ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.3 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಸದಸ್ಯ:Vikashegde 2 9037 322071 307116 2026-05-24T05:40:31Z Vikashegde 1258 /* ಉಪಯುಕ್ತ ಪುಟಗಳು */ 322071 wikitext text/x-wiki ವಿಕಿ ಸಂಪಾದಕರಲ್ಲೊಬ್ಬ. * [[ವಿಕಿಸೋರ್ಸ್:ಯೋಜನೆ]] * [[ವಿಕಿಸೋರ್ಸ್:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ]] * [[ವಿಕಿಸೋರ್ಸ್:ಯೋಜನೆ/ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ]] * [[:ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] <div style="background-color: #f8f8ff; border: 2px solid #e2e2ff; padding: 0.6em; padding-top: none;"> '''[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]''' :‌ [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅ| ಅ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಆ| ಆ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಇ| ಇ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಈ| ಈ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಉ| ಉ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಊ| ಊ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಎ| ಎ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಏ| ಏ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಐ| ಐ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಒ| ಒ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಓ| ಓ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಔ| ಔ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಂ| ಅಂ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಃ| ಅಃ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಕ| ಕ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಚ| ಚ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಟ| ಟ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ತ| ತ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಪ| ಪ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಗ| ಗ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಜ| ಜ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಡ| ಡ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ದ| ದ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಬ| ಬ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ನ| ನ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಮ| ಮ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಯ| ಯ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ರ| ರ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಲ| ಲ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ವ| ವ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಶ| ಶ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಷ| ಷ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಸ| ಸ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಹ| ಹ ]] </div> == ಪ್ರಕಟಿಸಿದ ಕೆಲವು ಪುಸ್ತಕಗಳು - ರೆಫರೆನ್ಸ್ == * [[ಪರಿವಿಡಿ:Kannadigara Karma Kathe.pdf]] * [[ಪರಿವಿಡಿ:ಹಳ್ಳಿಯ ಚಿತ್ರಗಳು.djvu]] ==ಉಪಯುಕ್ತ ಪುಟಗಳು== * [[ವಿಕಿಸೋರ್ಸ್:ವಿಕಿಸೋರ್ಸ್ ಕೈಪಿಡಿ]] *[[ಪುಟ:ಮನಮಂಥನ.pdf/೨೮೩]] ==WIP== * [[ಪರಿವಿಡಿ:ಹಗಲಿರುಳು.djvu]] * [[ಪರಿವಿಡಿ:ಕಮ್ಯೂನಿಸಂ.djvu]] 90rx2bnzxq3yzunvc7iy0b45gcto5bp 322072 322071 2026-05-24T05:41:26Z Vikashegde 1258 /* ಉಪಯುಕ್ತ ಪುಟಗಳು */ 322072 wikitext text/x-wiki ವಿಕಿ ಸಂಪಾದಕರಲ್ಲೊಬ್ಬ. * [[ವಿಕಿಸೋರ್ಸ್:ಯೋಜನೆ]] * [[ವಿಕಿಸೋರ್ಸ್:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ]] * [[ವಿಕಿಸೋರ್ಸ್:ಯೋಜನೆ/ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ]] * [[:ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] <div style="background-color: #f8f8ff; border: 2px solid #e2e2ff; padding: 0.6em; padding-top: none;"> '''[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]''' :‌ [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅ| ಅ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಆ| ಆ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಇ| ಇ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಈ| ಈ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಉ| ಉ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಊ| ಊ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಎ| ಎ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಏ| ಏ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಐ| ಐ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಒ| ಒ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಓ| ಓ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಔ| ಔ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಂ| ಅಂ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಃ| ಅಃ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಕ| ಕ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಚ| ಚ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಟ| ಟ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ತ| ತ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಪ| ಪ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಗ| ಗ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಜ| ಜ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಡ| ಡ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ದ| ದ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಬ| ಬ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ನ| ನ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಮ| ಮ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಯ| ಯ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ರ| ರ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಲ| ಲ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ವ| ವ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಶ| ಶ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಷ| ಷ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಸ| ಸ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಹ| ಹ ]] </div> == ಪ್ರಕಟಿಸಿದ ಕೆಲವು ಪುಸ್ತಕಗಳು - ರೆಫರೆನ್ಸ್ == * [[ಪರಿವಿಡಿ:Kannadigara Karma Kathe.pdf]] * [[ಪರಿವಿಡಿ:ಹಳ್ಳಿಯ ಚಿತ್ರಗಳು.djvu]] ==ಉಪಯುಕ್ತ ಪುಟಗಳು== * [[ವಿಕಿಸೋರ್ಸ್:ವಿಕಿಸೋರ್ಸ್ ಕೈಪಿಡಿ]] * [[ಪುಟ:ಮನಮಂಥನ.pdf/೨೮೩]] * [[ಪುಟ:ಮನಮಂಥನ.pdf/೨೮೨]] ==WIP== * [[ಪರಿವಿಡಿ:ಹಗಲಿರುಳು.djvu]] * [[ಪರಿವಿಡಿ:ಕಮ್ಯೂನಿಸಂ.djvu]] 79dkpd0stvp2vqeyg6lzb4xrku13u7j 322077 322072 2026-05-24T05:44:23Z Vikashegde 1258 /* ಉಪಯುಕ್ತ ಪುಟಗಳು */ 322077 wikitext text/x-wiki ವಿಕಿ ಸಂಪಾದಕರಲ್ಲೊಬ್ಬ. * [[ವಿಕಿಸೋರ್ಸ್:ಯೋಜನೆ]] * [[ವಿಕಿಸೋರ್ಸ್:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ]] * [[ವಿಕಿಸೋರ್ಸ್:ಯೋಜನೆ/ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ]] * [[:ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] <div style="background-color: #f8f8ff; border: 2px solid #e2e2ff; padding: 0.6em; padding-top: none;"> '''[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]''' :‌ [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅ| ಅ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಆ| ಆ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಇ| ಇ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಈ| ಈ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಉ| ಉ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಊ| ಊ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಎ| ಎ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಏ| ಏ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಐ| ಐ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಒ| ಒ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಓ| ಓ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಔ| ಔ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಂ| ಅಂ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಃ| ಅಃ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಕ| ಕ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಚ| ಚ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಟ| ಟ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ತ| ತ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಪ| ಪ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಗ| ಗ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಜ| ಜ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಡ| ಡ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ದ| ದ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಬ| ಬ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ನ| ನ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಮ| ಮ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಯ| ಯ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ರ| ರ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಲ| ಲ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ವ| ವ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಶ| ಶ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಷ| ಷ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಸ| ಸ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಹ| ಹ ]] </div> == ಪ್ರಕಟಿಸಿದ ಕೆಲವು ಪುಸ್ತಕಗಳು - ರೆಫರೆನ್ಸ್ == * [[ಪರಿವಿಡಿ:Kannadigara Karma Kathe.pdf]] * [[ಪರಿವಿಡಿ:ಹಳ್ಳಿಯ ಚಿತ್ರಗಳು.djvu]] ==ಉಪಯುಕ್ತ ಪುಟಗಳು== * [[ವಿಕಿಸೋರ್ಸ್:ವಿಕಿಸೋರ್ಸ್ ಕೈಪಿಡಿ]] * [[ಪುಟ:ಮನಮಂಥನ.pdf/೨೮೩]] - index * [[ಪುಟ:ಮನಮಂಥನ.pdf/೨೮೨]] - page vertical/horizontal centre alignment * [[ಪುಟ:ಹಗಲಿರುಳು.djvu/೬]] - image crop ==WIP== * [[ಪರಿವಿಡಿ:ಹಗಲಿರುಳು.djvu]] * [[ಪರಿವಿಡಿ:ಕಮ್ಯೂನಿಸಂ.djvu]] 36ma64fzhd7wz2b0ztl1d0ghwf8d5ui ಪುಟ:ದೀಕ್ಷೆ.pdf/೨೧ 104 19131 322085 277374 2026-05-24T06:29:33Z Shreelatha.Halemane 7642 /* Validated */ 322085 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=348 |right=ಕನಸು}} ನಾರಣಪ್ಪನೆಂದ: {{gap}}"ಬನ್ನಿ, ಹೋಗೋಣ."<br /> {{gap}}ತಮ್ಮಿಬ್ಬರ ನಡುವೆ ಪುಸ್ತಕಗಳನ್ನಿರಿಸಿ ಬೀದಿಗೆ ಬೆನ್ನು ಮಾಡಿ ಮನೆಗಳತ್ತ ನೋಡುತ್ತ ಇಬ್ಬರೂ ಕುಳಿತು ಬಳಿಕ,ಮುರಲೀಧರ ಕೇಳಿದ:<br /> {{gap}}"ನಿಮಗೆ ರಾಮಚಂದ್ರಯ್ಯ ಅ೧ತ ಯಾರಾದರಾ ಗೊತ್ತಾ?"<br /> {{gap}}"ರಾಮಚಂದ್ರಯ್ಯ? ಇಲ್ಲ, ಯಾರು?"<br /> {{gap}}“ಪೋಲೀಸ ಸಬ್ ಇನ್ಸ್ಪೆಕ್ಟರಂತೆ. ಸ್ಪೆಷಲ್ ಬ್ರಾಂಚಿನವನಂತೆ. ಶನಿವಾರ ಸಾಯಂಕಾಲ ನನ್ನ ಕೊಠಡಿಗೆ ಬ೧ದಿದ್ದ..."<br /> {{gap}}...ಉಸಿರು ಬಿಗಿ ಹಿಡಿದು ನಾರಣಪ್ಪ ಮುರಲೀಧರನ ಮಾತುಗಳಿಗೆ ಕಿವಿಗೊಟ್ಟ,ನಡ ಮಾತನಾಡಲಿಲ್ಲ. ಉದಾ. ರವೆತ್ತಲಿಲ್ಲ. ಅಲ್ಲಗಳೆಯುವ ಉತ್ತರ ಕೊಡಲಿಲ್ಲ...<br /> {{gap}}...ಮೊದಲ ಉದ್ವೇಗ ಇಳಿದರೂ ತುಸು ಕಂಪಿಸುತ್ತಲಿದ್ದ ಧ್ವನಿಯಲ್ಲಿ ಮುರಲೀಧರ ಕೇಳಿದ :<br /> {{gap}}"ನನ್ನ ಮಾತಿನಲ್ಲಿ ನಿಮಗೆ ನಂಬಿಕೆ ಇದೆ, ಅಲ್ವಾ?"<br /> {{gap}}ನಾರಣಪ್ಪ ನಸುನಕ್ಕ. ಆತನ ಒಣಗಿದ್ದ ಗಂಟಲಲ್ಲಿ ತಡವರಿಸಿ ಉರುಳುತ್ತ ಮಾತು ಹೊರಬಂತು:<br /> {{gap}}"ಇಲ್ಲದೆ ಏನ್ರಿ?"<br /> {{gap}}ಮತ್ತೆ ಮೌನ ನೆಲೆಸಿತು. ಪರಿಸ್ಥಿತಿಯ ಗ೦ಬೀರತೆ ಕುರಿತು ಯೋಚಿಸಿದ ನಾರಣಪ್ಪ.<br /> {{gap}} ಕೆಟ್ಟ ಸುದ್ದಿಯನ್ನು ತ೦ದುಕೊಟ್ಟ, ತಾನು ಒಳ್ಳೆಯದೇನನಾದರೂ ಹೇಳಬೇಕು ಎಂದು ಮುರಲೀಧರನಿಗೆ ಅನಿಸಿತು.<br /> {{gap}}"ಇನ್ನೊಮ್ಮೆ ಬರಲಿ ಆತ! ಚೆನಾಗಿ ಭೀಮಾರಿ ಮಾಡಿ ಕಳಿಸ್ತೀನಿ."<br /> {{gap}}ನಾರಣಪ್ಪ,ಅಸಮ್ಮತಿ ಸೂಚಕವಾಗಿ ತಲೆಯಲ್ಲಾಡಿಸುತ್ತ ಅಂದ:<br /> {{gap}}"ಹಾಗೆ ಮಾಡ್ಬೇಡಿ. ಸುಮ್ನೆ ಯಾತಕ್ಕೆ ಅಪಾಯಕ್ಕೆ ಗುರಿಯಾಗ್ರಿಡ್ತೀರಾ?" <br /> {{gap}}ಆ ಮಾತನ್ನು ಮುರಲೀಧರ ನಿರೀಕ್ಷಿಸಿರಲಿಲ್ಲ.<br /> {{gap}}"ಮತ್ತೆ? ಗೂಢಚಾರನಾಗು ಅಂತೀರಾ?"<br /> {{gap}}"ಹಾಗಂದ್ರೆ? ಜಗಳಕ್ಕೆ ಹೋಗ್ಬೇಡಿ, ಅಷ್ಟೇ."<br /> {{gap}}ಆತ ಸಮವಯಸ್ಕನೇ ಆದರೂ, ಬಹಳ ಹಿರಿಯರಾದವರು ಆಡಿದ ಹಾಗಿತ್ತು ಮಾತು. ನಾರಣಪ್ಪನಿಂದ ಹೆಚ್ಚು ವಿಷಯ ತಿಳಿದುಕೊಳ್ಳಬೇಕು,ಆ ರಹಸ್ಯ ಚಳವಳಿ ಯಲ್ಲಿ ತಾನೂ ಪಾಲುಗೊಳ್ಳಬೇಕು, ಅಪಾಯದ ಹೊಣೆಗಾರಿಕೆಯನ್ನು ತಾನೂ ಸ್ವಲ್ಪ ಹೊರಬೇಕು-ಎನಿಸಿತು ಮುರಲೀಧರನಿಗೆ.<br /> {{gap}}"ನನ್ನಿಂದ నిಮಗೆ ಯಾವತ್ತಾದರೂ ಏನಾದರೂ ಸಹಾಯ ಬೇಕೆನಿಸಿದರೆ<noinclude></noinclude> czcntse890m0887mjxzzd6iewsy45yn ಪುಟ:ದೀಕ್ಷೆ.pdf/೨೨ 104 19132 322086 277104 2026-05-24T06:32:23Z Shreelatha.Halemane 7642 /* Validated */ 322086 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ|right=349}} ಖಂಡಿತ ಕೇಳಿ ನಾರಣಪ್ಪ."<br /> {{gap}}ಆತ ಸಲಿಗೆಯು,ಹೃತ್ಪೂರ್ವಕವಾದ, ನಗೆ ನಕ್ಕ.<br /> "ಅಂಥಾದೇನಿಲ್ರಿ, ಮುಚ್ಚುಮರೆ ಯಾಕೆ ಅ೦ತ ನನಗೂ ಎಷ್ಟು ಸಾರಿ ಅನಿಸುತ್ತೆ, ನಾವು ಸತ್ಯ ಅಂತ ನಂಬಿದ್ದನ್ನ ಹೇಳೋದಕ್ಕೆ ಮಾಡೋದಕ್ಕೆ ಯಾರ ಹೆದರಿಕೆ? ಆದರೆ ನಮ್ಮಣ್ಣ__"<br /> {{gap}}ಮಾತು ನಿಂತಿತು. ಹೊರಬರುವುದು ಉಚಿತವಲ್ಲವೇನೋ ಎನ್ನುವಂತೆ ಪದ ಗಳು ಒಳಗೇ ತಲೆಮರೆಸಿಕೊoಡುವು.<br /> {{gap}}ಮುರಲೀಧರ ಅದನ್ನು ಗಮನಿಸಲಿಲ್ಲ. ಮತ್ತೆ ಪ್ರವೇಶಿಸಲಿಲ್ಲ ಕೆದಕಿ ಕೇಳಲಿಲ್ಲ ಸ್ವಲ್ಪ ತಡೆದು,ಸ್ವರ ಕೇಳಿದರು ಸ್ವಗತ ಎನ್ನುವ೦ತೆ,ನಾರಣಪ್ಪ ನುಡಿದ:<br /> {{gap}}"ಈ ಖಾದಿ ಕೈಕೊಡುತ್ತೆ ಅಂತ ನನಗೆ ಗೊತ್ತಿತ್ತು.ದೇಶಕ್ಕೋಸ್ಟರ ಜೈಲು ಅನುಭವಿಸೋಕೆ ನಾನೇನೂ ಹೆದರೋದಿಲ್ಲ. ಆದರೆ ನಮ್ಮಮ್ಮ ಸ೦ಕಟ ಪಟ್ಕೋತಾಳೆ."<br /> {{gap}}ತನ್ನಷ್ಟಕ್ಕೇ ಇರುತ್ತಿದ್ದ ಆ ಒಂದು ಜೀವದ ಒಡಲಲ್ಲಿ ಅಂತಹ ಯೋಜನೆಗಳೂ ಇದುವೆಂಬುದನ್ನು ಆ ವರೆಗೂ ತಾನು ತಿಳಿದೇ ಇರಲಿಲ್ಲವಲ್ಲ ಎಂದು ಮುರಲೀಧರನಿಗೆ ಸೋಜಿಗವೆನಿಸಿತು. ಆ ಸಹಪಾಠಿಯ ವಿಷಯದಲ್ಲಿ ಆತನಿಗೆ ಗೌರವ ಹುಟ್ಟಿತು.<br /> {{gap}}"ನಾರಣಪ್ಪ ನನ್ನಿಂದ ನಿಮಗೇನಾದರೂ ಉಪಯೋಗವಾದರೆ ಸಂತೋಷವೇ ಇನ್ನೇನೂ ಇಲ್ಲದೆ ಹೋದರೂ ನಮ್ಮೊಳಗಿನ ಪರಿಚಯಕ್ಕಾದರೂ ಆ ಇನ್ಸ್ಪೆಕ್ಟರ್ ಕಾರಣಾದ| ಅದಕ್ಕಾಗಿ ಆತನಿಗೆ ಧನ್ಯವಾದ ಅರ್ಪಿಸಬಹುದು. ಏನಂತೀರಾ?"<br /> {{gap}}ನಗುವ ಅಭಾಸವೇ ಆ ತುಟಿಗಳಿಗೆ ಇಲ್ಲವೇನೋ ಎಂದು ಮುರಲೀಧರ ಹಿಂದೆ ಭಾವಿಸಿದ್ದ. ಆ ಭಾವನೆ ನಿಜವಾಗಿರಲಿಲ್ಲ. ನಾರಣಪ್ಪನ ಮುಖದಿ೦ದ ಮ೦ದಹಾಸ, ಬೇಕು ಎ೦ದಾಗಲೆಲ್ಲ ಅತ್ಯ೦ಥ ಸಹಜವಾಗಿ ಸೂಸುತಿತ್ತು.<br /> {{gap}} "ನೀನಾಗಿಯೇ ನಿಮ್ಮ ಪರಿಚಯ ಮಾಡ್ಕೋಬೇಕೊಂತಿದ್ದೆ. ನೀವು ಕತೆಗಿತೆ ಬರೀತೀರಿ ಅಲ್ವೆ?"<br /> {{gap}}"ఇಲ್ವಲ್ಲ! ಯಾರು ಹಾಗಂದರು?"<br /> {{gap}}ಮಾತು ಪ್ರಿಯವೆನಿಸಿದರೂ ಘನತರವಾದ ಆರೋಪವೇ!, ಹಳೆಯ ಕಥೆ.ಊರಲ್ಲಿ ಪ್ರೌಢಶಾಲೆಯಲ್ಲಿದ್ದಾಗ ಏನನ್ನೋ ಬರೆದಿದ್ದ ಒಂದು ಕೈಬರೆಹದ ಪತ್ರಿಕೆಗೆ ಸಂಪಾದಕನಾಗಿದ್ದ. ಅ೦ತದೊ೦ದು ಹಳೆಯ ಸಂಚಿಕೆಯನ್ನು ಇಲ್ಲಿ ಕೆಲ ಹುಡುಗರು ನೊಡೀಯು ಇದ್ದರು ಹಿಂದೆ.<br /> {{gap}}"ಮಹದೇವಯ್ಯ ಹೇಳ್ದ. ಈಗಲ್ಲಾಂತಿಟ್ಕೊಳ್ಳಿ {{gap}}ಸುದ್ದಿಯ ಮೂಲ ಸ್ಪಷ್ಟವಾಯಿತು {{gap}}"ಏನು ಮಹಾ? ಅಂಥ ಕಥೆ ಎಲ್ರೂ ಬರೀತಾರೆ."<br /> {{gap}}"ಇರಬಹುದು. ಆದರೆ ನಾನು ಬರೆಯೋದಿಲ್ಲ ನೋಡಿ."<noinclude></noinclude> k2j2cu8notdex7dh0wc5kasjpzunhuc ಪುಟ:ದೀಕ್ಷೆ.pdf/೨೩ 104 19133 322087 277232 2026-05-24T06:36:26Z Shreelatha.Halemane 7642 /* Validated */ 322087 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=350|center=|right=ಕನಸು}} {{gap}}“ಈಗೇನೂ ಅಂಥ ಉತ್ಸಾಹ ನನಗಿಲ್ಲ. ವಿದ್ಯಾರ್ಜನೆಗೆ ಅಂತ ಈ ಊರಲ್ಲಿ ಕಾಲಯಾಪನೆ ಮಾಡೋದೇ ದೊಡ್ಡ ಸಮಸ್ಯೆಯಾಗಿದೆ."<br /> {{gap}}ನಾರಣಪ್ಪ ఒలವು ತು೦ಬಿದ ದೃಷ್ಟಿಯಿ೦ದ ಮುರಲೀಧರನನ್ನು ನೋಡಿದ.<br /> {{gap}}"ನನಗೆ ಇದು ಹುಟ್ಟೂರು ಅನ್ನೋದಷ್ಟೇ ವ್ಯತ್ಯಾಸ. ನಾವೇನೂ ಶ್ರೀಮಂತ ರಲ್ಲ, ಆಗಲೇ ಹೇಳಿದೆನಲ್ಲ. ಬಹಳ ದಿವಸದಿಂದ ನಿಮ್ಮನ್ನು ನೋಡ್ತಿದ್ದೆ, ಪರಿಚಯ ಮಾಡೊಬೇಕು ಅನಿಸಿತ್ತು, ಆದರೂ ಸಂದರ್ಭ ಒದಗಿರ್ಲಿಲ್ಲ.”<br /> {{gap}}"ನಾನೂ ಸ್ವಲ್ಪ ಮಟ್ಟಿಗೆ ಸಂಕೋಚ ಪ್ರವೃತ್ತಿಯವನೇ. ನಾನಾಗಿ ಯಾರ ಜತೆಲೂ ಸೇರಿಕೊಳ್ಳುದಿಲ್ಲ."<br /> {{gap}}“ಗೊತ್ತು."<br /> {{gap}}ಇಬ್ಬರನ್ನೂ ಬಿಗಿದುಬಿಟ್ಟಿತ್ತು, ಇಂತಹದೇ ಎಂದು ಹೇಳಲಾಗದ, ಅಗೋಚರವಾದ, ಒ೦ದು ರಜ್ಜು . ಆ ಭೇಟಿಯವರೆಗೆ ತನ್ನ ಹೃದಯ ಭಾರವಾಗಿತ್ತೆಂದು ನಂಬಲು ಮುರಲೀಧರ ಈಗ ಸಿದ್ಧನಿರಲಿಲ್ಲ. ನಾರಣಪ್ಪನೂ ಅಷ್ಟೇ. ಅಪಾಯದ ಕರಿಯ ಛಾಯೆ ಆವರಿಸಿದ್ದ ವ್ಯಕ್ತಿಯಂತೆ ಆತ ತೋರುತ್ತಲೇ ಇರಲಿಲ್ಲ. ಇಬ್ಬರಿಗೂ ಪ್ರಿಯವಾದ ವಿಷಯಗಳನ್ನು ಕುರಿತು ಬಾಲ್ಯ ಸ್ನೇಹಿತರು ಮಾತನಾಡುವಂತಿತ್ತು, ಆ ಸಂಭಾಷಣೆ.<br /> {{gap}}ಕಾಲೇಜಿನ ಕಡೆ ನೋಡಿ ನಾರಣಪ್ಪನೆಂದ:<br /> {{gap}}“ಹುಡುಗರೆಲ್ಲ ಒಳಗೆ ಹೋಗ್ತಿದಾರೆ, ಏಳಿ."<br /> {{gap}}ಎದ್ದು ನಿಂತಾಗ ಮುರಲೀಧರನನ್ನು ನೋಡಿ, ಬೀದಿಯತ್ತ ತಿರುಗಿ, ಮತ್ತೆ ನಾರಣಪ್ಪನೇ ಅಂದ;<br /> {{gap}}"ಗೂಢಚಾರರೆಲ್ಲ ಈ ಬೀದೀಲಿ ಓಡಾಡೋದು ಜಾಸ್ತಿ, ನನ್ನ ಪರಿಚಯವಿದ್ದೊರು ನಮ್ಮಿಬ್ಬರನ್ನೂ ಜತೇಲಿ ನೋಡಿದರು ಅ೦ದರೆ__"<br /> {{gap}}"ಮಹಾ! ನೋಡ್ಕೊಳ್ಲಿ, ನನಗೆ ಅದರ ಯೋಚನೆ ಇಲ್ಲ, ಯಾರ ಹೆದರಿಕೆಯೂ ನನಗಿಲ್ಲ."<br /> {{gap}}ಅವರ ಗೆಳೆತನಕ್ಕೆ ಮುದ್ರೆಯಂತಿತ್ತು ಆ ಮಾತು.<br /> {{gap}}ಕಾಲೇಜಿನ ಹತ್ತಿರ ಬರುತಿದ್ದಂತೆ ನಾರಣಪ್ಪ ಕೇಳಿದ:<br /> {{gap}}“ ಆತನ ಹೆಸರು ರಾಮಚಂದ್ರಯ್ಯ ಅ೦ತ ಅ೦ದ್ರಿ,ಅಲ್ವೆ?"<br /> {{gap}}"ಹೂ ಯಾರೊ ಲೆಕ್ಚರರ್ ಇರಬಹುದೂ೦ತಿದ್ದೆ ಮೊದಲು,ಬರೇ ನೋಟಕ್ಕೆ,ಅಸಾಮಿ ಎ೦ಥವನೂ೦ತ ಗೊತ್ತೆ ಆಗಲ್ಲ."<br /> {{gap}}ನಾರಣಪ್ಪ ನಸುನಕ್ಕು ಅ೦ದ:<br /> {{gap}}“నిజ. ಬರೀ ನೊಟದಿ೦ದಲೆ ಯಾವಾಗಲೂ ಒಬ್ಬರ ಗುಣ ಕ೦ಡುಹಿಡಿಯೋಕೆ ಆಗಲ್ಲ".<br /><noinclude></noinclude> ag3xsg5kca3w5cx2ca8z2kmkw4qd2hu ಪುಟ:ದೀಕ್ಷೆ.pdf/೨೪ 104 19134 322088 277326 2026-05-24T06:40:12Z Shreelatha.Halemane 7642 /* Validated */ 322088 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ದೀಕ್ಷೆ|center=|right=351}} {{gap}}ನೋಟ ಮಾತ್ರದಿಂದ ನಾರಣಪ್ಪನ ಗುಣವನ್ನು ತಿಳಿದಿದ್ದನೆ ಮುರಲೀಧರ? ಗೆಳೆಯನ ಮಾತಿನ ಸೂಕ್ಶ್ಮವನ್ನು ಗ್ರಹಿಸಿ ಆತನಿಗೆ ನಗು ಬ೦ತು<br /> {{center=೪|}} {{gap}}ಆ ದಿನ ಆರಂಭವಾಗಲಿದ್ದ ಕ್ರಿಕೆಟ್ ಪಂದ್ಯಾಟ, ನಗರದ ಕ್ರೀಡಾಭಿಮಾನಿಗಳ ಗಮನ ಸೆಳೆದಿತ್ತು.ಬಹು ಮ೦ದಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ರಜಾ ಕೊಡಲು ನಿರ್ಧರಿಸಿದರು.<br /> {{gap}}ಮುರಲೀಧರ ಕ್ರಿಕೆಟ್ ಹುಚ್ಚನಾಗಿರಲಿಲ್ಲ ಆದರೆ ಎಳೆಯರ ಉತ್ಸಾಹ ಅ೦ಟು ಜಾಡ್ಯದಂತಿತ್ತು.ಮೊದಲ ಪಿರೆಡ್ ಮುಗಿಸಿಕೊ೦ಡೂ ತಾನು ಹೊರಬೀಳಬೇಕು,ಎ೦ದು ಯೊಚಿಸುತ್ತ ತರಗತಿ ಸೇರಿದ.<br /> {{gap}}ಅಲ್ಲಿ ಇದ್ದವರು ಏಳೆಂಟು ಜನ, ಮುರಲೀಧರನ ಕಣ್ಣಗಳು ತಮಗೆ ಬೇಕಾ ಗಿದ್ದ ವ್ಯಕ್ತಿಯನ್ನು-ನಾರಣಪ್ಪನನ್ನು-ಹುಡುಕಿದುವು. ಆತ ಬಂದಿರಲಿಲ್ಲ, ಕ್ರೀಡಾಂಗಣದ ಪ್ರೇಕ್ಷಕರಲ್ಲಿ ಒಬ್ಬನಾಗಿ ನಾರಣಪ್ಪ ಕುಳಿತಿರಬಹುದೆಂದು ನಂಬುವುದು ಕಷ್ಟವಾಗಿತ್ತು. ತೋರಿಕೆಗೆ ಶೀತಲವೆಂದು ಕಂಡರೂ ಉರಿಯುತ್ತಿದ್ದ ಬೆಂಕಿಯಲ್ಲವೆ ಆ ಹೃದಯದಲ್ಲಿ ದ್ದುದು? ನೂರು ಜನರ ನೋವನ್ನು ನುಂಗಿದ್ದ ಆ ವಿಷಕ೦ಠ,ಸ೦ತೊಷ ಸ೦ಮಾರ೦ಭದಲ್ಲಿ ಮೈಮರೆಯುವುದುಂಟೆ?...<br /> {{gap}}ಉಪನ್ಯಾಸಕರು ఒಳಬ೦ದು ತರಗತಿಯನ್ನು ನೋಡಿದರು. ಬೇಸರವನ್ನು ತೋರ್ಪಡಿಸದೆ ಹುಡುಗರನ್ನು ಉದ್ದೇಶಿಸಿ ಅವರೆ೦ದರು:<br /> {{gap}}“ ನೀವು ಯಾಕಪ್ಪಾ ಬ೦ದಿದೀರಿ? ಕ್ರಿಕೆಟ್ ಬೇಡವೆ ನಿಮಗೆ?" {{gap}}ವಿದ್ಯಾರ್ಥಿಗಳು ಕಿರುನಗೆಯು ಪ್ರತ್ಯುತ್ತರವಿತ್ತರು;<br /> {{gap}}ಹಾಜರಿ ಹಾಕುವ ಕೆಲಸ ಮುಗಿಸಿ ಅಧ್ಯಾಪಕರೆಂದರು.<br /> {{gap}}"ಇಷ್ಟು ಜನಕ್ಕೆ ಎ೦ಥ ಪಾಠ?ನೀವು ಹೋಗಿ ಬೇಕಾದರೆ ."<br /> {{gap}}ಎದ್ದು ಹೊರಬೀಳಲು ಹುಡುಗರು ಹಿಂದುಮುಂದು ನೋಡುತ್ತಿದ್ದುದನ್ನು ಕ೦ಡು ಅಧ್ಯಾಪಕರೇ ಮತ್ತೂ ಅಂದರು;<br /> {{gap}}"ತಮಾಷೆಯಲ್ಲ. ನೀವು ಹೋಗ್ಬಹುದು. ನಾವಾಗಿಯೇ ಮೊದಲೇ ರಜಾ ಜಾಹೀರು ಮಾಡಿದ್ದರೆ ಚೆನ್ನಾಗಿತ್ತು."<br /> {{gap}}ಅಷ್ಟು ಹೇಳಿ ಅವರೇ ಎದ್ದರು. ಶಿಕ್ಶಕರನ್ನು ಹಿ೦ಬಾಲಿಸುವುದು ವಿದ್ಯಾರ್ಥಿಗಳಿಗೆ ಬಲು ಸುಲಭವೆನಿಸಿತು.<br /> {{gap}}ಬೀದಿಗಿಳಿದ ಮುರಲೀಧರ ಆಟದ ಬಯಲಿಗೆ ಅಭಿಮುಖ<noinclude></noinclude> c8u3yc78i0umm0cjtx4ripg0jbd3xx8 322089 322088 2026-05-24T06:40:32Z Shreelatha.Halemane 7642 322089 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ದೀಕ್ಷೆ|center=|right=351}} {{gap}}ನೋಟ ಮಾತ್ರದಿಂದ ನಾರಣಪ್ಪನ ಗುಣವನ್ನು ತಿಳಿದಿದ್ದನೆ ಮುರಲೀಧರ? ಗೆಳೆಯನ ಮಾತಿನ ಸೂಕ್ಶ್ಮವನ್ನು ಗ್ರಹಿಸಿ ಆತನಿಗೆ ನಗು ಬ೦ತು<br /> {{center|೪}} {{gap}}ಆ ದಿನ ಆರಂಭವಾಗಲಿದ್ದ ಕ್ರಿಕೆಟ್ ಪಂದ್ಯಾಟ, ನಗರದ ಕ್ರೀಡಾಭಿಮಾನಿಗಳ ಗಮನ ಸೆಳೆದಿತ್ತು.ಬಹು ಮ೦ದಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ರಜಾ ಕೊಡಲು ನಿರ್ಧರಿಸಿದರು.<br /> {{gap}}ಮುರಲೀಧರ ಕ್ರಿಕೆಟ್ ಹುಚ್ಚನಾಗಿರಲಿಲ್ಲ ಆದರೆ ಎಳೆಯರ ಉತ್ಸಾಹ ಅ೦ಟು ಜಾಡ್ಯದಂತಿತ್ತು.ಮೊದಲ ಪಿರೆಡ್ ಮುಗಿಸಿಕೊ೦ಡೂ ತಾನು ಹೊರಬೀಳಬೇಕು,ಎ೦ದು ಯೊಚಿಸುತ್ತ ತರಗತಿ ಸೇರಿದ.<br /> {{gap}}ಅಲ್ಲಿ ಇದ್ದವರು ಏಳೆಂಟು ಜನ, ಮುರಲೀಧರನ ಕಣ್ಣಗಳು ತಮಗೆ ಬೇಕಾ ಗಿದ್ದ ವ್ಯಕ್ತಿಯನ್ನು-ನಾರಣಪ್ಪನನ್ನು-ಹುಡುಕಿದುವು. ಆತ ಬಂದಿರಲಿಲ್ಲ, ಕ್ರೀಡಾಂಗಣದ ಪ್ರೇಕ್ಷಕರಲ್ಲಿ ಒಬ್ಬನಾಗಿ ನಾರಣಪ್ಪ ಕುಳಿತಿರಬಹುದೆಂದು ನಂಬುವುದು ಕಷ್ಟವಾಗಿತ್ತು. ತೋರಿಕೆಗೆ ಶೀತಲವೆಂದು ಕಂಡರೂ ಉರಿಯುತ್ತಿದ್ದ ಬೆಂಕಿಯಲ್ಲವೆ ಆ ಹೃದಯದಲ್ಲಿ ದ್ದುದು? ನೂರು ಜನರ ನೋವನ್ನು ನುಂಗಿದ್ದ ಆ ವಿಷಕ೦ಠ,ಸ೦ತೊಷ ಸ೦ಮಾರ೦ಭದಲ್ಲಿ ಮೈಮರೆಯುವುದುಂಟೆ?...<br /> {{gap}}ಉಪನ್ಯಾಸಕರು ఒಳಬ೦ದು ತರಗತಿಯನ್ನು ನೋಡಿದರು. ಬೇಸರವನ್ನು ತೋರ್ಪಡಿಸದೆ ಹುಡುಗರನ್ನು ಉದ್ದೇಶಿಸಿ ಅವರೆ೦ದರು:<br /> {{gap}}“ ನೀವು ಯಾಕಪ್ಪಾ ಬ೦ದಿದೀರಿ? ಕ್ರಿಕೆಟ್ ಬೇಡವೆ ನಿಮಗೆ?" {{gap}}ವಿದ್ಯಾರ್ಥಿಗಳು ಕಿರುನಗೆಯು ಪ್ರತ್ಯುತ್ತರವಿತ್ತರು;<br /> {{gap}}ಹಾಜರಿ ಹಾಕುವ ಕೆಲಸ ಮುಗಿಸಿ ಅಧ್ಯಾಪಕರೆಂದರು.<br /> {{gap}}"ಇಷ್ಟು ಜನಕ್ಕೆ ಎ೦ಥ ಪಾಠ?ನೀವು ಹೋಗಿ ಬೇಕಾದರೆ ."<br /> {{gap}}ಎದ್ದು ಹೊರಬೀಳಲು ಹುಡುಗರು ಹಿಂದುಮುಂದು ನೋಡುತ್ತಿದ್ದುದನ್ನು ಕ೦ಡು ಅಧ್ಯಾಪಕರೇ ಮತ್ತೂ ಅಂದರು;<br /> {{gap}}"ತಮಾಷೆಯಲ್ಲ. ನೀವು ಹೋಗ್ಬಹುದು. ನಾವಾಗಿಯೇ ಮೊದಲೇ ರಜಾ ಜಾಹೀರು ಮಾಡಿದ್ದರೆ ಚೆನ್ನಾಗಿತ್ತು."<br /> {{gap}}ಅಷ್ಟು ಹೇಳಿ ಅವರೇ ಎದ್ದರು. ಶಿಕ್ಶಕರನ್ನು ಹಿ೦ಬಾಲಿಸುವುದು ವಿದ್ಯಾರ್ಥಿಗಳಿಗೆ ಬಲು ಸುಲಭವೆನಿಸಿತು.<br /> {{gap}}ಬೀದಿಗಿಳಿದ ಮುರಲೀಧರ ಆಟದ ಬಯಲಿಗೆ ಅಭಿಮುಖ<noinclude></noinclude> 0sqgmoph4i8auks00ejivszcrx6cfry ಪುಟ:ದೀಕ್ಷೆ.pdf/೨೬ 104 19136 322090 277111 2026-05-24T06:45:53Z Shreelatha.Halemane 7642 /* Validated */ 322090 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ |right= 353}} ಸಂಭವ, ಒ೦ದೆರಡು ಪ್ರಶ್ನೆಗಳಿಂದಲೇ, ಮ್ಯಾಚಿಗೆ ತಾನು ಬರ್ಲಿಲ್ಲವೆ೦ಬುದನ್ನು ಶ್ಯಾಮ ಕಂಡುಹಿಡಿಯಬಹುದು. ಆತನ ದೃಷ್ಟಿಯಲ್ಲಿ 'ಮೇಸ್ಟ್ರ' ಬೆಲೆ ಕಡಮೆಯಾಗಿ ತೋರಬಹುದು. ಆ ಎಳೆಯರ ಅಕ್ಕ...<br /> {{gap}}ಅಂತಹ ಪರಿಸ್ಥಿತಿಗೆ ಮುರಲೀಧರ ಸಿದ್ಧನಿರಲಿಲ್ಲ.<br /> {{gap}}ಅಲ್ಲದೆ, ಸಂಜೆ ಪಾಠ ಹೇಳಲು ಹೋಗುವ ಮನೆಯ ಹುಡುಗರೂ ಪಂದ್ಯಾಟದ ಪ್ರಸ್ತಾಪ ಮಾಡಲಾರರೆಂಬ ಭರವಸೆ ಎನು?<br /> {{gap}}ಒ೦ದು ವೇಳೆ ನಾರಣಪ್ಪನೂ ಒಳಗೇ ಇದ್ದನೆ೦ದರೆ?<br /> {{gap}}ಅರಿವಿಲ್ಲದಂತೆಯೇ ಆತ್ಮೀಯತೆಯ ಅವ್ಯಕ್ತ ರಜ್ಜು ಅವರಿಬ್ಬರನ್ನೂ ಬಂಧಿಸಿತ್ತು, ನಾರಣಪ್ಪನ ವಿಷಯದಲ್ಲಿ ಪ್ರೇಮ ಆದರಗಳು ಮುರಲೀಧರನಲ್ಲಿ ಮೊಳೆತಿದ್ದುವು. ಗೆಳೆತನದ ಬುನಾದಿಯಾದ ಆ ಸಂಭಾಷಣೆಯನ್ನು ಮೆಲುಕು ಹಾಕುತ್ತ ಎ‍‍ಷ್ಟೋ ಸಾರೆ ಮುರಲೀಧರನಲ್ಲಿ ಪ್ರಶ್ನಿಸಿದ್ದ: ಯಾಕೆ ಹೀಗೆ? ಯಾಕೆ? ನಾರಣಪ್ಪ ತನಗೆ ಪ್ರಿಯನಾಗಿ ತೋರುತ್ತಿರುವುದಕ್ಕೆ ಕಾರಣವೇನು? ಏನು?<br /> {{gap}}ಎಲ್ಲ ವಿದ್ಯಾರ್ಥಿಗಳು ಹಾಗಿರಲಿಲ್ಲ ನಾರಣಪ್ಪ. 'ನಾವು ಸ್ನೇಹಿತರಾಗಿರಲು ಇದೊಂದೇ ಗುಣ ಸಾಲದೆ?'-ಎನಿಸುತ್ತಿತ್ತು ಮುರಲೀಧರನಿಗೆ. ಸ್ವತಃ ಆತನ ಮನೋವೃತ್ತಿಯೂ ಅಂಥದೇ ಅಲ್ಲವೆ?<br /> {{gap}}ದೇಶದ ಸ್ವಾತ೦ತ್ರ್ಯ, ಸ್ವಾತ೦ತ್ರ್ಯಕ್ಕೋಸ್ಕರವಾದ ಹೋರಾಟ... ಗಹನವೆನಿಸಿದರೂ ಪವಿತ್ರ ವಿಚಾರಗಳು. ಅಂತಹ ವಿಚಾರಗಳಿರುವ ವ್ಯಕ್ತಿ, ವಿನೋದ ವಿಹರಗಳಿಗಾಗಿ ಹೆತ್ತವರ ಹಣವನ್ನು ವ್ಯಯಮಾಡುವುದೊಂದನ್ನೇ ತಿಳಿದಿದ್ದ ಅಸ೦ಖ್ಯ ವಿದ್ಯಾರ್ಥಿಗಳಿಗಿ೦ತ ಭಿನ್ನವಾಗಿರುವುದು ಸ್ವಾಭಾವಿಕವೇ ಸರಿ.<br /> {{gap}}“ಟಿಕೆಟ್ ಕೊಡಿ."<br /> {{gap}} ತೂತು ಮಡಿದ ಚುಕ್ಕಿಗಳುದ್ದಕ್ಕೂ ಹರಿದು ಒoದು ಕೈ ಹೊರ ನೀಡಿದ ಹಸುರು ಕಾಗದ. {{gap}}ದ್ವಾರಪಾಲಕನಿಗೆ ಅದರ ಅರ್ಪಣೆ.<br /> {{gap}}ಅಲ್ಲೊಬ್ಬ, ಎಲ್ಲರಿಗೂ ಕೇಳಿಸುವ೦ತೆ ತನ್ನಷ್ಟಕೆ ಅ೦ದುಕೊ೦ಡ;<br /> {{gap}}"ಒಳಗೆ ಜಾಗವೇ ಇಲ್ಲ. ಏನೂಂತ ಟಿಕೆಟ್ ಕೊಡ್ತಾ ಇದಾರೊ?"<br /> {{gap}}ಆತ ಸತ್ಯವನ್ನೇ ಆಡಿದ್ದ. ನಾಲ್ಕಾಣೆಯ ಅ೦ಕಣವೆಲ್ಲ ಭರ್ತಿಯಗಿತ್ತು.<br /> ಉಳಿದ ಕಡೆಗಳಲ್ಲಾ ಅಷ್ಟೆ, ಊಟ ತಿಂಡಿ ಪಾನೀಯಗಳ ಪರಿವೆ ಇಲ್ಲದೆ, ರಣಗುಡು ತ್ತಿದ್ದ ಬಿಸಿಲನ್ನು ಗಮನಿಸದೆ, ಎಳೆಯರಿಂದ ಮುದುಕರವರೆಗೆ ಜನ ಅಲ್ಲಿ ಕಿಕ್ಕಿರಿದು ನೆರೆದಿದ್ದರು. ಎಲ್ಲರ ದೃಷ್ಟಿ ಕೇಂದ್ರೀಕರಿಸಿದುದೂ ಆಡುತ್ತಿದ್ದ ಕ್ರೀಡಾಪಟುಗಳ ಮೇಲೆ. ನಿಮಿಷ ನಿಮಿಷಕ್ಕೂ ಆಡುವವರೊಡನೆ ಭಾಗಿಗಳಾಗುವ ಪ್ರೇಕ್ಷಕರು.<br /> ಔಟಯಿತೆ೦ದು ಆಟಗಾರ ನಿರಾಸೆಯ ನಿಟ್ಟುಸಿರು ಬಿಡದೆ ಇರಬಹುದು. ಆದರೆ {{rh|center=|left=|right=45}}<noinclude></noinclude> 8n68kkpsw3il491vd0qdzl2t2vay42o ಪುಟ:ದೀಕ್ಷೆ.pdf/೨೭ 104 19137 322091 277114 2026-05-24T06:48:35Z Shreelatha.Halemane 7642 /* Validated */ 322091 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=354|right=ಕನಸು}} ವೀಕ್ಷಕರ ಪಾಲಿಗೆ ಅದು ಯಮಯಾತನೆ. ಎಲ್ಲರನ್ನೂ ಅಣಕಿಸುತ್ತ ಚೆಂಡು ದೂರ ಬಲು ದೂರ ಹೋದರಂತೂ ಸಂಭ್ರಮದ ಕೋಲಾಹಲ ನೆರೆದವರ ಪಾಲಿಗೆ, ನಮ್ಮವರೆಂಬ ಅಭಿಮಾನವಿದ್ದರೂ ಹೊರಗಿನವರೆಂಬ ಭೇದಭಾವವಿರಲಿಲ್ಲ. ಮೆಚ್ಚುಗೆ ಸೂಚಿಸುವ ವಿಷಯದಲ್ಲಿ ಯಾರೂ ಜಿಪುಣರಾಗಿರಲಿಲ್ಲ.<br /> {{gap}}ಕೆಲ ಗಂಟೆಗಳ ಮಟ್ಟಿಗೆ ಜನಜಂಗುಳಿಯನ್ನು ಒಂದಾಗಿ ಬೆಸೆಯ ಹೊರಟಿತ್ತು ಆಟ.<br /> {{gap}}ನಿ೦ತವರ ನೂಕುನುಗ್ಗಲಿನಲ್ಲಿ ಸ್ವಲ್ಪ ಹೊತ್ತು ಮುರಲೀಧರ ಚಡಪಡಿಸಿದ. ಪುಸ್ತಕಗಳು ಕೈತಪ್ಪಿ ಹೋಗಬಾರದೆಂದು ಭದ್ರವಾಗಿ ಎದೆಗೆ ಅಮುಕಿ ಹಿಡಿದು, ಸಾಧ್ಯವಾದ ಕಡೆಗಳಲ್ಲೆಲ್ಲ ಆತ ದೃಷ್ಟಿಹರಿಸಿದ. ಬಿಳಿಯ ಪೋಷಾಕು ಅಲ್ಲಿ ಇಲ್ಲಿ ಕಾಣಿಸುತ್ತಿತ್ತು, ಆದರೆ ನಾರಣಪ್ಪ? ಎಲ್ಲಿ, ಯಾವ ಮೂಲೆಯಲ್ಲಿ ಇರುವ ಆತ?<br /> {{gap}}ಶ್ಯಾಮ, ನಳಿನಿ, ಅವರ ಅಕ್ಕ..ಸೀರೆಗಳೇ ಸೀರೆಗಳು, ಲ೦ಗಗಳು, ಫ್ರಾಕುಗಳು-ವಿವಿಧ ಬಣ್ಣಗಳ ಪ್ರದರ್ಶನ. ಅದು ದೂರದ ದೃಶ್ಯ. ಬಗೆ ಬಗೆಯ ಮನುಷಾಕೃತಿಗಳು ಮಾತ್ರ. ಪರಿಚಿತರನ್ನು ಗುರುತಿಸುವುದು ಸುಲಭವಾಗಿರಲಿಲ್ಲ.<br /> {{gap}}ಅಲ್ಲಲ್ಲಿ ಮುರಲೀಧರನ ಸಹಪಾಠಿಗಳು ಕೆಲವರು ಕಾಣಿಸಿಕೊಂಡರು. ಪುಸ್ತಕಗಳೊಡನೆ ಕಾಲೇಜಿಗೆಂದು ಬಂದವರೇ ಅಲ್ಲ ಅವರು. ಆ ದಿನದ ಕಾರ್ಯಕ್ರಮ ಅವರೆಲ್ಲರ ಪಾಲಿಗೆ ಪೂರ್ವ ನಿಶ್ಚಿತವೆಂಬುದನ್ನು ಅವರ ಬರಿಗೈಗಳೇ ಸಾರುತ್ತಿದ್ದುವು. <br /> {{gap}}ಒಮ್ಮಿ೦ದೊಮ್ಮೆಲೆ ಮುರಲೀಧರನಿಗೆ ತಾನು ಹಿಡಿದುಕೊ೦ಡಿದ್ದ ಪುಸ್ತಕಗಳ ನೆನಪಾಗಿ ನಾಚಿಕೆ ಎನಿಸಿತು. ಯಾವುದೊ ಸಭೆಯ ಒಳಕ್ಕೆ ಅಪರಿಚಿತ ಮನುಷ್ಯನ೦ತಾಯಿತು ಅವನ ಮನೋಸ್ಥಿತಿ.<br /> {{gap}}ಒಳಗೆ ತಾನು ಬರಲೇಬಾರದಾಗಿತ್ತು ಎಂದುಕೊಂಡ ಆತ. <br /> {{gap}}ಆಟ ನಡೆದಿತ್ತು. ಅಸಕ್ತಿ ಇಲ್ಲದೆಯೆ ಮುರಲೀಧರ ನಿ೦ತ.<br /> {{gap}}ಜನ ಉತ್ಸಾಹ ತೋರುತ್ತಿದ್ದರು; ಸಂತೋಷ ಸೂಚಿಸುತ್ತಿದ್ದರು: ಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆ ಗುಂಪಿನೊಡನೆ ಬೆರೆತಿದ್ದರೂ, ಒ೦ಟಿಯಾಗಿಯೇ ಇರುವ ಬೇರೆಯೇ ಜೀವವಾಗಿ ಮುರಲೀಧರ ಹೊತ್ತು ಕಳೆದ. ಜನರ ಹರ್ಷಧ್ವನಿಯೊಡನೆ ಯಾ೦ತ್ರಿಕವಾಗಿ ಆತನ ತುಟಿಗಳೂ ಮುಗುಳು ನಕ್ಕುವು. ಆದರೆ ಕಣ್ಣುಗಳು ಲವಲವಿಕೆ ತೋರಲಿಲ್ಲ<br /> {{gap}}ಆ ಪ್ರೇಕ್ಷಕರ ನಡುವೆ ನಾರಣಪ್ಪನಿಲ್ಲವೆಂಬ ಭಾವನೆಯೇ ಮುರಲೀಧರನಲ್ಲಿ ಬಲ ಗೊಂಡಿತು. ಆತ ಬ೦ದಿರಬಹುದೆಂಬ ಶಂಕೆಯಾದರಗೂ ಹೇಗೆ ಹುಟ್ಟಿತೊ?_ಎ೦ದು ತನಗೆ ತಾನೇ ಮುರಲೀಧರ ಛೀಮಾರಿ ಹಾಕಿದ.<br /> {{gap}}ನಿಂತೇ ಇದ್ದ ಕಾಲುಗಳು ತಮಗೆ ಆಯಾಸವಾಗುತ್ತಿದೆಯೆಂದು ಸೂಚನೆ ಕೊಟ್ಟುವು. ಮನಸ್ಸೇ ಇಲ್ಲದ ಮೇಲೆ ಕಾಲುಗಳೇನು ಮಾಡುತ್ತವೆ, ಪಾಪ!<br /> {{gap}}ಭುಜಗಳ ಮೇಲಿನಿಂದ ಇಣಿಕಿ ನೋಡಬೇಕಾದ ಆಟದ ಕಣ ಒಂದೆಡೆ;<noinclude></noinclude> 2z7kmptkdutxyr2sj96h81qoecdwzs2 ಪುಟ:ದೀಕ್ಷೆ.pdf/೨೮ 104 19138 322092 277226 2026-05-24T06:52:48Z Shreelatha.Halemane 7642 /* Validated */ 322092 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ದೀಕ್ಷೆ|center=|right=355}} ಸಮೀಪದಲ್ಲೆ ಬೆನ್ನಹಿ೦ದೆ ಇದ್ದ ಹೆಬ್ಬಾಗಿಲು ಒ೦ದೆಡೆ. ನಾಲ್ಕು ಹೆಜ್ಜೆ ನಡೆದರಾಯಿತು, ಬೀದಿ ಸಿಗುದವುದು.<br /> {{gap}}ಎರಡು ಮೂರು ಸಾರೆ ದ್ವಾರಪಾಲಕ ಸ್ವಯಂಸೇವಕರ ಕಡೆಗೆ ನೋಡಿದ ಮುರಲೀಧರ, ಮನಸ್ಸು ಗಟ್ಟಿಮಾಡಿಕೊಂಡು ಹೊರಟೇಬಿಟ್ಟ, ಹಾಗೆ ಹೊರಟ ತನ್ನನು ಯಾರೂ ಗುರುತಿಸದಿದ್ದರೆ ಸಾಕು, ಎ೦ಬುದೊ೦ದೇ ಆಗ ಆತನ ಮನಸ್ಸಿನೊಳಗಿದ್ದ ಹಂಬಲ.<br /> {{gap}}"ಪಾಸು ತಗೊಳ್ರೀ."<br /> {{gap}}“ಬೇಡಿ."<br /> {{gap}}ಸಮೀಪದಲ್ಲೆ ಸಂಭ್ರಮದ ಆಟ ನಡೆಯುತ್ತಿರುವುದನ್ನು ತಾನು ಬಲ್ಲೆ ಎಂಬಂತೆ ತುಸು ಮೌನದಿಂದಲೆ ಉದ್ದಕ್ಕೆ ಮಲಗಿತ್ತು ಬೀದಿ. ಜನಸ೦ಚಾರವು ಕಡಮೆಯಾಗಿದ್ದ೦ತೆ ಭಾಸವಾಗುತ್ತಿತ್ತು. ನಿಜವಾಗಿ ನೋಡಿದರೆ, ಪ್ರತಿ ದಿನವೂ ಆ ಹೊತ್ತಿನಲ್ಲಿ ಬೀದಿಗಳಿರುತ್ತಿದುದೇ ಹಾಗೆ. ಆದರೆ ಈ ದಿವಸ ನಗರದಲ್ಲಿ ಕ್ರಿಕೆಟ್ ಆಟ ನಡೆಯುತ್ತಿದ್ದುದೇ ಅದಕ್ಕೆ ಕಾರಣವೇನೋ ಎಂಬ ಭ್ರಮೆ ಹುಟ್ಟವಂತಿತ್ತು.<br /> {{gap}}ಸ್ವಲ್ಪ ಹೊತ್ತು ವಾಚನಾಲಯದೊಳಗಿದ್ದರಾಯಿತೆಂದು ಮುರಲೀಧರ ನಿರ್ಧರಿಸಿದ<br /> {{gap}}ಒಳಗಿದ್ದವರು ಒಬ್ಬಿಬ್ಬರು ಮಾತ್ರ. ಪತ್ರಿಕೆಗಳ ಆ ಲೋಕ ಆತನಿಗೆ ಪ್ರಿಯವಾಗಿತ್ತು. ವಾರ ಪತ್ರಿಕೆ, ಮಾಸಪತ್ರಿಕೆ, ದಿನಪತ್ರಿಕೆ_ಒ೦ದೊ೦ದರಲ್ಲೂ ಒ೦ದೊ೦ದು ವೈಶಿಷ್ಟ್ಯವನ್ನು ಆತ ಕಾಣುತ್ತಿದ್ದ. ದಿನಪತ್ರಿಕೆಯನ್ನ೦ತೂ, ಪ್ರತಿಯೊ೦ದುನ್ನು ಓದಿದಾಗಲೂ, ಬದುಕು ಹೊಚ್ಚಹೊಸದು ಎನ್ನುವ ಭಾವನೆಯು೦ಟಾಗುತ್ತಿತ್ತು.ಕಾಲಮುಗಳುದ್ದಕ್ಕೂ ಕಣ್ಣೋಡಿಸುತ್ತ ಲೋಕಸ೦ಚಾರ ಮಾಡುವುದು, ಅತ್ಯ೦ತ ಅನುಭವವಾಗಿತ್ತು ಆತನಿಗೆ.<br /> {{gap}}ಪತ್ರಿಕೆಗಳನ್ನೆಲ್ಲ ಓದಿ ವಾಚನಾಲಯದಿಂದ ಹೊರಬೀಳುವಾಗ, ಪ್ರಿಯವಾದುದನ್ನು ಬಿಟ್ಟು ಬರುವ ನೋವೂ ಇರುತ್ತಿತ್ತು ಸ್ವಲ್ಪ.<br /> {{gap}}ಹೊರಡುತ್ತಿದ್ದ ಮುರಲೀಧರನನ್ನು ಉದ್ದೇಶಿಸಿ ಜವಾನ ಕೇಳಿದ:<br /> {{gap}}"ನೀವು ಓಗ್ಲಿಲ್ವಾ ಮ್ಯಾಚ್ ನೋಡೋಕೆ?"<br /> {{gap}}"ಹೋಗಿ ಬ೦ದ್ಬಿಟ್ಟೆ," ಎ೦ದ ಮುರಲೀಧರ. {{gap}}ಆಟ ಮುಗಿಯುವುದಕ್ಕೆ ಮುಂಚೆಯೆ ಯಾಕೆ ಬಂದಿರೆಂಬ ಮತ್ತೊಂದು ಪ್ರಶ್ನೆಗೆ ಅವಕಾಶ ಕೊಡದೆ ಆತ ಬೇಗ ಬೇಗನೆ ಹೆಜ್ಜೆಹಾಕಿದ.<br /> {{gap}}ಬ್ಯಾಂಕಿನೆದುರಲ್ಲಿದ್ದ ಪುಟ್ಟ ಹೋಟೆಲಿನಲ್ಲಿ ಒಂದು ಗುಟುಕು ಕಾಫಿ [ಮ್ಯಾಚಿನ ಹೆಸರಲ್ಲಿ ನಾಲ್ಕಾಣೆ ತೆತ್ತುದ೦ತೂ ನಷ್ಟವೇ ಆಯಿತು.] ಬಳಿಕ ಕೊಠಡಿಗೆ.<br /> {{gap}}ಆ ಜಾಗ ಸಮೀಪಿಸುತ್ತಿದ್ದಂತೆ ಸಮೀಪದ ಮನೆಯವರೊಬ್ಬರು ಕೇಳಿದರು:<br /> {{gap}}"ಇಷ್ಟು ಬೇಗ್ನೆ ಮ್ಯಾಚು ಮುಗೀತೇನ್ರಿ?"<noinclude></noinclude> grghglq8mkdrw5w9g78lriyvo4xsi3x ಪುಟ:ದೀಕ್ಷೆ.pdf/೨೯ 104 19139 322093 277315 2026-05-24T06:56:42Z Shreelatha.Halemane 7642 /* Validated */ 322093 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=356|center=|right=ಕನಸು}} {{gap}}“ಇಲ್ಲ, ನಡೀತಾ ಇದೆ." <br /> {{gap}}"ಮತ್ತೆ ನೀವು?"<br /> {{gap}} ಸುಳ್ಳು ಹೇಳುವುದೆನೋ೦ದೇ ಆತನ ಮುಂದಿದ್ದ ಸುಲಭದ ಹಾದಿ<br /> {{gap}}."ತಲೆ ನೋಯ್ತಿತ್ತು, ಬಂದ್ಬಿಟ್ಟೆ".<br /> {{gap}}"ನಮ್ಮ ಹುಡುಗರನ್ನು ಎಲ್ಲಾದರೂ ನೋಡಿದಿರಾ?" <br /> {{gap}}ಮನೆಯಾಕೆ ಮುಖ ತೋರಿಸಿ, ಗಂಡನ ಮಾತಿಗೆ ತಮ್ಮ ಧ್ವನಿಯನ್ನು ಸೇರಿಸಿದರು:<br /> {{gap}}"ಊಟಾನೂ ಮಾಡ್ಡೆ ಹೋಗಿವೆ."<br /> {{gap}}"ನಾನು ನೋಡ್ಲಿಲ್ರಿ, ಭಾರೀ ಜನಸಂದಣಿ, ಹುಡುಗರು ಅಲ್ಲಿಯೇ ಇರ್ತಾರೆ ಬಿಡಿ, ಬೇರೆಲ್ಲಿಗೆ ಹೋಗ್ತಾರೆ?"<br /> {{gap}}ಸಮಾಧಾನವೆನಿಸದೆ ಮನೆಯವರು ಗೊಣಗಿದರು;<br /> {{gap}}"ಎ೦ಥ ಕ್ರಿಕೆಟೋ ಏನು ಹುಚ್ಚೋ... " <br /> {{gap}}...ಸಂಜೆಯವರೆಗೂ ಮುರಲೀಧರನಿಗೆ ವಿರಾಮವಿತ್ತು. ಓದುತ್ತ ಹೊತ್ತು ಕಳೆಯುವುದೇನೊ ಕಷ್ಟವಾಗಿರಲಿಲ್ಲ.ಪಠ್ಯಪುಸ್ತಕಗಳಿದ್ದುವು, ಪಠ್ಯವಲ್ಲದ ಪುಸ್ತಕಗಳಿದ್ದುವು. ಆದರೆ ಮುರಲೀಧರನ ಮನಸ್ಸನ್ನು ತಮ್ಮೆಡೆಗೆ ಸೆಳೆಯಲು ಅವು ಸಮರ್ಥವಾಗಲ್ಲಿಲ್ಲ.<br /> {{gap}}ಆತನ ಅನಿರೀಕ್ಷಿತ ಸಾಮೀಪ್ಯದ ಲಾಭ ದೊರೆತುದು, ಸುರುಳಿ ಸುತ್ತಿ ಮೂಲೆ ಗುಂಪಾಗಿದ್ದ ತೆಳುಹಾಸಿಗೆಗೆ. ಅದನ್ನು ಬಿಡಿಸಿ ಮುರಲೀಧರ ಒರಗಿಕೊ೦ಡ. ನಿದ್ದೆ ಸಾಧ್ಯವಿರಲಿಲ್ಲ. ವೆುದುಳು ಬಿಸಿಯಾಗಿತ್ತು, ಪದರುಪದರಾಗಿ ಯೋಚನೆಗಳೀಗ ಸುರುಳಿ ಬಿಚ್ಚಿದುವು.<br /> {{gap}}ತಂದೆಯ ಆರೋಗ್ಯ ಸರಿಯಾಗಿಲ್ಲವೆಂದು ಅಣ್ಣ ಇತ್ತೀಚೆಗೆ ಕಾಗದ ಬರೆದಿದ್ದ. ಸದಾ ದುಡಿಯುವ ಆ ಜೀವಕ್ಕೆ ಅದೇನು ತೊಂದರೆಯಾ? ತಾಮಾಷೆಗಾಗಿ ಸಮವಯಸ್ಕರು ಒಮ್ಮೊಮ್ಮೆ ತಂದೆಯನ್ನು ಕೇಳುವುದಿತ್ತು; 'ನೀವು ಬ್ರಾಹ್ಮಣರೊ? ಒಕ್ಕಲಿಗರೊ?' ಹಾಗೆ ಪ್ರಶ್ನಿಸಲು ಕಾರಣ_ಕೃಷಿಕೂಲಿಗಳ ಜತೆ ಸೇರಿ ಮುರಲೀಧರನ ತಂದೆ ದುಡಿಯುತ್ತಿದ್ದ ರೀತಿ. ತಾವೆಲ್ಲ ನಿಸ್ಸಂಶಯವಾಗಿಯೂ ನೆಲದ ಮಕ್ಕಳು. ಬೀಜಗಳು ಮೊಳೆತು, ಸಸಿ ಚಿಗುರಿ, ಹಾಲು ತೆನೆ ಬಲಿತು ಹಣ್ಣಾದಾಗಲೇ ತುತ್ತು ಆಹಾರದ ಭದ್ರತೆ. ಆದರೆ ದೊರೆಯುತ್ತಿದ್ದುದು ಸ್ವಲ್ಪ. ತಿನ್ನಲು ಇದ್ದ ಬಾಯಿಗಳು ಹಲವು. ಬೇರೆ ಸಂಪಾದನೆ ಇಲ್ಲದೆ ಹೋದರೆ ಆ ಸಂಸಾರ ಹಾಗೆಯೇ ಬಹಳ ಕಾಲ ಮುಂದುವರಿಯುದು....<br /> {{gap}}ಬೇರೆ ಸಂಪಾದನೆ___<br /> {{gap}}ವಿದ್ಯಾರ್ಜನೆಗಾಗಿ ತಾನು ಬಂದಿದ್ದ. ಮುಂದೆ? ಈ ವರ್ಷದ ಅಧ್ಯಯನವನ್ನು.ಹಾಗೂ ಹೀಗೂ ಮಾಡಿ ಮುಗಿಸಬಹುದು. ಆದರೆ ಪದವೀಧರನಾಗಲು ಬೇಕಾದ<noinclude></noinclude> dvsmkc6fovbo3n7a4l69fjhj865etbt ಪುಟ:ದೀಕ್ಷೆ.pdf/೩೦ 104 19140 322094 277371 2026-05-24T07:13:30Z Shreelatha.Halemane 7642 /* Validated */ 322094 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ದೀಕ್ಷೆ|center=|right=357}} ಅನಂತರದ ಎರಡು ವರ್ಷ? ಆ ದಿಕ್ಕಿನಲ್ಲಿದ್ದುದು ಬರಿಯ ಕತ್ತಲು. ಪದವೀಧರ ರಾದವರಿಗೆಲ್ಲ ಉದ್ಯೋಗ ಕಾದಿತ್ತೆ? ಕೊನೆಯ ಕೊಠಡಿಯಾತ ಹೇಳಿದ್ದ:<br /> {{gap}}'ಮಂಡಿ ಕೆಲಸ ಬೇಜಾರಾಗಿದೆ. ಅಲ್ಲಿ ಬರೋದು ಶಂಕರ ಅಯ್ಯರಿಗೆ ಕೊಡೋದಕ್ಕೂ ಸಾಲದು.'<br /> {{gap}}ಆತನ ತೊಂದರೆಯನ್ನು ಅರ್ಥಮಾಡಿಕೊಳ್ಳಲೆತ್ನಿಸಿದ್ದ ಮುರಲೀಧರ. ಆ ಮನುಷ್ಯ ಮತ್ತೂ ಹೇಳಿದ್ದ:<br /> {{gap}}'ಈ ಕೆಲಸ ಬಿಟ್ಬಿಡೋಣಾಂತಿದೀನಿ.'<br /> {{gap}}ಮುರಲೀಧರ ವಿಸ್ಮಯಗೊಂಡು ಕೇಳಿದ್ದ;<br /> {{gap}}'ಬೇರೆ ಯಾವ ಕೆಲಸಕ್ಕೆ ಸೇರ್ಕೋತೀರಾ?'<br /> {{gap}}“ಈಗೇನ್ರಿ? ಯುದ್ಧಕಾಲ. ಯಾವುದಾದರೊ೦ದು ಕೆಲಸ. ಏನೂ ಸಿಗದೆ ಇದ್ದರೆ ಸೈನ್ಯಕ್ಕೆ ಭರ್ತಿಯಾಗುವ ಸನ್ನಿವೇಶ."<br /> {{gap}}ಯುವಕರೆಲ್ಲ ಸೈನ್ಯಕ್ಕೆ ಭರ್ತಿಯಾಗುವ ಸನ್ನಿವೇಶ...<br /> {{gap}}ತನ್ನಿ೦ದ ಅದು ಸಾಧ್ಯವೆ? ಎಷ್ಟೊಂದು ತುಚ್ಛವಾದುದು ಪರಕೀಯ ಸರಕಾರದ ಸೇವೆ! ಯಾರ ಯುಧ್ದ ಇದು? ಯಾತಕ್ಕೋಸ್ಕರ ಆ ನರಮೇಧ? ಯಾವ ರೀತಿಯಲ್ಲೇ ಆಗಲಿ, ಆ ಕಾರ್ಯದಲ್ಲಿ ಸಹಭಾಗಿಯಾಗುವುದು ಎಷ್ಟು ಅಸಹ್ಯ!....<br /> {{gap}}[ಯೋಚಿಸುತಿದ್ದ ಮುರಲೀಧರನ ಕಣ್ಣ ಮುಂದೆ ಅನಿವಾರ್ಯವಾಗಿ ನಾರಣಪ್ಪನ ಮೂರ್ತಿ ಬಂದು ನಿಂತಿತು.]<br /> {{gap}}ಆತ ಧ್ಯೇಯವಾದಿ. ಬದುಕಿಗೊಂದು ಅರ್ಥವಿದೆ ಎಂದು ನಂಬಿದ ಮನುಷ್ಯ.ಪದವೀಧರನಾದಾಗ ನಾರಣಪ್ಪ ಸರಕಾರದ ನೌಕರನಾಗುವನೆಂದು ಊಹಿಸುವುದು ಸಾಧ್ಯವೆ? ?<br /> {{gap}}ಏನು ಹೇಳುವನೆಂಬುದನ್ನು ಕಲ್ಪಿಸಿಕೊಳ್ಳುವುದು ಸುಲಭವಾಗಿತ್ತು.<br /> {{gap}}ಶತಮಾನಗಳ ಗುಲಾಮಗಿರಿ ನಮಗೆ ಒಗ್ಗಿದೆ ಮುರಲೀಧರ, ನಿರ್ವೀಯರಾದ ನಾವು ಮಾಡೋದೇ ಹೀಗೆ.. ಸರಕಾರದ ಚಾಕರಿಯ ಹೊರತು ನಮ್ಮ ವಿದ್ಯಾವಂತ ರಿಂದ ಇನ್ನೇನೂ ಸಾಧ್ಯವಿಲ್ಲ. ನಮ್ಮ ವಿಧ್ಯಾಪದ್ಧತಿಯೇ ಅಂಥಾದ್ದು ಇದಕ್ಕೆಲ್ಲ ಇರುವ ಪರಿಹಾರ ಒಂದೇ ಒಂದು'<br /> {{gap}}ತಾನು? ತನ್ನ ಬದುಕಿನ ಧ್ಯೇಯ ಯಾವುದು? ಏನನ್ನು ಮಾಡುವ ಸಾಮರ್ಥ್ಯ ಇದೆ ತನ್ನಲ್ಲಿ? ಎಲ್ಲರ ಹಾಗೆಯೇ ತಾನೂ. ಎಲ್ಲರ ಹಾಗೆಯೇ...<br /> {{gap}}ಇಷ್ಟು ಮಾತ್ರ ನಿಜ. ಹೆತ್ತವರಿಗೆ ತಾನೆಂದೂ ಭಾರವಾಗಬಾರದು. ತನ್ನ ಕಾಲ ಮೇಲೆಯೇ ತಾನು ನಿಂತುಕೊಳ್ಳಬೇಕು.<br /> {{gap}}ಗುಲಾಮಗಿರಿಗೆ ತಲೆಬಾಗುವುದು? ಅದನ್ನೂ ತಾನು ಮಾಡಬಾರದು. ಅದು ಪಾಪ.<br /> {{gap}}ಹಾಗಾದರೆ ತಾನು ಅನುಸರಿಸಬೇಕಾದ ಹಾದಿ ಯಾವುದು? ಯಾವುದು?...<noinclude></noinclude> fr1uqy24ca6yspf3zlw44y2f3nx94fe ಪುಟ:ದೀಕ್ಷೆ.pdf/೩೧ 104 19141 322095 277034 2026-05-24T07:16:29Z Shreelatha.Halemane 7642 /* Validated */ 322095 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=358|right=ಕನಸು}} {{gap}}[ವಿಚಾರ ಸರಣಿ ಅಲ್ಲಿಗೆ ಕಡಿದು ಹೋಯಿತು. ಮೆದುಳು ಮಾತ್ರ ಧಿಮಿ ಗುಡುತಿತ್ತು...]<br /> {{gap}}ಕಣ್ಣು ಕೋರೈಸುವಂತಹ ಬೆಳಕು. ಎದೆ ಮುಚ್ಚಿದರೆ ಉರಿ,<br /> {{gap}}ಮ್ಯಾಚ್ ಮುಗಿಯುವ ಹೊತ್ತು...<br /> {{gap}}ನಾರಣಪ್ಪನನ್ನು ಪೋಲೀಸರು ಹಿಂಬಾಲಿಸುತ್ತಿದ್ದರು. ಆತ, ಅವನ ಅಣ್ಣ... ಹಾಗೆಯೇ ಅಲ್ಲಿ ಇಲ್ಲಿ ಕೆಲವರು. ಪ್ರಜ್ಞಾಹೀನವಾಗಿ ಛಳಿಯಲ್ಲಿ ಹೆಪ್ಪು ಗಟ್ಟಿದ್ದ ಭೀಮ ದೇಹವನ್ನು ಅವರ ಪುಟ್ಟ ಕೈಗಳು ತೀಡುತ್ತಿದ್ದುವು. ಆದರೆ ಶಾಖ ಉತ್ಫನ್ನ ವಾಗುತ್ತಿರಲಿಲ್ಲ. ವಾತಾವರಣವೇ ಹಾಗಿತ್ತು...ಪ್ರವಾಹಕ್ಕಿದಿರು ದೋಣಿ ನಡೆಸುವ ಹುಚ್ಚು...ದೋಣಿಯೇ ಮಗುಚಿದರೆ? ವೀರ ನಾವಿಕರೆಲ್ಲ ನೀರು ಪಾಲಾದರೆ?<br /> {{gap}}ಜನ ಎಚ್ಚರುವ ಕನಸು ಕಾಣುತ್ತಿದ್ದ ನಾರಣಪ್ಪ,ಆದರೆ ದಿನನಿತ್ಯದ ಸಾವಿರ ಘಟನೆಗಳೂ 'ಅದು ಬರಿಯ ಕನಸು, ಕನಸು ಮಾತ್ರ' ಎಂದು ಸಾರಿ ಹೇಳುತ್ತಿದ್ದುವು.<br /> {{gap}}ಉದಾಹರಣೆಗೆ ಆ ದಿನದ ಕ್ರಿಕೆಟ್ ಆಟ. ಜನ ಸಮುದಾಯವನ್ನು ಮೆಟ್ಟಿ ತುಳಿದು ಬಳಿಯ ಸುಲಿಗೆಗಾರರು ಅಟ್ಟಹಾಸ ಮಾಡುತ್ತಿದ್ದರೆ, ಜನರು ಮಾತ್ರ ಆದರೆ ಅರಿವಿಲ್ಲದವರ೦ತೆ ಆಟ ವಿನೋದಗಳಲ್ಲಿ ಮಗ್ನರಾಗಿದ್ದರು...<br /> {{gap}}ನಾರಣಪ್ಪ ಅಂತಹ ಪಂದ್ಯಾಟದ ಪ್ರೇಕ್ಷಕರಲ್ಲಿ ಒಬ್ಬನಾಗಿರಬಹುದೆಂದು ಭಾವಿಸಿ ದುದೇ ತಪ್ಪು, ಆತ ಅಲ್ಲಿರುವುದು ಖಂಡಿತ ಸಾಧ್ಯವಿರಲಿಲ್ಲ...<br /> {{gap}}ಒಳ್ಳೆಯವನು ನಾರಣಪ್ಪ, ಶಾ೦ತ ಮೂರ್ತಿ. ತನ್ನ ವಿಷಯದಲ್ಲಿ ಆತನಿಗೆ ಗೌರವವಿತ್ತು. ಯಾಕೆ? ತಾನು బರೆಯುವವನೆ೦ದು. ಎ೦ತಹ ಬರೆಹಗಾರನೋ!<br /> ಆದರೂ ಬರೆಹಗಾರ ಎನ್ನಿಸಿಕೊಳ್ಳುವುದರಲ್ಲಿ ಒಂದು ಆಕರ್ಷಣೆಯಿತ್ತು. ಆ ಅಂಶ ವನ್ನು ಅಲ್ಲಗಳೆಯುವಂತಿರಲಿಲ್ಲ. ನಾರಣಪ್ಪ ತಮಾಷೆಗಾಗಿ ಹಾಗೆ ಹೇಳಿದ ಎನ್ನು ವಂತಿರಲಿಲ್ಲ.ಆತನ ನಂಬುಗೆ ಸುಳ್ಳಾಗದಂತೆ ತಾನು నిజವಾಗಿಯು ಬರೆಯುವುದು ಸಾಧ್ಯವಾದರೆ? ಬರಿಯ ಕಥೆಯನ್ನಲ್ಲ, ಕಟ್ಟು ಕತೆಯನ್ನಲ್ಲ,---బದలు, ಯಾವು ದಾದರು ಒಳ್ಳೆಯ ಕೆಲಸಕ್ಕೆ ಉಪಯೋಗವಾಗುವಂಥದನ್ನು ತಾನು ಬರೆದರೆ?<br /> {{gap}}ಬರಿಯ ಆಸೆ ತನ್ನಿ೦ದ ಅದು ಸಾಧ್ಯವಾಗುವುದೋ ಇಲ್ಲವೋ....<br /> {{gap}}ಯಾಕೆ ಸಾಧ್ಯವಾಗಬಾರದು? ಯಾಕಾಗಬಾರದು?<br /> {{gap}}[ಮುರಲೀಧರನ ತುಟಿಗಳ ಮೇಲೆ ಮುಗುಳುನಗೆ ಮೂಡಿತು. ಶರೀರದ ಸ್ನಾಯುಗಳು ಮೆಲ್ಲಮೆಲ್ಲನೆ ಸಡಿಲವಾದುವು.. ಉಸಿರಾಟ ಸರಾಗವಾಯಿತು. ತಲೆ ಭಾರವಾಗಿ ದಿಂಬನ್ನು ಒತ್ತಿತು. ಬಿಸಿಲನಿದ್ದೆ ಆತನ ಮೈಮೆಲೆ ಕೈ ಆಡಿಸಿತು.]<br /> {{gap}}...ತಣ್ಣನೆಯ ಗಾಳಿ బಬೀಸಿದ೦ತಾಗಿ ಮುರಲೀಧರ ಕಣ್ಣೆವೆಗಳನ್ನು ತೆರೆದ. ಬಿಸಿಲೇ ಇರಲಿಲ್ಲ ಹೊರಗೆ. ಸಂಜೆಯಾಗಿ ಬಿಟ್ಟಿತ್ತು.<br /> {{gap}}ಮುರಲೀಧರ ಗಡಬಡಿಸಿ ಎದ್ದ. ಮುಖಕ್ಕಿಷ್ಟು ನೀರು ಹನಿಸಿದ. ನಿದ್ದೆಯು ಮಬ್ಬಿನಲ್ಲಿ ಜಡವಾಗಿದ್ದ ಮೈಗೆ, ನಿಮಿಷದಲ್ಲೇ ಚೈತನ್ಯ ಮರಳಿ ಬಂತು.<noinclude></noinclude> 4bs9ns30o6zb1k0za9k57vqug7ujtp3 ಪುಟ:ದೀಕ್ಷೆ.pdf/೩೨ 104 19142 322096 277126 2026-05-24T07:19:27Z Shreelatha.Halemane 7642 /* Validated */ 322096 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ|right=359}} {{gap}}ಪುಟ್ಟ ಕನ್ನಡಿಯಲ್ಲಿ ಮುಖ ನೋಡುತ್ತ, ಎರಡು ಮೂರು ಹಲ್ಲುಗಳು ಮುರಿ ದಿದ್ದ ಹಣಿಗೆಯಿಂದ ತಲೆ ಬಾಚಿಕೊಂಡು, ಮುರಲೀಧರ ಬೀದಿಗಿಳಿದ.<br /> {{gap}}ಸಾಯಂಕಾಲದ ಹೊತ್ತು ಪಾಠ ಹೇಳುವ ಮನೆಯನ್ನು ಸಮೀಪಿಸಿದಾಗ,<br /> ಹುಡುಗರು ತಾಯಿ ಕದ ತೆರೆದು ಅಂದರು:<br /> {{gap}}"ಬನ್ನಿ ಮೇಸ್ಟ್ರೆ. ಹುಡುಗರು ಈಗ್ತಾನೇ ಬಂದ್ರು. ಒಳಗೆ ತಿಂಡಿ ತಿನ್ತಾ<br /> ಇದಾರೆ. ಕೂತ್ಕೊಳ್ಳಿ."<br /> {{gap}}ಆಗ ತಾನೆ బంದುದು ಆಟದ ಅಂಗಣದಿಂದಲೇ ಎಂಬುದು ಸ್ಪಷ್ಟವಾಗಿತ್ತು.<br /> {{gap}}ಮುರಲೀಧರ, ಎಂದಿನಂತೆ ಜಗಲಿಯ ಮೂಲೆಯನ್ನು ಸೇರಿ ಬೆಂಚಿನ ಮೇಲೆ ಕುಳಿತ.<br /> {{gap}}ಎರಡು ನಿಮಿಷಗಳಲ್ಲೇ ಹುಡುಗರು ಬಂದರು. ಒಬ್ಬನ ಕೈಯಲ್ಲಿ ಉಪ್ಪಿಟ್ಟಿನ ತಟ್ಟೆ ಇತ್ತು. ಇನ್ನೊಬ್ಬನ ಕೈಯಲ್ಲಿ ಲೋಟ ನೀರು.<br /> {{gap}}"ತಗೊಳ್ಳಿ ಸರ್."<br /> {{gap}}"ನನ್ನದು ಈಗ್ತಾನೆ ಆಯ್ತಪ್ಪ."<br /> {{gap}}ಹುಡುಗರು ಹಿ೦ದೆಯೇ బంದ ತಾಯಿ, ಬಾಗಿಲಲ್ಲೆ ನಿಂತು, ಹೇಳಿದರು:<br /> {{gap}}"ತಗೊಳ್ಳಿ, ಅಷ್ಟೇನೂ ಜಾಸ್ತಿಯಾಗೋದಿಲ್ಲ."<br /> {{gap}}ಮುರಲೀಧರ ಮುಗುಳು ನಕ್ಕ. ಆತ ಆಗ ತಾನೆ ತಿಂದು ಬ೦ದುದ೦ತೂ<br /> ಸುಳ್ಳೇ. ಬೆಳಗಿನ ಊಟ ಎಂದೋ ಕರಗಿ, ಕರುಳುಗಳು ಕೆಲಸವಿಲ್ಲವೆಂದು ರೇಗಾಡು ತ್ತಿದ್ದುವು. ಒಂದು ತಟ್ಟೆ ಉಪ್ಪಿಟ್ಟು ಖಂಡಿತ ಜಾಸ್ತಿಯಾಗುವಂತಿರಲಿಲ್ಲ.<br /> {{gap}}ಮೊದಲ ಸಾರೆ ಆ ಮನೆಯಲ್ಲಿ ತಿಂಡಿಕೊಟ್ಟಾಗ ಆ ತಾಯಿ ಕೇಳಿದ್ದರು:<br /> {{gap}}'ನಮ್ಮಲ್ಲಿ ನೀವು ತಿನ್ತೋರೋ ಇಲ್ಲೋವೋ?'<br /> {{gap}}ತನ್ನ ವಿಷಯದಲ್ಲಿ ಅವರು ತಪ್ಪು ಭಾವಿಸಿದರೆಂದು ಸ್ವಲ್ಪ ನೊಂದು ಮುರಲೀ ಧರ ಹೇಳಿದ್ದ:<br /> {{gap}}“ನನಗೆ ಅಂಥ ಭೇದ ಭಾವ ఇల్లವಮ್ಮ...."<br /> {{gap}}ಮುರಲೀಧರ ಈ ಸ೦ಜೆ ಉಪ್ಪಿಟ್ಟು ತಿನ್ನುತ್ತಿದ್ದ೦ತೆ ಆಕೆ ಕೇಳಿದರು:<br /> {{gap}}"ಕಾಫಿ ಇಲ್ಲ ಮೇಸ್ಟ್ರೇ. ನಿಂಬೆ ಹಣ್ಣಿದೆ. ಪಾನಕ ಮಾಡಿ ಕೊಡ್ಲಾ?"<br /> {{gap}}"ಎನೂ ಬೇಡೀಮ್ಮಾ ಈಗೇನೂ ಬೇಡಿ," ಎ೦ದ ಉಪಾಧ್ಯಾಯ ಮುರಲೀಧರ, ಪಾಠ ಹೇಳಿಸಿಕೊಳ್ಳಲು ಸಿದ್ಧರಾಗಿಬ೦ದ ವಿದ್ಯಾರ್ಥಿಯರನ್ನು ನೋಡುತ್ತ.<br /> {{gap}}ಅಷ್ಟರಲ್ಲೆ ನೆರೆಮನೆಯ ಹುಡುಗನೂ ಅವರನ್ನು ಸೇರಿಕೊಂಡ.<br /> {{gap}}ಬಿಸಿಲಿಗೆ ಆ ಎಳೆಯ ಮುಖಗಳೆಲ್ಲ ಬಾಡಿ ಕಪ್ಪಿಟ್ಟಿದ್ದುವು. ಆದರೆ ಆ ಕಣ್ಣುಗಳಲ್ಲಿ ಕೋಡಿ ಕಟ್ಟಿ ಹರಿಯುತ್ತಿತ್ತು ಸ೦ತಸ.<br /> {{gap}}ಹುಡುಗರು ಪರಸ್ಪರರನ್ನು ನೋಡಿದರು. ಆ ಮನೆಯ ಹುಡುಗರಲ್ಲಿ ಹಿರಿ ಯವನು ಕೇಳಿದ:<noinclude></noinclude> ppzh9i6jlp816yreueptq3r0oeg4nx9 ಪುಟ:ದೀಕ್ಷೆ.pdf/೩೩ 104 19143 322097 277215 2026-05-24T07:49:30Z Shreelatha.Halemane 7642 /* Validated */ 322097 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=360|center=|right=ಕನಸು}} {{gap}}"ಸಾರ್,ನೀವು ಮ್ಯಾಚಿಗೆ ಬ೦ದಿದ್ರಾ?"<br /> {{gap}}ಬ೦ತು ಗ೦ಡಾ೦ತರ ಎ೦ದು ನಸುನಕ್ಕ ಮುರಲೀಧರ.<br /> {{gap}}ತನಗೆ ಬೇಕಾದ ಉತ್ತರ ದೊರೆಯಿತೆಂದು ಮನೆಯವನು ನೆರೆಯ ಹುಡುಗನನ್ನು ನೋಡಿ, ಗೆದ್ದವನ ಧ್ವನಿಯಲ್ಲಿ ಅಂದ.<br /> {{gap}}"ನಾನು ಆಗ್ಲೇ ಹೇಳ್ಲಿಲ್ವೇನೋ-ಮೇಸ್ಟಿಗೆ ಕ್ರಿಕೆಟ್ ನಲ್ಲಿ ಆಸಕ್ತಿ ಇಲ್ಲಾ೦ತ?"<br /> {{gap}}ಮುರಲೀಧರ ಹುಡುಗರನ್ನೆಲ್ಲ ನೋಡಿ ನುಡಿದ:<br /> {{gap}}"ಆಸಕ್ತಿ ಇದೆಯಪ್ಪ ಮ್ಯಾಚಿಗೆ ಬ೦ದಿದೆ. ಆದರೆ ಕಡೆವರೆಗೂ ಇರೊದಕ್ಕಾಗಲಿಲ್ಲ. ಅಗತ್ಯ ಕೆಲಸ ಇತ್ತೂ೦ತ ಬೇಗ್ನೆ ವಾಪ್ಸು ಬಂದ್ಬಿಟ್ಟೆ."<br /> {{gap}}ಆ ಮಾತುಕೇಳಿ ಸೋತ ಹುಡುಗನಿಗೇನೂ ಅವಮಾನವೆನಿಸಲಿಲ್ಲ,ಅಂತಹ ಭಾವನೆಗಳಿಗೆಲ್ಲ ಆತನಿಗೆ ಪುರಸೊತ್ತೇ ಇರಲಿಲ್ಲ. ಆಡಬೇಕಾದ ವಿಷಯಗಳು ನೂರೊಂದು ಇದ್ದುವು.<br /> {{gap}}ಆ ದಿನದ ಆಟದ ಗುಣವಿಮರ್ಶೆ.<br /> {{gap}}ಸಂಸ್ಥಾನದ ತಂಡವೇ ಗೆದ್ದಿತ್ತು. ಆದರೂ ಹುಡುಗರಿಗೆ ಸಾಕಷ್ಟು ತೃಪ್ತಿ ಯಾಗಲ್ಲಿಲ.<br /> {{gap}}"ನಾಳೆದು ಮುಖ್ಯ ಸಾರ್.ನಾಳೆ ನೋಡ್ಬೇಕು."<br /> {{gap}}“ನಾಳೇನೂ ಹೋಗ್ತೀರಾ ನೀವು?" ಎಂದು ಕೇಳಿದ ಮುರಲೀಧರ.<br /> {{gap}}"ಹೂ೦.. ಹೋಗ್ದೇ ಇರೋಕಾಗುತ್ತಾ?ನಮ್ಮ ಸ್ಕೂಲಿಗ೦ತೂ ರಜಾ ಕೊಟ್ಟಿದಾರೆ. ಕೊಡದೇ ಇದ್ದರೆ ಮುಷ್ಕರ ಹೂಡ್ತಿದ್ವಿ..."<br /> {{gap}}ನೆರೆಮನೆಯು ಹುಡುಗನೆಂದ:<br /> {{gap}}“ಇವತ್ತು ಪಾಠ ಬೇಡಿ ಸಾರ್, ಶಾಲೇಲಿ ಕ್ಲಾಸೇ ತಗೊ೦ಡಿಲ್ಲ."<br /> {{gap}}ಕಿರಿಯವನೆ೦ದ:<br /> {{gap}}“ఒంದು ಕಥೆ ಹೇಳಿ ಸಾರ್."<br /> {{gap}}“ಕಥೆ?"<br /> {{gap}}"ಹೂಂ.. ಯಾವುದಾದರೊಂದು."<br /> {{gap}}ದೊಡ್ಡ ಹುಡುಗರೂ ಆ ಹೇಳಿಕೆಯನ್ನು ಪುಷ್ಟೀಕರಿಸಿದರು.<br /> {{gap}}ಮುರಲೀಧರ ಒಂದು ನಿಮಿಷ ನೆಲವನ್ನೆ ನೋಡುತ್ತಿದ್ದು, ತಲೆಯೆತ್ತಿ ಮುಗುಳು ನಕ್ಕು, ಹುಡುಗರನ್ನು ದಿಟ್ಟಿಸಿ ಅಂದ:<br /> {{gap}}“ಆಗಲಿ, ಕಥೆ ಹೇಳ್ತೀನಿ.. ಕಥೆಯ ಹೆಸರು 'ನರವೀರ' ಅಂತ."<br /> {{gap}}“ಪತ್ತೇದಾರಿನ ಸಾರ್?"<br /> {{gap}}“ಕೇಳಿ, ಹೇಳ್ತೀನಿ....."<br /> {{gap}}ಪತ್ತೇದಾರರು ಆ ಕಥೆಯಲ್ಲಿದ್ದರು-ಸರಕಾರದ ಪತ್ತೇದಾರರು, ನಾಯಕ ಕಳ್ಳನಲ್ಲ.ರಾಷ್ಟ್ರದ ಸ್ವಾತ೦ತ್ರ್ಯಕ್ಕೋಸ್ಕರ ಹೋರಾಡಿದ ವೀರ ಯುವಕ.ಹೆಸರು<noinclude></noinclude> mhexm1sh2cal84sxg15se8dmcmxcq8b ಪುಟ:ದೀಕ್ಷೆ.pdf/೩೪ 104 19144 322098 277293 2026-05-24T07:51:56Z Shreelatha.Halemane 7642 /* Validated */ 322098 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left= 361|center=|right=ದೀಕ್ಷೆ}} ಭಗತ್ ಸಿ೦ಗ್,ಆತನ ಹಾಗೂ ಸ೦ಗಡಿಗರ ಸಾಹಸ ಕೃತ್ಯಗಳು. ಅವರು ಹೋರಾಡಿದ ಬಗೆ. ಕೊನೆಯಲ್ಲಿ ಬ೦ಧನ. ಕಾರಗಾರದಲ್ಲಿ ಆ ವೀರಾರು ನಡೆದುಕೊ೦ಡ ರೀತಿ, "ಸಂಕೋಲೆಯಿಂದ ಸಿಂಹವನ್ನ ಕಟ್ಟಿಹಾಕಿದರೆ ಹ್ಯಾಗಿರುತ್ತೆ?-ಹೇಳಿ," ಅವರ ಮೇಲೆ ಸರಕಾರದ ಆರೋಪ. ವಿಚಾರಣೆಯ ನಾಟಕ, ಶಿಕ್ಷೆ-ಗಲ್ಲಿನ ಶಿಕ್ಷೆ...<br /> {{gap}}"ಉರುಳು ಕತ್ತನ್ನು ಬಿಗೀತಾ ಇದ್ದ ಹಾಗೆ ಭಗತ್ ಸಿ೦ಗ್ ಘೋಷಣೆ ಮಾಡ್ಡ: ಭಾರತ ಸ್ವತಂತ್ರವಾಗಿಯೇ ಆಗುತ್ತೆ. ಕ್ರಾಂತಿಗೆ ಜಯವಾಗಲಿ! ಇಂಕ್ವಿಲಾಬ್ ಜಿ೦ದಾ ಬಾದ್!'<br /> {{gap}}ಹುಡುಗರು ಉಸಿರು ಬಿಗಿ ಹಿಡಿದು ಕತೆಗೆ ಕಿವಿಗೊಟ್ಟರು.<br /> {{gap}}ಅದು ಮುಗಿದಾಗ ಹಿರಿಯವನು ಕೇಳಿದ:<br /> {{gap}}"ಇದು ನಡೆದ ಕತೇನ ಸಾರ್?"<br /> {{gap}}"ಹೂ೦.. ನಡೆದ ಕಥೆ."<br /> {{gap}}ಕ್ಷಣಕಾಲದ ಮೌನದ ಬಳಿಕ ನೆರೆಯ ಹುಡುಗನೆಂದ:<br /> {{gap}}"ನಾನು ಹೋಗ್ತಿನಿ. ನಾಳೆ ಮ್ಯಾಚ್ ಗೆ ಜತೇಲೆ ಹೊಗೋಣ"<br /> {{gap}}"ಹೂ೦.." ಎಂದು ಉತ್ತರವಿತ್ತ ಹುಡುಗ ಉಪಾಧ್ಯಾಯರನ್ನೂ ಕರೆದ:<br /> {{gap}}"ನಾಳೆ ನೀವೂ ನಮ್ಮ ಜತೇಲೆ ಬನ್ನಿ ಸಾರ್"<br /> {{gap}}ಮುರಲೀಧರ ಉಗುಳುನುಂಗಿ ಹೇಳಿದ:<br /> {{gap}}“ತುಂಬಾ ಕೆಲಸವಿದೆ. ಸಾಧ್ಯವಾದರೆ ಬರ್ತೀನಪ್ಪಾ."<br /> {{center|೫}} {{gap}}ನಾರಣಪ್ಪನನ್ನು ಕಾಣಲು ತವಕಿಸುತಿದ್ದ ಮುರಲೀಧರ ಎರಡು ಮೂರು ದಿನ ಕಾಯಬೇಕಾಯಿತು. ಸ್ನೇಹಿತ ಕಾಹಿಲೆ ಮಲಗಿರಬಹುದೆಂಬ ಶಂಕೆ. ಮನೆಯ ವಿಳಾಸ ತಿಳಿಯದೆ೦ಬ ಅಸಮಾಧನ. ನಾರಣಪ್ಪನ ಸಾಲಿನಲ್ಲೆ ಕುಳಿತುಕೊಳ್ಳುತ್ತಿದ್ದ ಒಬ್ಬಿಬ್ಬರನ್ನು ಮುರಲೀಧರ ಕೇಳಿ ನೋಡಿದ. ನಿರ್ದಿಷ್ಟ ಉತ್ತರ ದೊರೆಯಲಿಲ್ಲ, 'ಎಲ್ಲೋ ಮಲ್ಲೆಶ್ವರದಲ್ಲಿ ಇರಬೇಕು.' ಅಷ್ಟೆ ಮಾಹಿತಿಯ ಆಧಾರದ ಮೇಲೆ,ಹಲವು ಸಹಸ್ರ ಮನೆಗಳಿದ್ದ ಮಲ್ಲೇಶ್ವರದ ಪ್ರದೇಶದಲ್ಲಿ ನಾರಣಪ್ಪನ ನಿವಾಸವನ್ನು ಹುಡುಕಿ ಹಿಡಿಯುವುದಾದರೂ ಹೇಗೆ? ಅಸಹಾಯ ಪರಿಸ್ಥಿತಿ. ಹೀಗಾಗಬಾರದಿತ್ತು ಎಂದು ಮುರಲೀಧರನ ಮನಸ್ಸು ಹಲುಬಿತು.<br /> {{gap}}ಆತನ ಮುಖ ಅರಳಿದುದು ಮತ್ತೆ ನಾರಣಪ್ಪ ಕಾಣಿಸಿಕೊಂಡ ದಿನ.<noinclude></noinclude> f459zmtnunwy6wg4cmhn5ew0aalspqb ಪುಟ:ದೀಕ್ಷೆ.pdf/೩೫ 104 19145 322099 277337 2026-05-24T07:54:55Z Shreelatha.Halemane 7642 /* Validated */ 322099 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=362 |center=|right=ಕನಸು}} {{gap}}ಪ್ರವಚನಗಳಿಗೆ ಮುನ್ನ ಬರಿಯ ಮುಗುಳುನಗೆ. ಪಾಠಗಳು ನಡೆಯುತ್ತಿದ್ದಾಗ ಒಬ್ಬರನ್ನೊಬ್ಬರು ಕದ್ದು ನೋಡಿದ ಕಣ್ಣನೋಟ. ವಿರಾಮದ ವೇಳೆಯಲ್ಲಿ ಸಂಭಾಷಣೆ.<br /> {{gap}}ಮುರಲೀಧರನೇ ಆರಂಭಿಸಿದ:<br /> {{gap}}"ನಿಮ್ಮನ್ನು ನೋಡಿ ಒಂದು ಯುಗವಾಯ್ತು ಅನಿಸುತ್ತೆ. ಮೈಗೆ ಹುಷಾರಿಲ್ಲಿಲ್ವೆ?"<br /> {{gap}}ಪ್ರಶ್ನೆಗಳನ್ನು ಕೇಳುತ್ತಿದ್ದ೦ತೆ, ಗೆಳೆಯನ ಮುಖಲಕ್ಷಣಗಳನ್ನು ಸೂಕ್ಷ್ಮವಾಗಿ ದಿಟ್ಟಿಸಿ ನೋಡುತ್ತ ಉತ್ತರವನ್ನೂ ಮುರಲೀಧರ ಹುಡುಕಿದ.<br /> {{gap}}ಎಂದಿನಂತೆಯೇ ಇತ್ತು ನಾರಣಪ್ಪನ ಆರೋಗ್ಯ.<br /> {{gap}}"ನಾನು ಚೆನ್ನಾಗಿದೀನಿ ಮುರಲೀಧರ್. ನಮ್ಮ ಅಣ್ಣನನ್ನ ಅರೆಸ್ಟ್ ಮಾಡಿದ್ರು. ಹೀಗಾಗಿ__..."<br /> {{gap}}ಅದೇ ಮೆಲುದನಿ, ಮಿತವಾದ ಮಾತು. బంಧನವೆ೦ದು ಉದ್ವೇಗವಿರಲಿಲ್ಲ.<br /> 'ಊಟ ತಡವಾಯ್ತು. ಹೀಗಾಗಿ___' ಎ೦ದ ಹಾಗೆ,<br /> {{gap}}ಆದರೆ ಮುರಲೀಧರನ ಪಾಲಿಗೆ ಆ ಸುದ್ದಿ ಕಠೋರವೆನಿಸಿತು. ಧ್ವನಿ ಕಾತರ ಪೂರ್ಣವಾಯಿತು.<br /> {{gap}}"ಹೌದೆ? ನನಗೆ ಗೊತ್ತೇ ಇದ್ದಿಲ್ಲ, ಯಾವತ್ತು ಅರೆಸ್ಟಾಯ್ತು? ಪತ್ರಿಕೇಲಿ ಎನೂ ಬ೦ದೇ ಇಲ್ವಲ್ಲಾ ...!"<br /> {{gap}}"ಮೊನ್ನೆನೇ ಆಯ್ತು, ಪತ್ರಿಕೇಲಿ ಯಾಕೆ ಬರುತ್ತೆ ಹೇಳಿ? ನಮ್ಮಣ್ಣನೇನು ಪುಡಾರಿಯೆ?"<br /> {{gap}}ನಮ್ಮಣ್ಣ ಎಂದಾಗಲೆಲ್ಲ ನಾರಾಣಪ್ಪನ ಸ್ವರ ತುಂಬಿಬರುತ್ತಿತ್ತು. ಒಡಹುಟ್ಟಿದವನ ವಿಷಯದಲ್ಲಿ ಎಷ್ಟೊಂದು ಗೌರವವಿತ್ತು ಆತನಿಗೆ...<br /> {{gap}}ದಸ್ತಗಿರಿ ಎಂಬ ಪದ, ಮುರಲೀಧರನಿಗೆ ರಾಮಚಂದ್ರಯ್ಯನ ನೆನಪು ಮಾಡಿ ಕೊಟ್ಟಿತು. ಪೋಲಿಸರು ಕರಿಯ ಮೋಟಾರು ಬ೦ಡಿ. ಬ೦ದೂಕು, ಕೈಕೋಳ. ನಾರಣಪ್ಪನ ಅಣ್ಣ ಆ ಆವರಣದಲ್ಲಿ, ನೋಡಲು ಹೇಗಿರುವನೊ ಆತ? ನಾರಣಪ್ಪ ನ೦ತೆಯೇ...<br /> {{gap}}"ನೀವು ನಿಮ್ಮಣ್ಣನ ಹೆಸರು ಹೇಳೇ ಇಲ್ಲ."<br /> {{gap}}"ಮಲ್ಲೇಶಪ್ಪ ಅಂತ. ಆತನ ಹೆಸರು ಯಾರೂ ಕೇಳಿರೋದಿಲ್ಲ-ನನಗೆ ಗೊತ್ತು."<br /> {{gap}}ಮನಸಿನೊಳಗೆ ರೂಪಗೊಂಡ ಪ್ರಶ್ನೆ ಸರಿಯೇ, ತಪ್ಪೆ, ಎಂಬ ಸಂದೇಹವಿದ್ದರೂ ಮಾತು ಮುರಲೀಧರನಿಂದ ಹೊರಬಿತ್ತು;<br /> {{gap}}“ಯಾಕೆ ಅರೆಸ್ವಾಯ್ತು?"<br /> {{gap}}ನಾರಣಪ್ಪ ಮುಗುಳುನಕ್ಕ.<br /><noinclude></noinclude> thgyvnkwwtbb8r5gq2chytcs19aujp4 ಪುಟ:ದೀಕ್ಷೆ.pdf/೩೬ 104 19146 322100 277329 2026-05-24T08:00:14Z Shreelatha.Halemane 7642 /* Validated */ 322100 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=363|center=|right=ದೀಕ್ಷೆ}} {{gap}}"ಚಳವಳಿ ಜನ ಅಂತ.ಬೊಂಬಾಯಿಂದ ಬಂದಿದ್ಡ ಒಂದೆರಡು ಕಾಗದ ಪೋಲೀಸರ ಕೈಗೆ ಬಿತ್ತು....<br /> {{gap}}“ವಿಚಾರಣೆ ಮಾಡ್ತಾರಾ?”<br /> {{gap}}"ವಿಚಾರಣೆ? ಯಾಕ್ಮಾಡ್ತಾರೆ? ಹಾಗೇನೇ ಸ್ಥಾನಬದ್ಧತೆಯಲ್ಲಿಡ್ಬಹುದೂಂತ ಕಾನೂನಿದೆ"<br /> {{gap}}"ಏನಿದ್ದರೂ ಪತ್ರಿಕೇಲಿ ಬರದೇ ಇರೋದು ಆಶ್ಚರ್ಯ."<br /> {{gap}}"ಇಂಥ ವಿಷಯ ಜನರಿಗೆಲ್ಲ ಗೊತ್ತಾಗೋದು ಪೋಲೀಸರಿಗೆ ಇಷ್ಟವಿಲ್ವೋ ಏನೋ? ಅಥವಾ, ಅವರು ತಾವಾಗಿಯೇ ಪತ್ರಿಕೆಯೋರಿಗೆ ಸುದ್ದಿ ಕೊಟ್ಟಿರಲಾರರು. ಇನ್ನೇನು, ನಾನೇ ಹೋಗಿ ಕೇಳ್ಲೆ, ನಮ್ಮಣ್ಣನ ವಿಷಯ ಅಚ್ಚು ಹಾಕಿಸೀಂತ!"<br /> {{gap}}ಪರಿಸ್ಥಿತಿ ಗಭೀರವಾಗಿದ್ದರೂ, ನಾರಣಪ್ಪ ಅದನ್ನು ತೀರಾ ಲಘುವಾಗಿಯೆ ಪರಿಗಣಿಸಿದ್ದನೇನೋ ಎನ್ನುವಂತಿತ್ತು ಆ ಮಾತಿನ ಸರಣಿ.<br /> {{gap}}"ಪೋಲೀಸರು ಮನೆಗೇ ಬಂದಿದ್ರೆ? ಏನೇನಾಯ್ತು?"<br /> {{gap}}ತಿಳಿಯುವ ಆತುರ ಮುರಲೀಧರನಿಗೆ. ಆದರೆ, ನಾರಣಪ್ಪನ ತುಂಬಿಕೊಂಡಿದ್ದ ತಾಳ್ಮೆಯ ಕೊಡ ತುಳುಕುವಂತಿರಲಿಲ್ಲ.<br /> {{gap}}ನಡೆಯುತ್ತಿದ್ದ ಅವರಿಬ್ಬರೂ ಇಗರ್ಜಿಯನ್ನು ಸಮೀಪಿಸಿದ್ದರು. ನಾಲ್ಕು ಹೆಜ್ಜೆ ಗಳಾಚೆಗಿತ್ತು, ನೀರಿಲ್ಲದ ಸಂಪಂಗಿ ಕೆರೆ. ಎಡಕ್ಕೆ ಎದುರುಗಡೆ ತಗ್ಗು ಛಾವಣಿಯ ಹೆಂಚಿನ ಕಟ್ಟಡಗಳಿದ್ದುವು. ಬೀದಿಯ ಬದಿ ಬೋರ್ಡು ತಗಲಿಸಿದರು: 'ಮಾಜಿ ಸ್ಟ್ರೇಟರ ಕೋರ್ಟುಗಳು' ಎಂದು.<br /> {{gap}}ಅತ್ತ ನೋಡುತ್ತ ನಾರಣಪ್ಪನೆಂದ:<br /> {{gap}}"ಈ ಕಟ್ಟಡದಲ್ಲಿ ನ್ಯಾಯ ಮಾರಾಟಕ್ಕಿದೆ. ಆದರೆ ಅದನ್ನು ಕೊಳ್ಳೋ ಅವಕಾಶ ನಮ್ಮಣ್ಣನಿಗೆ ಇರ್ಲಿಲ್ಲ!"<br /> {{gap}}ತಾನು ಕೇಳಿದ ಪ್ರಶ್ನೆಗಳಿಗೆ ನೇರವಾದ ಉತ್ತರ ಬಂದಿರಲಿಲ್ಲ. ತನ್ನಷ್ಟಕ್ಕೆ ಗಟ್ಟಿಯಾಗಿ ಮಾತನಾಡುತ್ತಿದ್ದ ನಾರಣಪ್ಪ.<br /> {{gap}}ಬೀದಿಯ ಬದಿಗಿದ್ದ ಕಾಲುಹಾದಿಯ ಮೇಲೆ ಅವರುನಿಂತರು. ಕಾರು ಮೋಟಾರುಗಳು ಒಂದರಮೇಲೊಂದಾಗಿ ಅತ್ತಿತ್ತ ಹೋಗುತ್ತಲೇ ಇದ್ದುವು.<br /> {{gap}}ನಾರಣಪ್ಪ ಮುರಲೀಧರನ ಕಡೆ ತಿರುಗಿ ಕೇಳಿದ:<br /> {{gap}}"ಎಲ್ಲಿಗೆ ಹೋಗೋಣ ಇವರೆ?"<br /> {{gap}}“ನನಗೆ ಗೊತ್ತಿಲ್ಲ!"<br /> {{gap}}ಮತ್ತೆ ಮಾತು ಮುಂದುವರಿಸದೆ ನಾರಣಪ್ಪ ಯೋಚಿಸುತಿದ್ಧುದನ್ನು ಕಂಡು ಮುರಲೀಧರ ಕೇಳಿದ:<br /> {{gap}}"ಮನಸ್ನಲ್ಲೇನಿದೆಯೋ ಹೇಳಿಬಿಡಿ!"<br /> {{gap}}“ಏನೋ ಇದೇಂತ ಊಹಿಸಿದಿರಲ್ಲ, ಭೇಷ್!"<br /><noinclude></noinclude> te3jk3uck46oo78qr37q7tjnqdz0jpg ಪುಟ:ದೀಕ್ಷೆ.pdf/೩೭ 104 19147 322101 277070 2026-05-24T08:35:31Z Shreelatha.Halemane 7642 /* Validated */ 322101 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=364|right=ಕನಸು}} {{gap}}ಅಷ್ಟು ಹೇಳಿ, ಸಣ್ಣನೆ ನಕ್ಕು, ನಾರಣಪ್ಪನೇ ಮತ್ತೂ ಅಂದ: {{gap}}"ಪುನಃ ತರಗತಿಗೆ ಹೋಗ್ಲೆ ಬೇಕೆ?" {{gap}}ಸ್ನೇಹಿತನ ಮನಸ್ಸಿನ ಇಂಗಿತವನ್ನು ಗ್ರಹಿಸಿಕೊಂಡು ಮುರಲೀಧರನೆಂದ: {{gap}}"ಹೋಗ್ಲೇಬೇಕು ಅನ್ನೋ ಹಟವಿಲ್ಲ. ಹೋಗದಿದ್ದರೆ ಆಗೋ ನಷ್ಟ ಅಷ್ಟ ರಲ್ಲೇ ಇದೆ!" {{gap}}“ನಡೀರಿ ಹಾಗಾದರೆ. ಕಬ್ಬನ್ ಪಾರ್ಕ್ ಕಡೆಗೆ. ಯಾರ ಜತೆಲಾದರೂ ನಾನಿವತ್ತು ಮಾತಾಡಲೇಬೇಕು. ಇಲ್ಲದಿದ್ದರೆ ನನಗೆ ತಲೆ ಕೆಡೋದು ಖಂಡಿತ! ನಿಮ್ಮನ್ನು ಬಿಟ್ಟು ಬೇರೆ ಯಾರ ಹತ್ತಿರ ಮಾತಾಡ್ಲಿ ಹೇಳಿ?” {{gap}}ಸೋಜಿಗ ಹುಟ್ಟಿಸುವ ಹಾಗಿತ್ತು ನಾರಣಪ್ಪನ ಆ ಮಾತು. ಶಾಂತಸಾಗರವೆಂದು ಹೊರನೋಟಕ್ಕೆ ತೋರುತ್ತಿದ್ದರೂ ಘೋರ ಬಿರುಗಾಳಿ ಎದ್ದಿತ್ತು ಒಳಗೆ. ಬಿರಿಯುವ ಬೆದರಿಕೆ ಹಾಕುತ್ತಿತ್ತು, ನಾರಣಪ್ಪನ ತುಂಬಿದ ಕೊಡ. {{gap}}ಆತ್ಮೀಯತೆಯ ಆ ಮಾತುಗಳಿಗಾಗಿ ‌‌ಕೃತಜ್ಞತೆ ಸೂಚಿಸುತ್ತ ತುಸು ಕಂಪಿಸಿದ ಧ್ವನಿಯಲ್ಲಿ ಮುರಲೀಧರನೆಂದ: {{gap}}"ಬನ್ನಿ, ಬೀದಿ ದಾಟೋಣ." {{gap}}...ಬೀದಿಯನ್ನು ದಾಟಿದ ಬಳಿಕ ಮತ್ತೆ ಹಾದಿ. ಎಡಕ್ಕೆ ನೋಡಿದಾಗ ಕಾಣಲು ದೊರೆಯಿತು ಹಸುರುಗರಿಕೆಯ ಹುಲ್ಲುಗಾವಲು. ಆ ನಿಸರ್ಗ ರಮಣೀಯತೆಯನ್ನು ಅವಮಾನಿಸುವ ಹಾಗೆ ನಿಂತಿತ್ತು,ಸಾರ್ವಜನಿಕ ಪುಸ್ತಕ ಭಂಡಾರದ ಕೆಂಪು ಕಟ್ಟಡ. ಅದರಾಚೆಗೆ ಪಾರ್ಕ್ ಎಂಬ ಹೆಸರು ಹೊತ್ತಿದ್ದ ಜಾಗ. ಮರಗಳು, ಮರಗಳ ಕೆಳಗೆ ಕಲ್ಲು ಬೆಂಚುಗಳು. {{gap}}ಕಾಲುಗಳು ಮುಂದುವರಿದವು. ಮೌನದ ನಡಿಗೆಯನ್ನು ಭೇದಿಸಿದವು ಮಾತುಗಳು,ಆಗೊಮ್ಮೆ. ಈಗೊಮ್ಮೆ. {{gap}}"ನಿಮ್ಮ ರಾಮಚಂದ್ರಯ್ಯನೂ ಬಂದಿದ್ದ, ಆವತ್ತು ರಾತ್ರೆ." {{gap}}“ఓ! ಆತನೇ? ಆಹಾ! ಏನೆಂದ?" {{gap}}“ಈ ಸಲ ನಿಮ್ಮಣ್ಣನ್ನ ಕರಕೊಂಡು ಹೋಗ್ತೀವಿ. ಇನ್ನೊಂದ್ಸಲ...ಅಂತ ರಾಗ ಎಳೆದ. ನಮ್ಮ ಅಣ್ಣನಿಗೆ ರೇಗಿತು.ಈಗ ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ಮಾಡಿ-ಅಂದ. ದುರದುರನೆ ನೋಡಿದ ಅಷ್ಟೆ_ಆ ರಾಮಚಂದ್ರಯ್ಯ. ಅಲ್ಲಿಗೆ ಮಾತು ನಿಂತು ಹೋಯ್ತು." {{gap}}"ನಿಮಗೂ ಅಪಾಯ ಇದ್ದೇ ಇರುತ್ತೆ." {{gap}}"ಅಪಾಯ? ಅದರ ಯೋಚನೆಯೇ ನನಗಿಲ್ಲ. ಆದರೂ ಒಂದು ಚಿಂತೆ ಮಾತ್ರ ಇದೆ. ನಮ್ಮ ತಾಯೀದು. ಈಗ್ಲೇ ಅವರು ಹಾಗೆ ಆಗಿದಾರೇಂತ..." {{gap}}“ಹೌದು, ಪಾಪ..." {{gap}}"ನಮ್ಮ ಸಂಸಾರದ ಕಥೆ ನಿಮಗೆ ಗೊತ್ತಿಲ್ಲ, ಅಲ್ವೆ?"<noinclude></noinclude> i3nmp5nukg7dz909mks3ffpibtc0a6o ಪುಟ:ದೀಕ್ಷೆ.pdf/೩೮ 104 19148 322102 277241 2026-05-24T08:38:19Z Shreelatha.Halemane 7642 /* Validated */ 322102 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=365|center=|right=ದೀಕ್ಷೆ}} {{gap}}“ನಮ್ಮ ಪರಿಚಯ ತೀರಾ ಇತ್ತೀಚಿಂದು. ಮರೀಬೇಡಿ!"<br /> {{gap}}"ಹೌದಲ್ಲ! ಹಾಗಾದರೆ ಮೊದಲಿಂದಲೇ ಶುರು ಮಾಡ್ಬೇಕು ನಾನು. ಬನ್ನಿ, ಒಂದು ಗುಟುಕು ಕಾಫಿ ಹಾಕಿಕೊಳ್ಳೋಣ ಎಲ್ಲದಕ್ಕೂ ಮುಂಚೆ..."<br /> {{gap}}ಮಧ್ಯಾಹ್ನದ ಹೊತ್ತು ಬರಿದಾಗಿಯೆ ಇತ್ತು ಕಬ್ಬನ್ ಪಾರ್ಕ್ ರೆಸ್ಟುರಾ. ಆಂಗ್ಲೋ ಇಂಡಿಯನ್ ಹುಡುಗಿಯೊಬ್ಬಳೊಡನೆ ಇಬ್ಬರು ಬಿಳಿಯ ಸೈನಿಕರು ಒಂದೆಡೆ ಕುಳಿತಿದ್ದರು. ಅಲ್ಲಿ ಸಿಗರೇಟುಗಳು ಹೊಗೆಯಾಡುತ್ತಿದವು. ಇನ್ನೊಂದೆರಡು ಕಡೆಗಳಲ್ಲಿ ಇಬ್ಬರು ಮೂವರು ವಿದ್ಯಾರ್ಥಿಗಳಿದ್ದರು. ಅವರ ಹಾದಿ ನೋಡುತ್ತ ಸೈಕಲ್ಲುಗಳು ಹೊರಗಿದ್ದುವು.<br /> {{gap}}ತೆರವಾಗಿದ್ದ ದುಂಡು ಮೇಜನ್ನು ಆರಿಸಿಕೊಂಡು ಗೆಳೆಯರು ಕುಳಿತರು.<br /> {{gap}}ಸೈನಿಕರಿದ್ದ ಕಡೆಯಿಂದ ಖೋ ಖೋ ಎಂದು ನಗು ಕೇಳಿಸಿತು . ಕೊಬ್ಬಿದ ಮಾಂಸಖಂಡಗಳ, ಈ ಕ್ಷಣವೋ ಮತ್ತೆಯೋ ಪೋಷಾಕು ಬಿರಿಯುವಂತೆ ಬೀಗಿ ಕೊಂಡಿದ ಉಬ್ಬಿದೆದೆಗಳ, ರಂಗು ಮೆತ್ತಿದ ತುಟಿಗಳ, ಗುಂಗುರು ಕೂದಲಿನ ಆ ಹೆಣ್ಣು ಮಾದಕವಾಗಿ ತಾನೂ ನಕ್ಕಳು.<br /> {{gap}}ನಾರಣಪ್ಪ ಹೇಳಿದ:<br /> {{gap}}"ಲೋಕಶಾಂತಿಯ ರಕ್ಷಕರು! ನೋಡಿದಿರಾ ಮುರಲೀಧರ್?"<br /> {{gap}}"ಹೊಲಸು ಮಕ್ಕಳು!"<br /> {{gap}}"ದಿನದಿಂದ ದಿನಕ್ಕೆ ಈ ಊರಲ್ಲಿನ್ನು ಉಸಿರಾಡೋದೇ ಹೆಚ್ಚು ಹೆಚ್ಚು ಅಸಹ್ಯ ವಾಗುತ್ತೆ. ನೋಡ್ತಿರಿ. ನೀವು ದಂಡಿನ ಕಡೆಗೆ ಇತ್ತೀಚೆಗೆ ಹೋಗಿದೀರಾ? ಅದನ್ನ ಬೆಂಗಳೂರು ಅಂತ ಹೇಳೋ ಹಾಗೇ ಇಲ್ಲ..."<br /> {{gap}}ಆ ಮಾತು ನಿಜ ಎನ್ನುವಂತೆ ಮುರಲೀಧರ ತಲೆಯಾಡಿಸಿದ. ಚಕ್ರ ನೇಮಿ ಕ್ರಮದಂತೆ ನಿಯಮ ಬದ್ಧವಾಗಿ ಚಲಿಸುತಿದ್ದ ಬದುಕು ಆತನದು. ದಂಡಿನ ಕಡೆಗೆ ಅಂತಹ ಓಡಾಟ ಸಾಧ್ಯವಿರಲಿಲ್ಲ. [ಸುತ್ತುಮುತ್ತಲಿನ ಎಷ್ಟೊಂದು ವಿಷಯಗಳು ಆತನ ಸೂಕ್ಷ್ಮ ನಿರೀಕ್ಷಣೆಯಿಂದ ತಪ್ಪಿಸಿಕೊಂಡಿದ್ದವು!] ಆದರೂ ಯುದ್ಧ ಠಾಣ್ಯ ವಾದ ಬೆಂಗಳೂರು ಹೊಲಸಾಗಿತ್ತೆಂಬುದನ್ನು ಊಹಿಸುವುದು ಕಷ್ಟವಾಗಿರಲಿಲ್ಲ.<br /> {{gap}}ರೆಸ್ಟುರಾದ ಹುಡುಗ ಹತ್ತಿರ ಬಂದಾಗ ನಾರಣಪ್ಪ ಕೇಳಿದ: {{gap}}"ಏನಾದರೂ ತಿಂಡಿತಗೋಳೊಣ್ವೆ?"<br /> {{gap}}"ಬೇಡಿ!ಏನೂ ಬೇಡಿ!"<br /> {{gap}}[ಆತನ ಜೇಬಿನಲ್ಲಿದ್ದುದು ಒಂದು ಕಪ್ ಕಾಫಿಗೆ ಬೇಕಾದ ಹಣ ಮಾತ್ರ. ಕಾಫಿಯ ಪ್ರಸ್ತಾಪವನ್ನು ನಾರಣಪ್ಪನೇ ಮೊದಲು ಎತ್ತಿದ್ದನೆಂಬುದು ಒಳ ಬಂದಾಗ ಆತನಿಗಿದ್ದ ಧೈರ್ಯಕ್ಕೆ ಕಾರಣ. ಆದರೆ ಕಾಫಿಯ ಜತೆಗೆ ತಿಂಡಿಯನ್ನೂ ತರಿಸುವ ಯೋಚನೆ ಮಾತ್ರ-]<br /> {{gap}}ನಿರಾಕರಣೆಯ ಹಿನ್ನಲೆಯನ್ನು ಬಲ್ಲವನಂತೆ ನಾರಣಪ್ಪ ಮುಗುಳು ನಕ್ಕು<br /><noinclude></noinclude> a8gp29tejrvye4cbu4fr1lnxsd6nas3 ಪುಟ:ದೀಕ್ಷೆ.pdf/೩೯ 104 19149 322105 277322 2026-05-24T09:03:39Z Shreesha Sharma 7840 /* Validated */ 322105 proofread-page text/x-wiki <noinclude><pagequality level="4" user="Shreesha Sharma" /></noinclude>{{rh|left=366|center=|right=ಕನಸು}} ನುಡಿದು:<br /> {{gap}}"ಹಣ ಇದೆ ನನ್ನ ಹತ್ತಿರ, ಏನಾದರೂ ತಗೊಳೋಣ. ಪ್ಲೀಸ್..."<br /> {{gap}}ಮುರಲೀಧರನ ಮುಖ ಕೆಂಪೇರಿತು. ಪ್ರತಿಭಟನೆಯಿಂದ ಪ್ರಯೋಜನವಿರ ಲಿಲ್ಲ, ಮೆಲ್ಲನೆ ಆತನೆಂದ:<br /> {{gap}}“ಆಗಲಿ." {{gap}}ಚಿಲ್ಲರೆ ತಿಂಡಿ ಮತ್ತು ಕಾಫ಼ಿ..ಚಿಲ್ಲರೆ ಬಿಲ್ಲು...<br /> {{gap}}ಒಬ್ಬ ವಿದ್ಯಾರ್ಥಿ ಹೊರಟು ಹೋಗಿದ್ದ. ಕರಿಯಂಗಿ ತೊಟ್ಟಿದ್ದ ಒಬ್ಬ ವಕೀಲರು ಕಕ್ಷಿದಾರರಂತಿದ್ದ ಇಬ್ಬರೊಡನೆ బంದರು, ಸೈನಿಕರು ನಿರ್ದೇಶಗಳನ್ನು ಕೊಡುತ್ತಲೇ ಇದ್ದರು:<br /> {{gap}}"ಬಾಯ್!ವೇಯ್ಟ್ ರ್<br /> {{gap}}ಹುಡುಗಿ ಅತ್ತಿತ್ತ ನೋಡುತ್ತ ನಗುತ್ತಲೇ ಇದ್ದಳು.<br /> {{gap}}ಮುರಲೀಧರ ಕೇಳಿದ:<br /> {{gap}}“ಎದ್ದುಬಿಡೋಣ, ಆಗದೆ?"<br /> {{gap}}"ಏಳಿ. ಇಲ್ಲಿ ಉಸಿರುಕಟ್ಟುತ್ತೆ." {{gap}}ನೆಳಲು ನೀಡುತಿದ್ದ ಮರಗಳು ಅವರನ್ನು ಕರೆದವು. ಅಲ್ಲಿ ఇಲ್ಲಿ ಮಲಗಿದ್ದ ಕುಳಿತಿದ್ದ ಚಲಿಸುತಿದ್ದ ಕೆಲವರ ಹೊರತಾಗಿ ಆ ಪ್ರದೇಶ ನಿರ್ಜನವಾಗಿತ್ತು.<br /> {{gap}}ಅಲೆಯುತ್ತ ಬೇಸರ ಕಳೆಯಲು ಎಷ್ಟು ಒಳ್ಳೆಯ ಜಾಗ! ಆಗಾಗ್ಗೆ ತಾನು ಅಲ್ಲಿಗೆ ಬರುತ್ತಿದ್ದರೆ ಎಷ್ಟುಚೆನ್ನು-ಎನಿಸಿತು ಮುರಲೀಧರನಿಗೆ. ಆದರೆ, ಸಾಕಷ್ಟು ಬಿಡುವೇ ಇಲ್ಲದ ಆತ, ಅಂತಹ ಯೋಚನೆಯನ್ನು ಕೃತಿಗಿಳಿಸುವುದು ಕಷ್ಟಸಾಧ್ಯವಾಗಿತ್ತು - ಸಾರ್ವಜನಿಕ ಪುಸ್ತಕ ಭಂಡಾರದ ಸದಸ್ಯನಾದರೆ ಆ ನಿಮಿತ್ತದಿಂದಲಾದರೂ ಆಗಾಗ್ಗೆ ಅತ್ತ ಬರಬಹುದಿತ್ತು. ಆದರೆ, ಸದಸ್ಯತ್ವದ ವಂತಿಗೆಯನ್ನು ಕೊಡುವವರು ಯಾರು?<br /> {{gap}}ಬಳಿಯಲ್ಲಿದ್ದ ನಾರಣಪ್ಪ ವತ್ತ ಗಮನ ಹರಿಯುತ್ತಲೆ,ವೈಯಕ್ತಿಕ ಯೋಚನೆಗಳ ಸ್ವಾರ್ಥಿ ತಾನು-ಎಂದು ಮುರಲೀಧರನಿಗೆ ಕೆಡುಕೆನಿಸಿತು. ಗೆಳೆಯನಿಗೆ ಒದಗಿದ್ದ ಆಪತ್ತಿನೆದುರು, ಆತ ತೋರುತಿದ್ದ ಧೈರ್ಯಗಳೆದುರು, ತನ್ನ ಬದುಕಿನ ಹೋರಾಟ ಕಿರಿದಾಗಿ ಕಂಡಿತು.<br /> {{gap}}ಮರದ ಬುಡದಲ್ಲಿ ಎಳೆ ಚಿಗುರಿನ ಮೇಲೆ ಆಸೀನನಾಗುತ್ತ ನಾರಣಪ್ಪ ಗೆಳೆಯ ನನ್ನು ಕರೆದ:<br /> {{gap}}"ಬನ್ನಿ ಕೂತ್ಕೋಳ್ಳಿ."<br /> {{gap}}ಮುರಲೀಧರ ಬಳಿಯಲ್ಲೆ ಕುಳಿತುಕೊಳ್ಳುತ್ತಿದ್ದಂತೆ ನಾರಣಪ್ಪ ಮು೦ದು ವರಿಸಿದ:<br /> {{gap}}"ನನಗೆ ಎಷ್ಟೊಂದು ಆಯಾಸವಾಗಿದೆ, ಗೊತ್ತೆ? ಕಳೆದ ಎರಡು ರಾತ್ರಿಗಳಲ್ಲೂ ನಿದ್ದೆಯಿಲ್ಲ. ನಿನ್ನೆಯೆಲ್ಲ ಓಡಾಟವೇ ಆಯ್ತು, ಅಮ್ಮ, ಇವತ್ತೂ<br /><noinclude></noinclude> cbak7woyffii8px3pr5j7utk17sbt84 ಪುಟ:ದೀಕ್ಷೆ.pdf/೪೦ 104 19150 322106 277348 2026-05-24T09:10:33Z Shreesha Sharma 7840 /* Validated */ 322106 proofread-page text/x-wiki <noinclude><pagequality level="4" user="Shreesha Sharma" /></noinclude>{{rh|left=367|center=|right=ದೀಕ್ಷೆ}} {{gap}}ಹೋಗೋದು ಬೇಡ ಅಂದ್ರು. ಆದರೂ ಬಂದ್ದಿದ್ದೆ. ನಿಮ್ಮನ್ನು ನೋಡ್ಬೇಕು, ನಡೆದದ್ದೆಲ್ಲ ತಿಳಿಸ್ಬೇಕು ಅನಿಸ್ತು.”<br /> {{gap}}ಮುರಲೀಧರನಿಗೆ ದೊರೆತಿತ್ತು, ಒಬ್ಬ ಗೆಳೆಯ ಇನ್ನೊಬ್ಬನಿಗೆ ನೀಡಬಹುದಾದ ಅತಿ ದೊಡ್ಡ ಗೌರವ.<br /> {{gap}}“ನೀವು ನನಗೆ ಒಡಹುಟ್ಟಿದವರಿದ್ದ ಹಾಗೆ ನಾರಣಪ್ಪ.”<br /> {{gap}}ಮಿಲಿಟರಿಯವನು ಕುಳಿತಿದ್ದೊಂದು ಮೋಟಾರು ಕಾರು ದಂಡಿನ ಕಡೆಯಿಂದ ನಗರಕ್ಕೆ ವಿದ್ಯುತ್ ವೇಗದಿಂದ ಧಾವಿಸಿತು. ಕುಳಿತಿದ್ದಲ್ಲಿಂದಲೆ ನಾರಣಪ್ಪನ ದೃಷ್ಟಿ ಆ ವಾಹನವನ್ನು ಹಿಂಬಾಲಿಸಿತು. ಬಳಿಕ ನೋಟ ಸಮೀಪಕ್ಕೆ ಹಿಂತಿರುಗಿ, ಮೂರು ಮಾರುಗಳಾಚೆ ಚಪ್ಪಡಿ ಕಲ್ಲಿನೊಂದು ತುಣುಕಿನ ಮೇಲೆ ತಲೆಯೆತ್ತಿ ಸೆಟೆದು ನಿಂತಿ ದೊಂದು ಕೆಂಪು ಓತಿಯನ್ನು ದಿಟ್ಟಿಸಿತು.<br /> {{gap}}ಮೌನವಾಗಿ ಕುಳಿತಿದ್ದ ನಾರಣಪ್ಪನ ದೃಷ್ಟಿಯನ್ನು ಮುರಲೀಧರನೂ ಅನುಸರಿಸಿ ಆ ಓತಿಯನ್ನು ಕಂಡ.<br /> {{gap}}ಒಮ್ಮಿಂದೊಮ್ಮೆಲೇ ನಾರಣಪ್ಪನ ಧ್ವನಿ ಕೇಳಿಸಿತು:<br /> {{gap}}“ನಮ್ಮ ತಾಯಿನ ನಿನ್ನೆ ಸಮಾಧಾನ ಪಡಿಸೋದು ಎಷ್ಟು ಕಷ್ಟವಾಯ್ತೂಂತ..."<br /> {{gap}}ಗೊಗ್ಗರ ಸ್ವರದಲ್ಲಿ ಆರಂಭವಾದ ಮಾತು. ಕ್ರಮೇಣ ಅದರಲ್ಲಿ ಮೊದಲಿನ ಮಾರ್ದವತೆ ತುಂಬಿತು.<br /> {{gap}}ಅವರಣ್ಣನೆ ಹಿರಿಯವನಾಗಿದ್ದ ಸಂಸಾರ, ತಂದೆ ಬಾಲ್ಯದಲ್ಲಿಯೇ ತೀರಿಕೊಂಡಿ ದ್ದರು. ಇದ್ದು ಬದ್ದುದನ್ನೆಲ್ಲ ಮಾರಿ ಹಣ ದೊರಕಿಸಿ ಮಕ್ಕಳ ವಿದ್ಯಾಭ್ಯಾಸವನ್ನು ಸಾಧ್ಯಗೊಳಿಸಿದವರು ಅವರ ತಾಯಿ, ಆ ಇಬ್ಬರು ಸೋದರರ ನಡುವಿನಾಕೆಯೊಬ್ಬ ಳಿದ್ದಳು, ಒಡಹುಟ್ಟಿದವಳು. ಮದುವೆಯಾದ ಮರುವರುಷವೆ ಪತಿವಿಹೀನೆಯಾಗಿ ತವರಿಗೆ ಮರಳಿದ ಅಭಾಗಿನಿ ಆಕೆ...<br /> {{gap}}ಕೆಮಿಕಲ್ ಎಂಜಿನಿಯರಿಂಗ್ ಓದಬೇಕು ಎಂದಿದ್ದ ಮಲ್ಲೇಶಪ್ಪ. ಆದರೆ ಅನುಕೂಲವಾಗಲಿಲ್ಲ. ಆದಷ್ಟು ಬೇಗನೆ ಸಂಸಾರ ಭಾರವನ್ನು ಹೊರುವ ಅಗತ್ಯ ವಿತ್ತು. ಬಿ.ಎಸ್ಸಿ ಮುಗಿಸಿದವನೆ ಕೆಲಸಕ್ಕೋಸ್ಕರ ಅಲೆದ. ಹೊರನಾಡಿನಲ್ಲಿ ಹೆಚ್ಚು ಸಂಪಾದನೆಯ ಸಾಧ್ಯತೆಗಳಿದ್ದುವು. ಆದರೆ, ಮಗನನ್ನು ಬಿಟ್ಟಿರಲು ತಾಯಿ ಸಿದ್ಧಳಿರಲಿಲ್ಲ. ಆತ ದೂರ ಹೋಗುವುದು ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ.<br /> {{gap}}ಕೊನೆಗೆ ಮಲ್ಲೇಶಪ್ಪನಿಗೆ ದೊರೆತುದು ಕೆಮಿಸ್ಟರ ಅಂಗಡಿಯಲ್ಲಿ ಸಹಾಯಕನ ಕೆಲಸ.<br /> {{gap}}ಆತನ ಹೃದಯದ ಮೂಲೆಯಲ್ಲೆಲ್ಲೋ ನಿದ್ದೆ ಹೋಗಿದ್ದ ರಾಷ್ಟ್ರ ಪ್ರೇಮದ ಬೀಜ ನೆನೆಗೊಂಡು ಮೊಳೆತುದು ಆಗಲೇ, ಸಹೋದ್ಯೋಗಿಯೊಬ್ಬ ಅದಕ್ಕೆ ಕಾರಣ ನಾಗಿದ್ದ. ಆ ವ್ಯಕ್ತಿ, ಹೊರಗೆ ನಗುನಗುತ್ತಲೇ ಇದ್ದರೂ ಒಳಗಿಂದೊಳಗೇ ಅಶಾಂತಿ<br /><noinclude></noinclude> id1dp2t130a9wzg3fnaakqimp9m19xs ಪುಟ:ದೀಕ್ಷೆ.pdf/೪೧ 104 19151 322107 277147 2026-05-24T09:12:51Z Shreesha Sharma 7840 /* Validated */ 322107 proofread-page text/x-wiki <noinclude><pagequality level="4" user="Shreesha Sharma" />{{rh|368||ಕನಸು}}</noinclude>{{gap}}ಯಿಂದ ಕುದಿಯುತ್ತಿದ್ದ ಮನುಷ್ಯ. ಬೀಸುತ್ತಿದ್ದ ಗಾಳಿಯನ್ನಿದಿರಿಸಿ ಸಾವಿರ ಹಣತೆ ಗಳಿಗೆ ದೀಪ ಅಂಟಿಸಿದ ಮೇಲೂ ಮೊದಲ ಪ್ರಭೆಯಿಂದಲೆ ಉರಿಯುವ ನಂದಾದೀಪ ವಾಗಿತ್ತು ಅವನ ಅಂತರಂಗ, {{gap}}ದುಡಿಮೆಯ ಆ ಜೀವನ ಆತನ ಪಾಲಿಗೆ ಅಸಹನೀಯವಾಗುತ್ತ ಬಂದಿತ್ತು. ಗೆಳೆಯನೊಡನೆ ಆತನೆನ್ನುತ್ತಿದ್ದ: {{gap}}"ಮಲ್ಲೇಶಪ್ಪ, ನನ್ಕೈಲಿ ಆಗೋದಿಲ್ರೀ ಇಲ್ಲಿರೋದು.ಎಲ್ಲಿಗಾದರೂ ಹೊರಟ್ಟೋಗ್ತಿನಿ.' {{gap}}ಅಂಗಡಿಯ ಒಡೆಯರಿಂದಲೂ ಅವನನ್ನು ಉದ್ದೇಶಿಸಿ ಮಾತು ಬರುತಿತ್ತು: {{gap}}"ನಿಮಗೆ ಕೆಲಸದಲ್ಲಿ ಆಸಕ್ತಿ ಇಲ್ಲ ಕಣ್ರೀ...? {{gap}}ಹೆಚ್ಚು ಬೆಲೆಗೆ ಮಾರಬೇಕೆಂದು ಗೊತ್ತಾಗಿದ್ದ ಒಂದು ಔಷಧಿಯನ್ನು ಹಿಂದಿನಂತೆ ಕಡಮೆಗೇ ಆತ ಮಾರುತ್ತಿದ್ದುದನ್ನು ಒಮ್ಮೆ ಗಮನಿಸಿದ ಮಾಲಿಕರು, ತುಚ್ಚೀಕಾರವನ್ನು ಸೂಚಿಸುವ ಧ್ವನಿಯಲ್ಲಿ ಅಂದರು; {{gap}}"ಕುಡಿದು ಬಂದಿದೀಯೇನಪ್ಪ? ಕೆಲಸ ಮಾಡೋದು ಇಷ್ಟವಿಲ್ಲ್ಲದಿದ್ರೆ ಇಲ್ಲಿಂದ ತೊಲಗು! {{gap}}ಆ ಕ್ಷಣವೇ ಆತ ಅಂಗಡಿ ಬಿಟ್ಟು ಹೋಗಿದ್ದ, ಬರಬೇಕಾಗಿದ್ದ ಹಣವನ್ನೂ ಪಡೆಯದೆ, ಅಂಗಡಿಯನ್ನು ಮಾತ್ರವಲ್ಲ, ಆ ಊರನ್ನೆ ಬಿಟ್ಟು ಹೋದ, ಬೊಂಬಾಯಿಗೆಂದು. {{gap}}ಅಲ್ಲಿ ಉದ್ಯೋಗದ ಜತೆಯಲ್ಲಿ, ಚಳವಳಿಯ ವಿಸ್ತ್ರತ ಕಾರ್ಯ ಕ್ಷೇತ್ರವೂ ಆತನದಾಯಿತು. {{gap}}ಆದರೆ ಮಲ್ಲೇಶಪ್ಪನೊಡನೆ ಆತನ ಸಂಪರ್ಕ ಅನಂತರವೂ ಉಳಿಯಿತು.... {{gap}}[ಆಸಕ್ತಿಯಿಂದ ತನ್ನ ಮಾತುಗಳಿಗೆ ಕಿವಿಗೊಡುತ್ತಿದ್ದ ಮುರಲೀಧರನನ್ನು ದಿಟ್ಟಿಸಿ ನಾರಣಪ್ಪನೆಂದ: {{gap}}"ನೋಡಿ, ಪೋಲೀಸರ ಕೈಗೆ ಬಿದ್ದದ್ದು ನಮ್ಮಣ್ಣನಿಗೆ ಆತ ಬರೆದಿದ್ದ ಕಾಗದಗಳೇ." {{gap}}"ಆಗ್ಲೆ ಊಹಿಸ್ಕೊಂಡೆ."] {{gap}}ಅನಂತರ ಬಂತು, ಆ ಸೋದರರ ಚಟುವಟಿಕೆಯ ವಿವರ. {{gap}}"ಸ್ವಾತಂತ್ರ್ಯ ಗಳಿಸೋಕೆ ಇದೇ ಸುಸಮಯ ಅಂತ ನಮ್ಮಣ್ಣನ ಸ್ನೇಹಿತರ ಹಿಂದೆ ಒಮ್ಮೆ ಲೋಕಯುದ್ಧವಾಗಿತ್ತಂತಲ್ಲ, ಆಗ ಗಾಂಧೀಜಿ ಇಂಗ್ಲಿಷರ ಪಕ್ಷ ವಹಿಸಿದ್ರು. ಈ ಸಲವೂ ಹಾಗೇ ಆದೀತೂಂತ ಅವರ ಭಯ. ಅಹಿಂಸೆ ಅಹಿಂಸೆ ಅಂತ ಬಡಕೊಂಡು ಸುಮ್ಮನಿದ್ದರೆ ಏನು ಪ್ರಯೋಜನ ಹೇಳಿ? ಸುಭಾಷಬೋಸರು ಸೆರೆಮನೆಯಿಂದ ತಪ್ಪಿಸಿಕೊಂಡೇ ಹೋದರು. ಅದೀಗ ಧೀರತನ, ಜಯಪ್ರಕಾಶರೂ ಗಾಂಧೀಜಿಯ ಧೋರಣೇನ ಒಪ್ಪೋದಿಲ್ಲ. ನೆಹರೂಗೆ ಕೂಡ ಅದು ಇಷ್ಟವಿಲ್ಲ..."<noinclude></noinclude> 17pgwlnjzyjy5uquq1cabsyo0pots7c ಪುಟ:ದೀಕ್ಷೆ.pdf/೪೨ 104 19152 322108 277158 2026-05-24T09:28:35Z Shreesha Sharma 7840 /* Validated */ 322108 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=ದೀಕ್ಷೆ|right=369}} {{gap}}ಆ ಸೂಕ್ಷ್ಮನವನ್ನು ಅರ್ಥಮಾಡಿಕೊಳ್ಳುವುದು ಮುರಲೀಧರನಿಗೆ ಹೆಚ್ಚು ಕಷ್ಟ ವೆನಿಸಲಿಲ್ಲ. ಆತ ಮೆಲ್ಲನೆ ತಲೆದೂಗಿ 'ಹೂಂ' ಎಂದ. {{gap}}ಏಕಪ್ರಕಾರವಗಿ ನಾರಣಪ್ಪನ ಮಾತು ಮುಂದುವರಿಯಿತು: {{gap}}"ಅದಕ್ಕೇ ನಮ್ಮಣ್ಣನಂಥವರನ್ನು ಕಂಡರೆ ಈ ಪರದೇಶೀ ಸರಕಾರಕ್ಕೆ ಇಷ್ಟೊಂದು ಭಯ....." {{gap}}ಒಮ್ಮೆಲೆ ಸ್ವರ ಬದಲಾಯಿತು: {{gap}}"ಆದರೆ ನಮ್ಮ ತಾಯಿಗೆ ಇದೊಂದೂ ಅರ್ಥವಾಗೋದಿಲ್ಲ." {{gap}}ಅವರ ತಾಯಿ. ರಾಷ್ಟ್ರದ ಕಥೆಯಿಂದ ಮನೆಗೆ ಮತ್ತೆ... {{gap}}...ಬಹಳ ಹೊತ್ತು ಹಾಗೆ ಅವರು ಕುಳಿತಿದ್ದರು. {{gap}}ಕೊನೆಯಲ್ಲಿ ನಾರಣಪ್ಪ ಕೇಳಿದ {{gap}}"ಈ ವಿದ್ಯಾಭಾಸದಿಂದ ಏನು ಪ್ರಯೋಜನ ಹೇಳಿ?" {{gap}}ಒಳ್ಳೆಯ ಪ್ರಶ್ನೆ !_ಎಂದುಕೊಂಡ ಮುರಲೀಧರ. {{gap}}"ಏನು ಪ್ರಯೋಜನ ಅಂತ ನಿಮ್ಮನ್ನೇ ನಾನು ಕೇಳಬೇಕೂಂತಿದ್ದೆ." {{gap}}"ನಾನೇನೋ ಓದ್ದೀನಿ. ಆದರೆ ಗುಲಾಮ ಚಾಕರಿ ಮಾಡೋದು ನನ್ನಿಂದ ಖಂಡಿತ ಸಾಧ್ಯವಿಲ್ಲ." {{gap}}ಬಹಳ ದಿನಗಳಿಂದ ಮುರಲೀಧರನ ಮನಸ್ಸಿನಲ್ಲೂ ಮೂಡಿ ಬಲಿತಿದ್ದ ವಿಚಾರ ಅದು. {{gap}}"ನನ್ನಿಂದಲೂ ಅಷ್ಟೇ ನಾರಣಪ್ಪ. ವಿದ್ಯೆ,ವಿದ್ಯೆ ಅಂತ ಹಂಬಲಿಸುತ್ತ ನಮ್ಮೂರಿನಿಂದ ಬ೦ದೆ. ಬ೦ದ ದಿವಸದಿಂದ ಈವರೆಗಿನ ಅನುಭವ ಬಹಳ ದೊಡ್ಡ ಕಥೆ. ಇವತ್ತು ಬೇಡಿ ಇನ್ನೊಂದು ದಿವಸ ಯಾವತ್ತಾದರೂ ಹೇಳುವೆನಂತೆ... ಈಗೀಗ ನನ್ನ ತಿಳಿವಳಿಕೆ ಹೆಚ್ಚಿದೆ. ವಿದ್ಯೆ ತರಗತಿಯ ನಾಲ್ಕು ಗೋಡೆಗಳ ಹೊರಗೂ ಬೆಟ್ಟದಷ್ಟಿದೆ ಅನ್ನೋದು ಸ್ಪಷ್ಟವಾಗ್ತಿದೆ. ಮುಂದೆ ನಾನು ಏನಾಗ್ತೀನೋ ಗೊತ್ತಿಲ್ಲ. ಗುಲಾಮ ಚಾಕರಿ ಮಾತ್ರ ಖಂಡಿತ ನಾನು ಮಾಡಲಾರೆ ಅನ್ನಿಸುತ್ತೆ. ಏನಿದ್ದರೂ ನನ್ನ ಕಾಲಮೇಲೆಯೇ ನಾನು ನಿಲ್ಲಬೇಕು...." {{gap}}ತನ್ನದೇ ಪ್ರತಿಧ್ವನಿಯನ್ನು ಕೇಳುತ್ತ ಕೇಳುತ್ತ ನಾರಣಪ್ಪನ ಕಣ್ಣಗಳು ಪ್ರಕಾಶ ಮಾನವಾದುವು. ಆತನೆ೦ದ: {{gap}}"ನಿಮ್ಮಂಥ ಪ್ರತಿಭಾಶಾಲಿಗೇನ್ರಿ? ನಿಮ್ಮ ಬದುಕನ್ನ ಹ್ಯಾಗೆ ಬೇಕೋ ಹಾಗೆ ರೂಪಿಸ್ಕೋತಿರಾ..." {{gap}}"ಪ್ರತಿಭಾಶಾಲಿ? ನಾನು? ಒಳ್ಳೆದು ಹೇಳಿದಿರಿ!" {{gap}}“ಯಾಕೆ, ಅಷ್ಟನ್ನು ತಿಳಕೊಳೋ ಸಾಮರ್ಥ್ಯವೂ ನನಗಿಲ್ಲ, ಅಂತಲೆ?" {{gap}}"ಸರಿಹೋಯ್ತು!"<noinclude></noinclude> g3ap3jj4o2ahghy0yba43xh45xm8i3e ಪುಟ:ದೀಕ್ಷೆ.pdf/೪೩ 104 19153 322109 277296 2026-05-24T09:37:35Z Shreesha Sharma 7840 /* Validated */ 322109 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=370|right=ಕನಸು}} {{gap}}“ಹೋಗಲಿ ಬಿಡಿ. ಈಗ ಯಾಕೆ ಆ ಮಾತು?” {{gap}}ಬಿಸಿಲು ಇಳಿಮುಖವಾಗುತ್ತಿದ್ದಂತೆ ಗೆಳೆಯರು ಅಲ್ಲಿಂದೆದ್ದರು. {{gap}}ಜತೆಯಾಗಿ ಹಾದಿ ನಡೆಯುತ್ತ, ಮುರಲೀಧರನನ್ನು ಕುರಿತು ನಾರಣಪ್ಪನೆಂದ: {{gap}}“ನೀವೊಂದು ಸಾರೆ ನಮ್ಮನೆಗೆ ಬರಬೇಕು.” {{gap}}“ಬರ್ತೀನಿ.” {{gap}}“ನಮ್ಮಮ್ಮ ನಿಮ್ಮನ್ನು ಕಂಡರೆ ಇಷ್ಟಪಡ್ತಾರೆ. ನನಗೆ ಗೊತ್ತು. {{gap}}ನಸುಗೆಂಪಿನ ಛಾಯೆ ಮುಖವನ್ನು ಆವರಿಸುವಂತಾಯಿತು ಮುರಲೀಧರನಿಗೆ, ನಾರಣಪ್ಪನ ತಾಯಿ ನೋಡಲು ಹೇಗಿರಬಹುದೆಂಬುದನ್ನು ಬಗೆಗಣ್ಣಿನೆದುರು ಚಿತ್ರಿಸಿ ಕೊಳ್ಳಲು ಆತ ಯತ್ನಿಸಿದ. {{gap}}ಹೋಗುತ್ತಿದ್ದ ಬರುತ್ತಿದ್ದ ಜನರನ್ನೆಲ್ಲ ನಾರಣಪ್ಪ ದಿಟ್ಟಿಸುತ್ತಿದ್ದ. ಆತನ ಮನಸ್ಸಿನಲ್ಲಿ ಏನಿರಬಹುದೆಂದು ಊಹಿಸುತ್ತ ಮುರಲೀಧರನೆಂದ: {{gap}}“ಈಗ ರಾಮಚಂದ್ರಯ್ಯ ಬಂದು ನಮ್ಮಿಬ್ಬರನ್ನೂ ನೋಡಿದರೆ ಚೆನ್ನಾಗಿರುತ್ತೆ,ಅಲ್ವೆ?” {{gap}}“ಓಹೋ! ಆ ಮೇಲೆ ನೀವೂ ಗುಮಾನಿ ಮನುಷ್ಯನಾಗ್ತಿರಿ.” {{gap}}“ಹಾಗೆ ಆಗೋದು ಹೆಮ್ಮೆಯ ವಿಷಯ!” {{gap}}“ನೋಡೋದಕ್ಕೆ ನಮ್ಮಣ್ಣ ಸಾತ್ವಿಕ ಮನುಷ್ಯ. ಅಲ್ಲದೆ, ಈ ಪೋಲೀಸರು, ಜೈಲು, ಇದೆಲ್ಲ ಆತನಿಗೆ ಹೊಸತು ನೋಡಿ, ಏನಾಗುತ್ತೆ ಅಂತ ಅಳುಕಿದ್ದೆ. ಆದರೆ ಅಣ್ಣ ಎಷ್ಟೊಂದು ಧೈರ್ಯವಾಗಿದ್ದ! ಅಮ್ಮನೂ ಅಷ್ಟೆ. ನನ್ನ ಮಗ ಏನ್ರೀ ಮಾಡಿ ದಾನೆ? ಅಂತ ಕೇಳಿದಳೇ ಹೊರತು, ಕ್ಷಮೆ ಯಾಚಿಸು ಅಂತ ಅಣ್ಣನಿಗೆ ಹೇಳಲಿಲ್ಲ. ಪ್ರತಿಯೊಂದನ್ನೂ ನಾನು ವಿವರಿಸಿ ಹೇಳಿದಾಗ ಸುಮ್ಮನಾದ್ದು. ಸ್ವಲ್ಪ ಹೊತ್ತು ಅತ್ತಳೂಂತಿಳ್ಕೊಳ್ಳಿ, ಹಾಗೆ ನೋಡಿದರೆ, ಯಾವ ತಾಯಿ ತಾನೆ ಅಳೋದಿಲ್ಲ? ಮಕ್ಕಳಿಗೋಸ್ಕರ ಕಣ್ಣೀರಿನ ಅಕ್ಷಯ ಪಾತ್ರೆಯೇ ಅವರಲ್ಲಿರುತ್ತೆ...!” {{gap}}“ನಮ್ಮಮ್ಮನಿಗೆ ಮಾತ್ರ ಇಂಥದು ಏನೇನೂ ಅರ್ಥವಾಗದು. ಈ ವಿಷಯದಲ್ಲಿ ನೀವೇ ಭಾಗ್ಯಶಾಲಿ..." {{gap}}.... ವೃತ್ತಿ ಶಿಕ್ಷಣ ಶಾಲೆಯ ವೃತ್ತ ಕಳೆದು, ಮಹಾರಾಣಿ ಕಾಲೇಜು ಬಂತು. ಎಡಬದಿಯಲ್ಲಿ ಸೆರೆಮನೆಯ ಎತ್ತರದ ಪ್ರಾಕಾರಗಳು ಕಾಣಿಸಿದುವು. {{gap}}ಆ ಗೋಡೆಗಳೊಳಗಿನ ಕರಿಯ ಜಗತ್ತಿನಲ್ಲಿ ಎಲ್ಲೋ ಒಂದೆಡೆ ಇದ್ದ ಮಲ್ಲೇಶ. {{gap}}“ಆ ಮೇಲೆ ನಿಮ್ಮಣ್ಣನನ್ನ ನೋಡಿದ್ರಾ?” {{gap}}“ಹಿಡಕೊಂಡು ಹೋದ ರಾತ್ರೆ ಲಾಕಪ್ನಲ್ಲಿ ಇಟ್ಟಿದ್ರು, ಬಟ್ಟೆ ಬರೆ ಅಲ್ಲಿಗೇ ತಗೊಂಡು ಹೋಗಿ ಕೊಟ್ಟೆ. ತಾಯಿನ ಕರಕೊಂಡು ನಾಳೆ ಭೇಟಿಗೆ ಇಲ್ಲಿಗೆ ಬರೋ ಣಾಂತಿದೀನಿ.” {{gap}}“ಬಿಡುಗಡೆ ಯಾವತ್ತು ಏನೂಂತ ಗೊತ್ತಾಗಲಾರದು, ಅಲ್ವೆ?”<noinclude></noinclude> ktkacublfaa4hdxlfklnr5o4zdk1ljq ಪುಟ:ದೀಕ್ಷೆ.pdf/೪೪ 104 19154 322119 277318 2026-05-24T10:28:47Z Shreelatha.Halemane 7642 /* Validated */ 322119 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ|right=371}} {{gap}}“ಬಿಡುಗಡೆ? ಹ್ಯಾಗೆ ಹೇಳೋಣ ಆ ವಿಷಯ? ಯಾರಿಗೆ ಗೊತ್ತು? ಬೇಗನೆ ಬಿಟ್ಟುಬಿಡ್ತಾರೇಂತ ಅಮ್ಮ ತಿಳಿಕೊಂಡಿದಾಳೆ. ನನಗೆ ಹಾಗೆ ಅನಿಸೋಲ್ಲ.” {{gap}}ಸತ್ಯವಾಗಿದ್ದ ಮಾತು. ಆದರೂ ಸಮಾಧಾನಗೊಳಿಸುವಂಥದೇನನ್ನಾದರೂ ಹೇಳಬೇಕೆನಿಸಿತು ಮುರಲೀಧರನಿಗೆ. ಜತೆಗೆ ಸಿದ್ಧವಾಗಿಯೇ ನಿಂತಿತ್ತು ಪ್ರಶ್ನೆ ಕೂಡ. “ಏನನ್ನು? ಹೇಳುವುದೇನನ್ನು?” {{gap}}ಗೋಡೆಯ ಆ ಬದಿ ಕೆಲವು ಮಾರುಗಳಾಚೆ ಇದ್ದ ಅಣ್ಣನ ನೆನಪು ಬಾಧಿಸು ತಿದ್ದರೂ ತಣ್ಣನೆ ಬೀಸಿದೊಂದು ಗಾಳಿಗೆ ನಾರಣಪ್ಪ ಎದೆಯೊಡ್ಡಿದ. {{gap}}“ಇಷ್ಟೆಲ್ಲ ಈ ಹೊತ್ತು ನಿಮ್ಮ ಜತೆ ಮಾತನಾಡಿದೆ ಅಂತ ನನ್ನ ಹೃದಯ ಹಗುರವಾಗಿದೆ. ಮನಸ್ಸಿಗೆ ಸಮಾಧಾನವಾಗಿದೆ. ಕ್ಲಾಸಿಗೆ ಹೋಗದೆ ಜತೆಯಲ್ಲಿ ಬಂದಿರಲ್ಲ-ಅದಕ್ಕಾಗಿ ಕೃತಜ್ಞ.” {{gap}}“ಬೇಡಿ. ಹಾಗೆ ಹೇಳಬಾರದು ನೀವು....” {{gap}}ಮುರಲೀಧರನ ಮನಸ್ಸು ಅಸ್ಪಷ್ಟವಾಗಿ ತನ್ನೊಳಗೇ ತೊದಲಿತು: ನನ್ನ ಬದುಕು ವಿಶಾಲವಾಗೋ ಹಾಗೆ ಇವತ್ತು ಮಾಡಿದೀಯ.ಅದಕ್ಕಾಗಿ ನಿನಗೆ ಧನ್ಯ ವಾದ ಸಲ್ಲಿಸಬೇಕಾದವನು ನಾನು. ಇದು, ನನ್ನ ಮೇಲೆಯೆ ಉಳಿದಿರುವ ದೊಡ್ದ ಋಣ...' {{gap}}ಉಚ್ಚಾರ ದೊರೆಯದೆ ಕರಗಿ ಮಾಯವಾದ ಆ ಪದಗಳು ನಾರಣಪ್ಪನ ಕಿವಿಗೆ ಬೀಳಲಿಲ್ಲ. {{gap}}ಬೀಳ್ಕೊಡುವ ಕಡೆ ಮುರಲೀಧರನೆಂದ: {{gap}}“ನಾಳೆ ನೀವು ಬರೋದಿಲ್ಲ ಹಾಗಾದರೆ.” {{gap}}“ಇಲ್ಲ. ಪುನಃ ನಾಡದು ಭೇಟಿ.” {{gap}}“ನಮಸ್ಕಾರ, ನಡಕೊಂಡೇ ಹೋಗ್ತಿರಾ?” {{gap}}“ಹೂಂ, ನಮಸ್ಕಾರ.” {{gap}}ಬೇರೆ ಹಾದಿ ಹಿಡಿದು ತುಸು ದೂರ ನಡೆದ ಬಳಿಕ ಒಮ್ಮೆ ಮುರಲೀಧರ ತಿರುಗಿ ನೋಡಿದ. ಬಿಳಿಯ ಪಾಯಜಾಮ ಜುಬ್ಬ ಧರಿಸಿದ್ದ ವ್ಯಕ್ತಿ ಕರಗಿ ಕಿರಿದಾಗಿ ತೋರು ತಿತ್ತು. ಮತ್ತೊಮ್ಮೆ ದಿಟ್ಟಿಸಿದಾಗ ಆತನೂ ಒಮ್ಮೆ ತಿರುಗಿ ನೋಡಿದಂತೆ ಅನಿಸಿತು. {{gap}}ಮುರಲೀಧರ ಒಬ್ಬನೇ ಉಳಿದಾಗ, ತಾವು ಬಳಲಿರುವೆವೆಂದು ಪಾದಗಳು ದೂರುಕೊಟ್ಟುವು. ನಿಧಾನವಾಯಿತು ನಡಿಗೆ ಆ ದಿನದ ಘಟನೆಗಳನ್ನೆಲ್ಲ ಮನಸ್ಸು ಮೆಲುಕು ಹಾಕಿತು. ಬೇಗನೆ ಕಳೆದಿದ್ದರೂ ಬಲು ದೀರ್ಘವಾಗಿ ಈಗ ತೋರಿದ ಹಗಲು. ಒಂದೇ ಹೊತ್ತಿನಲ್ಲಿ ಎಷ್ಟೊಂದು ವಿಷಯಗಳನ್ನು ತಿಳಿದಿದ್ದ ಆತ! ಎಷ್ಟೊಂದು ವಿಸ್ತಾರ ಜಾಗದಲ್ಲಿ ಸಂಚಾರ ಮಾಡಿದ್ದ!. {{gap}}ನಮ್ಮ ಅಣ್ಣನನ್ನ ಅರೆಸ್ಟ್ ಮಾಡಿದ್ರು. ಹೀಗಾಗಿ {{gap}}ತಾನು ಕೊಟ್ಟಿದ್ದ ಉತ್ತರ:<noinclude></noinclude> 6ctk2ppovuqykgkprnjmsqa8adldwj5 ಪುಟ:ದೀಕ್ಷೆ.pdf/೪೫ 104 19155 322121 277324 2026-05-24T10:34:21Z Shreelatha.Halemane 7642 /* Validated */ 322121 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=372|right=ಕನಸು}} {{gap}}'ಯಾವತ್ತು ಅರೆಸ್ಟಾಯ್ತು? ಪತ್ರಿಕೇಲಿ ಏನೂ ಬಂದೇ ಇಲ್ವಲ್ಲಾ....? {{gap}}ಪತ್ರಿಕೆಯವರು ಏನನ್ನೂ ಪ್ರಕಟಿಸಿರಲಿಲ್ಲ. ಆದರೂ ಗಮನಾರ್ಹವಾದೊಂದು ಘಟನೆ ನಗರದಲ್ಲಿ ನಡೆದು ಹೋಗಿದ್ದುದು ನಿಜವಾಗಿತ್ತು. {{gap}}ಈ ವಿಷಯ ಪತ್ರಿಕೆಯವರೊಡನೆ ತಾನು ಪ್ರಸ್ತಾಪಿಸಬೇಕು ಎಂದು ತೋರಿತು ಮುರಲೀಧರನಿಗೆ. {{gap}}ನಿಯೋ ಮೈಸೂರು ಕೆಫೆಯತ್ತ ಸಾಗಿ ಆತ ಕೇಳಿದ: {{gap}}“ಒಮ್ಮೆ ಫೋನ್ ಮಾಡ್ಲೆ ಸಾರ್?” {{gap}}ಗಲ್ಲದ ಬಳಿ ಕುಳಿತಿದ್ದ ಮ್ಯಾನೇಜರು, ಎದುರಿಗಿದ್ದವನ ಬಡ ಸ್ವರೂಪ ವನ್ನೊಮ್ಮೆ ದಿಟ್ಟಿಸಿ ಕೇಳಿದರು: {{gap}}“ಎಲ್ಲಿಗೆ?" {{gap}}“ರಾಷ್ಟ್ರವಾಣಿ ಕಾರ್ಯಾಲಯಕ್ಕೆ.” {{gap}}ಆ ಉತ್ತರ ಕೇಳಿದ ಬಳಿಕ ಆಕ್ಷೇಪವೆತ್ತಲಿಲ್ಲ ಮ್ಯಾನೇಜರು. {{gap}}“ಮಾಡಿ.” {{gap}}ಟ್ರಿಣ್ ಟ್ರಿಣ್ ನಂಬರುಗಳು. ಹಲೋ....ಯಾರು ಮಾತಾಡ್ತಿರೋದು?.... ಸಂಪಾದಕರು ಬೇಕಾಗಿತ್ತು....ಸಂಪಾದಕರಿಲ್ಲ; ಏನು ಸಮಾಚಾರ ಹೇಳಿ?... {{gap}}“ಮೊನ್ನೆ ರಾತ್ರಿ ಮಲ್ಲೇಶಪ್ಪನವರ ಅರೆಸ್ಟಾಯ್ತು ಸಾರ್, ಆ ಸುದ್ದಿ ನಿಮ್ಮ ಪತ್ರಿಕೇಲಿ” {{gap}}“ಮಲೇಶಪ್ಪನೋರು? ಯಾರಪ್ಪ ಆತ?” {{gap}}“ವಿಚಾರಣೆ ಇಲ್ಲೆ ಸ್ಥಾನ ಬದ್ದ ತೇಲಿಟ್ಟಿದಾರೆ.” {{gap}}“ಹಾಗೇನು? ನೀವು ಯಾರು? ಎಲ್ಲಿಂದ ಮಾತಾಡ್ತಿದೀರ? ಇಲ್ಲಿಗೆ ಬಂದು ಸುದ್ದಿ ಬರ್ಕೊಡಿ...” {{gap}}“ಹೆಚ್ಚಿನ ವಿವರ ಗೊತ್ತಿಲ್ಲ. ದಯವಿಟ್ಟು ನೀವು ವಿಚಾರಿಸಿ ತಿಳ್ಕೊಬಾರದೆ?” {{gap}}“ಸರಿ, ಸರಿ!” {{gap}}“ಅಷ್ಟೇ ಥ್ಯಾಂಕ್ಸ್.” {{gap}}ಮುರಲೀಧರ ರಿಸೀವರ್ ಕೆಳಗಿಡುವುದಕ್ಕೆ ಮುಂಚೆಯೆ ಆಚೆಯ ಕಡೆಯಿಂದ ಕೇಳಿ ಬಂತು: ಟಕ್ ಸದ್ದು. {{gap}}ಸಂವಾದದ ಹೆಚ್ಚಿನಂಶವನ್ನು ಕೇಳಿದ್ದ ಕೆಫೆಯ ಮ್ಯಾನೇಜರು ಕುತೂಹಲದಿಂದ ಮುರಲೀಧರನನ್ನು ನೋಡಿದರು. ಆತನಿಗೂ ಕೃತಜ್ಞತೆಯನ್ನರ್ಪಿಸಿ ಮುರಲೀಧರ ಹೊರಕ್ಕಿಳಿದ. ಎದೆ ಡವಡವನೆ ಹೊಡೆದುಕೊಂಡಿತು-ಏನೋ ಮಹಾ ಕೆಲಸ ಮಾಡಿ ದವರಂತೆ. {{gap}}ತನ್ನ ಈ ಪ್ರಯತ್ನದ ಫಲವಾಗಿ ಸುದ್ದಿ ಪ್ರಕಟವಾದರೆ ಚೆನ್ನಾಗಿರುತ್ತದೆನ್ನಿಸಿತು. ಆಗ ನಾರಾಣಪ್ಪನಿಗೆ ಆ ವಿಷಯ ತಾನು ಹೇಳಬಹುದು....<noinclude></noinclude> adpwg64x0fezb3evz3vysv782eg4o6c ಪುಟ:ದೀಕ್ಷೆ.pdf/೪೬ 104 19156 322122 277056 2026-05-24T10:36:35Z Shreelatha.Halemane 7642 /* Validated */ 322122 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ|right=373}} {{gap}}ಸಂಜೆಯಾಗಿತ್ತು...<br> {{gap}}ಕೊಠಡಿ ತಲಪಿ, ತುಸು ವಿರಮಿಸಿದ ಬಳಿಕ, ಪಾಠ ಹೇಳುವ ಮನೆಯ ಕಡೆಗೆ ಮುರಲೀಧರ ಸಾಗಿದ.<br> {{gap}} ಮರಳಿ, ಊಟ ಮುಗಿಸಿ, ಪುಸ್ತಕಗಳತ್ತ ದೃಷ್ಟಿ ಬೀರಲು ಮುರಲೀಧರ ಯತ್ನಿಸಿದ. ಆಯಾಸವೆನಿಸಿತು.<br> {{gap}}ತೆರೆದ ಪುಸ್ತಕದೆದುರು ಹಾಗೆಯೇ ಕಣ್ಣ ಮುಚ್ಚಿ ಗೋಡೆಗೊರಗಿದ, ಆ ದಿನ ನಡೆದುದರ ಚಿತ್ರಮಾಲೆ ಮತ್ತೆ ಕಣ್ಣಿನೆದುರು ಸುಳಿಯಲಾರಂಭಿನಸಿತು.<br> {{gap}}ಪತ್ರಿಕೆಯ ಕಾರ್ಯಾಲಯದೊಡನೆ ತಾನು ನಡೆಸಿದ್ದ ಫೋನ್ ಸಂಭಾ‍‍‍‍‍‍‍ಷಣೆ....<br> {{gap}}ಮಾರನೆಯ ಬೆಳಗಿನ ಸಂಚಿಕೆಯಲ್ಲಿ ಆ ವಾರ್ತೆ ಪ್ರಕಟವಾಗುವುದು ಅಸಂಭವ ವಾಗಿರಲಿಲ್ಲ.<br> {{gap}}ಮಲ್ಲೇಶಪ್ಪನವರ ದಸ್ತಗಿರಿ....ದೊಡ್ಡ ಅಕ್ಷರಗಳಲ್ಲಿ ಪುಟದಗಲಕ್ಕೂ ಆ ಸುದ್ದಿ. ವಿವರಗಳು ಕಳಗೆ. ನಾರಣಪ್ಪನ ಹೆಸರು ಕೂಡ...<br> {{gap}}ಪತ್ರಿಕೆ ಮಾರುವ ಹುಡುಗರು ಕೂಗಿಕೊಳ್ಳುತ್ತ ಓಡಾಡಬಹುದು ಬೆಳಗ್ಗೆ :<br> {{gap}}"ಮಲ್ಲೇಶಪ್ಪನವರ ದಸ್ತಗಿರಿ! ರಾಷ್ಟ್ರವಾಣಿ-ಒಂದಾಣೆ!"<br> {{gap}}....ಚಿತ್ರಮಾಲೆ ಮುಗಿದರೂ ಕಣ್ಣುಗಳು ಮುಚ್ಚಿಯೇ ಇದ್ದುವು.<br> {{gap}} ....ಬೂಟುಗಾಲುಗಳು ಸದ್ದುಮಾದಡಿದುವು. ಕೊನೆಯ ಕೊಠಡಿಯವನ ಸ್ವರ ಕೇಳಿಸಿತು:<br> {{gap}}“ರೀ ಮುರಲೀಧರ್! ದೀಪ ಉರಿಸ್ಕೊಂಡೇ నిದ್ದೆ ಹೋಗಿದೀರಲ್ರೀ...!"<br> *{{gap}}{{gap}}*{{gap}}{{gap}}*{{gap}}{{gap}}*<br> {{gap}} ಬೆಳಗ್ಗೆ ಎದ್ದವನೇ ಮುರಲೀಧರ ಮುಖ ತೊಳೆದುಕೊಂಡು ಬೀದಿಯ ಬಳಿ ಹೋಗಿ ನಿಂತ. ಪತ್ರಿಕೆ ಮಾರುವ ಹುಡುಗರು ನಿಂತುಕೊಳ್ಳುತ್ತಿದ್ದ ಜಾಗ ಒಂದಿತ್ತು ಅಲ್ಲಿ.<br> {{gap}}'ರಾಷ್ಟ್ರವಾಣಿ' ಬಂತು, ಎಂದಿನಂತೆ. ಕೊಳ್ಳುವ ಗೊಡವೆಗೆ ಹೋಗದೆ ಮುರಲೀಧರ, ಒಬ್ಬರು ಕೊಂಡು ಓದುತ್ತಿದ್ದ ಪತ್ರಿಕೆಯತ್ತ ತಾನೂ ಇಣಿಕಿ ನೋಡಿದ. ಎಲ್ಲಿಯೂ ಏನೂ ಕಾಣಿಸಲಿಲ್ಲ.<br> {{gap}}ತನಗೆ ಅಂಟಿಕೊಂಡ ಎಳೆಯನನ್ನು ನೋಡಿ ವಯಸ್ಸಾದ ಆ ಮನು‌ಷ್ಯ ಅಂದರು.<br> {{gap}}"ಸ್ಕೋರ್ ನೋಡ್ತಿದೀಯೇನಪ್ಪಾ?"<br> {{gap}}"ಇಲ್ಲ ಸಾರ್. ಒಂದ್ನಿಮಿಷ ಪತ್ರಿಕೆ ಕೊಡ್ತೀರಾ?"<br> {{gap}}ಹುಬ್ಬು ಗಂಟಿಕ್ಕಿ ಅವರು ಪತ್ರಿಕೆ ಕೊಟ್ಟರು.<br> {{gap}}ಕಾಣಿಸಲೇ ಇಲ್ಲ ಆ ವಾರ್ತೆ....<br> {{gap}}...ಕಡೆಯ ಪುಟದಲ್ಲಿ ಒಂದು ಮೂಲೆಯಲ್ಲಿತ್ತು 'ಪೋಲೀಸ್ ಸುದ್ದಿಗಳು' ಎಂಬ ತಲೆಕಟ್ಟು.<br> ‍‍‍<noinclude></noinclude> 79p6e6vpocvdkd9gua2vib1d0z4yro6 ಪುಟ:ದೀಕ್ಷೆ.pdf/೪೭ 104 19157 322123 277141 2026-05-24T10:40:55Z Shreelatha.Halemane 7642 /* Validated */ 322123 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=374|right=ಕನಸು}} {{gap}}-ಸುಪ್ರಸಿದ್ಧ ಕೇಡಿ ಮುನಿಸ್ವಾಮಿ ಉರುಫ್ ವೆಂಕಟರೆಡ್ಡಿಯನ್ನು ಹಿಡಿದಿದ್ದರು. {{gap}}ಅದರ ಕೆಳಗಿತ್ತು.<br> {{gap}}ಯುದ್ಧ ವಿರೋಧಿ ಗುಪ್ತ ಚಳವಳಿಯಲ್ಲಿ ಭಾಗಿಯಾಗಿರುವರೆಂಬ ಆರೋಪದ ಮೇಲೆ ಗಿರಿಧರಲಾಲ್ ಆಂಡ್ ಸನ್ಸ್ ಕೆಮಿಸ್ಟರ ಅಂಗಡಿಯ ಸಹಾಯಕ ಮಲ್ಲೇಶಪ್ಪ ಎಂಬಾತನನ್ನು ನಗರದ ಸ್ಪೆಶಲ್ ಬ್ರಾಂಚಿನವರು ಬಂಧಿಸಿ ಸ್ಥಾನಬದ್ಧತೆಯಲ್ಲಿರಿಸಿದ್ದಾರೆ.<br> {{gap}}ಒಂದೇ ವಾಕ್ಯ. ಶಿರೋನಾಮೆ ಇರಲಿಲ್ಲ.<br> {{gap}}ಪತ್ರಿಕೆಯನ್ನು ಅದರ ಒಡೆಯರಿಗೆ ಹಿಂತಿರುಗಿಸಿ ಉಗುಳು ನುಂಗುತ್ತ ಮುರಲೀ ಧರನೆಂದ:<br> {{gap}}"ಉಪಕಾರವಾಯ್ತು ಸಾರ್."<br> {{center|೬}} {{gap}}ಮುರಲೀಧರ ಬರೆದ ಕಾಗದಗಳಿಗೆ ಉತ್ತರ ಬಂದೇ ಇರಲಿಲ್ಲ, ದಿನವೂ ಅದರ ಹಾದಿ ನೋಡಿ ಆತ ಬೇಸರಗೊಂಡ, ಆ ಬೇಸರಕ್ಕೆ, ವ್ಯಾಕುಲಕ್ಕೆ, ಕಾರಣವಿತ್ತು. ಆತನಿಗೆ ಹಣ ಬೇಕಾಗಿತ್ತು ಪರೀಕ್ಷೆಯ ಫೀಸು ಕಟ್ಟಲು. ಅದೇನು ಹತ್ತು ರೂಪಾಯಿಯೇ? ಇಪ್ಪತ್ತೆ? ಅಷ್ಟೊಂದು ಹಣವನ್ನು ಎಲ್ಲಿಂದ ತರಬೇಕು ಆತ? ಮನೆಯಿಂದ ಆ ಸಹಾಯ ಬಂದೇ ಬರುವುದೆಂಬ ನಂಬಿಕೆ ಇತ್ತು ಮುರಲೀಧರನಿಗೆ, ಈ ನಡುವೆ ಪ್ರತಿ ತಿಂಗಳೂ ಊರಿನಿಂದ ಹಣ ಬರುತ್ತಿರಲಿಲ್ಲ. ಅಂತೂ ಇಂತೂ ಕಾಲ ಯಾಪನೆ ಯೇನೊ ಸಾಧ್ಯವಾಗಿತ್ತು . ಆದರೆ ಫೀಸು ಕಟ್ಟುವಂತಹ ದೊಡ್ಡ ವೆಚ್ಛದ ನಿರ್ವಹಣೆಗೆ ಎಲ್ಲಿತ್ತು ಹಾದಿ?<br> {{gap}}ನಾರಣಪ್ಪ ಕೇಳಿದ:<br> {{gap}}"ಏನ್ಮಾಡ್ಬೇಕೂಂತಿದ್ದೀರಾ?"<br> {{gap}}"ಏನೂ ತೋಚ್ತಾ ಇಲ್ಲ ಕಣ್ರೀ. ಊರಿಗೆ ಹೋಗಿ ಬರೋಣಾಂತಿದೀನಿ."<br> {{gap}}"ತಡಮಾಡ್ಬೇಡಿ ಹಾಗಾದರೆ."<br> {{gap}}“ಇల్ల."<br> {{gap}}ಮುರಲೀಧರ ಊರಿಗೆ ಪ್ರಯಾಣ ಬೆಳೆಸಿದ.<br> {{gap}}ನಿರುತ್ಸಾಹ ಹುಟ್ಟಿಸುವಂತಿತ್ತು ಆತ ಮನೆಯಲ್ಲಿ ಕಂಡ ದೃಶ್ಯ.ಅದೊಂದು ಪುಟ್ಟ ಕುರುಕ್ಷೇತ್ರ ಸಂಸಾರ ಒಡೆಯುವ ಸ್ಥಿತಿಯಲ್ಲಿತ್ತು ಆತನ ಅಣ್ಣಂದಿರು ಪರಸ್ಪರ ಮುಖ ನೋಡಿ ಮಾತನಾಡುತ್ತಿರಲಿಲ್ಲ. ಜಗಳಕ್ಕೆ ಮೂಲ ಕಾರಣ ಮನೆಯ ಸೊಸೆಯಂದಿರೆ ಎಂಬುದು ಹೆಂಗಸರ ಸಿಡುಕು ಮೋರೆಗಳಿಂದ ಸ್ಪಷ್ಟವಾಗು<br><noinclude></noinclude> lsvx6gjvnsdsb6tmfh18g6xbzi4dbxq ಪುಟ:ದೀಕ್ಷೆ.pdf/೪೮ 104 19158 322124 277208 2026-05-24T10:43:12Z Shreelatha.Halemane 7642 /* Validated */ 322124 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ|right=375}} ತಿತ್ತು.ಆ ಬೇಗೆಯಲ್ಲೆ ಬೆಂದು ತಾಯಿ ಅರೆ ಜೀವವಾಗಿದ್ದಳು. ಮಾತು ಮಾತಿಗೂ ಕೆರಳಿ ಸಿಟ್ಟಾಗುವ ಅಸಹನೆಯ ಮೂರ್ತಿಯಾಗಿದ್ದರು ತಂದೆ.<br> {{gap}}ಮುರಲೀಧರನೊಡನೆ ಒಲವು ತುಂಬಿದ ಧ್ವನಿಯಿಂದ ಒಬ್ಬರೂ ಅಲ್ಲಿ ಮಾತ ನಾಡಲಿಲ್ಲ, ಆರೋಗ್ಯವಾಗಿದೀಯೇನೋ?-ಎಂದು ತಾಯಿಯೊಮ್ಮೆ ಕೇಳಿದರು. ಅಷ್ಟೆ. ಊಟವಾಯ್ತೆ? ತಿಂಡಿಯಾಯ್ತೆ? ಸ್ನಾನವಾಯ್ತೆ? ಎಂದು ಒಮ್ಮೆಯೂ ಕೇಳಲಿಲ್ಲ ಅತ್ತಿಗೆಯರು.<br> {{gap}}ಮಗ ದೃಷ್ಟಿಗೆ ಬಿದ್ದೊಡನೆ ತಂದೆ ಕೇಳಿದರು:<br> {{gap}}"ಪರೀಕ್ಷೆಗೆ ಎಷ್ಟು ದಿನ ಇದೆ ಇನ್ನು?"<br> {{gap}}ಮಗನೆಂದ:<br> {{gap}}"ಮಾರ್ಚ್ ಮೊದಲ್ನೆ ವಾರ ಅಪ್ಪಾ."<br> {{gap}}ಮುಂದೇನೂ ಪ್ರಶ್ನೆ ಬರಲಿಲ್ಲವೆಂದು ಮುರಲೀಧರ ಯೋಚನೆಗೆ ಒಳಗಾದ. ತನ್ನ ಪತ್ರಗಳು ತಂದೆಗೆ ತಲಪಿಯೇ ಇಲ್ಲವೇನೋ ಎಂಬ ಸಂದೇಹ ಆತನಲ್ಲಿ ಮೂಡಿತು.<br> {{gap}}ಆದರೆ ಆ ರಾತ್ರೆಯೆ ಆಯಿತು ಸಂದೇಹ నిವಾರಣೆ.<br> {{gap}}ತಂದೆ ಕೇಳಿದರು:<br> {{gap}}"ಎಷ್ಟು ದಿನ ಇರ್ತೀಯಾ?"<br> {{gap}}ಮುರಲೀಧರನೆಂದ:<br> {{gap}}"ನಾಳೆಯೇ ಹೋಗ್ವೇಕು. ಫೀಸು ಕಟ್ಟೋಕೆ ಸೋಮವಾರವೇ ಕೊನೆಯ ದಿವಸ."<br> {{gap}}"ನಿನ್ನ ಅಣ್ಣಂದಿರನ್ನು ಕೇಳಿದಿಯಾ?"<br> {{gap}}“ಇల్ల."<br> {{gap}}“ಕೇಳು. ನನ್ನಲ್ಲೇನಿದೆ? ಈಗೆಲ್ಲಾ ಅವರದೇ ರಾಜ್ಯ..."<br> {{gap}}ಹತಾಶನಾದ ಮನುಷ್ಯನ ಉತ್ತರ. ಆದರೆ ಧ್ವನಿ ಮಾತ್ರ ಕಟುವಾಗಿಯೆ ಇತ್ತು.<br> {{gap}}ಹಿಂದೆ ಮುರಲೀಧರನ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುತಿದ್ದ ಹಿರಿಯಣ್ಣ ಈ ಸಲ ಮೌನವಾಗಿದ್ದ. ತಮ್ಮನ ನಾಲ್ಕು ಮಾತುಗಳಿಗೆ ಆತ ಉತ್ತರವಾಗಿ ಕೊಟ್ಟದು ಒಂದೆ ಮಾತು.<br> {{gap}}“ಈವರೆಗೂ ನಾನು ಓದ್ತಾ ಬಂದಿರೋದು ನಿನ್ನ ಪೋತ್ಸಾಹದಿಂದಲೆ ಅಣ್ಣ."<br> {{gap}}“ಈಗ ನನ್ನಲ್ಲಿ ದುಡ್ಡಿಲ್ಲ."<br> {{gap}}"ಈ ವರ್ಷ ಓದಿದ್ದೆಲ್ಲ ವ್ಯರ್ಥವಾಗುತ್ತಲ್ಲಣ್ಣ. ನನ್ನ ಸ್ವಂತದ ಖರ್ಚಿಗೆ ನಾನು ದುಡ್ಡು ಕೇಳಿದ್ನೆ? ಪರೀಕ್ಷೆಗೆ-"<br> {{gap}}"ನನ್ನ ಹತ್ತಿರ ದುಡ್ಡಿಲ್ಲ ಅಂದೆ!”<br><noinclude></noinclude> 12brvpdzoyd3svly7hdsgld8skwb7hu ಪುಟ:ದೀಕ್ಷೆ.pdf/೪೯ 104 19159 322126 277267 2026-05-24T10:45:21Z Shreelatha.Halemane 7642 /* Validated */ 322126 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=376|right=ಕನಸು}} {{gap}}"ಹಾಗಾದರೆ ಏನು ಮಾಡು ಅಂತೀಯಾ?"<br> {{gap}}"ಏನು ಬೇಕಾದರೂ ಮಾಡ್ಕೊ."<br> {{gap}}ಆ ಮಾತು ಕೇಳಿದ ಬಳಿಕ ಹೆಚ್ಚಿನ ಆಸೆಯೇ ಮುರಲೀಧರನಲ್ಲಿ ಉಳಿಯಲಿಲ್ಲ. ಕಿರಿಯ ಅಣ್ಣನೊಡನೆ ಕೇಳುವುದರಿಂದಂತೂ ಯಾವ ಪ್ರಯೋಜನವೂ ಇರಲಿಲ್ಲ.<br> {{gap}}ಹಿರಿಯವನು ಮುರಲೀಧರನಿಗೆ ಕೊಟ್ಟ ಉತ್ತರ ತಿಳಿದಾಗ ತಂದೆ ರೇಗಾಡಿದರು:<br> {{gap}}"ಆವತ್ತೆ ಹೇಳ್ಲಿಲ್ವೆ ನಾನು, ಕಾಲೇಜಿಗೆ ನೀನು ಹೋಗೋದು ಅಗತ್ಯವಿಲ್ಲ ಅಂತ?"<br> {{gap}}ಅಸಹಾಯತೆಯು ಆ ಪರಿಸ್ಥಿತಿಯಲ್ಲಿ ಮುರಲೀಧರ ರೋದಿಸುವಂತಾಯಿತು.<br> {{gap}}"ಇದು ಕಡೆಯ ಪರೀಕ್ಷೆ ಅಪ್ಪ, ಇನ್ನು ಯಾವತ್ತೂ ದುಡ್ಡು ಕೇಳೊಲ್ಲ."<br> {{gap}}"ನಾನೇನು ಗಂಟು ಕಟ್ಟಿ ಇರಿಸಿದೀನಿ ತಿಳಕೊಂಡ್ಯಾ?"<br> {{gap}}"ಇನ್ನೇನಪ್ಪ ಮಾಡ್ಲಿ ನಾನು?"<br> {{gap}}“ನನಗೇನು ಗೊತ್ತು?"<br> {{gap}}ಬೆಂಗಳೂರಿನಲ್ಲಿ ಎಂದೂ ಕಂಬನಿ ಸುರಿಸಿರಲಿಲ್ಲ ಮುರಲೀಧರ, ಆ ಊರಲ್ಲಿ ತಲೆಯ ಮೇಲೊಂದು ಸೂರು ಇಲ್ಲದೆ ಓಡಾಡುತ್ತಿದ್ದಾಗಲೂ, ಕಣ್ಣೀರು ಮಿಡಿಯು ವುದು ಒಮ್ಮೆಯೂ ಅಗತ್ಯವೆನಿಸಿರಲಿಲ್ಲ. ಈಗ, ಹುಟ್ಟಿ ಬೆಳೆದ ಮನೆಯ ಆವರಣವೆ ಆತನನ್ನು ಅಣಕಿಸುತ್ತಿತ್ತು ತಾನು ತಾಯ್ತು ೦ದೆಯರಿದ್ದೂ ಒಡಹುಟ್ಟಿದವರಿದ್ದೂ అನಾಥ-ನಿರ್ಗತಿಕ-ಎಂಬ ಭಾವನೆ ಅವನಲ್ಲಿ ಬೇರೂರಿ ಬಲಿಯಿತು. ಕಂಬನಿ ಒತ್ತರಿಸಿ ಬಂತು. ತಂದೆಯೊಡನೆ ಆತ ಮಾತು ಮುಂದುವರಿಸಲಿಲ್ಲ, ಆಗಲೇ ಕತ್ತಲಾಗಿತ್ತು. ಮನೆಯಲ್ಲಿದ್ದಾಗ ಹಿಂದೆ ಪ್ರತಿ ಸಂಜೆಯೂ ಮಾಡುತ್ತಿದ್ದಂತೆ ಮುರಲೀಧರ ಕೈಕಾಲು ತೊಳೆದು ಬಂದ. ತನಗೆ ಪ್ರಿಯವಾಗಿದ್ದ ಒಳ ಹಜಾರದೊಂದು ಮೂಲೆಯಲ್ಲಿ ಚಾಪೆ ಬಿಡಿಸಿ ಮಲಗಿದ.<br> {{gap}}ಹಜಾರದ ನಡುವಿನಲ್ಲಿ ಛಾವಣಿಯಿಂದ ಕೆಳಕ್ಕೆ ತೂಗಾಡುತ್ತಿತ್ತು ಸೀಮೆ ಎಣ್ಣೆ ಯ ಕಂದೀಲು. ಕೆಳಗೆ ಕತ್ತಲು, ಸುತ್ತಲೂ ಒಂದಿಷ್ಟು ಬೆಳಕು.. ದೀಪದ ತೊಂದರೆ ಇಲ್ಲದೆಯೆ ಮಲಗಿದಲ್ಲೆ ನಿದ್ದೆ ಹೋಗುವುದು ಸಾಧ್ಯವಿತ್ತು. <br> {{gap}}ಆದರೆ, ಮುರಲೀಧರನ ಸಮೀಪದಲ್ಲೆಲ್ಲೂ ಇರಲಿಲ್ಲ ನಿದ್ದೆ. ಮೊಣಕೈಯ ಮೇಲೆ ತಲೆ ಇರಿಸಿ ಮಲಗಿದ ಆತನನ್ನು ಕರಿಯ ಯೋಚನೆಗಳು ಕಾಡಿದುವು. ಕಂಬನಿ ಅಳುಕುತ್ತ ನಾಚುತ್ತ ಮೆಲ್ಲನೆ ಹೊರಹರಿಯಿತು.<br> {{gap}}ಅಣ್ಣಂದಿರು ಮನೆಗೆ ಮರಳಿದರು, ಅವರ ಚಿಕ್ಕ ಮಕ್ಕಳು ಅತ್ತಿತ್ತ ಓಡಾಡಿದುವು. ಹೆಂಗಸರ ಕಾಲಂದುಗೆಯು ಸಪ್ಪಳವೂ ಕೇಳಿಸಿತು ಆಗೊಮ್ಮೆ ಈಗೊಮ್ಮೆ. ಮನೆಯವರೆಲ್ಲ ಒಬ್ಬಿಬ್ಬರಾಗಿ ಒಳಗೆ ಊಟಕ್ಕೆ ಕುಳಿತುಕೊಳ್ಳುತ್ತಿದ್ದ ಸದ್ದಾಯಿತು.<br> {{gap}}ಹಿರಿಯಣ್ಣನ ಎರಡನೆಯ ಮಗಳು ಬಂದು ಮುರಲೀಧರನ ಮೈ ಮುಟ್ಟಿ<br><noinclude></noinclude> eov35lminbt94fbsf7nrfosi86aiax2 ಪುಟ:ದೀಕ್ಷೆ.pdf/೫೦ 104 19160 322127 277344 2026-05-24T10:48:47Z Shreelatha.Halemane 7642 /* Validated */ 322127 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ದೀಕ್ಷೆ|center=|right=377}} ಹೇಳಿದಳು:<br> {{gap}}"ಚಿಕ್ಕಪ್ಪ, ಊಟಕ್ಕೆ ಬರಬೇಕಂತೆ."<br> {{gap}}"ನನ್ನ ಊಟವಾಯ್ತು."<br> {{gap}}ಮಗು ಒಯ್ದು ಸುದ್ದಿಯನ್ನು ಒಳಗೆ ಯಾರೂ ಅಲ್ಲಗಳೆದಂತೆಯೇ ತೋರಲಿಲ್ಲ!<br> ಆದರೂ ಸ್ವಲ್ಪ ಹೊತ್ತಿನ ಬಳಿಕ ತಾಯಿ ನಿಧಾನವಾಗಿ ನಡೆಯುತ್ತ ಬಂದು ಕೇಳಿದರು:<br> {{gap}}"ಆಯ್ತೇನೋ ಊಟ?"<br> {{gap}}"ಆಯ್ತು," ಎಂದ ಮುರಲೀಧರ ಮೆಲ್ಲನೆ.<br> {{gap}}ಆ ದಿನ ಮನೆಯಲ್ಲಿ ಹಿರಿಯ ಸೊಸೆಯ ಅಡುಗೆ. ಕಣ್ಣಲ್ಲಿ ಎಣ್ಣೆ ಇಟ್ಟು ಪ್ರತಿ ಯೊಂದನ್ನೂ ಗಮನಿಸುತ್ತಿದ್ದ ಕಿರಿಯ ಸೊಸೆ ಹೇಳಿದಳು:<br> {{gap}}"ಇಲ್ಲ ಅತ್ತೆ, ಸುಮ್ನೆ ಹೇಳ್ತೀದಾರೆ. ಅವರು ಊಟ ಮಾಡಿಲ್ಲ."<br> {{gap}}ಕನಿಕರದಿಂದಲೂ ಅల్ల, ಸಹಾನುಭೂತಿಯಿಂದಲೂ ಅಲ್ಲ, ಆ ಮಾತು ಬ೦ದುದು. ಬರಿಯ ಮತ್ಸರ ಭಾವದಿಂದ. ಅದು ಗೊತ್ತಿತ್ತು ಮುರಲೀಧರನಿಗೆ. ಆ ತಿಳಿವಳಿಕೆ ಆತನ ಮನೋವೇದನೆಯನ್ನು ಹೆಚ್ಚಿಸಿತು.<br> {{gap}}ಆದರೆ ಸತ್ಯಾಂಶ ತಿಳಿದ ತಾಯಿ ಸಿಟ್ಟಾದರು.<br> {{gap}}“ಯಾಕೆ ಹೀಗ್ಮಾಡ್ಮೀಯೋ, ಏಳು. ಮುರಲಿ, ಏಳು!" ಎಂದರು ಆಕೆ. {{gap}}"ಇಲ್ಲಮ್ಮ, ನನಗೆ ಹಸಿವಿಲ್ಲ."<br> {{gap}}ಹೆತ್ತ ಕರುಳಿಗೆ ಅರಿವಾಗದುದು ಯಾವುದಿತ್ತು? ಧ್ವನಿಯಿಂದಲೆ ಮಗನ ಮನೋ ಸ್ಥಿತಿಯನ್ನು ಅವರು ಊಹಿಸಿಕೊಂಡರು.<br> {{gap}}“ಹಾಗೆ ಮಾಡಬಾರದಪ್ಪಾ, ಏಳು, ಒಂದು ತುತ್ತು ಊಟ ಮಾಡುವಿಯಂತೆ. ನೋಡೋಕಾಗಲ್ಲಪ್ಪ ನಿನ್ನ. ಎಷ್ಟು ಸೊರಗಿದೀಯಾ! ಅದೇನು ಬೆಂಗಳೂರೋ, ಏನು ಕಾಲೇಜೋ..."<br> {{gap}}ಹಿಂದಿನ ಮಾತೃ ವಾತ್ಸಲ್ಯದ ನಾದ ಮಾಧುರ್ಯವಿನ್ನೂ ಉಳಿದಿದ್ದ ಸ್ವರ, ಗತ ಜನ್ಮದಲ್ಲಷ್ಟೆ ಇದನ್ನು ತಾನು ಕೇಳಿದ್ದೆನೇನೋ ಎಂದು ಭ್ರಮೆ ಹುಟ್ಟಿಸುವ ಹಾಗೆ.<br> {{gap}}ಎದ್ದು ಒಂದಿಷ್ಟು ಉಣ್ಣುವುದೇ ವಾಸಿ ಎಂದು ಮುರಲೀಧರ ಯೋಚಿಸು ತಿದ್ದಂತೆಯೆ,ಒಳಬಾಗಿಲಿನಿಂದ ತಂದೆಯ ಗಡಸು ಸ್ವರವೂ ಕೇಳಿಸಿತು:<br> {{gap}}"ಮುರಲೀಧರ!! ಬಾ ಊಟಕ್ಕೆ!"<br> {{gap}}ಮುರಲೀಧರ ವಿಧೇಯನಾಗಿ ಎದ್ದ, ಯಾರಿಗೂ ಕಾಣಿಸದಂತೆ ಅಂಗವಸ್ತ್ರದಿಂದ ಕಂಬನಿಯೊರೆಸಿಕೊಂಡೆ.<br> {{gap}}ತಂದೆ ಮತ್ತು ಮಗ. ತಾತನ ಜತೆಯಲ್ಲಿ ಚಿಳ್ಳೆಪಿಳ್ಳೆಗಳೆರಡು. ಹಿರಿ ಮಗನದೊಂದು, ಎರಡನೆಯವನದೊ೦ದು. ಅವುಗಳೂ ಪರಸ್ಪರ ದ್ವೇಷಿಸಲೆಂದು ಮಕ್ಕಳ<br><noinclude></noinclude> 4xzbuir4r6afad8efb9q2tavaycn9k8 ಪುಟ:ದೀಕ್ಷೆ.pdf/೫೧ 104 19161 322129 277422 2026-05-24T10:51:15Z Shreelatha.Halemane 7642 /* Validated */ 322129 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=378|center=|right=ಕನಸು}} ತಾಯಂದಿರು ಯತ್ನಿಸಿದುದಿತ್ತು. ಆದರೂ ಅಭೇದ್ಯವೆನಿಸಿತ್ತು ಎಳೆಯರ ಬಾಂಧವ್ಯ. ಪುಟ್ಟ ಬೆರಳುಗಳಿಂದ ಅನ್ನದ ಅಗುಳನ್ನೆತ್ತಿ ಮುದ್ದು ಮುಖಕ್ಕೆಲ್ಲ ಮೆತ್ತುತಿದ್ದ ಅವು ಗಳ ಆಟ ಮೋಹಕವಾಗಿತ್ತು. ಆ ಮಕ್ಕಳನ್ನು ನೋಡುತ್ತ, ತನ್ನ ಸಂಕಟವನ್ನು ಮರೆಯುತ್ತ, ಒಂದು ತುತ್ತು ಹೆಚ್ಚು ಉಣ್ಣಲು ಮುರಲೀಧರ ಯತ್ನಿಸಿದ.<br> {{gap}}ಊಟ ಸಾಗಿದ್ದಂತೆ, ಎದುರುಗಡೆ ಗೋಡೆಗೊರಗಿ ಕುಳಿತಿದ್ದ ತಾಯಿ ಕೇಳಿದರು:<br> {{gap}}"ರಜಾದ ಮೇಲೆ ಬಂದಿದೀಯೇನೋ ಮುರಲಿ?”<br> {{gap}}ಬೇಸರದ ಧ್ವನಿಯಲ್ಲಿ ಮುರಲೀಧರನೆಂದ:<br> {{gap}}“ನನಗೇನಮ್ಮ, ಯಾವಾಗಲೂ ರಜವೇ.”<br> {{gap}}“ಅದೇನೋ ಹಾಗಂದರೆ?”<br> {{gap}}“ಇನ್ನೇನು ಮತ್ತೆ?”<br> {{gap}}“ಯಾವತ್ತು ಹೋಗ್ತಿಯಾ ಬೆಂಗಳೂರಿಗೆ,”<br> {{gap}}“ಗೊತ್ತಿಲ್ಲ.”<br> {{gap}}“ಪರೀಕ್ಷೆ ಆಯ್ತೇನು?”<br> {{gap}}“ಆದ ಹಾಗೆ."<br> {{gap}}ತಾಯಿಗೆ ತುಸು ರೇಗಿತು. ಆಕೆ ಗಂಡನೆಡೆಗೆ ತಿರುಗಿ ದೂರುಕೊಟ್ಟಳು:<br> {{gap}}“ಇದೇನ್ರಿ ಹೀಗೆ ಮಾತಾಡ್ತಿದಾನೆ ಈತ?”<br> {{gap}}ತಂದೆ ಆ ಪ್ರಶ್ನೆಗೆ ಉತ್ತರವೀಯಲಿಲ್ಲ. ಹೂಂಕರಿಸಿ ತಟ್ಟೆಯೊಳಗೆ ಕೈ ಆಡಿ ಸುತ್ತ ಮಜ್ಜಿಗೆ ಅನ್ನವನ್ನು ಕಲಸಿದರು.<br> {{gap}}... ರಾತ್ರಿ ಕಳೆದು ಬೆಳಗಾದಾಗ ಮುರಲೀಧರನ ತಂದೆ ಮೂವತ್ತು ರೂಪಾಯಿಗಳನ್ನು ಮಗನ ಕೈಗಿತ್ತರು.<br> {{gap}}“ಬಸ್ ಚಾರ್ಜಿಗೆ ಇದೆಯೇನು?” ಎಂದು ಅವರು ಕೇಳಿದರು.<br> {{gap}}“ಇಲ್ಲ."<br> {{gap}}ಆ ಎರಡು ರೂಪಾಯಿಗಳೂ ಬಂದುವು.<br> {{gap}}ಅನಿರೀಕ್ಷಿತವಾಗಿ ಹಾಗಾದುದನ್ನು ಕಂಡು ಮುರಲೀಧರ ಮೂಕನಾದ.<br> {{gap}}ತಂದೆಯೇ ಮಾತನಾಡಿದರು. ಹಣ ಮಾತ್ರ ಮಗನನ್ನು ಇದಿರಿಸಲಿಲ್ಲ. ಎದುರಿಗಿದ್ದ ಅಂಗಳವನ್ನು ದಿಟ್ಟಿಸಿತು.<br> {{gap}}“ಈ ಮನೆಯಿಂದ ನೀನು ದುಡ್ಡು ತಗೊಂಡು ಹೋಗಿರೋದು ಇದೇ ಕೊನೇ ಸಲ ಮುರಲಿ. ಇನ್ನು ದುಡ್ಡಿಗೇಂತ ಬರಲೇಬೇಡ, ಏನಾದರೂ ಕೆಲಸ ಸಿಗೋ ಹಾಗಿದ್ದರೆ ಬೇಗನೆ ನೋಡು, ಸಂಪಾದಿಸು. ನಿನ್ನ ಅಣ್ಣಂದಿರ ಜಗಳದ ವಿಷಯ ಕೇಳಿದೆಯೋ ಇಲ್ಲವೋ, ಆಸ್ತಿ ಪಾಲಾಗೋಕಂತೆ, ಪಾಲಾದ್ಮಲೆ ಮೂರು ಕಾಸಿಗೆ ಮಾರ್ತಾರೆ. ನನಗೆ ಗೊತ್ತಿಲ್ವೇನು? ನಾನು ಸಾಯೋವರೆಗೂ ಈ ಮನೆ ಹೊಲ ಭದ್ರವಾಗಿರೋ ಹಾಗೆ ನೋಡ್ಕೊತೀನಿ, ಆಮೇಲೆ ಏನು ಬೇಕಾದರೂ ಆಗಲಿ.<br><noinclude></noinclude> mgpbllk5915fk28ffgu1hwhvt0j0fya ಪುಟ:ದೀಕ್ಷೆ.pdf/೫೫ 104 19165 322138 277051 2026-05-24T11:19:10Z Shreelatha.Halemane 7642 /* Validated */ 322138 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=382|right=}} ರೂಪು ರಾಶಿಯ ಮೇಲೆ ಮುಗ್ಧಭಾವದ ಮುದ್ರೆ, {{gap}}ರಾತ್ರಿ ಊಟಕ್ಕೆ ಇಲ್ಲೇ ಇದ್ದು ಹೋಗಪ್ಪ,” ಎಂದರು ನಾರಣಪ್ಪನ ತಾಯಿ. {{gap}}ಆಹ್ವಾನದ ಜತೆಯಲ್ಲಿ ಸಂದೇಹವೂ ಒಂದು ಮೊಳೆತು, ಅವರೇ ಅಂದರು: {{gap}}“ಆದರೆ ನಮ್ಮನೇಲಿ ನೀನು ಊಟ ಮಾಡ್ತೀಯೋ ಇಲ್ಲವೋ....” {{gap}}ಏನು ಉತ್ತರ ಕೊಡಬೇಕೆಂದು ತಿಳಿಯದೆ ತಬ್ಬಿಬ್ಬಾದ ಮುರಲೀಧರನ ನೆರವಿಗೆ ನಾರಣಪ್ಪ ಬಂದ: {{gap}}“ಮುರಲಿಗೆ ಅಂಥ ಭಾವನೆಗಳೆಲ್ಲ ಇಲ್ಲವಮ್ಮ {{gap}}ಮುರಲಿ ಎಂಬ ಚುಟುಕು ಹೆಸರಿನಿಂದ ಸ್ನೇಹಿತ ಆತನನ್ನು ಕರೆದುದು ಅದೇ ಮೊದಲು. ಗೆಳೆಯನ ಆ ಉತ್ತರ ಮುರಲೀಧರನಿಗೆ ಪ್ರಿಯವೆನಿಸಿತು. {{gap}}ನಾರಣಪ್ಪನ ತಾಯಿ ಅಂದರು: {{gap}}"ಹಾಗಾದರೆ ಸರಿ,” {{gap}}ಮಾತು ಊಟಕ್ಕೆ ಸಂಬಂಧಿಸಿತ್ತೆಂದು ತಿಳಿದ ಮುರಲೀಧರನೆಂದ: {{gap}}“ಇವತ್ತು ಬೇಡೀಮ್ಮಾ, ಇನ್ನೊಂದು ದಿವಸ ಯಾವಾಗಲಾದರೂ ಬರ್ತೀನಿ. ಯಾವತ್ತಾದರೂ ಭಾನುವಾರ. ಮಧ್ಯಾಹ್ನ .” {{gap}}“ಅದೇ ಸರಿ,” ಎಂದ ನಾರಣಪ್ಪ. {{gap}}ಆತನ ತಾಯಿಯೆಂದರು: {{gap}}“ಹಾಗೇ ಆಗಲಿ. ಖಂಡಿತವಾಗಿ ಬರಬೇಕು.ಏನೂ ಸಂಕೋಚವಿಟ್ಕೋ ಬಾರದು. ಪುರುಸೊತ್ತಿದ್ದಾಗಲೆಲ್ಲ ಬಂದು ಹೋಗು.” {{gap}}“ಹೂಂ” ಎಂದ ಮುರಲೀಧರ, ಆ ಆಹ್ವಾನಕ್ಕೆ ಕೃತಜ್ಞನಾಗಿ, ಸ್ವಲ್ಪ ಹೊತ್ತು ಅಲ್ಲಿದ್ದ ಬಳಿಕ ಮುರಲೀಧರ ಕೇಳಿದ: {{gap}}“ನಾಣಿ, ನಾನು ಹೋಗಲಾ?” {{gap}}ಆ ಆತ್ಮೀಯ ಸಂಬೋಧನೆಯೂ ಅನಿರೀಕ್ಷಿತವಾಗಿಯೇ ಬಂದಿತ್ತು. {{gap}}“ಹೋಗೋಣ, ನಾನೂ ಬರೀನಿ ಸ್ವಲ್ಪ ದೂರ,” ಎಂದ ನಾರಣಪ್ಪ, ಯಾವ ಬದಲಾವಣೆಯೂ ಇರಲಿಲ್ಲ ಆತನ ಧ್ವನಿಯಲ್ಲಿ. ಆಶ್ಚರ್ಯದ ಯಾವ ಸೂಚನೆಯೂ ಇರಲಿಲ್ಲ. {{gap}}ಹುಡುಗರು ಹೊರಟುದನ್ನು ಕಂಡು ನಾರಣಪ್ಪನ ತಾಯಿ ಎಂದರು: {{gap}}“ನಮ್ಮ ನಾಣೀನ ಸ್ವಲ್ಪ ನೋಡ್ಕೋ ಮುರಲಿ.ಅವನ ಅಣ್ಣನಿಗಂತೂ ಜೈಲೇ ಇಷ್ಟವಂತೆ. ಸದ್ಯ ಇವನಾದರೂ ಮನೇಲಿ ಇರಲಿ, ಇಬ್ಬರೂ ಚೆನ್ನಾಗಿ ಓದಿ.” {{gap}}ಉತ್ತರವೀಯುವ ಗೊಡವೆಗೆ ಹೋಗದೆ ಮುರಲೀಧರ ಸಣ್ಣನೆ ನಕ್ಕ. {{gap}}ಹೊರಗೆ ನಾರಣಪ್ಪನೆಂದ: {{gap}}“ಮುರಲಿ, ಆಗೊಲ್ಲ ಅನ್ನಬಾರದು. ನೀವು ಬಸ್ಸಲ್ಲೇ ಹೋಗ್ಬೇಕು, ಟಿಕೆಟು ನಾನು ತಕ್ಕೊಡ್ತೀನಿ.”<noinclude></noinclude> hwsshrc69s2z6vtw4taqpjz50f7cutq ಪುಟ:ದೀಕ್ಷೆ.pdf/೫೬ 104 19166 322140 277090 2026-05-24T11:26:01Z Shreelatha.Halemane 7642 /* Validated */ 322140 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ |right= 383}} {{gap}}“ಛೇ! ಛೇ! ನಡಕೊಂಡೇ ಹೋಗ್ತಿನಿ ನಾನು.” {{gap}}“ದಯವಿಟ್ಟು ಇದೊಂದು ಸಲ ನನ್ನ ಮಾತು ಕೇಳಿ.” {{gap}}“ಇದೆಂಥಾ ಒತ್ತಾಯ ನಾಣಿ?” {{gap}}“ದುಡ್ಡಿದ್ದರೆ ನೀವು ಬಸ್ನಲ್ಲಿ ಹೋಗ್ತಿದ್ದಿರೋ ಇಲ್ವೋ?” {{gap}}“ಅದು ಬೇರೆ ವಿಷಯ.” {{gap}}“ಇಲ್ಲಿ ಕೇಳಿ. ನಿಮಗೆ ಆಯಾಸವಾಗಿದೆ. ಬಸ್ನಲ್ಲಿ ಹೋಗಿ ಮಲಕೊಳ್ಳಿ.” {{gap}}ಹೆಚ್ಚು ಹಟ ಹಿಡಿಯದೆ ಮುರಲೀಧರ ಒಪ್ಪಿದ. ಆತನೆಂದ: {{gap}}“ಬಸ್ ಪ್ರಯಾಣ ಎಂದಾದರೆ ಅವಸರವೇನಿಲ್ಲವಲ್ಲ. ಸ್ವಲ್ಪ ಹೊತ್ತು ಮಾತಾ ಡ್ತಿರೋಣ.” {{gap}}“ನಾನೂ ಅದನ್ನೇ ಸೂಚಿಸೋಣಾಂತಿದ್ದೆ!” {{gap}}“ಹಾಗಾದರೆ ಹರಟೆಗೋಸ್ಕರ ಅನ್ನಿ ಟಿಕೆಟಿನ ಲಂಚ!” {{gap}}“ಇಲ್ಲವಪ್ಪ! ಮೊದಲು ಪರೋಪಕಾರ, ಆಮೇಲೆ ಸ್ವಾರ್ಥ. ಆದರೆ ಎರಡನ್ನೂ ಜತೇಲಿ ಬೇಕಾದರೂ ಸಾಧಿಸಬಹುದು. ಹಾಗೆ ಮಾಡೋದು ತಪ್ಪಂತ ಎಲ್ಲಿ ಬರೆದಿದೆ?” {{gap}}ಮೆಲ್ಲಮೆಲ್ಲನೆ ಹಾದಿ ನಡೆಯುತ್ತ, ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಕುಪ್ಪಳಿಸುತ್ತ, ಗೆಳೆಯರು ಬಹಳ ಹೊತ್ತು ಮಾತನಾಡಿದರು. {{gap}}ಮುರಲೀಧರ ಪತ್ರಿಕಾ ಕಛೇರಿಗೆ ಫೋನ್ ಮಾಡಿ, ಮಲ್ಲೇಶಪ್ಪನ ದಸ್ತಗಿರಿಯ ಸುದ್ದಿ ಅಷ್ಟಾದರೂ ಪ್ರಕಟವಾಗುವಂತೆ ಮಾಡಿದ 'ಸಾಹಸ ಕೃತ್ಯದ' ವಿವರ ತಿಳಿದಾಗ ನಾರಣಪ್ಪನ ತಾಯಿ, ತಮಾಷೆ ಹುಡುಗ' ಎಂದು ಹೇಳಿ ನಕ್ಕಿದ್ದರಂತೆ, {{gap}}“ನಿಮ್ಮನ್ನೊಮ್ಮೆ ಕರಕೊಂಡು ಬರಬೇಕೂಂತ ಆಗ್ಲೆ ಅಮ್ಮ ಹೇಳಿದ್ದು.” {{gap}}“ನಿಮ್ಮಮ್ಮ ತುಂಬಾ ಒಳ್ಳೆಯವರು.” {{gap}}“ನೀವು ಬೆಂಗಳೂರಿಗೆ ವಾಪಸಾಗೋದನ್ನೇ ಕಾಯ್ತಾ ಇದ್ದೆ. ಒಂದು ವೇಳೆ ನಿಮ್ಮ ಮನೆಯಿಂದೇನಾದರೂ ಸಿಗದೇ ಇದ್ದರೆ, ನಮ್ಮ ತಾಯಿ ಹತ್ತಿರ ಪ್ರಸ್ತಾಪ ಮಾಡೋಣಾಂತಿದ್ದೆ.” {{gap}}ಅದು ಕನಸಿನಲ್ಲಿ ಮುರಲೀಧರ ಎಣಿಸಿರದ ವಿಷಯ. {{gap}}“ಸದ್ಯಃ ಗಂಡಾಂತರ ಕಳೆಯಿತಲ್ಲ...” {{gap}}''ನಾನು ಫೀಸು ಕೊಡೋದು ಕೂಡ ಸ್ವಲ್ಪ ಕಷ್ಟವೇ ಆಯ್ತು ಮುರಲಿ.” {{gap}}[ಆ ಕಷ್ಟವಿದ್ದರೂ ಗೆಳೆಯನ ವಿಷಯವಾಗಿ ಯೋಚಿಸಿದ್ದ ನಾರಣಪ್ಪ.] {{gap}}ಅದು ಬಡ ಸಂಸಾರವೆಂಬುದು ಸ್ಪಷ್ಟವಾಗಿತ್ತು. ಅವರು ವಾಸವಾಗಿದ್ದ ಮನೆಯೇ ಸಾರುತ್ತಿತ್ತು ಅದನ್ನು ಒಂದಕ್ಕೊಂದು ಹೊಂದಿಕೊಂಡಿದ್ದ ಮೂರು ನಾಲ್ಕು ಮನೆಗಳ ಪುಟ್ಟ ವಠಾರ ಅದು. {{gap}}“ನಿಮ್ಮಣ್ಣನ ದಸ್ತಗಿರಿಯಾದ್ಮಲೆ ತುಂಬಾ ತೊಂದರೆಯಾಗಿದ್ದೇಕು, ಅಲ್ವೆ?”<noinclude></noinclude> p9tp82efw9g8g8ichj8aigo37s5u19i ಪುಟ:ದೀಕ್ಷೆ.pdf/೭೩ 104 19183 322042 277292 2026-05-23T18:11:57Z Pragathi. BH 7585 /* Validated */ 322042 proofread-page text/x-wiki <noinclude><pagequality level="4" user="Pragathi. BH" />{{rh|center=|left=400|right=ಕನಸು}}</noinclude> {{gap}} ನಾರಣಪ್ಪನ ಮನೆಯಲ್ಲಿ ಆತನ ತಾಯಿ ಮುರಲೀಧರನನ್ನು ಪ್ರೀತಿಯಿಂದ ಸ್ವಾಗತಿಸಿದರು.<br> {{gap}}"ಬಾ ಮಗು!ಬಾ.."<br> {{gap}}ಆ ಒಲವಿನ ಜಲಸೇಚನದಿಂದ ಮನಸ್ಸು ನಿರ್ಮಲವಾದಂತೆ ಮುರಲಿಗೆ ಭಾಸ ವಾಯಿತು.<br> {{center|೯}} {{gap}}ಶ್ರೀಕಂಠಯ್ಯನವರೆಂದರು:<br> {{gap}}“ನೀನು ಬರೆದಿರೋದು ಚೆನ್ನಾಗಿದೆ ಕಣೋ.. ನಿಜವಾಗಿಯೂ ಚೆನ್ನಾಗಿದೆ: ಚಿಕ್ಕದಾದರು ಕಲಾತ್ಮಕವಾಗಿದೆ. ಕಥೆಯಲ್ಲ-ಒಂದು ಚಿತ್ರ.ಅಲ್ವೇ?"<br> {{gap}}ಮುರಲೀಧರನೆಂದ:<br> {{gap}}"ಹೌದು ಸಾರ್. ಒಂದು ಚಿತ್ರ."<br> {{gap}}"ಆದರೆ ಓದುವಾಗ ಒಳ್ಳೆಯ ಕಥೆ ಕೊಡುವ ರಸಾನುಭವವೇ ಇದರಿಂದಲೂ ಆಗುತ್ತೆ.ಅದೀಗ ಒಳ್ಳೇ ಬರೆವಣಿಗೆಯ ಲಕ್ಷಣ, ನಿಜವಾಗಿ ನೋಡಿದರೆ ನೀನು ಕಲಾವಿಭಾಗದಲ್ಲಿರಬೇಕಿತ್ತು.ವಿಜ್ನಾನದ ವಿದ್ಯಾರ್ಥಿಯಾಗಿದ್ದು ಇದನ್ನು బರೆ ದಿರೋದು ನನಗೆ ಹೆಮ್ಮೆಯ ವಿಶಯ."<br> {{gap}}ಹೃದಯ ತುಂಬಿಬಂದಂತಾಗಿ ಮುರಲೀಧರ:<br> {{gap}}"ಏನಿದ್ದರೂ ಗುರುಕೃಪೆ ಸಾರ್."<br> {{gap}} ಶ್ರೀಕಂಠಯ್ಯ ನಿಟ್ಟುಸಿರು ಬಿಟ್ಟು ಅಂದರು:<br> {{gap}} “ಏನು ಮಾಡೋಣ ಹೇಳು? ಗುರುಕೃಪೆ ಅನ್ನೋದು ಹಳೇ ಕಾಲದ ಒಳ್ಳೆಯ ಪ್ರಯೋಗ. ಈಗ ಅದಕ್ಕೆ ಅರ್ಥವೂ ఇల్ల, ಬೆಲೆಯೂ ఇల్ల. ಪ್ರತಿ ತರಗತಿಯೂ ದೊಂಬಿಯೇ. ఎల్ల ವಿದ್ಯಾರ್ಥಿಗಳ ಮುಖ ಪರಿಚಯ ಕೂದ ನಮಗಿರೋದಿಲ್ಲ. ವೈಯಕ್ತಿಕವಾಗಿ ನಾವು ಸುಖ ದುಃಖ ವಿಚಾರಿಸೋದು ಎಲ್ಲಿ ಬಂತು? ಈಗ ಪಾಠ ಹೇಳೋದು ಹೆಣ ಚಾಕರಿನಶ್ತ . ಅಧ್ಯಾಪಕರಿಗೂ ಉತ್ಸಾಹವಿಲ್ಲ, ವಿದ್ಯಾರ್ಥಿಗಳಿಗೂ ಉತ್ಸಾಹವಿಲ್ಲ. ಇಶ್ತಿದ್ದೂ ಯಾವನಾದರು ವಿದ್ಯಾರ್ಥಿ ಮುಂದಕ್ಕೆ ಬಂದರೆ ಅದು ಆತನ ಸ್ವಸಾಮರ್ಥ್ಯದಿಂದಲೇ ಹೊರತು ಗುರುಕೃಪೆಯಿಂದಲ್ಲ."<br> {{gap}}ಅವರ ಧ್ವನಿ ಭಾರವಾಗಿತ್ತು ಆಡಿದ ಒಂದು ಮಾತೂ ಹಗುರವಾಗಿರಲಿಲ್ಲ. ಅದನ್ನೆಲ್ಲ ಅರ್ಥಮಾಡಿಕೊಳ್ಳುತ್ತ ನಿಂತ ಮುರಲೀಧರನಿಗೆ ತಾನು ಏನು ಉತ್ತರ ಹೇಳ ಬೇಕೆಂಬುದೇ ತೋಚಲಿಲ್ಲ.<br><noinclude></noinclude> jmsakqmoh4xpzxhx448s07xkuzgmj31 ಪುಟ:ದೀಕ್ಷೆ.pdf/೭೬ 104 19186 322043 277249 2026-05-23T18:12:23Z Pragathi. BH 7585 /* Validated */ 322043 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=ದೀಕ್ಷೆ|center=|right=403}} ಆದರೂ ಅನಿವಾರ್ಯವಾಗಿ ನಿಮ್ಮ ರಾಜಿನಾಮೇನ ಸ್ವೀಕರಿಸ್ತೀವಿ. ನಿಮ್ಮ ಹೆಸರಾದರೊ ಪತ್ರಿಕೆಯ ಮೇಲೆ ಇರೋಕೆ ಸಮ್ಮತಿ ಕೊಡ್ತೀರಿ ತಾನೆ?"<br> {{gap}}“ಇಲ್ಲ, ಕೂಡದು!"<br> {{gap}}“ಆಗಲಿ, ನಮ್ಮ ದೌರ್ಭಾಗ್ಯ..."<br> {{gap}}ಅಷ್ಟು ಹೇಳಿದ ಶ್ರೀಕಂಠಯ್ಯ, ತಾಳ್ಮೆಯಿಂದಿರಲು ಯತ್ನಿಸುತ್ತ, ಬಾಗಿಲಿನತ್ತ ಬೊಟ್ಟು ಮಾಡಿ, ಹೊರಹೋಗುವಂತೆ ಸಂಜ್ಜಯಿಂದಲೆ ಸೂಚಿಸಿದರು ಲಕ್ಶ್ಮೀ ಕಾಂತನಿಗೆ.<br> {{gap}}ಆಗಲೂ ಆತನೆಂದ:<br> {{gap}}ಇದು ಬಹಳ ಸೀರಿಯಸ್ ವಿಷಯ ಸಾರ್."<br> {{gap}}ಶ್ರೀಕಂಠಯ್ಯ ಗುಡುಗಿದರು:<br> {{gap}}"ಗೊತ್ತು ಕಣಯ್ಯ ಗೆಟೌಟ್!"<br> {{gap}}ಅಷ್ಟಕ್ಕೆ ಸುಮ್ಮನಾಗಲಿಲ್ಲ ಲಕ್ಷ್ಮೀಕಾಂತ, ರಾಜಿನಾಮೆ ಪತ್ರವನ್ನು ಸಲ್ಲಿಸಿದ ಬಳಿಕ, ಕಾಲೇಜಿನ ಪ್ರಿನ್ಸಿಪಾಲರಿಗೂ ದೀರ್ಘವಾಗಿ ದೂರು ಕೊಟ್ಟ. ಅದು ಮೂರು ನಾಲ್ಕು ಹಾಳೆಗಳಷ್ಟಿದ್ದ ಆರೋಪ ಪತ್ರಿಕೆ.<br> {{gap}}ಪ್ರತಿನಿತ್ಯದಂತೆ ಏಕಪ್ರಕಾರವಾಗಿ ಶಾಂತವಾಗಿರುವುದರ ಬದಲು, ಶಿಕ್ಷಕ ವೃಂದದ ಸರೋವರದಲ್ಲಿ ಒಂದೆರಡು ದಿನಗಳ ಕಾಲ ಸಣ್ಣ ಪುಟ್ಟ ತೆರೆಗಳನ್ನೆಬ್ಬಿಸಿತು ಆ ಫಿಯಾ೯ದು. ಸ್ವತಃ ಲಕ್ಷ್ಮೀಕಾಂತನ ಪ್ರಚಾರದಿಂದಾಗಿ ವಿದ್ಯಾರ್ಥಿಗಳ ಮಧ್ಯದಲ್ಲೂ ಅಲ್ಲಿ ಇಲ್ಲಿ ಆ ವಿಷಯವನ್ನು ಕುರಿತು ವಾದ ವಿವಾದಗಳಾದುವು.<br> {{gap}}ಅಧ್ಯಾಪಕರು ಒಬ್ಬರನ್ನೊಬ್ಬರು ಕೇಳಿದರು:<br> {{gap}}“ಯಾರ ಮಗನಯ್ಯ ಆತ?"<br> {{gap}}ಮಗನಿಂದಾಗಿ ತಂದೆಯ ಹೆಸರೂ ಪ್ರಖ್ಯಾತವಾಯಿತು.<br> {{gap}}ಸರಕಾರದ ಹಿರಿಯ ಹುದ್ದೆಯಲ್ಲಿದ್ದು ನಿವೃತ್ತರಾದವರೊಬ್ಬರ ಸುಕುಮಾರ.<br> {{gap}}"ಆತನೆ? ಬರೇ ಸಾಧೂಂತ ಕಾಣುತ್ತಲ್ಲ ಆ ಪಾಣಿ...."<br> {{gap}}“ತಂದೆ ಸಾಧುವಾದರೆ ಮಗನೂ ಹಾಗೆಯೇ ಇರಬೇಕೆ೦ಬ ನಿಯಮವಿದೆ ಯೇನು?"<br> {{gap}}ಲಕ್ಷ್ಮೀಕಾಂತ ಮಾತ್ರ ಹೋದ ಹೋದಲ್ಲೆಲ್ಲ ಜಾಹೀರು ಮಾಡಿದ:<br> {{gap}}"ಶ್ರೀಕಂಠಯ್ಯನನ್ನು ಡಿಸ್‌ಮಿಸ್ ಮಾಡ್ತಾರೆ, ನೋಡ್ಕೋಳ್ಳಿ."<br> {{gap}}ಆದರೆ ಆತನಿಗೆ ಆಶಾಭಂಗವಾಯಿತು. ಕಾಲೇಜಿನ ಪ್ರಿನ್ಸಿಪಾಲರು ಆತನನ್ನು ಕರೆದು ವಿಚಾರಣೆ ನಡೆಸಿದ ರೀತಿಯೇ ಬೇರೆಯಾಗಿತ್ತು, ತರಗತಿಯ ಪ್ರಬಂಧವನ್ನು ತಿದ್ದುವಂತೆ, ದೂರಿನಲ್ಲಿದ್ದ ನೂರು ತಪ್ಪುಗಳ ಮೇಲೆ ಅವರು ಗುಣಾಕಾರದ ಗುರುತು ಹಾಕಿದರು. ತರಗತಿಯ ಪರೀಕ್ಷೆಯಲ್ಲಿ ಆತನಿಗೆ ದೊರೆತಿದ್ದ ಅಂಕಗಳ ವಿವರ ತರಿಸಿ ಕೊಂಡು "ಯಾಕೆ ಇಷ್ಟು ಕಡಿಮೆ?” ಎಂದರು. ಕೊನೆಯದಾಗಿ ಆತನ ಕವಿತೆಗಳನ್ನೂ<noinclude></noinclude> e7mfmahjjtsm2qgxnl8zmpvqdixn8al ಪುಟ:ದೀಕ್ಷೆ.pdf/೭೭ 104 19187 322044 277303 2026-05-23T18:12:54Z Pragathi. BH 7585 /* Validated */ 322044 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=404|center=|right=ಕನಸು}} ಓದಿ ನೋಡಿ,"ಈ ಹೊಲಸನ್ನು ನೀನೇ ಏನಯ್ಯ ಬರೆದೋನು?" ಎಂದು ಕೇಳಿದರು.<br> {{gap}}"ಸೆಪ್ಟೆಂಬರಿನಲ್ಲಿ ಪರೀಕ್ಷೆಗೆ ಕಟ್ಟೋಣಾಂತ ಮಾಡಿದೀಯೋ? ಹೋಗು. ಓದ್ಕೋ. ಇನ್ನೊಮ್ಮೆ ನಿನ್ನ ವಿಷಯ ಏನಾದರೂ ಮಾತು ಕೇಳಿತೂಂದ್ರೆ ಹುಷಾರ್!" ಎಂದು ಎಚ್ಚರಿಕೆ ಇತ್ತರು.<br> {{gap}}ಮುಖಮುದುಡಿಸಿಕೊಂಡು ಲಕ್ಷ್ಮೀಕಾಂತ ಮನೆಗೆ ಹೋದ. ಎರಡು ದಿನ ಕಾಲೇಜಿನ ಕಡೆಗೆ ಬರಲಿಲ್ಲ. ಮೂರನೆಯ ದಿನ ಬಂದಾಗ, ಕುತೂಹಲಿಗಳಾಗಿದ್ದ ಸಹಪಾಠಿಗಲಿಗೆ ಆತನೆಂದ:<br> {{gap}}"ನನ್ನ ದೂರು ವೈಸ್ ಛಾನ್ಸ್‌ಲರ್ ಹತ್ತಿರಕ್ಕೆ ಹೋಗಿದೆ. ತನಿಖೆಗೆ ಕಮೀಶನ್ ನೆಮಿಸ್ಬಹುದು... "<br> {{gap}}ಒಬ್ಬ ವಿದ್ಯಾರ್ಥಿ ವ್ಯಂಗೋಕ್ತಿಯನ್ನಾಡಿದ:<br> {{gap}}"ಪ್ರಚಂಡ ಕಣಯ್ಯ ನೀನು."<br> {{gap}}"ಅಲ್ದೆ ಇನ್ನೇನು?" ಎಂದ ಲಕ್ಷ್ಮೀಕಾಂತ, ಆತ ಅಡಿದುದು ಹೊಗಳಿಕೆ ಎಂದೇ ಭಾವಿಸಿ.<br> {{gap}}ಆ ಸಂಪಾದಕನ ರಾಜಿನಾಮೆ ಪತ್ರ ಮಾತ್ರ ಸ್ವಿಕೃತವಾಯಿತು.<br> {{gap}}ಸಂಪಾದಕ ಮಂಡಲದಲ್ಲಿ ಲಕ್ಷ್ಮೀಕಾಂತನ ಹೆಸರಿಲ್ಲದೆಯೇ ಕಾಲೇಜ್ ಮ್ಯಾಗ ಜೀನ್ ಪ್ರಕಟವಾಯಿತು.<br> {{gap}}ಸಂಕಲನ-ಮುದ್ರಣ ಎರಡನೂ ಸೊಗಸಾಗಿದ್ದುವು.<br> {{gap}}ಅಧ್ಯಾಪಕ ವೃಂದದಲ್ಲಿ ಪ್ರಧಾನ ಸಂಪಾದಕ ಶ್ರೀಕಂಠಯ್ಯನವರನ್ನು ಹೊಗಳು ವವರೇ ಎಲ್ಲರೂ.<br> {{gap}}ಅವರು ಮಾತ್ರ ನಿರ್ಧಾರದ ಧ್ವನಿಯಲ್ಲಿ ಪ್ರತಿಯೊಬ್ಬರೊಡನೆಯೂ ಒಂದೇ ಮಾತನ್ನು ಅಂದರು:<br> {{gap}}"ಈ ಪ್ರಶಂಸೆ ಸಲ್ಲಬೇಕಾದ್ದು ಹುಡುಗರಿಗೆ_ಅದರಲ್ಲೂ ಆ ಮುರಲೀಧರನಿಗೆ."<br> {{gap}}'ದೇವತೆಗಳ ಕಣ್ಣೀರು' ಲೇಖನವನ್ನೋದಿದವರೆಲ್ಲರೂ ನಾನಾ ಪದಗಳನ್ನು ಉಪಯೋಗಿಸಿ 'ಚೆನ್ನಾಗಿದೆ' ಎಂಬ ಒಂದೇ ಅಭಿಪ್ರಾಯವನ್ನು ವ್ಯಕ್ತಗೊಳಿಸಿದರು. ಪರಿಚಯವಿಲ್ಲದವರೆಲ್ಲರೂ "ಮುರಲೀಧರ ಯಾರು?" ಎಂದು ಕೇಳಿದರು.<br> {{gap}}ಲಕ್ಷ್ಮೀಕಾಂತನ ಪ್ರತಿಭಟನೆಗೆ ಮುಂಚಿತವಾಗಿಯೆ ಅಚ್ಚಾಗಿ ಬಿಟ್ಟಿತ್ತು.ಆತನ ಕವಿತೆ. ಕೃತಿ ಪ್ರಕಟವಾಗುವುದಕ್ಕೆ ಮುಂಚೆಯೇ ಪ್ರಖ್ಯಾತನಾಗಿದ್ದ ಮಹಾನುಭಾವನ ಕವಿತಾ ಸೃಷ್ಟಿಯನ್ನು ನೋಡುವ ಅಪೇಕ್ಷೆ ಇಲ್ಲದವರು ಯಾರಿದ್ದರು? ಪ್ರತಿ ಯೊಬ್ಬರೂ ಅದನ್ನೋದಿಯೇ ಓದಿದರು.<br> {{gap}}ಹೆಸರು 'ನಮ್ಮ ಕಾಲೇಜು'<br> {{gap}}ಮೊದಲ ಸಾಲುಗಳು ಹೀಗಿದ್ದುವು:<noinclude></noinclude> eseremwdb6o22crbuxlqtoq7ygreop7 ಪುಟ:ದೀಕ್ಷೆ.pdf/೭೮ 104 19188 322112 277275 2026-05-24T09:51:53Z Shreesha Sharma 7840 /* Validated */ 322112 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=ದೀಕ್ಷೆ |right= 405}} {{gap}}'ಸೊಗಯಿಪ ಕಟ್ಟಡವಿದು ನಮ್ಮಯ ಕಾಲೇಜು {{gap}}ಇದರೊಳಗಿರುವರು ಗುರು ವಿದ್ಯಾರ್ಥಿಗಳು...” {{gap}}[ಹಸ್ತಪ್ರತಿಯಲ್ಲಿ 'ವಿದ್ಯಾರ್ತಿ' ಎಂದಿತ್ತು. ಮುರಲೀಧರ ಅದನ್ನು ತಿದ್ದಿದ್ದ.]ಮ್ಯಾಗಜೀನು ಹೊರಬಿದ್ದ ಕೆಲ ದಿನಗಳವರೆಗೂ ವಿದ್ಯಾರ್ಥಿಗಳು ಲಕ್ಷ್ಮೀಕಾಂತ ನನ್ನು ಕಂಡೊಡನೆ ಆರಂಭಿಸುತ್ತಿದ್ದರು: {{gap}}“ಸೊಗಯಿಪ ಕಟ್ಟಡವಿದು... {{gap}}ನಾರಣಪ್ಪ ಮುರಲೀಧರನೊಡನೆ ಹೇಳಿದ: {{gap}}“ನಿಮ್ಮಿಂದಾಗಿ ಮ್ಯಾಗಜೀನು ಚೆನ್ನಾಗಿ ಬಂತೂಂತ ನನಗೆ ಸಂತೋಷವಾಗಿದೆ,ಮುರಲಿ.” {{gap}}“ಆ ಸಂತೋಷಕ್ಕೆ ಮೂಲ ಕಾರಣವೂ ನೀವೇ,” ಎಂದ ಮುರಲೀಧರ. {{gap}}“ಹ್ಯಾಗೆ?” {{gap}}“ನನ್ನ ಬರೆವಣಿಗೆ ವಿಷಯದಲ್ಲಿ ನನಗೆ ವಿಶ್ವಾಸ ಹುಟ್ಟಿಸಿದೋರು ನೀವು.ಸಂಪಾದಕ ಮಂಡಲಿಗೆ ನನ್ನ ಹೆಸರು ಸೂಚಿಸಿದೋರು ನೀವು. 'ದೇವತೆಗಳ ಕಣ್ಣೀರು'ಲೇಖನವನ್ನು ಕೊಡೋ ಹಾಗೆ ಸಲಹೆ ಮಾಡ್ದೋರು ನೀವು. ಇಷ್ಟು ಸಾಲದೇನು?” {{gap}}“ಇಲ್ಲ ಮುರಲಿ.ದೀವಟಿಗೆ ಹಿಡಿಯೋ ಮನುಷ್ಯ ಬೆಳಕು ಹಾಯಿಸಬಹುದು.ಆದರೆ ದೇವರಿಗಿಂತ ಆತ ದೊಡ್ಡನಾಗಲಾರ.” {{gap}}“ನಾಣಿ, ನೀವು ಆ ಮಾತು ಆಡಬಾರದು. ನಮ್ಮೊಳಗೆ ಅಂಥ ಅಂತರವಿಲ್ಲ.” {{gap}}... ಕನ್ನಡದ ಅಧ್ಯಾಪಕರು ಮುರಲೀಧರನನ್ನು ಕರೆದು ಹೇಳಿದರು: {{gap}}“ಚೆನ್ನಾಗಿ ಬರೆದಿದೀ ಕಣಯ್ಯ. ಈ ಶಕ್ತಿನ ಬೆಳಸ್ಕೋ, ಮಾತು ಬಾರದ ಜನರಿಗೆ ಬರೆಹಗಾರ ವಾಣಿ. ಆತ ಸರಸ್ವತಿಯ ಉಪಾಸಕ. ಸತ್ಯದ ಪ್ರತಿಪಾದಕ.ತುಂಬಾ ಓದು. ಲೋಕದ ವಿದ್ವತ್ತಿಗೆಲ್ಲ ನಾವೇವಾರಿಸುದಾರರು. ಎದೆಯೊಳಗೆ ಜಾಗ ಇದೆ ನೋಡು, ಅದು ಬರಿದಾಗಬಾರದು. ಹಾಗೇ ತಲೆಯೊಳಗಿಂದು. ಇನ್ನೊಬ್ಬರಿಗೆ ಎಷ್ಟು ಕೊಟ್ಟರೂ ಅವೆರಡೂ ತುಂಬಿಯೇ ಇರಬೇಕು.... ಪರೀಕ್ಷೆ ಹತ್ತಿರಬಂತು. ಈಗ ಚೆನ್ನಾಗಿ ಓದಿ ಪಾಸಾಗು, ರಜಾದಲ್ಲಿ ತುಂಬಾ ಬರಿ.” {{gap}}ಮುರಲೀಧರ ಆ ಮಾತುಗಳಿಗಾಗಿ ಕೃತಜ್ಞನಾಗುತ್ತ ನುಡಿದ: {{gap}}“ಆಗಲಿ, ಸಾರ್.” {{center|೧೦}} {{gap}}ಪರೀಕ್ಷೆ ತೀರಾ ಹತ್ತಿರಕ್ಕೆ ಬಂತು. ತರಗತಿಗಳು ಎಂದೋ ಮುಕ್ತಾಯವಾಗಿದ್ದುವು, ವಿದ್ಯಾರ್ಥಿಗಳ ಕೊಠಡಿಗಳಲ್ಲಿ ನಡುರಾತ್ರೆ ಕಳೆದು ಬೆಳಕು ಹರಿಯುವವರೆಗೂ<noinclude></noinclude> cj244t1eg4cy5m96k8odx75ukcamhic ಪುಟ:ದೀಕ್ಷೆ.pdf/೭೯ 104 19189 322113 277298 2026-05-24T09:55:42Z Shreesha Sharma 7840 /* Validated */ 322113 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=406 |right=ಕನಸು}} ದೀಪಗಳು ಉರಿದುವು. ಸಹಸ್ರ ಸಹಸ್ರ ಕಣ್ಣುಗಳು ನಿದ್ದೆಗೆಟ್ಟು ಕೆಂಪಾದುವು. ಆರೈಕೆ ಇಲ್ಲದೆ ತಲೆಗೂದಲು ಅಸ್ತವ್ಯಸ್ತವಾಯಿತು. {{gap}}ಎರಡೇ ದಿನಗಳು ಉಳಿದುವು ಪರೀಕ್ಷೆಗೆ, {{gap}}ಆ ಬೆಳಗ್ಗೆ ಎದ್ದಾಗ ನಾರಣಪ್ಪನನ್ನು ನೋಡಬೇಕೆನಿಸಿತು ಮುರಲೀಧರನಿಗೆ, ಗೆಳೆಯನ ಭೇಟಿ ಇಲ್ಲದೆ ಬಹಳ ದಿನಗಳಾಗಿದ್ದುವು. ಆದರೂ ಅಷ್ಟು ದೂರ ಹೋಗಿ ಬರಲು ಸಮಯ ವ್ಯಯ ಮಾಡುವುದು ಮಿತ್ರನ ಸಮಯವನ್ನೂ ವ್ಯರ್ಥಗೊಳಿಸು ವುದು, ಸರಿಯಲ್ಲವೆನಿಸಿತು. ಮನಸ್ಸು ಬಿಗಿ ಹಿಡಿದು ಆತ ವ್ಯಾಸಂಗದಲ್ಲಿ ನಿರತನಾದ. {{gap}}ಆ ಪೂರ್ವಾಹ್ನ ಅಂಚೆಯವನು ಮುರಲೀಧರನ ವಿಳಾಸ ಬರೆದಿದ್ದೊಂದು ಕಾರ್ಡನ್ನು ಹೊತ್ತು ತಂದ. {{gap}}ಹಿರಿಯಣ್ಣನ ಹಸ್ತಾಕ್ಷರ. 'ಕ್ಷೇಮ' ಎಂದು ಕಾರ್ಡಿನ ಮೂಲೆಯಲ್ಲಿ ಸೂಚಿಸಿ ದ್ದರೂ ಕೆಟ್ಟ ಸುದ್ದಿಯೇ ಅದರೊಳಗಿದ್ದುದು. {{gap}}ತಂದೆ ಹಾಸಿಗೆ ಹಿಡಿದಿದ್ದರು. ಒಂದೇ ಸಮನೆ ಕೆಮ್ಮು, ರಕ್ತ ವಾಂತಿಯಾಗ ತೊಡಗಿತ್ತು. ವೈದ್ಯರ ಔಷಧೋಪಚಾರ. ಅವರೇನೋ 'ಭಯವಿಲ್ಲ' ಎಂದಿದ್ದರು. {{gap}}“ಆದಷ್ಟು ಬೇಗ ನೀನು ಬರಬೇಕೂಂತ ಅಮ್ಮ ಹೇಳಿದಾಳೆ. ತಡಮಾಡದೆ ಪರೀಕ್ಷೆ ಮುಗಿದ ಕೂಡಲೇ ಬಾ. {{gap}}ಮುರಲೀಧರ ತಂದೆಗೆ ಗುಣವಾಗಬಹುದೆಂದು ತನಗೆ ತಾನೇ ಎಷ್ಟು ಹೇಳಿ ಕೊಂಡರೂ ಮನಸ್ಸು ಅಶುಭವನ್ನೆ ನೆನೆಯಿತು. {{gap}}ಓದಲು ಇಷ್ಟವಾಗಲಿಲ್ಲ. ಮನೋಸ್ವಾಸ್ಥ್ಯಗಳನ್ನು ಬಿಗಿಯಾಗಿ ಮುಚ್ಚಿ, ಹೊತ್ತು ಕಳೆಯಲು ಆತ ಯತ್ನಿಸಿದ. ಮೆದುಳು ಬಿಸಿ ಏರಿತು. ಅಂಗಾಂಗಗಳು ಜಡವಾದುವು. {{gap}}ಆಗಲೆ ಬರಬೇಕೆ ಆ ಸುದ್ದಿ? ಪರೀಕ್ಷೆ ಅಷ್ಟೊಂದು ಸಮೀಪವಾಗಿದ್ದ ಹೊತ್ತಿ ನಲ್ಲಿ ಆತ ಊರಿಗೆ ಹೋಗುವುದಾದರೂ ಹೇಗೆ? {{gap}}ಕಾಹಿಲೆ ಬೀಳುವುದು ಸಾಮಾನ್ಯ ವಿಷಯ. ಬೇಗನೆ ಚೇತರಿಸಿಕೊಳ್ಳಬಾರ ದೆಂದೇನೂ ಇಲ್ಲವಲ್ಲ. ಆದರೂ ಈಸಲ ಯಾಕೋ____ {{gap}}ಒಂದೇ ಸಮನೆ ಕೆಮ್ಮು; ರಕ್ತವಾಂತಿಯಾಗುತ್ತಿತ್ತು ಬೇರೆ. ಅದೆಂತಹ ಕಾಹಿಲೆ? {{gap}}ತಾಯಿ ಬರಹೇಳಿದ್ದರು. {{gap}}ಹೋಗುವುದೇ ಚೆನ್ನಾಗಿರುತ್ತಿತ್ತು. ಆದರೆ ಹೇಗೆ? ಹೇಗೆ? {{gap}}ಎಂತಹ ಕೆಟ್ಟ ಘಳಿಗೆಯಲ್ಲಿ ಬಂದನೋ ಆ ಅಂಚೆಯವನು? ತಾನೊ ಓದಬೇಕು; ಪಠ್ಯ ಪುಸ್ತಕಗಳ ಟಿಪ್ಪಣಿಗಳ ಪುಟಗಳನ್ನು ತಿರುವಿ ಹಾಕಬೇಕು. {{gap}}ಮುರಲೀಧರ ಎದ್ದು ಕುಳಿತು ಮತ್ತೆ ಓದಲು ಯತ್ನಿಸಿದ. ಅಕ್ಷರಗಳು ಕಣ್ಣೆ ದುರು ಕುಣಿಯುತ್ತಿದ್ದುವೇ ಹೊರತು, ಓದುತ್ತಿದ್ದುದೊಂದೂ ಅರ್ಥವಾಗಲಿಲ್ಲ.<noinclude></noinclude> mh5p66psz67sojep15ifvbrc04grmof ಪುಟ:ದೀಕ್ಷೆ.pdf/೮೦ 104 19190 322114 277306 2026-05-24T10:02:43Z Shreesha Sharma 7840 /* Validated */ 322114 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=ದೀಕ್ಷೆ|right=407}} {{gap}}ಮಧ್ಯಾಹ್ನದ ಊಟ. ತಿಂದುದು ರುಚಿಸದಿದ್ದರೂ ಹೊಟ್ಟೆಗೆ ಒಂದು ತುತ್ತು. {{gap}}ಊಟ ಮುಗಿದ ಬಳಿಕ ನಿದ್ದೆ ಹೋಗಲು ಯತ್ನ, {{gap}}ಹತ್ತಾರು ಸಾರೆ ಎಚ್ಚರವಾಗಿ ಕಣ್ಣುರಿಯುತ್ತಿದ್ದ ಆ ಹಗಲುನಿದ್ದೆಯಿಂದ ಶರೀರಕ್ಕೆ ಯಾವ ವಿಶ್ರಾಂತಿಯೂ ದೊರೆಯಲಿಲ್ಲ. {{gap}}ಮನಸಿನ ನೆಮ್ಮದಿಯನ್ನು ಹುಡುಕುತ್ತ ಮಲ್ಲೇಶ್ವರದವರೆಗಾದರೂ ಹೋಗಿ ಬರಬೇಕೆಂದು ಆತ ನಿರ್ಧರಿಸಿದ.... {{gap}}..ಪುಸ್ತಕಗಳೆದುರು ಕುಳಿತಿದ್ದ ನಾರಣಪ್ಪ ಗೆಳೆಯನನ್ನು ಸ್ವಾಗತಿಸಿದ: {{gap}}“ನೂರು ವರ್ಷ ಆಯುಸ್ಸು ನಿಮಗೆ ಬನ್ನಿ ಮುರಲಿ. ಇದೇ ಈಗ ನಿಮ್ಮನ್ನು ನೆನೆಸ್ಕೊಳ್ತಿದ್ದೆ; ಒಂದೈದು ನಿಮಿಷವಾದರೂ ನಿಮ್ಮ ಜತೆ ಹರಟೆ ಸಾಧ್ಯವಾದರೆ ಎಷ್ಟು ಚೆನ್ನಾಗಿರುತ್ತೇಂತ ಯೋಚಿಸ್ತಿದ್ದೆ.” {{gap}}“ಬೆಳಗಿನಿಂದ ನನಗೂ ಅದೇ ಯೋಚನೆ ಇತ್ತು,” ಎಂದ ಮುರಲೀಧರ. {{gap}}ಆದರೆ ಮುಖಭಾವದ ಜತೆಗೆ ಸ್ವರವೂ ಆಗಲೇ ಕೈ ಕೊಟ್ಟಿತ್ತು. ಸ್ನೇಹಿತನ ಮುಖವನ್ನು ಎವೆಯಿಕ್ಕದೆ ನೋಡಿ ನಾರಣಪ್ಪ ಕೇಳಿದ: {{gap}}“ಏನು ಸಮಾಚಾರ?” {{gap}}ನೇರವಾದ ಆ ಪ್ರಶ್ನೆಗೆ ಬಳಸುವ ಉತ್ತರ ನೀಡುವುದು ಯೋಗ್ಯವಾಗಿರಲಿಲ್ಲ. ಕುಳಿತುಕೊಳ್ಳುತ್ತ, ಷರಾಯಿಯ ಜೇಬಿನೊಳಗಿಂದ, ಸ್ವಲ್ಪ ಮುದುಡಿದ್ದ ಕಾರ್ಡನ್ನು ಮುರಲೀಧರ ಹೊರತೆಗೆದು ಗೆಳೆಯನ ಕೈಗಿತ್ತ. {{gap}}ತಂದೆಯನ್ನು ಕಳೆದುಕೊಂಡಿದ್ದ ನಾರಣಪ್ಪನ ಮುಖದ ಮೇಲೆಯೂ ಕಳವಳದ ಛಾಯೆ ಮೂಡಿತು. ಕಾಗದವನ್ನೋದಿದ ಆತ ಒಂದು ಕ್ಷಣ ಏನನ್ನೂ ಹೇಳಲಿಲ್ಲ. ತೆರೆದ ಪುಸ್ತಕದ ಮೇಲೆ ಕಾರ್ಡನ್ನಿರಿಸಿದ. ಕುಳಿತಲ್ಲಿಂದಲೆ ಅದರತ್ತ ದೃಷ್ಟಿಯೋಡಿಸಿ ಆ ಸಾಲುಗಳನ್ನು ಮತ್ತೆ ಓದಿದ. {{gap}}ದೃಷ್ಟಿ ಮುರಲೀಧರನ ಅಣ್ಣನ ಸಹಿಯನ್ನು ದಾಟಿದ ಬಳಿಕ ಆತನೆಂದ: {{gap}}“ಸೋಮವಾರ ಪರೀಕ್ಷೆ, ಏನ್ಮಾಡ್ತೀರಾ?” {{gap}}“ನನಗೊಂದೂ ತೊಡ್ತಾ ಇಲ್ಲ ನಾಣಿ. {{gap}}“ಸ್ಥಿತಿ ಪೂರಾ ಕೆಟ್ಟಿದ್ದರೆ ಬಂದೇ ತೀರಬೇಕೂಂತ ಬರೀತಿದ್ದರು. ಅಲ್ವೆ?” {{gap}}“ಅದು ನಿಜ. ಆದರೂ ಏನೋ ಅಳುಕು. ಓದೋಕೆ ಮನಸಾಗ್ತಾ ಇಲ್ಲ. {{gap}}ನಾರಣಪ್ಪ ಏನನ್ನೂ ಹೇಳಲಿಲ್ಲ. ಮುರಲೀಧರನ ಬಳಿ ಹೇರಳವಾಗಿದ್ದ ಬೇಸರದೊಂದು ಭಾಗ ಆವರಿಸಿತು. {{gap}}ಯೋಚನೆಗಳು ಒಂದು ಮಟ್ಟಕ್ಕೆ ಬಂದು ತಲಪಿದಂತೆ ಮುರಲೀಧರನೇ ಅಂದ: {{gap}}“ಏನೇ ಆಗಲಿ, ಪರೀಕ್ಷೆಗೆ ಕುಳಿತೇಬಿಡಬೇಕೂಂತ ಮಾಡಿದೀನಿ.ಆಗದೆ?" {{gap}}“ಅದು ಸರಿ. ಪರೀಕ್ಷೆ ಮುಗಿದೊಡನೆ ಹೋದರಾಯ್ತು.” {{gap}}ಆ ತೀರ್ಮಾನದ ಬಳಿಕ ಮುರಲೀಧರನ ಮುಖ ಮತ್ತೆ ಕಳೆಗೊಂಡಿತು.<noinclude></noinclude> om9k86p38ia37k9hxwwa7ipf9h8zkro ಪುಟ:ದೀಕ್ಷೆ.pdf/೮೧ 104 19191 322045 277358 2026-05-23T18:13:38Z Pragathi. BH 7585 /* Validated */ 322045 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=408|center=|right=ಕನಸು}} {{gap}}ನಾರಣಪ್ಪನ ಅಕ್ಕ ತಿಂಡಿಯ ತಟ್ಟೆಗಳನ್ನು ತಂದಿಟ್ಟಳು.<br> {{gap}}ಆತನ ತಾಯಿ ಬಂದು ಹುಡುಗರಿಬ್ಬರನ್ನೂ ನೋಡಿ ಅಂದರು:<br> {{gap}}“ಪರೀಕ್ಷೆ ಪರೀಕ್ಷೆ ಅಂತ ಓದಿ ಓದಿ ಅದೆಷ್ಟು ಸಣಕಲಾಗೀರೋ ನಾನು ಬೇರೆ ಕಾಣೆ!”<br> {{gap}}ನಗಲು ಯತ್ನಿಸುತ್ತ ಮುರಲೀಧರನೆಂದ:<br> {{gap}}“ರಜಾದಲ್ಲಿ ಇಲ್ಲೇ ಇದ್ದಿದ್ದೀನಿ ಅಮ್ಮ. ಇಬ್ಬರಿಗೂ ಹೀಗೆ ತಿಂಡಿ ಕೊಡಿ.ಹ್ಯಾಗೆ ಆಗ್ತಿವಿ ಅನ್ನೋದನ್ನ ನೀವೇ ನೋಡಿ ಆಮೇಲೆ.”<br> {{gap}}“ಆಗಲಿ ಮಗೂ. ಖಂಡಿತ ಬಂದು ಇಲ್ಲೇ ಇದ್ದಿಡು.”<br> {{gap}}ತಾಯಿ ಅಲ್ಲೇ ಕುಳಿತು ಹಿರಿಯ ಮಗನ ಮಾತನ್ನೆತ್ತಿದರು. ನಾರಣಪ್ಪನಿಗೆ ಬಿಡುವಿರಲಿಲ್ಲವೆಂದು ಆ ಸಾರೆ ಮಲ್ಲೇಶಪ್ಪನ ಭೇಟಿಗೆ ಅವರೇ ಹೋಗಿದ್ದರು.<br> {{gap}}“ಏನಂತಾನೆ ಗೊತ್ತೆ ಮಲ್ಲೇಶಿ? ಒಳಗೆ ನಾನು ಚೆನ್ನಾಗೇ ಇದೀನಿ; ನನ್ನ ಯೋಚೆ ಮಾಡೋಡಿ ಅಂತ. ಸರಿಯಾಗೇ ನೋಡ್ಕೊತಿದಾರಂತೆ. ಕೆಲಸ ಏನೂ ಕೊಡೊಲ್ವಂತೆ.”<br> {{gap}}“ಕೆಲಸ ಯಾಕೆ ಕೊಡ್ತಾರೆ? ಸ್ಥಾನಬದ್ಧ ರಾಜಕೀಯ ಕೈದಿ ಅಂದ್ಮಲೆ ಅಂಥಾದೇನೂ ಅವರು ಮಾಡೋಹಾಗಿಲ್ಲ,” ಎಂದ ಮುರಲೀಧರ. ಆ ಮಾಹಿತಿಯನ್ನು ಆತ ತಿಳಿದುಕೊಂಡಿದ್ದುದೇನೋ ನಾರಣಪ್ಪನಿಂದಲೇ.<br> {{gap}}ಬಿಡುಗಡೆಯ ಯತ್ನವೂ ನಡೆದಿತ್ತು. ನಾರಣಪ್ಪನ ತಂದೆಯ ಸ್ನೇಹಿತರಾಗಿ ದೊಬ್ಬ ವಕೀಲರು ಸರಕಾರದ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದ್ದರು.<br> {{gap}}ಸ್ವತಃ ಆ ಯುವಕ ಅಪಾಯಕಾರಿ ಅಂತ ನಾವು ಭಾವಿಸಿಲ್ಲ. ಆತನಿಗೆ ಬಂದಿದ್ದ ಕಾಗದಗಳಿಲ್ಲದೇ ಹೋಗಿದ್ದರೆ ದಸ್ತಗಿರಿಯ ಯೋಚನೆಯನ್ನೂ ನಾವು ಮಾಡ್ತಿಲ್ಲ.ತಾಳಿ, ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ತಕ್ಷಣ_'<br> {{gap}}ಅದು, ಅಧಿಕಾರಿಗಳು ಆಡಿದ್ದ ನವುರು ಮಾತು.<br> {{gap}}“ಅಂತೂ ಒಮ್ಮೆ ಮಲ್ಲೇಶಿ ಮನೆಗೆ ಬಂದರೆ ಸಾಕು.”<br> {{gap}}“ಬಂದೇ ಬತ್ತಾರೆ. ಎಷ್ಟು ದಿವಸ ಅಂತ ಜೈಲಿನಲ್ಲಿಡೋದು ಸಾಧ್ಯ?” ಎಂದ ಮುರಲೀಧರ.<br> {{gap}} ...ಸಂಜೆ ಗೆಳೆಯನ ಮನೆಯಿಂದ ಬೇಗನೆ ಹೊರಟು ಆತ ಕೊಠಡಿ ಸೇರಿದ.ಪಾಠ ಹೇಳುವ ಕೆಲಸವಿರದ-ಅದರ ಪರಿಣಾಮವಾಗಿ ಸಂಪಾದನೆ ಶೂನ್ಯವಾದ ದಿನಗಳು...ಆ ಹಗಲು ಹೆಚ್ಚು ಓದುವುದಾಗಿರಲಿಲ್ಲ. ರಾತ್ರಿಯಾದರೂ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಅಗತ್ಯವೆನಿಸಿತು.<br> {{gap}}ಪುಸ್ತಕವನ್ನು ತೆರೆದು ಕುಳಿತ ಮುರಲೀಧರನನ್ನು, ಬೆಳಗ್ಗೆ ಬಂದಿದ್ದ ಕಾಗದದ ಸಾಲುಗಳ ನೆನಪು ಕ್ಷಣ ಕಾಲ ಗೊಂದಲಕ್ಕೀಡು ಮಾಡಿತು. ಆದರೆ ಮುರಲೀಧರ<noinclude></noinclude> eo6c1j0zhq1mdu8yvclb6u0z8iyeret ಪುಟ:ದೀಕ್ಷೆ.pdf/೮೨ 104 19192 322144 277314 2026-05-24T11:30:27Z Shreelatha.Halemane 7642 /* Validated */ 322144 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ|right=409}} ಚೇತರಿಸಿಕೊಂಡು, ದೃಢಮನಸ್ಕನಾಗಿ ಅಭ್ಯಾಸದಲ್ಲಿ ನಿರತನಾದ.... {{gap}}...ಸೋಮವಾರ ಸಡಗರದ ದಿನ. ಅದು, ಎರಡು ವರ್ಷಗಳ ಅಧ್ಯಯನ ನಿರ್ದಿಷ್ಟವಾದೊಂದು ಘಟ್ಟವನ್ನು ತಲಪುವ ಸನ್ನಿವೇಶ. ಉತ್ತೀರ್ಣನಾಗಲಾರೆನೆಂಬ ಭಯವೇನೂ ಮುರಲೀಧರನಿಗೆ ಇರಲಿಲ್ಲ. ಆದರೂ ಪರೀಕ್ಷಾ ಭವನವನ್ನು ಸಮೀಪಿಸಿ ದಂತೆ ಆತನ ಎದೆಬಡಿತ ತೀವ್ರವಾಯಿತು. ಈ ಪರೀಕ್ಷೆಯಲ್ಲಿ ಯಶಸ್ಸು ಲಭಿಸಿತೆಂದರೆ ಒಂದು ಅಧ್ಯಾಯ ಪೂರ್ಣವಾದಂತೆ... {{gap}}ಮರಗಳ ಕೆಳಗೆ ಕೊನೆಯ ಆ ಘಳಿಗೆಯಲ್ಲೂ ವಿದ್ಯಾರ್ಥಿಗಳ ಸಿದ್ಧತೆ ನಡೆದಿತ್ತು. ಆ ರೀತಿ ಓದಿ ತಲೆ ಕೆಡಿಸಿಕೊಳ್ಳುವುದು ಎಂದೂ ಒಪ್ಪಿಗೆಯಾಗಿರಲಿಲ್ಲ ಮುರಲೀಧರನಿಗೆ. ಗಡಿಯಾರದ ಮುಳ್ಳುಗಳು ಧಾವಿಸುತ್ತಿದ್ದ ಆ ಹೊತ್ತಿನಲ್ಲಿ ಶಾಂತನಾಗಿ ಸುಮ್ಮನಿರು ವುದೇ ಹೆಚ್ಚು ವಿಹಿತವಾಗಿತ್ತು. {{gap}}ಮುರಲೀಧರ ಅತ್ತಿತ್ತ ನೋಡಿದ. ನಾರಣಪ್ಪ ಆತನೆಡೆಗೇ ಬರುತ್ತಿದ್ದುದು ಕಂಡಿತು. ಶುಭ್ರ ಶ್ವೇತವಸನ ಎಂದಿನಂತೆಯೇ. {{gap}}ತಾನೂ ಆತನೆಡೆಗೆ ಮುಂದುವರಿದು, ಸಮೀಪಿಸಿದಂತೆ, ಮುರಲೀಧರನೆಂದ: {{gap}}“ಯಜ್ಞ ಕುಂಡದ ಹತ್ತಿರ ಹೋಗೋಕ್ಮುಂಚೆ ಸಿಕ್ಕಿದಿರಲ್ಲ! ಸಂತೋಷ!” {{gap}}ನಾರಣಪ್ಪ ಮುಗುಳುನಕ್ಕ. ಆದರೆ ಆತನ ದೃಷ್ಟಿ ಇದ್ದಕ್ಕಿದ್ದಂತೆ, ಅವರನ್ನು ಹಾದು ಹೋದ ಕೆಂಪು ಸೈಕಲಿನತ್ತ ಹರಿಯಿತು. ಕೆಂಪು ಸೈಕಲಿನಮೇಲೆ ಖಾಕಿಯುಡು ಗೆಯ ಸವಾರ, ಕಂಕುಳಿಗೆ ತೂಗಹಾಕಿದ್ದ ತೊಗಲ ಚೀಲ. {{gap}}ನಾರಣಪ್ಪನೆಂದ: {{gap}}“ತಂತಿ ಬಂದಿದೆ, ಯಾರಿಗೋ.” {{gap}}ತಂತಿ? ಯಾರಿಗೆ? ಮುರಲೀಧರನ ಉಸಿರು ಸರಾಗವಾಗಿ ಆಡಲಾಗದೆ ಚಡ ಪಡಿಸಿತು. ಯಾರಿಗೆ ತಂತಿ? ಅಣ್ಣ ಬರೆದಿದ್ದ ಕಾರ್ಡು ಆತನ ಕಣ್ಣೆದುರು ಬೃಹದಾಕಾರ ತಳೆಯಿತು. ತಂದೆ-ತನ್ನ ತಂದೆ? {{gap}}ಅವರಿಬ್ಬರ ದೃಷ್ಟಿಗಳೂ ಸೈಕಲು ಹೋದ ದಿಕ್ಕನ್ನೇ ಹಿಂಬಾಲಿಸಿದುವು. ತಂತಿ ಯವನು ಪರೀಕ್ಷಾ ಭವನದ ಬಳಿ ಇಳಿದು, ಮೆಟ್ಟಿಲುಗಳನ್ನೇರಿ, ಜವಾನನನ್ನು ವಿಚಾರಿ ಸುತ್ತಿದ್ದ. ಪರೀಕ್ಷಾರ್ಥಿಗಳ ಮೇಲೆ ಕಣ್ಣಿಡಲು ನಿಯೋಜಿತರಾಗಿದ್ದ ಇಬ್ಬರು ಅಧ್ಯಾ ಪಕರು ಅತ್ತ ಬಂದರು. ಅವರೊಡನೆಯೂ ಮಾತನಾಡಿದ ಖಾಕಿಯುಡುಗೆಯ ಮನುಷ್ಯ. {{gap}}ಅವರೆಲ್ಲ, ಹೊರಗೆ ಅಲ್ಲಲ್ಲಿದ್ದ ಹುಡುಗರತ್ತ ದೃಷ್ಟಿ ಹಾಯಿಸುತ್ತಿದ್ದಂತೆ ಕಂಡಿತು. {{gap}}ಬಾಯಿ ತೆರೆದು ಉಚ್ಚರಿಸದಿದ್ದರೂ ಬಲವಾದ ಸಂದೇಹ ನಾರಣಪ್ಪನನ್ನು ಕಾಡುತ್ತಿತ್ತು. ಆಗಲೇ ಮುಖ ವಿವರ್ಣವಾಗ ತೊಡಗಿದ್ದ ಮುರಲೀಧರನೊಡನೆ ಆತನೆಂದ: {{gap}}“ಬನ್ನಿ, ಅಲ್ಲಿಗೆ ಹೋಗೋಣ. ಯಾರನ್ನೂ ಹುಡುಕ್ತಿದಾರೆ.” {{Right|52}}<noinclude></noinclude> ts08f6ofl4nscthbqwesvju0wjn0ohi ಪುಟ:ದೀಕ್ಷೆ.pdf/೮೩ 104 19193 322145 277343 2026-05-24T11:35:48Z Shreelatha.Halemane 7642 /* Validated */ 322145 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=410|right= ಕನಸು}} {{gap}}ಅವರಂತೆಯೇ ಬೇರೆಯೂ ಇಬ್ಬರು ಮೂವರು ವಿದ್ಯಾರ್ಥಿಗಳು ಅತ್ತ ಸರಿದರು. {{gap}}ದೂರದಿಂದಲೆ ಕಾಣಿಸಿದುವು ಚಲಿಸುತ್ತಿದ್ದ ತುಟಿಗಳು. ಮುರಲೀಧರ ಎಂಬ ಪದವನ್ನೆ ಅವು ರೂಪಿಸುತ್ತಿದ್ದಂತೆ ಕಂಡಿತು. {{gap}}ಅದೇ ನಿಜವಾಗಿತ್ತೆನ್ನುವಂತೆ ಪರಿಚಯದ ಸಹಪಾಠಿಯೊಬ್ಬ ಕರೆದು ಹೇಳಿದ: {{gap}}“ರೀ ಮುರಲೀಧರ್, ನಿಮಗೊಂದು ಟೆಲಿಗ್ರಾಂ.” {{gap}}ಉಳಿದ ವಿದ್ಯಮಾನಗಳೆಲ್ಲ ಕನಸಿನಲ್ಲಿ ನಡೆದಂತೆ. ಕಾತರ, ಉದ್ವೇಗ, ಯಾರದೋ ಸ್ವರ ಕೇಳಿಸಿತು. ಇವರೇ ಮುರಲೀಧರ್' ಹಳದಿ ಬಣ್ಣದ ಪೆನ್ಸಿಲು, ಕಪ್ಪು ಸೀಸದ ಕಡ್ಡಿ. 'ಒನ್ ನಾಟ್ ಸೆವೆನ್ ನಂಬರ್, ಸಹಿ ಹಾಕಿ. ನಡುಗುತ್ತಿದ್ದ ಕೈ ಬೆರಳುಗಳು. ಲಕೋಟೆಯನ್ನು ಹರಿದು ಒಡೆದು, ಮಡಚಿದ ಕಾಗದವನ್ನು ಹೊರ ಕಳೆದು ಬಿಡಿಸಿದುದಾಯಿತು. ಅಸ್ಪಷ್ಟವಾಗಿ ಅತ್ತಿತ್ತ ಚಲಿಸಿ, ಕ್ರಮೇಣ ಘನೀಭವಿಸಿದ ನಾಲ್ಕು ಇಂಗ್ಲಿಷ್ ಪದಗಳು: {{gap}}“ತಂದೆ-ಉಲ್ಬಣಾವಸ್ಥೆ-ತಕ್ಷಣ-ಬಾ...” {{gap}}ಏನು, ಯಾರದೆಂದು ತಿಳಿಯುವ ಕುತೂಹಲವಿದ್ದ ಒಬ್ಬಿಬ್ಬರು ವಿದ್ಯಾರ್ಥಿಗಳು, ತಂತಿಯಲ್ಲಿದ್ದ ವಿಷಯ ಗೊತ್ತಾದೊಡನೆ ಮತ್ತೆ ಮರಗಳಡಿಗೆ ಸರಿದರು. {{gap}}ಕಾಲುಗಳು ಕ್ಷೀಣಿಸಿ ಕುಸಿ ಬೀಳುವ ಹಾಗಾಯಿತು ಮುರಲೀಧರನಿಗೆ. ಕಣ್ಣು ಗಳಿಗೆ ಕತ್ತಲು ಕವಿಯಿತು. ಚಿಂತೆಗೊಳಗಾಗಿ ನಿಂತಿದ್ದ ನಾರಣಪ್ಪನ ಆಕೃತಿ ಮಸುಕಾಗಿ ಆತನಿಗೆ ತೋರಿತು. {{gap}}ಸಂಕಟದ ಆ ಸಮಯದಲ್ಲಿ ಬಹುವಚನ ಪ್ರಯೋಗದ ಔಪಚಾರಿಕ ನಿಯಮಗಳನ್ನು ಬದಿಗಿರಿಸಿ, ನಾರಣಪ್ಪನೆಂದ: {{gap}}“ಮುರಲಿ, ಮುರಲಿ! ಏನ್ಮಾಡ್ತೀಯಾ ಈಗ?” {{gap}}“ಹೂಂ? ಏನು?” {{gap}}ಗೆಳೆಯ ಏನು ಕೇಳಿದನೆಂಬುದು ಮುರಲೀಧರನಿಗೆ ಸ್ಪಷ್ಟವಾಗಿರಲಿಲ್ಲ. {{gap}}“ಊರಿಗೆ ಹೋಗ್ತಿಯಾ?” {{gap}}ರುಗ್ಣ ಶಯ್ಕೆಯಲ್ಲಿದ್ದ ತಂದೆ........ತನಗೋಸ್ಕರ ಆತ ಆವರೆಗೂ ತೋರಿದ ಒಲವು ಎಷ್ಟೇ ಇರಲಿ, ತನಗೆ ಜನ್ಮವಿತ್ತವನು ಆತ-ಜನಕ....ತಾನು ಹೋಗಲೇಬೇಕು. ಆತನ ಮುಖವನ್ನೊಮ್ಮೆ ನೋಡಲೇಬೇಕು... {{gap}}“ಹೂಂ, ಹೋಗ್ತಿನಿ.” “ಎಷ್ಟು ಗಂಟೆಗಿದೆ ಬಸ್ಸು ?” {{gap}}"ಬಸ್ಸು?" {{gap}}ಎಷ್ಟು ಗಂಟೆಗೆ? ಊರಿಗೆ ಎಷ್ಟೋ ಸಾರೆ ಹೋಗಿರುವ ತನಗೆ ತಿಳಿದಿರ ಬೇಕಲ್ಲವೆ?<noinclude></noinclude> lwv7pfk83onhgiz1x71zyy893px2dr8 ಪುಟ:ದೀಕ್ಷೆ.pdf/೮೪ 104 19194 322046 277396 2026-05-23T18:14:00Z Pragathi. BH 7585 /* Validated */ 322046 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=ದೀಕ್ಷೆ|center=|right=411}} {{gap}}ಪ್ರಯಾಸಪಟ್ಟು ಸ್ಮರಿಸಿಕೊಂಡವನಂತೆ ಹುಬ್ಬುಗಳನ್ನು ಕುಂಠಿತಗೊಳ್ಳುತ್ತ ಮುರಲೀಧರನೆಂದ:<br> {{gap}}"ಹನ್ನೆರಡು ಗಂಟೆಗೆ ಒಂದಿದೆ."<br> {{gap}}"ದುಡ್ಡಿದೆಯೇನು ಟಿಕೆಟಿಗೆ?”<br> {{gap}}“ಇದೆ, ಕೊಠಡೀಲಿ ."<br> {{gap}}ಪರೀಕ್ಷೆ_ಪರೀಕ್ಷಾ ಭವನ........ ಐದು ನಿಮಿಷಗಳೂ ಉಳಿದಿರಲಿಲ್ಲ, ಬಸ್ ನಿಲ್ದಾಣದವರೆಗೆ ಸ್ನೇಹಿತನ ಜತೆ ಹೋಗುವುದಂತೂ ಆಗದ ಮಾತು.<br> {{gap}}ಆದರೂ ನಾರಣಪ್ಪ ಕೇಳಿದ:<br> {{gap}}"ಒಬ್ಬನೇ ಹೋಗೋಕಾಗುತ್ತಾ?"<br> {{gap}}"ಹೂ೦.. ಹೋಗ್ರಿಡ್ತೀನಿ."<br> {{gap}}"ಸಾಧ್ಯವಾದರೆ ನಾಳೆಯೇ ವಾಪಸು ಬಂದ್ಬಿಡು."<br> {{gap}}"ಹೂಂ. ಹೋಗ್ತೀನಿ"<br> {{gap}}ಶ್ರೀಕಂಠಯ್ಯ, ಅವರಿಬ್ಬರು ನಿ೦ತಿದ್ದ ಹಾದಿಯಾಗಿ ಬಂದರು, ನಮಿಸಿದ ನಾರಣಪ್ಪನನ್ನು ನೋಡಿ ತಲೆಯಾಡಿಸಿದರು. ಶಿಷ್ಯ ಮುರಲೀಧರನೂ ಅಲ್ಲಿದನೆಂದು ಮುಗುಳು ನಕ್ಕರು. ಆದರೆ ಆ ಹುಡುಗ ಶಿಲಾಪ್ರತಿಮೆಯಂತಿದ್ದ. ಕಪ್ಪಿಟ್ಟಿತ್ತು ಮುಖ. ಒಂದು ಹೆಜ್ಜೆ ಮುಂದಿರಿಸಿದ್ದ ಶ್ರೀಕಂಠಯ್ಯ ತಡೆದು ನಿಂತು, ತಿರುಗಿ ನೋಡಿ, ಕೇಳಿದರು:<br> {{gap}}“ಏನು ಸಮಾಚಾರ?"<br> {{gap}}ನಾರಣಪ್ಪ ವಿಷಯ ತಿಳಿಸಿದಾಗ ಅಧ್ಯಾಪಕರ ಮುಖವೂ ಮ್ಲಾನವಾಯಿತು, ಅವರೆಂದರು:<br> {{gap}}"ಸೋ ಸಾರಿ. ಪರೀಕ್ಷೆಗೇನು ಇನ್ನೊಂದ್ಸಲ ಪಾಸ್ ಮಾಡ್ಕೋಬಹುದು. ಹೋಗಿ ಬಾ."<br> {{gap}}ಸಹಾನುಭೂತಿಯು ಆ ಧ್ವನಿ, ಮುರಲೀಧರನ ಅಳಲಿನ ಚೀಲವನ್ನು ಇರಿಯಿತು. ಆತನ ಕಣ್ಣಗಳಲ್ಲಿ ಹನಿಯಾಡಿತು.<br> {{gap}}ಬೀದಿಯು ಕಡೆಗೆ ಎರಡು ಹೆಜ್ಜೆ ಇಟ್ಟು ಆತನೆಂದು:<br> {{gap}}"ಬರ್ತೀನಿ ನಾಣಿ. ಹೋಗಬರ್ತೀನಿ."<br> {{gap}}"ಹೂ೦.. ಸಾಧ್ಯವಾದರೆ ನಾಳೇನೆ ಬಾ, ಇಲ್ಲದೇ ಹೋದ್ರೆ ಕಾಗದನಾದರೂ ಬರಿ."<br> {{gap}}"ಆಗಲಿ ನಾಣಿ."<br> {{gap}}ಒಬ್ಬನೇ ನಡೆದು ಹೋದ ಮುರಲೀಧರನನ್ನೇ ನಾರಣಪ್ಪ ಸ್ವಲ್ಪ ಹೊತ್ತು ದಿಟ್ಟಿಸಿದ.ಬಾರಿಸಿದ ಗಂಟೆಯ ಸದ್ದು ಆತನನ್ನು ಎಚ್ಚರಿಸಿತು. ಭಾರವಾದ ಹೃದಯದೊಡನೆ ಆತ ಪರೀಕ್ಷಾಭವನದ ದ್ವಾರದೆಡೆಗೆ ನಡೆದ.<noinclude></noinclude> 50sbg3jns40rk69azhbjtudonvoprko ಪುಟ:ದೀಕ್ಷೆ.pdf/೮೫ 104 19195 322111 277338 2026-05-24T09:45:43Z Shreesha Sharma 7840 /* Validated */ 322111 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=412|right=ಕನಸು}} {{center|೧೧}} {{gap}}ಮೋಟಾರಿನಲ್ಲಿದ್ದುದು ಮೆತ್ತನೆಯ ಆಸನವಲ್ಲ, ಮುಳ್ಳುಗಿಡ, ಅಷ್ಟೊಂದು ಸಂಕಟ ಅನುಭವಿಸುತ್ತ ಮುರಲೀಧರ ಪ್ರಯಾಣ ಬೆಳಸಿದ. ಪ್ರಯಾಣಿಕರನ್ನು ಇಳಿಸಲೆಂದೋ ಹತ್ತಿಸಿಕೊಳ್ಳಲೆಂದೋ ವಿರಾಮಕ್ಕೆಂದೋ ಅಲ್ಲಿ ಇಲ್ಲಿ ವಾಹನ ನಿಂತಾಗಲೆಲ್ಲ,ಆತನ ಮನಸ್ಸು ಅಸಹನೆಯಿಂದ ಚೀರಾಡುತ್ತಿತ್ತು. ಆ ಒಂದು ಸಾರೆಯಾದರೂ ವೇಗವಾಗಿ ಊರು ಸೇರುವುದು ಸಾಧ್ಯವಿದ್ದರೆ... ಹಣವಿರುತ್ತಿದ್ದರೆ ಟ್ಯಾಕ್ಸಿ ಮಾಡಿಕೊಂಡೇ ಬರುತ್ತಿದ್ದ ಆತ ನಿಸ್ಸಂದೇಹವಾಗಿಯೂ. {{gap}}ನಸುಕಿನಲ್ಲೆ ಯಾರನ್ನೋ ಪಟ್ಟಣಕ್ಕೆ ಕಳುಹಿಸಿ ಅಣ್ಣ ತಂತಿ ಕೊಡಿಸಿರಬೇಕು. [ಸ್ವತಃ ಆಳನ್ನು ಕಳುಹಿದ್ದರೂ ತಂತಿ ಕೈ ಸೇರುವ ಹೊತ್ತಿಗೆ ಬಂದು ತಲಪುತ್ತಿದ್ದ.] ಅಷ್ಟು ಬೆಳಗ್ಗೆಯೇ ದೇಹಸ್ಥಿತಿ ಹಾಗಿತ್ತೆಂದಮೇಲೆ ಈಗ.... {{gap}}ತಾನು ಮನೆ ಸೇರುವುದರೊಳಗೆ ಪ್ರಮಾದವೇನೂ ಆಗಿರಲಾರದೆಂದುಕೊಂಡ ಮುರಲೀಧರ. ಆದರೂ ಮನಸ್ಸು ಕೆಟ್ಟುದನ್ನೆ ಚಿಂತಿಸುತ್ತಿತ್ತು... {{gap}}ಅಂತೂ ಕೊನೆಗೊಮ್ಮೆ ಆ ನಿಲ್ದಾಣ ತಲಪಿತು. ಅಲ್ಲಿಂದ ಕಾಲು ಹಾದಿಯ ಮೂಲಕ ಸಾಗಬೇಕು ಮನೆಗೆ. {{gap}}ಜನ ಸಂಚಾರವಿಲ್ಲದ ದಾರಿ, ವೇಗವಾಗಿ ಮುರಲೀಧರ ನಡೆದ, ನಡು ನಡುವೆ ಓಡಿದ. ಪರಿಚಿತವಾದ ಹೊಲದ ಏರಿ, ಹಿತ್ತಿಲು, ಮನೆ.... {{gap}}ಕಥೆ ಮುಗಿದಿತ್ತು. ವಯಸ್ಸಾಗಿದ್ದ ತಂದೆಯ ಜೀವ ಮಗನಿಗಾಗಿ ಕಾದಿರಲಿಲ್ಲ.ನಾಲ್ಕಾರು ಕಂಠಗಳಿಂದ ಹೊರಡುತ್ತಿದ್ದ ರೋದನ ಅಲೆಯಲೆಯಾಗಿ ಬಂದು ಮುರಲೀಧರನನ್ನು ಇದಿರುಗೊಂಡಿತು. ಮುಂದುವರಿಯುತ್ತಿದ್ದ ಮುರಲೀಧರ ಥಟ್ಟನೆ ನಿಂತ. ಎದುರು ಕತ್ತಲು ಕವಿದಂತಾಗಲು ಹಿತ್ತಿಲ ಬಾಗಿಲನ್ನು ಆಧರಿಸಿದ. ಆ ಕತ್ತಲೆಯನ್ನು ಭೇದಿಸಿಕೊಂಡು ತಾಯಿಯ ಶೋಕಧ್ವನಿ ಆತನ ಕಿವಿಗಳನ್ನು ಇರಿಯಿತು.ಕರುಳು ಕತ್ತರಿಸಿದಂತಾಯಿತು ಆಕೆಯ ಕಂದನಿಗೆ, ಮುರಲೀಧರ ಕೂಗಿಕೊಂಡ {{gap}}"ಅಮ್ಮಾ!" {{gap}}ಆ ಕೂಗು ಇತರರಿಗೆ ಕೇಳಿಸಿತೋ ಇಲ್ಲವೋ, ಗಂಡಸರು ಅಂಗಳದಲ್ಲಿ ನೆರೆದಿದ್ದರು. ಅಳುತ್ತಿದ್ದವರನ್ನು ಸಮಾಧಾನ ಪಡಿಸುವ ಧ್ವನಿಗಳಿದ್ದುವು: “ಅಳಬೇಡಿ!ಅಳಬೇಡಿ!” ತನ್ನ ಮನೆಯವರಲ್ಲ, ಸಂಬಂಧಿಕರಲ್ಲ, ಸಮೀಪದ ಮನೆಗಳ ನಿವಾಸಿಗಳು ಅವರು. {{gap}}ಮುಂದೆಂದೂ ಏಳದ ಹಾಗೆ ಮಲಗಿದ್ದ ವ್ಯಕ್ತಿಯನ್ನು ಮನೆಯೊಳಗಿಂದ ನಾಲ್ವರು ಹೊತ್ತು ತಂದರು. {{gap}}ಮಲಗಿದ್ದ ವ್ಯಕ್ತಿ ಯಾರೆಂಬುದು ಮುರಲೀಧರನಿಗೆ ತಿಳಿಯದೆ? ಅಯ್ಯೋ!<noinclude></noinclude> 324832eu5og58xxjjzwo8oqjngxfowt ಪುಟ:ದೀಕ್ಷೆ.pdf/೧೦೬ 104 19216 322103 277199 2026-05-24T08:50:20Z Shreelatha.Halemane 7642 /* Validated */ 322103 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ|right=433}} {{gap}}ಗರಿಕೆಹುಲ್ಲಿನ ಮೇಲೆ ಆ ಯುವಕ ಕುಳಿತುಕೊಂಡು ಏನನ್ನೊ ಕೆಳಗಿರಿಸಿದ. ಮಾಸಿದ ಕರವಸ್ತ್ರ, ಕಡಲೆಕಾಯಿಗಳು ಅದರೊಳಗೆ.. ಆತ ಹೇಳಿದ: {{gap}}"ತಗೊಳ್ಳಿ" <br />. {{gap}}ಮುರಲಿಧರನಿಗೆ ಸಕೋಚವೆನಿಸಿತು,ಆದರೆ"ಹಸಿದಿದೀನಿ" ಎಂದಿತು ಹೊಟ್ಟೆ.ಟಪ್ ಟಪ್ ಎಂದು ಒಡೆದು,ಆ ಮನುಷ್ಯನ ಜತೆಗೆ ತಾನೂ ನಾಲ್ಕಾರು ಬೀಜಗಳನ್ನು ತಿನ್ನುವುದು ಯೋಗ್ಯವೆನಿಸಿತು.<br /> {{gap}}ಆ ಯುವಕನೆಂದ:<br /> {{gap}}"ನನ್ನ ಹೆಸರು ಕಾಶೀಪತಿ, ನಿಮ್ಮ ಹೆಸರು ಮುರಲೀಧರ, ಅಲ್ವೆ? ನನಗೆ ಗೊತ್ತು. ನಿಮ್ಮ 'ದೇವತೆಗಳ ಕಣೀರು' ಲೆಖನದ ವಿಷಯ ಬರೆದೋನು ನಾನೇ",ಅಮಾವಾಸ್ಯೆಯ ರಾತ್ರೆಯಲ್ಲಿ ಒಮ್ಮೆಲೆ ಮೂಡಿದ ಚಂದಿರ;<br /> {{gap}}"ಓ! ಪರಿಚಯವಾದದ್ದು ತುಂಬಾ ಸಂತೋಷ. ಸಂಪಾದಕರ ಕೆಲಸ ಬರವಣಿಗೆಯೆಲ್ಲ ನನ್ನದೇ"<br/> {{gap}}'ಭವಿಶ್ಯತ್ತುಳ್ಳ ಲೇಖನಿ....'ಹುಚ್ಛು ಹಿಡಿಸಿ ಅಲೆಸಿಬಿಟ್ಟಿತು ಒಂದು ತಿಂಗಳ ಕಾಲ!<br/> {{gap}}ಮುರಲೀಧರನ ಮುಖ ಬಾಡಿದ್ದರೂ ಕಣ್ಣುಗಳು ಅರಳಿದ್ದುವು,ಮುಗುಳುನಗೆ ಸೊಸುತ್ತ ನೆಟ್ಟದೃಷ್ಟಿಯಿಂದ ತನ್ನನ್ನೇ ನೋಡುತ್ತಿದ್ದ ಆತನನನ್ನು ದ್ವೇಷಿಸಿ,ಕಾಶೀಪತಿಯೆಂದ:<br /> {{gap}}"ಯಾವುದದರೂ ಪತ್ರಿಕೇಲಿ ನಿಮಗೆ ಕೆಲಸ ಸಿಗ್ತೇ?"<br/> {{gap}}"ಇಲ್ಲ."<br /> {{gap}}"ಇನ್ನೂ ಹುಡುಕ್ತ ಇದ್ದೀರಾ?"<br/> {{gap}}"ಹೌದು"<br/> {{gap}}"ಪತ್ರಿಕೋದ್ಯಮದ ಹಂಬಲ ಬಿಟ್ಟಿಲ್ಲಾ,ಅನ್ನಿ!"<br/> {{gap}}ಮುರಲಿಧರ ಸಣ್ಣನೆ ನಕ್ಕ. ಕಾಶಿಪತಿಯೆಂದ:<br/> {{gap}}"ಅಶ್ಚರ್ಯ!ಹುತಾತ್ಮರಗೋಕೆ ಇಷ್ಟವೀರೊರು ಮಾತ್ರ ಈ ಉದ್ಯೋಗಕ್ಕೆ ಬರ್ತಾರೆ ನಿಮ್ಮನ್ನ ನೊಡಿದರೆ......"<br/> {{gap}}..... ತನಗಾದ ಅನುಭವನ್ನೆಲ್ಲಾಅತನಿಗೆ ಹೇಳಬೇಕೆಂದು ಮುರಲೀಧರನಿಗೆ ಅನಿಸಿತು.<br/> {{gap}}....ಮಾತು ಮುಗಿಯುವುದಕ್ಕೆ ಮುಂಚೆಯ ಕಡಲೆಕಾಯಿಗಳು ಮುಗಿದಿದ್ದುವು.ಆನತರವೂ ಸ್ವಲ್ಪ ಹೊತ್ತು ಮೌನವಾಗಿ ಕುಳಿತು ಬಳಿಕ ಕಾಶೀಪತಿಯೆಂದ:<br/><noinclude></noinclude> 0662vsvuy58vcqdj3bgpeklns5vhgjn ಪುಟ:ದೀಕ್ಷೆ.pdf/೧೦೭ 104 19217 322104 277294 2026-05-24T09:00:28Z Shreesha Sharma 7840 /* Validated */ 322104 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=434|right=ಕನಸು}} {{gap}}“ನಿಮ್ಮನ್ನು ಮುರಿಯೋದು ಬಹಳ ಕಷ್ಟ. ನನ್ನ ಊಹೆ ಸುಳ್ಳಾಗೋದಿಲ್ಲಾಂತ ನಂಬಿಕೆ. ಒಂದು ಮಾಡ್ತೀರಾ?” {{gap}}ಎಲ್ಲಾ ಆಯಾಸವನ್ನೂ ಮರೆತುಬಿಟ್ಟಿದ್ದ ಮುರಲೀಧರ ಉತ್ಸಾಹಿತನಾಗಿ ಕೇಳಿದ: {{gap}}“ಏನು? ಹೇಳಿ." {{gap}}“ಚಿಕ್ಕ ಪೇಟೇಲಿ 'ಪಾಂಚಜನ್ಯ' ಅಂತ ಒಂದು ಪುಟ್ಟ ಬೋರ್ಡಿದೆ. ಅಲ್ಲೇ ಮಾಲಿಕನೇ ಸಂಪಾದಕ. ಆತನ ಮನೆಯ ಓಣೀಲಿ ಅದರ ಕಾರ್ಯಾಲಯವಿದೆ ಅಲ್ಲೇ. ಹೋದ ವಾರ ಆತನ ಉಪ ಸಂಪಾದಕ ಹೇಳದೆ ಕೇಳದೆ ಓಡಿಹೋದ. ಹೋಗಿ ನೋಡಿ. ನಿಮಗೆ ಒಪ್ಪಿಗೆಯಾಗೋ ಹಾಗಿದ್ದರೆ. {{gap}}“ಖಂಡಿತ ಹೋಗ್ತಿನಿ.” {{gap}}ಸಂಬಳ ಬಹಳ ಕಡಮೆ.” {{gap}}“ಎಷ್ಟು ಬಂದರೂ ಸರಿಯೆ.” {{gap}}ಹಾಗಿದ್ದರೆ” {{gap}}“ಭೇಷ್! ಪ್ರತಿ ಶನಿವಾರ ಈ ತೋಟದಲ್ಲಿ ಕೂತಿದ್ದು ಹೋಗೋದು ನನ್ನ ಅಭ್ಯಾಸ. ಮೇಲಿನ ಶನಿವಾರ ಸಾಧ್ಯವಾದರೆ ನೀವು” {{gap}}“ಬರ್ತೀನಿ.” {{gap}}“ಬರುವಾಗ ಕಡಲೇಕಾಯಿ ತನ್ನಿ !” {{gap}}“ತರ್ತೀನಿ!” {{gap}}ಟ್ರೆಡ್‌ ಲ್ ಮುದ್ರಣಯಂತ್ರ. ಅಕ್ಷರದ ಮೊಳೆಗಳಿದ್ದ ಮರದ ಅಂಕಣಗಳು. {{gap}}“ಈ ಕಂಪಾಸಿಟರ್ ಮುಂಡೇಗಂಡ್ರನ್ನು ನಂಬೋದೇ ಕಷ್ಟ,” ಎಂದು ತಮ್ಮ ಸಂಕಟವನ್ನು ತೋಡಿಕೊಂಡರು ಗಾತ್ರ ಜೀವಿಯಾದ ಮಾಲಿಕ ಸಂಪಾದಕರು. {{gap}}ಕೆಲಸಗಾರರಿರಲಿಲ್ಲ. ಕತ್ತಲಾಗಿತ್ತು. ಮುರಲೀಧರ ಹೋದಾಗ ಅಲ್ಲಿದ್ದವರು ಅವರೊಬ್ಬರೇ. {{gap}}'ಪಾಂಚಜನ್ಯ' ವಾರ ಪತ್ರಿಕೆಯ ಉಪ ಸಂಪಾದಕನ ಸ್ಥಾನಕ್ಕೆ ಉಮೇದುವಾರ ನಾಗಿ ಬಂದ ಆತನನ್ನು ಸೂಕ್ಷ್ಮ ನೋಟದಿಂದ ಪರೀಕ್ಷಿಸುತ್ತ-ಅವರೆಂದರು: {{gap}}“ಯಾರಪ್ಪ ನಿಮ್ಮನ್ನಿಲ್ಲಿಗೆ ಕಳಿಸ್ದೋರು?” {{gap}}“ಕಾಶೀಪತಿಯವರು- ಪ್ರಜಾಹಿತ'ದ ಸಹಸಂಪಾದಕರು” {{gap}}....ನೋಡಪ್ಪ, ಇಲ್ಲಿ ಕೆಲಸ ಜಾಸ್ತಿ. ಸಂಬಳ ಕಡಿಮೆ.” {{gap}}“ಪರವಾಗಿಲ್ಲ ಸಾರ್, ಸಂಬಳಕ್ಕಿಂತಲೂ ಪತ್ರಿಕೋದ್ಯೋಗಿಯಾಗಿ ದುಡಿ ಬೇಕು ಅನ್ನೋದು ಮುಖ್ಯ.” {{gap}}“ಹಾಗಾದರೆ ಸರಿ. ತಿಂಗಳಿಗೆ ಹತ್ತು ರೂಪಾಯಿ ಕೊಡ್ತೀನಿ. ಕಡಮೆ ಅಂತ ಕಂಡ್ರೆ, ಸಂಬಳ ಅಲ್ಲ ಸಂಭಾವನೆ ಅಂತ ತಿಳ್ಕೊಬೌದು.”<noinclude></noinclude> mrw1jd6fo9lnniwngu58kv2vpiwje6v ಪುಟ:ದೀಕ್ಷೆ.pdf/೧೦೮ 104 19218 322110 277297 2026-05-24T09:41:21Z Shreesha Sharma 7840 /* Validated */ 322110 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=ದೀಕ್ಷೆ |right= 436}} {{gap}}ಮುರಲೀಧರ ಅದಕ್ಕೂ ಒಪ್ಪಿದ. ಮುಳುಗುತ್ತಿದ್ದ ಆತನಿಗೆ ಹುಲ್ಲು ಕಡ್ಡಿಯೂ ಸಾಕಾಗಿತ್ತು. {{gap}}ಅವರೆಂದರು: {{gap}}“ನಾಳೆ ಇಪ್ಪತ್ತನಾಲ್ಕನೆ ತಾರೀಖು. ಇಪ್ಪತ್ತೈದರಿಂದ ಬಂದ್ಬಿಡಿ. ಲೆಕ್ಕ ಮುಂದಿನ ತಿಂಗಳು ಮೊದಲೇ ತಾರೀಖಿನಿಂದ ಇಸ್ಕೊಳ್ಳೋಣ.” {{gap}}“ಆಗಲಿ ಸಾರ್.” *********** {{gap}}ಏನಾದರೂ ಸಿಹಿ ಕೊಂಡು ಮನೆಗೆ ಹೋಗಬೇಕೆಂದು ಮುರಲೀಧರ ಭಾವಿಸಿದ. ಜೇಬಿನಲ್ಲಿದ್ದುದು ಒಂದೇ ಆಣೆ. ಆ ದುಡ್ಡಿಗೆ ಪೆಪ್ಪರ್‌ಮಿಂಟ್ ಪಡೆದು ಆತ ಮಲ್ಲೇ ಶ್ವರಕ್ಕೆ ನಡೆದ. ಯಾವ ಬಳಲಿಕೆಯೂ ಆತನಿಗೆ ತೋರಲಿಲ್ಲ. {{gap}}ನಾರಣಪ್ಪನ ತಾಯಿ ವಿಷಯ ತಿಳಿದು ಸಂತೋಷಗೊಂಡರು. ದೇವರ ಮುಂದೆ ತುಪ್ಪದ ದೀಪ ಹಚ್ಚಿಟ್ಟರು. {{gap}}“ಸಂಬಳ ಎಷ್ಟು?” ಎನ್ನುವ ಪ್ರಶ್ನೆ, ಮುರಲೀಧರನನ್ನು ಗಲಿಬಿಲಿಯಲ್ಲಿ ಕೆಡವಿತು. {{gap}}ಆದರೂ ಅಧೀರನಾಗದೆ ಆತ ಉತ್ತರವಿತ್ತ: {{gap}}“ಎಷ್ಟು ಬೇಕೂಂತ ಅವರೇ ಕೇಳಿದ್ರು. ನಾನಿನ್ನೂ ಉತ್ತರ ಕೊಟ್ಟಿಲ್ಲ.” {{gap}}...ನಿಜ ಸಂಗತಿಯನ್ನು ತಿಳಿದಾಗ ನಾರಣಪ್ಪ ಮಾತ್ರ, ತಾಯಿಗಾಗಲೀ ಅಕ್ಕನಿ ಗಾಗಲೀ ಕೇಳಿಸದಂತೆ ಆಕ್ರೋಶಮಾಡಿದ: {{gap}}“ಅವನೇನು ಮನುಷ್ಯನೋ, ಕಸಾಯಿಯೋ?” {{center|೧೭}} {{gap}}ಮುರಲೀಧರ ಬೆಳಗ್ಗೆ ಬೇಗನೆದ್ದ. {{gap}}“ಊಟ ಮುಗಿಸಿಕೊಂಡು ಹತ್ತು ಗಂಟೆಗೇ ಬಂದುಬಿಡು' ಎಂದಿದ್ದರು ಆತನ ಮಾಲಿಕ-ಸಂಪಾದಕರು. ಒಂಭತ್ತು ಗಂಟೆಗೆ ಮನೆ ಬಿಟ್ಟರೆ ಮಾತ್ರ ಅದು ಸಾಧ್ಯ. ಅಷ್ಟರೊಳಗೆ ಅಡುಗೆ? ಆತನಾಗಿಯೇ ಅದರ ಪ್ರಸ್ತಾಪ ಮಾಡುವುದು ಸಾಧ್ಯ ವಿರಲಿಲ್ಲ. {{gap}}ಆದರೆ ನಾರಣಪ್ಪನ ತಾಯಿ ತಾವಾಗಿಯೇ ಕೇಳಿದರು: {{gap}}“ಅನ್ನ, ತಿಳಿಸಾರು ಮಾಡ್ತೀನಿ. ಸಾಕೇನಪ್ಪಾ?” {{gap}}ಮುರಲೀಧರನೆಂದ:<noinclude></noinclude> nkiizdfzomp7y3dtentxdxoojpwtxbc ಪರಿವಿಡಿ:ಹಗಲಿರುಳು.djvu 106 20315 322082 283916 2026-05-24T05:55:39Z Vikashegde 1258 322082 proofread-index text/x-wiki {{:MediaWiki:Proofreadpage_index_template |Type=book |Title=[[ಹಗಲಿರುಳು]] |Language=kn |Volume= |Author=ಮುಳಿಯ ತಿಮ್ಮಪ್ಪಯ್ಯ |Translator= |Editor= |Illustrator= |School= |Publisher= |Address=ಮಂಗಳೂರು |Year=೧೯೧೮ |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=T |Transclusion=no |Validation_date= |Pages=<pagelist 1to5=- 6="ಮುಖಪುಟ" 7=- 8="ಕೃತಜ್ಞತೆ" 9=- 10=1 89to93=- /> |Volumes= |Remarks= |Width= |Header= |Footer= |tmplver= }} e5hir8lu9ush2qe255e86z6wa7futpt 322083 322082 2026-05-24T05:57:35Z Vikashegde 1258 322083 proofread-index text/x-wiki {{:MediaWiki:Proofreadpage_index_template |Type=book |Title=[[ಹಗಲಿರುಳು]] |Language=kn |Volume= |Author=ಮುಳಿಯ ತಿಮ್ಮಪ್ಪಯ್ಯ |Translator= |Editor= |Illustrator= |School= |Publisher= |Address=ಮಂಗಳೂರು |Year=೧೯೧೮ |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=T |Transclusion=no |Validation_date= |Pages=<pagelist 1to5=- 6="ಮುಖಪುಟ" 7=- 8="ಕೃತಜ್ಞತೆ" 9=- 10=1 89to93=-/> |Volumes= |Remarks= |Width= |Header= |Footer= |tmplver= }} dx3x6iz9azwjmdo1uhm3s4ccd3fyrji ಪುಟ:ಸ್ವಾಮಿ ಅಪರಂಪಾರ.pdf/೯೭ 104 21247 321990 206410 2026-05-23T13:38:48Z Shreelatha.Halemane 7642 /* Validated */ 321990 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=|right=೯೫}} ಒಮ್ಮತವೇ. ಆದರೆ ಅದರು ಹಿಡಿದದ್ದು ಯಾವ ದಾರಿ? ಅಪ್ಪಂಗಳಕ್ಕೆ ಹತ್ತಿರದ ಸಂಪಾಜೆ ಗಡಿಗೋ? ಪೆರಿಯಾಪಟ್ಟಣಕ್ಕೊ ? {{gap}}ಸಶಸ್ತ್ರ ಕುದುರೆ ಸವಾರರು ಎರಡು ದಿಕ್ಕುಗಳಿಗೂ ಧಾವಿಸಿದರು. {{gap}}ಸಂಪಾಜೆಯ ಗಡಿಯತ್ತ ಅವರು ಬಂದಿರಲಿಲ್ಲ. {{gap}}ಪೆರಿಯಾಪಟ್ಟಣದ ಕಡೆಯ ಉಕ್ಕಡದಲ್ಲಿ ಪಹರೆಯವರಿಬ್ಬರು ಅಸಾಮಾನ್ಯ ಗುರಿಕಾರನಾದ ಚನ್ನಬಸಪ್ಪನ ಗುಂಡಿಗೆ ಮಟ ಮಟ ಮಧ್ಯಾಹ್ನ ಬಲಿಯಾಗಿದ್ದರು. ಸಂಜೆ ಬಂದು ಸೇರಿದ ರಾಜಭಟರು ಆ ಶವಗಳನ್ನು ಕಂಡರು. {{gap}}ಇದನ್ನು ತಿಳಿದ ಚಿಕವೀರರಾಜ ಕಿಡಿಕಿಡಿಯಾದ. ಈ ಪಲಾಯನದ ಹಿಂದೆ ಬೋಪಣ್ಣನ ಕೈವಾಡವಿರಬಹುದೇ ಎಂಬ ಸಂದೇಹ ಅವನಿಗೆ. ಆದರೆ, ಸಾಕಷ್ಟು ಆಧಾರಗಳಿಲ್ಲದೆ, ಬಹಿರಂಗವಾಗಿ ಅವನೇನನ್ನೂ ಆಡಲಾರ. {{gap}}"ಇರಲಿ. ಇದನ್ನು ಸರಿಪಡಿಸುತ್ತೇನೆ" ಎಂದುಕೊಂಡ ಮನಸ್ಸಿನಲ್ಲೆ. {{gap}}ದಿವಾನ ಲಕ್ಷ್ಮೀನಾರಾಯಣನನ್ನು ಬರಹೇಳಿ, ನಡೆದುದನ್ನು ತಿಳಿಸಿ, "ಮೈಸೂರಿನರೆಸಿಡೆಂಟನಿಗೆ ಒಂದು ಪತ್ರ ಬರೆಯಬೇಕಲ್ಲ" ಎಂದ. {{gap}}ಲಕ್ಷ್ಮೀನಾರಾಯಣ ವಿನಂತಿ ಮಾಡಿದ: {{gap}}"ಬೋಪಣ್ಣನವರನ್ನೂ ಒಂದು ಮಾತು ಕೇಳೋಣ__ಆಗದೆ?” {{gap}}"ಇದು ಚಿಲ್ಲರೆ ವಿಷಯ. ಇಷ್ಟಕ್ಕೆ ಇಬ್ಬರು ಬೇಕೆ? ಇದೇನೂ ಸಲಹೆ ತಕ್ಕೊಳ್ಳುವಂಥಾಗಹನ ರಾಜಕಾರ್ಯ ಅಲ್ಲವಲ್ಲ?” {{gap}}"ತಮ್ಮ ಚಿತ್ತ." {{gap}}ಪತ್ರ ಸಿದ್ಧವಾಯಿತು. ಒಕ್ಕಣೆಯಲ್ಲಿ ವಿನಯವಿತ್ತು. {{gap}}"ನಮ್ಮ ತಂಗಿ ದೇವಮಮ್ಮಾಜಿ ಹಾಗೂ ಆಕೆಯ ಗಂಡ ಚನ್ನಬಸಪ್ಪ ನಮ್ಮ ವಿರುದ್ಧವಾಗಿ ವರ್ತಿಸಿ ತಮ್ಮ ಸೀಮೆಗೆ ಬಂದಿದ್ದಾರೆ. ಅತಃ ಪ್ರಾಕು ನಡೆದುಕೊಂಡು ಬಂದಿರುವನಮ್ಮ ನಿಮ್ಮ ಸಖ್ಯವನ್ನು ಲಕ್ಷ್ಯದಲ್ಲಿಟ್ಟ ಅವರಿಬ್ಬರನ್ನೂ ಯಾವ ಕಾರಣದಿಂದಲೂ ತಡಮಾಡದೆ ನಮ್ಮ ರಾಜಧಾನಿಗೆ ಸಶಸ್ತ್ರ ಕಾವಲಿನಲ್ಲಿ ರವಾನೆ ಮಾಡಬೇಕಾಗಿ ಕೋರುತ್ತೇವೆ.ಮಹಾದೇವನ ಅನುಗ್ರಹದಿಂದ ನಾವೆಲ್ಲರೂ ಕ್ಷೇಮ. ನಮ್ಮ ದೋಸ್ತರಾದ ಖಾವಂದರ ಕ್ಷೇಮಸಮಾಚಾರಕ್ಕೆ ಆಗಾಗ್ಗೆ ಬರೆಸುತ್ತಾ ಇರಬೇಕಾಗಿ ನಮ್ಮ ವಿನಂತಿ." {{gap}}ಸಹಿ ಮೊಹರಿನ ಕೆಳಗೆ ವಿಶದವಾಗಿ ಬರೆಯಲಾಗಿತು : {{gap}}ಕೊಡಗು ಸಿಂಹಾಸನಾಧೀಶ್ವರ ಹಾಲೇರಿ ಸಂಸ್ಥಾನದ ಚಿಕವೀರರಾಜೇಂದ್ರ ಒಡೆಯರ್.' {{gap}}ಅರಸ ಕುದುರೆ ಸವಾರರಾದ ಇಬ್ಬರು ಓಲೆಕಾರರೊಡನೆ ಪತ್ರವನ್ನು ಶ್ರೀರಂಗಪಟ್ಟಣಕ್ಕೆ ಕಳುಹಿಸಿಕೊಟ್ಟ . {{center|೩೦}} {{gap}}ಶ್ರೀರಂಗಪಟ್ಟಣವನ್ನು ತಲಪಿದ ಚನ್ನಬಸಪ್ಪ, ಕಾಸ್ಸಾಮೇಜರನೆದುರು."ಶರಣಾರ್ಥಿಗಳಾಗಿ ಬಂದಿದೇವೆ. ಕೈಹಿಡಿದು ಉದ್ಧಾರ ಮಾಡಬೇಕು" ಎಂದು ಹಿಂದೂಸ್ಥಾನಿಯಲ್ಲಿ ಪ್ರಾರ್ಥಿಸಿದ. {{gap}}ರೋಗಿ ಬಯಸಿದ್ದೇ ಇಂಥ ಹಾಲನ್ನವನ್ನು. ಅಲ್ಲದೆ, ದೇವಮ್ಮಾಜಿಯೂ ಆಕೆಯ<noinclude></noinclude> rieu6fwtxgtt5qutpnjx9leuil19s6d ಪುಟ:ಸ್ವಾಮಿ ಅಪರಂಪಾರ.pdf/೯೮ 104 21248 321992 206411 2026-05-23T13:45:41Z Shreelatha.Halemane 7642 /* Validated */ 321992 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center= ಸ್ವಾಮಿ ಅಪರಂಪಾರ|left=೯೬|right=}} ಗಂಡನೂ ಕೊಡಗನ್ನು ಬಿಟ್ಟು ಬಂದರಾದೀತೆಂದು ಗುಟ್ಟಾಗಿ ಮೊದಲು ಸೂಚಿಸಿದ್ದವರೇ ಆಂಗ್ಲರು. ರೆಸಿಡೆಂಟನಿಗೆ ಪರಮಾನಂದವಾಯಿತು. ಅತಿಥಿಗಳ ಬಿಡಾರಕ್ಕಾಗಿ ಎಲ್ಲ ಅನುಕೂಲತೆಗಳೂ ಇದ್ದ ಮನೆಯೊಂದನ್ನು ಆತ ಒದಗಿಸಿಕೊಟ್ಟ. {{gap}}ಜತೆಗೆ ಭರವಸೆಯನ್ನೂ ಇತ್ತ : {{gap}}"ನೀವೇನೂ ಚಿಂತಿಸಬೇಡಿ. ಚಿಕವೀರರಾಜನು ದುಷ್ಟನೂ ಅನರ್ಹನೂ ಅಂಬೋದಕ್ಕೆ ಒಳ್ಳೆಯವರಾದ ನೀವು ಓಡಿಬಂದಿರುವುದೇ ಸಾಕ್ಷಿ ಬೇಗನೆ ಅವನನ್ನು ಗಾದಿಯಿಂದ ಇಳಿಸುತ್ತೇವೆ." {{gap}}ಚನ್ನಬಸಪ್ಪ ಯಾಚಿಸಿದ : {{gap}}"ಕೊಡಗಿನ ಸಿಂಹಾಸನಕ್ಕೆ ನಮ್ಮ ಹೆಂಡತಿ ಹಕ್ಕುದಾರಳು ಅಂಬುವದನ್ನು ಖಾವಂದರು ಒಪ್ಪಬೇಕು." {{gap}}"ಹ್ಞು -ಹ್ಞು. ಸಕಾಲದಲ್ಲಿ ಯೋಗ್ಯವಾದ್ದನ್ನೇ ಮಾಡುತ್ತೇವೆ. ಮದರಾಸ್ ಗವರ್ನರಿಗೆ ಬರೆಯುತ್ತೇವೆ." {{gap}}ಚಿಕವೀರರಾಜನ ಪತ್ರ ಕಾಸ್ಸಾಮೇಜರನ ಕೈಸೇರಿತು. ಅದನ್ನು ಆತ ಮದರಾಸಿಗೆ ಕಳುಹಿದ. ಆಗ ಸರ್ ಫ್ರೆಡರಿಕ್ ಆದಮ್ ಮದರಾಸಿನ ಗವರ್ನರ್. ಆತ ಚಿಕವೀರ ರಾಜನಿಗೆ ಉತ್ತರ ಬರೆದ. ಭಾವೀ ಘಟನೆಗಳಿಗೆ ಮುನ್ಸೂಚಿಯಾಗಿತು ಆ ದೀರ್ಘ ಓಲೆ. {{gap}}ದಕ್ಷ ರಾಜ್ಯಾಡಳಿತದ ಸೂತ್ರಗಳನ್ನು ವಿವರಿಸಿ, ಅವುಗಳಿಗೆ ಅನುಗುಣವಾಗಿ ಚಿಕವೀರರಾಜ ವರ್ತಿಸಬೇಕೆಂದು ಅದರಲ್ಲಿ ಕೇಳಲಾಗಿತು, ಈಸ್ಟ್ ಇಂಡಿಯಾ ಕಂಪೆನಿ ಸರಕಾರ ಹಿಂದೆಯೇ ಆಜ್ಞಾಪಿಸಿದ್ದಂತೆ ಕೊಡಗಿನಲ್ಲಾಗುವ ಪ್ರತಿಯೊಂದು ಮರಣದಂಡನೆಯ ಬಗೆಗೂ ಅರಸ ಕಂಪನಿ ಸರಕಾರಕ್ಕೆ ವರದಿ ಕೊಡಬೇಕು: ಕಂಪನಿ ಸರಕಾರದ ಅಪೇಕ್ಷೆಗೆವಿರುದ್ಧವಾಗಿ ರಾಜ ವರ್ತಿಸಬಾರದು__ಎಂದು ಆ ಓಲೆಯಲ್ಲಿ ತಿಳಿಸಲಾಗಿತು. ಗವರ್ನರನ ಆದೇಶದಂತೆ ಕಾಸ್ಸಾಮೇಜರ್ ರಾಜನೊಡನೆ ಮುಖತಃ ಮಾತನಾಡುವುದಕ್ಕಾಗಿ ಮಡಕೇರಿಗೆ ಬರುವುದಾಗಿ ಅದರಲ್ಲಿ ಸೂಚಿಸಲಾಗಿತ್ತು. {{gap}}ಆ ಓಲೆಯ ದಿನಾಂಕ : ಸಾವಿರದ ಎ೦ಟುನೂರ ಮೂವತ್ತಮೂರನೆಯ ಇಸವಿ ಜನವರಿ ಹದಿನೆಂಟನೆಯ ತಾರೀಖು. {{gap}}ಆ ತಿಂಗಳ ಕೊನೆಯ ವಾರದಲ್ಲಿ ಕಾಸ್ಸಾಯೇಜರ್ ಮಡಕೇರಿಗೆ ಆಗಮಿಸಿದ. ಆಂಗ್ಲ ಮಿತ್ರರ ಆತಿಥ್ಯಕ್ಕೆಂದೇ ದೊಡ್ಡವೀರರಾಜೇಂದ್ರ ಕಟ್ಟಿಸಿದ್ದ ಭವ್ಯ ಅತಿಥಿಗೃಹದಲ್ಲಿ ಆತನ ಬಿಡಾರಕ್ಕೆ ಚಿಕವೀರರಾಜೇಂದ್ರ ಏರ್ಪಾಟು ಮಾಡಿದ. {{gap}}ಆ ವೇಳೆಯಲ್ಲಿ ಹಲವು ಚಟುವಟಿಕೆಗದ ಬೀಡಾಗಿತು ಮಡಕೇರಿ. {{gap}}ಮುಮ್ಮಡಿ ಕೃಷ್ಣರಾಜನ ಆಂತರಂಗದ ಬಂಟನೊಬ್ಬ__ವೆಂಕೋಜಿ-ರಹಸ್ಯ ರಾಜಕಾರ್ಯದ ಮೇಲೆ ಚಿಕವೀರರಾಜನನ್ನು ಕಾಣಲು ಬಂದಿದ್ದ. ಮೈಸೂರು ರಾಜ್ಯವನ್ನು ಮರಳಿ ಪಡೆಯುವ ಯತ್ನದಲ್ಲಿ ಕೊಡಗಿನ ದೊರೆಯ ನೆರವನ್ನು ಒಡೆಯ ಯಾಚಿಸಿದ್ದ. {{gap}}ಚಿಕವೀರರಾಜ ಕೇಳಿದ : {{gap}}“ಇಂಗ್ರೇಜಿಯವರ ಹತ್ತಿರ ನಮ್ಮ ಮಾತು ನಡೀತದೇನು ? ಅವರಿಗರ್ಥವಾಗೋದು.ಮದ್ದುಗುಂಡಿನ ಭಾಷೆ ಮಾತ್ರ. ನಾಳೆ ನಮಗೂ ಅವರಿಗೂ ಯುದ್ಧವಾದರೆ ಕೃಷ್ಣರಾಜರ ಬೆಂಬಲ ನಮಗೆ ಸಿಕ್ಕಾತೇನು?"<noinclude></noinclude> 87zmrzu5zxhw5gdd0on4bv36g08dsqy ಪುಟ:ಸ್ವಾಮಿ ಅಪರಂಪಾರ.pdf/೯೯ 104 21249 321997 206412 2026-05-23T14:22:00Z Shreelatha.Halemane 7642 /* Validated */ 321997 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=|right= ೯೭}} {{gap}}ವೆಂಕೋಜಿಯೆಂದ: {{gap}}"ಓ. ಗುಪ್ತವಾಗಿ ಶಸ್ತ್ರಾಸ್ತ್ರಗಳನ್ನೂ ಸೈನಿಕರನ್ನೂ ಒಡೆಯರು ಕೊಡುತಾರೆ." {{gap}}"ಹಾಗಾದರೆ ಸಂತೋಷ." {{gap}}ಅದೇ ಸಮಯದಲ್ಲಿ ಮೈಸೂರಿನ ವರ್ತಕನೊಬ್ಬ ರಾಜನ ದರ್ಶನಕ್ಕೆ ಬಂದ. ಆತನ ಹೆಸರು ನೂನ್ ಲಾಲ್ ಬಾರ್ತಿ. {{gap}}ಚಿಕವೀರರಾಜನೆಂದ: {{gap}}"ಚನ್ನಬಸಪ್ಪನನ್ನೂ ಅವನ ಹೆಂಡತಿಯನ್ನೂ ಹೆಡೆ ಮುಡಿ ಕಟ್ಟಿ ಇಲ್ಲಿಗೆ ತರಬೇಕು ಅಂಬೋದು ನಮ್ಮ ಇಚ್ಛೆ. ನಮ್ಮ ಭಟರು ಬರುತ್ತಾರೆ. ನೀವು ಸಹಾಯ ಮಾಡತೀರಾ ?" {{gap}}ಆತ ಉತ್ತರಿಸಿದ : {{gap}}"ನನ್ನ ಕೈಲಾದದು ಮಾಡೇನು, ಮಹಾಸಾಮಿ." {{gap}}"ಉತ್ತರ ಹಿಂದೂಸ್ಥಾನವನ್ನು ನೀವು ಬಲ್ಲಿರಾ?" {{gap}}"ನಾನು ಆ ಕಡೆಯವನೇ." {{gap}}"ಸಿಕ್ಖರ ಅರಸರಾದ ರಣಜಿತ್ ಸಿಂಗರು ಇಂಗ್ರೇಜಿಯವರ ಕಡುವೈರಿ ಅಂತ ಕೇಳಿದೇವೆ.” {{gap}}"అದು నిజ." {{gap}}"ಅವರ ಸಖ್ಯ ಬೆಳೆಸಬೇಕು ಅಂತ ನಮಗೆ ಅಪೇಕ್ಷೆಯಾಗಿದೆ. ನಮ್ಮ ರಾಯಭಾರಿಯಾಗಿ ಅಲ್ಲಿಗೆ ಹೋಗತೀರಾ ?" {{gap}}ಬಾರ್ತಿಯೆ೦ದ : {{gap}}"ಹೋಗಬಲ್ಲೆ. ಆದರೆ ನನಗಿಂತ ಹೆಚ್ಚು ಸುಲಭವಾಗಿ ಈ ಕೆಲಸ ಮಾಡುವಾತ ಒಬ್ಬ ಇದಾನೆ. ಲಾಹೋರ್ ಸಿಂಗ್ ಅಂತ. ಸಿಕ್ಕ." {{gap}}"ಈಗ ಅವನೆಲ್ಲಿ ಸಿಗಬೇಕು?" {{gap}}"ಅವನೂ ವ್ಯಾಪಾರಿಯೇ, ವೀರರಾಜಪೇಟೆಯಲ್ಲಿ ಇದಾನೆ. ಕರೆಸಬಹುದು." {{gap}}...ಮಾರನೆಯ ದಿನವೇ ಲಾಹೋರ್ ಸಿಂಗ್ ರಾಜಾಜ್ಞೆಯಂತೆ ಮಡಕೇರಿಯನ್ನು ತಲಪಿದ. ಲಾಹೋರಿನವನಾದ ಕಾರಣ ಆ ಊರಿನ ಹೆಸರಿಂದಲೇ ಪ್ರಖ್ಯಾತನಾದವನು ಆತ. ಅರಸನ ಅಪೇಕ್ಷೆಯನ್ನು ತಿಳಿದಾಗ ಅವನೆಂದ: {{gap}}"ಲಾಹೋರ್ ದೂರ. ಆದರೂ ಹೋಗಿಬರತೇನೆ. ಕೆಲಸ ಬಾಳ ಜವಾಬ್ದಾರೀದು." {{gap}}"ನಮಗೆ ಬಾರ್ತಿಯವರು ಮಾಡುವ ಸಹಾಯಕ್ಕೆ ಪ್ರತಿಯಾಗಿ, ಕೊಡಗಿಗೆ ಬೇಕಾಗುವ ಸಾಮಾನನ್ನೆಲ್ಲ ಮುಂದೆ ಅವರಿಂದ ಕೊಳ್ಳಬೇಕೆಂದು ಮಾಡಿದೇವೆ. ಹಾಗೆಯೇ, ನಿಮಗೆ ಪ್ರತಿಫಲವಾಗಿ, ಇಲ್ಲಿನ ಕರಿಮೆಣಸನ್ನು ಹೊರಕ್ಕೆ ಒಯ್ದು ಮಾರುವ ಗುತ್ತಿಗೆಯನ್ನು ಕೊಡತೇವೆ" ಎಂದ ಚಿಕವೀರರಾಜೇಂದ್ರ. {{gap}}ಆ ಆಶ್ವಾಸನೆಯಿಂದ ಬಾರ್ತಿಯೂ ಲಾಹೋರ್ ಸಿಂಗನೂ ತೃಪ್ತರಾದಂತೆ ಕಂಡಿತು... {{gap}}ಬಿದನೂರಿನ ಪಾಳೆಯಗಾರರಲ್ಲೊಬ್ಬ-ಸೂರಪ್ಪ-ಆಂಗ್ಲರಿಗೆ ವಿರೋಧಿಯಾಗಿದ್ದ. ಆಂಗ್ಲ ಆಡಳಿತಗಾರರಿಗೆ ಅವನು ಒಂದೇ ಸಮನೆ ಕಿರುಕುಳ ಕೊಡುತ್ತಿದ್ದ. ಸಾಕಷ್ಟು ನೆರವು ದೊರೆತರೆ ಆತ ಬಂಡಾಯವೇಳುವುದೂ ಸಾಧ್ಯವಿತು. {{gap}}ಅವನೊಡನೆ ಸಖ್ಯ ಬೆಳಸುವ ಹೊಣೆಯನ್ನು ಆಪ್ತನಾದ ಬಸವನಿಗೆ ರಾಜ ಒಪ್ಪಿಸಿದ. ಇತ್ತ ಅತಿಥಿಗೃಹದಲ್ಲಿ ಕಾಸ್ಸಾಮೇಜರ್, ಬೋಪಣ್ಣನೊಡನೆ ಆಪಾಲೋಚನೆ ನಡೆಸಿದ. {{Left|7}}<noinclude></noinclude> lspk86mxroktbxrf731h89oxsx9tfax ಪುಟ:ಸ್ವಾಮಿ ಅಪರಂಪಾರ.pdf/೧೦೦ 104 21250 321998 206413 2026-05-23T14:26:34Z Pragathi. BH 7585 /* Validated */ 321998 proofread-page text/x-wiki <noinclude><pagequality level="4" user="Pragathi. BH" /></noinclude> ೯೮ ಸ್ವಾಮಿ ಅಪರಂಪಾರ ಕೊಡಗಿನ ಸೇನಾಬಲವನ್ನು ಕುರಿತು ಮಾಹಿತಿ ಸಂಗ್ರಹಿಸಿದ. ಅರಸನೊಡನೆ ಕಾಸ್ಸಾಮೇಜರನ ಭೇಟಿ ಈ ಹಿನ್ನೆಲೆಯಲ್ಲಿ ನಡೆಯಿತು. ಹಿಂದೂಸ್ಥಾನಿ ಯಲ್ಲಿ ಆದ ಆ ಮಾತುಕತೆಯಲ್ಲಿ ರಾಜನೈತಿಕ ಕಟ್ಟುಗಳು ಸಡಿಲಿದುವು. ಅದುಮಿ ಹಿಡಿದ ಭಾವನೆಗಳು ಹೊರಕ್ಕೆ ಸಿಡಿದುವು. ಅರಸ : "ಇಷ್ಟು ದೂರ ಬರೋದಕ್ಕೆ ಬಹಳ ತೊಂದರೆ ತಗೊಂಡಿರಿ!" ಕಾಸ್ಸಾಮೇಜರ್: "ಸುಖದುಃಖ ವಿಚಾರಿಸಿಕೊಂಡು ಹೋಗೋಣ ಅಂತ ಬಂದೆವು." "ಸಾಧಾರಣ ಸಂವತ್ಸರದಲ್ಲಿ ಸ್ವತಂತ್ರ ರಾಜ್ಯವಾದ ಕೊಡಗಿನ ದೊರೆಗೊ ಕುಂಪನಿ ಯವರಿಗೂ ಒಡಂಬಡಿಕೆಯಾಗಿ ಭಾಷಾಪತ್ರಿಕೆ ಬರೆದರಲಾ__ಅದರಲ್ಲಿ ಸುಖದುಃಖ ವಿಚಾರಿಸಿಕೊಂಡು ಹೋಗೋದೂ ಒಂದು ಕಲಮೇನೋ ?" "ಮಹಾಸ್ವಾಮಿ ಹೇಳುತಿರೋದು ಹಳೆಯ ಮಾತು. ಕ್ರಿಸ್ತಶಕ ೧೭೯೦ನೇ ಇಸವೀದ್ದು. ಅದಾದ ಮೇಲೆ ಕಾವೇರಿಯಲ್ಲಿ ಬಹಳ ನೀರು ಹರಿದಿದೆ." "ಕಾವೇರಿಯಲ್ಲಿ ನೀರು ಯಾವಾಗಲೂ ಹರೀತಿರತದೆ. ನಿಮಗೆ ಗೊತ್ತಿಲ್ಲವೇನೋ, ಪಾಪ !" "ಇದೊಂದು ಹೇಳೋ ರೀತಿ ಬದಲಾಗಿದೆ ಅಂತ ಅರ್ಥ." "ಇಂಥ ನಿರರ್ಥಕ ಸಂಭಾಷಣೆ ನಮಗಿಷ್ಟವಿಲ್ಲ. ಸ್ಪಷ್ಟವಾಗಿ ಕೇಳತೀವಿ. ನನ್ನ ತಂಗಿ ಯನ್ನೂ ಭಾವನನ್ನೂ ಇನ್ನೂ ಶ್ರೀರಂಗಪಟ್ಟಣದಲ್ಲೇ ಯಾಕೆ ಮಡಗಿಕೊಂಡಿದೀರಿ?" "ರಕ್ಷಣೆ ಕೇಳಿ ಬಂದವರಿಗೆ ಆಶ್ರಯ ಕೊಡುವುದು ನಮ್ಮ ಧರ್ಮ." "ಅದನ್ನು ಕಟ್ಟಿಡಿ. ನಮ್ಮ ವಿರುದ್ಧ ಅವರನ್ನು ಉಪಯೋಗಿಸಬಹುದೂಂತ ಯೋಚಿಸಿ ದೀರೋ?" "ನೀವು ಯುವಕರು. ನಿಮಗೆ ರಾಜಕಾರಣ ತಿಳಿಯದು. ಕೊಡಗನ್ನು ಪೆಟ್ಟಿಗೆ ಹಾಗೆ ಮುಚ್ಚಿಡುವುದು ಸರಿಯಲ್ಲ." "ನಮ್ಮ ಮನೇನ ಭದ್ರಪಡಿಸಿಕೊಳ್ಳೋದಕ್ಕೆ ಇನ್ನೊಬ್ಬರ ಪರವಾನಿಗಿ ಬೇಕೇನು ?" "ಹ್ಞ ! ಏನು ಮಾಡಬೇಕಾದರೂ ನಮ್ಮ ಪರವಾನಿಗಿ ಬೇಕು." "ಸ್ವತಂತ್ರ ರಾಜ್ಯದ ಅರಸನ ಜತೆ ನೀವು ಮಾತಾಡತಾ ಇದೀರಿ, ನೆನಪಿರಲಿ!" "ಕೊಡಗು ಸ್ವತಂತ್ರ ರಾಜ್ಯ ಅಲ್ಲ, ಇದು ಟೀಪೂನ ಕೆಳಗಿತು, ಅವನನ್ನು ನಾವು ಸೋಲಿಸಿದೆವು. ಈಗ ನೀವು ನಮ್ಮ ಕೆಳಗೆ ಬಂದಿದೀರಿ." "ಟೀಪೂಗೆ ನಾವು ಆಶ್ರಿತರಾಗಿದ್ದೆವು ಅನ್ನೋದೇ ಸುಳ್ಳು." "ಸುಳ್ಳು ? ಕುಂಪನಿ ಸರಕಾರ ಯಾವತ್ತೂ ಸುಳಾಡುವುದಿಲ್ಲ. ನೀವು ನಮಗೆ ಅಪಮಾನ ಮಾಡತಿದೇರಿ." "ಹಾಗಾದರೆ ನೀವು ಇನ್ನು ಗಾಡಿಬಿಡಬಹುದಲ್ಲವೇ?” "ಏನೆಂದಿರಿ? ಗಾಡಿ ? ನಾವು ಮೇನೆಯಲ್ಲೇ ಹೋಗುತೇವೆ." ಚಿಕವೀರರಾಜ ನಕ್ಕು ನುಡಿದ: "ಪಾಪ, ನಿಮಗೆ ವಯಸ್ಸಾಗಿದೆ. ಮೇನೆಯಲ್ಲೇ ಹೋಗಿ."<noinclude></noinclude> edi4sn4ugty472uf0eg37l5s9q9wm8t 321999 321998 2026-05-23T14:27:32Z Shreelatha.Halemane 7642 /* Validated */ 321999 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ|left=೯೮|right=}} ಕೊಡಗಿನ ಸೇನಾಬಲವನ್ನು ಕುರಿತು ಮಾಹಿತಿ ಸಂಗ್ರಹಿಸಿದ. {{gap}}ಅರಸನೊಡನೆ ಕಾಸ್ಸಾಮೇಜರನ ಭೇಟಿ ಈ ಹಿನ್ನೆಲೆಯಲ್ಲಿ ನಡೆಯಿತು. ಹಿಂದೂಸ್ಥಾನಿಯಲ್ಲಿ ಆದ ಆ ಮಾತುಕತೆಯಲ್ಲಿ ರಾಜನೈತಿಕ ಕಟ್ಟುಗಳು ಸಡಿಲಿದುವು. ಅದುಮಿ ಹಿಡಿದ ಭಾವನೆಗಳು ಹೊರಕ್ಕೆ ಸಿಡಿದುವು. {{gap}}ಅರಸ : {{gap}}"ಇಷ್ಟು ದೂರ ಬರೋದಕ್ಕೆ ಬಹಳ ತೊಂದರೆ ತಗೊಂಡಿರಿ!" ಕಾಸ್ಸಾಮೇಜರ್: {{gap}}"ಸುಖದುಃಖ ವಿಚಾರಿಸಿಕೊಂಡು ಹೋಗೋಣ ಅಂತ ಬಂದೆವು." {{gap}}"ಸಾಧಾರಣ ಸಂವತ್ಸರದಲ್ಲಿ ಸ್ವತಂತ್ರ ರಾಜ್ಯವಾದ ಕೊಡಗಿನ ದೊರೆಗೊ ಕುಂಪನಿಯವರಿಗೂ ಒಡಂಬಡಿಕೆಯಾಗಿ ಭಾಷಾಪತ್ರಿಕೆ ಬರೆದರಲಾ__ಅದರಲ್ಲಿ ಸುಖದುಃ ವಿಚಾರಿಸಿಕೊಂಡು ಹೋಗೋದೂ ಒಂದು ಕಲಮೇನೋ ?" {{gap}}"ಮಹಾಸ್ವಾಮಿ ಹೇಳುತಿರೋದು ಹಳೆಯ ಮಾತು. ಕ್ರಿಸ್ತಶಕ ೧೭೯೦ನೇ ಇಸವೀದ್ದು. ಅದಾದ ಮೇಲೆ ಕಾವೇರಿಯಲ್ಲಿ ಬಹಳ ನೀರು ಹರಿದಿದೆ." {{gap}}"ಕಾವೇರಿಯಲ್ಲಿ ನೀರು ಯಾವಾಗಲೂ ಹರೀತಿರತದೆ. ನಿಮಗೆ ಗೊತ್ತಿಲ್ಲವೇನೋ, ಪಾಪ !" {{gap}}"ಇದೊಂದು ಹೇಳೋ ರೀತಿ ಬದಲಾಗಿದೆ ಅಂತ ಅರ್ಥ." {{gap}}"ಇಂಥ ನಿರರ್ಥಕ ಸಂಭಾಷಣೆ ನಮಗಿಷ್ಟವಿಲ್ಲ. ಸ್ಪಷ್ಟವಾಗಿ ಕೇಳತೀವಿ. ನನ್ನ ತಂಗಿಯನ್ನೂ ಭಾವನನ್ನೂ ಇನ್ನೂ ಶ್ರೀರಂಗಪಟ್ಟಣದಲ್ಲೇ ಯಾಕೆ ಮಡಗಿಕೊಂಡಿದೀರಿ?" {{gap}}"ರಕ್ಷಣೆ ಕೇಳಿ ಬಂದವರಿಗೆ ಆಶ್ರಯ ಕೊಡುವುದು ನಮ್ಮ ಧರ್ಮ." {{gap}}"ಅದನ್ನು ಕಟ್ಟಿಡಿ. ನಮ್ಮ ವಿರುದ್ಧ ಅವರನ್ನು ಉಪಯೋಗಿಸಬಹುದೂಂತ ಯೋಚಿಸಿದೀರೋ?" {{gap}}"ನೀವು ಯುವಕರು. ನಿಮಗೆ ರಾಜಕಾರಣ ತಿಳಿಯದು. ಕೊಡಗನ್ನು ಪೆಟ್ಟಿಗೆ ಹಾಗೆ ಮುಚ್ಚಿಡುವುದು ಸರಿಯಲ್ಲ." {{gap}}"ನಮ್ಮ ಮನೇನ ಭದ್ರಪಡಿಸಿಕೊಳ್ಳೋದಕ್ಕೆ ಇನ್ನೊಬ್ಬರ ಪರವಾನಿಗಿ ಬೇಕೇನು ?" {{gap}}"ಹ್ಞ ! ಏನು ಮಾಡಬೇಕಾದರೂ ನಮ್ಮ ಪರವಾನಿಗಿ ಬೇಕು." {{gap}}"ಸ್ವತಂತ್ರ ರಾಜ್ಯದ ಅರಸನ ಜತೆ ನೀವು ಮಾತಾಡತಾ ಇದೀರಿ, ನೆನಪಿರಲಿ!" {{gap}}"ಕೊಡಗು ಸ್ವತಂತ್ರ ರಾಜ್ಯ ಅಲ್ಲ, ಇದು ಟೀಪೂನ ಕೆಳಗಿತು, ಅವನನ್ನು ನಾವು ಸೋಲಿಸಿದೆವು. ಈಗ ನೀವು ನಮ್ಮ ಕೆಳಗೆ ಬಂದಿದೀರಿ." {{gap}}"ಟೀಪೂಗೆ ನಾವು ಆಶ್ರಿತರಾಗಿದ್ದೆವು ಅನ್ನೋದೇ ಸುಳ್ಳು." {{gap}}"ಸುಳ್ಳು ? ಕುಂಪನಿ ಸರಕಾರ ಯಾವತ್ತೂ ಸುಳಾಡುವುದಿಲ್ಲ. ನೀವು ನಮಗೆ ಅಪಮಾನ ಮಾಡತಿದೇರಿ." {{gap}}"ಹಾಗಾದರೆ ನೀವು ಇನ್ನು ಗಾಡಿಬಿಡಬಹುದಲ್ಲವೇ?” {{gap}}"ಏನೆಂದಿರಿ? ಗಾಡಿ ? ನಾವು ಮೇನೆಯಲ್ಲೇ ಹೋಗುತೇವೆ." {{gap}}ಚಿಕವೀರರಾಜ ನಕ್ಕು ನುಡಿದ: {{gap}}"ಪಾಪ, ನಿಮಗೆ ವಯಸ್ಸಾಗಿದೆ. ಮೇನೆಯಲ್ಲೇ ಹೋಗಿ."<noinclude></noinclude> 544gqzbj0afly3h4szw20uabs3o287w ಪುಟ:ಸ್ವಾಮಿ ಅಪರಂಪಾರ.pdf/೧೦೧ 104 21251 322011 206414 2026-05-23T15:06:31Z Shreelatha.Halemane 7642 /* Validated */ 322011 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=|right=೯೯}} {{gap}}ಅಷ್ಟು ಹೇಳಿ, ಒಮ್ಮೆಲೆ ಧ್ವನಿ ಏರಿಸಿ. ಆತ ನುಡಿದ: {{gap}}"ಹೋದ ತಕ್ಷಣ ಚನ್ನಬಸಪ್ಪನನ್ನೂ ಅವನ ಹೆಂಡತಿಯನ್ನೂ ಕಳಿಸಿಕೊಡಿ." ಎದ್ದು ನಿಂತ ಕಾಸ್ಸಾಮೇಜರನೆಂದ: {{gap}}"ಇಲ್ಲ, ಸರ್ವಥಾ ಇಲ್ಲ." {{gap}}ಸಿಂಹಾಸನದ ಹಸ್ತವನ್ನು ಮುಷ್ಟಿಯಿಂದ ಗುದ್ದಿ ಅರಸನೆಂದ: {{gap}}ಇದರ ಪರಿಣಾಮ ನೆಟ್ಟಗಾಗದು!" {{gap}}"ನಾವು ನೆಟ್ಟಗೆ ಮಾಡತೇವೆ."“ಆಗಲೇ ಅಂದೆ ಹೊರಡಿ ಅಂಸತ!” {{gap}}ಕ್ರುದ್ಧನಾದ ಕಾಸ್ಸಾಮೇಜರ್, ರಾಜನಿಗೆ ವಂದಿಸದೆಯೇ ಅಲ್ಲಿಂದ ಹೊರಬಿದ್ದ. {{gap}}ಮುಂದೆ ನಿಮಿಷವೂ ಮಡಕೇರಿಯಲ್ಲಿ ನಿಲ್ಲದೆ, ಆತ ಶ್ರೀರಂಗಪಟ್ಟಣಕ್ಕೆ ಪಯಣ ಬೆಳೆಸಿದ. {{center|೩೧}} {{gap}}ಆವರ್ತಿಯಲ್ಲಿ ತನ್ನ ಕುಟೀರದೆದುರು ಅಂಗಳದಲ್ಲಿ ಅಪರಂಪಾರಸ್ವಾಮಿ ಸೌದೆಯೊಡೆಯುತ್ತಲಿದ್ದ. ಕೊಡಲಿ ಎತ್ತರಕ್ಕೆ ಹಾರಿ ಭರದಿಂದ ಕೆಳಕ್ಕೆ ಬಂದು ದಿಮ್ಮಿಯಲ್ಲಿನ ಸೀಳು ಗುರುತನ್ನು ನೀಳಗೊಳಿಸುತ್ತಿತು, ಪುನಃ ಲೀಲಾಜಾಲವಾಗಿ ಸೀಳಿನಿಂದೆದು, ಮೇಲಕ್ಕೆ ನೆಗೆದು ಕೆಳಬಂದು, ಸರಿಯಾದ ಜಾಗದಲ್ಲೇ ದಿಮ್ಮಿಯನ್ನು ಹೊಗುತ್ತಿತ್ತು. {{gap}}ಕಾವಿಯುಡುಗೆಯ ಕೆಲ ಜಂಗಮರೂ ಇತರ ಕೆಲ ಭಕ್ತಾದಿಗಳೂ ಅರ್ಧವೃತ್ತಾಕಾರವಾಗಿ, ದೂರದಲ್ಲಿ, ಬೆರಗಾಗಿ నింತಿದ್ದರು. {{gap}}ಮತ್ತೂ ನಾಲ್ಕೇಟು ಬಿದ್ದ ಬಳಿಕ ಮನುಷ್ಯಗಾತ್ರದ ದಿಮ್ಮಿ ಎರಡು ಹೋಳಾಯಿತು.ನೆರೆದವರಿಂದ ಮೆಚ್ಚುಗೆಯ ಉದ್ಗಾರ ಹೊರಟಿತು. {{gap}}ಹಿಂದಿನಿಂದೊಬ್ಬನು ನಡೆದುಬಂದು ತಮ್ಮನ್ನು ಸೇರಿಕೊಂಡುದನ್ನು ಅವರು ಯಾರೂ ಕಾಣರು. ತಾರಕ ಸ್ವರದಲ್ಲಿ ಆ ವ್ಯಕ್ತಿಯೆಂದಿತು : {{gap}}"ಕಾಯಕವೇ ಕೈಲಾಸ ಕಾಣಿರೋ!" {{gap}}ಕೊಡಲಿಯನ್ನು ಕೆಳಕ್ಕೆಸೆದು, ತೋಳುಗಳನ್ನು ಅಗಲವಾಗಿ ಚಾಚಿ, ಅಪರಂಪಾರನೆಂದ: {{gap}}"ಬಂದೆಯಾ? ಬಾ, ಶಿವ! ಬನ್ನಿ ಸಿದ್ಧಲಿಂಗ!" {{gap}}ವ್ಯಕ್ತಿ, ಸಿದ್ಧಲಿಂಗ. ಗುಂಪು ಸೀಳಾಯಿತು. ಸಿದ್ಧಲಿಂಗ ಮುಂದೆ ಬಂದು ಅಪರಂಪಾರ ನನ್ನು ತಬ್ಬಿಕೊಂಡ. {{gap}}"ಶರಣು! ಸ್ವಾಮಿ ಅಪರಂಪಾರ, ಶರಣು !" {{gap}}ಮಿಲನದ ಉದ್ವೇಗವಿಳಿದಾಗ ಸಿದ್ಧಲಿಂಗ ಕೇಳಿದ: {{gap}}"ಇದೇನು ನಡೆಸಿದ್ದಿರಿ ಸ್ವಾಮಿಯೋರು?" {{gap}}ಅಪರಂಪಾರ ನಸುನಕ್ಕು ನುಡಿದ: {{gap}}"ಇದನ್ನು ಯಾರು ಒಡೀಬಲ್ಲಿರಿ ಅಂತ ಕೇಳಿದೆವು. ಒಬ್ಬರಾದರೂ ಬೇಡವೆ! ನೋಡಿ,ಶಿವ ಒಡೀತಾನೆ,ಅಂದೆವು.ಕೊಡಲಿ ಕೈಗೆತ್ತಿಕೊಂಡೆವು." {{gap}}"ಭಳಿರೆ !"<noinclude></noinclude> q8jb1zqc5si8x6ytge6606bikufxu2f ಪುಟ:ಸ್ವಾಮಿ ಅಪರಂಪಾರ.pdf/೧೦೨ 104 21252 322012 206415 2026-05-23T15:11:14Z Shreelatha.Halemane 7642 /* Validated */ 322012 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರ೦ಪಾರ |left=೧೦೦|right=}} {{gap}}“ಮೊದಲ ಸಲ ಎತ್ತಿದಾಗಲೇ ದೂರದಿಂದ ಬರುತ್ತಿದ್ದ ನಿಮ್ಮನ್ನು ಕಂಡೆವು. ಮತ್ತೆ ಪ್ರತಿ ಸಲವೂ ಕಣ್ಣಿಗೆ ಬಿದ್ದಿರಿ. ಬಾಹುಗಳಿಗೆ ಬಲ ಬಂತು. ಮರದ ದಿಮ್ಮಿ ಹೋಳಾಯಿತು !" {{gap}}ಸ್ವಾಮಿಯೊಡನೆ ಅಪರಿಚಿತ ಜಂಗಮನ ಸಮಾಗಮನವನ್ನು ನೋಡುತ್ತ ಜನ ನಿಂತಿ ದ್ದರು. ಅವರನ್ನು ಉದ್ದೇಶಿಸಿ ಅಪರಂಪಾರನೆಂದ: {{gap}}“ಅಯ್ಯನವರು ನಂಜರಾಜಪಟ್ಟಣದಿಂದ ಬಂದಿದಾರೆ. ಇವರು ಶಿವಾಚಾರ್ಯಸಾಮಿ ಗಳ ಶಿಷ್ಯರು." {{gap}}ಅಲ್ಲಿದ್ದವರೆಲ್ಲ ಸಿದ್ಧಲಿಂಗನಿಗೆ ಬಾಗಿ ನಮಿಸುತ್ರ "ಶರಣು! ಶರಣು!" ಎಂದರು. ಸಿದ್ದಲಿಂಗ ಉತ್ತರಿಸಿದ: {{gap}}"ಹ್ಮ, ಶರಣ್ರೇಪಾ." {{gap}}ಅಪರ೦ಪಾರನೆ೦ದ : {{gap}}"ಒಳಗೆ ಬನ್ನಿ, ಅಯ್ಯನವರೇ." {{gap}}...ಅಪರಂಪಾರನ ಖಾತಿ ಶಿವಾಚಾರ್ಯರನ್ನು ಮುಟ್ಟಿತ್ತು, ಆತ ಅವರ್ತಿಯಲ್ಲಿರುವ ನೆಂಬ ಸುದ್ದಿಯೂ ಅವರ ಕಿವಿಗೆ ಬಿತ್ತು, ಶಿಷ್ಯ ಸಿದ್ಧಲಿಂಗನಿಗೆ, "ಹೋಗಿ ನೋಡಿಕೊಂಡು ಬಾ" ಎಂದರು. {{gap}}ಅಪರ೦ಪಾರನೆ೦ದ: {{gap}}“ಒಂದು ಪ್ರಶ್ನೆ ಕೇಳತೇವೆ. ಲೌಕಿಕ ಎನಬೇಡಿ. ನಂಜರಾಜಪಟ್ಟದಲ್ಲಿ ಸ್ವಾಮಿಗಳು, ಇನ್ನುಳಿದ ನಮ್ಮ ಕಳುಬಳ್ಳಿ, ಎಲ್ಲಾ ಕ್ಷೇಮ?" {{gap}}"ಓ ಹೋ." {{gap}}ಸ್ವರ ತಗ್ಗಿಸಿ, ಇದು ಬೇರೆ ಅಧಾಯ ಎನ್ನುವಂತೆ ಸಿದ್ದಲಿಂಗ ಆರಂಭಿಸಿದ: {{gap}}"ಸ್ವಾಮಿಗಳು ಒಂದು ಮುಖ್ಯ ಸಂಗತಿ ನಿಮಗೆ ತಿಳಿಸಬೇಕೊ೦ತ ನನ್ನನ್ನು ಕಳಿಸಿದ್ದಾರೆ. {{gap}}"ಹೌದೆ?ಏನದು?". {{gap}}"ಇಂಗ್ರೇಜಿಯವರು ಕೊಡಗಿನ ಮೇಲೆ ದಂಡೆತ್ತಿ ಬರೋ ಸೂಚನೆಗಳವೆ, ಚನ್ನಬಸಪ್ಪ- ದೇವಮಾಜಿ ಶ್ರೀರಂಗಪಟ್ಟಣಕ್ಕೆ ಓಡಿಹೋಗಿದಾರೆ. ದೇಶ ಯುದ್ಧಕ್ಕೆ ಅಣಿಯಾಗತಾ ಆದೆ." {{gap}}ಅವನತಶಿರನಾಗಿ ಅಪರಂಪಾರ ಕುಳಿತ. ಅವನ ಮನಸು ಚಿಂತಿಸಿತು: {{gap}}ಕಾಲಕ್ರಮೇಣ ಈ ಸುದ್ದಿ ತನಗೆ ಗೊತ್ತಾಗಿಯೇ ಆಗುತ್ತಿತ್ತು, ಈಗಲೇ ತಿಳಿಸುವಂತೆ ಸಿದ್ದಲಿಂಗನನ್ನು ಶಿವಾಚಾರ್ಯ ಸ್ವಾಮಿಗಳು ಅಟ್ಟಿದ ಉದ್ದೇಶವೇನು? ತನ್ನಿಂದ ಅವರೇನನ್ನು ಅಪೇಕ್ಷಿಸುತಾರೆ? {{gap}}"ಸ್ವಾಮಿಗಳು ಇನ್ನೇನಾದರೂ ಅಂದರೆ?" {{gap}}“ಹ್ಮ, ಇಂಗ್ರೇಜರು ಗೆದ್ದರೆ ಹಾಲೇರಿ ವಂಶದ ಅವಸಾನವಾಗತದೆ; ಸ್ವಾತಂತ್ರ್ಯ ನಷ್ಟವಾಗತದೆ; ಧರ್ಮಗ್ಲಾನಿಯಾಗತದೆ." {{gap}}“ಅದಕ್ಕೆ?”. {{gap}}"ಇಂಗ್ರೇಜರ ವಿರುದ್ಧ ಜನರನ್ನು ನಾವು ಹುರಿದುಂಬಿಸಬೇಕು–ಅಂದಿದ್ದಾರೆ." {{gap}}"ಇದು ಜಂಗಮರು ಮಾಡುವ ಕೆಲಸವಾ ?"<noinclude></noinclude> hi2zl1j2qgsh4k615xd026dqhdjvctk ಪುಟ:ಸ್ವಾಮಿ ಅಪರಂಪಾರ.pdf/೧೦೩ 104 21253 322020 206416 2026-05-23T16:31:06Z Shreesha Sharma 7840 /* Validated */ 322020 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ಸ್ವಾಮಿ ಅಪರ೦ಪಾರ|left=|right=೧೦೧}} {{gap}}"ಜಂಗಮರಿನ್ನು ವೀರ ಜಂಗಮರಾಗಬೇಕು–ಅನ್ನುತಾರೆ ಗುರುಗಳು.” {{gap}}ಒಂದು ಕ್ಷಣದ ಮೌನದ ಬಳಿಕ ಅಪರಂಪಾರನೆಂದ: {{gap}}"ಸರಿ, ಅವರ ಅಪೇಕ್ಷೆ ಅಪ್ಪಣೆಗೆ ಸಮಾನ.” {{gap}}"ನಾವು ಮೈಸೂರಲ್ಲಿ ಇಂಗ್ರೇಜಿ ದಂಡಿನ ಹತ್ತಿರ ಇದ್ದರೆ ಹೆಚ್ಚಿನ ವಿಷಯ ತಿಳೀ ಬಹುದು. ನಾವು ಅಂದರೆ, ನಾನು ಮತ್ತು ನೀವು. ಇನ್ನು ಮುಂದೆ ನಾನು ನಿಮ್ಮನ್ನು ಬಿಟ್ಟಿರತಕ್ಕದ್ದಲ್ಲ ಅಂತ ಗುರುಗಳ ಆಜ್ಞೆಯಾಗಿದೆ. {{gap}}"ನನ್ನ ಮಟ್ಟಿಗೆ ಇದು ಅನುಗ್ರಹ.. ಒಬ್ಬನಿದ್ದೆ, ಇಬ್ಬರಾದೆವು." {{gap}}"ಇಬ್ಬರು ? ಹೊರಗೆ ನೋಡಿದೆನಲ್ಲಪ್ಪ ಅಷ್ಟೊಂದು ಜನರನ್ನ ? ಎಪ್ಪತ್ತೆ- ಎ೦ಬತ್ತೆ ?" - {{gap}}"ಅದು ಶಿಷ್ಯಗಣ." {{gap}}"ಓಹೋ, ನಾವು ಗಣಾಚಾರರು ಅನ್ನಿ, ಶಿವ ಶಿವ ಶಿವ!" {{center|೩೨}} {{gap}}ಮದರಾಸಿನ ಗವರ್ನರನಿಗೂ ಕಲಕತ್ತೆಯಲ್ಲಿದ್ದ ಗವರ್ನರ್ ಜನರಲನಿಗೂ ಕಾಸ್ಸಾ ಮೇಜರನ ವರದಿ ಕಂಡು ಸಮಾಧಾನವೆನಿಸಿತು. {{gap}}ಅಗ್ನಿ ಸಿದ್ಧವಾಗಿತು, ಕಬ್ಬಿಣದ ಕೊರಡನ್ನು ಅದಕ್ಕೆ ಹಾಕಿದ್ದರು. ಅದು ಕಾದು ಕೆಂಪಾಗಬೇಕು, ಕೆಂಪು ಬಿಳಿಯಾಗಬೇಕು, ಆ ಬಳಿಕ ಹೊಡೆತ. ಆ ವರೆಗೂ ತಿದಿಯನೂದುತ ಇರಬೇಕು. {{gap}}ನಾಗಪುರದ ರೆಸಿಡೆಂಟನಾದ ಗ್ರಾಯೆಮ್ ಬೆಂಗಳೂರಿನ ಹಿತಕರ ಹವೆಯಲ್ಲಿ ಆಗ ವಿಶಾಂತಿಪಡೆಯುತ್ತಿದ್ದ, ಮಾತುಕತೆಯ ನೆಪದಿಂದ ಆತನನ್ನು ಮಡಕೇರಿಗೆ ಕಳುಹಿಸಿ ದಂಡಯಾತ್ರೆಯ ಯೋಜನೆಯ ವಿವರಗಳನ್ನು ಸಿದ್ಧಪಡಿಸಲು ಕುಂಪನಿ ನಿರ್ಧರಿಸಿತು. ಗ್ರಾಯೆಮ್ ಮಾತುಕತೆಗೆ ಬರಲಿರುವುದಾಗಿ ಚಿಕವೀರರಾಜೇಂದ್ರನಿಗೆ ತಿಳಿಸಲಾಯಿತು. {{gap}}"ಇಂಥ ಭೇಟಿ ಅನಗತ್ಯ" ಎಂದ ರಾಜ. {{gap}}ಅಗತ್ಯ ಎಂದು ಮನಗಾಣಿಸುವುದಕ್ಕಾಗಿ ಕುಂಪನಿಯ ಇಬ್ಬರು ಚಾಕರರು-ದಾರಾ ಸೇಟ್ ಹಾಗೂ ಕುಲಪಟ್ಟಿ ಕರುಣಾಕರ ಮೆನೊನ್-ಮಡಕೇರಿಗೆ ಬಂದರು. ಒಬ್ಬ ಪಾರಸೀ ವರ್ತಕ; ಇನ್ನೂಬ್ಬ ತಲಚೇರಿಯಲ್ಲಿ ಮಲೆಯಾಳದ ಕಲೆಕ್ಟರರ ಶಿರಸ್ತೇದಾರ, ಗ್ರಾಯೆಮ್ ಮಾಡಲಾಗದಿದ್ದ ಗೂಢಚರ್ಯೆಯನ್ನು ಇವರಿಂದ ಮಾಡಿಸಲು ಇಂಗ್ಲಿಷರು ಯತ್ನಿಸಿ ದರು. ಆದರೆ ಕೊಡಗಿನಲ್ಲಿ ಇವರನ್ನು ಬಂಧಿಸಲಾಯಿತು. {{gap}}ಅರಸ ಗದರಿ ಕೇಳಿದ: {{gap}}"ಯಾರ ಅಪ್ಪಣೆ ಪಡೆದು ನಮ್ಮ ರಾಜ್ಯವನ್ನು ಹೊಕ್ಕಿರಿ?" {{gap}}ಮೆನೊನ್ ಉತ್ತರಿಸಿದ: {{gap}}"ಕುಂಪನಿಯವರ ಅಪ್ಪಣೆ ಚೀಟಿ ಅದೆ, ಮಹಾರಾಜರೇ.” {{gap}}“ಈ ರಾಜ್ಯದ ಒಳಗೆ ಕಾಲಿಡೋದಕ್ಕೆ ಅವರು ಚೀಟಿ ಕೊಡತಾರ? ಇದೇನು ವಿಲಾಯಿತಿ ಅ೦ದುಕೊ೦ಡರಾ ಅವರು ?”<noinclude></noinclude> axnmis2p81x54ya8h0mfnta8pf1uex5 322021 322020 2026-05-23T16:32:42Z Shreesha Sharma 7840 322021 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ಸ್ವಾಮಿ ಅಪರ೦ಪಾರ|left=|right=೧೦೧}} {{gap}}"ಜಂಗಮರಿನ್ನು ವೀರ ಜಂಗಮರಾಗಬೇಕು–ಅನ್ನುತಾರೆ ಗುರುಗಳು.” {{gap}}ಒಂದು ಕ್ಷಣದ ಮೌನದ ಬಳಿಕ ಅಪರಂಪಾರನೆಂದ: {{gap}}"ಸರಿ, ಅವರ ಅಪೇಕ್ಷೆ ಅಪ್ಪಣೆಗೆ ಸಮಾನ.” {{gap}}"ನಾವು ಮೈಸೂರಲ್ಲಿ ಇಂಗ್ರೇಜಿ ದಂಡಿನ ಹತ್ತಿರ ಇದ್ದರೆ ಹೆಚ್ಚಿನ ವಿಷಯ ತಿಳೀ ಬಹುದು. ನಾವು ಅಂದರೆ, ನಾನು ಮತ್ತು ನೀವು. ಇನ್ನು ಮುಂದೆ ನಾನು ನಿಮ್ಮನ್ನು ಬಿಟ್ಟಿರತಕ್ಕದ್ದಲ್ಲ ಅಂತ ಗುರುಗಳ ಆಜ್ಞೆಯಾಗಿದೆ. {{gap}}"ನನ್ನ ಮಟ್ಟಿಗೆ ಇದು ಅನುಗ್ರಹ.. ಒಬ್ಬನಿದ್ದೆ, ಇಬ್ಬರಾದೆವು." {{gap}}"ಇಬ್ಬರು ? ಹೊರಗೆ ನೋಡಿದೆನಲ್ಲಪ್ಪ ಅಷ್ಟೊಂದು ಜನರನ್ನ ? ಎಪ್ಪತ್ತೆ- ಎ೦ಬತ್ತೆ ?" - {{gap}}"ಅದು ಶಿಷ್ಯಗಣ." {{gap}}"ಓಹೋ, ನಾವು ಗಣಾಚಾರರು ಅನ್ನಿ, ಶಿವ ಶಿವ ಶಿವ!" {{center|೩೨}} {{gap}}ಮದರಾಸಿನ ಗವರ್ನರನಿಗೂ ಕಲಕತ್ತೆಯಲ್ಲಿದ್ದ ಗವರ್ನರ್ ಜನರಲನಿಗೂ ಕಾಸ್ಸಾ ಮೇಜರನ ವರದಿ ಕಂಡು ಸಮಾಧಾನವೆನಿಸಿತು. {{gap}}ಅಗ್ನಿ ಸಿದ್ಧವಾಗಿತು, ಕಬ್ಬಿಣದ ಕೊರಡನ್ನು ಅದಕ್ಕೆ ಹಾಕಿದ್ದರು. ಅದು ಕಾದು ಕೆಂಪಾಗಬೇಕು, ಕೆಂಪು ಬಿಳಿಯಾಗಬೇಕು, ಆ ಬಳಿಕ ಹೊಡೆತ. ಆ ವರೆಗೂ ತಿದಿಯನೂದುತ ಇರಬೇಕು. {{gap}}ನಾಗಪುರದ ರೆಸಿಡೆಂಟನಾದ ಗ್ರಾಯೆಮ್ ಬೆಂಗಳೂರಿನ ಹಿತಕರ ಹವೆಯಲ್ಲಿ ಆಗ ವಿಶಾಂತಿಪಡೆಯುತ್ತಿದ್ದ, ಮಾತುಕತೆಯ ನೆಪದಿಂದ ಆತನನ್ನು ಮಡಕೇರಿಗೆ ಕಳುಹಿಸಿ ದಂಡಯಾತ್ರೆಯ ಯೋಜನೆಯ ವಿವರಗಳನ್ನು ಸಿದ್ಧಪಡಿಸಲು ಕುಂಪನಿ ನಿರ್ಧರಿಸಿತು. ಗ್ರಾಯೆಮ್ ಮಾತುಕತೆಗೆ ಬರಲಿರುವುದಾಗಿ ಚಿಕವೀರರಾಜೇಂದ್ರನಿಗೆ ತಿಳಿಸಲಾಯಿತು. {{gap}}"ಇಂಥ ಭೇಟಿ ಅನಗತ್ಯ" ಎಂದ ರಾಜ. {{gap}}ಅಗತ್ಯ ಎಂದು ಮನಗಾಣಿಸುವುದಕ್ಕಾಗಿ ಕುಂಪನಿಯ ಇಬ್ಬರು ಚಾಕರರು-ದಾರಾ ಸೇಟ್ ಹಾಗೂ ಕುಲಪಟ್ಟಿ ಕರುಣಾಕರ ಮೆನೊನ್-ಮಡಕೇರಿಗೆ ಬಂದರು. ಒಬ್ಬ ಪಾರಸೀ ವರ್ತಕ; ಇನ್ನೂಬ್ಬ ತಲಚೇರಿಯಲ್ಲಿ ಮಲೆಯಾಳದ ಕಲೆಕ್ಟರರ ಶಿರಸ್ತೇದಾರ, ಗ್ರಾಯೆಮ್ ಮಾಡಲಾಗದಿದ್ದ ಗೂಢಚರ್ಯೆಯನ್ನು ಇವರಿಂದ ಮಾಡಿಸಲು ಇಂಗ್ಲಿಷರು ಯತ್ನಿಸಿ ದರು. ಆದರೆ ಕೊಡಗಿನಲ್ಲಿ ಇವರನ್ನು ಬಂಧಿಸಲಾಯಿತು. {{gap}}ಅರಸ ಗದರಿ ಕೇಳಿದ: {{gap}}"ಯಾರ ಅಪ್ಪಣೆ ಪಡೆದು ನಮ್ಮ ರಾಜ್ಯವನ್ನು ಹೊಕ್ಕಿರಿ?" {{gap}}ಮೆನೊನ್ ಉತ್ತರಿಸಿದ: {{gap}}"ಕುಂಪನಿಯವರ ಅಪ್ಪಣೆ ಚೀಟಿ ಅದೆ, ಮಹಾರಾಜರೇ.” {{gap}}“ಈ ರಾಜ್ಯದ ಒಳಗೆ ಕಾಲಿಡೋದಕ್ಕೆ ಅವರು ಚೀಟಿ ಕೊಡತಾರ? ಇದೇನು ವಿಲಾಯಿತಿ ಅ೦ದುಕೊ೦ಡರಾ ಅವರು ?”<noinclude></noinclude> nmug8p3g5lapsmikd7u01yqvg8e9tl4 ಪುಟ:ಸ್ವಾಮಿ ಅಪರಂಪಾರ.pdf/೧೧೧ 104 21261 322005 206424 2026-05-23T14:51:53Z Shreelatha.Halemane 7642 /* Validated */ 322005 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಆಪರಂಪಾರ|left=|right=೧೦೯}} {{gap}}"ಹ ಮಹಾರಾಜ. ಸ್ವಾಮಿ ಅಪರಂಪಾರರ ಆದೇಶದಂತೆ ಇಲ್ಲಿಗೆ ಬಂದೆವು." {{gap}}ಅರಸ ವಿಸ್ಮಿತನಾದ. ಮೂರು ವರ್ಷಗಳಿಗೆ ಹಿಂದೆ ಸುಳಿಗಾಳಿಯಂತೆ ಬೀಸಿ ಹೋದ. ಅಪರಂಪಾರನ ಪ್ರಸ್ತಾಪ ಇಂತಹ ಹೊತ್ತಿನಲ್ಲಿ ಬರುವುದೆಂದು ಆತ ನಿರೀಕ್ಷಿಸಿರಲಿಲ್ಲ. {{gap}}ಚಳಿಗಾಲ ಕಳೆದೊಡನೆಯೇ ಆಂಗ್ಲರ ದಂಡಯಾತ್ರೆ... {{gap}}"ಇದನ್ನ ಸ್ವಾಮಿಯವರೆಲ್ಲಿ ಕೇಳಿದರು? ಹ್ಯಾಗೆ ತಿಳಿದರು?" {{gap}}"ಆ ವಿವರದ ಬಗ್ಗೆ ನಾನು ಆಜ್ಞಪ್ತನಾಗಿಲ್ಲ, ಮಹಾರಾಜ." {{gap}}"ಒಳ್ಳೇದು. ಈ ರಾಜ್ಯದ ಹಿತಚಿಂತನೆ ಸ್ವಾಮಿಯವರು ಮಾಡುತಿದಾರಲ್ಲಾ–ನಾವು ಧನ್ಯರು." {{gap}}...ಸಿದ್ಧಲಿಂಗ ಆ ರಾತ್ರೆ ಶಂಕರಪ್ಪನಲ್ಲಿ ತಂಗಿದ. {{gap}}ವೀರಪ್ಪಾಜಿಯೇ ಅಪರಂಪಾರ ಎಂಬುದನ್ನು ಕಡೆಗೊಮ್ಮೆ ಖಚಿತವಾಗಿ ತಿಳಿದ ಶಂಕರಪ್ಪ ಈಗ ಪರಮ ಸುಖಿ. {{gap}}"ಬಿಸಿನೀರು ತರ್ರಿ. ಅದರಿಂದ ಪಾದಪೂಜೆ ಮಾಡಿದರೆ ಶಿವನಿಗೆ ಈಗ ಹಿತವಾಗತದೆ" ಎಂದು ಜಂಗಮ. {{gap}}ಆ ಸೇವೆಯನ್ನು ಶಂಕರಪ್ಪ ಸಂತೋಷದಿಂದ ಮಾಡಿದ. {{gap}}ವಿರಕ್ತನ ವೇಷದಲ್ಲಿ ಗೂಢಚಾರನೊಬ್ಬ ಮೈಸೂರು ರಾಜ್ಯದಿಂದ ಬಂದಿರುವನೆಂಬ ವಾರ್ತೆ ಬೋಪಣ್ಣನಿಗೆ ಮುಟ್ಟಿತು. {{gap}}ಅದರ ಬೆನ್ನಲ್ಲೆ, ಆತ ಗೂಢಚಾರನಲ್ಲ, ನಿಜವಾದ ವಿರಕ್ತನೇ ಎಂಬ ಸ್ಪಷ್ಟೀಕರಣವೂ ಬಂತು. {{gap}}ಬೋಪಣ್ಣನೆಂದ: {{gap}}"ಈ ಜಂಗಮರು ಸೊಕ್ಕಿದರು. ಅವನೆಲ್ಲೇ ಇರಲಿ, ಯಾರಿಗೂ ಸಂಶಯ ಬರದ ಹಾಗೆ ಹಿಡಿದು ತನ್ನಿ." {{gap}}ಆದರೆ, ಬೋಪಣ್ಣನ ಸೇವಕರ ಕೈಗೆ ಸಿದ್ಧಲಿಂಗ ಸಿಗಲಿಲ್ಲ {{center|೩೫}} {{gap}}ಒಂದು ವಾರದ ಅವಧಿಯೊಳಗಾಗಿ ಕರುಣಾಕರ ಮೆನೊನನ್ನು ಬಿಟ್ಟುಕೊಡಬೇಕು ಇಲ್ಲದೆ ಹೋದರೆ ಪ್ರತಿಫಲ ಅನುಭವಿಸಲು ಸಿದ್ಧನಾಗಬೇಕು. {{gap}}-ಇದು ಕಾಸ್ಸಾಮೇಜರ್ ಚಿಕವೀರರಾಜೇಂದ್ರನಿಗೆ ಕಳುಹಿದ ಅಂತಿಮ ನಿರೂಪ. {{gap}}ಅರಸ ಅದನ್ನು ತುಚ್ಛೀಕಾರದಿಂದ ಕಂಡ. ಉತ್ತರಿಸುವ ಗೊಡವೆಗೆ ಹೋಗಲಿಲ್ಲ. ೧೮೩೪ ಮಾರ್ಚ್ ೧೫ರ ಅಂಕಿತವಿದ್ದ ಘೋಷಣೆಯೊಂದನ್ನು ಮದರಾಸಿನ ಗವರ್ನರ್ ಹೊರಡಿಸಿದ: {{gap}}"ಚಿಕವೀರರಾಜ ತನ್ನ ಹೇಯ ಕೃತ್ಯಗಳಿಂದ ಕಂಪನಿ ಸರಕಾರದ ಸ್ನೇಹವನ್ನೂ ರಕ್ಷಣೆಯನ್ನೂ ಕಳೆದುಕೊಂಡಿದ್ದಾನೆ. ಬ್ರಿಟಿಷರ ಸೈನ್ಯವು ಕೊಡಗಿನ ಮೇಲೆ ದಂಡಯಾತ್ರೆ ಕೈಗೊಳ್ಳುವುದು. ಶಾಂತಿಯಿಂದ ನಡೆದುಕೊಳ್ಳುವವರ ಹಾಗೂ ಬ್ರಿಟಿಷ್ ಪಡೆಗಳಿಗೆ ಸಹಾಯಮಾಡುವವರ ಆಸ್ತಿಪಾಸ್ತಿಗಳನ್ನು ಕಾಪಾಡಲಾಗುವುದು. ವೈರಿಯಾದ ರಾಜನಿಗೆ ಸಹಾಯ ಮಾಡುವವರನ್ನು ದ್ರೋಹಿಗಳೆಂದು ಬಗೆಯಲಾಗುವುದು, ಹಾಗೂ ಅವರಿಗೆ<noinclude></noinclude> 2cbl4t5wt2nhe8de2zt01cuoo4xo0nd ಪುಟ:ಸ್ವಾಮಿ ಅಪರಂಪಾರ.pdf/೧೧೮ 104 21268 322015 206431 2026-05-23T15:33:18Z Shreelatha.Halemane 7642 /* Validated */ 322015 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=೧೧೬|right=}} {{gap}}"ಎಲಾ ಘಾತಕಿ! ಹೀಗೂ ವಂಚಿಸಿದನಾ ? ಇನ್ನು-ಇನ್ನೇನಾಗತದೆ ಬಸವ?" {{gap}}"ನಮ್ಮ ಪಡೆಗಳೆಲ್ಲ ಶರಣಾಗತವೆ! ವೈರಿಗಳ ದಂಡು ಇಲ್ಲಿಗೆ ಬರತದೆ !" {{gap}}ಚಿಕವೀರರಾಜನ ಜಂಘಾಬಲ ಉಡುಗಿತು. ಅವನ ಕಣ್ಣುಗಳನ್ನು ಕತ್ತಲು ಕವಿಯಿತು. ಆ ಸ್ಥಿತಿಯಲ್ಲೂ ಅವನು ಆಕ್ರೋಶ ಮಾಡಿದ : {{gap}}"ಎಲ್ಲಿ ಬೋಪಣ್ಣ! ಅವನನ್ನು ಹಿಡಕೊಂಡು ಬನ್ನಿ. ಅವನ ಎದೆ ಬಗೀತೀನಿ!" {{gap}}ಮುಂದಿನ ಕ್ರಮಗಳನ್ನು ಕುರಿತು ಚಿಂತೆಗೀಡಾಗಿದ್ದ ಬಸವ, ರಾಜನನ್ನು ಸಂತೈಸಲೆತ್ನಿಸಿದ: {{gap}}"ಇನ್ನೂ ಹೋರಾಟ ಸಾಧ್ಯ. ಮಹಾಸ್ವಾಮಿ. ಈ ಕ್ಷಣವೆ ನಾವು ನಾಲ್ಕುನಾಡು ಅರಮನೆಗೆ ತೆರಳಬೇಕು. ಅಲ್ಲಿ ಸೈನ್ಯವನ್ನು ಒಟ್ಟುಗೂಡಿಸಬೇಕು. ಇಲ್ಲಿ ಇರೋದು ಅಪಾಯ! ನಾವು ತಡಮಾಡಬಾರದು!" {{gap}}ಅರಸ ಶಿಲೆಯಂತೆ ನಿಂತ. ಅವನ ಮುಖದಲ್ಲಿ ಕ್ರೋಧ ಹೆಪ್ಪುಗಟ್ಟಿತ್ತು. ಧ್ವನಿ. ಹೊರಡಲಾರದೆ ಗಂಟಲಲ್ಲೆ ಒರಲುತ್ತಿತ್ತು. {{gap}}ಈ ಮಾತುಕತೆಯನ್ನು ರಾಣಿ ಕೇಳಿಸಿಕೊಂಡಿದ್ದಳು.ಆಕೆ ಶಾಂತವಾಗಿ ಹೆಜ್ಜೆ ಇರಿಸುತ್ತ ತೆರೆಯಿಂದ ಹೊರಬಂದಳು {{gap}}ಬಸವನೆಂದ : {{gap}}"ಮಹಾರಾಣಿಯವರು ಶೋಕಿಸಬಾರದು." {{gap}}ಯಾವ ಕಂಪನವೂ ಇಲ್ಲದ ಸ್ವರದಲ್ಲಿ ರಾಣಿ ಅಂದಳು : {{gap}}"ನಾಲ್ಕುನಾಡಿಗೆ ಈಗಲೆ ಹೊರಡೋದೇ ಹ್ಯಾಗೆ ಅಂತ ಕೇಳೋಕೆ ಬಂದೆ." {{gap}}"ಹೌದು ತಾಯೀ." {{gap}}"ರಾಜಕುಮಾರಿ ಬಿಸಿಲ ಮಹಡೀಲಿದಾಳೆ. ಕರೀತೇನೆ." {{gap}}ಕರ್ಕಶವಾಗಿ ಅರಸನೆಂದ : {{gap}}"ಆಗಲೀ ಬಸವ, ನಾಲ್ಕುನಾಡಿಗೆ ಹೋಗೋಣ." {{center|೩೯}} {{gap}}ಐದು ಗಡಿಗಳಲ್ಲೂ ಕದನ ಆರಂಭವಾದೊಡನೆಯೇ, 'ಶರಣಾಗತಿಯ ಕೆಲಸ ಸುಲಭವಾಗುವುದಿಲ್ಲ'- ಎಂಬುದು ಬೋಪಣ್ಣನಿಗೆ ಮನದಟ್ಟಾಯಿತು. ಸ್ವತಃ ಚಿಕವೀರರಾಜನೂ ರಣರಂಗಕ್ಕಿಳಿದರೆ ವಿಜಯಶ್ರೀ ಇಂಗ್ಲಿಷರಿಗೆ ಒಲಿಯದಿರಲೂ ಬಹುದು-ಎಂದು ಅವನು ಚಿಂತೆಗೀಡಾದ. {{gap}}ಇದ್ದ ಪರಿಹಾರವೊಂದೇ : ಯುದ್ಧದ ಕ್ಷಿಪ್ರ ಮುಕ್ತಾಯ {{gap}}ಅದಕ್ಕೆ ಉಪಾಯ :ದಾಳಿಕಾರರಿಗೆ ಶರಣಾಗಿರೆಂದು ರಾಜನ ಹೆಸರಲ್ಲಿ ಅನುಜ್ಞೆ {{gap}}ಅಪ್ಪಚ್ಚು ಮತ್ತು ಉತ್ತಯ್ಯ ಅದಕ್ಕಾಗಿಯೇ ಕಾದಿದ್ದರು. ಕಳಿಂಗಯ್ಯನೂ ಸಮಾಧಾನದ ನಿಟ್ಟುಸಿರು ಬಿಟ್ಟ. ಕುಡಿಯ ಸೋದರರಿಗೇನೋ ಅದು ತಲಪಲಿಲ್ಲ. {{gap}}ಅರಸನ ನಂಬಿಗೆಯ ಕಾರ್ಯಕಾರನಾದ ಐಯಣ್ಣ ಮಾತ್ರ, ಹೀಗೂ ಉಂಟೆ ?-ಎಂದು ವಿಸ್ಮಿತನಾದ. {{gap}}ಕ್ರಮಕ್ರಮವಾಗಿ ವೈರಿಯನ್ನು ಹಣ್ಣುಮಾಡುವ ಅವನ ಸಮರ ನೀತಿ ಆವರೆಗೂ<noinclude></noinclude> odnyzo45sf71zsy1mwj5fzjb9cspyb4 ಪುಟ:ಸ್ವಾಮಿ ಅಪರಂಪಾರ.pdf/೧೧೯ 104 21269 322019 206432 2026-05-23T16:26:49Z Shreesha Sharma 7840 /* Validated */ 322019 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ಸ್ವಾಮಿ ಅಪರಂಪಾರ|left=|right=೧೧೭}} ಯಶಸ್ವಿಯಾಗಿತ್ತು. ಯುದ್ಧದ ಮೂರನೆಯ ದಿನ ಒಂದು ಹರದಾರಿ ಮುಂದುವರಿಯು ವುದಕ್ಕೂ ಇಂಗ್ಲೀಷರು ಶಕ್ತರಾಗಿರಲಿಲ್ಲ. ಹೀಗಿದ್ದೂ ಅವರಿಗೆ ಈಗ ತಾನು ಶರಣಾಬೇಕೆ ? {{gap}}ಮಾನಸಿಕ ತೊಳಲಾಟದಲ್ಲಿ ಆತ ಸಿಲುಕಿದ್ದಾಗಲೇ ಬೊಪು ದಿವಾನ,ನಾಲ್ಕುನೂರ ಜನ ಕೊಡವ ಯೋಧರೊಡನೆ ಅಲ್ಲಿಗೆ ಆಗಮಿಸಿದ. ಅವನ ಪಕ್ಕದಲ್ಲಿ ಪೊನ್ನಪ್ಪನಿದ್ದ. ಲಕ್ಷ್ಮೀನಾರಾಯಣನನ್ನೂ ಒತ್ತಾಯಪಡಿಸಿ ಕರಕೊಂಡು ಬಂದಿದ್ದ ಆತ. ಹೋರಾಡುತ್ತಲಿದ್ದ ಸೈನಿಕರು ತಮಗೆ ಸಹಾಯ ಬಂತು ಎಂದುಕೊಂಡರು. ಈ ಬೋಪುದಿವಾನನ್ನು ನಂಬಿ ಕೆಟ್ಟೆವೋ ಹೇಗೆ-ಎಂದು ಫ್ರೇಸರನ್ನೂ ಲಿಂಡ್ಸೆಯ ಕಾತರಗೊಳ್ಳತೊಡಗಿದ್ದ ವೇಳೆಯಲ್ಲೇ. ಬೋಪಣ್ಣ ಯುದ್ಧರಂಗಕ್ಕೆ ಬಂದಿರುವ ವಾರ್ತೆ ಅವರಿಗೆ ಮುಟ್ಟಿತು. {{gap}}ಐಯ್ಯಣ್ಣನನ್ನು ಬೋಪಣ್ಣ ಕೇಳಿದ : {{gap}}"ಲಡಾಯಿ ನಿಲ್ಲಿಸೂಂತ ಆಜ್ಞೆ ಬರಲಿಲ್ಲವಾ ?" {{gap}}"ಬಂತು" ಎಂದ ಐಯಣ್ಣ. {{gap}}"ಮತ್ಯಾಕೆ ಇನ್ನೂ ಗುಂಡಿನ ಶಬ್ದ ಕೇಳತಾ ಇದೆ ?" {{gap}}"ಆಜ್ಞೆ ಈಗಷ್ಟೇ ಮುಟ್ಟಿತು." {{gap}}"ಏನ್ಮಾಡೋಣಾಂತ ತಲೆ ತುರಿಸ್ಕೊಂಡು ನಿಂತಿದೀಯಾ? ರಾಜದ್ರೋಹಿಯಾಗ ತಿಯ? ನಿನ್ನನ್ನು ಬರ್ತರ್ಫ್ ಮಾಡಿದೀನಿ! ದಳದ ನಾಯಕತ್ವ ನಾನೇ ವಹಿಸಿಕೊಂಡಿ ದೀನಿ !" {{gap}}ಐಯ್ಯಣ್ಣ ಮರುಮಾತನಾಡದೆ,ತನ್ನ ಕೊಂಬು ಟೊಪ್ಪಿಗೆಯನ್ನು ತೆಗೆದು ಕೆಳಗಿರಿಸಿ ಬದಿಗೆ ಸರಿದು ನಿಂತ... {{gap}}...ತಮ್ಮ ಶಿಬಿರದ ಕಡೆಗೆ ಬರತೊಡಗಿದ ಬಿಳಿಯ ಬಾವುಟ ಕಂಡು ಫ್ರೇಸರ್ ಹರ್ಷಿತನಾದ {{gap}}'ಕೃತಾರ್ಥನಾದೆ' ಎಂದುಕೊಂಡ ಬೋಪಣ್ಣ , ಫ್ರೇಸರನಿಂದ ತಾನು ಹಸ್ತಲಾಘವವನ್ನು ಪಡೆದಾಗ. {{gap}}...ಪಶ್ಚಿಮದಲ್ಲಿ ಹೆಗ್ಗಳಘಟ್ಟದ ದಾರಿಯಾಗಿ ಕೊಡಗನ್ನು ಪ್ರವೇಶಿಸುವುದು ಸುಲಭ ಸಾಧ್ಯವಲ್ಲ-ಎಂದು ಕರ್ನಲ್ ಫಾಲ್ಸ್ ಭಾವಿಸತೊಡಗಿದ್ದ. ಅಷ್ಟರಲ್ಲಿ ಮೇಲಿನಿಂದ ಶರಣಾಗತಿಯ ಬಿಳಿಯ ಬಾವುಟ ಕಾಣಿಸಿತು. {{gap}}ಪಶ್ಚಿಮದ ಪಡೆ ಮೇಲೇರಿ ಉಕ್ಕಡವನ್ನು ದಾಟಿತು. {{gap}}ಇಲ್ಲಿಯೂ ಉಳಿದ ಮೂರು ಕಡೆಗಳಲ್ಲಿಯೂ ಎಲ್ಲ ಪಡೆಗಳು ನಿಯೋಜಿತ ರೀತಿಯಲ್ಲೇ ಮುಂದೆ ಸಾಗಿ ಮಡಕೇರಿಯನ್ನು ತಲಪಿದುವು. {{gap}}ಏಪ್ರಿಲ್ ಆರನೆಯ ದಿನ ಇಂಗ್ಲೀಷರು ಮಡಕೇರಿಯ ಕೋಟೆಯನ್ನು ಪ್ರವೇಶಿಸಿದರು. ರಾಜಮನೆತನದ ಕೇತುಪಟ ಕೆಳಕ್ಕಿಳಿದು, ಅದರ ಸ್ಥಾನದಲ್ಲಿ ಯೂನಿಯನ್ ಜಾಕ್ ಹಾರಾಡಿತು. {{gap}}ಅದಾದ ಐದನೆಯ ದಿನ ತಾನು ಸಹಿ ಹಾಕಿದ ಇಸ್ತಿಹಾರೊಂದನ್ನು ಫ್ರೇಸರ್ ಹೊರಡಿಸಿದ. ಅದು ಸಾರಿತು :<noinclude></noinclude> e85u7i8hoofy7h60dcsowqeyabguwtf ಪುಟ:ಸ್ವಾಮಿ ಅಪರಂಪಾರ.pdf/೧೩೮ 104 21288 322017 206451 2026-05-23T16:15:39Z Shreesha Sharma 7840 /* Validated */ 322017 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center= ಸ್ವಾಮಿ ಅಪರಂಪಾರ|left=೧೩೬ |right=}} {{gap}}ಅದನ್ನೆತ್ತಿ ನೋಡಿ ದುಭಾಷಿಯೆಂದ {{gap}}"ಅಪರಂಪಾರಸ್ವಾಮಿಯ ಸಹಿಯಿದೆ, ಖಾವಂದರೆ." {{gap}}"ಯಾರು? ತಡೆ ! ಅಭರಂಭಾರ ಅಂದೆಯಾ? ಆ ಮನುಷ್ಯ? ಏಯ್ ! ನೀನು ಸ್ವಾಮಿಯ ನಂಟನೊ ?" {{gap}}"ವಿರಕ್ತರಲ್ಲಿ ನಂಟಸ್ತನವೆ? ಹ್ಞಾ , ಒಂದು ರೀತಿಯಲ್ಲಿ ನಾವು ಆಪ್ತಬಂಧುಗಳು" ಎಂದ ಸಿದ್ಧಲಿಂಗ, ದುಭಾಷಿಯ ಹಾಗೂ ಕಾಸ್ಸಾಮೇಜರನ ಮುಖ ನೋಡುತ್ತ {{gap}}ಕಾಸ್ಸಾಮೇಜರನ ಕಣ್ಣುಗಳು ಚುರುಕುಗೊಂಡುವು. {{gap}}ಆತನೆಂದ: {{gap}}"ಪತ್ರ ಹಿಂದೂಸ್ಥಾನಿಯಲ್ಲಿದೆಯೋ ಕ್ಯಾನರೀಸಿನಲ್ಲಿದೆಯೊ ?" {{gap}}''ಕ್ಯಾನರೀಸಿನಲ್ಲಿ" ಎಂದ, ದುಭಾಷಿ. {{gap}}"ಒಂದೊಂದೇ ವಾಕ್ಯ ಓದಿ ತರ್ಜುಮೆ ಮಾಡು {{gap}}ಸಿದ್ದಲಿಂಗ ನಿಂತಿದ್ದ. {{gap}}ಓಲೆಯ ಭಾಷಾಂತರಕ್ಕೆ ಪಠನಕ್ಕೆ ಕಿವಿಗೊಟ್ಟ. {{gap}}ಕಾಸ್ಸಾಮೇಜರ್ ಮೇಜನ್ನು ಗುದ್ದಿ ಗದರಿದ : {{gap}}''ಆ ಅಭರoಭಾರ ಸ್ವಾಮಿ ಮೂರ್ಖನಿರಬೇಕು, ಶತಮೂರ್ಖನಿರಬೇಕು, ಅವನು ಏನೂಂತ ತಿಳಕೊಂಡಿದ್ದಾನೆ ?" {{gap}}ಸಿದ್ಧಲಿಂಗನ ಕಡೆ ನೋಡಿ ಹಿಂದೂಸ್ಥಾನಿಯಲ್ಲಿ ಅವನೆಂದ : {{gap}}'ಏಯ್ ! ನಿನಗೆ ಮೊಗಲಾಯಿ ಬರುತದೊ ?'' {{gap}}"ಪರದೇಶೀಯರಾದ ತಮಗೆ ಬರತದೆ. ನನಗೆ ಬರಲಾರದಾ ? ಅಷ್ಟೇ ಅಲ್ಲ, ತಿಳಕೊಳ್ಳಿ ಸಾಹೇಬರೇ. ನೀನು-ನೀವು–ತಾವು ವ್ಯತ್ಯಾಸವೆಲ್ಲ ನನಗೆ ಗೊತ್ತಾಗತದೆ. ಗೌರವದಿಂದ ಮಾತನಾಡಿದರೆ ಚೆನ್ನು." {{gap}}"ಮುಚ್ಚುಬಾಯಿ! ನಾಲಿಗೆ ಕೆನ್ನೆ ಒಳಗಡೆ ಇಟ್ಟು ಮಾತಾಡಬೇಡ." {{gap}}"ಒಳಗಡೆಯೂ ಇಡೋದಿಲ್ಲ, ಉದ್ದವೂ ಬೆಳೆಸೋದಿಲ್ಲ, ಎಷ್ಟು ಅಗತ್ಯವೋ ಅಷ್ಟೇ ಮಾತಾಡತೇನೆ.'' {{gap}}"ನಿನ್ನ ಸ್ವಾಮಿಯ ಹತ್ತರ ಎಷ್ಟು ಫೌಜದೆ ?" {{gap}}"ಅಪರಂಪಾರ ಸ್ವಾಮಿಯವರು ಫೌಜುದಾರರಲ್ಲ ಸಾಹೇಬರೇ." {{gap}}"ಮತ್ತೆ ? ಅನಾಹುತವಾದೀತು ಅಂತ ಎಚ್ಚರಿಕೆ ಕೊಡುತಾನಲ್ಲ ! ಅವನಿಗೆ ಮತಿ- ಭ್ರಮಣೆಯಾಗಿದೆಯೊ ?" {{gap}}"ತಿಳಕೊಳ್ಳಿ ! ಅವಾಚ್ಯ ಪದಗಳನ್ನಾಡಿದರೆ ನಾನು ಕೇಳುವವನಲ್ಲ !" {{gap}}"ಇಷ್ಟು ಧೈರ್ಯ ! ಹುಂ. ನಿನ್ನನ್ನು ಕಟ್ಟಿಹಾಕಿ ಬಂದೀಖಾನೆಯಲ್ಲಿಡತೇವೆ. ಏನು ಮಾಡತೀಯಾ ?" {{gap}}ದುಭಾಷಿಯ ಕಡೆ ನೋಡಿ ಸಿದ್ದಲಿಂಗ ಕನ್ನಡದಲ್ಲಿ ಅಂದ : {{gap}}"ಜ್ವರವಿಡಿದ ಬಾಯಿಗೆ ನೊರೆವಾಲು ಒಲಿವುದೆ ?" {{gap}}ಕಾಸ್ಸಾಮೇಜರ್ ಗರ್ಜಿಸಿದ : {{gap}}"ಏನೆಂದ ಅವನು ?"<noinclude></noinclude> atsuaiqabheb8c54w5a7xk4nvzqqpbk ಪುಟ:ಸ್ವಾಮಿ ಅಪರಂಪಾರ.pdf/೧೩೯ 104 21289 322018 206452 2026-05-23T16:22:03Z Shreesha Sharma 7840 /* Validated */ 322018 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ಸ್ವಾಮಿ ಅಪರಂಪಾರ|left=|right= ೧೩೭ }} {{gap}}ದುಭಾಷಿ ನಿವೇದಿಸಿದ : {{gap}}"ನಿಮಗೆ ಜ್ವರ ಬಂದಿದೆ : ಹಾಲು ಕೊಟ್ಟರೆ ಬೇಡ ಅನ್ನುತೀರಿ ಅಂತಾನೆ." {{gap}}"ಹುಚ್ಚಚ್ಚಾರ ! ನನಗೆಲ್ಲಿಯ ಜ್ವರ ? ಇಂಗ್ರೇಜಿ ಸರಕಾರದ ದೌಲತ್ತಿನ ಮುಂದೆ ಈ ಪಿಟಿಪಿಟಿ ?" {{gap}}ಸಿದ್ದಲಿಂಗನೆಂದ : {{gap}}"ದೌಲತ್ತು ? ಅಯ್ಯಾ , ನಿಮ್ಮ ಕರಸ್ಥಲದ ಘನ ನಿಮ್ಮಲ್ಲಿರಲಿ, ಅಯ್ಯಾ ನಿಮ್ಮ ಪರ ಸ್ಥಲದ ಘನ ನಿಮ್ಮಲ್ಲಿರಲಿ !" {{gap}}"ಏನೆನ್ನುತಿದಾನೆ ಈತ ?" {{gap}}ದುಭಾಷಿ ಅರಿಕೆ ಮಾಡಿದ : {{gap}}"ಅದೊಂದು ಶಿವಶರಣರ ವಚನ , ಖಾವಂದರೇ, ತಾವು ಪರಸ್ಥಲದವರು ಎನ್ನುತ್ತಾನೆ." {{gap}}ಸಿದ್ದಲಿಂಗ ಕೇಳಿದ: {{gap}}''ಸ್ವಾಮಿಗಳ ಪತ್ರಕ್ಕೆ ಉತ್ತರವಿಲ್ಲವೇನು ?" {{gap}}"ಉತ್ತರ ನಮ್ಮ ಸೈನಿಕರು ಕೊಡುತಾರೆ" ಎಂದ ಕಾಸ್ಸಾಮೇಜರ್. {{gap}}''ಹಾವಿನ ಬಾಯಕಪ್ಪೆ, ಹಸಿದು, ಹಾರುವ ನೊಣಕ್ಕೆ ಆಸೆ ಮಾಡುವಂತೆ ಶೂಲವ ನೇರುವ ಕಳ್ಳನು ಹಾಲು ತುಪ್ಪವ ಕುಡಿದು ಮೇಲೇಸು ಕಾಲ ಬದುಕುವನೊ ? ಕೆಡೆ ಒಡಲ ನೆಚ್ಚಿ ಕಡು ಹುಸಿಯನೆ ಹುಸಿದು ಒಡಲ ಹೊರೆವವರ ಕೂಡಲ ಸಂಗಮದೇವಯ್ಯ ನರನೊಲ್ಲ ಕಾಣಿರಣ್ಣ." {{gap}}ದುಭಾಷಿಯೆ೦ದ : {{gap}}"ಇದೂ ಒಂದು ವಚನ, ಸಾಹೇಬರೇ, ತಮ್ಮನ್ನು ಅದು ಟೀಕಿಸತದೆ." {{gap}}"ನಮ್ಮನ್ನು ಟೀಕಿಸುತದೆ ! ಹುಂ ! ಕಂಪನಿಯ ರಾಯಭಾರಿ ಕುಲಪಟ್ಟಿ ಕರುಣಾಕರ ಮೆನೊನನ್ನು ಕೊಡಗಿನ ಅರಸ ಚಿಕವೀರರಾಜೇಂದ್ರ ಬಂಧಿಸಿಟ್ಟಿದ್ದ. ಈಗ ನಿನ್ನನ್ನು ನಾವು ಬಂಧನದಲ್ಲಿಡುತೇವೆ." {{gap}}"ನನಗೆ ಗೊತ್ತಿರುವ ಹಾಗೆ ಮೆನೊನ್ ಗೂಢಚರ್ಯೆ ಮಾಡಿದ. ನಾನಾದರೋ ಓಲೆ ಹೊತ್ತ ದೂತನಾಗಿ ಬಂದಿದೇನೆ." {{gap}}"ಓಲೆಯಾ ? ಅಲ್ಲ ? ಇದು ಬಂಡಾಯ ಪ್ರದರ್ಶನ. ಯಾರಲ್ಲಿ ? ಈ ಫಕೀರನನ್ನು ಬಂಧಿಸಿ ಸೆರೆಯಲ್ಲಿಡಿ !" {{gap}}"ಶಿವ, ಶಿವ, ಶಿವ !'' ಎಂದ, ಸಿದ್ಧಲಿಂಗ. ಒಂದು ಕ್ಷಣ ಅವನ ಪಾದಗಳು ತಣ್ಣಗಾದುವು. ಆದರೂ ಅಧೀರನಾಗದೆ ಆತ ನಿ೦ತ. {{gap}}ಸಶಸ್ತ್ರ ಕಾವಲುಗಾರರು ಒಳಬಂದು, ಸಿದ್ದಲಿಂಗನ ಎರಡೂ ರಟ್ಟೆಗಳನ್ನು ಹಿಡಿದು ಹಿಂದಕ್ಕೆ ಜಗ್ಗತೊಡಗಿದರು {{gap}}ಸಿದ್ದಲಿಂಗ ಕೂಗಿ ನುಡಿದ: {{gap}}"ದರ್ಪಿಷ್ಟನಾದ ಕುಂಪಣಿ ಚಾಕರ ! ಇದರ ಫಲ ನೀನು ಉಣ್ಣತೀಯೆ ! ಜೋಕೆ !" ಕಾಸ್ಸಾಮೇಜರ್ ಕರ್ಕಶವಾಗಿ ಅಂದ: {{gap}}"ತೊಲಗಾಚೆ !" {{gap}}ಹೊರಗೆ ಸೆರೆಮನೆಯ ಕಡೆಗೆ ನಡೆಯುತ್ತ, ಕೈಗಳಿಗೆ ತೊಡಿಸಿದ ಸಂಕೋಲೆಗಳ<noinclude></noinclude> 1yxm4b0hkbwuo20wwbqp079y1wsjezj ಪುಟ:ಸ್ವಾಮಿ ಅಪರಂಪಾರ.pdf/೧೫೪ 104 21304 322001 206467 2026-05-23T14:39:49Z Shreelatha.Halemane 7642 /* Validated */ 322001 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=೧೫೨|right=}} {{gap}}ಸುತ್ತಲಿನವರು ಆಡಿಕೊಂಡರು : {{gap}}"ಇವನು ದರ್ಪಿಷ್ಹನಾದ ದೊರೆ.” {{gap}}ಲೀಹಾರ್ಡಿಗೆ ಸ್ಪೋಕ್ಸ್ ಬರೆದ: {{gap}}"ನಾನು ಮೈಸೂರಿಗೆ ಬಂದು ಅಧಿಕಾರ ವಹಿಸಿಕೊಂಡಿರುವ ವಿಷಯ ನಿಮಗೆ ಗೊತ್ತಿದ್ದೀತು. ಅಪರಂಪಾರಸ್ವಾಮಿ ಮತು ಅವನ ಸಂಗಡಿಗರ ಹುಟ್ಟಡಗಿಸುವುದು ತಡವಾಗಬಾರದು. ಆ ದಿಶೆಯಲ್ಲಿ ನಮ್ಮಿಂದೇನಾದರೂ ಆಗಬೇಕಿದ್ದರೆ ತಿಳಿಸೋಣಾಗಲಿ." {{gap}}ಆದರೆ, ಒಂದು ಸಂಗತಿ ಸ್ಟೋಕ್ಸ್ ಗೆ ತಿಳಿದಿರಲಿಲ್ಲ. ಆ ಪತ್ರವನ್ನು ಆತ ಬರೆಯುತ್ತಿದ್ದ ಘಳಿಗೆಯಲ್ಲೇ ಅಪರಂಪಾರಸ್ವಾಮಿ ಮೈಸೂರು ನಗರದೊಳಕ್ಕೆ ಕಾಲಿರಿಸಿದ್ದ, ಜತೆಗೆ ಅಪ್ಪಯ್ಯ, ವೆಂಕಟಪ್ಪ ಮತ್ತಿತರ ಪ್ರಮುಖರೂ ಇದ್ದರು. ಅವರೆಲ್ಲ ಯಾತ್ರಿಕರಂತೆ ವೇಷ ಮರೆಸಿ ಧರ್ಮಛತ್ರದಲ್ಲಿ ತಂಗಿದ್ದರು. {{gap}}ಕತ್ತಲಾದ ಬಳಿಕ ಅಪರಂಪಾರನನ್ನು ಬಸಪ್ಪಾಜಿ ಅರಸ ಮನೆಗೆ ಬರಮಾಡಿಕೊಂಡ. ಗೌರವಾದರಗಳನ್ನು ತೋರುತ್ತ ವಿನೀತನಾಗಿ ಅವನೆಂದ: "ವಿದ್ಯಮಾನಗಳನ್ನು ತಿಳಿದೆ, ಸ್ವಾಮಿಯವರೆ, ಮೆಚ್ಚುಗೆ ಸೂಚಿಸೋದು ಸರಿಯೋ ತಪ್ಪೋ ಅರಿಯೆ. ಆಗಬೇಕಾದಷ್ಟು ನನ್ನ ಕಡೆಯಿಂದ ಆಗಿಲ್ಲ ಅನ್ನೋದೊಂದೇ ನನ್ನ ಕೊರಗು. {{gap}}ಅಪರಂಪಾರ ನುಡಿದ : {{gap}}"ಅದನ್ನು ಇತ್ಯರ್ಥಪಡಿಸೋಣ ಅಂತಲೇ ಬಂದೆವು. ತೆನೆ ಭಾರದಿಂದ ಪೈರು ಬಾಗ ತೊಡಗಿದೆ, ಕುಯಿಲಿಗೆ ಬರುತೇನೆ ಅಂದಿದ್ದಿರಿ. ಇನ್ನು ಬಹಳ ಸಮಯ ಉಳಿದಿಲ್ಲ." {{gap}}"ಕೊಟ್ಟ ಮಾತಿಗೆ ತಪ್ಪಲಾರೆ. ನನ್ನ ಧನಕನಕ ಸರ್ವಸ್ವ ಮಿಾಸಲು. ನಾನೂ ಬರುತ್ತೇನೆ. ಜತೆಯಲ್ಲೂ ಹಲವರನ್ನು ತರುತ್ತೇನೆ." {{gap}}"ಇಲ್ಲಿ ಬಂಡಾಯವೇಳುವ ಮಾತು?" {{gap}}ಬಸಪ್ಪಾಜಿಯ ಉತ್ತರ ತಡವಾಯಿತು: {{gap}}"ಮಿಾನ ಮೇಷ ಎಣಿಸುತಾ ಇದಾರೆ. ಕೊನೇ ನಿರ್ಧಾರ ಮಾಡಿಲ್ಲ." {{gap}}"ಕೃಷ್ಣರಾಜ ಒಡೆಯರನ್ನು ನಾವು ಕಂಡರಾಗುತ್ತಿತ್ತು." {{gap}}ಕ್ಷಣ ವಿಳಂಬಿಸಿ ಬಸಪ್ಪಾಜಿ ಉತ್ತರವಿತ್ತ : {{gap}}"ಆಗಲಿ, ಅರಮನೆಗೆ ಹೋಗಿ ಮಾತನಾಡಿ ಬರುತ್ತೇನೆ. ಇದು ಗೋಪ್ಯವಾಗಿ ನಡೆಯಬೇಕಾದ ಸಂಗತಿ." {{gap}}"ನಾವು ಛತ್ರಕ್ಕೆ ಹೋಗಿ ಇರತೇವೆ, ಆಗದೆ?" {{gap}}"ತಮಗೆ ಆಕ್ಷೇಪವಿಲ್ಲವಾದರೆ ತಾವು ಇಲ್ಲಿ ತಂಗಬಹುದು. ಅಂಗರಕ್ಷಕನಾಗಿ ತಮ್ಮ ಕಡೆಯ ಒಬ್ಬಾತ ಇರಲಿ, ಇಲ್ಲಿ ತಾವು ಸುರಕ್ಷಿತವಾಗಿರುತೀರಿ. ಆ ಜವಾಬ್ದಾರಿ ನನ್ನದು." {{gap}}"ಆಗಲಿ, ಛತ್ರಕ್ಕೆ ಸುದ್ದಿ ಮುಟ್ಟಿಸಿಬಿಡಿ. ಶಂಕರಪ್ಪ ಇಲ್ಲೇ ಹೊರಗಿದಾನೆ. ನಮ್ಮ ಜತೆ ಉಳಿಯಲಿ." {{gap}}ಸ್ವಲ್ಪ ಸಮಯ ಕಳೆದು ಅಪರಂಪಾರನೆಂದ : {{gap}}"ಸಿದ್ಧಲಿಂಗ ಅಯ್ಯನನ್ನು ಎಲ್ಲಿ ಸೆರೆಯಲ್ಲಿಟ್ಟಿದಾರೆ, ಬಲ್ಲಿರಾ?" {{gap}}"ಶ್ರೀರಂಗಪಟ್ಟಕ್ಕೆ ಒಯ್ದರೂಂತ ಕಳೆದ ವರ್ಷ ಕೇಳಿದೆ."<noinclude></noinclude> 4fr3p994kqld065yamjomi2s28td10o ಪುಟ:ಸ್ವಾಮಿ ಅಪರಂಪಾರ.pdf/೧೫೫ 104 21305 322013 206468 2026-05-23T15:18:27Z Shreelatha.Halemane 7642 /* Validated */ 322013 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರ೦ಪಾರ |left=|right=೧೫೩}} {{gap}}"ಅವರಿಗೊಂದು ಸಂದೇಶ ತಲಪಿಸುವುದು ಸಾಧ್ಯವೇ?” {{gap}}"ಸಾಧ್ಯವಾದೀತು,ಅನ್ನಿ." {{gap}}"ಬಿಡುಗಡೆಯ ದಿನ ದೂರವಿಲ್ಲ ಅಂತ ನಾವು ತಿಳಿಸಿದೇವೆ--ಎಂದರಾಯ್ತು." {{gap}}ದೂತನಾಗಿ ಬಂದವನೊಬ್ಬನ ವಿಷಯದಲ್ಲಿ ಇಷ್ಟೊಂದು ಅನುಕಂಪ! ಬಸಪ್ಪಾಜಿ ಕಣ್ಣುಗಳು ಮ೦ಜಾದುವು. {{gap}}"ಸ್ವತಃ ನಾನೇ ಪಟ್ಟಕ್ಕೆ ಹೋಗಿ ಸಂದೇಶ ಮುಟ್ಟೋ ಹಾಗೆ ಏರ್ಪಾಟುಮಾಡುತೇನೆ,ಸ್ವಾಮಿಯವರೆ." {{center|೫೪}} {{gap}}ರಾತ್ರೆಯ ಊಟದ ಹೊತ್ತು. ಅರಮನೆಯ ಕೈದೋಟದ ಕಡೆಗೆ ನಾಲ್ವರು ವ್ಯಕ್ತಿಗಳು ಚಲಿಸುತ್ತಿದ್ದುದು ಗಮನಕ್ಕೆ ಬಂದು, ಕಾವಲುಗಾರ ಧ್ವನಿ ಏರಿಸಿ ಕೇಳಿದ: {{gap}}"ಯಾರದು ?" {{gap}}ವ್ಯಕ್ತಿಗಳಲ್ಲೊಬ್ಬ--ಬಸಪ್ಪಾಜಿ ಅರಸು---ಗಡಸು ಸ್ವರದಲ್ಲಿ ಉತ್ತರವಿತ್ತ: {{gap}}"ನಾವು ಕಣಪ್ಪ. ಮಹಾಸ್ವಾಮಿಯೋರು ಕರೆಸಿದಾರೆ." {{gap}}ಕಾವಲುಗಾರನಿಗೆ ಅದು ಪರಿಚಿತ ಗಂಟಲು {{gap}}"ಯಾರೂಂತ ತಿಳೀದೆ ಕೇಳ್ದೆ. ತಪ್ಪಾಯ್ತು ನನ್ನೊಡ್ಯಾ" ಎಂದ ಆತ. {{gap}}ಕೈದೋಟದೊಂದು ಮೂಲೆಯಲ್ಲಿ ಚಪ್ಪರದ ಕೆಳಗೆ ಕಲ್ಲು ಹಾಸುಗೆಯ ಮೇಲೆ ಕೃಷ್ಣರಾಜ ಒಡೆಯ ಕುಳಿತಿದ್ದ.ಕಾವಲುಗಾರ–ಬಸಪ್ಪಾಜಿಯವರ ಸಂಭಾಷಣೆ ಆತನಿಗೆ ಕೇಳಿಸಿತ್ತು {{gap}}ವ್ಯಕ್ತಿಗಳು ಹತ್ತಿರ ಬಂದಾಗ ಆತ ಎದ್ದು ನಿಂತ. ಏಳಬಾರದಿತ್ತೇನೋ ಎಂದು, ಅತ್ತಿತ್ತ ನಡೆಯತೊಡಗಿದ. {{gap}}ಬಂಧುವಿನ ಸಲಿಗೆಯನ್ನು ಧ್ವನಿಯಲ್ಲಿ ತೋರುತ್ತ ಬಸಪ್ಪಾಜಿ ಅರಸನೆಂದ {{gap}}"ಬಹಳ ಹೊತ್ತಾಯ್ತು ಬಂದು ?" {{gap}}ಕೃಷ್ಣರಾಜನೆಂದ : {{gap}}"ಇಲ್ಲಪ್ಪ, ಇಲ್ಲಪ್ಪ. ನಾವು ಈ ದಾರಿಯಾಗಿ ಬಂದ್ವಿ; ನೀವು ಆ ದಾರಿಯಾಗಿ ಬಂದಿರಿ." {{gap}}"ಇವರೇ ಸ್ವಾಮಿಯವರು.” {{gap}}ಅಪರಂಪಾರ ತಾನು ಹೊದೆದಿದ್ದ ಕಂಬಳಿಯನ್ನು ತೆಗೆದು ಇನ್ನೊಂದು ವ್ಯಕ್ತಿಯ– ಅಪ್ಪಯ್ಯನ—ಕೈಗಿತ್ತ, ಕಾವಿಯ ನಿಲುವಂಗಿ ಕೃಷ್ಣರಾಜನಿಗೆ ಕಾಣಿಸಿತು. {{gap}}ಆತನೆಂದ : {{gap}}"ಶರಣು." {{gap}}"ಶರಣು, ಒಡೆಯರು ಕೂತಿರೋಣಾಗಲಿ." {{gap}}ಅಪ್ಪಯ್ಯ ವೆಂಕಟಪ್ಪರ ಪರಿಚಯವನ್ನೂ ಬಸಪ್ಪಾಜಿ ಮಾಡಿಕೊಟ್ಟ. ಅವರಿಬ್ಬರೂ ತುಸು ದೂರದಲ್ಲಿ ಕುಳಿತರು. {{gap}}ನಾಲ್ವತ್ತರ ಗಡಿ ದಾಟಿದ್ದ ಅರಸ ಬಕ್ಕತಲೆಯಲ್ಲೆ ಬಂದಿದ್ದರೂ ರಾಜೋಚಿತವಾದ ಪೋಷಾಕನ್ನು ಧರಿಸಿದ್ದ. ಯಾರಾದರೂ ನೋಡುತ್ತಿರುವರೇನೋ ಎಂದು ಅವನ ದೃಷ್ಟಿ ಅತ್ತಿತ್ತ ಚಲಿಸುತ್ತಿತ್ತು.<noinclude></noinclude> 0qef547h8y998j63t31jpppdd6tbd89 ಪುಟ:ಸ್ವಾಮಿ ಅಪರಂಪಾರ.pdf/೧೫೬ 104 21306 322014 206469 2026-05-23T15:26:48Z Shreelatha.Halemane 7642 /* Validated */ 322014 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=೧೫೪ |right=}} {{gap}}ತಗ್ಗಿದ ಧ್ವನಿಯಾದರೂ ಮಾತಿನಲ್ಲಿ ಗಾಂಭೀರ್ಯ ತುಂಬಿ, ಅಪರಂಪಾರನೆಂದ: {{gap}}“ಈ ಭೇಟಿಯ ಉದ್ದೇಶ ಮಹಾರಾಜರಿಗೆ ವೇದ್ಯವಿದ್ದೀತು." {{gap}}ಪೀಠಿಕೆ ಅನಗತ್ಯ ಎನ್ನುವಂತೆ ಅಸಹನೆ ತೋರುತ್ತ ಕೃಷ್ಣರಾಜ ಒಡೆಯನೆಂದ: {{gap}}"ಬಸಪ್ಪಾಜಿ ಹೇಳಿದಾರೆ.ನಮ್ಮಿಂದೇನಾಗಬೇಕು, ತಿಳಿಸಿಬಿಡಿ." {{gap}}ಅಪರಂಪಾರ ಸಾವಧಾನವಾಗಿ ಅಂದ {{gap}}"ಲೋಕದಲ್ಲಿ ಜನ್ಮತಾಳುವವರೆಲ್ಲ ಮಹಾಪುರುಷರಲ್ಲ. ಆದರೂ ಹುಟ್ಟಿದ ಪ್ರತಿಯೊಬ್ಬನೂ ದೈವತ್ವ ಪಾಪ್ತಿಗೆ ಪ್ರಯತ್ನಿಸಬೇಕು. ಸಾಧ್ಯವಾಗತದೋ ಇಲ್ಲವೋ ಅನ್ನೋದುಬೇರೆ ಮಾತು. ನಾವು ಒಂದಷ್ಟು ಜನ ಆ ದಿಕ್ಕಿನಲ್ಲಿ ಅಲ್ಪ ಪ್ರಯತ್ನ ಮಾಡತಾ ಇದ್ದೇವೆ.ಅದೇನೂಂತ ತಮಗೆ ಗೊತ್ತಿದೆ. ಮೈಸೂರಿಗೆ ಅನ್ಯಾಯವಾದಾಗಲೇ ನಾವು ಅಂದುಕೊಂಡೆವು, ಕೊಡಗಿಗೂ ಈ ದುರ್ಗತಿ ಬೇಗ ಪ್ರಾಪ್ತವಾಗತದೆ. ಅಂತ, ಹಾಗೇ ಆಯ್ತು.ಡೊಂಕಾದದ್ದನ್ನ ಸರಿಪಡಿಸೋಕೆ ಈಗ ನೋಡತಿದೇವೆ.' {{gap}}ಕೃಷ್ಣರಾಜ ನಡುವೆ ಬಾಯಿ ಹಾಕಿದ : {{gap}}"ಬಸಪ್ಪಾಜಿ ಎಲ್ಲ ವಿಷಯ ಬಲ್ಲರು. ನಮ್ಮ ಬೊಕ್ಕಸ ಈಗ ಬರಿದಾಗಿದೆ. ಕುಂಪಣಿ ವರು ಕೊಡುವ ಹಣ ಅರಮನೆಯ ವೆಚ್ಚಕ್ಕೇ ಸಾಲದು. ಆದರೂ ನಮ್ಮ ಕೈಲಾದ ಸಹಾಯ ನಾವು ಮಾಡುತೇವೆ." {{gap}}ಉಗುಳು ನುಂಗಿ ಅಪರಂಪಾರನೆಂದ: {{gap}}"ಹಣದ ಮಾತಲ್ಲ. ತಮಗೆ ಅನ್ಯಾಯ ಮಾಡಿದರೂಂತ ಬಹಿರಂಗವಾಗಿ ತಾವು ಸಾರಿ ದರೆ ಜನ ರೊಚ್ಚಿಗೇಳತಾರೆ.ತಮ್ಮ ಕಡೆಯ ಧೀರರು ಒಬ್ಬಿಬ್ಬರು ದಾರಿ ತೋರಿದರೆ ಇಂಗ್ರೇಜಿಯವರಿಗೆ ಪ್ರಜೆಗಳೇ ಬುದ್ಧಿ ಕಲಿಸತಾರೆ." {{gap}}"ಬಂಡಾಯವೇಳಬೇಕು ಅಂತಲೆ ನೀವು ಹೇಳೋದು?" {{gap}}"ಅದು ಸಾಧ್ಯವಾದರೆ ನಾವು ಧನ್ಯರಾಗುತೇವೆ." {{gap}}"ವಿಚಾರಮಾಡಿ ನೋಡುತೇವೆ. ಇಕ್ಕೇರಿಯ ಸೂರಪ್ಪ ನಾಯಕರೂ ನಿಮ್ಮ ಜತೆ ಇದಾರಂತೆ." {{gap}}"ಹೌದು: ಮೈಸೂರು, ಇಕ್ಕೇರಿ, ಕೊಡಗುಗಳು ಸ್ವತಂತ್ರ ರಾಜ್ಯಗಳಾಗಿ ಪುನ ಉದಯಿಸೋದನ್ನು ನೋಡಿದರೆ ನಮ್ಮ ಜನ್ಮ ಸಾರ್ಥಕವಾಗತದೆ.' {{gap}}ತುಸು ಅನುಮಾನಿಸಿ ಕೃಷ್ಣರಾಜನೆಂದ: {{gap}}"ಒಂದು ಮಾತು ನಾವು ಹೇಳಿಬಿಡುವುದು ಮೇಲು." {{gap}}"ತಿಳಿಸೋಣಾಗಲಿ." {{gap}}"ಇಕ್ಕೇರಿ ಮೈಸೂರಿನ ಒಂದು ಭಾಗ." {{gap}}"ಹೈದರ್ ಗೆದ್ದಮೇಲೆ ಹಾಗಾಯ್ತು. ಈಗಂತೂ ಇಕ್ಕೇರಿ, ಮೈಸೂರುಗಳೆರಡೂ ಇಂಗ್ರೇಜಿಯವರ ವಶದಲ್ಲಿವೆ ಮೈಸೂರು, ಇಕ್ಕೇರಿಗಳೆರಡೂ ಸ್ವತಂತ್ರವಾದರೆ ಅನ್ಯೋನ್ಯ ಮೈತ್ರಿಯಿಂದ ಇರಬಹುದಲ್ಲ ?" {{gap}}"ವಿಚಾರಮಾಡಿ ಹೇಳತೇವೆ." {{gap}}"ಅಪರಾತ್ರಿಯಲ್ಲಿ ಹೀಗೆ ಕರೆಸಿ ತೊಂದರೆ ಕೊಟ್ಟೆವು." {{gap}}"ಪರವಾಗಿಲ್ಲ. ನಮಗೆ ಅಂಥ ಕೆಲಸವಾದರೂ ಏನಿದೆ? ಶಿವಮೊಗ್ಗಿಯಿಂದ ದಶಾವತಾರ<noinclude></noinclude> hx0c833xboipg1a6n018pv2gkog1rne ಪುಟ:ಸ್ವಾಮಿ ಅಪರಂಪಾರ.pdf/೧೫೭ 104 21307 322010 206470 2026-05-23T14:59:12Z Ashwini Rai K 8475 /* Validated */ 322010 proofread-page text/x-wiki <noinclude><pagequality level="4" user="Ashwini Rai K" />{{rh|center=ಸ್ವಾಮಿ ಅಪರಂಪಾರ|right=೧೫೫|left=}}</noinclude>ಮೇಳದವರನ್ನು ಕರೆಸಿದ್ವಿ. ಇವತ್ತು ಆಡಿಸೋಣ ಅಂತಿದ್ವಿ. ನಾಳೆಗೆ ಇಟ್ಟುಕೊಂಡರಾಗದೆ </br>ಅಂದರು ಬಸಪ್ಪಾಜಿ. ಒಪ್ಪಿದ್ವಿ. ಇವತ್ತು ಈ ಕಾರ್ಯಕ್ರಮವಾಯ್ತು. ನಾಳೆ ದಶಾವತಾರ</br> ಬಯಲಾಟ."</br> {{gap}}ಏಳಬೇಕು ಎనిಸಿತು అಪರ೦ಪಾರನಿಗೆ. ತಾನಾగి ಮೊದలు ಏಳುವುದು ಅಪಚಾರ</br>ವಾಗುವುದೆಂದು ಸುಮ್ಮನಿದ್ದ. ಬಸಪ್ಪಾಜಿ ಸೂಕ್ಷ್ಮವನ್ನು ಗ್ರಹಿಸಿ, "ಇನ್ನು ಏಳೋಣ,</br>ಆಗದೆ?" ಎಂದ.</br> {{gap}}ಕೃಷ್ಣರಾಜ ಒಡೆಯನೆದ್ದ. ಉಳಿದವರೂ ಎದ್ದರು. ವಂದನೆ ಪ್ರತಿವಂದನೆಗಳಾದುವು.</br> {{gap}}ಅಪರಂಪಾರ ಕಂಬಳಿ ಹೊದೆದುಕೊಂಡ.</br> {{gap}}ನಾಲ್ವರು ವ್ಯಕ್ತಿಗಳು ಪುನಃ ಕೈದೋಟದಿಂದ ಹೊರಬಿದ್ದರು...</br> {{gap}}...ದಾರಿಯಲ್ಲಿ ಬಸಪ್ಪಾಜಿ ಕೇಳಿದ:</br> {{gap}}"ಸ್ವಾಮಿಯವರಿಗೆ ನಿರಾಸೆಯಾಯ್ತೆ?"</br> {{gap}}ಅಪರಂಪಾರನೆಂದ:</br> {{gap}}"ಇಲ್ಲ. ಕಳೆದುಹೋದ ಸ್ವಾತಂತ್ರ್ಯವನ್ನ ಪುನಃ ಗಳಿಸೋದು ಎಷ್ಟು ಕಠಿಣ ಅನ್ನೋದು</br> ಈಗ ಹೆಚ್ಚು ಮಂದಟ್ಟಾಗಿದೆ."</br> {{gap}}...ಮುದೆ ಒಂದೇ ದಿನದ ಅವಧಿಯಲ್ಲಿ ಬೇರೊಂದು ಅನುಭವ ಅಪರಂಪಾರನನ್ನು</br> ಅಣಕಿಸಿತು.</br> {{gap}}ಕೈದೋಟದಲ್ಲಿ ಭೇಟಿ ನಡೆದ ಮಾರನೆಯ ರಾತ್ರೆ, ಧರ್ಮಛತ್ರದಲ್ಲಿ ಮಲ್ಲಪ್ಪಗೌಡ</br> ಓಡುತ್ತೋಡುತ್ತ ಬಸಪ್ಪಾಜಿ ಅರಸನ ಮನೆಗೆ ಬಂದ. ಶಂಕರಪ್ಪನೂ ಅವನೂ ಒಳ</br> ಕೊಠಡಿಯ ಬಾಗಿಲು ಬಡಿದರು. ಅಪರಂಪಾರನಾಗಲೀ ಬಸಪ್ಪಾಜಿಯಾಗಲೀ ನಿದ್ರಿ</br> ಸಿರలిల్ల.</br> {{gap}}ಏದುಸಿರು ಬಿಡುತ್ತ ಮಲ್ಲಪ್ಪಗೌಡನೆಂದ:</br> {{gap}}“ಇಂಗ್ರೇಜಿ ಸಿಪಾಯರು ಛತ್ರವನ್ನ ಸುತ್ತುವರಿದವರೆ. ನಾನು ಹೊರಗೆ ಮರದ ಕೆಳಗೆ</br> ಕಾವಲು ಕುಳಿತಿದ್ದೆ."</br>{{gap}}ಅಪರಂಪಾರ ಕೇಳಿದ:</br> <nowiki></nowiki>{{gap}}"ಛತ್ರದೊಳಗೆ ಯಾರಿದಾರೆ ?"</br> {{gap}}"ನಮ್ಮವರು ಬಯಲಾಟ ನೋಡೋಕೆ ಓದ ಒಸಿ ಒತ್ನಲ್ಲೇ ಇವರು ಬಂದ್ರು. ನಾಟಕ</br> ఇರದೇ ಓಗಿದ್ರೆ ಎಲ್ರೂ ಸಿಕ್ಹಾಕೊಳ್ತಿದ್ವಿ."</br> {{gap}}"ಈಗ? ಅಪ್ಪಯ್ಯ-ವೆಂಕಟಪ್ಪನವರಿಗೆಲ್ಲಾ ತಿಳಿಸಿದಿಯಾ ?"</br> {{gap}}"ಹ್ಞು. ಅವರೆಲ್ಲಾ ಕೋಟೆ ಹೊರಗೆ ಕಾದ್ಕೊಂಡು ನಿಂತವರೆ. ಏನು ಮಾಡ್ಬೇಕು,</br> ಕೇಳ್ಕೊಂಡ್ಬಾ—అంದ್ರು."</br> {{gap}}"ಛತ್ರದೊಳಗೆ ಏನಾದರೂ ಸಾಮಾನಿದೆಯಾ ?"</br> {{gap}}“ಚೂರುಪಾರು ಬಟ್ಟೆಗಂಟು. ಕಂಬಳಿಯನಕಾ ಒದ್ಕೊಂಡೇ ಇದ್ರು. ಬಂದೂಕಗಳನ್ನೂವೆ </br>ತಕೊಂಡೋಗಿದ್ರು."</br> {{gap}}ಬಸಪ್ಪಾಜಿ ಕಲ್ಲಿನ ಕಂಬದಂತೆ ನಿಂತಿದ್ದ. ಅವನ ಗಂಟಲು ಆರಿಹೋಗಿತ್ತು.</br> {{gap}}ಅಪರಂಪಾರನೆಂದ :</br><noinclude></noinclude> eiujqilzq9gwyow693h4pg1vbgtswpx ಪುಟ:ಸ್ವಾಮಿ ಅಪರಂಪಾರ.pdf/೧೫೮ 104 21308 322009 206471 2026-05-23T14:58:53Z Ashwini Rai K 8475 /* Validated */ 322009 proofread-page text/x-wiki <noinclude><pagequality level="4" user="Ashwini Rai K" />{{rh|center=ಸ್ವಾಮಿ ಅಪರಂಪಾರ|right=|left=.೧೫೬ }}</noinclude>{{gap}}“ನಾವೀಗ ಹೊರಡತೇವೆ, ಬಸಪ್ಪಾಜಿಯವರೇ. ಮುಂದಿನ ತಾಣದಿಂದ ನಿಮಗೆ ಬರೀ</br> ತೇವೆ."</br> {{gap}}ಕಷ್ಟಪಟ್ಟು ಬಸಪ್ಪಾಜಿಯೆಂದ:</br> {{gap}}"ತಮ್ಮನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ. ತಾವು ದೇವತಾ ಮನುಷ್ಯ. ನಾವು</br> ಸಾಮಾನ್ಯ ಮಾನವರು."</br> {{gap}}"ಅರಮನೆಯಿಂದ ಇಂಗ್ರೇಜಿಯವರಿಗೆ ಸುದ್ದಿ ಹೋಯ್ತೆಂದು ನಿಮಗೆ ವ್ಯಥೆಯೆ?”</br> {{gap}}"ಆದದ್ದಾಯಿತಲ್ಲ. ಇನ್ನು ಚಿಂತಿಸಿ ಏನು ಫಲ?"</br> {{gap}}"ನಿಮ್ಮ ರಕ್ಷಣೆ ಮಾಡಿಕೊಳ್ಳಿ. ಮುಂದೆ ಎತ್ತ ಏನೂಂತ ಬೇಗನೆ ತಿಳಿಸತೇವೆ. ಬರಲೆ</br> ಬಸಪ್ಪಾಜಿ ಅರಸರೆ ?” </br> {{gap}}ಬಸಪ್ಪಾಜಿಯ ಕಣ್ಣುಗಳು ಹನಿಗೂಡಿದುವು. ಹೊರಕ್ಕೆ ಓಡಿ ಮನೆಯ ಸಮಿಾಪ</br> ದಲ್ಲೆಲ್ಲೂ ಯಾರೂ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡು ಬಂದು, ತಲೆಬಾಗಿಲವರೆಗೂ</br> ಅಪರಂಪಾರನನ್ನು ಹಿಂಬಾಲಿಸುತ್ತ, ಹೆಜ್ಜೆಹೆಜ್ಜೆಗೂ ಆತನೆಂದ:</br> {{gap}}"ಇನ್ನು ತಮ್ಮ ಭೇಟಿ ಯಾವಾಗಲೊ ? ಯಾವಾಗಲೊ ?"</br> {{center|೫೫}} {{gap}}ಕಾಜಗೋಡು ಅಪರಂಪಾರಸ್ವಾಮಿಯ ಮುಖ್ಯ ಠಾಣ್ಯವಾಯಿತು. ಅಲ್ಲಿಂದ ಆತ ತನ್ನ</br> ಹಿಂಬಾಲಕರಿಗೆ ನಿರೂಪಗಳನ್ನು ಹೊರಡಿಸಿದ.</br> {{gap}}ಆಂಗ್ಲ ಆಡಳಿತಗಾರರನ್ನು ಕೆಣಕುವ ಕೆಲಸ ಆಗಲೇ ಆರಂಭವಾಗಿತ್ತು.</br> {{gap}}ಒಂದು ನಿರೂಪದಲ್ಲಿ ಅಪರಂಪಾರನೆಂದ:</br> {{gap}}"ನಮ್ಮ ತಂಡಗಳು ಹೆದ್ದಾರಿಗಳಲ್ಲೂ ಘಾಟಿ ಮಾರ್ಗಗಳಲ್ಲೂ ಗಸ್ತಿ ತಿರುಗಬೇಕು. ಎಲ್ಲ</br> ಟಪಾಲುಗಳನ್ನೂ ತಡೆಯಬೇಕು. ಒಂದೇ ಒಂದು ಕಾಗದವಾದರೂ ಆಚೆ ಈಚೆ ಹೋಗ</br> ತಕ್ಕದ್ದಲ್ಲ. ಹಾಗೆಯೇ ಇರಸಾಲುಗಳನ್ನು ತಡೆಯಬೇಕು. ಬಿಡಿಗಾಸನ್ನೂ ಅಪವ್ಯಯ</br> ಮಾಡದೆ ಹಣವನ್ನೆಲ್ಲ ದಳಗಳ ಮುಖ್ಯಸ್ಥರು ಜೋಪಾನವಾಗಿಡತಕ್ಕದ್ದು."</br> {{gap}}ಇನ್ನೊಂದರಲ್ಲಿ ಆತ ಆದೇಶವಿತ್ತ :</br> {{gap}}ಮಹಾಸಂಭವ ಒಂದರಿಂದ ಸದ್ಯದಲ್ಲೇ ಕೊಡಗು ತಲ್ಲಣಿಸಿ ಹೋಗತದೆ. ಇಲ್ಲಿ ಬೇರೂ</br> ರಿರುವ ಇಂಗ್ರೇಜಿ ಸರಕಾರ ನಶಿಸಿಹೋಗತದೆ. ಆದರೆ ಈ ಸಂಘರ್ಷದಲ್ಲಿ ಇತ್ತಂಡಗಳಿಗೂ</br> ಅಪಾರ ನಷ್ಟ ಉಂಟಾಗತದೆ. ಅನೇಕರು ಸಾವುನೋವುಗಳಿಗೆ ಈಡಾಗತಾರೆ. ಲಡಾಯಿಯಲ್ಲಿ</br> ಇಂಗ್ರೇಜಿಯರ ವಿರುದ್ಧ ನಮ್ಮನ್ನು ಸೇರಬಯಸುವವರೆಲ್ಲ ಇದನ್ನು ನೆನಪಿಡತಕ್ಕದ್ದು.</br> ಇದು ವಾಸ್ತವ ರಣರಂಗದಲ್ಲಿ ನಡೆಯುವ ಪಡೆಕ್ಕಳಿ. ಇದರಲ್ಲಿ ನಾವು ಗೆಲ್ಲಬೇಕು, ಗೆದ್ದು,</br> ವೈರಿಯ ಚಾವುಪರೆಯನ್ನು–ಶೋಕವಾದ್ಯವನ್ನು -ನಾವು ಕೇಳಬೇಕು."</br> {{gap}}ಮತ್ತೊಂದರಲ್ಲಿ ಆತನೆಂದ:</br> {{gap}}"ಈ ನಿರೂಪವನ್ನು ಓದುವವರಿಗೆಲ್ಲ ನಾವು ಹೇಳುತೇವೆ : ಏಕೆ ಚಿಂತೆಯನು ಮಾಡುವೆ</br> ಮೂಢ? ವಿಶ್ವನಾಥನಿಹ ಯೋಚನೆ ಬೇಡ. ಆದ್ದರಿಂದ ಏಳಿರಿ! ಅಣಿಯಾಗಿರಿ! ಹೋರಾಡಿರಿ!</br> ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು? ಮರ್ಕಟನ ಕೈಯಲ್ಲಿ ಮಾಣಿಕ್ಯ</br> ವಿದ್ದು ಫಲವೇನು? ಆ ಕಾರಣದಿಂದ, ಮನುಷ್ಯ ಜೀವಿಗಳಾಗಿರಿ ! ಚಂದ್ರಾಯುಧ</br><noinclude></noinclude> juuhqvcaiz21lkw9yheljrwtr5ln65t ಪುಟ:ಸ್ವಾಮಿ ಅಪರಂಪಾರ.pdf/೧೫೯ 104 21309 322007 206472 2026-05-23T14:57:19Z Ashwini Rai K 8475 /* Validated */ 322007 proofread-page text/x-wiki <noinclude><pagequality level="4" user="Ashwini Rai K" />{{rh|center=ಸ್ವಾಮಿ ಅಪರಂಪಾರ|right=೧೫೭.|left=}}</noinclude>ಪ್ರಯೋಗಿಸಿರಿ ! ನಿಮ್ಮ ವೀರಮುಖ ಕಾಂತಿಯನ್ನು ದರ್ಪಣದಲ್ಲಿ ನೋಡಿರಿ! ಸ್ವಾತಂತ್ರ್ಯ</br> ವೆಂಬ ಮಾಣಿಕ್ಯದ ಬೆಲೆಯನ್ನು ಅರಿಯಿರಿ!"</br> {{gap}}ಈ ಕರೆಗಳಿಗೆ ಕೊಡಗಿನ ಪ್ರಜೆಗಳು ಓಗೊಟ್ಟರು.</br> {{gap}}ಮಾಸಗಳು ಉರುಳಿದುವು. ಪ್ರಜಾವಿರೋಧದ ಪ್ರಖರತೆ ಹೆಚ್ಚುತ್ತ ನಡೆಯಿತು.</br> {{gap}}ಅಭಿಯೋಗದ ದಿನ ಇನ್ನು ದೂರವಿರದು–ಎಂದು ಎಲ್ಲರೂ ಅಂದುಕೊಂಡರು.</br> {{gap}}ಒಂದು ದಿನ ದೀರ್ಘ ಶಿವಧ್ಯಾನದ ಬಳಿಕ ಅಪರಂಪಾರ ಕೇಳಿದ:</br> {{gap}}"ಈ ದಿನ ಯಾವ ವಾರ ? ಯಾವ ತಿಥಿ ?"</br> -{{gap}}ಉತ್ತರ ಪಡೆದ ಬಳಿಕ ಕೈಬೆರಳುಗಳಲ್ಲಿ ಎಣಿಕೆ ಹಾಕಿ ಆತನೆಂದ.</br> {{gap}}"ದಂಡಯಾತ್ರೆಗೆ ದಿನ ಗೊತ್ತುಮಾಡಿದೇನೆ. ಓಲೆಕಾರರನ್ನು ಕರೆಯಿರಿ!"</br> {{gap}}ಒಬ್ಬ ಪುಟ್ಟಬಸವನಲ್ಲಿಗೆ, ಇನ್ನೊಬ್ಬ ಸೂರಪ್ಪನಾಯಕನಲ್ಲಿಗೆ, ಮತ್ತೊಬ್ಬ ವೇಲೂರಿಗೆ</br> ಚಿಕವೀರರಾಜನಲ್ಲಿಗೆ, ನಾಲ್ಕನೆಯವನು ಬಸಪ್ಪಾಜಿ ಅರಸನಲ್ಲಿಗೆ, ಮತ್ತೆ ಹಲವರು ಬೇರೆ</br> ಬೇರೆ ನಾಡುಗಳ ಪ್ರಮುಖರಲ್ಲಿಗೆ, ದಳನಾಯಕರಲ್ಲಿಗೆ, ಅಶ್ವಾರೋಹಿಗಳಾಗಿ ದಂಡಯಾತ್ರೆ</br> ಆರಂಭವಾಗುವ ದಿನ ತಿಳಿಸಲೆಂದು ಧಾವಿಸಿದರು.</br> {{gap}}ಅತ್ಯಂತ ಸಂಕ್ಷಿಪ್ತವಾಗಿತ್ತು ಆ ಸಂದೇಶ. ಅದರಲ್ಲಿದ್ದುದಿಷ್ಟೆ:</br> {{gap}}"ಅಕ್ಷತೃತೀಯೆ--”</br> {{gap}}ಎಲ್ಲೆಡೆಗಳಲ್ಲೂ ಆ ಪದ ಮೊಳಗಿ ಮಾರ್ಮೊಳಗಿತು:</br> {{gap}}“ಅಕ್ಷತೃತೀಯೆ, ಅಕ್ಷತೃತೀಯೆ."</br> ೫೬ {{gap}}ಕಾಜಗೋಡಿನಲ್ಲಿ ಒಂದು ಸಾವಿರ ಯೋಧರು ನೆರೆದರು, ಕೆಲವರು ಅಶ್ವಾರೋಹಿಗಳು :</br> ಉಳಿದವರೆಲ್ಲ ಪದಾತಿಗಳು. ಬಂದೂಕುಗಳು ಕೆಲವರಲ್ಲಿ; ಖಡ್ಗ ಢಾಲುಗಳು ಬೇರೆ ಕೆಲವ</br>ರಲ್ಲಿ: ಈಟಿ ಭರ್ಚಿಗಳು ಇನ್ನಿತರರಲ್ಲಿ: ಬಿಲ್ಲು ಬಾಣಗಳು ನಿಷ್ಣಾತ ಬೇಡರ ವಶದಲ್ಲಿ.</br> {{gap}}ಅಕ್ಷತೃತೀಯೆಗೆ ಹಿಂದಿನ ಇರುಳು ಅಪ್ಪಯ್ಯನ ಮನೆಯ ಒಂದು ಕೊಠಡಿಯಲ್ಲಿ.</br> ಅಪರಂಪಾರಸ್ವಾಮಿಯೂ ಅಪ್ಪಯ್ಯನೂ ದಂಡಯಾತ್ರೆಯ ವೇಗ ದಾರಿಗಳನ್ನು ಇತ್ಯರ್ಥ</br> ಪಡಿಸಿದರು.</br> {{gap}}ಕಾಜಗೋಡಿನಿಂದ ನಸುಕಿನಲ್ಲಿ ಹೊರಟು ಹಾರಂಗಿಯತ್ತ ಸಾಗಬೇಕು. ಮಧ್ಯಾಹ್ನದ</br>ಊಟ ವಿಶ್ರಾಂತಿ ಗೌಡಳ್ಳಿಯಲ್ಲಿ. ಹಾರಂಗಿಯಲ್ಲಿ ವೆಂಕಟಪ್ಪನ ನೇತೃತ್ವದಲ್ಲಿರುವ ದಂಡನ್ನು</br> ಕೂಡಿಕೊಳ್ಳುವುದು. ಅಲ್ಲಿಂದ ಮಡಕೇರಿಗೆ ಬೇರೆ ಬೇರೆ ಕಡೆಗಳಿಂದ ಬಂದ ಯೋಧರೆಲ್ಲ</br> ದಾರಿಯಲ್ಲಿ ಸೇನೆಯನ್ನು ಸೇರಿಕೊಳ್ಳಬೇಕು. ಘಟ್ಟದ ಕೆಳಗಿನ ಕೆಲಸ ಮುಗಿಸಿ ಪುಟ್ಟಬಸವನೂ</br>ಸಂಗಡಿಗರೂ ಮಡಕೇರಿಗೆ ಬರಬೇಕು. ನಿರ್ಣಾಯಕ ಕಾಳಗ ರಾಜಧಾನಿಯಲ್ಲಿ.</br> {{gap}}ಅಪರಂಪಾರನೆಂದ :</br> {{gap}}“ಗೌಡಳ್ಳಿಯ ದಾರಿಯಲ್ಲಿ ಕೊಳ ಪುಷ್ಕರಿಣಿ ಯಾವುದೂ ಇಲ್ಲವಾ ? ನಾವೊಂದಿಷ್ಟು</br> ಸ್ನಾನ ಶಿವಪೂಜೆ ಮುಗಿಸಿ ಶಿಬಿರವನ್ನು ಸೇರಬಹುದು.”</br> {{gap}}ಅಪ್ಪಯ್ಯನೆಂದ:</br><noinclude></noinclude> qxhv6tfg7xk3ibp549q2ybtc7p65fp0 322008 322007 2026-05-23T14:58:08Z Ashwini Rai K 8475 322008 proofread-page text/x-wiki <noinclude><pagequality level="4" user="Ashwini Rai K" />{{rh|center=ಸ್ವಾಮಿ ಅಪರಂಪಾರ|right=೧೫೭.|left=}}</noinclude>ಪ್ರಯೋಗಿಸಿರಿ ! ನಿಮ್ಮ ವೀರಮುಖ ಕಾಂತಿಯನ್ನು ದರ್ಪಣದಲ್ಲಿ ನೋಡಿರಿ! ಸ್ವಾತಂತ್ರ್ಯ</br> ವೆಂಬ ಮಾಣಿಕ್ಯದ ಬೆಲೆಯನ್ನು ಅರಿಯಿರಿ!"</br> {{gap}}ಈ ಕರೆಗಳಿಗೆ ಕೊಡಗಿನ ಪ್ರಜೆಗಳು ಓಗೊಟ್ಟರು.</br> {{gap}}ಮಾಸಗಳು ಉರುಳಿದುವು. ಪ್ರಜಾವಿರೋಧದ ಪ್ರಖರತೆ ಹೆಚ್ಚುತ್ತ ನಡೆಯಿತು.</br> {{gap}}ಅಭಿಯೋಗದ ದಿನ ಇನ್ನು ದೂರವಿರದು–ಎಂದು ಎಲ್ಲರೂ ಅಂದುಕೊಂಡರು.</br> {{gap}}ಒಂದು ದಿನ ದೀರ್ಘ ಶಿವಧ್ಯಾನದ ಬಳಿಕ ಅಪರಂಪಾರ ಕೇಳಿದ:</br> {{gap}}"ಈ ದಿನ ಯಾವ ವಾರ ? ಯಾವ ತಿಥಿ ?"</br> -{{gap}}ಉತ್ತರ ಪಡೆದ ಬಳಿಕ ಕೈಬೆರಳುಗಳಲ್ಲಿ ಎಣಿಕೆ ಹಾಕಿ ಆತನೆಂದ.</br> {{gap}}"ದಂಡಯಾತ್ರೆಗೆ ದಿನ ಗೊತ್ತುಮಾಡಿದೇನೆ. ಓಲೆಕಾರರನ್ನು ಕರೆಯಿರಿ!"</br> {{gap}}ಒಬ್ಬ ಪುಟ್ಟಬಸವನಲ್ಲಿಗೆ, ಇನ್ನೊಬ್ಬ ಸೂರಪ್ಪನಾಯಕನಲ್ಲಿಗೆ, ಮತ್ತೊಬ್ಬ ವೇಲೂರಿಗೆ</br> ಚಿಕವೀರರಾಜನಲ್ಲಿಗೆ, ನಾಲ್ಕನೆಯವನು ಬಸಪ್ಪಾಜಿ ಅರಸನಲ್ಲಿಗೆ, ಮತ್ತೆ ಹಲವರು ಬೇರೆ</br> ಬೇರೆ ನಾಡುಗಳ ಪ್ರಮುಖರಲ್ಲಿಗೆ, ದಳನಾಯಕರಲ್ಲಿಗೆ, ಅಶ್ವಾರೋಹಿಗಳಾಗಿ ದಂಡಯಾತ್ರೆ</br> ಆರಂಭವಾಗುವ ದಿನ ತಿಳಿಸಲೆಂದು ಧಾವಿಸಿದರು.</br> {{gap}}ಅತ್ಯಂತ ಸಂಕ್ಷಿಪ್ತವಾಗಿತ್ತು ಆ ಸಂದೇಶ. ಅದರಲ್ಲಿದ್ದುದಿಷ್ಟೆ:</br> {{gap}}"ಅಕ್ಷತೃತೀಯೆ--”</br> {{gap}}ಎಲ್ಲೆಡೆಗಳಲ್ಲೂ ಆ ಪದ ಮೊಳಗಿ ಮಾರ್ಮೊಳಗಿತು:</br> {{gap}}“ಅಕ್ಷತೃತೀಯೆ, ಅಕ್ಷತೃತೀಯೆ."</br> {{center|೫೬}} {{gap}}ಕಾಜಗೋಡಿನಲ್ಲಿ ಒಂದು ಸಾವಿರ ಯೋಧರು ನೆರೆದರು, ಕೆಲವರು ಅಶ್ವಾರೋಹಿಗಳು :</br> ಉಳಿದವರೆಲ್ಲ ಪದಾತಿಗಳು. ಬಂದೂಕುಗಳು ಕೆಲವರಲ್ಲಿ; ಖಡ್ಗ ಢಾಲುಗಳು ಬೇರೆ ಕೆಲವ</br>ರಲ್ಲಿ: ಈಟಿ ಭರ್ಚಿಗಳು ಇನ್ನಿತರರಲ್ಲಿ: ಬಿಲ್ಲು ಬಾಣಗಳು ನಿಷ್ಣಾತ ಬೇಡರ ವಶದಲ್ಲಿ.</br> {{gap}}ಅಕ್ಷತೃತೀಯೆಗೆ ಹಿಂದಿನ ಇರುಳು ಅಪ್ಪಯ್ಯನ ಮನೆಯ ಒಂದು ಕೊಠಡಿಯಲ್ಲಿ.</br> ಅಪರಂಪಾರಸ್ವಾಮಿಯೂ ಅಪ್ಪಯ್ಯನೂ ದಂಡಯಾತ್ರೆಯ ವೇಗ ದಾರಿಗಳನ್ನು ಇತ್ಯರ್ಥ</br> ಪಡಿಸಿದರು.</br> {{gap}}ಕಾಜಗೋಡಿನಿಂದ ನಸುಕಿನಲ್ಲಿ ಹೊರಟು ಹಾರಂಗಿಯತ್ತ ಸಾಗಬೇಕು. ಮಧ್ಯಾಹ್ನದ</br>ಊಟ ವಿಶ್ರಾಂತಿ ಗೌಡಳ್ಳಿಯಲ್ಲಿ. ಹಾರಂಗಿಯಲ್ಲಿ ವೆಂಕಟಪ್ಪನ ನೇತೃತ್ವದಲ್ಲಿರುವ ದಂಡನ್ನು</br> ಕೂಡಿಕೊಳ್ಳುವುದು. ಅಲ್ಲಿಂದ ಮಡಕೇರಿಗೆ ಬೇರೆ ಬೇರೆ ಕಡೆಗಳಿಂದ ಬಂದ ಯೋಧರೆಲ್ಲ</br> ದಾರಿಯಲ್ಲಿ ಸೇನೆಯನ್ನು ಸೇರಿಕೊಳ್ಳಬೇಕು. ಘಟ್ಟದ ಕೆಳಗಿನ ಕೆಲಸ ಮುಗಿಸಿ ಪುಟ್ಟಬಸವನೂ</br>ಸಂಗಡಿಗರೂ ಮಡಕೇರಿಗೆ ಬರಬೇಕು. ನಿರ್ಣಾಯಕ ಕಾಳಗ ರಾಜಧಾನಿಯಲ್ಲಿ.</br> {{gap}}ಅಪರಂಪಾರನೆಂದ :</br> {{gap}}“ಗೌಡಳ್ಳಿಯ ದಾರಿಯಲ್ಲಿ ಕೊಳ ಪುಷ್ಕರಿಣಿ ಯಾವುದೂ ಇಲ್ಲವಾ ? ನಾವೊಂದಿಷ್ಟು</br> ಸ್ನಾನ ಶಿವಪೂಜೆ ಮುಗಿಸಿ ಶಿಬಿರವನ್ನು ಸೇರಬಹುದು.”</br> {{gap}}ಅಪ್ಪಯ್ಯನೆಂದ:</br><noinclude></noinclude> 8oiflo1vhwv7wibe9zl01of6j9lqgjw ಪುಟ:ಸ್ವಾಮಿ ಅಪರಂಪಾರ.pdf/೧೬೦ 104 21310 322006 206473 2026-05-23T14:56:57Z Ashwini Rai K 8475 /* Validated */ 322006 proofread-page text/x-wiki <noinclude><pagequality level="4" user="Ashwini Rai K" />{{rh|center=ಸ್ವಾಮಿ ಅಪರ೦ಪಾರ|right=|left=೧೫೮}}</noinclude>{{gap}}“ಅದೇ. ಗೌಡಳ್ಳಿಗೆ ಒಂದು ಹರದಾರಿ ಈಚೆಗೆ ಬಲಕ್ಕೆ ತಿರುಗಿದರೆ ಸುಮಾರು ಅರ್ಧ</br> ಹರದಾರಿ ದೂರದಲ್ಲಿ ಒಂದು ಪುಷ್ಕರಿಣಿ ಸಿಗತದೆ.”</br> {{gap}}"ಆದರೆ ನಮ್ಮ ಶಂಕರಪ್ಪಗೆ ದಾರಿ ತಿಳೀತದೊ ಇಲ್ಲವೊ ?”</br> {{gap}}"ಈ ಕಡೆಯವ ಒಬ್ಬನನ್ನೂ ಜತೆ ಮಾಡಿದರಾಯ್ತು."</br> {{gap}}ಕೊಠಡಿಯ ಹೊರಗೆ ಒಬ್ಬ ಅತ್ತಿತ್ತ ಸುಳಿದಾಡುತ್ತಿದ್ದ. ಆತನನ್ನು ಉದ್ದೇಶಿಸಿ</br> ಅಪ್ಪಯ್ಯನೆಂದ :</br> {{gap}}“ಏಯ್! ಇಲ್ಲಿ ಬಾ."</br> {{gap}}ಆತ ಬ೦ದ.</br> {{gap}}“ಹೊರಗೇನು ಮಾಡ್ತಿದ್ದೆ?”</br> {{gap}}"ಸುಮ್ಕೆ ನಿಂತಿದ್ದೆ."</br> {{gap}}"ನಿನ್ನ ಹೆಸರೇನು ?”</br> {{gap}}"ಚಾವಡಿಕಾರ ಮಂಜಣ್ಣ.”</br> {{gap}}"ಯಾವೂರು ?"</br> {{gap}}"ಹಾರಂಗಿ ಹತ್ತಿರ ಹಳ್ಳಿ."</br> {{gap}}"ನಿನಗೆ ಗೌಡಳ್ಳಿ ದಾರಿ ಗೊತ್ತಾ?”</br> {{gap}}“ಓ.”</br> {{gap}}"ಹಳ್ಳಿ ಈಚೆಗೆ ಬಲಕ್ಕೆ ಕೆರೆ ಸಿಗುತ್ತಲ್ಲ--'</br> {{gap}}“ಗೊತ್ತು ಬುಡಿ.”</br> {{gap}}"ಕುದುರೆ ಸವಾರಿ ಕಲ್ತಿದೀಯಾ ?”</br> {{gap}}"ಓ.” </br> {{gap}}"ನಾಳೆ ನಸುಕಿಲಿ ದಂಡು ಹೊರಡ್ತದಲ್ಲ, ಆಗ ನೀನು ಸ್ವಾಮಿಯೋರ ಜತೆ ಇರಬೇಕು.</br> ಅವರಿಗೆ ಕೆರೆ ತೋರಿಸಬೇಕು."</br> {{gap}}"ಹ್ಞು."</br> {{gap}}"ಮೈಗಾವಲಿನ ಶಂಕರಪ್ಪನೂ ಜತೆಗಿರತಾನೆ.”</br> {{gap}}“ಆಗಲಿ ಬುದ್ಧಿ."</br> {{gap}}"ಹೋಗು. ಒಸಿ ಹೊತ್ತು ಮಲಕೋ."</br> {{gap}}ಅಪರಂಪಾರನೆಂದ :</br> {{gap}}"ಎಲ್ಲ ಇತ್ಯರ್ಥವಾಯಿತಲ್ಲ? ಮನಸ್ಸಿಗೆ ನಿದ್ದೆ ಬೇಕಾಗಿಲ್ಲ. ಆದರೆ ದೇಹಕ್ಕೆ ಬೇಕು.</br> ತುಸು ಅಡ್ಡಾಗುತೇವೆ."</br> {{gap}}ಇರುಳು ಕಳೆಯಿತು. ಕೋಳಿಯ ಕೂಗಿಗೆ ತುತೂರಿಯ ನಿನಾದ ಶ್ರುತಿ ಹಿಡಿಯಿತು.</br> ಸ್ವಲ್ಪವೇ ಹೊತ್ತಿನಲ್ಲಿ ಯೋಧರು ಅಣಿಯಾದರು.</br> {{gap}}ಅವರನ್ನು "ಬಾಂಧವರೇ” ಎಂದು ಸಂಬೋಧಿಸಿ, ಅಪರಂಪಾರ ನುಡಿದ:</br> {{gap}}"ನಮ್ಮದು ಸತ್ಯದ ನ್ಯಾಯದ ದಂಡು. ಅಸತ್ಯದ ಅನ್ಯಾಯದ ಕೇತುಪಟವನ್ನು ಧೂಳಿ</br>ದೂಸರ ಮಾಡೋದಕ್ಕೆ ನಾವು ಹೊರಟಿದೇವೆ. ನೆಲದ ಮರೆಯ ನಿಧಾನದಂತೆ, ಮುಗಿಲ</br>ಮರೆಯಲಡಗಿರ್ದ ಮಿಂಚಿನಂತೆ, ಬಯಲ ಮರೆಯಲಡಗಿರ್ದ ಮರೀಚಿಯಂತೆ, ಕಂಗಳ</br><noinclude></noinclude> 7msxgqw8bd6xiar3kt6vjrxd9k519vn ಪುಟ:ಸ್ವಾಮಿ ಅಪರಂಪಾರ.pdf/೧೬೧ 104 21311 321985 206474 2026-05-23T12:13:50Z Shreelatha.Halemane 7642 /* Validated */ 321985 proofread-page text/x-wiki <noinclude><pagequality level="4" user="Shreelatha.Halemane" />{{rh|center=ಸ್ವಾಮಿ ಅಪರ೦ಪಾರ|right=೧೫೯|left=}}</noinclude>ಮರೆಯಲಡಗಿರ್ದ ಬೆಳಗಿನಂತೆ, ವೈರಿ ಶಿಬಿರದ ಮೇಲೆ ನಮ್ಮ ದಂಡು ಎರಗುತದೆ. ಈಗ</br> ನಾವು ತ೦ಗಾಳಿ ಪರಿಮಳದೊಡಗೂಡಿ ಸುಳಿವಂತೆ ಸುಳಿಯುತೇವೆ. ಮುಂದೆ ಬಿರುಗಾಳಿ</br> ಬೀಸಿ ಮರ ಮುರಿವಂತೆ ಮುತ್ತುತೇವೆ. ಕಪಟಿಯಾದ ಧೂರ್ತನಾದ ವೈರಿ ನಮ್ಮ ಮನೆ</br> ಮಠಗಳ ಮೇಲೆ ಈಗ ಸ್ವಾರಿ ಮಾಡುತಿದಾನೆ. ಆ ಆಕ್ರಮಣಕಾರನನ್ನು ನಾವು ಸದೆ</br> ಬಡೆಯಬೇಕು. ನಮ್ಮ ಪಕ್ಷದಲ್ಲಿ ಮಹಾದೇವನಿದ್ದಾನೆ. ಅವರ ಪಕ್ಷದಲ್ಲಿ ಸೈತಾನ ಮಾತ್ರ.</br> ಇದು ಸುರಾಸುರರೊಳಗಿನ ಯುದ್ಧ. ನಾವು ಗೆಲ್ಲುತೇವೆ. ಅಸುರರು ಮಣ್ಣು ಮುಕ್ಕು</br>ತಾರೆ. ಎಲ್ಲರೂ ಜಯಘೋಷಮಾಡಿ. ಹರಹರ ಮಹಾದೇವ!"</br> {{gap}}"ಹರಹರ ಮಹಾದೇವ !"</br> {{gap}}ಸಹಸ್ರ ಕಂಠಗಳಿಂದ ಹೊರಟ ಘೋಷ ಗಗನವನ್ನು ಮುಟ್ಟಿತು.</br> {{gap}}ಸ್ವಾಮಿಯನ್ನು ಹೋರಾಟದ ಸಂಕೇತವನ್ನಾಗಿ ಮಾಡಿ ಯೋಧರೆಂದರು:</br> {{gap}}"ಅಪರಂಪಾರಸ್ವಾಮಿಯವರಿಗೆ ಜಯವಾಗಲಿ!"</br> {{gap}}ಅಪರಂಪಾರನೆಂದ :</br> {{gap}}"ಹೇಳಿರಿ! ಚಿಕವೀರರಾಜೇಂದ್ರ ಒಡೆಯರಿಗೆ ಜಯವಾಗಲಿ."</br> {{gap}}ಸಹಸ್ರ ಕಂಠಗಳು ಆ ಘೋಷವನ್ನು ಪುನರುಚ್ಚರಿಸಿದುವು.</br> ೫೭ {{gap}}ಅಶ್ವಾರೂಢ ಅಪ್ಪಯ್ಯನ ನಾಯಕತ್ವದಲ್ಲಿ ದಂಡು ಧೂಳೆಬ್ಬಿಸುತ್ತ ಸಾಗಿತು.</br> {{gap}}ಅದರ ಹಿಂದೆ ತುಸು ಅಂತರದಲ್ಲಿ ಮೂರು ಕುದುರೆಗಳು ನಡೆದುವು. ಒಂದರ ಮೇಲೆ</br> ಅಪರಂಪಾರನಿದ್ದ. ಅವನ ಇಕ್ಕೆಲಗಳಲ್ಲಿ ಶಂಕರಪ್ಪ ಮತ್ತು ಮಂಜಣ್ಣನಿದ್ದರು.</br> {{gap}}ಬಿರುಗಣ್ಣಿನಿಂದ ನೇರ ನೋಡುತ್ತ, ಕುದುರೆಯ ಮೇಲೆ ನೆಟ್ಟಗೆ ಮಿಸುಕದೆ ಕುಳಿತಿದ್ದ</br> ಮಂಜಣ್ಣ ಶಂಕರಪ್ಪನಿಗೆ ವಿಚಿತ್ರವಾಗಿ ಕಂಡ. ಹಾರಂಗಿಯನ್ನು ಕುರಿತು ಅಪರಂಪಾರ</br> ಕೇಳಿದ ಪ್ರಶ್ನೆಗಳಿಗೆಲ್ಲ ಮಂಜಣ್ಣ ಚುಟುಕು ಉತ್ತರಗಳನ್ನಿತ್ತ.</br> {{gap}}'ಬಹಳ ಮಿತಭಾಷಿ ಈತ. ಸಮರ್ಥನಂತೆ ಕಾಣುತಿದಾನೆ' ಎಂದುಕೊಂಡ ಅಪರಂಪಾರ.</br> {{gap}}ಬಿಸಿಲು ನೆತ್ತಿಗೇರಿತು. ದಂಡು ಬಹಳ ಮುಂದೆ ಸಾಗಿತು.</br> {{gap}}ಮಂಜಣ್ಣನೆಂದ :</br> {{gap}}"ಅಕಾ, ಓ ಅಲ್ಲಿ ಬಲಕ್ಕೆ ಕಿರುದಾರಿ ಕಾಣತದಲ್ಲ ಅಲ್ಲಿ ನಾವು ಹೊರಳಬೇಕು.”</br> {{gap}}“ಅಪ್ಪಯ್ಯನವರು ಹೇಳಿದ ಕೆರೆಗೆ ಆ ದಾರಿ ಹೋಗತದೆ. ಅಲ್ಲವಾ?” ಎಂದು</br> ಶಂಕರಪ್ಪ ಕೇಳಿದ.</br> {{gap}}"ಹ್ಞ."</br> {{gap}}ಮಂಜಣ್ಣ ಮೊದಲು ತಿರುಗಿದ. ಅವನ ಹಿಂದೆ ಅಪರಂಪಾರನ ಕುದುರೆ. ಕೊನೆಯ</br>ದಾಗಿ ಶಂಕರಪ್ಪ.</br> {{gap}}"ಎಂಥ ಹಸಿರು ! ಎಷ್ಟೊಂದು ಕಾಡು ಹೂಗಳು! ಸ್ವಾಗತ ಸ್ವಾಗತ ಅಂತ ಒಂದೇ</br> ಸಮನೆ ಉಲಿಯುತಿವೆಯಲ್ಲ ಹಕ್ಕಿಗಳು!" ಎಂದ, ಅಪರಂಪಾರಸ್ವಾಮಿ.</br> {{gap}}"ದಾರಿಯಲ್ಲಿ ಧೂಳಿಲ್ಲ. ಬಹಳಷ್ಟು ಜನ ದಿನಾ ಇಲ್ಲಿಗೆ ಬರೋದು ಕಾಣೆ” ಎಂದ.</br> ಶಂಕರಪ್ಪ.</br><noinclude></noinclude> 1hiekgem2f037zhftvs6m5l27ec9tyj ಪುಟ:ಸ್ವಾಮಿ ಅಪರಂಪಾರ.pdf/೧೬೨ 104 21312 321986 321573 2026-05-23T12:15:48Z Shreelatha.Halemane 7642 321986 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರಂಪಾರ|right=|left=೧೬೦}} {{gap}}ಮಂಜಣ್ಣನೆಂದ:</br> {{gap}}“ಬರತಾರೆ, ಬರತಾರೆ. ಇಲ್ಲಿನ ಕಾಡುಮೃಗಗಳು ಸಾಧುಪ್ರಾಣಿಗಳ ಹಾಗಿರತವಂತೆ ದನ ಮೇಯಿಸೋರು ಯೋಳಿದ್ದು ಕೇಳಿವ್ನಿ, ಆಕಳ ಬಂದರೆ ಹುಲಿ ಅದನ್ನ ತಿನ್ನಾ</br>ಕಿಲ್ವಂತೆ."</br> {{gap}}ಅಪರಂಪಾರ ಉದ್ಗರಿಸಿದ:</br> {{gap}}“ಅದ್ಭುತ! ಇದು ಮಹಾದೇವನ ಮಾಯಾಸೃಷ್ಟಿ!"</br> {{gap}}ಅವರು ಕೆರೆಯನ್ನು ಸಮಿಾಪಿಸಿದರು.</br> {{gap}}ನೀರು ಸ್ವಚ್ಛವಾಗಿತ್ತು, ನಾಲ್ಕಾಳು ತಬ್ಬಿದರೂ ಮುಚ್ಚಲಾಗದಂತಹ ಬಲಿಷ್ಟ ಕಾಂಡ ಗಳ ಆಲದ ಮರಗಳು ಕೆರೆಯ ದಂಡೆಯುದ್ದಕ್ಕೂ ನಾಲ್ಕಾರು ಕಡೆ ಇದ್ದುವು. ಯಾರೋ ಇತ್ತೀಚೆಗೆ ಬಂದು ವಿಶ್ರಮಿಸಿ, ಅಡುಗೆ ಬೇಯಿಸಿ ಉಂಡು ಹೋಗಿದ್ದರೆಂಬುದಕ್ಕೆ ಸಾಕ್ಷಯಾಗಿ, ಕಲ್ಲುಗಳನ್ನು ಜೋಡಿಸಿ ಮಾಡಿದ ಎರಡು ಒಲೆಗಳಿದ್ದುವು, ಕೆದರಿದ ಬೂದಿಯೂ ಅರ್ಧ ಸುಟ್ಟ ಸೌದೆಗಳೂ ಅಲ್ಲಿದ್ದುವು.</br> {{gap}}ನಕ್ಕು ಅಪರಂಪಾರಸ್ವಾಮಿಯೆಂದ :</br> {{gap}}“ನೋಡಿದೆಯಾ ಶಂಕರಪ್ಪ ? ಮಹಾದೇವ ಮುಂಚಿತವಾಗಿ ವಿಭೂತಿ ಕಳಿಸಿದಾನೆ."</br> {{gap}}ಅವರು ಕುದುರೆಗಳಿಂದ ಇಳಿದರು. ಮಂಜಣ್ಣ ಮೂರು ಅಶ್ವಗಳನ್ನೂ ಸಣ್ಣದೊಂದು</br>ಗಿಡಕ್ಕೆ ಕಟ್ಟಿದ.</br> {{gap}}ಅಪರಂಪಾರ ಜೋಳಿಗೆಯನ್ನು ದಂಡೆಯ ಮೇಲಿರಿಸಿ ನೀರಿನ ಬಳಿ ಸಾರಿದ. {{gap}}ಮಂಜಣ್ಣ ಅತ್ತಿತ್ತ ಅಲೆಯುತ್ತ ಒಂದು ಮರದ ಕೆಳಗೆ ನಿಂತು, ಮೇಲೆ ನೋಡಿದ.</br> {{gap}}ಉತ್ಸಾಹದ ಧ್ವನಿಯಲ್ಲಿ ಅವನೆಂದ:</br> {{gap}}"ಶಂಕರಣ್ಣ. ಬಿರ್ರನೆ ಬಾ. ಕೆಂಪು ಮೋರೆಯ ಒಂದು ಮುಜು ಕುಂತದೆ. ಮನುಷ್ಯನ ಹಂಗೇ ಅದೇ. ಬಾ, ಬಾ !"</br> {{gap}}ನೀರಲ್ಲಿ ಪಾದಗಳನ್ನು ತೋಯಿಸಿಕೊಂಡಿದ್ದ ಅಪರಂಪಾರ ಗಟ್ಟಿಯಾಗಿ ಅಂದ ;</br> {{gap}}“ಆ ಕೋತಿ ಸಾಕ್ಷಾತ್ ಹನುಮಂತ. ಇದು ಕಿಪ್ಕಿಂಧೆ. ಸಂಶಯವಿಲ್ಲ. ಬಂದೂಕು ಎತ್ತಬೇಡ, ಶಂಕರಪ್ಪ."</br> {{gap}}ಮಂಜಣ್ಣನ ಬಳಿಗೆ ಬಂದು ಮೇಲಕ್ಕೆ ನೋಡಿ ಶಂಕರಪ್ಪ ಕೇಳಿದ:</br> {{gap}}"ಎಲ್ಲಿ ? ಕಾಣಿಸೋದಿಲ್ಲ."</br> {{gap}}“ಅಕಾ_ಅಲ್ಲಿ."</br> {{gap}}ಕ್ಷಣಾರ್ಧದಲ್ಲಿ ನಡೆದ ಘಟನೆ. ಮಂಜಣ್ಣ ಶಿಳ್ಳು ಹಾಕಿದ. ಶಂಕರಪ್ಪ ಹುಬ್ಬು ಗಂಟಿಕ್ಕಿ ತಿರುಗುವುದರೊಳಗೆ, ತನ್ನ ತೋಳುಗಳಿಂದ ಅವನನ್ನು ಮಂಜಣ್ಣ ಬಲವಾಗಿ ಬಳಸಿ ಹಿಡಿದುಕೊಂಡ</br> {{gap}}"ಬಿಡು ! ಬಿಡು ! ಸೋಮಿಯೋರೆ ! ಘಾತ ! ಘಾತ !"</br> {{gap}}-ಶಂಕರಪ್ಪ ಕೂಗಿ ನುಡಿದ.</br> {{gap}}ಹೌಹಾರಿದ ಅಪರಂಪಾರ, ದಂಡೆಯ ಮೇಲೆ ಬಿಟ್ಟು ಬಂದಿದ್ದ ಜೋಳಿಗೆಯತ್ತ ಧಾವಿಸಿ, ಸೂರಪ್ಪನಾಯಕ ಕಾಣಿಕೆಯಾಗಿ ಕೊಟ್ಟಿದ್ದ ಬಂದೂಕಿಗೆ ಕೈಹಾಕಿದ.</br> {{gap}}ಅಷ್ಟರಲ್ಲೇ ಆರು ಜನ ಮರ ಪೊದೆಗಳಿಂದ ಹೊರಕ್ಕೆ ಬಂದಿದ್ದರು. ಮೂವರು</br><noinclude></noinclude> s6kxjn5tw0u0o3rd73n9g1enz5tlege ಪುಟ:ಸ್ವಾಮಿ ಅಪರಂಪಾರ.pdf/೧೬೩ 104 21313 321988 321574 2026-05-23T13:27:48Z Shreelatha.Halemane 7642 321988 proofread-page text/x-wiki <noinclude><pagequality level="4" user="Pragathi. BH" /></noinclude>{{gap}}{{rh|center=ಸ್ವಾಮಿ ಅಪರ೦ಪಾರ|left=|right=೧೬೧}} ಶಂಕರಪ್ಪನನ್ನು ಸುತ್ತುವರಿದರು. ಮೂವರು ಅಪರಂಪಾರನನ್ನು ಹಿಡಿದರು. ಸ್ವಾಮಿ ಎತ್ತಿದ ಕೈಬಂದೂಕನ್ನು ಒಬ್ಬ ಕಸಿದುಕೊಂಡ.</br> {{gap}}ಶಂಕರಪ್ಪ ಪ್ರತಿಭಟಿಸಿದ: ಅಪರಂಪಾರ ತೋಳು ಬೀಸಿದ.</br> {{gap}}ಆ ಜನರ ಮುಖಂಡನಂತೆ ಕಂಡವನೊಬ್ಬ ಗದರಿ ನುಡಿದ:</br> {{gap}}"ತೆಪ್ಪಗಿರಿ! ಗದ್ದಲ ಮಾಡಿದರೆ ಇಲ್ಲೇ ಸುಟ್ಟುಹಾಕತೇವೆ."</br> {{gap}}"ಮೂರ್ಖ! ಸುಡುವವನು ಹರನೊಬ್ಬನೇ!"</br> {{gap}}–ಎಂದು ಗರ್ಜಿಸಿದ,ಅಪರಂಪಾರಸ್ವಾಮಿ.</br> {{gap}}ಯಾರೋ ಅವನ ಮುಖಕ್ಕೆ ಗುದ್ದಿದರು.</br> {{gap}}ಆ ಜನ ಸನ್ನದ್ಧರಾಗಿ ಬಂದಿದ್ದರು. ಅವರಲ್ಲಿ ಹುರಿಮಾಡಿದ ಹಗ್ಗಗಳಿದ್ದುವು. ಕಬ್ಬಿಣದ ಸಂಕೋಲೆಯಿತ್ತು.</br> {{gap}}ಶಂಕರಪ್ಪನನ್ನೂ ಅಪರಂಪಾರನನ್ನೂ ಅವರು ನೆಲಕ್ಕೆ ಕೆಡವಿದರು. ಬಾಯಿಗಳಿಗೆ ಬಟ್ಟೆ ತುರುಕಿದರು.</br> {{gap}}ಶಂಕರಪ್ಪನನ್ನು ಒಂದು ಮರಕ್ಕೆ ಬಿಗಿದು ಬಲವಾಗಿ ಕಟ್ಟಿದರು. ಅಪರಂಪಾರನ ಕೈಗಳಿಗೂ ಕಾಲುಗಳಿಗನೂ ಸಂಕೋಲೆ ತೊಡಿಸಿದರು.</br> {{gap}}ಕುದುರೆಗಳು ಅಸಹಾಯವಾಗಿ ಕೆನೆದಾಡಿದುವು. ಹಗ್ಗಹರಿಯಲೆತ್ನಿಸಿದುವು.</br> {{gap}}ಮಂಜಣ್ಣ ಅವುಗಳನ್ನು ಸಂತೈಸಿದ.</br> {{gap}}ಆ ಜನರು ಅಪರಂಪಾರನ ಬಳಿಗೆ ಕುದುರೆಗಳನ್ನು ಎಳೆದು ತಂದರು.</br> {{gap}}"ಈ ಕುದುರೆ" ಎಂದ ಮಂಜಣ್ಣ, ಅಪರಂಪಾರ ಕುಳಿತು ಬಂದಿದ್ದರ ಕಡೆಗೆ ಬೊಟ್ಟು</br>ಮಾಡಿ.</br> {{gap}}ಆ ಜನರ ನಾಯಕ ಅದನ್ನೇರಿದ. ಅವನ ಬೆನ್ನಬಳಿ ಬೋರಲಾಗಿ ಅಪರಂಪಾರನನ್ನು ಕೆಡವಿದರು. ಹಗ್ಗಗಳಿಂದ ಬಿಗಿದು ಜೀನಿಗೆ ಕಟ್ಟಿದರು. ಮಂಜಣ್ಣ ತನ್ನ ಕುದುರೆಯನ್ನು ಹತ್ತಿದ.</br> {{gap}}"ನ್ಯಾಮಣ್ಣ, ನೀನು ಬಂದ್ದಿಡು. ಉಳಿದೋರೆಲ್ಲ ಹಿಂದಿನಿಂದ ಬನ್ನಿ, ಎಂದ ಮುಖ್ಯಸ್ಥ.</br> {{gap}}ಆತ ಹೆಸರು ಹಿಡಿದು ಕರೆದ ಮನುಷ್ಯ, ಶಂಕರಪ್ಪನ ಕುದುರೆಯನ್ನೇರಿದ.</br> {{gap}}ತಾನು ಕೂಗಿ ಕರೆಯಬೇಕು, 'ಸ್ವಾಮಿಯೋರೆ-ಸ್ವಾಮಿಯೋರೆ' ಎನ್ನಬೇಕು ಎಂದು ಶಂಕರಪ್ಪ ಚಡಪಡಿಸಿದ. ಆದರೆ ಧ್ವನಿ ಹೊರಬೀಳಲಿಲ್ಲ.</br> {{gap}}ಕುದುರೆಗಳು ವೇಗವಾಗಿ ಹೊರಟು ಕಣ್ಮರೆಯಾದುದನ್ನೂ ತಂಡದ ಉಳಿದ ನಾಲ್ವರು ಅವುಗಳನ್ನು ಹಿಂಬಾಲಿಸಿ ನಡೆದುಹೋದುದನ್ನೂ ಶಂಕರಪ್ಪ ಅಸಹಾಯನಾಗಿ ಪಿಳಿಪಿಳಿ ಕಣ್ಣು ಬಿಡುತ್ತ ನೋಡಿದ.</br> {{rh|center=೫೮|left=|right=}} {{gap}}ಕೈದಿಯನ್ನು ಕಂಡ ಲೀಹಾರ್ಡಿ ತನಗಾದ ಆನಂದವನ್ನು ಬಚ್ಚಿಡಲು ಶಕ್ತನಾಗಲಿಲ್ಲ.ಅವನು ಉದ್ಗರಿಸಿದ:</br> {{gap}}“ಹುರ್ರಾ !”</br> {{gap}}ದೂತರ ಮುಖ್ಯಸ್ಧ ಆರಿಕೆಮಾಡಿದ :</br> {{gap}} 1 l<noinclude></noinclude> 803dckfuo9w64svfrm87ubu3k5p4h0k ಪುಟ:ಸ್ವಾಮಿ ಅಪರಂಪಾರ.pdf/೧೬೪ 104 21314 321989 321575 2026-05-23T13:29:30Z Shreelatha.Halemane 7642 321989 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಸ್ವಾಮಿ ಅಪರ೦ಪಾರ|left=೧೬೨|right=}} {{gap}}"ಇವನು ಕೈದಿ, ಜೀವಂತ ಹಿಡಿದು ತಂದಿದೇವೆ. ಇದು ಇವನಲ್ಲಿದ್ದ ಕೈಬಂದೂಕು: ಇಂಗ್ರೇಜಿ ಸರಕಾರಕ್ಕೆ ಸೇರಿದ‍್ದು. ಹುಜೂರ್ ವಿರುದ್ಧ ದಂಗೆಯೆದ್ದರೆ ಏನಾಗತದೇಂತ ಲೋಕಕ್ಕೆ ತಿಳಿಯಲಿ ಅಂತ ಇವನ ಸಂಗಡಿಗನನ್ನು ಮರಕ್ಕೆ ಕಟ್ಟಿಹಾಕಿದೆವು-”</br> {{gap}}ಮಧ್ಯೆ ಬಾಯಿಹಾಕಿ ಲೀಹಾರ್ಡಿಯೆಂದ:</br> {{gap}}"ಅವನು ಯಾರು ? ಯಾಕೆ ಕೊಲ್ಲಲಿಲ್ಲ ?"</br> {{gap}}"ಒಬ್ಬ ಸಾಮಾನ್ಯ ಸೈನಿಕ,ಅಂಗರಕ್ಷಕ. ಕೊಲ್ಲದೇ ಇದ್ದರೂ ಅವನು ಸತ್ತಹಾಗೆಯೇ.ಹುಲಿ ಬಂದು ತಿನ್ನುತದೆ. ಇಲ್ಲವಾದರೆ ಉಪವಾಸವಿದ್ದು ಕಣ್ಣು ಮುಚ್ಚುತಾನೆ. ಗುಂಡು ಹಾರಿಸಬಾರದು, ವಿದ್ರೋಹಿಗಳ ದಂಡಿಗೆ ಸುಳಿವು ಸಿಗಬಾರದು-ಎಂದಿದ್ದಿರಿ. ಹಾಗೆಯೇ ಮಾಡಿದೇವೆ. ಸದ್ದು ಸಪ್ಪಳವಿಲ್ಲದೆ ಕೆಲಸ ಮುಗಿಸಿದೇವೆ.”</br> {{gap}}"ಭೇಷಕ್ ! ಭೇಷಕ್ ! ನಿನ್ನನ್ನು ಸುಭೇದಾರನಾಗಿ ಮಾಡುತೇವೆ.”</br> {{gap}}"ಖಾವಂದರ ಚಿತ್ತ."</br> {{gap}}ಕೈಕಾಲುಗಳಲ್ಲಿ ಸರಪಣಿಯನ್ನು ಹೊತ್ತು ಅಪರಂಪಾರ ನಿಶ್ಚಲನಾಗಿ ನಿಂತ. ಅದು ಅರಮನೆಯ ಸಭಾಭವನ. ಆಂಗ್ಲ ಪ್ರಭೃತಿಗಳ ತೈಲಚಿತ್ರಗಳು ಗೋಡೆಗಳಿಂದ ಕೆಳಕ್ಕೆ ನೋಡಿ, "ನಾವು ಅಜೇಯರು!” ಎಂದು ಸಾರುತ್ತಿದುವು, ಬಿಳಿಯ ಸೈನಿಕರಿಂದ, ಅವರ ಕರಿಯ ಬೆಂಬಲಿಗರಿಂದ, ದ್ವಾರಗಳು ತುಂಬಿದ್ದುವು.</br> {{gap}}"ಅಪರಂಪಾರರನ್ನು ಬಂಧಿಸಿದರಂತೆ! ಸ್ವಾಮಿ ಅಪರಂಪಾರರನ್ನು ಬಂಧಿಸಿದರಂತೆ!"</br> {{gap}}ಸುದ್ದಿ ದಳುರಿಯಾಗಿ ಮಡಕೇರಿಯಲ್ಲಿ ಹಬ‍್ಬಿತ್ತು. ಜನ ಅರಮನೆಯ ಎದುರು ಸಹಸ್ರಗಟ್ಟಲೆಯಲ್ಲಿ ನೆರೆಯತೊಡಗಿದ್ದರು. ಒಳಗಿನ ಬೇಗುದಿ ಅಸಹಾಯವಾಗಿ ಹೆಪ್ಪ ಗಟ್ಟುತ್ತಲಿತ್ತು. ಜನರ ಮುಖಗಳು ನಿಸ್ತೇಜವಾಗಿದ್ದುವು.</br> {{gap}}ಬಂಧನದಲ್ಲಿ ಅಪರಂಪಾರನ ಧೀಮಂತ ವ್ಯಕ್ತಿತ್ವ ಇಮ್ಮಡಿಸಿತ್ತು. ಮುಷ್ಟಿಯ ಆಘಾತದಿಂದ ಬೀಗಿಕೊಂಡಿದ್ದ ತುಟಿಗಳು, 'ಈತ ಅದಮ್ಮ' ಎಂಬ ಭಾವನೆಗೆ ಪುಟಗೊಡುತ್ತಿದ್ದುವು.</br> {{gap}}ಲೀಹಾರ್ಡಿ ಆಣಕಿಸಿದ:</br> {{gap}}“ಏಯ್, ಫಕೀರ್ ! ಏನಾಯಿತು ನಿನ್ನ ಬಂಡಾಯ?"</br> {{gap}}ಅಪರಂಪಾರ ಅವನನ್ನು ದಿಟ್ಟಿಸಿ ನೋಡಿದನೇ ಹೊರತು ಉತ್ತರವೀಯಲಿಲ್ಲ.</br> {{gap}}"ಮಾತಾಡೋ ! ಶಿವದ್ಯಾನಮಾಡತಾ ಇದೀಯೇನು? ಮೈಸೂರಿನವನಿಗೆ ಸಿಂಹಾಸನ,ಇಕ್ಕೇರಿಯವನಿಗೆ ಪಟ್ಟ, ಚಿಕವೀರರಾಜನಿಗೆ ಗಾದಿ__ಕೊಡಿಸಿದೆಯಾ?"</br> {{gap}}ಅಪರಂಪಾರ ತುಟಿಗಳನ್ನು ತೆರೆದ:</br> {{gap}}“ಈ ಪ್ರಶ್ನೆಗೆ ಈ ಮೂರು ದೇಶಗಳ ಪ್ರಜೆಗಳು ಉತ್ತರ ಕೊಡುತಾರೆ, ಪ್ರಶ್ನಿಸು ವವನು ನೀನು ಯಾರು ? ನಿನ್ನ ಅಧಿಕಾರವನ್ನು ನಾನು ಮಾನ್ಯ ಮಾಡುವುದಿಲ್ಲ. ದಿವಾನರನ್ನು ಕರೆಸು.”</br> {{gap}}“ಎಲಾ! ಏಕವಚನ ! ನೀನು ರಾಜಗುರು ಅಲ್ಲವಾ? ದಿವಾನರನ್ನು ಕರೆಸಬೇಕೆ? ಅವರು ನಮ್ಮ ತುಕಡಿ ಜತೆಗೆ ಹಾರಂಗಿಗೆ ಹೋಗಿದಾರೆ! ತಿಳೀತೇನು ? ನಿನ್ನ ಭಕ್ತಾದಿ ಗಳನ್ನು ಹಿಡಿಯೋದಕ್ಕೆ !”</br> {{gap}}"ಹುಲುಮಾನವ! ಬಹಳ ಹಾರಾಡಬೇಡ! ಮಹಾದೇವನಿಚ್ಛೆ ಇದ್ದಂತಾಗದೆ!"</br> {{gap}}ಅಪರಂಪಾರನ ಎಡಬಲಗಳಲ್ಲಿದ್ದ ಸಿಪಾಯರು ಗದರಿದರು :</br><noinclude></noinclude> e4gerwiho5eghwmeml2k3xldad3upt5 ಪುಟ:ಸ್ವಾಮಿ ಅಪರಂಪಾರ.pdf/೨೦೬ 104 21356 321977 206519 2026-05-23T12:01:05Z Shreelatha.Halemane 7642 /* Validated */ 321977 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center='''ಸ್ವಾಮಿ ಆಪರಂಪಾರ'''|left='''೨೦೪'''|right=} {{gap}}ನಡುವಯಸ್ಸು ದಾಟಿದ್ದ ನಿರ್ಭಾಗ್ಯೆ, ಕೂದಲೆಲ್ಲ ಬಿಳುಪು. ಆದರೆ ಮುಖದ ಮೇಲೆ ಒಂದೂ ಸುಕ್ಕೂ ಇರಲಿಲ್ಲ. {{gap}}ಶೀತವೆ? ನೆಗಡಿಯೆ? ಜ್ವರವೆ? {{gap}}—ಒಮ್ಮೆಯೂ ಕಾಹಿಲೆ ಮಲಗಿದವಳಲ್ಲ ಆಕೆ. {{gap}}ಈ ಕೆಲ ವರ್ಷಗಳಲ್ಲಿ ಸದಾ ಹಾಸಿಗೆ ಹಿಡಿದಿರುತ್ತಿದ್ದ ದೇವಮ್ಮಾಜಿ ಅನ್ನುವುದಿತು : {{gap}}"ನೀನು ಕಲ್ಲುಗುಂಡು ಕಣಮ್ಮ." {{gap}}ಆ ಕಲ್ಲುಗುಂಡು ಒಮ್ಮಿಂದೊಮ್ಮೆಲೆ ಸಿಡಿದಿತ್ತು. {{gap}}ಇದ್ದ ಕೆಲ ಆಳು ಕಾಳುಗಳೂ ಗುಲಾಮ ಪದ್ಧತಿ ನಿರ್ನಾಮವಾದ ಮೇಲೆ ಅಪ್ಪಂಗಳವನ್ನು ಬಿಟ್ಟು, ಕಾಫಿ ತೋಟಗಳಲ್ಲಿ ದುಡಿಯಲೆಂದು ಹೊರಟುಹೋಗಿದ್ದರು. ಒಬ್ಬನೇ ಒಬ್ಬ ವೃದ್ಧ, 'ನಾನು ಉಟ್ಟಿದ್ದೂ ಇಲ್ಲೇ, ಸಾಯೋದೂ ಇಲ್ಲೇ' ಎಂದು ಹಿಂದೆ ಉಳಿದಿದ್ದ. {{gap}}ಹೀಗೆ, ಹೆಚ್ಚಿನ ಹೊರೆಯಾದ ಎಲ್ಲ ಕೆಲಸಗಳನ್ನೂ ರಾಜಮ್ಮಾಜಿ ಮಾಡುತ್ತಿದ್ದಳು. ತೊಳೆದು ಸಾರಿಸಿ ಮಲಗುವ ವೇಳೆಗೆ ನಡು ಇರುಳಾಗುತ್ತಿತು. {{gap}}ಆ ರಾತ್ರೆ ಎಲ್ಲರೂ ಉಂಡರು. ಎಲ್ಲರೂ ಅಂದರೆ—ಚನ್ನಬಸಪ್ಪ, ದೇವಮಾಜಿ, ಅವರ ಯುವಕ ಮಗ [ಮಗಳನಾಗಲೇ ಮದುವೆ ಮಾಡಿಕೊಟ್ಟಿತ್ತು]-ವೃದ್ಧ ಆಳು ಮತ್ತು ರಾಜಮ್ಮಾಜಿ. {{gap}}"ಹೊಲದ ಕಡೆ ಹೋಗಿ ಬರತೀನಿ" ಎಂದು ಮಗ ಹೊರಬಿದ್ದ. {{gap}}ಹೊಲ ಕಾಯುವುದೆಲ್ಲ ಸುಳ್ಳು; ಯಾವುದೋ ದುರ್ಜನರ ಸಂಗವಿರಬೇಕು–ಎಂಬ ಸಂದೇಹ ಚನ್ನಬಸಪ್ಪನಿಗೆ. ಆದರೆ ಹಾಗೆಂದು ಮಗನನ್ನು ಗದರಿಸಲಾರ. {{gap}}"ಮುಂಡೇದು ಹಾಳಾಗಿ ಹೋಗತದೆ" ಎಂದು ಗೊಣಗುತ್ತ ಆತ ತನ್ನ ಕೊಠಡಿಗೆ ಹೋದ. {{gap}}ದೇವಮ್ಮಾಜಿ, "ತಲೆನೋವು, ನಡನೋವು" ಎನ್ನುತ್ತ ಹಾಸಿಗೆಯ ಮೇಲೆ ಬಿದ್ದು ಕೊಂಡಳು. {{gap}}ವೃದ್ಧ, "ಬಿಸಿ ಅಡಿಕೆ ನೀಡ್ರವ್ವಾ" ಎಂದು ಕೇಳಿ ಇಸಕೊಂಡು, ಬಾಗಿಲ ಬಳಿ ಬಿದ್ದಿದ್ದ ಚಪ್ಪಡಿ ಕಲ್ಲಿನ ಮೇಲೆ ಕುಟ್ಟತೊಡಗಿದ. {{gap}}ರಾಜಮ್ಮಾಜಿ ಕತ್ತಲಲ್ಲಿ ಹಿತ್ತಿಲಿಗೆ ಹೋಗಿ ಬಾವಿಯಿಂದ ನೀರು ಸೇದಿದಳು. ಭಾರವಾದ ಬಿಂದಿಗೆ. ಹೊತ್ತುಕೊಂಡು ಒಳಗೆ ಬಂದಿದ್ದಳಷ್ಟೆ, ಎದೆಯಲ್ಲೇನೋ ನೋವಾಯಿತು. ಲೆಕ್ಕಿಸದೆ ತೊಳೆಯುವ ಬಳೆಯುವ ಕೆಲಸದಲ್ಲಿ ತೊಡಗಿದಳು, ಮತ್ತೆ ನೋವು ಕಾಣಿಸಿಕೊಂಡಿತು. ತಾಳಲಾಗದೆ, "ಯಪ್ಪೊ ! ಯಪ್ಪೊ ! ನೋವು!" ಎಂದು ಕೂಗಿಕೊಂಡಳು. {{gap}}ವೃದ್ಧ ಮನೆಯ ಬಳಿಗೆ ಬರುವುದು 'ಪೊಲೆ', ಹೊರಗೇ ನಿಲ್ಲಬೇಕು. ಅಲ್ಲಿಂದಲೇ ಆತ ಕೂಗಿದ : {{gap}}"ಧಣೀರೇ! ಅಮ್ಮಣ್ಣಿ! ಬಿರ್ರನೆ ಬರ್ರಿ !" {{gap}}ರಾಜಮ್ಮಾಜಿಯ ರೋದನ ಹೆಚ್ಚಿತು. {{gap}}ಚನ್ನಬಸಪ್ಪನೂ ದೇವಮ್ಮಾಜಿಯೂ ಬಂದರು. {{gap}}"ಏನಾಯ್ತು ರಾಜಮ್ಮಾಜಿ? ಏನಾಯ್ತು ?” ಎಂದು ದೇವಮ್ಮಾಜಿ ಕೇಳಿದಳು.<noinclude></noinclude> 0i1rlo1nvnbyxmqopt1epsmpjcocv91 321978 321977 2026-05-23T12:01:24Z Shreelatha.Halemane 7642 321978 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center='''ಸ್ವಾಮಿ ಆಪರಂಪಾರ'''|left='''೨೦೪'''|right=} {{gap}}ನಡುವಯಸ್ಸು ದಾಟಿದ್ದ ನಿರ್ಭಾಗ್ಯೆ, ಕೂದಲೆಲ್ಲ ಬಿಳುಪು. ಆದರೆ ಮುಖದ ಮೇಲೆ ಒಂದೂ ಸುಕ್ಕೂ ಇರಲಿಲ್ಲ. {{gap}}ಶೀತವೆ? ನೆಗಡಿಯೆ? ಜ್ವರವೆ? {{gap}}—ಒಮ್ಮೆಯೂ ಕಾಹಿಲೆ ಮಲಗಿದವಳಲ್ಲ ಆಕೆ. {{gap}}ಈ ಕೆಲ ವರ್ಷಗಳಲ್ಲಿ ಸದಾ ಹಾಸಿಗೆ ಹಿಡಿದಿರುತ್ತಿದ್ದ ದೇವಮ್ಮಾಜಿ ಅನ್ನುವುದಿತು : {{gap}}"ನೀನು ಕಲ್ಲುಗುಂಡು ಕಣಮ್ಮ." {{gap}}ಆ ಕಲ್ಲುಗುಂಡು ಒಮ್ಮಿಂದೊಮ್ಮೆಲೆ ಸಿಡಿದಿತ್ತು. {{gap}}ಇದ್ದ ಕೆಲ ಆಳು ಕಾಳುಗಳೂ ಗುಲಾಮ ಪದ್ಧತಿ ನಿರ್ನಾಮವಾದ ಮೇಲೆ ಅಪ್ಪಂಗಳವನ್ನು ಬಿಟ್ಟು, ಕಾಫಿ ತೋಟಗಳಲ್ಲಿ ದುಡಿಯಲೆಂದು ಹೊರಟುಹೋಗಿದ್ದರು. ಒಬ್ಬನೇ ಒಬ್ಬ ವೃದ್ಧ, 'ನಾನು ಉಟ್ಟಿದ್ದೂ ಇಲ್ಲೇ, ಸಾಯೋದೂ ಇಲ್ಲೇ' ಎಂದು ಹಿಂದೆ ಉಳಿದಿದ್ದ. {{gap}}ಹೀಗೆ, ಹೆಚ್ಚಿನ ಹೊರೆಯಾದ ಎಲ್ಲ ಕೆಲಸಗಳನ್ನೂ ರಾಜಮ್ಮಾಜಿ ಮಾಡುತ್ತಿದ್ದಳು. ತೊಳೆದು ಸಾರಿಸಿ ಮಲಗುವ ವೇಳೆಗೆ ನಡು ಇರುಳಾಗುತ್ತಿತು. {{gap}}ಆ ರಾತ್ರೆ ಎಲ್ಲರೂ ಉಂಡರು. ಎಲ್ಲರೂ ಅಂದರೆ—ಚನ್ನಬಸಪ್ಪ, ದೇವಮಾಜಿ, ಅವರ ಯುವಕ ಮಗ [ಮಗಳನಾಗಲೇ ಮದುವೆ ಮಾಡಿಕೊಟ್ಟಿತ್ತು]-ವೃದ್ಧ ಆಳು ಮತ್ತು ರಾಜಮ್ಮಾಜಿ. {{gap}}"ಹೊಲದ ಕಡೆ ಹೋಗಿ ಬರತೀನಿ" ಎಂದು ಮಗ ಹೊರಬಿದ್ದ. {{gap}}ಹೊಲ ಕಾಯುವುದೆಲ್ಲ ಸುಳ್ಳು; ಯಾವುದೋ ದುರ್ಜನರ ಸಂಗವಿರಬೇಕು–ಎಂಬ ಸಂದೇಹ ಚನ್ನಬಸಪ್ಪನಿಗೆ. ಆದರೆ ಹಾಗೆಂದು ಮಗನನ್ನು ಗದರಿಸಲಾರ. {{gap}}"ಮುಂಡೇದು ಹಾಳಾಗಿ ಹೋಗತದೆ" ಎಂದು ಗೊಣಗುತ್ತ ಆತ ತನ್ನ ಕೊಠಡಿಗೆ ಹೋದ. {{gap}}ದೇವಮ್ಮಾಜಿ, "ತಲೆನೋವು, ನಡನೋವು" ಎನ್ನುತ್ತ ಹಾಸಿಗೆಯ ಮೇಲೆ ಬಿದ್ದು ಕೊಂಡಳು. {{gap}}ವೃದ್ಧ, "ಬಿಸಿ ಅಡಿಕೆ ನೀಡ್ರವ್ವಾ" ಎಂದು ಕೇಳಿ ಇಸಕೊಂಡು, ಬಾಗಿಲ ಬಳಿ ಬಿದ್ದಿದ್ದ ಚಪ್ಪಡಿ ಕಲ್ಲಿನ ಮೇಲೆ ಕುಟ್ಟತೊಡಗಿದ. {{gap}}ರಾಜಮ್ಮಾಜಿ ಕತ್ತಲಲ್ಲಿ ಹಿತ್ತಿಲಿಗೆ ಹೋಗಿ ಬಾವಿಯಿಂದ ನೀರು ಸೇದಿದಳು. ಭಾರವಾದ ಬಿಂದಿಗೆ. ಹೊತ್ತುಕೊಂಡು ಒಳಗೆ ಬಂದಿದ್ದಳಷ್ಟೆ, ಎದೆಯಲ್ಲೇನೋ ನೋವಾಯಿತು. ಲೆಕ್ಕಿಸದೆ ತೊಳೆಯುವ ಬಳೆಯುವ ಕೆಲಸದಲ್ಲಿ ತೊಡಗಿದಳು, ಮತ್ತೆ ನೋವು ಕಾಣಿಸಿಕೊಂಡಿತು. ತಾಳಲಾಗದೆ, "ಯಪ್ಪೊ ! ಯಪ್ಪೊ ! ನೋವು!" ಎಂದು ಕೂಗಿಕೊಂಡಳು. {{gap}}ವೃದ್ಧ ಮನೆಯ ಬಳಿಗೆ ಬರುವುದು 'ಪೊಲೆ', ಹೊರಗೇ ನಿಲ್ಲಬೇಕು. ಅಲ್ಲಿಂದಲೇ ಆತ ಕೂಗಿದ : {{gap}}"ಧಣೀರೇ! ಅಮ್ಮಣ್ಣಿ! ಬಿರ್ರನೆ ಬರ್ರಿ !" {{gap}}ರಾಜಮ್ಮಾಜಿಯ ರೋದನ ಹೆಚ್ಚಿತು. {{gap}}ಚನ್ನಬಸಪ್ಪನೂ ದೇವಮ್ಮಾಜಿಯೂ ಬಂದರು. {{gap}}"ಏನಾಯ್ತು ರಾಜಮ್ಮಾಜಿ? ಏನಾಯ್ತು ?” ಎಂದು ದೇವಮ್ಮಾಜಿ ಕೇಳಿದಳು.<noinclude></noinclude> 4vfy2b327t74cjsz3i1xkbn7llk4hcc 321979 321978 2026-05-23T12:02:08Z Shreelatha.Halemane 7642 321979 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಆಪರಂಪಾರ|left=೨೦೪|right=} {{gap}}ನಡುವಯಸ್ಸು ದಾಟಿದ್ದ ನಿರ್ಭಾಗ್ಯೆ, ಕೂದಲೆಲ್ಲ ಬಿಳುಪು. ಆದರೆ ಮುಖದ ಮೇಲೆ ಒಂದೂ ಸುಕ್ಕೂ ಇರಲಿಲ್ಲ. {{gap}}ಶೀತವೆ? ನೆಗಡಿಯೆ? ಜ್ವರವೆ? {{gap}}—ಒಮ್ಮೆಯೂ ಕಾಹಿಲೆ ಮಲಗಿದವಳಲ್ಲ ಆಕೆ. {{gap}}ಈ ಕೆಲ ವರ್ಷಗಳಲ್ಲಿ ಸದಾ ಹಾಸಿಗೆ ಹಿಡಿದಿರುತ್ತಿದ್ದ ದೇವಮ್ಮಾಜಿ ಅನ್ನುವುದಿತು : {{gap}}"ನೀನು ಕಲ್ಲುಗುಂಡು ಕಣಮ್ಮ." {{gap}}ಆ ಕಲ್ಲುಗುಂಡು ಒಮ್ಮಿಂದೊಮ್ಮೆಲೆ ಸಿಡಿದಿತ್ತು. {{gap}}ಇದ್ದ ಕೆಲ ಆಳು ಕಾಳುಗಳೂ ಗುಲಾಮ ಪದ್ಧತಿ ನಿರ್ನಾಮವಾದ ಮೇಲೆ ಅಪ್ಪಂಗಳವನ್ನು ಬಿಟ್ಟು, ಕಾಫಿ ತೋಟಗಳಲ್ಲಿ ದುಡಿಯಲೆಂದು ಹೊರಟುಹೋಗಿದ್ದರು. ಒಬ್ಬನೇ ಒಬ್ಬ ವೃದ್ಧ, 'ನಾನು ಉಟ್ಟಿದ್ದೂ ಇಲ್ಲೇ, ಸಾಯೋದೂ ಇಲ್ಲೇ' ಎಂದು ಹಿಂದೆ ಉಳಿದಿದ್ದ. {{gap}}ಹೀಗೆ, ಹೆಚ್ಚಿನ ಹೊರೆಯಾದ ಎಲ್ಲ ಕೆಲಸಗಳನ್ನೂ ರಾಜಮ್ಮಾಜಿ ಮಾಡುತ್ತಿದ್ದಳು. ತೊಳೆದು ಸಾರಿಸಿ ಮಲಗುವ ವೇಳೆಗೆ ನಡು ಇರುಳಾಗುತ್ತಿತು. {{gap}}ಆ ರಾತ್ರೆ ಎಲ್ಲರೂ ಉಂಡರು. ಎಲ್ಲರೂ ಅಂದರೆ—ಚನ್ನಬಸಪ್ಪ, ದೇವಮಾಜಿ, ಅವರ ಯುವಕ ಮಗ [ಮಗಳನಾಗಲೇ ಮದುವೆ ಮಾಡಿಕೊಟ್ಟಿತ್ತು]-ವೃದ್ಧ ಆಳು ಮತ್ತು ರಾಜಮ್ಮಾಜಿ. {{gap}}"ಹೊಲದ ಕಡೆ ಹೋಗಿ ಬರತೀನಿ" ಎಂದು ಮಗ ಹೊರಬಿದ್ದ. {{gap}}ಹೊಲ ಕಾಯುವುದೆಲ್ಲ ಸುಳ್ಳು; ಯಾವುದೋ ದುರ್ಜನರ ಸಂಗವಿರಬೇಕು–ಎಂಬ ಸಂದೇಹ ಚನ್ನಬಸಪ್ಪನಿಗೆ. ಆದರೆ ಹಾಗೆಂದು ಮಗನನ್ನು ಗದರಿಸಲಾರ. {{gap}}"ಮುಂಡೇದು ಹಾಳಾಗಿ ಹೋಗತದೆ" ಎಂದು ಗೊಣಗುತ್ತ ಆತ ತನ್ನ ಕೊಠಡಿಗೆ ಹೋದ. {{gap}}ದೇವಮ್ಮಾಜಿ, "ತಲೆನೋವು, ನಡನೋವು" ಎನ್ನುತ್ತ ಹಾಸಿಗೆಯ ಮೇಲೆ ಬಿದ್ದು ಕೊಂಡಳು. {{gap}}ವೃದ್ಧ, "ಬಿಸಿ ಅಡಿಕೆ ನೀಡ್ರವ್ವಾ" ಎಂದು ಕೇಳಿ ಇಸಕೊಂಡು, ಬಾಗಿಲ ಬಳಿ ಬಿದ್ದಿದ್ದ ಚಪ್ಪಡಿ ಕಲ್ಲಿನ ಮೇಲೆ ಕುಟ್ಟತೊಡಗಿದ. {{gap}}ರಾಜಮ್ಮಾಜಿ ಕತ್ತಲಲ್ಲಿ ಹಿತ್ತಿಲಿಗೆ ಹೋಗಿ ಬಾವಿಯಿಂದ ನೀರು ಸೇದಿದಳು. ಭಾರವಾದ ಬಿಂದಿಗೆ. ಹೊತ್ತುಕೊಂಡು ಒಳಗೆ ಬಂದಿದ್ದಳಷ್ಟೆ, ಎದೆಯಲ್ಲೇನೋ ನೋವಾಯಿತು. ಲೆಕ್ಕಿಸದೆ ತೊಳೆಯುವ ಬಳೆಯುವ ಕೆಲಸದಲ್ಲಿ ತೊಡಗಿದಳು, ಮತ್ತೆ ನೋವು ಕಾಣಿಸಿಕೊಂಡಿತು. ತಾಳಲಾಗದೆ, "ಯಪ್ಪೊ ! ಯಪ್ಪೊ ! ನೋವು!" ಎಂದು ಕೂಗಿಕೊಂಡಳು. {{gap}}ವೃದ್ಧ ಮನೆಯ ಬಳಿಗೆ ಬರುವುದು 'ಪೊಲೆ', ಹೊರಗೇ ನಿಲ್ಲಬೇಕು. ಅಲ್ಲಿಂದಲೇ ಆತ ಕೂಗಿದ : {{gap}}"ಧಣೀರೇ! ಅಮ್ಮಣ್ಣಿ! ಬಿರ್ರನೆ ಬರ್ರಿ !" {{gap}}ರಾಜಮ್ಮಾಜಿಯ ರೋದನ ಹೆಚ್ಚಿತು. {{gap}}ಚನ್ನಬಸಪ್ಪನೂ ದೇವಮ್ಮಾಜಿಯೂ ಬಂದರು. {{gap}}"ಏನಾಯ್ತು ರಾಜಮ್ಮಾಜಿ? ಏನಾಯ್ತು ?” ಎಂದು ದೇವಮ್ಮಾಜಿ ಕೇಳಿದಳು.<noinclude></noinclude> 4bmoi08uruk9brj78oc1dsj6o90mpc7 321980 321979 2026-05-23T12:02:50Z Shreelatha.Halemane 7642 321980 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=೨೦೪|right=}} {{gap}}ನಡುವಯಸ್ಸು ದಾಟಿದ್ದ ನಿರ್ಭಾಗ್ಯೆ, ಕೂದಲೆಲ್ಲ ಬಿಳುಪು. ಆದರೆ ಮುಖದ ಮೇಲೆ ಒಂದೂ ಸುಕ್ಕೂ ಇರಲಿಲ್ಲ. {{gap}}ಶೀತವೆ? ನೆಗಡಿಯೆ? ಜ್ವರವೆ? {{gap}}—ಒಮ್ಮೆಯೂ ಕಾಹಿಲೆ ಮಲಗಿದವಳಲ್ಲ ಆಕೆ. {{gap}}ಈ ಕೆಲ ವರ್ಷಗಳಲ್ಲಿ ಸದಾ ಹಾಸಿಗೆ ಹಿಡಿದಿರುತ್ತಿದ್ದ ದೇವಮ್ಮಾಜಿ ಅನ್ನುವುದಿತು : {{gap}}"ನೀನು ಕಲ್ಲುಗುಂಡು ಕಣಮ್ಮ." {{gap}}ಆ ಕಲ್ಲುಗುಂಡು ಒಮ್ಮಿಂದೊಮ್ಮೆಲೆ ಸಿಡಿದಿತ್ತು. {{gap}}ಇದ್ದ ಕೆಲ ಆಳು ಕಾಳುಗಳೂ ಗುಲಾಮ ಪದ್ಧತಿ ನಿರ್ನಾಮವಾದ ಮೇಲೆ ಅಪ್ಪಂಗಳವನ್ನು ಬಿಟ್ಟು, ಕಾಫಿ ತೋಟಗಳಲ್ಲಿ ದುಡಿಯಲೆಂದು ಹೊರಟುಹೋಗಿದ್ದರು. ಒಬ್ಬನೇ ಒಬ್ಬ ವೃದ್ಧ, 'ನಾನು ಉಟ್ಟಿದ್ದೂ ಇಲ್ಲೇ, ಸಾಯೋದೂ ಇಲ್ಲೇ' ಎಂದು ಹಿಂದೆ ಉಳಿದಿದ್ದ. {{gap}}ಹೀಗೆ, ಹೆಚ್ಚಿನ ಹೊರೆಯಾದ ಎಲ್ಲ ಕೆಲಸಗಳನ್ನೂ ರಾಜಮ್ಮಾಜಿ ಮಾಡುತ್ತಿದ್ದಳು. ತೊಳೆದು ಸಾರಿಸಿ ಮಲಗುವ ವೇಳೆಗೆ ನಡು ಇರುಳಾಗುತ್ತಿತು. {{gap}}ಆ ರಾತ್ರೆ ಎಲ್ಲರೂ ಉಂಡರು. ಎಲ್ಲರೂ ಅಂದರೆ—ಚನ್ನಬಸಪ್ಪ, ದೇವಮಾಜಿ, ಅವರ ಯುವಕ ಮಗ [ಮಗಳನಾಗಲೇ ಮದುವೆ ಮಾಡಿಕೊಟ್ಟಿತ್ತು]-ವೃದ್ಧ ಆಳು ಮತ್ತು ರಾಜಮ್ಮಾಜಿ. {{gap}}"ಹೊಲದ ಕಡೆ ಹೋಗಿ ಬರತೀನಿ" ಎಂದು ಮಗ ಹೊರಬಿದ್ದ. {{gap}}ಹೊಲ ಕಾಯುವುದೆಲ್ಲ ಸುಳ್ಳು; ಯಾವುದೋ ದುರ್ಜನರ ಸಂಗವಿರಬೇಕು–ಎಂಬ ಸಂದೇಹ ಚನ್ನಬಸಪ್ಪನಿಗೆ. ಆದರೆ ಹಾಗೆಂದು ಮಗನನ್ನು ಗದರಿಸಲಾರ. {{gap}}"ಮುಂಡೇದು ಹಾಳಾಗಿ ಹೋಗತದೆ" ಎಂದು ಗೊಣಗುತ್ತ ಆತ ತನ್ನ ಕೊಠಡಿಗೆ ಹೋದ. {{gap}}ದೇವಮ್ಮಾಜಿ, "ತಲೆನೋವು, ನಡನೋವು" ಎನ್ನುತ್ತ ಹಾಸಿಗೆಯ ಮೇಲೆ ಬಿದ್ದು ಕೊಂಡಳು. {{gap}}ವೃದ್ಧ, "ಬಿಸಿ ಅಡಿಕೆ ನೀಡ್ರವ್ವಾ" ಎಂದು ಕೇಳಿ ಇಸಕೊಂಡು, ಬಾಗಿಲ ಬಳಿ ಬಿದ್ದಿದ್ದ ಚಪ್ಪಡಿ ಕಲ್ಲಿನ ಮೇಲೆ ಕುಟ್ಟತೊಡಗಿದ. {{gap}}ರಾಜಮ್ಮಾಜಿ ಕತ್ತಲಲ್ಲಿ ಹಿತ್ತಿಲಿಗೆ ಹೋಗಿ ಬಾವಿಯಿಂದ ನೀರು ಸೇದಿದಳು. ಭಾರವಾದ ಬಿಂದಿಗೆ. ಹೊತ್ತುಕೊಂಡು ಒಳಗೆ ಬಂದಿದ್ದಳಷ್ಟೆ, ಎದೆಯಲ್ಲೇನೋ ನೋವಾಯಿತು. ಲೆಕ್ಕಿಸದೆ ತೊಳೆಯುವ ಬಳೆಯುವ ಕೆಲಸದಲ್ಲಿ ತೊಡಗಿದಳು, ಮತ್ತೆ ನೋವು ಕಾಣಿಸಿಕೊಂಡಿತು. ತಾಳಲಾಗದೆ, "ಯಪ್ಪೊ ! ಯಪ್ಪೊ ! ನೋವು!" ಎಂದು ಕೂಗಿಕೊಂಡಳು. {{gap}}ವೃದ್ಧ ಮನೆಯ ಬಳಿಗೆ ಬರುವುದು 'ಪೊಲೆ', ಹೊರಗೇ ನಿಲ್ಲಬೇಕು. ಅಲ್ಲಿಂದಲೇ ಆತ ಕೂಗಿದ : {{gap}}"ಧಣೀರೇ! ಅಮ್ಮಣ್ಣಿ! ಬಿರ್ರನೆ ಬರ್ರಿ !" {{gap}}ರಾಜಮ್ಮಾಜಿಯ ರೋದನ ಹೆಚ್ಚಿತು. {{gap}}ಚನ್ನಬಸಪ್ಪನೂ ದೇವಮ್ಮಾಜಿಯೂ ಬಂದರು. {{gap}}"ಏನಾಯ್ತು ರಾಜಮ್ಮಾಜಿ? ಏನಾಯ್ತು ?” ಎಂದು ದೇವಮ್ಮಾಜಿ ಕೇಳಿದಳು.<noinclude></noinclude> gf14dp2z659wuumdmpvea28un48t1ug ಪುಟ:ಸ್ವಾಮಿ ಅಪರಂಪಾರ.pdf/೨೦೭ 104 21357 321981 206520 2026-05-23T12:05:44Z Shreelatha.Halemane 7642 /* Validated */ 321981 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=|right=೨೦೫}} {{gap}}ರಾಜಮ್ಮಾಜಿ ಎದೆಯ ಎಡಭಾಗವನ್ನು ಎರಡೂ ಕೈಗಳಿಂದ ಒತ್ತಿಕೊಂಡೇ, “ನೋವು! ನೋವು!" ಎನ್ನುತಾ ಹೊರಳಾಡಿದಳು. {{gap}}ಒಂದರ್ಧ ಘಳಿಗೆಯ ಯಾತನೆ. ನೋಡುತ್ತಿದ್ದ ಮೂವರೂ ಅಸಹಾಯರಾಗಿ ನಿಂತರು. {{gap}}ರಾಜಮ್ಮಾಜಿ ಬೊಗಸೆ ಬೊಗಸೆಯಾಗಿ ರಕ್ತ ಕಾರಿದಳು. {{gap}}ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ಎಲ್ಲವೂ ಶಾಂತವಾಯಿತು. {{gap}}...ಅರಮನೆ ಎಂಬ ಹೆಸರಿದ್ದ ಅಪ್ಪಂಗಳದ ಆ ಮನೆಯ ವಿಸ್ತಾರವಾದ ಹಿತ್ತಿಲ ಒಂದು ಮೂಲೆಯಲ್ಲಿ. ಕಂದೀಲ, ಬೆಳಕಿನಲ್ಲಿ, ನೆಲವನ್ನು ವೃದ್ಧ ಆಳವಾಗಿ ಅಗೆದ. {{gap}}ಚನ್ನಬಸಪ್ಪನೂ ದೇವಮ್ಮಾಜಿಯೂ ಶವವನ್ನು ವಿಾಯಿಸಿ ಅಲಂಕರಿಸಿದರು. ಅವರೇ ಅದನ್ನು ಹೊತ್ತು ಭೂಮಿತಾಯಿಯ ಮಡಿಲಿಗೆ ಅರ್ಪಿಸಿದರು. {{gap}}ಹಿಂತಿರುಗಿದ ಬಳಿಕ ದೇವಮ್ಮಾಜಿ ಆಳಿಗೆ ಅಂದಳು : {{gap}}"ನೀನೇ ಬಂದು ಈ ನೆಲ ಎಲ್ಲ ಸ್ವಚ್ಛ ಮಾದಪ್ಪ,ಮಡಿಯೊ ? ಪೊಲೆಯೊ? ? —ಬೆಂಕಿ ಹಾಕ. ಬಾ ಒಳಕ್ಕೆ." * * * {{gap}}ಬೆಂಗಳೂರಲ್ಲಿ ಶಂಕರಪ್ಪನ ಜೀವನ ಹೆಚ್ಚು ಹೆಚ್ಚು ದುಸ್ತರವಾಗುತ್ತ ಸಾಗಿತ್ತು. ಮಕ್ಕಳು ಬೇರೆ ಬೇರೆಯಾಗಿ ತಮ್ಮ ಸಂಸಾರಗಳನ್ನು ಸಾಕಿಕೊಂಡಿರುತ್ತಿದ್ದರು. ವೃದ್ಧ ದಂಪತಿ ತಮ್ಮ ಪಾಡಿಗೆ ತಾವು ಇರಬೇಕಾಗಿ ಬಂತು. ಕಡಲೆಪುರಿ ವ್ಯಾಪಾರದಿಂದ ಬರುವುದು ಒಪ್ಪೊತ್ತಿಗೂ ಸಾಲುತ್ತಿರಲಿಲ್ಲ. {{gap}}ಕೊಡಗಿನಲ್ಲಿ ಕಾಫಿ ತೋಟಗಳು ಆರಂಭವಾಗಿರುವುದೂ ಎಷ್ಟು ಜನರಿಗೆ ಬೇಕಾದರೂ ಕೆಲಸ ದೊರೆಯುತ್ತಿರುವುದೂ ಎಲ್ಲರ ಬಾಯಲ್ಲೂ ಕೇಳಿಬರುತ್ತಿದ್ದ ಸುದ್ದಿಯಾಗಿತ್ತು. ತಾನೂ ಒಮ್ಮೆ ನೋಡಿ ಬರಬೇಕೆಂಬ ಆಸೆ ಶಂಕರಪ್ಪನಿಗೆ. ಊರು ಬಿಟ್ಟು ಮೂವತ್ತು ವರ್ಷಗಳಿಗೆ ಮೇಲಾಯಿತಲ್ಲ? ಇನ್ನು ಜನರಿಗೆ ತನ್ನ ಗುರುತು ಸಿಗುತ್ತದೆನ್ನುವುದು ಸುಳ್ಳು. {{gap}}ಎರಡೇ ವಾರದೊಳಗೆ ಬರುತೇನೆ. ನೀನು ಹಿರೇ ಮಗನ ಮನೇಲಿರು. ಸೊಸೆ ಬೇಡ ಅಂದರೆ ಕಿರೇ ಮಗನಲ್ಲಿಗೆ ಹೋಗು" ಎಂದು ಹೆಂಡತಿಯನ್ನು ಒಪ್ಪಿಸಿ, ಶಂಕರಪ್ಪ ಕೊಡಗಿಗೆ ಹೊರಟ. {{gap}}ಬಳಸು ದಾರಿಯಾದರೇನಂತೆ ? ಅಪ್ಪಂಗಳಕ್ಕೆ ಹೋಗಿಯೇ ಆತ ಮಡಕೇರಿ ಸೇರಬೇಕು. ಅವನ ಹರಕು ಕೋಟಿನ ಒಳಜೇಬಿನಲ್ಲೊಂದು ಹೊರೆಯಿತ್ತು. ಸಾಧ್ಯವಾದರೆ ಅಪ್ಪಂಗಳದಲ್ಲಿ ಅದನ್ನು ಇಳಿಸಬೇಕೆಂಬ ಅಪೇಕ್ಷೆ ಅವನದು. {{gap}}ಪಾಳುಬಿದ್ದಿದ್ದ ಅಪ್ಪಂಗಳದ ಅರಮನೆಯ ಮುಂದೆ ಚಪ್ಪಡಿ ಕಲ್ಲಿನ ಮೇಲೆ ವೃದ್ಧ ಆಳು ಕುಳಿತಿದ್ದ. {{gap}}ಶಂಕರಪ್ಪ ಕೇಳಿದ: {{gap}}“ಎಲ್ಲರೂ ಚೆಂದಾನಾ ?" {{gap}}ವೃದ್ಧ ಮಾತನಾಡಲಿಲ್ಲ. {{gap}}“ರಾಜಮ್ಮಾಜಿಯೋರು ಒಳಗದಾರಾ?" {{gap}}“ಏನು ಜಂಬ್ರ ?" {{gap}}"ಒಸಿ ಮಾತಾಡಬೇಕಿತ್ತು."<noinclude></noinclude> hysyz3bs5qqyonnbtkaqsx5o32kfqn2 ಪುಟ:ಸ್ವಾಮಿ ಅಪರಂಪಾರ.pdf/೨೦೮ 104 21358 321982 206521 2026-05-23T12:08:36Z Shreelatha.Halemane 7642 /* Validated */ 321982 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=೨೦೬|right=}} {{gap}}ವೃದ್ಧ ಅಂದ: {{gap}}"ಅದಾರೆ [ಮೇಲಕ್ಕೆ ಬೊಟ್ಟಮಾಡಿ] ಆ ಲೋಕದಾಗದಾರೆ. ಓಗಿ ನೋಡತೀಯಾ? ಇವತ್ತಿಗೆ ಎಂಟು ದಿವಸ ಆತು. ರಕ್ತಕಾರಿ ಸತ್ತೊದ್ರು ಆ ಮಾತಾಯಿ...ಅಯ್ಯೋ ! {{center|'''೭೩'''}} {{gap}}ತಾನು ಹುಟ್ಟಿ ಬೆಳೆದ ಕೊಡಗು ಇದೆ ಏನು ?-ಎನ್ನುವಂತಾಯಿತು ಶಂಕರಪ್ಪನಿಗೆ, ದೇಶದ ಸ್ಥಿತಿಗತಿಗಳನ್ನು ಗಮನಿಸಿದಾಗ. {{gap}}ಸಮಯ ಸಾಧಕರ ಸಂತತಿ ವಿಪುಲಗೊಂಡಿತ್ತು. ಆಳುವವರ ತಾಳಕ್ಕೆ ತಕ್ಕಂತೆ ಕುಣಿಯುವವರೇ ಎಲ್ಲರೂ. ಅದು ಇಷ್ಟವಾಗದವರು ತಮ್ಮ ಪಾಡಿಗೆ ತಾವಿದ್ದರು. {{gap}}ಒಂದೆರಡು ಕಾಫಿ ತೋಟಗಳನ್ನೂ ಶಂಕರಪ್ಪ ಕಂಡ. ಅಲ್ಲಿ ಜನರನ್ನು ದನಗಳಂತೆ ದುಡಿಸಿಕೊಳ್ಳುತ್ತಿದ್ದರು. ಆಂಗ್ಲ ಮಾಲಿಕ ಕೈಯಲ್ಲಿ ಚಾಟಿ ಹಿಡಿದು ಕುದುರೆಯ ಮೇಲೆ ಅತ್ತಿತ್ತ ಹೋಗುತ್ತಿದುದನ್ನು ಕಂಡಾಗ ಶಂಕರಪ್ಪನ ಕಣ್ಣುಗಳಿಂದ ಕಿಡಿ ಕಾರಿತು. {{gap}}ಆತ ಬೆಂಗಳೂರಿಗೆ ಹಿಂತಿರುಗಿದ : {{gap}}“ಕಾಫಿ ತೋಟದ ಕೆಲಸ ನಮಗೆ ಹೇಳಿದ್ದಲ್ಲ" ಎಂದು ಹೆಂಡತಿಗೆ ತಿಳಿಸಿದ. {{gap}}...ದಿವಾನ ಲಕ್ಶ್ಮೀನಾರಯಣನ ಮಕ್ಕಳು ತಮ್ಮ ವೃದ್ಧ ತಂದೆಯ ಬಿಡುಗಡೆಗಾಗಿ ಪ್ರಯತ್ನ ನಡೆಸಿದ್ದರು. ಮೈಸೂರಿನ ಅರಸನಿಗೂ ಆಂಗ್ಲ ಪ್ರತಿನಿಧಿ ಬೌರಿಂಗನಿಗೂ ಅವರು ಮನವಿಗಳನ್ನು ಸಲ್ಲಿಸಿದರು. {{gap}}"ಇದು ಕೊಡಗಿಗೆ ಸಂಬಂಧಿಸಿದ ವಿಷಯ" ಎಂದ ಕೃಷ್ಣಭೂಪಾಲ. {{gap}}ಲಕ್ಶ್ಮೀನಾರಯಣನ ಮಕ್ಕಳು, "ನಾವೀಗ ಬೆಂಗಳೂರಲ್ಲಿ ನೆಲೆಸಿದ್ದೇವೆ. ಶ್ರೀಮನ್ಮಹಾರಾಜರ ಪ್ರಜೆಗಳಾಗಿದ್ದೇವೆ" ಎಂದರು. {{gap}}ಕೃಷ್ಣಭೂಪಾಲ ಅವರ ಮನವಿಯನ್ನು, "ಕೊಡಗಿನ ಪ್ರಕರಣ. ಖಾವಂದರಿಗೆ ಸೇರಿದ್ದು. ಕನಿಕರ ತೋರಿಸಬಹುದೇನೋ-ಅಂತ ತಮ್ಮಲ್ಲಿಗೆ ಕಳುಹಿಸುತ್ತಿದ್ದೇವೆ" ಎಂದು ಬೌರಿಂಗನಿಗೆ ತಲಪಿಸಿದ. {{gap}}“ಕೊಡಗು! ಓ! ಆ ಕಪಾಟದಲ್ಲಿ ಇನ್ನೂ ಎಲುಬು ಗೂಡುಗಳು ಉಳಿದಿವೆಯೇನು?” ಎಂದು ಬೌರಿಂಗ್, ಹಳೆಯ ದಾಖಲೆಗಳನ್ನು ತರಿಸಿದ. {{gap}}"ಡಾಕ್ಟರ್, ಈ ಕೈದಿಯ ಬಗ್ಗೆ ಒಂದು ವೈದ್ಯಕೀಯ ವರದಿ ಬೇಕು" ಎಂದು ಕ್ಯಾಂಪ್‍ಬೆಲ್ಲ್ಗೆ ತಿಳಿಸಿದ. {{gap}}ಲಕ್ಶ್ಮೀನಾರಯಣ ಮುದುಕ; ಆರೋಗ್ಯವೂ ಸರಿಯಾಗಿಲ್ಲ–ಸಾಕ್ಷ್ಯ ನುಡಿಯಿತು ಕ್ಯಾಂಪ್‍ಬೆಲ್‍ನ ವರದಿ. {{gap}}ಅದರಲ್ಲಿ ಮತ್ತೂ ಒಂದು ವಿಷಯವಿತ್ತು : {{gap}}"ಇನ್ನೂ ಒಬ್ಬ ವೃದ್ಧ ಕೈದಿಯ ವಿಚಾರವಾಗಿ ತಮ್ಮ ಗಮನ ಸೆಳೆಯಬೇಕಾಗಿದೆ. ಇವನ ಹೆಸರು ಅಪರಂಪಾರಸ್ವಾಮಿ, ಅಂತ. ಕುರುಡ. ಒಂದು ವರ್ಷದ ಹಿಂದೆ ಅವನಿಗೊಂದು ಕೆಟ್ಟ ಕನಸು ಬಿದ್ದಿತಂತೆ. ಅಂದಿನಿಂದ ಒಂದೇ ಸಮನೆ ಕೃಶವಾಗುತ್ತಿದ್ದಾನೆ. ಇವನನ್ನೂ ಬಿಟ್ಟುಬಿಡಬಹುದು ಅಂತ ತೋರುತದೆ.” ಬೌರಿಂಗ್ ವೈದ್ಯನ ವರದಿಯನ್ನು ಪರಿಶೀಲಿಸಿ, ಕೊಡಗಿನ ಕಡತಗಳನ್ನು ಮತ್ತೊಮ್ಮೆ<noinclude></noinclude> ocxd8nk2m8ogbkkmmtikmqrby5qf5es ಪುಟ:ಸ್ವಾಮಿ ಅಪರಂಪಾರ.pdf/೨೦೯ 104 21359 321983 206522 2026-05-23T12:11:37Z Shreelatha.Halemane 7642 /* Validated */ 321983 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center='''ಸ್ವಾಮಿ ಅಪರ೦ಪಾರ''' |left=|right='''೨೦೭'''} ತೆರೆದು ನೋಡಿದ. ಅಪರಂಪಾರನ ಇತಿಹಾಸ ಸ್ವಾರಸ್ಯವಾಗಿತ್ತು. ಓದಿ ಅವನೆಂದ: {{gap}}"ಹು೦ ! ಇವನು ಫಕೀರ. ದಿಕ್ಕಿಲ್ಲದವನು. ಬಿಡುಗಡೆ ಮಾಡಿ ಅಂತ ಯಾರು ಬೇಡುತಾರೆ? ಈ ಮುದುಕರನ್ನೆಲ್ಲ ಇಲ್ಲಿ ಯಾವ ಲೌಕಿಕ ಪ್ರಯೋಜನಕ್ಕೆ ಇಟ್ಟುಕೊಂಡಿದಾರೋ ಕಾಣೆ." {{gap}}ಕೊಡಗಿನ ಈ ಕೈದಿಗಳನ್ನು ಬಿಡುಗಡೆ ಮಾಡಬಹುದು–ಎಂದು ಬೌರಿಂಗ್ ಆಜ್ಞೆ ಹೊರಡಿಸಿದ. {{gap}}...ಬರಬೇಕಾದ ದಿನಕ್ಕಿಂತಲೂ ಮುಂಚೆಯೇ ಪರಿಚಿತ ಬೂಟುಗಳ ಸಪ್ಪಳ ಕೇಳಿ ಅಪರಂಪಾರನಿಗೆ ಆಶ್ಚರ್ಯವಾಯಿತು. {{gap}}"ಶರಣು ಸ್ವಾಮಿಜಿ." {{gap}}"ಶರಣು ವೈದ್ಯರೆ." {{gap}}ವೈದ್ಯನ ಧ್ವನಿಯಲ್ಲಿ ಕಂಪನವಿತ್ತು. {{gap}}"ನಿಮಗೊಂದು ಸಿಹಿ ಸುದ್ದಿ ತಂದಿದೇನೆ." {{gap}}"ನಿಮ್ಮ ಔಷಧವಷ್ಟೇ ಕಹಿ. ಮಾತು ಯಾವಾಗಲೂ ಸಿಹೀನೇ ಅಲ್ಲವಾ ?" {{gap}}"ನಿಮ್ಮನ್ನು ಬಿಡುಗಡೆ ಮಾಡುತಾರೆ." {{gap}}ಅಪರಂಪಾರನ ತುಟಿಗಳು ಬಿಗಿದುಕೊಂಡುವ. ಗವಿಗಳ ಮೇಲೆ ಎವೆಯ ಅವಶೇಷಗಳು ಪಟಪಟನೆ ಬಡಿದವು. {{gap}}ಕ್ಯಾಂಪ್‍ಬೆಲ್ಲ್ ಮತ್ತೆ ಅಂದ: {{gap}}"ಇನ್ನು ನೀವು ಸ್ವತಂತ್ರರು. ಸ್ವಲ್ಪ ಹೊತ್ತಿನಲ್ಲೇ ಬಿಟ್ಟಬಿಡುತಾರೆ." {{gap}}ಅಪರಂಪಾರ ತುಟಿ ತೆರೆದ : {{gap}}"ಇದೂ ಒಂದು ಇರಲಿ ಎನ್ನುತಾನಾ ಮಹದೇವ ? ಈ ಸೆರೆಮನೆಯಿಂದ ಇನ್ನೊಂದು ಸೆರೆಮನೆಗಾ ನಮಗೆ ಬಿಡುಗಡೆ?...ನಮ್ಮ ಸಹವಾಸ ನಿಮಗೆ ಸಾಕಾಯಿತಾ ವೈದ್ಯರೆ?" {{gap}}"ಹಾಗಲ್ಲ, ಸ್ವಾಮಿಜಿ. ಅಗಲಿಕೆ ಯಾವಾಗಲೂ ಬೇಸರದ ಸಂಗತಿ. ಆದರೆ, ಸೆರೆ ಮನೆಯಿಂದ ನೀವು ಹೊರಹೋದಿರಿ ಅಂದರೆ ನನಗೆಷ್ಟೋ ಸಮಾಧಾನ." {{gap}}"ಇವನನ್ನ ಬಿಡಿ–ಅಂತ ನೀವೇ ಸಲಹೆ ಮಾಡಿದಿರಾ ?" {{gap}}"ಅದು ದೊಡ್ಡದಲ್ಲ. ಹೇಳಿ, ಸ್ವಾಮಿಜಿ, ನಿಮಗೇನಾದರೂ ಸಹಾಯ ಬೇಕೆ?” {{gap}}"ಸಹಾಯ ? ಹ್ಞ. ಮೂವತ್ತೆರಡು ವರ್ಷ ಆಯಿತು ಇಲ್ಲಿಗೆ ಬಂದು. ಒಮ್ಮೆಯೂ ನಿಮ್ಮನ್ನು ಏನೂ ಕೇಳಲಿಲ್ಲ. ಎಲ್ಲ ಹತ್ತಿರ ಬನ್ನಿ. ನಿಮ್ಮನ್ನಷ್ಟು ಸರಿಯಾಗಿ ನೋಡ ಬೇಕು." {{gap}}ಅಪರಂಪಾರ ನಡುಗುವ ಬೆರಳುಗಳನ್ನು ಸರಳುಗಳ ಹೊರಗೆ ತೂರಿ ವೈದ್ಯನ ತಲೆ ಮುಖ ಭುಜಗಳನ್ನು ಮುಟ್ಟಿದ. {{gap}}"ಮುಖದ ಗೆರೆಗಳು ಆಳವಾಗಿವೆ. ನನ್ನ ಹಾಗೆಯೇ ಮುದುಕರಾದಿರಿ, ಅಲ್ಲ ? ಒಳ್ಳೇದು. ನನಗೆ ನಾಪಿತನ ಸೇವೆ ದೊರಕಿಸಿ ಕೊಡಿ. ಯಾರಾದರೂ ತಲೆಯ ಮೇಲೆ ಎರಡು ಬಿಂದಿಗೆ ನೀರು ಸುರಿಯಲಿ. ಈ ವಸನಗಳನ್ನು ಇಲ್ಲಿಯೇ ತ್ಯಜಿಸುತೇನೆ. ನಮಗೊಂದು ನಿಲುವಂಗಿ-ಜೋಳಿಗೆ ಕೊಡಿಸಿ. ಇದೇ ನೀವು ಮಾಡಬೇಕಾದ ಸಹಾಯ." ಭಾವೋದ್ವೇಗವನ್ನು ಬಯಲುಗೊಳಿಸುತ್ತಿದ್ದ ಧ್ವನಿಯಲ್ಲಿ ಕ್ಯಾಂಪ್‍ಬೆಲ್ಲ್ ನುಡಿದ :<noinclude></noinclude> p4st6159kdksfri5oav0fpgrz781bfg 321984 321983 2026-05-23T12:11:48Z Shreelatha.Halemane 7642 321984 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center='''ಸ್ವಾಮಿ ಅಪರ೦ಪಾರ''' |left=|right='''೨೦೭'''}} ತೆರೆದು ನೋಡಿದ. ಅಪರಂಪಾರನ ಇತಿಹಾಸ ಸ್ವಾರಸ್ಯವಾಗಿತ್ತು. ಓದಿ ಅವನೆಂದ: {{gap}}"ಹು೦ ! ಇವನು ಫಕೀರ. ದಿಕ್ಕಿಲ್ಲದವನು. ಬಿಡುಗಡೆ ಮಾಡಿ ಅಂತ ಯಾರು ಬೇಡುತಾರೆ? ಈ ಮುದುಕರನ್ನೆಲ್ಲ ಇಲ್ಲಿ ಯಾವ ಲೌಕಿಕ ಪ್ರಯೋಜನಕ್ಕೆ ಇಟ್ಟುಕೊಂಡಿದಾರೋ ಕಾಣೆ." {{gap}}ಕೊಡಗಿನ ಈ ಕೈದಿಗಳನ್ನು ಬಿಡುಗಡೆ ಮಾಡಬಹುದು–ಎಂದು ಬೌರಿಂಗ್ ಆಜ್ಞೆ ಹೊರಡಿಸಿದ. {{gap}}...ಬರಬೇಕಾದ ದಿನಕ್ಕಿಂತಲೂ ಮುಂಚೆಯೇ ಪರಿಚಿತ ಬೂಟುಗಳ ಸಪ್ಪಳ ಕೇಳಿ ಅಪರಂಪಾರನಿಗೆ ಆಶ್ಚರ್ಯವಾಯಿತು. {{gap}}"ಶರಣು ಸ್ವಾಮಿಜಿ." {{gap}}"ಶರಣು ವೈದ್ಯರೆ." {{gap}}ವೈದ್ಯನ ಧ್ವನಿಯಲ್ಲಿ ಕಂಪನವಿತ್ತು. {{gap}}"ನಿಮಗೊಂದು ಸಿಹಿ ಸುದ್ದಿ ತಂದಿದೇನೆ." {{gap}}"ನಿಮ್ಮ ಔಷಧವಷ್ಟೇ ಕಹಿ. ಮಾತು ಯಾವಾಗಲೂ ಸಿಹೀನೇ ಅಲ್ಲವಾ ?" {{gap}}"ನಿಮ್ಮನ್ನು ಬಿಡುಗಡೆ ಮಾಡುತಾರೆ." {{gap}}ಅಪರಂಪಾರನ ತುಟಿಗಳು ಬಿಗಿದುಕೊಂಡುವ. ಗವಿಗಳ ಮೇಲೆ ಎವೆಯ ಅವಶೇಷಗಳು ಪಟಪಟನೆ ಬಡಿದವು. {{gap}}ಕ್ಯಾಂಪ್‍ಬೆಲ್ಲ್ ಮತ್ತೆ ಅಂದ: {{gap}}"ಇನ್ನು ನೀವು ಸ್ವತಂತ್ರರು. ಸ್ವಲ್ಪ ಹೊತ್ತಿನಲ್ಲೇ ಬಿಟ್ಟಬಿಡುತಾರೆ." {{gap}}ಅಪರಂಪಾರ ತುಟಿ ತೆರೆದ : {{gap}}"ಇದೂ ಒಂದು ಇರಲಿ ಎನ್ನುತಾನಾ ಮಹದೇವ ? ಈ ಸೆರೆಮನೆಯಿಂದ ಇನ್ನೊಂದು ಸೆರೆಮನೆಗಾ ನಮಗೆ ಬಿಡುಗಡೆ?...ನಮ್ಮ ಸಹವಾಸ ನಿಮಗೆ ಸಾಕಾಯಿತಾ ವೈದ್ಯರೆ?" {{gap}}"ಹಾಗಲ್ಲ, ಸ್ವಾಮಿಜಿ. ಅಗಲಿಕೆ ಯಾವಾಗಲೂ ಬೇಸರದ ಸಂಗತಿ. ಆದರೆ, ಸೆರೆ ಮನೆಯಿಂದ ನೀವು ಹೊರಹೋದಿರಿ ಅಂದರೆ ನನಗೆಷ್ಟೋ ಸಮಾಧಾನ." {{gap}}"ಇವನನ್ನ ಬಿಡಿ–ಅಂತ ನೀವೇ ಸಲಹೆ ಮಾಡಿದಿರಾ ?" {{gap}}"ಅದು ದೊಡ್ಡದಲ್ಲ. ಹೇಳಿ, ಸ್ವಾಮಿಜಿ, ನಿಮಗೇನಾದರೂ ಸಹಾಯ ಬೇಕೆ?” {{gap}}"ಸಹಾಯ ? ಹ್ಞ. ಮೂವತ್ತೆರಡು ವರ್ಷ ಆಯಿತು ಇಲ್ಲಿಗೆ ಬಂದು. ಒಮ್ಮೆಯೂ ನಿಮ್ಮನ್ನು ಏನೂ ಕೇಳಲಿಲ್ಲ. ಎಲ್ಲ ಹತ್ತಿರ ಬನ್ನಿ. ನಿಮ್ಮನ್ನಷ್ಟು ಸರಿಯಾಗಿ ನೋಡ ಬೇಕು." {{gap}}ಅಪರಂಪಾರ ನಡುಗುವ ಬೆರಳುಗಳನ್ನು ಸರಳುಗಳ ಹೊರಗೆ ತೂರಿ ವೈದ್ಯನ ತಲೆ ಮುಖ ಭುಜಗಳನ್ನು ಮುಟ್ಟಿದ. {{gap}}"ಮುಖದ ಗೆರೆಗಳು ಆಳವಾಗಿವೆ. ನನ್ನ ಹಾಗೆಯೇ ಮುದುಕರಾದಿರಿ, ಅಲ್ಲ ? ಒಳ್ಳೇದು. ನನಗೆ ನಾಪಿತನ ಸೇವೆ ದೊರಕಿಸಿ ಕೊಡಿ. ಯಾರಾದರೂ ತಲೆಯ ಮೇಲೆ ಎರಡು ಬಿಂದಿಗೆ ನೀರು ಸುರಿಯಲಿ. ಈ ವಸನಗಳನ್ನು ಇಲ್ಲಿಯೇ ತ್ಯಜಿಸುತೇನೆ. ನಮಗೊಂದು ನಿಲುವಂಗಿ-ಜೋಳಿಗೆ ಕೊಡಿಸಿ. ಇದೇ ನೀವು ಮಾಡಬೇಕಾದ ಸಹಾಯ." ಭಾವೋದ್ವೇಗವನ್ನು ಬಯಲುಗೊಳಿಸುತ್ತಿದ್ದ ಧ್ವನಿಯಲ್ಲಿ ಕ್ಯಾಂಪ್‍ಬೆಲ್ಲ್ ನುಡಿದ :<noinclude></noinclude> hw8cxxp5abztb3z94cy1f9dr6wdtg6y ಪುಟ:ಸ್ವಾಮಿ ಅಪರಂಪಾರ.pdf/೨೧೦ 104 21360 321995 206523 2026-05-23T14:07:59Z Shreelatha.Halemane 7642 /* Validated */ 321995 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center= '''ಸ್ವಾಮಿ ಅಪರಂಪಾರ'''|left='''೨೦೮'''|right=}} {{gap}}"ಆಗಲಿ ಒಂದು ಊರುಗೋಲೂ ಬೇಡವೇ ? " {{gap}}"ಆ ! ನಾನು ಕುರುಡ ಅಲ್ಲವಾ ?" {{gap}}"ಇಲ್ಲಿಂದ ಎಲ್ಲಿಗೆ ಹೋಗುತೀರಿ, ಸ್ವಾಮಿಾಜಿ?" {{gap}}"ಎಲ್ಲಿಗೆ?! ಕೊಡಗಿಗೆ!" {{gap}}"ದೂರದ ಪ್ರಯಾಣ, ಸಾಧ್ಯವಿದ್ದರೆ ಏರ್ಪಾಟು ಮಾಡುತ್ತಿದ್ದೆ. ಆದರೆ ನನಗೆ ಅಧಿಕಾರವಿಲ್ಲ." {{gap}}"ನಾನು ನಡೆಯೆನೆ? ನೋಡುತ್ತಿರಿ. ನನ್ನ ಕಾಲುಗಳಿಗೆ ರೆಕ್ಕೆ ಹುಟ್ಟುತವೆ." {{gap}}"ಬೇಕಿದ್ದರೆ ಇಲ್ಲಿಯ ಮಠಕ್ಕೆ ಸಿಪಾಯರು ನಿಮ್ಮನ್ನು ಒಯ್ದು ಮುಟ್ಟಿಸುವ ಹಾಗೆ ವ್ಯವಸ್ಥೆ ಮಾಡುತೇನೆ." {{gap}}"ವೀರಜಂಗಮನಿಗೆ ರಾಜಪಹರೆ ! ಆಗಲಿ, ಆಗಲಿ," {{gap}}"ನೀವು ಕೇಳಿರುವುದೆಲ್ಲ ಬರುತದೆ. ಇನ್ನು ನಮ್ಮ ನಿಮ್ಮ ಭೇಟಿಯಿಲ್ಲ. ನಾನು ಬರಲಾ? ದೇವರು ನಿಮ್ಮನ್ನು ರಕ್ಷಿಸಲಿ !" {{gap}}ಆರ್ತನಾದದಂತಿದ್ದ ಧ್ವನಿಯಲ್ಲಿ ಅಪರಂಪಾರನೆಂದ: {{gap}}"ಬರುತೀರಾ ಶಿವ ? ಬರುತೀರಾ ? ಬರುತೀರಾ ?" {{center|'''೨೪'''}} {{gap}}ಸೊರಗಿದ ಎತ್ತರದ ದೇಹ. ದೃಷ್ಟಿವಿಹೀನ. ಮೊಣಕಾಲುಗಳನ್ನು ಮುಚ್ಚಿ ಕೆಳಗಿಳಿದಿದ್ದ ಹೊಚ್ಚ ಹೊಸ ನಿಲುವಂಗಿ ; ಜೋಳಿಗೆ, ಹಾವುಗೆಗಳು. [ಅಪರಂಪಾರ ಕೇಳಿರದೆ ಇದ್ದರೂ ಆ ವೈದ್ಯ ಅವನ್ನು ಒದಗಿಸಿದ್ದ.] ನಡೆಗೋಲು. {{gap}}ಎಡಬಲಗಳಲ್ಲಿದ್ದ ಸಿಪಾಯರೆನ್ನುತ್ತಿದ್ದರು : {{gap}}"ಆಚೆ, ಈ ಕಡೆಗೆ." {{gap}}ತಾನು ಕುರುಡನಲ್ಲ ಎನ್ನುವಂತೆ ಅಪರಂಪಾರ ನಡೆದ, ಎಡವುತ್ತ ನಡೆದ. {{gap}}"ಕೈ ಹಿಡಿಯಲಾ ?” ಎಂದ ಒಬ್ಬ ಸಿಪಾಯಿ. {{gap}}"ಬೇಡ !" {{gap}}ಇಕ್ಕೆಲಗಲ್ಲೂ ಜನ ನಿಂತು ಆ ದೃಶ್ಯವನ್ನು ನೋಡಿದರು. ಕುರುಡ ಜಂಗಮ ಯಾರು ಎಂದು ಅವರಿಗೆ ತಿಳಿಯದು. {{gap}}"ಕಳವು ಗಿಳವು ಮಾಡಿದ್ದಾನು. ಹಿಡಕೊಂಡು ಹೋಗ್ತಿದ್ದಾರೆ" ಎಂದರು ಒಬ್ಬಿಬ್ಬರು. {{gap}}ಅವರು ಅರ್ಧ ದಾರಿ ನಡೆದಿದ್ದರಷ್ಟೆ, ಒಮ್ಮೆಲೆ ಅಪರಂಪಾರ ನಿಂತ. {{gap}}"ಯಾರೋ ಕರೀತಾ ಇದಾರೆ" ಎಂದ, ಆತ ಗಟ್ಟಿಯಾಗಿ. {{gap}}ಯಾರೂ ಇರಲಿಲ್ಲ. {{gap}}ಪುನಃ ಅವರು ನಡೆಯತೊಡಗಿದರು. {{gap}}ಅಷ್ಟರಲ್ಲೆ ಕಡಲೆಪುರಿ ಮೂಟೆಯನ್ನು ಬೆನ್ನ ಮೇಲೆ ಹಾಕಿದ್ದವನೊಬ್ಬ, “ಸ್ವಾಮಿ ಯೋರೆ, ಸ್ವಾಮಿಯೋರೇ!" ಎಂದು ಕೂಗುತ್ತ ಜನರ ಗುಂಪನ್ನು ಛೇದಿಸಿಕೊಂಡು ರಸ್ತೆಯ ಒಂದು ಮಗ್ಗುಲಿಂದ ಓಡಿಬಂದ. {{gap}}ಅಪರಂಪಾರ ನಿಂತ.<noinclude></noinclude> 0ivu2b8z2m8zembwegpvp1jz8k59vg2 ಪುಟ:ಸ್ವಾಮಿ ಅಪರಂಪಾರ.pdf/೨೧೧ 104 21361 321996 206524 2026-05-23T14:15:21Z Shreelatha.Halemane 7642 /* Validated */ 321996 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center='''ಸ್ವಾಮಿ ಆಪರಂಪಾರ'''|left=|right=೨೦೯}} {{gap}}ಆ ಮನುಷ್ಯ ಮೂಟೆಯನ್ನು ಕೆಳಕ್ಕೆ ಕುಕ್ಕಿ, ಜಂಗಮನ ಪಾದಗಳನ್ನು ಹಿಡಿದು ಕೊಂಡು, ನಿರ್ಲಜ್ಜ ಆನಂದಾಶ್ರುವನ್ನು ಸುರಿಸುತ್ತ, "ಸ್ವಾಮಿಯೋರೆ! ಸ್ವಾಮಿಯೋರೆ!" ಎಂದು ಬಾರಿ ಬಾರಿಗೂ ಅಂದ. {{gap}}ಅ೦ಬಾ ಎ೦ದು ತಾಯಿಯ ಬಳಿಗೆ ಓಡಿಬ೦ದ ಕರು.. {{gap}}ಅಪರಂಪಾರ ಬಾಗಿ, ಗೋಗರೆಯುತ್ತಿದ್ದವನ ಮೈದಡವಿದ. {{gap}}"ಏಳು, ಶಂಕರಪ್ಪ!" {{gap}}"ಬಂದಿರಾ ಸ್ವಾಮಿಯೋರೆ?" {{gap}}"ಹ ಶಂಕರಪ್ಪ, ಬಂದಿದೇವೆ." {{gap}}ಥರಥರ ಕಂಪಿಸುತ್ತಿದ್ದ ಶಂಕರಪ್ಪನೆದ್ದು, ಅಪರಂಪಾರನ ಎಡಗೈಯನ್ನು ಹಿಡಿದು ಕೊಂಡ. {{gap}}ಸಿಪಾಯರನ್ನು ಕುರಿತು ಅಪರಂಪಾರನೆಂದ: {{gap}}"ನೀವಿನ್ನು ಹೋಗಬಹುದು." {{gap}}ಒಬ್ಬ ಸಿಪಾಯಿಯೆಂದ : {{gap}}“ಮಠಕ್ಕೆ ಮುಟ್ಟಿಸು ಅಂತ ಆಡ್ರಾಗಿತ್ತು." {{gap}}“ನಮಗೀಗ ದಾರಿ ಕಾಣುತದೆ. ಕಣ್ಣುಗಳು ಬಂದಿವೆ." {{gap}}ಸಿಪಾಯರು, ಬಹಳ ಕಾಲ ತಾವು ಕೈದಿಯಾಗಿ ಕಂಡಿದ್ದ ಮನುಷ್ಯನಿಗೆ ಕೈಜೋಡಿಸಿ ನಮಿಸಿ, ಸೆರೆಮನೆಯ ದಾರಿ ಹಿಡಿದರು. {{gap}}ಶಂಕರಪ್ಪ ಕೇಳಿದ್ದು ಸುಳ್ಳಾಗಿರಲಿಲ್ಲ. ಕುರುಡನಾದರೇನು? ಕುಂಟನಾದರೇನು? ಅವನ ಸ್ವಾಮಿ, అವನ ಸ್ವಾಮಿಯೇ. {{gap}}"ನನ್ನ ಮನೆಗೆ ಹೋಗೋಣವಾ, ಸಾಮಿಯೋರೆ?" {{gap}}“ಇಲ್ಲಿ ಮನೆ ಮಾಡಿದೀಯಾ?" {{gap}}"ಹೌದು. ನಮ್ಮಪ್ಪ." {{gap}}“ನಡೆ...ಹಾಗೇ, ದಾರಿಯಲ್ಲಿ ಈಶ್ವರ ಗುಡಿ ಇದ್ದರೆ ಅವನಿಗಿಷ್ಟು ಕೈಮುಗಿಯಬೇಕಲ್ಲ?" {{gap}}“ಕರಕೊಂಡು ಹೋಗುತ್ತೇನೆ, ಸ್ವಾಮಿಯವರೆ." {{gap}}“ಅದೇನೋ ಕೆಳಕ್ಕಿಟ್ಟೆ..." {{gap}}"ಕಡಲೆ ಪುರಿ." {{gap}}“ವ್ಯಾಪಾರ ಮಾಡುತೀಯಾ?" {{gap}}"ಹೊಟ್ಟೆಪಾಡಿಗೇನಾದರೂ ಬೇಕಲ್ಲ. ನಮ್ಮಪ್ಪ." {{gap}}"నిಜ, ಮೂಟೆ ಎತ್ತಿಕೊ." {{gap}}ಶಂಕರಪ್ಪ ಚೀಲವನ್ನೆತ್ತಿಕೊಂಡು ಬೆನ್ನಿಗೇರಿಸಿದ. ತನ್ನ ಬಲಗೈಯಿಂದ ಅಪರಂಪಾರನ ಎಡಗೈಯನ್ನು ಹಿಡಿದುಕೊಂಡ. {{gap}}ನಡೆಯತೊಡಗುತ್ತ, ನೆರೆದಿದ್ದ ಜನರನ್ನುದ್ದೇಶಿಸಿ, "ದಾರಿ ಬಿಡಿ! ದಾರಿ ಬಿಡಿ!” ಎಂದ ಆತ. {{gap}}'ಮಹಾಸ್ವಾಮಿಯವರು ಬಿಜಯಂಗೈಯುತಿದಾರೆ. ಹೋಷಿಯಾರ್!' ಎಂಬ ದನಿ ಯಿತ್ತು ಶಂಕರಪ್ಪ ನುಡಿದ ಮಾತಿನಲ್ಲಿ. 14<noinclude></noinclude> swfz2n1ftepqr7dzilx3dkwzgpp1vq7 ಪುಟ:ಸ್ವಾಮಿ ಅಪರಂಪಾರ.pdf/೨೧೨ 104 21362 322002 206525 2026-05-23T14:42:12Z Shreelatha.Halemane 7642 /* Validated */ 322002 proofread-page text/x-wiki <noinclude><pagequality level="4" user="Shreelatha.Halemane" />{{rh|center=ಸ್ವಾಮಿ ಅಪರಂಪಾರ|right=|left=೨೧೦}}</noinclude>{{rh|center='''೭೫'''|right=|left=}} {{gap}}ಶಂಕರಪ್ಪನ ಮನೆಯಲ್ಲಿ ಅವನ ಹೆಂಡತಿ, "ಎಸರಿಡತೀನಿ” ಎಂದಳು.</br> {{gap}}ಅಪರಂಪಾರನೆಂದ :</br> {{gap}}“ಇಡು ತಾಯಿ. ಆದರೆ ಉಂಡೇನು ಅಂತ ಭರವಸೆ ಇಲ್ಲ.”</br> {{gap}}ಶಂಕರಪ್ಪನನ್ನು ಆತ ಕೇಳಿದ:</br> {{gap}}“ಕೊಳ್ಳಲು ಕಾಸಿಲ್ಲ. ಕಡಲೆ ಪುರಿ ಕೊಡತೀಯೇನಪ್ಪ ?”</br> {{gap}} “ಅಯ್ಯೋ ಸ್ವಾಮಿಯೊರೆ !”</br> {{gap}} ಶಂಕರಪ್ಪ ಮೂಟೆಯನ್ನೇ ಅಪರಂಪಾರನ ಮುಂದಿರಿಸಿದ,</br> {{gap}} ಒಂದಿಷ್ಟನ್ನು ಜಗಿದು ಅಪರಂಪಾರನೆಂದ:</br> {{gap}}“ರುಚಿಯಾಗಿದೆ, ಆದರೆ ಕಡಲೆಪುರಿ ತಿನ್ನುವ ಕಾಲ ಕಳೆಯಿತು. ನಾನು ಮುದುಕ,</br> ಅಲ್ಲವಾ ? ಹಲ್ಲುಗಳು ಕಡಮೆಯಾಗಿವೆ.”</br> {{gap}}ಶಂಕರಪ್ಪ ಗಹಗಹಿಸಿ ನಕ್ಕ. ಸ್ವತಃ ಅವನ ಬಾಯಲ್ಲೇ ಎಷ್ಟು ಉಳಿದಿದ್ದುವು ?</br> ನಕ್ಕಾಗ ಸ್ಪಷ್ಟವಾಗುತ್ತಿತ್ತು. ಆದರೆ ಅಪರಂಪಾರ ಕಾಣಲಾರ.</br> {{gap}}... ಉಣ್ಣಲು ಕುಳಿತಾಗಲೂ ಅಷ್ಟೆ, ಅಪರಂಪಾರನ ಬೆರಳುಗಳು ಎಲೆಯ ಮೇಲೆಲ್ಲ</br> ಓಡಾಡಿದುವು. ಗಂಟಲೊಳಗಿಳಿದುದು ಒಂದೇ ತುತ್ತು.</br> {{gap}}“ಸಾಕು ಶಂಕರಪ್ಪ, ಸವಿಯಾದ ಅಡುಗೆ, ಆದರೆ ನಾ ಉಣ್ಣಲಾರೆ, ಈ ದೇಹ ಬೇಡ</br> ಅನುತಿದೆ.”</br> {{gap}}...ಆದರೆ ಒಂದನ್ನು ಮಾತ್ರ ಆ ಜೀವ ಕೇಳುತ್ತಿತ್ತು. ತಾನು ಕೊಡಗಿಗೆ ಹೋಗ</br> ಬೇಕು ಎಂಬುದನ್ನು</br> {{gap}}“ನಾನು ಕೊಡಗಿಗೆ ಹೋಗಬೇಕು, ಶಂಕರಪ್ಪ, ಮುಂದಣೂರಿಗೆ ಬಟ್ಟೆ ಇದೆ</br> ಹೋಗಂದಡೆ ಅಂಧಕನೇನು ಬಲ್ಲ ಹೇಳು ? ಅಲ್ಲಿ ತನಕ ಬರತೀಯಾ ?”</br> {{gap}}“ಬರದೆ ಉಂಟೆ ಸ್ವಾಮಿಯೋರೆ ? ಈ ದೇಹದಲ್ಲಿ ಉಸಿರಿರುವವರೆಗೂ ನಿಮ್ಮ ನಾನು</br> ಬಿಟ್ಟಿರುತೀನಾ ?”</br> {{gap}}“ನಾಳೆ ನಸುಕಿನಲ್ಲಿ ಹೊರಡೋಣವಾ ?”</br> {{gap}} “ಹೇಗೆ ಅಂತೀರೋ ಹಾಗೆ.”</br> {{gap}}“ನಿನ್ನ ಹೆಂಡತಿ__”</br> {{gap}} “ಮಕ್ಕಳ ಮನೆಯಲಿರುತಾಳೆ, ತಿಳೀದಾ ? ನಾನು ಚಾವಡಿಕಾರ ಅಲ್ಲವಾ ?”</br> {{gap}}ಅಪರಂಪಾರ ಶಂಕರಪ್ಪನ ಪತ್ನಿಯನ್ನು ಉದ್ದೇಶಿಸಿ ಅಂದ :</br> {{gap}} “ಕರಕೊಂಡು ಹೋಗಲಾ, ತಾಯಿ ?”</br> {{gap}}“ಹೋಗಿ, ಸೋಮಿಯೋರೆ, ನಾನು ಬೇಡ ಅಂದೇನಾ ?”</br> {{gap}}...ಮಾರನೆಯ ದಿನ ನಸುಕಿನಲ್ಲಿ ಶಂಕರಪ್ಪನೂ ಅಪರಂಪಾರನೂ ಕೊಡಗಿಗೆಂದು </br>ಬೆಂಗಳೂರಿನಿಂದ ಪಯಣ ಬೆಳೆಸಿದರು. ನಡಿಗೆ ಸುಲಭವಾಗಿರಲಿಲ್ಲ. ಅಪರಂಪಾರನ</br> ಕಾಲುಗಳಿಗೆ ರೆಕ್ಕೆ ಹುಟ್ಟಲಿಲ್ಲ.</br> {{gap}}ಅವನೆಂದ:</br><noinclude></noinclude> 89w4pf35jzb2bd6qoe5hvfs7mq8nz56 ಪುಟ:ಸ್ವಾಮಿ ಅಪರಂಪಾರ.pdf/೨೧೩ 104 21363 322003 206526 2026-05-23T14:43:41Z Shreelatha.Halemane 7642 /* Validated */ 322003 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|right=೨೧೧|left=}} {{gap}}“ಗತಿಗೆಟ್ಟು ಧೃತಿಗೆಟ್ಟು ಮತಿಗೆಟ್ಟವ ನಾನಯ್ಯಾ, ನಡೆವರೆ ಶಕ್ತಿಯಿಲ್ಲ ನುಡಿವರೆ</br> ಜಿಹ್ವೆಯಿಲ್ಲ..."</br> {{gap}}ದಾರಿಯುದ್ದಕ್ಕೂ ಅಲ್ಲಲ್ಲಿ ಅವರು ತಂಗುತ್ತ ನಡೆದರು.</br> {{gap}} ಅಪರಂಪಾರನ ಅಸಹಾಯ ಸ್ಥಿತಿಯನ್ನು ನೋಡುತ್ತ ಶಂಕರಪ್ಪ ಚಿಂತೆಗೀಡಾದ.</br> {{gap}} “ಹೀಗೆ ಏಸು ದಿನ ಸಾಧ್ಯ ಆದಾತು ?'</br> {{gap}} ಹತ್ತು ದಿನ ನಡೆದ ಬಳಿಕ ಶ್ರೀರಂಗಪಟ್ಟಣ ಬಂತು.</br> {{gap}} ಅಪರಂಪಾರನೆಂದ:</br> {{gap}} “ಸಿದ್ದಲಿಂಗನ ಇಲ್ಲೇ ಸೆರೆಯಲ್ಲಿ ಕೂಡಹಾಕಿದರು. ಆ ಅಯ್ಯ ಈಗ ಇರಲಾರ</br> ಅನಿಸತದೆ.”</br> {{gap}}“ಇಲ್ಲಿಂದ ಕಾಲುದಾರಿಯಾಗಿ ಪರಿಯಾಪಟ್ಟಣಕ್ಕೆ ಹೋಗೋಣವೆ ? ಅಲ್ಲ__</br> ಮೈಸೂರಿಗಾಗಿ.”</br> {{gap}} “ಮೈಸೂರಿಗೆ ಬೇಡ, ಕೃಷ್ಣರಾಜ ಒಡೆಯರು ಆಳುತಿದಾರೆ ಅಂದೆಯಲ್ಲ? ಅವರಿಗೆ</br>ಯಾಕೆ ತೊಂದರೆ ? ಒಂದು ಕಾಲದಲ್ಲಿ ಅರಮನೆಯ ಕೈದೋಟದಲ್ಲಿ ಅವರ ಕಂಡಿದ್ದೆ ಅಂತ</br> ಹೇಳಿಕೊಳ್ಳಲೇ ?... ಅದಕ್ಕಲ್ಲ ಬಸಪ್ಪಾಜಿ ಅರಸರ ನೋಡೋದಕ್ಕೆ__ಅನ್ನಬೇಡ. ಅವರ </br> ಇಳಿ ವಯಸ್ಸಿನಲ್ಲಿ ಹಳೆಯ ನೆನಪನ್ನು ಯಾಕೆ ಮಾಡಿಕೊಡಲಿ ? ನಮ್ಮ ಹತ್ತರ ಯಾವ </br> ರಾಜಕಾರ್ಯ ಇದೆ ಅವರ ಜತೆ ಚರ್ಚಿಸೋಕೆ ?”</br> {{gap}}ಕಾವೇರಿಯಲ್ಲಿ ಮಿಂದು, ಕಾಲುಗಳನ್ನೆಳೆದುಕೊಂಡು, ಪೆರಿಯಾಪಟ್ಟಣದತ್ತ ಅವರು</br> ನಡೆದರು.</br> {{gap}}“ದಾರಿ ನೆನಪಾಗತಾ ಇದೆ, ಶಂಕರಪ್ಪ, ಆ ! ಇದು ಕೊಡಗಿನ ಕಡೆಯಿಂದ ಬೀಸು</br> ತಿರೋ ಗಾಳಿ, ನೋಡಿದೆಯಾ, ಸುವಾಸನೆ !”</br> {{gap}}“ಉತ್ತರ ದಿಕ್ಕಿಗೆ ಹೋದರೆ ಬೆಟ್ಟದಪುರ ತಲಪುತ್ತೇವೆ, ಸ್ವಾಮಿಯವರೆ.”</br> {{gap}} “ಬಲ್ಲೆ. ಆದರೆ, ಹೋಗಿ ಏನು ಮಾಡಲಿ ? ಏನೂಂತ ಹೇಳಲಿ ಮಲ್ಲಿಕಾರ್ಜುನನಿಗೆ?”</br> {{gap}}...ಸಿದ್ದೇಶ್ವರ ಘಟ್ಟ ಬಂದಿತು.</br> {{gap}} “ಕೊಡಗಿನ ನೆಲ, ಸ್ವಾಮಿಯವರೆ.”</br> {{gap}} "ಹಾ! ತಾಳು !”</br> {{gap}}ಅಪರಂಪಾರ ಹಾವುಗೆಗಳನ್ನು ಕಳಚಿದ, ನೆಲಕ್ಕೆ ಸಾಷ್ಟಾಂಗ ಪ್ರಣಾಮ ಮಾಡಿದ.</br> ಒಂದು ಹಿಡಿ ಮಣ್ಣನ್ನು ಅಂಗೈಯಲ್ಲೆತ್ತಿಕೊಂಡು ಅದನ್ನು ಚುಂಬಿಸಿದ. ತಲೆಯ ಮೇಲೆ</br> ಧರಿಸಿಕೊಂಡ.</br> {{gap}} “ಇನ್ನು ನಡೆ.”</br> {{gap}} ಆ ರಾತ್ರೆ ಅಪರಂಪಾರನ ಮೈ ಬಿಸಿಯಾಯಿತು.</br> {{gap}} “ಸ್ವಲ್ಪ ದಿನ ಇಲ್ಲೇ ಇದ್ದು ಪಯಣ ಮುಂದರಿಸಾನ, ಆಗದಾ ಸ್ವಾಮಿಯೋರೆ ?”</br> {{gap}} “ಛೇ! ಛೇ ! ಇಷ್ಟಕ್ಕೆಲ್ಲ ಭಯವೇ ? ಕೈ ಹಿಡಿ.</br> ಎಬ್ಬಿಸು.”</br> {{gap}} “'ಹಾಲೇರಿಗಲ್ಲವ ?”</br> {{gap}} “ಇನ್ನೆಲ್ಲಿಗೆ ?”</br> {{gap}}“ನಂಜರಾಜಪಟ್ಟಣದಲ್ಲಿ ಈಗ ಯಾರೂ ಇಲ್ಲ.”</br><noinclude></noinclude> 3vbkm6b6dt0xuxrgtdhkdy5yfxs4dke ಪುಟ:ಸ್ವಾಮಿ ಅಪರಂಪಾರ.pdf/೨೧೪ 104 21364 322004 206527 2026-05-23T14:45:18Z Shreelatha.Halemane 7642 /* Validated */ 322004 proofread-page text/x-wiki <noinclude><pagequality level="4" user="Shreelatha.Halemane" />{{rh|center=ಸ್ವಾಮಿ ಅಪರಂಪಾರ |right=|left=೨೧೨}}</noinclude>{{gap}}“ಯಾರೂ ಇಲ್ಲ ಅನ್ನಬೇಡ, ಶಿವಾಚಾರ್ಯರ ದಿವ್ಯಾತ್ಮ ಸುಳಿದಾಡತಿರತದೆ."</br> {{gap}}“ಅಪ್ಪಂಗಳದಲ್ಲಿ__"</br> {{gap}}“ಗೊತ್ತು, ಹೇಳಬೇಡ.”</br> {{gap}}ಜ್ವರ ಇಳಿಯಲಿಲ್ಲ. ಅದರ ಅಮಲಿನಲ್ಲೇ ಅಪರಂಪಾರ ನಡೆದ.</br> {{gap}} “ಶಿವನೆ ! ಒಮ್ಮೆ ನಮ್ಮನ್ನ ಹಾಲೇರಿಗೆ ಮುಟ್ಟಿಸು, ಅಲ್ಲಿ ಸ್ವಾಮಿಯೋರು ಖಂಡಿತ</br> ಸರಿಹೊಗತಾರೆ”</br> {{gap}}ಎಂದು ಶಂಕರಪ್ಪ ದೇವರನ್ನು ಕೇಳಿಕೊಂಡ.</br> {{gap}} ಐದು ದಿನಗಳ ಪ್ರವಾಸಕ್ಕೆ ಹತ್ತು ದಿನ...</br> {{gap}} ಹಾಲೇರಿ ಹತ್ತಿರ ಬರುತ್ತಿದ್ದಂತೆ ಒಂದು ಗೂಬೆ ಕೂಗಿತು.</br> {{gap}}“ಹಗಲು ಕಾಣದ ಗೂಗೆ ಇರುಳಾಯಿತೆಂದರೆ ಜಗಕೆ ಇರುಳಪ್ಪದೆ ಮರುಳೇ ! ನೀನು</br> ನಿಲ್ಲಬೇಡ, ಶಂಕರಪ್ಪ.</br> {{gap}}ಸೂರ್ಯಾಸ್ತಕ್ಕೆ ಮುನ್ನವೇ ಗೂಬೆ ಹಾಗೆ ಕೂಗಿದುದು ಅಪಶಕುನ ಎನಿಸಿತು.</br> ಶಂಕರಪ್ಪನಿಗೆ.</br> {{gap}}ಅವರ ಹೃದಯ ರೋಧಿಸಿತು.</br> {{gap}} “ದೇವರೇ, ಸ್ವಾಮಿಯೋರನ್ನ ಕಾಪಾಡು.”</br> {{gap}}...ಅಂತೂ ಅವರು ಹಾಲೇರಿ ಸೇರಿದರು.</br> {{gap}}“ಕೊಳಕ್ಕೆ ಕರಕೊಂಡು ಹೋಗು, ಶಂಕರಪ್ಪ. ನೀರಿನಲ್ಲಿ ಕಾಲಾಡಿಸತೀವಿ, ಕೈ </br>ಆಡಿಸತೀವಿ.”</br> {{gap}}ಅದಾದಮೇಲೆ : {{gap}}“ಮಿಂದು ಶಿವಧ್ಯಾನಕ್ಕೆ ಕುಳಿತುಕೊಳ್ಳಲೆ ?”</br> {{gap}}“ಬೇಡಿ ಸೋಮಿಯೋರೆ, ಮೈ ಕೆಂಡವಾಗದೆ.”</br> {{gap}}“ಹುಚ್ಚಪ್ಪ ! ಎಲ್ಲಿ ಕೈಹಿಡಿ, ಮಾಯತೀನಿ.</br>” {{gap}}ಮಿಂದ ಬಳಿಕ ಮಹಾದೇವನ ಧ್ಯಾನ,</br> {{gap}}ಅಪರಂಪಾರ ಧ್ವನಿಯೊಂದು ವೃತ್ತಾಕಾರವಾಗಿ ಸುತ್ತುತ್ತ ಅಲೆಯಿತು :</br> {{gap}}“ನೆನಹು ಸತ್ತಿತ್ತು, ಭ್ರಾಂತು ಬೆಂದಿತ್ತು, ಅರಿವು ಮರೆಯಿತ್ತು, ಕುರುಹುಗಟ್ಟಿತ್ತು,</br> ಗತಿಯನರಸಲುಂಟೆ ? ಅಂಗವೆಲ್ಲ ನಷ್ಟವಾಗಿ ಲಿಂಗಲೀನವಾಯಿತ್ತು, ಕಂಗಳಂಗದ ಕಳೆಯ</br> ಬೆಳಗಿನ ಭಂಗ ಹಿಂಗಿತ್ತು ಗುಹೇಶ್ವರಾ...ಅಂಗವೆಲ್ಲ-ನಷ್ಟವಾಗಿ-ಲಿಂಗಲೀನವಾಯಿತ್ತು...</br> ಅಂಗವೆಲ್ಲ-ನಷ್ಟವಾಗಿ-ಲಿಂಗಲೀನವಾಯಿತ್ತು...”</br> {{gap}}ಕುಳಿತಿದ್ದ ಅಪರಂಪಾರ ಪ್ರಜ್ಞೆ ತಪ್ಪಿ ಬಿದ್ದ. ಅವನನ್ನು ಶಂಕರಪ್ಪ ಪಾವಟಿಗೆಯ</br> ಮೇಲೆ ಮಲಗಿಸಿದ. ಉತ್ತರೀಯವನ್ನು ನೀರಿನಲ್ಲಿ ತೋಯಿಸಿ ತಂದು ಹಣೆ ಮುಖಗಳಿಗೆ</br> ತಟ್ಟಿದ.</br> {{gap}}ಅಪರಂಪಾರನಿಗೆ ಪ್ರಜ್ಞೆ ಮರಳಲಿಲ್ಲ.</br> {{gap}}ಸೂರ್ಯಾಸ್ತವಾಯಿತು. ಚಾವಡಿಕಾರ ಶಂಕರಪ್ಪ, ಜಂಗಮನ ದೇಹದ ಬಳಿ ರಾತ್ರಿ</br> ಇಡೀ ಕಾವಲು ಕುಳಿತ.</br> {{center|*{{gap}}*{{gap}}*{{gap}}*}}<noinclude></noinclude> 12ef3in86msdm9lhusudn40zhxi8aum ಪುಟ:ಸ್ವಾಮಿ ಅಪರಂಪಾರ.pdf/೨೧೫ 104 21365 322000 206528 2026-05-23T14:29:13Z Shreelatha.Halemane 7642 /* Validated */ 322000 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|right=೨೧೩|left=}} {{gap}}ಅದು ಕ್ರಿಸ್ತಶಕ ಸಾವಿರದ ಎಂಟುನೂರ ಎಪ್ಪತ್ತನೆಯ ವರ್ಷದ__ ಶಾಲಿವಾಹನ ಶಕ</br> ಸಾವಿರದ ಏಳುನೂರ ಎಪ್ಪತ್ತೆರಡನೆಯ ಪ್ರಮೋದೂತ ಸಂವತ್ಸರದ___ಒಂದು ದೀರ್ಘ</br> ರಾತ್ರೆ.</br> {{center|{{gap}}* {{gap}}* {{gap}}*}} {{gap}}ಬೆಳಿಗ್ಗೆ ಶಂಕರಪ್ಪ ಹಳ್ಳಿಗರನ್ನು ಕರೆತಂದು ಶವಸಂಸ್ಕಾರಕ್ಕಾಗಿ ಕೊಳದ ಬಳಿ ಒಂದು</br> ಕುಣಿ ತೋಡಿಸಿದ.</br> {{gap}}“ಹಾಲೇರಿವಂಶದ ಸ್ಥಾಪಕನನ್ನೂ ಇಲ್ಲೇ ಎಲ್ಲೋ ಮಣ್ಣು ಮಾಡಿರಬೇಕು' ಎಂದು</br> ಅವನಿಗೆ ಅನಿಸಿತು.</br> {{gap}}ಅಪರಂಪಾರನ ಪಾರ್ಥಿವ ಶರೀರವನ್ನೆತ್ತಿಕೊಂಡಾಗ ಶಂಕರಪ್ಪನಿಗೆ ಒಂದು ಕ್ಷಣ</br> ಅಳುಕಿತು.</br> {{gap}} ಐವತ್ತು ವರ್ಷಗಳಿಗೆ ಹಿಂದೆ ತಾನೊಮ್ಮೆ ಎತ್ತಿದ್ದಾಗ ಆ ಜೀವದಲ್ಲಿ ಕಾವಿತ್ತು.</br> ಈಗ ?</br> {{gap}}ಶಂಕರಪ್ಪ ನಿಂತ</br> {{gap}} “ನನಗೆ ಹುಚ್ಚು !” ಎಂದುಕೊಂಡು, ಮುಂದೆ ಚಲಿಸಿ, ಅಪರಂಪಾರನನ್ನು ಕುಣಿಯಲ್ಲಿ</br> ಇಳಿಬಿಟ್ಟ.</br> {{gap}}ತನ್ನ ಹರಕು ಕೋಟಿನ ಜೇಬಿನೊಳಗಿಂದ ಒಂದು ಪುಡಿಕೆಯನ್ನು ಜಾಗರೂಕತೆಯಿಂದ</br> ಹೊರ ತೆಗೆದು ಬಿಚ್ಚಿ, ಅದರೊಳಗಿದ್ದ ಒಂದು ರತ್ನಹಾರವನ್ನು ಕುಣಿಯೊಳಕ್ಕೆ ಮೆಲ್ಲನೆ</br> ಇಳಿಸಿದ.</br> {{gap}}ನಾಲ್ಕೂ ಕಡೆಗಳಿಂದ ಮಣ್ಣು ಮುಚ್ಚಿಕೊಂಡಿತು.</br> {{gap}}ಶಂಕರಪ್ಪ, ಅಪರಂಪಾರ ಕಣ್ಮರೆಯಾದುದನ್ನು ನೋಡುತ್ತ ನಿಂತ.</br> {{gap}}ನೆರೆದಿದ್ದವರಲ್ಲಿ ಯಾರೋ ಅಂದರು:</br> {{gap}}“ಶರಣರ ಗುಟ್ಟು ಮರಣದಲ್ಲಿ...”</br><noinclude></noinclude> 8f8z6fypbqrxnjnbrnoyxz53to7yvko ಪುಟ:ನಡೆದದ್ದೇ ದಾರಿ.pdf/೧೪೮ 104 31454 322030 320604 2026-05-23T16:43:02Z Shreesha Sharma 7840 /* Validated */ 322030 proofread-page text/x-wiki <noinclude><pagequality level="4" user="Shreesha Sharma" /></noinclude> '''ಕವಲು(೧೯೭೬)''' 1. ಕವಲು 2. ಒಂದು ರವಿವಾರ 3. ಹನುಮಾಪುರದ್ಲ ಹನುಮಜಯಂತಿ 4. ಹೋಟೆ ‘ ಬ್ಲೂ 5. ಅವಳ ಸ್ವಾತಂತ್ರ್ಯ 6. ಮರ್ಯಾದೆ<noinclude><references/></noinclude> r1jr4oygmcws28lhnxadxl65uhzb0fl ಪುಟ:ನಡೆದದ್ದೇ ದಾರಿ.pdf/೧೫೦ 104 31638 322032 84882 2026-05-23T17:49:34Z Pragathi. BH 7585 /* Proofread */ 322032 proofread-page text/x-wiki <noinclude><pagequality level="3" user="Pragathi. BH" /></noinclude> ೧೪೩ ಕವಲು ಒಂದು ತಿಂಗಳ ನಂತರ ಮೊನ್ನೆ ಆತ ಬಂದಾಗ ಬಹಳ ಉತ್ಸಾಹದಲ್ಲಿದ್ದ. ಇಪ್ಪತ್ತು ವರ್ಷಗಳಿಂದಲೂ ತಾವು ಭೆಟ್ಟಿಯಾಗಿದ್ದರು ಅದೇ ಮೊದಲನೆಯ ಸಲ ಭೆಟ್ಟಿಯಾದ ಹಾಗೆ ಇತಿಹಾಸ- ಭೂಗೋಲ ಕುರಿತು ಮಾತಾಡಿದೆ. ಸ್ವತಃ ಐವತ್ತರ ಗಡಿ ದಾಟಿ ಎರಡು ವರ್ಷವಾಗಿದ್ದರೂ ಇನ್ನು ಮುಂದೆಯೇ ನಿಜವಾದ ಜೀವನ ಸುರುಮಾಡಲಿರುವ ಹಾಗೆ ಕಾಣಿಸಿದೆ. ಆಗಿಹೋದದ್ದೆಲ್ಲ ತೀರ insignificant ಸುಲಭವಾಗಿ ಮರೆತು ಹೋಗಬಲ್ಲದ್ದು, ಭವಿಷ್ಯವೊಂದು ಸುಂದರ ಕನಸು - ಎಂದು ತನ್ನನ್ನು ನಂಬಿಸಲು ಹೆಣಗಿದೆ. ನಿಜವಾಗಿ ಆತ ಇಪ್ಪತ್ತು ವರ್ಷ ಚಿಕ್ಕವನಾಗಿ ತೋರಿದ. - ಅಸ್ವಸ್ಥ ಮನಸ್ಸಿನಿಂದ ಆಕೆ ಮಲಗಿದ್ದಂತೆಯೇ ಪಕ್ಕಕ್ಕೆ ಹೊರಳಿ ಗೋಡೆಗೆ ಹಾಕಿದ್ದ ನಿಲುಗನ್ನಡಿಯ ಕಡೆ ನೋಡಿದಳು. ಅಲ್ಲಲ್ಲಿ ನರೆತ ಕೂದಲು, ಕಣ್ಣ ಕೆಳಗೆ ಕಪ್ಪಗಿನ ಗೆರೆ, ಹಣೆಯ ಮೇಲೆರಡು ನಿರಿಗೆ ... ಇದೇನು, ಇಪ್ಪತ್ತು ವರ್ಷಗಳಲ್ಲಿಯೂ ಒಮ್ಮೆಯೂ ತಾನು ಕನ್ನಡಿ ನೋಡಲಿಲ್ಲವೇ? ಈ ಪರಿಯ ಬದಲಾವಣೆ ಅದು ಹೇಗೆ ತನ್ನ ಲಕ್ಷ್ಯಕ್ಕೆ ಬಂದಿಲ್ಲ? ಇಂದೇ ಏಕೆ ತನಗೆ ನಲವತ್ತಾಯಿತೆಂದು ಅನಿಸುತ್ತಿದೆ? - ವಯಸ್ಸು ತನಗೊಬ್ಬಳಿಗೇ ಆಗಬೇಕೆ? ಮೊನ್ನೆ ಅಷ್ಟೆಲ್ಲ ಮಾತಾಡಿ ಕೊನೆಗೆ ತೀರಾ ಮೃದು ಧ್ವನಿಯಲ್ಲಿ, ಆ ಕೊನೆಯ ಪ್ರಶ್ನೆ ಕೇಳುವಾಗಲಂತೂ ಆತ ನಿಜವಾಗಿ ಇಪ್ಪತ್ತು ವರ್ಷಗಳ ಹಿಂದೆ ಇದ್ದಂತೆಯೇ ಕಾಣಿಸಿದನ್ನೆಲ್ಲ, ಅದು ಹೇಗೆ? ಖರೇನೆ ಆತನ ಜೀವನೋತ್ಸಾಹ ಅಸೂಹೆ ಪಡುವಂಥದ್ದು : ' ಈ ಅಂಬಾಸಡರ್ ಕೊಟ್ಟಿಡಬೇಕಂತ ಮಾಡೀನಿ ಚುನುಭಾಯಿ ಸೇಠಗ. ಹ್ಯಾಂಗೂ ಹಳೇದಾಗೇದ. ನನಗ - ನಿನಗ ಒಂದು ಬೇಬಿ ಆಸ್ಟಿನ್ ಸಾಕು. ಹೋಗ್ಬಿಡೋಣ ಅದರಾಗ ಕೂತು - ದುನಿಯಾ ಕೆ ಉಸ್ಸ್ ಪಾರ ... ಈಗೇನು, ಯಾರಪ್ಪನ ಭಿದೇನು ಇಲ್ಲ ನನಗ. I am a brave ಮ್ಯಾನ್. ಏನಂತೀ ಮಿನಿ?' - ' ಅಲ್ಲ ಮಿನಿ, ಹ್ಯಾಂಗೂ ರಿಟೈರ್ ಆಗೋ ದಿವ್ಸ ಬಂದುವಲ್ಲ, ಇನ್ನ ಈ ಪುಣೆ ಬಿಟ್ಟು ನಮ್ಮ ಶಿರಸೀ ಕಡೆನೇ ಒಂದ ಎಸ್ಟೇಟ್ ತಗೊಂಡು ಅಲ್ಲಿ ಮಣಿ ಕಟ್ಸೋದು ಛಲೋ ಅಲ್ಲ s ? ನೀ ಹಗಲೆಲ್ಲ ಹೇಳತಿದಿಲ್ಲ s - ಅಡಿವ್ಯಾಗ ಗುಡಿಸಲು ಕಟ್ಟಿಗೊಂದು ಇರಬೇಕು ಅನಿಸ್ತದ ಅಂತ ? ಸುತ್ತಲೆಲ್ಲ ತೆಂಗಿನ ಗಿಡ.<noinclude><references/></noinclude> lcl0h7q5kn5svhvjko10v8qsi8a2bjk ಪುಟ:ನಡೆದದ್ದೇ ದಾರಿ.pdf/೧೪೯ 104 31721 322031 320605 2026-05-23T17:46:58Z Pragathi. BH 7585 322031 proofread-page text/x-wiki <noinclude><pagequality level="3" user="Pragathi. BH" /></noinclude> ೧೪೨.ನಡೆದದ್ದೇ ದಾರ<noinclude><references/></noinclude> npl2rnf1cjsp5xzj0rnee8xh3zov1tw ಪುಟ:ಹಗಲಿರುಳು.djvu/೮ 104 38606 322079 291718 2026-05-24T05:47:59Z Vikashegde 1258 322079 proofread-page text/x-wiki <noinclude><pagequality level="4" user="Babitha Shetty" /></noinclude>{{center|'''ಪ್ರ ಸ್ತಾ ವ ನೆ'''}} {{gap}}ಈ ನಮ್ಮ ಈ ''''ಹಗಲಿರುಳು'''' ಎಂಬ ಪುಸ್ತಕವು ಬೇರೆ ಯಾವ ಗ್ರಂಥದ ಆಧಾರದಿಂದ ಬರೆದುದೂ ಅಲ್ಲ. ಬರಿಯ 'ಹಗಲು ಇರುಳು' ಇವುಗಳ ರೀತಿಯಿಂದಲೆ ಆಕರ್ಷಿಸಿ ಬರೆದುದಾಗಿದೆ. ಕಾಲಪುರುಷ, ಸೂರ್ಯ, ಚಂದ್ರ, ಅಗ್ನಿ, ಕತ್ತಲೆ, ಮೇಘ, ಬೃಹಸ್ಪತಿ, ವಾಯು, ಶುಕ್ರ ಮೊದಲಾದವರನ್ನೆ ಪಾತ್ರಗಳನ್ನಾಗಿ ಮಾಡಿ, ನಮ್ಮ ಸಮಾಜದ ಚಿತ್ರವನ್ನೆ ಇದರಲ್ಲಿ ಚಿತ್ರಿಸಲ್ಪಟ್ಟಿದೆ. ಇದನ್ನು ಓದುವವರು, - ನಾವು ಈಗಿನ ಸಮಾಜದ ಗುಟ್ಟನ್ನೆ ಒಡೆದು ನೋಡುತ್ತೇವೆ' ಎಂದು ಭಾವಿಸಿದರೆ, ನಮ್ಮ ಪ್ರಯತ್ನವು ಸಫಲವಾದೀತು. ಸೂರ್ಯಚಂದ್ರರೆ ನಾಯಕರಾಗಿರುವ ಹಗಲಿರುಳುಗಳಲ್ಲಿ ನಮ್ಮ ಜೀವನವು ಸಾಗುವುದು, ಅದರಲ್ಲಿ, ಸೂರ್ಯನ ಆಡಳಿತದ ಹಗಲಲ್ಲಿ ನಾವು ಎಚ್ಚರಿತು ಹೇಗೆ ಕರ್ತವ್ಯವನ್ನು ಮಾಡುತ್ತೇವೆ ? ಚಂದ್ರನ ಯಜಮಾನಿಕೆಯ ಇರುಳಲ್ಲಿ ಹೇಗೆ ಸ್ಮೃತಿ ತಪ್ಪಿ ಹೋಗುತ್ತೇವೆ ? ಇರುಳೇ ಹಗಲಾಗಬೇಕೆಂದು ಪ್ರಯತ್ನಿಸಿದರೆ ಸಾಧ್ಯವೆ ? ಆ ಹಗಲಿರುಳುಗಳು ತಂತಮ್ಮ ಕೆಲಸಗಳನ್ನಷ್ಟೆ ಮಾಡಿದರೆ ಲೋಕಕ್ಕೆ ಎಷ್ಟು ಸುಖವಾದೀತು ? ಮೊದ ಲಾದುವುಗಳನ್ನು ವಿಚಾರಿಸಿದರೆ, ನಮ್ಮಲ್ಲಿ ಭಿನ್ನವಾಗಿ ತೋರುವ ಸಮಾಜರೋಗವು ವಾಸಿಯಾದೀತು. ಹಾಗೆಂದು ನಮ್ಮಲ್ಲಿ ಕೆಲವ್ಯಕ್ತಿಗಳು ಇತರರಿಗೆ ತಲೆಬಗ್ಗಿಸಬೇಕೆಂದಲ್ಲ. ಅವರವರು, ಲೋಕ ಹಿತವಾದ ಕಾಲಸೂಚಿತವಾದ ತಂತಮ್ಮ ಕೆಲಸಗಳಿಗಷ್ಟೆ ತಲೆಬಗ್ಗಿಸಿದರೆ ಎಲ್ಲವೂ ಸುಗಮವಾಗುವುದು. ಎಂದರೆ - ವ್ಯಕ್ತಿ ಸಮಾಜ ಇವುಗಳಲ್ಲಿ ದ್ವೇಷವನ್ನು ಇಡದೆ ಕಾರ್ಯದಲ್ಲಿ ನಿರತರಾದರೆ ಬಂಗಾರ ವಾಗುವುದು, ಇದರಲ್ಲಿ ಜಾತಿಭೇದದ ಕುತ್ಸಿತ ಪ್ರಶ್ನೆಯುಂಟೆಂದು ನೆನಸಬಾರದು. ಆರ್ಯರ ಆಗಮನಕಾಲ ಮೊದಲ್ಗೊಂಡು, 'ಆರ್ಯ, ದಸ್ಯು' ಎಂಬ ಭೇದವಳಿದು ಹೇಗೆ : 'ಹಿಂದಿ' ಎಂಬ ಒಂದೆ ಹೆಸರು ನೆಲೆಗೊಂಡಿದೆಯೊ ಹಾಗೆಯೆ ಬ್ರಾಹ್ಮಣ ಬ್ರಾಹ್ಮಣೇತರ ಭೇದವಳಿದು ಸಮರ್ಥರಾದವರೆ ಮುಖಂಡರಾಗಬೇಕೆಂದೂ, ಅವರೇ ಆರ್ಯರೆಂದೂ ನಮ್ಮ ನಂಬಿಕೆ. ಆ ಅಭಿಪ್ರಾಯವೆ ಕಾಲವುರುಷನ ಮಾತಿನಲ್ಲಿ ಪ್ರತಿಬಿಂಬಿಸುತ್ತಿದೆ. ವಾಚಕಮಹಾಶಯರು ಈ ಚಿಕ್ಕ ಪುಸ್ತಕದಲ್ಲಿ ತೋರುವ ಗುಣ ದೋಷಗಳನ್ನು ವಿಮರ್ಶಿಸಿ ಬಹಿರಂಗಪಡಿಸಿದರೆ ಮುಂದಿನ ಕಾರ್ಯಕ್ಕೆ ಸುಗಮವಾಗುವುದು. ನಮ್ಮ ಕನ್ನಡದಲ್ಲಿ ಇಂಥ ಪುಸ್ತಕಗಳು ಅಪೂರ್ವವಾದ್ದರಿಂದ ಪ್ರತಿಯೊಬ್ಬ ಕನ್ನಡಿಗನೂ ಸೂಕ್ಷದೃಷ್ಟಿಯಿಂದ ವಿಚಾರಿಸಿ ತಿಳಿಸುವರೆಂದು ನಂಬಿದ್ದೇವೆ. {{Right|ಇತಿ}} {{Right|'''ಗ್ರ೦ಥ ಕಾರ.'''}}<noinclude></noinclude> 0ywhidz0rntnxo1p8aacmabxi38ycs7 ಪುಟ:ಹಗಲಿರುಳು.djvu/೧೦ 104 38608 322080 291728 2026-05-24T05:49:44Z Vikashegde 1258 322080 proofread-page text/x-wiki <noinclude><pagequality level="4" user="A826" />{{rh||'''ಹಗಲಿರುಳು'''|೧}}</noinclude>{{c|{{xx-larger|'''ಹಗಲಿರುಳು.'''}}}} <poem> ಅನುಷ್ಟುಪ್ ॥ ಹಗಲೂ ಇರುಳೂ ತಾವು ತಿರುಗುತ್ತಿರುವಂದದಿ । ಸುಖವೂ ದುಃಖವೂ ಮೇಲೆಮೇಲೆ ಬಪ್ಪುದುಮಂದಿಗೆ ॥ ೧ ॥ ಎಲ್ಲಕೂ ಕರ್ತೃವಾದೇವನದಕ್ಕಾನು ನಿಮಿತ್ತವೈ ಸೂಜಿ ಚಿಪ್ಪಿಗನೊಪ್ಪಿಂದ ನಲಂಬಟ್ಟೆಯೊಳೊಯ್ವವೊಲ್ ॥ ೨ ॥ </poem> {{center|(ಎನ್ನುತ್ತ ಕಾಲನೆಂಬ ಸೂತ್ರಧಾರನು ಪ್ರವೇಶಿಸಿ)}} ಅಹಾ! ಸರ್ವಾಧಿಕಾರಿಯಾದ ಪರಮಾತ್ಮನ ದಯದಿಂದ,ನನ್ನ ಗತಿ, ಎಲ್ಲೆಲ್ಲಿಯೂ ತಡೆಯಿಲ್ಲದೆ ನಡೆಯುತ್ತಿದೆ. ಪಕ್ಷಪಾತವಿಡದೆ, ಲೋಕವೆಲ್ಲವನ್ನೂ, ಅವರವರ ಕರ್ಮಾನುಸಾರವಾಗಿ ನಡೆಯಿಸಬೇಕೆಂದು, ಅವನ ಕಟ್ಟಪ್ಪಣೆ. ನನ್ನ ಮನಃಪೂರ್ವಕವಾದ ಎಣಿಕೆಯೂ ಹಾಗೆಯೆ. ಅದರಿಂದಲೇ ನನ್ನ ಅಧಿಕಾರವು ಶಾಶ್ವತವಾಯಿತು. ಆದರೇನು? ಮೊದಲು, ಅಧಿಕಾರದಲ್ಲಿ ಆಸೆಯಿತ್ತು. ಈಗ, ಅದನ್ನು, ಸರಿಯಾಗಿ ನಡೆಯಿಸುವುದು ಹೇಗೆ?' ಎಂಬ ಅಂಜಿಕೆಯಾಗಿದೆ. ಅದೇನೆಂದರೆ ಈಗ, ಇಡಿ ಲೋಕವೆ ಎರಡು ಕವಲಾಗಿದೆ. ಒಂದು ನಾಡಿಗೆ ಒಯ್ದರೆ, ಇನ್ನೊಂದು ಕಾಡಿಗೆ. ಒಂದುಕಡೆ, ಹಗಲಿನ ಬೆಳುಪು, ಮತ್ತೊಂದು ಕಡೆ, ಕತ್ತಲೆಯ ಕಪ್ಪು. ಈ ಇತ್ತಂಡವನ್ನು ಒತ್ತಟ್ಟಿಗೆ ತರುವುದೆಂದರೆ, ಸ್ವರ್ಗಪಾತಾಳಗಳನ್ನು, ಒಟ್ಟುಗೂಡಿಸುವ ಕೆಲಸವೆ. ಬೆಳಕೆಂದರೆ, ಬಹಳ ಮಂದಿ ಆಶಿಸತಕ್ಕುದು. ಪ್ರತಿಯೊಂದನ್ನೂ ನೋಡಬೇಕೆಂದು ತನ್ನ ಬಾಗಿಲುತೆರೆದು, ಅಣಕಿಸುತ್ತಿರುವ ಕಣ್ಣ ಬೊಂಬೆಯನ್ನು, ಕೈ ಗೊಟ್ಟು, ಬೇಕಾದಲ್ಲಿಗೆ ನಡೆಯಿಸುವುದರಿಂದಲೆ, ಅದಕ್ಕೆ ಅಷ್ಟು ಮೇಲ್ಮೆ. (ಯೋಚಿಸಿ) ಆದರೆ, ಬೆಳಕು, ಆ ಕಣ್ಣಿಗೆ, ಅಷ್ಟು ಸಹಾಯಮಾಡಲಿಕ್ಕೆ, ಏನಾದರೂ ಕಾರಣವಿದೆಯೆ? ಹೌದು, ಕಾರಣವಿಲ್ಲದೆ ಕಾರ್ಯವಿರಲಾರದು. ತಾಯಿ ಇಲ್ಲದೆ ಮಗುವೆಲ್ಲಿಂದ?-ಹೋ! ನೆನಪಿನ ಬೀಗದ ಕೈ ಕೈಗೆ ಸಿಕ್ಕಿತು. ಕಣ್ಣೆಂದರೆ, ಬೆಳಕಿನ ಸಮೀಪದ ಬಂಧು. ಅದರಿಂದಲೆ, ಬೆಳಕು, ಕಣ್ಣನ್ನು ಎಲ್ಲಿ ಬೇಕಾದರೂ ನಡೆಯಿಸಿ, ಬೇಕೆಂಬಷ್ಟು ಕಾಣಿಸುವುದು. ಆ ಹೊರಗಿದ್ದು ದಾರಿತೋರಿಸುವ ಬೆಳಕು ಇಲ್ಲದಿರುವುದರಿಂದಲೆ, ರಾತ್ರಿಯಲ್ಲಿ ಗತಿಗಾಣದೆ ಕಣ್ಣುಮುಚ್ಚುವುದು. ದೊಡ್ಡವರು, ಮುಂದು<noinclude></noinclude> eq0rv3pk8m7aylfj83llqijd76o3e8o 322081 322080 2026-05-24T05:50:20Z Vikashegde 1258 [[Special:Diff/322080|322080]] ಪರಿಷ್ಕರಣೆಯನ್ನು [[Special:Contributions/Vikashegde|Vikashegde]] ([[User talk:Vikashegde|ಚರ್ಚೆ]]) ಅವರ ಮೂಲಕ ರದ್ದುಪಡಿಸಲಾಗಿದೆ. 322081 proofread-page text/x-wiki <noinclude><pagequality level="4" user="A826" />{{rh||'''ಹಗಲಿರುಳು'''|೧}}</noinclude>{{c|{{xx-larger|'''ಹಗಲಿರುಳು.'''}}}} <poem> ಅನುಷ್ಟುಪ್ ॥ ಹಗಲೂ ಇರುಳೂ ತಾವು ತಿರುಗುತ್ತಿರುವಂದದಿ । ಸುಖವೂ ದುಃಖವೂ ಮೇಲೆಮೇಲೆ ಬಪ್ಪುದುಮಂದಿಗೆ ॥ ೧ ॥ ಎಲ್ಲಕೂ ಕರ್ತೃವಾದೇವನದಕ್ಕಾನು ನಿಮಿತ್ತವೈ ಸೂಜಿ ಚಿಪ್ಪಿಗನೊಪ್ಪಿಂದ ನಲಂಬಟ್ಟೆಯೊಳೊಯ್ವವೊಲ್॥ ೨ ॥ </poem> {{center|(ಎನ್ನುತ್ತ ಕಾಲನೆಂಬ ಸೂತ್ರಧಾರನು ಪ್ರವೇಶಿಸಿ)}} ಅಹಾ! ಸರ್ವಾಧಿಕಾರಿಯಾದ ಪರಮಾತ್ಮನ ದಯದಿಂದ,ನನ್ನ ಗತಿ, ಎಲ್ಲೆಲ್ಲಿಯೂ ತಡೆಯಿಲ್ಲದೆ ನಡೆಯುತ್ತಿದೆ. ಪಕ್ಷಪಾತವಿಡದೆ, ಲೋಕವೆಲ್ಲವನ್ನೂ, ಅವರವರ ಕರ್ಮಾನುಸಾರವಾಗಿ ನಡೆಯಿಸಬೇಕೆಂದು, ಅವನ ಕಟ್ಟಪ್ಪಣೆ. ನನ್ನ ಮನಃಪೂರ್ವಕವಾದ ಎಣಿಕೆಯೂ ಹಾಗೆಯೆ. ಅದರಿಂದಲೇ ನನ್ನ ಅಧಿಕಾರವು ಶಾಶ್ವತವಾಯಿತು. ಆದರೇನು? ಮೊದಲು, ಅಧಿಕಾರದಲ್ಲಿ ಆಸೆಯಿತ್ತು. ಈಗ, ಅದನ್ನು, ಸರಿಯಾಗಿ ನಡೆಯಿಸುವುದು ಹೇಗೆ?' ಎಂಬ ಅಂಜಿಕೆಯಾಗಿದೆ. ಅದೇನೆಂದರೆ ಈಗ, ಇಡಿ ಲೋಕವೆ ಎರಡು ಕವಲಾಗಿದೆ. ಒಂದು ನಾಡಿಗೆ ಒಯ್ದರೆ, ಇನ್ನೊಂದು ಕಾಡಿಗೆ. ಒಂದುಕಡೆ, ಹಗಲಿನ ಬೆಳುಪು, ಮತ್ತೊಂದು ಕಡೆ, ಕತ್ತಲೆಯ ಕಪ್ಪು. ಈ ಇತ್ತಂಡವನ್ನು ಒತ್ತಟ್ಟಿಗೆ ತರುವುದೆಂದರೆ, ಸ್ವರ್ಗಪಾತಾಳಗಳನ್ನು, ಒಟ್ಟುಗೂಡಿಸುವ ಕೆಲಸವೆ. ಬೆಳಕೆಂದರೆ, ಬಹಳ ಮಂದಿ ಆಶಿಸತಕ್ಕುದು. ಪ್ರತಿಯೊಂದನ್ನೂ ನೋಡಬೇಕೆಂದು ತನ್ನ ಬಾಗಿಲುತೆರೆದು, ಅಣಕಿಸುತ್ತಿರುವ ಕಣ್ಣ ಬೊಂಬೆಯನ್ನು, ಕೈ ಗೊಟ್ಟು, ಬೇಕಾದಲ್ಲಿಗೆ ನಡೆಯಿಸುವುದರಿಂದಲೆ, ಅದಕ್ಕೆ ಅಷ್ಟು ಮೇಲ್ಮೆ. (ಯೋಚಿಸಿ) ಆದರೆ, ಬೆಳಕು, ಆ ಕಣ್ಣಿಗೆ, ಅಷ್ಟು ಸಹಾಯಮಾಡಲಿಕ್ಕೆ, ಏನಾದರೂ ಕಾರಣವಿದೆಯೆ? ಹೌದು, ಕಾರಣವಿಲ್ಲದೆ ಕಾರ್ಯವಿರಲಾರದು. ತಾಯಿ ಇಲ್ಲದೆ ಮಗುವೆಲ್ಲಿಂದ?-ಹೋ! ನೆನಪಿನ ಬೀಗದ ಕೈ ಕೈಗೆ ಸಿಕ್ಕಿತು. ಕಣ್ಣೆಂದರೆ, ಬೆಳಕಿನ ಸಮೀಪದ ಬಂಧು. ಅದರಿಂದಲೆ, ಬೆಳಕು, ಕಣ್ಣನ್ನು ಎಲ್ಲಿ ಬೇಕಾದರೂ ನಡೆಯಿಸಿ, ಬೇಕೆಂಬಷ್ಟು ಕಾಣಿಸುವುದು. ಆ ಹೊರಗಿದ್ದು ದಾರಿತೋರಿಸುವ ಬೆಳಕು ಇಲ್ಲದಿರುವುದರಿಂದಲೆ, ರಾತ್ರಿಯಲ್ಲಿ ಗತಿಗಾಣದೆ ಕಣ್ಣುಮುಚ್ಚುವುದು. ದೊಡ್ಡವರು, ಮುಂದು<noinclude></noinclude> qsyrf2jjorioeqvuc7q33wjeeuptmrh ಪುಟ:ಹಗಲಿರುಳು.djvu/೭೯ 104 38677 322078 321075 2026-05-24T05:45:47Z Vikashegde 1258 322078 proofread-page text/x-wiki <noinclude><pagequality level="4" user="Shreesha Sharma" />{{rh|center=ಕನ್ನಡ ಕೋಗಿಲೆ, ಅಗೋಸ್ತು ೧೯೧೮.|left=೭೦|right=}}</noinclude>ಬರತೊಡಗು.ದಿನಗಳೆದಂತೆ, ಹೆಚ್ಚು ಹೆಚ್ಚು ಹೊತ್ತು, ನನ್ನ ಬಳಿಯಲ್ಲಿ ಇರಬೇಕಾದೀತು, ಆದರೆ ಈಗಲೆ ಹೇಳುತ್ತೇನೆ; ಮೊದಮೊದಲು ನೀನು ಕೃಷನಾಗಹತ್ತುವಂತೆ ತೋರುವೆ, ಮದ್ದಿನಿಂದ ರೋಗನಿವೃತ್ತಿಯಾಗುತ್ತಿರುವಾಗ ಮುಂಚೆ ಮುಂಚೆ ರೋಗಿಯು ಮೈ ಕುಂದುವ ಹಾಗೆ, ನಿನ್ನಂಥ ದಾರಿ ದಪ್ಪಿದ ಪ್ರಾಯಸ್ಥ ವಿದ್ಯಾರ್ಥಿಗಳೂ, ಆದಿಯಲ್ಲಿ ಒಮ್ಮೆ, ಬದಲಿಕೆಯ ಗುಣವು ನೆಲೆಗೊಳ್ಳುವ ವರೆಗೆ, ಅಬಲರಾಗುತ್ತ ಬರುವುದು ಸ್ವಭಾವವು, ಆದರೆ, ಅದು ಅಪಾಯಸೂಚಕವಲ್ಲದುದರಿಂದ ಭಯವಿಲ್ಲ. ಆಮೇಲೆ ಬೋಧಿಸಿ ನಿನ್ನನ್ನು ಪರಿಪೂರ್ಣನನ್ನಾಗಿಯೂ ಕಳಾವಂತನನ್ನಾಗಿಯೂ ಮಾಡುವೆನು. ಬರಿದೆ, ಈಗಿನ ಕೆಲ ವಿದ್ಯಾರ್ಥಿಗಳ ಯೋಚನೆಯಂತೆ ಕಂಡಲ್ಲಿ ಕೈಹಾಕಿದರೆ ಗುರಿಮುಟ್ಟದು. '''ನಕ್ಷತ್ರಪತಿ''':- ಹೇಗಾದರೂ ಗಾಯಮಾಡಿ ಮದ್ದು ಬಳಿದಂತಾಗುವುದರಿಂದ, ಈ ಕಪ್ಪು ಕಳಂಕವೊಂದು ನನ್ನನ್ನು ಬಿಡುವಂತಿಲ್ಲ. ಇಂಥ ದೋಷದ ನಿದ ರ್ಶನವು, ಲೋಕಕ್ಕೆ ಸನ್ಮಾರ್ಗದಾಯಕವೆಂಬುದನ್ನಾದರೂ, ಹೇಗೆ ನಂಬಲಿ? '''ಆರ್ಯ''':- ಅದು ಯಾರನ್ನು ಬಿಟ್ಟಿದೆ? ಹುಟ್ಟುವುದೇ ಕಳಂಕದಿಂದ. ಆದರೆ, ಆ ದೋಷವನ್ನು ಒಳಗೆ ಅಡಗಿಸಿ, ನಿರ್ದೋಷಿಯೆಂದು ನಟಿಸುವುದೆ ವಂಚಕ ತನದ ತಪ್ಪು, ತನ್ನದನ್ನಾದರೂ, ತಿಳಿದು ಬಯಲಾಗಿಸಿದರೆ, ಅದು ಭೂಷಣವೆ, ನೀನು ಕಳಂಕವನ್ನು ಪ್ರಕಟಿಸಿದ ಕಾರಣ ಧರ್ಮವೆ ಆಯಿತು. ಪಂತಿಯಲ್ಲಿ ತಪ್ಪಿನ ಕೆಳಗೆ ಹಂಸಪಾದವನ್ನು ಎಳೆದಂತೆ, ನಿನ್ನಲ್ಲಿ ಆ ಕಳಂಕವಿರಲಿ. ಮೇಲೆ ತಳತಳಿಸುವ ಕಳೆಯ ಒಪ್ಪು ಹೊಳೆಯುತ್ತಿರುವುದಲ್ಲವೆ? ಕೈತಪ್ಪು ಪ್ರತಿಯೊಬ್ಬನನ್ನೂ ಬಿಡದಿರುವಂತೆ, ಇಂತಹ ರಾಜನನ್ನಾದರೂ ದೋಷದ ಬ್ರಹ್ಮಕಫಾಲವು ಬಿಟ್ಟಿಲ್ಲ ವೆಂದು, ಪ್ರಜೆಗಳಿಗೆ ಜಾಗ್ರತೆಯ ದೃಷ್ಟಾಂತವೆ ಆಗುವುದು, ಮುಂದಿನವನು ಮರೆತು ಕಲ್ಲನ್ನು ಎಡವಿದರೆ, ಹಿಂದಿನವನೂ ಎಡವಲೇಬೇಕೆಂಬ ಕಟ್ಟಳೆಯುಂಟೊ ? ಎಚ್ಚರಿತು ಕೆಳನೋಡಿ ಕಾಲಿಡಬೇಕೆಂಬ ವಿವೇಕವುಂಟಾಗುವುದೊ ? [ಆರ್ಯನ ಅಪ್ಪಣೆಯಂತೆ, ಸಮುದ್ರಸ್ನಾನ ಮಾಡಿ, ನಕ್ಷತ್ರಪತಿ ನಡೆದನು, ಮೂರ್ಖತೆಯ ಮರುಗುತ್ತಕ್ಕೆ ಪಶ್ಚಾತ್ತಾಪವೆ ಮೊದಲಿನ ಮದ್ದೆಂದು ಆರ್ಯನ ಅಭಿಪ್ರಾಯವು, ಹಾ ! ಇಂಥ ಹಿತಬೋಧನೆಯನ್ನೂ,<noinclude></noinclude> b0w9axtu1qevl3pehl0antgroxau6n0 ಪುಟ:ಹಗಲಿರುಳು.djvu/೮೯ 104 38687 322073 291756 2026-05-24T05:41:51Z Vikashegde 1258 /* Without text */ 322073 proofread-page text/x-wiki <noinclude><pagequality level="0" user="Vikashegde" /></noinclude><noinclude></noinclude> ttvonnlzfeaaugborzg10bkrmnkhx32 ಪುಟ:ಹಗಲಿರುಳು.djvu/೯೦ 104 38688 322074 291755 2026-05-24T05:42:04Z Vikashegde 1258 /* Without text */ 322074 proofread-page text/x-wiki <noinclude><pagequality level="0" user="Vikashegde" /></noinclude><noinclude></noinclude> ttvonnlzfeaaugborzg10bkrmnkhx32 ಪುಟ:ಹಗಲಿರುಳು.djvu/೯೧ 104 38689 322075 291753 2026-05-24T05:42:19Z Vikashegde 1258 /* Without text */ 322075 proofread-page text/x-wiki <noinclude><pagequality level="0" user="Vikashegde" /></noinclude><noinclude></noinclude> ttvonnlzfeaaugborzg10bkrmnkhx32 ಪುಟ:ಹಗಲಿರುಳು.djvu/೯೨ 104 38690 322076 291752 2026-05-24T05:42:30Z Vikashegde 1258 /* Without text */ 322076 proofread-page text/x-wiki <noinclude><pagequality level="0" user="Vikashegde" /></noinclude><noinclude></noinclude> ttvonnlzfeaaugborzg10bkrmnkhx32 ಪುಟ:ಸಂತಾಪಕ.djvu/೧೭ 104 40244 322035 218418 2026-05-23T18:03:17Z Pragathi. BH 7585 /* Validated */ 322035 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಸಂತಾಪಕ|left=|right=೧೧}} {{rule}} ನಿಂತಿದ್ದಳು. ಕಮಲಾಕರದತ್ತನು, " ಚಂಚಲಾ ! " ಎಂದು ಕರೆದನು.ಚಂಚಲೆಯು ಬಂದು ನಿಂತಳು. ದತ್ತನು, " ಈ ನನ್ನ ಮಿತ್ರರಿಬ್ಬರನ್ನೂ ಕರೆದುಕೊಂಡು ಹೋಗಿ ಯಥಾಯೋಗ್ಯವಾಗಿ ಸತ್ಕರಿಸು " ಎಂದವಳಿಗೆ ಆಜ್ಞಾಪಿಸಿದನು. ಅಪರಿಚಿತರಾದ ಆ ಯವಕರಿಬ್ಬರೂ ಚಂಚಲೆಯ ಹಿಂದೆ ಹೊರಟರು. ಕುಮಾರಿಯ ದೃಷ್ಟಿಯು ಮತ್ತೆ ಧಾರ್ಷ್ಟ್ಯವನ್ನು ವಹಿಸಿತು.ಮೊದಲು ತಾನು ನೋಡಿದ್ದ ವಸ್ತುವನ್ನು ಇನ್ನೊಂದುಬಾರಿ ನೋಡಬೇಕೆಂದು ಮುಂದುವರಿಯಿತು. ಕುಮಾರಿಯ ಮನಸ್ಸು ಅವಳ ದೃಷ್ಟಿಪ್ರವರ್ತನವನ್ನು ಕಂಡು ಕೋಪದಿಂದ ಅದನ್ನು ನಿರೋಧಿಸತೊಡಗಿತು. ಕ್ರಮವಾಗಿ ಎರಡಕ್ಕೂ ದ್ವಂದ್ವಯುದ್ಧವಾಯಿತು. ಯುದ್ದದಲ್ಲಿ ಮನಸ್ಸು ದೃಷ್ಟಿಯಿಂದ ಜಿತವಾಯಿತು. ದೃಷ್ಟಿಯು ಮನಸ್ಸನ್ನು ತನ್ನ ಹಿಂದೆ ಕರೆದುಕೊಂಡು ಆ.ಯುವಕನ ಬಳಿಗೆ ಹೋಯಿತು. ಹಠಾತ್ತಾಗಿ ಈರ್ವರದೃಷ್ಟಿಯೂ ಮಿಳಿತವಾಯಿತು. ಈ ಸಂಧಿವಿಗ್ರಹಗಳಲ್ಲಿ ಕುಮಾರಿಯ ಮನಸ್ಸು ಯುವಕನಲ್ಲಿಯೂ ಯುವಕನ ಮನಸ್ಸು ಕುಮಾರಿಯಲ್ಲಿಯೂ ನೆಲಸಿದುವು. ಯುವಕನು ಕಣ್ಣಿಗೆ ಮರೆಯಾಗಿ ಹೊರಟೇಹೋದನು. ಕುಮಾರಿಯು ಭ್ರಾಂತಳಾಗಿ ನಿಂತುಬಿಟ್ಟಳು. ಅವಳ ದೃಷ್ಟಿಯು ತನ್ನ ಸಂಕಲ್ಪವು ಈಡೇರಿತೆಂದು ಸುಮ್ಮನಾಯಿತು. ಎವೆಯಿಕ್ಕುವಷ್ಟು ಹೊತ್ತಿನೊಳಗಾಗಿ ವ್ಯಾಕುಲತೆಯು ಶಾಂತತೆಯನ್ನು ಹೊರಡಿಸಿ ತಾನೇತಾನಾಗಿ ನೆಲಸಿತು. ದತ್ತನು ಇದಾವುದನ್ನೂ ತಿಳಿಯಲಿಲ್ಲ. ಅವನು ಆವುದೋ ಒಂದು ಪತ್ರಿಕೆಯನ್ನು ನೋಡುತ್ತೆ ಕುಳಿತಿದ್ದನು. ಎಂದಿನಂತೆ ಕುಮಾರಿಯು ತನ್ನ ಸಮೀಪದಲ್ಲಿ ಬಂದು ಕುಳಿತುಕೊಳ್ಳದಿದ್ದುದರಿಂದ ದತ್ತನು ತಲೆಯೆತ್ತಿನೋಡಿದನು. ಕುಮಾರಿಯು ಗೋಡೆಯಲ್ಲಿ ನೇತುಹಾಕಿದ್ದ ದೇವಿಯ ಪಟವನ್ನು ದೃಷ್ಟಿಸುತ್ತಿದ್ದಳು.ದತ್ತನು, " ಕಮಲೇ ! ವಿಜಯವರ್ಮನಿಗೆ ಏನು ಹೇಳಲಿ ? " ಎಂದು ಕೇಳಿದನು.</br>{{gap}}ಕಮಲೆಯು ಮಾತನಾಡಲಿಲ್ಲ. ದತ್ತನು " ಮಗೂ ! ನಿನ್ನ ಮನಸ್ಸನ್ನು ನಾನು ತಿಳಿದುಕೊಂಡಿರುವೆನು. ಅದಿರಲಿ. ಇಲ್ಲಿ ಕುಳಿತಿದ್ದ ಯುವಕ ನನ್ನಾದರೂ ಒಪ್ಪುವೆಯೋ ಇಲ್ಲವೊ ? "</br>{{gap}}ಏನು ! ಆ ಯುವಕನನ್ನು ಒಪ್ಪುವುದೇ ? ಒಪ್ಪದಿದ್ದರೆ ಜಯಶಾಲಿನಿಯಾದ ದೃಷ್ಟಿಯು ಸುಮ್ಮನಿದ್ದೀತೆ ? ಕಮಲೆಯು ಪ್ರತ್ಯುತ್ತರವನ್ನೇನೂ</br><noinclude></noinclude> h16hagh093kp7jq4x59ngvzg85n8bvg ಪುಟ:ಸಂತಾಪಕ.djvu/೧೮ 104 40245 322036 218520 2026-05-23T18:03:33Z Pragathi. BH 7585 /* Validated */ 322036 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=ಕರ್ಣಾಟಕ ಚಂದ್ರಿಕೆ.|left=೧೨|right=}} {{rule}} ಕೊಡಲಿಲ್ಲವಾದರೂ ಅವಳ ಭಾವವು ಸಂಪೂರ್ಣವಾದ ಸಮ್ಮತಿಯನ್ನು</br>ಸೂಚಿಸಿತು. ಕಮಲಾಕರದತ್ತನು, " ಕುಮಾರಿ ! ಆ ಯುವಕನು ನನ್ನ</br>ಮಿತ್ರನಾದ ವಿನಯಚಂದ್ರನ ಮಗ. ಸೌಂದರ್ಯಶಾಲಿನಿಯಾಗಿಯೂ,</br>ಗುಣವಂತನಾಗಿಯೂ ಇರುವನು. ಅವನ ಹೆಸರು ಕುಮುದಿನೀಚ೦ದ್ರ.</br>ಇಂತಹ ಅನುರೂಪನಾದ ವರನು ನಿನಗೆ ಮತ್ತೆಲ್ಲಿಯೂ ದೊರೆಯುವುದು</br>ಅಸಂಭವ. ಈಗೇನು ಹೇಳುವೆ ? " ಎಂದು ಕೇಳಿದನು.</br>{{gap}}ಕುಮಾರಿಯು, " ಜನಕನೇ ! ನಿನ್ನ ಸಮ್ಮತಿಯೇ ನನಗೆ ಮಂಗಳ</br>ಕರವು " ಎಂದುತ್ತರವನ್ನಿತ್ತಳು.</br>{{gap}}ಆಗ ಪಾಟಲಿಕೆಯು ಬಂದು ಮಧ್ಯಾಹ್ನವಾಯಿತೆಂದು ತಿಳಿಸಲು</br>ದತ್ತನು ಕುಮಾರಿಯನ್ನು ಒಳಕ್ಕೆ ಕಳುಹಿಸಿ ತಾನು ವಿಲಾಸಭವನಾಭಿ</br>ಮುಖನಾಗಿ ಹೊರಟುಹೋದನು.</br>{{gap}} {{Css image crop |Image = ಸಂತಾಪಕ.djvu |Page = 18 |bSize = 402 |cWidth = 120 |cHeight = 17 |oTop = 270 |oLeft = 141 |Location = center |Description = }} {{center|<big>ಐದನೆಯ ಪರಿಚ್ಛೇದ.</big>}} {{gap}}<big>ಕ</big>ಮಲಕುಮಾರಿಯಂತೂ ವರನನ್ನು ಒಪ್ಪಿದಳು. ವರನೂ ಕುಮಾರಿ</br>ಯನ್ನು ಒಪ್ಪಿದನೆಂದು ನಾವು ಮತ್ತೆ ತಿಳಿಸಬೇಕೆ ? ಕಮಲಾಕರದತ್ತನ</br>ಕಿರುಮನೆಯಲ್ಲಿ ಈರ್ವರ ದೃಷ್ಟಿಯೂ ಎವೆಯಿಕ್ಕುವಷ್ಟು ಹೊತ್ತು ಮಿಳಿತ</br>ವಾಗಿ ಎಂತಹ ಅದ್ಭುತವನ್ನು ನಡೆಯಿಸಿರುವುದೆಂಬುದನ್ನು ಎಲ್ಲರೂ</br>ಚೆನ್ನಾಗಿಬಲ್ಲರು. ಪ್ರಕೃತದಲ್ಲಿ ಈರ್ವರ ವಿವಾಹವೂ ಒಂದು ಬಗೆಯಾಗಿ</br>ನಿಶ್ಚಿತವಾದಂತೆಯೇ ಸರಿ. ಪಾಠಕಮಹಾಶಯರೇ ! ಈಗ ನೀವು ಆ</br>ಮಹೋತ್ಸವವನ್ನು ನೋಡಿ ಸಂತೋಷಪಡಬೇಕೆಂದೆಳಸಿರುವಿರಲ್ಲವೆ ?</br>ಆಃ, ಪರೋಪಕಾರ ಪಾರೀಣರಾದ ನೀವು ಈ ಉತ್ಸವದಲ್ಲಿ ಆಸಕ್ತರಾಗಿ</br>ಕುಳಿತುಬಿಟ್ಟರೆ ನಮ್ಮ ಪೂರ್ವಪರಿಚಿತನಾದ ಪಥಿಕನ ಪಾಡೇನು ? ಅವನ</br>ಸ್ಥಿತಿಯನ್ನು ಒಂದುಬಾರಿಯಾದರೂ ವಿಚಾರಿಸಬೇಡವೆ ? ಆ ಘಾತುಕರು</br>ಸಹಾಯಶೂನ್ಯವಾದ ಆ ಅಡವಿಯಲ್ಲಿ ಅವನನ್ನು ನಿಷ್ಕರುಣರಾಗಿ ಮರಕ್ಕೆ</br>ಕಟ್ಟಿ ಹೊರಟುಹೋದರಲ್ಲಾ ! ಅಯ್ಯೋ ಪಾಪ ! ಅಲ್ಲಿಗೆ ಬನ್ನಿ. ಅವನ</br>ಸ್ಥಿತಿಯೇನಾಗಿರುವುದೋ ನೋಡೋಣ.</br><noinclude></noinclude> dc09baljrtugq3upwmx5vxfeagqdgpu ಪುಟ:ಸಂತಾಪಕ.djvu/೧೯ 104 40246 322037 218526 2026-05-23T18:06:30Z Pragathi. BH 7585 /* Validated */ 322037 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಸಂತಾಪಕ.|left=|right=೧೩}} {{rule}} {{gap}}ಈಗ ಆ ಪಥಿಕನು ಮರದಮೇಲಿಲ್ಲ. ಅವನು ಕಮಲಾಕರದತ್ತನವಿಲಾಸ ಭವನದಲ್ಲಿ ಕುಳಿತಿರುವನು. ಅವನು ಇಲ್ಲಿಗೆ ಹೇಗೆ ಬಂದನೆಂಬುದನ್ನೂ ,ಬಂದುದಕ್ಕೆ ಕಾರಣವನ್ನೂ ಸ್ವಲ್ಪ ತಿಳಿಸುವೆವು. ಪಥಿಕನು ಆ ಘಾತುಕ ರಿಂದ ಬಂಧಿತನಾಗಿ ವ್ಯಥೆಪಡುತ್ತಿರಲು ಅದೇ ಮಾರ್ಗದಲ್ಲಿ ಬರುತ್ತಿದ್ದ ಪ್ರಸನ್ನನಗರದ ಪ್ರಯಾಣಿಕನೊಬ್ಬನು ಅವನನ್ನು ಕಂಡು ಬಂಧನದಿಂದ ಮುಕ್ತನನ್ನಾಗಿ ಮಾಡಿದನು. ನಮ್ಮ ಪೂರ್ವಪರಿಚಿತನಾದ ಪಥಿಕನು ಅಲ್ಲಿಂದ ಹೊರಟು ಪ್ರಸನ್ನನಗರದ ಕಮಲಾಕರದತ್ತನ ಮನೆಗೆ ಬಂದನು.ಪಥಿಕನ ಹೆಸರು ವಿಜಯವರ್ಮ. ಇವನಿಗೆ ಇನ್ನೂ ಮದುವೆಯಾಗಿರಲಿಲ್ಲ.ಧೈರ್ಯಶಾಲಿಯಾಗಿಯೂ, ಸೌಂದರ್ಯವಂತನಾಗಿಯೂ ಇದ್ದ ಇವನನ್ನು ಕಮಲಾಕರದತ್ತನು ಪುತ್ರವಾತ್ಸಲ್ಯದಿಂದ ಪರಿಪಾಲಿಸುತಿದ್ದನು. ಬಾಲ್ಯದಲ್ಲಿಯೇ ಇವನಿಗೆ ಮಾತಾಪಿತೃಗಳ ವಿಯೋಗವುಂಟಾದುದರಿಂದ ಇವನು ಕಮಲಾಕರನನ್ನು ಪಿತೃಸಮಾನನೆಂದೇ ಭಾವಿಸಿ ಅವನ ಮನೆಯಲ್ಲಿದ್ದು ವಿದ್ಯಾವ್ಯಾಸಂಗವನ್ನು ಮಾಡಿ ಆತನ ಅಪ್ಪಣೆಯನ್ನು ಪಡೆದು ತನ್ನ ಜನ್ಮ ಭೂಮಿಯಾದ ವಿಮಲನಗರಕ್ಕೆ ಕೆಲದಿನಗಳ ಹಿಂದೆ ಹೊರಟುಹೋಗಿದ್ದನು.ಈತನು ಹೊರಟುಹೋಗುವಾಗ ಕಮಲಕುಮಾರಿಯನ್ನು ಮದುವೆಯಾಗಬೇಕೆಂದಿದ್ದ ತನ್ನ ಅಭಿಪ್ರಾಯವನ್ನು ದತ್ತನ ಸಾಕುಮಗಳಾದ ಪಾಟಲಿಕೆ ಯೊಡನೆ ತಿಳಿಸಿದ್ದನು. ಅವಳು ಈ ವಿಷಯವನ್ನು ಕುಮಾರಿಯದಿರಾಗಿ ದತ್ತನಿಗೆ ತಿಳಿಸಲು ದತ್ತನು ಸಮ್ಮತಿಸಿದನು. ಕುಮಾರಿಯಾದರೋ ಈ ವಿಚಾರದಲ್ಲಿ ಅಸಂತುಷ್ಟಳಾದಳು. ಕಾಲಕ್ರಮವಾಗಿ ಈ ವಿಷಯವು ವಿಜಯವರ್ಮ ನಿಗೆ ತಿಳಿಯಲು ಅವನು ಕುಮಾರಿಯ ಮನಸ್ಸನ್ನು ತನ್ನ ಅಧೀನವನ್ನಾಗಿಮಾಡಿಕೊಳ್ಳಲೆಳಸಿ ಅವಳಿಗೆ ಅನುರಾಗಸೂಚಕಗಳಾದ ಪತ್ರಗಳನ್ನು ಆಗಾಗ ಬರೆಯುತ್ತಿದ್ದನು. ಆದಿನ ಕಮಲಕುಮಾರಿಯು ಲತಾಗೃಹದಲ್ಲಿ ಹರಿದುಹಾಕಿದ ಪತ್ರಿಕೆಯೂ ಇವನು ಬರೆದಿದ್ದುದೇ. ಬಹುಕಾಲವಾದರೂ ಈ ವಿವಾಹದ ವಿಚಾರವು ಇತ್ಯರ್ಥವಾಗದಿದ್ದುದರಿಂದ, ಇದಿರಾಗಿ ನಿಂತು ಮದುವೆಯನ್ನು ನಿಷ್ಕರ್ಷೆಮಾಡಬೇಕೆಂಬ ಅಭಿಪ್ರಾಯದಿಂದಲೇ ವಿಜಯ ವರ್ಮನು ಇಲ್ಲಿಗೆ ಬಂದುದು. ಇವನು ಮಾರ್ಗಮಧ್ಯದಲ್ಲಿ ತನಗೆ ಸಂಘಟಿಸಿದ ವಿಪತ್ತುಗಳನ್ನೆಲ್ಲ ಸ್ಮರಿಸಿಕೊಂಡು ಆಶ್ಚರ್ಯಯುಕ್ತನಾಗಿ</br><noinclude></noinclude> rs2wa673rll7eyhuypiszh8b1z0ag8e ಪುಟ:ಸಂತಾಪಕ.djvu/೨೦ 104 40247 322038 218531 2026-05-23T18:06:52Z Pragathi. BH 7585 /* Validated */ 322038 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಕರ್ಣಾಟಕ ಚಂದ್ರಿಕೆ.|left=೧೨|right=}} {{rule}} ಕೊಡಲಿಲ್ಲವಾದರೂ ಅವಳ ಭಾವವು ಸಂಪೂರ್ಣವಾದ ಸಮ್ಮತಿಯನ್ನು</br>ಸೂಚಿಸಿತು. ಕಮಲಾಕರದತ್ತನು, " ಕುಮಾರಿ ! ಆ ಯುವಕನು ನನ್ನ</br>ಮಿತ್ರನಾದ ವಿನಯಚಂದ್ರನ ಮಗ. ಸೌಂದರ್ಯಶಾಲಿನಿಯಾಗಿಯೂ,</br>ಗುಣವಂತನಾಗಿಯೂ ಇರುವನು. ಅವನ ಹೆಸರು ಕುಮುದಿನೀಚ೦ದ್ರ.</br>ಇಂತಹ ಅನುರೂಪನಾದ ವರನು ನಿನಗೆ ಮತ್ತೆಲ್ಲಿಯೂ ದೊರೆಯುವುದು</br>ಅಸಂಭವ. ಈಗೇನು ಹೇಳುವೆ ? " ಎಂದು ಕೇಳಿದನು.</br>{{gap}}ಕುಮಾರಿಯು, " ಜನಕನೇ ! ನಿನ್ನ ಸಮ್ಮತಿಯೇ ನನಗೆ ಮಂಗಳ</br>ಕರವು " ಎಂದುತ್ತರವನ್ನಿತ್ತಳು.</br>{{gap}}ಆಗ ಪಾಟಲಿಕೆಯು ಬಂದು ಮಧ್ಯಾಹ್ನವಾಯಿತೆಂದು ತಿಳಿಸಲು</br>ದತ್ತನು ಕುಮಾರಿಯನ್ನು ಒಳಕ್ಕೆ ಕಳುಹಿಸಿ ತಾನು ವಿಲಾಸಭವನಾಭಿ</br>ಮುಖನಾಗಿ ಹೊರಟುಹೋದನು.</br>{{gap}} {{Css image crop |Image = ಸಂತಾಪಕ.djvu |Page = 18 |bSize = 402 |cWidth = 120 |cHeight = 17 |oTop = 270 |oLeft = 141 |Location = center |Description = }} {{center|<big>ಐದನೆಯ ಪರಿಚ್ಛೇದ.</big>}} {{gap}}<big>ಕ</big>ಮಲಕುಮಾರಿಯಂತೂ ವರನನ್ನು ಒಪ್ಪಿದಳು. ವರನೂ ಕುಮಾರಿ</br>ಯನ್ನು ಒಪ್ಪಿದನೆಂದು ನಾವು ಮತ್ತೆ ತಿಳಿಸಬೇಕೆ ? ಕಮಲಾಕರದತ್ತನ</br>ಕಿರುಮನೆಯಲ್ಲಿ ಈರ್ವರ ದೃಷ್ಟಿಯೂ ಎವೆಯಿಕ್ಕುವಷ್ಟು ಹೊತ್ತು ಮಿಳಿತ</br>ವಾಗಿ ಎಂತಹ ಅದ್ಭುತವನ್ನು ನಡೆಯಿಸಿರುವುದೆಂಬುದನ್ನು ಎಲ್ಲರೂ</br>ಚೆನ್ನಾಗಿಬಲ್ಲರು. ಪ್ರಕೃತದಲ್ಲಿ ಈರ್ವರ ವಿವಾಹವೂ ಒಂದು ಬಗೆಯಾಗಿ</br>ನಿಶ್ಚಿತವಾದಂತೆಯೇ ಸರಿ. ಪಾಠಕಮಹಾಶಯರೇ ! ಈಗ ನೀವು ಆ</br>ಮಹೋತ್ಸವವನ್ನು ನೋಡಿ ಸಂತೋಷಪಡಬೇಕೆಂದೆಳಸಿರುವಿರಲ್ಲವೆ ?</br>ಆಃ, ಪರೋಪಕಾರ ಪಾರೀಣರಾದ ನೀವು ಈ ಉತ್ಸವದಲ್ಲಿ ಆಸಕ್ತರಾಗಿ</br>ಕುಳಿತುಬಿಟ್ಟರೆ ನಮ್ಮ ಪೂರ್ವಪರಿಚಿತನಾದ ಪಥಿಕನ ಪಾಡೇನು ? ಅವನ</br>ಸ್ಥಿತಿಯನ್ನು ಒಂದುಬಾರಿಯಾದರೂ ವಿಚಾರಿಸಬೇಡವೆ ? ಆ ಘಾತುಕರು</br>ಸಹಾಯಶೂನ್ಯವಾದ ಆ ಅಡವಿಯಲ್ಲಿ ಅವನನ್ನು ನಿಷ್ಕರುಣರಾಗಿ ಮರಕ್ಕೆ</br>ಕಟ್ಟಿ ಹೊರಟುಹೋದರಲ್ಲಾ ! ಅಯ್ಯೋ ಪಾಪ ! ಅಲ್ಲಿಗೆ ಬನ್ನಿ. ಅವನ</br>ಸ್ಥಿತಿಯೇನಾಗಿರುವುದೋ ನೋಡೋಣ.</br><noinclude></noinclude> 5kd4t06ti4nssz4lg45o2npcjyacq0r ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೨೩೬ 104 46055 322033 160006 2026-05-23T17:57:42Z Pragathi. BH 7585 /* Validated */ 322033 proofread-page text/x-wiki <noinclude><pagequality level="4" user="Pragathi. BH" />{{rh|center=ಈಶ್ವರಕವಿ|left=ಶತಮಾನ|right=151}}</noinclude> ಎಂಬ ಪದ್ಯಗಳಿಂದಲೂ, “ ಇತಿ ಬಾಣಕವಿವಿನಿರ್ಮಿತಮಪ್ಪ ಛಂದೋಂ ಬುರಾಶಿ ಪ್ರಥಮ ಪರಿಚ್ಛೇದಸ್ಸಮಾಪ್ತಃ ” ಎಂಬ ಗದ್ಯದಿಂದಲೂ ಕವಿಗೆ ಬಾಣ, ಫಣಿವರ್ಮ ಎಂಬ ನಾಮಾಂತರಗಳೂ ಅಷ್ಟಭಾಷಾಕವಿವರ ಎಂಬ ಬಿರುದೂ ಗ್ರಂಧಕ್ಕೆ ಛಂದೋಂಬುಧಿ ಎಂಬ ಹೆಸರೂ ಇದ್ದಂತೆ ತಿಳಿ ಯುತ್ತದೆ. ಈಯಂಶಗಳನ್ನು ಮೆ.|| ಕಿಟ್ಟಲ್ ಹೇಳಿಲ್ಲ. ಅಭಿನವಕೇಶಿ ರಾಜ ಎಂದು ಹೇಳಿಕೊಂಡಿರುವುದರಿಂದ ಈತನು ಕೇಶಿರಾಜನಿಗಿಂತ (ಸು. 126೦) ಈಚೆಯವನೆಂಬುದಂತೂ ಸ್ಪಸ್ಟವಾಗಿಯೇ ಇದೆ. ಆಂಧ್ರಕವಿ ಗಳು ಉಪಯೋಗಿಸುವ ವಡಿಗಳನ್ನು ವಿವರಿಸುವುದರಿಂದ ಅಪ್ಪಕವಿಯು (ಸು.1450) ಕಾಲಕ್ಕೆ ಈಚೆಯವನೆಂದು ತೋರುತ್ತದೆ. ಸುಮಾರು 1500 ರಲ್ಲಿ ಇದ್ದಿರಬಹುದು, ಕನಕದಾಸನು (ಸು. 1550) ಪ್ರಸುವಡಿಗಳನ್ನು ಉ ಪಯೊಗಿಸಿ ತನ್ನ ಮೋಹನತರಂಗಿಣಿಯನ್ನು ಬರೆವಂತೆ ಹೇಳುತ್ತಾನೆ. {{gap}}ಇವನ ಗ್ರಂಥ.<br /> {{center|ಕವಿಜಿಹ್ವಾ ಬಂಧನ }} {{gap}}ಇದು ಮುಖ್ಯವಾಗಿ ಛಂದಸ್ಸನ್ನು ಬೋಧಿಸುವ ಗ್ರಂಥ ; ಕಂದವೃ ತ್ರಗಳಲ್ಲಿ ಬರೆದಿದೆ : ಪರಿಚ್ಛೇದ 4.<br /> {{gap}}1ನೆಯ ಪರಿಚ್ಛೇದದಲ್ಲಿ ಗಣಗಳೂ ಅವುಗಳ ವರ್ಣವಾಹನಮೈತ್ರಿವೈರಕುಲ ದೇವತಾಫಲಾದಿಗಳೂ ಹೇಳಿವೆ. 2ನೆಯದರಲ್ಲಿ ಪ್ರಾಸುವಡಿಗಳು ನಿರೂಪಿಸಲ್ಪಟ್ಟಿವೆ. ಪ್ರಾಸುಗಳಲ್ಲಿ ಸಿಂಹ, ಗಬ, ವೃಷಭ, ಶರಭ, ವಾಸವಾಕ್ಷಿ, ಮಿತ್ರ, ಮಹಾಪ್ರಾಣ ಮೊದಲಾದ 28 ಭೇದಗಳನ್ನು ಹೇಳುತ್ತಾನೆ. ವಡಿಗಳಲ್ಲಿ ಪದ್ಮ, ಗರುಡ, ಸಾರಂಗ, ಹಂಸ, ಪರಮಾರ್ದ, ಕಾಕ ಎಂಬ 6 ಭೇದಗಳನ್ನೂ ಮತ್ತು ಸ್ವರ, ಸರಸ, ಏಕ ವರ್ಣ, ಸಂಯುಕ್ತಾಕ್ಷರ, ವರ್ಗ ಎಂಬ 5 ಭೇದಗಳನ್ನೂ ಹೇಳುತ್ತಾನೆ, 3ನೆಯದ ರಲ್ಲಿ ಅಕ್ಷರಗಳೂ, ಅವಗಳ ಕುಲ, ಅಧಿದೇವತೆ ಮೊದಲಾದ ವಿಷಯಗಳೂ ಹೇಳಿವೆ. 4ನೆಯದರ, ಭಾವ, ಅಲ೦ಕಾರ, ಕಂದಷಟ್ಪದಿಗಳ ಲಕ್ಷಣ ಮುಂತಾದ ಅಂಶಗಳು ಹೇಳಿವೆ.<br /> {{gap}}ಹೆಂಡತಿಯನ್ನು ಸಂಬೋಧಿಸಿ ಕವಿ ಗ್ರಂಥವನ್ನು ಬರೆದಿರುವಂತೆ ತೋರುತ್ತದೆ, ಇದರಿಂದ ಒಂದೆರಡು ಪದ್ಯಗಳನ್ನು ಉದಾಹರಿಸುತ್ತೇವೆ:<br /> <poem> ಉಸರಿದ ತನುವವೋಲ್ ಭಾ|ವಿಸಲುಂ ಪ್ರಾಸಿಲ್ಲದಿರ್ಪ ಪದಪದ್ಯಂಗಳ್ | ಒಸೆದದನು ಹೇರಿ ಕೇಳಿದ 1 ರಸಿಕರ್ಗಾಯುಷ್ಯಮಾನಹಾನಿಗಳಕ್ಕುಂ || </poem><noinclude></noinclude> ljk4i9mkdv2bze872erjmrwy0oxbkff 322034 322033 2026-05-23T17:59:02Z Pragathi. BH 7585 322034 proofread-page text/x-wiki <noinclude><pagequality level="4" user="Pragathi. BH" />{{rh|center=ಈಶ್ವರಕವಿ|left=ಶತಮಾನ|right=151}}</noinclude> ಎಂಬ ಪದ್ಯಗಳಿಂದಲೂ, “ ಇತಿ ಬಾಣಕವಿವಿನಿರ್ಮಿತಮಪ್ಪ ಛಂದೋಂ ಬುರಾಶಿ ಪ್ರಥಮ ಪರಿಚ್ಛೇದಸ್ಸಮಾಪ್ತಃ ” ಎಂಬ ಗದ್ಯದಿಂದಲೂ ಕವಿಗೆ ಬಾಣ, ಫಣಿವರ್ಮ ಎಂಬ ನಾಮಾಂತರಗಳೂ ಅಷ್ಟಭಾಷಾಕವಿವರ ಎಂಬ ಬಿರುದೂ ಗ್ರಂಧಕ್ಕೆ ಛಂದೋಂಬುಧಿ ಎಂಬ ಹೆಸರೂ ಇದ್ದಂತೆ ತಿಳಿ ಯುತ್ತದೆ. ಈಯಂಶಗಳನ್ನು ಮೆ.|| ಕಿಟ್ಟಲ್ ಹೇಳಿಲ್ಲ. ಅಭಿನವಕೇಶಿ ರಾಜ ಎಂದು ಹೇಳಿಕೊಂಡಿರುವುದರಿಂದ ಈತನು ಕೇಶಿರಾಜನಿಗಿಂತ (ಸು. 126೦) ಈಚೆಯವನೆಂಬುದಂತೂ ಸ್ಪಸ್ಟವಾಗಿಯೇ ಇದೆ. ಆಂಧ್ರಕವಿ ಗಳು ಉಪಯೋಗಿಸುವ ವಡಿಗಳನ್ನು ವಿವರಿಸುವುದರಿಂದ ಅಪ್ಪಕವಿಯು (ಸು.1450) ಕಾಲಕ್ಕೆ ಈಚೆಯವನೆಂದು ತೋರುತ್ತದೆ. ಸುಮಾರು 1500 ರಲ್ಲಿ ಇದ್ದಿರಬಹುದು, ಕನಕದಾಸನು (ಸು. 1550) ಪ್ರಸುವಡಿಗಳನ್ನು ಉ ಪಯೊಗಿಸಿ ತನ್ನ ಮೋಹನತರಂಗಿಣಿಯನ್ನು ಬರೆವಂತೆ ಹೇಳುತ್ತಾನೆ. {{gap}}ಇವನ ಗ್ರಂಥ.<br /> {{center|ಕವಿಜಿಹ್ವಾ ಬಂಧನ }} {{gap}}ಇದು ಮುಖ್ಯವಾಗಿ ಛಂದಸ್ಸನ್ನು ಬೋಧಿಸುವ ಗ್ರಂಥ ; ಕಂದವೃ ತ್ರಗಳಲ್ಲಿ ಬರೆದಿದೆ : ಪರಿಚ್ಛೇದ 4.<br /> {{gap}}1ನೆಯ ಪರಿಚ್ಛೇದದಲ್ಲಿ ಗಣಗಳೂ ಅವುಗಳ ವರ್ಣವಾಹನಮೈತ್ರಿವೈರಕುಲ ದೇವತಾಫಲಾದಿಗಳೂ ಹೇಳಿವೆ. 2ನೆಯದರಲ್ಲಿ ಪ್ರಾಸುವಡಿಗಳು ನಿರೂಪಿಸಲ್ಪಟ್ಟಿವೆ. ಪ್ರಾಸುಗಳಲ್ಲಿ ಸಿಂಹ, ಗಬ, ವೃಷಭ, ಶರಭ, ವಾಸವಾಕ್ಷಿ, ಮಿತ್ರ, ಮಹಾಪ್ರಾಣ ಮೊದಲಾದ 28 ಭೇದಗಳನ್ನು ಹೇಳುತ್ತಾನೆ. ವಡಿಗಳಲ್ಲಿ ಪದ್ಮ, ಗರುಡ, ಸಾರಂಗ, ಹಂಸ, ಪರಮಾರ್ದ, ಕಾಕ ಎಂಬ 6 ಭೇದಗಳನ್ನೂ ಮತ್ತು ಸ್ವರ, ಸರಸ, ಏಕ ವರ್ಣ, ಸಂಯುಕ್ತಾಕ್ಷರ, ವರ್ಗ ಎಂಬ 5 ಭೇದಗಳನ್ನೂ ಹೇಳುತ್ತಾನೆ, 3ನೆಯದ ರಲ್ಲಿ ಅಕ್ಷರಗಳೂ, ಅವಗಳ ಕುಲ, ಅಧಿದೇವತೆ ಮೊದಲಾದ ವಿಷಯಗಳೂ ಹೇಳಿವೆ. 4ನೆಯದರ, ಭಾವ, ಅಲ೦ಕಾರ, ಕಂದಷಟ್ಪದಿಗಳ ಲಕ್ಷಣ ಮುಂತಾದ ಅಂಶಗಳು ಹೇಳಿವೆ.<br /> {{gap}}ಹೆಂಡತಿಯನ್ನು ಸಂಬೋಧಿಸಿ ಕವಿ ಗ್ರಂಥವನ್ನು ಬರೆದಿರುವಂತೆ ತೋರುತ್ತದೆ, ಇದರಿಂದ ಒಂದೆರಡು ಪದ್ಯಗಳನ್ನು ಉದಾಹರಿಸುತ್ತೇವೆ:<br /> <poem> ಉಸರಿದ ತನುವವೋಲ್ ಭಾ|ವಿಸಲುಂ ಪ್ರಾಸಿಲ್ಲದಿರ್ಪ ಪದಪದ್ಯಂಗಳ್ | ಒಸೆದದನು ಹೇರಿ ಕೇಳಿದ 1 ರಸಿಕರ್ಗಾಯುಷ್ಯಮಾನಹಾನಿಗಳಕ್ಕುಂ || </poem><noinclude></noinclude> 3ycb0nm4cwe9pzx64wmfc7rsqvqdh5s ಪುಟ:ನನ್ನ ಸಂಸಾರ.djvu/೨೭ 104 57310 322023 321937 2026-05-23T16:36:43Z Shreesha Sharma 7840 /* Validated */ 322023 proofread-page text/x-wiki <noinclude><pagequality level="4" user="Shreesha Sharma" />{{rh|center=ನನ್ನ ಸಂಸಾರ|left=|right=19}}</noinclude>{{rh|center=ನನ್ನ ಸಂಸಾರ|left=|right=19}} ಹರಿಕೆ, ಮುತ್ತೈದೆಯ ಪ್ರಾರ್ಥನೆ, ಇತ್ಯಾದಿ ಹಗರಣಗಳಿಂದ ನನಗೆ ದಿಕ್ಕೇ ತೋಚದೆ ಹೋಯಿತು. ನನಗೆ ದಿನೇದಿನೇ ನಿಶ್ಯಕ್ತಿಯೇ ಹೆಚ್ಚುತ್ತಬಂತು. ಮಗುವಿನ ವಿಷಯವಂತೂ ಹೇಳಲಶಕ್ಯ. ಈ ರೀತಿಯಾದ ಕಟಪಟೆಯಿಂದ ನನ್ನ ಬಾಣಂತನವು ಬೇಗ ಮುಗಿಯಲೇ ಇಲ್ಲ. ಮೂರನೇ ತಿಂಗಳಲ್ಲಿ, ಐದನೇ ತಿಂಗಳಲ್ಲಿ, ಏಳನೇ ತಿಂಗಳಲ್ಲಿ, ಕಳುಹಿಸಿಕೊಡಬೇಕೆಂದು ಹರಪುರದಿಂದ ಕಾಗದ ಬರುತ್ತಲೇ ಇತ್ತು. ಏಳು ತಿಂಗಳಾಗುವವರೆಗೂ ನನ್ನ ಬಾಣಂತನವೂ ಮುಗಿಯಲಿಲ್ಲ. ಹರಪುರಕ್ಕೂ ಹೋಗಲಿಲ್ಲ. ನನ್ನ ಔಷಧಪಥ್ಯಗಳಿಗಾಗಿ ನಮ್ಮ ತಂದೆಗೆ ಬಹಳ ದ್ರವ್ಯವು ವ್ಯಯವಾಯಿತು. ಸಾಲದುದಕ್ಕೆ ಇದೇ ಸಮಯದಲ್ಲಿ ನಮ್ಮ ತಂದೆಯು ನೋಡುತ್ತಿದ್ದ ಕೆಲಸವೂ ತಪ್ಪಿ ಹೋಯಿತು. ಈಗ ನಮ್ಮ ತಂದೆತಾಯಿಗಳಿಗೆ ಜೀವನಕ್ಕೆ ಬಹು ತೊಂದರೆಯೂ ಪ್ರಾಪ್ತವಾಯಿತು. {{gap}}ಅವರ ಕಷ್ಟವನ್ನು ನೋಡಲಾರದೆ ನನ್ನ ವಶಕ್ಕೆ ನಮ್ಮ ಮನೆಯವರು ಕೊಟ್ಟಿದ್ದ ಕೆಲವು ರೂಪಾಯಿಗಳನ್ನು ಕೊಟ್ಟು ಅವರ ತೊಂದರೆಯನ್ನು ತಪ್ಪಿಸಬೇಕಾಯಿತು. ಅಲ್ಲದೆ ನಮ್ಮ ತಂದೆಗೆ ಆಗ ಅನುಕೂಲವಿರಲಿಲ್ಲವಾದ್ದರಿಂದ ಮಗುವಿಗೆ ನಾನೇ ಒಂದೆರಡು ಒಡವೆಗಳನ್ನು ನಮ್ಮ ಯಜಮಾನರ ಹಣದಿಂದಲೇ ಮಾಡಿಸಿ ಇಟ್ಟನು. ಇಂತಹ ಕಷ್ಟಕಾಲವು ನಮ್ಮ ತಂದೆಗೆ ಸಂಭವಿಸಿದ್ದಾಗ್ಯೂ ನಮ್ಮ ತಾಯಿಯು ಮಾತ್ರ ಕಷ್ಟದಲ್ಲಿ ಸಹಾಯವಾಗಲೆಂದು ಐವತ್ತೈದು ರೂಪಾಯಿಗಳನ್ನು ಯಾರಿಗೂ ಕಾಣದಂತೆ ಇಟ್ಟುಕೊಂಡಿದ್ದರು. ನನ್ನನ್ನು ಒಂಭತ್ತನೇ ತಿಂಗಳಲ್ಲಿ ನಮ್ಮ ಯಜಮಾನರೇ ಬಂದು ನಮ್ಮ ತಂದೆತಾಯಿಗಳನ್ನು ನನ್ನೊಡನೆ ಒಟ್ಟಿಗೆ ಹರಪುರಕ್ಕೆ ಕರೆದು ಕೊಂಡುಹೋದರು. ಹರಪುರಕ್ಕೆ ಬಂದಮೇಲೆ ನಮ್ಮ ತಾಯಿಯು ತಮ್ಮ ವಶದಲ್ಲಿದ್ದ ಐವತ್ತೈದು ರೂಪಾಯಿಗಳನ್ನು "ಯಾರಿಗೂ ತಿಳಿಯದಂತೆ ನಿನ್ನ ವಶದಲ್ಲಿಟ್ಟುಕೊಂಡಿರು" ಎಂದು ಹೇಳಿ ನನ್ನ ಕೈಗೆ ಕೊಟ್ಟರು. ನಾನೂ ಅದನ್ನು ಬಹು ಗೂಢವಾಗಿ ನನ್ನ ಪೆಟ್ಟಿಗೆಯಲ್ಲಿಟ್ಟುಕೊಂಡೆನು. {{center|'''V'''}} {{gap}}ಶ್ರೀನಗರವು ಸುಪ್ರಸಿದ್ಧವಾದ ಪಟ್ಟಣ. ಈ ಪಟ್ಟಣದ ಸೌಂದರ್ಯವು ಪ್ರೇಕ್ಷಕರ ಕಣ್ಮನಗಳನ್ನು ಮುಗ್ಧಮಾಡುತ್ತಿರುವುದು. ಈ ಊರಿನ ಸುತ್ತಳತೆಯು ಹತ್ತು ಮೈಲಿಯಾಗುವುದು. ಊರಿನ ಮಧ್ಯದಲ್ಲಿ ವಿಸ್ತಾರವಾದ ಧೂಮಶಕಟಮಂದಿರ(ರೈಲ್ವೆ ಸ್ಟೇಷನ್)ವೊಂದುಂಟು. ಹರಪುರದಲ್ಲಿ ಬೆಳಗಿನ ಏಳು ಘಂಟೆಗೆ ಧೂಮಶಕಟವನ್ನೇರಿದರೆ ಹತ್ತು ಘಂಟೆ ಹೊತ್ತಿಗೆ ಶ್ರೀನಗರಕ್ಕೆ ತಲಪಬಹುದು. ಶ್ರೀನಗರದಲ್ಲಿ ಇಳಿಯದೆ ಮುಂದಕ್ಕೆ ಪ್ರಯಾಣಮಾಡಿದರೆ ಹನ್ನೆರಡು ಘಂಟೆಗೆ ರಂಗಪುರಿಗೆ ಹೋಗ{{nop}}<noinclude></noinclude> n702ceib86uavtuxfuqwqi8pnydql4o ಪುಟ:ನನ್ನ ಸಂಸಾರ.djvu/೫೧ 104 57334 322024 321947 2026-05-23T16:37:57Z Shreesha Sharma 7840 /* Validated */ 322024 proofread-page text/x-wiki <noinclude><pagequality level="4" user="Shreesha Sharma" />{{rh|center=ನನ್ನ ಸಂಸಾರ|left=|right=43}}</noinclude>{{rh|center=ನನ್ನ ಸಂಸಾರ|left=|right=43}} ಸ್ಸಿನಲ್ಲಿ ಹರ್ಷಾಶ್ಚರ್ಯ ವ್ಯಸನಗಳು ಸಂಮಿಳಿತವಾಗಿದ್ದುವು. ನಾನು ನಮ್ಮ ಯಜಮಾನರನ್ನು ಬಹು ವಿಧವಾಗಿ ಪ್ರಾರ್ಥಿಸಿದೆನು. ಪತಿಗೆ ವಂಚನೆಮಾಡಿ ಆತನ ಮನಸ್ಸಿಗೆ ಬೇಸರ ಪಡಿಸಿದವಳು ಬದುಕಿರುವುದಕ್ಕಿಂತಲೂ ಸಾಯುವುದು ಮೇಲೆಂದು ಅವರೊಡನೆ ಹೇಳಿ ಮಗುವನ್ನು ಎರಡುಬಾರಿ ಮುದ್ದಿಸಿ ನಮ್ಮ ಸ್ವಾಮಿಯ ಪಾದಗಳಿಗೆ ನಮಸ್ಕರಿಸಿ ನಾನು ಮನಸ್ಸಿನಲ್ಲಿ ಮಾಡಿಕೊಂಡಿದ್ದ ವಿಷಯವನ್ನು ಅವರೊಡನೆ ವಿಜ್ಞಾಪಿಸಿಕೊಂಡೆನು. ಆಗ ಯಜಮಾನರು ಚಕಿತರಾಗಿ ನನ್ನನ್ನೇ ದಿಟ್ಟಿಸಿನೋಡುತ್ತಾ ನನ್ನೆರಡು ಕೈಗಳನ್ನೂ ಹಿಡಿದೆಳೆದು ತಮ್ಮ ಹತ್ತಿರದಲ್ಲಿ ಕುಳ್ಳಿರಿಸಿಕೊಂಡು ಇಂತು ಉಪದೇಶಿಸಲಾರಂಭಿಸಿದರು. {{gap}}ಮುಗ್ದೆ ! {{gap}}ನಿನಗಿನ್ನೂ ಪ್ರಾಪಂಚಿಕ ವ್ಯವಹಾರಜ್ಞಾನವೂ ಗೃಹಿಣಿಯ ವೃತ್ತವೂ ಚೆನ್ನಾಗಿ ತಿಳಿದಿಲ್ಲ. ಈಗ ನಮ್ಮ ಮನೆಯಲ್ಲಿ ಸಂಘಟಿಸಿರುವ ಹಣದ ವಿಷಯವು ನಿನ್ನನ್ನು ಒಳ್ಳೆಯ ಗೃಹಿಣಿಯನ್ನಾಗಿ ಮಾಡಲು ನಡೆದಂತೆಯೇ ಭಾವಿಸುತ್ತೇನೆ. ನಿನ್ನ ಮನಸಿನಲಿ, ನನ್ನ ಹಣವೂ ಹೋಗಿ ನಿಷ್ಕಾರಣಾವಾದಕ್ಕೂ ಪಾತ್ರಳಾಗಬೇಕಾಗಿ ಬಂದಿತಲ್ಲಾ ಎಂಬ ಯೋಚನೆಯು ಪ್ರಬಲವಾಗಿರಬಹುದು. ಹಣ ಹೋದರೆ ಹೋಗಲಿ. ಅದಕ್ಯಾಗಿ ನೀನು ಚಿಂತಿಸಬೇಡ, ನಿಮ್ಮ ತಾಯಿಯನ್ನು ಕೇಳಿದಾಗ ನೀನು ನಿರಪರಾಧಿನಿಯೆಂದು ನನಗೆ ಗೊತ್ತಾದುದು. ಇಷ್ಟು ಅನರ್ಥಗಳಿಗೂ ಮೂಲಕಾರಣರು ನಿಮ್ಮ ತಾಯಿ ತಂದೆಗಳೆಂದು ಭಾವಿಸಿಕೊ. ನಿಮ್ಮ ತಾಯಿಯು ನಿನ್ನಲ್ಲಿ ಹಣವನ್ನು ಕೊಡುವಾಗ ನಿಮ್ಮ ಯಜಮಾನರಿಗೆ ಈ ವಿಷಯವನ್ನು ತಿಳಿಸಬೇಕೆಂದು ಹೇಳದೆ ಇದ್ದುದು ಅವರ ಮುಖ್ಯ ತಪ್ಪು. ನಿನಗಾದರೂ ಮೌಗ್ಧ್ಯವುಂಟಾಗಿ ಆ ವಿಚಾರವನ್ನು ನನ್ನೊಡನೆ ತಿಳಿಸದಿದ್ದುದು ನಿನ್ನ ತಪ್ಪು. ನಮ್ಮ ಮನೆಯಲ್ಲಿ ಹಣ ಹೋಯಿತೆಂದು ಚರ್ಚೆಬಿದ್ದಾಗಲಾಗಲೀ ಪೆಟ್ಟಿಗೆಗಳನ್ನು ಶೋಧಿಸಬೇಕೆಂಬ ವಿಚಾರ ಬಂದಾಗಲಾಗಲೀ ನೀನು ಈ ವಿಷಯವನ್ನು ಯಾರೊಡನೆಯೂ ಹೇಳದೇಹೋದೆ. ಹೀಗೆ ಹೇಳದಿರುವುದರ ಕಾರಣವನ್ನು ನಾನುಬಲ್ಲೆ. ನಿನ್ನ ಭೀರುಸ್ವಭಾವವೂ, ಮಾತೃರಹಸ್ಯೋಪದೇಶಮಂತ್ರವೂ, ಅವಿವೇಕವೂ ನಿನಗೆ ಆಗ ಅಜ್ಞಾನವನ್ನು ತಂದಿಟ್ಟಿತು. ಲೋಕದಲ್ಲಿ ತಂದೆ ತಾಯಿಗಳು ಹೆಣ್ಣು ಮಕ್ಕಳಿಗೆ, ಪತಿಸೇವಾ ಧರ್ಮವನ್ನು ತಿಳಿಯಿಸದೆ, ಆತನ ಮನಸ್ಸನ್ನು ಪ್ರಸನ್ನವಾಗಿರುವಂತೆ ಇಡಲು ತಕ್ಕಂತೆ ಉಪದೇಶಿಸದೆ ನಿನ್ನ ತಂದೆತಾಯಿಗಳಂತೆ ಇಂತಹ ಮನೆ ಹಾಳು ರಹಸ್ಯಗಳನ್ನೂ ಮಕ್ಕಳುಗಳಿಗೆ ಹಠಮಾರಿತನವನ್ನೂ ಒಡವೆಗಾಗಿ ಗಂಡನನ್ನು ಪೀಡಿಸಬೇಕೆಂಬುದನ್ನು, ಇನ್ನೊಬ್ಬರನ್ನು ನೋಡಿ ಕುರುಡು ಹತ್ತಬೇಕೆಂಬುದನ್ನು ಉಪದೇಶಿಸಿದರೆ ಲೋಕದಲ್ಲಿ ಯಾವ ಸಂಸಾರವೂ ನೆಟ್ಟಗಾಗಲಾರದು. ತನ್ನ ಮನೆಗೆ ತಾನೇ{{nop}}<noinclude></noinclude> heiw29a6n29pk0oms9y1j7u9xwl8tdr ಪುಟ:ನನ್ನ ಸಂಸಾರ.djvu/೫೨ 104 57335 322025 321948 2026-05-23T16:39:24Z Shreesha Sharma 7840 /* Validated */ 322025 proofread-page text/x-wiki <noinclude><pagequality level="4" user="Shreesha Sharma" />{{rh|center=ಕಾದಂಬರೀ ಸಂಗ್ರಹ|left=44|right=}}</noinclude>{{rh|center=ಕಾದಂಬರೀ ಸಂಗ್ರಹ|left=44|right=}} ಬೆಂಕಿ ಹಚ್ಚಿಕೊಂಡು ಜ್ವಾಲೆಯು ಸರ್ವತ್ರವ್ಯಾಪಿಸಿದಾಗ ಪಶ್ಚಾತ್ತಾಪ ಪಡುವರಂತೆ ನಿನ್ನ ತಾಯಿಯ ಸ್ಥಿತಿಯಾಯಿತು. ನೀನು ಇದನ್ನೆಲ್ಲಾ ಮನಸ್ಸಿನಲ್ಲಿ ಚೆನ್ನಾಗಿ ಆಲೋಚಿಸು. ಇನ್ನು ಮುಂದಾದರೂ ನಿನ್ನ ಎಚ್ಚರಿಕೆಯಲ್ಲಿ ನೀನಿರು. ನೀನು ಈಗ ಕಳೆದುಕೊಂಡ ಹಣವು ನೀತಿಬೋಧೆಗಾಗಿ ಗುರುಗಳಿಗೆ ಕೊಟ್ಟ ದಕ್ಷಿಣೆಯೆಂದು ತಿಳಿದುಕೊ. ಈಗ ಹಣ ಹೋದ ವಿಚಾರವು ನಡೆಯದಿದ್ದರೆ ಇಷ್ಟು ಸಂಘಟನೆಗಳು ಉಂಟಾಗುತ್ತಿರಲಿಲ್ಲ. ನಿನಗೆ ಚೆನ್ನಾಗಿ ಬುದ್ದಿಯೂ ಬರುತ್ತಿರಲಿಲ್ಲ. ನಿನ್ನ ತಂದೆ ತಾಯಿಗಳ ಹಿತೋಪದೇಶವು ಹೀಗೆಯೇ ಬೆಳೆದು ನಮ್ಮಿಬ್ಬರನ್ನೂ ಬಹುಕಷ್ಟಕ್ಕೆ ಗುರಿಮಾಡುತ್ತಿದ್ದಿತು. ಈಗ ನಾನು ಮಾಡಿದ ಉಪದೇಶವೂ ನಿನಗೆ ಲಭಿಸುತ್ತಿರಲಿಲ್ಲ. ಪ್ರಿಯೆ! ಭಾವಿಸು! ಚನ್ನಾಗಿ ಯೋಚಿಸು.! ಈಗ ನಿನಗೆ ಅಕಸ್ಮಾತ್ತಾಗಿ ಪ್ರಾಪ್ತವಾದ ಅಪಮಾನವು ನಿನ್ನ ಭವಿಷ್ಯತ್ಸುಖಾಭಿವೃದ್ಧಿಗೆ ಹೌದೋ ಅಲ್ಲವೋ ಹೇಳು. ಇನ್ನೂ ಕೇಳು, ಲೋಕದಲ್ಲಿ ಕೆಲವು ಮಂದಿ ಮೂರ್ಖಸ್ತ್ರೀಯರು ತಮ್ಮ ಗಂಡಂದಿರನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಉಪಾಯವನ್ನು ಹುಡುಕುತ್ತಾರೆ. ಇಂತಹ ಸ್ತ್ರೀಯರಿಗೆ ತಕ್ಕ ಉಪದೇಶಕರೂ ಸಿಕ್ಕುತ್ತಾರೆ. ಪಂಚಾಕ್ಷರೀಪುರಶ್ಚರಣೆ, ತಾಯತೀ, ಭಸ್ಮವೇ, ಮುಂತಾದ ಔಷಧಪ್ರಯೋಗ, ಹಸುರು ಹಾಕುವುದು, ಇಂತಹ ಕಪಟಮಾಯಾವಿದ್ಯೆಯನ್ನು ಆ ಉಪದೇಶಕರಾದ-ಮೋಸಗಾರರಾದ-ನೀಚಸ್ತ್ರೀಯರು ಮುಗ್ಧೆಯರಾದ ಹೆಣ್ಣು ಮಕ್ಕಳಿಗೆ ಕಲಿಸಿ ಬಿಡುತ್ತಾರೆ. ಇದರಿಂದ ಶ್ರಮಪಟ್ಟು ಸಂಪಾದಿಸಿದ ದ್ರವ್ಯವು ವ್ಯಯವಾಗಿ ಆ ದುಷ್ಟ ಹೆಂಗಸರ ದುರ್ಬೋಧನೆಯಿಂದ ಆ ಸ್ತ್ರೀಯರ ಮರ್ಯಾದೆಯೂ ಉಳಿಯುವುದಿಲ್ಲ. ಸ್ತ್ರೀಯರು ಇವರ ಹೇಳಿಕೆಯಂತೆ ಅನೇಕ ಅಧರ್ಮದ ಕೆಲಸಗಳನ್ನು ಮಾಡಿ ಜನರಲ್ಲಿ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ. ಇದರ ಫಲಿತಾರ್ಥವು ಇಷ್ಟರಿಂದಲೇ ಕೊನೆಗಾಣುವುದಿಲ್ಲ. ಈ ಮೋಸಗಾರರು ತಮ್ಮ ಮಾತು, ನಿಜವೆಂದು ತೋರ್ಪಡಿಸಿಕೊಳ್ಳಲಿಕ್ಕಾಗಿ, ಈ ಔಷಧವನ್ನು ಇಂತಹ ವೇಳೆಯಲ್ಲಿ ಈ ವಿಧದಲ್ಲಿ ನಿನ್ನ ಗಂಡನಿಗೆ ಏನಾದರೂ ರುಚಿಯಾದ ತಿಂಡಿಯಲ್ಲಿ ಬೆರಸಿಕೊಡು, ಇದರಿಂದ ನೀನು ಹೇಳಿದಂತೆ ಅವನು ನಡೆಯುತ್ತಾನೆಂದು ಹೇಳಿ, ಏನೋ ಒಂದು, ಕಲ್ಲೋ, ಮಣ್ಣೋ, ಬೂದಿಯೋ, ಹಸರು ಸಪ್ಪೋ-ಏನಾದರೊಂದನ್ನು ಕೊಟ್ಟುಬಿಡುತ್ತಾರೆ. ಬುದ್ದಿಹೀನರಾದ ಹೆಂಗಸರು ಆ ಉಪದೇಶಕ್ಕೆ ಮರುಳಾಗಿ ಆ ಔಷಧಗಳನ್ನು ತಮ್ಮ ಗಂಡಂದಿರಿಗೆ ಯಾವಾಗಲಾದರೂ ತಿನ್ನಿಸಿಬಿಡುತ್ತಾರೆ. ಆ ಔಷಧಗಳ ಸ್ವಭಾವವನ್ನು ಪರೀಕ್ಷಿಸುವಷ್ಟು ಬುದ್ಧಿ ಇವರಿಗಿರುವುದಿಲ್ಲ. ಇವುಗಳಲ್ಲಿ, ತಾಮ್ರ, ಪಾದರಸ, ಪಾಷಾಣ, ಮುಂತಾದ ಅಪಕ್ವ ಭಸ್ಮಗಳೂ ಅಪಾಯಕರಗಳಾದ-ಬುದ್ದಿಯನ್ನು ಕೆಡಿಸಿಬಿಡುವ-ದೀರ್ಘರೋಗಿಗಳ{{nop}}<noinclude></noinclude> 9qtrchyjv35faht8m63m2tgcscmmmp9 ಪುಟ:ನನ್ನ ಸಂಸಾರ.djvu/೫೩ 104 57336 322026 321949 2026-05-23T16:39:42Z Shreesha Sharma 7840 /* Validated */ 322026 proofread-page text/x-wiki <noinclude><pagequality level="4" user="Shreesha Sharma" /> {{rh|center=ನನ್ನ ಸಂಸಾರ|left=|right=45}}</noinclude>ನ್ನಾಗಿ ಮಾಡುವ ಹಸುರು ರಸಗಳೂ ಸೇರಿರುತ್ತವೆ. ಈ ಔಷಧಗಳು ಹೊಟ್ಟೆಗೆ ಹೋದ ಸ್ವಲ್ಪ ಕಾಲದಲ್ಲಿ ಪ್ರಾಣವನ್ನು ಸಹ ಹಾಳುಮಾಡಿಬಿಡುತ್ತವೆ. ಬುದ್ಧಿಯಿಲ್ಲದ ಹೆಂಗಸರು ಆ ಮೋಸಗಾರರ ಸುಳ್ಳು ಮಾತುಗಳನ್ನು ನಂಬಿ ಗಂಡಂದಿರನ್ನು ವಶಮಾಡಿಕೊಳ್ಳಬೇಕೆಂದು ಇಂತಹ ಅಪಾಯಕರಗಳಾದ ಪದಾರ್ಥಗಳನ್ನು ಅವರ ಹೊಟ್ಟೆಗೆ ಹಾಕಿ ಪ್ರಾಣಭಯವನ್ನುಂಟು ಮಾಡುತ್ತಾರೆ. ಇದಕ್ಕಾಗಿ-ಗಂಡನ ಸ್ವಾಧೀನಕ್ಕಾಗಿ ಯಾವ ಮಂತ್ರತಂತ್ರಗಳೂ ಇಲ್ಲ. ಇಂತಹ ನಡತೆಗಳು ಎಂದಾದರೊಂದು ದಿನ ಗಂಡಂದಿರಿಗೆ ತಿಳಿಯದೆ ಹೋಗದು. ಆಗ ಹೆಂಡತಿಯರ ಮೇಲಿನ ಅಭಿಮಾನವು ಅವರಿಗೆ ಸುತರಾಂ ತಪ್ಪಿಯೂ ಹೋಗುತ್ತದೆ. {{gap}}ಗಂಡನನ್ನು ಉಪಾಯದಿಂದ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕೆಲವು ಚಮತ್ಕಾರಗಳಿವೆ. ಅದನ್ನು ಹೇಳುವೆನು ಕೇಳು. ಹೆಂಡತಿಯ ನಡತೆ ಗಂಡನ ಮನಸ್ಸಿಗೆ ಒಪ್ಪುವಂತಿರಬೇಕು. ಗಂಡನಿಗೆ ಅಹಿತವಾದುದನ್ನೆಂದಿಗೂ ಮಾಡಬಾರದು. ಅವರೆದುರಿಗೆ ಗಟ್ಟಿಯಾಗಿ ಮಾತನಾಡಬಾರದು. ಅವರ ಮನಸ್ಸಿಗೆ ಆಯಾಸವನ್ನುಂಟುಮಾಡಬಾರದು. ಅವರನ್ನು ಎಂದಿಗೂ ನಿರಾಕರಿಸಬಾರದು. ಎಷ್ಟು ಕಷ್ಟ ಬಂದರೂ ಧರ್ಮ ಮಾರ್ಗವನ್ನತಿಕ್ರಮಿಸಬಾರದು. ಗಂಡನು ಯಾವ ಸಮಯದಲ್ಲಿ ಏನು ಕೆಲಸವನ್ನು ಹೇಳುತ್ತಾನೋ ಅದನ್ನು ತಕ್ಷಣವೇ ಆತನಿಗೆ ತೃಪ್ತಿಕರವಾಗುವಂತೆ ಮಾಡಬೇಕು.ಈ ಕೆಲಸವನ್ನು ನಾನು ಮಾಡೆನೆಂದಾಗಲೀ ನನಗೆ ಬೇಜಾರಾಗುವುದಾಗಲೀ ಹೇಳಬಾರದು. ಆ ಕೆಲಸವು ತಮ್ಮಿಂದಾಗದ ಪಕ್ಷದಲ್ಲಿ ನಮ್ರತೆಯಿಂದ ಅದರ ಕಾರಣವನ್ನು ಅವರಿಗೆ ತಿಳಿಯಪಡಿಸಬೇಕು. ಅವರೊಡನೆ ಯಾವ ವಿಧವಾದ ಸುಳ್ಳನ್ನು ಹೇಳಬಾರದು. ಅವರೆದುರಿಗೆ ಇತರರ ನಿಂದೆಯನ್ನು ಇತರರೆದುರಿಗೆ ಅವರ ನಿಂದೆಯನ್ನು ಸರ್ವಥಾ ಮಾಡಬಾರದು. ನಿಷ್ಕಾರಣವಾಗಿ ಕೋಪಿಸಿಕೊಂಡು ಅವರೆದುರಿಗೆ ಬಾಯಿಗೆ ಬಂದಂತೆ ಮಾತಾಡಬಾರದು. ಅವರನ್ನು ಎಂದಿಗೂ ಮೋಸಗೊಳಿಸಬಾರದು. ಅವರು ಮಾಡುವ ಒಳ್ಳೆ ಕೆಲಸಕ್ಕೆ ಅಡ್ಡಿ ಮಾಡಬಾರದು. ಯಾವ ಕೆಲಸದಲ್ಲಾಗಲೀ ತಮ್ಮದು ತಪ್ಪಾಗಿದ್ದರೆ ಒಪ್ಪಿಕೊಂಡು ಕ್ಷಮೆಯನ್ನು ಕೇಳಬೇಕು. ಅವರಲ್ಲಿ ತಪ್ಪಿದ್ದರೆ ಅದಕ್ಕೆ ಕೋಪಿಸಿಕೊಳ್ಳದೆ ಸಮಾಧಾನದಿಂದ ಅದನ್ನು ಅವರಿಗೆ ತಿಳಿಸಬೇಕು. ತಮ್ಮಿಂದ ಆದಷ್ಟು ಪ್ರೀತಿಯಿಂದ ಅವರ ಸೇವೆಮಾಡಬೇಕು. {{gap}}ಒಳ್ಳೇ ಸೀರೆಗಳನ್ನುಟ್ಟುಕೊಂಡು ಒಡವೆಗಳನ್ನಿಟ್ಟುಕೊಂಡು ಪತಿಗಳನ್ನು ಮೋಹಗೊಳಿಸುವ ಪ್ರಯತ್ನವನ್ನೆಂದಿಗೂ ಮಾಡಬಾರದು. ನಿಮ್ಮ ಮನಸ್ಸು ಒಳ್ಳೆಯದಾಗಿದ್ದರೆ ಅದರಿಂದಲೇ ಅವರ ಮನಸ್ಸು ನಿಮ್ಮ ಕಡೆಗೆ ತಿರುಗುತ್ತದೆ. ನಿಮ್ಮ ಸದ್ಗು{{nop}}<noinclude></noinclude> 7gfk176meq5tq4c6ulctpwjbdpvtdcb ಪುಟ:ನನ್ನ ಸಂಸಾರ.djvu/೫೪ 104 57337 322027 321950 2026-05-23T16:39:54Z Shreesha Sharma 7840 /* Validated */ 322027 proofread-page text/x-wiki <noinclude><pagequality level="4" user="Shreesha Sharma" />{{rh|center=ಕಾದಂಬರೀ ಸಂಗ್ರಹ|left=46 |right=}}</noinclude>ಣಗಳಿಂದ ನೀವು ಪತಿಯನ್ನು ಮೋಹಗೊಳಿಸಬೇಕು. ಅವರಿಗೆ ಯಾವ ವಿಷಯದಲ್ಲಿಯೂ ನೀವು ವಂಚನೆಯನ್ನು ಮಾಡಬಾರದು. ಪತಿಗೆ ಸಮನಾದ ಸ್ನೇಹಿತನು ಈ ಜಗತ್ತಿನಲ್ಲಿ ಯಾರೂ ಇಲ್ಲ. ಆತನು ಗುರುವಿನಂತೆ ಸನ್ಮಾರ್ಗವನ್ನು ತೋರಿಸುತ್ತಾನೆ. ತಂದೆಯಂತೆ ಹಿತವನ್ನುಂಟುಮಾಡುತ್ತಾನೆ. ತಾಯಿಯಂತೆ ಪ್ರೀತಿಸುತ್ತಾನೆ. ದೇವರಂತೆ ಪೂಜ್ಯನಾಗಿ ನಿಮ್ಮ ಪ್ರಾಣಕ್ಕಿಂತಲೂ ಪ್ರಿಯನಾಗಿರುತ್ತಾನೆ. ಇಂತಹ ಅದ್ದಿತೀಯನಾದ ಸ್ನೇಹಿತನನ್ನೇ ನೀವು ವಂಚಿಸಿದ ಪಕ್ಷದಲ್ಲಿ ನಿಮಗೆ ಇನ್ನೇತರಿಂದ ಸುಖವುಂಟಾದೀತು? ಪತಿಯನ್ನು ವಂಚಿಸುವ ಹೆಂಗಸು ಎಂತಹ ಅಕೃತ್ಯಮಾಡಲಿಕ್ಕೂ ಹಿಂತೆಗೆಯಳು. ಆದ್ದರಿಂದ ಗೃಹಿಣಿಯಾದವಳು ಪತಿಯ ಸಂಗಡ ನಿರ್ವಂಚನೆಯಿಂದ ನಡೆದುಕೊಳ್ಳಬೇಕು. ನಿಮ್ಮ ಪತಿಗಳಿಗೆ ಅಹಿತವಾದ ಕೆಲಸದಿಂದ ನಿಮಗೆಷ್ಟೇ ಲಾಭದ್ದಾಗ್ಯೂ ನೀವು ಅದನ್ನು ಮಾಡಬಾರದು. ನಿಮ್ಮ ಪತಿಯು ನಿಮ್ಮಲ್ಲಿ ಹೇಳಿರುವ ಗುಟ್ಟಿನ ಮಾತುಗಳನ್ನು ಇತರರ ಸಂಗಡ ಹೇಳಬಾರದು. ಏಕಾಂತದಲ್ಲಿ ಪತಿಯು ನಿಮ್ಮ ವಿಷಯದಲ್ಲಿ ಸಣ್ಣ ಮಾತನ್ನಾಡಿದ್ದರೆ ಅದನ್ನು ಹೊರಪಡಿಸಬಾರದು. ಈ ಪ್ರಕಾರ ಯಾವ ಹೆಂಗಸು ಆಚರಣೆಯಲ್ಲಿಟ್ಟಿರುವಳೋ ಅವಳಿಗೆ ಯಾರಲ್ಲಿಯೂ ವಿರೋಧವುಂಟಾಗುವುದಿಲ್ಲ. ಚಾಡಿಮಾತನ್ನು ಹೆಂಗಸು ಕಲಿಯಬಾರದು. ಕ್ಷುದ್ರ ಹೇಳುವವರನ್ನಾರೂ ನಂಬುವುದಿಲ್ಲ. ನಿಮ್ಮ ವಿಷಯದಲ್ಲಿ ನಿಷ್ಕಾರಣವಾಗಿ ಯಾರಾದರೂ ಅಪವಾದವನ್ನು ಹೊರಿಸಿದರೆ ಅದನ್ನು ಕೇಳಿಕೊಂಡು ಸುಮ್ಮನಿದ್ದು ನಿಮ್ಮ ಆಚರಣೆಯನ್ನು ನಿರ್ಮಲವನ್ನಾಗಿ ಮಾಡಿಕೊಂಡು ಸಮಾಧಾನದಿಂದಿರಬೇಕು. ಈ ಅಪವಾದವು ಸುಳ್ಳೆಂಬುದು ಕಾಲಕ್ರಮೇಣ ಎಲ್ಲರಿಗೂ ತಿಳಿದು ಆ ಅಪವಾದವನ್ನು ಹೊರಿಸಿದವರ ಮುಖಭಂಗವಾಗದೆ ಇರುವುದಿಲ್ಲ. ನಿಮ್ಮ ಗಂಡಂದಿರನ್ನು ಯಾರಾದರೂ ದೂಷಣೆ ಮಾಡಿದರೆ ಅದಕ್ಕಾಗಿ ಅವರ ಸಂಗಡ ವಿವಾದಮಾಡಬಾರದು. ಆ ಅಪವಾದವು ನಿಜವಾಗಿದ್ದ ಪಕ್ಷದಲ್ಲಿ ಅವನ್ನು ನಿವಾರಿಸುವ ಪ್ರಯತ್ನ ಮಾಡಬೇಕು. ನಿಮ್ಮ ಗಂಡಂದಿಗೆ ನೀವು ಎಲ್ಲ ಕೆಲಸದಲ್ಲಿಯೂ ಆದಷ್ಟು ಸಹಾಯ ಮಾಡಬೇಕು. ಮನೆಯ ಕೆಲಸಗಳನ್ನು ಪಾಲುಮಾರಿಕೆ ಇಲ್ಲದೆ ಕಾಲಕಾಲಕ್ಕೆ ಸರಿಯಾಗಿ ಮಾಡುತ್ತಾ ನಿಮ್ಮ ಗಂಡಂದಿರನ್ನು ಸಂತೋಷಗೊಳಿಸಬೇಕು. ಯಜಮಾನರು ಹೊರಗಿನಿಂದ ಮನೆಗೆ ಬಂದಾಗ ಅವರೊಡನೆ ಕೆಲಸಕ್ಕೆ ಬಾರದ ಮಾತುಗಳನ್ನಾಡಿ ಕಾಲಕಳೆಯಬಾರದು. ನಿಮ್ಮ ಗಂಡಂದಿರ ಸಂಗಡ ಮಾತನಾಡುವಾಗ ಹೆಚ್ಚು ಹರಟೆಯನ್ನು ಬಿಟ್ಟು, ನೀತಿ, ಜ್ಞಾನ, ಧರ್ಮವಿಚಾರವಾಗಿ ಚರ್ಚೆಮಾಡಬೇಕು. ಸಂಸಾರಕ್ಕೆ ಬೇಕಾದ ವಿಷಯಗಳನ್ನು ಕಾಲವರಿತು ತಿಳಿಸಬೇಕು. ಗಂಡನಮನಸ್ಸು ಖಿನ್ನವಾಗಿದ್ದರೆ ಒಳ್ಳೆ {{nop}}<noinclude></noinclude> 5srseeddr5th5qaaqf07vpcenh4vv14 ಪುಟ:ನನ್ನ ಸಂಸಾರ.djvu/೬೪ 104 57347 322028 321955 2026-05-23T16:40:45Z Shreesha Sharma 7840 /* Validated */ 322028 proofread-page text/x-wiki <noinclude><pagequality level="4" user="Shreesha Sharma" />{{rh|center=ಕಾದಂಬರೀ ಸಂಗ್ರಹ|left=56|right=}}</noinclude>ಒಳಕ್ಕೆ ಹೋಗಿ ಪೆಚ್ಚಾಗಿ ನಿಂತುಕೊಂಡನು. ಅವರಜ್ಜಿಯು ಇವನ ಸ್ಥಿತಿಯನ್ನು ನೋಡಿ ಇದೇಕೆ! ಹೀಗಿರುವೆಯೆಂದು ಕೇಳಿದರು. ಉತ್ತರಹೊರಡಲಿಲ್ಲ. ಅಷ್ಟರಲ್ಲೆ ನಮ್ಮ ಭಾವನವರು ಹೋಗಿ ಮುದುಕಿಯೊಡನೆ, ನಡೆದ ವೃತ್ತಾಂತವನ್ನೂ ಹುಡುಗರಿಬ್ಬರ ಸಂಭಾಷಣೆಯನ್ನೂ ತಿಳಿಸಿದರು. ಅದರ ಮೇಲೆ ಚಂಡಕೇಶವನ ಬೇಬನ್ನು ಶೋಧಿಸಲು ಮೂರು ಪಾವಲಿಗಳು ಸಿಕ್ಕಿದುವು. ಅದನ್ನು ನೋಡಿ ಮುದುಕಿಯು ಆ ಹುಡುಗನನ್ನು ಹೊಡೆದು ಬಡೆದು ವಿಪರೀತವಾಗಿ ಶಿಕ್ಷಿಸಿಬಿಟ್ಟರು. ತುಂಬಾ ರೂಪಾಯಿಗಳಿವೆಯೆಂದು ನಾರಾಯಣನ ಸಂಗಡ ಹೇಳಿದೆಯಲ್ಲಾ, ಇಲ್ಲಿ ಕೊಡು ಅದನ್ನು ಕೊಟ್ಟರೆ ನಿನಗೆ ಎರಡುರೂಪಾಯಿ ಇನಾಮು ಕೊಡುವೆನೆಂದು ನಮ್ಮ ಭಾವನವರು ಹೇಳಲು ಆ ಹುಡುಗನು ಅಳುತ್ತಾ, ಇಲ್ಲ! ನನ್ನಲ್ಲಿಲ್ಲ! ಎಂದು ಹೇಳಿದನು. ಅವನನ್ನು ಎಲ್ಲರೂ ತುಂಬಾ ಹೆದರಿಸಿ, ನೀನು ಹೇಳದಿದ್ದರೆ ನಿನ್ನನ್ನು ಪೋಲೀಸಿಗೆ ಕೊಟ್ಟುಬಿಡುತ್ತೇನೆಂದು ಹೇಳಿದರು. ಆಹುಡುಗನು ಬಹು ಕಷ್ಟದಿಂದ ಹಿತ್ತಲಿಗೆ ಹೋಗಿ ಗೋಡೆಯ ಪಕ್ಕದಲ್ಲಿ ಒಂದು ಸ್ಥಳದಲ್ಲಿ ಬಗೆದು ಅಳುತ್ತಾ ನಿಂತುಕೊಂಡನು. ಎಲ್ಲರೂ ಹೋಗಿ ಆ ಸ್ಥಳದಲ್ಲಿ ನೋಡಲು ಮಣ್ಣು ಹಿಡಿಯಲಾರಂಭವಾಗಿದ್ದ ಬೆಳ್ಳಿಯ ರೂಪಾಯಿಗಳು ಕಾಣಬಂದುವು. ಭಾವನವರು ಅದನ್ನು ತೆಗೆದು ಎಣಿಸಲು ಅರವತ್ತೆರಡು ರೂಪಾಯಿಗಳಿದ್ದುವು. ಇಷ್ಟು ಹಣ ನಿನಗೆಲ್ಲಿ ಸಿಕ್ಕಿತೆಂದು ಕೇಳಲು ಅವನು ನಡುಗುತ್ತಾ ತನ್ನ ಅಜ್ಜಿಯನ್ನು ತೋರಿಸಿದನು. ಅದರ ಅರ್ಥವೇನೆಂದು ಎಲ್ಲರೂ ಕೇಳಲು, ನಾನು ಈಗ ಒಂದು ತಿಂಗಳಲ್ಲಿ ನಿಮ್ಮ ಮನೆಯಲ್ಲಿ ಪೆಟ್ಟಿಗೆಯಲ್ಲಿದ್ದ ಹಣವನ್ನು ಕೈಗೆ ಸಿಕ್ಕಿದಷ್ಟನ್ನು ತಂದು ನನ್ನ ಅಜ್ಜಿಯ ಕೈಗೆ ಕೊಡಲು ಅವಳು ಅದನ್ನು ನನ್ನೆದುರಾಗಿ ಇಲ್ಲಿ ಹೂಳಿಟ್ಟಳೆಂದು ಹೇಳಿದನು. ಪಾಠಕರೆ! ಈಗ ಮುದುಕಿಯ ಮುಖವನ್ನು ಒಮ್ಮೆ ದೃಷ್ಟಿಸಿ ನೋಡಿರಿ, ಗುಟ್ಟು ಬಯಲಾಯಿತು. ಇನ್ನೊಂದು ಕ್ಷಣವೂ ತಮ್ಮ ಮನೆಯಲ್ಲಿರಲಾಗದೆಂದು ಮುದುಕಿಯನ್ನು ಆ ಹುಡುಗನೊಡನೆ ಹೊರಕ್ಕೆ ಕಳುಹಿಸಿಬಿಟ್ಟರು. ಈ ರೀತಿಯಾಗಿ ಶ್ರೀ ನಗರದಲ್ಲಿ ಕಳ್ಳತನ ಪತ್ತೆಯಾಯಿತು. {{gap}}ನಮ್ಮ ಭಾವನವರ ಪೆಟ್ಟಿಗೆಯಲ್ಲಿ ಹಿಂದೆ ಕಳುವಾದುದು ಐವತ್ತೈದು ರೂಪಾಯಿಗಳೆಂದೂ ನಿರ್ಧರವಾಯಿತಂತೆ! ಮುದುಕಿಯು ಆಹುಡುಗನೊಡನೆ ಮನೆಬಿಟ್ಟು ಹೊರಟು ಹೊದಮೇಲೆ ಮನೆಯವರೆಲ್ಲರೂ ಮಾತನಾಡಿಕೊಂಡು ನನ್ನನ್ನೂ ನಮ್ಮ ಯಜಮಾನರನ್ನೂ ಪುನಃ ಹಿಂತಿರುಗಿ ಮನೆಗೆ ಬರುವಂತೆ ಎಷ್ಟೋ ಉಪಚಾರವನ್ನು ಹೇಳಿದರು. ನಾನು ತಸ್ಕರಿಯಲ್ಲವೆಂದು ಆಗ ನಮ್ಮ ಮನೆಯವರಿಗೆ ಗೊತ್ತಾಗಿ ನನ್ನ ವಿಷಯದಲ್ಲಿ ಹಿಂದೆ ನಡೆಸಿದ ನಡವಳಿಕೆಗಾಗಿ ಒಹು ಪಶ್ಚಾತ್ತಾಪ ಪಟ್ರಂತೆ?<noinclude></noinclude> q0ti7x100oq7k3by8m8zr78cph6f3e5 ಪುಟ:ನನ್ನ ಸಂಸಾರ.djvu/೬೮ 104 57351 322132 160260 2026-05-24T11:01:29Z Vikashegde 1258 /* Proofread */ 322132 proofread-page text/x-wiki <noinclude><pagequality level="3" user="Vikashegde" /></noinclude>{{center|'''ನೂತನ ವತ್ಸರಾರಂಭ.'''}} ಪೋಷಕಮಹಾಶಯ! ನಿಮ್ಮ ಅಮೋಘ ಸಹಾಯ ಸಂಪತ್ತಿಯಿಂದ ಸಂಗ್ರಹಶಿಶುವು ಚತುರ್ಥ ವರ್ಷದಲ್ಲಿ ಕಾಲನ್ನಿಟ್ಟಿರುವುದು. ಕಳೆದಮೂರುವರ್ಷಕಾಲ ಸಂಗ್ರಹವು ಅನೇಕ ಕಷ್ಟದಿಂದ ಪ್ರಚುರವಾದುದು ಸರಿಯಷ್ಟೆ! ಮುಂದೆ ಈಪತ್ರಿಕೆಯು ನಿರಾಯಾಸವಾಗಿ ಹೊರಡುವಂತೆಯೂ, ಕಾಲಕ್ಕೆ ಸರಿಯಾಗಿ ಪ್ರಚುರವಾಗುವಂತೆಯೂ, ಗ್ರಾಹಕ ಸಂಖ್ಯೆಯು ಅಭಿವೃದ್ಧಿಯಾಗಿ ಸಂಗ್ರಹಕ್ಕೆ ಮಂಗಳ ವುಂಟಾಗುವಂತೆಯೂ ನೀವೆಲ್ಲರೂ ಅನುಗ್ರಹಿಸುವದಲ್ಲದೆ ಸ್ವಹಸ್ತ ಪರಹಸ್ತಗಳಿಂದ ಉದಾರಾಶ್ರಯಕೊಟ್ಟು ಕಾಪಾಡಬೇಕಾಗಿ ಪ್ರಾರ್ಥಿಸುತ್ತೇನೆ {{Right|ಸಂಗ್ರಹ ಪತ್ರಕರ್ತ.}} {{rule}} {{center|'''ಲಲಿತೆಯ ಪಾತಿವ್ರತ್ಯರಕ್ಷಣೆ.'''}} {{rule|10em}} {{gap}}ಹೊಸೂರಿನ ಆಚೆ ಸುಮಾರು ಅರ್ಧಮೈಲಿ ದೂರದಲ್ಲಿದ್ದ ಒಂದು ಮೈದಾನದಲ್ಲಿ ಸಣ್ಣದೊಂದು ಗುಡಿಸಲಿದ್ದಿತು. ಒಂದು ದಿನ ಬೆಳಿಗ್ಗೆ ಹತ್ತು ಗಂಟೆಯಲ್ಲಿ ಒಬ್ಬ ಭಿಕ್ಷುಕನು ಆ ಗುಡಿಸಲಿನ ಬಾಗಿಲಿನಲ್ಲಿ ನಿಂತು ತನ್ನ ಕೈಯಲ್ಲಿದ್ದ ಕಬ್ಬಿಣದ ಝಾಲುಯನ್ನು ಸದ್ದುಮಾಡಿದನು. ಒಳಗಿನಿಂದ ಯುವತಿಯೊಬ್ಬಳು ಭಿಕ್ಷವನ್ನು ತಂದು ಹಾಕಿದಳು. ಯುವತಿಗೆ ಹದಿನೆಂಟು ವರ್ಷ ವಯಸ್ಸು. ಸ್ವಭಾವವಾಗಿ ಆಕೆಯು ಸುಂದರಿಯಾಗಿದ್ದಳು. ಆಕೆಯ ಹೆಸರು ಲಲಿತಾಂಬ. ಲಲಿತೆಯು ಭಿಕ್ಷವನ್ನು ಹಾಕುತ್ತಿದ್ದಾಗ ಆ ಭಿಕ್ಷುಕನು ಪಾಪಪೂರಿತವಾದ ಕ್ರೂರದೃಷ್ಟಿಯಿಂದ ಆ ಸುಂದರಿಯನ್ನು ನೋಡತೊಡಗಿದನು. ಈತನ ಸ್ಥಿತಿಯನ್ನು ನೋಡಿ ಲಲಿತೆಯು ಹೆದರಿ ಬೇಗ ಭಿಕ್ಷವನ್ನು ಹಾಕಿ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಳು. ಬಳಿಕ ಭಿಕ್ಷುಕನು ಹೊಸೂರಿನ ಕಡೆಗೆ ಹೊರಟುಹೋದನು. ಆದರೆ ಅವನ ಮನಸ್ಸು ಈಗ ಮೊದಲಿನಂತಿರಲಿಲ್ಲ. ಊರ ಹೊರಗಿನ ನೆರೆಯಿಲ್ಲದ ಗುಡಿಸಲನ್ನೂ ಅಲ್ಲಿರುವ ಅಸದೃಶರೂಪರಾಶಿಯನ್ನೂ ನೋಡಿ ಅವನ ಮನಸ್ಸಿನಲ್ಲಿ ಏನೋ ಒಂದು ದುರಾಲೋಚನೆಯು ಉತ್ಪನ್ನ ವಾಯಿತು. ಹಾವು ಕಡಿದವನ ದೇಹದಲ್ಲಿ ವಿಷವೇರುವಂತೆ ಆ ಪಾಪಿಯ ಹೃದಯದಲ್ಲಿ ಜನಿಸಿದ ಆ ದುರಾಲೋಚನೆಯು ಒಂದು ಕ್ಷಣದೊಳಗಾಗಿ ಅವನನ್ನು ಆಕ್ರಮಣಮಾಡಿ ಅವನನ್ನು ಶಾಸಿಸತೊಡಗಿತು. {{gap}}ಅವನು ಹೊಸೂರಿಗೆ ಬಂದು ಬಹು ಚಮತ್ಕಾರದಿಂದ ಆ ಗುಡಿಸಲಿಗೆ ಸಂಬಂಧಪಟ್ಟ ಕೆಲವು ವಿಷಯಗಳನ್ನು ತಿಳಿದುಕೊಂಡನು. ಅಷ್ಟರಲ್ಲೇ ಸಾಯಂಕಾಲವಾಯಿತು. ಕತ್ತಲೆಯಾದ ಮೇಲೆ ಪೂರ್ವೋಕ್ತವಾದಾ ಗುಡಿಸಲಿನಲ್ಲಿ ವಾಸಿಸುತ್ತಿದ್ದ{{nop}}<noinclude></noinclude> qx7e94blp089zdiisevj7y6ti8oufyu ಪುಟ:ನನ್ನ ಸಂಸಾರ.djvu/೬೯ 104 57352 322133 160300 2026-05-24T11:04:43Z Vikashegde 1258 /* Proofread */ 322133 proofread-page text/x-wiki <noinclude><pagequality level="3" user="Vikashegde" /></noinclude>ಲಲಿತೆಯು ಎರಡು ವರ್ಷದ ತನ್ನ ಮಗುವನ್ನು ಎತ್ತಿಕೊಂಡು ಬೀದಿಯ ಬಾಗಿಲಿಗೆ ಬಂದಳು. ಜಗಲಿಯ ಮೇಲೆ ಯಾರೋ ಮಲಗಿರುವಂತೆ ತೋರಿತು. ವಿಚಾರಿಸಿ ನೋಡಲು ಆ ವ್ಯಕ್ತಿಯು ಬೆಳಿಗ್ಗೆ ಬಂದಿದ್ದ ಭಿಕ್ಷುಕನೆಂದು ತಿಳಿದುಬಂದಿತು. ಲಲಿತೆಗೆ ಸಂಶಯವುಂಟಾಯಿತು. ಆಗ ಆ ಭಿಕ್ಷುಕನು ಮೃದುಸ್ವರದಿಂದ, “ತಾಯಿ! ಮುಂದಿನೂರಿಗೆ ಹೋಗಲು ಕತ್ತಲಾದುದರಿಂದ ಈ ರಾತ್ರಿ ಇಲ್ಲಿ ಮಲಗಿದ್ದು ಬೆಳಿಗ್ಗೆ ಮುಂದಕ್ಕೆ ಹೋಗುವೆನು” ಎಂದು ಹೇಳಲು ಲಲಿತೆಯು ಧೈರ್ಯಗೊಂಡು ಒಳಕ್ಕೆ ಹೋದಳು. ಆ ದಿನ ಮನೆಯಲ್ಲಿ ಲಲಿತೆಯೊಬ್ಬಳೇ ಇದ್ದಳು. ಆಕೆಯ ಪತಿಯು ಪರಸ್ಥಳಕ್ಕೆ ಹೋಗಿದ್ದುದರಿಂದಲೂ ಆತನು ಮಾರನೆ ದಿನ ಬೆಳಿಗ್ಗೆ ಬರುವ ವಾಯಿದೆ ಇದ್ದುದರಿಂದಲೂ ಏಕಾಂಗಿಯಾಗಿ ಆ ರಾತ್ರಿ ಲಲಿತೆಯು ಆ ಗುಡಿಸಲಿನಲ್ಲಿರುವುದು ದುಸ್ತರವಾಗಿ ಹೋಯಿತು. ಕಾರ್ಯಾಂತರಗಳಿಂದ ಆಕೆಯ ಪತಿಯು ಅವಳೊಬ್ಬಳನ್ನೇ ಅಲ್ಲಿ ಬಿಟ್ಟು ಹೋಗಬೇಕಾಗಿ ಬಂದಿದ್ದಿತು. ಲಲಿತೆಯು ಆಗ ಏನು ಮಾಡಬಲ್ಲಳು? ತನ್ನ ಪತಿಯನ್ನೇ ಧ್ಯಾನಿಸುತ್ತಾ ಊಟವನ್ನು ಮಾಡಿ ಕೈತೊಳೆದುಕೊಂಡು ಒಳಗೆ ಹೋದಳು. ಹೋಗುವಾಗ ಭಿಕ್ಷುಕನು ಜಗಲಿಯ ಮೇಲೆ ಮಲಗಿರಲಿಲ್ಲ. ಲಲಿತೆಯು ಒಳಕ್ಕೆ ಹೋಗಿ ಬಾಗಿಲನ್ನು ಭದ್ರವಾಗಿ ಮುಚ್ಚಿದಳು. ಕೂಡಲೆ ಹಾಸಿಗೆಯನ್ನು ಹಾಸಿ ಮಲಗಲು ಸನ್ನಾಹಮಾಡುತ್ತಿದ್ದಾಗ ಆ ಗುಡಿಸಲಿನ ಮೂಲೆಯೊಂದರಲ್ಲಿ ಯಾರೋ ಕೆಮ್ಮಿದಂತೆ ಕೇಳಿಸಿತು. ದೀಪದಲ್ಲಿ ಎಣ್ಣೆ ಮುಗಿದು ಆರಿಹೋಗುವ ಸ್ಥಿತಿಯಲ್ಲಿದ್ದಿತು. ಆ ಸಣ್ಣ ಉರಿಯಲ್ಲೇ ಆ ಮೂಲೆಯನ್ನು ದೃಷ್ಟಿಸಿ ನೋಡಲು ಅಲ್ಲಿ ಒಬ್ಬ ಪುರುಷ ವ್ಯಕ್ತಿಯು ನಿಂತಿದ್ದಂತೆ ಬೋಧೆಯಾಯಿತು. ಮತ್ತು ಆ ವ್ಯಕ್ತಿಯು ತನ್ನ ಕಡೆಗೇ ನಡೆದು ಬರುತ್ತಿರುವುದನ್ನು ಲಲಿತೆಯು ನೋಡಿದಳು. ಆಕೆಯ ದೇಹವು ಗಡಗಡನೆ ನಡುಗ ತೊಡಗಿತು. ಬಾಯಲ್ಲಿ ಮಾತೇ ಹೊರಡದು, ಆಗ ಆ ಕಳ್ಳ ಭಿಕ್ಷುಕನು, “ನೀನು ಕೂಗಿಕೊಂಡರೆ ನಿನ್ನ ಪ್ರಾಣವನ್ನು ಕಳೆದುಬಿಡುವೆನು” ಎಂದು ಆಕೆಯನ್ನು ಬೆದರಿಸಿದನು. ತನ್ನ ಮನೆಯಲ್ಲಿರುವ ಸರ್ವಸ್ವವನ್ನೂ ನಿನಗೆ ಒಪ್ಪಿಸುವೆನೆಂದು ಲಲಿತೆಯು ಅವನನ್ನು ಪ್ರಾರ್ಥಿಸಿದಳು. ಆಗ ಅವನು, ನಾನು ಹಣದಾಸೆಯಿಂದ ಇಲ್ಲಿಗೆ ಬರಲಿಲ್ಲ. ನಿನ್ನಲ್ಲಿ ಮೋಹಿತನಾಗಿ ಇಲ್ಲಿಗೆ ಬಂದಿರುವೆನೆಂದು ಹೇಳಿದನು. ಈ ಮಾತನ್ನು ಕೇಳಿ ಲಲಿತೆಗೆ ದೇಹದಮೇಲೆ ಸ್ಮೃತಿಯೇ ತಪ್ಪಿತು. ಆದರೂ ಅವಳು ಆಗ ಧೈರ್ಯಮಾಡಿ ಅಯ್ಯ!ನ ನ್ನ ಮಗುವನ್ನು ಬಹಿರ್ಭೂಮಿಗೆ ಕರೆದುಕೊಂಡು ಹೋಗಿದ್ದು ಬಂದು ನಿನ್ನ ಮಾತನ್ನು ನಡೆಯಿಸುವೆನೆಂದು ಹೇಳಿದಳು. ಆ ಚಂಡಾಲನು ಅದಕ್ಕೊಪ್ಪದೆ ತಾನೇ ಮಗುವನ್ನು ಕರೆದುಕೊಂಡು ಹೋಗಿಬರುವೆನಂದು ಹೇಳಲು ಲಲಿತೆಯು ಉಪಾಯಾಂತರವನ್ನು ಕಾಣದೆ ಮಗುವನ್ನು ಮುದ್ದಿಸಿ ಆ ಪಾಪಿಯ ಕೈಗೆ ಕೊಟ್ಟಳು. ಅವನು ಹೊರಗೆ ಕಾಲಿಟ್ಟೂಡನೆಯೇ ಲಲಿತೆಯು ಬಾಗಿಲನ್ನು ಬಂಧಿಸಿಬಿಟ್ಟಳು. ಭಿಕ್ಷುಕನು,{{nop}}<noinclude></noinclude> pk9m34vdsnedsy2bd1ode0zly1cmmqd ಪುಟ:ನನ್ನ ಸಂಸಾರ.djvu/೭೦ 104 57353 322134 125967 2026-05-24T11:10:22Z Vikashegde 1258 /* Proofread */ 322134 proofread-page text/x-wiki <noinclude><pagequality level="3" user="Vikashegde" /></noinclude>ವಾಗಿ ಹೆದರಿಸಿದನು, ನಿಶ್ಯಬ್ಬ. ಅವನು ಮಿತಿ ಮೀರಿದ ಕೋಪದಿಂದ ಆಗುಡಿಸಲಿಗೆ ಬೆಂಕಿ ಹಚ್ಚುವೆನೆಂದೂ ಮಗುವನ್ನು ಸಂಹರಿಸಿ ಬಿಡುವೆನೆಂದೂ ಬೊಗಳಿದನು. ಆ ಕಟುಕನಿಗೆ ಆಗ ಕನಿಕರವೆಳ್ಳಷ್ಟೂ ಇರಲಿಲ್ಲ. ಆಹಾ! ಕಾಮಾಂಧರು ತಮ್ಮ ಕಾರ್ಯನಿರ್ವಾಹಕ್ಕೆ ಏನು ಬೇಕಾದರೂ ಮಾಡುವರಲ್ಲವೆ? ಏನಾದರೂ ಲಲಿತೆಯು ಮಾತನಾಡಲೇ ಇಲ್ಲ. ಆ ಕಟುಕನು ಬಹುಕೋಪದಿಂದ ಆಮಗುವಿನತಲೆಯನ್ನು ಕದಕ್ಕೆ ಹೊಡೆದನು. ಮಗುವು ಕಿಟ್ಟನೆ ಕಿರುಚತೊಡಗಿತು. ಆಮಗುವು ಅಳುವಿನಲ್ಲೂ ಮುದ್ದು ಮುದ್ದಾಗಿ ಅಮ್ಮ, ಅಮ್ಮ, ಎಂದು ಕೂಗುತ್ತಿತ್ತು. ಆದರೂ ಬಾಗಿಲು ತೆರೆಯಲ್ಪಡಲಿಲ್ಲ. ಲಲಿತೆಯು ಎಂತಹ ಕಠಿನ ಹೃದಯಳಿರಬಹುದು; ಸ್ತ್ರೀಯರು ಆವದುಃಖವನ್ನಾದರೂ ಸಹಿಸಬಲ್ಲರು. ತಮ್ಮ ಮಕ್ಕಳು ತಮ್ಮಿದಿರಿಗೆ ಆರ್ತನಾದ ಮಾಡುತ್ತಿದ್ದರೆ ನೋಡಿ ಸಹಿಸಲಾರರು. ಲಲಿತೆಯು ಮಗುವನ್ನು ಅವನ ಕೈಗೆ ಕೊಟ್ಟಾಗಲೇ ಯಮನ ವಶಮಾಡಿದಂತೆ ಭಾವಿಸಿದಳು. ಭಿಕ್ಷುಕನು ಕೊನೆಗೆ ಆ ಮಗುವನ್ನು ವೇಗವಾಗಿ ಬೀದಿಗೆ ಎಸೆದು ಆ ಮನೆಗೆ ಕನ್ನವನ್ನಿಕ್ಕಲು ಪ್ರಯತ್ನಿಸಿ ಒಂದು ಕಡೆ ಗೋಡೆಯನ್ನು ಹೊಡೆದು ಆ ರಂಧ್ರದಿಂದ ತನ್ನ ತಲೆಯನ್ನು ಒಳಕ್ಕೆ ನುಗ್ಗಿಸಿದನು. ಇದನ್ನು ಲಲಿತೆಯು ನೋಡಿ ತನ್ನ ಮನೆಯಲ್ಲಿದ್ದ ಮಚ್ಚು ಕತ್ತಿಯಿಂದ ಆ ಕಳ್ಳನ ತಲೆಗೆ ಬಲವಾಗಿ ಹೊಡೆದಳು. ಅವನ ತಲೆಯೊಡೆದು ರಕ್ತ ಸುರಿಯುತ್ತಿದ್ದಾಗಲೇ ಅವನ ಕಾಲನ್ನು ಒಂದು ಸರ್ಪವು ಕಚ್ಚಿತು. ಅರ್ಧ ಗಳಿಗೆಯೊಳಗಾಗಿ ಕಳ್ಳಭಿಕ್ಷುಕನು ಲೋಕಾಂತರವನ್ನೈದಿದನು. ಲಲಿತೆಯು ಬಾಗಿಲು ತೆರೆಯದೆ ಒಳಗೇ ಇದ್ದಳು. ಬೆಳಗಾಯಿತು. ಲಲಿತೆಯ ಗಂಡನು ಬಂದನು. ಗುಡಿಸಲಿಗೆ ಹತ್ತು ಮಾರು ದೂರದಲ್ಲಿ ಮಗುವು ಭೀಕರಾವಸ್ಥೆಯಲ್ಲಿ ಬಿದ್ದಿರುವುದನ್ನೂ ಗುಡಿಸಲಿನ ಹೊರಗೆ ಭಿಕ್ಷುಕನು ಸತ್ತಿರುವುದನ್ನೂ ನೋಡಿದನು. ಬಾಗಿಲು ತೆರೆಯಲ್ಪಟ್ಟಿರಲಿಲ್ಲ. ಕೂಗಿದರೂ ನಿರುತ್ತರ. ಕೂಡಲೆ ಹೊಸೂರಿನಿಂದ ಪೊಲೀಸಿನವರನ್ನು ಕರದುಕೊಂಡು ಬಂದು ಗುಡಿಸಲು ಬಾಗಿಲನ್ನೊಡೆಸಿ ಒಳಹೊಕ್ಕನು. ಲಲಿತೆಯು ಮೂರ್ಛಿತಳಾಗಿ ಬಿದ್ದಿದಾಳೆ. ಅವಳನ್ನು ಉಪಚರಿಸಿ ಮೇಲಕ್ಕೆಬ್ಬಿಸಿ ಜ್ಞಾನೋದಯವಾದಮೇಲೆ ಕೇಳಲು ನಡೆದ ವೃತ್ತಾಂತವು ತಿಳಿದುಬಂದಿತು. ಮಗುವನ್ನು ವೈದ್ಯರಿಗೆ ತೋರಿಸಲು ಸತ್ತಿರಲಿಲ್ಲವೆಂದು ತಿಳಿಯಿತು. ಮಗುವಿನ ಪ್ರಾಣವು ಉಳಿದುದಕ್ಕಾಗಿ ಎಲ್ಲರೂ ಸಂತೋಷಿಸಿದರು. ಲಲಿತೆಯ ಈ ಪಾತಿವ್ರತ್ಯ ರಕ್ಷಣೆಯ ವಿಚಾರವು ಊರಿಗೆಲ್ಲಾ ತಿಳಿದು ಜನರೆಲ್ಲರೂ ಆಕೆಯನ್ನು ಹೊಗಳಿದರು. {{rule|5em}}<noinclude></noinclude> 85oq77u163olv4og425spfcm327ssce ಪುಟ:ನನ್ನ ಸಂಸಾರ.djvu/೭೨ 104 57355 322057 160531 2026-05-23T18:49:17Z Vikashegde 1258 322057 proofread-page text/x-wiki <noinclude><pagequality level="3" user="1810164madhu.b" /></noinclude><center>PRINTED BY<br /> B. V. NARASIMHAIYENGAR<br /> AT THE ROYAL PRESS, MYSORE---1916. </center><noinclude></noinclude> 8kej0fvlcukd50apwiyrbdnrvhcfwk4 322130 322057 2026-05-24T10:52:55Z Vikashegde 1258 /* Validated */ 322130 proofread-page text/x-wiki <noinclude><pagequality level="4" user="Vikashegde" /></noinclude><div style="display: flex; flex-direction: column; justify-content: center; min-height: 80vh; text-align: center;"> <sup>PRINTED BY</sup><br /> B. V. NARASIMHAIYENGAR<br /> <sub>AT THE ROYAL PRESS, MYSORE-1916.</sub> </div><noinclude></noinclude> 6osag2g9zobcpa6a4nzgctr65m0n3ry ಪುಟ:ನನ್ನ ಸಂಸಾರ.djvu/೭೩ 104 57356 322058 293277 2026-05-23T18:52:54Z Vikashegde 1258 /* Validated */ 322058 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ಪೀಠಿಕೆ'''}} ಆರ್ಯಮಹಾಶಯರಿಗೊಂದು ವಿನಂತಿ : ಮಹಾಶಯರೇ? ನಮ್ಮ ಕರ್ನಾಟಕ ಭಾಷೆಯಲ್ಲಿ ಈಚಿಗೆ ಅಂದರೆ ಹತ್ತಿಪ್ಪತ್ತು ವರ್ಷಗಳಿಂದ ಅನೇಕವಿಧವಾದ ನಾವಲುಗಳೂ, ಕಥೆಗಳೂ, ಅನೇಕ ಮಹನೀಯರಿಂದ ಬರೆಯಲ್ಪಟ್ಟಿರುವುದು ಸಕಲರಿಗೂ ವೇದ್ಯವಾಗಿದೆ. ಆದರೆ ಆಂಗ್ಲೀಯಭಾಷೆಯಲ್ಲಿರುವಂತೆ ಕನ್ನಡದಲ್ಲಿ ಪತ್ತೆದಾರೀನಾವಲುಗಳು ಅತಿಯಾಗಿ ಇಲ್ಲವು. ಪತ್ತೇದಾರೀನಾವಲುಗಳು ಮನುಷ್ಯನ ಮನಸ್ಸನ್ನು ಆಹ್ವಾದಪಡಿಸಿ ಅವನನ್ನು ಯೋಚನೆಮಾಡುವ ಹಾಗೆ ಮಾಡುತ್ತವೆ. ಹೀಗೆ ಯೋಚನಾಶಕ್ತಿಯನ್ನು ಹೆಚ್ಚಿಸುವುದರಿಂದ ಮನುಷ್ಯನು ಅನೇಕ ವಿಷಯಗಳನ್ನು ಗ್ರಹಿಸಬಲ್ಲನು. ಮತ್ತು ಪೊಲೀಸ್ ಅಧಿಕಾರಿಗಳಿಗೆ ಅನೇಕವೇಳೆ ಸಹಾಯಕನಾಗಿಯೂ ಆಗಬಹುದು. ಈ ಅಭಿಪ್ರಾಯಗಳನ್ನಿಟ್ಟುಕೊಂಡೇ ನಾವು ಕೆಲವರು ಒಂದು ಸಂಘವನ್ನೇರ್ಪಡಿಸಿಕೊಂಡು ಪತ್ತೇದಾರಿ ನಾವಲುಗಳನ್ನು ಬರೆದು ಮಾಸಪತ್ರಿಕೆಗಳ ಮೂಲಕ ಪ್ರಚುರಪಡಿಸಿಯೂ ಕೈಲಾದಾಗ ಬಹಳ ಅಲ್ಪ ಬೆಲೆಗೆ --ಲಾಭಾಪೇಕ್ಷೆಯಿಲ್ಲದೆ-ಜನಗಳಿಗೆ ಕೊಡಬೇಕೆಂತಲೂ ಯೋಚಿಸಿರುವೆವು. ಆಗಲೇ ಈ ಸಂಘದವರು ಅನೇಕ ನಾವಲುಗಳನ್ನು ಬರೆದಿರುವರು. ಆದರೆ ದ್ರವ್ಯ ನಿಲ್ಲದೇ ಇರುವುದರಿಂದಲೂ, ಪ್ರೋತ್ಸಾಹ ಕಡಮೆಯಾಗಿರುವುದರಿಂದಲೂ, ಅವುಗಳು ಮೂಲೆಯಲ್ಲಿ ಬಿದ್ದಿವೆ. ಸಮಯ ಸಿಕ್ಕಿದಾಗೆಲ್ಲಾ ಅವುಗಳನ್ನು ಪ್ರಚುರಪಡಿಸುವೆವು. ತಿಳಿದವರು ತಪ್ಪುಗಳಿದ್ದರೆ ಮನ್ನಿಸಿ ನಮ್ಮನ್ನು ಪ್ರೋತ್ಸಾಹಿಸಬೇಕೆಂಬುದೇ ಪ್ರಾರ್ಥನೆ. ಈ ಪುಸ್ತಕವನ್ನು ಪ್ರಕಟಿಸಲು ಸಹಾಯಮಾಡಿದ ಕಾದಂಬರಿ ಸಂಗ್ರಹ ಮಾಸಪತ್ರಿಕಾ ಸಂಪಾದಕರಾದ ಮ|| ಸಿ. ವೆಂಕಟರಮಣ ಶಾಸ್ತ್ರಿಗಳಿಗೆ ನಾವು ನಿರಂತರವೂ ಕೃತಜ್ಞರಾಗಿರುತ್ತೇವೆ. {{Right|ಗ್ರಂಥಕರ್ತ.}}<noinclude></noinclude> qqppb9gq251e07xa905tj9musz3ip2z ಪುಟ:ನನ್ನ ಸಂಸಾರ.djvu/೭೭ 104 57360 322136 320012 2026-05-24T11:15:49Z Vikashegde 1258 /* Validated */ 322136 proofread-page text/x-wiki <noinclude><pagequality level="4" user="Vikashegde" />{{rh|center=ಮಧುಸೂದನ|left=|right=3}}</noinclude>ಹೋದಳು. ಈ ವೃತ್ತಾಂತವು ಕ್ಷಣಕಾಲದಲ್ಲಿ ಊರಲ್ಲೆಲ್ಲಾ ಹಬ್ಬ ಎಲ್ಲರೂ ಇದೇ ವಿಷಯವನ್ನೇ ಮಾತಾಡುತ್ತಿದ್ದರು. {{gap}}ಇಷ್ಟು ಗದ್ದಲ ನಡೆಯುತ್ತಿದ್ದಾಗ ಒಂಭತ್ತು ವರ್ಷ ವಯಸ್ಸಿನ ಮದುವಣ ಗಿತ್ತಿಯಾದ ಸರಳಬಾಲೆಯು ಏನುಮಾಡುತ್ತಿರಬಹುದು? ಬಲ್ಲಿರಾ? ಸುಶಿಕ್ಷಿತಳೂ ವಿವೇಕಿಯೂ ಆದ ಆ ಕನ್ಯೆಯು ಈ ಘಟನೆಯನ್ನು ನೋಡಿ ವ್ಯಸನಮಗ್ನಳಾಗಿ ಕೂಡಲೆ ದೇವರ ಮನೆಗೆ ಹೋಗಿ “ತನ್ನ ಗಂಡನಿಗೆ ಶುಭವಾಗಲೆಂದು” ಗೌರೀಪೂಜೆಯನ್ನು ಮಾಡತೊಡಗಿದಳು. ವಿವಾಹವು ಪೂರ್ಣವಾಗಿ ನಡೆಯದಿದ್ದರೂ ಮಧುಸೂದನನೇ ತನ್ನ ಯಾವಜ್ಜೀವವೂ ಪತಿಯಾಗಿರುವವನೆಂದು ಅವಳು ದೃಢನಿಶ್ಚಯ ಮಾಡಿ ಕೊಂಡು ಭಕ್ತಿಯಿಂದ ದೇವರನ್ನು ನುತಿಸತೊಡಗಿದಳು. {{gap}}ಸೋಮಸುಂದರನು ಈ ವೃತ್ತಾಂತವನ್ನು ಕೂಡಲೆ ಪೋಲಿಸಿನವರಿಗೆ ತಿಳಿಸಿದನು. ಅವರೂ ಹುಡುಕುವುದಕ್ಕೆ ಆರಂಭಿಸಿದರು. ಬಳಿಕ ಸೋಮಸುಂದರನು ತ್ರಿಯಂಬಕ ಶಾಸ್ತ್ರಿಗಳನ್ನು ಕುರಿತು ಮುಂದೇನು ಮಾಡಬೇಕೆಂದು ಕೇಳಲು ಆತನು ಸ್ವಾಮಿ! ಈಗ ನನಗೇನೂ ತೋರದು. ಮಾಂಗಲ್ಯಧಾರಣೆಯು ಆಗದಿದ್ದರೂ ವಿವಾಹವು ನಡೆಯಿತೆಂದೇ ನಾವು ಭಾವಿಸಬೇಕು. ನಾನು ನನ್ನ ಮಗಳನ್ನು ಇನ್ನೊಬ್ಬನಿಗೆ ಕೊಟ್ಟು ಆ ಹುಡುಗಿಯ ಸತೀತ್ವವನ್ನು ಹಾಳುಮಾಡಲಾರೆನೆನಲು ಸೋಮಸುಂದರನು, ಸ್ವಾಮಿ! ನಿಮ್ಮ ಮಗಳು ನನ್ನ ಸೊಸೆಯೇ ಸರಿ! ಆದರೆ ಆ ಕನ್ಯೆಯು ನನ್ನ ಮನೆಯಲ್ಲಿದ್ದರೆ ನನಗೆ ಆಗಾಗ್ಗೆ ಆ ಮಗುವಿನ ಮುಖವನ್ನು ನೋಡಿ ದುಃಖ ಬರುವುದರಿಂದ ನನ್ನ ಮಗನು ಸಿಕ್ಕುವವರಿಗೆ ಆ ಹುಡುಗಿಯು ನಿಮ್ಮ ಮನೆಯಲ್ಲೇ ಇರಲಿ. ನನ್ನ ಮಗನು ಸಿಕ್ಕಿದೊಡನೆ ವಿವಾಹ ಕಾರ್ಯಗಳನ್ನು ಮುಂಬರಿಸೋಣವೆಂದು ಹೇಳಲು ಇಬ್ಬರೂ ಸುಮ್ಮನಾದರು. {{center|'''ಎ ರ ಡ ನೆ ಯ ಅ ಧ್ಯಾ ಯ.'''}} {{rule|5em}} {{center|(ಭಾಸ್ಕರ)}} {{gap}}ಮೇಲೆಕಂಡ ವಿಷಯಗಳು ನಡೆದು ಹತ್ತುದಿನಗಳಾದವು. ಪೋಲೀಸ್ ಆಫೀಸರು ಬಂದು ವಿಷಯಗಳನ್ನೆಲ್ಲಾ ವಿಚಾರಿಸಿಕೊಂಡು ಹೋಗಿ ತಮ್ಮ ಕೈಲಾದ ಪ್ರಯತ್ನವನ್ನೆಲ್ಲಾ ಮಾಡಿ ಮಧುಸೂದನನನ್ನು ಹುಡುಕಿಸಿದರು. ಆದರೂ ಯಾವ ಪ್ರಯೋಜ{{nop}}<noinclude></noinclude> ekgpyj2g8adjq0gzujcxnpf30sqvd8f 322137 322136 2026-05-24T11:16:50Z Vikashegde 1258 322137 proofread-page text/x-wiki <noinclude><pagequality level="4" user="Vikashegde" />{{rh|center=ಮಧುಸೂದನ|left=|right=3}}</noinclude>ಹೋದಳು. ಈ ವೃತ್ತಾಂತವು ಕ್ಷಣಕಾಲದಲ್ಲಿ ಊರಲ್ಲೆಲ್ಲಾ ಹಬ್ಬ ಎಲ್ಲರೂ ಇದೇ ವಿಷಯವನ್ನೇ ಮಾತಾಡುತ್ತಿದ್ದರು. {{gap}}ಇಷ್ಟು ಗದ್ದಲ ನಡೆಯುತ್ತಿದ್ದಾಗ ಒಂಭತ್ತು ವರ್ಷ ವಯಸ್ಸಿನ ಮದುವಣ ಗಿತ್ತಿಯಾದ ಸರಳಬಾಲೆಯು ಏನುಮಾಡುತ್ತಿರಬಹುದು? ಬಲ್ಲಿರಾ? ಸುಶಿಕ್ಷಿತಳೂ ವಿವೇಕಿಯೂ ಆದ ಆ ಕನ್ಯೆಯು ಈ ಘಟನೆಯನ್ನು ನೋಡಿ ವ್ಯಸನಮಗ್ನಳಾಗಿ ಕೂಡಲೆ ದೇವರ ಮನೆಗೆ ಹೋಗಿ “ತನ್ನ ಗಂಡನಿಗೆ ಶುಭವಾಗಲೆಂದು” ಗೌರೀಪೂಜೆಯನ್ನು ಮಾಡತೊಡಗಿದಳು. ವಿವಾಹವು ಪೂರ್ಣವಾಗಿ ನಡೆಯದಿದ್ದರೂ ಮಧುಸೂದನನೇ ತನ್ನ ಯಾವಜ್ಜೀವವೂ ಪತಿಯಾಗಿರುವವನೆಂದು ಅವಳು ದೃಢನಿಶ್ಚಯ ಮಾಡಿ ಕೊಂಡು ಭಕ್ತಿಯಿಂದ ದೇವರನ್ನು ನುತಿಸತೊಡಗಿದಳು. {{gap}}ಸೋಮಸುಂದರನು ಈ ವೃತ್ತಾಂತವನ್ನು ಕೂಡಲೆ ಪೋಲಿಸಿನವರಿಗೆ ತಿಳಿಸಿದನು. ಅವರೂ ಹುಡುಕುವುದಕ್ಕೆ ಆರಂಭಿಸಿದರು. ಬಳಿಕ ಸೋಮಸುಂದರನು ತ್ರಿಯಂಬಕ ಶಾಸ್ತ್ರಿಗಳನ್ನು ಕುರಿತು ಮುಂದೇನು ಮಾಡಬೇಕೆಂದು ಕೇಳಲು ಆತನು ಸ್ವಾಮಿ! ಈಗ ನನಗೇನೂ ತೋರದು. ಮಾಂಗಲ್ಯಧಾರಣೆಯು ಆಗದಿದ್ದರೂ ವಿವಾಹವು ನಡೆಯಿತೆಂದೇ ನಾವು ಭಾವಿಸಬೇಕು. ನಾನು ನನ್ನ ಮಗಳನ್ನು ಇನ್ನೊಬ್ಬನಿಗೆ ಕೊಟ್ಟು ಆ ಹುಡುಗಿಯ ಸತೀತ್ವವನ್ನು ಹಾಳುಮಾಡಲಾರೆನೆನಲು ಸೋಮಸುಂದರನು, ಸ್ವಾಮಿ! ನಿಮ್ಮ ಮಗಳು ನನ್ನ ಸೊಸೆಯೇ ಸರಿ! ಆದರೆ ಆ ಕನ್ಯೆಯು ನನ್ನ ಮನೆಯಲ್ಲಿದ್ದರೆ ನನಗೆ ಆಗಾಗ್ಗೆ ಆ ಮಗುವಿನ ಮುಖವನ್ನು ನೋಡಿ ದುಃಖ ಬರುವುದರಿಂದ ನನ್ನ ಮಗನು ಸಿಕ್ಕುವವರಿಗೆ ಆ ಹುಡುಗಿಯು ನಿಮ್ಮ ಮನೆಯಲ್ಲೇ ಇರಲಿ. ನನ್ನ ಮಗನು ಸಿಕ್ಕಿದೊಡನೆ ವಿವಾಹ ಕಾರ್ಯಗಳನ್ನು ಮುಂಬರಿಸೋಣವೆಂದು ಹೇಳಲು ಇಬ್ಬರೂ ಸುಮ್ಮನಾದರು. {{center|'''ಎ ರ ಡ ನೆ ಯ ಅ ಧ್ಯಾ ಯ.'''}} {{rule|5em}} <sub>{{center|(ಭಾಸ್ಕರ)}}</sub> {{gap}}ಮೇಲೆಕಂಡ ವಿಷಯಗಳು ನಡೆದು ಹತ್ತುದಿನಗಳಾದವು. ಪೋಲೀಸ್ ಆಫೀಸರು ಬಂದು ವಿಷಯಗಳನ್ನೆಲ್ಲಾ ವಿಚಾರಿಸಿಕೊಂಡು ಹೋಗಿ ತಮ್ಮ ಕೈಲಾದ ಪ್ರಯತ್ನವನ್ನೆಲ್ಲಾ ಮಾಡಿ ಮಧುಸೂದನನನ್ನು ಹುಡುಕಿಸಿದರು. ಆದರೂ ಯಾವ ಪ್ರಯೋಜ{{nop}}<noinclude></noinclude> sa13pllyje0t54wf65qgtbapmndi29f ಪುಟ:ನನ್ನ ಸಂಸಾರ.djvu/೭೮ 104 57361 322139 297544 2026-05-24T11:21:35Z Vikashegde 1258 /* Validated */ 322139 proofread-page text/x-wiki <noinclude><pagequality level="4" user="Vikashegde" />{{rh|center=ಕಾದಂಬರೀ ಸಂಗ್ರಹ|left=4|right=}}</noinclude>ನವೂ ಆಗಲಿಲ್ಲ. ಬಹಳ ಕಾತರನಾದ ಸೋಮಸುಂದರನು ಪತ್ರಿಕೆಗಳಲ್ಲೇನಾದರೂ ತನ್ನ ಮಗನ ವಿಷಯವನ್ನು ತಿಳಿಯಬಹುದೆಂದು ಒಂದು ವಾರ ಪತ್ರಿಕೆಯನ್ನು ಓದುತ್ತಿದ್ದನು. ಅದರ ಒಂದು ಭಾಗದಲ್ಲಿ "ಘೋರವಾದ ಕೊಲೆಯೂ ಅದರ ಪಠ್ಯವಸಾನವೂ" ಎಂದು ಬರೆಯಲ್ಪಟ್ಟಿದ್ದ ಲೇಖನವನ್ನು ಓದತೊಡಗಿದನು. ಈಗ್ಗೆ ಸುಮಾರು ಹತ್ತು ದಿವಸಗಳ ಕೆಳಗೆ ರಾಣಿಗಂಜಿನಲ್ಲಿ ಒಂದು ಮನೆಯಲ್ಲಿ ಒಂದೇರಾತ್ರಿಯಲ್ಲಿ ಮೂರು ಜನಗಳು ಕೊಲ್ಲಲ್ಪಟ್ಟರು. ಆ ವಿಷಯದಲ್ಲಿ ಪೋಲೀಸಿನವರು ತಮ್ಮ ಸಾಮರ್ಥ್ಯವನ್ನೆಲ್ಲಾ ಉಪಯೋಗಿಸಿ ಕಂಡುಹಿಡಿಯಲು ಪ್ರಯತ್ನಪಟ್ಟರೂ ಯಾವ ಪ್ರಯೋಜನವನ್ನೂ ಹೊಂದದೇಹೋದರು. ಆಗ ಪೋಲೀಸ್ ಮುಖ್ಯಾಧಿಕಾರಿಯೇ ಬೊಂಬಾಯಿಯಲ್ಲಿದ್ದ ಪ್ರಸಿದ್ದ ಪತ್ತೇದಾರರಾದ ಭಾಸ್ಕರ ಎಂಬುವರನ್ನು ಕರೆತರಿಸಿ ಅವರಿಗೆ ಈ ವಿಷಯವನ್ನು ಒಪ್ಪಿಸಿದನು. ಅವರು ನಾಲ್ಕು ದಿವಸಗಳೊಳಗಾಗಿ ಕಷ್ಟಪಟ್ಟು ಕೊಲೆಪಾತಕನನ್ನು ಪತ್ತೆ ಮಾಡಿದರು. ಆ ಕೊಲೆಪಾತಕನು ಎಲ್ಲವನ್ನೂ ಒಪ್ಪಿಕೊಂಡು ಈ ದಿನ ಮಧ್ಯಾಹ್ನ ಯಾರಿಗೂ ಅರಿಯದ ರೀತಿ ತನ್ನನ್ನು ಕೂಡಿದ್ದ ಕೊಠಡಿಯ ಬಾಗಲಿನ ಕಂಬಗಳಿಗೆ ನೇಣುಹಾಕಿಕೊಂಡು ಸತ್ತನು. {{gap}}ಸೋಮಸುಂದರನು ಇದನ್ನೋದಿ ಸ್ವಲ್ಪ ಹೊತ್ತು ಏನೋ ಯೋಚಿಸಿ ತನ್ನ ಗುಮಾಸ್ತೆಯನ್ನು ಕರೆಸಿ ರಾಣೇಗಂಜಿನ ಪೋಲೀಸ್ ಅಧಿಕಾರಿಗೆ ತಕ್ಷಣವೇ ಭಾಸ್ಕರನ ಕಳುಹಿಸುವ ಹಾಗೆ ತಂತಿಯನ್ನು ಕೊಡುವಂತೆ ಆಜ್ಞಾಪಿಸಿದನು. {{gap}}ಮಾರನೇದಿನ ಒಂಭತ್ತು ಗಂಟೆಯ ಸಮಯದಲ್ಲಿ ಸುಮಾರು ಇಪ್ಪತ್ತೈದು ವರ್ಷ ಪ್ರಾಯದ ಮನುಷ್ಯನೊಬ್ಬನು ಬಂದು ಸೋಮಸುಂದರನನ್ನು ನೋಡಲಪೇಕ್ಷಿಸಿದನು. ಸೋಮಸುಂದರನು ಅವನನ್ನು ಒಳಕ್ಕೆ ಬರುವಹಾಗೆ ಹೇಳಿ ತನ್ನ ಬೈಠಕಖಾನೆಯಲ್ಲಿ ಕಾದಿದ್ದನು. ಬಂದ ಮನುಷ್ಯನು ಸೋಮಸುಂದರನಿಗೆ ವಂದಿಸಿ ಅಲ್ಲೇ ಇದ್ದ ಒಂದು ನೇತ್ರಾಸನದಮೇಲೆ ಕುಳಿತುಕೊಂಡನು. ಸೋಮಸುಂದರನು ಅವನೇ ಭಾಸ್ಕರನಿರಬಹುದೆಂದು ಯೋಚಿಸಿ ಸ್ವಾಮಿ ನೀವೇನೋ ಭಾಸ್ಕರರೆಂಬುವರು ಎಂದು ಕೇಳಿದನು. {{gap}}ಹೊಸಮನುಷ್ಯ— ಹೌದು. ನಿಮ್ಮ ತಂತಿಯನ್ನು ನೋಡಿ ನನ್ನನ್ನು ಪೋಲೀಸ್ ಸೂಪರಿಂಟೆಂಡೆಂಟರು ಕಳುಹಿಸಿರುವರು. ನನ್ನನ್ನು ಕರೆಯ ಕಳುಹಿಸಿದ ಕಾರಣವೇನು? {{gap}}ಸೋಮಸುಂದರ:— ಸ್ವಾಮಿ! ನಾನು ಏನು ಹೇಳು ಎಂದು ಕಣ್ಣೀರು ಸುರಿಸುತ್ತಾ ತನ್ನ ಮಗನು ಕಾಣದೇಹೋದ ವಿಷಯವನ್ನೆಲ್ಲಾ ಕ್ರಮವಾಗಿ ತಿಳಿಸಿದನು.<noinclude></noinclude> sjv7b9kspwrvyeigqswa5l8z4z0u5r7 ಪುಟ:ನನ್ನ ಸಂಸಾರ.djvu/೭೯ 104 57362 322141 321022 2026-05-24T11:27:06Z Vikashegde 1258 /* Validated */ 322141 proofread-page text/x-wiki <noinclude><pagequality level="4" user="Shreelatha.Halemane" />{{rh|center=ಮಧುಸೂದನ|left=|right=5}}</noinclude>{{gap}} ಭಾಸ್ಕರನು ಸ್ವಲ್ಪಹೊತ್ತು ಹಾಗೇ ಯೋಚಿಸಿ ಮಧ್ಯಾಹ್ನದಮೇಲೆ ಎಲ್ಲಾ ವಿಷಯಗಳನ್ನೂ ಪರೀಕ್ಷಿಸುವುದಾಗಿಯೂ ಈಗ ಹೊತ್ತಾದ್ದರಿಂದ ಭೋಜನಾದಿಗಳನ್ನು ಮುಗಿಸಿಕೊಳ್ಳುವುದು ಒಳ್ಳೆಯದೆಂದೂ ತಿಳಿಸಿದನು. ಸೋಮಸುಂದರನೂ ಒಪ್ಪಿ ಅವನನ್ನು ಸ್ನಾನಾದಿಗಳನ್ನು ಮಾಡುವಂತೆ ಹೇಳಿ ಹೊರಟುಹೋದನು. {{center|'''ಮೂರನೆಯ ಅಧ್ಯಾಯ.'''}} {{rule|5em}} <sub>{{center|(ಭಾಸ್ಕರನು ಏನು ಯೋಚಿಸಿದನು?)}}</sub> {{gap}}ಮಧ್ಯಾಹ್ನ ಸುಮಾರು ಎರಡು ಗಂಟೆಯ ಹೊತ್ತಿಗೆ ಸೋಮಸುಂದರನೂ ಭಾಸ್ಕರನೂ ಮಧುಸೂದನನ ಕೊಠಡಿಗೆ ಬಂದು ಸೇರಿದರು. ಭಾಸ್ಕರನು ಸೋಮಸುಂದರನನ್ನು ಕುರಿತು "ನೀವು ಈ ಕೊಠಡಿಯ ಸಮೀಪಕ್ಕೆ ಬಂದಾಗ ಒಳಗೆ ಅಗಣಿ ಹಾಕಿತ್ತೆಂದು ಹೇಳಿದಿರಲ್ಲವೆ? ಹಾಗಾದರೆ ಒಳಗಿನಿಂದ ಹೋಗಲು ಬೇರೇ ಮಾರ್ಗವಾವುದಾದರೂ ಇರುವುದೊ? ಇಲ್ಲದಿದ್ದರೆ ಹಾಗೆ ಒಳಗಿನಿಂದ ಅಗಣಿ ಹಾಕಿರಲು ಅದು ಹೇಗೆ ಸಾಧ್ಯವು? ಆದ್ದರಿಂದ ನಿಮಗೆ ತಿಳಿಯದ ಯಾವದೋ ಒಂದು ಮಾರ್ಗವು ಇರಲೇಬೇಕು" ಎಂಬದಾಗಿ ಹೇಳಿದನು. {{gap}}ಸೋಮಸುಂದರ: ಸ್ವಾಮಿಾ, ನನಗೆ ತಿಳಿದಮಟ್ಟಿಗೆ ಇಲ್ಲಿ ಯಾವ ಗುಪ್ತಮಾರ್ಗವೂ ಇಲ್ಲವು. ಇದೇ ಪ್ರಶ್ನೆಯನ್ನು ಪೋಲೀಸ್ ಮುಖ್ಯಾಧಿಕಾರಿಯೂ ನನ್ನನ್ನು ಕೇಳಿದನು. ಈ ಮನೆಯು ನನ್ನ ಪಿತ್ರಾರ್ಜಿತವಾದುದು. ಇದರಲ್ಲಿ ಯಾವ ಗೂಢ ಮಾರ್ಗವಿದ್ದರೂ ನನಗೆ ತಿಳಿದಿರಬೇಕು. ಆದರೂ ನನ್ನ ಪುತ್ರನನ್ನು ಹ್ಯಾಗೆ ಎತ್ತಿ ಕೊಂಡು ಹೋಗಿರಬೇಕೆಂಬುವುದೂ ಒಳಗೆ ಅಗಣೀಹಾಕಿದ್ರೂ ನನಗೆ ತಿಳಿಯಲಸಾಧ್ಯವಾದ ಒಗಟಾಗಿದೆ. {{gap}}ಭಾಸ್ಕರನು ತನ್ನ ಪತ್ತೇದಾರೀ ಮಾರ್ಗದ ಹುಡುಕುವಿಕೆಯನ್ನು ಪ್ರಾರಂಭಿಸಿದನು. ಅವನು ಸೋಮಸುಂದರನನ್ನು ಕುರಿತು ಅಲ್ಲಿ ಎಲ್ಲಾ ಸಾಮಾನುಗಳೂ ಮಧುಸೂದನನು ಕಾಣದೇ ಹೋದ ದಿನ ಇದ್ದ ಹಾಗೆಯೇ ಇದೆಯೋ ಎಂದು ಕೇಳಲು, ಅವನು ಪೊಲೀಸಿನವರು ತಿರಿಗಿ ಹಾಕಿದ ಪದಾರ್ಥಗಳು ವಿನಹಾ ಉಳಿದವುಗಳೆಲ್ಲಾ ಹಾಗೆಯೇ ಇರುವುದೆಂದು ತಿಳಿಸಿದನು. ಭಾಸ್ಕರನು ಹಾಗೇ ಸ್ವಲ್ಪ ಹೊತ್ತು ಆ ಕೊಠಡಿಯ ಆಕಾರ ಮತ್ತು ಅದರ ರಚನೆ ಇವುಗಳನ್ನು ನೋಡುತ್ತಿದ್ದನು. ಅವನಿಗೆ ಯಾವ ವಿಧ{{nop}}<noinclude></noinclude> 067qp2m1h91j5olofi52t099v5l8evh ಪುಟ:ನನ್ನ ಸಂಸಾರ.djvu/೮೦ 104 57363 322142 321023 2026-05-24T11:28:53Z Vikashegde 1258 /* Validated */ 322142 proofread-page text/x-wiki <noinclude><pagequality level="4" user="Shreelatha.Halemane" />{{rh|center=ಕಾದಂಬರೀ ಸಂಗ್ರಹ|left=6|right=}}</noinclude>ವಾದ ಸುಳಿವಾದರೂ ಸಿಗಲಿಲ್ಲವು. ಕೊಠಡಿಯ ಒಂದು ಭಾಗದಲ್ಲಿ ಒಂದು ದೊಡ್ಡ ಮಂಚವು ಹಾಕಲ್ಪಟ್ಟಿತ್ತು. ಭಾಸ್ಕರನ ಸೂಕ್ಷ್ಮವಾದ ಕಣ್ಣಿಗೆ ಆ ಮಂಚದ ಒಂದು ಭಾಗದಲ್ಲಿ ಸ್ವಲ್ಪ ಆರಿಶಿನವು ಕಾಣಬಂದಿತು. ಭಾಸ್ಕರನು ಅದನ್ನು ತನ್ನ ಬುಕ್ಕಿನಲ್ಲಿ ಬರೆದುಕೊಂಡನು. ಕೊಠಡಿಗೆಲ್ಲಾ ಮೆತ್ತನಾದ ಜಮಖಾನವನ್ನು ಹಾಸಿದ್ದರು. ಅದರ ಮೇಲೇನಾದರೂ ಕಾಲಿನ ಗುರುತುಗಳು ಕಾಣುವುವೋ ಎಂದು ಬಹಳ ಹೊತ್ತು ದೃಷ್ಟಿಸಿ ನೋಡಿದನು. ಏನೂ ಪ್ರಯೋಜನ ಕಂಡು ಬರಲಿಲ್ಲ. ಹಾಗೇ ಮಲಗಿಕ್ಕೊಂಡು ಪರೀಕ್ಷಿಸುತ್ತಾ ಬಂದನು. ಮಂಚದ ಸವಿಾಪದಲ್ಲಿ ಸ್ವಲ್ಪ ಮಂಕು ಮಂಕಾಗಿ ಎರಡು ಮೂರು ಬೂಟ್ಸ್ ಕಾಲಿನ ಗುರುತುಗಳು ಮಂಚದ ಕಡೆಗೆ ತೋರಿಸುತ್ತಿದ್ದವು. ಅದನ್ನೂ ತನ್ನ ಬುಕ್ಕಿನಲ್ಲಿ ಬರೆದುಕೊಂಡನು. ಅನಂತರ ಅವನಿಗೆ ಯಾವ ಸುಳಿವಾದರೂ ಶಿಗಲಿಲ್ಲವು. ಇನ್ನು ಹುಡುಕಿ ಪ್ರಯೋಜನವಿಲ್ಲವೆಂದು ತೀರ್ಮಾನಿಸಿ ಸೋಮಸುಂದರನನ್ನೂ ಸಹಾ ಹಿಂದಕ್ಕೆ ಕರೆದುಕೊಂಡು ಬಂದು ಮಾರನೇ ದಿವಸ ಬೆಳಿಗ್ಗೆ ಒಂದು ಮಾತನಾಡುವುದಾಗಿ ಹೇಳಿ ಹೊರಟು ತನಗಾಗಿ ಕೊಟ್ಟಿದ್ದ ಕೊಠಡಿಯನ್ನು ಸೇರಿ ಅಲ್ಲಿ ಒಂದು ವೇತ್ರಾಸನದ ಮೇಲೆ ಕುಳಿತುಕೊಂಡು ಯೋಚಿಸಲಾರಂಭಿಸಿದನು. {{gap}}ಭಾಸ್ಕರನು ಯೋಚನೆಯಲ್ಲಿಯೇ ರಾತ್ರಿ ಎಂಟು ಗಂಟೆಗಳವರಿಗೆ ಕುಳಿತಿದ್ದನು. ಆಗ ಹಠಾತ್ತಾಗಿ ಅವನು ಆಹಾ ! ಗೊತ್ತಾಯಿತು. ನಾನು ಈಗ ಯೋಚಿಸಿದ್ದೇ ಸರಿ ಯಾಗಿರಬೇಕು. ಇರಲಿ. ಎಲ್ಲವನ್ನೂ ವಿಚಾರಿಸಿದರೆ ತಿಳಿಯುವುದು ಎಂದು ಹೇಳಿ ಕೊಂಡು ಊಟಕ್ಕೆ ಹೊತ್ತಾದ್ದರಿಂದ ಎದ್ದು ಊಟಮಾಡಿ ಪುನಃ ಬಂದು ಕುಳಿತನು. ಆಗ ಅವನು ಸ್ವಲ್ಪ ಹೊತ್ತು ಯೋಚಿಸುತ್ತಿದ್ದು ತನ್ನ ಪುಸ್ತಕದಲ್ಲಿ ಏನನ್ನೋ ಬರೆದುಕೊಂಡು ಮಲಗಿ ನಿದ್ರೆಹೋದನು. {{gap}}ಮಾರನೇ ದಿನ ಬಳಿಗ್ಗೆ ಒಂಭತ್ತು ಗಂಟೆಯ ಸುಮಾರಿಗೆ ಭಾಸ್ಕರನು ಸೋಮಸುಂದರನ ಕೊಠಡಿಗೆ ಹೋಗಿ ಅಲ್ಲಿದ್ದ ವೇತ್ರಾಸನದ ಮೇಲೆ ಕುಳಿತುಕೊಂಡು ಅವನು ಕೊಟ್ಟ ಕಾಫಿಯನ್ನು ಕುಡಿದನು. {{gap}}ಭಾಸ್ಕರ:-ಸ್ವಾಮಿಾ, ನಿಮ್ಮ ಮನೆಯಲ್ಲಿ ಬಹಳ ಹಳೆಯ ಸೇವಕರಾರಾದರೂ ಇರುವರೋ ? {{gap}}ಸೋಮಸುಂದರ:-ಆಹಾ! ಇರುವರು, ನಮ್ಮ ತಾತನ ಕಾಲದಿಂದಲೂ ಬಂದ ಮುದುಕನಾದ ಕೃಷ್ಣನೆಂಬುವನೊಬ್ಬನೂ ನನ್ನ ತಂದೆಯ ಕಾಲದಿಂದ ಬಂದ ಹೀರಣ್ಣನೆಂಬುವನೂ ಇರುವರು.<noinclude></noinclude> ntqqg5375i59wz2sspsr6y8l4s140wq ಪುಟ:ನನ್ನ ಸಂಸಾರ.djvu/೯೪ 104 57377 322059 219342 2026-05-23T18:57:28Z Vikashegde 1258 /* Validated */ 322059 proofread-page text/x-wiki <noinclude><pagequality level="4" user="Vikashegde" />{{rh|center=ಕಾದಂಬರೀ ಸಂಗ್ರಹ|left=20|right=}}</noinclude>ಗೊಡ್ಡು ಶಾಸ್ತ್ರದಂತೆ ಬಹಿಷ್ಕಾರಕ್ಕೆ ಯೋಗ್ಯಳೆಂದೂ ಆದರೆ ತಾವೆಲ್ಲರೂ ಔನ್ನತ್ಯವನ್ನು (Reform) ಪಡೆದವರಾದ್ದರಿಂದ ಹುಡುಗಿಯು ಋತುವಾದರೂ ಲಕ್ಷ್ಯಮಾಡುವುದಿಲ್ಲವೆಂತಲೂ ತಿಳಿಸಿದರು. {{gap}}ಆಗ ಮುಖ್ಯಸ್ಥನು "ಸರಿ, ನೀವು ಹೇಳಿದ ರೀತಿಯೇ ನಡೆದುಕೊಳ್ಳೋಣ" ಎಂದು ತನ್ನ ಬಳಿ ಕುಳಿತಿದ್ದವನ ಮುಖವನ್ನು ನೋಡಿಬಿಟ್ಟು ಪುನಹಾ ಹೇಳತೊಡಗಿದನು. "ಸಹೋದರರೇ, ನಾನು ಹೇಳಿದ ರೀತಿ ಒಂದು ವಿವಾಹವು ನಿಂತುಹೋಯಿತು. ವರನ ತಂದೆಯೂ ವಧುವಿನ ತಂದೆಯೂ ವಿವಾಹವು ಸಂಪೂರ್ಣವಾಗಿ ನೆರವೇರಿದ ಹಾಗೆಯೇ ತೀರ್ಮಾನಿಸಿರುತ್ತಾರೆ. ನಿಮ್ಮ ಅಭಿಪ್ರಾಯವನ್ನು ವರನ ತಂದೆಗೆ ತಿಳಿಯಪಡಿಸಬೇಕು. ನನ್ನ ಪುತ್ರಿಯು ಋತುಮತಿಯಾದವಳು. ಅವಳನ್ನು ಇವರಿಗೆ ಕೊಡುತೇನೆ, ನೀವೆಲ್ಲರೂ ಬಂದು ಈ ಕೂಟವನ್ನು ಸಾಂಗವಾಗಿ ನೆರವೇರುವ ಹಾಗೆ ಮಾಡಿದಕ್ಕೆ ನಿಮ್ಮನ್ನೆಲ್ಲಾ ವಂದಿಸುತ್ತೇನೆ. ಈ ಹೊಸ ಮೆಂಬರಿನ ವಿಷಯವಾಗಿ ಜಯವನ್ನು ಮಾಡಿ ಅವನ ಆರೋಗ್ಯಲಾಭಕ್ಕಾಗಿ ಎಲ್ಲರೂ ಮದ್ಯವನ್ನು ಕುಡಿಯೋಣ. {{gap}}ಕ್ಷಣಮಾತ್ರದಲ್ಲೇ ಎಲ್ಲರ ಕೈಗೂ ಮದ್ಯ ತುಂಬಿದ ಬಟ್ಟಲುಗಳು ಬಂದವು. ಎಲ್ಲರೂ ಜಯನಾದವನ್ನು ಮಾಡುತ್ತಾ ಮದ್ಯವನ್ನು ಪಾನಮಾಡಿದರು. ಅಗ್ರಾಸನಾಧಿಪತಿಯು ಎದ್ದು ಎಲ್ಲರಿಗೂ ಆರೋಗ್ಯವೂ ಲಾಭವೂ ಉಂಟಾಗಲೆಂದೂ ಎಲ್ಲರೂ ಜಾಗರೂಕರಾಗಿರಬೇಕೆಂದೂ ಹೇಳಿ ಸಭೆಯನ್ನು ಮುಗಿಸಿದನು. ಎಲ್ಲರೂ ಕೈ ಚಪ್ಪಾಳೆ ತಟ್ಟುತ್ತ ವ್ಯಸನಾಕ್ರಾಂತನಾದ ಹೊಸ ಮೆಂಬರನ ಕೈಹಿಡಿದು ಆಡಿಸುತ್ತಾ ಎಂ (M) ಸಂಘದ ಅಧಿಕಾರಿಯಿಂದ ಅಪ್ಪಣೆಯನ್ನು ಪಡೆದು ಒಬ್ಬೊಬ್ಬರಾಗಿ ಹೊರಕ್ಕೆ ಹೊರಟು ಬಂದರು. ಸ್ವಲ್ಪಕಾಲದಲ್ಲಿ ಆ ಸೋಮಾರಿಗಳ ಗುಹೆಯಲ್ಲಿ ಐದಾರು ಜನಗಳು ವಿನಹಾ ಮತ್ತಾರೂ ಇಲ್ಲದ ಹಾಗಾಯಿತು. {{rule|10em}} {{center='''ಆ ರ ನೇ ಅ ಧ್ಯಾ ಯ'''}} {{rule|3em}} {{center=(ಏಳುಬಣ್ಣದ ಕರವಸ್ತ್ರ.)}} {{gap}}ಭಾಸ್ಕರನು ಕಲ್ಕತ್ತಾ ನಗರವನ್ನು ತಲಪಿ ಗೋವಿಂದನ ಮನೆಯನ್ನು ತಲಪಿದನೆಂದು ಹಿಂದೆಯೇ ತಿಳಿಸಿದ್ದೇವಷ್ಟೆ. ಅಲ್ಲಿ ಅವನು ಗೋವಿಂದನಿಗೆ ಎಲ್ಲಾ ವಿಷಯಗಳನ್ನೂ ತಿಳಿಸಿ ತನ್ನನ್ನು ಇನ್ನು ಮುಂದೆ ಸತ್ಯಚಂದನೆಂದು ಕರೆಯಬೇಕೆಂದು ಹೇಳಿದನು.{{nop}}<noinclude></noinclude> al4cx3kgw54aee9mlo1brsfqdstmm9v 322060 322059 2026-05-23T18:57:59Z Vikashegde 1258 322060 proofread-page text/x-wiki <noinclude><pagequality level="4" user="Vikashegde" />{{rh|center=ಕಾದಂಬರೀ ಸಂಗ್ರಹ|left=20|right=}}</noinclude>ಗೊಡ್ಡು ಶಾಸ್ತ್ರದಂತೆ ಬಹಿಷ್ಕಾರಕ್ಕೆ ಯೋಗ್ಯಳೆಂದೂ ಆದರೆ ತಾವೆಲ್ಲರೂ ಔನ್ನತ್ಯವನ್ನು (Reform) ಪಡೆದವರಾದ್ದರಿಂದ ಹುಡುಗಿಯು ಋತುವಾದರೂ ಲಕ್ಷ್ಯಮಾಡುವುದಿಲ್ಲವೆಂತಲೂ ತಿಳಿಸಿದರು. {{gap}}ಆಗ ಮುಖ್ಯಸ್ಥನು "ಸರಿ, ನೀವು ಹೇಳಿದ ರೀತಿಯೇ ನಡೆದುಕೊಳ್ಳೋಣ" ಎಂದು ತನ್ನ ಬಳಿ ಕುಳಿತಿದ್ದವನ ಮುಖವನ್ನು ನೋಡಿಬಿಟ್ಟು ಪುನಹಾ ಹೇಳತೊಡಗಿದನು. "ಸಹೋದರರೇ, ನಾನು ಹೇಳಿದ ರೀತಿ ಒಂದು ವಿವಾಹವು ನಿಂತುಹೋಯಿತು. ವರನ ತಂದೆಯೂ ವಧುವಿನ ತಂದೆಯೂ ವಿವಾಹವು ಸಂಪೂರ್ಣವಾಗಿ ನೆರವೇರಿದ ಹಾಗೆಯೇ ತೀರ್ಮಾನಿಸಿರುತ್ತಾರೆ. ನಿಮ್ಮ ಅಭಿಪ್ರಾಯವನ್ನು ವರನ ತಂದೆಗೆ ತಿಳಿಯಪಡಿಸಬೇಕು. ನನ್ನ ಪುತ್ರಿಯು ಋತುಮತಿಯಾದವಳು. ಅವಳನ್ನು ಇವರಿಗೆ ಕೊಡುತೇನೆ, ನೀವೆಲ್ಲರೂ ಬಂದು ಈ ಕೂಟವನ್ನು ಸಾಂಗವಾಗಿ ನೆರವೇರುವ ಹಾಗೆ ಮಾಡಿದಕ್ಕೆ ನಿಮ್ಮನ್ನೆಲ್ಲಾ ವಂದಿಸುತ್ತೇನೆ. ಈ ಹೊಸ ಮೆಂಬರಿನ ವಿಷಯವಾಗಿ ಜಯವನ್ನು ಮಾಡಿ ಅವನ ಆರೋಗ್ಯಲಾಭಕ್ಕಾಗಿ ಎಲ್ಲರೂ ಮದ್ಯವನ್ನು ಕುಡಿಯೋಣ. {{gap}}ಕ್ಷಣಮಾತ್ರದಲ್ಲೇ ಎಲ್ಲರ ಕೈಗೂ ಮದ್ಯ ತುಂಬಿದ ಬಟ್ಟಲುಗಳು ಬಂದವು. ಎಲ್ಲರೂ ಜಯನಾದವನ್ನು ಮಾಡುತ್ತಾ ಮದ್ಯವನ್ನು ಪಾನಮಾಡಿದರು. ಅಗ್ರಾಸನಾಧಿಪತಿಯು ಎದ್ದು ಎಲ್ಲರಿಗೂ ಆರೋಗ್ಯವೂ ಲಾಭವೂ ಉಂಟಾಗಲೆಂದೂ ಎಲ್ಲರೂ ಜಾಗರೂಕರಾಗಿರಬೇಕೆಂದೂ ಹೇಳಿ ಸಭೆಯನ್ನು ಮುಗಿಸಿದನು. ಎಲ್ಲರೂ ಕೈ ಚಪ್ಪಾಳೆ ತಟ್ಟುತ್ತ ವ್ಯಸನಾಕ್ರಾಂತನಾದ ಹೊಸ ಮೆಂಬರನ ಕೈಹಿಡಿದು ಆಡಿಸುತ್ತಾ ಎಂ (M) ಸಂಘದ ಅಧಿಕಾರಿಯಿಂದ ಅಪ್ಪಣೆಯನ್ನು ಪಡೆದು ಒಬ್ಬೊಬ್ಬರಾಗಿ ಹೊರಕ್ಕೆ ಹೊರಟು ಬಂದರು. ಸ್ವಲ್ಪಕಾಲದಲ್ಲಿ ಆ ಸೋಮಾರಿಗಳ ಗುಹೆಯಲ್ಲಿ ಐದಾರು ಜನಗಳು ವಿನಹಾ ಮತ್ತಾರೂ ಇಲ್ಲದ ಹಾಗಾಯಿತು. {{rule|10em}} {{center|'''ಆ ರ ನೇ ಅ ಧ್ಯಾ ಯ'''}} {{rule|3em}} {{center|(ಏಳುಬಣ್ಣದ ಕರವಸ್ತ್ರ.)}} {{gap}}ಭಾಸ್ಕರನು ಕಲ್ಕತ್ತಾ ನಗರವನ್ನು ತಲಪಿ ಗೋವಿಂದನ ಮನೆಯನ್ನು ತಲಪಿದನೆಂದು ಹಿಂದೆಯೇ ತಿಳಿಸಿದ್ದೇವಷ್ಟೆ. ಅಲ್ಲಿ ಅವನು ಗೋವಿಂದನಿಗೆ ಎಲ್ಲಾ ವಿಷಯಗಳನ್ನೂ ತಿಳಿಸಿ ತನ್ನನ್ನು ಇನ್ನು ಮುಂದೆ ಸತ್ಯಚಂದನೆಂದು ಕರೆಯಬೇಕೆಂದು ಹೇಳಿದನು.{{nop}}<noinclude></noinclude> arcctqcb7aqlw8hirdxfbxtn3vufl10 ಪುಟ:ನನ್ನ ಸಂಸಾರ.djvu/೧೧೬ 104 57399 322061 321961 2026-05-24T03:11:12Z Shreelatha.Halemane 7642 /* Validated */ 322061 proofread-page text/x-wiki <noinclude><pagequality level="4" user="Shreelatha.Halemane" />{{rh|center=ಕಾದಂಬರೀ ಸಂಗ್ರಹ|left=40|right=}}</noinclude>ವಿಲ್ಲವೆಂದು ಕಾಣುತ್ತೆ. ಇನ್ನು ನೀವು ಹುಡುಕಬಹುದು, ನಾನು ತಮ್ಮ ಸಂಗಡಲೇ ಬರಲೋ, ಇಲ್ಲ ಹೊರಕ್ಕೆ ಹೋಗಲೋ ? {{gap}}ಮೋಸೆಸ್ಸನು ವಿಶ್ವನಾಥನನ್ನೂ ಸಂಗಡಲೇ ಬರುವಂತೆ ಹೇಳಿ ತನ್ನ ಸಂಗಡ ಬಂದಿದ್ದ ಪೋಲೀಸ್ ಸೇವಕನನ್ನು ತನ್ನ ರಿವಾಲ್ವರುಗಳನ್ನು ಕೈಲಿ ಹಿಡಿದುಕೊಂಡು ಬಾಗಿಲಲ್ಲಿ ಕಾದಿರಬೇಕೆಂದು ಅಪ್ಪಣೆಯನ್ನು ಮಾಡಿ ತಾನೂ ತನ್ನ ರಿವಾಲ್ವರುಗಳನ್ನು ಕೈಯಲ್ಲಿಟ್ಟುಕೊಂಡು ಒಂದೊಂದು ಕೊಠಡಿಗಳನ್ನಾಗಿ ಪರೀಕ್ಷಿಸುತ್ತಾ ಹೊರಟನು. ಅವನು ನೋಡಿದ ಸ್ಥಳದಲ್ಲೆಲ್ಲಾ ಒಬ್ಬ ಸಭ್ಯರು ವಾಸಮಾಡುವುದಕ್ಕೆ ಬೇಕಾದ ಸಾಮಗ್ರಿಗಳಿದ್ದಿತೇ ವಿನಹಾ ಮತ್ತೇನೂ ಇರಲಿಲ್ಲವು. ಮೋಸೆಸ್ಸನು ತನ್ನನ್ನು ತನ್ನ ಶತ್ರುವು ಸೋಲಿಸಿದನೆಂದು ಯೋಚಿಸುತ್ತಾ ಬರುತ್ತಿರಲು ಒಂದು ಕೊಠಡಿಯಲ್ಲಿ ನೆಲಕ್ಕೆ ಜಮಖಾನವನ್ನು ಹಾಸಿರುವುದನ್ನು ನೋಡಿ ಅದನ್ನು ತೆಗೆದು ನೋಡಲು ಒಂದು ಮೊಳೆಯು ಕಾಣಿಸಿತು. ಅದನ್ನು ಹಿಡಿದು ಹಿಂದಕ್ಕೂ ಮುಂದಕ್ಕೂ, ಕೆಳಕ್ಕೂ ಮೇಲಕ್ಕೂ ಆಡಿಸಿದರೂ ಏನೂ ಪ್ರಯೋಜನವಿಲ್ಲದಿರುವುದನ್ನು ನೋಡಿ ಅದರಲ್ಲೇನೂ ಇಲ್ಲವೆಂದು ತಿಳಿದು ಅದನ್ನು ಬಿಟ್ಟು ಮುಂದಕ್ಕೆ ಹೊರಟನು. ಕೊನೆಗೂ ಅವನಿಗೆ ಸಂಶಯಾಸ್ಪದವಾದ ಪದಾರ್ಥವೊಂದೂ ಸಿಗಲಿಲ್ಲ. ವಿಶ್ವನಾಥನು ನಗುತ್ತಾ “ಸ್ವಾಮಿ! ಮತ್ತೊಂದುಸಲ ಬೇಕಾದರೂ ಹುಡುಕಿರಿ” ಎಂದನು. {{gap}}ಮನಸ್ಸಿನಲ್ಲಿ ಉಕ್ಕಿ ಬರುತ್ತಿದ್ದ ಕೋಪವನ್ನು ತೋರ್ಪಡಿಸದೆ, ಮೋಸೆಸ್ಸನು ವಿಶ್ವನಾಥನನ್ನು ಕುರಿತು "ಅಯ್ಯಾ, ನೀನು ಈ ದಿವಸ ನನ್ನನ್ನು ಸೋಲಿಸಿರುವಿ, ಆದರೆ ಒಂದು ಕುರಿಯು ಒಂದುಸಲ ಬಿದ್ದ ಹಳ್ಳಕ್ಕೆ ಮತ್ತೊಂದುಸಲ ಬೀಳುವುದಿಲ್ಲವು. ನೀನು ನನ್ನನ್ನು ಜಯಿಸಿದೆನೆಂದು ಸಂತೋಷಪಡದಿರು. ಅಲ್ಪಕಾಲದಲ್ಲೇ ನಿನ್ನನ್ನು ಪೋಲೀಸಿಗೆ ಹಿಡಿದುಕೊಡುವೆನು, ನಿನ್ನ ವಿಷಯವೆಲ್ಲಾ ನನಗೆ ತಿಳದಿದೆ.” ಎಂದು ಹೇಳಿ ತನ್ನ ಸೇವಕನನ್ನೂ ಕರೆದುಕೊಂಡು ಹೊರಟನು. {{gap}}ವಿಶ್ವನಾಥನು ಮೋಸೆಸ್ಸನು ಹೊರಟುಹೋದ ಕೂಡಲೇ ಗುಪ್ತಗೃಹವನ್ನು ಹೊಕ್ಕು ಅಲ್ಲಿದ್ದವರಿಗೆಲ್ಲಾ ಮೋಸೆಸ್ಸನ ವಿಷಯವನ್ನು ತಿಳಿಸಿ ಮದುವೆಯು ಇನ್ನು ಮೂರು ದಿವಸಗಳಲ್ಲಿ ಅದೇ ಮನೆಯಲ್ಲಿ ನಡೆಯುವುದೆಂದು ಹೇಳಿ ಪುನಃ ಮೇಲಕ್ಕೆ ಹೊರಟುಹೋದನು. ಭಾಸ್ಕರನು ಅವನು ಹೋಗುವುದನ್ನೇ ನೋಡಿಕೊಂಡಿದ್ದು ತಾನೂ ಮೇಲಕ್ಕೆ ಬಂದು ಸ್ವಲ್ಪ ಹೊರಕ್ಕೆ ಹೋಗಿ ಬರುವುದಾಗಿ ತಿಳಿಸಿ ಅಲ್ಲಿಂದ ಹೊರಟು ಯಾರಿಗೂ ತಿಳಿಯದ ರೀತಿ ಗೋವಿಂದನ ಮನೆಯನ್ನು ಸೇರಿ ತನ್ನ ಉಡುಪನ್ನು ಬದಲಾಯಿಸಿಕೊಂಡು ವೃತ್ತಪತ್ರಿಕೆಗಳನ್ನು ನೋಡುತ್ತ ಕುಳಿತನು.<noinclude></noinclude> n7jgtnxoiz43h56v2eelp76vo6ye80i ಪುಟ:ನನ್ನ ಸಂಸಾರ.djvu/೧೧೭ 104 57400 322062 321962 2026-05-24T03:13:25Z Shreelatha.Halemane 7642 /* Validated */ 322062 proofread-page text/x-wiki <noinclude><pagequality level="4" user="Shreelatha.Halemane" />{{rh|center=ಮಧುಸೂದನ|left=|right=41}}</noinclude><big>{{center|'''ಒಂಭತ್ತನೇ ಅಧ್ಯಾಯ.'''}}</big> <small>{{center|(ವಿವಾಹಭಂಗ ಮತ್ತು "ಎಂ" ಸಂಘದ ಮುಕ್ತಾಯ.)}}</small> {{gap}}ಮಾರನೇ ದಿವಸ ಪೊಲೀಸ್ ಕಮೀಷನರು ತಮ್ಮ ಆಫೀಸಿನಲ್ಲಿ ಕುಳಿತಿರುವಾಗ ಒಬ್ಬ ಸೇವಕನು ಬಂದು ಚೀಟಿಯೊಂದನ್ನು ಕೊಟ್ಟನು. ಅದರಲ್ಲಿ "ಪತ್ತೇದಾರಿ ಇಲಾಖೆಗೆ ಸೇರಿದ ಭಾಸ್ಕರ" ಎಂದಿದ್ದಿತು. ಕೂಡಲೇ ಕಳೆಗುಂದಿದ್ದ ಕಮೀಷನರ ಮುಖವು ಕಾಂತಿಯನ್ನು ಹೊಂದಿತು. 'ತಕ್ಷಣವೇ ಅವರನ್ನು ಕರೆದುಕೊಂಡು ಬಾ' ಎಂದು ಕಟ್ಟಳೇ ಮಾಡಿ ಕಳುಹಿಸಿದನು. ಭಾಸ್ಕರನು ಅವನಿಗೆ ಹೊಸಬನಲ್ಲವು, ಭಾಸ್ಕರನೂ ಅವನೂ ಸ್ನೇಹಿತರಾಗಿದ್ದರು. ಹಿಂದಲ ದಿವಸಗಳಲ್ಲಿ ನಡೆದ ವಿಷಯಗಳ ವಿಷಯವಾಗಿ ಯೋಚಿಸುತ್ತಾ ಭಾಸ್ಕರನಿಗೆ ಈ ವಿಷಯಗಳನ್ನೆಲ್ಲಾ ತಿಳಿಯಪಡಿಸಬೇಕೆಂದಿದ್ದನು. ಅಷ್ಟರಲ್ಲೇ ಭಾಸ್ಕರನೇ ತನ್ನನ್ನು ನೋಡಲು ಬರಲು ಅತ್ಯಂತ ಸಂತೋಷದಿಂದ ಅವನನ್ನು ಬರುವಹಾಗೆ ಹೇಳಿಕಳುಹಿಸಿದನು. {{gap}}ಸ್ವಲ್ಪಹೊತ್ತಿಗೆ ಭಾಸ್ಕರನು ಪೊಲೀಸ್ ಕಮೀಷನರ ಕೊಠಡಿಗೆ ಬಂದು ಅವನನ್ನು ಕಾಣಿಸಿಕೊಂಡನು. ಆತನು ಇವನ ಕೈಹಿಡಿದು ಆಡಿಸಿ "ಭಾಸ್ಕರಾ! ನೀನು ಈ ಸಮಯದಲ್ಲಿ ಬಂದದ್ದು ನನಗೆ ಬಹಳ ಸಂತೋಷವನ್ನುಂಟುಮಾಡಿದೆ. ನೀನು ನಿನ್ನೆ ಮೊನ್ನೇ ನಡೆದ ಡಕಾಯಿತಿಗಳನ್ನೂ ಮತ್ತು ಕೊಲೆಗಳನ್ನೂ ಕೇಳಿರುವಿಯೆಂದು ನಂಬುತ್ತೇನೆ. ನೀನು ಈ ವಿಷಯಗಳಲ್ಲಿ ಪ್ರವೇಶಮಾಡಿ ಈ ಕೊಲೆಪಾತಕರನ್ನು ಪತ್ತೆಮಾಡುವಿಯೆಂದು ನಂಬಿರುತ್ತೇನೆ. ನೀನು ಪತ್ತೆಮಾಡಿಕೊಟ್ಟರೆ ನಿನಗೆ ಬಹುಮಾನವೂ ಮತ್ತು ಯಶಸ್ಸೂ ಬರುವುವು ಮತ್ತು ನನಗೂ ಬಹಳ ಸಹಾಯಮಾಡಿದಂತಾಗುವುದು." ಎಂದು ಹೇಳಿದನು. {{gap}}ಭಾಸ್ಕರ:-ಸ್ವಾಮಿ! ನಾನು ಆಗಲೇ ಎಲ್ಲವನ್ನೂ ಪತ್ತೆಮಾಡಿರುತ್ತೇನೆ. ಈ ಎರಡು ದಿವಸಗಳಲ್ಲಿ ನಡೆದ ವಿಷಯಗಳಲ್ಲದೆ ಕೆಲವು ದಿವಸಗಳ ಹಿಂದೆ ವಾಸವಪುರದ ಜಮೀನ್ದಾರರ ಮಗನು ಕಾಣದೇಹೋದ ವಿಷಯವನ್ನೂ ಸಹ ಪತ್ತೇಮಾಡಿರುತ್ತೇನೆ. {{gap}}ಕಮೀಷನರು:-ಏನು? ಆಗಲೇ ಎಲ್ಲವನ್ನೂ ಪತ್ತೆಮಾಡಿರುವಿಯಾ? ನೀನೀಗ ನಿಜವಾದ ಪತ್ತೇದಾರನು. ಈ ವಿಷಯಗಳೆಲ್ಲಾ ಪತ್ತೆಯಾಗಲು ಇನ್ನೂ ಅನೇಕ ತಿಂಗಳುಗಳಾಗುವುವೆಂದು ನಾನು ಯೋಚಿಸಿದ್ದೆನು, ಆದರೆ ನೀನು ಆಗಲೇ{{nop}}<noinclude></noinclude> kierx0u6nwjpmwq92etpv6ly3g2kv3r ಪುಟ:ನನ್ನ ಸಂಸಾರ.djvu/೧೧೮ 104 57401 322039 321964 2026-05-23T18:08:13Z Pragathi. BH 7585 /* Validated */ 322039 proofread-page text/x-wiki <noinclude><pagequality level="4" user="Pragathi. BH" />{{rh|center=ಕಾದಂಬರೀ ಸಂಗ್ರಹ|left=42|right=}}</noinclude>ಎಲ್ಲವನ್ನೂ ಪತ್ತೆಮಾಡಿರುವ ವಿಷಯವನ್ನು ನೋಡಿ ನನಗೆ ಆಶ್ಚರವಾಗುತ್ತದೆ. ಕಳ್ಳರನ್ನು ಯಾವಾಗ ಹಿಡಿಯೋಣ? {{gap}}ಭಾಸ್ಕರ:-ನಾನು ವಾಸವಪುರದ ಜಮೀನ್ದಾರನ ಪರವಾಗಿ ಇಲ್ಲಿಗೆ ಬಂದು ಅವನ ಮಗನ ವಿಷಯವಾಗಿ ಪತ್ತೇಮಾಡುತ್ತಿರಲು ಇತರ ವಿಷಯಗಳೂ ನನ್ನ ಮಾರ್ಗದಲ್ಲಿ ತಾವಾಗಿಯೇ ಬಂದವು. {{gap}}ಭಾಸ್ಕರನೂ ಪೊಲೀಸ್ ಕಮಿಷನರೂ "ಬಹಳಹೊತ್ತು ಮಾತನಾಡುತ್ತಿದ್ದು ಎಲ್ಲಾ ವಿಷಯಗಳನ್ನೂ ಕ್ರಮವಾಗಿ ತೀರ್ಮಾನಮಾಡಿಕೊಂಡ ಮೇಲೆ ಭಾಸ್ಕರನು ಅಪ್ಪಣೆಯನ್ನು ಪಡೆದು ಗೋವಿಂದನ ಮನೆಗೆ ಹೋದನು. ಅದೇ ದಿವಸ ಮಧ್ಯಾಹ್ನ ಹರಿಚಂದ್ರನು ಭಾಸ್ಕರನ ನಯಭಯಗಳಿಗೊಳಪಟ್ಟು ತಮ್ಮ ಸಂಘಕ್ಕೆ ಸಂಬಂಧವಾದ ಎಲ್ಲಾ ವಿಷಯಗಳನ್ನೂ ಅಂದರೆ (1)ಮಧುಸೂದನನನ್ನು ವಿಶ್ವನಾಥನು ಎತ್ತಿಕೊಂಡು ಹೋದ ವಿಷಯವನ್ನೂ, (2)ವಿವಾಹದ ದಿವಸ ತಾನು ಜನಗಳ ಮಧ್ಯದಲ್ಲಿ ನುಗ್ಗಿ ತಮ್ಮ ಯಜಮಾನನಾದ ವಿಶ್ವನಾಥನು ಬಂದು ಮಧುಸೂದನನ ಕೊಠಡಿಯಲ್ಲಿ ಕಾದಿರುವ ಹಾಗೂ ತಕ್ಷಣವೇ ಬಾರದಿದ್ದರೆ ಮಧುಸೂದನನು ತನಗೆ ಕೊಡಬೇಕಾದ ಇಪ್ಪತ್ತು ಸಾವಿರ ರೂಪಾಯಿಗಳ ವಿಷಯವನ್ನೂ ಮತ್ತು ಅವನು ತನ್ನ ಮಗಳನ್ನು ಮದುವೆಯಾಗುವೆನೆಂದು ಮಾತು ಕೊಟ್ಟಿದ್ದ ವಿಷಯವನ್ನೂ ತಿಳಿಸುವುದಾಗಿ ಹೇಳಿರುವನೆಂಬ ವಿಷಯಗಳನ್ನೆಲ್ಲಾ ಅವನೊಡನೆ ಹೇಳಿದನು. ಭಾಸ್ಕರನು ಅವನನ್ನು ಸರ್ಕಾರದ ಪರ ಪಕ್ಷದ ಸಾಕ್ಷಿಯಾಗಿ ತೆಗೆದುಕೊಳ್ಳುವುದಾಗಿ ಹೇಳಿ ಅವನನ್ನು ಪುನಃ ಕೊಠಡಿ ಯಲ್ಲಿ ಕೂಡಿಟ್ಟನು. {{gap}}ಅದೇ ದಿವಸ ಮಧ್ಯಾಹ್ನ 'ಎಂ' ಸಂಘದವರ ಗುಪ್ತ ಗೃಹದಲ್ಲಿ ಮಾರನೇ ದಿವಸದ ವಿವಾಹಕ್ಕಾಗಿ ಎಲ್ಲವನ್ನೂ ಸಿದ್ಧಪಡಿಸಿಟ್ಟುಕೊಳ್ಳುತ್ತಿದ್ದರು. ಒಂದು ಕಡೆಯಲ್ಲಿ ಮಧುಸೂದನನೂ ವಿಶ್ವನಾಥನೂ ಕುಳಿತುಕೊಂಡು ಮಾತನಾಡುತ್ತಿದ್ದರು. ಅವರ ಮುಂದುಗಡೆ ಮೇಜಿನ ಮೇಲೆ ಮೂರು ಶೀಸೆಗಳ ವ್ಹಿಸ್ಕಿಯೂ, ಒಂದು ತಟ್ಟೆಯಲ್ಲಿ ಕೆಲವು ಫಲಹಾರ ಸಾಮಗ್ರಿಗಳೂ ಮತ್ತೊಂದು ಕಡೆ ಕೆಲವು ಹೊಗೆಯಬತ್ತಿಗಳೂ ಇದ್ದವು. ವಿಶ್ವನಾಥನು ಬಟ್ಟಲುಗಳಲ್ಲಿ ಮದ್ಯವನ್ನು ತುಂಬಿತುಂಬಿ ಮದುಸೂದನನಿಗೆ ಕುಡಿಸುತ್ತಿದ್ದನು. ಅಯ್ಯೋ! ಅತ್ಯಂತ ಆಚಾರಸಂಪನ್ನನಾದವನ ಪುತ್ರನಾಗಿ ಹುಟ್ಟಿ ತಾನೂ ಆಚಾರಸಂಪನ್ನನಾಗಿದ್ದು ಈಗ ಸಹವಾಸದೋಷದಿಂದ ಒಂದೇಸಲಕ್ಕೆ ತನ್ನ ಆಚಾರವನ್ನೂ, ಶೀಲವನ್ನೂ, ಜಾತಿಯನ್ನೂ ಮರೆತು ಮದ್ಯಪಾನ ಮಾಡುತ್ತಿರು{{nop}}<noinclude></noinclude> dlirfiv1d2sbnpi04tp5805vsxyet8h ಪುಟ:ನನ್ನ ಸಂಸಾರ.djvu/೧೧೯ 104 57402 322040 321968 2026-05-23T18:08:33Z Pragathi. BH 7585 /* Validated */ 322040 proofread-page text/x-wiki <noinclude><pagequality level="4" user="Pragathi. BH" />{{rh|center=ಮಧುಸೂದನ|left=|right=43}}</noinclude>ಈ ಮಧುಸೂದನನನ್ನು ನೋಡಿ ತಂದೆಗಳಾದವರು ತಮ್ಮ ಪುತ್ರರ ವಿಷಯದಲ್ಲಿ ಎಚ್ಚರವಾಗಿರಲಿ! ಪುತ್ರರು ಕೆಟ್ಟ ಸಂಘಗಳಿಗೆ ಸೇರಿ ಜಾತಿ ಭೇದವಿಲ್ಲವೆಂದು ಹೇಳಿಕೊಂಡು ಕುಡಿತ ಮುಂತಾದುವುಗಳನ್ನು ಕಲಿತು ಹಾಳಾಗುವರೆಂದು ತಿಳಿದು, ಅವರು ಅಂಥಾ ಸಂಘಗಳಿಗೆ ಸೇರದಹಾಗೆ ಇರುವುದಕ್ಕೆ ಪ್ರಯತ್ನಪಡಲಿ!! {{gap}}ವಿಶ್ವನಾಥ:-ಮಧುಸೂದನಾ! ನಾಳೆದಿವಸ ನೀನು ನನ್ನ ಅಳಿಯನಾಗುವಿ. ಆಮೇಲೆ ನೀನು ನಿಮ್ಮ ಮನೆಗೆ ಹೋಗಬಹುದು. ನಾನೂ ಸಹಾ ನನ್ನ ಸಂಘವನ್ನೊಡೆದು ಬೇರೆಸ್ಥಳಕ್ಕೆ ಹೋಗುವೆನು. {{gap}}ಮಧುಸೂದನ (ಮದ್ಯದ ವೇಗದಿಂದ ಉನ್ಮತ್ತನಾಗಿ) ಅದಕ್ಕೇನು! ನಾನು ನಿಮ್ಮ ಪುತ್ರಿಯನ್ನು ವಿವಾಹ ಮಾಡಿಕೊಳ್ಳುವೆನು. ನನ್ನ ಸಂಗಡಲೇ ನಿಮ್ಮ ಪುತ್ರಿಯನ್ನೂ ಕರೆದುಕೊಂಡು ವಾಸವಪುರಕ್ಕೆ ಹೋಗುವೆನು. ನನ್ನ ತಂದೆಯು ನನ್ನನ್ನು ಬಹಿಷ್ಕರಿಸಿದರೆ ನನ್ನ ಭಾಗವನ್ನು ತೆಗೆದುಕೊಂಡು ಸುಖವಾಗಿರುವನು.(ಸ್ವಲ್ಪ ಶಾಂತನಾಗಿ) ಅಯ್ಯೋ ನನ್ನ ಗತಿಯು ಹೀಗೆ ಆಗಬೇಕೇ? ನನ್ನ ತಂದೆಯೇನು ಹೇಳುವನೋ ? ಈ ವಿವಾಹಕ್ಕೆ ಅವನೆಂದಿಗೂ ಒಪ್ಪನು. {{gap}}ವಿಶ್ವನಾಥನು ಅವನಿಗೆ ಮತ್ತಿಷ್ಟು ಮದ್ಯವನ್ನು ಕೊಟ್ಟು ನಿಮ್ಮ ತಂದೆಯು ಒಪ್ಪದೇ ಏನುಮಾಡುವನು? ವಿವಾಹವು ಶಾಸ್ತ್ರಾಚಾರರೀತಿಯಿಂದಲೇ ನಡೆದಮೇಲೆ ನಿಮ್ಮ ತಂದೆಯೇನು ಮಾಡುವನು? ಇನ್ನು ಹೊತ್ತಾಯಿತು. ನಾನು ಹೋಗಿಬರುವೆನು. ನಾನು ಹೇಳಿದ ವಿಷಯಗಳು ಜ್ಞಾಪಕದಲ್ಲಿರಲಿ. ವಾಸವಪುರವನ್ನು ಸೇರಿದಮೇಲೆ ಒಂದು ಲಕ್ಷ ರೂಪಾಯನ್ನು ಕಳುಹಲು ಮರೆತುಬಿಡಬೇಡ” ಎಂದು ಹೇಳಿ ಹೊರಟುಹೋದನು. {{gap}}ಈದಿವಸ ಕಾಳಿಬೀದಿಯಲ್ಲಿರುವ "ಎಂ" ಸಂಘದವರ ಮನೆಯಲ್ಲಿ ಅತ್ಯಂತ ಕೋಲಾಹಲ, ಮನೆಯೆಲ್ಲವೂ ಕದಳಿ ಸ್ತಂಭಗಳಿಂದಲೂ ಮಾವಿನ ತೋರಣಗಳಿಂದಲೂ ಅಲಂಕರಿಸಲ್ಪಟ್ಟಿರುವುದು. ಒಂದು ಕಡೆಯಲ್ಲಿ ವಾದ್ಯಗಳು ತಮ್ಮ ನಾದವನ್ನು ಎಲ್ಲ ಕಡೆಗೂ ಕಳುಹಿಸುತ್ತಿದ್ದವು. ಬೀದಿಯಲ್ಲಿ ಜನಗಳೆಲ್ಲರೂ ವಿಶ್ವನಾಥನ ಮಗಳಾದ ಸುಂದರಿಯೆಂಬ ಋತುಮತಿಯಾದ ಕನ್ನೆಯನ್ನು ಸೋಮೇಂದ್ರನೆಂಬುವನಿಗೆ ಕೊಟ್ಟು ವಿವಾಹವೆಂದು ಹೇಳಿಕೊಳ್ಳುತ್ತಿದ್ದರು. ಕರೆಯಲ್ಪಟ್ಟಿದ್ದ ಜನಗಳು ಮಾತ್ರ ಬಿಡಲ್ಪಡುವರೆಂದೂ ಹೇಳಿಕೊಳ್ಳುತ್ತಿದ್ದರು. ಸುಮಾರು ಇಪ್ಪತ್ತೈದು ಮಂದಿ ವೈದಿಕಬ್ರಾಹ್ಮಣರುಗಳು ವಿಭೂತೀ ರುದ್ರಾ‍ಕ್ಷೀ ಮುಂತಾದವುಗಳನ್ನು ಧರಿಸಿಕೊಂಡು ಬೀದೀಬಾಗಲಿನಲ್ಲಿ {{nop}}<noinclude></noinclude> f7p7tu1ajd2cs38t4ogp8nq6bt31jtp ಪುಟ:ನನ್ನ ಸಂಸಾರ.djvu/೧೨೦ 104 57403 322041 321969 2026-05-23T18:08:49Z Pragathi. BH 7585 /* Validated */ 322041 proofread-page text/x-wiki <noinclude><pagequality level="4" user="Pragathi. BH" />{{rh|center=ಕಾದಂಬರೀ ಸಂಗ್ರಹ |left=44|right=}}</noinclude>ನಿಂತಿದ್ದ ಇಬ್ಬರು ಬ್ರಾಹ್ಮಣ ತರುಣರಿಗೆ ಏನನ್ನೋ ತೋರಿಸುತ್ತಾ ಒಳಕ್ಕೆ ಹೋಗುತ್ತಿದ್ದರು. ಈ ಬ್ರಾಂಹ್ಮಣರುಗಳನ್ನು ಯಾರಾದರೂ ಶೋಧನೆಮಾಡಿದ್ದರೆ ಪ್ರತಿಯೊಬ್ಬನ ಮಡಿಲಿಯಲ್ಲಿಯೂ ಒಂದೊಂದು ರಿವಾಲ್ವರುಗಳನ್ನು ನೋಡಬಹುದಾಗಿತ್ತು. ಈ ವಿವಾಹಮಂಟಪದಲ್ಲಿ ಮತ್ತೊಂದು ವಿಶೇಷವೇನೆಂದರೆ, ಆ ಸ್ಥಳದಲ್ಲಿ ಒಬ್ಬ ಸ್ತ್ರೀಯಾದರೂ ಇರಲಿಲ್ಲ. ಸುಂದರಿಯೆಂಬ ಋತುಮತಿಯಾದ ಕನ್ಯೆಯು ಸರ್ವಾಭರಣಗಳಿಂದಲಂಕೃತಳಾಗಿದ್ದಳು. ಅವಳು ಅತ್ಯಂತ ಸುಂದರಿಯಾಗಿದ್ದದ್ದರಿಂದ ಬಂದವರೆಲ್ಲರೂ ಅವಳನ್ನೇ ಅವಾಕ್ಕಾಗಿ ನೋಡುತ್ತಿದ್ದರು. ಇಂಥಾ ನಾರೀರತ್ನವು ನೀಚನಾದ ವಿಶ್ವನಾಥನಿಗೆ ಮಗಳಾಗಿ ಹುಟ್ಟಿದ್ದು ಆಶ್ಚರ್ಯವಾಗಿರುವದು. ಆಕೆಗೆ ತನ್ನ ತಂದೆಯ ದುರ್ವ್ಯಾಪಾರದ ವಿಷಯವು ಸ್ವಲ್ಪವಾದರೂ ತಿಳಿಯದು. ಆಕೆಗೆ ತಾನು ಋತುಮತಿಯಾದಮಲೆ ವಿವಾಹವಾಗುವ ವಿಷಯದಲ್ಲಿ ಸ್ವಲ್ಪವಾದರೂ ಮನವಿಲ್ಲವು. ವಿಶ್ವನಾಥನು ಅವಳನ್ನು ಸೋಮೇಂದ್ರನೆಂಬ ಅತುಳೈಶ್ವರ್ಯ ಸಂಪನ್ನನಿಗೆ ವಿವಾಹ ಮಾಡಿಕೊಡುವುದಾಗಿಯೂ, ಮದುವೆಯಾದಮೇಲೆ ಆ ಸೋಮೇಂದ್ರನ ನಿಜವಾದ ಹೆಸರು ತಿಳಿಯುವುದೆಂದೂ ಅವನು ಈಗ ಯಾವುದೋ ಒಂದು ಕಾರಣದಿಂದ ಛದ್ಮವೇಷದಲ್ಲಿರುತಾನೆಂದೂ ಹೇಳಿ, ಅವಳನ್ನು ಈ ವಿವಾಹವನ್ನು ಮಾಡಿಕೊಳ್ಳುವ ಹಾಗೆ ಒಪ್ಪಿಸಿದನು. ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಆ ಬಾಲೆಯು ತನ್ನ ತಂದೆಯನ್ನು ತನ್ನ ಸರ್ವಸ್ವವೆಂದು ನಂಬಿ ಅವನ ಮಾತಿಗೆ ವ್ಯತಿರಿಕ್ತವಾಗಿ ನಡೆಯದೆ ಅವನ ಮಾತಿಗೊಪ್ಪಿದಳು. ಇಂಥಾ ನವಕೋಮಲಾಂಗಿಯು ಕೊನೆಗೆ ಧೂರ್ತನಾದ ತಂದೆಯ ದೆಸೆಯಿಂದಲೇ ಪ್ರಾಣಬಿಡುವ ಕಾಲವು ಬಂದಿತು. {{gap}}ವಿವಾಹ ಮುಹೂರ್ತವು ಹತ್ತು ಗಂಟೆಗೆ ಸರಿಯಾಗಿಡಲ್ಪಟ್ಟಿತ್ತು. 'ನನಗೆ ಹೆಂಡತಿಯಿಲ್ಲವಾದ್ದರಿಂದ ಪತ್ನಿಯಿಲ್ಲದೇನೇ ಮದುವೆ ಮಾಡಿಕೊಡುತ್ತೇನೆಂದು ವಿಶ್ವನಾಥನು ಹೇಳಿದನು.' ಇಬ್ಬರು ವೈದಿಕಬ್ರಾಹ್ಮಣರು ದುಡ್ಡಿನಾಶೆಗಾಗಿ ವಿಶ್ವನಾಥನು ಹೇಳಿದ ಹಾಗೇ ವಿವಾಹ ಮಾಡಿಸುವುದಾಗಿ ಹೇಳಿಬಂದಿದ್ದರು. ಸೋಮೇಂದ್ರನೆಂದು ಕರಯಲ್ಪಟ್ಟ ಮದವಣಿಗನು ಅಲಂಕರಿಸಲ್ಪಟ್ಟು ಕರತರಲ್ಪಟ್ಟನು. ಅವನಿಗೆ ಸುಮಾರು ಮೂವತ್ತು ವರ್ಷ ವಯಸ್ಸಾಗಿರಬಹುದೆಂದು ಕಾಣಬಂದಿತು. ಮುಖದಲ್ಲಿ ಮೀಶೆಯೂ ದಾಡಿಯೂ ಇದ್ದವು. ಅವನು ಸುಂದರಿಯನ್ನು ನೋಡಿ ನಗುತ್ತಾ ಬಂದನು. ಮನೆಗೆ ಸೇರಿದ ಆವರಣದಲ್ಲೇ ಕಾಶೀಯಾತ್ರೆಯು ನಡೆಸಲ್ಪಟ್ಟಿತು. ವಧೂವರರು ಮಣೆಯಮೇಲೆ ಕುಳಿತುಕೊಂಡು ಹೋಮಾದಿಗಳನ್ನು ಮಾಡಿದರು. ಇನ್ನೇನು ಧಾರೆ{{nop}}<noinclude></noinclude> 9i20mw3qtech4bj5affbp40ttafcsaa ಪುಟ:ನನ್ನ ಸಂಸಾರ.djvu/೧೩೦ 104 57413 322115 160800 2026-05-24T10:14:42Z Vikashegde 1258 /* Validated */ 322115 proofread-page text/x-wiki <noinclude><pagequality level="4" user="Vikashegde" /></noinclude><div style="display: flex; flex-direction: column; justify-content: center; min-height: 80vh; text-align: center;"> PRINTED BY<br /> B. V. NARASIMHAIYENGAR<br /> AT THE ROYAL PRESS, MYSORE—1916.<br /> </div><noinclude></noinclude> pleo1vafh629zcf9twq8rri5stnnmjx ಪುಟ:ನನ್ನ ಸಂಸಾರ.djvu/೧೩೩ 104 57416 322064 160102 2026-05-24T05:20:50Z Shreelatha.Halemane 7642 /* Proofread */ 322064 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|ಪ್ರಸ್ಥಾವ ನೆ.}}. ಮಹನೀಯರೇ {{gap}}ಮಹಾಪುರುಷರ ಚರಿತ್ರೆಯನ್ನು ಬರೆಯಬೇಕಾದರೆ ಮಹಾಪಂಡಿತರಿಂದ ಲ್ಲದೇ ಸಾಮಾನ್ಯರಿಂದಾಗಲಾರದೆಂಬ ವಿಷಯವು ಸರ್ವರಿಗೂ ತಿಳಿದೇಯಿರುವುದು;"ಲೋಕೋಭಿನ್ನ ರುಚಿಃ" ಎಂಬ ನಾಣ್ನುಡಿಯಂತೆ, ಸರ್ವಜನರಿಗೂ ಸಮಾಧಾನ ವಾಗಿರುವಂತೆ ಗ್ರಂಥವನ್ನು ರಚಿಸುವುದು ಬಹಳ ಕಷ್ಟವಾದ ಕೆಲಸವಾಗಿರುವುದು, {{gap}}ಹೀಗಿರುವಲ್ಲಿ ಮಹಾಪುರುಷರಾದ ಶ್ರೀ ಶಂಕರಾಚಾರ್ಯರ ಚರಿತ್ರೆಯನ್ನು ಬರೆ ಯುವುದು ಸಾಮಾನ್ಯವಾದುದಲ್ಲ. ಅದರಲ್ಲಿಯೂ "ಶಂಕರಕಥಾಸಾರ" ವೆಂಬ ಈ ಗ್ರಂಥರಚನೆಯು ಅತ್ಯಧಿಕವಾದ ಪ್ರಯತ್ನದಿಂದ ರಸಭರಿತವಾಗಿ ಮಾಡಲ್ಪ ಟ್ಟಿದೆ. ಈ ಗ್ರಂಥಕರ್ತರಾಧ ಮ|| ರಾ|| ಡಿ. ಎಸ್. ಶಂಕರನಾರಾಯಣಶಾಸ್ತ್ರೀಯ ವರು ಇನ್ನೂ ಚಿಕ್ಕ ವಯಸ್ಸಿನವರು, ಇದೇ ಇವರ ಮೊದಲನೆಯ ಗ್ರಂಥರಚನೆಯು, ಈ ಬಾಲ್ಯದಲ್ಲಿಯೇ ಗ್ರಂಥರಚನೆಯಲ್ಲಿ ಇವರಿಗೆ ಉತ್ಸಾಹಹುಟ್ಟಿ, ತಮ್ಮ ಆಶಾಪೂರ್ಣತೆಯನ್ನು ಮಾಡಿಕೊಳ್ಳಲು, ಸಾಮಾನ್ಯವಾದ ಕಟ್ಟು ಕಥೆಗಳನ್ನು ಬರೆಯಲುಪಕ್ರಮಿಸದೇ ಶ್ರೀ ಆಚಾರ್ಯರವರ ಚರಿತ್ರೆಯ ಸಾರವನ್ನು ಸಂಗ್ರಹಿಸಿ ಬರೆಯಲುಪಕ್ರಮಿಸಿ ಮುಗಿಸಿದುದು ಆಚಾರ್ಯರ ಮಹಿಮೆಯಿಂದಲ್ಲದೇ ಬೇರೆಯಲ್ಲ. {{gap}}ಈ ಗ್ರಂಥಕರ್ತರು ಪುಸ್ತಕವನ್ನು ಪ್ರಚಾರಕ್ಕೆ ತರಲು "ಶ್ರೇಯಾಂಸಿಬಹು ವಿಘ್ನಾನಿ" ಎಂಬಂತೆ ನಾನಾ ಕಷ್ಟಗಳನ್ನು ಅನುಭವಿಸಿದ್ದರಿಂದ ಇಂತಹ ಸತ್ಕಾರ್ಯದಲ್ಲಿ ಹತಾಶರಾಗಿ ಧೈರಗುಂದಿದವರಾಗಿದ್ದರು, ಆಗಾಗ್ಯೆ ಇವರಿಗೆ ಉತ್ಸಾಹ ಕೊಟ್ಟಿದುದ ರಿಂದ ಈ ಪುಸ್ತಕವು ಪ್ರಚಾರಕ್ಕೆ ಬರಲು ಅವಕಾಶವಾಯಿತು. {{gap}}ಮಹನೀಯರು ತಮ್ಮ ಉದಾರವಾದ ಮನಸ್ಸಿನಿಂದ ಈ ಗ್ರಂಥಕರ್ತರಿಗೆ ಪ್ರೋತ್ಸಾಹಕೊಟ್ಟು ಇವರ ಗ್ರಂಥರಚನೆಯಲ್ಲಿನ ಉತ್ಸಾಹವನ್ನು ಅಭಿವೃದ್ಧಿಗೊಳಿ ಸುವರೆಂದು ಕೋರುತ್ತೇವೆ. {{rh|center=|left=ಮೈಸೂರು|right=ಇತಿ}}ಇತಿ {{rh|center=|left=15-3-1916 )|right=ಬಿ. ವಿ. ನರಸಿಂಹೈಯ್ಯಂಗಾರ್ಯ}}<noinclude></noinclude> 586qp1q6607ypzo0cg5f3zkd0q9n4dd 322116 322064 2026-05-24T10:21:45Z Vikashegde 1258 /* Validated */ 322116 proofread-page text/x-wiki <noinclude><pagequality level="4" user="Vikashegde" /></noinclude>{{center|ಪ್ರಸ್ಥಾವನೆ.}} ಮಹನೀಯರೇ, {{gap}}ಮಹಾಪುರುಷರ ಚರಿತ್ರೆಯನ್ನು ಬರೆಯಬೇಕಾದರೆ ಮಹಾಪಂಡಿತರಿಂದಲ್ಲದೇ ಸಾಮಾನ್ಯರಿಂದಾಗಲಾರದೆಂಬ ವಿಷಯವು ಸರ್ವರಿಗೂ ತಿಳಿದೇಯಿರುವುದು; "ಲೋಕೋಭಿನ್ನರುಚಿಃ" ಎಂಬ ನಾಣ್ನುಡಿಯಂತೆ, ಸರ್ವಜನರಿಗೂ ಸಮಾಧಾನವಾಗಿರುವಂತೆ ಗ್ರಂಥವನ್ನು ರಚಿಸುವುದು ಬಹಳ ಕಷ್ಟವಾದ ಕೆಲಸವಾಗಿರುವುದು. {{gap}}ಹೀಗಿರುವಲ್ಲಿ ಮಹಾಪುರುಷರಾದ ಶ್ರೀ ಶಂಕರಾಚಾರ್ಯರ ಚರಿತ್ರೆಯನ್ನು ಬರೆಯುವುದು ಸಾಮಾನ್ಯವಾದುದಲ್ಲ. ಅದರಲ್ಲಿಯೂ "ಶಂಕರಕಥಾಸಾರ"ವೆಂಬ ಈ ಗ್ರಂಥರಚನೆಯು ಅತ್ಯಧಿಕವಾದ ಪ್ರಯತ್ನದಿಂದ ರಸಭರಿತವಾಗಿ ಮಾಡಲ್ಪಟ್ಟಿದೆ. ಈ ಗ್ರಂಥಕರ್ತರಾಧ ಮ|| ರಾ|| ಡಿ. ಎಸ್. ಶಂಕರನಾರಾಯಣಶಾಸ್ತ್ರಿಯವರು ಇನ್ನೂ ಚಿಕ್ಕ ವಯಸ್ಸಿನವರು. ಇದೇ ಇವರ ಮೊದಲನೆಯ ಗ್ರಂಥರಚನೆಯು. ಈ ಬಾಲ್ಯದಲ್ಲಿಯೇ ಗ್ರಂಥರಚನೆಯಲ್ಲಿ ಇವರಿಗೆ ಉತ್ಸಾಹಹುಟ್ಟಿ, ತಮ್ಮ ಆಶಾಪೂರ್ಣತೆಯನ್ನು ಮಾಡಿಕೊಳ್ಳಲು, ಸಾಮಾನ್ಯವಾದ ಕಟ್ಟು ಕಥೆಗಳನ್ನು ಬರೆಯಲುಪಕ್ರಮಿಸದೇ ಶ್ರೀ ಆಚಾರ್ಯರವರ ಚರಿತ್ರೆಯ ಸಾರವನ್ನು ಸಂಗ್ರಹಿಸಿ ಬರೆಯಲುಪಕ್ರಮಿಸಿ ಮುಗಿಸಿದುದು ಆಚಾರ್ಯರ ಮಹಿಮೆಯಿಂದಲ್ಲದೇ ಬೇರೆಯಲ್ಲ. {{gap}}ಈ ಗ್ರಂಥಕರ್ತರು ಪುಸ್ತಕವನ್ನು ಪ್ರಚಾರಕ್ಕೆ ತರಲು "ಶ್ರೇಯಾಂಸಿಬಹುವಿಘ್ನಾನಿ" ಎಂಬಂತೆ ನಾನಾ ಕಷ್ಟಗಳನ್ನು ಅನುಭವಿಸಿದ್ದರಿಂದ ಇಂತಹ ಸತ್ಕಾರ್ಯದಲ್ಲಿ ಹತಾಶರಾಗಿ ಧೈರ್ಯಗುಂದಿದವರಾಗಿದ್ದರು. ಆಗಾಗ್ಯೆ ಇವರಿಗೆ ಉತ್ಸಾಹ ಕೊಟ್ಟಿದುದರಿಂದ ಈ ಪುಸ್ತಕವು ಪ್ರಚಾರಕ್ಕೆ ಬರಲು ಅವಕಾಶವಾಯಿತು. {{gap}}ಮಹನೀಯರು ತಮ್ಮ ಉದಾರವಾದ ಮನಸ್ಸಿನಿಂದ ಈ ಗ್ರಂಥಕರ್ತರಿಗೆ ಪ್ರೋತ್ಸಾಹಕೊಟ್ಟು ಇವರ ಗ್ರಂಥರಚನೆಯಲ್ಲಿನ ಉತ್ಸಾಹವನ್ನು ಅಭಿವೃದ್ಧಿಗೊಳಿಸುವರೆಂದು ಕೋರುತ್ತೇವೆ. {{rh|center=|left=ಮೈಸೂರು|right=ಇತಿ}} {{rh|center=|left=15-3-1916|right=ಬಿ. ವಿ. ನರಸಿಂಹೈಯ್ಯಂಗಾರ್ಯ}}<noinclude></noinclude> dq4y7yq4ww6fdgs16lqc4ntwggsrvsc 322117 322116 2026-05-24T10:22:48Z Vikashegde 1258 322117 proofread-page text/x-wiki <noinclude><pagequality level="4" user="Vikashegde" /></noinclude><big>{{center|ಪ್ರಸ್ತಾವನೆ.}}</big> ಮಹನೀಯರೇ, {{gap}}ಮಹಾಪುರುಷರ ಚರಿತ್ರೆಯನ್ನು ಬರೆಯಬೇಕಾದರೆ ಮಹಾಪಂಡಿತರಿಂದಲ್ಲದೇ ಸಾಮಾನ್ಯರಿಂದಾಗಲಾರದೆಂಬ ವಿಷಯವು ಸರ್ವರಿಗೂ ತಿಳಿದೇಯಿರುವುದು; "ಲೋಕೋಭಿನ್ನರುಚಿಃ" ಎಂಬ ನಾಣ್ನುಡಿಯಂತೆ, ಸರ್ವಜನರಿಗೂ ಸಮಾಧಾನವಾಗಿರುವಂತೆ ಗ್ರಂಥವನ್ನು ರಚಿಸುವುದು ಬಹಳ ಕಷ್ಟವಾದ ಕೆಲಸವಾಗಿರುವುದು. {{gap}}ಹೀಗಿರುವಲ್ಲಿ ಮಹಾಪುರುಷರಾದ ಶ್ರೀ ಶಂಕರಾಚಾರ್ಯರ ಚರಿತ್ರೆಯನ್ನು ಬರೆಯುವುದು ಸಾಮಾನ್ಯವಾದುದಲ್ಲ. ಅದರಲ್ಲಿಯೂ "ಶಂಕರಕಥಾಸಾರ"ವೆಂಬ ಈ ಗ್ರಂಥರಚನೆಯು ಅತ್ಯಧಿಕವಾದ ಪ್ರಯತ್ನದಿಂದ ರಸಭರಿತವಾಗಿ ಮಾಡಲ್ಪಟ್ಟಿದೆ. ಈ ಗ್ರಂಥಕರ್ತರಾಧ ಮ|| ರಾ|| ಡಿ. ಎಸ್. ಶಂಕರನಾರಾಯಣಶಾಸ್ತ್ರಿಯವರು ಇನ್ನೂ ಚಿಕ್ಕ ವಯಸ್ಸಿನವರು. ಇದೇ ಇವರ ಮೊದಲನೆಯ ಗ್ರಂಥರಚನೆಯು. ಈ ಬಾಲ್ಯದಲ್ಲಿಯೇ ಗ್ರಂಥರಚನೆಯಲ್ಲಿ ಇವರಿಗೆ ಉತ್ಸಾಹಹುಟ್ಟಿ, ತಮ್ಮ ಆಶಾಪೂರ್ಣತೆಯನ್ನು ಮಾಡಿಕೊಳ್ಳಲು, ಸಾಮಾನ್ಯವಾದ ಕಟ್ಟು ಕಥೆಗಳನ್ನು ಬರೆಯಲುಪಕ್ರಮಿಸದೇ ಶ್ರೀ ಆಚಾರ್ಯರವರ ಚರಿತ್ರೆಯ ಸಾರವನ್ನು ಸಂಗ್ರಹಿಸಿ ಬರೆಯಲುಪಕ್ರಮಿಸಿ ಮುಗಿಸಿದುದು ಆಚಾರ್ಯರ ಮಹಿಮೆಯಿಂದಲ್ಲದೇ ಬೇರೆಯಲ್ಲ. {{gap}}ಈ ಗ್ರಂಥಕರ್ತರು ಪುಸ್ತಕವನ್ನು ಪ್ರಚಾರಕ್ಕೆ ತರಲು "ಶ್ರೇಯಾಂಸಿಬಹುವಿಘ್ನಾನಿ" ಎಂಬಂತೆ ನಾನಾ ಕಷ್ಟಗಳನ್ನು ಅನುಭವಿಸಿದ್ದರಿಂದ ಇಂತಹ ಸತ್ಕಾರ್ಯದಲ್ಲಿ ಹತಾಶರಾಗಿ ಧೈರ್ಯಗುಂದಿದವರಾಗಿದ್ದರು. ಆಗಾಗ್ಯೆ ಇವರಿಗೆ ಉತ್ಸಾಹ ಕೊಟ್ಟಿದುದರಿಂದ ಈ ಪುಸ್ತಕವು ಪ್ರಚಾರಕ್ಕೆ ಬರಲು ಅವಕಾಶವಾಯಿತು. {{gap}}ಮಹನೀಯರು ತಮ್ಮ ಉದಾರವಾದ ಮನಸ್ಸಿನಿಂದ ಈ ಗ್ರಂಥಕರ್ತರಿಗೆ ಪ್ರೋತ್ಸಾಹಕೊಟ್ಟು ಇವರ ಗ್ರಂಥರಚನೆಯಲ್ಲಿನ ಉತ್ಸಾಹವನ್ನು ಅಭಿವೃದ್ಧಿಗೊಳಿಸುವರೆಂದು ಕೋರುತ್ತೇವೆ. {{rh|center=|left=ಮೈಸೂರು|right=ಇತಿ}} {{rh|center=|left=15-3-1916|right=ಬಿ. ವಿ. ನರಸಿಂಹೈಯ್ಯಂಗಾರ್ಯ}}<noinclude></noinclude> kxkmtsz6wwbldgen9gs8v0v68jn136r 322118 322117 2026-05-24T10:23:20Z Vikashegde 1258 322118 proofread-page text/x-wiki <noinclude><pagequality level="4" user="Vikashegde" /></noinclude><big>{{center|'''ಪ್ರಸ್ತಾವನೆ.'''}}</big> ಮಹನೀಯರೇ, {{gap}}ಮಹಾಪುರುಷರ ಚರಿತ್ರೆಯನ್ನು ಬರೆಯಬೇಕಾದರೆ ಮಹಾಪಂಡಿತರಿಂದಲ್ಲದೇ ಸಾಮಾನ್ಯರಿಂದಾಗಲಾರದೆಂಬ ವಿಷಯವು ಸರ್ವರಿಗೂ ತಿಳಿದೇಯಿರುವುದು; "ಲೋಕೋಭಿನ್ನರುಚಿಃ" ಎಂಬ ನಾಣ್ನುಡಿಯಂತೆ, ಸರ್ವಜನರಿಗೂ ಸಮಾಧಾನವಾಗಿರುವಂತೆ ಗ್ರಂಥವನ್ನು ರಚಿಸುವುದು ಬಹಳ ಕಷ್ಟವಾದ ಕೆಲಸವಾಗಿರುವುದು. {{gap}}ಹೀಗಿರುವಲ್ಲಿ ಮಹಾಪುರುಷರಾದ ಶ್ರೀ ಶಂಕರಾಚಾರ್ಯರ ಚರಿತ್ರೆಯನ್ನು ಬರೆಯುವುದು ಸಾಮಾನ್ಯವಾದುದಲ್ಲ. ಅದರಲ್ಲಿಯೂ "ಶಂಕರಕಥಾಸಾರ"ವೆಂಬ ಈ ಗ್ರಂಥರಚನೆಯು ಅತ್ಯಧಿಕವಾದ ಪ್ರಯತ್ನದಿಂದ ರಸಭರಿತವಾಗಿ ಮಾಡಲ್ಪಟ್ಟಿದೆ. ಈ ಗ್ರಂಥಕರ್ತರಾಧ ಮ|| ರಾ|| ಡಿ. ಎಸ್. ಶಂಕರನಾರಾಯಣಶಾಸ್ತ್ರಿಯವರು ಇನ್ನೂ ಚಿಕ್ಕ ವಯಸ್ಸಿನವರು. ಇದೇ ಇವರ ಮೊದಲನೆಯ ಗ್ರಂಥರಚನೆಯು. ಈ ಬಾಲ್ಯದಲ್ಲಿಯೇ ಗ್ರಂಥರಚನೆಯಲ್ಲಿ ಇವರಿಗೆ ಉತ್ಸಾಹಹುಟ್ಟಿ, ತಮ್ಮ ಆಶಾಪೂರ್ಣತೆಯನ್ನು ಮಾಡಿಕೊಳ್ಳಲು, ಸಾಮಾನ್ಯವಾದ ಕಟ್ಟು ಕಥೆಗಳನ್ನು ಬರೆಯಲುಪಕ್ರಮಿಸದೇ ಶ್ರೀ ಆಚಾರ್ಯರವರ ಚರಿತ್ರೆಯ ಸಾರವನ್ನು ಸಂಗ್ರಹಿಸಿ ಬರೆಯಲುಪಕ್ರಮಿಸಿ ಮುಗಿಸಿದುದು ಆಚಾರ್ಯರ ಮಹಿಮೆಯಿಂದಲ್ಲದೇ ಬೇರೆಯಲ್ಲ. {{gap}}ಈ ಗ್ರಂಥಕರ್ತರು ಪುಸ್ತಕವನ್ನು ಪ್ರಚಾರಕ್ಕೆ ತರಲು "ಶ್ರೇಯಾಂಸಿಬಹುವಿಘ್ನಾನಿ" ಎಂಬಂತೆ ನಾನಾ ಕಷ್ಟಗಳನ್ನು ಅನುಭವಿಸಿದ್ದರಿಂದ ಇಂತಹ ಸತ್ಕಾರ್ಯದಲ್ಲಿ ಹತಾಶರಾಗಿ ಧೈರ್ಯಗುಂದಿದವರಾಗಿದ್ದರು. ಆಗಾಗ್ಯೆ ಇವರಿಗೆ ಉತ್ಸಾಹ ಕೊಟ್ಟಿದುದರಿಂದ ಈ ಪುಸ್ತಕವು ಪ್ರಚಾರಕ್ಕೆ ಬರಲು ಅವಕಾಶವಾಯಿತು. {{gap}}ಮಹನೀಯರು ತಮ್ಮ ಉದಾರವಾದ ಮನಸ್ಸಿನಿಂದ ಈ ಗ್ರಂಥಕರ್ತರಿಗೆ ಪ್ರೋತ್ಸಾಹಕೊಟ್ಟು ಇವರ ಗ್ರಂಥರಚನೆಯಲ್ಲಿನ ಉತ್ಸಾಹವನ್ನು ಅಭಿವೃದ್ಧಿಗೊಳಿಸುವರೆಂದು ಕೋರುತ್ತೇವೆ. {{rh|center=|left=ಮೈಸೂರು|right=ಇತಿ}} {{rh|center=|left=15-3-1916|right=ಬಿ. ವಿ. ನರಸಿಂಹೈಯ್ಯಂಗಾರ್ಯ}}<noinclude></noinclude> jk7p0u33w0pyvzg87plw7o1ocen072g ಪುಟ:ನನ್ನ ಸಂಸಾರ.djvu/೧೬೮ 104 57451 322047 160452 2026-05-23T18:15:15Z Pragathi. BH 7585 /* Validated */ 322047 proofread-page text/x-wiki <noinclude><pagequality level="4" user="Pragathi. BH" /></noinclude>೩೦ ಕಾದಂಬರೀಸಂಗ್ರಹ {{gap}}ವಪನಂಸಶಿಖಂಕೃತ್ವಾತ್ಯಜೇತ್ಸೂತ್ರಂ ಬಹಿಧೈ೯ತಮ್ || ಬ್ರಹ್ಮೈವಸೂತ್ರಮಿ ತ್ಯುಕ್ತಂತಾದೃಕ್ಸೂತ್ರಂವಹೇದ್ಬುಧಃ | ಬಹಿನ್ಸೂತ್ರಂತ್ಯಜೇದ್ಯೋಗೀವಜೇನುಕ್ತ್ಮಿ ಪದೇ ಸ್ಥಿತಃ, (ಜ್ಞಾನಿಯು ಶಿಖೆಯನ್ನೂ , ಹೊರಗೆಧರಿಸಿರುವ ಸೂತ್ರವನ್ನೂ ಬಿಟ್ಟು 'ಬ್ರಹ್ಮ' ಎಂಬ ಸೂತ್ರವನ್ನು ಧರಿಸತಕ್ಕದ್ದು; ಜೀವನ್ಮುಕ್ತಿಕಾಮನು ಹೊರಗಿನ ಯಜ್ಙೋಪ ವೀತವನ್ನು ಪರಿತ್ಯಾಗಮಾಡಬೇಕು) ಎಂಬ ವಚನಗಳಿಂದ ಸೂತ್ರತ್ಯಾಗವು ಹೇಗೆ ದೂಷ್ಯವು? {{gap}}'ಯೆಚಸಂತಾನಜಾದೋಪಾಃ ಯೇಚಸ್ಯುಃಕರ್ಮಸಂಭವಾಃ | ಸನ್ಯಾಸಸ್ತಾ೯ದ ಹೇತ್ಸರ್ವಾ೯..... || ಮತ್ತು ಚತ್ವಾರೋಬ್ರಾಹ್ಮಣಸ್ಪೋಕ್ತಾಃ ಆಶ್ರಮಾಃಶ್ರು ತಿಚೋದಿತಾಃ | ಕ್ಷತ್ರಿಯಸ್ಯತ್ರಯಃಪ್ರೋಕ್ತಾಃದ್ವಾವೇಕೋವೈಶ್ಯಶೂದ್ರಯೋಃ ||' (ಸಂತಾನಜಗಳಾದ ದೋಷಗಳೂ, ಕರ್ಮಜಗಳಾದ ದೋಷಗಳೂ ಸನ್ಯಾಸದಿಂದ ನಶಿಸಲ್ಪಡುತ್ತವೆ; ಮತ್ತು ಬ್ರಾಹ್ಮಣನಿಗೆ ನಾಲ್ಕು ಆಶ್ರಮಗಳಲ್ಲಿಯೂ ಅಧಿಕಾರವಿರು ವುದರಿಂದ ಸನ್ಯಾಸ ಸ್ವೀಕಾರದಿಂದ ಬ್ರಾಹ್ಮಣ್ಯಹಾನಿಯು ಹೇಗೆ ?) ಎಂಬ ಪ್ರಮಾಣ ದಿಂದ ಸನ್ಯಾಸವು ನಿಷಿದ್ಧವಲ್ಲವಷ್ಟೆ ! {{gap}}'ಅಕ್ಷರಂಪರಮಂಬ್ರಹ್ಮಸದಾಧ್ಯಾರ್ಯ ಜಿತೇಂದ್ರಿಯಃ | ಶಿಖಾಂಯಬ್ಞೊಪವೀ ಶಂಚನಿತ್ಯಕರ್ಮಪರಿತ್ಯಬೇತ್‌' (ಉತ್ಕೃಷ್ಟವೂ, ನಾಶರಹಿತವೂ ಆದ ಬ್ರಹ್ಮಸ್ವರೂಪವನ್ನು ಧ್ಯಾನಿಸುತ್ತಾ ಜಿತೇಂದ್ರಿಯನಾದವನು, ಶಿಖಾಯಜ್ಞೋಪವೀತ ಮತ್ತು ನಿತ್ಯಕರ್ಮ ಗಳನ್ನು ಪರಿತ್ಯಜಿಸಬೇಕು) ಎಂಬ ವಚನದಿಂದ, ಮೋಕ್ಷಾರ್ಥಿಯಾಗಿ ಕರ್ಮಬಿಟ್ಟವ ನಿಗೆ ನರಕಬಾಧೆಯು ಹೇಗೆ ? ಮತ್ತು ಇವನಿಗೆ ಸ್ವರ್ಗಕ್ಕಿಂತ ಅಧಿಕವಾದ ಮೋಕ್ಷ ಪ್ರಾಪ್ತವಾಗಿರುವಾಗ ಸ್ವರ್ಗಾದಿಗಳಿಂದ ಪ್ರಯೋಜನವೇನು ? ಎಂದು ಹೇಳಲು, ಮಂಡನಮಿಶ್ರರು ಪ್ರತ್ಯುತ್ತರ ಕೊಡಲು ಅಸಮರ್ಥರಾದ್ದನ್ನು ಕಂಡು, ಶಂಕರರು ಮೂಢನೇ ! ಪೂರ್ವದಲ್ಲಿ ನೀನು ಏನು ಪ್ರಲಾಪಿಸಿದೆ ? ಅಚೇತನವಾದ ಕರ್ಮವು ಹೇಗೆ ಮೋಕ್ಷಪ್ರದವು ? ಆ ಮೋಕ್ಷವನ್ನು ಕೊಡತಕ್ಕದ್ದು ಶ್ರುತಿಸಮ್ಮತವಾದ ಬ್ರಹ್ಮನಲ್ಲವೇ ? ಮತ್ತು ಉತ್ತಮವಾದ ಸನ್ಯಾಸಾಶ್ರಮವನ್ನು ದೂಷಿಸಿದವನು ಅವನಿಗಿಂತಲೂ ದೂಷ್ಯನಲ್ಲವೆ? ಎಂದು ಕೋಪದಿಂದ ಹೇಳಿದರು. " ಆಗ ಮಧ್ಯಸ್ಥಳಾಗಿದ್ದ ಶಾರದೆಯು ಜಾಗ್ರತೆ ಎದ್ದು, ಪ್ರತಿನಿತ್ಯವೂ, ಯತಿಗಳಾದ ಶಂಕರರನ್ನು ಮಾತ್ರ ಭಿಕ್ಷಕ್ಕೆ ಕರೆಯುತ್ತಿದ್ದಂತೆ ಆ ದಿನ ಪತಿಯತಿಗಳೀರ್ವ<noinclude></noinclude> fnnqapd9io7pec3u0a20sn99mk8abd2 322048 322047 2026-05-23T18:15:35Z Pragathi. BH 7585 322048 proofread-page text/x-wiki <noinclude><pagequality level="4" user="Pragathi. BH" /></noinclude>೩೦ ಕಾದಂಬರೀಸಂಗ್ರಹ {{gap}}ವಪನಂಸಶಿಖಂಕೃತ್ವಾತ್ಯಜೇತ್ಸೂತ್ರಂ ಬಹಿಧೈ೯ತಮ್ || ಬ್ರಹ್ಮೈವಸೂತ್ರಮಿ ತ್ಯುಕ್ತಂತಾದೃಕ್ಸೂತ್ರಂವಹೇದ್ಬುಧಃ | ಬಹಿನ್ಸೂತ್ರಂತ್ಯಜೇದ್ಯೋಗೀವಜೇನುಕ್ತ್ಮಿ ಪದೇ ಸ್ಥಿತಃ, (ಜ್ಞಾನಿಯು ಶಿಖೆಯನ್ನೂ , ಹೊರಗೆಧರಿಸಿರುವ ಸೂತ್ರವನ್ನೂ ಬಿಟ್ಟು 'ಬ್ರಹ್ಮ' ಎಂಬ ಸೂತ್ರವನ್ನು ಧರಿಸತಕ್ಕದ್ದು; ಜೀವನ್ಮುಕ್ತಿಕಾಮನು ಹೊರಗಿನ ಯಜ್ಙೋಪ ವೀತವನ್ನು ಪರಿತ್ಯಾಗಮಾಡಬೇಕು) ಎಂಬ ವಚನಗಳಿಂದ ಸೂತ್ರತ್ಯಾಗವು ಹೇಗೆ ದೂಷ್ಯವು?<br /> {{gap}}'ಯೆಚಸಂತಾನಜಾದೋಪಾಃ ಯೇಚಸ್ಯುಃಕರ್ಮಸಂಭವಾಃ | ಸನ್ಯಾಸಸ್ತಾ೯ದ ಹೇತ್ಸರ್ವಾ೯..... || ಮತ್ತು ಚತ್ವಾರೋಬ್ರಾಹ್ಮಣಸ್ಪೋಕ್ತಾಃ ಆಶ್ರಮಾಃಶ್ರು ತಿಚೋದಿತಾಃ | ಕ್ಷತ್ರಿಯಸ್ಯತ್ರಯಃಪ್ರೋಕ್ತಾಃದ್ವಾವೇಕೋವೈಶ್ಯಶೂದ್ರಯೋಃ ||' (ಸಂತಾನಜಗಳಾದ ದೋಷಗಳೂ, ಕರ್ಮಜಗಳಾದ ದೋಷಗಳೂ ಸನ್ಯಾಸದಿಂದ ನಶಿಸಲ್ಪಡುತ್ತವೆ; ಮತ್ತು ಬ್ರಾಹ್ಮಣನಿಗೆ ನಾಲ್ಕು ಆಶ್ರಮಗಳಲ್ಲಿಯೂ ಅಧಿಕಾರವಿರು ವುದರಿಂದ ಸನ್ಯಾಸ ಸ್ವೀಕಾರದಿಂದ ಬ್ರಾಹ್ಮಣ್ಯಹಾನಿಯು ಹೇಗೆ ?) ಎಂಬ ಪ್ರಮಾಣ ದಿಂದ ಸನ್ಯಾಸವು ನಿಷಿದ್ಧವಲ್ಲವಷ್ಟೆ !<br /> {{gap}}'ಅಕ್ಷರಂಪರಮಂಬ್ರಹ್ಮಸದಾಧ್ಯಾರ್ಯ ಜಿತೇಂದ್ರಿಯಃ | ಶಿಖಾಂಯಬ್ಞೊಪವೀ ಶಂಚನಿತ್ಯಕರ್ಮಪರಿತ್ಯಬೇತ್‌' (ಉತ್ಕೃಷ್ಟವೂ, ನಾಶರಹಿತವೂ ಆದ ಬ್ರಹ್ಮಸ್ವರೂಪವನ್ನು ಧ್ಯಾನಿಸುತ್ತಾ ಜಿತೇಂದ್ರಿಯನಾದವನು, ಶಿಖಾಯಜ್ಞೋಪವೀತ ಮತ್ತು ನಿತ್ಯಕರ್ಮ ಗಳನ್ನು ಪರಿತ್ಯಜಿಸಬೇಕು) ಎಂಬ ವಚನದಿಂದ, ಮೋಕ್ಷಾರ್ಥಿಯಾಗಿ ಕರ್ಮಬಿಟ್ಟವ ನಿಗೆ ನರಕಬಾಧೆಯು ಹೇಗೆ ? ಮತ್ತು ಇವನಿಗೆ ಸ್ವರ್ಗಕ್ಕಿಂತ ಅಧಿಕವಾದ ಮೋಕ್ಷ ಪ್ರಾಪ್ತವಾಗಿರುವಾಗ ಸ್ವರ್ಗಾದಿಗಳಿಂದ ಪ್ರಯೋಜನವೇನು ? ಎಂದು ಹೇಳಲು, ಮಂಡನಮಿಶ್ರರು ಪ್ರತ್ಯುತ್ತರ ಕೊಡಲು ಅಸಮರ್ಥರಾದ್ದನ್ನು ಕಂಡು, ಶಂಕರರು ಮೂಢನೇ ! ಪೂರ್ವದಲ್ಲಿ ನೀನು ಏನು ಪ್ರಲಾಪಿಸಿದೆ ? ಅಚೇತನವಾದ ಕರ್ಮವು ಹೇಗೆ ಮೋಕ್ಷಪ್ರದವು ? ಆ ಮೋಕ್ಷವನ್ನು ಕೊಡತಕ್ಕದ್ದು ಶ್ರುತಿಸಮ್ಮತವಾದ ಬ್ರಹ್ಮನಲ್ಲವೇ ? ಮತ್ತು ಉತ್ತಮವಾದ ಸನ್ಯಾಸಾಶ್ರಮವನ್ನು ದೂಷಿಸಿದವನು ಅವನಿಗಿಂತಲೂ ದೂಷ್ಯನಲ್ಲವೆ? ಎಂದು ಕೋಪದಿಂದ ಹೇಳಿದರು. " ಆಗ ಮಧ್ಯಸ್ಥಳಾಗಿದ್ದ ಶಾರದೆಯು ಜಾಗ್ರತೆ ಎದ್ದು, ಪ್ರತಿನಿತ್ಯವೂ, ಯತಿಗಳಾದ ಶಂಕರರನ್ನು ಮಾತ್ರ ಭಿಕ್ಷಕ್ಕೆ ಕರೆಯುತ್ತಿದ್ದಂತೆ ಆ ದಿನ ಪತಿಯತಿಗಳೀರ್ವ<noinclude></noinclude> ktizufh50op0v9ak4rcvvthsw2omgg3 ಪುಟ:ನನ್ನ ಸಂಸಾರ.djvu/೧೬೯ 104 57452 322049 159827 2026-05-23T18:17:42Z Pragathi. BH 7585 /* Validated */ 322049 proofread-page text/x-wiki <noinclude><pagequality level="4" user="Pragathi. BH" />{{rh|center=ಶಂಕರಕಥಾಸಾರ|left=|right=೩೧}}</noinclude> ರನ್ನೂ ಭಿಕ್ಷಕ್ಕೆ ಕರೆದಳು, (ಹಿಂದಿನ ಶಪಥದಂತೆ ಮಂಡನಪಂಡಿತನು ಸೋತದ್ದನ್ನೂ, ಅವನ ಕೊರಳಿನ ಮಾಲಿಕೆಯು ಬಾಡಿದ್ದನ್ನೂ ಕಂಡು ಆಕೆಯು ಈರೀತಿ ಹೇಳಿದಳು.)<br /> {{gap}}ಆಗ ಮಂಡನಮಿಶ್ರರು ಭಕ್ತಿಯಿಂದ ಮೇಲಕ್ಕೆದ್ದು ಆಚಾರ್ಯರಿಗೆ ನಮಸ್ಕರಿಸಿ ನಾನು ಮಾಡಿದ ಸನ್ಯಾಸಾಶ್ರಮನಿಂದೆಯನ್ನು ಕ್ಷಮಿಸಿ, ನನ್ನ ಅಜ್ಞಾನವನ್ನು ಹೋಗ ಲಾಡಿಸಿ, ಪುನೀತನನ್ನಾಗಿಮಾಡಿ ನನಗೂ ಸನ್ಯಾಸವನ್ನಿತ್ತು ತಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳಬೇಕು ಎಂದು ಪ್ರಾರ್ಥಿಸಲು ಶಂಕರಾಚಾರ್ಯರು ಮಂಡನಪಂಡಿತನಿಗೆ ಸನ್ಯಾಸವನ್ನು ಕೊಟ್ಟು, ಸತ್ಯಲೋಕಕ್ಕೆ ಹೋಗಬೇಕೆಂದು ಅಂತರಿಕ್ಷಕ್ಕೆ ಹಾರಿದ ಶಾರದೆಯನ್ನು ವನದುರ್ಗಾಮಂತ್ರದಿಂದ ಆ ಸಭೆಯಲ್ಲಿದ್ದ ಕೋಟ್ಯನುಕೋಟಿ ಪಂಡಿ ತರೆದುರಿಗೆ ಆಕರ್ಷಿಸಿ ಜನಗಳ ಹಿತಕ್ಕೋಸ್ಕರ ಭೂಮಿಯಲ್ಲಿ ನಿಲ್ಲಬೇಕೆಂದು ಆಕೆ ಯನ್ನು ಪ್ರಾರ್ಥಿಸಿದರು.<br /> {{gap}}ಆಗ ಶಾರದೆಯು ಪತ್ನಿ ಯ ಪತಿಯ ಅರ್ಧಾಂಗಿಯೆಂಬುದು ಲೋಕವಿದಿತ ವಷ್ಟೆ, ಅದರಂತೆ ನನ್ನ ಪತಿಯು ಸೋತರೆ ನಾವಿಬ್ಬರೂ ಸೋತಂತಾಗುತ್ತೇವೆಯೇ? ನಿಮಗೆ ಅರ್ಧಜಯ ಬಂದಿರುವುದಲ್ಲದೇ ಪೂರ್ಣಒಯವಲ್ಲ; ನನ್ನನ್ನು ಸೋಲಿಸಿದಹೊ ರತು ಪೂರ್ಣಜಯ ಬರಲಾರದೆಂದಳು.<br /> {{gap}}ಆಚಾರ್ಯರು ಮೊದಲು ವಾದಕ್ಕೊಪ್ಪದಿದ್ದರೂ ಅನಂತರ ಒಪ್ಪಿದರು, ವಾದೋ ಪಕ್ರಮವಾಯಿತು.<br /> {{gap}}ಶಾರದೆಯು ಆಚಾರ್ಯರನ್ನು ಕಾಮಶಾಸ್ತ್ರದಲ್ಲಿ ಪ್ರಶ್ನಿಸಲಾರಂಭಿಸಿದಳು.<br /> {{gap}}ಆಚಾರ್ಯರು ಸರಿಯಾದ ಉತ್ತರವನ್ನೀಯದಿದ್ದರೆ ಸರ್ವಜ್ಞತ್ವಕ್ಕೆ ಭಂಗಬ ರುವುದು ಉತ್ತರವನ್ನಿತ್ತರೆ ಯತಿಧರ್ಮಕ್ಕೆ ಭಂಗಬರುವುದು ಎಂದು ಯೋಚಿಸಿ, ಅದನ್ನು ತಿಳಿದುಕೊಂಡುಬರಲು ಒಂದುತಿಂಗಳು ವ್ಯವಧಾನವನ್ನು ತೆಗೆದುಕೊಂಡು ಸಶಿಷ್ಯರಾಗಿ ಹೊರಟರು. ಅನಂತರ ಶಂಕರರು ಅಮೃತಪುರವೆಂಬ ಪಟ್ಟಣದ ಹೊರಗೆ ನಿಂತು, ಆ ದೇಶದ ರಾಯನು ಮೃತನಾಗಿರಲು ಅವನ ಮಹಿಷಿಯರು ಪತಿಯ ಶವ ವನ್ನು ಸಕಲರಾಜ ಮರ್ಯಾದೆಗಳೊಡನೆ ಸ್ಮಶಾನಕ್ಕೆ ತೆಗೆಯಿಸಿಕೊಂಡುಹೋಗಿ ಅಳು ತ್ತಿರುವುದನ್ನು ಕಂಡು' ಶಿಷ್ಯನನ್ನು ಕುರಿತು "ಎಲೈ ಸನಂದನೇ ! ಇಲ್ಲಿ ನೋಡು; ಜಾಣೆ ಯರಾದ ಹಲವುಮಂದಿ ಯುವತಿಯರು ಸತ್ರ ತಮ್ಮ ಪತಿಯ ಸುತ್ತಲೂ ಪ್ರಲಾಪಿಸು<noinclude></noinclude> bu1zwrl9f6jjo736w6f74dbvtwb3pog ಪುಟ:ನನ್ನ ಸಂಸಾರ.djvu/೧೭೦ 104 57453 322050 159826 2026-05-23T18:18:41Z Pragathi. BH 7585 /* Validated */ 322050 proofread-page text/x-wiki <noinclude><pagequality level="4" user="Pragathi. BH" />{{rh|center=ಕಾದಂಬರೀಸಂಗ್ರಹ|left=೩೨|right=}}</noinclude> ತ್ತಲಿದಾರೆ, ನಾನು ಯೋಗಸಾಮರ್ಥ್ಯದಿಂದ ಆ ರಾಜನ ದೇಹಕ್ಕೆ ನನ್ನ ಆತ್ಮವನ್ನು ನುಗ್ಗಿಸಿ ಅವರಿಂದ ಕಳಾಶಾಸ್ತ್ರವನ್ನೆಲ್ಲಾ ಕಲಿತುಬರುವೆನು ” ಎನ್ನಲು ಸನಂದನನು ಗುರುಗಳನ್ನು ಕುರಿತು, “ ಆಚಾರ್ಯರೇ ! ಮತ್ಸ್ಯೇಂದ್ರಯೋಗಿಯೆಂಬುವನು ಪರಕಾಯ ಪ್ರವೇಶವಿದ್ಯಾಬಲದಿಂದ ತನ್ನ ದೇಹವನ್ನು ಶಿಷ್ಯನಾದ ಗೋರಕ್ಷನ ಬಳಿ ಇಟ್ಟು ಆತ್ಮ ವನ್ನು ಮೃತನಾಗಿರುವ ಓರ್ವ ಮಹಾರಾಜನ ದೇಹಕ್ಕೆ ನುಗ್ಗಿ ಸಲು, ಶವವು ಎದ್ದ ದ್ದನ್ನು ಕಂಡು ಎಲ್ಲರೂ ಭಯಾಶ್ಚರ್ಯಯುಕ್ತರಾಗಿ ಆ ದೇಹಕ್ಕೆ ಸಂಸ್ಕಾರಾದಿಗಳಂ ಮಾಡಿ ಪಟ್ಟಣಕ್ಕೆ ಕರೆದುಕೊಂಡುಹೋದನಂತರದಲ್ಲಿ ಮಂತ್ರಿಗಳು ಯಾರೋ ಯೋಗಿಗಳು ನಮ್ಮ ರಾಜನ ಸತ್ತ ದೇಹದಲ್ಲಿ ಸೇರಿ ವಿಲಾಸತೋರಿಸುತ್ತಿರುವುದರಿಂದಲೇ ದುರ್ಭಿಕ್ಷವು ದೇಶದ ಯಾವಭಾಗದಲ್ಲಿಯೂ ಇಲ್ಲ ವೆಂದೂಹಿಸಿ ಆತನು ರಾಜಶರೀರ ವನ್ನು ಬಿಟ್ಟ ಹೋಗದೇ ಇರುವಹಾಗೆ ಮಾಡಲು, ನವಯೌವನಸಂಪನ್ನೆ ಯರಾದ ಅನೇ ಕಸುಂದರೀಮಣಿಗಳನ್ನು ಕೂಡಿಹಾಕಿ ತನ್ಮೂಲಕ ಆ ಯತಿಗೆ ಮೋಸಗೊಳಿಸಲು ಆ ಯತಿಯು ತನ್ನ ಸಮಾಧಿಯನ್ನು ಮರೆತು ಕಾಮಕ್ರೀಡಾಲಾಲಸನಾಗಿರುವ ಸಮ ಯದಲ್ಲಿ ಗೋರಕ್ಷನು ಗುರದೇಹವನ್ನು ಬೇರೆಜನರ ರಕ್ಷಣೆಯಲ್ಲಿಟ್ಟು; ತಾನು ಭರ ತಾಚಾರ್ಯನಂತೆ ವೇಷಧರಿಸಿ ಸರಿಯಾದ ಸಮಯದಲ್ಲಿ ರಾಜನಿಗೆ ತತ್ವೋಪದೇಶವಂ ಮಾಡಿ ಯತಿಯನ್ನು ಆ ದೇಹವನ್ನು ಬಿಟ್ಟು ಬರುವಹಾಗೆ ಮಾಡಿದನೆಂಬ ಕಥೆಯು ಪ್ರಸಿದ್ಧವಾಗಿಲ್ಲವೆ ? ಎಂದನು. ಅದನ್ನು ಕೇಳಿ ಆಚಾರ್ಯರು ಎಲೈ ಶಿಷ್ಯನೇ ! ಕೃಷ್ಣ ನುರತಿಕ್ರೀಡಾಲೋಲನಾಗಿದ್ದರೂ ವಜ್ರೋಲಿಯೆಂಬ ಯೋಗದ ಮಹಿಮೆಯಿಂದ ಇಂದ್ರಿ ಯಸ್ಖಲನವಿಲವಿಲ್ಲದವನಾಗಿ ಅನಾದ್ರಿ ಹ್ಮಚಾರಿ ಎಂಬ ಹೆಸರನ್ನು ಹೊಂದಲಿಲ್ಲವೆ? ಇದಲ್ಲದೇ ಇಂದ್ರನು ಯತಿಗಳನ್ನು ಕೊಂದು ತೋಳಗಳಿಗೆ ಹಾಕಿ ತ್ವಷ್ಟೃಬ್ರಹ್ಮನ ಮಗನನ್ನು ಕೊಂದನು. ಹೀಗೆ ಯತಿ ಹತ್ಯೆ ಬ್ರಹ್ಮ ಹತ್ಯೆಗಳೆಂಬ ಮಹಾ ಪಾಪಗಳನ್ನು ಮಾಡಿದರೂ ತನ್ನ ಒಂದು ರೋಮವೂ ನೋಯಲಿಲ್ಲವೆಂದು ಆತ್ಮಜ್ಞಾನಪ್ರಭಾವ ವನ್ನು ಹೇಳಿರುವುದು ಖಗ್ವೇದದಿಂದ ತಿಳಿದುಬರುತ್ತದೆ, ಮತ್ತು ಜನಕನು ಅನೇಕ ದಕ್ಷಿಣೆಗಳಿಂದ ಯುಕ್ತಗಳಾದ ಕ್ರತುಗಳನ್ನು ಮಾಡಿ ದೇವತೆಗಳನ್ನೂ ಬ್ರಾಹ್ಮಣರನ್ನೂ ತೃಪ್ತಿಪಡಿಸಿದನು. ಹೀಗೆ ಮಾಡಿದಾಗ್ಯೂ ತತ್ಫಲಭೋಗಾರ್ಹವಾದ ಶರೀರವು ಬರದೇ ಮೋಕ್ಷವು ಬಂದಿತೆಂದು ಕಾಣ್ವಶಾಖೋಪನಿಷತ್ತುಗಳಿಂದ ತಿಳಿಯಬರುತ್ತದೆ. ಆದ್ದ ರಿಂದ ವ್ರತಭಂಗಶಂಕೆಯು ಬರಲಾರದು. ಎಂದು ಹೇಳಿ ತಮ್ಮ ದೇಹವನ್ನು ಒಂದು<noinclude></noinclude> fraj57o1iuxyoyk4xaislbpaen0bwqr ಪುಟ:ನನ್ನ ಸಂಸಾರ.djvu/೧೭೧ 104 57454 322051 159841 2026-05-23T18:20:26Z Pragathi. BH 7585 /* Validated */ 322051 proofread-page text/x-wiki <noinclude><pagequality level="4" user="Pragathi. BH" /></noinclude>ಶಂಕರಕಥಾಸಾರ ೩೩ ಭಂಡೆಯ ಪೊಟರೆಯಲ್ಲಿಟ್ಟು, ಅದನ್ನು ಕಾಪಾಡುವಂತೆ ಶಿಷ್ಯರಿಗೆ ಹೇಳಿ ತಮ್ಮ ಆತ್ಮ ವನ್ನು ಅಮರುಕರಾಯನ ದೇಹಕ್ಕೆ ಪ್ರವೇಶಗೊಳಿಸಲು, ಅಮರುಕರಾಯನು ಮೂರ್ಛೆಹೋಗಿ ಎದ್ದವನಂತೆ ಎದ್ದನು.<br /> {{gap}}ಅದನ್ನು ನೋಡಿ ಆ ರಾಜನ ಪೂರ್ವವಯಸ್ಕರೂ ಸುಂದರಿಗಳೂ ಆದ ಪತ್ನಿಯರು, ಮತ್ತು ಮಂತ್ರಿಗಳು ಪುರೋಹಿತನಿಂದ ಅನೇಕ ಶಾಂತಿಕರ್ಮಗಳಂ ಮಾಡಿಸಿ ರಾಜನನ್ನು ಮಂಗಳ ವಾದ್ಯಘೋಷದೊಡನೆ ಪಟ್ಟಣಕ್ಕೊಯ್ದರು.<br /> {{gap}}ಆಚಾರ್ಯರು ನೃಪತಿಯ ಶರೀರದಲ್ಲಿ ದ್ದು ಬಹಳ ನೀತಿಯಿಂದ ರಾಜ್ಯವನ್ನಾ ಳುತ್ತಾ ಅಂತಃಪುರದ ಕಾಂತೆಯರ ಸಹವಾಸದಿಂದ ಕಾಮಶಾಸ್ತ್ರವನ್ನು ತಿಳಿದರು. ಇವರು ರಾಜ್ಯವಾಳತಕ್ಕ ಕಾಲದಲ್ಲಿ ಕಾಲಕಾಲಕ್ಕೆ ಮಳೆಯಾಗಿ ದೇಶವೆಲ್ಲಾ ಸುಭಿಕ್ಷ ವಾಗಿತ್ತು.<br /> {{gap}}ಆ ಭೂಮಿಪಾಲನ ಪಟ್ಟ ಮಹಿಷಿಯಾದ ಕನಕಮಂಜರಿಯೆಂಬುವಳು ಆತನ ಅಮಾ ನುಷಪ್ರಜ್ಞಾ ವಿಶೇಷಕ್ಕೆ ಆಶ್ವರ್ಯವನ್ನು ಹೊಂದಿ, ತನ್ನ ಮಂತ್ರಿಯಂ ಕರೆದು ಆಯ್ಯ! ಈ ಶರೀರವು ನಮ್ಮ ಪತಿಯದೇ ಹೊರತು ಆತ್ಮವು ಪತಿಯದಲ್ಲ. ಯಾವನೋ ಒಬ್ಬ ಯೋಗಿವರ್ಯನು ನಮ್ಮ ಪತಿಯ ದೇಹವನ್ನು ಪ್ರವೇಶಿಸಿರುವಂತೆ ತೋರುತ್ತದೆ, ಆದ್ದರಿಂದ ಈ ಪ್ರಾಂತ್ಯದಲ್ಲಿರತಕ್ಕ ಶವಗಳನ್ನೆಲ್ಲಾ ಸುಡಿಸಬೇಕೆಂದಾಜ್ಞಾಪಿಸಲು. ಅವನು ಅದರಂತೆ ಸಿಕ್ಕಿದ ಶವಗಳನ್ನು ಸುಡಿಸುತ್ತಾ ಶಂಕರಾಚಾರ್ಯರ ಶವವಿದ್ದಸ್ಥ ಳಕ್ಕೂ ಬಂದು, ಆಚಾರ್ಯರ ದೇಹವನ್ನು ನೋಡಿ ಅದನ್ನೂ ಬೆಂಕಿಯಮೇಲಿಡಿಸಿದನು.{{gap}} {{gap}}ಆಗ ಶಿಷ್ಯರು, ಆಚಾರ್ಯರ ಸಮಿಾಪಕ್ಕೆ ಬಂದು "ತತ್ತ್ವಮಸಿ, ತತ್ತ್ವಮಸಿ, ತತ್ತ್ವಮಸಿ ರಾಜE!'' ಎಂದು ಸ್ತೋತ್ರಮಾಡಲು ಆಚಾರ್ಯರು ಆ ದೇಹವನ್ನು ಬಿಟ್ಟು ಗಿಣಿಯರೂಪದಿಂದ ಹಾರಿಬಂದು, ತಮ್ಮ ದೇಹವು ಸುಡುತ್ತಾ ಇರುವುದುಂ ಕಂಡು ಅದರಲ್ಲಿ ಪ್ರವೇಶಮಾಡಿ-<br /> <poem> ( * ಶ್ರೀಮತ್ಪಯೋನಿಧಿ ನಿಕೇತನಚಕ್ರಪಾಣೇ | ಭೋಗೀಂದ್ರಭೋಗಮಣಿರಂಜಿತಪುಣ್ಯ ಮೂರ್ತೇ || ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿ ಪೋತ | ಲಕ್ಷ್ಮೀನೃಸಿಹ್ಮ ಮಮ ದೇಹಿ ಕರಾವಲಂಬಮ್ ||೧|| * ಭಕ್ತರಾದ ವಾಚಕರು ಆಚಾರ್ಯರಿಂದ ರಚಿತವಾದ ಈ ಕರಾವಲಂಬ ಸೋತ್ರವನ್ನು ನಿತ್ಯ ಪಾರಾಯಣದಲ್ಲಿಡುವುದು ಶ್ರೇಯಸ್ಕರವು. </poem><noinclude></noinclude> bzug2fi3dxia3i19iik2hqyb8s4ph1r ಪುಟ:ನನ್ನ ಸಂಸಾರ.djvu/೧೭೫ 104 57458 322065 160160 2026-05-24T05:24:02Z Shreelatha.Halemane 7642 /* Validated */ 322065 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಶಂಕರಕಥಾಸಾರ|left=|right=೩೭}} <poem></poem> ಪ್ರಹ್ಲಾದಮಾನಸಸರೋಜವಿಹಾರಭೃಂಗ| ಗಂಗಾತರಂಗ ಧವಳಾಂಗ ರಮಾಸ್ಥಿತಾಂಗ ಶೃಂಗಾರ ಸಂಗತ ಕಿರೀಟಲಸದ್ವರಾಂಗ | ಲಕ್ಷ್ಮೀನೃಸಿಹ್ಮ ಮಮ ದೇಹಿಕರಾವಲಂಬಮ್ || ೨೦ || ಮಾತಾ ನೃಸಿಹ್ಮಶ್ವ ಪಿತಾ ನೃಸಿಹ್ಮಃ | ಭ್ರಾತಾ ನೃಸಿಹ್ಮಶ್ವ ಸಖಾ ನೃಸಿಹ್ಮಃ || ನೃಸಿಹ್ಮದೇವಾನ್ನ ಪರಂ ನ ಕಿಂಚಿತ್ | ಲಕ್ಷ್ಮೀನೃಸಿಹ್ಮ ಮಮ ದೇಹಿಕರಾವಲಂಬಮ್ || ೨೧ || ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ| ವೈಕುಂಠ ಕೃಷ್ಣ ಮಧುಸೂದನ ಪುಷ್ಕರಾಕ್ಷ | ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ | ದೇವೇಶ ದೇಹಿ ಕೃಸಣಸ್ಯ ಕರಾವಲಂಬಮ್|| ೨೨ || ಶ್ರೀಮನ್ನೃಸಿಹ್ಮವಿಭವೇ ಗರುಡಧ್ವಚಾಯ | ತಾಪತ್ರಯೋಪಶಮನಾಯ ಛವೌಷಧಾಯ || ತೃಷ್ಣಾದಿ ವೃಶ್ಚಿಕ ಜಲಾಗ್ನಿ ಭುಜ೦ಗರೋಗ | ಕ್ಲೇಶನ್ಯಯಾಯ ಹರಯೇ ಗುರವೇ ನಮಸ್ತೇ || ೨೩ | ಶ್ರೀಶಂಕರಾರ್ಯರಚಿತಂ ಸತತಂ ಮನುಷ್ಯಃ | ಸ್ತೋತ್ರಂ ಪಠೇದ್ಯ ಇಹ ಸರಗುಣಪ್ರಸನ್ನಮ್|| ಸದ್ಯೊವಿಮುಕ್ತಃಕಲುಷೋ ಮುನಿವರೈಗಣ್ಯಃ | ಲಕ್ಷ್ಮೀಪತೇಃ ಪದಮುಪೈತಿ ಸ ನಿರ್ಮಲಾತ್ಮಾ || ೨೪ || ಯನ್ಮಾಯಯೋರ್ಜಿತವಪುಃ ಪ್ರಚುರಪ್ರವಾಹ | ಮಗ್ನಾಥ೯ಮತ್ರ ನಿವಹೋರುಕರಾವಲಂಬಮ್ || ಲಕ್ಷ್ಮೀನೃಸಿಹ್ಮಚರಣಾಬ್ಬ ಮಧುವ್ರತೇನ | ಸ್ತೋತ್ರಂ ಕೃತಂ ಸುಖಕರಂ ಭುವಿ ಶಂಕರೇಣ | ೨೫ ||” ಎಂದು ಲಕ್ಷ್ಮೀನೃಸಿಹ್ಮನನ್ನು ಸ್ತುತಿಸಲು, ಲಕ್ಷ್ಮೀನೃಸಿಹ್ಮನು ಪ್ರತ್ಯಕ್ಷನಾಗಿ, ಆ ವಹ್ನಿ ಯಂ ಶಮನಮಾಡಿ, ಆಚಾರ್ಯರ ದೇಹವನ್ನು ತನ್ನ ಹಸ್ತಸ್ಪರ್ಶನದಿಂದ ಸುಖಶೀತಲವುಂ ಟಾಗುವಂತೆಮಾಡಿ, ಬಾಧೆಯಂ ಪರಿಹರಿಸಿ ಅಂತರ್ಹಿತನಾದನು. </poem><noinclude></noinclude> br0uw6tlbpuutb3u9a4bi27ctgkk46e 322067 322065 2026-05-24T05:28:41Z Shreelatha.Halemane 7642 322067 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಶಂಕರಕಥಾಸಾರ|left=|right=೩೭}} <poem></poem> {{gap}}ಪ್ರಹ್ಲಾದಮಾನಸಸರೋಜವಿಹಾರಭೃಂಗ| {{gap}}ಗಂಗಾತರಂಗ ಧವಳಾಂಗ ರಮಾಸ್ಥಿತಾಂಗ {{gap}} ಶೃಂಗಾರ ಸಂಗತ ಕಿರೀಟಲಸದ್ವರಾಂಗ | {{gap}} ಲಕ್ಷ್ಮೀನೃಸಿಹ್ಮ ಮಮ ದೇಹಿಕರಾವಲಂಬಮ್ || ೨೦ || {{gap}}ಮಾತಾ ನೃಸಿಹ್ಮಶ್ವ ಪಿತಾ ನೃಸಿಹ್ಮಃ | {{gap}}ಭ್ರಾತಾ ನೃಸಿಹ್ಮಶ್ವ ಸಖಾ ನೃಸಿಹ್ಮಃ || {{gap}}ನೃಸಿಹ್ಮದೇವಾನ್ನ ಪರಂ ನ ಕಿಂಚಿತ್ | {{gap}}ಲಕ್ಷ್ಮೀನೃಸಿಹ್ಮ ಮಮ ದೇಹಿಕರಾವಲಂಬಮ್ || ೨೧ || {{gap}}ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ| {{gap}}ವೈಕುಂಠ ಕೃಷ್ಣ ಮಧುಸೂದನ ಪುಷ್ಕರಾಕ್ಷ | {{gap}} ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ | {{gap}}ದೇವೇಶ ದೇಹಿ ಕೃಸಣಸ್ಯ ಕರಾವಲಂಬಮ್|| ೨೨ || {{gap}}ಶ್ರೀಮನ್ನೃಸಿಹ್ಮವಿಭವೇ ಗರುಡಧ್ವಚಾಯ | {{gap}}ತಾಪತ್ರಯೋಪಶಮನಾಯ ಛವೌಷಧಾಯ || {{gap}}ತೃಷ್ಣಾದಿ ವೃಶ್ಚಿಕ ಜಲಾಗ್ನಿ ಭುಜ೦ಗರೋಗ | {{gap}}ಕ್ಲೇಶನ್ಯಯಾಯ ಹರಯೇ ಗುರವೇ ನಮಸ್ತೇ || ೨೩ | {{gap}}ಶ್ರೀಶಂಕರಾರ್ಯರಚಿತಂ ಸತತಂ ಮನುಷ್ಯಃ | {{gap}}ಸ್ತೋತ್ರಂ ಪಠೇದ್ಯ ಇಹ ಸರಗುಣಪ್ರಸನ್ನಮ್|| {{gap}} ಸದ್ಯೊವಿಮುಕ್ತಃಕಲುಷೋ ಮುನಿವರೈಗಣ್ಯಃ | {{gap}} ಲಕ್ಷ್ಮೀಪತೇಃ ಪದಮುಪೈತಿ ಸ ನಿರ್ಮಲಾತ್ಮಾ || ೨೪ || {{gap}}ಯನ್ಮಾಯಯೋರ್ಜಿತವಪುಃ ಪ್ರಚುರಪ್ರವಾಹ | {{gap}}ಮಗ್ನಾಥ೯ಮತ್ರ ನಿವಹೋರುಕರಾವಲಂಬಮ್ | {{gap}}ಲಕ್ಷ್ಮೀನೃಸಿಹ್ಮಚರಣಾಬ್ಬ ಮಧುವ್ರತೇನ | {{gap}}ಸ್ತೋತ್ರಂ ಕೃತಂ ಸುಖಕರಂ ಭುವಿ ಶಂಕರೇಣ | ೨೫ ||” ಎಂದು ಲಕ್ಷ್ಮೀನೃಸಿಹ್ಮನನ್ನು ಸ್ತುತಿಸಲು, ಲಕ್ಷ್ಮೀನೃಸಿಹ್ಮನು ಪ್ರತ್ಯಕ್ಷನಾಗಿ, ಆ ವಹ್ನಿ ಯಂ ಶಮನಮಾಡಿ, ಆಚಾರ್ಯರ ದೇಹವನ್ನು ತನ್ನ ಹಸ್ತಸ್ಪರ್ಶನದಿಂದ ಸುಖಶೀತಲವುಂ ಟಾಗುವಂತೆಮಾಡಿ, ಬಾಧೆಯಂ ಪರಿಹರಿಸಿ ಅಂತರ್ಹಿತನಾದನು. </poem><noinclude></noinclude> 1mlvj6v0pthe1hovgtgurcs2ncqbysz 322068 322067 2026-05-24T05:30:41Z Shreelatha.Halemane 7642 322068 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಶಂಕರಕಥಾಸಾರ|left=|right=೩೭}} <poem> {{gap}}ಪ್ರಹ್ಲಾದಮಾನಸಸರೋಜವಿಹಾರಭೃಂಗ| {{gap}}ಗಂಗಾತರಂಗ ಧವಳಾಂಗ ರಮಾಸ್ಥಿತಾಂಗ {{gap}} ಶೃಂಗಾರ ಸಂಗತ ಕಿರೀಟಲಸದ್ವರಾಂಗ | {{gap}} ಲಕ್ಷ್ಮೀನೃಸಿಹ್ಮ ಮಮ ದೇಹಿಕರಾವಲಂಬಮ್ || ೨೦ || {{gap}}ಮಾತಾ ನೃಸಿಹ್ಮಶ್ವ ಪಿತಾ ನೃಸಿಹ್ಮಃ | {{gap}}ಭ್ರಾತಾ ನೃಸಿಹ್ಮಶ್ವ ಸಖಾ ನೃಸಿಹ್ಮಃ || {{gap}}ನೃಸಿಹ್ಮದೇವಾನ್ನ ಪರಂ ನ ಕಿಂಚಿತ್ | {{gap}}ಲಕ್ಷ್ಮೀನೃಸಿಹ್ಮ ಮಮ ದೇಹಿಕರಾವಲಂಬಮ್ || ೨೧ || {{gap}}ಲಕ್ಷ್ಮೀಪತೇ ಕಮಲನಾಭ ಸುರೇಶ ವಿಷ್ಣೋ| {{gap}}ವೈಕುಂಠ ಕೃಷ್ಣ ಮಧುಸೂದನ ಪುಷ್ಕರಾಕ್ಷ | {{gap}} ಬ್ರಹ್ಮಣ್ಯ ಕೇಶವ ಜನಾರ್ದನ ವಾಸುದೇವ | {{gap}}ದೇವೇಶ ದೇಹಿ ಕೃಸಣಸ್ಯ ಕರಾವಲಂಬಮ್|| ೨೨ || {{gap}}ಶ್ರೀಮನ್ನೃಸಿಹ್ಮವಿಭವೇ ಗರುಡಧ್ವಚಾಯ | {{gap}}ತಾಪತ್ರಯೋಪಶಮನಾಯ ಛವೌಷಧಾಯ || {{gap}}ತೃಷ್ಣಾದಿ ವೃಶ್ಚಿಕ ಜಲಾಗ್ನಿ ಭುಜ೦ಗರೋಗ | {{gap}}ಕ್ಲೇಶನ್ಯಯಾಯ ಹರಯೇ ಗುರವೇ ನಮಸ್ತೇ || ೨೩ | {{gap}}ಶ್ರೀಶಂಕರಾರ್ಯರಚಿತಂ ಸತತಂ ಮನುಷ್ಯಃ | {{gap}}ಸ್ತೋತ್ರಂ ಪಠೇದ್ಯ ಇಹ ಸರಗುಣಪ್ರಸನ್ನಮ್|| {{gap}}ಸದ್ಯೊವಿಮುಕ್ತಃಕಲುಷೋ ಮುನಿವರೈಗಣ್ಯಃ | {{gap}}ಲಕ್ಷ್ಮೀಪತೇಃ ಪದಮುಪೈತಿ ಸ ನಿರ್ಮಲಾತ್ಮಾ || ೨೪ || {{gap}}ಯನ್ಮಾಯಯೋರ್ಜಿತವಪುಃ ಪ್ರಚುರಪ್ರವಾಹ | {{gap}}ಮಗ್ನಾಥ೯ಮತ್ರ ನಿವಹೋರುಕರಾವಲಂಬಮ್ | {{gap}}ಲಕ್ಷ್ಮೀನೃಸಿಹ್ಮಚರಣಾಬ್ಬ ಮಧುವ್ರತೇನ | {{gap}}ಸ್ತೋತ್ರಂ ಕೃತಂ ಸುಖಕರಂ ಭುವಿ ಶಂಕರೇಣ | ೨೫ ||” ಎಂದು ಲಕ್ಷ್ಮೀನೃಸಿಹ್ಮನನ್ನು ಸ್ತುತಿಸಲು, ಲಕ್ಷ್ಮೀನೃಸಿಹ್ಮನು ಪ್ರತ್ಯಕ್ಷನಾಗಿ, ಆ ವಹ್ನಿ ಯಂ ಶಮನಮಾಡಿ, ಆಚಾರ್ಯರ ದೇಹವನ್ನು ತನ್ನ ಹಸ್ತಸ್ಪರ್ಶನದಿಂದ ಸುಖಶೀತಲವುಂ ಟಾಗುವಂತೆಮಾಡಿ, ಬಾಧೆಯಂ ಪರಿಹರಿಸಿ ಅಂತರ್ಹಿತನಾದನು. </poem><noinclude></noinclude> cxx1lan0o0fx3qumwyj7xue4z8wam1t ಪುಟ:ನನ್ನ ಸಂಸಾರ.djvu/೧೭೬ 104 57459 322055 320662 2026-05-23T18:44:16Z Vikashegde 1258 /* Validated */ 322055 proofread-page text/x-wiki <noinclude><pagequality level="4" user="Pragathi. BH" />{{rh|center=ಕಾದಂಬರೀಸಂಗ್ರಹ|left=೩೮|right=}}</noinclude>{{gap}}ಅನಂತರ ಶಂಕರರು ಮಂಡನ ಪಂಡಿತನ ಮನೆಗೆ ಬಂದು, ಮಂಡನಪಂಡಿತನಿಂದ ಪೂಜಿಸಲ್ಪಟ್ಟವರಾಗಿ, ಶಾರದೆಯನ್ನು ವಾದಕ್ಕೆ ಕರೆಯಲು, ಶಾಂಕರಮಹಿಮೆಯನ್ನು ತಿಳಿದ ಶಾರದೆಯು, ದಂಪತಿಗಳಾದ ತಾವಿಬ್ಬರೂ ಸೋತೆವೆಂದೂ ಮತ್ತು ತನ್ನ ಅವತಾರ ಪೂರ್ತಿಯಾಯಿತೆಂದೂ ಲಜ್ಜೆಯಿಲ್ಲದೆ ಹೇಳಿ ಅಂತರ್ಹಿತಳಾಗಲು ಆಚರ್ಯರು ಆಕೆಯನ್ನು ಯೋಗದೃಷ್ಟಿಯಿಂದ ನೋಡಿ "ಎಲೌ, ಮಾತೆಯೇ! ನೀನು ಬ್ರಹ್ಮದೇವರ ಪತ್ನಿಯೆಂಬುದನ್ನೂ, ಈಶ್ವರನ ಸಹೋದರಿಯೆಂಬುದನ್ನೂ, ವಾಗ್ದೇವಿಯೆಂಬುದನ್ನೂ, ಪ್ರಪಂಚರಕ್ಷಣೆಗೋಸ್ಕರವೇ ಲಕ್ಷ್ಮ್ಯಾದಿ ರೂಪಗಳನ್ನೂ ಧರಿಸುತ್ತೀಯೆಂಬುದನ್ನೂ, ಬಲ್ಲೆನಾದ್ದರಿಂದ, ನಮ್ಮಿಂದ ರಚಿಸಲ್ಪಡುವ ಶೃಂಗೇರಾದಿ ಕ್ಷೇತ್ರಗಳಲ್ಲಿ ಶಾರದೆಯೆಂಬ ಹೆಸರಿನಿಂದ ನೆಲೆಗೊಂಡವಳಾಗಿ, ಜನರ ಇಷ್ಟಾರ್ಥಗಳನ್ನೀಯುತ್ತಾ ಸತ್ಪುರುಷರಿಂದ ಅರ್ಚಿಸಲ್ಪಡುತ್ತಿರಬೇಕು" ಎಂದು ಪ್ರಾರ್ಥಿಸಲು, ವೈಧವ್ಯ ಸಂಭವಿಸುವುದೆಂಬ ಶಂಕೆಯಿಂದ ಭೂಸ್ಪರ್ಶಮಾಡದೇ ನಿಂತಿದ್ದು, ಸಭೆಯವರಿಗೆಲ್ಲಾ ದರ್ಶನವನ್ನಿತ್ತು 'ತಥಾಸ್ತು' ಎಂದು ಹೇಳಿ, ಹಾಗೆಯೇ ಅಂತರಿಕ್ಷಕ್ಕೇರಿದ ಮಾಯವಾದ ಶಾರದೆಯನ್ನು ನೋಡಿ ಎಲ್ಲರೂ ಆಶ್ಚರ್ಯಭರಿತರಾದರು. ಅನಂತರ ಶಂಕರದೇಶಿಕರು ಮಂಡನಮಿಶ್ರನಿಗೆ ಸನ್ಯಾಸವನ್ನಿತ್ತು ಆತ್ಮತತ್ತ್ವಗಳನ್ನುಪದೇಶಿಸಿ ಸುರೇಶ್ವರಾಚಾರ್ಯರೆಂಬ ಹೆಸರನ್ನಿಟ್ಟು ಸಶಿಷ್ಯರಾಗಿ ದಕ್ಷಿಣಕಡೆಗೆ ಬಂದು, ಮಹಾರಾಷ್ತ್ರಾದಿದೇಶಗಳಲ್ಲಿ ತಮ್ಮ ಭಾಷ್ಯಗಳನ್ನು ಪ್ರಚಾರಮಾಡುತ್ತಾ ಶ್ರೀಶೈಲಕ್ಕೆ ಬಂದು ಪಾತಾಳಗಂಗೆಯಲ್ಲಿ ಸ್ನಾನಮಾಡಿ ಭ್ರಮರಾಂಬಾಸಹಿತನಾದ ಮಲ್ಲಿಕಾರ್ಜುನೇಶ್ವರನನ್ನು ಪೂಜಿಸಿ, ಅಲ್ಲಿದ್ದ ಪಾಶುಪತರು, ವೈಷ್ಣವರು, ವೀರಶೈವರು, ಮಾಹೇಶ್ವರರು ಮುಂತಾದವರನ್ನು ಸೋಲಿಸಿ, ಅವರಿಗೆಲ್ಲಾ, ಜ್ಞಾನಮಾರ್ಗೋಪದೇಶವಂಗೈಯುತ್ತಿದ್ದರು. {{rule|6em}}<noinclude></noinclude> crw6c6ikkkvii7flu1vcwqmu8slkfu3 ಪುಟ:ನನ್ನ ಸಂಸಾರ.djvu/೧೮೩ 104 57466 322063 314019 2026-05-24T03:18:44Z Shreelatha.Halemane 7642 /* Validated */ 322063 proofread-page text/x-wiki <noinclude><pagequality level="4" user="Shreelatha.Halemane" /></noinclude> {{rh|center=ಶಂಕರಕಥಾಸಾರ|left=|right=೪೫}} ಅದನ್ನು ಕೇಳಿ ಅಚಾರ್ಯರು "ಒಂದಾನೊಂದುಕಾಲದಲ್ಲಿ ಓರ್ವಸ್ತ್ರೀಯು ತನ್ನ ಎಳೆಯ ಹುಡುಗನನ್ನು ನೋಡಿಕೊಳ್ಳುತ್ತಿರುವಂತೆ ಯಮುನಾನದಿಯ ದಡದಮೇಲೆ ಕುಳಿತಿದ್ದ ಒಬ್ಬ ಯೋಗಿಯ ವಶಕ್ಕೆ ಕೊಟ್ಟು ತಾನು ತನ್ನ ಗೆಳತಿಯರೊಡನೆ ಎಲ್ಲಿಗೋ ಹೋಗಿ ಬರುವಷ್ಟರಲ್ಲಿ ತನ್ನ ಮಗನು ಮೃತನಾಗಿರುವುದನ್ನು ನೋಡಿ ಆಕೆಯು ವ್ಯಸ ನಾಕ್ರಾಂತಳಾಗುತ್ತಿರಲು ಆ ಯೋಗಿಯ ಪರಕಾಯಪ್ರವೇಶವಿದ್ಯಾಬಲದಿಂದ ತನ್ನ ಆತ್ಮವನ್ನು ಆ ಮಗುವಿನ ದೇಹದೊಳಕ್ಕೆ ನುಗ್ಗಿಸಿದ ಪ್ರಯುಕ್ತ ಅವಳ ಮಗುವು ನಿದ್ರೆ ಯಿಂದೆದ್ದವನಂತೆ ಎದ್ದು ಪ್ರಸಿದ್ಧನಾದೀ ಹಸ್ತಾಮಲಕಾಚಾರ್ಯನಾಗಿರುವನು ; ಇವನು ಸಕಲ ಶಾಸ್ತ್ರಜ್ಞನಾದರೂ ಅವಿಚ್ಛಿನ್ನ ಸಮಾಧಿ: ಷ್ಠನಾಗಿರುವುದರಿಂದ ಅವನು ವೃತ್ತಿಯ ಅರ್ಚನೆಗೆ ಅರ್ಹನಲ್ಲ, ಸನಂದನನು ಭಾಷ್ಯಕ್ಕೊಂದು ವ್ಯಾಖ್ಯಾನವಂ ಬರೆಯಲಿ" ಎಂದು ಹೇಳಿ ನೀನು ವಾರ್ತಿಕವಂ ಮಾಡಬೇಡ ; ನಿನ್ನ ಸಿದ್ಧಾನ್ತಜ್ಞಾನಪ್ರಕಶಗಳಾದ ಸ್ವತಂತ್ರಗ್ರಂಥಗಳಂ ರಚಿಸು" ಎಂದು ಸುರೇಶ್ವರರಿಗೆ ರಹಸ್ಯದಲ್ಲಿ ಹೇಳಲು ಅವರು ಅದರಂತೆ 'ನೈಷ್ಕರ್ಮಸಿದ್ದಿ 'ಯೆಂಬ ಸ್ವತಂತ್ರಗ್ರಂಥವನ್ನು ರಚಿಸಿ ಗುರುಗಳಿ ಗರ್ಪಿಸಲು ಅವರು ಮತ್ತು ಶಿಷ್ಯರೂ ಅದನ್ನು ನೋಡಿ ಸಂತುಷ್ಟರಾದರು. ಬಳಿಕ ಸುರೇಶ್ವರರು "ಈ ಭಾಷ್ಯಕ್ಕೆ ಇನ್ನು ಯಾರು ವಾರ್ತಿಕವನ್ನು ಬರೆದರೂ ಅದು ಪ್ರಚಾ ರಕ್ಕೆ ಬಾರದೇಹೋಗಲಿ ” ಎಂದು ಶಾಪವಿತ್ತರು. ಅನಂತರ ಶಂಕರದೇಶಿಕರು “ ನನ್ನದು ಯಜುಶ್ಮಾಖೆ ; ನಿನ್ನ ದು ಕಣ್ವಶಾಖೆ ; ಆ ರಡರ ಭಾಷ್ಯಕ್ಕೂ ವಿವರಣ, ವಾರ್ತಿಕ' ಗಳೆಂಬ ಗ್ರಂಥಗಳನ್ನು ರಚಿಸು ' ಎಂದು ಸುರೇಶ್ವರರಿಗೆ ಹೇಳಲು ಅವರು ಅದರಂತೆ ಗ್ರಂಥಗಳು ರಚಿಸಿ ಆಚಾರ್ಯರಿಗಷ್ಯಸಿದರು. ಪದ್ಮಪಾದರು ಆಚಾರ್ಯರ ಅಪ್ಪಣೆಯಂತೆಯೇ ಭಾಷ್ಯಕ್ಕೆ ಎರಡು ಭಾಗಗಳುಳ್ಳ ಟೀಕೆಯಂ ಬರೆದರು.ಅದರಲ್ಲಿ ಪೂರ್ವಭಾಗವು ಪಂಚಪಾದಿಕೆಯೆಂತಲೂ ಉತ್ತರ ಭಾಗವು ವೃತ್ತಿಯೆಂತಲೂ ಹೆಸರುಹೊಂದಿ ವಿಜಯಡಿಂಡಿಮವೆನಿಸಿದವು. ಆಚಾರ್ಯರು ಎರಡು ಭಾಗಗಳನ್ನೂ ಕೇಳಿ ಪೂರ್ವಭಾಗವಾದ ಪಂಚವಾದಿ ಕೆಯೇ ಚೆನ್ನಾಗಿದೆ ; ಮತ್ತು ಅದೇ ಪ್ರಪಂಚದಲ್ಲಿ ಪ್ರಖ್ಯಾತವಾಗಿ ನಿಲ್ಲುವುದು. ಮುಂದೆ ನೀನು ವಾಚಸ್ಪತಿಯೆಂಬ ಹೆಸರಿನಿಂದ ಭೂಮಿಯಲ್ಲ ವತರಿಸಿ ನನ್ನ ಭಾಷ್ಯಕ್ಕೆ ಟೀಕೆಯನ್ನು ರಚಿಸುವೆ ; ಅದು ಶಾಶ್ವತವಾಗಿ ನಿಲ್ಲುವದು” ಎಂದು ಹೇಳಿದರು. ಬಳಿಕ ದೇಶಿಕರು ಉಳಿದ ತಮ್ಮ ಶಿಷ್ಯರಂ ಕರೆದು "ನಿಮ್ಮ ನಿಮ್ಮ ಯೋಗ್ಯ ತಾನುಸಾರವಾಗಿ ಅದ್ವೈತಗ್ರಂಥಗಳಂ ರಚಿಸಿರಿ' ಎಂದಾಜ್ಞಾಪಿಸಲು ಅವರು ಅದ ರಂತೆ ಗ್ರಂಥಗಳಂ ರಚಿಸಿ ಗುರುವಿಗರ್ಪಿಸಿದರು. ಈ ಪ್ರಕಾರವಾಗಿ ಆಚಾರ್ಯರು ಜ್ಞಾನಮಾರ್ಗಪ್ರಚಾರಮಾಡುತ್ತಿದ್ದರು.<noinclude></noinclude> 3jp8fwgu6wrvjpil6y8b6g3hmd2u3bm ಪುಟ:ನನ್ನ ಸಂಸಾರ.djvu/೨೧೪ 104 57497 321987 160458 2026-05-23T12:42:44Z Vikashegde 1258 /* Validated */ 321987 proofread-page text/x-wiki <noinclude><pagequality level="4" user="Vikashegde" />{{rh|center=ಕಾದಂಬರೀಸಂಗ್ರಹ|left=4|right=}}</noinclude>{{gap}}೫ನೆಯ ನಿಬಂಧನೆಯಲ್ಲಿ "ಎರಡನೆಯ ವರ್ಗದ ಸಾಧಾರಣಸಭ್ಯರು ಹೊರತು ಮಿಕ್ಕ ಸಭ್ಯರೆಲ್ಲರಿಗೂ ಪರಿಷತ್ತಿನ ಸಾಮಾನ್ಯಸಭೆಗಳಲ್ಲಿ ತಮ್ಮಅಭಿಮತವನ್ನು ತಿಳಿಸುವ ಸ್ವಾತಂತ್ರ್ಯವಿರತಕ್ಕುದು ; ಮತ್ತು ಪರಿಷತ್ತಿನಿಂದ ಪ್ರಕಟವಾಗುವ ಗ್ರಂಥಗಳ ಮತ್ತು ಪತ್ರಿಕೆಗಳ ಒಂದೊಂದು ಪ್ರತಿಯ. ಅವರಿಗೆ ಉಚಿತವಾಗಿ ದೊರೆಯತಕ್ಕುದು" ಎಂದು ಹೇಳಿದೆ. ಇದರಲ್ಲಿ ಎರಡನೆಯ ವರ್ಗದವರನ್ನು ವಿನಾಯಿಸಿರುವ ಮಟ್ಟಿಗೆ ಈ ನಿಬಂಧನೆಯನ್ನು ತಿದ್ದಿಕೊಳ್ಳಬೇಕಾಗಿದೆ. ಅವರ ವಾರ್ಷಿಕವರ್ಗಣಿಯನ್ನೂ ೩ ರೂ.ಗೆ ಇಳಿಸಿ ಮತಾಧಿಕಾರವನ್ನೂ ಪುಸ್ತಕಾದಿಗಳನ್ನು ಪಡೆಯುವ ಸ್ವಾತಂತ್ರವನ್ನೂ ಕೂಡ ಅವರಿಗೆ ಕೊಡಬೇಕೆಂದು ನಾನು ಹೇಳುವುದು ಕೆಲವರಿಗೆ ವಿಪರೀತ ಸೂಚನೆಯಾಗಿ ತೋರಬಹುದು. ಆದರೆ ನಮ್ಮ ದೇಶದಮಟ್ಟಿಗೆ ದಾರಿದ್ರ್ಯವನ್ನೂ ಒಂದು ಅಪರಾಧವಾಗಿ ನಾವು ತಿಳಿಯತಕ್ಕುದಲ್ಲ. ಇದಲ್ಲದೆ ಯಾವ ತರಗತಿಯ ಸಭ್ಯರಲ್ಲಿಯೂ ಬಲು ದೊಡ್ಕ ಭಾಗದವರು ಬೆಂಗಳೂರಿನ ಹೊರಗಿರುವವರಾಗಿ ಅವರಿಗೆ ಪರಿಷತ್ತಿನಿಂದ ಅಚ್ಚಾದ ಪುಸ್ತಕಪತ್ರಿಕಾದಿಗಳನ್ನು ಪಡೆಯುವ ಮತ್ತು ಸಮ್ಮೇಳನದ ಕಾಲದಲ್ಲಿ ಮತ (Vote) ಕೊಡುವುದಕ್ಕಿಂತ ಹೆಚಿನ ಯಾವ ಪ್ರಯೋಜನವೂ ದೊರೆಯುವಂತಿಲ್ಲವೆಂಬುದನ್ನು ಈ ಸಂದರ್ಭದಲ್ಲಿ ಮರೆಯತಕ್ಕುದಲ್ಲ. ಆದುದರಿಂದ ಪತ್ರಿಕೆಯನ್ನು ಮಟ್ಟಿಗೆ ಸಮಸ್ತ ವರ್ಗದವರಿಗೆ ಉಚಿತವಾಗಿ ಕೊಟ್ಟು ಪುಸ್ತಕಗಳ ವಿಷಯದಲ್ಲಿ ಸಂದರ್ಭಾನುಸಾರ ವರ್ತಿಸಲು ಕಾರ್‍ಯನಿರ್ವಾಹಕರಿಗೆ ಅಧಿಕಾರ ಕೊಡುವುದು ಯುಕ್ತವಾಗಿದೆ. ಇನ್ನು, ಬೆಂಗಳೂರಿನಲ್ಲಿಯೇ ಇದು ಪ್ರಸ್ತಕಾಲಯದ ಪ್ರಯೋಜನವನ್ನೂ ಪಡೆಯುವ ಸದಸ್ಯರ ಸಂಗತಿಯಲ್ಲಿ ಬೇಕಾದರೆ ಸ್ಥಳೀಯ ವರ್ಗಣಿಯಾಗಿ ವರ್ಷಕ್ಕೆ ೧ರೂ.ಯಂತೆ ಹೆಚಾಗಿ ಪಡೆಯಬಹುದು. ಇತರ ಸದಸ್ಯರು ಕೂಡ ತಮ್ಮ ತಮ್ಮ ಪಟ್ಟಣಗಳಲ್ಲಿ ಉಪಶಾಖೆಗಳನ್ನು ಹೊರಡಿಸಿದಾಗ ಆಯಾ ಶಾಖೆಯ ಪೋಷಣೆಗಾಗಿ ಇದೇ ಮೇರೆಗೆ ೧ರೂ. ಸ್ಥಳೀಯ ವರ್ಗಣಿಯನ್ನು ಕೊಡತಕ್ಕುದೆಂದು ನಿಬಂಧಿಸಬಹುದು. {{gap}}ಹಾಗೆಯೇ, ೨ನೆಯ ವರ್ಗದ ಸಭ್ಯರಿಗೆ ಮತಾಧಿಕಾರವು ಏತಕ್ಕೆ ಇರಬಾರದೆಂಬುದೂ ಆಲೋಚಿಸತಕ್ಕ ಒಂದು ವಿಷಯವಾಗಿದೆ. ಅವರು ಕೊಡುವ ವರ್ಗಣಿಯು ಕಡಿಮೆಯೆಂಬ ಒಂದೇ ಕಾರಣದಿಂದ ಅವರನ್ನು ಈ ರೀತಿಯಾಗಿ ನಡೆಯಿಸಿಕೊಳ್ಳುವುದು ಎಷ್ಟು ಮಾತ್ರಕ್ಕೂ ಯೋಗ್ಯವಲ್ಲವೆಂದು ನಾನು ಭಾವಿಸುವೆನು. ಸಾಮಾನ್ಯವಾಗಿ ಈ ವರ್ಗಕ್ಕೆ ವಿದ್ಯಾರ್ಥಿಗಳೂ ಅನುಭವ ಕಡಿಮೆಯಾಗಿರುವ ತರುಣರೂ ಇತರ ಸ್ವಲ್ಪ ಆದಾಯವುಳ್ಳ ಜನರೂ ಸೇರುವರಾದುದರಿಂದಲೂ ಈ ವರ್ಗದವರ ಸಂಖ್ಯೆಯೇ{{nop}}<noinclude></noinclude> rk9omtyd9gqb5hiszuvfasweu6unq5x ಪುಟ:ನನ್ನ ಸಂಸಾರ.djvu/೨೫೬ 104 57539 322053 160698 2026-05-23T18:36:20Z Vikashegde 1258 /* Validated */ 322053 proofread-page text/x-wiki <noinclude><pagequality level="4" user="Vikashegde" />{{rh|center=ಕಾದಂಬರಿಸಂಗ್ರಹ|left=30|right=}}</noinclude>ವಾದ ಚಿತ್ರಪಠಗಳಿಂದ ಅಲಂಕರಿಸಿದ್ದರು. ಈ ಗೃಹವು ಮೊದಲು ಸುವರ್ಣಪುರಾಧೀಶ್ವರನ ಬೇಸಿಗೆಯಕಾಲದ ಆರಾಮಮಂದಿರವಾಗಿದ್ದಿತು. ಅವಂತೀಶನು ಆ ರಾಜ್ಯವನ್ನು ತನ್ನ ಕೈವಶಮಾಡಿಕೊಂಡ ಕೂಡಲೇ ಪಟ್ಟಣದ ನಾನಾ ಭಾಗಗಳಲ್ಲಿಯ ಯುದ್ಧದಲ್ಲಿ ಮೃತಪಟ್ಟವರ ದೇಹಗಳು ನಾರುತ್ತಾ ಕೊಳೆತು ದುರ್ಗಂಧಗಳನ್ನು ದೆಸೆ ದೆಸೆಗೂ ಬೀರುತ್ತಿದ್ದುದರಿಂದ ಆ ದುರ್ಗಂಧವನ್ನು ಸಹಿಸಲಾರದೆ ಈ ಮಂದಿರದಲ್ಲೇ ವಾಸಿಸುತ್ತಿದ್ದನು. {{gap}}ಸೇನಾಪತಿಯು ರೋಹಿಣಿ ಕರುಣಾಂಬೆಯರೊಂದಿಗೆ ಆ ಮಂದಿರಕ್ಕೆ ಪ್ರವೇಶಿಸಿದನು. ದಿವಾನಖಾನೆಯಲ್ಲಿ ಆರಾಮಕುರ್ಚಿಯಮೇಲೆ ಸುಖಾಸೀನನಾಗಿದ್ದ ಅವಂತೀಶ್ವರನಿಗೆ ರೋಹಿಣಿ ಕರುಣಾಂಬೆಯರನ್ನು ತಾನು ಹುಡುಕಿಸಿ ಕರತಂದಿರುವೆನೆಂದು ವಿಜ್ಞಾಪಿಸಿಕೊಂಡು ಆ ಯುವತಿಯರಿಬ್ಬರನ್ನೂ ದಿವಾನಖಾನೆಯಲ್ಲಿಯೇ ಬಿಟ್ಟು ತಾನು ಹೊರಟು ಹೋದನು. ಆ ಅವಂತೀಶನು, ಮೌನದಿಂದ ತಲೆವಾಗಿ ರೋಹಿಣಿ ಕರುಣಾಂಬೆಯರನ್ನು ಕುರಿತು ನೀವು ಯಾರೆಂದು ಪ್ರಶ್ನೆ ಮಾಡಲು ಯಾವ ಉತ್ತರವೂ ಬರಲಿಲ್ಲ. ಅವಂತೀಶ:-ಎಲೌ ಸುಂದರಿಯರೆ ಏತಕ್ಕೆ ಮೌನವನ್ನು ಧರಿಸಿರುವಿರಿ? ನನ್ನನ್ನು ನಿಮ್ಮ ಸಹೋದರನೆಂದು ನಂಬಿ ನಿಮ್ಮ ವೃತ್ತಾಂತವನ್ನ ತಿಳಿಸಿರಿ. ಕರುಣಾಂಬೆ :-ಭೂಮೀಶ್ವರನೆ ! ನಾನು ಸುವರ್ಣಪುರಾಧೀಶ್ವರನ ತೃತೀಯ ಪತ್ನಿಯು. ಈಕೆಯು ನನ್ನ ಸೋದರಪಾಲಿತ ಪುತ್ರಿ. ಅವಂತೀಶ :-ಹಾಗಾದರೆ ನಿಮ್ಮ ಸೋದರರು ಯಾರು? ಕರುಣಾಂಬೆ:-ಆ ಪರೋಪಕಾರಶಿಖಾಮಣಿಗಳು ತಮಗೂ, ಸುವರ್ಣಪುರಾಧೀಶ್ವರನಿಗೂ, ನಡೆದ ಯುದ್ಧರಂಗದಲ್ಲಿ ಘಾಯಪಟ್ಟು ಮರಣೋನ್ಮುಖರಾಗುವವರ ಸಹಾಯಕರಾಗಿ ಇಲ್ಲಿ ಇರುವರೆಂದು ತಿಳಿದು, ಬಂದೆವು. ಅವಂತೀಶ:-ಹಾಗಾದರೆ ನೀವು ಕರುಣಾಕರ, ದಯಾಕರರ ಸಹೋದರಿಯರೊ? ಕರುಣಾಂಬೆ :-ಹೌದು, ಮಹಾಪ್ರಭು ! ಅವಂತೀಶ :-ನಿಮ್ಮ ಬಳಿಯಲ್ಲಿ ನಿಂತಿರುವ ಈ ಸುಂದರೀಮಣಿಯು ಕರುಣಾಕರರ, ದಯಾಕರರ ಸಾಕುಮಗಳೆಂದು ಹೇಳಿದರಷ್ಟೆ? ಅದು ಹೇಗೆ? ಕರುಣಾಂಬೆಯು ಅವಂತೀಶನೊಡನೆ ರೋಹಿಣಿಯು ಶಿಶುವಾಗಿದ್ದಾಗಿನಿಂದಲೂ ಅವಳ ಚರಿತ್ರೆಯನ್ನು ಸವಿಸ್ತಾರವಾಗಿ ವಿಜ್ಞಾಪಿಸಿಕೊಂಡಳು. ಇದನ್ನು ಕೇಳಿದ ಕೂಡಲೇ ಅವಂತೀಶನು ತುಂಬಾ ವ್ಯಸನಾಕ್ರಾಂತನಾಗಿ ರೋಹಿಣಿ ಕರುಣಾಂಬೆಯರ ಕಡೆಗೆ ತಿರುಗಿ<noinclude></noinclude> 6bwisyfahczmh0g2urytec9wp3angqu ಪುಟ:ನನ್ನ ಸಂಸಾರ.djvu/೨೫೭ 104 57540 322054 160697 2026-05-23T18:40:23Z Vikashegde 1258 /* Validated */ 322054 proofread-page text/x-wiki <noinclude><pagequality level="4" user="Vikashegde" />{{rh|center=ರೋಹಿಣಿ.|left=|right=31}}</noinclude>{{gap}}ಎಲೌ! ಭಾತೃವಾತ್ಸಲರಾದ ರಮಣಿಯರೆ? ನೀವು ಯಾವವಿಧವಾದ ಯೋಚನೆಯನ್ನೂ ಮಾಡದಿರಿ! ಕರುಣಾಕರ ದಯಾಕರರೀರ್ವರನ್ನೂ ಈ ದಿನ ಸಂಧ್ಯಾ ಕಾಲದೊಳಗಾಗಿ ಎಲ್ಲಿದ್ದರೂ ಹುಡುಕಿಸಿ ತಮ್ಮ ಬಳಿಗೆ ಬರಮಾಡುವೆನು ಎಂದು ಹೇಳಿ ರೋಹಿಣಿಯನ್ನು ಕಣ್ಣು ತುಂಬ ನೋಡಿ ಆನಂದಪರವಶನಾಗಿ ಸೈನ್ಯಾಧಿಕಾರಿಯನ್ನು ಕುರಿತು ಈ ಯುವತಿಯರಿಬ್ಬರನ್ನೂ ಕರೆದುಕ್ಕೊಂಡು ಹೋಗಿ ಅವರಿಗಾಗಿ ಬೇರೆಯೊಂದು ಕೊಠಡಿಯನ್ನು ತೆರವುಮಾಡಿಕೊಡಬೇಕು. ಮತ್ತು ಇವರ ಉಪಚಾರಗಳನ್ನು ನೀನೇ ಸಾಕ್ಷಾತ್ತಾಗಿ ನೋಡಿಕೊಳ್ಳಬೇಕೆಂದು ಆಜ್ಞೆಯಿತ್ತು ಭೋಜನಶಾಲೆಯನ್ನು ಹೊಕ್ಕನು. {{gap}}ಭೋಜನಾಲಯದಲ್ಲಿ ಪದ್ಧತಿಗನುಸಾರವಾಗಿ ಎಲ್ಲವೂ ಸಿದ್ಧವಾಗಿದ್ದಿತು. ರಾಜಬಂಧುಗಳೂ, ಮಂತ್ರಿಗಳೂ, ಸೇನಾಧಿಕಾರಿಗಳೂ ಇತರ ಅಧಿಕಾರಿಗಳೂ ತಮ್ಮ ತಮ್ಮ ನಿಯಮಿತಸ್ಥಳಗಳಲ್ಲಿ ಕುಳಿತರು. ಎಲ್ಲರೂ ಭುಂಜಿಸಿದರು. ಆದರೆ ಚಕ್ರವರ್ತಿಯು ಮಾತ್ರ ನಿತ್ಯವೂ ಇದ್ದಂತೆ ಇರದೆ ಯಾರಜೊತೆಯಲ್ಲಿಯೂ ಮಾತನ್ನಾಡದೆ ಸುಮ್ಮನೆ ಯಾವುದೋ ಯೋಚನೆಯಲ್ಲಿ ಮಗ್ನನಾಗಿದ್ದುದನ್ನು ಕಂಡು ಉಳಿದವರೆಲ್ಲರೂ ಚಕಿತರಾದರು. ಆದರೆ ಕಾರಣವನ್ನು ಕೇಳಲು ಯಾರಿಗೆ ತಾನೇ ಧೈರ್ಯ. ಯಾರೊಬ್ಬರೂ ಯಾವ ಪ್ರಸ್ತಾಪವನ್ನೂ ಮಾಡಲಿಲ್ಲ. ಸೇನಾಪತಿಯು ರೋಹಿಣಿ, ಕರುಣಾಂಬೆಯರನ್ನು ಕರೆದುಕೊಂಡು ಬಂದುಬಿಟ್ಟ ಸಂಗತಿ ವಿನಹ ಮತ್ಯಾವದನ್ನೂ ಅರಿಯನು. {{rule|6em}} {{center|'''ಸಸ್ತಮಲಹರಿ.'''}} {{rule|3em}} {{gap}}ಚಿಂತೆಗೂ ಚಿತೆಗೂ ಒಂದು ಬಿಂದು ಮಾತ್ರ ವ್ಯತ್ಯಾಸವಿರುವಾದರೂ ಮೊದಲನೆಯದು ನಿರ್ಜೀವ ವಸ್ತುಗಳನ್ನೂ ಎರಡನೆಯದು ಸಜೀವ ವಸ್ತುಗಳನ್ನೂ ದಹಿಸಿಬಿಡುವುದು. ಲೋಕದಲ್ಲಿ ಎಲ್ಲಾ ರೋಗಗಳಿಗೂ ಔಷಧಗಳೂ ಚಿಕಿತ್ಸೆಗಳೂ ಉಂಟು. ಆದರೆ ಈ ಚಿಂತಾರೋಗಕ್ಕೆ ಯಾವ ಔಷಧವೂ ಚಿಕಿತ್ಸೆಯೂ ದೇವಲೋಕದ ವೈದ್ಯ ಶಿರೋಮಣಿಗಳಾದ ಅಶ್ವನೀದೇವತೆಗಳೂ ಕೂಡ ಕಂಡುಹಿಡಿದ ಹಾಗೆ ಕಾಣಬರಲಿಲ್ಲ.{{nop}}<noinclude></noinclude> k5g55x4mbiivuqutz4t9q6x9k2m8vuj ಪುಟ:ನನ್ನ ಸಂಸಾರ.djvu/೨೬೮ 104 57551 322120 159316 2026-05-24T10:29:24Z Vikashegde 1258 /* Validated */ 322120 proofread-page text/x-wiki <noinclude><pagequality level="4" user="Vikashegde" /></noinclude><div style="display: flex; flex-direction: column; justify-content: center; min-height: 80vh; text-align: center;"> ರಾಯಲ್ ಪ್ರೆಸ್, ಮೈಸೂರು<br /> 1916 </div><noinclude></noinclude> m2nbgnz03sr26hih1t3e6oo09ourrwg ಪುಟ:ನನ್ನ ಸಂಸಾರ.djvu/೨೬೯ 104 57552 322125 160912 2026-05-24T10:43:31Z Vikashegde 1258 /* Validated */ 322125 proofread-page text/x-wiki <noinclude><pagequality level="4" user="Vikashegde" /></noinclude>{{center|'''ಪೀಠಿಕೆ .'''}} ಸ್ಕಾಂದಪುರಾಣಾಂತರ್ಗತವಾಗಿರುವ ಈ ಗಣಪತಿಯ ಮಹಿಮೆಯಲ್ಲಿ 24 ಅಧ್ಯಾಯಗಳಿರುವುವು. ಇದುವರೆಗೂ ಈ ಗಣಪತಿಯ ಮಹಿಮೆಯು ಕನ್ನಡದಲ್ಲಿ ಪದ್ಯ ರೂಪವಾಗಿ ಪ್ರಕಟವಾದಂತೆ ಕಾಣಿಸಲಿಲ್ಲ. ಈಗ ಗಣಪತಿಯನ್ನು ಸರ಼಼್ವರೂ ಕಾರ್ಯಾರಂಭದಲ್ಲಿಯೇ ಅರ್ಚಿಸುತ್ತಿರುವುದು ಸುಪ್ರಸಿದ್ಧವಾಗಿದೆ. ಹೀಗೆ ಆದಿಪೂಜ್ಯನಾದ ವಿನಾಯಕನ ಅವತಾರ ಕಥೆಯನ್ನು ಸರ್ವರೂ ತಿಳಿಯಬೇಕಾದುದು ಬಹಳ ಅವಶ್ಯಕವಾದ ಕಾರಣ ಇದನ್ನು ಕನ್ನಡದಲ್ಲಿ ಬರೆದೆನು. ಪ್ರಕಾಶಕ್ಕೆ ಅವಕಾಶವಿಲ್ಲದೆ ಬಹಳ ದಿನದಂದಲೂ ಹಾಗೆಯೇ ಇದ್ದ ಈ ಗ್ರಂಥವನ್ನು ಮೊದಲು ಮೈಸೂರು ನಾರ್ಮಲ್ ಸ್ಕೂಲಿನಲ್ಲಿ ನಮಗೆ ಕನ್ನಡ ಗ್ರಂಥವನ್ನು ಬೋಧಿಸುತ್ತಿದ್ದು, ಪ್ರಕೃತದಲ್ಲಿ ಮದ್ರಾಸ್‌ ಗೌರ್ನಮೆಂಟ್ ಕನ್ನಡ ಟ್ರಾನ್‌ಸ್ಲೇಟರಾಗಿರುವ ಮ|| ರಾ|| ಬಿ. ರಾಮರಾವ್ M.A. L.L.B. ಯವರು ದಯವಿಟ್ಟು ಪರಾಂಬರಿಸಿ ನನಗಾಗಿ ತೊಂದರೆಯನ್ನು ತೆಗೆದುಕೊಂಡು ಅರ್ಧಭಾಗವನ್ನು ಪ್ರಕಾಶಕ್ಕೆ ಬರುವಂತೆ ಅವಕಾಶಮಾಡಿಕೊಟ್ಟರಲ್ಲದೆ, ಈ ಪುಸ್ತಕಕ್ಕೆ ವಿನಾಯಕವಿಜಯವೆಂಬ ಹೆಸರನ್ನು ಇಟ್ಟು ಕೊಟ್ಟಿರುತ್ತಾರೆ. ಅದಕ್ಕಾಗಿ ಆ ಮಹನೀಯರಿಗೆ ಬಹಳ ಕೃತಜ್ಞನಾಗಿರುವೆನು. ಇದಕ್ಕ ಮುಂಚೆ ಈ ಗ್ರಂಥವನ್ನು ಆಮೂಲಾಗ್ರವಾಗಿ ನೋಡಿ ಪರಿಶೋಧಿಸಿದ ಮ|| ರಾ|| ಆರ್ ಶ್ರೀನಿವಾಸರಾಯರ ಸಹಾಯವು ಚಿರಸ್ಮರಣೀಯವಾಗಿರುವುದು. ಮೊದಲಿಂದಲೂ ನನ್ನ ಮೇಲೆ ಪೂರ್ಣವಿಶ್ವಾಸವನ್ನಿಟ್ಟು ಪದೇಶಿಸಿದ ತ್ಯಾಮಗೊಂಡ್ಹು ಎ.ವಿ.ಸ್ಕೂಲ್‌ ಸಂಸ್ಕೃತಪಂಡಿತರಾದ ವೇ|| ಬ್ರ|| ಶ್ರೀ|| ಕೃಷ್ಣಮೂರ್ತಾಚಾರ಼಼್ಯರ ಅಮೋಘವಾದ ಅನುಗ್ರಹವೇ ಸಕಲ ಶ್ರೇಯಸ್ಸಿಗೂ ಕಾರಣವಾಗಿರುವುದೆಂದು ತಿಳಿಸಲು ಸಂತುಷ್ಟನಾಗಿರುತ್ತೇನೆ. ಇದನ್ನು ತಮ್ಮ ಅಮೋಘವಾದ ಕಾದಂಬರಿ ಸಂಗ್ರಹ ಮಾಸಪತ್ರಿಕೆಯಲ್ಲಿ ಪ್ರಕಟಿಸಿ ಸಹಾಯಮಾಡಿದ ವೇ || ಚಾ || ವೆಂಕಟ ರಮಣಶಾಸ್ತ್ರಿಗಳಿಗೆ ನಾನು ಕೃತಜ್ಞನಾಗಿದೇನೆ. ಕನ್ನಡಭಾಷಾಭಿಮಾನಿಗಳೆಲ್ಲರೂ ಇದಕ್ಕುತ್ತೇಜನವನ್ನಿತ್ತು ಪ್ರೋತ್ಸಾಹಿಸುವರೆಂದು ನಂಬಿರುವ ತಮ್ಮ ವಿಧೇಯನಾದ {{rh|center=|left=ಆನೆಕಲ್|right=ವೆಂಕಟಸುಬ್ಬಯ್ಯ}} {{rh|center=|left=ತಾ.10-8-1916|right=ಮುಖ್ಯೋಪಾಧ್ಯಾಯ,}} {{rh|center=|left=|right=ಆನೆಕಲ್,ಕರ್ಣಾಟಕಪಾಟಶಾಲಾ }}<noinclude></noinclude> h14u9y261nedulvmfaoed5sz99g07qv ಪುಟ:ನನ್ನ ಸಂಸಾರ.djvu/೨೭೦ 104 57553 322128 160913 2026-05-24T10:50:07Z Vikashegde 1258 /* Validated */ 322128 proofread-page text/x-wiki <noinclude><pagequality level="4" user="Vikashegde" /></noinclude><poem>ಕಂ|| ಗುರುವೇ ಬೊಮ್ಮಂಗುರುವೇ| ವರವಿಷ್ಟುವೆ ನಿಪ್ಪ ನಾಗುರುವುಮಾಪತಿಯೈ || ಗುರುವೇ ಸಾಕ್ಷಾದಜನೈ| ಪಿರಿದಾಗುರುಚರಣ ಕೇಗಳಾನತನಪ್ಪೆಂ||೧|| ಮೆರೆವುದೊ ಮೈಸೂರ಼್ನಾಡೋಳ್ ವರಶಿವಗಂಗಾಭಿಧಾನ ಯಾತ್ರಾಸ್ಥಲಮೇಂ || ಕರೆವರ್ ದಕ್ಷಿಣಕಾಶೀ| ಪುರಮೆಂದವನೀಧ್ರಮಂಕಕುದ್ಗಿರಿಯೆಂಬರ್||೨|| ಇದರೆಡೆಯೊಳ್ಪಾವನ ಮೆನ| ಲದುವೆ ಪುರಂ ತ್ಯಾಮಗೊಂಡ್ಲ ವೆಂಬಾಸೆಸರಿಂ || ಪದದೇಂ ಮರೆಗುವೊ ಸುಜನಾ। ಸ್ಪದಮಾಗಿರ್ಪುದು ಸಮಸ್ತವಸುಸಂಚಯದಿಂ||೩|| ವ||ಆಪುರದೊಳ್ ಶ್ರೀಕಂಠೇಶ್ವರ ಭಕುತಂ | ಶ್ರೀಕಂಠಾಹ್ವಯ ಮಹೀಸುರಂ ಛಂದೋಗಂ || ಶ್ರೀಕರ ವಾಸಿಷ್ಠಾನ್ವಯ | ನಾಕರುಣಾಕರನದೆಂತು ಮೆರೆದನೊಜಸದಿಂ||೪|| ಪಿರಿದುಂ ವ್ರತನಿಯಮದೊಳಂ| ಪರಮೌದಾರ್ಯಂಗಳೊಳಗೆ ಪಾಸಟಿಯಿಲ್ಲಂ|| ನೆರೆಮೆರೆವಾತನ ತನಯಂ | ವರನಂಜುಂಡಯ್ಯ ನೆಂಬ ಭೂಸುರನೆಸೆವಂ ||೫|| ವರನಂಜುಂಡಯ್ಯಸುತಂ। ವರಗುರುಚರಣಾರವಿಂದಮಧುರೋಲಂಬಂ || ಬರೆದಂ ವೇಂಕಟಸುಬ್ಬಂ| ವರವಿಘ್ನೇಶ್ವರ ಚರಿತ್ರಮಂ ಷಟ್ಟದಿಯೊಳ್ ||೬|| </poem> {{rule|3em}}<noinclude></noinclude> bp2pwyw6gyrwm2ufbm34oe29tox6ckz ಪುಟ:ನನ್ನ ಸಂಸಾರ.djvu/೨೯೬ 104 57580 322052 161004 2026-05-23T18:31:15Z Vikashegde 1258 /* Validated */ 322052 proofread-page text/x-wiki <noinclude><pagequality level="4" user="Vikashegde" />{{rh|centerಬೆನಕನಮಹಿಮೆ=|left=೨೬|right=}}</noinclude><poem> ಬ್ಬರನು ಬೆನಕನ ಸನಿಯಕೈದಿಸಿ ಜಯವಬೆಸಗೊಂಡ ||೨೬|| ಮಡಿದರೆಲ್ಲರು ಗಣನ ಸೈನಿಕ|ರಿಡಿದುಬಂದೆನು ತಂದೆ! ರಣದೊಳು ಪಿಡಿದುಮಿವರನು, ಗಣನು ಮೊರ್ವನುಸಿಂತನಿಂದಿನೊಳು|| ಬಿಡದೆ ನೀನೇ ಕೊಂದು ಗಣನನು| ಮೊಡರಿಸಮೃತವ ನವಗಮಿಳೆಯೊಳ| ಗೊಡೆಯದೈತ್ಯನ ಸುತರಿಗವನಿಯ ನೀಡುನೀನೆಂದ ||೨೭|| </poem> <small>ಇಂತು ಸ್ಕಾಂದಪುರಾಣಾಂತರ್ಗತಮಾದ ವಿನಾಯಕವಿಜಯದೊಳ್ ಚಿಂತಾಮಣ್ಯುಪಾಖ್ಯಾನವೆಂಬ ಆರನೆಯ ಪ್ರಕರಣವು ಮುಗಿದುದು. </small> {{rule|5em}} {{center|'''ಏಳನೆಯ ಪ್ರಕರಣವು.'''}} {{rule|3em}} <poem> <small>ಸೂ|| ದುರುಳ ಗಣನನು ಕೊಂದು ಗಣಪನು ಪರಮಚಿಂತಾಮಣಿಯ ಪೆಸರನು| ತಿರೆಯೊಳೊಂದಿಯೆ ಮುನಿಯ ಕಪಿಲನಕಾಯ್ದನೇನೆಂಬೆ||</small> </poem> <poem> ತನುಜ ಕೇಳೈ ಸಿದ್ದಿ ಪುತ್ರನು|ವಿನುತಲಕ್ಷನು ಜಯಿಸಿ ಬಲವನು| ಜನಪಸೂನುಗಳೆಂದು ಕುವರರ ತಿಳಿದು ಸಲಹಿದನು || ಮನದೊಳಂಜಿಕೆಯಾಂತರುಳಿದರು|ಕೊನೆಗೆ ತಾಂಗ್ರಂಥನರಗುವರ| ಬೆನಕಲ್ಲಿಗೆ ಲಕ್ಷನುಯ್ದನೆನುತ್ತೆ ತಾತಿಳಿದ ||೧|| ಶೂಲಪಾಣಿಯು ಸುಲಭರಿಬ್ಬರು| ಕಾಲಬಲದಿಂ ಯುದ್ಧ ಮಾಡಲು| ಕೋಲನೆಲ್ಲಂ ಪಿಡಿದು ಪೋದರ್ಗೇನು ಗತಿಯಾಯ್ತೋ|| ಮೇಲುಗಾಣೆ ವಿಚಾರಿಸವನೀ ಪಾಲಯೆನುತುಂನುಡಿಯುತಿರಲಾ| ವೇಳೆಗೊರ್ವನು ಭರದೆ ಬಂದಾ ಗಣಗೆ ಪೇಳಿದನು ||೨|| ಅರಸ ಕೇಳೈ ನಿನ್ನ ಮಕ್ಕಳು|ಧುರದೆ ಕಾಯ್ದರು ಪಿರಿದು ದಳವನು| ತಿರೆಗೆಮಲಗಿಸೆ ಘೋರರೂಪನು ಬಂದುದಳವಿಡಿದು || ಪುರುಷಹರಿಗಳ ಪಿಡಿದು ನಿಜಬಲ| ಪರಿಸರಕ್ಕೆನೊಯ್ದುನಲ್ಲಿಂ| ಭರದೊಳೇಗೆಯ್ದಪರೊ? ಕಾಣೆನು ದೇವಕೇಳೆಂದ ||೩|| ಎಂದು ನುಡಿದನ ಮಾತನಾಲಿಸು| ತಂದು ರಾಯನು ಬಳಲಿನೊಂದನು| ಮಿ೦ದು ಕಣ್ಣೀರೊಳಗೆ ಸುಲಭನೆ! ಶಲಫಾಣಿಗಳೆ || </poem><noinclude></noinclude> 9a12ydsqq9hjhg6tqys8ml3dkpg0cbs 322056 322052 2026-05-23T18:45:56Z Vikashegde 1258 322056 proofread-page text/x-wiki <noinclude><pagequality level="4" user="Vikashegde" />{{rh|center=ಬೆನಕನಮಹಿಮೆ|left=೨೬|right=}}</noinclude><poem> ಬ್ಬರನು ಬೆನಕನ ಸನಿಯಕೈದಿಸಿ ಜಯವಬೆಸಗೊಂಡ ||೨೬|| ಮಡಿದರೆಲ್ಲರು ಗಣನ ಸೈನಿಕ|ರಿಡಿದುಬಂದೆನು ತಂದೆ! ರಣದೊಳು ಪಿಡಿದುಮಿವರನು, ಗಣನು ಮೊರ್ವನುಸಿಂತನಿಂದಿನೊಳು|| ಬಿಡದೆ ನೀನೇ ಕೊಂದು ಗಣನನು| ಮೊಡರಿಸಮೃತವ ನವಗಮಿಳೆಯೊಳ| ಗೊಡೆಯದೈತ್ಯನ ಸುತರಿಗವನಿಯ ನೀಡುನೀನೆಂದ ||೨೭|| </poem> <small>ಇಂತು ಸ್ಕಾಂದಪುರಾಣಾಂತರ್ಗತಮಾದ ವಿನಾಯಕವಿಜಯದೊಳ್ ಚಿಂತಾಮಣ್ಯುಪಾಖ್ಯಾನವೆಂಬ ಆರನೆಯ ಪ್ರಕರಣವು ಮುಗಿದುದು. </small> {{rule|5em}} {{center|'''ಏಳನೆಯ ಪ್ರಕರಣವು.'''}} {{rule|3em}} <poem> <small>ಸೂ|| ದುರುಳ ಗಣನನು ಕೊಂದು ಗಣಪನು ಪರಮಚಿಂತಾಮಣಿಯ ಪೆಸರನು| ತಿರೆಯೊಳೊಂದಿಯೆ ಮುನಿಯ ಕಪಿಲನಕಾಯ್ದನೇನೆಂಬೆ||</small> </poem> <poem> ತನುಜ ಕೇಳೈ ಸಿದ್ದಿ ಪುತ್ರನು|ವಿನುತಲಕ್ಷನು ಜಯಿಸಿ ಬಲವನು| ಜನಪಸೂನುಗಳೆಂದು ಕುವರರ ತಿಳಿದು ಸಲಹಿದನು || ಮನದೊಳಂಜಿಕೆಯಾಂತರುಳಿದರು|ಕೊನೆಗೆ ತಾಂಗ್ರಂಥನರಗುವರ| ಬೆನಕಲ್ಲಿಗೆ ಲಕ್ಷನುಯ್ದನೆನುತ್ತೆ ತಾತಿಳಿದ ||೧|| ಶೂಲಪಾಣಿಯು ಸುಲಭರಿಬ್ಬರು| ಕಾಲಬಲದಿಂ ಯುದ್ಧ ಮಾಡಲು| ಕೋಲನೆಲ್ಲಂ ಪಿಡಿದು ಪೋದರ್ಗೇನು ಗತಿಯಾಯ್ತೋ|| ಮೇಲುಗಾಣೆ ವಿಚಾರಿಸವನೀ ಪಾಲಯೆನುತುಂನುಡಿಯುತಿರಲಾ| ವೇಳೆಗೊರ್ವನು ಭರದೆ ಬಂದಾ ಗಣಗೆ ಪೇಳಿದನು ||೨|| ಅರಸ ಕೇಳೈ ನಿನ್ನ ಮಕ್ಕಳು|ಧುರದೆ ಕಾಯ್ದರು ಪಿರಿದು ದಳವನು| ತಿರೆಗೆಮಲಗಿಸೆ ಘೋರರೂಪನು ಬಂದುದಳವಿಡಿದು || ಪುರುಷಹರಿಗಳ ಪಿಡಿದು ನಿಜಬಲ| ಪರಿಸರಕ್ಕೆನೊಯ್ದುನಲ್ಲಿಂ| ಭರದೊಳೇಗೆಯ್ದಪರೊ? ಕಾಣೆನು ದೇವಕೇಳೆಂದ ||೩|| ಎಂದು ನುಡಿದನ ಮಾತನಾಲಿಸು| ತಂದು ರಾಯನು ಬಳಲಿನೊಂದನು| ಮಿ೦ದು ಕಣ್ಣೀರೊಳಗೆ ಸುಲಭನೆ! ಶಲಫಾಣಿಗಳೆ || </poem><noinclude></noinclude> afck79oxc6nejae8f0fpgkmkm912j4f ಪುಟ:ಮನಮಂಥನ.pdf/೧೪೬ 104 62593 322143 316501 2026-05-24T11:29:47Z A826 6806 322143 proofread-page text/x-wiki <noinclude><pagequality level="4" user="Shreesha Sharma" /></noinclude>{{Left|ಹಿಸ್ಟಿರಿಯಾ ಪ್ರದರ್ಶನಗಳು}}{{Right|೧೨೭}} ಚಿಹ್ನೆ. ಆ ಭಾಗದಲ್ಲಿರುವ ನರಗಳು ರೋಂವು ಹಿಡಿದಂತೆಯೋ ಸತ್ತಂತೆಯೇ ಆಗಿರುತ್ತದೆ. ಆದ್ದರಿಂದ ಚಿಟಿಕೆ ಹಾಕಲಿ, ಬರೆ ಹಾಕಲಿ, ಚುಚ್ಚಲಿ, ಕತ್ತರಿಸಲಿ, ರೋಗಿಯು ತೆಪ್ಪಗಿರುತ್ತಾಳೆ. ಒಂದು ಹಂತದ ತನಕ ಹೀಗೆ ಇರುತ್ತದೆ. ನಂತರ ಯಾತನೆಯು ಕಾಣಬರುತ್ತದೆ. ಆಗ ಕನಕವಲ್ಲಿಯು ಉರಿ ಉರಿ ಎಂದಳು. ಚಿಕಿತ್ಸೆಯನ್ನು ನಿಲ್ಲಿಸಲಾಯಿತು. 'ಉಕ್ಕೂ ಕ್ರೂ, ಕ್ರೋ,' ಈ ಗಲಾಟೆಯಲ್ಲಿ ನಿಂತು ಹೋಗಿತ್ತು. 'ಈಗ ಗುಣವಾದ ಹಾಗಿದೆ. ಉಸಿರು ಸರಾಗವಾಗಿ ಆಡುತ್ತಿದೆ. ಆದರೆ ಗಂಟಲಿನಲ್ಲಿ ಸ್ವಲ್ಪ ರಣವಾದಂತಿದೆ' ಎಂದಳು ಕನಕವಲ್ಲಿ. ತಿರುಗಿ 'ಉಕೂ, ಶೂ, ಕ್ರೋ' ಮರುಕಳಿಸಲಿಲ್ಲ. ಆದರೆ ಮೂರನೆಯ ದಿನದಿಂದ, ತೋಳಿನ ನರ ಸೆಳೆಯುತ್ತದೆ, ಎತ್ತಎತ್ತಲೋ ಎಳೆಯುತ್ತದೆ ಎಂದು ಕನಕವಲ್ಲಿಯು ನರಳಲಾರಂಭಿಸಿದಳು. ಭುಜವನ್ನು ಕಂಡೂ ಕಾಣದ ಹಾಗೆ ಕುಣಿಸಲು ಆರಂಭಿಸಿದಳು. ಇದೂ ಹಿಸ್ಟಿರಿಯಾದ ಇನ್ನೊಂದು ತರಹ ಪ್ರದರ್ಶನ! ಆದರೆ ಈ ಪ್ರದರ್ಶನದಿಂದ ರೋಗಿಗೇನೂ ಸುಸ್ತು ಬಡಿಯುವುದಿಲ್ಲ. ಮನೆಯವರಿಗೆ ಕಾಟವನ್ನು ಕೊಡುವುದಿಲ್ಲ. ಹಾಗೂ ದೊಡ್ಡದಾದ ಘೋರವಾದ ಆ ಬೇನೆಯನ್ನು ವಾಸಿಮಾಡಿದ ವೈದ್ಯರು ಈ ಅಲ್ಪ ಬೇನೆಯನ್ನೂ ಸರಿಪಡಿಸುತ್ತಾರೆ ಎನ್ನುವ ನಂಬಿಕೆಯೂ ಕನಕವಲ್ಲಿಯಲ್ಲಿ ಉಂಟಾಗಿತ್ತು. ಇಂತಹ ಬೇನೆಗಳಲ್ಲಿ ವೈದ್ಯರಲ್ಲಿರುವ ಪೂರ್ಣ ನಂಬಿಕೆಯೇ ಗುಣಪಡಿಸುವ ಅಂಶಗಳಲ್ಲಿ ಮುಖ್ಯವಾದುದೊಂದು. ಹಿಸ್ಟಿರಿಯಾ ಪ್ರದರ್ಶನವು ಉಗ್ರವಾಗಿ ಕಂಡು ಬಂದವರಲ್ಲಿ, ನಿಶ್ಲೇಷವಾಗಿ, ಬೇನೆಯು ನಿವಾರಣೆಯಾಗುತ್ತದೆ ಎಂದು ಹೇಳಬರುವುದಿಲ್ಲ. ಏಕೆಂದರೆ, ಅವರ ಹುಟ್ಟು ಗುಣ; ಬಾಳಿನ ಪ್ರಸಂಗಗಳು; ಸಂಸಾರ ಮತ್ತು ಸಾಮಾಜಿಕ ಪರಿಸರ; ಇವುಗಳನ್ನು ರೋಗಿಗೆ ಅನುಕೂಲವಾಗಿರುವಂತೆ ಮಾಡಲು ಅಸಾಧ್ಯ. ಆದರೆ ಸಾಮಾನ್ಯ ಬಾಳು ನಡೆಸುವುದಕ್ಕೆ ಕಂಟಕವಾಗದಂತೆ ಘೋರ ಪ್ರದರ್ಶನವನ್ನು ಸೌಮ್ಯ ಪ್ರದರ್ಶನವನ್ನಾಗಿ ರೂಪಾಂತರಿಸಬಹುದು. ರೋಗಿಯ ಮತ್ತು ಆಕೆಯ ಮನೆಯವರ ದೃಷ್ಟಿಯಿಂದ, ಈ ಫಲಿತಾಂಶವು ಪರಿಣಾಮಕಾರಿಯಾದುದು. ಕನಕವಲ್ಲಿಯು ಈಗಲೂ ಅಂದರೆ ಏಳೆಂಟು ವರ್ಷಗಳಾದ ಮೇಲೆ, ಒಮ್ಮೊಮ್ಮೆ ಭುಜವನ್ನು ಕುಣಿಸುತ್ತಾಳೆ. ಒಮ್ಮೊಮ್ಮೆ ಮೊಣಕೈಯನ್ನು ಛಂಗಿಸುತ್ತಾಳೆ. ಆದರೆ ಚಾಕರಿಗೆ ತಪ್ಪದೆ ಹೋಗುತ್ತಿದ್ದಾಳೆ. ಮಕ್ಕಳ ತಾಯಾಗಿ ಸಂಸಾರವನ್ನೂ ಮಾಡಿಕೊಂಡಿದ್ದಾಳೆ. ಸಮಾಜದಲ್ಲೂ ಸರಸವಾಗಿರುತ್ತಾಳೆ. ಹೊರನೋಟಕ್ಕೆ<noinclude></noinclude> joywfxxshbyow0yy3vjsxr85ogskdqd ಪುಟ:ಮನಮಂಥನ.pdf/೨೮೨ 104 62729 322066 319037 2026-05-24T05:27:01Z Vikashegde 1258 /* Validated */ 322066 proofread-page text/x-wiki <noinclude><pagequality level="4" user="Vikashegde" />{{rh|center=|left=|right=೨೬೩}}</noinclude><div style="display: flex; flex-direction: column; justify-content: center; min-height: 80vh; text-align: center;"> <big><big>{{center|'''ಮನಮಂಥನ'''}}</big></big> <big><big>{{center|'''ಭಾಗ-೨'''}}</big></big> </div><noinclude></noinclude> m53vb2ihz3na99qshavc7e1qicoow4o ಪುಟ:ಮನಮಂಥನ.pdf/೨೮೪ 104 62731 322069 314449 2026-05-24T05:34:39Z Vikashegde 1258 /* Proofread */ 322069 proofread-page text/x-wiki <noinclude><pagequality level="3" user="Vikashegde" />{{rh|center=|left=೨೬೬|right=ಮನಮಂಥನ}}</noinclude>೪. ಬಾಲ್ಯ ಆಗಿನ ಮನಸ್ಸು|೩೧೭ ಯೌವನ ಅಥವಾ ಪ್ರೌಢ ವಯಸ್ಸಿನವರಲ್ಲಿ ಮನಸ್ಸಿನ ಕಾರ್ಯಕ್ರಮ ವಯಸ್ಕರಲ್ಲಿ ಮನಸ್ಸಿನ ಕಾರ್ಯಕ್ರಮ ಮುಪ್ಪಿನಲ್ಲಿ ಮನಸ್ಸಿನ ಕಾರ್ಯಕ್ರಮ ೫. ಮನಸ್ಸಿನ ಚಟುವಟಿಕೆಗಳು|೩೫೪ ಆಸೆ-ಮೂಲ ಪ್ರೇರಕ ಈಡೇರಿಸುವ ವಿಧಾನಗಳು-ವಾಸ್ತವಿಕವಾಗಿ :- ಪ್ರಯತ್ನ ಪಡುವುದರಿಂದ :- ಕನಸುಗಳಲ್ಲಿ :- ವಯೂರಿಸಂ ಮೂಲಕ ಭವಿಷ್ಯವನ್ನು ತಿಳಿದುಕೊಳ್ಳುವುದರಿಂದ - ವಿವಿಧ ಕಲಾ ರೀತಿಗಳಲ್ಲಿ- ೭. ಆಸೆಯು ನಿರಾಸೆಯಾದರೆ|೩೭೦ ಭವಿಷ್ಯ ನುಡಿಯುವವರ ಹೇಳಿಕೆಯಿಂದ ಸಮಾಧಾನ ಪಡೆಯುವುದು- ಮಾನಸಿಕ ಕೊರಗು ಅತ್ಯಧಿಕವಾಗುವುದು- ಆತ್ಮಹತ್ಯೆ ಸಮಾಜ ವಿಚ್ಛಿದ್ರಕ ಪ್ರವೃತ್ತಿಯಾಗಬಹುದು- ೮. ಮನಸ್ಸಿನ ಮಥನ|೩೭೬ ಯೋಚನ-ಯೋಜನ-ನಿರ್ಣಯ- ಸಮುದ್ರ ಮಥನದ ಪುರಾಣದ ಕತೆಯೊಂದಿಗೆ ಸಮನ್ವಯ ೯. ಮನಮಂಥನವು ಹಳಿ ತಪ್ಪಿದಾಗ|೩೮೭ ವಾಸ್ತವಿಕ ಅರಿವು ಇಲ್ಲವಾಗುವುದು-ಒಬ್ಸೆಷನಲ್ ಪಿಶಾಚಿಗಳು- ಬೆಪ್ಪು ಬಡಿಯುವುದು-ಲೋಕಾನುಭವದಿಂದ ಹದಗೊಳ್ಳದೆ ಇರುವ ಮನಸ್ಸು-ಮನೋದೈಹಿಕ ಬೇನೆಗಳು ೧೦. ದೇಹದ ರೋಗಗಳಿಂದ ಮಾನಸಿಕ ಭಯ-ಅಸ್ವಾಸ್ಥ್ಯ|೩೯೨ ೧೧. ನನಗೆ ಹುಚ್ಚು ಹಿಡಿದಿದೆಯೆ ?|೩೯೩ ೧೨. ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ|೩೯೫ ಮನಸ್ಸು-ಯೋಗ ; ಭೋಗ- ಯೋಗ ಪಾದ-ಸಾಧನ ಪಾದ-ವಿಭೂತಿಪಾದ-ಕೈವಲ್ಯಪಾದ-<noinclude></noinclude> jmhtdcbi5xesljykqt6jyc6xdrhptwj 322070 322069 2026-05-24T05:39:25Z Vikashegde 1258 322070 proofread-page text/x-wiki <noinclude><pagequality level="3" user="Vikashegde" />{{rh|center=|left=೨೬೬|right=ಮನಮಂಥನ}}</noinclude>{{TOC_page_listing|'''೪. ಬಾಲ್ಯ ಆಗಿನ ಮನಸ್ಸು'''|'''೩೧೭'''}} {{gap}}ಯೌವನ ಅಥವಾ ಪ್ರೌಢ ವಯಸ್ಸಿನವರಲ್ಲಿ ಮನಸ್ಸಿನ ಕಾರ್ಯಕ್ರಮ<br /> {{gap}}ವಯಸ್ಕರಲ್ಲಿ ಮನಸ್ಸಿನ ಕಾರ್ಯಕ್ರಮ<br /> {{gap}}ಮುಪ್ಪಿನಲ್ಲಿ ಮನಸ್ಸಿನ ಕಾರ್ಯಕ್ರಮ<br /> {{TOC_page_listing|'''೫. ಮನಸ್ಸಿನ ಚಟುವಟಿಕೆಗಳು'''|'''೩೫೪'''}} {{gap}}ಆಸೆ-ಮೂಲ ಪ್ರೇರಕ<br /> {{gap}}ಈಡೇರಿಸುವ ವಿಧಾನಗಳು-ವಾಸ್ತವಿಕವಾಗಿ :-<br /> {{gap}}ಪ್ರಯತ್ನ ಪಡುವುದರಿಂದ :- ಕನಸುಗಳಲ್ಲಿ :-<br /> {{gap}}ವಯೂರಿಸಂ ಮೂಲಕ<br /> {{gap}}ಭವಿಷ್ಯವನ್ನು ತಿಳಿದುಕೊಳ್ಳುವುದರಿಂದ -<br /> {{gap}}ವಿವಿಧ ಕಲಾ ರೀತಿಗಳಲ್ಲಿ-<br /> {{TOC_page_listing|'''೭. ಆಸೆಯು ನಿರಾಸೆಯಾದರೆ'''|'''೩೭೦'''}} {{gap}}ಭವಿಷ್ಯ ನುಡಿಯುವವರ ಹೇಳಿಕೆಯಿಂದ ಸಮಾಧಾನ ಪಡೆಯುವುದು-<br /> {{gap}}ಮಾನಸಿಕ ಕೊರಗು ಅತ್ಯಧಿಕವಾಗುವುದು-<br /> {{gap}}ಆತ್ಮಹತ್ಯೆ ಸಮಾಜ ವಿಚ್ಛಿದ್ರಕ ಪ್ರವೃತ್ತಿಯಾಗಬಹುದು-<br /> {{TOC_page_listing|'''೮. ಮನಸ್ಸಿನ ಮಥನ'''|'''೩೭೬'''}} {{gap}}ಯೋಚನ-ಯೋಜನ-ನಿರ್ಣಯ-<br /> {{gap}}ಸಮುದ್ರ ಮಥನದ ಪುರಾಣದ ಕತೆಯೊಂದಿಗೆ ಸಮನ್ವಯ<br /> {{TOC_page_listing|'''೯. ಮನಮಂಥನವು ಹಳಿ ತಪ್ಪಿದಾಗ'''|'''೩೮೭'''}} {{gap}}ವಾಸ್ತವಿಕ ಅರಿವು ಇಲ್ಲವಾಗುವುದು-ಒಬ್ಸೆಷನಲ್ ಪಿಶಾಚಿಗಳು-<br /> {{gap}}ಬೆಪ್ಪು ಬಡಿಯುವುದು-ಲೋಕಾನುಭವದಿಂದ<br /> {{gap}}ಹದಗೊಳ್ಳದೆ ಇರುವ ಮನಸ್ಸು-ಮನೋದೈಹಿಕ ಬೇನೆಗಳು<br /> {{TOC_page_listing|'''೧೦. ದೇಹದ ರೋಗಗಳಿಂದ ಮಾನಸಿಕ ಭಯ-ಅಸ್ವಾಸ್ಥ್ಯ'''|'''೩೯೨'''}} {{TOC_page_listing|'''೧೧. ನನಗೆ ಹುಚ್ಚು ಹಿಡಿದಿದೆಯೆ?'''|'''೩೯೩'''}} {{TOC_page_listing|'''೧೨. ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ'''|'''೩೯೫'''}} {{gap}}ಮನಸ್ಸು-ಯೋಗ ; ಭೋಗ-<br /> {{gap}}ಯೋಗ ಪಾದ-ಸಾಧನ ಪಾದ-ವಿಭೂತಿಪಾದ-ಕೈವಲ್ಯಪಾದ-<br /><noinclude></noinclude> iged4ehidxtwvny6rp6u8jnpdk8yx7w ಪುಟ:ಮನಮಂಥನ.pdf/೩೭೩ 104 62820 322016 319027 2026-05-23T15:35:53Z Shreelatha.Halemane 7642 /* Validated */ 322016 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=ಮನಸ್ಸಿನ ಚಟುವಟಿಕೆಗಳು|right=೩೫೫}}</noinclude>ಕೊಟ್ಟೆ? ಎಂದು ಸುಮಾರು ಎರಡು ಸಿಗರೇಟುಗಳ ಕಾಲ ಯೋಚಿಸಿದೆ. ಯಾರಿಗೂ ಕೊಟ್ಟ ನೆನಪಾಗಲಿಲ್ಲ. ಇಂತಹ ಪ್ರತಿಯನ್ನು ಯಾರಿಗೂ ಆಪ್ತರಿಗೂ ಕೂಡ, ಕೊಡಲು ಮನಸ್ಸು ಒಪ್ಪುವುದೇ ಇಲ್ಲ. ಕೆಲವು ಪುಸ್ತಕಗಳ ವಿಷಯದಲ್ಲಿ; ಅದೂ ನನ್ನ ಪುಸ್ತಕಗಳಾಗಿದ್ದರೆ, ನಾನು ಅತ್ಯಂತ ಲೋಭಿ, ಜಿಪುಣ. ಮತ್ತೆ ಆ ಪ್ರತಿಯೇನಾಯಿತು? {{gap}}ಯಾಕೋ? ಬರೆಯಲು ಕುಳಿತರೆ, ಇವತ್ತು ಶಕುನವು ಸರಿಯಾಗಲಿಲ್ಲ. ಇವತ್ತು ಬರೆಯುವುದು ಬೇಡ. ಬೆಳಿಗ್ಗೆ ದೈನಂದಿನ ಪತ್ರಿಕೆಯಲ್ಲಿ ಕಂಡ ಚಕ್ರಬಂಧ ಸ್ಪರ್ಧೆಯ ಸಮಸ್ಯೆಯನ್ನು ಮುಗಿಸೋಣ ಎಂದುಕೊಂಡೆ. ಕಾಲವನ್ನು ಹಾಗೂ ತನ್ನನ್ನು ಖೂನಿ ಮಾಡಲು ಇದ್ದಕ್ಕಿಂತ ಪವಿತ್ರವಾದ ಹವ್ಯಾಸವುಂಟೇ? ಇಂತಹ ಪವಿತ್ರ ಕಾರ್ಯವನ್ನು ಪ್ರಾರಂಭಿಸುವ ಮೊದಲು, ಒಂದು ತಟ್ಟೆ ಹುರಿಗಾಳನ್ನು ಪಕ್ಕದಲ್ಲಿಟ್ಟುಕೊಂಡರೆ ವೈನ ಎಂದನಿಸಿತು. ಹುರಿಗಾಳಿನ ಡಬ್ಬವನ್ನು ಪುಸ್ತಕದ ಕಪಾಟಿನಲ್ಲಿ ಸುರಕ್ಷಿತವಾಗಿಡುವುದು ನನ್ನದೊಂದು ಒಳ್ಳೆಯ ಗುಣ. ಅದನ್ನೆಂದೂ ಮರೆಯುವುದಿಲ್ಲ. ತಟ್ಟೆಯನ್ನು ಹಿಡಿದುಕೊಂಡು ಹುರಿಗಾಳಿನ ಡಬ್ಬವಿದ್ದ ಪುಸ್ತಕದ ಕಪಾಟಿನ ಬಳಿಗೆ ಹೋದೆ. ಡಬ್ಬವನ್ನು ಹೊರ ತೆಗೆದೆ. ಅದರ ಹಿಂದೆಯೇ ಮನೋನಂದನದ ಪ್ರತಿಯು ಕಾಣಿಸಿತು. ಅದನ್ನು ಕಂಡ ಮೇಲೆ, ಶಕುನವು ಸರಿಹೋಯಿತು. ಇವತ್ತು ಈ ಅಧ್ಯಾಯವನ್ನು ಬರೆದು ಮುಗಿಸೋಣ ಎಂದು ಪುನಃ ಮೇಜಿನ ಬಳಿಗೆ ಬಂದೆ. ಪುಸ್ತಕವನ್ನು ಹಿಡಿದುಕೊಂಡು, ಹುರಿಗಾಳಿನ ಡಬ್ಬ ಮತ್ತು ತಟ್ಟೆಯನ್ನು ಡಬ್ಬದ ಮೇಲಿರಿಸಿದೆ. {{gap}}ಮನೋನಂದನವನ್ನು, ಒದ್ದು ಬೈದು, ಬೇಡಿ ಕಾಡಿ, ಬರೆಸಿದ ಜಿ. ಪಿ. ಯವರ ನೆನಪಾಯಿತು. ಅವರಿಗೆ 'ಥ್ಯಾಂಕ್ಯೂ' ಅನ್ನಬೇಕು ಎನಿಸಿತು. ಅವರೆದುರಿಗೆ ಹಾಗೆ ಹೇಳಿದರೆ, ಅವರು ಸಂತಸಗೊಂಡಾರು ; ತೃಪ್ತಿಪಡಬಹುದು ಎಂದೂ ಅನ್ನಿಸಿತು. ಆದರೆ ಅದರ ಹಿಂದೆಯೇ 'ಎಷ್ಟೆಲ್ಲಾ ಕಾಡಿ ಕೆಡವಿದ ; ಸುಖವಸ್ತುವಾದ ನನ್ನನ್ನು' ಎಂಬ ಯೋಚನೆಯೂ ನೆನಪಾಯಿತು. ಎದುರಿಗೆ 'ಥ್ಯಾಂಕ್ಯೂ' ಎಂದರೂ ನನ್ನ ಮನಸ್ಸಿನಲ್ಲಿ ವಂದನಾ ಭಾವನೆಯೂ ಇರಲಿಲ್ಲ, ಇದೆಂತಹ ಮೋಸ! ನನಗೆ ನಾನೇ ಮಾಡಿಕೊಳ್ಳುವ ಮನಸ್ಸಿನ ತಟವಟ, ಎಂದೂ ತೋರಿತು. ನಂತರ ಆ ಪುಸ್ತಕದ ಹಾಳೆಗಳನ್ನು ಮನಸ್ಸಿನ ಚಟುವಟಿಕೆಗಳು ಎಂಬ ಅಧ್ಯಾಯದ ಪುಟಗಳನ್ನು ತಿರುವು ಹಾಕಿದೆ. ಅರೆ! ಅಲ್ಲಿ ಬರೆದಿರುವುದನ್ನೇ ಇಲ್ಲೂ ಬರೆಯಬೇಕಾಗುತ್ತದಲ್ಲ! ಇದೇನೂ ಅಷ್ಟು ಚೆನ್ನಲ್ಲ ಎನ್ನಿಸಿತು. ಹೇಳಿದ್ದನ್ನೇ ಹೇಳುವ ಕಿಸಬಾಯಿದಾಸನಾಗಬೇಕೇ ಎನ್ನಿಸಿತು. ಆದಕಾರಣ ಅಲ್ಲಿ ಬರೆದಂತೆಯೇ{{nop}}<noinclude></noinclude> fgq6gpe9qeyc21amoxrlnt20qz3pqwf ಪುಟ:ನಡೆದದ್ದೇ ದಾರಿ.pdf/೧೪೭ 104 76901 322029 320603 2026-05-23T16:42:44Z Shreesha Sharma 7840 /* Validated */ 322029 proofread-page text/x-wiki <noinclude><pagequality level="4" user="Shreesha Sharma" /></noinclude>________________ ೧೪೦ ನಡೆದದ್ದೇ ದಾರಿ<noinclude><references/></noinclude> dxhf3jmxk85g4cp3r5eq6zqgd4j8gth ಪುಟ:ಅರಮನೆ.pdf/೭೧ 104 77156 322022 169865 2026-05-23T16:35:23Z Shreesha Sharma 7840 /* Proofread */ 322022 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೪೦|right=ಅರಮನೆ}} ಸಾರ್ತಕಾತು, ಜ್ವಾಪಾನ ಜತುನಾ ಮಾಡೀನಂತ ಹೇಳಿ ನಿನ್ನಾ ಹಂಗಿಸಿಲ್ಲವ್ವಾ ನನ್ನುಪಕಾರ ನಿಂಗೆ ನೆಪ್ಪಿದ್ದಲ್ಲಿ.. ನೀನು ಸರಣಾಗತ ರಚ್ಚಕಿ ಆಗಿದ್ದಲ್ಲಿ ಗಂಡ ಬಿಟ್ಟಿರೋ ನನ್ನ ನಿನ್ನ ಬುಡದಾಗಿಟಕಂಡು ಕಾಪಾಡಬೇಕು ತಾಯಿ” ಯಂದೊಂದೇ ಮಾತಲ್ಲಿ ಕೇಳಿಕೊಂಡಳು. ಆಕೆಯ ಮಾತು ಕೇಳಿ ಮರದ ಕರುಳು ಕರಗಿತು. ಜಗಲೂರೆವ್ವನ ಮಯ್ಯ ಬೆವರಿನ ವಾಸನೆ ಕುಡುದೂ ಕುಡುದು ತನಗೀ ಬಣ್ಣ ಕಸುವು ಲಭಿಸಯ್ತೆ. ಅಲ್ಲಿದ್ದ ತನ್ನನ್ನು ಯಲ್ಲಿಗೆ ತಂದು ಪಾಲಿಸಿ ಘೋಷಿಸಿರುವಳು, ಮೇಕೆಯ ಬೇಡಿಕೇನ ತಿರಸ್ಕರಿಸಿ ರಿಣಗೇಡಿ ಆಗಬಾರದು ಯಂದು ಮುಂತಾಗಿ ರುಕ್ಷ ಯೋಚಿಸಿತು. ಆದರ ಸಡನ್ನಂತ ನಿಲ್ದಾರ ತೆಗೆದುಕೊಳ್ಳಲದಕ ಸಾಧ್ಯಯಿರಲಿಲ್ಲ. ತಾನು ಹೇಳಿ ಕೇಳಿ ತಾಯಿ ಸಾಂಬವಿಯ ಆಗ್ನಾವರ್ತಿಯು, ಆಕೆಯ ಹಂಗು ಅನುಗ್ರಹಗಳಿಂದ ತುಂಬಿ ತುಳುಕಾಡುತಿರುವ ತಾನು ಸೊಸಂತರಾಲೋಚನೆ ಮಾಡಲಕ ಯಷ್ಟರವಳು? ತನ ಗಂಡನ ಸರೀರವನ್ನು ಮುಟ್ಟುವ ಹಕ್ಕನ್ನು ಕಳೆದುಕೊಂಡು ನಿರಾಶ್ರಿತಳಾಗಿರುವ ಜಗಲೂರೆವ್ವಗೆ ತನ್ನ ಬುಡದಲ್ಲಿ ಪುನರೊಸತಿ ಕಲುಪಿಸಿ ಕೊಡೋದು ಯಾವುದೇ ರುಕ್ಷದ ಧರುಮವು, ಕೆಲದಿವಸಗಳ ಯಿದ್ಯಾಮಾನಗಳನ್ನು ನೋಡುತ್ತಿದ್ದರೆ ತಾಯಿ ಸಾಂಬವಿಯ ವಲುಮೆ ಮೇಕೆಯ ಮಾಲ ಯಿರುವುದೊ ಯಿಲ್ಲವೋ ಯಂಬ ಅನುಮಾನ ಬರುವುದು. ಯೇನೇ ಆಗಲಿ, ವಂದು ಮಾತು ತಾಯಿನ ಕೇಳಿದ ಮ್ಯಾಲೆಯೇ ಮುಂದಿನಾಲೋಚನೆ ಮಾಡುವುದೆಂದು ಈ ರುಕ್ಷವು ನಿಲ್ದಾರ ಮಾಡಿತಂತೆ... {{gap}}ತನ್ನೊಂದು ಬೇರನ್ನು ರಾಯಭಾರಿಯನ್ನಾಗಿ ಮೋಬಯ್ಯನ ಸರೀರದೊಳಗಿದ್ದ ಸಾಂಬವಿಯ ಬಳಿಗೆ ಕಳಿಸಿತಂತೆ. ಬೇರು ಅಡಬಿದ್ದು “ತಾಯಿ ಸಾಂಬವೀ.. ನಿನ್ನಂಗೆ ಜಗಲೂರವ್ವ ಕೂಡ ವಂದು ಹೆಣ್ಣು ಅಂಬುದನು ಮರೀಬ್ಯಾಡಪ್ಪಾ”ಯಂದು ಬಖಯಿರು ಸಲ್ಲಿಸಿತಂತೆ. ಬಖಯರ ನ್ನಾಲಿಸಿದ ತಾಯಿಯು.. “ಆಕೆ ದೂರವ ಜಲುಮದಲ್ಲಿ ಪಾಪ ಮಾಡಿರುವಾಕಿ.. ಅಲ್ಲದ ತಾನು ಹೆಣ್ಣಾಗಿ ಜಗಲೂರಜ್ಜನ್ನ ಕುಂತರೂ ನೆನೀತಾಳ.. ನಿಂತರೂ ನೆನೀತಾಳ. ಆಕೆಯಂಥ ಹೆಣುಮಕ್ಕಳಿಗೆ ಬುದ್ದಿ ಕಲಿಸುವ ಸಲುವಾಗೇ ನಾನಾಕೆಯ ಗಂಡನ ಸರೀರದಲ್ಲಿ ವಸ್ತಿ ಮಾಡಿರೋದು. ನಾನಾ ಯದವಾದ ಪರೀಕ್ಕೇಲಿ ಗೆದ್ದ ಮಾಲೀss ಆಕೆಗೆ ಸುಕ ಸಾಂತಿ ದೊರಕೋದು.. ಅಲ್ಲಿಗಂಟಾ ಆಕೆ ಬಿಸಿಲಾಗಿದ್ದು ತಾಪ ಪಡಲೀ.. ನೆಳ್ಳಾಗಲೀ, ಆಶ್ರಯ ಆಗಲಿ ಕೊಡಕೂಡದಂತಾ ಮರದವ್ವಗೆ ಹೇಳು” ಯಂದು ಹೇಳಿದಳಂತೆ. ಅದಕಿದ್ದು ರಾಯಭಾರಿಯು “ತಾಯಿss...<noinclude><references/></noinclude> 5n0tw1fhoacw108azvblv2a7kszwdl1 ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 321991 321861 2026-05-23T13:42:38Z A826 6806 321991 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 38235<br><small>ದತ್ತಾಂಶ ಪಡೆದ ಸಮಯ: 2026-05-23 13:40:44 UTC / 2026-05-23 19:10:44 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Shreelatha.Halemane|Shreelatha.Halemane]] || 0 || 0 || 7161 (10479) || 0 || 0 || 4890 || 818 (1636) || 1351 (4053) || 7573 || '''10479''' |- | 2 || [[Special:Contributions/Pragathi. BH|Pragathi. BH]] || 0 || 0 || 9082 (10447) || 0 || 0 || 7983 || 153 (306) || 912 (2736) || 9709 || '''10447''' |- | 3 || [[Special:Contributions/Shreesha Sharma|Shreesha Sharma]] || 0 || 0 || 3277 (4421) || 0 || 0 || 2097 || 365 (730) || 408 (1224) || 3798 || '''4421''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 531 (1259) || 0 || 0 || 70 || 63 (126) || 393 (1179) || 660 || '''1259''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/A826|A826]] || 10740 || 1 || 195 (243) || 26 || 0 || 5 || 4 (8) || 28 (84) || 10978 || '''267''' |- | 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 9 || [[Special:Contributions/Vikashegde|Vikashegde]] || 0 || 0 || 85 (184) || 0 || 0 || 0 || 27 (54) || 47 (141) || 103 || '''184''' |- | 10 || [[Special:Contributions/Hariprasad Shetty10|Hariprasad Shetty10]] || 0 || 0 || 80 (172) || 0 || 0 || 0 || 21 (42) || 39 (117) || 345 || '''172''' |- | 11 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150''' |- | 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] 2qimougbs4bxpi7c74r35w0pcw9rpzb 322084 321991 2026-05-24T06:29:11Z A826 6806 322084 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 38322<br><small>ದತ್ತಾಂಶ ಪಡೆದ ಸಮಯ: 2026-05-24 06:28:33 UTC / 2026-05-24 11:58:33 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Shreelatha.Halemane|Shreelatha.Halemane]] || 0 || 0 || 7183 (10542) || 0 || 0 || 4890 || 819 (1638) || 1372 (4116) || 7597 || '''10542''' |- | 2 || [[Special:Contributions/Pragathi. BH|Pragathi. BH]] || 0 || 0 || 9101 (10498) || 0 || 0 || 7983 || 154 (308) || 930 (2790) || 9731 || '''10498''' |- | 3 || [[Special:Contributions/Shreesha Sharma|Shreesha Sharma]] || 0 || 0 || 3290 (4457) || 0 || 0 || 2097 || 366 (732) || 420 (1260) || 3812 || '''4457''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 535 (1269) || 0 || 0 || 70 || 63 (126) || 397 (1191) || 665 || '''1269''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/A826|A826]] || 10740 || 1 || 195 (243) || 26 || 0 || 5 || 4 (8) || 28 (84) || 10978 || '''267''' |- | 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 9 || [[Special:Contributions/Vikashegde|Vikashegde]] || 0 || 0 || 101 (210) || 2 || 0 || 0 || 28 (56) || 54 (162) || 125 || '''211''' |- | 10 || [[Special:Contributions/Hariprasad Shetty10|Hariprasad Shetty10]] || 0 || 0 || 80 (172) || 0 || 0 || 0 || 21 (42) || 39 (117) || 345 || '''172''' |- | 11 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150''' |- | 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] fkjmozpbgm7of5kn901hkcjje0cro35 322131 322084 2026-05-24T10:59:51Z A826 6806 322131 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 38368<br><small>ದತ್ತಾಂಶ ಪಡೆದ ಸಮಯ: 2026-05-24 10:58:33 UTC / 2026-05-24 16:28:33 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Shreelatha.Halemane|Shreelatha.Halemane]] || 0 || 0 || 7209 (10618) || 0 || 0 || 4890 || 819 (1638) || 1398 (4194) || 7624 || '''10618''' |- | 2 || [[Special:Contributions/Pragathi. BH|Pragathi. BH]] || 0 || 0 || 9101 (10498) || 0 || 0 || 7983 || 154 (308) || 930 (2790) || 9731 || '''10498''' |- | 3 || [[Special:Contributions/Shreesha Sharma|Shreesha Sharma]] || 0 || 0 || 3301 (4490) || 0 || 0 || 2097 || 366 (732) || 431 (1293) || 3823 || '''4490''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 535 (1269) || 0 || 0 || 70 || 63 (126) || 397 (1191) || 665 || '''1269''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/A826|A826]] || 10740 || 1 || 195 (243) || 26 || 0 || 5 || 4 (8) || 28 (84) || 10978 || '''267''' |- | 8 || [[Special:Contributions/Vikashegde|Vikashegde]] || 0 || 0 || 106 (225) || 2 || 0 || 0 || 28 (56) || 60 (180) || 133 || '''226''' |- | 9 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 10 || [[Special:Contributions/Hariprasad Shetty10|Hariprasad Shetty10]] || 0 || 0 || 80 (172) || 0 || 0 || 0 || 21 (42) || 39 (117) || 345 || '''172''' |- | 11 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150''' |- | 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] r2sli0k9cdf0ncfoixeu7xp9x8b9adt ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬ 4 120710 321993 320457 2026-05-23T14:04:52Z A826 6806 321993 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. hssuhwd2uq2n8zf02bbxkzao6nwabcs 321994 321993 2026-05-23T14:05:15Z A826 6806 added [[Category:ವಿಕಿಸೋರ್ಸ್ ಕಾರ್ಯಾಗಾರ]] using [[Help:Gadget-HotCat|HotCat]] 321994 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] l8ockoj977h7guxis0rco0wj08b24ug 322135 321994 2026-05-24T11:13:20Z Reema Jalihal 7674 /* ಭಾಗವಹಿಸುವವರು */ 322135 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 4qmoz29pw9qkkpogid2413uo1hkogav