥ.}}
{{gap}} ದಶವಾಯುಗಳ ತಮ್ಮ ವಶಕೆ ಹರಿಯಲೀಯದೆ ಊರ್ದವಶಕೆ ಬಪ್ಪ ಪ್ರಣ ಮವಶನಾಗಿರಾ, ವಿಷಮಲೋಚನಘನಗುರುಪ್ರಿಯಸೋಮನಾಧ ಎಸಳಿನಾ ದಳದೊ ಇಗೆ ಬೆಳಗುತಿಹನು.<noinclude></noinclude>
12p10k0skbk3w5344qikt6ssbc0fc19
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೧೦
104
46029
321583
160841
2026-05-21T08:56:45Z
Pragathi. BH
7585
/* Validated */
321583
proofread-page
text/x-wiki
<noinclude><pagequality level="4" user="Pragathi. BH" />{{rh|center=ಸ್ವತಂತ್ರ ಸಿದ್ಧಲಿಂಗೇಶ್ವರ.|left=|right=125}}</noinclude>
ಶತಮಾನ
{{center|ಸ್ವತಂತ್ರಸಿದ್ಧಲಿಂಗೇಶ್ವರ, ಸು. 1480 }}
{{gap}}ಈತನು ಸ್ವತಂತ್ರ ಸಿದ್ದಲಿಂಗೇಶ್ವರವಚನ, ಮುಕ್ಕಂಗನೆಯಕಂಠ ಮಾಲೆ ಇವುಗಳನ್ನು ಬರೆದಿದ್ದಾನೆ. ಇವನು ವೀರಶೈವಕವಿ, ವಿರೂಪಾಕ್ಷ ಪಂಡಿತನ (1584) ಚೆನ್ನಬಸವಪುರಾಣದಿಂದ ತೋಂಟದಸಿದ್ದಲಿಂಗ ಯತಿಗೆ (ಸು 1470) ಸಿದ್ದಲಿಂಗೇಶ್ವರ, ದೊಡ್ಡಲಿಂಗೇಶ್ವರ ಎಂಬ ಇಬ್ಬರು ಶಿಷ್ಯರು ಇದ್ದಂತೆ ತಿಳಿಯುತ್ತದೆ. ಕವಿ ಇವರಲ್ಲಿ ಒಬ್ಬನಾಗಿರಬಹು ದೆಂದು ತೋರುತ್ತದೆ, ಹಾಗಿದ್ದ ಪಕ್ಷದಲ್ಲಿ ಇವನ ಕಾಲವು ಸುಮಾರು 1480 ಆಗಬಹುದು.<br />
{{gap}}ಜಂಗಮರಗಳ ಎಂಬ ಗ್ರಂಥದ ಕೊನೆಯ ಕಂದದ “ಇಂತೀಜಂಗ ಮದಿರವಂ ಸಂತಸದಿಂ ಸಿದ್ದಲಿಂಗೇಶ್ವರಂ” ಎಂಬ ಭಾಗದಿಂದ ಆ ಗ್ರಂಥವು ಸಿದ್ಧಲಿಂಗೇಶ್ವರಕೃತವೆಂದು ತಿಳಿಯುತ್ತದೆ. ಏತಕ್ಕವಿಕೃತ ವಾಗಿದ್ದರೂ ಇರಬಹುದು.<br />
{{gap}}ಇವನ ಗ್ರಂಥಗಳಲ್ಲಿ<br />
{{gap}}1 ಸ್ವತಂತ್ರ ಸಿದ್ದಲಿಂಗೇಶ್ವರ ವಚನ <br />
{{gap}}ಇದು ವೀರಶೈವಸಿದ್ಧಾಂತವನ್ನು ಬೋಧಿಸುತ್ತದೆ; ವಚನ 430. ಪ್ರ ತಿವಚನದಲ್ಲಿಯೂ 'ನಿಜಗುರುಸ್ವತಂತ್ರ ಸಿದ್ದಲಿಂಗೇಶ್ವರ” ಎಂದು ಬರುತ್ತದೆ. ಈ ಗ್ರಂಥದಿಂದ ಕೆಲವು ವಚನಗಳನ್ನು ಉದ್ಧರಿಸಿ ಬರೆಯುತ್ತೇವೆ.<br />
{{gap}}(1) ಕಣ್ಣು ಕಾಲು ಎರಡುಳ್ಳವನು ದೂರವೆನ್ನುವನಲ್ಲದೆ ಕಣ್ಣು ಕಾಲು ಎರಡ ನೊಳಗೊಂದಿಲ್ಲದವನು ದೂರವೆಯ್ಸಲರಿಯನೆಂಬಂತೆ ಜ್ಞಾನರಹಿತವಾಗಿ ಕ್ರಿಯೆ ಯನೆಷ್ಟ ಮಾಡಿದಡೇನು ? ಅದು ಕಣ್ಣಿಲ್ಲದವನ ನಡೆಯಂತೆ, ಕ್ರಿಯೆರಹಿತವಾಗಿ ಜ್ಞಾ ನಿಯಾದಡೇನು ? ಅದು ಕಾಲಿಲ್ಲದವನ ಇರವಿನಂತೆ; ನಿಜಗುರುಸ್ವಸಂತ್ರಸಿದ್ದಲಿಂಗೇಶ್ವ ರನ ನಿಜವ ಬೆರಸುವೊಡೆ ಜ್ಞಾನವೂ ಕ್ರಿಯೆಯ ಎರಡೂ ಬೇಕು.<br />
{{gap}}(2) ಹಾವಡಿಗ ಹಾವನಾಡಿಸುವಲ್ಲಿ ತನ್ನ ಕಾದುಕೊಂಡು ಹಾವನಾಡಿಸುವ ನವನಂತೆ ಆವ ಮಾತನಾಡಿದಡೂ ತನ್ನ ಕಾದು ಆಡಬೇಕು. ಅದೆಂತೆಂದಡೆ ತನ್ನ ವಚನವೆ ತನಗೆ ಹಗೆಯಹುದಾಗಿ ಅನ್ನಿಗರಿಂದ ಬಂದಿತ್ತೆನಬೇಡ; ಆಲಿವುದುಉವುದು ತನ್ನ ವಚನದಲ್ಲಿಯೆ ಅದೆ. ನಿಜಗುರುಸ್ವತಂತ್ರ ಸಿದ್ದಲಿಂಗೇಶ್ವರಾ ಹಗೆಯ ಕೆಳೆಯೂ ತನ್ನ ವಚನವೇ ಬೇಅಲ್ಲ,
1, ಸಂಧಿ 63 ಸದ್ಯ 47,<noinclude></noinclude>
3ryfy82cacpacsj3dnhmxhkgz9eh94s
ಪುಟ:ದಾಮಿನಿ.djvu/೮
104
56630
321489
279018
2026-05-20T18:00:39Z
Pragathi. BH
7585
/* Validated */
321489
proofread-page
text/x-wiki
<noinclude><pagequality level="4" user="Pragathi. BH" /></noinclude>{{center}'''ಶ್ರೀಕೃಷ್ಣಸೂಕ್ತಿಮುಕ್ತಾವಳಿ'''}}
ಅವ್ವನು ದಾಮಿನಿಯನ್ನು ಮನೆಗೆ ಕರೆದುಕೊಂಡು ಹೊರಟಳು. ದಾಮಿನಿಯೂ,
ಗಂಭೀರವಾಗಿ, ತನ್ನ ದೀಪದ ಪರಿಣಾಮವನ್ನೇ ಯೋಚಿಸುತ್ತ, ಮನೆಗೆ ನಡೆದಳು.
ಅಂಗಳದಲ್ಲಿ ಕೊಡದ ತುಂಬ ನೀರಿದ್ದಿತು. ಅದರಲ್ಲಿ ಪುಟ್ಟ ಕಯ್ಬೆರಳು ಪುಟ್ಟ
ಪುಟ್ಟ ಕಾಲ್ಗಳನ್ನು ಪ್ರಕ್ಷಾಲನಮಾಡಿಕೊಂಡು, ಶಯನಗೃಹವನ್ನು ಪ್ರವೇಶಿಸಿದಳು.
ಮಲಗಿದುದೇ ತಡ;-ನಿದ್ದೆ ಬಂದಿತು.<br />
{{gap}}ನಿದ್ದೆಯಲ್ಲಿಯೆ ದಾಮಿನಿಯೊಂದು ಸ್ವಪ್ನವನ್ನು ನೋಡಿದಳು. ಅಂಧಕಾರ
ದಲ್ಲಿ ಘನೀಭೂತವಾಗಿ ಮೇಘವು ನದಿಯ ಮೇಲೆ ಬಾಗಿಬಿದ್ದಿದ್ದಿತು. ಅದನ್ನು
ನೋಡಿ, ಭಯಗೊಂಡು ದಾಮಿನಿಯ ದೀಪವು ಸಣ್ಣ ಸಣ್ಣನೆ ತೊಳತೊಳಗುತ್ತ ಓಡತೊಡಗಿತು. ಪತನೋನ್ಮುಖವಾಗಿದ್ದ ದೊಡ್ಡದೊಡ್ಡ ಭಯಾನಕತರಂಗಗಳೆಷ್ಟೋ
ಸುತ್ತು ಸುತ್ತಲೂ ಸುಳಿಯುತ್ತ, ನಾಲ್ಕು ಕಡೆಗಳಿಂದಲೂ ಆ ಕ್ಷುದ್ರದೀಪವನ್ನು
ಆಕ್ರಮಿಸಿಬಿಟ್ಟುವು. ಅವುಗಳಲ್ಲಿ ಒಂದರ ತಲೆಯ ಮೇಲೆ, ಒಂದು ಬೆಕ್ಕು ಗಂಭೀ
ರವಾಗಿ ಕುಳಿತಿದ್ದಿತು. ಅದನ್ನು ನೋಡಿದೊಡನೆಯೆ ಗುರುತಿಸಿದಳು; ಅದು ಆ ಹಳ್ಳಿಯಲ್ಲಿಯೆಲ್ಲ ಕೆಟ್ಟ ಬೆಕ್ಕಾಗಿದ್ದಿತು. ದಾಮಿನಿಯನ್ನು ನೋಡಿತೆಂದರೆ, ಪರಚುವುದಕ್ಕೆ ಬರುವುದು; ಅವಳು, ಅದು ಬಂದಿತೆಂದರೆ, ಕಣ್ಣು ಮುಚ್ಚಿಕೊಂಡು ಚೀತ್ಕಾರಮಾಡುವಳು;-ಅದರ ಭಯದಿಂದ, ತಪ್ಪಿಸಿಕೊಂಡು ಓಡುವುದಕ್ಕೂ ಅವಳಿಂದಾಗದು. ಇಂದು, ಆ ತರಂಗಶಿಖರದಲ್ಲಿ ಅದೇ ಹಾಳ ಬೆಕ್ಕನ್ನು ನೋಡಿ, ಅವಳಿಗೆ
ತಡೆಯಲಾರದಷ್ಟು ಭಯವುಂಟಾಯಿತು. ಮಾತಾಮಹಿಯ ಮುಂಚೆರಗನ್ನು ಹಿಡಿದುಕೊಂಡು, ಕಣ್ಣು ಮುಚ್ಚಿಕೊಂಡಳು. ಕ್ರುದ್ದೆಯಾಗಿ, ಆ ವೃದ್ಧ ಸೆರಗನ್ನೆಳೆದುಕೊಂಡು, ದಾಮಿನಿಯನ್ನು ಹಿಡಿದು, ಅವಳ ಕ್ಷುದ್ರದೇಹವನ್ನು ಅಗಾಧಜಲದಲ್ಲಿ
ಎಸೆದುಬಿಟ್ಟಳು. ದಾಮಿನಿ ಸ್ವಪ್ನದಲ್ಲಿಯೂ ಚೀತ್ಕಾರ ಮಾಡತೊಡಗಿದಳು.<br />
{{gap}}ಭಯವೇನೆಂದು ಕೇಳುತ್ತ, ನಿದ್ರಿತೆಯಾಗಿದ್ದ ಆ ದಾಮಿನಿಯನ್ನು ಅಜ್ಜಿಯೆತ್ತಿಕೊಂಡಳು. ದಾಮಿನಿಗೆ ಎಚ್ಚರವಾಗಿ, “ಅಮ್ಮಾ! ಎಲ್ಲಿ?” ಎಂದು ಅಳತೊಡಗಿದಳು. ಪಾಪ! ಅಭಾಗಿನಿಯಾದವಳಿಗೆ ಅಮ್ಮನಿರಲಿಲ್ಲ. ಮೂರು ವರ್ಷಗಳಿಗೆ
ಮೊದಲೇ, ನಿರುದ್ದೇಶೆಯಾಗಿ, ಎಲ್ಲಿಗೋ ಹೊರಟುಹೋಗಿದ್ದಳು.
-
-
{{gap}}ಮರುದಿನ, ಪ್ರಾತಃಕಾಲದಲ್ಲಿ, ಪಾಠಶಾಲೆಗೆ ಹೋಗುತ್ತಿದ್ದ ಹನ್ನೆರಡು
ವರ್ಷದ ಒಬ್ಬ ಹುಡುಗನು ದಾಮಿನಿಯ ಗೃಹದ್ವಾರದಲ್ಲಿ ನಿಂದು, - "ಹಕ್ಕಿಯ ಮರಿ ಗಳಿಗಾಗಿ ಕಾಳುಗಳನ್ನು ಸಂಗ್ರಹಿಸಿಲ್ಲವೆ?” – ಎಂದು ಕೇಳಿದನು. ದಾಮಿನಿಯೊಬ್ಬಳೇ ಕುಳಿತಿದ್ದಳು; ಅವನ ಆ ಪ್ರಶ್ನೆಗೆ ತಲೆಯನ್ನಾಡಿಸುತ್ತ ಉತ್ತರಕೊಟ್ಟಳು.ಬಾಲಕನಿಗೆ ತೃಪ್ತಿಯಾಗಲಿಲ್ಲ. ಕೊಂಚ ಮುಂಬರಿದು, "ಅದೇಕೆ? ಜ್ವರ ಬಂದಿದೆಯೆ?”_ ಎಂದು ಕೇಳಿದನು. ಅವಳು ಪುನಃ ತಲೆಯನ್ನಾಡಿಸಿದಳು. ಪುನಃ,
-
--<noinclude></noinclude>
8oamzdjn2fl9sjn0bemb9qlbj9g5eob
321490
321489
2026-05-20T18:01:15Z
Pragathi. BH
7585
321490
proofread-page
text/x-wiki
<noinclude><pagequality level="4" user="Pragathi. BH" /></noinclude>{{center|ತನ್ನ'''ಶ್ರೀಕೃಷ್ಣಸೂಕ್ತಿಮುಕ್ತಾವಳಿ'''}}
ಅವ್ವನು ದಾಮಿನಿಯನ್ನು ಮನೆಗೆ ಕರೆದುಕೊಂಡು ಹೊರಟಳು. ದಾಮಿನಿಯೂ,
ಗಂಭೀರವಾಗಿ, ತನ್ನ ದೀಪದ ಪರಿಣಾಮವನ್ನೇ ಯೋಚಿಸುತ್ತ, ಮನೆಗೆ ನಡೆದಳು.
ಅಂಗಳದಲ್ಲಿ ಕೊಡದ ತುಂಬ ನೀರಿದ್ದಿತು. ಅದರಲ್ಲಿ ಪುಟ್ಟ ಕಯ್ಬೆರಳು ಪುಟ್ಟ
ಪುಟ್ಟ ಕಾಲ್ಗಳನ್ನು ಪ್ರಕ್ಷಾಲನಮಾಡಿಕೊಂಡು, ಶಯನಗೃಹವನ್ನು ಪ್ರವೇಶಿಸಿದಳು.
ಮಲಗಿದುದೇ ತಡ;-ನಿದ್ದೆ ಬಂದಿತು.<br />
{{gap}}ನಿದ್ದೆಯಲ್ಲಿಯೆ ದಾಮಿನಿಯೊಂದು ಸ್ವಪ್ನವನ್ನು ನೋಡಿದಳು. ಅಂಧಕಾರ
ದಲ್ಲಿ ಘನೀಭೂತವಾಗಿ ಮೇಘವು ನದಿಯ ಮೇಲೆ ಬಾಗಿಬಿದ್ದಿದ್ದಿತು. ಅದನ್ನು
ನೋಡಿ, ಭಯಗೊಂಡು ದಾಮಿನಿಯ ದೀಪವು ಸಣ್ಣ ಸಣ್ಣನೆ ತೊಳತೊಳಗುತ್ತ ಓಡತೊಡಗಿತು. ಪತನೋನ್ಮುಖವಾಗಿದ್ದ ದೊಡ್ಡದೊಡ್ಡ ಭಯಾನಕತರಂಗಗಳೆಷ್ಟೋ
ಸುತ್ತು ಸುತ್ತಲೂ ಸುಳಿಯುತ್ತ, ನಾಲ್ಕು ಕಡೆಗಳಿಂದಲೂ ಆ ಕ್ಷುದ್ರದೀಪವನ್ನು
ಆಕ್ರಮಿಸಿಬಿಟ್ಟುವು. ಅವುಗಳಲ್ಲಿ ಒಂದರ ತಲೆಯ ಮೇಲೆ, ಒಂದು ಬೆಕ್ಕು ಗಂಭೀ
ರವಾಗಿ ಕುಳಿತಿದ್ದಿತು. ಅದನ್ನು ನೋಡಿದೊಡನೆಯೆ ಗುರುತಿಸಿದಳು; ಅದು ಆ ಹಳ್ಳಿಯಲ್ಲಿಯೆಲ್ಲ ಕೆಟ್ಟ ಬೆಕ್ಕಾಗಿದ್ದಿತು. ದಾಮಿನಿಯನ್ನು ನೋಡಿತೆಂದರೆ, ಪರಚುವುದಕ್ಕೆ ಬರುವುದು; ಅವಳು, ಅದು ಬಂದಿತೆಂದರೆ, ಕಣ್ಣು ಮುಚ್ಚಿಕೊಂಡು ಚೀತ್ಕಾರಮಾಡುವಳು;-ಅದರ ಭಯದಿಂದ, ತಪ್ಪಿಸಿಕೊಂಡು ಓಡುವುದಕ್ಕೂ ಅವಳಿಂದಾಗದು. ಇಂದು, ಆ ತರಂಗಶಿಖರದಲ್ಲಿ ಅದೇ ಹಾಳ ಬೆಕ್ಕನ್ನು ನೋಡಿ, ಅವಳಿಗೆ
ತಡೆಯಲಾರದಷ್ಟು ಭಯವುಂಟಾಯಿತು. ಮಾತಾಮಹಿಯ ಮುಂಚೆರಗನ್ನು ಹಿಡಿದುಕೊಂಡು, ಕಣ್ಣು ಮುಚ್ಚಿಕೊಂಡಳು. ಕ್ರುದ್ದೆಯಾಗಿ, ಆ ವೃದ್ಧ ಸೆರಗನ್ನೆಳೆದುಕೊಂಡು, ದಾಮಿನಿಯನ್ನು ಹಿಡಿದು, ಅವಳ ಕ್ಷುದ್ರದೇಹವನ್ನು ಅಗಾಧಜಲದಲ್ಲಿ
ಎಸೆದುಬಿಟ್ಟಳು. ದಾಮಿನಿ ಸ್ವಪ್ನದಲ್ಲಿಯೂ ಚೀತ್ಕಾರ ಮಾಡತೊಡಗಿದಳು.<br />
{{gap}}ಭಯವೇನೆಂದು ಕೇಳುತ್ತ, ನಿದ್ರಿತೆಯಾಗಿದ್ದ ಆ ದಾಮಿನಿಯನ್ನು ಅಜ್ಜಿಯೆತ್ತಿಕೊಂಡಳು. ದಾಮಿನಿಗೆ ಎಚ್ಚರವಾಗಿ, “ಅಮ್ಮಾ! ಎಲ್ಲಿ?” ಎಂದು ಅಳತೊಡಗಿದಳು. ಪಾಪ! ಅಭಾಗಿನಿಯಾದವಳಿಗೆ ಅಮ್ಮನಿರಲಿಲ್ಲ. ಮೂರು ವರ್ಷಗಳಿಗೆ
ಮೊದಲೇ, ನಿರುದ್ದೇಶೆಯಾಗಿ, ಎಲ್ಲಿಗೋ ಹೊರಟುಹೋಗಿದ್ದಳು.
-
-
{{gap}}ಮರುದಿನ, ಪ್ರಾತಃಕಾಲದಲ್ಲಿ, ಪಾಠಶಾಲೆಗೆ ಹೋಗುತ್ತಿದ್ದ ಹನ್ನೆರಡು
ವರ್ಷದ ಒಬ್ಬ ಹುಡುಗನು ದಾಮಿನಿಯ ಗೃಹದ್ವಾರದಲ್ಲಿ ನಿಂದು, - "ಹಕ್ಕಿಯ ಮರಿ ಗಳಿಗಾಗಿ ಕಾಳುಗಳನ್ನು ಸಂಗ್ರಹಿಸಿಲ್ಲವೆ?” – ಎಂದು ಕೇಳಿದನು. ದಾಮಿನಿಯೊಬ್ಬಳೇ ಕುಳಿತಿದ್ದಳು; ಅವನ ಆ ಪ್ರಶ್ನೆಗೆ ತಲೆಯನ್ನಾಡಿಸುತ್ತ ಉತ್ತರಕೊಟ್ಟಳು.ಬಾಲಕನಿಗೆ ತೃಪ್ತಿಯಾಗಲಿಲ್ಲ. ಕೊಂಚ ಮುಂಬರಿದು, "ಅದೇಕೆ? ಜ್ವರ ಬಂದಿದೆಯೆ?”_ ಎಂದು ಕೇಳಿದನು. ಅವಳು ಪುನಃ ತಲೆಯನ್ನಾಡಿಸಿದಳು. ಪುನಃ,
-
--<noinclude></noinclude>
odune44mw62uh5emdj9nin2ie1npl7f
ಪುಟ:ದಾಮಿನಿ.djvu/೯
104
56631
321491
278995
2026-05-20T18:02:14Z
Pragathi. BH
7585
/* Validated */
321491
proofread-page
text/x-wiki
<noinclude><pagequality level="4" user="Pragathi. BH" /></noinclude>{{center|'''ದಾಮಿನಿ'''.}}
{{Right|5}}
ಕೇಳಿದನು:- "ಅವ್ವನ ಮೇಲೆ ಕೋಪವೇನು??” ಅವಳು ಮಾತನಾಡಲಿಲ್ಲ. ಆವ ಉತ್ತರವೂ ಬಾರದುದನ್ನು ನೋಡಿ, ಬಟ್ಟೆಯ ಸೆರಗಿನಲ್ಲಿದ್ದ ಕೆಲವು ಕಾಳುಗಳನ್ನು ತೆಗೆದು ಅವಳ ಮುಂದಿರಿಸಿ, ಹುಡುಗನು ಪಾಠಶಾಲಾಭಿಮುಖನಾಗಿ ಹೊರಟು ಹೋದನು.
{{gap}}ಹುಡುಗನ ಹೆಸರು ರಮೇಶನು, ದಾಮಿನಿಗೆ ಅವನು ಏನೂ ಆಗಬೇಡ. ನೆರೆಯವನೆಂದು ಅವಳವನನ್ನು ಅಣ್ಣನೆನ್ನುವಳು; ಅವನನ್ನು ಆವಾಗಲೂ “ ಅಣ್ಣಾ!” ಎಂದು ಸಂಬೋಧಿಸುವಳು. ರಮೇಶನೆಂದರೆ, ದಾಮಿನಿಗೆ ಬಲು ಇಷ್ಟ; ಆವ ಬೆಕ್ಕನ್ನು ನೋಡಿದರೆ ತನಗೆ ಬಹುಭಯವಾಗುತ್ತಿದ್ದಿತೋ ಅದನ್ನು ರಮೇಶನು ನೋಡಿದೊಡನೆ ಹೊಡೆಯತೊಡಗುವನು. ಅದಕ್ಕಾಗಿಯೇ, ಅವಳು ಅವನ ಅನು ಗತೆಯಾಗಿರುವಳು, ಸ್ನಾನಮಾಡುತ್ತಿದ್ದಾಗ, ರಮೇಶನು ದಾಮಿನಿಗಾಗಿ ನೀರಲ್ಲಿ ಆದು, ಎಷ್ಟೋ ಪ್ರಯಾಸದಿಂದ, ಬಲಪುಷ್ಪಗಳನ್ನು ತಂದುಕೊಡುವನು. ಅದನ್ನ ವಳು ತೆಗೆದುಕೊಂಡು, ನಗುನಗುತ್ತ, ಹೆರಳಿಗೆ ಸೂಡಿ, ಮತ್ತೆ ತಲೆದಗ್ಗಿಸಿ, “ನೋಡಣ್ಣ! ಹೇಗಿದೆ?” ಎಂದು ಕೇಳುವಳು. ಬಹುಶಃ, ರಮೇಶನು ಚೆನ್ನಾಗಿ ದೆಯೆಂದೇ ಹೇಳುವನು; ಆದರೆ, ಮಧ್ಯೆಮಧ್ಯೆ ಮನಸ್ಸಿಗೆ ಬಾರದಿದ್ದರೆ, ಸ್ವತಃ ಅದನ್ನು ಸರಿಯಾಗಿ ಮುಡಿಯಿಸುವನು. ಗ್ರಾಮದಲ್ಲಿನ ಎಲ್ಲ ಹುಡುಗಿಯರಿಂದಲೂ, ತನ್ನ ದಾಮಿನಿ ಸ್ವಾಭಾವಿಕವಾಗಿ ಶಾಂತೆಯೆಂದೂ ದುಃಖಿನಿಯೆಂದೂ ರಮೇಶನು ತಿಳಿದಿದ್ದನು. ಅಂತೆಯೆ, ದಾಮಿನಿಯೂ ಆ ಗ್ರಾಮದ ಹುಡುಗರಲ್ಲಿಯೆಲ್ಲ ತನ್ನ ರಮೇಶನನ್ನು ಸ್ವಜನವೆಂದು ಭಾವಿಸಿಕೊಂಡಿದ್ದಳು, ಇತರರಾರೂ ತನಗಾಗಿ ಹೂಗ ಳನ್ನು ತಂದುಕೊಡುತ್ತಿಲ್ಲ; ಹಕ್ಕಿಗಳನ್ನು ಹಿಡಿಯುತ್ತಿಲ್ಲ; ಕಾಳುಗಳನ್ನು ಸಂಗ್ರಹಿ ಸುತ್ತಿಲ್ಲ; ತನ್ನ ವೈರಿಯಾದ ಬೆಕ್ಕನ್ನು ಹೊಡೆದೋಡಿಸುತ್ತಿಲ್ಲ. ಆದುದರಿಂದ, ರಮೇಶನನ್ನು ನೋಡಿದಳೆಂದರೆ, ದಾಮಿನಿಯೋಡಿಹೋಗಿ, ಅವನ ಬಳಿ ನಿಲ್ಲುತ್ತಿ ದೃಳು, ನಗೆಮೊಗದಿಂದ, ಅವನ ಮಾತುಗಳಿಗೆ ಉತ್ತರಗುಡುತ್ತಿದ್ದಳು. ಆದರೆ, ಇಂದು ಅವನನ್ನು ನೋಡಿ, ಮೊದಲಿನಂತೆ ಅವಳು ಆಹ್ಲಾದವನ್ನು ಸೂಚಿಸಲಿಲ್ಲ' ದಾಮಿನಿ ಶೈಶವದಲ್ಲಿಯೂ ಗಂಭೀರೆಯಾಗಿಹೋಗಿದ್ದಾಳೆ!
{{gap}}ಶೈಶವದಲ್ಲಿಯೂ, ದಾಮಿನಿಗೆ ಇಷ್ಟು ಗಂಭೀರಪ್ರಕೃತಿಯೇಕೆ? ಆವನು ಸುಖಿ ಯೋ, ಅವನು ಚಂಚಲನು; ಆವನು ದುಃಖಿಯೋ, ಅವನು ಶಾಂತನೂ, ಧಿರ ನೂ, ಗಂಭೀರಪ್ರಕೃತಿಯುಳ್ಳವನೂ ಆಗಿರುವನು. ಇದು ಸ್ವಭಾವವು. ದಾರುಣ ವಾದ ಒಂದು ದುಃಖದ ದೆಸೆಯಿಂದ, ದಾಮಿನಿಯೆಂದು, ಈ ಶೈಶವದಲ್ಲಿ ಯೂ, ಕಾತರೆಯಾಗಿರುವಳು. ಅವಳ ಆ ತಾಯಿಯೆಲ್ಲಿ ?-ಏನು? ಸತ್ತು ಹೋಗಿರಬಹುದೆ? ಹಾಗಾಗಿದ್ದರೆ, ಜನಗಳೇಕೆ ಹಾಗೆ ಹೇಳುವುದಿಲ್ಲ? ಹಳ್ಳಿಯ ಎಲ್ಲ ಮಕ್ಕಳೂ ತಾಯ<noinclude></noinclude>
c0zhqewmio2q5upf71icmuef9p0fd0x
ಪುಟ:ದಾಮಿನಿ.djvu/೧೦
104
56632
321492
314226
2026-05-20T18:03:39Z
Pragathi. BH
7585
321492
proofread-page
text/x-wiki
<noinclude><pagequality level="3" user="Pragathi. BH" />{{Left|6}}</noinclude>{{center|ಶ್ರೀ ಕೃಷ್ಣ ಸೂಕ್ತಿಮುಕ್ತಾವಳಿ.}}
ತೊಡೆಯ ಮೇಲೆ ಮಲಗುವರು; ತಾಯ ಕಯ್ಯಲ್ಲಿ ಉಣ್ಣುವರು; ತಾಯ ಕತೆ ಗಳನ್ನು ಕೇಳುವರು; ತಾಯ ಮೊಗವನ್ನು ನೋಡುವರು; ತಾಯಿಯೊಡನೆ ಮು ದ್ದು ಮುದ್ದಾಗಿ ಮಾತನಾಡುವರು; ತಾಯಿಯೊಂದಿಗೆ ಜಗಳವಾಡುವರು; ಗಲಭೆ ಮಾಡುವರು; ತಾಯ ಸಂಗಡ ದೌರಾತ್ಮವನ್ನು ನಡೆಯಿಸುವರು. ಆದರೆ, ದಾ ಮಿನಿಯ ಅದೃಷ್ಟದಲ್ಲಿ ಅವಾವುವೂ ಇಲ್ಲ ವೇತಕ್ಕೆ? ಅಜ್ಜಿಯಿರುವಳು; ಬಲು ಒಳ್ಳೆ ಯವಳು; ತನ್ನನ್ನು ತಾಯಂತೆಯೆ ಪ್ರೀತಿಸುವಳು. ಆದರೆ, ತಾಯಿ? ಅವಳ ಆದರ? ಅವಳ ಪ್ರೀತಿ? ಅದಾವ ಪರಿ?-ತನ್ನ ತೃತೀಯವರ್ಷದಲ್ಲಿಯೆ ತಾಯನ್ನು ನೀಗಿ ಕೊಂಡಿದ್ದ ಆ ದಾಮಿನಿಗೆ ಅದು ಹೇಗೆ ಗೊತ್ತಾಗಬೇಕು? ಎಲ್ಲಿಯೂ, ಒಂದೊಂದು ವೇಳೆ, ಕೊಂಚಕೊಂಚವಾಗಿ, ಅವಳಿಗೆ ಆ ನೆನಪು! ಕೊಂಚಕೊಂಚ;-ಕೇವಲ ಛಾಯಾಮಾತ್ರ!--ಕೇವಲ ಒಂದು ದೇಹ;-ಆ ಮೇಲೆ, ಬರೀ ಒಂದು ಮುಖ!!-- ಬಾಲ್ಯಕಾಲದಲ್ಲಿ ಒಂದು ಬಾರಿ ದುರ್ಗೊತ್ಸವವನ್ನು ನೋಡಿದಳು;- ಕೇವಲ ಒಂದೇ ಬಾರಿ: - ಮಾತ್ತಾವಾಗಲೂ ನೋಡಿದುದಿಲ್ಲ;-ಪ್ರೌಢಾವಸ್ಥೆಯಲ್ಲಿ ಹೇಗೆ ಆ ದುರ್ಗೊತ್ಸವದ ದುರ್ಗಾ ವಿಗ್ರಹದ ಜ್ಞಾಪನವಾಗಬಹುದೋ ಹಾಗೆಯೆ, ಈಗ, ಅವ ಳಿಗೆ ತನ್ನ ತಾಯ ಜ್ಞಾಪಕ!! ಎಷ್ಟೋ ಬಾರಿ, ಮಾತೃವಿಗ್ರಹವನ್ನು ಮನಸ್ಸಿನ ಲ್ಲಿಯೇ ಪ್ರತಿಷ್ಠಾಪನಮಾಡುವಳು;-ಬಟ್ಟೆಗಳಿಂದಲೂ ಆಭರಣಗಳಿಂದಲೂ ಮನಸ್ಸಿ ನಲ್ಲಿಯೇ ಅದನ್ನಲಂಕರಿಸುವಳು;-ಅನಂತರ, ನಗೆಮೊಗದಿಂದ, ಅತ್ಯಾದರದಿಂದ, ಮನಬಂದಂತೆ, ಆ ದಿವ್ಯದೇವೀಮೂರ್ತಿಯ ಸರ್ವಾಂಗಗಳನ್ನೂ ಅಳವಡಿಸು ವಳು;-ಅಳವಡಿಸಿ, ಆ ಬಳಿಕ, ಮನಸ್ಸಿನಲ್ಲಿಯೇ-“ಅಮ್ಮಾ ಅಮ್ಮಾ!” ಎಂದು ಕರೆಯತೊಡಗುವಳು.
{{gap}}ಇಂದೂ, ತಾಯ ವಿಚಾರವನ್ನು ಮನಸ್ಸಿನಲ್ಲಿಯೇ ಭಾವಿಸಿಕೊಳ್ಳುತ್ತಿದ್ದ ಹಾಗೆ,-ತಾಯ ವಿಚಾರ, ದೀಪದ ವಿಚಾರ, ಸ್ವಪ್ನದ ವಿಚಾರ, ರಮೇಶನ ವಿಚಾ ರ-ಸಮಸ್ತವಿಚಾರಗಳೂ ಮೇಲಿಂದ ಮೇಲೆ ಮನಸ್ಸಿಗೆ ಬಂದು, ದಾಮಿನಿಯ ಹೃದಯದಲ್ಲಿ ಅತಿಶಯವಾದ ವ್ಯಥೆಯನ್ನುಂಟುಮಾಡಿದುವು. ದಾಮಿನಿಯು “ಸತ್ತ ರೆ ಸುಖ'' ವೆಂದುಕೊಂಡಳು.
-- @++-..
{{center|'''ದ್ವಿತೀಯ ಪರಿಚ್ಛೇದ.'''}}
ಹತ್ತು ವರ್ಷಗಳಾದ ಮೇಲೆ, ಒಂದು ದಿನ, ಅಪರಾಹ್ನದಲ್ಲಿ, ದಾಮಿನಿಯೋಬ್ಬಳೇ ಕಿರುಮನೆಯಲ್ಲಿ ಮಂಚದ ಮೇಲೆ ಹಾಸುಗೆಯನ್ನು ಹಾಸುತ್ತಿದ್ದಳು, ಪಶ್ಚಿಮ<noinclude></noinclude>
1za6200tulz5ybm9zboaoakg056n83a
ಪುಟ:ನನ್ನ ಸಂಸಾರ.djvu/೪೯
104
57332
321506
319150
2026-05-21T02:50:57Z
Hariprasad Shetty10
7490
321506
proofread-page
text/x-wiki
<noinclude><pagequality level="3" user="Shreelatha.Halemane" /> {{rh|center=ನನ್ನ ಸಂಸಾರ|left=|right=41}}
vvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvv</noinclude>ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾವುದಾದರೂ ಪಧಾರ್ಥಗಳನ್ನು
ಕೊಟ್ಟಿರುವಿರಾ ? ಹಾಗೆಕೊಟ್ಟಿದ್ದರೆ ಅವುಗಳ ತಪಶೀಲನ್ನು ತಿಳಿಸಿರಿ ” ಎಂದು ಕೇಳಿ
ದೆನು. ನನ್ನ ಮಾತನ್ನು ಕೇಳಿ ಅವರು ಸಂಕೋಚವನ್ನೂ ಗಾಬರಿಯನ್ನೂ ಹೊಂದಿದರೆಂದು
ತಿಳಿದು ಬಂದಿತು. ಪುನಃ ನಾನು, ಸಂಕೋಚಕ್ಕೂ ಗಾಬರಿಗೂ ಇದು ಸಮಯ
ವಲ್ಲ. ಈ ವಿಚಾರವನ್ನು ನೀವು ಹೇಳಲೇಬೇಕು. ಅಥವಾ ಏನೂ ಕೊಡದಿದ್ದರೆ, ಏನೂ
ಕೊಟ್ಟಿಲ್ಲವೆಂದು ಹೇಳಿಬಿಡಿರಿ. ಅಂತೂ ನಿಶ್ಚಯವಾದ ಮಾತನ್ನು ಈಗ ಹೇಳಬೇಕು.
ಇಲ್ಲವಾದರೆ ಆಭಾಸವಾದೀತು. ಎಂದುಹೇಳಿದೆನು. ಇಷ್ಟಾದಮೇಲೆ ಅವರು
ಅಂಜುತ್ತ ಅಂಜುತ್ತ ನಾನು ಯಾರಿಗೂ ತಿಳಿಸದಿರುವಂತೆ ಹೇಳಿ ಒಂದು ಅಡುವಿನ ಅಡ್ಡಿ ಕೆಯನ್ನೂ ಐವತ್ತು ರೂಪಾಯಿಗಳನ್ನೂ ನಮ್ಮ ಹಡುಗಿಯವಶಕ್ಕೆ ಕೊಟ್ಟಿರುವೆನೇ ವಿನಾ ಇನ್ನಾವ ಪದಾರ್ಥಗಳನ್ನೂ ಕೊಟ್ಟಿಲ್ಲವೆಂದು ಹೇಳಿದರು. ಈ ಸ್ಥಿತಿಯನ್ನು ಯೋಚಿಸಿ ನೋಡಿದರೆ ನಿನ್ನೆ ನಿಮ್ಮ ಪೆಟ್ಟಿಗೆಯಲ್ಲಿ ಹೋಯಿತೆಂಬ ಹಣವು ಸೌಭಾಗ್ಯವತಿಯ ಪೆಟ್ಟಿಗೆಯಲ್ಲಿ ದೊರೆತ ಹಣವಲ್ಲವಾದ್ದರಿಂದ ಆ ಹಣವನ್ನು ಅವಳಿಗೇ ಹಿಂತಿರುಗಿ ಕೊಟ್ಟು ಬಿಡಬೇಕು. ನಿನ್ನೆ ಯದಿವಸ ಸರ್ವರ ಸಮಕ್ಷಮದಲ್ಲಿ ನಮ್ಮ ತಾಯಿಯ ಹಣವೆಂದು ಸೌಭಾಗ್ಯವ ತಿಯು ಹೇಳಿದ ಮಾತು ನಿಜವಾಗಿರುತ್ತದೆ, ಆದ್ದರಿಂದ ನಿಮ್ಮ ಹಣ ಹೋದುದಕ್ಕೆ ನಾವು ಉತ್ತರವಾದಿಗಳಲ್ಲಿ,ಹಣವನ್ನು ಕೊಡದಿದ್ದರೆ ಮನಸ್ತಾಪಕ್ಕೆ ಕಾರಣವಾಗಬಹುದು.
ರಂಗಪುರೀ, ಇತಿ ವಿಜ್ಞಾಪನಾ.
16-1-17. H. V, SASTRY.
{{center|'''ನನ್ನ ಹೆಸರಿಗೆ ಕಳುಹಿಸಿದ ವರ್ತಮಾನ'''.}}
{{gap}}ನಿನ್ನೆ ನಡೆದ ವಿಷಯದಲ್ಲಿ ನಾನು ನಿನ್ನನ್ನು ಅಪರಾಧಿಯೆಂದು ನಿಶ್ವಯಿ
ಸಿದ್ದೆನು. ಆದರೆ ನಮ್ಮ ಮನೆಯವರ ಮತ್ತು ನಿನ್ನ ಕೋರಿಕೆಯಂತೆ ನಾನು ನಿನ್ನ
ಮಾತಿನ ನಿಶ್ಚಯಾಂಶವನ್ನು ತಿಳಿಯುವದಕ್ಕಾಗಿ ನಿಮ್ಮ ತಾಯಿಯವರನ್ನು ಏನೋ
ಒಂದು ವಿಧವಾಗಿ ಪ್ರಶ್ನೆ ಮಾಡಲು, ನಿನ್ನ ವಶಕ್ಕೆ 50 ರೂಪಾಯನ್ನೂ .ಒಂದು
ಅಡ್ಡಿಕೆಯನ್ನೂ ಕೊಟ್ಟಿರುವೆನೆಂದು ಹೇಳಿದರು. ಇದೇ ವಿಷಯವನ್ನು ನಮ್ಮ
ಅಣ್ಣನವರ ಪರಾಂಬರಿಕೆಗಾಗಿ ತಿಳಿಸಿರುತ್ತೇನೆ. ಅವರು ಸಂತೋಷದಿಂದ ಹಣವನ್ನು
ಕೊಟ್ಟರೆಕೊಡಲಿ. ಇಲ್ಲವಾದರೆ ಅದನ್ನು ನೀನು ಕೇಳಬೇಡ, ನೀನು ನನ್ನ ಸಂಗಡ
ಈ ವಿಷಯವನ್ನು ಹೇಳದೆ ಗೋಪ್ಯ ಮಾಡಿಕೊಂಡಿದ್ದ ಅಪರಾಧಕ್ಕೆ ಆ ಹಣವನ್ನು ಭಾಪ<noinclude></noinclude>
dno6vl5vh90gwmxoqysu8diyo11ozxn
321507
321506
2026-05-21T02:51:52Z
Hariprasad Shetty10
7490
321507
proofread-page
text/x-wiki
<noinclude><pagequality level="3" user="Shreelatha.Halemane" /> {{rh|center=ನನ್ನ ಸಂಸಾರ|left=|right=41}}
vvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvv</noinclude>ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾವುದಾದರೂ ಪಧಾರ್ಥಗಳನ್ನು
ಕೊಟ್ಟಿರುವಿರಾ ? ಹಾಗೆಕೊಟ್ಟಿದ್ದರೆ ಅವುಗಳ ತಪಶೀಲನ್ನು ತಿಳಿಸಿರಿ ” ಎಂದು ಕೇಳಿ
ದೆನು. ನನ್ನ ಮಾತನ್ನು ಕೇಳಿ ಅವರು ಸಂಕೋಚವನ್ನೂ ಗಾಬರಿಯನ್ನೂ ಹೊಂದಿದರೆಂದು
ತಿಳಿದು ಬಂದಿತು. ಪುನಃ ನಾನು, ಸಂಕೋಚಕ್ಕೂ ಗಾಬರಿಗೂ ಇದು ಸಮಯ
ವಲ್ಲ. ಈ ವಿಚಾರವನ್ನು ನೀವು ಹೇಳಲೇಬೇಕು. ಅಥವಾ ಏನೂ ಕೊಡದಿದ್ದರೆ, ಏನೂ
ಕೊಟ್ಟಿಲ್ಲವೆಂದು ಹೇಳಿಬಿಡಿರಿ. ಅಂತೂ ನಿಶ್ಚಯವಾದ ಮಾತನ್ನು ಈಗ ಹೇಳಬೇಕು.
ಇಲ್ಲವಾದರೆ ಆಭಾಸವಾದೀತು. ಎಂದುಹೇಳಿದೆನು. ಇಷ್ಟಾದಮೇಲೆ ಅವರು
ಅಂಜುತ್ತ ಅಂಜುತ್ತ ನಾನು ಯಾರಿಗೂ ತಿಳಿಸದಿರುವಂತೆ ಹೇಳಿ ಒಂದು ಅಡುವಿನ ಅಡ್ಡಿ ಕೆಯನ್ನೂ ಐವತ್ತು ರೂಪಾಯಿಗಳನ್ನೂ ನಮ್ಮ ಹಡುಗಿಯವಶಕ್ಕೆ ಕೊಟ್ಟಿರುವೆನೇ ವಿನಾ ಇನ್ನಾವ ಪದಾರ್ಥಗಳನ್ನೂ ಕೊಟ್ಟಿಲ್ಲವೆಂದು ಹೇಳಿದರು. ಈ ಸ್ಥಿತಿಯನ್ನು ಯೋಚಿಸಿ ನೋಡಿದರೆ ನಿನ್ನೆ ನಿಮ್ಮ ಪೆಟ್ಟಿಗೆಯಲ್ಲಿ ಹೋಯಿತೆಂಬ ಹಣವು ಸೌಭಾಗ್ಯವತಿಯ ಪೆಟ್ಟಿಗೆಯಲ್ಲಿ ದೊರೆತ ಹಣವಲ್ಲವಾದ್ದರಿಂದ ಆ ಹಣವನ್ನು ಅವಳಿಗೇ ಹಿಂತಿರುಗಿ ಕೊಟ್ಟು ಬಿಡಬೇಕು. ನಿನ್ನೆ ಯದಿವಸ ಸರ್ವರ ಸಮಕ್ಷಮದಲ್ಲಿ ನಮ್ಮ ತಾಯಿಯ ಹಣವೆಂದು ಸೌಭಾಗ್ಯವ ತಿಯು ಹೇಳಿದ ಮಾತು ನಿಜವಾಗಿರುತ್ತದೆ, ಆದ್ದರಿಂದ ನಿಮ್ಮ ಹಣ ಹೋದುದಕ್ಕೆ ನಾವು ಉತ್ತರವಾದಿಗಳಲ್ಲಿ,ಹಣವನ್ನು ಕೊಡದಿದ್ದರೆ ಮನಸ್ತಾಪಕ್ಕೆ ಕಾರಣವಾಗಬಹುದು.
{{Left|ರಂಗಪುರೀ,}} {{Right|}}ಇತಿ ವಿಜ್ಞಾಪನಾ.
{{Left|}}16-1-17. {{Right|}}H. V, SASTRY.
{{center|'''ನನ್ನ ಹೆಸರಿಗೆ ಕಳುಹಿಸಿದ ವರ್ತಮಾನ'''.}}
{{gap}}ನಿನ್ನೆ ನಡೆದ ವಿಷಯದಲ್ಲಿ ನಾನು ನಿನ್ನನ್ನು ಅಪರಾಧಿಯೆಂದು ನಿಶ್ವಯಿ
ಸಿದ್ದೆನು. ಆದರೆ ನಮ್ಮ ಮನೆಯವರ ಮತ್ತು ನಿನ್ನ ಕೋರಿಕೆಯಂತೆ ನಾನು ನಿನ್ನ
ಮಾತಿನ ನಿಶ್ಚಯಾಂಶವನ್ನು ತಿಳಿಯುವದಕ್ಕಾಗಿ ನಿಮ್ಮ ತಾಯಿಯವರನ್ನು ಏನೋ
ಒಂದು ವಿಧವಾಗಿ ಪ್ರಶ್ನೆ ಮಾಡಲು, ನಿನ್ನ ವಶಕ್ಕೆ 50 ರೂಪಾಯನ್ನೂ .ಒಂದು
ಅಡ್ಡಿಕೆಯನ್ನೂ ಕೊಟ್ಟಿರುವೆನೆಂದು ಹೇಳಿದರು. ಇದೇ ವಿಷಯವನ್ನು ನಮ್ಮ
ಅಣ್ಣನವರ ಪರಾಂಬರಿಕೆಗಾಗಿ ತಿಳಿಸಿರುತ್ತೇನೆ. ಅವರು ಸಂತೋಷದಿಂದ ಹಣವನ್ನು
ಕೊಟ್ಟರೆಕೊಡಲಿ. ಇಲ್ಲವಾದರೆ ಅದನ್ನು ನೀನು ಕೇಳಬೇಡ, ನೀನು ನನ್ನ ಸಂಗಡ
ಈ ವಿಷಯವನ್ನು ಹೇಳದೆ ಗೋಪ್ಯ ಮಾಡಿಕೊಂಡಿದ್ದ ಅಪರಾಧಕ್ಕೆ ಆ ಹಣವನ್ನು ಭಾಪ<noinclude></noinclude>
fhkrh5ufevy56092ffy1ud6ewu15xw5
321508
321507
2026-05-21T02:52:19Z
Hariprasad Shetty10
7490
321508
proofread-page
text/x-wiki
<noinclude><pagequality level="3" user="Shreelatha.Halemane" /> {{rh|center=ನನ್ನ ಸಂಸಾರ|left=|right=41}}
vvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvv</noinclude>ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾವುದಾದರೂ ಪಧಾರ್ಥಗಳನ್ನು
ಕೊಟ್ಟಿರುವಿರಾ ? ಹಾಗೆಕೊಟ್ಟಿದ್ದರೆ ಅವುಗಳ ತಪಶೀಲನ್ನು ತಿಳಿಸಿರಿ ” ಎಂದು ಕೇಳಿ
ದೆನು. ನನ್ನ ಮಾತನ್ನು ಕೇಳಿ ಅವರು ಸಂಕೋಚವನ್ನೂ ಗಾಬರಿಯನ್ನೂ ಹೊಂದಿದರೆಂದು
ತಿಳಿದು ಬಂದಿತು. ಪುನಃ ನಾನು, ಸಂಕೋಚಕ್ಕೂ ಗಾಬರಿಗೂ ಇದು ಸಮಯ
ವಲ್ಲ. ಈ ವಿಚಾರವನ್ನು ನೀವು ಹೇಳಲೇಬೇಕು. ಅಥವಾ ಏನೂ ಕೊಡದಿದ್ದರೆ, ಏನೂ
ಕೊಟ್ಟಿಲ್ಲವೆಂದು ಹೇಳಿಬಿಡಿರಿ. ಅಂತೂ ನಿಶ್ಚಯವಾದ ಮಾತನ್ನು ಈಗ ಹೇಳಬೇಕು.
ಇಲ್ಲವಾದರೆ ಆಭಾಸವಾದೀತು. ಎಂದುಹೇಳಿದೆನು. ಇಷ್ಟಾದಮೇಲೆ ಅವರು
ಅಂಜುತ್ತ ಅಂಜುತ್ತ ನಾನು ಯಾರಿಗೂ ತಿಳಿಸದಿರುವಂತೆ ಹೇಳಿ ಒಂದು ಅಡುವಿನ ಅಡ್ಡಿ ಕೆಯನ್ನೂ ಐವತ್ತು ರೂಪಾಯಿಗಳನ್ನೂ ನಮ್ಮ ಹಡುಗಿಯವಶಕ್ಕೆ ಕೊಟ್ಟಿರುವೆನೇ ವಿನಾ ಇನ್ನಾವ ಪದಾರ್ಥಗಳನ್ನೂ ಕೊಟ್ಟಿಲ್ಲವೆಂದು ಹೇಳಿದರು. ಈ ಸ್ಥಿತಿಯನ್ನು ಯೋಚಿಸಿ ನೋಡಿದರೆ ನಿನ್ನೆ ನಿಮ್ಮ ಪೆಟ್ಟಿಗೆಯಲ್ಲಿ ಹೋಯಿತೆಂಬ ಹಣವು ಸೌಭಾಗ್ಯವತಿಯ ಪೆಟ್ಟಿಗೆಯಲ್ಲಿ ದೊರೆತ ಹಣವಲ್ಲವಾದ್ದರಿಂದ ಆ ಹಣವನ್ನು ಅವಳಿಗೇ ಹಿಂತಿರುಗಿ ಕೊಟ್ಟು ಬಿಡಬೇಕು. ನಿನ್ನೆ ಯದಿವಸ ಸರ್ವರ ಸಮಕ್ಷಮದಲ್ಲಿ ನಮ್ಮ ತಾಯಿಯ ಹಣವೆಂದು ಸೌಭಾಗ್ಯವ ತಿಯು ಹೇಳಿದ ಮಾತು ನಿಜವಾಗಿರುತ್ತದೆ, ಆದ್ದರಿಂದ ನಿಮ್ಮ ಹಣ ಹೋದುದಕ್ಕೆ ನಾವು ಉತ್ತರವಾದಿಗಳಲ್ಲಿ,ಹಣವನ್ನು ಕೊಡದಿದ್ದರೆ ಮನಸ್ತಾಪಕ್ಕೆ ಕಾರಣವಾಗಬಹುದು.
{{Left|ರಂಗಪುರೀ,}} {{Right|ಇತಿ ವಿಜ್ಞಾಪನಾ.}}
{{Left|16-1-17. }} {{Right|H. V, SASTRY.}}
{{center|'''ನನ್ನ ಹೆಸರಿಗೆ ಕಳುಹಿಸಿದ ವರ್ತಮಾನ'''.}}
{{gap}}ನಿನ್ನೆ ನಡೆದ ವಿಷಯದಲ್ಲಿ ನಾನು ನಿನ್ನನ್ನು ಅಪರಾಧಿಯೆಂದು ನಿಶ್ವಯಿ
ಸಿದ್ದೆನು. ಆದರೆ ನಮ್ಮ ಮನೆಯವರ ಮತ್ತು ನಿನ್ನ ಕೋರಿಕೆಯಂತೆ ನಾನು ನಿನ್ನ
ಮಾತಿನ ನಿಶ್ಚಯಾಂಶವನ್ನು ತಿಳಿಯುವದಕ್ಕಾಗಿ ನಿಮ್ಮ ತಾಯಿಯವರನ್ನು ಏನೋ
ಒಂದು ವಿಧವಾಗಿ ಪ್ರಶ್ನೆ ಮಾಡಲು, ನಿನ್ನ ವಶಕ್ಕೆ 50 ರೂಪಾಯನ್ನೂ .ಒಂದು
ಅಡ್ಡಿಕೆಯನ್ನೂ ಕೊಟ್ಟಿರುವೆನೆಂದು ಹೇಳಿದರು. ಇದೇ ವಿಷಯವನ್ನು ನಮ್ಮ
ಅಣ್ಣನವರ ಪರಾಂಬರಿಕೆಗಾಗಿ ತಿಳಿಸಿರುತ್ತೇನೆ. ಅವರು ಸಂತೋಷದಿಂದ ಹಣವನ್ನು
ಕೊಟ್ಟರೆಕೊಡಲಿ. ಇಲ್ಲವಾದರೆ ಅದನ್ನು ನೀನು ಕೇಳಬೇಡ, ನೀನು ನನ್ನ ಸಂಗಡ
ಈ ವಿಷಯವನ್ನು ಹೇಳದೆ ಗೋಪ್ಯ ಮಾಡಿಕೊಂಡಿದ್ದ ಅಪರಾಧಕ್ಕೆ ಆ ಹಣವನ್ನು ಭಾಪ<noinclude></noinclude>
kcy2vev4ewhvnvsjlfj7x25n4om6efz
321509
321508
2026-05-21T02:52:45Z
Hariprasad Shetty10
7490
321509
proofread-page
text/x-wiki
<noinclude><pagequality level="3" user="Shreelatha.Halemane" /> {{rh|center=ನನ್ನ ಸಂಸಾರ|left=|right=41}}
vvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvv</noinclude>ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾವುದಾದರೂ ಪಧಾರ್ಥಗಳನ್ನು
ಕೊಟ್ಟಿರುವಿರಾ ? ಹಾಗೆಕೊಟ್ಟಿದ್ದರೆ ಅವುಗಳ ತಪಶೀಲನ್ನು ತಿಳಿಸಿರಿ ” ಎಂದು ಕೇಳಿ
ದೆನು. ನನ್ನ ಮಾತನ್ನು ಕೇಳಿ ಅವರು ಸಂಕೋಚವನ್ನೂ ಗಾಬರಿಯನ್ನೂ ಹೊಂದಿದರೆಂದು
ತಿಳಿದು ಬಂದಿತು. ಪುನಃ ನಾನು, ಸಂಕೋಚಕ್ಕೂ ಗಾಬರಿಗೂ ಇದು ಸಮಯ
ವಲ್ಲ. ಈ ವಿಚಾರವನ್ನು ನೀವು ಹೇಳಲೇಬೇಕು. ಅಥವಾ ಏನೂ ಕೊಡದಿದ್ದರೆ, ಏನೂ
ಕೊಟ್ಟಿಲ್ಲವೆಂದು ಹೇಳಿಬಿಡಿರಿ. ಅಂತೂ ನಿಶ್ಚಯವಾದ ಮಾತನ್ನು ಈಗ ಹೇಳಬೇಕು.
ಇಲ್ಲವಾದರೆ ಆಭಾಸವಾದೀತು. ಎಂದುಹೇಳಿದೆನು. ಇಷ್ಟಾದಮೇಲೆ ಅವರು
ಅಂಜುತ್ತ ಅಂಜುತ್ತ ನಾನು ಯಾರಿಗೂ ತಿಳಿಸದಿರುವಂತೆ ಹೇಳಿ ಒಂದು ಅಡುವಿನ ಅಡ್ಡಿ ಕೆಯನ್ನೂ ಐವತ್ತು ರೂಪಾಯಿಗಳನ್ನೂ ನಮ್ಮ ಹಡುಗಿಯವಶಕ್ಕೆ ಕೊಟ್ಟಿರುವೆನೇ ವಿನಾ ಇನ್ನಾವ ಪದಾರ್ಥಗಳನ್ನೂ ಕೊಟ್ಟಿಲ್ಲವೆಂದು ಹೇಳಿದರು. ಈ ಸ್ಥಿತಿಯನ್ನು ಯೋಚಿಸಿ ನೋಡಿದರೆ ನಿನ್ನೆ ನಿಮ್ಮ ಪೆಟ್ಟಿಗೆಯಲ್ಲಿ ಹೋಯಿತೆಂಬ ಹಣವು ಸೌಭಾಗ್ಯವತಿಯ ಪೆಟ್ಟಿಗೆಯಲ್ಲಿ ದೊರೆತ ಹಣವಲ್ಲವಾದ್ದರಿಂದ ಆ ಹಣವನ್ನು ಅವಳಿಗೇ ಹಿಂತಿರುಗಿ ಕೊಟ್ಟು ಬಿಡಬೇಕು. ನಿನ್ನೆ ಯದಿವಸ ಸರ್ವರ ಸಮಕ್ಷಮದಲ್ಲಿ ನಮ್ಮ ತಾಯಿಯ ಹಣವೆಂದು ಸೌಭಾಗ್ಯವ ತಿಯು ಹೇಳಿದ ಮಾತು ನಿಜವಾಗಿರುತ್ತದೆ, ಆದ್ದರಿಂದ ನಿಮ್ಮ ಹಣ ಹೋದುದಕ್ಕೆ ನಾವು ಉತ್ತರವಾದಿಗಳಲ್ಲಿ,ಹಣವನ್ನು ಕೊಡದಿದ್ದರೆ ಮನಸ್ತಾಪಕ್ಕೆ ಕಾರಣವಾಗಬಹುದು.
{{Left|ರಂಗಪುರೀ,}} {{Right|ಇತಿ ವಿಜ್ಞಾಪನಾ.}}
{{Left|16-1-17.}} {{Right|H. V, SASTRY.}}
{{center|'''ನನ್ನ ಹೆಸರಿಗೆ ಕಳುಹಿಸಿದ ವರ್ತಮಾನ'''.}}
{{gap}}ನಿನ್ನೆ ನಡೆದ ವಿಷಯದಲ್ಲಿ ನಾನು ನಿನ್ನನ್ನು ಅಪರಾಧಿಯೆಂದು ನಿಶ್ವಯಿ
ಸಿದ್ದೆನು. ಆದರೆ ನಮ್ಮ ಮನೆಯವರ ಮತ್ತು ನಿನ್ನ ಕೋರಿಕೆಯಂತೆ ನಾನು ನಿನ್ನ
ಮಾತಿನ ನಿಶ್ಚಯಾಂಶವನ್ನು ತಿಳಿಯುವದಕ್ಕಾಗಿ ನಿಮ್ಮ ತಾಯಿಯವರನ್ನು ಏನೋ
ಒಂದು ವಿಧವಾಗಿ ಪ್ರಶ್ನೆ ಮಾಡಲು, ನಿನ್ನ ವಶಕ್ಕೆ 50 ರೂಪಾಯನ್ನೂ .ಒಂದು
ಅಡ್ಡಿಕೆಯನ್ನೂ ಕೊಟ್ಟಿರುವೆನೆಂದು ಹೇಳಿದರು. ಇದೇ ವಿಷಯವನ್ನು ನಮ್ಮ
ಅಣ್ಣನವರ ಪರಾಂಬರಿಕೆಗಾಗಿ ತಿಳಿಸಿರುತ್ತೇನೆ. ಅವರು ಸಂತೋಷದಿಂದ ಹಣವನ್ನು
ಕೊಟ್ಟರೆಕೊಡಲಿ. ಇಲ್ಲವಾದರೆ ಅದನ್ನು ನೀನು ಕೇಳಬೇಡ, ನೀನು ನನ್ನ ಸಂಗಡ
ಈ ವಿಷಯವನ್ನು ಹೇಳದೆ ಗೋಪ್ಯ ಮಾಡಿಕೊಂಡಿದ್ದ ಅಪರಾಧಕ್ಕೆ ಆ ಹಣವನ್ನು ಭಾಪ<noinclude></noinclude>
if1kcq52psqtxb8hzyq2fshwryjzj19
321510
321509
2026-05-21T02:53:03Z
Hariprasad Shetty10
7490
321510
proofread-page
text/x-wiki
<noinclude><pagequality level="3" user="Shreelatha.Halemane" /> {{rh|center=ನನ್ನ ಸಂಸಾರ|left=|right=41}}
vvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvv</noinclude>ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾವುದಾದರೂ ಪಧಾರ್ಥಗಳನ್ನು
ಕೊಟ್ಟಿರುವಿರಾ ? ಹಾಗೆಕೊಟ್ಟಿದ್ದರೆ ಅವುಗಳ ತಪಶೀಲನ್ನು ತಿಳಿಸಿರಿ ” ಎಂದು ಕೇಳಿ
ದೆನು. ನನ್ನ ಮಾತನ್ನು ಕೇಳಿ ಅವರು ಸಂಕೋಚವನ್ನೂ ಗಾಬರಿಯನ್ನೂ ಹೊಂದಿದರೆಂದು
ತಿಳಿದು ಬಂದಿತು. ಪುನಃ ನಾನು, ಸಂಕೋಚಕ್ಕೂ ಗಾಬರಿಗೂ ಇದು ಸಮಯ
ವಲ್ಲ. ಈ ವಿಚಾರವನ್ನು ನೀವು ಹೇಳಲೇಬೇಕು. ಅಥವಾ ಏನೂ ಕೊಡದಿದ್ದರೆ, ಏನೂ
ಕೊಟ್ಟಿಲ್ಲವೆಂದು ಹೇಳಿಬಿಡಿರಿ. ಅಂತೂ ನಿಶ್ಚಯವಾದ ಮಾತನ್ನು ಈಗ ಹೇಳಬೇಕು.
ಇಲ್ಲವಾದರೆ ಆಭಾಸವಾದೀತು. ಎಂದುಹೇಳಿದೆನು. ಇಷ್ಟಾದಮೇಲೆ ಅವರು
ಅಂಜುತ್ತ ಅಂಜುತ್ತ ನಾನು ಯಾರಿಗೂ ತಿಳಿಸದಿರುವಂತೆ ಹೇಳಿ ಒಂದು ಅಡುವಿನ ಅಡ್ಡಿ ಕೆಯನ್ನೂ ಐವತ್ತು ರೂಪಾಯಿಗಳನ್ನೂ ನಮ್ಮ ಹಡುಗಿಯವಶಕ್ಕೆ ಕೊಟ್ಟಿರುವೆನೇ ವಿನಾ ಇನ್ನಾವ ಪದಾರ್ಥಗಳನ್ನೂ ಕೊಟ್ಟಿಲ್ಲವೆಂದು ಹೇಳಿದರು. ಈ ಸ್ಥಿತಿಯನ್ನು ಯೋಚಿಸಿ ನೋಡಿದರೆ ನಿನ್ನೆ ನಿಮ್ಮ ಪೆಟ್ಟಿಗೆಯಲ್ಲಿ ಹೋಯಿತೆಂಬ ಹಣವು ಸೌಭಾಗ್ಯವತಿಯ ಪೆಟ್ಟಿಗೆಯಲ್ಲಿ ದೊರೆತ ಹಣವಲ್ಲವಾದ್ದರಿಂದ ಆ ಹಣವನ್ನು ಅವಳಿಗೇ ಹಿಂತಿರುಗಿ ಕೊಟ್ಟು ಬಿಡಬೇಕು. ನಿನ್ನೆ ಯದಿವಸ ಸರ್ವರ ಸಮಕ್ಷಮದಲ್ಲಿ ನಮ್ಮ ತಾಯಿಯ ಹಣವೆಂದು ಸೌಭಾಗ್ಯವ ತಿಯು ಹೇಳಿದ ಮಾತು ನಿಜವಾಗಿರುತ್ತದೆ, ಆದ್ದರಿಂದ ನಿಮ್ಮ ಹಣ ಹೋದುದಕ್ಕೆ ನಾವು ಉತ್ತರವಾದಿಗಳಲ್ಲಿ,ಹಣವನ್ನು ಕೊಡದಿದ್ದರೆ ಮನಸ್ತಾಪಕ್ಕೆ ಕಾರಣವಾಗಬಹುದು.
{{Left|ರಂಗಪುರೀ,}} {{Right|ಇತಿ ವಿಜ್ಞಾಪನಾ.}}<br />
{{Left|16-1-17.}} {{Right|H. V, SASTRY.}}
{{center|'''ನನ್ನ ಹೆಸರಿಗೆ ಕಳುಹಿಸಿದ ವರ್ತಮಾನ'''.}}
{{gap}}ನಿನ್ನೆ ನಡೆದ ವಿಷಯದಲ್ಲಿ ನಾನು ನಿನ್ನನ್ನು ಅಪರಾಧಿಯೆಂದು ನಿಶ್ವಯಿ
ಸಿದ್ದೆನು. ಆದರೆ ನಮ್ಮ ಮನೆಯವರ ಮತ್ತು ನಿನ್ನ ಕೋರಿಕೆಯಂತೆ ನಾನು ನಿನ್ನ
ಮಾತಿನ ನಿಶ್ಚಯಾಂಶವನ್ನು ತಿಳಿಯುವದಕ್ಕಾಗಿ ನಿಮ್ಮ ತಾಯಿಯವರನ್ನು ಏನೋ
ಒಂದು ವಿಧವಾಗಿ ಪ್ರಶ್ನೆ ಮಾಡಲು, ನಿನ್ನ ವಶಕ್ಕೆ 50 ರೂಪಾಯನ್ನೂ .ಒಂದು
ಅಡ್ಡಿಕೆಯನ್ನೂ ಕೊಟ್ಟಿರುವೆನೆಂದು ಹೇಳಿದರು. ಇದೇ ವಿಷಯವನ್ನು ನಮ್ಮ
ಅಣ್ಣನವರ ಪರಾಂಬರಿಕೆಗಾಗಿ ತಿಳಿಸಿರುತ್ತೇನೆ. ಅವರು ಸಂತೋಷದಿಂದ ಹಣವನ್ನು
ಕೊಟ್ಟರೆಕೊಡಲಿ. ಇಲ್ಲವಾದರೆ ಅದನ್ನು ನೀನು ಕೇಳಬೇಡ, ನೀನು ನನ್ನ ಸಂಗಡ
ಈ ವಿಷಯವನ್ನು ಹೇಳದೆ ಗೋಪ್ಯ ಮಾಡಿಕೊಂಡಿದ್ದ ಅಪರಾಧಕ್ಕೆ ಆ ಹಣವನ್ನು ಭಾಪ<noinclude></noinclude>
63t21rf8hprdus8p945d5qgdv4iwspl
321511
321510
2026-05-21T02:53:29Z
Hariprasad Shetty10
7490
321511
proofread-page
text/x-wiki
<noinclude><pagequality level="3" user="Shreelatha.Halemane" /> {{rh|center=ನನ್ನ ಸಂಸಾರ|left=|right=41}}
vvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvv</noinclude>ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾವುದಾದರೂ ಪಧಾರ್ಥಗಳನ್ನು
ಕೊಟ್ಟಿರುವಿರಾ ? ಹಾಗೆಕೊಟ್ಟಿದ್ದರೆ ಅವುಗಳ ತಪಶೀಲನ್ನು ತಿಳಿಸಿರಿ ” ಎಂದು ಕೇಳಿ
ದೆನು. ನನ್ನ ಮಾತನ್ನು ಕೇಳಿ ಅವರು ಸಂಕೋಚವನ್ನೂ ಗಾಬರಿಯನ್ನೂ ಹೊಂದಿದರೆಂದು
ತಿಳಿದು ಬಂದಿತು. ಪುನಃ ನಾನು, ಸಂಕೋಚಕ್ಕೂ ಗಾಬರಿಗೂ ಇದು ಸಮಯ
ವಲ್ಲ. ಈ ವಿಚಾರವನ್ನು ನೀವು ಹೇಳಲೇಬೇಕು. ಅಥವಾ ಏನೂ ಕೊಡದಿದ್ದರೆ, ಏನೂ
ಕೊಟ್ಟಿಲ್ಲವೆಂದು ಹೇಳಿಬಿಡಿರಿ. ಅಂತೂ ನಿಶ್ಚಯವಾದ ಮಾತನ್ನು ಈಗ ಹೇಳಬೇಕು.
ಇಲ್ಲವಾದರೆ ಆಭಾಸವಾದೀತು. ಎಂದುಹೇಳಿದೆನು. ಇಷ್ಟಾದಮೇಲೆ ಅವರು
ಅಂಜುತ್ತ ಅಂಜುತ್ತ ನಾನು ಯಾರಿಗೂ ತಿಳಿಸದಿರುವಂತೆ ಹೇಳಿ ಒಂದು ಅಡುವಿನ ಅಡ್ಡಿ ಕೆಯನ್ನೂ ಐವತ್ತು ರೂಪಾಯಿಗಳನ್ನೂ ನಮ್ಮ ಹಡುಗಿಯವಶಕ್ಕೆ ಕೊಟ್ಟಿರುವೆನೇ ವಿನಾ ಇನ್ನಾವ ಪದಾರ್ಥಗಳನ್ನೂ ಕೊಟ್ಟಿಲ್ಲವೆಂದು ಹೇಳಿದರು. ಈ ಸ್ಥಿತಿಯನ್ನು ಯೋಚಿಸಿ ನೋಡಿದರೆ ನಿನ್ನೆ ನಿಮ್ಮ ಪೆಟ್ಟಿಗೆಯಲ್ಲಿ ಹೋಯಿತೆಂಬ ಹಣವು ಸೌಭಾಗ್ಯವತಿಯ ಪೆಟ್ಟಿಗೆಯಲ್ಲಿ ದೊರೆತ ಹಣವಲ್ಲವಾದ್ದರಿಂದ ಆ ಹಣವನ್ನು ಅವಳಿಗೇ ಹಿಂತಿರುಗಿ ಕೊಟ್ಟು ಬಿಡಬೇಕು. ನಿನ್ನೆ ಯದಿವಸ ಸರ್ವರ ಸಮಕ್ಷಮದಲ್ಲಿ ನಮ್ಮ ತಾಯಿಯ ಹಣವೆಂದು ಸೌಭಾಗ್ಯವ ತಿಯು ಹೇಳಿದ ಮಾತು ನಿಜವಾಗಿರುತ್ತದೆ, ಆದ್ದರಿಂದ ನಿಮ್ಮ ಹಣ ಹೋದುದಕ್ಕೆ ನಾವು ಉತ್ತರವಾದಿಗಳಲ್ಲಿ,ಹಣವನ್ನು ಕೊಡದಿದ್ದರೆ ಮನಸ್ತಾಪಕ್ಕೆ ಕಾರಣವಾಗಬಹುದು.
{{Left|ರಂಗಪುರೀ,}}{{Right|ಇತಿ ವಿಜ್ಞಾಪನಾ.}}{{Left|16-1-17.}} {{Right|H. V, SASTRY.}}
{{center|'''ನನ್ನ ಹೆಸರಿಗೆ ಕಳುಹಿಸಿದ ವರ್ತಮಾನ'''.}}
{{gap}}ನಿನ್ನೆ ನಡೆದ ವಿಷಯದಲ್ಲಿ ನಾನು ನಿನ್ನನ್ನು ಅಪರಾಧಿಯೆಂದು ನಿಶ್ವಯಿ
ಸಿದ್ದೆನು. ಆದರೆ ನಮ್ಮ ಮನೆಯವರ ಮತ್ತು ನಿನ್ನ ಕೋರಿಕೆಯಂತೆ ನಾನು ನಿನ್ನ
ಮಾತಿನ ನಿಶ್ಚಯಾಂಶವನ್ನು ತಿಳಿಯುವದಕ್ಕಾಗಿ ನಿಮ್ಮ ತಾಯಿಯವರನ್ನು ಏನೋ
ಒಂದು ವಿಧವಾಗಿ ಪ್ರಶ್ನೆ ಮಾಡಲು, ನಿನ್ನ ವಶಕ್ಕೆ 50 ರೂಪಾಯನ್ನೂ .ಒಂದು
ಅಡ್ಡಿಕೆಯನ್ನೂ ಕೊಟ್ಟಿರುವೆನೆಂದು ಹೇಳಿದರು. ಇದೇ ವಿಷಯವನ್ನು ನಮ್ಮ
ಅಣ್ಣನವರ ಪರಾಂಬರಿಕೆಗಾಗಿ ತಿಳಿಸಿರುತ್ತೇನೆ. ಅವರು ಸಂತೋಷದಿಂದ ಹಣವನ್ನು
ಕೊಟ್ಟರೆಕೊಡಲಿ. ಇಲ್ಲವಾದರೆ ಅದನ್ನು ನೀನು ಕೇಳಬೇಡ, ನೀನು ನನ್ನ ಸಂಗಡ
ಈ ವಿಷಯವನ್ನು ಹೇಳದೆ ಗೋಪ್ಯ ಮಾಡಿಕೊಂಡಿದ್ದ ಅಪರಾಧಕ್ಕೆ ಆ ಹಣವನ್ನು ಭಾಪ<noinclude></noinclude>
mmfs5layitt2d6r2kqwk6ewzidjcpet
321512
321511
2026-05-21T02:53:55Z
Hariprasad Shetty10
7490
321512
proofread-page
text/x-wiki
<noinclude><pagequality level="3" user="Shreelatha.Halemane" /> {{rh|center=ನನ್ನ ಸಂಸಾರ|left=|right=41}}
vvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvv</noinclude>ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾವುದಾದರೂ ಪಧಾರ್ಥಗಳನ್ನು
ಕೊಟ್ಟಿರುವಿರಾ ? ಹಾಗೆಕೊಟ್ಟಿದ್ದರೆ ಅವುಗಳ ತಪಶೀಲನ್ನು ತಿಳಿಸಿರಿ ” ಎಂದು ಕೇಳಿ
ದೆನು. ನನ್ನ ಮಾತನ್ನು ಕೇಳಿ ಅವರು ಸಂಕೋಚವನ್ನೂ ಗಾಬರಿಯನ್ನೂ ಹೊಂದಿದರೆಂದು
ತಿಳಿದು ಬಂದಿತು. ಪುನಃ ನಾನು, ಸಂಕೋಚಕ್ಕೂ ಗಾಬರಿಗೂ ಇದು ಸಮಯ
ವಲ್ಲ. ಈ ವಿಚಾರವನ್ನು ನೀವು ಹೇಳಲೇಬೇಕು. ಅಥವಾ ಏನೂ ಕೊಡದಿದ್ದರೆ, ಏನೂ
ಕೊಟ್ಟಿಲ್ಲವೆಂದು ಹೇಳಿಬಿಡಿರಿ. ಅಂತೂ ನಿಶ್ಚಯವಾದ ಮಾತನ್ನು ಈಗ ಹೇಳಬೇಕು.
ಇಲ್ಲವಾದರೆ ಆಭಾಸವಾದೀತು. ಎಂದುಹೇಳಿದೆನು. ಇಷ್ಟಾದಮೇಲೆ ಅವರು
ಅಂಜುತ್ತ ಅಂಜುತ್ತ ನಾನು ಯಾರಿಗೂ ತಿಳಿಸದಿರುವಂತೆ ಹೇಳಿ ಒಂದು ಅಡುವಿನ ಅಡ್ಡಿ ಕೆಯನ್ನೂ ಐವತ್ತು ರೂಪಾಯಿಗಳನ್ನೂ ನಮ್ಮ ಹಡುಗಿಯವಶಕ್ಕೆ ಕೊಟ್ಟಿರುವೆನೇ ವಿನಾ ಇನ್ನಾವ ಪದಾರ್ಥಗಳನ್ನೂ ಕೊಟ್ಟಿಲ್ಲವೆಂದು ಹೇಳಿದರು. ಈ ಸ್ಥಿತಿಯನ್ನು ಯೋಚಿಸಿ ನೋಡಿದರೆ ನಿನ್ನೆ ನಿಮ್ಮ ಪೆಟ್ಟಿಗೆಯಲ್ಲಿ ಹೋಯಿತೆಂಬ ಹಣವು ಸೌಭಾಗ್ಯವತಿಯ ಪೆಟ್ಟಿಗೆಯಲ್ಲಿ ದೊರೆತ ಹಣವಲ್ಲವಾದ್ದರಿಂದ ಆ ಹಣವನ್ನು ಅವಳಿಗೇ ಹಿಂತಿರುಗಿ ಕೊಟ್ಟು ಬಿಡಬೇಕು. ನಿನ್ನೆ ಯದಿವಸ ಸರ್ವರ ಸಮಕ್ಷಮದಲ್ಲಿ ನಮ್ಮ ತಾಯಿಯ ಹಣವೆಂದು ಸೌಭಾಗ್ಯವ ತಿಯು ಹೇಳಿದ ಮಾತು ನಿಜವಾಗಿರುತ್ತದೆ, ಆದ್ದರಿಂದ ನಿಮ್ಮ ಹಣ ಹೋದುದಕ್ಕೆ ನಾವು ಉತ್ತರವಾದಿಗಳಲ್ಲಿ,ಹಣವನ್ನು ಕೊಡದಿದ್ದರೆ ಮನಸ್ತಾಪಕ್ಕೆ ಕಾರಣವಾಗಬಹುದು.
{{Left|ರಂಗಪುರೀ,}}{{Right|ಇತಿ ವಿಜ್ಞಾಪನಾ.}}
{{Left|16-1-17.}}{{Right|H. V, SASTRY.}}
{{center|'''ನನ್ನ ಹೆಸರಿಗೆ ಕಳುಹಿಸಿದ ವರ್ತಮಾನ'''.}}
{{gap}}ನಿನ್ನೆ ನಡೆದ ವಿಷಯದಲ್ಲಿ ನಾನು ನಿನ್ನನ್ನು ಅಪರಾಧಿಯೆಂದು ನಿಶ್ವಯಿ
ಸಿದ್ದೆನು. ಆದರೆ ನಮ್ಮ ಮನೆಯವರ ಮತ್ತು ನಿನ್ನ ಕೋರಿಕೆಯಂತೆ ನಾನು ನಿನ್ನ
ಮಾತಿನ ನಿಶ್ಚಯಾಂಶವನ್ನು ತಿಳಿಯುವದಕ್ಕಾಗಿ ನಿಮ್ಮ ತಾಯಿಯವರನ್ನು ಏನೋ
ಒಂದು ವಿಧವಾಗಿ ಪ್ರಶ್ನೆ ಮಾಡಲು, ನಿನ್ನ ವಶಕ್ಕೆ 50 ರೂಪಾಯನ್ನೂ .ಒಂದು
ಅಡ್ಡಿಕೆಯನ್ನೂ ಕೊಟ್ಟಿರುವೆನೆಂದು ಹೇಳಿದರು. ಇದೇ ವಿಷಯವನ್ನು ನಮ್ಮ
ಅಣ್ಣನವರ ಪರಾಂಬರಿಕೆಗಾಗಿ ತಿಳಿಸಿರುತ್ತೇನೆ. ಅವರು ಸಂತೋಷದಿಂದ ಹಣವನ್ನು
ಕೊಟ್ಟರೆಕೊಡಲಿ. ಇಲ್ಲವಾದರೆ ಅದನ್ನು ನೀನು ಕೇಳಬೇಡ, ನೀನು ನನ್ನ ಸಂಗಡ
ಈ ವಿಷಯವನ್ನು ಹೇಳದೆ ಗೋಪ್ಯ ಮಾಡಿಕೊಂಡಿದ್ದ ಅಪರಾಧಕ್ಕೆ ಆ ಹಣವನ್ನು ಭಾಪ<noinclude></noinclude>
4pjxopwf86pjqzlu1msly33g8rlqwk6
321513
321512
2026-05-21T02:54:26Z
Hariprasad Shetty10
7490
321513
proofread-page
text/x-wiki
<noinclude><pagequality level="3" user="Shreelatha.Halemane" /> {{rh|center=ನನ್ನ ಸಂಸಾರ|left=|right=41}}
vvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvv</noinclude>ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಯಾವುದಾದರೂ ಪಧಾರ್ಥಗಳನ್ನು
ಕೊಟ್ಟಿರುವಿರಾ ? ಹಾಗೆಕೊಟ್ಟಿದ್ದರೆ ಅವುಗಳ ತಪಶೀಲನ್ನು ತಿಳಿಸಿರಿ ” ಎಂದು ಕೇಳಿ
ದೆನು. ನನ್ನ ಮಾತನ್ನು ಕೇಳಿ ಅವರು ಸಂಕೋಚವನ್ನೂ ಗಾಬರಿಯನ್ನೂ ಹೊಂದಿದರೆಂದು
ತಿಳಿದು ಬಂದಿತು. ಪುನಃ ನಾನು, ಸಂಕೋಚಕ್ಕೂ ಗಾಬರಿಗೂ ಇದು ಸಮಯ
ವಲ್ಲ. ಈ ವಿಚಾರವನ್ನು ನೀವು ಹೇಳಲೇಬೇಕು. ಅಥವಾ ಏನೂ ಕೊಡದಿದ್ದರೆ, ಏನೂ
ಕೊಟ್ಟಿಲ್ಲವೆಂದು ಹೇಳಿಬಿಡಿರಿ. ಅಂತೂ ನಿಶ್ಚಯವಾದ ಮಾತನ್ನು ಈಗ ಹೇಳಬೇಕು.
ಇಲ್ಲವಾದರೆ ಆಭಾಸವಾದೀತು. ಎಂದುಹೇಳಿದೆನು. ಇಷ್ಟಾದಮೇಲೆ ಅವರು
ಅಂಜುತ್ತ ಅಂಜುತ್ತ ನಾನು ಯಾರಿಗೂ ತಿಳಿಸದಿರುವಂತೆ ಹೇಳಿ ಒಂದು ಅಡುವಿನ ಅಡ್ಡಿ ಕೆಯನ್ನೂ ಐವತ್ತು ರೂಪಾಯಿಗಳನ್ನೂ ನಮ್ಮ ಹಡುಗಿಯವಶಕ್ಕೆ ಕೊಟ್ಟಿರುವೆನೇ ವಿನಾ ಇನ್ನಾವ ಪದಾರ್ಥಗಳನ್ನೂ ಕೊಟ್ಟಿಲ್ಲವೆಂದು ಹೇಳಿದರು. ಈ ಸ್ಥಿತಿಯನ್ನು ಯೋಚಿಸಿ ನೋಡಿದರೆ ನಿನ್ನೆ ನಿಮ್ಮ ಪೆಟ್ಟಿಗೆಯಲ್ಲಿ ಹೋಯಿತೆಂಬ ಹಣವು ಸೌಭಾಗ್ಯವತಿಯ ಪೆಟ್ಟಿಗೆಯಲ್ಲಿ ದೊರೆತ ಹಣವಲ್ಲವಾದ್ದರಿಂದ ಆ ಹಣವನ್ನು ಅವಳಿಗೇ ಹಿಂತಿರುಗಿ ಕೊಟ್ಟು ಬಿಡಬೇಕು. ನಿನ್ನೆ ಯದಿವಸ ಸರ್ವರ ಸಮಕ್ಷಮದಲ್ಲಿ ನಮ್ಮ ತಾಯಿಯ ಹಣವೆಂದು ಸೌಭಾಗ್ಯವ ತಿಯು ಹೇಳಿದ ಮಾತು ನಿಜವಾಗಿರುತ್ತದೆ, ಆದ್ದರಿಂದ ನಿಮ್ಮ ಹಣ ಹೋದುದಕ್ಕೆ ನಾವು ಉತ್ತರವಾದಿಗಳಲ್ಲಿ,ಹಣವನ್ನು ಕೊಡದಿದ್ದರೆ ಮನಸ್ತಾಪಕ್ಕೆ ಕಾರಣವಾಗಬಹುದು.
{{Left|ರಂಗಪುರೀ,}}{{Right|ಇತಿ ವಿಜ್ಞಾಪನಾ.}}
{{Left|16-1-17.}}{{Right|H. V, SASTRY.}}
{{center|'''ನನ್ನ ಹೆಸರಿಗೆ ಕಳುಹಿಸಿದ ವರ್ತಮಾನ'''.}}
{{gap}}ನಿನ್ನೆ ನಡೆದ ವಿಷಯದಲ್ಲಿ ನಾನು ನಿನ್ನನ್ನು ಅಪರಾಧಿಯೆಂದು ನಿಶ್ವಯಿ
ಸಿದ್ದೆನು. ಆದರೆ ನಮ್ಮ ಮನೆಯವರ ಮತ್ತು ನಿನ್ನ ಕೋರಿಕೆಯಂತೆ ನಾನು ನಿನ್ನ
ಮಾತಿನ ನಿಶ್ಚಯಾಂಶವನ್ನು ತಿಳಿಯುವದಕ್ಕಾಗಿ ನಿಮ್ಮ ತಾಯಿಯವರನ್ನು ಏನೋ
ಒಂದು ವಿಧವಾಗಿ ಪ್ರಶ್ನೆ ಮಾಡಲು, ನಿನ್ನ ವಶಕ್ಕೆ 50 ರೂಪಾಯನ್ನೂ .ಒಂದು
ಅಡ್ಡಿಕೆಯನ್ನೂ ಕೊಟ್ಟಿರುವೆನೆಂದು ಹೇಳಿದರು. ಇದೇ ವಿಷಯವನ್ನು ನಮ್ಮ
ಅಣ್ಣನವರ ಪರಾಂಬರಿಕೆಗಾಗಿ ತಿಳಿಸಿರುತ್ತೇನೆ. ಅವರು ಸಂತೋಷದಿಂದ ಹಣವನ್ನು
ಕೊಟ್ಟರೆಕೊಡಲಿ. ಇಲ್ಲವಾದರೆ ಅದನ್ನು ನೀನು ಕೇಳಬೇಡ, ನೀನು ನನ್ನ ಸಂಗಡ
ಈ ವಿಷಯವನ್ನು ಹೇಳದೆ ಗೋಪ್ಯ ಮಾಡಿಕೊಂಡಿದ್ದ ಅಪರಾಧಕ್ಕೆ ಆ ಹಣವನ್ನು ಭಾವ<noinclude></noinclude>
l7bhej1ke8deixfnqzpj295wfez2j8t
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೮೯
104
66296
321546
204372
2026-05-21T04:47:01Z
Pragathi. BH
7585
/* Proofread */
321546
proofread-page
text/x-wiki
<noinclude><pagequality level="3" user="Pragathi. BH" /></noinclude>ಆ ಯುರ್ವೇ ದ ಸಾ ರ
ಪ್ರಥಮ ಭಾಗ<noinclude></noinclude>
8498c4av98e6gg6lo401voompx3wp8e
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೯೦
104
66297
321547
204373
2026-05-21T04:47:16Z
Pragathi. BH
7585
/* Problematic */
321547
proofread-page
text/x-wiki
<noinclude><pagequality level="2" user="Pragathi. BH" /></noinclude><noinclude></noinclude>
bwx7vy3yq76e42nn5g2d35lybeh2fe1
321548
321547
2026-05-21T04:47:29Z
Pragathi. BH
7585
/* Without text */
321548
proofread-page
text/x-wiki
<noinclude><pagequality level="0" user="Pragathi. BH" /></noinclude><noinclude></noinclude>
4gl9xhymplktzzqjyrslkxbe03b704i
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೯೧
104
66298
321566
204374
2026-05-21T05:30:59Z
Pragathi. BH
7585
/* ಪರಿಶೀಲಿಸಲಾಗಿಲ್ಲ */
321566
proofread-page
text/x-wiki
<noinclude><pagequality level="1" user="Pragathi. BH" /></noinclude>ಆಯುರ್ವೆದ ಸಾರ
ಪ್ರಥಮ ಭಾಗ. (ಸೂತ್ರ, ಶರೀರ, ವಿಮಾನ, ಇಂದ್ರಿಯ ಮತ್ತು ಸಿದ್ಧಿಸ್ವಾನಗಳು )
|| ಶ್ರೀ ಗುರುಭ್ಯೋ ನಮಃ || ನಮೋ ನೃಸಿಂಹದೇವಾಯ ಜನಾನಾಂ ಸುಖಹೇತವೇ |
ಯಃ ಪ್ರೀತಃಸ್ಕಾನಮಾನೇನ ಯತ್ನೇನ ರಮಯಾ ಸಹ || ಬುದ್ದಿ ದಶ ಮರುತ್ಸು ವಿಹಾರೀ ಗಜಾನನಃ | ಧನ್ವಂತರಿಶ್ವ ಜ್ಞಾನಾಯ ಪ್ರಸನ್ನಾಸ್ಸಂತು ಮೇ ಧ್ರುವಂ ||
I ನೇ ಅಧ್ಯಾಯ.
ಆರೋಗ್ಯವ್ರಶಂನಾ. 1 ಇಹ ಖಲು ಪುರುಷಣಾನುಪಹತಸತ್ತ ಬುದ್ದಿಪೌರುಷ ಪರಾಕ್ರಮೇಣ ಹಿತ
ಮಹ ಚಾಮುಸ್ಮಿಂಶ್ಚ ಲೋಕೇ ಸಮನುವಶ್ಯತಾ ತಿಸ್ರ ಏಷಣಾ ಪರ್ಯೇ
ಷ್ಟವ್ಯಾ ಭವಂತಿ (ಚ 55 ) . ಇಹಲೋಕದ ಮತ್ತು ಪರಲೋಕದ ಹಿತದ ಕಡೆಗೆ ದೃಷ್ಟಿಯುಳ್ಳ ಪುರುಷನು ಸತ್ಯ. ಬುದ್ದಿ -ಪೌರುಷ- ಪರಾಕ್ರಮಗಳು ಕುಂದದಿರುವಾಗ ಮೂರು ಬಯಕೆಗಳನ್ನು ಬಯಸತಕ್ಕದ್ದು
ತದ್ಧ ಧಾ - ಪ್ರಾಣೈಷಣಾ-ಧನ್ವೆಷಣಾ-ಪರಲೋಕೈಷಣೇತಿ | ಆಸಾಂ ತು ಖಲ್ವೇಷಣಾನಾಂ ಪ್ರಾಣೈಷಣಾಂ ತಾವತ್ ಪೂರ್ವತರಮಾಪದ್ಯೆತ್ |
ಕಸ್ಮಾತ್ ಪ್ರಾಣತ್ಯಾಗೇ ಹಿ ಸರ್ವತ್ಯಾಗಃ | (ಚ 55 ) ಅವು ಯಾವವೆಂದರೆ - ಪ್ರಾಣಾಪೇಕ್ಷೆ-ಧನಾಪೇಕ್ಷೆ-ಪರಲೋಕಾಪೇಕ್ಷೆ, ಇವುಗಳಲ್ಲಿ ಪ್ರಾಣಾಪೇಕ್ಷೆಯನ್ನು ಮುಂದಾಗಿ ಪೂರೈಸಿಕೊಳ್ಳಬೇಕು. ಯಾಕೆಂದರೆ ಪ್ರಾಣತ್ಯಾಗವಾದಲ್ಲಿ ಸರ್ವತ್ಯಾಗವಾಗುತ್ತದೆ.
2. ಸರ್ವಮತ ನರಿತ್ಯಜ್ಯ ಶರೀರಮನುವಾಲಯೇತ್ ||
ತದಭಾವೇ ಹಿ ಭಾವಾನಾಂ ಸರ್ವಾಭಾವಶರೀರಿಣಾಂ || (ಚ. 225 )<noinclude></noinclude>
j2u2fpzby7x475cxafhn0zka0hx0dvw
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೨೯
104
66951
321486
166285
2026-05-20T17:53:06Z
Pragathi. BH
7585
/* Validated */
321486
proofread-page
text/x-wiki
<noinclude><pagequality level="4" user="Pragathi. BH" /></noinclude>೩೯{{RunningHeader|center=ದ್ವಿತೀಯಾಶ್ವಾಸಂ}}
<poem>
ಕಂ||ಸಂಹರಿಸಿ ರಿಪು ಮದದ್ವಿಪ
ಸಂಹತಿಯಂ ಬೀರಸಿರಿಗೆ ವಲ್ಲಭನಾದಂ
ಸಿ೦ಹ ಪರಾಕ್ರಮನೆನಿಸಿದ
ಸಿಂಹರಥಂ ಸಾರ್ವಭೌಮವಿಭವ ಸನಾಥಂ{{gap}}{{gap}}||೬೧||
ಆ ಸಿಂಹರಥನ ಸುತನಯೋಧ್ಯಾಸಿಂಹಾಸನಮನಲಂಕರಿಸಿ--
ಕಂ || ಒರ್ವನೆ ಧನ್ವಿಯೆನಲ್ ಸಕ
ಲೋರ್ವರೆಯಂ ಕಾದು ತನ್ನ ಬಾಣದ ಮೊನೆಯೊಳ್||
ಮಾರ್ವಲಮಂ ತವಿಸಿದನೆನೆ
ದೋರ್ವಲಮೇಂ ಬ್ರಹ್ಮರಥನೊಳ ವಿತಥಮಾಯ್ತೋ{{gap}}{{gap}}||೬೨||
ತತ್ತನಯಂ--
ಕಂ||ಸಮರ ಮುಖದೊಳ್ ವಿರೋಧಿ
ಪ್ರಮುಖರನೆಯ್ದಿಸೆ ಶಿಲೀಮು_೦ ಯಮ ಮುಖಮಂ
ಕ್ಷಮೆಯಂ ತಳೆದಂ ಚಾಪಾ
ಗಮ ಚತುರ ಚತುರ್ಮುಖಂ ಚತುರ್ಮುಖನೆಂಬಂ{{gap}}{{gap}}||೬೩||
ಭೂಮಂಡಲನುಂ ತಳೆದಂ
<sup>೧</sup>ಕ್ಷೇಮಾಸ್ಪದಮಾಗೆ ನಾಮಮಹಿಮೋನ್ನತಿಯಿಂ||
ಹೇಮಾಚಲಮಂ ಮೆಚ್ಚಂ,
ಹೇಮರಥಂ ಶ್ರುತಿಮುಖಂ ಚತುರ್ಮುಖತನಯಂ{{gap}}{{gap}}||೬೪||
ಆ ರಾಜಸುತಂ ಕೀರ್ತಿ ಸು
ಧಾರಸದಿಂ ತಣ್ಪುವಡೆದು ಪರಿಪೂರ್ಣಕಲಾ||
ಧಾರಂ ಸಕಲೇಂದುರಥಂ
ವೈರಿ ಮನೋರಥ ರಥಾಂಗಮಂ ವಿಘಟಿಸಿದಂ{{gap}}{{gap}}||೬೫||
ಆ ಮಹೀಭುಜನ ತನೂಭವಂ---
ಕಂ|| ತೇಜಂ ಪುದುವಿಲ್ಲೆನಿಸಿ ವಿ
ರಾಜಿಸೆ ಪರರಾಜಮಂಡಲಂ ತನ್ನಿಂ ನಿ||
ಸ್ತೇಜಂ ಬೆತ್ತಿರೆ ಬೆಳಗಿದ
ನೀ ಜಗಮಂ ಭಾನುವೆಂಬಿನಂ ಭಾನುರಥಂ{{gap}}{{gap}}||೬೬||
---------------------------------------------------------------------------
೧. ಪ್ರೇಮಾ. ಕ. ಖ. ಚ.
</poem><noinclude></noinclude>
f0w4m9mzeqxt0gnema4s9v9ztdjw3qf
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೦
104
66972
321527
166363
2026-05-21T03:24:11Z
Pragathi. BH
7585
/* Validated */
321527
proofread-page
text/x-wiki
<noinclude><pagequality level="4" user="Pragathi. BH" /></noinclude>೬೦{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಕ೦|| ವ್ಯವಹಾರ ಮಂಗಳಾಚಾ
ರವೆಲ್ಲವಂ ತೀರ್ಚಿ ಮುಖ್ಯ ಮಾಂಗಲ್ಯಮನಾ||
ಯುವತಿ ಜಿನಪೂಜೆಯಂ ಮಾ
ಡಿ ವಿಚಿತ್ರಮೆನಿಪ್ಪ ಚಿತ್ರಶಾಲೆಗೆ ಬಂದಳ್{{gap}}{{gap}}||೮೩||
{{gap}}ಅಂತು ಬಂದು ಮರಕತಮಣಿ ವೇದಿಕೆಯ ನಡುವಣ ಚೆಂಬೊನ್ನ ಪಟ್ಟವಣೆಯ
ಮೇಲೆ ರೋಹಣನಗ ನಿತಂಬದೊಳ್ಪೊಳೆವ ರತ್ನ <sup>೧</sup>ಶಲಾಕೆಯಂತೆ ನಿಜಶರೀರ ಕಾಂತಿ ಪಸರಿಸೆ ಕುಳ್ಳಿರ್ಪುದುಂ, ಆಗಳುಭಯಪಾರ್ಶ್ವದೊಳಂ ಚಾಮರಗ್ರಾಹಿಣಿಯರ್ಕಳ್
ಕಾಶ ಕಣಿಶಂಗಳಿಂದೆಸೆವ ಶರಲ್ಲಕ್ಷ್ಮಿಯಂ ನೆನೆಯಿಸೆ ಕುಂಚದಡಪದ ಡವಕೆಯ ಕನ್ನ
ಡಿಯ ಪರಿಚಾರಿಕೆಯರ್ ಕುಸುಮಶರ ವಶೀಕರಣ ಮಂತ್ರಾಧಿದೇವತೆಯ ಪರಿವಾರ
ದೇವತೆಯರೆನಿಸೆ--
ಕಂ|| ಕರ ಕಿಸಲಯ ರುಚಿಯಿಂದಂ
ಪರಭಾಗಂಬಡೆದು ರಾಗಮಂ ಬೀರುವಿನ೦||
ಚರಣ ಮಣಿವಲಯ,ಮಣಿನೂ
ಪುರಮಂ ನೃಪವಧುಗೆ ತುಡಿಸಿದಳ್ ಮತ್ತೋರ್ವಳ್{{gap}}||೮೪||
ಗೆಲೆವಂದುವಲರ್ದ ಕರ್ನೆ
ಯ್ದಿಲ ಪೂಗಳ ಚೆಲ್ವನೀಗಳೆನೆ ಕೆನ್ನೆಗಳಾ||
ದಲೆಗೆಯ್ದಿದ ಚೆನ್ನೆಯ ಕ
ಣ್ಮಲರೊಳ್ ಕಾಡಿಗೆಯನೆಚ್ಚಿದಳ್ ಮತ್ತೊರ್ವಳ್{{gap}}||೮೫||
ಅಂಬುಜದ ಬಂಡನುಣ್ಬೆಳ
ದುಂಬಿಯನಜನಿಸೆ ಮನೋಜ ಗಜಗಮನೆಯ ವ||
ಕ್ತ್ರಾಂಬುಜದೊಳ್ ಮತ್ತೋರ್ವಳ್
ಬಿಂಬಾಧರೆ ಮೃಗಮದಾಂಬು ತಿಲಕಮನಿಟ್ಟಲ್{{gap}}||೮೬||
ತೊಳಗುವವತಂಸ ಮುಕ್ತಾ
ಫಳ ರುಚಿಯೊಳ್ ಕೆಲದ ಕನ್ನೆಯರ ನಗೆಗಣ್ಗಳ್||
ಪೊಳೆದುವು ಪೊಸವೆಳ್ದಿಂಗಳ
ಬಳಸಿಂಗೊಳಗಾದ ಚಳ ಚಕೋರಂಗಳವೋಲ್{{gap}}||೮೭||
----------------------------------------------------------------------------
೧ ಮಾಲೆಯಂತೆ, ಕ, ಖ, ಚ.
</poem><noinclude></noinclude>
lmqyy9lfkwpc76txcoavk4gl2xz672s
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೪
104
66976
321529
166370
2026-05-21T03:58:34Z
Pragathi. BH
7585
/* Validated */
321529
proofread-page
text/x-wiki
<noinclude><pagequality level="4" user="Pragathi. BH" /></noinclude>೬೪{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಉ|| ಹಾರಮನಿಕ್ಕಿ ಮಿಕ್ಕ ಕನಕಾಭರಣಂಗಳ ಬಿಣ್ಪನೇನುಮಂ|
ಸೈರಿಸದಿರ್ಪುದಪ್ಪುದೆ ವಲಂ ಕನಕಾದ್ರಿಯ ಬಿಣ್ಪನಪ್ಪೊಡಂ||
ಸೈರಿಸದರ್ಭಕಂ ಬಳೆಯೆ ಗರ್ಭಸರೋಜದೊಳಾ ವಿನೀಳ|
ನೀರೇರುಹನೇತ್ರೆ ತತ್ಕನಕಮಾತ್ರದ ಬಿಣ್ಣನದೇಕೆ ಸೈರಿಪಳ್{{gap}}{{gap}}||೧೦೫||
ಚ|| ತನು ತನುವಾದ ಗರ್ಭಿಣಿಗೆ ತತ್ಸಮಯೋಚಿತ ಮಂಗಳ ಪ್ರಸಾ|
ಧನಮೆಸೆದತ್ತು ಕಪ್ಪುರದ ಕಂಠಿಕೆ ಬಣ್ಣದ ಸಣ್ಣಮಾಲೆ ತೆಂ||
ಗಿನ ತಿರುಳೋಲೆ ತಾವರೆಯನೂಲುಡೆನೂಲ್ ಸಿರಿಕಂಡದಣ್ಪು ಮು
ತ್ತಿನ ತಿಸರಂ ಮೃಣಾಳಿಕೆಯ ಮುದ್ರಿಕೆ ಪೂವಿನ ಪಿಂಡುಗಂಕಣಂ{{gap}}||೧೦೬||
ಘನಕುಚೆ ಮೇಳದಂಗನೆಯ ಮೇಲೆ ಮಲಂಗಿ ಸರೋಜಪತ್ರ ವೀ।
ಜನಪವನಂ ವಿಕಾಸಮನೊಡರ್ಚೆ ಮನಕ್ಕೆ ಸುಧಾಪ್ರವಾಹಮೆಂ||
ಬಿನಮೆರಡುಂ ಕೆಲಂಬಿಡಿದು ಬಾಜಿಪ ವಾದ್ಯದಿನೋಜೆವೆತ್ತ ಗಾ|
ಯನಿಯರ ಸೀಯನಪ್ಪ ರಸಗೇಯಮನಾಲಿಸುತಿರ್ಪಳೊರ್ಮೆಯುಂ{{gap}}||೧೦೭||
ಉ|| ಸೋರ್ಮುಡಿ ಮಾಲೆಯಿಂ ಕದಪುಗಳ್ ಮಲಯೋದ್ಭವ ಪತ್ರಭಂಗದಿಂ|
ಪೆರ್ಮೊಲೆ ಹಾರದಿಂದೆಸೆಯೆ, ಬಂಬಲಬಾಡಿದ ರೂಪು ಗಾಡಿಯಂ||
ನೂರ್ಮಡಿ ಮಾಡೆ ಮೇಳದವಳ೦ ಸತಿ ನಿರ್ಭರ ಗರ್ಭಧಾರದಿಂ|
ನೆರ್ಮಿ ನಿಮಿರ್ಚ್ಚುವಳ್ ಪುರುಳಿಯೊ ಳ್ ಪರಿಹಾಸ ವಚೋವಿಲಾಸಮಂ||೧೦೮||
ಅ೦ತು ವಿವಿಧವಿಲಾಸಂಗಳಿ೦ ದಿವಸ೦ಗಳಭಿಲಷಿತ ಫಲಪ್ರಸವಂಗಳಾಗೆ ಸುಖ
ಪ್ರಸವ ಸಮಯದೊಳ್--
ಕಂ|| ಉರ್ವರೆ ಮಣಿಪರ್ವತಮಂ
ಶಾರ್ವರಿ ಪರಿಪೂರ್ಣಚಂದ್ರನಂ ಪಡೆವಂತಂ||
ತರ್ವತ್ನಿ ಸರ್ವಲಕ್ಷಣ
ಸರ್ವಗುಣಾನ್ವಿತನೆನಿಪ್ಪ ಸುತನಂ ಪಡೆದಳ್{{gap}}{{gap}}{{gap}}||೧೦೯||
ನೀರಜಮಾದುದು ಮೇದಿನಿ;
ನೀರಜಮೀತನ ಚರಿತ್ರಮೆಂದರಿಪುವವೋಲ್||
ನೀರಚ್ಛಮಾದುದೀ ವಸು
ಧಾರಮಣಂ ಸ್ವಚ್ಛಹೃದಯನೆಂದರಿಪುವವೋಲ್
</poem><noinclude></noinclude>
23d6oopoyrq0bdvwh25iv0hgaqlt655
321530
321529
2026-05-21T03:59:20Z
Pragathi. BH
7585
321530
proofread-page
text/x-wiki
<noinclude><pagequality level="4" user="Pragathi. BH" />{{rh|center=ರಾಮಚಂದ್ರಚರಿತಪುರಾಣಂ|left=೬೪|right=}}</noinclude>
<poem>
ಉ|| ಹಾರಮನಿಕ್ಕಿ ಮಿಕ್ಕ ಕನಕಾಭರಣಂಗಳ ಬಿಣ್ಪನೇನುಮಂ|
ಸೈರಿಸದಿರ್ಪುದಪ್ಪುದೆ ವಲಂ ಕನಕಾದ್ರಿಯ ಬಿಣ್ಪನಪ್ಪೊಡಂ||
ಸೈರಿಸದರ್ಭಕಂ ಬಳೆಯೆ ಗರ್ಭಸರೋಜದೊಳಾ ವಿನೀಳ|
ನೀರೇರುಹನೇತ್ರೆ ತತ್ಕನಕಮಾತ್ರದ ಬಿಣ್ಣನದೇಕೆ ಸೈರಿಪಳ್{{gap}}{{gap}}||೧೦೫||
ಚ|| ತನು ತನುವಾದ ಗರ್ಭಿಣಿಗೆ ತತ್ಸಮಯೋಚಿತ ಮಂಗಳ ಪ್ರಸಾ|
ಧನಮೆಸೆದತ್ತು ಕಪ್ಪುರದ ಕಂಠಿಕೆ ಬಣ್ಣದ ಸಣ್ಣಮಾಲೆ ತೆಂ||
ಗಿನ ತಿರುಳೋಲೆ ತಾವರೆಯನೂಲುಡೆನೂಲ್ ಸಿರಿಕಂಡದಣ್ಪು ಮು
ತ್ತಿನ ತಿಸರಂ ಮೃಣಾಳಿಕೆಯ ಮುದ್ರಿಕೆ ಪೂವಿನ ಪಿಂಡುಗಂಕಣಂ{{gap}}||೧೦೬||
ಘನಕುಚೆ ಮೇಳದಂಗನೆಯ ಮೇಲೆ ಮಲಂಗಿ ಸರೋಜಪತ್ರ ವೀ।
ಜನಪವನಂ ವಿಕಾಸಮನೊಡರ್ಚೆ ಮನಕ್ಕೆ ಸುಧಾಪ್ರವಾಹಮೆಂ||
ಬಿನಮೆರಡುಂ ಕೆಲಂಬಿಡಿದು ಬಾಜಿಪ ವಾದ್ಯದಿನೋಜೆವೆತ್ತ ಗಾ|
ಯನಿಯರ ಸೀಯನಪ್ಪ ರಸಗೇಯಮನಾಲಿಸುತಿರ್ಪಳೊರ್ಮೆಯುಂ{{gap}}||೧೦೭||
ಉ|| ಸೋರ್ಮುಡಿ ಮಾಲೆಯಿಂ ಕದಪುಗಳ್ ಮಲಯೋದ್ಭವ ಪತ್ರಭಂಗದಿಂ|
ಪೆರ್ಮೊಲೆ ಹಾರದಿಂದೆಸೆಯೆ, ಬಂಬಲಬಾಡಿದ ರೂಪು ಗಾಡಿಯಂ||
ನೂರ್ಮಡಿ ಮಾಡೆ ಮೇಳದವಳ೦ ಸತಿ ನಿರ್ಭರ ಗರ್ಭಧಾರದಿಂ|
ನೆರ್ಮಿ ನಿಮಿರ್ಚ್ಚುವಳ್ ಪುರುಳಿಯೊ ಳ್ ಪರಿಹಾಸ ವಚೋವಿಲಾಸಮಂ||೧೦೮||
ಅ೦ತು ವಿವಿಧವಿಲಾಸಂಗಳಿ೦ ದಿವಸ೦ಗಳಭಿಲಷಿತ ಫಲಪ್ರಸವಂಗಳಾಗೆ ಸುಖ
ಪ್ರಸವ ಸಮಯದೊಳ್--
ಕಂ|| ಉರ್ವರೆ ಮಣಿಪರ್ವತಮಂ
ಶಾರ್ವರಿ ಪರಿಪೂರ್ಣಚಂದ್ರನಂ ಪಡೆವಂತಂ||
ತರ್ವತ್ನಿ ಸರ್ವಲಕ್ಷಣ
ಸರ್ವಗುಣಾನ್ವಿತನೆನಿಪ್ಪ ಸುತನಂ ಪಡೆದಳ್{{gap}}{{gap}}{{gap}}||೧೦೯||
ನೀರಜಮಾದುದು ಮೇದಿನಿ;
ನೀರಜಮೀತನ ಚರಿತ್ರಮೆಂದರಿಪುವವೋಲ್||
ನೀರಚ್ಛಮಾದುದೀ ವಸು
ಧಾರಮಣಂ ಸ್ವಚ್ಛಹೃದಯನೆಂದರಿಪುವವೋಲ್
</poem><noinclude></noinclude>
3ukypcqukjqqsgeow9bxoravu8e23z9
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೫
104
66977
321531
166372
2026-05-21T04:00:30Z
Pragathi. BH
7585
/* Validated */
321531
proofread-page
text/x-wiki
<noinclude><pagequality level="4" user="Pragathi. BH" />{{rh|center=ತೃತಿಯಾಶ್ವಾಸಂ|left=|right=೩೫}}</noinclude>
<poem>
ಕ೦|| ಉದಯಿಸಿದ ತನೂಜನ ತೇ
ಜದೊಳೇನುಂ ಮಲಿನಭಾವ ಲಾಂಛನ ಮಿಲ್ಲೆ೦||
ಬುದನರಿಪುವಂತೆ ಪೊಗೆಯಿ
ಲ್ಲದೆ ಪೊಣ್ಮಿತ್ತಗ್ನಿ ದಕ್ಷಿಣಾವರ್ತಮುಖಂ{{gap}}{{gap}}||೧೧೧||
ಈ ತನಯನೆ ಸಕಲೋತ್ಸವ
ಹೇತು ಜಗತ್ತಾಪ ಶಮನನೆಂದರಿಪುವವೋಲ್||
ಶೀತಲ ಸಮೀರನೆಸಗಿ
ತ್ತಾತನ ಜಸದಂತೆ ವಿಶದವಾಯ್ತಾಕಾಶಂ||{{gap}}{{gap}}||೧೧೨||
ಎಳವಿಸಿಲುಂ ಬೆಳ್ದಿಂಗಳು
ಮೇಳಸಿದುವೆನೆ ರಮ್ಯ ಹರ್ಮ್ಯಶಿಖರ ಸ್ಥಳಿಯೊಳ್||
ಪೊಳೆದುವು ಪೊಂಗಳಸಂಗಳ
ಪೊಳೆಪುಂ ಕೇತನ ದುಕೂಲ ಚೇಲಾಂಚಲಮುಂ{{gap}}{{gap}}||೧೧೩||
ಅವಿರಳಮೆನೆ ಪೂವಲಿ ಪುದಿ
ದುವು|ಗುಡಿಯುಂ ತೋರಣಂಗಳುಂ ತಳ್ತುವು ಬ||
ದ್ದವಣಂ ಬಾಜಿಸಿದುವು ವೀ
ಧಿವೀಧಿಯೊಳ್ ಕೇರಿಕೇರಿಯೊಳ್ ಮನೆಮನೆಯೊಳ್{{gap}}{{gap}}||೧೧೪||
ಉ|| ರಾಗದ ಬಳ್ಳವಳ್ಳಿಯೆನೆ ರನ್ನದ ತೋರಣಮಾಲೆ ಕೂಡೆ ಚೆ|
ಲ್ಯಾಗಿರೆ ದಾನಮೇಘ ರುತಿಯ೦ತಿರೆ ಮಂಗಳ ಶೂರ್ಯನಾದಮಾ||
ಶಾಗಜ ಕರ್ಣಪೂರಮೆನೆರಾಗ ರಸಾಮೃತವಾಧಿ ಘೋಷದಂ||
ತಾಗಿರೆ ಪುಣ್ಯಪಾಠಕ ರವಂ ಪೊಸತಾದುದು ರಾಜಮಂದಿರಂ{{gap}}||೧೧೫||
ದೇಸಿ ವಿಲಾಸಮಂ ಪಡೆಯೆ ಗೊಂದಳವಕ್ಕಣವಾಗಳಾ ನೃಪಾ|
ವಾಸದೊಳಾಡಿದತ್ತೆಸೆಯೆ ಪಾಣಿತಲಂ ಪಡೆವಂತೆ ಕುಂಕುಮ||
ಸ್ಥಾಸಕಮಂ ಕುರುಳ್, ಕೆದರುವಂತೆ ತಮಾಲ ನವ ಪ್ರವಾಳಮಂ|
ಕೇಸಡಿ ಪಾಸುವಂತೆ ತಳಿರ೦ ನಗೆಗಣ್ಣುಗುಳ್ವಂತೆ ನೆಯ್ದಿಲಂ{{gap}}||೧೧೬||
ಚ|| ಉದಯಿಪುದುಂ ತ್ರಿಲೋಕತಿಲಕಂಗೃಹದೇವತೆಯರ್ ಪ್ರಸನ್ನವೇ|
ಹದಿನೆಸೆದಾಡುವಂತೆ ಮಣಿಭಿತ್ತಿಗಳಂ ಮಣಿ ಕುಟ್ಟಿ ಮಂಗಳಂ||
ಪುದಿದು ಮನಕ್ಕೆ ಸಂತಸವನಿತ್ತುವು ನೃತ್ಯರಸಾಮೃತ ಪ್ರವಾ||
ಹದೊಳವಗಾಹಮಿರ್ದ ಗಣಿಕಾಪ್ರಚಯ ಪ್ರತಿಬಿಂಬ ಲಕ್ಷ್ಮಿಗಳ್{{gap}}||೧೧೭||
</poem><noinclude></noinclude>
8sdxk50b1hc6xhezs1j4zj6r532gonb
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೬
104
66978
321532
166373
2026-05-21T04:01:44Z
Pragathi. BH
7585
/* Validated */
321532
proofread-page
text/x-wiki
<noinclude><pagequality level="4" user="Pragathi. BH" />{{rh|center=ರಾಮಚಂದ್ರಚರಿತಪುರಾಣಂ|left=೬೬|right=}}</noinclude>
<poem>
ಆ ಪ್ರಸ್ತಾವದೊಳ್ ದಶರಥಮಹೀನಾಥಂ ಸುತಮುಖ ನಿರೀಕ್ಷಣ ಭರದಿಂ
ಪಾರಿಜಾತಂ ಕೊರಕಿತಮಾದಂತೆ ಪುಲಕಿತಶರೀರನಾಗಿ---
ಮ|| ಜಿನ ಪೂಜೋತ್ಸವಮಂ ಸುರೇಂದ್ರನಳವಲ್ತೆಂಬನ್ನೆಗಂ ಮಾಡಿ ಬೇ|
ಳ್ಪನಿತಂ ಬೇಳ್ಪವರ್ಗಿತ್ತು ಕಲ್ಪಕುಜನಂ ಕೀಳ್ಮಾಡಿ ಸನ್ಮಾನಭಾ||
ಜನರಂ ಸಜ್ಜನರಂ ವಿಚಿತ್ರ ವಸನ ಸ್ರಗ್ಭೂಷಣಾಲೇಪದಿಂ|
ಜನಪಂ ಮನ್ನಣೆಮಾಡಿ ತತನಯ ಜನ್ಮೋತ್ಸಾಹಮಂ ಮಾಡಿದಂ{{gap}}||೧೧೮||
ಚ|| ದಿವಿಜ ಕುಜ೦ಗಳಾರವೆಗಳಾದುವು ಸಿದ್ಧರಸಂ ತಟಾಕಮಾ|
ದುವು ಸುರಧೇನು ಪಿಂಡಳಿಯದೊ೦ದೆಡೆಯೊಳ್ ನೆರೆದಿರ್ದುವೆಂಬಿನಂ||
ಭುವನ ಜನಕ್ಕೆ ಬಾಂಧವ ಜನಕ್ಕಖಿಲಾರ್ಥಿಜನಕ್ಕೆ ಹರ್ಷದಿ೦||
ದವರಿವರೆನ್ನದಿತ್ತು ಮೆಳೆದಂ ಜನಸಂ ಸುತ ಜಾತಕರ್ಮಮಂ{{gap}}{{gap}}||೧೧೯||
ಅಂತು ಜಾತಕರ್ಮೋತ್ಸವಮಂ ಮಾಡಿ ದಶಮದಿನದೊಳ್ ಪದ್ಮಾಲಂಕೃತ ವಿಶಾಲವಕ್ಷಸ್ಸ್ಥಲನಪ್ಪುದರಿ೦ ಪದ್ಮನುಂ, ಸಕಲ ಶುಭ ಲಕ್ಷಣಾಭಿರಾಮನಪ್ಪುದರಿಂ ರಾಮಚಂದ್ರನುಮೆಂದಿವು ಮೊದಲಾಗೆ ಪೆಳವುಮನ್ವರ್ಥನಾಮಂಗಳನಿಟ್ಟು ಕತಿಪಯ
ದಿನಂಗಳೊಳ್--
ಕಂ|| ರವಿಕಿರಣಂ ಸೋಂಕದೆ ಹಾ
ಸ ವಿಲಾಸಂಬಡೆದ ಕಮಲಮಂ ನೆನೆಯಿಸುಗುಂ
ನೆವಮಿಲ್ಲದ ನಗೆಯಿಂದೊ
ಪ್ಪುವಾಸ್ಯಮುತ್ತಾನಶಯ್ಯೆಯೊಳ್ ಬಾಲಕನಾ{{gap}}{{gap}}{{gap}}||೧೨೦||
ನಿರಪೇಕ್ಷಕಮೆನಿಸಿಯುಮೇಂ
ಪರಿದತ್ತಲೆ ಪರಿವ ಸುತನ ಕಣ್ಬೊಳಪಿಂದಂ||
ತೆರೆಮಸಗಿದುದರಸಿಯ ಮೋ
ಹ ರಸಂ ಚಂದ್ರಿಕೆಯ್ದಿನಮೃತ ಜಲರಾಶಿಯವೋಲ್{{gap}}{{gap}}||೧೨೧||
ಹ ರಿನೀಲೋಪಲ ವಿರಚಿತ
ಮರಳೆಲೆ ಬಾಲಕನ ನಿಟಿಲದೊಳ್ ನಯನ ಮನೋ|
ಹರಮಾದುದರ್ಧಚಂದ್ರೋ
ದರದೊಳ್ ಕಣ್ಗೊಳಿಸಿ ತೋರ್ಪ ಕರ್ಪೆ೦ಬಿನೆಗಂ{{gap}}{{gap}}||೧೨೨||
</poem><noinclude></noinclude>
bxhfy5jbj0zyosb4u2kk1j36w1om34s
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೭
104
66979
321533
166206
2026-05-21T04:02:28Z
Pragathi. BH
7585
/* Validated */
321533
proofread-page
text/x-wiki
<noinclude><pagequality level="4" user="Pragathi. BH" />{{Right|೬೭}}</noinclude>{{RunningHeader|center=ತೃತಿಯಾಶ್ವಾಸಂ}}
<poem>
ಕಂ|| ಅರುಣಮಣಿ ಕರ್ಣಭೂಷಣ
ಮರೀಚಿ <sup>೧</sup>ಪಸರಿಸಿದ ರಾಮಚಂದ್ರ ಶರೀರ೦||
ಪರಿಭವಿಸಿದುದೆಳವಿಸಿಲಾ
ವರಿಸಿದ ಕಮನೀಯ ಪುಂಡರೀಕ ಶ್ರೀಯಂ{{gap}}{{gap}}{{gap}}||೧೨೩||
ಅರಸಿಯ ಮನದೊಳ್ ಕೆಂಜಡೆ
ದೊರೆಕೊಳಿಸುವುದುಚಿತಮೊಡನೆ ಕಜ್ಜಲರುಚಿಯೊಳ್||
ಪೊರೆದ ನಯನೋತ್ಪಲಂಗಳ್
ದೊರೆಕೊಳಿಪುದು ಚಿತ್ರಮಲ್ತೆ ರಾಗೋತ್ಸವಮಂ{{gap}}{{gap}}||೧೨೪||
ಧಾತ್ರಿಯೊಳನ್ಯರ ತೇಜೋ
ಮಾತ್ರಮನಾಂ <sup>೨</sup>ಸಲ್ಲಿಸೆನೆಂಬ ತೆರದಿಂ ಪೊಯ್ಯಲ್||
ಧಾತ್ರಿಯ ಕಯ್ಯಿಂ ನಿಮಿರ್ವ೦
ಕ್ಷತ್ರಶಿಖಾಮಣಿ ಮಣಿಪ್ರದೀಪಾಂಕುರಮಂ{{gap}}{{gap}}||೧೨೫||
ಕಿವಿಗಿನಿದೆನಿಪ್ಪ ವೀಣಾ
ರವದೊಳನಾದರಮನುಂಟುಮಾಡಿತು ತನೂ||
ಭವನ ತಳರ್ನಡೆಯೊಳ್ ಪೊ
ಣ್ಮುವ ಮೃದುಪದ ಕನಕ ಕಿಂಕಿಣೀ ಝಣರುಣಿತ೦{{gap}}{{gap}}||೧೨೬||
ಶ್ರವಣಕ್ಕರ್ಥವ್ಯಕ್ತಿಯ
ನವಟಯಿಸದೆ ನೆಗಳ್ವಿ ವಶ್ಯಮಂತ್ರಾಕ್ಷರದಂ||
ತೆವೊಲೆಲ್ಲರುಮಂ ಸೋಲಿಸಿ
ದುವು <sup>೩</sup>ತೊದಲಂನುಡಿವ ರಾಮಚಂದ್ರನ ನುಡಿಗಳ್{{gap}}||೧೨೭||
ತಿಳಿಗೊಳದೊಳಗೆಡೆಯಾಡುವ
ಕಳಹಂಸನ ಬಾಲಕೇಳಿ ಪುದುವೆನೆ ಮಧುಪಾ||
ಟಳನೇತ್ರಂ ಧವಳಾಂಗಂ
ಪಳಿಕಿನ ಕುಟ್ಟಿಮದಮೇಲೆ ದಟ್ಟಡಿಯಿಟ್ಟಂ{{gap}}{{gap}}||೧೨೮||
--------------------------------------------------------------------------
೧. ಪರಿಕಲಿಸೆ, ಚ,
೨. ಸಹಿಸೆ, ಘ.
೩. ತೂದಳೊಳ್ಪುದಿನ. ಗ. ಫ.
</poem><noinclude></noinclude>
4fe03c4o1637mfkkxqmlyk1nf1r0fdg
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೮
104
66980
321534
166202
2026-05-21T04:03:11Z
Pragathi. BH
7585
/* Validated */
321534
proofread-page
text/x-wiki
<noinclude><pagequality level="4" user="Pragathi. BH" /></noinclude>{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ನಡೆಗಲ್ವಂದುಂ ಬಣ್ಣಿ೦
ಕೊಡೆ ನೆಗೆದಪುದುರ್ವಿಯೆಂದು ವಾಸುಗಿ ಪಲವು೦||
ಹೆಡೆಯಂ ಶಿಶುನಡೆವೆಡೆಯೊಳ್|
ಪಡೆದಾಂತು ಸಹಸ್ರಫಣನೆನಲ್ ಪೆಸರ್ವಡೆದಂ{{gap}}{{gap}}||೧೯೬||
ಮಣಿಯೇರಂ ಚೆಂಬೊನ್ನುಡೆ
ಮಣಿಯುಲಿಗೆಲೆ ಗೆಲ್ಲ ನಂಗರುಚಿಯಿಂದೈರಾ
ವಣಮಂ ಕುಮಾರ ಚೂಡಾ
ಮಣಿ ಲಾಲಾಜಲದೊಳಂ ಚತುರ್ದ೦ತದೊಳಂ{{gap}}{{gap}}||೧೩೦||
ಅಮೃತಾಂಶು ಪೆರ್ಚೆ ಪೆರ್ಚುವ
ಸಮುದ್ರಮೆಂತಂತೆ ರಾಮಚಂದ್ರಂ ದಿವಸ||
ಕ್ರಮದಿನಭಿವೃದ್ಧಿವೆತ್ತಾ
ಕ್ರಮಿಸಿದನತಿಮುಗ್ಧಭಾವಮಂ ಶೈಶವಮಂ{{gap}}{{gap}}||೧೩೧||
ಅ೦ತು ರಾಮಚಂದ್ರನಾದಿತ್ಯನಂತೆ ನಿತ್ಯೋದಯಮನಪ್ಪುಕೆಯ್ವುದುಂ--
ಕಂ|| ಬಾಲತ್ವದೊಳಮುದಾತ್ತ ಗು
ಣಾಲಯಮೆನಿಸಿದ ತನೂಜ ಮುಖಚಂದ್ರಮನಂ||
ಲೀಲೆಯಿನೀಕ್ಷಿಸಿ ದಶರಥ
ನೋಲಾಡಿದನಧಿಕ ರಾಗರಸ ವಾರಿಧಿಯೊಳ್{{gap}}{{gap}}||೧೩೨||
ಅಂತು ಸಂತೋಷದ ಪರಮಪದಮನೆಯ್ದಿರ್ಪುದುಮದಲ್ಲದೆಯುಮಾ ಮಹೀ
ವಲ್ಲಭನ ಮೋಹವಲ್ಲರಿಗಳೇ ಪೂತುವೆಂಬಂತೆ ಪುಷ್ಪವತಿಯರಾಗಿ ನಾಲ್ಕು ನೀರ್ಮಿ೦ದು
ಬೆಳ್ವ ಸದನದ ಪೊಸದೇಸೆ ವಿಳಾಸಂಬಡೆಯೆ ಸೂಳ್ಗೆ ವಂದು ಶುಭಸ್ವಪ್ನ ದರ್ಶನಾ
ನಂತರಂ ಕೆಲವು ದಿವಸಮರ್ಪಿನಂ--
ಕಂ|| ಕುಲದೋದವಿಂಗೀ ಸತಿಯರೆ
ಕುಲದೇವತೆಯರ್ಕಳೆಂಬ ಬಗೆ ಪುಟ್ಟುವಿನಂ||
ತಲೆದೋರೆ ಗರ್ಭಚಿಹ್ನಂ
ತಲೆದೋರಿದುದವನಿಪತಿಗೆ ರಾಗೋದ್ರೇಕ೦{{gap}}{{gap}}||೧೩೩||
ಆಗಳಾಕೆಗಳ ಪಸುರ್ಪೆಸೆವಸಿಯ ಬಾಸೆ ಲಾವಣ್ಯನದಿಯ ಶೈವಾಲಲತೆಯ ಲಾಸ್ಯ ಮನಸಹಾಸ್ಯಂಗೆಯ್ಯುಮಾಕೆಗಳ ಕರಂಗಿದ ಕುಚ ಚೂಚುಕಂಗಳಿಂದೆಸೆದು ತೋಳ
ಮೊದಲಿಂ ಜಕ್ಕುಲಿಸುವ ಪೆರ್ಮೊಲೆ ಕರ್ನೆಯ್ದಿ ಲೆಸಳಂ ನಲಿದು ಕರ್ಚುವ ಜಕ್ಕವಕ್ಕಿ
</poem><noinclude></noinclude>
52i3fijn9f50orw8btoektm00dr2rbi
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೧
104
66983
321535
166193
2026-05-21T04:12:28Z
Pragathi. BH
7585
/* Validated */
321535
proofread-page
text/x-wiki
<noinclude><pagequality level="4" user="Pragathi. BH" />{{Right|೭೧}}</noinclude>{{RunningHeader|center=ತೃತಿಯಾಶ್ವಾಸಂ}}
<poem>
ಕಂ ||ಪರಮ ಪ್ರೇಮಂ ಜನ್ಮಾಂ
ತರದಿಂದೊಡವಂದುದೆನಿಸಿ ಗೆಡೆ ಬೆಚ್ಚವೊಲ
ಚ್ಚರಿಯಾಗೆ ರಾಮ ಲಕ್ಷ್ಮೀ
ಧರರೊಳಮಾದತ್ತು ಭರತಶತ್ರುಘ್ನರೊಳಂ{{gap}}{{gap}}||೧೪೩||
ಅಮಳ್ಗಳಿವರೆಂಬಿನಂ ತಮ
ಗಮಳ್ವೆಸರಮರ್ದೆಸೆಯೆ,ತಾಯ ತಂದೆಯ ಚಿತ್ತ||
ಕ್ಕಮರ್ದಿನ ಮಳಿಯಂ ಕರೆದರ್
ಕುಮಾರಕರ್ ಮೂರ್ತಿಗೊಂಡ ಪುರುಷಾರ್ಥದವೋಲ್{{gap}}{{gap}}||೧೪೪||
ಮ ||ಸುರಧೇನು ಸ್ತನಭಾರದಂತೆ ಪುರುಷಾರ್ಥ೦ ಮೂರ್ತಿಗೊಂಡಂತೆ ನಾ|
ಲ್ವರುಮೊಂದಾಗಿರೆ ನಂದನರ್ ದಶರಥಂ ನಾಲ್ಕುಂ ಸಮುದ್ರಂಬರಂ||
ಧರೆಯಂ ಕೂಡೆ ನಿಮಿರ್ಚಿ ನಾಲ್ದೆಸೆಯೊಳಂ ನಾಲ್ಕುಂ ಜಯಸ್ತಂಭಮಂ|
ಚರಿತಾರ್ಥರ್ ನಿಲಿಸಲ್ ಸಮರ್ಥರಿವರೆಂದುತ್ಸಾಹಮಂ ತಾಳ್ದಿದಂ{{gap}}||೧೪೫||
ಮತ್ತಂ ನಿಜ ತನೂಭವರ ನಿರ್ಜಿತ ಮನೋಜಾಕಾರಮುಮಂ, <sup>೧</sup>ತಿಳ ಮಸೂರಿ
ಕಾದಿ ಶುಭ ವ್ಯಂಜನರಂಜಿತ ಪ್ರಶಸ್ತಾವಯವಂಗಳುಮಂ, ಹಲ ಕುಲಿಶ ಶಂಖ ಚಕ್ರ ಲಾಂಛನಂಗಳಪ್ಪ ಕರ ಚರಣಂಗಳುಮಂ ನೋಡಿ 'ಸಕಲ ಸಾಮ್ರಾಜ್ಯಶ್ರೀಯನಪ್ಪು
ಕೆಯ್ದಂತೆ ಸಂತೋಷದಂತಮನೆಯ್ದಿ--
ಕ೦।। ಸವಿವವಸರಮಿದು ವಿದ್ಯಾ
ಯುವತಿಯ ವದನಾರವಿಂದ ಮಧುವನೆನುತ್ತುಂ||
ವಿವಿಧ ಕಳಾಚಾರ್ಯರನಾ
ರ್ಯವರ್ಯರಂ ಗುರು ನಿಯೋಗದೊಳ್ ಯೋಜಿಸಿದಂ{{gap}}||೧೪೬||
ಶುಭದಿನ ಮುಹೂರ್ತದೊಳ್ ಪು
ಣ್ಯಭಾಗಿಗಳ್ ಕಲಿಸೆ ಗುರುಗಳೊಡವಂದುದೊ ಪೂ||
ರ್ವ ಭವೋಪಾರ್ಜಿತ ವಿದ್ಯಾ
ವಿಭವಮೆನಲ್ ಸಕಲಶಾಸ್ತ್ರ ಪರಿಣತರಾದರ್{{gap}}{{gap}}||೧೪೭||
ರೋಮಾಂಚಮನೊಡರಿಸೆಯುಂ
ರಾಮನ ಲಕ್ಷ್ಮಣನ ಭರತ ಶತ್ರುಘ್ನರ ವಿ
ದ್ಯಾ ಮಹಿಮೆ ಚತುಷ್ಪಷ್ಟಿಕ
ಲಾ ಮಹಿತರ ಮನದೊಳೀರ್ಷ್ಯೆಯಂ ಪುಟ್ಟಿಸುಗುಂ{{gap}}{{gap}}||೧೪೮||
--------------------------------------------------------------------------
೧. ಮುಡಿಳ. ಘ. ; ತೀಳಿಳ, ಚ.
</poem><noinclude></noinclude>
3mkrfrx394rus2h1yvd5hv99zo17z7v
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೨
104
66984
321536
166192
2026-05-21T04:12:57Z
Pragathi. BH
7585
/* Validated */
321536
proofread-page
text/x-wiki
<noinclude><pagequality level="4" user="Pragathi. BH" /></noinclude>೭೨{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಮ|| ಸೊಡರಂ ಪೊತ್ತಿಸಿಕೊಂಡು ಪೋಗೆ ಸೊಡರೊಳ್ ತೇಜಂ ಗುಣಾಧಿಕ್ಯದಿಂ|
ಕಡುಗೊರ್ವಂ ಪಡೆವಂತೆ| ತಮ್ಮ ವಿಶದಪ್ರಜ್ಞಾ ಗುಣೋತ್ಕರ್ಷದಿಂ||
ಪಡೆಮಾತೇನರುವತ್ತುನಾಲ್ಕು ಕಳೆಯುಂ ತತ್ಕೋವಿದರ್ ಮೆಚ್ಚೆ ನೂ|
ರ್ಮಡಿ ಮೇಲಾದುವು ರಾಮಲಕ್ಷ್ಮಣರೊಳೇಂ ಸತೇವೆ ಸಾಮಾನ್ಯ ಮೇ
ಚ|| ಕಲಿತನಮುಂ ಮಹಾಬಲಮುಮಳ್ಳನ ಕಯ್ದುವೆ ಕಯ್ದು ಪಂದೆದು|
ರ್ಬಲನೆನಿಸಿರ್ದವಂ ಪಿಡಿದ ಕೈದುವದೇತರ ಕೈದುವೆಂಬಿನಂ||
ಕಲಿಸಿದ ಭಾರ್ಗವಾ<sup>೧</sup>ತ್ಮಜರನೋಡಿದ ತಜ್ಞರ ಮುಯ್ವು ನೆತ್ತಿಯಂ|
ಗೆಲೆ ಸಲೆ ರಾಮಲಕ್ಷ್ಮಣರದೇಂ ನೆರೆ ಕಲ್ತರೊ ಕೈದುವೆಲ್ಲಮಂ{{gap}}||೧೫೦||
ಮ|| ಮಿಗೆ ವಂದೆಲ್ಲರ ಬಿಲ್ಲ ಬಿನ್ನಣದ ಬಿಣ್ಪಂ ರಾಮನೇಸೆಂಬಿನಂ|
ಮಿಗೆ ತನ್ನೇಸುಪಮಾನಮಾದುದೆನೆರಾಮಂ ಕಲ್ತ ಬಿಲ್ಬಲ್ಮೆಯಂ||
ಪೊಗಳಿಲ್ವೇಳ್ಪುದೆ|ರಾಮನೊಳ್ ಸದೃಶವೆಂಬನ್ನಂ ಧನುರ್ವಿದ್ಯೆಯಿಂ|
ಜಗಮಂ ಮೆಚ್ಚಿಸಿ ಚಾಪ ಚಾಪಲತೆಯಂ ಕೊಂಡಾಡಿದ೦ ಲಕ್ಷ್ಮಣಂ||೧೫೧||
ಅಂತವರ್ ಸಕಲಶಸ್ತ್ರ ಶಾಸ್ತ್ರ ವಿದ್ಯಾವಿಶಾರದರಾಗಿ ಕುಮಾರ ದತ್ತಾತಿಶಯ
ಮನಪ್ಪುಕೆಯ್ವುದುಂ---
ಚ|| ಹಿಮಕರ ಬಿಂಬದಿಂ ಕಡೆದುದೋಪಳಿಕಿಂ ಪಡೆದತ್ತೊ ಪೂಗಳಿ೦|
ಸಮೆದುದೊ ಚಂದ್ರಕಾಂತಮಣಿಯಿಂ ಬೆಸಕೆಯ್ದುದೊಮೌಕ್ತಿಕ೦ಗಳಿ೦||
ಸಮನಿಸಿದತ್ತೊ. ಕೋಮಲಮೃಣಾಳಿಕೆಯಿಂ ಪರಿಪೂರ್ಣಮಾಯ್ತೊ ಪೇ|
ಳಿಮಿದೆನೆ ರಂಜಿಸಿತ್ತು ರಘುರಾಮನ ಪಾಂಡುರ ದೇಹಮ೦ಡಲ೦{{gap}}||೧೫೨||
ಕಂ|| ಉನ್ನತ ಲಲಾಟ ಪಟ್ಟ೦,
ಮನ್ನಿಸದಷ್ಟಮಿಯ ಚಂದ್ರನಂ ನಗೆಗಣ್ಗಳ್|
<sup>೨</sup>ಮುನ್ನಡೆವಿಡಿದುವು ಕಮಳಮ
ನಿನ್ನೇವಣ್ಣಿಪುದೊ ರಾಮನಭಿರಾಮತೆಯಂ{{gap}}{{gap}}||೧೫೩||
ಚ|| ತೆರೆ ಕರೆಗಣ್ಮಿದಿಂಗಡಲ ಗಾಡಿಯನೇಳಿಸೆ ತೋರಮುತ್ತಿನೈ|
ಸರದ ಮರೀಚಿಯಿಂ ಸಿರಿಯ ತಾಯ್ವನೆ ರಾಮನ ಪೇರುರಂ ಮನೋ||
ಹರಮೆನಿಸಿತ್ತು ವಾರವನಿತಾಜನ ವಶ್ಯವಿಧಾನ ವೇದಿಯೊಳ್|
ದೊರೆಯೆನಿಸಿತ್ತು ಧೈರ್ಯಗುಣ ರೋಹಣಶೈಲ ಶಿಲಾತಲೋಪಮಂ||೧೫೪||
---------------------------------------------------------------------------
೧. ತ್ಮಜನಿನೋದಿತ ತಜ್ಞರ ಮುಯ್ವು ನೆತ್ತಿಯುಂ, ಚ,
೨. ಮುನ್ನುರೆ ಕ. ಖ. ಗ. ಘ.
</poem><noinclude></noinclude>
ehou59htn9a2usq8p8pe13hdd8i18gj
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೩
104
66985
321537
166189
2026-05-21T04:13:34Z
Pragathi. BH
7585
/* Validated */
321537
proofread-page
text/x-wiki
<noinclude><pagequality level="4" user="Pragathi. BH" />{{Right|೭೩}}</noinclude>{{RunningHeader|center=ತೃತಿಯಾಶ್ವಾಸಂ}}
<poem>
ಕಂ|| ಏಳಿಸಿದುವು ಲಕ್ಷ್ಮಣನ ವಿ
ಶಾಳ ವಿಲೋಚನ ಯುಗಂಗಳಂಗ ಪ್ರಭೆಯಿಂ||
ಮೇಳಿಸಿ ನಗೆಯಂ ಪಾಳಿಸಿ
ಕಾಳಿಂದಿಯೊಳಲರ್ದ ಪುಂಡರೀಕ ಶ್ರೀಯಂ{{gap}}{{gap}}||೧೫೫||
ಹರಿನೀಲ ರತ್ನಮಂ ಕ೦
ಡರಿಸಿದ ಕಣ್ದೆರವಿ<sup>೧</sup>ಗೆಯ್ದೆ ಜೀವಂಬೊಯ೦||
ತಿರೆತೋರ್ಪ ಗಂಡಗಾಡಿಗೆ
ಪುರುಷೋತ್ತಮನೆಂದು ಕೊಂಡು ಕೊನೆದುದು ಲೋಕಂ{{gap}}||೧೫೬||
ಚ|| ಮನಮನಲರ್ಚಿದತ್ತು ಪುರುಷೋತ್ತಮನುಚ್ಚ ಲಲಾಟ ಲೇಖೆ ಕೃ
ಷ್ಣನ ಕುರುಳೋಳಿ| ವಿಷ್ಣುವಿನ ಪೇರುರಮಾಯತಿವೆತ್ತ ವಾರಿಜಾ|
ಕ್ಷನ ಧವಳೇಕ್ಷಣ೦ ಪುರುಷಸಿಂಹನ ಸಿ೦ಹ ಕಟೀತಟಂ ಜನಾ|
ರ್ದನನ ಭುಜಂಗ ಭೀಮ ಭುಜಮಂಬುಜನಾಭನ ನಾಭಿಮಂಡಲಂ{{gap}}||೧೫೭||
ಪೊಳೆಯೆ ನಖಾಂಶುಮಂಡಲ ಫಣಾಮಣಿ,ಪಂಚಫಣಾಸಿತಾಹಿಗಳ್
ಬಳೆದಪುವೀಂಟಲೆಂದು ದಶಕಂಠನ ಬಲ್ಲುಸಿರಂತದೀಯ ನಿ||
ರ್ಮಳತರ ಕೀರ್ತಿ ದುಗ್ಧರಸಪಾನಮನಂಬಿನೆಗಂ ಪೊದಳ್ದು ಕೋ|
ಮಳಿಕೆಯನಾಳ್ದು ನೀಳ್ದು ಬಗೆಗೊಂಡುವು ಕೃಷ್ಣನ ಬಾಹುಶಾಖೆಗಳ್{{gap}}||೧೫೮||
ಉ|| ಹಾರ ಮರೀಚಿಯಂ ಮರಕತಚ್ಛವಿಯಂ ಗೆಲೆ ದೇಹದೀಪ್ತೀ ನೀ
ಹಾರ ಮರೀಚಿಯಂ, ಕುಸುಮ ಸಾಯಕನಂ ಗೆಲೆ ಗಂಡಗಾಡಿ
ಠೀರವ ನಾದಮಂ, ಜಲಧರಧ್ವನಿಯಂ ಗೆಲೆ ಬೇರೆಬೇರೆ ಗಂ|
ಭೀರರವ೦ ಬಲಾಚ್ಯುತರದೇನೆಸೆದಿರ್ದರೊ ರಾಮಲಕ್ಷಣರ್
ಮ|| ರಣದೊಳ್ ರಾವಣನಂ ಜವಂಗೆ ಪೊಸತಿಕ್ಕಲ್,ತಾರಶೈಲಕ್ಕೆ ತೆಂ
ಕಣದಂ ಕಂಕಣದಂತೆ ಕೈಗೆವರಿಸಲ್ ಭೂಚಕ್ರಮಂ ಚಕ್ರಮಂ||
ರಣದೊಳ್ ಸಾಧಿಸಲೆಂದು ಪುಟ್ಟಿದವರೇ೦ ಸಾಮಾನ್ಯರೇ ರಾಮ ಲ
ಕ್ಷ್ಮಣರಪ್ರಾಕೃತವಿಕ್ರಮರ್ ತ್ರಿಭುವನ ಪ್ರಖ್ಯಾತ ಕೀರ್ತಿಧ್ವಜರ್{{gap}}||೧೬೦||
ಅ೦ತು ರಾಮ ಲಕ್ಷ್ಮಣ ಭರತ ಶತ್ರುಘ್ನರೆಂಬ ನಾಲ್ವರ್ ತನೂಭವರುಂ ನಾಲ್ಕುಂ ರತ್ನಶಿಲಾಸ್ತಂಭ೦ಗಳಂತೆ ರಘುಕುಲ ಸಮುದ್ಧರಣ ಸಮರ್ಥರಾಗೆ ದಶರಥಂ ಪರಿಪೂರ್ಣ ಮನೋರಥನಾಗಿ--
---------------------------------------------------------------------------
೧. ಗೆಯ್ದು, ಕ. ಖ. ಗೆಯ್ದ. ಚ.
</poem><noinclude></noinclude>
idu1nh532434dfzvffxjvv46371tdjt
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೪
104
66986
321538
166186
2026-05-21T04:14:14Z
Pragathi. BH
7585
/* Validated */
321538
proofread-page
text/x-wiki
<noinclude><pagequality level="4" user="Pragathi. BH" /></noinclude>೭೪{{RunningHeader|center=ರಾಮಚಂದ್ರಚರಿತಪುರಾಣಂ}}
<poem>
ಮ||ಸ್ರ|| ಧನಮಂ ಮರ್ಯಾದೆಯಿಂದಾರ್ಜಿಸಿ ವಿಷಯಸುಖಾಸ್ವಾದನಂ ದೋಷ ನಿಷ್ಪಾ|
ದನಮಲ್ತೆಂಬಂತೆ ಚಿತ್ತಕ್ಕೊದವಿಸೆ ಪದೆಪಂ ಭಾರತೀ ಹಂಸಿ ವಕ್ತ್ರಾ||
ಬ್ವಿನಿಯೊಳ್ ನಾನಾವಿಧಂ ನರ್ತಿಸೆ ಹಿಮಕರ ಭಾಸ್ವದ್ಯಶೋ ವಲ್ಲಿಗಾಲಂ|
ಬನಮಂಭೋರಾಶಿ ವೇಲಾವನಮೆನೆ ನೆಗಳ್ದಿಂ ಭಾರತೀಕರ್ಣಪೂರಂ ॥೧೬೧॥
ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ
ಮುನೀಂದ್ರ ಚರಣನಖಕಿರಣ ಚಂದ್ರಿಕಾಚಕೋರ ಭಾರತೀ
ಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ
ರಾಮಚಂದ್ರ ಚರಿತ ಪುರಾಣದೊಳ್
ಕುಮಾರೋದಯವರ್ಣನಂ
-ತೃತೀಯಾಶ್ವಾಸಂ-
</poem><noinclude></noinclude>
r77qiet1hp4dhq1wm7zl6ynou6l0pyn
ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೬೫
104
66987
321539
166184
2026-05-21T04:14:43Z
Pragathi. BH
7585
/* Validated */
321539
proofread-page
text/x-wiki
<noinclude><pagequality level="4" user="Pragathi. BH" /></noinclude>{{RunningHeader|center=ಚತುರ್ಥಾಶ್ವಾಸಂ}}
<poem>
ಕಂ|| ಶ್ರೀಸುದತಿ ತನ್ನುರಸ್ಸರ
ಸೀ ಸದನದೊಳಿರ್ದು ಪಾತ್ರದಾನ ವಿನೋದ||
ವ್ಯಾಸಂಗಮನೊದವಿಸೆ ಸೌ
ಖ್ಯಾಸೀನಂ ಪೆಂಪುವೆತ್ತನಭಿನವಪಂಪಂ{{gap}}{{gap}}||೧||
ಅನ್ನೆಗಮಿತ್ತಲ್--
ಕಂ|| ಮಿಥಿಳಾ ಪುರಾಧಿನಾಥಂ
ಪ್ರಥಿತಯಶ೦ ಜನಕನಾಮಹೀಭುಜನ ಮನೋ||
ರಥ ಭೂಮಿ ವಿದೇಹಿಗದೇಂ
ಪೃಥು ಕುಚ<sup>೧</sup>ಯುಗದೊಡನೆ <sup>೨</sup>ಕೊರ್ವುವಡೆದುದೊ ಮಧ್ಯಂ{{gap}}{{gap}}||೨||
ಶಶಿಕಾಂತ ಮುಕುರದಂತಿರೆ
ಶಶಿಮುಖಿಯ ಕದ೦ಪುಗಳ್ ಬೆಳರ್ತುವು ಹರಿನೀ||
ಲ ಶಲಾಕೆಯಂತೆ ಬಾಸೆಗೆ
ವಿಶೇಷಮೆನೆ ಪಸರಿಸಿತ್ತು ಕರ್ಪೆಳವಸಿಳೊಳ್{{gap}}{{gap}}||೩||
ವಳಿರೇಖೆ ಮಸುಳೆ ಗರ್ಭ೦
ಬಳೆವುದುಮೊಡವಳೆದು ಸತಿಯ ಮಧ್ಯಂ ಚೆಲ್ವಂ||
ತಳೆದುದು ನಯನಾನಂದಮ
ನೆಳನೆರೆ ಪರಿಪೂರ್ಣಮಾದೊಡಂ ಪುಟ್ಟಪವೋಲ್{{gap}}{{gap}}||೪||
ಆ ಸಮಯದೊಳ್--
ಕಂ|| ಭವ ಭದ್ಧ ವೈರದಿಂ ಕಾ
ದು ವಿದೇಹಿಯ ಗರ್ಭಮಂ ನಿಶಾಚರನಿರ್ದ೦||
ವಿವಿಧೋಪಸರ್ಗವಂ ಪಡೆ
ಯವೆ ಮುಳಿಸಂ ಪಡೆವ ಮುಳಿವ ದುಶ್ಚರಿತಂಗಳ್{{gap}}{{gap}}||೫||
---------------------------------------------------------------------------
೧. ಭರ. ಗ. ಚ.
೨. ತೋರ್ಪು. ಗ
</poem><noinclude></noinclude>
4qlqv4m1laj0zznwdxsl24zmrv7lvrw
ಪುಟ:ನಡೆದದ್ದೇ ದಾರಿ.pdf/೧೪೨
104
76899
321560
307325
2026-05-21T05:06:20Z
Hariprasad Shetty10
7490
321560
proofread-page
text/x-wiki
<noinclude><pagequality level="1" user="Ananth subray" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೫}}</noinclude>ಅವನಿಗೆ ಸಿಟ್ಟು ಬರುವುದಿಲ್ಲ. ಅವನ ಗೆಳೆಯರೊಂದಿಗೆ ತಿರುಗಿದರೂ ಅವನು ಏನೂ ಅನ್ನುವುದಿಲ್ಲ. ಆ ಗೆಳೆಯರ ಹೆಂಡಂದಿರಿಗೆಲ್ಲ ಮಾತ್ರ ತನ್ನ ಮೇಲೆ ವಿಪರೀತ ಸಿಟ್ಟುಆಸೂಯೆ. ಅವರೆಲ್ಲ ಕೂಡಿದಾಗ ಮರೆಯದೆ ಚರ್ಚಿಸುವ, ದೂಷಿಸುವ ವಸ್ತು ತಾನು. ಹ್ಞು : ಗಂಡಂದಿರ ಮೇಲೆ ನಂಬಿಕೆಯಿರದ ದುರ್ದೈವೀ ಹೆಂಡಂದಿರು ಸುಂದರಿಯರಾದ ಇತರ ಹೆಂಗಸರನ್ನು ದೂಷಿಸುವುದರಿಂದಲ್ಲದೆ ಹೋದರೆ ಇನ್ನಾವುದರಿಂದ ತೃಪ್ತಿ ಹೊಂದಬೇಕು ?
ಎಲ್ಲ ಕೇಳಿ, ಎಲ್ಲ ನೋಡಿ, “ನಿನ್ನ ಮೇಲೆ ವಿಶ್ವಾಸವಿದೆ' ಅನ್ನುವ ಸತೀಶನನ್ನು ಎತ್ತಿ ಅವನ ಫ್ಯಾಕ್ಟರಿಯೊಳಗಿನ ಬೆಂಕಿಯುಗುಳುವ ಬಂಬಿನಲ್ಲಿ ಹಾಕಬೇಕು ಅನ್ನಿಸುವುದು....
- ಆದರೆ ಬಹುಶಃ ಇದರಲ್ಲಿ ಅವನ ತಪ್ಪಿಲ್ಲ, ಅವನಿಗೆ ತನ್ನ ಹೆಂಡತಿಯ ಬಗೆಗಿನ ಸತ್ಯವನ್ನು ಅರಿತು ಎದುರಿಸುವ ಧೈಯ್ಯವಿರಲಾರದು ; ಅಂತೆಯೆ ಅವಳ ತಪ್ಪನ್ನು ತಾನು ಕ್ಷಮಿಸಿದ್ದೇನೆಂದುಕೊಂಡು, ಇಷ್ಟೆಲ್ಲ ಆದರೂ ಅವಳನ್ನು ಬಿಡದೆ ಪ್ರೀತಿಸುತ್ತಿರುವೆನೆಂದುಕೊಂಡು, ಅವಳಿಗಾಗಿಯೇ ಅವಳೊಂದಿಗಿದ್ದು ಅವಳನ್ನು ಜಗತ್ತಿನ ಎಲ್ಲ ದುಃಖ-ಕಷ್ಟಗಳಿಂದ ಕಾಯುತ್ತಿರುವೆನೆಂದುಕೊಂಡು, ಅವಳಿಗಾಗಿ ತ್ಯಾಗ ಮಾಡುತ್ತಿರುವೆನೆಂದುಕೊಂಡು ಸಮಾಧಾನದಿಂದಿದ್ದಾನೆ ಅವನು.
ಹೈ-ತ್ಯಾಗ, ಪ್ರೀತಿಸುವ ವ್ಯಕ್ತಿಯಲ್ಲಿ ನಂಬಿಕೆಯಿದ್ದಾಗ ಮಾಡುವ ತ್ಯಾಗಕ್ಕಿಂತಲೂ, ನಂಬಿಕೆಯಿಲ್ಲದೇ ಬರೇ ಪ್ರೀತಿಗಾಗಿ ಮಾಡುವ ತ್ಯಾಗ ದೊಡ್ಡದೆಂದು ಹಿಂದೆಂದೋ ಕೇಳಿದ ನೆನಪು. ಸತೀಶನಿಗೆ ತನ್ನಲ್ಲಿ ನಂಬಿಕೆಯಿಲ್ಲವೆಂದು ತನಗೆ ಗೊತ್ತಿದೆ. ಹಾಗಾದರೆ ಪ್ರೀತಿಯಿರಬಹುದೇ ?
ಯಾಕೊ ಇಷ್ಟು ವರ್ಷಗಳ ನಂತರ ಒಮ್ಮೆಲೆ ಅವನ ಬಗ್ಗೆ 'ಪಾಪ !" ಅನಿಸುತ್ತಲಿದೆ.... ಬೆಳಗು, ಮಿರಜ ಸ್ಟೇಶನ್ ಬಂತು. ಚಹಾ-ಕಾಫಿ-ವಡೆಗಳ ಧಾಂದಲೆ....
- - 'ಅಷ್ಟದೂರದಿಂದ ಇಷ್ಟೆಲ್ಲಾ ತ್ರಾಸು ಸಹನ ಮಾಡಿಕೊಂಡು ನೀ ಒಬ್ಯಾಕಿ ನೋಡವಾ ಇಲ್ಲೀ ತನಕಾ ಬಂದು ನಮ್ಮನ್ನ ನೋಡೂವಾಕಿ. ಉಳಿದ ಆಕ್ಕಾ-ತಂಗೇರು ಲಗ್ವಾದಕೂಡಲೆ ತವರಮನಿ ಮರತಬಿಟ್ಟಾರ. ನೀ ಮಾತ್ರ ಸ್ವಲ್ಕೂ ಬದಲಾಗಿಲ್ಲ. ಅವ್ವಾ-ಅಪ್ಪಾ ತೀರಿಕೊಂಡ ಮ್ಯಾಲೂ ನಿನಗ ತವರಮನೀ ಮ್ಯಾಲಿನ ಪ್ರೀತಿ ಹಾಂಗ ಆದ. ತಪ್ಪದ ಬಂದು ಬೆಟ್ಟಿ ಆಗತೀ.' – ಅನ್ನುತ್ತಾನೆ ಹುಬ್ಬಳ್ಳಿಯಲ್ಲಿಯ ತಮ್ಮ, ತಾನು ಅಲ್ಲಿಗೆ ಹೋದ ಪ್ರತಿಸಲ. ಅವನ ಹೆಂಡತಿ ಮನೆತುಂಬ ಓಡಾಡಿ ಸಿಹಿತಿಂಡಿ ಮಾಡುತ್ತಾಳೆ. ಮಧ್ಯಾಹ್ನ ಊಟ ಮುಗಿಸಿ ಅಡ್ಡಾದಾಗ ಮೆಲ್ಲನೆ ಹೇಳುತ್ತಾಳೆ, “ನಮ್ಮ ಸುಶೀಗೆ ಪರಕಾರ ಹರದುಹೋಗ್ಯಾವ ನೋಡಿದ್ರೆಲಾ ವೈನ್, ಹ್ಯಾಂಗೂ<noinclude><references/></noinclude>
f5njc1ni4xh8l6x25m2150d3znxkc99
321561
321560
2026-05-21T05:17:23Z
Hariprasad Shetty10
7490
321561
proofread-page
text/x-wiki
<noinclude><pagequality level="1" user="Ananth subray" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೫}}</noinclude>ಅವನಿಗೆ ಸಿಟ್ಟು ಬರುವುದಿಲ್ಲ. ಅವನ ಗೆಳೆಯರೊಂದಿಗೆ ತಿರುಗಿದರೂ ಅವನು ಏನೂ ಅನ್ನುವುದಿಲ್ಲ. ಆ ಗೆಳೆಯರ ಹೆಂಡಂದಿರಿಗೆಲ್ಲ ಮಾತ್ರ ತನ್ನ ಮೇಲೆ ವಿಪರೀತ ಸಿಟ್ಟುಆಸೂಯೆ. ಅವರೆಲ್ಲ ಕೂಡಿದಾಗ ಮರೆಯದೆ ಚರ್ಚಿಸುವ, ದೂಷಿಸುವ ವಸ್ತು ತಾನು. ಹ್ಞು : ಗಂಡಂದಿರ ಮೇಲೆ ನಂಬಿಕೆಯಿರದ ದುರ್ದೈವೀ ಹೆಂಡಂದಿರು ಸುಂದರಿಯರಾದ ಇತರ ಹೆಂಗಸರನ್ನು ದೂಷಿಸುವುದರಿಂದಲ್ಲದೆ ಹೋದರೆ ಇನ್ನಾವುದರಿಂದ ತೃಪ್ತಿ ಹೊಂದಬೇಕು?
{{gap}}ಎಲ್ಲ ಕೇಳಿ, ಎಲ್ಲ ನೋಡಿ, “ನಿನ್ನ ಮೇಲೆ ವಿಶ್ವಾಸವಿದೆ' ಅನ್ನುವ ಸತೀಶನನ್ನು ಎತ್ತಿ ಅವನ ಫ್ಯಾಕ್ಟರಿಯೊಳಗಿನ ಬೆಂಕಿಯುಗುಳುವ ಬಂಬಿನಲ್ಲಿ ಹಾಕಬೇಕು ಅನ್ನಿಸುವುದು....
{{gap}}—ಆದರೆ ಬಹುಶಃ ಇದರಲ್ಲಿ ಅವನ ತಪ್ಪಿಲ್ಲ, ಅವನಿಗೆ ತನ್ನ ಹೆಂಡತಿಯ ಬಗೆಗಿನ ಸತ್ಯವನ್ನು ಅರಿತು ಎದುರಿಸುವ ಧೈಯ್ಯವಿರಲಾರದು ; ಅಂತೆಯೆ ಅವಳ ತಪ್ಪನ್ನು ತಾನು ಕ್ಷಮಿಸಿದ್ದೇನೆಂದುಕೊಂಡು, ಇಷ್ಟೆಲ್ಲ ಆದರೂ ಅವಳನ್ನು ಬಿಡದೆ ಪ್ರೀತಿಸುತ್ತಿರುವೆನೆಂದುಕೊಂಡು, ಅವಳಿಗಾಗಿಯೇ ಅವಳೊಂದಿಗಿದ್ದು ಅವಳನ್ನು ಜಗತ್ತಿನ ಎಲ್ಲ ದುಃಖ-ಕಷ್ಟಗಳಿಂದ ಕಾಯುತ್ತಿರುವೆನೆಂದುಕೊಂಡು, ಅವಳಿಗಾಗಿ ತ್ಯಾಗ ಮಾಡುತ್ತಿರುವೆನೆಂದುಕೊಂಡು ಸಮಾಧಾನದಿಂದಿದ್ದಾನೆ ಅವನು.
{{gap}} ಹ್ಞ -ತ್ಯಾಗ, ಪ್ರೀತಿಸುವ ವ್ಯಕ್ತಿಯಲ್ಲಿ ನಂಬಿಕೆಯಿದ್ದಾಗ ಮಾಡುವ ತ್ಯಾಗಕ್ಕಿಂತಲೂ, ನಂಬಿಕೆಯಿಲ್ಲದೇ ಬರೇ ಪ್ರೀತಿಗಾಗಿ ಮಾಡುವ ತ್ಯಾಗ ದೊಡ್ಡದೆಂದು ಹಿಂದೆಂದೋ ಕೇಳಿದ ನೆನಪು. ಸತೀಶನಿಗೆ ತನ್ನಲ್ಲಿ ನಂಬಿಕೆಯಿಲ್ಲವೆಂದು ತನಗೆ ಗೊತ್ತಿದೆ. ಹಾಗಾದರೆ ಪ್ರೀತಿಯಿರಬಹುದೇ ?
{{gap}}ಯಾಕೊ ಇಷ್ಟು ವರ್ಷಗಳ ನಂತರ ಒಮ್ಮೆಲೆ ಅವನ ಬಗ್ಗೆ 'ಪಾಪ !" ಅನಿಸುತ್ತಲಿದೆ....ಬೆಳಗು, ಮಿರಜ ಸ್ಟೇಶನ್ ಬಂತು. ಚಹಾ-ಕಾಫಿ-ವಡೆಗಳ ಧಾಂದಲೆ....
{{gap}}—'ಅಷ್ಟದೂರದಿಂದ ಇಷ್ಟೆಲ್ಲಾ ತ್ರಾಸು ಸಹನ ಮಾಡಿಕೊಂಡು ನೀ ಒಬ್ಯಾಕಿ ನೋಡವಾ ಇಲ್ಲೀ ತನಕಾ ಬಂದು ನಮ್ಮನ್ನ ನೋಡೂವಾಕಿ. ಉಳಿದ ಅಕ್ಕಾ-ತಂಗೇರು ಲಗ್ನಾದಕೂಡಲೆ ತವರಮನಿ ಮರತಬಿಟ್ಟಾರ. ನೀ ಮಾತ್ರ ಸ್ವಲ್ಪೂ ಬದಲಾಗಿಲ್ಲ. ಅವ್ವಾ-ಅಪ್ಪಾ ತೀರಿಕೊಂಡ ಮ್ಯಾಲೂ ನಿನಗ ತವರಮನೀ ಮ್ಯಾಲಿನ ಪ್ರೀತಿ ಹಾಂಗ ಆದ. ತಪ್ಪದ ಬಂದು ಬೆಟ್ಟಿ ಆಗತೀ.' – ಅನ್ನುತ್ತಾನೆ ಹುಬ್ಬಳ್ಳಿಯಲ್ಲಿಯ ತಮ್ಮ, ತಾನು ಅಲ್ಲಿಗೆ ಹೋದ ಪ್ರತಿಸಲ. ಅವನ ಹೆಂಡತಿ ಮನೆತುಂಬ ಓಡಾಡಿ ಸಿಹಿತಿಂಡಿ ಮಾಡುತ್ತಾಳೆ. ಮಧ್ಯಾಹ್ನ ಊಟ ಮುಗಿಸಿ ಅಡ್ಡಾದಾಗ ಮೆಲ್ಲನೆ ಹೇಳುತ್ತಾಳೆ, “ನಮ್ಮ ಸುಶೀಗೆ ಪರಕಾರ ಹರದುಹೋಗ್ಯಾವ ನೋಡಿದ್ರೆಲಾ ವೈನ್, ಹ್ಯಾಂಗೂ<noinclude><references/></noinclude>
bs47g3uz1nx8j5qvj4woxxh0yld3rd7
321562
321561
2026-05-21T05:18:01Z
Hariprasad Shetty10
7490
321562
proofread-page
text/x-wiki
<noinclude><pagequality level="1" user="Ananth subray" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೫}}</noinclude>ಅವನಿಗೆ ಸಿಟ್ಟು ಬರುವುದಿಲ್ಲ. ಅವನ ಗೆಳೆಯರೊಂದಿಗೆ ತಿರುಗಿದರೂ ಅವನು ಏನೂ ಅನ್ನುವುದಿಲ್ಲ. ಆ ಗೆಳೆಯರ ಹೆಂಡಂದಿರಿಗೆಲ್ಲ ಮಾತ್ರ ತನ್ನ ಮೇಲೆ ವಿಪರೀತ ಸಿಟ್ಟುಆಸೂಯೆ. ಅವರೆಲ್ಲ ಕೂಡಿದಾಗ ಮರೆಯದೆ ಚರ್ಚಿಸುವ, ದೂಷಿಸುವ ವಸ್ತು ತಾನು. ಹ್ಞು : ಗಂಡಂದಿರ ಮೇಲೆ ನಂಬಿಕೆಯಿರದ ದುರ್ದೈವೀ ಹೆಂಡಂದಿರು ಸುಂದರಿಯರಾದ ಇತರ ಹೆಂಗಸರನ್ನು ದೂಷಿಸುವುದರಿಂದಲ್ಲದೆ ಹೋದರೆ ಇನ್ನಾವುದರಿಂದ ತೃಪ್ತಿ ಹೊಂದಬೇಕು?
{{gap}}ಎಲ್ಲ ಕೇಳಿ, ಎಲ್ಲ ನೋಡಿ, “ನಿನ್ನ ಮೇಲೆ ವಿಶ್ವಾಸವಿದೆ' ಅನ್ನುವ ಸತೀಶನನ್ನು ಎತ್ತಿ ಅವನ ಫ್ಯಾಕ್ಟರಿಯೊಳಗಿನ ಬೆಂಕಿಯುಗುಳುವ ಬಂಬಿನಲ್ಲಿ ಹಾಕಬೇಕು ಅನ್ನಿಸುವುದು....<br />
{{gap}}—ಆದರೆ ಬಹುಶಃ ಇದರಲ್ಲಿ ಅವನ ತಪ್ಪಿಲ್ಲ, ಅವನಿಗೆ ತನ್ನ ಹೆಂಡತಿಯ ಬಗೆಗಿನ ಸತ್ಯವನ್ನು ಅರಿತು ಎದುರಿಸುವ ಧೈಯ್ಯವಿರಲಾರದು ; ಅಂತೆಯೆ ಅವಳ ತಪ್ಪನ್ನು ತಾನು ಕ್ಷಮಿಸಿದ್ದೇನೆಂದುಕೊಂಡು, ಇಷ್ಟೆಲ್ಲ ಆದರೂ ಅವಳನ್ನು ಬಿಡದೆ ಪ್ರೀತಿಸುತ್ತಿರುವೆನೆಂದುಕೊಂಡು, ಅವಳಿಗಾಗಿಯೇ ಅವಳೊಂದಿಗಿದ್ದು ಅವಳನ್ನು ಜಗತ್ತಿನ ಎಲ್ಲ ದುಃಖ-ಕಷ್ಟಗಳಿಂದ ಕಾಯುತ್ತಿರುವೆನೆಂದುಕೊಂಡು, ಅವಳಿಗಾಗಿ ತ್ಯಾಗ ಮಾಡುತ್ತಿರುವೆನೆಂದುಕೊಂಡು ಸಮಾಧಾನದಿಂದಿದ್ದಾನೆ ಅವನು.<br />
{{gap}} ಹ್ಞ -ತ್ಯಾಗ, ಪ್ರೀತಿಸುವ ವ್ಯಕ್ತಿಯಲ್ಲಿ ನಂಬಿಕೆಯಿದ್ದಾಗ ಮಾಡುವ ತ್ಯಾಗಕ್ಕಿಂತಲೂ, ನಂಬಿಕೆಯಿಲ್ಲದೇ ಬರೇ ಪ್ರೀತಿಗಾಗಿ ಮಾಡುವ ತ್ಯಾಗ ದೊಡ್ಡದೆಂದು ಹಿಂದೆಂದೋ ಕೇಳಿದ ನೆನಪು. ಸತೀಶನಿಗೆ ತನ್ನಲ್ಲಿ ನಂಬಿಕೆಯಿಲ್ಲವೆಂದು ತನಗೆ ಗೊತ್ತಿದೆ. ಹಾಗಾದರೆ ಪ್ರೀತಿಯಿರಬಹುದೇ ?<br />
{{gap}}ಯಾಕೊ ಇಷ್ಟು ವರ್ಷಗಳ ನಂತರ ಒಮ್ಮೆಲೆ ಅವನ ಬಗ್ಗೆ 'ಪಾಪ !" ಅನಿಸುತ್ತಲಿದೆ....ಬೆಳಗು, ಮಿರಜ ಸ್ಟೇಶನ್ ಬಂತು. ಚಹಾ-ಕಾಫಿ-ವಡೆಗಳ ಧಾಂದಲೆ....<br />
{{gap}}—'ಅಷ್ಟದೂರದಿಂದ ಇಷ್ಟೆಲ್ಲಾ ತ್ರಾಸು ಸಹನ ಮಾಡಿಕೊಂಡು ನೀ ಒಬ್ಯಾಕಿ ನೋಡವಾ ಇಲ್ಲೀ ತನಕಾ ಬಂದು ನಮ್ಮನ್ನ ನೋಡೂವಾಕಿ. ಉಳಿದ ಅಕ್ಕಾ-ತಂಗೇರು ಲಗ್ನಾದಕೂಡಲೆ ತವರಮನಿ ಮರತಬಿಟ್ಟಾರ. ನೀ ಮಾತ್ರ ಸ್ವಲ್ಪೂ ಬದಲಾಗಿಲ್ಲ. ಅವ್ವಾ-ಅಪ್ಪಾ ತೀರಿಕೊಂಡ ಮ್ಯಾಲೂ ನಿನಗ ತವರಮನೀ ಮ್ಯಾಲಿನ ಪ್ರೀತಿ ಹಾಂಗ ಆದ. ತಪ್ಪದ ಬಂದು ಬೆಟ್ಟಿ ಆಗತೀ.' – ಅನ್ನುತ್ತಾನೆ ಹುಬ್ಬಳ್ಳಿಯಲ್ಲಿಯ ತಮ್ಮ, ತಾನು ಅಲ್ಲಿಗೆ ಹೋದ ಪ್ರತಿಸಲ. ಅವನ ಹೆಂಡತಿ ಮನೆತುಂಬ ಓಡಾಡಿ ಸಿಹಿತಿಂಡಿ ಮಾಡುತ್ತಾಳೆ. ಮಧ್ಯಾಹ್ನ ಊಟ ಮುಗಿಸಿ ಅಡ್ಡಾದಾಗ ಮೆಲ್ಲನೆ ಹೇಳುತ್ತಾಳೆ, “ನಮ್ಮ ಸುಶೀಗೆ ಪರಕಾರ ಹರದುಹೋಗ್ಯಾವ ನೋಡಿದ್ರೆಲಾ ವೈನ್, ಹ್ಯಾಂಗೂ<noinclude><references/></noinclude>
jprrmiane5bg3evm0968jgoxyw7q1gy
321563
321562
2026-05-21T05:18:18Z
Hariprasad Shetty10
7490
321563
proofread-page
text/x-wiki
<noinclude><pagequality level="1" user="Ananth subray" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೫}}</noinclude>ಅವನಿಗೆ ಸಿಟ್ಟು ಬರುವುದಿಲ್ಲ. ಅವನ ಗೆಳೆಯರೊಂದಿಗೆ ತಿರುಗಿದರೂ ಅವನು ಏನೂ ಅನ್ನುವುದಿಲ್ಲ. ಆ ಗೆಳೆಯರ ಹೆಂಡಂದಿರಿಗೆಲ್ಲ ಮಾತ್ರ ತನ್ನ ಮೇಲೆ ವಿಪರೀತ ಸಿಟ್ಟುಆಸೂಯೆ. ಅವರೆಲ್ಲ ಕೂಡಿದಾಗ ಮರೆಯದೆ ಚರ್ಚಿಸುವ, ದೂಷಿಸುವ ವಸ್ತು ತಾನು. ಹ್ಞು : ಗಂಡಂದಿರ ಮೇಲೆ ನಂಬಿಕೆಯಿರದ ದುರ್ದೈವೀ ಹೆಂಡಂದಿರು ಸುಂದರಿಯರಾದ ಇತರ ಹೆಂಗಸರನ್ನು ದೂಷಿಸುವುದರಿಂದಲ್ಲದೆ ಹೋದರೆ ಇನ್ನಾವುದರಿಂದ ತೃಪ್ತಿ ಹೊಂದಬೇಕು?<br />
{{gap}}ಎಲ್ಲ ಕೇಳಿ, ಎಲ್ಲ ನೋಡಿ, “ನಿನ್ನ ಮೇಲೆ ವಿಶ್ವಾಸವಿದೆ' ಅನ್ನುವ ಸತೀಶನನ್ನು ಎತ್ತಿ ಅವನ ಫ್ಯಾಕ್ಟರಿಯೊಳಗಿನ ಬೆಂಕಿಯುಗುಳುವ ಬಂಬಿನಲ್ಲಿ ಹಾಕಬೇಕು ಅನ್ನಿಸುವುದು....<br />
{{gap}}—ಆದರೆ ಬಹುಶಃ ಇದರಲ್ಲಿ ಅವನ ತಪ್ಪಿಲ್ಲ, ಅವನಿಗೆ ತನ್ನ ಹೆಂಡತಿಯ ಬಗೆಗಿನ ಸತ್ಯವನ್ನು ಅರಿತು ಎದುರಿಸುವ ಧೈಯ್ಯವಿರಲಾರದು ; ಅಂತೆಯೆ ಅವಳ ತಪ್ಪನ್ನು ತಾನು ಕ್ಷಮಿಸಿದ್ದೇನೆಂದುಕೊಂಡು, ಇಷ್ಟೆಲ್ಲ ಆದರೂ ಅವಳನ್ನು ಬಿಡದೆ ಪ್ರೀತಿಸುತ್ತಿರುವೆನೆಂದುಕೊಂಡು, ಅವಳಿಗಾಗಿಯೇ ಅವಳೊಂದಿಗಿದ್ದು ಅವಳನ್ನು ಜಗತ್ತಿನ ಎಲ್ಲ ದುಃಖ-ಕಷ್ಟಗಳಿಂದ ಕಾಯುತ್ತಿರುವೆನೆಂದುಕೊಂಡು, ಅವಳಿಗಾಗಿ ತ್ಯಾಗ ಮಾಡುತ್ತಿರುವೆನೆಂದುಕೊಂಡು ಸಮಾಧಾನದಿಂದಿದ್ದಾನೆ ಅವನು.<br />
{{gap}} ಹ್ಞ -ತ್ಯಾಗ, ಪ್ರೀತಿಸುವ ವ್ಯಕ್ತಿಯಲ್ಲಿ ನಂಬಿಕೆಯಿದ್ದಾಗ ಮಾಡುವ ತ್ಯಾಗಕ್ಕಿಂತಲೂ, ನಂಬಿಕೆಯಿಲ್ಲದೇ ಬರೇ ಪ್ರೀತಿಗಾಗಿ ಮಾಡುವ ತ್ಯಾಗ ದೊಡ್ಡದೆಂದು ಹಿಂದೆಂದೋ ಕೇಳಿದ ನೆನಪು. ಸತೀಶನಿಗೆ ತನ್ನಲ್ಲಿ ನಂಬಿಕೆಯಿಲ್ಲವೆಂದು ತನಗೆ ಗೊತ್ತಿದೆ. ಹಾಗಾದರೆ ಪ್ರೀತಿಯಿರಬಹುದೇ ?<br />
{{gap}}ಯಾಕೊ ಇಷ್ಟು ವರ್ಷಗಳ ನಂತರ ಒಮ್ಮೆಲೆ ಅವನ ಬಗ್ಗೆ 'ಪಾಪ !" ಅನಿಸುತ್ತಲಿದೆ....ಬೆಳಗು, ಮಿರಜ ಸ್ಟೇಶನ್ ಬಂತು. ಚಹಾ-ಕಾಫಿ-ವಡೆಗಳ ಧಾಂದಲೆ....<br />
{{gap}}—'ಅಷ್ಟದೂರದಿಂದ ಇಷ್ಟೆಲ್ಲಾ ತ್ರಾಸು ಸಹನ ಮಾಡಿಕೊಂಡು ನೀ ಒಬ್ಯಾಕಿ ನೋಡವಾ ಇಲ್ಲೀ ತನಕಾ ಬಂದು ನಮ್ಮನ್ನ ನೋಡೂವಾಕಿ. ಉಳಿದ ಅಕ್ಕಾ-ತಂಗೇರು ಲಗ್ನಾದಕೂಡಲೆ ತವರಮನಿ ಮರತಬಿಟ್ಟಾರ. ನೀ ಮಾತ್ರ ಸ್ವಲ್ಪೂ ಬದಲಾಗಿಲ್ಲ. ಅವ್ವಾ-ಅಪ್ಪಾ ತೀರಿಕೊಂಡ ಮ್ಯಾಲೂ ನಿನಗ ತವರಮನೀ ಮ್ಯಾಲಿನ ಪ್ರೀತಿ ಹಾಂಗ ಆದ. ತಪ್ಪದ ಬಂದು ಬೆಟ್ಟಿ ಆಗತೀ.' – ಅನ್ನುತ್ತಾನೆ ಹುಬ್ಬಳ್ಳಿಯಲ್ಲಿಯ ತಮ್ಮ, ತಾನು ಅಲ್ಲಿಗೆ ಹೋದ ಪ್ರತಿಸಲ. ಅವನ ಹೆಂಡತಿ ಮನೆತುಂಬ ಓಡಾಡಿ ಸಿಹಿತಿಂಡಿ ಮಾಡುತ್ತಾಳೆ. ಮಧ್ಯಾಹ್ನ ಊಟ ಮುಗಿಸಿ ಅಡ್ಡಾದಾಗ ಮೆಲ್ಲನೆ ಹೇಳುತ್ತಾಳೆ, “ನಮ್ಮ ಸುಶೀಗೆ ಪರಕಾರ ಹರದುಹೋಗ್ಯಾವ ನೋಡಿದ್ರೆಲಾ ವೈನ್, ಹ್ಯಾಂಗೂ<noinclude><references/></noinclude>
qexon219nhdsj72g008htzqsvwctl5f
321564
321563
2026-05-21T05:18:36Z
Hariprasad Shetty10
7490
/* Proofread */
321564
proofread-page
text/x-wiki
<noinclude><pagequality level="3" user="Hariprasad Shetty10" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೫}}</noinclude>ಅವನಿಗೆ ಸಿಟ್ಟು ಬರುವುದಿಲ್ಲ. ಅವನ ಗೆಳೆಯರೊಂದಿಗೆ ತಿರುಗಿದರೂ ಅವನು ಏನೂ ಅನ್ನುವುದಿಲ್ಲ. ಆ ಗೆಳೆಯರ ಹೆಂಡಂದಿರಿಗೆಲ್ಲ ಮಾತ್ರ ತನ್ನ ಮೇಲೆ ವಿಪರೀತ ಸಿಟ್ಟುಆಸೂಯೆ. ಅವರೆಲ್ಲ ಕೂಡಿದಾಗ ಮರೆಯದೆ ಚರ್ಚಿಸುವ, ದೂಷಿಸುವ ವಸ್ತು ತಾನು. ಹ್ಞು : ಗಂಡಂದಿರ ಮೇಲೆ ನಂಬಿಕೆಯಿರದ ದುರ್ದೈವೀ ಹೆಂಡಂದಿರು ಸುಂದರಿಯರಾದ ಇತರ ಹೆಂಗಸರನ್ನು ದೂಷಿಸುವುದರಿಂದಲ್ಲದೆ ಹೋದರೆ ಇನ್ನಾವುದರಿಂದ ತೃಪ್ತಿ ಹೊಂದಬೇಕು?<br />
{{gap}}ಎಲ್ಲ ಕೇಳಿ, ಎಲ್ಲ ನೋಡಿ, “ನಿನ್ನ ಮೇಲೆ ವಿಶ್ವಾಸವಿದೆ' ಅನ್ನುವ ಸತೀಶನನ್ನು ಎತ್ತಿ ಅವನ ಫ್ಯಾಕ್ಟರಿಯೊಳಗಿನ ಬೆಂಕಿಯುಗುಳುವ ಬಂಬಿನಲ್ಲಿ ಹಾಕಬೇಕು ಅನ್ನಿಸುವುದು....<br />
{{gap}}—ಆದರೆ ಬಹುಶಃ ಇದರಲ್ಲಿ ಅವನ ತಪ್ಪಿಲ್ಲ, ಅವನಿಗೆ ತನ್ನ ಹೆಂಡತಿಯ ಬಗೆಗಿನ ಸತ್ಯವನ್ನು ಅರಿತು ಎದುರಿಸುವ ಧೈಯ್ಯವಿರಲಾರದು ; ಅಂತೆಯೆ ಅವಳ ತಪ್ಪನ್ನು ತಾನು ಕ್ಷಮಿಸಿದ್ದೇನೆಂದುಕೊಂಡು, ಇಷ್ಟೆಲ್ಲ ಆದರೂ ಅವಳನ್ನು ಬಿಡದೆ ಪ್ರೀತಿಸುತ್ತಿರುವೆನೆಂದುಕೊಂಡು, ಅವಳಿಗಾಗಿಯೇ ಅವಳೊಂದಿಗಿದ್ದು ಅವಳನ್ನು ಜಗತ್ತಿನ ಎಲ್ಲ ದುಃಖ-ಕಷ್ಟಗಳಿಂದ ಕಾಯುತ್ತಿರುವೆನೆಂದುಕೊಂಡು, ಅವಳಿಗಾಗಿ ತ್ಯಾಗ ಮಾಡುತ್ತಿರುವೆನೆಂದುಕೊಂಡು ಸಮಾಧಾನದಿಂದಿದ್ದಾನೆ ಅವನು.<br />
{{gap}} ಹ್ಞ -ತ್ಯಾಗ, ಪ್ರೀತಿಸುವ ವ್ಯಕ್ತಿಯಲ್ಲಿ ನಂಬಿಕೆಯಿದ್ದಾಗ ಮಾಡುವ ತ್ಯಾಗಕ್ಕಿಂತಲೂ, ನಂಬಿಕೆಯಿಲ್ಲದೇ ಬರೇ ಪ್ರೀತಿಗಾಗಿ ಮಾಡುವ ತ್ಯಾಗ ದೊಡ್ಡದೆಂದು ಹಿಂದೆಂದೋ ಕೇಳಿದ ನೆನಪು. ಸತೀಶನಿಗೆ ತನ್ನಲ್ಲಿ ನಂಬಿಕೆಯಿಲ್ಲವೆಂದು ತನಗೆ ಗೊತ್ತಿದೆ. ಹಾಗಾದರೆ ಪ್ರೀತಿಯಿರಬಹುದೇ ?<br />
{{gap}}ಯಾಕೊ ಇಷ್ಟು ವರ್ಷಗಳ ನಂತರ ಒಮ್ಮೆಲೆ ಅವನ ಬಗ್ಗೆ 'ಪಾಪ !" ಅನಿಸುತ್ತಲಿದೆ....ಬೆಳಗು, ಮಿರಜ ಸ್ಟೇಶನ್ ಬಂತು. ಚಹಾ-ಕಾಫಿ-ವಡೆಗಳ ಧಾಂದಲೆ....<br />
{{gap}}—'ಅಷ್ಟದೂರದಿಂದ ಇಷ್ಟೆಲ್ಲಾ ತ್ರಾಸು ಸಹನ ಮಾಡಿಕೊಂಡು ನೀ ಒಬ್ಯಾಕಿ ನೋಡವಾ ಇಲ್ಲೀ ತನಕಾ ಬಂದು ನಮ್ಮನ್ನ ನೋಡೂವಾಕಿ. ಉಳಿದ ಅಕ್ಕಾ-ತಂಗೇರು ಲಗ್ನಾದಕೂಡಲೆ ತವರಮನಿ ಮರತಬಿಟ್ಟಾರ. ನೀ ಮಾತ್ರ ಸ್ವಲ್ಪೂ ಬದಲಾಗಿಲ್ಲ. ಅವ್ವಾ-ಅಪ್ಪಾ ತೀರಿಕೊಂಡ ಮ್ಯಾಲೂ ನಿನಗ ತವರಮನೀ ಮ್ಯಾಲಿನ ಪ್ರೀತಿ ಹಾಂಗ ಆದ. ತಪ್ಪದ ಬಂದು ಬೆಟ್ಟಿ ಆಗತೀ.' – ಅನ್ನುತ್ತಾನೆ ಹುಬ್ಬಳ್ಳಿಯಲ್ಲಿಯ ತಮ್ಮ, ತಾನು ಅಲ್ಲಿಗೆ ಹೋದ ಪ್ರತಿಸಲ. ಅವನ ಹೆಂಡತಿ ಮನೆತುಂಬ ಓಡಾಡಿ ಸಿಹಿತಿಂಡಿ ಮಾಡುತ್ತಾಳೆ. ಮಧ್ಯಾಹ್ನ ಊಟ ಮುಗಿಸಿ ಅಡ್ಡಾದಾಗ ಮೆಲ್ಲನೆ ಹೇಳುತ್ತಾಳೆ, “ನಮ್ಮ ಸುಶೀಗೆ ಪರಕಾರ ಹರದುಹೋಗ್ಯಾವ ನೋಡಿದ್ರೆಲಾ ವೈನ್, ಹ್ಯಾಂಗೂ<noinclude><references/></noinclude>
7kofpol4l4iuy0f5d86ll812ptw47r8
321572
321564
2026-05-21T05:55:45Z
Pragathi. BH
7585
/* Validated */
321572
proofread-page
text/x-wiki
<noinclude><pagequality level="4" user="Pragathi. BH" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೫}}</noinclude>ಅವನಿಗೆ ಸಿಟ್ಟು ಬರುವುದಿಲ್ಲ. ಅವನ ಗೆಳೆಯರೊಂದಿಗೆ ತಿರುಗಿದರೂ ಅವನು ಏನೂ ಅನ್ನುವುದಿಲ್ಲ. ಆ ಗೆಳೆಯರ ಹೆಂಡಂದಿರಿಗೆಲ್ಲ ಮಾತ್ರ ತನ್ನ ಮೇಲೆ ವಿಪರೀತ ಸಿಟ್ಟುಆಸೂಯೆ. ಅವರೆಲ್ಲ ಕೂಡಿದಾಗ ಮರೆಯದೆ ಚರ್ಚಿಸುವ, ದೂಷಿಸುವ ವಸ್ತು ತಾನು. ಹ್ಞು : ಗಂಡಂದಿರ ಮೇಲೆ ನಂಬಿಕೆಯಿರದ ದುರ್ದೈವೀ ಹೆಂಡಂದಿರು ಸುಂದರಿಯರಾದ ಇತರ ಹೆಂಗಸರನ್ನು ದೂಷಿಸುವುದರಿಂದಲ್ಲದೆ ಹೋದರೆ ಇನ್ನಾವುದರಿಂದ ತೃಪ್ತಿ ಹೊಂದಬೇಕು?<br />
{{gap}}ಎಲ್ಲ ಕೇಳಿ, ಎಲ್ಲ ನೋಡಿ, “ನಿನ್ನ ಮೇಲೆ ವಿಶ್ವಾಸವಿದೆ' ಅನ್ನುವ ಸತೀಶನನ್ನು ಎತ್ತಿ ಅವನ ಫ್ಯಾಕ್ಟರಿಯೊಳಗಿನ ಬೆಂಕಿಯುಗುಳುವ ಬಂಬಿನಲ್ಲಿ ಹಾಕಬೇಕು ಅನ್ನಿಸುವುದು....<br />
{{gap}}—ಆದರೆ ಬಹುಶಃ ಇದರಲ್ಲಿ ಅವನ ತಪ್ಪಿಲ್ಲ, ಅವನಿಗೆ ತನ್ನ ಹೆಂಡತಿಯ ಬಗೆಗಿನ ಸತ್ಯವನ್ನು ಅರಿತು ಎದುರಿಸುವ ಧೈಯ್ಯವಿರಲಾರದು ; ಅಂತೆಯೆ ಅವಳ ತಪ್ಪನ್ನು ತಾನು ಕ್ಷಮಿಸಿದ್ದೇನೆಂದುಕೊಂಡು, ಇಷ್ಟೆಲ್ಲ ಆದರೂ ಅವಳನ್ನು ಬಿಡದೆ ಪ್ರೀತಿಸುತ್ತಿರುವೆನೆಂದುಕೊಂಡು, ಅವಳಿಗಾಗಿಯೇ ಅವಳೊಂದಿಗಿದ್ದು ಅವಳನ್ನು ಜಗತ್ತಿನ ಎಲ್ಲ ದುಃಖ-ಕಷ್ಟಗಳಿಂದ ಕಾಯುತ್ತಿರುವೆನೆಂದುಕೊಂಡು, ಅವಳಿಗಾಗಿ ತ್ಯಾಗ ಮಾಡುತ್ತಿರುವೆನೆಂದುಕೊಂಡು ಸಮಾಧಾನದಿಂದಿದ್ದಾನೆ ಅವನು.<br />
{{gap}} ಹ್ಞ -ತ್ಯಾಗ, ಪ್ರೀತಿಸುವ ವ್ಯಕ್ತಿಯಲ್ಲಿ ನಂಬಿಕೆಯಿದ್ದಾಗ ಮಾಡುವ ತ್ಯಾಗಕ್ಕಿಂತಲೂ, ನಂಬಿಕೆಯಿಲ್ಲದೇ ಬರೇ ಪ್ರೀತಿಗಾಗಿ ಮಾಡುವ ತ್ಯಾಗ ದೊಡ್ಡದೆಂದು ಹಿಂದೆಂದೋ ಕೇಳಿದ ನೆನಪು. ಸತೀಶನಿಗೆ ತನ್ನಲ್ಲಿ ನಂಬಿಕೆಯಿಲ್ಲವೆಂದು ತನಗೆ ಗೊತ್ತಿದೆ. ಹಾಗಾದರೆ ಪ್ರೀತಿಯಿರಬಹುದೇ ?<br />
{{gap}}ಯಾಕೊ ಇಷ್ಟು ವರ್ಷಗಳ ನಂತರ ಒಮ್ಮೆಲೆ ಅವನ ಬಗ್ಗೆ 'ಪಾಪ !" ಅನಿಸುತ್ತಲಿದೆ....ಬೆಳಗು, ಮಿರಜ ಸ್ಟೇಶನ್ ಬಂತು. ಚಹಾ-ಕಾಫಿ-ವಡೆಗಳ ಧಾಂದಲೆ....<br />
{{gap}}—'ಅಷ್ಟದೂರದಿಂದ ಇಷ್ಟೆಲ್ಲಾ ತ್ರಾಸು ಸಹನ ಮಾಡಿಕೊಂಡು ನೀ ಒಬ್ಯಾಕಿ ನೋಡವಾ ಇಲ್ಲೀ ತನಕಾ ಬಂದು ನಮ್ಮನ್ನ ನೋಡೂವಾಕಿ. ಉಳಿದ ಅಕ್ಕಾ-ತಂಗೇರು ಲಗ್ನಾದಕೂಡಲೆ ತವರಮನಿ ಮರತಬಿಟ್ಟಾರ. ನೀ ಮಾತ್ರ ಸ್ವಲ್ಪೂ ಬದಲಾಗಿಲ್ಲ. ಅವ್ವಾ-ಅಪ್ಪಾ ತೀರಿಕೊಂಡ ಮ್ಯಾಲೂ ನಿನಗ ತವರಮನೀ ಮ್ಯಾಲಿನ ಪ್ರೀತಿ ಹಾಂಗ ಆದ. ತಪ್ಪದ ಬಂದು ಬೆಟ್ಟಿ ಆಗತೀ.' – ಅನ್ನುತ್ತಾನೆ ಹುಬ್ಬಳ್ಳಿಯಲ್ಲಿಯ ತಮ್ಮ, ತಾನು ಅಲ್ಲಿಗೆ ಹೋದ ಪ್ರತಿಸಲ. ಅವನ ಹೆಂಡತಿ ಮನೆತುಂಬ ಓಡಾಡಿ ಸಿಹಿತಿಂಡಿ ಮಾಡುತ್ತಾಳೆ. ಮಧ್ಯಾಹ್ನ ಊಟ ಮುಗಿಸಿ ಅಡ್ಡಾದಾಗ ಮೆಲ್ಲನೆ ಹೇಳುತ್ತಾಳೆ, “ನಮ್ಮ ಸುಶೀಗೆ ಪರಕಾರ ಹರದುಹೋಗ್ಯಾವ ನೋಡಿದ್ರೆಲಾ ವೈನ್, ಹ್ಯಾಂಗೂ<noinclude><references/></noinclude>
gsxyrf8rtixo7i3ms2mayqzl7bsb0gh
ಪುಟ:ನಡೆದದ್ದೇ ದಾರಿ.pdf/೧೩೮
104
76957
321545
169507
2026-05-21T04:44:40Z
Pragathi. BH
7585
/* Proofread */
321545
proofread-page
text/x-wiki
<noinclude><pagequality level="3" user="Pragathi. BH" /></noinclude>________________
ಕೊನೆಯ ದಾರಿ } ಹೊರಟು ಹೋದವನು
೧೩೧
ವರ್ಷದಲ್ಲಿ ಎರಡು-ಮೂರು ಸರೆ ತಪ್ಪದೆ ಹನ್ನೆರಡು ವರ್ಷಗಳಿಂದಲೂ ಹೋಗಿ ಬರುತ್ತಲಿರುವ ದಾರಿ- 'ಯಾಕ ಸುಮ್ಮನ ಆಯಾಸ ಮಾಡಿಕೋತೀ...' ಯಾಕೆ ಹೋಗುತ್ತಿದ್ದೆ ?
- ಮೊದಲು ಅವ್ವ-ಅಪ್ಪ ಇದ್ದರು ಹುಬ್ಬಳ್ಳಿಯಲ್ಲಿ. ತನ್ನ ಲಗ್ನವಾದ ವರ್ಷವೇ ಅವ್ವನಿಗೆ ಸೀರಿಯಸ್ ಬ್ಲಡ್ ಪ್ರೆಶರ್ ಆಯಿತು. ಒಂದೇ ಸವನೆ ಕೆಮ್ಮು ಹತ್ತಿ ಶ್ವಾಸ ಸಿಕ್ಕಿಹಾಕಿಕೊಂಡು, ಈಗಲೇ ಸತ್ತೇಬಿಡುವಳೇನೋ ಎಂದು ಆಸೆ ಹುಟ್ಟಿಸಿ, ಮತ್ತೆ ನೆಟ್ಟಗಾಗಿ, ಮತ್ತೆ ಹೀಗೇ ಆಗಿ, ನಾಲ್ಕು ತಿಂಗಳು ಒದ್ದಾಡಿ ಕಡೆಗೆ ಸತ್ತಳು ಅವ್ವ. ಅವ್ವನ ಹೆಣದ ಮೇಲೆ ಬಿದ್ದು ಅತ್ತರು ತಮ್ಮ-ತಂಗಿ-ಅಕ್ಕ ಎಲ್ಲರೂ ಸುಮ್ಮನೇ ಕೂತಿದ್ದ ತನ್ನನ್ನು ನೋಡಿ ಕೂಡಿದ ಆಪ್ತರಲ್ಲಿನ ಇಬ್ಬರು ಮುದುಕಿಯರು ಗುಸುಗುಸು ಪಿಸುಪಿಸು ನಡೆಸಿದಾಗ ಎಂದಿನಂತೆ ಕೇಳದೆಯೇ ನೆರವಿಗೆ ಬಂದಿದ್ದ ಸತೀಶ, 'ಈಕೀಗೆ ಭಾಳ ಶಾಕ್ ಆಗೇದ್ರೀ ರಮಾಬಾಯರು, ಆದಕ್ಕು ಕಣ್ಣಾಗ ನೀರು ಬರವೊಲ್ಲವು. ಅವ್ವನ ಮಾಲೆ ಭಾಳ ಜೀವ ಈಕೀಗೆ.' ಸತೀಶನ ಲಾಜಿಕ್ ಎಂದಿನಂತೆ ಆಗಲೂ ತಪ್ಪಾಗಿತ್ತು.
ಅವ್ವ ಇದ್ದಾಗ ಅವಳ ಮೇಲೆ, ಮಕ್ಕಳ ಮೇಲೆ, ಜಗತ್ತಿನ ಮೇಲೆಲ್ಲ ಜೋರು ಮಾಡುತ್ತಿದ್ದ ಆ ಮುದುಕ, ಅಪ್ಪ, ಅವ್ವ ಸತ್ತ ಕೂಡಲೆ ಮೆತ್ತಗಾದದ್ದು ನೋಡಿ ಮಜಾ ಅನಿಸಿತ್ತು. ತಾನು ಅಲ್ಲಿರುವ ತನಕ ದಿನವೂ ಅಪ್ಪನಿಗೆ ಗೊತ್ತಾಗದ ಹಾಗೆ ಅವನ ಕೋಲು ಬಚ್ಚಿಡುವುದು, ಸಂಧ್ಯಾವಂದನೆಗೆಂದು ಇಟ್ಟ ಮಡಿನೀರನ್ನು ಮುಟ್ಟಲು ಅಕ್ಕನ ಮಗಳಿಗೆ ಹುರುಪು ಕೊಡುವುದು, ಅಪ್ಪನಿಗೆ ಸೇರದ ಖಾರವನ್ನು ಅಡಿಗೆಗೆ ಹೆಚ್ಚಾಗಿ ಹಾಕುವುದು, ಅವನ ಪ್ರೀತಿಯ ಭಗವದ್ಗೀತೆಯ ಮೇಲೆ ನಾಯಿ ಬಿಟ್ಟು ಹೊಲಸು ಮಾಡಿಸುವುದು - ಹೀಗೆಲ್ಲ ಮಾಡಿದ್ದು ನೆನಪಾಗಿ ತುಟಿಗಳು ಅಗಲವಾದವು. - ಅಪ್ಪ ಮುಂದೆ ಮೂರೇ ತಿಂಗಳಲ್ಲಿ ಹಾಸಿಗೆ ಹಿಡಿದಿದ್ದ. ಅವನ ದೇಹ ಆ ಹಾಸಿಗೆಯೊಂದಿಗೇ ಒಂದಾದಷ್ಟು ಬಡಕಲಾಗಿದ್ದರೂ ಧ್ವನಿ ಮಾತ್ರ ಇನ್ನೂ ದೊಡ್ಡದಿತ್ತು. ''ನೀವೆಲ್ಲಾ ನಾ ಗೊಟಕ್ ಅನ್ನೋ ದಾರೀ ಕಾಯತೀರೋ ಸೂಳೇಮಕ್ಕಳಿರಾ, ನಾ ನಿಮಗ ಭಾರ ಆಗೀನ್ನೋ' ಎಂದೆಲ್ಲ ಅವನು ಕಿರಿಚುತ್ತಿದ್ದಾಗ ಅವನ ಅಪರೋಕ್ಷ ಜ್ಞಾನದ ಅಗಾಧತೆಯ ಬಗ್ಗೆ ಮೆಚ್ಚುಗೆ ಅನಿಸುತ್ತಿತ್ತು.
ಮುಂದೆ ಒಂದು ದಿನ ಮುಂಜಾನೆ ಅಪ್ಪ ಎದ್ದಿರಲೇ ಇಲ್ಲ. 'ಅಪ್ಪಾ, ಅಪ್ಪಾ, ಕಣ್ಣು ತಗೀಯಪ್ಪಾ' ಎಂದು ಬೊಬ್ಬಿರಿದಿದ್ದ ತಮ್ಮ. ಅಪ್ಪ ನಿದ್ದೆಯಲ್ಲೇ ಸತ್ತು ಪುಣ್ಯವಂತನಾಗಿದ್ದ. ತಮ್ಮ ಸುಳ್ಳೇ ಡಾಕ್ಟರನ್ನು ಕರೆಯಲು ಓಡಿದ್ದ.<noinclude><references/></noinclude>
3dh1rb59pxbqnjp6ij7qrzzg6z4gulu
321553
321545
2026-05-21T04:58:22Z
Hariprasad Shetty10
7490
321553
proofread-page
text/x-wiki
<noinclude><pagequality level="3" user="Pragathi. BH" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೧}}</noinclude>ವರ್ಷದಲ್ಲಿ ಎರಡು-ಮೂರು ಸರೆ ತಪ್ಪದೆ ಹನ್ನೆರಡು ವರ್ಷಗಳಿಂದಲೂ ಹೋಗಿ ಬರುತ್ತಲಿರುವ ದಾರಿ- 'ಯಾಕ ಸುಮ್ಮನ ಆಯಾಸ ಮಾಡಿಕೋತೀ...' ಯಾಕೆ ಹೋಗುತ್ತಿದ್ದೆ ?
- ಮೊದಲು ಅವ್ವ-ಅಪ್ಪ ಇದ್ದರು ಹುಬ್ಬಳ್ಳಿಯಲ್ಲಿ. ತನ್ನ ಲಗ್ನವಾದ ವರ್ಷವೇ ಅವ್ವನಿಗೆ ಸೀರಿಯಸ್ ಬ್ಲಡ್ ಪ್ರೆಶರ್ ಆಯಿತು. ಒಂದೇ ಸವನೆ ಕೆಮ್ಮು ಹತ್ತಿ ಶ್ವಾಸ ಸಿಕ್ಕಿಹಾಕಿಕೊಂಡು, ಈಗಲೇ ಸತ್ತೇಬಿಡುವಳೇನೋ ಎಂದು ಆಸೆ ಹುಟ್ಟಿಸಿ, ಮತ್ತೆ ನೆಟ್ಟಗಾಗಿ, ಮತ್ತೆ ಹೀಗೇ ಆಗಿ, ನಾಲ್ಕು ತಿಂಗಳು ಒದ್ದಾಡಿ ಕಡೆಗೆ ಸತ್ತಳು ಅವ್ವ. ಅವ್ವನ ಹೆಣದ ಮೇಲೆ ಬಿದ್ದು ಅತ್ತರು ತಮ್ಮ-ತಂಗಿ-ಅಕ್ಕ ಎಲ್ಲರೂ ಸುಮ್ಮನೇ ಕೂತಿದ್ದ ತನ್ನನ್ನು ನೋಡಿ ಕೂಡಿದ ಆಪ್ತರಲ್ಲಿನ ಇಬ್ಬರು ಮುದುಕಿಯರು ಗುಸುಗುಸು ಪಿಸುಪಿಸು ನಡೆಸಿದಾಗ ಎಂದಿನಂತೆ ಕೇಳದೆಯೇ ನೆರವಿಗೆ ಬಂದಿದ್ದ ಸತೀಶ, 'ಈಕೀಗೆ ಭಾಳ ಶಾಕ್ ಆಗೇದ್ರೀ ರಮಾಬಾಯರು, ಆದಕ್ಕು ಕಣ್ಣಾಗ ನೀರು ಬರವೊಲ್ಲವು. ಅವ್ವನ ಮಾಲೆ ಭಾಳ ಜೀವ ಈಕೀಗೆ.' ಸತೀಶನ ಲಾಜಿಕ್ ಎಂದಿನಂತೆ ಆಗಲೂ ತಪ್ಪಾಗಿತ್ತು.
ಅವ್ವ ಇದ್ದಾಗ ಅವಳ ಮೇಲೆ, ಮಕ್ಕಳ ಮೇಲೆ, ಜಗತ್ತಿನ ಮೇಲೆಲ್ಲ ಜೋರು ಮಾಡುತ್ತಿದ್ದ ಆ ಮುದುಕ, ಅಪ್ಪ, ಅವ್ವ ಸತ್ತ ಕೂಡಲೆ ಮೆತ್ತಗಾದದ್ದು ನೋಡಿ ಮಜಾ ಅನಿಸಿತ್ತು. ತಾನು ಅಲ್ಲಿರುವ ತನಕ ದಿನವೂ ಅಪ್ಪನಿಗೆ ಗೊತ್ತಾಗದ ಹಾಗೆ ಅವನ ಕೋಲು ಬಚ್ಚಿಡುವುದು, ಸಂಧ್ಯಾವಂದನೆಗೆಂದು ಇಟ್ಟ ಮಡಿನೀರನ್ನು ಮುಟ್ಟಲು ಅಕ್ಕನ ಮಗಳಿಗೆ ಹುರುಪು ಕೊಡುವುದು, ಅಪ್ಪನಿಗೆ ಸೇರದ ಖಾರವನ್ನು ಅಡಿಗೆಗೆ ಹೆಚ್ಚಾಗಿ ಹಾಕುವುದು, ಅವನ ಪ್ರೀತಿಯ ಭಗವದ್ಗೀತೆಯ ಮೇಲೆ ನಾಯಿ ಬಿಟ್ಟು ಹೊಲಸು ಮಾಡಿಸುವುದು - ಹೀಗೆಲ್ಲ ಮಾಡಿದ್ದು ನೆನಪಾಗಿ ತುಟಿಗಳು ಅಗಲವಾದವು. - ಅಪ್ಪ ಮುಂದೆ ಮೂರೇ ತಿಂಗಳಲ್ಲಿ ಹಾಸಿಗೆ ಹಿಡಿದಿದ್ದ. ಅವನ ದೇಹ ಆ ಹಾಸಿಗೆಯೊಂದಿಗೇ ಒಂದಾದಷ್ಟು ಬಡಕಲಾಗಿದ್ದರೂ ಧ್ವನಿ ಮಾತ್ರ ಇನ್ನೂ ದೊಡ್ಡದಿತ್ತು. ''ನೀವೆಲ್ಲಾ ನಾ ಗೊಟಕ್ ಅನ್ನೋ ದಾರೀ ಕಾಯತೀರೋ ಸೂಳೇಮಕ್ಕಳಿರಾ, ನಾ ನಿಮಗ ಭಾರ ಆಗೀನ್ನೋ' ಎಂದೆಲ್ಲ ಅವನು ಕಿರಿಚುತ್ತಿದ್ದಾಗ ಅವನ ಅಪರೋಕ್ಷ ಜ್ಞಾನದ ಅಗಾಧತೆಯ ಬಗ್ಗೆ ಮೆಚ್ಚುಗೆ ಅನಿಸುತ್ತಿತ್ತು.
ಮುಂದೆ ಒಂದು ದಿನ ಮುಂಜಾನೆ ಅಪ್ಪ ಎದ್ದಿರಲೇ ಇಲ್ಲ. 'ಅಪ್ಪಾ, ಅಪ್ಪಾ, ಕಣ್ಣು ತಗೀಯಪ್ಪಾ' ಎಂದು ಬೊಬ್ಬಿರಿದಿದ್ದ ತಮ್ಮ. ಅಪ್ಪ ನಿದ್ದೆಯಲ್ಲೇ ಸತ್ತು ಪುಣ್ಯವಂತನಾಗಿದ್ದ. ತಮ್ಮ ಸುಳ್ಳೇ ಡಾಕ್ಟರನ್ನು ಕರೆಯಲು ಓಡಿದ್ದ.<noinclude><references/></noinclude>
dzbv9cb7e04u86gqkfxxcvxlqqr0hne
321554
321553
2026-05-21T05:00:02Z
Hariprasad Shetty10
7490
321554
proofread-page
text/x-wiki
<noinclude><pagequality level="3" user="Pragathi. BH" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೧}}</noinclude>ವರ್ಷದಲ್ಲಿ ಎರಡು-ಮೂರು ಸರೆ ತಪ್ಪದೆ ಹನ್ನೆರಡು ವರ್ಷಗಳಿಂದಲೂ ಹೋಗಿ ಬರುತ್ತಲಿರುವ ದಾರಿ- 'ಯಾಕ ಸುಮ್ಮನ ಆಯಾಸ ಮಾಡಿಕೋತೀ...' ಯಾಕೆ ಹೋಗುತ್ತಿದ್ದೆ ?<br />
{{gap}}—ಮೊದಲು ಅವ್ವ-ಅಪ್ಪ ಇದ್ದರು ಹುಬ್ಬಳ್ಳಿಯಲ್ಲಿ. ತನ್ನ ಲಗ್ನವಾದ ವರ್ಷವೇ ಅವ್ವನಿಗೆ ಸೀರಿಯಸ್ ಬ್ಲಡ್ ಪ್ರೆಶರ್ ಆಯಿತು. ಒಂದೇ ಸವನೆ ಕೆಮ್ಮು ಹತ್ತಿ ಶ್ವಾಸ ಸಿಕ್ಕಿಹಾಕಿಕೊಂಡು, ಈಗಲೇ ಸತ್ತೇಬಿಡುವಳೇನೋ ಎಂದು ಆಸೆ ಹುಟ್ಟಿಸಿ, ಮತ್ತೆ ನೆಟ್ಟಗಾಗಿ, ಮತ್ತೆ ಹೀಗೇ ಆಗಿ, ನಾಲ್ಕು ತಿಂಗಳು ಒದ್ದಾಡಿ ಕಡೆಗೆ ಸತ್ತಳು ಅವ್ವ. ಅವ್ವನ ಹೆಣದ ಮೇಲೆ ಬಿದ್ದು ಅತ್ತರು ತಮ್ಮ-ತಂಗಿ-ಅಕ್ಕ ಎಲ್ಲರೂ ಸುಮ್ಮನೇ ಕೂತಿದ್ದ ತನ್ನನ್ನು ನೋಡಿ ಕೂಡಿದ ಆಪ್ತರಲ್ಲಿನ ಇಬ್ಬರು ಮುದುಕಿಯರು ಗುಸುಗುಸು ಪಿಸುಪಿಸು ನಡೆಸಿದಾಗ ಎಂದಿನಂತೆ ಕೇಳದೆಯೇ ನೆರವಿಗೆ ಬಂದಿದ್ದ ಸತೀಶ, 'ಈಕೀಗೆ ಭಾಳ ಶಾಕ್ ಆಗೇದ್ರೀ ರಮಾಬಾಯರು, ಆದಕ್ಕು ಕಣ್ಣಾಗ ನೀರು ಬರವೊಲ್ಲವು. ಅವ್ವನ ಮಾಲೆ ಭಾಳ ಜೀವ ಈಕೀಗೆ.' ಸತೀಶನ ಲಾಜಿಕ್ ಎಂದಿನಂತೆ ಆಗಲೂ ತಪ್ಪಾಗಿತ್ತು.<br />
—{{gap}}ಅವ್ವ ಇದ್ದಾಗ ಅವಳ ಮೇಲೆ, ಮಕ್ಕಳ ಮೇಲೆ, ಜಗತ್ತಿನ ಮೇಲೆಲ್ಲ ಜೋರು ಮಾಡುತ್ತಿದ್ದ ಆ ಮುದುಕ, ಅಪ್ಪ, ಅವ್ವ ಸತ್ತ ಕೂಡಲೆ ಮೆತ್ತಗಾದದ್ದು ನೋಡಿ ಮಜಾ ಅನಿಸಿತ್ತು. ತಾನು ಅಲ್ಲಿರುವ ತನಕ ದಿನವೂ ಅಪ್ಪನಿಗೆ ಗೊತ್ತಾಗದ ಹಾಗೆ ಅವನ ಕೋಲು ಬಚ್ಚಿಡುವುದು, ಸಂಧ್ಯಾವಂದನೆಗೆಂದು ಇಟ್ಟ ಮಡಿನೀರನ್ನು ಮುಟ್ಟಲು ಅಕ್ಕನ ಮಗಳಿಗೆ ಹುರುಪು ಕೊಡುವುದು, ಅಪ್ಪನಿಗೆ ಸೇರದ ಖಾರವನ್ನು ಅಡಿಗೆಗೆ ಹೆಚ್ಚಾಗಿ ಹಾಕುವುದು, ಅವನ ಪ್ರೀತಿಯ ಭಗವದ್ಗೀತೆಯ ಮೇಲೆ ನಾಯಿ ಬಿಟ್ಟು ಹೊಲಸು ಮಾಡಿಸುವುದು - ಹೀಗೆಲ್ಲ ಮಾಡಿದ್ದು ನೆನಪಾಗಿ ತುಟಿಗಳು ಅಗಲವಾದವು.
{{gap}}ಅಪ್ಪ ಮುಂದೆ ಮೂರೇ ತಿಂಗಳಲ್ಲಿ ಹಾಸಿಗೆ ಹಿಡಿದಿದ್ದ. ಅವನ ದೇಹ ಆ ಹಾಸಿಗೆಯೊಂದಿಗೇ ಒಂದಾದಷ್ಟು ಬಡಕಲಾಗಿದ್ದರೂ ಧ್ವನಿ ಮಾತ್ರ ಇನ್ನೂ ದೊಡ್ಡದಿತ್ತು. ''ನೀವೆಲ್ಲಾ ನಾ ಗೊಟಕ್ ಅನ್ನೋ ದಾರೀ ಕಾಯತೀರೋ ಸೂಳೇಮಕ್ಕಳಿರಾ, ನಾ ನಿಮಗ ಭಾರ ಆಗೀನ್ನೋ' ಎಂದೆಲ್ಲ ಅವನು ಕಿರಿಚುತ್ತಿದ್ದಾಗ ಅವನ ಅಪರೋಕ್ಷ ಜ್ಞಾನದ ಅಗಾಧತೆಯ ಬಗ್ಗೆ ಮೆಚ್ಚುಗೆ ಅನಿಸುತ್ತಿತ್ತು.
{{gap}}ಮುಂದೆ ಒಂದು ದಿನ ಮುಂಜಾನೆ ಅಪ್ಪ ಎದ್ದಿರಲೇ ಇಲ್ಲ. 'ಅಪ್ಪಾ, ಅಪ್ಪಾ, ಕಣ್ಣು ತಗೀಯಪ್ಪಾ' ಎಂದು ಬೊಬ್ಬಿರಿದಿದ್ದ ತಮ್ಮ. ಅಪ್ಪ ನಿದ್ದೆಯಲ್ಲೇ ಸತ್ತು ಪುಣ್ಯವಂತನಾಗಿದ್ದ. ತಮ್ಮ ಸುಳ್ಳೇ ಡಾಕ್ಟರನ್ನು ಕರೆಯಲು ಓಡಿದ್ದ.<noinclude><references/></noinclude>
68ssfs5m5cyj3483cdthwrcrn7hdb3u
321555
321554
2026-05-21T05:00:37Z
Hariprasad Shetty10
7490
321555
proofread-page
text/x-wiki
<noinclude><pagequality level="3" user="Pragathi. BH" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೧}}</noinclude>ವರ್ಷದಲ್ಲಿ ಎರಡು-ಮೂರು ಸರೆ ತಪ್ಪದೆ ಹನ್ನೆರಡು ವರ್ಷಗಳಿಂದಲೂ ಹೋಗಿ ಬರುತ್ತಲಿರುವ ದಾರಿ- 'ಯಾಕ ಸುಮ್ಮನ ಆಯಾಸ ಮಾಡಿಕೋತೀ...' ಯಾಕೆ ಹೋಗುತ್ತಿದ್ದೆ ?<br />
{{gap}}—ಮೊದಲು ಅವ್ವ-ಅಪ್ಪ ಇದ್ದರು ಹುಬ್ಬಳ್ಳಿಯಲ್ಲಿ. ತನ್ನ ಲಗ್ನವಾದ ವರ್ಷವೇ ಅವ್ವನಿಗೆ ಸೀರಿಯಸ್ ಬ್ಲಡ್ ಪ್ರೆಶರ್ ಆಯಿತು. ಒಂದೇ ಸವನೆ ಕೆಮ್ಮು ಹತ್ತಿ ಶ್ವಾಸ ಸಿಕ್ಕಿಹಾಕಿಕೊಂಡು, ಈಗಲೇ ಸತ್ತೇಬಿಡುವಳೇನೋ ಎಂದು ಆಸೆ ಹುಟ್ಟಿಸಿ, ಮತ್ತೆ ನೆಟ್ಟಗಾಗಿ, ಮತ್ತೆ ಹೀಗೇ ಆಗಿ, ನಾಲ್ಕು ತಿಂಗಳು ಒದ್ದಾಡಿ ಕಡೆಗೆ ಸತ್ತಳು ಅವ್ವ. ಅವ್ವನ ಹೆಣದ ಮೇಲೆ ಬಿದ್ದು ಅತ್ತರು ತಮ್ಮ-ತಂಗಿ-ಅಕ್ಕ ಎಲ್ಲರೂ ಸುಮ್ಮನೇ ಕೂತಿದ್ದ ತನ್ನನ್ನು ನೋಡಿ ಕೂಡಿದ ಆಪ್ತರಲ್ಲಿನ ಇಬ್ಬರು ಮುದುಕಿಯರು ಗುಸುಗುಸು ಪಿಸುಪಿಸು ನಡೆಸಿದಾಗ ಎಂದಿನಂತೆ ಕೇಳದೆಯೇ ನೆರವಿಗೆ ಬಂದಿದ್ದ ಸತೀಶ, 'ಈಕೀಗೆ ಭಾಳ ಶಾಕ್ ಆಗೇದ್ರೀ ರಮಾಬಾಯರು, ಆದಕ್ಕು ಕಣ್ಣಾಗ ನೀರು ಬರವೊಲ್ಲವು. ಅವ್ವನ ಮಾಲೆ ಭಾಳ ಜೀವ ಈಕೀಗೆ.' ಸತೀಶನ ಲಾಜಿಕ್ ಎಂದಿನಂತೆ ಆಗಲೂ ತಪ್ಪಾಗಿತ್ತು.<br />
{{gap}}ಅವ್ವ ಇದ್ದಾಗ ಅವಳ ಮೇಲೆ, ಮಕ್ಕಳ ಮೇಲೆ, ಜಗತ್ತಿನ ಮೇಲೆಲ್ಲ ಜೋರು ಮಾಡುತ್ತಿದ್ದ ಆ ಮುದುಕ, ಅಪ್ಪ, ಅವ್ವ ಸತ್ತ ಕೂಡಲೆ ಮೆತ್ತಗಾದದ್ದು ನೋಡಿ ಮಜಾ ಅನಿಸಿತ್ತು. ತಾನು ಅಲ್ಲಿರುವ ತನಕ ದಿನವೂ ಅಪ್ಪನಿಗೆ ಗೊತ್ತಾಗದ ಹಾಗೆ ಅವನ ಕೋಲು ಬಚ್ಚಿಡುವುದು, ಸಂಧ್ಯಾವಂದನೆಗೆಂದು ಇಟ್ಟ ಮಡಿನೀರನ್ನು ಮುಟ್ಟಲು ಅಕ್ಕನ ಮಗಳಿಗೆ ಹುರುಪು ಕೊಡುವುದು, ಅಪ್ಪನಿಗೆ ಸೇರದ ಖಾರವನ್ನು ಅಡಿಗೆಗೆ ಹೆಚ್ಚಾಗಿ ಹಾಕುವುದು, ಅವನ ಪ್ರೀತಿಯ ಭಗವದ್ಗೀತೆಯ ಮೇಲೆ ನಾಯಿ ಬಿಟ್ಟು ಹೊಲಸು ಮಾಡಿಸುವುದು - ಹೀಗೆಲ್ಲ ಮಾಡಿದ್ದು ನೆನಪಾಗಿ ತುಟಿಗಳು ಅಗಲವಾದವು.
{{gap}}ಅಪ್ಪ ಮುಂದೆ ಮೂರೇ ತಿಂಗಳಲ್ಲಿ ಹಾಸಿಗೆ ಹಿಡಿದಿದ್ದ. ಅವನ ದೇಹ ಆ ಹಾಸಿಗೆಯೊಂದಿಗೇ ಒಂದಾದಷ್ಟು ಬಡಕಲಾಗಿದ್ದರೂ ಧ್ವನಿ ಮಾತ್ರ ಇನ್ನೂ ದೊಡ್ಡದಿತ್ತು. ''ನೀವೆಲ್ಲಾ ನಾ ಗೊಟಕ್ ಅನ್ನೋ ದಾರೀ ಕಾಯತೀರೋ ಸೂಳೇಮಕ್ಕಳಿರಾ, ನಾ ನಿಮಗ ಭಾರ ಆಗೀನ್ನೋ' ಎಂದೆಲ್ಲ ಅವನು ಕಿರಿಚುತ್ತಿದ್ದಾಗ ಅವನ ಅಪರೋಕ್ಷ ಜ್ಞಾನದ ಅಗಾಧತೆಯ ಬಗ್ಗೆ ಮೆಚ್ಚುಗೆ ಅನಿಸುತ್ತಿತ್ತು.
{{gap}}ಮುಂದೆ ಒಂದು ದಿನ ಮುಂಜಾನೆ ಅಪ್ಪ ಎದ್ದಿರಲೇ ಇಲ್ಲ. 'ಅಪ್ಪಾ, ಅಪ್ಪಾ, ಕಣ್ಣು ತಗೀಯಪ್ಪಾ' ಎಂದು ಬೊಬ್ಬಿರಿದಿದ್ದ ತಮ್ಮ. ಅಪ್ಪ ನಿದ್ದೆಯಲ್ಲೇ ಸತ್ತು ಪುಣ್ಯವಂತನಾಗಿದ್ದ. ತಮ್ಮ ಸುಳ್ಳೇ ಡಾಕ್ಟರನ್ನು ಕರೆಯಲು ಓಡಿದ್ದ.<noinclude><references/></noinclude>
1fv99sdzrwgwnzp3vy9g9sh93pprvqt
321556
321555
2026-05-21T05:03:13Z
Hariprasad Shetty10
7490
321556
proofread-page
text/x-wiki
<noinclude><pagequality level="3" user="Pragathi. BH" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೧}}</noinclude>ವರ್ಷದಲ್ಲಿ ಎರಡು-ಮೂರು ಸರೆ ತಪ್ಪದೆ ಹನ್ನೆರಡು ವರ್ಷಗಳಿಂದಲೂ ಹೋಗಿ ಬರುತ್ತಲಿರುವ ದಾರಿ- 'ಯಾಕ ಸುಮ್ಮನ ಆಯಾಸ ಮಾಡಿಕೋತೀ...' ಯಾಕೆ ಹೋಗುತ್ತಿದ್ದೆ ?<br />
{{gap}}—ಮೊದಲು ಅವ್ವ-ಅಪ್ಪ ಇದ್ದರು ಹುಬ್ಬಳ್ಳಿಯಲ್ಲಿ. ತನ್ನ ಲಗ್ನವಾದ ವರ್ಷವೇ ಅವ್ವನಿಗೆ ಸೀರಿಯಸ್ ಬ್ಲಡ್ ಪ್ರೆಶರ್ ಆಯಿತು. ಒಂದೇ ಸವನೆ ಕೆಮ್ಮು ಹತ್ತಿ ಶ್ವಾಸ ಸಿಕ್ಕಿಹಾಕಿಕೊಂಡು, ಈಗಲೇ ಸತ್ತೇಬಿಡುವಳೇನೋ ಎಂದು ಆಸೆ ಹುಟ್ಟಿಸಿ, ಮತ್ತೆ ನೆಟ್ಟಗಾಗಿ, ಮತ್ತೆ ಹೀಗೇ ಆಗಿ, ನಾಲ್ಕು ತಿಂಗಳು ಒದ್ದಾಡಿ ಕಡೆಗೆ ಸತ್ತಳು ಅವ್ವ. ಅವ್ವನ ಹೆಣದ ಮೇಲೆ ಬಿದ್ದು ಅತ್ತರು ತಮ್ಮ-ತಂಗಿ-ಅಕ್ಕ ಎಲ್ಲರೂ ಸುಮ್ಮನೇ ಕೂತಿದ್ದ ತನ್ನನ್ನು ನೋಡಿ ಕೂಡಿದ ಆಪ್ತರಲ್ಲಿನ ಇಬ್ಬರು ಮುದುಕಿಯರು ಗುಸುಗುಸು ಪಿಸುಪಿಸು ನಡೆಸಿದಾಗ ಎಂದಿನಂತೆ ಕೇಳದೆಯೇ ನೆರವಿಗೆ ಬಂದಿದ್ದ ಸತೀಶ, 'ಈಕೀಗೆ ಭಾಳ ಶಾಕ್ ಆಗೇದ್ರೀ ರಮಾಬಾಯರು, ಆದಕ್ಕು ಕಣ್ಣಾಗ ನೀರು ಬರವೊಲ್ಲವು. ಅವ್ವನ ಮಾಲೆ ಭಾಳ ಜೀವ ಈಕೀಗೆ.' ಸತೀಶನ ಲಾಜಿಕ್ ಎಂದಿನಂತೆ ಆಗಲೂ ತಪ್ಪಾಗಿತ್ತು.<br />
{{gap}}ಅವ್ವ ಇದ್ದಾಗ ಅವಳ ಮೇಲೆ, ಮಕ್ಕಳ ಮೇಲೆ, ಜಗತ್ತಿನ ಮೇಲೆಲ್ಲ ಜೋರು ಮಾಡುತ್ತಿದ್ದ ಆ ಮುದುಕ, ಅಪ್ಪ, ಅವ್ವ ಸತ್ತ ಕೂಡಲೆ ಮೆತ್ತಗಾದದ್ದು ನೋಡಿ ಮಜಾ ಅನಿಸಿತ್ತು. ತಾನು ಅಲ್ಲಿರುವ ತನಕ ದಿನವೂ ಅಪ್ಪನಿಗೆ ಗೊತ್ತಾಗದ ಹಾಗೆ ಅವನ ಕೋಲು ಬಚ್ಚಿಡುವುದು, ಸಂಧ್ಯಾವಂದನೆಗೆಂದು ಇಟ್ಟ ಮಡಿನೀರನ್ನು ಮುಟ್ಟಲು ಅಕ್ಕನ ಮಗಳಿಗೆ ಹುರುಪು ಕೊಡುವುದು, ಅಪ್ಪನಿಗೆ ಸೇರದ ಖಾರವನ್ನು ಅಡಿಗೆಗೆ ಹೆಚ್ಚಾಗಿ ಹಾಕುವುದು, ಅವನ ಪ್ರೀತಿಯ ಭಗವದ್ಗೀತೆಯ ಮೇಲೆ ನಾಯಿ ಬಿಟ್ಟು ಹೊಲಸು ಮಾಡಿಸುವುದು - ಹೀಗೆಲ್ಲ ಮಾಡಿದ್ದು ನೆನಪಾಗಿ ತುಟಿಗಳು ಅಗಲವಾದವು.
{{gap}}ಅಪ್ಪ ಮುಂದೆ ಮೂರೇ ತಿಂಗಳಲ್ಲಿ ಹಾಸಿಗೆ ಹಿಡಿದಿದ್ದ. ಅವನ ದೇಹ ಆ ಹಾಸಿಗೆಯೊಂದಿಗೇ ಒಂದಾದಷ್ಟು ಬಡಕಲಾಗಿದ್ದರೂ ಧ್ವನಿ ಮಾತ್ರ ಇನ್ನೂ ದೊಡ್ಡದಿತ್ತು. ''ನೀವೆಲ್ಲಾ ನಾ ಗೊಟಕ್ ಅನ್ನೋ ದಾರೀ ಕಾಯತೀರೋ ಸೂಳೇಮಕ್ಕಳಿರಾ, ನಾ ನಿಮಗ ಭಾರ ಆಗೀನ್ನೋ' ಎಂದೆಲ್ಲ ಅವನು ಕಿರಿಚುತ್ತಿದ್ದಾಗ ಅವನ ಅಪರೋಕ್ಷ ಜ್ಞಾನದ ಅಗಾಧತೆಯ ಬಗ್ಗೆ ಮೆಚ್ಚುಗೆ ಅನಿಸುತ್ತಿತ್ತು.<br />
{{gap}}ಮುಂದೆ ಒಂದು ದಿನ ಮುಂಜಾನೆ ಅಪ್ಪ ಎದ್ದಿರಲೇ ಇಲ್ಲ. 'ಅಪ್ಪಾ, ಅಪ್ಪಾ, ಕಣ್ಣು ತಗೀಯಪ್ಪಾ' ಎಂದು ಬೊಬ್ಬಿರಿದಿದ್ದ ತಮ್ಮ. ಅಪ್ಪ ನಿದ್ದೆಯಲ್ಲೇ ಸತ್ತು ಪುಣ್ಯವಂತನಾಗಿದ್ದ. ತಮ್ಮ ಸುಳ್ಳೇ ಡಾಕ್ಟರನ್ನು ಕರೆಯಲು ಓಡಿದ್ದ.<noinclude><references/></noinclude>
na8z8ois6df4edf36ak3nss6g5zmiyy
321557
321556
2026-05-21T05:03:30Z
Hariprasad Shetty10
7490
321557
proofread-page
text/x-wiki
<noinclude><pagequality level="3" user="Pragathi. BH" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೧}}</noinclude>ವರ್ಷದಲ್ಲಿ ಎರಡು-ಮೂರು ಸರೆ ತಪ್ಪದೆ ಹನ್ನೆರಡು ವರ್ಷಗಳಿಂದಲೂ ಹೋಗಿ ಬರುತ್ತಲಿರುವ ದಾರಿ- 'ಯಾಕ ಸುಮ್ಮನ ಆಯಾಸ ಮಾಡಿಕೋತೀ...' ಯಾಕೆ ಹೋಗುತ್ತಿದ್ದೆ ?<br />
{{gap}}—ಮೊದಲು ಅವ್ವ-ಅಪ್ಪ ಇದ್ದರು ಹುಬ್ಬಳ್ಳಿಯಲ್ಲಿ. ತನ್ನ ಲಗ್ನವಾದ ವರ್ಷವೇ ಅವ್ವನಿಗೆ ಸೀರಿಯಸ್ ಬ್ಲಡ್ ಪ್ರೆಶರ್ ಆಯಿತು. ಒಂದೇ ಸವನೆ ಕೆಮ್ಮು ಹತ್ತಿ ಶ್ವಾಸ ಸಿಕ್ಕಿಹಾಕಿಕೊಂಡು, ಈಗಲೇ ಸತ್ತೇಬಿಡುವಳೇನೋ ಎಂದು ಆಸೆ ಹುಟ್ಟಿಸಿ, ಮತ್ತೆ ನೆಟ್ಟಗಾಗಿ, ಮತ್ತೆ ಹೀಗೇ ಆಗಿ, ನಾಲ್ಕು ತಿಂಗಳು ಒದ್ದಾಡಿ ಕಡೆಗೆ ಸತ್ತಳು ಅವ್ವ. ಅವ್ವನ ಹೆಣದ ಮೇಲೆ ಬಿದ್ದು ಅತ್ತರು ತಮ್ಮ-ತಂಗಿ-ಅಕ್ಕ ಎಲ್ಲರೂ ಸುಮ್ಮನೇ ಕೂತಿದ್ದ ತನ್ನನ್ನು ನೋಡಿ ಕೂಡಿದ ಆಪ್ತರಲ್ಲಿನ ಇಬ್ಬರು ಮುದುಕಿಯರು ಗುಸುಗುಸು ಪಿಸುಪಿಸು ನಡೆಸಿದಾಗ ಎಂದಿನಂತೆ ಕೇಳದೆಯೇ ನೆರವಿಗೆ ಬಂದಿದ್ದ ಸತೀಶ, 'ಈಕೀಗೆ ಭಾಳ ಶಾಕ್ ಆಗೇದ್ರೀ ರಮಾಬಾಯರು, ಆದಕ್ಕು ಕಣ್ಣಾಗ ನೀರು ಬರವೊಲ್ಲವು. ಅವ್ವನ ಮಾಲೆ ಭಾಳ ಜೀವ ಈಕೀಗೆ.' ಸತೀಶನ ಲಾಜಿಕ್ ಎಂದಿನಂತೆ ಆಗಲೂ ತಪ್ಪಾಗಿತ್ತು.<br />
{{gap}}ಅವ್ವ ಇದ್ದಾಗ ಅವಳ ಮೇಲೆ, ಮಕ್ಕಳ ಮೇಲೆ, ಜಗತ್ತಿನ ಮೇಲೆಲ್ಲ ಜೋರು ಮಾಡುತ್ತಿದ್ದ ಆ ಮುದುಕ, ಅಪ್ಪ, ಅವ್ವ ಸತ್ತ ಕೂಡಲೆ ಮೆತ್ತಗಾದದ್ದು ನೋಡಿ ಮಜಾ ಅನಿಸಿತ್ತು. ತಾನು ಅಲ್ಲಿರುವ ತನಕ ದಿನವೂ ಅಪ್ಪನಿಗೆ ಗೊತ್ತಾಗದ ಹಾಗೆ ಅವನ ಕೋಲು ಬಚ್ಚಿಡುವುದು, ಸಂಧ್ಯಾವಂದನೆಗೆಂದು ಇಟ್ಟ ಮಡಿನೀರನ್ನು ಮುಟ್ಟಲು ಅಕ್ಕನ ಮಗಳಿಗೆ ಹುರುಪು ಕೊಡುವುದು, ಅಪ್ಪನಿಗೆ ಸೇರದ ಖಾರವನ್ನು ಅಡಿಗೆಗೆ ಹೆಚ್ಚಾಗಿ ಹಾಕುವುದು, ಅವನ ಪ್ರೀತಿಯ ಭಗವದ್ಗೀತೆಯ ಮೇಲೆ ನಾಯಿ ಬಿಟ್ಟು ಹೊಲಸು ಮಾಡಿಸುವುದು - ಹೀಗೆಲ್ಲ ಮಾಡಿದ್ದು ನೆನಪಾಗಿ ತುಟಿಗಳು ಅಗಲವಾದವು.<br />
{{gap}}ಅಪ್ಪ ಮುಂದೆ ಮೂರೇ ತಿಂಗಳಲ್ಲಿ ಹಾಸಿಗೆ ಹಿಡಿದಿದ್ದ. ಅವನ ದೇಹ ಆ ಹಾಸಿಗೆಯೊಂದಿಗೇ ಒಂದಾದಷ್ಟು ಬಡಕಲಾಗಿದ್ದರೂ ಧ್ವನಿ ಮಾತ್ರ ಇನ್ನೂ ದೊಡ್ಡದಿತ್ತು. ''ನೀವೆಲ್ಲಾ ನಾ ಗೊಟಕ್ ಅನ್ನೋ ದಾರೀ ಕಾಯತೀರೋ ಸೂಳೇಮಕ್ಕಳಿರಾ, ನಾ ನಿಮಗ ಭಾರ ಆಗೀನ್ನೋ' ಎಂದೆಲ್ಲ ಅವನು ಕಿರಿಚುತ್ತಿದ್ದಾಗ ಅವನ ಅಪರೋಕ್ಷ ಜ್ಞಾನದ ಅಗಾಧತೆಯ ಬಗ್ಗೆ ಮೆಚ್ಚುಗೆ ಅನಿಸುತ್ತಿತ್ತು.<br />
{{gap}}ಮುಂದೆ ಒಂದು ದಿನ ಮುಂಜಾನೆ ಅಪ್ಪ ಎದ್ದಿರಲೇ ಇಲ್ಲ. 'ಅಪ್ಪಾ, ಅಪ್ಪಾ, ಕಣ್ಣು ತಗೀಯಪ್ಪಾ' ಎಂದು ಬೊಬ್ಬಿರಿದಿದ್ದ ತಮ್ಮ. ಅಪ್ಪ ನಿದ್ದೆಯಲ್ಲೇ ಸತ್ತು ಪುಣ್ಯವಂತನಾಗಿದ್ದ. ತಮ್ಮ ಸುಳ್ಳೇ ಡಾಕ್ಟರನ್ನು ಕರೆಯಲು ಓಡಿದ್ದ.<noinclude><references/></noinclude>
o9a6ut4pwt1uudxq9x4t7t0nbl8xjrv
321558
321557
2026-05-21T05:04:35Z
Hariprasad Shetty10
7490
321558
proofread-page
text/x-wiki
<noinclude><pagequality level="3" user="Pragathi. BH" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೧}}</noinclude>ವರ್ಷದಲ್ಲಿ ಎರಡು-ಮೂರು ಸರೆ ತಪ್ಪದೆ ಹನ್ನೆರಡು ವರ್ಷಗಳಿಂದಲೂ ಹೋಗಿ ಬರುತ್ತಲಿರುವ ದಾರಿ- 'ಯಾಕ ಸುಮ್ಮನ ಆಯಾಸ ಮಾಡಿಕೋತೀ...' ಯಾಕೆ ಹೋಗುತ್ತಿದ್ದೆ ?<br />
{{gap}}—ಮೊದಲು ಅವ್ವ-ಅಪ್ಪ ಇದ್ದರು ಹುಬ್ಬಳ್ಳಿಯಲ್ಲಿ. ತನ್ನ ಲಗ್ನವಾದ ವರ್ಷವೇ ಅವ್ವನಿಗೆ ಸೀರಿಯಸ್ ಬ್ಲಡ್ ಪ್ರೆಶರ್ ಆಯಿತು. ಒಂದೇ ಸವನೆ ಕೆಮ್ಮು ಹತ್ತಿ ಶ್ವಾಸ ಸಿಕ್ಕಿಹಾಕಿಕೊಂಡು, ಈಗಲೇ ಸತ್ತೇಬಿಡುವಳೇನೋ ಎಂದು ಆಸೆ ಹುಟ್ಟಿಸಿ, ಮತ್ತೆ ನೆಟ್ಟಗಾಗಿ, ಮತ್ತೆ ಹೀಗೇ ಆಗಿ, ನಾಲ್ಕು ತಿಂಗಳು ಒದ್ದಾಡಿ ಕಡೆಗೆ ಸತ್ತಳು ಅವ್ವ. ಅವ್ವನ ಹೆಣದ ಮೇಲೆ ಬಿದ್ದು ಅತ್ತರು ತಮ್ಮ-ತಂಗಿ-ಅಕ್ಕ ಎಲ್ಲರೂ ಸುಮ್ಮನೇ ಕೂತಿದ್ದ ತನ್ನನ್ನು ನೋಡಿ ಕೂಡಿದ ಆಪ್ತರಲ್ಲಿನ ಇಬ್ಬರು ಮುದುಕಿಯರು ಗುಸುಗುಸು ಪಿಸುಪಿಸು ನಡೆಸಿದಾಗ ಎಂದಿನಂತೆ ಕೇಳದೆಯೇ ನೆರವಿಗೆ ಬಂದಿದ್ದ ಸತೀಶ, 'ಈಕೀಗೆ ಭಾಳ ಶಾಕ್ ಆಗೇದ್ರೀ ರಮಾಬಾಯರು, ಆದಕ್ಕು ಕಣ್ಣಾಗ ನೀರು ಬರವೊಲ್ಲವು. ಅವ್ವನ ಮಾಲೆ ಭಾಳ ಜೀವ ಈಕೀಗೆ.' ಸತೀಶನ ಲಾಜಿಕ್ ಎಂದಿನಂತೆ ಆಗಲೂ ತಪ್ಪಾಗಿತ್ತು.<br />
{{gap}}ಅವ್ವ ಇದ್ದಾಗ ಅವಳ ಮೇಲೆ, ಮಕ್ಕಳ ಮೇಲೆ, ಜಗತ್ತಿನ ಮೇಲೆಲ್ಲ ಜೋರು ಮಾಡುತ್ತಿದ್ದ ಆ ಮುದುಕ, ಅಪ್ಪ, ಅವ್ವ ಸತ್ತ ಕೂಡಲೆ ಮೆತ್ತಗಾದದ್ದು ನೋಡಿ ಮಜಾ ಅನಿಸಿತ್ತು. ತಾನು ಅಲ್ಲಿರುವ ತನಕ ದಿನವೂ ಅಪ್ಪನಿಗೆ ಗೊತ್ತಾಗದ ಹಾಗೆ ಅವನ ಕೋಲು ಬಚ್ಚಿಡುವುದು, ಸಂಧ್ಯಾವಂದನೆಗೆಂದು ಇಟ್ಟ ಮಡಿನೀರನ್ನು ಮುಟ್ಟಲು ಅಕ್ಕನ ಮಗಳಿಗೆ ಹುರುಪು ಕೊಡುವುದು, ಅಪ್ಪನಿಗೆ ಸೇರದ ಖಾರವನ್ನು ಅಡಿಗೆಗೆ ಹೆಚ್ಚಾಗಿ ಹಾಕುವುದು, ಅವನ ಪ್ರೀತಿಯ ಭಗವದ್ಗೀತೆಯ ಮೇಲೆ ನಾಯಿ ಬಿಟ್ಟು ಹೊಲಸು ಮಾಡಿಸುವುದು - ಹೀಗೆಲ್ಲ ಮಾಡಿದ್ದು ನೆನಪಾಗಿ ತುಟಿಗಳು ಅಗಲವಾದವು.<br />
{{gap}}ಅಪ್ಪ ಮುಂದೆ ಮೂರೇ ತಿಂಗಳಲ್ಲಿ ಹಾಸಿಗೆ ಹಿಡಿದಿದ್ದ. ಅವನ ದೇಹ ಆ ಹಾಸಿಗೆಯೊಂದಿಗೇ ಒಂದಾದಷ್ಟು ಬಡಕಲಾಗಿದ್ದರೂ ಧ್ವನಿ ಮಾತ್ರ ಇನ್ನೂ ದೊಡ್ಡದಿತ್ತು. "ನೀವೆಲ್ಲಾ ನಾ ಗೊಟಕ್ ಅನ್ನೋ ದಾರೀ ಕಾಯತೀರೋ ಸೂಳೇಮಕ್ಕಳಿರಾ, ನಾ ನಿಮಗ ಭಾರ ಆಗೀನ್ನೋ" ಎಂದೆಲ್ಲ ಅವನು ಕಿರಿಚುತ್ತಿದ್ದಾಗ ಅವನ ಅಪರೋಕ್ಷ ಜ್ಞಾನದ ಅಗಾಧತೆಯ ಬಗ್ಗೆ ಮೆಚ್ಚುಗೆ ಅನಿಸುತ್ತಿತ್ತು.<br />
{{gap}}ಮುಂದೆ ಒಂದು ದಿನ ಮುಂಜಾನೆ ಅಪ್ಪ ಎದ್ದಿರಲೇ ಇಲ್ಲ. 'ಅಪ್ಪಾ, ಅಪ್ಪಾ, ಕಣ್ಣು ತಗೀಯಪ್ಪಾ' ಎಂದು ಬೊಬ್ಬಿರಿದಿದ್ದ ತಮ್ಮ. ಅಪ್ಪ ನಿದ್ದೆಯಲ್ಲೇ ಸತ್ತು ಪುಣ್ಯವಂತನಾಗಿದ್ದ. ತಮ್ಮ ಸುಳ್ಳೇ ಡಾಕ್ಟರನ್ನು ಕರೆಯಲು ಓಡಿದ್ದ.<noinclude><references/></noinclude>
j1dstu3oc5opsvva618ubg9rshumm5t
321559
321558
2026-05-21T05:04:44Z
Hariprasad Shetty10
7490
/* Validated */
321559
proofread-page
text/x-wiki
<noinclude><pagequality level="4" user="Hariprasad Shetty10" />{{rh|left=ಕೊನೆಯ ದಾರಿ/ಹೊರಟು ಹೋದವನು|center=|right=೧೩೧}}</noinclude>ವರ್ಷದಲ್ಲಿ ಎರಡು-ಮೂರು ಸರೆ ತಪ್ಪದೆ ಹನ್ನೆರಡು ವರ್ಷಗಳಿಂದಲೂ ಹೋಗಿ ಬರುತ್ತಲಿರುವ ದಾರಿ- 'ಯಾಕ ಸುಮ್ಮನ ಆಯಾಸ ಮಾಡಿಕೋತೀ...' ಯಾಕೆ ಹೋಗುತ್ತಿದ್ದೆ ?<br />
{{gap}}—ಮೊದಲು ಅವ್ವ-ಅಪ್ಪ ಇದ್ದರು ಹುಬ್ಬಳ್ಳಿಯಲ್ಲಿ. ತನ್ನ ಲಗ್ನವಾದ ವರ್ಷವೇ ಅವ್ವನಿಗೆ ಸೀರಿಯಸ್ ಬ್ಲಡ್ ಪ್ರೆಶರ್ ಆಯಿತು. ಒಂದೇ ಸವನೆ ಕೆಮ್ಮು ಹತ್ತಿ ಶ್ವಾಸ ಸಿಕ್ಕಿಹಾಕಿಕೊಂಡು, ಈಗಲೇ ಸತ್ತೇಬಿಡುವಳೇನೋ ಎಂದು ಆಸೆ ಹುಟ್ಟಿಸಿ, ಮತ್ತೆ ನೆಟ್ಟಗಾಗಿ, ಮತ್ತೆ ಹೀಗೇ ಆಗಿ, ನಾಲ್ಕು ತಿಂಗಳು ಒದ್ದಾಡಿ ಕಡೆಗೆ ಸತ್ತಳು ಅವ್ವ. ಅವ್ವನ ಹೆಣದ ಮೇಲೆ ಬಿದ್ದು ಅತ್ತರು ತಮ್ಮ-ತಂಗಿ-ಅಕ್ಕ ಎಲ್ಲರೂ ಸುಮ್ಮನೇ ಕೂತಿದ್ದ ತನ್ನನ್ನು ನೋಡಿ ಕೂಡಿದ ಆಪ್ತರಲ್ಲಿನ ಇಬ್ಬರು ಮುದುಕಿಯರು ಗುಸುಗುಸು ಪಿಸುಪಿಸು ನಡೆಸಿದಾಗ ಎಂದಿನಂತೆ ಕೇಳದೆಯೇ ನೆರವಿಗೆ ಬಂದಿದ್ದ ಸತೀಶ, 'ಈಕೀಗೆ ಭಾಳ ಶಾಕ್ ಆಗೇದ್ರೀ ರಮಾಬಾಯರು, ಆದಕ್ಕು ಕಣ್ಣಾಗ ನೀರು ಬರವೊಲ್ಲವು. ಅವ್ವನ ಮಾಲೆ ಭಾಳ ಜೀವ ಈಕೀಗೆ.' ಸತೀಶನ ಲಾಜಿಕ್ ಎಂದಿನಂತೆ ಆಗಲೂ ತಪ್ಪಾಗಿತ್ತು.<br />
{{gap}}ಅವ್ವ ಇದ್ದಾಗ ಅವಳ ಮೇಲೆ, ಮಕ್ಕಳ ಮೇಲೆ, ಜಗತ್ತಿನ ಮೇಲೆಲ್ಲ ಜೋರು ಮಾಡುತ್ತಿದ್ದ ಆ ಮುದುಕ, ಅಪ್ಪ, ಅವ್ವ ಸತ್ತ ಕೂಡಲೆ ಮೆತ್ತಗಾದದ್ದು ನೋಡಿ ಮಜಾ ಅನಿಸಿತ್ತು. ತಾನು ಅಲ್ಲಿರುವ ತನಕ ದಿನವೂ ಅಪ್ಪನಿಗೆ ಗೊತ್ತಾಗದ ಹಾಗೆ ಅವನ ಕೋಲು ಬಚ್ಚಿಡುವುದು, ಸಂಧ್ಯಾವಂದನೆಗೆಂದು ಇಟ್ಟ ಮಡಿನೀರನ್ನು ಮುಟ್ಟಲು ಅಕ್ಕನ ಮಗಳಿಗೆ ಹುರುಪು ಕೊಡುವುದು, ಅಪ್ಪನಿಗೆ ಸೇರದ ಖಾರವನ್ನು ಅಡಿಗೆಗೆ ಹೆಚ್ಚಾಗಿ ಹಾಕುವುದು, ಅವನ ಪ್ರೀತಿಯ ಭಗವದ್ಗೀತೆಯ ಮೇಲೆ ನಾಯಿ ಬಿಟ್ಟು ಹೊಲಸು ಮಾಡಿಸುವುದು - ಹೀಗೆಲ್ಲ ಮಾಡಿದ್ದು ನೆನಪಾಗಿ ತುಟಿಗಳು ಅಗಲವಾದವು.<br />
{{gap}}ಅಪ್ಪ ಮುಂದೆ ಮೂರೇ ತಿಂಗಳಲ್ಲಿ ಹಾಸಿಗೆ ಹಿಡಿದಿದ್ದ. ಅವನ ದೇಹ ಆ ಹಾಸಿಗೆಯೊಂದಿಗೇ ಒಂದಾದಷ್ಟು ಬಡಕಲಾಗಿದ್ದರೂ ಧ್ವನಿ ಮಾತ್ರ ಇನ್ನೂ ದೊಡ್ಡದಿತ್ತು. "ನೀವೆಲ್ಲಾ ನಾ ಗೊಟಕ್ ಅನ್ನೋ ದಾರೀ ಕಾಯತೀರೋ ಸೂಳೇಮಕ್ಕಳಿರಾ, ನಾ ನಿಮಗ ಭಾರ ಆಗೀನ್ನೋ" ಎಂದೆಲ್ಲ ಅವನು ಕಿರಿಚುತ್ತಿದ್ದಾಗ ಅವನ ಅಪರೋಕ್ಷ ಜ್ಞಾನದ ಅಗಾಧತೆಯ ಬಗ್ಗೆ ಮೆಚ್ಚುಗೆ ಅನಿಸುತ್ತಿತ್ತು.<br />
{{gap}}ಮುಂದೆ ಒಂದು ದಿನ ಮುಂಜಾನೆ ಅಪ್ಪ ಎದ್ದಿರಲೇ ಇಲ್ಲ. 'ಅಪ್ಪಾ, ಅಪ್ಪಾ, ಕಣ್ಣು ತಗೀಯಪ್ಪಾ' ಎಂದು ಬೊಬ್ಬಿರಿದಿದ್ದ ತಮ್ಮ. ಅಪ್ಪ ನಿದ್ದೆಯಲ್ಲೇ ಸತ್ತು ಪುಣ್ಯವಂತನಾಗಿದ್ದ. ತಮ್ಮ ಸುಳ್ಳೇ ಡಾಕ್ಟರನ್ನು ಕರೆಯಲು ಓಡಿದ್ದ.<noinclude><references/></noinclude>
itc875wkgd9gwdradajwk7nbbd4zms1
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೧
104
85432
321488
320022
2026-05-20T17:57:47Z
Pragathi. BH
7585
/* Validated */
321488
proofread-page
text/x-wiki
<noinclude><pagequality level="4" user="Pragathi. BH" /></noinclude>
{{rh|center=ಮುನ್ನುಡಿ|left=vi|right=}}
ಹು ಟ್ಟಿ ಸಿ ದ ವು. ಪಟ್ಟಣಗಳಲ್ಲಿಯಾದರೋ ಕಲೆ ರಾಜ ಮಹಾರಾಜರ ಶ್ರೀಮಂತರ ಊಳಿಗದ ದಾಸಿಯಾಯಿತು. ಅವರ ಪೋಷಣೆಗೆ ಕೈ ನೀಡುತ್ತಿದ್ದ ಕ ಲಾ ವಿ ದ ರು ತಮ್ಮ ಪ್ರತಿಭೆಯನ್ನು ರಾ ಜ ರ, ಶ್ರೀಮಂತರ ಅ ಭಿ ರು ಚಿ ಗ ನು ಗುಣ ವಾಗಿ + ಮಾ ರ್ಪ ಡಿ ಸಿ ಕೊಂ ಡ ರು. ಪ ಟ್ಟ ಣ ಗ ಳಿ ಗೂ ಹಳ್ಳಿಗಳಿಗೂ ಇರುವ ವಿಶೇಷ ಅಂತರವನ್ನು ನೀಗಬೇಕಾದುದವಶ್ಯಕವಾದರೂ ಹಳ್ಳಿಗಳ ಸಹಜ ಪ್ರತಿಭೆ, ಕಲೆಯ ಆವಿಷ್ಕಾರ ನಾಶವಾಗಲು ಅವಕಾಶ ಕೊಡಬಾರದು. ಹಳ್ಳಿಗಳ ಕಲೆ ಜನಪದ ಸಂಸ್ಕೃತಿಯ (ಭಾರತೀಯ ಋಜುಸಂಸ್ಕೃತಿಯ) ಪ್ರತೀಕವಾಗಿರುವುದು ಮಾತ್ರವಲ್ಲದೆ ರಾಷ್ಟ ಶಕ್ತಿಯ ಮಹಾಸಾಧನವಾಗಿದೆ. ಭಾರತಕ್ಕೆ ಕೀರ್ತಿ ತಂದಿರುವ ಭರತನಾಟ್ಯ, ಕಥಕ್ಕಳಿ, ಮಣಿಪೂರಿ ನೃತ್ಯ ಸಂಪ್ರದಾಯಗಳೂ, ಚೋಳ, ಹೊಯ್ಸಳ, ಚಾಳುಕ್ಯ, ನಾಗರಿ ಶಿಲ್ಪ ಸಂಪ್ರದಾಯಗಳೂ, ಅಜಂತಾ, ಸಿಗ್ರಿಯಾ ಸೀತನ್ನಿವಾಸಲ್, ರಜಪೂತ ಚಿತ್ರಕಲಾ ಸಂಪ್ರದಾಯಗಳೂ, ಕರ್ನಾಟಕ ಸಂಗೀತ ಸಂಪ್ರದಾಯವೂ ಹಳ್ಳಿಗಳಲ್ಲೇ ಹುಟ್ಟಿ ಬೆಳೆದವು. ಶಿಲ್ಪದಲ್ಲಿ ಇಂಡೋ-ಸ್ಯಾರಸನ್ ಸಂಪ್ರದಾಯ, ಚಿತ್ರಕಲೆಯಲ್ಲಿ ಮುಘಲ ಸಂಪ್ರದಾಯ
————————————————————————————————————
" There is no respect in the millionaire who invests his surplus wealth in pictures and the costliest furniture so that his taste may be admired, or his wealth envied, by his poorer brethern. There is none in the man who decorates his house in a style archælogically correct, or dresses himself in the latest fashion, so that he may be considered • up-to-date' by his fellows. There is none in the engineer who having made some hideous construction seeks to beautify it by covering it with meaningless ornament. But there is true art instinct in the humble peasant who takes the choicest flowers he can find and with patience and skill weaves them into a garland for the village shrine. And so there is in the craftsman or labourer who, rejoicing in the cunning of his hand and with no thought of extra profit for himself, puts into his work the best that his knowledge and skill, can produce. " {{Right|-E. B. Havell in THE BASIS OF ARTISTIC AND INDUSTRIAL REVIVAL IN INDIA".}}<noinclude></noinclude>
0vq658o97zv3jbj4rwe4z5n99wsysys
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೨೪
104
85545
321580
196032
2026-05-21T08:39:42Z
Pragathi. BH
7585
/* ಪರಿಶೀಲಿಸಲಾಗಿಲ್ಲ */
321580
proofread-page
text/x-wiki
<noinclude><pagequality level="1" user="Pragathi. BH" /></noinclude>________________
ರುದ್ರಪಟ್ಟಣದ ದೊರೆಸ್ವಾಮಿ ವಿಕೃತಾವಸ್ಥೆಯಲ್ಲಿ ಕೊರಗುತ್ತಿರುವಾಗ ವೀಣಾವಾದನ ಕಲೆ ಮಾತ್ರ ತನ್ನ ವೈಶಿಷ್ಟ್ಯವನ್ನುಳಿಸಿಕೊಂಡಿರುವುದು ಗಮನಾರ್ಹವಾದುದಾಗಿದೆ. ಇಂದಿಗೂ ಸಾಂಬಶಿವ ಅಯ್ಯರ್, ವಿ. ಎನ್. ರಾವ್, ಆರ್. ಕೇಶವಮೂರ್ತಿ, ವೆಂಕಟಗಿರಿಯಪ್ಪ, ಏಮನಿ ಶಂಕರಶಾಸ್ತ್ರಿ, ದೊರೆಸ್ವಾಮಿ ಅಯ್ಯಂಗಾರ್, ರುದ್ರಪಟ್ಟಣದ ದೊರೆಸ್ವಾಮಿ ಮೊದಲಾದ ಕಲಾವಿದರು ವೀಣೆಯ ಯಶಃ ಕೀರ್ತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ.
ಶ್ರೇಷ್ಠ ಕಲೆ ಕಲಿತವರ, ತಿಳಿದವರ ಸೊತ್ತು. ಅದು ಜನಸಾಮಾನ್ಯಕ್ಕೆ ಒಪ್ಪಿಗೆಯಾಗುವುದಿಲ್ಲ. ಜನಸಾಮಾನ್ಯಕ್ಕೆ ಸಾಧಾರಣ ದರ್ಜೆಯ ಕಲೆಯೇ ಬೇಕು ಎಂದು ವಾದಮಾಡುವವರಿದ್ದಾರೆ. ಈಗ್ಗೆ ಮೂರು ವರ್ಷಗಳ ಹಿಂದೆ ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನ ಕರ್ನಾಟಕ ಸಂಘದ ವಾರ್ಷಿ' ಕೋತ್ಸವದಲ್ಲಿ ನಾನು ಭಾಗವಹಿಸಿದ್ದೆ. ಅಂದು ರುದ್ರಪಟ್ಟಣದ ದೊರೆಸ್ವಾಮಿ ಗಳ ವೀಣಾವಾದನ ಕಾರ್ಯಕ್ರಮದ ಒಂದು ಅಂಗವಾಗಿತ್ತು. ವೇದಿಕೆಯ ಮೇಲೆ ಕುಳಿತು ದೊರೆಸ್ವಾಮಿ ಸಂಪ್ರದಾಯದಂತೆ ಒಂದು ಕೀರ್ತನೆ ನುಡಿಸಿ ದರು. ವಿದ್ಯಾರ್ಥಿಗಳು ಗಲಭೆಗಾರಂಭಿಸಿದರು. ಎರಡನೆಯ ಕೀರ್ತನೆ ಆರಂಭಿಸಿದರು. ಅದನ್ನು ಮುಗಿಸುವುದು ಸಾಧ್ಯವಾಗಲಿಲ್ಲ. ಶ್ರಾವಕರ ಅಭಿ ರುಚಿಯನ್ನರಿತುಕೊಂಡ ದೊರೆಸ್ವಾಮಿ ಕೀರ್ತನೆಗಳ ಕೈ ಬಿಟ್ಟು ತಾನ ನುಡಿಸಿ, ಒಂದು ತಿಲ್ಲಾನ ನುಡಿಸಿದರು. ವಿದ್ಯಾರ್ಥಿಗಳು ಸಂತೋಷಭರಿತರಾದರು. ಸಂಗೀತದ ಕ್ಲಿಷ್ಟ ಅಂಗವಾದ ತಿಲ್ಲಾನವನ್ನು ಜನಸಾಮಾನ್ಯಕ್ಕೆ ರುಚಿಸುವಂತೆ ನುಡಿಸಿ ದೊರೆಸ್ವಾಮಿ ಅವರ ಕಿವಿಯಲ್ಲಿ ಶ್ರೇಷ್ಠ ಸಂಗೀತ ತುಂಬಿದರು. ಜನ ಸಾಮಾನ್ಯಕ್ಕೂ ಶ್ರೇಷ್ಠ ಕಲೆಗೂ ಸಂಬಂಧವಿಲ್ಲವೆಂದು ಕಲಾವಿದರು ತೃಪ್ತರಾ ಗುವುದರ ಬದಲು ಶ್ರೇಷ್ಠ ಕಲೆಯನ್ನು ಜನಸಾಮಾನ್ಯಕ್ಕೆ ಹೇಗೆ ಅರ್ಪಿಸ ಬೇಕೆಂಬುದರ ಕಡೆಗೆ ಅವರ ಲಕ್ಷ ಹೋಗಬೇಕು.
ವರ್ಧಿಷ್ಣುಗಳಾದ ರುದ್ರಪಟ್ಟಣದ ದೊರೆಸ್ವಾಮಿ ಹಿರಿಯಪರಂಪರೆಯನ್ನು ಉಳಿಸಿಕೊಂಡು ಬೆಳಸುತ್ತಿರುವ ಕಲಾವಿದರಾಗಿದ್ದಾರೆ. ೧೯೧೬ ರಲ್ಲಿ ರುದ್ರಪಟ್ಟಣದಲ್ಲಿ ಇವರ ಜನನವಾಯಿತು. ಇವರ ತಾಯಿಯವರ ಕಡೆ ಸಂಗೀತ ಬಲ್ಲವರಿದ್ದರು. ದೊರೆಸ್ವಾಮಿಯವರಲ್ಲಿ ಸಂಗೀತಾಭಿರುಚಿ ಮೊಳೆಯುವುದಕ್ಕೆ ತಾಯಿಯೇ ಕಾರಣರಾದರು. ಹೊಳೇನರಸೀಪುರದಲ್ಲಿ ಐದನೆಯ ಫಾರಮ್<noinclude></noinclude>
5kerqfisu3rkhfji6k3fsonh0gboc5u
ಪುಟ:ಗಿಳಿವಿಂಡು.djvu/೨೨
104
87660
321487
317447
2026-05-20T17:56:35Z
Pragathi. BH
7585
321487
proofread-page
text/x-wiki
<noinclude><pagequality level="3" user="Pragathi. BH" />{{rh|center=ವಿದಾಯ|left=|10right=}}</noinclude>________________
<poem>
ಅಲೆವೆಲರುಸಿರಿಂ ಹುಯ್ಯುವೆನು, ನಿನ್ನೆದೆಯಿಂ ನಿಡುಸುಯ್ಯುವೆನು; ಬಿಮ್ಮನೆ ತೋಳುಗಳಿಂದೆನ್ನ ಬಿಗಿವಿಡಿಯದೊಲೋಡುವೆ ನಿನ್ನ, ನೀರಿನ ಕಿರುದೆರೆಯಾಗುತಲಿ, ಯಾರನ್ನರಿಯದೋಲೀಸುತಲಿ, ಮಾಯುವ ನಿನ್ನನು ಬಲವಂದು ಮುರಿಮುರಿದಪ್ಪಿ ಕೊಳುವೆನಂದು ಪೋಗಗೋಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೊಗಗೊಡು
ಸೂಸುವ ಸೇಸೆಯ ಸೋನೆಯಲಿ ಇರುಳಲಿ ನೀನಮ್ಮ ಮನೆಯಲಿ ಒಂಟಿ ಮಲಗಿ ನಮ್ಮ ಹಸೆಯಲ್ಲಿ ಮಯೂರೆತೆನ್ನನೆ ನೆನೆವಲ್ಲಿ, ತಟತಟ ತಟಕುವ ತನಿಯೆಲೆಯಿಂ ತೊದಲಾಡುವೆನಿಂಬನಿಯುಲಿಯಿಂ ಮುಚ್ಚಲು ಮರೆತಿಹ ಕಿಟಕಿಗಳಿಂ ಮಿಂಚುವ ಮಿಂಚಿನ ಮೊಟಕುಗಳಿಂಅಂದಿನ ನನ್ನಟ್ಟಸವನ್ನ ಬಗೆಯಲಳವೆ ಅನ್ನಾ ನಿನ್ನ ?
ಮೂಾರಿದಿರುಳ ಕಗ್ಗತ್ತಲಲಿ ನೀನೆಚ್ಚರವಿರೆ ಮರುಗುತಲಿ, ಮಿರುರೆಪ್ಪೆಯ ತಾರಗೆಯಾಗಿ ಮಲಗಪ್ಪಾ ಎನುವೆನು ಬಾಗಿ ಅಳಲಿ ಬಳಲಿ ಕಡೆಯಲಿ ದಣಿದು ಪವಡಿಸುತಲೆ ನೀನರೆಮಣಿದು, ಚಂದ್ರುನ ಪೊದೆಗದಿರಾಗುವೆನು,
</poem><noinclude></noinclude>
jgwiqjm8vclilm2tadbtfopgyea5w5l
ಪುಟ:Elu Suthina Kote.pdf/೧೨
104
90711
321493
234124
2026-05-20T18:06:13Z
Pragathi. BH
7585
/* Validated */
321493
proofread-page
text/x-wiki
<noinclude><pagequality level="4" user="Pragathi. BH" />xii</noinclude>{{center|== ಮುನ್ನುಡಿ ==}}
ಒಂದು ಛಂದೋಗತಿಯಲ್ಲಿ ಹರಿಯುವ ಪದಪುಂಜಗಳಿಂದ ಒಂದು
ಬಗೆಯಲ್ಲಿ ಸಂಯೋಜಿತವಾದ ಜೀವನ ಚಿತ್ರಗಳನ್ನೂ ರೂಪಕಗಳನ್ನೂ ವ್ಯಕ್ತಗೊಳಿಸುತ್ತಾ
ಭಾವ ಪ್ರಪಂಚಗಳನ್ನು ನಿರ್ಮಿಸುವುದು ಕಾವ್ಯ ಕಾಲಕಾಲಕ್ಕೆ ಈ ಛಂದೋಗತಿ,
ಈ ಜೀವನಚಿತ್ರ ಸಂಯೋಜನೆಯ ಕ್ರಮ ಬದಲಾಯಿಸುತ್ತ ಹೋಗುವುದು ಅತ್ಯಂತ
ಅವಶ್ಯಕ. ಬರದುದನ್ನು ಅಳಿಸಿ ಅದರ ಮೇಲೆ ಇನ್ನೊಮ್ಮೆ ಬರದರ ಹೇಗೆ ಬರವಣಿಗೆ
ಅಸ್ಪಷ್ಟವಾಗುವುದೋ ಹಾಗೇ ಮುದಿಯಾದ ಸಂಪ್ರದಾಯದ ಮಾರ್ಗವನ್ನನುಸರಿಸಿ
ಬರದರ ಭಾವಗಳು ಮಸುಕು ಮಸುಕಾಗುತ್ತವೆ. ಕ್ರಾಂತಿಕಾರಿಯಾದ ಕವಿ ಆ
ಹಾಳೆಯನ್ನು ಮಗುಚಿ ಇನ್ನೊಂದು ಹಾಳೆಯ ಮೇಲೆ ಬರೆಯಬೇಕಾಗುತ್ತದೆ.
ಕಾವ್ಯವಾರ್ಗಗಳು ಹುಟ್ಟಿ ಸಾಯುತ್ತಿರುವುದರಿ೦ದಲೇ ಕಾವ್ಯ
ಚಿರಂಜೀವಿಯಾಗಿರುವುದು. ಹೀಗೆ ತನ್ನ ಆಂತರಿಕ ಧರ್ಮದಿಂದಲೇ ಕಾವ್ಯ
ಕ್ರಾಂತಿಪಥವನ್ನು ತುಳಿಯುತ್ತಿರುತ್ತದೆ.
{{gap}}ಅಲ್ಲದೆ ಕಾಲದೇಶ ವರ್ತಮಾನ ಗಳಿಗನುಸಾರವಾಗಿ ಜೀವನ
ಬದಲಾಯಿಸುವಂತೆ ಜೀವನಕ್ಕೆ ಆದರ್ಶವನ್ನು ಹಿಡಿಯುವ ಕಾವ್ಯವೂ
ಬದಲಾಯಿಸಬೇಕಾಗುತ್ತದೆ. ಒಂದೊಂದು ಕಾಲದಲ್ಲಿ ಒಂದೊಂದು ಬಗೆಯಾಗಿ
ಮನುಷ್ಯ ಚಿಂತಿಸುತ್ತಾನೆ, ಭಾವಿಸುತ್ತಾನೆ. ಜೀವನದ ಹೊರ ವ್ಯಯ
ವ್ಯತ್ಯಸ್ತವಾಗುತ್ತಿರುತ್ತದೆ. ಗತಜೀವನದ ಒಳಹೊರಗನ್ನು ವ್ಯಕ್ತಗೊಳಿಸಲು ಶಕ್ತವಾದ
ಒಂದು ಕಾವ್ಯಮಾರ್ಗ ಆಧುನಿಕ ಜೀವನದ ರೂಪಾಂತರಗಳನ್ನು ಚಿತ್ರಿಸಲು
ಅಸಮರ್ಥವಾಗುತ್ತದೆ. ಒಂದೊಂದು ಕಾಲಕ್ಕೂ ಒಂದೊಂದು ವೈಶಿಷ್ಟ್ಯವಿದೆ. ಆ
ವೈಶಿಷ್ಟ್ಯಕ್ಕೆ ತಕ್ಕ ಶೈಲಿಯನ್ನು ಕ್ರಾಂತಿಕಾರಿ ಕವಿ ರಚಿಸುತ್ತಾನೆ. ಆ ಶೈಲಿಯಲ್ಲಿ
ಸೂಕ್ಷ್ಮ ವ್ಯತ್ಯಾಸಗಳನ್ನು ಮಾಡಿಕೊಂಡು ಆ ಕಾಲದ ಒಬ್ಬೊಬ್ಬ ಕವಿಯೂ ತನ್ನ
ತನ್ನ ವೈಶಿಷ್ಟ್ಯವನ್ನು ವ್ಯಕ್ತಪಡಿಸುತ್ತಾನೆ. ಹೀಗೆ ಸೂಕ್ಷ್ಮ ವ್ಯತ್ಯಾಸಗಳನ್ನು ಮಾಡಿಕೊಳ್ಳಲು
ಸಾಧ್ಯವಿರುವವರೆಗೂ ಈ ಹೊಸ ಸಂಪ್ರದಾಯ ನಿಲ್ಲುತ್ತದೆ. ಕಾಲ ಬದಲಾಯಿಸಿದಾಗ
ಹೊಸತಾದ ಭಾವಗಳನ್ನು, ಚಿಂತನೆಗಳನ್ನು ರೂಪಿಸಲು ಮಹತ್ವದ ಬದಲಾವಣೆಯನ್ನೇ
ಕಾವ್ಯಮಾರ್ಗದಲ್ಲಿ ಮಾಡಬೇಕಾಗುತ್ತದೆ. ಹೀಗೆ ಕಾಲಕಾಲಕ್ಕೆ ಪುನಃ
ಮುನರ್ಜಾಯಮಾನವಾಗಿ ಕಾವ್ಯ ನವೋನವವಾಗುತ್ತದೆ.
{{gap}}ಮೊದಲಿನ ಮಹಾಯುದ್ಧವಾದ ಮೇಲೆ ಕನ್ನಡ ಸಾಹಿತ್ಯದಲ್ಲಿ ಒಂದು<noinclude></noinclude>
1h1o7cjluf586zykmxrlor3mff3m0xg
ಪುಟ:Elu Suthina Kote.pdf/೧೩
104
90712
321494
234126
2026-05-20T18:07:06Z
Pragathi. BH
7585
/* Validated */
321494
proofread-page
text/x-wiki
<noinclude><pagequality level="4" user="Pragathi. BH" />xiii</noinclude>ಕ್ರಾಂತಿಯಾಯಿತು. ಕಂದ ಮತ್ತು ಸೀಸಪದ್ಯಗಳು ಹೋಗಿ ಹಲವು ಗೀತ ರೂಪಗಳು
ಬಂದವು. ವೃತ್ತಗಳನ್ನು ಓಡಿಸಿದ್ದ. ಷಟ್ಟದಿಗಳು ಸರಳ ರಗಳೆಯ ಮುಂದೆ ಕಾಲ್ಗೆಗೆದವು.
ಬೇಂದ್ರೆಯವರು ಮೊದಲಲ್ಲಿ ಬರೆದ ಕೆಲವು ಷಟ್ಟದಿಗಳು ತೆಗೆದು ಹಾಕುವಂತಿದಿದ್ದರೂ
ಅವರು ಬಳಿಕ ಬರೆದ ಕೆಲವು ಷಟ್ಟದಿಗಳು ತೆಗೆದು ಹಾಕುವಂತಿಲ್ಲದಿದ್ದರೂ ಅವರು
ಬಳಿಕ ಬರದ ಜಾನಪದ ಗೀತೆಗಳ ಧಾಟಿಯ ಕವಿತೆಗಳಂತೆ ಯಶಸ್ವಿಯಾಗಿಲ್ಲ.
ಈಗಿನ ಕೆಲವು ಕಿರಿಯ ಕವಿಗಳು ಬೇಂದ್ರೆಯವರ ಮಾರ್ಗದಲ್ಲಿ ಬರೆಯುತ್ತಿರುವ
ಕವಿತೆಗಳೂ ಹೀಗೇ ನಿರ್ಜೀವವಾಗುತ್ತಿವೆ, ನಿಸ್ತೇಜವಾಗುತ್ತಿವೆ. ಪುಟ್ಟಪ್ಪನವರ ಮತ್ತು
ಬೇಂದ್ರೆಯವರ ನೆರಳಿನಲ್ಲಿ ನಡೆಯುವ ಕವಿಗಳಿಗೆ ಕಣ್ಣು ಕುರುಡಾಗಿ ಗತಿ
ಕುಂಠಿತವಾಗುತ್ತಿದೆ.
{{gap}}ಎರಡನೆ ಮಹಾಯುದ್ಧವಾದ ಮೇಲೆ ನಮ್ಮ ಜೀವನವೇ ಬಹು ಮಟ್ಟಿಗೆ
ಬದಲಾಯಿಸಿಬಿಟ್ಟಿದೆ. ಸ್ವಾತಂತ್ರ್ಯಸಂಗ್ರಾಮದ ಧೈಯಂಯುಗ ಮುಗಿದು
ಗಣರಾಷ್ಟರಚನಾತ್ಮಕ ಕಾರ್ಯಯುಗ ಮೊದಲಾಗಿದೆ. ಆರ್ಥಿಕ ಅಸಮತೆ, ಅಹಾರ
ವಸ್ತ್ರಗಳ ಬರ, ಆಧ್ಯಾತ್ಮಿಕ ತತ್ವಗಳಲ್ಲಿ ಅಪನಂಬಿಕೆ, ನೀತಿ ಸಂಸ್ಕೃತಿಗಳ ನೆಲಗಟ್ಟೆ
ಕಳಚುತ್ತಿರುವುದು ಎಲ್ಲರ ಮನಸ್ಸಿನಲ್ಲಿಯೂ ನಿರಾಶೆ, ಅಶಾಂತಿ, ದುಃಖ, ಕಟುತ್ವ
ಹುಟ್ಟಿಸುತ್ತಿದೆ. ಆದರೂ ಮೆಲ್ಲಗೆ ರಚನಾತ್ಮಕ ಕಾರ್ಯವೂ ಸಾಗುತ್ತಿದೆ. ಇಂಗ್ಲೆಂಡಿನಲ್ಲಿ
ಹತ್ತೊಂತ್ತನೇ ಶತಮಾನದಲ್ಲಿ ಹುಟ್ಟಿದ ರೋಮ್ಯಾಂಟಿಕ್ ಸಾಹಿತ್ಯದಿಂದ ಹಿರಿಯರು
ಸ್ಫೂರ್ತಿ ಪಡೆದಂತ ಕಿರಿಯರು ಇಪ್ಪತ್ತನೇ ಶತಮಾನದಲ್ಲಿ ಯೂರೋಪಿನಲ್ಲಿ
ಈಚೆಗೆ ಹುಟ್ಟಿರುವ ನವ್ಯ ಸಾಹಿತ್ಯದಿಂದ ಸ್ಫೂರ್ತಿ ಪಡೆಯುವುದು ಸಹಜವೇ.
ಇವತ್ತಿನ ಪ್ರಪಂಚದಲ್ಲಿ ಹೆಚ್ಚು ಜನರು ನಾಗರಿಕ ಜೀವನದಲ್ಲಿ ಮುಳುಗಿ ತೇಲುತ್ತಿದ್ದಾರೆ.
ಮರಾತನ ಧರ್ಮದಲ್ಲಿ ಶ್ರದ್ಧೆ ಕಡಿಮೆಯಾದಂತೆ ಪ್ರಕೃತಿಯಲ್ಲಿ ಆಕ್ರೋನ್ನತಿಯ
ಸಾಧನವನ್ನು ಕಾಣುವ ದೃಷ್ಟಿಯೂ ಕಡಿಮೆಯಾಗಿದೆ. ವಿಜ್ಞಾನದ ಪ್ರಗತಿಯಿಂದ
ಜಗತ್ತಿನ ಪ್ರಲಯವೇ ಆಗುವ ಸೂಚನೆಗಳು ನಮ್ಮ ಕಣ್ಣ ಮುಂದೆ ಬಂದಿವೆ.
ಹೀಗಿರುವಾಗ ಮಾನವನ ಚರಿತ್ರೆ ಪ್ರಗತಿಪರವಾಗಿದೆಯೆಂದು ನಂಬುವುದು
ಕಷ್ಟವಾಗುತ್ತಿದೆ. ಮಾನಸಿಕ ಶಾಸ್ತ್ರದ ಸಂಶೋಧನೆಗಳಿಂದ ನಮ್ಮ ಬುದ್ಧಿ ನಮ್ಮ
ಚಿತ್ತದ ತುದಿ ಮಾತ್ರ ಎಂದು ನಮಗೆ ಅರಿವಾಗುತ್ತಿದೆ. ಗುಪ್ತಚಿತ್ತದ ವ್ಯಾಪಾರಗಳು
ಸ್ವಲ್ಪ ಸ್ವಲ್ಪವಾಗಿ ಬೆಳಕಿಗೆ ಬರುತ್ತಿವೆ. ಈ ಕಾಲಕ್ಕೆ ಉಚಿತವಾದ ಶೈಲಿಯನ್ನು ನವ್ಯ
ಕವಿ ರಚಿಸಬೇಕಾಗುತ್ತದೆ.
{{gap}}ಗೋಕಾಕರ ಪ್ರಾಯೋಗಿಕ “ನವ್ಯ ಕವಿತೆಗಳು” ಎಂಬ ಸಂಕಲನದ
ಒಂದೆರಡು ಕವಿತೆಗಳಲ್ಲಿಯೂ ಗೋಪಾಲಕೃಷ್ಣ ಅಡಿಗರ “ನಡೆದು ಬಂದ ದಾರಿ”
ಎಂಬ ಸಂಕಲನದ ಕೆಲವು ಯಶಸ್ವಿ ಕವಿತೆಗಳಲ್ಲಿಯೂ “ದೀಪದಾನ” ಎಂಬ
ವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಡಿಗರ ದೀರ್ಘ ಕವನಗಳಲ್ಲಿಯೂ ಈ<noinclude></noinclude>
df18ad1o6pu2lrduomfhabykpeyd7gs
ಪುಟ:Elu Suthina Kote.pdf/೧೫
104
90754
321495
230972
2026-05-20T18:08:50Z
Pragathi. BH
7585
/* Validated */
321495
proofread-page
text/x-wiki
<noinclude><pagequality level="4" user="Pragathi. BH" />{{rh|||XV}}</noinclude>ಮಿರುಗು ಬರುತ್ತದೆ. ಪ್ರಕೃತಿಯಲ್ಲಿರುವ ಕಾಮವ್ಯಾಪರ ತರುಣನಿಗೆ ಅರ್ಥವಾಗುತ್ತದೆ.
ಆದರೆ ಯೌವನದ ಉಬ್ಬರದಲ್ಲಿ ಕಾಮದ ಭೇತಾಳ ನೃತ್ಯ ವಿಕಟವಾಗುತ್ತದೆ.
ಮುದಿತನದ ಇಳಿತದಲ್ಲಿ ಮತ್ತೆ ದೂರದೃಷ್ಟಿ ಸಾಧ್ಯವಾಗಿ ಆದಷ್ಟು ಸಾಮರಸ್ಯ
ಸಿದ್ಧಿಯಾಗುತ್ತದೆ. ಮತ್ತೆ ಅದೇ ಕಟ್ಟುಕತೆ ಮುಂದಿನ ಜನಾಂಗದ ಬಾಲಕರಿಗೆ
ಸಾಗುತ್ತದೆ. ದೃಷ್ಟಿಯಲ್ಲಿಯೂ ಶಿಲ್ಪದಲ್ಲಿಯೂ ಇದೊಂದು ಸುಂದರವಾದ ಕವನ.
{{gap}}ಮನಸ್ಸಿನ ಗುಪ್ತ ಕಾಮನೆಗಳಿಗೆ ಬುದ್ಧಿ ಗೋಚರವಾಗಲು ಸಿಂಬಲ್ಸ್ ಅಥವಾ
ಸಂಕೇತನಗಳ ರೂಪಕ ಬೇಕು. ಈ ಸಂಕೇತಗಳಿಗೂ ನಮ್ಮ ಹಳೆಯ ರೂಪಕಗಳಿಗೂ
ಮುಖ್ಯವಾದ ಒಂದು ವ್ಯತ್ಯಾಸವಿದೆ. ಬುದ್ಧಿ ಜನ್ಯವಾದ ರೂಪಕಗಳು ಉಪಮೇಯ
ವಸ್ತುಗಳೊಂದಿಗೆ ತಾರ್ಕಿಕವಾಗಿ ಸಮಂಜಸವಾದ ಸಂಬಂಧವನ್ನು ಹೊಂದಿರುತ್ತವೆ.
ಆದರೆ ಮನಸ್ಸಿನ ಆಳದಿಂದ ಏಳುವ ಸಂಕೇತಗಳಿಗೂ ಉಪಮೇಯ ವಸ್ತುಗಳಿಗೂ
ಇರುವ ಸಂಬಂಧ ತಾತ್ಕಾಲಿಕ ವಾದುದು, ಬುದ್ಧಿಭಾವ ಮಿಲನದಿಂದ
ಉದ್ಯೋತವಾದದ್ದು, ಉಪಮೇಯ ವಸ್ತುಗಳನ್ನು ಸೂಚಿಸುವ ಕೆಲಸವಷ್ಟನ್ನೇ
ಮಾಡುವಂತಹುದು. ಉದಾಹರಣೆಗೆ ಮೇಲಿನ ಪದ್ಯದ 'ಮಗು' ಎಂಬ ಸಂಕೇತವನ್ನು
ತೆಗೆದುಕೊಳ್ಳಿ, ಕಾಮಭಾವ ಹುಡುಗನ ಮನಸಿನಲ್ಲಿ ಪದಾರ್ಪಣ ಮಾಡುವಾಗ
'ಮಗು' ವಿನಂತೆ ಎಳೆಯದಾಗಿರುತ್ತದೆ, ಮುಗ್ಧವಾಗಿರುತ್ತದೆ, ಶುದ್ಧವಾಗಿರುತ್ತದೆ.
ಆದರೆ ಹುಡುಗ ಹದಿನೆಂಟನೆ ವಯಸ್ಸಿಗೆ ಬಂದಾಗ ಈ ಕಾಮಶಿಶು ಅವನಷ್ಟೇ
ಬೆಳೆದಿರುತ್ತದೆ. ಯೌವನ ಬಂದಾಗ ಕಾಮವು ಅವನಿಗಿಂತ ನೂರುಪಾಲು ಬೆಳೆದು
ಅವನದ ಬಯಕೆಯಿಂದ ಬಿರಿಯುವಂತೆ ಮಾಡುತ್ತದೆ. ಮುಪ್ಪು ಕವಿದಾಗ ಕಾಮ
ಬಿಟ್ಟು ಹೋದ ಗೆಳೆಯನಂತೆ ಮಾಯವಾಗುತ್ತದೆ, ಅನುಭವದ ಕಡಲಿನಲ್ಲಿ ಕರಗಿ
ಹೋಗುತ್ತದೆ. ಕವನದ ಅರ್ಥ ಇನ್ನೂ ಗಾಢವಾಗಿದೆ. ಕಾಮವು ಮಗುವಿನಂತೆ
ಹುಡುಗನ ಮನಸ್ಸಿಗೆ ಬಂದಿತೋ ಅಥವಾ ಮೊದಲಿನಿಂದಲೂ ಮನಸ್ಸಿನಲ್ಲಿಯೇ
ಗರ್ಭಿತವಾದುದು. ಈಗ ಗೋಚರವಾಯಿತೋ ಎಂಬ ಶಂಕೆಯೇಳುತ್ತದೆ:
{{gap}}“ನೀಲಿಮೆಗೆ ಮುಗಿಲರಳೆ ಉರುಳಿದುದ ಕಂಡಂಯ?<br />
<br />ಸುಮಕೆ ಸೌರಭ ಬಂದ ಘಳಿಗೆ ಯಾವುದು ಹೇಳು.<br />
{{gap}}ಬಂತ ಮಗು?<br />
{{gap}}ಅಥವ ಮನೆಯೊಳಗಿತ್ತೊ;
:ಅಜ್ಞಾತದಾಳದೋಳು ತಲೆಮರೆಸಿ ಕುಳಿತೊಂದು ನನಹಂತೆ ಆಗ
::::::::::ಅದು ಹೊರಬಿತ್ತೋ!
:ಮಗು ಬಂದ ಮೇಲೆನಗೆ ಮಗುಬರಏನರಿವು.”
ಗುಪ್ತಚಿತ್ತದಲ್ಲಿ ಸಂಕೇತಗಳು ಬೆಳೆಯುವ ಮಾರ್ಗವೂ ವಿಚಿತ್ರವಾದುದು.<noinclude></noinclude>
64d8erj78ttuvfkawtezbxr3sjicyvq
ಪುಟ:Elu Suthina Kote.pdf/೧೬
104
90755
321496
230979
2026-05-20T18:09:37Z
Pragathi. BH
7585
/* Validated */
321496
proofread-page
text/x-wiki
<noinclude><pagequality level="4" user="Pragathi. BH" />{{rh|xvi||}}</noinclude>ಕಾಲಾನುಕ್ರಮವಾಗಿ ತಾರ್ಕಿಕವಾಗಿ ವಾದಸರಣಿ ಬೆಳೆದಂತೆ ಬೆಳೆಯದೆ
ಸಾದೃಶ್ಯವಿರೋಧಗಳಿಂದ ಒಂದರಿಂದೊಂದು ಸೂಚಿತವಾಗಿ ಸಂಕೇತಮಾಲೆ
ಹಣೆದುಕೊಳ್ಳುತ್ತದೆ. ಈ ಮಾರ್ಗ ಹಿರಿಯ ಕವಿಗಳಲ್ಲಿ ಅಲ್ಲಲ್ಲಿ-ಮಟ್ಟಪ್ಪನವರ
'ಕಲ್ಕಿ' ಯಲ್ಲಿ, 'ರಾಮಾಯಣ ದರ್ಶನ'ದ ಕೆಲವು ಕನಸು ಕಣಸುಗಳಲ್ಲಿ, ಬೇಂದ್ರೆಯವರ
'ಕುರುಡು ಕಾಂಚಾಣ'ದಲ್ಲಿ ಕಂಡುಬಂದರೂ ಅವರ ರಾಜಮಾರ್ಗ
ತಾರ್ಕಿಕವಾದುದು. ನವ್ಯಕಾವ್ಯದಲ್ಲಿ ಸಾಂಕೇತಿಕ ಚಿತ್ರಗಳ ಸುರುಳಿ ಬಿಚ್ಚುತ್ತ ಹೋಗುತ್ತದೆ.
ಉದಾಹರಣೆಗೆ “ತಾಯಿ-ಮಗು” ಎಂಬ ಕವಿತೆಯನ್ನು ತೆಗೆದುಕೊಳ್ಳಿ. “ಸುಡು
ಮಸಾಲೆಯ ಕಂಪಿ" ನಲ್ಲಿ ಆರಂಭಿಸುವ ಕವಿತೆ ಪರಮಾಣು ಸಿಡಿತದವರಗೂ
ಬೆಳೆಯುತ್ತದೆ. ಭಿಕ್ಷುಕನಾದ ಹುಡುಗ ಸುಡುವ ಮಸಾಲೆ ದೋಸೆಯ ಕಂಪಿಗೆ
ಮುಗ್ಧನಾಗಿ ಹೊಟೇಲಿನ ಕಿಟಕಿಯ ಬಳಿ ಬಂದು ನಿಲ್ಲುತ್ತಾನೆ. ಇವನು ಯಾರು
ಇರಬಹುದೆಂದು ಕವಿಗೆ ಮರುಕದೊಂದಿಗೆ ಕುತೂಹಲೂ ಆಗುತ್ತದೆ. ಇವನ
ವಿಳಾಸ ವಿಶ್ವವೇ. ಗುಡಿ ಚರ್ಚುಗಳ ಬಾಗಿಲಲ್ಲಿ ಬಾರದ ಸಾವಿಗಾಗಿ ಇವನ
ಪ್ರಾರ್ಥನೆ ಸದಾಕಾಲವೂ, ಮನೋರಂಜನೆಯ ಕಾರಯಕ್ರಮಗಳಿರುವಡೆಯಲ್ಲಿ
ಇವನ ಭಿಕ್ಷಾಪಾತ್ರೆಗೆ ಬಿಡಿಕಾಸಿಲ್ಲ. ಕವಿ ಇವನನ್ನು ತನ್ನ ಸೋದರನೆಂದು
ಸಹಪಾಠಿಯೆಂದು ಎಳೆತನದ ಒಡನಾಡಿಯೆಂದು ಕಡೆಗೆ ಗುರುತಿಸುತ್ತಾನೆ. ಇಬ್ಬರ
ತಾಯಿಯ ಅಣುಬಾಂಬಿನ ವ ತಾರಕ್ಕಾಗಿ ನಿರಾಶ ಯಿಂದ ದೇವರಲ್ಲಿ
ಮೊರೆಯಿಡುತ್ತಾಳೆ. ಕವಿ ತನ್ನ ದೋಸೆಯನ್ನು ಮಗುವಿನ ಕೈಗೆ ತುರುಕುತ್ತಾನೆ.
ಆದರೆ ಅಲ್ಲೊಂದು ಇಲ್ಲೊಂದು ಇಂತಹ ಕರುಣಾಕ್ರಿಯೆಗಳಿಂದ ಈ ಮಹಾ
ಪ್ರಶ್ನೆಯನ್ನು ಬಿಡಿಸಲು ಸಾಧ್ಯವಿಲ್ಲ. ಭಿಕ್ಷುಕನ “ಕೊಡು ಮೂರು ಕಾಸ” ಎಂಬ
ಮೊರ ಕವನದ ಅಂತ್ಯದಲ್ಲಿಯೂ ಮೊಳಗುತ್ತದೆ.
{{gap}}ಗುಪ್ತಚಿತ್ತದ ಆಳಕ್ಕೆ ಇಳಿಯಬಲ್ಲದು ಜಾಗೃತ ಬುದ್ಧಿಯಲ್ಲ, ನಿದ್ರೆಯೊಳಗಿನ
ಕನಸು ಕನವರಿಕೆ, ಅತೀಂದ್ರಿಯವಾದ ಕಣಸು, “ನಿರಾಶಯ ಆಳದಿಂದ” ಎಂಬ
ಕವಿತೆಯಲ್ಲಿ ಕವಿಯ ಕಣಸು-ಕಣ್ಣಿಗೆ ಹೊತ್ತು ಇಳಿಯುವುದು ಧರ್ಮ
ಲೋಪದಂತೆಯೂ ಮನುಷ್ಯರು ಜೀವನ್ಮತರಂತೆಯೂ ಆತ್ಮಘಾತುಕರಂತೆಯೂ
ಜಗತ್ತೇ ಸ್ಮಶಾನದಂತಯೂ ಕಾಣುತ್ತದೆ. “ಗೌರಿ ಶಂಕರ” ಎಂಬ ಕವಿತೆಯಲ್ಲಿ
ಜಗತ್ತಿನ ತುತ್ತತುದಿಗೇರಿದ ನರನಿಗೆ ತತ್ವಪ್ರಕಾಶವಾಗುವುದು ಯಾರ ಮೈಯನ್ನು
ಮಾತ್ರ ಭೋಗಿಸಿದ್ದನೋ ಆ ಹೆಣ್ಣಿನ ಕನವರಿಕೆಯಿಂದ, ಯಾವ ತಾಯಿಯನ್ನು
ಮತ್ತಿನಲ್ಲಿ ಮರೆತಿದ್ದನೋ ಅವಳ ಕಣಸಿನ ಉಪದೇಶದಿಂದ ಇಲ್ಲಿ ಹೆಣ್ಣಿನ ಸಂಕೇತ
ಮೊದಲು ಪರ್ವತ ಪ್ರದೇಶವನ್ನು, ಪ್ರಕೃತಿಯನ್ನು ಸೂಚಿಸುತ್ತದೆ. ಭೂಮಿಯ
ಅತ್ಯುನ್ನತ ಶಿಖರವನ್ನೇರುವ ಆಕಾಂಕ್ಷೆಯೂ ಹೆಣ್ಣಿನ ಮೈಯನ್ನು ಪೂರ್ಣವಾಗಿ
ಸ್ವಾಧೀನಪಡಿಸಿಕೊಳ್ಳುವ ಕಾಮವೂ ಆಳದಲ್ಲಿ ಒಂದೇ. ಆಮೇಲೆ ಅತ್ಮವಿಜಯದ<noinclude></noinclude>
iyf035s85h7zhlb8c6q43hu5mzcqqhk
ಪುಟ:Elu Suthina Kote.pdf/೧೭
104
90756
321497
230986
2026-05-21T01:58:46Z
Pragathi. BH
7585
/* Validated */
321497
proofread-page
text/x-wiki
<noinclude><pagequality level="4" user="Pragathi. BH" />{{rh|||xvii}}</noinclude>ಕಲ್ಪನೆ ಬಂದಾಗ ಆಧ್ಯಾತ್ಮಿಕವಾದ ಪರ್ವತಾಗ್ರ ತಾಯೊಗದಂತೆ ಕಾಣುತ್ತದೆ. ಒಂದೇ
ಸಂಕೇತದ ಬೇರೆ ಬೇರೆ ಮುಖಗಳು ಬೇರೆ ಬೇರೆ ಸಂದರ್ಭಗಳಲ್ಲಿ ಕಾಣುತ್ತವೆ.
“ಕೊನೆಗಳಿ” ಎಂಬ ಕವಿತೆಯಲ್ಲಿ ಸಂಭೋಗದ ಮೈ ಮರವು ಮರಣಕ್ಕೆ
ಸಂಕೇತವಾಗಿ, “ಗಂಡಿಂಗೆ ಹೆಣ್ಣಾಗಿ” ಮೃತ್ಯುಮಾಯೆ ಮನುಷ್ಯನನ್ನು ಕಾಡುವುದನ್ನೂ
ಇಲ್ಲಿ ಜ್ಞಾಪಿಸಿಕೊಳ್ಳಬಹುದು.
ಗುಪ್ತಚಿತ್ತದಲ್ಲಿ ಭಾವಗಳು ಕ್ರಿಯೆಗಳು ಚಿತ್ರಗಳು ಸ್ಮೃತಿಗಳು ಹೆಣೆದುಕೊಳ್ಳುವ
ಬಗೆಯಲ್ಲಿ ಅನ್ಯಾದೃಶವಾದ ನಾಟಕೀಯತೆಯಿದೆ. ನವ್ಯ ಕವಿ ತನ್ನ ವಿಚಾರವನ್ನು
ನೇರವಾಗಿ ಮಂಡಿಸದೆ ಸಂಕೇತಗಳ ದೃಶ್ಯಾವಳಿಯನ್ನು ಮುಂದಿರಿಸುತ್ತಾನೆ. “ತಾಯಿ-
ಮಗ” ಎಂಬ ಕವಿತೆಯಲ್ಲಿ ಕವಿಗೂ ಭಿಕ್ಷುಕನಿಗೂ ನಡೆಯುವ ಸಂಭಾಷಣೆಗಳಾಗಲಿ
ಸಾವಿನ ಕರಿ ಬಸ್ಸಿನಲ್ಲಿ ಪ್ರವೇಶಕ್ಕಾಗಿ ಭಿಕ್ಷುಕನು ಮಾಡುವ ವ್ಯರ್ಥ ಪ್ರಯತ್ನದ ಈ
ಚಿತ್ರವಾಗಲಿ ಎಷ್ಟು ನಾಟಕೀಯವಾಗಿದೆ!
::ಅದೋ ಬಸ್ಸು ಕರಿ ಬಸ್ಸು!
::(ಕರುಣೆ ಕುಡಿ ಕಾಲನೆದ ಕಲ್ಲಲ್ಲು ಚಿಗುರಿತು)
::ಅದೊ ಬಂತು, ಬಂತು!
::ಕೊರಳೆತ್ತಿ ಕೈಯೆತ್ತಿ ಕೂಗು; ಹೋಲ್ಡಾನು!
::(ನಡುನೀರಿನೊಳಗೆನ್ನ ಕೈಯ ಬಿಡುವನೆ ಕೃಷ್ಣ)
::ಹೋಲ್ಡಾನು, ಹೋಲ್ಡಾನು!
::ಬಂತು.
::ಅಯ್ಯೋ ಹೋಯ್ತು!
::ತೆರವಿದ್ದರೂ ಬಸ್ಸು ನಿಲದೆ ಉರುಳಲು ಮುಂದೆ
::ಕನಸ ಗೋಪುರದಂತೆ ಎಲುಬು ಕೈ ಕುಸಿಯಿತು.
::ಒಲ್ಲದಿನ್ನೊಬ್ಬ ನರ ನಡದಿರಲು ಬಸ್ವವನ
::ಹಿಮಗಿರಿಯ ಕಂದರಕೆ ಕರೆದೊಯ್ದಿತು!
{{gap}}“ಜರ ಜರೋ....” “ಢಮ ಢಮಾ” ಇತ್ಯದಿ ಅನುಕರಣ ಶಬ್ದಗಳನ್ನು
ಶರ್ಮರು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಅವರ ಕವನಗಳ ತುಂಬಾ ಅವರು ಕಾಣಿಸುವ
ನೋಟಗಳು, ಕೇಳಿಸುವ ದನಿಗಳು, ನನಸುವ ನುಡಿಗಳು, ಚಿತ್ರಿಸುವ ಕ್ರಿಯೆಗಳು,
ಮಾಡುವ ಉದ್ಧಾರಗಳು.
{{gap}}ಗುಪ್ತಚಿತ್ತದ ಆಳದಲ್ಲಿ ಮನುಷ್ಯನ ಸಮಗ್ರ ಅನುಭವೂ ಇಳಿದು ಅಡಗುತ್ತದೆ.
ಅವನ ಇಂದಿನ ಅನುಭವಗಳೂ ಹಿಂದಿನ ನೆನಪುಗಳು ಓದಿದ ಉದ್ಗ್ರಂಥಗಳೂ<noinclude></noinclude>
4oxi4mrytmsijnmaxd45b61y4viefk2
ಪುಟ:ತೊಳೆದ ಮುತ್ತು.pdf/೧೩
104
91858
321614
239964
2026-05-21T09:54:27Z
Pragathi. BH
7585
/* Validated */
321614
proofread-page
text/x-wiki
<noinclude><pagequality level="4" user="Pragathi. BH" />{{rh||ಪ್ರಥಮ ದರ್ಶನದ ಪ್ರೇಮ|೩}}</noinclude>
ವಾದದ್ದವೆಂಬ ಅಭಿಪ್ರಾಯವನ್ನು ಕಳೆದ ಸುಧಾರಕರು ತೀರ ಕಡಿಮೆ.
ಸ್ತ್ರೀಯರಿಗೆ ಸ್ವತಂತ್ರವಾದ ಕಾಲೇಜಗಳಿರಬೇಕೆ೦ಬ ಜನರೇ ಬಹಳ.
ಹೀಗಿರಲು ಹೆಣ್ಣು ಮಕ್ಕಳಿಗಾಗಿ ಕಾಲೇಜಗಳನ್ನು ಸ್ಥಾಪಿ
ಪಿಸುವ ಸುಬುದ್ಧಿಯು
ಇನ್ನೂ ನಮ್ಮ ಪುರಸ್ಕರ್ತರಲ್ಲಿ ಉಂಟಾಗಿಲ್ಲ. ಶಿಕ್ಷಣಾಭಿರುಚಿಯುಳ್ಳ
ನವದನೆಯರು ಆ ನಿರ್ವಾಹಕ್ಕಾಗಿ ಗಂಡುಮಕ್ಕಳ ಕಾಲೇಜಗಳಿಗೆ
ಹೋಗುತ್ತಿರುವರು
{{gap}}ಗಂಡುಮಕ್ಕಳ ಕಾಲೇಜುಗಳಲ್ಲಿ ಅನೇಕವಾಜೆ ವಿದ್ಯಾ ಕಲೆಗಳ ಶಿಕ್ಷಣವು
ಯಥೇಷ್ಟವಾಗಿ ದೊರಕುತ್ತಿದ್ದರೂ ಅಲ್ಲಿ ಧಾರ್ಮಿಕ ಹಾಗೂ ಜೈತಿಕ ಶಿಕ್ಷಣ
ಗಳ “ ಭಾವವೇ ಆಗಿರುವದರಿಂದ ಅನೇಕ ಜನ ತರುಣರು ಆ ಸತರ್ಷಿಗಳಾಗು
ತಿರುವದನ್ನು ಕಂಡು, ಅತ್ಯಂತವಾಗಿ ಉದ್ರರಾಗಿರುವ ರಾಜಾ ದೀನ
ದಯಾಲವೆಂಬ ಘನವಂತರಾದ ಶ್ರೀಮಂತರು ಪರ್ವ ತಪ್ರಾಯವಾದ ಹಣ
ವೆಚ್ಚ ಮಾಡಿ ಶಾರದಾಪ್ರಸಾದವೆಂಬ ಕಾಲೇಜವನ್ನು ಗುಸುವ ಪುರದ ಸಮಾಸ
ದಲ್ಲಿ ಸ್ಥಾಪಿಸಿದರು
ರಾಮಕಿಶೋರ ಆಚಾರ್ಯ ಚೌಧ ಎದೆ”, ಏ,,
ಎಲ್ಎಲ್, ಡೀ, ಎಂಬ ಅನೇಕ ಶಾಸ್ತ್ರವುರಂಗತರಾದ ಮ ಪಂಡಿತರ
ಸೌಜನ್ಯ ಸದಾಚರಣಗಳನ್ನೂ ಅವರಲ್ಲಿರುವ ವಿದ್ಯಾಪ್ರ ದ ನ ಮುಡುವ
ಟವಾದ ಅಭಿಲಾಷೆಯನ್ನೂ ಕಂಡು ಭಾಳಾ ಎಎಯ'ರವರು
ಅವರನ್ನು ಬಹು ಸನ್ಮಾನದೊಂದಿಗೆ ಕರ೦ಗು ತಮ್ಮ ಕಾಲೇಜಿನ ಮುಖ್ಯ
ನಿಯಾಮಕರನ್ನಾಗಿ ಮಾಡಿದರು. ಉಳಿದ ಶಿಕ್ಷಕವರ್ಗವಾರ್ದಣ ಸಾಮಾನ್ಯ
ವಾದದ್ದಲ್ಲ.
ಈ ಆಲಭ್ಯ ಲಾಭಕ್ಕಾಗಿ ಮಾನವಪ್ರಸಾದ ಘಾಜದಲ್ಲಿ
ಕಲಿಯುವದಕ್ಕಾಗಿ ಅನೇಕ ಪ್ರಾಂಶಗಳಿಂದ ಬುದ್ಧಿವಂತಿರುವ ವಿದ್ಯಾರ್ಥಿಗಳು
ಬರುತ್ತಲಿದ್ದರು
{{gap}}ಡಾಕ್ಟರ ಚೌಧರಿಯವರ ಧರ್ಮಪತ್ನಿ ಯವಾದ ಜನ ದೇಸಿಯ
ಕಾದಲೂ ಕಲಕತ್ತಾ ವಿಶ್ವವಿದ್ಯಾಲಯದ ವಿಧವೆಯರಿಗೆ ಐದು ಒಳರು,
ಪ್ರಚಲಿತವಾದ ಸ್ತ್ರೀಶಿಕ್ಷಣದ ಪದ್ಧತಿಯಲ್ಲಿರುವ ದೋಷಗಳ& ತಿಳಿದುಕಿ
ಭರತಭೂಮಿಗೆ ಭೂಷಣರಾಗತಕ್ಕೆ ಮಹಿಳೆಯರಿಗೆ ಉಚ್ಚಸತಿಯ ಶಿಕ್ಷಣವು
ಬೊರಕುವದಲ್ಲದೆ ಸ್ವಧರ್ಮ ನೀತಿಗಳು ಕೂಡ ಇವರಿಗೆ ಸಂಪೂರ್ಣವಾಗಿ
ಪ್ರಾಪ್ತವಾಗಬೇಕೆಂಬ ಪ್ರಯತ್ನದಲ್ಲಿ ಜನರೇಜೀನಿಯರಿದ್ದರು
ಉತ್ಕಟ<noinclude></noinclude>
m5hbsh7kjpy2ly8a7jwu2ehpc3l7xs4
ಪುಟ:ತೊಳೆದ ಮುತ್ತು.pdf/೧೪
104
91859
321615
240705
2026-05-21T09:54:47Z
Pragathi. BH
7585
/* Validated */
321615
proofread-page
text/x-wiki
<noinclude><pagequality level="4" user="Pragathi. BH" />{{rh|೪|ಸಂಪೂರ್ಣ-ಕಥೆಗಳು|}}</noinclude>ಪ್ರಸಾದ ಕಾಲೇಜದಲ್ಲಿ ಕಲಿಯಲಿಕ್ಕೆ ಬಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮದ
ಮೇಲ್ವಿಚಾರಣೆಯನ್ನು ಆ ಸಾದ್ವಿಯರು ಮನಃಪೂರ್ವಕವಾಗಿ ಅಂಗೀಕರಿಸಿ
ದ್ವಲ್ಲದ, ಆ ವಿದ್ಯಾರ್ಥಿನಿಯರ ವ್ಯಾಯಾಮ ಮನೋರಂಜನ ಸ್ನಾನ ಭೋಜ
ನಾದಿಗಳಲ್ಲಿಯಾದರೂ ಅವರು ದಕ್ಷತೆಯಿಂದ ಲಕ್ಷವನ್ನಿಟ್ಟಿದ್ದರು. ಗೃಹಿಣ
ಜನೋಡಿ ಶವಾದ ಕರ್ತವ್ಯ ಜಾಗ್ರತಿಯು ಅಲ್ಲಿಯ ವಿದ್ಯಾರ್ಥಿನಿಯರಲ್ಲಿ ಈಗ
ಭತವಾಗಿರಬೇಕೆಂದು ನೆನಿಸಿ ಪ್ರತಿ ರವಿವಾರ ಇಬ್ಬರು ವಿದ್ಯಾರ್ಥಿನಿಯರನ್ನು
ಜಾನಕೀದೇವಿಯರು ತಮ್ಮ ಮನೆಗೆ ಕರೆಸಿಕೊಂಡು ತಾವು ಮಾಡುತ್ತಿರುವ
ಮನೆಕೆಲಸಗಳ ವ್ಯವಸ್ಥೆಯನ್ನೂ ಅತಿಧಿಗಳ ಆದರಾತಿಥ್ಯವನ್ನೂ, ಪತಿ
ಕುಶೂಷೆಯ ಕ್ರಮವನ್ನೂ ನಿತ್ಯ ನಿಯಮ ದೇವತಾರಾಧನಗಳನ್ನೂ ಅವರಿಗೆ
ತೋರಿಸಿಕೊಡುತ್ತಿದ್ದರು.
{{gap}}ಶಾರದಾ ಕಾಲೇಜದಲ್ಲಿ ಇಪ್ಪತ್ತು ಇಪ್ಪತ್ತೈದು ಜನ ಹೆಣ್ಣು ಮಕ್ಳಿ
ದ್ದರು. ಅವರಲ್ಲಿ ರಮಾಸುಂದರಿಯೂ ಓರ್ವಳಾಗಿದ್ದಳು
ರಿಯು ದಕ್ಷಿಣ ದೇಶದಲ್ಲಿರುವ ಕನಕಗಿರಿಯಂಬ ಊರಿನ ಜಾಗೀರದಾರನ
ಮಗಳು: ಅವಳ ತಂದೆಯು ಸುಸಂಸ್ಕೃತವಾದ ಆಚಾರ ವಿಚಾರಗಳುಳ್ಳ
ವನ ವಿದ್ಯಾ ಪಕ್ಷಪಾತಿಯ ದೇಶ ಸಂಚಾರ ಮಾಡಿದವನ ಆಗಿರುವದರಿಂದ
ಅವನು ರಮಾಸುಂದರಿಗೆ ಉಚ್ಚ ಪ್ರತಿಯ ಶಿಕ್ಷಣವನ್ನು ಕೊಡಿಸುತ್ತಿರುವದು
ಆಶ್ಚರ್ಯವಿಲ್ಲ. ಉತ್ತರ ದೇಶದಲ್ಲಿ ಸಂಚಾರ ಮಾಡುತ್ತಿರುವಾಗ ಅವನು
ಶಾರದಾ ಕಾಲೇಜದ ಖ್ಯಾತಿಯನ್ನು ಕೇಳಿ ಅದನ್ನು ನೋಡಹೋಗಿ, ಅಲ್ಲಿ
ರಾಮಕಿಶೋರ ಜಾನಕೀದೇಏಯರ ಪರಿಚಯವನ್ನು ಮಾಡಿಕೊಂಡು, ತನ್ನ
ಪ್ರೀತಿಯ ಮಗಳಾದ ರಮಾಸುಂದರಿಯನ್ನು ಜಾನಕೀದೇವಿಯರ ಈಡಿ
ಯಲ್ಲಿ ಹಾಕಿದಂತೆ ಮಾಡಿ ಅವಳನ್ನು ಶಾರದಾ ಕಾಲೇಜದಲ್ಲಿ ಕಲಿಯಲಿಕ್ಕೆ
ಇದ್ದನು,
{{gap}}ರಮಾಸುಂದರಿಯ ನಿರುಪಮವದ ರೂಪವತಿಯ, ವಿನಯ
ಶೀಲೆಯ, ಪಾಪಭೀರುವೂ, ಬುದ್ಧಿಮತಿಯು ಆಗಿರುವದರಿಂದ ಅವಳು
ಜಾನಕೀದೇವಿಯ ಪ್ರೀತಿಪಾತ್ರಳಿಗಿದ್ದಳು, ಇಂದುಮತಿ ಬಾನರ್ಜಿ,
ಕಂದಾವರೀ ತ್ರಿವೇದಿ ಹಾಗೂ ರಮಾಸುಂದರಿಯರು ಎಫ್, ಏ, ತರಗತಿ
ಯಲ್ಲಿ ಕಲಿಯುತ್ತಿರುವದರಿಂದ ಅವರೆಲ್ಲರೂ ಒಟ್ಟಿಗೆ ಒಂದೇ ಕೋಣೆಯಲ್ಲಿ<noinclude></noinclude>
b3h3fhdesu03mk2gzhuip23lxe5p237
ಪುಟ:ತೊಳೆದ ಮುತ್ತು.pdf/೧೫
104
91860
321616
240706
2026-05-21T09:55:03Z
Pragathi. BH
7585
/* Validated */
321616
proofread-page
text/x-wiki
<noinclude><pagequality level="4" user="Pragathi. BH" />{{rh||ಪ್ರಥಮ ದರ್ಶನದ ಪ್ರೇಮ|೫}}</noinclude>ಇದ್ದು ಕೊಂಡು ಅಭ್ಯಾಸ ಮಾಡುತ್ತಿದ್ದರು. ನವಕ ತೀಕ್ಷ್ಮವಾದ
ಬುದ್ದಿ ಯುಳ್ಳವರೂ ನಿರ್ಮಲಾಂತಃಕರಣದವರೂ ವಿಶುದ್ಧವಾದ ಆಚರಣ
ವುಳ್ಳವರೂ ಆಗಿದ್ದರು. ಇಂದುಮತಿಯ ವಿನೋದದ ನುಡಿಗಳ, ಚಂದ್ರಾ
ವಲಿಯ ತಿದ್ದಿ ತೀಡಿದ ಉಡಿಗೆ ತೊಡಿಗೆಗಳೂ ರಮಾಸುಂದರಿಯ ಸ್ವಚ್ಛತೆ
ಸುವ್ಯವಸ್ಥೆಗಳೂ ಆ ಮೂವರಲ್ಲಿ ಸರಿಯಾಗಿ ಕಲೆತು ಹೂ ಅವರು ನಾರೀ
ಕುಲಕ್ಕೆ ಅಲಂಕಾರವಾಗಿ ಮೆರೆಯುತ್ತಿದ್ದರು.
{{gap}}ವಾರಶಾಲೆಯಲ್ಲಿ ನದದ ವಿಷಯದ ಊಹಾಪೋಹವನ್ನು ಗಂಡು
ಮಕ್ಕಳು ಮಾಡುತ್ತಿರುವವನ್ನೂ, ಅವರು ತೆಗೆದ ಕುಶಲನಾದ ಶಂಕೆಗಳಿಗೆ
ಗುರುಗಳು ಹೇಳುತ್ತಿರುವ ಸಮರ್ಪಕವಾದ ಸಮಾಧಾನಗಳನ್ನೂ ಆ ಚತುರೆ
ಯರು ಮನಸ್ಸು ಕೊಟ್ಟು, ಆಳುತ್ತಿದ್ದರು, ಆ ಮkವರಿಗೂ ಭಾಷಾವಿಷಯ
ಗಳಲ್ಲಿ ವಿಶೇಷವಾದ ಅಭಿರುಚಿಯಾಗಿರುವದರಿಂದ ಬಿ ಎ , ಎಂ. ಏ ವರ್ಗ
ಗಳಲ್ಲಿ ಇಂಗ್ಲಿಶ್ ಸಂಸ್ಕೃತ ವಿಷಯಗಳು ನಡೆದಿರುವಾಗ ಒಮ್ಮೊಮ್ಮೆ ಹೋಗಿ
ಅವರು ಕೇಳುತ್ತೆ ಕೂಡುವರು, ಪುರುಷ ವಿದ್ಯಾರ್ಥಿಗಳ ಪರಿಚಯವನ್ನು
ಅವರು ಮಾಡಿ ಕೊಳ್ಳುತ್ತಿದ್ದಿಲ್ಲವಾದರೂ ಆ ಕಾಲೇಜದಲ್ಲಿ ಒಳ್ಳೆ ಬುದ್ಧಿಶಾ
ಗಳಾದ ವಿದ್ಯಾರ್ಥಿಗಳಾರೆಂಬದು ಅವರಿಗೆ ಗೊತ್ತಾಗಿತ್ತು.
{{gap}}ವಿಜಯಪುರದ ಧುವರಾಯನಲಬ ಅದ್ವಿತೀಯನಾದ ಬುದ್ಧಿಶಾಲಿಯು
ಬಿ. ಏ. ತರಗತಿಯಲ್ಲಿ ಉತ್ತಮ ಪರೀಕ್ಷೆಯನ್ನು ಕೆಟ್ಟದ್ದನಾದ್ದರಿಂದ ಆ
ತರುಣನನ್ನು ಡಾಕ್ಟರ ಚೌಧರಿಯವರು ತಮ್ಮ ಕಾಲೇಜದ ಫೆಲೋt
(ವಿದ್ಯಾರ್ಥಿಯಾಗಿದ್ದ ದೂ ಶಿಕ್ಷಕರ ಕಲಸವನ್ನು ಮುಡುವವ)ನನ್ನಾಗಿ ಮಾಡಿ
ಎಂ. ಎ: ತರಗತಿಯಲ್ಲಿ ಅಭ್ಯಾಸ ಮಾಡಲು ಆಸ್ಥೆಯಿಂದ ಇಟ್ಟುಕೊಂಡರು.
ಭುವರಾಯನು ಸಂಸ್ಕೃತದಲ್ಲಿ ಅಸದೃಶನೂ ಇಂಗ್ಲಿಶದಲ್ಲಿಯ ಆತಿ ಪ್ರವೀ
ಣನೂ ಆಗಿರುವದರಿಂದ ಎಫ್, ಏ, ತರಗತಿಯವರಿಗೆ ಆ ಎರಡು ವಿಷಯ
ಗಳನ್ನು ಕಲಿಸಲು ಶಿವನನ್ನು ಆಯಾ ವಿಷಯಗಳ ಪಂಡಿತರ ಸಹಾಯಕಾರಿ
ಯಾಗಿ ನಿಯಮಿಸಿದ್ದರು.
{{gap}}ಒಂದು ದಿನ ಡಾಕ್ಟರ ರಾಮಕಿಶೋಧ ಆಚಾರ್ಯರವರು ಮೇಜಿನ
ಮೇಲಿರುವ ಲೇಖಗಳಲ್ಲಿ ಒಂದನ್ನೆತ್ತಿಕೊಂಡು ನೆರೆದಿರುವ ವಿದ್ಯಾರ್ಥಿ ವಿದ್ಯಾ
ರ್ಥಿನಿಯರನ್ನು ಕುರಿತು "ಇದು ನಮ್ಮ ಧ್ರುವರಾಯನು ಬರೆದಿರುವ<noinclude></noinclude>
tm4qf4bzieg9m7mga4dfr9ukk548dj9
ಪುಟ:ತೊಳೆದ ಮುತ್ತು.pdf/೧೯
104
92016
321617
238663
2026-05-21T09:57:53Z
Pragathi. BH
7585
/* Validated */
321617
proofread-page
text/x-wiki
<noinclude><pagequality level="4" user="Pragathi. BH" />{{rh||ಪ್ರಥಮ ದರ್ಶನದ ಪ್ರೇಮ|೯}}</noinclude>ರಮಾಸುಂದರಿಯು ತನ್ನ ಧರ್ಮಮಾತೆಗೆ ಅಭಿವಚನವನ್ನಿತ್ತಳು.
{{gap}}"ಆಗಲಿ ಓದುಬರಹಕ್ಕಾದರೂ ಸಮಯಾಸಮಯದ ವಿಚಾರವಿರ
ಬೇಕು, ಮಗುವೆ, ಗಡಿಯಾರವನ್ನು ನೋಡಬಾರದೆ ? ಸರಿರಾತ್ರಿ ಮಿರಿ
ಹೋಗಿದೆ ನೋಡು, ಹಾಸಿಗೆಯನ್ನು ಕೂಡ ಬಿಚ್ಚಿಲ್ಲ” ಎಂದು ಜಾನಕೀ
ದೇವಿಯರು ರಮಾಸುಂದರಿಯ ಮಂಚದ ಮೇಲಿದ್ದ ಹಾಸಿಗೆಯನ್ನು ಉರುಳಿ
ಸಿದಳು.
{{gap}}"ಆಯೋ ಪಾಪನೆ !
ನನ್ನ ಕೈಗಳೇನು ಮುರಿದಿವೆಯೇನು ?
ತಾವೇಕೆ ಹಾಸಿಗೆಯನ್ನು ಉರುಳಿಸಿದಿರಿ ? " ಎಂದು ರಮಾಸುಂದರಿಯು
ಖಿನ್ನಳಾಗಿ ನುಡಿದಳು,<br />
{{gap}}ಮತ್ತೊಂದು ಮಾತಾಡದೆ ಮಲಗಿಬಿಡು ಇನ್ನು ಇಂದಿನಿಂದ
ರಾತ್ರಿಯ ಹತ್ತು ಗಂಟೆಯ ತಿರುವಾಯದಲ್ಲಿ ನಿನ್ನ ಕೋಣೆಯಲ್ಲಿ ದೀಪವು
ಉರಿದದ್ದು ಜರೆ ನಾನು ನಿನ್ನನ್ನು ಕ್ಷಮಿಸಿದವಳಲ್ಲ! ?” ಎಂದು ಹೇಳಿ ಜಾನಕೀ
ದೇಏಯರು ಹೊರಟಳೋದರು. ರಮಾಸುಂದರಿಯಾದರೂ ದೀಪಕ್ಕೆ
ಅಪ್ಪಣೆಕೊಟ್ಟು ಮಲಗಿಕೊಂಡಳು,
{{gap}}ಮರುದಿವಸ ರಮಾಸುಂದರಿಯು ನಿನ್ನೆ ರಾತ್ರಿ ನಡೆದ ಸಂಗತಿಯನ್ನೆಲ್ಲ
ಇಂದುಮತಿ ಚಂದಾವಲಿಯರಿಗೆ ತಿಳಿಸಿ ಜಾನಕೀದೇಏಯರ ಶಿಷ್ಯ ವಾತ್ಸಲ್ಯ
ವನ್ನು ಕಂಡಾಡಿದಳು.
{{gap}}"ಸರಿ ಸರಿ, ರಮಾ ಸುಂದರಿ, ನೀನು ಧುವರಾಯನಿಗೆ ಬರೆದ ಪತ್ರ
ದಲ್ಲಿ ಲೇಖವನ್ನು ಕಳಿಸಿಕೊಡೆಂದು ಇಷ್ಟೆಯ ಬರೆದಿದ್ದೆಯೋ ಮತ್ತೇನಾ
ದರೂ ಬರೆದಿದ್ದೆಯೋ ?"
{{gap}}"ತಲೆ ಇಲೆ ನಿನ್ನದು ! ಮತ್ತೇನು ಬರೆಯುತ್ತಾರೆ ? * ಎಂದು ಧನಾ
ಸುಂದರಿಯು ಕ್ರುದ್ಧಳಾಗಿ ಕೇಳಿದಳು.
{{gap}}"ಇಲ್ಲವಾದರೆ ಇಲ್ಲವೆನ್ನು, ಕೊಪವೇಕೆ ? ” ಎಂದು ಚಂದ
ಪಳಿಯು ನಕ್ಕು ನುಡಿದಳು.
{{gap}}"ಸುಸ್ವಭಾವದವರಾದ ಸ್ತ್ರೀ ಪುರುಷರೀರ್ವರನ್ನು ಒಟ್ಟಿಗೆ ಇದು
ಬಹುದಂತೆ. ಆದರೆ ಸಮಾನವಯಸ್ಕರಾದ ಮಿಂಡೆಯರೀರ್ವರನ್ನು ಒಪ್ಪ
ಟ್ಟಗೆ ಇಡಚಣಡದೆಂದು ಹಿರಿಯರಾಡುವದು ಅನುಭವಸಿದ್ಧವಾದ ಮಾತು"<noinclude></noinclude>
qacc2ffzw5zqi4o3yafagq60hpsi8xv
ಪುಟ:ತೊಳೆದ ಮುತ್ತು.pdf/೨೧
104
92018
321618
276795
2026-05-21T10:00:08Z
Pragathi. BH
7585
/* Validated */
321618
proofread-page
text/x-wiki
<noinclude><pagequality level="4" user="Pragathi. BH" />{{rh|center=ಪ್ರಥಮ ದರ್ಶನದ ಪ್ರೇಮ|left=|right=೧೧}}</noinclude>
ವನ್ನು ಕುರಿತು ವಿಶದವಾದ ಊಹಾಪೋಹವಾಯಿತು ನಮ್ಮ ವಿದ್ಯಾರ್ಥಿ
ತ್ರಯರಿಗೆ ಸಂಶಯ ನಿವಾರಣವೇ ಬೇಕಾಗಿತ್ತು ಹೊರತಾಗಿ ಸ್ವಪಾಂಡಿತ್ಯದ
ಪ್ರದರ್ಶನವು ಅವರಿಗೆ ಬೇಕಾಗಿದ್ದಿಲ್ಲ. ಶ್ಲೋಕಾರ್ಧವು ಮುಗಿದ ಬಳಿಕ
ಮತ್ತೆ ಪ್ರಶ್ನೆಗಳ ಸುಗ್ಗಿಯೆದ್ದಿತು ಆಗ ಚಂದ್ರಾವಲಿಯು ತನ್ನ ಸ್ತ್ರೀ
ಸ್ವಭಾವಕ್ಕನುಸರಿಸಿ ಮೆಲ್ಲನೆ ಇಂದುಮತಿಯನ್ನು ಕುರಿತು “ಧ್ರುವರಾಯನ್ನು
ವಿವಾಹಿತನೋ ಅವಿವಾಹಿತ ? ” ಎಂದು ಕೇಳಿದಳು.<br />
{{gap}}ಇದಕ್ಕಿಷ್ಟೊಂದು ವಿಚಾರವೇಕೆ ?
ಕಾಲೇಜದ ವಿದ್ಯಾರ್ಥಿಗಳಲ್ಲಿ
ವಿವಾಹಿತರಾ ಇವರ ನಾಮಾವಲಿಯು ಪುಸ್ತಕವು ಒಂದು ಬೇರೆಯಾಗಿಯೂ,
ಅವಿವಾಹಿತರ ನಾಮಾವಲಿಯು ಪುಸ್ತಕವು ಬೇರೆಯಾಗಿಯೂ ಸಿದ್ಧವಾಗಿಯೇ
ಇವೆ ಆ೩11ಳನ್ನು ಬೇಕಾದವರು ಬೇಕಾದಾಗ ನೋಡಿಕೊಳ್ಳಬಹುದಷ್ಟೆ ?
ಧ್ರುಪರಾ ಬಗರು ಅವಿವಾಹಿತರ ಪುಸ್ತಕದಲ್ಲಿ ಕಂಡುಬರುತ್ತದೆ'' ಎಂದು
ಇದುವAು ಹಳಿದ.<br />
{{gap}}ಅಭ್ಯಾಸ ನಡೆದಿದಿರುವ ಸಮಯದಲ್ಲಿ ಈ ಕುಚೋದ್ಯವೇಕೆ ಗೆಳತಿ
ಧರೆ ? ೬ಧ್ಯಾಪಕರು ಹೇಳುವದನ್ನು ಕೇಳಿಕೊಂಡರೆ ಹಿತವಾದೀತು !
ಎದು ರವರು ಸಿವಿಲ್ಲದcಯ ಬುದ್ಧಿವಾದ ಮಾಡಿದಳು,<br />
{{gap}}ಹೀಗೆ ಆ ಕಲಭಾಷಿಣಿಯ ಗು ನಡಿಸಿರುವ ಕಲ ಕಲಾಟವನ್ನು ಕೇಳಿ
ಧವರಾಯನು ಅವರ ಕಡೆಗೆ ನೋಡಿ ನಿಮ್ಮೊಳಗೆಯ ಗುಜುಗುಜರಿ ನದಿ
ಸಿರಿವದೇಕೆ? ನಿಮಗೇನಾದರೂ ಕೇಳುವದಿದ್ದರೆ ಸಂಕೋಚವಿಲ್ಲದೆ ನನ್ನನ್ನೇ
ಕೇಳಿದರಾಯಿತು … '' ಎ೦ದು ಸುಮತಿಖವನ್ನು ತಾಳಿ ನುಡಿದರೂ ಕಲಕಲಾಟ
ವನ್ನು ಮಾಡಬೇಡಿರೆಂದು ಅವನು ಫರ್ ಾಯದಿಂದ ಸೂಚಿಸಿದನು,
ಆದರೆ ಆ ಲಲನೆಯರು ಧು ವರಾಯನ ವಿವಾಹ ವಿಗ್ರಹವನ್ನು ಕುರಿತು
ವಹಿಸಿದ ತಟೆಗೆ, ಅತನಾಡಿದ ಮಾಘು ಕಾಳಶಾಶ{ಯವಾf ಸಮರ್ಪಕ
ವಾದದ್ದು ಕಂಡು ಆ ಮಾನಿನಿಯರೆಲ್ಲರಿಗೆ ನಗೆ ಬಂದಿತು. ಅತಿ ಮರ್ಯಾದ
ಶೀಲೆಯಾದ ರಮಾಸುಂದರಿಯು ಕೂಡ ನಕ್ಕದ್ದನ್ನು ಕಂಡು ಧ್ರುವರಾಯನು
ತಾನು ಅಪಹಾಸಕ್ಕೆ ಪಾತ್ರನಾಗಿರುವೆನೇನೆಂದು ಶಂಕಿಸಿ " ಏನು ಸಮಾ
* ರವದು ರಮಾಸುಂದರೀಬಾಯಿ?” ಎಂದು ಮುಂದಸ್ಮಿತನಾಗಿ ಕೇಳಿದನು.
ಅವನ ಮಂದಹಾಸವು ಆ ಸುಂದರಿಯರ ವಿನೋದವನ್ನು ಕೊಂದಿತು, ಧ್ರುವ<noinclude></noinclude>
aorges8ajlmc0vofg0qnrpncedtr0w9
321619
321618
2026-05-21T10:00:32Z
Pragathi. BH
7585
321619
proofread-page
text/x-wiki
<noinclude><pagequality level="4" user="Pragathi. BH" />{{rh|center=ಪ್ರಥಮ ದರ್ಶನದ ಪ್ರೇಮ|left=|right=೧೧}}</noinclude>
ವನ್ನು ಕುರಿತು ವಿಶದವಾದ ಊಹಾಪೋಹವಾಯಿತು ನಮ್ಮ ವಿದ್ಯಾರ್ಥಿ
ತ್ರಯರಿಗೆ ಸಂಶಯ ನಿವಾರಣವೇ ಬೇಕಾಗಿತ್ತು ಹೊರತಾಗಿ ಸ್ವಪಾಂಡಿತ್ಯದ
ಪ್ರದರ್ಶನವು ಅವರಿಗೆ ಬೇಕಾಗಿದ್ದಿಲ್ಲ. ಶ್ಲೋಕಾರ್ಧವು ಮುಗಿದ ಬಳಿಕ
ಮತ್ತೆ ಪ್ರಶ್ನೆಗಳ ಸುಗ್ಗಿಯೆದ್ದಿತು ಆಗ ಚಂದ್ರಾವಲಿಯು ತನ್ನ ಸ್ತ್ರೀ
ಸ್ವಭಾವಕ್ಕನುಸರಿಸಿ ಮೆಲ್ಲನೆ ಇಂದುಮತಿಯನ್ನು ಕುರಿತು “ಧ್ರುವರಾಯನ್ನು
ವಿವಾಹಿತನೋ ಅವಿವಾಹಿತ ? ” ಎಂದು ಕೇಳಿದಳು.<br />
{{gap}}ಇದಕ್ಕಿಷ್ಟೊಂದು ವಿಚಾರವೇಕೆ ?
ಕಾಲೇಜದ ವಿದ್ಯಾರ್ಥಿಗಳಲ್ಲಿ
ವಿವಾಹಿತರಾ ಇವರ ನಾಮಾವಲಿಯು ಪುಸ್ತಕವು ಒಂದು ಬೇರೆಯಾಗಿಯೂ,
ಅವಿವಾಹಿತರ ನಾಮಾವಲಿಯು ಪುಸ್ತಕವು ಬೇರೆಯಾಗಿಯೂ ಸಿದ್ಧವಾಗಿಯೇ
ಇವೆ ಆ೩11ಳನ್ನು ಬೇಕಾದವರು ಬೇಕಾದಾಗ ನೋಡಿಕೊಳ್ಳಬಹುದಷ್ಟೆ ?
ಧ್ರುಪರಾ ಬಗರು ಅವಿವಾಹಿತರ ಪುಸ್ತಕದಲ್ಲಿ ಕಂಡುಬರುತ್ತದೆ'' ಎಂದು
ಇದುವAು ಹಳಿದ.<br />
{{gap}}ಅಭ್ಯಾಸ ನಡೆದಿದಿರುವ ಸಮಯದಲ್ಲಿ ಈ ಕುಚೋದ್ಯವೇಕೆ ಗೆಳತಿ
ಧರೆ ? ೬ಧ್ಯಾಪಕರು ಹೇಳುವದನ್ನು ಕೇಳಿಕೊಂಡರೆ ಹಿತವಾದೀತು !
ಎದು ರವರು ಸಿವಿಲ್ಲದcಯ ಬುದ್ಧಿವಾದ ಮಾಡಿದಳು,<br />
{{gap}}ಹೀಗೆ ಆ ಕಲಭಾಷಿಣಿಯ ಗು ನಡಿಸಿರುವ ಕಲ ಕಲಾಟವನ್ನು ಕೇಳಿ
ಧವರಾಯನು ಅವರ ಕಡೆಗೆ ನೋಡಿ ನಿಮ್ಮೊಳಗೆಯ ಗುಜುಗುಜರಿ ನದಿ
ಸಿರಿವದೇಕೆ? ನಿಮಗೇನಾದರೂ ಕೇಳುವದಿದ್ದರೆ ಸಂಕೋಚವಿಲ್ಲದೆ ನನ್ನನ್ನೇ
ಕೇಳಿದರಾಯಿತು … '' ಎ೦ದು ಸುಮತಿಖವನ್ನು ತಾಳಿ ನುಡಿದರೂ ಕಲಕಲಾಟ
ವನ್ನು ಮಾಡಬೇಡಿರೆಂದು ಅವನು ಫರ್ ಾಯದಿಂದ ಸೂಚಿಸಿದನು,
ಆದರೆ ಆ ಲಲನೆಯರು ಧು ವರಾಯನ ವಿವಾಹ ವಿಗ್ರಹವನ್ನು ಕುರಿತು
ವಹಿಸಿದ ತಟೆಗೆ, ಅತನಾಡಿದ ಮಾಘು ಕಾಳಶಾಶ{ಯವಾf ಸಮರ್ಪಕ
ವಾದದ್ದು ಕಂಡು ಆ ಮಾನಿನಿಯರೆಲ್ಲರಿಗೆ ನಗೆ ಬಂದಿತು. ಅತಿ ಮರ್ಯಾದ
ಶೀಲೆಯಾದ ರಮಾಸುಂದರಿಯು ಕೂಡ ನಕ್ಕದ್ದನ್ನು ಕಂಡು ಧ್ರುವರಾಯನು
ತಾನು ಅಪಹಾಸಕ್ಕೆ ಪಾತ್ರನಾಗಿರುವೆನೇನೆಂದು ಶಂಕಿಸಿ " ಏನು ಸಮಾ
"ರವದು ರಮಾಸುಂದರೀಬಾಯಿ?” ಎಂದು ಮುಂದಸ್ಮಿತನಾಗಿ ಕೇಳಿದನು.
ಅವನ ಮಂದಹಾಸವು ಆ ಸುಂದರಿಯರ ವಿನೋದವನ್ನು ಕೊಂದಿತು, ಧ್ರುವ<noinclude></noinclude>
5ugsqht6a5b7ru5hsml0xpgd9hdtyng
ಪುಟ:ತೊಳೆದ ಮುತ್ತು.pdf/೨೨
104
92019
321620
276796
2026-05-21T10:01:39Z
Pragathi. BH
7585
/* Validated */
321620
proofread-page
text/x-wiki
<noinclude><pagequality level="4" user="Pragathi. BH" />{{rh|center=ಸಂಪೂರ್ಣ-ಕಥೆಗಳು|left=೧೨|right=}}</noinclude>
ರಾಯನ ಪ್ರಶ್ನೆಗೆ ಏನು ಉತ್ತರವೆಂದು ಇಂದುಮತಿ ಚಂದ್ರಾವಲಿಯರು
ಬೆದರಿ ನಿರುತ್ತರರಾಗಿ ಕುಳಿತರು ರಮಾಸುಂದರಿಯ ಅನಿರ್ವಾಕ್ಕಾಗಿ
ಲಜ್ಜೆಯಿಂದ ಆರಕ್ತವಾಗಿರುವ ತನ್ನ ಮುಖವನ್ನು ಬಾಗಿಸಿ '' ಏನೂ ಇಲ್ಲ,
ನಮಗೆಯೇ ಸ್ಪಷ್ಟವಾಗಿ ತಿಳಿಯುತ್ತಿರುವ ವಿಷಯದ ಮೇಲೆ ವ್ಯರ್ಥವಾಗಿ
ಪ್ರಶ್ನೆ ಕೇಳುವದೇಕೆಂದು ನಾವು ಮಾತಾಡುತ್ತಿದ್ದೆವು. ಗಲಾಟವಾದದ್ದಕ್ಕೆ
ಕ್ಷಮೆ ಇರಬೇಕು ' ಎಂದು ಬಿನ್ನಯಿಸಿದಳು.<br />
{{gap}}ರಮಾಸುಂದರಿಯ ಧುವರಾಯನ ಶಾರದಾ ಪ್ರಸಾದ ಕಾಲೇಜ
ದಲ್ಲಿರಹ ಏಳೆಂಟು ತಿಂಗಳು ಆಗಿ ಹೋಗಿದ್ದ ರ ಆವರವಲ್ಲಿ ಪರಿಚಯ
ವುಂಟಾಗಿದ್ದಿಲ್ಲ. ಮೊನ್ನೆ ಯೇ ಅವಳು ಅವನಿಗೆ ಪತ್ರ ಬರದು ಲೇಖವನ್ನು
ತರಿಸಿಕೊಂಡಿದ್ದಳು. ಇಂದು ಅವರವರ ನಡುವೆ ಮೇಲೆ ಎವಲಸಿದ ಒಂದೇ
ಒಂದಾದ ಪ್ರಶೋತ್ತರವು ನಡೆಯಿತು. ಚಕಮಕಿ ಕನ ಒಳ ಹೊಡೆತ
ದಿಂದ ಒಮ್ಮೊಮ್ಮೆ ಬೆಂಕಿಯ ಕಿಡಿಯು ಹೊರಡುವದುಂಟು. ಒಂದೇ
'ಬೆಂಕಿಯ ಕಿಡಿಯುವ ಏನೇನು ಚಮತ್ಕಾರಗಂಳುಂಟಾಗಬಲ್ಲವೆಂಬುದನ್ನು
ಯಾರು ಹೇಳಬಲ್ಲರು ? ಕುಚೋದ್ಯ ಮಾಡಿದನೆಂದ ಇಂದುಮತಿ ಚಂದ್ರಾ
ವಲಿಯರೊಟ್ಟಿಗೆ ಉಳಿದರು,ದ್ರವರಾಯನ ಪ್ರಶ್ನವು ರಮಾಸುಂದರಿಯ
ಮೇಲೆ ಬಿದ್ದಿತು. ಆ ಚಮತ್ಕಾರವಾದ ಪ್ರಶ್ನೆ ಕೈ ನಿರ್ವಾಹವಿಲ್ಲದೆ ಉತ್ತರ
ವನ್ನು ಕೊಡುವಾಗ ದಮಾಸುಂದರಿಯು ಒಳಿತಾಗಿ ನಾಚಿಕೊಂಡಳು,
ನಾಚಿಕೆಯ ಹಿಡಿತಕ್ಕಾಗಿ ಸಖಿಯರ ಮುಖವ ನೋಡಲು ಅವಳಿಗೆ
'ಧೈರ್ಯಸಾಲಲಿಲ್ಲ, ಇತ್ತ ನೋಟಕ್ಕೆ ಹಾದಿ ಕಟ್ಟಾಗಿರಲು ಆ ನೋಟವು
ಫಕ್ಕನೆ ಧ್ರುವರಾಯನ ಸುಂದರವಾದ ಮುಖದ ಕಡೆಗೆ ಧಾವಿಸಿತು. ಹಗಲು
ಪಂಜಿನ ಚಮತ್ಕಾರವಾದ ಪ್ರಕಾಶದಲ್ಲಿ ವಸ್ತುಗಳ ಸೌಂದರ್ಯವು ಎದ್ದು
“ ಕಾಣುವಂತೆ ರಮಾಸುಂದರಿಯ ಹೃದಯದಲ್ಲಿ ಉದ್ಭವಿಸಿದ ಕೆಲವೊಂದು
ವಿನೂತನವಾದ ಜ್ಯೋತಿಯ ಮಡಿಲಕ ಧ್ರುವರಾಯಸ ಮುಖದ ಸೌಂದರ್ಯ
ಆ ಕ್ಷಣದಲ್ಲಿ ಮನ್ಮಥನ ಸೌಂದರ್ಯವನ್ನು ಉಜ್ಜಿಸುವಂತೆ ಕಂಡಿತು. ಒಂದು
ಪಳದ ಎಷ್ಟನೆಯ ಅಂಶವೋ, ಅಷ್ಟು ಅಲ್ಪಕಾಲ ಮಾತ್ರ ರವಾಸುಂದರಿಯ
ದೃಷ್ಟಿಯು ಸಾಭಿಲಾಷವಾಗಿ ಧ್ರುವರಾಯನ ಮುಖಚಂದ್ರಮದಲ್ಲಿ ಸಚಿಸಿ
ಇದ್ದರೂ ಅಲ್ಪಾವಧಿಯಲ್ಲಿ ಅನುರಾಗಯುಕ್ತವಾದವುಗಳಾದ ಪರಸ್ಪರರ<noinclude></noinclude>
emu2l4n5w7frv2uauzkg0fs9herf6pi
ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೩೪
104
94567
321522
274463
2026-05-21T03:04:02Z
Pragathi. BH
7585
/* Validated */
321522
proofread-page
text/x-wiki
<noinclude><pagequality level="4" user="Pragathi. BH" /><small>{{rh|೧೧೮||ಗೌರ್ಮೆಂಟ್ ಬ್ರಾಹ್ಮಣ}}</small></noinclude>
ಕೇರಿಯ ಎಲ್ಲ ಯುವಕರನ್ನೂ ಕರೆದುಕೊಂಡು ಕೊಡ ಹಗ್ಗದೊಂದಿಗೆ ನೀರಿಗೆ ಹೊರಟರಂತೆ. ಅದು ಮಧ್ಯಾಹ್ನದ ಉರಿ ಬಿಸಿಲು ಬೇರೆ! ಹೋದವರೇ ಮೊದಲು ಮಠದ ಬಾವಿಗೆ ಹಗ್ಗವನ್ನು ಹಾಕಿ ನೀರು ಸೇದಿದರಂತೆ. ಎಲ್ಲ ಜನತೆ "ಅವಕ್ಕಾಗಿ" ಇವರನ್ನೇ ನೋಡುತ್ತಿದ್ದರಂತೆ. ಇವರ ಕುಣಿದಾಟ, ಜಿಗಿದಾಟ ನಿಂತು ನೋಡುವ ಹಾಗೆ ಇರುತ್ತಿತ್ತಂತೆ! ಮೇಲು ಜಾತಿಯ ಜನತೆಗೆ ಆಶ್ಚರ್ಯ, ದಿಗಿಲು ಎರಡೂ ಏಕಕಾಲಕ್ಕೆ ಉಂಟಾಗಿರಬೇಕು. ಬಾವಿಯಿಂದ ನೀರು ಜಗ್ಗಿದ ಈ ಜನ ಮನೆಗೂ ತೆಗೆದುಕೊಂಡು ಹೋಗುತ್ತಿರಲಿಲ್ಲವಂತೆ.</br>
{{gap}}ಬಾವಿಯಿಂದ ನೀರು ಜಗ್ಗುವುದು</br>
{{gap}}ದಬದಬನೆ ನೆಲಕ್ಕೆ ಚೆಲ್ಲುವುದು</br>
{{gap}}ಬಾವಿಯಿಂದ ನೀರು ಜಗ್ಗುವುದು</br>
{{gap}}ದಬದಬನೆ ನೆಲ್ಲಕ್ಕೆ ಚೆಲ್ಲುವುದು
{{gap}}ಹೀಗೆ ಒಂದು ಬಾವಿಯಲ್ಲಿ. ಎರಡು ಬಾವಿಯಲ್ಲಿ ಊರಲ್ಲಿ ಇರುವ ಎಲ್ಲ ಬಾವಿಗಳನ್ನೂ ಮುಟ್ಟಿ ಮುಟ್ಟಿ ಗಡಗಡಿಗೆ ಹಗ್ಗ ಹಾಕಿ ನೀರು ತೆಗೆಯುವುದು, ಚೆಲ್ಲುವುದು, ಆ ಪಂದ್ರಾ ಆಗಸ್ಟದ ದಿನವೆಲ್ಲ ಇದೇ ಕೆಲಸವೇ ಆಗಿ ಹೋಗಿತ್ತಂತೆ ಊರ ಜನವೆಲ್ಲ ಮಿಕ ಮಿಕನೇ ಬಾಯಿ ತೆಗೆದುಕೊಂಡು ಇವರ ಮುಖಗಳನ್ನೇ ನೋಡುತ್ತಿದ್ದರಂತೆ! ಜನರೆಲ್ಲ ದಾರಿಯುದ್ದಕ್ಕೂ ನಿಂತು ನೋಡುತ್ತಿದ್ದರಂತೆ.
{{gap}}ಎಂತಹ ಸಂದರ್ಭವಲ್ಲವೇ ಇದು? ಸ್ವಾತಂತ್ರ್ಯವೆಂದರೆ ಒಬ್ಬೊಬ್ಬರಿಗೆ ಎಂತಹ ಕಲ್ಪನೆ. ವಿವೇಕಾನಂದರಿಗೆ ತಮ್ಮದೇ ಆದ ಹೊಸನಾಡಿನ ಕಲ್ಪನೆ, ಸರದಾರ್ ವಲ್ಲಭಭಾಯಿ ಪಟೇಲರಿಗೆ ಕ್ಷಾತ್ರ ತೇಜಸ್ಸಿನ ಕಲ್ಪನೆ, ನೆಹರೂಗೆ ಆಧುನೀಕರಣದ ನಾಡಿನ ಕಲ್ಪನೆ, ಗಾಂಧೀಜಿಗೆ ರಾಮರಾಜ್ಯದ ಕಲ್ಪನೆ, ಅಂಬೇಡ್ಕರ್ಗೆ ಹಕ್ಕುಗಾರಿಕೆಯ ನಾಡಿನ ಕಲ್ಪನೆ, ನನ್ನಪ್ಪನಂತಹ ಸಾಮಾನ್ಯ ಮನುಷ್ಯರಿಗೆ ಸ್ವಾತಂತ್ರ್ಯದ ನಾಡು ಎಂದರೆ ಕುಡಿಯುವ ನೀರು ತರಲು ನಮಗೆ ಯಾರೂ ಅಡ್ಡಿ ಮಾಡಲಾರರು ಎನ್ನುವ ನಾಡಿನ ಕಲ್ಪನೆ!
{{gap}}ನನ್ನಪ್ಪನ ಎದೆಗೆ ಕುದಿವ ಬಿಸಿನೀರು ಎರಚಿದಂತಾದುದು ಪಂದ್ರಾ ಆಗಸ್ಟದ ದಿನದಂದೆ! ಪಂದ್ರಾ ಆಗಸ್ಟದಂದು ನಡೆದ ಘಟನೆ ಅನಿಶ್ಚಿತತೆಯಿಂದ ಕೂಡಿದ್ದು. ಹೀಗಾಗಿಯೇ ಜನ ಕೇವಲ ನಿಂತು ನೋಡುವಂತಾಗಿ ಹೋಯಿತೆಂದು ತೋರುತ್ತದೆ. ಆದರೆ ಮರುದಿನ ಹಲ್ಲು ಮಸೆಯುವ ಸುದ್ದಿಗಳೇ ಕಿವಿತುಂಬ ಇದ್ದುವಂತೆ. ಕೆಲವರು ಬಾವಿಯ</br>
ಗಡಗಡಿಗಳನ್ನೇ ತೆಗೆದಿದ್ದರಂತೆ ಇನ್ನೂ ಕೆಲವರು "ಅವರು ಬರಲಿ ಇವತ್ತು” ಎಂದು</br>
ಕಾಯುತ್ತಾ ಕುಳಿತಿದ್ದರಂತೆ!
{{gap}}ಪಂದ್ರಾ ಆಗಸ್ಟದಂದು ಮಾಡಿಸಿ ತಿಂದದ್ದು ಹೊ!ದಿನವೂ ಹೋಳಿಗೆ
ತಿನ್ನಲು ಸಾಧ್ಯವೇ? ಮರುದಿನ ಅದೇ ಕಂಕು ರೊಟ್ಟಿಯೇ ಗತಿ ಎನ್ನುವಂತೆ ಹಳೆಯ<noinclude></noinclude>
6s856i7t88w2p9qt12b6f05m643s3qg
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೮
104
99537
321587
278881
2026-05-21T08:59:13Z
Pragathi. BH
7585
/* Validated */
321587
proofread-page
text/x-wiki
<noinclude><pagequality level="4" user="Pragathi. BH" /></noinclude>
ಸಂಸ್ಕೃತಿ- ಮನೆಗೆ ಬಂದ ಅತಿಥಿಗಳನ್ನು ವಯಸ್ಸಿನ ಅಂತರವೂ ನೋಡದೆ ತುಂಬು
ಗೌರವ ಕೊಡುವ ಶ್ರೇಷ್ಠ ಸಂಸ್ಕೃತಿ. ಎಲ್ಲರಿಗೂ ಅಡಿಕೆಯೇ ಪ್ರಮುಖ ಕೃಷಿ. ಅದೇ ಹಳೇ ಮಹಾರಾಷ್ಟ್ರೀಯ ಚಿತ್ಪಾವನಿ ಭಾಷೆ. ಈ ಮಾಳದ ಹೆರಂಜೆ ಎಂಬ ಊರಿನ ಕಟ್ಟಕಡೆಯ ಕಾಡಿಗೆ ತಾಗಿಕೊಂಡ ಪ್ರದೇಶದ ಮನೆಯಲ್ಲಿ ಹುಟ್ಟಿದವರು ಪ್ರಭಾಕರ ಜೋಶಿ.
{{gap}}ಅದು ೨ನೇ ಮಹಾಯುದ್ಧ ಕಾಲ. ಯುದ್ಧ ಕಳೆದು ಆಗಷ್ಟೇ ತಲೆ ಎತ್ತುತ್ತಿತ್ತು ನಮ್ಮ ದೇಶ, ಅಡಿಕೆಯ ಬೆಲೆ ಇಳಿದಿತ್ತು. ಅಡಿಕೆಗೆ ಮಹಾಲಿಯೆಂಬ ಹೊಸ ರೋಗದ ಕಾಟ. ಮಾರುಕಟ್ಟೆಯ ಅಭಾವ. ಸ್ವಾತಂತ್ರ್ಯ ಸನಿಹದಲ್ಲಿತ್ತು. ಇಂಥ ವಿಕ್ಷಿಪ್ತ ಕಾಲಘಟ್ಟದಲ್ಲಿ ಹುಟ್ಟಿದವರು ಪ್ರಭಾಕರ ಜೋಶಿ.
{{rh|left=|center='''ತಂದೆಯವರೇ ಸರಸ ಸಂಭಾಷಣಾ ಚತುರ...'''|right=}}
ತಂದೆ ನಾರಾಯಣ ಜೋಶಿ, ಲಕ್ಷ್ಮೀಬಾಯಿ ಯಾನೆ ಚಂದ್ರಾವತಿ ಪ್ರಭಾಕರ ಜೋಶಿಯವರ ತಾಯಿ. ಅವರು ಅನಿರುದ್ಧ ಭಟ್ ಮರಾಠ ಎಂಬ ಪ್ರಸಿದ್ಧ ಮದ್ದಳೆಗಾರರ ಮಗಳು. ಅಪಾರ ದುಡಿಮೆ ಮತ್ತು ತ್ಯಾಗಗಳಿಂದ ಸಂಸಾರವನ್ನು ಉಳಿಸಿ ಬೆಳೆಸಿದವರು. ಅನಾರೋಗ್ಯದಲ್ಲಿದ್ದ ಪತಿ, ಹೆಣ್ಣು ಮಕ್ಕಳಿಲ್ಲದ ಮನೆ, ಪ್ರತಿಕೂಲ ಸ್ಥಿತಿ – ಎಲ್ಲವನ್ನೂ ನಿಭಾಯಿಸಿದ ಮಹಾನ್ ವ್ಯಕ್ತಿತ್ವ ಅವರು ೫-೬ ವರ್ಷಗಳವರೆಗೆ ಹೊರಗೆ ನೆರೆಮನೆಗೂ ಹೋದವರಲ್ಲವಂತೆ! ಇಂಥ ದಂಪತಿಗೆ ೧೯೪೬ರ ಫೆ. ೬ರಂದು ಮೂರನೇ ಮಗನಾಗಿ ಜನಿಸಿದರು. ಹರಿಹರ ಜೋಶಿ ಮತ್ತು ಸೀತಾರಾಮ ಜೋಶಿ ಎಂಬಿಬ್ಬರು ಅಣ್ಣಂದಿರು ಮದ್ದಲೆ ತಬಲಾ ವಾದಕರು, ವಸಂತ ಜೋಶಿ ತಮ್ಮ.
{{gap}}ನಿತ್ಯ ವೇದ, ಉಪನಿಷತ್ತುಗಳು ಗುನುಗುನಿತವಾಗುತ್ತಿದ್ದ ಮನೆ. ತಂದೆಯೋ ಪರಮ ಪಂಡಿತ. ಚಾವಡಿಯಲ್ಲಿ ಕುಳಿತೇ ಬದುಕಿನ ಕಾಲಂಶ ಕಳೆದವರು. ವೇದ, ಶಾಸ್ತ್ರಗಳು, ವರ್ತಮಾನ ಪತ್ರಿಕೆಗಳ ನಿರಂತರ ಓದು ಮತ್ತು ಬದುಕಿನ ಗಾಢ ಅನುಭವ ಹೊಂದಿದ್ದರು. ತಂದೆ ನಾರಾಯಣ ಜೋಶಿಯವರ ಮಾತು ಕೇಳಲೆಂದೇ ಊರ ಜನ ಆಗಾಗ ಮನೆಗೆ ಬರುತ್ತಿದ್ದರು. ಲಾಲಿತ್ಯಪೂರ್ಣ, ಪಾಂಡಿತ್ಯಪೂರ್ಣ ಇಂಪಾದ ಮಾತು. ಉಚ್ಛಾರ ಸ್ವಚ್ಛ ಆದರೆ ಸೌಲ್ಯವೆಂಬ ಕಾಯಿಲೆ ಬಾಧಿತರು. 'ನನ್ನ ತಂದೆಯವರದ್ದು ವ್ಯರ್ಥ ಪ್ರತಿಭೆ' ಎನ್ನುವರು ಜೋಶಿ. ಅದ್ಭುತ ಭಾಷಣಗಾರ, ವೇದ, ಸಂಸ್ಕೃತ ವಿದ್ವಾಂಸ. ಐಗಳ ಮಠದಂಥ ಶಾಲೆಯಲ್ಲಿ
೩ನೇ ತರಗತಿ ಕಲಿತು, ಗೋಕರ್ಣ, ಶೃಂಗೇರಿ ಮಠಗಳಲ್ಲಿ ವೇದ ಕಲಿತಿದ್ದರು. ಅವರೂ ತಾಳಮದ್ದಲೆಗಳಲ್ಲಿ ಅರ್ಥ ಹೇಳುತ್ತಿದ್ದರು. ನಿತ್ಯವೂ ಸಂಜೆ ಭಗವದ್ಗೀತೆಯ ವಾಚನ ಮಾಡುತ್ತಿದ್ದರು. ಸರಸ ಸಂಭಾಷಣಾ ಚತುರ.
{{gap}}ಹುಡುಗ ಪ್ರಭಾಕರ ತಂದೆಯವರ ಇವೆಲ್ಲ ಮಾತುಗಾರಿಕೆಯನ್ನು ಕೇಳುತ್ತಲೇ ಬೆಳೆದವರು.
{{rh|left=|center='''ಅಜ್ಜ ಅನಿರುದ್ಧ....'''|right=}}
ಜೋಶಿಯವರಿಗೆ ಯಕ್ಷಗಾನದ ಮಟ್ಟಿಗೆ ದೊಡ್ಡ ಹಿನ್ನೆಲೆಯಂತಿದ್ದವರು ಅಜ್ಜ. ಅನಿರುದ್ಧ ಭಟ್ ಮರಾಠ. ತೆಂಕು ಮತ್ತು ಬಡಗು ಎರಡೂ ಶೈಲಿಗಳನ್ನು ಬಲ್ಲ ಅದ್ಭುತ ಮದ್ದಳೆಗಾರ.
{{rh|left=|center='''ಡಾ. ಎಂ. ಪ್ರಭಾಕರ ಜೋಶಿ / ೩'''|right=}}<noinclude></noinclude>
bw78l4hgwa9nuq7i09ukenehhhle13q
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೧೮
104
99538
321594
278985
2026-05-21T09:02:30Z
Pragathi. BH
7585
/* Validated */
321594
proofread-page
text/x-wiki
<noinclude><pagequality level="4" user="Pragathi. BH" /></noinclude>{{gap}}ಕೃಷ್ಣನಾಗಿದ್ದರು. ಸಣ್ಣ ತಿಮ್ಮಣ್ಣ ಭಟ್ಟರದ್ದು ಕೌರವ. ಅಂದಿನದ್ದು ನನ್ನ ಮನಸ್ಸಲ್ಲಿ ಅಷ್ಟೊತ್ತಿ
ಉಳಿದ ಕೌರವ. ಇಂದಿಗೂ ಮರೆಯಲಾಗದ್ದು, ಬೇರೆ ಯಾರ ಹಾಗೂ ಅಲ್ಲ. ದೊಡ್ಡ ಪ್ರತಿಪಾದನೆ,
ತರ್ಕದಲ್ಲಿ ಕೌರವ ಮಾಡಿದ್ದು ಸರಿ ಅಂತೆಲ್ಲ ಹೇಳುವುದಿಲ್ಲ. ಆದರೆ ಪಾತ್ರದಲ್ಲಿ ಆ ಜಬರ್ದಸ್ತು,
ಗಾಂಭೀರ್ಯ, ಛಾಪು, ಯೋಗ್ಯತೆಯನ್ನು ತಿಮ್ಮಣ್ಣ ಭಟ್ಟರು ತೋರಿಸಿದ್ದರು' ಎನ್ನುತ್ತಾರೆ ಜೋಶಿ,<br />
{{gap}}ನೆಡುಗೋಡಿನ ಕೃಷ್ಣ ಮತ್ತು ಯಲ್ಲಾಪುರ ಸೊಸೈಟಿಯ ಕೃಷ್ಣ ಜೋಶಿಯವರನ್ನು
ಉತ್ತರಕನ್ನಡದಲ್ಲಿ ಜನಪ್ರಿಯಗೊಳಿಸಿತು. ಕೆರೇಕೈ ಕೃಷ್ಣ ಭಟ್ (ವಿದ್ವಾನ್ ಉಮಾಕಾಂತ್
ಭಟ್ರ ತಂದೆ) ದಂಟೆಕಲ್ ಪಟೇಲರು, ಗಣಪತಿ ಹೆಗಡೆ, ಹೆಸರುಗೋಡು, ನೆಟ್ಟೂರು
ಭಾಗವತರಂಥ ಹಿರಿಯ ಅರ್ಥದಾರಿಗಳ ಜೊತೆಗೆ ಆಗಷ್ಟೇ ಕಾಲೇಜು ಮುಗಿಸಿದ್ದ
ಸ್ನಾತಕೋತ್ತರ ವಿದ್ಯಾರ್ಥಿ ಜೋಶಿಯವರು ವೇದಿಕೆ ಹಂಚಿಕೊಂಡಿದ್ದರೆಂಬುದೇ ವಿಶೇಷ.
ಆಗಲೇ ಸ್ಪುಟವಾಗಿ, ನಿರರ್ಗಳವಾಗಿ ಅರ್ಥ ಹೇಳುವ ಯುವಕ ಜೋಶಿ ಎಲ್ಲರ ಕೇಂದ್ರ
ಬಿಂದುವಾಗಿದ್ದರು.<br />
{{center|'''ಮೇಳ ಸೇರಬೇಕೆಂದುಕೊಂಡಿದ್ದರು ಜೋಶಿ'''!<br />
'''ಆದರೆ ಇದೆಲ್ಲ ದಶಾವತಾರ ಎಂದಿದ್ದರು ಪೈಗಳು'''}}
{{gap}}ಕಾರ್ಕಳದಲ್ಲಿದ್ದಾಗ ಕೆಲ ಮೇಳಗಳಲ್ಲಿ ವೇಷ ಮಾಡಿದ್ದರು ಜೋಶಿ, ಯಕ್ಷಗಾನವೇ
ಮೈಮನಗಳಲ್ಲಿ ತುಂಬಿಕೊಂಡಿತ್ತು. ಆ ಕಾರಣವೋ ಏನೋ ಬಿಕಾಂ ಮುಗಿಸಿದ ಮೇಲೂ
ಪ್ರವೃತ್ತಿಯನ್ನೇ ವೃತ್ತಿಯಾಗಿಸಿದರೆ ಹೇಗೆ ಎಂದು ಚಿಂತಿಸಿದ್ದರು. ಆಗ ಅಧ್ಯಾಪಕನ ಸಂಬಳಕ್ಕಿಂತ
ಮೇಳದ ಕಲಾವಿದನ ಸಂಬಳವೇ ಹೆಚ್ಚಿತ್ತು. ಮೇಳದಲ್ಲಿ ಆರು ತಿಂಗಳು ವಸತಿ, ಊಟಕ್ಕೆ
ಚಿಂತೆಯಿರಲಿಲ್ಲ. ಆಗ ಇವರ ವೇಷಕ್ಕೆ ೪-೫ಸಾವಿರ ರೂಪಾಯಿ ಸಂಬಳ ಸಿಗುವ ವಿಶ್ವಾಸವೂ
ಇತ್ತು. ಇದೇ ಕಾರಣಕ್ಕೆ ಮೇಳಕ್ಕೆ ಸೇರಿ ವ್ಯವಸಾಯಿ ಕಲಾವಿದನಾಗುವ ಎಂಬ ಕನಸು ಚಿಗುರಿದ್ದು,<br />
{{gap}}ಹಾಗೆ ಅಂದು ಉಚ್ಚಾಯ ದಿನಗಳನ್ನು ಕಾಣುತ್ತಿದ್ದ ಸುರತ್ಕಲ್ ಮೇಳದ ಕಸ್ತೂರಿ
ವರದರಾಯ ಪೈಗಳಿಗೆ ಜೋಶಿ ಒಂದು ಪತ್ರ ಬರೆದರು. ಪೈಗಳು ಆರೆಸ್ಸೆಸ್ನವರು. ಜೋಶಿ
ಯವರು ಆಗಲೇ ವಕೀಲ ರಾಮಮೂರ್ತಿ, ಕಾರ್ಕಳದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ
ಮುರಾರಿಯರ ಮೂಲಕ ಸಂಘದ ಸಂಪರ್ಕಕ್ಕೆ ಬಂದಿದ್ದರು. ಸಂಘ ಶಿಕ್ಷಾ ವರ್ಗ (ಐಟಿಸಿ)
ಆಗಿತ್ತು. ಮೇಳಕ್ಕೆ ಬರಬೇಕೆಂದುಕೊಂಡಿದ್ದೇನೆ. ಶಿಕ್ಷಣದ ಭವಿಷ್ಯವನ್ನು ಮುಂದುವರಿಸ
ಬೇಕೆಂಬುದು ನನ್ನ ಉದ್ದೇಶ. ಪೈಗಳು ಜೋಶಿಯವರ ವೇಷವನ್ನು ಸಾಣೂರಿನ ತಮ್ಮ
ಮೇಳದ ಆಟದಲ್ಲಿ ನೋಡಿದ್ದರು. ಅಗರಿ ರಘುರಾಮ ಭಾಗವತರು. ನಟ ಸಾರ್ವಭೌಮ
ಮುರೂರು ದೇವರ ಹೆಗಡೆಯವರದ್ದು ಕಂಸ. ಸ್ವಪ್ನದ ಕಂಸ, ತೆಕ್ಕಟ್ಟೆ ಆನಂದ ಮಾಸ್ಟು
ಅಕ್ರೂರ. ಜೋಶಿಯವರದ್ದು ಕೃಷ್ಣ ಕೃಷ್ಣನನ್ನು ನೋಡಿದ ಪೈಗಳು ಆದೀತು' ಎಂದಿದ್ದರು.<br />
{{gap}}“ನೀನು ಮೇಳಕ್ಕೆ ಬರುವುದಿದ್ದರೆ ಬಾ. ಇನ್ನು ಮೂರು ದಿನಗಳಲ್ಲಿ ನಮ್ಮ ಮೇಳ
ಸುಳ್ಯ ದಾಟಿ ಮಡಿಕೇರಿಗೆ ಹೋಗುತ್ತದೆ. ಅಲ್ಲಿ ನೀನು ಬಂದು ಸೇರು' ಎಂದಿದ್ದರು ಪೈಗಳು.
ಜೊತೆಗೆ ಪಕ್ಕ ಕರೆದು ಬೆನ್ನಿಗೆ ಕೈ ಹಾಕಿ, ಕೊಂಕಣಿಯಲ್ಲಿ, 'ತುಗಲೆ ವೇಷ ದಾಯಿತ... (ನಿನ್ನ
ವೇಷ ಆದೀತು... ಆದರೆ...) ದಲ್ಲರಿ ಏ ಪೂರ ದಶಾವತಾರ್, ತುಕ್ಕ ನಕ್ಕ... (ಇದೆಲ್ಲ<br />
{{center|'''ಡಾ.ಎಂ. ಪ್ರಭಾಕರ ಜೋಶಿ''' / ೧೩}}<noinclude></noinclude>
nbbvxwm28g1njk34yvu8x3a6sixlhua
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೧೫
104
99540
321592
278872
2026-05-21T09:01:49Z
Pragathi. BH
7585
/* Validated */
321592
proofread-page
text/x-wiki
<noinclude><pagequality level="4" user="Pragathi. BH" /></noinclude>ಸಂಬಂಧಿಕ ಎಂಬ ನೆಲೆಯಲ್ಲಿ ಜೋಶಿಯವರಿಗೆ ಅಲ್ಲೊಂದು ಪಾತ್ರ ಕೊಟ್ಟಿದ್ದರು. ಆ
ಕಾಲಘಟ್ಟದಲ್ಲಿ ಸಣ್ಣ ಸಣ್ಣ ಊರುಗಳಲ್ಲಿ ನಡೆಯುವ ತಾಳಮದ್ದಲೆಗಳಲ್ಲಿ ಊರ ಕಲಾವಿದರ
ಜೊತೆಗೆ ಹೊರಗಿನ ಪ್ರಸಿದ್ಧರನ್ನೂ ಕೂಡಿಸಿ ಪಾತ್ರ ಸಂಯೋಜಿಸುತ್ತಿದ್ದರು. ಕಲೆಯ ಏಳೆ
ದೃಷ್ಟಿಯಿಂದ ಇಂಥದ್ದು ಆಗಬೇಕು. ಆದರೆ ಈಗ ಹಾಗಾಗುತ್ತಿಲ್ಲ ಎನ್ನುವುದೂ ಜೋಶಿಯವರ
ಕೊರಗು.<br />
ಅಂದು ಪಾರ್ಥ ಸಾರಥ್ಯ-ಭಗವದ್ಗೀತೆ ಪ್ರಸಂಗ, ದೇರಾಜೆ ಸೀತಾರಾಮಯ್ಯನವರದ್ದು
ಪಾರ್ಥ ಸಾರಥ್ಯದ ಕೃಷ್ಣ ಕಾಲೇಜು ಹುಡುಗ ಜೋಶಿಯವರದ್ದು ಕೌರವ! ಹಾಗೆ ಮುಂಡಾಜೆ
ಮನೆಯ ಚಾವಡಿಯಲ್ಲಿ 'ಕುರುಕ್ಷೇತ್ರ' ಅನಾವರಣಗೊಂಡಿತ್ತು. ಹುಡುಗನಾದರೂ ಜೋಶಿ
ವಯಸ್ಸಿಗೆ ಮೀರಿದ ಮಾತಿನ ಪ್ರಬುದ್ಧತೆಯನ್ನು ತೋರಿದ್ದರು! ೩೦ ವರ್ಷ ವಯೋ
ಅಂತರವಿದ್ದರೂ ದೇರಾಜೆಯವರು ಜೋಶಿಯವರ ಕೌರವ ಎದ್ದು ಕಾಣುವಂತೆ ಅರ್ಥ
ಹೇಳಿದ್ದರಂತೆ. ಜೋಶಿಯವರ ಪ್ರಕಾರ ಅದು ತಮ್ಮ ಜೀವಮಾನದಲ್ಲಿ ಹೇಳಿದ ಒಟ್ಟು
ಅರ್ಥಗಳಲ್ಲಿ ಯಶಸ್ವೀ ಅರ್ಥವಂತೆ.<br />
ಇದೇ ವರ್ಷ ಮುಲ್ಕಿಯಲ್ಲೂ ಮೇರು ಕಲಾವಿದರ ಜೊತೆಗೆ ಜೋಶಿ ಅರ್ಥ ಹೇಳಿದ್ದರು.
ವಿಜಯಾ ಕಾಲೇಜಿನಲ್ಲಿ ನಡೆದ ಕೂಟ. ಶೇಣಿ ಗೋಪಾಲಕೃಷ್ಣ ಭಟ್ಟರು, ದೊಡ್ಡ ಸಾಮಗರು,
ಪೆರ್ಲ ಕೃಷ್ಣ ಪಂಡಿತರು, ಮಂದಾರ ಕೇಶವ ಭಟ್ಟರು, ವೆಂಕಟ್ರಾಯ ಐತಾಳರು, ಕೆಮ್ಮಣ್ಣು
ನಾರಣಪ್ಪಯ್ಯ.. ಅಂದು ಇವೆಲ್ಲ ಮೇರು ವ್ಯಕ್ತಿತ್ವಗಳೊಂದಿಗೆ ವಿಧೇಯ ವಿದ್ಯಾರ್ಥಿಯಂತೆ
ಅರ್ಥ ಹೇಳಿದ್ದ ಜೋಶಿ ಮುಂದೊಂದು ದಿನ ಅವರೆಲ್ಲರ ಕುರಿತು ಪ್ರತ್ಯಪ್ರತ್ಯೇಕ ಅಧ್ಯಯನ
ವನ್ನೇ ನಡೆಸಿದ್ದರು! ಶೇಣಿಯವರ ಅಭಿನಂದನೆಗೊಂದು ರೂಪು ಕೊಟ್ಟರು. ಪೆರ್ಲ
ಪಂಡಿತರ ಕುರಿತು ಪುಸ್ತಕ ಬರೆದರು. ವೆಂಕಟ್ರಾಯ ಐತಾಳರ ಬಗೆಗೆ 'ರಂಗ ವೆಂಕಟ'ವೆಂಬ
ಕೃತಿ ಸಂಪಾದಿಸಿ ದರು. ಮಂದಾರ ಕೇಶವ ಭಟ್ಟರ ಜೊತೆಗೆ ಮಹತ್ವದ ಸಂಘಟನೆಗಳಲ್ಲಿ
ಭಾಗಿಯಾದರು.<br />
{{rh|left=|center='''ಕಾರ್ಕಳದ ಗುಮ್ಮಟ ಬೆಟ್ಟದಲ್ಲಿ ಅದೊಂದು ಭಾಷಣ..'''!|right=}}
ಬಿಕಾಂ ಬಳಿಕ ಒಂದಷ್ಟು ಸಮಯ ಜೋಶಿಯವರು ತಮ್ಮ ಅಣ್ಣನ ಜಿನಸಿ ಅಂಗಡಿಯಲ್ಲಿದ್ದರು.
ಬಳಿಕ ತಾವು ಕಲಿತ ಕಾರ್ಕಳ ಬೋರ್ಡ್ ಹೈಸ್ಕೂಲಿನಲ್ಲಿಯೇ ತಾತ್ಕಾಲಿಕ ಶಿಕ್ಷಕನಾಗಿ ಎರಡು
ವರ್ಷ ದುಡಿದರು. ಆಗ ಕಾರ್ಕಳದ ಕುತ್ಯಾರು ಅರಸರ ಕಟ್ಟಡದಲ್ಲಿ ಬಾಡಿಗೆ ಕೊಠಡಿಯಲ್ಲಿದ್ದರು.
ಮತ್ತೆ ಅನಂತಶಯನ, ವೆಂಕಟರಮಣ ದೇವಸ್ಥಾನ, ಅಲ್ಲಿನ ಕೂಟಗಳು, ಭಾಷಣಗಳು..
೧೯೬೯ರಲ್ಲೇ ಪ್ರಬುದ್ಧ ಭಾಷಣಕಾರನಾಗಿ ಪ್ರಕಟಗೊಳ್ಳುವಂಥ ಸಂದರ್ಭ ಒದಗಿಬಂದಿತು.
ಅದು ಕಾರ್ಕಳ ಗೊಮ್ಮಟ ಬೆಟ್ಟದಲ್ಲಿ ಪ್ರತಿವರ್ಷ ನಡೆಯುವ ಬೆಟ್ಟ ತೇರು ಉತ್ಸವ. ಅಲ್ಲಿ
ಉತ್ಸವದ ಜೊತೆ ವಿಚಾರಗೋಷ್ಠಿಯನ್ನೂ ಏರ್ಪಡಿಸುತ್ತಿದ್ದರು. ಆ ವರ್ಷ ಜೈನ ಶಾಸ್ತ್ರದಲ್ಲಿ
ವಿಶೇಷ ಅಧ್ಯಯನ ನಡೆಸಿದ್ದ ಪಂಡಿತ್ ದೇವಕುಮಾರ್ ಜೈನ್ ಅವರ ಜೊತೆ ಯುವಕ
ಜೋಶಿಯವರಿಗೂ ವಿಚಾರ ಮಂಡಿಸುವ ಅವಕಾಶ, ರತ್ನಾಕರವರ್ಣಿಯ ಭರತೇಶ
ವೈಭವದಲ್ಲೂ, ಪಂಪನ ಆದಿ ಪುರಾಣದಲ್ಲೂ ಬರುವ ಭರತ-ಬಾಹುಬಲಿಯರ
{{rh|left=|center='''ಡಾ.ಎಂ.ಪ್ರಭಾಕರ ಜೋಶಿ''' | |right=೧೦}}<noinclude></noinclude>
lvq1jcm2xn5nivhfm1a1qhn5i2jrr5b
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೯
104
99543
321588
278867
2026-05-21T08:59:32Z
Pragathi. BH
7585
/* Validated */
321588
proofread-page
text/x-wiki
<noinclude><pagequality level="4" user="Pragathi. BH" /></noinclude>ಪ್ರಭಾಕರ ಜೋಶಿಯವರ ಮನೆಗೆ ಅಣ್ಣಂದಿರಿಗೆ ತಬಲಾ ಮತ್ತು ಮದ್ದಳೆ ಕಲಿಸಲು ಬರುತ್ತಿದ್ದರು.ಜೋಶಿಗೂ ಕೂಡಾ ಅವಾಗಲೇ ಸ್ವಲ್ಪಮಟ್ಟಿಗೆ ತಾಳಗಳ ಪರಿಚಯವಾದದ್ದು, ಮದ್ದಲೆ ಕಲಿತದ್ದು.ಅನಿರುದ್ಧ ಭಟ್ ಮರಾಠಿಯವರು ಅದೆಂಥ ಯಕ್ಷಗಾನದ ಹುಚ್ಚನೆಂದರೆ ದೂರದೂರಲ್ಲಿ ಸಂಜೆ ನಡೆಯುವ ತಾಳಮದ್ದಲೆಗೆ ಬೆಳ್ಳಂಬೆಳಗ್ಗೆಯೇ ಮನೆಯಿಂದ ಹೊರಟು ಪರಿಚಿತರ
ಮನೆಯಲ್ಲಿ ನಿದ್ರಿಸುತ್ತಿದ್ದರು. ಮಧ್ಯಾಹ್ನ ಹೊರಟರೆ ಬಿಸಿಲ ಝಳ ತಾಳಲಾರೆನೆಂದು. ಆ ಕಾಲದ ಆಸಕ್ತಿಗಳೇ ನಿರಪೇಕ್ಷ ಅಲ್ಲವಾ?-ಇದು ಜೋಶಿಯವರ ಮಾತು. ೧೯೬೮ರ ವೇಳೆಗೇ ಅಜ್ಜ ತೀರಿಕೊಂಡಿದ್ದರೂ ಬಾಲ್ಯದಲ್ಲಿ ಪ್ರಭಾಕರ ಜೋಶಿ ಅಜ್ಜನಿಂದ ಸಾಕಷ್ಟು ಪ್ರಭಾವಿತರಾಗಿದ್ದರು.
{{rh|left=|center='''ಯಕ್ಷಗಾನವೇ ಹೆಪ್ಪುಗಟ್ಟಿತ್ತು ಮಾಳದಲ್ಲಿ...'''|right=}}
ಆ ಕಾಲದಲ್ಲಿ ಮಾಳ ಆಸುಪಾಸಲ್ಲಿ ಒಂದು ಚಳವಳಿಯಂತೆ, ಅಭಿಯಾನದಂತೆ ಯಕ್ಷಗಾನ ಕೂಟಗಳು ನಡೆಯುತ್ತಿದ್ದವು. ಶಾಲೆ, ದೇವಸ್ಥಾನ, ಆಸಕ್ತರ ಮನೆಗಳಲ್ಲೆಲ್ಲ ೧೫ ದಿನಗಳಿಗೊಮ್ಮೆ ತಾಳಮದ್ದಲೆ ಕೂಟಗಳಾಗುತ್ತಿದ್ದವು. ಒಂದು ಉತ್ತಮ ಪ್ರದರ್ಶನ ಕೊಡಬಲ್ಲ ತಂಡವೂ ಆ ಊರಲ್ಲಿತ್ತು. ಗ್ರಾಮ ವ್ಯಾಪ್ತಿಯಲ್ಲಿ ೨-೩ ತಂಡಗಳಿದ್ದವು. ೪-೫ ಮದ್ದಲೆಗಾರರು,
೧೦-೧೫ ಅರ್ಥದಾರಿಗಳಿದ್ದರು. ಹೀಗೆ ಯಕ್ಷಗಾನವೇ ಹೆಪ್ಪುಗಟ್ಟಿದ್ದ ಸಮೃದ್ಧ ಪರಿಸರದಲ್ಲಿ ಬೆಳೆದವರು ಜೋಶಿ.
{{gap}}ಇಂಥ ಜೋಶಿ ಮೊಟ್ಟಮೊದಲ ಬಾರಿಗೆ ಬಯಲಾಟವನ್ನು ಕಂಡಿದ್ದು ಮಿಯಾರು ಸಮೀಪದ ಕುಂಟಿಬೈಲಲ್ಲಿ. ಹಿಲಾಲು ಬೆಳಕಲ್ಲಿ ಪೆರ್ಡೂರು ಮೇಳದ ರಂಗಸ್ಥಳ.
{{gap}}ಅಂದು ಮನೆಗೆ ಬೇಕಾದ ಸಾಮಾನು ಸರಂಜಾಮುಗಳನ್ನು ತರಲು ಕಾರ್ಕಳಕ್ಕೆ ಹೋಗಬೇಕಿತ್ತು. ಅದೂ ಸಂಜೆ ಮಾಳದಿಂದ ಎತ್ತಿನಗಾಡಿ ಮಾಡಿ ಅಡಿಕೆಯೋ, ಬಾಳೆಗೊನೆಯೋ ಮೂಟೆ ಕಟ್ಟಿ ಹೊರಡುವುದು, ತುಂಬ ಹಠ ಮಾಡಿದ ಮೇಲೆ ಒಂದು ಸಲ ಮಕ್ಕಳನ್ನು ಹೀಗೆ ಪೇಟೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಹಾಗೆ ಜೋಶಿಯವರೂ ಒಂದು ಸಲ ಗಾಡಿ ಮೇಲೆ ಪೇಟೆಗೆ ಹೋಗಿದ್ದರು. ಮಾಳದಿಂದ ಹೊರಟ ಗಾಡಿ ರಾತ್ರಿ ೯-೧೦ರ ಸುಮಾರಿಗೆ ಮಿಯಾರು ಹತ್ತಿರ ತಲುಪುತ್ತದೆ. ಅಲ್ಲಿ ಎತ್ತುಗಳಿಗೆ ಬೈಹುಲ್ಲು, ನೀರು ಕುಡಿಸಲು ಗಾಡಿ ನಿಲ್ಲಿಸಿದಾಗ ಗಾಡಿ ಮೇಲೆ ಕುಳಿತು ಪೆರ್ಡೂರು ಮೇಳದ ಆಟ
ನೋಡಿದ್ದರು ಜೋಶಿ.
{{gap}}ಅದು ತೆಂಕು ಬಡಗಿನ ಗಡಿ, ದುರ್ಗದಲ್ಲಿ ಒಂದು ಮೇಳವೂ ಇತ್ತಂತೆ. ಅಷ್ಟೂ ಯಕ್ಷಗಾನ ಸಮೃದ್ಧಿಯ ಪರಿಸರ. ಆ ಕಾಲದಲ್ಲಿ ಪ್ರಭಾಕರ ಜೋಶಿಯವರ ಎಳೆ ಮನಸ್ಸು ಕಂಡ ಕಲಾವಿದ ಮಾನ್ಯರ ಚಿತ್ರಣ ಕೇಳಿ
{{gap}}ಬಾಬುರಾಯ ಎಂಬವರು ಭಾಗವತರೂ, ಅರ್ಥದಾರಿಯೂ ಹೌದು. ಕೈಯೊಂದು ಮೊಂಡಾದರೂ ಎದೆಗಾನಿಸಿಕೊಂಡು ತಾಳ ಬಾರಿಸುವವರು. ಯಕ್ಷಗಾನದ ಸಕಲಾಂಗಗಳ ಮೇಲೆ ಹಿಡಿತ ಇದ್ದವರು. ಅವರದ್ದು ಶುದ್ಧ, ಸ್ಪುಟ, ಕಸುರಿಲ್ಲದ ಬಡಗು ಭಾಗವತಿಕೆ. ೩೦ ರಾಗಗಳನ್ನು ಬಲ್ಲ ಬಾಬುರಾಯರು ಕಡು ಬಡವ. ಒಂದು ಸಲ ಕೈಗೆ ಚಕ್ರ ಕಟ್ಟಿಕೊಂಡು
ಕೃಷ್ಣನ ವೇಷವೂ ಮಾಡಿದ್ದರಂತೆ!
{{rh|left=|center='''ಡಾ.ಎಂ. ಪ್ರಭಾಕರ ಜೋಶಿ/೪''' ||right=}}<noinclude></noinclude>
1e8qdd70yjzumg70k82xgh21g05ndbp
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೫
104
99545
321584
278862
2026-05-21T08:58:14Z
Pragathi. BH
7585
/* Validated */
321584
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=|right=|center='''ಸಂಪಾದಕೀಯ'''}}
ಕಾಂತಾವರ ಕನ್ನಡ ಸಂಘದ ಮಹತ್ವದ ಯೋಜನೆ 'ನಾಡಿಗೆ ನಮಸ್ಕಾರ' ಶತಮಾನೋತ್ತರ ಕೃತಿ ಮಾಲೆಯ ಸಂಪಾದಕತ್ವವನ್ನು ಕನ್ನಡ ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆಯವರು ನನಗೆ ವಹಿಸಿದ್ದಾರೆ. ಈಗಾಗಲೇ ನೂರ ಇಪ್ಪತ್ತೆರಡು ಕೃತಿಗಳನ್ನು ಈ ಮಾಲೆಯಲ್ಲಿ ತಂದಿರುವುದರಿಂದ ಇದರ ಸ್ವರೂಪಕ್ಕೆ ಒಂದು ಖಾಚಿತ್ಯ ಬಂದಿದೆ.
{{gap}}ಒಂದು ಪ್ರದೇಶದ ಬದುಕು ಸುಸಂಸ್ಕೃತವೆನಿಸಿಕೊಳ್ಳಬೇಕಾದರೆ ಅಲ್ಲಿನ ಪ್ರತಿಭಾವಂತ ಪ್ರಜೆಗಳು ವಿವಿಧ ಕ್ಷೇತ್ರಗಳಲ್ಲಿ ಸಮಾಜದ ಒಳಿತಿಗಾಗಿ ದುಡಿಯಬೇಕಾಗುತ್ತದೆ. 'ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ'ಎಂಬಂತಹ ಪರಿಸ್ಥಿತಿ ಇದ್ದಾಗ ಇಂತಹ ಸಂಸ್ಕೃತಿ
ಬೆಳೆಯಲಾರದು. ಗ್ರೀಕ್ ಚಿಂತಕ ಲಾಂಜೈನಸ್ನ ವಿಚಾರಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು:ರಾಜ ಪ್ರಭುತ್ವದಡಿ ಸ್ವಾತಂತ್ರ್ಯ ಇಲ್ಲದ ಕಾರಣ ಪ್ರತಿಭೆ ಮುರುಟಿ ಹೋಗುತ್ತದೆ.ಪ್ರಜಾಪ್ರಭುತ್ವದಲ್ಲಿ ಸೃಷ್ಟಿಕಾರ್ಯ ಪ್ರಗತಿಪಥದಲ್ಲಿ ಸಾಗುತ್ತದೆ ಎನ್ನುವ ಮಾತುಗಳನ್ನು ಒಪ್ಪದೆ ಅವನು ಜನರ ನೈತಿಕ ಅಧಃಪತನದಲ್ಲಿ ಪ್ರತಿಭೆಯ ಅವನತಿ ಮತ್ತು ದುರ್ಗತಿಗೆ ಕಾರಣವನ್ನು
ಗುರುತಿಸುತ್ತಾನೆ. ಧನಲೋಭ, ಭ್ರಷ್ಟಾಚಾರ, ಸುಖಲೋಲುಪತೆ, ಸ್ವಾರ್ಥಗಳ ಪರಿಣಾಮವಾಗಿ ಹುಟ್ಟಿಕೊಳ್ಳುವ ನಿರ್ಲಜ್ಜ ಮನೋವೃತ್ತಿ, ಆದರ್ಶ ವಿಮುಖತೆ ಇವುಗಳಿಂದಾಗಿ ಆತ್ಮಶಕ್ತಿ ಕುಗ್ಗಿಸಿಕೊಂಡ ಒಂದು ಜನಾಂಗದಲ್ಲಿ ಸಂಸ್ಕೃತಿ ದೊಡ್ಡದಾಗಿ ಬೆಳೆಯಲಾರದು ಎನ್ನುವುದು ಅವನ ಅಭಿಪ್ರಾಯ. ನಮ್ಮ ನಾಡಿನಲ್ಲಿ ಹಾಗಾಗದ ಹಾಗೆ ಸದಾ ಎಚ್ಚರವಾಗಿರಬೇಕಾದುದು
ಅಗತ್ಯ. ಜನರಲ್ಲಿ ಆದರ್ಶಗಳನ್ನು ಬಿತ್ತಬೇಕಾದುದೂ ಅಗತ್ಯ. ಇಂತಹ ಮಹತ್ಕಾರ್ಯಕ್ಕೆ ಕಾಂತಾವರ ಕನ್ನಡ ಸಂಘ ತನ್ನ ಕಿಂಚಿತ್ ಕಾಣಿಕೆ ಸಲ್ಲಿಸುತ್ತಲೇ ಬಂದಿದೆ. 'ನಾಡಿಗೆ ನಮಸ್ಕಾರ' ಪುಸ್ತಕ ಮಾಲೆ ಅಂತಹ ಒಂದು ಕಾಣಿಕೆ.
ನಮ್ಮ ದಕ್ಷಿಣಕನ್ನಡ (ಉಡುಪಿ ಮತ್ತು ಕಾಸರಗೋಡು ಸೇರಿದ ಅವಿಭಜಿತ ಜಿಲ್ಲೆ) ಧಾರ್ಮಿಕ, ನೈತಿಕ, ಸಾಹಿತ್ಯಕ, ಸಾಂಸ್ಕೃತಿಕ ಅಧಃಪತನವಾಗದಂತೆ ಸದಾ ಎಚ್ಚರಿಕೆಯಿಂದಿರುವ ಒಂದು ನಾಡು. ಇಲ್ಲಿನ ಬಹುಮುಖೀ ಸಂಸ್ಕೃತಿಯ ನಿರ್ಮಾಣಕ್ಕಾಗಿ ದುಡಿದು ಕೀರ್ತಿಶೇಷರಾಗಿರುವ ಮತ್ತು ಈಗಲೂ ನಮ್ಮ ನಡುವೆ ಇರುವ ವಿದ್ವಾಂಸರು, ಚಿಂತಕರು, ಸಾಹಿತಿಗಳು, ಯಕ್ಷಗಾನ ಸಾಹಿತಿಗಳು ಹಾಗೂ ಕಲಾವಿದರು, ವರ್ಣಚಿತ್ರ ಕಲಾವಿದರು, ಶಿಲ್ಪಿಗಳು,
ದಾರುಶಿಲ್ಪಿಗಳು, ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸಮಾಜಸೇವಕರು, ಶಿಕ್ಷಕರು, ಅಭಿವೃದ್ಧಿಯ ಹರಿಕಾರರು, ಕೃಷಿ ಋಷಿಗಳು, ವೈದ್ಯರು ಮುಂತಾದವರ ಸಾಧನೆಗಳನ್ನು ದಾಖಲಿಸುವುದು ಸಮಾಜದ ಕರ್ತವ್ಯ. ಮುಂದೆ ಅಧ್ಯಯನ ಕಾರ್ಯಗಳನ್ನು ಕೈಗೊಳ್ಳುವವರಿಗೆ ಒಂದು ಮಾಹಿತಿ ಕೋಶವಾಗಿಯೂ ಈ ಮಾಲೆಯ ಪುಸ್ತಕಗಳು ಒದಗಿಬರಲಿವೆ.
ಪ್ರಗಲ್ಬ ಚಿಂತಕ, ಅರ್ಥವಿಹಾರಿ ಡಾ.ಎಂ.ಪ್ರಭಾಕರ ಜೋಶಿ ಅವರ ಕುರಿತಾದ ಈ ಕೃತಿಯನ್ನು ಬರೆದುಕೊಟ್ಟು ಮಾಲೆಯ ಮಹತ್ವವನ್ನು ಹೆಚ್ಚಿಸಿದ ಲೇಖಕ ಚಂದ್ರಶೇಖರ ಮಂಡೆಕೋಲು ಅವರಿಗೆ ಸಂಘವು ಋಣಿಯಾಗಿದೆ.
{{rh|left='''೧ ನವೆಂಬರ್ ೨೦೧೫'''|right='''ಡಾ. ಬಿ. ಜನಾರ್ದನ ಭಟ್'''}}<noinclude></noinclude>
5bmemhd3usiwc97uto2ptgkukw47w19
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೭
104
99546
321586
278863
2026-05-21T08:58:56Z
Pragathi. BH
7585
/* Validated */
321586
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=|center=ಲಕ್ಷ್ಮಣ ಜೋಶಿ ಇದೇ ಪ್ರಭಾಕರ ಜೋಶಿಯವರ ಖಾಸಾ ಚಿಕ್ಕಪ್ಪ.|right=}}
{{rh|left=|center=ಆಗ ಪ್ರಭಾಕರ ಜೋಶಿಯವರಿನ್ನೂ ಪುಟ್ಟ ಬಾಲಕ.|right=}}
{{rh|left=|center='''ಮಾಳದೊಳಗೊಂದು ಲೋಕ. ವಾಳ್ಯ.'''|right=}}
ಜೋಶಿ ಎಂದರೆ ಜ್ಯೋತಿಷಿ. ಈಗಲೂ ಹಳಬರು ಜೋಯಿಶಿ ಎಂದೇ ಕರೆಯುವರು.
ಚಿತ್ಪಾವನ ಬ್ರಾಹ್ಮಣರಲ್ಲಿ ಬರುವ ಕುಲನಾಮವದು. ಮಹಾರಾಷ್ಟ್ರ ಮೂಲದ ಎಷ್ಟೆಷ್ಟೋ ಮಹನೀಯರನ್ನು ನೀಡಿದ ಪ್ರತಿಷ್ಠಿತ ಸಮುದಾಯವದು. ಕನ್ನಡ ಕರಾವಳಿಗೆ ಈ ಚಿತ್ಪಾವನರು ೧೬೦೦-೧೭೦೦ರ ಮಧ್ಯದಲ್ಲಿ ಬಂದವರು, ಗೋವಾ ಮತ್ತು ರತ್ನಗಿರಿಯ ನಡುವಿನ ಯಾವುದೋ ಒಂದು ಪ್ರದೇಶದಿಂದ ವಲಸೆ ಬಂದವರು. ಈ ಕುಲ ವೃತ್ತಾಂತದ ಬಗೆಗೆ ಜೋಶಿಯವರು ಒಂದು ಪ್ರಬಂಧವನ್ನೂ ಬರೆದಿದ್ದಾರೆ. ಅದು ಹಲವು ಬಾರಿ ಪುನರ್ ಮುದ್ರಣಗೊಂಡಿದೆ.
{{gap}}ಕೊಡಲಿ ಹಿಡಿದ ಪರಶುರಾಮ ಚಿತ್ಪಾವನರ ಆರಾಧ್ಯ ದೈವ. ಗುರು ಮತ್ತು ದೈವತ ಎರಡೂ ಪರಶುರಾಮನೇ. ಇವರು ಸ್ಮಾರ್ತ ಬ್ರಾಹ್ಮಣರು. ಪಂಚಾಯತನ ಪೂಜೆಯೂ ಇವರಲ್ಲಿದೆ.
{{gap}}ಹಾಗೆ ವಲಸೆ ಬಂದವರು ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಅತ್ಯಂತ ದುರ್ಗಮ ಪರ್ವತ ಪ್ರದೇಶಗಳಲ್ಲೇ ನೆಲೆಸಿದ್ದಾರೆ. ಶಿಶಿಲ, ಹಾಲಾಡಿ, ಮಾಳ, ದುರ್ಗ, ಸುಕ್ಕೇರಿ- ಮೂಲ ನಿವಾಸಿಗಳ ಕುರಿತ ಆತಂಕವೋ, ಅನ್ಯರು ಎಂಬ ಕೀಳರಿಮೆಯೋ- ಪರ್ವತ ಪ್ರದೇಶಗಳ ತಪ್ಪಲಲ್ಲೇ ಮನೆ ಕಟ್ಟಿಕೊಂಡರು ಚಿತ್ಪಾವನರು.
{{gap}}ಹಾಗೆ ಪ್ರಭಾಕರ ಜೋಶಿಯವರ ಹಿರಿಯರು ಬಂದು ನೆಲೆಸಿದ್ದು ಜಿಲ್ಲೆಯ ಮೂಲೆಯ ತಾಲೂಕು ಕಾರ್ಕಳದ ಕೊನೆಯ ಗ್ರಾಮ ಮಾಳದಲ್ಲಿ. ಒಂದೆಡೆ ನಾರಾವಿ, ಪೆರ್ನೋಡಿ, ನೆಲ್ಲಿಕಾರು, ಇನ್ನೊಂದೆಡೆ ಬಜೆಗೋಳಿ, ಕೆರ್ವಾಶೆ, ಅಂಡಾರು, ಆ ಕಾಲದಲ್ಲಿ ಅಜೆಕಾರು ಫಿರ್ಕಾ- ಗ್ರಾಮಕೂಟ.
{{gap}}ವಿಸ್ತಾರದಲ್ಲಿ ಅರ್ಧಾಂಶಕ್ಕಿಂತ ಹೆಚ್ಚು ಕಾಡೇ ತುಂಬಿರುವ ಗ್ರಾಮ ಮಾಳ. ಗ್ರಾಮದ ಒಂದು ಬದಿ ಪೂರ್ತಿ ಅಡಿಕೆ ತೋಟ. ಇನ್ನೊಂದೆಡೆ ಭತ್ತದ ಗದ್ದೆ. ೧೯೭೦ರವರೆಗೆ ಇಡೀ ಊರು ಹೊರ ಜಗತ್ತಿನಿಂದ ಸಂಪರ್ಕವೇ ದುರ್ಗಮವಾಗಿತ್ತು. ಊರಾಚೆ ಇರುವ ಕಡಾರಿ ಹೊಳೆ ಮಳೆಗಾಲದ ೪-೫ ತಿಂಗಳು ತುಂಬಿ ಹರಿದು ದೋಣಿ ಮೂಲಕವೇ ನಡೆದು ಬಜೆಗೋಳಿ ತಲುಪಬೇಕಿತ್ತು. ಕುದುರೆಮುಖದ ಕಾರಣವಾಗಿ ೧೯೭೦ರಲ್ಲಿ ಕಡಾರಿ ಹೊಳೆಗೆ ಸೇತುವೆ ನಿರ್ಮಾಣವಾಗಿ ದ್ವೀಪದಂತಿದ್ದ ಹಳ್ಳಿಗಳೆಲ್ಲ ಹೊರಜಗತ್ತಿಗೆ ತೆರೆದುಕೊಂಡವು.
{{gap}}ಮಾಳದಲ್ಲಿ ಚಿತ್ಪಾವನರದ್ದೊಂದು ಕೇರಿ. ವಾಳ್ಯ ಅಂತ ಹೆಸರು. ವಾಡಾ ಎಂಬ ಮರಾಠಿ ಶಬ್ದದಿಂದ ಬಂದದ್ದು ವಾಳ್ಯ.
{{gap}}ಅದೊಂದು ಬೇರೆಯದೇ ಜಗತ್ತು.
{{gap}}ಸುಮಾರು ೧೦೦ರಷ್ಟು ಚಿತ್ಪಾವನರ ಮನೆಗಳಿರುವ ವಠಾರ, ಕೇರಿ ತುಂಬ ಚಿತ್ಪಾವನೀ
{{rh|left=|center='''ಡಾ.ಎಂ.ಪ್ರಭಾಕರ ಜೋಶಿ / ೨'''|right=}}<noinclude></noinclude>
oso7jt8re3afw5tbu26iklsgl6oqb1t
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೬
104
99551
321585
278878
2026-05-21T08:58:34Z
Pragathi. BH
7585
/* Validated */
321585
proofread-page
text/x-wiki
<noinclude><pagequality level="4" user="Pragathi. BH" /></noinclude>{{center|'''ಪ್ರಗಲ್ಬ ಚಿಂತಕ, ಅರ್ಥವಿಹಾರಿ'''|r3}}
{{center|'''ಡಾ.ಎಂ.ಪ್ರಭಾಕರ ಜೋಶಿ'''|r3}}
ಡಾ. ಮಾಳ ಪ್ರಭಾಕರ ಜೋಶಿ. ವೃತ್ತಿಯಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕನಾಗಿ ನಿವೃತ್ತರು. ಯಕ್ಷಗಾನ ಅವರಿಗೆ ಹೆಸರು ತಂದಿತ್ತ ಕ್ಷೇತ್ರ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಬಳಿಕದ ತಲೆಮಾರಿನ ಶ್ರೇಷ್ಠ ಅರ್ಥದಾರಿ, ಕೋಟ ಶಿವರಾಮ ಕಾರಂತರ ಬಳಿಕ ಈ ಕ್ಷೇತ್ರದ ಸಂಶೋಧನೆ, ಅಧ್ಯಯನದಲ್ಲಿ ರಾಜ್ಯ, ದೇಶ, ವಿದೇಶಗಳ ವಿದ್ವಾಂಸರಿಗೂ ಬೇಕಾದವರು.ಯಾವುದೇ ವಿಷಯ ಕೇಳಿದರೂ ಅದರ ಸಮೂಲಾಗ್ರ ಅರಿವು ಕೊಡಬಲ್ಲ ಸಮರ್ಥ ಗುರು, ಮತ್ತೆ ಮತ್ತೆ ಕೇಳಿಸಬೇಕೆಂಬಂಥ ಮಾತುಗಾರ, ಪಂಥಗಳ ಹಂಗಿಲ್ಲದ, ಯಾವ
ದಾಕ್ಷಿಣ್ಯಕ್ಕೂ ಬಗ್ಗದ ಸಂಶೋಧಕ, ವಸ್ತುನಿಷ್ಠ ಚಿಂತಕ ಎಲ್ಲಕ್ಕೂ ಮಿಗಿಲಾಗಿ ಮಗು ಮನಸ್ಸಿನ ಸ್ನೇಹಜೀವಿ. ಡಾ. ಎಂ. ಪ್ರಭಾಕರ ಜೋಶಿಯವರ ಬದುಕಿನ ಕತೆಯೆಂದರೆ ಅದು ಯಕ್ಷಗಾನದ ಆರೇಳು ದಶಕಗಳ ಚರಿತ್ರೆಯೂ ಹೌದು. ಒಂದು ಕಾಲದ ತಾಳಮದ್ದಲೆ ಲೋಕದ ಇತಿಹಾಸವೂ ಹೌದು.
{{center|'''ಮಾಳದಲ್ಲಿ ಬಾಲ್ಯ...'''|r3}}
ಮಾಳ... ಅದು ಜೋಶಿಯವರ ಬಾಲ್ಯದ ವಿನ್ಯಾಸಗಳನ್ನು ಕಡೆದಿಟ್ಟ ಪರ್ಣಶಾಲೆ. ಅತ್ತ ಕುದುರೆಮುಖ, ಪಶ್ಚಿಮ ಘಟ್ಟಗಳ ಹಸಿರು ಸಾಲು, ಅದರ ತಪ್ಪಲಲ್ಲೇ ಇರುವ ಪುಟ್ಟ ಊರು. ಒಂದು ಕಾಲಕ್ಕೆ ದಕ್ಷಿಣಕನ್ನಡಕ್ಕೆ ಸೇರಿದ, ಸದ್ಯ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕಿನ ಕೊನೆಯ ಗ್ರಾಮ.
{{gap}}ಇಡೀ ಜಗತ್ತೇ ನಿಬ್ಬೆರಗುಪಡುವಂಥ ವ್ಯಕ್ತಿತ್ವಗಳನ್ನು ಕೊಟ್ಟ ಊರದು. ಅವರು ಅನಂತ ಶಾಸ್ತ್ರಿ ಡೋಂಗ್ರೆ ಪ್ರಖಾಂಡ ಪಂಡಿತ. ಪೇಶ್ವಗಳ ಆಸ್ಥಾನ ವಿದ್ವಾಂಸರಾಗಿ ಮೆರೆದು ಬ್ರಿಟಿಷರ
ಆಳ್ವಿಕೆ ಬಳಿಕ ಇದೇ ಮಾಳದ ಗಂಗಾಮೂಲಕ್ಕೆ ಬಂದು ನೂರಿನ್ನೂರು ವರ್ಷಗಳ ಹಿಂದೆಯೇ ಹೆಂಗಳೆಯರಿಗೆ ಅಕ್ಷರ ಕಲಿಸುತ್ತೇನೆಂದು ಟೊಂಕ ಕಟ್ಟಿ ನಿಂತವರು. ಅವರ ಮಗಳೇ ಪಂಡಿತಾ ರಮಾಬಾಯಿ. ತಂದೆ ಕಟ್ಟಿದ ಆಶ್ರಮದಲ್ಲಿ ಹುಟ್ಟಿ ಬೆಳೆದು ಮುಂದೆ ಭಾರತದಾದ್ಯಂತ ೧೦ ಸಾವಿರ ಕಿ.ಮೀ. ಕಾಲ್ನಡಿಗೆಯಲ್ಲಿಯೇ ನಡೆದು ದಲಿತನೊಬ್ಬನನ್ನು ಮದುವೆಯಾಗಿ ವೇದ ಶಾಸ್ತ್ರಗಳಲ್ಲಿ ಪಾರಂಗತಳಾಗಿ ಪಂಡಿತಾ ಎಂಬ ಬಿರುದು ಪಡೆದು ಕ್ರಿಶ್ಚಿಯನ್ಗೆ ಮತಾಂತರಳಾಗಿ ಪೂನಾಕ್ಕೆ ಬಂದು ಶಾರದಾ ಸದನ ಕಟ್ಟಿ ಅನಾಥ ಮಹಿಳೆಯರ ಬಾಳಿಗೆ ಬೆಳಕಾದವಳು. ಈ ರಮಾಬಾಯಿ ಹುಟ್ಟಿ ಓಡಿಯಾಡಿ ಬೆಳೆದದ್ದು ಇದೇ ಮಾಳದಲ್ಲಿ. ಮಾಳದ ಲಕ್ಷ್ಮಣ ಜೋಶಿ ಎಂಬವರು ಇದೇ ರಮಾಬಾಯಿ ಬಗೆಗೆ ಜೀವನಕಥೆ ಬರೆದಿದ್ದರು. ಅದು ರಮಾಬಾಯಿಯ ಬಗ್ಗೆ ಪ್ರಕಟವಾದ ಮೊದಲ ಕನ್ನಡ ಪುಸ್ತಕ, ಅದನ್ನು ಬರೆದ
{{center|'''ಡಾ.ಎಂ.ಪ್ರಭಾಕರ ಜೋಶಿ | ೧'''|r3}}<noinclude></noinclude>
0c4xoupqn34a6qm9era82rz30cdbrib
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೩೫
104
99552
321601
278900
2026-05-21T09:07:57Z
Pragathi. BH
7585
/* Validated */
321601
proofread-page
text/x-wiki
<noinclude><pagequality level="4" user="Pragathi. BH" /></noinclude>{{gap}}ಇವರ ಸಂಧಾನದ ಕೃಷ್ಣ, ಕೌರವ, ಕರ್ಣಪರ್ವದ ಕರ್ಣ, ಶರಸೇತುಬಂಧನದ
ಅರ್ಜುನ, ಸುಧನ್ವಕಾಳಗದ ಸುಧನ್ವ, ಅರ್ಜುನ, ವಾಲಿವಧೆಯ ವಾಲಿ,ಸುಗ್ರೀವ, ಸುಭದ್ರಾ ಪರಿಣಯದ ಬಲರಾಮ, ಅರ್ಜುನ ಮೊದಲಾದ ಪಾತ್ರಗಳುಉತ್ಕೃಷ್ಟವಾದವುಗಳು.ತಾಳಮದ್ದಲೆಗೆ ಬಹಳ ಅಗತ್ಯವಾಗಿ ಬೇಕಾದ ಪ್ರತ್ಯುತ್ಪನ್ನಮತಿ ಇವರಿಗೆ ವರವಾಗಿ ಲಭಿಸಿದೆ.ಪ್ರತಿಯೊಂದು ಪಾತ್ರಕ್ಕೂ ತನ್ನ ಕೊಡುಗೆ ಇದ್ದೇ ಇದೆ.
{{gap}}ಇಡೀ ವಿಶ್ವದ ಕ್ರಿಕೆಟ್ ವಿವರ ಅವರಿಗೆ ನೆನಪಿದೆ. ಎಷ್ಟು ಬಾಲಿನಲ್ಲಿ ಯಾರ ಮುಂದೆಯಾರು ಯಾವ ಇಸವಿಯಲ್ಲಿ ಸೆಂಚುರಿ ಬಾರಿಸಿದರು? ಯಾವಯಾವ ಆಟಗಾರಯಾವ ಯಾವ ದಾಖಲೆಗಳನ್ನು ನಿರ್ಮಿಸಿದ್ದಾನೆ? ದೇಶ ವಿದೇಶದ ಆಟಗಾರರ ಸಂಪೂರ್ಣ ವಿವರ ಅವರಿಗೆ ನೆನಪಿದೆ. ಸ್ನೇಹ, ಅನುಕಂಪ, ಕರ್ತವ್ಯನಿಷ್ಠೆ, ಶ್ರದ್ಧೆ, ಸಮಯಪಾಲನೆ,ದೂರದೃಷ್ಟಿ, ಆಡಳಿತ ದಕ್ಷತೆ- ಇವು ಇವರಿಗೆ ರಕ್ತಗತವಾಗಿ ಬಂದ ಗುಣಗಳು.
{{gap}}ಕಾಲೇಜಿನ ಉಪನ್ಯಾಸಕ, ಪ್ರಾಂಶುಪಾಲರಾಗಿದ್ದಾಗಲೂ ನಿಷ್ಠೆಯಿಂದ ದುಡಿದವರು.ಪಾಠಗಳ ಬೋಧನೆಗೆ ಹೊಸ ಹೊಸ ಆವಿಷ್ಕಾರವನ್ನು ರೂಪಿಸಿದವರು. ಶಿಕ್ಷಕನಾದವನಿಗೆ ಪರಿಪೂರ್ಣ ಪಾಂಡಿತ್ಯವಷ್ಟೇ ಸಾಲದು. ಅಳವಡಿಸಿಕೊಂಡ ಜ್ಞಾನವನ್ನು ಇತರರಿಗೆ
ಯಥಾವತ್ತಾಗಿ ವಿವರಿಸಿ ಹೇಳುವ ವಿಶಿಷ್ಟ ಕಲ್ಪಕತೆಯೂ, ಕೌಶಲವೂ ಬೇಕು. ಇದುಜೋಶಿಯವರಿಗೆ ಕರತಲಾಮಲಕವಾಗಿದೆ. ಯಾವುದೇ ಕಾರ್ಯಕ್ರಮವಿರಲಿ. ಒಂದು ತಾಸುಗಳಷ್ಟು ಮುಂಚಿತವಾಗಿಯೇ ಜೋಶಿಯವರು ಬಂದೇ ಬರುತ್ತಾರೆ. ಹೇಳಿದ ಸಮಯಕ್ಕೆ ಜೋಶಿಯವರು ಇದ್ದಾರೆಯೆಂದೇ ತೀರ್ಮಾನ. ಹಾಗೇನಾದರೂ ವ್ಯತ್ಯಾಸವಾಗುವುದಾದರೆ ದೂರವಾಣಿಯ ಮೂಲಕ
ತಿಳಿಸುವುದು ಇವರ ಒಂದು ದೊಡ್ಡ ಗುಣ.
{{gap}}'ಯಕ್ಷಗಾನ ಮಕರಂದ' ಗ್ರಂಥದ ಯಶಸ್ಸಿನಲ್ಲಿ ಜೋಶಿಯವರ ಕೊಡುಗೆ ಅಪಾರ.ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ ಇಂದಿನವರೆಗೂ ಕಾರ್ಯೋನ್ಮುಖವಾಗಿರುವುದಕ್ಕೆ ಜೋಶಿಯವರೇ ಕಾರಣರಾಗಿದ್ದಾರೆ. ಇಲ್ಲದಿದ್ದರೆ ಸಮಿತಿ ಎಂದೋ ಬಾಗಿಲು ಬಲಿಯಬೇಕಾಗಿತ್ತು.ಶಾಸ್ತ್ರಿಗಳು ಜೋಶಿಯವರ ಸಂಬಂಧಿ ಅಲ್ಲ. ಒಬ್ಬ ಅಗ್ರಮಾನ್ಯ ಕಲಾವಿದನ ಹೆಸರು ಉಳಿಯಬೇಕೆಂಬ ಹೆಬ್ಬಯಕೆಯಲ್ಲೇ ಈ ಸಮಿತಿಯ ಯಶಸ್ವಿಗಾಗಿ ದುಡಿದಿದ್ದಾರೆ. ಒಂದೆರಡುಸಂಸ್ಮರಣ ಗ್ರಂಥಗಳನ್ನು ಹೊರತರುವ ಸಂದರ್ಭ ಇವರಿಗೆ ನಾನು ಸಹಾಯಕನಾಗಿದ್ದೆ.ಇವರ ಅಚ್ಚುಕಟ್ಟುತನ, ಕೆಲಸದ ಮೇಲಿನ ಶ್ರದ್ದೆ ಒಂದು ಮಾದರಿಯಾಗಿ ನಿಲ್ಲಬಲ್ಲದು.ಒಂದಿಷ್ಟು ವ್ಯತ್ಯಾಸವಾದರೂ ಸಹಿಸಲಾರರು. ಶ್ರದ್ಧೆಯನ್ನು ಪರಿಪೂರ್ಣ ರೀತಿಯಲ್ಲಿ ವ್ಯಕ್ತಪಡಿಸುವ ಗುಣ ಇವರನ್ನು ಎತ್ತರಕ್ಕೇರಿಸಿದೆ. ಸಿಟ್ಟು ಸ್ವಲ್ಪ ಜಾಸ್ತಿ, ಪಕ್ಕನೆ ಬರುತ್ತದೆ ಎಂದು ಹೇಳುವವರಿದ್ದಾರೆ. ಆದರೆ ಆ ಸಿಟ್ಟು ಬರಬೇಕಾದಲ್ಲೇ ಬರುತ್ತದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ.
{{gap}}ವಾಙ್ಮಯ ಕ್ಷೇತ್ರದಲ್ಲೂ ಇವರದ್ದು ಬಲುದೊಡ್ಡ ಹೆಸರು. ಇವರು ಬರೆದ ಹಲವಾರುಲೇಖನಗಳಲ್ಲಿ ಸಾಹಿತ್ಯ ಕೃತಿಗಳಲ್ಲಿ ಇವರ ಪ್ರೌಢ ಭಾಷೆಯನ್ನು ಗಮನಿಸಬಹುದು. ಸಂದರ್ಭಸನ್ನಿವೇಶಗಳಿಗೆ ಸರಿಹೊಂದುವ ಶಬ್ದಗಳನ್ನೇ ಬಳಸುತ್ತಾರೆ. ಈ ಶಬ್ದಗಳು ಸರ್ವೋತ್ಕೃಷ್ಟ
{{rh|left=|center=ಡಾ.ಎಂ.ಪ್ರಭಾಕರ ಜೋಶಿ| ೩೦|right=}}<noinclude></noinclude>
pwzib9ijqat2a8birlyuqmhjw33obx4
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೩೩
104
99553
321599
278902
2026-05-21T09:06:27Z
Pragathi. BH
7585
/* Validated */
321599
proofread-page
text/x-wiki
<noinclude><pagequality level="4" user="Pragathi. BH" /></noinclude>ಯಕ್ಷಗಾನ ಮಕರಂದ' ಎಂಬ ಪೊಳಲಿ ಶಾಸ್ತ್ರಿ ಸಂಸ್ಮರಣ ಗ್ರಂಥವನ್ನು ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ ಪ್ರಕಟಿಸಿತು. ಯಕ್ಷಗಾನದ ಕುರಿತ ಅತಿದೊಡ್ಡ ಸಂಸ್ಮರಣ ಗ್ರಂಥವಾದ'ಯಕ್ಷಗಾನ ಮಕರಂದ'ದ ಸಂಪಾದನೆಯಲ್ಲಿ ಮುಳಿಯ ಮಹಾಬಲ ಭಟ್ಟರ ಜೊತೆಗೆ ಜೋಶಿ ಸಕ್ರಿಯವಾಗಿದ್ದರು. ಜೋಶಿಯವರು ಈ ಸಮಿತಿಯ ಸ್ಥಾಪಕ ಸದಸ್ಯ. ಇಂದಿಗೂ ಆ ಸಮಿತಿ ಸಕ್ರಿಯವಾಗಿದ್ದು ಜೋಶಿಯವರ ಕ್ರಿಯಾಶೀಲತೆಗೆ ಒಂದು ಸಂಕೇತದಂತಿದೆ.
ಮಂಗಳೂರು ಕರಂಗಲ್ಪಾಡಿಯಲ್ಲಿದ್ದ ಬಾಬು ಐತಾಳರ ಮನೆಯೇ ಪೊಳಲಿ ಶಾಸ್ತ್ರಿ ಸಮಿತಿಯ ಕಚೇರಿ. ಆಗಲೇ ಪರಿಚಿತರಾದವರು ಮಂಗಳೂರು ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಎಸ್.ವಿ.ಪರಮೇಶ್ವರ ಭಟ್ಟರು. ಐತಾಳರ ಮನೆಯ ಎದುರು ಅಲೋಶಿಯಸ್ ಕಂಪೌಂಡ್ನಲ್ಲಿ ಎಸ್ವಿಪಿ ಮನೆಯಿತ್ತು. ಆಗ ವಾರಕ್ಕೆ ೨-೩ ಸಲ ನಿತ್ಯ ಭೇಟಿಯಾಗಿ ಚರ್ಚಿಸುತ್ತಿದ್ದರು. ಒಂದು ಅದ್ಭುತ ಸಾಹಿತ್ಯಕ ವಾತಾವರಣ ನಿರ್ಮಿಸಿದ್ದ ಎಸ್ವಿಪಿಯವರ ಪರಿಚಯವಾದದ್ದು ಜೋಶಿಯವರನ್ನು ಕೂಡಾ ಸಾಹಿತ್ಯ ವಲಯದಲ್ಲಿ ತೊಡಗಿಸುವಂತೆ ಮಾಡಿತು.
ಎಸ್ವ ವಿಪಿಯವರು ಭಾಸ ಸಂಪುಟ ಮತ್ತು ಕಾಳಿದಾಸ ಮಹಾ ಸಂಪುಟಗಳ ಬಿಡುಗಡೆ ವೇಳೆ ನಾದಾ ಶೆಟ್ಟಿ, ಕೇಶವ ಭಟ್ಟರ ಜೊತೆ ಜೋಶಿ ಕೂಡಾ ದುಡಿದಿದ್ದರು. ಲೇಖಕ, ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ವಿದ್ವಾನ್ ಪಿ.ಕೆ. ನಾರಾಯಣ ಅವರ ಜೊತೆ ಡಾ. ಜೋಶಿಯವರು ಕೂಡಾ ಹಲವು ಸಾರ್ವಜನಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
{{rh|left=|center='''ಕಬ್ಬಿನ ಹಾಲಿನ ಪಾಕಕ್ಕೆ ಏನು ಹೆಸರು?'''|right=}}
ಡಾ.ಎಂ. ಪ್ರಭಾಕರ ಜೋಶಿಯವರ ಬಗೆಗೆ ಅವರ ಸುದೀರ್ಘ ಒಡನಾಡಿ, ಹಲವು ಸಂಘಟನೆಗಳಲ್ಲಿ ಜೊತೆಗೆ ಕಾರ್ಯನಿರ್ವಹಿಸಿದ ನಿತ್ಯಾನಂದ ಕಾರಂತರು, ಯಾರ ಹಂಗಿಗೂ ಒಳಗಾಗದೆ, ದಾಕ್ಷಿಣ್ಯಕ್ಕೂ ಈಡಾಗದೆ ನಿಶಿತವಾದ ಚಿಂತನೆಯುಳ್ಳ ಚಿಂತಕ ಎನ್ನುತ್ತಾರೆ:
“ಸುಮಾರು ೨೫ ವರ್ಷಗಳ ಹಿಂದೆ ಬಂಟ್ವಾಳ ನಾರಾಯಣ ನಾಯಕರ ಜೊತೆ ನಾನು ಮಾತಾಡುತ್ತಿದ್ದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ವಿಚಾರದಲ್ಲಿ ನಾಯಕರು ತಲ್ಲೀನರಾಗಿದ್ದರು. ಆಗ ಪ್ರಭಾಕರ ಜೋಶಿಯವರು ಆಗಮಿಸಿದರು. ಬೆಲ್ಲ, ಕಬ್ಬು, ಕಾರ್ಖಾನೆ ಇತ್ಯಾದಿ ವಿಚಾರದಲ್ಲಿ ತಿಳುವಳಿಕೆಗಾಗಿ ನಾಯಕರು ಜೋಶಿಯವರಲ್ಲಿ ಕೆಲವಾರು ಪ್ರಶ್ನೆಗಳನ್ನು ಕೇಳಿದರು. ಜೋಶಿಯವರು ಕೇಳಿದ ಎಲ್ಲಾ ವಿಷಯಕ್ಕೂ ಸಮರ್ಪಕವಾದ ವಿವರಣೆ ನೀಡಿದರು. ಕಬ್ಬಿನ ಹಾಲಿನ ಪಾಕಕ್ಕೆ ಏನು ಹೆಸರು? ಎಂದು ನಾಯಕರು ಕೇಳಿದರು. ಕಾಕಂಬಿ ಎಂಬುದಾಗಿ ಜೋಶಿಯವರು ಉತ್ತರಿಸಿದರು. ನಾರಾಯಣ ನಾಯಕರು ಇವರ ಅಸಾಧಾರಣವಾದ ಅನುಭವಕ್ಕೆ ಬೆರಗಾಗಿದ್ದರು.
ನೀನಾಸಂ ಹೆಗ್ಗೋಡು ಇಲ್ಲಿ ಯಕ್ಷಗಾನದ ಬಗ್ಗೆ ಕಾರ್ಯಾಗಾರ ನಡೆದಿತ್ತು. ಹಲವಾರು ವಿದ್ವಾಂಸರು, ರಂಗಕರ್ಮಿಗಳು, ರಂಗ ತರಬೇತಿಯ ಮಕ್ಕಳು ಭಾಗವಹಿಸಿದ್ದರು. ತಾಳಮದ್ದಲೆ, ಒಡೋಲಗ, ಭಾಷಣ ಏರ್ಪಡಿಸಲಾಗಿತ್ತು. ಕೊನೆಗೆ ನಡೆದ ಸಂವಾದದಲ್ಲಿ ನೆರೆದವರು
ಡಾ.ಎಂ. ಪ್ರಭಾಕರ ಜೋಶಿ | ೨೮<noinclude></noinclude>
pv3heo7svhfe9h7xaxbr03psd4dvic2
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೫೩
104
99558
321647
279037
2026-05-21T11:24:33Z
Pragathi. BH
7585
/* Validated */
321647
proofread-page
text/x-wiki
<noinclude><pagequality level="4" user="Pragathi. BH" /></noinclude>ಪ್ರತಿಭೆ ಕೆ.ವಿ.ತಿರುಮಲೇಶ್ (ಲೇ:ಡಾ. ಮಹೇಶ್ವರಿ ಯು.); ೧೦೯. ವಿಜಯಾ ಬ್ಯಾಂಕಿನ ವಿಜಯಶಿಲ್ಪಿ
ಸುಂದರರಾಮ ಶೆಟ್ಟಿ (ಲೇ: ಎನ್.ಪಿ. ಶೆಟ್ಟಿ)<br />
'''ಹನ್ನೊಂದನೇ ಕಂತಿನ ಹದಿಮೂರು ಹೊತ್ತಗೆಗಳು''': ೧೧೦.ಹೊಸಗನ್ನಡದ ಮುಂಗೋಳಿ ಕವಿವರ
ಮುದ್ದಣ (ಲೇ: ಪ್ರೊ.ಎಂ. ರಾಜಗೋಪಾಲ ಆಚಾರ್ಯ); ೧೧೧. ಕನ್ನಡದ ಕಾಳಿದಾಸ ಪ್ರೊ. ಎಸ್.ವಿ.
ಪರಮೇಶ್ವರ ಭಟ್ಟ (ಲೇ:ಡಾ. ಹೆಚ್.ಆರ್. ವಿಶ್ವಾಸ); ೧೧೨. ಶಿಕ್ಷಣ ಶಾಸ್ತ್ರದ ಗುರುವರೇಣ್ಯ ಪ್ರೊ.ಕೆ.ಆರ್.
ಹಂದೆ (ಲೇ: ರಾಘವೇಂದ್ರ ಹೇರ್ಳೆ, ಗಿಳಿಯಾರು); ೧೧೩ ಸಾರಸ್ವತ ಲೋಕದ ಸ್ವಯಂಸೇವಕಿ ಲಕ್ಷ್ಮಿ
ಕುಂಜತ್ತೂರು (ಲೇ: ರಾಧಾಕೃಷ್ಣ ಕೆ. ಉಳಿಯತ್ತಡ್ಕ); ೧೧೪. ಕರ್ಮಯೋಗಿ ಮಹಾತ್ಯಾಗಿ ಪಂಜಜೆ
ಶಂಕರ ಭಟ್ಟ (ಲೇ: ಅಂಶುಮಾಲಿ); ೧೧೫. ಸಜ್ಜನ ರಾಜಕಾರಣಿ ಎಸ್.ಸುಬ್ಬಯ್ಯ ನ್ಯಾಕ್ (ಲೇ: ಬಿ.ಐತಪ್ಪ
ನ್ಯಾಕ್) ೧೧೬. ಜನಸೇವಕ ಅಮ್ಮೆಂಬಳ ಆನಂದ (ಲೇವಿಷ್ಣು ನಾಯ್ಕ); ೧೧೭ ಜಿಜ್ಞಾಸೆಯ ಕಡಲು
ಲಕ್ಷ್ಮೀಶ ತೋಳ್ಪಾಡಿ (ಲೇ:ಗಂಗಾಧರ ಬೆಳ್ಳಾರೆ); ೧೧೮. ಪುರಾಣಕೋಶ ವಿಹಾರಿ-ಅರ್ಥಧಾರಿ
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (ಲೇ: ರಾಧಾಕೃಷ್ಣ ಕಲ್ಟಾರ್); ೧೧೯. ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ
ವಿಜ್ಞಾನಿ ಡಾ.ಹರೀಶ್ ಹಂದೆ (ಲೇ:ಮೋಹನ ಭಾಸ್ಕರ ಹೆಗ್ಡೆ); ೧೨೦.ಸಮಗ್ರ ಸಾಹಿತ್ಯ ಸಾಧಕ ರಾಮದಾಸ
(ಲೇ: ಡಾ.ಕಾತ್ಯಾಯಿನಿ ಕುಂಜಿಬೆಟ್ಟು); ೧೨೧. ಪುತ್ತೂರಿನ ವೃತ್ತಾಂತಕಾರ ಪ್ರೊ.ವಿ.ಬಿ.ಅರ್ತಿಕಜೆ (ಲೇ:
ಡಾ.ಸೀತಾಲಕ್ಷ್ಮೀ ಕರ್ಕಿಕೋಡಿ); ೧೨೨.ನಾದವೈಭವಂ ಉಡುಪಿ ವಾಸುದೇವ ಭಟ್ (ಲೇ: ಅಂಶುಮಾಲಿ)<br /><br />
'''ಹನ್ನೆರಡನೇ ಕಂತಿನ ಹದಿನಾಲ್ಕು ಹೊತ್ತಗೆಗಳು :''' ೧೨೩. ದಕ್ಷಿಣ ಕನ್ನಡ ನವೋದಯದ ಕಣ್ವ; ಬೆನಗಲ್
ರಾಮರಾವ್(ಲೇ:ನಂದಳಿಕೆ ಬಾಲಚಂದ್ರರಾವ್); ೧೨೪.ದಲಿತೋದ್ಧಾರದ ಗುರು: ಕುದ್ಮುಲ್ ರಂಗರಾವ್ (ಲೇ:ಲಕ್ಷ್ಮಣ ಕೊಡಸೆ);೧೨೫.ಶಿಕ್ಷಣತಜ್ಞ ಮತ್ತು ಅರ್ಥವಂತ:ಅಮ್ಮೆಂಬಳ ಸುಬ್ಬರಾವ್ ಪೈ(ಲೇ:ಗಣೇಶ ಕಾಮತ್ ಮೂಡುಬಿದಿರೆ); ೧೨೬.ಮುಕ್ತ ಛಂದದ:ಮೂಕಜ್ಜಿ (ಲೇ:ಡಾ.ಗಾಯತ್ರೀ ವಿ.ನಾವಡ);೧೨೭ ಭಾಗವತರ ಭಾಗವತ:ಹಿರಿಯ ಬಲಿಪ ನಾರಾಯಣ ಭಾಗವತ (ಲೇ:ಡಾ. ರಾಧಾಕೃಷ್ಣ ಬೆಳ್ಳೂರು); ೧೨೮. ಕನ್ನಡದ ಕಲ್ಹಣ: ನೀರ್ಪಾಜೆ ಭೀಮ ಭಟ್ಟ (ಲೇ: ಹಿರಣ್ಯ ವೆಂಕಟೇಶ್ವರ ಭಟ್);೧೨೯. ಬಹುಮುಖಿ ಸಂಶೋಧಕ : ಪ್ರೊ.ಎ.ವಿ.ನಾವಡ (ಲೇ: ಡಾ.ಕಬ್ಬಿನಾಲೆ ವಸಂತ ಭಾರದ್ವಾಜ); ೧೩೦.ಪಗಲ್ಭ ಚಿಂತಕ, ಅರ್ಥವಿಹಾರಿ:ಡಾ.ಎಂ.ಪ್ರಭಾಕರ ಜೋಶಿ(ಲೇ:ಚಂದ್ರಶೇಖರ ಮಂಡೆಕೋಲು); ೧೩೧. ಸಂಗೀತ ರಸವಿಹಾರಿ: ಪಿ.ಕಾಳಿಂಗರಾವ್ (ಲೇ:ಹೆಚ್.ಎಂ. ನಾಗರಾಜರಾವ್ ಕಲ್ಕಟ್ಟೆ); ೧೩೨.ಗಾನಯೋಗಿ:ಅಜ್ಜನಗದ್ದೆ ಗಣಪಯ್ಯ ಭಾಗವತ(ಲೇ:ಜಿ.ಎಸ್.ಉಬರಡ್ಕ); ೧೩೩. ಕಲಾವಸಂತದ ಮಾಮರ: ದೇವುದಾಸ ಶೆಟ್ಟಿ (ಲೇ:ಡಾ. ವಿಶ್ವನಾಥ ಕಾರ್ನಾಡ್); ೧೩೪. ಮೂರನೇ ಕಣ್ಣು : ಶಿವಸುಬ್ರಹ್ಮಣ್ಯ ಕೆ.(ಲೇ: ಡಾ. ಪ್ರದೀಪ್ ಕುಮಾರ್ ಹೆಬ್ರಿ); ೧೩೫. ಪ್ರಗತಿಪಥ ತೋರಿದ ಸೃಜನಶೀಲ ಚಿಂತಕ:ನಿರಂಜನ (ಲೇ:ಡಾ.ಧನಂಜಯ ಕುಂಬ್ಳೆ); ೧೩೬.ಅನನ್ಯರಂಗಕರ್ಮಿ, ಅಪೂರ್ವ ಪುಸ್ತಕ ಪ್ರೇಮಿ : ಶ್ರೀಪತಿ ಮಂಜನಬೈಲು (ಲೇ: ಗೋಪಾಲ ವಾಜಪೇಯಿ)<br /><noinclude></noinclude>
16b6ffrhli8oz8fdfegecr9b943lpe0
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೫೪
104
99565
321648
279035
2026-05-21T11:24:53Z
Pragathi. BH
7585
/* Validated */
321648
proofread-page
text/x-wiki
<noinclude><pagequality level="4" user="Pragathi. BH" /></noinclude>
{{Css image crop
|Image = ಪ್ರಗಲ್ಭ_ಚಿಂತಕ,_ಅರ್ಥವಿಹಾರಿ_ಡಾ.ಎಂ._ಪ್ರಭಾಕರ_ಜೋಶಿ.pdf
|Page = 54
|bSize = 411
|cWidth = 57
|cHeight = 69
|oTop = 32
|oLeft = 35
|Location = left
|Description =
}}
<br>
<br>ಯಕ್ಷಗಾನ ರಂಗಕ್ಕೆ ಒಂದು ಬೌದ್ಧಿಕ ಆಯಾಮ ನೀಡಿರುವ ಬಹುಮುಖಿ ಸಾಧಕ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರ ಜೀವನ ಸಾಧನೆಗಳನ್ನು 'ನಾಡಿಗೆ ನಮಸ್ಕಾರ' ಮಾಲಿಕೆಗಾಗಿ ದಾಖಲಿಸಿಕೊಟ್ಟವರು ಚಂದ್ರಶೇಖರ ಮಂಡೆಕೋಲು, ಸುಳ್ಯ ತಾಲೂಕಿನ ಮಂಡೆಕೋಲು ಎಂಬ
ಗ್ರಾಮದ, ಸದ್ಯ ಬೆಂಗಳೂರಲ್ಲಿ ನೆಲೆಸಿರುವ ಚಂದ್ರಶೇಖರ್ ಮಂಡೆಕೋಲು ವೃತ್ತಿಯಲ್ಲಿ ಪತ್ರಕರ್ತ. ಸಾಹಿತ್ಯ ಮತ್ತು ಯಕ್ಷಗಾನ ಇವರ ಆಸಕ್ತಿಯ ಕ್ಷೇತ್ರಗಳು. 'ವಿಜಯವಾಣಿ' ಪತ್ರಿಕೆಯಲ್ಲಿ 'ಮುಗಿಲಿಗೆ ಮೆಟ್ಟಿಲು' ಅಂಕಣದ ಮೂಲಕವೂ ಪರಿಚಿತರು. ಮಂಡೆಕೋಲು ಅವರು ರಚಿಸಿರುವ ಹಿರಿಯ
ಯಕ್ಷಗಾನ ಕಲಾವಿದ, ಮೇಳಗಳ ಯಜಮಾನ ಪುತ್ತೂರು ಶೀನಪ್ಪ ಭಂಡಾರಿ ಅವರ ಅನುಭವ ಕಥನ 'ಯಕ್ಷಭಂಡಾರಿ' ಕೃತಿಯನ್ನು ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಕಟಿಸಿದೆ. ಭಾರತದ ಮೊದಲ ಮಹಿಳಾ ವೈದ್ಯೆ ಆನಂದಿಬಾಯಿ ಜೋಶಿ ಅವರ ಜೀವನಗಾಥೆ ಪ್ರಕಟನೆಯ ಹಂತದಲ್ಲಿದೆ. ಚಂದ್ರಶೇಖರ ಮಂಡೆಕೋಲು ಅವರು ಯಕ್ಷಗಾನ ಕ್ಷೇತ್ರವನ್ನು ಹತ್ತಿರದಿಂದ ಬಲ್ಲವರು. ಇದರಿಂದ ಅವರಿಗೆ ಪ್ರಭಾಕರ ಜೋಶಿಯವರ ಕುರಿತ ಆಸಕ್ತಿಪೂರ್ಣ ಕೃತಿಯೊಂದನ್ನು ಬರೆಯಲು ಸಾಧ್ಯವಾಗಿದೆ.<br>
{{gap}} ಪ್ರೊ. ಎಂ. ಪ್ರಭಾಕರ ಜೋಶಿಯವರು ಯಕ್ಷಗಾನಕ್ಕೆ ಮತ್ತು ಯಕ್ಷಗಾನ ಚಿಂತನೆಗೆ ಒಂದು ಶಾಸ್ತ್ರೀಯತೆಯ ಪರಿಪ್ರೇಕ್ಷ್ಯವನ್ನು ಒದಗಿಸಿದವರು. 'ಯಕ್ಷಗಾನ ಪದಕೋಶ'ವನ್ನು ರಚಿಸಿಕೊಟ್ಟ ಜೋಶಿಯವರು ಯಕ್ಷಗಾನ ಪ್ರಸಂಗ 'ಕೃಷ್ಣ ಸಂಧಾನ: ಪಠ್ಯ ಮತ್ತು ಪ್ರಯೋಗ' ಕುರಿತಾಗಿಯೇ ಡಾಕ್ಟರೇಟ್ ಅಧ್ಯಯನ ನಡೆಸಿದ್ದಾರೆ. ಯಕ್ಷಗಾನ ಕ್ಷೇತ್ರವು ತೀವ್ರಗತಿಯ ಪರಿವರ್ತನೆಗಳನ್ನು ಕಾಣುತ್ತಿರುವ ಈ ಕಾಲಘಟ್ಟದಲ್ಲಿ ಯಕ್ಷಗಾನದ ಹಿಂದಿನ, ಇಂದಿನ ಮತ್ತು ಮುಂದಿನ ಗೊತ್ತುಗುರಿಗಳನ್ನು ಗ್ರಹಿಸಿ ದಾಖಲಿಸುತ್ತಿರುವ ಪ್ರಮುಖ ಯಕ್ಷಗಾನ ಕಲಾವಿದ, ಸಂಸ್ಕೃತಿ ಚಿಂತಕ,
ಶಿಕ್ಷಣತಜ್ಞ ಪ್ರಭಾಕರ ಜೋಶಿಯವರ ಕುರಿತಾಗಿ ಬರುತ್ತಿರುವ ಮೊತ್ತ ಮೊದಲನೆಯ ಕೃತಿ ಇದು.
{{right|'''ಡಾ. ಬಿ. ಜನಾರ್ದನ ಭಟ್'''}}<br>
{{Css image crop
|Image = ಪ್ರಗಲ್ಭ_ಚಿಂತಕ,_ಅರ್ಥವಿಹಾರಿ_ಡಾ.ಎಂ._ಪ್ರಭಾಕರ_ಜೋಶಿ.pdf
|Page = 54
|bSize = 411
|cWidth = 414
|cHeight = 233
|oTop = 372
|oLeft = 2
|Location = center
|Description =
}}<noinclude></noinclude>
m8u370gho71bc339383nbag3njywean
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೫೨
104
99567
321646
279043
2026-05-21T11:24:19Z
Pragathi. BH
7585
/* Validated */
321646
proofread-page
text/x-wiki
<noinclude><pagequality level="4" user="Pragathi. BH" /></noinclude>೭೩. ಸಮಾಜಮುಖಿ ಚಿಂತಕ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ (ಲೇ: ಡಾ. ಪಾದೇಕಲ್ಲು ವಿಷ್ಣು ಭಟ್ಟ):೭೪. ಯಕ್ಷ ಕಿನ್ನರ ಐರೋಡಿ ಗೋವಿಂದಪ್ಪ (ಲೇ: ನರೇಂದ್ರ ಕುಮಾರ್ ಕೋಟ); ೭೫. ಕಲಾಕೋವಿದ ಮೋಹನ ಸೋನಾ (ಲೇ: ಮೌಲ್ಯ ಜೀವನರಾಂ)<br/><br />
'''ಎಂಟನೇ ಕಂತಿನ ಹನ್ನೆರಡು ಹೊತ್ತಗೆಗಳು :''' ೭೬. ನವೋದಯ ಕಾವ್ಯದ ಶಕಪುರುಷ ಪಂಜೆ ಮಂಗೇಶರಾಯರು(ಲೇ:ಡಾ. ವಾಮನ ನಂದಾವರ); ೭೭. ಪಂಪ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟ (ಲೇ: ಪಿ.ಎನ್. ಅಂಬಿಕಾ); ೭೮. ನವೋದಯದ ಕವಿಪುಂಗವ ಅಮ್ಮೆಂಬಳ ಶಂಕರ ನಾರಾಯಣ ನಾವಡ (ಲೇ: ವಿ.ಗ. ನಾಯಕ); ೭೯. ವಾಸ್ತವವಾದಿ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ (ಲೇ: ಡಾ. ಜಿ.ಎನ್. ಉಪಾಧ್ಯ); ೮೦. ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ (ಲೇ: ಡಾ.ಪಿ.ಶ್ರೀಕೃಷ್ಣ ಭಟ್); ೮೧. ಬರಹಗಾರರ ಬಳಗದ ಬೆಳದಿಂಗಳು-ಚಂದ್ರರಾಜ ಶೆಟ್ಟಿ (ಲೇ: ಡಾ.ಎಸ್.ಪಿ. ಪದ್ಮಪ್ರಸಾದ್); ೮೨. ಕನ್ನಡದ ಕಿಂಕರ ಕೀಕಾನ ರಾಮಚಂದ್ರ (ಲೇ: ಕಲ್ಲೂರು ನಾಗೇಶ);೮೩. ಪಂಡಿತ ಪೆರ್ಲ ಕೃಷ್ಣ ಭಟ್ಟ (ಲೇ: ಡಾ. ಎಂ.ಪ್ರಭಾಕರ ಜೋಶಿ); ೮೪. ಭಾಷಾವಿಜ್ಞಾನಿ ಪ್ರೊ. ಕೋಡಿ ಕುಶಾಲಪ್ಪ ಗೌಡ (ಲೇ: ಡಾ. ಶಿವಕುಮಾರ ಭರಣ್ಯ); ೮೫. ಅಪೂರ್ವ ಪತ್ರಕರ್ತ ಎಂ.ವಿ.ಕಾಮತ್ (ಲೇ: ಅಂಶುಮಾಲಿ); ೮೬. ರಂಗಸ್ಥಳದ ಬೆಳಕು ಡಾ.ಕೋಳ್ಳೂರು ರಾಮಚಂದ್ರ ರಾವ್ (ಲೇ: ಡಾ. ಕೆ. ಎಂ. ರಾಘವ ನಂಬಿಯಾರ್); ೮೭. ಅಪರೂಪದ ಸಮಾಜಸೇವಕ ಪಿ. ರವೀಂದ್ರ ನಾಯಕ್ (ಲೇ: ಕೆ. ತಾರಾ ಭಟ್)<br /><br />
'''ಒಂಬತ್ತನೇ ಕಂತಿನ ಹದಿಮೂರು ಹೊತ್ತಗೆಗಳು :''' ೮೮. ವಿದ್ವತ್ತೆಗೆ ರೂಪಕ ಕಡವ ಶಂಭುಶರ್ಮ (ಲೇ: ಡಾ. ಶ್ರೀಧರ ಹೆಚ್.ಜಿ.); ೮೯. ಕನೀಯಕವಿ ಪ್ರೊ. ಟಿ.ಕೇಶವ ಭಟ್ಟ (ಲೇ: ಡಾ.ತಾಳ್ತಜೆ ವಸಂತಕುಮಾರ);೯೦. ಸಮಾನತೆಯ ಸಂತ ಬಿ.ವಿ. ಕಕ್ಕಿಲ್ಲಾಯ (ಲೇ: ಡಾ. ನಿತ್ಯಾನಂದ ಬಿ. ಶೆಟ್ಟಿ); ೯೧. ವಾಸ್ತವವಾದದ ಸಾಹಿತಿ ರಾಮಚಂದ್ರ ಉಚ್ಚಿಲ (ಲೇ: ಶ್ಯಾಮಲಾ ಮಾಧವ); ೯೨. ಉದ್ಯಮರಂಗದ ಆದ್ಯಪ್ರವರ್ತಕ ವಿ.ಎಸ್. ಕುಡ್ವ (ಲೇ: ಬಿ.ಸೀತಾರಾಮ ಭಟ್); ೯೩, ಮಾತಿನ ಮಹಾಕವಿ ಶೇಣಿ ಗೋಪಾಲಕೃಷ್ಣ ಭಟ್ಟ (ಲೇ: ಮೂಡಂಬೈಲು ಸಿ. ಗೋಪಾಲಕೃಷ್ಣ ಶಾಸ್ತ್ರಿ); ೯೪. ಸಾಧನೆಯ ಬೆಳಕು ನಾವರಿಯದ ದೇರಾಜೆ (ಲೇ: ಪ್ರಸಾದ ರಕ್ಷಿದಿ); ೯೫. ಜೇನುಕೃಷಿ ತಜ್ಞ-ಹವ್ಯಾಸಗಳ ಹರಿಕಾರ ಪೈಲೂರು
ಲಕ್ಷ್ಮೀನಾರಾಯಣ ರಾವ್ (ಲೇ:ಜಿ.ಎಸ್. ಉಬರಡ್ಕ); ೯೬. ಜಾದೂಲೋಕದ ಮಾಂತ್ರಿಕ ಪ್ರೊ. ಶಂಕರ್ (ಲೇ: ಪ. ರಾಮಕೃಷ್ಣ ಶಾಸ್ತ್ರಿ); ೯೭.ಕೋಶ ಸಾಮ್ರಾಜ್ಯದ ಈಶ ಯಜ್ಞನಾರಾಯಣ ಉಡುಪ (ಲೇ: ನಾರಾಯಣಿ ದಾಮೋದರ್);೯೮. ಕಲಾಲೋಕದ ಚಿಂತಕ ಎ. ಈಶ್ವರಯ್ಯ (ಲೇ: ನಿತ್ಯಾನಂದ ಪಡ್ರೆ); ೯೯. ಶಿಕ್ಷಣ ಸಿದ್ಧಾಂತಿ ಡಾ. ಎನ್. ಸುಕುಮಾರ ಗೌಡ (ಲೇ: ಕೆ.ಆರ್. ವಿದ್ಯಾಧರ); ೧೦೦. ಸಂಸ್ಕೃತಿ ಪ್ರೀತಿಯ ಕುಂಭ ಬಾಬು ಶಿವ ಪೂಜಾರಿ (ಲೇ: ವಿ.ಗ.ನಾಯಕ) <br /><br />
'''ಹತ್ತನೇ ಕಂತಿನ ಒಂಬತ್ತು ಹೊತ್ತಗೆಗಳು :''' ೧೦೧. ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿ ಬಂಟಕಲ್ಲು ಲಕ್ಷ್ಮೀನಾರಾಯಣ ಶರ್ಮ (ಲೇ:ಬಿ.ಸೀತಾರಾಮ ಭಟ್); ೧೦೨. ಯಕ್ಷಗಾನ ಆಚಾರ್ಯ ಅರ್ಕುಳ ಸುಬ್ರಾಯ ಆಚಾರ್ಯ(ಲೇ:ಕೆ.ಉಮೇಶ ಆಚಾರ್ಯ ಗೇರುಕಟ್ಟೆ); ೧೦೩.ಬಹುಮುಖ ಪ್ರತಿಭೆಯ ಭೀಷ್ಮ ತುದಿಯಡ್ಕ ವಿಷ್ಣಯ್ಯ (ಲೇ:ಸರೋಜಿನಿ ನಾಗಪ್ಪಯ್ಯ ಕಾಂತಾವರ); ೧೦೪. ಧಾರವಾಡದಲ್ಲರಳಿದ ಮಂಗಳೂರು ಮಲ್ಲಿಗೆ ಗೀತಾ ಕುಲಕರ್ಣಿ (ಲೇ: ರಂಜನಾ ನಾಯಕ); ೧೦೫, ಕಾಸರಗೋಡಿನ ಶ್ರೀಗಂಧ ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ (ಲೇ: ಶ್ಯಾಮಲಾಕುಮಾರಿ
ಬೇವಿಂಜೆ); ೧೦೬. ಯಕ್ಷಕಲಾ ಕಲ್ಪ ಕುರಿಯ ವಿಠಲ ಶಾಸ್ತ್ರಿ (ಲೇ: ಸೇರಾಜೆ ಗೋಪಾಲಕೃಷ್ಣ ಭಟ್ಟ); ೧೦೭.ತುಳುವ ಕಲಾತಿಲಕ ಪಿ.ಎನ್.ಆಚಾರ್ಯ (ಲೇ:ಶೇಖರ ಅಜೆಕಾರು); ೧೦೮. ಗಡಿನಾಡಿನ ಬಾನಾಡಿ<noinclude></noinclude>
38z1vrrgtb5vlgkdtw2qmjvvhpd05q1
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೪೯
104
99568
321644
279047
2026-05-21T11:23:37Z
Pragathi. BH
7585
/* Validated */
321644
proofread-page
text/x-wiki
<noinclude><pagequality level="4" user="Pragathi. BH" /></noinclude>ಪ್ರಹಾರ... ಇನ್ನು ಮುಂದೆ ಶಿವ ಲಿಂಗ ಮಾಡುವಾಗ ಒಂದು ಗೆರೆ ಮಾಡಬೇಕಂತೆ. ಅದರರ್ಥವೇನು? ಅರ್ಜುನ ಹೊಡೆದ ಪೆಟ್ಟು ಅಷ್ಟು ಗಟ್ಟಿ...<br />
{{gap}}ಹೇಳಿ ಪ್ರಯೋಜನ ಇಲ್ಲ...<br />
{{gap}}ಬಂದಿದ್ದನಲ್ಲ ಚಿತ್ರಸೇನ... ನಮ್ಮ ಪ್ರಭು ಶ್ರೀಮಾನ್ ಕೌರವನವರು ೨೭ ತಮ್ಮಂದಿರೊಂದಿಗೆ ದಿವಂಗತರಾಗ್ತಿದ್ರು... ನೀನು ಪ್ರಯತ್ನ ಮಾಡಿದಿ. ಪೆಟ್ಟು ತಿಂದು ಯಾರ ಸೆರಗಿನಲ್ಲಿ ಬದುಕಿದ್ದೆಯೋ? ವಿಕರ್ಣನ ರಥಕ್ಕೆ ಹಾರಿ ಓಡಿದವ ನೀನು... ಆ ಕಾಲಕ್ಕೆ ಚಿತ್ರಸೇನನಿಂದ ಕೌರವನನ್ನು ಬಿಡಿಸಿದವ ಅವ. ಈಗ ಹೇಳಿ... ಅಂಥ ಅರ್ಜುನನ್ನು ನಾನು ಸೋಲಿಸ್ತೇನೆ...<br />
{{gap}}ಗೋಗ್ರಹಣದ ಯುದ್ಧದಲ್ಲಿ ಭೀಷ್ಮರು, ನೀನು, ದುರ್ಯೋಧನ, ದುಶ್ಯಾಸನ, ದ್ರೋಣರು, ಅಶ್ವತ್ಥಾಮರು, ಸಕಲ ಅತಿರಥ ಮಹಾರಥರು ಒಬ್ಬ ಅರ್ಜುನನ ಮೇಲೆ ಬಿದ್ದಿರಿ. ನಡುಗುತ್ತಿರುವ ಸಾರಥಿಯನ್ನು ಮೈಯ ಶಲ್ಯದಿಂದ ಕಟ್ಟಿ ಬಿಗಿದು... ಅಲ್ಲಾ... ರಥ ಓಡಿದ್ದು ಅವ ನಡುಗಿದ್ದರಿಂದಲೇ.. ಅವ ಸಾರಥ್ಯ ಮಾಡಲಿಲ್ಲ... ಲೋಕ ಉಂಟೋ ಅವನಿಗೆ...ಒಬ್ಬನೇ ಸಕಲರನ್ನು ಪರಾಭವಗೊಳಿಸಿದ್ದು... ನಿನ್ನ ಒಂದು ರಥವನ್ನೇ ಮೂರು ಸಲ ನಿನ್ನ ರಥದ ಮೂಕಿಗೆ ಹೊಡೆದಿದ್ದನಲ್ಲಾ? ಅವನನ್ನು ಹೊಡೀತೇನೆ ಅಂತ ಹೇಳ್ತೀಯಲ್ಲಾ ನಿನಗೆ ಸ್ವಯ ಉಂಟಾ ನಿನಗೆ?<br />
{{gap}}ಅವರು ಇವರು ಅಂತ ಯಾಕೆ ಸುಮ್ಮನೆ ಹುಡುಕ್ತಿ? ಅವರಿವರೊಳು ನೀ ಪಲುಗಿರುವುದೇತಕೆ? ಒಂದೊಂದು ಯುದ್ಧದಲ್ಲಿ ಅವನು ಮಾಡಿದ ವೀರಗಾಥೆಯನ್ನು ಕೇಳಿದ್ರೆ....<br />
{{gap}}ಸಮುದ್ರವನ್ನೇ ಮಸಿಯನ್ನಾಗಿ ಮಾಡಿ ಅರ್ಜುನನ ಬಾಣವನ್ನೇ ಲೇಖನಿಯನ್ನಾಗಿ ಮಾಡಿ ಭೂಮಿಯನ್ನೇ ಪಟವನ್ನಾಗಿ ಮಾಡಿ ಪ್ರಬಂಧ ಬರೆದ್ರೆ ಭೂಮಿ ಮುಗಿದೀತು, ಅವನ ಪ್ರಬಂಧ ಮುಗೀಲಿಕ್ಕಿಲ್ಲ...<br />
{{gap}}ಭೀಷ್ಮರೊಂದಿಗೆ ಅವನ ಹೋರಾಟವೇನು? ದ್ರೋಣರನ್ನು ಎದುರಿಸಿದ್ದೇನು? ಈಗಾಗಲೇ ನಮ್ಮ ೧೧ ಅಕ್ಷೋಹಿಣಿ ಸೇನೆಯಲ್ಲಿ ಎಷ್ಟು ೩-೪ ಅಕ್ಷೋಹಿಣಿಯನ್ನು ಒಬ್ಬ ಅರ್ಜುನನೇ ಮುಗಿಸಿದ್ದಾನೆ ಅಂತ ಪ್ರತೀತಿ ಉಂಟು. ಬಿಡುವು, ತೊಡುವು, ಲಾಘವ, ಸೌಷ್ಠವ, ಪ್ರಯೋಗ, ಉಪಸಂಹಾರ, ಮಂತ್ರಾಸ್ತ್ರ, ನಾರಾಚ, ಶ್ರೀಮುಖ, ಬಾಣ, ದಶವಿಧ ಪ್ರಯೋಗ.. ಇವತ್ತು ದ್ರೋಣರು ಹೆದರ್ತಾರೆ. ಅವರೇನು ಹೇಳಿದ್ರು? ಅರ್ಜುನನೊಬ್ಬ ತಪ್ಪಿದಡೆ ಮಿಕ್ಕ ದೂರ್ಜಟಿ ಮೊದಲಾದ ಭಟರೆನಗಿದಿರೆ...? ದ್ರೋಣರಿಗೂ ಭಯವುಂಟು.. ದೇವತೆಗಳು ಹೆದರ್ತಾರೆ. ಅರ್ಜುನ ಧನುಷ್ಥೇಂಕಾರ ಮಾಡಿದ್ರೆ ಪಾತಾಳ ಲೋಕದಲ್ಲಿದ್ದ ರಾಕ್ಷಸ ಸ್ತ್ರೀಯರಿಗೆ ಗರ್ಭಪಾತವಾಗುತ್ತದೆ.. ಇಂದ್ರಾದಿಗಳು ಹರ್ಷಿಸುತ್ತಾರೆ.. ಹೆಚ್ಚೇನು ಆಶ್ರಿತನಾಗಿ ಬಂದಂಥ ಗಯನಿಗಾಗಿ ಕೃಷ್ಣನನ್ನೂ ಎದುರು ಹಾಕಿಕೊಳ್ಳುವುದಕ್ಕೂ ಧರ್ಮ ಬುದ್ದಿಯವ ಅರ್ಜುನ ಹೆದರಿದವನಲ್ಲ.<br />
{{gap}}ಅವನು ನಿಜವಾಗಿ ಬವರಗಾರರ ದೇವ... ಕುರುಕುಲವೆಂಬ ಕಾಡಿಗೆ ಬೆಂಕಿಯದು. ಕುರುಕುಲವೆಂಬ ಜೀವಕ್ಕೆ ಅರ್ಜುನನ ಬಾಣ ವಿಷ. ಕುರುಕುಲವೆಂಬ ಕುರಿಗೆ ಅವನು ಸಿಂಹಪ್ರಾಯ... ಹೇ..'<br /><br />
{{center|'''ಡಾ.ಎಂ. ಪ್ರಭಾಕರ ಜೋಶಿ / ೪೪'''}}<noinclude></noinclude>
r90sq4ir3p2rjobc4yhy04ljoawanj3
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೧೨
104
99569
321589
278972
2026-05-21T08:59:53Z
Pragathi. BH
7585
/* Validated */
321589
proofread-page
text/x-wiki
<noinclude><pagequality level="4" user="Pragathi. BH" /></noinclude>ದೊಡ್ಡ ಕೂಟದಲ್ಲಿ ಅರ್ಥ ಹೇಳಿದ್ದರು! ಸ್ವಂತ ಅಣ್ಣ ಶಂಕರ ಜೋಶಿಯೇ ಪ್ರಭಾಕರ
ಜೋಶಿಯವರನ್ನು ಅರ್ಥಕ್ಕೆ ಕೂರಿಸಿದ್ದು,
{{gap}}ಮಾಳದ ಮಲ್ಲಾರು ಎಂಬಲ್ಲಿದ್ದ ಗುರುಕುಲ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯವರೆಗೆ ವ್ಯಾಸಂಗ, ಅದು ಕೃಷ್ಣ ಜೋಶಿ ಎಂಬವರು ನಡೆಸುತ್ತಿದ್ದ ಶಾಲೆ. ೧೯೫೦ರಲ್ಲಿ ಸ್ಥಾಪನೆಯಾಗಿದ್ದ ಆ ಶಾಲೆಯಲ್ಲಿ ಜೋಶಿಯವರದ್ದು ನಾಲ್ಕನೇ ತಂಡ. ಮಾಳದ ಶಾಲೆಯಲ್ಲಿದ್ದಾಗ ಜೋಶಿಯವರನ್ನು ಪ್ರಭಾವಿಸಿದ ಶಿಕ್ಷಕರು ಬಿ.ಮೂರ್ತಿ ಗೋರೆ ಮತ್ತು ಸದಾಶಿವ ಮಾಸ್ಟ್ರು. ಬಿ. ಮೂರ್ತಿ ಗೋರೆ, ಶಿಸ್ತಿನ ಸಿಪಾಯಿ, ಸದಾಶಿವ ಮಾಸ್ಟ್ರು ಬಾಲ್ಯದಲ್ಲಿ ಜೋಶಿಯವರನ್ನು ನಾಟಕದಲ್ಲಿ ಭಾಗವಹಿಸುವಂತೆ ಎಳವೆಯಲ್ಲೇ ಹುರಿದುಂಬಿಸಿದವರು.ಹಾಗೆ ಶಾಲಾ ಹಂತದಲ್ಲೇ ಜೋಶಿಯವರು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದರು.
{{center|'''ಸೂರ್ನೊಳಿಯಂತೆ ಕಾರ್ಕಳದ ನೆನಪು...'''}}
ಜೋಶಿಯವರು ಹಲವು ಕಡೆಗಳಲ್ಲಿ ಶಿಕ್ಷಣ ಪಡೆದರು. ಹೈಸ್ಕೂಲ್ನ ಮೊದಲ ವರ್ಷ
ಅವರು ಪೂರೈಸಿದ್ದು ಉಜಿರೆಯ ಡಿಕೆವಿ ಹೈಸ್ಕೂಲ್ನಲ್ಲಿ ಬಳಿಕ ಕಾರ್ಕಳದ ಬೋರ್ಡ್
ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ. ಪೂರೈಸಿ ಎಸ್.ಬಿ.ಕಾಲೇಜು ಸೇರಿದರು. ಪಿಯುಸಿಯಲ್ಲಿ ವಾಣಿಜ್ಯ ವಿಷಯ ಆರಿಸಿಕೊಂಡಿದ್ದರು. ಕಾಲೇಜು ಶಿಕ್ಷಣದ ಬಳಿಕ ಎರಡು ವರ್ಷ ಕಲಿತ ಕಾಲೇಜಿನಲ್ಲೇ ಶಿಕ್ಷಕರಾಗಿ ದುಡಿದರು. ೧೯೫೭ರಿಂದ ೧೯೬೯ರವರೆಗೆ ಜೋಶಿ ಕಾರ್ಕಳದ ನಿಕಟ ಸಂಪರ್ಕದಲ್ಲಿದ್ದರು. ಆಗಲೇ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಸಮೃದ್ಧವಾಗಿದ್ದ ಕಾರ್ಕಳ ಪರಿಸರ ಜೋಶಿಯವರನ್ನು ಇನ್ನಷ್ಟು ಬೆಳೆಸಿತು. ಆಗಲೇ ಸಕ್ರಿಯರಾಗಿದ್ದ ಪ್ರೊ.ಎಂ. ರಾಮಚಂದ್ರ ಅವರು ಜೋಶಿಯವರಲ್ಲಿ ಸಾಹಿತ್ಯಿಕ ಆಸಕ್ತಿ ತುಂಬಿದರು, ಪ್ರೋತ್ಸಾಹವಿತ್ತರು. ಬೋರ್ಡ್ ಹೈಸ್ಕೂಲು, ಅನಂತಶಯನ, ವೆಂಕಟ್ರಮಣ ದೇವಸ್ಥಾನ, ಸ್ವರಾಜ್ ಮೈದಾನ, ರಾಮಸಮುದ್ರವೆಂಬ ವಿಶಾಲ ಕೆರೆ, ಗೊಮ್ಮಟಬೆಟ್ಟ, ತಾಳಮದ್ದಲೆಗಳು ನಡೆಯುತ್ತಿದ್ದ ಫಿಲ್ಮ್ ಟಾಕೀಸು, ಅತಿ ವಿಶಿಷ್ಟ ತಿಂಡಿಗಳು ಸಿಗುತ್ತಿದ್ದ ಕಾರ್ಕಳದ ಹೊಟೇಲುಗಳು... ಹೀಗೆ ಜೋಶಿಯವರಲ್ಲಿ ಹತ್ತು ಹಲವು ಆಸಕ್ತಿಗಳು ಪಡಿಮೂಡಲು ಕಾರ್ಕಳದ ಪ್ರಭಾವ ಸಾಕಷ್ಟು ಸ್ವರಾಜ್ ಮೈದಾನದಲ್ಲಿ ಅವರು ಗೆಳೆಯರ ಜೊತೆ ಕ್ರಿಕೆಟ್ ಆಡುತ್ತಿದ್ದರು. ಇಂದು ಜೋಶಿಯವರು ಯಾವುದೇ ಪ್ರಮುಖ ಪತ್ರಿಕೆಯ ಕ್ರೀಡಾ ವರದಿಗಾರನಿಗಿಂತ ನಿಖರವಾಗಿ ಕ್ರಿಕೆಟ್ ಸಂಬಂಧಿ
ಸಂಗತಿಗಳನ್ನು ಹೇಳಬಲ್ಲರು ಜೋಶಿ, ರಾಮಸಮುದ್ರ ಕೆರೆಯಲ್ಲಿ ಈಜಲು ಹೋಗುತ್ತಿದ್ದರು. ಕಾರ್ಕಳದ ಅತಿ ಇಷ್ಟದ ಜಾಗಗಳಲ್ಲಿ ಅದೂ ಒಂದು. ಅನಂತಶಯನದ ಯಕ್ಷಗಾನ ಸಂಘದಲ್ಲಿ ಅರ್ಥದಾರಿಯಾಗಿ ಪಾಲುಪಡೆಯುತ್ತಿದ್ದರು. ಸಂಘದ ತಾಳ ಮದ್ದಲೆಗಳನ್ನು ಕೇಳುತ್ತಲೇ ತಾನೂ ಅರ್ಥ ಹೇಳುತ್ತಲೇ ಬೆಳೆದವರು ಅವರು. ವೆಂಕಟ್ರಮಣ ದೇವಸ್ಥಾನದ ಯಕ್ಷಗಾನ ಸಂಘದ ತಾಳಮದ್ದಲೆ ಆಲಿಸಲೂ ಜೋಶಿ ತೆರಳುತ್ತಿದ್ದರು ಮತ್ತು ಅರ್ಥದಾರಿಯಾಗಿಯೂ ಭಾಗವಹಿಸುತ್ತಿದ್ದರು. ಕಾರ್ಕಳದ ಇವೆರಡು ಯಕ್ಷಗಾನ ಸಂಘಗಳು ಜೋಶಿಯವರೊಳಗಿನ ಅರ್ಥದಾರಿಯನ್ನು ರೂಪಿಸಲು ಪ್ರಮುಖ ಕಾರಣ.
{{gap}}ಜೋಶಿಯವರ ಪಾಲಿಗೆ ಕಾರ್ಕಳದ ನೆನಪು ಅಲ್ಲಿನ ಹೊಟೇಲುಗಳ ಸೂರ್ನೊಳಿ
{{center|'''ಡಾ.ಎಂ. ಪ್ರಭಾಕರ ಜೋಶಿ /೭'''}}<noinclude></noinclude>
dd31r67umll9v6yl6z3uj1ipallw6dr
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೪೦
104
99571
321633
278924
2026-05-21T10:31:00Z
Pragathi. BH
7585
/* Validated */
321633
proofread-page
text/x-wiki
<noinclude><pagequality level="4" user="Pragathi. BH" /></noinclude>ಸುಧನ್ವಾರ್ಜುನವಂತೂ ನಮ್ಮಿಬ್ಬರಿಗಾಗಿಯೇ ಪ್ರಸಂಗ ಇದೆಯೇನೋ ಎಂಬಷ್ಟು ಪ್ರಸಿದ್ಧವಾಗಿತ್ತು.
ಶೇಣಿ ಸುಧನ್ವನಾದರೆ ನಾನು ಅರ್ಜುನ. ವಿಭೀಷಣ ನೀತಿಯಲ್ಲಿ ಶೇಣಿಯವರ ರಾವಣನಿಗೆ
ಹೊಂದುವ ವಿಭೀಷಣ ಹೇಳುವವರು ಜೋಶಿ ಮತ್ತು ಪೆರ್ಲ ಪಂಡಿತರು ಮಾತ್ರ ಎಂಬಷ್ಟು
ಜನಪ್ರಿಯವಾಗಿತ್ತು. ಕರ್ಣಾರ್ಜುನದಲ್ಲಿ ನನ್ನದು ಖಾಯಂ ಅರ್ಜುನ, ಅವರದ್ದು ಕರ್ಣ.<br/>
{{gap}} ೧೯೬೭ರ ಕಾರ್ಕಳದ ತಾಳಮದ್ದಲೆಗೆ ಶೇಣಿಯವರನ್ನು ಪತ್ರ ಮುಖೇನ ಸಂಪರ್ಕಿಸಿ
ಕರೆಸಿದ್ದೆ. ಶೇಣಿಯವರ ಜೊತೆ ಅಂದೇ ನಾನು ಮೊದಲ ಅರ್ಥ ಹೇಳಿದ್ದು, ಬಳಿಕ ಹಲವಾರು
ವೇದಿಕೆಗಳಲ್ಲಿ ಅವರೊಂದಿಗೆ ಅರ್ಥ ಹೇಳಿದ್ದೇನೆ. ಶೇಣಿ ಜೊತೆ ಅರ್ಥ ಹೇಳುವಾಗ
ತುಂಬ ಏಕಾಗ್ರತೆ ಬೇಕು, ಉಳಿದವರೊಟ್ಟಿಗೆ ಅರ್ಥ ಹೇಳಿದ ಹಾಗಲ್ಲ. ಎಷ್ಟೆಂದರೆ ಆಗ
ಸಭೆ ಕೂಡ ನಮಗೆ ಕಾಣುವುದಿಲ್ಲ!<br />
{{gap}}೧೯೭೨ರಲ್ಲಿ ಮಂಗಳೂರಿಗೆ ಬಂದಾಗ ನಿಕಟ ಸಂಪರ್ಕ ಒದಗಿ ಬಂತು.ಈ ಮಧ್ಯೆ
ಕಲ್ಲಾಡಿ ವಿಠಲ ಶೆಟ್ಟರ ಕೂಡ್ಲು ಮೇಳದಲ್ಲಿ ಶೇಣಿಯವರ ಜೊತೆಗೆ ಸಣ್ಣ ತಿರುಗಾಟವೇ
ಮಾಡಿದ್ದೇನೆ.
<br/>
{{gap}}ಶೇಣಿಯವರ ಚಿಂತನಾ ವಿಧಾನ ನನ್ನನ್ನು ತುಂಬ ಪ್ರಭಾವಿಸಿದೆ. ಯಕ್ಷಗಾನ
ಕಲಾವಿದರಲ್ಲೇ ತುಂಬ ಭಿನ್ನ ಚಿಂತನಾ ವಿಧಾನ ಹೊಂದಿದ್ದವರು ಶೇಣಿ. <br />
{{gap}}೧೯೮೦ರ ವೇಳೆಗೆ ನನ್ನ ಮತ್ತು ಅವರ ನಡುವೆ ಮಿಸ್ ಅಂಡರ್ಸ್ಟಾಂಡ್ ನಿರ್ಮಾಣ
ಮಾಡಿದ್ರು- ಅದು ಅಭಿಮಾನಿಗಳ ಅತಿರೇಕ. ಅದರಲ್ಲಿ ನನಗೆ ಸಂತೋಷ ಆದ ಒಂದು
ವಿಷಯ ಉಂಟು. ಶೇಣಿಯವರಿಗೆ ನಾನೊಬ್ಬ ಪ್ರತಿಸ್ಪರ್ಧಿ ಕಲಾವಿದ ಅಂತ ಜನರು
ಭಾವಿಸಿದರಲ್ಲಾ? ಅಲ್ಲಾ ಭಾವಿಸಿದವರಿಗೆ ತಲೆ ಸರಿ ಇಲ್ಲ.. ಅದು ಬೇರೆ ವಿಷಯ. ನೊ
ಕಂಪಾರಿಸನ್. ಇವ ಒಬ್ಬ ರೈವಲ್ ಅಂತ ಬಿಂಬಿಸಿದ್ರು. ಕತೆ ಕಟ್ಟಿ ಎಂತದ್ದು ಹೇಳಿದ್ರಾ?
ಶೇಣಿ>ಯವರು ಅದನ್ನು ನಂಬಿದ್ರಾ..?<br />
{{gap}} ನಮ್ಮ ಜಿಲ್ಲೆಯ ದಕ್ಷಿಣ ಭಾಗದಲ್ಲಿ ನಡೆದ 'ಕರ್ಣಪರ್ವ' ತಾಳಮದ್ದಲೆ. ನಾನು ಅರ್ಜುನ,<br/>
ಶೇಣಿಯವರದ್ದು ಕರ್ಣ,'ಎಲವೋ ಸೂತನ ಮಗನೇ..'ಪದ್ಯದ ಅರ್ಥ ಹೇಳಿದ್ದೆ- 'ನಾನು
ದೇವತೆಗಳಿಂದ ಸಂಗ್ರಹ ಮಾಡಿದವ. ದ್ರೋಣ ಶಿಷ್ಯ, ಕೃಷ್ಣನ ಶಿಷ್ಯ. ಈಶ್ವರ-ಪಾರ್ವತಿಯಿಂದ
ಆಯುಧ ಸಂಗ್ರಹ ಮಾಡಿದ್ದೇನೆ. ನನಗೆ ಹನುಮಂತನ ರಕ್ಷಣೆ ಉಂಟು. ಆದರೆ ನೀನೆಲ್ಲಿ
ಕಲಿತಿದ್ದಿ?ನಾನು ಕೇಳಿದ ಪ್ರಕಾರ ನೀನು ಯಾವ ಗುರುಕುಲದಲ್ಲೂ ಕ್ರಮ ಪ್ರಕಾರ ಕಲಿತವನಲ್ಲ.
ಅಲ್ಲಿಷ್ಟು ಇಲ್ಲಿಷ್ಟು ಕಲಿತು ಬಂದು ನನಿಗೆ ಸ್ಪರ್ಧಿ ಅಂತ ಹೇಳುತ್ತಿ. ನೀನೆಲ್ಲಿ? ನಾನೆಲ್ಲಿ...?
ಇವಿಷ್ಟು ಅರ್ಜುನ ಕರ್ಣನಿಗೆ ಹೇಳಲೇಬೇಕಾದ ಮಾತುಗಳು.ಅಂದು ನಾನೂ ಅದನ್ನೇ
ಹೇಳಿದ್ದೆ. <br/>
{{gap}}ಆದರೆ ಯೋಚನೆ ಮಾಡಿದರೆ ಅವು ಶೇಣಿಯವರ ನಿಜ ಬದುಕಿಗೂ ಟಚ್ ಆಗುತ್ತದೆ.
ನಾನು ಹಾಗೆ ಎಣಿಸಿ ಹೇಳಿದ್ದೇ ಅಲ್ಲ, ನಿಜವಾಗಿ ಅಲ್ಲ.<br />
{{gap}}ಶೇಣಿಯವರು ಅದ್ಭುತ ಏಕಪಾಠಿ. ಫಾರ್ಮಲ್ ಎಜುಕೇಶನ್ ಕಡಿಮೆ. ಶೇಣಿಯವರೂ
ಅಂದು ಬಹಳ ಚಂದ ಮಾಡಿ ಉತ್ತರ ಕೊಟ್ಟಿದ್ದಾರೆ.'ಹೌದು ನೀವೆಲ್ಲ ಕ್ರಮವಾಗಿ ಕಲಿತವರು.
ಹಲವು ವಿವಿಗಳ ಪದವಿ ಉಂಟು. ನಮ್ಮದು ಹಾಗಲ್ಲ,ನಮ್ಮದು ಗುಟ್ಟು,ಯುದ್ಧದಲ್ಲಿ ನಿಮಗೆ
{{Right|'''ಡಾ.ಎಂ.ಪ್ರಭಾಕರ ಜೋಶಿ / ೩೫'''}}<noinclude></noinclude>
k850qn18n19uu8qt49upwg52sattjg7
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೪೨
104
99575
321638
278943
2026-05-21T11:19:51Z
Pragathi. BH
7585
/* Validated */
321638
proofread-page
text/x-wiki
<noinclude><pagequality level="4" user="Pragathi. BH" /></noinclude>ನಷ್ಟ ಉಂಟು ಮಾಡುತ್ತದೆ ಎಂಬ ನೋವು ಅವರದ್ದು. ವೈಯಕ್ತಿಕ ರಾಗದ್ವೇಷಗಳನ್ನೆಣಿಸದೆ ಪರಮ ಕಲೆಯ ಆರಾಧನೆಯಲ್ಲಿ ತೊಡಗಿದವರು.<br />
{{gap}}ಶೇಣಿ ನಿಧನರಾದಾಗ ಅವರ ಬದುಕಿನ ಬಗೆಗೆ 'ಮರೆಯಾದ ಮಹಾ ಯಕ್ಷ' ಎಂ
ವಿಶೇಷ ಸಂಪಾದಕೀಯ ಬರೆದಿದ್ದರು ಜೋಶಿ. ಅದು ಆಗ ನಂಬರ್ ವನ್ ಪತ್ರಿಕೆ
ವಿಜಯಕರ್ನಾಟಕದಲ್ಲಿ ಪ್ರಕಟವಾಗಿತ್ತು. ಶೇಣಿ ಗೋಪಾಲಕೃಷ್ಣ ಭಟ್ರ ಕುರಿತು ಪ್ರಭಾಕರ ಜೋಶಿಯವರು ಮಾಡಿದ ಅಭಿನಂದನಾ ಭಾಷಣಗಳು ಮತ್ತು ಲೇಖನಗಳು ಅತ್ಯುತ್ತಮ ವಿಶ್ಲೇಷಣೆಗಳಾಗಿವೆ ಎಂದು ಪ್ರಸಿದ್ಧ ಚಿಂತಕ ಲಕ್ಷ್ಮೀಶ ತೋಳ್ವಾಡಿಯವರು ಹೇಳುತ್ತಾರೆ.<br />
{{center|'''ಯಕ್ಷಗಾನದ ಪ್ರಜ್ಞಾಜಾಗೃತಿಗಾರ'''}}
{{gap}}ಹೀಗೆಂದು ಡಾ. ಪ್ರಭಾಕರ ಜೋಶಿ ವಿದ್ವಾಂಸ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಕಲಾ ರಂಗದಲ್ಲಿ ನಡೆಯುವ ಪ್ರತಿ ಚಲನೆಯನ್ನೂ ಸೂಕ್ಷ್ಮವಾಗಿ ಗಮನಿಸುವ ಡಾ. ಜೋಶಿ ಅವರಲ್ಲಿ ಸೃಜನಶೀಲ ಮನಸ್ಸಿದೆ. ಅವರ ಚಡಪಡಿಕೆ, ಅಸಹನೆ, ಸಾತ್ವಿಕ ರೋಷಗಳಿಗೆ ಒಂದು ಅರ್ಥವಿದೆ, ತಾರ್ಕಿಕ ಮೌಲ್ಯವಿದೆ. ಯಕ್ಷಗಾನ ರಂಗದ ಜೊತೆಗೆ ಅವರು ಇರಿಸಿಕೊಂಡಿರುವ ನಿರಂತರ ನಿಕಟ ಸಂಪರ್ಕ, ಗಾಢವಾದ ರಂಗಾನುಭವದ ಮೂಲಕ ಸ್ಪುಟಗೊಂಡ ಕಲಾಧೋರಣೆ ಜೋಶಿಯವರ ಮಾತುಗಳಿಗೆ ವಿಶೇಷ ಮಹತ್ವ ಕಲ್ಪಿಸಿದೆ.<br/>
{{gap}}“ಆಧುನಿಕತೆಯ ಸನ್ನಿವೇಶಗಳು ಪಾರಂಪರಿಕ ಕಲೆಗಳನ್ನು ವಿಘಟನೆ ಮಾಡಿಬಿಡುತ್ತವೆ...ಹೊಸತನದ ಸಂಭ್ರಮದಲ್ಲಿ, ಜನಪ್ರಿಯತೆಯ ಹೊಯ್ಲಿನಲ್ಲಿ, ಗೌಜಿ ಗದ್ದಲದಲ್ಲಿ ಯಾವ್ಯಾವುದೋ ಕಲಾಮಾಧ್ಯಮಗಳ ಅವಿಚಾರಿತ ಅನುಕರಣೆಯಲ್ಲಿ, ನಾವು ಕಳೆದು ಕೊಂಡಿರುವುದನ್ನು ಪುನಃ ಪಡೆಯಲು ಇದೀಗ ಸಕಾಲ ಮತ್ತು ಪ್ರಾಯಶಃ ಕೊನೆಯ ಅವಕಾಶ. ಕಳೆದ ಐವತ್ತು ವರ್ಷಗಳಲ್ಲಿ, ಒಂದೇ ಸಮನೆ ಕಲೆಯೊಳಗೆ ಬಂದಿರುವ ಕಲೇತರ ಮತ್ತು ಅಯಕ್ಷಗಾನೀಯ ಅಂಶಗಳನ್ನು ಯಕ್ಷರಂಗ ತಾಳಿಕೊಂಡಿದೆ. ಈಗ ಅದು ಮಾತ್ರ ಸಂಕರಗಳ ಗೂಡಾಗಿದೆ... ಇದು ಯಕ್ಷಗಾನದ ಕುರಿತು ಗಂಭೀರವಾದ ಶೈಕ್ಷಣಿಕ ಕಾಳಜಿಗಳಿರುವವರ ಮುಂದೆ ಇರುವ ಒಂದು ದೊಡ್ಡ ಕೆಲಸ. ವೇಷ-ಭೂಷಣ (ಮುಖ್ಯವಾಗಿ ತೆಂಕುತಿಟ್ಟು)ಗಳ ಪುನಾರಚನೆ-ಶೈಲಿಯ ಪುನರ್ನಿಮರ್ಾಣದ ಕೆಲಸಗಳನ್ನು ತಜ್ಞ ಡಿಸೈನರುಗಳ ಮೂಲಕ ಮಾಡಿಕೊಳ್ಳದಿದ್ದರೆ ಐದಾರು ಶತಮಾನಗಳ ಕಾಲ ಬೆಳೆದು ನಿಂತ ಒಂದು ಶ್ರೀಮಂತ ವೇಷ ವಿಧಾನ, ವರ್ಣಿಕೆ ವಿನ್ಯಾಸಗಳು ನಾಶವಾಗುವ ಸಾಧ್ಯತೆಯಿದೆ...
ಯಕ್ಷಗಾನದ ಪ್ರಜ್ಞಾಜಾಗೃತಿಗಾರ ಎಂಬ ಮಾತಿಗೆ ಅನ್ವರ್ಥದಂತಿದೆ ಜೋಶಿಯವರು
ಬರೆದ ಈ ಸಾಲುಗಳು.<br/>
{{gap}}ಉಭಯತಿಟ್ಟುಗಳ ಬಹುತೇಕ ಹಿಮ್ಮೇಳ ಮುಮ್ಮೇಳ ಕಲಾವಿದರ ಪರಿಚಯ, ಒಡನಾಟ ಜೋಶಿಯವರಿಗಿದೆ. ಅವರ ನೋವು ನಲಿವುಗಳಲ್ಲಿ ಜೋಶಿ ಜೊತೆಗಿದ್ದವರು. ಕಲಾವಿದ ನೊಬ್ಬನಿಗೆ ಅಪಾರ ಸ್ನೇಹಿತ, ಅಭಿಮಾನಿ ವಲಯವೇ ಒಂದು ದೊಡ್ಡ ಆಸ್ತಿ. ಬಲಿಪ ಭಾಗವತರು,ಕುಂಬಳೆ ಸುಂದರರಾಯರು, ಕೋಳ್ಳೂರು ರಾಮಚಂದ್ರರಾಯರು, ಕೆ.ಗೋವಿಂದ ಭಟ್,ಚಂದ್ರಶೇಖರ ರಾವ್, ಉಮಾಕಾಂತ ಭಟ್, ವಾದಿರಾಜ ಕಲ್ಲೂರಾಯ, ಕೆರೆಮನೆ ಕುಟುಂಬ,<br />
{{center|'''ಡಾ.ಎಂ. ಪ್ರಭಾಕರ ಜೋಶಿ | ೩೭'''}}<noinclude></noinclude>
12rtrp54183ha408uekjmcbepictxux
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೧೪
104
99576
321590
278979
2026-05-21T09:00:17Z
Pragathi. BH
7585
/* Validated */
321590
proofread-page
text/x-wiki
<noinclude><pagequality level="4" user="Pragathi. BH" /></noinclude>{{center|'''ಸಾಹಸ ಭೀಮ ವಿಜಯವೆಂಬ ತಾಳಮದ್ದಲೆಯು'''}}
ಅದುವರೆಗೆ ಶೋತೃವಾಗಿ, ಅರ್ಥದಾರಿಯಾಗಿ ಕೂಟಗಳಲ್ಲಿ ಪಾಲು ಪಡೆಯುತ್ತಿದ್ದ
ಜೋಶಿಯವರು ಕಾರ್ಕಳದಲ್ಲಿ ೧೯೬೮ರಲ್ಲಿ ಸಂಘಟಕನಾಗಿ ತೆರೆದುಕೊಂಡರು.
ಅನಂತಶಯನ ಯಕ್ಷಗಾನ ಸಂಘದಲ್ಲಿ ಬಹುಕಾಲ ಕಾರ್ಯದರ್ಶಿಯಾಗಿದ್ದರು. ಹಾಗೆ
ಕಾರ್ಕಳದ ಸಿನಿಮಾ ಟಾಕೀಸ್ನಲ್ಲಿ ಒಂದು ದೊಡ್ಡ ಕೂಟ ಆಯೋಜಿಸಿದ್ದರು. ಅಲ್ಲೂ
ಜೋಶಿತನ ಎದ್ದು ಕಾಣುವಂತೆ ಹೊಸ ಪ್ರಸಂಗವನ್ನು ಸಂಯೋಜಿಸಿದ್ದರು. ರನ್ನನ ಸಾಹಸ
ಭೀಮ ವಿಜಯವನ್ನು ಆಧರಿಸಿ ಕೆ.ಪಿ. ವೆಂಕಪ್ಪ ಶೆಟ್ಟರು ಬರೆದ ಗದಾಯುದ್ಧ ಪ್ರಸಂಗವನ್ನು
ತಾಳಮದ್ದಲೆಗೆ ಆರಿಸಿಕೊಂಡಿದ್ದರು. ಜನಪ್ರಿಯವಲ್ಲದ ಪ್ರಸಂಗವದು. 'ಈ ಪ್ರಸಂಗ ಬೇಡ,
ಜನ ಹೇಗೆ ಸ್ವೀಕರಿಸಿಯಾರು?” ಎಂದು ಅಂದೇ ಶೇಣಿಯವರು ಪತ್ರ ಬರೆದು ಎಚ್ಚರಿಸಿದ್ದರಂತೆ!
ಸ್ವತಃ ಜೋಶಿಯವರೇ ಕರಪತ್ರ ಬರೆದು ಅಚ್ಚು ಹಾಕಿಸಿದ್ದರು. (ಆ ಕರಪತ್ರ ಜೋಶಿಯವರ
ಬಳಿ ಈಗಲೂ ಇದೆ). ಕಡತೋಕ ಮಂಜುನಾಥ ಭಾಗವತರ ಭಾಗವತಿಕೆ, ಶೇಣಿಯವರ
ಕೌರವ, ಪೆರ್ಲ ಪಂಡಿತರ ಸಂಜಯ, ದೊಡ್ಡ ಸಾಮಗರ ಭೀಮ, ಕೃಷ್ಣರಾಯರ ಧರ್ಮರಾಯ,
ಜೋಶಿಯವರು ಭೀಷ್ಮನಾಗಿ ಆ ಕೂಟ ಮೆರೆದಿತ್ತು. ಸಂಘಟಕನಾಗಿ ಮೊತ್ತ ಮೊದಲು
ಜೋಶಿಯವರಿಗೆ ಒಳ್ಳೆಯ ಹೆಸರೂ ತಂದಿತ್ತಿತ್ತು.
ಹೀಗೆ ಆಗ ಕಾರ್ಕಳ ಸುತ್ತಲಿನ ೩೦-೪೦ ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಕಳ, ರೆಂಜಾಳ,
ವೇಣೂರು, ಹಿರ್ಗಾನ, ಮೂರೂರು, ಅಜೆಕಾರು, ಹೆಬ್ರಿ-ಕೂಟಗಳಿಗೆ ತೆರಳುತ್ತಿದ್ದರು ಜೋಶಿ.
{{center|'''ದೇರಾಜೆ ಜೊತೆ ಹುಡುಗ ಜೋತಿ ಅರ್ಥ..'''}}
ಶಾಲಾ ಕಾಲೇಜು ಹಂತದಿಂದಲೇ ಜೋಶಿ ರಂಗಸ್ಥಳ ಏರಿದ್ದರು. ರಕ್ತದ ಗುಣವೋ ಏನೋ
ಮಾತು ಅವರಿಗೆ ಸರಾಗವಾಗಿ ಒಲಿದಿತ್ತು. ಕಾರ್ಕಳದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿ
ದ್ದಾಗಲೇ ಕರ್ವಾಶೆಯಲ್ಲಿ ನಡೆದ 'ಚೂಡಾಮಣಿ' ಪ್ರಸಂಗದಲ್ಲಿ ಜಟಾಯುವಿನ ಅರ್ಥ
ಹೇಳಿದ್ದರು. 'ಗರಿ ಬೆಂದು ಮೂಡಿದವು ರಾಮ ಕತೆಯಂ ಕೇಳು...'
ಅಂದೇ ಜೋಶಿಯವರ ಒಳ ಮನಸ್ಸಲ್ಲಿ ನವಿಲುಗರಿ ಅರಳಿದ್ದವು.
ಆಗಲೇ ಜೋಶಿ ಕಾರ್ಕಳ, ಮಾಳ, ಉಜಿರೆ, ಬೆಳ್ತಂಗಡಿ ಆಸುಪಾಸಲ್ಲಿ ತಾಳಮದ್ದಲೆಯ
ಅರ್ಥಗಾರಿಕೆಯಲ್ಲಿ ಭಾಗವಹಿಸಿದ್ದರು.
ಹತ್ತರ ಹರೆಯದಲ್ಲೇ ಅರ್ಥ ಹೇಳಲು ಶುರು ಮಾಡಿದ್ದ ಜೋಶಿಯವರೊಳಗೆ
(ಮಾಳದಲ್ಲಿ ಹೇಳಿದ್ದ 'ಸಂಪಾತಿ' ಪಾತ್ರದ ಅರ್ಥ) ನಿಧಾನಕ್ಕೆ ಪುರಾಣ ಪಾತ್ರಗಳು,
ಘಟನಾವಳಿಗಳು, ಅವತಾರಗಳ ಸ್ಪಷ್ಟ ಕಲ್ಪನೆ, ಪ್ರತೀ ಪಾತ್ರಗಳ ನಡೆ, ನಡಾವಳಿ, ಸ್ವಭಾವ
ಇಳಿದಿತ್ತು. ಸಿದ್ಧ ಪ್ರಸಿದ್ಧರ ಅರ್ಥಗಳನ್ನು ಆಲಿಸುತ್ತಿದ್ದರು. ವಿಶೇಷವೆಂದರೆ ತೀರ ಎಳವೆಯಲ್ಲೇ
ಜೋಶಿಯವರಿಗೆ ಆ ಕಾಲದ ಪ್ರಸಿದ್ಧ ಅರ್ಥದಾರಿಗಳ ಜೊತೆ ಕುಳಿತು ಅರ್ಥ ಹೇಳುವ
ಸುಯೋಗ ಒಲಿದದ್ದು.
ಆಗ ಜೋಶಿ ಅಂತಿಮ ಬಿಕಾಂ ವಿದ್ಯಾರ್ಥಿ. ಮುಂಡಾಜೆಯ ರಾಮಚಂದ್ರ ಶ್ರವಣಿ
ಎಂಬವರು ತಮ್ಮ ಮನೆಯಲ್ಲೊಂದು ವಿಶೇಷ ತಾಳಮದ್ದಲೆ ಕೂಟ ಏರ್ಪಡಿಸಿದ್ದರು.
{{center| '''ಡಾ.ಎಂ.ಪ್ರಭಾಕರ ಜೋಶಿ/೯'''}}<noinclude></noinclude>
d2k5aceroq8wge0hp8h7da8thbkl3kv
321591
321590
2026-05-21T09:01:22Z
Pragathi. BH
7585
321591
proofread-page
text/x-wiki
<noinclude><pagequality level="4" user="Pragathi. BH" /></noinclude>{{center|'''ಸಾಹಸ ಭೀಮ ವಿಜಯವೆಂಬ ತಾಳಮದ್ದಲೆಯು'''}}
ಅದುವರೆಗೆ ಶೋತೃವಾಗಿ, ಅರ್ಥದಾರಿಯಾಗಿ ಕೂಟಗಳಲ್ಲಿ ಪಾಲು ಪಡೆಯುತ್ತಿದ್ದ
ಜೋಶಿಯವರು ಕಾರ್ಕಳದಲ್ಲಿ ೧೯೬೮ರಲ್ಲಿ ಸಂಘಟಕನಾಗಿ ತೆರೆದುಕೊಂಡರು.
ಅನಂತಶಯನ ಯಕ್ಷಗಾನ ಸಂಘದಲ್ಲಿ ಬಹುಕಾಲ ಕಾರ್ಯದರ್ಶಿಯಾಗಿದ್ದರು. ಹಾಗೆ
ಕಾರ್ಕಳದ ಸಿನಿಮಾ ಟಾಕೀಸ್ನಲ್ಲಿ ಒಂದು ದೊಡ್ಡ ಕೂಟ ಆಯೋಜಿಸಿದ್ದರು. ಅಲ್ಲೂ
ಜೋಶಿತನ ಎದ್ದು ಕಾಣುವಂತೆ ಹೊಸ ಪ್ರಸಂಗವನ್ನು ಸಂಯೋಜಿಸಿದ್ದರು. ರನ್ನನ ಸಾಹಸ
ಭೀಮ ವಿಜಯವನ್ನು ಆಧರಿಸಿ ಕೆ.ಪಿ. ವೆಂಕಪ್ಪ ಶೆಟ್ಟರು ಬರೆದ ಗದಾಯುದ್ಧ ಪ್ರಸಂಗವನ್ನು
ತಾಳಮದ್ದಲೆಗೆ ಆರಿಸಿಕೊಂಡಿದ್ದರು. ಜನಪ್ರಿಯವಲ್ಲದ ಪ್ರಸಂಗವದು. 'ಈ ಪ್ರಸಂಗ ಬೇಡ,
ಜನ ಹೇಗೆ ಸ್ವೀಕರಿಸಿಯಾರು?” ಎಂದು ಅಂದೇ ಶೇಣಿಯವರು ಪತ್ರ ಬರೆದು ಎಚ್ಚರಿಸಿದ್ದರಂತೆ!{{gap}}
{{gap}}ಸ್ವತಃ ಜೋಶಿಯವರೇ ಕರಪತ್ರ ಬರೆದು ಅಚ್ಚು ಹಾಕಿಸಿದ್ದರು. (ಆ ಕರಪತ್ರ ಜೋಶಿಯವರ
ಬಳಿ ಈಗಲೂ ಇದೆ). ಕಡತೋಕ ಮಂಜುನಾಥ ಭಾಗವತರ ಭಾಗವತಿಕೆ, ಶೇಣಿಯವರ
ಕೌರವ, ಪೆರ್ಲ ಪಂಡಿತರ ಸಂಜಯ, ದೊಡ್ಡ ಸಾಮಗರ ಭೀಮ, ಕೃಷ್ಣರಾಯರ ಧರ್ಮರಾಯ,
ಜೋಶಿಯವರು ಭೀಷ್ಮನಾಗಿ ಆ ಕೂಟ ಮೆರೆದಿತ್ತು. ಸಂಘಟಕನಾಗಿ ಮೊತ್ತ ಮೊದಲು
ಜೋಶಿಯವರಿಗೆ ಒಳ್ಳೆಯ ಹೆಸರೂ ತಂದಿತ್ತಿತ್ತು.
ಹೀಗೆ ಆಗ ಕಾರ್ಕಳ ಸುತ್ತಲಿನ ೩೦-೪೦ ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಕಳ, ರೆಂಜಾಳ,
ವೇಣೂರು, ಹಿರ್ಗಾನ, ಮೂರೂರು, ಅಜೆಕಾರು, ಹೆಬ್ರಿ-ಕೂಟಗಳಿಗೆ ತೆರಳುತ್ತಿದ್ದರು ಜೋಶಿ.
{{center|'''ದೇರಾಜೆ ಜೊತೆ ಹುಡುಗ ಜೋತಿ ಅರ್ಥ..'''}}
ಶಾಲಾ ಕಾಲೇಜು ಹಂತದಿಂದಲೇ ಜೋಶಿ ರಂಗಸ್ಥಳ ಏರಿದ್ದರು. ರಕ್ತದ ಗುಣವೋ ಏನೋ
ಮಾತು ಅವರಿಗೆ ಸರಾಗವಾಗಿ ಒಲಿದಿತ್ತು. ಕಾರ್ಕಳದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿ
ದ್ದಾಗಲೇ ಕರ್ವಾಶೆಯಲ್ಲಿ ನಡೆದ 'ಚೂಡಾಮಣಿ' ಪ್ರಸಂಗದಲ್ಲಿ ಜಟಾಯುವಿನ ಅರ್ಥ
ಹೇಳಿದ್ದರು. 'ಗರಿ ಬೆಂದು ಮೂಡಿದವು ರಾಮ ಕತೆಯಂ ಕೇಳು...'
ಅಂದೇ ಜೋಶಿಯವರ ಒಳ ಮನಸ್ಸಲ್ಲಿ ನವಿಲುಗರಿ ಅರಳಿದ್ದವು.
ಆಗಲೇ ಜೋಶಿ ಕಾರ್ಕಳ, ಮಾಳ, ಉಜಿರೆ, ಬೆಳ್ತಂಗಡಿ ಆಸುಪಾಸಲ್ಲಿ ತಾಳಮದ್ದಲೆಯ
ಅರ್ಥಗಾರಿಕೆಯಲ್ಲಿ ಭಾಗವಹಿಸಿದ್ದರು.
ಹತ್ತರ ಹರೆಯದಲ್ಲೇ ಅರ್ಥ ಹೇಳಲು ಶುರು ಮಾಡಿದ್ದ ಜೋಶಿಯವರೊಳಗೆ
(ಮಾಳದಲ್ಲಿ ಹೇಳಿದ್ದ 'ಸಂಪಾತಿ' ಪಾತ್ರದ ಅರ್ಥ) ನಿಧಾನಕ್ಕೆ ಪುರಾಣ ಪಾತ್ರಗಳು,
ಘಟನಾವಳಿಗಳು, ಅವತಾರಗಳ ಸ್ಪಷ್ಟ ಕಲ್ಪನೆ, ಪ್ರತೀ ಪಾತ್ರಗಳ ನಡೆ, ನಡಾವಳಿ, ಸ್ವಭಾವ
ಇಳಿದಿತ್ತು. ಸಿದ್ಧ ಪ್ರಸಿದ್ಧರ ಅರ್ಥಗಳನ್ನು ಆಲಿಸುತ್ತಿದ್ದರು. ವಿಶೇಷವೆಂದರೆ ತೀರ ಎಳವೆಯಲ್ಲೇ
ಜೋಶಿಯವರಿಗೆ ಆ ಕಾಲದ ಪ್ರಸಿದ್ಧ ಅರ್ಥದಾರಿಗಳ ಜೊತೆ ಕುಳಿತು ಅರ್ಥ ಹೇಳುವ
ಸುಯೋಗ ಒಲಿದದ್ದು.
ಆಗ ಜೋಶಿ ಅಂತಿಮ ಬಿಕಾಂ ವಿದ್ಯಾರ್ಥಿ. ಮುಂಡಾಜೆಯ ರಾಮಚಂದ್ರ ಶ್ರವಣಿ
ಎಂಬವರು ತಮ್ಮ ಮನೆಯಲ್ಲೊಂದು ವಿಶೇಷ ತಾಳಮದ್ದಲೆ ಕೂಟ ಏರ್ಪಡಿಸಿದ್ದರು.
{{center| '''ಡಾ.ಎಂ.ಪ್ರಭಾಕರ ಜೋಶಿ/೯'''}}<noinclude></noinclude>
4q77u5iy29wihmzukq5kmlnlitxzr9a
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೧೭
104
99578
321593
278968
2026-05-21T09:02:08Z
Pragathi. BH
7585
/* Validated */
321593
proofread-page
text/x-wiki
<noinclude><pagequality level="4" user="Pragathi. BH" /></noinclude>{{gap}}ಕರ್ನಾಟಕದಲ್ಲಿ ನಾಟಕ ರಂಗಭೂಮಿಯಲ್ಲಿ ಹೊಸ ಗಾಳಿ ಬೀಸುತ್ತಿದ್ದ ಹೊತ್ತು. ಆಗಲೇ ಒಂದೆರಡು ನವ್ಯ ನಾಟಕಗಳನ್ನು ಜೋಶಿ ನೋಡಿದ್ದರಂತೆ. ಪ್ರಸಿದ್ಧ ನಾಟಕಕಾರ ಬಿ.ವಿ.ಕಾರಂತರ ಒಂದು ಶಿಬಿರ ಕೂಡಾ ಧಾರವಾಡದಲ್ಲಿ ನಡೆದಿತ್ತು. ಶಿಬಿರದ ಕೊನೆಗೆ ನಡೆದ
ಅಸಂಗತ ನಾಟಕ ಕಂಡ ಜೋಶಿಯವರು ಅದರ ಕುರಿತು ೧೦ ಪುಟಗಳ ಪ್ರಬಂಧವನ್ನೂ ಬರೆದರು.' ಆ ಕಾಲಕ್ಕೆ ಅದೊಂದು ಹೊಸ ಪಂಥ. ಅದನ್ನು ಆರಾಧನೆಯ ರೂಪದಲ್ಲಿ
ಬರೆಯಬೇಕಿತ್ತೋ ಏನೋ? ಅನೇಕರಿಗೆ ಆ ಲೇಖನ ಹಿಡಿಸಲಿಲ್ಲ. ಕೆಲವರು ಚೆನ್ನಾಗಿತ್ತು
ಎಂದಿದ್ರು' ಎನ್ನುತ್ತಾರೆ ಜೋಶಿ.
{{gap}}ಇದೇ ವೇಳೆ ಜೋಶಿಯವರು ಕೆಲ ಕವನಗಳನ್ನು ಬರೆದರು. ಆಗ ಯಕ್ಷಗಾನದ ಮೇಲೆ ಇವರು ಬರೆದ ಒಂದೆರಡು ಲೇಖನಗಳು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಜೊತೆಗೆ ಆಕಾಶವಾಣಿ ಕಲಾವಿದ ವರದಾಚಾರ್ ಬಳಿಯಲ್ಲಿ ದಕ್ಷಿಣಾದಿ
ಮೃದಂಗ ಪಾಠಕ್ಕೂ ತೆರಳಿದ್ದರು.
{{center|'''ಉತ್ತರಕನ್ನಡದಲ್ಲಿ ದಿಗ್ವಿಜಯ...'''}}
ಧಾರವಾಡದಲ್ಲಿರುವಾಗಲೇ ಪ್ರಭಾಕರ ಜೋಶಿಯವರಿಗೆ ಅನಿರೀಕ್ಷಿತವಾಗಿ ಉತ್ತರಕನ್ನಡದ ಸಂಪರ್ಕ ಬೆಳೆಯಿತು. ಹಳದೀಪುರದ ಜಾತ್ರೆಯಲ್ಲಿ ನಡೆದ ಒಂದು ಬಯಲಾಟದಲ್ಲಿ ಜೋಶಿ ವೇಷ ಮಾಡಿದ್ದರು. ಆಗಲೇ ಅವರು ಚಿಟ್ಟಾಣಿ, ಜಲವಳ್ಳಿ, ಮೂರೂರು ದೇವರ ಹೆಗಡೆಯವರ ವೇಷಗಳನ್ನು ನೋಡಿದ್ದು.ಹಾಗೆ ಉತ್ತರಕನ್ನಡದಲ್ಲಿ ಒಂದು ರೀತಿ ದಿಗ್ವಿಜಯದ ಆರಂಭದಂತೆ
ಜೋಶಿಯವರ ಅರ್ಥಯಾತ್ರೆ ಶುರುವಾದದ್ದು ಶಿರಸಿ-ಯಲ್ಲಾಪುರಗಳ ನಡುವಿನ ನೆಡುಗೋಡು ಎಂಬಲ್ಲಿ. ಅದು ಹವ್ಯಕ ಬ್ರಾಹ್ಮಣರೊಬ್ಬರ ಮನೆ ಮಾಳಿಗೆಯಲ್ಲಿ ನಡೆದ ಚೌತಿಯ ತಾಳಮದ್ದಲೆ.
ಸುಧನ್ವಾರ್ಜುನದ ಕೃಷ್ಣ ಜೋಶಿಯವರದ್ದು. ಕಡತೋಕರ ಮಂಜುನಾಥ ಭಾಗವತರದ್ದು
ಭಾಗವತಿಕೆ. ಹೆಸರುಗೋಡು ಲಕ್ಷ್ಮೀನಾರಾಯಣ ಹೆಗಡೆ ಸುಧನ್ವ, ದಂಟಕಲ್ ಪಟೇಲರು ಅರ್ಜುನ, ಇಡೀ ರಾತ್ರಿ ನಡೆದ ಕೂಟದಲ್ಲಿ ಕೃಷ್ಣನ ಪ್ರವೇಶ ಬೆಳಗಿನ ಜಾವ ೪ವರೆಗೆ.
ನಂತರ ಒಂದುವರೆ ತಾಸು ಮನೆ ಮಾಳಿಗೆಯಲ್ಲಿ ಕೃಷ್ಣನಾಗಿ ಮೆರೆದಿದ್ದರು ಜೋಶಿ.
{{gap}}ಉತ್ತರಕನ್ನಡದಲ್ಲಿ ಚೌತಿ ಮತ್ತು ಸೊಸೈಟಿ ವಾರ್ಷಿಕೋತ್ಸವಗಳ ತಾಳಮದ್ದಲೆಗಳು ಪ್ರಸಿದ್ಧ.
ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗ ಜೋಶಿಯವರು ಇಂಥ ಕೂಟಗಳಿಗೆ ತೆರಳುತ್ತಿದ್ದರು.ಆರ್ಥಿಕವಾಗಿಯೂ ಅದು ನೆರವಾಗುತ್ತಿತ್ತು. ೧೯೭೦-೭೧ರ ಕಾಲ. ತರಗತಿಗಳಿಗೆ ಬಂಕ್ ಮಾಡಿ ಬಸ್ನಲ್ಲೋ,ಟ್ರಕ್ಗಳಲ್ಲೋ
ಮ್ಯಾಂಗನೀಸ್ ಲಾರಿಗಳಲ್ಲೋ ತೆರಳುತ್ತಿದ್ದರು.
{{gap}}ಹಾಗೆ ಶಿರಸಿ, ಯಲ್ಲಾಪುರ, ಕುಮಟಾ, ಹೊನ್ನಾವರ ಸೇರಿದಂತೆ ಉತ್ತರಕನ್ನಡದ ಬಹುಭಾಗ ಪರಿಚಿತವಾಯಿತು. ಕಡತೋಕ ಮಂಜುನಾಥ ಭಾಗವತರು ಹಲವು ಕಡೆಗೆ
ಜೋಶಿಯವರನ್ನು ಆಹ್ವಾನಿಸಿದ್ದರು. ಚೌತಿಯ ಎಂಟು ಹತ್ತು ದಿನಗಳಲ್ಲಂತೂ ಇದೇ ಭಾಗವತರ ಜೊತೆ ಮನೆ ಮನೆಗೆ ತಿರುಗಾಡಿದರು.
{{gap}}ಯಲ್ಲಾಪುರ ಸೊಸೈಟಿ ತಾಳಮದ್ದಲೆಯಂತೂ ತುಂಬ ಜನಪ್ರಿಯವಾದದ್ದು. ಸೊಸೈಟಿ
ಅಂಗಳ ಪ್ರೇಕ್ಷಕರಿಂದ ತುಳುಕುತ್ತಿರುತ್ತದೆ. ೧೯೭೧ರಲ್ಲಿ ಅಲ್ಲಿ ಜೋಶಿಯವರು 'ಕೃಷ್ಣಸಂಧಾನ'ದ
{{center|'''ಡಾ.ಎಂ. ಪ್ರಭಾಕರ ಜೋಶಿ /೧೨'''}}<noinclude></noinclude>
efrwle9l8gi4teiovd8i5ka90e0m6o8
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೩೪
104
99579
321600
278981
2026-05-21T09:07:35Z
Pragathi. BH
7585
/* Validated */
321600
proofread-page
text/x-wiki
<noinclude><pagequality level="4" user="Pragathi. BH" /></noinclude>ಸುಮಾರು ಐವತ್ತು ಪ್ರಶ್ನೆ ಕೇಳಿರಬಹುದು. ಜೋಶಿಯವರು ಹಿಂದೆ ಮುಂದೆ ನೋಡದೆ ಲೀಲಾಜಾಲವಾಗಿ ಉತ್ತರಿಸಿ ಬೆರಗುಗೊಳಿಸಿದ್ದರು. ಬೇರೆಬೇರೆ ಕಲೆಗಳನ್ನು ಉದಾಹರಿಸಿ ಪರಿಣಾಮಕಾರಿಯಾಗಿ ಉತ್ತರಿಸಿದ್ದರು.”
{{gap}}ಇಂದು ಯಕ್ಷಗಾನದಲ್ಲಿ ದೊಡ್ಡ ದೊಡ್ಡ ಅರ್ಥಧಾರಿಗಳು, ಪಾತ್ರಧಾರಿಗಳಿರಬಹುದು. ಆದರೆ ವಿಮರ್ಶೆಯೆನ್ನುವಂಥದದ್ದು ಬೇರೆಯೇ ಆಗಿದೆ. ಅದಕ್ಕೆ ಜೋಶಿಯವರೇ ಬೇಕು. ಇವರ ವಿಮರ್ಶೆಯಲ್ಲಿ ನಿಶಿತವಾದ ವೈಚಾರಿಕ ನೇರ ನೋಟ ಇದೆ. ಕೆಲವರು ಮುಖ ನೋಡಿ ಮಣೆ ನೀಡುವುದಿದೆ. ಆಗ ವಿಮರ್ಶೆ ದಾರಿ ತಪ್ಪಿ ಅಪಾಯವೇ ಸಂಭವಿಸುವುದಿದೆ. ಕೆಲವರು ಕಲೆಯ ಬಗ್ಗೆ ಜ್ಞಾನವಿಲ್ಲದೆ ಏನೋ ತನಗೆ ಕಂಡದ್ದನ್ನು ಹೇಳುವುದುಂಟು. ಶಿಲ್ಪ ಜ್ಞಾನವಿಲ್ಲದವ ಗಣಪತಿ ಮಾಡಲು ಹೊರಟು ಮಂಗನ ಮುಸುಡು ಮಾಡಿದ ಹಾಗಾಗುವುದುಂಟು. ಜೋಶಿಯವರದ್ದು ಹಾಗಲ್ಲ. ಯಾರ ಹಂಗೂ ಇಲ್ಲದೆ, ದಾಕ್ಷಿಣ್ಯಕ್ಕೆ
ಒಳಗಾಗದೆ, ಕಲೆಯ ಸಂಪೂರ್ಣ ಜ್ಞಾನವನ್ನು ತಿಳಿದು ವಸ್ತುನಿಷ್ಠವಾಗಿ ವಿಮರ್ಶೆ ಮಾಡ ಬಲ್ಲವರಲ್ಲಿ ಜೋಶಿಯವರು ಮೊದಲಿಗರು. ರೈಲು ನಿಲ್ದಾಣದಲ್ಲಿ ಟಿಕೇಟು ಕೊಡುವವ ಪ್ರಯಾಣದ ಸ್ಥಳ, ಅದಕ್ಕೆ ಸರಿಯಾದ ಹಣವನ್ನು ಪಡೆದುಕೊಳ್ಳಬೇಕು. ಟಿಕೇಟು ಕೇಳಲು ಬಂದವ ಹೇಗಿದ್ದಾನೆ, ಚಂದ ಇದ್ದಾನಾ? ಕೋಟು ಬೂಟು ತೊಟ್ಟಿದ್ದಾನೋ, ಸ್ನೇಹಿತನೋ, ಸಂಬಂಧಿಯೋ ಎಂದು ನೋಡಿ ಟಿಕೆಟಿನ ಹಣ ಕಡಿಮೆ ತೆಗೆದುಕೊಂಡರೆ ಸಂಜೆ ಇವನೇ ಭರ್ತಿ ಮಾಡಬೇಕಾಗುತ್ತದೆ. ಪ್ರಯಾಣದ ಸ್ಥಳಕ್ಕೆ ಸರಿಯಾಗಿ ಟಿಕೇಟು ಕೊಟ್ಟು ಹಣ ಪಡೆಯುವುದೇ ಅವನ ಕರ್ತವ್ಯ. ಅದೇ ರೀತಿ ಜೋಶಿಯವರ ವಿಮರ್ಶೆ ವಸ್ತು ನಿಷ್ಠವಾದುದು. ಇದು ಕಲೆಯ ಆರೋಗ್ಯಕ್ಕೆ ಬಹಳ ಉತ್ತಮ.
{{gap}}ಪಾದರಸದಂಥ ಲವಲವಿಕೆ, ಶಿಸ್ತು, ಔದಾರ್ಯ, ಗುಣಗ್ರಾಹಿ, ಒಳ್ಳೆಯ ಗುಣಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುವ ಸಜ್ಜನಿಕೆ, ಆತ್ಮೀಯತೆ, ಒಪ್ಪ ಓರಣ ಇವರನ್ನು ಮುನ್ನಡೆಸಿದ ಗುಣಗಳು. ಇನ್ನಿಲ್ಲ ಎಂಬಷ್ಟರವರೆಗಿನ ಇವರ ಭಾಷಣ ಬಹು ಪ್ರಸಿದ್ದ. ಅದಿಂದ ಅಃ'ದವರೆಗೆ ವಿಷಯಗಳನ್ನು ಕ್ರೋಢೀಕರಿಸಬಲ್ಲ ವಿದ್ವಾಂಸ, ಉದಾ: ಶೇಣಿಯವರನ್ನು ಕಂಡು ಕೇಳದವರಿಗೂ ಶೇಣಿಯವರ ಬಗ್ಗೆ ಜೋಶಿಯವರ ಭಾಷಣ ಕೇಳಿದರೆ ಶೇಣಿಯವರ ಸಮಗ್ರ ಚಿತ್ರಣ ಮನದಟ್ಟಾದೀತು. ಇದೇ ರೀತಿಯಲ್ಲಿ ಭಾಷಣಗಳೂ ಅನುಭವದ ಖನಿಜ. ಒಂದು ನವಿರಾದ ಹಾಸ್ಯ ಭಾಷಣದಲ್ಲೂ, ಅರ್ಥದಲ್ಲೂ ಹೀಗೆ ಮಾತನಾಡುವಾಗಲೂ ನುಸುಳಿ ಹೋದೀತು. ಗಂಟೆ ಗಂಟೆ ಮಾತಾಡಿದರೂ ಮಾತಿನ ಒರತೆ ಆರಲಾರದು. ಮಾತು ಆಕರ್ಷಣೀಯ. ಇನ್ನೂ ಕೇಳೋಣ ಎನಿಸುವಂತಿದೆ. ಹಲವಾರು ಉದಾಹರಣೆಗಳು,
ಉಪಕಥೆಗಳು, ಉಪಮೆಗಳು ಇವರ ಮಾತಿನಲ್ಲಿ ಪುಂಖಾನುಪುಂಖವಾಗಿ ಬರುತ್ತವೆ.
ಹಲವಾರು ಭಾಷೆಗಳನ್ನು ಲೀಲಾಜಾಲವಾಗಿ ಮಾತಾಡಬಲ್ಲ ಭಾಷಾ ಕೋವಿದ. ಇವರ ಅರ್ಥಗಾರಿಕೆಯೂ ಹಾಗೆ. ಪಾತ್ರವನ್ನು ಹಲವಾರು ದೃಷ್ಟಿಕೋನದಲ್ಲಿ ಕಂಡುಕೊಂಡು ಪಾತ್ರಗಳನ್ನು ಹೃದಯಂಗಮವಾಗಿ ಚಿತ್ರಿಸುತ್ತಿದ್ದರು. ಬಹಳ ದೀರ್ಘವಾಗಿ ಆಕರ್ಷಕವಾಗಿ ಮಾತಾಡಬಲ್ಲ ಜೋಶಿಯವರು ಸಮಯಾವಕಾಶವಿಲ್ಲದಾಗ ಕೆಲವೇ ವಾಕ್ಯಗಳಲ್ಲಿ ಪದ್ಯದ ಅರ್ಥವನ್ನೆಲ್ಲಾ ತುಂಬಿಸಿ ಲಘುಬಗೆಯಿಂದ ಮಾತಾಡಬಲ್ಲ ಸಮರ್ಥ.
{{center|'''ಡಾ.ಎಂ. ಪ್ರಭಾಕರ ಜೋಶಿ | ೨೯'''}}<noinclude></noinclude>
heu63y9h1zswbpzr6qxvufivmga8ifq
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೫೦
104
99580
321645
278977
2026-05-21T11:24:01Z
Pragathi. BH
7585
/* Validated */
321645
proofread-page
text/x-wiki
<noinclude><pagequality level="4" user="Pragathi. BH" /></noinclude>{{center|''''ನಾಡಿಗೆ ನಮಸ್ಕಾರ' ೧ ರಿಂದ ೧೩೬ರ ತನಕದ<br/>ಹೊತ್ತಗೆಗಳ ಹೆಸರು ಮತ್ತು ಕೃತಿಕಾರರು'''}}
'''ಮೊದಲ ಕಂತಿನ ಹತ್ತು ಹೊತ್ತಗೆಗಳಳು:''' ೧. ಪದ್ಮಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು
(ಲೇ:ಡಾ.ಬಿ.ಪಿ. ಸಂಪತ್ಕುಮಾರ್, ಉಜಿರೆ); ೨. ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ
(ಲೇ: ಬೆಳಗೋಡು ರಮೇಶ ಭಟ್); ೩. ಸಂಶೋಧಕ ಮಹೋಪಾಧ್ಯಾಯ ಡಾ. ಉಳಿಯಾರು
ಪದ್ಮನಾಭ ಉಪಾಧ್ಯಾಯ (ಲೇ: ಎಸ್.ಆರ್. ಅರುಣಕುಮಾರ್); ೪. ಹಿರಿಯ ಸಾಹಿತಿ ಜನಾರ್ದನ
ಗುರ್ಕಾರ್ (ಲೇ:ಡಾ.ಬಿ.ಜನಾರ್ದನ ಭಟ್); ೫. ಮಹಾಕವಿ ಮಂದಾರ ಕೇಶವಭಟ್ಟ (ಲೇ:ಡಾ. ನಿಕೇತನ);
೬. ಮೃಗಯಾ ಸಾಹಿತಿ ಕೆದಂಬಾಡಿ ಜತ್ತಪ್ಪ ರೈ (ಲೇ: ವಿ.ಗ. ನಾಯಕ); ೭. ಅಭಿನವ ಧನ್ವಂತರಿ
ಡಾ. ಮುಳಿಯೆ ಗೋಪಾಲಕೃಷ್ಣ ರಾಯರು (ಲೇ: ಜನಾರ್ದನ ಗುರ್ಕಾರ್); ೮. ರಂಗಕರ್ಮಿ ಸದಾನಂದ
ಸುವರ್ಣ (ಲೇ: ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ); ೯. ಸಸ್ಯವಿಜ್ಞಾನಿ ಡಾ. ಪಳ್ಳತ್ತಡ್ಕ ಕೇಶವ ಭಟ್ಟ
(ಲೇ: ಡಾ. ವಸಂತಕುಮಾರ ಪೆರ್ಲ): ೧೦. ಕರ್ನಾಟಕದ ಹಾನಿಮನ್ ಡಾ. ಕೆ. ವಸಂತಕುಮಾರ್ ರಾವ್,
(ಲೇ: ಡಾ.ವಿಶ್ವೇಶ್ವರ ವಿ.ಕೆ.)
'''ಎರಡನೇ ಕಂತಿನ ಹತ್ತು ಹೊತ್ತಗೆಗಳು :''' ೧೧. ಸಮಾಜಸೇವೆಗೆ ಪರ್ಯಾಯ ಹೆಸರು ಧರ್ಮದರ್ಶಿ
ಹರಿಕೃಷ್ಣ ಪುನರೂರು (ಲೇ: ಜಯರಾಮ ಕಾರಂತ, ಕಾಂತಾವರ); ೧೨. ಪತ್ರಕರ್ತರ ಆಚಾರ್ಯ
ಪಾಡಿಗಾರು ವೆಂಕಟ್ರಮಣ ಆಚಾರ್ಯ (ಲೇ: ಡಾ. ಶ್ರೀನಿವಾಸ ಹಾವನೂರ); ೧೩. ಹಿರಿಯ ಜಾನಪದ
ವಿದ್ವಾಂಸ ಡಾ. ಅಮೃತ ಸೋಮೇಶ್ವರ (ಲೇ: ಡಾ.ನಾ. ದಾಮೋದರ ಶೆಟ್ಟಿ); ೧೪, ತುಳು ಭಾಷಾ
ಸಾಹಿತ್ಯದ ರನ್ನ ದರ್ಬೆ ಕೃಷ್ಣಾನಂದ ಚೌಟ (ಲೇ: ಡಾ. ವಾಮನ ನಂದಾವರ); ೧೫. ನೈತಿಕ ಶಿಕ್ಷಣದ
ಚಿಂತಕ ಉ.ಕ. ಸುಬ್ಬರಾಯಾಚಾರ್ಯ (ಲೇ: ಬೈಕಾಡಿ ಜನಾರ್ದನ ಆಚಾರ್); ೧೬. ಪುಸ್ತಕ ಪ್ರೀತಿಗೆ
ರೂಪಕ ಬೋಳಂತಕೋಡಿ ಈಶ್ವರ ಭಟ್ಟ (ಲೇ: ಪ್ರೊ. ವಿ.ಬಿ. ಅರ್ತಿಕಜೆ); ೧೭. ಮಿಂಚುವ ಮಾತಿನ ಯಕ್ಷ
ಕುಂಬಳೆ ಸುಂದರ ರಾವ್ (ಲೇ: ಗಣರಾಜ ಕುಂಬ್ಳೆ); ೧೮. ಒಂದಾಣೆ ಮಾಲೆಯ ಸಾಹಸಿ ಕುಡಿ
ವಾಸುದೇವ ಶೆಣೈ (ಲೇ: ಡಾ. ಸಬಿಹಾ ಭೂಮಿಗೌಡ); ೧೯. ಮಕ್ಕಳ ಸಾಹಿತ್ಯದ ಹಿರಿಯ ಪಳಕಳ
ಸೀತಾರಾಮ ಭಟ್ಟ (ಲೇ: ನೆಂಪು ನರಸಿಂಹ ಭಟ್ಟ): ೨೦. ಬಹುಮುಖ ಪ್ರತಿಭಾಸಂಪನ್ನ
ಡಾ.ಎಂ.ಮೋಹನ ಆಳ್ವ (ಲೇ: ಡಾ. ನರೇಂದ್ರ ರೈ ದೇರ್ಲ)
'''ಮೂರನೇ ಕಂತಿನ ಹತ್ತು ಹೊತ್ತಗೆಗಳು :''' ೨೧. ಕಾರಂತರ ಕನ್ನಡ ದೀಕ್ಷಾ ಗುರು ಐರೋಡಿ
ಶಿವರಾಮಯ್ಯ (ಲೇ:ಎ.ಮಾಧವ ಉಡುಪ); ೨೨.ಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ
(ಲೇ:ಬಿ.ಸೀತಾರಾಮ ಭಟ್); ೨೩ಹಿರಿಯ ಸಹಕಾರಿ ಮೊಳಹಳ್ಳಿ ಶಿವರಾಯ (ಲೇ: ಡಾ. ಗಣನಾಥ
ಎಕ್ಕಾರು); ೨೪. ಬೆಳಕಿನ ಬೀಜ ಪಾಂಡೇಶ್ವರ ಗಣಪತಿ ರಾವ್ (ಲೇ:ಡಾ.ಬೇ.ಸೀ. ಗೋಪಾಲಕೃಷ್ಣ);
೨೫. ಹಿರಿಯ ಕವಿ ಅ.ಗೌ.ಕಿನ್ನಿಗೋಳಿ (ಲೇ:ಡಾ.ಕೆ.ಚಿನ್ನಪ್ಪ ಗೌಡ); ೨೬. ಸಂಗೀತ ವಿದ್ವಾಂಸ ಚಕ್ರಕೋಡಿ
ನಾರಾಯಣಶಾಸ್ತ್ರಿ (ಲೇ:ಡಾ.ಎಸ್.ಆರ್.ವಿಘ್ನರಾಜ); ೨೭.ಸಾಂಸ್ಕೃತಿಕ ರಾಯಭಾರಿ ಕು.ಶಿ. ಹರಿದಾಸಭಟ್ಟ
(ಲೇ:ಡಾ.ಎನ್.ಟಿ.ಭಟ್): ೨೮.ಬಹುಮುಖಿ ಸಾಹಿತಿ ವಿಶುಕುಮಾರ್ (ಲೇ:ಅರವಿಂದ ಕರ್ಕಿಕೋಡಿ);
೨೯.ಜನರ ನಡುವಿನ ನ್ಯಾಯಾಧೀಶ ಡಾ.ಶಂಕರ ಖಂಡೇರಿ (ಲೇ:ಎಸ್.ಜಿ. ಕೃಷ್ಣ); ೩೦. ಸಮಾಜಮುಖಿ
ಸಂಶೋಧಕಿ ಡಾ. ಸುಶೀಲಾ ಪದ್ಮನಾಭ ಉಪಾಧ್ಯಾಯ (ಲೇ: ಎಂ.ಜಾನಕಿ ಬ್ರಹ್ಮಾವರ)
'''ನಾಲ್ಕನೇ ಕಂತಿನ ಹತ್ತು ಹೊತ್ತಗೆಗಳು :''' ೩೧. ಸಾಂಸ್ಕೃತಿಕ ಚಿಂತಕ ಕೆ.ಎಸ್.ಎನ್. ಅಡಿಗ (ಲೇ: ಶ್ರೀನಿವಾಸ
ದೇಶಪಾಂಡೆ); ೩೨. ಸಮಾಜಮುಖಿ ಯೋಜಕ ಕೆ.ಕೆ.ಪೈ (ಲೇಕೆ.ಶಾರದಾ ಭಟ್); ೩೩. ರಾಜನೀತಿಯ<noinclude></noinclude>
851uxdaz3eggwnxgweqvo9qi5gq3m9j
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೪೫
104
99581
321639
278978
2026-05-21T11:21:42Z
Pragathi. BH
7585
/* Validated */
321639
proofread-page
text/x-wiki
<noinclude><pagequality level="4" user="Pragathi. BH" /></noinclude> {{gap}}'ಆಕಾಶ ಕಲ್ಪಿತವಾದ ಶುದ್ಧ ನಿರಾಕಾರ ಸ್ವರೂಪಿ, ಜ್ಞಾನದಿಂದ ಗಗನಸದೃಶವಾದ
ಉನ್ನತ, ಕೇವಲ ಚೈತನ್ಯವಾದ ತಿಳಿ-ತಿಳಿಯುವ ಎಂಬ ಭೇದವಿಲ್ಲದ ಏಕವಾದ ಜ್ಞಾನವನ್ನು
ಬೋಧಿಸಿದ ಆ ದೇವ-ಮಾನವೋತ್ತಮನಾದ ಬುದ್ಧನನ್ನು/ನಾರಾಯಣನನ್ನು ವಂದಿಸುತ್ತೇನೆ'.<br />
{{gap}}ಇದು ಯಾವುದೇ ಬೌದ್ಧ ಗ್ರಂಥಗಳಿಂದ ಆಯ್ದ ಸ್ತುತಿಯಲ್ಲ. ವೇದಾಂತಾಚಾರ್ಯರಾದ
ಗೌಡಪಾದರ (ಆಚಾರ್ಯ ಶಂಕರರ ಗುರುಗಳಾದ ಗೋವಿಂದ ಭಗವತ್ಪಾದರ ಗುರು)
ಮಾಂಡೂಕ್ಯಕಾರಿಕಾ ಗ್ರಂಥದ ಶ್ಲೋಕವಿದು!<br />
{{gap}}ಹೀಗಿತ್ತು ಒಂದು ಹಂತದಲ್ಲಿ ವೇದಾಂತ ಮತ್ತು ಬೌದ್ಧ ದರ್ಶನಗಳ ನಿಕಟತೆ. ವೈದಿಕ
ವರ್ಸಸ್ ಬೌದ್ಧ ಎಂಬ ವಿರೋಧವೂ ಅಂದಿನ ಒಂದು ಸ್ಥಾಯಿ ಕಲ್ಪನೆಯಲ್ಲವೆ? ಎಂದರೆ
ಹೌದು. ಅದೂ ನಿಜ. ವೇದ (ಕರ್ಮಕಾಂಡದ) ಮೀಮಾಂಸಾ ಮತಕ್ಕೂ ವೇದಾಂತ ಮತಕ್ಕೂ
ಹೀಗೆಯೇ ವಿರೋಧ- ಪ್ರೀತಿಗಳ ಸಂಬಂಧವಿತ್ತು. ಹಲವು ದಾರ್ಶನಿಕ ವಿವಾದಗಳಿದ್ದವು.<br />
{{gap}}ದಾರ್ಶನಿಕ ಕ್ಷೇತ್ರದಲ್ಲಿ ಇಂತಹ ದ್ವಂದ್ವಗಳ ಹಲವು ದೃಷ್ಟಾಂತಗಳಿವೆ. ಜ್ಞಾನ-ಜ್ಞೆಯ
ಆಕಾಶಗಳಲ್ಲಿ ಧರ್ಮ (ಧಮ್ಮ) ಬುದ್ಧ ಶಬ್ದ ಮೇಳೈಸಿ ವೇದಾಂತದ ವ್ಯಾಖ್ಯಾನದಲ್ಲಿ
ಅದನ್ನು ನೇರವಾಗಿ ಹೇಳಿದ ಗೌಡಪಾದಾಚಾರ್ಯರ ಧೈರ್ಯ ಔದಾರ್ಯಗಳು ದೊಡ್ಡವು.<br />
{{gap}}ಭಗವಾನ್ ಗೌತಮ ಬುದ್ಧನ ಆವಿರ್ಭವ ಕಾಲವು (ಕ್ರಿ.ಪೂ. ಆರನೇ ಶತಮಾನ)
ಭಾರತದಲ್ಲಿ ಧರ್ಮ ಮತ್ತು ದರ್ಶನಗಳು ಬೆಳವಣಿಗೆಯ ಒಂದು ದೊಡ್ಡ ಘಟ್ಟವನ್ನು
ತಲುಪಿದ ಕಾಲ. ಬಹುಶಃ ಸಮಗ್ರ ವೇದಗಳು ಪ್ರಧಾನ ಉಪನಿಷತ್ತುಗಳು. ಭಗವದ್ಗೀತೆ,
ಸಾಂಖ್ಯ ಯೋಗಗಳು, ಮೀಮಾಂಸಾ ನ್ಯಾಯ ದರ್ಶನಗಳ ಆರಂಭಿಕ ಹಂತವೂ ಆಗಲೇ
ರೂಪಿತವಾಗಿ ಸ್ಥಾಪಿತವಾಗಿರಬೇಕು. ಜೈನ (ಅರ್ಹತ) ಮಾರ್ಗವು ಅದಾಗಲೇ ಪ್ರಸಿದ್ಧವಾಗಿ
ಸ್ಥಾಪಿತವಾಗಿತ್ತು. ತೀರ್ಥಂಕರ ಪಾರ್ಶ್ವನಾಥ (ಕ್ರಿ.ಪೂ. ೮೫೦)ರವರೆಗೆ ೨೩
ಜೈನಾಚಾರ್ಯರಿದ್ದರು. ಭಗವಾನ್ ಮಹಾವೀರನು ಬುದ್ಧನ ಹಿರಿಯ ಸಮಕಾಲೀನ.
“ಬಹುಶಃ ತರುಣ ಬುದ್ಧನು ಮಹಾವೀರನನ್ನು ಭೇಟಿ ಆಗಿರಬಹುದು' (ಓಶೋ ರಜನೀಶ್)<br />
{{gap}}ವೇದದೊಳಗೆಯ ವಿಸ್ತಾರವಾದ ಪಂಥ ವೈವಿಧ್ಯದ ಸೂಚನೆಗಳಿವೆ. ಅದರ ಸಮನ್ವಯವೇ
ಪ್ರಾಯಶಃ 'ಏಕಂ ಸದ್ವಿಪ್ರಾ ಬಹುಧಾವದಂತಿ' (ಇರುವ ಒಂದೇ ಸತ್ಯ/ ದೇವಸತ್ತ್ವವನ್ನು ತಿಳಿದವರು
ಬೇರೆ ಹೆಸರುಗಳಿಂದ ಹೇಳುತ್ತಾರೆ ಎಂಬ ಮಹಾನ್ ಉಕ್ತಿ) ವೇದಾಂತ (ಉಪನಿಷತ್ತುಗಳು)ದಲ್ಲಿ
ಕರ್ಮಕಾಂಡ ನಿಂದೆ, ಕರ್ಮವಾದಿಗಳಿಂದ ವೇದಾಂತದ ನಿಂದೆ ನಡೆದಿತ್ತು.<br />
{{gap}}ಮಹಾವೀರನ ಹಿಂದೆ ೨೩ ತೀರ್ಥಂಕರರ ಪರಂಪರೆ ಇದ್ದ ಹಾಗೆ ಬುದ್ಧನ ಹಿಂದೆಯೂ
೨೭ರಷ್ಟು ಬುದ್ಧರಿದ್ದರೆಂಬ (ಕ್ರತುಚಂದ, ಕನಕಮುನಿ, ನಾರದ, ಕಾಶ್ಯಪ ಇತ್ಯಾದಿ)
ಪರಂಪರೆಯಿದೆ. ವೇದದ ಆಚರಣೆಗಳು- ಹಿಂಸಾಪರ, ಸಂಕೀರ್ಣ ಮತ್ತು
ವರ್ಗಸೀಮಿತವಾಗತೊಡಗಿದ್ದವು. ಯಜ್ಞವೆಂಬುದರ ಸಾಮೂಹಿಕ ಆಚರಣೆ ಸಾರ್ವತ್ರಿಕ
ಹಿತದ ಕಲ್ಪನೆ ಮರೆಯಾಗಲಾರಂಭಿಸಿತ್ತು.<br />
{{gap}}ಸೃಜನಶೀಲ ದೃಷ್ಟಿ ಜತೆಗೆ ತಾತ್ವಿಕ ಕ್ಷೇತ್ರದಲ್ಲಿ ತಳಮಳಗಳು, ನೂತನ ಕಲ್ಪನೆಗಳು
ಕಾಣಿಸಿಕೊಂಡಿದ್ದವು. ಆಜೀವಕ, ಆಕ್ರಿಯಾವಾದ, ಸಂದೇಹವಾದ, ಸ್ಯಾದ್ವಾದ (ಅರ್ಹತ,
ಜಿನಮತ) ಮೊದಲಾದವು ಒಂದೆಡೆ, ಚಾರ್ವಾಕ ಪಂಥದ ವಿವಿಧ ಮುಖಗಳು ಒಂದೆಡೆ<br/>
{{center|'''ಡಾ.ಎಂ. ಪ್ರಭಾಕರ ಜೋಶಿ | ೪೦'''}}<noinclude></noinclude>
8umhycy7iubpieoff9gawevb2n6cc2x
321640
321639
2026-05-21T11:22:11Z
Pragathi. BH
7585
321640
proofread-page
text/x-wiki
<noinclude><pagequality level="4" user="Pragathi. BH" /></noinclude> {{gap}}'ಆಕಾಶ ಕಲ್ಪಿತವಾದ ಶುದ್ಧ ನಿರಾಕಾರ ಸ್ವರೂಪಿ, ಜ್ಞಾನದಿಂದ ಗಗನಸದೃಶವಾದ
ಉನ್ನತ, ಕೇವಲ ಚೈತನ್ಯವಾದ ತಿಳಿ-ತಿಳಿಯುವ ಎಂಬ ಭೇದವಿಲ್ಲದ ಏಕವಾದ ಜ್ಞಾನವನ್ನು
ಬೋಧಿಸಿದ ಆ ದೇವ-ಮಾನವೋತ್ತಮನಾದ ಬುದ್ಧನನ್ನು/ನಾರಾಯಣನನ್ನು ವಂದಿಸುತ್ತೇನೆ'.<br />
{{gap}}ಇದು ಯಾವುದೇ ಬೌದ್ಧ ಗ್ರಂಥಗಳಿಂದ ಆಯ್ದ ಸ್ತುತಿಯಲ್ಲ. ವೇದಾಂತಾಚಾರ್ಯರಾದ
ಗೌಡಪಾದರ (ಆಚಾರ್ಯ ಶಂಕರರ ಗುರುಗಳಾದ ಗೋವಿಂದ ಭಗವತ್ಪಾದರ ಗುರು)
ಮಾಂಡೂಕ್ಯಕಾರಿಕಾ ಗ್ರಂಥದ ಶ್ಲೋಕವಿದು!<br />
{{gap}}ಹೀಗಿತ್ತು ಒಂದು ಹಂತದಲ್ಲಿ ವೇದಾಂತ ಮತ್ತು ಬೌದ್ಧ ದರ್ಶನಗಳ ನಿಕಟತೆ. ವೈದಿಕ
ವರ್ಸಸ್ ಬೌದ್ಧ ಎಂಬ ವಿರೋಧವೂ ಅಂದಿನ ಒಂದು ಸ್ಥಾಯಿ ಕಲ್ಪನೆಯಲ್ಲವೆ? ಎಂದರೆ
ಹೌದು. ಅದೂ ನಿಜ. ವೇದ (ಕರ್ಮಕಾಂಡದ) ಮೀಮಾಂಸಾ ಮತಕ್ಕೂ ವೇದಾಂತ ಮತಕ್ಕೂ
ಹೀಗೆಯೇ ವಿರೋಧ- ಪ್ರೀತಿಗಳ ಸಂಬಂಧವಿತ್ತು. ಹಲವು ದಾರ್ಶನಿಕ ವಿವಾದಗಳಿದ್ದವು.<br />
{{gap}}ದಾರ್ಶನಿಕ ಕ್ಷೇತ್ರದಲ್ಲಿ ಇಂತಹ ದ್ವಂದ್ವಗಳ ಹಲವು ದೃಷ್ಟಾಂತಗಳಿವೆ. ಜ್ಞಾನ-ಜ್ಞೆಯ
ಆಕಾಶಗಳಲ್ಲಿ ಧರ್ಮ (ಧಮ್ಮ) ಬುದ್ಧ ಶಬ್ದ ಮೇಳೈಸಿ ವೇದಾಂತದ ವ್ಯಾಖ್ಯಾನದಲ್ಲಿ
ಅದನ್ನು ನೇರವಾಗಿ ಹೇಳಿದ ಗೌಡಪಾದಾಚಾರ್ಯರ ಧೈರ್ಯ ಔದಾರ್ಯಗಳು ದೊಡ್ಡವು.<br />
{{gap}}ಭಗವಾನ್ ಗೌತಮ ಬುದ್ಧನ ಆವಿರ್ಭವ ಕಾಲವು (ಕ್ರಿ.ಪೂ. ಆರನೇ ಶತಮಾನ)
ಭಾರತದಲ್ಲಿ ಧರ್ಮ ಮತ್ತು ದರ್ಶನಗಳು ಬೆಳವಣಿಗೆಯ ಒಂದು ದೊಡ್ಡ ಘಟ್ಟವನ್ನು
ತಲುಪಿದ ಕಾಲ. ಬಹುಶಃ ಸಮಗ್ರ ವೇದಗಳು ಪ್ರಧಾನ ಉಪನಿಷತ್ತುಗಳು. ಭಗವದ್ಗೀತೆ,
ಸಾಂಖ್ಯ ಯೋಗಗಳು, ಮೀಮಾಂಸಾ ನ್ಯಾಯ ದರ್ಶನಗಳ ಆರಂಭಿಕ ಹಂತವೂ ಆಗಲೇ
ರೂಪಿತವಾಗಿ ಸ್ಥಾಪಿತವಾಗಿರಬೇಕು. ಜೈನ (ಅರ್ಹತ) ಮಾರ್ಗವು ಅದಾಗಲೇ ಪ್ರಸಿದ್ಧವಾಗಿ
ಸ್ಥಾಪಿತವಾಗಿತ್ತು. ತೀರ್ಥಂಕರ ಪಾರ್ಶ್ವನಾಥ (ಕ್ರಿ.ಪೂ. ೮೫೦)ರವರೆಗೆ ೨೩
ಜೈನಾಚಾರ್ಯರಿದ್ದರು. ಭಗವಾನ್ ಮಹಾವೀರನು ಬುದ್ಧನ ಹಿರಿಯ ಸಮಕಾಲೀನ.
“ಬಹುಶಃ ತರುಣ ಬುದ್ಧನು ಮಹಾವೀರನನ್ನು ಭೇಟಿ ಆಗಿರಬಹುದು' (ಓಶೋ ರಜನೀಶ್)<br />
{{gap}}ವೇದದೊಳಗೆಯ ವಿಸ್ತಾರವಾದ ಪಂಥ ವೈವಿಧ್ಯದ ಸೂಚನೆಗಳಿವೆ. ಅದರ ಸಮನ್ವಯವೇ
ಪ್ರಾಯಶಃ 'ಏಕಂ ಸದ್ವಿಪ್ರಾ ಬಹುಧಾವದಂತಿ' (ಇರುವ ಒಂದೇ ಸತ್ಯ/ ದೇವಸತ್ತ್ವವನ್ನು ತಿಳಿದವರು
ಬೇರೆ ಹೆಸರುಗಳಿಂದ ಹೇಳುತ್ತಾರೆ ಎಂಬ ಮಹಾನ್ ಉಕ್ತಿ) ವೇದಾಂತ (ಉಪನಿಷತ್ತುಗಳು)ದಲ್ಲಿ
ಕರ್ಮಕಾಂಡ ನಿಂದೆ, ಕರ್ಮವಾದಿಗಳಿಂದ ವೇದಾಂತದ ನಿಂದೆ ನಡೆದಿತ್ತು.<br />
{{gap}}ಮಹಾವೀರನ ಹಿಂದೆ ೨೩ ತೀರ್ಥಂಕರರ ಪರಂಪರೆ ಇದ್ದ ಹಾಗೆ ಬುದ್ಧನ ಹಿಂದೆಯೂ
೨೭ರಷ್ಟು ಬುದ್ಧರಿದ್ದರೆಂಬ (ಕ್ರತುಚಂದ, ಕನಕಮುನಿ, ನಾರದ, ಕಾಶ್ಯಪ ಇತ್ಯಾದಿ)
ಪರಂಪರೆಯಿದೆ. ವೇದದ ಆಚರಣೆಗಳು- ಹಿಂಸಾಪರ, ಸಂಕೀರ್ಣ ಮತ್ತು
ವರ್ಗಸೀಮಿತವಾಗತೊಡಗಿದ್ದವು. ಯಜ್ಞವೆಂಬುದರ ಸಾಮೂಹಿಕ ಆಚರಣೆ ಸಾರ್ವತ್ರಿಕ
ಹಿತದ ಕಲ್ಪನೆ ಮರೆಯಾಗಲಾರಂಭಿಸಿತ್ತು.<br />
{{gap}}ಸೃಜನಶೀಲ ದೃಷ್ಟಿ ಜತೆಗೆ ತಾತ್ವಿಕ ಕ್ಷೇತ್ರದಲ್ಲಿ ತಳಮಳಗಳು, ನೂತನ ಕಲ್ಪನೆಗಳು
ಕಾಣಿಸಿಕೊಂಡಿದ್ದವು. ಆಜೀವಕ, ಆಕ್ರಿಯಾವಾದ, ಸಂದೇಹವಾದ, ಸ್ಯಾದ್ವಾದ (ಅರ್ಹತ,
ಜಿನಮತ) ಮೊದಲಾದವು ಒಂದೆಡೆ, ಚಾರ್ವಾಕ ಪಂಥದ ವಿವಿಧ ಮುಖಗಳು ಒಂದೆಡೆ<br/>
{{center|'''ಡಾ.ಎಂ. ಪ್ರಭಾಕರ ಜೋಶಿ/ ೪೦'''}}<noinclude></noinclude>
qx8comgcdh0yw82hsee6lx86nqhi06t
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೨೬
104
99582
321597
278992
2026-05-21T09:05:20Z
Pragathi. BH
7585
/* Validated */
321597
proofread-page
text/x-wiki
<noinclude><pagequality level="4" user="Pragathi. BH" /></noinclude>ಇನ್ನು ಕೆಲವೊಮ್ಮೆ ಅಪೂರ್ವ ಘಟನೆಗಳಿಗೆ ಪ್ರತಿಕ್ರಿಯೆಯೋ ಎಂಬಂತೆ ಪತ್ರಿಕೆಗಳ ವಾಚಕರವಿಭಾಗಕ್ಕೆ ಪುಟ್ಟ ಪುಟ್ಟ ಪತ್ರ ಬರೆಯುತ್ತಾರೆ. ಹೀಗೆ ಅವರು ಬರೆದಿರುವ ಪತ್ರಗಳ ಸಂಗ್ರಹವೇಒಂದು ಕೃತಿಯಾದೀತು.
{{gap}}ಮಾಧ್ಯಮಗಳಲ್ಲಿ ಬಳಕೆಯಾಗುವ ಭಾಷಾ ಪ್ರಯೋಗದ ಬಗ್ಗೆ ಜೋಶಿಯವರಲ್ಲಿ
ತೀವ್ರ ಅಸಹನೆಯಿದೆ. ಚುನಾವಣಾ ರಣತಂತ್ರ ರಣರಂಗ, ಚುನಾವಣಾ ಕಣ ಮೊದಲಾದ
ಪ್ರಚೋದನಕಾರಿ ಪದಪ್ರಯೋಗಗಳು ತಪ್ಪು ಎನ್ನುವುದು ಅವರ ಅಭಿಪ್ರಾಯ. ಹಿರಿಯ
ಪತ್ರಕರ್ತ ಅರ್ಣಬ್ ಗೋಸ್ವಾಮಿಯಿಂದ ಹಿಡಿದು ಕನ್ನಡ ಟಿವಿ ಲೋಕದ ಚರ್ಚಾ
ಕಾರ್ಯಕ್ರಮಗಳನ್ನೂ ಚಿಕಿತ್ಸಕ ನೋಟದಿಂದ ಕಾಣುವ ಜೋಶಿ, ಸುದ್ದಿಯನ್ನು ಕೇವಲ
ಸುದ್ದಿಯಾಗಿ ಮಾತ್ರ ಜನರ ಮುಂದಿಡಬೇಕು ಎಂಬ ನಿಲುವಿನವರು. ಆ ನಿಟ್ಟಿನಲ್ಲಿ ಬಿಬಿಸಿ
ವಾಹಿನಿಯ ವಾರ್ತೆಗಳ ಬಗೆಗೆ ಅವರ ಮೆಚ್ಚುಗೆಯಿದೆ.
{{center|'''ಲೇಖಕ, ಸಂಶೋಧಕ, ಅಂಕಣಕಾರ'''}}
'''ಜೋಶಿಯವರ ಪ್ರಕಟಿತ ಕೃತಿಗಳು:''' ಜಾಗರ, ಕೇದಗೆ, ಮಾರುಮಾಲೆ, ಪ್ರಸ್ತುತ, ಯಕ್ಷಗಾನ
ಪದಕೋಶ, ಭಾರತೀಯ ತತ್ತ್ವಶಾಸ್ತ್ರ, ತಾಳಮದ್ದಲೆ, ವಾಗರ್ಥ, ಕೃಷ್ಣಸಂಧಾನ: ಪ್ರಸಂಗ
ಮತ್ತು ಪ್ರಯೋಗ, ಮುಡಿ, ಮಂದಾರ ಕೇಶವ ಬಟ್ರ್(ಪರಿಚಯ - ತುಳು), ಗುರ್ತ
(ತುಳು ಕವಿತೆಗಳು), ಪಂಡಿತ ಪೆರ್ಲ ಕೃಷ್ಣಭಟ್ಟ, ಯಕ್ಷಗಾನ ಸ್ಥಿತಿಗತಿ.
{{gap}}'''ಸಹ ಕರ್ತೃಕ''' : ಮಣೇಲ್ ಶ್ರೀನಿವಾಸ ನಾಯಕರು: ಜೀವನ ಪರಿಚಯ (ಎನ್. ಮಾಧವಾ
ಚಾರ್ಯರೊಂದಿಗೆ), ಭಾರತೀಯ ತತ್ತ್ವಶಾಸ್ತ್ರ ಪರಿಚಯ (ಪ್ರೊ.ಎಂ.ಎ. ಹೆಗಡೆ
ಯವರೊಂದಿಗೆ), ಭಾರತೀಯ ತತ್ತ್ವಶಾಸ್ತ್ರ ಪ್ರವೇಶ (ಪ್ರೊ.ಎಂ.ಎ. ಹೆಗಡೆಯವರೊಂದಿಗೆ),
ಕುಮಾರಿಲ ಭಟ್ಟ (ಪ್ರೊ. ಎಂ.ಎ. ಹೆಗಡೆಯವರೊಂದಿಗೆ), ದಕ್ಷಿಣ ಕನ್ನಡ (ಗುರುರಾಜ
ಮಾರ್ಪಳ್ಳಿಯವರೊಂದಿಗೆ), ಹಾಜಿ ಅಬ್ದುಲ್ಲಾ (ಪ್ರೊ. ಮುರಳೀಧರ ಉಪಾಧ್ಯ,
ಹಿರಿಯಡ್ಕರೊಂದಿಗೆ).
{{gap}}'''ಸಂಪಾದಿತ''' : ಅರ್ಥಗಾರಿಕೆ: ಸ್ವರೂಪ ಸಮೀಕ್ಷೆ, ಯಕ್ಷಗಾನ ಚಿಂತನ, ಕುಕ್ಕಿಲ ಸಂಪುಟ
{{gap}}'''ಸಂಪಾದಿತ-ಇತರರೊಂದಿಗೆ :''' ಯಕ್ಷಗಾನ ಮಕರಂದ (ಪೊಳಲಿ ಶಾಸ್ತ್ರಿ ಸಂಸ್ಮರಣಾ ಗ್ರಂಥ),
ಯಕ್ಷಕರ್ದಮ (ಪದವೀಧರ ಯಕ್ಷಗಾನ ಸಮಿತಿ, ಮುಂಬೈ, ಸಮ್ಮೇಳನ ಸಂಕಲನ), ಗಾನಕೋಗಿಲೆ
(ಭಾಗವತ ದಾಮೋದರ ಮಂಡೆಚ್ಚ ಸಂಸ್ಮರಣ ಗ್ರಂಥ), ಸ್ವರ್ಣರೇಖೆ, Vision 21st century (ಕರ್ನಾಟಕ ರಾಜ್ಯ ಸ್ವರ್ಣ ಮಹೋತ್ಸವ ನೆನಪಿನ ಲೇಖನ ಸಂಕಲನಗಳು), ಪೊಲಿ (ಕೆನರಾ ಜಿಲ್ಲೆ ಶತಮಾನ-ಸಂಪುಟ), ಕುಬಣೂರು ಸ್ಮೃತಿ (ಕುಬಣೂರು ಬಾಲಕೃಷ್ಣರಾವ್ ಸ್ಮೃತಿ ಗ್ರಂಥ),
ರಂಗ ವೆಂಕಟ (ಪಣಂಬೂರು ವೆಂಕಟರಾಯ ಐತಾಳ ಸಂಸ್ಮರಣಗ್ರಂಥ),
ದಿವಾಣ ಸಂಪದ (ದಿವಾಣ ಭೀಮ ಭಟ್ಟ), ಮೂಡಂಬೈಲು ಶಾಸ್ತ್ರಿ-೭೫ (ಅಭಿನಂದನ
ಗ್ರಂಥ), ಶೇಣಿ ಪ್ರಸಂಗ, ಶ್ರೀಮಯ ಅಮೃತ ಸಿಂಚನ (ಶ್ರೀ ಇಡಗುಂಜಿ ಮೇಳ- ೭೫
ಸಂಪುಟ), ಶ್ರೀಮಯ ಅಮೃತ ಸಿಂಚನ (ಶ್ರೀ ಇಡಗುಂಜಿ ಮೇಳ- ೮೦ ಸಂಪುಟ)
'''ಇತರ''' : ಬಿಡಿ ಬರಹಗಳು, ಕವಿತೆಗಳು, ವಿಚಾರ ಪತ್ರಗಳು.
{{center|'''ಡಾ.ಎಂ. ಪ್ರಭಾಕರ ಜೋಶಿ/೨೧'''}}<noinclude></noinclude>
mdxwq6tyv1a5a2ddh6aa4ykunge17qs
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೪೧
104
99584
321636
278987
2026-05-21T11:17:13Z
Pragathi. BH
7585
/* Validated */
321636
proofread-page
text/x-wiki
<noinclude><pagequality level="4" user="Pragathi. BH" /></noinclude>ಪೆಟ್ಟು ಬಿದ್ದ ಮೇಲೇ ಗೊತ್ತಾಗುವುದು' ಅಂತ ಸ್ಪೋರ್ಟಿವ್ ಆಗಿಯೇ
ಉತ್ತರ ಕೊಟ್ಟಿದ್ದರು..<br />
{{gap}}ವಿಚಿತ್ರ ಅಂದರೆ ಈ ಘಟನೆ ನಡೆದ ಬಳಿಕ ಆ ಪ್ರದೇಶದ ಒಂದಿಬ್ಬರು ಕಲಾಭಿಮಾನಿಗಳು ೧೦-೧೫ ವರ್ಷ ಕಾಲ ನನ್ನ ಜೊತೆ ಮಾತಾಡುತ್ತಿರಲಿಲ್ಲ.<br />
{{gap}} ಇನ್ನೊಂದು ಘಟನೆ- ಒಂದೇ ದಿನ ಎರಡು ಪ್ರಸಂಗ -ಸುಧನ್ವ ಕಾಳಗ ಮತ್ತು ರಾವಣ ವಧೆ. ಎರಡರಲ್ಲೂ ಸುಧನ್ವ ಮತ್ತು ರಾವಣ ಶೇಣಿಯವರದ್ದು. ತಾಳಮದ್ದಲೆ
ಯುದ್ದಕ್ಕೂ ಎಂಟು ಗಂಟೆ ಅವರು ರಂಗದಲ್ಲಿರಬೇಕು. ಪುರುಸೊತ್ತೇ ಇಲ್ಲ. ಶೇಣಿಯವರ
ಅರ್ಥಗಾರಿಕೆ ಸ್ವಭಾವತಃ ಸ್ವಲ್ಪ ದೀರ್ಘ. ಅವರಿಗೆ ಸುಧನ್ವ ಮತ್ತು ರಾವಣ ಕೊಟ್ಟರೆ
ಪ್ರಸಂಗ ಮುಗಿಯಲಾರದು. ಬೇರೆ ಕಲಾವಿದರಿದ್ರು, ಬೇರೆ ಅರ್ಥ ಕೊಡಬಹುದಿತ್ತು.
ಅದನ್ನೇ ಸಂಘಟಕರ ಬಳಿ ಹೇಳಿದ್ದೆ.<br />
{{gap}}ನನಗೆ ಪಾತ್ರ ಸಣ್ಣದಾಗುತ್ತದೆ. ಒಳ್ಳೆಯ ಪಾತ್ರ ಕೊಡಬೇಕು ಅಂತ ಹೇಳಿದ್ದೇ ಅಲ್ಲ.ಅರ್ಜುನ ಕೊಟ್ಟಿದ್ದಾರೆ, ಅದೇನೂ ಸಣ್ಣದಲ್ಲ.<br />
{{gap}} ಹಾಗೆಯೇ ಆಯಿತು. ಅಂದು ೮ ಗಂಟೆ ಕಳೆದರೂ ಸುಧನ್ವಾರ್ಜುನವೇ ಮುಗಿಯಲಿಲ್ಲ.
ರಾವಣ ವಧೆ ಬಿಡಿ- ದೊಡ್ಡ ಕಲಾವಿದರ ಕೂಟ ...ಮುಗಿಯಲಾರದ ಪ್ರಸಂಗಗಳು...<br />
{{gap}} ಇಂಥ ಐದಾರು ಘಟನೆಗಳು ನಡೆದವು. ನಾನೇ ಒಂದು ಸೈದ್ಧಾಂತಿಕ ನಿಲುವಿಗೆ
ಬಂದೆ. ಶೇಣಿ ಜೊತೆಗೆ ಅರ್ಥ ಹೇಳುವುದನ್ನೇ ಬಿಟ್ಟೆ. ಸತತ ನಾಲ್ಕು ವರ್ಷ ಕಾಲ ಈ
ನಿಲುವು ಚಾಲ್ತಿಯಲ್ಲಿತ್ತು. ಆದರೆ ಆ ಅವಧಿಯಲ್ಲಿ ಶೇಣಿಯವರ ಅರ್ಥ ಕೇಳಲಿಕ್ಕೆ ನಾನು
ಹೋಗಿದ್ದೇನೆ. ಅವರನ್ನು ಕರೆದೊಯ್ದು ನಾನು ತಾಳಮದ್ದಲೆ ಕೂಟ ಸಂಘಟಿಸಿದ್ದೇನೆ.
ವೈಯಕ್ತಿಕ ದ್ವೇಷ ಏನೂ ಇರಲಿಲ್ಲ. ಅವರ ಮಕ್ಕಳು, ಮೊಮ್ಮಕ್ಕಳ ಮದುವೆ, ಉಪನಯನಗಳಿಗೆ
ಹೋಗಿದ್ದೇನೆ- ಗಮನಿಸಬೇಕು, ಶೇಣಿಯವರ ಖಾಸಗಿ ಕಾರ್ಯಕ್ರಮಗಳಿಗೆ ಅವರಿಂದ
ಕರೆ ಸ್ವೀಕರಿಸುತ್ತಿದ್ದ ಕೇವಲ ಎರಡು ಮೂರು ಸಹ ಕಲಾವಿದರ ಪೈಕಿ ನಾನೂ ಒಬ್ಬ.<br />
{{gap}} ಈ ರಂಗ ಮುನಿಸಿನಿಂದ ಅನೇಕ ಕಲಾವಿದರಿಗೆ ತೊಂದರೆ ಆಯಿತು. ಕೊನೆಗೆ
ಸುರತ್ಕಲ್ನ ರಮಾನಾಥ ರಾಯರು, ದಾಮೋದರ ಮಂಡೆಚ್ಚರು ಮತ್ತು ಕುಂಬಳೆ
ಸುಂದರರಾಯರ ನೇತೃತ್ವದಲ್ಲಿ ಪೇಜಾವರ ಶಾಲೆಯಲ್ಲಿ ನಡೆದ ತಾಳಮದ್ದಲೆಯಲ್ಲಿ ನಮ್ಮನ್ನು
ರಾಜಿ ಮಾಡಿಸಿದರು. ಆ ದಿನ ಮತ್ತದೇ ಸುಧನ್ವಾರ್ಜುನ. ಶೇಣಿ ಸುಧನ್ವನಾದರೆ ನಾನು
ಅರ್ಜುನ., ಅಂದು ಕೇವಲ ಸುಧನ್ವಾರ್ಜುನ ಸಂವಾದವೇ ೨-೨ವರೆ ಗಂಟೆ ನಡೆದಿತ್ತು.
ಯಾವ ಘರ್ಷಣೆಯೂ ಇರಲಿಲ್ಲ. ಶೇಣಿ ಅಷ್ಟು ಚೆನ್ನಾಗಿ ಅರ್ಥ ಹೇಳಿದ್ದರು.<br />
{{gap}} ಶೇಣಿಯವರ ನೂರಾರು ಆಟ ನೋಡಿದ್ದೇನೆ. ಅರ್ಥ ಕೇಳಿದ್ದೇನೆ. ಅವರಿದ್ದ ತಾಳಮದ್ದಲೆಗೆ
ಹೋಗುವುದೇ ಒಂದು ಲಾಭ, ಶೇಣಿಯವರ ಅರ್ಥ ದೀರ್ಘವಾದರೂ ಒಂದು ಶ್ರೇಷ್ಠತೆ
ಇತ್ತು. ಶೇಣಿ-ಸಾಮಗರು ಹಿಂದಿನ ಅರ್ಥ ಪರಂಪರೆಯನ್ನು ಮುಂದುವರಿಸಿದವರಲ್ಲ.
ಅದೊಂದು ಲಂಘನ. ಅಡಿಗರ ಕಾವ್ಯದ ಹಾಗೆ, ಅನಂತಮೂರ್ತಿಯವರ ಕಾದಂಬರಿಯ
ಹಾಗೆ ಶೇಣಿ ಅರ್ಥಗಾರಿಕೆ...'<br />
{{gap}} ಇದು ಪ್ರಭಾಕರ ಜೋಶಿ ಸ್ವಭಾವ ಮತ್ತು ಶ್ರೇಷ್ಠತೆ. ಬದುಕಿನುದ್ದಕ್ಕೂ ಒಂದು ಸೈದ್ಧಾಂತಿಕ
ಲುವಿಗೆ ಬದ್ಧರಾದವರು. ಅಭಿಮಾನಿಗಳ ಅತಿರೇಕದ ವರ್ತನೆ ಕಲಾ ಪರಂಪರೆಗೇ
{{Right|'''ಡಾ.ಎಂ. ಪ್ರಭಾಕರ ಜೋಶಿ / ೩೬
'''}}<noinclude></noinclude>
a1c37xcpw8fksem35awphlalbj0ulmk
321637
321636
2026-05-21T11:17:42Z
Pragathi. BH
7585
321637
proofread-page
text/x-wiki
<noinclude><pagequality level="4" user="Pragathi. BH" /></noinclude>ಪೆಟ್ಟು ಬಿದ್ದ ಮೇಲೇ ಗೊತ್ತಾಗುವುದು' ಅಂತ ಸ್ಪೋರ್ಟಿವ್ ಆಗಿಯೇ
ಉತ್ತರ ಕೊಟ್ಟಿದ್ದರು..<br />
{{gap}}ವಿಚಿತ್ರ ಅಂದರೆ ಈ ಘಟನೆ ನಡೆದ ಬಳಿಕ ಆ ಪ್ರದೇಶದ ಒಂದಿಬ್ಬರು ಕಲಾಭಿಮಾನಿಗಳು ೧೦-೧೫ ವರ್ಷ ಕಾಲ ನನ್ನ ಜೊತೆ ಮಾತಾಡುತ್ತಿರಲಿಲ್ಲ.<br />
{{gap}} ಇನ್ನೊಂದು ಘಟನೆ- ಒಂದೇ ದಿನ ಎರಡು ಪ್ರಸಂಗ -ಸುಧನ್ವ ಕಾಳಗ ಮತ್ತು ರಾವಣ ವಧೆ. ಎರಡರಲ್ಲೂ ಸುಧನ್ವ ಮತ್ತು ರಾವಣ ಶೇಣಿಯವರದ್ದು. ತಾಳಮದ್ದಲೆ
ಯುದ್ದಕ್ಕೂ ಎಂಟು ಗಂಟೆ ಅವರು ರಂಗದಲ್ಲಿರಬೇಕು. ಪುರುಸೊತ್ತೇ ಇಲ್ಲ. ಶೇಣಿಯವರ
ಅರ್ಥಗಾರಿಕೆ ಸ್ವಭಾವತಃ ಸ್ವಲ್ಪ ದೀರ್ಘ. ಅವರಿಗೆ ಸುಧನ್ವ ಮತ್ತು ರಾವಣ ಕೊಟ್ಟರೆ
ಪ್ರಸಂಗ ಮುಗಿಯಲಾರದು. ಬೇರೆ ಕಲಾವಿದರಿದ್ರು, ಬೇರೆ ಅರ್ಥ ಕೊಡಬಹುದಿತ್ತು.
ಅದನ್ನೇ ಸಂಘಟಕರ ಬಳಿ ಹೇಳಿದ್ದೆ.<br />
{{gap}}ನನಗೆ ಪಾತ್ರ ಸಣ್ಣದಾಗುತ್ತದೆ. ಒಳ್ಳೆಯ ಪಾತ್ರ ಕೊಡಬೇಕು ಅಂತ ಹೇಳಿದ್ದೇ ಅಲ್ಲ.ಅರ್ಜುನ ಕೊಟ್ಟಿದ್ದಾರೆ, ಅದೇನೂ ಸಣ್ಣದಲ್ಲ.<br />
{{gap}} ಹಾಗೆಯೇ ಆಯಿತು. ಅಂದು ೮ ಗಂಟೆ ಕಳೆದರೂ ಸುಧನ್ವಾರ್ಜುನವೇ ಮುಗಿಯಲಿಲ್ಲ.
ರಾವಣ ವಧೆ ಬಿಡಿ- ದೊಡ್ಡ ಕಲಾವಿದರ ಕೂಟ ...ಮುಗಿಯಲಾರದ ಪ್ರಸಂಗಗಳು...<br />
{{gap}} ಇಂಥ ಐದಾರು ಘಟನೆಗಳು ನಡೆದವು. ನಾನೇ ಒಂದು ಸೈದ್ಧಾಂತಿಕ ನಿಲುವಿಗೆ
ಬಂದೆ. ಶೇಣಿ ಜೊತೆಗೆ ಅರ್ಥ ಹೇಳುವುದನ್ನೇ ಬಿಟ್ಟೆ. ಸತತ ನಾಲ್ಕು ವರ್ಷ ಕಾಲ ಈ
ನಿಲುವು ಚಾಲ್ತಿಯಲ್ಲಿತ್ತು. ಆದರೆ ಆ ಅವಧಿಯಲ್ಲಿ ಶೇಣಿಯವರ ಅರ್ಥ ಕೇಳಲಿಕ್ಕೆ ನಾನು
ಹೋಗಿದ್ದೇನೆ. ಅವರನ್ನು ಕರೆದೊಯ್ದು ನಾನು ತಾಳಮದ್ದಲೆ ಕೂಟ ಸಂಘಟಿಸಿದ್ದೇನೆ.
ವೈಯಕ್ತಿಕ ದ್ವೇಷ ಏನೂ ಇರಲಿಲ್ಲ. ಅವರ ಮಕ್ಕಳು, ಮೊಮ್ಮಕ್ಕಳ ಮದುವೆ, ಉಪನಯನಗಳಿಗೆ
ಹೋಗಿದ್ದೇನೆ- ಗಮನಿಸಬೇಕು, ಶೇಣಿಯವರ ಖಾಸಗಿ ಕಾರ್ಯಕ್ರಮಗಳಿಗೆ ಅವರಿಂದ
ಕರೆ ಸ್ವೀಕರಿಸುತ್ತಿದ್ದ ಕೇವಲ ಎರಡು ಮೂರು ಸಹ ಕಲಾವಿದರ ಪೈಕಿ ನಾನೂ ಒಬ್ಬ.<br />
{{gap}} ಈ ರಂಗ ಮುನಿಸಿನಿಂದ ಅನೇಕ ಕಲಾವಿದರಿಗೆ ತೊಂದರೆ ಆಯಿತು. ಕೊನೆಗೆ
ಸುರತ್ಕಲ್ನ ರಮಾನಾಥ ರಾಯರು, ದಾಮೋದರ ಮಂಡೆಚ್ಚರು ಮತ್ತು ಕುಂಬಳೆ
ಸುಂದರರಾಯರ ನೇತೃತ್ವದಲ್ಲಿ ಪೇಜಾವರ ಶಾಲೆಯಲ್ಲಿ ನಡೆದ ತಾಳಮದ್ದಲೆಯಲ್ಲಿ ನಮ್ಮನ್ನು
ರಾಜಿ ಮಾಡಿಸಿದರು. ಆ ದಿನ ಮತ್ತದೇ ಸುಧನ್ವಾರ್ಜುನ. ಶೇಣಿ ಸುಧನ್ವನಾದರೆ ನಾನು
ಅರ್ಜುನ., ಅಂದು ಕೇವಲ ಸುಧನ್ವಾರ್ಜುನ ಸಂವಾದವೇ ೨-೨ವರೆ ಗಂಟೆ ನಡೆದಿತ್ತು.
ಯಾವ ಘರ್ಷಣೆಯೂ ಇರಲಿಲ್ಲ. ಶೇಣಿ ಅಷ್ಟು ಚೆನ್ನಾಗಿ ಅರ್ಥ ಹೇಳಿದ್ದರು.<br />
{{gap}} ಶೇಣಿಯವರ ನೂರಾರು ಆಟ ನೋಡಿದ್ದೇನೆ. ಅರ್ಥ ಕೇಳಿದ್ದೇನೆ. ಅವರಿದ್ದ ತಾಳಮದ್ದಲೆಗೆ
ಹೋಗುವುದೇ ಒಂದು ಲಾಭ, ಶೇಣಿಯವರ ಅರ್ಥ ದೀರ್ಘವಾದರೂ ಒಂದು ಶ್ರೇಷ್ಠತೆ
ಇತ್ತು. ಶೇಣಿ-ಸಾಮಗರು ಹಿಂದಿನ ಅರ್ಥ ಪರಂಪರೆಯನ್ನು ಮುಂದುವರಿಸಿದವರಲ್ಲ.
ಅದೊಂದು ಲಂಘನ. ಅಡಿಗರ ಕಾವ್ಯದ ಹಾಗೆ, ಅನಂತಮೂರ್ತಿಯವರ ಕಾದಂಬರಿಯ
ಹಾಗೆ ಶೇಣಿ ಅರ್ಥಗಾರಿಕೆ...'<br />
{{gap}} ಇದು ಪ್ರಭಾಕರ ಜೋಶಿ ಸ್ವಭಾವ ಮತ್ತು ಶ್ರೇಷ್ಠತೆ. ಬದುಕಿನುದ್ದಕ್ಕೂ ಒಂದು ಸೈದ್ಧಾಂತಿಕ
ಲುವಿಗೆ ಬದ್ಧರಾದವರು. ಅಭಿಮಾನಿಗಳ ಅತಿರೇಕದ ವರ್ತನೆ ಕಲಾ ಪರಂಪರೆಗೇ
{{Center|'''ಡಾ.ಎಂ. ಪ್ರಭಾಕರ ಜೋಶಿ / ೩೬
'''}}<noinclude></noinclude>
bh1ce7aj359opk8jxk6g6nz33er5cxb
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೩೧
104
99585
321598
278991
2026-05-21T09:05:55Z
Pragathi. BH
7585
/* Validated */
321598
proofread-page
text/x-wiki
<noinclude><pagequality level="4" user="Pragathi. BH" /></noinclude>ಆಶೋತ್ತರಗಳಿಗೂ ವಿಮರ್ಶೆಯ ಸಾಲುಗಳ ನಡುವೆ ಜಾಗವಿತ್ತವರು. 'ವಿಚಲನೆಯ
ದೌರ್ಭಾಗ್ಯ- ಹರಕೆ ಬಯಲಾಟಗಳು' ಎಂಬ ತಮ್ಮದೊಂದು ಲೇಖನದಲ್ಲಿ ಕಲಾವಿದನ ಗೋಳಿನ ಕುರಿತು ಜೋಶಿ ಹೀಗೆ ಬರೆಯುತ್ತಾರೆ:
{{gap}}'... ಈ ಎಲ್ಲದರ ಮಧ್ಯೆ ವೇತನಕ್ಕಾಗಿ ದುಡಿಯುವ ಕಲಾವಿದ ಅಸಹಾಯಕ. ಆತನು ಹೆಸರಿಗೆ ಮಾತ್ರ ಕ್ಷೇತ್ರದ ಉದ್ಯೋಗಿ. ನಿಜದಲ್ಲಿ ಮೇಳದ ಯಜಮಾನನ ಉದ್ಯೋಗಿ. ಹರಕೆದಾರನ ದಾಕ್ಷಿಣ್ಯ ಯಜಮಾನರಿಗೂ ಕಲಾವಿದರಿಗೂ ಉಂಟು. ಈ ಮಧ್ಯೆ ಬೇಂಡು- ಸಿಡಿಮದ್ದುಗಳಿಂದ ಕಲಾವಿದನಿಗಿರುವ ಮಾನಸಿಕ, ಶಾರೀರಿಕ ಹಿಂಸೆ ವರ್ಣಿಸಲಸದಳ, ಬೇಂಡು, ಸಿಡಿ ಮದ್ದುಗಳು ಕಲಾವಿದನ ರಂಗದ ಕೆಲಸಕ್ಕೆ ಮಾರಕ. ನಿತ್ಯ ದೊಡ್ಡ ಶಬ್ದ ಹೊಗೆಗಳಿಂದ ಕಣ್ಣು, ಕಿವಿ, ತಮ್ಮಟೆಗಳಿಗೆ ಹಾನಿ. ಚೌಕಿಯಲ್ಲಿ ವೇಷ ವರ್ಣಿಕೆ ಮಾಡುವಾಗ
ಶಬ್ದವಾದರೆ ಬಣ್ಣದ ಕಡ್ಡಿ ಕಣ್ಣು, ಮೂಗಿಗೆ. ಭಾಗವತನ ಶ್ರುತಿಗೆ ಬಾಧಕ. ರಂಗದ ಕೆಲಸ ಹೊಂದಿಸಿ ತುಸು ನಿದ್ರೆ ಮಾಡೋಣ ಅಂದರೆ ಗಲಾಟೆ, ಸದಾ ವಿಚಲನೆಯ ವ್ಯಸನ. ಆಟ ರೈಸುವುದರಿಂದ ಅವರಿಗಾಗುವ ಮೂಕವೇದನೆಯನ್ನು ಕೇಳುವವರಿಲ್ಲ...'
{{gap}}ಇದು ಡಾ. ಪ್ರಭಾಕರ ಜೋಶಿಯವರ ರಂಗ ವಿಮರ್ಶೆಯ ಪರಿ.
{{center|'''ಜಗದ ವಿದ್ಯಮಾನಗಳಿಗೆ ಸ್ಪಂದಿಸುವ ಬಗೆ..'''}}
ಪ್ರಭಾಕರ ಜೋಶಿ ಜಗತ್ತಿನ ವಿದ್ಯಮಾನಗಳ ಕುರಿತು ಸದಾ ಕುತೂಹಲ ಇರಿಸಿಕೊಂಡವರು. ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಬೆಳವಣಿಗೆಗಳ ಬಗೆಗೆ ಸದಾ ಚಿಕಿತ್ಸಕ ದೃಷ್ಟಿಯಿಂದ ನೋಡುವವರು. ಅವರೊಳಗಿನ ತುಡಿತ ಹೆಚ್ಚಾದಾಗ ಅಂಥ ಘಟನೆಯ ಬಗೆಗೆ ಪತ್ರಿಕೆಗಳ ವಾಚಕರ ಅಂಕಣಕ್ಕೆ ಒಂದು ಪತ್ರ ಬರೆದು ಕಳುಹಿಸುವರು. ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಲೇಖನಗಳು, ವಿಮರ್ಶೆಗಳು, ವಾಚಕರ ಪತ್ರಗಳು ಸಾವಿರ ಸಂಖ್ಯೆಯಲ್ಲಿ ಪ್ರಕಟಗೊಂಡಿವೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಕುರಿತ ಚರ್ಚೆ ನಡೆಯುತ್ತಿದ್ದಾಗ 'ನೆಹರೂ ಟೀಕಾಕಾರನ್ನು ಬ್ರಾಂಡ್ ಮಾಡಬೇಡಿ' ಎಂಬ ಶೀರ್ಷಿಕೆಯಲ್ಲಿ ಪತ್ರಿಕೆಯೊಂದಕ್ಕೆ ಬರೆದ ಜೋಶಿಯವರ ಒಂದು ಪತ್ರ ಹೀಗಿದೆ-
{{gap}}'ರಾಷ್ಟ್ರದ ಅಭಿವೃದ್ಧಿ ಶಿಲ್ಪಿ' ಎಂದು ಬಹುಪ್ರಶಂಸೆಗೆ ಒಳಗಾಗಿರುವ ಭಾರತದ ಪ್ರಥಮ ಪ್ರಧಾನಿ ಪಂಡಿತ ನೆಹರೂ ಅವರ ಧೋರಣೆ, ಕಾರ್ಯವಿಧಾನ ಮತ್ತು ಸಾಧನೆಗಳ ಕುರಿತು ವ್ಯಾಪಕವಾದ ವಿಮರ್ಶೆಗಳು ನಡೆದಿವೆ. ಆಶ್ಚರ್ಯವೆಂದರೆ- ನೆಹರೂರವರನ್ನು ಟೀಕಿಸುವವರನ್ನು 'ಬಲಪಂಥೀಯ' ಕೋಮುವಾದಿ ಎಂದೆಲ್ಲ ಟೀಕಿಸಿ, ನೆಹರೂ ವಿಮರ್ಶಾತೀತರೆಂಬಂತೆ ಬರೆಯುವುದು, ಹದಿನೇಳು ವರ್ಷ ಅಧಿಕಾರದಲ್ಲಿದ್ದ ದೊಡ್ಡ ನಿರೀಕ್ಷೆಗಳನ್ನು ನಿರ್ಮಿಸಿದ್ದ ನೆಹರೂ ಬಗ್ಗೆ, ಹೊಗಳಿಕೆ ಇದ್ದ ಹಾಗೆ ಟೀಕೆಯೂ ತಪ್ಪೆ? ನೆಹರೂ ಟೀಕಾಕಾರರೆಲ್ಲ 'ಬಲ'ಪಂಥೀಯರೂ ಅಲ್ಲ. ಕೋಮುವಾದಿಗಳೂ ಅಲ್ಲ. ನೆಹರೂ ಕಾಲದಲ್ಲಿ, ಮಕ್ಕಳ ನೆಹರೂ ಕಾಲದಲ್ಲಿ ತೀರ ಅವಜ್ಞೆಗೊಳಗಾದ ಕ್ಷೇತ್ರಗಳಲ್ಲಿ ಪ್ರಾಥಮಿಕ ಶಿಕ್ಷಣವೂ ಒಂದು! ಶೈಕ್ಷಣಿಕ ಸುಧಾರಣೆ ಬಗೆಗೂ ನೆಹರೂ ದೊಡ್ಡ ಕ್ರಮಗಳನ್ನು ಕೈಗೊಳ್ಳಲಿಲ್ಲ. ಆರ್ಥಿಕ ನೀತಿಗಳಲ್ಲೂ ಹಾಗೆಯೇ. ೧೯೫೦ರಿಂದ ನಾವು ದಿಟ್ಟ ಆರ್ಥಿಕ ಸುಧಾರಣೆ
{{center|'''ಡಾ.ಎಂ.ಪ್ರಭಾಕರ ಜೋಶಿ | ೨೬'''}}<noinclude></noinclude>
6hordc9mpujr7x5kv252a79foee33sz
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೪೭
104
99586
321642
279003
2026-05-21T11:23:07Z
Pragathi. BH
7585
/* Validated */
321642
proofread-page
text/x-wiki
<noinclude><pagequality level="4" user="Pragathi. BH" /></noinclude>ವಿಚಾರಗಳಿಗೆ ವಿರುದ್ಧವಾಗಿ ಬೆಳೆಯಿತು. ಅದರಲ್ಲೂ ಪೂಜೆ, ಪುರಸ್ಕಾರ, ಮತಾಚರಣೆಗಳ
ದೊಡ್ಡ ಶಾಸ್ತ್ರ ವರ್ಧಿಸಿತು. ಇದೆಲ್ಲ ಕಾಲಕ್ರಮ, ಸಹಜ. ಇರಲಿ.<br/>
{{gap}}ಬುದ್ಧನು ಕಂಡ ಆರ್ಯಸತ್ಯ ಎಂದರೆ ಶ್ರೇಷ್ಠ ತಾತ್ವಿಕ ಸತ್ಯ ಶ್ರೇಷ್ಠನಾಗುವುದಕ್ಕೆ
ಅರಿಯಬೇಕಾದ ಸತ್ಯ. ಅದೇನೆಂದರೆ 'ದುಃಖ, ಲೋಕವು ದುಃಖಮಯ. ಸಮುದಯ,
ದುಃಖದ ಕಾರಣ, ಮೂಲ- 'ನಿರೋಧ'. ಕಾರಣವನ್ನು ತಡೆಯಬಹುದು ಎಂಬ ಅರಿವು
'ಮಾರ್ಗ'- ವೈರಾಗ್ಯ. ಬುದ್ಧನ ಜ್ಞಾನದ ಉಪದೇಶದಿಂದ ಜ್ಞಾನದ ಮೂಲಕ ಪರಿಹಾರ
ಮತ್ತು ದುಃಖ ಸಮಾಪ್ತಿ.ಭ್ರಾಂತಿಯನ್ನು ದೂರೀಕರಿಸುವುದು. ಇವೇ ನಾಲ್ಕು ಆರ್ಯಸತ್ಯಗಳು
ದುಃಖ, ನಿರೋಧ, ಮಾರ್ಗ, ದುಃಖ ಸಮಾಪ್ತಿ.<br/>
{{gap}}ಜಗತ್ತು ದೀಪಜ್ವಾಲೆಯಂತೆ, ನದಿಯ ಪ್ರವಾಹದಂತೆ ಕ್ಷಣಕ್ಷಣ ಪರಿವರ್ತನಶೀಲ
ಒಂದೇ ಎಂಬಂತೆ ಕಾಣುವುದು ಮಾತ್ರ.<br/>
{{gap}}ಒಂದೇ ನದಿಯಲ್ಲಿ ಎರಡು ಸಾರಿ ನಮ್ಮ ಕೈ ಮುಳುಗಿಸಲು ಅಸಾಧ್ಯ. ಕಾರಣ
ಎರಡನೇ ಬಾರಿ ಮುಳುಗುವಾಗ ಆ ನದಿ ಬೇರೆ ಆಗಿರುತ್ತದೆ. ಅಷ್ಟೇ ಅಲ್ಲ, ಒಂದೇ
ನದಿಯಲ್ಲಿ ಒಂದೇ ಕೈಯನ್ನು ಮುಳುಗಿಸಲಾಗುವುದಿಲ್ಲ. ಕಾರಣ ನದಿ ಮಾತ್ರವಲ್ಲ, ಕೈಯೂ
ಬೇರೆಯಾಗಿದೆ!! ಹೌದಲ್ಲವೆ?<br/>
{{gap}}ಝೆನ್ ಎಂಬ ಬೌದ್ಧ ಪಂಥವು ಚೀನಾದಲ್ಲಿ ಮಹಾಯಾನ ಬೌದ್ಧ ಶಾಖೆಯಾಗಿ
ಹುಟ್ಟಿ ಜಪಾನ್ ಕೊರಿಯಾ ವಿಯೆಟ್ನಾಂ, ಥಾಯ್ಲೆಂಡ್ ಮುಂತಾದ ಪೂರ್ವದೇಶಗಳಿಗೆ
ಹರಡಿದ ವಿಶಿಷ್ಟ ಪಂಥ. ಛಾನ್ ಚೀನೀ ಶಬ್ದ.ಝೆನ್ ಜಪಾನಿ ರೂಪ. ಜ್ಞಾನ - ಧ್ಯಾನಗಳಿಂದ
ಬಂದಿರಬೇಕು. ಈ ಪಂಥದ ಚಿಕ್ಕ ಚಿಕ್ಕ ಕತೆಗಳು ಝೆನ್ ಪ್ರಸಂಗಗಳೆಂದು ಹೇಳುವರು.<br/>
ಬಹಳ ಪ್ರಸಿದ್ಧ. ವಿಶ್ವ ಸಾಹಿತ್ಯದಲ್ಲೇ ಅದ್ಭುತ ಉದ್ಭವವೆಂದು ಹೆಸರಾಗಿವೆ...
{{center|ಅನುಬಂಧ-೨}}
{{center|'''ಜೋಶಿಯವರ ಅರ್ಥಗಾರಿಕೆಯ ಮಾದರಿ (ಶಲ್ಯನಾಗಿ)'''}}
ಶಲ್ಯ ಸಾರಥ್ಯ ಪ್ರಸಂಗದಲ್ಲಿ ಶಲ್ಯನಾಗಿ ಜೋಶಿಯವರ ಅರ್ಥವೈಖರಿಗೆ ಒಂದು ನಿದರ್ಶನ-<br/>
''''ಕೇಳು ಸೂತನ ತನಯನೇ ನೀನು... ಈ ಖೂಳತನಕ್ಕೆ ನಾ ಉಸುರುವುದೇನು..?'''<br/>
ಪದ್ಯಕ್ಕೆ ಶಲ್ಯನ ಅರ್ಥ.. ಖೂಳತನ ಎಂಬ ಒಂದು ಪದವನ್ನೇ ಪ್ರಭಾಕರ ಜೋಶಿ ಅರ್ಧ ತಾಸು<br/>
ವಿವರಿಸುತ್ತಾರೆ. ಜೊತೆಗೆ ಅರ್ಜುನನ ವೀರತ್ವದ ವರ್ಣನೆ.. ಕಲ್ಪನೆ, ಕಾವ್ಯವಾಗಬಲ್ಲಂಥ ಅರ್ಥ..<br/>
{{gap}}'ಕರ್ಣಾ, ನೀನು ಕರ್ಣನೂ ಹೌದು, ಸೇನಾಪತಿಯೂ ಹೌದು, ವಸುಷೇಣನೂ
ಹೌದು. ಆದರೆ ಈಗ ಸೂತಪುತ್ರ ಅಂತ ಕರೆದದ್ದು ನಿನ್ನ ಕೃತಿಗೆ, ಎಂತದಿದು....?
{{gap}}ನಿನ್ನೆ ನಕುಲಾಂಕನಿಂದ ಪರಾಭೂತನಾಗಿ ಶಿಬಿರವನ್ನು ಸೇರಿ ಪ್ರಭುವಿನಿಂದ
ಮಂಗಳಾರತಿ ಮಾಡಿಸಿಕೊಂಡವ ನೀನು. ಇವತ್ತು ನಾನು ಇಲ್ಲಿ ಕೂತಿದ್ದೇನೆ ಎಂಬುದರಿಂದಲೋ...<br/>
ಅಲ್ಲಾ ತಾನು ತರಿಸಿಕೊಂಡೆ ಅಂತಲೋ... ಎಂತದು ಮಾತಾಡಿದಿ ನೀನು..? ಸೂತರ
ಅಭ್ಯಾಸವೇ ಬಂದು ಹೋಯಿತಲ್ಲ? ಸೂತರಲ್ಲಿ ಹಾಗೊಂದು ಗುಣ ಉಂಟು. ತನ್ನನ್ನಲ್ಲ,<br/>
{{center|'''ಡಾ.ಎಂ.ಪ್ರಭಾಕರ ಜೋಶಿ / ೪೨'''}}<noinclude></noinclude>
432fj4lbrn95g85eya759gantn05ph0
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೨೫
104
99588
321595
279014
2026-05-21T09:04:04Z
Pragathi. BH
7585
/* Validated */
321595
proofread-page
text/x-wiki
<noinclude><pagequality level="4" user="Pragathi. BH" /></noinclude>ಅನ್ಯರನ್ನು ತುಳಿದರೆಂಬ ಅರ್ಥ ಬರುವಂತೆ ಬಹಳ ಜನ ಬರೆದಿದ್ದಾರೆ. ಮೇಲ್ನೋಟಕ್ಕೆ
ಹಿಡಿಸುವ, ಚಳವಳಿಗಳಿಗೆ ಅಗತ್ಯವಾದ ವಾದವಿದು. ಆದರೆ ಕ್ಷಣಿಕ ರಂಜಕ ಮತ್ತು ಅನರ್ಥಕವೇ ಸರಿ. ವೈದಿಕ (ಬ್ರಾಹ್ಮಣ?)ರನ್ನು ಹಳಿಯುವುದು, ಅವರ ವಿರುದ್ಧ ದ್ವೇಷ ಕಾರುವುದು,
ದೇಶದ ಎಲ್ಲ ಸಮಸ್ಯೆಗಳಿಗೆ ಅವರು ಕಾರಣರೆಂಬಂತೆ ಬರೆಯುವುದು, ಒಂದು ವರ್ಗದ ವಿದ್ವಾಂಸರ ನಿತ್ಯಾಭ್ಯಾಸ. ಆದರೆ ಧಾರ್ಮಿಕ ವಿನ್ಯಾಸ, ತಾರತಮ್ಯ, ಶೋಷಣೆ, ವೈದಿಕತೆ
ಇವೆಲ್ಲ ಅಷ್ಟು ಸುಲಭಕ್ಕೆ ದಕ್ಕುವ ವಿಷಯಗಳಲ್ಲ. ವೈದಿಕ ನಿಂದೆ ಸುಲಭ, ಸುಭದ್ರ ಅಷ್ಟೇ!
{{gap}}ಬಲಿಯೂ ವೈದಿಕನೇ. ವಾಮನನಿಗೆ ದಾನ ಕೊಡಬೇಡ ಎಂದು ಸಾರಿ ಸಾರಿ ಹೇಳಿದ ಶುಕ್ರಾಚಾರ್ಯನೂ ಬ್ರಾಹ್ಮಣನೇ. ವಾಮನನ ಮೂಲ ರೂಪ-ವಿಷ್ಣು. ಲಕ್ಷ್ಮೀಪತಿ,ಭೂಪತಿಯಾಗಿ ಕ್ಷತ್ರಿಯ ಲಕ್ಷಣಗಳ ದೇವರು. ಬ್ರಹ್ಮನಲ್ಲಿ ಬ್ರಾಹ್ಮಣರೂಪ, ಶಿವನಲ್ಲಿ ಸರ್ವ
ವರ್ಣಾರೂಪ ಕಾಣುತ್ತದೆ. ಬಲಿ ವಾಮನ ಶುಕ್ರ ಕಥೆಯು ಭಕ್ತಿ ವೇದಾಂತ ಎಲ್ಲ
ಮಾಂಸಾರ್ದಶನೆಗಳ, ಸುರಾಸುರ ಸಂಬಂಧಗಳ ಕಥೆ. ಉಳ್ಳವರ-ಇಲ್ಲದವರ,
ಬ್ರಾಹ್ಮಣರಿಂದಾಗುವ ಶೋಷಣೆಯ ಕಥೆ ಅಲ್ಲ. ಹತ್ತು ಅವತಾರಗಳನ್ನು ತೆಗೆದುಕೊಂಡರೆ ಪರಶುರಾಮ, ರಾಮ ಇಬ್ಬರೇ ಬ್ರಾಹ್ಮಣರು. ಉಳಿದವರು (ಮತ್ಯ, ಕೂರ್ಮ, ವರಾಹ,
ನೃಸಿಂಹ, ಕೃಷ್ಣ, ಬುದ್ಧ) ವಿವಿಧ ಮೂಲದವರು.
{{gap}}ಯಾರನ್ನು ಯಾರು ಶೋಷಣೆ ಮಾಡಿದ್ದು ಯಾವಾಗ ಎಂಬುದೂ ಮುಖ್ಯ.
'ಶೋಷಣೆ', 'ತುಳಿತ'ಗಳ ಕಥೆ ಸಂಕೀರ್ಣ. ಪ್ರಬಲರ ತುಳಿತಗಳಾದಾಗ, ಬ್ರಾಹ್ಮಣರು ರಕ್ಷಣೆ ನೀಡಿದ್ದರೇನು? ಬ್ರಾಹ್ಮಣರೇ ವಿವಿಧ ಶೋಷಣೆಗಳಿಗೆ ಒಳಗಾದುದುಂಟು. 'ಶೋಷಿತರು', 'ಇಲ್ಲದವರು'ತುಳಿತಕ್ಕೊಳಗಾದವರೆಂಬ ಜಾತಿಗಳು- ಅವರಿಂದ 'ಕೆಳಗೆ'
ಇದ್ದವರನ್ನು ನಡೆಸಿಕೊಂಡ ಕಥೆಗಳು ಪರಿಶೀಲನಾರ್ಹ.ಸ್ಪಷ್ಟವಾಗಿ ವಿಚಾರಪರರು
ಪರಾಂಬರಿಸಬೇಕು. ದ್ವೇಷ ಉರಿಗೊಳಿಸುವುದು ಬೇರೆ, ವಿಮರ್ಶೆ ಬೇರೆ.
{{gap}}ಹೌದು ನನಗೆ ಗೊತ್ತಿದೆ. ಈ ನನ್ನ ಬರಹವನ್ನು ಬಹಳ ಸುಲಭವಾಗಿ ಬ್ರಾಹ್ಮಣ್ಯ ಹುನ್ನಾರ ಎಂದು ದಮನಿಸಬಹುದು. ರೆಡಿಮೇಡ್ ಸೈದ್ಧಾಂತಿಕ ವಿಶ್ಲೇಷಣೆ ಸತ್ಯ ಸೂಕ್ಷ್ಮಗಳನ್ನು
ಗುಡಿಸಿಹಾಕುತ್ತದೆ.
<br />{{gap}}ಕ್ಲೀಷೆ, ಹಳಸಲು ಪದಪ್ರಯೋಗವನ್ನು ಪದೇಪದೇ ವಿಡಂಬಿಸುತ್ತ,ವಿರೋಧಿಸುತ್ತ
ಬಂದಿದ್ದಾರೆ ಜೋಶಿ.ಯಕ್ಷಗಾನ ಭೀಷ್ಮ, ಯಕ್ಷ ಬ್ರಹ್ಮ, ಯಕ್ಷ ಧ್ರುವತಾರೆ ಮೊದಲಾದ ಸವಕಲು ಬಿರುದು ಪ್ರದಾನಗಳ ಬಗೆಗೂ ಅವರೊಳಗೆ ತೀವ್ರ ಅಸಹನೆಯಿದೆ. ಈವರೆಗೆ
ನೂರಿನ್ನೂರು ಕಲಾವಿದರ ಬಗೆಗೆ ನಾನಾ ಪತ್ರಿಕೆಗಳಲ್ಲಿ ಲೇಖನ ಬರೆದ, ನೂರಾರು
ಅಭಿನಂದನಾ ಭಾಷಣ ಮಾಡಿರುವ ಜೋಶಿಯವರ ಈ ಅಸಹನೆಯನ್ನು ಸೈದ್ಧಾಂತಿಕವಾಗಿ ನೋಡಬೇಕಿದೆ. ತನಗೇ ಯಾರಾದರೂ ಒಂದು ಬಿರುದು ಕೊಡುವುದಾದರೆ 'ಯಕ್ಷ
ದುಶ್ಯಾಸನ' ಎಂಬ ಬಿರುದು ಕೊಡಲಿ ಎಂದು ತಮಾಷೆಯಾಗಿಯೂ ಪ್ರತಿಕ್ರಿಯಿಸುತ್ತಾರೆ.
{{gap}}ಹೊರ ಜಗತ್ತಿನ ಎಲ್ಲ ವಿದ್ಯಮಾನಗಳಿಗೂ ತಕ್ಷಣ ಸ್ಪಂದಿಸುವುದು ಜೋಶಿಯವರ ಗುಣ.ಪತ್ರಿಕೆಗಳಲ್ಲಿ ಯಕ್ಷಗಾನದ ಕುರಿತು ಏನೇ ಪ್ರಬುದ್ಧ ಚರ್ಚೆ ನಡೆದರೂ ಅಲ್ಲಿ
ಜೋಶಿಯವರದ್ದೊಂದು ಸ್ಪುಟವಾದ ನಿಶಿತ ಚಿಂತನೆಯ ಪ್ರತಿಕ್ರಿಯೆ ಬಂದೇ ಬರುತ್ತದೆ.
{{center|'''ಡಾ.ಎಂ.ಪ್ರಭಾಕರ ಜೋಶಿ /೨೦'''}}<noinclude></noinclude>
dau5vp3i8jzuy2h5eta4ju5a22twl1d
321596
321595
2026-05-21T09:04:47Z
Pragathi. BH
7585
321596
proofread-page
text/x-wiki
<noinclude><pagequality level="4" user="Pragathi. BH" /></noinclude>ಅನ್ಯರನ್ನು ತುಳಿದರೆಂಬ ಅರ್ಥ ಬರುವಂತೆ ಬಹಳ ಜನ ಬರೆದಿದ್ದಾರೆ. ಮೇಲ್ನೋಟಕ್ಕೆ
ಹಿಡಿಸುವ, ಚಳವಳಿಗಳಿಗೆ ಅಗತ್ಯವಾದ ವಾದವಿದು. ಆದರೆ ಕ್ಷಣಿಕ ರಂಜಕ ಮತ್ತು ಅನರ್ಥಕವೇ ಸರಿ. ವೈದಿಕ (ಬ್ರಾಹ್ಮಣ?)ರನ್ನು ಹಳಿಯುವುದು, ಅವರ ವಿರುದ್ಧ ದ್ವೇಷ ಕಾರುವುದು,
ದೇಶದ ಎಲ್ಲ ಸಮಸ್ಯೆಗಳಿಗೆ ಅವರು ಕಾರಣರೆಂಬಂತೆ ಬರೆಯುವುದು, ಒಂದು ವರ್ಗದ ವಿದ್ವಾಂಸರ ನಿತ್ಯಾಭ್ಯಾಸ. ಆದರೆ ಧಾರ್ಮಿಕ ವಿನ್ಯಾಸ, ತಾರತಮ್ಯ, ಶೋಷಣೆ, ವೈದಿಕತೆ
ಇವೆಲ್ಲ ಅಷ್ಟು ಸುಲಭಕ್ಕೆ ದಕ್ಕುವ ವಿಷಯಗಳಲ್ಲ. ವೈದಿಕ ನಿಂದೆ ಸುಲಭ, ಸುಭದ್ರ ಅಷ್ಟೇ!<br />
{{gap}}ಬಲಿಯೂ ವೈದಿಕನೇ. ವಾಮನನಿಗೆ ದಾನ ಕೊಡಬೇಡ ಎಂದು ಸಾರಿ ಸಾರಿ ಹೇಳಿದ ಶುಕ್ರಾಚಾರ್ಯನೂ ಬ್ರಾಹ್ಮಣನೇ. ವಾಮನನ ಮೂಲ ರೂಪ-ವಿಷ್ಣು. ಲಕ್ಷ್ಮೀಪತಿ,ಭೂಪತಿಯಾಗಿ ಕ್ಷತ್ರಿಯ ಲಕ್ಷಣಗಳ ದೇವರು. ಬ್ರಹ್ಮನಲ್ಲಿ ಬ್ರಾಹ್ಮಣರೂಪ, ಶಿವನಲ್ಲಿ ಸರ್ವ
ವರ್ಣಾರೂಪ ಕಾಣುತ್ತದೆ. ಬಲಿ ವಾಮನ ಶುಕ್ರ ಕಥೆಯು ಭಕ್ತಿ ವೇದಾಂತ ಎಲ್ಲ
ಮಾಂಸಾರ್ದಶನೆಗಳ, ಸುರಾಸುರ ಸಂಬಂಧಗಳ ಕಥೆ. ಉಳ್ಳವರ-ಇಲ್ಲದವರ,
ಬ್ರಾಹ್ಮಣರಿಂದಾಗುವ ಶೋಷಣೆಯ ಕಥೆ ಅಲ್ಲ. ಹತ್ತು ಅವತಾರಗಳನ್ನು ತೆಗೆದುಕೊಂಡರೆ ಪರಶುರಾಮ, ರಾಮ ಇಬ್ಬರೇ ಬ್ರಾಹ್ಮಣರು. ಉಳಿದವರು (ಮತ್ಯ, ಕೂರ್ಮ, ವರಾಹ,
ನೃಸಿಂಹ, ಕೃಷ್ಣ, ಬುದ್ಧ) ವಿವಿಧ ಮೂಲದವರು.<br />
{{gap}}ಯಾರನ್ನು ಯಾರು ಶೋಷಣೆ ಮಾಡಿದ್ದು ಯಾವಾಗ ಎಂಬುದೂ ಮುಖ್ಯ.
'ಶೋಷಣೆ', 'ತುಳಿತ'ಗಳ ಕಥೆ ಸಂಕೀರ್ಣ. ಪ್ರಬಲರ ತುಳಿತಗಳಾದಾಗ, ಬ್ರಾಹ್ಮಣರು ರಕ್ಷಣೆ ನೀಡಿದ್ದರೇನು? ಬ್ರಾಹ್ಮಣರೇ ವಿವಿಧ ಶೋಷಣೆಗಳಿಗೆ ಒಳಗಾದುದುಂಟು. 'ಶೋಷಿತರು', 'ಇಲ್ಲದವರು'ತುಳಿತಕ್ಕೊಳಗಾದವರೆಂಬ ಜಾತಿಗಳು- ಅವರಿಂದ 'ಕೆಳಗೆ'
ಇದ್ದವರನ್ನು ನಡೆಸಿಕೊಂಡ ಕಥೆಗಳು ಪರಿಶೀಲನಾರ್ಹ.ಸ್ಪಷ್ಟವಾಗಿ ವಿಚಾರಪರರು
ಪರಾಂಬರಿಸಬೇಕು. ದ್ವೇಷ ಉರಿಗೊಳಿಸುವುದು ಬೇರೆ, ವಿಮರ್ಶೆ ಬೇರೆ.<br />
{{gap}}ಹೌದು ನನಗೆ ಗೊತ್ತಿದೆ. ಈ ನನ್ನ ಬರಹವನ್ನು ಬಹಳ ಸುಲಭವಾಗಿ ಬ್ರಾಹ್ಮಣ್ಯ ಹುನ್ನಾರ ಎಂದು ದಮನಿಸಬಹುದು. ರೆಡಿಮೇಡ್ ಸೈದ್ಧಾಂತಿಕ ವಿಶ್ಲೇಷಣೆ ಸತ್ಯ ಸೂಕ್ಷ್ಮಗಳನ್ನು
ಗುಡಿಸಿಹಾಕುತ್ತದೆ.
<br />{{gap}}ಕ್ಲೀಷೆ, ಹಳಸಲು ಪದಪ್ರಯೋಗವನ್ನು ಪದೇಪದೇ ವಿಡಂಬಿಸುತ್ತ,ವಿರೋಧಿಸುತ್ತ
ಬಂದಿದ್ದಾರೆ ಜೋಶಿ.ಯಕ್ಷಗಾನ ಭೀಷ್ಮ, ಯಕ್ಷ ಬ್ರಹ್ಮ, ಯಕ್ಷ ಧ್ರುವತಾರೆ ಮೊದಲಾದ ಸವಕಲು ಬಿರುದು ಪ್ರದಾನಗಳ ಬಗೆಗೂ ಅವರೊಳಗೆ ತೀವ್ರ ಅಸಹನೆಯಿದೆ. ಈವರೆಗೆ
ನೂರಿನ್ನೂರು ಕಲಾವಿದರ ಬಗೆಗೆ ನಾನಾ ಪತ್ರಿಕೆಗಳಲ್ಲಿ ಲೇಖನ ಬರೆದ, ನೂರಾರು
ಅಭಿನಂದನಾ ಭಾಷಣ ಮಾಡಿರುವ ಜೋಶಿಯವರ ಈ ಅಸಹನೆಯನ್ನು ಸೈದ್ಧಾಂತಿಕವಾಗಿ ನೋಡಬೇಕಿದೆ. ತನಗೇ ಯಾರಾದರೂ ಒಂದು ಬಿರುದು ಕೊಡುವುದಾದರೆ 'ಯಕ್ಷ
ದುಶ್ಯಾಸನ' ಎಂಬ ಬಿರುದು ಕೊಡಲಿ ಎಂದು ತಮಾಷೆಯಾಗಿಯೂ ಪ್ರತಿಕ್ರಿಯಿಸುತ್ತಾರೆ.
{{gap}}ಹೊರ ಜಗತ್ತಿನ ಎಲ್ಲ ವಿದ್ಯಮಾನಗಳಿಗೂ ತಕ್ಷಣ ಸ್ಪಂದಿಸುವುದು ಜೋಶಿಯವರ ಗುಣ.ಪತ್ರಿಕೆಗಳಲ್ಲಿ ಯಕ್ಷಗಾನದ ಕುರಿತು ಏನೇ ಪ್ರಬುದ್ಧ ಚರ್ಚೆ ನಡೆದರೂ ಅಲ್ಲಿ
ಜೋಶಿಯವರದ್ದೊಂದು ಸ್ಪುಟವಾದ ನಿಶಿತ ಚಿಂತನೆಯ ಪ್ರತಿಕ್ರಿಯೆ ಬಂದೇ ಬರುತ್ತದೆ.
{{center|'''ಡಾ.ಎಂ.ಪ್ರಭಾಕರ ಜೋಶಿ /೨೦'''}}<noinclude></noinclude>
t6ho3k82c2489k6ihbffsm5sx8cu6qd
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೪೬
104
99591
321641
279056
2026-05-21T11:22:33Z
Pragathi. BH
7585
/* Validated */
321641
proofread-page
text/x-wiki
<noinclude><pagequality level="4" user="Pragathi. BH" /></noinclude>ಬೆಳೆಯಲಾರಂಭಿಸಿ ವಿಚಾರ ಕ್ರಾಂತಿಯ ಒಂದು ಸನ್ನಿವೇಶ ಹದವಾಗಿತ್ತು. ಒಂದು ಸಮನ್ವಿತ ಭಿನ್ನಮಾರ್ಗ, ಸರಳ ನೈತಿಕ ಧಾರ್ಮಿಕತೆಯ ಬೇರು, ನೆರಳು, ಅಂದಿನ ಕಾಲದ ನಿರೀಕ್ಷೆಯಾಗಿತ್ತು. ಅದನ್ನು ಬುದ್ಧ, ಮಹಾವೀರರು ತಮ್ಮದಾದ ರೀತಿಯಲ್ಲಿ ಪೂರೈಸಿದರು.<br/>
{{gap}} ಬಹುಶಃ ಇದರಿಂದಲೇ ಇರಬಹುದು ಬೋಧಿವೃಕ್ಷ ಮತ್ತಿತರ ವೃಕ್ಷ ಸಂಕೇತಗಳು ಜಿನ ಮತ್ತು ಬುದ್ಧ ಸಂಪ್ರದಾಯಗಳಲ್ಲಿ ಪ್ರಾಶಸ್ತ್ಯ ಗಳಿಸಿವೆ. ಬೋಧಿವೃಕ್ಷವು ಜ್ಞಾನ ಅನಂತತೆಗಳ ಪ್ರಸಿದ್ಧವಾದ ವಸ್ತುವಷ್ಟೆ.<br/>
{{gap}}ಧಾರ್ಮಿಕ ದಾರ್ಶನಿಕ ಕ್ಷೇತ್ರದಲ್ಲಿ ಆಗ ಇದ್ದ ಎರಡು ಪ್ರಧಾನ ಶಾಖೆಗಳೆಂದರೆ ವೈದಿಕ
ಮತ್ತು ಅವೈದಿಕ ಅಥವಾ ಬ್ರಾಹ್ಮಣ ಮತ್ತು ಶ್ರಮಣ. ಇವುಗಳೊಳಗೆ ಅನೇಕ ಸಮಾನ ಅಂಶಗಳೂ,
ಹಲವು ಭಿನ್ನತೆಗಳೂ ಇದ್ದವು. ಬ್ರಾಹ್ಮಣ ಧರ್ಮದಲ್ಲಿ ಬ್ರಹ್ಮ ಎಂಬುದಕ್ಕೆ ಎರಡು ರೂಪಗಳಾದ
ಪ್ರಾಯಃ ಕೆಲವೊಮ್ಮೆ ವಿರೋಧಿ ಸಿದ್ದಾಂತಗಳಾದ ಯಜ್ಞಮತ್ತು ಪರಮಆತ್ಮ ವಸ್ತುವೆಂಬ
ಎರಡೂ ಅರ್ಥಗಳಿದ್ದವು. ಸಾಂಖ್ಯದ ಪ್ರಕೃತಿ-ಪುರುಷರೂಪಿ ದ್ವಿದಳ ವಿಧಾನವೂ ಸ್ಥಾಪಿತವೇ
ಆಗಿತ್ತು. ಆ ಕಡೆ ಧರ್ಮವೂ ಬೇಡ, ದೇವರೂ ಇಲ್ಲ. ಪಾಪಪುಣ್ಯಗಳು ಸುಳ್ಳು. ಚೆನ್ನಾಗಿ
ಬಾಳಿದರೆ ಅದೇ ಬದುಕು ಎಂಬ ಲೌಕಿಕ ಲೋಕಾಯುತವೂ ಇತ್ತು.<br/>
{{gap}}ತೀವ್ರ ಅಹಿಂಸೆ, ತ್ಯಾಗ, ಧ್ಯಾನಗಳಿಂದ ಪರೋಪಕಾರದಿಂದ ಕರ್ಮದ ಅಂಚಿನಲ್ಲಿ
ಮಾಲಿನ್ಯವನ್ನು ಕಳಚಿ ಆತ್ಮಗತಿ ಮೇಲೇರಿ ಉಚ್ಚಾಯ ಸಾಧಿಸಬಹುದು. ಅಣುಗಳೂ
ಆತ್ಮಗಳೂ ಅನಂತ, ಜಗತ್ತು ಮುದ್ದಲಮಯ ಎನ್ನುವ ಋಷಭಾದಿ ಮಹಾವೀರಾಂತ
ಶ್ರಮಣ ಧರ್ಮವಿತ್ತು. ಯಾವುದೇ ಆಗಲಿ 'ಇದೆ', 'ಇಲ್ಲ' ಎಂಬುದಕ್ಕಿಂತ ಇದೆ ಇಲ್ಲ'
ಹೇಳಲಾಗುವುದಿಲ್ಲ. ಇದ್ದು ಇಲ್ಲದೆಯೂ ಇದೆ ಎಂಬಂತಿರುವ ಸ್ಯಾತ್ (ಬಹುಶಃ ಮೇ
ಬಿ ಹೌದಂತೆ) ವಾದವು ಅವರದಾಗಿತ್ತು. ಇವೆಲ್ಲ ಬುದ್ಧನಿಗೆ ಸ್ಫೂರ್ತಿಯಾಗಿದ್ದವು.<br/>
{{gap}}ಲೋಕವು ಕ್ಷಣಿಕ, ಶೂನ್ಯ, ಕ್ಷುದ್ರವಾದುದು. ಸಂಪತ್ತಲ್ಲ, ತ್ಯಾಗ, ನಿರಾಡಂಬರತೆ,
ಜ್ಞಾನ, ಅತಿಯಲ್ಲದ ಮಿತಿ. ಇವು ಭಾಗಶಃ ಬುದ್ಧನ ನೈತಿಕ ಉಪದೇಶಗಳು. ಅವನು ಕಂಡ
ಸಿದ್ಧ ಅರ್ಥ ಅದು. ಅದೇ ಪ್ರಬಲವಾಗಿ ಪ್ರಜ್ಞೆ ವಿಕಾಸವಾಗಿ ಬುದ್ಧನೆನಿಸಿದ.<br/>
{{gap}}'ಮಧ್ಯಮಮಾರ್ಗ'ದ ಪ್ರತಿಪಾದನೆಯಿಂದ ಬೆಳಕಾದ, ಜ್ಞಾನ, ಕರ್ಮ, ಯಜ್ಞಗಳಿಗೆ
ಹೊಸ ಅರ್ಥಗಳನ್ನು ನೀಡಿದ. ಉಪನಿಷತ್ತುಗಳಲ್ಲಿ ಆರಂಭವಾಗಿದ್ದ ಆತ್ಮಯಜ್ಞದ ವಿಚಾರ,
ಶ್ರಮಣ ಪಂಥದ ಅಹಿಂಸಾದಿ ಮಹಾವ್ರತಗಳು ಮತ್ತು ಸಮಾಜವು ಅಪೇಕ್ಷಿಸುತ್ತಿದ್ದ ಸರಳ
ಸಾರ್ವತ್ರಿಕ ಧಾರ್ಮಿಕತೆಯ ತುಡಿತ ಇವೆಲ್ಲವೂ ಗೌತಮ ಸಿದ್ಧಾರ್ಥನನ್ನು ಪ್ರಭಾವಿಸಿ
ಇದಕ್ಕೊಂದು ಉತ್ತರ ಕಾಣಬೇಕು, ಕಾಣಬಲ್ಲೆ ಎಂಬ ನಡೆಯಿಂದ ತಥಾಗತನಾದ.
ಗಗನದೆತ್ತರದ ಧಮ್ಮವನ್ನು ಬಯಲಲ್ಲಿ ಸನಾತನ ವೃಕ್ಷದಡಿಯಲ್ಲಿದ್ದು ಕಂಡು ನೀಡಿದ. ಆ
ವೃಕ್ಷಕ್ಕೆ ಹೊಸ ಟಿಸಿಲು, ರೆಂಬೆ ಬೆಳೆಸಿ ಕೃಷಿ ಮಾಡಿದ.<br/>
{{gap}}ಬುದ್ದನ ಪ್ರಧಾನ ಉಪದೇಶ ಏನು? ಬುದ್ಧ ಹೃದಯ ಯಾವುದು?- ಇದು ಈಗಲೂ
ಚರ್ಚೆಯ ವಿಷಯ. ಭಗವಾನ್ ಬುದ್ಧನು ಹೊರಟಿದ್ದು ಸಂಕೀರ್ಣವಾದ ದರ್ಶನ-
ಧರ್ಮಗಳನ್ನು ಸರಳಗೊಳಿಸಿ ಜನರೆಡೆಗೆ ಕೊಂಡೊಯ್ಯಲಿಕ್ಕೆ, ಧಮ್ಮವನ್ನು ಹರಡುವುದಕ್ಕೆ.
ಆದರೆ ಆದುದೇನು? ಬೌದ್ಧ ಧರ್ಮವೂ ಜಿಗುಟಾಗಿ ವಿವಿಧವಾಗಿ ಕೆಲವೊಮ್ಮೆ ಬುದ್ಧನ
{{center|'''ಡಾ.ಎಂ. ಪ್ರಭಾಕರ ಜೋಶಿ | ೪೧'''}}<noinclude></noinclude>
pmgsspjz28gqjprfb2brzvgmb995grb
ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೪೮
104
99592
321643
279055
2026-05-21T11:23:25Z
Pragathi. BH
7585
/* Validated */
321643
proofread-page
text/x-wiki
<noinclude><pagequality level="4" user="Pragathi. BH" /></noinclude>ಬೇರೆಯವರನ್ನು ಅವ ಎಷ್ಟು ಸಣ್ಣ ರಾಜನೇ ಆಗಿರಲಿ ಸೂತರಿಗೆ ಕಲಿತದ್ದು ಬಾಯಿಪಾಠ. <br />
{{gap}}ಚತುಸ್ಸಾಗರ ವಲಯಾಂಕಿತವಾದ ಭೂಮಿಯನ್ನಾಳುತ್ತಿರುವ ದೋರ್ದಂಡ ವಿಕ್ರಮಿಗಳಾದಂಥ ಅರಿನೃಪಾಲರ ಗರ್ವವನ್ನು ಮುರಿದಂಥ ಮಹಾರಾಜರು ಅಂತ... ಅವ ಅರ್ಧ ಗ್ರಾಮಕ್ಕೂ ಒಡೆಯನಲ್ಲ. ಇಷ್ಟರವರೆಗೆ ಯುದ್ಧವನ್ನೂ ಮಾಡ್ಲಿಲ್ಲ. ಆದರೆ ಹೇಳುವುದು ಹಾಗೆ.
{{gap}}ಶಾಸನ ಬರೆಸುವಾಗಲೂ ಹಾಗೆ. ಅಖಂಡ ಭೂಮಂಡಲವನ್ನು ಆಳುತ್ತಿರುವ ಇಂಥ ಗ್ರಾಮಾಧಿಪತಿಯು.... ಅಖಂಡ ಭೂಮಂಡಲವನ್ನು ಆಳುವುದು... ಅದು ಬಾಯಿಪಾಠ...
{{center|'''***'''}}
{{gap}}ಅರ್ಜುನ ಕೀರ್ತಿಯ ಧಾವಳ್ಯ, ಪೌರುಷದ ಧಾವಳ್ಯ, ಬೆಳ್ತನದ ಪ್ರತೀಕ. ಅದಕ್ಕೆ ಅವ ಅರ್ಜುನ, ಬಿಳಿಯಾದವರೆಲ್ಲ ಅರ್ಜುನರಲ್ಲ, ಕಪ್ಪಗಿದ್ದವರೆಲ್ಲ ಕೃಷ್ಣರೂ ಅಲ್ಲ. <br />
{{gap}}ಫಲ್ಗುಣ- ಪೂರ್ವ ಫಲ್ಗುಣಿ ನಕ್ಷತ್ರದಿಂದ ಬಂದರೂ ಕೂಡಾ ಫಲವನ್ನೂ ಗುಣವನ್ನೂ ಪಡೆದು ಆ ನಕ್ಷತ್ರವನ್ನೇ ಫಲ್ಗುಣಿಯನ್ನಾಗಿ ಮಾಡಿದನೋ ಎಂಬಂತಿದ್ದಾನೆ.<br />
{{gap}} ಪಾರ್ಥ. ಪಾರ್ಥ ಅವನೊಬ್ಬನೆಯೋ..? ಅವನಿಂದ ಮೊದಲು ಹುಟ್ಟಿದವರಿಲ್ವೋ? ಪೃಥಾನಂದನ ಎಂಬರ್ಥದಲ್ಲೇ ಪಾರ್ಥ, ನಿನಗೊತ್ತಿಲ್ಲವೋ ಪೃಥಾನಂದನರು ಬೇರೆ ಇಲ್ವೋ? ಆದರೆ ಈ ಪೃಥ್ವೀ ಸಂಬಂಧವಾಗಿಯೂ ಪಾರ್ಥ. ಯಾಕೆ? ಸಂಪೂರ್ಣ ಪಾರ್ಥಿವತ್ವ, ಸಂಪೂರ್ಣ ಪೃಥಾನಂದನತ್ವ ಅವನಲ್ಲಿ...<br />
{{gap}}ಕಿರೀಟಿ.. ಯಾರಿಗುಂಟಯ್ಯಾ.? ಸ್ವರ್ಗದಲ್ಲಿ ದೇವೇಂದ್ರನೊಟ್ಟಿಗೆ ಅರ್ಧ ಸಿಂಹಾಸನದಲ್ಲಿ ಕುಳಿತು ಕಿರೀಟ ಹಿಡಿಸಿಕೊಳ್ಳುವುದು...? ನೀನೆಂತದು ಹೇಳುವುದು ಅವನ ಕಿರೀಟ ಹಾರಿಸ್ತೇನೆ...? ಆ ಕಿರೀಟ ತೆಗೆದ ಕೂಡಲೆ ಆಯ್ತಾ? ನಮ್ಮತ್ತ ಇರುವುದು ಬೇರೆಯವರು ಕೊಟ್ಟದ್ದೇ ಅಲ್ಲವಾ?<br />
{{gap}}ಶ್ವೇತವಾಹನ... ಆ ವಾಹನಗಳು ಶ್ವೇತ ಅಂತಂದ್ರೇನು...? ಅಗ್ನಿದತ್ತವಾದ ದಿವ್ಯ ಪರ್ವತ. ದೈವಿಕವಾದ ವಾಹನಗಳು.. ಅವುಗಳನ್ನು ಎಂತದು ಮಾಡುತ್ತಿ? ಬಾಣ ಬಿಟ್ಟು ರಕ್ತ ಇಳಿಸ್ತಿ ಅಲ್ಲವಾ? ಎಂತದದು? ಒಂದೊಂದು ತಿರುಗುವಾಗ ಸಿಕ್ಕಿದ್ರೂ ಅವನ್ನು ಹೊಡಿಲಿಕ್ಕೆ ಕೂಡದು.<br />
{{gap}}ಭಿಭತ್ಸು- ಅವನ ದರ್ಶನ ಮಾತ್ರದಿಂದಲೇ ಶತ್ರುಗಳಲ್ಲಿ ಭಯ ಉಂಟಾಗುತ್ತದೆ. ಅವನಲ್ಲಿ ನೀನು ಭೀಭತ್ಸುವಾಗುತ್ತಿ ಅಲ್ವಾ? ಅವನಲ್ಲೇ ಭಯವುಂಟು ಮಾಡ್ತಿ...<br />
{{gap}} ಧನಂಜಯ.. ಸುಮ್ಮನೆ ಬಂದದ್ದಲ್ಲ.. ಒಂದು ದಿಕ್ಕಿನಲ್ಲಿ ದಿಗ್ವಿಜಯ ಮಾಡಿ ರಾಜಸೂಯದಲ್ಲಿ ಧನದ ರಾಶಿಯನ್ನೇ ತಂದವ, ಸವ್ಯಸಾಚಿ... ನೀನು ಒಂದು ಕೈಯಲ್ಲಿ ಬಾಣ ಬಿಡುವುದಲ್ವಾ? ಅವ ಎಡ ಬಲ ಕೈಯಲ್ಲಿ ಬಾಣ ಬಿಡುವವ.<br/>
{{center|'''***'''}}
{{gap}} ಅಂಥ ಅರ್ಜುನ. ಸ್ವರ್ಗದಲ್ಲಿ ಸ್ವರ್ಗದ ಸಿಂಹಾಸನಕ್ಕೆ ತೊಂದರೆ ಕೊಡುತ್ತಿದ್ದ ಕೋಟಿ ಕೋಟಿ ಸಂಖ್ಯೆಯ ಕಾಲಕೇಯ, ನಿವಾತ ಕವಚರನ್ನು ಕೊಂದ ಮೇಲೆ ಮುಟ್ಟಿ ನೋಡಿದನಂತೆ ಬೆವರು ಬಂದಿದಾಂತ...? ಬೆವರ ಪಸೆಯಿಲ್ಲ...<br/>
{{gap}} ಒಲಿದು ಬಂದವಳು ಊರ್ವಶಿ... ಸ್ವೀಕರಿಸಿದ್ರೆ ಅಪರಾಧ ಅಲ್ಲ. ನೀ ನನ್ನ ತಾಯಿ ಅಂತ ಹೇಳಿದನಂತೆ. ಶಿವನಲ್ಲೇ ಹೋರಾಟ ಮಾಡಿ ಎಲ್ಲವನ್ನೂ ಕಳೆದುಕೊಂಡು ಮಲ್ಲಯುದ್ಧದಲ್ಲೂ ಆಗದಿದ್ದಾಗ ತೆಗೆದು ಹೊಡೆದದ್ದು... ಶಿವನ ತಲೆ ಮೇಲೆ. ಪಾರ್ಥ
{{center|'''ಡಾ.ಎಂ. ಪ್ರಭಾಕರ ಜೋಶಿ / ೪೩'''}}<noinclude></noinclude>
ceck27midb5nmakrtxhddss0yz8c2kp
ಪುಟ:ಯಕ್ಷಗಾನ ಮಕರಂದ.pdf/೨೭೧
104
100192
321628
319715
2026-05-21T10:19:01Z
Ashwini Rai K
8475
/* Validated */
321628
proofread-page
text/x-wiki
<noinclude><pagequality level="4" user="Ashwini Rai K" />{{Right|21}}</noinclude>
ದೇವರ ಪ್ರತಿಮೆಯನ್ನು ಜೊತೆಯಲ್ಲಿಯೇ ಕೊಂಡುಹೋಗುವುದಲ್ಲದೆ, ಆಟ ಸುರು
ಮಾಡುವುದಕ್ಕೆ ಮೊದಲಾಗಿ ನೇಪಥ್ಯ ಗೃಹದಲ್ಲಿ ಆ ದೇವರನ್ನು ಪೂಜೆಗೆ ಇಡುವುದು
ಪರಂಪರೆಯಿಂದ ಸರ್ವತ್ರ ನಡೆದು ಬಂದಿದೆ. ಅದೂ ಅಲ್ಲದೆ ದೇವಸ್ಥಾನಗಳಲ್ಲಿ 'ತಾಳ
ಮದ್ದಳೆ ಸೇವೆ' ಎಂದು ಹೆಸರಾದ ಗೀತಾರಾಧನೆಯಲ್ಲಿ ಯಕ್ಷಗಾನ ಪದಗಳನ್ನು
ಹಾಡುವ ಸಂಪ್ರದಾಯವಿದ್ದಿತ್ತೆಂದೂ ತಿಳಿಯುವುದು. ಹಿಂದೆ ಹೇಳಿದ ಆ ಶ್ರೀನಾಥ
ಕವಿಯ ಆಂಧ್ರ 'ಭೀಮೇಶ್ವರ ಪುರಾಣ'ದಲ್ಲಿ ಯಕ್ಷಗಾನದ ಪ್ರಸ್ತಾವವೆಂದರೆ, ದಕ್ಷಾ
ರಾಮವೆಂಬ ಶಿವಕ್ಷೇತ್ರದಲ್ಲಿ ಭೀಮೇಶ್ವರ ದೇವರ ಮುಂದೆ (ಶಿವ ದೇವಾಲಯದಲ್ಲಿ)
ಯಕ್ಷಗಾನ ಗೀತಾರಾಧನೆ ನಡೆಯುತ್ತಿತ್ತೆಂದು ಕವಿ ವರ್ಣಿಸಿರುವುದಾಗಿದೆ—
{{gap}}ಕೀರ್ತಿ೦ತುರೆದ್ದಾನಿ ಕೀರ್ತಿ ಗಂಧರ್ವಲು
<br />ಗಾಂಧರ್ವಮುನ ಯಕ್ಷಗಾನ ಸರಣಿ|
ಇದು, ಅನ್ಯಕರ್ತೃಕವಾದ ಪುರಾತನ ಸಂಸ್ಕೃತ ಭೀಮೇಶ್ವರ ಪುರಾಣವೊಂದನ್ನು ಈ
ಕವಿಯು ಆಂಧ್ರೀಕರಿಸಿದ್ದು, ಸಂಸ್ಕೃತದ ಆ ಶ್ಲೋಕ ಹೀಗಿರುತ್ತದೆ—
{{gap}}ಕೀರ್ತಯಂತಿಸ್ಮ ಮಾಹಾತ್ಮೈಂ ಗಂಧರ್ವಾಸ್ತ್ರಿದಿವೌಕಸಃ |
<br />ಗಾಂಧರ್ವವಿದ್ಯಾನಿಪುಣಾ ಗಾಂಧರ್ವೇಣ ಗರೀಯಸಾ ||
“ಗಾಂಧರ್ವೇಣ ಗರೀಯಸಾ' - ಗಾಂಧರ್ವವೆಂದರೆ ದೇವಸ್ತುತ್ಯಾಶ್ರಯವಾದ ಗೇಯಪ್ರಬಂಧವೆಂದು ನಾಟ್ಯ ಶಾಸ್ತ್ರದಲ್ಲೇ ಹೇಳಿದೆ. ಸಂಗೀತ ರತ್ನಾಕರಾದಿ ಇತರ ಶಾಸ್ತ್ರಗ್ರಂಥಗಳಲ್ಲಿಯೂ ಅದೇ ಅರ್ಥವಿರುತ್ತದೆ. 'ಗರೀಯಸಾ ಗಾಂಧರ್ವೇಣ” ಎಂದರೆ ದೇವಸ್ತುತ್ಯರ್ಥವಾದ ಮಹಾಪ್ರಬಂಧದಿಂದ, 'ಮಾಹಾತ್ಮಂ ಕೀರ್ತಯಂತಿಸ್ಮ' ಎಂದಿರುವುದರಿಂದ ಅದು ದೇವರ ಮಹಾತ್ಮ್ಯಗಳನ್ನು ವರ್ಣಿಸಿರುವ ಪ್ರಬಂಧವೆಂಬುದು ಸ್ಪಷ್ಟ. ಶ್ರೀನಾಥನು ಅದನ್ನೇ 'ಯಕ್ಷಗಾನ ಸರಣಿ' ಎಂದು ಅನುವಾದಿಸಿರುವುದರಿಂದ 'ಯಕ್ಷಗಾನ'ವೆಂಬುದು ದೇವರ ಮಹಾತ್ಮಗಳನ್ನು ವರ್ಣಿಸಿರುವ ಹಾಗೂ ದೇವರ ಆರಾಧನಾರ್ಥವಾಗಿರುವ ಮಹಾಪ್ರಬಂಧವಾಗಿತ್ತೆಂಬುದರಲ್ಲಿ ಸಂದೇಹವುಳಿಯುವುದಿಲ್ಲ. 'ಸರಣಿ” ಎಂದರೆ ಶ್ರೇಣಿ', ಒಂದರ ಹಿಂದೊಂದರಂತೆ ಅನೇಕ ಪ್ರಬಂಧಗಳೆಂದರ್ಥ. ಪೂಜಾಪ್ರಬಂಧವೇ —ಯಕ್ಷಗಾನ'ವೆಂಬುದು ಇದರಿಂದ ಸಮರ್ಥಿತವಾಗುವುದು. ಹೀಗಿರುವುದರಿಂದ ಪೂಜಾಪ್ರಬಂಧ ಎಂಬ ಅರ್ಥದಲ್ಲಿಯೇ ಯಕ್ಷಗಾನವೆಂಬ ಹೆಸರು ಬಂದಿರುವುದು ಸಹಜವೂ ಯಥಾರ್ಥವೂ ಇರಬೇಕೆಂದು ತೋರುವುದು. ಪ್ರಾಯಶಃ ಜಯದೇವನ ಗೀತ ಗೋವಿಂದದ ಪ್ರಭಾವ ನಮ್ಮ ದಕ್ಷಿಣದೇಶದಲ್ಲಿ ವಿಶೇಷ ಪ್ರಸಿದ್ಧಿಗೆ ಬಂದ ಮೇಲೆಯೇ ಯಕ್ಷಗಾನವೆಂಬ ಹೆಸರೂ, ದಶಾವತಾರ ಆಟವೆಂಬ ಹೆಸರೂ ರೂಢಿಗೆ ಬಂದಿರುವುದು ಸಂಭಾವ್ಯವಾಗಿ ತೋರುವುದು.
{{gap}}ಕೇರಳದ ಕಥಕಳಿಗೆ ಯಕ್ಷಗಾನವೆಂಬ ಹೆಸರು ಏಕೆ ಬರಲಿಲ್ಲವೆಂದರೆ; ಅದು
ದೇವಸ್ಥಾನಗಳ ಸೇವಾರ್ಥವಾಗಿದ್ದುದಲ್ಲ, ದೇವಸ್ಥಾನಗಳನ್ನು ಆಶ್ರಯಿಸಿಕೊಂಡಿ<noinclude></noinclude>
pakc6i3w4fizn27ncs3w09g7v85olh8
321629
321628
2026-05-21T10:19:50Z
Ashwini Rai K
8475
321629
proofread-page
text/x-wiki
<noinclude><pagequality level="4" user="Ashwini Rai K" />{{Right|21}}</noinclude>
ದೇವರ ಪ್ರತಿಮೆಯನ್ನು ಜೊತೆಯಲ್ಲಿಯೇ ಕೊಂಡುಹೋಗುವುದಲ್ಲದೆ, ಆಟ ಸುರು
ಮಾಡುವುದಕ್ಕೆ ಮೊದಲಾಗಿ ನೇಪಥ್ಯ ಗೃಹದಲ್ಲಿ ಆ ದೇವರನ್ನು ಪೂಜೆಗೆ ಇಡುವುದು
ಪರಂಪರೆಯಿಂದ ಸರ್ವತ್ರ ನಡೆದು ಬಂದಿದೆ. ಅದೂ ಅಲ್ಲದೆ ದೇವಸ್ಥಾನಗಳಲ್ಲಿ 'ತಾಳ
ಮದ್ದಳೆ ಸೇವೆ' ಎಂದು ಹೆಸರಾದ ಗೀತಾರಾಧನೆಯಲ್ಲಿ ಯಕ್ಷಗಾನ ಪದಗಳನ್ನು
ಹಾಡುವ ಸಂಪ್ರದಾಯವಿದ್ದಿತ್ತೆಂದೂ ತಿಳಿಯುವುದು. ಹಿಂದೆ ಹೇಳಿದ ಆ ಶ್ರೀನಾಥ
ಕವಿಯ ಆಂಧ್ರ 'ಭೀಮೇಶ್ವರ ಪುರಾಣ'ದಲ್ಲಿ ಯಕ್ಷಗಾನದ ಪ್ರಸ್ತಾವವೆಂದರೆ, ದಕ್ಷಾ
ರಾಮವೆಂಬ ಶಿವಕ್ಷೇತ್ರದಲ್ಲಿ ಭೀಮೇಶ್ವರ ದೇವರ ಮುಂದೆ (ಶಿವ ದೇವಾಲಯದಲ್ಲಿ)
ಯಕ್ಷಗಾನ ಗೀತಾರಾಧನೆ ನಡೆಯುತ್ತಿತ್ತೆಂದು ಕವಿ ವರ್ಣಿಸಿರುವುದಾಗಿದೆ—
{{gap}}ಕೀರ್ತಿ೦ತುರೆದ್ದಾನಿ ಕೀರ್ತಿ ಗಂಧರ್ವಲು
<br />{{gap}}ಗಾಂಧರ್ವಮುನ ಯಕ್ಷಗಾನ ಸರಣಿ|
ಇದು, ಅನ್ಯಕರ್ತೃಕವಾದ ಪುರಾತನ ಸಂಸ್ಕೃತ ಭೀಮೇಶ್ವರ ಪುರಾಣವೊಂದನ್ನು ಈ
ಕವಿಯು ಆಂಧ್ರೀಕರಿಸಿದ್ದು, ಸಂಸ್ಕೃತದ ಆ ಶ್ಲೋಕ ಹೀಗಿರುತ್ತದೆ—
{{gap}}ಕೀರ್ತಯಂತಿಸ್ಮ ಮಾಹಾತ್ಮೈಂ ಗಂಧರ್ವಾಸ್ತ್ರಿದಿವೌಕಸಃ |
<br />{{gap}}ಗಾಂಧರ್ವವಿದ್ಯಾನಿಪುಣಾ ಗಾಂಧರ್ವೇಣ ಗರೀಯಸಾ ||
“ಗಾಂಧರ್ವೇಣ ಗರೀಯಸಾ' - ಗಾಂಧರ್ವವೆಂದರೆ ದೇವಸ್ತುತ್ಯಾಶ್ರಯವಾದ ಗೇಯಪ್ರಬಂಧವೆಂದು ನಾಟ್ಯ ಶಾಸ್ತ್ರದಲ್ಲೇ ಹೇಳಿದೆ. ಸಂಗೀತ ರತ್ನಾಕರಾದಿ ಇತರ ಶಾಸ್ತ್ರಗ್ರಂಥಗಳಲ್ಲಿಯೂ ಅದೇ ಅರ್ಥವಿರುತ್ತದೆ. 'ಗರೀಯಸಾ ಗಾಂಧರ್ವೇಣ” ಎಂದರೆ ದೇವಸ್ತುತ್ಯರ್ಥವಾದ ಮಹಾಪ್ರಬಂಧದಿಂದ, 'ಮಾಹಾತ್ಮಂ ಕೀರ್ತಯಂತಿಸ್ಮ' ಎಂದಿರುವುದರಿಂದ ಅದು ದೇವರ ಮಹಾತ್ಮ್ಯಗಳನ್ನು ವರ್ಣಿಸಿರುವ ಪ್ರಬಂಧವೆಂಬುದು ಸ್ಪಷ್ಟ. ಶ್ರೀನಾಥನು ಅದನ್ನೇ 'ಯಕ್ಷಗಾನ ಸರಣಿ' ಎಂದು ಅನುವಾದಿಸಿರುವುದರಿಂದ 'ಯಕ್ಷಗಾನ'ವೆಂಬುದು ದೇವರ ಮಹಾತ್ಮಗಳನ್ನು ವರ್ಣಿಸಿರುವ ಹಾಗೂ ದೇವರ ಆರಾಧನಾರ್ಥವಾಗಿರುವ ಮಹಾಪ್ರಬಂಧವಾಗಿತ್ತೆಂಬುದರಲ್ಲಿ ಸಂದೇಹವುಳಿಯುವುದಿಲ್ಲ. 'ಸರಣಿ” ಎಂದರೆ ಶ್ರೇಣಿ', ಒಂದರ ಹಿಂದೊಂದರಂತೆ ಅನೇಕ ಪ್ರಬಂಧಗಳೆಂದರ್ಥ. ಪೂಜಾಪ್ರಬಂಧವೇ —ಯಕ್ಷಗಾನ'ವೆಂಬುದು ಇದರಿಂದ ಸಮರ್ಥಿತವಾಗುವುದು. ಹೀಗಿರುವುದರಿಂದ ಪೂಜಾಪ್ರಬಂಧ ಎಂಬ ಅರ್ಥದಲ್ಲಿಯೇ ಯಕ್ಷಗಾನವೆಂಬ ಹೆಸರು ಬಂದಿರುವುದು ಸಹಜವೂ ಯಥಾರ್ಥವೂ ಇರಬೇಕೆಂದು ತೋರುವುದು. ಪ್ರಾಯಶಃ ಜಯದೇವನ ಗೀತ ಗೋವಿಂದದ ಪ್ರಭಾವ ನಮ್ಮ ದಕ್ಷಿಣದೇಶದಲ್ಲಿ ವಿಶೇಷ ಪ್ರಸಿದ್ಧಿಗೆ ಬಂದ ಮೇಲೆಯೇ ಯಕ್ಷಗಾನವೆಂಬ ಹೆಸರೂ, ದಶಾವತಾರ ಆಟವೆಂಬ ಹೆಸರೂ ರೂಢಿಗೆ ಬಂದಿರುವುದು ಸಂಭಾವ್ಯವಾಗಿ ತೋರುವುದು.
{{gap}}ಕೇರಳದ ಕಥಕಳಿಗೆ ಯಕ್ಷಗಾನವೆಂಬ ಹೆಸರು ಏಕೆ ಬರಲಿಲ್ಲವೆಂದರೆ; ಅದು
ದೇವಸ್ಥಾನಗಳ ಸೇವಾರ್ಥವಾಗಿದ್ದುದಲ್ಲ, ದೇವಸ್ಥಾನಗಳನ್ನು ಆಶ್ರಯಿಸಿಕೊಂಡಿ<noinclude></noinclude>
3euk4cxu7r96bvi9067s6f8b9cructp
ಪುಟ:ಯಕ್ಷಗಾನ ಮಕರಂದ.pdf/೨೭೨
104
100193
321630
319726
2026-05-21T10:22:59Z
Ashwini Rai K
8475
/* Validated */
321630
proofread-page
text/x-wiki
<noinclude><pagequality level="4" user="Ashwini Rai K" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ '
'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ
ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ
ನಾಟ್ಯ ಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ
'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ
ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ.
{{gap}}ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಪ್ರಶ್ನಯೇ.ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ.ಅದಕ್ಕೆ, ದಶರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ,
ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯೇ ಹೇಳುತ್ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ—(ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.)<br />
ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ|<br />ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ |<br />ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ |<br />ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ ||<noinclude></noinclude>
nfhfiai1516k2xqa3wsq8ju7249b3si
321631
321630
2026-05-21T10:24:00Z
Ashwini Rai K
8475
321631
proofread-page
text/x-wiki
<noinclude><pagequality level="4" user="Ashwini Rai K" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ '
'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ
ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ
ನಾಟ್ಯ ಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ
'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ
ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ.
{{gap}}ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಪ್ರಶ್ನಯೇ.ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ.ಅದಕ್ಕೆ, ದಶರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ,
ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯೇ ಹೇಳುತ್ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ—(ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.)<br />
ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ|<br />ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ |<br />ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ |<br />ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ ||<noinclude></noinclude>
5kgell1hntn6145utmnx01coqu9l6lw
321632
321631
2026-05-21T10:25:12Z
Ashwini Rai K
8475
321632
proofread-page
text/x-wiki
<noinclude><pagequality level="4" user="Ashwini Rai K" />{{Left|22}}</noinclude>ದ್ದುದೂ ಅಲ್ಲ. ಅಲ್ಲಿಯ ದೇವಸ್ಥಾನಗಳಲ್ಲಿ 'ಚೊಕ್ಯಾರ್ ಕೂತ್ತು' ಹಾಗೂ '
'ಕೂಡಿಯಾಟ್ಟಂ' ಎಂಬ ಹೆಸರಿನಿಂದ ಸಂಸ್ಕೃತ ನಾಟಕಗಳ ಹಾಗೂ ಉಪರೂಪಕಗಳ
ಪ್ರಯೋಗವು ನಡೆಯುತ್ತಿತ್ತೆಂಬುದು ಸರ್ವಶ್ರುತವಾದ ವಿಚಾರ. ಗೀತ ಗೋವಿಂದದ
ನಾಟ್ಯ ಸೇವೆಯೂ ಅಲ್ಲಿಯ ದೇವಸ್ಥಾನಗಳಲ್ಲಿ ಸಂಸ್ಕೃತ ಪ್ರಬಂಧಗಳ ಮೂಲಕವೇ
'ಅಷ್ಟಪದಿಯಾಟ್ಟಂ', 'ಕೃಷ್ಣಾಟ್ಟಂ' ಎಂಬ ಹೆಸರಿನಿಂದ ನಡೆಯುತ್ತಿತ್ತು. ದೇವಸ್ಥಾನದ ಒಳಾಂಗಣದಲ್ಲಿ ನಡೆಯುತ್ತಿದ್ದ ಆ ನಾಟ್ಯ ಪ್ರಯೋಗಗಳಿಗೆ ಬ್ರಾಹ್ಮಣೇತರರಿಗೆ ಪ್ರವೇಶವಿಲ್ಲದೇ ಇದ್ದ ನಿಮಿತ್ತ ಅಂಥ ಸಾರ್ವಜನಿಕರ ಅನುಕೂಲಕ್ಕೆ ಬೇಕಾಗಿ ಕೊಟ್ಟಾರಕರದಲ್ಲಿದ್ದ ಒಬ್ಬ ರಾಜನು ರಾಮಾಯಣ ಪ್ರಬಂಧಗಳನ್ನು ರಚಿಸಿ'ರಾಮನಾಟ್ಟಂ' ಎಂಬ ಹೆಸರಿನಿಂದ ಈ ಪ್ರಯೋಗವನ್ನು ರೂಢಿಗೆ ತಂದುದಾಗಿ
ಜನಜನಿತವಾದ ಹೇಳಿಕೆಯಿದೆ, ಸಂಶೋಧಕರ ಬರಹಗಳೂ ಬಂದಿವೆ.
{{gap}}ಇನ್ನು, ಯಕ್ಷಗಾನ ಪ್ರಯೋಗಕ್ಕೆ 'ಬಯಲಾಟ'ವೆಂಬ ಹೆಸರು ಯಾವುದರಿಂದ ಬಂತೆಂಬುದು ಸಹ ವಿಚಾರಾರ್ಹವಾದ ಪ್ರಶ್ನಯೇ.ನಮ್ಮಲ್ಲಿ 'ಬಯಲಾಟ'ವೆಂದು ಕರೆದರೆ ಆಂಧ್ರದಲ್ಲಿ 'ವೀಥಿನಾಟಕ'ವೆಂದು ಹೆಸರಾಗಿದೆ.ಅದಕ್ಕೆ, ದಶರೂಪಕಗಳಲ್ಲಿ ಒಂದಾದ 'ವೀಥೀ' ಎಂಬ ಅರ್ಥವಲ್ಲ; ಹೊರಬೀದಿಯಲ್ಲಿ ಆಡುವುದು ಎಂಬುದರಿಂದ ಬಂದ ಹೆಸರದು. ದ್ರಾವಿಡ ದೇಶದ 'ತೆರುಕ್ಕೂತ್ತು' ಎಂಬ ಹೆಸರಿಗೂ ಬಯಲಾಟವೆಂದೇ ಅರ್ಥ. ಇದರಿಂದ, ಹೊರಬಯಲಲ್ಲಿ ಅಲ್ಲದೆ ಒಳಗೆ ಆಡುವ ಆಟವೆಂಬುದು ಬೇರೆ ಇದ್ದಿರಬೇಕೆಂಬ ಅನುಮಾನ ಸಹಜವಾಗಿ ಹುಟ್ಟುತ್ತದೆ. ಹಾಗೆ ನಾಟಕಶಾಲೆ (Stage, theatre) ಯೊಳಗೆ ಆಡುವ ಪ್ರಯೋಗವಿದ್ದಿತೆಂಬುದೂ ಪೂರ್ವದ ನಮ್ಮ ಕಾವ್ಯಾದಿಗಳಲ್ಲಿ ಬರುವ ವರ್ಣನೆಗಳಿಂದ ತಿಳಿದು ಬರುತ್ತದೆ. ದೇವಾಲಯಕ್ಕೆ ಸಂಬಂಧಿಸಿಯೂ, ರಾಜಾಲಯಕ್ಕೆ ಸಂಬಂಧಿಸಿಯೂ,
ನಾಟ್ಯ ಮಂದಿರಗಳಿದ್ದವು. ಕಾವ್ಯಗಳಲ್ಲಿ ವರ್ಣಿಸಿರುವ ಪ್ರಕಾರ ಆ ಪ್ರಯೋಗಗಳು ಶುದ್ಧ ಶಾಸ್ತ್ರೀಯ ಸಂಪ್ರದಾಯದಲ್ಲಿ ನಡೆಯುತ್ತಿದ್ದುವೆಂದು ಊಹಿಸಬಹುದು. ಅತಃಪೂರ್ವದಲ್ಲಿಯೇ ಹೀಗೆ ಆಭ್ಯಂತರ, ಬಾಹ್ಯ ಎಂಬ ಎರಡು ವಿಧದ ನಾಟಕ ಪ್ರಯೋಗಗಳಿದ್ದುದನ್ನು ನಾಟ್ಯಶಾಸ್ತ್ರದಲ್ಲಿ ಭರತ ಮುನಿಯೇ ಹೇಳುತ್ತಾನೆ. ಅವುಗಳಲ್ಲಿ ಬಾಹ್ಯಪ್ರಯೋಗಕ್ಕೆ ಆ ಹೆಸರು ಯಾವುದಕ್ಕಾಗಿ ಎಂಬುದನ್ನು ಹೀಗೆ ಹೇಳಿದ್ದಾನೆ—(ನಾಟಕಾದಿ ರೂಪಕಗಳಲ್ಲಿ ಚತುರ್ವಿಧವಾದ ಅಭಿನಯಗಳನ್ನು ಸಲಕ್ಷಣವಾಗಿಯೂ ಶುದ್ಧವಾಗಿಯೂ ಹೇಗೆ ನಿರ್ವಹಿಸಬೇಕೆಂಬುದನ್ನು ಹೇಳಿದ ಮೇಲೆ ಈ ಶ್ಲೋಕಗಳು ಬರುತ್ತವೆ.)<br />
{{gap}}ಏತೇ ಪ್ರಯೋರ್ನಿಯಾ ಮಾರ್ಗಾದ್ಯಭಿನಯೇಸ್ಮೃತಾಃ|<br />{{gap}}ಯವೀದೃಶಂ ಭವೇನಾಟ್ಯಂ ಯಮಾಭ್ಯಂತರಂತು ತತ್ |<br />{{gap}}ಲಕ್ಷಣಾಭ್ಯಂತರತ್ವಾಗಿ ತದಾಭ್ಯಂತರವಿಷ್ಯತೇ |<br />{{gap}}ಶಾಸ್ತ್ರಬಾಹ್ಯಂ ಭವೇದ್ಯತ್ತು ತದ್ಭಾಹ್ಯಮಿತಿ ಸಂಸ್ಕೃತಂ ||<noinclude></noinclude>
fknli67up9evcb773f2qrj3asi6ehmt
ಪುಟ:ಯಕ್ಷಗಾನ ಮಕರಂದ.pdf/೨೭೫
104
100196
321635
281823
2026-05-21T11:14:47Z
Pragathi. BH
7585
/* Proofread */
321635
proofread-page
text/x-wiki
<noinclude><pagequality level="3" user="Pragathi. BH" /></noinclude>“ಯಕ್ಷಗಾನದ ಮೌಲಿಕ ವಿಚಾರ
C
- ಕೆ. ವೆಂಕಟರಾಯಾಚಾರ್ಯ,
ಸಂಗೀತದ ಮೂಲರೂಪರೇಷೆಗಳು ವೇದಗಳಲ್ಲಿ ಹಾಗೂ ವೇದಾಂಗಗಳಲ್ಲಿ
ಕಾಣುತ್ತವೆ (ಶ್ರೀ ಎಂ. ರಾಜಾರಾವ್: ಡಾ| ಪಿ. ಕೆ. ಗೋಡೆಯವರ ಸಂಭಾವನಾ
ಗ್ರಂಥ) ಭರತ ಮೊದಲಾದ ಪ್ರಾಚೀನ ಕೃತಿಕಾರರು ಅದನ್ನು ಮಾರ್ಗರೀತಿಯಲ್ಲಿ
ವಿಸ್ತರಿಸಿದರು. ಅನಂತರ ದೇಶೀಲೌಕಿಕ ರೀತಿಯಲ್ಲಿ ಶಾರ್ಙ್ಗದೇವ, ಚಾಳುಕ್ಯ
ಸೋಮೇಶ್ವರ, ವಿದ್ಯಾರಣ್ಯ, ಪುಂಡರೀಕ, ಪುರಂದರದಾಸ ಮುಂತಾದವರು ವಿವರಿ
ಸಿದರು. ದಕ್ಷಿಣಾದಿ ಅಥವಾ ಕರ್ಣಾಟಕ ಸಂಗೀತವೆಂಬ ಹೆಸರಿಗೆ ಇವರೇ ಕಾರಣರು
(ಶ್ರೀ ಹುಲಗೂರು ಕೃಷ್ಣಾಚಾರ: ಕರ್ನಾಟಕ ಸಂಗೀತವೂ, ಹರಿದಾಸ ಕೂಟವೂ
ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯ ಪ್ರಕಟನೆ). 'ಸಂಗೀತ'ವೆಂಬುದನ್ನು
ಗೀತಂ ವಾದ್ಯಂ ಚ ನೃತ್ಯಂಚ ತ್ರಯಂ ಸಂಗೀತವುಚ್ಯತೇ' ಎಂದು ಅಮರ
ಸಿಂಹನು ಮುಪ್ಪುರಿಯಾಗಿದೆಯೆಂದನು, ಇಲ್ಲಿ ಗೀತವೇ ಪ್ರಧಾನವಾಗಿದೆ. ಗೀತದ
ಲಕ್ಷಣ-ಭೇದಗಳು ಹೀಗಿವೆ:
ರಂಜಕಃ ಸ್ವರಸಂದರ್ಭೋ
ಗೀತಂ ಇತ್ಯಭಿಧೀಯತೇ
ಗಾಂಧರ್ವಂ ಗಾನಮಿತ್ಯಸ್ಯ
ಭೇದದ್ವಯಮುದೀರಿತಂ (ಸಂ. ರ. 4-1)
ರಂಜಕವಾದ ಸ್ವರಗಳ ಸಂದರ್ಭವು ಗೀತವೆಂದು; ಅದು ಗಾಂಧರ್ವಗಾನ
ವೆಂದು ಇಬ್ಬಗೆಯೆಂದು ಹೇಳಲಾಗಿದೆ. ಗಾಂಧರ್ವವೆಂದರೆ ಮಾರ್ಗರೀತಿಯ ರಾಗ
ಗಳ ಹೆಸರು, ಅದು ದೇವತೆಗಳಿಗೆ ಹಾಗೂ ಗಂಧರ್ವರಿಗೆ ಪ್ರೀತಿಕರವು; ಗಾನವೆಂದರೆ
ದೇಶೀರಾಗಗಳ ಹೆಸರೆಂದು ಅರ್ಥವಿಸಲಾಗಿದೆ. ಗಾಂಧರ್ವರೀತಿಯಲ್ಲಿ ಮೌಲಿಕ
ರಾಗಗಳೂ, ಗಾನರೀತಿಯಲ್ಲಿ ಅನಂತರ ಬಿತ್ತರಿಸಿದ ದೇಶೀರಾಗಗಳೂ ಅಳವಡಿಸಿರು
ಇವೆ. ಗಾಂಧರ್ವಕ್ಕಿಂತ ಗಾನವು ಪ್ರತ್ಯೇಕವೆಂದು ಹೇಳಿದಂತಾಯಿತು,
3<noinclude></noinclude>
m3r1e5q3g2vry095lbb8b1dli8q662i
ಪುಟ:ಯಕ್ಷಗಾನ ಮಕರಂದ.pdf/೨೮೦
104
100202
321625
307304
2026-05-21T10:15:59Z
Ashwini Rai K
8475
/* Validated */
321625
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|30}}
ಈ ಪ್ರೇಕ್ಷ ಎಂಬಂದು ಲಾಸ್ಯ, ತಾಂಡವ, ಛಲಿಕ, ಶಮ್ಯಾ, ಹಲ್ಲೀಸಕ
ಹಾಗೂ ರಾಸ ಎಂದು ಆರು ವಿಧ. ಶೃಂಗಾರರಸ ಪ್ರಧಾನವಾದುದು ಲಾಸ್ಯ, ವೀರ
ರಸ ಪ್ರಧಾನವಾಗಿರುವುದು ತಾಂಡವ, ಶೃಂಗಾರ ಹಾಗೂ ವೀರ ಉಭಯರಸ
ಪ್ರಧಾನವಾದುದು ಛಲಿಕ, ವಿಷಯಾಂತರಗೊಂಡ ಛಲಿಕವೇ ಶಮ್ಯಾ.
ಮಂಡಲೇನ ಚ ಯತ್ ಸ್ತ್ರೀಣಾಂ ನೃತ್ಯಂ ಹಲ್ಲೀಸಕಂ ತು ತತ್ |
ತನ್ನಾಯಕೋ ಭವೇದೇಕೊ ಗೋಪಸ್ತ್ರೀಣಾಂ ಹರಿರ್ಯಥಾ ||
ಮಂಡಲಾಕಾರವಾಗಿ ಮಹಿಳೆಯರ ನೃತ್ಯವೇ ಹಲ್ಲೀಸಕ. ಗೋಪಿಕೆಯರಿಗೆ
ಕೃಷ್ಣನಿದ್ದಂತೆ ಇದಕ್ಕೆ ಪುರುಷನೊಬ್ಬ ನಾಯಕನಿರುತ್ತಾನೆ.
ಇದೇ ಹಲ್ಲೀಸಕವು
ತಾಲಬಂಧ ವಿಶೇಷದಿಂದ ಕೂಡಿದರೆ ಅರ್ಥಾತ್ ಇಬ್ಬರು ಹೆಂಗಸರ ನಡುವೆ ಒಬ್ಬ
ಪುರುಷ ಅಥವಾ ಇಬ್ಬರು ಪುರುಷರ ನಡುವೆ ಒಬ್ಬ ಸ್ತ್ರೀ (ಅಂಗನಾಮಂಗನಾಮಂ
ತರೆ ಮಾಧವೋ, ಮಾಧವಂ ಮಾಧವಂಚಾಂತರೇಚಾಂಗನಾ-ಎಂಬಂತೆ) ಇದ್ದರೆ
ರಾಸ ಎನಿಸುತ್ತದೆ.
{{gap}}ಮೇಲೆ ಹೇಳಿದ ಛಲಿಕ ಎಂಬ ರೂಪಕಭೇದವನ್ನು ಕಾಳಿದಾಸ ತನ್ನ ಮಾಲ
ವಿಕಾಗ್ನಿ ಮಿತ್ರದಲ್ಲಿ ಉಲ್ಲೇಖಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಗಾನವೇ ಛಾಲಿಕ್ಯ.
ಇದೊಂದು ಗಾನ ಪ್ರಧಾನವಾದ ಕ್ರೀಡೆ (ಆಟ) ಯಾದುದರಿಂದ ಛಾಲಿಕ್ಯಗಾನ,
ಛಾಲಿಕ್ಯ ಕ್ರೀಡೆ ಎಂಬ ಎರಡೂ ಹೆಸರುಗಳು ಯುಕ್ತ, ದೇವಲೋಕದಲ್ಲಿದ್ದ ಈ
ಗಾನಭೇದವನ್ನು ಶ್ರೀಕೃಷ್ಣನು ಭೂಲೋಕದಲ್ಲಿ ಪ್ರಚಾರ ಮಾಡಿದನೆಂದು ಹರಿವಂಶ
ದಲ್ಲಿ ಹೇಳಿದೆ. ಯಕ್ಷಗಾನಕ್ಕೆ ಇದೇ ಮೂಲವಿರಬೇಕೆಂದು ದಿ| ಪೊಳಲಿ ಶಂಕರ
ನಾರಾಯಣ ಶಾಸ್ತ್ರಿಯವರು ಬಲಿಪ ಭಾಗವತರ ಸಂಸ್ಮರಣ ಸಂಚಿಕೆಯಲ್ಲಿ ಅಭಿ
ಪ್ರಾಯ ಪಟ್ಟಿದ್ದರು. ಮಾತ್ರವಲ್ಲ, ಇದು ಪರಂಪರೆಯಿಂದ ಬಂದ ನಂಬಿಕೆಯೂ
ಆಗಿದೆ.
ಹಳೆಯ ತಲೆಮಾರಿನ ಇತರ ಕೆಲವರು ಕಲಾವಿದರು ಕೂಡ ಇದೇ ಅಭಿ
ಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹರಿವಂಶದ ವಿಷ್ಣು ಪರ್ವದ 89ರಿಂದ 93ನೇ
ಅಧ್ಯಾಯದ ವರೆಗಿರುವ ಈ ಛಾಲಿಕ್ಯ ಕ್ರೀಡೆಯ ಭಾಗವನ್ನು ಕೆಳಗೆ ವಿವೇಚಿಸಿ
ರುವುದನ್ನು ಪರಾಂಬರಿಸಿದರೆ ಇದು ಸ್ಪಷ್ಟವಾಗುವುದು.
{{gap}}ತೃಷ್ಣಾ: ಪ್ರವೃತ್ತಾ: ಪುನರೇವ ವೀರಾ: ತೇ ಭೈಮಮುಖ್ಯಾ ವನಿತಾಸಹಾಯಾಃ |
ಗೀತಾನಿ ರಮ್ಯಾಣಿ ಜಗುಃ ಪ್ರಹೃಷ್ಟಾ: ಕಾಂತಾಭಿನೀತಾನಿ ಮನೋಹರಾಣಿ ||
-(ಹ. ವಂ. 2-89-66)
{{gap}}ಉಂಡು ತೃಪ್ತರಾದ ಪ್ರದ್ಯುಮ್ನಾದಿ ವೀರರು ಸಂತೋಷಗೊಂಡು ಸ್ತ್ರೀಯ
ರೊಡಗೂಡಿ ಆಕರ್ಷಕವಾಗಿ ಅಭಿನಯಿಸಲ್ಪಟ್ಟ ರಮ್ಯವೂ ಮನೋಹರವೂ ಆದ
ಹಾಡುಗಳನ್ನು ಹಾಡಿದರು.
----------------------------------------------------------------
ಛಲಿಕಂ ದುಷ್ಟ್ರಯೋಜ್ಯಮುದಾಹರಂತಿ (ಛಲಿಕವನ್ನು ಪ್ರಯೋಗಿಸುವುದು ಕಷ್ಟಕರ ಎನ್ನುತ್ತಾರೆ)
-ಮಾಲವಿಕಾಗ್ನಿ ಮಿತ್ರ ವಿ<noinclude></noinclude>
g6kcfzaw4frt20n03ljgiuki0bd8hzx
ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು
4
101285
321484
320963
2026-05-20T17:48:17Z
A826
6806
321484
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 37734<br><small>ದತ್ತಾಂಶ ಪಡೆದ ಸಮಯ: 2026-05-20 17:46:09 UTC / 2026-05-20 23:16:09 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Shreelatha.Halemane|Shreelatha.Halemane]] || 0 || 0 || 7047 (10169) || 0 || 0 || 4890 || 811 (1622) || 1251 (3753) || 7449 || '''10169'''
|-
| 2 || [[Special:Contributions/Pragathi. BH|Pragathi. BH]] || 0 || 0 || 8878 (9980) || 0 || 0 || 7983 || 138 (276) || 731 (2193) || 9427 || '''9980'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 3272 (4411) || 0 || 0 || 2097 || 364 (728) || 406 (1218) || 3792 || '''4411'''
|-
| 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 528 (1254) || 0 || 0 || 70 || 63 (126) || 390 (1170) || 654 || '''1254'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 193 (241) || 26 || 0 || 5 || 4 (8) || 28 (84) || 10974 || '''265'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Hariprasad Shetty10|Hariprasad Shetty10]] || 0 || 0 || 72 (151) || 0 || 0 || 0 || 20 (40) || 33 (99) || 305 || '''151'''
|-
| 10 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 11 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109'''
|-
| 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
006g5muifgzalesb5ktjwvf7z49d2i3
321500
321484
2026-05-21T02:18:12Z
A826
6806
321500
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 37749<br><small>ದತ್ತಾಂಶ ಪಡೆದ ಸಮಯ: 2026-05-21 02:17:22 UTC / 2026-05-21 07:47:22 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Shreelatha.Halemane|Shreelatha.Halemane]] || 0 || 0 || 7047 (10169) || 0 || 0 || 4890 || 811 (1622) || 1251 (3753) || 7449 || '''10169'''
|-
| 2 || [[Special:Contributions/Pragathi. BH|Pragathi. BH]] || 0 || 0 || 8892 (10016) || 0 || 0 || 7983 || 138 (276) || 743 (2229) || 9442 || '''10016'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 3272 (4411) || 0 || 0 || 2097 || 364 (728) || 406 (1218) || 3792 || '''4411'''
|-
| 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 528 (1254) || 0 || 0 || 70 || 63 (126) || 390 (1170) || 654 || '''1254'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 193 (241) || 26 || 0 || 5 || 4 (8) || 28 (84) || 10974 || '''265'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Hariprasad Shetty10|Hariprasad Shetty10]] || 0 || 0 || 72 (151) || 0 || 0 || 0 || 20 (40) || 33 (99) || 305 || '''151'''
|-
| 10 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 11 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109'''
|-
| 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
p842ojfu55iscvs8ccv3v2p6whtzykb
321634
321500
2026-05-21T10:53:53Z
A826
6806
321634
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 37883<br><small>ದತ್ತಾಂಶ ಪಡೆದ ಸಮಯ: 2026-05-21 10:53:17 UTC / 2026-05-21 16:23:17 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 8962 (10189) || 0 || 0 || 7983 || 141 (282) || 805 (2415) || 9529 || '''10189'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 7047 (10169) || 0 || 0 || 4890 || 811 (1622) || 1251 (3753) || 7449 || '''10169'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 3272 (4411) || 0 || 0 || 2097 || 364 (728) || 406 (1218) || 3792 || '''4411'''
|-
| 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 531 (1259) || 0 || 0 || 70 || 63 (126) || 393 (1179) || 660 || '''1259'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 194 (242) || 26 || 0 || 5 || 4 (8) || 28 (84) || 10975 || '''266'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Hariprasad Shetty10|Hariprasad Shetty10]] || 0 || 0 || 80 (172) || 0 || 0 || 0 || 21 (42) || 39 (117) || 345 || '''172'''
|-
| 10 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 11 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109'''
|-
| 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
4jv6ldhpcg8j5heuq0w5a0dmlpvy6cd