ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.3 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪರಿವಿಡಿ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf 106 11257 322380 283097 2026-05-25T05:21:58Z Anzx-ooo 3060 322380 proofread-index text/x-wiki {{:MediaWiki:Proofreadpage_index_template |Type=book |Title=[[ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು]] |Language=kn |Volume= |Author= |Translator= |Editor= |Illustrator= |School= |Publisher= |Address= |Year= |Key= |ISBN= |OCLC= |LCCN= |BNF_ARK= |ARC= |DOI= |Source=pdf |Image=1 |Progress=C |Transclusion=no |Validation_date= |Pages=<pagelist /> |Volumes= |Remarks= |Width= |Header= |Footer= |tmplver= }} m2ejbb0bqfp4ghhtx3ftt0hi1ldi9gr ಪರಿವಿಡಿ:ಮನಮಂಥನ.pdf 106 11260 322296 298412 2026-05-24T17:48:31Z Vikashegde 1258 322296 proofread-index text/x-wiki {{:MediaWiki:Proofreadpage_index_template |Type=book |Title=[[ಮನಮಂಥನ]] |Language=kn |Volume= |Author=ಡಾ. ಎಂ. ಶಿವರಾಂ |Translator= |Editor=ಡಾ. ಎಂ. ಶಿವರಾಂ |Illustrator= |School= |Publisher=ಕನ್ನಡ ಮತ್ತು ಸಂಸ್ಕೃತಿ ಇಲಾಖೆ |Address=ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು - ೫೬೦ ೦೦೨ |Year=೨೦೧೧ |Key= |ISBN= |OCLC= |LCCN= |BNF_ARK= |ARC= |DOI= |Source=pdf |Image=1 |Progress=C |Transclusion=no |Validation_date= |Pages=<pagelist /> |Volumes= |Remarks= |Width= |Header= |Footer= |tmplver= }} dchr7qwoolp7kzt113j52f3fpcdxqmm ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೬೪ 104 15998 322209 277434 2026-05-24T14:46:56Z Pragathi. BH 7585 /* Validated */ 322209 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=೪೮|center=|right='''ಗೌರ್ಮೆಂಟ್ ಬ್ರಾಹ್ಮಣ'''}} ಲಿಂಗ ಬಳಸುವುದನ್ನು ನಿಲ್ಲಿಸಿದ್ದ ತಂದೆ, ಪುನಃ ಬಳಸಲು ಆರಂಭಿಸಿದರಂತೆ! ಬಾಡಿಗೆಗೆ ಇದ್ದ ಮನೆಯ ಬಾಗಿಲ ಎದುರು ಗೋಡೆಗೆ ಒಂದು ಮೊಳೆ ಒಡೆದು, ದಾರಿಗೆ ಹೋಗುವವರಿಗೆ ಬರುವವರಿಗೆ ಕಾಣುವಂತೆ ಲಿಂಗುವನ್ನು ಗೂಟಕ್ಕೆ ತೂಗುಬಿಟ್ಟಿದ್ದರಂತೆ.<br /> {{gap}}ನಾನು ಸೋಲಾಪುರದಲ್ಲಿ ಕೆಲ ಕಾಲ ಶಾಲೆ ಓದಿದ ಬಗ್ಗೆ ಹಿಂದಿನ ಒಂದು ಸಂದರ್ಭದಲ್ಲಿ ಹೇಳಿದ್ದೇನೆ. ನಾನು ಕಳೆದ ಆ ದಿನಗಳು ನನ್ನ ಎರಡನೆಯ ಚಿಕ್ಕಪ್ಪನ ಮನೆಯಲ್ಲಿ, ಅವರು ರೈಲ್ವೆ ಆರಕ್ಷಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಸರ್ಕಾರಿ ವಸತಿ ಗೃಹದಲ್ಲಿಯೇ ಅಂದರೆ, ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ವಾಸವಾಗಿದ್ದರು. ಇವರೂ ತಮ್ಮ ಜಾತಿಯನ್ನು ನೇರವಾಗಿ ಹೇಳಿಕೊಳ್ಳಲು ಹಿಂಜರಿಯುವ ಪ್ರವೃತ್ತಿಯವರು. ತಮ್ಮ ಜಾತಿಯನ್ನು ಗೌಪ್ಯವಾಗಿಡುವುದರ ಜೊತೆಗೆ ಮಾಂಸ ತಿನ್ನುವುದನ್ನು ಗೌಪ್ಯವಾಗಿಟ್ಟಿದ್ದರು. ಕೇಳಿದವರಿಗೆಲ್ಲ ನಾವು ವೀರಶೈವರೆಂದೂ, ಒಕ್ಕಲಿಗರೆಂದೂ ಹೇಳಿಕೊಳ್ಳುತ್ತಿದ್ದರು! ಆದರೆ ಮೂಳೆ ಕಡಿಯುವ ರುಚಿ ಮಾತ್ರ ಮರೆತಿರಲಿಲ್ಲ. ವಾರಕ್ಕೆ ಒಮ್ಮೆ ಮಾಂಸ ತಂದೇ ತರುತ್ತಿದ್ದರು. ಇದೆಲ್ಲ ಕದ್ದು ಮುಚ್ಚಿ ಅಂಜುತ್ತ ಅಳುಕುತ್ತಲೇ ನಡೆಯುತ್ತಿತ್ತು. ಮಾಂಸ ತಿಂದಾದ ಮೇಲೆ ಎಲುಬುಗಳನ್ನು ಹೊರಗೆ ಎಸೆಯುವುದು ಸಮಸ್ಯೆಯಾಗಿತ್ತು. ತಿನ್ನದೇ ಉಳಿದ ಎಲುಬು-ಮೂಳೆಗಳನ್ನೆಲ್ಲಾ ಒಂದು ಪೇಪರಿನಲ್ಲಿ ಕೂಡಿ ಹಾಕಿ ಕಟ್ಟಿ ಇಡುತ್ತಿದ್ದರು. ಮರುದಿನ ನಾನು ಶಾಲೆಗೆ ಹೋಗುವಾಗ ಆ ಕಾಗದದಲ್ಲಿ ಕಟ್ಟಿದ ಗಂಟು ಮರೆಯದೆ ನನ್ನ ಚಿಕ್ಕಮ್ಮ, ನನ್ನ ಪುಸ್ತಕದ ಚೀಲದಲ್ಲಿ ಇಡುತ್ತಿದ್ದರು. ಮನೆಯಿಂದ ಸುಮಾರು ದೂರ ಹೋದ ಮೇಲೆ ೮ ಗಂಟು ಗಂಟಾಗಿಯೇ ಎಸೆದು ಮುಂದೆ ಹೋಗುತ್ತಿದ್ದೆ. ಯಾವ ಮಹಾನುಭಾವ ಬಿಚ್ಚಿ ನೋಡುವ ಸಾಹಸಕ್ಕೆ ಕೈಹಾಕುತ್ತಿದ್ದನೋ ಏನೋ ನನಗೆ ಗೊತ್ತಿಲ್ಲ!<br /> {{gap}}ಈಗ ಎಲ್ಲೆಂದರಲ್ಲೇ ನಾನು ಡಂಗುರ ಸಾರಿದಂತೆ ನಾನು ಜಾತಿಯನ್ನು ಹೇಳಿಕೊಂಡು ತಿರುಗುತ್ತೇನೆ. ಮನೆಗೆ ಬಂದಾಗಲೆಲ್ಲ ನನ್ನ ತಾಯಿಯ ಕೊರಳಲ್ಲಿರುವ ಆ ಲಿಂಗು ನನ್ನನ್ನು ಸತಾಯಿಸುತ್ತದೆ. ಅದು ಹಗ್ಗಕ್ಕೆ ನೇಣು ಹಾಕಿಕೊಂಡವರಂತೆ ಜೋತಾಡುತ್ತಿರುತ್ತದೆ. ಅದನ್ನು ತೆಗೆದೊಗೆಯಲು ನನ್ನ ತಾಯಿಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಇನ್ನೂ ಹೆಚ್ಚಿನ ಒತ್ತಾಯ ನನ್ನಿಂದ ಸಾಧ್ಯವಾಗಿಲ್ಲ. ನನ್ನ ವರ್ತನೆ ನನ್ನ ತಾಯಿಗೆ ಸಾಕಷ್ಟು ಬೇಸರ ತಂದಿದೆ ಎನ್ನುವುದರಲ್ಲಂತೂ ಸಂದೇಹವಿಲ್ಲ. ಇದೊಂದೇ ವಿಷಯದಲ್ಲಿ ಭಿನ್ನಾಭಿಪ್ರಾಯ ಎಂದಲ್ಲ. ಇಂಥ ಎಷ್ಟೋ ವಿಷಯಗಳು ನನ್ನನ್ನು ನನ್ನ ಮನೆಯವರಿಂದ ದೂರ ಸರಿಸಿವೆ. ಲಿಂಗುವಿನ ವಿಷಯದ ಬಗ್ಗೆ ತಾಯಿಗೆ ಹೇಳಿದಾಗ ಯಾವಾಗಲೂ ಗುಬ್ಬಣ್ಯಾ ಎಂದು ಆತ್ಮೀಯವಾಗಿ ಕರೆಯುವ ನನ್ನ ತಾಯಿ ನನಗೆ ಮಾರ್ಗದರ್ಶನ ಕೊಟ್ಟದ್ದು ಹೀಗೆ:<noinclude></noinclude> ghi4azgvmdefx8h2etwgb26161dtbuz ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೨೯ 104 16063 322206 274381 2026-05-24T14:45:43Z Pragathi. BH 7585 /* Validated */ 322206 proofread-page text/x-wiki <noinclude><pagequality level="4" user="Pragathi. BH" />{{rh|ನಾನೊಬ್ಬ ಉತ್ತಮ ಕ್ಷಾರಿಕನಾದೆ||೧೧೩}}</noinclude> ಪ್ರಯತ್ನಿಸುತ್ತಿದ್ದವು. ಮಶೀನ, ಕೂದಲನ್ನು ಬಿಟ್ಟು ಹೊರಗೆ ಬಾರದೆ ಇರುವುದರಿಂದ ಹಿಡಿದು ಜಗ್ಗುತ್ತಿದ್ದರು. ಮಶೀನ್ ಬಾಯಿಗೆ ತಲೆಕೊಟ್ಟು ನಾವು, ಬೊಬ್ಬೆ ಹೊಡೆಯುತ್ತ ಅದರೊಟ್ಟಿಗೆ ಜಾಲಾಡುತ್ತಿದ್ದೆವು. {{gap}}ಆ ಮಶೀನ್ ತಂದೆಯ ಕೈಯಿಂದ ಅಣ್ಣಂದಿರ ಕೈಗೆ, ಅವರ ಕೈಯಿಂದ ನನ್ನ ಕೈಗೆ ಸೇರಿದಾಗ, ನಾನು ಈ ಕೆಲಸದಲ್ಲಿ ಎಷ್ಟೊಂದು ಪಳಗಿದೆನೆಂದರೆ, ನಾನೂ ಒಬ್ಬ ಉತ್ತಮ ಕ್ಷೌರಿಕನಾದೆ. ನಾನು ಎಂ. ಎ. ಓದುವಾಗ ನನ್ನ ಸ್ನೇಹಿತರು ಹೇಳುತ್ತಿದ್ದರು. {{gap}}"ಈಗ ಸಂಪೂರ್ಣ ಕನ್ನಡ ಓದಿದವರಿಗೆ</br> {{gap}}ನೌಕರಿ ಸಿಗೋದಿಲ್ಲ. ಇನ್ನು ಜಾನಪದ ಕನ್ನಡ ಓದಿದ</br> {{gap}}ವರಿಗೆ ನೌಕರಿ ಸಿಗ್ತಾದ?ಜಾನಪದ ವಿಷಯ ಕಾಲೇಜಿನಲ್ಲಿ</br> {{gap}}ಇದ್ದರೆ ತಾನೇ ಅವು ನಮ್ಮನ್ನ ನೌಕರಿಗೆ ತಗೊಳ್ಳುದು............?" {{gap}}ಎಂದು ಪ್ರಶ್ನಿಸುತ್ತಿದ್ದರು. ಅಂತೆಯೇ ಎಂ. ಎ. ಮುಗಿದಾಕ್ಷಣ ನನಗೆ ಕೆಲಸ ಸಿಗಲಿಲ್ಲ. ಯು. ಜಿ. ಸಿ. ಯಿಂದ ಸಂಶೋಧನೆಯನ್ನು ಕೈಗೊಂಡೆ. ಆಮೇಲೆಯೂ ನನಗೆ ಮೇಲಿನ ಪ್ರಶ್ನೆಯೇ ಕಾಡುತ್ತಿತ್ತು. ನನ್ನದು ಎಂ. ಎ. ಸಂಪೂರ್ಣ ಕನ್ನಡ ವಿಷಯ ಅಲ್ಲ. ನಾನು ಜಾನಪದದ ವಿದ್ಯಾರ್ಥಿ. ನನಗೆ ನೌಕರಿ ಸಿಗದಿದ್ದರೆ?' ನನ್ನ ಮನಸ್ಸು ಆಗ ಎಷ್ಟರ ಮಟ್ಟಿಗೆ ನಿರ್ಧಾರಕ್ಕೆ ಬಂದು ನಿಂತಿತ್ತು ಎಂದರೆ, {{gap}}"PH.D.BARBERSIHIOP'' {{gap}}ಎಂದು ದೊಡ್ಡದೊಂದು ಬೋರ್ಡು ಹಾಕಿ ಅಂಗಡಿಯನ್ನು ತೆರೆಯೋಣ ಎಂದು ನಿರ್ಧರಿಸಿದ್ದೆ. ಅಷ್ಟರಮಟ್ಟಿಗೆ ನಾನು ಆ ಕೆಲಸದಲ್ಲಿ ಆತ್ಮವಿಶ್ವಾಸವನ್ನು ಹೊಂದಿದವನಾಗಿದ್ದೆ. {{gap}}ಅಷ್ಟೇ ಏಕೆ? ನಾನು ಎಂ. ಎ. ಓದಲು ಧಾರವಾಡಕ್ಕೆ ಬಂದಾಗ ನನ್ನ ಅಣ್ಣ ಧಾರವಾಡದಲ್ಲಿ ಕ್ಷೌರಿಕರ ಅಂಗಡಿಗೆ ಹೋಗುತ್ತಿರಲಿಲ್ಲ. ನನ್ನಣ್ಣನಿಗೆ ಹಾಸ್ಟೇಲಿನ ಅವನ ರೂಮಿನಲ್ಲಿ ನಾನೇ ಕಟಿಂಗ್ ಮಾಡುತ್ತಿದ್ದೆ. ವಿಷಯ ಯಾರಿಗೂ ಗೊತ್ತಾಗದಿರಲೆಂದು ನನ್ನ ರೂಮಿನ ಕಿಟಕಿ ಬಾಗಿಲುಗಳನ್ನು ಭದ್ರಪಡಿಸುತ್ತಿದ್ದ. ಒಮ್ಮೆ ಹುಳುಕು ಹೊರಬಿದ್ದಾಗ ಅವನ ಸ್ನೇಹಿತರಿಗೆ ಆಶ್ಚರ್ಯ! ಆಮೇಲೆ ಅವನ ಸ್ನೇಹಿತರೂ ಕಟಿಂಗ್ ಮಾಡಿಸಿಕೊಳ್ಳಲು ಹಂಬಲಿಸಿದರು. ಕತ್ತರಿ ಹಣಿಗೆ ಮತ್ತು ದಾಡಿ ಸೆಟ್ ಇದ್ದರೆ ಸಾಕು, ಕಟಿಂಗ್ ಮುಗಿದು ಹೋಗುತ್ತಿತ್ತು. {{gap}}ಎಂ. ಎ. ಮುಗಿಸಿ ಧಾರವಾಡದಿಂದ ಊರಿಗೆ ಬಂದಾಗ ನಾಯಿಂದರ ಮಲ್ಲನಲ್ಲಿ ಕಟಿಂಗ್ ಮಾಡಿಸಿಕೊಳ್ಳಲು ಹೋದರೆ, ಆಗ ಆತ 'ರೀ' ಎಂದು ಸಂಬೋಧಿಸುತ್ತಾ ಕೇಳುತ್ತಿದ್ದ {{gap}}ನೀವು ಮೊದ್ದು ಮನ್ಯಾಗ ಕಟಿಂಗ್ ಮಾಡ್ತಿದ್ರಂತ ಹೌದಾ?<noinclude></noinclude> s3zr0ecec332ojfrv7sqkm8ic38bnud ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೪೧ 104 16075 322208 275577 2026-05-24T14:46:08Z Pragathi. BH 7585 /* Validated */ 322208 proofread-page text/x-wiki <noinclude><pagequality level="4" user="Pragathi. BH" /><small>{{rh|||೧೨೫}}</small></noinclude> ದಲಿತ ಲೋಕದ ಅನುಭವಗಳು ಈ ಶತಮಾನದ ಕೊನೆಯ ಮುಖ್ಯ ಬರಹಗಳಾಗುತ್ತವೆಂಬ ದಿಕ್ಕನ್ನು ಗೌರ್ಮೆಂಟ್ ಬ್ರಾಹ್ಮಣ ಸಂಕೇತಿಸುತ್ತದೆ... {{rh|center=|right='''ಮಲ್ಲೇಪುರಂ ಜಿ. ವೆಂಕಟೇಶ್'''|left=}} {{rh|center=|right=ಕನ್ನಡ ಪ್ರಭ,೧೮.೧೨.೯೪|left=}} '''◼ ಮಾಲಗತ್ತಿ.... ಬರಹದ ದೊಡ್ಡ ಶಕ್ತಿ:''' {{gap}}ನಮ್ಮ ನೆಲದಲ್ಲಿ ದಲಿತ ಮಾತ್ರನಿಗೇ ಸಾಧ್ಯವಾಗುವ ವಿಶಿಷ್ಟ ಹೀನಾಯವಾದ ಬಿಡಿ ಬಿಡಿ ಪ್ರಸಂಗಗಳ ಮಾಲಿಕೆಯಿದು.... ಓದುಗರನ್ನು ಬೆಚ್ಚಿ ಬೀಳಿಸುವ, ಆಘಾತ ನೀಡುವ ಅನುಭವಗಳಿಗೆ ಒತ್ತು ಕೊಟ್ಟು ಒಂದೆಡೆ ತಂದಿರುವ ಮಾಲಗತ್ತಿ ಬಹುತೇಕ ಎಲ್ಲೂ ತಾಳ್ಮೆಗೆಡದೆ ಭಾವಾವಿಷ್ಟರಾಗದೆ ನಿರರ್ಥಕ ಸಿಟ್ಟು ಹೊರಹಾಕದೆ ಎದೆ ಬಗೆದು ತೋರುತ್ತ ಚಿಂತನೆಗೆ ಹಚ್ಚುತ್ತಾರೆ. {{gap}}ಅವರ ಅನುಭವಗಳ ಸಾಚಾತನ ಎಂಥದೆಂದರೆ, ಅವರು ನಿರ್ವಿಕಾರವಾಗಿ ಎತ್ತುವ ಪ್ರಶ್ನೆಗಳೂ ತಲ್ಲಣಕಾರಿಯಾಗೇ ಕಾಣಲು ಸಾಧ್ಯ. {{gap}}ಮಾಲಗತ್ತಿ ಇತರರ ಮನಸ್ಸನ್ನು ಸಹಾನುಭೂತಿಯಿಂದ ನಿರೀಕ್ಷಿಸುತ್ತಾರೆ ಎಂಬುದೇ ಅವರ ಬರಹದ ದೊಡ್ಡ ಶಕ್ತಿ. {{rh|center=|right='''ಲಂಕೇಶ್ ಪತ್ರಿಕೆ'''|left=}} {{rh|center=|right=ಎನ್.ಎಸ್. ಶಂಕರ, ಡಿಸೆಂಬರ್‌ ೯೪.|left=}} '''◼ ಗೌರ್ಮೆಂಟ್ ಬ್ರಾಹ್ಮಣ:''' '''ಒಬ್ಬ ವ್ಯಕ್ತಿಯ ಚರಿತ್ರೆಯಲ್ಲ, ಸಮಾಜವೊಂದರ ಚರಿತ್ರೆ:''' {{gap}}ಮಾಲಗತ್ತಿ ಅವರು ಕವಿಯಾಗಿ ಕಾದಂಬರಿಕಾರರಾಗಿ ಚರ್ಚೆಗೊಳಗಾಗಿರುವ ಶಕ್ತ ಲೇಖಕರು. ತಮ್ಮ ಕವಿತೆ ಕಾದಂಬರಿಗಳಲ್ಲಿ ಬಳಸಿಕೊಳ್ಳಲಾಗದ ವಿಭಿನ್ನ ಅನುಭವ ಜಗತ್ತನ್ನು ಈ ಆತ್ಮಕಥೆಯ ಬರಹದಲ್ಲಿ ಸಹಜವಾಗಿ, ಪ್ರಖರವಾಗಿ ತೆರೆದು ಇಟ್ಟಿದ್ದಾರೆ. ಹಾಗೆ ನೋಡಿದರೆ ಈ ಕೃತಿ ಒಂದೇ ಸಲಕ್ಕೆ ಬರೆದದ್ದಲ್ಲ. ಆತ್ಮಕತೆಯ ತುಣುಕುಗಳಂತಿರುವ ಇಲ್ಲಿನ ಬಹುತೇಕ ಲೇಖನಗಳನ್ನು ಕಳೆದ ಹತ್ತು ವರ್ಷಗಳಿಂದ ಲೇಖಕರು ಬಿಡಿ ಬಿಡಿಯಾಗಿ ಪ್ರಕಟಿಸಿಕೊಂಡೇ ಬಂದಿರುವರು. ಬಿಡಿಬಿಡಿ ಬರಹಗಳಾಗಿ ಪ್ರಕಟವಾಗಿದ್ದಾಗಲೇ ಇವು ಕನ್ನಡದ ಓದುಗರನ್ನು ತಾಕಿದ್ದವು. ಈಗ ಈ ಲೇಖನಗಳೆಲ್ಲ ಕೃತಿಯಾಗಿ ಬಂದು ಕನ್ನಡದ ಓದುಗರ ಸಂವೇದನೆಯನ್ನು ಅಲ್ಲಾಡಿಸಲು ಅಣಿಯಾಗಿವೆ. ಕನ್ನಡದೊಳಗೆ ನಡೆಯುತ್ತಿರುವ<noinclude></noinclude> 18avziov9tb3isyp86z717xz8b7b5eo ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೪೨ 104 16076 322204 275583 2026-05-24T14:44:32Z Pragathi. BH 7585 /* Validated */ 322204 proofread-page text/x-wiki <noinclude><pagequality level="4" user="Pragathi. BH" /><small>{{rh|೧೨೬||ಗೌರ್ಮೆಂಟ್ ಬ್ರಾಹ್ಮಣ}}</small></noinclude> ಸಂಸ್ಕೃತಿ ಚಿಂತನೆಯಲ್ಲಿ ಅನೇಕ ಚಲನೆಗಳನ್ನು ಮಾಡುವಷ್ಟು ಗೌರ್ಮೆಂಟ್ ಬ್ರಾಹ್ಮಣ</br> ಕೃತಿಯು ಸಮರ್ಥವಾಗಿದೆ. {{gap}}ಜನಾಂಗವಾದ (racism) ಇರುವ ಸಮಾಜದಲ್ಲಿ ಒಬ್ಬ ಕಪ್ಪು ವರ್ಣೀಯ, ಜಾತಿ ಸಮಾಜವಿದ್ದಲ್ಲಿ ಒಬ್ಬ ಅಸ್ಪೃಶ್ಯ ವ್ಯಕ್ತಿ ತನ್ನ ಆತ್ಮಕಥೆ ಬರೆದಾಗ ಅದು ಒಬ್ಬ ವ್ಯಕ್ತಿಯ ಕಥನವಾಗಿರುವುದಿಲ್ಲ. ಇಡೀ ಒಂದು ಸಮುದಾಯವೇ ಚರಿತ್ರೆಯಲ್ಲಿ ಅಪಮಾನದ, ಬದುಕುಳಿಯಲು ಮಾಡಿದ ಸೆಣಸಾಡಿದ ಕಥಾನಕವಾಗಿರುತ್ತದೆ.... ಈ ಅರ್ಥದಲ್ಲಿ 'ಗೌರ್ಮೆಂಟ್ ಬ್ರಾಹ್ಮಣ' ಕೂಡ ಒಬ್ಬ ವ್ಯಕ್ತಿಯ ಚರಿತ್ರೆಯಲ್ಲ; ಮನುಷ್ಯರ ಹಸಿವನ್ನು ಹಸಿವೆಂದರಿಯದ, ಅವರ ಭಾವನೆಗಳನ್ನು ಭಾವನೆಗಳೆಂದು ಗುರುತಿಸಲಾಗದ ಅವರ ಪ್ರೇಮವನ್ನು ಪ್ರೇಮವೆಂದು ಒಪ್ಪಿಕೊಳ್ಳದ ಸಮಾಜವೊಂದರ ನಂಬಿಕೆ ಆಚರಣೆಗಳ</br> ಚರಿತ್ರೆ.... {{gap}}ಮಾಲಗತ್ತಿಯವರದು... ವೇದನೆ ತುಂಬಿದ ದಾರ್ಶನಿಕನಂತೆ ವಿವೇಚನೆ ಮಾಡುವ ಗಂಭೀರ ಬರಹವಾಗಿದೆ. ಕೆಲವೊಮ್ಮೆ ಅವರು ಸಮಾಜದ ವರ್ತನೆಯನ್ನು ವಿಮರ್ಶೆ ಮಾಡುವ ಸಿನಿಕತೆ ಎನಿಸುವ ಆಕ್ರೋಶದ ಅಂಚಿಗೂ ಸರಿಯುವುದುಂಟು. ಅವರ ಬರಹದ ಶಕ್ತಿ ಇರುವುದು ಅತ್ಯಂತ ವಿಶಿಷ್ಟವಾದ ಅನುಭವಗಳಲ್ಲಷ್ಟೇ ಅಲ್ಲ ಆ ಅನುಭವಗಳನ್ನು ನಿರೂಪಿಸಲು ಬಳಸುವ ಚಿತ್ರಮಯ ಭಾಷೆಯಲ್ಲಿ, ಈ ಬರಹಗಳು ಹೀಗಾಗಿ ಒಮ್ಮೆ ಕವಿತೆಯಂತೆ ಮತ್ತೊಮ್ಮೆ ಪ್ರಬಂಧಗಳಂತೆ ಬಹಳ ಸಲ ಕತೆಗಳಂತೆ ಓದಿಸಿಕೊಳ್ಳುತ್ತವೆ.</br> ಮುಟ್ಟಿದರೆ ಮಿಡಿಯುತ್ತವೆ. {{rh|center=|right='''ರಹಮತ್ ತರೀಕೆರೆ'''|left=}} {{rh|center=|right=ಪ್ರಜಾವಾಣಿ ೨೬ ಫೆಬ್ರವರಿ ೯೫.|left=}} '''◼ ಗಂಭೀರ ಚರ್ಚೆಯ ಅವಶ್ಯಕತೆಯಿದೆ:''' {{gap}}ಇಲ್ಲಿನ ಅನೇಕ ಅನುಭವಗಳು ವಿವರಗಳು ಹೊರಗೆ ಬರಲೇ ಬೇಡವೇ ಪ್ರಕಟಿಸುವಾಗಲೇ ಬೇಡವೇ? ಎಂದು ತುಯ್ದಾಟದಲ್ಲಿ ಯಾತನೆ ವೇದನೆಯನ್ನು ಅನುಭವಿಸಿವೆ. ಇಂಥ ಸಂಕೀರ್ಣತೆಯ ಸಂದಿಗ್ಧತೆ ವ್ಯಕ್ತಿ ಕೇಂದ್ರಿತ ನೆಲೆಯದೋ ಅಥವಾ ಸಮಾಜ ಕೇಂದ್ರಿತ ನೆಲೆಯದೋ? ಜೊತೆಗೆ ಇದರಲ್ಲಿ ಯಾವುದು ಪ್ರಧಾನ. ಯಾವುದು ಆನುಷಂಗಿಕ. ಈ ದಿಕ್ಕಿನಲ್ಲಿ ಗಂಭೀರ ಚರ್ಚೆಯ ಅವಶ್ಯಕತೆಯಿದೆ. {{rh|center=|right='''ಪುಸ್ತಕ ಮಾಹಿತಿ (ಹಂಪಿ)'''|left=}} {{rh|center=|right=ಬಿ.ಎಂ. ಪುಟ್ಟಯ್ಯ - ಅಕ್ಟೋಬರ್ ೯೪|left=}}<noinclude></noinclude> 06ql7cmff586wg55j8tn6ter8t4jex3 ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೪೩ 104 16077 322205 275590 2026-05-24T14:44:56Z Pragathi. BH 7585 /* Validated */ 322205 proofread-page text/x-wiki <noinclude><pagequality level="4" user="Pragathi. BH" /><small>{{rh|||೧೨೭}}</small></noinclude> '''◼ ವಂಚನೆಗೊಳಗಾದವರ ಪ್ರತಿನಿಧಿಯ ಧ್ವನಿ:''' {{gap}}ತಾವು ಬರೆದ ಗೌರ್ಮೆಂಟ್ ಬ್ರಾಹ್ಮಣ ಓದಿದೆ. ಸಹಸ್ರಾರು ವರ್ಷಗಳಿಂದ ವಂಚನೆಗೊಳಗಾದ ಪ್ರತಿನಿಧಿಯಾಗಿ, ನೋವು ನಲಿವುಗಳಿಗೆ ಧ್ವನಿಯಾಗಿದೆ ನಿಮ್ಮ ಸಾಹಿತ್ಯ.</br> ವಾಯ್ ಎಂ.ಮಾದಾರ್ ಧಾರವಾಡ ೧೭.೧೨.೧೨೯೪ '''◼ ಅಸಲೀ ಅನುಭವಗಳು:''' {{gap}}ಗೌರ್ಮೆಂಟ್ ಬ್ರಾಹ್ಮಣ ಡಾ. ಅರವಿಂದ ಮಾಲಗತ್ತಿಯವರ ಆತ್ಮ ಕಥೆ. ಮರಾಠಿಯಲ್ಲಿ ಈ ಮೊದಲು ಪ್ರಕಟವಾದ....ಮಾದರಿಯಲ್ಲಿ ಬಂದ ಕನ್ನಡದ ಮೊತ್ತ ಮೊದಲ ಆತ್ಮ ಕಥೆಯಿದು. {{gap}}ಸ್ವಗತವಾಗಿ ಲೇಖಕರು ನೇರವಾಗಿ ಬೆತ್ತಲಾಗಿಸುವ ಪ್ರತಿಯೊಂದು ಪ್ರಕರಣಗಳು ಅವರ ಅಸಲೀ ಅನುಭವಗಳು ಶೋಷಣಿ ಅಸ್ಪಶ್ಯತೆಯ ಕರಾಳತೆಯನ್ನು ಅರ್ಥಪೂರ್ಣವಾಗಿ ಧ್ವನಿಸುತ್ತವೆ.ಲೇಖಕರು ಮುಕ್ತಾಯದ ಮೊದಲು 'ಬದುಕು ತೆರೆದ ಪುಸ್ತಕದಂತಿರಬೇಕು' ಎಂದರೂ ಬರೆಯಲಾಗದ ಬರೆಯಲಾರದ ಇನ್ನೂ ಅನೇಕ ರಹಸ್ಯಗಳಿವೆ ಎನ್ನುವ ಮೂಲಕ ಕುತೂಹಲ ಕೆರಳಿಸುತ್ತಾರೆ. {{rh|center=|right='''ತರಂಗ ಪತ್ರಿಕೆ'''|left=}} {{rh|center=|right=ದೇರ್ಲ ಡಿಸೆಂಬರ್ ೧೯೯೪|left=}} '''◼ ಗೌರ್ಮೆಂಟ್ ಬ್ರಾಹ್ಮಣ: ದಲಿತ ಜನಾಂಗದ ಇತಿಹಾಸ''' {{gap}}ನಿಮ್ಮ ಪರಿಚಯವಿಲ್ಲದಿದ್ದರೂ 'ಗೌರ್ಮೆಂಟ್ ಬ್ರಾಹ್ಮಣ' ಎಂಬ ಪುಸ್ತಕ ಓದಿ ತುಂಬಾ ಸಂತೋಷವಾಯಿತು... ಇಲ್ಲಿಯ ಪ್ರಸಂಗಗಳು ದಲಿತ ಜನಾಂಗದ ಸಹೋದರ ಸಹೋದರಿ ಬಂಧು ಬಾಂಧವರ ಒಂದೊಂದು ಇತಿಹಾಸವಾಗಿವೆ. {{rh|center=|right='''ಸಂಪಾದಕರ: ಪಂಪಣ್ಮ ಟಿ.'''|left=}} {{rh|center=|right=ಟೈಗರ್ ಪತ್ರಿಕೆ. ಹೊಸಪೇಟೆ ೨೩.೨.೯೫|left=}}<noinclude></noinclude> qvntplvgeqjpommal8q2wvhfel5sfpq ಪರಿವಿಡಿ:ಸಂತಾಪಕ.djvu 106 17731 322310 283090 2026-05-24T18:10:38Z Vikashegde 1258 322310 proofread-index text/x-wiki {{:MediaWiki:Proofreadpage_index_template |Type=book |Title=[[ಸಂತಾಪಕ]] |Language=kn |Volume= |Author= |Translator= |Editor= |Illustrator= |School= |Publisher= |Address= |Year= |Key= |ISBN= |OCLC= |LCCN= |BNF_ARK= |ARC= |DOI= |Source=djvu |Image=1 |Progress=V |Transclusion=no |Validation_date= |Pages=<pagelist /> |Volumes= |Remarks= |Width= |Header= |Footer= |tmplver= }} 38yz611ty98321iv7l68pyphg7ii7di ಪುಟ:ಬನಶಂಕರಿ.pdf/೭ 104 18727 322268 223653 2026-05-24T15:24:51Z Pragathi. BH 7585 /* Validated */ 322268 proofread-page text/x-wiki <noinclude><pagequality level="4" user="Pragathi. BH" /></noinclude>{{center|೧}} {{gap}}"ಅಮ್ಮಿ ದೇವರ ಮನೆಗೆಹೋಗಿ ಹಣತೆ ಹಚ್ಚಿಕೊಂಡು ಬಾರೇ "</br> {{gap}}"ಹೂಂ ಅತ್ತೆ"</br> {{gap}}ಪ್ರೀತಿಯ ಮಗುವಿಗೆ ಹೇಳಿದ ಹಾಗಿತ್ತು ಅತ್ತೆಯ ಮಾತು, ಸೊಸೆಯೂ ಅಷ್ಟೆ.</br> ಹೂವಿನಷ್ಟು ಕೋಮಲ ಆ ಮಾರುತ್ತರದ ದ್ವನಿ,</br> {{gap}}ಮೊಗಸಾಲೆಯಲ್ಲಿ ಮಾವ ಕುಳಿತಿದರು,ಅವರೆದುರಿಂದ ಹಾದು ಹೋಗಿ ಆ ಹಣತೆ</br> ಯನ್ನೆತ್ತಿಕೊಳ್ಳಬೇಕು, ಹನ್ನೆರಡುಹದಿಮೂರರ ಆಪುಟ್ಟ ಹುಡುಗಿ ಮೈತುಂಬ ಸೆರಗು </br> ಹೊದ್ದುಕೊಂಡು ವಿನೀತಳಾಗಿ ಮಾವನೆದುರು ನಡೆದು ಬಂದಳು.</br> {{gap}}ಶಾಂತವಾದ ಸ್ವರದಲ್ಲಿಅವ ರು ಕೇಳಿದರು ;</br> {{gap}}"ಸಾಲುದೀಪ ಹಚ್ತಿಯೇನಮಣ್ಣಿ"?</br> {{gap}}"ಹೂಂ ಮಾವಯ್ಯ"</br> {{gap}}"ಹಾಂ ಹಚ್ಚಿಡಿ ಆಗ್ನಿಂದ ಪಟಾಕಿ ಸುಡೋಕೆ ಹುಡುಗರು ಕಾಯ್ತಾ ಇದಾರೆ".</br> {{gap}}"ಹೂಂ"...</br> {{gap}}ಪಟಾಕಿಯ ಪದೋಚ್ಚಾರ ಅಮ್ಮಿ ಲಗುಬಗೆಯಿಂದ ನಡೆಯುವಂತೆ ಮಾಡುವಂತೆ ಮಾಡಿತು.</br>ಎಣ್ಣೆ ತುಂಬಿದ್ದ ಹಣತೆಯನೆತ್ತಿಕೊಂಡು ಅವಳು ದೇವರ ಮನೆಗೆ ಹೋದಳು, ಹೊಸತಾಗಿ </br>ಹೊಸೆದ್ದಿದ್ದ ಅರಳೆಯ ಬತ್ತಿ ಸೊಗಸಾಗಿ ಆ ಹಣತೆಯಲ್ಲಿಎಣ್ಣೆಯೊಡನೆ ಬೆರೆತು ಒರಗಿ</br> ಕೊಂಡಿತು, ಒಂದು ವಾರಕ್ಕೆ ಹಿಂದಯೇ ದೀಪಾವಳಿಯ ಹಬ್ಬಕ್ಕೆಂದು ಅತ್ತೆಯೂ</br>ಸೊಸೆಯೂ ಜತೆಯಾಗಿ ಕೂತು ಬತ್ತಿ ಹೊಸೆದಿದ್ದರು-ಮೆಲುದನಿಯಲ್ಲಿ ದೇವರನಾಮ</br> ಹೇಳುತ್ತ.</br> {{gap}}ಸಿಂಗರಿಸಿದ್ದ ದೇವರೆದುರು ದೀಪ ಉರಿಯುತಿತ್ತು ಅದರಿಂದ ಹಣತೆಗೆ ಬೆಳಕು</br> ಅಂಟಿಸಿಕೊಡಳು ಅಮ್ಮಿ ಗಾಳಿಗೆ ಆರದಂತೆ ಸೆರಗಿನಿಂದ ಹಣತೆಯಿಂದ ಮರೆಮಾಡಿ.</br> ಹೆಜ್ಜೆಯಮೇಲೆ ಹೆಜ್ಜೆಯಿಡುತ್ತಾ ಹೊರಬಂದಳು.</br> {{gap}}ಹೊರಗೆ ಹುಡುಗರಿಬ್ಬರು ಗಲಾಟೆ ಮಾಡುತ್ತಿದ್ದರು.</br> {{gap}}"ಅಪ್ಪಯ್ಯ ನೊಡಪ್ಪಯ್ಯ ಹೊಡಿತಾನೆ ರಂಗ."</br> {{gap}}"ನಾನಲ್ಲ ಅಪ್ಪಯ್ಯ ಸುಳ್ಳು ಹೇಳ್ತಾನೆ ಅಣ್ಣ."</br> {{gap}}ಅಮ್ಮಿಯ ಮೈದುನಂದಿರು ಯಾವಾಗಲೂ ಹಾಗೆಯೇ ಹತ್ತುವರುಷ ಆರು ವರುಷ</br> ವಯಸ್ಸಿನ ಆ ಹುಡುಗರು ಹೊರಗೆ ಗದ್ದೆಗಳಿಗೋ ತೋಟಕ್ಕೋ ಹೋದರೆ ಮನೆ ಬಿಕೋ</br> ಎನ್ನುತ್ತಿತ್ತು ಅದು ಸಹಿಸಲಾಗದ ಮೌನ, ಅಮ್ಮಿ ಯಾವಾಗಲೂ ಅವರು ಹಿಂತಿರುಗಿ</br> ಬರುವುದನ್ನೇ ಇದಿರು ನೋಡುತಿದ್ದಳು ಅತ್ತೆಯೂ ಆಗಾಗ್ಗೆ ಕೇಳುತ್ತಾಯಿದ್ದಳು;"ರಂಗ </br> ಎಲ್ಲೇ ನಾಣಿಎಲ್ಲೇ ಅಮ್ಮಿ?"</br> {{gap}}ಆ ಹುಡುಗರೋ ಮಹಾ ತುಂಟರು, ಅತ್ತಿಗೆ ಎಂದು ಒಂದು ದಿನವೂ ಅಮ್ಮಿ</br><noinclude></noinclude> p6eoilr3pfqjk8wgqv30klgd13zmbja ಪುಟ:ಬನಶಂಕರಿ.pdf/೮ 104 18728 322269 223658 2026-05-24T15:26:44Z Pragathi. BH 7585 /* Validated */ 322269 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=ಬನಶಂಕರಿ|left=|right=೭}} {{gap}}ಅಮ್ಮಿಯ ಮಾವ ಒಂದು ಪುಸ್ತಕ ತೆರೆದು ಎರಡು ಪುಟ ಓದಿದರು ಯಾವುದೋ</br> ದಸ್ತಾವೇಜು ತೆರೆದು ನಾಲ್ಕಾರು ಪುಟ ಮಗುಚಿ ಹಾಕಿದರು. ಅದೂ ಬೇಸರವಾಯಿತು</br> ಕನ್ನಡಕವನ್ನು ಮೂಗಿನ ಮೇಲಿಂದ ಇಳಿಸಿ ಮಡಚಿಟ್ಟು ಅತ್ತಿತ್ತ ಶತಫಥ ತುಳಿದರು.</br> {{gap}}ಅಮ್ಮಿ ದೇವರ ಮನೆಗೆ ಹೋದಳು. ಅಲಂಕೃತ ಮಂಟಪದೊಳಗೆ ಮನೆದೇವರ </br>{{gap}}ವಿಗ್ರಹ ನಿಶ್ಚಲವಾಗಿ ಕುಳಿತಿತ್ತು ಅಲ್ಲೇ ಬಾಗಿಲ ಆತು ಕಾಲು ಕೆರೆಯುತ್ತ ಅಮ್ಮಿ </br>ನಿಂತಳು. ಅವ್ಯಕ್ತ ಪ್ರಾರ್ಥನೆಯ ನುಡಿಗಳೆಂಬಂತೆ ತುಟಿಗಳು ಚಲಿಸುತಿದ್ದವು.</br> {{gap}}ಹಿಂಬದಿಯಿಂದ ನಡೆದು ಬಂದು ಅತ್ತೆ ಹೇಳಿದರು;</br> {{gap}}"ನೀನು ಊಟ ಮಾಡಿ ಮಲಕ್ಕೋ ಅಮ್ಮಿ"</br> {{gap}}-ಎಲ್ಲಾದರೂ ಉಂಟೆ ಎಂತಹ ಮಾತು?</br> {{gap}}"ನಾ ಒಲ್ಲೆ ಅತ್ತೆ. ನಂಗೆ ಹಸಿವಿಲ್ಲ"</br>{{gap}}ಕಾಡು ಹಾದಿ ..ಕತ್ತಲು..ಅಮ್ಮಿಯ ಗಂಡನನ್ನು ಬಸಿರಲ್ಲಿಹೊತ್ತು ಹೆತ್ತಿದ್ದ ಆ </br>ತಾಯಿಗೆ ಯಾಕೋ ಒಂದು ರೀತಿಯ ಅಳುಕು. ಶೀತಲ ಗಾಳಿ ನರನಾಡಿಗಳನ್ನು ತಿವಿಯುವ </br>ಹಾಗೆ ಆ ಅಳುಕು ಹೃದಯ ಹಿಂಡು ತಿತ್ತು ತೂಕಡಿಸುತ್ತಿದ್ದ ಎಳೆಯ ಮಕ್ಕಳಿಬ್ಬರನ್ನೂ </br>ಮಲಗಿಸಿದ್ದಾಯಿತು..ಆ ಬಳಿಕ ಯೋಚನೆಗಳನ್ನು ಓಡಿಸಲೆಂದು ದೇವರ ನಾಮ .."ಕಂಡು</br> ಕಂಡು ನಿ ಎನ್ನ ಕೈ ಬಿಡುವರೆ.."</br>{{gap}}ಮಾವ ಅಂಗಳಕ್ಕೆ ಹೋಗಿ ನಿಂತರು ಬಹಳ ಹೊತ್ತು,</br> {{gap}}ತನಗರಿವಿಲ್ಲದಂತೆಯೇ ಅಮ್ಮಿ ಅತ್ತೆ ಹತ್ತಿರ ಬಂದಿದ್ದಳು.ಅತ್ತೆಯ ಮಡಿಲಲ್ಲಿ</br> ಮುಖವಿರಿಸಿ ಎಲ್ಲವನ್ನೂ ಮರೆಯ ಬಯಸಿದ್ದಳು ಅಮ್ಮಿ ಹಿತಕರವಾಗಿ ಮುಂಗುರುಳು</br> ಅತ್ತೆಯ ಬೆರಳುಗಳು .ಆ ಪಲ್ಲವಿ.."ಕಂಡು ಕಂಡು ನೀ ಎನ್ನ.."ಎಲ್ಲ</br>ವನ್ನೂ ಮರೆಯುವ ಸಾದ್ಯತೆ..ತಿಳಿದೋ ತಿಳಿಯದೋ ಬಲೆ ಬೀಸಿದ ಕಳ್ಳ ನಿದ್ದೆ..</br> {{gap}}ಇರುವಿಕೆಯನ್ನು ಮರೆತ ಆ ಅವಸ್ತೆಯೊಳಗೆ ಅಮ್ಮಿ ಅದೆಷ್ಟು ಹೊತ್ತು ಇದ್ದಳೋ!</br> {{gap}}ಯಾವುದೋ ಪಿಸು ಮಾತು ಕೇಳಿಸಿತು ಅಮ್ಮಿಗೆ.ಇದು ಸ್ವಪ್ನವಿರಬೇಕು-ಎಂದು </br>ಕೊಡಳು ಆಕೆ ಅವರು ಬಂದು ತನಗಾಗಿ ದೃಶ್ಟಿ ಹಾಯಿಸುತ್ತಿದ್ದ</br> ಹಾಗೆ...ಅಮ್ಮಿ ನಿದಾನವಾಗಿ ಕಣ್ಣು ತೆರೆದಳು ಅತ್ತೆ ಮಾವ ಜತೆಯಾಗಿ ಬಾಗಿಲ ವಬಳಿ ನಿಂತಿದ್ದರು. ಬೇರೆ ಯಾರೂ ಇರಲ್ಲಿಲ್ಲ, ಸಾಲು ದೀಪಗಳಿನ್ನೂ ಉರಿಯುತ್ತಿದ್ದವು,</br> ಅಲ್ಲೊಂದು ಇಲ್ಲೊಂದು ಸೊಡರು ಕಣ್ಣು ಮುಚ್ಚಿತ್ತು, ಅಷ್ಟೆ,ಪಿಸುಮಾತು ಬಾಗಿಲ ಬಳಿಯಿಂದ ಬರುತಿತ್ತು.</br> {{gap}}ಅತ್ತೆ ಹೇಳುತಿದ್ದರು;</br> {{gap}}"ನೋಡಿ ಈಗ ಸ್ವಷ್ಟವಾಗಿ ಕಾಣ್ತಿದೆ ಕಂದೀಲು ಅಲ್ಲ?"</br> {{gap}}"ಹೂಂ.. ಹೌದು.. ಬೇಗ ಬೇಗನೆ ಬರ್ತಿರೋ ಹಾಗಿದೆ"</br> ಅಮ್ಮಿ ಥಟ್ಟನೆ ಎದ್ದು ಕುಳಿತಳು,ತಾನೂ ಬಾಗಿಲ ಬಳಿಗೆ ಓಡಬೇಕೆಂಬ ಅವಳಿಗೆ </br>ಆಸೆಯಾಯಿತು,ಆದರೂ ಒಳಮನಸ್ಸು ಹೇಳುತ್ತಿತ್ತು: ಇಲ್ಲೇಕೂತಿರು.ಈ ನಿರೀಕ್ಷೆ</br> ಎಷ್ಟೋಂದು ಸುಂದರ| ಇಲ್ಲೇ ಕೂತಿರು.."</br>{{gap}}ಆ ಸುಖಕ್ಕೆ ಭಂಗ ಬರಬಾರದೆಂದು ಅಮ್ಮಿಅಲ್ಲಿಯೇ. ಚಾಪೆಯ ಮೇಲೆ ಕುಳಿತಳು.<noinclude></noinclude> t4tyalvslm06yu2folgdw50suqvruvi ಪುಟ:ಬನಶಂಕರಿ.pdf/೯ 104 18729 322283 276825 2026-05-24T16:33:37Z Shreelatha.Halemane 7642 /* Validated */ 322283 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಬನಶಂಕರಿ|left=|right= ೩}} {{gap}}ಕೊನೇಲಿ ನಿಂತ್ಕೊಂಡು ಬಾರಿಸಿ" {{gap}}ಹೂನಪ್ಪಯ್ಯ ಹಾಗೇ ಮಾಡ್ತೀನಿ" {{gap}}ರಂಗ ಮೂಲೆಯಿಂದ ಬಿಚ್ಚಿಕೊಂಡು ಪಟಾಕಿಯನ್ನು ಮೊದಲು ಹಾರಿಸಿದ,ಅದು ಆರಂಭ,ಆ ಬಳಿಕ ಹುಡುಗರ ಹುಚ್ಚು ಕಿರಿಚಾಟದೊಡನೆ ಹಿರಿಯರ ನಗೆ ಸಂತೋಷದೊಡನೆ ಅಮ್ಮಿಯ ಅನಂದೋತ್ಸಾಹ ಪಟಾಕಿಗಳು ಚಟ್ ಚಟಿಲೆಂದವು, ಸುರುಸುರು ಬಾಣಗಳು ಆಕಾಶಕ್ಕೆ ನೆಟ್ಟವು ನಕ್ಷತ್ರಕಡ್ಡಿಗಳು ಮೌನವಾಗಿ ಬಣ್ಣಬಣ್ಣವಾಗಿ ಉರಿದು ಸಾವಿರ ನಕ್ಷತ್ರಗಳನ್ನು ಉಗುಳಿದವು. {{gap}}ಆ ಬೆಳಕು ತಾರೆಗಳನೆಲ್ಲಾ ಅಂಗೈಯಲ್ಲಿ, ಸೆರಗಿನಲ್ಲಿ, ಹಿಡಿಯಬೇಕೆಂಬ ಬಯಕೆ ಅಮ್ಮಿಗೆ ಆದರೆ ಗೃಹಿಣಿಯಾದ ಆಕೆ ಹಾಗೆ ಮಾಡಲು ಸ್ವತಂತ್ರಳಲ್ಲ {{gap}}ಇಷ್ಟಿದ್ದರೂ ಒಂದು ವಿಷಯದಲ್ಲಿ ಮಾತ್ರ ಯಾರಿಗೂ ಇಲ್ಲದ ಹೆಮ್ಮೆ ಅವಳ ಆಸ್ತಿಯಾಗಿತ್ತು ಪೇಟೆಯಿಂದ ತನ್ನ ಪತಿದೇವರು ಕಳುಸಿದ್ದಲ್ಲವೇ,ಈದಿನ ಪಟಾಕಿಯಾಟ ಸಾದ್ಯವಾದ್ದದ್ದು? {{gap}}ಆ ಮಧ್ಯಾಹ್ನ ಬಲು ಜಂಬದಿಂದ ನಾಣಿ ಹೇಳಿದ್ದ; {{gap}}"ಐ ಅಮ್ಮ.. ಇವತ್ತು ಸಾಯಂಕಾಲ ಎಂಥೆಂಥ ಪಟಾಕಿ ಹಾರಿಸ್ತೀವಿ ಗೊತ್ತಾ" {{gap}}ರಂಗ ರಾಗವೆಳೆದಿದ್ದ; {{gap}}"ಆನೆ ಪಟಾಕಿ....ಕುದುರೆ ಪಟಾಕಿ.." {{gap}}ಅಮ್ಮಿಗೆ ತನಗೆ ಆ ಬಾಗ್ಯವಿಲ್ಲವೆಂಬ ದು:ಖ ಒಂದೆಡೆ: ಕಳುಹಿಸಿಕೊಟ್ಟದ್ದು ತನ್ನ ಗಂಡನೆಂದು ಆ ಮೈದುನರು ಹೇಳಲಿಲ್ಲವೆಂಬ ಸಿಟ್ಟು ಒಂದೆಡೆ, ಆ ಭಾವನೆಗಳಿಂದ ನೊಂದು ಅವಳ ಸುಂದರ ಮುಖ ಸಿಂಡರಿಸಿತು . {{gap}}ನೋವಿನ ದ್ವನಿಯಲ್ಲಿ ಒಂದು ಪ್ರಶ್ನೆ; ಹಾಗೆ {{gap}}"ಆ ಪಟಾಕಿ ಎಲಿಂದ್ಬಂತೋ?" {{gap}}"ಚಿಕ್ಕಮಗಳೂರಿಂದ." {{gap}}"ಹುಂ ಯಾರು ಕಳಿಸ್ಕೊಟ್ಟೋರು?" {{gap}}"ನಮ್ಮಣ್ಣ ಕಣೇ-ನಮ್ಮಣ್ಣ|" {{gap}}ಮತ್ತೆ ಸೋಲು ಅಮ್ಮಿಗೆ. ರಾತ್ರೆ ಅಂಚೆಯವನ ಜತೆಗೂಡಿ ಅವರು ಬರುವರು;ಆಗ ಸಮಯ ಸಾದಿಸಿ ಗುಟ್ಟಾಗಿ ಅವರಿಗೆ,ತನಗಾದ ಅವಮಾನದ ವರದಿಯೊಪ್ಪಿಸಬೇಕು-ಎಂದು ಅಮ್ಮಿ ಯೋಚಿಸಿದಳು. {{gap}}ಹಾಗೆ ಎಷ್ಟೋಂದು ಸಾರಿ ಯೋಚಿಸಿಲ್ಲ! ಆದರೆ ಗಂಡ ಬಂದಾಗ ಎಂದೂ ಅಂತಹ ಮಾತನ್ನು ಅಮ್ಮಿ ಹಾಡಿದವಳಲ್ಲ. ಅಷ್ಟೆಕೆ? ಕ್ಶಣಕಾಲ ಎಂದಾದರೊಮ್ಮೆ ಗೋಪ್ಯದಲ್ಲಿ ಸಂದಿಸಿದಾಗ-ಹೂಂ ಹೊರತಾಗಿ ಹೆಚ್ಚು ಮಾತನ್ನೆ ಅವಳು ಆಡಿದವಳಲ್ಲ. {{gap}}"..ಅವರ ಆಗಮನ...ಸಾಲುದೀಪಗಳ ಬೆಳಕಿನ ಆವರಣದೊಳಗೆ ಆ ಹುಡುಗರಿಬ್ಬರೂ ಹುಚ್ಚೆದ್ದು ಕುಣಿಯುತ್ತಿದ್ದಾರೆ, ಕತ್ತಲು-ಬೆಳಕುಗಳ ನಡುವೆ ಕಣ್ಣುಮುಚ್ಚಾಲೆಯಾಟ ನಡೆದಿದೆ ಅದನ್ನುಅಮ್ಮಿ ಬಾಗಿಲ ಬಳಿ ನಿಂತು ನೋಡುತ್ತಿದ್ದಾಳೆ.ಹಾಗೆ ನೋಡುತ್ತಿದ್ದರೂ ಅವಳ ದೃಷ್ಟಿ ಮುಂದಕ್ಕೆ ಹರಿದಿದೆ-ಮುಂದಕ್ಕೆ ದೂರ...ಗುಡ್ಡ ಬೆಟ್ಟಗಳನ್ನು ದಾಟಿ.<noinclude></noinclude> a6yha396u7vur5v147768ekfhj8dzbg ಪುಟ:ಬನಶಂಕರಿ.pdf/೧೦ 104 18730 322284 276827 2026-05-24T16:42:40Z Shreelatha.Halemane 7642 /* Validated */ 322284 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಬನಶಂಕರಿ|left=|right=೯}} {{gap}}ಮೇಲಿಟ್ಟು, ಒಡೆದ ಕಲ್ಲೊಂದರ ಮೇಲೆ ಎರಡೂ ಕೈಗಳಲ್ಲಿ ತಲೆಯಿರಿಸಿ ಉಸಿರಿಗಾಗಿ ಏದುತ್ತಾ ಏದುತ್ತಾ ಮುನಿಯಪ್ಪ ಕುಳಿತಿದ್ದ. {{gap}}"ಏನಾಯ್ತು ಮುನಿಯ ಏನಾಯ್ತು?" {{gap}}"ಅತ್ತೆಯೂ ಇಳಿದು ಬಂದು ಸ್ವಲ್ಪ ದೂರದಲ್ಲಿ ನಿಂತರು. {{gap}}"ಏನಾಯ್ತೂಂದ್ರೆ..?" {{gap}}ಅಮ್ಮಿ ಮೆಲ್ಲನೆ ನಡೆದು ಬಂದು ಬಾಗಿಲನ್ನು ಆದರಿಸಿ ನಿಂತಳು ಅವಳ ಮನಸ್ಸು ಕೇಳುತಿತ್ತು ಮೂಕನಾಗಿ. {{gap}}'ಏನಾಯ್ತು ಅವರಿಗೇನಾಯ್ತು ನನ್ನ ದೇವರಿಗೇನಾಯ್ತು?' {{gap}}ಸ್ವರ ಹೊರಡಿಸಲೆತ್ನಿಸಿದ ಮುನಿಯ. ಮಾತಿನ ಬದಲು ರೋದನದ ದ್ವನಿ ತೆಗೆದ, {{gap}}"ಅಯ್ಯೋ ಎಂದರು ಅತ್ತೆ. ಏನಾಯ್ತು?ಅಯ್ಯೋ! ಏನಾಯ್ತು?" ಮಾವ ಗದರಿ ನುಡಿದರು; {{gap}}"ಸುಮ್ನಿರು ಲಕ್ಷ್ಮಿ, ನೀನು ಸುಮ್ನಿರು" {{gap}}ಮತ್ತು ನಾಲ್ಕಾರು ನಿಮಷ ಮುನಿಯ ಮಾತನಾಡಲೇಯಿಲ್ಲ ಮಡಿ ಮೈಲಿಗೆಯನ್ನು ಗಣಿಸದ ಮಾವ ಅವನ ಬುಜಹಿಡಿದು ಕುಲುಕಿದರು. {{gap}}"ಹೇಳು ಮುನಿಯ! ಹೇಳು! ಏನಾಯ್ತು ಹೇಳು!ಎಲ್ಲಿ ರಾಮಚಂದ್ರ? ಬರ್ಲಿಲ್ವೇನು?" {{gap}}ಮುನಿಯ ಮಾವನ ಪಾದಗಳನ್ನು ಹಿಡಿದುಕೊಂಡ {{gap}}'ನಾನು ಕಡು ಪಾಪಿ! ದ್ಯಾವ್ರು... ನಾನು ಕಡು,ಪಾಪಿ"! {{gap}}"ಏನಾಯ್ತು ಹೇಳ್ಭಾದ್ರೇನೋ...?" {{gap}}ಆ ಬಳಿಕ ಪಿಸು ಮಾತಿನಲ್ಲಿ ಆ ವಿಶಯ.. {{gap}}ಚಿಕ್ಕ ಅಯ್ನೋರು ಇವತ್ತು ಚಂಜೆಗೇ ತೀರ್ಹೋದ್ರು.....ಅಯ್ಯೋ..! {{gap}}ಅಮ್ಮಿಗೆ ಕೇಳಿಸಿದುದು ಆ ಮಾತಲ್ಲ.ಅವಳ ಕಿವಿಯನ್ನಿರಿದುದು ಅತ್ತೆಯ ಕಠೋರ ರೋದನೆ ತಲೆ ತಿರುಗಿ ಅತ್ತೆ ನೆಲದ ಮೇಲೆ ಕುಸಿದು ಬಿದ್ದುದನ್ನು ಅವಳು ಕಂಡಳು ಮಾವ ಸ್ತಂಬಿತರಾಗಿ ಕಲ್ಲು ಬೊಂಬೆಯ ಹಾಗೆ ನಿಂತರು.ಕತ್ತಲೆಯನ್ನು ಭೇದಿಸಿ ಕೊಂಡು ಆಕಾಶಕ್ಕೆ ಅಡರಿದ ಆ ರೋದನವೂ!ಅಮ್ಮಿ ಅದೀರಳಾದಾಗ ಯಾವಾಗಲೂ "ಅಮ್ಮ"ಎನ್ನುತ್ತಿದ್ದಳು ಗತಿಸಿದ ಅಮ್ಮನ ನೆನಪು ಈಗಲೂ ಅತ್ತೆಯ ಬಳಿಗೆ ಓಡುತ್ತಾ ಓಡುತ್ತಾ ಅವಳು ಕೂಗಾಡಿದಳು;"ಅಮ್ಮ!ಅಮ್ಮಾ!" {{gap}}ಅಯ್ಯೋ!ನನ್ನ ರಾಮಚಂದ್ರನ್ನ ಮುದ್ದು ಕಂದನ್ನ ಕೊಂದ್ರಪ್ಪೊ ಕೊಂದರು..ಅಯ್ಯೋ-ಅಯ್ಯೋ!" "ರಾಮ-ಚಂದ್ರ-" {{gap}}ಅಮ್ಮಿ ಮಾವನ ಮುಖ ನೋಡಿದಳು,ಮುನಿಯನ ಮುಖ ನೋಡಿದಳು ಹಾ! ಹಾಗೂ ಆಯಿತೆ? {{gap}}"ಅಮ್ಮಾ!ಅಮ್ಮಾ!.." {{gap}}ಆ ಕೂಗಿನ ಜತೆಯಲ್ಲೇ,ಹೃದಯ ತಲ್ಲಣಿಸುವಹಾಗೆ ಬಿಕ್ಕಿ ಬಿಕ್ಕಿ ಬಂದ ಅಳು,<noinclude></noinclude> lhhe8l0rj3rnkd0bkmgfdtcqnspahkz ಪುಟ:ದೀಕ್ಷೆ.pdf/೨೫ 104 19135 322328 277355 2026-05-24T19:02:22Z Pragathi. BH 7585 /* Validated */ 322328 proofread-page text/x-wiki <noinclude><pagequality level="4" user="Pragathi. BH" /></noinclude>352 ಕನಸು ವಾಗಿ ನಡೆದುವು. ಆದರೆ, ಪ್ರವೇಶದ ಟಿಕೆಟು ಕೊಳ್ಳುವ ಜಾಗ ಸಮೀಪಿಸಿದಾಗ, ಒಳ ಹೋಗಬೇಕೆ ಬೇಡವೆ ಎಂಬ ಯೋಚನೆ ಆತನನ್ನು ಬಾಧಿಸಿತು. ಆ ವೆಚ್ಚಕ್ಕಾಗಿ ಹೆಚ್ಚಿನ ನಾಲ್ಕಾಣೆಯ ಪೂರ್ವ ಸಿದ್ಧತೆಯನ್ನೇನೋ ಆತ ಮಾಡಿದ್ದ. ಆದರೂ ಹಿಮ್ಮೆಟ್ಟುವ ಬಯಕೆಯಾಯಿತು. ವಾಚನಾಲಯವಿತ್ತು ಅಲ್ಲೇ, ಸಂಘದ ಕಟ್ಟಡ, ತೆರೆದ ಬಾಗಿಲುಗಳು, ಪರಿಚಿತನಾದ ಆತನನ್ನು ಕರೆಯುತ್ತಿದ್ದುವು. ಆದರೆ, ಬಯಲಿನ ಆವರಣದೊಳಗಿಂದ ಕಲರವವೂ ಏಳುತ್ತಿತ್ತು. ಮೋಹಕವಾಗಿತ್ತು ಆ ಹರ್ಷೋ ದ್ವಾರ. ಅದು ಕಿವಿಗೆ ಬಿದ್ದೊಡನೆ, ಹಿಂದಿರುಗುವ ಬಯಕೆಯನ್ನು ಮೆಟ್ಟಿ ನಿಂತಿತು ಮನಸ್ಸು...<br /> {{gap}}ಬೆಳಗ್ಗೆ ಪಾಠ ಹೇಳಲು ಹೋದಾಗ ಶ್ಯಾಮ ಅಂದಿದ್ದ:<br /> {{gap}}“ನಾವಿವತ್ತು ಮ್ಯಾಚಿಗೆ ಹೋಗ್ತಿವಿ ಸಾರ್ ನೀವು ಬರೋಲ್ವಾ?'<br /> {{gap}}ಆ ಆಟದಲ್ಲಿ ತನಗೆ ಅಷ್ಟೊಂದು ಆಸಕ್ತಿ ಇಲ್ಲವೆಂದು ಆ ಎಳೆಯರೆದುರು ಹೇಳು ವುದು ಅವಮಾನದ ವಿಷಯವಾಗಿತ್ತು ಮುರಲೀಧರನಿಗೆ.<br /> {{gap}}ಬರಬೇಕೂಂತಿದೀನಿ.”<br /> {{gap}}“ನಮ್ಮಕ್ಕನಿಗೆ ರಜಾ ಇಲ್ವಂತೆ. ಆದರೂ ಅವಳು ಬಾಳೆ, ರಜಾ ಕೊಡದೇ ಇರೋದು ತಪ್ಪಲ್ವ ಸಾರ್??<br /> {{gap}}ಮುರಲೀಧರ ನಸುನಕ್ಕು, ತಾನೂ ಈಸಾರೆ ಮ್ಯಾಚ್ ನೋಡಲು ಹೋಗು ವುದೇ ಸರಿ ಎಂದು ನಿರ್ಧರಿಸುತ್ತ, ನುಡಿದ:<br /> {{gap}}“ಖಂಡಿತವಾಗಿಯೂ ತಪ್ಪು.'<br /> {{gap}}ಆ ದಿನದ ಪಂದ್ಯಾಟದಲ್ಲಿ ಭಾಗವಹಿಸಲಿದ್ದ ನಮ್ಮ ಸಂಸ್ಥಾನದ ತಂಡದ ಪ್ರತಿ ಯೊಬ್ಬ ಕ್ರೀಡಾಪಟುವಿನ ವಿಷಯವೂ ಶ್ಯಾಮನಿಗೆ ಗೊತ್ತಿತ್ತು. ಆ ಆಯ್ಕೆ ಅಸಮ ರ್ಪಕ ಎಂಬ ಅಭಿಪ್ರಾಯವೂ ಇತ್ತು ಆತನಿಗೆ ದಾರಿ,<br /> {{gap}}'ಬೌಲರ್ ಶ್ರೀನಿವಾಸ್ ಇಲ್ಲಿ ಅದೆಂಥ ಮ್ಯಾಚ್ ಸಾರ್??<br /> {{gap}}ಶ್ಯಾಮನ ಅಭಿಪ್ರಾಯದೊಡನೆ ಸಮರಸನಾಗುವುದೊಂದೇ ಮುರಲೀಧರನಿಗಿದ್ದ<br /> {{gap}}ಎದುರಾಳಿಗಳಾಗಿ ಬಂದಿದ್ದ ಹೊರಗಿನವರ ವಿಷಯವೂ ತಿಳಿದಿತ್ತು ಆ ಶ್ಯಾಮ ನಿಗೆ, 'ಕುಲಗೋತ್ರ'ಗಳ ವಿವರ ಕೂಡ.<br /> {{gap}}ಶ್ಯಾಮ ಒಬ್ಬನೇ ಎಂದಲ್ಲ. ನಳಿನಿಯೂ ಅತ್ಯಂತ ಆಸಕ್ತಿಯಿಂದ ಅಣ್ಣನ ಪ್ರತಿಯೊಂದು ಮಾತಿಗೂ ಕಿವಿಗೊಡುತ್ತಿದ್ದಳು.<br /> {{gap}}ಆ ಬೆಳಗ್ಗೆ ಅವರ ಗಮನವನ್ನು ಪಾಠದೆಡೆಗೆ ಸೆಳೆಯುವುದು ಮುರಲೀಧರನಿಗೆ ಬಹಳ ಕಷ್ಟವಾಯಿತು. ಕ್ರಿಕೆಟಿಗೆ ಸಂಬಂಧಿಸಿ ಅವರಷ್ಟು ತನಗೆ ತಿಳಿಯದಲ್ಲಾ ಎಂದು ನಾಚಿಕೆಯೂ ಆಯಿತು.<br /> {{gap}}ಈಗ ಒಳಹೋಗದೇ ಇದ್ದರೆ ನಾಳೆ ಬೆಳಗ್ಗೆ ಪೂರಾ ಅವಮಾನವಾಗುವ<noinclude></noinclude> 6txo1ay9zp2te07jdr4ehlo0mov49mp ಪುಟ:ದೀಕ್ಷೆ.pdf/೫೭ 104 19167 322157 277124 2026-05-24T13:54:48Z Shreelatha.Halemane 7642 /* Validated */ 322157 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=384|right=ಕನಸು}} {{gap}}“ಹೌದು, ಸಣ್ಣ ಪುಟ್ಟ ಒಡವೆಗಳೆಲ್ಲ ಚಿನಿವಾರ ಕಟ್ಟೆಗೆ ಹೋಗಿವೆ. ಆದರೆ ಎಷ್ಟು ಕಾಲ ಹೀಗೆ ದಿನ ತಳ್ಳೋದು ಸಾಧ್ಯ? ಪರೀಕ್ಷೆಯಾದ ತಕ್ಷಣ ನಾನು ಎಲ್ಲಾ ದರೂ ಕೆಲಸಕ್ಕೆ ಸೇರೋಬೇಕು. ಅಕ್ಕನಿಗೆ ಎಸ್ ಎಸ್ ಎಲ್ ಸಿ ಆಗಿದೆ. ಎಲ್ಲಾದರೂ ಕೆಲಸ ಕೊಡಿಸು-ಅಂತಿದ್ದಾಳೆ. ಆದರೆ ಅಕ್ಕ ದುಡಿಯೋದು ಅಮ್ಮನಿಗೆ ಇಷ್ಟವಿಲ್ಲ.” {{gap}}“ಹೆತ್ತ ಕರುಳು...... ಇಂಟ‌ರ್ ಮುಗಿಸಿದ್ಮಲೆ ನೀವು ವಿದ್ಯಾಭ್ಯಾಸ ಮುಂದು ವರಿಸೋ ಹಾಗೆ ಕಾಣ್ಣಿಲ್ಲ ಹಾಗಾದರೆ.” {{gap}}“ಹ್ಯಾಗೆ ಮುಂದುವರಿಸ್ಲಿ? ಕಾಲೇಜಿಗೆ ಹೋದರೂ ಮಲ್ಲೇಶಪ್ಪನ ತಮ್ಮನನ್ನು ಸುಮ್ಮೆ ಬಿಡ್ತಾರೆ ಅನ್ನೋ ಭರವಸೆ ಏನು? ಈ ಸಲದ ಪರೀಕ್ಷೆಯಾದರೂ ಯಾವ ಸುಖಕ್ಕೋಸ್ಕರ ಅಂತ ಅನಿಸುತ್ತೆ ಒಮ್ಮೊಮ್ಮೆ, ಅಣ್ಣ ಇದ್ದಾಗ ಚುರುಕಾಗಿ ಅತ್ತಿತ್ತ ಓಡಾಡ್ತಿದ್ದೆ. ಒಂದಿಷ್ಟು ಕೆಲಸ ಮಾಡ್ತಿದ್ದೆ. ಈಗ? ಸುಮ್ನಿರೋದು ಹ್ಯಾಗೆ ಸಾಧ್ಯ ಹೇಳಿ?” {{gap}}ಆ ಮಾತನ್ನೆಲ್ಲ ನಿಧಾನವಾಗಿ ತೂಗಿ ನೋಡುತ್ತ ಮುರಲೀಧರನೆಂದ: {{gap}}“ರಾಷ್ಟ್ರದ ಕೆಲಸ ಮತ್ತು ಸಂಸಾರದ ಜವಾಬುದಾರಿ, ಒಂದಕ್ಕೋಸ್ಕರ ಇನ್ನೊಂದನ್ನು ಮರೆಯೋದಕ್ಕಾಗುತ್ತಾ?” {{gap}}“ಒಂದನ್ನು ಬಿಟ್ಟು ಇನ್ನೊಂದಿಲ್ಲ ಅಂತ ನನ್ನ ಅಭಿಪ್ರಾಯ, ಮನೇದು ಚಿಕ್ಕ ಸಂಸಾರ, ರಾಷ್ಟ್ರದ್ದು ದೊಡ್ಡ ಸಂಸಾರ. ಚಿಕ್ಕದು ದೊಡ್ಡದರ ಒಂದಂಗ, ಹೌದೋ, ಅಲ್ಲವೋ?” {{gap}}ಮುರಲೀಧರ ಮುಗುಳುನಕ್ಕ. {{gap}}“ಈ ಮಾತಿಗೆ ನನ್ನ ಪ್ರತ್ಯುತ್ತರವಿಲ್ಲ!” {{gap}}ವಿಷಯ ತಿಳಿಯಲು ಅಪೇಕ್ಷಿಸುವ ದೃಷ್ಟಿಯಿಂದ ನಾರಣಪ್ಪ ಕೇಳಿದ: {{gap}}“ನಿಮ್ಮೂರ ಕಡೆ ಹ್ಯಾಗಿದೆ? ಜನ ರಾಜಕೀಯದ ಪ್ರಸ್ತಾಪ ಮಾಡೋದು ಉಂಟೆ?” {{gap}}“ಏನು ಉತ್ತರ ಕೊಡಲಿ ಆ ಪ್ರಶ್ನೆಗೆ? ಪತ್ರಿಕೆಗಳು ಮೊದಲಿಗಿಂತ ಹೆಚ್ಚು ಖರ್ಚಾಗ್ತವೆ. ಯುದ್ಧ ಸುದ್ದಿ ತಿಳಿಯೋ ಕುತೂಹಲ ಎಲ್ಲರಲ್ಲೂ ಇದೆ. ನಮ್ಮೂರಿ ನಿಂದಲೂ ಒಬ್ಬಿಬ್ಬರು ಸೈನ್ಯಕ್ಕೆ ಭರ್ತಿಯಾಗಿದ್ದಾರೆ....” {{gap}}“ಸ್ವಾತಂತ್ರ ಚಳವಳಿ ಮಾತೆಲ್ಲಾ__” {{gap}}“ಇಲ್ಲ, ಅಂಥದೊಂದೂ ಇಲ್ಲ. ಉದಾಹರಣೆಗೆ ನಮ್ಮನೆಯನ್ನೆ ತಗೊಳ್ಳಿ, {{gap}}ನನ್ನ ತಂದೆ ಓದುಬರಹ ಬಲ್ಲವರು. ನನ್ನ ಇಬ್ಬರು ಅಣ್ಣಂದಿರೂ ತಕ್ಕಮಟ್ಟಿಗೆ ವಿದ್ಯಾವಂತರು. ಆದರೆ ವೃತ್ತ ಪತ್ರಿಕೆಗೂ ಅವರಿಗೂ ಎಣ್ಣೆ ಸೀಗೆ....” {{gap}}ಊರಿನ ಕುರಿತು ಹೇಳಲು ತೊಡಗಿದ್ದ ಮುರಲೀಧರ ತನ್ನ ಕುಟುಂಬದ ಮನೆಗೆ ಬಂದು ತಲಪಿದ್ದ. ಈ ಸಂಜೆ ಮಲ್ಲೇಶ್ವರದಲ್ಲಿ, ಸ್ನೇಹಿತನ ಸಹವಾಸದಲ್ಲಿ, ಬದುಕು<noinclude></noinclude> munbtimbjdd5ktb34jzo0k42kqchfz9 ಪುಟ:ದೀಕ್ಷೆ.pdf/೫೮ 104 19168 322164 277144 2026-05-24T14:01:23Z Shreelatha.Halemane 7642 /* Validated */ 322164 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ|right=385}}ದೀಕ್ಷೆ 385 ಸಹ್ಯವಾಗಿ ತೋರಿತ್ತು ಆತನಿಗೆ, ಆದರೆ ಹಿಂದಿನ ದಿನ ಊರಿನಲ್ಲಿ ಅಷ್ಟೇ ಹೊತ್ತಿನಲ್ಲಿ ಆತನಿಗಾಗಿದ್ದ ಅನುಭವ? ಸಂಜೆಯಾದೊಡನೆಯೆ ಆತ ಚಾಪೆಯ ಮೇಲೆ ಒರಗಿ ಕೊಂಡುದು? ಆ ಚಿತ್ರ ಮುರಲೀಧರನ ಕಣ್ಣಿಗೆ ಕಟ್ಟಿತು. ಆ ನೆನಪು ಒಂದು ಕ್ಷಣ ಆತನನ್ನು ಕಾಡಿತು. {{gap}}ಮನೆಯ ಮಾತು ಹೇಳುತ್ತ ಅಂತರ್ಮುಖಿಯಾಗಿ ಒಮ್ಮೆಲೆ ಮೌನ ತಳೆದ ಗೆಳೆಯನನ್ನು ನೋಡುತ್ತ ನಾರಣಪ್ಪ ಕೇಳಿದ: {{gap}}“ಸುಮ್ಮನಾದಿರಲ್ಲ?” {{gap}}ಮುರಲೀಧರ ನಸುನಕ್ಕು ನುಡಿದ: {{gap}}“ಯಾವುದನ್ನೂ ಅನುಭವಿಸಿ ತನಗುಂಟಾದ ಭಾವನೆಗಳು ಇನ್ನೊಬ್ಬನಿಗೂ ಆಗಲೀಂತ ಮನುಷ್ಯ ಬಯಸ್ತಾನೆ, ಅಲ್ವೆ?” {{gap}}“ಹೌದು.” {{gap}}“ಹಾಗೆ ಬಯಸೋದು ಸ್ವಾಭಾವಿಕ ತಾನೆ? ಕೇಳಿ ಹಾಗಾದರೆ” {{gap}}ಸ್ನೇಹಿತನ ಮಾತಿಗೆ ಕಿವಿಗೊಡುತ್ತ ನಾರಣಪ್ಪ ಗಂಭೀರನಾದ. ರಾಷ್ಟ್ರ ಚಿತ್ರ ದೊಳಗಿನ ಸಂಸಾರ ಚಿತ್ರವೇ ಅದೂ ಎಷ್ಟೊಂದು ರುದ್ರ! ಭಾರತದಲ್ಲಿರುವ ಅಂತಹ ಸಂಸಾರಗಳ ಸಂಖ್ಯೆಯೋ ಕೋಟಿ ಕೋಟಿ....ವೈಯಕ್ತಿಕವಾಗಿಯೂ ಅಷ್ಟೆ. ಸಾಮೂ ಹಿಕವಾಗಿಯೂ ಅಷ್ಟೆ: ನಾಳೆಯ ಚಿತ್ರ ಸ್ಪಷ್ಟವಾಗಿರಲಿಲ್ಲ. ಎಲ್ಲವನ್ನೂ ಬದಲಾಯಿ ಸುವ, ಸರಿಪಡಿಸುವ, ಹೋರಾಟದ ಕಾರಿರುಳು ದೀರ್ಘವಾಗಿತ್ತು. {{gap}}“ನನ್ನ ಅಧ್ಯಯನದ ಕಥೆ ಮುಗಿದ ಹಾಗೆಯೇ ಅಂತ ಭಾವಿಸಿದ್ದೆ ನಾರಣಪ್ಪ. ಸದ್ಯಃ ಆ ಸ್ಥಿತಿಯಿಲ್ಲ. ಈ ಸಲದ್ದೂ ಒಂದು ಪರೀಕ್ಷೆ ಆಗಿಯೇ ಆಗುತ್ತೆ.” {{gap}}“ಆಮೇಲೆ?” {{gap}}“ಅದು ದೊಡ್ಡ ಪ್ರಶ್ನೆ, ಉತ್ತರವನ್ನೇನೋ ಇವತ್ತಲ್ಲ ನಾಳೆ ನಾನು ಕೊಟ್ಟೆ ತೀರಬೇಕು. ಆದರೂ ಆ ಕೆಲಸವನ್ನು ನಾಳೆಗೆ ಮುಂದುವರಿಸೂಂತ ಹೇಳುತ್ತೆ ಮನಸ್ಸು." {{gap}}“ಅಂಥ ಸಮಯದಲ್ಲಿ ಸರಿಯಾದ ಉತ್ತರವನ್ನೇ ನೀವು ಕೊಡ್ತೀರೀಂತ ನನಗೆ ಗೊತ್ತು.” {{gap}}ಬೀದಿಯಲ್ಲೂ ಬೀದಿಯ ಅಂಚಿನ ಮೇಲೂ ಅತ್ತಿತ್ತ ನಡೆಯುತ್ತಿದ್ದ ಜನರ ಆಕೃತಿಗಳು ಅಸ್ಪಷ್ಟವಾದುವು. ಬೀದಿಯ ದೀಪಗಳು ಬೆಳಗಿದುವು. ವಾಹನಗಳು ಕಣ್ಣುಗಳಿಂದ ಪ್ರಭೆ ಕಾರುತ್ತ ಚಲಿಸಿದುವು. {{gap}}ಚಿಲ್ಲರೆ ಆಣೆಗಳನ್ನು ಗೆಳೆಯನ ಕೈಗೆ ತುರುಕುತ್ತ ನಾರಣಪ್ಪನೆಂದ: {{gap}}“ಅಗೋ ಬಂತು ನಿಮ್ಮ ಬಸ್ಸು!” {{Right|49}}<noinclude></noinclude> clv3jewuigln43whh5577a4zlrpt7oo ಪುಟ:ದೀಕ್ಷೆ.pdf/೫೯ 104 19169 322165 277217 2026-05-24T14:06:01Z Shreelatha.Halemane 7642 /* Validated */ 322165 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=386 |right=ಕನಸು}} {{center|೭}} {{gap}}ಆ ವರ್ಷದ 'ಕಾಲೇಜು ಮ್ಯಾಗಜೀನ್'ಗಾಗಿ ಸಿದ್ಧತೆ ನಡೆದಿತ್ತು. ಆ ಕೆಲಸ ಕ್ಕೋಸ್ಕರ ನಿಯೋಜಿತರಾಗಿದ್ದ ರಸಾಯನ ಶಾಸ್ತ್ರದ ಉಪನ್ಯಾಸಕ ಶ್ರೀಕಂಠಯ್ಯನವರು ಲೇಖಕ ಲೇಖಿಕೆಯರನ್ನು ಹುಡುಕುತ್ತ ತರಗತಿಯಿಂದ ತರಗತಿಗೆ ಓಡಾಡಿದರು. ಅವರೇ ಪ್ರಧಾನ ಸಂಪಾದಕರು, ಸೈನ್ಯವಿಲ್ಲದ ಸೇನಾನಿಯ ಹಾಗೆ, ಅವರ ಸಂಪಾದಕ ಮಂಡಲವೇ ಸಿದ್ಧವಾಗಿರಲಿಲ್ಲ! {{gap}}ಮುರಲೀಧರನ ತರಗತಿಯಲ್ಲಿ ಶ್ರೀಕಂಠಯ್ಯನವರು ಲೇಖನಗಳಿಗಾಗಿ ವಿನಂತಿ ಮಾಡಿದರು.ಆ ಸಂದರ್ಭದಲ್ಲಿ ಅವರು ಎಚ್ಚರಿಕೆಯ ಮಾತನ್ನೂ ಆಡಿದರು: “ಸ್ವತಃ ನೀವೇ ಬರೀಬೇಕು. ಪತ್ರಿಕೆಗಳಿಂದ ಪ್ರತಿ ಮಾಡ್ಕೊಂಡು ತರ ಕೂಡದು.” {{gap}}“ಪುಸ್ತಕದಿಂದ ಕಾಪಿ ಮಾಡಹುದೆ ಸಾರ್ ?” ಎಂದು ಕೇಳಿ ಒಬ್ಬ ವಿದ್ಯಾರ್ಥಿ, ಎದುರಿಗಿದ್ದವನ ಹಿಂದೆ ತಲೆ ಮರೆಸಿಕೊಂಡ. {{gap}}ತರಗತಿ ನಕ್ಕಿತು. {{gap}}ಲೇಖನ ಬರೆದುಕೊಡುವವರಿಗೇ ಬರಗಾಲವೆಂದಾದರೆ ಸಂಪಾದಕರನ್ನು ಆರಿಸು ವುದು ಹೇಗೆ ಸಾಧ್ಯವಿತ್ತು? {{gap}}ಶ್ರೀಕಂಠಯ್ಯ ವಿದ್ಯಾರ್ಥಿಗಳೆದುರು ತಮ್ಮ ಸಂಕಟವನ್ನು ತೋಡಿಕೊಂಡರು: {{gap}}“ಸಂಪಾದಕ ಮಂಡಲಕ್ಕೆ ಯಾರನ್ನು ಕೊಡ್ತೀರಪ್ಪಾ?” {{gap}}ಹೆಸರು ಸೂಚಿಸುವುದಕ್ಕೇನೋ ವಿದ್ಯಾರ್ಥಿಗಳು ಸಿದ್ಧವಾಗಿದ್ದರು. ಯಾರದಾದ ರೊಂದು ಹೆಸರು. ಆದರೂ ಮ್ಯಾಗಜೀನಿಗೆ ಸಂಬಂಧಿಸಿದ ವಿಷಯವೆಂದು, ಹಿಂದು ಮುಂದು ನೋಡುವಂತಾಯಿತು. {{gap}}ಪೇಚಿನಲ್ಲಿ ಸಿಲುಕಿದ ಶ್ರೀಕಂಠಯ್ಯನವರ ದೃಷ್ಟಿ ಗೊತ್ತುಗುರಿ ಇಲ್ಲದೆ ವಿದ್ಯಾರ್ಥಿ ಗಳ ಮುಖಗಳ ಮೇಲೆ ಅಲೆಯಿತು. ನಾರಣಪ್ಪ ಕುಳಿತಿದ್ದ ಕೊನೆಯಲ್ಲಿ ವಿರಾಮ ಕ್ಕೆಂದು ಅನಿರೀಕ್ಷಿತವಾಗಿ ತಂಗಿತು. {{gap}}ಅಧ್ಯಾಪಕರು ದಿಟ್ಟಿಸಿ ನೋಡುತ್ತಿದ್ದ ಪ್ರತಿಭಾಶಾಲಿ ಯಾರೆಂದು ತಿಳಿಯಲು, ಹುಡುಗರು ಕತ್ತು ಚಾಚಿ ಆ ಮೂಲೆಯನ್ನು ಕಂಡರು. {{gap}}“ಓ!” ಎಂದು ಹೊರಟುವು ಒಂದೆರಡು ಉದ್ಧಾರಗಳು, {{gap}}ಶ್ರೀಕಂಠಯ್ಯ ಕಕ್ಕಾವಿಕ್ಕಿಯಾದರು. ಮತ್ತೆ ಅವರ ದೃಷ್ಟಿ ಅತ್ತಿತ್ತ ಧಾವಿಸಿತು. ಇತರರ ಉದ್ಗಾರಗಳಿಗೆ ಕಾರಣನಾಗಿದ್ದ ವಿದ್ಯಾರ್ಥಿ ಯಾರೆಂದು ನೋಡಲು ನಾರಣಪ್ಪ ನೆಡೆಗೇ ಮರಳಿತು. {{gap}}“ಲೇಖನ ಬರೆಯೋಕೆ ಬರುತ್ತೇನಯ್ಯ ನಿನಗೆ?” ಎಂದು ಶ್ರೀಕಂಠಯ್ಯ ಆತ ನನ್ನು ಕೇಳಿದರು.<noinclude></noinclude> aphequrdee1b3l3iy7zss587e9flvyz ಪುಟ:ದೀಕ್ಷೆ.pdf/೬೦ 104 19170 322166 277234 2026-05-24T14:11:12Z Shreelatha.Halemane 7642 /* Validated */ 322166 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=ದೀಕ್ಷೆ|right=387}}</noinclude>{{gap}}ನಾರಣಪ್ಪ ಏಳುತ್ತಿದ್ದಂತೆ ಗುಸುಗುಸು ಮಾತನಾಡಿಕೊಂಡರು ಹುಡುಗರು, ಅವನಲ್ಲಿ ಅಂತಹ ಸಾಮರ್ಥ್ಯವಿರಬಹುದೆಂದು ಊಹಿಸಿಯೇ ಇರಲಿಲ್ಲ ಯಾರೂ {{gap}}“ಇಲ್ಲ ಸಾರ್” ಎಂದ ನಾರಣಪ್ಪ, “ಆದರೆ ಸಂಪಾದಕ ಮಂಡಲಿಗೆ ಬೇರೊಬ್ಬರ ಹೆಸರು ಸೂಚಿಸ್ತೀನಿ.” {{gap}}"ಯಾರು?” {{gap}}“ಮುರಲೀಧರ್, ಅವರು ಕತೆ ಬರೀತಾರೆ. ಹಿಂದೆ ಕೈಬರೆಹದ ಪತ್ರಿಕೆ ನಡೆಸಿದಾರೆ. ಹೀಗಾಗಿ ಸಂಪಾದಕನ ಕೆಲಸದ ಅನುಭವವೂ ಇದೆ.” {{gap}}ಅಷ್ಟಾದರೂ ಸಲಹೆ ಬಂತಲ್ಲ ಎಂದು ಶ್ರೀಕಂಠಯ್ಯ ಮುರಲೀಧರನನ್ನು ಹುಡುಕಿದರು. {{gap}}ಹುಡುಗರ ಗುಜುಗುಜು ಧ್ವನಿ ಗಟ್ಟಿಯಾಯಿತು. “ಮುರಲೀಧರ್, ಮುರಲೀಧರ್!” ಎಂದು ಸ್ವರಗಳು ಕೇಳಿಸಿದುವು. {{gap}}ಅನಿವಾರ್ಯವಾಗಿ ಮುರಲೀಧರ ಎದ್ದು ನಿಂತ. ನಾರಣಪ್ಪ ಹೀಗೂ ಮಾಡ ಬಹುದೆ? ಎಂದು ಮೊದಲು ಸಿಟ್ಟು ಬಂತು ಆತನಿಗೆ, ಬಳಿಕ, ಸ್ನೇಹಿತ ಹೀಗೆ ಹೇಳದೆ ಇರುತ್ತಿದ್ದರೇ ಚೆನ್ನಾಗಿತ್ತು__ಎಂಬ ಸಂಕೋಚ ಅವನನ್ನು ಆವರಿಸಿತು. ಏನಾದರೂ ಒಂದಿಷ್ಟು ಬರೆಯಲು ಒಳ್ಳೆಯ ಅವಕಾಶ ಒದಗಿತೆಂಬ ಸಮಾಧಾನವೂ ಮೂಡಿತು. {{gap}}ಅಧ್ಯಾಪಕರು ಕೇಳಿದರು: {{gap}}“ಏನಯ್ಯಾ, ಸಂಪಾದಕ ಮಂಡಲೀಲಿ ಇದ್ದೀಯಾ?” {{gap}}ಇದು ತಾನು ಹೊರಲಾರದ ಭಾರವಿದ್ದಿತೆಂದು ಮುರಲೀಧರ ಸ್ವಲ್ಪ ದಿಗಿಲುಗೊಂಡ. {{gap}}“ನನ್ನ ಕೈಲಾಗುತ್ತೋ ಇಲ್ವೋ ಸಾರ್.” {{gap}}ಈತನನ್ನು ಸೇರಿಸಿಕೊಳ್ಳುವುದೇ ಸರಿ___ಎಂದು ಆಗಲೇ ನಿರ್ಧರಿಸಿದ ಶ್ರೀಕಂಠಯ್ಯನೆಂದರು: {{gap}}“ಸುಲಭದ ಕೆಲಸ ಮುರಲೀಧರ್. ನಾನಿದ್ದೀನಲ್ಲ ಜತೇಲಿ. ಕೂತ್ಕೊ." {{gap}}'ಒಲ್ಲೆ' ಎನ್ನಲು ಅವಕಾಶವನ್ನೇ ಅವರು ಕೊಡಲಿಲ್ಲ. ನಾರಣಪ್ಪನ ಮುಖ ಅರಳಿತು. ಮುರಲೀಧರ ಆತನನ್ನೇ ದಿಟ್ಟಿಸಿದ. ದುರದುರನೆ ನೋಡುತ್ತಿದ್ದಂತೆ ಕಂಡರೂ ಆ ನೋಟದಲ್ಲಿ ತುಂಬಿದ್ದುದು ಒಲವು ಮಾತ್ರ. {{gap}}“ಇನ್ನೂ ಒಬ್ಬರ ಹೆಸರು ಹೇಳೀಪ್ಪಾ, ಈ ತರಗತಿಯಿಂದ ಇಬ್ಬರು ಬೇಕು,” ಎಂದರು ಶ್ರೀಕಂಠಯ್ಯ. {{gap}}ತರಗತಿಯ ಒಂದು ವಿಭಾಗ ಗಟ್ಟಿಯಾಗಿ ಸಲಹೆ ನೀಡಿತು. {{gap}}“ಮಹದೇವಯ್ಯ ಸಾರ್.” {{gap}}ಮಹದೇವಯ್ಯ ಆಕ್ಷೇಪಿಸಲಿಲ್ಲ. {{gap}}“ಸರಿ, ಇಬ್ಬರಾದರು, ಸಾಕು,” ಎಂದರು ಶ್ರೀಕಂಠಯ್ಯ, ನಿಟ್ಟುಸಿರು ಬಿಟ್ಟು,<noinclude></noinclude> t1tb8we88v1rw5okxj0dktnq211oe1j ಪುಟ:ದೀಕ್ಷೆ.pdf/೬೧ 104 19171 322207 277122 2026-05-24T14:46:08Z Shreelatha.Halemane 7642 /* Validated */ 322207 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=388|right=ಕನಸು}} ದೊಡ್ಡದೊಂದು ಕೆಲಸವನ್ನು ಮಾಡಿ ಮುಗಿಸಿದವರಂತೆ. {{gap}}ಪಾಠದ ಬಳಿಕ ವಿದ್ಯಾರ್ಥಿಗಳು ಹೊರ ಹೋಗುತ್ತಿದ್ದಂತೆ ಕೆಲವರು ಮಹ ದೇವಯ್ಯನ ಕೈ ಕುಲುಕಿದರು. ಬೇರೆ ಕೆಲವರು, ಮುರಲೀಧರನಿಗೆ ಕೇಳಿಸುವಂತೆ ಕೀಟಲೆ ಮಾಡುವ ಧ್ವನಿಯಲ್ಲಿ ಅಂದರು: {{gap}}“ಸಂಪಾದಕರು! ಸಂಪಾದಕರು!” {{gap}}ಇಬ್ಬರೇ ಉಳಿದಾಗ ನಾರಣಪ್ಪನೊಡನೆ ಮುರಲೀಧರನೆಂದ: {{gap}}“ರೀ, ನಿಮ್ಮ ಮೇಲೆ ನನಗೆ ಬಹಳ ಸಿಟ್ಟು ಬಂದಿದೆ.” {{gap}}“ಹೌದೆ? ಯಾಕೆ?” ಎಂದು ನಾರಣಪ್ಪ ನಗುತ್ತ. {{gap}}“ಇನ್ನೇನು ಮತ್ತೆ?” {{gap}}“ಸುಮ್ನಿರಿ ಮುರಲಿ, ನಾನು ಸರಿಯಾದ್ದನ್ನೇ ಮಾಡಿದೆ.” {{gap}}“ಏನೋಪ್ಪ...” {{gap}}ಮನೆಯ ಕಡೆ ಹೊರಟಾಗ ನಾರಣಪ್ಪ ನಕ್ಕು ಹೇಳಿದ: {{gap}}“ಮ್ಯಾಗಜೀನಿಗೆ ನಾನೊಂದು ಲೇಖನ ಕೋಡ್ತೀನಿ. ತಿರಸ್ಕರಿಸ್ಬೇಡೀಪ್ಪಾ....” {{gap}}....ಮೊದಲು ವರ್ಷದ ಇಬ್ಬರು ಪ್ರತಿನಿಧಿಗಳು, ದ್ವಿತೀಯ ವರ್ಷದ ಕಲಾ ವಿಭಾಗದಿಂದ ಇನ್ನೊಬ್ಬರು, ಮುರಲೀಧರ ಮತ್ತು ಮಹದೇವಯ್ಯ-ಹೀಗೆ ಐವರ ಸಂಪಾದಕ ಮಂಡಲ ಕೆಲಸ ಆರಂಭಿಸಿತು. {{gap}}"ಸಂಪಾದಕರೇ ಸಾಲದು.ಸ್ವತಃ ನೀವೂ ಬರೀಬೇಕು''ಎಂದರು ಶ್ರೀಕಂಠಯ್ಯ . {{gap}}ಅದು ಕಷ್ಟದ ಕೆಲಸವೆಂಬುದು ಹೆಚ್ಚಿನವರ ಅಭಿಪ್ರಾಯವಾಗಿತ್ತು. ಅದಕ್ಕೆ ಅಪವಾದವಾಗಿದ್ದವನು ಲಕ್ಷ್ಮೀಕಾಂತ. ಆತ ಕೇಳಿದ: {{gap}}“ಕವಿತೆ ಎಷ್ಟು ಬೇಕಾಗಬಹುದು ಸಾರ್?” {{gap}}“ಕನ್ನಡ ವಿಭಾಗದಲ್ಲಿ ನಾಲೈದು. ಇಂಗ್ಲಿಷ್ ವಿಭಾಗದಲ್ಲಿ ಒಂದೋಎರಡೋ,” ಎಂದರು ಶ್ರೀಕಂಠಯ್ಯ. {{gap}}“ಆ ಕೆಲಸ ನನಗೆ ಬಿಟ್ಟಿಡಿ ಸಾರ್.” {{gap}}“ಎಲ್ಲಿಂದ ತರ್ತೀಯಪ್ಪ?” {{gap}}ಕಣ್ಣೆವೆ ಕೂಡ ಅಲುಗಿಸದೆ ಆತ್ಮ ವಿಶ್ವಾಸದಿಂದ ಲಕ್ಷ್ಮೀಕಾಂತನೆಂದ: {{gap}}“ನಾನೇ ಬರೀತೀನಿ, ಇಂಗ್ಲಿಷ್ ಕನ್ನಡ ಎರಡರಲ್ಲ.” {{gap}}ಶ್ರೀಕಂಠಯ್ಯನವರ ಕಣ್ಣುಗಳಲ್ಲಿ ತುಂಟತನದ ನಗೆ ಮಿನುಗಿದುದನ್ನು ಮುರಲೀ ಧರ ಗಮನಿಸಿದ. {{gap}}''ನೋಡೋಣ.ಬರೆದು ತಗೊಂಡ್ಬಾ.ಬೇರೆ ಕವಿಗಳೂ ಇದಾರೇನೋ ಹುಡುಕೋಣ'' {{gap}}ಲಕ್ಷ್ಮೀಕಾಂತನ ಮೇಲೆ ಆ ಮಾತಿನಿಂದ ಯಾವ ಪರಿಣಾಮವೂ ಆಗಲಿಲ್ಲ.<noinclude></noinclude> 86s302ywkf1czm0tjiqmxbrq1lmcr2i ಪುಟ:ದೀಕ್ಷೆ.pdf/೬೨ 104 19172 322216 277143 2026-05-24T14:51:05Z Shreelatha.Halemane 7642 /* Validated */ 322216 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ|right=389}}ದೀಕ್ಷೆ ನಿಶ್ಚಲವಾಗಿತ್ತು ಆತನ ಮುಖಮುದ್ರೆ, ಏನನ್ನೋ ಆತ ಯೋಚಿಸುತ್ತಿದ್ದ. ಪ್ರಾಯಶಃ ಕವಿತೆಯ ಸಾಲುಗಳನ್ನಾತ ಆಗಲೆ ಅಲ್ಲಿಯೆ ಮನಸ್ಸಿನೊಳಗೆ ರೂಪಿಸುತ್ತಿರಬೇಕೆಂಬ ಶಂಕೆ ಮುರಲೀಧರನಿಗೆ ಮೂಡಿತು. {{gap}}ಅಧ್ಯಾಪಕರೆಂದರು: {{gap}}“ಸಮೀಪದಲ್ಲಿ ಯಾವುದಾದರೂ ಪ್ರೆಸ್ ಗೊಲ್ಮಾಡ್ತೀನಿ. ಇನ್ನೆರಡು ವಾರ ಗಳಲ್ಲಿ ಮುದ್ರಣ ಶುರುವಾಗೇಕು. ಪ್ರೆಸ್ಸಿಗೆ ಹೋಗಿ ಮುದ್ರಣದ ಉಸ್ತುವಾರಿ ಯಾರು ವಹಿಸ್ತೀರಾ?” {{gap}}ವಿನಯಶೀಲನಾದ ಮುರಲೀಧರ ಮಹದೇವಯ್ಯನ ಹೆಸರು ಸೂಚಿಸಿದ. {{gap}}“ಪ್ರೆಸ್ಸಿನಲ್ಲಿ ಏನು ಕೆಲಸ ಇರುತ್ತೆ ಸಾರ್ ?” ಎಂದು ಕೇಳಿದ ಮಹದೇವಯ್ಯ, {{gap}}“ಪ್ರೊಫ್ ತಿದ್ದೋದು, ಮ್ಯಾಟರ್ ಎಷ್ಟು ಬೇಕೂಂತ ಕೇಳೋದು. ಇನ್ನೇನಿರುತ್ತೆ?” ಅದು ಗುರುತರವಾದ ಜವಾಬ್ದಾರಿ ಎನಿಸಿತು ಮಹದೇವಯ್ಯನಿಗೆ. ಆತನೆಂದ: {{gap}}“ಮುರಲೀಧರ್ ಕೂಡಾ ಜತೇಲಿದ್ದರೆ ವಾಸಿ.” {{gap}}“ಸರಿ, ಪ್ರೆಸ್ಸಿನ ಕೆಲಸ ನಿಮ್ಮಿಬ್ಬರ ಜವಾಬ್ದಾರಿ. ಒಂದು ವಾರದೊಳಗೆ ಲೇಖನಗಳು ಸಂಪಾದಕರ ಕೈಸೇರಬೇಕೂಂತ ನೋಟೀಸ್ ಬೋರ್ಡಿನಲ್ಲಿ ಹಾಕಿಸೋಣ.ಆಗದೆ?” {{gap}}“ಹೂಂ ಸಾರ್” ಎಂದ ಮುರಲೀಧರ. {{gap}}... ಪರೀಕ್ಷೆಯ ತಯಾರಿ ನಡೆಸಬೇಕು, ಇನ್ನು ತಡಮಾಡಬಾರದು ಎಂಬ ಯೋಚನೆ ಮುರಲೀಧರನನ್ನು ಕೊರೆಯುತ್ತಿದ್ದರೂ ಹೊಸ ಚಟುವಟಿಕೆಯಿಂದ ಆತ ಉತ್ಸಾಹಿತನಾದ, ದಿನವೂ ಆತನನ್ನು ನೋಡುತ್ತಿದ್ದವರು, “ಇವತ್ತು ಖುಶಿಯಾಗಿದೀ ರಲ್ಲಾ, ಏನು ಸಮಾಚಾರ?” ಎಂದು ಕೇಳುವಂತಾಯಿತು. ಸಂಪಾದಕ ಮಂಡಲದಲ್ಲಿ ತಾನು ಒಬ್ಬನಾದರೂ ಶ್ರೀಕಂಠಯ್ಯನವರಿಗೆ ಹೆಚ್ಚು ವಿಶ್ವಾಸವಿದ್ದುದು ತನ್ನಲ್ಲೇ ಎಂಬುದು ಖಚಿತವಾಗಿತ್ತು. ಕಾಲೇಜು ಪತ್ರಿಕೆಗೆ ಸಂಪಾದಕ ತಾನು. ಕೈಬರೆಹದ್ದಲ್ಲ, ಅಚ್ಚಾಗುವ ಪತ್ರಿಕೆ... {{gap}}ಶ್ರೀಕಂಠಯ್ಯ ಅಂದರು: {{gap}}“ಮ್ಯಾಗಜೀನಿಗೆ ಒಂದಿಷ್ಟು ಜಾಹೀರಾತು ದೊರಕಿಸ್ಸೇಕು. ಪ್ರಿಂಟಿಂಗ್ ಖರ್ಚಾದರೂ ಹುಟ್ಟುತ್ತೆ." {{gap}}ಮಹದೇವಯ್ಯ ಕೇಳಿದ: {{gap}}“ಅದೆಲ್ಲಿ ಸಿಗುತ್ತೆ ಸಾರ್?” {{gap}}“ಸ್ಪೋರ್ಟ್ಸ್ ಅಂಗಡಿಯವರು, ದೊಡ್ಡ ದೊಡ್ಡ ಪುಸ್ತಕದಂಗಡಿಯವರು, ಕೊಡ್ತಾರೆ. ಹೋಗಿ ಕೇಳೋಕು.” {{gap}}ವಿಷಯ ಸ್ಪಷ್ಟವಾದಾಗ ಉತ್ಸಾಹ ಧ್ವನಿಯಲ್ಲಿ ಮಹದೇವಯ್ಯನೆಂದ:<noinclude></noinclude> 7hcfxzz8hw33vbewp5rx3n952nokjs2 ಪುಟ:ದೀಕ್ಷೆ.pdf/೬೩ 104 19173 322220 277202 2026-05-24T14:56:35Z Shreelatha.Halemane 7642 /* Validated */ 322220 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=390 |right=ಕನಸು}} {{gap}}“ಆ ಜವಾಬ್ದಾರಿ ನನಗಿರಲಿ ಸಾರ್. ಮೂರು ನಾಲ್ಕು ಅಂಗಡಿಯವರು ನನಗೆ ಗೊತ್ತು. ತಗೊಂಡದ್ದೀನಿ.” {{gap}}“ನಿಮ್ಮ ಅಂಗಡೀದೂ ಬೇಕು!” {{gap}}ಚಿಕ್ಕಪೇಟೆಯಲ್ಲಿ ಮಹದೇವಯ್ಯನ ತಂದೆಯ ದೊಡ್ಡ ಜವಳಿ ಅಂಗಡಿ ಇತ್ತು. {{gap}}“ಆಗಲಿ ಸಾರ್, ಅದಕ್ಕೇನು?” {{gap}}ಮುರಲೀಧರನ ಕೈಗೆ ನಿಲುಕದ ಲೋಕ ಅದು. ಮಹದೇವಯ್ಯನ ಧೈರ್ಯ, ಕಂಡು ಆತನಿಗೆ ಅಭಿಮಾನವೆನಿಸಿತು. ಆತನೆಲ್ಲಾದರೂ ಆ ಕೆಲಸಕ್ಕೆ ಇಳಿದಿದ್ದರೆ ಒಂದೆ ರಡು ಜಾಹೀರಾತುಗಳಾದರೂ ಸಿಗುತ್ತಿದ್ದುವೋ ಇಲ್ಲವೋ... {{gap}}ಶ್ರೀಕಂಠಯ್ಯ ತಮ್ಮ ಕೈ ಸೇರಿದ್ದ ಎಂಟು ಹತ್ತು ಲೇಖನಗಳನ್ನು ಮುರಲೀಧರ ನಿಗೆ ಕೊಟ್ಟು ಹೇಳಿದರು. {{gap}}“ಓದಿ ನೋಡು, ತಪ್ಪುಗಳಿದ್ದರೆ ತಿದ್ದು. ಹ್ಯಾಗೆ ಮಾಡ್ತೀಂತ ನೋಡೋಣ.” {{gap}}“ಆಗಲಿ ಸಾರ್, ಓದಿ ನೋಡ್ತೀನಿ,” ಎಂದ ಮುರಲೀಧರ, ಅದು ತನ್ನ ಸಾಮರ್ಥ್ಯಕ್ಕೆ ಮೀರಿದ ಕೆಲಸ ಎಂದು ಆತನಿಗೆ ತೋರಲಿಲ್ಲ. {{gap}}ಶ್ರೀಕಂಠಯ್ಯ ಕೇಳಿದರು: {{gap}}“ನೀನೇನು ಬರೀತೀಯಾ? ಪ್ರಬಂಧವೋ? ಕಥೆಯೋ?” {{gap}}“ಇನ್ನೂ ಯೋಚಿಸಿಲ್ಲ, ಸಾರ್.” {{gap}}“ಬರಿ, ಚೆನ್ನಾಗಿ ಬರಲಿ, ನೋಡಿದವರು ತಲೆದೂಗೋ ಹಾಗಿದ್ದೇಕು ಈ ಸಲದ ಮ್ಯಾಗಜೀನು.” {{gap}}“ಆಗಲಿ ಸಾರ್." {{gap}}ಬೆಳಗ್ಗೆಯೂ ಸಂಜೆಯ ಪಾಠ ಹೇಳುವುದರ ಜತೆಗೆ ಲೇಖನಗಳನ್ನು ಓದಿ ನೋಡುವ ಕೆಲಸ ಮುರಲೀಧರನಿಗೆ, ಹೆಚ್ಚಿನ ಬರಹಗಳು ತೀರಾ ಕೆಳಮಟ್ಟದಲ್ಲಿ ದ್ದುವು. ಇವನ್ನೆಲ್ಲ ಅಚ್ಚು ಹಾಕಿದರೆ ಓದಿದವರು ತಲೆದೂಗಿದಂತೆಯೇ ಎಂದು ಕೊಂಡ ಮುರಲೀಧರ. ಲಕ್ಷ್ಮೀಕಾಂತ ಬರೆದ ಕವಿತೆಗಳಂತೂ ಅಸಹನೀಯ ವಾಗಿದ್ದುವು. {{gap}}ಲಕ್ಷ್ಮೀಕಾಂತ ಮುರಲೀಧರನನ್ನು ಕೇಳಿದ: {{gap}}“ಪ್ರಧಾನ ಸಂಪಾದಕರು ನನ್ನ ಕವಿತೆಗಳನ್ನು ನಿಮ್ಮ ಕೈಗೆ ಕೊಟ್ಟಿದಾರಂತೆ ಹೌದೆ?” {{gap}}ಆಪತ್ತು ಬಂತೆಂಬುದು ಸ್ಪಷ್ಟವಾಯಿತು ಮುರಲೀಧರನಿಗೆ. ಆದರೂ ಆತ ಎದೆ ಗುಂದಲಿಲ್ಲ. ಮಾತನಾಡುವುದಕ್ಕೆ ಪೀಠಿಕೆಯಾಗಿ ಮುಗುಳು ನಕ್ಕ. {{gap}}"ಹೌದು" {{gap}}“ಪ್ರಿಂಟಿಂಗ್ ಯಾವಾಗ ಶುರುವಾಗುತ್ತೆ?” {{gap}}“ಗೊತ್ತಿಲ್ಲ.”<noinclude></noinclude> 4y9gkjvogw81o14m1i7ybjmnjl4ruc6 ಪುಟ:ದೀಕ್ಷೆ.pdf/೬೪ 104 19174 322229 277240 2026-05-24T15:02:49Z Shreelatha.Halemane 7642 /* Validated */ 322229 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ|right=391}} {{gap}}“ಬೇರೆ ಯಾರ ಯಾರ ಲೇಖನಗಳನ್ನು ಹಾಕ್ತಾರಂತೆ?” {{gap}}“ಇನ್ನೂ ತೀರ್ಮಾನಿಸಿಲ್ಲ.” {{gap}}ಅಂತಹ ಪ್ರಶ್ನೆಗಳೆಲ್ಲ ಬಂದುವೇ ಹೊರತು, ಸ್ವಂತದ ಕೃತಿಗಳ ವಿಷಯವಾಗಿ ಏನನ್ನೂ ಲಕ್ಷ್ಮೀಕಾಂತ ಕೇಳಲಿಲ್ಲ. ಮುರಲೀಧರ ತಾನಾಗಿಯೇ ಮೆಚ್ಚುಗೆ ಸೂಚಿಸ ಬಹುದೆಂದು ನಿರೀಕ್ಷಿಸಿದ್ದ ಆತ. ಅದು ಬರದೇ ಇದ್ದಾಗ ಅನಿವಾರ್ಯವಾಗಿ ಆತನೇ ಅದರ ಪ್ರಸ್ತಾಪ ಮಾಡಬೇಕಾಯಿತು. {{gap}}“ನನ್ನ ಕವಿತೆಗಳ ವಿಷಯ ಶ್ರೀಕಂಠಯ್ಯನವರು ಏನೆಂದರು?” {{gap}}“ಅವರು ಓದಿಲ್ಲಾಂತ ಕಾಣುತ್ತೆ.” {{gap}}ಲಕ್ಷ್ಮೀಕಾಂತನ ಮುಖ ತುಸು ವಿವರ್ಣವಾಯಿತು. {{gap}}“ನೀವು ಓದಿದಿರಾ?” {{gap}}"ಹುಂ" {{gap}}ಮುರಲೀಧರನ ಎದೆ ಡವಡವನೆ ಹೊಡೆದುಕೊಂಡಿತು. ಮುಂದಿನ ಪ್ರಶ್ನೆ ಯಾವುದೆಂಬುದನ್ನು ನಿರೀಕ್ಷಿಸುವುದು ಕಷ್ಟವಾಗಿರಲಿಲ್ಲ. ಅದಕ್ಕೆ ಕೊಡಬೇಕಾದ ಉತ್ತರ__ {{gap}}“ಅವಸರದಲ್ಲಿ ಬರೆದೆ. ಹ್ಯಾಗಿವೆ?” {{gap}}[ಅಲ್ಲಿ ಇಲ್ಲಿ ಚೆನ್ನಾಗಿಲ್ಲದೆ ಹೋದರೆ, ಅವಸರದಲ್ಲಿ ಬರೆದುದೇ ಹಾಗಾಗಲು ಕಾರಣ.] {{gap}}“ಒಂದೆರಡು ಪರವಾಗಿಲ್ಲ; ತಕ್ಕಮಟ್ಟಿಗಿವೆ.” {{gap}}___ಅದು ಕೂಡ ಮನಸ್ಸಾಕ್ಷಿಗೆ ವಿರುದ್ಧವಾಗಿಯೆ ಆತ ಹೇಳಿದ ಮಾತು, {{gap}}ಲಕ್ಷ್ಮೀಕಾಂತನ ಮುಖ ಅವಮಾನ ಸಹಿಸಲಾಗದೆ ಕೆಂಪೇರಿತು. {{gap}}“ಅದರಲ್ಲಿರೋ ದೋಷ ಏನು ಹೇಳೀರಾ?” {{gap}}ತೊಡೆ ತಟ್ಟಿ ನೀಡಿದ ಆಹ್ವಾನದಂತಿತ್ತು ಆ ಧ್ವನಿ. ಮುರಲೀಧರನನ್ನು ಕೆಣಕಿ ದಂತಾಗಿ ಆತನೆಂದ: {{gap}}“ಮುಖ್ಯತಃ ಅವು ಕವಿತೆಗಳಲ್ಲ.” {{gap}}“ಇನ್ನೇನು ಮತ್ತೆ? ಭಾಮಿನಿ ಷಟ್ನದಿಯಲ್ಲಿ ಬರೆದು ಕೊಡೋಕೋ {{gap}}“ಹಾಗಂದ್ರೆ? ಶ್ರೀಯವರ ಇಂಗ್ಲಿಷ್ ಗೀತಗಳು ನೀವು ಓದಿದೀರಾ? ಬೇಂದ್ರೆ_ ಪುಟ್ಟಪ್ಪನವರ ಕವಿತೆಗಳನ್ನು__” {{gap}}“ಕವಿತೆ ಬರೀಬೇಕಾದರೆ ಅವನ್ನೆಲ್ಲ ಓದಲೇಬೇಕೂಂತ ನಿಯಮ ಇದೆಯೋ?” {{gap}}“ಹಾಗೇನಿಲ್ಲ. ಆದರೂ____" {{gap}}“ನೀವು ಸ್ವತಃ ಕವಿತೆ ಬರೆದಿದೀರೇನು?” {{gap}}“ಇಲ್ಲವಪ್ಪ!” {{gap}}“ಹಾಗಾದರೆ ನನ್ನ ಕೃತಿಯ ವಿಷಯ ಮಾತನಾಡೋದಕ್ಕೆ ನಿಮಗೆ ಅಧಿಕಾರವಿಲ್ಲ.”<noinclude></noinclude> 0oph0hncrvfz924visql6wk4sfvvjg0 ಪುಟ:ದೀಕ್ಷೆ.pdf/೬೬ 104 19176 322326 277105 2026-05-24T18:53:01Z Pragathi. BH 7585 /* Validated */ 322326 proofread-page text/x-wiki <noinclude><pagequality level="4" user="Pragathi. BH" />{{rh|center=|left=ದೀಕ್ಷೆ|right=393}}</noinclude> {{gap}}ಪಂದ್ಯಾಟದ ಪಟುಗಳ ಬ್ಲಾಕುಗಳು ಬಂದುವು. ವರದಿಗಳು ಸಿದ್ಧವಾದುವು.<br /> {{gap}}ಮುದ್ರಣವೂ ಆರಂಭವಾಯಿತು.[[Category:]] {{gap}}ಆದರೆ ಮುರಲೀಧರನಿನ್ನೂ ತಾನೇನು ಬರೆಯಬೇಕೆಂಬುದನ್ನು ನಿರ್ಧರಿಸಿರಲಿಲ್ಲ.<br /> {{gap}}ಬರೆದರಾದೀತೆಂದು ಎಂದೋ ಭಾವಿಸಿದ್ದ ಮೂರು ನಾಲ್ಕು ಕಥಾ ವಸ್ತುಗಳನ್ನು ಆತ ಮನಸ್ಸಿನಲ್ಲಿ ಮೆಲುಕು ಹಾಕಿದ.ಆದರೂ ಒಂದೂ ಸ್ಪಷ್ಟವಾದ ರೂಪು ತಳೆಯಲಿಲ್ಲ....<br /> {{gap}}ಬಹಳ ದಿನಗಳಿಂದ ಬರೆಯದೆ ಇದ್ದ ದಿನಚರಿ ಪುಸ್ತಕವನ್ನು ಆ ರಾತ್ರೆ ಮುರಲೀ ಧರ ಕೈಗೆತ್ತಿಕೊಂಡ. ಲಕ್ಷ್ಮೀಕಾಂತನೊಡನೆ ಆದ ಸಂಭಾಷಣೆಯನ್ನು ಬರೆದಿಡುವ ಮನಸ್ಸಾಯಿತು......ಬರೆದು ಮುಗಿಸಿದ ಆ ಪುಟವನ್ನು ಮತ್ತೊಮ್ಮೆ ಓದಿನೋಡಿ ಮೇಲ್ಗಡೆ, “ನಾನು ಕಂಡ ಕವಿ' ಎಂಬ ಶಿರೋನಾಮೆಯನ್ನು ಆತ ಅದಕ್ಕಿರಿಸಿದ.<br /> {{gap}}ಹಿಂದಿನ ಹಾಳೆಗಳನ್ನು ಮಗುಚುವ ಮನಸ್ಸಾಯಿತು...<br /> {{gap}}ಜಲಪ್ರಳಯವಾಯಿತೇನೋ ಎಂದು ಭ್ರಮೆ ಹುಟ್ಟಿಸುವಂತೆ ಮಳೆ ಸುರಿದಿದ್ದ ಆ ಒಂದು ರಾತ್ರೆ....<br /> {{gap}}ಓದುತ್ತಿದ್ದ ಮುರಲೀಧರನಿಗೆ ಹಾಗೆಯೇ ನಿದ್ದೆ ಬಂತು. {{center|೮}} {{gap}}ಮಾರನೆಯ ದಿನ ಭಾನುವಾರ, ರಜಾ, ಅಯ್ಯರ್ ಭೋಜನ ಶಾಲೆಯ ಗಿರಾಕಿಗಳು ಆ ದಿವಸ ಏಳುತ್ತಿದ್ದುದು ಸ್ವಲ್ಪ ತಡವಾಗಿ, ಬೆಳಗ್ಗೆ ಬೇಗನೆ ಹೋದರೆ ಸ್ನಾನಕ್ಕೆ ಅನುಕೂಲವಾಗಿರುತ್ತಿತ್ತು.<br /> {{gap}}ಆ ಕಾರಣದಿಂದ ಮುರಲೀಧರ, ಎದ್ದೊಡನೆಯೆ ತಡಮಾಡದೆ ಹೊರ ಬಿದ್ದ.ಆತನ ಹಾಗೆಯೇ ಬೇಗನೆ ಬಂದಿದ್ದ ಒಬ್ಬಿಬ್ಬರಷ್ಟೇ ಸ್ನಾನದ ಮನೆಯಲ್ಲಿದ್ದರು.<br /> {{gap}}ಬಿಸಿನೀರು ಸುರಿಸಿಕೊಂಡ ಮೈಯಿಂದ ಉಗಿ ಎದ್ದಿತು. ಸ್ನಾನದ ಮನೆಯ ಹೊಗೆಯನ್ನು ಅದು ಇದಿರಿಸಿತು. ಮರದಿಂದ ಮಾಡಿದ್ದ ಬಕೀಟಿನಲ್ಲಿ ನೀರು. ಒಬ್ಬರ ಸ್ನಾನಕ್ಕೆ ಒಂದು ಬಕೀಟು ತುಂಬಾ. ಅಷ್ಟರಿಂದಲೆ ತೃಪ್ತಿಯಾಯಿತು ಮುರಲೀಧರನಿಗೆ.<br /> {{gap}}ಭಾನುವಾರ ಅಯ್ಯರ್ ಭೋಜನ ಶಾಲೆಯಲ್ಲಿ ಊಟ ತಡ. ರಜಾ ದಿನಗಳಲ್ಲಿ ಯಾವಾಗಲೂ ಹಬ್ಬದ ಅಡುಗೆ, ಏನಾದರೊಂದು ಸಿಹಿ ಇರುತ್ತಿತ್ತು, ಇತರ ದಿನಗಳಿಗಿಂತ ಹೆಚ್ಚಾಗಿ. ಆ ಬೆಳಗ್ಗೆ ಬರಿಯ ಒಂದು ಲೋಟ ಕಾಫಿ ಸಾಲುತ್ತಿರಲಿಲ್ಲ.ಒಂದೋ ಎರಡೋ ಇಡ್ಲಿಗಳಿದ್ದರೆ ಚೆನ್ನಾಗಿರುತ್ತಿತ್ತು. ದುಡ್ಡು ಇಲ್ಲದೆ ಇದ್ದಾಗ {{Right|50}}<noinclude></noinclude> rpvzc388mswylzd9lkoy73thx62i2z5 ಪುಟ:ದೀಕ್ಷೆ.pdf/೬೭ 104 19177 322327 277138 2026-05-24T18:57:54Z Pragathi. BH 7585 /* Validated */ 322327 proofread-page text/x-wiki <noinclude><pagequality level="4" user="Pragathi. BH" />{{rh|center=|left=394|right=ಕನಸು}}</noinclude> {{gap}}ಆ ಸಿರಿವಂತಿಕೆಯನ್ನು ತೋರಲು ಮುರಲೀಧರ ಹೋಗುತ್ತಿರಲಿಲ್ಲ. ಈ ದಿನ ಆತನಲ್ಲಿ ಚಿಲ್ಲರೆ ಹಣವಿತ್ತು. ಮನಸೂ ಉಲ್ಲಾಸವಾಗಿತ್ತು. ತಿಂಡಿ ಕಾಫಿ ಎರಡನ್ನೂ ಸ್ವೀಕರಿಸುವ ಇಚ್ಛೆಯಾಯಿತು. ಕ್ರಾಪು ಬಾಚಿಕೊಂಡು ಬರೋಣವೆಂದು ಆತ ಕೊಠಡಿಯ ಕಡೆಗೆ ನಡೆದ.<br /> {{gap}}ಸ್ನಾನಮಾಡುತ್ತಿದ್ದಾಗಲೇ ಮನಸಿನಲ್ಲೊಂದು ನಿರ್ಧಾರವನ್ನು ಆತ ಮಾಡಿದ್ದ: ಆ ದಿನ ಮ್ಯಾಗಜೀನಿಗೋಸ್ಕರ ಏನನ್ನಾದರೂ ಬರೆಯಲೇಬೇಕೆಂದು. ಕಾಫಿ ತಿಂಡಿಯ ಬಳಿಕ ಬರೆಯಲು ಕುಳಿತನೆಂದರೆ....<br /> {{gap}}ಕೊಠಡಿಯ ಹೊರಗೆ ಯಾರೋ ನಿಂತಿದ್ದುದು ದೂರದಿಂದಲೆ ಮುರಲೀಧರನಿಗೆ ಕಾಣಿಸಿತು. ತನಗೋಸ್ಕರವೆ ಇರಬೇಕು. ಬಿಳಿಯ ಜುಬ್ಬ-ಮುಖವೂ ಕಾಣಿಸಿತು.ನಾರಣಪ್ಪ! ಕೊಠಡಿ ಎಲ್ಲಿದೆ ಎಂದು ಕೇಳಿ ತಿಳಿದಿದ್ದ, ಅಷ್ಟೆ. ಈ ದಿನವೆ ಬರುವನೆಂಬುದು ಮಾತ್ರ ಮುರಲೀಧರನಿಗೆ ಗೊತ್ತಿರಲಿಲ್ಲ. ಸ್ನೇಹಿತನ ದರ್ಶನದಿಂದ ಆತನಿಗೆಸಂತೋಷವಾಯಿತು. {{gap}}ನಡಿಗೆಯನ್ನು ತೀವ್ರಗೊಳಿಸುತ್ತ ಮುರಲೀಧರ ಕೊಠಡಿಯನ್ನು ಸಮೀಪಿಸಿದ.<br /> {{gap}}“ಬಂದು ಬಹಳ ಹೊತ್ತಾಯ್ತ?”<br /> {{gap}}“ಇಲ್ಲ. ಈಗ್ತಾನೆ ಬಂದೆ.”<br /> {{gap}}“ರೂಮು ಪತ್ತೆ ಹಚೋದು ಕಷ್ಟವಾಯ್ತನು?”<br /> {{gap}}“ಏನೇನೂ ಇಲ್ಲ. ನಿಮ್ಮ ಭೋಜನ ಶಾಲೆ ಬೋರ್ಡು ನೋಡ್ಡೆ, ನೇರವಾಗಿ ಇಲ್ಲಿಬ್ಬಂದೆ. ಕಿಟಕಿ ತೆರೆದೇ ಇರಿಸಿದೀರಾ, ಕೊಠಡಿ ನಿಮ್ಮದೇಂತ ಗೊತ್ತು ಹಳ್ಳೋದು ಸುಲಭವಾಯ್ತು. ಎಲ್ಲಿಗೆ ಹೋಗಿದೀರಿ ಅಂತ ನಿಮ್ಮ ಪಕ್ಕದ ಕೊಠಡಿಯವರನ್ನ ಕೇಳಿ ತಿಳಿಯೋಣಾಂತಿದ್ದೆ. ಆದರೆ ಅವರು ಯಾರೂ ಎದ್ದೇ ಇಲ್ಲ!”<br /> {{gap}}“ಭಾನುವಾರ ಏಳೋದಕ್ಕೆ ಏನವಸರ ಹೇಳಿ?”<br /> {{gap}}ಬಾಗಿಲು ತೆರೆದು ನಾರಣಪ್ಪನನ್ನು ಒಳಕ್ಕೆ ಕರೆದುದಾಯಿತು. ಪೆಟ್ಟಿಗೆಯನ್ನು ಮುರಲೀಧರ ತೋರಿಸಿದ. ಆದರೆ ಚಾಪೆಯೇ ನಾರಣಪ್ಪನಿಗೆ ಇಷ್ಟವಾಯಿತು.<br /> {{gap}}ಮುರಲೀಧರ ನಕ್ಕು ಹೇಳಿದ:<br /> {{gap}}“ಆ ಪೆಟ್ಟಿಗೆಯ ಮೇಲೆಯೇ ನಮ್ಮ ಸ್ನೇಹಿತ ರಾಮಚಂದ್ರಯ್ಯ ಆ ದಿನ ಕೂತದ್ದು.”<br /> {{gap}}"ಓ!”<br /> {{gap}}“ಬಸ್ ಓಡಾಟ ಶುರುವಾಗಿಲ್ವಲ್ಲ. ಹ್ಯಾಗಂದ್ರಿ ಇಷ್ಟು ಬೆಳಗ್ಗೆ ?”<br /> {{gap}}“ಐದು ಘಂಟೆಗೇ ಎಚ್ಚರವಾಯ್ತು. ನಮ್ಮಣ್ಣನ ಸ್ನೇಹಿತರು ಯಾರೋ ಬಂದಿದ್ದರು. ಅವರನ್ನ ಕಲಾಸಿಪಾಳ್ಯಂ ಬಸ್ ನಿಲ್ದಾಣದ ತನಕ ತಲಪಿಸೋ ಕೆಲಸ ವಿತ್ತು. ಅಲ್ಲಿಂದ ನೇರವಾಗಿ ನಿಮ್ಮಲ್ಲಿಗೆ ಬಂದಿಟ್ಟೆ.”<br /> {{gap}}“ಜಟಕಾ ಮಾಡಿದಿರಾ?”<noinclude></noinclude> 9wl6mhotgoc87lx3o3qdjmenukjbla8 ಪುಟ:ದೀಕ್ಷೆ.pdf/೬೮ 104 19178 322333 277200 2026-05-25T03:24:39Z Shreelatha.Halemane 7642 /* Validated */ 322333 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ |right=395}} {{gap}}“ಇಲ್ಲ. ನಡ್ಕೊಂಡೇ ಬಂದ್ವಿ. ಬೆಳಗ್ಗೆ ನಡೆಯೋದು ಹಿತವಾಗಿರುತ್ತೆ.” {{gap}}ಅಣ್ಣನ ಸ್ನೇಹಿತರು_ಎಂದಾಗ ನಾರಣಪ್ಪ ಮುರಲೀಧರನ ಮುಖಭಾವವನ್ನೆ ನಿರೀಕ್ಷಿಸಿದ. ಅಲ್ಲಿ ಯಾವ ಬದಲಾವಣೆಯೂ ಕಾಣಿಸಲಿಲ್ಲ. {{gap}}ತನ್ನಲ್ಲಿದ್ದ ಚಿಲ್ಲರೆ ಆಣೆಗಳನ್ನೆಲ್ಲ ಎತ್ತಿಕೊಳ್ಳುತ್ತ ಮುರಲೀಧರನೆಂದ: {{gap}}“ಬನ್ನಿ, ನಮ್ಮ ಅಯ್ಯರ್ ಹೋಟಲಿನ ಕಾಫಿ ರುಚಿ ನೋಡುವಿರಂತೆ.” {{gap}}... ಸಿಹಿ ತರಿಸಬೇಕೆಂಬ ಆಸೆ ಇತ್ತು ಮುರಲೀಧರನಿಗೆ. ಆದರೆ ಬಿಲ್ಲು, ತನ್ನಲ್ಲಿದ್ದ ಹಣಕ್ಕಿಂತಲೂ ಹೆಚ್ಚಾಗಬಹುದೆಂದು ಭಯವಾಯಿತು. ಮೊದಲ ಬಾರಿಗೆ ಕೊಠಡಿಗೆ ಬಂದ ಗೆಳೆಯನಿಗೆ ತಾನು ಮಾಡುವ ಸತ್ಕಾರ ಇದೇ ಏನು? ಎಂದು ತನ್ನನ್ನು ತಾನೆ ಮೂದಲಿಸುವಂತೆಯೂ ಆಯಿತು. ಹೋಟೆಲಿನ ಹುಡುಗ ಎದುರು ಬಂದು ನಿಂತಾ ಗಲೂ ಆತನ ಮನಸ್ಸನ್ನು ಆವರಿಸಿದ್ದುದು ಅನಿಶ್ಚಯತೆಯೇ. {{gap}}ಮುರಲೀಧರನ ಪರಿಚಯವಿದ್ದ ಹುಡುಗನೆಂದ: {{gap}}“ಎರಡು ಕಾಫೀನಾ?” {{gap}}“ತಾಳಪ್ಪ, ಸ್ವಲ್ಪ ತಿಂಡಿ ಬೇಕು.” {{gap}}“ಏನು ತರಲಿ?” {{gap}}ಯೋಚಿಸಲು ಮೆದುಳಿಗೆ ಅವಕಾಶಕೊಡದೆ ಮುರಲೀಧರ ತೊದಲಿದ. {{gap}}“ಎರಡು ಕೇಸರಿ ಭಾತ್.” {{gap}}ಹುಡುಗ ಒಳ ಹೋದಂತೆ ನಾರಣಪ್ಪ ಕೇಳಿದ: {{gap}}“ಯಾಕೆ? ಸಿಹಿ ನಿಮಗೆ ಇಷ್ಟವೆ?” {{gap}}“ಹಾಗೇನಿಲ್ಲ. ಸುಮ್ಮೆ ತರಹೇಳೆ.” {{gap}}“ನೋಡಿ, ಹೀಗೆಲ್ಲ ಅತಿಥಿ ಸತ್ಕಾರ ಮಾಡಬಾರು.” {{gap}}“ಸುಮ್ಮಿರಿ.” {{gap}}ಕೇಸರಿ ಭಾತ್ ಬಂದು ಅದನ್ನು ಅರ್ಧ ತಿನ್ನುವವರೆಗೂ ಬಿಲ್ಲಿನ ಕಹಿಯೋಚನೆ ಮುರಲೀಧರನನ್ನು ಕಾಡಿತು. ಮುಂದೆ ಅದನ್ನಾತ ಮರೆಯಲೆತ್ನಿಸಿದ. ಇಡ್ಲಿ-ಕಾಫಿ••• {{gap}}“ನಮ್ಮ ಅಯ್ಯರ್ ಹೋಟ್ನಲ್ಲಿ ಅವರೇಕಾಳು ಉಪ್ಪಿಟ್ಟು ಪ್ರಸಿದ್ಧ,” ಎಂದ ಮುರಲೀಧರ. {{gap}}“ಮಾಡಿದಾರೇನು?” ಎಂದು ನಾರಣಪ್ಪ ನಕ್ಕು ಕೇಳಿದ. {{gap}}“ಇಲಿ. ಅವರೇಕಾಳು ಈಗೆಲ್ಲಿಂದ ಬಂತು?” {{gap}}“ತಮಾಷೆಗೆ ಕೇಳೆ. ಅದನ್ನೂ ತರಿಸ್ಬಿಡ್ತೀರೇನೊ ಅಂತ.” {{gap}}ಬಿಲ್ಲು ಬಂತು. ಮಡಚಿದ್ದ ಸದ್ಯ. ಬಾಗಿಲ ಬಳಿ ಹೋಗುವವರೆಗೂ ಅದನ್ನು ತೆರೆದು ನೋಡಬೇಕಾದ ಅಗತ್ಯವಿರಲಿಲ್ಲ. {{gap}}ಹೊರಟಂತೆ ತಾನು ಹಿಂದಾಗುತ್ತ ಮುರಲೀಧರನೆಂದ:<noinclude></noinclude> t5nwitq56weyzebjftlg2dn0zce57z9 ಪುಟ:ದೀಕ್ಷೆ.pdf/೬೯ 104 19179 322334 277235 2026-05-25T03:34:47Z Shreelatha.Halemane 7642 /* Validated */ 322334 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=396|right=ಕನಸು}} {{gap}}“ನಡೀರಿ, ಬಂದ್ದಿಟ್ಟೆ.” {{gap}}“ನನಗೆ ಚಿಲ್ಲರೆ ಬೇಕು. ಬಿಲ್ಕೊಡಿ,” ಎಂದು ನಾರಣಪ್ಪ ಕೈ ಚಾಚಿದ. {{gap}}“ದಯವಿಟ್ಟು ನಡೀರಿ.” {{gap}}ನಾರಣಪ್ಪ ಬಾಗಿಲನ್ನು ದಾಟಿದೊಡನೆ ಆತನಿಗೆ ಬೆನ್ನು ಹಾಕಿ, ಅಯ್ಯರ್ ಕುಳಿತಿದ್ದ ಕಡೆ ನಿಂತು, ಚೀಟಿಯನ್ನು ತೆರೆದ ಮುರಲೀಧರ. ಇಬ್ಬರು-ಹತ್ತಾಣೆ. ಕೈ,ಚಿಲ್ಲರೆ ಆಣೆಗಳನ್ನು ಹೊರತಂದು ಎಣಿಸಿತು. {{gap}}ತುಸು ಕಂಪಿಸಿದ ಧ್ವನಿಯಲ್ಲಿ ಮುರಲೀಧರನೆಂದ: {{gap}}“ಒಂದಾಣೆ ಕಮ್ಮಿ ಇದೆ, ಆಮೇಲೆ ಕೊಡ್ತೀನಿ.” {{gap}}ಎಂದೂ ಹಾಗೆ ಕೇಳಿದವನಲ್ಲ ಮುರಲೀಧರ, ಅಷ್ಟು ಮೊತ್ತದ ಬಿಲ್ಲನ್ನು ಪಡೆದವನೇ ಅಲ್ಲ ಆತ. {{gap}}“ಆಗಲಿ. ನೆನಪಿನಿಂದ ತಂದ್ಕೊಡಿ, ಅಷ್ಟೆ,” ಎಂದ ಅಯ್ಯರ್. {{gap}}ಮುರಲೀಧರ ಸರಾಗವಾಗಿ ಉಸಿರಾಡುವಂತಾದುದು ಬೀದಿಗಿಳಿದಾಗ ಮಾತ್ರ.ಕೊಠಡಿಗೆ ಮರಳಿದ ಬಳಿಕ ನಾರಣಪ್ಪ ಕೇಳಿದ: {{gap}}"ಇದೇನು ಮುರಲಿ? ಗೋಡೆಗಳನ್ನೆಲ್ಲಾ ಬರಿದಾಗಿಯೇ ಇರಿಸಿದೀರಲ್ಲ?” {{gap}}“ಯಾರ ಚಿತ್ರ ತೂಗಹಾಕಲಿ ಹೇಳಿ? ಚಕ್ರವರ್ತಿಯವರನ್ನು ತೂಗೋಣ ವೆಂದರೆ ನಾನು ರಾಜಭಕ್ತನಲ್ಲ. ಪುಢಾರಿಗಳಿಗೆ ಮೊಳೆ ಹೊಡೆಯೋಣವೆಂದರೆ ಅವರಲ್ಲಿ ಸಾಕಷ್ಟು ನಂಬುಗೆ ಇಲ್ಲ." {{gap}}“ಚೆನ್ನಾಗಿದೆ!” {{gap}}“ಸಂಬಂಧಿಕರದು ಯಾರದಾದರೂ ಇಡೋಣವೆಂದರೆ ಒಳ್ಳೆಯ ಭಾವಚಿತ್ರವೇ ಇಲ್ಲ..." {{gap}}“ಹೋಗಲಿ. ನಮ್ಮ ಮನೇಲಿ ಎರಡು ಕ್ಯಾಲೆಂಡರುಗಳಿವೆ. ಒಂದು ತಂದ್ಕೊಡ್ತೀನಿ.” {{gap}}“ಅದರಲ್ಲಿದೆಯೇನೋ ಚಿತ್ರ?” {{gap}}“ಇಲ್ಲವಪ್ಪ, ಬರೇ ತಾರೀಕು ಪಟ್ಟಿ.” {{gap}}“ಅಗಲಿ.” {{gap}}ಕುಳಿತುಕೊಳ್ಳುತ್ತ ನಾರಣಪ್ಪ, ಅರೆತೆರೆದಿದ್ದ ದಪ್ಪನೆಯ ಪುಸ್ತಕವನ್ನು ನೋಡಿದ. ರಾತ್ರೆ ಅರ್ಧ ಓದಿ ಹಾಗೆಯೇ ಇರಿಸಿದ್ದ ದಿನಚರಿ ಪುಸ್ತಕ. {{gap}}“ಇಷ್ಟು ದೊಡ್ಡ ನೋಟ್ ಬುಕ್ ಯಾವುದು ಮುರಲಿ ಇದು?” {{gap}}ಮುರಲೀಧರನೆಂದ: {{gap}}“ಬೇಡಿ! ಓದ್ಬೇಡಿ!” {{gap}}“ಓಹೋ! ಸಾಹಿತ್ಯಕೃತೀನೋ?” {{gap}}ಗೆಳೆಯನ ನಿಷೇಧವನ್ನು ಲೆಕ್ಕಿಸದೆ ಆ ಪುಸ್ತಕವನ್ನೆತ್ತಿಕೊಳ್ಳಲು ನಾರಣಪ್ಪನ ಕೈ<noinclude></noinclude> 30qa8u3fxdd20b8mrmr3ega0wdcx5gu ಪುಟ:ದೀಕ್ಷೆ.pdf/೭೦ 104 19180 322335 277075 2026-05-25T03:39:21Z Shreelatha.Halemane 7642 /* Validated */ 322335 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ |right= 397}} ಮುಂದುವರಿಯಿತು.<br> {{gap}}ಮೊದಲ ಹಾಳೆಗಳನ್ನು ನೋಡಿ, ಮುಟ್ಟಿದುದು ತಪ್ಪಾಯಿತೆಂದು ಅದನ್ನು ಕೆಲಗಿರಿಸತೊಡಗಿ ನಾರಣಪ್ಪನೆಂದ:<br> {{gap}}“ಇದು ದಿನಚರಿ".<br> {{gap}}ಈಗ ಮುರಲೀಧರನೆ ಹೇಳಿದ:<br> {{gap}}"ಖಾಸಗಿ ದಿನಚರಿಯಲ್ಲ ನಾಣಿ. ನೀವು ಓದಬಾರದ್ದು ನಾನು ಏನು ಬರೆದೇನು?"<br> {{gap}} "ಓದಲೆ ಹಾಗದರೆ?"<br> {{gap}}“ಹೂಂ."<br> {{gap}}"ಬೇಡ ಅಂದಿರಿ ಆಗ?”<br> {{gap}}“ಏನು ತಿಳ್ಕೊತೀರೋ ಅಂತ ನಾಚಿಕೆಯಾಯ್ತು."<br> {{gap}}"ಸರಿ, ಸರಿ!"<br> {{gap}}ಮೇಲಿಂದ ಮೇಲೆ ಓದಿದರಾಯಿತೆಂದು ಭಾವಿಸಿದ್ದ ನಾರಣಪ್ಪ-ಕುತೂಹಲದಿಂದ, ಕ್ರಮೇಣ ತೀವ್ರ ಆಸಕ್ತಿಯಿಂದ -ಪ್ರತಿಯೊಂದು ಪುಟವನ್ನು ತಿರುವಿ ಹಾಕಿದ.<br> {{gap}}ಸಂಭಾಷಣೆಯ ಅಗತ್ಯವಿರಲಿಲ್ಲ. ಓದಿಗೆ ತಡೆಯಾಗುವಂತಿತ್ತು ಮಾತು. ಹೊರ ನೋಡುತ್ತ, ನಡುನಡುವೆ ಸ್ನೇಹಿತನ ಕಡೆಗೆ ದೃಷ್ಟಿ ಬೀರುತ್ತ, ಕುಳಿತಿರುವುದೊಂದೇಮುರಲೀಧರನ ಪಾಲಿಗಿದ್ದ ಕೆಲಸ.<br> {{gap}}ಓದುತ್ತಿದ್ದಂತೆ ನಾರಣಪ್ಪನ ಮುಖದ ಮೇಲೆ ಗೆಲುವು ಮೂಡಿತು. ಹುಬ್ಬು ಗಳು ಮೇಲೇರಿದುವು ಒಮ್ಮೆ. ಕಣ್ಣುಗಳಲ್ಲಿ ಬೆಳಕು ಕಾಣಿಸಿತು ಮತ್ತೊಮ್ಮೆ. ಒಮ್ಮೆ ಮುಖವೆತ್ತಿ ಆತ ಗೆಳೆಯನನ್ನು ನೋಡಿ ನುಡಿದ:<br> {{gap}}"ಎಂಥೆಂಥದೆಲ್ಲಾ ಬರೆದಿದೀರಾ! ನನಗೆ ಗೊತ್ತೇ ಇರ್ಲಿಲ್ಲ!"<br> {{gap}}ಮುರಲೀಧರನ ನಸುಗೆಂಪೇರಿತು.<br> {{gap}}"ಎಂಥೆಂಥತದು ಬರೆದಿದೀನಿ?"<br> {{gap}}"ಯಾಕೆ? ಇದು ಕಾವ್ಯ ಕಣ್ರೀ, ಕಾವ್ಯ."<br> {{gap}}"ಕಾವ್ಯ?"<br> {{gap}}"ಇನ್ನೇನು? ಬರೇ ಟಿಪ್ಪಣೀಂತ ತಿಳಕೊಂಡಿಡೀರಾ? ಅಲ್ಲ, ಇದು ಮಹಾಗೀತೆ. ಈ ಹತ್ತು ಚೂರು ಒಟ್ಟಾಗಿ ಇರಿಸಿದಾಗ ಸಿಗೋದು ಬದುಕಿನ ಸಮಗ್ರ ಚಿತ್ರ."<br> {{gap}}"ಸಾಕು ,ಬಿಡಿ"<br> {{gap}}"ಲೋಕದ ಅಲೆಯೂ ಇಲ್ಲಿದೆ.ಸಂತೋ‌‍‍‍‍‍‍ಶದ ತೆರೆಯೂ ఇಲ್ಲಿದೆ.ಎಂಥ ಧ್ವನಿ ಇದು! ಕೇಳ್ತೀರಾ? ಓದಿ ಹೇಳ್ಲೆ ಈ ಪುಟ? ಬರೆದಿರುವ ನಿಮಗೇ ನೆನಪಿದೆಯೋ ಇಲ್ಲವೋ.. ಓದ್ಲಾ?"<br> {{gap}}"ಬೇಡಿ ಪರಿಹಾಸ್ಯ ಮಾಡ್ಬೇಡಿ."<br><noinclude></noinclude> fkz5pao57xrm99xsf3w88kakkwxbc4u ಪುಟ:ದೀಕ್ಷೆ.pdf/೭೧ 104 19181 322336 277152 2026-05-25T03:44:14Z Shreelatha.Halemane 7642 /* Validated */ 322336 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=398|right=ಕನಸು}}</noinclude>{{gap}} ಕ್ಷಣ ಗಂಭೀರವಾಗಿದ್ದು ನಾರಣಪ್ಪನೆಂದ:<br> {{gap}}"ಪರಿಹಾಸ್ಯ ಯಾಕಾಡ್ಲಿ ಮುರಲಿ? ಇವತ್ತು ಇಲ್ಲಿಗೆ ಬಂದು ಇದನ್ನು ನಾನು ಓದ್ತಿರೋದು ಒಂದು ಸುಯೋಗ."<br> {{gap}}“ಆಯಿತಲ್ಲಿಗೆ' ಎಂಬ ಪದ ನಾಲಗೆಯ ತುದಿವರೆಗೆ ಬಂದರೂ ಅದನ್ನು ಮುರಲೀದರ ತಡೆ ಹಿಡಿದ.ಆತನ ಪಾಲಿಗೆ ಸಹಪಾಟಿಯ ಆ ಮೆಚ್ಚುಗೆ ಬಲು ದೊಡ್ಡ ವಿಶಯವಾಗಿತ್ತು, ಆದರೂ- -<br> {{gap}}"ನಾನೇನೂ ಸಾಹಿತ್ಯಕೃತಿ ಅಂತ ಅದನ್ನೆಲ್ಲ ಬರೆದಿಲ್ಲ ನಾಣಿ."<br> {{gap}} "ಒಳ್ಳೆ ಕೆಲಸ ಮಾಡಿದಿರಿ. ಅದಕ್ಕೇ, ಕೃತ್ರಿಮತೆ ಲವಲೇಶವಾದರೂ ಇಲ್ಲ."<br> {{gap}}"ತೋಚಿದ್ದು ಗೀಚಿದ್ದು ಅನ್ತಾರಲ್ಲ ಹಾಗೆ"<br> {{gap}}"ಹೀಗೆಯೇ ಗೀಚ್ತಾ ಇರಿ ಯಾವಾಗಲೂ..."<br> {{gap}} ಹಾಗಾದರೆ ನಾರಣಪ್ಪನ ದೃಷ್ಟಿಯಲ್ಲಿ ತಾನೊಬ್ಬ ಒಳ್ಳೆಯ ಲೇಖಕನೆ?-ಎಂದು ಕೊಂಡ ಮುರಲಿ. ಆದರೆ ನಿಜಸಂಗತಿ ಏನಿತ್ತು?<br> {{gap}}“ನೀವು ಹೀಗಂತೀರಾ. ಕಾಲೇಜು ಮ್ಯಾಗಜೀನಿಗೆ ಏನಾದರು బರೆಯೋಣ ಅಂತ ಎಷ್ಟೋ ದಿವಸದಿಂದ ಪ್ರಯತ್ನಿಸ್ತಿದೀನಿ. ಒಂದೇ ಒಂದು ಕತೆ ಬರೆಯೋದು ನನ್ನಿಂದಾಗಿಲ್ಲ."<br> {{gap}}ಆ ಧ್ವನಿಯಲ್ಲೂ ಪ್ರಾಮಾಣಿಕತೆಯೇ ಇದ್ದುದನ್ನು ನಾರಣಪ್ಪ ಕಂಡ, ಮುರಲೀ ಧರನ ಸಂಕಟವನ್ನು ಹೇಗೆ ವಿವರಿಸಬೇಕೆಂಬುದೇ ತಿಳಿಯದೆ ಹೋಯಿತು ಆತನಿಗೆ. ಟಿಪ್ಪಣಿ ಪುಸ್ತಕದ ತೆರೆದ ಹಾಳೆಗಳ ಮೇಲೊಮ್ಮೆ ದೃಷ್ಟಿ ಹರಿಸಿ ಆತನೆಂದ:<br> {{gap}}"ಏನು ನೀವು ಹೇಳ್ತಿರೋದು? ಬೇರೆ ಹೊಸದಾಗಿ ಯಾಕೆ ಬರೀಬೇಕು ನೀವು? ಇದರಿಂದಲೇ ಯಾವುದಾದರೊಂದನ್ನು ಆರಿಸಿಕೊಡಿ."<br> {{gap}}“ಇದರಿಂದಲೇ?”<br> {{gap}}“ಹೂಂ, ಉದಾಹರಣೆ ಈ " ದೇವತೆಗಳ ಕಣ್ಣೀರು ಇದು ಸೊಗಸಾದ ಸಣ್ಣ ಕಥೆ."<br> {{gap}}"ಸಣ್ಣ ಕಥೆ? ಅದನ್ನು ಬರೆದಿರೋ ದಿನಾಂಕ ನೋಡಿ ನಾಣಿ. ಅದೊಂದು ಅನುಭವ."<br> {{gap}}"ಅನುಭವಿಸಿ ಬರೆದದ್ದು. ಅದಕ್ಕೆ ಇಷ್ಟೂ ಚೆನ್ನಗಿದೆ. ದಿನಾಂಕ ಆಗಲೇ ನೋಡಿದೀನಿ. ಆ ರಾತ್ರೆ ನನಗೂ ನೆನಪಿದೆ. ಆದರೆ ಮುರಲಿ ಮತ್ತು ನಾಣಿ ಎಂಬ ಇಬ್ಬರು ಆಗ ಸ್ನೇಹಿತರಾಗಿದ್ದಿಲ್ಲ ಅಷ್ಟೆ!"<br> {{gap}}ಕಂಠ ಬಿಗಿದು ಬಂದು ಮಾತನಾಡುವುದಾಗಲಿಲ್ಲ ಮುರಲೀಧರನಿಂದ. ಆತ ಕೆಲ ನಿಮಿಷಗಳ ಕಾಲ ಸುಮ್ಮನಿದ್ದ.<br> {{gap}}ಬಳಿಕ, ನಾರಣಪ್ಪ ಕೆಳಗಿರಿಸಿದ ಟಿಪ್ಪಣಿ ಪುಸ್ಥಕವನ್ನು ತಾನೆತ್ತಿಕೊಂಡ. ಹಾಳೆಗಳನ್ನು ತೆರೆದ “ದೇವತೆಗಳ ಕಣ್ಣೀರು" ಎಂಬ ತಲೆಕಟ್ಟಿನ ಕೆಳಗಿದ್ದ ಸಾಲುಗಳನ್ನು<noinclude></noinclude> 3bc50ow00gilqcpj5x3656l0ck6kzbv ಪುಟ:ದೀಕ್ಷೆ.pdf/೭೨ 104 19182 322337 277230 2026-05-25T03:49:17Z Shreelatha.Halemane 7642 /* Validated */ 322337 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=ದೀಕ್ಷೆ|right=399}}</noinclude> ಓದಿದ.<br> {{gap}}ಬರೆದುದು ಚೆನ್ನಾಗಿತ್ತೆಂದು ಮನವರಿಕೆಯಾದರೂ ಮೆಲ್ಲನೆ ತಲೆ ಎತ್ತಿ ನಾರಣಪ್ಪನನ್ನು ನೋಡಿ ಆತ ಕೇಳಿದ:<br> {{gap}}"ಇದನ್ನು ಕೊಡೋಣ ಅಂತೀರಾ?"<br> {{gap}}"ಹೌದು, ಇದು ಚೆನ್ನಾಗಿದೆ. ಯಾವುದನ್ನು ಬೇಕಾದರೂ ಕೊಡಬಹುದು. ಸ್ವಲ್ಪ ಹೆಚ್ಚು ಕಡಮೆ ಮಾಡಿದರಾಯ್ತು. ಕತೆಯೋ ಪ್ರಬಂಧವೋ ಆಗ್ತದೆ. ಇದರಲ್ಲಂತೂ ಒಂದಕ್ಶರ ಕೂಡ ಬದಲಾಯಿಸಬೇಕಾದ್ದಿಲ್ಲ."<br> {{gap}}“ಆಗಲಿ, ಹಾಗೇ ಮಾಡೋಣ."<br> {{gap}}ನಾರಣಪ್ಪ ನಸುನಕ್ಕು ಅಂದ:<br> {{gap}}"ಇವತ್ತು ಹಾಗಾದರೆ ನಿಮಗೇನೂ ಕೆಲಸವಿಲ್ಲ. ಪ್ರತಿ ಮಾಡೋದು ತಾನೆ? ಸಾಯಂಕಾಲವಿದೆ, ರಾತ್ರೆ ಇದೆ, ಹೊರಡಿ, ಇವತ್ತು ಊಟ ನಮ್ಮನೇಲಿ."<br> {{gap}}"ಬೇಡ ನಾಣಿ. ಹ್ಯಾಗು ಬಂದಿದೀರಾ, ನನ್ನ ಅತಿಥಿಯಾಗಿ ಇಲ್ಲೆ ಇದ್ಬಿಡಿ."<br> {{gap}}"ಅದು ಇನ್ನೊಂದು ದಿವಸ. ಈ ದಿನ ನೀವು ಬರಲೇ ಬೇಕು." ಮುರಲೀಧರ ఒಪ್ಪದೆ ಅನ್ಯ ಗತಿ ಇರಲಿಲ್ಲ.<br> {{gap}}ಬೆಳಗ್ಗೆ ಅಷ್ಟು ದೂರ ಗೆಳೆಯ ನಡೆದು ಬಂದುದು ಆತನಿಗೆ ನೆನಪಿತ್ತು. ಪುನಃ ಈಗ ಕಾಲ್ನಡಿಗೆ ಸಾದ್ಯವಿರಲಿಲ್ಲ. ಬಸ್ ಎಂದೊಡನೆ ಮತ್ತೆ ಅತ್ಯಗತ್ಯವಾದ ಹಣ. ಅದನ್ನೆತ್ತಿಕೊಳ್ಳಲು ಆತ ಪೆಟ್ಟಿಗೆಯನ್ನು ತೆರೆದಂತೆ ನಾರಣಪ್ಪನೆಂದ:<br> {{gap}}"ದುಡ್ಡು ನನ್ನ ಹತ್ತಿರ ಇದೆ. ತೆಗೀಬೇಡಿ."<br> {{gap}}“ಛೆ!ಛೆ!"<br> {{gap}}"ಛೆನೂ ಇಲ್ಲ, ಛಿನೂ ಇಲ್ಲ, ದಯವಿಟ್ಟ ನನ್ನ ಮಾತು ಕೇಳಿ," ನಿರುತ್ತರನಾದ ಮುರಲೀಧರ.<br> {{gap}}ಬಸ್ ಸ್ಥಾಪಿನೆಡೆಗೆ ಅವರು ನಡೆದಂತೆ ನಾರಣಪ್ಪ ಸಣ್ಣನೆ ನಗತೊಡಗಿದ.<br> {{gap}}"ಯಾಕೆ ನಗ್ತಿದೀರಾ?"<br> {{gap}}"ಹೆಣ್ಣು ಕೊಡಲು ಬಂದ ಮಾವ.. ಅಂತ ಒಂದು ಅದ್ಯಾಯ ಬರೆದಿದೀರಲ್ಲ. ಅದು ನೆನಪಾಯ್ತು."<br> {{gap}}“ಓ! ಅದೇ”<br> {{gap}}*ಆಮೇಲೆ ಮಾವ ಸಿಗಲೇ ಇಲ್ವೇನು?"<br> {{gap}}"ಒಂದೆರಡು ಸಾರೆ ಕಣ್ಣಿಗೆ ಬಿದ್ದಿದ್ದ. ಪರಿಚಯ ಇಲ್ಲದವರೆ ಹಾಗೆ ನಾನು ಸುಮ್ನಿದ್ದೆ.ಆತನೂ ಮಾತಾಡಿಸ್ಲಿಲ್ಲ. ನಿಷ್ಟ್ರಯೋಜಕ ಹುಡುಗ ಅಂತ ಭಾವಿಸಿರ್ಬೇಕು."<br> {{gap}}"ನಿಮಗೆ ಹೆಣ್ಣು ಸಿಗದೇ ಹೋದರೂ ನಮ್ಮಿಬ್ಬರ ಪರಿಚಯಕ್ಕೆ ಕಾರಣನಾದನಲ್ಲ ಅಷ್ಟು ಸಾಕು"<br><noinclude></noinclude> 4tphehixxm3mutidx1gtikec7ovo28n ಪುಟ:ದೀಕ್ಷೆ.pdf/೭೪ 104 19184 322338 277265 2026-05-25T04:02:36Z Shreelatha.Halemane 7642 /* Validated */ 322338 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ದೀಕ್ಷೆ|right=401}} {{gap}}ಶಿಷ್ಯನನ್ನು ನೆಟ್ಟ ದೃಷ್ಟಿಯಿಂದ ನೋಡುತ್ತ ಕುಳಿತ ಅಧ್ಯಾಪಕರೇ ನಸುನಕ್ಕು ಅಂದರು: {{gap}}“ನಿನ್ನ ಹತ್ತಿರ ಇದನ್ನೆಲ್ಲ ಹೇಳಬಾರದು ಕಣಯ್ಯ, ಕತೆ ಬರೆದು ಬಿಟ್ಟಿಯ ಎಲ್ಲಾದರೂ!” {{gap}}“ಇಲ್ಲ ಸಾರ್,” ಎಂದ ಮುರಲೀಧರ, ತಾನೂ ನಗುತ್ತ... {{gap}}... ಪರೀಕ್ಷೆ ಸಮೀಪಿಸಿತೆಂದು ವಿದ್ಯಾರ್ಥಿಗಳು ಭರದಿಂದ ಸಿದ್ಧತೆ ನಡೆಸಿದರು. ಕಾಲೇಜು ಪತ್ರಿಕೆಯ ಮುದ್ರಣವೂ ವೇಗವಾಗಿ ಸಾಗಿತು. {{gap}}ಮ್ಯಾಗಜೀನಿನ ಕೆಲಸ ಪ್ರತಿಯೊಂದೂ ಸಾಂಗವಾಗಿ ನೆರವೇರಿತು ಎನ್ನುವ ಹಾಗಿರಲಿಲ್ಲ. ಲಕ್ಷ್ಮೀಕಾಂತನ ಪ್ರಕರಣ ದೊಡ್ಡ ಸ್ವರೂಪವನ್ನೆ ತಳೆಯುವ ಚಿಹ್ನೆ ಗಳು ಕಂಡುವು. {{gap}}ಆತ ಖಡಾಖಂಡಿತವಾಗಿ ಮಹದೇವಯ್ಯನೊಡನೆ ಅಂದ: {{gap}}“ಪ್ರೆಸ್ಸಿಗೆ ಹೋಗೋಕ್ಮುಂಚೆ ಲೇಖನಗಳನ್ನೆಲ್ಲ ನಾನು ಓದಿ ನೋಡಲೇಬೇಕು, ನಾನೂ ಸಂಪಾದಕ, ನನ್ನ ಸಮ್ಮತಿ ಇಲ್ದೆ ಯಾವ ಕೆಲಸವನ್ನೂ ನೀವು ಮಾಡೋ ಹಾಗಿಲ್ಲ.” {{gap}}ಪಂದ್ಯಾಟದ ಪಟುಗಳ ಭಾವಚಿತ್ರಗಳೊಡನೆ ಬ್ಲಾಕ್ ತಯಾರಿಸುವವರಲ್ಲಿಗೆ ಹೊರಟಿದ್ದ ಮಹದೇವಯ್ಯನೆಂದ: {{gap}}“ಲೇಖನಗಳ ಜವಾಬ್ದಾರಿ ನನ್ನದಲ್ಲಪೋ, ಏನಿದ್ದರೂ ಮುರಲೀಧರ್‌ರನ್ನು ಕೇಳಿ.” {{gap}}ಲಕ್ಷ್ಮೀಕಾಂತ ಮುರಲೀಧರನನ್ನು ಹುಡುಕಿಕೊಂಡು ಹೋಗಿ ಕೇಳಿದ: {{gap}}“ನನ್ನ ಕವಿತೆಗಳು ಏನಾದುವು?” {{gap}}“ಪ್ರಧಾನ ಸಂಪಾದಕರು ಒಂದನ್ನು ಆರಿಸಿಕೊಟ್ಟಿದ್ದಾರೆ. ಪ್ರೆಸ್ಸಿಗೆ ಹೋಗಿದೆ.” {{gap}}“ಉಳಿದುದನ್ನು ಕಸದ ಬುಟ್ಟಿಗೆ ಎಸೆದರೋ?” {{gap}}“ಇಲ್ಲ. ನನ್ನಲ್ಲಿವೆ. ಕೊಟ್ಟೇನು?” {{gap}}“ಬೇಡಿ, ನೀವೇ ಇಟ್ಕಳ್ಳಿ. ಅಚ್ಚುಹಾಕದೇ ಇದ್ದರೆ ನನಗೇನೂ ನಷ್ಟ ವಾಗೋದಿಲ್ಲ. ಇಂಥದು ಸಾವಿರ ಬರೆದೇನು.” {{gap}}ಹುಬ್ಬು ಕುಣಿಸಿ ಲಕ್ಷ್ಮೀಕಾಂತ ಕೇಳಿದ: {{gap}}“ನೀವೇನು ಬರೆದಿರಿ?” {{gap}}“ಏನೋ ಒಂದು ಬರೆದೆ ಕಣ್ರಿ. ಚೆನ್ನಾಗಿಲ್ಲ.” {{gap}}“ಶ್ರೀಕಂಠಯ್ಯನವರು ಬೇಡ ಅಂದರೋ?” {{gap}}ತುಂಟತನದ ಉತ್ತರ ಕೊಡು ಎಂದಿತು ಮುರಲೀಧರನ ಮನಸ್ಸು. ಆತನೆಂದ: 51<noinclude></noinclude> lvwk9gn9br4209u0hfs2we6swpl31wj ಪುಟ:ದೀಕ್ಷೆ.pdf/೭೫ 104 19185 322339 277259 2026-05-25T04:12:33Z Shreelatha.Halemane 7642 /* Validated */ 322339 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=402|right= ಕನಸು}} {{gap}}“ಇಲ್ಲ. ಅಚ್ಚು ಹಾಕೋಣ, ಸಂಪಾದಕರಾದ ತಪ್ಪಿಗಾದರೂ ಒಬ್ಬೊಬ್ಬರದು ಒಂದೊಂದು ಇದ್ದರೆ ವಾಸಿ-ಅಂದರು.” {{gap}}ಬಾಣ ನಾಟಿತು. ಲಕ್ಷ್ಮೀಕಾಂತ ಕೆರಳಿ ನುಡಿದ: {{gap}}“ಕವಿತೇನ ಸೇರಿಸ್ಕೊಂಡಿರೋದು ನನ್ನ ಮೇಲಿನ ದಾಕ್ಷಿಣ್ಯದಿಂದ ಅನ್ನಿ, ಆ ಕವಿತೆಗೆ ಸ್ವಂತದ ಯೋಗ್ಯತೆ ಏನೂ ಇಲ್ಲ ಹಾಗಾದರೆ.” {{gap}}“ಅದೆಲ್ಲ ನನಗೆ ಗೊತ್ತಿಲ್ಲ. ಆ ವಿಚಾರ ನೀವು ಅಧ್ಯಾಪಕರನ್ನೆ ಕೇಳಬಾರೆ?” {{gap}}“ಕೇಳದೆ ಬಿಡ್ತೀನೀಂತ ಅಂಡ್ಕೊಂಡಿರೊ?” {{gap}}....ಶ್ರೀಕಂಠಯ್ಯನವರಿಗೆ ರೇಗಿತು. ಅವರು ಲಕ್ಷ್ಮೀಕಾಂತನನ್ನು ಉದ್ದೇಶಿಸಿ ಅಂದರು: {{gap}}“ಏನಪ್ಪ ಸಮಾಚಾರ? ಏನು ವಿಶೇಷ? ವಿದ್ಯಾರ್ಥಿಯಾಗಿರೋದು ನೀನೋ ನಾನೋ?” {{gap}}ಅಷ್ಟಕ್ಕೆಲ್ಲ ಅಂಜುವವನಾಗಿರಲಿಲ್ಲ ಕವಿ ಲಕ್ಷ್ಮೀಕಾಂತ. {{gap}}“ನೀವು ಹೀಗೆಲ್ಲ ಫೇವರಿಟ್ ತೋರಿಸೋದು ತಪ್ಪು, ಸಾರ್.” {{gap}}“ಫೇವರಿಟ್ ಅಲ್ಲ ಕಣಯ್ಯ, ಫೇವರ್ ಅನ್ನು, ಅಥವಾ ಫೇವರಿಟಿಸಂ ಅನ್ನು, ಪಕ್ಷಪಾತ ಅಂತ ಸ್ವಚ್ಛವಾಗಿ ಹೇಳಿದರೆ ಮತ್ತಷ್ಟು ವಾಸಿ.” {{gap}}“ಥ್ಯಾಂಕ್ಸ್ ಸಾರ್, ತಪ್ಪಾಗಿದ್ದರೆ ತಿದ್ದಿಕೊಳ್ಳೋಣ. ಅದಕ್ಕೇನು? ಆದರೆ ನೀವು ಈ ರೀತಿ ಮಾಡೋದು ಮಾತ್ರ ಸರಿಯಲ್ಲ.” {{gap}}“ಏನಯ್ಯ ಅದು, ಸರಿ-ತಪ್ಪು?” {{gap}}“ಇದು ಸರ್ವಾಧಿಕಾರ ಸಾರ್.” {{gap}}ಆತ್ಮೀಯತೆಗೆ ಅವಕಾಶವಿಲ್ಲವೆಂದು ಅಧ್ಯಾಪಕರು ಬೇಗನೆ ಬಹು ವಚನಕ್ಕೆ ತಿರುಗಿದರು: {{gap}}“ನಿಮ್ಮ ಕವಿತೆಗಳನ್ನೆಲ್ಲ ಅಚ್ಚು ಹಾಕಿಸ್ಟೇಕಾಗಿತ್ತೂಂತ ತಾನೆ ನೀವು ಹೇಳೋದು?" {{gap}}ಲಜ್ಜೆಗೊಳ್ಳುವ ಅಭ್ಯಾಸವೆಲ್ಲ ಲಕ್ಷ್ಮೀ ಕಾಂತನಿಗಿರಲಿಲ್ಲ. {{gap}}“ಹೌದು.” {{gap}}“ಒಂದು ಬಿಟ್ಟು ಉಳಿದದ್ದೆಲ್ಲ ಹಾಗೇ ಇವೆ. ನೋಡೀಪ್ಪ. ಅವನ್ನೆಲ್ಲ ವಿಶ್ವ ವಿದ್ಯಾನಿಲಯದ ಪ್ರಬುದ್ಧ ಕರ್ಣಾಟಕ ಪತ್ರಿಕೆಗೆ ಕಳಿಸೋದೇ ಯೋಗ್ಯ.” {{gap}}“ಅದಕ್ಕೆ ನಿಮ್ಮ ರೆಕಮೆಂಡ್ ಬೇಕಾಗಿಲ್ಲ ಸಾರ್.” {{gap}}“ರೆಕಮೆಂಡ್ ಅಲ್ಲ, ರೆಕಮೆಂಡೇಷನ್, ಶಿಫಾರಸು ಅಂತ.” {{gap}}ಲಕ್ಷ್ಮೀಕಾಂತ ಸ್ವರವೇರಿಸಿ ನುಡಿದ: {{gap}}“ನನ್ನ ಸಂಪಾದಕ ಸ್ಥಾನಕ್ಕೆ ರಾಜಿನಾಮೆ ಕೊಡ್ತೀನಿ.” {{gap}}ಅದರಿಂದ ನಮ್ಮ ಸಂಪಾದಕ ಮಂಡಲಕ್ಕೆ ತುಂಬಾ ನಷ್ಟವಾಗೋದೇನೊ ನಿಜ.<noinclude></noinclude> dcerqr7x5imwvnqd8glbx3nd59tk2a7 ಪುಟ:ದೀಕ್ಷೆ.pdf/೭೬ 104 19186 322340 322043 2026-05-25T04:13:24Z Shreelatha.Halemane 7642 322340 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=ದೀಕ್ಷೆ|center=|right=403}} ಆದರೂ ಅನಿವಾರ್ಯವಾಗಿ ನಿಮ್ಮ ರಾಜಿನಾಮೇನ ಸ್ವೀಕರಿಸ್ತೀವಿ. ನಿಮ್ಮ ಹೆಸರಾದರೊ ಪತ್ರಿಕೆಯ ಮೇಲೆ ಇರೋಕೆ ಸಮ್ಮತಿ ಕೊಡ್ತೀರಿ ತಾನೆ?"<br> {{gap}}“ಇಲ್ಲ, ಕೂಡದು!"<br> {{gap}}“ಆಗಲಿ, ನಮ್ಮ ದೌರ್ಭಾಗ್ಯ..."<br> {{gap}}ಅಷ್ಟು ಹೇಳಿದ ಶ್ರೀಕಂಠಯ್ಯ, ತಾಳ್ಮೆಯಿಂದಿರಲು ಯತ್ನಿಸುತ್ತ, ಬಾಗಿಲಿನತ್ತ ಬೊಟ್ಟು ಮಾಡಿ, ಹೊರಹೋಗುವಂತೆ ಸಂಜ್ಜಯಿಂದಲೆ ಸೂಚಿಸಿದರು ಲಕ್ಶ್ಮೀ ಕಾಂತನಿಗೆ.<br> {{gap}}ಆಗಲೂ ಆತನೆಂದ:<br> {{gap}}ಇದು ಬಹಳ ಸೀರಿಯಸ್ ವಿಷಯ ಸಾರ್."<br> {{gap}}ಶ್ರೀಕಂಠಯ್ಯ ಗುಡುಗಿದರು:<br> {{gap}}"ಗೊತ್ತು ಕಣಯ್ಯ ಗೆಟೌಟ್!"<br> {{gap}}ಅಷ್ಟಕ್ಕೆ ಸುಮ್ಮನಾಗಲಿಲ್ಲ ಲಕ್ಷ್ಮೀಕಾಂತ, ರಾಜಿನಾಮೆ ಪತ್ರವನ್ನು ಸಲ್ಲಿಸಿದ ಬಳಿಕ, ಕಾಲೇಜಿನ ಪ್ರಿನ್ಸಿಪಾಲರಿಗೂ ದೀರ್ಘವಾಗಿ ದೂರು ಕೊಟ್ಟ. ಅದು ಮೂರು ನಾಲ್ಕು ಹಾಳೆಗಳಷ್ಟಿದ್ದ ಆರೋಪ ಪತ್ರಿಕೆ.<br> {{gap}}ಪ್ರತಿನಿತ್ಯದಂತೆ ಏಕಪ್ರಕಾರವಾಗಿ ಶಾಂತವಾಗಿರುವುದರ ಬದಲು, ಶಿಕ್ಷಕ ವೃಂದದ ಸರೋವರದಲ್ಲಿ ಒಂದೆರಡು ದಿನಗಳ ಕಾಲ ಸಣ್ಣ ಪುಟ್ಟ ತೆರೆಗಳನ್ನೆಬ್ಬಿಸಿತು ಆ ಫಿಯಾ೯ದು. ಸ್ವತಃ ಲಕ್ಷ್ಮೀಕಾಂತನ ಪ್ರಚಾರದಿಂದಾಗಿ ವಿದ್ಯಾರ್ಥಿಗಳ ಮಧ್ಯದಲ್ಲೂ ಅಲ್ಲಿ ಇಲ್ಲಿ ಆ ವಿಷಯವನ್ನು ಕುರಿತು ವಾದ ವಿವಾದಗಳಾದುವು.<br> {{gap}}ಅಧ್ಯಾಪಕರು ಒಬ್ಬರನ್ನೊಬ್ಬರು ಕೇಳಿದರು:<br> {{gap}}“ಯಾರ ಮಗನಯ್ಯ ಆತ?"<br> {{gap}}ಮಗನಿಂದಾಗಿ ತಂದೆಯ ಹೆಸರೂ ಪ್ರಖ್ಯಾತವಾಯಿತು.<br> {{gap}}ಸರಕಾರದ ಹಿರಿಯ ಹುದ್ದೆಯಲ್ಲಿದ್ದು ನಿವೃತ್ತರಾದವರೊಬ್ಬರ ಸುಕುಮಾರ.<br> {{gap}}"ಆತನೆ? ಬರೇ ಸಾಧೂಂತ ಕಾಣುತ್ತಲ್ಲ ಆ ಪಾಣಿ...."<br> {{gap}}“ತಂದೆ ಸಾಧುವಾದರೆ ಮಗನೂ ಹಾಗೆಯೇ ಇರಬೇಕೆ೦ಬ ನಿಯಮವಿದೆ ಯೇನು?"<br> {{gap}}ಲಕ್ಷ್ಮೀಕಾಂತ ಮಾತ್ರ ಹೋದ ಹೋದಲ್ಲೆಲ್ಲ ಜಾಹೀರು ಮಾಡಿದ:<br> {{gap}}"ಶ್ರೀಕಂಠಯ್ಯನನ್ನು ಡಿಸ್‌ಮಿಸ್ ಮಾಡ್ತಾರೆ, ನೋಡ್ಕೋಳ್ಳಿ."<br> {{gap}}ಆದರೆ ಆತನಿಗೆ ಆಶಾಭಂಗವಾಯಿತು. ಕಾಲೇಜಿನ ಪ್ರಿನ್ಸಿಪಾಲರು ಆತನನ್ನು ಕರೆದು ವಿಚಾರಣೆ ನಡೆಸಿದ ರೀತಿಯೇ ಬೇರೆಯಾಗಿತ್ತು, ತರಗತಿಯ ಪ್ರಬಂಧವನ್ನು ತಿದ್ದುವಂತೆ, ದೂರಿನಲ್ಲಿದ್ದ ನೂರು ತಪ್ಪುಗಳ ಮೇಲೆ ಅವರು ಗುಣಾಕಾರದ ಗುರುತು ಹಾಕಿದರು. ತರಗತಿಯ ಪರೀಕ್ಷೆಯಲ್ಲಿ ಆತನಿಗೆ ದೊರೆತಿದ್ದ ಅಂಕಗಳ ವಿವರ ತರಿಸಿ ಕೊಂಡು "ಯಾಕೆ ಇಷ್ಟು ಕಡಿಮೆ?” ಎಂದರು. ಕೊನೆಯದಾಗಿ ಆತನ ಕವಿತೆಗಳನ್ನೂ<noinclude></noinclude> moed604bdmewe4wnlfsh4n89f7g8h8p ಪುಟ:Kannada-Saahitya.pdf/೨೭ 104 23132 322436 65783 2026-05-25T09:26:29Z Pragathi. BH 7585 /* Validated */ 322436 proofread-page text/x-wiki <noinclude><pagequality level="4" user="Pragathi. BH" />{{rh|center='''ಭರತ-ಬಾಹುಬಲಿ'''|left=|right=೧೭}}</noinclude> 2] ವನ್ನು ಮಾಡಿ ತೋರಿಸಿ ಆನಂದ ನೃತ್ಯವನ್ನಾಡಿದರು. ಜಿನ ಶಿಶುವಿಗೆ ಒಡ ನಾಡಿಗಳಾಗಿರಲು ಕೆಲವರ ದೇವಕುಮಾರರನ್ನು ಅಲ್ಲಿ ಬಿಟ್ಟು ಸ್ವರ್ಗಕ್ಕೆ ಪ್ರಯಾಣಮಡಿದರು.<br /> {{gap}}ಋಷಭದೇವನು ದೇವತೆಗಳ ಒಡನಾಟದಲ್ಲಿ ಬೆಳೆಯುತ್ತ ಬಲ್ಯವನ್ನು ಕಳೆದು ಯೌವನದಲ್ಲಿ ಅಡಿಯಿಟ್ಟನು. ಆಗ ಅವನ ರೂಪು ಅದ್ಬುತವಾಗಿತ್ತು; ಸಮಸ್ತರನ್ನೂ ಮುಗ್ಧಮಾಡುತ್ತಿತ್ತು. ಆದರೂ ಅವನಿಗೆ ಮುಕ್ತಿಸಾಧನೆಯೇ ಗುರಿಯಾಗಿ ಸಂಸಾರದಲ್ಲಿ ಅನಾದರವುಂಟಾಯಿತು. ನಾಭಿರಾಜನು ಮಗನ ಅತಿಶಯವಾದ ಈ ರೂಪವೈಭವವನ್ನು ಕಂಡು ಅವನಿಗೆ ಮದುವೆ ಮಾಡ ಬಯಸಿದನು. ಅವನ ಮನಃಸ್ಥಿತಿಯನ್ನರಿತು, 'ಏನೆನ್ನುವನೋ' ಎಂದು ಅಳುಕಿದನು. ಅಂಜುತ್ತಂಜುತ್ತಲೆ ತನ್ನ ಆಸೆಯನ್ನು ಮಗನಿಗೆ ತಿಳಿಸಿದನು. ಋಷಭನು ತಂದೆತಾಯಿಗಳ ಸಂತೋಷಕ್ಕಾಗಿಯೂ ಲೋಕಾನುಗ್ರಹ ಕ್ಕಾಗಿಯೂ ಮದುವೆಗೆ ಒಡಂಬಟ್ಟನು. ಯಶಸ್ವತಿ, ಸುನಂದೆ ಎಂಬ ಇಬ್ಬರು ಕನ್ಯೆಯರನ್ನು ಆತನಿಗೆ ಮದುವೆ ಮಾಡಿದರು. ಸರ್ವಪ್ರಕಾರದಿಂದಲೂ ಅವರು ಆತನಿಗೆ ತಕ್ಕವರು. ತಮ್ಮ ಗುಣಶೀಲಗಳಿಂದ ಆ ಪರಮನು ಮನ ಸ್ಸನ್ನು ತಮ್ಮೆಡೆಗೆ ಆಕರ್ಷಿಸಿಕೊಂಡರು; ತಮ್ಮ ಸರ್ವಪ್ರೆಮವನ್ನೂ ಆ ಪರ ಮೇಶ್ವರನಿಗೆ ಅರ್ಪಿಸಿದರು. ಆದರ್ಷ ದಂಪತಿಗಳಾಗಿ ಅವರು ಕಾಲ ಕಳೆಯು ತ್ತಿದ್ದರು.<br /> {{center|'''ಭರತನ ಜನನ'''}} {{gap}}ಸಂಸಾರ ಸುಖದ ಸಾರವನ್ನು ಸವಿಯುತ್ತಿದ್ದ ಆ ದಂಪತಿಗಳಿಗೆ ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಅನೇಕ ವರ್ಷಗಳು ಕಳೆದ ಬಳಿಕ ಒಂದು ದಿನ ಹಿರಿಯ ರಾಣಿ ಯಶಸ್ವತಿ ನಿದ್ರಿಸುತ್ತಿದ್ದಾಗ ಸೂರ್ಯ, ಚಂದ್ರ, ಮೇರು ಪರ್ವತ, ಸಮುದ್ರ, ಪದ್ಮದಲ್ಲಿ ಉದ್ಭವಿಸಿ ಎದ್ದು ಬರುತ್ತಿದ್ದ ಲಕ್ಷ್ಮಿ, ಕಲ್ಪ ವೃಕ್ಷ-ಇವನ್ನು ಕನಸಿನಲ್ಲಿ ಕಂಡಳು. ಆ ಕನಸನ್ನು ಆದಿನಾಥನಿಗೆ ತಿಳಿ ಸಲು ಆತನು,"ಈ ಭರತ ಭೂಮಿಯನ್ನೆಲ್ಲ ಆಳುವ ಚಕ್ರವರ್ತಿ ನಿನ್ನ ಹೊಟ್ಟಿ ಯಲ್ಲಿ ಹುಟ್ಟುವನು. ಪುಣ್ಯಾತ್ಮರಾದ ಇನ್ನೂ ಹಲವರು ಮಕ್ಕಳು ನಿನಗಾಗು ವರು" ಎಂದನು.<noinclude><references/></noinclude> 5o8tomq2mp6btfed2ncsyndvk3gxbsr 322437 322436 2026-05-25T09:26:53Z Pragathi. BH 7585 322437 proofread-page text/x-wiki <noinclude><pagequality level="4" user="Pragathi. BH" />{{rh|center='''ಭರತ-ಬಾಹುಬಲಿ'''|left=|right=೧೭}}</noinclude>2] ವನ್ನು ಮಾಡಿ ತೋರಿಸಿ ಆನಂದ ನೃತ್ಯವನ್ನಾಡಿದರು. ಜಿನ ಶಿಶುವಿಗೆ ಒಡ ನಾಡಿಗಳಾಗಿರಲು ಕೆಲವರ ದೇವಕುಮಾರರನ್ನು ಅಲ್ಲಿ ಬಿಟ್ಟು ಸ್ವರ್ಗಕ್ಕೆ ಪ್ರಯಾಣಮಡಿದರು.<br /> {{gap}}ಋಷಭದೇವನು ದೇವತೆಗಳ ಒಡನಾಟದಲ್ಲಿ ಬೆಳೆಯುತ್ತ ಬಲ್ಯವನ್ನು ಕಳೆದು ಯೌವನದಲ್ಲಿ ಅಡಿಯಿಟ್ಟನು. ಆಗ ಅವನ ರೂಪು ಅದ್ಬುತವಾಗಿತ್ತು; ಸಮಸ್ತರನ್ನೂ ಮುಗ್ಧಮಾಡುತ್ತಿತ್ತು. ಆದರೂ ಅವನಿಗೆ ಮುಕ್ತಿಸಾಧನೆಯೇ ಗುರಿಯಾಗಿ ಸಂಸಾರದಲ್ಲಿ ಅನಾದರವುಂಟಾಯಿತು. ನಾಭಿರಾಜನು ಮಗನ ಅತಿಶಯವಾದ ಈ ರೂಪವೈಭವವನ್ನು ಕಂಡು ಅವನಿಗೆ ಮದುವೆ ಮಾಡ ಬಯಸಿದನು. ಅವನ ಮನಃಸ್ಥಿತಿಯನ್ನರಿತು, 'ಏನೆನ್ನುವನೋ' ಎಂದು ಅಳುಕಿದನು. ಅಂಜುತ್ತಂಜುತ್ತಲೆ ತನ್ನ ಆಸೆಯನ್ನು ಮಗನಿಗೆ ತಿಳಿಸಿದನು. ಋಷಭನು ತಂದೆತಾಯಿಗಳ ಸಂತೋಷಕ್ಕಾಗಿಯೂ ಲೋಕಾನುಗ್ರಹ ಕ್ಕಾಗಿಯೂ ಮದುವೆಗೆ ಒಡಂಬಟ್ಟನು. ಯಶಸ್ವತಿ, ಸುನಂದೆ ಎಂಬ ಇಬ್ಬರು ಕನ್ಯೆಯರನ್ನು ಆತನಿಗೆ ಮದುವೆ ಮಾಡಿದರು. ಸರ್ವಪ್ರಕಾರದಿಂದಲೂ ಅವರು ಆತನಿಗೆ ತಕ್ಕವರು. ತಮ್ಮ ಗುಣಶೀಲಗಳಿಂದ ಆ ಪರಮನು ಮನ ಸ್ಸನ್ನು ತಮ್ಮೆಡೆಗೆ ಆಕರ್ಷಿಸಿಕೊಂಡರು; ತಮ್ಮ ಸರ್ವಪ್ರೆಮವನ್ನೂ ಆ ಪರ ಮೇಶ್ವರನಿಗೆ ಅರ್ಪಿಸಿದರು. ಆದರ್ಷ ದಂಪತಿಗಳಾಗಿ ಅವರು ಕಾಲ ಕಳೆಯು ತ್ತಿದ್ದರು.<br /> {{center|'''ಭರತನ ಜನನ'''}} {{gap}}ಸಂಸಾರ ಸುಖದ ಸಾರವನ್ನು ಸವಿಯುತ್ತಿದ್ದ ಆ ದಂಪತಿಗಳಿಗೆ ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಅನೇಕ ವರ್ಷಗಳು ಕಳೆದ ಬಳಿಕ ಒಂದು ದಿನ ಹಿರಿಯ ರಾಣಿ ಯಶಸ್ವತಿ ನಿದ್ರಿಸುತ್ತಿದ್ದಾಗ ಸೂರ್ಯ, ಚಂದ್ರ, ಮೇರು ಪರ್ವತ, ಸಮುದ್ರ, ಪದ್ಮದಲ್ಲಿ ಉದ್ಭವಿಸಿ ಎದ್ದು ಬರುತ್ತಿದ್ದ ಲಕ್ಷ್ಮಿ, ಕಲ್ಪ ವೃಕ್ಷ-ಇವನ್ನು ಕನಸಿನಲ್ಲಿ ಕಂಡಳು. ಆ ಕನಸನ್ನು ಆದಿನಾಥನಿಗೆ ತಿಳಿ ಸಲು ಆತನು,"ಈ ಭರತ ಭೂಮಿಯನ್ನೆಲ್ಲ ಆಳುವ ಚಕ್ರವರ್ತಿ ನಿನ್ನ ಹೊಟ್ಟಿ ಯಲ್ಲಿ ಹುಟ್ಟುವನು. ಪುಣ್ಯಾತ್ಮರಾದ ಇನ್ನೂ ಹಲವರು ಮಕ್ಕಳು ನಿನಗಾಗು ವರು" ಎಂದನು.<noinclude><references/></noinclude> igu14wk2x9vcel3nq8qw6jvl9mml8xv ಪುಟ:Kannada-Saahitya.pdf/೨೮ 104 23134 322438 127421 2026-05-25T09:27:31Z Pragathi. BH 7585 /* Validated */ 322438 proofread-page text/x-wiki <noinclude><pagequality level="4" user="Pragathi. BH" /></noinclude><p style="text-indent: 6cm;">'''ಕನ್ನಡ ಸಾಹಿತ್ಯ ಚಿತ್ರಗಳು'''</p> ೧೮ <p style="text-indent: 1cm;">ಕೇಳಿ ಯಶಸ್ವತಿಯ ಆನಂದಕ್ಕೆ ಪಾರವಿಲ್ಲವಾಯಿತು. ಕಾಲಕ್ರಮದಲ್ಲಿ</p> ಆಕೆ ಗರ್ಭಿಣಿಯಾದಳು. ಆಗ ಆಕೆಊಪವನಗಳಲ್ಲಿ ವಿಹರಿಸುವುದಕ್ಕೆ ಬದ ಲಾಗಿ ಹಿಮವತ್ಪರ್ವತ ಮತ್ತು ನಿಜಯಾರ್ಧ ಪರ್ವತಗಳ ಶಿಖರಗಳಲ್ಲಿ ಆಲೆ ದಾಡಬೇಕೆಂದು ಅಫೇಕ್ಷಿಸುವಳು; ಸಮುದ್ರದಲ್ಲಿ ಜಲಕೇಳಿಯಾಡಲು ಅತ್ಯಾಸೆ ಪಡುವಳು; ಮೃದು ಮಧುರವಾದ ಸರಸವಾಕ್ಯಗಳನ್ನು ಕೇಳಲು ಬೇಸರಪಟ್ಟು ಅಸಮಸಾಹಸಿಗಳ ವೀರಕಥೆಗಳನ್ನು ಕೇಳಲು ಉತ್ಸಾಹಗೊಳ್ಳು ವಳು; ಪಂಜರದ ಗಿಳಿಗಳೊಡನೆ ಮಾತಾಡುವುದನ್ನು ಬಿಟ್ಟು ಸಿಂಹದ ಮರಿ ಗಳನ್ನು ತರಿಸಿ ನೋಡುತ್ತಿರುವಳು; ಕನ್ನಡಿಯಿದ್ದರೂ ಕತ್ತಿಯಲ್ಲಿ ಮುಖ ನೋಡಿಕೊಳ್ಳುವಳು; ಗೀತಕ್ಕೆ ಕಿವಿಗೊಡದೆ ಧನುಷ್ಟಂಕಾರವನ್ನು ಕೇಳ ಬಯಸುವಳು. ಹೀಗೆ ನೀರಜನನಿಗೆ ತಕ್ಕು ಬಯಕೆಗಳು ಆಕೆಗೆ ತಲೆದೂರು ತ್ತಿದ್ದವು. <p style="text-indent: 1cm;">ನವಮಾಸ ತುಂಬಿತು. ಆಕೆ ಶುಭಮುಹೂರ್ತದಲ್ಲಿ ಮನುವಂಶಕ್ಕೆ</p> ಕಲಶಪ್ರಾಯನಾದ ಸುಕುಮಾರನನ್ನು ಹಡೆದಳು. ಆ ಪುಣ್ಯಶಾಲಿಯ ಜನ್ಮ ದಿನದಲ್ಲಿ ಎಲ್ಲೆಲ್ಲೂ ತ್ಂಗಾಳಿ ಸುಳಿಯಿತು; ಆಕಾಶವೆಲ್ಲ ಹಾಲಿನಲ್ಲಿ ತೊಳೆ ಯಿತ್ತೋ ಎಂಬಂತೆ ಹೊಳೆಯುತ್ತಿತ್ತು. ಎಲ್ಲೆಲೂ ಹರ್ಷ ಕುಳುಕಾಡುತ್ತಿತ್ತು. ಅರಮನೆಯಲ್ಲಿನ ಸಡಗರವನ್ನಂತೂ ಹೇಳತೀರದು. ಎತ್ತಿ ಕಟ್ಟದ ಬಾವುಟ ಗಳು ಪಟಪಟನೆ ಹಾರುತ್ತಿದ್ದವು. ರತ್ನದ ತೋರಣಗಳು ಸುತ್ತಮುತ್ತ ಕಳೆ ಯೆರಚುತ್ತಿದ್ದವು. ಆನಂದಭೇರಿಗಳ ಗಂಭೀರ ಧ್ವನಿ ದಿಕ್ಕುದಿಕ್ಕಿಗೂ ಒಳಗೂ ಓಡಾಡುತ್ತಿದ್ದರು. <p style="text-indent: 1cm;">ನಾಭಿರಾಜನೂ ಇತರ ಹಿರಿಯರೂ ಹರ್ಷಗೊಂಡರು. ಸಮಸ್ತ</p> ಬಂಧು ಜನರೂ ನೆರದು ಬಹು ಸಂಭ್ರಮದಿಂದ ಜಾತಕರ್ಮೋತ್ಸವವನ್ನು ನೆರವೇರಿಸಿದರು. ಎಲ್ಲರೂ ಸೇರಿ ಕೂಸಿಗೆ ಭರತ ಎಂದು ಹೆಸರಿಟ್ಟರು. <p style="text-indent: 6cm;">'''ಭರತನ ಬಾಲ್ಯ'''</p> <p style="text-indent: 1cm;">ಮಗು ಕಾಂತಿಯಿಂದ ಕಂಗೊಳಿಸುತ್ತ ಬಹು ಮುದ್ದಾಗಿತ್ತು. ತಾಯಿ</p> ತಂದೆಗಳು ಅದರ ನಸುನಗೆಗೆ ಮರುಳಾಗಿ ಹೋದರು. ಗುರುಹಿರಿಯರಿಗೆ ಆ ಮಗುವಿನ ಸುಂದರ ಮುಖಮಂಡಲವನ್ನು ಎಷ್ಟು ನೋಡಿದರೂ ತೃಪ್ತಿ<noinclude><references/></noinclude> einlplry57ic6zybbakdf1cowapkdlg 322439 322438 2026-05-25T09:28:11Z Pragathi. BH 7585 322439 proofread-page text/x-wiki <noinclude><pagequality level="4" user="Pragathi. BH" /></noinclude><p style="text-indent: 6cm;">'''ಕನ್ನಡ ಸಾಹಿತ್ಯ ಚಿತ್ರಗಳು'''</p> ೧೮ <p style="text-indent: 1cm;">ಕೇಳಿ ಯಶಸ್ವತಿಯ ಆನಂದಕ್ಕೆ ಪಾರವಿಲ್ಲವಾಯಿತು. ಕಾಲಕ್ರಮದಲ್ಲಿ ಆಕೆ ಗರ್ಭಿಣಿಯಾದಳು. ಆಗ ಆಕೆಊಪವನಗಳಲ್ಲಿ ವಿಹರಿಸುವುದಕ್ಕೆ ಬದ ಲಾಗಿ ಹಿಮವತ್ಪರ್ವತ ಮತ್ತು ನಿಜಯಾರ್ಧ ಪರ್ವತಗಳ ಶಿಖರಗಳಲ್ಲಿ ಆಲೆ ದಾಡಬೇಕೆಂದು ಅಫೇಕ್ಷಿಸುವಳು; ಸಮುದ್ರದಲ್ಲಿ ಜಲಕೇಳಿಯಾಡಲು ಅತ್ಯಾಸೆ ಪಡುವಳು; ಮೃದು ಮಧುರವಾದ ಸರಸವಾಕ್ಯಗಳನ್ನು ಕೇಳಲು ಬೇಸರಪಟ್ಟು ಅಸಮಸಾಹಸಿಗಳ ವೀರಕಥೆಗಳನ್ನು ಕೇಳಲು ಉತ್ಸಾಹಗೊಳ್ಳು ವಳು; ಪಂಜರದ ಗಿಳಿಗಳೊಡನೆ ಮಾತಾಡುವುದನ್ನು ಬಿಟ್ಟು ಸಿಂಹದ ಮರಿ ಗಳನ್ನು ತರಿಸಿ ನೋಡುತ್ತಿರುವಳು; ಕನ್ನಡಿಯಿದ್ದರೂ ಕತ್ತಿಯಲ್ಲಿ ಮುಖ ನೋಡಿಕೊಳ್ಳುವಳು; ಗೀತಕ್ಕೆ ಕಿವಿಗೊಡದೆ ಧನುಷ್ಟಂಕಾರವನ್ನು ಕೇಳ ಬಯಸುವಳು. ಹೀಗೆ ನೀರಜನನಿಗೆ ತಕ್ಕು ಬಯಕೆಗಳು ಆಕೆಗೆ ತಲೆದೂರು ತ್ತಿದ್ದವು. <p style="text-indent: 1cm;">ನವಮಾಸ ತುಂಬಿತು. ಆಕೆ ಶುಭಮುಹೂರ್ತದಲ್ಲಿ ಮನುವಂಶಕ್ಕೆ ಕಲಶಪ್ರಾಯನಾದ ಸುಕುಮಾರನನ್ನು ಹಡೆದಳು. ಆ ಪುಣ್ಯಶಾಲಿಯ ಜನ್ಮ ದಿನದಲ್ಲಿ ಎಲ್ಲೆಲ್ಲೂ ತ್ಂಗಾಳಿ ಸುಳಿಯಿತು; ಆಕಾಶವೆಲ್ಲ ಹಾಲಿನಲ್ಲಿ ತೊಳೆ ಯಿತ್ತೋ ಎಂಬಂತೆ ಹೊಳೆಯುತ್ತಿತ್ತು. ಎಲ್ಲೆಲೂ ಹರ್ಷ ಕುಳುಕಾಡುತ್ತಿತ್ತು. ಅರಮನೆಯಲ್ಲಿನ ಸಡಗರವನ್ನಂತೂ ಹೇಳತೀರದು. ಎತ್ತಿ ಕಟ್ಟದ ಬಾವುಟ ಗಳು ಪಟಪಟನೆ ಹಾರುತ್ತಿದ್ದವು. ರತ್ನದ ತೋರಣಗಳು ಸುತ್ತಮುತ್ತ ಕಳೆ ಯೆರಚುತ್ತಿದ್ದವು. ಆನಂದಭೇರಿಗಳ ಗಂಭೀರ ಧ್ವನಿ ದಿಕ್ಕುದಿಕ್ಕಿಗೂ ಒಳಗೂ ಓಡಾಡುತ್ತಿದ್ದರು. <p style="text-indent: 1cm;">ನಾಭಿರಾಜನೂ ಇತರ ಹಿರಿಯರೂ ಹರ್ಷಗೊಂಡರು. ಸಮಸ್ತ</p> ಬಂಧು ಜನರೂ ನೆರದು ಬಹು ಸಂಭ್ರಮದಿಂದ ಜಾತಕರ್ಮೋತ್ಸವವನ್ನು ನೆರವೇರಿಸಿದರು. ಎಲ್ಲರೂ ಸೇರಿ ಕೂಸಿಗೆ ಭರತ ಎಂದು ಹೆಸರಿಟ್ಟರು. <p style="text-indent: 6cm;">'''ಭರತನ ಬಾಲ್ಯ'''</p> <p style="text-indent: 1cm;">ಮಗು ಕಾಂತಿಯಿಂದ ಕಂಗೊಳಿಸುತ್ತ ಬಹು ಮುದ್ದಾಗಿತ್ತು. ತಾಯಿ</p> ತಂದೆಗಳು ಅದರ ನಸುನಗೆಗೆ ಮರುಳಾಗಿ ಹೋದರು. ಗುರುಹಿರಿಯರಿಗೆ ಆ ಮಗುವಿನ ಸುಂದರ ಮುಖಮಂಡಲವನ್ನು ಎಷ್ಟು ನೋಡಿದರೂ ತೃಪ್ತಿ<noinclude><references/></noinclude> 3zp5zbnrjfetux2lhkt5y8swggr5n36 322440 322439 2026-05-25T09:28:42Z Pragathi. BH 7585 322440 proofread-page text/x-wiki <noinclude><pagequality level="4" user="Pragathi. BH" /></noinclude><p style="text-indent: 6cm;">'''ಕನ್ನಡ ಸಾಹಿತ್ಯ ಚಿತ್ರಗಳು'''</p> ೧೮ <p style="text-indent: 1cm;">ಕೇಳಿ ಯಶಸ್ವತಿಯ ಆನಂದಕ್ಕೆ ಪಾರವಿಲ್ಲವಾಯಿತು. ಕಾಲಕ್ರಮದಲ್ಲಿ ಆಕೆ ಗರ್ಭಿಣಿಯಾದಳು. ಆಗ ಆಕೆಊಪವನಗಳಲ್ಲಿ ವಿಹರಿಸುವುದಕ್ಕೆ ಬದ ಲಾಗಿ ಹಿಮವತ್ಪರ್ವತ ಮತ್ತು ನಿಜಯಾರ್ಧ ಪರ್ವತಗಳ ಶಿಖರಗಳಲ್ಲಿ ಆಲೆ ದಾಡಬೇಕೆಂದು ಅಫೇಕ್ಷಿಸುವಳು; ಸಮುದ್ರದಲ್ಲಿ ಜಲಕೇಳಿಯಾಡಲು ಅತ್ಯಾಸೆ ಪಡುವಳು; ಮೃದು ಮಧುರವಾದ ಸರಸವಾಕ್ಯಗಳನ್ನು ಕೇಳಲು ಬೇಸರಪಟ್ಟು ಅಸಮಸಾಹಸಿಗಳ ವೀರಕಥೆಗಳನ್ನು ಕೇಳಲು ಉತ್ಸಾಹಗೊಳ್ಳು ವಳು; ಪಂಜರದ ಗಿಳಿಗಳೊಡನೆ ಮಾತಾಡುವುದನ್ನು ಬಿಟ್ಟು ಸಿಂಹದ ಮರಿ ಗಳನ್ನು ತರಿಸಿ ನೋಡುತ್ತಿರುವಳು; ಕನ್ನಡಿಯಿದ್ದರೂ ಕತ್ತಿಯಲ್ಲಿ ಮುಖ ನೋಡಿಕೊಳ್ಳುವಳು; ಗೀತಕ್ಕೆ ಕಿವಿಗೊಡದೆ ಧನುಷ್ಟಂಕಾರವನ್ನು ಕೇಳ ಬಯಸುವಳು. ಹೀಗೆ ನೀರಜನನಿಗೆ ತಕ್ಕು ಬಯಕೆಗಳು ಆಕೆಗೆ ತಲೆದೂರು ತ್ತಿದ್ದವು. <p style="text-indent: 1cm;">ನವಮಾಸ ತುಂಬಿತು. ಆಕೆ ಶುಭಮುಹೂರ್ತದಲ್ಲಿ ಮನುವಂಶಕ್ಕೆ ಕಲಶಪ್ರಾಯನಾದ ಸುಕುಮಾರನನ್ನು ಹಡೆದಳು. ಆ ಪುಣ್ಯಶಾಲಿಯ ಜನ್ಮ ದಿನದಲ್ಲಿ ಎಲ್ಲೆಲ್ಲೂ ತ್ಂಗಾಳಿ ಸುಳಿಯಿತು; ಆಕಾಶವೆಲ್ಲ ಹಾಲಿನಲ್ಲಿ ತೊಳೆ ಯಿತ್ತೋ ಎಂಬಂತೆ ಹೊಳೆಯುತ್ತಿತ್ತು. ಎಲ್ಲೆಲೂ ಹರ್ಷ ಕುಳುಕಾಡುತ್ತಿತ್ತು. ಅರಮನೆಯಲ್ಲಿನ ಸಡಗರವನ್ನಂತೂ ಹೇಳತೀರದು. ಎತ್ತಿ ಕಟ್ಟದ ಬಾವುಟ ಗಳು ಪಟಪಟನೆ ಹಾರುತ್ತಿದ್ದವು. ರತ್ನದ ತೋರಣಗಳು ಸುತ್ತಮುತ್ತ ಕಳೆ ಯೆರಚುತ್ತಿದ್ದವು. ಆನಂದಭೇರಿಗಳ ಗಂಭೀರ ಧ್ವನಿ ದಿಕ್ಕುದಿಕ್ಕಿಗೂ ಒಳಗೂ ಓಡಾಡುತ್ತಿದ್ದರು. <p style="text-indent: 1cm;">ನಾಭಿರಾಜನೂ ಇತರ ಹಿರಿಯರೂ ಹರ್ಷಗೊಂಡರು. ಸಮಸ್ತ ಬಂಧು ಜನರೂ ನೆರದು ಬಹು ಸಂಭ್ರಮದಿಂದ ಜಾತಕರ್ಮೋತ್ಸವವನ್ನು ನೆರವೇರಿಸಿದರು. ಎಲ್ಲರೂ ಸೇರಿ ಕೂಸಿಗೆ ಭರತ ಎಂದು ಹೆಸರಿಟ್ಟರು. <p style="text-indent: 6cm;">'''ಭರತನ ಬಾಲ್ಯ'''</p> <p style="text-indent: 1cm;">ಮಗು ಕಾಂತಿಯಿಂದ ಕಂಗೊಳಿಸುತ್ತ ಬಹು ಮುದ್ದಾಗಿತ್ತು. ತಾಯಿ ತಂದೆಗಳು ಅದರ ನಸುನಗೆಗೆ ಮರುಳಾಗಿ ಹೋದರು. ಗುರುಹಿರಿಯರಿಗೆ ಆ ಮಗುವಿನ ಸುಂದರ ಮುಖಮಂಡಲವನ್ನು ಎಷ್ಟು ನೋಡಿದರೂ ತೃಪ್ತಿ<noinclude><references/></noinclude> hoqxe9c3qmcxp2wkagbar7kim8w947i ಪುಟ:ನಡೆದದ್ದೇ ದಾರಿ.pdf/೧೧ 104 30832 322235 249940 2026-05-24T15:05:19Z Pragathi. BH 7585 /* Validated */ 322235 proofread-page text/x-wiki <noinclude><pagequality level="4" user="Pragathi. BH" />{{rh|right= ೧ }}</noinclude> {{center|{{xxx-larger|ನಡೆದದ್ದೇ ದಾರಿ}}}}<noinclude><references/></noinclude> s8i1hn40lk0mzlzzvyiu8hi28e30h4t ಪುಟ:ನಡೆದದ್ದೇ ದಾರಿ.pdf/೩೩೮ 104 30940 322152 83354 2026-05-24T13:39:55Z Pragathi. BH 7585 /* Validated */ 322152 proofread-page text/x-wiki <noinclude><pagequality level="4" user="Pragathi. BH" /></noinclude> {{Right|೩೩೧}} {{center|ಗಂಡಸರು}} {{center|೧}} ಸಂಜೆ ಎಂದಿನಂತೆ ಶಾಲೆಯಿಂದ ಬಂದು ಕೈಕಾಲು ಮುಖ ತೊಳಕೊಂಡು ತಿಂಡಿ ತಿಂದು ಕುಣಿತದ ನಡಿಗೆಯಲ್ಲಿ ಆಕೆ ಅಟ್ಟದ ಮೇಲಿನ ತನ್ನ ರೂಮಿಗೆ ಬರುತ್ತಿದ್ದಾಗ, ರೂಮಿನಲ್ಲಿ ಯಾರೋ ಪುಸ್ತಕಗಳನ್ನು ಕಿತ್ತಾ ಡುತ್ತಿದ್ದ ಸದ್ದು ಕೇಳಿಸಿ ಆಕೆಗೆ ವಿಪರೀತ ಸಿಟ್ಟು ಬಂತು. ಗೋಪೀನೇ ಇರಬೇಕು. ಎಷ್ಹು ಸಲ ಹೇಳಿಲ್ಲ ಅವನಿಗೆ ತನ್ನ ಕಪಾಟಿನಲ್ಲಿನ ಪುಸ್ತಕ ಮುಟ್ಟಬೇಡ, ನಿನಗೆ ಸ್ಪ್ಯಾಂಪ್ ಅಥವಾ ಪುಸ್ತಕದ ಹಾಳೆಯಲ್ಲಿಟ್ಟ ನವಿಲುಗರಿ ಬೇಕಾಗಿದ್ದರೆ ನನ್ನನ್ನು ಕೇಳು, ಕೊಡುತ್ತೇನೆ ಆಂತ? ಇವತ್ತು ಚೆನ್ನಾಗಿ ಎರಡೇಟು ಹಾಕಿಯೇ ಬಡಬೇಕು. ಹೋಗಿ ಅಮ್ಮನಿಗೆ ಹೇಳಲಿ ಬೇಕಾದರೆ. ಆಮ್ಮನೇನೂ ನನಗೆ ಬೈಯುವುದಿಲ್ಲ.<br /> {{gap}}ಹಾಗೆಂದುಕೊಳ್ಳುತ್ತಾ ಆಕೆ ಸದ್ದಾಗದಂತೆ ರೂಮು ಪ್ರವೆಶಿಸಿ ಅಲ್ಲೇ ಇದ್ದ ರೂಲು ಕಟ್ಟಿಗೆ ತೆಗೆದುಕೊಂಡು ಮೆಲ್ಲನೆ ಹೆಜ್ಜೆಯಿಡುತ್ತ ಹೋಗಿ ಕಪಾಟಿನ ಬಾಗಿಲ ಹಿಂದೆ ಅರೆಮರೆಯಾಗಿ ಕೂತಿದ್ದ ನೀಲಿ ಶರ್ಟಿನ ಬೆನ್ನಮೇಲೆ ರಪ್ ಎಂದು ಬಾರಿಸಿಬಿಡಲು ಕೈ ಎತ್ತುತ್ತಿರುವಂತೆಯೇ- ಸರ್ರನೆ ಹೊರಳಿ ನೋಡಿ ರೂಲುಕಟ್ಟಿಗೆಯೊಂದಿಗೆ ಅವಳ ಕೈಯನ್ನೂ ಬಿಗಿಯಾಗಿ ಹಿಡಿದುಕೊಂಡು ಎದ್ದು ನಿಂತ ಶಂಕರ.<br /> {{gap}}"ಓಹ್ ನೀನು? ನೀ ಯಾಕ ನನ್ನ ಕಪಾಟು ತಗದೀ? ನೀ ಯಾವಾಗ ಬಂದಿ ಇಲ್ಲೆ ಕಳ್ಲನ್ಹಾಂಗ? ನಾ ಗೋಪಿ ಆಂತ ತಿಳಿದಿದ್ದೆ."- ಕೈ ಬಿಡಿಸಿಕೊಳ್ಳಲು ಪ್ರಯತ್ನಿಸುತಾ ಆಕೆ ಅಂದಳು, ಗೋಪಿ ಅಲ್ಲವಲ್ಲ ಸದ್ಯ, ಸಾಮಾನಿಗೇನೂ ಧಕ್ಕೆಯಿಲ್ಲ, ಅಂತ ಸಮಧಾನದೊಂದಿಗೆ. ಅವಳ ಕೈ ಬಿಡದೆಯೇ ಬಾಗಿ ಅವಳ ಕಣ್ಣುಗಳನೇ ನೋಡುತ್ತ ನಗುತ್ತ ಅಂದ ಶಂಕರ,"ಕಳ್ಲ ಯಾಕ? ನಾಯೇನ ಹೊರಗಿನಾಂವೇನು? ಕಳ್ಳತನ್ನ ಮಾಡೂವಂಥಾ ಕಿಮ್ಮತ್ತಿನ ಸಾಮಾನು ಬ್ಯಾರೇ ಅವು ಅಂಧಾಂಗಾತು ನಿನ್ನ ಹತ್ತರ."<br /> {{gap}}"ಕೈಬಿಡು, ನೀ ಹೊರಗಿನಂವಾ ಅರೇ ಇರ್ಲಿ, ಒಳಗಿನಂವಾ ಅರೇ ಇರ್ಲಿ, ನನ್ನ ಕಪಾಟು- ನನ್ನ ಸಾಮಾನು ಮುಟ್ಟಬ್ಯಾಡ ನೋಡು."ಅಸಮಾಧಾನದಿಂದ<noinclude><references/></noinclude> t6nwsb17m9iimuivfw7a6w8rvnhmggc ಪುಟ:ನಡೆದದ್ದೇ ದಾರಿ.pdf/೧೦ 104 30952 322234 251870 2026-05-24T15:05:05Z Pragathi. BH 7585 /* Validated */ 322234 proofread-page text/x-wiki <noinclude><pagequality level="4" user="Pragathi. BH" />{{rh|left=xiv}}</noinclude> ಹಸಿವು (೧೯೮೪) {{rh|left=೧೮.|center=ಕಾಯುತ್ತದದ್ದ ಕರಿಯ |right=207}} {{rh|left=೧೯.|center=ತಿರುಗಿ ಹೋದಳು |right=220}} ಬಿಡುಗಡೆ (೧೯೯೪) {{rh|left=೨೦.|center=ಬಿಡುಗಡೆ |right=239}} {{rh|left=೨೧.|center=ಹೀಗೊಂದು ಕತೆ |right=250}} {{rh|left=೨೨.|center=ಅನಾಥೆ |right=259}} {{rh|left=೨೩.|center=ನಿರಾಕರಣೆ |right=268}} {{rh|left=೨೪.|center=ರಾಧವ್ವ |right=275}} {{rh|left=೨೫.|center=ಒಲವೆ ಜೀವನ |right=283}} {{rh|left=೨೬.|center=ತಾರಾ ಮ್ಯಾಡಮ್ ಮತ್ತು ತತ್ವಗಳು |right=293}} {{rh|left=೨೭.|center=ದ. ಬಾ. ಕ್ರಿಷ್ಟಪ್ಪ |right=303}} {{rh|left=೨೮.|center=ಮರೀಚಿಕೆ |right=309}} {{rh|left=೨೯.|center=ಧೈರ್ಯದ ಮನುಷ್ಯ321}} ಕಿರುಕಾದಂಬರಿಗಳು {{rh|left=೩೦.|center=ಗಂಡಸರು |right=331}} {{rh|left=೩೧.|center=ಶೋಷಣೆ, ಬಂದಾಯ ಇತ್ಯಾದಿ... |right=385}} ಇನ್ನಷ್ಟು ಕತೆಗಳು {{rh|left=೩೨.|center=ದೆವ್ವ |right=469}} {{rh|left=೩೩.|center=ಹರಿದು ಬಾ ತಾಯಿ |right=480}} {{rh|left=೩೪.|center=ಮುಂದಾಳುವಿನ ಜನತಾ ಸೇವೆ |right=486}} {{rh|left=೩೫.|center=ಸೋನಿಯಾ |right=489}} {{rh|left=೩೬.|center=ಸಮಾಧಾನ |right=495}} {{rh|left=೩೭.|center=ಇದ್ಲಂದ ಮುಂದೆದ್ಲ? |right=506}} {{rh|left=೩೮.|center=ಒಂದು ಗಿಡ, ಒಂದು ಬಾವಿ |right=516}} {{rh|center=ವೀಣಾ ಅವರ ಕ-ತಿಗಳ ಬಗ್ಗೆ ಕೆಲವು ಅಭಿಪ್ರಾಯಗಳು |right=522}} {{rh|center=ವೀಣಾ ನಡೆದ ದಾರಿ....|right=528}}<noinclude><references/></noinclude> fncqs5ryj5ir0tjwdh856wtnszr1k0j ಪುಟ:ನಡೆದದ್ದೇ ದಾರಿ.pdf/೬ 104 30958 322233 249932 2026-05-24T15:04:40Z Pragathi. BH 7585 /* Validated */ 322233 proofread-page text/x-wiki <noinclude><pagequality level="4" user="Pragathi. BH" />{{rh|right=ix}}</noinclude>ಘೋಷಿಸುವ ವಿಮಲಾ ಶಂಕರ ತನ್ನ ಮನೆಯಲ್ಲಿಯೇ ಗುಲಾಮಳು; ತನ್ನ ಗಂಡನ ದ್ರೋಹ, ಶೋಷಣೆಗಳಿಂದ ನೊಂದರೂ ಅನಿವಾರ್ಯವಾಗಿ ಲಕ್ಷ್ಮಿ ತನ್ನ ಮನೆಗೆ ತಿರುಗಿ ಹೋಗುತ್ತಾಳೆ; ಪ್ರತಿಭಟನೆಯ ಮಾರ್ಗವನ್ನೇ ಕಾಣದ ಅನಾಥೆ ಕೋಮಲಾ ಸಮಾಜ ಕಲ್ಯಾಣ ಶಾಕೆಯ ಅಧಿಕಾರಿ ಶಿವರಾಮ ರೆಡ್ಡಿ ಲೈಂಗಿಕ ಆಕ್ರಮಣವನ್ನು ನಿರ್ಲಿಪ್ತಳಾಗಿ ಸಹಿಸಿಕೊಳ್ಳುತಾಳೆ; ನ್ಯಾಯಾಧೀಶಳಾಗಿ ಒಳ್ಳೆಯ ಹೆಸರು ಗಳಿಸಿದ ಯಶಸ್ವಿನೀ ದೇಸಾಯ ತನ್ನ ಕುಟುಂಬಕ್ಕೆಯೇ ಹೊರಗಿನವಳಾಗಿ ಸೋಲು ಅನುಭವಿಸುತ್ತಾಳೆ; ವರ್ಮಾಬಾಯಿ ಒಳ್ಳೆಯ ಶಿಕ್ಷಕಿಯಾದರು ರಜನಿಗೆ ಅವಳ ಭ್ರಷ್ಟತೆಯೆದುರು ಸೋಲಬೇಕಾಗುತ್ತದೆ. ಶಾಲೆಯಲ್ಲಿ ಲೀಟರ್ ಎಂದು ಮೆರೆದ ರಜಪೂತ ಹುಡುಗಿ ಸೋನಿಯಾ ತನ್ನ ತಾಯಿತನದಲ್ಲಿಯೇ ಸಮಾಧಾನ ಪಡಬೇಕಾಗುತ್ತದೆ. ಬದುಕಿ ಉಳಿಯುವುದಕ್ಕೆ ಸ್ತ್ರೀ ಹೇಗೆ ತನ್ನ ಸ್ವಾತಂತ್ರ್ಯ, ಸ್ವಾಭಿಮಾನ, ಆಸೆ - ಆಕಾಂಕ್ಷೆಗಳು, ಮರ್ಯಾದೆ, ಯೋಗ್ಯತೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದರ ಧಾರುಣ ಚಿತ್ರಗಳು ಈ ಕಥೆಗಳಲ್ಲಿವೆ. ಪ್ರತಿಭಟನೆಯ ಅನಿವಾರ್ಯತೆಯನ್ನು ಒಪ್ಪಿಕೊಳ್ಳುತ್ತಲೇ ಪ್ರಸ್ತುತ ಸಾಮಾಜಿಕ ಸಂದರ್ಭದಲ್ಲಿ ಅದು ಸಫಲವಾಗಲಾರದು ಎನ್ನುವುದು ವೀಣಾರ ಗ್ರಹಿಕೆ. ಈ ಗ್ರಹಿಕೆಯ ಶ್ರೇಷ್ಠ ಅಭಿವ್ಯಕ್ತಿಯೆಂದರೆ ಅವರ 'ಶೋಷಣೆ, ಬಂಡಾಯ ಇತ್ಯಾದಿ' ಕಾದಂಬರಿ. ಅವರ 'ತಿರುಗಿ ಹೋದಳು' ಕತೆಗೂ ಈ ಕಾದಂಬರಿಗೂ ಬಹಳು ಸಮೀಪದ ಹೋಲಿಕೆಗಳಿವೆ. {{gap}}ವೀಣಾರ ಕತೆಯನ್ನೋದುವಾಗ ಅವುಗಳ ಚಾರಿತ್ರಿಕ ಸಂದರ್ಭವನ್ನು ನೆನಪಿನಲ್ಲಿಡುವುದು ಒಳ್ಳೆಯದು. ಯಾಕೆಂದರೆ, ಬದಲಾದ ಸಾಮಾಜಿಕ ಸಂದರ್ಭದಲ್ಲಿ ಸ್ತ್ರೀಯ ಸ್ಥಾನಮಾನಗಳಲ್ಲಿ, ಕ್ರಿಯಶೀಲತೆಯಲ್ಲಿ, ದೃಷ್ಟಿಕೋನಗಳಲ್ಲಿ ಹೇಗೆ ಬದಲಾವಣೆಯಾಗಬಲ್ಲದು ಎನ್ನುವುದನ್ನು, ವೀಣಾರ ನಂತರದ ಕಥೆಗಾರರಾದ ನೇಮಿಚಂದ್ರ ಮೊದಲಾದವರ ಕತೆಗಳು ನಮಗೆ ತೋರಿಸಿಕೊಟ್ಟಿವೆ. ಹೊಸ ಸಂಧರ್ಭಗಳಲ್ಲಿ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆಯಾದರು ಸ್ತ್ರೀಯ ವಾಸ್ತವ ಅನುಭವ ಹಾಗು ಅವಳ ಆಸೆ. ಆಕಾಂಕ್ಷೆಗಳ ನಡುವಿನ ಅಂತರದ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತಿರುವುದು ಸಮಾಜದ ಆರೋಗ್ಯದ ಲಕ್ಷಣವಾಗುದೆ. {{gap}}ವ್ಯೆಯಕ್ತಿಕ ಸಂಬಂಧಗಲಾಚೆಗಿನ ಸಮಸ್ಯೆಗಳ ಬಗ್ಗೆ ವೀಣಾ ಬರೆದ ಕತೆಗಳು ಕಡಿಮೆ. ಆದರೂ ಭ್ರಷ್ಟಾಚಾರ ('ಹರಿದು ಬಾ ತಾಯಿ', 'ಮುಂದಾಳುವಿನ ಜನತಾ ಸೇವೆ', 'ಹೊಟೇಲ್ ಬ್ಲೂ'), ಜಾತಿಯ ಪ್ರಶ್ನೆ ('ಹನುಮಾಪುರದಲ್ಲಿ ಹನುಮ ಜಯಂತಿ','ದ. ಬ್ರಾ. ಕ್ರಿಷ್ಣಪ್ಪ' ) ಹಾಗೂ ಪರಿಸರನಾಶ ('ಒಂದು ಗಿಡ ಒಂದು ಬಾವಿ') ಗಳಂಥ ಸಮಸ್ಯೆಗಳನ್ನಾಧರಿಸಿದ ಕತೆಗಳನ್ನು ಅವರು ಬರೆದದ್ದುಂಟು. ಇವುಗಳಲ್ಲಿ 'ಒಂದು ಗಿಡ ಒಂದು ಬಾವಿ' ಕಥನ ಶೈಲಿಯಲ್ಲಿಯೇ ಆಕರ್ಷಕ ಪ್ರಯೋಗದಿಂದಾಗಿ ನಮ್ಮ ಗಮನ ಸೆಳೆಯುತ್ತದೆ. ಮಹಿಳ ಸಾಹಿತ್ಯ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದರ ನಿದರ್ಶನಗಳೆಂದು ಈ ಕಥೆಗಳಿಗೆ ಮಹತ್ವವಿದೆ. {{gap}}ನಿಜವಾಗಿ ನೋಡಿದರೆ, ಕನ್ನಡ ಓದುಗರಿಗೆ ಈಗಾಗಲೇ ಸುಪರಿಚಿತರಾದ ವೀಣರಿಗೆ ನನ್ನ ಮುನ್ನುಡಿಯ ಅಗತ್ಯವಿರಲಿಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಅವರ ಕತೆ-ಕಾದಂಬರಿಗಳ ಬಗ್ಗೆ ಈಗಾಗಲೇ ನಾನು ಬರೆದಿದ್ದೇನೆ. ಆದರೂ ಅವರ<noinclude><references/></noinclude> djysxi6rw2yvabkw1ntcj5304wfehvn ಪುಟ:ನಡೆದದ್ದೇ ದಾರಿ.pdf/೩೩೯ 104 30977 322153 83449 2026-05-24T13:50:21Z Pragathi. BH 7585 /* Validated */ 322153 proofread-page text/x-wiki <noinclude><pagequality level="4" user="Pragathi. BH" /></noinclude> ೩೩೨ {{Right|ನಡೆದದ್ದೇ ದಾರಿ}} ಹೇಳುತ್ತಿದ್ದಂತೆ ಆತನ ಇನ್ನೊಂದು ಕೈಯ ಕಡೆ ಗಮನ ಹೋಗಿ ಒಮ್ಮೆಲೆ ಕಿರಿಚುವ ಧ್ವನಿಯಲ್ಲಿ ಕೇಳಿದಳು- "ಏನದು ? ಏನ ತಗೊಂಡೀ ? ತೋರಿಸು.'<br /> {{gap}}"ಹಿಂಗ್ಯಾಕ ಚೀರತಿ ಶಾಂತಿ ? ನಾ ಬಂದಾಗ ನೀ ಒಳಗಿದ್ದಿ ಅಂತ ನಿನ್ನ ಕರೀಲಿಲ್ಲ. ಊರಿಂದ ಅಕ್ಕ ಬಂದಳ.ಓದ್ಲಿಕ್ಕೆ ಏನರೆ ಕನ್ನಡ ಕಾದಂಬರಿ ಕೊಡು ಆಂದಳು. ನೀ ಇಟ್ಟಿರ್ತೀಯಲಾ ಅಂಥವೆಲ್ಲಾ ಕಚಡಾ.ಅದಕ್ಕ ನಿನ್ನ ಕಪಾಟಿನ್ಯಾಗಿನಿಂದ ತಗೊಂಡ್ರಾತು ಅಂತ ಬಂದೆ. ಹಂಗ ನಿನ್ನ ಆರುತಿಂಗಳ ಪರೀಕ್ಷಾದ್ದು ಸಾಯನ್ಸ್ ಪೇಪರು ಸಿಕ್ತು. ನೋಡಿಕೋತ ಕೂತೆ.ಅಷ್ಟರಾಗ ನೀ ನನ್ನ ಕಟಿಗೀ ತಗೊಡು ಹೊಡೀಲಿಕ್ಕೇ ಬಂದಿ."<br /> {{gap}}"ಕೊಡೂ ನನ್ನ ಪೇಪರು- ಕೊಡು,ಕೊಡು,ಕೊಡು " -ಶಾಂತಿಯ ದನಿಯಲ್ಲಿ ಅಳು ಇಣುಕಿತು.<br /> {{gap}}ಅವಳ ಕೈಬಿಟ್ಟು ಪೇಪರನ್ನು ಕೊಟ್ಟು ಒಂದು ಗಳಿಗೆ ಅವಳನ್ನೇ ನೋಡಿ ಶಂಕರ ಅಂದ," ಶಾಂತಿ, ನೀ ಇಷ್ಟ ಹುಶಾರ ಇದ್ದೀ ಅಂತ ನನಗ ಗೊತ್ತ ಇದ್ದಿದ್ದಿಲ್ಲ ನೋಡು. ಎಷ್ಟ ಛೆಂದ ಬರದೀಯ ಪೇಪರು. ಅದಕ್ಕ ನಿನಗ ನೂರಕ್ಕ ತೊಂಬತ್ತೆರಡು ಮಾರ್ಕ್ಸ್ ಕೊಟ್ಟಾರ ನಿಮ್ಮ ಮಾಸ್ತರು. ನಾ ಅಗಿದ್ರ ನೂರಕ್ಕ ನೂರು ಕೊಡ್ತಿದ್ದೆ."<br /> {{gap}}ಗಡಿಬಿಡಿಯಿಂದ ಕಪಾಟಿನ ಬಾಗಿಲು ಭದ್ರಪಡಿಸುತ್ತ ಆಕೆ ಅಂದಳು, {{gap}}"ಹೋಗ್ಹೂಗು, ನಿನ್ನ ಮಾರ್ಕ್ಸ್ ಯಾರಿಗೆ ಬೇಕು ? ನಿಂದು ನನಗ ಏನೂ ಬ್ಯಾಡ."<br /> {{gap}}"ಬ್ಯಾಡ ? ಅದರ ಶಾಂತೀ, ನಾ ನಿಂದು ಏನಾರೆ ಕೇಳಿದ್ರ ? ಕೊಡ್ತೀಯೇನು ?"<br /> {{gap}}"ಏನರೆ ಅಂದ್ರ ? ಏನು ? " - ಅವಳಿಗೆ ಅಚ್ಚರಿ. ಇವನಿಗೂ ತನ್ನ ಸ್ಪ್ಯಾಂಪುಗಳ, ನವಿಲುಗರಿಗಳ ಸಂಗ್ರಹದ ಮೇಲೆ ಕಣ್ಣೋ ಏನೋ,<br /> {{gap}}"ಏನರೆ ಅಂದ್ರ ಏನೋ.ಕೊಡ್ತೀ ಇಲ್ಲೋ ಹೇಳು ಮೊದಲು" - ಆತನ ಕಣ್ಣುಗಳಲ್ಲಿ ತುಂಟ ನಗು. {{gap}}" ನೀ ಕೇಳಲಾ ಮೊದಲು" - ಹಟದಿಂದ ಅಂದಳು ಆಕೆ.ಮೊದಲೇ ಹ್ಞೂ ಅಂದು ಆಮೇಲೆ ಪೇಚಾಡುವ ಪೆದ್ದಿ ತಾನಾಗಬಾರದಲ್ಲ.<br /> {{gap}}" ಕೇಳ್ತೀನಿ.ಆದರೆ ಈಗಲ್ಲ. ನಾ ದಿಲ್ಲೀಗೆ ಹೋದಮ್ಯಾಲ ಪತ್ರಾ ಬರೀತೀನಿ. ಪತ್ರದಾಗ ಕೇಳ್ತೀನಿ. ಕೊಡ್ತೀಯೋ ಇಲ್ಲೋ ನೋಡೋಣ."<br /> {{gap}}"ನೀ ಊರಿಗೆ ಹೋಗ್ತೀಯಾ ? ಸೂಟಿ ಮುಗೀತೇನು ನಿಂದು ? " - ಆಕೆಗೆ ಬೇಸರ. ಸಂಜೆ ಇನ್ನು ಯಾರೊಂದಿಗೆ ಬ್ಯಾಡ್ಮಿಂಟನ್ ಆಡುವುದು ? [[Category:]] {{gap}}"ಮುಗೀತದ ಇನ್ನೊಂದ ಎರಡದಿನಕ್ಕೆ. ನಾ ನಾಳೇ ಹೋಗ್ಬೇಕು. ನಾ ಹೇಳಿದ್ದು ಮರೀಬ್ಯಾಡ ಹ್ಞಾ ಮತ್ತೆ. ನಾ ಪತ್ರಾ ಬರೀಲಿ ಹೌದಲ್ಲೋ ನಿನಗ ? '<br /> {{gap}} "ಛಿ, ಗಂಡು ಹುಡುಗ್ರು ಪತ್ರಾ ಬರದರ ಸೇರೂದಿಲ್ಲ ನನಗ್."<noinclude><references/></noinclude> imth82aonlz3aszfzdhxgfuo72mrjlu ಪುಟ:ನಡೆದದ್ದೇ ದಾರಿ.pdf/೩೦೯ 104 30989 322238 83505 2026-05-24T15:08:38Z Pragathi. BH 7585 /* Validated */ 322238 proofread-page text/x-wiki <noinclude><pagequality level="4" user="Pragathi. BH" /></noinclude> ೩೦೨ {{Right|ನಡೆದದ್ದೇ ದಾರಿ}} {{gap}}ಅಧಿಕಾರದ ದುರುಪಯೋಗ, ಸರಕಾರಿ ಹಣದ ಆಘರಾತಫರಾ, ಇಲಾಖೆಯ ಒಡೆತನದಲ್ಲಿ ರುವ ಮಾಲಿನ ಬೇಕಾಯ್ದೇಶಿರ ವಿಲೇವಾರಿ, ಭ್ರಷ್ಟಾಚಾರ - ಈ ಆರೋಪಗಳನ್ನು ಮೇಲುನೋಟಕ್ಕೆ ಸಾಬೀತು ಪಡಿಸಿ, ನ್ಯಾಯಾಂಗ ವಿಚಾರಣೆಯಾಗುವ ತನಕ ಡಾ. ತಾರಾ ಪೋಕಳೆಯನ್ನು ಸೇವೆಯಿಂದ ಅಮಾನತ್ತುಗೊಳಿಸಲಾಯಿತು. {{rh|center=* * *}} {{gap}}ಆ ರಾತ್ರಿ ತಡವಾಗಿ ಮನೆ ಸೇರಿದ ಆಕೆ ದಾರಿ ಕಾಯ್ದು ಊಟವಿಲ್ಲದೆ ಉಪವಾಸ ಹಾಸಿಗೆ ಸೇರಿದ್ದ ಗಂಡನನ್ನುದ್ದೇಶಿಸಿ, ಗಟ್ಟಿಯಾಗಿ ಹೇಳತೊಡಗಿದಳು, " ಈ ದೇಶದಾಗ ಪ್ರಾಮಾಣಿಕರಾಗಿ, ತತ್ವನಿಷ್ಠರಾಗಿ ಕೆಲಸಾ ಮಾಡವ್ರಿಹೆ ಅವಕಾಶನೇ ಇಲ್ಲ. ಎಲ್ಲರೂ ದುಷ್ಟರು, ಆಪ್ರಾಮಾಣಿಕರು, ಅಯೋಗ್ಯರು..."ಆಕೆಯ ತತ್ವಪಾಠ ಕೇಳಲು ಆತ ಎಚ್ಚರವಿರಲಿಲ್ಲ,ಎಂದಿನಂತೆ ಆಕೆ ಬರುವ ಮೊದಲೇ ಅಕೆಯ ಲೆಕ್ಚರಿನಿಂದ ತಪ್ಪಿಸಿಕೊಳ್ಳಲೆಂದು ನಿದ್ದೆಗುಳಿಗೆ ಸೇವಿಸಿ ಮರೆವಿನ ಲೋಕಕ್ಕೆ ಜಾರಿಬಿಟ್ಟಿದ್ದ. (೧೯೯೦) {{rh|center=* * *}}<noinclude><references/></noinclude> 8hqy37e37nqezd35mpzaomig5wgrcte ಪುಟ:ನಡೆದದ್ದೇ ದಾರಿ.pdf/೪೯೬ 104 31905 322230 318088 2026-05-24T15:03:04Z Pragathi. BH 7585 /* Validated */ 322230 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=|right=೪೮೯}} {{center|'''ಸೋನಿಯಾ'''}} {{gap}}"A little boy is a little boy, but a little girl is a little mother." {{gap}}ನಿಜವಾಗಿಯೂ ಹೌದೆ? {{center|೧}} {{gap}}ಸಂಜೆ ಐದೂವರೆಯ ಸಮಯ.ಕಾಲೇಜಿನಿಂದ ಆಗಲೇ ಬಂದಿದ್ದ ನಾನು ಸ್ಕೂಲಿಂದ ಬರಲಿರುವ ಮಕ್ಕಳಿಗಾಗಿ ತಿಂಡಿ ಮಾಡುವ ಕೆಲಸ್ದ್ದಲ್ಲಿದ್ದೆ.ಹೊರಗೆ ಸ್ಕೂಲಿನ ರಿಕ್ಶಾದ ಹಾರ್ನ್ ದೊಂಸದಿಗೆ ಮಕ್ಕಳ ಗಲಾಟೆ ಕೇಳಿಸಿತು.ಬೂಟುಗಳ ಟಪ್ ಟಪ್,ಬ್ಯಗುಗಳ ಧಪ್ ಧಪ್,ಜೊತೆಗೆ"ಅಮ್ಮಾ ಇವತ್ತು ಸ್ಕೂಲಿನಾಗ ಏನಾತು ಗೊತ್ತೇನು?" {{gap}}"ಏನಾತು ಚಿನ್ನ?" {{gap}}ದಿನವೂ ಸ್ಕೂಲಿನೊಂದ ಬರುತ್ತಿದಂತೆಯೇ ತುಂಬ ಉದ್ವೇಗ,ಉತ್ಸಾಹ ಅವಸರದಿಂದ ವರದಿಯೊಪ್ಪಿಉಬುದು ನನ್ನ ಮಗಳು ಮಿಲಿಯ ರೂಡಿ.ಕೆಲಸ ಮಾಡುತ್ತಲೆ ಅವಳಿಗೆ ಕಿವಿಗೊಟ್ಟು,ನಡು ನಡುವೆ ಒಂದೊಂದು ಮಾತಾಡುವುದು ನನ್ನ ಪರಿಪಾಟ. {{gap}}"ಇವತ್ತು ಕನ್ನಡ ಪಿರಿಯಡ್ ಇದ್ದಾಗ ಸೋನಿಯಾ ಬೋರ್ಡಿನ ಮ್ಯಾಲ ಟೀಚರ್ ಚಿತ್ರ ತಗೆದು ನ್ಯೂಜ್ ರೀಡರ್ ಅಂತ ಬರೆದಿದ್ದಳು.ಟೀಚರ್ ಬಂದು ನೋಡಿ ಸಿಟ್ಟಾಗಿ ಎಲ್ಲರನ್ನು ಸ್ಟ್ಯಂದಡಪ್ ಆನ್ ದ್ ಬೆಂಚ್ ಮಾಡಿಸಿದ್ರು" {{gap}}ಅವರ ಕಾನ್ವೆಂಟಿಅಲ್ಲಿ ಕಲಿಸುವ ಒಬ್ಬ ಮೇಡಮ್ ಬರೀ ಸುದ್ದಿ ಓದಿದಂತೆ ಪುಸ್ತಕ ಓದಿ ಎದ್ದು ಹೊರಟುಹೋಗುವುದು ನನಗೆ ಗೊತಿತ್ತು.ಆಕೆಯ ಬಾಬ್ ಕಟ್,ಎದ್ದು ಲಿಪ್ಸ್ಟಿಕ್,ಚಿತ್ರ ವಿವಿತ್ರ ಅಲಂಕಾರ ನೆನೆಪಾಗಿ ನಗು ಬಂದಿತು. {{gap}}"ಅದರ್ ಸ್ಕೂಲು ಮ್ಯಾಲ ಆ ಚಿತ್ರಾ ತಗದದ್ದು ಸೋನಿಯಾನೆ ಅಂತ ಗೊತ್ತಾಗಿ ಆಕೆಗೆ ಒಂದು ತಾಸು ನೀಲ್ ಡೂನ್ ಪನಿಶ್ ಮೆಂಟ್ ಕೊಟ್ರು"<noinclude><references/></noinclude> bivgtn9zqosfftmvs9afymne61t67gv ಪುಟ:ನಡೆದದ್ದೇ ದಾರಿ.pdf/೪೯೩ 104 31909 322232 319148 2026-05-24T15:03:38Z Pragathi. BH 7585 /* Validated */ 322232 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೪೮೯ |right=ನಡೆದದ್ದೇ ದಾರಿ}} {{center|'''ಮುಂದಾಳುವಿನ ಜನತಾಸೇವೆ'''}} {{gap}}ಅದೊಂದು ಸಣ್ಣ ತಾಲೂಕು ಕೇಂದ್ರ.ಅಲ್ಲೊಂದು ಸರ್ಕಾರಿ ಪದವಿ ಪೂರ್ವ ಕಾಲೇಜು.ಸುತ್ತಮುತ್ತಲ ಹತ್ತಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ಆ ಕಾಲೇಜಿಗೆ ಬರುತ್ತಿದ್ದರು ಹತ್ತಿರದಲ್ಲೆಲ್ಲೂ ಬೇರೆ ಕಾಲೇಜು ಇಲ್ಲದ್ದರಿಂದ ಸಹಜವಾಗಿಯೆ ಪ್ರತಿ ವರ್ಷ ಆ ಕಾಲೇಜಿನಲ್ಲಿ ಪ್ರವೇಶ ಪಡೆಯಲು ನೂಕು ನುಗ್ಗಲು ಇರುತ್ತಿತ್ತು.ಪ್ರತಿ ವರ್ಷ ಹಳ್ಳಿಗಲಿಂದ ಬರುವ ಹಲವಾರು ಮೂಗ್ಧ ವಿದ್ಯಾರ್ಥಿಗಳಿಗೆ ಆ ಕಾಲೇಜಿನಲ್ಲಿ ಪ್ರವೇಶ ದೊರಕಿದಸಿ ಕೊಡಲು ಒಬ್ಬ ಸ್ವಯಂಘೋಷಿತ ಮೂಂದಾಳು ಮೂಂದೆ ಬರುತ್ತಿದ್ದ.ಅವನ ಹೆಸರು ಕಲ್ಲಪ್ಪ ಮಣಿನಮನಿ. {{gap}}ಈ ವರ್ಶ ಎಂದಿನಂತೆ ಕಲ್ಲಪ್ಪ ಮಣಿನಮನಿ ಖಾದಿ ಶರ್ಟ್-ಪಾಯಿಆಮ ಧರಿಸಿ ಗತ್ತಿನಿಂದ ಕಾಲೇಜಿಗೆ ಬಂದ ಜೂನ್ ತಿಂಗಳು ಆಗಷ್ಟೆ ಎಸ್ಸೆಸ್ಸೆಲ್ಸಿ ಫಾಲಿತಾಂಶ ಹೂರಬಿದ್ದಿತ್ತು.ಕಾಲೇಜಿನಲ್ಲಿ ಅಪಾರ ಜನ ಸಂದಣಿ.ಎಲ್ಲರನ್ನು ನೂಕಿಕೊಂಡು ಪ್ರಿನ್ಸಿಪಾಲರ ಕೋಣೆಯ ಹಒರಗಿದ್ದ ಸಿಪಾಯಿಯನ್ನ ಆಚೆ ದೂಡಿ ಮಣಿನಮನಿ ಒಳಗೆ ಪ್ರವೇಶಿಸಿದ."ಓಹೋ" ಅಂದುಕೊಂಡ.ಹೊಸ ಪ್ರಿನ್ಸಿಪಾಲರು ಈಗಷ್ಟೆ ಇಲ್ಲಿಗೆ ವರ್ಗವಾಗಿ ಬಂದಿದ್ದರು ಇನ್ನೂ ಯುವಕ ಆದರ್ಶವಾದಿಯಂತೆ,ಶಿಸ್ತಿನ ಸಿಪಾಯಿಯಂತೆ,ಕಾನ್ನೂನು ಪರಿಪಾಲಕನಂತೆ ಹಾಗಂತೆ ಹೀಗಂತೆ ಅಂತ ಮೂದಲೆ ಮಣ್ಣಿಮನಿ ಕೇಳಿ ತಿಳಿದ್ದಿದ್ದ.ಆದರೆ ಏನಿದ್ದರೇನು ತಾನು ಸಾಮಾನ್ಯಲ್ಲವಲ್ಲ.ತ್ತ್ನು ಮೂಂದಾಳು ನಾಳಿನ ಶಾಸಕ ಮುಂದಿನ ಮಂತ್ರಿ ನನ್ನ ಮೂಂದೆ ಇಂಥ ಪ್ರಿನ್ಸಿಪಾಲರು ಯಾವ ಗಿಡದ ತೊಪ್ಪಲು ಅಂತ ತಾತ್ಸಾರದಿಂದಲೆ ಕುರ್ಚಿಯಲ್ಲಿ ಕೂತ.ತನ್ನ ಬೇಡಿಕೆ ಮಂಡಿಸಿದ.ಒಂದು ಪಟ್ಟಿಯನ್ನು ಟೇಬಲ್ ಮೇಲೆ ಕುಕ್ಕಿದ ಈ ಪಟ್ಟಿಯಲ್ಲಿ ಹೆಸರಿದ್ದವರಿಗೆಲ್ಲಾ ಪ್ರವೇಶ ಕೊಡಲೇಬೇಕೆಂದ. {{gap}}''ಆಗುವುದಿಲ್ಲ ಕಲ್ಲಪ್ಪನವರೆ.ನಾವು ಮೆರಿಟ್ ಪ್ರಕಾರ ಸೀಟ್ ಕೊಡುತ್ತೇವೆ.ಮೆರಿಟ್ಮತ್ತು ಮೀಸಲಾತಿಗೆ ಸಂಬಂಧಪಟ್ಟ ಸರಕಾರದ ಕಾನೂನಿನಂತೆ ಯಾರಿಗೆ ಅಡ್ಮಿಶನ್ ಸಿಗಬೇಕೋ ಅವರ ಹೆಸರುಗಳು ಹೊರಗೆ ನೋಟೀಸ್ ಬೋರ್ಡ್ ಮೇಲೆ<noinclude><references/></noinclude> dxyqx0wrlenk65ovdx5on842yh7xsni ಪುಟ:ನಡೆದದ್ದೇ ದಾರಿ.pdf/೪೯೨ 104 31921 322227 319147 2026-05-24T15:02:12Z Pragathi. BH 7585 /* Validated */ 322227 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಇನ್ನಷ್ಟು ಕತೆಗಳು/ಹರಿದು ಬಾ ತಾಯಿ|right=೪೮೫}} {{gap}}ಯಾರು ಯಾತರ ಬಗೆಗೂ ಆಕ್ಷೇಪಿಸುವುದಿಲ್ಲ.ಹಿಂದೆ-ಮುಂದೆ ನೋಡುವುದಿಲ್ಲ.ಅಪರಾಧಿ ಭಾವವಂತೂ ಇಲ್ಲವೇ ಇಲ್ಲ.ಕೃಷ್ಣೆಯಲ್ಲೆ ಹರಿದ ನೀರೀಂತ ಹೆಚ್ಚು ಹಣ ಹರಿದಿದೆ,ಹರಿಯುತ್ತಲೇ ಇದೇ. {{gap}}ತಿಮ್ಮನೀಗ ತಿರುಗಿ ಹನುಮಾಪುರಕ್ಕೇ ಹೋಗಿದ್ದಾನೆ.ಹನುಮಾಪುರಕ್ಕೇ ಹೋಗಿದ್ದಾನೆ.ಹನುಮಾಪುರದ ಪರಿಸ್ಥ್ತಿಯಲ್ಲಿ ಏನೂ ಬದಲಾವಣೆಗಳಗಿಲ್ಲ.ಆದರೆ ಒಂದಲ್ಲ ಒಂದು ದಿನ ಕೃಷ್ಣೆಯ ನೀರು ಕಾಲುವೆಯಲ್ಲಿ ಹರಿದು ತಮ್ಮೂರಿಗೆ ಬರುತ್ತದೆ,ಆಗ ಎಲ್ಲ ಹಸಿರಾಗುತ್ತದೆ,ಹೊನ್ನಾಗೌತ್ತದೆ,ಎಂದು ಈಗ ತಿಮ್ಮನ ಮೊಮ್ಮಗ ಕನಸು ಕಾಣುತ್ತಿದ್ದಾನೆ.<noinclude><references/></noinclude> ci2bfcp4sdajtjgsh9n5s4wu0ydlde9 322228 322227 2026-05-24T15:02:39Z Pragathi. BH 7585 322228 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಇನ್ನಷ್ಟು ಕತೆಗಳು/ಹರಿದು ಬಾ ತಾಯಿ|right=೪೮೫}} {{gap}}ಯಾರು ಯಾತರ ಬಗೆಗೂ ಆಕ್ಷೇಪಿಸುವುದಿಲ್ಲ.ಹಿಂದೆ-ಮುಂದೆ ನೋಡುವುದಿಲ್ಲ.ಅಪರಾಧಿ ಭಾವವಂತೂ ಇಲ್ಲವೇ ಇಲ್ಲ.ಕೃಷ್ಣೆಯಲ್ಲೆ ಹರಿದ ನೀರೀಂತ ಹೆಚ್ಚು ಹಣ ಹರಿದಿದೆ,ಹರಿಯುತ್ತಲೇ ಇದೇ. {{gap}}ತಿಮ್ಮನೀಗ ತಿರುಗಿ ಹನುಮಾಪುರಕ್ಕೇ ಹೋಗಿದ್ದಾನೆ.ಹನುಮಾಪುರಕ್ಕೇ ಹೋಗಿದ್ದಾನೆ.ಹನುಮಾಪುರದ ಪರಿಸ್ಥ್ತಿಯಲ್ಲಿ ಏನೂ ಬದಲಾವಣೆಗಳಗಿಲ್ಲ.ಆದರೆ ಒಂದಲ್ಲ ಒಂದು ದಿನ ಕೃಷ್ಣೆಯ ನೀರು ಕಾಲುವೆಯಲ್ಲಿ ಹರಿದು ತಮ್ಮೂರಿಗೆ ಬರುತ್ತದೆ,ಆಗ ಎಲ್ಲ ಹಸಿರಾಗುತ್ತದೆ,ಹೊನ್ನಾಗೌತ್ತದೆ,ಎಂದು ಈಗ ತಿಮ್ಮನ ಮೊಮ್ಮಗ ಕನಸು ಕಾಣುತ್ತಿದ್ದಾನೆ. {{rh|center=***}}<noinclude><references/></noinclude> rdb4jz48waeorf9pd6sdqlt79k1mzb5 ಪುಟ:ಮನಮಂಥನ.pdf/೪ 104 32050 322289 268682 2026-05-24T17:30:19Z Vikashegde 1258 /* Proofread */ 322289 proofread-page text/x-wiki <noinclude><pagequality level="3" user="Vikashegde" /></noinclude>{{Css image crop |Image = ಮನಮಂಥನ.pdf |Page = 4 |bSize = 365 |cWidth = 405 |cHeight = 590 |oTop = 3 |oLeft = 3 |Location = center |Description = }} <noinclude></noinclude> mynccksa0uv6hnnzs95niixbpzro4t8 ಪುಟ:ನಡೆದದ್ದೇ ದಾರಿ.pdf/೪೮೪ 104 32076 322231 318057 2026-05-24T15:03:20Z Pragathi. BH 7585 /* Validated */ 322231 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಇನ್ನಷ್ಟು ಕತೆಗಳು /ದೆವ್ವ|right=೪೭೭}} {{gap}}ನಗು ಬಂದಿತು ಆತನಿಗೆ. ನಗು ತುಟಿಯಂಚಿನಲ್ಲಿ ಮೂಡುವುದಕ್ಕೂ ಕಣ್ಣು ಮಿಸ್ ಗೊಖಲೆಯ ಕಡೆ ತಿರುಗುವುದಕ್ಕೂ ಸಮನಾಯಿತು. ಒಂದು ಕ್ಷಣ ಕಕ್ಕಾಬಿಕ್ಕಿಯಾದರೂ ಮರುಕ್ಷಣ ಸಾವರಿಸಿಕೊಂಡು ನಗೆಯರಳಿಸಿದ ಅವಳ ಚಾಣಾಕ್ಷತೆಯ ಬಗ್ಗೆ ಮೆಚ್ಚಿಗೆಯೆನಿಸಿತು. {{gap}}ಏ ಮುದುಕಾ, ಯಾಕೆ ಹೀಗೆ ಸಿಕ್ಕಾಪಟ್ಟೆ ಮಾತಾದುತ್ತಿದ್ದೀ ? ಕ್ಲಾಸಿನಲ್ಲಿ ನಿರ್ಭಗ್ಯಾ ಹುಡುಗರಿಗೆ ಸುಳ್ಳುಒಳ್ಳು ಸೇರಿಸಿ ಲೆಕ್ಚರು ಕುಟ್ಟಿ ಅಭ್ಯಾಸ ನಿನಗೆ. ನಾನು ಯಾವ ಕಲೆಯ ಸೇವೆಗೂ ಹೊರಟಿಲ್ಲವೋ. ನನಗೊಂದು ದೆವ್ವ ಬೆನ್ನು ಹತ್ತಿದೆ. ಅದರಿಂದ ತಪ್ಪಿಸಿಕೋಳ್ಳಬೇಕಾಗಿದೆ ನನಗೆ. ನನ್ನಿಂದ ನನಗೆ ದೂರ ಹೋಗಲು ಸಾಧ್ಯವೇನೋ ನೋಡಲು ಹೊರಟಿದ್ದೇನೆ... ಓಡಿ ಹೂರಟಿದ್ದೇನೆ... {{gap}}ಪ್ಯಾರಿಸ್ಸಿನಲ್ಲಿ ತನ್ನ ಸ್ಕೂಟರ್ ಮೇಲೆ ದಿನಾ ಹೊಸ-ಹೊಸ ಹುಡುಗಿಯರನ್ನು ಕರೆದೆಊಯ್ಯು ಕನಸು ಕಾಣುತ್ತಿದ್ದಾಗ ಕಾತರದ ದನಿಯಲ್ಲಿ ಅವನ ಹೆಂಡತಿ ಕೇಳಿದ್ದಳು ಒಂದು ರಾತ್ರಿ. "ನೀವು ಲಗೊ ಬರಬೇಕು, ನೀಎಲ್ಲದನಾಹ್ಯಾಂಗ ಇರ್ಲಿ ?"" ಕಾಣುತ್ತಿದ್ದ ಕನಸಿನಿಂದ ಹೊರಬರದೆಯೆ. ಅವಳು ಮುಂದೆ ಮಾತಾಡಂತ ಅವಳ ಬಾಯಿಯ ಮೇಲೆ ತುಟಿಯೂರಿ ಪಿಸುಗುಟ್ಟಿದ್ದ ತಾನು. ""ನಾ ಎಲ್ಲಿದ್ರೂ ನನ್ನೆ ಮನಸ್ಪು ಇಲ್ಲೇ ಇರ್ತದ." ಅವಳಿಗೆ ಸಮಾಧಾನವಾಗಲು ಅಷ್ಟು ಸಾಕಾಗಿತ್ತು {{gap}}'ದೇವರು ಇವರಿಗೆ ದೀಫ್ರಾಯುಷ್ಯ ಕೊಡಲಿ.' {{gap}}ಬೇಡವೋ ಮುದುಕಾ, ನಾನು ಕಂಡ ಬದುಕು ನನಗೆ ಸಾವಿನ ಬಗ್ಗೆ ಅಗಾಧ ಪ್ರೀತಿ ಹುಟ್ಟಿಸಿದೆ... {{gap}}ಮುದುಕ ಪ್ರಿನ್ಸಿಪಾಲರ ಭಾಷಣ ಮುಗಿಯಿತೆಂದು ಸಮಾಧಾನದ ನಿಟ್ಟುಸಿರು ಬಿಡುವಾಗ ಮತ್ತೊಬ್ಬ ಬಂದು ನಿ೦ತ. ಕನ್ನಡ ಲೆಕ್ಚರರ್ ಅ೦ದರು ಯಾರೋ-ಸರಿ. ಇನ್ನಿವನು ತಾನು ಕಲಿತ ವಿಮಶ್ರೆಯ ತೆತ್ವಗಳನ್ನೂ. ನಾಟಕಗಳನ್ನೂ ಕುರಿತು ಉಪನ್ಯಾಸ ಮಾಡುವನೋ ಎಂದು ಕಸಿವಿಸಿಯಾಯಿತು ಆತನಿಗೆ. ಪಕ್ಕಕ್ಕೆ ತಿರುಗಿ ನೋಡಿದ. ಹೆಂಡತಿ ಬಿಟ್ಟ ಕಣ್ಣುಗಳಿಂದ ಭಾಷಣಕಾರನನ್ನೆ ನೋಡುತ್ತಿದ್ದುದನ್ನು ಖಚಿತಪಡಿಸಿಕೋಂಡು ಮಿಸ್ ಗೋಖಲೆಯ ಕಡೆ ಹೊರಳಿದ. ಆಕೆ ಅವನನ್ನೇ ನೋಡುತ್ತಿದ್ದವಳು ಈ ಸಲ ಬೆಚ್ಚದೆ ನಿಧಾ೯ರದ ನಗೆ ಬೀರಿದಳು. {{gap}}'ಇವರ ಭಾಷೆಯ ವೈಶಿಷ್ಟಯವೆಂದರೆ ಸೊಜೆಯ ಮೊನೆಯಂತಹ ವ್ಯಂಗ್ಯ ; ಹರಿತವಾದ ಬಾಣದೆಂತೆ ಇವರ ಟೀಕೆ ; ಬಾರುಕೋಲಿನಿಂದ ಹೊಡೆದೆಬ್ಬಿಸಿದಂತೆ ಇವರ ಮಾತು...' ಆ ಮಹಾಶಯನ ಉಪಮೆಗಳ ಪಟ್ಟ ಮುಗಿಯುವಂತೆಯೇ ಕಾಣಲಿಲ್ಲ. {{gap}}ವ್ಯಂಗ್ಯ-ಟೀಕೆ... "ನಿನ್ನೆ ನೋವನ್ನು ಮರೆಯಲು ಇತರರನ್ನು ನೋಯಿಸಿ<noinclude><references/></noinclude> ilgzmc5mkf56gb75g0gflfsmb32ht5c ಪುಟ:VISHAALAAKSHI - Niranjana.pdf/೬ 104 37844 322402 100001 2026-05-25T07:53:17Z Hariprasad Shetty10 7490 /* ಪರಿಶೀಲಿಸಲಾಗಿಲ್ಲ */ 322402 proofread-page text/x-wiki <noinclude><pagequality level="1" user="Hariprasad Shetty10" /> {{center|೪}}</noinclude>{{gap}}ಆದರೂ ಅಲ್ಲಿ ನೊಂದು ಉಪಪಾತ್ರವಾದ ವಿಶಾಲಾಕ್ಷಿಯನ್ನು ಓದುಗರು ! ಮೆಚ್ಚಿಕೊಂಡ ಬಗೆ, ಈ ಹೊಸ ಕಾದಂಬರಿಗೆ ಹಾದಿಮಾಡಿಕೊಟ್ಟಿದೆ.<br /> {{gap}}“ವಿಲಾಸಿನಿ' (ಅಂಜನ'ಗಳೆರಡನ್ನೂ ಕುರಿತು ಚರ್ಚಿಸಿ, ಇನ್ನೊಂದು ಕಾದಂಬರಿ ಅಗತ್ಯ ಎಂದು ಮನಗಾಣಿಸಿಕೊಟ್ಟವರು, ಕನ್ನಡದ ಹಿರಿಯ ಬರೆಹಗಾರ್ತಿ : ಶ್ರೀಮತಿ ವಾಣಿಯವರು, 'ಇನ್ನೂ ಒಂದು ಇದೆಯಲ್ಲವೆ?' ಎಂದು ಕೇಳಿ, ನನ್ನನ್ನು ಕಾರ್ಯೋನ್ಮುಖಗೊಳಿಸಿದವರು, ಹಲವಾರು ಜನ ವಾಚಕ +| ಮಿತ್ರರು, ಅವರಿಗೆಲ್ಲ ನಾನು ಕೃತಜ್ಞ.<br /> {{gap}}'ವಿಶಾಲಾಕ್ಷಿ' ಕಾದಂಬರಿಯಲ್ಲಿರುವುದು ಭಿನ್ನ ಚಿತ್ರಣ, ಆ ಕಾರಣದಿಂದ * “ವಿಲಾಸಿನಿ' 'ಅಂಜನ' ಗಳ ಮುಂದಿನ ಭಾಗವೆನಿಸುವುದಿಲ್ಲ ಇದು.* ಬೇರೆಯೇ | ಥಾನಾಯಿಕೆಯುಳ್ಳ ಈ ಕೃತಿಗೆ ಸ್ವತಂತ್ರ ಇರುವಿಕೆಯೂ ಇದೆ: ಇದು ರಚಿತವ, Jಾಗಿರುವುದು ಮಾತ್ರ ಹಿಂದಿನ ಎರಡು ಕಾದಂಬರಿಗಳ ಹಿನ್ನೆಲೆಯಲ್ಲಿ, ಕೃತಿಗಳಿಗೆ ಪೂರಕವಾಗಿ, ಇದಿಷ್ಟೇ ನೆನಪಿನಲ್ಲಿಡಬೇಕಾದ ಅಂಶ.... * ನನ್ನ ಕೃತಿಗಳ ಓದುಗರಿಗೆ 'ವಿಶಾಲಾಕ್ಷಿ' ಯೂ ಮೆಚ್ಚುಗೆಯಾಗುವುದೆಂಬ ಭರವಸೆ ನನಗಿದೆ.... ! - ಈ ಪುಸ್ತಕವನ್ನು ಅಂದವಾಗಿ • ಮುದ್ರಿಸಿಕೊಟ್ಟ ಚೇತನಾ ಪ್ರಿಂಟರ್ಸ್ ಅವರಿಗೂ, ಪ್ರಕಾಶಿಸಿದ ಕಲಾಮಾಲ್ಲಾ ಪ್ರಕಾಶನದವರಿಗೂ ನನ್ನ ನೆನಕೆಗಳು - ಇಲ್ಲಿ ಸಲ್ಲಬೇಕು. ೧೮-೪-೧೯೫೮' ಸಾರಸ್ವತಪುರ, ಧಾರವಾಡ. " - “ನಿರಂಜನ 11 .. Bh ' ೬ ಟಿ. ೩. & - ***ಟ್ಟೆ. ಓ ೫ ಬದ: ಇk : A # 14west 1. ವರ್ಷ 11 4 | { PI ಕ , & ೬.: ------------------- , A * - $, { -:<noinclude></noinclude> dt71o2yy997wagoyyucsm9gms67ll16 ಪುಟ:VISHAALAAKSHI - Niranjana.pdf/೨೩ 104 37859 322395 319580 2026-05-25T07:41:43Z Hariprasad Shetty10 7490 322395 proofread-page text/x-wiki <noinclude><pagequality level="3" user="Shreesha Sharma" />{{center|ಪ್ರೇಮಕ್ಕೆ ಕಣ್ಣಿಲ್ಲ - }}{{Right|೨೧}}</noinclude>{{gap}}ಮೃದುವಾದ ಧ್ವನಿಯಲ್ಲಿ ಆಡಿದ್ದ ಮಾತು, ತುಸು ಕಂಪಿಸಿತ್ತು. ನಾಗಮ್ಮ ನಿಗೆ ತಿಳಿದಿತ್ತು ಆ ಕಂಪನದ ಅರ್ಥ.... {{gap}}ವಿಶಾಲಾಕ್ಷಿಯ ತಂದೆ ಮತ್ತೊಮ್ಮೆ ಯತ್ನಿಸಿ ನೋಡಿದರು- ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದ, ಬಿ.ಎ, ಆನರ್ಸ್ ಪದವೀಧರೆಯಾದ, ಬುದ್ಧಿಮತಿ “ ಯಾದ, ಸಕಲಗುಣಸಂಪನ್ನೆಯಾದ ತನ್ನ ಮಗಳಿಗೆ ಒಬ್ಬ ಗಂಡು ದೊರೆಯುವನೇ ಎಂದು. “ಮರಳಿಯತ್ನವ ಮಾಡು, ಮರಳಿಯತ್ನವ ಮಾಡು.' ಉಪದೇಶ ವೀಯುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ.... {{gap}}ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಿಕೆಯಾಗುವ ಅವಕಾಶ ದೊರೆತಾಗ, ವಿಶಾಲಾಕ್ಷಿ ಆ ಪ್ರಸ್ತಾಪವನ್ನು ಮೊದಲು ಮಾಡಿದುದು ತಾಯಿಯೊಡನೆ. {{gap}}ನಾಗಮ್ಮ ಅಂದಿದ್ದರು: {{gap}}'ನಿಮ್ಮ ತಂದೇನ ಕೇಳಿನೋಡು.' {{gap}}ವಿದ್ಯಾರ್ಥಿನಿಯಾಗಿದ್ದವರೆಗೂ ಒಂದು ಬಗೆ ಹೇಗೂ ಕಾಲ ಕಳೆಯು ತಿತ್ತು, ಕೆಲಸವಿಲ್ಲದೆ ಮನೆಯಲ್ಲೆ ಕುಳಿತಿರುವುದೆಂದರೆ, ಮಾನಸಿಕ ಯಾತನೆಗೆ : ಆಹ್ವಾನ ನೀಡಿದಂತೆ, ಅಧ್ಯಾಪಿಕೆಯಾಗುವುದರಿಂದ, ಸರಾಗವಾಗಿ ಉಸಿರಾಡಲು ಮತ್ತೂ ಒಂದಿಷ್ಟು ಅವಕಾಶ, ಆ ವೃತ್ತಿ ಮಗಳಿಗೆ ಇಷ್ಟವೆಂಬುದನ್ನು ಅವಳ ಸ್ವರದಲ್ಲಿ ಗುರುತಿಸಿದ್ದ ತಂದೆ, ತಾವೂ ಸಂತೋಷ ವ್ಯಕ್ತಪಡಿಸುತ್ತ, ನಗೆಯ - ಮುಖವಾಡ ಧರಿಸುತ್ತ, ಹೇಳಿದ್ದರು : {{gap}}ಆಗಲಿ, ಅದಕ್ಕೇನು ? {{gap}}ಏಕಾಂತದಲ್ಲಿ ಸಹಧರ್ಮಿಣಿಯೊಡನೆ ಅವರು ನುಡಿದಿದ್ದರು: - {{gap}}'ಸ್ವಲ್ಪ ಸಮಯದವರೆಗೆ ಹೋಗ್ತಾ ಇರಲಿ, ಮನೆಯಲ್ಲಿ ಇರೋದಕ್ಕಿಂತ : ಅದು ವಾಸಿ. ಆಮೇಲೆ ಬಿಟ್ಟುಬಿಟ್ಟರಾಯ್ತು ...ಮುಂದೆ ನೋಡೋಣ.' {{gap}}ಅವರಿಗೆ ಪ್ರಿಯವಾಗಿದ್ದ ಪದಪ್ರಯೋಗ-ಮುಂದೆ ನೋಡೋಣ.' ಸಮಸ್ಯೆ ಸಿಕ್ಕುಗಟ್ಟಿ ಗಡುತರವಾದಾಗಲೆಲ್ಲ ಆ ಮಾತು. {{gap}}ಆ ಆಸೆಯಲ್ಲೇ ದೀರ್ಘಕಾಲ ಕಳೆಯಿತು.... {{gap}}ಆಮೇಲೆ ಒಮ್ಮೆಲೆ ಯಾವ ಆಸೆಗೂ ಆಸ್ಪದವಿಲ್ಲದ ಹಾಗೆ {{gap}}ಅಲ್ಲ, ಇಷ್ಟೊಂದು ಕ್ರೂರವಾಗಬಹುದೆ ವಿಧಿ ? ... {{gap}}ಏಕಮಾತ್ರ ಆಸರೆಯಾಗಿದ್ದ ಹೆಮ್ಮರ ಇನ್ನಿಲ್ಲ ತನ್ನ ಪಾಲಿಗೆ,<noinclude></noinclude> 2tlaly07e42qfhzpdic9um4mcrr76iv 322396 322395 2026-05-25T07:42:17Z Hariprasad Shetty10 7490 322396 proofread-page text/x-wiki <noinclude><pagequality level="3" user="Shreesha Sharma" />{{center|ಪ್ರೇಮಕ್ಕೆ ಕಣ್ಣಿಲ್ಲ - }}{{Right|೨೧}}</noinclude>{{gap}}ಮೃದುವಾದ ಧ್ವನಿಯಲ್ಲಿ ಆಡಿದ್ದ ಮಾತು, ತುಸು ಕಂಪಿಸಿತ್ತು. ನಾಗಮ್ಮ ನಿಗೆ ತಿಳಿದಿತ್ತು ಆ ಕಂಪನದ ಅರ್ಥ....<br /> {{gap}}ವಿಶಾಲಾಕ್ಷಿಯ ತಂದೆ ಮತ್ತೊಮ್ಮೆ ಯತ್ನಿಸಿ ನೋಡಿದರು- ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದ, ಬಿ.ಎ, ಆನರ್ಸ್ ಪದವೀಧರೆಯಾದ, ಬುದ್ಧಿಮತಿ “ ಯಾದ, ಸಕಲಗುಣಸಂಪನ್ನೆಯಾದ ತನ್ನ ಮಗಳಿಗೆ ಒಬ್ಬ ಗಂಡು ದೊರೆಯುವನೇ ಎಂದು. “ಮರಳಿಯತ್ನವ ಮಾಡು, ಮರಳಿಯತ್ನವ ಮಾಡು.' ಉಪದೇಶ ವೀಯುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ....<br /> {{gap}}ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಿಕೆಯಾಗುವ ಅವಕಾಶ ದೊರೆತಾಗ, ವಿಶಾಲಾಕ್ಷಿ ಆ ಪ್ರಸ್ತಾಪವನ್ನು ಮೊದಲು ಮಾಡಿದುದು ತಾಯಿಯೊಡನೆ.<br /> {{gap}}ನಾಗಮ್ಮ ಅಂದಿದ್ದರು: <br /> {{gap}}'ನಿಮ್ಮ ತಂದೇನ ಕೇಳಿನೋಡು.'<br /> {{gap}}ವಿದ್ಯಾರ್ಥಿನಿಯಾಗಿದ್ದವರೆಗೂ ಒಂದು ಬಗೆ ಹೇಗೂ ಕಾಲ ಕಳೆಯು ತಿತ್ತು, ಕೆಲಸವಿಲ್ಲದೆ ಮನೆಯಲ್ಲೆ ಕುಳಿತಿರುವುದೆಂದರೆ, ಮಾನಸಿಕ ಯಾತನೆಗೆ : ಆಹ್ವಾನ ನೀಡಿದಂತೆ, ಅಧ್ಯಾಪಿಕೆಯಾಗುವುದರಿಂದ, ಸರಾಗವಾಗಿ ಉಸಿರಾಡಲು ಮತ್ತೂ ಒಂದಿಷ್ಟು ಅವಕಾಶ, ಆ ವೃತ್ತಿ ಮಗಳಿಗೆ ಇಷ್ಟವೆಂಬುದನ್ನು ಅವಳ ಸ್ವರದಲ್ಲಿ ಗುರುತಿಸಿದ್ದ ತಂದೆ, ತಾವೂ ಸಂತೋಷ ವ್ಯಕ್ತಪಡಿಸುತ್ತ, ನಗೆಯ - ಮುಖವಾಡ ಧರಿಸುತ್ತ, ಹೇಳಿದ್ದರು : {{gap}}ಆಗಲಿ, ಅದಕ್ಕೇನು ? {{gap}}ಏಕಾಂತದಲ್ಲಿ ಸಹಧರ್ಮಿಣಿಯೊಡನೆ ಅವರು ನುಡಿದಿದ್ದರು: - {{gap}}'ಸ್ವಲ್ಪ ಸಮಯದವರೆಗೆ ಹೋಗ್ತಾ ಇರಲಿ, ಮನೆಯಲ್ಲಿ ಇರೋದಕ್ಕಿಂತ : ಅದು ವಾಸಿ. ಆಮೇಲೆ ಬಿಟ್ಟುಬಿಟ್ಟರಾಯ್ತು ...ಮುಂದೆ ನೋಡೋಣ.' {{gap}}ಅವರಿಗೆ ಪ್ರಿಯವಾಗಿದ್ದ ಪದಪ್ರಯೋಗ-ಮುಂದೆ ನೋಡೋಣ.' ಸಮಸ್ಯೆ ಸಿಕ್ಕುಗಟ್ಟಿ ಗಡುತರವಾದಾಗಲೆಲ್ಲ ಆ ಮಾತು. {{gap}}ಆ ಆಸೆಯಲ್ಲೇ ದೀರ್ಘಕಾಲ ಕಳೆಯಿತು.... {{gap}}ಆಮೇಲೆ ಒಮ್ಮೆಲೆ ಯಾವ ಆಸೆಗೂ ಆಸ್ಪದವಿಲ್ಲದ ಹಾಗೆ {{gap}}ಅಲ್ಲ, ಇಷ್ಟೊಂದು ಕ್ರೂರವಾಗಬಹುದೆ ವಿಧಿ ? ... {{gap}}ಏಕಮಾತ್ರ ಆಸರೆಯಾಗಿದ್ದ ಹೆಮ್ಮರ ಇನ್ನಿಲ್ಲ ತನ್ನ ಪಾಲಿಗೆ,<noinclude></noinclude> 93lt5zxxhhne9w47it955jrlt2kyug9 322397 322396 2026-05-25T07:42:40Z Hariprasad Shetty10 7490 322397 proofread-page text/x-wiki <noinclude><pagequality level="3" user="Shreesha Sharma" />{{center|ಪ್ರೇಮಕ್ಕೆ ಕಣ್ಣಿಲ್ಲ - }}{{Right|೨೧}}</noinclude>{{gap}}ಮೃದುವಾದ ಧ್ವನಿಯಲ್ಲಿ ಆಡಿದ್ದ ಮಾತು, ತುಸು ಕಂಪಿಸಿತ್ತು. ನಾಗಮ್ಮ ನಿಗೆ ತಿಳಿದಿತ್ತು ಆ ಕಂಪನದ ಅರ್ಥ....<br /> {{gap}}ವಿಶಾಲಾಕ್ಷಿಯ ತಂದೆ ಮತ್ತೊಮ್ಮೆ ಯತ್ನಿಸಿ ನೋಡಿದರು- ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದ, ಬಿ.ಎ, ಆನರ್ಸ್ ಪದವೀಧರೆಯಾದ, ಬುದ್ಧಿಮತಿ “ ಯಾದ, ಸಕಲಗುಣಸಂಪನ್ನೆಯಾದ ತನ್ನ ಮಗಳಿಗೆ ಒಬ್ಬ ಗಂಡು ದೊರೆಯುವನೇ ಎಂದು. “ಮರಳಿಯತ್ನವ ಮಾಡು, ಮರಳಿಯತ್ನವ ಮಾಡು.' ಉಪದೇಶ ವೀಯುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ....<br /> {{gap}}ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಿಕೆಯಾಗುವ ಅವಕಾಶ ದೊರೆತಾಗ, ವಿಶಾಲಾಕ್ಷಿ ಆ ಪ್ರಸ್ತಾಪವನ್ನು ಮೊದಲು ಮಾಡಿದುದು ತಾಯಿಯೊಡನೆ.<br /> {{gap}}ನಾಗಮ್ಮ ಅಂದಿದ್ದರು: <br /> {{gap}}'ನಿಮ್ಮ ತಂದೇನ ಕೇಳಿನೋಡು.'<br /> {{gap}}ವಿದ್ಯಾರ್ಥಿನಿಯಾಗಿದ್ದವರೆಗೂ ಒಂದು ಬಗೆ ಹೇಗೂ ಕಾಲ ಕಳೆಯು ತಿತ್ತು, ಕೆಲಸವಿಲ್ಲದೆ ಮನೆಯಲ್ಲೆ ಕುಳಿತಿರುವುದೆಂದರೆ, ಮಾನಸಿಕ ಯಾತನೆಗೆ : ಆಹ್ವಾನ ನೀಡಿದಂತೆ, ಅಧ್ಯಾಪಿಕೆಯಾಗುವುದರಿಂದ, ಸರಾಗವಾಗಿ ಉಸಿರಾಡಲು ಮತ್ತೂ ಒಂದಿಷ್ಟು ಅವಕಾಶ, ಆ ವೃತ್ತಿ ಮಗಳಿಗೆ ಇಷ್ಟವೆಂಬುದನ್ನು ಅವಳ ಸ್ವರದಲ್ಲಿ ಗುರುತಿಸಿದ್ದ ತಂದೆ, ತಾವೂ ಸಂತೋಷ ವ್ಯಕ್ತಪಡಿಸುತ್ತ, ನಗೆಯ - ಮುಖವಾಡ ಧರಿಸುತ್ತ, ಹೇಳಿದ್ದರು : {{gap}}ಆಗಲಿ, ಅದಕ್ಕೇನು ? {{gap}}ಏಕಾಂತದಲ್ಲಿ ಸಹಧರ್ಮಿಣಿಯೊಡನೆ ಅವರು ನುಡಿದಿದ್ದರು: - {{gap}}'ಸ್ವಲ್ಪ ಸಮಯದವರೆಗೆ ಹೋಗ್ತಾ ಇರಲಿ, ಮನೆಯಲ್ಲಿ ಇರೋದಕ್ಕಿಂತ : ಅದು ವಾಸಿ. ಆಮೇಲೆ ಬಿಟ್ಟುಬಿಟ್ಟರಾಯ್ತು ...ಮುಂದೆ ನೋಡೋಣ.' {{gap}}ಅವರಿಗೆ ಪ್ರಿಯವಾಗಿದ್ದ ಪದಪ್ರಯೋಗ-ಮುಂದೆ ನೋಡೋಣ.' ಸಮಸ್ಯೆ ಸಿಕ್ಕುಗಟ್ಟಿ ಗಡುತರವಾದಾಗಲೆಲ್ಲ ಆ ಮಾತು. {{gap}}ಆ ಆಸೆಯಲ್ಲೇ ದೀರ್ಘಕಾಲ ಕಳೆಯಿತು.... {{gap}}ಆಮೇಲೆ ಒಮ್ಮೆಲೆ ಯಾವ ಆಸೆಗೂ ಆಸ್ಪದವಿಲ್ಲದ ಹಾಗೆ {{gap}}ಅಲ್ಲ, ಇಷ್ಟೊಂದು ಕ್ರೂರವಾಗಬಹುದೆ ವಿಧಿ ? ... {{gap}}ಏಕಮಾತ್ರ ಆಸರೆಯಾಗಿದ್ದ ಹೆಮ್ಮರ ಇನ್ನಿಲ್ಲ ತನ್ನ ಪಾಲಿಗೆ,<noinclude></noinclude> 4v8utkfp4mwn9ai4i6d3lz0eo18okpu 322398 322397 2026-05-25T07:43:55Z Hariprasad Shetty10 7490 322398 proofread-page text/x-wiki <noinclude><pagequality level="3" user="Shreesha Sharma" />{{rh|left=|center=ಪ್ರೇಮಕ್ಕೆ ಕಣ್ಣಿಲ್ಲ|right=೨೧}}</noinclude>{{gap}}ಮೃದುವಾದ ಧ್ವನಿಯಲ್ಲಿ ಆಡಿದ್ದ ಮಾತು, ತುಸು ಕಂಪಿಸಿತ್ತು. ನಾಗಮ್ಮ ನಿಗೆ ತಿಳಿದಿತ್ತು ಆ ಕಂಪನದ ಅರ್ಥ....<br /> {{gap}}ವಿಶಾಲಾಕ್ಷಿಯ ತಂದೆ ಮತ್ತೊಮ್ಮೆ ಯತ್ನಿಸಿ ನೋಡಿದರು- ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದ, ಬಿ.ಎ, ಆನರ್ಸ್ ಪದವೀಧರೆಯಾದ, ಬುದ್ಧಿಮತಿ “ ಯಾದ, ಸಕಲಗುಣಸಂಪನ್ನೆಯಾದ ತನ್ನ ಮಗಳಿಗೆ ಒಬ್ಬ ಗಂಡು ದೊರೆಯುವನೇ ಎಂದು. “ಮರಳಿಯತ್ನವ ಮಾಡು, ಮರಳಿಯತ್ನವ ಮಾಡು.' ಉಪದೇಶ ವೀಯುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ....<br /> {{gap}}ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಿಕೆಯಾಗುವ ಅವಕಾಶ ದೊರೆತಾಗ, ವಿಶಾಲಾಕ್ಷಿ ಆ ಪ್ರಸ್ತಾಪವನ್ನು ಮೊದಲು ಮಾಡಿದುದು ತಾಯಿಯೊಡನೆ.<br /> {{gap}}ನಾಗಮ್ಮ ಅಂದಿದ್ದರು: <br /> {{gap}}'ನಿಮ್ಮ ತಂದೇನ ಕೇಳಿನೋಡು.'<br /> {{gap}}ವಿದ್ಯಾರ್ಥಿನಿಯಾಗಿದ್ದವರೆಗೂ ಒಂದು ಬಗೆ ಹೇಗೂ ಕಾಲ ಕಳೆಯು ತಿತ್ತು, ಕೆಲಸವಿಲ್ಲದೆ ಮನೆಯಲ್ಲೆ ಕುಳಿತಿರುವುದೆಂದರೆ, ಮಾನಸಿಕ ಯಾತನೆಗೆ : ಆಹ್ವಾನ ನೀಡಿದಂತೆ, ಅಧ್ಯಾಪಿಕೆಯಾಗುವುದರಿಂದ, ಸರಾಗವಾಗಿ ಉಸಿರಾಡಲು ಮತ್ತೂ ಒಂದಿಷ್ಟು ಅವಕಾಶ, ಆ ವೃತ್ತಿ ಮಗಳಿಗೆ ಇಷ್ಟವೆಂಬುದನ್ನು ಅವಳ ಸ್ವರದಲ್ಲಿ ಗುರುತಿಸಿದ್ದ ತಂದೆ, ತಾವೂ ಸಂತೋಷ ವ್ಯಕ್ತಪಡಿಸುತ್ತ, ನಗೆಯ - ಮುಖವಾಡ ಧರಿಸುತ್ತ, ಹೇಳಿದ್ದರು : {{gap}}ಆಗಲಿ, ಅದಕ್ಕೇನು ? {{gap}}ಏಕಾಂತದಲ್ಲಿ ಸಹಧರ್ಮಿಣಿಯೊಡನೆ ಅವರು ನುಡಿದಿದ್ದರು: - {{gap}}'ಸ್ವಲ್ಪ ಸಮಯದವರೆಗೆ ಹೋಗ್ತಾ ಇರಲಿ, ಮನೆಯಲ್ಲಿ ಇರೋದಕ್ಕಿಂತ : ಅದು ವಾಸಿ. ಆಮೇಲೆ ಬಿಟ್ಟುಬಿಟ್ಟರಾಯ್ತು ...ಮುಂದೆ ನೋಡೋಣ.' {{gap}}ಅವರಿಗೆ ಪ್ರಿಯವಾಗಿದ್ದ ಪದಪ್ರಯೋಗ-ಮುಂದೆ ನೋಡೋಣ.' ಸಮಸ್ಯೆ ಸಿಕ್ಕುಗಟ್ಟಿ ಗಡುತರವಾದಾಗಲೆಲ್ಲ ಆ ಮಾತು. {{gap}}ಆ ಆಸೆಯಲ್ಲೇ ದೀರ್ಘಕಾಲ ಕಳೆಯಿತು.... {{gap}}ಆಮೇಲೆ ಒಮ್ಮೆಲೆ ಯಾವ ಆಸೆಗೂ ಆಸ್ಪದವಿಲ್ಲದ ಹಾಗೆ {{gap}}ಅಲ್ಲ, ಇಷ್ಟೊಂದು ಕ್ರೂರವಾಗಬಹುದೆ ವಿಧಿ ? ... {{gap}}ಏಕಮಾತ್ರ ಆಸರೆಯಾಗಿದ್ದ ಹೆಮ್ಮರ ಇನ್ನಿಲ್ಲ ತನ್ನ ಪಾಲಿಗೆ,<noinclude></noinclude> 3weg06s1zfxn9ju0hfb5tqeadplw5e9 322399 322398 2026-05-25T07:44:55Z Hariprasad Shetty10 7490 322399 proofread-page text/x-wiki <noinclude><pagequality level="3" user="Shreesha Sharma" />{{rh|left=|center=ಪ್ರೇಮಕ್ಕೆ ಕಣ್ಣಿಲ್ಲ|right=೨೧}}</noinclude>{{gap}}ಮೃದುವಾದ ಧ್ವನಿಯಲ್ಲಿ ಆಡಿದ್ದ ಮಾತು, ತುಸು ಕಂಪಿಸಿತ್ತು. ನಾಗಮ್ಮ ನಿಗೆ ತಿಳಿದಿತ್ತು ಆ ಕಂಪನದ ಅರ್ಥ....<br /> {{gap}}ವಿಶಾಲಾಕ್ಷಿಯ ತಂದೆ ಮತ್ತೊಮ್ಮೆ ಯತ್ನಿಸಿ ನೋಡಿದರು- ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದ, ಬಿ.ಎ, ಆನರ್ಸ್ ಪದವೀಧರೆಯಾದ, ಬುದ್ಧಿಮತಿ “ ಯಾದ, ಸಕಲಗುಣಸಂಪನ್ನೆಯಾದ ತನ್ನ ಮಗಳಿಗೆ ಒಬ್ಬ ಗಂಡು ದೊರೆಯುವನೇ ಎಂದು. “ಮರಳಿಯತ್ನವ ಮಾಡು, ಮರಳಿಯತ್ನವ ಮಾಡು.' ಉಪದೇಶ ವೀಯುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ....<br /> {{gap}}ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಿಕೆಯಾಗುವ ಅವಕಾಶ ದೊರೆತಾಗ, ವಿಶಾಲಾಕ್ಷಿ ಆ ಪ್ರಸ್ತಾಪವನ್ನು ಮೊದಲು ಮಾಡಿದುದು ತಾಯಿಯೊಡನೆ.<br /> {{gap}}ನಾಗಮ್ಮ ಅಂದಿದ್ದರು: <br /> {{gap}}'ನಿಮ್ಮ ತಂದೇನ ಕೇಳಿನೋಡು.'<br /> {{gap}}ವಿದ್ಯಾರ್ಥಿನಿಯಾಗಿದ್ದವರೆಗೂ ಒಂದು ಬಗೆ ಹೇಗೂ ಕಾಲ ಕಳೆಯು ತಿತ್ತು, ಕೆಲಸವಿಲ್ಲದೆ ಮನೆಯಲ್ಲೆ ಕುಳಿತಿರುವುದೆಂದರೆ, ಮಾನಸಿಕ ಯಾತನೆಗೆ : ಆಹ್ವಾನ ನೀಡಿದಂತೆ, ಅಧ್ಯಾಪಿಕೆಯಾಗುವುದರಿಂದ, ಸರಾಗವಾಗಿ ಉಸಿರಾಡಲು ಮತ್ತೂ ಒಂದಿಷ್ಟು ಅವಕಾಶ, ಆ ವೃತ್ತಿ ಮಗಳಿಗೆ ಇಷ್ಟವೆಂಬುದನ್ನು ಅವಳ ಸ್ವರದಲ್ಲಿ ಗುರುತಿಸಿದ್ದ ತಂದೆ, ತಾವೂ ಸಂತೋಷ ವ್ಯಕ್ತಪಡಿಸುತ್ತ, ನಗೆಯ - ಮುಖವಾಡ ಧರಿಸುತ್ತ, ಹೇಳಿದ್ದರು :<br /> {{gap}}ಆಗಲಿ, ಅದಕ್ಕೇನು ? <br /> {{gap}}ಏಕಾಂತದಲ್ಲಿ ಸಹಧರ್ಮಿಣಿಯೊಡನೆ ಅವರು ನುಡಿದಿದ್ದರು: <br />- {{gap}}'ಸ್ವಲ್ಪ ಸಮಯದವರೆಗೆ ಹೋಗ್ತಾ ಇರಲಿ, ಮನೆಯಲ್ಲಿ ಇರೋದಕ್ಕಿಂತ : ಅದು ವಾಸಿ. ಆಮೇಲೆ ಬಿಟ್ಟುಬಿಟ್ಟರಾಯ್ತು ...ಮುಂದೆ ನೋಡೋಣ.'<br /> {{gap}}ಅವರಿಗೆ ಪ್ರಿಯವಾಗಿದ್ದ ಪದಪ್ರಯೋಗ-ಮುಂದೆ ನೋಡೋಣ.' ಸಮಸ್ಯೆ ಸಿಕ್ಕುಗಟ್ಟಿ ಗಡುತರವಾದಾಗಲೆಲ್ಲ ಆ ಮಾತು.<br /> {{gap}}ಆ ಆಸೆಯಲ್ಲೇ ದೀರ್ಘಕಾಲ ಕಳೆಯಿತು.... <br /> {{gap}}ಆಮೇಲೆ ಒಮ್ಮೆಲೆ ಯಾವ ಆಸೆಗೂ ಆಸ್ಪದವಿಲ್ಲದ ಹಾಗೆ <br /> {{gap}}ಅಲ್ಲ, ಇಷ್ಟೊಂದು ಕ್ರೂರವಾಗಬಹುದೆ ವಿಧಿ ? ... <br /> {{gap}}ಏಕಮಾತ್ರ ಆಸರೆಯಾಗಿದ್ದ ಹೆಮ್ಮರ ಇನ್ನಿಲ್ಲ ತನ್ನ ಪಾಲಿಗೆ,<noinclude></noinclude> 84siabg81h5ugh8h0azsob1zpjevhn0 322400 322399 2026-05-25T07:45:21Z Hariprasad Shetty10 7490 322400 proofread-page text/x-wiki <noinclude><pagequality level="3" user="Shreesha Sharma" />{{rh|left=|center=ಪ್ರೇಮಕ್ಕೆ ಕಣ್ಣಿಲ್ಲ|right=೨೧}}</noinclude>{{gap}}ಮೃದುವಾದ ಧ್ವನಿಯಲ್ಲಿ ಆಡಿದ್ದ ಮಾತು, ತುಸು ಕಂಪಿಸಿತ್ತು. ನಾಗಮ್ಮ ನಿಗೆ ತಿಳಿದಿತ್ತು ಆ ಕಂಪನದ ಅರ್ಥ....<br /> {{gap}}ವಿಶಾಲಾಕ್ಷಿಯ ತಂದೆ ಮತ್ತೊಮ್ಮೆ ಯತ್ನಿಸಿ ನೋಡಿದರು- ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದ, ಬಿ.ಎ, ಆನರ್ಸ್ ಪದವೀಧರೆಯಾದ, ಬುದ್ಧಿಮತಿ “ ಯಾದ, ಸಕಲಗುಣಸಂಪನ್ನೆಯಾದ ತನ್ನ ಮಗಳಿಗೆ ಒಬ್ಬ ಗಂಡು ದೊರೆಯುವನೇ ಎಂದು. “ಮರಳಿಯತ್ನವ ಮಾಡು, ಮರಳಿಯತ್ನವ ಮಾಡು.' ಉಪದೇಶ ವೀಯುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ....<br /> {{gap}}ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಿಕೆಯಾಗುವ ಅವಕಾಶ ದೊರೆತಾಗ, ವಿಶಾಲಾಕ್ಷಿ ಆ ಪ್ರಸ್ತಾಪವನ್ನು ಮೊದಲು ಮಾಡಿದುದು ತಾಯಿಯೊಡನೆ.<br /> {{gap}}ನಾಗಮ್ಮ ಅಂದಿದ್ದರು: <br /> {{gap}}'ನಿಮ್ಮ ತಂದೇನ ಕೇಳಿನೋಡು.'<br /> {{gap}}ವಿದ್ಯಾರ್ಥಿನಿಯಾಗಿದ್ದವರೆಗೂ ಒಂದು ಬಗೆ ಹೇಗೂ ಕಾಲ ಕಳೆಯು ತಿತ್ತು, ಕೆಲಸವಿಲ್ಲದೆ ಮನೆಯಲ್ಲೆ ಕುಳಿತಿರುವುದೆಂದರೆ, ಮಾನಸಿಕ ಯಾತನೆಗೆ : ಆಹ್ವಾನ ನೀಡಿದಂತೆ, ಅಧ್ಯಾಪಿಕೆಯಾಗುವುದರಿಂದ, ಸರಾಗವಾಗಿ ಉಸಿರಾಡಲು ಮತ್ತೂ ಒಂದಿಷ್ಟು ಅವಕಾಶ, ಆ ವೃತ್ತಿ ಮಗಳಿಗೆ ಇಷ್ಟವೆಂಬುದನ್ನು ಅವಳ ಸ್ವರದಲ್ಲಿ ಗುರುತಿಸಿದ್ದ ತಂದೆ, ತಾವೂ ಸಂತೋಷ ವ್ಯಕ್ತಪಡಿಸುತ್ತ, ನಗೆಯ - ಮುಖವಾಡ ಧರಿಸುತ್ತ, ಹೇಳಿದ್ದರು :<br /> {{gap}}ಆಗಲಿ, ಅದಕ್ಕೇನು ? <br /> {{gap}}ಏಕಾಂತದಲ್ಲಿ ಸಹಧರ್ಮಿಣಿಯೊಡನೆ ಅವರು ನುಡಿದಿದ್ದರು: <br /> {{gap}}'ಸ್ವಲ್ಪ ಸಮಯದವರೆಗೆ ಹೋಗ್ತಾ ಇರಲಿ, ಮನೆಯಲ್ಲಿ ಇರೋದಕ್ಕಿಂತ : ಅದು ವಾಸಿ. ಆಮೇಲೆ ಬಿಟ್ಟುಬಿಟ್ಟರಾಯ್ತು ...ಮುಂದೆ ನೋಡೋಣ.'<br /> {{gap}}ಅವರಿಗೆ ಪ್ರಿಯವಾಗಿದ್ದ ಪದಪ್ರಯೋಗ-ಮುಂದೆ ನೋಡೋಣ.' ಸಮಸ್ಯೆ ಸಿಕ್ಕುಗಟ್ಟಿ ಗಡುತರವಾದಾಗಲೆಲ್ಲ ಆ ಮಾತು.<br /> {{gap}}ಆ ಆಸೆಯಲ್ಲೇ ದೀರ್ಘಕಾಲ ಕಳೆಯಿತು.... <br /> {{gap}}ಆಮೇಲೆ ಒಮ್ಮೆಲೆ ಯಾವ ಆಸೆಗೂ ಆಸ್ಪದವಿಲ್ಲದ ಹಾಗೆ <br /> {{gap}}ಅಲ್ಲ, ಇಷ್ಟೊಂದು ಕ್ರೂರವಾಗಬಹುದೆ ವಿಧಿ ? ... <br /> {{gap}}ಏಕಮಾತ್ರ ಆಸರೆಯಾಗಿದ್ದ ಹೆಮ್ಮರ ಇನ್ನಿಲ್ಲ ತನ್ನ ಪಾಲಿಗೆ,<noinclude></noinclude> d7pufresiqrey8g566cbcxot9jy2pay 322401 322400 2026-05-25T07:45:32Z Hariprasad Shetty10 7490 /* Validated */ 322401 proofread-page text/x-wiki <noinclude><pagequality level="4" user="Hariprasad Shetty10" />{{rh|left=|center=ಪ್ರೇಮಕ್ಕೆ ಕಣ್ಣಿಲ್ಲ|right=೨೧}}</noinclude>{{gap}}ಮೃದುವಾದ ಧ್ವನಿಯಲ್ಲಿ ಆಡಿದ್ದ ಮಾತು, ತುಸು ಕಂಪಿಸಿತ್ತು. ನಾಗಮ್ಮ ನಿಗೆ ತಿಳಿದಿತ್ತು ಆ ಕಂಪನದ ಅರ್ಥ....<br /> {{gap}}ವಿಶಾಲಾಕ್ಷಿಯ ತಂದೆ ಮತ್ತೊಮ್ಮೆ ಯತ್ನಿಸಿ ನೋಡಿದರು- ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದ, ಬಿ.ಎ, ಆನರ್ಸ್ ಪದವೀಧರೆಯಾದ, ಬುದ್ಧಿಮತಿ “ ಯಾದ, ಸಕಲಗುಣಸಂಪನ್ನೆಯಾದ ತನ್ನ ಮಗಳಿಗೆ ಒಬ್ಬ ಗಂಡು ದೊರೆಯುವನೇ ಎಂದು. “ಮರಳಿಯತ್ನವ ಮಾಡು, ಮರಳಿಯತ್ನವ ಮಾಡು.' ಉಪದೇಶ ವೀಯುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ....<br /> {{gap}}ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಿಕೆಯಾಗುವ ಅವಕಾಶ ದೊರೆತಾಗ, ವಿಶಾಲಾಕ್ಷಿ ಆ ಪ್ರಸ್ತಾಪವನ್ನು ಮೊದಲು ಮಾಡಿದುದು ತಾಯಿಯೊಡನೆ.<br /> {{gap}}ನಾಗಮ್ಮ ಅಂದಿದ್ದರು: <br /> {{gap}}'ನಿಮ್ಮ ತಂದೇನ ಕೇಳಿನೋಡು.'<br /> {{gap}}ವಿದ್ಯಾರ್ಥಿನಿಯಾಗಿದ್ದವರೆಗೂ ಒಂದು ಬಗೆ ಹೇಗೂ ಕಾಲ ಕಳೆಯು ತಿತ್ತು, ಕೆಲಸವಿಲ್ಲದೆ ಮನೆಯಲ್ಲೆ ಕುಳಿತಿರುವುದೆಂದರೆ, ಮಾನಸಿಕ ಯಾತನೆಗೆ : ಆಹ್ವಾನ ನೀಡಿದಂತೆ, ಅಧ್ಯಾಪಿಕೆಯಾಗುವುದರಿಂದ, ಸರಾಗವಾಗಿ ಉಸಿರಾಡಲು ಮತ್ತೂ ಒಂದಿಷ್ಟು ಅವಕಾಶ, ಆ ವೃತ್ತಿ ಮಗಳಿಗೆ ಇಷ್ಟವೆಂಬುದನ್ನು ಅವಳ ಸ್ವರದಲ್ಲಿ ಗುರುತಿಸಿದ್ದ ತಂದೆ, ತಾವೂ ಸಂತೋಷ ವ್ಯಕ್ತಪಡಿಸುತ್ತ, ನಗೆಯ - ಮುಖವಾಡ ಧರಿಸುತ್ತ, ಹೇಳಿದ್ದರು :<br /> {{gap}}ಆಗಲಿ, ಅದಕ್ಕೇನು ? <br /> {{gap}}ಏಕಾಂತದಲ್ಲಿ ಸಹಧರ್ಮಿಣಿಯೊಡನೆ ಅವರು ನುಡಿದಿದ್ದರು: <br /> {{gap}}'ಸ್ವಲ್ಪ ಸಮಯದವರೆಗೆ ಹೋಗ್ತಾ ಇರಲಿ, ಮನೆಯಲ್ಲಿ ಇರೋದಕ್ಕಿಂತ : ಅದು ವಾಸಿ. ಆಮೇಲೆ ಬಿಟ್ಟುಬಿಟ್ಟರಾಯ್ತು ...ಮುಂದೆ ನೋಡೋಣ.'<br /> {{gap}}ಅವರಿಗೆ ಪ್ರಿಯವಾಗಿದ್ದ ಪದಪ್ರಯೋಗ-ಮುಂದೆ ನೋಡೋಣ.' ಸಮಸ್ಯೆ ಸಿಕ್ಕುಗಟ್ಟಿ ಗಡುತರವಾದಾಗಲೆಲ್ಲ ಆ ಮಾತು.<br /> {{gap}}ಆ ಆಸೆಯಲ್ಲೇ ದೀರ್ಘಕಾಲ ಕಳೆಯಿತು.... <br /> {{gap}}ಆಮೇಲೆ ಒಮ್ಮೆಲೆ ಯಾವ ಆಸೆಗೂ ಆಸ್ಪದವಿಲ್ಲದ ಹಾಗೆ <br /> {{gap}}ಅಲ್ಲ, ಇಷ್ಟೊಂದು ಕ್ರೂರವಾಗಬಹುದೆ ವಿಧಿ ? ... <br /> {{gap}}ಏಕಮಾತ್ರ ಆಸರೆಯಾಗಿದ್ದ ಹೆಮ್ಮರ ಇನ್ನಿಲ್ಲ ತನ್ನ ಪಾಲಿಗೆ,<noinclude></noinclude> kj6g408ymsogdrlsgzhj25mcvidpeqq ಪುಟ:ಸಂತಾಪಕ.djvu/೩ 104 40230 322309 217483 2026-05-24T18:09:02Z Vikashegde 1258 /* Proofread */ 322309 proofread-page text/x-wiki <noinclude><pagequality level="3" user="Vikashegde" /></noinclude>{{center|'''OSMANIA UNIVERSITY LIBRARY'''}} {{rh|center=|left=Call No. K83|right=Accession No. K561}} {{Left|{{gap}}{{gap}}S63Sa}} {{Left|Author ಶ್ರೀಕಂಠಶಾಸ್ತ್ರಿ, ನಂಜನಗೂಡು}} {{Left|Title ಸಂತಾಪಕ. 1918}} {{gap}}This book should be returned on or before the date last marked below.<noinclude></noinclude> 0ix4c4jn14khlwb0wb5wwlvc6xpk2kx ಪುಟ:ಸಂತಾಪಕ.djvu/೫ 104 40232 322202 208229 2026-05-24T14:40:55Z Pragathi. BH 7585 /* Validated */ 322202 proofread-page text/x-wiki <noinclude><pagequality level="4" user="Pragathi. BH" /></noinclude>{{Css image crop |Image = ಸಂತಾಪಕ.djvu |Page = 5 |bSize = 402 |cWidth = 372 |cHeight = 530 |oTop = 33 |oLeft = 11 |Location = center |Description = }} <noinclude></noinclude> 3em7y8ni3risqxr47oxygofzmhnh0rt ಪುಟ:ಸಂತಾಪಕ.djvu/೬ 104 40233 322201 217486 2026-05-24T14:40:28Z Pragathi. BH 7585 /* Validated */ 322201 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=<big>'''ವಿಜ್ಞಾಪನೆ.'''</big>|right=}} {{center|{{bar}}}} {{gap}}ಇದೊಂದು ಕಲ್ಪಿತಕಾದಂಬರಿ. ಸ್ತ್ರೀಸ್ವಭಾವವೆಂತಹುದೆಂಬ</br>ದನ್ನೂ, ಸುರಾಪಾನವು ನಿಂದ್ಯವೆಂಬುದನ್ನೂ, ವಂಚಕರಿಗೆ ಪರ್ಯ</br>ಸಾನದಲ್ಲಿ ವಿಪತ್ತುಗಳೇ ಉಂಟಾಗುವುವೆಂಬುದನ್ನೂ ಬೋಧಿಸುವುದು</br>ಈ ಬಗೆಯ ಕತೆಗಳು ಕನ್ನಡದಲ್ಲಿ ವಿರಳವಾಗಿರುವುದರಿಂದ ಭಾಷಾಭಿಮಾನಿ</br>ಗಳು ಪರಿಗ್ರಹಿಸಬೇಕೆಂದು ಪ್ರಾರ್ಥನೆ.</br> {{Right|ಗ್ರಂಥಕರ್ತ.}} {{center|{{bar}}}}<noinclude></noinclude> jkauu730u6xsq5h10yi5ivj0j104w3i ಪುಟ:ಸಂತಾಪಕ.djvu/೭ 104 40234 322199 217511 2026-05-24T14:37:12Z Pragathi. BH 7585 /* Validated */ 322199 proofread-page text/x-wiki <noinclude><pagequality level="4" user="Pragathi. BH" /></noinclude> {{center|‖ಶ್ರೀ‖}} {{center|<big>'''ಸಂತಾಪಕ.'''</big>}} {{Css image crop |Image = ಸಂತಾಪಕ.djvu |Page = 7 |bSize = 402 |cWidth = 81 |cHeight = 15 |oTop = 158 |oLeft = 165 |Location = center |Description = }} {{center|<big>ಮೊದಲನೆಯ ಪರಿಚ್ಛೇದ.</big>}} {{gap}}<big>ಇಂದು ಚೈತ್ರಶುದ್ಧ ಪೂರ್ಣಿಮಾ ಸಂಧ್ಯಾಕಾಲ, ಸುಮಾರು ಆರುಗಂಟೆಯ ಸಮಯ. ಸೂರ್ಯದೇವನು ಮಾರ್ಗಾಯಾಸದಿಂದ ಶ್ರಾಂತವಾಗಿದ್ದ ತನ್ನ ಕುದುರೆಗಳನ್ನು ಪಶ್ಚಿಮಸಮುದ್ರದ ಬಳಿಗೆ ಕರೆದುಕೊಂಡುಹೋಗಿ ದಣುವಾರಿಸುತ್ತಿದ್ದನು. ಆಹಾರಾರ್ಥವಾಗಿ ಸಂಚರಿಸುತ್ತಿದ್ದ ಶುಕ ಪಿಕಾದಿ ಪಕ್ಷಿಗಳು ತಂತಮ್ಮ ವಾಸಸ್ಥಾನಗಳಿಗೆ ಹಿಂತಿರುಗಿ ಹೋಗುತ್ತಿದ್ದವು. ಗಗನಾಂಗಣವು ಅನಾಯಕವಾದುದನ್ನು ಕಂಡು ಒಂದೆರಡುನಕ್ಷತ್ರಗಳು ತಮ್ಮ ಅಲ್ಪ ತೇಜಸ್ಸನ್ನು ಪ್ರದರ್ಶನಮಾಡುವುದಕ್ಕೆ ಇದೇ ತಕ್ಕಸಮಯವೆಂದು ಅಲ್ಲಲ್ಲಿ ತಲೆದೋರುತ್ತಿದ್ದುವು. ಶೀತಲವಾದ ಮಂದಮಾರುತವು ಮಾಲತೀಮಲ್ಲಿಕಾದಿ ನವವಿಕಸಿತ ಪುಷ್ಪಗಳ ಸೌರಭವನ್ನು ಸಂಗ್ರಹಿಸಿಕೊಂಡು ಮತ್ತಾವ ಪುಷ್ಪವಿಶೇಷಗಳಿವೆಯೋ ಅವನ್ನೂ ನೋಡಬೇಕೆ೦ಬ ಅಭಿಲಾಷೆಯಿಂದ ಬಹು ಗಾಂಭೀರ್ಯವನ್ನು ತಾಳಿ ಅಲ್ಲಲ್ಲಿ ಸುಳಿಯುತ್ತಿದ್ದಿತು. ಯಥಾಕಾಲದಲ್ಲಿ ಕುಮುದಬಾಂಧವನಾದ ಚಂದ್ರನೂ ಮೇಘಮಂಡಲವನ್ನಡರಿದನು. ಈ ಸಮಯದಲ್ಲಿ ಚಂದ್ರಿಕೆಯ ಶೋಭಾರಾಶಿಯನ್ನು ಕಂಡು ಸಂತೋಷಪಡದವರಾರು ! ಯಾವ ರಸಿಕನು ತಾನೆಇಂತಹ ಸಮಯದಲ್ಲಿ ಸುಖಾನುಭವವನ್ನು ಮಾಡದಿರುವನು ! ಇಹಜೀವನದಲ್ಲಿ ಯಾವನಿಗೆ ತಾನೇ ಈ ಸುಖವನ್ನು ಹೊಂದುವುದಕ್ಕೆ ಆಸೆಯಿಲ್ಲ ! ಆದರೇನು, ವಿರಹಿಗಳಿಗೆ ಇದು ವಿಪತ್ಕಾಲವೇ ಸರಿ.</br>{{gap}}ಚಂದ್ರಿಕೆಯು ರಸಾತಲವನ್ನೆಲ್ಲ ವ್ಯಾಪಿಸಿ ಪ್ರತಿ ವೃಕ್ಷದ ಮೇಲೆಯೂಕುಳಿತಿರುವ ಪೇಚಕಾದಿ ಪಕ್ಷಿಗಳಿಗೆ ಎಳೆಬಿಸಿಲೆ೦ಬ ಭ್ರಾಂತಿಯನ್ನುಂಟು</br><noinclude></noinclude> 2yja97sk28bbg61xt45av3b4tlof3dx ಪುಟ:ಸಂತಾಪಕ.djvu/೮ 104 40235 322200 217792 2026-05-24T14:40:05Z Pragathi. BH 7585 /* Validated */ 322200 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಕರ್ಣಾಟಕ ಚಂದ್ರಿಕೆ|left=೨|right=}} ಮಾಡುತ್ತಿದ್ದಿತು. ಮನ್ಮಥನಿಗೆ ಪರಮಾಪ್ತನಾದ ಚಂದ್ರನು ಇಂತಹಶೋಭಾರಾಶಿಯಿಂದ ಲೋಕವನ್ನೆಲ್ಲ ಮುಗ್ಧವನ್ನಾಗಿ ಮಾಡುತ್ತಿರಲು ಪ್ರಸನ್ನನಗರದ ಮಾರ್ಗದಲ್ಲಿ ಒಬ್ಬ ಸಧಿಕನು ಪ್ರಯಾಣಮಾಡುತ್ತಿದ್ದನು.ಇವನಿಗೆ ಸುಮಾರು ಇಪ್ಪತೈದುವರ್ಷ ವಯಸ್ಸಾಗಿರಬಹುದು. ದೇಹವು ಶ್ಯಾಮಲವರ್ಣ. ನಿಭೂತಿಯಿಂದ ಪ್ರಕಾಶಮಾನವಾದ ಹಣೆಯಲ್ಲಿ ರಕ್ತಚ೦ದನದ ಬೊಟ್ಟು ಮೆರೆಯುತ್ತಿದ್ದಿತು. ಕಂಠದಲ್ಲಿ ರುದ್ರಾಕ್ಷಮಾಲೆಯು ವಿರಾಜಿಸುತ್ತಲಿದ್ದಿತು. ಕೈಯಲ್ಲಿ ಒಂದು ದೊಡ್ಡದಾದ ದಂಡವು ಒಪ್ಪುತ್ತಿದ್ದಿತು. ಯುವಕನು ಜರತಾರಿಯ ಪಂಚೆಯನ್ನು ಹೊಡೆದು ಒ೦ದು ತೆಳುವಾದ ಪಂಚೆಯನ್ನುಟ್ಟಿದ್ದನು. ಇವನ ಗಮನವನ್ನು ಕಂಡರೆ ಪ್ರಸನ್ನ ನಗರಾಭಿಮುಖವಾಗಿ ಹೋಗುತ್ತಿದ್ದನೆಂದು ತೋರುವುದು. ವಥಿಕನು ಪ್ರಸ್ತಚಿತ್ತನಾಗಿದ್ದನು. ಇದಕ್ಕೆ ಕಾರಣವೇನು ? ಸಂಧ್ಯಾಕಾಲವಾದು ದರಿಂದ ನಿರ್ಮಾನುಷವಾದ ಅರಣ್ಯಮಾರ್ಗದಲ್ಲಿ ಒಂಟಿಯಾಗಿ ಪ್ರಯಾಣ ಮಾಡುವುದು ಹೇಗೆಂದು ಭೀತನಾಗಿರಬಹುದೇ ? ಹಾಗಿದ್ದರೆ ಮೆಲ್ಲಮೆಲ್ಲನೆ ಹೋಗುತ್ತಿದ್ದನೇಕೆ ? ಆದರೆ ಇವನ ವ್ಯಾಕುಲಕ್ಕೆ ಕಾರಣವೇನು ? ಮಾರ್ಗಾಯಾಸದಿಂದ ಭಿನ್ನನಾಗಿದ್ದನೇ ? ಅದೂ ಅಲ್ಲ.ಇವನ ಮನೋವ್ಯಾಕುಲಕ್ಕೆ ಕಾರಣವನ್ನು ಸರಿಯಾಗಿ ಊಹಿಸಿ ಹೇಳಲು ಸಾಧ್ಯವಿಲ್ಲ. ಪಥಿಕನು ಸ್ವಲ್ಪದೂರ ಹಾಗೆಯೇ ಹೋಗಿ ನಿಂತುಕೊಂಡನು.ಮತ್ತೆ ಸ್ವಲ್ಪದೂರ ನಡೆದನು. ಮತ್ತೆ ನಿಂತನು. ಹೀಗೆ ಹತ್ತು ಹದಿನೈದು ಬಾರು ಮಾರ್ಗವನ್ನು ಕಳೆದು ಮುಂದೆ ಹೋಗುತ್ತಿರಲು ಒಂದು ಅಸ್ಫುಟವಾದ ಚೀತ್ಕಾರಧ್ವನಿಯು ವೃಕ್ಷಪಬ್ತಿಯನ್ನು ಭೇದಿಸಿಕೊಂಡುಒಂದು ಪಥಿಕನ ಕಿವಿಯಲ್ಲಿ ಬಿದ್ದಿತು. ಪಥಿಕನು ತಟ್ಟನೆ ನಿಂತುಬಿಟ್ಟನು. ಕ್ಷಣ ಕಾಲ ಯಾವ ಶಬ್ದವೂ ಕೇಳಿಸಲಿಲ್ಲ. ಪಥಿಕನು ಮತ್ತೆ ಮುಂದೆ ಹೊರಟನು. ಮಾರ್ಗದ ಬಲಗಡೆಯಲ್ಲಿದ್ದ ವೃಕ್ಷಪಙ್ತಿಯ ಹಿಂದೆ ಸಣ್ಣಸಣ್ಣ ಕುರುಚುಗಿಡಗಳು ಗುಂಪಾಗಿ ಬೆಳೆದಿದ್ದುವು. ಎಡಗಡೆಯಲ್ಲಿ ಒಂದು ಸಣ್ಣ ಗುಡ್ಡವು ಕಾಣಿಸುತ್ತಿದ್ದಿತು. ಪಥಿಕನು ಅದರ ಬಳಿಗೆ ಹೋಗುವುದರೊಳಗಾಗಿ, ಮತ್ತೆ ಮೊದಲು ಕೇಳಿಸಿದ ಚೀತ್ಕಾರವೇ ಕೇಳಿಸಿತು. ಪಥಿಕನು ಬೇಗಬೇಗ ಎಡಗಡೆಗೆ ತಿರುಗಿದನು. ಇವನು ಹೋಗುವ ವೇಗದಲ್ಲಿ</br><noinclude></noinclude> 4in6yljxp7qfh56u2qvl4g15ncd4ikj ಪುಟ:ಸಂತಾಪಕ.djvu/೧೧ 104 40238 322305 202617 2026-05-24T18:06:18Z Vikashegde 1258 /* Proofread */ 322305 proofread-page text/x-wiki <noinclude><pagequality level="3" user="Vikashegde" />{{rh|center=ಸ೦ತಾಪಕ.|left=|right=೫}}</noinclude>ಮಾತ್ರ ಹಾಗಿರಲಿಲ್ಲ. ಉಕ್ಕಿನಷ್ಟು ಕಠಿನವಾಗಿದ್ದಿತೆಂದು ಹೇಳಿದರೆ ಅತಿಶಯೋಕ್ತಿಯೆನಿಸಿಕೊಳ್ಳದು. ಐತಿಹಾಸಿಕವ್ಯಕ್ತಿಗಳಾದ ತೈಮೂರ್‌ ಲ೦ಗನಾದಿರಷಹ ಮೊದಲಾದವರಂತೆ ಇವನೂ ಸುಪ್ರಸಿದ್ಧನಾದ ಘಾತುಕನೇ ಆಗಿದ್ದನು. ಆಗಣಕಾಲದಲ್ಲಿ ಇವನ ಹೆಸರನ್ನು ಕೇಳದಿರುವವರೇ ಅತಿ ವಿರಳ. ಪರರು ತನಗೆ ಸ್ವಲ್ಪ ಘಾಸಿಯನ್ನುಂಟುಮಾಡಿದರೂ ಅವರನ್ನಿವನು ಸಂಹರಿಸದೆ ಬಿಡುತ್ತಿರಲಿಲ್ಲ. ದ್ರವ್ಯಾರ್ಜನೆಯೇ ಇವನ ಮುಖ್ಯೋದ್ದೇಶವಾಗಿದ್ದಿತು. ಇವನು ಘೋರಕೃತ್ಯಗಳಲ್ಲಿಯೇ ಆಸಕ್ತನಾಗಿದ್ದರೂ ಒಂದೊಂದುವೇಳೆ ಪ್ರಾಚೀನ ಕವಿವರ್ಣಿತರಾದ ಮಹಾ ವೀರರ ಚರಿತ್ರೆಗಳನ್ನೋದಿ ತನ್ನ ಧೈರ್ಯ ಸಾಹಸಾದಿಗಳನ್ನು ಅಭಿವೃದ್ಧಿಪಡಿಸಿ ಕೊಳ್ಳುತ್ತಿದ್ದನು. ಪರೋಪಕಾರ, ವಿಧೇಯತೆ, ಯಥಾರ್ಥತ್ವ ಮುಂತಾದ ಸದ್ಗುಣಗಳು ಇವನ ಬಳಿಯಲ್ಲಿ ಎವೆಯಿಕ್ಕುವಷ್ಟು ಹೊತ್ತಾದರೂ ಇರುತ್ತಿರಲಿಲ್ಲ. ಇವನಿಗೆ ಸಹಾಯಕನಾಗಿದ್ದ ಮತ್ತೊಬ್ಬನ ಹೆಸರು ನಂದಕುಮಾರಮಿತ್ರ. ನಂದಕುಮಾರಮಿತ್ರನು ಕುಬ್ಬನಾಗಿಯೂ ಭೀರುಸ್ವಭಾವವುಳ್ಳವನಾಗಿಯೂ ಇದ್ದನು. ನಿದ್ರಾಹಾರಗಳಲ್ಲಿ ಸ್ವಲ್ಪ ಲೋಪವುಂಟಾದರೂ ಇವನು ಸೈರಿಸಲಾರದವನಾಗಿದ್ದನು. ಇವನು ಒಬ್ಬ ಧನಿಕನ ಮಗ. ಸಂತಾಪಕನ ಮಾಯೋಪಾಯದಿಂದ ಅವನಿಗೆ ಅಧೀನನಾಗಿ ಸರ್ವಸ್ವವನ್ನೂ ಒಪ್ಪಿಸಿ ಅವನ ಆಜ್ಞಾನುವರ್ತಿಯಾಗಿದ್ದನು. ಸಹವಾಸಬಲದಿಂದ ಅವನ ದುರ್ಗುಣಗಳು ಇವನಲ್ಲಿಯೂ ಕಿಂಚಿತ್ ಪದಾರ್ಪಣಮಾಡಿದುವು. ಸಂತಾಪಕನೂ ನಂದಕುಮಾರಮಿತ್ರನೂ ಇಬ್ಬರೂ ಸಮಾನವಯಸ್ಕರಾಗಿದ್ದರು. ನಾವೆಷ್ಟು ಹುಡುಕಿದರೂ ಇವರ ವಾಸಸ್ಥಾನವೆಲ್ಲಿರುವುದೆಂಬ ವಿಷಯವು ಇದುವರೆಗೂ ವಿಶದವಾಗಿಲ್ಲ. ಆದರೆ ಇವರು ಪ್ರಯಾಣಿಕರನ್ನು ಹಿಡಿದು ಹಿಂಸಿಸಿ ಅವರ ವಸ್ತ್ರಾಭರಣಗಳನ್ನಪಹರಿಸುತ್ತಿದ್ದ ಸ್ಥಳವನ್ನು ಮಾತ್ರ ನಮ್ಮ ಪಾಠಕಮಹಾಶಯರಿಗೆ ಈಗ ತಿಳಿಸುವೆವು. {{gap}}ಪ್ರಸನ್ನನಗರದಿಂದ ದಕ್ಷಿಣಕ್ಕೆ ಒಂದೆರಡು ಹರದಾರಿಯ ದೂರ ಹೋದರೆ ಒಂದು ಸಣ್ಣ ಗುಡ್ಡವು ಕಾಣಿಸುವುದು. ಆ ಗುಡ್ಡದ ಎರಡು ಪಾರ್ಶ್ವಗಳಲ್ಲಿಯೂ ಎರಡು ಮಾರ್ಗಗಳು ಕಣ್ಗೊಳಿಸುವುವು. ಬಲಗಡೆಯ ಮಾರ್ಗದಲ್ಲಿ ಹೋದರೆ ಚಂದ್ರನಗರವನ್ನು ನೋಡಬಹುದು. ಎಡಗಡೆಯ{{nop}}<noinclude></noinclude> t67ef7okh0i3m4xa63tu7afsdjxxk52 ಪುಟ:ಸಂತಾಪಕ.djvu/೩೦ 104 40257 322203 218843 2026-05-24T14:43:51Z Pragathi. BH 7585 /* Validated */ 322203 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಕರ್ಣಾಟಕ ಚಂದ್ರಿಕೆ.|left=೨೪|right=}} ವೆಯೇ ಕಾರಣ. ಕುಮಾರಿಗೆ ತಾನು ಪ್ರೀತಿಸಿ ವಾಗ್ದಾನಮಾಡಿದ ವರನ ವಿಷಯದಲ್ಲಿ ಸಂಶಯವುಂಟಾಗಿರುವುದು. " ಅವನು ಕುಮುದೀನಿಚಂದ್ರನೋ ಸಂತಾಪಕನೋ ತಿಳಿಯದು. ಅವನು ಕುಮುದಿನೀಚಂದ್ರನೇ ಆಗಿದ್ದ ಪಕ್ಷದಲ್ಲಿ ಸಂತಾಪನೆಂದೇಕೆ ಹೇಳುತ್ತಿದ್ದನು ? ಅವನು ಸಂತಾಪಕನೇ ಸರಿ.ವಿನಯಚಂದ್ರದತ್ತನು ಬರೆದ ಪತ್ರಿಕೆಯು ಅವನಿಗೆ ಹೇಗೆ ಸಿಕ್ಕಿತು ? ಅದೂ ಕೃತ್ರಿಮಸಂಧಾನವೇ ಆಗಿರಬಹುದೇ ? ಎಂದು ಮೊದಲಾಗಿ ಅವಳ ಮನಸ್ಸಿನಲ್ಲಿ ಅನೇಕಾನೇಕ ಪ್ರಶ್ನೆಗಳು ತಲೆದೋರುತ್ತಿರುವುವು. ಕುಮಾರಿಯು ಈ ವಿಷಯವನ್ನೆಲ್ಲ ದತ್ತನಿಗೆ ತಿಳಿಸಬೇಕೆಂದು ತಟ್ಟನೆದ್ದಳು." ಕಮಲೆ ! ನೀನು ಆ ಯುವಕನಿಗೆ ಮಾಡಿರುವ ವಾಗ್ದಾನವನ್ನು ಸ್ಮರಿಸಿಕೊ ಅವನ ರಹಸ್ಯವನ್ನು ಪ್ರಕಾಶಪಡಿಸುವುದು ನಿನಗೆ ಯುಕ್ತವೆ? "ಎಂದು ಯಾರೋ ಪ್ರಶ್ನೆಮಾಡಿದಂತೆ ಅವಳ ಕಿವಿಗೆ ಕೇಳಿಸಿತು. ಕುಮಾರಿಯು ಮತ್ತೆ ಕುಳಿತುಬಿಟ್ಟಳು. ಏನೇನೋ ಆಲೋಚಿಸಿದಳು. ಮತ್ತೆ ಎದ್ದುನಿಂತಳು, ಮೊದಲಿನಂತೆ ಯಾರೋ ಅವಳ ಕಿವಿಯಲ್ಲಿ " ಅ೦ತಹ ಸೌಂದರ್ಯಶಾಲಿಯು ಸಂತಾಪಕನೆಂದರೇನು ? ವಿಜಯವರ್ಮನು ಅಸೂಯೆಯಿ೦ದ ಹೀಗೆ ಹೇಳಿದನು. " ಎಂದು ಸಂತವಿಸಿದಂತೆ ಬೋಧೆಯಾಯಿತು.ಕುಮಾರಿಯು ಉಪವನದಲ್ಲಿ ನಡೆದ ವಿಷಯಗಳನ್ನೆಲ್ಲ ಮತ್ತೆ ಸ್ಮರಿಸಿಕೊ೦ಡಳು. ಕುಮುದಿನೀಚ೦ದ್ರನು ತನ್ನ ಮನಸ್ಸನ್ನು ಪರೀಕ್ಷಿಸಬೇಕೆಂಬ ಉದ್ದೇಶದಿಂದಲೇ ಅಸತ್ಯವನ್ನಾಡಿರುವನೆಂದು ನಿಶ್ಚಯ ಮಾಡಿಕೊಂಡಳು.ಆಗ ಕಿರುಮನೆಯ ಬಲಗಡೆಯಿದ್ದ ಗವಾಕ್ಷದಿಂದ ಯಾರೋ ಅತ್ತಕಡೆ ಓಡಾಡುತ್ತಿದ್ದಂತೆ ಮೈನೆಳಲು ಕಾಣಿಸಿತು. ಕುಮಾರಿಯು ಎದ್ದು ಹೋಗಿ ನೋಡಿದಳು. ಅಲ್ಲಿ ಯಾರೂ ಇರಲಿಲ್ಲ. ಕುಮಾರಿಯು ಮತ್ತೆ ಬಂದು ಕುಳಿತುಕೊಂಡಳು. ಆಗ ಚಂಚಲೆಯು ಒಳಕ್ಕೆ ಬಂದು ಕುಮಾರಿಯನ್ನು ಊಟಕ್ಕೆ ಕರೆದಳು. ಕುಮಾರಿಯು ಗವಾಕ್ಷದ ಬಾಗಿಲನ್ನು ಮುಚ್ಚಿ ತನ್ನ ಪೆಟ್ಟಿಗೆಗಳ ಬಿಯಗದ ಕೈಗಳನ್ನು ಕಿರುಮನೆಯಲ್ಲಿದ್ದ ಕಾಲುಮಣೆಯಮೇ ಲಿಟ್ಟು ಹೊರಟುಹೋದಳು. ಕುಮಾರಿಯು ಹೊರಟು ಹೋದ ಉತ್ತರಕ್ಷಣದಲ್ಲಿಯೇ ಗವಾಕ್ಷದ ಬಾಗಿಲು ಮತ್ತೆ ತೆರೆಯಲ್ಪಟ್ಟಿತು. ವಸ್ತ್ರಾವಕುಂಠಿತ ಶೀರ್ಷನಾದ ಒಬ್ಬ ಪುರುಷನು ಗವಾಕ್ಷವನ್ನು ಹತ್ತಿ ಒಳಕ್ಕೆ ಬಂದನು.ಕಾಲುಮಣೆಯಮೇಲಿದ್ದ ಬಿಯಗದ ಕೈಗಳು ಇವನ ದೃಷ್ಟಿಗೆ ಗೋಚರಿಸಿ</br><noinclude></noinclude> njz17jany8g183xfm0ct8v7hcq3y394 ಪುಟ:ಕಥಾವಳಿ.djvu/೪೨ 104 45102 322213 321473 2026-05-24T14:50:06Z Pragathi. BH 7585 /* Validated */ 322213 proofread-page text/x-wiki <noinclude><pagequality level="4" user="Pragathi. BH" /></noinclude>{{center|೨೭}} ತಡೆಯಲಾರದೆ ಓಡಲಾರಂಭಿಸಿದುವ, ಎಲ್ಲೆಲ್ಲೂ ಕೋಲಾಹಲ, ಜನರ ಗೋಳು, ಶೂರರ ಆರ್ಭಟ, ಅಭಿಮನ್ಯುವಿನ ಹುಂಕಾರ ಧ್ವನಿ ಇವೇ ತುಂಬಿದ್ದುವು.<br /> {{gap}}ಆಗ ದುರ್ಯೋಧನನು ಕಂಗೆಟ್ಟು ದ್ರೋಣಾಚಾರ್ಯರಲ್ಲಿಗೆ ಬಂದು,- ಒಂದು ಮಗುವಿಗೆ ನಾವು ಇಷ್ಟು ಹೆದರಬೇಕೆ ? ' ನಾನು ಕರ್ಣನನ್ನು ಸುಡುತ್ತಿದ್ದೆನು ನಮ್ಮ ತಂದೆಗೋಸ್ಕರ ಬಿಟ್ಟಿರುವೆನು. ದುಶ್ಯಾಸನನ ತಲೆಯನ್ನು ಚಂಡಾಡುತಿದ್ದೆನು. ನಮ್ಮ ದೊಡ್ಡಪ್ಪ ಭೀಮನಿಗೋಸ್ಕರ ಅವನನ್ನು ಉಳಿ ಸಿರುವೆನು' ಎಂದು ಅಭಿಮನ್ಯು ಹೇಳಿಕೊಳ್ಳುತ್ತಾ, ಸಿಂಹದ ಮರಿಯಂತೆ ಮೆರೆಯುತ್ತಿರುವನಲ್ಲ! ಏನು ಗತಿ ? ಪದಾತಿಗಳು ಓಡುವ ಯೋಜನೆಯನ್ನು ಮಾಡುತ್ತಿರುವರಲ್ಲ ! ಮುಂದೇನುಮಾಡುವುದು ?- ಎನ್ನಲು ಆಗ ದ್ರೋಣರು ಆಯ್ಯಾ ? ಅಭಿಮನ್ಯುವಿನ ಕೈಯಲ್ಲಿ ಆ ಬಿಲ್ಲು ಇರುವವರೆಗೂ ಅವನನ್ನು ಸೋಲಿಸಲು ನಮ್ಮಲ್ಲಿ ಯಾರಿಂದಲೂ ಸಾಧ್ಯವಲ್ಲ- ಎಂದರು. ಆಗ ಅವರಲ್ಲೊಬ್ಬನು, - ನೀವು ಅಭಿಮನ್ಯುವಿಗೆ ಇದಿರಾಗಿ ಯುದ್ಧ ಮಾಡಿರಿ, ನಾನು ಮೆಲ್ಲನೆ ಹಿಂದಿನಿಂದ ಅವನ ಬಿಲ್ಲನ್ನು ಕತ್ತರಿಸುವೆನು ಎಂದನು. ಆ ಹೇಡಿಯ ಸಲಹೆಗೆ ಆ ಮಹಾಶೂರರೆಲ್ಲರೂ ಒಪ್ಪಿದರು, ಅದೇ ಮೇರೆ ಮತ್ತೆ ಹೊಸ ರಥಗಳನ್ನೇರಿ, ಹೊಸ ಕವಚಗಳನ್ನು ತೊಟ್ಟು ಹೊಸ ಬಾಣಗಳನ್ನು ಹಿಡಿದು ಹೊಸ ಶೂರರಂತೆ ಎಲ್ಲರೂ ಒಟ್ಟಾಗಿ ಬಂದು ಒಂದೇ ಸಮನಾಗಿ ಬೆಳಗ್ಗಿನಿಂದಲೂ , ಅಸಹಯನಾಗಿ ಯುದ್ಧ ಮಾಡುತ್ತಿರುವ ಆ ಮಗುವಿನ ಮೇಲೆ ಬಿದ್ದರು, ಅಭಿಮನ್ಯುವು ಸ್ವಲ್ಪವೂ ಹಿಂದೆಗೆಯದೆ, ಬಾಣದ ಮಳೆಯನ್ನೇ ಅವರಮೇಲೆ ಕರೆದು, ಮತ್ತೆ ಬಾಣವನ್ನು ಹೂಡುತ್ತಿದ್ದನು. ಆಗ ಹಿಂದು ಗಡೆಯಿಂದ ಬಂದು ಶೂರನೊಬ್ಬನು ಬಿಲ್ಲಿನ ಹುರಿಯನ್ನು ಕತ್ತರಿಸಿದನು. ಅಭಿಮನ್ಯುವು ಹಿಂದಿರುಗಿ ನೋಡಿ," ಆ8 ! ಎಂತಹ ಶೂರ ” ಎಂದು ಬಿಲ್ಲನ್ನು ಬಿಸಾಟು, ಕತ್ತಿಯನ್ನು ಹಿರಿದು, ಶತ್ರುಗಳ ಮೇಲೆ ಬಿದ್ದನು. ಆಗ ಶತ್ರು ಗಳು ಹೊಡೆಯುತ್ತಿದ್ದ ಬಾಣಗಳನ್ನೆಲ್ಲಾ ಅಭಿಮನ್ಯು ಕತ್ತಿಯನ್ನು ತಿರುಗಿಸಿ ತಪ್ಪಿಸುತ್ತಿರಲು, ಒಂದು ಬಾಣವು ಬಂದು ಕೈಯನ್ನು ಕತ್ತರಿಸಿತು. ಆಗ ರಥದ ಚಕ್ರವನ್ನು ಒದೆದು ತೆಗೆದು, ಮೊಂಡುಕೈಯಿಂದಲೆ ತಿರುಗಿಸಿ ತಿರುಗಿಸಿ ಅಪ್ಪಳಿಸುತ್ತಿರಲು, ಇನ್ನೊಂದು ಕೈಯನ್ನೂ ಕತ್ತರಿಸಿದರು. ಅಪ್ಪಾದರೂ<noinclude></noinclude> gb8bz6u8y7dvyj29ozbaiuifds557vk ಪುಟ:ಕಥಾವಳಿ.djvu/೯೬ 104 45156 322214 279443 2026-05-24T14:50:22Z Pragathi. BH 7585 /* Without text */ 322214 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೦ 104 45849 322470 228207 2026-05-25T09:58:16Z Pragathi. BH 7585 /* Validated */ 322470 proofread-page text/x-wiki <noinclude><pagequality level="4" user="Pragathi. BH" /></noinclude>{{center|'''INTRODUCTION.'''}} {{gap}}In the Introduction to the Fust Volume of the '''KARNATAKA KAVICHARITE 01 LIVES OF KANNADA POETS''' the antiquity of the Karnataka country and language and the support given by kings and nobles to the advancement of the Kannada language and literature were briefly touched upon A few more details will nov be given about these and other matters conuected with them befoie saying a few words about the 11rsent volume, in the liope that they may increase the respect of tlie Kannadigas for, and aiotuse their interest in, their country and language, and that as a consequence earnest efforts may be made by them for the advance ment of both {{center|'''Antiquity of the Kannada Country.'''}}<br> {{gap}}The Kannada country was once under the rule of such ancient dynasties of kings as the Maui ya, the Andhra, the Kadamba and the Ganga <br>{{gap}}It is stated in Jaina Works that when a great twelve years' famine occurred during the reign of the Maui ya king Chandragupta, the Jaina community under the leadership of Bhadrabahu, the last Siulakevali, migrated to the Punnata kingdom 11n the south of Mysore, that king Chandragupta abdicated and accompanied Bhadrabahu as his disciple ; that on reaching Sravana Belgola Bhadralbahu, seeing the approach of his death, ordered the community to proceed on their journey, stopped at Sravana Belgola and died there (in B C. 297) being attended on by his disciple Chandragupta during his last moments, and that after the death of his preceptor Chandragupta lived there for some time and ultimately died by the Jaina rite of sallekhana or starvation. With regard to this account Dr. Vincent Smith writes--" My present impression is that the tradition has a solid foun.<noinclude></noinclude> or5tsi4i3misvkfpk4mxgbc0mx10ll1 ಪುಟ:ಜೀರ್ಣವಿಜಯನಗರಾದರ್ಶನಂ .djvu/೧೧ 104 56123 322314 235003 2026-05-24T18:16:33Z Pragathi. BH 7585 /* Validated */ 322314 proofread-page text/x-wiki <noinclude><pagequality level="4" user="Pragathi. BH" /></noinclude> = ಜೀರ್ಣವಿಜಯನಗರಾದರ್ಶಂ = == ಪೂರ್ವಭಾಗ. == {{gap}}ಅತಿತ್ವರ್ಯದಲ್ಲಿಯೇ ಅಭಿವೃದ್ಧಿಯನ್ನು ಪಡೆದು ಅಚಿರಕಾದಲ್ಲಿಯೇ ಕ್ಷೀಣದಶೆಯನ್ನು ಹೊಂದಿ ಅಸ್ತಮಿಸಿದ ರಾಜ್ಯಗಳ ವಿಜಯನಗರದ ರಾಜ್ಯವು ಒಂದಾಗಿದೆ. ರಮಾರಮಿ ಮುನ್ನೂರು ಸಂವತ್ಸರಗಳು ಈ ರಾಜ್ಯವು ಅತಿವೈಭವದಿಂದ ಮೆರೆಯುತಿತ್ತು. ಪ್ರಸಿದ್ಧ ಯಾತ್ರಾಸ್ಥಾನವಾದ ಹಂಪೆಯು ಈ ವಿಜಯನಗರರಾಜ್ಯಕ್ಕೆ ಮುಖ್ಯ ಪಟ್ಟಣವಾಗಿದ್ದುದು. ಒಂದಾನೊಂದು ಕಾಲದಲ್ಲಿ ಈ ಪ್ರಪಂಚದ ನಗರಗಳಲ್ಲೆಲ್ಲಾ ಸಕಲ ವಿಧಗಳಲ್ಲಿಯ ಅಗ್ರಗಣ್ಯವಾಗಿ ಕಡುಪ್ರಖ್ಯಾತಿಯನ್ನು ತಳೆದಿದ್ದುದು ಈ ವಿಜಯನಗರವೇ. ಈ ನಗರರಾಜ್ಯವು ಪ್ರಕೃತದಲ್ಲಿ ಶಿಥಿಲರೂಪದಿಂದ ಆಯಾಚಿಹ್ನೆಗಳನ್ನು ತೋರಿಸುತ್ತಲಿದೆ. ಈ ಜೀರ್ಣವಿಜಯನಗರವನ್ನೂ, ಅದರಲ್ಲಿನ ವಿಷಯಗಳನ್ನೂ ವರ್ಣಿಸತೊಡಗುವುದಕ್ಕೆ ಮೊದಲು ವಿಜಯನಗರ ಸಾಮ್ರಾಜ್ಯವನ್ನು ಕುರಿತ ಇತಿಹಾಸವನ್ನು ಸಂಗ್ರಹವಾಗಿ ತಿಳಿಸುವುದು ಅಗತ್ಯ. {{gap}}ಉತ್ತರಹಿಂದೂಸ್ಥಾನದಿಂದ ಮಹಾಪ್ರವಾಹವಾಗಿ ಹೊರಟು, ದಕ್ಷಿಣ ಹಿಂದೂದೇಶದಲ್ಲಿನ ಹಿಂದೂಮತವನ್ನೂ, ಹಿಂದೂರಾಜ್ಯವನ್ನೂ ರೂಂಪಳಿಸುವುದಕ್ಕೆ ಸಿದ್ಧವಾಗಿದ್ದ ಮಹಮ್ಮದೀಯರೆಂಬ ಮಹಾನದಿಯನ್ನು ಇನ್ನೂರೈವತ್ತು ವರುಷಗಳವರೆಗೆ ಅಡಗಿಸಿ, ಹಿಂದೂಮತವನ್ನೂ, ಹಿಂದುಗಳ ಸ್ವಾತಂತ್ರಗಳನ್ನೂ ರಕ್ಷಿಸಿದ ವಿಜಯನಗರಸಾಮ್ರಾಜ್ಯವನ್ನು ವರ್ಣಿಸಲಿಕ್ಕೆ ಸಹಸ್ರಜಿಹ್ವನಾದ ಆದಿಶೇಷನೂ ಶಕ್ತನಾಗನು. ಕ್ರಿ. ಶ. 1307 ರಲ್ಲಿ<noinclude></noinclude> 5zogrfwv8s5hu6vxf9podh7w03j1srj ಪುಟ:ಜೀರ್ಣವಿಜಯನಗರಾದರ್ಶನಂ .djvu/೧೨ 104 56124 322315 235004 2026-05-24T18:18:25Z Pragathi. BH 7585 /* Validated */ 322315 proofread-page text/x-wiki <noinclude><pagequality level="4" user="Pragathi. BH" />ಕರ್ಣಾಟಕ ಗ್ರಂಥಮಾಲೆ {{rh|center=ಕರ್ಣಾಟಕ ಗ್ರಂಥಮಾಲೆ|left=೨|right=}}</noinclude>ಮಹಮ್ಮದೀಯರು ದೇವಗಿರಿರಾಜರನ್ನು ಸೆರೆಹಿಡಿದರು. 1310 ರಲ್ಲಿ ದ್ವಾರಸಮುದ್ರದಲ್ಲಿನ ಬಲ್ಲಾಳರಾಜರ ಹೆಸರಡಗಿಸಿದರು. 1323 ರಲ್ಲಿ ಓರಗಲ್ಲಿನ ಪ್ರತಾಪರುದ್ರರಾಜನನ್ನು ದೆಹಲಿಗೆ ಹಿಡಿದೊಯ್ದರು. ಹೀಗೆ ದಕ್ಷಿಣದೇಶದಲ್ಲಿನ ಹಿಂದೂರಾಜ್ಯಗಳೆಲ್ಲವೂ ತಳಹತ್ತಿದ್ದರಿಂದ ಹಿಂದೂಮತಕ್ಕೂ ದೇಶಸ್ವಾತಂತ್ರಕ್ಕೂ ಆಧಾರಸ್ತಂಭವೇ ಇಲ್ಲದೆ ಹೋಯಿತು. ಹಿಂದೂದೇಶಕ್ಕೆ ಅಂತಹ ವಿಪನ್ನಾವಸ್ಥೆಯು ಪ್ರಾಪ್ತವಾದ ಸಂದರ್ಭದಲ್ಲಿ ಅದನ್ನುದ್ಧರಿಸುವುದಕ್ಕೆ ಅವತರಿಸಿದ ರಾಜ್ಯವೇ ಈ ವಿಜಯನಗರಸಾಮ್ರಾಜ್ಯವು. ಆಕಾಲದಲ್ಲಿ ಈ ಪ್ರಭುತ್ವವು ಹುಟ್ಟದೆ ಹೋಗಿದ್ದರೆ ಹದಿನಾಲ್ಕನೆಯ ಶತಾಬ್ದದಲ್ಲಿಯೇ ಅಂದರೆ ಈಗ್ಗೆ 500 ಸಂವತ್ಸರಗಳಿಗಿಂತ ಮುಂಚೆಯೇ ದಕ್ಷಿಣಹಿಂದೂದೇಶವೆಲ್ಲವೂ ಸಂಪೂರ್ಣವಾಗಿ ತುರುಷ್ಕರಪಾಲಾಗಿ ಹಿಂದೂಮುತವೆಲ್ಲವೂ ತಳಹತ್ತಿ ನಾವೆಲ್ಲರೂ ಮಹಮ್ಮದೀಯರಾಗಿ ಹೋಗುತ್ತಿದ್ದೆವೆಂದು ಹೇಳಿದರೂ ಅತಿಶಯೋಕ್ಕೆಯೆನ್ನಿಸದೆಂದು ವಿಜ್ಞಾನಚಂದ್ರಿಕಾ ಗ್ರಂಥಮಾಲೆಯ ಮಹಮ್ಮದೀಯಮಹಾಯುಗದಲ್ಲಿ ಕಂಠಕವಾಗಿ ಉಪಪಾದಿಸಿರುವರು, ಪಠನಿಯ ಚರಿತ್ರಂಥಗಳ ಕೆಲವು ಈ ವಿಷಯವನ್ನು ಬಹುಸಂಕ್ಷೇಪವಾಗಿ ವಿವರಿಸಿರುವುದರಿಂದ ಇದರ ಸಮಗ್ರ ಚರಿತ್ರೆಯನ್ನು ನಾವು ಶೋಧಿಸಿತಿಳಿಯದೆ ಉದಾಸೀನದಿಂದ ಇರುವುದು ತುಂಬಾ ಶೋಚನೀಯವು. {{gap}}ವಿಜಯನಗರವು ಬಳ್ಳಾರಿ ಡಿಸ್ಟಿಕ್ಕಿನ ಹೊಸಪೇಟೆಗೆ ಸಮೀಪದಲ್ಲಿ ತುಂಗ ಭದ್ರಾನದಿಯ ದಕ್ಷಿಣತೀರದಲ್ಲಿ ಕಟ್ಟಲ್ಪಟ್ಟಿತ್ತು. ಈ ನದಿಯ ಆಚೆನ ದಡದಲ್ಲಿ ರಾಮನ ಕಾಲದಿಂದಲೂ, ಕಿಷ್ಕಿಂಧೆಯೆಂದು ಪ್ರಸಿದ್ಧಿಯನ್ನು ಹೊಂದಿ ಆನೆಗೊಂದಿ ಎಂದು ಹೆಸರುಗೊಂಡ ಪಟ್ಟಣವಿರುವುದು. 700 ವರುಪಗಳಿಂದಲೂ, ಆನೆಗೊಂದಿ ರಾಜ್ಯವನ್ನು ಹಿಂದುಗಳೇ ಆಳುತ್ತಿರುವರು.<noinclude></noinclude> a6tvs4pg0st989fbyqz3420a4pq7g3k ಪುಟ:ಜೀರ್ಣವಿಜಯನಗರಾದರ್ಶನಂ .djvu/೧೩ 104 56125 322316 235129 2026-05-24T18:18:46Z Pragathi. BH 7585 /* Validated */ 322316 proofread-page text/x-wiki <noinclude><pagequality level="4" user="Pragathi. BH" />ಜೀರ್ಣವಿಜಯನಗರಾದರ್ಶo</noinclude> ಸಂಗಮನೆಂಬ ರಾಜಕುಮಾರನ ಮಕ್ಕಳಾದ ಹರಿಹರ, ಬುಕ್ಕರಾಯ ರೆಂಬುವರು ಓರುಗಲ್ಲು ರಾಜರ ಹತ್ತಿರ ಕೋಶಾಧ್ಯಕ್ಷರಾಗಿದ್ದು 1323 ರಲ್ಲಿ ಮಹಮ್ಮದೀಯರು ಓರಗಲ್ಲನ್ನು ಹಾಳುಮಾಡಿದಾಗ ಈ ಓರಗಲ್ಲನ್ನು ಬಿಟ್ಟು, ಆನೆಗೊಂದಿ ಸಂಸ್ಥಾನಾಧಿಪತಿಯ ಹತ್ತಿರಕ್ಕೆ ಬಂದರು. ಹರಿಹರನು ಆ ಸಂಸ್ಥಾನಕ್ಕೆ ಮಂತ್ರಿಯಾದನು. ಬುಕ್ಕರಾಯನು ಕೋಶಾಧ್ಯಕ್ಷನಾದನು. ದೆಹಲೀಶ್ವರನಾದ ಮಹಮ್ಮದ್ ತೊಗಲಖನ ಸೋದರಳಿಯನು ತನ್ನ ಸೋದರಮಾವನ ಆಗ್ರಹಕ್ಕೆ ಪಾತ್ರನಾದುದರಿಂದ ಆತನಿಗೆ ಹೆದರಿ ದೆಹಲಿಯಿಂದ ಓಡಿಬಂದು ಆನೆಗೊಂದಿರಾಜನನ್ನು ಆಶ್ರಯಿಸಿದನು. ಇದರಿಂದ ಆ ದೆಹಲೀ ಶರನು ಅತ್ಯಂತ ಕೋಪಾವಿಷ್ಟನಾಗಿ 1334 ರಲ್ಲಿ ಆನೆಗೊಂದಿಯ ಮೇಲೆ ದಂಡೆತ್ತಿ ಬಂದನು, ಆನೆಗೊಂದಿಯ ಅರಸನು ತನಗೆ ಪರಾಭವವಾಗುವುದು ನಿಜವೆಂದು ತಿಳಿದು, ಅದರಿಂದುಂಟಾಗುವ ಅಪಮಾನಗಳನ್ನು ಸಹಿಸಲಾರದೆ ತನ್ನ ಭಾರಾ ಪುತಾದಿಗಳನ್ನು ತನ್ನ ಕೈಗಳಿಂದಲೇ ಸಂಹರಿಸಿ, ಕೋಟೆಯಿಂದ ಹೊರಟು ಬಂದು ರಣಭೂಮಿಯಲ್ಲಿ ಘೋರವಾಗಿ ಕಾದಿ, ವೀರಶಯ್ಯವನೆಯ್ದಿದನು, ದೆಹಲೀಶ್ವರನು ಈ ರೀತಿಯಲ್ಲಿ ಸ್ವಾಧೀನಪಡಿಸಿ ಕೊಂಡ ರಾಜ್ಯದಲ್ಲಿ ತನ್ನ ಕಡೆಯ ಅಧಿಕಾರಿಯನ್ನೊಬ್ಬನನ್ನಿರಿಸಿ ದೆಹಲಿಗೆ ಹೋದನು. ಆನೆಗೊಂದಿಯ ಪ್ರಜೆಗಳೆಲ್ಲರೂ ಈ ಮಹಮ್ಮದೀಯರ ಆ೪ಕೆಯನೊಲ್ಲದೆ ಆ ಅಧಿಕಾರಿಯ ಮೇಲೆ ತಿರುಗಿಬಿದ್ದರು. ದೆಹಲೀಠ ರನು ಇದನ್ನು ಕೇಳಿ ಆನೆಗೊಂದಿರಾಜ್ಯವನ್ನು ಪಾಲಿಸುವುದು ತನಗೆ ಅತಿ ದುರ್ಘಟವೆಂದು ತಿಳಿದು, ಆನೆಗೊಂದಿ ರಾಜವಂಶಸ್ಥರು ಒಬ್ಬರೂ ಇಲ್ಲದ ರಿಂದ ಅದುವರೆಗೆ ತಾನು ಹಿಡಿದುಕೊಂಡುಹೋಗಿ ಸೆರೆಯಲ್ಲಿ ವೃದ್ದ ಆರುಜನ ರಾಜಕುಮಾರರನ್ನು ಕರೆಯಿಸಿ, ಆನೆಗೊಂದಿ ರಾಜನಹತ್ತಿರ ಅದುವರೆಗೂ ಮಂತ್ರಿ ಪದವಿಯನ್ನು ಹೊಂದಿದ್ದ ಹರಿಹರರಾಯನಿಗೆ ರಾಜ್ಯವನ್ನಿತ್ತು ಆತ ನನ್ನು ತನ್ನ ಸಾಮಂತರಾಜನನ್ನಾಗಿ ಒಡಂಬಡಿಸಿಕೊಂಡು ಅವನ ತಮ್ಮ<noinclude></noinclude> 9wppkaf5gcyrckbvx572h97i3qgj6ht ಪುಟ:ಜೀರ್ಣವಿಜಯನಗರಾದರ್ಶನಂ .djvu/೧೪ 104 56126 322317 235130 2026-05-24T18:21:36Z Pragathi. BH 7585 /* Validated */ 322317 proofread-page text/x-wiki <noinclude><pagequality level="4" user="Pragathi. BH" /> {{rh|center=ಕರ್ಣಾಟಕ ಗ್ರಂಥಮಾಲೆ|left=೪|right=}}</noinclude> ನಾದ ಬುಕ್ಕರಾಯನಿಗೆ ಮಂತ್ರಿ ಪದವಿಯನ್ನಿತ್ತು, ಉಳಿದ ನಾಲ್ವರನ್ನೂ ದೊಡ್ಡ ಅಧಿಕಾರಿಗಳನ್ನಾಗಿ ನಿಯಮಿಸಿ ಕಳುಹಿಸಿಕೊಟ್ಟನು. ಹರಿಹರನು ರಾಜನಾಗಿಯೂ ಬುಕ್ಕರಾಯನು ಮಂತ್ರಿಯಾಗಿಯೂ ಇದ್ದರು. ಅವರು ಒಂದಾನೊಂದುದಿನ ಚತುರಂಗಬಲಸಮೇತರಾಗಿ ಮೃಗಯಾವಿನೋದಕ್ಕೋ ಸ್ಕರ ತುಂಗಭದ್ರಾ ನದಿಯ ದಕ್ಷಿಣತೀರಕ್ಕೆ ಹೊರಟು, ಅಲ್ಲಿನ ಕಾಡುಗಳಲ್ಲಿ ಬೇಟೆಯಾಡುತ್ತಿರುವಾಗ ಮೊಲಗಳೇ ತಮ್ಮ ಬೇಟೆನಾಯಿಗಳನ್ನು ಅಟ್ಟಿ ಕೊಂಡು ಬಂದುವಂತೆ ! ಈ ವಾರ್ತೆಯನ್ನು ತಮ್ಮ ಕುಲಗುರುಗಳಾದ ವಿದ್ಯಾರಣ್ಯರಿಗೆ ವಿಜ್ಞಾಪಿಸಲು, ಅವರು ಅಲ್ಲಿ ಬಂದುಪಟ್ಟಣವನ್ನು ನಿನ್ನಿಸಿ ದರೆ ಅದು ಜಯಪ್ರದವಾಗುವುದೆಂದು ಹೇಳಿ ಅಲ್ಲಿ ಬಂದು ನಗರವನ್ನು ನಿರಾಣಗೊಳಿಸಿದರು. ಆ ಪ್ರದೇಶವು ನೈಸರ್ಗಿಕ ಪಾಕಾರಪಂಗಣವಾಗಿ ಸುತ್ತಿಕೊಂಡಿರುವ ಬೆಟ್ಟಗಳುಳ್ಳದಾಗಿ ಕಾತ್ರವದುರ್ಭೇದ್ಯವಾಗಿರುವುದು. ಕ್ರಿ. ಶ 1336 ಕೆ ಸರಿಯಾದ ಶಾಲಿವಾಹನಶಕೆ 1258 ನೇ ಧಾತು ಸಂವ ತೃರ ವೈಶಾಖ ಶುದ್ಧ ಪಂಚಮಿಯದಿನ ಈ ನಗರವು ನಿರಿಸಲ್ಪಟ್ಟಿತು, ಹರಿಹರರಾಯನು 1339 ರಿಂದ 1350 ರ ವರೆಗೆ ಈ ವಿಜಯನಗರವನ್ನು ಪಾಲಿಸಿದನು. ಈತನು ತನ್ನ ತಮ್ಮನ ಸಹಾಯದಿಂದ ತನ್ನ ರಾಜ್ಯವನ್ನು ಬಹಳವಾಗಿ ವಿಸ್ತರಿಸಿದನು, ಈತನ ರಾಜ್ಯಭಾರದ ಕಾಲದಲ್ಲಿಯೇ ವಿಜಯ ನಗರ ಸಾಮಾಜ್ಯಕ್ಕೆ ಅಂಕುಶಪ್ರಾಯವಾದ ಭಾಮಿನೀರಾಜ್ಯವು ಸ್ಥಾಪಿಸ ಲ್ಪಟ್ಟಿತು. ಈ ಭಾಮಿನೀರಾಜರಿಗೂ ವಿಜಯನಗರದರಾಜರಿಗೂ ಎಡೆಬಿಡದ ಯುದ್ಧವು ಜರುಗುತ್ತಲೇ ಇತ್ತು {{gap}}ಹರಿಹರರಾಯನಿಗೆ ಸಂತಾನವಿಲ್ಲದ್ದರಿಂದ ಆತನ ಮರಣಾನಂತರ ಅವನ ಮಂತ್ರಿಯ ಯುವರಾಜನೂ ಸಹೋದರನೂ ಆದ ಬುಕ್ಕರಾಯನೇ ದೊರೆತನಕ್ಕೆ ಬಂದನು. ಈತನ ಆಳ್ವಿಕೆಯಲ್ಲಿಯೇ ತುಂಗಭದ್ರಾ ನದಿಗೆ ದಕ್ಷಿಣದಲ್ಲಿರುವ ರಾಜ್ಯವೂ, ಓಢ್ರ, ಕಳಿಂಗ, ದೇಶಗಳೂ ಜಯಿಸಲ್ಪಟ್ಟು<noinclude></noinclude> milf0nvprm4ajn9g7sk9k0tu68wm832 ಪುಟ:ಜೀರ್ಣವಿಜಯನಗರಾದರ್ಶನಂ .djvu/೭೨ 104 56184 322318 234976 2026-05-24T18:24:08Z Pragathi. BH 7585 /* Validated */ 322318 proofread-page text/x-wiki <noinclude><pagequality level="4" user="Pragathi. BH" /></noinclude> ಸರರಿಗೆ ಹುಟ್ಟಿದ ಮನೆ ಯೆನಿಸಿ ತುರುರಾಜರ ಎದೆ ಬಿರಿಯುವಂತೆ ದಿನದಿನಾಭಿ ವೃದ್ಧಿಯನ್ನು ಹೊಂದಿ ಐಶ್ವೈರ್ಯ ಶೌರ್ಯ ಪ್ರಾಭವಗಳಲ್ಲಿ ಪ್ರಪಂಚದಲ್ಲಿ ಇದಕ್ಕೆಣೆಯಾದುದು ಮತ್ತೊಂದಿಲ್ಲವೆಂದು ಪಶ್ಚಿಮಖಂಡ ವಾಸಿಗಳಿ೦ದಲೂ ಪೂರ್ವಖಂಡ ವಾಸಿಗಳಿಂದಲೂ ಸಾವಿರ ಬಾಯಿಗಳಿಂದ ಹೊಗಳಿಕೆಯನ್ನು ಪಡೆದು ಶಿಲ್ಪಿಗಳ ನೈಪುಣ್ಯಕ್ಕೆ ವಿಹಾರಭೂಮಿಯಾಗಿ ಶರಣಾಗತರಿಗೆ ರಕ್ಷಕಸ್ಥಾನವಾಗಿ ಹೆಸರುಗೊಂಡ ವಿಜಯನಗರ ಸಂಸ್ಥಾನವು, ಈಗ ರೂಪರಹಿತ ವಾಗಿ, ಜನಶೂನ್ಯವಾಗಿ, ಅನಾರೋಗ್ಯ ಪ್ರದೇಶವಾಗಿ ಅರಣ್ಯವಾಗಿ ನೋಟಕರಿಗೆ ಭಯವನ್ನೂ ಮನಸ್ಸಂತಾಪವನ್ನೂ ಉಂಟುಮಾಡುತ್ತಲಿದೆ. ಆಹಾ ! ಕಾಲಪ್ರಭಾವಕ್ಕೆ ಯಾರೇನು ಮಾಡಬಹುದು !! {{C|{{xx-larger|ಸ೦ ಪೂ ಣ ೯೦}}}} {{Css image crop |Image = ಜೀರ್ಣವಿಜಯನಗರಾದರ್ಶನಂ_.djvu |Page = 72 |bSize = 374 |cWidth = 99 |cHeight = 47 |oTop = 335 |oLeft = 138 |Location = center |Description = }}<noinclude></noinclude> 9dxlmduq2qyugstgs6bxg57gsvr9unp ಪುಟ:ದಕ್ಷಕನ್ಯಾ .djvu/೬ 104 56196 322448 319761 2026-05-25T09:32:49Z Pragathi. BH 7585 /* Without text */ 322448 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ದಕ್ಷಕನ್ಯಾ .djvu/೭ 104 56197 322449 124800 2026-05-25T09:33:02Z Pragathi. BH 7585 /* Without text */ 322449 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ನನ್ನ ಸಂಸಾರ.djvu/೧೯ 104 57302 322419 159437 2026-05-25T08:54:04Z Shreelatha.Halemane 7642 /* Proofread */ 322419 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|left=|center=ನನ್ನ ಸಂಸಾರ |right=11}} ***************************************** ಪ್ರಯಾಣಮಾಡಿದಳು. ವಿನಾಯಕ ಶಾಸ್ತ್ರಿಗಳು ಗಾಡಿಯ ಮೇಲೆಯೇ ಮೂರ್ಛಿತರಾಗಿ ಬಿಟ್ಟರು, ರೋಗಿಯು ಮೃತಳಾದಸ್ಥಳಕ್ಕೂ ಹರಪುರದ ಸ್ಮಶಾನ ಭೂಮಿಗೂ ಮೂರು ಮೈಲಿದೂರವಿತ್ತು, ಬೆಳಗ್ಗೆ ಆರುಗಂಟೆಗೆ ವಿನಾಯಕ ಶಾಸ್ತ್ರಿಗಳ ಮನೆಯವರೆಲ್ಲರೂ ಸ್ಮಶಾನದಲ್ಲಿ ಬಂದಿಳಿದು ನಡೆದ ವರ್ತಮಾನವನ್ನು ನೀಲಕಂಠಶಾಸ್ತ್ರಿಗಳ ಮನೆಗೆ ಹೇಳಿ ಕಳುಹಿಸಿದರು. ನೀಲಕಂಠ ಶಾಸ್ತ್ರಿಗಳು ಆಗ ಊರಲ್ಲಿರಲಿಲ್ಲ, ಅವಶ್ಯವಾಗಿ ಸ್ಮಶಾನಕ್ಕೆ ಹೋಗಬೇಕಾದವರು ಹೋಗಿದ್ದುದೂ ಆಯಿತು, ಅಲ್ಲಿ ಲಕ್ಷ್ಮೀ ದೇವಿಯ ದೇಹವನ್ನು ಸಂಸ್ಕಾರಮಾಡಿ ಎಲ್ಲರೂ ಹಿಂತಿರುಗಿ ಮನೆಗೆ ಬಂದುದೂ ಆಯಿತು. ಅಂತು ಎರಡು ತಿಂಗಳು ಕಳೆವುದರೊಳಗಾಗಿ ಇಷ್ಟು ಕಥೆ ಕಳೆದುಹೋಯಿತು. {{gap}}ನಾನೇನೋ ಮದುವೆ ವಿಷಯವನ್ನು ಬರೆಯ ತೊಡಗಿ ಮಧ್ಯದಲ್ಲಿ ಇಂತಹ ಅಮಂಗಳವನ್ನು ಬರೆದುದಕ್ಕಾಗಿ ಪಾರಕಿಯರು ನನ್ನ ಮೇಲೆ ಆಗ್ರಹಪಡಬಹುದು. ಆದರೆ ನಡೆದವಿಷಯವೆಲ್ಲವನ್ನೂ ಬರೆದು ಬಿಡಬೇಕಾಗಿರುವುದರಿಂದ ಎಲ್ಲರೂ ನನ್ನನ್ನು ಮನ್ನಿಸಬೇಕು, ಈ ಪ್ರಪಂಚದಲ್ಲಿ ಮಂಗಳಾಮಂಗಳಗಳು ಬರುವುದೂ ಗೊತ್ತಿಲ್ಲ. ಹೋಗುವುದೂ ಗೊತ್ತಿಲ್ಲ, ಇದೆಲ್ಲಾ ನಾಟಕವಾಡಿದ ಹಾಗೆ, ನಾವು ರಾತ್ರಿ ಹೊತ್ತು ಮಲಗಿಕೊಂಡು ಕನಸನ್ನು ಕಂಡರೆ ಹೇಗೋ ಅದರಂತೆಯೇ ಈ ಲೋಕದ ಸುಖ ದುಃಖಗಳು. {{gap}}ನನಗೆ ಹದಿನಾಲ್ಕು ವರ್ಷ ತುಂಬುವುದಕ್ಕೆ ಇನ್ನು ಆರೇತಿಂಗಳು ಉಳಿದಿತ್ತು. ನಮ್ಮ ತಾತನಂತೂ ನನಗೆ ಮದುವೆ ಮಾಡದೆ ತಾನೆಲ್ಲಿ ಸತ್ತು ಹೋಗುವೆನೋ ಎಂದು ಕೊರಗಿಕೊರಗಿ ಕೃಶನಾಗುತ್ತಿದ್ದನು. ಕೊನೆಗೆ ಸೀಲಕಂಠಶಾಸ್ತ್ರಿಗಳಿಗೂ ನಮ್ಮ ತಾತನವರಿಗೂ ಪತ್ರ ವ್ಯವಹಾರ ಬೆಳೆದ ಮೇಲೆ ನೀಲಕಂಠಶಾಸ್ತ್ರಿಗಳು ದಯವಿಟ್ಟು ನಮ್ಮ ಮನೆ ಸಂಬಂಧಮಾಡುವುದಕ್ಕೆ ಒಪ್ಪಿಕೊಂಡರು. ನಮ್ಮ ತಾತನ ಸಂತೋಷವು ವಿವರಿಸಲಸದಳ. {{gap}}ಮಾಘ ಬಹುಳ ಬಿದಿಗೆ ದಿನ ನನಗೆ ಮದುವೆಯಾಯಿತು. ಮದುವೆಗಾಗಿ ಬಂದಿದ್ದ ಬೀಗರು ಹರಪುರಕ್ಕೆ ಪ್ರಯಾಣ ಬೆಳಸಿದರು, ಅವರು ಪ್ರಯಾಣಮಾಡುವಾಗ ನಮ್ಮ ತಾತನು ನೀಲಕಂಠಶಾಸ್ತ್ರಿಗಳನ್ನು ಕುರಿತು : ಸ್ವಾಮಿ ! ತಾವು ದೊಡ್ಡ ಮನಸ್ಸು ಮಾಡಿ ನನ್ನನು ಕನ್ಯಾದಾನದಿಂದಉದ್ಧಾರಮಾಡಿದುದಕ್ಕಾಗಿ ನಾನು ತಮಗೆ ಜೀವಾವಧಿ ಕೃತಜ್ಞನಾಗಿದೇನೆ, ನನ್ನ ಮನಸ್ಸಿನಲ್ಲಿ ಪೂರ್ವವಯಸ್ಕನೂ, ಸತ್ಕುಲ ಪ್ರಸೂತನೂ, ವಿದ್ಯಾವಂತನೂ ಆದ ವರಸಿಗೆ ಹುಡುಗಿಯನ್ನು ಕೊಡಬೇಕೆಂಬ ಆಶೆ<noinclude></noinclude> oujyty8kojdspaczyk117vnfyxscjzl ಪುಟ:ನನ್ನ ಸಂಸಾರ.djvu/೨೦ 104 57303 322420 159429 2026-05-25T08:56:14Z Shreelatha.Halemane 7642 /* Proofread */ 322420 proofread-page text/x-wiki <noinclude><pagequality level="3" user="Shreelatha.Halemane" />{{rh|left=12|center=ಕಾದಂಬರಿ ಸಂಗ್ರಹ|right=}}</noinclude> * * * * * * * * * * * * * * * * * * * * * * * * ಬಹಳವಾಗಿತ್ತು, ಅದನ್ನು ತಾವು ಸಾಫಲ್ಯಗೊಳಿಸಿದಿರಿ, ಇನ್ನು ನಾನು ಕೃತಾರ್ಥನಾದೆನು, ತಾವು ನಾಲ್ಕಾರು ತಿಂಗಳು ಬಿಟ್ಟುಕೊಂಡು ಹುಡುಗಿಯನ್ನು ನಿಮ್ಮ ಮನೆಗೆ ಕರದುಕೊಂಡು ಹೋಗಿ ನಿಮ್ಮ ಮನೆ ಆಚಾರ ವ್ಯವಹಾರ, ಪದ್ಧತಿ, ಮಾನಮರ್ಯಾದೆಗಳನ್ನು ಕಲಿಸಿಕೊಡಿ, ಈ ಹುಡಿಗಿಯನ್ನು ಪ್ರೀತಿಯಿಂದ ಸಾಕಿರುವೆನು, ನನ್ನ ಮಗನು ವಿವೇಕಶಾಲಿಯಾಗಿ ಮಗಳಿಗೆ ಬುದ್ಧಿವಾದ ಹೇಳಿಕೊಡುವಷ್ಟು ಗುಣವಂತನಲ್ಲ, ನೀವು ನಮ್ಮನ್ನು ಮುಂದೆ ಯಾವ ವಿಧದಲ್ಲಿಯೂ ಆಕ್ಷೇಪಣೆ ಮಾಡದಿರಬೇಕಾದರೆ ನಿಮ್ಮ ಮನೆಯಲ್ಲಿಟ್ಟು ಕೊಂಡು ನಿಮ್ಮ ಮನೆಸಂಪ್ರದಾಯಗಳನ್ನು ಹೇಳಿಕೊಡಬೇಕು.” ಎಂದು ಹೇಳಿ ಅವರನ್ನು ಪ್ರಯಾಣಮಾಡಿಸಿ ಕಳುಹಿಸಿಕೊಟ್ಟನು. {{gap}}ನನಗೆ ಮದುವೆಯಾದ ಆರುತಿಂಗಳಿಗೆ ನಮ್ಮ ತಾತನು ಇಹಲೋಕವನ್ನು ತ್ಯಜಿಸಿ ಪರಲೋಕಕ್ಕೆ ಪ್ರಯಾಣಮಾಡಿದನು, ನನ್ನ ತಂದೆಯು ತಾತನ ಉತ್ತರಕ್ರಿಯೆ ಗಳನ್ನು ಮಾಡುವುದಕ್ಕಾಗಿ ಇನ್ನೂರು ರೂಪಾಯಿ ಸಾಲಮಾಡಬೇಕಾಯಿತು, ಎಲ್ಲಾ ಮುಗಿದಮೇಲೆ ನನ್ನನ್ನು ನಮ್ಮ ತಂದೆಯು ಕೆಲವು ದಿನಗಳ ಮಟ್ಟಿಗೆ ಪತಿಗೃಹಕ್ಕೆ ಕಳುಹಿಸಿಕೊಟ್ಟರು. {{gap}}ನಾನಿನ್ನೂ ಅರಿಯದ ಹುಡುಗಿ ಪರ‌ಗೃಹದಲ್ಲಿದ್ದವಳಲ್ಲ. ಮೊದಮೊದಲು ನನಗೆ ಪತಿಗೃಹಕ್ಕೆ ಬಂದಾಗ ಏನೋ ಒಂದು ವಿಧವಾಗಿ ಕಣ್ಣು ಕಟ್ಟಿದಂತಾಗಿತ್ತು. ತಂದೆ ತಾಯಿಗಳನ್ನು ನಾನೆಂದೂ ಬಿಟ್ಟಿದ್ದವಳಲ್ಲ, ಅದಲ್ಲದೆ ನಾನು ಪತಿಗೃಹಕ್ಕೆ ಬಂದಮೇಲೆ ಅಲ್ಲಿನ ನಡವಳಿಕೆ ಆಚಾರ, ಸಂಪ್ರದಾಯಗಳನ್ನು ನಮ್ಮ ಅತ್ತೆಯೂ ನಮ್ಮ ಅಕ್ಕನೂ(ಓರಗಿತ್ತಿ) ನನಗೆ ಬೋಧಿಸುತ್ತಿದ್ದರು. {{gap}}ನಮ್ಮ ಬ್ರಾಹ್ಮಣವೃಂದದಲ್ಲಿ ಹೆಂಡತಿ ದೊಡ್ಡವಳಾಗಿ ಗಂಡನ ಮನೆಗೆ ಹೋಗುವ ವರೆವಿಗೂ ಗಂಡಹೆಂಡರು ಮಾತನಾಡುವುದೆಂದರೆ ಬಲು ಸಂಕೋಚವೂ ಅಪಹಾಸ್ಯವೂ ವಾಮಾನಿಕೆಯೂ ಆದ ಪದ್ಧತಿಯಂತೆ, ಈ ಪದ್ಧತಿಯು ಪೂರ್ವಕಾಲದಲ್ಲಿ ವಿಶೇಷವಾಗಿ ಆಚರಣೆಯಲ್ಲಿದ್ದಿತು. ಆಗಣಕಾಲದಲ್ಲಿ ಒಂದೆರಡು ಮಕ್ಕಳಾದ ಮೇಲೂ ಹೆಂಡತಿಯಾದವಳು ಗಂಡನೊಡನೆ ಧೈರ್ಯದಿಂದ ಬಹಿರಂಗದಲ್ಲಿ ಮಾತನಾಡುವುದಕ್ಕೆ ಹೆದರಿಕೊಳ್ಳುತ್ತಿದ್ದಳು, ಅದರಲ್ಲೂ ಅತ್ತೆ, ಮಾವ, ಭಾವ, ಅತ್ತಿಗೆ, ನಾದಿನಿ ಯೆದಿರಿಗೆ, ಗಂಡನ ಸಂಗಡ ಮಾತಾಡುವುದೆಂದರೆ ಬಹುಕಷ್ಟ ತರವಾದ ಸಂಗತಿಯೇ ಸರಿ. ಒಂದುವೇಳೆ ಪ್ರತ್ಯಕ್ಷವಾಗಿ ಮಾತನಾಡಿಬಿಟ್ಟಳೆಂದರೆ, ಆ ವಿಚಾರವು ಮಾರನೆಯದಿನವೇ ಊರಲ್ಲೆಲ್ಲಾ ಹರಡಿ ಹೋಗುತ್ತಿದ್ದುದಲ್ಲದೆ, ಅಂತಹವಳಿಗೆ ಗಂಡುಬೀರಿಯೆಂಬ ಬಿರಿದು ಸಹ ಬಂದು ಬಿಡುತ್ತಿದ್ದಿತು.<noinclude></noinclude> fzdlq0upfxr2hsqa9wliatj1tiorfql ಪುಟ:ನನ್ನ ಸಂಸಾರ.djvu/೨೧ 104 57304 322422 159424 2026-05-25T08:58:03Z Shreelatha.Halemane 7642 /* Proofread */ 322422 proofread-page text/x-wiki <noinclude><pagequality level="3" user="Shreelatha.Halemane" />{{rh|left=13|center=ನನ್ನ ಸಂಸಾರ.|right=}}</noinclude> A Ar r * , * * \h 1 * * * * * * * \ಗಿ ೧೧೧ ೧೧೧೧ {{gap}}ನೀಲಕಂಠಶಾಸ್ತ್ರಿಗಳ ಕಿರೀಮೊಮ್ಮಕ್ಕಳಾದ ವಾಸುದೇವಶಾ• ... ... .... .. ಆಹಾ ! ಮರೆತುಬಿಟ್ಟೆನು, ಏನೋಜ್ಞಾನದಿಂದ ನನ್ನ ಸ್ವಾಮಿಯ ಹೆಸರನ್ನು ಬಾಯಿಂದ ಮರೆತು ಹೇಳುಬಿಡುತ್ತಿದ್ದೆನು. ವಾಚಕಿಯರು ದಯವಿಟ್ಟು ಕ್ಷಮಿಸಬೇಕು. ಈಗ ಈ ಗ್ರಂಥದಲ್ಲಿ ಇನ್ನು ಮುಂದೆ ನನ್ನ ಜೀವಿತಸರ್ವಸ್ವರಾದ ಸ್ವಾಮಿಯವರ ಹೆಸರನ್ನು ಆಗಾಗ್ಗೆ ಉಚ್ಚರಿಸ ಬೇಕಾಗುತ್ತದೆ. ಆದುದರಿಂದ ಅವರಿಗೆ ಯಾವ ಹೆಸರಿಟ್ಟು ಕರೆಯ ಬೇಕೋ ತಿಳಿಯದು ನೀವಾದರೂ ಐದು ಮಂದಿ ಮುತ್ತೈದೆಯರು ಸೇರಿ ನನಗೆ ಈ ವಿಷ ಯದಲ್ಲಿ ಬುದ್ದಿವಾದವನ್ನು ಹೇಳಿಕೊಡಬೇಕು, ನಾವು ನಿಮ್ಮ ಮಾತನ್ನು ಮೀರುವವಳಲ್ಲ, ಲೋಕನ್ಯಾಯದಂತೆ ನಾನು ವರ್ತಿಸುವವಳೇ ವಿನಹ ಅನ್ಯಥಾ ಇಲ್ಲ. ನಮ್ಮ! ಮನೆಯವರೆಂದು ಕರೆಯಲೆ? ಅಥವಾ ಪ್ರಾಣನಾಯಕ ; ಪ್ರಾಣಪ್ರಿಯ ! ಪ್ರಿಯನಾಥ ಪ್ರಾಣಕಾಂತ ! ಮುಂತಾದ ಯಾವುದಾದರೊಂದು ಹೆಸರಿನಿಂದ ಕೂಗಲೆ ? ಅಥವಾ My Dear Husband ಎಂದು ಕರೆಯುತ್ತಾ ಬರಲೇ? ಉಹು-ಇದಾವುದೂ ಸರಿಯಲ್ಲ, ಏನೆಂದು ಕರೆದರೂ ಆಕ್ಷೇಪಣೆ ಮಾಡುವವರ ಮಾಡಿಯೇಮಾಡುತ್ತಾರೆ. ಆದುದರಿಂದ ನಮ್ಮ ಸೋದರೀಮಣಿಯರು ಈಗ ವರ್ತಿಸುತ್ತಿರುವಂತೆ ನಾನೂಸಹ ನಮ್ಮ ಯಜಮಾನರೆಂದು ಸಂಬೋಧಿಸುತ್ತಾ ಬರುವೆನು. ಇದರಲ್ಲೇನೂ ದೋಷ ವಿರುವಂತೆ ತೋರದು. {{gap}}- ಒಂದುದಿನ ನನ್ನ ಯಜಮಾನರು ನನ್ನನ್ನು ತಮ್ಮ ಚಿಕ್ಕ ಮನೆಗೆ ಕರೆದು ನನ್ನೆರಡು ಕೈಗಳನ್ನೂ ಹಿಡಿದುಕೊಂಡು ನನ್ನ ಗಲ್ಲವನ್ನು ಮುದ್ದಿಟ್ಟು,ಪ್ರಿಯಳೆ! ಈಗ ನೀನು ನನ್ನ ಸಂಗಡ ಮಾತನಾಡಲು ನಾಚಿಕೆ ಪಡಬೇಡ; ನೀನು ಪುಸ್ತಕಗಳನ್ನೋದುವುದನ್ನು ಬಲ್ಲೆಯಾ? ಎಂದು ಕೇಳಿದರು. ನನ್ನನ್ನು ಅವರು ಮುಟ್ಟುತ್ತಲೇ ನನಗೆ ಮೈಯೆಲ್ಲಾ ನಡುಗಿಹೋಯಿತು, ಅವರು ಕೇಳಿದ ಪ್ರಶ್ನೆಗೆ ಉತ್ತರ ಕೊಡಬೇಕೆಂದು ಪ್ರಯತ್ನ ಪಟ್ಟೆನು, ಆದರೆಆ-ಹಾಳು ನಾಚಿಕೆಯೊಂದು ಅಡ್ಡವಾಗಿ ಬಂದು ನನ್ನನ್ನು ಮಾತನಾಡಗೊಡಿಸದೆ ಹೋಯಿತು. ಅರ್ಧ ಗಂಟೆವರಿವಿಗೆ ನಮ್ಮ ಯಜಮಾನರು ನನ್ನನ್ನು ವಿವಿಧವಾಗಿ ಕೇಳಿದರೂ ನಾನು ಯಾವಮಾತನ್ನಾಡಲೂ ಶಕ್ತಳಾಗಲಿಲ್ಲ. ಕೊನೆಗೆ ಅವರಿಗೇ ಬೇಸರವಾಗಿ ನನ್ನನ್ನು ಬಿಟ್ಟು ಬಿಟ್ಟು, ಇಂತಹ ಮೂಢತನವನ್ನು ನೀನು ಇನ್ನು ಮೇಲೆ ಬಿಟ್ಟು ನನ್ನೊಡನೆ ಸರಿಯಾಗಿ ಮಾತನಾಡದಿದ್ದರೆ ನನಗೆ ಬಹು ಕೋಪ ಬರುವುದೆಂದು ಹೇಳಿಬಿಟ್ಟರು. ಅವರು ನನ್ನ ಕೈಬಿಟ್ಟೊಡನೆಯೇ ನಾನು ಆ ಸ್ಥಳ ವನ್ನು ಬಿಟ್ಟು ಒಳಕ್ಕೆ ಹೊರಟು ಹೋದೆನು. ಒಳಕ್ಕೆ ಹೋದ ಮೇಲೆ ನನ್ನನ್ನು ನಾನೇ ನಿಂದಿಸಿಕೊಳ್ಳಬೇಕಾಯಿತು, ನನ್ನನ್ನು ಯಜಮಾನರು ಆದರದಿಂದ ಮಾತನಾಡಿಸಿದರೂ<noinclude></noinclude> r2cmk45384fsliwi3r3zhc4lc4dgim5 ಪುಟ:ನನ್ನ ಸಂಸಾರ.djvu/೬೮ 104 57351 322146 322132 2026-05-24T13:28:25Z Pragathi. BH 7585 /* Validated */ 322146 proofread-page text/x-wiki <noinclude><pagequality level="4" user="Pragathi. BH" /></noinclude>{{center|'''ನೂತನ ವತ್ಸರಾರಂಭ.'''}} ಪೋಷಕಮಹಾಶಯ! ನಿಮ್ಮ ಅಮೋಘ ಸಹಾಯ ಸಂಪತ್ತಿಯಿಂದ ಸಂಗ್ರಹಶಿಶುವು ಚತುರ್ಥ ವರ್ಷದಲ್ಲಿ ಕಾಲನ್ನಿಟ್ಟಿರುವುದು. ಕಳೆದಮೂರುವರ್ಷಕಾಲ ಸಂಗ್ರಹವು ಅನೇಕ ಕಷ್ಟದಿಂದ ಪ್ರಚುರವಾದುದು ಸರಿಯಷ್ಟೆ! ಮುಂದೆ ಈಪತ್ರಿಕೆಯು ನಿರಾಯಾಸವಾಗಿ ಹೊರಡುವಂತೆಯೂ, ಕಾಲಕ್ಕೆ ಸರಿಯಾಗಿ ಪ್ರಚುರವಾಗುವಂತೆಯೂ, ಗ್ರಾಹಕ ಸಂಖ್ಯೆಯು ಅಭಿವೃದ್ಧಿಯಾಗಿ ಸಂಗ್ರಹಕ್ಕೆ ಮಂಗಳ ವುಂಟಾಗುವಂತೆಯೂ ನೀವೆಲ್ಲರೂ ಅನುಗ್ರಹಿಸುವದಲ್ಲದೆ ಸ್ವಹಸ್ತ ಪರಹಸ್ತಗಳಿಂದ ಉದಾರಾಶ್ರಯಕೊಟ್ಟು ಕಾಪಾಡಬೇಕಾಗಿ ಪ್ರಾರ್ಥಿಸುತ್ತೇನೆ {{Right|ಸಂಗ್ರಹ ಪತ್ರಕರ್ತ.}} {{rule}} {{center|'''ಲಲಿತೆಯ ಪಾತಿವ್ರತ್ಯರಕ್ಷಣೆ.'''}} {{rule|10em}} {{gap}}ಹೊಸೂರಿನ ಆಚೆ ಸುಮಾರು ಅರ್ಧಮೈಲಿ ದೂರದಲ್ಲಿದ್ದ ಒಂದು ಮೈದಾನದಲ್ಲಿ ಸಣ್ಣದೊಂದು ಗುಡಿಸಲಿದ್ದಿತು. ಒಂದು ದಿನ ಬೆಳಿಗ್ಗೆ ಹತ್ತು ಗಂಟೆಯಲ್ಲಿ ಒಬ್ಬ ಭಿಕ್ಷುಕನು ಆ ಗುಡಿಸಲಿನ ಬಾಗಿಲಿನಲ್ಲಿ ನಿಂತು ತನ್ನ ಕೈಯಲ್ಲಿದ್ದ ಕಬ್ಬಿಣದ ಝಾಲುಯನ್ನು ಸದ್ದುಮಾಡಿದನು. ಒಳಗಿನಿಂದ ಯುವತಿಯೊಬ್ಬಳು ಭಿಕ್ಷವನ್ನು ತಂದು ಹಾಕಿದಳು. ಯುವತಿಗೆ ಹದಿನೆಂಟು ವರ್ಷ ವಯಸ್ಸು. ಸ್ವಭಾವವಾಗಿ ಆಕೆಯು ಸುಂದರಿಯಾಗಿದ್ದಳು. ಆಕೆಯ ಹೆಸರು ಲಲಿತಾಂಬ. ಲಲಿತೆಯು ಭಿಕ್ಷವನ್ನು ಹಾಕುತ್ತಿದ್ದಾಗ ಆ ಭಿಕ್ಷುಕನು ಪಾಪಪೂರಿತವಾದ ಕ್ರೂರದೃಷ್ಟಿಯಿಂದ ಆ ಸುಂದರಿಯನ್ನು ನೋಡತೊಡಗಿದನು. ಈತನ ಸ್ಥಿತಿಯನ್ನು ನೋಡಿ ಲಲಿತೆಯು ಹೆದರಿ ಬೇಗ ಭಿಕ್ಷವನ್ನು ಹಾಕಿ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಳು. ಬಳಿಕ ಭಿಕ್ಷುಕನು ಹೊಸೂರಿನ ಕಡೆಗೆ ಹೊರಟುಹೋದನು. ಆದರೆ ಅವನ ಮನಸ್ಸು ಈಗ ಮೊದಲಿನಂತಿರಲಿಲ್ಲ. ಊರ ಹೊರಗಿನ ನೆರೆಯಿಲ್ಲದ ಗುಡಿಸಲನ್ನೂ ಅಲ್ಲಿರುವ ಅಸದೃಶರೂಪರಾಶಿಯನ್ನೂ ನೋಡಿ ಅವನ ಮನಸ್ಸಿನಲ್ಲಿ ಏನೋ ಒಂದು ದುರಾಲೋಚನೆಯು ಉತ್ಪನ್ನ ವಾಯಿತು. ಹಾವು ಕಡಿದವನ ದೇಹದಲ್ಲಿ ವಿಷವೇರುವಂತೆ ಆ ಪಾಪಿಯ ಹೃದಯದಲ್ಲಿ ಜನಿಸಿದ ಆ ದುರಾಲೋಚನೆಯು ಒಂದು ಕ್ಷಣದೊಳಗಾಗಿ ಅವನನ್ನು ಆಕ್ರಮಣಮಾಡಿ ಅವನನ್ನು ಶಾಸಿಸತೊಡಗಿತು. {{gap}}ಅವನು ಹೊಸೂರಿಗೆ ಬಂದು ಬಹು ಚಮತ್ಕಾರದಿಂದ ಆ ಗುಡಿಸಲಿಗೆ ಸಂಬಂಧಪಟ್ಟ ಕೆಲವು ವಿಷಯಗಳನ್ನು ತಿಳಿದುಕೊಂಡನು. ಅಷ್ಟರಲ್ಲೇ ಸಾಯಂಕಾಲವಾಯಿತು. ಕತ್ತಲೆಯಾದ ಮೇಲೆ ಪೂರ್ವೋಕ್ತವಾದಾ ಗುಡಿಸಲಿನಲ್ಲಿ ವಾಸಿಸುತ್ತಿದ್ದ{{nop}}<noinclude></noinclude> ogymeq3kk750mqz5hvaaf5rtj30c1de ಪುಟ:ನನ್ನ ಸಂಸಾರ.djvu/೬೯ 104 57352 322147 322133 2026-05-24T13:28:46Z Pragathi. BH 7585 /* Validated */ 322147 proofread-page text/x-wiki <noinclude><pagequality level="4" user="Pragathi. BH" /></noinclude>ಲಲಿತೆಯು ಎರಡು ವರ್ಷದ ತನ್ನ ಮಗುವನ್ನು ಎತ್ತಿಕೊಂಡು ಬೀದಿಯ ಬಾಗಿಲಿಗೆ ಬಂದಳು. ಜಗಲಿಯ ಮೇಲೆ ಯಾರೋ ಮಲಗಿರುವಂತೆ ತೋರಿತು. ವಿಚಾರಿಸಿ ನೋಡಲು ಆ ವ್ಯಕ್ತಿಯು ಬೆಳಿಗ್ಗೆ ಬಂದಿದ್ದ ಭಿಕ್ಷುಕನೆಂದು ತಿಳಿದುಬಂದಿತು. ಲಲಿತೆಗೆ ಸಂಶಯವುಂಟಾಯಿತು. ಆಗ ಆ ಭಿಕ್ಷುಕನು ಮೃದುಸ್ವರದಿಂದ, “ತಾಯಿ! ಮುಂದಿನೂರಿಗೆ ಹೋಗಲು ಕತ್ತಲಾದುದರಿಂದ ಈ ರಾತ್ರಿ ಇಲ್ಲಿ ಮಲಗಿದ್ದು ಬೆಳಿಗ್ಗೆ ಮುಂದಕ್ಕೆ ಹೋಗುವೆನು” ಎಂದು ಹೇಳಲು ಲಲಿತೆಯು ಧೈರ್ಯಗೊಂಡು ಒಳಕ್ಕೆ ಹೋದಳು. ಆ ದಿನ ಮನೆಯಲ್ಲಿ ಲಲಿತೆಯೊಬ್ಬಳೇ ಇದ್ದಳು. ಆಕೆಯ ಪತಿಯು ಪರಸ್ಥಳಕ್ಕೆ ಹೋಗಿದ್ದುದರಿಂದಲೂ ಆತನು ಮಾರನೆ ದಿನ ಬೆಳಿಗ್ಗೆ ಬರುವ ವಾಯಿದೆ ಇದ್ದುದರಿಂದಲೂ ಏಕಾಂಗಿಯಾಗಿ ಆ ರಾತ್ರಿ ಲಲಿತೆಯು ಆ ಗುಡಿಸಲಿನಲ್ಲಿರುವುದು ದುಸ್ತರವಾಗಿ ಹೋಯಿತು. ಕಾರ್ಯಾಂತರಗಳಿಂದ ಆಕೆಯ ಪತಿಯು ಅವಳೊಬ್ಬಳನ್ನೇ ಅಲ್ಲಿ ಬಿಟ್ಟು ಹೋಗಬೇಕಾಗಿ ಬಂದಿದ್ದಿತು. ಲಲಿತೆಯು ಆಗ ಏನು ಮಾಡಬಲ್ಲಳು? ತನ್ನ ಪತಿಯನ್ನೇ ಧ್ಯಾನಿಸುತ್ತಾ ಊಟವನ್ನು ಮಾಡಿ ಕೈತೊಳೆದುಕೊಂಡು ಒಳಗೆ ಹೋದಳು. ಹೋಗುವಾಗ ಭಿಕ್ಷುಕನು ಜಗಲಿಯ ಮೇಲೆ ಮಲಗಿರಲಿಲ್ಲ. ಲಲಿತೆಯು ಒಳಕ್ಕೆ ಹೋಗಿ ಬಾಗಿಲನ್ನು ಭದ್ರವಾಗಿ ಮುಚ್ಚಿದಳು. ಕೂಡಲೆ ಹಾಸಿಗೆಯನ್ನು ಹಾಸಿ ಮಲಗಲು ಸನ್ನಾಹಮಾಡುತ್ತಿದ್ದಾಗ ಆ ಗುಡಿಸಲಿನ ಮೂಲೆಯೊಂದರಲ್ಲಿ ಯಾರೋ ಕೆಮ್ಮಿದಂತೆ ಕೇಳಿಸಿತು. ದೀಪದಲ್ಲಿ ಎಣ್ಣೆ ಮುಗಿದು ಆರಿಹೋಗುವ ಸ್ಥಿತಿಯಲ್ಲಿದ್ದಿತು. ಆ ಸಣ್ಣ ಉರಿಯಲ್ಲೇ ಆ ಮೂಲೆಯನ್ನು ದೃಷ್ಟಿಸಿ ನೋಡಲು ಅಲ್ಲಿ ಒಬ್ಬ ಪುರುಷ ವ್ಯಕ್ತಿಯು ನಿಂತಿದ್ದಂತೆ ಬೋಧೆಯಾಯಿತು. ಮತ್ತು ಆ ವ್ಯಕ್ತಿಯು ತನ್ನ ಕಡೆಗೇ ನಡೆದು ಬರುತ್ತಿರುವುದನ್ನು ಲಲಿತೆಯು ನೋಡಿದಳು. ಆಕೆಯ ದೇಹವು ಗಡಗಡನೆ ನಡುಗ ತೊಡಗಿತು. ಬಾಯಲ್ಲಿ ಮಾತೇ ಹೊರಡದು, ಆಗ ಆ ಕಳ್ಳ ಭಿಕ್ಷುಕನು, “ನೀನು ಕೂಗಿಕೊಂಡರೆ ನಿನ್ನ ಪ್ರಾಣವನ್ನು ಕಳೆದುಬಿಡುವೆನು” ಎಂದು ಆಕೆಯನ್ನು ಬೆದರಿಸಿದನು. ತನ್ನ ಮನೆಯಲ್ಲಿರುವ ಸರ್ವಸ್ವವನ್ನೂ ನಿನಗೆ ಒಪ್ಪಿಸುವೆನೆಂದು ಲಲಿತೆಯು ಅವನನ್ನು ಪ್ರಾರ್ಥಿಸಿದಳು. ಆಗ ಅವನು, ನಾನು ಹಣದಾಸೆಯಿಂದ ಇಲ್ಲಿಗೆ ಬರಲಿಲ್ಲ. ನಿನ್ನಲ್ಲಿ ಮೋಹಿತನಾಗಿ ಇಲ್ಲಿಗೆ ಬಂದಿರುವೆನೆಂದು ಹೇಳಿದನು. ಈ ಮಾತನ್ನು ಕೇಳಿ ಲಲಿತೆಗೆ ದೇಹದಮೇಲೆ ಸ್ಮೃತಿಯೇ ತಪ್ಪಿತು. ಆದರೂ ಅವಳು ಆಗ ಧೈರ್ಯಮಾಡಿ ಅಯ್ಯ!ನ ನ್ನ ಮಗುವನ್ನು ಬಹಿರ್ಭೂಮಿಗೆ ಕರೆದುಕೊಂಡು ಹೋಗಿದ್ದು ಬಂದು ನಿನ್ನ ಮಾತನ್ನು ನಡೆಯಿಸುವೆನೆಂದು ಹೇಳಿದಳು. ಆ ಚಂಡಾಲನು ಅದಕ್ಕೊಪ್ಪದೆ ತಾನೇ ಮಗುವನ್ನು ಕರೆದುಕೊಂಡು ಹೋಗಿಬರುವೆನಂದು ಹೇಳಲು ಲಲಿತೆಯು ಉಪಾಯಾಂತರವನ್ನು ಕಾಣದೆ ಮಗುವನ್ನು ಮುದ್ದಿಸಿ ಆ ಪಾಪಿಯ ಕೈಗೆ ಕೊಟ್ಟಳು. ಅವನು ಹೊರಗೆ ಕಾಲಿಟ್ಟೂಡನೆಯೇ ಲಲಿತೆಯು ಬಾಗಿಲನ್ನು ಬಂಧಿಸಿಬಿಟ್ಟಳು. ಭಿಕ್ಷುಕನು,{{nop}}<noinclude></noinclude> gbxp2xhmlyta3uhl3v96je04b1jbao2 ಪುಟ:ನನ್ನ ಸಂಸಾರ.djvu/೭೦ 104 57353 322148 322134 2026-05-24T13:29:03Z Pragathi. BH 7585 /* Validated */ 322148 proofread-page text/x-wiki <noinclude><pagequality level="4" user="Pragathi. BH" /></noinclude>ವಾಗಿ ಹೆದರಿಸಿದನು, ನಿಶ್ಯಬ್ಬ. ಅವನು ಮಿತಿ ಮೀರಿದ ಕೋಪದಿಂದ ಆಗುಡಿಸಲಿಗೆ ಬೆಂಕಿ ಹಚ್ಚುವೆನೆಂದೂ ಮಗುವನ್ನು ಸಂಹರಿಸಿ ಬಿಡುವೆನೆಂದೂ ಬೊಗಳಿದನು. ಆ ಕಟುಕನಿಗೆ ಆಗ ಕನಿಕರವೆಳ್ಳಷ್ಟೂ ಇರಲಿಲ್ಲ. ಆಹಾ! ಕಾಮಾಂಧರು ತಮ್ಮ ಕಾರ್ಯನಿರ್ವಾಹಕ್ಕೆ ಏನು ಬೇಕಾದರೂ ಮಾಡುವರಲ್ಲವೆ? ಏನಾದರೂ ಲಲಿತೆಯು ಮಾತನಾಡಲೇ ಇಲ್ಲ. ಆ ಕಟುಕನು ಬಹುಕೋಪದಿಂದ ಆಮಗುವಿನತಲೆಯನ್ನು ಕದಕ್ಕೆ ಹೊಡೆದನು. ಮಗುವು ಕಿಟ್ಟನೆ ಕಿರುಚತೊಡಗಿತು. ಆಮಗುವು ಅಳುವಿನಲ್ಲೂ ಮುದ್ದು ಮುದ್ದಾಗಿ ಅಮ್ಮ, ಅಮ್ಮ, ಎಂದು ಕೂಗುತ್ತಿತ್ತು. ಆದರೂ ಬಾಗಿಲು ತೆರೆಯಲ್ಪಡಲಿಲ್ಲ. ಲಲಿತೆಯು ಎಂತಹ ಕಠಿನ ಹೃದಯಳಿರಬಹುದು; ಸ್ತ್ರೀಯರು ಆವದುಃಖವನ್ನಾದರೂ ಸಹಿಸಬಲ್ಲರು. ತಮ್ಮ ಮಕ್ಕಳು ತಮ್ಮಿದಿರಿಗೆ ಆರ್ತನಾದ ಮಾಡುತ್ತಿದ್ದರೆ ನೋಡಿ ಸಹಿಸಲಾರರು. ಲಲಿತೆಯು ಮಗುವನ್ನು ಅವನ ಕೈಗೆ ಕೊಟ್ಟಾಗಲೇ ಯಮನ ವಶಮಾಡಿದಂತೆ ಭಾವಿಸಿದಳು. ಭಿಕ್ಷುಕನು ಕೊನೆಗೆ ಆ ಮಗುವನ್ನು ವೇಗವಾಗಿ ಬೀದಿಗೆ ಎಸೆದು ಆ ಮನೆಗೆ ಕನ್ನವನ್ನಿಕ್ಕಲು ಪ್ರಯತ್ನಿಸಿ ಒಂದು ಕಡೆ ಗೋಡೆಯನ್ನು ಹೊಡೆದು ಆ ರಂಧ್ರದಿಂದ ತನ್ನ ತಲೆಯನ್ನು ಒಳಕ್ಕೆ ನುಗ್ಗಿಸಿದನು. ಇದನ್ನು ಲಲಿತೆಯು ನೋಡಿ ತನ್ನ ಮನೆಯಲ್ಲಿದ್ದ ಮಚ್ಚು ಕತ್ತಿಯಿಂದ ಆ ಕಳ್ಳನ ತಲೆಗೆ ಬಲವಾಗಿ ಹೊಡೆದಳು. ಅವನ ತಲೆಯೊಡೆದು ರಕ್ತ ಸುರಿಯುತ್ತಿದ್ದಾಗಲೇ ಅವನ ಕಾಲನ್ನು ಒಂದು ಸರ್ಪವು ಕಚ್ಚಿತು. ಅರ್ಧ ಗಳಿಗೆಯೊಳಗಾಗಿ ಕಳ್ಳಭಿಕ್ಷುಕನು ಲೋಕಾಂತರವನ್ನೈದಿದನು. ಲಲಿತೆಯು ಬಾಗಿಲು ತೆರೆಯದೆ ಒಳಗೇ ಇದ್ದಳು. ಬೆಳಗಾಯಿತು. ಲಲಿತೆಯ ಗಂಡನು ಬಂದನು. ಗುಡಿಸಲಿಗೆ ಹತ್ತು ಮಾರು ದೂರದಲ್ಲಿ ಮಗುವು ಭೀಕರಾವಸ್ಥೆಯಲ್ಲಿ ಬಿದ್ದಿರುವುದನ್ನೂ ಗುಡಿಸಲಿನ ಹೊರಗೆ ಭಿಕ್ಷುಕನು ಸತ್ತಿರುವುದನ್ನೂ ನೋಡಿದನು. ಬಾಗಿಲು ತೆರೆಯಲ್ಪಟ್ಟಿರಲಿಲ್ಲ. ಕೂಗಿದರೂ ನಿರುತ್ತರ. ಕೂಡಲೆ ಹೊಸೂರಿನಿಂದ ಪೊಲೀಸಿನವರನ್ನು ಕರದುಕೊಂಡು ಬಂದು ಗುಡಿಸಲು ಬಾಗಿಲನ್ನೊಡೆಸಿ ಒಳಹೊಕ್ಕನು. ಲಲಿತೆಯು ಮೂರ್ಛಿತಳಾಗಿ ಬಿದ್ದಿದಾಳೆ. ಅವಳನ್ನು ಉಪಚರಿಸಿ ಮೇಲಕ್ಕೆಬ್ಬಿಸಿ ಜ್ಞಾನೋದಯವಾದಮೇಲೆ ಕೇಳಲು ನಡೆದ ವೃತ್ತಾಂತವು ತಿಳಿದುಬಂದಿತು. ಮಗುವನ್ನು ವೈದ್ಯರಿಗೆ ತೋರಿಸಲು ಸತ್ತಿರಲಿಲ್ಲವೆಂದು ತಿಳಿಯಿತು. ಮಗುವಿನ ಪ್ರಾಣವು ಉಳಿದುದಕ್ಕಾಗಿ ಎಲ್ಲರೂ ಸಂತೋಷಿಸಿದರು. ಲಲಿತೆಯ ಈ ಪಾತಿವ್ರತ್ಯ ರಕ್ಷಣೆಯ ವಿಚಾರವು ಊರಿಗೆಲ್ಲಾ ತಿಳಿದು ಜನರೆಲ್ಲರೂ ಆಕೆಯನ್ನು ಹೊಗಳಿದರು. {{rule|5em}}<noinclude></noinclude> 0m1nn57g6h2wwsomk0quizh4lmzk09r ಪುಟ:ನನ್ನ ಸಂಸಾರ.djvu/೭೧ 104 57354 322149 160530 2026-05-24T13:29:23Z Pragathi. BH 7585 /* Validated */ 322149 proofread-page text/x-wiki <noinclude><pagequality level="4" user="Pragathi. BH" /></noinclude> ಕಾದಂಬರೀ ಸಂಗ್ರಹ ಗ್ರಂಥಮಾಲಾ ನಂ. ೨೬. MADHUSUDANA (A DETECTIVE NOVEL) BY M. S. RAMASWAMY -------- ಮಧುಸೂದನ (ಒಂದು ಪತ್ತೇದಾರೀ ನಾವಲ್) ಎಂ. ಎಸ್. ರಾಮಸ್ವಾಮಿಯವರಿಂದ ಬರೆಯಲ್ಪಟ್ಟಿತು. ------------ MYSORE: ROYAL PRESS 1916 Price 4 As.] [ಬಳಿ 4 ಆಣೆ.<noinclude></noinclude> lkxlypp54om0nok7839ues7cxttzop4 ಪುಟ:ನನ್ನ ಸಂಸಾರ.djvu/೯೫ 104 57378 322423 219353 2026-05-25T08:59:42Z Shreelatha.Halemane 7642 /* Proofread */ 322423 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|center=ಮಧುಸೂದನ|left=|right=21}} ^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^</br> ಮಾರನೇ ದಿವಸವೇ ಬೊ ಬಚಾರ್‌ ಬೀದಿಗೆ ಹೋಗಿ ಅಲ್ಲಿನ 29 ನೇ ನಂಬರ್‌ ಮನೆಯ</br> ಯಜಮಾನನನ್ನು ಹುಡುಕಿಕ್ಕೊಂಡು ಹೋದನು, ಅವನನ್ನು ಕಂಡುಹಿಡಿದು ಅವನನ್ನು</br> ಮಧುಸೂದನನ ವಿಷಯವೇನಾದರೂ ಗೊತ್ತೋ ಎಂದು ಕೇಳಿದನು.</br> ಯಜಮಾನ:-ಮಧುಸೂದನನೆಂಬುವನು ಈಗ ನಮ್ಮ ಮನೆಯಲ್ಲಿ ಇಲ್ಲ.</br> ಭಾಸ್ಕರ-ಈಗ್ಯೆ ಎರಡು ವರ್ಷಗಳ ಹಿಂದೆ ಇಲ್ಲಿ ಇದ್ದನು. ಅವನನ್ನೇನಾ</br>ದರೂ ಈಚಿಗೆ ನೋಡಿದ್ದೀರಾ ?</br> ಯಜಮಾನ-: ಆಹಾ! ಈಗ ಜ್ಞಾಪಕಕ್ಕೆ ಬಂದಿತು, ಈಗ ಎರಡು ವರ್ಷ</br> ಗಳಲ್ಲಿ ಮಧುಸೂದನನೆಂಬೊಬ್ಬ ಜಮಿನ್ದಾರನಿದ್ದನು. ಅವನು ನನ್ನ ಮನೆಯನ್ನು</br> ಬಿಟ್ಟ ಮೇಲೆ ಏನಾದನೋ ನನಗೆ ಗೊತ್ತಿಲ್ಲ.</br> ಭಾಸ್ಕರ :-ಅವನ ಸಂಗಡ ಅನೇಕ ಸ್ನೇಹಿತರಿದ್ದರು. ಅವರ ವಿಷಯವೇನಾ</br> ದರೂ ನಿಮಗೆ ಗೊತ್ತಿದೆಯೋ ?</br> ಯಜಮಾನ-: ಸ್ವಾಮಿ ನನಗಾವುದೂ ತಿಳಿಯದು. ಆ ಮಧುಸೂದನ</br> ನೆಂಬುವನು ಹೊರಟು ಹೋದಮೇಲೆ ಅವರೆಲ್ಲರೂ ಹೊರಟು ಹೋದರು. ಅಷ್ಟೇ</br> ನನಗೆ ಗೊತ್ತಿರುವುದು.</br> {{gap}}ಭಾಸ್ಕರನು ಇನ್ನು ಇವನನ್ನು ಕೇಳಿ ಪ್ರಯೋಜನವಿಲ್ಲವೆಂದು ಅವನಿಂದಪ್ಪಣೆ</br> ಯನ್ನು ಪಡೆದುಕೊಂಡು ಕಾಳೀಬೀದಿಯಲ್ಲಿದ್ದ ವೈದೀಕರ ಹೋಟೆಲಿಗೆ ಹೋದನು.</br> ಆ ಹೋಟಲು ಮೈಸೂರು ದೇಶಸ್ಥನಾದ ಸುಬ್ರಹ್ಮಣ್ಯಶಾಸ್ತ್ರಿಯೆಂಬುದವನಿಂದ ನಡೆಸ</br> ಲ್ಪಡುತ್ತಿತ್ತು, ಅಲ್ಲಿ ವೈದೀಕರಿಗೆ ಮಾತ್ರ ಭೋಜನವನ್ನು ಹಾಕುತ್ತಿದ್ದರು, ಪ್ರತಿ</br>ಯೊಬ್ಬನೂ ಸ್ನಾನಾದಿಗಳನ್ನೂ ಅಲ್ಲೆ ಮಾಡಿಕೊಂಡು ಜಪ ತಪಗಳನ್ನೂ ಮಾಡಿ</br> ಅಲ್ಲಿದ್ದ ವಿಗ್ರಹಗಳ ಪೂಜೆಯನ್ನು ನೋಡಿಬಿಟ್ಟು ಅಭಿಷೇಕ ಒಲವನ್ನು ಸ್ವೀಕರಿಸಿ</br> ಸಾಲುಸಾಲಾಗಿ ಹಾಕಿದ್ದ ಎಲೆಗಳ ಬಳಿ ಕುಳಿತು ಭೋಜನಮಾಡುತ್ತಿದ್ದರು. ನೆಲವೆಲ್ಲಾ</br> ಚನ್ನಾಗಿ ಸಾರಿಸಲ್ಪಟ್ಟು ರಂಗವಲ್ಲಿ ಗಳಿಂದಲಂಕರಿಸಲ್ಪಟ್ಟಿರುತ್ತಿದ್ದವು, ಅಡಿಗೆ ಮುಂತಾದ</br>ವೆಲ್ಲವೂ ವಯಸ್ಕರಾದ ಮತ್ತು ಆಚಾರ ಸಂಪನ್ನರಾದ ವಿಧವೆಗಳಿಂದ ನಡೆಯುತ್ತಿ</br>ದ್ದವು. ಬಡಿಸುವವರೂ ಅವರೇ ಆಗಿದ್ದರು. ಇತರ ಹೋಟಲುಗಳಹಾಗೆ ಅಲ್ಲಿ</br> ಯಾರೂ ತಮ್ಮ ಅಂಗಿ ಮುಂತಾದವುಗಳೊಡನೆ ಕುಳಿತು ಭೋಜನಮಾಡುವುದಕ್ಕೆ</br> ಆಗುತ್ತಿರಲಿಲ್ಲ. ಮಧ್ಯದಲ್ಲಿ ಯಾರೂ ಎದ್ದು ಹೊಗಕೂಡದು. ಭೋಜನವು ನಡೆಯು</br>ತ್ತಿರುವಾಗ ಇಬ್ಬರು ಬ್ರಾಹ್ಮಣರು ವೇದ ಮಂತ್ರಗಳನ್ನು ಹೇಳುತ್ತಿದ್ದರು. ಹೆಚ್ಚಿನ</br><noinclude></noinclude> e4rzsvb0e8p4hokegcna56oq4uykln2 322434 322423 2026-05-25T09:17:47Z Shreesha Sharma 7840 /* Validated */ 322434 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ಮಧುಸೂದನ|left=|right=21}} ಮಾರನೇ ದಿವಸವೇ ಬೊ ಬಚಾರ್‌ ಬೀದಿಗೆ ಹೋಗಿ ಅಲ್ಲಿನ 29 ನೇ ನಂಬರ್‌ ಮನೆಯ</br> ಯಜಮಾನನನ್ನು ಹುಡುಕಿಕ್ಕೊಂಡು ಹೋದನು, ಅವನನ್ನು ಕಂಡುಹಿಡಿದು ಅವನನ್ನು</br> ಮಧುಸೂದನನ ವಿಷಯವೇನಾದರೂ ಗೊತ್ತೋ ಎಂದು ಕೇಳಿದನು.</br> ಯಜಮಾನ:-ಮಧುಸೂದನನೆಂಬುವನು ಈಗ ನಮ್ಮ ಮನೆಯಲ್ಲಿ ಇಲ್ಲ.</br> ಭಾಸ್ಕರ-ಈಗ್ಯೆ ಎರಡು ವರ್ಷಗಳ ಹಿಂದೆ ಇಲ್ಲಿ ಇದ್ದನು. ಅವನನ್ನೇನಾ</br>ದರೂ ಈಚಿಗೆ ನೋಡಿದ್ದೀರಾ ?</br> ಯಜಮಾನ-: ಆಹಾ! ಈಗ ಜ್ಞಾಪಕಕ್ಕೆ ಬಂದಿತು, ಈಗ ಎರಡು ವರ್ಷ</br> ಗಳಲ್ಲಿ ಮಧುಸೂದನನೆಂಬೊಬ್ಬ ಜಮಿನ್ದಾರನಿದ್ದನು. ಅವನು ನನ್ನ ಮನೆಯನ್ನು</br> ಬಿಟ್ಟ ಮೇಲೆ ಏನಾದನೋ ನನಗೆ ಗೊತ್ತಿಲ್ಲ.</br> ಭಾಸ್ಕರ :-ಅವನ ಸಂಗಡ ಅನೇಕ ಸ್ನೇಹಿತರಿದ್ದರು. ಅವರ ವಿಷಯವೇನಾ</br> ದರೂ ನಿಮಗೆ ಗೊತ್ತಿದೆಯೋ ?</br> ಯಜಮಾನ-: ಸ್ವಾಮಿ ನನಗಾವುದೂ ತಿಳಿಯದು. ಆ ಮಧುಸೂದನ</br> ನೆಂಬುವನು ಹೊರಟು ಹೋದಮೇಲೆ ಅವರೆಲ್ಲರೂ ಹೊರಟು ಹೋದರು. ಅಷ್ಟೇ</br> ನನಗೆ ಗೊತ್ತಿರುವುದು.</br> {{gap}}ಭಾಸ್ಕರನು ಇನ್ನು ಇವನನ್ನು ಕೇಳಿ ಪ್ರಯೋಜನವಿಲ್ಲವೆಂದು ಅವನಿಂದಪ್ಪಣೆ</br> ಯನ್ನು ಪಡೆದುಕೊಂಡು ಕಾಳೀಬೀದಿಯಲ್ಲಿದ್ದ ವೈದೀಕರ ಹೋಟೆಲಿಗೆ ಹೋದನು.</br> ಆ ಹೋಟಲು ಮೈಸೂರು ದೇಶಸ್ಥನಾದ ಸುಬ್ರಹ್ಮಣ್ಯಶಾಸ್ತ್ರಿಯೆಂಬುದವನಿಂದ ನಡೆಸ</br> ಲ್ಪಡುತ್ತಿತ್ತು, ಅಲ್ಲಿ ವೈದೀಕರಿಗೆ ಮಾತ್ರ ಭೋಜನವನ್ನು ಹಾಕುತ್ತಿದ್ದರು, ಪ್ರತಿ</br>ಯೊಬ್ಬನೂ ಸ್ನಾನಾದಿಗಳನ್ನೂ ಅಲ್ಲೆ ಮಾಡಿಕೊಂಡು ಜಪ ತಪಗಳನ್ನೂ ಮಾಡಿ</br> ಅಲ್ಲಿದ್ದ ವಿಗ್ರಹಗಳ ಪೂಜೆಯನ್ನು ನೋಡಿಬಿಟ್ಟು ಅಭಿಷೇಕ ಒಲವನ್ನು ಸ್ವೀಕರಿಸಿ</br> ಸಾಲುಸಾಲಾಗಿ ಹಾಕಿದ್ದ ಎಲೆಗಳ ಬಳಿ ಕುಳಿತು ಭೋಜನಮಾಡುತ್ತಿದ್ದರು. ನೆಲವೆಲ್ಲಾ</br> ಚನ್ನಾಗಿ ಸಾರಿಸಲ್ಪಟ್ಟು ರಂಗವಲ್ಲಿ ಗಳಿಂದಲಂಕರಿಸಲ್ಪಟ್ಟಿರುತ್ತಿದ್ದವು, ಅಡಿಗೆ ಮುಂತಾದ</br>ವೆಲ್ಲವೂ ವಯಸ್ಕರಾದ ಮತ್ತು ಆಚಾರ ಸಂಪನ್ನರಾದ ವಿಧವೆಗಳಿಂದ ನಡೆಯುತ್ತಿ</br>ದ್ದವು. ಬಡಿಸುವವರೂ ಅವರೇ ಆಗಿದ್ದರು. ಇತರ ಹೋಟಲುಗಳಹಾಗೆ ಅಲ್ಲಿ</br> ಯಾರೂ ತಮ್ಮ ಅಂಗಿ ಮುಂತಾದವುಗಳೊಡನೆ ಕುಳಿತು ಭೋಜನಮಾಡುವುದಕ್ಕೆ</br> ಆಗುತ್ತಿರಲಿಲ್ಲ. ಮಧ್ಯದಲ್ಲಿ ಯಾರೂ ಎದ್ದು ಹೊಗಕೂಡದು. ಭೋಜನವು ನಡೆಯು</br>ತ್ತಿರುವಾಗ ಇಬ್ಬರು ಬ್ರಾಹ್ಮಣರು ವೇದ ಮಂತ್ರಗಳನ್ನು ಹೇಳುತ್ತಿದ್ದರು. ಹೆಚ್ಚಿನ</br><noinclude></noinclude> l59c9a8vtj1ang7a372to2v671f4t9y ಪುಟ:ನನ್ನ ಸಂಸಾರ.djvu/೯೬ 104 57379 322424 159994 2026-05-25T09:01:41Z Shreelatha.Halemane 7642 /* Proofread */ 322424 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|left=22|center=ಕಾದಂಬರಿ ಸಂಗ್ರಹ |right=}} ಮಾತೇನು ? ಆಚಾರ ರುಚಿ ಇವುಗಳಿಗೆ ಆ ಭೋಜನಶಾಲೆಯು ತವುರು ಮನೆಯಾ ಗಿತ್ತು, ಇತರ ಹೋಟಲುಗಳಿಗಿಂತಲೂ ಇಲ್ಲಿನ ದರವು ಸ್ವಲ್ಪ ಜಾಸ್ತಿಯಾಗಿತ್ತು. ಆದರೂ ಇಲ್ಲಿಗೆ ಎಲ್ಲಾ ಹೋಟಲಿಗಿಂತಲೂ ಹೆಚ್ಚಾಗಿ ಜನಗಳು ಬರುತ್ತಿದ್ದರು, {{gap}}ಅನೇಕರು ಹೋಟಲುಗಳಲ್ಲಿರುವುದರಿಂದ ಹಾಳಾಗಿ ಹೋಗಿ ದುರ್ರ್ಮಾರ್ಗಿಗಳಾಗಿರುವರೆಂಬ ವಿಷಯವು ಎಲ್ಲರಿಗೂ ತಿಳಿದೇ ಇದೆ, ಹೋಟಲುಗಳಲ್ಲಿ ಯಾವ ಆಚಾರವೂ ಇಲ್ಲದೆ ಮನಸ್ಸಿಗೆ ಬಂದಹಾಗೆ ನಡೆಯುವುದರಿಂದ ಕೆಟ್ಟ ನಡತೆಗಳಿಗೆ ತವರು ಮನೆಗಳಾಗಿವೆ. ಆಚಾರ ಸಂಪನ್ನರಾದವರು ವಿಧಿಯಿಲ್ಲದೆ ಹೋಟಲುಗಳಿಗೆ ಸೇರಿ ಸ್ವಲ್ಪಕಾಲದಲ್ಲೇ ಆಚಾರಾದಿಗಳನ್ನು ಮರೆತು ನಾಸ್ತಿಕರಾಗುತ್ತಾರೆ. ನಾವು ಮೇಲೆ ವಿವರಿಸಿರುವ ಕಲ್ಕತ್ತಾ ನಗರದ ವೈದೀಕ ಹೋಟಲಿನ ನೇಮನಿಷ್ಟೇಗಳಲ್ಲಿ ಹತ್ತರ ಲ್ಲೊಂದು ಭಾಗವು ಇತರ ಹೋಟಲುಗಳಲ್ಲಿ ನಡೆದರೂ ಸಹಾ ಸಾಕಾಗಿದೆ. ಅನೇಕರು ಅಲ್ಲಿಗೆ ಸೇರಿ ತಮ್ಮ ಆಚಾರಾದಿಗಳನ್ನುಳಿಸಿಕೊಳ್ಳುವರು. {{gap}}ಭಾಸ್ಕರನು ಮೇಲೆ ಕಂಡ ವೈದಿಕರ ಹೋಟಲಿಗೆ ಹೋಗಿ ಅಲ್ಲಿನ ಯಜಮಾನ ನೊಡನೆ ಸ್ವಲ್ಪಹೊತ್ತು ಮಾತನಾಡಲಪೇಕ್ಷಿಸಿದನು. ಲೌಕಿಕರನ್ನು ನೋಡುವುದಕ್ಕಾ ಗಿಯೇ ಪ್ರತ್ಯೇಕವಾಗಿ ನಿರ್ಮಾಣವಾಗಿದ್ದ ಕೊಠಡಿಗೆ ಭಾಸ್ಕರನು ಹೋಗಿ ಕಾದಿರಲು ಸ್ವಲ್ಪ ಹೊತ್ತಾದ ಮೇಲೆ ಶುಭ್ರವಾದ ವಸ್ತ್ರಗಳನ್ನು ಧರಿಸಿ ವಿಭೂತಿಯನ್ನು ಧರಿಸಿದ್ದ ಬ್ರಾಹ್ಮಣನೊಬ್ಬನು ಬಂದು ತನ್ನನ್ನು ಕರೆಯ ಕಳುಹಲು ಕಾರಣವೇನೆಂದು ಕೇಳಿದನು. ತನ್ನ ದೇಶದವನಾದ ಆ ಬ್ರಾಹ್ಮಣನು ತನ್ನನ್ನು ಸ್ವಭಾಷೆಯಲ್ಲಿ ಮಾತನಾಡಿ ಸಲು ಭಾಸ್ಕರನು ಸಂತೋಷಪಟ್ಟವನಾಗಿ ಅವನಿಗೆ ವಂದಿಸಿ, ಅಯ್ಯಾ ತಮ್ಮ ಗೃಹದಲ್ಲಿ ಈಗೆರಡು ವರ್ಷಗಳಹಿಂದೆ ಭೋಜನಮಾಡುತ್ತಿದ್ದ ಮಧುಸೂದನನೆಂಬುವನನ್ನು ಬಲ್ಲಿರಾ? " {{gap}}ಬ್ರಾಹ್ಮಣಃ-ಚೆನ್ನಾಗಿ ಬಲ್ಲೆನು, ಅವನಸಂಗಡ ಅವನ ಸಹಪಾಠಿಗಳಾದವರು ಅನೇಕರು ಬರುತ್ತಿದ್ದರು. ಅವರಿಗೆಲ್ಲಾ ಅವನೇ ದುಡ್ಡು ಕೊಡುತ್ತಿದ್ದನು, ನಾನು ಅಲ್ಲಲ್ಲಿ ಜನಗಳ ಆಚಾರಾದಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಗೂಢಚಾರರನ್ನಿಟ್ಟಿರುವೆನು, ಒಂದು ದಿವಸ ನನ್ನ ಗೂಢಚಾರರಲ್ಲೊಬ್ಬನು, ಮಧುಸೂದನನ ಸ್ನೇಹಿತನೊಬ್ಬನು ರಾತ್ರೀ ಕಾಲದಲ್ಲಿ ಇಲ್ಲೇ ಸಮಿಪದಲ್ಲಿರುವ ಮದ್ಯದಂಗಡಿಯಿಂದ ಹೊರಕ್ಕೆ ಬರುವುದನ್ನು ನೋಡಿ ನನಗೆ ತಿಳಿಸಿದನು, ನಾನು ಆ ವಿಷಯವನ್ನು ಸುಯಾಗಿ ವಿಚಾರಿಸಲು ಅವನು ಮದ್ಯಪಾಯಿಯೆಂದು ತಿಳಿಯಬಂದಿತು. ಅವನನ್ನು ಇಲ್ಲಿಗೆ ಇನ್ನು ಮುಂದೆ ಬರಕೂಡ ದೆಂದು ಕಟ್ಟಳೇಮಾಡಿದೆನು. ಮಧುಸೂದನನು ಅವನ ಪರವಾಗಿ ಮಾತನಾಡಿದನು, ನಾನು<noinclude></noinclude> 5e2da02lerei212vq42t4v8q6rwgr28 322433 322424 2026-05-25T09:17:09Z Shreesha Sharma 7840 /* Validated */ 322433 proofread-page text/x-wiki <noinclude><pagequality level="4" user="Shreesha Sharma" /></noinclude>{{rh|left=22|center=ಕಾದಂಬರಿ ಸಂಗ್ರಹ |right=}} ಮಾತೇನು ? ಆಚಾರ ರುಚಿ ಇವುಗಳಿಗೆ ಆ ಭೋಜನಶಾಲೆಯು ತವುರು ಮನೆಯಾಗಿತ್ತು, ಇತರ ಹೋಟಲುಗಳಿಗಿಂತಲೂ ಇಲ್ಲಿನ ದರವು ಸ್ವಲ್ಪ ಜಾಸ್ತಿಯಾಗಿತ್ತು. ಆದರೂ ಇಲ್ಲಿಗೆ ಎಲ್ಲಾ ಹೋಟಲಿಗಿಂತಲೂ ಹೆಚ್ಚಾಗಿ ಜನಗಳು ಬರುತ್ತಿದ್ದರು, {{gap}}ಅನೇಕರು ಹೋಟಲುಗಳಲ್ಲಿರುವುದರಿಂದ ಹಾಳಾಗಿ ಹೋಗಿ ದುರ್ರ್ಮಾರ್ಗಿಗಳಾಗಿರುವರೆಂಬ ವಿಷಯವು ಎಲ್ಲರಿಗೂ ತಿಳಿದೇ ಇದೆ, ಹೋಟಲುಗಳಲ್ಲಿ ಯಾವ ಆಚಾರವೂ ಇಲ್ಲದೆ ಮನಸ್ಸಿಗೆ ಬಂದಹಾಗೆ ನಡೆಯುವುದರಿಂದ ಕೆಟ್ಟ ನಡತೆಗಳಿಗೆ ತವರು ಮನೆಗಳಾಗಿವೆ. ಆಚಾರ ಸಂಪನ್ನರಾದವರು ವಿಧಿಯಿಲ್ಲದೆ ಹೋಟಲುಗಳಿಗೆ ಸೇರಿ ಸ್ವಲ್ಪಕಾಲದಲ್ಲೇ ಆಚಾರಾದಿಗಳನ್ನು ಮರೆತು ನಾಸ್ತಿಕರಾಗುತ್ತಾರೆ. ನಾವು ಮೇಲೆ ವಿವರಿಸಿರುವ ಕಲ್ಕತ್ತಾ ನಗರದ ವೈದೀಕ ಹೋಟಲಿನ ನೇಮನಿಷ್ಟೇಗಳಲ್ಲಿ ಹತ್ತರ ಲ್ಲೊಂದು ಭಾಗವು ಇತರ ಹೋಟಲುಗಳಲ್ಲಿ ನಡೆದರೂ ಸಹಾ ಸಾಕಾಗಿದೆ. ಅನೇಕರು ಅಲ್ಲಿಗೆ ಸೇರಿ ತಮ್ಮ ಆಚಾರಾದಿಗಳನ್ನುಳಿಸಿಕೊಳ್ಳುವರು. {{gap}}ಭಾಸ್ಕರನು ಮೇಲೆ ಕಂಡ ವೈದಿಕರ ಹೋಟಲಿಗೆ ಹೋಗಿ ಅಲ್ಲಿನ ಯಜಮಾನ ನೊಡನೆ ಸ್ವಲ್ಪಹೊತ್ತು ಮಾತನಾಡಲಪೇಕ್ಷಿಸಿದನು. ಲೌಕಿಕರನ್ನು ನೋಡುವುದಕ್ಕಾ ಗಿಯೇ ಪ್ರತ್ಯೇಕವಾಗಿ ನಿರ್ಮಾಣವಾಗಿದ್ದ ಕೊಠಡಿಗೆ ಭಾಸ್ಕರನು ಹೋಗಿ ಕಾದಿರಲು ಸ್ವಲ್ಪ ಹೊತ್ತಾದ ಮೇಲೆ ಶುಭ್ರವಾದ ವಸ್ತ್ರಗಳನ್ನು ಧರಿಸಿ ವಿಭೂತಿಯನ್ನು ಧರಿಸಿದ್ದ ಬ್ರಾಹ್ಮಣನೊಬ್ಬನು ಬಂದು ತನ್ನನ್ನು ಕರೆಯ ಕಳುಹಲು ಕಾರಣವೇನೆಂದು ಕೇಳಿದನು. ತನ್ನ ದೇಶದವನಾದ ಆ ಬ್ರಾಹ್ಮಣನು ತನ್ನನ್ನು ಸ್ವಭಾಷೆಯಲ್ಲಿ ಮಾತನಾಡಿ ಸಲು ಭಾಸ್ಕರನು ಸಂತೋಷಪಟ್ಟವನಾಗಿ ಅವನಿಗೆ ವಂದಿಸಿ, ಅಯ್ಯಾ ತಮ್ಮ ಗೃಹದಲ್ಲಿ ಈಗೆರಡು ವರ್ಷಗಳಹಿಂದೆ ಭೋಜನಮಾಡುತ್ತಿದ್ದ ಮಧುಸೂದನನೆಂಬುವನನ್ನು ಬಲ್ಲಿರಾ? " {{gap}}ಬ್ರಾಹ್ಮಣಃ-ಚೆನ್ನಾಗಿ ಬಲ್ಲೆನು, ಅವನಸಂಗಡ ಅವನ ಸಹಪಾಠಿಗಳಾದವರು ಅನೇಕರು ಬರುತ್ತಿದ್ದರು. ಅವರಿಗೆಲ್ಲಾ ಅವನೇ ದುಡ್ಡು ಕೊಡುತ್ತಿದ್ದನು, ನಾನು ಅಲ್ಲಲ್ಲಿ ಜನಗಳ ಆಚಾರಾದಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಗೂಢಚಾರರನ್ನಿಟ್ಟಿರುವೆನು, ಒಂದು ದಿವಸ ನನ್ನ ಗೂಢಚಾರರಲ್ಲೊಬ್ಬನು, ಮಧುಸೂದನನ ಸ್ನೇಹಿತನೊಬ್ಬನು ರಾತ್ರೀ ಕಾಲದಲ್ಲಿ ಇಲ್ಲೇ ಸಮಿಪದಲ್ಲಿರುವ ಮದ್ಯದಂಗಡಿಯಿಂದ ಹೊರಕ್ಕೆ ಬರುವುದನ್ನು ನೋಡಿ ನನಗೆ ತಿಳಿಸಿದನು, ನಾನು ಆ ವಿಷಯವನ್ನು ಸುಯಾಗಿ ವಿಚಾರಿಸಲು ಅವನು ಮದ್ಯಪಾಯಿಯೆಂದು ತಿಳಿಯಬಂದಿತು. ಅವನನ್ನು ಇಲ್ಲಿಗೆ ಇನ್ನು ಮುಂದೆ ಬರಕೂಡ ದೆಂದು ಕಟ್ಟಳೇಮಾಡಿದೆನು. ಮಧುಸೂದನನು ಅವನ ಪರವಾಗಿ ಮಾತನಾಡಿದನು, ನಾನು<noinclude></noinclude> joe4r4yzsye3khatetp3aej1ppvaeqs ಪುಟ:ನನ್ನ ಸಂಸಾರ.djvu/೯೭ 104 57380 322425 160518 2026-05-25T09:03:39Z Shreelatha.Halemane 7642 /* Proofread */ 322425 proofread-page text/x-wiki <noinclude><pagequality level="3" user="Shreelatha.Halemane" />{{rh|left=|center=ಮಧುಸೂದನ|right=23}}</noinclude> ಅದನ್ನು ಕೇಳದೇಹೋಗಲು ಮಾರನೇ ದಿವಸದಿಂದ ಮಧುಸೂದನನೂ ಅವನ ಸ್ನೇಹಿ ತರೂ ಇಲ್ಲಿಗೆ ಬರುವುದನ್ನೇ ನಿಲ್ಲಿಸಿಬಿಟ್ಟರು. ಆ ಮೇಲೆ ಅವರೆಲ್ಲಾ ಏನಾದರೋ ನನಗೆ ತಿಳಿಯದು. ಆದರೆ ಅವರಲ್ಲಿ ಕೆಲವರು ಈಗಲೂ ಅದೋ ಅಲ್ಲಿ ಕಾಣುವ ಮದ್ಯದಂಗಡಿಗೆ ರಾತ್ರೀ ಕಾಲದಲ್ಲಿ ಬರುತ್ತಾರೆಂದು ಕೇಳಿ ಬಲ್ಲೆನು. {{gap}}ಭಾಸ್ಕರ:__ನಾನು ಇಷ್ಟೇ ತಿಳಿದುಕೊಳ್ಳಬೇಕಾಗಿದ್ದದ್ದು ಎಂದು ಯೋಚಿಸಿ ನಾನು ಹೋಗಿ ಬರುವೆನು ಎಂದು ಆತನ ಅಪ್ಪಣೆಪಡೆದು ಹೊರಟು ಹೋದನು. {{gap}}ಭಾಸ್ಕರನು ನೆಟ್ಟಗೆ ಮನೆಗೆ ಬಂದು ಗೋವಿಂದನನ್ನು ಒಬ್ಬ ಕುಡುಕನ ಉಡು ಪನ್ನು ತರುವಂತೆ ಕೇಳಿಕೊಂಡನು. ಅದರಂತೆ ಮಾರನೇ ದಿವಸ ಗೋವಿಂದನು ಒಂದು ಹಳೆಯ ಉಡುಪನ್ನು ತಂದು ಕೊಟ್ಟನು. ಭಾಸ್ಕರನು ತನ್ನ ರೂಪವನ್ನು ಬದಲಾಯಿಸಿ ಕೊಂಡು ಉದ್ದವಾದ ಕೃತಕದಾಡಿಗಳನ್ನೂ ಮೀಶೆಗಳನ್ನೂ ಕಟ್ಟಿಕೊಂಡು ಮುಖ ಕ್ಕೆಲ್ಲಾ ಯಾವದೋ ಒಂದು ವಿಧವಾದ ಬಣ್ಣವನ್ನು ಬಳಿದು ಕೊಳ್ಳಲು ಮುಖವು ಘೋರವಾಗಿ ಕಾಣುತ್ತಾ ನೋಡುವುದಕ್ಕೆ ಠಕ್ಕನ ಮುಖದಂತೆ ಕಾಣುವಂತೆಮಾಡಿ ಕೊಂಡು ಗೋವಿಂದನು ತಂದು ಕೊಟ್ಟ ಉಡುಪನ್ನು ಧರಿಸಿದನು. ಆಗ ಅವನನ್ನು ನೋಡಿದ್ದೇ ಆದರೆ ಯಾರೇ ಆಗಲೀ ಅವನನ್ನು ಒಬ್ಬ ಕಳ್ಳನೆಂದು ಹೇಳುತ್ತಿದ್ದರು. ಸಾಯಂಕಾಲ ಏಳುಘಂಟೆಯವರಿಗೂ ಕಾದಿದ್ದು ಆ ಮೇಲೆ ಇನ್ನೂರು ಮುನ್ನೂರು ರೂಪಾಯಿಗಳನ್ನು ತೆಗೆದುಕೊಂಡು ತನ್ನ ಒಳಜೋಬಿನಲ್ಲಿ ಭದ್ರಪಡಿಸಿಕೊಂಡು ಎರಡು ರಿವಾಲ್ವರುಗಳನ್ನೂ ಒಳಗಿಟ್ಟು ಕೊಂಡು ಹೊರಕ್ಕೆ ಹೊರಟು ನೆಟ್ಟಗೆ ಕಾಳೇಬೀದಿಗೆ ಹೋದನು. ಅಲ್ಲಿಗೆ ಹೋಗುವಹೊತ್ತಿಗೆ ಎಂಟುಗಂಟೆಯ ಸಮಯವಾಗಿದ್ದಿತು. ಅಲ್ಲಿಂದ ಭಾಸ್ಕರನು ಕೂಗಾಡುತ್ತಲೂ ಕುಣಿಯುತ್ತಲೂ, ಹಾಡುತ್ತಲೂ, ಬಾಯಿಗೆ ಬಂದಹಾಗೆಲ್ಲಾ ಮಾತನಾಡುತ್ತಲೂ ಸಂಪೂರ್ಣವಾಗಿ ಕುಡಿದವನಂತೆ ನಟಿಸುತ್ತಾ ಅಲ್ಲಲ್ಲಿ ಬಿದ್ದೇಳುತ್ತಾ ಕೊನೆಗೆ ಆ ಬೀದಿಯಲ್ಲಿದ್ದ ಮದ್ಯದಂಗಡಿಯನ್ನು ಪ್ರವೇಶ ಮಾಡಿದನು. ಮದ್ಯಪಾಯಿಗಳಿಗಾಗಿಯೇ ಕಾದಿರತಕ್ಕಂಥಾ ಅಲ್ಲಿಯ ಜನಗಳು ಇವನನ್ನು ಎದುರುಗೊಂಡು ಬಂದು ಒಳಕ್ಕೆ ಕರೆದುಕೊಂಡು ಹೋದರು. {{gap}}ಸಂಘಸಂಸ್ಕರಣ ಕರ್ತರೂ ಇತರರೂ ಸೇರಿ ಬಾಲ್ಯ ವಿವಾಹದಿಂದಲೂ ಮತ್ತು ಇತರ ಆಚಾರಗಳಿಂದಲೂ ಇಂಡಿಯಾ ದೇಶದ ಮರಣವು ಹೆಚ್ಚಾಗಿದೆಯೆಂದು ಅನ್ಯಾ ಯವಾಗಿ ಸರಿಯಾದ ಕಾರಣಗಳಿಲ್ಲದೇನೇ ಹೇಳುತ್ತಾರೆ. ಸರಿಯಾಗಿ ಯೋಚಿಸಿ ನೋಡುವಲ್ಲಿ ಬಾಲ್ಯ ವಿವಾಹದಿಂದ ಮರಣಗಳೇನೂ ಹೆಚ್ಚಿಲ್ಲವು. ಮದುವೆಯಾಗ ತಕ್ಕಂಥಾ ಹೆಣ್ಣೇನೂ ತನ್ನ ಗಂಡನನ್ನು ಕಚ್ಚಿ ಕೊಲ್ಲುವುದಕ್ಕೆ ಸರ್ಪವಲ್ಲವು. ವಿವಾಹ<noinclude></noinclude> 8qsve4t64674y5qr4jqxoukrpgoqecf 322432 322425 2026-05-25T09:16:34Z Shreesha Sharma 7840 /* Validated */ 322432 proofread-page text/x-wiki <noinclude><pagequality level="4" user="Shreesha Sharma" />{{rh|left=|center=ಮಧುಸೂದನ|right=23}}</noinclude> ಅದನ್ನು ಕೇಳದೇಹೋಗಲು ಮಾರನೇ ದಿವಸದಿಂದ ಮಧುಸೂದನನೂ ಅವನ ಸ್ನೇಹಿ ತರೂ ಇಲ್ಲಿಗೆ ಬರುವುದನ್ನೇ ನಿಲ್ಲಿಸಿಬಿಟ್ಟರು. ಆ ಮೇಲೆ ಅವರೆಲ್ಲಾ ಏನಾದರೋ ನನಗೆ ತಿಳಿಯದು. ಆದರೆ ಅವರಲ್ಲಿ ಕೆಲವರು ಈಗಲೂ ಅದೋ ಅಲ್ಲಿ ಕಾಣುವ ಮದ್ಯದಂಗಡಿಗೆ ರಾತ್ರೀ ಕಾಲದಲ್ಲಿ ಬರುತ್ತಾರೆಂದು ಕೇಳಿ ಬಲ್ಲೆನು. {{gap}}ಭಾಸ್ಕರ:__ನಾನು ಇಷ್ಟೇ ತಿಳಿದುಕೊಳ್ಳಬೇಕಾಗಿದ್ದದ್ದು ಎಂದು ಯೋಚಿಸಿ ನಾನು ಹೋಗಿ ಬರುವೆನು ಎಂದು ಆತನ ಅಪ್ಪಣೆಪಡೆದು ಹೊರಟು ಹೋದನು. {{gap}}ಭಾಸ್ಕರನು ನೆಟ್ಟಗೆ ಮನೆಗೆ ಬಂದು ಗೋವಿಂದನನ್ನು ಒಬ್ಬ ಕುಡುಕನ ಉಡುಪನ್ನು ತರುವಂತೆ ಕೇಳಿಕೊಂಡನು. ಅದರಂತೆ ಮಾರನೇ ದಿವಸ ಗೋವಿಂದನು ಒಂದು ಹಳೆಯ ಉಡುಪನ್ನು ತಂದು ಕೊಟ್ಟನು. ಭಾಸ್ಕರನು ತನ್ನ ರೂಪವನ್ನು ಬದಲಾಯಿಸಿ ಕೊಂಡು ಉದ್ದವಾದ ಕೃತಕದಾಡಿಗಳನ್ನೂ ಮೀಶೆಗಳನ್ನೂ ಕಟ್ಟಿಕೊಂಡು ಮುಖ ಕ್ಕೆಲ್ಲಾ ಯಾವದೋ ಒಂದು ವಿಧವಾದ ಬಣ್ಣವನ್ನು ಬಳಿದು ಕೊಳ್ಳಲು ಮುಖವು ಘೋರವಾಗಿ ಕಾಣುತ್ತಾ ನೋಡುವುದಕ್ಕೆ ಠಕ್ಕನ ಮುಖದಂತೆ ಕಾಣುವಂತೆಮಾಡಿ ಕೊಂಡು ಗೋವಿಂದನು ತಂದು ಕೊಟ್ಟ ಉಡುಪನ್ನು ಧರಿಸಿದನು. ಆಗ ಅವನನ್ನು ನೋಡಿದ್ದೇ ಆದರೆ ಯಾರೇ ಆಗಲೀ ಅವನನ್ನು ಒಬ್ಬ ಕಳ್ಳನೆಂದು ಹೇಳುತ್ತಿದ್ದರು. ಸಾಯಂಕಾಲ ಏಳುಘಂಟೆಯವರಿಗೂ ಕಾದಿದ್ದು ಆ ಮೇಲೆ ಇನ್ನೂರು ಮುನ್ನೂರು ರೂಪಾಯಿಗಳನ್ನು ತೆಗೆದುಕೊಂಡು ತನ್ನ ಒಳಜೋಬಿನಲ್ಲಿ ಭದ್ರಪಡಿಸಿಕೊಂಡು ಎರಡು ರಿವಾಲ್ವರುಗಳನ್ನೂ ಒಳಗಿಟ್ಟು ಕೊಂಡು ಹೊರಕ್ಕೆ ಹೊರಟು ನೆಟ್ಟಗೆ ಕಾಳೇಬೀದಿಗೆ ಹೋದನು. ಅಲ್ಲಿಗೆ ಹೋಗುವಹೊತ್ತಿಗೆ ಎಂಟುಗಂಟೆಯ ಸಮಯವಾಗಿದ್ದಿತು. ಅಲ್ಲಿಂದ ಭಾಸ್ಕರನು ಕೂಗಾಡುತ್ತಲೂ ಕುಣಿಯುತ್ತಲೂ, ಹಾಡುತ್ತಲೂ, ಬಾಯಿಗೆ ಬಂದಹಾಗೆಲ್ಲಾ ಮಾತನಾಡುತ್ತಲೂ ಸಂಪೂರ್ಣವಾಗಿ ಕುಡಿದವನಂತೆ ನಟಿಸುತ್ತಾ ಅಲ್ಲಲ್ಲಿ ಬಿದ್ದೇಳುತ್ತಾ ಕೊನೆಗೆ ಆ ಬೀದಿಯಲ್ಲಿದ್ದ ಮದ್ಯದಂಗಡಿಯನ್ನು ಪ್ರವೇಶ ಮಾಡಿದನು. ಮದ್ಯಪಾಯಿಗಳಿಗಾಗಿಯೇ ಕಾದಿರತಕ್ಕಂಥಾ ಅಲ್ಲಿಯ ಜನಗಳು ಇವನನ್ನು ಎದುರುಗೊಂಡು ಬಂದು ಒಳಕ್ಕೆ ಕರೆದುಕೊಂಡು ಹೋದರು. {{gap}}ಸಂಘಸಂಸ್ಕರಣ ಕರ್ತರೂ ಇತರರೂ ಸೇರಿ ಬಾಲ್ಯ ವಿವಾಹದಿಂದಲೂ ಮತ್ತು ಇತರ ಆಚಾರಗಳಿಂದಲೂ ಇಂಡಿಯಾ ದೇಶದ ಮರಣವು ಹೆಚ್ಚಾಗಿದೆಯೆಂದು ಅನ್ಯಾ ಯವಾಗಿ ಸರಿಯಾದ ಕಾರಣಗಳಿಲ್ಲದೇನೇ ಹೇಳುತ್ತಾರೆ. ಸರಿಯಾಗಿ ಯೋಚಿಸಿ ನೋಡುವಲ್ಲಿ ಬಾಲ್ಯ ವಿವಾಹದಿಂದ ಮರಣಗಳೇನೂ ಹೆಚ್ಚಿಲ್ಲವು. ಮದುವೆಯಾಗ ತಕ್ಕಂಥಾ ಹೆಣ್ಣೇನೂ ತನ್ನ ಗಂಡನನ್ನು ಕಚ್ಚಿ ಕೊಲ್ಲುವುದಕ್ಕೆ ಸರ್ಪವಲ್ಲವು. ವಿವಾಹ<noinclude></noinclude> scho5ysckgbin2km6jdpcav6a9mhz6m ಪುಟ:ನನ್ನ ಸಂಸಾರ.djvu/೯೮ 104 57381 322426 160520 2026-05-25T09:05:25Z Shreelatha.Halemane 7642 /* Proofread */ 322426 proofread-page text/x-wiki <noinclude><pagequality level="3" user="Shreelatha.Halemane" />{{rh|left=24|center=ಕಾದಂಬರೀ ಸಂಗ್ರಹ |right=}}</noinclude> ವಾದ ಕೂಡಲೇ ಗಂಡನಾದವನು ಸಾಯ ಬೇಕೆಂದು ಯಾವಶಾಸ್ತ್ರದಲ್ಲಿ ಯೂ, ಯಾವ ಆರೋಗ್ಯ ಸೂತ್ರಗಳಲ್ಲಿ ಯೂ ಹೇಳಿಲ್ಲವು, ವಿವಾಹ ನೂಡಿಕೊಳ್ಳತಕ್ಕಂಥಾ ಹುಡುಗ ನಾದವನು ತನ್ನ ದೇಹವನ್ನು ಸರಿಯಾಗಿಟ್ಟು ಕೊಂಡಿದ್ದು ತನ್ನ ಬ್ರಹ್ಮಚರ್ಯವನ್ನು ಕಾಪಾಡಿ ಕೊಂಡಿದ್ದರೆ ಅವನು ವಿವಾಹವಾದಕೂಡಲೇ ಹೇಗೆ ಸಾಯುವನು? ಇದನ್ನು ಯೋಚಿಸದೆ ಬಾಲ್ಯ ವಿವಾಹವು ಮರಣಕ್ಕೆ ಕಾರಣವಾಗಿದೆಯೆಂದು ಹೇಳಿದರೆ ಹೇಗೆ ಅದನ್ನು ನಂಬಬಹುದು. ಬಾಲ್ಯವಿವಾಹವನ್ನು ಬಿಟ್ಟು ಪ್ರೌಢಾವಿವಾಹ ಮಾಡಬೇ ಕೆಂಬುವರ ಸಂಖ್ಯೆಯು ಈಗ ಅಧಿಕವಾಗಿರುವದು. ಒಂದು ಭಾಗವಾದ ಬ್ರಾಹ್ಮ ಣರಲ್ಲೂ ವೈಶ್ಯರಲ್ಲೂ ಬಾಲ್ಯ ವಿವಾಹವು ಕಂಡುಬರುವುದು. ಆದರೆ ಸರಿಯಾಗಿ ವಿಚಾರಿಸಿ ನೋಡಿದ್ದರಲ್ಲಿ ಇತರ ಜಾತಿಯವರಲ್ಲಾಗುವಷ್ಟು ಮರಣವು ಇವರಲ್ಲಾ ಗುವುದಿಲ್ಲವೆಂದು ತಿಳಿದು ಬಂದಿದೆ. ಹಾಗಾದರೆ ಚಿಕ್ಕ ವಯಸ್ಸಿನ ಮರಣಕ್ಕೇನು ಕಾರಣ? ಸ್ವಲ್ಪ ಯೋಚಿಸಿನೋಡಿದರೆ ತಿಳಿಯುವುದು.ಇತರ ಜಾತಿಯವರು ಅಧಿಕ ವಾಗಿ ಮದ್ಯವನ್ನು ಪಾನಮಾಡುವುದರಿಂದಲೂ ಮಾದಕ ಪದಾರ್ಥಗಳನ್ನು ತಿನ್ನು ವು ದರಿಂದಲೂ ಬಾಲಾದಿಗಳೂ ಕೂಡ ದೇಹವನ್ನು ಹಾಳುಮಾಡಿಕೊಳ್ಳುತ್ತಾರೆ. ಈ ಮದ್ಯದಂಗಡಿಗಳು ಜನನಿಬಿಡವಾದ ಸ್ಥಳಗಳಲ್ಲಿರುವುದರಿಂದ ಅನೇಕರು ಅವುಗಳ ಆಶೆಯೆಂಬ ಬಲೆಗೆ ತುತ್ತಾಗುತ್ತಾರೆ. ಸಂಘಸಂಸ್ಕರಣ ಕರ್ತರು ಯಾವ ಕೆಡು ಕನ್ನೂ ಮಾಡದ ಬಾಲ್ಯ ವಿವಾಹಾದಿಗಳ ವಿಷಯವನ್ನು ಬಿಟ್ಟು ಕಣ್ಣೆದುರಿಗೇ ಕಾಣು ತ್ತಿರುವ ಈ ಕೆಟ್ಟ ಕುಡಿತವನ್ನೂ, ಮದ್ಯದಂಗಡಿಗಳನ್ನೂ ನಾಶಪಡಿಸುವುದಕ್ಕೆ ಪ್ರಯತ್ನ ಪಡಲಿ! ಆದರೆ ಇದು ಸರ್ಕಾರದವರಿಗೆ ಸೇರಿದ ವಿಷಯ. ಅವರೊಡನೆ ಹೆಣ ಗಾಡಲು-ಇವರಿಗೆ ಧೈರ್ಯಸಾಲದು. {{gap}}ಭಾಸ್ಕರನು ಒಳಕ್ಕೆ ಹೋಗಿ ಸುತ್ತಲೂ ನೋಡಿದನು. ಒಂದು ಮೂಲೆಯಲ್ಲಿ ಗೌರವಸ್ಥನಂತೆ ಕಂಡು ಬರುತ್ತಿದ್ದವನೊಬ್ಬನು ಕುಳಿತಿರುವುದನ್ನು ನೋಡಿ ತೂರಾಡಿ ಕೊಂಡು ಅವನಬಳಿ ಹೋಗಿ ಕುಳಿತುಕೊಂಡು ಏನೇನೋ ಮಾತನಾಡ ತೊಡಗಿದನು. ಅಲ್ಲಿ ಕುಳಿತಿದ್ದ ಮನುಷ್ಯನು ಇವನನ್ನು ನೋಡಿ ಇಂಗ್ಲೀಷಿನಲ್ಲಿ ನೀನು ಯಾರು who are you) ಎಂದು ಕೇಳಿದನು. ಅದಕ್ಕೆ ಭಾಸ್ಕರನು ಅರ್ಧ ಇಂಗ್ಲೀಷಿನಿಂದಲೂ ಅರ್ದ ಹಿಂದೂಸ್ಥಾನದಿಂದಲೂ ಅರ್ಧರ್ಧ ಮಾತುಗಳಾಗಿ " ನಾನೇ... ನಾನು ನಾನೇ ಗೊತ್ತಿಲ್ಲವೇ ನನ್ನ ಹೆಸರು... ನಾನು...ನಾನೇ ನೀಲಕಂಠಬಾಬು...ನೀನ್ಯಾರು ನಿನ್ನಲ್ಲಿ ದುಡ್ಡಿದೆಯೋ ಎಲ್ಲಿ. ದಾಹವಾಗುತ್ತೆ. ಮದ್ಯವನ್ನು ಕೊಡಿಸು ನೋಡೋಣ" ಎಂದನು. {{gap}}ಮನುಷ್ಯ:-ಅಯ್ಯಾ ನೀಲಕಂಠ ಬಾಬು ಆಗಲೇ ಅತಿಯಾಗಿ ಕುಡಿದಿರುವೆ. ಇನ್ನೂ ಬೇಕೇ? ನಾನು ಯಾರಾದರೆ ನಿನಗೇನು ? ಬೇಕಾಗಿದ್ದರೆ ನಿನಗೆ ಕುಡಿಯುವು<noinclude></noinclude> rk4fu79ecg9giw99swcrl8ipttht9o3 322431 322426 2026-05-25T09:15:54Z Shreesha Sharma 7840 /* Validated */ 322431 proofread-page text/x-wiki <noinclude><pagequality level="4" user="Shreesha Sharma" />{{rh|left=24|center=ಕಾದಂಬರೀ ಸಂಗ್ರಹ |right=}}</noinclude> ವಾದ ಕೂಡಲೇ ಗಂಡನಾದವನು ಸಾಯ ಬೇಕೆಂದು ಯಾವಶಾಸ್ತ್ರದಲ್ಲಿ ಯೂ, ಯಾವ ಆರೋಗ್ಯ ಸೂತ್ರಗಳಲ್ಲಿಯೂ ಹೇಳಿಲ್ಲವು, ವಿವಾಹ ನೂಡಿಕೊಳ್ಳತಕ್ಕಂಥಾ ಹುಡುಗ ನಾದವನು ತನ್ನ ದೇಹವನ್ನು ಸರಿಯಾಗಿಟ್ಟು ಕೊಂಡಿದ್ದು ತನ್ನ ಬ್ರಹ್ಮಚರ್ಯವನ್ನು ಕಾಪಾಡಿ ಕೊಂಡಿದ್ದರೆ ಅವನು ವಿವಾಹವಾದಕೂಡಲೇ ಹೇಗೆ ಸಾಯುವನು? ಇದನ್ನು ಯೋಚಿಸದೆ ಬಾಲ್ಯ ವಿವಾಹವು ಮರಣಕ್ಕೆ ಕಾರಣವಾಗಿದೆಯೆಂದು ಹೇಳಿದರೆ ಹೇಗೆ ಅದನ್ನು ನಂಬಬಹುದು. ಬಾಲ್ಯವಿವಾಹವನ್ನು ಬಿಟ್ಟು ಪ್ರೌಢಾವಿವಾಹ ಮಾಡಬೇ ಕೆಂಬುವರ ಸಂಖ್ಯೆಯು ಈಗ ಅಧಿಕವಾಗಿರುವದು. ಒಂದು ಭಾಗವಾದ ಬ್ರಾಹ್ಮ ಣರಲ್ಲೂ ವೈಶ್ಯರಲ್ಲೂ ಬಾಲ್ಯ ವಿವಾಹವು ಕಂಡುಬರುವುದು. ಆದರೆ ಸರಿಯಾಗಿ ವಿಚಾರಿಸಿ ನೋಡಿದ್ದರಲ್ಲಿ ಇತರ ಜಾತಿಯವರಲ್ಲಾಗುವಷ್ಟು ಮರಣವು ಇವರಲ್ಲಾ ಗುವುದಿಲ್ಲವೆಂದು ತಿಳಿದು ಬಂದಿದೆ. ಹಾಗಾದರೆ ಚಿಕ್ಕ ವಯಸ್ಸಿನ ಮರಣಕ್ಕೇನು ಕಾರಣ? ಸ್ವಲ್ಪ ಯೋಚಿಸಿನೋಡಿದರೆ ತಿಳಿಯುವುದು.ಇತರ ಜಾತಿಯವರು ಅಧಿಕ ವಾಗಿ ಮದ್ಯವನ್ನು ಪಾನಮಾಡುವುದರಿಂದಲೂ ಮಾದಕ ಪದಾರ್ಥಗಳನ್ನು ತಿನ್ನು ವು ದರಿಂದಲೂ ಬಾಲಾದಿಗಳೂ ಕೂಡ ದೇಹವನ್ನು ಹಾಳುಮಾಡಿಕೊಳ್ಳುತ್ತಾರೆ. ಈ ಮದ್ಯದಂಗಡಿಗಳು ಜನನಿಬಿಡವಾದ ಸ್ಥಳಗಳಲ್ಲಿರುವುದರಿಂದ ಅನೇಕರು ಅವುಗಳ ಆಶೆಯೆಂಬ ಬಲೆಗೆ ತುತ್ತಾಗುತ್ತಾರೆ. ಸಂಘಸಂಸ್ಕರಣ ಕರ್ತರು ಯಾವ ಕೆಡು ಕನ್ನೂ ಮಾಡದ ಬಾಲ್ಯ ವಿವಾಹಾದಿಗಳ ವಿಷಯವನ್ನು ಬಿಟ್ಟು ಕಣ್ಣೆದುರಿಗೇ ಕಾಣು ತ್ತಿರುವ ಈ ಕೆಟ್ಟ ಕುಡಿತವನ್ನೂ, ಮದ್ಯದಂಗಡಿಗಳನ್ನೂ ನಾಶಪಡಿಸುವುದಕ್ಕೆ ಪ್ರಯತ್ನ ಪಡಲಿ! ಆದರೆ ಇದು ಸರ್ಕಾರದವರಿಗೆ ಸೇರಿದ ವಿಷಯ. ಅವರೊಡನೆ ಹೆಣ ಗಾಡಲು-ಇವರಿಗೆ ಧೈರ್ಯಸಾಲದು. {{gap}}ಭಾಸ್ಕರನು ಒಳಕ್ಕೆ ಹೋಗಿ ಸುತ್ತಲೂ ನೋಡಿದನು. ಒಂದು ಮೂಲೆಯಲ್ಲಿ ಗೌರವಸ್ಥನಂತೆ ಕಂಡು ಬರುತ್ತಿದ್ದವನೊಬ್ಬನು ಕುಳಿತಿರುವುದನ್ನು ನೋಡಿ ತೂರಾಡಿ ಕೊಂಡು ಅವನಬಳಿ ಹೋಗಿ ಕುಳಿತುಕೊಂಡು ಏನೇನೋ ಮಾತನಾಡ ತೊಡಗಿದನು. ಅಲ್ಲಿ ಕುಳಿತಿದ್ದ ಮನುಷ್ಯನು ಇವನನ್ನು ನೋಡಿ ಇಂಗ್ಲೀಷಿನಲ್ಲಿ ನೀನು ಯಾರು who are you) ಎಂದು ಕೇಳಿದನು. ಅದಕ್ಕೆ ಭಾಸ್ಕರನು ಅರ್ಧ ಇಂಗ್ಲೀಷಿನಿಂದಲೂ ಅರ್ದ ಹಿಂದೂಸ್ಥಾನದಿಂದಲೂ ಅರ್ಧರ್ಧ ಮಾತುಗಳಾಗಿ " ನಾನೇ... ನಾನು ನಾನೇ ಗೊತ್ತಿಲ್ಲವೇ ನನ್ನ ಹೆಸರು... ನಾನು...ನಾನೇ ನೀಲಕಂಠಬಾಬು...ನೀನ್ಯಾರು ನಿನ್ನಲ್ಲಿ ದುಡ್ಡಿದೆಯೋ ಎಲ್ಲಿ. ದಾಹವಾಗುತ್ತೆ. ಮದ್ಯವನ್ನು ಕೊಡಿಸು ನೋಡೋಣ" ಎಂದನು. {{gap}}ಮನುಷ್ಯ:-ಅಯ್ಯಾ ನೀಲಕಂಠ ಬಾಬು ಆಗಲೇ ಅತಿಯಾಗಿ ಕುಡಿದಿರುವೆ. ಇನ್ನೂ ಬೇಕೇ? ನಾನು ಯಾರಾದರೆ ನಿನಗೇನು ? ಬೇಕಾಗಿದ್ದರೆ ನಿನಗೆ ಕುಡಿಯುವು<noinclude></noinclude> kswkafjzcxtvcziwiepoi8t72vj7ej7 ಪುಟ:ನನ್ನ ಸಂಸಾರ.djvu/೧೫೬ 104 57439 322355 161372 2026-05-25T04:32:04Z Shreelatha.Halemane 7642 /* Validated */ 322355 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೮ |right=ಕಾದಂಬರೀಸಂಗ್ರಹ}} {{gap}}ಅವರ ಅಪ್ಪಣೆಯಂತೆ ಆಚಾರ್ಯರು ಅವರಿಗೆ ವಂದನಾದಿಗಳನ್ನುಮಾಡಿ ಮಹೇಶ್ವರನ ರಾಜಧಾನಿಯಾದ ಕಾಶಿಗೆ ಹೋಗಿ ಭಾಗೀರಥಿಯಲ್ಲಿ ಸ್ನಾನಮಾಡಿ, ಅಲ್ಲಿ ಗಂಗಾ ಷ್ಟಕವೆಂಬ ಸ್ತೋತ್ರವನ್ನು ರಚಿಸಿ, ಕೈತ್ರಯಾತ್ರೆಯಂ ನೆರವೇರಿಸಿ ಧುಂಡಿರಾಜ, ಭೈರ ವಮಾಧವಾದ್ಯಷ್ಟಕಸ್ತವಗಳನ್ನು ಹೇಳಿ ದೇವಾದಿದೇವನಾದ ವಿಶ್ವೇಶ್ವರನನ್ನು ಪೂಜಿಸಿ, ಕಾಶಿಜನಗಳಿಂದ ಸೇವಿಸಲ್ಪಡುತ್ತಲೂ, ಸನ್ಯಾಸವನ್ನು ಪ್ರಚಾರಮಾಡುತ್ತಲೂ ಇದ್ದರು. {{center|-->•<--}} {{center|'''ಷಷ್ಠವಲ್ಲರೀ'''.}} {{center|---------}} {{center|}}ಕಾಶ್ಯಾಂ ವಸನ್ನಿ ಖಿಲದುಷ್ಟ ಮತಾನಿ ಭಿಂರ್ದ {{center|}}ಶಿಷ್ಯಂ ಸನಂದನಮವಾಪ್ತಮವೇಕ್ಷ್ಯ ತಸ್ಯ |{{center|}}ಚಕ್ರೇ ಹಿ ಪದ್ಮಚರಣಾಹ್ವಯಮಾತ್ಮಬುಧ್ಯಾ {{center|}}ಭಾಷ್ಯಾದಿಕಂ ಚ ಗಿರಿಜಾರಮಣಾನುಮತ್ಯಾ || {{center|----------}} {{gap}}ಶಂಕರಾಚಾರ್ಯರು ಸನ್ಯಾಸಪ್ರಚಾರಮಾಡುತ್ತಿರುವ ಸಮಯದಲ್ಲಿ ಒಂದು ದಿನ ಒಬ್ಬ ಬ್ರಾಹ್ಮಣಬಾಲಕನು ಬಂದು ಆಚಾರ್ಯರಿಗೆ ನಮಸ್ಕರಿಸಿ ನಿಲ್ಲಲು, ಶಂಕರರು ಅವನನ್ನು “ನೀನು ದ್ವಿಜರಲ್ಲಿ ಯಾರು? ನಿನ್ನ ವಾಸವು ಎಲ್ಲಿ? ಇಲ್ಲಿಗೆ ಏತಕ್ಕೆ ಬಂದೆ?” ಎನ್ನಲು ಆ ಬಾಲಕನು"ಸ್ವಾಮಿ ! ನಾನು ದ್ವಿಜರಲ್ಲಿ ಬ್ರಾಹ್ಮಣನು; ನನ್ನ ವಾಸವು ಜೋಲದೇಶವು; ಈ ಸಂಸಾರಸಾಗರದಲ್ಲಿ ಮುಳಿ ಗಿದಂಥಾವನಾಗಿ ಏಳಲು ಶಕ್ತಿಯಿಲ್ಲದೇ, ಅದನ್ನು ನಿವಾರಿಸಲರ್ಹರಾದ ಗುರುಗಳನ್ನು ನಾನಾ ದೇಶಗಳಲ್ಲಿಯೂ ಹುಡುಕಿ ಎಲ್ಲಿಯೂ ಕಾಣದೇ ಇಲ್ಲಿಗೆ ಬಂದಿದ್ದೇನೆ; ಇದೇ ನನ್ನ ಉದ್ದೇಶವು; ಆದ್ದರಿಂದ ತಾವು ನನ್ನಲ್ಲಿ ದಯವಿಟ್ಟು ನನ್ನನ್ನು ತಮ್ಮ ಶಿಷ್ಯನನ್ನಾಗಿಮಾಡಿಕೊಳ್ಳಬೇಕು" ಎಂದು ಪ್ರಾರ್ಥಿಸಲಾಚಾರ್ಯರು, ತಮಗೆ ಆಹಿಂದಣರಾತ್ರಿಯಲ್ಲಿ ಬಿಂದುಮಾಧವಸ್ವಾಮಿಯು “ನನ್ನ ಅಂಶೋದ್ಭವನಾದ ಓರ್ವನು ಬಂದು ನಿನ್ನ ಶಿಷ್ಯನಾಗುವನು” ಎಂದು ಸ್ವಪ್ನದಲ್ಲಿ ಹೇಳಿದ್ದ‌ದ್ದು ನಿಜವೆಂದು ತಿಳಿದು ಅವನಿಗೆ ಸನ್ಯಾಸಾಶ್ರಮವಂ ಕೊಟ್ಟು ಸನಂದನನೆಂಬ ಹೆಸರಿನಿಂದ ಶಿಷ್ಯನನ್ನಾಗಿ ಮಾಡಿ ಕೊಂಡರು.<noinclude></noinclude> lhph99kude5nsqaic9ai1gc8jmtmw7j ಪುಟ:ನನ್ನ ಸಂಸಾರ.djvu/೨೧೫ 104 57498 322344 160482 2026-05-25T04:18:22Z Shreelatha.Halemane 7642 /* Validated */ 322344 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಕರ್ನಾಟಕ ಸಾಹಿತ್ಯ ಪರಿಷತ್ತು |left=|right=5}} ಹೆಚ್ಚಾಗಿ ತನ್ಮೂಲಕ ಪರಿಷತ್ತು ಏನಾದರೂ ಅನಿಷ್ಟ ಮಾರ್ಗ (ಉದಾಹರಣೆಯಾಗಿ, ರಾಜಕೀಯ ಅಥವಾ ಸಾಮಾಜಿಕ ಕಲಹ) ದಲ್ಲಿ ಪ್ರವರ್ತಿಸಬಹುದೆಂಬ ಒಂದು ಭಯವು ಕೆಲವರ ಮನಸ್ಸನ್ನು ಬಾಧಿಸುತ್ತಿದ್ದರೂ ಇರಬಹುದು. ಪರಂತು ಕೇವಲ ಸಾಹಿತ್ಯವರ್ಧನಕ್ಕಾಗಿಯೇ ಹುಟ್ಟಿರುವ ಪರಿಷತ್ತಿನಲ್ಲಿ ಬಹುಶಃ ಇಂಥ ಭಯಕ್ಕೆ ಅ ಕಾಶವೇ ಇರಲಾರದು. ಒಂದು ವೇಳೆಗೆ ಇದೆಯೆಂದು ಯಾರಾದರೂ ವಾದಿಸುವು ದಾದರೆ ಅದನ್ನು ಪರಿಹರಿಸುವುದಕ್ಕಾಗಿ ೧ ನೇ ನಿಬಂಧನೆಗೆ 'ಪರಿಷತ್ತಿಗೆ ರಾಜಕೀಯ ಮತ್ತು ಮತ ವಿಷಯಗಳಲ್ಲಿ ಯಾವ ಸಂಬಂಧವೂ ಇರಲಾಗದು (It shall be non-political and non-Sectarian in character)' ಎಂಬ ಮಾತುಗ ಳನ್ನು ಸೇರಿಸಬಹುದು. ಹಾಗೆಯೇ ಕಾರ್ಯನಿರ್ವಾಹಕ ಮಂಡಲದಲ್ಲಿ ಆ ವರ್ಗದ ಪ್ರತಿ ನಿಧಿಗಳ ಸಂಖ್ಯೆಯನ್ನು ಇಷ್ಟೆಂದು ಕ್ಲಪ್ತಡಿಸಿ, ಸಮ್ಮೇಳನದ ಮುಂದೆ ಬರತಕ್ಕ ಯಾ ವತ್ತು ನಿರ್ಣಯಗಳು ಮೊದಲು ಕಾರ್‍ಯನಿರ್ವಾಹಕ ಮಂಡಲದಲ್ಲಿ ಅಂಗೀಕರಿಸಲ್ಪಡತ ಕ್ಕುದು' ಎಂಬುದಾಗಿ ಸಿಬಂಧಿಸಬಹುದು. ಹೀಗೆ ಮಾಡಿದರೆ ತರುವಾಯ ಯಾವ ಭಯಕ್ಕೂ ಅವಕಾಶವಿರುವುದಿಲ್ಲ. ಆದರೆ ಆ ವರ್ಗದ ಸದಸ್ಯರಿಗೆ ಶದ್ಧಂಗವಾಗಿ ಮತಾಧಿಕಾರವಿರಹಿತರನ್ನಾಗಿ ಮಾಡುವುದು ಮಾತ್ರ ಮಹತ್ತರವಾದ ದೋಷವೆಂದು ನನಗೆ ತೋರುತ್ತಿದೆ. {{gap}}೬ ನೇ ನಿಬಂಧನೆಯಲ್ಲಿ ೨ ನೇ ವರ್ಗದ ಸಭ್ಯರಿಗೆ ಪರಿಷತ್ಪ ತ್ರಿಕೆಯು ಉಚಿತ ವಾಗಿ ದೊರೆಯತಕ್ಕುದೆಂದು ಹೇಳಿರುವುದು. ೫ ನೇ ನಿಬಂಧನೆಯಲ್ಲಿ ೨ ನೇ ವರ್ಗದ ವರ ವಿನಾ ಉಳಿದವರಿಗೆ ಮಾತ್ರ ದೊರೆಯತಕ್ಕುದೆಂದು ಹೇಳಿದೆ ; ಹೀಗೆ ಇವೆರಡೂ ಒಂದಕ್ಕೊಂದು ವಿರುದ್ಧಗಳಾಗಿವೆ. ಇದನ್ನು ಸರಿಪಡಿಸಿಕೊಳ್ಳುವುದು ಅಗತ್ಯವು. ಇನ್ನು ಪುಷತ್ಪತ್ರಿಕೆಯ ವಿಷಯವನ್ನು ತಿದ್ದಿಕೊಂಡ ಬಳಿಕ ೫ ನೇ ನಿಬಂಧನೆಯಲ್ಲಿ ಹೇಳಿದುದೇ ೬ ನೆಯದರಲ್ಲಿಯೂ ಬರುವುದರಿಂದ ಪುನರುಕ್ತಿ ದೋಷವನ್ನು ಹೋಗಗೊಳಿಸುವುದಕ್ಕಾಗಿ ಇವುಗಳೊಳಗೆ ಒಂದನ್ನು ಬಿಟ್ಟು ಬಿಡಬೇಕಾಗುವುದು. {{gap}}೭ ನೇ, ೮ ನೇ ಮತ್ತು ೯ ನೆಯ ನಿಬಂಧನೆಗಳಲ್ಲಿ ಕಾರ್‍ಯನಿರ್ವಾಹಕಮಂಡ ಲಿಯವರು ಪರಿಷತ್ತಿನ ಆಡಳಿತ ನಡೆಯಿಸತಕ್ಕು ದೆಂದೂ ಆ ಮಂಡಲದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್‍ಯದರ್ಶಿ ಮತ್ತು ಕೋಶಾಧ್ಯಕ್ಷರ ವಿನಾ ೩೦ ಮಂದಿ (ಒಟ್ಟು ೩೪) ಸದಸ್ಯರಿರ ಬೇಕೆಂದೂ ಅವರನ್ನು ಆರಿಸುವ ಕ್ರಮವು ಯಾವುದೆಂದೂ ಹೇಳಿದೆ. ಇದರಲ್ಲಿ ನಾನು ಸೂಚಿಸತಕ್ಕ ತಿದ್ದು ಪಡೆಗಳು ಹಲವಿವೆ:-<noinclude></noinclude> jiham3nb7ui0f27hi5l06eod8lzpq1k ಪುಟ:ನನ್ನ ಸಂಸಾರ.djvu/೨೧೬ 104 57499 322354 160522 2026-05-25T04:28:22Z Shreelatha.Halemane 7642 /* Validated */ 322354 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=6|right=ಕಾದಂಬರೀಸಂಗ್ರಹ}} {{gap}}(೧) ೭ನೇ ಮತ್ತು ೮ ನೇ ನಿಬಂಧನೆಗಳನ್ನು ಒಂದೇ ನಿಬಂಧನೆಯಾಗಿ ಏರ್ಪಡಿಸಬಹುದು. {{gap}}(೨) ಕಾರ್‍ಯ ನಿರ್ವಾಹಕಮಂಡಲಿಗೆ Executive Committee ಎಂಬ ಇಂಗ್ಲೀಷ್ ಹೆಸರಿನ ಬದಲಾಗಿ ಆಂಧ್ರ ಪರಿಷತ್ತಿನಂತೆಯೇ Senatus ಎಂಬ ಹೆಸರು ಕೊಟ್ಟರೆ ಕಿವಿಗೆ ಗಂಭೀರವಾಗಿಯ. ಪರಿಷತ್ತೆಂಬ ಮಾತಿಗೆ ಅನುಗುಣವಾಗಿಯೂ ಇರುವುದು. {{gap}}(೩) ಅಧ್ಯಕ್ಷ (President) ರನ್ನೇ ಕಾರನಿರ್ವಾಹಕಮಂಡಲಿಯ ಮುಖ್ಯರನ್ನಾಗಿ ಮಾಡುವುದಕ್ಕೆ ಬದಲಾಗಿ ಆ ಉದ್ಯೋಗದ ಬಹುಮಾನವು ಇತರ ಭಾಗಗಳ ದೊಡ್ಡ ಮನುಷ್ಯರಿಗೂ ದೊರೆಯಲು ಅವಕಾಶವಾಗುವಂತೆ, ಕಾರ್‍ಯನಿರ್ವಾಹಕಮಂಡಲಿಯ ಅಗ್ರಾಸನಾಧಿಪತಿಯಾಗಿ (chairman of the senatus) ಬೇರೊಬ್ಬರನ್ನು ನಿಯ ಮಿಸಿ, ಅಧ್ಯಕ್ಷರನ್ನು ಮುಂದೆ ಹೇಳುವ ಮೇರೆಗೆ ಅಸಾಧಾರಣಸಭ್ಯರನ್ನಾಗಿ ಇಟ್ಟು ಕೊಳ್ಳಬಹುದು. ಇಂಥ ಅಗ್ರಾಸನಾಧಿಪತಿಗಳು ಬೆಂಗಳೂರಿನವರೇ ಆಗಿರಬೇಕೆಂಬುದನ್ನು ಪ್ರತ್ಯೇಕವಾಗಿ ನಾನು ಹೇಳಬೇಕಾದುದಿಲ್ಲ. ಆಯಾ ಸಮ್ಮೇಳನದ ಅಧ್ಯಕ್ಷರೇ ಮುಂದಿನ ಸಮ್ಮೇಳನದ ಪರ್‍ಯಃತ ಪರಿಷತ್ತಿನ ಅಧ್ಯಕ್ಷರಾಗಿದ್ದರೆ ಚೆನ್ನಾಗಿರುವುದು. {{gap}}(೪) ಕಾ.ನಿ. ಮಂಡಲಿಯ ಸದಸ್ಯರ ಒಟ್ಟು ಸಂಖ್ಯೆಯನ್ನು ೫೦ ಕ್ಕೆ ಏರಿಸಬಹುದು. ಮತ್ತು ಇವರ ವಿನಾ ಮಹಾಪೋಷಕರೂ, ಪೋಷಕರ ಮೇಲೆ ಸೂಚಿಸಿದ (ನಡೆ ಯುವ ವರ್ಷದ ಮತ್ತು ಹಿಂದಿನ ವರ್ಷಗಳು) ಅಧ್ಯಕ್ಷರೂ ಅದರ ಯಾವಜೀವ ಅಸಾ ಧಾರಣ ಸಭಾಸದ(extraordinary members) ರಾಗಿರಬೇಕೆಂದು ಏರ್ಪಡಿಸ ಬಹುದು. {{gap}}*(೫) ಉಪಾಧ್ಯಕ್ಷರ ಸಂಖ್ಯೆಯ ಪರಮಾವಧಿಯು ೫ ಯೆಂದೂ, ಕಾರ್‍ಯದರ್ಶಿಗಳಿಗೂ ಕೋಶಾಧ್ಯಕ್ಷರಿಗೂ ಒಬ್ಬೊಬ್ಬರು ಜಂಟಿಯಾಗಿ (joint) ಅಥವಾ ಸಹಾಯಕ (Assistant) ರಾಗಿ ಇರಬಹುದೆಂದೂ, ಅಂತು ಉದ್ಯೋಗಪ್ರಯುಕ್ತ (Ex-officio) ಸದಸ್ಯರ ಸಂಖ್ಯೆಯ ಪರಮಾವಧಿಯು ೧೦ರವರೆಗೆ ಇರಬಹುದೆಂದೂ ಏರ್ಪಡಿಸಬಹುದು. ಬೇರೆಬೇರೆ ಪ್ರಾಂತ್ಯಗಳಲ್ಲಿಯ ದೊಡ್ಡ ಮನುಷ್ಯರಿಗೆ ಪರಿಷತ್ತಿನ ಬೇರೆ ಯಾವ ಅಧಿಕಾ ರವೂ ಲಭಿಸುವಂತಿಲ್ಲವಾದುದರಿಂದ ಅವರನ್ನು ಗೌರವಿಸುವುದಕ್ಕಾಗಿ ಉಪಾಧ್ಯಕ್ಷರ ಸಂಖ್ಯೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಆದರೆ ಯಾವುದೊಂದು ಪ್ರಾಂತ್ಯದಿಂದ ಕನಿಷ್ಠ ಪಕ್ಷ ೨೫ ಮಂದಿ ಸಭಾಸದರಾದರೂ ಇಲ್ಲದೆ ಅವರಿಗೆ ಆ ಪ್ರಾಂತ್ಯದ ಬಗ್ಗೆ ಉಪಾಧ್ಯಕ್ಷರನ್ನಾ ರಿಸಲು ಬಿಡದಿರಬಹುದು. ———————————————————————————————————— * ತೆಲುಗು ಸಾ. ಪರಿಷತ್ತಿಗೆ ಕಾಯ್ಯದರ್ಶಿಗಳು ಮೂವರೂ ಕೋಶಾಧ್ಯಕ್ಷರಿಬ್ಬರೂ ಇರುವರು ಮರಾಟೀ ಸಾ. ಪರಿಷತ್ತಿಗೆ ಉಪಾಧ್ಯಕ್ಷರೈವರೂ ಕಾರ್‍ಯದರ್ಶಿಗಳಿಬ್ಬರೂ ಕೋಶಾಧ್ಯಕ್ಷರೊಬ್ಬರೂ ಇರುವರು.<noinclude></noinclude> biyxy1m7hnf4aszt3p0w5v6ci2eekac ಪುಟ:ನನ್ನ ಸಂಸಾರ.djvu/೨೯೭ 104 57581 322347 161005 2026-05-25T04:21:20Z Shreelatha.Halemane 7642 /* Validated */ 322347 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಕಾದಂಬರಿ ಸಂಗ್ರಹ |left=|right=೨೭}} ಇಂದು ನೀ ವೇನಾಗಿ ಪೋದಿರಿ|ವೃಂದವೆಲ್ಲ ವು ಸೋತವಿವುನಿ। ಮ್ಮಿಂದೆರಣದೊಳ್ನೀವದೆಂತುಟು ಸಂದಿರೆಂದೊರೆದ ||೪|| ಮಿಡಿದು ಕಣ್ಣೀರ್ಗಳನು ಗಣನುಂ| ಪೊಡವಿಯಲ್ಲಿರಲಾರೆನಾಂಕೇ| ಡಡಿಸಿತಿಂತು ಕುಲಕ್ಕೆ ವೀರರು ಮರಣವೈದಿದರು || ಉಡುಗಿಪೋಗುವೆವೆನ್ನ ಹರಣ| ಗಳಡಿಗಡಿಗೆ ನಾವೇಗನೆಂದೆನೆ| ನುಡಿದರಾತಂಗಂದು ಸಚಿವರು ಶಾಂತವಚನವನು ||೫|| ತಿರೆಯೊಳಾರೈ ಮರಣವೆಯ್ದದ| ರಿರುವರಧಟಿಂಶತ್ರುವೀರರ| ತರಿದು ಮಡಿದಿರಲದಕೆ ಬೀರರುವ್ಯಥೆಯಮಾಣುವರು || ಅರಸನೀಂನಾನಿಂದು ಹಗೆಗಳ| ಧುರದೊಳಿದಿರಿಸಿ ಜೀವಿಸಿರ್ದೊಡೆ| ತರಳರಿರ್ವರ ಬಿಡಿಸಿ ಬರ್ಪೆವೆನುತ್ತೆ ಬೆಸಸಿದರು ||೬|| ಅರಿಪೆ, ಕೇಳ್ದುಂ ಗಣನು ಬಳಿಕಾ | ನಿರದೆ ಭಕ್ಷಿ ಪೆನೆಲ್ಲ ಮುನಿಗಳ| ಧರೆಯೊಳೀಗಳೆನುತ್ತೆ ಸೈನ್ಯಕೆ ಪೇಳ್ದು ರಥದೊಡನೆ || ತೆರಳೆ ಪಿಂತನೆ ನಾಲ್ಕು ದಳವುಂ। ಬರಲು ಚಣದೊಳ್ಬೆನಕನಲ್ಲಿಗೆ ಧರಿಸಿ ಬಂದನು ಪರಶುಕಮಲವ ಕರದೆಮೋದಕವು ||೭|| ಕರಚತುಷ್ಟಯದಲ್ಲಿ ಧರಿಸು | ತ್ತಿರದೆ ಸಿದ್ಧಿಸುಬುದ್ಧಿಯೆಂಬರು | ಮೆರಡುವಕ್ಕದೊಳಿರಲು ಸಿಂಗವನೇರಿ ಮಕುಟದೊಳು || ಮೆರೆವ ತೇಜೋನಿಧಿಯ ವಿಘ್ನೇ| ಶ್ವರನ ಮುನಿಯುಂಸ್ತುತಿಸುತಿರೆತಾ| ಮಿರದೆ ಕಂಡರು ಗಣನ ಸೇನಾಚರರು ಬೆರಗಾಗಿ ||೮|| ಪರಿಕಿಸಿಲ್ಲಂ ನಾವು ಮಿಂದಿನ| ವರೆಗೆ ಪೇಳೆನೆ ಗಣನ ಸೈನ್ಯವು| ಕೆರಳಿ ದೈತ್ಯನು ಗಣನು ಕಪಿಲನಕೂಡೆ ಬೆನಸಿದನು || ವರಮುನೀಶ್ವರ ಪೇಳು ಬೇಗನೆ | ಪುರುಷನಾವನು ನಿನ್ನ ಸನಿಯದೊ| ಳಿರುವ ನಿಲ್ಲ ದೊಡವನಜತೆಯಲಿ ನಿನ್ನ ಕೊಲ್ಲುವೆನು ||೯|| ಆರುಮಂದಿಯ ಹಗೆಗಳೊಡನೆಯೆ |ಹಾರಿಯಾಡುವೆ ಹೀನಕರುಣನೆ| ಯಾರು ಪೇಳೈಯಿವನು ? ಲೋಕದ ಜನಕೆ ಕೇಡುಗಳ || ಬಾರಿಬಾರಿಗು ಮಾಳ್ಪನಿವನಿಂ| ದಾರಿಯಾಯ್ತಾ ಜಗಳಕಂ। ಬೀರನೊಡನೆಯೆ ನಿನ್ನ ಕೊಲ್ಲದೆಬಿಡೆನು ದಿಟವೆಂದ ||೧೦||<noinclude></noinclude> 1bnbd8jvrukq2d6q3ekzw6c0y26ejf6 ಪುಟ:ನಿರ್ಮಲೆ.djvu/೪ 104 57732 322320 319480 2026-05-24T18:27:47Z Pragathi. BH 7585 /* Without text */ 322320 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೭ 104 58651 322198 127695 2026-05-24T14:34:11Z Pragathi. BH 7585 /* Validated */ 322198 proofread-page text/x-wiki <noinclude><pagequality level="4" user="Pragathi. BH" /></noinclude> <p style="text-indent: 5cm;">PREFACE</p> {{Css image crop |Image = %E0%B2%AA%E0%B2%82%E0%B2%9A%E0%B2%A4%E0%B2%82%E0%B2%A4%E0%B3%8D%E0%B2%B0_%E0%B2%85%E0%B2%A5%E0%B2%B5%E0%B2%BE_%E0%B2%AA%E0%B2%82%E0%B2%9A%E0%B3%8B%E0%B2%AA%E0%B2%BE%E0%B2%96%E0%B3%8D%E0%B2%AF%E0%B2%BE%E0%B2%A8.djvu |Page = 7 |bSize = 380 |cWidth = 77 |cHeight = 26 |oTop = 123 |oLeft = 152 |Location = center |Description = }} REGARDING the date and authorship of the Kanarese version of the Pancha Tantra we have no information, but it is conjectured to have been written in the 16th century A.D. </p> <p style="text-indent: 1cm;">It was first published in 1864, edited by Mr. J. Garrett, then Director of Public Iustruction in Mysore, with the assistance of M. I). Singarachari, munshi to the Kanarese Translator to the Madras Governinent, who compared it with the original Sanskrit, as well as with the Tamil and Telugu versions. </p> <p style="text-indent: 1cm;">A second edition appeared the following year, in which were inserted the Sanskrit slokas and Kanarese padyams, two copies of the work contained in the Library of the College of Fort St. George having been lent for the purpose by the Board of Examiners. The book has been out of print for some time, but being required for the examinations of the Madras University has now been issued afresh. (The Kanarese padyams have been excluded from the present revised edition as they appear to be the composition of an inferior modern writer.) </p> <p style="text-indent: 1cm;">The following are extracts from the introduction to the former editions :- </p> <p style="text-indent: 1cm;"> The collection of Fables and Stories termed Pancha Tantra is one of the oldest in the world. It was translated from Sanskrit into Persian in the sixth century; and from Persian into Arabic in the ninth century; it was afterwards rendered into Hebrew,<noinclude></noinclude> n3xvo7gg5yi5ytmke2mj2vn9lg5v1yn ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೮ 104 58652 322197 127697 2026-05-24T14:33:56Z Pragathi. BH 7585 /* Validated */ 322197 proofread-page text/x-wiki <noinclude><pagequality level="4" user="Pragathi. BH" /></noinclude>Greek, Latin and Syriac ; from these versions successive translations were made into all the languages of modern Europe, until it becaine universally known Is Pilpay's Fables. </p> <p style="text-indent: 1cm;">The narrator of the stories is in the Arabic version called Bidpai ; in the Sanskrit original no name similar to this occurs ; but it is certain that the name Pilpay, by which the work is known in Europe, is a corruption of Bidpai. </p> <p style="text-indent: 1cm;">The Arabic Translation of the Panchatantra is called Kalila wa Damna ; it is thus designated in allusion to two jackals which act a conspicuous part in the first story of the Arabic version, and which we recognise in the Sanskrit and Kannrese under the forins Karataka and Damanaka. </p> <p style="text-indent: 1cm;">The most admired Persian translation is not that which was first inade, but the one written at the beginning of the sixteenth century, and known under tlhe title of Anivàr-i-Soheili; which was afterwards rendered into Turkish with the designation of Humayun Naineh. </p> <p style="text-indent: 1cm;">With the exception of the Bible there is probably no work that has been translated into so many languages as the Panchatantra. In India it has retained its popularity to the present time, and is found in soine form in all the spoken dialects of the country. The Sanskrit epitoine of the Panchatantra is terined the “ Hitopadesa,” or “Salutary Instruction." This has been translated into English isy Sir William Jones and by Sir Charles Wilkins. </p> <p style="text-indent: 1cm;">"Its popularity” says Professor Johnson “ througlı so inany ages, ainidst such various nations, is evidence of intrinsic merit; and the pictures of domestic manners and human nature which it presents, how'- erer tinctured by national peculiarities, inust have<noinclude></noinclude> 5ldlyvcpj519oxfvpkhbnnq0z0ncue0 ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೯ 104 58653 322196 127699 2026-05-24T14:33:43Z Pragathi. BH 7585 /* Validated */ 322196 proofread-page text/x-wiki <noinclude><pagequality level="4" user="Pragathi. BH" /></noinclude>been recognised as universally true, as well as diverting; or they would not have been naturalized in the W est as well as in the East. In the maxinus also which the tales serve to illustrato, there must have been inuch which secured the acquiescence of all inankiud, or the remarks would have been left to enlighten the moralists of India aloime. These inerits however were such as admitted of transfusion into other languages ; the merits of its composition are those which have chiefly recoinnended its preservation by the press, and its circulation amongst the cultivators of Sanskrit literature." </p> <p style="text-indent: 1cm;">There is a great diversity in the manuscript copios of the Panchatantra. Many differences occur in the various stories. In some versions the residence of the king is in Mahilauropya, ia city in the South of Tudia, which Professor Wilson identifies with Saint Thomc.* The Kanarese version of the Panchatantra follows the Hitopadesa in making the residence of the king in Putaliputra on the Ganges. </p> <p style="text-indent: 1cm;">The king had three sons who were deficient in ability and application. He inade this known to his counsellors and sought their advice; asking them “Of what use is a SOLI who has neitlher knowledge nor virtue ? of what use is a cow who has no milk with her calf ? etc. I learned Brahmin who was present offered to relieve the king of his, anxiety by taking the princes to his house and instructing them perfectly. He then composed in their benefit these five * “ We necl not be much at a loss for its identification, as the naine approaches sufficiently to Mailapur', Melujpur, or Saint Thome; where our own recorrls indicate a city of somo consoquenco, in the beginning of tlıc Cliristain ora, as tho scene of tho luhours and martyrdom of Saint Thoinas, occurrences very far from invalidated by any argument yet adduced against the truth of the tradition."--Transactions of the Royal Asiatic Society, Vol. 1, page 161.<noinclude></noinclude> a1vyhemhzy39qnptkqy3xna08i5ckvh ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೦ 104 58654 322177 127700 2026-05-24T14:24:48Z Pragathi. BH 7585 /* Validated */ 322177 proofread-page text/x-wiki <noinclude><pagequality level="4" user="Pragathi. BH" /></noinclude> chapters: Mitra Bheda, Dissension of Friends: Mitra Prapti, Acquisition of friends; Kakolukiya, Inveterate" enmity; Labdha Nasa, Loss of Advantage ; Asamprekshya Kâritva, Inconsiderateness. Through reading these the princes became in six months highly accomplished, and the five tantras were fainous throughout the world. </p> <p style="text-indent: 1cm;">In the transactions of the Royal Asiatic Society Professor Wilson has published an " Analytical Account of the Panchatantra, illustrated with occasional translations." This analysis was founded on an examination of three copies of the work, one of which was procured in Calcutta, the others in Benarese; while these copies agreed in all essential points, it was found that they presented abundantly the variations to be expected in compilations of such a character ; where stauzus and even stories are often omitted or inserted at the pleasure of the transcriber. </p> <p style="text-indent: 1cm;">In another article on Hindu Fiction, contributed to the British and Foreign Review, Professor Wilson states that a version of the Panchatantra, as current in the South of India has been published in French, by the Abbe Dubois, but not entire. He has only a selection of the stories, taken froin three different copies written one in Kanarese, one, in Telugu, and one in Tamil. It may be doubted if his principle of selection is the niost judicious that could be adopted; “ Nous avons tiré de cet ouvrage tous les apologues qui peuvent interesser un lecteur european, et nous avons omis autres, dont le sens et la inorale ne pouvaient etre entendus qui par le trespetit nombre de personnes versees dans les usages et les coutumes Indiennes auxquelles ces fables font allusion.” This is in fact to onit all that is most characteristic. Enough however is given to show that the vernacular<noinclude></noinclude> nb8mr00indtfeehgwn19b5n340akr13 ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೧ 104 58655 322178 127702 2026-05-24T14:25:05Z Pragathi. BH 7585 /* Validated */ 322178 proofread-page text/x-wiki <noinclude><pagequality level="4" user="Pragathi. BH" /></noinclude> representatives of the Panchatantra in the Peninsula correspond in plan, and in most of their many details, with the Sanskrit original. </p> <p style="text-indent: 1cm;">This edition of the Panchatautriu, now published for the first tiine in Kanarese, has been collated with various manuscript copies in circulation amongst learned natives. Many of the stories referred to in Professor Wilson's analytical account are wanting in all the Kanarese copies of the work that have been Consulted. Others have been purposely omitted as unsuitable for an edition which will be used in schools. </p> <p style="text-indent: 1cm;">Several inquiries have been addressed to the editor respecting the English translations that have been published. The most common one, called “The Fables of l’ilpay,” has been often reprinted in London, und an illustrated edition from the press of WhittinghuiIn, appeared in 1852. </p> <p style="text-indent: 1cm;">Another translation from the Arabic, by the Rev. W. Knatchbull, termcd “Kalila and Diuina, or the Fables of Bidpai,” was published at Oxford in 1819. The author says in the preface, “ In offering to the public an English translation of this invaluable production, which may be placed by the side of the ivost renowned treasures of Oriental literature, of which our libraries are in possession, I have thought it possible to open il source of considerable amuseiuent, if not of great intellectual enjoyment, to persons who are strangers to the languages of the East.” </p> <p style="text-indent: 1cm;">But the translation which most fully exhibits the mmcrits of the original work is the following, “ Anvari Suheili, or the Lights of Canopus; being the Persian version of the Fables of Pilpay, or “ The Book of Kalilalh and Danilnah," rendered into Persian by Husain Vaiza'1 Rashif ; literally translated into Prosc and Verse, hy G. B, Eastwick, F.R.S., M.R.A.S., Hertford 1854.</p><noinclude></noinclude> ci0wopxgny83iwq4opib55yehmxewjc ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೨ 104 58656 322179 127709 2026-05-24T14:25:15Z Pragathi. BH 7585 /* Validated */ 322179 proofread-page text/x-wiki <noinclude><pagequality level="4" user="Pragathi. BH" /></noinclude> <p style="text-indent: 1cm;">An account of the various versions of the Panchittantra will be found in the Retrospective Review, Vol. III. The English Encylopædia has also an interesting sketch of the work, from which the fullowing extract may be given: “ F'ables and taules in which animals are introduced us auctors, tund in which moral principles and maxims of prudence are inculcuted by example and precept, secin froin all carly age to have bocn current anong the Hindus. Several Collectious of such stories, written in Sanskrit, are still in existence. The oldest of theini, aliud evidently tlie pilrent stock of the Fables of Bidpai, is the work known in India under the naine of the “ Panchatantra." </p> <p style="text-indent: 1cm;">To this may be added the testimony of Professor Robertso11, who Nuys, thaut " it is in such high esteem throughout the Eust that it has been translated into every dialect spoken there."</p><noinclude></noinclude> su4qxd5hucz7ymsn87lgq4i6pl3pmxs ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೨೧ 104 58665 322188 127714 2026-05-24T14:28:26Z Pragathi. BH 7585 /* Validated */ 322188 proofread-page text/x-wiki <noinclude><pagequality level="4" user="Pragathi. BH" /></noinclude> <p style="text-indent: 3cm;"><big>THE PANCHATANTRA-ITS ORIGIN.</big> </p> <p style="text-indent: 5cm;">ಪಂಚತಂತ್ರೊತ್ಪತ್ತಿ </p> <p style="text-indent: 1cm;">ಪಾಟಲೀಪುರವೆಂಬ ಪ್ರಸಿದ್ಧವಾದ ಒಂದು ಪಟ್ಟಣವುಂಟು. ಅದು ವೇದಶಾಸ್ತ್ರ ಪುರಾಣಾದಿ ಚತುರ್ದಶಏದೈಗಳ ಕಲಿತ ಬ್ರಾಹ್ಮಣೋತ್ರ ಮರಿಂದಲೂ, ಬಹಳ ಬಲಪರಾಕ್ರಮಶಾಲಿಗಳಾದ ರಾಜಶ್ರೇಷ್ಟರಿಂದಲೂ, ಕ್ರಮವಿಕ್ರಯಗಳಲ್ಲಿ ಪ್ರಸಿದ್ಧರಾದ ವೈಕೃರಿಂದಲೂ, ದೇವಬ್ರಾಹ್ಮಣ ವಿಕ್ಷಾ ಸವುಳ ಶೂದ್ರರಿಂದಲೂ, 'ನಾನಾವಿಧವಾದ ಆಯುಧಸಾಧಕಗಳಲ್ಲಿ ಸಮ ರ್ಥರಾದ ವೀರಭಟರಿಂದಲೂ, ಅನೇಕ ದೇವಾಲಯಗಳಿಂದಲೂ ಮೆರೆಯು ಆದಿತು. </p> <p style="text-indent: 2cm;">The Excellence of Learning-Sudarsanaraya, </p> <p style="text-indent: 1cm;">ಆ ಪಟ್ಟಣವನ್ನು ಸುದರ್ಶನನೆಂಬ ಅರಸನು ಪಾಲಿಸುತ್ತಿದ್ದನು. ಆತನು ಪರಾಕ್ರಮದಲ್ಲಿ ಕಾರ್ತವೀಲ್ಯಾರ್ಕ್‌ನನಿಗೂ ಬುದ್ದಿಯಲ್ಲಿ ಬೃಹಸ್ಪ ತಿಗೂ ಧೈರದಲ್ಲಿ ಹಿಮವಂತನಿಗೂ ದಾತೃತ್ವದಲ್ಲಿ ಶಿಬಿ ಕರ ದಧೀಚಿಗಳಿಗೂ ಸಮಾನನಾಗಿ ಈ ಲೋಕದಲ್ಲಿ ಪ್ರಸಿದ್ದಿ ಪಡೆದಿದ್ದನು. ಆ ರಾಜಶ್ರೇಷ್ಠನು ಬಂದುದಿನ ಮಂತ್ರಿ ಪುರೋಹಿತರು "ವಿದಜನರು ಸಾಮಂತರಾಯರು ನಂಟರು ಮಿತ್ರರು ಮುಂತಾದವರಿಂದ ಪರಿವೇಷ್ಟಿತನಾಗಿ ಸಭೆಯಲ್ಲಿ ಒಟ್ಟೋ ಆಗದಿಂದಿರುವಾಗ ದುರ್ಮಾರ್ಗರಾಗಿ ನೀತಿಗೆ ತಿಳಿಯದ ತನ್ನ ಪುತ್ರ ರನ್ನು ನೋಡಿ ಅತಿ ಚಿಂತಾಕ್ರಾಂತನಾಗಿ ಸಭೆಯಲ್ಲಿರುವವರ ಸಂಗಡ ಇಂತೆಂದನು: - ವಿದ್ಯಾಂಸನೂ ಧಕನೂ ಅಲ್ಲವ ಮಗನು ಹುಟ್ಟಿದರೆ ಫುವೆನು ? ಹಾಲುಕರೆಯದ ಆಕಳನ್ನು ಇಟ್ಟುಕೊಂಡು ಏನುಮಾಡ ಬಹುದು ? ಗಂಡುಮಕ್ಕಳು ಅನೇಕರುವೆಂದು ಲೆಕ್ಕಿಸಿಕೊಳ್ಳುವುದರಿಂದ<noinclude></noinclude> 86lt5daf4lapc9ykwh2zakq3jwcajg0 ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೨೨ 104 58666 322189 127718 2026-05-24T14:29:12Z Pragathi. BH 7585 /* Validated */ 322189 proofread-page text/x-wiki <noinclude><pagequality level="4" user="Pragathi. BH" /></noinclude>{{center|ಪಂಚತಂತ್ರ್ಯೋತ್ಪತ್ತಿ }} {{Left|2}} ಪ್ರಯೋಜನವೇನು ? ವಂಶಕ್ಕೆ ಕೀರ್ತಿತರುವ ಮಗನೊಬ್ಬನೇ ಸಾಕು. ರೂಪವೂ ಧನವೂ ಬಲವೂ ಉಂಟಾಗಿದ್ದರೂ ಶಾಸ್ತ್ರ ಜ್ಞಾನವಿಲ್ಲದ ಮಗನು ಏತಕ್ಕೆ? ಇಂಥ ಮಗನ ಹೆರುವುದಕ್ಕಿಂತ ತಾಯಿ ಗೊಡ್ಡಿಯಾದರೂ ಮೇಲು, ಗರ್ಭವಿಳಿದು ಬಿದ್ದು ಹೋದರೂ ಒಳ್ಳೆಯದು, ಹುಟ್ಟಿದವನು ಸತ್ತರೂ ಚೆಂದ, ಹೆಣ್ಣಾಗಿ ಹುಟ್ಟಿದರೂ ವಾಸಿ“ಪೂರ್ವಜನ್ಮದಲ್ಲಿ ತಂದೆ ಮಾಡಿದ ಪುಣ್ಯಕರದಿಂದ ಉದಾರನೂ ಧರಾತನೂ ತಾಯಿತಂದೆಗಳ ಮಾತು ಮೀರವವನೂ ಒಳ್ಳೆಯ ನಡತೆಯುಳ್ಳವನೂ ಸರಜನರಿಗೂ ಹಿತನೂ ವಿದ್ವಾಂಸನೂ ಸಮದ್ಧನೂ ಪರರು ತನಗೆ ಮಾಡಿದ ಮೇಲನ್ನು ಮರೆಯದವನೂ ಆಡಿದಮಾತು ತಪ್ಪದವನೂ ಆದ ಕುಮಾರನು ಹುಟ್ಟು ತಾನೆ; ಪಾಪಕರ ದಿಂದ ಕ್ಷೀರಸಮುದ್ರದಲ್ಲಿ ವಿಷಹುಟ್ಟಿದಂತೆ ಒಳ್ಳೆಯ ವಂಶದಲ್ಲಿ ದುರಾರ್ಗನು ಹುಟ್ಟಿ ಕುಲವನ್ನು ಕೆಡಿಸುವನು. </p> <p style="text-indent: 1cm;">ಯೂವನಂ ಧನಸಂಪತ್ತಿಃ ಪ್ರಭುತ್ವವಿವೇಕಿತಾ | </p> <p style="text-indent: 1cm;">ಏಕೈಕಮಷ್ಯನರ್ಥಾಯ ಕಿಮು ಯತ್ರ ಚತುಷ್ಟಯ೦ || </p> <p style="text-indent: 1cm;">ಯ್ವವನ ಧನ ದೊರೆತನ ಅವಿವೇಕ ಎಂಬ ಈ ನಾಲ್ಕರಲ್ಲಿ ಒಂದೊಂದೆ: ಅನರ್ಥವನ್ನು ಹುಟ್ಟಿಸುತ್ತದೆ. ಈನಲ್ಲೂ ಉಳ್ಳ ಸ್ಥಳದಲ್ಲಿ ಹೇಳ ಬೇಕಾದುದೇನು ? ಆದುದರಿಂದ ವಿವೇಕವಿಲ್ಲದೆ ದುಾರ್ಗರಾಗಿರುವ ನನ್ನ ಪುತ್ರರಿಗೆ ನೀತಿ ಶಾಸ್ತ್ರವನ್ನೋದಿನಿ ವಿವೇಕವುಂಟುಮಾಡುವುದರಿಂದ ಅವ ರನ್ನು ಪುನಶ್ಚನ್ನ ಸಂಭೂತರಾಗಿ ಮಾಡತಕ್ಕ ಪುಣ್ಯಾತ್ಮರು ಯಾರಾದರೂ ಈ ಸಭೆಯಲ್ಲಿ ಉಂಟೆ ? </p> <p style="text-indent: 1cm;">Vishnuarma, the able Teacher, </p> <p style="text-indent: 1cm;"> ಎಂದು ಅರಸನು ಕೇಳಲು, ದೇವಗುರುವಾದ ಬೃಹಸ್ಪತಿಯ ಹಾಗೆ ಸಮಸ್ತ ನೀತಿ ಶಾಸ್ತ್ರಗಳನ್ನೂ ತಿಳಿದ ವಿಷ್ಣು ಕರನೆಂಬ ಬ್ರಾಹ್ಮಣನೆದ್ದು ಅರಸನನ್ನು ನೋಡಿ,-ಓ ಮಹಾರಾಯರೇ, ನೀವು ಹೀಗೆ ಚಿಂತಿಸಬೇ ಕಾದುದೇನು? ನೀವು ನೆನಸಿದ ಕೆಲಸವನ್ನು ನೆಟ್ಟಗೆ ಮಾಡುವುದು ಎಷ್ಟು ಮಾತ್ರ ? ನಾನು ನಿಮ್ಮ ಕುಮಾರರೆಲ್ಲರನ್ನೂ ಆರು ತಿಂಗಳಲ್ಲಿ ಸಕಲ ನೀತಿಶಾಸ್ತ್ರಗಳನ್ನೂ ತಿಳಿದವರಾಗಿ ಮಾಡಿ ನಿಮಗೆ ಸಮರ್ಪಿಸದೆ ಇದ್ದರೆ<noinclude></noinclude> f1bn2vq39a9dbafyciaoclrmq7khe4u ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೨೩ 104 58667 322191 127720 2026-05-24T14:29:28Z Pragathi. BH 7585 /* Validated */ 322191 proofread-page text/x-wiki <noinclude><pagequality level="4" user="Pragathi. BH" /></noinclude>ಪಂಚತಂತ್ರ್ಯೋತ್ಸವ ಧನಧಾನ್ಯಸಮೇತ ನನ್ನ ಮನೆಯನ್ನು ಬಿಟ್ಟು ಬಿಟ್ಟು ನಿಮ್ಮ ರಾಜ್ಯಕ್ಕೆ ದೂರವಾಗಿ ಹೋಗಲುಳ್ಳವನು-ಎಂದು ಪ್ರತಿಜ್ಞೆ ಮಾಡಿದನು. ಅದಕ್ಕೆ ಅರಸನು ಬಹಳ ಸಂತೋಷಿಸಿ ವಿಷ್ಣು ಶರ್ಮನಿಗೆ ಆನೆ ಕುದುರೆ ಗಾಡಿ ಪಲ್ಲಕ್ಕಿ ಬಹಳ ಬೆಲೆಯುಳ್ಳ ವಸ್ತ್ರ ಗಳು ಒಡವೆಗಳು ಮುಂತಾದ ವಸ್ತು ಗಳನ್ನು ಪ್ರೀತಿಯಿಂದ ಬಹುಮಾನಮಾಡಿ ತನ್ನ ಕುಮಾರರನ್ನು ಕರೆ ಯಿಸಿ,-ಅಯ್ಯಾ, ಇವರನ್ನು ನಿಮ್ಮ ಕುಮಾರರಂತೆ ನೋಡಿಕೊಂಡು ಇವರಿಗೆ ವಿದ್ಯೆ ಕಲಿಸಿ ಇವರನ್ನು ಬುದ್ಧಿವಂತರಾಗಿ ಮಾಡುವಭಾರ ನಿಮ್ಮ ದು-ಎಂದು ಅವರನ್ನು ವಿಜ್ಞಾನ ವಶಕ್ಕೆ ಕೊಟ್ಟನು. </p> <p style="text-indent: 3cm;"> His Scheme of Education. </p> <p style="text-indent: 1cm;">ಬಳಿಕ ವಿಷ್ಣು ಶರನು ಆ ರಾಜಪುತ್ರರನ್ನು ಕರೆದುಕೊಂಡು ಹೋಗಿ ತನ್ನ ಮನಸ್ಸಿನಲ್ಲಿ ಆಲೋಚಿಸಿ ಮಿತ್ರಭೇದ, ಸುಹೃಲ್ಲಾಭ, ಸಂಧಿವಿಗ್ರಹ, ಲಬ್ಬನಾಶ, ಅಸಂಪ್ರೇಕ್ಷಕಾರಿತ್ರ್ಯ, ಎಂಬ ಐದು ತಂತ್ರಗಳುಳ್ಳ ಪಂಚ ತಂತ್ರವೆಂಬ ಗ್ರಂಥವನ್ನು ರಚಿಸಿ ಅವರ ಸಂಗಡ ಇಂತೆಂದನು:-ಮಿತ್ರ ಭೇಧ ಎಂದರೆ ಸ್ನೇಹಿತರಿಗೆ ವಿರೋಧವನ್ನು ಹುಟ್ಟಿಸೋಣ ; ಸುಹೃಲ್ಲಾಭ ಎಂದರೆ ಸ್ನೇಹಿತರನ್ನು ಸಂಪಾದಿಸೋಣ ; ಸಂಧಿವಿಗ್ರಹ ಎಂದರೆಮೊದಲಲ್ಲಿ ಸ್ನೇಹಮಾಡಿ ತರುವಾಯ ವಿರೋಧಿಸೋಣ ; ಲಬ್ದನಾಶ ಎಂದರೆ ಸಿಕ್ಕಿದ ಧನವನ್ನು ಹೋಗಲಾಡಿಸಿಕೊಳ್ಳೋಣ ; ಅಸಂಹಕಾರಿತ್ರ ಎಂದರೆ ಯಾವ ಕಾರೈವನ್ನಾದರೂ ಚೆನ್ನಾಗಿ ವಿಚಾರಿಸದೆ ಮಾಡೋಣ. ಪಂಚ ತಂತ್ರವೆಂದರೆ ಈ ಐದು ತಂತ್ರಗಳನ್ನು ಗ್ರಂಥವು.</p><noinclude></noinclude> 1ob1r0a62gzx4uqus77mx3fa4ju3243 ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೨೭ 104 58671 322193 127727 2026-05-24T14:31:40Z Pragathi. BH 7585 /* Validated */ 322193 proofread-page text/x-wiki <noinclude><pagequality level="4" user="Pragathi. BH" />{{center|ಮಿತ್ರಭೇಧ ತಂತ್ರ}}</noinclude>ಒಂದು ಅಡವಿಯಲ್ಲಿ ಇಡುಗುತೊಡಗು ಭೂಮಿಯಲ್ಲಿ ಮೊಣಕಾಲುಗಳು ಮುರಿದು ಬಿದ್ದ ಸಂಜೀವಕನನ್ನು ನೋಡಿ ಆ ವರ್ತಕನು ಸ್ವಲ್ಪಹೊತ್ತು ಚಿಂತಿಸಿ, ಬಳಿಕ ಆ ಬಂಡಿಯ ಮೇಣ ಸರಕುಗಳನ್ನೆಲ್ಲಾ ಮನುಷ್ಯರ ಕೈಯಿಂದ ಎತ್ತಿಸಿಕೊಂಡು, ಬಿದ್ದಿದ್ದ ಸಂಜೀವಕನ ಕಾಲುಗಳಿಗೆ ಕಟ್ಟು ಕಟ್ಟಿಸಿ, ಆ ಎತ್ತಿನ ಮೇಲಣ ಪ್ರೀತಿಯಿಂದ ಕೆಲವರನ್ನು ಅಲ್ಲಿ ಕವಲಿಟ್ಟು ಮುಂದಕ್ಕೆ ಸಾಗಿಹೋದನು, </p> <p style="text-indent: 1cm;">ಅನಂತರ ಅಲ್ಲಿ ಕಾವಲಿದ್ದವರು--ನಾವು ಈ ಭಯಂಕರವಾದ ಕಾಡಿನಲ್ಲಿದ್ದು ಸಾಯಬೇಕಾದುದೇನು ? ಹೋಗೊಣ-ಎಂದು ಅತಿ ತೊರೆಯಾಗಿ ಹೋಗಿ ಪ್ರಭುವನ್ನು ನೋಡಿ ಸ್ವಾಮಿ, ಆ ವನವಲ್ಲಿ ಹುಲಿ ಮುಂತಾದ ದುಷ್ಯಮೃಗಗಳು ಅನೇಕವುಂಟು. ನಾವು ಅಂಜಿ ಅಲ್ಲಿ ವೃಷಭಕ್ಕೆ ಕಾವಲಿರಲಾರದೆ ಅದನ್ನು ಬಿಟ್ಟು ಬಿಟ್ಟು ತಮ್ಮ ಸನ್ನಿ ಧಾನಕ್ಕೆ ಬಂದೆವು. ತಮ್ಮೊಂದಿಗೆ ಈ ಮಾತು ಹೇಳಲಿಕ್ಕೆ ನಾಚಿಕೆಯಾ ಗುತ್ತದೆ ಎಂದು ಮಹಾಭಕ್ತಿಯಿಂದ ನುಡಿದರು. </p> <p style="text-indent: 1cm;">ಅಲ್ಲಿ ಆ ಸಂಜೀವಕನಿಗೆ ಮುರಿದಕಾಲು ದಿನೇ ದಿನೇ ಚೆನ್ನಾಗಿ ಬಂದ ಕಾರಣ, ಆ ಎತ್ತು ಮೆಲ್ಲಮೆಲ್ಲಗೆ ಎದ್ದು ತಿರುಗಾಡುತ್ತಾ, ಎಳಯ ಗರಿಕೆ ಯನ್ನು ಮೇಯುತ್ತಾ, ಸಿಹಿನೀರು ಕುಡಿಯುತ್ತಾ, ಮೈತಿಳಿಯದೆ ಕೊಬಿ ಸ್ವಲ್ಪವಾದರೂ ಭಯವಿಲ್ಲದೆ ಒಂದುದಿನ ಗಟ್ಟಿಯಾಗಿ ಗುಟರುಹಾಕಿತು. * </p> <p style="text-indent: 2cm;">The Story of the Lion Pingalaka. </p> <p style="text-indent: 1cm;">ಆ ವನದಲ್ಲಿ ಪಿಂಗಳಕನೆಂಬ ಸಿಂಹವು ಹುಲಿಗಳು ಕಾಡುಹಂದಿಗಳು ಕರಡಿಗಳು ಕಾಡುಕೋಣಗಳ ಆನೆಗಳು ಖಡ್ಗಮೃಗಗಳು ಸಾರಂಗ ಗಳು ಹುಲ್ಲೆಗಳು ಚಿಗರಿಗಳು ಮುಂತಾದ ಸಕಲಮೃಗಗಳನ್ನು ಶಿಕ್ಷೆ ಸುತ್ತಾ ರಕ್ಷಿಸುತ್ತಾ, ಎಮರಿಲ್ಲದ ಭುಜಬಲದಿಂದ ಗರಿಸಿ ಸ್ನೇಚ್ಛೆಯಾಗಿ ತಿರುಗುತ್ತಾ, ತನ್ನ ಪರಾಕ್ರಮದಿಂದ ಸಂಪಾದಿಸಲ್ಪಟ್ಟ ರಾಜ್ಯವನ್ನನುಭವಿ ಸುತ್ತಾ ಇದ್ದಿತು. ಆ ಸಿಂಹವು ಒಂದುದಿನ ಬಾಯಾರಿಕೆಯಿಂದ ಬಳಲಿ ನೀರು ಕುಡಿಯುವುದಕ್ಕಾಗಿ ಯಮುನಾನದಿಯ ತೀರದಲ್ಲಿ ಇಳಿಯು ತಿದ್ದು, ಮಹಾಭಯಂಕರವಾಗಿ ಪ್ರಳಯಕಾಲದ ಮೇಘದಿಂದ ಹುಟ್ಟಿದ<noinclude></noinclude> 7mpac83kslxb8ee2092am7xqm33667p ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೨೮ 104 58672 322194 127817 2026-05-24T14:31:54Z Pragathi. BH 7585 /* Validated */ 322194 proofread-page text/x-wiki <noinclude><pagequality level="4" user="Pragathi. BH" /></noinclude>ಗುಡುಗಿಗೆ ಸಮಾನವಾದ ಸಂಜೀವಕನ ಗುಟರೆಯನ್ನು ಕೇಳಿ ದಿಗಿಲು ಪಟ್ಟು-ಇದು ಏನು? ಇಲ್ಲಿ ಯಾರಿದ್ದಾರೆ?-ಎಂದು ತನ್ನಲ್ಲಿ ತಾನು ಆಲೋಚಿಸುತ್ತಾ ಮುಂದಕ್ಕೆ ಹೋಗದೆ ನಿಂತಿತು. </p> <p style="text-indent: 2cm;">The first Council of Jackals Karataka and Dinanaka. </p> <p style="text-indent: 1cm;">ಆಗ ವಿಂಗಳಕನ ಮಂತ್ರಿ ಕುಮಾರರಾದ ಕರಟಕ ದಮನಕರೆಂಬ ಹೆಸರುಳ್ಳ ನರಿಗಳಲ್ಲಿ ದಮನಕನು ತಮ್ಮ ಪ್ರಭುವಾದ ಪಿಂಗಳಕನೆಂಬ ನಿಂಹರಾಜನು ಗೂಳಿಯ ಗುಟರೆಯನ್ನು ಕೇಳಿ ಬೆದರಿದುದನರಿತು, ಕರಟಕ ನನ್ನು ನೋಡಿ-ಎಲೈ ಕರಟಕನೇ, ಇಷ್ಟು ದೊಡ್ಡವನಾದ ನಮ್ಮ ಅರಸನು ಅಪೂರ್ವವಾದ ಶಬ್ದವೆ ಕೇಳಿ ಹೊಳಗೆ ನೀರು ಕುಡಿಯಹೋಗಲಿಕ್ಕೆ ಹೆದರಿ ದಳು. ನಾವು ಆತನ ಮಂತ್ರಿ ಕುಮಾರರಾಗಿದ್ದು ಉಪೇಕ್ಷಿಸುವುದು ಯುಕ್ತ ವಲ್ಲ. ಆತನ ಅಂಜಿಕೆಯ ತೀರಿಸೋಣವೇ...ಎನಲು, ಕರಟಕ ನಿಂತೆಂದನು. ಎಲೈ ಹುಚ್ಚನೇ, ದಾರಿಯಲ್ಲಿ ಹೋಗುವ ವ್ಯಜ್ಞವ ಕೊಂಡುಕೊಂಡ ಹಾಗೆ ನಮಗೆ ಇಂಥ ಕೆಲಸವೇಕೆ? ದೇವರು ಕೊಟ್ಟನ್ನು ಊಟ ಮಾಡಿ ಸುಖವಾಗಿರೋಣ, ಇಂಥ ಕೆಲಸಗಳಿಗೆ ಹೋದರೆ ನಮಗೇನು ಮೋಸ ಬಂದೀತೋ ತಿಳಿಯದು, </p> <p style="text-indent: 1cm;">ಅವ್ಯಾಪಾರೇಷು ವ್ಯಾಪಾರಂ ಯೋ ನರಃ ಕರ್ತುವಿಚ್ಛತಿ | - </p> <p style="text-indent: 1cm;">ಸ ಭೂಮಿ ನಿಹತ್ತೇ ಕೀಲೋತ್ಪಾಟವ ವಾನರಃ | </p> <p style="text-indent: 0.1cm;">ಎಂಬಂತೆ ಅಧಿಕ ಪ್ರಸಂಗಗಳಿಗೆ ಹೋಗುವವನಿಗೆ ಕೀಲನ್ನು ಕಿತ್ತ ಕೋ ತಿಯ ಹಾಗೆ ನಿಜವಾಗಿ ಹಾನಿ ಬಂದೀತು. ಅದು ಹೇಗೆಂದರೆ :- </p> <p style="text-indent: 1cm;">ಒಂದು ಪಟ್ಟಣದ ಹತ್ತಿರ ಒಂದು ದೊಡ್ಡಗುಡಿ ಜೀರ್ಣವಾಗಿ ಅರ್ಧ ನೆಲಕ್ಕೆ ಕುಸಿದಿರಲಾಗಿ, ದೇವಭಕ್ತಿಯುಳ್ಳ ಒಬ್ಬ ವೈಶ್ಯನು ಅದನ್ನು ಮುಂಚಿನಹಾಗೆ ನೆಟ್ಟಗೆ ಮಾಡಹೇಳ ಶಿಲ್ಪಗಾರರಿಗೆ ಸಲ್ಪ ಧನವನ್ನು ಕೊಟ್ಟನು. ಅವರು ಆ ಧನವನ್ನು ತೆಗೆದುಕೊಂಡು ಗುಡಿಯನ್ನು ಕಟ್ಟುತ್ತಾ ಇರುವ ಸಮಯದಲ್ಲಿ, ಒಂದು ತೇಗಿನ ತೊಲೆಯನ್ನು ಹಲಗೆಗ ೪ಾಗಿ ಕೊಯ್ಯುತ್ತಾ ಅದನ್ನು ಸೀಳುವುದಕ್ಕಾಗಿ ಅಲ್ಲಲ್ಲಿ ಬೆಣೆಗಳನ್ನ ಇಳಿಯ<noinclude></noinclude> j9yiny82m0lk39i6xoaa508jew9fokj 322195 322194 2026-05-24T14:33:22Z Pragathi. BH 7585 322195 proofread-page text/x-wiki <noinclude><pagequality level="4" user="Pragathi. BH" />{{rh|center=ಪಂಚತಂತ್ರ ಕಥೆಗಳು|left=8|right=}}</noinclude>ಗುಡುಗಿಗೆ ಸಮಾನವಾದ ಸಂಜೀವಕನ ಗುಟರೆಯನ್ನು ಕೇಳಿ ದಿಗಿಲು ಪಟ್ಟು-ಇದು ಏನು? ಇಲ್ಲಿ ಯಾರಿದ್ದಾರೆ?-ಎಂದು ತನ್ನಲ್ಲಿ ತಾನು ಆಲೋಚಿಸುತ್ತಾ ಮುಂದಕ್ಕೆ ಹೋಗದೆ ನಿಂತಿತು. </p> <p style="text-indent: 2cm;">The first Council of Jackals Karataka and Dinanaka. </p> <p style="text-indent: 1cm;">ಆಗ ವಿಂಗಳಕನ ಮಂತ್ರಿ ಕುಮಾರರಾದ ಕರಟಕ ದಮನಕರೆಂಬ ಹೆಸರುಳ್ಳ ನರಿಗಳಲ್ಲಿ ದಮನಕನು ತಮ್ಮ ಪ್ರಭುವಾದ ಪಿಂಗಳಕನೆಂಬ ನಿಂಹರಾಜನು ಗೂಳಿಯ ಗುಟರೆಯನ್ನು ಕೇಳಿ ಬೆದರಿದುದನರಿತು, ಕರಟಕ ನನ್ನು ನೋಡಿ-ಎಲೈ ಕರಟಕನೇ, ಇಷ್ಟು ದೊಡ್ಡವನಾದ ನಮ್ಮ ಅರಸನು ಅಪೂರ್ವವಾದ ಶಬ್ದವೆ ಕೇಳಿ ಹೊಳಗೆ ನೀರು ಕುಡಿಯಹೋಗಲಿಕ್ಕೆ ಹೆದರಿ ದಳು. ನಾವು ಆತನ ಮಂತ್ರಿ ಕುಮಾರರಾಗಿದ್ದು ಉಪೇಕ್ಷಿಸುವುದು ಯುಕ್ತ ವಲ್ಲ. ಆತನ ಅಂಜಿಕೆಯ ತೀರಿಸೋಣವೇ...ಎನಲು, ಕರಟಕ ನಿಂತೆಂದನು. ಎಲೈ ಹುಚ್ಚನೇ, ದಾರಿಯಲ್ಲಿ ಹೋಗುವ ವ್ಯಜ್ಞವ ಕೊಂಡುಕೊಂಡ ಹಾಗೆ ನಮಗೆ ಇಂಥ ಕೆಲಸವೇಕೆ? ದೇವರು ಕೊಟ್ಟನ್ನು ಊಟ ಮಾಡಿ ಸುಖವಾಗಿರೋಣ, ಇಂಥ ಕೆಲಸಗಳಿಗೆ ಹೋದರೆ ನಮಗೇನು ಮೋಸ ಬಂದೀತೋ ತಿಳಿಯದು, </p> <p style="text-indent: 1cm;">ಅವ್ಯಾಪಾರೇಷು ವ್ಯಾಪಾರಂ ಯೋ ನರಃ ಕರ್ತುವಿಚ್ಛತಿ | - </p> <p style="text-indent: 1cm;">ಸ ಭೂಮಿ ನಿಹತ್ತೇ ಕೀಲೋತ್ಪಾಟವ ವಾನರಃ | </p> <p style="text-indent: 0.1cm;">ಎಂಬಂತೆ ಅಧಿಕ ಪ್ರಸಂಗಗಳಿಗೆ ಹೋಗುವವನಿಗೆ ಕೀಲನ್ನು ಕಿತ್ತ ಕೋ ತಿಯ ಹಾಗೆ ನಿಜವಾಗಿ ಹಾನಿ ಬಂದೀತು. ಅದು ಹೇಗೆಂದರೆ :- </p> <p style="text-indent: 1cm;">ಒಂದು ಪಟ್ಟಣದ ಹತ್ತಿರ ಒಂದು ದೊಡ್ಡಗುಡಿ ಜೀರ್ಣವಾಗಿ ಅರ್ಧ ನೆಲಕ್ಕೆ ಕುಸಿದಿರಲಾಗಿ, ದೇವಭಕ್ತಿಯುಳ್ಳ ಒಬ್ಬ ವೈಶ್ಯನು ಅದನ್ನು ಮುಂಚಿನಹಾಗೆ ನೆಟ್ಟಗೆ ಮಾಡಹೇಳ ಶಿಲ್ಪಗಾರರಿಗೆ ಸಲ್ಪ ಧನವನ್ನು ಕೊಟ್ಟನು. ಅವರು ಆ ಧನವನ್ನು ತೆಗೆದುಕೊಂಡು ಗುಡಿಯನ್ನು ಕಟ್ಟುತ್ತಾ ಇರುವ ಸಮಯದಲ್ಲಿ, ಒಂದು ತೇಗಿನ ತೊಲೆಯನ್ನು ಹಲಗೆಗ ೪ಾಗಿ ಕೊಯ್ಯುತ್ತಾ ಅದನ್ನು ಸೀಳುವುದಕ್ಕಾಗಿ ಅಲ್ಲಲ್ಲಿ ಬೆಣೆಗಳನ್ನ ಇಳಿಯ<noinclude></noinclude> 74hvrj8h0nng0qb5uy8xonkqn9upfit ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೫೦ 104 58794 322180 127713 2026-05-24T14:25:48Z Pragathi. BH 7585 /* Validated */ 322180 proofread-page text/x-wiki <noinclude><pagequality level="4" user="Pragathi. BH" /><p style="text-indent: 5cm;">ಪಂಚತಂತ್ರ ಕಥೆಗಳು.</p> 130</noinclude>ಇನ್ನು ಮೇಲೆ ನೀನೇ ಸ್ನೇಹಿತರಿಗೆ ಹಿತವನ್ನು ಮಾಡಹೋಗುತ್ತೀಯೆ. ನೀನೂ ನಾನೂ ನಿಂಹಕ್ಕೆ ಪ್ರಧಾನಭ್ರತರಾಗಿ ಇರೋಣ. ಸಾವಿರ ಮಾತು ಏತಕ್ಕೆ? ಮನುಷ್ಯರಲ್ಲಿ ಧರ್ಮಾರ್ಥಕಾಮಗಳನ್ನು ಕೋರು ವವರಿಗೆ ಶುಭಗಳು ಬಹು ವಿಫ್ಟ್ ಗಳುಳೆವಾಗಿ ಇರುವುವು-ಎಂದು ಹೇಳಲಾಗಿ, ಕತ್ತೆ ಕೇಳಿ, ನಾನು ನಿನ್ನ ಸಂಗಡ ಬರುತ್ತೇನೆ ಎಂದು ಹೇಳಿತು. ಆಗ ನರಿ- ನೀನು ಹೆದರಬೇಡ, ಬಾ; ನನ್ನನ್ನು ನಂಬು, -- ಎಂದು ಬುದ್ದಿ ಯಿಲ್ಲದ ಕತ್ತೆಯನ್ನು ತಿರುಗಿ ಕರೆದುಕೊಂಡು ಹೋಗಿ ಸಿಂಹಕ್ಕೆ ಒಪ್ಪಿಸಿತು. ತರುವಾಯ ಸಿಂಹವು ಅದನ್ನು ಪ್ರೀತಿಯಾ ಗಿಯೇ ಹಿಡಿದುಕೊಂಡು ಕೊಂದು, ನರಿಯನ್ನು ನೋಡಿ ಸೀನು ದುಸ್ತ್ರ ರವಾದ ಕಾರವನ್ನು ಮಾಡಿದೆ. ನಿನ್ನಂತಹ ಸಮರ್ಥರು ಈ ಲೋಕ ದಲ್ಲಿ ಇಲ್ಲವೆಂದು ಹೊಗಳಿ, ನೀನು ಹಣಮಾತ್ರ ಇದನ್ನು ನೋಡಿ ಕೊಂಡಿರು. ನಾನು ಸ್ನಾನಮಾಡಿ ನಿತ್ಯ ಕರ್ಮವನ್ನು ತೀರಿಸಿಕೊಂಡು ಬಂದು ಈ ಮದ್ದನ್ನು ತಿನ್ನುತ್ತೇನೆ ಎಂದು ಹೇಳಿ ಹೋಯಿತು. ಸಿಂಹವು ಹೋಗುತ್ತಲೇ, ನರಿ ಇದು ಏನೋ ಮಹಷಧವೆಂದು ನೆನಸಿ ಕತ್ತೆಯ ಕಿವಿಗಳನ್ನೂ ಕರುಳನ್ನೂ ತಾನೇ ಭಕ್ಷಿಸಿತು. ಅನಂತರ ಸಿಂಹವು ಒಂದು ಕತೆಯ ಕಿವಿಗಳೂ ಕರುಳ ಎಲ್ಲಿ ? - ಎಂದು ಕೇಳಿತು. ಬುದ್ಧಿಹೀನನಿಗೆ ಕಿವಿಗಳ ಕರುಳ ಉಟೋ ? ಅವು ಇದ್ದರೆ ಅವನು ಹೀಗೇಕಾದಾನು ?-ಎಂದು ನರಿ ಪ್ರತ್ಯುತ್ತರಕೊ ಟ್ಟಿತು, ಅಹುದೇನೋ ಎಂದು ಸಿಂಹವು ಸುಮ್ಮನೆ ಇದ್ದಿತು. ಆದಕಾ ರಣ ನಾನು ಮುದಿಕೊತಿಯೇ ಹೊರತು ಕತ್ತೆಯಲ್ಲವೆಂದು ಹೇಳಿ ದೆನು. ಇನ್ನು ಮೇಲೆ ನನ್ನನ್ನು ವಂಚಿಸಲಿಕ್ಕೆ ನಿನ್ನಿಂದಾಗದು, ನೀನು ಹೋಗಿ ನೀರು ಕುಡಿಯುತ್ತಾ ಇರಬೇಕು-ಎಂದು ವಾನರನು ಹೇಳಲು, ಕೇಳಿ ಮೊಸಳೆ ಸಿಕ್ಕಿದುದನ್ನು ಹೋಗಲಾಡಿಸಿಕೊಂಡು ಹೋಯಿತು. <p style="text-indent: 1cm;">ಇಂತು ವಿಷ್ಣು ಶರ್ಮನು ಹೇಳಿದ ಅಬ್ದ ನಾಶವೆಂಬ ನಾಲ್ಕನೆಯ</p> <p style="text-indent: 2.5cm;">ತಂತ್ರವನ್ನು ಕೇಳಿ ರಾಜಕುಮಾರರು ಬಹಳ</p> <p style="text-indent: 3.5cm;">ಸಂತೋಷಚಿತ್ತರಾದರು.</p> --<noinclude></noinclude> bdag518ihtufndpu9yn3hraats4fe9y ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೫೧ 104 58795 322181 127708 2026-05-24T14:25:58Z Pragathi. BH 7585 /* Validated */ 322181 proofread-page text/x-wiki <noinclude><pagequality level="4" user="Pragathi. BH" /><p style="text-indent: 4cm;">SECTION V.</p> <p style="text-indent: 3cm;">INCONSIDERATENESS.</p> <p style="text-indent: 4cm;">ಅಸಂಪ್ರೇಕ್ಷಕಾರಿತ್ಪವು.</p></noinclude><p style="text-indent: 1cm;">'ನಿಜವನ್ನೂ ಸುಳ್ಳನ್ನೂ ತಿಳಿದುಕೊಳ್ಳಲಾರದೆ ಕ್ರೋಧದಿಂದ ಜನ</p> ಗಳಿಗೆ ಕೇಡಮಾಡುವವನು ಪಾವನ್ನು ಕೊಂದ ಮುಂಗನಿಯನ್ನು ವಧಿ ನಿದ ಬ್ರಾಹ್ಮಣನ ಹಾಗೆ ಮಹತ್ತಾದ ಮನೋವ್ಯಥೆಯನ್ನು ಹೊಂದು ವನು ' ಎಂದು ವಿಷ್ಣು ಶರ್ಮನು ಹೇಳಲಾಗಿ ರಾಜಪುತ್ರರು ಕೇಳಿಹಾವನ್ನು ಮುಂಗಸಿ ಏಕೆ ಕೊಂದಿತು ? ಮುಂಗಸಿಯನ್ನು ಬ್ರಾಹ್ಮಣನು ಏಕೆ ವಧಿಸಿದನು ? ನಮಗೆ ಅದನ್ನು ತಿಳಿಯಹೇಳಬೇಕು-ಎನಲು, ವಿಷ್ಣು ಶರ್ಮನಿಂತೆಂದನು. <p style="text-indent: 1cm;">'ಗೌಡದೇಶದಲ್ಲಿ ಒಂದು ಅಗ್ರಹಾರವುಂಟು. ಅದರಲ್ಲಿ ದೇವಶರ್ಮ</p> ನೆಂಬ ಬ್ರಾಹ್ಮಣನಿದ್ದನು. ಆತನ ಹೆಂಡತಿ ಯಜ್ಞಸೇನೆ, ಆಕೆಯು ಪೂರಕೃತಪುಣ್ಯದಿಂದ ಗರ್ಭವನ್ನು ಧರಿಸಿದಳು. ಬ್ರಾಹ್ಮಣನು ಅವ ಳನ್ನು ನೋಡಿ ಬಹಳ ಸಂತೋಷದಿಂದ ಅನಂತವಾದ ಕೋರಿಕೆಗಳನ್ನು ಕೋರುತ್ತಾ-ಎಲೈ ಪ್ರಿಯಳೇ, ನಿನ್ನ ಗರ್ಭದಲ್ಲಿರುವ ಕುಮಾರನು ನಮ್ಮ ಕುಲವನ್ನೆಲ್ಲಾ ಉದ್ಧರಿಸತಕ್ಕವನು. ಮರಾಭಾಗ್ಗವಂತನುಎಂದು ಹೇಳಿದನು. ಹೆಂಡತಿ ಗಂಡನನ್ನು ನೋಡಿ-ಇಂತಹ ಕೋರಿಕೆ ಗಳನ್ನು ಕೋರುವುದು ಯುಕ್ತವಲ್ಲ. ಅನಾಗತಕಾರಗಳನ್ನು ಕುರಿತು ಚಿಂತೆಯನ್ನು ಯಾವನು ಮಾಡುತ್ತಾನೋ ಅವನು ಸೋಮಶರ್ಮನ ತಂದೆಯ ಹಾಗೆ ಬಹಳ ವಿವಾದವನ್ನು ಹೊಂದುವನು-ಎಂದು ನುಡಿ ದಳು. “ ಅದು ಹೇಗೆ' ಎಂದು ಬ್ರಾಹ್ಮಣನು ಕೇಳಲು, ಅವನ ಹೆಂಡತಿ ಹೇಳುತ್ತಾಳ.<noinclude></noinclude> fs9nqsyx7ryzuitp2sn7hp229csxf5p ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೫೫ 104 58799 322182 127694 2026-05-24T14:26:30Z Pragathi. BH 7585 /* Validated */ 322182 proofread-page text/x-wiki <noinclude><pagequality level="4" user="Pragathi. BH" /><p style="text-indent: 5cm;">ಅಸಂಪ್ರೇಕಕಾರಿತ್ವವು.</p> 136</noinclude>ಯಾವನು ಚನ್ನಾಗಿ ಕೇಳದೆಯೂ ಚೆನ್ನಾಗಿ ನೋಡದೆಯ ಕಲಂಕಷ ವಾಗಿ ವಿಚಾರಿಸದೆಯೂ ಒಂದು ಕೆಲಸವನ್ನು ಮಾಡುವನೋ ಅವನು ಭಿಕ್ಷುಕರನ್ನು ಕೊಂದ ನಾಯಿಂದನ ಹಾಗೆ ಆಪತ್ತನ್ನು ಹೊಂದುವನುಎಂದು ಹೇಳಲು, ( ಅದು ಹೇಗೆ ? ' ಎಂದು ಬ್ರಾಹ್ಮಣನು ಕೇಳಿದನು. ಅವನ ಹೆಂಡತಿ ಹೇಳುತ್ತಾಳೆ. <p style="text-indent: 1cm;">Theo Konati, the Beggars and the Burber.</p> <p style="text-indent: 1cm;">ಒಬ್ಬಾನೊಬ್ಬ ಕೋಮಟ ಹುಡುಗನುಂಟು. ಅವನು ಹುಟ್ಟು ತಲೇ ಅವನ ತಾಯಿ ಸತ್ತುಹೋದಳು. ತರುವಾಯ ಅವನನ್ನು ವಾದಿ ಬಳಯಿಸುತ್ತಿದ್ದಳು. ಹೀಗಿರಲಾಗಿ ಆ ಹುಡುಗನಿಗೆ ಬಾಲ್ಯವು ಕಳವ ಸಮಯದಲ್ಲಿ ಒಂದು ದಿನ ಅವನು ದಾರಿದ್ರದಿಂದ ದುಃಖಿಸುತ್ತಾ ತನ್ನನ್ನು ನಿಂದಿಸಿಕೊಂಡು, ನಿಟ್ಟುಸಿರು ಬಿಡುತ್ತಾ, ರಾತ್ರಿ ಮಲಗಿ ನಿದ್ರೆ ಹೋಗುತ್ತಿದ್ದನು. ಅಂದಿನ ರಾತ್ರಿ ಬೆಳಗಿನ ಜಾವದಲ್ಲಿ ಅವನ ಗುಪ್ತವು ನಶಿಸಿ ಹೋದುದರಿಂದ ಒಳ್ಳೆಯ ಕನಸನ್ನು ಕಂಡನು. ಆ ಕನಸಿನಲ್ಲಿ ಒಬ್ಬ ನಿದ್ದ ಪುರುಷನು ಬಂದು-ನೀನು ಏತಕ್ಕೆ ಚಿಂತಿಸು ತೀಯ ? ಸಾತಕದಲ್ಲಿ ಕೈ ರ ಅಭ್ಯಂಜನಸ್ನಾನ ಮುಂತಾದ ಕೃತ್ಯಗಳನ್ನು ತೀರಿಸಿಕೊಂಡು ಕಾದಿರು. ಆಗ ಮೂರು ಮಂದಿ ಭಿಕ್ಷುಕರು ಬರುವರು. ಅವರನ್ನು ಪೂಜಿಸಿ ಭೋಜನವಾಡಿಸಿ ತೃಪ್ತಿ ದೊಂದಿಸಿದ ತರುವಾಯ, ನಿರ್ದಯನಾಗಿ ಆ ಮೂವರನ್ನೂ ದೊಣೆ ಹಿಂದ ತಲೆಯ ಮೇಲೆ ಹೊಡೆ. ಆ ಮೇಲೆ ಆ ಮೂವರೂ ಮೂರು ನಿಧಿಗಳಾಗುವರು. ಆ ನಿಧಿಗಳನ್ನು ಇಟ್ಟುಕೊಂಡು ಸಕಲ ಧರ್ಮಗ ಇನ್ನೂ ಮಾಡುತ್ತಾ ಪುತ್ರವತ್ರಾಭಿವೃದ್ಧಿಯನ್ನು ಪಡೆದು ಚಿರಕಾಲ ಟಾಳು-ಎಂದು ಆಶೀರ್ವದಿಸಿ, ಅದೃಶನಾಗಿ ಹೋದನು. ಆ ಕೂಡಲೇ ಆಕೊಮಟ ಹುಡುಗನು ಎಚ್ಚರಗೊಂಡು, ಒಳ್ಳೆಯ ಕನಸು ಕಂಡ ವನು ತಿರುಗಿ ನಿದ್ರಿಸಬಾರವಾದುದರಿಂದ ಸೂರೋದು ಕಾಲಪರಂತ ನಿದ್ದೆ ಹೋಗದೆ ಕುಳಿತಿದ್ದು, ಸದ್ಯೋದಯವಾದ ಬಳಿಕ ದಾದಿಯನ್ನು<noinclude></noinclude> qu827x53z317scphoazg2ilz9f78lqj ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೫೬ 104 58800 322183 127690 2026-05-24T14:26:45Z Pragathi. BH 7585 /* Validated */ 322183 proofread-page text/x-wiki <noinclude><pagequality level="4" user="Pragathi. BH" /><p style="text-indent: 5cm;">ಪಂಚತಂತ್ರ ಕಥೆಗಳು.</p> 136</noinclude>ಕೂಗಿ,-ಇಂದು ನಮಗೊಂದು ಮೇಲುಂಟಾಗುತ್ತದೆ. ನೀನು ನಮ್ಮ ಮನೆ ಮುಂತಾದುವನ್ನು ಚೆನ್ನಾಗಿ ಸಾರಿಸಿ ಶುದ್ಧಿ ಮಾಡಿ ನೇಮವುಳ್ಳವೆ ೪ಾಗಿರು. ನಾನು ಹೈರಾಭ್ಯಂಜನಗಳನ್ನು ಮಾಡಿಸಿಕೊಂಡು ಸ್ನಾನ ಮಾಡಿ ಮಡಿಯಾಗಿರುತ್ತೇನೆ. ಒಬ್ಬ ಹರಕನನ್ನು ಕರೆಯಿಸು ಎಂದು ಹೇಳಿ, ಹೈರಕನು ಬಂದಕೂಡಲೇ ಕ್ಷೌರಮಾಡಿಸಿಕೊಂಡು, ಅವ ನನ್ನು ಸ್ವಲ್ಪ ಹೊತ್ತು ಇರಹೇಳಿ, ಅಭ್ಯಂಜನಸ್ನಾನಮಾಡಿ, ಮಡಿ ಬಟ್ಟೆಗಳನ್ನು ಉಟ್ಟುಕೊಂಡು ಶುಚಿಯಾಗಿದ್ದನು. ತರುವಾಯ ಸಿದ್ಧ ಪುರುಷನು ಹೇಳಿದ ಪ್ರಕಾರ ಭಿಕ್ಷುಕರು ಮೂವರು ಬಂದರು. ಅವ ರನ್ನು ಕೋಮಟ ಹುಡುಗನು ನೋಡಿ ಪೂಜಿಸಿ, ಅವರಿಗೆ ಪಡ್ರಸೋಪೇತ ವಾದ ಭೋಜನವನ್ನು ಬಡಿಸಿ ಅವರು ತೃಪ್ತಿ ಹೊಂದಿದ ಮೇಲೆ ದೊಣ್ಣೆ ಯನ್ನು ತೆಗೆದುಕೊಂಡು ಅವರ ತಲೆಯ ಮೇಲೆ ಹೊಡೆದನು. ಆಗ ಆ ಮೂವರೂ ಮರು ವರಹಗಳ ರಾಶಿಗಳಾದರು. ಅದನ್ನು ನೋಡಿ ಅವನು ಬಹಳ ಸಂತೋಪಿಸಿ ದಾದಿಯ ಸಂಗಡ ಧನಸಹಿತವಾದ ತನ್ನ ಮನೆಯನ್ನು ಪ್ರವೇಶಿಸಿ ನಾಯಿಂದನಿಗೆ ನೂರು ವರಹಗಳನ್ನು ಕೊಟ್ಟು ಕಳುಹಿಸಿದನು. ಈ ಸಂಗತಿಯನ್ನು ಚೆನ್ನಾಗಿ ವಿಚಾರಿಸದ ನಾಯಿಂ ದನು ಇದನ್ನು ನೋಡಿ ತನ್ನ ಮನೆಗೆ ಹೋಗಿ, ' ನಾನೂ ಭಿಕ್ಷುಕರು ಮೂವರನ್ನು ಕೊಂದು ಧನವನ್ನು ಗಳಿಸುವೆನು ' ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು, ಭಿಕ್ಷುಕರನ್ನು ಎದುರು ನೋಡುತ್ತಿದ್ದನು. ಕರ್ಮ ವಶದಿಂದ ಮೂವರು ಭಿಕ್ಷುಕರು ಬಂದರು. ನಾಯಿಂದನು ಅವರನ್ನು ನೋಡಿ ಸಂತೋಪಿಸಿ ಪೂಜಿಸಿ ತೃಪ್ತಿಯಾಗಿ ಭೋಜನಮಾಡಿಸಿ, ಆ ಮೇಲೆ ಅವರನ್ನು ದೊಣ್ಣೆ ಯಿಂದ ಹೊಡೆದು ಕೊಂದನು. ಆದರೆ ವರಹ ಗಳ ರಾಶಿ ಸಿಕ್ಕಲಿಲ್ಲ. ಈ ಸಮಾಚಾರವನ್ನು ಅರಮನೆಯವರು ಕೇಳಿ ಕರಕನನ್ನು ಎಳದುಕೊಂಡು ಹೋಗಿ ಅರಸನಿಗೆ ತಿಳಿಸಿ ಅರಸನ ಆಜ್ಞೆಯ ಮೇಲೆ ಅವನನ್ನು ಕೊಂದರು.</p><noinclude></noinclude> swmj0eq1lrkulpsdmyfqf6f61s2rea9 322184 322183 2026-05-24T14:27:06Z Pragathi. BH 7585 322184 proofread-page text/x-wiki <noinclude><pagequality level="4" user="Pragathi. BH" /><p style="text-indent: 5cm;">ಪಂಚತಂತ್ರ ಕಥೆಗಳು.</p> {{Left|136}}</noinclude>ಕೂಗಿ,-ಇಂದು ನಮಗೊಂದು ಮೇಲುಂಟಾಗುತ್ತದೆ. ನೀನು ನಮ್ಮ ಮನೆ ಮುಂತಾದುವನ್ನು ಚೆನ್ನಾಗಿ ಸಾರಿಸಿ ಶುದ್ಧಿ ಮಾಡಿ ನೇಮವುಳ್ಳವೆ ೪ಾಗಿರು. ನಾನು ಹೈರಾಭ್ಯಂಜನಗಳನ್ನು ಮಾಡಿಸಿಕೊಂಡು ಸ್ನಾನ ಮಾಡಿ ಮಡಿಯಾಗಿರುತ್ತೇನೆ. ಒಬ್ಬ ಹರಕನನ್ನು ಕರೆಯಿಸು ಎಂದು ಹೇಳಿ, ಹೈರಕನು ಬಂದಕೂಡಲೇ ಕ್ಷೌರಮಾಡಿಸಿಕೊಂಡು, ಅವ ನನ್ನು ಸ್ವಲ್ಪ ಹೊತ್ತು ಇರಹೇಳಿ, ಅಭ್ಯಂಜನಸ್ನಾನಮಾಡಿ, ಮಡಿ ಬಟ್ಟೆಗಳನ್ನು ಉಟ್ಟುಕೊಂಡು ಶುಚಿಯಾಗಿದ್ದನು. ತರುವಾಯ ಸಿದ್ಧ ಪುರುಷನು ಹೇಳಿದ ಪ್ರಕಾರ ಭಿಕ್ಷುಕರು ಮೂವರು ಬಂದರು. ಅವ ರನ್ನು ಕೋಮಟ ಹುಡುಗನು ನೋಡಿ ಪೂಜಿಸಿ, ಅವರಿಗೆ ಪಡ್ರಸೋಪೇತ ವಾದ ಭೋಜನವನ್ನು ಬಡಿಸಿ ಅವರು ತೃಪ್ತಿ ಹೊಂದಿದ ಮೇಲೆ ದೊಣ್ಣೆ ಯನ್ನು ತೆಗೆದುಕೊಂಡು ಅವರ ತಲೆಯ ಮೇಲೆ ಹೊಡೆದನು. ಆಗ ಆ ಮೂವರೂ ಮರು ವರಹಗಳ ರಾಶಿಗಳಾದರು. ಅದನ್ನು ನೋಡಿ ಅವನು ಬಹಳ ಸಂತೋಪಿಸಿ ದಾದಿಯ ಸಂಗಡ ಧನಸಹಿತವಾದ ತನ್ನ ಮನೆಯನ್ನು ಪ್ರವೇಶಿಸಿ ನಾಯಿಂದನಿಗೆ ನೂರು ವರಹಗಳನ್ನು ಕೊಟ್ಟು ಕಳುಹಿಸಿದನು. ಈ ಸಂಗತಿಯನ್ನು ಚೆನ್ನಾಗಿ ವಿಚಾರಿಸದ ನಾಯಿಂ ದನು ಇದನ್ನು ನೋಡಿ ತನ್ನ ಮನೆಗೆ ಹೋಗಿ, ' ನಾನೂ ಭಿಕ್ಷುಕರು ಮೂವರನ್ನು ಕೊಂದು ಧನವನ್ನು ಗಳಿಸುವೆನು ' ಎಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು, ಭಿಕ್ಷುಕರನ್ನು ಎದುರು ನೋಡುತ್ತಿದ್ದನು. ಕರ್ಮ ವಶದಿಂದ ಮೂವರು ಭಿಕ್ಷುಕರು ಬಂದರು. ನಾಯಿಂದನು ಅವರನ್ನು ನೋಡಿ ಸಂತೋಪಿಸಿ ಪೂಜಿಸಿ ತೃಪ್ತಿಯಾಗಿ ಭೋಜನಮಾಡಿಸಿ, ಆ ಮೇಲೆ ಅವರನ್ನು ದೊಣ್ಣೆ ಯಿಂದ ಹೊಡೆದು ಕೊಂದನು. ಆದರೆ ವರಹ ಗಳ ರಾಶಿ ಸಿಕ್ಕಲಿಲ್ಲ. ಈ ಸಮಾಚಾರವನ್ನು ಅರಮನೆಯವರು ಕೇಳಿ ಕರಕನನ್ನು ಎಳದುಕೊಂಡು ಹೋಗಿ ಅರಸನಿಗೆ ತಿಳಿಸಿ ಅರಸನ ಆಜ್ಞೆಯ ಮೇಲೆ ಅವನನ್ನು ಕೊಂದರು.</p><noinclude></noinclude> o38xtc9s72xxjdx6vxperukh2cy1gi0 ಪುಟ:ಪಂಚತಂತ್ರ ಅಥವಾ ಪಂಚೋಪಾಖ್ಯಾನ.djvu/೧೫೭ 104 58801 322185 127687 2026-05-24T14:27:21Z Pragathi. BH 7585 /* Validated */ 322185 proofread-page text/x-wiki <noinclude><pagequality level="4" user="Pragathi. BH" /><p style="text-indent: 5cm;">ಅಸಂಗ್ರೆಹ್ಮಕಾರಿತ್ವವು.</p> 137</noinclude> <p style="text-indent: 1cm;">ಆದಕಾರಣ ಯಾವ ಕಾರವನ್ನಾದರೂ ಸರಿ, ವಿಚಾರಿಸದೆ ತರೆ</p> ಪಟ್ಟು ಮಾಡಬಾರದು. ಇರೆಪಟ್ಟು ಮಾಡುವ ಅವಿವೇಕಿಗೆ ಆಪತ್ತು ಗಳು ಬರುವುದು ಸಿದ್ದವು. ಚೆನ್ನಾಗಿ ವಿಮರ್ಶಿಸಿ ಮಾಡುವ ವಿವೇಕಿಗೆ ಸಂಪತ್ತು ತಪ್ಪದೆ ಉಂಟಾಗುವುದು-ಎಂಮ ಹೆಂಡತಿ ಹೇಳಲು, ಕೇಳಿ ಬ್ರಾಹ್ಮಣನು ಆಕೆಯ ವಿವೇಕವಚನಗಳಿಗೆ ಸಂತೋಷವನ್ನೂ ವಿಚಾರಿ ಸದೆ ತಾನು ಮುಂಗಸಿಯನ್ನು ಕೊಂದವಕ್ಕೆ ಪರಿತಾಪವನ್ನೂ ಹೊಂದಿದ ಚಿತ್ತವುಳ್ಳವನಾಗಿ, ಸರವೂ ದೈವಾಧೀನವೆಂದು ನುಡಿದು, ತನ್ನ ಮಗ ನನ್ನು ಲಾಲಿಸುತ್ತಾ ಭಾರೈಯೂ ತಾನೂ ಸುಖವಾಗಿದ್ದರು. <p style="text-indent: 1cm;">ಇಂತು ವಿಷ್ಣು ಶರನು ಹೇಳಿದ ಅಸಂಪ್ರೇಕ್ಷಕಾರಿತ್ಪವೆಂಬ</p> <p style="text-indent: 2cm;">ಐದನೆಯ ತಂತ್ರವನ್ನು ಕೇಳಿ ಆ ರಾಜನಂದನರು</p> <p style="text-indent: 3cm;">ಅಪರಿಮಿತ ಸಂತೋಷಭರಿತರಾದರು.</p><noinclude></noinclude> btnigq6uh8fjqidvti9ale6adaiman3 322186 322185 2026-05-24T14:27:46Z Pragathi. BH 7585 322186 proofread-page text/x-wiki <noinclude><pagequality level="4" user="Pragathi. BH" /><p style="text-indent: 5cm;">ಅಸಂಗ್ರೆಹ್ಮಕಾರಿತ್ವವು.</p> {{Right|137}}</noinclude> <p style="text-indent: 1cm;">ಆದಕಾರಣ ಯಾವ ಕಾರವನ್ನಾದರೂ ಸರಿ, ವಿಚಾರಿಸದೆ ತರೆ</p> ಪಟ್ಟು ಮಾಡಬಾರದು. ಇರೆಪಟ್ಟು ಮಾಡುವ ಅವಿವೇಕಿಗೆ ಆಪತ್ತು ಗಳು ಬರುವುದು ಸಿದ್ದವು. ಚೆನ್ನಾಗಿ ವಿಮರ್ಶಿಸಿ ಮಾಡುವ ವಿವೇಕಿಗೆ ಸಂಪತ್ತು ತಪ್ಪದೆ ಉಂಟಾಗುವುದು-ಎಂಮ ಹೆಂಡತಿ ಹೇಳಲು, ಕೇಳಿ ಬ್ರಾಹ್ಮಣನು ಆಕೆಯ ವಿವೇಕವಚನಗಳಿಗೆ ಸಂತೋಷವನ್ನೂ ವಿಚಾರಿ ಸದೆ ತಾನು ಮುಂಗಸಿಯನ್ನು ಕೊಂದವಕ್ಕೆ ಪರಿತಾಪವನ್ನೂ ಹೊಂದಿದ ಚಿತ್ತವುಳ್ಳವನಾಗಿ, ಸರವೂ ದೈವಾಧೀನವೆಂದು ನುಡಿದು, ತನ್ನ ಮಗ ನನ್ನು ಲಾಲಿಸುತ್ತಾ ಭಾರೈಯೂ ತಾನೂ ಸುಖವಾಗಿದ್ದರು. <p style="text-indent: 1cm;">ಇಂತು ವಿಷ್ಣು ಶರನು ಹೇಳಿದ ಅಸಂಪ್ರೇಕ್ಷಕಾರಿತ್ಪವೆಂಬ</p> <p style="text-indent: 2cm;">ಐದನೆಯ ತಂತ್ರವನ್ನು ಕೇಳಿ ಆ ರಾಜನಂದನರು</p> <p style="text-indent: 3cm;">ಅಪರಿಮಿತ ಸಂತೋಷಭರಿತರಾದರು.</p><noinclude></noinclude> fsmc1jz6cfbvjdtve6ct3dmqp3khfkc ಪುಟ:Kannada-Saahitya.pdf/೮ 104 58862 322435 256884 2026-05-25T09:19:58Z Pragathi. BH 7585 /* Validated */ 322435 proofread-page text/x-wiki <noinclude><pagequality level="4" user="Pragathi. BH" />{{rh| | vi |}}</noinclude>ಕವಿಯ ನಿರೂಪಣ ಕ್ರಮವನ್ನನುಸರಿಸಿ ಸಾಧ್ಯವಾದ ಮಟ್ಟಿಗೂ ಅವನ ಮಾತುಗಳನ್ನೇ ಬಳಸಿಕೊಂಡು ಈಗಿನ ರೂಪದಲ್ಲಿ ಈಗಿನವರಿಗೆ ಅರ್ಥವಾಗುವಂತೆ ಬರೆಯುವುದು ನನ್ನ ರೀತಿ. ಮುಖ್ಯವಾಗಿ ವಿದ್ಯಾರ್ಥಿಗಳಿಗೂ, ಜೀವನಕ್ಕಾಗಿ ಹಲವು ವೃತ್ತಿಗಳಲ್ಲಿ ತೊಡಗಿ ಸಾಹಿತ್ಯಾಭ್ಯಾಸಕ್ಕೆ ಹೆಚ್ಚು ಬಿಡುವಿಲ್ಲದಿರುವ ಸಾಮಾನ್ಯ ವಿದ್ಯಾವಂತನಿಗೂ ಈ ಪ್ರಯತ್ನದಿಂದ ಸಹಾಯವಾಗಬಹುದೆಂದು ನಂಬಿದ್ದೇನೆ. {{gap}}ಸರಳತೆಗಾಗಿ ಇಲ್ಲಿ ಉದಾಹರಿಸಿರುವ ಪದ್ಯಗಳಲ್ಲಿ 'ಅ'ಕಾರ 'ಆ' ಕಾರಗಳನ್ನು ಉಪಯೋಗಿಸಿಲ್ಲ. ಅದಕ್ಕೆ ಬದಲಾಗಿ 'ರ' ಕಾರ 'ಳ 'ಕಾರಗಳನ್ನೆ ಬಳಸಿದೆ. {{gap}}ಈ ಕೆಲಸ ಮಾಡಬೇಕೆಂದು ನಾಲೈದು ವರ್ಷಗಳಿಂದಲೂ ಆಲೋಚಿಸುತ್ತಿದ್ದೆನಾದರೂ ಇಬ್ಬರು ಮಾನ್ಯ ಮಿತ್ರರ ಪ್ರೋತ್ಸಾಹದಿಂದ ಈಗ ಇದು ಕಾರ್ಯರೂಪಕ್ಕೆ ಬಂತು. ಶ್ರೀ ಎಂ. ವಿ. ಸೀತಾರಾಮಯ್ಯ ಎಂ.ಎ., ಆವರು ಒಳ್ಳೆಯ ಚಿತ್ರ ಬರೆದುಕೊಟ್ಟು ಪುಸ್ತಕದ ಅಂದವನ್ನು ಹೆಚ್ಚಿಸಿದ್ದಾರೆ. ಇವರಿಗೆ ವಂದನೆಗಳು. {{rh|ಬೆಂಗಳೂರು<br/>೨೪-೩-೧೯೪೫||ಎಲ್. ಗುಂಡಪ್ಪ}}<noinclude></noinclude> 6q1emd9mu2roo5n9oxm4ifr9cjx6z2r ಪುಟ:ಮನಮಂಥನ.pdf/೧ 104 62449 322287 268675 2026-05-24T17:27:49Z Vikashegde 1258 /* Proofread */ 322287 proofread-page text/x-wiki <noinclude><pagequality level="3" user="Vikashegde" /></noinclude>{{Css image crop |Image = ಮನಮಂಥನ.pdf |Page = 1 |bSize = 365 |cWidth = 405 |cHeight = 590 |oTop = 3 |oLeft = 3 |Location = center |Description = }} <noinclude></noinclude> dgcqrtjacufmrlehl9j608ysojxxuj2 322288 322287 2026-05-24T17:28:22Z Vikashegde 1258 322288 proofread-page text/x-wiki <noinclude><pagequality level="3" user="Vikashegde" /></noinclude>{{Css image crop |Image = ಮನಮಂಥನ.pdf |Page = 1 |bSize = 365 |cWidth = 405 |cHeight = 690 |oTop = 3 |oLeft = 3 |Location = center |Description = }} <noinclude></noinclude> euuszoldnfj3dc81mnv34te43jkxpmm ಪುಟ:ಮನಮಂಥನ.pdf/೫ 104 62452 322290 317758 2026-05-24T17:33:36Z Vikashegde 1258 /* Validated */ 322290 proofread-page text/x-wiki <noinclude><pagequality level="4" user="Vikashegde" /></noinclude>{{center|'''ಅಧ್ಯಕ್ಷರ ಮಾತು'''}} {{gap}}ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್‌ ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು. {{gap}}ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. {{gap}}ಕನ್ನಡದ ಮೇರುಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಕಷ್ಟಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. {{gap}}ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೆಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ. {{gap}}ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣ ಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. {{center|ಸಿರಿಗನ್ನಡಂ ಗೆಲ್ಲೆ!}} {{Right|ಎಲ್.ಎಸ್. ಶೇಷಗಿರಿ ರಾವ್}} {{Right|ಅಧ್ಯಕ್ಷ}} {{rh|center=|left=ದಿನಾಂಕ ೧೬.೧೨.೨೦೧೦|right=ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ}}<noinclude></noinclude> ax0duvf3m5tcfnxtkacohr88zhcddol ಪುಟ:ಮನಮಂಥನ.pdf/೬ 104 62453 322291 268685 2026-05-24T17:37:44Z Vikashegde 1258 /* Proofread */ 322291 proofread-page text/x-wiki <noinclude><pagequality level="3" user="Vikashegde" /></noinclude>{{center|'''ಹೊನ್ನುಡಿ'''}} ನಾಡಿನ ಭಾಷೆ, ಸಂಸ್ಕೃತಿ ಮತ್ತು ಜನಜೀವನದ ಪರಿಮಾಣವನ್ನು ಅಳೆಯುವುದರಲ್ಲಿ ಅಲ್ಲಿನ ಸಾಹಿತ್ಯದ ಕೃತಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಸುಮಾರು ಎರಡು ಸಾವಿರದ ಐದನೂರು ವರ್ಷಗಳಿಗೂ ದೀರ್ಘವಾದ ಐತಿಹಾಸಿಕ ಪರಂಪರೆ ಚೆಲುವ ಕನ್ನಡ ನಾಡಿನದು. ಹಾಗೆಯೇ ಅದರ ಸಾಹಿತ್ಯ ಕೂಡ ಪಂಪ, ಕುಮಾರವ್ಯಾಸ, ಶರಣರು, ದಾಸರು ಮೊದಲಾದವರಿಂದ ಸಮೃದ್ಧವಾಗಿ ಬೆಳೆದಿದೆ. ಅದರ ಸಮೃದ್ಧತೆಗೆ ಏಳು ಜ್ಞಾನಪೀಠಗಳ ಗರಿಮೆಯೇ ಸಾಕ್ಷಿ. ಕರ್ನಾಟಕವು ಏಕೀಕರಣಗೊಂಡು ೫೫ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಆಚರಿಸುತ್ತಿರುವುದು ಒಂದು ಐತಿಹಾಸಿಕವೂ ಹಾಗೂ ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮಾಚರಣೆಯ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಾಗಿರುವ ಪ್ರಗತಿಯ ಆತ್ಮಾವಲೋಕನದ ಜೊತೆಗೆ ಕನ್ನಡ ಸಾಹಿತ್ಯದ ಸೃಜನಶೀಲ ಹಾಗೂ ಸೃಜನೇತರ ಪ್ರಕಾರದ ೧೦೧ ಕೃತಿಗಳನ್ನು, ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಪ್ರಕಟಿಸಲಾಗುತ್ತಿದೆ. ಈ ವಿಶಿಷ್ಟ ಕೃತಿಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ನನ್ನ ವಂದನೆಗಳು. ಈ ಸಾಹಿತ್ಯ ಮಾಲಿಕೆಯನ್ನು ಸಾಹಿತ್ಯಾಭಿಮಾನಿಗಳು ಸ್ವಾಗತಿಸುವ ಮೂಲಕ ಈ ಕೃತಿಗಳ ಸದುಪಯೋಗ ಪಡೆದುಕೊಳ್ಳುತ್ತಾರೆಂದು ಭಾವಿಸಿದ್ದೇನೆ. {{Right|(ಐ.ಎಂ. ವಿಠ್ಠಲಮೂರ್ತಿ)}} {{Right|ವಿಶೇಷಾಧಿಕಾರಿಗಳು}} {{Right|ವಿಶ್ವ ಕನ್ನಡ ಸಮ್ಮೇಳನ}}<noinclude></noinclude> fcq9absxloko7ows8ofnclufctfi2ax ಪುಟ:ಮನಮಂಥನ.pdf/೭ 104 62454 322292 268687 2026-05-24T17:40:17Z Vikashegde 1258 /* Proofread */ 322292 proofread-page text/x-wiki <noinclude><pagequality level="3" user="Vikashegde" /></noinclude>{{center|'''ಎರಡು ನುಡಿ'''}} {{gap}}ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 'ವಿಶ್ವ ಕನ್ನಡ ಸಮ್ಮೇಳನ'ದ ಅಂಗವಾಗಿ ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿರುವ ಸಾಹಿತಿಗಳ ಮಹತ್ವದ ಕೃತಿಗಳನ್ನು ಓದುಗರಿಗೆ ಒದಗಿಸಬೇಕೆಂಬ ಸದಾಶಯ ಹೊಂದಿರುತ್ತದೆ. ಈ ಯೋಜನೆಯಡಿ ಸುಮಾರು ೧೦೦ ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಿದೆ. {{gap}}ಈ ಕೃತಿಗಳನ್ನು ಆಯ್ಕೆಮಾಡಲು ಖ್ಯಾತ ವಿದ್ವಾಂಸರಾದ ಪ್ರೊ. ಎಲ್.ಎಸ್. ಶೇಷಗಿರಿರಾವ್‌ ರವರ ಅಧ್ಯಕ್ಷತೆಯಲ್ಲಿ ನಾಡಿನ ಹೆಸರಾಂತ ಸಾಹಿತಿ / ವಿದ್ವಾಂಸರುಗಳನ್ನೊಳಗೊಂಡ ಆಯ್ಕೆ ಸಮಿತಿಯನ್ನು ರಚಿಸಿದೆ. ಈ ಆಯ್ಕೆ ಸಮಿತಿಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಗೆ ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಬಂದ ಪ್ರಾತಿನಿಧಿಕ ಕೃತಿಗಳನ್ನು ಆಯ್ಕೆ ಮಾಡಿರುತ್ತದೆ. ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸರ್ಕಾರದ ಪರವಾಗಿ ವಂದನೆಗಳು ಸಲ್ಲುತ್ತವೆ. ಈ ಪುಸ್ತಕಗಳನ್ನು ಹೊರತರಲು ಅನುಮತಿ ನೀಡಿ ಸಹಕರಿಸಿದ ಎಲ್ಲಾ ಲೇಖಕರು ಹಾಗೂ ಹಕ್ಕುದಾರರುಗಳಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಕನ್ನಡದ ಮೇರುಕೃತಿ ಸಾಹಿತ್ಯ ಮಾಲಿಕೆಯನ್ನು ಓದುಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ. {{rh|center=|left=ದಿನಾಂಕ ೧೭.೦೧.೨೦೧೧|right=(ರಮೇಶ್ ಬಿ.ಝಳಕಿ)}} {{rh|center=|left=|right=ಸರ್ಕಾರದ ಕಾರ್ಯದರ್ಶಿಗಳು}} {{rh|center=|left=|right=ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ}}<noinclude></noinclude> 52flgcknaio8t4r2koewqbipmeedxyh ಪುಟ:ಮನಮಂಥನ.pdf/೮ 104 62455 322293 268688 2026-05-24T17:42:34Z Vikashegde 1258 /* Proofread */ 322293 proofread-page text/x-wiki <noinclude><pagequality level="3" user="Vikashegde" /></noinclude>{{center|'''ಪ್ರಕಾಶಕರ ಮಾತು'''}} ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ 'ವಿಶ್ವ ಕನ್ನಡ ಸಮ್ಮೇಳನ'ದ ಅಂಗವಾಗಿ ಸುಮಾರು ನೂರು ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಈ ಮೂರೂ ಕಾಲಘಟ್ಟಗಳಲ್ಲಿ ರಚನೆಗೊಂಡ, ಕನ್ನಡದಲ್ಲಿ ಮಹತ್ವದ ಕೃತಿಗಳೆಂದು ಪರಿಗಣಿತವಾಗಿರುವ ಪುಸ್ತಕಗಳನ್ನು ಸರ್ಕಾರವು ನೇಮಿಸಿರುವ ಆಯ್ಕೆ ಸಮಿತಿಯು ಮರುಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಸಾಹಿತ್ಯ ಮಾಲೆಯಲ್ಲಿ ಈಗಾಗಲೇ ಇಲಾಖೆಯು ಸಮಗ್ರ ಸಾಹಿತ್ಯ ಪ್ರಕಟಣೆಯಡಿ ಪ್ರಕಟಿಸಿರುವ ಲೇಖಕರ ಕೃತಿಗಳನ್ನು ಪರಿಗಣಿಸಿರುವುದಿಲ್ಲ. ಕನ್ನಡದ ಮೇರುಕೃತಿಗಳ ಮರುಮುದ್ರಣಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಪ್ರೊ. ಎಲ್.ಎಸ್. ಶೇಷಗಿರಿ ರಾವ್‌ರವರಿಗೆ ಹಾಗೂ ಸಮಿತಿಯ ಸದಸ್ಯರುಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಹಂಪ ನಾಗರಾಜಯ್ಯ, ಡಾ. ಎಂ.ಎಂ.ಕಲಬುರ್ಗಿ, ಡಾ. ದೊಡ್ಡರಂಗೇಗೌಡ, ಡಾ. ಎಚ್.ಜೆ. ಲಕ್ಕಪ್ಪಗೌಡ, ಡಾ. ಅರವಿಂದ ಮಾಲಗತ್ತಿ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಡಾ. ಪಿ.ಎಸ್. ಶಂಕರ್, ಶ್ರೀಮತಿ ಸಾರಾ ಅಬೂಬಕ್ಕರ್, ಡಾ. ಪ್ರಧಾನ್ ಗುರುದತ್ತ ಇವರುಗಳಿಗೆ ನನ್ನ ಕೃತಜ್ಞತೆಗಳು. ಈ ಯೋಜನೆಯಡಿ ಮರುಮುದ್ರಣಕ್ಕೆ ಆಯ್ಕೆಯಾಗಿರುವ ಪುಸ್ತಕಗಳ ಮುದ್ರಣಕ್ಕೆ ಅನುಮತಿ ನೀಡಿದ ಎಲ್ಲ ಲೇಖಕರಿಗೂ, ಹಕ್ಕುದಾರರಿಗೂ ಮತ್ತು ಕರಡಚ್ಚು ತಿದ್ದಿದವರಿಗೂ ನನ್ನ ವಂದನೆಗಳು. ಸದರಿ ಪ್ರಕಟಣಾ ಯೋಜನೆಯ ಪುಸ್ತಕಗಳನ್ನು ಹೊರತರಲು ಸಹಕರಿಸಿದ ಶ್ರೀ ಎಚ್. ಶಂಕರಪ್ಪ, ಜಂಟಿ ನಿರ್ದೇಶಕರು, (ಸು.ಕ.), ಶ್ರೀಮತಿ ವೈ.ಎಸ್.ವಿಜಯಲಕ್ಷ್ಮಿ, ಸಹಾಯಕ ನಿರ್ದೆಶಕರು ಹಾಗೂ ಪ್ರಕಟಣಾ ಶಾಖೆಯ ಸಿಬ್ಬಂದಿಗೆ ನನ್ನ ನೆನಕೆಗಳು. ವಿಶ್ವ ಕನ್ನಡ ಸಮ್ಮೇಳನದ ಲಾಂಛನವನ್ನು ಸಿದ್ಧಪಡಿಸಿಕೊಟ್ಟ ಹಿರಿಯಕಲಾವಿದರಾದ ಶ್ರೀ ಸಿ. ಚಂದ್ರಶೇಖರ ಅವರಿಗೂ ನನ್ನ ನೆನಕೆಗಳು ಹಾಗೂ ಈ ಪುಸ್ತಕಗಳನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ಮಯೂರ ಪ್ರಿಂಟ್ ಆ್ಯಡ್ಸ್‌ನ ಮಾಲೀಕರಾದ{{nop}}<noinclude></noinclude> ihhzmzn1dx7beg0smistbg1qshwiqm4 322306 322293 2026-05-24T18:06:59Z Pragathi. BH 7585 /* Validated */ 322306 proofread-page text/x-wiki <noinclude><pagequality level="4" user="Pragathi. BH" /></noinclude>{{center|'''ಪ್ರಕಾಶಕರ ಮಾತು'''}} {{gap}}ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ 'ವಿಶ್ವ ಕನ್ನಡ ಸಮ್ಮೇಳನ'ದ ಅಂಗವಾಗಿ ಸುಮಾರು ನೂರು ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಿರುತ್ತದೆ. ಈ ಯೋಜನೆಯಡಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಈ ಮೂರೂ ಕಾಲಘಟ್ಟಗಳಲ್ಲಿ ರಚನೆಗೊಂಡ, ಕನ್ನಡದಲ್ಲಿ ಮಹತ್ವದ ಕೃತಿಗಳೆಂದು ಪರಿಗಣಿತವಾಗಿರುವ ಪುಸ್ತಕಗಳನ್ನು ಸರ್ಕಾರವು ನೇಮಿಸಿರುವ ಆಯ್ಕೆ ಸಮಿತಿಯು ಮರುಮುದ್ರಣಕ್ಕೆ ಆಯ್ಕೆ ಮಾಡಿರುತ್ತದೆ. ಈ ಸಾಹಿತ್ಯ ಮಾಲೆಯಲ್ಲಿ ಈಗಾಗಲೇ ಇಲಾಖೆಯು ಸಮಗ್ರ ಸಾಹಿತ್ಯ ಪ್ರಕಟಣೆಯಡಿ ಪ್ರಕಟಿಸಿರುವ ಲೇಖಕರ ಕೃತಿಗಳನ್ನು ಪರಿಗಣಿಸಿರುವುದಿಲ್ಲ. {{gap}}ಕನ್ನಡದ ಮೇರುಕೃತಿಗಳ ಮರುಮುದ್ರಣಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಪ್ರೊ. ಎಲ್.ಎಸ್. ಶೇಷಗಿರಿ ರಾವ್‌ರವರಿಗೆ ಹಾಗೂ ಸಮಿತಿಯ ಸದಸ್ಯರುಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಹಂಪ ನಾಗರಾಜಯ್ಯ, ಡಾ. ಎಂ.ಎಂ.ಕಲಬುರ್ಗಿ, ಡಾ. ದೊಡ್ಡರಂಗೇಗೌಡ, ಡಾ. ಎಚ್.ಜೆ. ಲಕ್ಕಪ್ಪಗೌಡ, ಡಾ. ಅರವಿಂದ ಮಾಲಗತ್ತಿ, ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಡಾ. ಪಿ.ಎಸ್. ಶಂಕರ್, ಶ್ರೀಮತಿ ಸಾರಾ ಅಬೂಬಕ್ಕರ್, ಡಾ. ಪ್ರಧಾನ್ ಗುರುದತ್ತ ಇವರುಗಳಿಗೆ ನನ್ನ ಕೃತಜ್ಞತೆಗಳು. ಈ ಯೋಜನೆಯಡಿ ಮರುಮುದ್ರಣಕ್ಕೆ ಆಯ್ಕೆಯಾಗಿರುವ ಪುಸ್ತಕಗಳ ಮುದ್ರಣಕ್ಕೆ ಅನುಮತಿ ನೀಡಿದ ಎಲ್ಲ ಲೇಖಕರಿಗೂ, ಹಕ್ಕುದಾರರಿಗೂ ಮತ್ತು ಕರಡಚ್ಚು ತಿದ್ದಿದವರಿಗೂ ನನ್ನ ವಂದನೆಗಳು. {{gap}}ಸದರಿ ಪ್ರಕಟಣಾ ಯೋಜನೆಯ ಪುಸ್ತಕಗಳನ್ನು ಹೊರತರಲು ಸಹಕರಿಸಿದ ಶ್ರೀ ಎಚ್. ಶಂಕರಪ್ಪ, ಜಂಟಿ ನಿರ್ದೇಶಕರು, (ಸು.ಕ.), ಶ್ರೀಮತಿ ವೈ.ಎಸ್.ವಿಜಯಲಕ್ಷ್ಮಿ, ಸಹಾಯಕ ನಿರ್ದೆಶಕರು ಹಾಗೂ ಪ್ರಕಟಣಾ ಶಾಖೆಯ ಸಿಬ್ಬಂದಿಗೆ ನನ್ನ ನೆನಕೆಗಳು. ವಿಶ್ವ ಕನ್ನಡ ಸಮ್ಮೇಳನದ ಲಾಂಛನವನ್ನು ಸಿದ್ಧಪಡಿಸಿಕೊಟ್ಟ ಹಿರಿಯಕಲಾವಿದರಾದ ಶ್ರೀ ಸಿ. ಚಂದ್ರಶೇಖರ ಅವರಿಗೂ ನನ್ನ ನೆನಕೆಗಳು ಹಾಗೂ ಈ ಪುಸ್ತಕಗಳನ್ನು ಸುಂದರವಾಗಿ ಮುದ್ರಿಸಿಕೊಟ್ಟಿರುವ ಮಯೂರ ಪ್ರಿಂಟ್ ಆ್ಯಡ್ಸ್‌ನ ಮಾಲೀಕರಾದ{{nop}}<noinclude></noinclude> lyb096g0t0t9toqi2idj2e5oftuvcai ಪುಟ:ಮನಮಂಥನ.pdf/೯ 104 62456 322294 268690 2026-05-24T17:44:13Z Vikashegde 1258 /* Proofread */ 322294 proofread-page text/x-wiki <noinclude><pagequality level="3" user="Vikashegde" />{{rh|center=|left=|right=ix}}</noinclude>ಶ್ರೀ ಬಿ.ಎಲ್. ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರಿಗೂ ನನ್ನ ನೆನಕೆಗಳು. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಓದುಗರಿಗೆ ಹಲವಾರು ವರ್ಷಗಳಿಂದ ದೊರಕದೇ ಇದ್ದ ಎಷ್ಟೋ ಪುಸ್ತಕಗಳು ಲಭ್ಯವಾಗುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಸಾಹಿತ್ಯಾಭಿಮಾನಿಗಳಿಗೆ ಅಕ್ಷರದಾಸೋಹ ನಡೆಸುವ ಆಶಯ ನಮ್ಮದು. ಈ ಕೃತಿಗಳನ್ನು ಕನ್ನಡಿಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ. {{rh|center=|left=|right=ಮನು ಬಳಿಗಾರ್}} {{rh|center=|left=ದಿನಾಂಕ ೧೧.೦೧.೨೦೧೧|right=ನಿರ್ದೇಶಕರು}} {{rh|center=|left=|right=ಕನ್ನಡ ಮತ್ತು ಸಂಸ್ಕೃತಿ ಇಲಾಖೆ}}<noinclude></noinclude> 3zrstq9j8blg19ecvvt5nc859b476ic 322303 322294 2026-05-24T18:01:38Z Pragathi. BH 7585 /* Validated */ 322303 proofread-page text/x-wiki <noinclude><pagequality level="4" user="Pragathi. BH" />{{rh|center=|left=|right=ix}}</noinclude>ಶ್ರೀ ಬಿ.ಎಲ್. ಶ್ರೀನಿವಾಸ್ ಮತ್ತು ಸಿಬ್ಬಂದಿ ವರ್ಗದವರಿಗೂ ನನ್ನ ನೆನಕೆಗಳು. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಓದುಗರಿಗೆ ಹಲವಾರು ವರ್ಷಗಳಿಂದ ದೊರಕದೇ ಇದ್ದ ಎಷ್ಟೋ ಪುಸ್ತಕಗಳು ಲಭ್ಯವಾಗುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಸಾಹಿತ್ಯಾಭಿಮಾನಿಗಳಿಗೆ ಅಕ್ಷರದಾಸೋಹ ನಡೆಸುವ ಆಶಯ ನಮ್ಮದು. ಈ ಕೃತಿಗಳನ್ನು ಕನ್ನಡಿಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ. {{rh|center=|left=|right=ಮನು ಬಳಿಗಾರ್}} {{rh|center=|left=ದಿನಾಂಕ ೧೧.೦೧.೨೦೧೧|right=ನಿರ್ದೇಶಕರು}} {{rh|center=|left=|right=ಕನ್ನಡ ಮತ್ತು ಸಂಸ್ಕೃತಿ ಇಲಾಖೆ}}<noinclude></noinclude> cat2o437va5qrc0zbfbv3bj5s0wqe17 ಪುಟ:ಮನಮಂಥನ.pdf/೧೦ 104 62457 322304 319039 2026-05-24T18:04:10Z Pragathi. BH 7585 /* Validated */ 322304 proofread-page text/x-wiki <noinclude><pagequality level="4" user="Pragathi. BH" /></noinclude><big>{{center|'''ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ'''}}</big> {{center|'''ಅಧ್ಯಕ್ಷರು'''}} {{center|ಪ್ರೊ. ಎಲ್.ಎಸ್. ಶೇಷಗಿರಿ ರಾವ್}} {{center|'''ಸದಸ್ಯರು'''}} {{center|ಡಾ. ಚಂದ್ರಶೇಖರ ಕಂಬಾರ}} {{center|ಡಾ. ಎಂ.ಎಂ. ಕಲಬುರ್ಗಿ}} {{center|ಡಾ. ದೊಡ್ಡರಂಗೇಗೌಡ}} {{center|ಡಾ. ಅರವಿಂದ ಮಾಲಗತ್ತಿ}} {{center|ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ}} {{center|ಡಾ. ಪ್ರಧಾನ್ ಗುರುದತ್ತ}} {{center|ಡಾ. ಹಂಪ ನಾಗರಾಜಯ್ಯ}} {{center|ಡಾ. ಎಚ್.ಜೆ. ಲಕ್ಕಪ್ಪಗೌಡ}} {{center|ಶ್ರೀಮತಿ ಸಾರಾ ಅಬೂಬಕ್ಕರ್}} {{center|ಡಾ. ಪಿ.ಎಸ್. ಶಂಕರ್}} {{center|'''ಸದಸ್ಯ ಕಾರ್ಯದರ್ಶಿ'''}} {{center|ಶ್ರೀ ಮನು ಬಳಿಗಾರ್, ಕ.ಆ.ಸೇ.}} {{center|ನಿರ್ದೆಶಕರು}} {{center|ಕನ್ನಡ ಮತ್ತು ಸಂಸ್ಕೃತಿ ಇಲಾಖೆ}}<noinclude></noinclude> isyyc30g7z4g0giih83uwx629dfymzn ಪುಟ:ಮನಮಂಥನ.pdf/೨೦ 104 62467 322285 268700 2026-05-24T17:25:20Z Vikashegde 1258 /* Proofread */ 322285 proofread-page text/x-wiki <noinclude><pagequality level="3" user="Vikashegde" />{{rh|center=|left=|right=}}</noinclude><div style="display: flex; flex-direction: column; justify-content: center; min-height: 80vh; text-align: center;"> <big><big><big>{{center|'''ಮನಮಂಥನ'''}}</big></big></big> </div><noinclude></noinclude> pt7r8lyoh0rvqozww107386noj2v3b4 322300 322285 2026-05-24T17:59:19Z Pragathi. BH 7585 /* Validated */ 322300 proofread-page text/x-wiki <noinclude><pagequality level="4" user="Pragathi. BH" />{{rh|center=|left=|right=}}</noinclude><div style="display: flex; flex-direction: column; justify-content: center; min-height: 80vh; text-align: center;"> <big><big><big>{{center|'''ಮನಮಂಥನ'''}}</big></big></big> </div><noinclude></noinclude> t6sh94smmink8l5dzlm4y1c96r5ew9z ಪುಟ:ಮನಮಂಥನ.pdf/೨೧ 104 62468 322286 268702 2026-05-24T17:26:03Z Vikashegde 1258 /* Proofread */ 322286 proofread-page text/x-wiki <noinclude><pagequality level="3" user="Vikashegde" /></noinclude><div style="display: flex; flex-direction: column; justify-content: center; min-height: 80vh; text-align: center;"> <big><big><big>{{center|'''ಭಾಗ-೧'''}}</big></big></big> </div><noinclude></noinclude> oq7e8lw61rfn5tz3616xj83vob7wq9w 322301 322286 2026-05-24T17:59:50Z Pragathi. BH 7585 /* Validated */ 322301 proofread-page text/x-wiki <noinclude><pagequality level="4" user="Pragathi. BH" /></noinclude><div style="display: flex; flex-direction: column; justify-content: center; min-height: 80vh; text-align: center;"> <big><big><big>{{center|'''ಭಾಗ-೧'''}}</big></big></big> </div><noinclude></noinclude> ihgqw0fperidwxa222lkqid1srew29l ಪುಟ:ಮನಮಂಥನ.pdf/೨೨ 104 62469 322302 314244 2026-05-24T18:00:35Z Pragathi. BH 7585 322302 proofread-page text/x-wiki <noinclude><pagequality level="4" user="Shreesha Sharma" /></noinclude>{{center|'''೧. ಆತಂಕ'''}} {{center|Anxiety Syndromes}} {{gap}}ಆತಂಕವು ಅತಿಯಾದಾಗ ಅಂತಕನು ಹತ್ತಿರ ಬರುತ್ತಾನೆ ಎನ್ನುವ ನಾಣ್ನುಡಿಯಿದೆ. ಅಕ್ಷರಗಳ ಪಲ್ಲಟದಿಂದಲೇ ಒಂದರ ಮೇಲೆ ಇನ್ನೊಂದರ ಪರಿಣಾಮವನ್ನು ಲಕ್ಷಣವಾಗಿ ಸೂಚಿಸಬಹುದು. ಸುಸೂತ್ರವಾಗಿ ಯಾವ ಕೆಲಸವನ್ನಾಗಲೀ ಯೋಜಿಸಿದಂತೆ ಮಾಡಲಾಗದಿದ್ದರೆ, ಆತಂಕವುಂಟಾಗುತ್ತದೆ. ಆಗ ಮನಸ್ಸು ಎನ್ನುವುದು ಒಂದಿದೆ ಎನ್ನುವ ಅರಿವೂ ಉಂಟಾಗುತ್ತದೆ. ಯೋಚನೆಗಳು ಸುಸೂತ್ರವಾಗಿ ರೂಪುಗೊಂಡು, ಎಣಿಸಿದಂತೆಯೇ ಕೆಲಸವು ಆಗುವಾಗ, ಮನಸ್ಸು ಇದೆ ಎಂಬ ಅರಿವೇ ಬರುವುದಿಲ್ಲ. ಹಸಿವಾದಾಗಲೇ ಹೊಟ್ಟೆ ಎಂದೊಂದು ಅಂಗವಿದೆ ಎನ್ನುವುದು ನಮ್ಮ ಗಮನಕ್ಕೆ ಎದ್ದು ಬರುತ್ತದೆ. ಹಾಗೆಯೇ ಮನಸ್ಸು ಕೂಡ. ಬಯಸಿದಂತೆ ಬಾಳಲು ಸಾಧ್ಯವೇ ? ಯೋಚಿಸಿದಂತೆ ನಡೆಯಲು ಪರಿಸರವೂ ತೊಡಕಿಕೊಳ್ಳದೇ ಇರಬೇಕು. ಪರಿಸರದ ಮೇಲೆ ನಮ್ಮ ಪೂರ್ಣ ಹತೋಟಿ ಇರಲು ಸಾಧ್ಯವೇ ಇಲ್ಲ. ಹೀಗಾಗಿ ಆತಂಕವು ಸರ್ವವ್ಯಾಪಿಯಾಗಿದೆ. {{gap}}ಆದರೆ ಮನಸ್ಸಿನಲ್ಲಿ ಆತಂಕವು ಕಂಡುಬರುವಂತೆ ಪ್ರಕೃತಿಯು ಏಕೆ ವ್ಯವಸ್ಥೆಯನ್ನು ಮಾಡಿತು? ಇದರಿಂದ ಮನಸ್ಸಿಗೆ ಯಾವುದಾದರೂ ಲಾಭವಾಗುತ್ತದೆಯೇ ? ಅನುಕೂಲವೇನಾದರೂ ಉಂಟೆ ? ವಿಚಾರ ಮಾಡೋಣ. {{gap}}'ಒಂಭತ್ತು ಗಂಟೆಗೆ ಸರಿಯಾಗಿ ತಟ್ಟೆ ಹಾಕಿ ಊಟವನ್ನು ಬಡಿಸ್ತೀನಿ. ಅಲ್ಲಿನ ತನಕ ಅಡಿಗೆಯ ಮನೆಯ ಬಾಗಿಲ ಹತ್ತಿರ ಸುಳಿಯಬೇಡಿ, ಅಂದ್ರೆ ಐದೈದು ನಿಮಿಷಗಳಿಗೂ ಅಡಿಗೆ ಮನೆಯ ಬಾಗಿಲಲ್ಲಿ ಇಣುಕಿ, ಆಯ್ತೇನೆ ಅಡಿಗೆ? ಎಂದು ಕೇಳ್ತಾ ಇದ್ದರೆ, ಮನಸ್ಸಿಗೆ ಚಿಟ್ಟು ಹಿಡಿದು ಹೋಗುತ್ತೆ. ಆಗ ಮಾಡಿದ ಅಡಿಗೆಯು ಕೆಟ್ಹೋಗುತ್ತೆ' ಎಂದು ಅವಸರ ಸ್ವಭಾವದ ಗಂಡನನ್ನು ಹೆಂಡತಿಯು ಹತೋಟಿಯಲ್ಲಿಡ ಹೋಗುವುದು, ಎಲ್ಲರ ಅನುಭವಕ್ಕೂ ಬಂದ ಸರ್ವೇ ಸಾಮಾನ್ಯ ವಿಷಯ. ತಲೆಗೆ ಚಿಟ್ಟು ಹಿಡಿಯಿತು ಎಂದರೆ ಆತಂಕವಾಯಿತು ಎಂದು.<noinclude></noinclude> 8s40urp9zjag7i9ybunaeeb1ta43v93 ಪುಟ:ಮನಮಂಥನ.pdf/೨೮೩ 104 62730 322307 319036 2026-05-24T18:07:41Z Pragathi. BH 7585 /* Validated */ 322307 proofread-page text/x-wiki <noinclude><pagequality level="4" user="Pragathi. BH" />{{rh|center=|left=|right=೨೬೫}}</noinclude><big>{{center|'''ಪರಿವಿಡಿ'''}}</big> {{center|'''ಭಾಗ-೨'''}} {{TOC_page_listing|'''೧. ದೇಹ ಮತ್ತು ಮನಸ್ಸಿನ ಸಂಬಂಧ'''|'''೨೬೯'''}} {{gap}}ದೇಹವನ್ನು ಜರೆಯುವುದು, ಮನಸ್ಸನ್ನು ಹೊಗಳುವುದು,<br /> {{gap}}ಪರಸ್ಪರ ಸಂಬಂಧ, Merns sano Corpore sane<br /> {{TOC_page_listing|'''೨. ಮನಸ್ಸಿನ ಸ್ವರೂಪ'''|'''೨೭೬'''}} {{gap}}ವಿಚಾರ ಮತ್ತು ಸ್ಮರಣೆ :-<br /> {{gap}}ಸ್ಫೂರ್ತಿ ಮತ್ತು ಕುತೂಹಲ :-<br /> {{gap}}ಮನಸ್ಸು ದೇಹದ ಒಂದು ಅಂಗ :-<br /> {{gap}}ಮನಸ್ಸು ಸತ್ ಚೈತನ್ಯವಾದಾಗ:-<br /> {{gap}}ದೇಹಾತೀತವಾದ ಚೇತನ :-<br /> {{gap}}ಮನಸ್ಸು ಯಾವ ತೆರನ ಶಕ್ತಿ ?<br /> {{gap}}ಮನಸ್ಸಿಗೆ ಕವಚವಿದೆಯೇ ?-ಮಾನವನು ಹಿಂಡು ಜೀವಿ :-<br /> {{gap}}ಮುಪ್ಪು ಮತ್ತು ಮನಸ್ಸು :-<br /> {{gap}}ಮನಸ್ಸನ್ನು ನಡಸುವ ಚೇತನ :-<br /> {{gap}}ಮನಸ್ಸು ; ಅರಿಷಡ್ವರ್ಗಗಳಿಂದ ಮಲಿನತೆ :-<br /> {{gap}}ದೇಹ ಮತ್ತು ಮನಸ್ಸಿನ ಪರಸ್ಪರ ಸಂಬಂಧ :-<br /> {{gap}}ಸ್ಥಾವರ ಮತ್ತು ಜಂಗಮ :-<br /> {{gap}}ಆಲಯ ಮತ್ತು ಬಯಲು :- ಮನಸ್ಸು ಎಲ್ಲಿದೆ :-<br /> {{TOC_page_listing|'''೩. ಮೆದುಳಿನ ಪ್ರಮುಖ ಭಾಗಗಳು'''|'''೩೦೯'''}} {{gap}}ಮದುಳಿನ ಅವತಾರ :- ವಿವಿಧ ಭಾಗಗಳು :-<br /> {{gap}}ಮೆದುಳಿನಲ್ಲಿನ ಸಂಪರ್ಕ ವ್ಯವಸ್ಥೆ :-<br /> {{gap}}ಮೆದುಳಿನ ಕಾರ್ಯಗಳ ಸಮನ್ವಯದಿಂದ ಮನಸ್ಸಿನ ಅಭಿವೃದ್ಧಿ :-<br /> {{gap}}ಮನಸ್ಸಿನ ಅಭಿವೃದ್ಧಿ ಮತ್ತು ಸಮಕಾಲೀನ ಜ್ಞಾನಭಂಡಾರ :-<br /><noinclude></noinclude> 1ox7iv9yiwbbmaqpzwbd9t41skfygd9 ಪುಟ:ಮನಮಂಥನ.pdf/೨೮೪ 104 62731 322308 322070 2026-05-24T18:08:26Z Pragathi. BH 7585 /* Validated */ 322308 proofread-page text/x-wiki <noinclude><pagequality level="4" user="Pragathi. BH" />{{rh|center=|left=೨೬೬|right=ಮನಮಂಥನ}}</noinclude>{{TOC_page_listing|'''೪. ಬಾಲ್ಯ ಆಗಿನ ಮನಸ್ಸು'''|'''೩೧೭'''}} {{gap}}ಯೌವನ ಅಥವಾ ಪ್ರೌಢ ವಯಸ್ಸಿನವರಲ್ಲಿ ಮನಸ್ಸಿನ ಕಾರ್ಯಕ್ರಮ<br /> {{gap}}ವಯಸ್ಕರಲ್ಲಿ ಮನಸ್ಸಿನ ಕಾರ್ಯಕ್ರಮ<br /> {{gap}}ಮುಪ್ಪಿನಲ್ಲಿ ಮನಸ್ಸಿನ ಕಾರ್ಯಕ್ರಮ<br /> {{TOC_page_listing|'''೫. ಮನಸ್ಸಿನ ಚಟುವಟಿಕೆಗಳು'''|'''೩೫೪'''}} {{gap}}ಆಸೆ-ಮೂಲ ಪ್ರೇರಕ<br /> {{gap}}ಈಡೇರಿಸುವ ವಿಧಾನಗಳು-ವಾಸ್ತವಿಕವಾಗಿ :-<br /> {{gap}}ಪ್ರಯತ್ನ ಪಡುವುದರಿಂದ :- ಕನಸುಗಳಲ್ಲಿ :-<br /> {{gap}}ವಯೂರಿಸಂ ಮೂಲಕ<br /> {{gap}}ಭವಿಷ್ಯವನ್ನು ತಿಳಿದುಕೊಳ್ಳುವುದರಿಂದ -<br /> {{gap}}ವಿವಿಧ ಕಲಾ ರೀತಿಗಳಲ್ಲಿ-<br /> {{TOC_page_listing|'''೭. ಆಸೆಯು ನಿರಾಸೆಯಾದರೆ'''|'''೩೭೦'''}} {{gap}}ಭವಿಷ್ಯ ನುಡಿಯುವವರ ಹೇಳಿಕೆಯಿಂದ ಸಮಾಧಾನ ಪಡೆಯುವುದು-<br /> {{gap}}ಮಾನಸಿಕ ಕೊರಗು ಅತ್ಯಧಿಕವಾಗುವುದು-<br /> {{gap}}ಆತ್ಮಹತ್ಯೆ ಸಮಾಜ ವಿಚ್ಛಿದ್ರಕ ಪ್ರವೃತ್ತಿಯಾಗಬಹುದು-<br /> {{TOC_page_listing|'''೮. ಮನಸ್ಸಿನ ಮಥನ'''|'''೩೭೬'''}} {{gap}}ಯೋಚನ-ಯೋಜನ-ನಿರ್ಣಯ-<br /> {{gap}}ಸಮುದ್ರ ಮಥನದ ಪುರಾಣದ ಕತೆಯೊಂದಿಗೆ ಸಮನ್ವಯ<br /> {{TOC_page_listing|'''೯. ಮನಮಂಥನವು ಹಳಿ ತಪ್ಪಿದಾಗ'''|'''೩೮೭'''}} {{gap}}ವಾಸ್ತವಿಕ ಅರಿವು ಇಲ್ಲವಾಗುವುದು-ಒಬ್ಸೆಷನಲ್ ಪಿಶಾಚಿಗಳು-<br /> {{gap}}ಬೆಪ್ಪು ಬಡಿಯುವುದು-ಲೋಕಾನುಭವದಿಂದ<br /> {{gap}}ಹದಗೊಳ್ಳದೆ ಇರುವ ಮನಸ್ಸು-ಮನೋದೈಹಿಕ ಬೇನೆಗಳು<br /> {{TOC_page_listing|'''೧೦. ದೇಹದ ರೋಗಗಳಿಂದ ಮಾನಸಿಕ ಭಯ-ಅಸ್ವಾಸ್ಥ್ಯ'''|'''೩೯೨'''}} {{TOC_page_listing|'''೧೧. ನನಗೆ ಹುಚ್ಚು ಹಿಡಿದಿದೆಯೆ?'''|'''೩೯೩'''}} {{TOC_page_listing|'''೧೨. ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ'''|'''೩೯೫'''}} {{gap}}ಮನಸ್ಸು-ಯೋಗ ; ಭೋಗ-<br /> {{gap}}ಯೋಗ ಪಾದ-ಸಾಧನ ಪಾದ-ವಿಭೂತಿಪಾದ-ಕೈವಲ್ಯಪಾದ-<br /><noinclude></noinclude> qvlmf4p4pe99ut3awegqwk5er3ql096 ಪುಟ:ಮನಮಂಥನ.pdf/೩೮೯ 104 62836 322295 317301 2026-05-24T17:46:36Z Vikashegde 1258 /* Validated */ 322295 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=ಆಸೆಯು ನಿರಾಸೆಯಾದರೆ|right=೩೭೧}}</noinclude>{{gap}}ಆಸೆಯು ನಿರಾಸೆಯಾದಾಗ ಮನಸ್ಸಿನ ತುಂಬಾ ಜುಗುಪ್ಪೆಯು ತುಂಬಿಕೊಳ್ಳುತ್ತದೆ. ಆಗ ಜ್ಯೋತಿಷ್ಯನ ನುಡಿಯು ಸ್ವಲ್ಪ ಮಟ್ಟಿಗಾದರೂ ಸಮಾಧಾನವನ್ನು ನೀಡುತ್ತದೆ. ಏಕೆ? 'ನಾನು ನನ್ನ ಪ್ರಯತ್ನಗಳು' ಎಂದು ತುಸು ಹೆಮ್ಮೆ ಪಡುತ್ತಿದ್ದವನ Ego ಮೆರೆಯುತ್ತಿತ್ತು. 'ಗ್ರಹಗಳ ಕಾಟದ ಮುಂದೆ ನೀನು ಯಾವ ಲೆಕ್ಕಕ್ಕೆ' ಎಂಬ ಅರಿವನ್ನು ಜ್ಯೋತಿಷ್ಯನ ನುಡಿಯು ಮೂಡಿಸಿತ್ತು. ಆಗ ನಾನು, ನನ್ನ ಪ್ರಯತ್ನ ಎಂದು ಮೆರೆದಿದ್ದ Ego ಕರಗತೊಡಗಿತ್ತು, ಕೊರಗಿನಿಂದ; ನಿಸ್ಸಹಾಯಕತೆಯಿಂದ, Ego ಅಳಿಯಲಾರಂಭಿಸಿದರೆ, ಲೌಕಿಕವಾದ ಆಸೆಗಳು, Id ಇನ ಕಾಮನೆಗಳು, ಎಲ್ಲವೂ ಯಾವುದನ್ನು ಜಗ್ಗಾಡಿಸಬೇಕು? Ego ದೃಢವಾಗಿದ್ದಾಗ Id ಜಗ್ಗಾಡಿಸುತ್ತದೆ. Ego ಸಡಿಲಗೊಂಡಾಗ Id ಕೂಡ ತೆಪ್ಪಗಾಗುತ್ತದೆ, ತಾತ್ಕಾಲಿಕವಾಗಿಯಾದರೂ {{gap}}ಆಸೆಯು ನಿರಾಸೆಯಾದಾಗ, ಮನಸ್ಸಿನಲ್ಲಿ ಮುತ್ತಿಕೊಳ್ಳುವ ಬೇಸರವು ಖಿನ್ನತೆಯನ್ನು ಉಂಟು ಮಾಡುತ್ತದೆ. ದುಃಖವನ್ನುಂಟುಮಾಡುತ್ತದೆ. ನಮ್ಮ ನಾಡಿನ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ಬೇರೂರಿ ಬಂದಿರುವ ಜಾತಕಗಳಲ್ಲಿ ನಂಬಿಕೆ ಗ್ರಹಗತಿಗಳಲ್ಲಿ ವಿಶ್ವಾಸ ; ಜನ್ಮಜನ್ಮಾಂತರದ ಕರ್ಮದ ಕಲ್ಪನೆ, ಇವೆಲ್ಲವೂ ನಿರಾಸೆಯಿಂದಾಗುವ ಖಿನ್ನತೆಯನ್ನು ಸ್ವಲ್ಪಮಟ್ಟಿಗೆ ಶಮನ ಮಾಡುತ್ತವೆ. ಆದ ಕಾರಣ ವೈಯಕ್ತಿಕವಾಗಿ ; ಲೌಕಿಕ ಬಾಳಿನಲ್ಲಿ ಉಪಯುಕ್ತವಾಗಿವೆ. ಮಾನಸಿಕ ತಳಮಳವನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡುತ್ತದೆ. {{gap}}ಭವಿಷ್ಯ ನುಡಿಯುವವರಿಂದ, ಈ ರೀತಿಯಲ್ಲಿ ಒಳ್ಳೆಯ ಫಲಿತಾಂಶವು ದೊರೆತರೆ ; ಮತ್ತೆ ಕೆಲವು ವೇಳೆ ಕೆಟ್ಟ ಪರಿಣಾಮವೂ ಆಗುವುದುಂಟು. 'ಇನ್ನು ಮೂರು ವರ್ಷಗಳ ನಂತರ ಗಂಡಾಂತರವಿದೆ. ಆದಕಾರಣ ಶಾಂತಿ ಮಾಡಿಸಿ' ಎಂದು ಭವಿಷ್ಯವನ್ನು ಹೇಳಿದರು ಅನ್ನಿ. ಇಂತಹ ಭವಿಷ್ಯದ ನುಡಿಗಳು ಹಲವಾರು ಅರ್ಥಗಳನ್ನು ನೀಡಬಲ್ಲವು. ಆದರೆ ಕೇಳಿದವನು ವಿಪರೀತಾರ್ಥವನ್ನು ಮಾಡಿಕೊಳ್ಳುತ್ತಾನೆ. ಇಂತಹ ಪ್ರೇರಕಗಳಿಂದ ಕೆಲವರಿಗೆ ಆತಂಕವು ಅತ್ಯಧಿಕವಾಗಿ, ಮಾನಸಿಕ ಸ್ವಾಸ್ಥ್ಯವು ಕೆಡುತ್ತದೆ. ಈ ಕಾರಣಗಳಿಂದಾಗಿ, ಆತಂಕಪಡುತ್ತಿರುವ ರೋಗಿಗಳನ್ನು ವೈದ್ಯರು ಪರೀಕ್ಷಿಸುವ ಮುನ್ನ ಯಾರಿಗಾದರೂ ಜಾತಕವನ್ನು ತೋರಿಸಿದ್ದೀರಾ? ಅಂಗೈ ತೋರಿಸಿ ಭವಿಷ್ಯವನ್ನು ಕೇಳಿದ್ದೀರಾ' ; ಎಂದು ಕೇಳುತ್ತಾರೆ. ರೋಗಿಯನ್ನು ಪರಿಹಾಸ್ಯ ಮಡುವುದಕ್ಕೆಂದು ಇಂತಹ ಪ್ರಶ್ನೆಗಳನ್ನು ವೈದ್ಯರುಗಳು ಕೇಳುವುದಿಲ್ಲ. ಯಥಾರ್ಥವನ್ನು ತಿಳಿದುಕೊಳ್ಳುವುದಕ್ಕಾಗಿ ಕೇಳುತ್ತಾರೆ. {{gap}}ನಿರಾಸೆಯು ಅತ್ಯಧಿಕವಾದಾಗ, ಮುಂದೆಂದೂ ಈ ಪರಿಸ್ಥಿತಿಯು{{nop}}<noinclude></noinclude> iaukyp51vcads2ay06sa0ivubis9pt6 ಪುಟ:ಮಾತೃನಂದಿನಿ.djvu/೧೦ 104 64881 322474 318246 2026-05-25T10:07:37Z Pragathi. BH 7585 /* Validated */ 322474 proofread-page text/x-wiki <noinclude><pagequality level="4" user="Pragathi. BH" /></noinclude>( ನಿದ್ರಾಜಡತಯಲ್ಲಿರುವ ನಮ್ಮ ಭಗಿನಿಯರಿಗೆ) ರಾಗ|| (ಯಾರು ಹಿತವರು ಮನವೆ) ಏಳೇಳಿರೆನ್ನೊ ಅದಕ್ಕತಂಗಿಯರೇ|| ಏಳೇಳು ಬಗೆಯಾಗಿ ಹೇಳುವೆನು ಕೂಗಿ ಅ || ಹೆತ್ತಾಕೆಯಳುತಿರಲ್ ತಲೆಯೆತ್ತಿ ನೋಡದಿರೆ ಮತ್ತಾವುದಿ ಹುದೆಮಗೆ ಕರ್ತವ್ಯವಿಳೆಯೊಳ್ || ಕತ್ತಲೆಯ ಕೋಣೆಯೊಳು ಮತ್ತಿನಿಂ ಮಲಗಿಹುದು | ಮತ್ತ ಕಾಶಿನಿಯರಿಗಿದೆತ್ತಣದು ನಡತೆ || ೧ || ಊರೂರ ತಿರುತಿರುಗಲರಸರನು ಕಳುಹಿದಿರಿ | ಆರದೊಂದಿನಿತು ಮೈಮರೆದು ಮಲಗಿದಿರಿ || ಸಂಗೊಳುವರಕಟ ಪರದೇಶಿಗಳು ಬಂದು | ಅಮ್ಮನಿದಿರಿ ಸವ ಧೀರರಿಲ್ಲಿಹರೆಂದು ಕೇಳಿ| ೨ || ಜೋಗಿಮಲಗುವರೆ ನಿದ್ರಾಸೊಗ ನೀವಳೆದಿಂತು | ಬೇಗಪಡುತಿರೆ 'ಕರ್ನಾಟವತೆಯಂತು | ಕೂಗುತಿದೆ ಗನಿಕರವಾಗುತಿದೆ ಶುಭಶಕುನವಾಗಗೊಚರನೊಲಿವ ಬೀರಮಂ ನೆನೆನೆನೆದು || ಏಳೇಳಿ || ೩ || ಕರೆಯಿಸಿರಿ ನಿಮ್ಮರಸನು, ನೆರೆಯಿಸಿ ಕಾರ್ಯವನ್ನು ಹುರಿಗೊಳಿಸಿ ನಿಲ್ಲಿಸಿರಿ ದೇಶಸೇವಕರಂ || ಪರಿಭಾವಿಸಿ ನಮ್ಮ ಪೂರ್ವಜರ ಮಹಿಮೆಯನು, ಪರದೇಶಿಗಳ ಸಿಂದಕ್ಕೆ ಪಡೆಯಿರಿ ಕೀರ್ತಿ ಯನು || ಏಳೇ || ೪ || ನೀವಲ್ಲದಿನ್ನಾರು ಈವೇಳೆಯೊಳು ಕಾಯ್ದ | ರೇವೇಳೆ ಕರ್ಣಾಟಮಾತೃಭಂಡಾರ | ನಾವಿಧದಿ ಬರಿದಾಗುತಿಹುದು ವಿದೇಶಿಗಳಿಂದ | ಸಾವಧಾನದಿ ನೋಡಿ ಭಾವೆಯರೆ ನೀವೇಳಿ || ಏಳೇಳಿ |೫|| ಕಳೆಯದಿರಿ ಕಾಲವನು, ಕೆಳೆತನದಿ ಲೋಕವನು ಬೆಳಯಿಸಿರಿ ಸಂಪದವನ್ನು ಕೆಲಸತೆಯನುಳಿದಿನ್ನು || ಒಲಿದಕ್ಕಗಳಿಗೆ ಹೇಳಿ, ಎಳದಂಗಿಯರೆ ಕೇಳಿ ತಳುವು ಮಾಡದೆಳಿ ನಲವಿನಿಂ ನೆರೆಬಾಳಿ ಏಳೇಳಿ || ೬ || ಉದಯಾದ್ರಿ ಶಿಖರದೊಳು ಉದಯಿಸಿದನಿ ಭಾನು | ಸದಮಲಾತ್ಮರ ನೋಡಿ ನಗುತ ಲಿಹನು || ಮದವಳಿದು ಮುದವಡೆದು ನಡೆನೋಡಿ ಮು೦ದಿಹುದನ್ನು || ಸದುಳದಿಂ ಪೇಳುವೆನು ಸುದತಿಯರೆ ನಿಮಗಿನ್ನು ೧ ಏಳೇಳಿ | ೭ || ಕನ್ನಡದಮಾತಾ ಮುನ್ನಿದ್ದ ವೈಭವವ ನಿನ್ನೊಮ್ಮೆ ನೆಲೆಗೊಳಿಸೆವೆಂದಿರ್ಪ ನಮ್ಮ || ಕನ್ನಡದ ನಾಡೊಡೆಯ ಚೆನ್ನ ಕೃಷ್ಣಂದ್ರಂಗೆ ನನ್ನಿಯಿಂ ಜಯ ಎಂದು ಹರಸಿಂದು || ೮ || ಜಯವೆನ್ನಿ ಕರ್ಣಾಟ ಜನನಿಯರಿದಾವರೆಗೆ | ಜಯವೆನ್ನಿ ಕರ್ಣಾಟ ಭಾರತಿಯ ನುಡಿಗೆ |ಜಯವೆನ್ನಿ ನರಶೇಷ ಗಿರಿವರನ ಚರಣಕ್ಕೆ ! ಜಯವೆನ್ನಿ ಸಂತತವು ಕರ್ಣಾಟ ಜನಪದಕೆ || ಏಳೇಳಿ || ೯ ||<noinclude></noinclude> gx6e9bf7uti0iqs4l8a6vag0eto3p6k 322475 322474 2026-05-25T10:09:06Z Pragathi. BH 7585 322475 proofread-page text/x-wiki <noinclude><pagequality level="4" user="Pragathi. BH" /></noinclude>{{center|( ನಿದ್ರಾಜಡತಯಲ್ಲಿರುವ ನಮ್ಮ ಭಗಿನಿಯರಿಗೆ)}} ರಾಗ||{{center| (ಯಾರು ಹಿತವರು ಮನವೆ)}} {{gap}}ಏಳೇಳಿರೆನ್ನೊ ಅದಕ್ಕತಂಗಿಯರೇ|| ಏಳೇಳು ಬಗೆಯಾಗಿ ಹೇಳುವೆನು ಕೂಗಿ ಅ || ಹೆತ್ತಾಕೆಯಳುತಿರಲ್ ತಲೆಯೆತ್ತಿ ನೋಡದಿರೆ ಮತ್ತಾವುದಿ ಹುದೆಮಗೆ ಕರ್ತವ್ಯವಿಳೆಯೊಳ್ || ಕತ್ತಲೆಯ ಕೋಣೆಯೊಳು ಮತ್ತಿನಿಂ ಮಲಗಿಹುದು | ಮತ್ತ ಕಾಶಿನಿಯರಿಗಿದೆತ್ತಣದು ನಡತೆ || ೧ || ಊರೂರ ತಿರುತಿರುಗಲರಸರನು ಕಳುಹಿದಿರಿ | ಆರದೊಂದಿನಿತು ಮೈಮರೆದು ಮಲಗಿದಿರಿ || ಸಂಗೊಳುವರಕಟ ಪರದೇಶಿಗಳು ಬಂದು | ಅಮ್ಮನಿದಿರಿ ಸವ ಧೀರರಿಲ್ಲಿಹರೆಂದು ಕೇಳಿ| ೨ || ಜೋಗಿಮಲಗುವರೆ ನಿದ್ರಾಸೊಗ ನೀವಳೆದಿಂತು | ಬೇಗಪಡುತಿರೆ 'ಕರ್ನಾಟವತೆಯಂತು | ಕೂಗುತಿದೆ ಗನಿಕರವಾಗುತಿದೆ ಶುಭಶಕುನವಾಗಗೊಚರನೊಲಿವ ಬೀರಮಂ ನೆನೆನೆನೆದು || ಏಳೇಳಿ || ೩ || ಕರೆಯಿಸಿರಿ ನಿಮ್ಮರಸನು, ನೆರೆಯಿಸಿ ಕಾರ್ಯವನ್ನು ಹುರಿಗೊಳಿಸಿ ನಿಲ್ಲಿಸಿರಿ ದೇಶಸೇವಕರಂ || ಪರಿಭಾವಿಸಿ ನಮ್ಮ ಪೂರ್ವಜರ ಮಹಿಮೆಯನು, ಪರದೇಶಿಗಳ ಸಿಂದಕ್ಕೆ ಪಡೆಯಿರಿ ಕೀರ್ತಿ ಯನು || ಏಳೇ || ೪ || ನೀವಲ್ಲದಿನ್ನಾರು ಈವೇಳೆಯೊಳು ಕಾಯ್ದ | ರೇವೇಳೆ ಕರ್ಣಾಟಮಾತೃಭಂಡಾರ | ನಾವಿಧದಿ ಬರಿದಾಗುತಿಹುದು ವಿದೇಶಿಗಳಿಂದ | ಸಾವಧಾನದಿ ನೋಡಿ ಭಾವೆಯರೆ ನೀವೇಳಿ || ಏಳೇಳಿ |೫|| ಕಳೆಯದಿರಿ ಕಾಲವನು, ಕೆಳೆತನದಿ ಲೋಕವನು ಬೆಳಯಿಸಿರಿ ಸಂಪದವನ್ನು ಕೆಲಸತೆಯನುಳಿದಿನ್ನು || ಒಲಿದಕ್ಕಗಳಿಗೆ ಹೇಳಿ, ಎಳದಂಗಿಯರೆ ಕೇಳಿ ತಳುವು ಮಾಡದೆಳಿ ನಲವಿನಿಂ ನೆರೆಬಾಳಿ ಏಳೇಳಿ || ೬ || ಉದಯಾದ್ರಿ ಶಿಖರದೊಳು ಉದಯಿಸಿದನಿ ಭಾನು | ಸದಮಲಾತ್ಮರ ನೋಡಿ ನಗುತ ಲಿಹನು || ಮದವಳಿದು ಮುದವಡೆದು ನಡೆನೋಡಿ ಮು೦ದಿಹುದನ್ನು || ಸದುಳದಿಂ ಪೇಳುವೆನು ಸುದತಿಯರೆ ನಿಮಗಿನ್ನು ೧ ಏಳೇಳಿ | ೭ || ಕನ್ನಡದಮಾತಾ ಮುನ್ನಿದ್ದ ವೈಭವವ ನಿನ್ನೊಮ್ಮೆ ನೆಲೆಗೊಳಿಸೆವೆಂದಿರ್ಪ ನಮ್ಮ || ಕನ್ನಡದ ನಾಡೊಡೆಯ ಚೆನ್ನ ಕೃಷ್ಣಂದ್ರಂಗೆ ನನ್ನಿಯಿಂ ಜಯ ಎಂದು ಹರಸಿಂದು || ೮ || ಜಯವೆನ್ನಿ ಕರ್ಣಾಟ ಜನನಿಯರಿದಾವರೆಗೆ | ಜಯವೆನ್ನಿ ಕರ್ಣಾಟ ಭಾರತಿಯ ನುಡಿಗೆ |ಜಯವೆನ್ನಿ ನರಶೇಷ ಗಿರಿವರನ ಚರಣಕ್ಕೆ ! ಜಯವೆನ್ನಿ ಸಂತತವು ಕರ್ಣಾಟ ಜನಪದಕೆ || ಏಳೇಳಿ || ೯ ||<noinclude></noinclude> 9xhpmj77377w19koa79i0d9pforld76 322476 322475 2026-05-25T10:09:23Z Pragathi. BH 7585 322476 proofread-page text/x-wiki <noinclude><pagequality level="4" user="Pragathi. BH" /></noinclude>{{center|( ನಿದ್ರಾಜಡತಯಲ್ಲಿರುವ ನಮ್ಮ ಭಗಿನಿಯರಿಗೆ)}} ರಾಗ||{{center|(ಯಾರು ಹಿತವರು ಮನವೆ)}} {{gap}}ಏಳೇಳಿರೆನ್ನೊ ಅದಕ್ಕತಂಗಿಯರೇ|| ಏಳೇಳು ಬಗೆಯಾಗಿ ಹೇಳುವೆನು ಕೂಗಿ ಅ || ಹೆತ್ತಾಕೆಯಳುತಿರಲ್ ತಲೆಯೆತ್ತಿ ನೋಡದಿರೆ ಮತ್ತಾವುದಿ ಹುದೆಮಗೆ ಕರ್ತವ್ಯವಿಳೆಯೊಳ್ || ಕತ್ತಲೆಯ ಕೋಣೆಯೊಳು ಮತ್ತಿನಿಂ ಮಲಗಿಹುದು | ಮತ್ತ ಕಾಶಿನಿಯರಿಗಿದೆತ್ತಣದು ನಡತೆ || ೧ || ಊರೂರ ತಿರುತಿರುಗಲರಸರನು ಕಳುಹಿದಿರಿ | ಆರದೊಂದಿನಿತು ಮೈಮರೆದು ಮಲಗಿದಿರಿ || ಸಂಗೊಳುವರಕಟ ಪರದೇಶಿಗಳು ಬಂದು | ಅಮ್ಮನಿದಿರಿ ಸವ ಧೀರರಿಲ್ಲಿಹರೆಂದು ಕೇಳಿ| ೨ || ಜೋಗಿಮಲಗುವರೆ ನಿದ್ರಾಸೊಗ ನೀವಳೆದಿಂತು | ಬೇಗಪಡುತಿರೆ 'ಕರ್ನಾಟವತೆಯಂತು | ಕೂಗುತಿದೆ ಗನಿಕರವಾಗುತಿದೆ ಶುಭಶಕುನವಾಗಗೊಚರನೊಲಿವ ಬೀರಮಂ ನೆನೆನೆನೆದು || ಏಳೇಳಿ || ೩ || ಕರೆಯಿಸಿರಿ ನಿಮ್ಮರಸನು, ನೆರೆಯಿಸಿ ಕಾರ್ಯವನ್ನು ಹುರಿಗೊಳಿಸಿ ನಿಲ್ಲಿಸಿರಿ ದೇಶಸೇವಕರಂ || ಪರಿಭಾವಿಸಿ ನಮ್ಮ ಪೂರ್ವಜರ ಮಹಿಮೆಯನು, ಪರದೇಶಿಗಳ ಸಿಂದಕ್ಕೆ ಪಡೆಯಿರಿ ಕೀರ್ತಿ ಯನು || ಏಳೇ || ೪ || ನೀವಲ್ಲದಿನ್ನಾರು ಈವೇಳೆಯೊಳು ಕಾಯ್ದ | ರೇವೇಳೆ ಕರ್ಣಾಟಮಾತೃಭಂಡಾರ | ನಾವಿಧದಿ ಬರಿದಾಗುತಿಹುದು ವಿದೇಶಿಗಳಿಂದ | ಸಾವಧಾನದಿ ನೋಡಿ ಭಾವೆಯರೆ ನೀವೇಳಿ || ಏಳೇಳಿ |೫|| ಕಳೆಯದಿರಿ ಕಾಲವನು, ಕೆಳೆತನದಿ ಲೋಕವನು ಬೆಳಯಿಸಿರಿ ಸಂಪದವನ್ನು ಕೆಲಸತೆಯನುಳಿದಿನ್ನು || ಒಲಿದಕ್ಕಗಳಿಗೆ ಹೇಳಿ, ಎಳದಂಗಿಯರೆ ಕೇಳಿ ತಳುವು ಮಾಡದೆಳಿ ನಲವಿನಿಂ ನೆರೆಬಾಳಿ ಏಳೇಳಿ || ೬ || ಉದಯಾದ್ರಿ ಶಿಖರದೊಳು ಉದಯಿಸಿದನಿ ಭಾನು | ಸದಮಲಾತ್ಮರ ನೋಡಿ ನಗುತ ಲಿಹನು || ಮದವಳಿದು ಮುದವಡೆದು ನಡೆನೋಡಿ ಮು೦ದಿಹುದನ್ನು || ಸದುಳದಿಂ ಪೇಳುವೆನು ಸುದತಿಯರೆ ನಿಮಗಿನ್ನು ೧ ಏಳೇಳಿ | ೭ || ಕನ್ನಡದಮಾತಾ ಮುನ್ನಿದ್ದ ವೈಭವವ ನಿನ್ನೊಮ್ಮೆ ನೆಲೆಗೊಳಿಸೆವೆಂದಿರ್ಪ ನಮ್ಮ || ಕನ್ನಡದ ನಾಡೊಡೆಯ ಚೆನ್ನ ಕೃಷ್ಣಂದ್ರಂಗೆ ನನ್ನಿಯಿಂ ಜಯ ಎಂದು ಹರಸಿಂದು || ೮ || ಜಯವೆನ್ನಿ ಕರ್ಣಾಟ ಜನನಿಯರಿದಾವರೆಗೆ | ಜಯವೆನ್ನಿ ಕರ್ಣಾಟ ಭಾರತಿಯ ನುಡಿಗೆ |ಜಯವೆನ್ನಿ ನರಶೇಷ ಗಿರಿವರನ ಚರಣಕ್ಕೆ ! ಜಯವೆನ್ನಿ ಸಂತತವು ಕರ್ಣಾಟ ಜನಪದಕೆ || ಏಳೇಳಿ || ೯ ||<noinclude></noinclude> qqif61eizp6vgj3wymyltttsjscd39j ಪುಟ:ಮಾಲತಿ.djvu/೨೭ 104 65260 322222 260824 2026-05-24T14:57:46Z Pragathi. BH 7585 /* Validated */ 322222 proofread-page text/x-wiki <noinclude><pagequality level="4" user="Pragathi. BH" />{{rh| |ಎರಡನೆಯ ಪರಿಚ್ಛೇದ|೧೯}} {{custom rule|w|160|w|160|w|160|w|160}}</noinclude>ವ್ಯನು ಆತ್ಮ ವಿರೋಧಿ, ಅಸ್ಥಿರಚೇತನು, ಆಗ್ಗೆ ಒಂದು ಕ್ಷಣಕ್ಕೆ ಮೊದಲು Tಭನೆಯು ತನ್ನ ಮನಸ್ಸಿನಲ್ಲಾವ ಸಂದೇಹಕ್ಕೂ ಅವಕಾಶವಂ ಕೊಡ ಕಡಗೆಂದು ಸಂಕಲ್ಪಿ' ಗಳು : ಆದರೆ ಪುನಃ ಅದೇ ಸಂದೇಹವುಂಟಾಗಿ ಆ ಸಂಗೋದಕ್ಕೆ ಕಾರಣವನ್ನು ತಾನೇ ಅರಿಯದವಳಾಗಿದ್ದಳು. ರಮೇಶನ ಮಾತುಗಳೆಲ್ಲಾ ಸನಿಗೆ ಜಿ.? ಮವು. ರಮೇಶನು ಸ್ವಲ್ಪ ನಕ್ಕ ನಗುವಿ ನಲ್ಲಿ ಅಗೆಲ್ಲಾ ಹಣಿದ: ೯ಹೊದುವು. ಕೇವನೆ. ಅ೦ಥಾ ಪ್ರೇಮಮ ಧಮವಾಗಿದೆ. ಸಮುವಾಯ. ಸುಖಮಯವಾಗಿಯೂ ಇದ್ದ ನಗು ವನ್ನು 15 ಶತ ನಟರಾಗ ಕಂಡಿರಲಿಲ್ಲ. ತಮೇಶನು ನಿಜವಾ fಯ ತ ವ ತಾಳವನಾಗಿರಲಿಲ್ಲ. ಹಾಗೇರಿತವಾಗಿದ್ದರೆ ಹೀಗೆ ನ.! ನಗುವ ಈ ಛನ ಅದೃಷ್ಟಕ್ಕೆ ಒದರಲಿಲ್ಲ, ಅ. ಥಾ ಮಧ. Fಲೆ ನತದ ಸೇದನವು, ಅಂಥಾ ಸೈನಜಡಿತವಾದ ನಗುವು. ಇಂಥಾ ದ ೧ ಲೋಟ ನಗುವು, ಅನುರಾಗದಿಂದ ರಂಜಿತ ನಾದ ಅ೦ಪಾ ನ' ವು ' " " - ದ ಕಡೆಯಲ್ಲಿ ರೆದಿರಲಿಲ್ಲ. ಹಾಗಾದರೆ ಅದುವರೆಗೂ, ಮನಸು T ಟಮrಳಂದ ಭನೆಯನ್ನು ಮೊ. ಗೆಳೆಸಿದನೆ ? ಹಾ ಶನು ತನ್ನ ಮನಸ್ಸನ್ನು ತಾನೇ ಅರಿಯದವ ನಾಗಿದ್ದನು. ಆದರೆ, ಈ ಮೇಳ ! • ನಿಜವಾಗಿ ನೋ ಭನೆಯವನ "ವೆ? ನಿಜವಾಗಿಯು ಮಾತಿಗೆ ಸೇರಿದವನೆ?' ರಮೇಶನ ಆ ನಗುವು ತೋಘನೆ ಮನಸ್ಸಿನಲ್ಲಿನ ವತು. ಅವಳ ಹೃದಯದಲ್ಲಿ ಪ್ರನಃ ಮೊದಲಿನಾ ದಾವಾ ನಲದ ಉರಿಯಿದ್ದಿತು. {{rule|height=0.5px|10em}} {{rule|height=0.5px|10em}} {{center|{{x-larger|ಮೂರನೆಯ ಪರಿಚ್ಛೇದ.}}}} {{rule|height=0.5px|10em}} {{gap}}ಅಂದಿದ ಗಂಡು ನೋಬನು ಬಾಯಿಬಿಡಲಿಲ್ಲ. ಮೊದ ಲಿನಂತೆ ಸಂದೇಹವೂ ಇದೆ.ದ. ತಡವೆ ಅನುತಾಪವೂ ಹುಟ್ಟಿ ಅವಳ ಮನಸ್ಸು ನಗುತ ಬಂದಿತ್ತು ಅದನ್ನೆಲ್ಲಾ ತನ್ನೊಳು ತಾನೇ ಸಹಿಸಿ ಕೊಳ್ಳಬೇಕೆಂದು ಸಿ೦ಕಲ್ಪಿಸಿಕೊಂಡಿದ್ದಳು.<noinclude></noinclude> 1p9h37ksiawomggg6330719jv43s0ic ಪುಟ:ಮಾಲತಿ.djvu/೩೬ 104 65269 322219 321236 2026-05-24T14:56:35Z Pragathi. BH 7585 /* Validated */ 322219 proofread-page text/x-wiki <noinclude><pagequality level="4" user="Pragathi. BH" />{{rh|೧೮|ಮಾಲತೀ}} {{custom rule|w|160|w|160|w|160|w|160}}</noinclude>{{gap}}ಶೋಭನೆಯು ಹಿಂದೆ ಬಂದುನಿಂತು ಆಕಾರಣವಾಗಿ ಅಲ್ಲಿಂದ ಹೊರಟು ಹೋದುದನ್ನು ಕಂಡು ರಮೇಶನೂ ವಮಾಲತಿಯೂ ಅವಳ ಹಿಂದೆ ಹೋದರು. ಶೋಭನೆಯು ನದಿಯಲ್ಲಿ ಧುಮುಕಿದ ನಿಮಿಷವೇ ರಮೇಶನೂ ನದಿಯಲ್ಲಿ ಹಾರಿ ಅವಳನ್ನು ನೀರಿನಿಂದೆತ್ತಿ ತೀರಕ್ಕೆ ತಂದನು. ಮಾಲತಿಯು ಕಲ್ಲಿನ ಪ್ರತಿಮೆಯಂತೆ ಸ್ತ೦ಭಿತೆಯಾಗಿ ಅಲ್ಲಿಯೇ ನಿಂತಿದ್ದಳು. {{Css image crop |Image = ಮಾಲತಿ.djvu |Page = 36 |bSize = 377 |cWidth = 69 |cHeight = 21 |oTop = 153 |oLeft = 155 |Location = center |Description = }} {{center|{{x-larger|ನಾಲ್ಕನೆಯ ಪರಿಚ್ಛೇದ.}}}} {{rule|8em}} {{gap}}ರಮೇಶನು ಶೋಭನೆಯನ್ನು ಎತ್ತಿಕೊಂಡು ಒಂದು ಮನೆಯಲ್ಲಿ ಮಲಗುವ ಕೊಠಡಿಯಲ್ಲಿ ಸೋಫಾದಮೇಲೆ ಮಲಗಿಸಿ ತಾನು ಅವಳ ಪಾರ್ಶ್ವದಲ್ಲಿ ಕುಳಿತುಕೊಂಡನು. ಶೋಭನೆಯು ನಾಲ್ಕೂ ಕಡೆ ನೋಡಿದಳು. ಈ ಜನ್ಮದಲ್ಲಿ ಪುನಃ ನೋಡುವುದಿಲ್ಲವೆಂದು ಯೋಚಿಸಿದ್ದ ಪದಾರ್ಥಗಳು ಪುನಃ ಆಳ ಕಣಿಗೆ ಬಿದ್ದುವು. ಅದೇ ಮನೆ ಅದೇ ಕೊಠಡಿ E&, ೧ರ ಹರಾ ವೆ ಗಲೆ.* * * : ಸಹ ಇದು ನಿಮ್ಮ ಸರದ.8 ಖಗಳಿಗೆ ಕಸಿ . ೧ ವಾದ ... ಧ ತಳು ೧: ೬೨ಾಗಿ ಆನೆಕೆ ರ್ಕಾರ್ಯ ಗಳು ನಡೆದ ಅದೆ- ಮನೆ೯೧ ವ..? – ಹಾಸಿಗೆ ಹಾಕಿ ತೆಯೆ ಇದೆ, ಸ ದ ಒ೪ ಇದ್ದ ಸಣ್ಣ ಮೇಜಿನ ಮೇಲೆ ಒತ್ಸಾ ಎಳ ನಾಟಕ, ಉತ್ತರರಾಮಚರಿತೆ, ಶಕುಂತಲೆ ಮುಂತಾದ ಪ್ರಸ್ಥಕಗಳು ಹಾಗೇನೇ ಅವೆ, ದೀಪವು ಉರಿಯುತ್ತಿದೆ, ಆದರೆ ಎಣ್ಣೆಯಿಲ್ಲದೆ ಪ್ರಕಾಶವು ಕಡಿಮೆ; ಸಾವನನ ಪ್ರಾಣದಂತೆ ತುಡುಕೂಳ್ಳು ತ್ತಿದೆ, ನಂದಿಜೋಗುವಂತಾಗಿ ನೊಂದಿಗೆ ಆಗುವುದಿಲ್ಲ, ಶೋಭನೆಯ ಪಾಣವೂ ಹಾಗೇನೇ ನೆಂದಿಗಿದ್ದುದು ನೋಂದಿಹೋಗಲಿಲ್ಲ ಶೋಭನೆಯು ನಾಚಿ ಕೆಯಿಂದ ಅದುವರೆಗೂ ಸ್ವಾಮಿಯ ಮುಖವನ್ನು ನೋಡದಿದ್ದವಳು ಆಗ ನೋಡಿದಳು. ಅವ ಹೃದಯರತ್ನವನ್ನು ನೋಡುವ ಆಸೆಯನ್ನು ತೋರದಿ ದ್ದಳೆ ಅಂಧಾ ಸ್ವಾಮಿಯು ಪುನಃ ಗೊರಕುವನೆ ? ನೃಗ ಭಾವದಿಂದ ಅಂಧಾ ಸ್ವಾಮಿಯನ್ನು ನೋಡಿದಳು. ವಿಷಾದದಿಂದ ಗಂಭೀರವಾಗಿದ್ದ<noinclude></noinclude> d8ums7a51w47mhoorm4xq1x30wtk5tq ಪುಟ:ಮಾಲತಿ.djvu/೪೧ 104 65274 322221 260935 2026-05-24T14:56:59Z Pragathi. BH 7585 /* Validated */ 322221 proofread-page text/x-wiki <noinclude><pagequality level="4" user="Pragathi. BH" />{{rh| |ನಾಲ್ಕನೆಯ ಪರಿಚ್ಛೇದ|೩೩}} {{custom rule|w|160|w|160|w|160|w|160}}</noinclude>ಕೆಳಗೆಲ್ಲಾ ಕತ್ತಲೆ. ಕತ್ತಲೆಯು ಆವರಿಸಿಕೊಂಡಿದ್ದ ನಿಶ್ಯಬ್ದವಾದಾ ನದಿಯ ತೀರದಲ್ಲಿ ಹೋಗುತ್ತಿರುವಾಗ ರಮೇಶನು ಒಂದಸಾಧಾರಣ ಭಯದಿಂದ ನಡುಗಿದನು. ಅವನ ಹೃದಯವು ಸೃಂಭಿತವಾಗಿ ನರಗಳಲ್ಲಿ ರಕ್ತಪ್ರವಾಹವು ನಿಂತುಹೋದಹಾಗಾಗಿ ನಡೆಯುವ ಶಕ್ತಿಯು ಉಡುಗಿಹೋಯಿತು; ಆದರೆ ಇದ್ದಹಾಗೆ, ಅದೇನು? ಏನೋ ಶಬ್ದವಾದಹಾಗಾಯಿತು ! ನದಿನೀರಲ್ಲಿ ಭಾರಪದಾರ್ಥವಾವದೊ ಬಿದ್ದ ಶಬ್ದ ! {{gap}}ಪ್ರನಃ ಆ ಸಂಜೆಯಲ್ಲಿ ನಡೆದ ಭಯಾನಕವಾದಾ ಘಟನೆಯು ರಮೇಶನ ಮನಕೆ ಹೊಳೆಯಿತು. ಮೈಯೆಲ್ಲಾ ಮುಳ್ಳಿಂದ ಚುಚ್ಚಿದಹಾಗಾಯಿತು. ರಮೇಶನಿಗೆ ನಿರ್ಜಿವವಾಗಿದ್ದ ಪ್ರಾಣದಲ್ಲಿ ಪಾಣವುಬಂದಿತು, ನಾಡಿಯಲ್ಲಿ ರಕ್ತಚಲನೆಯುಂಟಾಯಿತು. ಕಾಲಲ್ಲಿ ಬಲವು ಬಂದಿತು. ರಮೇಶನು, ‘ಮಾಲತಿ! ಮಾಲತಿ!’ ಎಂದು ಕೂಗುತ್ತ ಶಬ್ದವು ಕೇಳಿಬಂದಿದ್ದ ದಿಕ್ಕಿಗೆ ಓಡಿ ಹೋದನು. ನದಿಯ ದಡದಲ್ಲಿ ಎತ್ತರವಾಗಿದ್ದೊಂದು ಗಡ್ಡೆಯಮೇಲೆ ನಿಂತು ನೋಡಿದನು. ಆಸ್ಥಳದಲ್ಲಿ ಎದ್ದಿದ್ದ ಅಲೆಗಳು ತಂಡತಂಡವಾಗಿ ಅಳಸಿ ಹೋಗಿ ಆಳವಾಗಿ ಹರಿಯುತ್ತಿದ್ದ ನದಿಯ ಪ್ರವಾಹದೊಂದಿಗೆ ಸೇರಿಹೋಗುತ್ತಿದ್ದಿತು. ರಮೇಶನು ತುದಿಗಾಲಲ್ಲಿ ನಿಂತು ಕುತ್ತಿಗೆಯನ್ನೆತ್ತಿ ದೃಷ್ಟಿಸಿ ನೋಡಿದನು. ನದಿಯಲ್ಲಿ ತೆರೆಗಳಿರಲಿಲ್ಲ. ಎಲ್ಲಾ ಸಾಮಾನ್ಯವಾಗಿದ್ದ ಹಾಗೆ ಕಂಡಿತು. ಸುಖಮಯಿಯು ನಿಶ್ಯಬ್ದವಾಗಿ ಹರಿಯುತ್ತಿತ್ತು. ರಮೇಶನು ನಾಲ್ಕು ಕಡೆಯೂ ನೋಡಿದನು. ಮಾಲತಿಯ ಚಿಹ್ನೆಗಳಾವವೂ ಕಂಡುಬರಲಿಲ್ಲ. ರಮೇಶನು ಹುಚ್ಚನಹಾಗೆ, 'ಮಾಲತಿ! ಮಾಲತಿ’ ಎಂದು ಕೂಗಿದನು. ನದಿಯ ಆಕಾಶವೂ ದಿಕ್ಕುಗಳೂ ರಮೇಶನಾ ಆರ್ತನಾದಕ್ಕೆ ಮಾದನಿಯನ್ನು ಕೊಟ್ಟವು. ಆದರೆ, ಆವ ಮಾಲತಿಯಾಗಲೀ ಉತ್ತರವನ್ನು ಕೊಡಲಿಲ್ಲ! {{Css image crop |Image = ಮಾಲತಿ.djvu |Page = 41 |bSize = 377 |cWidth = 78 |cHeight = 36 |oTop = 512 |oLeft = 149 |Location = center |Description = }}<noinclude></noinclude> mco1tmn1xrr5vnbsvsln62n7oxs39yu 322223 322221 2026-05-24T14:58:02Z Shreelatha.Halemane 7642 /* Validated */ 322223 proofread-page text/x-wiki <noinclude><pagequality level="4" user="Pragathi. BH" />{{rh| |ನಾಲ್ಕನೆಯ ಪರಿಚ್ಛೇದ|೩೩}} {{custom rule|w|160|w|160|w|160|w|160}}</noinclude>ಕೆಳಗೆಲ್ಲಾ ಕತ್ತಲೆ. ಕತ್ತಲೆಯು ಆವರಿಸಿಕೊಂಡಿದ್ದ ನಿಶ್ಯಬ್ದವಾದಾ ನದಿಯ ತೀರದಲ್ಲಿ ಹೋಗುತ್ತಿರುವಾಗ ರಮೇಶನು ಒಂದಸಾಧಾರಣ ಭಯದಿಂದ ನಡುಗಿದನು. ಅವನ ಹೃದಯವು ಸ್ತಂಭಿತವಾಗಿ ನರಗಳಲ್ಲಿ ರಕ್ತಪ್ರವಾಹವು ನಿಂತುಹೋದಹಾಗಾಗಿ ನಡೆಯುವ ಶಕ್ತಿಯು ಉಡುಗಿಹೋಯಿತು; ಆದರೆ ಇದ್ದಹಾಗೆ, ಅದೇನು? ಏನೋ ಶಬ್ದವಾದಹಾಗಾಯಿತು ! ನದಿನೀರಲ್ಲಿ ಭಾರಪದಾರ್ಥವಾವದೊ ಬಿದ್ದ ಶಬ್ದ ! {{gap}}ಪ್ರನಃ ಆ ಸಂಜೆಯಲ್ಲಿ ನಡೆದ ಭಯಾನಕವಾದಾ ಘಟನೆಯು ರಮೇಶನ ಮನಕೆ ಹೊಳೆಯಿತು. ಮೈಯೆಲ್ಲಾ ಮುಳ್ಳಿಂದ ಚುಚ್ಚಿದಹಾಗಾಯಿತು. ರಮೇಶನಿಗೆ ನಿರ್ಜಿವವಾಗಿದ್ದ ಪ್ರಾಣದಲ್ಲಿ ಪ್ರಾಣವುಬಂದಿತು, ನಾಡಿಯಲ್ಲಿ ರಕ್ತಚಲನೆಯುಂಟಾಯಿತು. ಕಾಲಲ್ಲಿ ಬಲವು ಬಂದಿತು. ರಮೇಶನು, ‘ಮಾಲತಿ! ಮಾಲತಿ!’ ಎಂದು ಕೂಗುತ್ತ ಶಬ್ದವು ಕೇಳಿಬಂದಿದ್ದ ದಿಕ್ಕಿಗೆ ಓಡಿ ಹೋದನು. ನದಿಯ ದಡದಲ್ಲಿ ಎತ್ತರವಾಗಿದ್ದೊಂದು ಗಡ್ಡೆಯಮೇಲೆ ನಿಂತು ನೋಡಿದನು. ಆಸ್ಥಳದಲ್ಲಿ ಎದ್ದಿದ್ದ ಅಲೆಗಳು ತಂಡತಂಡವಾಗಿ ಅಳಸಿ ಹೋಗಿ ಆಳವಾಗಿ ಹರಿಯುತ್ತಿದ್ದ ನದಿಯ ಪ್ರವಾಹದೊಂದಿಗೆ ಸೇರಿಹೋಗುತ್ತಿದ್ದಿತು. ರಮೇಶನು ತುದಿಗಾಲಲ್ಲಿ ನಿಂತು ಕುತ್ತಿಗೆಯನ್ನೆತ್ತಿ ದೃಷ್ಟಿಸಿ ನೋಡಿದನು. ನದಿಯಲ್ಲಿ ತೆರೆಗಳಿರಲಿಲ್ಲ. ಎಲ್ಲಾ ಸಾಮಾನ್ಯವಾಗಿದ್ದ ಹಾಗೆ ಕಂಡಿತು. ಸುಖಮಯಿಯು ನಿಶ್ಯಬ್ದವಾಗಿ ಹರಿಯುತ್ತಿತ್ತು. ರಮೇಶನು ನಾಲ್ಕು ಕಡೆಯೂ ನೋಡಿದನು. ಮಾಲತಿಯ ಚಿಹ್ನೆಗಳಾವವೂ ಕಂಡುಬರಲಿಲ್ಲ. ರಮೇಶನು ಹುಚ್ಚನಹಾಗೆ, 'ಮಾಲತಿ! ಮಾಲತಿ’ ಎಂದು ಕೂಗಿದನು. ನದಿಯ ಆಕಾಶವೂ ದಿಕ್ಕುಗಳೂ ರಮೇಶನಾ ಆರ್ತನಾದಕ್ಕೆ ಮಾದನಿಯನ್ನು ಕೊಟ್ಟವು. ಆದರೆ, ಆವ ಮಾಲತಿಯಾಗಲೀ ಉತ್ತರವನ್ನು ಕೊಡಲಿಲ್ಲ! {{Css image crop |Image = ಮಾಲತಿ.djvu |Page = 41 |bSize = 377 |cWidth = 78 |cHeight = 36 |oTop = 512 |oLeft = 149 |Location = center |Description = }}<noinclude></noinclude> rnyfjlckjst8mx14454qg0ut7x50kvn ಪುಟ:ಶ್ರೀ ಕೃಷ್ಣ ಲೀಲೆ.djvu/೩೯ 104 68713 322323 169912 2026-05-24T18:45:57Z Pragathi. BH 7585 /* Validated */ 322323 proofread-page text/x-wiki <noinclude><pagequality level="4" user="Pragathi. BH" /></noinclude>೨೪{{gap}}{{gap}}ದ್ವಿತೀಯಾಂಕಂ. ಕ್ಷ ಪರಪಕ್ಷಾದಿ ಭೇದ ಭಾವ ವಿರಹಿತ೦, ದುಷ್ಟ ಶಿಕ್ಷಣ ರಕ್ಷಣಾದಿ ಸರ್ವಸಮಾನ ಧರ್ಮಭಾವಸಹಿತ೦, ವಿಶಾಲನಿಸ್ತುಲ ದಯಾಗುಣೋಪೇತಂ,ಅನಘ- ಆನಂತ - ಅವ್ಯಯ- ಅಪ್ರಮೇಯ-ಅವಿಕಾರ,ಆದಿ ಮಧ್ಯಾಂತರಹಿತ, ಅನುಪಮಾ ತೇಜೋಮಯಾಕಾರಂ , ಭವವೀಯಾತೀತಂ, ಕರುಣಾಸಮುದ್ರಂ, ಮಹಾನುಭಾವಂ, ಪರಮಪುರುಷ೦, ಸುರನಾಯಕ ಕಾರ್ಯಷ್ಟದಿಕ್ಪಾಲ ಮುಕುಟಮಣಿಗಣ ನೀರಾಜಿತ ಪಾದಾರವಿಂದಂ, ಸದಾನಂದ ಚಂದ್ರಿಕಾ ಮಂದಿರಂ,ಜಗದಾನಂದನ೦ದ ಕರಂ, ಭಕ್ತ ತ್ರಾಣ ಪರಾಯಣಂ, ಲಕ್ಷ್ಮೀರಮಣ೦, ಭಗವಾನ್ ಶ್ರೀಮನ್ನಾರಾಯಣಂ, ಭಜೇಹಂ! ಭಜೇಹಂ !! ಭಜೇಹಂ !!! {{gap}}[ಇಂತು : ನಾರಾಯಣನಾಮ ಸಂಕೀರ್ತನೆ ಮಾಡುತ್ತ ಬಂದ ನಾರದರನ್ನು ಅಂತಃಪುರದ ಮುಂಭಾಗದಲ್ಲಿ ಕಂಸನು ಸಂಧಿಸುವನು.] '''ಕಂಸ''':- (ತನ್ನಲ್ಲಿ) ಎಲ್ಲಿಯೋ ವೀಣಾಗಾನವಾಗುವಂತೆ ಕೇಳಿ ಸುತ್ತದೆ. ಇಷ್ಟು ಗಮವಾಗಿ ವೀಣೆಯನ್ನು ನುಡಿಸುವುದಕ್ಕೆ ಸಾಮಾ ನ್ಯರಿಗೆ ಸಾಧ್ಯವಲ್ಲ. ಯಾರೋ ಅಸಾಧಾರಣ ಪಂಡಿತರೇ ಹೀಗೆ ನುಡಿ ಸುತ್ತಿರಬಹುದು. ಒಳ್ಳೆಯದು. ಆಗಲಿ, ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ ವಿಚಾರಿಸುವೆನು. [ಎಂದು ಒಂದೆರಡು ಹೆಜ್ಜೆಗಳಿಡುವರಲ್ಲಿಯೇ ನಾರದರು ಕಾಣಿಸಿಕೊಳ್ಳು(ವ)ರು.] '''ಕಂಸ''':-ಓಹೋ ! ಸರಿ ! ಸರಿ ! ವೈಣಿಕ ಶಿಖಾಮಣಿಯಾದ ಈತನ ಗಾನವಾದುದರಿಂದಲೇ ಅಷ್ಟು ರಮ್ಯವಾಗಿದ್ದಿತು | ನಾರದರೇ ! ನಮಸ್ಕರಿಸುವೆನು. '''ನಾರದ''':-ಎಲೈ ಅಸಹಾಯ ಶೂರನೇ ! ಅಷ್ಟೈಶ್ವರ್ಯ ಸಂಪನ್ನ ನಾಗು ! '''ಕಂಸ''':-(ಬಹಳ ಸಂತೋಷದಿಂದ ನಗುತ್ತ) ನಾರದರೇ | ವಿಶೇಷ ವರ್ತಮಾನಗಳೇನಾದರೂ ವುಂಟೋ ? '''ನಾರದ''':-ಕಂಸ ರಾಜೇಂದ್ರಾ ! ಈ ದಿವಸವೇನು ಬಹಳ ಸಂತೋಷವಾಗಿರುವಂತೆ ಕಾಣುತ್ತದೆ ? '''ಕಂಸ''':-ನಾರದರೇ | ತಾವೇಕೆ ಹೀಗೆ ಕೇಳುವಿರಿ ? '''ನಾರದ'''':-ಹೇಗೆ ಕೇಳಿದೆನು ?<noinclude></noinclude> av7k27if6s3gkonon4eukt7cja0y2rj ಪುಟ:ಶ್ರೀ ಕೃಷ್ಣ ಲೀಲೆ.djvu/೧೬೭ 104 68841 322324 169554 2026-05-24T18:46:30Z Pragathi. BH 7585 /* Validated */ 322324 proofread-page text/x-wiki <noinclude><pagequality level="4" user="Pragathi. BH" /></noinclude>{{center|ಭದ್ರಾಚಲರಾಮದಾಸ ಚರಿತ್ರೆ,}} (ಎರಡನೇ ಮುದ್ರಣ.) 1919 ಅಕ್ಟೋಬರ್ ತಿಂಗಳಲ್ಲಿ ಪ್ರಕಟವಾಗುತ್ತೆ.</br> {{gap}}ಶ್ರೀ ರಾಮಭಕ್ತಿ ಸಾಮ್ರಾಜ್ಯವನ್ನು ಸೂರೆಗೊಂಡ ಭಕ್ತಾಗ್ರೇ ಸರರಾದ ಶ್ರೀ ರಾಮದಾಸರ ಚರಿತ್ರವನ್ನು ಸಾವಿರಾರುಮಂದಿ ಅನು ದಿನವೂ ನಶಿಸಿ ಸಂತೋಷಿಸಬೇಕೆಂಬ ಸಂಕಲ್ಪದಿಂದ ಈ ಗ್ರಂಥವನ್ನು ಕನ್ನಡಭಾಷೆಯಲ್ಲಿ ಸಿದ್ದಪಡಿಸಿರುತ್ತವೆ. {{center|ವಿ ಶ ಯ ಸೊ ಚಿ ಕೆ}}. {{gap}}ಅವತಾರಿಕೆ, ದಿವ್ಯಮಂಗಳನಾಮಸಂಕೀತ್ರನೆ, ಶ್ರೀ ರಾಮ ನವಮಿ ಮಹೋತ್ಸವಕ್ಕಾಗಿ ಭಕ್ತಾದಿಗಳು ತಂಡೋಪತಂಡವಾಗಿ ಶ್ರೀ ಭದ್ರಾಚಲಕ್ಕೆ ಹೋಗುವಿಕೆ, ಗೋಪಣ್ಣನಿಗೂ (ರಾಮದಾಸರ ಪೂ ಈ ನಾಮಧೇಯ) ಶ್ರೀ ಕಬೀರುದಾಸರಿಗೂ ಪರಿಚಯವುಂಟಾಗು ವಿಕ, ಕಬೀರುದಾಸರು ಗೋಪಣ್ಣನಿಗೆ ರಾಮತಾರಕ ಮಂತ್ರವದೇ ಶಮಾಡುವಿಕೆ, ಅರ್ಚಕರ ಮತಾವೇಕ ಪ್ರಸಂಗಗಳು, ಕಬೀರುದಾಸರ ಪ್ರಭಾವವು ಬಯಲಾಗುವಿಕೆ, ಗೋಲ್ಕೊಂಡಾ ನವಾಬನಾದ ತಾನೀ ಪಾ” ಮಹಾಶಯನ ವೈಭವ ಮತ್ತು ಸುಗುಣಾಭಿವರನೆ, ಯಾವ ಜಾತಿಯಲ್ಲಿ ಹುಟ್ಟಿದವರಾದರೂ ಭಗವದ್ಭಕ್ತರು ಸರತ್ರ ಪೂಜ್ಯರಂ ಬ ಸಿದ್ದಾಂತ, ಅಕ್ಕಣ, ಮಾದಣ್ಣರೆಂಬ ಬ್ರಾಹ್ಯಣಮಂತ್ರಿಗಳ ರಾಜ ಕಾರ ಧುರಂಧರತೆ, ತಾನಿಷಾ ಪ್ರಭುವಿನ ಧರ ಪತ್ನಿಯಾದ ಸಿತಾ ರಾಬೇಗಮನ ಸಪ್ಪರನ, ಪ್ರಜಾನುರಾಗ, ಗೋಪಣ್ಣನ ಪತ್ನಿಯಾದ “ಕಮಲೆಯ ಪತಿಭಕ್ತಿ, ವಿಜ್ಞಾನ ವೈಭವ, ಕಬೀರರು ಗೋವಣ್ಣನ ಭಕ್ತಿಗೆ ಆಶ್ಚರಚಕಿತರಾಗಿ ಆತನಿಗೆ “ರಾಮದಾಸ” ರೆಂಬ ನಾಮಕ ರಣ ಮಾಡುವಿಕೆ, ರಾಮದಾಸರ ಮಗನಾದ ಕೋದಂಡರಾಮನೆಂಬ ಬಾಲಕನು ಜತಹುಡುಗರೂಡನೆ ರಾಮಭಜನರೂಪವಾದ ಆಟವಾಡು ಕೆ. ರಾಮದಾಸರು ತಮ್ಮ ಸರಸ್ವವನ್ನೂ ದಾನಮಾಡುವಿಕ, ಪುತ್ರ ಸೌಕ, ಕೋದಂಡರಾಮನು ಪುನಃ ಜೀವಿಸುವಿಕೆ, ಸತೀಸುತಸಹಿತ ರಾಗಿ ರಾಮದಾಸರು ಭದ್ರಾಚಲಕ್ಕೆ ತೆರಳುವಿಕೆ, ಕೋದಂಡರಾಮನ ಅಸಲಿಕ, ರಾಮದಾಸರ ಮನೋನಿಗ್ರಹ, ವೇಶ್ಯಾವಿನೋದ ಮಗರಾಗಿದ್ದ ಭಾಚಲಪುರವಾಸಿಗಳಿಗೆ ರಾಮದಾಸರು ಹಿತೋಪದೇಶಮಾಡಿ ಅವ<noinclude></noinclude> 3lq74o8n0fvmsfpvvq9xok90z295221 ಪುಟ:ಕುರುಕ್ಷೇತ್ರ ಗ್ರಂಥ.djvu/೬ 104 72330 322244 298077 2026-05-24T15:12:28Z Pragathi. BH 7585 /* Validated */ 322244 proofread-page text/x-wiki <noinclude><pagequality level="4" user="Pragathi. BH" /></noinclude>{{c| ಗಳಗನಾಥ, ಸುರಸಗ್ರಂಥಮಾಲ<br />{{Custom rule|w|40|w|160|w|160|w|40}} ೪೧ನೆಯ ಗ್ರಂಥ. {{xxx-larger|'''ಕುರುಕ್ಷೇತ್ರ!'''}} ಇದನ್ನು '''ವೇಂಕಟೇಶ ತಿರಕೋ ಕುಲಕರಣಿ, ಗಳಗನಾಥ,''' ಪೇನಶನರ ಅಸಿಸ್ಟಂಟ ಮಾಸ್ತರ, ಟ್ರೇನಿಂಗ ಕಾಲೇಜ ಧಾರವಾಡ, ಹಾಗು, ರಾಮಚಂದ್ರ ಕೃಷ್ಣ ದೇಶಪಾಂಡೆ ಲಕ್ಷ್ಮೀಶ್ವರ, ಇವರು ಬರದರು. {{Custom rule|w|160|w|160|w|160}}ಮೊದಲನೆಯ ಆವೃತ್ತಿ, ೬೦೦೦ ಪ್ರತಿಗಳು.{{Custom rule|w|160|w|160|w|160}} [ಪುಸ್ತಕದ ಎಲ್ಲಹಕ್ಕುಗಳು ಗಳಗನಾಥ ಇವರಿಂದ ಕಾಯಲ್ಪಟ್ಟಿರುವವು.] 1919 {{rh|Re. 1]||[ಬೆಲೆ ೧ ರೂಪಾಯಿ}}{{Custom rule|w|40|w|160|w|160|w|40}}ಇದನ್ನು ಮಿ. ವೇಕಂಟೇಶ ತಿರಕೋ ಕುಲಕರಣಿ, ಗಳಗನಾಥ. ಇವರು ಹಾವೇರಿಯಲ್ಲಿ ತಮ್ಮ ಸ್ವಂತ ಮಾಲಕಿಯ ಶ್ರೀವೇಂಕಟೇಶಪ್ರೇಸಿನಲ್ಲಿ ಮುದ್ರಿಸಿ ಅಲ್ಲಿಯೇ ಪ್ರಸಿದ್ಧ ಪಡಿಸಿದರು. }}<noinclude></noinclude> kr1y33fycsmlihbq6grqg2pqm1otkw6 ಪುಟ:ಕುರುಕ್ಷೇತ್ರ ಗ್ರಂಥ.djvu/೨೩ 104 72347 322239 258400 2026-05-24T15:09:43Z Pragathi. BH 7585 /* Validated */ 322239 proofread-page text/x-wiki <noinclude><pagequality level="4" user="Pragathi. BH" /></noinclude> {[c]}/{(xxx-larger)}  ೧೬ ಕುರುಕ್ಷೇತ್ರ ! ಉದಾತ್ತ ವಿಚಾರದ ಸ್ವಾಮಿನಿಷ್ಠ ಜಾಟನ ಈ ಸಮಂಜಸ ಮಾತು ನಡಿಸುವ ಸುಬುದ್ಧಿಯು ಆ ತರುಣ ಮದಾಂಧಮರಾಟನಿಗೆ ಆಗಲಿಲ್ಲ ಜಾಟನ ಮಾತಿನಿಂದ ಭಾವುಸಾಹೇಬ, ಮೇಹೆಂದಳೆ ಮೊದಲಾದವರ ಬಾಯಲ್ಲಿ ಮತ್ತಷ್ಟು ನೀರುಒಡೆದವು. ತಗಡು ಉಚ್ಚಿಸಿದರೆ ಇದಕ್ಕೂ ಹೆಚ್ಚು ಉತ್ಪನ್ನರಾಗುವದೆಂಬ ದುರಾಶೆಗೆ ಅವರು ಒಳ ಗಾದರು. ಕಡೆಗೆ ಹಟಮಾರಿ ಭಾವುಸಾಹೇಬನು ದ್ರವ್ಯಲೋಭದಿಂದ ಛತ್ತಿನ ತಗಡು ಉಚಿಸಿದರು. ಆಶ್ಚರ್ಯದ ಸಂಗತಿಯೇನಂದರೆ, ತಗಡಿನ ಬೆಲೆಯು ಮೂರುಲಕ್ಷ ಕ್ಕಿಂತ ಹೆಚ್ಚು ಆಗಲಿಲ್ಲ.ಆಗ ಮತ್ತೆ ಸುರಜಮಲ್ಲನು ಭಾವುಸಾಹೇಬನಿಗೆ -ಭಾವುಸಾಹೇಬ, ನಾವು ಬಳಿಯಲ್ಲಿರುತ್ತಿರಲು , ಸಿಂಹಾಸನದ ವಿದ್ವಾಂಸಮಾಡಿಸಿದಿರಿ. ಇದ ರಿಂದ ನಮಗೆ ಕಲಂಕವುಂಟಾಯಿತು. ನಮ್ಮ ವಿನಂತಿಯನೆಲ್ಲ ಸಾಬರವರು ಅಲ್ಲ ಗಳೆದುಬಿಡುವಿರಿ! ಹಿಂದುಧರ್ಮವ ಮುಣಗಿಸಬೇಕೆಂದು ನಮ್ಮ ಮನಸ್ಸಿನಲ್ಲಿರುವದಿಲ್ಲ. ರಾಜ್ಯದಲ್ಲಿ ಸ್ವಾಸ್ಥ್ಯವುಂಟಾಗಬೇಕೆಂದು ನಮ್ಮ ಮನಸ್ಸಿನಲ್ಲಿರುತ್ತದೆ . ಯಮು ನೆಯ ಉದಕವನ್ನು ಹಿಡಿದು ನಾವೂ, ನೀವೂ ಮಿತ್ರತ್ವದ ಶಪಥವಹಿಸಿದ್ದರ ಪರಿಣಾಮವು ಇದೇಯೋ! ಈಗಾದರೂ ನಮ್ಮ ಮಾತು ಕೇಳುವಹಾಗಿದ್ದರೆ , ಛತ್ತಿನ ತಗಡನ್ನು ಪುನಃ ಮೊದಲಿನಂತೆ ಕೂಡಿಸಿರಿ. ಅದರಿಂದ ನಿಮಗೆ ನಿಶ್ಚಯವಾಗಿ ಜಯಪ್ರಾಪ್ತಿಯಾಗು ವದು. ಸಾಹೇಬ, ನನ್ನ ಮತ್ತೊಂದು ವಿನಂತಿಯೇನಂದರೆ, ಗಾಜುದ್ದಿನನ ವಜೀರಿಯ ಪದವಿಯನ್ನು ಪುನಃ ಗಾಜುದ್ದೀನನಿಗೆ ಕೊಡಬೇಕು. ಈ ಸಂಬಂಧದಿಂದ ಸಿಂದೆ-ಹೋಳ ಕರರು, ಹಾಗು ನಾನು ಪ್ರಮಾಣದಬದ್ದ ರಾಗಿರುವೆವು. ಮುಂದೆ ನಮ್ಮ ಸಣ-ಪುಟ್ಟ ವಿನಂ ತಿಗಳನ್ನು ಮನ್ನಿಸುತ್ತಹೋದರೆ, ನಾವು ಸರ್ವಾಂಶದಿಂದ ನಿಮ್ಮವರೇ ಇರುವೆವು. ನಿಮಗೆ ಹತ್ತುವಷ್ಟು ಕಾಳು-ಕಡಿ ಮೊದಲಾದ ಸಾಹಿತ್ಯಗಳನ್ನು ಒದಗಿಸುವೆವು, ನೀವು ದಿಲ್ಲಿಯನ್ನು ಬಿಟ್ಟು ಮುಂದಕ್ಕೆ ಹೋಗಬೇಡಿರಿ. ಇಲ್ಲಿಯೇ ಇದ್ದು ಎಲ್ಲ ಕಾರಭಾ ರವನ್ನೂ, ಮಸಲತ್ತುಗಳನ್ನೂ ನಡಿಸಿ ನಮಗೆ ಅಪ್ಪಣೆ ಕೊಡುತ್ತಹೋಗಿರಿ. ಕದಾ ಚಿತ್, ಕುಂಜಪರದವರ ಪರಿಪತ್ಯ ಮಾಡುವದು ನಿಮ್ಮ ಮನಸ್ಸಿನಲ್ಲಿದ್ದರೆ, ಇಲ್ಲಿಯೇ ಇದು ಹಲವು ಪ್ರಕಾರದಿಂದ ಮಾಡಿರಿ; ಆದರೆ ನೀವು ವೈರಿಗಳ ಅಳವಿನಲ್ಲಿ ಸಿಗಬೇಡಿರಿ. ಎಂದು ಉತ್ತಮಪ್ರಕಾರದ ಆಲೋಚನೆಯನ್ನು ಹೇಳಿದನು; ಆದರೆ ಗರ್ವಿಷ್ಠನಾದ ಭಾವುಸಾಹೇಬನು ಅವಿಚಾರದಿಂದ ಸರಳಹೃದಯದ ಚಾಟನಿಗೆ ಪ್ರತ್ಯುತ್ತರವಾಗಿ“ನಾವು ನಿಮ್ಮ ಬಲವನ್ನು ನಂಬಿ ದಕ್ಷಿಣವನ್ನು ಬಿಟ್ಟು ಬಂದಿರುವದಿಲ್ಲ. ನಮ್ಮ ಮನ ಸ್ಸಿಗೆ ಬಂದಂತೆ ನಾವು ಮಾಡುವೆವು. ಅದನ್ನು ನೋಡುವದು ನಿಮ್ಮಿಂದಾದರೆ ಇಲ್ಲಿ ಇರಬೇಕು, ಆಗದಿದ್ದರೆ ನಿಮ್ಮ ಸ್ನಾನಕ್ಕೆ ನೀವು ಹೊರಟುಹೋಗಬೇಕು. ಅಬದಾಲಿಯ ಪಾರಿಪತ್ಯವಾದಬಳಿಕ ನಾವೂ, ನೀವೂ ನೋಡಿಕೊಳ್ಳೋಣವಂತೆ!” ಎಂದನು. ಪ್ರಿಯ ವಾಚಕರೇ, ಬುದ್ಧಿ ಹೇಳುವವರಕಡ ಗುದ್ದಾಡುವ ಈ ರೀತಿಯನ್ನು ನೋಡಿದಿರಾ? ಎಂಥ ಅವಿಚಾರವಿದು ! ಭಾವುವಿಗಾದರೂ ಏಕೆ ಅನ್ನಬೇಕು ? ಭವಿತ್ಯನವನ್ನು ತಪ್ಪಿಸು ವದು ಬಹ್ಮಾದಿಗಳಿಂದಲೂ ಆಗದು!_<noinclude></noinclude> hc8ghkijzuvym2vc95ugc4tlxw64hqs 322240 322239 2026-05-24T15:10:43Z Pragathi. BH 7585 322240 proofread-page text/x-wiki <noinclude><pagequality level="4" user="Pragathi. BH" />{{rh|center=ಕುರುಕ್ಷೇತ್ರ !|left=೧೬|right=}}</noinclude> {[c]}/{(xxx-larger)} {{gap}}ಉದಾತ್ತ ವಿಚಾರದ ಸ್ವಾಮಿನಿಷ್ಠ ಜಾಟನ ಈ ಸಮಂಜಸ ಮಾತು ನಡಿಸುವ ಸುಬುದ್ಧಿಯು ಆ ತರುಣ ಮದಾಂಧಮರಾಟನಿಗೆ ಆಗಲಿಲ್ಲ ಜಾಟನ ಮಾತಿನಿಂದ ಭಾವುಸಾಹೇಬ, ಮೇಹೆಂದಳೆ ಮೊದಲಾದವರ ಬಾಯಲ್ಲಿ ಮತ್ತಷ್ಟು ನೀರುಒಡೆದವು. ತಗಡು ಉಚ್ಚಿಸಿದರೆ ಇದಕ್ಕೂ ಹೆಚ್ಚು ಉತ್ಪನ್ನರಾಗುವದೆಂಬ ದುರಾಶೆಗೆ ಅವರು ಒಳ ಗಾದರು. ಕಡೆಗೆ ಹಟಮಾರಿ ಭಾವುಸಾಹೇಬನು ದ್ರವ್ಯಲೋಭದಿಂದ ಛತ್ತಿನ ತಗಡು ಉಚಿಸಿದರು. ಆಶ್ಚರ್ಯದ ಸಂಗತಿಯೇನಂದರೆ, ತಗಡಿನ ಬೆಲೆಯು ಮೂರುಲಕ್ಷ ಕ್ಕಿಂತ ಹೆಚ್ಚು ಆಗಲಿಲ್ಲ.ಆಗ ಮತ್ತೆ ಸುರಜಮಲ್ಲನು ಭಾವುಸಾಹೇಬನಿಗೆ -ಭಾವುಸಾಹೇಬ, ನಾವು ಬಳಿಯಲ್ಲಿರುತ್ತಿರಲು , ಸಿಂಹಾಸನದ ವಿದ್ವಾಂಸಮಾಡಿಸಿದಿರಿ. ಇದ ರಿಂದ ನಮಗೆ ಕಲಂಕವುಂಟಾಯಿತು. ನಮ್ಮ ವಿನಂತಿಯನೆಲ್ಲ ಸಾಬರವರು ಅಲ್ಲ ಗಳೆದುಬಿಡುವಿರಿ! ಹಿಂದುಧರ್ಮವ ಮುಣಗಿಸಬೇಕೆಂದು ನಮ್ಮ ಮನಸ್ಸಿನಲ್ಲಿರುವದಿಲ್ಲ. ರಾಜ್ಯದಲ್ಲಿ ಸ್ವಾಸ್ಥ್ಯವುಂಟಾಗಬೇಕೆಂದು ನಮ್ಮ ಮನಸ್ಸಿನಲ್ಲಿರುತ್ತದೆ . ಯಮು ನೆಯ ಉದಕವನ್ನು ಹಿಡಿದು ನಾವೂ, ನೀವೂ ಮಿತ್ರತ್ವದ ಶಪಥವಹಿಸಿದ್ದರ ಪರಿಣಾಮವು ಇದೇಯೋ! ಈಗಾದರೂ ನಮ್ಮ ಮಾತು ಕೇಳುವಹಾಗಿದ್ದರೆ , ಛತ್ತಿನ ತಗಡನ್ನು ಪುನಃ ಮೊದಲಿನಂತೆ ಕೂಡಿಸಿರಿ. ಅದರಿಂದ ನಿಮಗೆ ನಿಶ್ಚಯವಾಗಿ ಜಯಪ್ರಾಪ್ತಿಯಾಗು ವದು. ಸಾಹೇಬ, ನನ್ನ ಮತ್ತೊಂದು ವಿನಂತಿಯೇನಂದರೆ, ಗಾಜುದ್ದಿನನ ವಜೀರಿಯ ಪದವಿಯನ್ನು ಪುನಃ ಗಾಜುದ್ದೀನನಿಗೆ ಕೊಡಬೇಕು. ಈ ಸಂಬಂಧದಿಂದ ಸಿಂದೆ-ಹೋಳ ಕರರು, ಹಾಗು ನಾನು ಪ್ರಮಾಣದಬದ್ದ ರಾಗಿರುವೆವು. ಮುಂದೆ ನಮ್ಮ ಸಣ-ಪುಟ್ಟ ವಿನಂ ತಿಗಳನ್ನು ಮನ್ನಿಸುತ್ತಹೋದರೆ, ನಾವು ಸರ್ವಾಂಶದಿಂದ ನಿಮ್ಮವರೇ ಇರುವೆವು. ನಿಮಗೆ ಹತ್ತುವಷ್ಟು ಕಾಳು-ಕಡಿ ಮೊದಲಾದ ಸಾಹಿತ್ಯಗಳನ್ನು ಒದಗಿಸುವೆವು, ನೀವು ದಿಲ್ಲಿಯನ್ನು ಬಿಟ್ಟು ಮುಂದಕ್ಕೆ ಹೋಗಬೇಡಿರಿ. ಇಲ್ಲಿಯೇ ಇದ್ದು ಎಲ್ಲ ಕಾರಭಾ ರವನ್ನೂ, ಮಸಲತ್ತುಗಳನ್ನೂ ನಡಿಸಿ ನಮಗೆ ಅಪ್ಪಣೆ ಕೊಡುತ್ತಹೋಗಿರಿ. ಕದಾ ಚಿತ್, ಕುಂಜಪರದವರ ಪರಿಪತ್ಯ ಮಾಡುವದು ನಿಮ್ಮ ಮನಸ್ಸಿನಲ್ಲಿದ್ದರೆ, ಇಲ್ಲಿಯೇ ಇದು ಹಲವು ಪ್ರಕಾರದಿಂದ ಮಾಡಿರಿ; ಆದರೆ ನೀವು ವೈರಿಗಳ ಅಳವಿನಲ್ಲಿ ಸಿಗಬೇಡಿರಿ. ಎಂದು ಉತ್ತಮಪ್ರಕಾರದ ಆಲೋಚನೆಯನ್ನು ಹೇಳಿದನು; ಆದರೆ ಗರ್ವಿಷ್ಠನಾದ ಭಾವುಸಾಹೇಬನು ಅವಿಚಾರದಿಂದ ಸರಳಹೃದಯದ ಚಾಟನಿಗೆ ಪ್ರತ್ಯುತ್ತರವಾಗಿ“ನಾವು ನಿಮ್ಮ ಬಲವನ್ನು ನಂಬಿ ದಕ್ಷಿಣವನ್ನು ಬಿಟ್ಟು ಬಂದಿರುವದಿಲ್ಲ. ನಮ್ಮ ಮನ ಸ್ಸಿಗೆ ಬಂದಂತೆ ನಾವು ಮಾಡುವೆವು. ಅದನ್ನು ನೋಡುವದು ನಿಮ್ಮಿಂದಾದರೆ ಇಲ್ಲಿ ಇರಬೇಕು, ಆಗದಿದ್ದರೆ ನಿಮ್ಮ ಸ್ನಾನಕ್ಕೆ ನೀವು ಹೊರಟುಹೋಗಬೇಕು. ಅಬದಾಲಿಯ ಪಾರಿಪತ್ಯವಾದಬಳಿಕ ನಾವೂ, ನೀವೂ ನೋಡಿಕೊಳ್ಳೋಣವಂತೆ!” ಎಂದನು. ಪ್ರಿಯ ವಾಚಕರೇ, ಬುದ್ಧಿ ಹೇಳುವವರಕಡ ಗುದ್ದಾಡುವ ಈ ರೀತಿಯನ್ನು ನೋಡಿದಿರಾ? ಎಂಥ ಅವಿಚಾರವಿದು ! ಭಾವುವಿಗಾದರೂ ಏಕೆ ಅನ್ನಬೇಕು ? ಭವಿತ್ಯನವನ್ನು ತಪ್ಪಿಸು ವದು ಬಹ್ಮಾದಿಗಳಿಂದಲೂ ಆಗದು!_<noinclude></noinclude> oib9bra8bszza90w2fln6qb594ax9gz ಪುಟ:ಕುರುಕ್ಷೇತ್ರ ಗ್ರಂಥ.djvu/೫೦ 104 72374 322241 320034 2026-05-24T15:11:26Z Pragathi. BH 7585 /* Validated */ 322241 proofread-page text/x-wiki <noinclude><pagequality level="4" user="Pragathi. BH" /> {{rh|left=|center=ಅಂತಃಕಲತ.|right=೪೩}}</noinclude> ತಕ್ಕದ್ದು. ನಿಮ್ಮಲ್ಲಿಯ ಅಂತಃಕಲಹವನ್ನು ಮೇಲಾಟದಿಂದ ಶತ್ರುಗಳ ಹಣಿಯುವದರಲ್ಲಿ ಉಪಯೋಗಿಸಿಕೊಳ್ಳುವದು ನನಗೆ ನೆಟ್ಟಗೆ ಕಾಣುತ್ತದೆ. ಈಶ್ವರೇಚ್ಛೆಯಿದ್ದಂತಾಗುವದು; ಆದರೆ ಹೀಗೆ ಒಂದೇ ಸ್ಥಳದಲ್ಲಿ ಕೊಳೆಯುತ್ತ ಬಿದ್ದುಕೊಳ್ಳುವದು ನನ್ನ ಮನಸ್ಸಿಗೆ ಸರ್ವಥಾ ಬರುವುದಿಲ್ಲ. 'ಒಂದು ಕಡತ ಎರಡು ತುಂಡು' ಎನ್ನುವ ಹಾಗೆ ಈಗ ಮಾಡಬೇಕು. ಈ ಯುದ್ಧದ ಸಂಬಂಧದಿಂದ ಎರಡರಲ್ಲಿ ಒಂದರ ನಿರ್ಣಯವು ಬೇಗನೆ ಆಗುವುದು ನನಗೆ ನೆಟ್ಟಗೆ ಕಾಣುತ್ತದೆ,” ಎಂದು ನುಡಿಯಲು, ಮಹದಾಜಿ ಸಿಂದೆಯು ಎದ್ದು ನಿಂತು ಆವೇಶದಿಂದ—"ವೀರರೇ, ನಿಮ್ಮ ಬಾಹುಗಳಿಗೆ ಯುದ್ಧ ಮಾಡುವ ತಿಂಡೆ ಯಿಟ್ಟಿದ್ದರೆ, ಅದನ್ನು ಶತ್ರುಗಳೊಡನೆ ಕಾದಿ ಕಳೆದುಕೊಳ್ಳಿರಿ. ಹೀಗೆ ನಮ್ಮ ನಮ್ಮೊಳಗೆ ಕಾದಾಡುವದರಲ್ಲಿ ಪೌರುಷವೇನು? ಈಗ ನಾನು ಎಲ್ಲರನ್ನು ಪ್ರಾರ್ಥಿಸುವೆನೇನಂದರೆ, ನೀವು ಶಿವಛತ್ರಪತಿಯ ಅನುಯಾಯಿಗಳಾಗಿದ್ದರೆ, ಸ್ವರಾಜ್ಯದ ಅಭಿಮಾನವು ನಿಮಗಿದ್ದರೆ, ನೀವು ವೀರಜನನಿಯರ ಪುತ್ರರೂ— ವೀರಪತ್ನಿಯರ ಪತಿಗಳೂ-ವೀರಕುಮಾರರ ತಂದೆಗಳೂ ಆಗಿದ್ದರೆ ಮೇಹೇಂದಳೆಯವರ ಅಭಿಪ್ರಾಯದಂತೆ ಸರಕ್ಕನೆ ಶಸ್ತ್ರಗಳನ್ನು, ಒರೆಗಳಿಂದ ಹಿರಿದು ಶತ್ತುಗಳ ಮೇಲೆ ದುಮುಕಲಿಕ್ಕೆ ತಟ್ಟನೆ ಸಿದ್ಧರಾಗಿರಿ. ಸದ್ದು ಹೊಡೆದು ದುರಾಣಿಕರನನ್ನು ಬರಮಾಡಿಕೊಂಡು ಮರಾಟರ ಕೈಯನ್ನು ಆತನಿಗೆ ಚೆನ್ನಾಗಿ ತೋರಿಸಿ, ಈ ಮಹದಾಜಿಯ ಕುದುರೆಯು ಹೊರಗೆ ಚೇನು ಹಾಕಿ ಸಿದ್ದವಾಗಿ ನಿಂತಿರುವದು, ಚೇನು ಇಳಿಸದೆ ಹಾಗೆಯೇ ಆತನು ಸ್ವಾಮಿಕಾರ್ಯಕ್ಕಾಗಿ ರಣಕ್ಕೆ ಹೊರಡಲು ಸಿದ್ಧನಾಗಿರುವನೆಂಬುದನ್ನು ಚೆನ್ನಾಗಿ ನೆನಪಿನಲ್ಲಿಡಿರಿ,” ಎಂದು ನುಡಿದು, ಆತನು ತನ್ನ ಖಡ್ಗವನ್ನು ಹಿರಿದು-“ಜಯಜಗದಂಬೆ, ಜಯತುಳಜಾ ಭವಾನಿ” ಎಂದು ಗರ್ಜಿಸಿದನು.<br /> {{gap}}ಹೀಗೆ ಸಿಂದೆಯು ತನ್ನ ಮನೆತನಕ್ಕೆ ಒಪ್ಪುವಂತೆ ಆಡಿದ ವೀರಾಲಾವಗಳನ್ನು ಕೇಳಿ ಧರ್ಬಾರದ ಸರದಾರರೂ ಆವೇಶಗೊಂಡು ತಮ್ಮ ಖಡ್ಗಗಳನ್ನು ಒರೆಯಿಂದ ಒರಿದರು. ಆಗ ಮಾರಾವಳಕರನು ಎದ್ದು ನಿಂತು ಖಡ್ಗವೆತ್ತಿ— "ಶಾಬಾಸ, ಮಹದಾಜೀ, ಶಾಬಾಸ! ನಿಮ್ಮ ಮಾತುಗಳು ನಿಮ್ಮ ಶೌರ್ಯಕ್ಕೆ ಒಪ್ಪುವಹಾಗಿವೆ. ಮೇಹೇಂದಳೆಯವರ ವಿಚಾರವು ನನಗೆ ಸಮ್ಮತವದೆ. ಇಂದೇ ಮಾಣಿಶಹನಮೇಲೆ ದಂಡೆತ್ತಿ ಹೋಗಲಿಕ್ಕೆ ನಾನು ಸಿದ್ಧನಿರುತ್ತೇನೆ. ನಮಗೆ ನಾಶಪ್ರಸಂಗವು ಒದಗಿರುವದೆಂಬದೇನೊ ನಿಜ; ಆದರೆ ಆ ಪ್ರಸಂಗಕ್ಕೆ ನನ್ನ ಚಂಡನ್ನು ಮೊದಲು ಮುಂದೆಮಾಡುವೆನು. ನಾನೂ, ಯಶವಂತರಾವಸವಾರನೂ ಕೂಡಿ ಸೈನಮೊಡನೆ ಇಂದು ರಾತ್ರಿ ದುರಾಣಿಯ ಮೇಲೆ ಸಾಗಿಹೋಗುವೆವು. ಸಮಶೇರಬಹದ್ದರನೂ, ವಿಠ್ಠಲರಾವ ವಿಂಚೂರಕರನೂ ನಮ್ಮ ದಂಡಿನಿಂದ ಒಂದು ಕೂಗಳತೆಯ ಅಂತರದಲ್ಲಿದ್ದು, ನಮ್ಮ ಸೈನ್ಯದ ಹಿಂಭಾಗವನ್ನು ರಕ್ಷಿಸುತ್ತಿರಲಿ. ಜನಕೋಜೆಸಿಂದೆ, ಮಹದಾಜಿಸಿಂದೆ ಇವರು ತಮ್ಮ ಸೈನ್ಯದೊಡನೆ ದುರಾ ಣಿಯ ಛಾವಣಿಯ ಸಂರಕ್ಷಕ ಸೈನ್ಯದ ಮೇಲೆ ಅಕಸ್ಮಾತಾಗಿ ಬಿದ್ದು ಅದನ್ನು ತುಂಡರಿ ಸಲಿ, ಇಬ್ರಾಹಿಮಖಾನರು ನಮ್ಮ ಛಾವಣಿಯನ್ನು ರಕ್ಷಿಸಲಿ. ನಾನು ಹುರಾಣಿಯ<noinclude></noinclude> dxuah62efo4fllk03latifdsss0x3ke ಪುಟ:ಕುರುಕ್ಷೇತ್ರ ಗ್ರಂಥ.djvu/೫೪ 104 72378 322242 317944 2026-05-24T15:11:56Z Pragathi. BH 7585 /* Validated */ 322242 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಕುರುಬನ ಕರಾಮತಿ|left=|right=೪೭}} . ದಲ್ಲಿ ತೊಡಗಿದ್ದರಿಂದ ಅವನ ಗಸಿಯು ಬಂದುಬಿದ್ದು, ಹೋಳಕರನು ಶಾನ ಛಾವಣಿ ಯಮೆಲೆ ಸಪ್ಪಳಿಲ್ಲದೆ ನಿರ್ಬಾಧವಾಗಿ ಸಾಗಿಹೋಗಲಿಕ್ಕೆ ಅನುಕೂಲವಾಯಿತು. ಆತಾ ಯಿಖಾನನು ಯುದ್ಧದಲ್ಲಿ ತೊಡಗಿದ ಸುದ್ದಿಯನ್ನು, ಆ ಬಾನನ ಜನರು ಶಹನಿಗೆ ತಿಳ ಸಿದರು; ಆದರೆ ಶಹಾನು ಅದಕ್ಕೆ ಅಷ್ಟು ಮಹತ್ವ ಕೊಡಲಿಲ್ಲ. ಈಮೊದಲೆಅತಾಯಿಖಾನನು ಅಕಸ್ಮಾತ್ತಾಗಿ ಗೋವಿಂದಪಂತಬುಂದಲೆಯನ್ನು ಕೊಂದ ಸಿಟ್ಟಿನಿಂದ ಮರಾಟರು ಅವನ ಸೇಡು ತೀರಿಸಿಕೊಳ್ಳಲಿಕ್ಕೆ ಬಂದಿರಬಹುದೆಂದು ಆತನು ತಿಳಿದು, ಖಾನನ ಸಹಾಯಕ್ಕೆ ತನ್ನ ವಾಸಸೈನ್ಯವನ್ನೂ, ಸುಜಾಲದೌಲನ ಮೊಗಲರಾವುತರನ್ನೂ ಕಳಿಸಿ, ತನ್ನ ಬಳಿಯಲ್ಲಿ ಅಫಗಾಣಕಾಲಾಳನ್ನೂ, ಹಾಫೀಜರಹಮಂತಖಾನನ ರೊಹಿಲೆಜನರನ್ನೂ ಇಟ್ಟುಕೊಂಡನು. ಇದಕ್ಕಾ ಹೆಚ್ಚಿನ ವ್ಯವಸ್ಬಿಯನ್ನೇನು ಮಾಡುವ ಕಾರಣವಿಲ್ಲೆಂದು ಶಹಾನು ತಿಳಿದು ಸ್ವಸ್ಥವಾಗಿದ್ದನು. ಆತನ ಈ ತಪ್ಪು ತಿಳುವಳಿಕೆಯ ಲಾಭವು ಮಲ್ಲಾ ರರಾಯನಿಗಾಯಿತು. ಆ ರಣವೀರನು ನಿರ್ವಾಧವಾಗಿ ಮುಂದಕ್ಕೆ ಸಾಗಿ ದನು, ಉತ್ತರಹಿಂದುಸ್ಥಾನದಲ್ಲಿ ಚಳಿಗಾಲದೊಳಗೆ ಮಂಜು ಬಹು ದಟ್ಟವಾಗಿ ಬೀಳುತ್ತದೆ. ಅದರಂತೆ ಈಗ ಮಂಜು ಬಿದ್ದದರಿಂದ, ದಾಣಿಗಳಿಗೆ ಜೋಳಕರನ ಜನರು ಬರುವದು ಕಾಣಲಿಲ್ಲ. {{gap}}ಶಹಾನು ಜಾತ್ಯಾ ಒಳ್ಳೇ ಜಾಣನು, ಧೂರ್ತನು; ಆದರೆ ಯುದ್ಧ ಮಾಡಿ ನರೆ ಹಾಯ್ದಿದ್ದ ಮಲ್ಲಾರರಾಯನು ಯುಕ್ತಿಯಿಂದ ಆತನನ್ನು ಚನ್ನಾಗಿ ಮೋಸಗೊಳಿಸಿ ದನು. ಒಂದು ದಿನ್ನೆಯಮೇಲೆ ಶಹಾನ ಕೆಂಪು ಡೇರೆಯನ್ನು ಹೊಡೆದಿದ್ದರು. ಅದರ ಸುತ್ತು ತುಬಾಕಿಯವರ ಜಾಗರೂಕವಾದ ಕಾವಲು ಇತ್ತು. ಮಲ್ಲಾರರಾಯನ ಜನರು ತೀರಹತ್ತರ ಹೊಗಲು, ಆ ಕಾವಲುಗಾರರಿಗೆ ಅವರ ಸುಳವು ಹತ್ತಿ, ಕಡಲೆ ಅವರು ತುಬಾಕಿಗಳನ್ನು ಹಾರಿಸಿದರು. ಅದಕ್ಕೆ ಮರಾಟರಿಂದಲೂ ಪ್ರತ್ಯುತ್ತರವು ದೊರೆಯಿತು. ಮರಾಟರು “ಹರ ಹರ ಮಹಾದೇವ” ಎಂದು ಗರ್ಜಿಸುತ್ತ ಕೈಗೆ ಸಿಕ್ಕವರನ್ನು ತುಂಡರಿಸುತ್ತ ಮುಂದಕ್ಕೆ ಸಾಗಿದರು. ಅವರ ಸೈನ್ಯದೊಂದು ಗುಂಪು ಶಹಾನ ಛಾವಣಿಯ ದ್ವಾರದೊಳಗಿಂದ ಸಾಗಿಹೊಗಿ ಡೇರೆಯ ಮುಂದಿನ ಓಣಿಯನ್ನು ಸೇರಿತು. ಮತ್ತೊಂದು ಗುಂಪು ಬೇರೊಂದು ನಿಟ್ಟಿನಿಂದ ಡೇರೆಯಿದ್ದ ದಿನ್ನೆಯನ್ನು ಏರಿ ಹೋಗಹತ್ತಿತು. ಹೀಗೆ ಸೂರ್ಯೋದಯವಾಗುತ್ತಿರಲು, ಮಲ್ಲಾರರಾಯನು ತನ್ನ ಪ್ರತಿಜ್ಞೆಯಂತೆ ದುರಾಣಿಯ ಶಹನ ಡೇರೆಗೆ ಮುತ್ತಿಗೆ ಹಾಕಿದನು. ಈ ಪ್ರಸಂಗ ದಲ್ಲಿ ದುರಾಣಿ ಅಹಮ್ಮದಶಹನು ತನ್ನ ಡೇರೆಯಲ್ಲಿ ಇದ್ದರೆ, ಹೋಳಕರನ ಪ್ರತಿಜ್ಞೆಯು ಪೂರ್ಣವಾಗಿ, ಶಹಾನು ಹೋಳಕರನ ಸೆರೆಯಾಳಾಗಬಹುದಾಗಿತ್ತು; ಆದರೆ ಗುರಿಯ ಸ್ವಲ್ಪದರಲ್ಲಿ ತಪ್ಪಿದಂತಾಯಿತು! ಅಂದು ಶಹಾನು ಸುದೈವದಿಂದ ಬೇರೆ ಡೇರೆಯಲ್ಲಿ ಮಲಗಿಕೊಂಡದ್ದರಿಂದ ಪಾರಾದನು. ದೇವರು ಕಾಯುವಾಗ ಯಾರು ಏನು ಮಾಡು ವರು? ಹೀಗೆ ಹೋಳಕರನು ಡೇರೆಯನ್ನು ಮುತ್ತಿದಾಗ, ಅತ್ತ ಸಮಶೇರಬತಾ ದರ, ವಿಚಾರಕರ ಇವರು ದುರಾಣಿಯ ಛಾವಣಿಯೊಳಗಿನ ಜನರನ್ನು ತುಂಡರಿಸ<noinclude></noinclude> 438ll5qrp8gr21tcwnmf093s50zflxx ಪುಟ:ಕುರುಕ್ಷೇತ್ರ ಗ್ರಂಥ.djvu/೫೫ 104 72379 322243 317945 2026-05-24T15:12:12Z Pragathi. BH 7585 /* Validated */ 322243 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=ಕುರುಕ್ಷೇತ್ರ !|left=೪೮|right=}} ಹತ್ತಿದರು; ಅ ಮಹದಾಜಿ ಸಿಂದೆಯು ಅತಾಯಿಖಾನನ ಮೈಯನು ಚನ್ನಾಗಿ ನುಗು ಮಾಡಿದ್ದನು. ಹೀಗೆ ಮರಾಟರು ಎಲ್ಲ ಕಡೆಯಿಂದಲೂ ಸಿರಿಬಂದು ಅನರ್ಥ ಮಾಡತೊಡಗಿರುವದನ್ನು ನೋಡಿ ಶಹಾನು ದುಗು ಬಡಿದನು. ಅಂಥ ಅಲೌಕಿಕ ಬುದ್ದಿಶಾಲಿಯ, ಹಾಗು ಕೈ ಕೂತ ರಣಸಿರನ ಬುದ್ಧಿಯೂ, ಆಗ ಮಸಣಿ ಸಿ ಹೋಯಿತು! ತಾನು ಏಳುವದರೊಳಗೆ ಮರಾಟರು ತನ್ನ ಸೀರೆಯ ಮುತ್ತಿದರಲ್ಲ, ಎಂದು ಆತನು ಆಶ್ಚರ್ಯದಿಂದ ಬೆರಳು ಕಚ್ಚಿದನು. ತಾನು ನಿನ್ನೆ ತನ್ನ ಡೇರೆಯಲ್ಲಿ ಮಲಗದೆ ಇದ್ದದ್ದೊಂದು ಅಲ್ಲಾನ ಕೃಪೆಯೆಂದು ಆತನ ತಿಳಿದನು. {{gap}}ಈ ಪ್ರಸಂಗದಲ್ಲಿ ಮರಾಟರು ಪ್ರಕಟಿಸಿದ ಪರಾಕ್ರಮವು ಆರ್ಯಕರವಾ ಗಿತ್ತು. ಅವರ ಆವೇಶದ ಹೊಡೆತಕ್ಕೆ ದುರಾಣಿಯ ಪಾಳಯವು ತತ್ತರಿಸಿತು; ದುರಾ ಣಿಯು ದುಗುಬಡಿದನು. ಏನುಮಾಡಬೇಕೆಂಬದು ಆತನಿಗೆ ತೋಚದಾಯಿತು. (ಮಲಾರ ಆಯಾ! ಮುಲ್ಯಾರಆಯಾ” ಎಂಬ ಭಯಸೂಚಕ ಧನಿಯು ಛಾವಣಿಯ ತುಂಬ ಹಬ್ಬಿತು. ಪೆಂಡಾರಿಗಳು ತಮ್ಮ ಲೂಟಿಯ ಕಾಯಕವನ್ನು ಬಿಡಿಸಿದರು. ಲೂಟ ಯೊಡನೆ ಜನಸಂಹಾರದ ಕಾರ್ಯವನ್ನೂ ಸಾಗಿಸಿದರು. ಆಗ ಅಬ್ ಕಾ ಕನಾ! ಅರೆ ಅಲ್ಲಾ! ಬಡಾಗಹಜಬಹುವಾ! ತೋಬಾ! ತೋಬಾ!” ಎಂಬ ಧ್ವನಿಯಿಂದ ದಿಕ್ಕು ಗಳು ತುಂಬಿದವು. ಕೆಲವು ಹೊತ್ತಿನಮೇಲೆ ಬರ್ಚಿಯ ಯುದವು ನಿಂತು ಖದ್ಯದ ಯುದ್ಧಕ್ಕೆ ಆರಂಭವಾಯಿತು. ಆ ಘೋರವಾದ ಕಾದಾಟದಲ್ಲಿ ಹೋಳಕರ-ಗಾಯಕ ವಾಡ-ವಿಂಚೂರಕರರವರ ಹಲವುಜನ ವೀರರು ರಣಭೂಮಿಯಲ್ಲಿ ಬಿದ್ದರು. ಆಮೇಲೆ ಆ ಮೂವರು ವೀರರೂ ಸೈನ್ಯದೊಡನೆ ಜಲಪ್ರವಾಹದಂತೆ ದುರಾಣಿಯ ಸೈನ್ಯದಮೇಲೆ ಹರಿದುಹೋದರು, ಉಭಯದಳದ ವೀರರ ಖಡ್ಗಳ ಹೊಡತದ “ಸಪ್ ಸಸ್” ಎಂಬ ಸಪ್ಪಳವು ಎಲ್ಲ ಕಡೆಯಲ್ಲಿ ಕೇಳಹತ್ತಿತು. ರಣಕೊಂಬು, ರಣಭೇರಿ ಮೊದಲಾದ ಹಣ ವಾದ್ಯಗಳು ಭೋರ್ಗರೆಯಹತ್ತಿದವು. ಮರಾಟರ ಆ ಮೂವರು ವೀರರಿಗೂ ರಣಮದ ವೇರಿ, ಅವರು ಎದುರಾದವರನ್ನು ತುಂಡರಿಸುತ್ತ ಸಾಗಿದರು. ಸ್ವತ: ಮಲ್ಯಾರರಾ ಯನು ಎಲ್ಲರಿಗಿಂತ ಮುಂದೆ ಹೋಗಿ ಶಹನ ಡೇರೆಯ ಮುಂದಿನ ಹಸಿರು ನಿಶಾನೆಯನ್ನು ಹೊಡೆದು ಕೆಡವಿ, ಅದರ ಸ್ಥಳದಲ್ಲಿ ತನ್ನ ಟೊಂಕಕ್ಕೆ ಸುತ್ತಿದ್ದ ಕಂದಿಯಬಣ್ಣದ ಸೆಲ್ಲೆಯ ನಿಶಾನವಾಡಿ ನಿಲ್ಲಿಸಿದನು! ಈ ನಿಶಾನೆಯನ್ನು ನೋಡಿದಕೂಡಲೆ ಮರಾಟಾ ವೀರರು “ಹರಹರ ಮಹಾದೇವ” ಎಂದು ಗರ್ಜಿಸಿ ಒತ್ತರದಿಂದ ಮುಂದಕ್ಕೆ ಸಾಗಿ ಹೋದರು. ಆಗ ಸುಜೆಉದ್ರಲನು ಬಾದಶಹನ ಬಳಿಯಲ್ಲಿ ಕುಳಿತಿದ್ದನು. ಆತನನ್ನು ಕುರಿತು ಬಾದಶಹನು(ಮರಾಠಾಸರದಾರರು ಭಯಂಕರ ಸಾಹಸಮಾಡಿದರು! ಮರಾ ಟಿರು ಹೆಸರಾದ ವೀರರಿರುವರು. ಇಂಥ ಪರಾಕ್ರಮಿಗಳಿರುವರೆಂಬದು ನನಗೆ ಗೊತ್ತಿ ದಿಲ್ಲ. ಇವರೊಡನೆ ಒಡಂಬಡಿಕೆ ಮಾಡಿಕೊಳ್ಳುವದು ನೆಟ್ಟಗೆ! ಹಾಗೆ ಮಾಡುವದರಲ್ಲಿಯೇ ಜಾಣತನವಿರುತ್ತದೆ. ಅನ್ನದ ದುಷ್ಮಾಳಬಿದ್ದಿದ್ದರೂ, ಈ ಸೈತಾನರು ಯಥಾಸ್ಥಿತ ವಾಗಿ ತಮ್ಮ ರಣಕಾರ್ಯವನ್ನು ಸಾಗಿಸುತ್ತಿರುವರಲ್ಲ! ಶಾಬಾಸ! ಇವರ ಬಲವು ಅಧಿಕ<noinclude></noinclude> 2wflt2za4xh70rtwtgz4xfahszq243o ಪುಟ:ನನ್ನ ನಲ್ಲ.pdf/೧೯ 104 75416 322150 318174 2026-05-24T13:32:52Z Pragathi. BH 7585 322150 proofread-page text/x-wiki <noinclude><pagequality level="3" user="Pragathi. BH" /></noinclude>{{Right|xix}} {{center|ಕೃತಜ್ಞತೆ}} {{gap}}ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯವರು ೧೯೭೩- ೭೪ರ ಶೈಕ್ಷಣಿಕ ವರ್ಷದಲ್ಲಿ ತಮ್ಮ ವಿಶ್ವವಿದ್ಯಾಲಯದ ಬಿ.ಎ.-೧ರ ಕನ್ನಡ ಮುಖ್ಯ ವಿಷಯಕ್ಕೆ ಈ ಪುಸ್ತಕವನ್ನು ಪಠ್ಯಪುಸ್ತಕವನ್ನಾಗಿ ಆಯ್ದುಕೊಂಡುದಕ್ಕೆ ಅವರಿಗೆ ನಮ್ಮ ಕೃತಜ್ಞತೆಗಳು.<br /> {{gap}}ಹಲಸಂಗಿ 20-02-೧೯೭೩ {{Right|ಸಂಚಾಲಕ}} {{Right|ಚೆನ್ನಬಸವ ಪ್ರಕಾಶನ, ಹಲಸಂಗಿ}}<noinclude></noinclude> 7jnok6qhcgfspzsex9dzzraujsvzbbv ಪುಟ:ನನ್ನ ನಲ್ಲ.pdf/೨೧ 104 75418 322151 319999 2026-05-24T13:34:46Z Pragathi. BH 7585 /* Proofread */ 322151 proofread-page text/x-wiki <noinclude><pagequality level="3" user="Pragathi. BH" /></noinclude>೧೭.ಸುಖ-ದುಃಖ ೧೮. ರೋಹಿಣಿ ೧೯. ಸಿಡಿಲು xxi とみ 20 ೨೦. ಅಣ್ಣಯ್ಯನಿಗೆ ೨೧. ಮಂಗಲಸಪ್ತಕಂ ೨೨. ದೀನಬಂಧು-ಆಂಡ್ರೂಜ ೨. ಧನ್ಯಸೀತೆ ೨೪. ಮುರಲೀಧರಂ ೨೫. ಮಹಾಕೃಪೆ وح 22 28 ೭೬ 22 20 ೨೬. ಅಭೀಪ್ಪಾ 2F ೨೭. ಪ್ರೇಮ ೮೨ ೨೮. ಓ-ಮ್ ೨೯. ಮಾತಾಯಿ ೩೦. ಜೀವನ FO ೩೧. ಅಸಮಾಧಾನ ೩೨. ಪಾತ್ರತೆ ೩೩. ಕರ್ಮ ಪಥ ೩೪, ಅಭೇದ ೩೫. ಕ್ಷಮಾಯಾಚನೆ €2 600 ೧೦೪ ೧೦೫ ೩೬. ಅರ್ಪಣ ೩೭. ಸಂಧ್ಯಾ ೧೦೬ ೩೮. ಅನಾದ್ಯನಂತ ೧೦೭ ೩೯. ಕಾವ್ಯಕರ್ಮ ೧೦೮ ೪೦. ಯಾಮಿನೀ ೧೦೯ ೧೧೦ ೪೧. ಜೀವನಸೋಪಾನ ೪೨. ಗದ್ದರಣೆ ೪೩. ಮಾವಿನಗೊಲ್ಲೆ ಅಲ್ಲ. ಸುಖಜೀವನ ೪೫. ದಿವಸ್ಪತಿ ೪೬ ರಮ್ಯಸೃಷ್ಟಿ ೪೭. ಉಷಾದೇವಿ 600 ೧೧೫ ೧೧೬<noinclude></noinclude> hqgpzy3zigv0mkj9a343ffw2m2mci06 ಪುಟ:Kannada-Saahitya.pdf/೫೨ 104 76714 322441 273371 2026-05-25T09:29:28Z Pragathi. BH 7585 /* Validated */ 322441 proofread-page text/x-wiki <noinclude><pagequality level="4" user="Pragathi. BH" />{{rh|center=ಕನ್ನಡ ಸಾಹಿತ್ಯ ಚಿತ್ರಗಳು|left=೪೨|right=}}</noinclude> ರಾದ ಹೆಂಡಿರು ಮಕ್ಕಳಲ್ಲೂ ಧನಸಮೂಹದಲ್ಲೂ ಆಸೆ ತೊರೆದು ಕಾಳಗಕ್ಕೆ ಬರಲಿ, ಯಾರು ಹೆಚ್ಚು ಎನ್ನುವುದನ್ನು ನೀನು ಕಾಣುತ್ತೀಯೆ.”</br> {{gap}}ಹೀಗೆ ದರ್ಫೋಕ್ತಿಗಳನ್ನಾಡಿ ಚಕ್ರವರ್ತಿಯ ದೂತನನ್ನು ಉಚಿತ ರೀತಿಯಲ್ಲಿ ಸತ್ಕರಿಸಿ ಹಿಂದಕ್ಕೆ ಕಳಿಸಿದನು.</br> {{center|ಯುದ್ಧ ಸನ್ನಾಹ}} {{gap}}ಆ ದೂತನು ಸಾಕೇತಪುರವನ್ನು ಸೇರಿ ಆಸ್ಥಾನದಲ್ಲಿದ್ದ ಚಕ್ರವರ್ತಿಯನ್ನು ಕಂಡು ನಮಸ್ಕರಿಸಿ ನಡೆದದ್ದನ್ನೆಲ್ಲ ವಿವರಿಸಿದನು. “ ರಾಜಾಧಿರಾಜಾ, ಪಟ್ಟಂಡ ಭೂಮಂಡಲವೂ ನಿನ್ನಡಿಗೆರಗಿದ್ದು ಸಾಲದೆ ? ಮಿತಿಮೀರಿದ ಈ ಹಮ್ಮೆಗಾರನಿಂದೇನೆಂದು ಕಡೆಗಣಿಸಿ ಸುಮ್ಮನಿದ್ದು ಬಿಡುವುದು ಉಚಿತ. ಹಾಗೆ ಮಾಡಿದರೆ ಮರ್ಯಾದೆಯನ್ನು ಕಾದ ನಿಮ್ಮ ದೊಡ್ಡತನ ಲೋಕದಲ್ಲೆಲ್ಲ ಹರಡುವುದು. ನೀವು ಕೋಪಗೊಂಡರೆ ನಿಮ್ಮ ತಮ್ಮ ನಿನಗೆರಗುವುದಿಲ್ಲ. ಇದು ನಿಜ. ಎಂದು ನುಡಿದನು.</br> {{gap}}ಕೇಳಿ ಚಕ್ರವರ್ತಿ, “ ನಮ್ಮ ದಿಗ್ವಿಜಯ ತುದಿಮುಟ್ಟಿತು. ಈಗ ನಮ್ಮ ದಾಯಾದನು ನನ್ನೊಡನೆ ಕಾದಬೇಕೆಂದು ಉಬ್ಬಿ ನಿಂತಿದ್ದಾನೆ. ಕದನ ಬೇಡವೆಂದು ಬಿಡುವುದು ಕ್ರಮವಲ್ಲ. ಅವನ ಭುಜಬಲವನ್ನೂ ನೋಡೋಣ? ಎಂದು ಆಸ್ಥಾನದಿಂದ ಎದ್ದನು.</br> {{gap}}ಭರತ ಬಾಹುಬಲಿಗಳಿಬ್ಬರೂ ಸೇನೆಗಳನ್ನು ಸಿದ್ಧಮಾಡಿಕೊಂಡರು, ಚಕ್ರವರ್ತಿಯ ವಿಜಯ ಸೈನ್ಯ ರಾಜಧಾನಿಯಿಂದ ಪೌದನಪುರಕ್ಕೆ ಪ್ರಯಾಣ ಮಾಡಿತು, ಬಾಹುಬಲಿಯ ಪಡೆ ಅದನಡ್ಡಗಟ್ಟಿತು, ಅಣ್ಣ ತಮ್ಮಂದಿರಿಬ್ಬರೂ ಧನುರ್ಧಾರಿಗಳಾಗಿ ಎದುರು ಬದುರು ನಿಂತರು.</br> {{center|ಮಂತ್ರಿಗಳ ಸಂಧಾನ}} {{gap}}ಇನ್ನೇನು ಕದನ ಮೊದಲಾಗಬೇಕು ಎನ್ನುವಷ್ಟರಲ್ಲಿ ಎರಡು ಕಡೆಯ ಮುಖ್ಯ ಮಂತ್ರಿಗಳೂ, “ ಈ ಇಬ್ಬರರಸುಗಳೊ ಚರಮ ದೇಹಧಾರಿಗಳು, ಇವರು ಯುದ್ಧಕ್ಕೆ ತೊಡಗಿದರೆ ಸಕಲ ಸೈನ್ಯವೂ ನಾಶವಾಗುವುದು. ಜನ ಸಂಹಾರಕ್ಕೆ ಕಾರಣವಾಗುವ ಯುದ್ಧ ಬೇಡ, ಧರ್ಮ ಯುದ್ಧವೇ ನಡೆಯಲಿ"<noinclude><references/></noinclude> 44lff2s6ndhotxrsnq947f11h9dn6m3 ಪುಟ:Kannada-Saahitya.pdf/೫೩ 104 76715 322442 273375 2026-05-25T09:29:55Z Pragathi. BH 7585 /* Validated */ 322442 proofread-page text/x-wiki <noinclude><pagequality level="4" user="Pragathi. BH" />{{rh|center=ಭರತ-ಬಾಹುಬಳಿ|left=|right=೪೩}}</noinclude> ಎಂದುಕೊಂಡರು. ಹೀಗೆ ಆಲೋಚಿಸಿ ಇಬ್ಬರೂ ಮೊದಲು ಭರತ ಚಕ್ರವರ್ತಿಯ ಬಳಿ ಬಂದರು.</br> {{gap}}“ ದೇವಾ, ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಲ್ಲಿ ನೀವು ಜಯವನ್ನು ನಿರ್ಧರಿಸಿರಿ. ಜನ ವಿನಾಶಕ್ಕೆ ಕಾರಣವಾದ ಯುದ್ಧದಿಂದ ಪ್ರಯೋಜನವೇನು ? ಪಾಪ, ಅಪಯಶಸ್ಸು, ಅಷ್ಟೇ. ಅದನ್ನು ಬಿಡಿ, ಲೋಕದ ನಿಂದೆ ತಾಗದ ಹಾಗೆ ಧರ್ಮಯುದ್ದ ಮಾಡಿ ” ಎಂದು ಬೋಧಿಸಿದರು. ಚಕ್ರವರ್ತಿ ಅದಕ್ಕೆ ಒಪ್ಪಿಕೊಂಡನು.”</br> {{gap}}ಮಂತ್ರಿಗಳಿಬ್ಬರೂ ಬಾಹುಬಲಿಯ ಸಮೀಪಕ್ಕೆ ಹೋಗಿ ಮೊದಲಿನಂತೆಯೆ ಧರ್ಮಯುದ್ದದ ಏರ್ಪಾಟನ್ನು ಬಿನ್ನಯಿಸಿದರು. ಬಾಹುಬಲಿಗೆ ಅವರ ಮಾತು ರುಚಿಸಲಿಲ್ಲ. “ ನನ್ನ ಚತುರಂಗಬಲವನ್ನು ಯಾವನೆದುರಿಸುತ್ತಾನೆ ” ಎಂದು ನಿಮ್ಮರಸ ಗರ್ವಪಡುತ್ತಾನೆ. ಆ ಗರ್ವದ ಉನ್ನತಿಯನ್ನು ಮೊದಲು ಸ್ವಲ್ಪ ನೋಡುತ್ತೇನೆ. ಬಳಿಕ ಧರ್ಮಯುದ್ದವಾಗಲಿ” ಎಂದು ಕೋಪದಿಂದಲೇ ನುಡಿದು ವಿಷಣ್ಣನಾಗಿ ನಿಂತನು.</br> {{gap}}ಮಂತ್ರಿಗಳು, “ಈ ಕೆಟ್ಟ ಆಗ್ರಹ ಬೇಡ, ಬಿಟ್ಟು ಬಿಡು. ಯುವರಾಜಾ, ಪ್ರಸನ್ನಚಿತ್ತನಾಗಿ ಈ ಮಾತು ಕೇಳು. ಮನಸ್ಸು ಮಾಡಿ ಒಮ್ಮೆ ಈ ಮುದುಕರ ಮಾತನ್ನು ನಡೆಸಿಕೊಡು ” ಎಂದು ಹಿತನುಡಿದರು. ಕಡೆಗೂ ಬಾಹುಬಲಿಯನ್ನೊಡಂಬಡಿಸಿದರು.</br> {{center|ಧರ್ಮ ಯುದ್ದ }} {{gap}}ಎರಡು ಕಡೆಗಳಲ್ಲೂ ಆನಂದ ಭೇರಿಗಳು ಮೊಳಗಿದವು. * ಐನೂರು ಬಿಲ್ಲೆತ್ತರದ ಭರತನೂ ಐನೂರಿಪ್ಪತ್ತೈದು ಬಿಲ್ಲೆತ್ತರದ ಬಾಹುಬಲಿಯೂ ಮುಂದೆ ಬಂದರು, ಒಬ್ಬರನ್ನೊಬ್ಬರು ಎದುರಿಸಿ ನಿಂತು ನೀಲ ನಿಷಧ ಪರ್ವತಗಳು ಹೊರಬಂದುವೋ ಎಂಬಂತೆ ಕಾಣುತ್ತಿದ್ದರು. ಎರಡು ಕಡೆ ಯವರೂ ಮಧ್ಯಸ್ಥರಾಗಿ ನೋಡುತ್ತ ನಿಂತರು.</br> {{longdash}}</br> {{gap}}ಆ ಆದಿಕಾಲದಲ್ಲಿ ಜನರ ದೇಹಪ್ರಮಾಣ, ಆಯಸ್ಸು ಎಲ್ಲವೂ ಬಹಳ ಹೆಚ್ಚಾ ಗಿತ್ತೆಂದೂ, ಕ್ರನು ಕ್ರಮವಾಗಿ ಕೂಡ ಸುಯಾಗುತ್ತ ಬಂತೆಂದೂ ಪುರಾಣಗಳ ಹೇಳಿಕೆ. ಭರತ ಚಕ್ರವರ್ತಿಯ ದಿಗ್ವಿಜಯಕ್ಕೆ ಅರುವತ್ತು ಸಾವಿರ ವರ್ಷ ಹಿಡಿಯಿತಂತೆ,<noinclude><references/></noinclude> ct8stzvrmn3rcf4zmidinuowfrcp1ho 322443 322442 2026-05-25T09:30:19Z Pragathi. BH 7585 322443 proofread-page text/x-wiki <noinclude><pagequality level="4" user="Pragathi. BH" />{{rh|center=ಭರತ-ಬಾಹುಬಳಿ|left=|right=೪೩}}</noinclude> ಎಂದುಕೊಂಡರು. ಹೀಗೆ ಆಲೋಚಿಸಿ ಇಬ್ಬರೂ ಮೊದಲು ಭರತ ಚಕ್ರವರ್ತಿಯ ಬಳಿ ಬಂದರು.</br> {{gap}}“ ದೇವಾ, ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಲ್ಲಿ ನೀವು ಜಯವನ್ನು ನಿರ್ಧರಿಸಿರಿ. ಜನ ವಿನಾಶಕ್ಕೆ ಕಾರಣವಾದ ಯುದ್ಧದಿಂದ ಪ್ರಯೋಜನವೇನು ? ಪಾಪ, ಅಪಯಶಸ್ಸು, ಅಷ್ಟೇ. ಅದನ್ನು ಬಿಡಿ, ಲೋಕದ ನಿಂದೆ ತಾಗದ ಹಾಗೆ ಧರ್ಮಯುದ್ದ ಮಾಡಿ ” ಎಂದು ಬೋಧಿಸಿದರು. ಚಕ್ರವರ್ತಿ ಅದಕ್ಕೆ ಒಪ್ಪಿಕೊಂಡನು.”</br> {{gap}}ಮಂತ್ರಿಗಳಿಬ್ಬರೂ ಬಾಹುಬಲಿಯ ಸಮೀಪಕ್ಕೆ ಹೋಗಿ ಮೊದಲಿನಂತೆಯೆ ಧರ್ಮಯುದ್ದದ ಏರ್ಪಾಟನ್ನು ಬಿನ್ನಯಿಸಿದರು. ಬಾಹುಬಲಿಗೆ ಅವರ ಮಾತು ರುಚಿಸಲಿಲ್ಲ. “ ನನ್ನ ಚತುರಂಗಬಲವನ್ನು ಯಾವನೆದುರಿಸುತ್ತಾನೆ ” ಎಂದು ನಿಮ್ಮರಸ ಗರ್ವಪಡುತ್ತಾನೆ. ಆ ಗರ್ವದ ಉನ್ನತಿಯನ್ನು ಮೊದಲು ಸ್ವಲ್ಪ ನೋಡುತ್ತೇನೆ. ಬಳಿಕ ಧರ್ಮಯುದ್ದವಾಗಲಿ” ಎಂದು ಕೋಪದಿಂದಲೇ ನುಡಿದು ವಿಷಣ್ಣನಾಗಿ ನಿಂತನು.</br> {{gap}}ಮಂತ್ರಿಗಳು, “ಈ ಕೆಟ್ಟ ಆಗ್ರಹ ಬೇಡ, ಬಿಟ್ಟು ಬಿಡು. ಯುವರಾಜಾ, ಪ್ರಸನ್ನಚಿತ್ತನಾಗಿ ಈ ಮಾತು ಕೇಳು. ಮನಸ್ಸು ಮಾಡಿ ಒಮ್ಮೆ ಈ ಮುದುಕರ ಮಾತನ್ನು ನಡೆಸಿಕೊಡು ” ಎಂದು ಹಿತನುಡಿದರು. ಕಡೆಗೂ ಬಾಹುಬಲಿಯನ್ನೊಡಂಬಡಿಸಿದರು.</br> {{center|ಧರ್ಮ ಯುದ್ದ }} {{gap}}ಎರಡು ಕಡೆಗಳಲ್ಲೂ ಆನಂದ ಭೇರಿಗಳು ಮೊಳಗಿದವು. * ಐನೂರು ಬಿಲ್ಲೆತ್ತರದ ಭರತನೂ ಐನೂರಿಪ್ಪತ್ತೈದು ಬಿಲ್ಲೆತ್ತರದ ಬಾಹುಬಲಿಯೂ ಮುಂದೆ ಬಂದರು, ಒಬ್ಬರನ್ನೊಬ್ಬರು ಎದುರಿಸಿ ನಿಂತು ನೀಲ ನಿಷಧ ಪರ್ವತಗಳು ಹೊರಬಂದುವೋ ಎಂಬಂತೆ ಕಾಣುತ್ತಿದ್ದರು. ಎರಡು ಕಡೆ ಯವರೂ ಮಧ್ಯಸ್ಥರಾಗಿ ನೋಡುತ್ತ ನಿಂತರು.</br> {{Rule}}</br> {{gap}}ಆ ಆದಿಕಾಲದಲ್ಲಿ ಜನರ ದೇಹಪ್ರಮಾಣ, ಆಯಸ್ಸು ಎಲ್ಲವೂ ಬಹಳ ಹೆಚ್ಚಾ ಗಿತ್ತೆಂದೂ, ಕ್ರನು ಕ್ರಮವಾಗಿ ಕೂಡ ಸುಯಾಗುತ್ತ ಬಂತೆಂದೂ ಪುರಾಣಗಳ ಹೇಳಿಕೆ. ಭರತ ಚಕ್ರವರ್ತಿಯ ದಿಗ್ವಿಜಯಕ್ಕೆ ಅರುವತ್ತು ಸಾವಿರ ವರ್ಷ ಹಿಡಿಯಿತಂತೆ,<noinclude><references/></noinclude> m5u6rh8qpybriupgd30jhin6au7d8a9 322444 322443 2026-05-25T09:30:50Z Pragathi. BH 7585 322444 proofread-page text/x-wiki <noinclude><pagequality level="4" user="Pragathi. BH" />{{rh|center=ಭರತ-ಬಾಹುಬಳಿ|left=|right=೪೩}}</noinclude> ಎಂದುಕೊಂಡರು. ಹೀಗೆ ಆಲೋಚಿಸಿ ಇಬ್ಬರೂ ಮೊದಲು ಭರತ ಚಕ್ರವರ್ತಿಯ ಬಳಿ ಬಂದರು.</br> {{gap}}“ ದೇವಾ, ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಲ್ಲಿ ನೀವು ಜಯವನ್ನು ನಿರ್ಧರಿಸಿರಿ. ಜನ ವಿನಾಶಕ್ಕೆ ಕಾರಣವಾದ ಯುದ್ಧದಿಂದ ಪ್ರಯೋಜನವೇನು ? ಪಾಪ, ಅಪಯಶಸ್ಸು, ಅಷ್ಟೇ. ಅದನ್ನು ಬಿಡಿ, ಲೋಕದ ನಿಂದೆ ತಾಗದ ಹಾಗೆ ಧರ್ಮಯುದ್ದ ಮಾಡಿ ” ಎಂದು ಬೋಧಿಸಿದರು. ಚಕ್ರವರ್ತಿ ಅದಕ್ಕೆ ಒಪ್ಪಿಕೊಂಡನು.”</br> {{gap}}ಮಂತ್ರಿಗಳಿಬ್ಬರೂ ಬಾಹುಬಲಿಯ ಸಮೀಪಕ್ಕೆ ಹೋಗಿ ಮೊದಲಿನಂತೆಯೆ ಧರ್ಮಯುದ್ದದ ಏರ್ಪಾಟನ್ನು ಬಿನ್ನಯಿಸಿದರು. ಬಾಹುಬಲಿಗೆ ಅವರ ಮಾತು ರುಚಿಸಲಿಲ್ಲ. “ ನನ್ನ ಚತುರಂಗಬಲವನ್ನು ಯಾವನೆದುರಿಸುತ್ತಾನೆ ” ಎಂದು ನಿಮ್ಮರಸ ಗರ್ವಪಡುತ್ತಾನೆ. ಆ ಗರ್ವದ ಉನ್ನತಿಯನ್ನು ಮೊದಲು ಸ್ವಲ್ಪ ನೋಡುತ್ತೇನೆ. ಬಳಿಕ ಧರ್ಮಯುದ್ದವಾಗಲಿ” ಎಂದು ಕೋಪದಿಂದಲೇ ನುಡಿದು ವಿಷಣ್ಣನಾಗಿ ನಿಂತನು.</br> {{gap}}ಮಂತ್ರಿಗಳು, “ಈ ಕೆಟ್ಟ ಆಗ್ರಹ ಬೇಡ, ಬಿಟ್ಟು ಬಿಡು. ಯುವರಾಜಾ, ಪ್ರಸನ್ನಚಿತ್ತನಾಗಿ ಈ ಮಾತು ಕೇಳು. ಮನಸ್ಸು ಮಾಡಿ ಒಮ್ಮೆ ಈ ಮುದುಕರ ಮಾತನ್ನು ನಡೆಸಿಕೊಡು ” ಎಂದು ಹಿತನುಡಿದರು. ಕಡೆಗೂ ಬಾಹುಬಲಿಯನ್ನೊಡಂಬಡಿಸಿದರು.</br> {{center|ಧರ್ಮ ಯುದ್ದ }} {{gap}}ಎರಡು ಕಡೆಗಳಲ್ಲೂ ಆನಂದ ಭೇರಿಗಳು ಮೊಳಗಿದವು. * ಐನೂರು ಬಿಲ್ಲೆತ್ತರದ ಭರತನೂ ಐನೂರಿಪ್ಪತ್ತೈದು ಬಿಲ್ಲೆತ್ತರದ ಬಾಹುಬಲಿಯೂ ಮುಂದೆ ಬಂದರು, ಒಬ್ಬರನ್ನೊಬ್ಬರು ಎದುರಿಸಿ ನಿಂತು ನೀಲ ನಿಷಧ ಪರ್ವತಗಳು ಹೊರಬಂದುವೋ ಎಂಬಂತೆ ಕಾಣುತ್ತಿದ್ದರು. ಎರಡು ಕಡೆ ಯವರೂ ಮಧ್ಯಸ್ಥರಾಗಿ ನೋಡುತ್ತ ನಿಂತರು.</br> {{Long drash}}</br> {{gap}}ಆ ಆದಿಕಾಲದಲ್ಲಿ ಜನರ ದೇಹಪ್ರಮಾಣ, ಆಯಸ್ಸು ಎಲ್ಲವೂ ಬಹಳ ಹೆಚ್ಚಾ ಗಿತ್ತೆಂದೂ, ಕ್ರನು ಕ್ರಮವಾಗಿ ಕೂಡ ಸುಯಾಗುತ್ತ ಬಂತೆಂದೂ ಪುರಾಣಗಳ ಹೇಳಿಕೆ. ಭರತ ಚಕ್ರವರ್ತಿಯ ದಿಗ್ವಿಜಯಕ್ಕೆ ಅರುವತ್ತು ಸಾವಿರ ವರ್ಷ ಹಿಡಿಯಿತಂತೆ,<noinclude><references/></noinclude> pnjz3lmx9fnks77jfd7cx5oa5fyiuvf 322445 322444 2026-05-25T09:31:07Z Pragathi. BH 7585 322445 proofread-page text/x-wiki <noinclude><pagequality level="4" user="Pragathi. BH" />{{rh|center=ಭರತ-ಬಾಹುಬಳಿ|left=|right=೪೩}}</noinclude> ಎಂದುಕೊಂಡರು. ಹೀಗೆ ಆಲೋಚಿಸಿ ಇಬ್ಬರೂ ಮೊದಲು ಭರತ ಚಕ್ರವರ್ತಿಯ ಬಳಿ ಬಂದರು.</br> {{gap}}“ ದೇವಾ, ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಲ್ಲಿ ನೀವು ಜಯವನ್ನು ನಿರ್ಧರಿಸಿರಿ. ಜನ ವಿನಾಶಕ್ಕೆ ಕಾರಣವಾದ ಯುದ್ಧದಿಂದ ಪ್ರಯೋಜನವೇನು ? ಪಾಪ, ಅಪಯಶಸ್ಸು, ಅಷ್ಟೇ. ಅದನ್ನು ಬಿಡಿ, ಲೋಕದ ನಿಂದೆ ತಾಗದ ಹಾಗೆ ಧರ್ಮಯುದ್ದ ಮಾಡಿ ” ಎಂದು ಬೋಧಿಸಿದರು. ಚಕ್ರವರ್ತಿ ಅದಕ್ಕೆ ಒಪ್ಪಿಕೊಂಡನು.”</br> {{gap}}ಮಂತ್ರಿಗಳಿಬ್ಬರೂ ಬಾಹುಬಲಿಯ ಸಮೀಪಕ್ಕೆ ಹೋಗಿ ಮೊದಲಿನಂತೆಯೆ ಧರ್ಮಯುದ್ದದ ಏರ್ಪಾಟನ್ನು ಬಿನ್ನಯಿಸಿದರು. ಬಾಹುಬಲಿಗೆ ಅವರ ಮಾತು ರುಚಿಸಲಿಲ್ಲ. “ ನನ್ನ ಚತುರಂಗಬಲವನ್ನು ಯಾವನೆದುರಿಸುತ್ತಾನೆ ” ಎಂದು ನಿಮ್ಮರಸ ಗರ್ವಪಡುತ್ತಾನೆ. ಆ ಗರ್ವದ ಉನ್ನತಿಯನ್ನು ಮೊದಲು ಸ್ವಲ್ಪ ನೋಡುತ್ತೇನೆ. ಬಳಿಕ ಧರ್ಮಯುದ್ದವಾಗಲಿ” ಎಂದು ಕೋಪದಿಂದಲೇ ನುಡಿದು ವಿಷಣ್ಣನಾಗಿ ನಿಂತನು.</br> {{gap}}ಮಂತ್ರಿಗಳು, “ಈ ಕೆಟ್ಟ ಆಗ್ರಹ ಬೇಡ, ಬಿಟ್ಟು ಬಿಡು. ಯುವರಾಜಾ, ಪ್ರಸನ್ನಚಿತ್ತನಾಗಿ ಈ ಮಾತು ಕೇಳು. ಮನಸ್ಸು ಮಾಡಿ ಒಮ್ಮೆ ಈ ಮುದುಕರ ಮಾತನ್ನು ನಡೆಸಿಕೊಡು ” ಎಂದು ಹಿತನುಡಿದರು. ಕಡೆಗೂ ಬಾಹುಬಲಿಯನ್ನೊಡಂಬಡಿಸಿದರು.</br> {{center|ಧರ್ಮ ಯುದ್ದ }} {{gap}}ಎರಡು ಕಡೆಗಳಲ್ಲೂ ಆನಂದ ಭೇರಿಗಳು ಮೊಳಗಿದವು. * ಐನೂರು ಬಿಲ್ಲೆತ್ತರದ ಭರತನೂ ಐನೂರಿಪ್ಪತ್ತೈದು ಬಿಲ್ಲೆತ್ತರದ ಬಾಹುಬಲಿಯೂ ಮುಂದೆ ಬಂದರು, ಒಬ್ಬರನ್ನೊಬ್ಬರು ಎದುರಿಸಿ ನಿಂತು ನೀಲ ನಿಷಧ ಪರ್ವತಗಳು ಹೊರಬಂದುವೋ ಎಂಬಂತೆ ಕಾಣುತ್ತಿದ್ದರು. ಎರಡು ಕಡೆ ಯವರೂ ಮಧ್ಯಸ್ಥರಾಗಿ ನೋಡುತ್ತ ನಿಂತರು.</br> {{Long dash}}</br> {{gap}}ಆ ಆದಿಕಾಲದಲ್ಲಿ ಜನರ ದೇಹಪ್ರಮಾಣ, ಆಯಸ್ಸು ಎಲ್ಲವೂ ಬಹಳ ಹೆಚ್ಚಾ ಗಿತ್ತೆಂದೂ, ಕ್ರನು ಕ್ರಮವಾಗಿ ಕೂಡ ಸುಯಾಗುತ್ತ ಬಂತೆಂದೂ ಪುರಾಣಗಳ ಹೇಳಿಕೆ. ಭರತ ಚಕ್ರವರ್ತಿಯ ದಿಗ್ವಿಜಯಕ್ಕೆ ಅರುವತ್ತು ಸಾವಿರ ವರ್ಷ ಹಿಡಿಯಿತಂತೆ,<noinclude><references/></noinclude> hr5d52wstusix8clah7t5u5r684u9tu 322446 322445 2026-05-25T09:31:33Z Pragathi. BH 7585 322446 proofread-page text/x-wiki <noinclude><pagequality level="4" user="Pragathi. BH" />{{rh|center=ಭರತ-ಬಾಹುಬಳಿ|left=|right=೪೩}}</noinclude> ಎಂದುಕೊಂಡರು. ಹೀಗೆ ಆಲೋಚಿಸಿ ಇಬ್ಬರೂ ಮೊದಲು ಭರತ ಚಕ್ರವರ್ತಿಯ ಬಳಿ ಬಂದರು.</br> {{gap}}“ ದೇವಾ, ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಲ್ಲಿ ನೀವು ಜಯವನ್ನು ನಿರ್ಧರಿಸಿರಿ. ಜನ ವಿನಾಶಕ್ಕೆ ಕಾರಣವಾದ ಯುದ್ಧದಿಂದ ಪ್ರಯೋಜನವೇನು ? ಪಾಪ, ಅಪಯಶಸ್ಸು, ಅಷ್ಟೇ. ಅದನ್ನು ಬಿಡಿ, ಲೋಕದ ನಿಂದೆ ತಾಗದ ಹಾಗೆ ಧರ್ಮಯುದ್ದ ಮಾಡಿ ” ಎಂದು ಬೋಧಿಸಿದರು. ಚಕ್ರವರ್ತಿ ಅದಕ್ಕೆ ಒಪ್ಪಿಕೊಂಡನು.”</br> {{gap}}ಮಂತ್ರಿಗಳಿಬ್ಬರೂ ಬಾಹುಬಲಿಯ ಸಮೀಪಕ್ಕೆ ಹೋಗಿ ಮೊದಲಿನಂತೆಯೆ ಧರ್ಮಯುದ್ದದ ಏರ್ಪಾಟನ್ನು ಬಿನ್ನಯಿಸಿದರು. ಬಾಹುಬಲಿಗೆ ಅವರ ಮಾತು ರುಚಿಸಲಿಲ್ಲ. “ ನನ್ನ ಚತುರಂಗಬಲವನ್ನು ಯಾವನೆದುರಿಸುತ್ತಾನೆ ” ಎಂದು ನಿಮ್ಮರಸ ಗರ್ವಪಡುತ್ತಾನೆ. ಆ ಗರ್ವದ ಉನ್ನತಿಯನ್ನು ಮೊದಲು ಸ್ವಲ್ಪ ನೋಡುತ್ತೇನೆ. ಬಳಿಕ ಧರ್ಮಯುದ್ದವಾಗಲಿ” ಎಂದು ಕೋಪದಿಂದಲೇ ನುಡಿದು ವಿಷಣ್ಣನಾಗಿ ನಿಂತನು.</br> {{gap}}ಮಂತ್ರಿಗಳು, “ಈ ಕೆಟ್ಟ ಆಗ್ರಹ ಬೇಡ, ಬಿಟ್ಟು ಬಿಡು. ಯುವರಾಜಾ, ಪ್ರಸನ್ನಚಿತ್ತನಾಗಿ ಈ ಮಾತು ಕೇಳು. ಮನಸ್ಸು ಮಾಡಿ ಒಮ್ಮೆ ಈ ಮುದುಕರ ಮಾತನ್ನು ನಡೆಸಿಕೊಡು ” ಎಂದು ಹಿತನುಡಿದರು. ಕಡೆಗೂ ಬಾಹುಬಲಿಯನ್ನೊಡಂಬಡಿಸಿದರು.</br> {{center|ಧರ್ಮ ಯುದ್ದ }} {{gap}}ಎರಡು ಕಡೆಗಳಲ್ಲೂ ಆನಂದ ಭೇರಿಗಳು ಮೊಳಗಿದವು. * ಐನೂರು ಬಿಲ್ಲೆತ್ತರದ ಭರತನೂ ಐನೂರಿಪ್ಪತ್ತೈದು ಬಿಲ್ಲೆತ್ತರದ ಬಾಹುಬಲಿಯೂ ಮುಂದೆ ಬಂದರು, ಒಬ್ಬರನ್ನೊಬ್ಬರು ಎದುರಿಸಿ ನಿಂತು ನೀಲ ನಿಷಧ ಪರ್ವತಗಳು ಹೊರಬಂದುವೋ ಎಂಬಂತೆ ಕಾಣುತ್ತಿದ್ದರು. ಎರಡು ಕಡೆ ಯವರೂ ಮಧ್ಯಸ್ಥರಾಗಿ ನೋಡುತ್ತ ನಿಂತರು.</br> {{Long drash}}</br> {{gap}}ಆ ಆದಿಕಾಲದಲ್ಲಿ ಜನರ ದೇಹಪ್ರಮಾಣ, ಆಯಸ್ಸು ಎಲ್ಲವೂ ಬಹಳ ಹೆಚ್ಚಾ ಗಿತ್ತೆಂದೂ, ಕ್ರನು ಕ್ರಮವಾಗಿ ಕೂಡ ಸುಯಾಗುತ್ತ ಬಂತೆಂದೂ ಪುರಾಣಗಳ ಹೇಳಿಕೆ. ಭರತ ಚಕ್ರವರ್ತಿಯ ದಿಗ್ವಿಜಯಕ್ಕೆ ಅರುವತ್ತು ಸಾವಿರ ವರ್ಷ ಹಿಡಿಯಿತಂತೆ,<noinclude><references/></noinclude> pnjz3lmx9fnks77jfd7cx5oa5fyiuvf 322447 322446 2026-05-25T09:31:51Z Pragathi. BH 7585 /* Validated */ 322447 proofread-page text/x-wiki <noinclude><pagequality level="4" user="Pragathi. BH" />{{rh|center=ಭರತ-ಬಾಹುಬಳಿ|left=|right=೪೩}}</noinclude> ಎಂದುಕೊಂಡರು. ಹೀಗೆ ಆಲೋಚಿಸಿ ಇಬ್ಬರೂ ಮೊದಲು ಭರತ ಚಕ್ರವರ್ತಿಯ ಬಳಿ ಬಂದರು.</br> {{gap}}“ ದೇವಾ, ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಲ್ಲಿ ನೀವು ಜಯವನ್ನು ನಿರ್ಧರಿಸಿರಿ. ಜನ ವಿನಾಶಕ್ಕೆ ಕಾರಣವಾದ ಯುದ್ಧದಿಂದ ಪ್ರಯೋಜನವೇನು ? ಪಾಪ, ಅಪಯಶಸ್ಸು, ಅಷ್ಟೇ. ಅದನ್ನು ಬಿಡಿ, ಲೋಕದ ನಿಂದೆ ತಾಗದ ಹಾಗೆ ಧರ್ಮಯುದ್ದ ಮಾಡಿ ” ಎಂದು ಬೋಧಿಸಿದರು. ಚಕ್ರವರ್ತಿ ಅದಕ್ಕೆ ಒಪ್ಪಿಕೊಂಡನು.”</br> {{gap}}ಮಂತ್ರಿಗಳಿಬ್ಬರೂ ಬಾಹುಬಲಿಯ ಸಮೀಪಕ್ಕೆ ಹೋಗಿ ಮೊದಲಿನಂತೆಯೆ ಧರ್ಮಯುದ್ದದ ಏರ್ಪಾಟನ್ನು ಬಿನ್ನಯಿಸಿದರು. ಬಾಹುಬಲಿಗೆ ಅವರ ಮಾತು ರುಚಿಸಲಿಲ್ಲ. “ ನನ್ನ ಚತುರಂಗಬಲವನ್ನು ಯಾವನೆದುರಿಸುತ್ತಾನೆ ” ಎಂದು ನಿಮ್ಮರಸ ಗರ್ವಪಡುತ್ತಾನೆ. ಆ ಗರ್ವದ ಉನ್ನತಿಯನ್ನು ಮೊದಲು ಸ್ವಲ್ಪ ನೋಡುತ್ತೇನೆ. ಬಳಿಕ ಧರ್ಮಯುದ್ದವಾಗಲಿ” ಎಂದು ಕೋಪದಿಂದಲೇ ನುಡಿದು ವಿಷಣ್ಣನಾಗಿ ನಿಂತನು.</br> {{gap}}ಮಂತ್ರಿಗಳು, “ಈ ಕೆಟ್ಟ ಆಗ್ರಹ ಬೇಡ, ಬಿಟ್ಟು ಬಿಡು. ಯುವರಾಜಾ, ಪ್ರಸನ್ನಚಿತ್ತನಾಗಿ ಈ ಮಾತು ಕೇಳು. ಮನಸ್ಸು ಮಾಡಿ ಒಮ್ಮೆ ಈ ಮುದುಕರ ಮಾತನ್ನು ನಡೆಸಿಕೊಡು ” ಎಂದು ಹಿತನುಡಿದರು. ಕಡೆಗೂ ಬಾಹುಬಲಿಯನ್ನೊಡಂಬಡಿಸಿದರು.</br> {{center|ಧರ್ಮ ಯುದ್ದ }} {{gap}}ಎರಡು ಕಡೆಗಳಲ್ಲೂ ಆನಂದ ಭೇರಿಗಳು ಮೊಳಗಿದವು. * ಐನೂರು ಬಿಲ್ಲೆತ್ತರದ ಭರತನೂ ಐನೂರಿಪ್ಪತ್ತೈದು ಬಿಲ್ಲೆತ್ತರದ ಬಾಹುಬಲಿಯೂ ಮುಂದೆ ಬಂದರು, ಒಬ್ಬರನ್ನೊಬ್ಬರು ಎದುರಿಸಿ ನಿಂತು ನೀಲ ನಿಷಧ ಪರ್ವತಗಳು ಹೊರಬಂದುವೋ ಎಂಬಂತೆ ಕಾಣುತ್ತಿದ್ದರು. ಎರಡು ಕಡೆ ಯವರೂ ಮಧ್ಯಸ್ಥರಾಗಿ ನೋಡುತ್ತ ನಿಂತರು.</br> {{longdash}}</br> {{gap}}ಆ ಆದಿಕಾಲದಲ್ಲಿ ಜನರ ದೇಹಪ್ರಮಾಣ, ಆಯಸ್ಸು ಎಲ್ಲವೂ ಬಹಳ ಹೆಚ್ಚಾ ಗಿತ್ತೆಂದೂ, ಕ್ರನು ಕ್ರಮವಾಗಿ ಕೂಡ ಸುಯಾಗುತ್ತ ಬಂತೆಂದೂ ಪುರಾಣಗಳ ಹೇಳಿಕೆ. ಭರತ ಚಕ್ರವರ್ತಿಯ ದಿಗ್ವಿಜಯಕ್ಕೆ ಅರುವತ್ತು ಸಾವಿರ ವರ್ಷ ಹಿಡಿಯಿತಂತೆ,<noinclude><references/></noinclude> ct8stzvrmn3rcf4zmidinuowfrcp1ho ಪುಟ:ಶತಕ ಸಂಪುಟ.pdf/೬೦ 104 76857 322325 277277 2026-05-24T18:47:33Z Pragathi. BH 7585 /* Validated */ 322325 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೨೦|right=ಶತಕ ಸಂಪುಟ}} <poem> ಪಿಂದೇನೇನಾಗಿ ಬಂದೆಂ ಮನುಜಜನನಮುಂ ತಾನಿದೆಂತಾಯ್ತು ಸಂಸಾ</br>ರಂ ದೋಷಂ ಕಾಮಲೋಭಾದಿಗಳೆನಗಮಿವೆಲ್ಲಿಂದೆ ಬಂದತ್ತು ಮತ್ತಂ</br>ಮುಂದೇನಾದಪ್ಪೆನೆಂದಾನರೆಯದೆ ಭಯದಿಂ ಶಂಕಿಸುತ್ತಿರ್ದಪೆಂ [ನಿಃ]</br>ಸಂದೇಹಂ ಮಾಡಿ ಪಂಪಾಪುರದರಸ ವಿರೂಪಾಕ್ಷ ರಕ್ಷಿಪ್ಪುದೆನ್ನಂ ‖ ೧೦೧ ‖</br> * * •</br>'''ಪಂಪಾಶತಕ'''</br> -ಶ್ರೀಮದ್‌ರಾಜಕಳಾವತಂಸ ಧರೆ-ಚಂದ್ರಾರ್ಕಾಗ್ನಿ-ಜೀವಾನಿಲ</br>ವ್ಯೋಮಾಂಬುಪ್ರಕರಂಗಳಿಂ ಸಕಲಮಂ ರಕ್ಷಿಪ್ಪ ಸರ್ವೇಶ ಸು-</br>ತ್ರಾಮಾದಿತ್ರಿದಶವ್ರಜಾರ್ಚಿತಪದಾಂಭೋಜಾತ ಸದ್ಭಕ್ತಿಯಂ</br>ಪ್ರೇಮಂ<sup><small>೧</sup></small> ಕೈಮಿಗೆ ಮಾಡು ನೀನೆನಗೆ ಪಂಪಾ[ಶ್ರೀ]<sup><small>೧</sup></small> ಪುರಾಧೀಶ್ವರಾ ‖ ೧ ‖</br> ಪುಳಕದ ಹಾದಿಗೆಂದು ಪಥವಪ್ಪುದು ಕಣ್ಗಳ ಕೋಡಿಗೆಂದು ನೀ-</br>ರ್ಗಳ ಕಡೆಗಾಣ್ಬುದೆನ್ನ ಚರಣಂಗಳ ಲೀಲೆಗದೆಂದು ಕೀಲ್ಗಳ-</br>ಚ್ಚಳಿವುದು ಕೈಯ ಕಂಪದ ಕದಂ ತೆರೆದಪ್ಪುದು ತಪ್ಪದೀ ಮನೋ-</br>ಗಳಿತತರಾಬ್ಧಿಗೆಂದು ಮಿಗೆ ಮೇರೆಯಗಲ್ವುದು ಹಂಪೆಯಾಳ್ದನೇ ‖ ೨ ‖</br> ಪುಳಕದ ತೊಟ್ಟಿಲೊಳ್ ಬೆಮರ ಮಜ್ಜನದಿಂದೆಸಲೆಣ್ಣೆ(?)ಯಿಟ್ಟು ಕ–</br>ಣ್ಗಳ ಮೊಲೆವಾಲನೂಡಿ ತೊದಳಿಂದವೆ ಬಣ್ಣಿಸಿ ಹಾಡಿ ಕಂಪದಿಂ-</br>ದಳವಡೆ ತೂಗಿಯಚ್ಚಸುಖನಿದ್ರೆಯನಂದಮನುಂಟುಮಾಡಿ ನಿ-</br>ಶ್ಚಳನಿಜಭಕ್ತಿಯಿತ್ತು ಸಲೆ ರಕ್ಷಿಪುದೆಂದೆಲೆ ಹಂಪೆಯಾಳ್ದನೇ</br>‖ ೩ ‖</br>ಹರಹರ ಎನ್ನ ಕೈಯ ಹಸಿವೋಡಲಣಂ ತನುವಿಂದೆ ಪೂಜೆಯಂ</br>ವಿರಚಿಪೆನೆಂದೊ ಕಣ್ಗಳ ಬರ೦ ತಿಳಿಯಲ್ ಪೊಸನೋಟದಿಂದೆ ಕೆಂ-</br>ಕರಿಸುವೆನೆಂದೊ ಮೈಮರೆದು ಕಣ್ಗೆಡಲಪ್ಪಿ ಮನೋನುರಾಗದಿಂ</br> </poem><noinclude><references/></noinclude> 9v8x88oau0hmst0lhoavpkbxulkf4qt ಪುಟ:ನಡೆದದ್ದೇ ದಾರಿ.pdf/೩ 104 76976 322236 249929 2026-05-24T15:05:34Z Pragathi. BH 7585 /* Validated */ 322236 proofread-page text/x-wiki <noinclude><pagequality level="4" user="Pragathi. BH" /></noinclude>{{center|<big>ಅರ್ಪಣೆ</big> ನನ್ನ ಒಡಹುಟ್ಟಿದವರು ಎಣೆಯಿಲ್ಲದ ಪ್ರೀತಿ ಎರೆದವರು ಶ್ರೀ ರಾಘವೇಂದ್ರ ಎಲಬುರ್ಗಿ ಮತ್ತು ಡಾ. ವಾದೀಂದ್ರ ಎಲಬುರ್ಗಿ ಇವರಿಗೆ}}<noinclude><references/></noinclude> b20hgqcaw4ma7r9qywt522pw0tmad1v ಪುಟ:ನಡೆದದ್ದೇ ದಾರಿ.pdf/೨ 104 76978 322237 235132 2026-05-24T15:05:52Z Pragathi. BH 7585 /* Validated */ 322237 proofread-page text/x-wiki <noinclude><pagequality level="4" user="Pragathi. BH" />ii</noinclude>Collection of Research Books by '''NADEDADDE DARI''' edited by '''Dr. Veena Shanteshwar''', Published by '''Sri Manu Baligar''', Director, Department of Kannada and Culture, Kannada Bhavan, J.C. Road, Bengaluru - 560 002. ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ ಮುದ್ರಿತ ವರ್ಷ : ೨೦೧೦<br/> ಪ್ರತಿಗಳು : ೧೦೦೦<br/> ಪುಟಗಳು : XXII + Had<br/> ಬೆಲೆ: ರೂ.<br/> ರಕ್ಷಾಪುಟ ವಿನ್ಯಾಸ : ಮುದ್ರಕರು :<br/> '''ಮೇ|| ಮಯೂರ ಪ್ರಿಂಟ್ ಆಡ್ಸ್'''<br/> ನಂ. ೬೯, ಸುಬೇದಾರ್‌ಛತ್ರಂ ರೋಡ್<br/> ಬೆಂಗಳೂರು - ೫೬೦ ೦೨೦ ದೂ: ೨೩೩೪೨೭೪ <br/><noinclude><references/></noinclude> n47zrhrzua20gv1tugd3yjg0i4w9ywl ಪುಟ:Epigraphia carnatica - Volume I.djvu/೧೩ 104 76994 322270 224533 2026-05-24T15:29:21Z Pragathi. BH 7585 /* Validated */ 322270 proofread-page text/x-wiki <noinclude><pagequality level="4" user="Pragathi. BH" /></noinclude> {{c|{{larger|ಮೊದಲ ಮಾತು}}}} {{gap}}ಯಾವುದೇ ಪ್ರದೇಶದ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸಗಳ ಅಧ್ಯಯನಕ್ಕೆ ಶಾಸನಗಳು ಅಮೂಲ್ಯ ಆಕರಗಳು, ಶಾಸನಗಳು ಒಂದು ಜನಾಂಗದ ಆಸ್ತಿ. ಸುದೈವದಿಂದ ನಮ್ಮ ನಾಡಿನ ಶಾಸನ ಸಂಪತ್ತು ಹೇರಳವಾಗಿದೆ. ತಮಿಳನ್ನು ಬಿಟ್ಟರೆ ಕನ್ನಡದಲ್ಲಿಯೇ ಅತ್ಯಂತ ಹೆಚ್ಚು ಸಂಖ್ಯೆಯ ಶಾಸನಗಳಿವೆ ಎಂದು ಅಂದಾಜು ಮಾಡಲಾಗಿದೆ. ಯಾರ ಕಣ್ಣಿಗೂ ಬೀಳದೆ ಅಜ್ಞಾತವಾಗಿರುವ ಶಾಸನಗಳು ಇನ್ನೂ ಅಸಂಖ್ಯಾತವಾಗಿವೆ. ಇಂಥ ಶಾಸನಗಳನ್ನು ಹುಡುಕುವ ಸಂಗ್ರಹಿಸುವ ಪ್ರಕಟಿಸುವ ಕೆಲಸ ಆಗಬೇಕಾಗಿದೆ: ಈಗಾಗಲೇ ಪ್ರಕಟವಾಗಿರುವ ಶಾಸನಗಳನ್ನು ಪರಿಷ್ಕರಿಸುವ. ವಿಶ್ಲೇಷಿಸುವ ಕೆಲಸವೂ ಅಗತ್ಯವಾಗಿದೆ, ಹೊಸ ಆಧಾರಗಳ ಬೆಳಕಿನಲ್ಲಿ, ಹೊಸ ಸಂಶೋಧನೆಗಳ ದೃಷ್ಟಿಯಲ್ಲಿ ಈ ಕೆಲಸ ಸತತವಾಗಿ ನಡೆಯಬೇಕಾಗುತ್ತದೆ. {{gap}}ಕನ್ನಡ ಶಾಸನ ಪ್ರಕಟಣೆಗಳಲ್ಲಿ ಮಾತ್ರವಲ್ಲ, ಯಾವುದೇ ಭಾಷೆಯ ಇಂಥ ಪ್ರಕಟಣೆಗಳಲ್ಲಿಯಾದರೂ "ಎಪಿಗ್ರಾಫಿಯ ಕರ್ನಾಟಿಕ" ಸಂಪುಟಗಳು ಒಂದು ಅಪೂರ್ವ ಸಿದ್ಧಿ; ಬೃಹತ್ತು ಮಹತ್ತುಗಳೆರಡರಲ್ಲಿಯೂ ಹೆಮ್ಮೆ ಪಡಬಹುದಾದ ಅದ್ವಿತೀಯ ಸಾಧನೆ. ೧೮೮೪ರಲ್ಲಿ ಮೈಸೂರಿನಲ್ಲಿ ಪುರಾತತ್ವ ಇಲಾಖೆ ಸ್ಥಾಪನೆಯಾದಾಗ ಅದರ ಒಪ್ಪೊತ್ತಿನ ನಿರ್ದೇಶಕರಾಗಿ ನೇಮಕಗೊಂಡ ಬಿ. ಎಲ್. ರೈಸ್ ಅವರು ೧೯೦೬ರವರೆಗಿನ ಮುಂದಿನ ಇಪ್ಪತ್ತೆರಡು ವರ್ಷಗಳ ಅವಧಿಯಲ್ಲಿ, ಅಂದಿನ ಮೈಸೂರು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಮತ್ತು ಆಗ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗಿನಲ್ಲಿ ೮೮೬೯ ಶಾಸನಗಳನ್ನು ಸಂಗ್ರಹಿಸಿದರು. ಈ ಶಾಸನಗಳನ್ನೆಲ್ಲ ಲಿಪ್ಯಂತರ, ಭಾಷಾಂತರಗಳೊಡನೆ ಅವರು 'ಎಪಿಗ್ರಾಫಿಯ ಕರ್ನಾಟಿಕ' ಮಾಲೆಯಲ್ಲಿ ಪ್ರಕಟಿಸಿದರು. ಹನ್ನೆರಡು ಸಂಪುಟಗಳ ಈ ಮಾಲೆಯ ಯೋಜನೆಯಂತೆ ಸಾಮಾನ್ಯವಾಗಿ ಒಂದು ಜಿಲ್ಲೆಯ ಶಾಸನಗಳು ಒಂದು ಸಂಪುಟದಲ್ಲಿ ಸೇರಿದವು. ಶ್ರವಣಬೆಳಗೊಳದ ಶಾಸನಗಳಿಗಾಗಿಯೇ ಒಂದು ಸಂಪುಟ (೨) ಮೀಸಲಾಯಿತು. ಇಂದಿನ ಮಂಡ್ಯ ಜಿಲ್ಲೆಯನ್ನೊಳಗೊಂಡ ಅಂದಿನ ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಯ ಶಾಸನಗಳು ಎರಡೆರಡು ಸಂಪುಟಗಳಲ್ಲಿ (೩-೪ ಮತ್ತು ೭-೮) ಪ್ರಕಟವಾದವು. ರೈಸರ ನಂತರ ಅಧಿಕಾರಕ್ಕೆ ಬಂದ ಆರ್. ನರಸಿಂಹಾಚಾರರು ತಮ್ಮ ೧೬ ವರ್ಷಗಳ ಅಧಿಕಾರಾವಧಿಯಲ್ಲಿ ಸುಮಾರು ೫೦೦೦ ಶಾಸನಗಳನ್ನು ಕಂಡುಹಿಡಿದರು. ಇವುಗಳಲ್ಲಿ ಮುಖ್ಯವಾದವನ್ನೆಲ್ಲ ತಮ್ಮ ವಾರ್ಷಿಕ ವರದಿಗಳಲ್ಲಿ ಪ್ರಕಟಿಸುತ್ತಾ ಬಂದರು. 'ಎಪಿಗ್ರಾಫಿಯ ಕರ್ನಾಟಿಕ' ಮಾಲೆಯ ಎರಡನೆಯ ಸಂಪುಟವನ್ನು (ಶ್ರವಣಬೆಳಗೊಳ) ಅವರು ಅಮೂಲಾಗ್ರವಾಗಿ ಪರಿಷ್ಕರಿಸಿ ೧೯೨೩ರಲ್ಲಿ ಹೊಸ ಆವೃತ್ತಿಯನ್ನು ಪ್ರಕಟಿಸಿದರು. ಪುರಾತತ್ವ ಇಲಾಖೆ ೧೯೨೨ರ ನಂತರ ೧೯೪೪ರ ವರೆಗೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿತ್ತು. ಆಗ ಓರಿಯಂಟಲ್ ಲೈಬ್ರೆರಿಯ ಕ್ಯೂರೇಟರ್ ಅವರು ಇಲಾಖೆಗೆ ಒಪ್ಪೋತಿನ ನಿರ್ದೇಶಕರಾಗಿರುತ್ತಿದ್ದರು. ಆಮೇಲೆ ಅದು ಸರ್ಕಾರದ ಇಲಾಖೆಯಾದರೂ ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪ್ರಾಚೀನ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರ ವಿಭಾಗಗಳ ಮುಖ್ಯರು ಪದನಿಮಿತ್ತ ನಿರ್ದೇಶಕರಾಗಿದ್ದರು. ಉದ್ದಕ್ಕೂ ಇಲಾಖೆ ಶಾಸನ ಪರಿವೀಕ್ಷಣೆಯ ಕೆಲಸವನ್ನು ಮುಂದುವರಿಸಿಕೊಂಡು ಬಂದಿದೆ. ಫಲವಾಗಿ ವರ್ಷ ವರ್ಷವೂ ಹೊಸ ಶಾಸನಗಳು ಬೆಳಕಿಗೆ ಬರುತ್ತಿವೆ. {{gap}}'ಎಪಿಗ್ರಾಫಿಯ ಕರ್ನಾಟಿಕ' ಸಂಪುಟಗಳು ಕಳೆದ ಕೆಲವು ದಶಕಗಳಿಂದ ತುಂಬ ದುರ್ಲಭವಾಗಿದ್ದು, ಅವುಗಳು ವಿದ್ಯಾರ್ಥಿಗಳಿಗೂ, ವಿದ್ವಾಂಸರಿಗೂ ಅನಿವಾರ್ಯ ಆಕರ ಗ್ರಂಥಗಳಾಗಿದ್ದುದರಿಂದ ಅವನ್ನು ಪರಿಷ್ಕರಿಸಿ ಪುನರ್ಮುದ್ರಿಸುವ ಅವಶ್ಯಕತೆ ಬಹಳವಾಗಿತ್ತು. ೧೯೭೦ರ ಜನವರಿ ೨೪ರಂದು ಮೈಸೂರು ರಾಜ್ಯದ ಶಿಕ್ಷಣ ಸಚಿವ ಶ್ರೀ ಕೆ. ವಿ. ಶಂಕರಗೌಡ ಅವರ ಅಧ್ಯಕ್ಷತೆಯಲ್ಲಿ ಸೇರಿದ್ದ, ಕರ್ಣಾಟಕ ಜೀವನ ಸಂಸ್ಕೃತಿಗಳನ್ನು ಕುರಿತ ಸಂಶೋಧನೆಗಳಿಗಾಗಿರುವ ಸಮನ್ವಯ ಸಮಿತಿಯ (Co-ordination Committee for Research work on Karnataka Life and Culture) ಸಭೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಈ ಪರಿಷ್ಕರಣ ಹಾಗೂ ಪುನರ್ಮುದ್ರಣದ ಸಲಹೆ ಮಾಡಿದರು: ಜವಾಬ್ದಾರಿಯನ್ನು ಹೊರಲು ಸಂಸ್ಥೆ ಸಿದ್ದವೆಂದೂ ಹೇಳಿದರು. ಸಮಿತಿಯ ಸದಸ್ಯರೆಲ್ಲರೂ ಅವರಿಗೆ ಬೆಂಬಲ ನೀಡಿದರು; ಸಲಹೆಯನ್ನು ಸ್ವಾಗತಿಸಿದರು, ಯೋಜನೆಯ ವಿವರಗಳನ್ನು ಕನ್ನಡ ಅಧ್ಯಯನ ಸಂಸ್ಥೆ ಸಿದ್ದಪಡಿಸ ಬೇಕೆಂದೂ, ಯೋಜನೆಗೆ ಅಗತ್ಯವಾದ ಹಣಕಾಸನ್ನು ಒದಗಿಸಲು ಸರ್ಕಾರಕ್ಕೆ ಶಿಫಾರಸ್ ಮಾಡಬೇಕೆಂದೂ, ಯೋಜನೆಯನ್ನು ಕನ್ನಡ ಅಧ್ಯಯನ ಸಂಸ್ಥೆಗೆ ವಹಿಸಬೇಕೆಂದೂ ಸಮಿತಿ ನಿರ್ಣಯಮಾಡಿತು. {{gap}}ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಯೋಜನೆಯ ವಿವರಗಳನ್ನು ಚರ್ಚಿಸಲು ಮಾರ್ಚಿ ೭, ೧೯೭೦ರಂದು ತಜ್ಞರ ಒಂದು ಸಭೆ ಕರೆದರು. ಅದರಲ್ಲಿ ಡಾ. ಎಂ. ಶೇಷಾದ್ರಿ, ಡಾ. ಜಿ. ಎಸ್. ಗಾಯಿ, ಮತ್ತು ಡಾ. ಎ. ವಿ. ನರಸಿಂಹಮೂರ್ತಿ ಅವರು ಭಾಗವಹಿಸಿದ್ದರು. ಆ ಸಭೆಯಲ್ಲಿ 'ಎಪಿಗ್ರಾಫಿಯ ಕರ್ನಾಟಿಕ' ಪರಿಷ್ಕರಣ ಹಾಗೂ ಪುನರ್ಮುದ್ರಣಕ್ಕೆ ಸಂಬಂಧಿಸಿದಂತೆ ಸುಮಾರು ಹನ್ನೆರಡೂವರೆ ಲಕ್ಷ ರೂಪಾಯಿಗಳ ಯೋಜನೆಯೊಂದನ್ನು ಸಿದ್ದಪಡಿಸಲಾಯಿತು. ಕನ್ನಡ<noinclude><references/></noinclude> cqgcgeap6w8cg1tui0l9t7ikbul7r9j ಪುಟ:Epigraphia carnatica - Volume I.djvu/೧೫ 104 76996 322271 224538 2026-05-24T15:30:08Z Pragathi. BH 7585 /* Validated */ 322271 proofread-page text/x-wiki <noinclude><pagequality level="4" user="Pragathi. BH" />{{c|9}}</noinclude> ಆಸಕ್ತರ ವಿದ್ವಾಂಸರ ಸಲಹೆ ಸೂಚನೆಗಳನ್ನು ಸ್ವೀಕರಿಸಲು ಸಿದ್ಧರಿದ್ದೇವೆ. ಇದು ನಾಡಿನ ಕೆಲಸ, ಎಲ್ಲರ ಹೊಣೆ, ಒಂದು ದೃಷ್ಟಿಯಿಂದ ಈ ಮೊದಲ ಸಂಪುಟ ಮಾದರಿ ಸಂಪುಟ. ಇದರ ಪರಿಷ್ಕರಣ ವಿನ್ಯಾಸಗಳ ಬಗೆಗೆ ದೊರೆಯುವ ವಿಮರ್ಶೆಗಳ ಬೆಳಕಿನಲ್ಲಿ ಮುಂದಿನ ಸಂಪುಟಗಳ ಪರಿಷ್ಕರಣಕಾರ ಇನ್ನೂ ಉತ್ತಮಗೊಳ್ಳುವುದೆಂದು ನಾವು ನಿರೀಕ್ಷಿಸಿದ್ದೇವೆ. ಈ ಸಂಪುಟದಲ್ಲಿ ಕೆಲವು ಸ್ಟಾಲಿತ್ಯಗಳು ಉಳಿಯುವುದು ಅನಿವಾರವಾಯಿತು. ಅವುಗಳ ತಿದ್ದುಪಡಿಯನ್ನು ಪ್ರತ್ಯೇಕವಾಗಿ ಕೊಟ್ಟಿದ್ದೇವೆ. ವಾಚಕರು ಅದನ್ನು ಕೃಪೆಯಿಟ್ಟು ಗಮನಿಸಬೇಕು. {{center|***|5|6em}} {{gap}}ಈ ಯೋಜನೆ ಕಾರರೂಪಕ್ಕೆ ಬಂದದ್ದು ಮೈಸೂರು ಸರ್ಕಾರದ ಔದಾರ್ಯದಿಂದ; ಅದರ ಸಂಸ್ಕೃತಿ ಪ್ರೇಮದಿಂದ. ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ವೀರೇಂದ್ರ ಪಾಟೀಲರು, ಶಿಕ್ಷಣ ಸಚಿವರಾಗಿದ್ದ ಶ್ರೀ ಕೆ. ವಿ. ಶಂಕರಗೌಡರು ಮತ್ತು ಹಣಕಾಸಿನ ಸಚಿವರಾಗಿದ್ದ ಶ್ರೀ ರಾಮಕೃಷ್ಣ ಹೆಗ್ಗಡೆ ಅವರುಗಳು ಈ ಯೋಜನೆಯಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರದಿದ್ದಿದ್ದರೆ ಈ ದೊಡ್ಡ ಯೋಜನೆ ಬಹು ಸುಲಭವಾಗಿ ಸರ್ಕಾರದ ಒಪ್ಪಿಗೆ ಪಡೆಯುವುದು ಸಾಧ್ಯವಾಗುತ್ತಿರಲಿಲ್ಲ. ಈ ಮೂವರು ಮಹನೀಯರು ತಮ್ಮ ಭಾಷೆ ಸಾಹಿತ್ಯಗಳ ಮೇಲಿನ ಪ್ರೀತಿ ದೂರದೃಷ್ಟಿಗಳಿಂದ ಕೈಗೊಂಡ ಮಹತ್ವದ ಯೋಜನೆಗಳಲ್ಲಿ ಇದೂ ಒಂದಾಗಿದೆ. ಈ ಹೊತ್ತು ಅವರನ್ನು ನೆನೆಯುವುದು ನನಗೆ ತುಂಬ ಸಂತೋಷದ ಕೆಲಸ. ಹಿಂದಿನ ಸರ್ಕಾರದ ಇಂಥ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ಮಾತ್ರವಲ್ಲದೆ ಹೊಸ ಹೊಸ ಯೋಜನೆಗಳನ್ನು ಕಾರರೂಪಕ್ಕೆ ತರುವುದರಲ್ಲಿಯೂ ಆಸಕ್ತಿ ವಹಿಸಿರುವ ಇಂದಿನ ಸರ್ಕಾರಕ್ಕೂ ನಮ್ಮ ಕೃತಜ್ಞತೆಯ ವಂದನೆಗಳು ಸಲ್ಲಬೇಕು. ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರ ದಿಟ್ಟ ನಾಯಕತ್ವದಲ್ಲಿ ಸರ್ಕಾರ ಈಗಾಗಲೇ ಕೈಗೊಂಡಿರುವ ಅನೇಕ ನಿರ್ಣಯಗಳು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಮಹತ್ವವವಾಗಿವೆ. ಹಣಕಾಸಿನ ಸಚಿವರಾದ ಶ್ರೀ ಎಂ. ವೈ. ಘೋರ್ಪಡೆಯವರು ಮತ್ತು ಶಿಕ್ಷಣ ಸಚಿವರಾದ ಶ್ರೀ ಎ. ಆರ್. ಬದರಿನಾರಾಯಣ ಅವರು ಇಂಥ ವಿಚಾರಗಳಲ್ಲಿ ವಿಶೇಷ ಆಸಕ್ತಿ ವಹಿಸಿರುವುದು ನಾಡಿನ ಜನತೆಗೆ ಹೆಚ್ಚಿನ ಸಂತೋಷನ್ನುಂಟುಮಾಡಿದೆ ನಾಡಿನ ಇತಿಹಾಸವನ್ನೇ ಬದಲಿಸಲು ಸಮರ್ಥವಾದ ಈ ಸರ್ಕಾರ ನಾಡಿನ ಭವಿಷ್ಯವನ್ನು ಉಜ್ವಲನಾಗಿ ರೂಪಿಸುತ್ತದೆಂಬುದ ರಲ್ಲಿ ಸಂದೇಹವಿಲ್ಲ. {{gap}} 'ಎಪಿಗ್ರಾಫಿಯ ಕರ್ನಾಟಿಕ' ಪರಿಷ್ಕರಣ ಹಾಗೂ ಪುನರ್ಮುದ್ರಣ ಯೋಜನೆಯಲ್ಲಿ, ಹಿಂದೆ ಶಿಕ್ಷಣ ಇಲಾಖೆಯ ಕಾಠ್ಯದರ್ಶಿಯಾಗಿದ್ದ ಶ್ರೀ ಕೆ. ಆರ್. ರಾಮಚಂದ್ರನ್ ಅವರೂ, ಈಗ ಆ ಸ್ಥಾನದಲ್ಲಿರುವ ಶ್ರೀ ಸ್ಯಾಮ್ಯುಯಲ್ ಅಪ್ಪಾಜಿ ಯವರೂ ತುಂಬ ಸಹಕಾರ ನೀಡಿದ್ದಾರೆ. ಭಾರತದ ಪುರಾತತ್ವ ಇಲಾಖೆಯ ಶ್ರೀ ಎಸ್. ಆರ್. ರಾವ್ ಅವರು ನಾನು ಮೊದಲ ಸಲ ಈ ಯೋಜನೆಯನ್ನು ಸಮಿತಿಯ ಮುಂದಿಟ್ಟಾಗ ಹೆಚ್ಚಿನ ಬೆಂಬಲಕೊಟ್ಟರು; ಉತ್ಸಾಹದ ಮಾತಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಹಾಗೂ ಪುರಾತತ್ತ್ವ ಶಾಸ್ತ್ರ ಶಾಖೆಯ ಮುಖ್ಯರಾಗಿರುವ ಡಾ. ಎ. ವಿ. ನರಸಿಂಹಮೂರ್ತಿಯವರು ಈ ಯೋಜನೆಯಲ್ಲಿ ಮೊದಲಿನಿಂದಲೂ ನನಗೆ ನೆರವು ನೀಡಿದ್ದಾರೆ. ಒಂದು ದೃಷ್ಟಿಯಲ್ಲಿ ಅವರೇ ಈ ಯೋಜನೆಯ ಮೂಲಕರ್ತೃವೆಂದರೂ ಸಲ್ಲುತ್ತದೆ. ಅನೇಕ ರೀತಿಯಲ್ಲಿ ನನಗೆ ಮಾರ್ಗದರ್ಶನ ಮಾಡುತ್ತಿದ್ದ ಪುರಾತತ್ವ ಇಲಾಖೆಯ ನಿರ್ದೇಶಕರಾಗಿದ್ದ ಡಾ. ಎಂ. ಶೇಷಾದ್ರಿಯವರು ಮೊದಲ ಸಂಪುಟ ಪ್ರಕಟವಾಗುವ ಮೊದಲೇ ತೀರಿಕೊಂಡಿರುವುದು ನನಗೆ ತುಂಬ ವ್ಯಥೆಯನ್ನುಂಟುಮಾಡಿದೆ. ಭಾರತ ಸರ್ಕಾರದ ಮುಖ್ಯ ಶಾಸನಾಧಿ ಕಾರಿಗಳಾದ ಡಾ. ಜಿ. ಎಸ್. ಗಾಯಿ ಅವರು ಮತ್ತು ಅವರ ಸಹೋದ್ಯೋಗಿಗಳು ನನಗೆ ಹೆಜ್ಜೆ ಹೆಜ್ಜೆಗೂ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. ಡಾ. ಗಾಯಿ ಮತ್ತು ಡಾ. ಕೆ. ವಿ. ರಮೇಶ್ ನನಗೆ ಸಮಸ್ಯೆಗಳು ಬಂದಾಗಲೆಲ್ಲ ಸಹಾಯಮಾಡಿದ್ದಾರೆ; ಈ ಸಂಪುಟದ ಕೆಲ ಭಾಗಗಳನ್ನು ನೋಡಿಕೊಟ್ಟಿದ್ದಾರೆ. ಅಂಥ ವಿದ್ವಾಂಸರ ನೆರವು ಈ ಯೋಜನೆಗೆ ದೊರಕಿರುವುದು ಒಂದು ಅದೃಷ್ಟ ಸಂಪಾದಕೀಯ ಸಮಿತಿಯ ಸದಸ್ಯರೆಲ್ಲರೂ ತಮ್ಮ ಅನುಭವದ ವಿದ್ವತ್ತಿನ ತಜ್ಞ ಮಾರ್ಗದರ್ಶನವನ್ನು ನೀಡಿ ಉಪಕರಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮುದ್ರಣಾಲಯದ ನಿರ್ದೇಶಕ ರಾದ ಶ್ರೀ ಎಚ್. ನರಸಣ್ಣನವರೂ ಅವರ ಸಿಬ್ಬಂದಿ ವರ್ಗದವರೂ ಅಷ್ಟು ಸುಲಭವಲ್ಲದ ಈ ಕೆಲಸದಲ್ಲಿ ವಿಶೇಷವಾಗಿ ಸಹಕರಿಸಿದ್ದಾರೆ. ಕನ್ನಡ ಅಧ್ಯಯನ ಸಂಸ್ಥೆಯ ಛಾಯಾ ಚಿತ್ರಗ್ರಾಹಕ ಶ್ರೀ ಕೆ. ಆರ್, ಸುಂದರರಾಜ್ ಈ ಸಂಪುಟ ವನ್ನು ಸಚಿತ್ರವಾಗಿಸುವಲ್ಲಿ ಆಸಕ್ತಿ ವಹಿಸಿದ್ದಾರೆ. ಹಂತ ಹಂತಗಳಲ್ಲಿ ವಿಶ್ವವಿದ್ಯಾನಿಲಯದ ಅಧಿಕಾರಿಗಳೂ, ಅಧ್ಯಯನ ಸಂಸ್ಥೆಯ ವಿವಿಧ ವಿಭಾಗಗಳ ನನ್ನ ಸಹೋದ್ಯೋಗಿಗಳೂ ಸಹಕರಿಸಿ ನನ್ನ ಜವಾಬ್ದಾರಿಯ ಭಾರವನ್ನು ಕಡಿಮೆ ಮಾಡಿದ್ದಾರೆ. ಈ ಸಂಪುಟವನ್ನು ಪರಿಷ್ಕರಿಸಿ ಪ್ರಕಟಿಸಲು ಭಾರತ ಸರ್ಕಾರದ ಪುರಾತತ್ವ ಇಲಾಖೆಯ ಡೈರೆಕ್ಟರ್ ಜನರಲ್ ಅವರು ಸಮ್ಮತಿ ನೀಡಿದ್ದಾರೆ. ಇವರೆಲ್ಲರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.<noinclude><references/></noinclude> 7go7r6o5elw93ha8d7kczhbzcncpxpq ಪುಟ:ಬಾಳ ನಿಯಮ.djvu/೧೧ 104 80367 322277 246480 2026-05-24T15:35:43Z Pragathi. BH 7585 /* Validated */ 322277 proofread-page text/x-wiki <noinclude><pagequality level="4" user="Pragathi. BH" />{{c|{{xx-larger| ಬಾಳ ನಿಯಮ}}}}</noinclude> {{center|== ಬಾಳ ನಿಯಮ ==}} {{gap}}ಮುದುಕ ಕಾಸ್‍ಕೂಶ್ ಅತಿಯಾಶೆಯಿಂದ ಕಿವಿಗೊಟ್ಟು ಆಲಿಸಿದ ಆತನ ದೃಷ್ಟಿ ಮಬ್ಬಾಗಿ ಬಹಳ ಕಾಲವಾಗಿದ್ದರೂ, ಕಿವಿಗಳು ಇನ್ನೂ ಚುರುಕಾಗಿದ್ದುವು. ನೆರಿಗಟ್ಟ ಸುಕ್ಕಾಗಿದ್ದ ಹಣೆಯ ಹಿಂದೆ ಇದ್ದ ಆತನ ಬುದ್ಧಿಶಕ್ತಿ ಇನ್ನೂ ಸತ್ವಪೂರ್ಣವಾಗಿತ್ತು. ಎಷ್ಟು ಸಣ್ಣ ಸಾದರೂ ಅದರಲ್ಲಿ ನಾಟುತಿತ್ತು; ಆದರೆ ಅದು ಪ್ರಾಪಂಚಿಕ ವಿಷಯಗಳಿಂದ ವಿಮುಖವಾಗಿತ್ತು. {{gap}}ಅಗೋ, ಅವಳೇ ಸಿತಕಮತೋಹ; ಹಿಡಿಶಾಪಹಾಕುವವಳಂತೆ ಚೀರುತ್ತಾ ನಾಯಿಗಳನ್ನು ಒಂದೇ ಸಮನೆ ಬಡಿಯುತ್ತಾ ಸಜ್ಜುಗೊಳಿಸುತ್ತಿದ್ದಾಳೆ. ಅವಳು ಮುದುಕನ ಮೊಮ್ಮಗಳು. ಹಿಮಪ್ರದೇಶದಲ್ಲಿ ಯಾವ ಸಹಾಯವೂ ಇಲ್ಲದೆ ಹತಾಶನಾಗಿದ್ದ ಅಜ್ಜನ ಬಗ್ಗೆ ಯೋಚಿಸುವುದಕ್ಕೂ ಅವಳಿಗೆ ಸಮಯವಿರಲಿಲ್ಲ. ಶಿಬಿರವನ್ನು ಕೀಳಬೇಕಾಗಿತ್ತು. ಬಹುದೂರದ ಪ್ರಯಾಣಕ್ಕೆ ಕಾಲ ಹೆಚ್ಚಿರಲಿಲ್ಲ. ಮುಂದಿನ ಜೀವನದ ಕಾರ್ಯಕ್ರಮ ಅವಳನ್ನು ಸೆಳೆಯುತ್ತಿತ್ತು. ಅವಳನ್ನು ಆಹ್ವಾನಿಸುತ್ತಿದ್ದುದು ಜೀವನ, ಸಾವಲ್ಲ. ಮುದುಕನಾದರೋ ಸಾವಿನ ಹತ್ತಿರ ಸರಿಯುತ್ತಿದ್ದನು. {{gap}}ಯೋಚನೆಯಿಂದ ಮುದುಕನಿಗೆ ಫಕ್ಕನೆ ಗಾಬರಿಯಾಯಿತು.ವಾಗಿದ್ದ ಕೈಯನ್ನು ಮುಂದೆ ಚಾಚಿದನು. ನಡುಗುತ್ತಿದ್ದಂತೆಯೇ ಪಕ್ಕದಲ್ಲಿದ್ದ ಸೌದೆಯ ರಾಶಿಯ ಮೇಲೆ ಕೈಯಾಡಿಸಿದನು. ಪಕ್ಕದಲ್ಲಿದ್ದ ಸೌದೆ ಅವನಿಗೆ ಸ್ವಲ್ಪ ಸಮಾಧಾನ ತಂದಿತು. ಮತ್ತೆ ತನ್ನ ಕೈಗಳನ್ನು ಹಳೆಯದಾಗಿದ್ದ ದುಪಟಿಯಲ್ಲಿ ಮುಚ್ಚಿಕೊಂಡು ಆಲಿಸುತ್ತಾ ಕುಳಿತನು. {{gap}}ನಾಯಕನ ನೆಲೆ ಮುರಿದಂತಾಗಿ, ಮುಂದೆ ಸಾಗಿಸುವ ಏರ್ಪಾಟನ್ನು ಚರ್ಮದ ಚಟಪಟ ಶಬ್ದದಿಂದಲೇ ತಿಳಿಯಬಹುದಾಗಿತ್ತು, ಮುದುಕನ ಮಗನೇ ತಂಡದ ನಾಯಕನು. ಅವನೂ ಬಲಿಷ್ಠ, ನಿಸ್ಸಿಮ ಬೇಟೆಗಾರ, ಹೆಂಗಸರು ಸಾಮಾನು ಸಾಗಿಸಲು ಒದ್ದಾಡುತ್ತಿದ್ದಾಗ, ನಾಯಕನು ಅವರನ್ನು ಚಡಪಡಿಸುತ್ತಿದ್ದ ಕೂಗು ಕೇಳಿಬರುತ್ತಿತ್ತು. ವೃದ್ಧ ಕಾಸ್‌ಕೂಶ್ ಕಿವಿ ನಿಮಿರಿಸಿ ಆಲಿಸಿದನು....ಹೌದು ; ಇದೇ ಕಡೆಯ ಸಲ ಮಗನ ಧ್ವನಿಯನ್ನು ಕೇಳುವುದು. ಆಗಲೇ ಗೀಹ್, ಟಸ್ಕನ್ ಬಂಡಿಗಳು ಹೊರಟವು ! ಮತ್ತೆ ಏಳು, ಎಂಟು, ಒಂಬತ್ತು; ಕೊನೆಯದು ಮಾತ್ರ ಇನ್ನೂ ನಿಂತಿದೆ. ಅಲ್ಲಿ ! ಸಾಮಾನು<noinclude></noinclude> k2cb3n92mltfr5jqmq4atfpyzna8qls ಪುಟ:ಬಾಳ ನಿಯಮ.djvu/೧೨ 104 80368 322278 246580 2026-05-24T15:36:44Z Pragathi. BH 7585 /* Validated */ 322278 proofread-page text/x-wiki <noinclude><pagequality level="4" user="Pragathi. BH" />{{rh|೨|ಬಾಳ ನಿಯಮ|}}</noinclude>ಗಳನ್ನು ತುಂಬುತ್ತಿರುವಾಗ ಬೇಟಿಗಾರರು ಗೊಣಗುತ್ತಿದ್ದಾರೆ. ಆ ಸದ್ದು ತನಗೆ ಕೇಳಿಸುತ್ತಿದೆ. ಮಗುವೊಂದು ಬಿಕ್ಕಿ ಅಳುತ್ತಿದೆ. ತಾಯಿ ಮೆಲುದನಿಯಲ್ಲಿ ಸಮಾಧಾನ ಮಾಡುತ್ತಿದ್ದಾಳೆ. ಅಷ್ಟೇನೂ ದೃಢಕಾಯವಲ್ಲದ. ಪೀಡಿಸುತ್ತಿರುವ ಆ ಚಿಕ್ಕ ಮಗು ಕೂ-ಟೀ ಇರಬೇಕು. ಅದು ಬೇಗನೆ ಸಾಯುವ ಸ್ಥಿತಿಯಲ್ಲಿದೆ. ಸತ್ತರೇನಂತೆ? ಹೆಪ್ಪುಗಟ್ಟದ ಜೌಗುಪ್ರದೇಶದಲ್ಲೇ ಗೋರಿಮಾಡಿ ದೇಹ ತೋಳಗಳಿಗೆ ಸಿಗದಂತೆ ಕಲ್ಲು ಹೇರಬಹುದು. ಅಷ್ಟೇ ಜನ ಮಾಡುವ ಕೆಲಸ. ಆದರೇನಂತೆ? ಕೆಲವು ವರ್ಷಗಳಲ್ಲೇ, ಈಗ ಹೊಟ್ಟೆ ತುಂಬಿರುವನರು ಹಸಿದವರಾಗಿ ಅಲೆಯದೆ ಇರುತ್ತಾರೆಯೇ? ಕಡೆಗಂತೂ ಸದಾ ಹೆಸಿದಿರುವ ಮತ್ತು ಹಸಿವಿನ ಪರಮಾವಧಿಯನ್ನು ಮುಟ್ಟಿರುವ ಮೃತ್ಯು ಕಾದೇ ಇರುತ್ತದೆ. {{gap}}ಏನಿರಬಹುದು? ಹೌದು; ಜನ ಸ್ಲೆಜ್‌ ಗಾಡಿಗಳನ್ನು ಓಡಿಸುತ್ತಿದ್ದಾರೆ. {{gap}}ಸಾರಥಿ ಕಡಿವಾಣವನ್ನು ಬಿಗಿದೆಳೆಯುತಿದ್ದಾನೆ.. ಮುಂದೆ ಅಂಥ ಶಬ್ದ ಸೇಳುವ ಸಂಭವ ಇಲ್ಲದುದರಿಂದ, ಮುದುಕ ಗಮನವಿಟ್ಟು ಆಲಿಸಿದನು.... ನಾಯಿಗಳು ಹಲ್ಲು ಕಿರಿಯುತ್ತ ಗುರ್ರೆನ್ನುತಿದ್ದವು. ಮತ್ತೆ ಕುಂಯ್‌ಗುಟ್ಟುವ ಅಳುವಿನ ರಾಗ. ಅವುಗಳಿಗೆ ಕೆಲಸವೆಂದರೆ ಸಂಚಾರನೆಂದರೆ ಅಷ್ಟು ದ್ವೇಷ! ಒಂದೊಂದಾಗಿಯೂ ಸಿಧಾನವಾಗಿಯೂ ಬಂಡಿಗಳು ನಿಶ್ಶಬ್ದ ಪ್ರಪಂಚದೆಡೆ ನಡೆದವು. ತನ್ನ ಜೀವನದಿಂದ ಅವು ಬೇರೆಯಾದವು. ಈಗ ಕೊನೆಯ ಮನೋವೇಧಕ ಘಳಿಗೆಯನ್ನು ಏಕಾಂತದಲ್ಲಿ ಕಳೆಯಬೇಕಾಗಿದೆ. ಇಲ್ಲ; ಪಾದರಕ್ಷೆಯೊಂದು ಮಂಜಿನ ನೆಲನನ್ನು ತುಳಿಯುತ್ತಿದೆ. ಅಲ್ಲವೇ ?...ಮನುಷ್ಯನೊಬ್ಬ ಹತ್ತಿರ ಬಂದು ನಿಂತನು. ಅವನು ನಿಧಾನವಾಗಿ ಮುದುಕನ ತಲೆಯಮೇಲೆ ಕೈಯಿಟ್ಟು ನೇವರಿಸಿದನು....ತನ್ನ ಮಗ ಎಷ್ಟು ಒಳ್ಳೆಯವನಾಗಿದ್ದಾನೆ! ತನಗೆ ತಿಳಿದಂತೆ, ಗುಂಪನ್ನು ಬಿಟ್ಟು ವೃದ್ಧ ತಂದಡೆಗಾಗಿ ನಿಂತ ಮಕ್ಕಳು ವಿರಳ. ತನಗೆ ದೊರೆತಂಥ ಸುಯೋಗ ಹಿಂದಿನವರಿಗಿಲ್ಲ. {{gap}}ಮುದುಕನ ವಿಚಾರಶಕ್ತಿ ಭೂತಕಾಲದ ನೆನಪನ್ನು ತಂದುಕೊಳ್ಳುತ್ತಿತ್ತು. ಮಗನ ಧ್ವನಿಯನ್ನು ಕೇಳಿ ಮುದುಕ ಎಚ್ಚತ್ತು. {{gap}}"ನೀನು ಚೆನ್ನಾಗಿದ್ದೀಯಾ?" {{gap}}"ಹೂಂ; ಚೆನ್ನಾಗಿದ್ದೇನೆ" ಎಂದು ಮುದುಕ ಉತ್ತರಕೊಟ್ಟನು. {{gap}}"ಕಟ್ಟಿಗೆಯು ನಿನ್ನ ಬಳಿಯಿದೆ. ಬೆಂಕಿ ಚೆನ್ನಾಗಿ ಉರಿಯುತ್ತದೆ. ಮುಂಜಾನೆ ಮಬ್ಬಾಗಿದೆ, ಚಳಿ ಪ್ರಾರಂಭವಾಗಿದೆ. ಸ್ವಲ್ಪ ಹೊತ್ತಿನಲ್ಲೇ ಮಂಜು ಬೀಳುವ ಸಂಭವವುಂಟು....ಹೌದು ; ಈಗಲೂ ಬೀಳುತ್ತಿದೆ."<noinclude></noinclude> bzf0t0hcuue0x5i0f6mz04cvcs8d5or ಪುಟ:ಬಾಳ ನಿಯಮ.djvu/೧೩ 104 80369 322280 246581 2026-05-24T16:24:08Z Shreelatha.Halemane 7642 /* Validated */ 322280 proofread-page text/x-wiki <noinclude><pagequality level="4" user="Shreelatha.Halemane" />________________ {{rh|center=ಬಾಳ ನಿಯಮ|left=|right=೩}}</noinclude> {{gap}}"ನಿಜ ; ಈಗಲೂ ಮಂಜು ಬೀಳುತ್ತಿದೆ" ಎಂದು ಕಾಸ್ಕೂಶ್. {{gap}}ಮಗ ಹೇಳಿದನು-"ಗುಂಪು ಆತುರದಿಂದ ಹೊರಟಿತು. ಅವರ ಸಾಮಾನಿನ ಹೊರೆ ವಿಪರೀತವಾಗಿದೆ. ಎಲ್ಲರೂ ಹಸಿವಿನಿಂದ ಕಂಗೆಟ್ಟಿದ್ದಾರೆ. ದಾರಿ ಬಹಳ ದೂರವಾದುದರಿಂದ ಅವರು ವೇಗವಾಗಿ ನಡೆಯುತ್ತಿದ್ದಾರೆ. ನಾನು ಈಗ ಹೊರಡುತ್ತೇನೆ. ಬರಲೇ ?" {{gap}}"ಒಳ್ಳೆಯದು ; ನನ್ನ ಸ್ಥಿತಿಯಂತೂ ಗೊತ್ತಿದೆ. ಕಡೆಯ ವರ್ಷದ ಹಣ್ಣೆಲೆ ಯಂತೆ ಕೊಂಬೆಗೆ ಸ್ವಲ್ಪದರಲ್ಲಿ ಅಂಟಿಕೊಂಡಿದ್ದೇನೆ. ಮೊವಲ ಉಸಿರಿನ ಗಾಳಿಗೇ ಬೀಳುವವನಿದ್ದೇನೆ. ನನ್ನ ಧನಿಯೋ ಮುದುಕಿಯ ಧ್ವನಿಯಂತಿದೆ. ಕಣ್ಣುಗಳಿಗೆ ದಾರಿಯು ಕಾಣದಾಗಿದೆ. ಕಾಲುಗಳು ಭಾರದಿಂದ ಕುಸಿಯು ತಿವೆ. ನಾನು ಬಹಳ ಬಳಲಿದ್ದೇನೆ. ಒಳ್ಳೇದು ಹೋಗಿ ಬಾ." {{gap}}ಮುದುಕ ತೃಪ್ತಿಯಿಂದ ತಲೆತಗ್ಗಿಸಿ ಕುಳಿತನು. ಹಿಮದ ದಾರಿಯಲ್ಲಿ ಹೆಜ್ಜೆಯ ಸಪ್ಪಳ ಕ್ರಮೇಣ ದೂರ ದೂರವಾಗಿ ಕೇಳಿಸಿತು. ಇನ್ನು ತನ್ನ ಮಗ ನನ್ನು ಕರೆಯಲು ಅಸಾಧ್ಯವೆಂದು ತಿಳಿಯುವ ತನಕ ಕಾಸ್‌ ಕೂಶ್ ಹಾಗೆಯೆ ತಲೆತ ಗ್ಗಿಸಿದ್ದನು. ಆಮೇಲೆ ಅತ್ಯಾತುರದಿಂದ ಕಟ್ಟಿಗೆಯ ಕಡೆ ಕೈ ಚಾಚಿದನು. ಆ ಕಟ್ಟಿಗೆಯ ಹೊರೆಯೊಂದೇ ತನಗೂ, ತನಗಾಗಿ ಬಾಯಿತೆರೆದು ಕುಳಿತಿರುವ ನಿತ್ಯ ತೆಗೂ ಮಧ್ಯೆ ನಿಂತಹಾಗಿತ್ತು....ಹೌದು ; ತನ್ನ ಜೀವನವು ಒಂದು ಹಿಡಿ ಕಟ್ಟಿಗೆಯ ಪ್ರಮಾಣಕ್ಕೆ ಸರಿಹೊಂದುತ್ತದೆ. ಬೆಂಕಿ ಒಂದೊಂದು ತುಂಡು ಗಳನ್ನು ಆವರಿಸುತ್ತ ಬರುವಂತೆ ನಾವು ಕೂಡ ತನ್ನನ್ನು ನಿಧಾನವಾಗಿ ಅಪ್ಪಳಿ ಸುತ್ತದೆ. ಕೊನೆಯ ತುಂಡು ಉರಿದು ಬೂದಿಯಾದಾಗ, ಹಿಮು ನುಗ್ಗುತ್ತದೆ, ಅಲ್ಲಿಗೆ ಜೀವನದ ಅಂತ್ಯ, ಸಾವಿನ ಜಯ. ಅಂದರೆ ಮೊದಲು ತನ್ನ ಕಾಲು, ಆಮೇಲೆ ಕೈಗಳು ; ಒಂದು ಕಡೆಯಿಂದ ಜಡತ್ವ ಚೇತನವನ್ನು ನುಂಗುತ್ತಾ ದೇಹಾದ್ಯಂತ ಪಸರಿಸುತ್ತದೆ. ತಲೆ ಮೊಣಕಾಲ ಮೇಲೆ ಬಿದ್ದಾಗ ಸಂಪೂರ್ಣ ವಿರಾಮ, ಪ್ರತಿಯೊಬ್ಬರೂ ಸಾಯಲೇಬೇಕಿರುವಾಗ ಇದಕ್ಕಿಂತಲೂ ಸುಲಭ ಸಾಧ್ಯ ಯಾವುದಿದೆ ? {{gap}}ಅವನೇನೂ ಗೊಣಗುಟ್ಟಲಿಲ್ಲ. ಬಾಳ ನಿಯಮಕ್ಕೆ ತಲೆಬಾಗಲೇ ಬೇಕಲ್ಲವೇ! ಪ್ರಕೃತಿಯ ಮಡಿಲಲ್ಲಿ ಹುಟ್ಟಿ, ಪ್ರಕೃತಿಗಾಗಿಯೆ ಬೆಳೆದವನಿಗೆ ಅದರ ನಿಯಮ ಹೊಸದಲ್ಲ. ಆ ನಿಸರ್ಗ ನಿಯಮ ಎಲ್ಲಕ್ಕೂ ಅನ್ವಯವಾಗುವುದು. ಅದು ವ್ಯಕ್ತಿಯ ಹಿತವನ್ನು ಗಮನಿಸುವುದಿಲ್ಲ. ವ್ಯಕ್ತಿ ಒಂದು ಸಲಕರಣೆ ಮಾತ್ರ. ಅದರ ಆಸಕ್ತಿಯಿರುವುದು ಸಮಷ್ಟಿಯಲ್ಲಿ ; ಅಂದರೆ<noinclude></noinclude> alkzotagup2fcmgh15lbuh7xl7ih99v ಪುಟ:ಬಾಳ ನಿಯಮ.djvu/೧೪ 104 80370 322281 246584 2026-05-24T16:25:05Z Shreelatha.Halemane 7642 /* Validated */ 322281 proofread-page text/x-wiki <noinclude><pagequality level="4" user="Shreelatha.Halemane" />{{rh|center=ಬಾಳ ನಿಯಮ|left=೪|right=}}</noinclude>ವಿವಿಧ ಗುಂಪುಗಳ ಸೃಷ್ಟಿಯಲ್ಲಿ....ಇಂಥ ಆಳವಾದ ಭಾವನೆ ವೃದ್ಧ ಕಾನ್ ಕೂಶನ ಸಾಮಾನ್ಯ ಬುದ್ಧಿಗೆ ಸಿಲುಕಿದ್ದು ತುಂಬ ಸಾಧನೆಯ ಫಲವೇ ಸರಿ. ಆದ್ದರಿಂದಲೇ ತಕ್ಷಣ ಗ್ರಹಿಸಲು ಶಕ್ಯವಾಯಿತು....ನಿಯಮದ ಸೂತ್ರವನ್ನು ಎಲ್ಲೆಡೆಯಲ್ಲೂ ಕಾಣಬಹುದು. ಸಸ್ಯದ ಬೆಳವಣಿಗೆ, ಕಣ್ಣು ಕುಕ್ಕುವಂತೆ ಹಸಿರು ಬಣ್ಣ ತಾಳುವ ಮೊಗ್ಗು, ಕಡೆಗೆ ಹಳದಿಯಾಗಿ ಬೀಳುವ ಎಲೆ ಈ ಸಾಮಾನ್ಯ ಚರಿತ್ರೆಯಲ್ಲೇ ಬಾಳಿನ ನಿಯಮವಿದೆ. ಆದರೆ ಪ್ರತಿ ವ್ಯಕ್ತಿಗೂ ನಿಸರ್ಗದತ್ತವಾದ ಕರ್ತವ್ಯವೊಂದಿದೆ. ಅದನ್ನು ನೆರವೇರಿಸಲಿ, ಬಿಡಲಿ, ಮನುಷ್ಯ ಸಾಯುವುದಂತು ಖಂಡಿತ. ಒಟ್ಟಿನಲ್ಲಿ ನಿಸರ್ಗ ನಿಯಮ ಯಾರನ್ನೂ ಲಕ್ಷಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ ವಿಧೇಯರಾದವರು ಬೇಕಾದಷ್ಟು ಮಂದಿಯಿದ್ದಾರೆ. ಇದರ ವ್ಯಾಪ್ತಿ ಎಲ್ಲಿಯ ತನಕ ಹೋಗಿದೆಯೆಂದರೆ ವಿಧೇಯನಾದವನ ಸ್ಥಾನ ಗೌಣವಾಗಿ, 'ವಿಧೇಯತೆ' ಎಂಬ ಶಕ್ತಿಯೇ ಜಗತ್ತಿನ ಸೂತ್ರವನ್ನು ಹಿಡಿಯ ಬಲ್ಲ ಜೀವಾಳವಾಗಿದೆ. ತಾನು ಚಿಕ್ಕವನಾಗಿದ್ದಾಗ ವೃದ್ಧರನ್ನು ಹೇಗೆ ನೋಡಿದ್ದನೋ, ಹಾಗೆಯೇ ಆ ವೃದ್ಧರೂ ಕೂಡ ತಮ್ಮ ಬಾಲ್ಯದಲ್ಲಿ ಹಿಂದಿನವರನ್ನು ಕಂಡಿರಲೇಬೇಕು. ಆದ್ದರಿಂದ ಅನೇಕರ ವಿಧೇಯತೆಯಿಂದ ಒಂದು ತಂಡ ಇಲ್ಲಿಯತನಕ ಬದುಕಿದೆ ; ಮುಂದೆಯೂ ಬದುಕುತ್ತದೆ. ಆಗಿಹೋದ ವ್ಯಕ್ತಿ ಎಲ್ಲಿ ಯಾವ ವಿಶ್ರಾಂತಿ ಸ್ಥಳವನ್ನು ಸೇರಿದ? ಎಂಬ ಪ್ರಶ್ನೆಯನ್ನು ಮಾತ್ರ ನಮ್ಮ ಜ್ಞಾಪಕ ಶಕ್ತಿಯಿಂದ ದೂರವಿಡಬೇಕು. ಅವರ ಗಣನೆ ಬೇಡ ; ಅವರ ಚರಿತ್ರೆಯನ್ನು ಇತಿಹಾಸದ ಉಪಕಥೆಯೆಂದು ಭಾವಿಸೋಣ. ಬೇಸಿಗೆಯ ದಿನಗಳಲ್ಲಿ ತಾನಾಗಿಯೆ ಹೊರಟುಹೋಗುವ ಮೋಡಗಳಂತೆ ಅವರು ಕಣ್ಮರೆಯಾದರು. ಹಾಗೆಯೆ ಪ್ರಾಸಂಗಿಕವಾಗಿ ಬಂದಿರುವ ತಾನು ಕೂಡ ಈ ಜಗತ್ತಿನಿಂದ ಜಾರಿಹೋಗಲೇ ಬೇಕು. ಅದರಿಂದ ನಿಸರ್ಗಕ್ಕೆ ಯಾವ ದುಃಖವೂ ಇಲ್ಲ. ನಿಸರ್ಗದ ಮುಖ ಎರಡು ಬಗೆಯಾಗಿದೆ. ಪೀಳಿಗೆಯ ಬೆಳವಣಿಗೆ ಒಂದಾದರೆ, ವ್ಯಕ್ತಿಗಳು ಸಾಯಲೇಬೇಕೆಂಬ ನಿಯಮ ಮತ್ತೊಂದು. ಒಂದು ಕರ್ತವ್ಯ ಪ್ರಚೋದಕವಾಗಿದ್ದರೆ, ಮತ್ತೊಂದು ಶಾಸನ ರೂಪವಾಗಿದೆ. ಉದಾಹರಣೆಗೆ, ಒಬ್ಬ ಹುಡುಗಿ ಇದ್ದಾಳೆನ್ನಿ, ಅವಳಿಗೆ ವಯಸ್ಸು ಬಂದಂತೆ ಸುಂದರಿಯೂ, ದೃಢಕಾಯಳೂ, ಮೋಹಕ ನೇತ್ರವುಳ್ಳವಳೂ ದಿಟ್ಟತನದಿಂದ ನಡೆಯುವವಳೂ ಆಗುತ್ತಾಳೆ. ಎಲ್ಲರ ಕಣ್ಣನ್ನೂ ಆನಂದಸಾಗರದಲ್ಲಿ ಮುಳುಗಿ ಸುತ್ತಾಳೆ. ಅಷ್ಟು ಮಾತ್ರಕ್ಕೆ ಅವಳ ಜೀವನದ ಕರ್ತವ್ಯ ಮುಗಿಯಿತೇ ? ಇಲ್ಲ; ತರುಣಿಯ ವಿವಿಧ ಹಾವಭಾವಗಳು ಎಷ್ಟೋ ಪುರುಷರ ಮನೋರಂಗದಲ್ಲಿ<noinclude></noinclude> 1p1meen8svers57mty3lpqln31z2bxs ಪುಟ:ಬಾಳ ನಿಯಮ.djvu/೧೯ 104 80375 322282 246460 2026-05-24T16:26:30Z Shreelatha.Halemane 7642 322282 proofread-page text/x-wiki <noinclude><pagequality level="3" user="Gshguru" />{{rh|center=ಬಾಳ ನಿಯಮ|left=|right=೯}}</noinclude>{{gap}}ಅದೇ ಹಿಮಪಶು ; ಹರಿತಾದ ಕೋಡು, ಮುರಿದ ಪಕ್ಕೆ, ರಕ್ತಮಯ ಪಾರ್ಶ್ವ, ಕಿತ್ತಾಟದಲ್ಲಿ ಜಲ್ಲರಿಯಾಡಿದ ಚರ್ಮ ; ಹಿಂದೆ ಉತ್ಸಾಹದಿಂದ ನುಗ್ಗುತ್ತಿರುವ ತೋಳಗಳ ಹಿಂಡು ಶುಭ್ರ ಹಿಮದ ಸುತ್ತಲೂ ನಿಷ್ಕರುಣೆಯ ಕತ್ತಲೆ ಆವರಿಸಿತು. {{gap}}ಚಳಿಗಾಳಿಯ ಹೊಡೆತದಿಂದ ಮುದುಕನ ಆತ್ಮ ಚೇತರಿಸಿಕೊಂಡು ಹೋರಾಟಕ್ಕೆ ನಿಂತಿತು. ಅವನಿಗೆ ಆಯುಧವಿಲ್ಲವೇ ? ತಕ್ಷಣ ಉರಿಯುತ್ತಿದ್ದ ಕಟ್ಟಿಗೆಯನ್ನೇ ತೆಗೆದನು. ಆ ಕ್ಷಣ ತೋಳವೊಂದು ಹಿಂಜರಿದು ಕೂಗಿತು. ಮನುಷ್ಯನ ಹೆದರಿಕೆಯಿರಬೇಕು. ಆದರೆ ಹಿಂದೆಯೇ ಇದ್ದ ತೋಳಗಳ ಹಿಂಡು ಮುದುಕನ ಸುತ್ತಲೂ ನಿಂತಿತು. ಪಾವ; ಮುದುಕ ಒಬ್ಬಂಟಿಗ ನಾಗಿದ್ದರೂ ಹೆದರದೆ ಕೈ ಬೀಸಿದನು. ತೋಳಗಳ ಕೂಗಾಟ ಹೆಚ್ಚತೊಡಗಿತು. ಅವು ಚೆದರದೆ ಒಂದೇ ಕಡೆ ಸುತ್ತಗಟ್ಟಿದವು. ಒಂದೊಂದಾಗಿ ಮುದುಕನ ಮೇಲೆ ಬೀಳಲು ಹವಣಿಸುತ್ತಿದ್ದವು. {{gap}}"ನಾನೇಕೆ ಇನ್ನೂ ಜೀವ ಹಿಡಿದಿರಬೇಕು?" ಎನ್ನುತ್ತಾ ಕಾಸ್‌ಕೂಶ್ ಕೈಯಲ್ಲಿದ್ದ ಕೊಳ್ಳಿಯನ್ನು ಬಿನಾಡಿದನು. ಕೊಳ್ಳಿ ಹಿಮದ ಮೇಲೆ ಬಿದ್ದು ಹಿಸ್ ಎನ್ನುತ್ತಾ ತಣ್ಣಗಾಯಿತು. ವೃದ್ಧ ಹಿಮಪಶುವಿನ ಕಡೆಯ ದೃಶ್ಯ ಕಣ್ಣಿಗೆ ಕಟ್ಟಿದಂತಾಯಿತು. ಅಂತೂ ಕಾನ್ ಕೂಶ್ ಭಾರ ಹೊತ್ತ ತಲೆಯನ್ನು ಆಗಲೇ ಜಡವಾಗಿದ್ದ ಕಾಲುಗಳ ಮೇಲೆಸೆದನು. ಅದರಲ್ಲಿ ತಪ್ಪೇನು? ಅದು ಬಾಳ ನಿಯಮ ತಾನೆ?.... {{rule|3em}}<noinclude></noinclude> 80fzejfg6dc80ap25662gsii9hoo1qy ಪುಟ:ಬಾಳ ನಿಯಮ.djvu/೨೦ 104 80376 322299 246461 2026-05-24T17:58:49Z Pragathi. BH 7585 /* Validated */ 322299 proofread-page text/x-wiki <noinclude><pagequality level="4" user="Pragathi. BH" />00 ಬಾಳ ನಿಯಯ</noinclude> == ಮುಖ ಭಂಗ == ಅದೇ ಕೊನೆ. ಮನೋವೇಧಕವೂ, ಭಯಾನಕವೂ ಆದ ದಾರಿಯಲ್ಲಿ ಸುಬೆನ್ ಕೊವ್ ಬಹುದೂರದ ಪ್ರಯಾಣ ಮಾಡಿ ಮನೆಗೆ ಹಿಂದಿರುಗಿ ಹಾರಿ ಬರುವ ಪಾರಿವಾಳದಂತೆ ಯೂರೋಪಿನ ರಾಜಧಾನಿಗಳ ಕಡೆ ಹೊರಟಿದ್ದನು. ಈಗ ಅವನು ಎಲ್ಲಕ್ಕಿಂತಲೂ ದೂರವಾದ ರಷ್ಯನರಿಗೆ ಸೇರಿದ್ದ ಅಮೇರಿಕದ ಭೂ ಭಾಗದ ಹಿಮದಲ್ಲಿ ಕುಳಿತಿದ್ದನು. ಅವನ ಎರಡು ಕೈಗಳನ್ನೂ ಹೆಡಮುರಿ ಕಟ್ಟಲಾಗಿತ್ತು. ಮುಂದೆ ಬರಲಿರುವ ಕ್ರೂರ ಯಾತನೆಯನ್ನು ಅನುಭವಿಸಲು ಕಾದಿದ್ದನು. ಎದುರಿಗೆ ಭಾರಿ ರಾವುತನೊಬ್ಬನನ್ನು ಮಂಜಿನ ಮೇಲೆ ಕೆಳಮೊಗ ಮಾಡಿ ಮಲಗಿಸಿದ್ದರು; ಆತ ನೋವಿನಿಂದ ನರಳುತಿದ್ದುದನ್ನು ಸುಬೆನ್ ವ್ ಅಚ್ಚರಿಯಿಂದ ನೋಡಿದನು. ಆ ದೈತ್ಯನನ್ನು ಶಿಕ್ಷಿಸಿ ಹೆಂಗಸರಿಗಿಂತ ಕಡೆ ಮಾಡಿದ್ದರು. ಆ ಮನುಷ್ಯನ ರೋದನವೇ, ಆತನ ಬಗ್ಗೆ ನಡೆದ ಪೈಶಾಚಿಕ ಶಿಕ್ಷಾಕ್ರಮ ಅಸಾಮಾನ್ಯವಾಗಿತ್ತೆಂಬುದನ್ನು ವ್ಯಕ್ತಪಡಿಸುತಿತ್ತು. ಸುಬೆನ್ ಕೊವ್ ನಡುಗುತ್ತಾ ನೋಡಿದನು. ಆದರೆ ಅವನು ಸಾವಿಗೆ ಹೆದರುವವನಲ್ಲ. ವಾರ್ಸಾದಿಂದ ನ್ಯುಲಾಟೋ ತನಕ ಬೇಸರದ ಹಾದಿಯಲ್ಲಿ ಜೀವವನ್ನು ಹೊತ್ತು ತಂದವನಿಗೆ, ಸಾವು ಎಂದ ಮಾತ್ರಕ್ಕೆ ಕಂಪಿಸುವಂಥ ಸಂಭವವಿಲ್ಲ. ಆದರೆ ಅವನು ನರಕ ಯಾತನೆಯ ಅನುಭವಕ್ಕೆ ವಿರೋಧಿಯಾಗಿದ್ದನು. ಅದು ಆತ್ಮವಿಶ್ವಾಸಕ್ಕೆ ಧಕ್ಕೆಯುಂಟುಮಾಡಿತ್ತು. ನೋವಿನಿಂದುಂಟಾಗುವ ದುಃಖಮಯ ದೃಶ್ಯ ನೋವಿಗಿಂತಲೂ ನಿಂದನೀಯವಾಗಿತ್ತು. ತಾನು ಕೂಡ ಬಿಗ್ ಇವಾನ್ ಮತ್ತು ಇನ್ನೂ ಮುಂಚೆ ಸತ್ತಿರುವ ಮನುಷ್ಯರ ಹಾಗೆ ಯಾಚಿಸಿ, ಪ್ರಾರ್ಥಿಸಿ, ಮೊರೆಯಿಟ್ಟು ಕಷ್ಟ ಪಡಬೇಕಾಗಬಹುದು ಎಂಬ ಅಂಶವನ್ನು ಸುಬೆನ್‌ಕೋವ್ ತಿಳಿದಿದ್ದನು; ಅಂಥ ಮಾರ್ಗ ಒಳ್ಳೆಯದಲ್ಲ.... ಸರಿಯಾದ ಪರಿಹಾರ ಯಾವುದೆಂದರೆ ಧೈರ್ಯವಾಗಿ, ಯಾರ ಹಂಗೂ ಇಲ್ಲದೆ, ನಗುನಗುತ್ತಾ ಕಣ್ಮರೆಯಾಗುವುದು!.... ಇಲ್ಲದೆ ಶಕ್ತಿ ಕುಗ್ಗಿ, ಮಾಂಸಖಂಡಗಳ ಚುಚ್ಚು ನೋವಿನಿಂದ ತಳಮಳಗೊಂಡು, ಕೋತಿಯಂತೆ ಚೀತ್ಕಾರ ಮಾಡುತ್ತಾ, ಕಿರುಗುಟ್ಟುತ್ತಾ ಶುದ್ಧ ಮೃಗದಂತಾಗುವುದು ಅಬ್ಬಾ, ಅದೇ ಅತ್ಯಂತ ಭೀಷಣವಾದುದು.... ತಪ್ಪಿಸಿಕೊಳ್ಳಲು ಯಾವ ಉಪಾಯವೂ ಇದ್ದಿಲ್ಲ. ಎಂದು ಪೋಲೆಂಡಿನ ಸ್ವಾತಂತ್ರ್ಯದ ದಿವ್ಯ ಕನಸನ್ನು ಕಂಡನೋ, ಅಂದಿನಿಂದ ಅವನು ವಿಧಿಯ ಕೀಲುಗೊಂಬೆಯಾಗಿದ್ದನು. ಮೊದಲಿನಿಂದಲೂ ವಿಧಿಯ ಕೈವಾಡ ನಡೆದಿತ್ತು. ವಾರ್ಸಾ, ಸೇಂಟ್ ಟೈಟರ್ ಬರ್ಗ್, ಸೈಬೀರಿಯದ ಗಣಿಗಳು, ಮತ್ತು ಕಮ್ ಚಟಕ ಸ್ಥಳಗಳಿಂದ ತುಪ್ಪುಳು ಚರ್ಮಕ್ಕಾಗಿ ಬರುವ ಕಳ್ಳರೊಡನೆ ಅಲ್ಲಾಡುವ ದೋಣಿಗಳಲ್ಲಿ ಈ ತುದಿಗೆ ಅವನನ್ನು ತಂದು ನಿಲ್ಲಿಸಿದೆ. ಅವನಂಥ ಕನಸುಗಾರ, ಕಲಾವಿದ, ಸೂಕ್ಷ್ಮಮತಿಗೆ ಈ ಕೊನೆಗಾಲವೇ ? ದೂರದ ಕತ್ತಲ ಪ್ರದೇಶದಲ್ಲಿ, ಅನಾಗರಿಕರ ಮಧ್ಯೆ ಗೋಳಿಡುತ್ತಾ, ಸುಲಭವಾಗಿ ಮನೋವಿಕಾರ ಹೊಂದುತ್ತಾ<noinclude></noinclude> 2d8e0rorcfxq8vm6uyl76bohq2aqwu5 ಪುಟ:ಬಾಳ ನಿಯಮ.djvu/೨೧೧ 104 80567 322279 246443 2026-05-24T15:38:35Z Pragathi. BH 7585 /* Validated */ 322279 proofread-page text/x-wiki <noinclude><pagequality level="4" user="Pragathi. BH" /> {{rh|center=ಮೋಹದ ಬಲೆಯಲ್ಲಿ|left=|right=೨೦೩}}</noinclude>ಇಂಗ್ಲೆಂಡ್ ಅವನ ಜನ್ಮಸ್ಥಳ. ಆದರೆ ಹವಾಯಿಯ ರೀತಿ ನೀತಿಗಳನ್ನು ಚೆನ್ನಾಗಿ ಅಭ್ಯಾಸಮಾಡಿದ್ದನು. ಬಂದವನೇ ಮೊಟ್ಟ ಮೊದಲು ತೋಳು ಗಳನ್ನು ಬಳಸಿ, ಬೆಲ್ಲಳಿಗೆ ಮುತ್ತಿಟ್ಟನು. ಹವಾಯಿಯವರಂತೆಯೆ ಅವನ ಹೃದಯ ವಿಶ್ವಾಸದಿಂದ ತುಂಬಿಹೋಗಿತ್ತು. ಏನೊ ಹೆಂಗಸರ ಮಾತುಕಥೆ ನಡೆದಿರಬೇಕೆಂದು ಅವನ ಚುರುಕು ಕಣ್ಣುಗಳು ಅಗಲೇ ಗ್ರಹಿಸಿದವು. ನಕ್ಷತ್ರದ ಬೆಳಕಿನಂತಿದ್ದ ಅವರ ಬುದ್ಧಿವಂತಿಕೆಯಿಂದ ಎಲ್ಲವೂ ಪ್ರಶಾಂತವಾಗಿಯೇ ಕೊನೆಗೊಂಡಿರಬೇಕೆಂದು ಊಹಿಸಿ, ಆ ಗೋಜಿಗೆ ಹೋಗಲಿಲ್ಲ. {{gap}}ರಾಸ್ಕೋ ಸ್ಕಾನ್ ಡೈಲ್ ತನ್ನ ಹೆಂಡತಿಗೆ ಮುತ್ತಿಟ್ಟು, "ಎಲ್ಲಿ ಮತ್ತು ಮಕ್ಕಳು ಬರುತ್ತಾರಂತೆ. ಈಗತಾನೆ ಹಡಗಿನಿಂದ ನಿಸ್ತಂತು ವಾರ್ತೆ ಬಂತು. 'ಮಾಯ್'ಗೆ ಹೋಗುವುದಕ್ಕಿಂತ ಮುಂಚೆ ನಮ್ಮಲ್ಲಿ ಕೆಲವು ದಿನಗಳು ಕಾಲಕಳೆಯುತ್ತಾರಂತೆ...." ಎಂದು ಸಂತನದ ಸುದ್ದಿಯನ್ನು ಹೊರಗೆಡಹಿದನು. {{gap}}ಮುಂದಿನ ಏರ್ಪಾಟನ್ನು ಮಾರ್ಧ ಸ್ಕಾನ್‌ ಡೈಲ್ ಯೋಚಿಸಿ ಹೇಳಿದಳು : “ಸೋದರಿ ಬೆಲ್ಲ, ನಿನ್ನನ್ನು ಗುಲಾಬಿ ಕೋಣೆಯಲ್ಲಿ ಇಳಿಸಲು ಯೋಚಿಸಿದ್ದೆ. ಅದು ವಿರಾಲವಾಗಿದೆ. ಎಲ್ಲಿ, ಅವಳ ಮಕ್ಕಳು, ನರ್ಸುಗಳು ಮತ್ತು ಅವಳ ಎಲ್ಲ ವಸ್ತುಗಳಿಗೂ ಆ ರೂಮು ಸರಿಯಾಗಿದೆ. ಆದ್ದರಿಂದ ನೀನು ಎಮ್ಮ ರಾಣಿಯ ಕೋಣೆಯಲ್ಲಿ ಇರಬೇಕಾಗುತ್ತೆ....” {{gap}}"ಅದಕ್ಕೇನಂತೆ? ಹೋದಸಾರಿಯೂ ನಾನು ಅಲ್ಲೇ ಇದ್ದೆ ; ಪರವಾಗಿಲ್ಲ. ನನಗೆ ಅದೇ ಇಷ್ಟ" ಎಂದಳು ಬೆಲ್ಲ. {{gap}}ಇಬ್ಬರೂ ಸೊಗಸಾದ ಮೈಕಟ್ಟಿನ ಶ್ರೇಷ್ಠ ಹೆಂಗಸರು; ಅವರ ಮಧ್ಯೆ ಎತ್ತರವಾಗಿಯೂ, ತೆಳ್ಳಗೂ, ಗಂಭೀರವಾಗಿಯೂ ನಿಂತ ರಾಸ್ಕೊ ಸ್ಕಾನ್‌ ನನ್ನು ನೋಡಬೇಕು! ಹವಾಯಿಯವರ ಪ್ರೇಮದಾಟಗಳನ್ನು ಅವನು ಚೆನ್ನಾಗಿ ಅರಿತಿದ್ದಾನೆ. ದಿವ್ಯವಾಗಿದ್ದ ಇಬ್ಬರ ನಡುವನ್ನೂ ತನ್ನ ತೋಳುಗಳಿಂದ ಬಳಸಿ ಬಂಗಲೆಯ ಕಡೆಗೆ ಮುಂದುವರಿದನು.<noinclude></noinclude> s8g72nvcc8hpvfk8roimd7zufai4gol ಪುಟ:ವೈಶಾಖ.pdf/೨೧೮ 104 82147 322356 192394 2026-05-25T04:35:47Z Shreesha Sharma 7840 /* Proofread */ 322356 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೨೦೨|right=ವೈಶಾಖ}} ಸಾಲಿಗ್ರಾಮಗಳಿಗೆ ಕ್ಷೀರಾಭಿಷೇಕ ಮಾಡಿ, ಅನಂತರ ನೀರಿನಲ್ಲಿ ತೊಳೆದು ಮಡಿವಸ್ತ್ರದಿಂದ ಅವನ್ನು ಒರಿಸಿ ಇಟ್ಟರು. ತರುವಾಯ ರುಕ್ಕಿಣಿಯು ಅರ್ಧ ತೇಯ್ದಿದ್ದ ಗಂಧವನ್ನು ಇನ್ನೂ ಗಟ್ಟಿ ಬರುವಂತೆ ತೇಯ್ದು, ಅದನ್ನೂ ಕುಂಕುಮವನ್ನೂ ಸಾಲಿಗ್ರಾಮಗಳಿಗೂ ದೇವರ ಪಟಗಳಿಗೂ ಹಚ್ಚಿ, ರುಕ್ಕಿಣಿಯು ಹಿತ್ತಲಿನ ಹೂಗಿಡಗಳಿಂದ ಆರಿಸಿ ಬಿದಿರು ಬುಟ್ಟಿಯಲ್ಲಿ ತಂದಿಟ್ಟಿದ್ದ ಮಲ್ಲಿಗೆ, ಕೆಂಪು ದಾಸವಾಳ, ಇತ್ಯಾದಿ ಹೂಗಳನ್ನು ಧರಿಸುತ್ತ ನಾರಾಯಣಸೂಕ್ತವನ್ನು ಪಠಿಸಿದರು. {{gap}}ಶಾಸ್ತ್ರಿಗಳ ಪೂಜೆ ಈ ದಿವಸ ಮಧ್ಯಾಹ್ನ ನಾಲ್ಕೂವರೆಯಾದರೂ ಮುಗಿಯಲಿಲ್ಲ. ತಾವು ಎಸಗಿದೆ ಅಪರಾಧಕ್ಕೆ ವ್ರತೋಪವಾಸಗಳಿಂದ ತಮ್ಮ ದೇಹ ದಂಡಿಸಿ ಹತೋಟಿಯಲ್ಲಿಡಬೇಕೆಂದು ಅವರು ಸಂಕಲ್ಪ ಮಾಡಿದಂತಿತ್ತು. {{gap}}ರುಕ್ಕಿಣಿಯು ಕಾದು ಕಾದು ಸೊಪ್ಪಾಗಿ ಅಡಿಗೆಕೋಣೆಯಲ್ಲಿ ನೆಲದ ಮೇಲೇ ಒರಗಿ ನಿದ್ದೆ ಹೋಗಿದ್ದಳು. ಶಾಸ್ತ್ರಿಗಳು ಪೂಜೆ ಮುಗಿಸಿ ಬಂದು ನೋಡಿದವರು, ಯಾಕೆ ಎಬ್ಬಿಸಬೇಕೆಂದು ಹೊರಟುಹೋಗುವುದರಲ್ಲಿದ್ದರು. ಆದರೆ ತಮಗೇನೊ ಆಹಾರದ ಅಗತ್ಯವಿರಲಿಲ್ಲ. ಹಾಗೆಂದು ಪಾಪ ರುಕ್ಕಿಣಿಯೇಕೆ ಹಸಿದಿರಬೇಕು, ಎನ್ನಿಸಿ- “ರುಕ್ಕು- ಎಂದು ಕರುಣೆ ತುಂಬಿದ ಸ್ವರದಲ್ಲಿ ಕೂಗಿದರು. {{gap}}ರುಕ್ಕಿಣಿಯು ದಡಬಡ ಎದ್ದು ಕುಳಿತಳು. ಸೆರಗಳನ್ನು ಸರಿಪಡಿಸಿಕೊಳ್ಳುತ್ತ, “ಬೆಳಿಗ್ಗೆ ಮಾಡಿದ ಉಪ್ಪಿಟ್ಟಿದೆ” ಎಂದು ತಡವರಿಸಿದಳು. ಶಾಸ್ತ್ರಿಗಳು ಶಾಂತಸ್ವರದಲ್ಲಿ. “ಬೇಡ, ಬೇಡ. ಇನ್ನು ಮೇಲೆ ನಾನು ಬೆಳಗಿನ ಫಳಾರ ಮಾಡಲ್ಲ. ಮಧ್ಯಾಹ್ನ ಒಂದು ಊಟವಾದರೆ ಮುಗಿಯಿತು. ರಾತ್ರಿಯ ಊಟ ಬೇಕಿಲ್ಲ, ಕುಡಿಯಲು ತುಳಸೀ ದಳ ಹಾಕಿದ ನೀರಿದ್ದರೆ ತೀರಿಸು- ಎಂದರು. {{gap}}ರುಕ್ಕಿಣಿಯು ಮರುಮಾತಾಡದೆ ಅವರ ಅಪೇಕ್ಷೆಯಂತೆ ಮಧ್ಯಾಹ್ನದ ಊಟವನ್ನೆ ಬಡಿಸುತ್ತ, “ಕೆಲವೇ ಗಂಟೆಗಳಲ್ಲಿ ಎಂಥ ಬದಲಾವಣೆ!” ಎಂದು ವಿಸ್ಮಿತಳಾದಳು. ಈಗ ಅವರು ವ್ಯಕ್ತಗೊಳಿಸುತ್ತಿರುವ ವೈರಾಗ್ಯವು ಅವಳನ್ನು ದಂಗುಗೊಳಿಸಿತು. ತಮ್ಮಿಬ್ಬರ ನಡುವೆ ಏನೂ ಆಗಿಲ್ಲವೆನ್ನುವ ಹಾಗೆ ಅವರು ವರ್ತಿಸುತ್ತಿದ್ದರು! {{center|೧೯}} {{gap}}ದಿನದ ಹಗಲು ಕಳೆದು ಇರುಳು ಕವಿಯಿತು. ಹಾಸಿಗೆಯ ಮೇಲೆ ಬಿದ್ದು ಕೊಂಡ ರುಕ್ಕಿಣಿಗೆ ಏನೋ ಆಸರ, ಬೇಸರ. ಒಂದು ವರ್ಷಕ್ಕೂ ಮಿಕ್ಕಿ ಹಾಸಿಗೆ ಸುಖದಿಂದ ವಂಚಿತಳಾಗಿದ್ದ ಅವಳಿಗೆ ಮತ್ತೆ ಪುರುಷಪ್ರವೇಶದಿಂದ ನರನಾಡಿಗಳಲ್ಲೆಲ್ಲ ವಿದ್ಯುತ್ ಸಮಚಾರವಾದಂತಾಗಿತ್ತು. ಗಂಡನೊಡನೆ<noinclude></noinclude> n1nd2zd05ixttc7thkeoxvyw1n8fwt8 322364 322356 2026-05-25T04:48:18Z Shreelatha.Halemane 7642 /* Validated */ 322364 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೨೦೨|right=ವೈಶಾಖ}} ಸಾಲಿಗ್ರಾಮಗಳಿಗೆ ಕ್ಷೀರಾಭಿಷೇಕ ಮಾಡಿ, ಅನಂತರ ನೀರಿನಲ್ಲಿ ತೊಳೆದು ಮಡಿವಸ್ತ್ರದಿಂದ ಅವನ್ನು ಒರಿಸಿ ಇಟ್ಟರು. ತರುವಾಯ ರುಕ್ಕಿಣಿಯು ಅರ್ಧ ತೇಯ್ದಿದ್ದ ಗಂಧವನ್ನು ಇನ್ನೂ ಗಟ್ಟಿ ಬರುವಂತೆ ತೇಯ್ದು, ಅದನ್ನೂ ಕುಂಕುಮವನ್ನೂ ಸಾಲಿಗ್ರಾಮಗಳಿಗೂ ದೇವರ ಪಟಗಳಿಗೂ ಹಚ್ಚಿ, ರುಕ್ಕಿಣಿಯು ಹಿತ್ತಲಿನ ಹೂಗಿಡಗಳಿಂದ ಆರಿಸಿ ಬಿದಿರು ಬುಟ್ಟಿಯಲ್ಲಿ ತಂದಿಟ್ಟಿದ್ದ ಮಲ್ಲಿಗೆ, ಕೆಂಪು ದಾಸವಾಳ, ಇತ್ಯಾದಿ ಹೂಗಳನ್ನು ಧರಿಸುತ್ತ ನಾರಾಯಣಸೂಕ್ತವನ್ನು ಪಠಿಸಿದರು. {{gap}}ಶಾಸ್ತ್ರಿಗಳ ಪೂಜೆ ಈ ದಿವಸ ಮಧ್ಯಾಹ್ನ ನಾಲ್ಕೂವರೆಯಾದರೂ ಮುಗಿಯಲಿಲ್ಲ. ತಾವು ಎಸಗಿದೆ ಅಪರಾಧಕ್ಕೆ ವ್ರತೋಪವಾಸಗಳಿಂದ ತಮ್ಮ ದೇಹ ದಂಡಿಸಿ ಹತೋಟಿಯಲ್ಲಿಡಬೇಕೆಂದು ಅವರು ಸಂಕಲ್ಪ ಮಾಡಿದಂತಿತ್ತು. {{gap}}ರುಕ್ಕಿಣಿಯು ಕಾದು ಕಾದು ಸೊಪ್ಪಾಗಿ ಅಡಿಗೆಕೋಣೆಯಲ್ಲಿ ನೆಲದ ಮೇಲೇ ಒರಗಿ ನಿದ್ದೆ ಹೋಗಿದ್ದಳು. ಶಾಸ್ತ್ರಿಗಳು ಪೂಜೆ ಮುಗಿಸಿ ಬಂದು ನೋಡಿದವರು, ಯಾಕೆ ಎಬ್ಬಿಸಬೇಕೆಂದು ಹೊರಟುಹೋಗುವುದರಲ್ಲಿದ್ದರು. ಆದರೆ ತಮಗೇನೊ ಆಹಾರದ ಅಗತ್ಯವಿರಲಿಲ್ಲ. ಹಾಗೆಂದು ಪಾಪ ರುಕ್ಕಿಣಿಯೇಕೆ ಹಸಿದಿರಬೇಕು, ಎನ್ನಿಸಿ- “ರುಕ್ಕು- ಎಂದು ಕರುಣೆ ತುಂಬಿದ ಸ್ವರದಲ್ಲಿ ಕೂಗಿದರು. {{gap}}ರುಕ್ಕಿಣಿಯು ದಡಬಡ ಎದ್ದು ಕುಳಿತಳು. ಸೆರಗಳನ್ನು ಸರಿಪಡಿಸಿಕೊಳ್ಳುತ್ತ, “ಬೆಳಿಗ್ಗೆ ಮಾಡಿದ ಉಪ್ಪಿಟ್ಟಿದೆ” ಎಂದು ತಡವರಿಸಿದಳು. ಶಾಸ್ತ್ರಿಗಳು ಶಾಂತಸ್ವರದಲ್ಲಿ. “ಬೇಡ, ಬೇಡ. ಇನ್ನು ಮೇಲೆ ನಾನು ಬೆಳಗಿನ ಫಳಾರ ಮಾಡಲ್ಲ. ಮಧ್ಯಾಹ್ನ ಒಂದು ಊಟವಾದರೆ ಮುಗಿಯಿತು. ರಾತ್ರಿಯ ಊಟ ಬೇಕಿಲ್ಲ, ಕುಡಿಯಲು ತುಳಸೀ ದಳ ಹಾಕಿದ ನೀರಿದ್ದರೆ ತೀರಿಸು- ಎಂದರು. {{gap}}ರುಕ್ಕಿಣಿಯು ಮರುಮಾತಾಡದೆ ಅವರ ಅಪೇಕ್ಷೆಯಂತೆ ಮಧ್ಯಾಹ್ನದ ಊಟವನ್ನೆ ಬಡಿಸುತ್ತ, “ಕೆಲವೇ ಗಂಟೆಗಳಲ್ಲಿ ಎಂಥ ಬದಲಾವಣೆ!” ಎಂದು ವಿಸ್ಮಿತಳಾದಳು. ಈಗ ಅವರು ವ್ಯಕ್ತಗೊಳಿಸುತ್ತಿರುವ ವೈರಾಗ್ಯವು ಅವಳನ್ನು ದಂಗುಗೊಳಿಸಿತು. ತಮ್ಮಿಬ್ಬರ ನಡುವೆ ಏನೂ ಆಗಿಲ್ಲವೆನ್ನುವ ಹಾಗೆ ಅವರು ವರ್ತಿಸುತ್ತಿದ್ದರು! {{center|೧೯}} {{gap}}ದಿನದ ಹಗಲು ಕಳೆದು ಇರುಳು ಕವಿಯಿತು. ಹಾಸಿಗೆಯ ಮೇಲೆ ಬಿದ್ದು ಕೊಂಡ ರುಕ್ಕಿಣಿಗೆ ಏನೋ ಆಸರ, ಬೇಸರ. ಒಂದು ವರ್ಷಕ್ಕೂ ಮಿಕ್ಕಿ ಹಾಸಿಗೆ ಸುಖದಿಂದ ವಂಚಿತಳಾಗಿದ್ದ ಅವಳಿಗೆ ಮತ್ತೆ ಪುರುಷಪ್ರವೇಶದಿಂದ ನರನಾಡಿಗಳಲ್ಲೆಲ್ಲ ವಿದ್ಯುತ್ ಸಮಚಾರವಾದಂತಾಗಿತ್ತು. ಗಂಡನೊಡನೆ<noinclude></noinclude> itukmwlu3fqjur9iiguynci7hdzzmmu ಪುಟ:ವೈಶಾಖ.pdf/೨೧೯ 104 82148 322357 192395 2026-05-25T04:36:40Z Shreesha Sharma 7840 /* Proofread */ 322357 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೦೩}} ಅನುಭವಿಸಿದ ರತಿಸುಖವನ್ನು ಎಂದೋ ಮರೆತು ಸಂಯಮಶೀಲೆಯಾಗಿದ್ದವಳನ್ನು ಹಿಂದಿನ ರಾತ್ರಿಯ ಅನುಭವ ಕೆದಕಿ ಬೆದಕಿ ಮನಃ ಪ್ರಚೋದಿಸಿದಂತಿತ್ತು. ಯಾಕೊ ಸೆಖೆಯಾದಂತಾಯಿತು. ವಿಪರೀತ ಸೆಖೆ, ಹಾಸಿಗೆ ಬಿಟ್ಟಿದ್ದಳು. ಎದ್ದು ಹಜಾರಕ್ಕೆ ಬಂದಳು. ಮೂಲೆಯ ಮಾಮೂಲು ಜಾಗದಲ್ಲಿ ಶಾಸ್ತ್ರಿಗಳು ಆರಾಮವಾಗಿ ಕಾಲು ಚಾಚಿ ಅಂಗಾತ ಮಲಗಿ ಗಾಢನಿದ್ರೆಯಲ್ಲಿದ್ದರು. ಕೆಲನಿಮಿಷ ಅವರನ್ನೇ ನಿಟ್ಟಿಸುತ್ತಿದ್ದು, ಮೆಲ್ಲನೆ ಮುಂಬಾಗಿಲು ತೆರೆದು, ಜಗಲಿಗೆ ಹೋದಳು. ಅಲ್ಲಿ ಅತ್ತಿಂದಿತ್ತ ಶತಪಥಕ್ಕೆ ಆರಂಭಿಸಿದಳು. ಹೊರಗೂ ಗಾಳಿಯ ಸುಳಿವಿಲ್ಲ. ಉಬ್ಬಸ ಬರಿಸುವಂತಹ ಸೆಕೆ!... ಬಾಗಿಲು ಮುಚ್ಚಿ ಬಂದು ಮತ್ತೆ ಮಲಗಿದಳು. ಎಷ್ಟು ಪ್ರಯತ್ನಿಸಿದರೂ ನಿದ್ರೆಬಾರದು. ಕುರಿಗಳನ್ನು ಎಣಿಸಿದರೆ ನಿದ್ರೆ ಬರುವುದೆಂದು ಯಾರೋ ಹೇಳಿದ್ದ ನೆನಪು. ಆ ಪ್ರಕಾರ, ಒಂದು ಎರಡು ಮೂರು... ಕುರಿ ಎಣಿಸಲು ಉದ್ಯುಕ್ತಳಾದಳು. ಅದೂ ಉಪಯೋಗಕ್ಕೆ ಬರಲಿಲ್ಲ. ಮಗ್ಗಲಿನಿಂದ ಮಗ್ಗಲಿಗೆ ಹೊರಳಿದಳು. ಅದೂ ಉಪಯೋಗಕ್ಕೆ ಬರಲಿಲ್ಲ. ಮಗ್ಗಲಿನಿಂದ ಮಗ್ಗಲಿಗೆ ಹೊರಳಿದಳು ರವಿಕೆಯ ಒಳಗೆ ಬೆವರು ಸುರಿದು ಒದ್ದೆಯಾಗಿತ್ತು. ಎದ್ದು ಕುಳಿತಳು. ರವಿಕೆಯ ಗುಂಡಿಗಳನ್ನು ಬಿಚ್ಚಿ ಸೀರೆಯ ಸೆರಗಿನಿಂದ ಎದೆಯ ಭಾಗವನ್ನೂ ಕಂಕುಳನ್ನೂ ಒರಿಸಿದಳು. ಪುನಃ ಹಾಸಿಗೆಯ ಮೇಲೆ ಉರುಳಿದಳು. ಎಣ್ಣೆ ತೀರಿಹೋಗಿ ಮೂಲೆಯಲ್ಲಿದ್ದ ದೀವಿಗೆಯ ಕುಡಿ ನಂದಿಹೋಗಿತ್ತು. ಎದ್ದು ಹೋಗಿ ನಡುಮನೆಯಿಂದ ಎಣ್ಣೆ ತಂದು ದೀಪ ಉರಿಸಲು ಯಕೊ ಬೇಸರವಾಯಿತು. ಕತ್ತಲೆಯಲ್ಲೇ ಕಣ್ಣು ಬಿಟ್ಟು ನೋಡುತ್ತಿದ್ದಳು. ಮನಸಡ್ಡು ಬರಿದೆ ಬರಿದು, ನಿರ್ಭಾವದಿಂದ ಕತ್ತಲೆಯಲ್ಲಿ ನೋಟವನ್ನು ನೆಟ್ಟಳು. ಕತ್ತಲೆಯ ದಟ್ಟವಾದ ಕಪ್ಪು ಅಲೆಅಲೆಯಾಗಿ ಬಂದು ಕಣ್ಣುಗಳಿಗೆ ಮೆತ್ತಿದಂತಾಯಿತು. ರೆಪ್ಪೆಗಳು ತಾವೇತಾವಾಗಿ ಮುಚ್ಚಿದವು. ಪೂರ್ಣ ನಿದ್ರೆಯೂ ಅಲ್ಲದ ಎಚ್ಚರವೂ ಅಲ್ಲದ ಸ್ಥಿತಿಯಲ್ಲಿ ಮನಸ್ಸು ತೇಲಿತು. {{gap}}ಒಂದು ಹಗಲು, ಗಂಡನೊಡನೆ ತೋಟಕ್ಕೆ ಹೋಗಿದ್ದಳು. ವಿವಾಹದ ಆರಂಭದ ದಿನಗಳು. ಇಬ್ಬರ ಹೆಜ್ಜೆಹೆಜ್ಜೆಯಲ್ಲೂ ಸಂಭ್ರಮ ಇಟ್ಟಾಡುತ್ತಿತ್ತು. ಸೀಬೆಹಣ್ಣು ತಿಂದು, ಎಳನೀರು ಕುಡಿದರು. “ಬೆಟ್ಟದ ಕಡೆ ಸುತ್ತಾಡಿ ಬರೋಣವೆ?” ವಿಶ್ವೇಶ್ವರ ಕೇಳಿದ್ದೇ ತಡ, ರುಕ್ಕಿಣಿ ಉತ್ಸಾಹದಿಂದ ಒಪ್ಪಿದ್ದಳು. ಊರಿನ ಮೇಗಡೆ ಪಶ್ಚಿಮಕ್ಕಿದ್ದ ಕುಂತಿಬೆಟ್ಟವನ್ನು ದಂಪತಿಗಳಿಬ್ಬರೂ ಚಿಮ್ಮಿ ಚಿಮ್ಮಿ ಜಿಗಿದಾಡುತ್ತ ಏರಿದ್ದರು. ಆಗ ಶಿವರಾತ್ರಿಯ ಕಾಲ. ಕಾಡಿನ ಗಿಡಮರಗಳ ಮೇಲೆ ಅಲ್ಲಲ್ಲಿ ಬಣ್ಣ ಬಣ್ಣದ ಹೂಗಳ ಸಂತೆ. ವಿಶ್ವೇಶ್ವರ ಒಂದು ಬೆಟ್ಟ ದಾವರೆ ಹೂವನ್ನು ಕಿತ್ತುತಂದ. ಅಂಗೈ<noinclude></noinclude> g6516dd9ab7ws44zbbui24e7e16y7ca 322365 322357 2026-05-25T04:51:15Z Shreelatha.Halemane 7642 /* Validated */ 322365 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೦೩}} ಅನುಭವಿಸಿದ ರತಿಸುಖವನ್ನು ಎಂದೋ ಮರೆತು ಸಂಯಮಶೀಲೆಯಾಗಿದ್ದವಳನ್ನು ಹಿಂದಿನ ರಾತ್ರಿಯ ಅನುಭವ ಕೆದಕಿ ಬೆದಕಿ ಮನಃ ಪ್ರಚೋದಿಸಿದಂತಿತ್ತು. ಯಾಕೊ ಸೆಖೆಯಾದಂತಾಯಿತು. ವಿಪರೀತ ಸೆಖೆ, ಹಾಸಿಗೆ ಬಿಟ್ಟೆದ್ದಳು. ಎದ್ದು ಹಜಾರಕ್ಕೆ ಬಂದಳು. ಮೂಲೆಯ ಮಾಮೂಲು ಜಾಗದಲ್ಲಿ ಶಾಸ್ತ್ರಿಗಳು ಆರಾಮವಾಗಿ ಕಾಲು ಚಾಚಿ ಅಂಗಾತ ಮಲಗಿ ಗಾಢನಿದ್ರೆಯಲ್ಲಿದ್ದರು. ಕೆಲನಿಮಿಷ ಅವರನ್ನೇ ನಿಟ್ಟಿಸುತ್ತಿದ್ದು, ಮೆಲ್ಲನೆ ಮುಂಬಾಗಿಲು ತೆರೆದು, ಜಗಲಿಗೆ ಹೋದಳು. ಅಲ್ಲಿ ಅತ್ತಿಂದಿತ್ತ ಶತಪಥಕ್ಕೆ ಆರಂಭಿಸಿದಳು. ಹೊರಗೂ ಗಾಳಿಯ ಸುಳಿವಿಲ್ಲ. ಉಬ್ಬಸ ಬರಿಸುವಂತಹ ಸೆಕೆ!... ಬಾಗಿಲು ಮುಚ್ಚಿ ಬಂದು ಮತ್ತೆ ಮಲಗಿದಳು. ಎಷ್ಟು ಪ್ರಯತ್ನಿಸಿದರೂ ನಿದ್ರೆಬಾರದು. ಕುರಿಗಳನ್ನು ಎಣಿಸಿದರೆ ನಿದ್ರೆ ಬರುವುದೆಂದು ಯಾರೋ ಹೇಳಿದ್ದ ನೆನಪು. ಆ ಪ್ರಕಾರ, ಒಂದು ಎರಡು ಮೂರು... ಕುರಿ ಎಣಿಸಲು ಉದ್ಯುಕ್ತಳಾದಳು. ಅದೂ ಉಪಯೋಗಕ್ಕೆ ಬರಲಿಲ್ಲ. ಮಗ್ಗಲಿನಿಂದ ಮಗ್ಗಲಿಗೆ ಹೊರಳಿದಳು. ಅದೂ ಉಪಯೋಗಕ್ಕೆ ಬರಲಿಲ್ಲ. ಮಗ್ಗಲಿನಿಂದ ಮಗ್ಗಲಿಗೆ ಹೊರಳಿದಳು ರವಿಕೆಯ ಒಳಗೆ ಬೆವರು ಸುರಿದು ಒದ್ದೆಯಾಗಿತ್ತು. ಎದ್ದು ಕುಳಿತಳು. ರವಿಕೆಯ ಗುಂಡಿಗಳನ್ನು ಬಿಚ್ಚಿ ಸೀರೆಯ ಸೆರಗಿನಿಂದ ಎದೆಯ ಭಾಗವನ್ನೂ ಕಂಕುಳನ್ನೂ ಒರಿಸಿದಳು. ಪುನಃ ಹಾಸಿಗೆಯ ಮೇಲೆ ಉರುಳಿದಳು. ಎಣ್ಣೆ ತೀರಿಹೋಗಿ ಮೂಲೆಯಲ್ಲಿದ್ದ ದೀವಿಗೆಯ ಕುಡಿ ನಂದಿಹೋಗಿತ್ತು. ಎದ್ದು ಹೋಗಿ ನಡುಮನೆಯಿಂದ ಎಣ್ಣೆ ತಂದು ದೀಪ ಉರಿಸಲು ಯಾಕೊ ಬೇಸರವಾಯಿತು. ಕತ್ತಲೆಯಲ್ಲೇ ಕಣ್ಣು ಬಿಟ್ಟು ನೋಡುತ್ತಿದ್ದಳು. ಮನಸಡ್ಡು ಬರಿದೆ ಬರಿದು, ನಿರ್ಭಾವದಿಂದ ಕತ್ತಲೆಯಲ್ಲಿ ನೋಟವನ್ನು ನೆಟ್ಟಳು. ಕತ್ತಲೆಯ ದಟ್ಟವಾದ ಕಪ್ಪು ಅಲೆಅಲೆಯಾಗಿ ಬಂದು ಕಣ್ಣುಗಳಿಗೆ ಮೆತ್ತಿದಂತಾಯಿತು. ರೆಪ್ಪೆಗಳು ತಾವೇತಾವಾಗಿ ಮುಚ್ಚಿದವು. ಪೂರ್ಣ ನಿದ್ರೆಯೂ ಅಲ್ಲದ ಎಚ್ಚರವೂ ಅಲ್ಲದ ಸ್ಥಿತಿಯಲ್ಲಿ ಮನಸ್ಸು ತೇಲಿತು. {{gap}}ಒಂದು ಹಗಲು, ಗಂಡನೊಡನೆ ತೋಟಕ್ಕೆ ಹೋಗಿದ್ದಳು. ವಿವಾಹದ ಆರಂಭದ ದಿನಗಳು. ಇಬ್ಬರ ಹೆಜ್ಜೆಹೆಜ್ಜೆಯಲ್ಲೂ ಸಂಭ್ರಮ ಇಟ್ಟಾಡುತ್ತಿತ್ತು. ಸೀಬೆಹಣ್ಣು ತಿಂದು, ಎಳನೀರು ಕುಡಿದರು. “ಬೆಟ್ಟದ ಕಡೆ ಸುತ್ತಾಡಿ ಬರೋಣವೆ?” ವಿಶ್ವೇಶ್ವರ ಕೇಳಿದ್ದೇ ತಡ, ರುಕ್ಕಿಣಿ ಉತ್ಸಾಹದಿಂದ ಒಪ್ಪಿದ್ದಳು. ಊರಿನ ಮೇಗಡೆ ಪಶ್ಚಿಮಕ್ಕಿದ್ದ ಕುಂತಿಬೆಟ್ಟವನ್ನು ದಂಪತಿಗಳಿಬ್ಬರೂ ಚಿಮ್ಮಿ ಚಿಮ್ಮಿ ಜಿಗಿದಾಡುತ್ತ ಏರಿದ್ದರು. ಆಗ ಶಿವರಾತ್ರಿಯ ಕಾಲ. ಕಾಡಿನ ಗಿಡಮರಗಳ ಮೇಲೆ ಅಲ್ಲಲ್ಲಿ ಬಣ್ಣ ಬಣ್ಣದ ಹೂಗಳ ಸಂತೆ. ವಿಶ್ವೇಶ್ವರ ಒಂದು ಬೆಟ್ಟ ದಾವರೆ ಹೂವನ್ನು ಕಿತ್ತುತಂದ. ಅಂಗೈ<noinclude></noinclude> i34rqfjn6sv2w5phsvix84afywfm9ed ಪುಟ:ವೈಶಾಖ.pdf/೨೨೦ 104 82149 322358 192396 2026-05-25T04:37:39Z Shreesha Sharma 7840 /* Proofread */ 322358 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=೨೦೪|right=ವೈಶಾಖ}} ಅಗಲದ ಹೂವು, ಅರಿಶಿನವನ್ನೇ ಅದಕ್ಕೆ ಲೇಪಿಸಿದಂತಿತ್ತು. ನೋಡಲು ಬಲು ಮೋಹಕವಾದ ಆ ಹೂವನ್ನು ವಿಶ್ವೇಶ್ವರ ರುಕ್ಕಿಣಿಯ ಮಂಡೆಗೆ ಮುಡಿಸಿ ಅವಳನ್ನು ಹೊರಳಿಸಿ ಹೊರಳಿಸಿ ನೋಡಿ ಸುಖಿಸುತ್ತಿದ್ದಂತೆ ರುಕ್ಕಿಣಿಯು ಎತ್ತ ತಿರುಗಿದರತ್ತ ಕಣ್ಣು ತುಂಬುತ್ತಿದ್ದ ಕಡುಗೆಂಪಿನ ಮುತ್ತುಗದ ಹೂಗಳನ್ನು ನೋಡುತ್ತ ಪುಳಕಗೊಳ್ಳುತ್ತಿದ್ದಳು... ಹೀಗೆ ಅವರಿಬ್ಬರೂ ಸರಸ ಸಲ್ಲಾಪವಾಡುತ್ತ ಮುಂದೆ ಸಾಗಿದ್ದರು. ಹೆಜ್ಜೆ ಹೆಜ್ಜೆಗೂ ಘಮಘಮಿಸುವ ಯಾವುದೊ ಅಪರೂಪದ ಪರಿಮಳ ಅಲ್ಲಿನ ವಾತಾವರಣವನ್ನೆಲ್ಲ ತುಂಬಿದಂತಿತ್ತು. ರುಕ್ಕಿಣಿ ತಡೆದು ನಿಂತು, “ಅಬ್ಬಬ್ಬ, ಇದೆಂಥ ಸುವಾಸನೆ...” ಎಂದು ಆನಂದಿಸಿದಳು. “ಈ ಪರಿಮಳ ಜಾಲಿ ಹೂವಿನದ್ದು, ರುಕ್ಕು... ಇದರ ಘಮನ ಗಾಳಿ ಬೀಸುತ್ತಿರುವಾಗ ಸುಮಾರು ಒಂದು ಒಂದೂವರೆ ಮೈಲಿ ಫಾಸಲೆಗೂ ಹರಡುತ್ತೆ...” ಎಂದು ವಿಶ್ವೇಶ್ವರ ವಿವರಿಸಿದ್ದ. - ರುಕ್ಕಿಣಿಯು ಆ ಸುವಾಸನೆಯನ್ನು ಹೀರುತ್ತಲೇ ಪತಿಯ ಜೊತೆಗೆ ಬೆಟ್ಟವನ್ನೇರಿ, ಅದರ ನೆತ್ತಿಗೆ ಬಂದಿದ್ದಳು. ಬೆಟ್ಟದ ನೆತ್ತಿಯ ವಿಸ್ತಾರ ಪ್ರದೇಶದ ಉತ್ತರ ಭಾಗದಲ್ಲಿ ಒಂದು ಕೋಟೆ. ಅದು ದೃಷ್ಟಿಗೆ ಬಿದ್ದೊಡನೆಯೆ, “ಇದೇ ಏನ್ರಿ, ನಮ್ಮ ಊರಿನ ಮಂದಿ ಮಾತಾಡಿಕೊಳ್ತಾರಲ್ಲ- ಆ ಚಿತ್ರ ಮೂಲನ ಕೋಟೆ?” ಎಂದು ವಿಶ್ವೇಶ್ವರನನ್ನು ಕೇಳಿದ್ದಳು ರುಕ್ಕಿಣಿ. “ಹೌದು, ಇದೇ ದ್ರೋಣಾಚಾರ್ಯರು ಕುರುಕ್ಷೇತ್ರದ ಯುದ್ದಕ್ಕೂ ಮುನ್ನ ದಕ್ಷಿಣಾಪಥಕ್ಕೆ ಬಂದಿದ್ದಾಗ ನಿರ್ಮಿಸಿದ ಚಿತ್ರಮೂಲನ ಕೋಟೆ, ಮುಂದೆ ಕುರುಕ್ಷೇತ್ರದ ಮಹಾಸಮರದಲ್ಲಿ ದುರ್ಯೋಧನನ ಸೈನ್ಯಕ್ಕೆ ಸೇನಾನಿಯಾಗುವ ಸಂಭವ ಬಂದಾಗ, ತಾವು ತಮ್ಮ ಅಧೀನದ ಸೇನಾತುಕಡಿಗಳನ್ನು ಉಪಯೋಗಿಸಿ ರಚಿಸಬೇಕೆಂದಿದ್ದ ಚಕ್ರವ್ಯೂಹದ ಒಂದು ಪ್ರಯೋಗ, ರಾಜಧಾನಿ ಹಸ್ತಿನಾಪುರದಿಂದ ಸಹಸ್ರಾರು ಮೈಲಿಯಾಚೆಗಿರುವ ಈ ದುರ್ಗಮ ತಾಣದಲ್ಲಿ ಈ ಚಿತ್ರ ಮೂಲನ ಕೋಟೆಯನ್ನು ನಿರ್ಮಿಸಿ, ಪರೀಕ್ಷೆ ನಡೆಸಿದರೆಂದು ಜನಜನಿತವಾದ ಮತ್ತು....” ವಿಶ್ವೇಶ್ವರ ತನ್ನ ಮಡದಿಗೆ ವಿವರಿಸುತ್ತ ಸಾಗಿದಂತೆ, ಜೀರ್ಣವಾಗಿ ಸಂದಿ ಗೊಂದಿಗಳಲ್ಲಿ ಪಾಚಿ ಹಾಗೂ ಗಿಡಗಳನ್ನು ಬೆಳೆದಿದ್ದರೂ ಇನ್ನೂ ಬಲಶಾಲಿಯಾಗೇ ಕಾಣುವ ಕೋಟೆಯನ್ನು ನೋಡಿ ರುಕ್ಕಿಣಿ ಬೆರಗಾದಳು. ಕೋಟೆಯೊಳಗೆ ಏನಿದೆಯೊ ನೋಡಬೇಕೆಂಬ ಕುತೂಹಲ ಉಂಟಾಯಿತು.<noinclude></noinclude> 9m6lo8st743ejdfz79r8d9mbfu2lbk8 322366 322358 2026-05-25T04:52:42Z Shreelatha.Halemane 7642 /* Validated */ 322366 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=|left=೨೦೪|right=ವೈಶಾಖ}} ಅಗಲದ ಹೂವು, ಅರಿಶಿನವನ್ನೇ ಅದಕ್ಕೆ ಲೇಪಿಸಿದಂತಿತ್ತು. ನೋಡಲು ಬಲು ಮೋಹಕವಾದ ಆ ಹೂವನ್ನು ವಿಶ್ವೇಶ್ವರ ರುಕ್ಕಿಣಿಯ ಮಂಡೆಗೆ ಮುಡಿಸಿ ಅವಳನ್ನು ಹೊರಳಿಸಿ ಹೊರಳಿಸಿ ನೋಡಿ ಸುಖಿಸುತ್ತಿದ್ದಂತೆ ರುಕ್ಕಿಣಿಯು ಎತ್ತ ತಿರುಗಿದರತ್ತ ಕಣ್ಣು ತುಂಬುತ್ತಿದ್ದ ಕಡುಗೆಂಪಿನ ಮುತ್ತುಗದ ಹೂಗಳನ್ನು ನೋಡುತ್ತ ಪುಳಕಗೊಳ್ಳುತ್ತಿದ್ದಳು... {{gap}}ಹೀಗೆ ಅವರಿಬ್ಬರೂ ಸರಸ ಸಲ್ಲಾಪವಾಡುತ್ತ ಮುಂದೆ ಸಾಗಿದ್ದರು. ಹೆಜ್ಜೆ ಹೆಜ್ಜೆಗೂ ಘಮಘಮಿಸುವ ಯಾವುದೊ ಅಪರೂಪದ ಪರಿಮಳ ಅಲ್ಲಿನ ವಾತಾವರಣವನ್ನೆಲ್ಲ ತುಂಬಿದಂತಿತ್ತು. ರುಕ್ಕಿಣಿ ತಡೆದು ನಿಂತು, {{gap}}“ಅಬ್ಬಬ್ಬ, ಇದೆಂಥ ಸುವಾಸನೆ...” ಎಂದು ಆನಂದಿಸಿದಳು. {{gap}}“ಈ ಪರಿಮಳ ಜಾಲಿ ಹೂವಿನದ್ದು, ರುಕ್ಕು... ಇದರ ಘಮನ ಗಾಳಿ ಬೀಸುತ್ತಿರುವಾಗ ಸುಮಾರು ಒಂದು ಒಂದೂವರೆ ಮೈಲಿ ಫಾಸಲೆಗೂ ಹರಡುತ್ತೆ...” ಎಂದು ವಿಶ್ವೇಶ್ವರ ವಿವರಿಸಿದ್ದ. {{gap}}- ರುಕ್ಕಿಣಿಯು ಆ ಸುವಾಸನೆಯನ್ನು ಹೀರುತ್ತಲೇ ಪತಿಯ ಜೊತೆಗೆ ಬೆಟ್ಟವನ್ನೇರಿ, ಅದರ ನೆತ್ತಿಗೆ ಬಂದಿದ್ದಳು. {{gap}}ಬೆಟ್ಟದ ನೆತ್ತಿಯ ವಿಸ್ತಾರ ಪ್ರದೇಶದ ಉತ್ತರ ಭಾಗದಲ್ಲಿ ಒಂದು ಕೋಟೆ. ಅದು ದೃಷ್ಟಿಗೆ ಬಿದ್ದೊಡನೆಯೆ, {{gap}}“ಇದೇ ಏನ್ರಿ, ನಮ್ಮ ಊರಿನ ಮಂದಿ ಮಾತಾಡಿಕೊಳ್ತಾರಲ್ಲ- ಆ ಚಿತ್ರ ಮೂಲನ ಕೋಟೆ?” ಎಂದು ವಿಶ್ವೇಶ್ವರನನ್ನು ಕೇಳಿದ್ದಳು ರುಕ್ಕಿಣಿ. {{gap}}“ಹೌದು, ಇದೇ ದ್ರೋಣಾಚಾರ್ಯರು ಕುರುಕ್ಷೇತ್ರದ ಯುದ್ದಕ್ಕೂ ಮುನ್ನ ದಕ್ಷಿಣಾಪಥಕ್ಕೆ ಬಂದಿದ್ದಾಗ ನಿರ್ಮಿಸಿದ ಚಿತ್ರಮೂಲನ ಕೋಟೆ, ಮುಂದೆ ಕುರುಕ್ಷೇತ್ರದ ಮಹಾಸಮರದಲ್ಲಿ ದುರ್ಯೋಧನನ ಸೈನ್ಯಕ್ಕೆ ಸೇನಾನಿಯಾಗುವ ಸಂಭವ ಬಂದಾಗ, ತಾವು ತಮ್ಮ ಅಧೀನದ ಸೇನಾತುಕಡಿಗಳನ್ನು ಉಪಯೋಗಿಸಿ ರಚಿಸಬೇಕೆಂದಿದ್ದ ಚಕ್ರವ್ಯೂಹದ ಒಂದು ಪ್ರಯೋಗ, ರಾಜಧಾನಿ ಹಸ್ತಿನಾಪುರದಿಂದ ಸಹಸ್ರಾರು ಮೈಲಿಯಾಚೆಗಿರುವ ಈ ದುರ್ಗಮ ತಾಣದಲ್ಲಿ ಈ ಚಿತ್ರ ಮೂಲನ ಕೋಟೆಯನ್ನು ನಿರ್ಮಿಸಿ, ಪರೀಕ್ಷೆ ನಡೆಸಿದರೆಂದು ಜನಜನಿತವಾದ ಮತ್ತು....” {{gap}}ವಿಶ್ವೇಶ್ವರ ತನ್ನ ಮಡದಿಗೆ ವಿವರಿಸುತ್ತ ಸಾಗಿದಂತೆ, ಜೀರ್ಣವಾಗಿ ಸಂದಿ ಗೊಂದಿಗಳಲ್ಲಿ ಪಾಚಿ ಹಾಗೂ ಗಿಡಗಳನ್ನು ಬೆಳೆದಿದ್ದರೂ ಇನ್ನೂ ಬಲಶಾಲಿಯಾಗೇ ಕಾಣುವ ಕೋಟೆಯನ್ನು ನೋಡಿ ರುಕ್ಕಿಣಿ ಬೆರಗಾದಳು. ಕೋಟೆಯೊಳಗೆ ಏನಿದೆಯೊ ನೋಡಬೇಕೆಂಬ ಕುತೂಹಲ ಉಂಟಾಯಿತು.<noinclude></noinclude> 3v01m7fy017lfkrpeqtqsmmhargbfuw ಪುಟ:ವೈಶಾಖ.pdf/೨೨೧ 104 82150 322367 319652 2026-05-25T04:56:21Z Shreelatha.Halemane 7642 322367 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೦೫}} {{gap}}“ಕೋಟೆಯೊಳಗೆ ಹೋಗಿ ನೋಡೋಣವಾ?” - ಆಸೆಯಿಂದ ಕೇಳಿದಳು.<br/> {{gap}}“ಇಲ್ಲಿಯ ತನಕ ಈ ಕೋಟೆಯೊಳಗೆ ನಮ್ಮ ಪ್ರದೇಶದ ಆಸುಪಾಸಿನ ಜನರು ಯಾರೂ ಪ್ರವೇಶಿದ್ದೇ ಇಲ್ಲ.... ಇದರ ಒಳಗೆ ಒಮ್ಮೆ ಹೋದವರು ಹಿಂದಿರುಗಿ ಬರಲು ದಾರಿ ಕಾಣದೆ ಸಾಯುತ್ತರೆಂದೇ ನಂಬಿಕೆ!... ಕೋಟೆಯೊಳಗೆ ಕೋಟೆಯಿದೆ ಎಂದು ಪ್ರತೀತಿ... ಒಂದೆರಡು ದನ ಕಾಯುವ ಹುಡುಗರಿಗೆ ಒಳಗೇನಿರುವುದೋ ನೋಡಬೇಕೆಂಬ ಚಪಲ ಬಂದು ಈ ಕೋಟೆಯ ಒಳಹೊಕ್ಕದ್ದರಂತೆ. ಆದರೆ ಹಾಗಿ ಹೋದವರು ಮತ್ತೆ ಹಿಂದಿರುಗಲೇ ಇಲ್ಲವಂತೆ! ಆದ್ದರಿಂದ...” ಎಂದು ವಿಶ್ವೇಶ್ವರ ವಿವರಣೆ ನೀಡುತ್ತಿರುವಾಗ, ಅವನ ವಾಕ್ಯವನ್ನು ಪೂರ್ತಿಗೊಳಿಸಲು ಅನುವುಗೊಡದೆ,<br/> {{gap}}“ಆದ್ದರಿಂದ ಕೋಟೆಯೊಳಗೆ ನಾವು ಹೋಗಿ ಹಿಂದಕ್ಕೆ ನೋಡುವುದು ಬೇಡ- ಇದು ತಾನೆ ನೀವು ಹೇಳಬೇಕೆಂದು ಇರುವುದು?” ಎಂದು ರುಕ್ಕಿಣಿ ಮುಖವನ್ನು ಸಣ್ಣಗೆ ಮಾಡಿದಳು.<br/> {{gap}}“ಹಾಗಲ್ಲವೆ, ರುಕ್ಕು, ಒಳಗಡೆ ಹೋಗಿ ಬರಲು ಆಗದೆ ಹೋದರೆ, ಯಾವ ಪುರುಷಾರ್ಥ ಸಾಧಿಸಿದ ಹಾಗಾಯ್ತು, ನೀನೇ ಹೇಳು.” {{gap}}ಗಂಡನ ಮಾತು ರುಕ್ಕಿಣಿಗೆ ಒಪ್ಪಿತವಾಗಲಿಲ್ಲ. {{gap}}“ಅದಕ್ಕೇನಂತೆ, ಅಲ್ಲಿ ಸಾಯೋದೇ ಆದರೆ, ನಾವಿಬ್ಬರೂ ಒಟ್ಟಿಗೇ ಇರುತ್ತೇವಲ್ಲ!- ಆಗ ಇಬ್ಬರೂ ಒಟ್ಟಿಗೇ ಸಾಯೋದಪ್ಪ” ಎಂದಳು. {{gap}}“ಬಂಗಾರದ ಜಿಂಕೆಯನ್ನು ಬಯಸಿದ ತ್ರೇತಾಯುಗದ ಸೀತಾದೇವಿಯ ಸಂತತಿ ಇನ್ನೂ ಜೀವಂತವಿದೆ!” ಎಂದು ನಗುತ್ತ, ಮೋಹದ ಮಡದಿಯನ್ನು ಬಾಚಿ ತಬ್ಬಿ ರಮಿಸುತ್ತ, {{gap}}“ನನ್ನ ಮನದನ್ನೇ ಹೋಗಲೇಬೇಕೆಂದು ಹಟ ಮಾಡವಾಗ ನನ್ನ ಮಾತೆಲ್ಲಿ ನಡೆಯುತ್ತೆ?... ಆದರೂ ಅಲ್ಲಿ ಕಾದಿರಬಹುದಾದ ಅಪಾಯಕುರಿತು ಹೇಳಿದ್ದೇನೆ. ಇನ್ನೊಮ್ಮೆ ಚೆನ್ನಾಗಿ ಆಲೋಚನೆ ಮಾಡಿ ತಿಳಿಸು. ಹೋಗಲೇಬೇಕೆ?” {{gap}}ರುಕ್ಕಿಣಿ ಅಷ್ಟೇನೂ ಆಲೋಚನೆ ಮಾಡುವ ಗೋಜಿಗೇ ಹೋಗದೆ ಹೌದು ಎನ್ನುವಂತೆ ತಲೆ ಕುಣಿಸಿದಳು. {{gap}}“ಸರಿ” ಎಂದು, “ಕಲ್ಲುಮುಳ್ಳಿನ ಹಾದಿ, ಎಚ್ಚರದಿಂದ ಬಾ.” ಹೇಳುತ್ತ ವಿಶ್ವೇಶ್ವರ ಕೋಟೆಯನ್ನು ಪ್ರವೇಶಿಸಿದ. ಹಿಂದಿನಿಂದ ಒಳಗೆ ಬಂದ ರುಕ್ಕಿಣಿ ತಾನು ಕಂಡ ದೃಶ್ಯದಿಂದ ಅವಾಕ್ಕಾದಳು. ಅವಳು ಶ್ರೀರಂಗಪಟ್ಟಣದಂತಹ<noinclude></noinclude> srkdzmpa4lhbyp0sqokfs766n9mflgt ಪುಟ:ವೈಶಾಖ.pdf/೨೩೮ 104 82167 322368 319670 2026-05-25T05:00:22Z Shreelatha.Halemane 7642 322368 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{Left|೨೨೨}} {{Right|'''ವೈಶಾಖ'''}} {{gap}}ತಾನು ಕಂಡದ್ದ ಕಂಡಂಗೆ ಎಲ್ಲಾ ನೂವೆ ಅವ್ವನ ಕುಟ್ಟೆ ಯೋಳಿ, {{gap}}“ಅದ್ಯಾಕವ್ವ ಅವಳ ಹೆಣವ ಅಂಗೆ ಕುಂಡರಿಸಿದ್ರು?” ಕೇಳಿದ್ದ. {{gap}}“ಬಿಮ್ಮಂಸೆ ಆದ ಎಂಗಸು ಸತ್ತರೆ, ಹೈಟೆ ವಳಗಡೆ ರೊ ಇನ್ನೊಂದು ಜೀವೊವೇ ಸತ್ತಂಗೆ ಅಲ್ವ?- ಅದುಕ್ಕೆ ಸುಮಾರು ಜಾತಿ ಜನ ಮಣ್ಣು ಬಗದು, ಅಂತಾ ಹೆಣವ ಹೂಳಕ್ಕಿಲ್ಲಕನಪ್ಪ- ಓದು ಪಕ್ಕಸ ಹೂತ, ಆ ಹೆಣವ ಹೂತ ಆಸುಪಾಸ್ನಲ್ಲಿ ಮಳೆ ಬೆಳೆಯೇ ಅಗಕ್ಕಿಲ್ಲವಂತೆ!- “ಇಂಗೆಲ್ಲ ಇವರಿಸಿದ್ದಲು, ಅವ್ವ, {{gap}}ತನ್ನ ಅವ್ವ ಜಿನ ಯೋಳಿದ ಮಾತ್ರೆ ನೆನೀತ ದರಮನಳ್ಳಿ ಕಡೀಕೆ ಲಕ್ಕ ತನ್ನ ಪಯಣವ ಮುಂದುವರಿಸ್ತ, ಯತಾ ಪರ್ಕಾರ ಬೊಡ್ಡ ಅವನ್ನ ಇಂಬಾಲಿಸ್ತು. {{center|'''೨೨'''}} {{gap}}ಲಕ್ಕ ಕಾಡ್ನಿಂದ ಬತ್ತಾ ಇದ್ದಂಗೆ ಕೆಂಗಣಪ್ಪ ತನ್ನ ಹೊಲದ ಪಕ್ಕದ. ಬಯಲಲ್ಲಿ ಕುಂತು ಏನೊ ಅರಸ್ತಾ ಇದ್ದದ್ದು ಕಾಣಿಸ್ತು, ಲಕ್ಕ ಅದೇ ದಾರೀಲಿ ವೋಗಬೇಕಲ್ಲ! ಕೆಂಗಣ್ಣಪ್ಪ ಹದ್ದಿನ ಕಣ್ಣ ತೆಪ್ಪಸಿ ವೋಗೋವಂಗಿಲ್ಲ. ಸುಮಾಸು, ಬಂದದ್ದು ಬರಲಿ- ಅಂದು ನ್ಯಾರವಾಗಿ ಕೆಂಗಣ್ಣಪ್ಪ ಏನ್ನೋ ಅರಸ್ತಿದ್ದ ತಳಕ್ಕೇ ದ್ವಾದ. {{gap}}“ಆದೇನಯ್ಯ ಈಟೊಂದು ಬಗೇಲಿ ಉಡುಕ್ತಾ ಇದ್ದೀರಿ?... ಯೇನ್ನಾರ ಕಳಕಂಡ್ರ?” ಕೇಳ್ದ, {{gap}}“ಇಲ್ಲ ಕನ್ಲ ಲಕ್ಕ ನಾ ಯೇನ್ನೂ ಕಳಕಂಡಿಲ್ಲ....” - {{gap}}“ಮಂತೆ, ಈ ಬಟಾ ಬಯಲಲ್ಲಿ ಯಾಕೆ ಇಂಗೆ ಕುಂತು ತಡಕಾಡ ಇದ್ದೀರಿ?” {{gap}}“ನಿಂಗೆ ಗ್ವತ್ತಿಲ್ಲೇನ್ಲ-ಪುರುಸರತ್ನ ತಡಕಾಡ್ತಾ ಇದ್ವಿ” {{gap}}“ಅದಾ?...” ಅಂತ ವಳವಳುಗೇ ಲಕ್ಕ ನಕ್ಕ, ದಾತು ರುದ್ದಿಗೆ ಕೆಂಗಣಪ್ಪ ಅಗಾಗ ಈ ಪುರುಸರತ್ನದ ಸೊಪ್ಪ ತಿನ್ತಾ ಇದ್ದದ್ದು ಲಕ್ಕಂಗೂ ಗ್ವತಿತ್ತು. {{gap}}“ಊ. ಅದೇಯ... ನನ್ನ ಜತೇಲಿ ಕುಂತು ಉಡುಕಾಡಿ ಈ ಪುರುಸರತ್ನದ ಸೊಪ್ಪ ವಸಿ ಜಮಾಯ್ತಿ ಕ್ವಡು, ಮತ್ತೆ, ಆಗ್ಲೇ ಬಿಸಿಲು ಏರ್ತಾ ಅದೆ. ನಂಗೋಬ್ಬಂಗೇ ತಗ ಆಯ್ತದೆ.”- ಕೆಂಗಣಪ್ಪ ಇಂಗಂದು “ಅಂಗೇ ಆಮ್ಯಕೆ, ನಮ್ಮಟ್ಟಿ ತಾವಿಕೆ ತಿರುಗಾಡಿಕಂಡು ಬಾ. ನನ್ನೆಡತಿ ಕಜ್ಜಾಯ ಮಾಡವಳೆ” ಅಂದು ಪುಸಿ ಮಾಡ್ದ. {{gap}}ಕಜ್ಜಾಯ ಅಸೀದೊ, ಬಿಸಿದೆ- ಅನ್ನೋ ಮಾತು ನಗ ಬೆರಕ್ಕಾಗಿ ಲಕ್ಕನ ನಾಲಿಗೆ ಮ್ಯಲೆ ಉಳ್ಳಾಡಿತೆ ವಿನಾ ತುಟಿಯಿಂದಾಚೆ ಹೊಳ್ಳನಿಲ್ಲ.... ಗೌಡ ಗ್ಯಾಗರೀತ ಅವೆ. {{gap}}ಅಲ್ಲದೇಯ ಇಂದುಕೆ ಬಾಲ್ಯದಲ್ಲಿ ಅಮ್ಮ ಅಟ್ಟೇಲಿ ಜೀತಕೆ<noinclude></noinclude> mk42cw7f59qimjwqtpkzxfki3y0zwfw ಪುಟ:ವೈಶಾಖ.pdf/೨೩೯ 104 82168 322369 319690 2026-05-25T05:01:54Z Shreelatha.Halemane 7642 /* Validated */ 322369 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|ಸಮಗ್ರ ಕಾದಂಬರಿಗಳು}}{{Right|೨೨೩}} ಇರನಿಲ್ವ, ತಾನು?- ತುಸ ವೊತ್ತು ಜ್ವತ್ಯಾಗಿ ಕುಂತು ಒಂದೋಟು ಸೊಪ್ಪು ಕಿತ್ತುಕೊಟ್ಟರೆ, ಅದ್ಯಾವ ಸಾಮ್ರಾಜ್ಯ ಕಳುದೋದದು?... ಅಲ್ಲದೇಯ ಈ ಗಾಟಿ ಗೌಡ ಈಟು ಸಣ್ಣ ಇಸ್ಯಕ್ಕೆಲ್ಲ ಯಕೆ ಯೆದುರಾಕೊಬೇಕು? {{gap}}ಇಂಗೆ ಚಿಂತುಸಿ, ಆ ಬಯಲಲ್ಲಿ ಲಕ್ಕ ಪುರುಸರತ್ನವ ತಾನೂ ಅರಸ್ತ ವೊಂಟ ಗೌಡ ಸಂತುರುಪ್ತನಾಗಿ ಕುಂತ ತನ್ನ ಉಡುಕಾಟದವ ಮುಂದುವರಿಸ್ಥ. ಗರಿಕೆ ಅಂಗೇ ಇದ್ದು ಪುಟಾಣಿ ನಕ್ಷತ್ರದ ತರ ಹೂವು ಇರೊ ಪುರುಸರತ್ನ ಸೊಪ್ಪ ಕುಕ್ಕರಗಾಲ್ನಲ್ಲಿ ಕುಂತು ಕೀಳ್ತ, {{gap}}“ಇನ್ನೇಟು ಪುರುಸರತ್ನ ತಿಂದರೆ ತಾನೆ ಈವಯ್ಯ ಎಂದೊ ವೊಂಟೋದ ಪುಂಸತ್ವ ವಾಪಸು ಬಂದಾತು?'- ತನ್ವಳಗೇ ಯೋಳಿಕೊಂಡು ನಗಡ್ಡ, ಮತ್ತೆ ಆಪಾಟಿ ಗ್ಯಾನಗೆಟ್ಟು ಆಟ ಆಡಿದರೆ ಯಾವ ಪುಂಸತ್ವ ತಾನೆ ಅದೇಟು ಜಿನ ಉಳುದಾತು?... ಮೊದ್ಲೆ ಯೋಳಕ್ಕಿಲ್ಲಾ ಗಾದ್ಯ- ಅನ್ನ ಅದೆ ಅಂತ ಉಂಡೋನು ಕೆಟ್ಟ, ಎಣ್ಣು ಅವಳ ಅಂತ ಮೋದೋನು ಕೆಟ್ಟ, ಅಂತಾವ!...' ಅಂದುಕೊತ್ತ ಇದ್ದಮಗೆ, ಗೌಡ್ನ ಅಟ್ಟಿಲಿ ತಾನು ಜೀತಕ್ಕಿದ್ದ ದಿನಗಳು ಗ್ಯಾಪನ ಅದೊ: {{gap}}ಅದರಾಗು ಒಂದು ಜಿನ ಗೌಡನ ಎಡತಿ ತೌರಿಗೋಗಿದ್ದುಲು. ಲಕ್ಕ ಅಟ್ಟ ವಳುಗಡೆಗೆ ಇದ್ದ ಕಟ್ಟಿಗೆ ಅಂಚಿಗೆ, ವಳುಗಿನ ಜಗತಿ ಕೈಪಿಡಿ ಪಕ್ಕದಾಗೆ ಮನಗಿದ್ದ. ಇನ್ನೊಚ್ಚೊರಿ ದನ ಕರ ಕಟ್ಟಾಕಿತ್ತು. ಎಡತಿ ಇಲ್ಲದಿದ್ದಾಗ ಕೆಂಗಣ್ಣಪ್ಪ ಅಟ್ಟ ವಳುಗಡೆ ಜಗತಿ ಮ್ಯಾಲೇ ಮನಗ್ತಿದ್ದ... {{gap}}ಮೊಖದ ತುಂಬ ಕಂಬಳಿ ಕವುಚಿ ಮನಗಿದ್ದ ಲಕ್ಕಂಗೆ ಅದ್ಯಾವ ಮಾಯದಲ್ಲಿ ನಿದ್ದೆ ಬಂತೊ, ಗ್ವತಿಲ್ಲ. ಮಕಾಡಿ ಮನಗಿದ ವಸಿ ವೊತ್ನಲ್ಲೆ ಇರಬೇಕು, ಯರೊ ಉದ್ದುದ್ದಕೆ ತನ್ನ ಮಯ್ಯ ಮ್ಯಾಲೆ ಭಾರ ಹೇರಿ ಮನಗಿದಂಗಾಯ್ತು!... ಎಚ್ಚರಾದರೂವೆ ಕಣ್ಣು ಮಾತ್ರ ತೆರೀನಿಲ್ಲ. ಎದರಿಕೆ. ಯವುದೊ ಪಿಶಾತಿ ಬಂದು ಹೇರಿಕಂತು ಅಂತ ಲಕ್ಕ ಬೆಮತೋದ... ಆದ್ರೆ, ಆ ಹಾಳು ಪಿತತಿ ತನ್ನ ಚಡ್ಡಿ ಯಾಕೆ ಬಿಚ್ಚಬೇಕು?- ಅರ್ತವೆ ಆಗದೆ ಕಣ್ಣು ಮುಚ್ಚಿದಂಗೇಯ ಅಲ್ಲು ಮರಿ ಕಚ್ಚಿ, 'ಜಡೆಮುನಿ, ಕಾಪಡಪ್ಪ' ಅಂತ ಮನದಾಗೆ ಪ್ರಾರ್ತನೆ ಮಾಡ್ತ ಸುಮ್ಮನೆ ಬಿದ್ದುಕಂಡ... ಥೋ, ಇದೇನ- ಕುಂಡಿ, ಒಳತೊಡೆಯೆಲ್ಲನು ತಣ್ಣಗಾಯ್ತು ಅದಲ್ಲ... {{gap}}“ನಾನೇ ಕಗ್ಗ-ಗಾಬರಿ ಬೀಳಬ್ಯಾಡ”- ಪುಸಿ ಮಾಡ್ತ ಗೌಡ ಕಂತು ಗಂಡು ತನ್ನ ಟುವಲ್ನಿಂವಿಂದ ಕುಂಡಿ ವರುಸ್ತಾ ಇದ್ದ... {{gap}}ಲಕ್ಕ ತಟಕ್ಕನೆ ಎದ್ದು ಕುಂತು ಅಳಕ್ಕೆ ಸುರು ಮಾಡ್ಡ... ಗೌಡ ಲಕ್ಕನ ಕೆನ್ನೆ ಸವರ್ತ,<noinclude></noinclude> jk0j9dq3fgas6xkwf90vi6qknyfyrji ಪುಟ:ವೈಶಾಖ.pdf/೨೪೦ 104 82169 322370 320134 2026-05-25T05:02:17Z Shreelatha.Halemane 7642 /* Validated */ 322370 proofread-page text/x-wiki <noinclude><pagequality level="4" user="Shreelatha.Halemane" />{{Left|೨೨೪}} {{Right|ವೈಶಾಖ}}</noinclude>{{gap}}“ದಮ್ಮಯ್ಯ ಕನ್ಲ. ನನ್ನೆಡತೀಗೆ ಮಾತ್ರ ಈ ಸುದ್ಯ ಯೋಳಬ್ಯಾಡ” ಗ್ವಾಗರಿಯಕ್ಕೆ ಮುಟ್ಟಕಂಡ, ಲಕ್ಕಂಗೆ ಸಮಾಧಾನ ಆಗಿ ಮನಾ ಮನಗಬೇಕಾರೆ ನಾತ್ರೆ ಸುಮಾರು ವ್ಯಾಲ್ಯಾನೆ ಕಳೀತು.... {{gap}}ಅವತ್ತಿಂದ ಮುಂದಕೆ ಗೌಡ ಇನ್ನು ತನ್ನ ತಂಟೆಗೆ ಬರನರ ಅಂತ ಲಕ್ಕ ಬಗದ, ಅಂಗೂವೆ ಏಡು ನಾತ್ರೆ ಕಳುದು ಮೂರನೇ ನಾತ್ರೆ ಲಕ್ಕಂಗಿನ್ನೂ ನಿದ್ದೆ ಬಂದಿಲ್ಲ. ಗೌಡನೂವೆ ನಿದ್ದೆ ಬರದೆ ಹೂಳಡುತಿದೊನು ದನ ಹಾದಾಡ್ತನೆ ಅಂತ ನೆಪ ತಕ್ಕಂಡು ಮೆತ್ತಗೆ ಎದ್ದ ಬಂದು ತನ್ನ ತಾವು ನಿಂತ, ಮನುಸನ ರಕ್ತದ ರುತಿ ಪಾಟಾದ ಹುಲಿ ಮತ್ತೆ ಉಡುಕ್ಕಂಡು ಬಂದೆ ಅನ್ನುಸ್ತು ಲಕ್ಕಂಗೆ...ಇನ್ನು ಸುಮ್ಮಕಿದ್ರೆ ಚೆಂದಿಲ್ಲ ಅಂದೂನೆ ಒಂದೇಡು ಸರ್ತಿ ಜೋಕ್ನಿಂದ ಕೆಮ್ಮಿದ... ಯಾಕೊ ಸರಿಯಿಲ್ಲ, ಹೈದ ಉಸಾರಾಗವೆ ಅಂತಲೋ ಯಾನೊ ಗೌಡ ಅವತ್ತೇ ಕಡೆ, ಅದರಿಂದ ಮುಂದಕೆ ತನ್ನ ತಂಟೆಗೆ ಬರನಿಲ್ಲ. ಎಚ್ಚು ಜುಲುಮೆ ಮಾಡಿದೆ, ಹೈದಯಲ್ಲಿ ತನ್ನೆಡತಿಗೆ ಯೋಳಿಬುಟ್ಬಾನೊ ಅನ್ನೋಭಯ ಇರಬೈದು!... {{gap}}ಮರುಪಸರತ್ನದ ಸೊಪ್ಪ ಕೆಂಗಣ್ಣಪ್ಪ ಸಾಕು ಅನ್ನೋವೋಟು ಜಮಾಯ್ಸಿ ಆಗಿತ್ತು” ಇನ್ನು ಸಾಕು, ನಡೀಲಾ ಲಕ್ಕ” ಅಂದು, ಕೆಂಗಣ್ಣಪ್ಪ ಎದ್ದ. ಲಕ್ಕನೊಂದಿಗೆ ಊರ ಕಡೆ ವೊಂಟ, ಅವರಿಬ್ಬರೂವೆ ಬತ್ತಾ ಇರೋನೂವೆ ಊರ್ನ ಸಮೀಪ್ದ ಒಂದು ಹೊಲದಲ್ಲಿ ನೀಲಂಗಾಲದ ಮಾದೇವಪ್ಪನೂ ಅವ್ನ ಎಡತಿ ಬಸಮ್ಮನೂವೆ ಒಂದೊಂದು ಕೊಡದಲ್ಲಿ ಏನೋ ತುಂಬಿ ಹೊಲದ ಮ್ಯಾಕ್ಕೆಲ್ಲ ತೆಳ್ಳಗೆ ಚಿವುಕಸ್ತ ಇದ್ದರು. ಅದ್ರೆ ನ್ವಾಡ್ತ ನಡದ ಕೆಂಗಣ್ಣಪ್ಪ. {{gap}}“ಈ ಮುಕ್ತಗಳಿಗೊಂದ ಬ್ರಾಂತು-ಅದೊಂದು ಬಂಜರು ಭೂಮಿ. ಇವರು ಅದೇಟು ಹ್ವಸ ರಕ್ತ ತಂದು ನೀರಿಗೆ ಬರೆಸಿ ವೊಲಕ್ಕೆಲ್ಲ ತಕ್ಕಳಿಸಿದ್ರೂವೆ, ನೆಲ ಫಲವತ್ತಾಕ್ಕಿಲ್ಲ. ಉತ್ತಮಾದ ಫಸಲ ಕ್ವಡಕ್ಕಿಲ್ಲ” -ತನಗೆ ತಾನೆ ಒಪ್ಪುಸಿಕೊಳೋನ ರೀತಿ ನುಡುದ. {{gap}}ಲಕ್ಕ ಆ ಜಿನ ಬೆಳಗಾಗೊ ಮುನ್ನ ಹೊಲಗೇರಿಂದ ಹೃಂಟು ಕಿಸ್ಥಸಾಸ್ತಿಗಳ ಕಮಾನುಗಾಡಿ ಕಟ್ಟಕ್ಕೆ ಬತ್ತಿರೋನುವೆ ಮಾದೇವಪ್ಪ ಮನೆ ಸಿಕ್ತು, ಅಲ್ಲಿ ವಸಿ ಜನ ಗುಬ್ಬಲು ಪರದಾಡ ಇದರು ಯೇನು ಇಸ್ಯ? ಅಂದು ಲಕ್ಕ ಕೇಳಿದ್ದ. ಆಗ ಯಾರೊ ಅಂದಿದ್ದರು.: “ಮಾದೇವಪ್ನ ಮೂರನೆ ಎಣ್ಣು ಕೆಂಪಿ ಇಲ್ವೆವ್ವ!ಅವಳು ಇವತ್ತು ಕೋಳಿ ಕೂಗಕ್ಕೂ ಮುಂಚೈ ರುತಮತಿ ಆದ್ಲು.” {{gap}}ಅದು ಸ್ಮರಣೆ ಬಂದು, ಅವರು ಏಡಾಳೂವೆ ನಡಸ್ತ ಇದ್ದ ಕಾಯಕಕ್ಕೆ<noinclude></noinclude> 6jepi4a3ztxd4lk0862f4bel27724o4 ಪುಟ:ವೈಶಾಖ.pdf/೨೪೧ 104 82170 322359 306194 2026-05-25T04:45:05Z Shreesha Sharma 7840 /* Proofread */ 322359 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೨೫}} ಕಾರಣ ಲಕ್ಕಂಗೆ ಜ್ವಳುದೋಯ್ತು . ಕೆಂಗಣಪ, ಲಕ್ಕ ಇಬ್ಬರೂವೆ ವೋಲಗೇರಿ ಸಮೀಪ ಬರೋ ವ್ಯಾಲ್ಯಾಕ್ಕೆ ಟಗರೂರನ ಗುಡ್ಡ ಮುಂದೆ ಐದೂರು ಯಜಮಾನ್ತು ಘೋರಾಯಿಸಿದ್ರು, ಕೆಂಗಣಪ್ಪ ಆ ಕಡೆ ಒಂದಾವರ್ತಿ ದುಸ್ಸಿ ಹಾಯ್ದಿ. “ಯಾನೊ ಪಂಚಾತಿ ಅಂತ ಕಾಣುಸ್ತದೆ ಕನ್ಯ. ಈ ಜನಕೆ ಇನ್ನೇನು ಕೇಮೆ. ಇವರ ಮ್ಯಾಲೆ ಅವರ ತಳ್ಳಿ, ಅವರ ಮ್ಯಾಲೆ ಇವರ ತಳ್ಳಿ, ತಮ್ಮ ಕಯ್ಯ ಕಾಯಿಸ್ಕಳಾದು” ಎಂದು ಮರುಸರತ್ನವ ಬಾಯಲ್ಲಿ ಮಣಕಿಸ್ತ ಹೊಂಟೇ ವೋದ. “ಅಟ್ಟಿಗೆ ಬಾರ, ಕಜ್ಜಾಯ ಮಾಡವ್ವ ನನ್ನೆಡತಿ"ದ ಮಾತು ಆ ಬಯಲಿಗೇ ಬಿದ್ದೋಯ್ತು. ಲಕ್ಕಂಗೆ ಮಾತ್ರ ಜೀವ ತಡೀನಿಲ್ಲ. ಸಾದಾರಣಕೆ ಪಂಚತಿ ಸೇರಿದ್ದುದ್ದು ಊರ ನಡುತಾವಿನ ಚಾವಡೀಲಿ. ಈಗ ವೋಲಗೇರಿಗೇ ಯಾಕೆ ಬಂದವೆ, ಈ ಜಯಮಾನು?- ಯಾನೊ ಗನವಾದ ಇಸಯವೆ ಇರಬೈದು ಅಂದುಕೊತ್ತ, ಯಜಮಾನ್ನು ಜಮಾಯ್ದಿರೊ ಕಡೀಕೆ ವೋದ. - ಟಗರೂರ ತಲೆಯ ಮಂಡಿಗೆ ಹೆಟ್ಟಿ ಕುಕ್ಕರಿಸಿ ಕುಂತಿದ್ದ. ಅವನೆ ಮೂರು ಮಾರು ದೂರದಲ್ಲಿ ಗುತ್ತು ತಡಿಕೆ ವರಿಕ್ಕಂಡು ಅವ್ರ ಹೊಲತಿ ಹುಚ್ಚು ಬೊರಿ ಸ್ವಾಲೆ ಸೆರಗಿನ ತುದಿಯ ಉಂಡೆ ಮಾಡಿ ಬಾಯೋಳಿಕೆ ಸೆಕ್ಸಿ ದುಡಿಸಿದ್ದು. ಕೇಮೆಗೆ ಇನ್ನೂ ವೊಗದಿದ್ದ ಹೋಲಗೇರಿ ಎಂಗಸರು ತಂತಮ್ಮ ಗುಡ್ಲು ವಳಗ್ನಿಂದ ಇಣಿಕಿ ಪಣಿಕಿ ಕ್ವಾಡ್ತಿದ್ರು, ಮನಿಪಾರೆ ಹುಲ್ಲಿನಲ್ಲಿ ನಾಗರ ಸೆಡೆ ಮಾಡಿ ಆಡಿಕತ್ತಿದ್ದ ಹೈಕಳು ಆಡೋದ ನಿಲ್ಲುಸಿ, ಕಣ್ಣ ಅಗಲ್ಲಿ ಕ್ವಾಡ್ತಾ ನಿಂತಿದ್ದೊ. “ದಪಾ ದಪಾ ಅದೇ ಸೊಲ್ಲು. ಯೆಲ್ಲಿ ತರಾನೆ ಅಂದ್ರೆ, ಎಂಗಾರು ತರಬೇಕಪ್ಪ... ಆ ಹೈದ್ರ ಕ್ರಿಯಾದಿಗಳು ನಡೀಬ್ಯಾಡದ?” ಗಂಗಪ್ಪ ಜೋರು ಮಾಡ್ತಿದ!... ಟಗರೂರ ನಿದಾನಕೆ ತಲೆ ಎತ್ತಿ, ಪಟೇಲರ ಕಡೀಕೆ ತಿರುಗ್ಲ. “ಅದೇನ ಅಲ್ಪ ಸೊಲ್ಪ ದುಡ್ಡ ಪಟೆ?- ಸಾವ್ರ ರೂಪಾಯಿ!... ನಾ ಯೆಲ್ಲಿಂದ ತರಾನೆ?” - ಬೆದರಿ ಬೆದರಿ ಅವ್ರು ಮಾತಾಡ್ಡಾಗ, ಮಾರಮ್ಮ ಮುಂದಕೆ ಬಲಿ ಕ್ವಡಕೆ ತಂದು ನಿಲ್ಲಿಸ್ಟ ಕುರಿ ವದುರಾಡೊವಂಗೆ ತೋರು, ಲಕ್ಕಂಗೆ! “ಯೆಲ್ಲಿಂದ ತರಾನೆ, ಯಲ್ಲಿಂದ ತರಾನೆ- ಅಂತಾನೆ ಸತಾಯಿಸ್ತ ಕುಂತಿದೆ, ಈ ನ್ಯಾಯ ಸವೆಯಕ್ಕಿಲ್ಲ. ಯಾರ ಅಟ್ಟಲಾರೂ ಜೀತಕಿಸ್ತೀನಿ ಅಂತ<noinclude></noinclude> 4dh5lq4wzxci5hqqevj1r6pjne474f6 322372 322359 2026-05-25T05:02:52Z Shreelatha.Halemane 7642 /* Validated */ 322372 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೨೫}} ಕಾರಣ ಲಕ್ಕಂಗೆ ಜ್ವಳುದೋಯ್ತು . {{gap}}ಕೆಂಗಣಪ, ಲಕ್ಕ ಇಬ್ಬರೂವೆ ವೋಲಗೇರಿ ಸಮೀಪ ಬರೋ ವ್ಯಾಲ್ಯಾಕ್ಕೆ ಟಗರೂರನ ಗುಡ್ಡ ಮುಂದೆ ಐದೂರು ಯಜಮಾನ್ತು ಘೋರಾಯಿಸಿದ್ರು, ಕೆಂಗಣಪ್ಪ ಆ ಕಡೆ ಒಂದಾವರ್ತಿ ದುಸ್ಸಿ ಹಾಯ್ದಿ. {{gap}}“ಯಾನೊ ಪಂಚಾತಿ ಅಂತ ಕಾಣುಸ್ತದೆ ಕನ್ಯ. ಈ ಜನಕೆ ಇನ್ನೇನು ಕೇಮೆ. ಇವರ ಮ್ಯಾಲೆ ಅವರ ತಳ್ಳಿ, ಅವರ ಮ್ಯಾಲೆ ಇವರ ತಳ್ಳಿ, ತಮ್ಮ ಕಯ್ಯ ಕಾಯಿಸ್ಕಳಾದು” ಎಂದು ಮರುಸರತ್ನವ ಬಾಯಲ್ಲಿ ಮಣಕಿಸ್ತ ಹೊಂಟೇ ವೋದ. “ಅಟ್ಟಿಗೆ ಬಾರ, ಕಜ್ಜಾಯ ಮಾಡವ್ವ ನನ್ನೆಡತಿ"ದ ಮಾತು ಆ ಬಯಲಿಗೇ ಬಿದ್ದೋಯ್ತು. {{gap}}ಲಕ್ಕಂಗೆ ಮಾತ್ರ ಜೀವ ತಡೀನಿಲ್ಲ. ಸಾದಾರಣಕೆ ಪಂಚತಿ ಸೇರಿದ್ದುದ್ದು ಊರ ನಡುತಾವಿನ ಚಾವಡೀಲಿ. ಈಗ ವೋಲಗೇರಿಗೇ ಯಾಕೆ ಬಂದವೆ, ಈ ಜಯಮಾನು?- ಯಾನೊ ಗನವಾದ ಇಸಯವೆ ಇರಬೈದು ಅಂದುಕೊತ್ತ, ಯಜಮಾನ್ನು ಜಮಾಯ್ದಿರೊ ಕಡೀಕೆ ವೋದ. {{gap}}- ಟಗರೂರ ತಲೆಯ ಮಂಡಿಗೆ ಹೆಟ್ಟಿ ಕುಕ್ಕರಿಸಿ ಕುಂತಿದ್ದ. ಅವನೆ ಮೂರು ಮಾರು ದೂರದಲ್ಲಿ ಗುತ್ತು ತಡಿಕೆ ವರಿಕ್ಕಂಡು ಅವ್ರ ಹೊಲತಿ ಹುಚ್ಚು ಬೊರಿ ಸ್ವಾಲೆ ಸೆರಗಿನ ತುದಿಯ ಉಂಡೆ ಮಾಡಿ ಬಾಯೋಳಿಕೆ ಸೆಕ್ಸಿ ದುಡಿಸಿದ್ದು. ಕೇಮೆಗೆ ಇನ್ನೂ ವೊಗದಿದ್ದ ಹೋಲಗೇರಿ ಎಂಗಸರು ತಂತಮ್ಮ ಗುಡ್ಲು ವಳಗ್ನಿಂದ ಇಣಿಕಿ ಪಣಿಕಿ ಕ್ವಾಡ್ತಿದ್ರು, ಮನಿಪಾರೆ ಹುಲ್ಲಿನಲ್ಲಿ ನಾಗರ ಸೆಡೆ ಮಾಡಿ ಆಡಿಕತ್ತಿದ್ದ ಹೈಕಳು ಆಡೋದ ನಿಲ್ಲುಸಿ, ಕಣ್ಣ ಅಗಲ್ಲಿ ಕ್ವಾಡ್ತಾ ನಿಂತಿದ್ದೊ. {{gap}}“ದಪಾ ದಪಾ ಅದೇ ಸೊಲ್ಲು. ಯೆಲ್ಲಿ ತರಾನೆ ಅಂದ್ರೆ, ಎಂಗಾರು ತರಬೇಕಪ್ಪ... ಆ ಹೈದ್ರ ಕ್ರಿಯಾದಿಗಳು ನಡೀಬ್ಯಾಡದ?” ಗಂಗಪ್ಪ ಜೋರು ಮಾಡ್ತಿದ!... {{gap}}ಟಗರೂರ ನಿದಾನಕೆ ತಲೆ ಎತ್ತಿ, ಪಟೇಲರ ಕಡೀಕೆ ತಿರುಗ್ಲ. “ಅದೇನ ಅಲ್ಪ ಸೊಲ್ಪ ದುಡ್ಡ ಪಟೆ?- ಸಾವ್ರ ರೂಪಾಯಿ!... ನಾ ಯೆಲ್ಲಿಂದ ತರಾನೆ?” - ಬೆದರಿ ಬೆದರಿ ಅವ್ರು ಮಾತಾಡ್ಡಾಗ, ಮಾರಮ್ಮ ಮುಂದಕೆ ಬಲಿ ಕ್ವಡಕೆ ತಂದು ನಿಲ್ಲಿಸ್ಟ ಕುರಿ ವದುರಾಡೊವಂಗೆ ತೋರು, ಲಕ್ಕಂಗೆ! {{gap}}“ಯೆಲ್ಲಿಂದ ತರಾನೆ, ಯಲ್ಲಿಂದ ತರಾನೆ- ಅಂತಾನೆ ಸತಾಯಿಸ್ತ ಕುಂತಿದೆ, ಈ ನ್ಯಾಯ ಸವೆಯಕ್ಕಿಲ್ಲ. ಯಾರ ಅಟ್ಟಲಾರೂ ಜೀತಕಿಸ್ತೀನಿ ಅಂತ<noinclude></noinclude> 6l4rirsn8ece2tpby7u3eww7jubtfoe ಪುಟ:ವೈಶಾಖ.pdf/೨೪೨ 104 82171 322360 306208 2026-05-25T04:46:06Z Shreesha Sharma 7840 /* Proofread */ 322360 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|೨೨೬}} {{Right|'''ವೈಶಾಖ'''}} ಈಸುಗಂಬಂದು ಅನ ಕಟ್ಟಬೇಕು ಕನ್ನ.” {{gap}}“ಈಗೇನು-ಇಲ್ಲೇ ಯೋನಿ. ನನ್ನೇ ಯಾರಾರು ಪುಣ್ಯಾತ್ಮರು ಜೀತಕಿರಿಸಿಕೊಂಡು ಈ ಅಣವ ಪಂಚಾತಿಗೆ ಕಟ್ಟಿಕೂಡ್ಲಿ. ನ್ಯಾ ಬ್ಯಾಡ ಅನ್ನಕ್ಕಿಲ್ಲ... ಬೇತುಗದ ಟಗರೂರ. {{gap}}“ನಿನ್ನ ಯಾರಲಾ ಅಪ್ಪಯ್ಯಾ ಇರುಸಿಕಳಾರು?... ಸಿಳ್ಳೆಕ್ಯಾತ್ಸಂಗೆ ಇದ್ದೀ. ನಿನ್ನ ಕಯ್ಲಿ ಯಾವ ಕೇಮೆ ಆದಾತು?... ನಿನ್ನ ಎಡತಿ ಹುಚ್ಚುಬೋರಿಗೂವೆ ಯಾರೂ ಆಪಾಟಿ ಆಣ ತೆರಕ್ಕಿಲ್ಲ. ಇನ್ನೂ ನಿನ್ನ ಮಗಳು ಚೆಲುವಿನ ಜೀತಕಿಟೆ ಯೇನಾರ ದೂರೀಬೈದು.” ಈ ಮಾತು ಮುಂದು ಮಾಡಿದೋನು ನಂಜೇಗೌಡ. ಮಗಳ ಜೀತಕಿರುಸು ಅಂದ ಕೂಡ್ಡೆ ಟಗರೂರ ಭೂಮಿಗೆ ಇಳುದೋದ. ಗುಡ್ಡ ವರೀಕಂಡು ನಿಂತಿದ್ದ ಹುಚ್ಚುಖೋರಿ ಮಾತ್ರ, {{gap}}“ಇರಾ ಒಂದು ಎಣ್ಣ, ಅದರಾಗು ಲಗ್ನಕ್ಕೆ ಬಂದಿರಾ ಎಣ್ಣ ಜೀತಕಿರಿಸಾದಾ?- ಈ ಹೂಟಕೆ ಬಿಲ್‌ಕುಲ್ ನ ವಪ್ಪನಾರಿ...” ಬಿಕ್ಕಾ ಬಿಕ್ಕಾ ಅಂದ್ಲು. {{gap}}- “ಅದಕೂ ವಪಕ್ಕಿಲ್ಲ. ಇದಕ್ಕೂ ವಪಕ್ಕಿಲ್ಲ, ಅಂದ್ರೆ ನಾವೇನ ಮಾಡಬೇಕು?... ಉಳುದಿರಾದು ಒಂದೇ ದಾರಿ. ಆ ಹೆಣವ ತಂದು ಇವರ ಗುಡ್ಡ ತಾವು ಕೆಡವೋದು! ವೋಟೇಯ”- ಇಂಗಂದೋರು ನಾಮಧಾರಿಗಳ ಉದ್ದೂರಯ್ಯ. {{gap}}“ಹಯ್ಯಯ್ಯೋ ಹಯ್ಯಯ್ಯೋ ಅಂಗೆ ಮಾತ ಮಾಡಬ್ಯಾಡಿ ಕನ್ನಯ್ಯನಿಮ್ಮ ಪಾದಕ್ಕೆಬೀಳೀನಿ.” ಹುಚ್ಚುಬೋರಿ ಚೀರಿದ್ದು. {{gap}}“ಅಂಗಾರೆ ಬುಡು. ನಮಗುಳಿದಿರಾದು ಅದೊಮದೆ ದಾರಿ, “- ಇಂಗಂದು ಗಂಗಪ್ಪ “ಊ ನಡೀರಪ್ಪ, ಇವನತ್ರ ಎಷ್ಟು ಮಾತಾಡಿದ್ರೂವೆ ಅಸ್ಟೇಯ”- ಅಂತ ಹೈಂಡೋರಂಗೆ ತಿರುಗಿದ. {{gap}}- “ಬ್ಯಾಡಿ, ಬ್ಯಾಡಿ, ಅಂಗೆ ಮಾಡಬ್ಯಾಡಿ, ನಿಂತುಗನ್ನಿ... ಇನ್ನೇನ ಮಾಡಾದು ನನ್ನ ಎಣ್ಣನೇ ಯಾರತ್ರನಾರೂ ಜೀತಕಿರುಸಿ ರೂಪಾಯಿ ತಂದು ಕಡ್ತೀನಿ, ವಸಿ ಜಿನತಡೀರಿ...” ಟಗರೂರ ಆಳ್ತಾ ಆಳ್ತಾ ಯೋಳ, {{gap}}ಹೊಂಟಿದ್ದೋರೆಲ್ಲ ನಿಂತುಗಂಡು, ನಾಮಧಾರಿಗಳ ಉದ್ದೂರಯ್ಯ, “ಅವಳ ನಾ ಜೀತಕಿಟ್ಟುಕೋತೀನಿ. ಆದ್ರೆ ಸಾವ್ರ ರೂಪಾಯ ಕ್ವಡಕ್ಕೆ ನಂಗ ಸಾಮರ್ತ್ಯ ಇಲ್ಲ. ನನ್ನತ್ರ ಐನೂರು ರೂಪಾಯಿ ಅದೆ. ವೋಟು ಬೇಕಾರೆ ಕೃಡ್ತೀನಿ” ಅಂದ. {{gap}}ಬಾಕಿ ಜಯಮಾನು ಯೆಲ್ಲಾರು ವಜ್ಯೋರಿಗೋಗಿ ಮಾತಾಡಿಕಂಡ್ರು.<noinclude></noinclude> arasw9krs1ujna67sad3sufxpaw2mbn 322374 322360 2026-05-25T05:03:09Z Shreelatha.Halemane 7642 /* Validated */ 322374 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|೨೨೬}} {{Right|'''ವೈಶಾಖ'''}} ಈಸುಗಂಬಂದು ಅನ ಕಟ್ಟಬೇಕು ಕನ್ನ.” {{gap}}“ಈಗೇನು-ಇಲ್ಲೇ ಯೋನಿ. ನನ್ನೇ ಯಾರಾರು ಪುಣ್ಯಾತ್ಮರು ಜೀತಕಿರಿಸಿಕೊಂಡು ಈ ಅಣವ ಪಂಚಾತಿಗೆ ಕಟ್ಟಿಕೂಡ್ಲಿ. ನ್ಯಾ ಬ್ಯಾಡ ಅನ್ನಕ್ಕಿಲ್ಲ... ಬೇತುಗದ ಟಗರೂರ. {{gap}}“ನಿನ್ನ ಯಾರಲಾ ಅಪ್ಪಯ್ಯಾ ಇರುಸಿಕಳಾರು?... ಸಿಳ್ಳೆಕ್ಯಾತ್ಸಂಗೆ ಇದ್ದೀ. ನಿನ್ನ ಕಯ್ಲಿ ಯಾವ ಕೇಮೆ ಆದಾತು?... ನಿನ್ನ ಎಡತಿ ಹುಚ್ಚುಬೋರಿಗೂವೆ ಯಾರೂ ಆಪಾಟಿ ಆಣ ತೆರಕ್ಕಿಲ್ಲ. ಇನ್ನೂ ನಿನ್ನ ಮಗಳು ಚೆಲುವಿನ ಜೀತಕಿಟೆ ಯೇನಾರ ದೂರೀಬೈದು.” ಈ ಮಾತು ಮುಂದು ಮಾಡಿದೋನು ನಂಜೇಗೌಡ. ಮಗಳ ಜೀತಕಿರುಸು ಅಂದ ಕೂಡ್ಡೆ ಟಗರೂರ ಭೂಮಿಗೆ ಇಳುದೋದ. ಗುಡ್ಡ ವರೀಕಂಡು ನಿಂತಿದ್ದ ಹುಚ್ಚುಖೋರಿ ಮಾತ್ರ, {{gap}}“ಇರಾ ಒಂದು ಎಣ್ಣ, ಅದರಾಗು ಲಗ್ನಕ್ಕೆ ಬಂದಿರಾ ಎಣ್ಣ ಜೀತಕಿರಿಸಾದಾ?- ಈ ಹೂಟಕೆ ಬಿಲ್‌ಕುಲ್ ನ ವಪ್ಪನಾರಿ...” ಬಿಕ್ಕಾ ಬಿಕ್ಕಾ ಅಂದ್ಲು. {{gap}}- “ಅದಕೂ ವಪಕ್ಕಿಲ್ಲ. ಇದಕ್ಕೂ ವಪಕ್ಕಿಲ್ಲ, ಅಂದ್ರೆ ನಾವೇನ ಮಾಡಬೇಕು?... ಉಳುದಿರಾದು ಒಂದೇ ದಾರಿ. ಆ ಹೆಣವ ತಂದು ಇವರ ಗುಡ್ಡ ತಾವು ಕೆಡವೋದು! ವೋಟೇಯ”- ಇಂಗಂದೋರು ನಾಮಧಾರಿಗಳ ಉದ್ದೂರಯ್ಯ. {{gap}}“ಹಯ್ಯಯ್ಯೋ ಹಯ್ಯಯ್ಯೋ ಅಂಗೆ ಮಾತ ಮಾಡಬ್ಯಾಡಿ ಕನ್ನಯ್ಯನಿಮ್ಮ ಪಾದಕ್ಕೆಬೀಳೀನಿ.” ಹುಚ್ಚುಬೋರಿ ಚೀರಿದ್ದು. {{gap}}“ಅಂಗಾರೆ ಬುಡು. ನಮಗುಳಿದಿರಾದು ಅದೊಮದೆ ದಾರಿ, “- ಇಂಗಂದು ಗಂಗಪ್ಪ “ಊ ನಡೀರಪ್ಪ, ಇವನತ್ರ ಎಷ್ಟು ಮಾತಾಡಿದ್ರೂವೆ ಅಸ್ಟೇಯ”- ಅಂತ ಹೈಂಡೋರಂಗೆ ತಿರುಗಿದ. {{gap}}- “ಬ್ಯಾಡಿ, ಬ್ಯಾಡಿ, ಅಂಗೆ ಮಾಡಬ್ಯಾಡಿ, ನಿಂತುಗನ್ನಿ... ಇನ್ನೇನ ಮಾಡಾದು ನನ್ನ ಎಣ್ಣನೇ ಯಾರತ್ರನಾರೂ ಜೀತಕಿರುಸಿ ರೂಪಾಯಿ ತಂದು ಕಡ್ತೀನಿ, ವಸಿ ಜಿನತಡೀರಿ...” ಟಗರೂರ ಆಳ್ತಾ ಆಳ್ತಾ ಯೋಳ, {{gap}}ಹೊಂಟಿದ್ದೋರೆಲ್ಲ ನಿಂತುಗಂಡು, ನಾಮಧಾರಿಗಳ ಉದ್ದೂರಯ್ಯ, “ಅವಳ ನಾ ಜೀತಕಿಟ್ಟುಕೋತೀನಿ. ಆದ್ರೆ ಸಾವ್ರ ರೂಪಾಯ ಕ್ವಡಕ್ಕೆ ನಂಗ ಸಾಮರ್ತ್ಯ ಇಲ್ಲ. ನನ್ನತ್ರ ಐನೂರು ರೂಪಾಯಿ ಅದೆ. ವೋಟು ಬೇಕಾರೆ ಕೃಡ್ತೀನಿ” ಅಂದ. {{gap}}ಬಾಕಿ ಜಯಮಾನು ಯೆಲ್ಲಾರು ವಜ್ಯೋರಿಗೋಗಿ ಮಾತಾಡಿಕಂಡ್ರು.<noinclude></noinclude> hvuhzzlfkva0gq1d1k2rn279ac2f2io ಪುಟ:ವೈಶಾಖ.pdf/೨೪೩ 104 82172 322361 306225 2026-05-25T04:47:00Z Shreesha Sharma 7840 /* Proofread */ 322361 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೨೭}} ಆಮ್ಯಾಕೆ ಗಂಗಪ್ಪ ಬಂದೋನು, {{gap}}“ಐನೂರ ಕ್ವಟ್ಟರೆ ತಕ್ಕಡೀನೆ ಏಳಕ್ಕಿಲ್ಲ. ಹೈದ ತೀರುಕಂಡದೆ. ಅಮ್ಮ ಮಣ್ಣು ಮಾಡಕ್ಕೆ ಅದರ ಅವ್ವನಿಗೆ ಕೂಡಬೇಕೊ ಬ್ಯಾಡವೊ?... ಅವಳೂ ಬಡವಿ, ಪಾಪ. ಇನ್ಯಾವ ಆದಾರ ಇದ್ದು ಅವಳೆ?... ಅದೆಲ್ಲ ಅಗಕ್ಕಿಲ್ಲ ಉದ್ದೂರಯ್ಯ, ನಿನ್ನತ್ರ ಇದ್ದರೆ ಸಾವ್ರ ರೂಪಾಯ ತಂದು ಕಡು. ಎಣ್ಣ ಕರಕೊಂಡೋಗು. ಇಲ್ಲ.. ನಿಂಗೆ ಆಗಕ್ಕಿಲ್ಲ ಅಂದ್ರೆ, ಬ್ಯಾರೆ ಇನ್ಯಾರಾರ ಅಣ ಕ್ವಡ್ತಾರೆ.” ಕೋವಿಲಿ ಸುಟ್ಟಂಗೆ ಯೋಳಿಜುಟ್ಟು, {{gap}}ಉದ್ದೂರಯ್ಯ ವಸಿ ವೊತ್ತು ವಳು ಅಳದೂ ಸುರದೊ ಕಡೀಕೆ, {{gap}}“ಊ, ಅಟ್ಟೇಲಿ ವೋಗಿ ನ್ಯಾಡ್ತೀನಿ, ಅಣ ಯೇನಾರ ಜಮಾ ಆದ್ರೆ ತತ್ತೀನಿ. ಅಲ್ಲೀಗಂಟ ತಡಕನ್ನಿ...” ಇಂಗಂದು ಎದ್ದೋದೋನು, ಕಣ್ಮುಚ್ಚಿ ಕಣ್ಮ ಬುಡೋರೊಲ್ಲೆ ಅಟ್ಟಿಯಿಂದ ಆಜರಾಗಿ, {{gap}}“ತಕ್ಕ ಗಂಗಪ್ತಾರೆ, ನನೆಡತಿ ಮೂಲೆ ಮುಡಕಲಲ್ಲಿ ಇಟ್ಟಿದ್ದ ಅಣವ ಕ್ವಡುದೇ ಇದ್ರೆ, ಇಟು ದುಡ್ಡು ಈ ಕ್ಷಣಕ್ಕೆ ಜ್ವತೆ ಮಾಡಕ್ಕಾಯ್ತಾ ಇರನಿಲ್ಲ ನಂಗೆ...? ಅಂತೇಳಿ, ಗಂಗಪ್ಪನ ಕೈಗೆ ಒಂದು ಸ್ರಾವ ಬೆಳ್ಳಿ ನಾಣ್ಯವ ಒಂದೊಂದಾಗಿ ಎಣಿಸಿ ಆಹ್ಲಾ, {{gap}}ನಾಣ್ಯಗಳ ನಂಜೇಗೌಡನ ಕಾಯ್ಕಿಗೆ ಕಟ್ಟು, ಗಂಗಪ್ಪ, “ನೀವೊಂದು ದಪ್ಪ ಎಣಿಸಿಬಿಡಿ, ನಂಜೇಗೌಡರೆ” ಅಂದ. ನಂಜೇಗೌಡ ಜ್ವಾಪಾನವಾಗಿ ಅಣವ ಇನ್ನೊಂದು ದಪ ಎಣಿಸಿ, ಅದನೂ ಚೌಕದಲ್ಲಿ ಕಟ್ಟಿಕಂಡು. {{gap}}“ಊ, ಈಗ ನೀನು ಎಣ್ಣ ಕರಕಂಡು ವೋಗಬೈದು, ಉದ್ದೂರಯ್ಯ” ಅಂದ. ಹುಚ್ಚಬೋರಿ, {{gap}}“ನಾ ಕಳಸಕ್ಕಿಲ್ಲ. ಕಳಸಕ್ಕಿಲ್ಲ”- ರಾದ್ದಾಂತ ಮಾಡಿದ್ದು. ಅದು ಯಾವ ಪರ್ಯೋಜನಕೂ ಬರನಿಲ್ಲ. ಅಲ್ಲಿದ್ದೋರೆಲ್ಲ ಅವಳಿಗೆ ಬುದ್ದಿ ಯೋಳಕ್ಕೆ ಸುರು ಮಾಡಿದರು. ಕಡೀಕೆ ಆ ಎಣ್ಣು ನಾಮಧಾರಿಗಳ ಉದ್ದೂರಮ್ಮ ಆಟ್ಟಿಗೆ ಕ್ವಿಂಡಲೇಬೇಕಾಯ್ತು! {{gap}}ಲಕ್ಕ ಇದ್ಯಾಕೆ ಇಂಗಾಯ್ತು ಎಂದು ತಲೆ ಕೆಡಿಸಿಕಂಡ. ಅವರಿವರ ಕೇಳಿ ವಸಿ ತೀಳಿತು. ಆದರೆ ಪೂರಾ ಇಚಾರ ತಿಳಿಸಿದೋನು ಟಗರೂರನ ದೋಸ್ತು ಮಲ್ಲೂವ, ಅದೂ ಮೂರುನಾಕು ಜಿನ ಕಳುದ ಬಳಿಕಾನೆ, ಪಂಚಾತಿ ಆದ ನಾನ ಟಗರೂರ ಮಲ್ಲೂವನ ಸಂಗಾಟ ರಾಚನ ಸರಾಪಿನ ಅಂಗಡೀಲಿ<noinclude></noinclude> 4nbxjes1eymk8nb8fs5po182c03bmd0 322375 322361 2026-05-25T05:03:10Z Pragathi. BH 7585 /* Validated */ 322375 proofread-page text/x-wiki <noinclude><pagequality level="4" user="Pragathi. BH" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೨೭}} ಆಮ್ಯಾಕೆ ಗಂಗಪ್ಪ ಬಂದೋನು, {{gap}}“ಐನೂರ ಕ್ವಟ್ಟರೆ ತಕ್ಕಡೀನೆ ಏಳಕ್ಕಿಲ್ಲ. ಹೈದ ತೀರುಕಂಡದೆ. ಅಮ್ಮ ಮಣ್ಣು ಮಾಡಕ್ಕೆ ಅದರ ಅವ್ವನಿಗೆ ಕೂಡಬೇಕೊ ಬ್ಯಾಡವೊ?... ಅವಳೂ ಬಡವಿ, ಪಾಪ. ಇನ್ಯಾವ ಆದಾರ ಇದ್ದು ಅವಳೆ?... ಅದೆಲ್ಲ ಅಗಕ್ಕಿಲ್ಲ ಉದ್ದೂರಯ್ಯ, ನಿನ್ನತ್ರ ಇದ್ದರೆ ಸಾವ್ರ ರೂಪಾಯ ತಂದು ಕಡು. ಎಣ್ಣ ಕರಕೊಂಡೋಗು. ಇಲ್ಲ.. ನಿಂಗೆ ಆಗಕ್ಕಿಲ್ಲ ಅಂದ್ರೆ, ಬ್ಯಾರೆ ಇನ್ಯಾರಾರ ಅಣ ಕ್ವಡ್ತಾರೆ.” ಕೋವಿಲಿ ಸುಟ್ಟಂಗೆ ಯೋಳಿಜುಟ್ಟು, {{gap}}ಉದ್ದೂರಯ್ಯ ವಸಿ ವೊತ್ತು ವಳು ಅಳದೂ ಸುರದೊ ಕಡೀಕೆ, {{gap}}“ಊ, ಅಟ್ಟೇಲಿ ವೋಗಿ ನ್ಯಾಡ್ತೀನಿ, ಅಣ ಯೇನಾರ ಜಮಾ ಆದ್ರೆ ತತ್ತೀನಿ. ಅಲ್ಲೀಗಂಟ ತಡಕನ್ನಿ...” ಇಂಗಂದು ಎದ್ದೋದೋನು, ಕಣ್ಮುಚ್ಚಿ ಕಣ್ಮ ಬುಡೋರೊಲ್ಲೆ ಅಟ್ಟಿಯಿಂದ ಆಜರಾಗಿ, {{gap}}“ತಕ್ಕ ಗಂಗಪ್ತಾರೆ, ನನೆಡತಿ ಮೂಲೆ ಮುಡಕಲಲ್ಲಿ ಇಟ್ಟಿದ್ದ ಅಣವ ಕ್ವಡುದೇ ಇದ್ರೆ, ಇಟು ದುಡ್ಡು ಈ ಕ್ಷಣಕ್ಕೆ ಜ್ವತೆ ಮಾಡಕ್ಕಾಯ್ತಾ ಇರನಿಲ್ಲ ನಂಗೆ...? ಅಂತೇಳಿ, ಗಂಗಪ್ಪನ ಕೈಗೆ ಒಂದು ಸ್ರಾವ ಬೆಳ್ಳಿ ನಾಣ್ಯವ ಒಂದೊಂದಾಗಿ ಎಣಿಸಿ ಆಹ್ಲಾ, {{gap}}ನಾಣ್ಯಗಳ ನಂಜೇಗೌಡನ ಕಾಯ್ಕಿಗೆ ಕಟ್ಟು, ಗಂಗಪ್ಪ, “ನೀವೊಂದು ದಪ್ಪ ಎಣಿಸಿಬಿಡಿ, ನಂಜೇಗೌಡರೆ” ಅಂದ. ನಂಜೇಗೌಡ ಜ್ವಾಪಾನವಾಗಿ ಅಣವ ಇನ್ನೊಂದು ದಪ ಎಣಿಸಿ, ಅದನೂ ಚೌಕದಲ್ಲಿ ಕಟ್ಟಿಕಂಡು. {{gap}}“ಊ, ಈಗ ನೀನು ಎಣ್ಣ ಕರಕಂಡು ವೋಗಬೈದು, ಉದ್ದೂರಯ್ಯ” ಅಂದ. ಹುಚ್ಚಬೋರಿ, {{gap}}“ನಾ ಕಳಸಕ್ಕಿಲ್ಲ. ಕಳಸಕ್ಕಿಲ್ಲ”- ರಾದ್ದಾಂತ ಮಾಡಿದ್ದು. ಅದು ಯಾವ ಪರ್ಯೋಜನಕೂ ಬರನಿಲ್ಲ. ಅಲ್ಲಿದ್ದೋರೆಲ್ಲ ಅವಳಿಗೆ ಬುದ್ದಿ ಯೋಳಕ್ಕೆ ಸುರು ಮಾಡಿದರು. ಕಡೀಕೆ ಆ ಎಣ್ಣು ನಾಮಧಾರಿಗಳ ಉದ್ದೂರಮ್ಮ ಆಟ್ಟಿಗೆ ಕ್ವಿಂಡಲೇಬೇಕಾಯ್ತು! {{gap}}ಲಕ್ಕ ಇದ್ಯಾಕೆ ಇಂಗಾಯ್ತು ಎಂದು ತಲೆ ಕೆಡಿಸಿಕಂಡ. ಅವರಿವರ ಕೇಳಿ ವಸಿ ತೀಳಿತು. ಆದರೆ ಪೂರಾ ಇಚಾರ ತಿಳಿಸಿದೋನು ಟಗರೂರನ ದೋಸ್ತು ಮಲ್ಲೂವ, ಅದೂ ಮೂರುನಾಕು ಜಿನ ಕಳುದ ಬಳಿಕಾನೆ, ಪಂಚಾತಿ ಆದ ನಾನ ಟಗರೂರ ಮಲ್ಲೂವನ ಸಂಗಾಟ ರಾಚನ ಸರಾಪಿನ ಅಂಗಡೀಲಿ<noinclude></noinclude> 7hmdkjtla5xoi87xxx7crixe4klxb5q ಪುಟ:ವೈಶಾಖ.pdf/೨೪೪ 104 82173 322362 306237 2026-05-25T04:47:24Z Shreesha Sharma 7840 /* Proofread */ 322362 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|೨೨೮}} {{Right|'''ವೈಶಾಖ'''}} ಕುಡೀತ ತೋಡಿಕಂಡಿದ್ರಂತೆ... {{gap}}ಇಂದಿನ ನಾನಾಗ ಭರ್ತಿ ಏರಿಸಿದ್ದ ಟಗರೂರ, ಸ್ವಾಮಿ ಅವನ ಗುಡ್ಡ ಬೆಚ್ಚಗೆ ಮಾಡಕ್ಕೆ ಅತ್ತಿದ್ರೂವೆ ಇನ್ನೂ ಬಿದ್ದೇ ಇದ್ದಂತೆ. ಎದ್ದು ಸ್ವಾಡಿದಾಗ ಆಗ್ಗೆ ಎಡತಿ ಹುಚ್ಚುಬೋರಿ, ಮಗಳು ಚೆಲುವಿ ಇಬ್ಬರೂವೆ ಕೂಲಿಕಂಬಳಕೆ ವೋಂಟೋಗಿದ್ರಂತೆ. ಮಡಿಕೇಲಿ ಅರ್ದಮುದ್ದೆ ಹಿಟ್ಟ ಇನ್ನಿಗೇ ಅಂತಾನೆ ಎಡತಿ ಮಡಗೋಗಿದ್ದು, ಹಿತ್ತಲಿಂದ ನಾಕು ಹರು ಮೆಣಸಿನಕಾಯಿ ಬುಡಸಿ ತಂದು ತಂಗಳಿಟ್ಟಿನ ಜತೆ ಕಡಕಂಡು ತಿಂದ, ನಿಶಾದಿಂದ ತಲೆ ಇನ್ನೂ ಸಿಡೀತಾನೆ ಇತ್ತು. ಎಂಗೂ ಕಂಬಳಕೋಗೊ ವೊತ್ತು ಮೀರು, ಊರೊಳೆ ತಿರುಕ್ಕಂಬಂದ್ರೆ ಈ ತಲೆ ಸಿಡ್ಡ ವಸಿ ತಪ್ಪಬೈದು ಅಂತ ವೊಂಟ. ಊರೊಳಗಿನ ಬೀದಿಗಳಲ್ಲಿ ಜನವೇ ಇಲ್ಲ. ಮುಕ್ಕಾಲುಪಾಲು ಗಂಡಸರು ಎಂಗಸರೆಲ್ಲ ಕೆಲ್ಸಕ್ಕೊಂಟೋಗಿದ್ರು, ತೆಳ್ಳತೆಳ್ಳಗೆ ಅಲ್ಲೊಬ್ಬು ಇಲ್ಲೊಬ್ಬು ಉಳಿದೋರು ತಮ್ಮತಮ್ಮ ಅಟ್ಟಿ ಕದ ಮುಚ್ಚಿ ವಳುಗೆ ಸೇರಿದ್ರು, ಯಾವ ಬೀದೀಲಿ ಕ್ವಾಡಿದ್ರೂವೆ ನಾಯಿಗಳ ಸಂಸಾರವೆ ವೊರತು ಒಂದು ನರಿಪಿಳ್ಳೆ ಸೈತ ಕಾಣಿಸ್ತಿರನಿಲ್ಲ.... {{gap}}ಟಗರೂರ ಆ ಬೀದೀಲಿ ಹೈಕ್ಕು ಈ ಬೀದೀಲಿ ಕಡದು ಪರಿವಾರದೋರ ಬೀದಿಗೆ ಬಂದಿದ್ರಂತೆ. ಆ ಬೀದಿಯೂ ಬಿಕೊ ಅಂತಿತ್ತು, ಅಂಗೆ ಅತ್ತಿತ್ತಾಗಿ ಕಣ್ಣಾಡಿಸ್ತ ಬಲ್ವಾಗ, ಟಗರೂರಿನಿಗೆ ಬಾಯಾಡಕ್ಕೆ ಯೇನಾರೂವೆ ಸಿಕ್ಕಿದೆ ವಾಸಿಯಾಗಿತ್ತಲ್ಲ ಅನ್ನಿಸ್ತಂತೆ. ಯಾವ ಅಟೀಲಿ ಕ್ಯಾಳಿದ್ರೆ ಸಿಕ್ಕಬೈದು ಅಂತ ಲೆಕ್ಕಾಚಾರ ಆಕ್ತ ಬತ್ತಾ ಇರೋನೂವೆ, ಎಂಕಿ ಅಟ್ಟಿ ಎದುರಾಗಿ, ಹುಂ- ಎಂಕಿ ಅಟ್ಟಿ ಅಂಗದೆ, ಅವಳು ಯಾವತ್ತೂವೆ ಈಳ್ಯದೆಲೆ ಹೊಗೆಸೊಪ್ಪು ವತ್ತಿರಿಸಿದಂಗೆ ಇದ್ದಾಳೆ. ನಾ ಕಾಳಿದಾಗ, ಒಂದೊಂದಿ ಜಿನ ಗ್ಯಾನ ಸುದ್ದಾಗಿದೆ. 'ಏನ್ನ ನನ್ನ ಹಳೇನ ಮಗನೆ, ಸಾಲ ಕ್ವಟ್ಟು ಮಡಗಿರೋನ ತರ ನಿಸೂರಾಗಿ ಬಂದು ಕ್ಯಾಳೀಓಯಲ್ಲ?' ಅಂತ ಹಟಿಗಿಸದೂವೆ, ಕಡೀಕೆ 'ಹು, ವೋಗ್ಲಿ ತಕ್ಕ' ಅಂತ ಕೂಗ್ತಿದ್ದು, ಆ ಆಸೆಯಿಂಧೆ ಟಗರೂರ ಎಂಕಿ ಅಟ್ಟಿ ಬಾಗಿಲ ಮುಂದೆ ಬಂದು ನಿಂತ. ಬಾಗಿಲು ಮುಚ್ಚಿತ್ತು. ವಕ್ಕಡೆ ಇರೋ ಜಗಲಿ ಮ್ಯಾಲೆ ಹೈಕಳು ಊಟಾನೂ ತಿಂಡೀನೊ ತಕ್ಕಂಡೋಗೊ ಟಿಪನ್ ಕರಾ ಯಾರೊ ಇಟ್ಟಂಗಿತ್ತು. ಯಾರಿರಬೈದು ಅಂತ ಯೋಚಿಸಿದೋನು, ಇನ್ಯಾರು ಎಂಕಿ ಹೈದನೆ ಇರಬೇಕು ಅಂದಕೋತ್ತ, ಮುಂದಕೋಗಿ ಅಟ್ಟಿಕದ ತಟ್ಟಿದ. ವಳುಖ್ಯಿಂದ ಯಾರೂ ಬಂದು ಕದ ತಗೀನಿಲ್ಲ. ಪುನಾ ಜೋನ್ನಿಂದ ತಟ್ಟಿದ. ವಳಗ್ನಿಂದ ಸದ್ದು ಸಮಾಚಾರವೇ ಇಲ್ಲ.... ಮತ್ತೆ ಮತ್ತೆ ತಟ್ಟ, ಏಟೋತ್ತಾದರೂ ಯಾರೂ ಕದ ತಗೀನೇ ಇಲ್ಲ. ನಿಂತ, ನಿಂತ, ನಿಂತ.<noinclude></noinclude> e2kwz9cbwp9rjwy9mqvnnp1g4jlclx1 322373 322362 2026-05-25T05:02:59Z Pragathi. BH 7585 /* Validated */ 322373 proofread-page text/x-wiki <noinclude><pagequality level="4" user="Pragathi. BH" /></noinclude>________________ {{Left|೨೨೮}} {{Right|'''ವೈಶಾಖ'''}} ಕುಡೀತ ತೋಡಿಕಂಡಿದ್ರಂತೆ... {{gap}}ಇಂದಿನ ನಾನಾಗ ಭರ್ತಿ ಏರಿಸಿದ್ದ ಟಗರೂರ, ಸ್ವಾಮಿ ಅವನ ಗುಡ್ಡ ಬೆಚ್ಚಗೆ ಮಾಡಕ್ಕೆ ಅತ್ತಿದ್ರೂವೆ ಇನ್ನೂ ಬಿದ್ದೇ ಇದ್ದಂತೆ. ಎದ್ದು ಸ್ವಾಡಿದಾಗ ಆಗ್ಗೆ ಎಡತಿ ಹುಚ್ಚುಬೋರಿ, ಮಗಳು ಚೆಲುವಿ ಇಬ್ಬರೂವೆ ಕೂಲಿಕಂಬಳಕೆ ವೋಂಟೋಗಿದ್ರಂತೆ. ಮಡಿಕೇಲಿ ಅರ್ದಮುದ್ದೆ ಹಿಟ್ಟ ಇನ್ನಿಗೇ ಅಂತಾನೆ ಎಡತಿ ಮಡಗೋಗಿದ್ದು, ಹಿತ್ತಲಿಂದ ನಾಕು ಹರು ಮೆಣಸಿನಕಾಯಿ ಬುಡಸಿ ತಂದು ತಂಗಳಿಟ್ಟಿನ ಜತೆ ಕಡಕಂಡು ತಿಂದ, ನಿಶಾದಿಂದ ತಲೆ ಇನ್ನೂ ಸಿಡೀತಾನೆ ಇತ್ತು. ಎಂಗೂ ಕಂಬಳಕೋಗೊ ವೊತ್ತು ಮೀರು, ಊರೊಳೆ ತಿರುಕ್ಕಂಬಂದ್ರೆ ಈ ತಲೆ ಸಿಡ್ಡ ವಸಿ ತಪ್ಪಬೈದು ಅಂತ ವೊಂಟ. ಊರೊಳಗಿನ ಬೀದಿಗಳಲ್ಲಿ ಜನವೇ ಇಲ್ಲ. ಮುಕ್ಕಾಲುಪಾಲು ಗಂಡಸರು ಎಂಗಸರೆಲ್ಲ ಕೆಲ್ಸಕ್ಕೊಂಟೋಗಿದ್ರು, ತೆಳ್ಳತೆಳ್ಳಗೆ ಅಲ್ಲೊಬ್ಬು ಇಲ್ಲೊಬ್ಬು ಉಳಿದೋರು ತಮ್ಮತಮ್ಮ ಅಟ್ಟಿ ಕದ ಮುಚ್ಚಿ ವಳುಗೆ ಸೇರಿದ್ರು, ಯಾವ ಬೀದೀಲಿ ಕ್ವಾಡಿದ್ರೂವೆ ನಾಯಿಗಳ ಸಂಸಾರವೆ ವೊರತು ಒಂದು ನರಿಪಿಳ್ಳೆ ಸೈತ ಕಾಣಿಸ್ತಿರನಿಲ್ಲ.... {{gap}}ಟಗರೂರ ಆ ಬೀದೀಲಿ ಹೈಕ್ಕು ಈ ಬೀದೀಲಿ ಕಡದು ಪರಿವಾರದೋರ ಬೀದಿಗೆ ಬಂದಿದ್ರಂತೆ. ಆ ಬೀದಿಯೂ ಬಿಕೊ ಅಂತಿತ್ತು, ಅಂಗೆ ಅತ್ತಿತ್ತಾಗಿ ಕಣ್ಣಾಡಿಸ್ತ ಬಲ್ವಾಗ, ಟಗರೂರಿನಿಗೆ ಬಾಯಾಡಕ್ಕೆ ಯೇನಾರೂವೆ ಸಿಕ್ಕಿದೆ ವಾಸಿಯಾಗಿತ್ತಲ್ಲ ಅನ್ನಿಸ್ತಂತೆ. ಯಾವ ಅಟೀಲಿ ಕ್ಯಾಳಿದ್ರೆ ಸಿಕ್ಕಬೈದು ಅಂತ ಲೆಕ್ಕಾಚಾರ ಆಕ್ತ ಬತ್ತಾ ಇರೋನೂವೆ, ಎಂಕಿ ಅಟ್ಟಿ ಎದುರಾಗಿ, ಹುಂ- ಎಂಕಿ ಅಟ್ಟಿ ಅಂಗದೆ, ಅವಳು ಯಾವತ್ತೂವೆ ಈಳ್ಯದೆಲೆ ಹೊಗೆಸೊಪ್ಪು ವತ್ತಿರಿಸಿದಂಗೆ ಇದ್ದಾಳೆ. ನಾ ಕಾಳಿದಾಗ, ಒಂದೊಂದಿ ಜಿನ ಗ್ಯಾನ ಸುದ್ದಾಗಿದೆ. 'ಏನ್ನ ನನ್ನ ಹಳೇನ ಮಗನೆ, ಸಾಲ ಕ್ವಟ್ಟು ಮಡಗಿರೋನ ತರ ನಿಸೂರಾಗಿ ಬಂದು ಕ್ಯಾಳೀಓಯಲ್ಲ?' ಅಂತ ಹಟಿಗಿಸದೂವೆ, ಕಡೀಕೆ 'ಹು, ವೋಗ್ಲಿ ತಕ್ಕ' ಅಂತ ಕೂಗ್ತಿದ್ದು, ಆ ಆಸೆಯಿಂಧೆ ಟಗರೂರ ಎಂಕಿ ಅಟ್ಟಿ ಬಾಗಿಲ ಮುಂದೆ ಬಂದು ನಿಂತ. ಬಾಗಿಲು ಮುಚ್ಚಿತ್ತು. ವಕ್ಕಡೆ ಇರೋ ಜಗಲಿ ಮ್ಯಾಲೆ ಹೈಕಳು ಊಟಾನೂ ತಿಂಡೀನೊ ತಕ್ಕಂಡೋಗೊ ಟಿಪನ್ ಕರಾ ಯಾರೊ ಇಟ್ಟಂಗಿತ್ತು. ಯಾರಿರಬೈದು ಅಂತ ಯೋಚಿಸಿದೋನು, ಇನ್ಯಾರು ಎಂಕಿ ಹೈದನೆ ಇರಬೇಕು ಅಂದಕೋತ್ತ, ಮುಂದಕೋಗಿ ಅಟ್ಟಿಕದ ತಟ್ಟಿದ. ವಳುಖ್ಯಿಂದ ಯಾರೂ ಬಂದು ಕದ ತಗೀನಿಲ್ಲ. ಪುನಾ ಜೋನ್ನಿಂದ ತಟ್ಟಿದ. ವಳಗ್ನಿಂದ ಸದ್ದು ಸಮಾಚಾರವೇ ಇಲ್ಲ.... ಮತ್ತೆ ಮತ್ತೆ ತಟ್ಟ, ಏಟೋತ್ತಾದರೂ ಯಾರೂ ಕದ ತಗೀನೇ ಇಲ್ಲ. ನಿಂತ, ನಿಂತ, ನಿಂತ.<noinclude></noinclude> 38nogeg84xxf4bclwunyw1n0chn3kpg ಪುಟ:ವೈಶಾಖ.pdf/೨೪೫ 104 82174 322363 306243 2026-05-25T04:47:39Z Shreesha Sharma 7840 /* Proofread */ 322363 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೨೯}} ಸಾಕಾಗೋಯ್ತು... ಎಂಕಿ ಜೋರಗಿರ ಬಂದು ಮನಗಿರ ಬೈದು, ಅವಳ ಹೈದ ಅವ್ರು ಕಲೀತಿರೊ ಮಠಕೋಗರಬೈದು... ಅದುಕೇ ಯಾರೂ ಬಂದು ಕದ ತಗೀತಾ ಇಲ್ಲ- ಅಂತ ಕರ್ತ ಮಾಡ್ಡ... ಆಂದರೆ ಜಗಲಿ ಮ್ಯಾಲಿರೊ ಟಿಪನ್‌ಕರಾರು ಯಾರು?... ಅವನದೆ ಇರಬೈದ? ಆ ವನೇನಾರ ಮರತ ಗಿರತು ವೋಗಿರಬೈದು?... ಥತ್ ಥತ್, ಯೇಲ್ಲಾರ ಉಂಟ?- ಆ ಹೈದ ಹಲಗ ಬೋ ಉಸಾರು. ಇಂಗೆಲ್ಲ ಬುಟ್ಟೋಗಕ್ಕಿಲ್ಲ... ಅಂಗಾರೆ ಯಾರದಿರಬೇಕು ಇದು? ಓಪನ್ ಕಾರರು ನ್ಯಾಡ್ತಾನೆ ಯೋಚಿಸ್ತಾ ಇದ್ದ. ಬೆಳಗಿನ ಪ್ರಬೇಲಿ ಆ ಇತ್ತಾಳೆ ಡಬ್ಬಿ ಜಗಲಿ ಮ್ಯಾಲೆ ಒಂಟಿಯಾಗಿ ಕುಂತು, ಟಗರೂರ ವಳುಗಡೆ ಮಿಗಿಲಾದ ಆಸೆ ಬತ್ತೀಯ ಮ್ಯಾಲೆ ಹೃತಿಸ್ತು... ತನ್ನ ಗುಡ್ಡಲ್ಲಿ ಯಾವತ್ತೂವೆ ಮಡಕೆ ಕುಡಕೆ ಸುಂಗಾರವೆ!- ತಣತಣಾಂತ ಹೃಳೆಯೊ ಇಂತಾ ಇತ್ತಾಳೆ ಪಾತ್ರೆ ಪದಾರ್ತ ತನ್ನಜ್ಜ ಮುತ್ತಜ್ಜರ ಕಾಲದಿಂದ್ಲವೆ ತಮ್ಮ ಗುಡ್ಲು ವಳೀಕೆ ಕಾಲಿಟ್ಟಿದ್ದೇ ಇಲ್ಲ!- ಯತೆ ಎದೇಲಿ ಒತ್ತಿಗಂಬಂತು. ಕಣ್ಣು, ಬಿದೀಲೆಲ್ಲ ಇಂದುಕೆ ಮುಂದುರೆ, ಎತ್ತಿತ್ತಾಗೂ ಹರಿದಾಡು: ಸುತ್ತಾ ಮುತ್ತಲ ಅಟ್ಟಿ ಕದಗಳೆಲ್ಲ ತಟ್ಟಿ ತಟ್ಟಿ ಸ್ವಾತ್ತು. ಒಬ್ಬರದಾರ ಸುಳುವೇ ಬ್ಯಾಡದ? ಬೀದಿ ಉದ್ದಕ್ಕೂ ವೋಟೇಯ- ಖುಲ್ಲಾ ಅಂದರೆ ಖುಲ್ಲಾ!... ಇತ್ತಾಳೆ ಪದಾರ್ತವ ಸ್ವಾಮಿ ಬಣ್ಣಬಣ್ಣ ಮಾಡಿ ಮಾಯದ ಬಲೆ ಬೀಸ್ತಿತ್ತು. ಮಂಕು ಕವಿದು ಟಗರೂರ ದಿಟ್ಟಿಸ್ತಾನೆ ಇದ್ದ. ತಣ್ಣಗೆ ಮ್ಯಲೆ ಹಂದಿ ಬಾಡು ಕಂಡು ಜೊಲ್ಲು ಸುರುಸೊ ತರ ಬಾಯಿಬುಟ್ಟ. ಇನ್ನು ತಡೆಯಕ್ಕಾಗನಿಲ್ಲ. ಇನ್ನೂ ಒಂದು ದಪ ಸುತ್ತಾಲು ಕಣ್ಣಾಡ್ಲಿ ಟಿಪನ್ ಕರಾರಿಗೆ ಕೈಯ್ಯ ಆಕ್ಷ. ಅಮ್ಮ ಎತ್ತಿಗತ್ತಿದ್ದಂಗೆ ಎದೆ ವಳಾಗಡೆ ಕ್ವಟ್ಟಣ ಕುಟ್ಟಕ್ಕೆ ಸುರುವಾಯ್ತು. ವೊದಿದ್ದ ದುಪಟವೊಳಗೆ ಮೊಗ ಸುತ್ತೋನಂಗೆ ಅದ್ರ ಸುತ್ತಿಕಂಡ. ತಲೆ ಬೊಗ್ಗುಸಿ ಮೆಲ್ಲಕೆ ಅಲ್ಲಿಂದ ಜಾರ... ಇಟೆಲ್ಲಾನೂವೆ ರಾಚನ ಸರಾಪಿನ ಅಂಗಡೀಲಿ ಕುಡೀತ ಕುಡೀತ ಟಗರೂರನೆ ಯೋಳಿದ್ರಂತೆ... {{gap}}ಗಂಡನ ಕಳಕಂಡು ಎಂಕಿ ಕಷ್ಟಪಟ್ಟು ಕೂಲಿ ನಾಲಿ ಮಾಡಿ ತನ್ನ ಒಬ್ಬನೆ ಮಗ ಹಲಗನ್ನ ಓದಿಸ್ತಿರನಿಲ್ವ?- ಆ ಹೈದ ಏಡು ಏಡೂವರೆ ಮೈಲಿ ಇರೊ ಮಿಡ್ಲಿಸ್ಕೂಲಿಗೆ ಊಟ ತಕ್ಕಂಡೋಗಕ್ಕೆ ಒಂದು ಟಿಪನ್ ಕರಾರು ತಕ್ಕೊಟ್ಟಿದ್ದಲು... ತನ್ನ ಸತ್ತೋದ ಗಂಡ ಕುಡುಕ. ಕುಡುದೂ ಕುಡುದೂ ಒಂದು ಅಮಾಸೆ ನಾತ್ರೀಲಿ ಗೊತಕ್ ಅಂದಿದ್ದ. ಅವನು ಬದುಕಿದ್ದಾಗಲೂ ಕಾಟವೇಯ, ಸತ್ತಾಗಲೂ ಕಾಟವೇ ಆಯ್ತು ಅವಳಿಗೆ.... ಆ ಗಂಡನ ಮಣ್ಣು ಮಾಡಬೇಕಾರೆ, ಅವಳು ತನ್ನ ಚಿನ್ನದ ಚೌಲಿ ಗೊಣಸ ಇಟ್ಟುಕಂಡು ಊಡೀಂತ ಊರಿನ ಮನೆ ಮನೆಗೂ ಇಟ್ಟಾಡಿ, ವಸಿ ಪರಿದಾಡಿದ್ದ?... ಆ ತಲೆಮಾಸಿದ ಗಂಡನ ತರ,<noinclude></noinclude> tm6pjx7krssk2bssg86oauddpbxxrz4 322371 322363 2026-05-25T05:02:43Z Pragathi. BH 7585 /* Validated */ 322371 proofread-page text/x-wiki <noinclude><pagequality level="4" user="Pragathi. BH" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೨೯}} ಸಾಕಾಗೋಯ್ತು... ಎಂಕಿ ಜೋರಗಿರ ಬಂದು ಮನಗಿರ ಬೈದು, ಅವಳ ಹೈದ ಅವ್ರು ಕಲೀತಿರೊ ಮಠಕೋಗರಬೈದು... ಅದುಕೇ ಯಾರೂ ಬಂದು ಕದ ತಗೀತಾ ಇಲ್ಲ- ಅಂತ ಕರ್ತ ಮಾಡ್ಡ... ಆಂದರೆ ಜಗಲಿ ಮ್ಯಾಲಿರೊ ಟಿಪನ್‌ಕರಾರು ಯಾರು?... ಅವನದೆ ಇರಬೈದ? ಆ ವನೇನಾರ ಮರತ ಗಿರತು ವೋಗಿರಬೈದು?... ಥತ್ ಥತ್, ಯೇಲ್ಲಾರ ಉಂಟ?- ಆ ಹೈದ ಹಲಗ ಬೋ ಉಸಾರು. ಇಂಗೆಲ್ಲ ಬುಟ್ಟೋಗಕ್ಕಿಲ್ಲ... ಅಂಗಾರೆ ಯಾರದಿರಬೇಕು ಇದು? ಓಪನ್ ಕಾರರು ನ್ಯಾಡ್ತಾನೆ ಯೋಚಿಸ್ತಾ ಇದ್ದ. ಬೆಳಗಿನ ಪ್ರಬೇಲಿ ಆ ಇತ್ತಾಳೆ ಡಬ್ಬಿ ಜಗಲಿ ಮ್ಯಾಲೆ ಒಂಟಿಯಾಗಿ ಕುಂತು, ಟಗರೂರ ವಳುಗಡೆ ಮಿಗಿಲಾದ ಆಸೆ ಬತ್ತೀಯ ಮ್ಯಾಲೆ ಹೃತಿಸ್ತು... ತನ್ನ ಗುಡ್ಡಲ್ಲಿ ಯಾವತ್ತೂವೆ ಮಡಕೆ ಕುಡಕೆ ಸುಂಗಾರವೆ!- ತಣತಣಾಂತ ಹೃಳೆಯೊ ಇಂತಾ ಇತ್ತಾಳೆ ಪಾತ್ರೆ ಪದಾರ್ತ ತನ್ನಜ್ಜ ಮುತ್ತಜ್ಜರ ಕಾಲದಿಂದ್ಲವೆ ತಮ್ಮ ಗುಡ್ಲು ವಳೀಕೆ ಕಾಲಿಟ್ಟಿದ್ದೇ ಇಲ್ಲ!- ಯತೆ ಎದೇಲಿ ಒತ್ತಿಗಂಬಂತು. ಕಣ್ಣು, ಬಿದೀಲೆಲ್ಲ ಇಂದುಕೆ ಮುಂದುರೆ, ಎತ್ತಿತ್ತಾಗೂ ಹರಿದಾಡು: ಸುತ್ತಾ ಮುತ್ತಲ ಅಟ್ಟಿ ಕದಗಳೆಲ್ಲ ತಟ್ಟಿ ತಟ್ಟಿ ಸ್ವಾತ್ತು. ಒಬ್ಬರದಾರ ಸುಳುವೇ ಬ್ಯಾಡದ? ಬೀದಿ ಉದ್ದಕ್ಕೂ ವೋಟೇಯ- ಖುಲ್ಲಾ ಅಂದರೆ ಖುಲ್ಲಾ!... ಇತ್ತಾಳೆ ಪದಾರ್ತವ ಸ್ವಾಮಿ ಬಣ್ಣಬಣ್ಣ ಮಾಡಿ ಮಾಯದ ಬಲೆ ಬೀಸ್ತಿತ್ತು. ಮಂಕು ಕವಿದು ಟಗರೂರ ದಿಟ್ಟಿಸ್ತಾನೆ ಇದ್ದ. ತಣ್ಣಗೆ ಮ್ಯಲೆ ಹಂದಿ ಬಾಡು ಕಂಡು ಜೊಲ್ಲು ಸುರುಸೊ ತರ ಬಾಯಿಬುಟ್ಟ. ಇನ್ನು ತಡೆಯಕ್ಕಾಗನಿಲ್ಲ. ಇನ್ನೂ ಒಂದು ದಪ ಸುತ್ತಾಲು ಕಣ್ಣಾಡ್ಲಿ ಟಿಪನ್ ಕರಾರಿಗೆ ಕೈಯ್ಯ ಆಕ್ಷ. ಅಮ್ಮ ಎತ್ತಿಗತ್ತಿದ್ದಂಗೆ ಎದೆ ವಳಾಗಡೆ ಕ್ವಟ್ಟಣ ಕುಟ್ಟಕ್ಕೆ ಸುರುವಾಯ್ತು. ವೊದಿದ್ದ ದುಪಟವೊಳಗೆ ಮೊಗ ಸುತ್ತೋನಂಗೆ ಅದ್ರ ಸುತ್ತಿಕಂಡ. ತಲೆ ಬೊಗ್ಗುಸಿ ಮೆಲ್ಲಕೆ ಅಲ್ಲಿಂದ ಜಾರ... ಇಟೆಲ್ಲಾನೂವೆ ರಾಚನ ಸರಾಪಿನ ಅಂಗಡೀಲಿ ಕುಡೀತ ಕುಡೀತ ಟಗರೂರನೆ ಯೋಳಿದ್ರಂತೆ... {{gap}}ಗಂಡನ ಕಳಕಂಡು ಎಂಕಿ ಕಷ್ಟಪಟ್ಟು ಕೂಲಿ ನಾಲಿ ಮಾಡಿ ತನ್ನ ಒಬ್ಬನೆ ಮಗ ಹಲಗನ್ನ ಓದಿಸ್ತಿರನಿಲ್ವ?- ಆ ಹೈದ ಏಡು ಏಡೂವರೆ ಮೈಲಿ ಇರೊ ಮಿಡ್ಲಿಸ್ಕೂಲಿಗೆ ಊಟ ತಕ್ಕಂಡೋಗಕ್ಕೆ ಒಂದು ಟಿಪನ್ ಕರಾರು ತಕ್ಕೊಟ್ಟಿದ್ದಲು... ತನ್ನ ಸತ್ತೋದ ಗಂಡ ಕುಡುಕ. ಕುಡುದೂ ಕುಡುದೂ ಒಂದು ಅಮಾಸೆ ನಾತ್ರೀಲಿ ಗೊತಕ್ ಅಂದಿದ್ದ. ಅವನು ಬದುಕಿದ್ದಾಗಲೂ ಕಾಟವೇಯ, ಸತ್ತಾಗಲೂ ಕಾಟವೇ ಆಯ್ತು ಅವಳಿಗೆ.... ಆ ಗಂಡನ ಮಣ್ಣು ಮಾಡಬೇಕಾರೆ, ಅವಳು ತನ್ನ ಚಿನ್ನದ ಚೌಲಿ ಗೊಣಸ ಇಟ್ಟುಕಂಡು ಊಡೀಂತ ಊರಿನ ಮನೆ ಮನೆಗೂ ಇಟ್ಟಾಡಿ, ವಸಿ ಪರಿದಾಡಿದ್ದ?... ಆ ತಲೆಮಾಸಿದ ಗಂಡನ ತರ,<noinclude></noinclude> 7juupqvu8ta0dsjufizvrhcnc69qur7 ಪುಟ:ವೈಶಾಖ.pdf/೨೪೬ 104 82175 322377 306250 2026-05-25T05:04:27Z Pragathi. BH 7585 /* Proofread */ 322377 proofread-page text/x-wiki <noinclude><pagequality level="3" user="Pragathi. BH" /></noinclude>________________ {{Left|೨೩೦}} {{Right|'''ವೈಶಾಖ'''}} ಇರೊ ಒಬ್ಬಾನೊಬ್ಬ ಹೈದನೂ ಕೆಟ್ಟೋದಾನು ಅಂತಲೊ ಯಾನೊ ಸಣ್ಣದು ಪುಟ್ಟದಕ್ಕೆಲ್ಲ ತಪ್ಪು ಕಂಡಿಡುದು ವೋಗಿ ಬಂದು ವೋಗಿ ಬಂದು, ಈ ಹೈದ ಗಟ್ಟಿಸ್ತಾನೆ ಇದ್ದಂತೆ!- ಎದ್ದ ಹೃನ್ನಿಂದ ನಾ ಮೊಗ್ಗಲು ಕೊಡಾವರೆಗೂ ಹೈದ, ಅವ್ವನ ಕಯ್ಲಿ ಯಾವ ಗಳಿಗೇಲಿ ಏಟು ತಿನ್ನಬೇಕಾದತೊ ಅಂತ ಥರಥರನೆ ಪತುರುಗುತ್ತಾನೆ ಇರೋನಂತೆ... ಇಂಗಿರುವಾಗ ಯೇನಾಯ್ತಪ್ಪ ಅಂದರೆ, ಟಗರೂರ ತಿಳುಕಂಡ ರೀತಿ, ಏಂಕಿ ಅಟ್ಟಿನಳಾಗಡೆ ಜೋರ ಬಂದು ಮನಗಿರನಿಲ್ಲ. ಅವಳು ಯಾರದೊ ತಾಟದ ಕೆಲುಸಕ್ಕೊಗಿದ್ದಲು. ಅವಳ ಹೈದ ಹಲಗ, ಟಿಪನ್ ಕರಾರು ತಕ್ಕಂಡು ಸ್ಟೋರೀಕೆ ಬಂದೋನು, ಯಾವುದೋ ಪುಸ್ತಕ ಮರತೂ, ಇಲ್ಲ ಇತ್ತಲಿಗೆ ಅವರಸರಾಗೊ ಟಿಪನ್ ಕರಾರ ಜಗಲಿ ಮಾಲಿಟ್ಟು ಕದವ ವಳೀಕೆ ಎಳಕಂಡು ವೋಗವೆ- ವೋಟರಲ್ಲಿ ಟಗರೂರ ಅಲ್ಲಿಗೆ ಬಂದೋನು, ಜಗುಲಿ ಮ್ಯಾಲಿದ್ದ ಟೀಪನ್‌ಕರಾರ ಕಂಡು, ಅಸ್ಯಾಗಿ ಎತ್ತಿಗೊಂಬಂದವೆ?... ನಳುನ್ನಿಂದ ಪುಸ್ತಕ ತಕ್ಕಂಡು ಜ್ವರೀಕೆ ಬಂದು ನೌಆಡ್ತಾನೆ- ತಾನು ಜಗಲಿ ಮ್ಯಾಲಿಟ್ಟಿದ್ದ ಟಿಪನ್‌ಕರಾರು ಮುಮಗರಮಾಯ ಆಗದೆ!- ಆಗ ಮಾತ್ರ, ಹೈದಂಗೆ ಎದೆ ಒಡೆದೋಗಿರಬೇಕು... ತನ್ನವ್ವ ಕೂಲಿ ಮಾಡಿ ಕಾಸಿಗೆ ಕಾಸ ಗಂಟಾಕಿ ತಕ್ಕೊಟ್ಟಿರೊ ಟಿಪನ್ ಕರಾರ ಕಳದುಬುಟ್ಟು, ಅವ್ವಂಗೆ ಅದೇನಂತ ಮೊಖ ತೋರುಸ್ತಿ? ಅವಳು ನನ್ನ ಸುಮ್ಮಕೆ ಬುಟ್ಟಾಳ? ಚಮಡ ಸುಲುದು ಬುಡ್ತಾಳೆ ಅಂತೆಲ್ಲ ಅವ್ರ ಮನದಲ್ಲಿ ಮೂಡಿರಬೇಕು- ಅಟ್ಟಿ ವಳುಕ್ಕೋಗಿ ಮುಂದಿನ ಬಾಗಿಲ ತಾಪಾಳ ಪೆಟ್ಟಿ, ಹಗ್ಗ ತಕ್ಕಂಡು ಅಂಗಳದ ತೊಳೆಗೆ ನ್ಯಾತು ಆಕ್ಕಂಡಿರಬೇಕು.... ವಸಿ ಮೊತ್ತಾದ ಮ್ಯಾಲೆ ಹಜಾಮರ ಜವರಯ್ಯ 'ಹೈದನಿಗೆ ಚೌರ ಮಾಡಕ್ಕೆ ಯೋಳಿಲ್ಲ. ಯಾವತ್ತು ಬರಾನೆ?'- ಎಂಕಿಯ್ಯ ಕ್ಯಾಳಿ ವೋಗಾನೇಂತ ಅಟ್ಟಿ ತಾವಿಕೆ ಬಂದನಂತೆ. ಅಟ್ಟಿ ಕದ ಮುಚ್ಚಿತ್ತು. ಕದ ತಟ್ಟಿದನಂತೆ, ಕೂಗಿದನಂತೆ. ಮುನಾ ತಟ್ಟಿದನಂತೆ. ಯಾರೂ ಕದವ ತೆಗೀನಿಲ್ಲ. ಮತ್ತೆ ಊರಲ್ಲಿ ಅವರಿವರ ಅಟ್ಟಿ ತಟ್ಟಾಡಿ ಬಂದನಂತೆ. ಇನ್ನೂ ಕದ ಮುಚ್ಚೇ ಇತ್ತು. ಎಂಕಿ ಜ್ವರೀಕೋದ್ರೆ ಬೀಗ ಜಡಿದೇ ವೋಗಬೇಕು. ಹೈದ ಯೇನಾರ ಮಠದಿಂದ ಬ್ಯಾಗ ಬಂದರೆ ಇರಲೀಂತ ಒಂದು ಬೀಗದ ಕಯ್ಯ ಅವನ ತಾವೂ ಕಟ್ಟು, ಇನ್ನೊಂದ ತನ್ನ ತಾವು ಇಟ್ಟುಕಂಡು ಇಡ್ತಾ ಇದ್ದ ಇಸ್ಯಜವರಯ್ಯಂಗೂ ಗೈತ್ತಿತ್ತಂತೆ- ಮತ್ತೆ ವಳಾಗಡೆ ಈಟೋತ್ತು ಯಾರಿರೂರು?- ಚೋಜಿಗಾಗಿ ಒಂದೇ ಸಮಕೆ ಕದ ಕುಟ್ಟಿದನಂತೆ. ನಳುನ್ನಿಂದ ಯಾರೂವೆ ಹರ, ಸಿವ ಅನ್ನಲೇ ಇಲ್ಲ.... ತಟ್ಟಿ ತಟ್ಟಿ ಅವಸ್ಥೆ<noinclude></noinclude> axca5qp7jk05zk1twqv8txtaqmowh7h 322404 322377 2026-05-25T08:42:04Z Shreelatha.Halemane 7642 /* Validated */ 322404 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|೨೩೦}} {{Right|'''ವೈಶಾಖ'''}} ಇರೊ ಒಬ್ಬಾನೊಬ್ಬ ಹೈದನೂ ಕೆಟ್ಟೋದಾನು ಅಂತಲೊ ಯಾನೊ ಸಣ್ಣದು ಪುಟ್ಟದಕ್ಕೆಲ್ಲ ತಪ್ಪು ಕಂಡಿಡುದು ವೋಗಿ ಬಂದು ವೋಗಿ ಬಂದು, ಈ ಹೈದ ಗಟ್ಟಿಸ್ತಾನೆ ಇದ್ದಂತೆ!- ಎದ್ದ ಹೃನ್ನಿಂದ ನಾ ಮೊಗ್ಗಲು ಕೊಡಾವರೆಗೂ ಹೈದ, ಅವ್ವನ ಕಯ್ಲಿ ಯಾವ ಗಳಿಗೇಲಿ ಏಟು ತಿನ್ನಬೇಕಾದತೊ ಅಂತ ಥರಥರನೆ ಪತುರುಗುತ್ತಾನೆ ಇರೋನಂತೆ... {{gap}}ಇಂಗಿರುವಾಗ ಯೇನಾಯ್ತಪ್ಪ ಅಂದರೆ, ಟಗರೂರ ತಿಳುಕಂಡ ರೀತಿ, ಏಂಕಿ ಅಟ್ಟಿನಳಾಗಡೆ ಜೋರ ಬಂದು ಮನಗಿರನಿಲ್ಲ. ಅವಳು ಯಾರದೊ ತಾಟದ ಕೆಲುಸಕ್ಕೊಗಿದ್ದಲು. ಅವಳ ಹೈದ ಹಲಗ, ಟಿಪನ್ ಕರಾರು ತಕ್ಕಂಡು ಸ್ಟೋರೀಕೆ ಬಂದೋನು, ಯಾವುದೋ ಪುಸ್ತಕ ಮರತೂ, ಇಲ್ಲ ಇತ್ತಲಿಗೆ ಅವರಸರಾಗೊ ಟಿಪನ್ ಕರಾರ ಜಗಲಿ ಮಾಲಿಟ್ಟು ಕದವ ವಳೀಕೆ ಎಳಕಂಡು ವೋಗವೆ- ವೋಟರಲ್ಲಿ ಟಗರೂರ ಅಲ್ಲಿಗೆ ಬಂದೋನು, ಜಗುಲಿ ಮ್ಯಾಲಿದ್ದ ಟೀಪನ್‌ಕರಾರ ಕಂಡು, ಅಸ್ಯಾಗಿ ಎತ್ತಿಗೊಂಬಂದವೆ?... ನಳುನ್ನಿಂದ ಪುಸ್ತಕ ತಕ್ಕಂಡು ಜ್ವರೀಕೆ ಬಂದು ನೌಆಡ್ತಾನೆ- ತಾನು ಜಗಲಿ ಮ್ಯಾಲಿಟ್ಟಿದ್ದ ಟಿಪನ್‌ಕರಾರು ಮುಮಗರಮಾಯ ಆಗದೆ!- ಆಗ ಮಾತ್ರ, ಹೈದಂಗೆ ಎದೆ ಒಡೆದೋಗಿರಬೇಕು... ತನ್ನವ್ವ ಕೂಲಿ ಮಾಡಿ ಕಾಸಿಗೆ ಕಾಸ ಗಂಟಾಕಿ ತಕ್ಕೊಟ್ಟಿರೊ ಟಿಪನ್ ಕರಾರ ಕಳದುಬುಟ್ಟು, ಅವ್ವಂಗೆ ಅದೇನಂತ ಮೊಖ ತೋರುಸ್ತಿ? ಅವಳು ನನ್ನ ಸುಮ್ಮಕೆ ಬುಟ್ಟಾಳ? ಚಮಡ ಸುಲುದು ಬುಡ್ತಾಳೆ ಅಂತೆಲ್ಲ ಅವ್ರ ಮನದಲ್ಲಿ ಮೂಡಿರಬೇಕು- ಅಟ್ಟಿ ವಳುಕ್ಕೋಗಿ ಮುಂದಿನ ಬಾಗಿಲ ತಾಪಾಳ ಪೆಟ್ಟಿ, ಹಗ್ಗ ತಕ್ಕಂಡು ಅಂಗಳದ ತೊಳೆಗೆ ನ್ಯಾತು ಆಕ್ಕಂಡಿರಬೇಕು.... {{gap}}ವಸಿ ಮೊತ್ತಾದ ಮ್ಯಾಲೆ ಹಜಾಮರ ಜವರಯ್ಯ 'ಹೈದನಿಗೆ ಚೌರ ಮಾಡಕ್ಕೆ ಯೋಳಿಲ್ಲ. ಯಾವತ್ತು ಬರಾನೆ?'- ಎಂಕಿಯ್ಯ ಕ್ಯಾಳಿ ವೋಗಾನೇಂತ ಅಟ್ಟಿ ತಾವಿಕೆ ಬಂದನಂತೆ. ಅಟ್ಟಿ ಕದ ಮುಚ್ಚಿತ್ತು. ಕದ ತಟ್ಟಿದನಂತೆ, ಕೂಗಿದನಂತೆ. ಮುನಾ ತಟ್ಟಿದನಂತೆ. ಯಾರೂ ಕದವ ತೆಗೀನಿಲ್ಲ. ಮತ್ತೆ ಊರಲ್ಲಿ ಅವರಿವರ ಅಟ್ಟಿ ತಟ್ಟಾಡಿ ಬಂದನಂತೆ. ಇನ್ನೂ ಕದ ಮುಚ್ಚೇ ಇತ್ತು. ಎಂಕಿ ಜ್ವರೀಕೋದ್ರೆ ಬೀಗ ಜಡಿದೇ ವೋಗಬೇಕು. ಹೈದ ಯೇನಾರ ಮಠದಿಂದ ಬ್ಯಾಗ ಬಂದರೆ ಇರಲೀಂತ ಒಂದು ಬೀಗದ ಕಯ್ಯ ಅವನ ತಾವೂ ಕಟ್ಟು, ಇನ್ನೊಂದ ತನ್ನ ತಾವು ಇಟ್ಟುಕಂಡು ಇಡ್ತಾ ಇದ್ದ ಇಸ್ಯಜವರಯ್ಯಂಗೂ ಗೈತ್ತಿತ್ತಂತೆ- ಮತ್ತೆ ವಳಾಗಡೆ ಈಟೋತ್ತು ಯಾರಿರೂರು?- ಚೋಜಿಗಾಗಿ ಒಂದೇ ಸಮಕೆ ಕದ ಕುಟ್ಟಿದನಂತೆ. ನಳುನ್ನಿಂದ ಯಾರೂವೆ ಹರ, ಸಿವ ಅನ್ನಲೇ ಇಲ್ಲ.... ತಟ್ಟಿ ತಟ್ಟಿ ಅವಸ್ಥೆ<noinclude></noinclude> mwif9hioy5t22koxj8w0kzxidqrh8xs ಪುಟ:ವೈಶಾಖ.pdf/೨೪೭ 104 82176 322376 306264 2026-05-25T05:04:07Z Pragathi. BH 7585 /* Proofread */ 322376 proofread-page text/x-wiki <noinclude><pagequality level="3" user="Pragathi. BH" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೩೧}} ಸಾಕಾಯ್ತಂತೆ, ಅನುಮನಸೂ ಬಂತು. ಗುಲ್ಲೆಬ್ಬಿಸಿ, ಆಚೆ ಈಚೆ ಅಟ್ಟಲಿ ಅಪುರ್ಪಕೆ ಕೆಲಸಕ್ಕೋಗದೆ ವಳಗಡೇನೆ ಉಳುದಿದ್ದ ಮೂರು ನಾಕು ಎಂಗಸರ ಜಮಾಯಿಸಿದನಂತೆ... ಆ ಎಂಗಸರೂವೆ ತಟ್ಟಿದ್ರು, ಕೂಗಿದ್ರು. ಅವರಿಗೂ ಅಮಾನಸಾಯ್ತು- ಎಲ್ಲರೂವೆ ಕಡೀಕೆ ಅಟ್ಟಿಮ್ಯಾಲೆ ಹೃದಿಸಿದ್ದ ನಾಡ ಹೆಂಚ ತಗುದು ವಳೀಕೆ ಇಳುದು ಹಾಡಾದೆ ಸಮ ಅನೊ ತೀರ್ಮಾನಕ್ಕೆ ಬಂದರಂತೆ... ಆ ಪರ್ಕಾರ ಹಜಾಮರ ಜವರಯ್ಯನೆ ಅಟ್ಟಿ ಮ್ಯಾಕತ್ತಿ, ಹೆಂಚ ತಗುದು ವಳೀಕೆ ಇಳುದಂತೆ. ಇಳುದು ಸ್ವಾಡ್ತಾನಂತೆ-ಹೈದ ಹಲಗ, ತೊಟ್ಟಿ ಕಂಬಕ್ಕೆ ನ್ಯಾತು ಆಕಂಡಿ!- ವಸ್ತು ಯಾವಾಗ್ಲೋ ವೊಂಟೋಗಿರಬೇಕು.... ಮುಂದಿನ ಕದವ ತೆಗೆದನಂತೆ. ಹೊರಗಿದ್ದ ಎಂಗಸರೂ ಬಂದು ಸ್ವಾಡಿ ಎದೆ ಎದೆ ಬಡಕೊಂಡರಂತೆ... ಹೈದ ಸತ್ತೋದ ಸುದ್ದಿ ಅಲ್ಲಿ ಬಿದ್ದು ಇಲ್ಲಿ ಎದ್ದು ಟಗರೂರನ ಗುಡ್ಡನೂ ಮುಟ್ಟಕ್ಕೆ ವೋಟು ತಡೆಯೇನೂ ಆಗಿಲ್ಲ. ಆ ಸುದ್ದಿ ಕಿವಿಗೆ ಬಿದ್ದ ಕೃಣಕೆ, ಟಗರಂಗೆ ಮರದ ಜಾಗದಲ್ಲಿ ಕಟ್ಟಿರ ಕಚ್ಚಿದಂಗಾಯ್ತಂತೆ! ಮೊಖ ಕೆಟ್ಟು, ಸಂದಿ ಸಂದೀಲೂ ಬೆಮರು ಕಿತ್ತು ಹರಿಯಕ್ಕೆ ಸುರುವಾಯ್ತಂತೆ... ಟಗರೂರ ಹೆದರಿ ಹೆಪ್ಪಳಿಸೋಗಿ ಟಿಪನ್ ಕರಾರು ತಕ್ಕಂಡು ಸೀದ ಜಪ್ಪಯ್ಯನ ಮಟದ ಅಯ್ಯೋರ ಮಂದಕಿಟ್ಟು, “ಯಾನೊ ತಪ್ಪು ಮಾಡಿಬುಟ್ಟೆ, ಗುರುವೆ- ಹಾಳಾದ ಬಡ್ಡಿ ಹೆತ್ತ ಆಸೆ, ನನ್ನೊಡೆಯ ಎತ್ತಿಗಂಬಂದೆ... ಮಾತ್ರ ಇದ್ರಿಂದ ಹೈದ ಸಾಯ್ತಾನೇಂತ ತಿಳೀನಿಲ್ಲ, ಸಿವನೆ!... ಊರ ಯಜಮಾನ್ರಿಗೆ ಯೋಳಿ ನನ್ನ ತಟಾಯ್ಲಿ, ಬುದ್ದಿ..” ಸಿವಪಾದಪ್ಪನೋರ ಪದಕ್ಕೆ ಬಿದ್ದನಂತೆ. ಅಯ್ಯನೋರು, “ಇದರಾಗೆ ನಾನೇನೂ ಮಾಡಕ್ಕೆ ಬರಕ್ಕಿಲ್ಲ. ಒಂದು ಜೀವ ಕಳದೋಗದೆ. ಊರ ಯಜಮಾನ್ನು ಸೇರಿ ಈ ನ್ಯಾಯವ ಧರ್ಮಾಗಿ ತೀಮಾನ ಮಾಡಬೇಕು” ಅಂತ ಅಪ್ಪಣೆ ಕ್ವಟ್ಟು, ಅಲ್ಲೆ ಕುಂತಿದ್ದ ನಂಜೇಗೌಡರು, ಗಂಗಪ್ಪಾರು ಇಬ್ಬ ಕಡೀಕು ನ್ಯಾಡಿದ್ರಂತೆ... ಸರಿ ಮುಂದಕೆ ನಡೆದದ್ದೆಲ್ಲ ನಿಂಗೆ ಗ್ವತ್ತೇ ಅದೆ... ಯಜಮಾನ್ನು ಟಗರೂರಿನ ಗುಡ್ಡ ತಾವಿಕೆ ಬಂದು, ಅವನ ಮಗಳು ಚೆಲುವೀಯ ಕೆಲ್ಬದ ತಾವಿನಿಂದ ಕರಸಿ, ಅಬ್ಬಿಗೆ ಬೀರಬಿದ್ದು, ಸಾವ್ರ ರೂಪಾಯ ತಕ್ಕಂಡು ಆ ಎಣ್ಣ ನಾಮಧಾರಿಗಳ ಉದ್ದೂರಯ್ಯ ಅಟ್ಟಿ ಜೀತಕೆ ಕಳುಸಿದ್ದ, ನೀನೂವೆ ನನ್ನಂಗೇಯ ಸ್ವಾತ್ತ ನಿಂತಿದ್ಯಲ್ಲ? ಇಂಗೆ ಟಗರೂರ ದೋಸ್ತು ಮಲ್ಲೂವ ಪರಸಮಗ ಯೋಳಿ<noinclude></noinclude> schtsv8zi56gtpj2f3tonibdqab72c6 322405 322376 2026-05-25T08:42:42Z Shreelatha.Halemane 7642 /* Validated */ 322405 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೩೧}} ಸಾಕಾಯ್ತಂತೆ, ಅನುಮನಸೂ ಬಂತು. ಗುಲ್ಲೆಬ್ಬಿಸಿ, ಆಚೆ ಈಚೆ ಅಟ್ಟಲಿ ಅಪುರ್ಪಕೆ ಕೆಲಸಕ್ಕೋಗದೆ ವಳಗಡೇನೆ ಉಳುದಿದ್ದ ಮೂರು ನಾಕು ಎಂಗಸರ ಜಮಾಯಿಸಿದನಂತೆ... ಆ ಎಂಗಸರೂವೆ ತಟ್ಟಿದ್ರು, ಕೂಗಿದ್ರು. ಅವರಿಗೂ ಅಮಾನಸಾಯ್ತು- ಎಲ್ಲರೂವೆ ಕಡೀಕೆ ಅಟ್ಟಿಮ್ಯಾಲೆ ಹೃದಿಸಿದ್ದ ನಾಡ ಹೆಂಚ ತಗುದು ವಳೀಕೆ ಇಳುದು ಹಾಡಾದೆ ಸಮ ಅನೊ ತೀರ್ಮಾನಕ್ಕೆ ಬಂದರಂತೆ... ಆ ಪರ್ಕಾರ ಹಜಾಮರ ಜವರಯ್ಯನೆ ಅಟ್ಟಿ ಮ್ಯಾಕತ್ತಿ, ಹೆಂಚ ತಗುದು ವಳೀಕೆ ಇಳುದಂತೆ. ಇಳುದು ಸ್ವಾಡ್ತಾನಂತೆ-ಹೈದ ಹಲಗ, ತೊಟ್ಟಿ ಕಂಬಕ್ಕೆ ನ್ಯಾತು ಆಕಂಡಿ!- ವಸ್ತು ಯಾವಾಗ್ಲೋ ವೊಂಟೋಗಿರಬೇಕು.... ಮುಂದಿನ ಕದವ ತೆಗೆದನಂತೆ. ಹೊರಗಿದ್ದ ಎಂಗಸರೂ ಬಂದು ಸ್ವಾಡಿ ಎದೆ ಎದೆ ಬಡಕೊಂಡರಂತೆ... {{gap}}ಹೈದ ಸತ್ತೋದ ಸುದ್ದಿ ಅಲ್ಲಿ ಬಿದ್ದು ಇಲ್ಲಿ ಎದ್ದು ಟಗರೂರನ ಗುಡ್ಡನೂ ಮುಟ್ಟಕ್ಕೆ ವೋಟು ತಡೆಯೇನೂ ಆಗಿಲ್ಲ. ಆ ಸುದ್ದಿ ಕಿವಿಗೆ ಬಿದ್ದ ಕೃಣಕೆ, ಟಗರಂಗೆ ಮರದ ಜಾಗದಲ್ಲಿ ಕಟ್ಟಿರ ಕಚ್ಚಿದಂಗಾಯ್ತಂತೆ! ಮೊಖ ಕೆಟ್ಟು, ಸಂದಿ ಸಂದೀಲೂ ಬೆಮರು ಕಿತ್ತು ಹರಿಯಕ್ಕೆ ಸುರುವಾಯ್ತಂತೆ... ಟಗರೂರ ಹೆದರಿ ಹೆಪ್ಪಳಿಸೋಗಿ ಟಿಪನ್ ಕರಾರು ತಕ್ಕಂಡು ಸೀದ ಜಪ್ಪಯ್ಯನ ಮಟದ ಅಯ್ಯೋರ ಮಂದಕಿಟ್ಟು, {{gap}}“ಯಾನೊ ತಪ್ಪು ಮಾಡಿಬುಟ್ಟೆ, ಗುರುವೆ- ಹಾಳಾದ ಬಡ್ಡಿ ಹೆತ್ತ ಆಸೆ, ನನ್ನೊಡೆಯ ಎತ್ತಿಗಂಬಂದೆ... ಮಾತ್ರ ಇದ್ರಿಂದ ಹೈದ ಸಾಯ್ತಾನೇಂತ ತಿಳೀನಿಲ್ಲ, ಸಿವನೆ!... ಊರ ಯಜಮಾನ್ರಿಗೆ ಯೋಳಿ ನನ್ನ ತಟಾಯ್ಲಿ, ಬುದ್ದಿ..” ಸಿವಪಾದಪ್ಪನೋರ ಪದಕ್ಕೆ ಬಿದ್ದನಂತೆ. ಅಯ್ಯನೋರು, {{gap}}“ಇದರಾಗೆ ನಾನೇನೂ ಮಾಡಕ್ಕೆ ಬರಕ್ಕಿಲ್ಲ. ಒಂದು ಜೀವ ಕಳದೋಗದೆ. ಊರ ಯಜಮಾನ್ನು ಸೇರಿ ಈ ನ್ಯಾಯವ ಧರ್ಮಾಗಿ ತೀಮಾನ ಮಾಡಬೇಕು” ಅಂತ ಅಪ್ಪಣೆ ಕ್ವಟ್ಟು, ಅಲ್ಲೆ ಕುಂತಿದ್ದ ನಂಜೇಗೌಡರು, ಗಂಗಪ್ಪಾರು ಇಬ್ಬ ಕಡೀಕು ನ್ಯಾಡಿದ್ರಂತೆ... {{gap}}ಸರಿ ಮುಂದಕೆ ನಡೆದದ್ದೆಲ್ಲ ನಿಂಗೆ ಗ್ವತ್ತೇ ಅದೆ... ಯಜಮಾನ್ನು ಟಗರೂರಿನ ಗುಡ್ಡ ತಾವಿಕೆ ಬಂದು, ಅವನ ಮಗಳು ಚೆಲುವೀಯ ಕೆಲ್ಬದ ತಾವಿನಿಂದ ಕರಸಿ, ಅಬ್ಬಿಗೆ ಬೀರಬಿದ್ದು, ಸಾವ್ರ ರೂಪಾಯ ತಕ್ಕಂಡು ಆ ಎಣ್ಣ ನಾಮಧಾರಿಗಳ ಉದ್ದೂರಯ್ಯ ಅಟ್ಟಿ ಜೀತಕೆ ಕಳುಸಿದ್ದ, ನೀನೂವೆ ನನ್ನಂಗೇಯ ಸ್ವಾತ್ತ ನಿಂತಿದ್ಯಲ್ಲ? {{gap}}ಇಂಗೆ ಟಗರೂರ ದೋಸ್ತು ಮಲ್ಲೂವ ಪರಸಮಗ ಯೋಳಿ<noinclude></noinclude> bgqw4stt48rdp62ykim3vpdhmfs5bor ಪುಟ:ವೈಶಾಖ.pdf/೨೪೮ 104 82177 322378 306274 2026-05-25T05:04:57Z Pragathi. BH 7585 /* Proofread */ 322378 proofread-page text/x-wiki <noinclude><pagequality level="3" user="Pragathi. BH" /></noinclude>________________ {{Left|೨೩೨}} {{Right|'''ವೈಶಾಖ'''}} ಮುಗುಸಿ... ಲಕ್ಕ-ಕಳ್ಳ ಬೊಡ್ಡಿಹೈದ ಟಗರೂರಂಗೆ ಒಳ್ಳೆ ಸಿಕ್ಕೇನೆ ಆಯ್ತು. ಆದ್ರೆ, ಇವನ ಕಳ್ಳ ಯವಾರದಿಂದ, ಬೆಳೀತಿದ್ದ ಒಂದು ಚೆಂದುಳ್ಳಿ ಕುಡಿ ಕಮರೋಯ್ತಲ್ಲ, ಅಂತ ಪೇಚಾಡಿದ... ಟಗರೂರ ಮಾಡ್ತಿದ್ದ ಸಣ್ಣ ಪುಟ್ಟ ಕಳ್ಳತನಗಳಲ್ಲಿ ಗೆಪ್ತಿಗೆ ಬಂದೊ... ಅಡೆ ಆಕಿದ ಹೊಗೆಸೊಪ್ಪ ಪಲ್ಪಾಯಿಸಕ್ಕೆ ಯಾರ ಅಟ್ಟಲಾರೂ ಕರು, ಅಲ್ಲಿ ಅದಿನೈದು ಇಪ್ಪತ್ತೊ ಒಣಗಿದ್ದ ಹೊಗೆಸೊಪ್ಪ ಎಲೆಗಳ, ಚಡ್ಡಿ ವಳುಗಡೆ ಚೊರಕ ಮಾಡ್ತಿದ್ದ, ಕಾಸಕ್ಕೆ ಆಸೆಗೆ, ಯಾರ ಹೋಲ ಆದರೂ ಸೈ, ಯಾರೂ ಇಲ್ಲದಿದ್ದ ಸಮಯಕಾದು, ರಾಗಿ ತೆನೆ ಕಡಿಯೋದು-ಊರಿನಲ್ಲಿ ಇಂಗೇ ಯೇನಾರ ಅದು ಇದು ಚೆಲ್ಲರೆ ಕೆಲ್ಸ ಮಾಡ್ತಿದ್ದ. ಆದ್ರೆ ಎಲ್ಲಕಿಂತಲೂವೆ ಅಮ್ಮ ನಡುಸಿದ ಭಾರಿ ಹಿಕಮತ್ತು ಅಂದ್ರೆ, ಕರುರುಬರ ಕೆಸ್ತೂರಯ್ಯ ಅಟ್ಟಿ ಕೋಳಿ ಕದ್ದದ್ದು!... ಸುಮಾರು ನಾಕೈದು ತಿಂಗಳ ಇಂದಿನ ಮಾತು. ಒಂದು ಮುಚ್ಚಂಜೆನಾಗ, ಟಗರೂರ ಹೆಗಲ ಮ್ಯಾಲೆ ಒಂದು ಹಸಿಬೆ ಚೀಲ ಅಕ್ಕಂಡು ಹುಣಸೂರು ಪ್ಯಾಟ ಸಂಂದ ಊರೊಳಗೆ ಬಂದೋನು, ಹಲಗೇರಿ ಕಡೀಕೆ ವೊಂಟದ್ದ. ದಾರೀಲೆ ಕೆಸ್ತೂರಯ್ಯ ಅಟ್ಟಿ ಸಿಕ್ತು. ಆವತ್ತು ಸಂತೆ ಜಿನ ಅಲ್ವ?ಸಂತೆಗೋಗಿದ್ದ ಜನ ಹುಣಸೂರಿನಲ್ಲಿ ಅದು ಇದು ಸೂಟಗ ಸಂಬಾರಾಂತ ಯವಾರ ಮಾಡ್ತ ಊರಿಗಿನ್ನೂವೆ ಮರಳಿರನಿಲ್ಲ. ಕೆಸ್ತೂರಯ್ಯನ ಮನೆಯೋರು, ಅಮ್ಮ ಸುತ್ತಾಮುತ್ತಾಲ ಮನೆಯೋರು ಇನ್ನೂ ಊರು ಕಡೆ ದಾರೀಲಿ ಬತ್ತಾ ಇರಬೇಕು. ಅಟ್ಟಿ ವಳುಗಡೆ ಒಬ್ಬರೋ ಇಬ್ಬರೋ ಮುದುಕೀರು ಇದ್ದಿರಬೇಕು. ಅಲ್ಲಿ ಹೈಕಳು ಆಚೆ ಬೀದಿ ಮುಂದ ಮಾಳದಲ್ಲಿ ಆಡಿಕತ್ತ ಇದ್ದುವಂತೆ... ಟಗರೂರ ನ್ಯಾಡ - ಕೆಸೂರಯ್ಯನ ಅಟ್ಟಿಗೂ ನರಸಯ್ಯನ ಅಟ್ಟಿಗೂ ನಡುತಾವಿನ ಸೊಂಪಲಲ್ಲಿ ನಾಕೈದು ಕೋಳಿ ಮೇಯ್ತಿದ್ದೊ. ಟಗರೂರನಿಗೆ ಬಾಯಲ್ಲಿ ನೀರು ಕಿತ್ತುಗತ್ತು. ಊಟ ಮದ್ದಯ ಬಾವಿಗೆ ಅಂಟಿಗಂಡಂಗೆ ಯಾರೋ ಪುಣಾತ್ಮರು ಇಂದುಕೆ ಒಂದು ದೊಡ್ಡ ಕಲ್ಲು ದೋನಿ ಕೆತ್ತಿಸಿ ಇರಿಸಿದ್ದು, ಆ ಬಾವೀಲೆ ನೀರು ಸೇದೋ ಎಂಗಸರು ಗಂಡಸರು ಯಾರಾದರೂ ಸರಿ, ಸರ್ವೇ ಸಾದಾರಣಾಗಿ ತಮತಮ್ಮ ಅಟ್ಟಿಗೆ ನೀರು ಸೇದೋವಾಗ, ಒಂದು ಚರಿಗೆಯೊ ಏಡು ಚರಿಗೆಯೊ ನೀರ ಆ ಕಲ್ಲುದೋಣಿಗೆ ತಪ್ಪದೆ ಸುರಿದು ವೋಯ್ತಿದ್ದರು. ಸಕುತಿ ಇದ್ದೋರು ಮೂರು ನಾಕು ಚರಿಕೆ ಸುರಿಯಾದು ಉಂಟು. ಬಾಯಾರಿ ಬಂದ ಎಮ್ಮೆ ದನ ಕುಡೀಲೀಂತ ಇಂಗೆ ಸೇದಿ ಆಕೋರು. ಆ ನೀರ ಈ ಪ್ರಾಣಿಗಳ ಜ್ವ, ಹಕ್ಕಿಪಕ್ಷಿಗಳೂವೆ ಕುಡುದೋಯ್ತಿದ್ದೆ. ಅಂಗಾಗಿ, ಅ ಕಲ್ಲು ದೋಣಿಯ ನೀರು ಖಾಲಿ ಆಯ್ತಾನೆ<noinclude></noinclude> c9z575ufm0t0hi0f02jpvo5rwfgu9hs 322407 322378 2026-05-25T08:43:10Z Shreelatha.Halemane 7642 /* Validated */ 322407 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|೨೩೨}} {{Right|'''ವೈಶಾಖ'''}} ಮುಗುಸಿ... {{gap}}ಲಕ್ಕ-ಕಳ್ಳ ಬೊಡ್ಡಿಹೈದ ಟಗರೂರಂಗೆ ಒಳ್ಳೆ ಸಿಕ್ಕೇನೆ ಆಯ್ತು. ಆದ್ರೆ, ಇವನ ಕಳ್ಳ ಯವಾರದಿಂದ, ಬೆಳೀತಿದ್ದ ಒಂದು ಚೆಂದುಳ್ಳಿ ಕುಡಿ ಕಮರೋಯ್ತಲ್ಲ, ಅಂತ ಪೇಚಾಡಿದ... ಟಗರೂರ ಮಾಡ್ತಿದ್ದ ಸಣ್ಣ ಪುಟ್ಟ ಕಳ್ಳತನಗಳಲ್ಲಿ ಗೆಪ್ತಿಗೆ ಬಂದೊ... ಅಡೆ ಆಕಿದ ಹೊಗೆಸೊಪ್ಪ ಪಲ್ಪಾಯಿಸಕ್ಕೆ ಯಾರ ಅಟ್ಟಲಾರೂ ಕರು, ಅಲ್ಲಿ ಅದಿನೈದು ಇಪ್ಪತ್ತೊ ಒಣಗಿದ್ದ ಹೊಗೆಸೊಪ್ಪ ಎಲೆಗಳ, ಚಡ್ಡಿ ವಳುಗಡೆ ಚೊರಕ ಮಾಡ್ತಿದ್ದ, ಕಾಸಕ್ಕೆ ಆಸೆಗೆ, ಯಾರ ಹೋಲ ಆದರೂ ಸೈ, ಯಾರೂ ಇಲ್ಲದಿದ್ದ ಸಮಯಕಾದು, ರಾಗಿ ತೆನೆ ಕಡಿಯೋದು-ಊರಿನಲ್ಲಿ ಇಂಗೇ ಯೇನಾರ ಅದು ಇದು ಚೆಲ್ಲರೆ ಕೆಲ್ಸ ಮಾಡ್ತಿದ್ದ. ಆದ್ರೆ ಎಲ್ಲಕಿಂತಲೂವೆ ಅಮ್ಮ ನಡುಸಿದ ಭಾರಿ ಹಿಕಮತ್ತು ಅಂದ್ರೆ, ಕರುರುಬರ ಕೆಸ್ತೂರಯ್ಯ ಅಟ್ಟಿ ಕೋಳಿ ಕದ್ದದ್ದು!... ಸುಮಾರು ನಾಕೈದು ತಿಂಗಳ ಇಂದಿನ ಮಾತು. ಒಂದು ಮುಚ್ಚಂಜೆನಾಗ, ಟಗರೂರ ಹೆಗಲ ಮ್ಯಾಲೆ ಒಂದು ಹಸಿಬೆ ಚೀಲ ಅಕ್ಕಂಡು ಹುಣಸೂರು ಪ್ಯಾಟ ಸಂಂದ ಊರೊಳಗೆ ಬಂದೋನು, ಹಲಗೇರಿ ಕಡೀಕೆ ವೊಂಟದ್ದ. ದಾರೀಲೆ ಕೆಸ್ತೂರಯ್ಯ ಅಟ್ಟಿ ಸಿಕ್ತು. ಆವತ್ತು ಸಂತೆ ಜಿನ ಅಲ್ವ?ಸಂತೆಗೋಗಿದ್ದ ಜನ ಹುಣಸೂರಿನಲ್ಲಿ ಅದು ಇದು ಸೂಟಗ ಸಂಬಾರಾಂತ ಯವಾರ ಮಾಡ್ತ ಊರಿಗಿನ್ನೂವೆ ಮರಳಿರನಿಲ್ಲ. ಕೆಸ್ತೂರಯ್ಯನ ಮನೆಯೋರು, ಅಮ್ಮ ಸುತ್ತಾಮುತ್ತಾಲ ಮನೆಯೋರು ಇನ್ನೂ ಊರು ಕಡೆ ದಾರೀಲಿ ಬತ್ತಾ ಇರಬೇಕು. ಅಟ್ಟಿ ವಳುಗಡೆ ಒಬ್ಬರೋ ಇಬ್ಬರೋ ಮುದುಕೀರು ಇದ್ದಿರಬೇಕು. ಅಲ್ಲಿ ಹೈಕಳು ಆಚೆ ಬೀದಿ ಮುಂದ ಮಾಳದಲ್ಲಿ ಆಡಿಕತ್ತ ಇದ್ದುವಂತೆ... ಟಗರೂರ ನ್ಯಾಡ - ಕೆಸೂರಯ್ಯನ ಅಟ್ಟಿಗೂ ನರಸಯ್ಯನ ಅಟ್ಟಿಗೂ ನಡುತಾವಿನ ಸೊಂಪಲಲ್ಲಿ ನಾಕೈದು ಕೋಳಿ ಮೇಯ್ತಿದ್ದೊ. ಟಗರೂರನಿಗೆ ಬಾಯಲ್ಲಿ ನೀರು ಕಿತ್ತುಗತ್ತು. ಊಟ ಮದ್ದಯ ಬಾವಿಗೆ ಅಂಟಿಗಂಡಂಗೆ ಯಾರೋ ಪುಣಾತ್ಮರು ಇಂದುಕೆ ಒಂದು ದೊಡ್ಡ ಕಲ್ಲು ದೋನಿ ಕೆತ್ತಿಸಿ ಇರಿಸಿದ್ದು, ಆ ಬಾವೀಲೆ ನೀರು ಸೇದೋ ಎಂಗಸರು ಗಂಡಸರು ಯಾರಾದರೂ ಸರಿ, ಸರ್ವೇ ಸಾದಾರಣಾಗಿ ತಮತಮ್ಮ ಅಟ್ಟಿಗೆ ನೀರು ಸೇದೋವಾಗ, ಒಂದು ಚರಿಗೆಯೊ ಏಡು ಚರಿಗೆಯೊ ನೀರ ಆ ಕಲ್ಲುದೋಣಿಗೆ ತಪ್ಪದೆ ಸುರಿದು ವೋಯ್ತಿದ್ದರು. ಸಕುತಿ ಇದ್ದೋರು ಮೂರು ನಾಕು ಚರಿಕೆ ಸುರಿಯಾದು ಉಂಟು. ಬಾಯಾರಿ ಬಂದ ಎಮ್ಮೆ ದನ ಕುಡೀಲೀಂತ ಇಂಗೆ ಸೇದಿ ಆಕೋರು. ಆ ನೀರ ಈ ಪ್ರಾಣಿಗಳ ಜ್ವ, ಹಕ್ಕಿಪಕ್ಷಿಗಳೂವೆ ಕುಡುದೋಯ್ತಿದ್ದೆ. ಅಂಗಾಗಿ, ಅ ಕಲ್ಲು ದೋಣಿಯ ನೀರು ಖಾಲಿ ಆಯ್ತಾನೆ<noinclude></noinclude> okzj7e4w0gds83nlhpdqwgv4zessmpy ಪುಟ:ವೈಶಾಖ.pdf/೨೪೯ 104 82178 322391 192425 2026-05-25T07:38:49Z Hariprasad Shetty10 7490 /* ಪರಿಶೀಲಿಸಲಾಗಿಲ್ಲ */ 322391 proofread-page text/x-wiki <noinclude><pagequality level="1" user="Hariprasad Shetty10" />{{rh|left=|center=ಸಮಗ್ರ ಕಾದಂಬರಿಗಳು|right=೨೩೩}}</noinclude>ಇರನಿಲ್ಲ. ಟಗರೂರ ಸೀದ ಆ ಕಲ್ಲುದೋಣಿ ಅತ್ರ ವೋದ. ತನ್ನ ತಲೆಗೆ ಸುತ್ತಿದ್ದ ವಸ್ತ ತಗದು ಅದರಾಗಿ ಅದಿದ್ದ. ಆಮ್ಯಾಕೆ ಆ ವಸ್ತವ ಹಿಂಡಿ, ಅದ್ರ ಕೊಂಡೋಗಿ, ಮೆತ್ತಗೆ ಊಂಚಾಕ್ತ ಸ್ವಂಚಾಕ್ತ, ಆ ಕೋಳಿ ತಿರುಗಿದಂತೆ ತಿರುಗಿದಂತೆ ಇಂದಿಂದೆ ನಡುದು, ಸಮಯ ಕಾದು, ಬೋ ಹುನ್ನಾರಿಂದ ತಾನು ಇಡುದಿದ್ದ ವದ್ದೆ ಪಾವಡೇಯ ತಟಕ್ಕನೆ ಅದರ ಮಾಲೆ ದಬ್ಬಾಕಿದ. ವದ್ದೆ ಪಾವಡೆ ತನ್ನ ಮ್ಯಾಲೆ ಬೀಳ್ತಾನೂವೆ ಆ ಕೋಳಿ ಕಮಕ್ ಕಿಮಕ್ ಅನ್ನನಿಲ್ಲ. ತಕ್ಷಣ ಅಮಗೇ ಅದೂ ಎತ್ತಿ, ತನ್ನ ಹಸಿಬೆಚೀಲಕೆ ತುರಕಿ, ಆ ಚೀಲವ ತನ್ನ ಎಗಲ ಮ್ಯಾಕ್ಕೆ ಎಸೆದು ಕಳ್ಳ ಎಜ್ಜೆ ಆಕ್ತ ವೊಂಟ... {{gap}}ತನ್ನ ಗುಡ್ಡ ತಲುಪಿ, ಹಸಿಬೆ ಚೀಲದಿಂದ ಕೋಳಿಯ ಹೂಗೀಕೆ ತಗೀತ, {{gap}}“ತಕ್ಷಣೆ, ವೈನಾದ ಕೋಳಿ ತಂದಿಮ್ಮಿ... ನಾತ್ರೆಗೆ ಹೊಗುದಸ್ತಾಗಿ ಎಸರ ಮಾಡಿಕ್ಕು” ಅಂದ. {{gap}}ಹುಚ್ಚುಬೋರಿಗೆ ಎಲ್ಲಿಲ್ಲದ ಕುಸಾಮತ್ತಾಗಿ, “ಇದ ತರಕ್ಕೆ ಈಗೆಲ್ಲಿ ದುಡ್ಡು?” ಕ್ಯಾಳಿದ್ದು. {{gap}}”ನನ್ನ ಯೋನಂತ ತಿಳುಕಂಬುಟ್ಟೆ?- ಯೇಣ್ಣಿ, ಒಂದು ಕೋಳಿ ತರಕ್ಕು ತಾಕತ್ತ ನಂಗೆ?”- ಕ್ವಾಪ ಬಂದೋನಂಗೆ ನಟನೆ ಮಾಡಿ, ಆಮ್ಯಾಕೆ ಬಿದ್ದು ಬಿದ್ದು ನಗಾಡ್ತ. {{gap}}“ವೋಗೆ ಬೋರಿ. ನೀನೊಂದು ಪೆದ್ದುಗರ. ಈ ಕೋಳಿಗೆಲ್ಲ ದುಡ್ಡು ಸುರಿಯಕ್ಕೆ ನಾಯೇನ ದೊರೆ ಮೊಮ್ಮಗನ?” ಅಂದುದಕೆ, ಬೋರಿ {{gap}}“ಒಂದು ಕೋಳಿ ತರಕ್ಕೆ ಒಬ್ಬ ದೊರೆ ಮೊಮ್ಮಗನೆ ಆಗಬೇಕೆ?- ನೀ ಕುಡಿಯಾ ದುಡ್ಡಲ್ಲಿ ಉಳಿಕೆ ಮಾಡಿದ್ರೆ, ವಾರಕೊಂದು ಜಿನ ಆದ್ರೂ ನಮ್ಮ ಗುಡ್ಡಲ್ಲೂವೆ ಕೋಳಿ ಕಾರ ಆರೀನೇಬೈದು!...” ಅಂದ್ಲು. ಟಗರೂರ, {{gap}}“ಅಯ್ಯೋ ಪೆದ್ದಗರುವೆ, ಇದ್ದ ನಾ ದುಡ್ಡ ಕ್ವಿಟ್ಟು ತಂದೇಂತ ನೀ ತಿಳುಕಂಡ್ಯ?”- ನಕ್ಕು, “ಕ್ಯಾಳು, ಯೋಳ್ತಣಿ” ಅಂದು, ತಾನು ಆ ಕೋಳಿಯ ಎಂಗೆಹಾರಿಸಿ ತಂದೆ ಅನಾದ ಕಣ್ಣಿಗೆ ಕಟ್ಟೂವಂಗೆ ಇವರಿಸಿದನಂತೆ! {{gap}}ಇದರಿಂದ-ಏಟೊ ಜಿನ ಕಳುದ ಮ್ಯಾಲೆ ಇವೊತ್ತೊಂದು ಕೋಳಿ ತಿನೊ ಅವಕಾಶ ಸಿಕ್ಕಿಲ್ಲ ಅಂತಾವ, ಹುಚ್ಚುಬೋರಿಗೆ ಕುಸಿ ಆದರೂವೆ, ಮಗಳು ಚೆಲುವಿಗೆ ಮಾತ್ರ ಅವಳಯ್ಯನ ನಡತೆ ಇಸುಸನಿಲ್ಲವಂತೆ! {{gap}}“ಮಯ್ಯ ಮುರುದು ದುಡೀಬೇಕು. ಘನ್ನಬೇಕು. ಕದ್ದು ತಂದು ತಿನ್ನಾದು ನಂಗೇನೂ ಒಪ್ಪಿತ ಆಗ್ತಿಲ್ಲ”- ಕಡ್ಡಿ ಮುರಿದಂತೆ ಯೋಳಿದ್ದಂತೆ.<noinclude></noinclude> 9xxwqw4v27niq4vs92u85v0tv5hvfo3 322392 322391 2026-05-25T07:39:07Z Hariprasad Shetty10 7490 322392 proofread-page text/x-wiki <noinclude><pagequality level="1" user="Hariprasad Shetty10" />{{rh|left=ಸಮಗ್ರ ಕಾದಂಬರಿಗಳು|center=|right=೨೩೩}}</noinclude>ಇರನಿಲ್ಲ. ಟಗರೂರ ಸೀದ ಆ ಕಲ್ಲುದೋಣಿ ಅತ್ರ ವೋದ. ತನ್ನ ತಲೆಗೆ ಸುತ್ತಿದ್ದ ವಸ್ತ ತಗದು ಅದರಾಗಿ ಅದಿದ್ದ. ಆಮ್ಯಾಕೆ ಆ ವಸ್ತವ ಹಿಂಡಿ, ಅದ್ರ ಕೊಂಡೋಗಿ, ಮೆತ್ತಗೆ ಊಂಚಾಕ್ತ ಸ್ವಂಚಾಕ್ತ, ಆ ಕೋಳಿ ತಿರುಗಿದಂತೆ ತಿರುಗಿದಂತೆ ಇಂದಿಂದೆ ನಡುದು, ಸಮಯ ಕಾದು, ಬೋ ಹುನ್ನಾರಿಂದ ತಾನು ಇಡುದಿದ್ದ ವದ್ದೆ ಪಾವಡೇಯ ತಟಕ್ಕನೆ ಅದರ ಮಾಲೆ ದಬ್ಬಾಕಿದ. ವದ್ದೆ ಪಾವಡೆ ತನ್ನ ಮ್ಯಾಲೆ ಬೀಳ್ತಾನೂವೆ ಆ ಕೋಳಿ ಕಮಕ್ ಕಿಮಕ್ ಅನ್ನನಿಲ್ಲ. ತಕ್ಷಣ ಅಮಗೇ ಅದೂ ಎತ್ತಿ, ತನ್ನ ಹಸಿಬೆಚೀಲಕೆ ತುರಕಿ, ಆ ಚೀಲವ ತನ್ನ ಎಗಲ ಮ್ಯಾಕ್ಕೆ ಎಸೆದು ಕಳ್ಳ ಎಜ್ಜೆ ಆಕ್ತ ವೊಂಟ... {{gap}}ತನ್ನ ಗುಡ್ಡ ತಲುಪಿ, ಹಸಿಬೆ ಚೀಲದಿಂದ ಕೋಳಿಯ ಹೂಗೀಕೆ ತಗೀತ, {{gap}}“ತಕ್ಷಣೆ, ವೈನಾದ ಕೋಳಿ ತಂದಿಮ್ಮಿ... ನಾತ್ರೆಗೆ ಹೊಗುದಸ್ತಾಗಿ ಎಸರ ಮಾಡಿಕ್ಕು” ಅಂದ. {{gap}}ಹುಚ್ಚುಬೋರಿಗೆ ಎಲ್ಲಿಲ್ಲದ ಕುಸಾಮತ್ತಾಗಿ, “ಇದ ತರಕ್ಕೆ ಈಗೆಲ್ಲಿ ದುಡ್ಡು?” ಕ್ಯಾಳಿದ್ದು. {{gap}}”ನನ್ನ ಯೋನಂತ ತಿಳುಕಂಬುಟ್ಟೆ?- ಯೇಣ್ಣಿ, ಒಂದು ಕೋಳಿ ತರಕ್ಕು ತಾಕತ್ತ ನಂಗೆ?”- ಕ್ವಾಪ ಬಂದೋನಂಗೆ ನಟನೆ ಮಾಡಿ, ಆಮ್ಯಾಕೆ ಬಿದ್ದು ಬಿದ್ದು ನಗಾಡ್ತ. {{gap}}“ವೋಗೆ ಬೋರಿ. ನೀನೊಂದು ಪೆದ್ದುಗರ. ಈ ಕೋಳಿಗೆಲ್ಲ ದುಡ್ಡು ಸುರಿಯಕ್ಕೆ ನಾಯೇನ ದೊರೆ ಮೊಮ್ಮಗನ?” ಅಂದುದಕೆ, ಬೋರಿ {{gap}}“ಒಂದು ಕೋಳಿ ತರಕ್ಕೆ ಒಬ್ಬ ದೊರೆ ಮೊಮ್ಮಗನೆ ಆಗಬೇಕೆ?- ನೀ ಕುಡಿಯಾ ದುಡ್ಡಲ್ಲಿ ಉಳಿಕೆ ಮಾಡಿದ್ರೆ, ವಾರಕೊಂದು ಜಿನ ಆದ್ರೂ ನಮ್ಮ ಗುಡ್ಡಲ್ಲೂವೆ ಕೋಳಿ ಕಾರ ಆರೀನೇಬೈದು!...” ಅಂದ್ಲು. ಟಗರೂರ, {{gap}}“ಅಯ್ಯೋ ಪೆದ್ದಗರುವೆ, ಇದ್ದ ನಾ ದುಡ್ಡ ಕ್ವಿಟ್ಟು ತಂದೇಂತ ನೀ ತಿಳುಕಂಡ್ಯ?”- ನಕ್ಕು, “ಕ್ಯಾಳು, ಯೋಳ್ತಣಿ” ಅಂದು, ತಾನು ಆ ಕೋಳಿಯ ಎಂಗೆಹಾರಿಸಿ ತಂದೆ ಅನಾದ ಕಣ್ಣಿಗೆ ಕಟ್ಟೂವಂಗೆ ಇವರಿಸಿದನಂತೆ! {{gap}}ಇದರಿಂದ-ಏಟೊ ಜಿನ ಕಳುದ ಮ್ಯಾಲೆ ಇವೊತ್ತೊಂದು ಕೋಳಿ ತಿನೊ ಅವಕಾಶ ಸಿಕ್ಕಿಲ್ಲ ಅಂತಾವ, ಹುಚ್ಚುಬೋರಿಗೆ ಕುಸಿ ಆದರೂವೆ, ಮಗಳು ಚೆಲುವಿಗೆ ಮಾತ್ರ ಅವಳಯ್ಯನ ನಡತೆ ಇಸುಸನಿಲ್ಲವಂತೆ! {{gap}}“ಮಯ್ಯ ಮುರುದು ದುಡೀಬೇಕು. ಘನ್ನಬೇಕು. ಕದ್ದು ತಂದು ತಿನ್ನಾದು ನಂಗೇನೂ ಒಪ್ಪಿತ ಆಗ್ತಿಲ್ಲ”- ಕಡ್ಡಿ ಮುರಿದಂತೆ ಯೋಳಿದ್ದಂತೆ.<noinclude></noinclude> 8nxdljsckvjku9yai8utvmky27tw1du 322393 322392 2026-05-25T07:40:16Z Hariprasad Shetty10 7490 322393 proofread-page text/x-wiki <noinclude><pagequality level="1" user="Hariprasad Shetty10" />{{rh|left=ಸಮಗ್ರ ಕಾದಂಬರಿಗಳು|center=|right=೨೩೩}}</noinclude>ಇರನಿಲ್ಲ. ಟಗರೂರ ಸೀದ ಆ ಕಲ್ಲುದೋಣಿ ಅತ್ರ ವೋದ. ತನ್ನ ತಲೆಗೆ ಸುತ್ತಿದ್ದ ವಸ್ತ ತಗದು ಅದರಾಗಿ ಅದಿದ್ದ. ಆಮ್ಯಾಕೆ ಆ ವಸ್ತವ ಹಿಂಡಿ, ಅದ್ರ ಕೊಂಡೋಗಿ, ಮೆತ್ತಗೆ ಊಂಚಾಕ್ತ ಸ್ವಂಚಾಕ್ತ, ಆ ಕೋಳಿ ತಿರುಗಿದಂತೆ ತಿರುಗಿದಂತೆ ಇಂದಿಂದೆ ನಡುದು, ಸಮಯ ಕಾದು, ಬೋ ಹುನ್ನಾರಿಂದ ತಾನು ಇಡುದಿದ್ದ ವದ್ದೆ ಪಾವಡೇಯ ತಟಕ್ಕನೆ ಅದರ ಮಾಲೆ ದಬ್ಬಾಕಿದ. ವದ್ದೆ ಪಾವಡೆ ತನ್ನ ಮ್ಯಾಲೆ ಬೀಳ್ತಾನೂವೆ ಆ ಕೋಳಿ ಕಮಕ್ ಕಿಮಕ್ ಅನ್ನನಿಲ್ಲ. ತಕ್ಷಣ ಅಮಗೇ ಅದೂ ಎತ್ತಿ, ತನ್ನ ಹಸಿಬೆಚೀಲಕೆ ತುರಕಿ, ಆ ಚೀಲವ ತನ್ನ ಎಗಲ ಮ್ಯಾಕ್ಕೆ ಎಸೆದು ಕಳ್ಳ ಎಜ್ಜೆ ಆಕ್ತ ವೊಂಟ...<br /> {{gap}}ತನ್ನ ಗುಡ್ಡ ತಲುಪಿ, ಹಸಿಬೆ ಚೀಲದಿಂದ ಕೋಳಿಯ ಹೂಗೀಕೆ ತಗೀತ,<br /> {{gap}}“ತಕ್ಷಣೆ, ವೈನಾದ ಕೋಳಿ ತಂದಿಮ್ಮಿ... ನಾತ್ರೆಗೆ ಹೊಗುದಸ್ತಾಗಿ ಎಸರ ಮಾಡಿಕ್ಕು” ಅಂದ.<br /> {{gap}}ಹುಚ್ಚುಬೋರಿಗೆ ಎಲ್ಲಿಲ್ಲದ ಕುಸಾಮತ್ತಾಗಿ, “ಇದ ತರಕ್ಕೆ ಈಗೆಲ್ಲಿ ದುಡ್ಡು?” ಕ್ಯಾಳಿದ್ದು.<br /> {{gap}}”ನನ್ನ ಯೋನಂತ ತಿಳುಕಂಬುಟ್ಟೆ?- ಯೇಣ್ಣಿ, ಒಂದು ಕೋಳಿ ತರಕ್ಕು ತಾಕತ್ತ ನಂಗೆ?”- ಕ್ವಾಪ ಬಂದೋನಂಗೆ ನಟನೆ ಮಾಡಿ, ಆಮ್ಯಾಕೆ ಬಿದ್ದು ಬಿದ್ದು ನಗಾಡ್ತ.<br /> {{gap}}“ವೋಗೆ ಬೋರಿ. ನೀನೊಂದು ಪೆದ್ದುಗರ. ಈ ಕೋಳಿಗೆಲ್ಲ ದುಡ್ಡು ಸುರಿಯಕ್ಕೆ ನಾಯೇನ ದೊರೆ ಮೊಮ್ಮಗನ?” ಅಂದುದಕೆ, ಬೋರಿ<br /> {{gap}}“ಒಂದು ಕೋಳಿ ತರಕ್ಕೆ ಒಬ್ಬ ದೊರೆ ಮೊಮ್ಮಗನೆ ಆಗಬೇಕೆ?- ನೀ ಕುಡಿಯಾ ದುಡ್ಡಲ್ಲಿ ಉಳಿಕೆ ಮಾಡಿದ್ರೆ, ವಾರಕೊಂದು ಜಿನ ಆದ್ರೂ ನಮ್ಮ ಗುಡ್ಡಲ್ಲೂವೆ ಕೋಳಿ ಕಾರ ಆರೀನೇಬೈದು!...” ಅಂದ್ಲು. ಟಗರೂರ,<br /> {{gap}}“ಅಯ್ಯೋ ಪೆದ್ದಗರುವೆ, ಇದ್ದ ನಾ ದುಡ್ಡ ಕ್ವಿಟ್ಟು ತಂದೇಂತ ನೀ ತಿಳುಕಂಡ್ಯ?”- ನಕ್ಕು, “ಕ್ಯಾಳು, ಯೋಳ್ತಣಿ” ಅಂದು, ತಾನು ಆ ಕೋಳಿಯ ಎಂಗೆಹಾರಿಸಿ ತಂದೆ ಅನಾದ ಕಣ್ಣಿಗೆ ಕಟ್ಟೂವಂಗೆ ಇವರಿಸಿದನಂತೆ!<br /> {{gap}}ಇದರಿಂದ-ಏಟೊ ಜಿನ ಕಳುದ ಮ್ಯಾಲೆ ಇವೊತ್ತೊಂದು ಕೋಳಿ ತಿನೊ ಅವಕಾಶ ಸಿಕ್ಕಿಲ್ಲ ಅಂತಾವ, ಹುಚ್ಚುಬೋರಿಗೆ ಕುಸಿ ಆದರೂವೆ, ಮಗಳು ಚೆಲುವಿಗೆ ಮಾತ್ರ ಅವಳಯ್ಯನ ನಡತೆ ಇಸುಸನಿಲ್ಲವಂತೆ!<br /> {{gap}}“ಮಯ್ಯ ಮುರುದು ದುಡೀಬೇಕು. ಘನ್ನಬೇಕು. ಕದ್ದು ತಂದು ತಿನ್ನಾದು ನಂಗೇನೂ ಒಪ್ಪಿತ ಆಗ್ತಿಲ್ಲ”- ಕಡ್ಡಿ ಮುರಿದಂತೆ ಯೋಳಿದ್ದಂತೆ.<noinclude></noinclude> tktzn3kk66tdg9fy75o1juvk95nay3k 322394 322393 2026-05-25T07:40:32Z Hariprasad Shetty10 7490 /* Proofread */ 322394 proofread-page text/x-wiki <noinclude><pagequality level="3" user="Hariprasad Shetty10" />{{rh|left=ಸಮಗ್ರ ಕಾದಂಬರಿಗಳು|center=|right=೨೩೩}}</noinclude>ಇರನಿಲ್ಲ. ಟಗರೂರ ಸೀದ ಆ ಕಲ್ಲುದೋಣಿ ಅತ್ರ ವೋದ. ತನ್ನ ತಲೆಗೆ ಸುತ್ತಿದ್ದ ವಸ್ತ ತಗದು ಅದರಾಗಿ ಅದಿದ್ದ. ಆಮ್ಯಾಕೆ ಆ ವಸ್ತವ ಹಿಂಡಿ, ಅದ್ರ ಕೊಂಡೋಗಿ, ಮೆತ್ತಗೆ ಊಂಚಾಕ್ತ ಸ್ವಂಚಾಕ್ತ, ಆ ಕೋಳಿ ತಿರುಗಿದಂತೆ ತಿರುಗಿದಂತೆ ಇಂದಿಂದೆ ನಡುದು, ಸಮಯ ಕಾದು, ಬೋ ಹುನ್ನಾರಿಂದ ತಾನು ಇಡುದಿದ್ದ ವದ್ದೆ ಪಾವಡೇಯ ತಟಕ್ಕನೆ ಅದರ ಮಾಲೆ ದಬ್ಬಾಕಿದ. ವದ್ದೆ ಪಾವಡೆ ತನ್ನ ಮ್ಯಾಲೆ ಬೀಳ್ತಾನೂವೆ ಆ ಕೋಳಿ ಕಮಕ್ ಕಿಮಕ್ ಅನ್ನನಿಲ್ಲ. ತಕ್ಷಣ ಅಮಗೇ ಅದೂ ಎತ್ತಿ, ತನ್ನ ಹಸಿಬೆಚೀಲಕೆ ತುರಕಿ, ಆ ಚೀಲವ ತನ್ನ ಎಗಲ ಮ್ಯಾಕ್ಕೆ ಎಸೆದು ಕಳ್ಳ ಎಜ್ಜೆ ಆಕ್ತ ವೊಂಟ...<br /> {{gap}}ತನ್ನ ಗುಡ್ಡ ತಲುಪಿ, ಹಸಿಬೆ ಚೀಲದಿಂದ ಕೋಳಿಯ ಹೂಗೀಕೆ ತಗೀತ,<br /> {{gap}}“ತಕ್ಷಣೆ, ವೈನಾದ ಕೋಳಿ ತಂದಿಮ್ಮಿ... ನಾತ್ರೆಗೆ ಹೊಗುದಸ್ತಾಗಿ ಎಸರ ಮಾಡಿಕ್ಕು” ಅಂದ.<br /> {{gap}}ಹುಚ್ಚುಬೋರಿಗೆ ಎಲ್ಲಿಲ್ಲದ ಕುಸಾಮತ್ತಾಗಿ, “ಇದ ತರಕ್ಕೆ ಈಗೆಲ್ಲಿ ದುಡ್ಡು?” ಕ್ಯಾಳಿದ್ದು.<br /> {{gap}}”ನನ್ನ ಯೋನಂತ ತಿಳುಕಂಬುಟ್ಟೆ?- ಯೇಣ್ಣಿ, ಒಂದು ಕೋಳಿ ತರಕ್ಕು ತಾಕತ್ತ ನಂಗೆ?”- ಕ್ವಾಪ ಬಂದೋನಂಗೆ ನಟನೆ ಮಾಡಿ, ಆಮ್ಯಾಕೆ ಬಿದ್ದು ಬಿದ್ದು ನಗಾಡ್ತ.<br /> {{gap}}“ವೋಗೆ ಬೋರಿ. ನೀನೊಂದು ಪೆದ್ದುಗರ. ಈ ಕೋಳಿಗೆಲ್ಲ ದುಡ್ಡು ಸುರಿಯಕ್ಕೆ ನಾಯೇನ ದೊರೆ ಮೊಮ್ಮಗನ?” ಅಂದುದಕೆ, ಬೋರಿ<br /> {{gap}}“ಒಂದು ಕೋಳಿ ತರಕ್ಕೆ ಒಬ್ಬ ದೊರೆ ಮೊಮ್ಮಗನೆ ಆಗಬೇಕೆ?- ನೀ ಕುಡಿಯಾ ದುಡ್ಡಲ್ಲಿ ಉಳಿಕೆ ಮಾಡಿದ್ರೆ, ವಾರಕೊಂದು ಜಿನ ಆದ್ರೂ ನಮ್ಮ ಗುಡ್ಡಲ್ಲೂವೆ ಕೋಳಿ ಕಾರ ಆರೀನೇಬೈದು!...” ಅಂದ್ಲು. ಟಗರೂರ,<br /> {{gap}}“ಅಯ್ಯೋ ಪೆದ್ದಗರುವೆ, ಇದ್ದ ನಾ ದುಡ್ಡ ಕ್ವಿಟ್ಟು ತಂದೇಂತ ನೀ ತಿಳುಕಂಡ್ಯ?”- ನಕ್ಕು, “ಕ್ಯಾಳು, ಯೋಳ್ತಣಿ” ಅಂದು, ತಾನು ಆ ಕೋಳಿಯ ಎಂಗೆಹಾರಿಸಿ ತಂದೆ ಅನಾದ ಕಣ್ಣಿಗೆ ಕಟ್ಟೂವಂಗೆ ಇವರಿಸಿದನಂತೆ!<br /> {{gap}}ಇದರಿಂದ-ಏಟೊ ಜಿನ ಕಳುದ ಮ್ಯಾಲೆ ಇವೊತ್ತೊಂದು ಕೋಳಿ ತಿನೊ ಅವಕಾಶ ಸಿಕ್ಕಿಲ್ಲ ಅಂತಾವ, ಹುಚ್ಚುಬೋರಿಗೆ ಕುಸಿ ಆದರೂವೆ, ಮಗಳು ಚೆಲುವಿಗೆ ಮಾತ್ರ ಅವಳಯ್ಯನ ನಡತೆ ಇಸುಸನಿಲ್ಲವಂತೆ!<br /> {{gap}}“ಮಯ್ಯ ಮುರುದು ದುಡೀಬೇಕು. ಘನ್ನಬೇಕು. ಕದ್ದು ತಂದು ತಿನ್ನಾದು ನಂಗೇನೂ ಒಪ್ಪಿತ ಆಗ್ತಿಲ್ಲ”- ಕಡ್ಡಿ ಮುರಿದಂತೆ ಯೋಳಿದ್ದಂತೆ.<noinclude></noinclude> nf8zi0g1oahyogtf1rct134k466ficj 322403 322394 2026-05-25T08:41:05Z Pragathi. BH 7585 /* Validated */ 322403 proofread-page text/x-wiki <noinclude><pagequality level="4" user="Pragathi. BH" />{{rh|left=ಸಮಗ್ರ ಕಾದಂಬರಿಗಳು|center=|right=೨೩೩}}</noinclude>ಇರನಿಲ್ಲ. ಟಗರೂರ ಸೀದ ಆ ಕಲ್ಲುದೋಣಿ ಅತ್ರ ವೋದ. ತನ್ನ ತಲೆಗೆ ಸುತ್ತಿದ್ದ ವಸ್ತ ತಗದು ಅದರಾಗಿ ಅದಿದ್ದ. ಆಮ್ಯಾಕೆ ಆ ವಸ್ತವ ಹಿಂಡಿ, ಅದ್ರ ಕೊಂಡೋಗಿ, ಮೆತ್ತಗೆ ಊಂಚಾಕ್ತ ಸ್ವಂಚಾಕ್ತ, ಆ ಕೋಳಿ ತಿರುಗಿದಂತೆ ತಿರುಗಿದಂತೆ ಇಂದಿಂದೆ ನಡುದು, ಸಮಯ ಕಾದು, ಬೋ ಹುನ್ನಾರಿಂದ ತಾನು ಇಡುದಿದ್ದ ವದ್ದೆ ಪಾವಡೇಯ ತಟಕ್ಕನೆ ಅದರ ಮಾಲೆ ದಬ್ಬಾಕಿದ. ವದ್ದೆ ಪಾವಡೆ ತನ್ನ ಮ್ಯಾಲೆ ಬೀಳ್ತಾನೂವೆ ಆ ಕೋಳಿ ಕಮಕ್ ಕಿಮಕ್ ಅನ್ನನಿಲ್ಲ. ತಕ್ಷಣ ಅಮಗೇ ಅದೂ ಎತ್ತಿ, ತನ್ನ ಹಸಿಬೆಚೀಲಕೆ ತುರಕಿ, ಆ ಚೀಲವ ತನ್ನ ಎಗಲ ಮ್ಯಾಕ್ಕೆ ಎಸೆದು ಕಳ್ಳ ಎಜ್ಜೆ ಆಕ್ತ ವೊಂಟ...<br /> {{gap}}ತನ್ನ ಗುಡ್ಡ ತಲುಪಿ, ಹಸಿಬೆ ಚೀಲದಿಂದ ಕೋಳಿಯ ಹೂಗೀಕೆ ತಗೀತ,<br /> {{gap}}“ತಕ್ಷಣೆ, ವೈನಾದ ಕೋಳಿ ತಂದಿಮ್ಮಿ... ನಾತ್ರೆಗೆ ಹೊಗುದಸ್ತಾಗಿ ಎಸರ ಮಾಡಿಕ್ಕು” ಅಂದ.<br /> {{gap}}ಹುಚ್ಚುಬೋರಿಗೆ ಎಲ್ಲಿಲ್ಲದ ಕುಸಾಮತ್ತಾಗಿ, “ಇದ ತರಕ್ಕೆ ಈಗೆಲ್ಲಿ ದುಡ್ಡು?” ಕ್ಯಾಳಿದ್ದು.<br /> {{gap}}”ನನ್ನ ಯೋನಂತ ತಿಳುಕಂಬುಟ್ಟೆ?- ಯೇಣ್ಣಿ, ಒಂದು ಕೋಳಿ ತರಕ್ಕು ತಾಕತ್ತ ನಂಗೆ?”- ಕ್ವಾಪ ಬಂದೋನಂಗೆ ನಟನೆ ಮಾಡಿ, ಆಮ್ಯಾಕೆ ಬಿದ್ದು ಬಿದ್ದು ನಗಾಡ್ತ.<br /> {{gap}}“ವೋಗೆ ಬೋರಿ. ನೀನೊಂದು ಪೆದ್ದುಗರ. ಈ ಕೋಳಿಗೆಲ್ಲ ದುಡ್ಡು ಸುರಿಯಕ್ಕೆ ನಾಯೇನ ದೊರೆ ಮೊಮ್ಮಗನ?” ಅಂದುದಕೆ, ಬೋರಿ<br /> {{gap}}“ಒಂದು ಕೋಳಿ ತರಕ್ಕೆ ಒಬ್ಬ ದೊರೆ ಮೊಮ್ಮಗನೆ ಆಗಬೇಕೆ?- ನೀ ಕುಡಿಯಾ ದುಡ್ಡಲ್ಲಿ ಉಳಿಕೆ ಮಾಡಿದ್ರೆ, ವಾರಕೊಂದು ಜಿನ ಆದ್ರೂ ನಮ್ಮ ಗುಡ್ಡಲ್ಲೂವೆ ಕೋಳಿ ಕಾರ ಆರೀನೇಬೈದು!...” ಅಂದ್ಲು. ಟಗರೂರ,<br /> {{gap}}“ಅಯ್ಯೋ ಪೆದ್ದಗರುವೆ, ಇದ್ದ ನಾ ದುಡ್ಡ ಕ್ವಿಟ್ಟು ತಂದೇಂತ ನೀ ತಿಳುಕಂಡ್ಯ?”- ನಕ್ಕು, “ಕ್ಯಾಳು, ಯೋಳ್ತಣಿ” ಅಂದು, ತಾನು ಆ ಕೋಳಿಯ ಎಂಗೆಹಾರಿಸಿ ತಂದೆ ಅನಾದ ಕಣ್ಣಿಗೆ ಕಟ್ಟೂವಂಗೆ ಇವರಿಸಿದನಂತೆ!<br /> {{gap}}ಇದರಿಂದ-ಏಟೊ ಜಿನ ಕಳುದ ಮ್ಯಾಲೆ ಇವೊತ್ತೊಂದು ಕೋಳಿ ತಿನೊ ಅವಕಾಶ ಸಿಕ್ಕಿಲ್ಲ ಅಂತಾವ, ಹುಚ್ಚುಬೋರಿಗೆ ಕುಸಿ ಆದರೂವೆ, ಮಗಳು ಚೆಲುವಿಗೆ ಮಾತ್ರ ಅವಳಯ್ಯನ ನಡತೆ ಇಸುಸನಿಲ್ಲವಂತೆ!<br /> {{gap}}“ಮಯ್ಯ ಮುರುದು ದುಡೀಬೇಕು. ಘನ್ನಬೇಕು. ಕದ್ದು ತಂದು ತಿನ್ನಾದು ನಂಗೇನೂ ಒಪ್ಪಿತ ಆಗ್ತಿಲ್ಲ”- ಕಡ್ಡಿ ಮುರಿದಂತೆ ಯೋಳಿದ್ದಂತೆ.<noinclude></noinclude> dd7fgxj51slc8afn4zkp9903lmzf3mk ಪುಟ:ವೈಶಾಖ.pdf/೨೫೦ 104 82179 322411 306287 2026-05-25T08:45:49Z Shreesha Sharma 7840 /* Proofread */ 322411 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|೨೩೪}} {{Right|'''ವೈಶಾಖ'''}} ಬೆಂಕಿಕಡ್ಡಿ ಗಿರಿ, ಬೀಡಿ ಕತ್ತಿಸಿ {{gap}}“ಚೋಟು ಉದ್ದುದೋರಿಂದ ಇಡುದು ವೋಟುದ್ದ ಇರೋವಲ್ಲೂ ನಂಗೆ ಬುದ್ದಿ ಯೋಳೋರೇಯ, ಗಮ್ಯನೆ ನಿಮ್ಮ ನಿಮ್ಮ ಕೇಮೆ ಮಾಡಿರಮ್ಮಿ” ಅಂದು, ಟಗರೂರ ದಮ್ಮೇಳೀತ ಕುಂತು, ಕಾಲ ನೀಡಿದ್ದಂತೆ. ವಸಿ ವೋಡ್ನಲ್ಲೆ ಕಣ್ಣು ಎಳದಂಗಾಗಿ ಬಿಡಿಯ ಜಟಜಟ್ಟೆ ಸೇದಿ, ತುಂಡು ಆಚೆಗಸ್ತು, ಬಿದ್ದು ಕಂಡನಂತೆ... {{gap}}ಅಡುಗೆ ಆದ ಕೂಡ್ಲೆ ಅಯ್ಯಂಗೆ ಕಕಾಲು ತೊಳಸಿ ಉಣಕ್ಕೆ ಕುಂದರಿಸಿದ್ದು. ಹುಚ್ಚಬೋರಿ ತಗತಗ್ಗು ಇಡುತ್ತಾ ಇದ್ದರೆ, ಅಹ್ ಅದ್ಧಾಂತ ಚಪ್ಪರಸ್ತ ಗಡದ್ದಾಗಿ ಹೈಡದು, ಪುನಾ ಕಾಲು ನೀಡಿ ಬಿದ್ದು ಕಂಡನಂತೆ... {{gap}}ಈ ಇಚಾರನೆಲ್ಲ ಚಾಚೂ ತಪ್ಪದ ರೀತಿ, ಹುಚ್ಚುಬೋರಿ ಅದು ನಡದ ನಾಕನೆ ನಾ, ಲಕ್ಕನ ಅವನ ಕುಟ್ಟೆ ವರದಿ ತಪ್ಪಿಸಿದ್ದು. ಲಕ್ಕನ ಅವ್ವ ಕಲ್ಯಾಣಿಯೇನೊ ಗುಟ್ಟುಗಾತಿ. ಒಬ್ಬರು ಯೋಳಿ ಇನ್ನೊಬ್ರ ಕುಟ್ಟೆ ಯೋಳೊ ಸೋಬಾವದೋಳಲ್ಲ. ಆದ್ರೆ ಹುಚ್ಚುಬೋರೀದು ತುಡುಮಿಡಕೆ ಜೀವ. ಯೇನಾರ ಕಿವಿಗೆ ಬೀಳೋದೆ ತಡ, ಅಪ್ಪ ಊರಲ್ಲೆಲ್ಲ ಸಾರುತಾ ಬರಬೇಕು. ಮಾತಾಡ್ತಾ ಇದ್ದರೂ ವೋಟೇಯಮಾತಾಡ್ತಾನೆ ಇರಬೇಕು. ನಗಾಡ್ತ ಇದ್ದರೂ ವೋಟೇಯ, ನಗಾಡ್ತಾನೆ ಇರಬೇಕು. ಅದುಕೇ ಊರಲ್ಲಿ ಎಲ್ಲರೂವೆ ಬೋರಿ ಅನ್ನೋ ಹೆಸರಿನ ಜ್ವತೆ ಹುಚ್ಚು ಅಂತಾನು ಸೇರಿಸಿದ್ದು... {{gap}}ಹುಚ್ಚಬೋರಿ ಈ ಇಸ್ಯವ ಬೋ ಗುಟ್ಟಾಗಿ ಇಟ್ಟುಕಾಬೇಕು ಅಂತಾ ಕುಂಡಿಮಾದಿ, ದೈವಾಜಿ, ಪುಟ್ಟಿ, ಚೌಡಿ, ರಂಗಿ, ಯೆಲ್ಲಾರತ್ರವೂ” ಗುಟ್ಟುಇನ್ಯಾರೂ ಯೋಳಬ್ಯಾಡಿ” ಅಂತ ಬಿತ್ತುಬುಟ್ಲು... ದ್ಯಾವಾಜಿ ಒಬ್ಬಳ ಕಿವಿಗೆ ಬಿದ್ದರೆ ಸಾಕಾಗಿತ್ತು. ಇನ್ನು ಈಟು ಮಂದಿ ಕಿವಿಗೆ ಬಿದ್ದರೆ ಕ್ಯಾಳಬೇಕ?ಊರೊಳಗೆಲ್ಲ ಟಾಂ ಠಾಂ ಆಗೋಯ್ತು, ಪಂಚಾತಿಗೆ ಕುಂದರಿಸಿದ್ದು, ಟಗರೂರ “ನನ್ನೆಡತಿಗೆ ಹುಚ್ಚು-ಗ್ಯಾನಗೆಟ್ಟಂಗೆ ಯೇನೇನೊ ಮಾತಾಡಿಬುಡ್ತಾಳೆ... ಈ ಇಸ್ಯ ನಾ ಯೇನೇನೂ ಕಾಣನೇ ಕಾಣೆ. ನನ್ನ ಕಣ್ಣಾಣೆಗೂವೆ, ಇರಾ ನನ್ನೊಬ್ಬಳ ಮಗಳಾಣೆಗೂವೆ” ಅಂತ ಬಟ್ಟಾಡಿದ- ಪಂಚಾತಿಯೋರು ವಷ್ಟುನಿಲ್ಲ. ಇಪ್ಪತ್ತು ರೂಪಾಯಿ ದಂಡ ಆಕೆ ಆಕಿದು... {{gap}}- ಅಂತು ಒಟ್ನಲ್ಲಿ ಟಗರೂಕ್ನಿಂದ ಒಂದು ಚೆಂದುಳ್ಳಿ ಹೈದ ಮಣ್ಣಾಯ್ತು, ಅನ್ನಾ ಮಾತು ಊರಲ್ಲಿ ಗಟ್ಯಾಗಿ ನಿಂತೋಯ್ತು. ಆದೆ ತಿಂಗಳೊಪ್ಪತ್ತು ಕಳೆಯೋದಲ್ಲೆ ಲಕ್ಕಂಗೆ ಹೃಸ ಇಚಾರವೊಂದು ತಿಳಿದು ಬೆಪ್ಪಗೂಡೋದ! ಹಜಾಮರ<noinclude></noinclude> rbg1cb168a9nh7uzb5bhhf73aiojnb4 322418 322411 2026-05-25T08:50:46Z Shreelatha.Halemane 7642 /* Validated */ 322418 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|೨೩೪}} {{Right|'''ವೈಶಾಖ'''}} ಬೆಂಕಿಕಡ್ಡಿ ಗಿರಿ, ಬೀಡಿ ಕತ್ತಿಸಿ {{gap}}“ಚೋಟು ಉದ್ದುದೋರಿಂದ ಇಡುದು ವೋಟುದ್ದ ಇರೋವಲ್ಲೂ ನಂಗೆ ಬುದ್ದಿ ಯೋಳೋರೇಯ, ಗಮ್ಮನೆ ನಿಮ್ಮ ನಿಮ್ಮ ಕೇಮೆ ಮಾಡಿರಮ್ಮಿ” ಅಂದು, ಟಗರೂರ ದಮ್ಮೇಳೀತ ಕುಂತು, ಕಾಲ ನೀಡಿದ್ದಂತೆ. ವಸಿ ವೋಡ್ನಲ್ಲೆ ಕಣ್ಣು ಎಳದಂಗಾಗಿ ಬಿಡಿಯ ಜಟಜಟ್ಟೆ ಸೇದಿ, ತುಂಡು ಆಚೆಗಸ್ತು, ಬಿದ್ದು ಕಂಡನಂತೆ... {{gap}}ಅಡುಗೆ ಆದ ಕೂಡ್ಲೆ ಅಯ್ಯಂಗೆ ಕೈಕಾಲು ತೊಳಸಿ ಉಣಕ್ಕೆ ಕುಂದರಿಸಿದ್ದು. ಹುಚ್ಚಬೋರಿ ತಗತಗ್ಗು ಇಡುತ್ತಾ ಇದ್ದರೆ, ಅಹ್ ಅದ್ಧಾಂತ ಚಪ್ಪರಸ್ತ ಗಡದ್ದಾಗಿ ಹೈಡದು, ಪುನಾ ಕಾಲು ನೀಡಿ ಬಿದ್ದು ಕಂಡನಂತೆ... {{gap}}ಈ ಇಚಾರನೆಲ್ಲ ಚಾಚೂ ತಪ್ಪದ ರೀತಿ, ಹುಚ್ಚುಬೋರಿ ಅದು ನಡದ ನಾಕನೆ ನಾ, ಲಕ್ಕನ ಅವನ ಕುಟ್ಟೆ ವರದಿ ತಪ್ಪಿಸಿದ್ದು. ಲಕ್ಕನ ಅವ್ವ ಕಲ್ಯಾಣಿಯೇನೊ ಗುಟ್ಟುಗಾತಿ. ಒಬ್ಬರು ಯೋಳಿ ಇನ್ನೊಬ್ರ ಕುಟ್ಟೆ ಯೋಳೊ ಸೋಬಾವದೋಳಲ್ಲ. ಆದ್ರೆ ಹುಚ್ಚುಬೋರೀದು ತುಡುಮಿಡಕೆ ಜೀವ. ಯೇನಾರ ಕಿವಿಗೆ ಬೀಳೋದೆ ತಡ, ಅಪ್ಪ ಊರಲ್ಲೆಲ್ಲ ಸಾರುತಾ ಬರಬೇಕು. ಮಾತಾಡ್ತಾ ಇದ್ದರೂ ವೋಟೇಯಮಾತಾಡ್ತಾನೆ ಇರಬೇಕು. ನಗಾಡ್ತ ಇದ್ದರೂ ವೋಟೇಯ, ನಗಾಡ್ತಾನೆ ಇರಬೇಕು. ಅದುಕೇ ಊರಲ್ಲಿ ಎಲ್ಲರೂವೆ ಬೋರಿ ಅನ್ನೋ ಹೆಸರಿನ ಜ್ವತೆ ಹುಚ್ಚು ಅಂತಾನು ಸೇರಿಸಿದ್ದು... {{gap}}ಹುಚ್ಚಬೋರಿ ಈ ಇಸ್ಯವ ಬೋ ಗುಟ್ಟಾಗಿ ಇಟ್ಟುಕಾಬೇಕು ಅಂತಾ ಕುಂಡಿಮಾದಿ, ದೈವಾಜಿ, ಪುಟ್ಟಿ, ಚೌಡಿ, ರಂಗಿ, ಯೆಲ್ಲಾರತ್ರವೂ” ಗುಟ್ಟುಇನ್ಯಾರೂ ಯೋಳಬ್ಯಾಡಿ” ಅಂತ ಬಿತ್ತುಬುಟ್ಲು... ದ್ಯಾವಾಜಿ ಒಬ್ಬಳ ಕಿವಿಗೆ ಬಿದ್ದರೆ ಸಾಕಾಗಿತ್ತು. ಇನ್ನು ಈಟು ಮಂದಿ ಕಿವಿಗೆ ಬಿದ್ದರೆ ಕ್ಯಾಳಬೇಕ?ಊರೊಳಗೆಲ್ಲ ಟಾಂ ಠಾಂ ಆಗೋಯ್ತು, ಪಂಚಾತಿಗೆ ಕುಂದರಿಸಿದ್ದು, ಟಗರೂರ “ನನ್ನೆಡತಿಗೆ ಹುಚ್ಚು-ಗ್ಯಾನಗೆಟ್ಟಂಗೆ ಯೇನೇನೊ ಮಾತಾಡಿಬುಡ್ತಾಳೆ... ಈ ಇಸ್ಯ ನಾ ಯೇನೇನೂ ಕಾಣನೇ ಕಾಣೆ. ನನ್ನ ಕಣ್ಣಾಣೆಗೂವೆ, ಇರಾ ನನ್ನೊಬ್ಬಳ ಮಗಳಾಣೆಗೂವೆ” ಅಂತ ಬಟ್ಟಾಡಿದ- ಪಂಚಾತಿಯೋರು ವಷ್ಟುನಿಲ್ಲ. ಇಪ್ಪತ್ತು ರೂಪಾಯಿ ದಂಡ ಆಕೆ ಆಕಿದು... {{gap}}- ಅಂತು ಒಟ್ನಲ್ಲಿ ಟಗರೂಕ್ನಿಂದ ಒಂದು ಚೆಂದುಳ್ಳಿ ಹೈದ ಮಣ್ಣಾಯ್ತು, ಅನ್ನಾ ಮಾತು ಊರಲ್ಲಿ ಗಟ್ಯಾಗಿ ನಿಂತೋಯ್ತು. ಆದೆ ತಿಂಗಳೊಪ್ಪತ್ತು ಕಳೆಯೋದಲ್ಲೆ ಲಕ್ಕಂಗೆ ಹೃಸ ಇಚಾರವೊಂದು ತಿಳಿದು ಬೆಪ್ಪಗೂಡೋದ! ಹಜಾಮರ<noinclude></noinclude> 1vl1iuhknnppqy5bsqi4454c85gpyik ಪುಟ:ವೈಶಾಖ.pdf/೨೫೧ 104 82180 322413 306300 2026-05-25T08:46:39Z Shreesha Sharma 7840 /* Proofread */ 322413 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೩೫}} ಜವರಯ್ಯ ಒಂದು ತಂತೇಲಿ ಹುಣಸೂರು ಪ್ಯಾಟೇಲಿ ಸಿಕ್ಕಿ, ಅಲ್ಲೀತನಕ ತನ್ನ ವೋಟೇಲೆ ಜ್ವಾಪಾನಾಗಿ ಬೀಗಮುದ್ರೆ ಆಕಿ ಇಟ್ಟುಗಂಡಿದ್ದ ಇಸ್ಯವ ತನ್ನತ್ರ ಗುಟ್ಟಾಗಿ, “ಇಗ ಯೋಳ್ಳಿರೊ ಇಸ್ಯವ ಯಾರ ಕುಟ್ಟಾರು ಯೋಳಿಬುಟ್ಟಿ ಕನಪು... ನಿನ್ನ ದಮ್ಮಯ್ಯ.... ನನ್ನ ವೊಟೇಲಿ ಈಟು ಕಾಲವೂ ಇದೂ ಎಂಗೋ ಇಟ್ಟುಕಂಡು ಕಾಲ ತಳ್ಳಿದೆ. ಇನ್ನು ಆಗಕ್ಕಿಲ್ಲ, ಯಾರ ಕುಟ್ಟಾರು ಯೋಳದೆ ಮೋದರೆ, ನಂಗೆ ವೊಟ್ಟೆ ಉಬ್ಬರಣೆ ಬಂದು ನಾ ಸತ್ತೇವೋಗೊದಂತೂ ನಿಚ್ಚಯ... ಅದುಕೆ, ನಿನ್ನ ತಾವು ಯೆಲ್ಲನೂ ಬಿಚ್ಚುತ್ತಾ ಇನ್ನಿ. ನೀನು ಬಾಕಿಯೋರಂಗೆ ಬಾಯಿಬಡುಕ ಅಲ್ಲ, ಯಾವ ಇಸ್ಕಾನಾರು ವೋಟೇಲೆ ಇಟ್ಟುಕತ್ತೀಯಾಂತ ಅನುಬೋಗದಿಂದ ತಿಳುಕಂಡೀಮ್ಮಿ...ಆದರೂವೆ, ತಲೆ ವೋಗೊ ಇಸ್ಯ. ಒಂದು ದಪ್ಪ ಪಂಚಾತೀಲಿ ತೀರ್ಮಾನ ಆಗಿ ಮುಗಿದೊಗದೆ, ಯಾರ ಕುಟ್ಟುವೆ ನೀ ಯೋಳಕ್ಕಿಲ್ಲ ಅಂತ ಭಾಸೆ ಕ್ವಟ್ಟರೆ, ನಾ ಯೋನಿ ಕ್ವಾಡಪ್ಪ” ಅಂದ. {{gap}}“ಜಡೆಮುನಿ ಆಣೆಗೂ ನಾ ಯೋಳಕ್ಕಿಲ್ಲ. ಅದೇನು ಯೋಳಿರಯ್ಯ”ಅಂತ ತಾನು ಭಾಸೆ ಕ್ವಟ್ಟಮ್ಯಾಲೆ ಜವರಯ್ಯ ಬಾಯಿ ಬಿಚ್ಚಿದ. {{gap}}ಜವರಯ್ಯಂಗೂ ಸತ್ತೋದ ಆ ಹೈದ ಹಲಗಂಗೂ ಬೋ ಚೆಂದ. ಯಾವ ಇಚಾರ ಆದರೂವೆ ಹಲಗ ಜವರಯ್ಯ ಅತ್ರ ಯೋಳಿಕೊಬೇಕು. ಅವು ಯಾರ ಸಂಗಾಟವೂ ಯೆಚ್ಚಾಗಿ ಸೀನೆಯ ಮಾಡಿಕರನಿಲ್ಲ- “ನಿನ್ನಂಗೆ ಗುಟ್ಟುಗಾರ ಕನೊ” ಇಲ್ಲೀತಂಕ ಅವ್ರ ಸಾವಿನ ಇಚಾರವಾಗಿ ಹಬ್ಬಿರಾ ಸುದ್ದಿಗೆ ಬುಡವೆ ಇಲ್ಲ. ದಿಟ್ಟವಾಗೂ ನಡದ್ದೇನಪ್ಪ ಅಂದ್ರೆ- ಇಂದುಕೆ ಒಂದು ಜಿನ, ದೇಸದಲ್ಲಿ ಯಾರೊ ಸತ್ತೋಗಿ, ಮಟಕ್ಕೋಗಿದ್ದ ಹೈಕಳೆಲ್ಲ ಉಪಾದ್ಯರು ರಜ ಕ್ವಿಟ್ಟು ಕಳಿಸಿಬುಟ್ಟಿದ್ರು, ಊರಿಗೆ ಬಂದ ಹಲಗ ತಮ್ಮ ಅಟ್ಟಿ ಮುಂಚೋರಿ ಕಡ ಆಕಿರೋದ ಕಂಡು, ಅವ್ವ ದಣಿದು ಬಂದು ಮನಗಿರಬೈದು, ಯಾಕೆ ಸುಮ್ಮಕೆ ಅವಳ ಯೋಳಿಸಬೇಕೂಂತ, ಹೈದ ಹಿತ್ತಲ ಬಾಗಿಲ ಚೋರಿ ಯೇನಾರ ತಗಿದಿದ್ದಾತ ಕ್ವಾಡಾನೆಂತ, ಅಲ್ಲಿಗೋಗಿ ಕದವ ಮೆತ್ತಗೆ ದಬ್ಬಿದನಂತೆ ಆ ಕದ ತಕ್ಕಂತೆ. ಎಂಕಿ ಆ ಕದ ಭದ್ರ ಮಡಾದ ಮರತು ಮನಗಿದ್ದಲು. ಹೈದ ವಳುಗೋಗಿ ಕ್ವಾಡ್ತದೆ... ಅವ್ವ ಹುಟ್ಟಿದ್ದ ಹುಟ್ಟಿದಂಗೇಯ ಬೆತ್ತಾನು ಬೆತ್ತಲೆ ಅಂಗಡಿ ಬಸಲಿಂಗು ಜತೆ ಬಿದ್ದು ಕಂಡವಳೆ!... ಹೈದ ಕಲ್ಲಾಗಿ ನಂತನಂತೆ!... ಅವೋನ್ನಿಂದ ಹೈದನ್ನ ಕಂಡರೆ ಎಂಕಿಗೆ ಹುಚ್ಚು ಕ್ವಾಪ, ಸಣ್ಣಪುಟ್ಟ ತಪ್ಪಿಗೆಲ್ಲ ಏಟು, ಬೆನ್ನಲ್ಲಿ ಬಾಸುಂಡೆ ಯೆಳೀದೇ ಇದ್ದ ಜಿನವೆ ಅಪರ್ಪ. ಅವಳ ಮಯೊಳಗೆ ಭೂತ ಕುಣಿಯಕ್ಕೆ ಸುರು ಆಗೋಯ್ತು . ಜಿನದಿಂದ ಜಿನಕೆ ಅಟ್ಟೇಲಿ ಅವಳ<noinclude></noinclude> sxs5zwb7rrppkwzi3baghyjj4rjvz0c 322415 322413 2026-05-25T08:49:25Z Shreelatha.Halemane 7642 /* Validated */ 322415 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೩೫}} ಜವರಯ್ಯ ಒಂದು ತಂತೇಲಿ ಹುಣಸೂರು ಪ್ಯಾಟೇಲಿ ಸಿಕ್ಕಿ, ಅಲ್ಲೀತನಕ ತನ್ನ ವೋಟ್ಟೇಲೆ ಜ್ವಾಪಾನಾಗಿ ಬೀಗಮುದ್ರೆ ಆಕಿ ಇಟ್ಟುಗಂಡಿದ್ದ ಇಸ್ಯವ ತನ್ನತ್ರ ಗುಟ್ಟಾಗಿ, {{gap}}“ಇಗ ಯೋಳ್ತಿರೋ ಇಸ್ಯವ ಯಾರ ಕುಟ್ಟಾರು ಯೋಳಿಬುಟ್ಟಿ ಕನಪು... ನಿನ್ನ ದಮ್ಮಯ್ಯ.... ನನ್ನ ವೊಟೇಲಿ ಈಟು ಕಾಲವೂ ಇದೂ ಎಂಗೋ ಇಟ್ಟುಕಂಡು ಕಾಲ ತಳ್ಳಿದೆ. ಇನ್ನು ಆಗಕ್ಕಿಲ್ಲ, ಯಾರ ಕುಟ್ಟಾರು ಯೋಳದೆ ಮೋದರೆ, ನಂಗೆ ವೊಟ್ಟೆ ಉಬ್ಬರಣೆ ಬಂದು ನಾ ಸತ್ತೇವೋಗೊದಂತೂ ನಿಚ್ಚಯ... ಅದುಕೆ, ನಿನ್ನ ತಾವು ಯೆಲ್ಲನೂ ಬಿಚ್ಚುತ್ತಾ ಇವ್ನಿ. ನೀನು ಬಾಕಿಯೋರಂಗೆ ಬಾಯಿಬಡುಕ ಅಲ್ಲ, ಯಾವ ಇ ಸ್ಯಾನ್ನಾ ರು ವೋಟೇಲೆ ಇಟ್ಟುಕತ್ತೀಯಾಂತ ಅನುಬೋಗದಿಂದ ತಿಳುಕಂಡೀಮ್ಮಿ...ಆದರೂವೆ, ತಲೆ ವೋಗೊ ಇಸ್ಯ. ಒಂದು ದಪ್ಪ ಪಂಚಾತೀಲಿ ತೀರ್ಮಾನ ಆಗಿ ಮುಗಿದೊಗದೆ, ಯಾರ ಕುಟ್ಟುವೆ ನೀ ಯೋಳಕ್ಕಿಲ್ಲ ಅಂತ ಭಾಸೆ ಕ್ವಟ್ಟರೆ, ನಾ ಯೋನಿ ಕ್ವಾಡಪ್ಪ” ಅಂದ. {{gap}}“ಜಡೆಮುನಿ ಆಣೆಗೂ ನಾ ಯೋಳಕ್ಕಿಲ್ಲ. ಅದೇನು ಯೋಳಿರಯ್ಯ”ಅಂತ ತಾನು ಭಾಸೆ ಕ್ವಟ್ಟಮ್ಯಾಲೆ ಜವರಯ್ಯ ಬಾಯಿ ಬಿಚ್ಚಿದ. {{gap}}ಜವರಯ್ಯಂಗೂ ಸತ್ತೋದ ಆ ಹೈದ ಹಲಗಂಗೂ ಬೋ ಚೆಂದ. ಯಾವ ಇಚಾರ ಆದರೂವೆ ಹಲಗ ಜವರಯ್ಯ ಅತ್ರ ಯೋಳಿಕೊಬೇಕು. ಅವು ಯಾರ ಸಂಗಾಟವೂ ಯೆಚ್ಚಾಗಿ ಸೀನೆಯ ಮಾಡಿಕರನಿಲ್ಲ- “ನಿನ್ನಂಗೆ ಗುಟ್ಟುಗಾರ ಕನೊ” ಇಲ್ಲೀತಂಕ ಅವ್ರ ಸಾವಿನ ಇಚಾರವಾಗಿ ಹಬ್ಬಿರಾ ಸುದ್ದಿಗೆ ಬುಡವೆ ಇಲ್ಲ. ದಿಟ್ಟವಾಗೂ ನಡದ್ದೇನಪ್ಪ ಅಂದ್ರೆ- ಇಂದುಕೆ ಒಂದು ಜಿನ, ದೇಸದಲ್ಲಿ ಯಾರೊ ಸತ್ತೋಗಿ, ಮಟಕ್ಕೋಗಿದ್ದ ಹೈಕಳೆಲ್ಲ ಉಪಾದ್ಯರು ರಜ ಕ್ವಿಟ್ಟು ಕಳಿಸಿಬುಟ್ಟಿದ್ರು, ಊರಿಗೆ ಬಂದ ಹಲಗ ತಮ್ಮ ಅಟ್ಟಿ ಮುಂಚೋರಿ ಕಡ ಆಕಿರೋದ ಕಂಡು, ಅವ್ವ ದಣಿದು ಬಂದು ಮನಗಿರಬೈದು, ಯಾಕೆ ಸುಮ್ಮಕೆ ಅವಳ ಯೋಳಿಸಬೇಕೂಂತ, ಹೈದ ಹಿತ್ತಲ ಬಾಗಿಲ ಚೋರಿ ಯೇನಾರ ತಗಿದಿದ್ದಾತ ಕ್ವಾಡಾನೆಂತ, ಅಲ್ಲಿಗೋಗಿ ಕದವ ಮೆತ್ತಗೆ ದಬ್ಬಿದನಂತೆ ಆ ಕದ ತಕ್ಕಂತೆ. ಎಂಕಿ ಆ ಕದ ಭದ್ರ ಮಡಾದ ಮರತು ಮನಗಿದ್ದಲು. ಹೈದ ವಳುಗೋಗಿ ಕ್ವಾಡ್ತದೆ... ಅವ್ವ ಹುಟ್ಟಿದ್ದ ಹುಟ್ಟಿದಂಗೇಯ ಬೆತ್ತಾನು ಬೆತ್ತಲೆ ಅಂಗಡಿ ಬಸಲಿಂಗು ಜತೆ ಬಿದ್ದು ಕಂಡವಳೆ!... ಹೈದ ಕಲ್ಲಾಗಿ ನಂತನಂತೆ!... ಅವೋನ್ನಿಂದ ಹೈದನ್ನ ಕಂಡರೆ ಎಂಕಿಗೆ ಹುಚ್ಚು ಕ್ವಾಪ, ಸಣ್ಣಪುಟ್ಟ ತಪ್ಪಿಗೆಲ್ಲ ಏಟು, ಬೆನ್ನಲ್ಲಿ ಬಾಸುಂಡೆ ಯೆಳೀದೇ ಇದ್ದ ಜಿನವೆ ಅಪರ್ಪ. ಅವಳ ಮಯೊಳಗೆ ಭೂತ ಕುಣಿಯಕ್ಕೆ ಸುರು ಆಗೋಯ್ತು . ಜಿನದಿಂದ ಜಿನಕೆ ಅಟ್ಟೇಲಿ ಅವಳ<noinclude></noinclude> 4xrg7vpjocj15nh4ongesojz959d50t ಪುಟ:ವೈಶಾಖ.pdf/೨೫೨ 104 82181 322414 306310 2026-05-25T08:47:40Z Shreesha Sharma 7840 /* Proofread */ 322414 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|೨೩೬}} {{Right|'''ವೈಶಾಖ'''}} ರಾದ್ದಾಂತ ಎಚ್ಚಕತ್ತಿತ್ತೆ ಜ್ವರತು ಕಮ್ಮಿ ಆಗೊ ಸುಳುವೆ ಕಾಣನಿಲ್ಲ.... ನನ್ನ ಕುಟ್ಟೆ ಹೈದ, “ಇನ್ನು ನಂಗೆ ಬದುಕಕ್ಕೆ ಆಸ್ಯೆ ಇಲ್ಲ. ಜವರಪ್ಪ” ಅಂತ ಯೋಳಿಕತ್ತಾನೇ ಇತ್ತು. “ಚಿಕ್ಕೋನು ಮುಟ್ಟೋನು- ಅಂಗೆಲ್ಲ ಮಾತಾಡಬಾರು” ಅಂತ ನಾನು ಬದ್ದಿ ಯೋಳಿದೆ. ನನ್ನ ತಬ್ಬಿಕಂಡು ಗೋಳೇಂತ ಆಳ, ಒಂದು ಆಯಿತವಾರ ಸಂದೀನಾಗ ಕೆರೆ ಅತ್ರ ನಾವಿಬ್ರೇ ಇದ್ದಾಗ, ನಡದದ್ದೆಲ್ಲ ಮುಚ್ಚುವರೆಯಿಲೆ ಯೋಳಿ “ಇನ್ನು ಯಾವ ಆಸೆಗೆ ಬದುಕಬೇಕು? ನೀನೇ ಯೋಳು...” -ನನ್ನೇ ಕೇಳು... ನಿಂಗೂ ಸ್ವತ್ತಲ್ಲ, ನಿಷ್ಟುರಗಾರ ಹೈದ, ಮನಸ್ಸಿಗೇನಾರ ಬಂದ್ರೆ, ಅನ್ನ ಸಾದಿಸೋವಂತ ಗಂಡೇಯ. ನಾನೂವೆ ತಿಳಿದ ಬುದ್ದೀನೆಲ್ಲ ಯೆಚ್ಚ ಮಾಡಿ ಯೋಳೆ, ಅವು ನಂಗೆ ಯೋಳ ಕೊನೇ ಮಾತು ಏನಂತೀಯ?... “ನಿಂಗ್ಯಾಕೆ ಜನರಯ್ಯ, ಸುಮ್ಮಕೆ ಚಪಲ. ನಮಗೂ ನಮ್ಮವ್ವಂಗೂ ಇನ್ನು ಈ ಧರೇ ಮ್ಯಾಲೆ ರುಣತೀರೋಯ್ತು ...” {{gap}}ಹಲಗೆ ಇಂಗ ನನ್ನತ್ರ ಖೈಡಾಗಿ ಯೋಳಿದ್ದು ಮಂಗಳಾವರ ಬೈಗಿನಲ್ಲಿ. ಬದುವಾರ ಬೆಳಿಗ್ಗೆ ಎದ್ದೋನು ನ್ಯಾರವಾಗಿ ಅವರ ಅಟ್ಟಿ ತಾವಿಕೋದೆ. ಅಗ ಹಲಗ ಟಿಪನ್ ಕರಾರ ವೋರೀಕೆ ತಂದಿಟ್ಟೋನು, ಅದೇನು ಮನಸ್ಸು ಬಂತೋ, ಆತರಾತರಾಗಿ ಪುನಾ ಅಟ್ಟಿ ವಳೀಕೆ ಗುಡುಕ್ಕುನೋಗಿ ಕದ ಆಕ್ಕಂಡ, ಮಟದ ಹೈಕಳೆಲ್ಲ ಆಗ್ಗೆ ಊರಿಂದ ವೊಂಟು ಬರೋವಾಗ ದಾರೀಲೆ ಸಿಕ್ಕಿದ್ದೊ. ನಿಮ್ಮ ಜತೆ ಹಲಗ ಯಾಕೆ ಬರನಿಲ್ಲಾಂತ ಕೇಳೆ, ಅಟ್ಟಿಲಿ ವಸಿ ಕೇಮೆ ಅದೆ, ಅದ ಮುಗುಸಿ ಬತ್ತೀನಿ... ಆ ಹೈಕಳು ಯೋಳಿದ್ದಕೂ ನಾನು ಅಟ್ಟಿ ತಾವು ಕಂಡ ದುರಸ್ಕಕೂ ಚಾಟಿ ಆಯ್ತು. ಅಂಗೆ ಆತರಾಗಿ ಟಿಪನ್ ಕರಾರ ಹರೀಕಿಟ್ಟು ವಳೀಕೋದ ಹೈದನ ಚರ್ಯ ಕಂಡಮಾಲಂತೂ ನಂಗೆ ಪೂರಾ ಅನುಮನಸಾಯ್ತು. ದಡದಡನೋಗಿ ಕದ ತಟ್ಟಿದೆ. ಎಸರು ಎಡದು ಕೂಗ್ಗೆ, ವಳುದ್ರಿಂದ ಏಟೋತ್ತಾದರೂವೆ ಜವಾಬೆ ಬರವಿಲ್ಲ. ಅಂಗೇ ವಸಿವೊತ್ತು ನಿಂತಿದ್ದೋನು ಕದಕ್ಕೆ ಕಿವಿ ಕ್ವಿಟ್ಟು ನಿಂತೆ. ನಳುನ್ನಿಂದ ಗೊರ್ ಗೊರ್್ರ ಅಂತ ಸದ್ದು ಬತ್ತಿತ್ತು. ನಂಗೆ ಕಯ್ಯಕಾಲು ವದುರಕ್ಕೆ ಸುರು ಆಯ್ತು. ಇನ್ನು ಅಲ್ಲಿ ನಿಂತರೆ ನನ್ನ ಮ್ಯಾಲೆ ಬಂದಾತು ಅಂತ ಆ ಜಾಗದಿಂದ ಆ ಕ್ಷಣದಲ್ಲಿ ನಿಕಾಲಾದೆ.” ಬೆಪ್ಪಾಗಿ, ಜವರಯ್ಯ ಯೋಳ ಕೇಳ್ತಾ ನಿಂತಿದ್ದೋನು, {{gap}}* ಅಂಗಾರೆ, ಟಗರೂರ ಆ ಡಬ್ಬಿ ಎತ್ತಕ್ಕೆ ಮುಂಚೆ ಹೈದ ಸತ್ತೋಗಿತ್ತು ಅನ್ನು?” ಅಂದ ಲಕ್ಕ, {{gap}}“ಅಯ್, ಟಗರೂರ ಬರಕ್ಕೆ ಸುಮಾರು ವೊತ್ನಲ್ಲೆ ಆ ಹೈದ ಪ್ರಾಣ<noinclude></noinclude> g1o5iny4rr2iw6f908s38qhki9ecie4 ಪುಟ:ವೈಶಾಖ.pdf/೨೫೩ 104 82182 322416 306327 2026-05-25T08:49:45Z Shreesha Sharma 7840 /* Proofread */ 322416 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೩೭}} {{Left|ವೋಗಿರಬೇಕು.”}} “ಅಂಗಾರೆ, ಟಗರೂರ ಡಬ್ಬಿ ಎತ್ತಿದ್ರಿಂದ ಯೇನೂವೆ, ಆ ಹೈದ ಸಾಯನಿಲ್ಲ ಅಂದಂಗಾಯ್ತು?” ಲಕ್ಕ ತನಗೆ ತಾನೆ ಮಾತಾಡಿಕಳೊತರ ಕ್ಯಾಳಿದ್ದ. {{gap}}“ಅದು ಹ್ಯಾಗಲಿ ಅಂದೆ ಆ ಮಾನಗೆಟ್ಟ ಯಜಮಾನು, ಆ ಹೈದ ಮಣ್ಣು ಮಾಡಕ್ಕೆ ಎಂಕಿ ಕಯ್ಯಲಿ ಬರಿ ನೂರು ರೂಪಾಯಿ ಕ್ವಟ್ಟು, ಉಳುಕೆ ಒಂಬಯನೂರು ರೂಪಾಯೂವೆ ಮಾದೇಶ್ವರನ ಗುಡಿ ಲಿಪೇರಿ ಮಾಡಿಸ್ತೀವಿಂತ ತಾವು ತಾನೆ ಅಂಚಿಕಂಡ್ರಲ್ಲ... ಈ ಅನ್ಯಾಯಕೆ ಯೇನು ಯೋಳೋದಪ್ಪ...” {{gap}}“ಅದ್ಯಾವ ಹೊಸ ಇಸ್ಯ ಬುಡು. ಕಾಲದಿಂದ್ದೂ ಇಂಗೇ ನಡದು ಬಂದದೆ. ಈ ಅನ್ಯಾಯದಲ್ಲಿ ಹುಟ್ಟಿ, ಈ ಅನ್ಯಾಯದಲ್ಲೆ ಬೆಳೀತಾ ಅದೆ, ನಮ್ಮ ಪಂಚಾತಿ...” ಲಕ್ಕನ ಮಾತ್ನಲ್ಲಿ ಸಂಕ್ಷದ ಜ್ವತ್ತತೆ ರೋಸವೂ ಬೆರುತ್ತಿತ್ತು. ಆದರೆ, ಉಳಿಕೆ ಒಂಬೈನೂರ ರೂಪಾಯಿಗಳನ್ನು ಹಂಚಿಕೊಳ್ಳುವಾಗ, ತನಗೆ ಬಂದ ಪಾಲು ಕಡಿಮೆ ಆಯ್ತು ಎಂದು ಕೋಟೆ ಬುಳ್ಳಪನಿಗೆ ಕೋಪ ಬಂದಿತು. ಪರಿವಾರದ ಜಾತಿ ಎಂಕಿಯ ಮಗ ಹಲಗ, ಸುಮಾರು ಹನ್ನೆರಡು ವರ್ಷದ ಬಾಲಕನು ಆತ್ಮಹತ್ಯೆ ಮಾಡಿಕೊಂಡು ಸತ್ತಿರುವುದಾಗಿಯೂ ಊರಿನ ಇತರೆ ಯಜಮಾನರು ಗೋಪ್ಯವಾಗಿ ಆ ಹಣವನ್ನು ಮಣ್ಣು ಮಾಡಿರುವುದಾಗಿಯೂ ಹುಣಸೂರು ಪೋಲೀಸು ಠಾಣೆಗೆ ಮೂಗರ್ಜಿ ಬರೆದ. ಒಡನೆಯೇ ಒಬ್ಬ ಪೋಲೀಸು ಪೇದೆಯೊಡನೆ ಸಬ್ಇಬ್‌ಸೆಕ್ಟರ್‌ ಗೊಳಪ್ಪ ದರುಮನಳ್ಳಿಗೆ ಒಂದು ಬೆಳಿಗ್ಗೆ ಹಾಜರಾದರು. {{gap}}ಸಬ್ ಇನ್‌ಸ್ಪೆಕ್ಟರ್‌ ಗೊಳಪ್ಪನವರು ಹಟಾತ್ತನೇ ಪ್ರತ್ಯಕ್ಷವಾದದ್ದು ದರುಮನಳ್ಳಿಯ ಜನರನ್ನು ದಿಗೃಮೆಗೊಳಿಸಿತು. ಗೊಳಪ್ಪನವರು ತಾವು ಬಂದ ಕಾರಣವನ್ನು ತಿಳಿಸದ ಬಳಿಕವಂತೂ ಊರಿನ ಮುಖಂಡರ ಜಂಘಾಬಲವೇ ಉಡುಗಿಹೋದಂತಾಯಿತು. {{gap}}ಗೂಳಪ್ಪ ಹೊದೆ ಹೊದೆ ಮೀಸೆಯ 'ಕಪೀನಿ' ಆಳು. ಎತ್ತರದಲ್ಲಿ ಕುಳ್ಳು, ಆದರೂ ತೋರವಾದ ಮಯ್ಯ, ಮೆಡ್ಡಗಣ್ಣು, ಖಾಕಿ ಪೋಷಾಕಿನ ವೈಖರಿಯಲ್ಲಿ, ಸಾಮಾನ್ಯರನ್ನು ಅದರಲ್ಲೂ ಹಳ್ಳಿಗಾಡಿನ ಮುಗ್ಧ ಮಂದಿಯನ್ನು ಭೀತಿ ಗೊಳಿಸುವ ವ್ಯಕ್ತಿತ್ವವನ್ನು ಆತನಿಗೆ ದಯಪಾಲಸಿದ್ದವು. {{gap}}ಗಳ ಪ್ರನ ಆಗಮನದಿಂದ ಎಲ್ಲರಿಗಿಂತ ವಿಶೇಷವಾಗಿ ಕಸಿವಿಸಗೊಂಡವರೆಂದರೆ ಶ್ಯಾನುಭೋಗ ಸೀತಾರಾಮಯ್ಯ, ಈತ ತಮ್ಮ ತಂದೆ<noinclude></noinclude> fdx3y8le7ernn0ru2ihwt033apn81p2 ಪುಟ:ವೈಶಾಖ.pdf/೨೫೪ 104 82183 322417 306340 2026-05-25T08:50:23Z Shreesha Sharma 7840 /* Proofread */ 322417 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|೨೩೮}} {{Right|'''ವೈಶಾಖ'''}} ವೆಂಕಟಕೃಷ್ಣಯ್ಯನವರಂತೆ ತಮ್ಮ ಬದುಕಿಗೆ ಎಂದೂ ಊರಿನ ವ್ಯವಹಾರಗಳನ್ನು ಅಂಟಿಸಿಕೊಂಡವರಲ್ಲ. ತಮ್ಮ ತೋಟ, ತುಡಿಕೆ, ತಮಗೆ ರೈತರಿಂದ ಬರಬೇಕಾದ ಪೋಟಿಕೆ, ಮಸಿಕುಡಿಕೆ ಹಣ, ಜೊತೆಗೆ ರೈತಾಪಿ ಜನ ತಂದುಕೊಡುವ ಬೆಣ್ಣೆ, ಜೇನುತುಪ್ಪ, ಆಯಾ ಕಾಲದಲ್ಲಿ ದೊರೆಯುವ ಹಲಸಿಹಣ್ಣು, ಮಾವಿನಹಣ್ಣು. ಸೀಬೆಹಣ್ಣು, ಉಪ್ಪಿನಕಾಯಿ ಹಾಕಲು ಅಮಟೆಕಾಯಿ, ಬೆಟ್ಟದ ನೆಲ್ಲಿಕಾಯಿಇತ್ಯಾದಿ ಮಾಮೂಲುಗಳಲ್ಲಿ ಆಸಕ್ತಿ ವಿನಾ, ಊರಿನ ಆಗುಹೋಗುಗಳಲ್ಲಿ ಸಾಮಾನ್ಯವಾಗಿ ಅವರು ನಿರ್ಲಿಪ್ತರು. ಅಂದರೆ ಊರಿನಲ್ಲಿ ಏನೇ ಅವ್ಯವಹಾರ ನಡೆದರೂ ಉಪಾಯವಾಗಿ ಯಾವ ಏಟಿಗೂ ಸಿಕ್ಕದೆ 'ರಾಮಾ ಸ್ವಸ್ತಿ, ರಾವಣಾ ಸ್ವಸ್ತಿ' ಎಂದು ಜಾರಿಕೊಳ್ಳುವ ಸ್ವಭಾವದ ವ್ಯಕ್ತಿ.... ಈ ಊರಿನಲ್ಲಿ ನಾವು ಬ್ರಾಹ್ಮಣರು ಇರುವುದು ಕೆಲವೇ ಜನ. ಇಲ್ಲಿ ಲಿಂಗಾಯಿತರು, ಒಕ್ಕಲಿಗರು, ಕುರುಬರು, ಪರಿವಾರದವರು, ಕುಂಬಾರರು ಇತ್ಯಾದಿ ಇತರೇ ಕೋಮಿನವರದೇ ಪ್ರಾಬಲ್ಯ. ಆದ್ದರಿಂದ ತಾವು ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಿ, ಅದು ಸಾಧ್ಯವಾಗದಿದ್ದಲ್ಲಿ ಎಲ್ಲರಿಂದಲೂ ಆದಷ್ಟು ದೂರ ಇದ್ದಬಿಡುವುದು ಕ್ಷೇಮ ಎಂದು ತೀರ್ಮಾನಿಸಿದ್ದರು. ಆದರೆ ಇಂದು ಅವರು ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲಾಗದ ಸಂದರ್ಭ ಒದಗಿ ಬಂದಿತ್ತು. ಸಬ್‌ಇನ್‌ಸ್ಪೆಕ್ಟರ್‌ ಗೂಳಪ್ಪ ಒಬ್ಬ ಪೇದೆಯೊಡನೆ ಬಂದು ತಮ್ಮ ಮನೆಯ ಜಗುಲಿಯ ಮೇಲೆಯೇ ಪ್ರತಿ ಸ್ಥಾಪಿತರಾಗಿರುವರೆಂದೂ ತಮ್ಮನ್ನು ಜಾಗ್ರತೆ ಕರೆತರಲು ಹೇಳಿರುವುದೆಂದೂ ಪಟೇಲ ನಿರ್ವಾಣಯ್ಯ ತೋಟಕ್ಕೆ ಬಂದು ಸುದ್ದಿ ಮುಟ್ಟಿಸಿದಾಗ, ಸೀತಾರಾಮಯ್ಯನವರ ಶ್ಯಾನಭೋಗ ಬುದ್ದಿಗೆ ಮಂಕು ಕವಿದಂತಾಯಿತು. ಈ ಸಂದಿಗ್ಧದಿಂದ ಹೇಗೆ ಪಾರಾಗುವುದೆಂದು ತರ್ಕಿಸುತ್ತಲೆ ಬಂದರು. {{gap}}ಶ್ಯಾನುಭೋಗರು ಪಟೇಲನ ಸಂಗಡ ತಮ್ಮ ಮನೆಯ ಬಳಿ ಬಂದಾಗ, ಗೂಳಪ್ಪನಾಗಲೆ ತನ್ನ ಪೇದೆಯನ್ನು ಕಳಿಸಿ ಊರಿನ ಯಜಮಾನ್ತುರನ್ನು ಕಲೆ ಹಾಕಿ, ತನಿಖೆಗೆ ಆರಂಭಿಸಿದ್ದ. ಆಗಾಗ ಹುಷಾರು ತಪ್ಪುತ್ತಿದ್ದ ಕುಳವಾಡಿ ಕುಂದೂರಯ್ಯನಿಗೆ ಆ ದಿವಸವೂ ಆರೋಗ್ಯ ಕೆಟ್ಟು, ತನ್ನ ಪರವಾಗಿ ಲಕ್ಕನನ್ನೆ ಕಳಿಸಿದ್ದುದರಿಂದ, ಲಕ್ಕನೂ ಜಗಲಿಗೆ ಅಷ್ಟು ದೂರದಲ್ಲಿ ನಿಂತಿದ್ದ. ಶ್ಯಾನುಭೋಗರು ಬಂದವರೇ, “ಇನ್ ಸ್ಪೆಕ್ಟರ್‌ ಸಾಹೇಬರಿಗೆ ನಮಸ್ಕಾರ. ಯಾವಾಗ ದಯಾಮಾಡಿಸೋಣವಾಯ್ತು?” ಎಂದು ಕೈ ಜೋಡಿಸುತ್ತ, ದೇಶಾವರಿ ನಗು ನಕ್ಕು, “ಅಯ್ಯಯ್ಯೋ, ಇದೇನು- ಸಾಹೇಬರನ್ನ ಚಾಪೆ ಮೇಲೆ ಕೂರಿದೀರಲ್ಲ?” ಎನ್ನುತ್ತ, ಗೂಳಪ್ಪ ಬೇಡ ಬೇಡವೆಂದರೂ ಕೇಳದೆ, ಮನೆಯ ಒಳಗಿನಿಂದ<noinclude></noinclude> op5qag6ssv7j8whj8agzb5hogoips0x ಪುಟ:ವೈಶಾಖ.pdf/೨೫೫ 104 82184 322421 306352 2026-05-25T08:57:17Z Shreesha Sharma 7840 /* Proofread */ 322421 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೩೯}} ತಾವೇ ಕುರ್ಚಿಯನ್ನೆತಿ ತಂದು, “ತಾವು ಇಲ್ಲಿ ಇಲ್ಲಿ ಮುಹೂರ್ತ ಮಾಡ ಬೇಕು” ಎಂದು ವಿನೀತರಾಗಿ ಬಿಸಿದರು, ಗೂಳಪ್ಪ ಈ ಠಕ್ಕು ಉಪಚಾರಕ್ಕೆ ತಾನು ಬಲಿಬೀಳುವ ಪ್ರಧೃತಿಯಲ್ಲ ಎಂದುಕೊಳ್ಳುತ್ತ, ಹೊರಗೆ ಪ್ರಕಟವಾಗಿ ಯಾವ ಭಾವವನ್ನೂ ತೋರದೆ, ಎದ್ದು ಕುರ್ಚಿಯ ಮೇಲೆ ಠೀವಿಯಿಂದ ಕುಳಿತು, ಒಂದು ಕಾಲನ್ನೆತ್ತ ಇನ್ನೊಂದರ ಮೇಲಿಟ್ಟು ಅಲ್ಲಾಡಿಸುತ್ತ, ತನ್ನ ಕೈಕೋಲನ್ನು ತೋಡೆಯ ಮೇಲಿಟ್ಟು ಅಟ್ಟಣಿಗೆಯಂತೆ ಎರಡೂ ಹಸ್ತಗಳಿಂದ ಅದನ್ನು ಹಿಡಿದು, ಚಪಾತಿ ಒತ್ತುವಂತೆ ಹಿಂದೆ ಮುಂದೆ ಆಡಿಸುತ್ತ. {{gap}}“ಇದೇನು ಶ್ಯಾನುಭೋಗರೆ, ಊರಲ್ಲಿ ನೀವು, ಪಟೇಲರು, ಇಂಥಿಂಥ ಯಜಮಾನರು, ಎಲ್ಲರೂ ಇದ್ದು ಕೂಡ, ಇಂಥ ಅಚಾತುರ್ಯ ನಡೆಯೋಕೆ ಅವಕಾಶ ಕೊಟ್ಟಿರಿ?” ಪ್ರಶ್ನಿಸಿದ. {{gap}}- “ಅಚಾತುರ್ಯ?... ಏನು ಸ್ವಾಮಿ ತಾವು ಹೇಳಿರೋದು?- ನನಗೆ ಅರ್ಥ ಆಗ್ತಿಲ್ಲ” ಎಂದು ನಶ್ಯ ಏರಿಸುತ್ತ, ಯಜಮಾನರ ಕಡೆ ನೋಡುತ್ತ ಹೇಳಿದರು. {{gap}}“ಶ್ಯಾನುಭೋಗರೆ, ನೀವು ಹಿಂದೆ ಎಲ್ಲಾದರೂ ನಾಟಕದಲ್ಲಿ ಪಾರ್ಟುಮಾಡಿದ್ದಿರೇನ್ರಿ?” ಕೈ ಕೋಲಿನಲ್ಲಿ ತೊಡೆಯ ಮೇಲೆ ಚಪಾತಿ ಒತ್ತುತ್ತಲೆ ಕೇಳಿದ ಗೂಳಪ್ಪ. {{gap}}ಶ್ಯಾನುಭೋಗರು ಕೊಂಚ ಅಧೀರರಾದಂತೆ ಕಂಡರು. {{gap}}“ಓ ಓ ಓ... ಯಾಕೆ, ಇಲ್ಲವಲ್ಲ ಸ್ವಾಮಿ... {{gap}}” ಗೂಳಪ್ಪ ಕಣ್ಣಿನಿಂದಲೆ ಇರಿಯುತ್ತ, {{gap}}“ಈ ನಾಟಕ ಯಾವುದೂ ನನ್ನ ತಾವು ನಡೆಯಕ್ಕಿಲ್ಲ, ಶ್ಯಾನುಭೋಗರೆ. ನೇರವಾಗಿ ಮಾತಾಡಿ. ನೀವೆಲ್ಲ ಸೇರಿ ಆ ಪರಿವಾರದೋರ ಜಾತಿ ಎಂಕಿ ಅನ್ನೋಳ ಮಗ ಸುಮಾರು ಹತ್ತು ವರ್ಷದ ಹುಡುಗ ಹಲಗ ನೇಣು ಹಾಕ್ಕೊಂಡು ಸತ್ತದ್ದನ್ನ ನಮಗೆ ರಿಪೋರ್ಟ್ ಮಾಡದೆ, ಅವನ ಹೆಣಾವ ಮಣ್ಣು ಮಾಡಕ್ಕೆ ಅವಕಾಶ ಕೊಟ್ಟಿದ್ದೀರಿ. ಇದು ಸರ್ಕಾರಿ ಕಾನೂನಿನ ದೃಷ್ಠಿಲಿ ಘೋರ ಅಪರಾಧ ಅನ್ನೋ ವಿಷಯ ನಿಮಗೆ ತಿಳಿದೇ ಇದೆ...” ಎಂದು ಮಾತಿನ ಶಲಾಕೆಗಳನ್ನು ಎಸೆಯುತ್ತಿರುವ ಸಮಯದಲ್ಲಿ, ಶ್ಯಾನುಭೋಗರು {{gap}}“ಅದರಲ್ಲಿ ಮಾತ್ರ ನಾನು ಭಾಗಿಯಾಗಿಲ್ಲ, ಸ್ವಾಮಿ” ಎಂದು ಒದರಿಬಿಟ್ಟರು! ಅನಂತರ ಆ ಕ್ಷಣದಲ್ಲಿ ತಾವು ಆಡಿದ್ದು ಅವಿವೇಕವಾಯಿತು. ಎಂಬ ಅರಿವಾಗಿ, ನಾಲಿಗೆ ಕಚ್ಚಿ ಮುದುಡಿಹೋದರು.<noinclude></noinclude> exywxc0dibpmvj9zduuksp84m6kqt0l ಪುಟ:ವೈಶಾಖ.pdf/೨೫೬ 104 82185 322427 306369 2026-05-25T09:06:13Z Shreesha Sharma 7840 /* Proofread */ 322427 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|೨೪೦}} {{Right|'''ವೈಶಾಖ'''}} {{gap}}“ಅಂದರೆ ಈ ಕೂಟದಲ್ಲಿ ನೀವು ಮಾತ್ರ ಭಾಗಿಯಾಗಿಲ್ಲ. ಆದರೆ ಅದರಲ್ಲಿ ನಿಮ್ಮನ್ನು ಬಿಟ್ಟು ಈ ಪಟೇಲರು, ನಂಜೇಗೌಡರು, ಇತರೆ ಯಜಮಾನರು, ಇವರೆಲ್ಲ ಭಾಗಿಗಳು ಎಂದು ನೀವು ರುಜುವಾತುಪಡಿಸಿದ ಹಾಗಾಯ್ತು.” {{gap}}ತಾನು ಕಲಿತಿದ್ದ ಲಾ ಹೇಗೆ ಪ್ರಯೋಜನಕ್ಕೆ ಬಂತು ಎಂದು ಗೂಳಪ್ಪ ಒಳಗೊಳಗೇ ಹಿಗ್ಗಿದ್ದ. {{gap}}“ಹಾಗಲ್ಲ ಇನ್‌ಸ್ಪೆಕ್ಟರ್‌, ನಾನು ಹೇಳಿದ್ದು....ನಾನು ಏನು ಹೇಳಬೇಕು ಎಂದಿದ್ದೆ ಅಂದರೆ ಈ ಊರಿನ ಯಾವ ವ್ಯವಹಾರದಲ್ಲೂ ನಾನು ಭಾಗವಹಿಸಿಲ್ಲ... ನಾನಾಯ್ತು, ನನ್ನ ತೋಟವಾಯ್ತು. ನೀವು ಹೇಳಿರೋದು ನಮಗೆ ಗೊತ್ತೇ ಇಲ್ಲ....”- ಶ್ಯಾನುಭೋಗರ ನುಣಚಿಕೊಳ್ಳುವ ದುರ್ಬಲ ಪ್ರಯತ್ನ ಹೀಗೆ ಪ್ರಕಟವಾಗಿತ್ತು. {{gap}}“ಊರಿನಲ್ಲಿ ನಡೆಯೋ ಯಾವ ವಿಷಯವೂ ನಿಮ್ಮ ಗಮನಕ್ಕೆ ಬರದೇ ಹೋಯ್ತು ಅಂದ ಬಳಿಕ, - ಸೀತರಾಮಯ್ಯನೋರೆ, ನೀವು ನಿಮ್ಮ ಶ್ಯಾನುಬೋಗಿಕೇತನ ಊರಿನಲ್ಲಿ ಬೇರೆ ಇನಯಾರಿಗಾದರೂ ಬಿಟ್ಟು ಕೊಟ್ಟು ಸ್ವಸ್ಥವಾಗಿ ನಿಮ್ಮ ತೋಟತುಡಿಕೆ ನೋಡಿಕೋತ ಆರಾಮಾಗಿ ಇರಬಹುದಲ್ಲ?” {{gap}}ಗೋಡೆಗೆ ಮೊಳೆ ಹೊಡೆಯುವ ರೀತಿಯಲ್ಲಿ ಗೂಳಪ್ಪ ಮಾತುಗಳನ್ನೆಸೆದ. ಶ್ಯಾನುಭೋಗರು ಹೆಚ್ಚಾಗಿ, {{gap}}“ಅಯ್ಯೋ, ಕಾಲಾದಿಂದ ವಂಶಪಾರಂಪರ್ಯವಾಗಿ ನಡೆದುಬಂದದ್ದು ಈಗ ಇಷ್ಟು ಚಿಲ್ಲರೆ ವಿಷಯಕ್ಕೆಲ್ಲ ಬಿಟ್ಟು ಬಿಡೋದು ಅಂದರೆ...” ಎನ್ನುತ್ತ, ಕೈ ಕೈ ಹೊಸೆಯುತ್ತ ಹಲ್ಲುಕಿರಿದರು. {{gap}}“ಸರಿ” ಎಂದ ಗೂಳಪ್ಪ, “ವಿಷಯ ತಿಳಿದ ಹಾಗಾಯ್ತು. ಮುಂದೆ ಕಾನೂನಿನ ಪ್ರಕಾರ ಏನೇನು ಖಡ್ಡೆ ತಗೋಬೇಕೊ ಅದೆಲ್ಲ ತಗೋತೀನಿ”ನಿರ್ಧಾರವಾಗಿ ನುಡಿದ. {{gap}}ನಂಜೇಗೌಡನಿಗೆ ಇನ್ನು ಸುಮ್ಮನೆ ಕೂರುವುದು ಸಾಧ್ಯವಾಗಲಿಲ್ಲ. ಅವರು ಎದ್ದು ನಿಂತು, {{gap}}“ಈಗ ನಮ್ಮೂರಲ್ಲಿ ಯಾವಾಗದೆ ಅಂತ್ಥ, ಇನ್‌ಸ್ಪೆಕ್ಟರ್‌?... ಯಾರೋ ಹಲಾಲ್ ಕೋರು ನಿಮ್ಮೆ ಸುಳ್ಳು ಸುದ್ದಿ ಕ್ವಟ್ಟು, ಪಾಪ ನಿಮ್ಮ ಇಲ್ಲೀತಂಕ ದಣಿಸಿ, ಎಂಕಿ ಹೈದಂಗೆ ಅದೆಂತಾದ್ದೋ ಯೋಳ್ತಾರಲ್ಲ.... ನಿವೊನಿ, ಊ ನಿವೊನಿ ಜೋರಾನೊ ಯೇನೊ, ಆದಾಗಿತ್ತು. ಹೈದ ತೀರಿಕತ್ತು... ಹೆಣವ ಅಂಗೇ ಬೋ ಕಾಲ ಇಟ್ಟರೆ, ಕೊಳತು ನಮ್ಮೂರ ಬ್ಯಾರೆ ಹೈಕಳಗೂವೆ ಈ<noinclude></noinclude> 9fprj88wun3ex96blvr1m74392idaqd ಪುಟ:ವೈಶಾಖ.pdf/೨೫೭ 104 82186 322428 306385 2026-05-25T09:09:08Z Shreesha Sharma 7840 /* Proofread */ 322428 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೪೧}} ಕಾಯ್ದೆ ಅಮರಿಕಂಡಾದು ಅಂತ ಜಟಪಟನೆ ಅದ್ರ ಮಸಣಕ್ಕೆ ತಟಾಯಿಸ್ಕೊ, ವೋಟೆಯ... ಇದ್ದ ದೊಡ್ಡದು ಮಾಡಬ್ಯಾಡಿ, ನಾನು ನಮ್ಮ ಊರಿನೋರ ಪಾಗಿ ಕಯ್ಯ ಮುಗುದು ಬೇಡಿಕತ್ತೀನಿ... ಇದರಿಂದ ನಮ್ಮೂರ ಮಾನವೇ ವೋಟೋಯ್ತದೆ...” ಎಂದು ಅಂಗಲಾಚಿದ. {{gap}}“ಹಂಗಾದರೆ-ನಿಮ್ಮೂರಲ್ಲಿ ಆ ಎಂಕಿ ಹೈದ ನೇಣು ಹಾಕೊಂಡದ್ದು, ಅದೆಲ್ಲ ಸುಳ್ಳಾ?... ಇಂತಾದೆಲ್ಲ ನಡೀಲೆ ಇಲ್ಲ ಅಂತೀರ, ಗೌಡರೆ?” “ಬೇಸಕ್ಕಾಗಿ, ನಡೀರ, ಬೇಕಾರೆ ಯಾವ ದ್ಯಾವರ ಮುಂದೆ ನಿಂತು ಬೇಕಾರೂ ಪ್ರಮಾಣ ಮಾಡ್ತೀನಿ.” “ಅಷ್ಟೆಲ್ಲ ತೊಂದರೆ ಯಾಕೆ?... ನೀವು ಪ್ರಮಾಣಾನು ಮಾಡಬೇಕಾಗಿಲ್ಲ. ಬೇರೆ ಯಾವ ತೊಂದರೇನೂ ತಕ್ಕೊಬೇಕಿಲ್ಲ... ಇದ್ದ ಪತ್ತೆ ಮಾಡಕ್ಕೆ ನಾನು ಬೇರೆ ಔಷಧಾನೆ ಇಟ್ಟಿದ್ದೀನಿ.” {{gap}}ನಂಜೇಗೌಡನ ಮಾತು ನಿಂತಿತು. ಶ್ಯಾನುಭೋಗರ ಮಡದಿ ಒಳಗಿನಿಂದ ಸನ್ನೆ ಮಾಡಿದ ಮೇರೆಗೆ, ಶ್ಯಾನು ಭೋಗರು ಎದ್ದು ಹೋಗಿ, ಬೆಳ್ಳಿ ತಟ್ಟೆಯನ್ನು ಈಸಿ ತಂದರು. ಅದರಲ್ಲಿ ಒಂದು ಚಿಪ್ಪು ಬೂದಿ ಬಾಳೆಹಣ್ಣು, ಕೆಂಪು ಬೂರಾ ಸಕ್ಕರೆ ಮತ್ತು ಬೆಳ್ಳಿಲೋಟದಲ್ಲಿ ಕಾಸಿದ ಹಾಲು. {{gap}}“ಬ್ಯಾರೆ ಔಷದಿ ಇಟ್ಟಿ~ ಅಂದಲ್ಲ- ಅಂಗಂದ್ರೇನ ಸೋಮಿ?” ಗಂಗಪ್ಪ ಧೈರ್ಯ ಮಾಡಿ ಕೇಳೇ ಬಿಟ್ಟ. {{gap}}ಗೂಳಪ್ಪ ಒಂದು ಸಲ ಗಂಗಪ್ಪ ನಿರ್ಲಕ್ಷ್ಯದಿಂದ ನೋಡಿ, ಎರಡು ಬಾಳೆಹಣ್ಣು ತಿಂದು, ಹಾಲು ಕುಡಿದು ಮುಗಿಸಿ ಎದ್ದ. ಶ್ಯಾನುಭೋಗರು ಗೂಳಪ್ಪ ಬಿಟ್ಟು ಬಾಳೆಹಣ್ಣುಗಳನ್ನು ಅವನ ಜತೆಗೆ ಬಂದಿದ್ದ ಪೇದೆಗೆ ಕೊಡಲು ಮರೆಯಲಿಲ್ಲ. {{gap}}- ಜಗಲಿಯಿಂದ ಇಳಿಯುತ್ತ, ಗಂಗಪ್ಪನತ್ತ ದೃಷ್ಟಿಹಾಯಿಸಿ, ಗೂಳಪ್ಪ {{gap}}“ಬ್ಯಾರೆ” ಔಷಧಿ ಯಾವದೂಂತ ನೀವೇನಪ್ಪ ಕೇಳಿದೋರು?... ಅದು ಬಲು ಸುಲಭದ ಔಷಧ- ಆ ಹುಡುಗನ ಹೆಣಾವ ಹೂಳಿರೋ ಜಾಗದಿಂದ ಆಗೆಸಿ ತೆಗಿಸ್ತೀನಿ. ಆಮೇಲೆ ಅದ್ರ ವೈದ್ಯರ ಪರೀಕ್ಷೆಗೆ ಗುರಿ ಮಾಡ್ತೀನಿ. ಆಗ ಆ ಹುಡುಗ ನಿಮ್ಮ ಇನ್ನೊಬ್ಬ ಯಜಮಾನ್ನು ಹೇಳಿದ ಹಾಗೆ- ನ್ಯೂಮೋನಿಯಾ ಜ್ವರದಿಂದ ಸತ್ತನೊ ಅಥವ ನನಗೆ ತಿಳಿದಬಂದಿರೊ ಹಾಗೆ ನೇಣುಹಾಕ್ಕೊಂಡು ಪ್ರಾಣ ಬಿಟ್ಟನೋ ಅನ್ನೋದು ನಿಖರವಾಗಿ, ಎಳ್ಳಷ್ಟು ಅನುಮಾನಕ್ಕೂ ಆಸ್ಪದವಿಲ್ಲದೆ ಪ್ರಕಟವಾಗುತ್ತದೆ” ಎಂದು ಹೇಳಿ, ಗಂಗಪ್ಪನೂ ಸೇರಿದಂತೆ ಅಲ್ಲಿದ್ದ<noinclude></noinclude> 34hdkb8rvvswtwoedvc2urgsmy5mifu ಪುಟ:ವೈಶಾಖ.pdf/೨೫೮ 104 82187 322429 306400 2026-05-25T09:10:57Z Shreesha Sharma 7840 /* Proofread */ 322429 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|೨೪೨}} {{Right|'''ವೈಶಾಖ'''}} {{Left|ಯಜಮಾನರೆಲ್ಲರಿಗೂ ಜಾಪಾಳದ ಮಾತ್ರೆ ಕೊಟ್ಟ.}} {{gap}}ಈ ಮಾತು ಕೇಳಿ, ಅಲ್ಲಿ ನೆರೆದ ಎಲ್ಲ ಯಜಮಾನರಿಗೂ ಬಾಯಿ ಒಣಗುತ್ತ ಬಂದಿತು. ಅವರೆಲ್ಲರೂ ಒಂದು ಕಡೆ ಪ್ರತ್ಯೇಕವಾಗಿ ಸೇರಿ ಪರಸ್ಪರ ವಿಚಾರ ವಿನಿಯಮಯ ಮಾಡಿಕೊಳ್ಳುತ್ತಿದ್ದರು. {{gap}}ಲಕ್ಕನಿಗೆ ಮುಸ್ಟಾನ್ನ ಉಂಡಷ್ಟು ಸಂತೋಸ ಆಗಿತ್ತು... ಈ ಯಜಮಾನ್ನು ನಮ್ಮೂರಲ್ಲಿ 'ಮಾತುಭಾರಿ' ಮನುಸು ಅಂತ ಎಲ್ಲಾರ ಬಾಯಲ್ಲೂವೆ ಉಳ್ಳಾಡ್ತಾರೆ!ಇಂಡೋರ ಈವಯ್ಯ ಎಂತೆಂತ ಪೈಲ್ವಾನ್ ವರಸೆ ಆಕಿ ಬೆಪ್ಪುಗೂಡಿಬುಟ್ಟ!ಹೀಗೆಂದು ಆ ಇನ್‌ಸೆಕ್ಟರ್ ವಿಷಯವಾಗಿ ಲಕ್ಕನಿಗೆ ಬಹಳ ಹೆಮ್ಮೆಯೆನಿಸಿತು. ಮಂಕು ಬಡಿದವರ ಹಾಗೆ ಇನ್ನೂ ಜಗಲಿ ಮುಂದುಗಡೆಯೇ ನಿಂತಿದ್ದ ಶ್ಯಾನುಭೋಗ ಸೀತಾರಾಮ್ಯನವರನ್ನು ಕೇಳಿದ: {{gap}}“ಸೋಮಿ, ಇವರು ಯಾವ ಜಾತಿ?” {{gap}}ಶ್ಯಾನುಭೋಗರು ಪಿಸುಮಾತಿನಲ್ಲೆ ಖಾರ ತುಂಬಿ, {{gap}}“ಅಯ್ಯೋ, ನಿಮ್ಮ ಜಾತಿಗೂ ಕೀಳು ಕಣೋ-ಎಡಗೈ!”- ಎಂದರು ತಿರಸ್ಕಾರವಾಗಿ, ಅವರಿಗೆ, ಬುದ್ದಿವಂತ ಬ್ರಾಹ್ಮಣನಾದ ತಾನು ಈ ಅತ್ಯಂತ ಕೀಳು ಜಾತಿಯ ಯಃಕಶ್ಚಿತನಿಂದ ಈ ದಿನ ಊರಿನ ಪ್ರಮುಖರ ಮುಂದೆ, ಅದೂ ನಡುಬೀದಿಯಲ್ಲಿ, ಮಾತುಮಾತಿಗೂ 'ಚಿತ್” ಅದೆನಲ್ಲ ಎಂಬ ಕೊರಗು ಒಳಗೊಳಗೆ ಜ್ವಾಲಾಮುಖಿಯಾಗಿ ಹೊಗೆಯಾಡುತ್ತಿತ್ತು. {{gap}}ಲಕ್ಕನಿಗೆ ಇನ್‌ಸ್ಪೆಕ್ಟರ್‌ ಗೂಳಪ್ಪನ ಬಗ್ಗೆ ಇನ್ನೂ ತಾರೀಸು ಹೆಚ್ಚಿತು. ನಮ್ಮೊನೊಬ್ಬ ಅದೇಟು ಚೆಂದಾಗಿ ನ್ಯಾಯ ಅಡ್ಡ... ಈ ಸಾಸ್ತಪುರಾಣ ಓದ್ದ ನಮ್ಮೂರ ಗಟಾನುಗಟಿಗಳ ಅದೇಟು ಸಲೀಸಾಗಿ ಮಾತ್ನಲ್ಲಿ ಸೋಲಿಸಿದ್ದ... ಬೇಸ್, ಬೇಸ್- ಲಕ್ಕನಿಗೆ ಎದೆಯುಬ್ಬಿ ಬಂತು. ಅವರನ್ನು ಮಾತಾಡಿಸಲೇಬೇಕೆಂದು ಮನಸ್ಸಾಯಿತು. ಮೋಟಾರ್ ಸೈಕಲ್ ಹಿಡಿದು ಏರಲು ಸಿದ್ಧನಾಗಿ ನಿಂತಿದ್ದ ಗೂಳಪ್ಪನ ಮುಂದೆ ಹೋಗಿ ಕೈ ಜೋಡಿಸಿ ನಿಂತ “ಕೈಮುಗುದೆ. ಸೋಮಿಎಂದ ಅತ್ಯಂತ ವಿನಯದಿಂದ. {{gap}}“ಇವನು ಯಾರು?” - ಸಬ್‌ಇನ್‌ಸೆಕ್ಸರ್‌ ಗೂಳಪ್ಪ ನಿರ್ಭಾವದಿಂದ ಕೇಳಿದರು. ಅಷ್ಟರ ಮಾತು ಮುಗಿಸಿ ಇತರ ಯಜಮಾನರ ಜೊತೆಯಲ್ಲಿ ಅಲ್ಲಿಗೆ ಬಂದಿದ ನಂಜೇಗೌಡ, {{gap}}“ಇವನು-ಹೊಲೇರ ಲಕ್ಕ, ಇವರ ದೊಡ್ಡಪ್ಪನೆ ನಮ್ಮೂರ ಕುಳವಾಡಿ. ಅವಸ್ಥೆ ಹುಸಾರು ತೆಪ್ಪಿ, ಅವ್ರ ಬದ್ಲಾಗಿ ಇವನ್ನ ಕಳುಸನ್ನೆ” ಎಂದು ಪರಿಚಯಿಸಿದ.<noinclude></noinclude> hlzcfeb6tl6m8vxd0eeh6jp8e1glwit 322430 322429 2026-05-25T09:14:42Z Shreesha Sharma 7840 322430 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|೨೪೨}} {{Right|'''ವೈಶಾಖ'''}} ಯಜಮಾನರೆಲ್ಲರಿಗೂ ಜಾಪಾಳದ ಮಾತ್ರೆ ಕೊಟ್ಟ {{gap}}ಈ ಮಾತು ಕೇಳಿ, ಅಲ್ಲಿ ನೆರೆದ ಎಲ್ಲ ಯಜಮಾನರಿಗೂ ಬಾಯಿ ಒಣಗುತ್ತ ಬಂದಿತು. ಅವರೆಲ್ಲರೂ ಒಂದು ಕಡೆ ಪ್ರತ್ಯೇಕವಾಗಿ ಸೇರಿ ಪರಸ್ಪರ ವಿಚಾರ ವಿನಿಯಮಯ ಮಾಡಿಕೊಳ್ಳುತ್ತಿದ್ದರು. {{gap}}ಲಕ್ಕನಿಗೆ ಮುಸ್ಟಾನ್ನ ಉಂಡಷ್ಟು ಸಂತೋಸ ಆಗಿತ್ತು... ಈ ಯಜಮಾನ್ರು ನಮ್ಮೂರಲ್ಲಿ 'ಮಾತುಭಾರಿ' ಮನುಸು ಅಂತ ಎಲ್ಲಾರ ಬಾಯಲ್ಲೂವೆ ಉಳ್ಳಾಡ್ತಾರೆ!ಇಂಡೋರ ಈವಯ್ಯ ಎಂತೆಂತ ಪೈಲ್ವಾನ್ ವರಸೆ ಆಕಿ ಬೆಪ್ಪುಗೂಡಿಬುಟ್ಟ!ಹೀಗೆಂದು ಆ ಇನ್‌ಸೆಕ್ಟರ್ ವಿಷಯವಾಗಿ ಲಕ್ಕನಿಗೆ ಬಹಳ ಹೆಮ್ಮೆಯೆನಿಸಿತು. ಮಂಕು ಬಡಿದವರ ಹಾಗೆ ಇನ್ನೂ ಜಗಲಿ ಮುಂದುಗಡೆಯೇ ನಿಂತಿದ್ದ ಶ್ಯಾನುಭೋಗ ಸೀತಾರಾಮ್ಯನವರನ್ನು ಕೇಳಿದ: {{gap}}“ಸೋಮಿ, ಇವರು ಯಾವ ಜಾತಿ?” {{gap}}ಶ್ಯಾನುಭೋಗರು ಪಿಸುಮಾತಿನಲ್ಲೆ ಖಾರ ತುಂಬಿ, {{gap}}“ಅಯ್ಯೋ, ನಿಮ್ಮ ಜಾತಿಗೂ ಕೀಳು ಕಣೋ-ಎಡಗೈ!”- ಎಂದರು ತಿರಸ್ಕಾರವಾಗಿ, ಅವರಿಗೆ, ಬುದ್ದಿವಂತ ಬ್ರಾಹ್ಮಣನಾದ ತಾನು ಈ ಅತ್ಯಂತ ಕೀಳು ಜಾತಿಯ ಯಃಕಶ್ಚಿತನಿಂದ ಈ ದಿನ ಊರಿನ ಪ್ರಮುಖರ ಮುಂದೆ, ಅದೂ ನಡುಬೀದಿಯಲ್ಲಿ, ಮಾತುಮಾತಿಗೂ 'ಚಿತ್” ಅದೆನಲ್ಲ ಎಂಬ ಕೊರಗು ಒಳಗೊಳಗೆ ಜ್ವಾಲಾಮುಖಿಯಾಗಿ ಹೊಗೆಯಾಡುತ್ತಿತ್ತು. {{gap}}ಲಕ್ಕನಿಗೆ ಇನ್‌ಸ್ಪೆಕ್ಟರ್‌ ಗೂಳಪ್ಪನ ಬಗ್ಗೆ ಇನ್ನೂ ತಾರೀಪು ಹೆಚ್ಚಿತು. ನಮ್ಮೊನೊಬ್ಬ ಅದೇಟು ಚೆಂದಾಗಿ ನ್ಯಾಯ ಅಡ್ಡ... ಈ ಸಾಸ್ತ್ರಪುರಾಣ ಓದ್ದ ನಮ್ಮೂರ ಗಟಾನುಗಟಿಗಳ ಅದೇಟು ಸಲೀಸಾಗಿ ಮಾತ್ನಲ್ಲಿ ಸೋಲಿಸಿದ್ದ... ಬೇಸ್, ಬೇಸ್- ಲಕ್ಕನಿಗೆ ಎದೆಯುಬ್ಬಿ ಬಂತು. ಅವರನ್ನು ಮಾತಾಡಿಸಲೇಬೇಕೆಂದು ಮನಸ್ಸಾಯಿತು. ಮೋಟಾರ್ ಸೈಕಲ್ ಹಿಡಿದು ಏರಲು ಸಿದ್ಧನಾಗಿ ನಿಂತಿದ್ದ ಗೂಳಪ್ಪನ ಮುಂದೆ ಹೋಗಿ ಕೈ ಜೋಡಿಸಿ ನಿಂತ “ಕೈಮುಗುದೆ. ಸೋಮಿ ಎಂದ ಅತ್ಯಂತ ವಿನಯದಿಂದ. {{gap}}“ಇವನು ಯಾರು?” - ಸಬ್‌ಇನ್‌ಸೆಕ್ಸರ್‌ ಗೂಳಪ್ಪ ನಿರ್ಭಾವದಿಂದ ಕೇಳಿದರು. ಅಷ್ಟರ ಮಾತು ಮುಗಿಸಿ ಇತರ ಯಜಮಾನರ ಜೊತೆಯಲ್ಲಿ ಅಲ್ಲಿಗೆ ಬಂದಿದ ನಂಜೇಗೌಡ, {{gap}}“ಇವನು-ಹೊಲೇರ ಲಕ್ಕ, ಇವರ ದೊಡ್ಡಪ್ಪನೆ ನಮ್ಮೂರ ಕುಳವಾಡಿ. ಅವಸ್ಥೆ ಹುಸಾರು ತೆಪ್ಪಿ, ಅವ್ರ ಬದ್ಲಾಗಿ ಇವನ್ನ ಕಳುಸವ್ನೆ” ಎಂದು ಪರಿಚಯಿಸಿದ.<noinclude></noinclude> nz5b0p7e7pzb2v551m3m4zdmch3be5s ಪುಟ:Durga Puja Kannada.djvu/೫ 104 82818 322272 215298 2026-05-24T15:31:35Z Pragathi. BH 7585 /* Validated */ 322272 proofread-page text/x-wiki <noinclude><pagequality level="4" user="Pragathi. BH" /></noinclude>{{Left|ಸಂಕ್ಷಿಪ್ತ ಭೂತಶುದ್ದಿ}} {{gap}}{{gap}}ಓಂ ಭೂತಶೃಂಗಾಟಾಚ್ಛಿರಃ ಸುಷುಮ್ಮಾಪಥೇನ ಜೀವಶಿವಂ</br> {{gap}}{{gap}}ಪರಮಶಿವಪದೇ ಯೋಜಯಾಮಿ ಸ್ವಾಹಾ ||</br> {{gap}}{{gap}}ಓಂ ಯಂ ಲಿಂಗಶರೀರಂ ಶೋಷಯ ಶೋಷಯ ಸ್ವಾಹಾ ||</br> {{gap}}{{gap}}ಓಂ ರಂ ಸಂಕೋಚಶರೀರಂ ದಹ ದಹ ಸ್ವಾಹಾ ||</br> {{gap}}{{gap}}ಓಂ ಪರಮಶಿವ ಸುಷುಮ್ನಾಪಥೇನ ಮೂಲಶೃಂಗಾಟಮುಲ್ಲಸೋಲ್ಲಸ</br> {{gap}}{{gap}}ಜ್ವಲ ಜ್ವಲ ಪ್ರಜ್ವಲ ಪ್ರಜ್ವಲ ಸೋsಹಂ ಹಂಸಃ ಸ್ವಾಹಾ ||</br> {{Left|}}ವ್ಯಾಪಕನ್ಯಾಸ {{gap}}{{gap}}ಓಂ ಹ್ರೀಂ ಶ್ರೀದುರ್ಗಾಯ್ ದೇವತಾಯ್ಕೆ ನಮಃ ಓಂ | (''3 ಬಾರಿ'')</br> {{Left|ಜೀವನ್ಯಾಸ}} ''ಲೇಲಿಹಾನಮುದ್ರೆಯಿಂದ ಹೃದಯವನ್ನು ಸ್ಪರ್ಶಿಸಿ'' -</br> {{gap}}{{gap}}ಓಂ ಆಂ ಹ್ರೀಂ ಕ್ರೋಂ ಯಂ ರಂ ಲಂ ವಂ ಶಂ ಷಂ ಸಂ ಹೌಂ ಹಂಸಃ</br> {{gap}}{{gap}}ಶ್ರೀದುರ್ಗಾದೇವತಾಯಾಃ ಪ್ರಾಣಾ ಇಹ ಪ್ರಾಣಾಃ |</br> {{gap}}{{gap}}ಓಂ ಆಂ ಹ್ರೀಂ ಕ್ರೋಂ ಯಂ ರಂ ಲಂ ವಂ ಶಂ ಷಂ ಸಂ ಹೌಂ ಹಂಸಃ</br> {{gap}}{{gap}}ಶ್ರೀದುರ್ಗಾದೇವತಾಯಾಃ ಜೀವ ಇಹ ಸ್ಥಿತಃ |</br> {{gap}}{{gap}}ಓಂ ಆಂ ಹ್ರೀಂ ಕ್ರೋಂ ಯಂ ರಂ ಲಂ ವಂ ಶಂ ಷಂ ಸಂ ಹೌಂ ಹಂಸಃ</br> {{gap}}{{gap}}ಶ್ರೀದುರ್ಗಾದೇವತಾಯಾಃ ಸರ್ವೆಂದ್ರಿಯಾಣಿ |</br> {{gap}}{{gap}}ಓಂ ಆಂ ಹ್ರೀಂ ಕ್ರೋಂ ಯಂ ರಂ ಲಂ ವಂ ಶಂ ಷಂ ಸಂ ಹೌಂ ಹಂಸಃ</br> {{gap}}{{gap}}ಶ್ರೀದುರ್ಗಾದೇವತಾಯಾಃ ವಾಙ್ಮನಶ್ಚಕ್ಷುತ್ವಕ್ ಶ್ರೋತ್ರಘ್ರಾಣಪ್ರಾಣ ಇಹಾಗತ್ಯ</br> {{gap}}{{gap}}ಸುಖಂ ಚಿರಂ ತಿಷ್ಠಂತು ಸ್ವಾಹಾ |</br> {{Left|ಮಾತೃಕಾನ್ಯಾಸ}} ''ಕೈ ಮುಗಿದು''</br> - ಓಂ ಅಸ್ಯ ಮಾತೃಕಾಮಂತ್ರಸ್ಯ ಬ್ರಹ್ಮಋಷಿಃ, ಗಾಯತ್ರೀ ಛಂದಃ, ದೇವೀಮಾತೃಕಾಸರಸ್ವತೀ ದೇವತಾ,</br> ಹಲೋ ಬೀಜಾನಿ, ಸ್ವರಾಃ ಶಕ್ತಯಃ, ಅವ್ಯಕ್ತಂ ಕೀಲಕಂ, ಸರ್ವಾಭೀಷ್ಟಸಿದ್ಧಯೇ ಲಿಪಿನ್ಯಾಸೇ ವಿನಿಯೋಗಃ |</br> ''ಈಗ ತತ್ವಮುದ್ರೆಯಿಂದ'' - {{gap}}{{gap}}''ತಲೆ'' - ಓಂ ಬ್ರಹ್ಮಣೇ ಋಷಯೇ ನಮಃ |</br> {{gap}}{{gap}}''ಮುಖ'' - ಓಂ ಗಾಯತ್ರೀ ಛಂದಸೇ ನಮಃ |</br> {{gap}}{{gap}}''ಹೃದಯ'' - ಓಂ ಮಾತೃಕಾ ಸರಸ್ವತ್ಯೆ ದೇವತಾಯ್ಕೆ ನಮಃ |</br> {{gap}}{{gap}}''ಮೂಲಾಧಾರ'' -ಓಂ ಹಲ್‌ ಭ್ಯೋ ಬೀಜೇಭ್ಯೋ ನಮಃ |</br> {{center|5}}<noinclude></noinclude> ccizw4qj78a8iwnt8cno9a0fjvral4j ಪುಟ:ಕಮಲಕುಮಾರಿ.djvu/೧೩ 104 82954 322276 244993 2026-05-24T15:33:47Z Pragathi. BH 7585 /* Validated */ 322276 proofread-page text/x-wiki <noinclude><pagequality level="4" user="Pragathi. BH" />{{rh|center=ಕಾದಂಬರಿಸಂಗ್ರಹ|left=೨|right=}}</noinclude>ಕೆಲವರು ನಗುವರು; ಮತ್ತೆ ಕೆಲವರು ಅಳುವರು. ಕೆಲವರು ನಗುತ್ತ ಸಂಗಡಲೇ ಕಣ್ಣೀರನ್ನಿಳಿಸುವರು. ಕೆಲವರು ಅತ್ತತ್ತು ಕಡೆಯಲ್ಲಿ ನಕ್ಕುಬಿಡುವುದೂ ಉಂಟು. ಆದರೆ, ನಮ್ಮಲ್ಲಿ ಯಾರೇ ಆಗಲಿ, ಅಳುವನ್ನು ಮೆಚ್ಚುವುದಿಲ್ಲ; ಅನ್ಯರ ಅಳುವನ್ನೂ ಸಹಿಸಿಕೊಳ್ಳುವುದಿಲ್ಲ. ಕಿನ್ತು(ಆದರೆ) ಆವಾಗಲೂ ನಗುತ್ತಲೇ ಇರುವವರಿಗೆ ಮಾತ್ರ ಅನ್ಯರು ಅಳುತಲಿರುವುದೇಕೆಂದು ಅರಿವುದೇ ಇಲ್ಲ. {{Gap}}ಆ ವೃದ್ಧೆಯ ರೋಧನವಾದರೋ, ಸಾಮಾನ್ಯವಾದುದಲ್ಲ. ಹಿಂದೆ ಅವಳ ಸಂಸಾರವು ಸುಖಮಯವಾಗಿಯೇ ಇದ್ದುದು. ಅವಳ ಮನೆಯ ಅಂಗಳವು ಪುತ್ರ ಕನ್ಯೆಯರ ಸುಖದ ಆಟಗಳಿಂದಲೇ ಆವಾಗಲೂ ಸುಶೋಭಿತವಾಗಿಯೇ ಇದ್ದುದು. ತನ್ನ ಪತಿಯ ಮೇಲಣ ಪ್ರೇಮದಿಂದ ಅವಳ ಹೃದಯವು ಸದಾ ತುಂಬಿಕೊಂಡೇ ಇದ್ದಿತು. ಕಮಲೆಯ ಕೃಪೆಯಿಂದ, ದುಃಖವೆಂಬ ಶಬ್ದವೂ ಸಹಾ ಅವಳಿಗೆ ಗೋಚರವಾಗಿದ್ದುದಿಲ್ಲ. ಪರಂತು, ಆಕೆಯ ನಿರ್ಮಲವಾದ ಹೃದಯಾಕಾಶದಲ್ಲಿ ಚಿರದುಃಖದ ಕಾಲಮೇಘವೊಂದು ಅದೆಲ್ಲಿಂದ ಹರಿದುಬಂದುದೋ-ಅರರಿವರು?ಕಮಲೆಯ ಕೃಪೆಯೂ ಕಾಲಾಂತರದಲ್ಲಿ ಕುಂದುತ್ತೆ ಬಂದುದು. ವೃದ್ಧೆಯ ಪುತ್ರಕನ್ನೆಯರು ಅಳಿದು ಹೋದರು. ತನ್ನ ಪ್ರಾಣಾಧಿಕನಾದ ಪತಿಯನ್ನೂ ಅವಳು ಕಳೆದುಕೊಂಡಳು. ಪುತ್ರಕನ್ನೆಯರ ಮಧುರಹಾಸದಿಂದ ಉಜ್ವಲಿತವಾದ ಆಕೆಯ ಗೃಹವು, ಇಂದಿಗೆ ದರಿದ್ರತೆಯಿಂದುಂಟಾದ ತಪ್ತಶ್ವಾಸಗಳಿಂದ ಮಾತ್ರ ತುಂಬಿಕೊಂಡಿದೆ! ಅದುಕಾರಣ ಆಕೆಯು ಇಂದು ಪರ್ಣಕುಠೀರವಾಸಿನಿ; ಆಕೆಗೆ ಆರ ಸಾಹಾಯ್ಯವೂ ಇಲ್ಲ, ಸುಬಲವೂ ಇಲ್ಲ! ಮೊದಲಾದರೆ, ಅವಳ ಆಜ್ಞೆಗಳನ್ನು ಪ್ರತಿಪಾಲನೆಗಯ್ಯಲು ಎಷ್ಟೋ ದಾಸದಾಸೀ ಜನಗಳು ಪುಣ್ಯಾರ್ಥಿಯರೆಂದೆನಿಸಿಕೊಳ್ಳುತಲಿದ್ದರು! ಈಗ ಅವಳಿಗೆ ಒಂದು ಹಿಡಿಯ ತುಂಬ ಉದರಾನ್ನಕ್ಕೂ ಲಾಲಾಯಿತೆಯಾಗಿ ಬಿದ್ದುಕೊಂಡೇ ಇರಬೇಕಾಗಿದೆ. ಆಹಹ! ಇದಕ್ಕಿಂತಲೂ ಹೆಚ್ಚಿನ ದುರವಸ್ಥೆಯೂ ಉಂಟಾಗುವುದಿದೆಯೇ? ವೃದ್ಧೆಗೆ ಇನ್ನು ಕನ್ನೆಯೊಬ್ಬಳೇ ಮಾತ್ರ ಉಳಿದಿರುವಳು. ತನಗೆ ಕಣ್ಣುಗಳು ಕಾಣವು; ನಡೆಯಲು ಬರಲಿಲ್ಲ; - ಬಾಲಿಕೆಯು ಬೇಡಿ ತರುವ ಭಿಕ್ಷಾ<noinclude></noinclude> q7b5vmfz31h51c427zy2tjg0tjogfgh ಪುಟ:ಕಮಲಕುಮಾರಿ.djvu/೧೪ 104 82955 322274 244992 2026-05-24T15:32:59Z Pragathi. BH 7585 /* Validated */ 322274 proofread-page text/x-wiki <noinclude><pagequality level="4" user="Pragathi. BH" /></noinclude>ನ್ನವೇ ಅವಳಿಗೆ ಅದೊಂದೇ ಜೀವನೋಪಾಯ, ಇನ್ನೂ ಕಷ್ಟಗಳು ಒದಹಿ ಬರುವುವೋ ಏನೋ? {{gap}}ಆದರೆ ತನಗೊಂದು ಪುತ್ರಿ ರತ್ನವು ಇನ್ನೂ ಇದೆಯೆಂಬುದೇ ಅವಳ ಹೃದಯಕ್ಕೆ ಯಥೇಷ್ಟವಾದುದಾಯ್ತು ಈಶ್ವರನಿಂದ ತಾನು ಈ ವಿಧದಲ್ಲಿ ಅನುಗ್ರಹೀತೆಯಾಗಿಹೆನೆಂಬುದೇ ಅವಳಿಗೆ ಅನಂದಕರವಾದುದು. ಕಿನ್ತು ಆ ಬಾಲಿಕೆಯು ಇಂತಹ ದಾರುಣವಾದ ಬಿಸಿಲಿನಲ್ಲಿ ಅವಕಡೆಯಲ್ಲಿ ಸುತ್ತುತಲಿರುವಳೋ-ಎಲ್ಲಿ ಭಿಕ್ಷೆಯನ್ನೆತ್ತುವಳೋ ಅದು ಆರಿಗೆ ಗೊತ್ತಿದೆ ಅಥವಾ ಅವಳು ಎಲ್ಲಿ ಮೂರ್ಛೆಗೊಂಡಿರುವಳೋ ಪಥದಲ್ಲಿ ಬಿದ್ದಿರುತ್ತೆ ಪ್ರಾಣವನ್ನು ಕಳೆದುಕೊಂಡು ಇರುವಳೋ? ಚಿಃ! ಇದೆಂತಹ ದುಶ್ಚಿಂತೆ! ವೃದ್ಧೆಯ ಎರಡೂ ಕಣ್ಗಳಿಂದ ದರದರನೆ ಅಶ್ರುಪಾತವುಂಟಾಗಲಾರಂಭಿಸಿತು. {{gap}}ಕ್ರಮೇಣ ಅವೇ ಕಣ್ಣುಗಳು ಉಜ್ವಲತೆಯನಾಂತುವು ಅದೇಕೆ? ದ್ವಾದಶವರ್ಷೀಯೆಯಾದೊಬ್ಬ ಬಾಲಕಿಯು ಅಷ್ಟರಲ್ಲಿ ಆ ದ್ವಾರದ ಬಳಿ ಉಪಸ್ಥಿತೆಯಾದಳು. ಆಗಲಾ ಅಂಧಕಾರದ ಕುಟೀರದಲ್ಲಿ ಆಕಸ್ಮಿಕವಾಗಿ ಜ್ಯೋತಿರ್ಮಯಿಯಾದ ಸೌದಾಮಿನಿಯು ವಿಕಾಸಗೊಂಡಂತಾದುದು ! {{gap}}ಅಹದು ಇವಳೇ ಆ ಬಾಲಿಕೆ ! ಚಿಂದಿಚಿಂದಿಯಾದ ಬಟ್ಟೆ ಬರೆಗಳು; ಅಂಗಾಂಗಳಲ್ಲೆಲ್ಲ ದೂಳು ; ತೀಕ್ಷ್ಣವಾದ ಕಿರಣಗಳಿಂದ ಕೆಂಪೇರಿದ ಮುಖಮಂಡಲ; ಲಲಾಟದಮೇಲೆ ಬಿಂದ ಬಿಂದುವಾಗಿ ಹೊಂದಿರುವ ಸ್ವೇದಮಾಲೆ ವಿಶುಷ್ಕವಾದ ವದನ,- ಇಂತಹಾ ಹೀನಾವಸ್ಥೆಯಲ್ಲೂ ಅವಳ ಸೌಂದರ್ಯವು ಮಾತ್ರ ಒಂದೇ ಒಂದು ಬಿಂದುವಿನ ಮಟ್ಟಿಗೆ ಕುಂದಿದುದಿಲ್ಲ. ಅದೇ ದಿರ್ಫುನಯನಳು: ವಕ್ರವಾದ ಸೂಕ್ಷ್ಮ ಭ್ರೂಯುಗಲ; ಚಂಪಕಾಕಲಿಕೆಯಂತಹ ನಾಸಿಕ; ಫುಟನಾಭಂಗಿಯನುಳ್ಳ ಲಲಾಟ ; ಸ್ಫುರಿತಮನೋಮುಗ್ಧಕರವಾದ ಗಂಡಸ್ಥಲ ! ಅಹ ! ಸೃಷ್ಟಿಕರ್ತನು ಆಪಾರ ಅಧ್ಯವಸಾಯದಿಂದ ತನ್ನ ಶಿಲ್ಪನೈಪುಣ್ಯವನ್ನು ಇವಳಲ್ಲಿ ಪ್ರಕಾಶಗೊಳಿಸಿರುವನು, ಆದರೆ ಈ ಸ್ವರ್ಣಕಮಲವು ಇಂತು ದೂಳಿನಲ್ಲಿ ಬಿದ್ದುಕೊಂಡಿರುವುದದೇತಕ್ಕೂ? ಅಭಗಿನಿಯಾದಿವಳಿಗೆ ಅಂತಹ ಸೌಂದರ್ಯವೇಕೆಯೊ? {{gap}}ವೃದ್ಧೆಯು ಬಾಲೆಯನ್ನು ಕಂಡೊಡನೆಯೆ-'ಕಮಲೆ, ಬಂದೆಯಮ್ಮಾ?!” ಎಂದು ಉಲ್ಲಾಸಭರದಿಂದ ಅಂದಳು ಅಹುದು; ಈ ಬಾಲಿಕೆ<noinclude></noinclude> 8ltn31ulo3a84z271k14n2w60nhjmg9 ಪುಟ:ಕಮಲಕುಮಾರಿ.djvu/೧೫ 104 82956 322273 245001 2026-05-24T15:32:13Z Pragathi. BH 7585 /* Validated */ 322273 proofread-page text/x-wiki <noinclude><pagequality level="4" user="Pragathi. BH" /></noinclude>ಯ ಹೆಸರೇ ಕಮಲೆ,-ಕಮಲ ಕುಮಾರಿ. ಅನಂತರ ಮಗಳನ್ನು ಚುಂಬಿಸಿ ಅವಳ ತಲೆಗೂದಲ್ಗಳನ್ನು ತನ್ನ ಅಂಗೈಯಿಂದ ಸವರಿ-“ಅಮ್ಮ ನಿನ್ನ ಯಾತನೆಗಳನ್ನು ನಾನಿನ್ನೆಷ್ಟು ಕಾಲ ಕಾಣಬೇಕಾಗಿರುವುದೋ!" ಎಂದು ನಿಟ್ಟುಸಿರನ್ನಿಟ್ಟಳು. {{gap}}ಕಮಲೆ:- ಯಾತನೆ! ಅದಾವುದು ? ನನಗೆ ಅಂತಹುದಾವುದೂ ಬೋಧೆಯಾಗುವುದಿಲ್ಲ. {{gap}}ವೃದ್ಧೆಯು ಕಣ್ಣೀರನ್ನೊರೆಸಿಕೊಂಡಳು ಮತ್ತು-"ನೀನು ಇಂತು ಭಿಕ್ಷೆಯನ್ನೆತ್ತಿ ಉದರಭರಣವನ್ನು ಮಾಡಿಕೊಳ್ಳಬೇಕಾಗಿ ಬರುವುದೆಂಬುದನ್ನು ನಾನು ಸ್ವಪ್ನೇಪಿ ತಿಳಿದಿರಲಿಲ್ಲ!" ಎಂದಳು. ಒಡನೆಯೆ ಪುನಃ ಅತ್ತುಬಿಟ್ಟಳು. {{gap}}ಕಮಲೆ-ಅಳುವುದೇನಮ್ಮ? ನಿನ್ನ ಕಣ್ಣುಗಳಿಂದ ನೀರಿಳಿವುದೆಂದರೆ ನನ್ನ ಹೃದಯದಲ್ಲುಂಟಾಗುವ ಕಳವಳವ್ಯಥೆಯು, ಮತ್ತಾವ ಪರಿಯಿಂದಲೂ ನನ್ನಲ್ಲುಂಟಾಗುವುದಿಲ್ಲ, ಅಳಬಾರದಮ್ಮ! {{gap}}ವೃದ್ಧೆ:-ಇಲ್ಲ ; ಅಳುವುದಿಲ್ಲ {{gap}}ಕಮಲೆ:-ನೀನು ಇನ್ನೂ ಆಹಾರವನ್ನುಂಡುದಿಲ್ಲವೇ ? {{gap}}ವೃದ್ಧೆ:-ನಿನ್ನೊಡನೆಯೆ ಅಲ್ಲದೆ, ನಾನು ಉಣ್ಣಲಾಪನೆ ? {{gap}}ಕಮಲೆ:-ಚಿಃ ! ನಾನು ನಡೆದ ಬರುತ್ತ ಏನನ್ನಾದರೂ ತಿಂದಲ್ಲದೆ ಇತ್ತ ಬರುವುದಿಲ್ಲ. {{gap}}ವೃದ್ಧೆ:-ಇದೂ ಅಹುದೆ? {{gap}}ಕಮಲೆ:-ಅಹುದು ಆದುದರಿಂದ ನೀನು ಅನುನಿತ್ಯವೂ ನನಗೆ ಮೊದಲಾಗಿಯೆ ಅನ್ನವನ್ನುಂಡರಾಗದೆ? {{gap}}ವೃದ್ಧೆ:-ಇಂದಿಗೆ ಇರಲಿ ನೀನು ಮಿಂದು ಬಾ ಕೂಡೆ ನಾವಿಬ್ಬರೂ ಉಣ್ಣುವ. {{gap}}ಕಮಲೆಯು ಇದಕ್ಕೆ ಮರುಮಾತನಾಡಲಾರದೆ ಹೋದಳು. ಅವಳು ಬೆವತುಹೋದಳು. ಅವಳ ತುಟಿಗಳೊಣಗಿದವು. {{gap}}ವೃದ್ಧೆ:-ಇದೇಕ ಸುಮ್ಮನಾದೆ ? ಇಂದು ಭಿಕ್ಷೆಯು ದೊರೆತುದಿಲ್ಲವೆ? {{gap}}ಕಮಲೆ:- ಒಂದು ಹಿಡಿಯತುಂಬ ಅಕ್ಕಿಕಾಳು ದೊರಕಿದೆಯಷ್ಟೆ !<noinclude></noinclude> ar0gbye8rcotiwf7cbl3gna53jortr5 ಪುಟ:ಕಮಲಕುಮಾರಿ.djvu/೧೬ 104 82957 322275 245005 2026-05-24T15:33:23Z Pragathi. BH 7585 /* Validated */ 322275 proofread-page text/x-wiki <noinclude><pagequality level="4" user="Pragathi. BH" />{{rh|center=ಕಮಲಕುಮಾರಿ|left=|right=೫}}</noinclude> {{gap}}ವೃದ್ಧೆಯು ಅಳಲು ತೊಡಗಿದಳು,-“ನಿನ್ನ ಹಣೆಯಲ್ಲಿ ಇಷ್ಟು ಬರೆದಿದ್ದಿತೆ? {{gap}}ಕಮಲೆ! ನೀನಾದರೋ ನನ್ನ ಎಳೆಕೂಸು ನೀನು ಬೇಡಿ ಬೇಡಿ ತಂದುದನ್ನು ನಿನ್ನನ್ನೇ ಪಾಲಿಸಬೇಕಾಗಿದ್ದ ನಾನು ಉಣಬೇಕಾಗಿ ಬಂದಿತೆ" ಎಂದುಕೊಂಡಳು. {{gap}}ಕಮಲೆ; -ಅಷ್ಟು ನನಗೆ ಸಾಧ್ಯವಾದುದೆಲ್ಲಿ? ನಡೆದು ನಡೆದು ನನ್ನ ಕದಗಳು ಗಾಯವೊಡೆದಿವೆ. ಆದರೂ ಹೊಟ್ಟೆಯ ತುಂಬ ಅನ್ನಕ್ಕೂ ಗತಿದೋರದಾದುದು. {{gap}}ನಿನ್ನ ಈ ಎರಡೇ ಎಲವುಗಳು ಸರಿಯಾಗಿ ಉಂಡಿರದೆ, ಇನ್ನಷ್ಟು ದಿನ ಬದುಕಿ ಕೊಂಡಿರಲಾಪುವು. {{gap}}ವೃದ್ಧೆ-ಅಷ್ಟನ್ನವು ನನಗೆ ಹೆಚ್ಚೇ ಸರಿ, ನಾನೇನು ಬಲಿಯನ್ನು ತಿಂಬಾಕೆಯೆ? {{gap}}ಕಮಲೆ-ನಾನಾದರೆ ಪುನಃ ಭಿಕ್ಷೆಯನ್ನೆತ್ತಿಕೊಂಡು, ಮತ್ತೆ ಉಣ್ಣುವೆನು. {{gap}}ವೃದ್ಧೆ-ಈಗತಾನೆ ಆ ಕಾಳುಗಳನ್ನು ಬೇಯಿಸಿ, ಅಡುಗೆಮಾಡುವೆನು, ನೀನೊಮ್ಮೆ ಬಾಯ್ತುಂಬ ಉಂಡು ಆ ಮೇಲೆ ಮರುಳಿ ಭಿಕ್ಷೆಗೆಂದು ತೆರಳ ಬಹುದು, {{gap}}ಕಮೆಲೆ-ಅದಾಗದು {{gap}}ವೃದ್ಧೆ-ಹಾಗಿದ್ದರೆ, ನಾವಿಬ್ಬರೂ ಇಷ್ಟನ್ನ ಊಣ್ಣುವ. {{gap}}ಈ ಸಂಭಾಷಣೆಯು ಇಲ್ಲಿಗೆ ಮುಗಿದ ಮೇಲೆ, ಆ ಕೆಲವೇ ಕಾಳುಗಳನ್ನು ಬೇಯಿಸಿದುದಾಯ್ತು. ಕಮಲೆಯು ಸ್ನಾನವನ್ನು ಮುಗಿಸಿಕೊಂಡಳು. ಆಕೆಗಿರುವುದು ಆದೊಂದೇ ಭಿನ್ನವಸ್ತ್ರ ; ಅದನ್ನೇ ಬಿಸಿಲಿನಲ್ಲಿಯೊಣಗಿಸಿಕೊಂಡು, ಮರಳಿ ತಾಯಿಯಿದ್ದೆಡೆಗೆ ಬಂದಳು. {{gap}}ಕಮಲೆಯ ಮನಸ್ತುಷ್ಟಿಗೆಂದು ಮಾತ್ರ ವೃದ್ಧೆಯು ಊಟಕ್ಕೆ ಕುಳಿತುಕೊಂಡಿದುದಲ್ಲದೆ-ಆಹಾರವು ಅವಳ ಗಂಟಲನ್ನು ದಾಟಿದುದಿಲ್ಲ. ತಾನೇಕೆ ಮಾತೆಯ ಜತೆಯಲ್ಲಿ ಊಟಕ್ಕೆ ಕುಳಿತು ಕೊಂಡನೆಂದು ಕಮಲೆಯು ವ್ಯಥೆಪಟ್ಟಳು, ಹೇಗೆಯೋ ಭೋಜನವು ಮುಗಿದಿತು.<noinclude></noinclude> 38zc60pbf93vkjlvhzj01ybw3mw3icb ಪುಟ:ಕಮ್ಯೂನಿಸಂ.djvu/೧೭ 104 86244 322159 307244 2026-05-24T13:56:24Z Pragathi. BH 7585 /* Validated */ 322159 proofread-page text/x-wiki <noinclude><pagequality level="4" user="Pragathi. BH" />{{rh|center=ಸಮಾಜ ವಾದದ ಜನನ |left=|right=೯}}</noinclude>ನಿಸಂ" ರಾಜ್ಯದ ಕ್ಷೇಮಕ್ಕೂ ಸ್ವಾಮ್ಯಕ್ಕೂ ನಿಕಟಸಂಬಂಧವಿದೆಯೆಂದು ತೋರಿಸುವ ಶಬ್ದವಾಗಿ ಉಳಿದಿದೆ.<sup>1</sup> {{gap}}ಪ್ಲೇಟೋ ಪ್ರಾಚೀನಕಾಲದ ಸಮಾಜಕ್ಕೆ ಸೇರಿದವನು. ಈತನ ನಂತರ ಸಮಾಜವ್ಯವಸ್ಥೆಯ ಬಗ್ಗೆ ಪ್ರತಿಭಟನೆಯನ್ನೂ ಟೀಕೆಯನ್ನೂ ಸೂಚಿಸುವ ಬರೆಹಗಳು ಹೇರಳವಾಗಿ ಹೊರಬಿದ್ದಿವೆ. ಆದರೆ ಇವುಗಳ ದೃಷ್ಟಿಕೋನ ವಿರಕ್ತಿಯನ್ನು ಬೋಧಿಸುವ, ಪ್ರಕೃತಿಗೆ ಅನುಗುಣವಾಗಿ ಬಾಳು ನಡೆಸು ಎಂದು ಹೇಳುವ ದೈವನಿಯಾಮಕ್ಕೆ ಕೈತೋರಿಸುವ, ನಿಸ್ಸಾಹಯಕತೆಯನ್ನು ಪ್ರತಿಬಿಂಬಿಸುವ, ಇಹಲೋಕವನ್ನು ಮಾಯೆ, ಮಿಥ್ಯ, ಇಹಲೋಕದ ವಸ್ತುಗಳಿಗೆ ಅಂಟಿಕೊಂಡಷ್ಟೂ ಮುಕ್ತಿ ಅಸಾಧ್ಯವೆಂದು ತಿಳಿಸುವ ರೀತಿಯದಾಗಿದೆ. ಇಂತಹ ಬರಹಗಾರರು ಪೌರ್ವಾತ್ಯರಲ್ಲಿಯೂ ಪಾಶ್ಚಿಮಾತ್ಯರಲ್ಲಿಯೂ ಕಂಡು ಬರುತ್ತಾರೆ. ಪೌರ್ವಾತ್ಯರನ್ನು ತೆಗೆದುಕೊಂಡರೆ ಭಾರತದಲ್ಲಿ ಪ್ರಥಮವಾಗಿ ಮಹಾವೀರ, ಬುದ್ಧ ಇವರು ಬರುತ್ತಾರೆ. ಚೀಣದಲ್ಲಿ ಕನ್ಪ್ಯೂಷಿಯಸ್‌, ಲೋಟ್ಸೇ ಮುಂತಾದವರು ಬರುತ್ತಾರೆ. ಇವರಲ್ಲದೆ ಕಾಲ ಕ್ರಮೇಣ ಭಾರತದಲ್ಲಿ ಸಾಧುಸಂತರಾದ ರಾಮದಾಸ್,{{nop}} --------------- <small>(1) ಪ್ಲೇಟೋ ತನ್ನ 'ಕಮ್ಯೂನಿಸಂ' ಅನ್ನು ಆಳುವ ವರ್ಗಕ್ಕೆ ಮಾತ್ರ ಅನ್ವಯಿಸಿ, ಆಳಲ್ಪಟ್ಟ ವರ್ಗಕ್ಕೆ ಅನ್ವಯಿಸದಿರುವುದರಿಂದ ಆಳಲ್ಪಡುವ ವರ್ಗದ ಆರ್ಥಿಕ ಜೀವನವನ್ನು ಅಂಗೀಕರಿಸುತ್ತಾನೆ. ಅಂದು ಆಳಲ್ಪಟ್ಟ ವರ್ಗದ ಆರ್ಥಿಕ ಜೀವನ ಗುಲಾಮರ ದುಡಿಮೆಯನ್ನವಲಂಬಿಸಿದ್ದುದರಿಂದ ಪ್ಲೇಟೋ ಪರೋಕ್ಷವಾಗಿ ಗುಲಾಮಗಿರಿಯನ್ನು ಸಮರ್ಥಿಸಿದ ಹಾಗೆಯೇ ಆಗುತ್ತದೆ. {{gap}}ಪ್ಲೇಟೋವಿನ 'ಕಮ್ಯೂನಿಸಂ' ಅನ್ನು ಅತಿ ಸುಲಭವಾಗಿ ವಿವರಿಸುವುದಾದರೆ ಅದಕ್ಕೆ ಹತ್ತಿರದ ಹೋಲಿಕೆ ಭಾರತದಲ್ಲಿ ಸಿಗುತ್ತದೆ. ಸಾಧುಸಂತರ ಆಶ್ರಮವಾಸಿಗರ ಜೀವನವನ್ನು ನೋಡಿದ್ದೇವೆ. ಇವರು ಯಾವ ಸ್ವಾಮ್ಯವನ್ನೂ ಬಯಸುವುದಿಲ್ಲ ಅವರಿವರು ಕೊಟ್ಟ ಭಿಕ್ಷೆ ದಾನಗಳಿಂದ ಜೀವನ ಸಾಗಿಸುತ್ತಾರೆ, ತತ್ತ್ವಾನ್ವೇಷಣೆಯೇ, ಸಾಮಾನ್ಯ ಜನರಿಗೆ ಅದರ ಬೋಧನೆಯೇ ಇವರ ಗುರಿ. ಆದರೆ ಸಾಮಾನ್ಯ ಜನರು ನಿತ್ಯಕರ್ಮಗಳಲ್ಲಿ ತೊಡಗಿರಬೇಕು, ಆಶ್ರಮವಾಸಿಗಳಾಗಬೇಕಾಗಿಲ್ಲ, ಸ್ವಾಮ್ಯವನ್ನು ತ್ಯಜಿಸಬೇಕಾಗಿಯೂ ಇಲ್ಲ. {{gap}}ಮಾರ್ಕ್- ಏಂಗೆಲ್ಸ್ ರಿಗೆ ಮುನ್ನ 'ಕಮ್ಯೂನಿಸಂ' ಎಂಬ ಶಬ್ದ ಪ್ರಯೋಗದಲ್ಲಿತ್ತೇ ವಿನಾ ಮಾರ್ಕ್ಸ್- ಏಂಗೆಲ್ಸ್‌ರ ಕಮ್ಯೂನಿಸಂ ವಾದಕ್ಕೂ ಪ್ಲೇಟೋವಿನ ವಾದಕ್ಕೂ ಯಾವ ಸಂಬಂಧವಾಗಲೀ ಹೋಲಿಕೆಯಾಗಲೀ ಇಲ್ಲ.</small><noinclude></noinclude> 1f3z7jofu2dv8sao9k7j7ecgk3qwna3 ಪುಟ:ಕಮ್ಯೂನಿಸಂ.djvu/೧೮ 104 86245 322160 307260 2026-05-24T13:56:40Z Pragathi. BH 7585 /* Validated */ 322160 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿಕ ಸಮಾಜ ವಾದ|left=೧೦ |right=}}</noinclude>ತುಳಸೀದಾಸ್, ಚೈತನ್ಯ, ಪುರಂದರದಾಸ್, ಮುಂತಾದವರು ಬರುತ್ತಾರೆ. ಪಾಶ್ಚಿಮಾತ್ಯ ದೇಶಗಳನ್ನು ತೆಗೆದುಕೊಂಡರೆ ಪ್ಲೇಟೋವಿನ ನಂತರ ಸ್ಟೋಯಿಕ್ (Stoics) ಗಳೆಂಬ ವಿರಕ್ತರೂ, ತರುವಾಯ ಏಸುಕ್ರಿಸ್ತ, ಮಹಮದ್ ಪೈಗಂಬರರು ಬರುತ್ತಾರೆ. ಇವರನಂತರ ಅಸಂಖ್ಯಾತ ಸಾಧು ಸಂತರು ಮೇಲೆ ಹೇಳಿದ ಗುರುಗಳ ಉಪದೇಶವನ್ನು ಪುನಃ ಪುನಃ ಹೇಳಿದ್ದಾರೆ. {{gap}}ಸಾಧುಸಂತರು ಸಮಾಜದ ಆಗುಹೋಗುಗಳನ್ನು ಕಣ್ಣಾರನೋಡಿ ಮನದಲ್ಲಿ ಮರುಗಿದವರು. ಒಂದು ಕಡೆ ಕಂಡದ್ದು ಅಟ್ಟಹಾಸ, ವೈಭವ, ವಿಲಾಸ, ಇನ್ನೊಂದು ಕಡೆ ಯಾತನೆ, ದಾರಿದ್ರ್ಯ, ಕ್ಷುಬ್ಧ ಜೀವನ. ಜೀವನ ನಡೆಸುವುದಕ್ಕೋಸ್ಕರ ಮಾನವರು ಮಾನವರ ಮೇಲೆ ಯುದ್ಧ, ಮೋಸ, ಕಪಟ, ಕುಹಕಗಳಲ್ಲಿ ನಿರತರಾಗಿರುವುದನ್ನು ಕಂಡರು. ಸ್ವಾಮ್ಯ ವರ್ಗ ತನ್ನ ಸ್ವಾರ್ಥದ ಕೂಪದಲ್ಲಿ ಮುಳುಗಿ ದಯೆ, ಕರುಣೆ, ಅನ್ಯಪ್ರಾಣಿ ಚಿಂತನೆ ಸಹಾಯ, ಸಹಕಾರ ಇವುಗಳನ್ನು ತೊರೆದಿರುವುದನ್ನು ಕಂಡರು. ಮಾನವ ವ್ಯಕ್ತಿಗಳು ಇದೇ ರೂಪದಲ್ಲಿ ಬಹುಕಾಲವಿರುವುದಾದರೆ ಮಾನವತ್ವವೇ ಹೋಗುವುದಾಗಿ ಬಗೆದು ಇವುಗಳೆಲ್ಲಕ್ಕೂ ಸ್ವಾರ್ಥ ಮತ್ತು ದುರಾಸೆಯೇ ಕಾರಣವೆಂದು ತಿಳಿಸಿದರು. ವೈರಾಗ್ಯ, ವಿರಕ್ತ ಜೀವನ, ಇಂದ್ರಿಯ ನಿಗ್ರಹ ಇವುಗಳಿಂದ ಮುಕ್ತಿ ಸಿಕ್ಕುವುದೆಂದು ಬೋಧಿಸಿದರು. ವಸ್ತುಗಳ ಬಂಧನವೇ ಅವನತಿಗೆ ಕಾರಣವೆಂದು ಹೇಳಿ, ವಸ್ತು ನಿಗ್ರಹ ಮಾಡಬೇಕೆಂದರು. ಇಹದ ಬಂಧನ ದೇವರ ಕೃಪೆಯನ್ನು ದೂರಮಾಡುವುದಾಗಿ ತಿಳಿಸಿದರು. ದೇವರಲ್ಲಿ ಮರೆಹೋಗುವುದಾದರೆ ಬಂದ ಕಷ್ಟನಷ್ಟಗಳಿಗೆ ಪರಿಹಾರಸಿಗುವುದೆಂದು ತಿಳಿಸಿದರು. {{gap}}ಪ್ರಾರಂಭದಲ್ಲಿ ಸಾಧು ಸಂತರ ಹಿತವಚನಗಳು ಅನೇಕರನ್ನು ಆಕರ್ಷಿಸಿದವು. ಶಿಷ್ಯ ಮಂಡಳಿಗಳು ಹುಟ್ಟಿದವು ಮತ್ತು ಸಾಧು ಸಂತರ ಹೆಸರಿನಲ್ಲಿ ಪಂಥಗಳು ಹುಟ್ಟಿದವು. ಭಾರತದಲ್ಲಿ ಇವು ದಾಸಪಂಥಗಳೆಂದೂ, ಶಿವಶರಣರ ಪಂಥಗಳೆಂದೂ ಹೆಸರು ಪಡೆದಿವೆ. ಎಷ್ಟೇ ಉಪದೇಶ ನಡೆದರೂ ಸಮಾಜದ ಸ್ಥಿತಿಗತಿಗಳು ಪೂರ್ವದಲ್ಲಿದ್ದಂತೆಯೇ ಮುಂದುವರಿದವು. ನೊಂದ ಬೇಸತ್ತ ಜನರು ದಿಕ್ಕು ಕಾಣದೆ ಮತ್ತಷ್ಟು ವಿಧಿವಿಲಾಸದಕಡೆ ಕೈತೋರಿಸು ವಂತಾಯಿತು, ಹಿತವಚನಗಳಿಂದ ಸಮಾಜ ಅಲುಗಲಿಲ್ಲ; ವಚನಗಳು ಶುಷ್ಕ{{nop}}<noinclude></noinclude> pag0npz3e0oa3t9ol8trza58vk7n1bp ಪುಟ:ಕಮ್ಯೂನಿಸಂ.djvu/೯ 104 88768 322217 210931 2026-05-24T14:51:57Z Pragathi. BH 7585 /* Validated */ 322217 proofread-page text/x-wiki <noinclude><pagequality level="4" user="Pragathi. BH" /></noinclude>{{center|<big><big>ಸಮಾಜ ವಾದದ ಜನನ</big></big>}} {{center|ಅಧ್ಯಾಯ-1. }} {{gap}}ಮಾನವ ಸಮಾಜ ಜನಿಸಿದಾರಂಭದಿಂದ ಎಷ್ಟೇ ಕಷ್ಟಪರಂಪರೆಗಳು </br> ಬಂದರೂ ತಾನು ಬದುಕುವುದೇ ಮಾನವನ ಪ್ರಥಮ ಪ್ರಯತ್ನ ವಾಗಿದೆ. ಹಾಗೆ ಬಾಳಿ ಬದುಕಲು ಯತ್ನಿಸಿದ ಮಾನವನನ್ನು ಎರಡು ವಿಧವಾದ ಪ್ರತಿಬಂಧಕ ಬಾಧಿಸಿವೆ. ಒಂದು ಭೌತಿಕ ಮತ್ತೊಂದು ಸಾಮಾಜಿಕ, ಭೌತಿಕವಾಗಿ ಪ್ರಕೃತಿ ತಂದೊಡ್ಡಿದ ತೊಡರುಗಳನ್ನು ಎದುರಿಸಿ ನಾಗರಿಕತೆಯನ್ನು ಸ್ಥಾಪಿಸಿದ ಮಹತ್ಕಾರ್ಯದ ಗೌರವ ಮಾನವನಿಗೆ ಸಲ್ಲತಕ್ಕದ್ದಾಗಿದೆ ; ಮಾನವವರ್ಗವನ್ನು ಮೃಗ ವರ್ಗದಿಂದ ಬೇರ್ಪಡಿಸುವ ವೈಶಿಷ್ಟ್ಯವೂ ಇದೇ ಆಗಿದೆ. ಮಾನವ ತನ್ನ ಬುದ್ದಿ ವಿಶೇಷದಿಂದ ಪ್ರಕೃತಿಯ ಚಲನವಲನಗಳ ಮೇಲೆ ಹತೋಟ ಯನ್ನು ಹೊಂದಿದ್ದಾನೆ. ಇದೇ ವಿಜ್ಞಾನದ ಸಾಧನೆ. ವಿಜ್ಞಾನವನ್ನು ಬೆಳೆಸುವುದರ ಮೂಲಕ ಮಾನವನು ಪ್ರಾಕೃತಿಕ ಪ್ರತಿಬಂಧಕಗಳನ್ನು ಪರಿ ಹರಿಸಿಕೊಂಡಿದ್ದಾನೆ ; ಪರಿಹರಿಸುತ್ತಿದ್ದಾನೆ ; ಮತ್ತು ಉಳಿದಿರುವ ಸಮಸ್ಯೆ ಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದಾನೆ.</br> {{gap}}ಪ್ರಕೃತಿಯಿಂದ ಉದ್ಭವವಾದ ಮಾನವರು ತಮ್ಮ ಬದುಕನ್ನು ಸಾಗಿ </br> ಸಲು ಸಮಾಜ ಜೀವಿಗಳಾದರು. ಆದರೆ ಪ್ರಕೃತಿಯಮೇಲೆ ಹೋರಾಡಿ</br> ಸಾಧಿಸಿದಷ್ಟು ವಿಜಯವನ್ನು ತಮ್ಮ ಸಮಾಜಜೀವನದಲ್ಲಿ ಗಳಿಸಿಲ್ಲ.</br> ಪ್ರಕೃತಿಯಿಂದುಂಟಾದ ಸಂಕಟಗಳನ್ನು ಅನುಭವಿಸುವುದರ ಜೊತೆಗೆ </br> ಮಾನವ ತಾನು ಬಾಳಲು ನಿರ್ಮಿಸಿಕೊಂಡ ಸಮಾಜದಿಂದಲೂ ಬೇರೊಂದು </br> ವಿಧವಾದ ಕಷ್ಟಗಳನ್ನು ಅನುಭವಿಸಿದ್ದಾನೆ. ಆದಿ ಮಾನವನ ಮತ್ತು </br> ಅನಾಗರಿಕಕಾಲದ ಸಮಾಜಗಳ ಇತಿಹಾಸವನ್ನು ಬಿಟ್ಟರೆ (ಆದಿಯುಗ : </br> Primitive Period), ಈ ವರೆಗೆ ಮಾನವ ಸಮಾಜಗಳಲ್ಲಿ ಬದುಕು </br> ಸಾಗಿಸುತ್ತಿರುವ ಮಾನವ ಜೀವಿಗಳು ಮಾನವ ನಿರ್ಮಿತ ಉಪಟಳಗಳಿಗೇ </br> ಹೆಚ್ಚು ತುತ್ತಾಗಿದ್ದಾರೆ. ಮಾನವ ಸಮಾಜಗಳ ವ್ಯವಸ್ಥೆ, ನಿಯಮಗಳು, </br> ಕಟ್ಟುಪಾಡುಗಳೇ ಮೊದಲಾದುವು ಚೆನ್ನಾಗಿ ಬದುಕಲು, ಸುಖಸಂಪತ್ತು </br> ಗಳನ್ನನುಭವಿಸಲು ಹಾತೊರೆದ ಮಾನವ ಜೀವಿಗಳ ಸ್ವಪ್ನವನ್ನು ಭಗ್ನ</br><noinclude></noinclude> f57xlrakbjkw50w5d2ze00s850vyg9z 322218 322217 2026-05-24T14:52:53Z Pragathi. BH 7585 322218 proofread-page text/x-wiki <noinclude><pagequality level="4" user="Pragathi. BH" /></noinclude>{{center|<big><big>ಸಮಾಜ ವಾದದ ಜನನ</big></big>}} {{center|ಅಧ್ಯಾಯ-1. }} {{gap}}ಮಾನವ ಸಮಾಜ ಜನಿಸಿದಾರಂಭದಿಂದ ಎಷ್ಟೇ ಕಷ್ಟಪರಂಪರೆಗಳು ಬಂದರೂ ತಾನು ಬದುಕುವುದೇ ಮಾನವನ ಪ್ರಥಮ ಪ್ರಯತ್ನ ವಾಗಿದೆ. ಹಾಗೆ ಬಾಳಿ ಬದುಕಲು ಯತ್ನಿಸಿದ ಮಾನವನನ್ನು ಎರಡು ವಿಧವಾದ ಪ್ರತಿಬಂಧಕ ಬಾಧಿಸಿವೆ. ಒಂದು ಭೌತಿಕ ಮತ್ತೊಂದು ಸಾಮಾಜಿಕ, ಭೌತಿಕವಾಗಿ ಪ್ರಕೃತಿ ತಂದೊಡ್ಡಿದ ತೊಡರುಗಳನ್ನು ಎದುರಿಸಿ ನಾಗರಿಕತೆಯನ್ನು ಸ್ಥಾಪಿಸಿದ ಮಹತ್ಕಾರ್ಯದ ಗೌರವ ಮಾನವನಿಗೆ ಸಲ್ಲತಕ್ಕದ್ದಾಗಿದೆ ; ಮಾನವವರ್ಗವನ್ನು ಮೃಗ ವರ್ಗದಿಂದ ಬೇರ್ಪಡಿಸುವ ವೈಶಿಷ್ಟ್ಯವೂ ಇದೇ ಆಗಿದೆ. ಮಾನವ ತನ್ನ ಬುದ್ದಿ ವಿಶೇಷದಿಂದ ಪ್ರಕೃತಿಯ ಚಲನವಲನಗಳ ಮೇಲೆ ಹತೋಟ ಯನ್ನು ಹೊಂದಿದ್ದಾನೆ. ಇದೇ ವಿಜ್ಞಾನದ ಸಾಧನೆ. ವಿಜ್ಞಾನವನ್ನು ಬೆಳೆಸುವುದರ ಮೂಲಕ ಮಾನವನು ಪ್ರಾಕೃತಿಕ ಪ್ರತಿಬಂಧಕಗಳನ್ನು ಪರಿ ಹರಿಸಿಕೊಂಡಿದ್ದಾನೆ ; ಪರಿಹರಿಸುತ್ತಿದ್ದಾನೆ ; ಮತ್ತು ಉಳಿದಿರುವ ಸಮಸ್ಯೆ ಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದಾನೆ.</br> {{gap}}ಪ್ರಕೃತಿಯಿಂದ ಉದ್ಭವವಾದ ಮಾನವರು ತಮ್ಮ ಬದುಕನ್ನು ಸಾಗಿ ಸಲು ಸಮಾಜ ಜೀವಿಗಳಾದರು. ಆದರೆ ಪ್ರಕೃತಿಯಮೇಲೆ ಹೋರಾಡಿ ಸಾಧಿಸಿದಷ್ಟು ವಿಜಯವನ್ನು ತಮ್ಮ ಸಮಾಜಜೀವನದಲ್ಲಿ ಗಳಿಸಿಲ್ಲ. ಪ್ರಕೃತಿಯಿಂದುಂಟಾದ ಸಂಕಟಗಳನ್ನು ಅನುಭವಿಸುವುದರ ಜೊತೆಗೆ ಮಾನವ ತಾನು ಬಾಳಲು ನಿರ್ಮಿಸಿಕೊಂಡ ಸಮಾಜದಿಂದಲೂ ಬೇರೊಂದು ವಿಧವಾದ ಕಷ್ಟಗಳನ್ನು ಅನುಭವಿಸಿದ್ದಾನೆ. ಆದಿ ಮಾನವನ ಮತ್ತು ಅನಾಗರಿಕಕಾಲದ ಸಮಾಜಗಳ ಇತಿಹಾಸವನ್ನು ಬಿಟ್ಟರೆ (ಆದಿಯುಗ : Primitive Period), ಈ ವರೆಗೆ ಮಾನವ ಸಮಾಜಗಳಲ್ಲಿ ಬದುಕು ಸಾಗಿಸುತ್ತಿರುವ ಮಾನವ ಜೀವಿಗಳು ಮಾನವ ನಿರ್ಮಿತ ಉಪಟಳಗಳಿಗೇ ಹೆಚ್ಚು ತುತ್ತಾಗಿದ್ದಾರೆ. ಮಾನವ ಸಮಾಜಗಳ ವ್ಯವಸ್ಥೆ, ನಿಯಮಗಳು, ಕಟ್ಟುಪಾಡುಗಳೇ ಮೊದಲಾದುವು ಚೆನ್ನಾಗಿ ಬದುಕಲು, ಸುಖಸಂಪತ್ತು ಗಳನ್ನನುಭವಿಸಲು ಹಾತೊರೆದ ಮಾನವ ಜೀವಿಗಳ ಸ್ವಪ್ನವನ್ನು ಭಗ್ನ</br><noinclude></noinclude> 5bs44u8t3cf4koqs32c75j0csmvdkgt ಪುಟ:ಕಮ್ಯೂನಿಸಂ.djvu/೧೯ 104 88784 322161 307262 2026-05-24T13:57:04Z Pragathi. BH 7585 /* Validated */ 322161 proofread-page text/x-wiki <noinclude><pagequality level="4" user="Pragathi. BH" />{{rh|center=ಸಮಾಜ ವಾದದ ಜನನ|left=|right=೧೧}}</noinclude>ಪಂಕ್ತಿಗಳಾಗಿ ಉಳಿದವು. ನೊಂದವರು, ಇಂಥ ಭೀಕರ ದೃಶ್ಯ ನೋಡಲಾರದವರು, ಜಿಗುಪ್ಸೆಗೊಂಡು ಆಶ್ರಮ, ಕುಟೀರ ಮುಂತಾದವುಗಳನ್ನು ರಚಿಸಿಕೊಂಡು ಆತ್ಮಶುದ್ದಿಯನ್ನು ಇನ್ನೂ ಮಾಡಿಕೊಳ್ಳುತ್ತಲೇ ಇದ್ದಾರೆ. ಅವರುಗಳ ಆತ್ಮಶುದ್ಧಿಯ ತಪಶ್ಚರ್ಯೆಯ ಫಲ ಸಮಾಜಕ್ಕೆ ತಟ್ಟುತ್ತದೆಂಬ ಆಶಾಭಾವನೆ ಅನೇಕರಲ್ಲಿ ಇನ್ನೂ ನಶಿಸಿಲ್ಲ. ಸಮಾಜ ಮಾತ್ರ ಪೂರ್ವದಂತೆ ಮುಂದುವರಿಯುತ್ತಲೇ ಇದೆ. {{gap}}15ನೇ ಶತಮಾನದನಂತರ ಪಾಶ್ಚಿಮಾತ್ಯ ದೇಶಗಳಲ್ಲಿ ರೂಪ ತಾಳಿದ ನಡೆವಳಿಕೆಗಳು ಸಮಾಜವಾದದ ಇತಿಹಾಸದಲ್ಲಿ ಬಹು ಮುಖ್ಯವಾದವು. ಸಮಾಜ ಸುಧಾರಣೆ ಹಿತವಚನಗಳಲ್ಲೇ ಪರ್ಯವಸಾನ ಹೊಂದದೆ ಸುಧಾರಿತ ಸಮಾಜದ ಸಾಧನೆಗಾಗಿ ಶೋಷಿತವರ್ಗ ಚಳವಳಿಯನ್ನು ಆರಂಭಿಸಿತು. ಬರೆಹಗಾರರು ಚಳವಳಿಗೆ ಬೆಂಬಲವಿತ್ತರು. ಕಷ್ಟಮಯ ಬಾಳಿನಿಂದ ಕೂಡಿದ ಸಮಾಜಕ್ಕೆ ಪ್ರತಿಯಾಗಿ ಸುಖೀ ರಾಜ್ಯವೊಂದು ಇದೆ ಎಂದು ಹೇಳುವ ಗ್ರಂಥಗಳು ಹೇರಳವಾಗಿ ಹೊರಬಿದ್ದವು. ಇಂತಹ ಗ್ರಂಥವೊಂದನ್ನು ಬರೆದು ಪ್ರಸಿದ್ಧಿಯಾದವನೆಂದರೆ ಇಂಗ್ಲೆಂಡ್ ದೇಶದ ಥಾಮಸ್ ಮೋರ್ ಎಂಬಾತನು. ಈತನು 'ಎಲ್ಲೂ ಇಲ್ಲದ ಆದರ್ಶರಾಜ್ಯ' (Utopia) ಎಂಬ ಗ್ರಂಥವನ್ನು 1516ರಲ್ಲಿ ರಚಿಸಿ ತಾನಿದ್ದ ಸಮಾಜವನ್ನು ಕಟುವಾಗಿ ಮೂದಲಿಕೆಗೆ ಗುರಿಪಡಿಸಿದನು. ಆದರೆ ಅಂತಹ ರಾಜ್ಯ ಎಲ್ಲಿದೆ, ಅದನ್ನು ಪಡೆಯುವುದು ಹೇಗೆ ಎಂಬ ವಿಷಯಗಳ ಚರ್ಚೆಗೆ ಪ್ರವೇಶಿಸಲಿಲ್ಲ, ಆದುದರಿಂದ ಥಾಮಸ್ ಮೋರ್‌ನ ಗ್ರಂಥ ಕಲ್ಪನಾಸಾಹಿತ್ಯವಾಗಿಯೇ ಉಳಿದಿದೆ. ಇಂತಹ ಗ್ರಂಥಗಳು ಜನಸಮುದಾಯದಲ್ಲಿ ಸುಖಮಯ ಸಮಾಜವೊಂದು ಸಾಧ್ಯವೆಂದೂ ಅಂತಹ ಸಮಾಜವೊಂದು ಇರುವುದೆಂಬ ಭಾವನೆಗೂ ಆಸರೆ ಕೊಟ್ಟವು. {{gap}}ಇಂಗ್ಲೆಂಡಿನಲ್ಲಿ 1640ರಲ್ಲಿ ಉಂಟಾದ ಕ್ರಾಂತಿ ನೊಂದ ಜನಸಮುದಾಯದ ಚಳವಳಿಗೆ ಬೆಂಬಲ ನೀಡಿತು. ಕ್ರಾಂತಿ ಉಂಟಾಗಲು ಅನೇಕ ಕಾರಣಗಳಿದ್ದವು, ಶೋಷಣೆಗೆ ಒಳಪಟ್ಟ ಜನಸಮುದಾಯವಿದ್ದಿತು. ರಾಜನ ನಿರಂಕುಶವರ್ತನೆ ವ್ಯಾಪಾರೀ ಮತ್ತು ಜಮೀನ್ದಾರ ವರ್ಗದವರನ್ನು ಉದ್ರೇಕಗೊಳಿಸಿತ್ತು. ಆಚರಣೆಯಲ್ಲಿದ್ದ ಕಟ್ಟಳೆ ಕಾನೂನುಗಳು ವ್ಯಾಪಾರಿವರ್ಗ ಅಡ್ಡಿ ಆತಂಕಗಳಿಲ್ಲದೆ, ರಾಜನ ಮತ್ತು ರಾಜನ ಆಶ್ರಯ{{nop}}<noinclude></noinclude> 5x727fpki5tgk60c26m0dbekvwvdvg2 ಪುಟ:ಕಮ್ಯೂನಿಸಂ.djvu/೨೦ 104 88785 322162 307280 2026-05-24T13:58:53Z Pragathi. BH 7585 /* Validated */ 322162 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿಕ ಸಮಾಜ ವಾದ|left=೧೨|right=}}</noinclude>ದಲ್ಲಿರುವ ಸಾಮಂತರ ಉಪಟಳವಿಲ್ಲದೆ, ವ್ಯಾಪಾರ ಮಾಡುವುದಕ್ಕೂ, ಹಣ ಕೂಡಿಡುವುದಕ್ಕೂ, ಉದ್ಯಮಗಳಲ್ಲಿ ನಿರತರಾಗುವುದಕ್ಕೂ ಅಡ್ಡಿ ಬಂದಿದ್ದವು. ರಾಜನ ನಿರಂಕುಶ ಪ್ರಭುತ್ವವನ್ನು, ವ್ಯಾಪಾರ ಮತ್ತು ಉದ್ಯಮಕ್ಕೆ ಅಡ್ಡಿ ಬರುವ ಕಟ್ಟಳೆ ಕಾನೂನುಗಳನ್ನು ಬದಿಗೊತ್ತಿದ ಹೊರತು ವ್ಯಾಪಾರೀ ವರ್ಗದ ಏಳಿಗೆಗೆ ಅವಕಾಶವಿರಲಿಲ್ಲ. ಬದಲಾವಣೆಯಿಂದ ರಾಜನ ಮತ್ತು ಆತನ ಹಿಂಬಾಲಕ ವರ್ಗದವರ ಹಕ್ಕು ಬಾಧ್ಯತೆಗಳಿಗೆ ಧಕ್ಕೆ ಬರುತ್ತಿತ್ತು. ಅವರು ಬದಲಾವಣೆಯನ್ನು ವಿರೋಧಿಸಿದರು. ಸಂಧಾನದ ಮೂಲಕ ಬಗೆ ಹರಿಯದ ವಿರಸ ಒಳಯುದ್ದದಲ್ಲಿ ಪರ್ಯವಸಾನ ಹೊಂದಿತು. ಜನರು ಚಾರಲ್ಸ್ ಎಂಬ ದೊರೆಯ ಶಿರಚ್ಛೇದನ ಮಾಡಿದರು. ಮತ್ತೊಬ್ಬ ದೊರೆಯನ್ನು ಬೇರೆಕಡೆಯೆಂದ ಕರೆತಂದು ಪಟ್ಟಕಟ್ಟಿದರು. ಒಳಯುದ್ಧದಲ್ಲಿ ವಿಜಯಶಾಲಿಗಳಾದ ವ್ಯಾಪಾರೀ ಮತ್ತು ಜಮೀನ್ದಾರವರ್ಗ ತಮ್ಮ ಹಕ್ಕುಗಳನ್ನು ಘೋಷಿಸಿದರು. ವ್ಯಾಪಾರ ಮತ್ತು ಉದ್ಯಮಗಳಲ್ಲಿ ಸರ್ಕಾರ ಕಾನೂನುಗಳ ಮೂಲಕ ಅಡ್ಡಿ ಆತಂಕಗಳನ್ನು ಒಡ್ಡದ ಹಾಗೆ ನಿಯಾಮಕ ಮಾಡಿದರು. ಸ್ವಾಮ್ಯ ಮತ್ತು ವ್ಯಾಪಾರ ವರ್ಗದವರಿಂದ ಚುನಾಯಿತರಾದ ಪ್ರತಿನಿಧಿಗಳ ಸಮ್ಮತವಿಲ್ಲದೆ ಶಾಸನ ಮಾಡಕೂಡದೆಂಬ ಸಂಪ್ರದಾಯಕ್ಕೆ ರಾಜನು ಒಪ್ಪುವಂತೆ ಮಾಡಿದರು. ಸಾಂಕುಶಪ್ರಭುತ್ವ ಸ್ಥಾಪನೆಯಾಯಿತು. {{gap}}ಕ್ರಾಂತಿಯ ಕಾಲದಲ್ಲಿ ವ್ಯಾಪಾರೀ ಮತ್ತು ಜಮೀನ್ದಾರವರ್ಗ ಕೇಳಿದುದು ಮತನೀಡುವ ಹಕ್ಕು, ಪ್ರತಿನಿಧಿಗಳ ಒಪ್ಪಿಗೆ ಪಡೆದು ಶಾಸನವಾಗುವ ಭರವಸೆ, ವ್ಯಕ್ತಿ ಸ್ವಾತಂತ್ರ್ಯ, ಪೌರರ ಹಕ್ಕುಗಳು, ಶಾಸನ ಸಮ್ಮುಖದಲ್ಲಿ ಸಮಾನತೆ, ಆರ್ಥಿಕವಾಗಿ ಖಾಸಗೀ ಸ್ವಾಮ್ಯಕ್ಕೆ ರಕ್ಷಣೆ ಮತ್ತು ಉದ್ಯಮ ಸ್ವಾತಂತ್ರ. ಆದರೆ ಈ ಮಧ್ಯೆ ಒಡಕು ಶಬ್ದವೆಂಬಂತೆ ಒಂದು ವಾದ ಆಂದೋಳನದ ರಂಗದಲ್ಲಿ ಕಾಲಿಟ್ಟತು. ಅದು ವ್ಯಾಪಾರಿ ಮತ್ತು ಸ್ವಾಮ್ಯ ವರ್ಗದವರನ್ನು ಸ್ತಬ್ಧರನ್ನಾಗಿ ಮಾಡಿತು. ಹೊಸವಾದದ ಪ್ರತಿಪಾದಕರೆಂದರೆ ಜರಾಲ್ಡ್ ವಿನ್ ಸ್ಟಾನ್‌ಲೇ ಮತ್ತು ಲಿಲ್‌ಬರ್‍ನೇ. ಇವರ ವಾದಸರಣಿ ಅತಿಸುಲಭವಾಗಿದ್ದು ಮನಸ್ಸಿಗೆ ನಾಟುವಂತಿತ್ತು. ಅವರ ಪ್ರಕಾರ ಜನಸಮುದಾಯವೆಲ್ಲಾ ದೇವರ ಮಕ್ಕಳು, ಎಲ್ಲರೂ ಅಣ್ಣತಮ್ಮಂದಿರು, ಅಕ್ಕತಂಗಿಯರು ಎಲ್ಲರೂ ಒಂದೇ ಸಮಾಜಕ್ಕೆ ಸೇರಿದವರು.{{nop}}<noinclude></noinclude> mczajng4nt2hg8joolrqded43lzf3kj ಪುಟ:ಕಮ್ಯೂನಿಸಂ.djvu/೨೧ 104 88786 322163 309805 2026-05-24T13:59:02Z Pragathi. BH 7585 /* Validated */ 322163 proofread-page text/x-wiki <noinclude><pagequality level="4" user="Pragathi. BH" />{{rh|center=ಸಮಾಜ ವಾದದ ಜನನ|left=|right=೧೩}}</noinclude>ದೇವರು ತನ್ನ ಮಕ್ಕಳಲ್ಲಿ ಹೇಗೆ ಭೇದ ಭಾವವನ್ನು ಮಾಡುವುದಿಲ್ಲವೋ ಹಾಗೆಯೇ ಭೇದ ಭಾವ, ತಾರತಮ್ಯ, ಅಸಮಾನತೆ ಇರುವ ಸಮಾಜ ದೇವರ ದೃಷ್ಟಿಯಲ್ಲಿ ಸರಿಯಲ್ಲ; ಎಲ್ಲರೂ ಸಮಾನರು. ಆದುದರಿಂದ ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಹೇಗೆ ಸಮಾನತೆ ಆವಶ್ಯಕವೆಂದು (ವ್ಯಾಪಾರೀ ಮತ್ತು ಜಮೀನ್ದಾರವರ್ಗ) ಹೇಳುವುದುಂಟೋ ಹಾಗೆಯೇ ಆರ್ಥಿಕ ರಂಗದಲ್ಲೂ ಸಹ ಸಮಾನತೆ ಆವಶ್ಯಕವಾಗಿದೆ. ಆರ್ಥಿಕ ಸಮಾನತೆ ಜನಸಮುದಾಯಕ್ಕೆ ಲಭಿಸಿದ ಹೊರತೂ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಲಭಿಸಿರುವ ಸಮಾನತೆ ಮಿಥ್ಯ, ಹುರುಡಿಲ್ಲದ್ದು ಎಂದರು. ಆರ್ಥಿಕ ಸಮಾನತೆ ಲಭಿಸುವವರೆಗೂ ಹೋರಾಟ ಮುಂದುವರಿಯುವ ಅಗತ್ಯವನ್ನು ಸಾರಿದರು. {{gap}}ಹೊಸವಾದಕ್ಕೆ ವ್ಯಾಪಾರೀ ಮತ್ತು ಸ್ವಾಮ್ಯವರ್ಗದ ಪ್ರತಿಕ್ರಿಯೆ ಬೇರೆಯಾಗಿತ್ತು. ವ್ಯಾಪಾರೀ ಮತ್ತು ಸಾಮ್ಯವರ್ಗ ಈ ಹೊಸವಾದದಲ್ಲಿ ಹಕ್ಕು ಬಾಧ್ಯತೆಗಳಿಗೆ ಅಪಾಯವನ್ನೂ ಖಾಸಗೀ ಸ್ವಾಮ್ಯಕ್ಕೆ ಧಕ್ಕೆಯನ್ನೂ ಕಂಡಿತು. ಜನಸಮುದಾಯದಲ್ಲಿ ಹೊಸವಾದದ ಹರಡುವಿಕೆಯನ್ನು ತಡೆಗಟ್ಟಲು ಕಂಕಣಬದ್ಧರಾದರು. ಆರ್ಥಿಕ ಸಮಾನತೆಯ ಸ್ಥಾಪನೆ ಎಂದೂ ಕ್ರಾಂತಿಯ ಧೈಯವಲ್ಲವೆಂದೂ, ದೇವರು ಎಂದೂ ಎಲ್ಲರನ್ನೂ ಒಂದೇ ಸಮನಾಗಿ ಸೃಷ್ಟಿಸಿಲ್ಲವೆಂದೂ, ಸ್ವಾಮ್ಯ ಅವರವರ ದುಡಿಮೆಯ ಫಲವೆಂದೂ, ಆರ್ಥಿಕ ಅಸಮಾನತೆ ಸ್ವಾಭಾವಿಕವೆಂದೂ, ಆರ್ಥಿಕ ಸಮಾನತೆಗಾಗಿ ಆಶಿಸುವುದು ಹಗಲುಗನಸಾಗಿ ಸಮಾಜ ಭದ್ರತೆಗೆ ಕಂಟಕವಾಗುತ್ತದೆಂದೂ ತಿಳಿಸಿದರು. ಹೊಸವಾದ ಮೂದಲಿಕೆಗೆ ಗುರಿಯಾಯಿತು. ಇಷ್ಟಾದರೂ, ಹೊಸವಾದದಲ್ಲಿ ಅಡಗಿದ್ದ ತರ್ಕವನ್ನು ಭೇದಿಸುವುದಕ್ಕೆ ಸ್ವಾಮ್ಯವರ್ಗಕ್ಕೆ ಶಕ್ತಿ ಸಾಲದೇ ಹೋಯಿತು. ಪ್ರತಿವಾದದಿಂದ ಭೇದಿಸಲಾರದ್ದನ್ನು ಶಕ್ತಿಪ್ರಯೋಗದ ಮೂಲಕ ಅಡಗಿಸಲು ಸ್ವಾಮ್ಯವರ್ಗ ನಿರ್ಧರಿಸಿತ್ತು. ಆದರೂ ಮೊಟ್ಟ ಮೊದಲನೆಯ ಬಾರಿಗೆ, ಆರ್ಥಿಕ ಸಮಾನತೆ ಇದ್ದ ಹೊರತು ಜನಸಮುದಾಯಕ್ಕೆ ಕ್ಷೇಮವಿಲ್ಲವೆಂದು ಹೇಳಿ ಜನಸಮುದಾಯದ ಗಮನವನ್ನು ಆರ್ಥಿಕ ರಂಗದಲ್ಲಿರುವ ಅಸಮಾನತೆಗೆ ಸೆಳದದ್ದು 1640ರ ಕ್ರಾಂತಿಯ ಮಹತ್ಕಾರ್ಯ.<noinclude></noinclude> mojxkh7wi6ad7x8xptko5e5jf6go1kg ಪುಟ:ಕಮ್ಯೂನಿಸಂ.djvu/೨೨ 104 88787 322154 309830 2026-05-24T13:53:46Z Pragathi. BH 7585 /* Validated */ 322154 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿಕ ಸಮಾಜ ವಾದ|left=೧೪|right=}}</noinclude>{{gap}}ಆರ್ಥಿಕ ಸಮಾನತೆಗಾಗಿ ನಡೆದ ಹೋರಾಟ ಇಂಗ್ಲಿಷ್ ಕ್ರಾಂತಿಗೇ ಕೊನೆಗೊಳ್ಳಲಿಲ್ಲ. ಹಾಗಾಗುವುದೆಂದು ನಿರೀಕ್ಷಿಸಿದ್ದವರು ಹತಾಶರಾದರು. ಹೊರ ದೇಶಗಳಿಗೆ ಇಂಗ್ಲಿಷ್ ಆರ್ಥಿಕ ಸಮಾನತೆಯವಾದ ಹರಡಿತೊ ಇಲ್ಲವೋ ತಿಳಿಯದು. ಆದರೆ, 18ನೇ ಶತಮಾನದ ಕೊನೆಯ ಭಾಗದಲ್ಲಿ ಫ್ರಾನ್ಸ್ ದೇಶದಲ್ಲಿ ನಡೆದ ಮಹಾಕ್ರಾಂತಿ (1789) ಕಾಲದಲ್ಲಿ ಆರ್ಥಿಕ ಸಮಾನತೆಯ ಪ್ರಶ್ನೆ ಪುನಃ ಜನ್ಮ ತಾಳಿತು. ಫ್ರಾನ್ಸಿನ ಮಹಾಕ್ರಾಂತಿ ಇಂಗ್ಲಿಷ್ ಕ್ರಾಂತಿಯಂತೆ ವ್ಯಾಪಾರೀ ಮತ್ತು ಜಮೀನ್ದಾರ ವರ್ಗಗಳ ಮುಂದಾಳತ್ವದಲ್ಲಿ ನಿರಂಕುಶ ಪ್ರಭುತ್ವದ ನಾಶಕ್ಕೂ ಖಾಸಗೀ ಸ್ವಾಮ್ಯದ ಆಧಾರದಮೇಲೆ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳ ಸ್ಥಾಪನೆಗೂ ನಡೆಯಿತು. ಕ್ರಾಂತಿಯ ಕಾಲದಲ್ಲಿ ಆರ್ಥಿಕ ಪ್ರಶ್ನೆ ಪ್ರಾಮುಖ್ಯತೆಗೆ ಬರುತ್ತದೆಂದು ಯಾರೂ ಯೋಚಿಸಿರಲಿಲ್ಲ. ಆದರೆ ಕ್ರಾಂತಿಯ ಹುರುಪಿನಲ್ಲಿ ಘೋಷಣೆಯಾದ "ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ)" (Liberty, Equality and Fraternity) ಧ್ಯೇಯಗಳು ಆರ್ಥಿಕ ಸಮಾನತೆಯ ಪ್ರಶ್ನೆ ಪುನಃ ಕಾಣಿಸಿಕೊಳ್ಳುವಂತೆ ಪ್ರಚೋದಿಸಿದುವು. ಕ್ರಾಂತಿಯ ಸಮಯದಲ್ಲಿ ಬೆಬ್ಯೂಫ್ ಎಂಬುವನ ಮುಖಂಡತ್ವದಲ್ಲಿ "ಸಮಾನತೆಗಾರರ ಪಿತೂರಿ" ಎಂಬ ರಂಗವೊಂದು ರಚಿತವಾದದ್ದಲ್ಲದೆ ಆರ್ಥಿಕ ಸಮಾನತೆಯ ವಾದ "ನ್ಯಾಯ"ದ ಹೆಸರಿನಲ್ಲಿ ಪ್ರತಿಪಾದಿತವಾಯಿತು. ಅಧಿಕ ಪ್ರಮಾಣದಲ್ಲಿ ಮತ್ತು ಅತ್ಯಂತ ಶ್ರೀಘ್ರಕಾಲದಲ್ಲಿ ಆರ್ಥಿಕ ಸಮಾನತೆಯ ವಾದ ಜನಸಮುದಾಯವನ್ನು ಆಕರ್ಶಿಸಿತು. ಸ್ವಾಮ್ಯವರ್ಗ ನಿಧಾನಿಸದೆ ಬೆಬ್ಯೂಫ್ ಮತ್ತು ಆತನ ಸಹಪಾಠಿಗಳನ್ನು ಸದೆಬಡಿಯಿತು. {{gap}}ಬೆಬ್ಯೂಫ್ ಮತ್ತು ಆತನ ಸಹವರ್ತಿಗಳು ಮಂಡಿಸಿದ ವಾದಕ್ಕೂ ಇಂಗ್ಲಿಷ್ ಕ್ರಾಂತಿಯ ಸಮಯದಲ್ಲಿ ಮಂಡಿತವಾದ ಸಮಾನತೆಯವಾದಕ್ಕೂ ಕೆಲವು ವ್ಯತ್ಯಾಸಗಳಿವೆ. ಇಂಗ್ಲಿಷ್ ಕ್ರಾಂತಿಕಾರರು ಆರ್ಥಿಕ ಸಮಾನತೆಯನ್ನು ದೇವರ ಹೆಸರಿನಲ್ಲಿ ಕೇಳಿದರು; ಫ್ರೆಂಚ್ ಕ್ರಾಂತಿಕಾರರು ನ್ಯಾಯ ಮತ್ತು ವಿವೇಚನಗಳ (Justice and Reason) ಹೆಸರಿನಲ್ಲಿ ಮಂಡಿಸಿದರು. ನಿರಂಕುಶಪ್ರಭುತ್ವ ಸಮಾಜಿಕ ಮತ್ತು ರಾಜಕೀಯ ರಂಗಗಳಲ್ಲಿ ಅಸಮಾನತೆ, ಹಕ್ಕುರಹಿತ ಕರ್ತವ್ಯಗಳು ಹೇಗೆ ಅನ್ಯಾಯವೋ ವಿವೇಚನಾರಹಿತವೋ ಹಾಗೆಯೇ ವಾಸ್ತವಿಕವಾಗಿರುವ ಆರ್ಥಿಕ ಅಸಮಾನತೆ ಸಹ{{nop}}<noinclude></noinclude> 1hgl2sqhov1xtqgianviubk39xvm7ev ಪುಟ:ಕಮ್ಯೂನಿಸಂ.djvu/೨೩ 104 88788 322155 309868 2026-05-24T13:54:15Z Pragathi. BH 7585 /* Validated */ 322155 proofread-page text/x-wiki <noinclude><pagequality level="4" user="Pragathi. BH" />{{rh|center=ಸಮಾಜ ವಾದದ ಜನನ|left=|right=೧೫}}</noinclude>ಅನ್ಯಾಯವೆಂದೂ ಏವೇಚನಾರಹಿತವೆಂದೂ ಸಾರಿದರು. ಎರಡನೆಯದಾಗಿ, ಫ್ರೆಂಚ್ ಕ್ರಾಂತಿಕಾರರು ನ್ಯಾಯಾನ್ಯಾಯಗಳ ಹೆಸರಿನಲ್ಲಿ ಸಾರಿದ ಸಂದೇಶ ಬಹು ಮಹತ್ತರವಾದ ಪ್ರಭಾವವನ್ನು ಬೀರುವಂತಹುದಾಗಿತ್ತು. ನ್ಯಾಯಾನ್ಯಾಯಗಳ ಪ್ರಶ್ನೆ ವಿವೇಕ ಬುದ್ದಿಯ ತೀರ್ಮಾನಕ್ಕೆ ಒಳಪಟ್ಟಿದ್ದರಿಂದ ಸಮಸ್ಯೆಗಳ ಬಗ್ಗೆ ತೀರ್ಮಾನ ದೈವ ಪ್ರಭಾವದಿಂದ ಪ್ರತ್ಯೇಕಿಸಲ್ಪಟ್ಟವು. ದೈವ ಪ್ರಭಾವದಿಂದ ಬಿಡುಗಡೆ ಹೊಂದಿದ ಮಾನುಷ ಬುದ್ಧಿಗೆ ಪ್ರಾಶಸ್ತ್ಯ ದೊರಕಿತು. ಎಲ್ಲದಕ್ಕೂ ಮನುಷ್ಯ ಬುದ್ದಿ ಅಂತಿಮವಾದ ಒರೆಗಲ್ಲಾಯಿತು. ದೈವ ಪ್ರಭಾವದಿಂದ ಬೇರ್ಪಟ್ಟ ಸ್ವತಂತ್ರ ಸಮಾಜಶಾಸ್ತ್ರ ಬೆಳೆಯಲು ಅಂಕುರಾರ್ಪಣೆಯಾಯಿತು. ಒಟ್ಟಿನಲ್ಲಿ ಶೋಷಣೆ ಮತ್ತು ಆರ್ಥಿಕ ಅಸಮಾನತೆ ಕೇವಲ ದೈವ ನಿಯಾಮಕವಾಗಿರದೆ ಸಮಾಜದ ರಚನೆ ಮತ್ತು ಕಟ್ಟುಪಾಡುಗಳನ್ನು ಅವಲಂಬಿಸಿವೆ ಎಂದು ಎರಡು ಕ್ರಾಂತಿಗಳೂ ತಿಳಿಸಿದವು. ಆರ್ಥಿಕ ಅಸಮಾನತೆ ತಾರ್ಕಿಕ ಬುದ್ದಿ ವಿಶೇಷಕ್ಕೆ ಸಮಂಜಸವಾಗಿ ತೋರುವುದಿಲ್ಲವೆಂದು ತಿಳಿಸಿದ್ದಲ್ಲದೆ ಸಮಾಜದ ಕಟ್ಟುಪಾಡುಗಳು ಸಮಾಜ ಜೀವಿಗಳ ಯೋಗಕ್ಷೇಮವನ್ನು ಗಳಿಸುವುದಾದರೆ ಸರಿ, ಇಲ್ಲವಾದರೆ ತಪ್ಪು ಎಂಬ ವೈಯುಕ್ತಿಕ ತೀರ್ಮಾನಕ್ಕೆ ಎಡೆ ಕೊಟ್ಟವು. {{gap}}ಫ್ರಾನ್ಸ್‌ನ ಮಹಾಕ್ರಾಂತಿಯ ಕಾಲದಲ್ಲಿ ಅವತರಿಸಿದ ಸಮಾನತೆಯ ತತ್ತ್ವ ನೊಂದ ಜನರ ತಾತ್ಕಾಲಿಕ ಆರ್ಭಟವಾಗದೆ ಚಿರಸ್ಥಾಯಿಯಾಯಿತು. ಫ್ರಾನ್ಸ್ ದೇಶದಲ್ಲಿ ಅನೇಕ ವಿಚಾರತಜ್ಞರು ಸಮಾನತೆಯ ಸಮಸ್ಯೆಯನ್ನು ಜಿಜ್ಞಾಸೆಗೆ ಒಳಪಡಿಸಿದರು. ಅದರ ವಿಷಯವಾಗಿ ಸಾಹಿತ್ಯ ಬೆಳೆಯಲಾರಂಭಿಸಿತು. ಸಮಾನತೆ ಇರುವ ಸಮಾಜವನ್ನು ಬುದ್ಧಿಯ ಬಲದಿಂದ ರಚಿಸಲು ಸಾಧ್ಯವೆಂದು ತಿಳಿಸಿದರು. ಇಂತಹವುಗಳಲ್ಲಿ'ಸಮಾಜವಾದ' ಎಂಬ ಹೆಸರಿನಲ್ಲಿ ಪ್ರಕಟವಾದ ಫ್ರಾನ್ಸಿನ ಫೌರಿಯರ್, ಫ್ರೌಢನ್ ಮತ್ತು ಮುಖ್ಯವಾಗಿ ಸ್ಯೇಂಟ್ ಸೈಮನ್‌ರ ಬರೆಹಗಳು ಬಹಳ ಮುಖ್ಯ ವಾದವು. 'ಸಮಾನ ಸಮಾಜದ' ಮಾದರಿಯಂತೆ ಅಲ್ಲಲ್ಲಿ ಪ್ರಾಯೋಗಿಕ ಕೇಂದ್ರಗಳೂ ಆರಂಭವಾದವು. ಫ್ರಾನ್ಸ್ ದೇಶ ಸಮಾಜವಾದ ತತ್ತ್ವಕ್ಕೆ ತೌರುಮನೆಯಾಯಿತು. {{gap}}ಈ ಮಧ್ಯೆ ಇಂಗ್ಲೆಂಡ್ ದೇಶದಲ್ಲಿ ಕೈಗಾರಿಕಾ ಕ್ರಾಂತಿ (Industrial Revolution) ಉಂಟಾಗಿ, ಕ್ರಮೇಣ ಕ್ರಾಂತಿ ಯೂರೋಪಿನ{{nop}}<noinclude></noinclude> jls8zbhxqjhe971srhhwies6slxaam1 ಪುಟ:ಕಮ್ಯೂನಿಸಂ.djvu/೨೪ 104 88789 322156 311938 2026-05-24T13:54:38Z Pragathi. BH 7585 /* Validated */ 322156 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿಕ ಸಮಾಜ ವಾದ|left=೧೬|right=}}</noinclude>ಪ್ರಸಕ್ತ ಅನೇಕ ಭಾಗಗಳಿಗೆ ಮುಖ್ಯವಾಗಿ ಫ್ರಾನ್ಸ್, ಬೆಲ್ಜಿಯಂ ಮತ್ತು ಜರ್ಮನಿ ದೇಶಗಳಿಗೆ ಹರಡಲಾರಂಭಿಸಿತು. ಈ ಕ್ರಾಂತಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ರಾಜಕೀಯ ಕ್ರಾಂತಿಗಳಷ್ಟೇ ಮುಖ್ಯವಾದದ್ದು. ಬಹುಶಃ ಕೈಗಾರಿಕಾ ಕ್ರಾಂತಿ ಈ ಎರಡು ಕ್ರಾಂತಿಗಳಿಗಿಂತ ಮಿಗಿಲಾದ ಪರಿಣಾಮವನ್ನು ಪ್ರಪಂಚದ ನಾನಾಭಾಗಗಳಲ್ಲಿ ಉಂಟುಮಾಡಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಉತ್ಪಾದನೆಯಲ್ಲಿ ಯಾಂತ್ರಿಕ ಶಕ್ತಿಯನ್ನು ಉಪಯೋಗಿಸುವುದೇ ಕೈಗಾರಿಕಾ ಕ್ರಾಂತಿ. ಈ ಕ್ರಾಂತಿ ಖಾಸಗೀ ಬಂಡವಾಳ ಶೇಖರಣೆ, ಕೂಲಿಗಾರರ ಸಂಖ್ಯೆಯ ಅಭಿವೃದ್ಧಿ ಲಾಭೈಕ ಧ್ಯೇಯದಿಂದ ಸರಕುಗಳ ಉತ್ಪಾದನೆ ಇವು ಉಂಟಾದುವು. ಕೂಲಿಗಾರರು ಸಾಮೂಹಿಕವಾಗಿ ತಯಾರಿಸಿದ್ದೆಲ್ಲಾ ಬಂಡವಾಳಗಾರನ ಸ್ವತ್ತಾಯಿತು. ಕೂಲಿಗಾರರಿಗೆ ಯಾವ ಸ್ವಾಮ್ಯವೂ ಇಲ್ಲದೆ ದುಡಿಮೆ ಮಾತ್ರ ಉಳಿಯಿತು. {{gap}}ಕೈಗಾರಿಕಾ ಕ್ರಾಂತಿ ಮತ್ತೊಂದು ಕಠೋರ ಪರಿಣಾಮವನ್ನು ತಂದಿತು. ವ್ಯವಸಾಯ ರಂಗದಲ್ಲಿ ಜೀತ, ಕೂಲಿ ವಾರ ಗುತ್ತಿಗೆಯ ಮೂಲಕ ಶೋಷಣೆ ಆಗುತ್ತಿರುವಂತೆ ಕೈಗಾರಿಕಾ ರಂಗದಲ್ಲಿ ಇನ್ನೂ ಹೆಚ್ಚಾದ ಶೋಷಣೆ ಪ್ರಾರಂಭವಾಯಿತು. ಶೋಷಣೆ ಹೆಚ್ಚಿದಂತೆ ದೇಶದಲ್ಲಿ ದಾರಿದ್ರ್ಯ, ನಿರ್ಗತಿ ಹೆಚ್ಚಿದವು. ಇನ್ನೊಂದು ಕಡೆ ಕೈಗಾರಿಕಾ ಸ್ವಾಮ್ಯವರ್ಗದಲ್ಲಿ ಸಂಪತ್ತು ಸಂಗ್ರಹವಾಯಿತು. ಸಮಾಜ ಇಬ್ಭಾಗವಾಗಿ ಒಡೆಯಿತು. ಸ್ವಾಮ್ಯವುಳ್ಳವರ್ಗ, ಸ್ವಾಮ್ಯವಿಲ್ಲದ ದುಡಿಮೆಗಾರ ವರ್ಗ ಉಂಟಾದವು. ಪ್ರಾರಂಭದಲ್ಲಿ ಕೈಗಾರಿಕಾ ಕ್ರಾಂತಿಯ ಪರಿಣಾಮವನ್ನು ಕಾರ್ಮಿಕವರ್ಗ ಗಮನಿಸಲಿಲ್ಲ. ಕ್ರಮೇಣ ಶೋಷಣೆ ಅತ್ಯಧಿಕ ರೀತಿಯಲ್ಲಿ ಆಗುತ್ತಿರುವುದನ್ನು ಕಾರ್ಮಿಕವರ್ಗ ಕಂಡಿತು; ಅವರಿಂದ ಪ್ರತಿಭಟನೆ ಮುಷ್ಕರಗಳು ಆರಂಭವಾದವು. ಇಲ್ಲಿ ಕೈಗಾರಿಕಾ ಕ್ರಾಂತಿ ಜನಸಮುದಾಯಕ್ಕೆ ತಂದ ನಿರ್ಗತಿಕ ಬಾಳನ್ನು ನೋಡಿ, ಮರುಕತಾಳಿ, ತಡೆಗಟ್ಟಲು ಕೆಲವು ಉದಾರಿಗಳು ಮುಂದೆ ಬಂದರು. ಇಂತಹ ಉದಾರಿಗಳಲ್ಲಿ ಇಂಗ್ಲೆಂಡಿನ ರಾಬರ್ಟ್ ಓವೆನ್ (1771-1858) ಎಂಬಾತನು ಚಿರಸ್ಮರಣೀಯನು. ಯಂತ್ರದ ಉಪಯೋಗದಿಂದ ಶೋಷಣೆಯಾಗುವುದಿಲ್ಲ. ಅದರ ಉಪಯೋಗದಿಂದ ಬಂದ ಪ್ರತಿಫಲವನ್ನು (ಲಾಭವನ್ನು) ದುಡಿಯುವ ಕೂಲಿಗಳಿಗೆ ಹಿಂತಿರುಗಿ{{nop}}<noinclude></noinclude> k65y26ndv6tldu6lz6lgzdxkqqtnpjl ಪುಟ:ಕಮ್ಯೂನಿಸಂ.djvu/೨೫ 104 88790 322158 315131 2026-05-24T13:54:57Z Pragathi. BH 7585 /* Validated */ 322158 proofread-page text/x-wiki <noinclude><pagequality level="4" user="Pragathi. BH" />{{rh|center=ಸಮಾಜ ವಾದದ ಜನನ|left=|right=೧೭}}</noinclude>ಕೊಡುವುದಾದರೆ ಶೋಷಣೆಗೆ ಅವಕಾಶವಿಲ್ಲವೆಂದು ಓವೆನ್ ತಿಳಿಸಿದನು. ಅದರಂತೆ ಪರಸ್ಪರ ಸಹಕಾರ ನೀತಿಯ ಮೇಲೆ ಕೈಗಾರಿಕಾ ಉದ್ಯಮವನ್ನು ನ್ಯೂಲಾನಾರ್ಕ್ ಎಂಬ ಸ್ಥಳದಲ್ಲಿ ನಡೆಸಿ ದುಡಿಮೆಗಾರರಿಂದ ಮೆಚ್ಚುಗೆಯನ್ನು ಪಡೆದನು. ದುಡಿಮೆಗಾರರು ಸಹ ಮೊದಲಿಗಿಂತ ಹೆಚ್ಚಿಗೆ ದುಡಿಯಲಾರಂಭಿಸಿದರು. ಆದರೆ ಓವನ್ ಅಷ್ಟಕ್ಕೆ ತೃಪ್ತನಾಗದೆ ತನ್ನ ಉದ್ಯಮದ ಮರ್ಮವನ್ನು ಇತರೆಡೆಗಳಲ್ಲಿ ಪ್ರಚಾರಮಾಡಲನುವಾದನು. ಖಾಸಗೀ ಸ್ವಾಮ್ಯದ ಆವಶ್ಯಕತೆಯೇ ಇಲ್ಲವೆಂದನು. ಖಾಸಗೀಸ್ವಾಮ್ಯವರ್ಗ ಇದರಿಂದ ಗಾಬರಿಗೊಂಡಿತು. ಓವೆನ್ನನನ್ನು ನಿಂದೆಗೆ ಗುರಿಪಡಿಸಿ ದೇಶದಿಂದ ಹೊರದೂಡಿತು. ಅಡ್ಯಾಮ್ ಸ್ಮಿತ್ <sup>1</sup> ಮತ್ತು ಡೇವಿಡ್ ರಿಕಾರ್ಡೊ <sup>2</sup> ಇವ{{nop}} ---------------- <small>{{gap}}(1) ಅಡ್ಯಾಮ್ ಸ್ಮಿತ್ (1723-1790) ಗ್ಲಾಸ್ಗೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನಾಗಿದ್ದನು. ಈತನು ಬರೆದ 'Wealth of Nations' ಎಂಬ ಅರ್ಥಶಾಸ್ತ್ರ ಒಂದು ಉದ್ಗ್ರಂಥವಾಗಿದೆ. {{gap}}(2) ಡೇವಿಡ್ ರಿಕಾರ್ಡೋ (1772-1823) ಒಬ್ಬ ಪ್ರಮುಖ ವ್ಯಾಪಾರೋದ್ಯಮಿ. 'Principles of Political Economy' ಎಂಬ ಉದ್ಗ್ರಂಥವನ್ನು ಪ್ರಕಟಸಿದನು. {{gap}}ಅಡ್ಯಾಮ್ ಸ್ಮಿತ್ ಮತ್ತು ಡೇವಿಡ್ ರಿಕಾರ್ಡೊ ಇವರು ಬಂಡವಾಳಶಾಹಿ ಅರ್ಥಶಾಸ್ತ್ರದ ಸ್ಥಾಪನಾಚಾರ್ಯರು. ಖಾಸಗೀಸ್ವಾಮ್ಯ, ಖಾಸಗೀ ಉದ್ಯಮ, ಪೈಪೋಟಿ, ದುಡಿಮೆಯ ಆಧಾರದಮೇಲೆ ಸರಕುಗಳ ಮೌಲ್ಯ ನಿರ್ಣಯ-- ಇವು ಇವರ ಅರ್ಥಶಾಸ್ತ್ರದ ಆಧಾರ ಸ್ತಂಭಗಳು. ಕ್ರಮೇಣ ಇವರಿಂದ ಪ್ರತಿಪಾದಿತವಾದ ಅರ್ಥಶಾಸ್ತ್ರ ಮಾರ್ಷಲ್, ಎಡ್ಜ್ ವರ್ತ್ ಮತ್ತು ಇತರರಿಂದ ಟೀಕೆಗೊಳಗಾಯಿತು. ದುಡಿಮೆಯ ಆಧಾರದಮೇಲೆ ಸರಕುಗಳ ಮೌಲ್ಯ ನಿರ್ಣಯ ತತ್ತ್ವಕ್ಕೆ ಬದಲು ಸರಬರಾಜು ಮತ್ತು ಗಿರಾಕಿಯ (Supply and demand) ನಿಯಮದಿಂದ ಸರಕುಗಳ ಬೆಲೆ ನಿರ್ಣಯವಾಗುತ್ತದೆಂದರು. ಇತ್ತೀಚೆಗೆ ಆಧುನಿಕ ಅರ್ಥಶಾಸ್ತ್ರದಲ್ಲಿ ಸರಕುಗಳ ಮೌಲ್ಯ ನಿರ್ಧಾರದ ಬಗ್ಗೆ ವಿಪರೀತ ಗೊ೦ದಲವೂ ಭಿನ್ನಾಭಿಪ್ರಾಯಗಳೂ ತಲೆಹಾಕಿವೆ. ಮೌಲ್ಯ ನಿರ್ಣಯ ತತ್ತ್ವವನ್ನೇ ಉಚ್ಛಾಟನೆಗೊಳಿಸಲು ಯತ್ನಿಸಲಾಗಿದೆ. {{gap}}ಮಾರ್ಕ್-ಏಂಗೆಲ್ಸ್‌ರವಾದದಲ್ಲಿ ದುಡಿಮೆಯ ಆಧಾರದಮೇಲೆ ಸರಕುಗಳ ಮೌಲ್ಯ ನಿರ್ಧಾರ ತತ್ತ್ವ ಬಹಳ ಮುಖ್ಯವಾದದ್ದು. ದುಡಿಮೆಯ ಪ್ರಮಾಣ ಪದಾರ್ಥಗಳ ಮೌಲ್ಯ ನಿರ್ಧರಿಸುತ್ತದೆಂದು ಅಡ್ಯಾಮ್ ಸ್ಮಿತ್ ಮತ್ತು ರಿಕಾರ್ಡೋ ಪ್ರತಿಪಾದಿಸಿದ ಮೌಲ್ಯತತ್ತ್ವವನ್ನು ತಿದ್ದುಪಡಿಗೊಳಪಡಿಸಿದರು. ದುಡಿಮೆಯ ಪ್ರಮಾಣ (Quantity of Labour) ಪದಾರ್ಥಗಳ ಮೌಲ್ಯವನ್ನು ನಿರ್ಧರಿಸುವುದರ ಬದಲು ಪದಾರ್ಥಗಳ ಉತ್ಪಾದನೆಗೆ ಅವಶ್ಯಕವಾಗಿ ಬೇಕಾಗುವ ದುಡಿಮೆಯ ಕಾಲ (Socially necessary labour time) ಮೌಲ್ಯವನ್ನು ನಿರ್ಧರಿಸುವುದಂದರು. ಕಾರ್ಮಿಕರ ಶೋಷಣೆಯು ದುಡಿಮೆ ಶಕ್ತಿಯ (Labour Power) ಅಪಹರಣದಲ್ಲಿ ಅಡಗಿರುವುದಾಗಿ ತಿಳಿಸಿದರು.</small><noinclude></noinclude> 7yw2ewgw1s0yvwcokzd1cyhccchea88 ಪುಟ:ಕಮ್ಯೂನಿಸಂ.djvu/೪೧ 104 89383 322173 273817 2026-05-24T14:20:15Z Shreelatha.Halemane 7642 /* Validated */ 322173 proofread-page text/x-wiki <noinclude><pagequality level="4" user="Shreelatha.Halemane" />{{rh||ಕಲ್ಪನಾ ಮತ್ತು ವೈಜ್ಞಾನಿಕ ಸಮಾಜ ವಾದ |೩೧}}</noinclude>ನಿಯಾಮಕವೇ ? ವಿಧಿ ವಿಲಾಸವೇ ? 3,000 ವರ್ಷಗಳ ಹಿಂದೆಯೇ ಈ ಪ್ರೇರೇಪಣೆ ಹೊಳೆದಿದ್ದರೆ ಮಾನವಕೋಟಿಗೆ ಎಷ್ಟು ಉಪಕಾರವಾಗು ತಿತ್ತು. ಈ ಪ್ರಶ್ನೆಗೆ ಉತ್ತರ ಸಿಗುವುದು ದುರ್ಲಭವಾಗುತ್ತದೆ. 18 ನೇ ಶತಮಾನದನಂತರ ಈ ಪ್ರೇರಣೆ ಹೊಳೆದಿರುವುದರಿಂದ ಅಲ್ಲಿಂದೀಚಿನ ವ್ಯಕ್ತಿಗಳು ಮಹಾಬುದ್ದಿವಂತರೆಂದೂ, ಹಿಂದಿನವರೆಲ್ಲರೂ ದಡ್ಡರೆಂದೂ, ಕಲ್ಯಾಣಸಮಾಜದ ಭಾವನೆಯೂ ಅವರಿಗೆ ದರ್ಶನವಾಗಲಿಲ್ಲವೆಂದೂ ಅಥವಾ ಗ್ರಹಿಸಲು ಅಸಮರ್ಥರಾದರೆಂದೂ ತೀರ್ಮಾನಕ್ಕೆ ಬರಬೇಕಾಗು ತ್ತದೆ. ಆದುದರಿಂದ ಕಲ್ಪನೆ, ಊಹೆಗಳ ಮೂಲಕ ಸಮಾಜವಾದದ ನಿರ್ಮಾಣವನ್ನು ಬಿಡಬೇಕು.</br> {{gap}}ಎಲ್ಲ ವಿಷಯಗಳಲ್ಲೂ ಸಮಾನತೆ ಇರುವ ಸಮಾಜವನ್ನು ಆದರ್ಶ ವನ್ನಾಗಿ ಬಯಸಿದ ಸಮಾಜವಾದವೂ (Equilitarian Socialism) ಸಹ ಕಲ್ಪನೆಯಾಗಿದೆ, ಮತ್ತು ಆಭಾಸದ ಪರಮಾವಧಿಯೂ ಆಗಿದೆ. ಎಲ್ಲ ವ್ಯಕ್ತಿಗಳ ಅಭಿರುಚಿ ಮತ್ತು ಆವಶ್ಯಕತೆ ಒಂದೇ ತೆರನಾಗಿ ಇರಲು ಸಾಧ್ಯವಿಲ್ಲ. ಒಂದುವೇಳೆ ಸಮಾನಸಮಾಜದ ಮೂಲಕ ಸುಖ ಲಭಿಸುವುದಾಗಿದ್ದರೆ, ಅಸಮಾನತೆ, ಖಾಸಗೀ ಸ್ವಾಮ್ಯ ಇವುಗಳು ಹೇಗೆ ಜನ್ಮತಾಳಿದವು ? ಹಿಂದಿನವರಿಗೆ ಈ ಭಾವನೆ ಏಕೆ ಉಂಟಾಗಲಿಲ್ಲ ? ಆದುದರಿಂದ ಸಮಾನತೆಯನ್ನೂ ಸುಖೀರಾಜ್ಯವನ್ನೂ ಕಲ್ಪನೆಯ ಮೂಲಕ ಸೃಷ್ಟಿಸುವುದಕ್ಕಾಗುವುದಿಲ್ಲ. ಸಾಧ್ಯವಿದ್ದಿದ್ದರೆ ಸಮಾನಸಮಾಜ ಎಂದೋ ಜನ್ಮ ತಾಳುತ್ತಿತ್ತು. ಇಂತಹ ಭಾವನೆ ಉತ್ಕೃಷ್ಟ ಸಮಾಜದ ಮಾದರಿ ಯಾಗಿ ಉಳಿದು, ಪುನಃ ಸಮಾಜವಾದದ ಪ್ರತಿಪಾದನೆಗೆ ಆವಶ್ಯಕತೆಯೇ ಇರುತ್ತಿರಲಿಲ್ಲ.</br> {{gap}}ಮಿಕ್ಕ ಸಮಾಜವಾದಗಳ ಸ್ವರೂಪವೂ ಸಹ ಹೆಚ್ಚು ಕಡಿಮೆ ಇದೇ ಆಗಿದೆ. ಧರ್ಮಕ್ಕೆ, ನ್ಯಾಯಕ್ಕೆ ಅನುಗುಣವಾಗಿರುವ ಧರ್ಮಸಮಾಜ, ಸುಖೀ ರಾಜ್ಯ, ನ್ಯಾಯಸಮಾಜಗಳ ನಿರ್ಮಾಣದ ಕಾರ್ಯವೆಂದರೆ ಧರ್ಮ, ನ್ಯಾಯ ಎಂದರೆ ಏನು ಮತ್ತು ಯಾವುದು ಎಂಬ ಜಿಜ್ಞಾಸೆ ಬರುತ್ತದೆ. ಧರ್ಮ, ನ್ಯಾಯಗಳ ಬಗ್ಗೆ ಇತಿಹಾಸದ ಉದ್ದಕ್ಕೂ ವಿವಿಧ ಸಮಾಜಗಳಲ್ಲಿ ವಿವಿಧ ಭಾವನೆಗಳಿರುವುದರಿಂದಲೂ ಮತ್ತು ಒಂದೇ ಸಮಾಜದಲ್ಲೇ ಕಾಲ ಕಾಲಕ್ಕೆ ಧರ್ಮ, ನ್ಯಾಯಗಳ ಭಾವನೆಯ ಬಗ್ಗೆ ಬದಲಾವಣೆಗಳಾಗಿರುವುದರಿಂದಲೂ, ಧರ್ಮ ಮತ್ತು ನ್ಯಾಯಗಳಿಗೆ ಎಲ್ಲರೂ<noinclude></noinclude> 524r1e2zawkoki5f7w70k922go3huw1 ಪುಟ:ಕಮ್ಯೂನಿಸಂ.djvu/೪೨ 104 89384 322174 273818 2026-05-24T14:22:00Z Shreelatha.Halemane 7642 /* Validated */ 322174 proofread-page text/x-wiki <noinclude><pagequality level="4" user="Shreelatha.Halemane" />{{rh|೩೨.|ವೈಜ್ಞಾನಿಕ ಸಮಾಜ ವಾದ |}}</noinclude>ಒಂದೇ ಅರ್ಥವನ್ನು ಕೊಟ್ಟಿಲ್ಲ. ಈ ಕಾರಣದಿಂದ ಸಮಾಜರಚನೆಯ ಬಗ್ಗೆ, ಸಮಾಜಕಲ್ಯಾಣದ ಬಗ್ಗೆ ಏಕಾಭಿಪ್ರಾಯ ಇರುವುದಿಲ್ಲ. ಯಾವುದು ಧರ್ಮಸಮಾಜ, ಸುಖೀರಾಜ್ಯ ಆಗಿದೆ ಅಥವಾ ಆಗಿಲ್ಲ ಎಂಬುದನ್ನು ತೀರ್ಮಾನಿಸುವುದು ಕಷ್ಟವಾಗುತ್ತದೆ; ಅಷ್ಟಲ್ಲದೆ ಅಭಿಪ್ರಾಯ ವೈಯಕ್ತಿಕ ವಾಗುತ್ತದೆ.</br> {{gap}}ಇನ್ನು ಮತೀಯ ಸಮಾಜವಾದಿಗಳ ಬಗ್ಗೆ ಹೆಚ್ಚು ವಿಮರ್ಶೆ ಅನಾ ವಶ್ಯಕವಾಗಿದೆ. ನೀತಿಬೋಧೆಯ ಮನಃಪರಿವರ್ತನೆಯ ಕೆಲಸ ಎಡೆಬಿಡದೆ ಆಗುತ್ತಿದ್ದರೂ ಸಮಾಜ ಕಲ್ಯಾಣ ಮತ್ತು ಸುಖೀರಾಜ್ಯ ಮಾತ್ರ ಇನ್ನೂ ಲಭಿಸಿಲ್ಲ ! ಮತೀಯ ಸಮಾಜವಾದ ತನ್ನ ನಿಷ್ಪ್ರಯೋಜತೆಯನ್ನು ವ್ಯಕ್ತಪಡಿಸಿದೆ. ಇಷ್ಟಲ್ಲದೆ, ಆಗಾಗ್ಗೆ ಹಣಬೆಯಂತೆ ಹುಟ್ಟಿಸಾಯುವ ಸಮಾಜವಾದಗಳ ಬಗ್ಗೆ ಶೋಷಿತವರ್ಗ ಬಹು ಎಚ್ಚರಿಕೆಯಿಂದ ಇರ ಬೇಕಾದ ಅವಶ್ಯಕತೆ ಇದೆ ಎಂದು ಮಾರ್ಕ್ಸ್-ಏಂಗೆಲ್ಸ್ರು ಎಚ್ಚರಿಕೆ ಇತ್ತರು. ಮೊದಲನೆಯದಾ ಗಿ ಊಳಿಗಮಾನ್ಯದ-ಸಮಾಜವಾದ (Feudal Socialism). ಈ ವಾದ ನಾನಾಕಾಲದಲ್ಲಿ ನಾನಾರೂಪವನ್ನು ತಾಳುತ್ತಿರುತ್ತದೆ. ಸ್ಥಾನ ಮಾನಗಳನ್ನು ಕಳೆದುಕೊಂಡಿರುವ ಅಥವಾ ಕಳೆದು ಕೊಳ್ಳುತ್ತಿರುವ ಅಥವಾ ಕಳೆದುಕೊಳ್ಳಬೇಕಾಗಿರುವ ವ್ಯಕ್ತಿಗಳು, ತಮ್ಮೆದುರು ಆಗುತ್ತಿರುವ ಬದಲಾವಣೆಗಳಿಗೆ ಅಂಜುವರು, ಇವರು ಜನರ ಮನಸ್ಸನ್ನು ಆಕರ್ಷಿಸುವರೀತಿಯಲ್ಲಿ ಗತಿಸಿದ ಮತ್ತು ಗತಿಸುತ್ತಿರುವ ಸಮಾಜಗಳು ಸುಖ ಸಮಾಜಗಳೆಂದೂ ಬದಲಾವಣೆ ಕ್ಷೇಮಕರವಲ್ಲವೆಂದೂ ಪ್ರಸಾರಮಾಡು ತ್ತಾರೆ. ಈ ಮೂಲಕ ಸ್ಥಾನಮಾನಗಳನ್ನು ಉಳಿಸಿಕೊಳ್ಳುವುದಕ್ಕೆ ಯತ್ನಿಸು ತ್ತಾ ಶೋಷಿತವರ್ಗದ ಹಿತಚಿಂತಕರಾಗಿ ಅವರ ಕ್ಷೇಮವನ್ನು ಬಯಸುವುದು ಅವರ ನಿತ್ಯದ ಮಾತಾಗುತ್ತದೆ. 'ಮಕರ (Crocodile) ಸಮಾಜವಾದಿಗ ಳಾಗುತ್ತಾನೆ. ಅದರಂತೆ ಬದಲಾವಣೆಗಳಿಗೆ ವಿಘ್ನತರಲು ಕಂಕಣಬದ್ಧರಾಗಿ ನಿಲ್ಲುತ್ತಾರೆ. ಎರಡನೆಯದಾಗಿ, ಇನ್ನು ಕೆಲವುವೇಳೆ ಸಮಾಜದಲ್ಲಿ ಆಗು ತ್ತಿರುವ ಬದಲಾವಣೆಗಳನ್ನು ಸುದೀರ್ಘವಾಗಿ ಅರಿಯಲು ಕೆಲವರು ಅಶಕ್ತ ರಾಗಿ ರಸ (ಭಾವ) ಪ್ರಧಾನದ ಸಮಾಜವಾದಿಗಳಾಗುತ್ತಾರೆ (Senti- mental Socialism), ನಿತ್ಯ ಕಾಣುವ ಯಾತನೆ, ಕಷ್ಟ, ದುಃಸ್ಥಿತಿಗಳು ಮನದಟ್ಟಾಗಿ, ದಿಕ್ಕು ತೋಚದೆ, ಗತಿಸಿದ ಸಮಾಜಗಳ ವೈಭವದ ಆರಾ<noinclude></noinclude> 3p1185mtvn778182q6loatwh7il5j9f ಪುಟ:ಕಮ್ಯೂನಿಸಂ.djvu/೪೩ 104 89385 322175 273820 2026-05-24T14:23:12Z Shreelatha.Halemane 7642 /* Validated */ 322175 proofread-page text/x-wiki <noinclude><pagequality level="4" user="Shreelatha.Halemane" />{{rh|3]|ಕಲ್ಪನಾ ಮತ್ತು ವೈಜ್ಞಾನಿಕ ಸಮಾಜವಾದ|೩೩}}</noinclude> ಧಕರಾಗಿಯೋ ಅಥವಾ ಕ್ಷೇಮ ಚಿಂತನೆ ಬಯಸುವರಾಗಿಯೋ ಅಥವಾ ನೀತಿ, ಧರ್ಮ, ನ್ಯಾಯ ಮತ್ತು ಸಂಸ್ಕೃತಿ ಪುನರುದ್ಧಾರಕರಾಗಿಯೋ ಅಥವಾ ಅವ್ಯವಸ್ಥೆಯ ಖಂಡನೆಯಲ್ಲೋ ನಿರತರಾಗಿರುತ್ತಾರೆ. ಆಗಾಗ್ಗೆ, ಸಮಯ ಸಂದರ್ಭಾನುಸಾರ, ಇರುವ ಸ್ಥಿತಿಗತಿಗಳ ಮೇಲೆ ಮುಸುಕು ಎಳೆಯಲು ಸಮಾಜವಾದ ಶಬ್ದದ ಉಚ್ಚಾರಣಾ ಪ್ರದರ್ಶನಗಳೂ ಸಹ ಬರು ತಿರುತ್ತವೆ. ಸ್ವಾಮ್ಯವರ್ಗವೂ ಸಹ ಸಮಾಜವಾದದ ಧ್ಯೇಯವಾದಿ ಆಗುತ್ತದೆ.</br> {{gap}}ಈ ರೀತಿಯಾಗಿ ಬಗೆ ಬಗೆಯ ಸಮಾಜವಾದಗಳು ಪ್ರತಿಪಾದಿತವಾಗುವು ದಕ್ಕೆ ಈ ವಾದಗಳು ಪ್ರತಿಪಾದಿತವಾದ ಸಮಯದಲ್ಲಿದ್ದ ಸಮಾಜ ಸನ್ನಿವೇಶ, ಹಿಂದುಳಿದ ಆರ್ಥಿಕ ಪರಿಸ್ಥಿತಿಗಳು, ಇವೇ ಮುಖ್ಯ ಕಾರಣವಾಗಿವೆಯೆಂದು ಮಾರ್ಕ್ಸ್-ಏಂಗೆಲ್ಸರು ತಿಳಿಸಿದ್ದಾರೆ. ಸಮಾಜದಲ್ಲಿದ್ದ ಶೋಷಣೆ, ಯಾತನೆ, ದುಸ್ಥಿತಿ, ತಾರತಮ್ಯ, ಮನಕರಗುವ ದೃಶ್ಯ, ರಾಜಕೀಯ ಗೊಂದಲಗಳು, ಸ್ವಾಮ್ಯ ವರ್ಗದ ಸ್ವಾರ್ಥ ಇವುಗಳು ವಿಚಾರವೆತ್ರರನ್ನು ಪ್ರಚೋದನೆಗೊಳಿಸಿ ಸುಖೀರಾಜ್ಯದ ನಿರ್ಮಾಣಕ್ಕೆ ಆಶಿಸುವಂತೆ ಮಾಡಿ ದವು. ಪ್ರತಿಭಟನೆ, ಮುಷ್ಕರ, ದಂಗೆ, ಇತ್ಯಾದಿಗಳ ಮೂಲಕ ನೊಂದವರು ಪರಿಹಾರವನ್ನು ಯತ್ನಿಸಿದರೆ, ಸಹೃದಯರು, ವಿಚಾರವೇತ್ತರು ತಾತ್ವಿಕ ರೂಪದಲ್ಲಿ ಸಮಾಜ ಕಲ್ಯಾಣವನ್ನು ಬಯಸಿ ಸಮಾಜ ಸುಧಾರಣೆಗೆ ಯತ್ನಿಸಿದರು, ಆದುದರಿಂದ ಇವರುಗಳಲ್ಲಿ ಅನೇಕರು ಕೇವಲ ಶೋಷಿತ ವರ್ಗದ ಹಿತವನ್ನು ಬಯಸುವುದು ಮಾತ್ರವಲ್ಲದೆ ಸರ್ವರ ಹಿತವನ್ನೂ ಬಯಸಿದ್ದು ಸಹಜವಾಗಿದೆ. ಈ ಕಾರಣದಿಂದ ಸಮಾಜದಲ್ಲಿ ವರ್ಗಗಳ ಇರುವಿಕೆಯನ್ನಾಗಲಿ, ವರ್ಗವೈಷಮ್ಯವನ್ನಾಗಲಿ, ಶೋಷಿತವರ್ಗದ ಹೋರಾ ಟದ ಆವಶ್ಯಕತೆಯನ್ನಾಗಲಿ ಅಂಗೀಕರಿಸಲು ಇಚ್ಛಿಸಲಿಲ್ಲ. ಉತ್ಕೃಷ್ಟ ಸಮಾಜದ ಆಗಮನವನ್ನು ಊಹೆ ಮತ್ತು ಕಲ್ಪನೆಗಳ ಮೂಲಕ ಸಾಧಿಸು ವುದಕ್ಕೆ ತೊಡಗಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.</br> {{gap}}ಕಲ್ಪನೆಯ ಮೂಲಕ ಸುಖೀರಾಜ್ಯದ ಆಗಮನವನ್ನು ನಿರೀಕ್ಷಿಸು ವುದಕ್ಕೆ ಹೊರಟರೆ ವಾಸ್ತವಿಕ ಪರಿಸ್ಥಿತಿಯ ಅರಿವು ಬೇಡವಾಗುತ್ತದೆ. ಆದುದರಿಂದ, ಸ್ವಾಭಾವಿಕವಾಗಿ ಕಲ್ಪನಾ ಸಮಾಜವಾದಿಗಳು ವಾಸ್ತವಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡುವುದಕ್ಕಾಗಲಿ ಅಥವಾ ಶೋಷಣೆಯ ಆ ವಾಸಸ್ಥಾನವನ್ನು ತಿಳಿಯುವುದಕ್ಕಾಗಲಿ ಗಮನಕೊಡಲಿಲ್ಲ, ಯಾವುದು ಅವರ<noinclude></noinclude> qcuodnoochwcqwz6ks24kfp2u4ygne5 ಪುಟ:ಕಮ್ಯೂನಿಸಂ.djvu/೪೪ 104 89386 322187 273821 2026-05-24T14:27:52Z Shreelatha.Halemane 7642 /* Validated */ 322187 proofread-page text/x-wiki <noinclude><pagequality level="4" user="Shreelatha.Halemane" />{{rh|೩೪|ವೈಜ್ಞಾನಿಕ ಸಮಾಜವಾದ|}}</noinclude>ದೃಷ್ಟಿಯಲ್ಲಿ ಕ್ರೂರವಾಗಿ ಕಂಡುಬಂದಿತೋ ಅದನ್ನು ಅಧರ್ಮ, ಅನ್ಯಾಯ ಎಂದರು. ಹಿತೈಷಿಗಳಾದವರು ಯಾವುದಾದರೂ ಒಂದು ವರ್ಗಕ್ಕೆ ಸೇರಿ ದವರೆಂದು ಹೇಳಿಕೊಳ್ಳಲು ಇಷ್ಟ ಪಡಲಿಲ್ಲ. ತಮ್ಮ ಸಂದೇಶವನ್ನು ಯಾವು ದಾದರು ಒಂದು ವರ್ಗಕ್ಕೆ ಸಂಬೋಧನೆಮಾಡಲೂ ಇಲ್ಲ. ಆದುದರಿಂದ ಯಾವ ವರ್ಗಕ್ಕೂ ಇವರ ಮಾತುಗಳಲ್ಲಿ ನಂಬಿಕೆ ಬರದೆ ಹೋಯಿತು. ಕೆಲವು ಹಿಂಬಾಲಕರು ಸಿಕ್ಕಿ ಸಣ್ಣ ಪುಟ್ಟ ಪಂಥಗಳನ್ನು ಸ್ಥಾಪಿಸಿದರೇ ಹೊರತು ಕಾರ್ಯತಃ ಮತ್ತೇನನ್ನೂ ಗಳಿಸಲಿಲ್ಲ.</br> {{gap}}ನಿರ್ವೀರ್ಯವಾದ ಕಲ್ಪನಾ ಸಮಾಜವಾದ ಯಾವ ವಿಧವಾದ ಪರಿ ಹಾರವನ್ನು ತರದಿದ್ದುದರಿಂದ ವಿರಕ್ತಿ, ಅಸಹಾಯಕತೆ, ದಾನ ಧರ್ಮಗಳು, ಮನಃಪರಿವರ್ತನೆಯ ಕೆಲಸ ಇವುಗಳಿಗೆ ಎಡೆಗೊಟ್ಟು, ಎಲ್ಲವೂ ತಂಡ ತಂಡ ವಾಗಿ ಆಗಮಿಸುವಂತೆ ಆಗಿದೆ. ಅಸಹಾಯಕ ಸಮಾಜವಾದಕ್ಕೆ ಅನೇಕ ಸಾಧುಸಂತರ, ಮಹರ್ಷಿಗಳ, ಜೀವನ ಮತ್ತು ತಮ್ಮ ನಿದರ್ಶನಗಳಾಗಿವೆ. ಇವರುಗಳು ಯಾರೂ ಸಹ ಶೋಷಿತವರ್ಗವನ್ನು ಸಂಬೋಧಿಸಲಿಲ್ಲ. ಶೋಷಿತವರ್ಗ ರಾಜಕೀಯದಲ್ಲಿ ಪ್ರವೇಶಿಸಿ ರಾಜ್ಯ ಶಕ್ತಿಯನ್ನು ಗಳಿಸ ಬೇಕೆಂದು ತಿಳಿಸಲಿಲ್ಲ. ರಾಜಕೀಯವನ್ನು ದೂರವಿಡಬೇಕೆಂದು ತಿಳಿಸಿದರು, ಆದುದರಿಂದ ಈ ವಾದಗಳೆಲ್ಲವೂ ಕಾಲಕ್ರಮೇಣ, ಚಿಕ್ಕಮಕ್ಕಳು ಒಂದರ ಮೇಲೊಂದು ಅಡ್ಡವಾಗಿ ಡೊಂಕಾಗಿ ಎಳೆಯುವ ಗೆರೆಗಳಂತೆ ಗೋಜಿ ಹೋಗಿ, ನಿಷ್ಟ್ರಯೋಜಿತ ತತ್ತ್ವಗಳಾಗಿ ಉಳಿದುದು ಆಶ್ಚರ್ಯವೇನೂ ಇಲ್ಲ !</br> {{gap}}ಮುಖ್ಯವಾಗಿ ಹಿಂದುಳಿದ ಆರ್ಥಿಕ ಪರಿಸ್ಥಿತಿ ಸಮಾಜವಾದೀ ವ್ಯವ ಸ್ಥೆಯ ಆಗಮನವನ್ನು ಅಸಾಧ್ಯಮಾಡಿತ್ತು. ಹಿಂದುಳಿದ ಮತ್ತು ಸ್ವಯಂ ಸಂಪೂರ್ಣತೆಯ ಆರ್ಥಿಕ ವ್ಯವಸ್ಥೆ, ವಿಶಾಲ ಭೂಪ್ರದೇಶ ಕಡಿಮೆ ಜನ ಸಂಖ್ಯೆ ಮತ್ತು ಶೋಷಿತವರ್ಗದ ಮೌಡ್ಯ ಇವುಗಳು ಅತಿಪ್ರಮಾಣ ದಲ್ಲಿ ವರ್ಗವೈಷಮ್ಯವನ್ನೂ ಆರ್ಥಿಕ ವಿರಸವನ್ನೂ ತರದಿರುವುದರಿಂದ ಸಮಾಜವಾದದ ಆವಶ್ಯಕತೆಯೇ ಬರುವುದಿಲ್ಲ. ಶೋಷಣೆ ಮತ್ತು ದುಸ್ಥಿತಿ ಇದ್ದರೂ, ಇವುಗಳ ಒತ್ತಡ ಕಡಿಮೆ ಇರುವುದರಿ೦ದ , ವ್ಯವಸ್ಥೆ ಮತ್ತು ಉತ್ಪಾದನಾಶಕ್ತಿಗಳು ಇನ್ನೂ ಅಭಿವೃದ್ಧಿ ಹೊಂದಲು ಅವಕಾಶವಿರುವುದರಿಂದ, ಸಮಾಜದ ಉತ್ಪಾದನಾ ಸಾಧನಗಳ ಸಮಾಜೀ<noinclude></noinclude> e4er7p7s47uf91qp0sf8zpkfb11h8cm ಪುಟ:ಕಮ್ಯೂನಿಸಂ.djvu/೪೭ 104 89387 322176 273822 2026-05-24T14:23:59Z Pragathi. BH 7585 322176 proofread-page text/x-wiki <noinclude><pagequality level="3" user="Pragathi. BH" />{{rh||ಕಲ್ಪನಾ ಮತ್ತು ವೈಜ್ಞಾನಿಕ ಸಮಾಜವಾದ |೩೭}}</noinclude>ಕಾರ್ಮಿಕವರ್ಗ ಕೈಕೊಂಡ ಚಳವಳಿಯ ಫಲವಾಗಿ ಅವಶ್ಯಕವಾಗಿ ಸಮಾಜ ವಾದ ಜನ್ಮತಾಳುತ್ತದೆಂದರು.ಮಾರ್ಕ್ಸ್-ಏಂಗೆಲ್ಸ ರು ತಾವು ಸಂಶೋಧಿಸಿದ ಮುಖ್ಯ ಎರಡು ಸಮಾಜ ಸೂತ್ರಗಳನ್ನು ' ಐತಿಹಾಸಿಕ ಭೌತವಾದ' (Historical Materialism) ಮತ್ತು ಹೆಚ್ಚಿಗೇ ಮೌಲ್ಯ ' (Surplus Value) ಎಂದು ಕರೆದರು. ಮೊದಲನೆಯ ಸೂತ್ರದ ಸಹಾಯದಿಂದ ಸಮಾಜವಿಕಾಸದ ಸ್ವರೂಪವನ್ನು ಚಿತ್ರಿಸಿದರು. ಎರಡನೆಯ ಸೂತ್ರದ ಸಹಾಯದಿಂದ ಶೋಷಣೆಯ ಮರ್ಮವನ್ನು ಬಯಲುಮಾಡಿದರು. ಮಾರ್ಕ್- ಏಂಗೆಲ್ಸ ರಿಂದ ಹೆಚ್ಚಿಗೇಮೌಲ್ಯದ ಸೂತ್ರ ಪ್ರತಿಪಾದನೆಯಾಗುವವರೆಗೂ ಶೋಷ ಣೆಯ ಬಗ್ಗೆ ಖಂಡನೆ ಇತ್ತೆ ವಿನಾ ಯಾರೂ ಶೋಷಣೆ ಯಾವ ರೀತಿಯಲ್ಲಿ ಆಗುತ್ತಿದೆ ಎಂಬುದನ್ನು ತಿಳಿಸಲು ಸಮರ್ಥರಾಗಿರಲಿಲ್ಲ. ಮಾರ್ಕ್ಸ್-ಏಂಗೆಲ್ಸರು ಪ್ರತಿ ಸಮಾಜದ ವ್ಯವಸ್ಥೆಯಲ್ಲಿದ್ದ ಶೋಷಣೆ ಯನ್ನು ವಿವರಿಸಿ, ಬಂಡವಾಳ ವ್ಯವಸ್ಥೆಯಲ್ಲಿ ಸ್ವಾಮ್ಯವರ್ಗ ಕಾರ್ಮಿಕ ವರ್ಗವನ್ನು ಶೋಷಣೆ ಮಾಡುತ್ತಿರುವುದನ್ನು ಹೊರಹಾಕಿದರು, ಶೋಷಣೆ ಇಲ್ಲದೆ ಬಂಡವಾಳವರ್ಗ ಅತ್ಯಲ್ಪ ಕಾಲ ಬದುಕುವುದೂ ದುಸ್ತರವಾಗುವು ದೆಂದು ವಿವರಿಸಿದರು. ಶೋಷಣೆಯು ವರ್ಗದಂತರವನ್ನೂ ದುಸ್ಥಿತಿಯನ್ನೂ ತಂದು ಶೋಷಣೆಯ ವಿನಾಶ ಕಾರ್ಮಿಕವರ್ಗದ ಹೋರಾಟದಿಂದಲೇ ಸಾಧ್ಯವೆಂಬುದನ್ನು ಕಾರ್ಮಿಕವರ್ಗಕ್ಕೆ ಮನದಟ್ಟು ಮಾಡುತ್ತದೆಂದು ತಿಳಿಸಿ ದರು, ಶೋಷಿತವರ್ಗ ಶೋಷಕವರ್ಗವನ್ನು ನಿರ್ಮೂಲಗೊಳಿಸುವು ದೆಂದರು, ಸಮಾಜವಾದದ ಆಗಮನವು ಅನಿವಾರ್ಯವಾಗುತ್ತದೆಂದರು.</br> {{gap}}ಸಂಕ್ಷಿಪ್ತವಾಗಿ ವೈಜ್ಞಾನಿಕ ಸಮಾಜವಾದದ (ಆಧುನಿಕ ಅಥವಾ ಮಾರ್ಕ್ಸ್‌ವಾದ) ಸ್ವರೂಪವನ್ನು ಹೇಳುವುದಾದರೆ ಅದು ಬಂಡವಾಳ ವ್ಯವಸ್ಥೆಯಲ್ಲಿರುವ ವಿರಸಗಳ ಪ್ರತಿಬಿಂಬವಾಗಿದೆ. ಸ್ವಾಮ್ಯವರ್ಗಕ್ಕೂ ಕಾರ್ಮಿಕವರ್ಗ (ಶೋಷಿತವರ್ಗ) ಕ್ಕೂ ನಡೆಯುವ ಬಡಿದಾಟವಾಗಿದೆ. ಬಂಡವಾಳ ಆರ್ಥಿಕ ವ್ಯವಸ್ಥೆ ವಿರಸಪೂರಿತವಾದ ವ್ಯವಸ್ಥೆ. ಅದು ದಾರಿದ್ರ, ನಿರುದ್ಯೋಗ, ಆರ್ಥಿಕ ದುಸ್ಥಿತಿ, ವರ್ಗದ ಆಂತರ, ಶೋಷಣೆ ಇವುಗಳನ್ನು ಉಂಟುಮಾಡುತ್ತದೆ. ಅವುಗಳ ವಿನಾಶಕ್ಕಾಗಿ ಕಾರ್ಮಿಕರು ಹೋರಾಟ<noinclude></noinclude> 91if5g9y1ertta7e2jfs06rai76t083 322190 322176 2026-05-24T14:29:12Z Shreelatha.Halemane 7642 /* Validated */ 322190 proofread-page text/x-wiki <noinclude><pagequality level="4" user="Shreelatha.Halemane" />{{rh||ಕಲ್ಪನಾ ಮತ್ತು ವೈಜ್ಞಾನಿಕ ಸಮಾಜವಾದ |೩೭}}</noinclude>ಕಾರ್ಮಿಕವರ್ಗ ಕೈಕೊಂಡ ಚಳವಳಿಯ ಫಲವಾಗಿ ಅವಶ್ಯಕವಾಗಿ ಸಮಾಜ ವಾದ ಜನ್ಮತಾಳುತ್ತದೆಂದರು. {{gap}}ಮಾರ್ಕ್ಸ್-ಏಂಗೆಲ್ಸ ರು ತಾವು ಸಂಶೋಧಿಸಿದ ಮುಖ್ಯ ಎರಡು ಸಮಾಜ ಸೂತ್ರಗಳನ್ನು ' ಐತಿಹಾಸಿಕ ಭೌತವಾದ' (Historical Materialism) ಮತ್ತು ಹೆಚ್ಚಿಗೇ ಮೌಲ್ಯ ' (Surplus Value) ಎಂದು ಕರೆದರು. ಮೊದಲನೆಯ ಸೂತ್ರದ ಸಹಾಯದಿಂದ ಸಮಾಜವಿಕಾಸದ ಸ್ವರೂಪವನ್ನು ಚಿತ್ರಿಸಿದರು. ಎರಡನೆಯ ಸೂತ್ರದ ಸಹಾಯದಿಂದ ಶೋಷಣೆಯ ಮರ್ಮವನ್ನು ಬಯಲುಮಾಡಿದರು. ಮಾರ್ಕ್- ಏಂಗೆಲ್ಸ ರಿಂದ ಹೆಚ್ಚಿಗೇಮೌಲ್ಯದ ಸೂತ್ರ ಪ್ರತಿಪಾದನೆಯಾಗುವವರೆಗೂ ಶೋಷ ಣೆಯ ಬಗ್ಗೆ ಖಂಡನೆ ಇತ್ತೆ ವಿನಾ ಯಾರೂ ಶೋಷಣೆ ಯಾವ ರೀತಿಯಲ್ಲಿ ಆಗುತ್ತಿದೆ ಎಂಬುದನ್ನು ತಿಳಿಸಲು ಸಮರ್ಥರಾಗಿರಲಿಲ್ಲ. ಮಾರ್ಕ್ಸ್-ಏಂಗೆಲ್ಸರು ಪ್ರತಿ ಸಮಾಜದ ವ್ಯವಸ್ಥೆಯಲ್ಲಿದ್ದ ಶೋಷಣೆ ಯನ್ನು ವಿವರಿಸಿ, ಬಂಡವಾಳ ವ್ಯವಸ್ಥೆಯಲ್ಲಿ ಸ್ವಾಮ್ಯವರ್ಗ ಕಾರ್ಮಿಕ ವರ್ಗವನ್ನು ಶೋಷಣೆ ಮಾಡುತ್ತಿರುವುದನ್ನು ಹೊರಹಾಕಿದರು, ಶೋಷಣೆ ಇಲ್ಲದೆ ಬಂಡವಾಳವರ್ಗ ಅತ್ಯಲ್ಪ ಕಾಲ ಬದುಕುವುದೂ ದುಸ್ತರವಾಗುವು ದೆಂದು ವಿವರಿಸಿದರು. ಶೋಷಣೆಯು ವರ್ಗದಂತರವನ್ನೂ ದುಸ್ಥಿತಿಯನ್ನೂ ತಂದು ಶೋಷಣೆಯ ವಿನಾಶ ಕಾರ್ಮಿಕವರ್ಗದ ಹೋರಾಟದಿಂದಲೇ ಸಾಧ್ಯವೆಂಬುದನ್ನು ಕಾರ್ಮಿಕವರ್ಗಕ್ಕೆ ಮನದಟ್ಟು ಮಾಡುತ್ತದೆಂದು ತಿಳಿಸಿ ದರು, ಶೋಷಿತವರ್ಗ ಶೋಷಕವರ್ಗವನ್ನು ನಿರ್ಮೂಲಗೊಳಿಸುವು ದೆಂದರು, ಸಮಾಜವಾದದ ಆಗಮನವು ಅನಿವಾರ್ಯವಾಗುತ್ತದೆಂದರು.</br> {{gap}}ಸಂಕ್ಷಿಪ್ತವಾಗಿ ವೈಜ್ಞಾನಿಕ ಸಮಾಜವಾದದ (ಆಧುನಿಕ ಅಥವಾ ಮಾರ್ಕ್ಸ್‌ವಾದ) ಸ್ವರೂಪವನ್ನು ಹೇಳುವುದಾದರೆ ಅದು ಬಂಡವಾಳ ವ್ಯವಸ್ಥೆಯಲ್ಲಿರುವ ವಿರಸಗಳ ಪ್ರತಿಬಿಂಬವಾಗಿದೆ. ಸ್ವಾಮ್ಯವರ್ಗಕ್ಕೂ ಕಾರ್ಮಿಕವರ್ಗ (ಶೋಷಿತವರ್ಗ) ಕ್ಕೂ ನಡೆಯುವ ಬಡಿದಾಟವಾಗಿದೆ. ಬಂಡವಾಳ ಆರ್ಥಿಕ ವ್ಯವಸ್ಥೆ ವಿರಸಪೂರಿತವಾದ ವ್ಯವಸ್ಥೆ. ಅದು ದಾರಿದ್ರ, ನಿರುದ್ಯೋಗ, ಆರ್ಥಿಕ ದುಸ್ಥಿತಿ, ವರ್ಗದ ಆಂತರ, ಶೋಷಣೆ ಇವುಗಳನ್ನು ಉಂಟುಮಾಡುತ್ತದೆ. ಅವುಗಳ ವಿನಾಶಕ್ಕಾಗಿ ಕಾರ್ಮಿಕರು ಹೋರಾಟ<noinclude></noinclude> mzspsxfjpr8q42l9wq1k0wle6iwoq54 ಪುಟ:ಕಮ್ಯೂನಿಸಂ.djvu/೪೯ 104 89389 322172 224213 2026-05-24T14:18:51Z Shreelatha.Halemane 7642 /* Validated */ 322172 proofread-page text/x-wiki <noinclude><pagequality level="4" user="Shreelatha.Halemane" /></noinclude> {{rh|center=ಕಲ್ಪನಾ ಮತ್ತು ವೈಜ್ಞಾನಿಕ ಸಮಾಜವಾದ|left=|right=೩೯}} ಎಂಬ ದನ್ನು ಮಾತ್ರ ತಿಳಿಸುವ ವಾದವಾಗಿದೆ. ಇದೇ ವೈಜ್ಞಾನಿಕ ಸಮಾಜ</br> ವಾದ (ಮಾರ್ಕ್ಸ್‌ವಾದ) ಮಾಡಿರುವ ಕೆಲಸ,</br> {{center|ಅಧ್ಯಯನ :}} The Manifesto of the Communist Party :</br> {{gap}}(Max-Engels Selected Works Vol. 1, Pages 21-61 ;</br> {{gap}} Ed 1951, Moscow).</br> Socialism-Utopian and Scientific : F. Engels.</br> {{gap}}(Marx-Engles Selected Works, Vol. II, Pages 86-125 ;</br> {{gap}} Ed. 1951.)</br> Condition of the Working Class in England :</br> {{gap}}Engels, L, & W. London.</br> What is Marxism ?</br> {{gap}}Enil Burns, L. & W. London.</br> Communism :</br> {{gap}}Ralph Fox ; Kitabistan, Allahabad.</br> {{Css image crop |Image = ಕಮ್ಯೂನಿಸಂ.djvu |Page = 49 |bSize = 372 |cWidth = 110 |cHeight = 138 |oTop = 345 |oLeft = 135 |Location = center |Description = }}<noinclude></noinclude> rotio26nllns0ovq763sfzoc560pke3 ಪುಟ:ಕಮ್ಯೂನಿಸಂ.djvu/೫೦ 104 89390 322170 273823 2026-05-24T14:17:52Z Shreelatha.Halemane 7642 /* Validated */ 322170 proofread-page text/x-wiki <noinclude><pagequality level="4" user="Shreelatha.Halemane" />{{rh||ವೈಜ್ಞಾನಿಕ ಸಮಾಜವಾದದ ಆಧಾರ ಅಧ್ಯಾಯ-3.|}}</noinclude> {{gap}}pಮಾರ್ಕ್ಸ್ ವಾದ ವಿಶ್ವದೃಷ್ಟಿಯನ್ನು (World Outlook) ನಿರೂಪಿಸುವ ಒಂದು ತತ್ವ ಸಿದ್ಧಾಂತವಾಗಿದೆ. ವೈಜ್ಞಾನಿಕ ಸಮಾಜ ವಾದ ಈ ತತ್ಸಮುಚ್ಚಯದಲ್ಲಿ ಹೆಣೆದುಕೊಂಡು ತಾರ್ಕಿಕ ರೂಪದಲ್ಲಿ ಹೊರಬಿದ್ದಿರುವ ಭಾಗವಾಗಿದೆ. ಈ ಕಾರಣದಿಂದ ಮಾರ್ಕ್ಸ್ ಸಿದ್ಧಾಂತ ದಲ್ಲಿ ಪ್ರಕೃತಿಯ ಜನನ, ಪ್ರಕೃತಿಯ ಕಾರ್ಯವಿಧಾನ, ಪ್ರಕೃತಿಗೂ ಮಾನವ ನಿಗೂ ಇರುವ ಸಂಬಂಧ ಸಮಾಜದ ಜನನ, ಸಮಾಜದ ಬೆಳವಣಿಗೆ, ಸಮಾಜದಲ್ಲಿ ಕಾಣುವ ಆರ್ಥಿಕ ವ್ಯವಸ್ಥೆ, ಕಟ್ಟಳೆ, ಕಾನೂನು, ಜಾತಿ, ಮತ, ದೇವರಲ್ಲಿ ನಂಬಿಕೆ, ನೀತಿ, ಶಾಸ್ತ್ರಗಳು ಇತ್ಯಾದಿ ಎಲ್ಲದರ ಸ್ವರೂಪ, ವಿನ್ಯಾಸ, ಅವುಗಳನ್ನು ಅರ್ಥಮಾಡಿಕೊಳ್ಳುವ ರೀತಿ, ಅವುಗಳಿಗಿರುವ ಪರಸ್ಪರ ಸಂಬಂಧ, ಅವುಗಳ ಸ್ಥಾನಮಾನಗಳು, ಇತ್ಯಾದಿಗಳನ್ನು ಚರ್ಚಿಸ ಲಾಗಿದೆ. ಮಾನವನ ಬಾಳು ಮುಖ್ಯವಾದದ್ದು. ಬಾಳಿನಲ್ಲಿ ರೂಪರೇಖೆ ಗಳು ಇರುತ್ತವೆ. ಈ ರೂಪರೇಖೆಗಳ ಒಂದು ಭಾಗದಲ್ಲಿ ತಲ್ಲೀನರಾಗಿ ಒಟ್ಟು ಬಾಳನ್ನು ಮರೆತರೆ ಕುರುಡರು ಆನೆಯನ್ನು ಗುರುತಿಸಿದ ಕಥೆ ಯಾಗುತ್ತದೆ. ಒಟ್ಟು ಬಾಳನ್ನು ಅರಿಯಲು ಯತ್ನಿಸಬೇಕು. ಆಗಲೇ ಇತಿಹಾಸದ ಉದ್ದಕ್ಕೂ ವಿವಿಧ ಕಾಲಗಳಲ್ಲಿ ವಿವಿಧ ಸಮಾಜಗಳಲ್ಲಿ, ಬಾಳಿನ ಸ್ವರೂಪ, ಚಿತ್ರ ವಿಚಿತ್ರ ಮತ್ತು ರೂಪರೇಖೆಗಳು ವ್ಯಕ್ತವಾಗುವುವು. ಬಾಳು ಸಮಾಜದಲ್ಲಿ ನಡೆಯುತ್ತದೆ ; ಇತರ ವ್ಯಕ್ತಿಗಳ ಜೊತೆಯಲ್ಲಿ ಸಂಬಂಧವನ್ನು ಬೆಳಸಿ ಸಾಗುತ್ತದೆ, ಸಾಗಾಣಿಕೆಯಲ್ಲಿ ವಿಧವಿಧವಾದ ಸಮಸ್ಯೆಗಳು ತಲೆದೋರುತ್ತವೆ. ಸಮಸ್ಯೆಗಳನ್ನು ಬೇರೆ ಬೇರೆ ಹೆಸರಿನಲ್ಲಿ ಕರೆದರೂ ಅವುಗಳೆಲ್ಲವೂ ಒಂದೇ ಜೀವನದ ಸಮಸ್ಯೆಗಳು, ಈ ಮರ್ಮ ವನ್ನು ಮಾರ್ಕ್ಸ್ ತಮ್ಮ ಮರೆಯದೆ ಬಾಳನ್ನು ಆಮೂಲಾಗ್ರವಾಗಿ ಪರೀಕ್ಷಿ ಸಿದೆ. ಅದರ ಪದರಗಳನ್ನೆಲ್ಲ ಬಿಡಿಸಲು ಯತ್ನಿಸಿದರೂ ಆ ಪದರಗಳೆ ಲ್ಲವೂ ಬಾಳನ್ನು ನಡೆಸಲು ಹೊರಟಿರುವ ಮಾನವ ಜೀವಿಗಳಲ್ಲಿ ಕೇಂದ್ರೀ ಕೃತವಾಗಿವೆ ಎಂಬುದನ್ನು ಶ್ರುತಪಡಿಸುತ್ತದೆ. ಈ ಕಾರಣಗಳಿಂದ<noinclude></noinclude> eyvjdt81fymrkvwrhav3j08lku6t2on 322171 322170 2026-05-24T14:18:05Z Shreelatha.Halemane 7642 322171 proofread-page text/x-wiki <noinclude><pagequality level="4" user="Shreelatha.Halemane" />{{rh||ವೈಜ್ಞಾನಿಕ ಸಮಾಜವಾದದ ಆಧಾರ ಅಧ್ಯಾಯ-3.|}}</noinclude> {{gap}}ಮಾರ್ಕ್ಸ್ ವಾದ ವಿಶ್ವದೃಷ್ಟಿಯನ್ನು (World Outlook) ನಿರೂಪಿಸುವ ಒಂದು ತತ್ವ ಸಿದ್ಧಾಂತವಾಗಿದೆ. ವೈಜ್ಞಾನಿಕ ಸಮಾಜ ವಾದ ಈ ತತ್ಸಮುಚ್ಚಯದಲ್ಲಿ ಹೆಣೆದುಕೊಂಡು ತಾರ್ಕಿಕ ರೂಪದಲ್ಲಿ ಹೊರಬಿದ್ದಿರುವ ಭಾಗವಾಗಿದೆ. ಈ ಕಾರಣದಿಂದ ಮಾರ್ಕ್ಸ್ ಸಿದ್ಧಾಂತ ದಲ್ಲಿ ಪ್ರಕೃತಿಯ ಜನನ, ಪ್ರಕೃತಿಯ ಕಾರ್ಯವಿಧಾನ, ಪ್ರಕೃತಿಗೂ ಮಾನವ ನಿಗೂ ಇರುವ ಸಂಬಂಧ ಸಮಾಜದ ಜನನ, ಸಮಾಜದ ಬೆಳವಣಿಗೆ, ಸಮಾಜದಲ್ಲಿ ಕಾಣುವ ಆರ್ಥಿಕ ವ್ಯವಸ್ಥೆ, ಕಟ್ಟಳೆ, ಕಾನೂನು, ಜಾತಿ, ಮತ, ದೇವರಲ್ಲಿ ನಂಬಿಕೆ, ನೀತಿ, ಶಾಸ್ತ್ರಗಳು ಇತ್ಯಾದಿ ಎಲ್ಲದರ ಸ್ವರೂಪ, ವಿನ್ಯಾಸ, ಅವುಗಳನ್ನು ಅರ್ಥಮಾಡಿಕೊಳ್ಳುವ ರೀತಿ, ಅವುಗಳಿಗಿರುವ ಪರಸ್ಪರ ಸಂಬಂಧ, ಅವುಗಳ ಸ್ಥಾನಮಾನಗಳು, ಇತ್ಯಾದಿಗಳನ್ನು ಚರ್ಚಿಸ ಲಾಗಿದೆ. ಮಾನವನ ಬಾಳು ಮುಖ್ಯವಾದದ್ದು. ಬಾಳಿನಲ್ಲಿ ರೂಪರೇಖೆ ಗಳು ಇರುತ್ತವೆ. ಈ ರೂಪರೇಖೆಗಳ ಒಂದು ಭಾಗದಲ್ಲಿ ತಲ್ಲೀನರಾಗಿ ಒಟ್ಟು ಬಾಳನ್ನು ಮರೆತರೆ ಕುರುಡರು ಆನೆಯನ್ನು ಗುರುತಿಸಿದ ಕಥೆ ಯಾಗುತ್ತದೆ. ಒಟ್ಟು ಬಾಳನ್ನು ಅರಿಯಲು ಯತ್ನಿಸಬೇಕು. ಆಗಲೇ ಇತಿಹಾಸದ ಉದ್ದಕ್ಕೂ ವಿವಿಧ ಕಾಲಗಳಲ್ಲಿ ವಿವಿಧ ಸಮಾಜಗಳಲ್ಲಿ, ಬಾಳಿನ ಸ್ವರೂಪ, ಚಿತ್ರ ವಿಚಿತ್ರ ಮತ್ತು ರೂಪರೇಖೆಗಳು ವ್ಯಕ್ತವಾಗುವುವು. ಬಾಳು ಸಮಾಜದಲ್ಲಿ ನಡೆಯುತ್ತದೆ ; ಇತರ ವ್ಯಕ್ತಿಗಳ ಜೊತೆಯಲ್ಲಿ ಸಂಬಂಧವನ್ನು ಬೆಳಸಿ ಸಾಗುತ್ತದೆ, ಸಾಗಾಣಿಕೆಯಲ್ಲಿ ವಿಧವಿಧವಾದ ಸಮಸ್ಯೆಗಳು ತಲೆದೋರುತ್ತವೆ. ಸಮಸ್ಯೆಗಳನ್ನು ಬೇರೆ ಬೇರೆ ಹೆಸರಿನಲ್ಲಿ ಕರೆದರೂ ಅವುಗಳೆಲ್ಲವೂ ಒಂದೇ ಜೀವನದ ಸಮಸ್ಯೆಗಳು, ಈ ಮರ್ಮ ವನ್ನು ಮಾರ್ಕ್ಸ್ ತಮ್ಮ ಮರೆಯದೆ ಬಾಳನ್ನು ಆಮೂಲಾಗ್ರವಾಗಿ ಪರೀಕ್ಷಿ ಸಿದೆ. ಅದರ ಪದರಗಳನ್ನೆಲ್ಲ ಬಿಡಿಸಲು ಯತ್ನಿಸಿದರೂ ಆ ಪದರಗಳೆ ಲ್ಲವೂ ಬಾಳನ್ನು ನಡೆಸಲು ಹೊರಟಿರುವ ಮಾನವ ಜೀವಿಗಳಲ್ಲಿ ಕೇಂದ್ರೀ ಕೃತವಾಗಿವೆ ಎಂಬುದನ್ನು ಶ್ರುತಪಡಿಸುತ್ತದೆ. ಈ ಕಾರಣಗಳಿಂದ<noinclude></noinclude> i35z0ju36phzwiuz8tpa5xm40xb2gs0 ಪುಟ:ಕಮ್ಯೂನಿಸಂ.djvu/೫೧ 104 89391 322169 273824 2026-05-24T14:16:48Z Shreelatha.Halemane 7642 /* Validated */ 322169 proofread-page text/x-wiki <noinclude><pagequality level="4" user="Shreelatha.Halemane" />{{rh||ವೈಜ್ಞಾನಿಕ ಸಮಾಜವಾದದ ಆಧಾರ|೪೧}}</noinclude>ಮಾರ್ಕ್ಸ್ ತತ್ವ ಕೇವಲ ವಿಜ್ಞಾನವಲ್ಲ, ಅರ್ಥಶಾಸ್ತ್ರವಲ್ಲ, ರಾಜ ಕೀಯ ಶಾಸ್ತ್ರವಲ್ಲ, ಮನಶ್ಯಾಸ್ತ್ರವಲ್ಲ, ಸಮಾಜ ಶಾಸ್ತ್ರವಲ್ಲ-ಅದು ಎಲ್ಲವೂ ಆಗಿದೆ. ಹೀಗಿರುವುದರಿಂದಲೇ ಮಾರ್ಕ್ಸ್ ತತ್ತ್ವವನ್ನು ತಿಳಿದುಕೊಳ್ಳು ವುದರಲ್ಲಿ ಸ್ವಲ್ಪ ಕ್ಲಿಷ್ಟತೆ ಕಂಡು ಬರುವುದು, ಎಲ್ಲ ಶಾಸ್ತ್ರಗಳನ್ನೂ ದೀರ್ಘ ವಾಗಿ ವ್ಯಾಸಂಗ ಮಾಡಿದರೆ ಸಾಲದು, ಪ್ರತಿಯೊಂದಕ್ಕೂ ಇರುವ ಪರಸ್ಪರ ನಿಕಟ ಸಂಬಂಧವನ್ನು ಬಾಳಿನ ಹಿನ್ನೆಲೆಯಲ್ಲಿ ತಿಳಿದುಕೊಳ್ಳಲು ಶಕ್ತಿ ಸಂಪಾದಿಸಿರಬೇಕು. ಇಲ್ಲದಿದ್ದರೆ ಶುಷ್ಕ ಪಾಂಡಿತ್ಯವಾಗುತ್ತದೆ. ಬಾಳಿನ, ಸಮಾಜದ, ಪ್ರಕೃತಿಯ ಒಟ್ಟಿನ ಸೊಗಸನ್ನು ಚಿತ್ರಿಸುವ ಉದ್ಯಮದಲ್ಲಿ ಮಾರ್ಕ್ಸ್- ಏಂಗೆಲ್ಸರು ನಿಸ್ಸೀಮರು, ಅವರ ತತ್ವ ಸಿದ್ದಾಂತ ತನ್ನ ಪ್ರತಿಯೊಂದು ಭಾಗದಲ್ಲೂ ಈ ಮೇಲ್ಮೈಯನ್ನು ಹೊರಸೂಸುತ್ತದೆ. ಮಾರ್ಕ್ಸ್ ಸಿದ್ಧಾಂತ ಇನ್ನೊಂದು ಲಕ್ಷಣವನ್ನು ವ್ಯಕ್ತಪಡಿಸುತ್ತದೆ, ಕೇವಲ ತಾತ್ವಿಕ ನಿರೂಪಣೆಯಾಗಿರದೆ ಕಾರ್ಯಾಚರಣೆಯ ಅಗತ್ಯವನ್ನು ಒತ್ತಿ ಹೇಳಿರುವ ತತ್ವವಾಗಿದೆ. ಲೋಕವ್ಯವಹಾರವನ್ನು ತ್ಯಜಿಸಿ ಸತ್ಯಸಂಶೋ ಧನೆಯೇ ಗುರಿಯೆಂದು ತಿಳಿಸುವ ತತ್ತ್ವವಲ್ಲ, ಈ ಕಾರಣದಿಂದ ಮಾರ್ಕ್ಸ್ ವಾದ ಪ್ರಥಮವಾಗಿ ಶೋಷಣೆಗೆ ಒಳಗಾಗಿರುವವರ ಆಶೋತ್ತರಗಳನ್ನು ಪ್ರತಿಬಿಂಬಿಸುವ ತತ್ತ್ವ, ಶೋಷಣೆಯಿಂದ ಪಾರಾಗಲು ಯಾವ ಬಗೆಯ ಕಾರ್ಯಾಚರಣೆಯಿಂದ ಸಾಧ್ಯ ಎಂದು ಹೇಳುವ ತತ್ತ್ವ . ಶೋಷಣೆ ಎಂದರೇನು, ಅದು ಯಾವ ರೀತಿಯಲ್ಲಿ ಆಗುತ್ತಿದೆ, ಶೋಷಣೆ ಆಗುವುದಕ್ಕೆ ಯಾರು ಯಾರು, ಯಾವ ಯಾವ ಶಕ್ತಿಗಳು ಸಹಾಯಕವಾಗಿ ನಿಂತಿವೆ, ಮಾಡುತ್ತಿರುವವರು ಯಾರು, ಇತ್ಯಾದಿಗಳನ್ನು ತಾತ್ವಿಕ ರೂಪದಲ್ಲಿ ವಿವರಿ ಸಿದೆ, ಪ್ರತಿಭಟನೆ, ಕಾರ್ಯಾಚರಣೆ ಇವುಗಳ ಮೂಲಕವೇ ಶೋಷಣೆಯಿಂದ ಪಾರಾಗಲು ಸಾಧ್ಯವೆಂದು ತಿಳಿಸುತ್ತದೆ. ಶೋಷಣೆಯಿಂದ ಜೀವನ ಮಾಡು ತ್ತಿರುವ ವರ್ಗದಮೇಲೆ ಶೋಷಿತವರ್ಗ ಸಂಘಟಿತರಾಗಿ ಚಳವಳಿ ಹೂಡ ಬೇಕೆಂದು ತಿಳಿಸುತ್ತದೆ. ಹೊಸ ಬಗೆಯ ಸಾಮಾಜಿಕ ಮತ್ತು ಆರ್ಥಿಕ ವ್ಯವ ಸ್ಥೆಗೆ ಹೋರಾಟ ನಡೆಸಬೇಕೆಂದು ನಿರೂಪಿಸುತ್ತದೆ. ಆದುದರಿಂದ ಮಾರ್ಕ್ಸ್ ತತ್ತ್ವ ಹೋರಾಟಕ್ಕೆ ಮುನ್ನುಡಿಯಾಗಿ ಮಾರ್ಗದರ್ಶಕವಾಗಿದೆ. ಸ್ಥಿತಿ ಗತಿಗಳು ಬದಲಾವಣೆಗೊಂಡಂತೆ, ಹೊಸ ಸನ್ನಿವೇಶಗಳು ಮೂಡಿದಂತೆ ಹೊಸಸಂದರ್ಭ ಸನ್ನಿವೇಶಗಳ ವಿವರಣೆಯೂ ವಿಮರ್ಶೆಯೂ ಅವಶ್ಯಕವೆಂದು<noinclude></noinclude> 55088s2r3hsud6uqama0hkeon3z1k3e ಪುಟ:ಕಮ್ಯೂನಿಸಂ.djvu/೫೨ 104 89392 322168 273825 2026-05-24T14:15:10Z Shreelatha.Halemane 7642 /* Validated */ 322168 proofread-page text/x-wiki <noinclude><pagequality level="4" user="Shreelatha.Halemane" />{{rh|೪೨|ವೈಜ್ಞಾನಿಕ ಸಮಾಜವಾದ|}}</noinclude>ಒತ್ತಿ ಹೇಳುತ್ತದೆ, ಹೊಸ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವುದಕ್ಕೆ ತತ್ತ್ವ ಸಾಧ್ಯ ಮಾಡಿಕೊಡದಿದ್ದರೆ ಪ್ರತಿಪಾದನೆಯಾಗಿರುವ ತತ್ವದಲ್ಲಿ ಮಾರ್ಪಾಡು ಅಗತ್ಯವೆಂದು ಸೂಚಿಸುತ್ತದೆ. ಪ್ರತಿ ಸಮಯದಲ್ಲೂ ಸನ್ನಿ ವೇಶ, ಸ್ಥಿತಿಗತಿಗಳು, ತಮ್ಮ ಮತ್ತು ಹೋರಾಟ ಇವುಗಳಲ್ಲಿ ಸಮನ್ವಯ ಇರಬೇಕೆಂದು ವಿಧಿಸುತ್ತದೆ. ಶೋಷಿತವರ್ಗವನ್ನು ಶೋಷಣೆಯಿಂದ ವಿಮುಕ್ತರನ್ನಾಗಿ ಮಾಡುವುದೇ ಮಾರ್ಕ್ಸ್ ತತ್ತ್ವದ ಮೂಲ ಉದ್ದೇಶ ವಾದ್ದರಿಂದ ಅದು ಯಾವಾಗಲೂ ದುಡಿಮೆ ಮಾಡುವ ವರ್ಗದ ಪ್ರತಿನಿಧಿ ಶೋಷಣೆ ಇಲ್ಲವೆಂದು ಹೇಳುವವರನ್ನೂ, ಶೋಷಣೆಯಮೇಲೆ ಮುಸುಕ ನ್ನೆಳೆದು ಅದನ್ನು ಮರೆಮಾಚಿರುವವರನ್ನೂ, ದೈವನಿಯಾಮಕ, ದೇವರಲ್ಲಿ ಮರೆಹೋಗೆಂದು ಹೇಳುವ ಮತೀಯ ತತ್ತ್ವಗಳನ್ನೂ, ಸತ್ಯಾನ್ವೇಷಣೆಯ ಸೋಗಿನಲ್ಲಿ ಕಾಲಹರಣಮಾಡುತ್ತಿರುವ ವಿದ್ವನ್ಮಣಿಗಳನ್ನೂ, ಅಜ್ಞಾನ ದಿಂದ ಕೂಡಿರುವ ಮೌಡ್ಯ ಜನಸಮುದಾಯಕ್ಕೆ ಅಚ್ಚರಿ ಉಂಟುಮಾಡು ತಿರುವ ರಾಜಮಂತ್ರ ಪ್ರವೀಣರು, ರಾಜ್ಯನೀತಿ ನಿಪುಣರು ಮತ್ತು ಅರ್ಥ ಶಾಸ್ತ್ರ ಪಂಡಿತರನ್ನೂ ಕಟುವಾಗಿ ಟೀಕೆಗೆ ಗುರಿಪಡಿಸಿದೆ. ಕಾರ್ಮಿಕ ವರ್ಗಕ್ಕೆ ಬೇಕಾಗಿರುವ ತತ್ವ ನಿರೂಪಣೆಯನ್ನು ಅಂಜದೆ ನೈಜವಾಗಿ ತಿಳಿಸುತ್ತದೆ, ಆರ್ಥಿಕ ಜೀವನವೇ ಬಾಳಿನ ಆಧಾರ ಸ್ತಂಭವೆಂದು ಒತ್ತಿ ಹೇಳಿ, ಆರ್ಥಿಕ ಜೀವನದ ಇತಿಹಾಸವನ್ನು ಆದಿಯಿಂದ ಬಂಡವಾಳಶಾಹಿ ಸಮಾಜದವರೆಗೆ ನಿರ್ಭಯವಾಗಿ ವಿಶದಪಡಿಸಿದೆ. ಹಾಗೆ ತಿಳಿಸಲು ಹೊರಟು ತನ್ನದೇ ಆದ ಹೊಸ ಸಿದ್ದಾಂತವನ್ನು ಪ್ರತಿಪಾದಿಸಿದ, ಬಂಡ ವಾಳ ಉತ್ಪಾದನಾ ವ್ಯವಸ್ಥೆಯಲ್ಲಿರುವ ವಿರೋಧಾಭಾಸ ಸ್ವಾಮ್ಯಕ್ಕೆ ಮೃತ್ಯು ವಾಗುತ್ತದೆಂದೂ, ಅದನ್ನು ತೊಡೆಯಲು ಕಾರ್ಮಿಕವರ್ಗ ಜನ್ಮತಾಳಿದೆ ಯೆಂದೂ ತಿಳಿಸಿದೆ. ಒಂದು ಪಕ್ಷ ಮಾರ್ಕ್ಸ್‌ವಾದ ಶೋಷಿತವರ್ಗದ ಪಕ್ಷೀಯ ಸಿದ್ಧಾಂತವಾಗಿ ಕಂಡರೆ, ಇರುವ ಮತ್ತು ಹಿಂದಿನ ಸಿದ್ದಾಂತ ಗಳಿಗೆ ವಿರುದ್ಧವಾಗಿದ್ದರೆ, ಅದು ಇತಿಹಾಸದ ಉದ್ದಕ್ಕೂ ಸ್ವಾಮ್ಯ ವರ್ಗ ದಿಂದ ನಡೆದಿರುವ ಶೋಷಣೆಯ ಮತ್ತು ಶೋಷಕವರ್ಗದ ಖಂಡನೆ ಮಾಡುವ ಪಕ್ಷವನ್ನಾಗಿ ಮಾಡಿದೆ. ಸಮಾಜದಲ್ಲಿ ದುಡಿಮೆ ಮಾಡುವ ಜನರಿಗೆ ಮಾತ್ರ ಸ್ಥಳವಿರುವುದರಿಂದ ಶೋಷಣೆಮಾಡುವವರಿಗೆ ಸ್ಥಳವಿಲ್ಲ. ಹಾಗೆಯೇ ಶೋಷಣೆಯನ್ನು ಸಮರ್ಥಿಸುವ ಸಿದ್ದಾಂತಗಳಿಗೂ ಸ್ಥಳವಿಲ್ಲ. ಮಾರ್ಕ್ಸ್<noinclude></noinclude> mwy25sw4775p6oldyqylpd6uewrnk1b ಪುಟ:ಕಮ್ಯೂನಿಸಂ.djvu/೫೩ 104 89393 322167 273826 2026-05-24T14:13:39Z Shreelatha.Halemane 7642 /* Validated */ 322167 proofread-page text/x-wiki <noinclude><pagequality level="4" user="Shreelatha.Halemane" />{{rh||ವೈಜ್ಞಾನಿಕ ಸಮಾಜವಾದದ ಆಧಾರ| ೪೩}}</noinclude>ಸಿದ್ಧಾಂತಕ್ಕೆ ಮಾತ್ರ ಸ್ಥಳವಿದೆ. ಶೋಷಿತವರ್ಗದ ಆಶೋತ್ತರಗಳನ್ನು ಪ್ರತಿಬಿಂಬಿಸುವುದು ಪಕ್ಷೀಯವಾದರೆ ಬಾಧಕವಿಲ್ಲ. {{gap}}ಸಮಾಜದ ಸ್ವರೂಪವನ್ನು ಅರಿಯಲು ಮಾರ್ಕ್ಸ್-ಏಂಗೆಲ್ಸರ ಸಿದ್ದಾಂತ ಹೊಸ ಕ್ರಮವನ್ನು ನಿರೂಪಿಸಿದೆ. ಈ ಸಿದ್ಧಾಂತದೃಷ್ಟಿಗೆ ಮಾರ್ಕ್ಸ್-ಏಂಗೆಲ್ಸ್ ರು ಎಷ್ಟು ಬಾಧ್ಯರೋ ಅಷ್ಟೇ ಅವರು ಈ ಹೊಸ ಸಿದ್ದಾಂತ ಸೃಷ್ಟಿಸುವುದಕ್ಕೆ ಸಹಾಯಕರಾದ ಮಹನೀಯರುಗಳಿಗೂ ಋಣಿ ಗಳಾಗಿರುತ್ತಾರೆ. ಆದುದರಿಂದ ಅವರ ಸಿದ್ಧಾಂತ ಸ್ವೇಚ್ಚಾವಾದವಲ್ಲ. ಈ ಸಿದ್ಧಾಂತದ ಅನೇಕ ಭಾಗಗಳು ಇತರರು ಪ್ರತಿಪಾದಿಸಲು ಯತ್ನಿಸಿದ, ಅಥವಾ ಸ್ವಲ್ಪ ಮಟ್ಟಿಗೆ ಯತ್ನಿಸಿ ಅಲ್ಲೇ ನಿಂತ ಅಥವಾ ವಿಷಯಗೋಚರ ವಾಗಿ ಹೇಳುವುದನ್ನು ತಪ್ಪು ರೀತಿಯಲ್ಲಿ ಹೇಳಿರುವ ಅಥವಾ ವಿಷಯ ಗೋಚರವಾಗಿ ಅದಕ್ಕೆ ಕಾರಣಗಳು ಬೇರೆಯಾಗಿವೆಯೆಂದು ಹೇಳಿದ ಗ್ರಂಥ ಗಳಲ್ಲಿ ಕಾಣುತ್ತವೆ. ಈ ಕಾರಣದಿಂದ ಮಾರ್ಕ್ಸ್-ಏಂಗೆಲ್ಸರ ಸಿದ್ದಾಂತ ದೃಷ್ಟಿಗೆ ಯೂರೋಪಿನ 19 ನೇ ಶತಮಾನದ ಆದಿ ಭಾಗದಲ್ಲಿ ಪ್ರಬುದ್ಧಾವಸ್ಥೆಗೆ ಬಂದ ಮೂರು ತತ್ವಗಳು ಸಹಾಯಕ ಭಾಗವಾಗಿ ಸೇರಿವೆ. ಮೊದಲನೆಯದಾಗಿ, ಜರ್ಮನಿ ದೇಶದ ಅತಿ ವಿಖ್ಯಾತ ತತ್ತ್ವ ವೇತ್ತ ಹೆಗೆಲ್ ಎಂಬಾತನು ಪ್ರತಿಪಾದನೆ ಮಾಡಿದ ಇತಿಹಾಸ ದೃಷಿ ಮತ್ತು ತರ್ಕ ; ಎರಡನೆಯದಾಗಿ, ಫ್ರಾನ್ಸ್ ದೇಶದಲ್ಲಿ ಪ್ರತಿಪಾದಿತವಾದ ಸಮಾಜವಾದ ತತ್ತ್ವ; ಕೊನೆಯದಾಗಿ, ಇಂಗ್ಲೆಂಡ್ ದೇಶದಲ್ಲಿ ಕೈಗಾರಿಕಾ ಕ್ರಾಂತಿಯನಂತರ ವ್ಯವಸ್ಥೆ ಹೊಂದಿದ ಬಂಡವಾಳ ಆರ್ಥಿಕ ವ್ಯವಸ್ಥೆ, ಅದರ ಸ್ವರೂಪವನ್ನು ತಿಳಿಸಲು ಪ್ರತಿಪಾದಿತವಾದ ಆಡ್ಯಾಮ್ ಸ್ಮಿತ್ ಮತ್ತು ರಿಕಾರ್ಡೊಗಳ ಅರ್ಥಶಾಸ್ತ್ರ ಮತ್ತು ಪದಾರ್ಥಗಳ ಮೌಲ್ಯವನ್ನು ನಿರ್ಧರಿ ಸಲು ದುಡಿಮೆಯನ್ನು ಆಧಾರಮಾಡಿದ ತತ್ತ್ವ.</br> {{gap}}ತತ್ವ ಜ್ಞಾನಿ ಹೆಗೆಲ್ಲನು 1 ಮಾನವ ಇತಿಹಾಸವನ್ನು ಈಕ್ಷಿಸಿ ಮಾನವ ಸಮಾಜಗಳಲ್ಲಿ ಚಲನೆ ಮತ್ತು ಬೆಳವಣಿಗೆಯನ್ನು ಕಂಡನು. {{Rule}} {{gap}}(1) ಜರ್ಮನಿ: ದೇಶದ ಅತಿ ಪ್ರಖ್ಯಾತ ತತ್ವವೇತ್ತ (1770-1831). ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾಗಿದ್ದನು. ಈತನ ಬರೆಹಗಳಲ್ಲಿ ಬುದ್ದಿ ಮಾಮಾಂಸೆ' (Phenomenology of Mind), ' ತರ್ಕ ವಿಜ್ಞಾನ' (Science of Logic), 1 ಇತಿಹಾಸ ತತ್ತ್ವ ' (Philosophy of History) 'ಧರ್ಮದ ತತ್ತ್ವ (Philosophy of Right),ಬಹು ಮುಖ್ಯವಾದವು.<noinclude></noinclude> no0e1rs0svkj2dis7g5anqxn9nzk9k2 ಪುಟ:ಕಮ್ಯೂನಿಸಂ.djvu/೫೭ 104 89397 322192 273846 2026-05-24T14:30:05Z Shreelatha.Halemane 7642 /* Validated */ 322192 proofread-page text/x-wiki <noinclude><pagequality level="4" user="Shreelatha.Halemane" />{{rh||ವೈಜ್ಞಾನಿಕ ಸಮಾಜವಾದದ ಆಧಾರ|೪೭}}</noinclude> ಯೆಂದು ಕಂಡುಹಿಡಿದರು. ಸಮಾಜಕ್ಕೆ ಅನ್ವಯಿಸುವ ಹಾಗೆ ಐತಿಹಾಸಿಕ ಭೌತವಾದವನ್ನು ಪ್ರತಿಪಾದಿಸಿದರು (Historical Materialism).</br> {{gap}}ಇದೇ ಸಮಯದಲ್ಲಿ ಫ್ರಾನ್ಸ್ ದೇಶದಲ್ಲಿ ಪ್ರಚಾರಕ್ಕೆ ಬಂದಿದ್ದ ಸಮಾಜವಾದ ಮಾರ್ಕ್-ಏಂಗೆಲ್ಸರ ಐತಿಹಾಸಿಕ ಭೌತವಾದ ದೃಷ್ಟಿಗೆ ಪುಷ್ಟಿಕೊಟ್ಟಿತು, ಇತಿಹಾಸಜ್ಞರು ವರ್ಗ ಹೋರಾಟ ವರ್ಗಗಳ ಇರುವಿಕೆ, ವಿರಸ ಇತ್ಯಾದಿಗಳ ಕಡೆ ಗಮನ ಸೆಳೆದಿದ್ದರು. ಇವುಗಳು ಕೊನೆಗೊಳ್ಳ ಬೇಕಾದರೆ ಸಮಾಜದ ಆರ್ಥಿಕ ವ್ಯವಸ್ಥೆಯನ್ನು ಮಾರ್ಪಾಡು ಮಾಡಿದ ಹೊರತು, ಆರ್ಥಿಕ ಸಮಾನತೆಯನ್ನು ಸ್ಥಾಪಿಸಿದ ಹೊರತು, ಖಾಸಗೀ ಸ್ವಾಮ್ಯ ವಿನಾಶವಾದ ಹೊರತು ಸಾಧ್ಯವಿಲ್ಲವೆಂದು ಫ್ರೆಂಚ್ ಸಮಾಜವಾದಿ ಗಳು ತಿಳಿಸಿದ್ದರು. ಈ ಮಧ್ಯೆ ಶೋಷಣೆಯಿಂದ ಪಾರಾಗಲು ಯತ್ನಿಸಿ ಕಾರ್ಮಿಕವರ್ಗ ಸ್ವಾಮ್ಯವರ್ಗದ ಮೂಲೋತ್ಪಾಟನೆಗೆ ಶ್ರಮಿಸುತ್ತಿದ್ದಿತು. ಹೀಗಿರುವಾಗ, ಸಮಾಜವಾದಿಗಳು ಆಶಿಸಿದಂತೆ, ಸ್ವಾಮ್ಯವರ್ಗ ನಿರ್ನಾಮ ವಾಗುವುದಕ್ಕೆ ಸಹಾಯ ಸಂದರ್ಭಗಳನ್ನು ಆಧುನಿಕ ಬಂಡವಾಳ ಆರ್ಥಿಕ ವ್ಯವಸ್ಥೆ ಕಲ್ಪಿಸಿದೆಯೇ ಎಂಬುದಕ್ಕೆ ಉತ್ತರ ಬೇಕಾಯಿತು. ಈ ಉತ್ತರದ ಸಂಶೋಧನೆ ಮಾರ್ಕ್-ಏಂಗೆಲ್ಸರ ಪ್ರಥಮ ಕರ್ತವ್ಯವಾಯಿತು. ಉತ್ತರ ಸಿಕ್ಕಿತು, ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿರುವ ವಿರಸಗಳು ಮತ್ತು ಅದು ಜನ್ಮ ಕೊಟ್ಟಿರುವ ಹೊಸ ಶಕ್ತಿಯಾದ ಕಾರ್ಮಿಕವರ್ಗ ಬಂಡವಾಳ ವ್ಯವ ಸ್ಥೆಗೂ ಖಾಸಗೀ ಸ್ವಾಮ್ಯಕ್ಕೂ ಚ್ಯುತಿ ತರುವುದೆಂದರು. ಸಮಾಜವಾದದ ಆಗಮನ ಅನಿವಾರ್ಯವೆಂದರು. ತತ್ ಪರಿಣಾಮವಾಗಿ ಕಾರ್ಮಿಕವರ್ಗದ ಚಳವಳಿಗೂ ಸಮಾಜವಾದಕ್ಕೂ ನಿಕಟ ಸಂಬಂಧವನ್ನು ಕಲ್ಪಿಸಿದರು.</br> {{gap}}ಕಾರ್ಮಿಕವರ್ಗದ ಹೋರಾಟ ಮತ್ತು ಚಳವಳಿಗೆ ಶೋಷಣೆಯೇ ಮುಖ್ಯ ಕಾರಣವಾಗಿದೆ ಎಂದು ಮಾರ್ಕ್ಸ್-ಏಂಗೆಲ್ಸರು ತಿಳಿಸಿದರು. ಆದುದರಿಂದ, ಶೋಷಣೆ ಆಗುತ್ತಿರುವ ರೀತಿಯನ್ನು ವ್ಯಕ್ತಪಡಿಸುವುದು ಅಗತ್ಯವಾಯಿತು. ಇದಕ್ಕೆ ಇಂಗ್ಲೆಂಡ್ ದೇಶದಲ್ಲಿ ಬೃಹತ್ ಪ್ರಮಾಣ ದಲ್ಲಿ ವ್ಯವಸ್ಥೆ ಹೊಂದಿದ್ದ ಬಂಡವಾಳ ಉತ್ಪಾದನಕ್ರಮ ಶೋಷ ಣೆಯ ಮರ್ಮವನ್ನು ಬಹಿರಂಗಪಡಿಸಲು ನೆರವಾಯಿತು. ಮಾರ್ಕ್ಸ್- ಏಂಗೆಲ್ಸರು ಬಂಡವಾಳ ಆರ್ಥಿಕ ವ್ಯವಸ್ಥೆಯ ಬೆಳವಣಿಗೆ ಅದು ಕೆಲಸ ಮಾಡುವ ರೀತಿ, ಇತ್ಯಾದಿಗಳನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿದರು. ಲಾಭ<noinclude></noinclude> 3w17sxumq231z2v3xzfcampw766ei2i ಪುಟ:ಕಮ್ಯೂನಿಸಂ.djvu/೨೧೭ 104 89474 322215 224375 2026-05-24T14:50:50Z Pragathi. BH 7585 /* Validated */ 322215 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಅಕಾರಾದಿ ಸೂಚಿ|left=|right=xiii}} ಸಂಘ-ನ್ಯಾಯವಾದಿಗಳ 26;</br> ಸಾಧು-ಸಂತರು-ಪಾಶ್ಚಿಮಾತ್ಯ ದೇಶಗಳಲ್ಲಿ-9; ಪೌರ್ವಾತ್ಯ ದೇಶಗಳಲ್ಲಿ</br> {{gap}}{{gap}}9, 10, 113;</br> ಸೈಮನ್, ಸೈಂಟ್-15;</br> ಸಂಸ್ಥಾ ರಾಜ್ಯವ್ಯವಸ್ಥೆ-125:</br> ಸನ್-ಯಾಟ್- ಸನ್-132;</br> ಸ್ಟಾರ್ಟಾಕಸ್-5;</br> ಸ್ವಾತಂತ್ರ-ಸಮಾಜವಾದೀ 102:</br> ಸೂತ್ರ ಸಮಾಜ-56</br> ಸರ್ವಾಧಿಕಾರೀ ತತ್ವ-ರಷ್ಯಾದಲ್ಲಿ ಇದರ ಸ್ವರೂಪ 107;</br> {{gap}}{{gap}}ಫ್ಯಾಸಿಸ್ಟ್ ರಾಷ್ಟ್ರಗಳಲ್ಲಿ 119, 123;</br> {{gap}}{{gap}}ಮಾರ್ಕ್ಸ್‌ ವಾದದಲ್ಲಿ 86, 94, 158, 164;</br> ಸ್ವರ್ಣಯುಗ-7:</br> ಸೋಯಿಕ್ಸ್-10;</br> ಸೊರೆಲ್, ಜಾರ್ಜಸ್‌-117;</br> ಸೋಲನ್-5:</br> ಸಮುವಾದಿಗಳ ಪ್ರಣಾಳಿಕೆ--21, 21:</br> ಸಮವಾದಿಗಳ ಸಮೂಹ-27</br> ಸಮಾಜ-ನ್ಯಾಯ 14, 18; ಪ್ರಾಚೀನ 2, 5; ಸಮಾನ 15; ರಾವ</br> {{gap}}ರಾಜ್ಯದ್ಯೋಪಾದಿಯ 7; ವರ್ಗ 15, 36; ವ್ಯವಸ್ಥೆಯಲ್ಲಿ</br> {{gap}}ವಿಕಾಸ 36; ಚಲನವಲನ ಗಳ ಬಗ್ಗೆ ನಿಯಮ 49; ಸಮಾಜ</br> {{gap}}ವ್ಯವಸ್ಥೆ ಗತಿಸುವ ಬಗೆ:51; ಸಮಾಜಪರಿವರ್ತನೆ ಎಂದರೇನು?</br> {{gap}}55; ಸಮಾಜವಾದೀ 29; ಇದರ ತಳಹದಿ 87: ಸ್ವರೂಪ</br> {{gap}}87; ಸಮವಾದೀ: ಇದರ ಸ್ವರೂಪ 87, 100;</br> ಸಮಾಜವಾದೀ ವ್ಯವಸ್ಥೆ -ಇದರ ಸ್ಥಾಪನೆ 98; ಇದರ ಮೇಯ ಪ್ರದ</br> {{gap}}ರ್ಶನ 99 ವರ್ಗರಹಿತ 87, 88: ರಷ್ಯಾದಲ್ಲಿ</br> {{gap}}ಇದರ ಸ್ವರೂಪ 102: ವ್ಯಕ್ತಿಗಳ ಸ್ಥಾನಮಾನ</br> {{gap}}ಗಳು 103-108; ಇದನ್ನು ನಿರ್ಧರಿಸುವ</br> {{gap}}ಲಕ್ಷಣಗಳು 155, 157;</br><noinclude></noinclude> ekaifbadpymyw8chmcrpbabvm0uk6o2 ಪುಟ:Elu Suthina Kote.pdf/೨೫ 104 89708 322260 234108 2026-05-24T15:19:53Z Pragathi. BH 7585 /* Validated */ 322260 proofread-page text/x-wiki <noinclude><pagequality level="4" user="Pragathi. BH" /></noinclude>== ನಿರಾಶೆಯ ಆಳದಿಂದ == :This is the deadland :This is cactus land :::::-ELIOT <poem> ನೋಡು ಸಂಜೆ ಮುಗಿಲು ಕೆಂಪು ಕಳೆದು ನಿಂತಿದೆ. ಹರೆಯದರಿವೆಯುಳಿದು ನಿಂತ ಮುದುಕನಂತಿದೆ. ರೂಪು, ಕಳೆಯನಿತ್ತ ಹಗಲು ಕರಗಿ ಬರಲು ಕತ್ತಲು, ತುಂಬು ಚೆಲುವ ಮೆರೆದ ಮುಗಿಲು ಈಗಲೀಗ ಬೆತ್ತಲು. ಅರ್ಥವಿರದ ಮಾತಿನಿಂತೆ ಭಾವವಿರದ ಗೀತೆಯಂತೆ ಮುಗಿಲು, ನೋಡು, ಬೆತ್ತಲು! ಇಗೋ ಬಂತು ಬಂದೆ ಬಂತು ಸಂಜೆಗತ್ತಲು. ಅರಿವುಗೊಡದೆ ಒಳಗೆ ಬರುವ 'ದೀನ ನಾನು' ಭಾವದಂತೆ, ಸತ್ತ ಇಲಿಯ ನಾತದಂತೆ, ನರನ ಕಳ್ಳ ಮನಸಿನಂತೆ, ಬಂದು ಸಂಜೆಗತ್ತಲು ಇಳೆಗೆಸೆಯಿತು, ಘಳಿಗೆಯಲ್ಲಿ ಕರಿ ಮುಸುಕನು ಸುತ್ತಲು. </poem><noinclude></noinclude> gngjq7ldqkluq9w5s4hwg3tcg9rye7t ಪುಟ:Elu Suthina Kote.pdf/೨೬ 104 89709 322261 234109 2026-05-24T15:20:03Z Pragathi. BH 7585 /* Validated */ 322261 proofread-page text/x-wiki <noinclude><pagequality level="4" user="Pragathi. BH" />{{rh|೨||ಏಳು ಸುತ್ತಿನ ಕೋಟೆ}}</noinclude><poem> ಮನುಜ ಕುಲದ ಧರ್ಮ, ನ್ಯಾಯ ಬುದ್ಧಿ ಸತ್ತ ಹಾಗೆ, ಅದೋ ಕಾಗೆ, ಕರಿಯ ಕಾಗೆ, ಏರಿ ಏರಿ ಏರಿ ಹಾರಿ ಮುಗಿಲ ಮರೆಯ ಸೇರಿ, ತಮದ ಬಸುರಿನಾಳದಿಂದ ತಿಳಿವು ಚಿಕ್ಕೆ ಬೀಜಗಳನ್ನು ಕಿತ್ತು ಮುಕ್ಕತೊಡಗಿದೆ. ಹಣ್ಣು ಹೂವು ಎಲೆಗಳನ್ನು ಕಳಚಿ ನಿಂತ ಗಿಡ ಲತೆಗಳು ಚಳಿಗೊ ಏನೊ ನಡುಗಿವೆ. ಏನದೇನು ಸದ್ದು? ಎಲ್ಲಿ ಯಾರಿಗಿಂಥ ಇಂಥ ಗುದ್ದು? ನೋಡು. ಕಾಣದೇನು ಸೂಡು! ಅದೋ ಬರಿಯ ಎಲುಬುಗೂಡು, ಗುಣಿಯ ತೊಡಿ ಆಳ ನೋಡಿ ಮಲಗಿ ಒಳಗೆ ತಾನೆ ತನ್ನ ಮೇಲೆ ಮಣ್ಣ ಮುಚ್ಚಿತು ಏನು ಎಂಥ ಹುಚ್ಚಿದು! ಒಂದು ಎರಡು ಮೂರು ನಾಲ್ಕು ಹತ್ತು ನೂರ ಸಾವಿರ ಹಿಂಡು ಹಿಂಡೆ ಬರತೊಡಗಿವೆ! ಮನ ನಡುಗಿದೆ ಥರಥರ! ಇಳೆಯೆ ಇದು? ಅಲ್ಲ, ಅಲ್ಲ! ನಿಜಕು ಸೂಡು, ಕಾಡು! </poem> {{***|4}}<noinclude></noinclude> saev0vt5ttijb0txv74h8mqr9p4zlea ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೫ 104 90303 322381 228413 2026-05-25T06:41:40Z Pragathi. BH 7585 /* Validated */ 322381 proofread-page text/x-wiki <noinclude><pagequality level="4" user="Pragathi. BH" />{{rh|center=ಹರಿಚಂದ್ರ|left=|right=೯}} ಶಕ</noinclude> ವನು ಶಿಷ್ಯಸಮೂಹದೊಡನೆ ಬಂದಿರುವ ಸಮಾಚಾರವನ್ನು ಕೇಳಿ ಆತನ ಸಂದರ್ಶ ನಾರ್ಥಿಯಾಗಿ ಹೊರಟು ಆತನನ್ನು ಪೂಜಿಸಿದನಂತರ ಸತ್ಕೃತನಾಗಿ ಕುಳಿತುಕೊಂಡು ಮನದ ಬಯಕೆಯನ್ನು ತಿಳುಹಿಸಲು ಮುನಿವರನು ರಾಜಮಹಾಸೇನ! ಚಿಂತೆ ಯನ್ನು ಬಿಡು, ಚತುರ್ವಿಂಶತಿ ತೀರ್ಥಂಕರರಲ್ಲಿ ೧೦ನೆಯ ತೀರ್ಥಂಕರನಾದ ಧರ್ಮ ನಾಥನು ನಿನ್ನ ಉದರದಲ್ಲಿ ಜನಿಸಿ ನಿಮ್ಮ ಕುಲವನ್ನುದ್ರಿಧರಿಪನೆಂದು ಹೇಳಿದ. ರಾಜನು ಮುದಿತ ವದನನಾಗಿ ಆ ಋಷಿ ಪುಂಗವನನ್ನು ಕುರಿತು ಮಹಾತ್ಮ! ಪರಮ ಪವಿತ್ರನಾದ ಧರ್ಮನಾಥನು ಗರ್ಭಕ್ಲೇಶವನ್ನು ಅನುಭವಿಸಬೇಕಾದ ಕಾರಣ ವೇನು? ನನ್ನ ಉದರದಲ್ಲಿ ಜನ್ಮಿಸುವ ಕಾರಣವು ಹೇಗೆ? ಆತನ ಪೂರ್ವಜನ್ಮ ವೃತ್ತಾಂತವೇನು? ಎಂದು ಬೆಸಗೊಳ್ಳಲು ಮುನಿವರನು ಇಂತೆಂದನು: –<br /> {{gap}}ಕೇಳು ಭೂಪಾಲ ! ಸಂಚಾಶತ್ಕೋಟಿ ವಿಸ್ತೀರ್ಣವಾದ ಈ ಭೂಮಂಡಲದಲ್ಲಿ ಧಾತಕೀಖಂಡವೆಂಬ ದ್ವೀಪವು ಇರುವುದು. ಇದರ ಒಂದು ಭಾಗದಲ್ಲಿ ಮೇರುಪರ್ವತವಿರುವುದು. ಇದರ ದಕ್ಷಿಣಭಾಗದಲ್ಲಿವಿದೇಹವೆಂಬ ರಾಜ್ಯವೂ ಅದಕ್ಕೆ ಅಲಂಕಾರಭೂತವಾದ ವತ್ಸದೇಶವೂ ಇರುವುದು, ಇದನ್ನು ಮಹಾ ಭುಜಬಲಪರಾಕ್ರಮಿಯಾದ ದಶರಥನೆಂಬುವನು ಧರ್ಮದಿಂದ ರಾಜ್ಯ ಸರಿಪಾಲನ ವನ್ನು ಮಾಡುತ್ತ ಅನೇಕ ಅ೦ತಃ ಪುರಜನರಿಂದೊಡಗೂಡಿ ಶೈಲಾರಾಮವನನದೀ ತೀರಗಳಲ್ಲಿ ಮನಬಂದಂತೆ ವಿಹರಿಸುತ್ತ ಅವರಿಂದ ಸೇವಿತನಾಗಿರಲು ಒಂದಾನೊಂದು ಚಂದ್ರಗ್ರಹಣದ ದಿವಸ ರಾಹುಗ್ರಸ್ತನಾದ ಚಂದ್ರನನ್ನು ನೋಡಿ ಅಹಹ! ಇದೆಂತಹ ಅಚ್ಚರಿ! ಮಹಾಮಹಿಮರಾದ ದೇವತೆಗಳಿಂದ ಮಾನ್ಯನಾಗಿ ಸುಖಶಾಂತಿದಾಯಕ ನಾದ ಲೋಕಪೂಜ್ಯನಾದ ಚಂದ್ರನಿಗೆ ಇಂತಹ ವಿಪತ್ತು ಸಂಭವಿಸುವುದಾದರೆ ನಮ್ಮಂತಹ ಹುಲುಮಾನವರ ಪಾಡೇನು? ಆಯುಷ್ಯವಾದರೊ ಛಿದ್ರಘಟದಲ್ಲಿನ ನೀರಿನಂತೆ ಕಳೆದು ಹೋಗುತ್ತಿರುವುದು. ಅಭಿಮಾನಪುರಸ್ಸರವಾದ ಯೌವನವು ಗತವಾಗಿ ಹೋಗಿ ಜರಾಂಗನೆಯ ಪ್ರಹರಗಳಿಗೆ ಸಿಲುಕಿ ದೇಹವು ಜರ್ಜರಿತ ವಾಗಿಯೆ ಹೋಗುವುದು. ಹುಟ್ಟಿದವರಿಗೆ ಸಾವು ತಪ್ಪದು. ಒಂದು ದಿವಸವಿಲ್ಲ ದಿದ್ದರೆ ಮತ್ತೊಂದು ದಿವಸ ಸಾಯಲೇಬೇಕಾಗುವುದು. ಆದುದರಿಂದ ಈ ನಶ್ವರ ವಾದ ಭೋಗಗಳನ್ನು ತೊರೆದು ವಿಷಯೋಪಲಾಲಸತೆಯನ್ನು ಮರೆತು ಇಂದ್ರಿಯ ಪಾಟವವು ಸುಷ್ಟು ವಾಗಿರುವಾಗಲೇ ಪರಮಾರ್ಥಸಿದ್ದಿಗಾಗಿ ಯತ್ನಿಸುವುದು ಪ್ರತಿಯೊಬ್ಬ ವಿವೇಕಿಯ ಕರ್ತವ್ಯವೆಂದು ಯೋಚಿಸಿ ದೃಢಮನಸ್ಕನಾಗಿ ತನ್ನ ಮಗನಾದ ಅತಿರಥನಿಗೆ ರಾಜ್ಯಾಭಿಷೇಕವನ್ನು ಮಾಡಿ ತಪೋವನಕ್ಕೆ ಹೋಗಿ ಅಲ್ಲಿ ಸಿದ್ಧಪುರುಷರನ್ನು ಸೇವಿಸಿ ಸರ್ವಸಂನ್ಯಾನದಿಂದ ಈ ಕಳೇಬರವನ್ನು ಬಿಟ್ಟು 'ಸರ್ವಾರ್ಥಸಿದ್ದಿಯನ್ನು ಹೊಂದಿದನು. ಇಂತಹ ಪೂತಚರಿತನು ಧರ್ಮರಕ್ಷಣಾ (2)<noinclude></noinclude> 9hx961u0l1zbn6yeuybo8vta9s8ome4 ಪುಟ:ಶಾಸನ ಪದ್ಯಮಂಜರಿ.djvu/೨೬೮ 104 90469 322321 261814 2026-05-24T18:43:26Z Pragathi. BH 7585 /* Validated */ 322321 proofread-page text/x-wiki <noinclude><pagequality level="4" user="Pragathi. BH" />{{rh|268||ಶಾಸನ ಪದ್ಯಮಂಜರಿ}}</noinclude>ದಾಂಗುಡಿಮರಲ್ಲು = ಹಬ್ಬಿ ವ್ಯಾಪಿಸಿ, 61. ಕುಳಭವನಂ = ತವರುಮನೆ. ನಿಧಾನಂ= ನಿಧಿ, ಮಾಂತನ = ದೊಡ್ಡಸ್ತಿಕೆ, ಆಗರ = ಮನೆ, ವಿಧು=ಚಂದ್ರ, 62, ಚಾಂದ್ರ ಮುಂತಾದವು ವ್ಯಾಕರಣಗಳು ; ಶಬ್ದಾನುಶಾಸನ ಶಾಕಟಾಯನಕೃತ, ಏಕಾಕ್ಷರಂ= ಅತಿಸುಲಭ. ಮೊಗ್ಗೆ = ಸಾಧ್ಯವೇ ? 63. ವಡ್ಡ ವ್ಯವಹಾರಿ = ದೊಡ್ಡ ವರ್ತಕ. ಉಕ್ಷ= ವೃಷಭ, ರಾಜೀವ-ಕಮಲ, ಮಧುಪ=ದಂಬಿ, ಯಥಾಸಂಖ್ಯಾಲಂಕಾರ. 64, ಶೇಷಾಲಂಕಾರ, ವಿಬುಧ = ದೇವತೆಗಳು, ವಿದ್ವಾಂಸರು, ಉಮಾ = ಪಾರ್ವತಿ, ಯಶಸ್ಸು, ಆಶಾರದನಿ = ದಿಗ್ಗಜ, ದಾನ= ತ್ಯಾಗ, ಮದದ ನೀರು, 65, ಆರ್ವ= ಔದಾಯ್ಯ, ಆಹವ=ಯುದ್ದ, 66, ಎಟಿಗದ=ನಮಸ್ಕರಿಸದೆ, ಅದಟ - ಪರಾ ಕ್ರಮಶಾಲಿಗಳು. ತಿಂದ = ಕೊಡದ, ಅಂಕಚೇಯರ್ – ? ಯುದ್ದವೀರರು, ಬೆಳ್ಳು ಅದ = ನಡುಗದೆ, 67, ಬೆಸಕೆಯ್ದು ತು = ಸೇವೆಮಾಡಿತು. ಚೋಳಿಕ= ಚೋಳ ರಾಜ. G೯, ಸೀನ= ದಪ್ಪವಾದ, ಉದ್ವ = ಶ್ರೇಷ್ಟವಾದ. 69. ಮೇರೆ = ಎಲ್ಲೆ. ಎಬಿವಟ್ಟು = ಸ್ಥಾನ, ನೆಲೆ. {{gap}}70. ಆಘಾಟ = ಎಲ್ಲೆ. ಬಲ್ಬಳನೆ= ಹೆಚ್ಚಾಗಿ, ಪ್ರಜ್ವಳಿಸಿದ = ಬೆಳಗಿದನು; ಬಿಂದುವಿಲ್ಲದ ಪ್ರಯೋಗ: ಕೃದಂತವೆಂದು ಭಾವಿಸಿದರೆ ಕ್ರಿಯೆಯನ್ನು ಅಧ್ಯಾಹಾರ ಮಾಡಬೇಕು. 71. ತಸಲವು = ನಿರ್ಣಯ ದೃಢಸಂಕಲ್ಪ. ದೇಗುಲ = ದೇವ ಕುಲ, ದೇವಸ್ಥಾನ. ಇ೦ = ಇನ್ನು, ಸಲೆ= ಚೆನ್ನಾಗಿ, 72. ನೆಗಟ್ಟಿ, ಇಲ್ಲಿಯ ಬಿಂದುವಿಲ್ಲದ ಪ್ರಯೋಗ; 70 ನ್ನು ನೋಡಿ. 73. ಜಳರಾಶಿ =ಸಮುದ್ರ. ಅಗ್ಗಳ೦= ಹೆಚ್ಚು. 7-4. ನಾಡಾಡಿ - ಸಾಮಾನ್ಯ. ಧವಳಾರ = ಧವಳಾಗಾರ, ಅರಮನೆ. ನೀಡ = ಗೂಡು, ಮನೆ. 76ಎಕ್ಕ ಲಾವಣ೦= ಏಕಾಯತ್ತ, ಏಗಣಜು= ಎಂಥ ಕಣಜ ? ಪೊಗಲುಗುಂ, ಪೊಗಂ ಎಂಬುದಕ್ಕೆ, ಸಮೀರಣ - ಗಾಳಿ, 77. ಮೈ ಮೆ=ಮಹಿಮೆ. ಓಜೆ = ಕಾಂತಿ. 78. ಸಲುಗೆ, ಗೆಲುವ; ಹೊಸಗನ್ನಡ, ಎಕ್ಕೆ= ಉನ್ನತಿ, ಅಕ್ಕೆ- ಆಗಲಿ, ಎಮ, ಅಂಗೀಕಾರಾರ್ಥ, 79, ಕೃತಕ = ಮೋಸ. 80. ಮಾಣ್ = ಬಿಡು, ತೋಡು, ಪಾಟಿ= ಸಮಾನ. ಕುಜಾತೆ = ಸೀತೆ. {{gap}}81. ಘ೦ತೆ=ಸಮೂಹ. ಒಡ್ಡು = ಸೈನ್ಯ. ಚಕ್ರಿ= ಚಕ್ರವರ್ತಿ. 82. ಎರೆ ದವರ್ಗೆ = ಯಾಚಕರಿಗೆ, 53, ಅಸದಳಂ-ಶ್ರಮದಿಂದ, ವರ್ಗ ತ್ರಯ- ಧರ್ಮಾ ರ್ಥ ಕಾಮಗಳು, ಒಡರಿಸಿ= ಹೊಂದಿಸಿ. 84. ಬೆಳ್ಳುತ್ತುದು= ಹೆದರಿತು. ವೆಸ (ಬೆಸ= ಕೆಲಸ, ಪೂಣ್ಣ ತು=ಕೈಕೊಂಡಿತು. ಆಗಿದು= ಹೆದರಿ, ಮೆಲ್ಲು=ಮಾರ್ದವ, ಆವ ರ್ಚಿಸಿದ=ಒಳಕೊಂಡ. ಎಳಸು = ಅಪೇಕ್ಷಿಸು. ಎಸಕಂ = ತೇಜಸ್ಸು, ಕೆಯ್ದಕ್ಕೆ= ಹೆಚ್ಚಲು, 5. ಮಾನಸ = ಮನುಷ್ಯ, ಪಸಯಿತ, ಪಸಾಯಿತ= ? ಉಡುಪನ್ನು ಕೊಡುವವನು. . ಅಣುಗು -- ಪ್ರೀತಿಪಾತ್ರನಾದ. ತುಲಿಲಾಳ್ = ಯುದ್ಧ<noinclude></noinclude> kc9hdfvvzdvntqb32n1ek49h222b67b ಪುಟ:ಶಾಸನ ಪದ್ಯಮಂಜರಿ.djvu/೧೬೧ 104 90497 322322 261780 2026-05-24T18:43:58Z Pragathi. BH 7585 /* Validated */ 322322 proofread-page text/x-wiki <noinclude><pagequality level="4" user="Pragathi. BH" /></noinclude><poem>{{center|ಬಲ್ಲಾಳ II}} ::ಅನುವವರಣನಿಸ್ತಾರಕ | ನನೂನಶಕ್ತ್ಯನ್ವಿತಂ ವಿಚಾರಕ್ಷ್ಯ ಮನೆಂ | ಬ ನೆಗಡಿಯಿಂದ ಬಲ್ಲಾ | ಕನ್ಮಪಾಳಂ ಕಾರ್ತಿಕೇಯನಂತೊಪ್ಪಿರ್ಪ೦ ||795|| {{center|ಜಯಗೊಂಡಪುರ}} ::ತಮಗಿದ ನಂದನಂ ಪರಿವ ಕಾಲ್ಪೆ ಕಡಲ್ಗಿವೆ ನೋಡೆನಿಪ್ಪ ಪೆ | ರ್ಗ್ಗೆ ಬಳಸಿರ್ದ ಪೆರ್ವಳಸು ಸಂದಣಿವೆ ಜನಂ ವಿಳಾಸದಿಂ || ಮೆರೆವರ್ಮಲಯಂ ಬಹುಗೃಹಗಳ ಗುಣ್ಣಿವಳಿಂದ ಚೆಕ್ಕು ಕ | ಣ್ದೆರೆದವೊಲೀಜಗಕ್ಕೆ ಜಯಗೊಂಡವರಂ ನಿಸದಂ ವಿರಾಜಿಕುo li796|| {{center|ನಾಗದೇವ}} ::ಹೃದಯಕಳಂಕನಲ್ಲದ ಒಡಾತ್ಮ ಕನಲ್ಲದ ಶೀರೋಚಿಯೆಂ | ಬುದು ಗುರುಗೋತ್ರಶತ್ರುವಣಮಲ್ಲದ ಕೌಶಿಕನಲ್ಲದಿಂದ್ರನಂ || ಬುದು ವಿಪರೀತನಲ್ಲದ ಕುಜನ್ಮ ಕನಲ್ಲದ ಕಲ್ಪವೃಕ್ಷ ಮೆಂ || ಬುದು ವಿಬುಧಾಶ್ರಯೆ ಕನಿಧಿಯಂ ಧರೆ ದುಮ್ಮನ ನಾಗದೇವನಂ ||797|| {{rule|5em}} {{center|151 ಚಿಕ್ಕನಾಯಕನಹಳ್ಳಿ 43, 1171 ಇದರಲ್ಲಿ ಹೊಯ್ಸಳರಾಜನಾದ 1 ನೆಯ ನಾರಸಿಂಹನ ಆಳಿಕೆಯಲ್ಲಿ ಸಾಮಂತ ಬಿಟ್ಟಗೆ ಅವನ ತಾಯಿ ಶಾಂತಲೆ ಮುಂತಾದವರು ಮದ್ದ ವದೇವನಿಗೆ ಭೂಮಿಯನ್ನು<br> ಕೊಟ್ಟಂತೆ ಹೇಳಿದೆ. ಶಾಂತಲೆ}} ::ಮರಕತವರ್ಣಮಂ ತರುಣವೇಣತನುಚ್ಛವಿಯಿಂದೆ ವಜ್ರಮಂ | ಸುರುಚಿರಮಪ್ಪ ಮುತ್ತೆನಿಪ ದಂತಚಯಂಗಳದೊಂದು ಕಾಂತಿಯಿಂ | ದುರಗಸದೃಕ್ಷಮಪ್ಪ ಕಚದಿಂ ಹರಿನೀಲಮನೊಪ್ಪೆ ಹೋಲ್ತಳಂ | ತಿರೆ ಸತಿ ರತ್ನದೊಂದೆಣೆಗೆ ವಾರಳೆ ಶಾಂತಲೆನಾರಿ ರೂಪಿನೊಳ್ ||798|| {{center|ಸಾಮಂತಬಿಟ್ಟಿಗ}} ::ನಲಿದುಲಿದಟ್ಟಿ ಕೊಂಡು ಕವಿಶರ್ಪ ವಿರೋಧಿಬಲಕ್ಕೆ ಭೀತಿಯಿಂ | ನೆಲವಲವೆನ್ನದಲ್ಲದಿದು ಪರ್ವಲನೆನ್ನದೆ ದೋಃಪ್ರತಾಪದಿಂ || </poem><noinclude></noinclude> aiunotjkc9wh2sbd72tjj1xxmwbscyp ಪುಟ:Elu Suthina Kote.pdf/೨೭ 104 90871 322262 234110 2026-05-24T15:20:14Z Pragathi. BH 7585 /* Validated */ 322262 proofread-page text/x-wiki <noinclude><pagequality level="4" user="Pragathi. BH" /></noinclude>== ಕ್ಷೋಭೆ == <poem> ಗಾಳಿ ಮಲ್ಲಿಗೆ ಕಂಪ ಮೂಸಿತ್ತು ನನಗಿಂತ ಬಲು ಮೊದಲೆ. ಕೊಠಡಿಯುದ್ದಕು ಹರಿಯಿತೊಂದು ಕರೆಂಟು! ಗಾಳಿಯೊಳು ಕುಣಿದು ತೋರಿದರೆನಗೆ ನೂರು ಜೋಡಿಗಳಾಗ ವಾಲ್ಟ್ಜ್ ಕುಣಿತದ ಜೈಲರಿನ ಸೊಂಟದೊಳು ತುಂಟ ಬೀಗದ ಕೈಯ ಗೊಂಚಲದೊ ಮೂಕ!-ಘಳಿಗೆ ಸರಿಗಮ ಮಿಡಿ ಅದಕೆ ಬಂದಿಯ ಹೃದಯ ಕುಣಿವುದುಂಟು. ನೂರು ಯೋಜನದಾಚೆ ಗಾಳಿಯಿಡುತಿರೆ ದಾಳಿ ಸ್ಪಂದಿಸಿದೆ ರೇಡಿಯೋ ಬರುವ ಕ್ಷೇಭೆಯ ಮೊದಲ ತೊದಲುನುಡಿ ನುಡಿದು!{{pline|೧}} ಗಾಳಿ ಕಳವಳ ನುಡಿಯೆ ತಲೆಯನೆತ್ತಿಗೆ ನಾನು ಪುಸ್ತಕದ ಸಾಲುಸಂಕೋಲೆಯಿಂದ ಬಿಸವಂದ! ಬಿಸವಂದ! ತೆರೆದ ಬಾಗಿಲನೊರಗಿ ನಿಂತ ಹರೆಯದ ಹೆಣ್ಣ ಮಾಟ ತುಂಬಿತು ಕಣ್ಣ. ಘಳಿಗೊಳದ ನೀರಿನೊಳಗಣ ನೆರಳು ಈ ತರಳೆ! ತನ್ನರಿವ ಮಂದಿರದ ಹೊಸ್ತಿಲೊಳು ನಿಂತಿರುವ ತೂಗು ಮನಸಿನ ಕನಸು{{pline|೨}} </poem><noinclude></noinclude> k1j8qf1rw63hhcndibxhi6qu39oidr0 ಪುಟ:Elu Suthina Kote.pdf/೨೯ 104 90872 322263 234112 2026-05-24T15:21:25Z Pragathi. BH 7585 /* Validated */ 322263 proofread-page text/x-wiki <noinclude><pagequality level="4" user="Pragathi. BH" />ಕೋಭೆ ೫</noinclude><poem> ಸ್ಕೂಲು, ಕಾಲೇಜುಗಳ ಕಕ್ಕಸಿನ ಗೋಡೆಯೊಳು ರಾರಾಜಿಸುವ ಚಿತ್ರ {{Right|ನುಡಿವಂಥ ಕಾಮ! }}{{pline|೫}} ಯಾವ ರಾಕ್ಷಸ ಕೈ ಬರೆದ ಚಲನ ನಿಯಮವೋ! ಎದೆಯಂತು ತಿದಿಯಂತೆ ಹಿಗ್ಗಿದೆ, ಕುಗ್ಗಿದೆ! ಕಡಲ ಮೈ ಒಡಲಿನುಬ್ಬರವಿಳಿತ. ಎಂಥ ನಿಟ್ಟುಸಿರೆಳೆತ! ಗೋಡೆ, ಛಾವಣಿ, ಕಿಟಕಿ, ಕುರ್ಚಿ ಮೇಜುಗಳೆಲ್ಲ ತೂಗಿವೆ, ಬಾಗಿವೆ! ಮುಗಿಲು ನೆಲಗಳ ನಡುವೆ ಉಯ್ಯಲೆಯೊಳಾಡಿವೆ! {{pline|೬}} ಚಿಟ್ ಚಿಟಾ! ಚಿಟ್ ಚಿಟಾ! ಇದು ಸದ್ದು ಚಿಗುಟ! ವಿಷ್ಣವಾದ ಅನುಭವದ ಘಳಿಗೆಯಾದರು ಏನು? ಎಲ್ಲಿ ಕೈ ಗಡಿಯಾರ? ಢಢಗಾ! ಢಗ್‌ಢಗಾ ಕೆಳ ಶ್ರುತಿಯ ಡಮರುಗ ಇಲ್ಲಿ, ಇಲ್ಲಿ! ಆಗ ಹೊಳೆಯಿತು ನನಗೆ ವಾಚು ಕ್ಲಾಕಾಯ್ದೆಂದು! </poem><noinclude></noinclude> s6mh3grmx4ka3u6yr0bo7d2q65v1b1g 322264 322263 2026-05-24T15:22:26Z Pragathi. BH 7585 322264 proofread-page text/x-wiki <noinclude><pagequality level="4" user="Pragathi. BH" />ಕ್ಷೋಭೆ {{Right|೫}}</noinclude><poem> ಸ್ಕೂಲು, ಕಾಲೇಜುಗಳ ಕಕ್ಕಸಿನ ಗೋಡೆಯೊಳು ರಾರಾಜಿಸುವ ಚಿತ್ರ {{Right|ನುಡಿವಂಥ ಕಾಮ! }}{{pline|೫}} ಯಾವ ರಾಕ್ಷಸ ಕೈ ಬರೆದ ಚಲನ ನಿಯಮವೋ! ಎದೆಯಂತು ತಿದಿಯಂತೆ ಹಿಗ್ಗಿದೆ, ಕುಗ್ಗಿದೆ! ಕಡಲ ಮೈ ಒಡಲಿನುಬ್ಬರವಿಳಿತ. ಎಂಥ ನಿಟ್ಟುಸಿರೆಳೆತ! ಗೋಡೆ, ಛಾವಣಿ, ಕಿಟಕಿ, ಕುರ್ಚಿ ಮೇಜುಗಳೆಲ್ಲ ತೂಗಿವೆ, ಬಾಗಿವೆ! ಮುಗಿಲು ನೆಲಗಳ ನಡುವೆ ಉಯ್ಯಲೆಯೊಳಾಡಿವೆ! {{pline|೬}} ಚಿಟ್ ಚಿಟಾ! ಚಿಟ್ ಚಿಟಾ! ಇದು ಸದ್ದು ಚಿಗುಟ! ವಿಷ್ಣವಾದ ಅನುಭವದ ಘಳಿಗೆಯಾದರು ಏನು? ಎಲ್ಲಿ ಕೈ ಗಡಿಯಾರ? ಢಢಗಾ! ಢಗ್‌ಢಗಾ ಕೆಳ ಶ್ರುತಿಯ ಡಮರುಗ ಇಲ್ಲಿ, ಇಲ್ಲಿ! ಆಗ ಹೊಳೆಯಿತು ನನಗೆ ವಾಚು ಕ್ಲಾಕಾಯ್ದೆಂದು! </poem><noinclude></noinclude> 57g6dkgy4j536vo4tulq0edzliarjx9 322265 322264 2026-05-24T15:22:53Z Pragathi. BH 7585 322265 proofread-page text/x-wiki <noinclude><pagequality level="4" user="Pragathi. BH" />ಕ್ಷೋಭೆ {{Right|೫}}</noinclude><poem> ಸ್ಕೂಲು, ಕಾಲೇಜುಗಳ ಕಕ್ಕಸಿನ ಗೋಡೆಯೊಳು ರಾರಾಜಿಸುವ ಚಿತ್ರ {{Right|ನುಡಿವಂಥ ಕಾಮ! }}{{pline|೫}} ಯಾವ ರಾಕ್ಷಸ ಕೈ ಬರೆದ ಚಲನ ನಿಯಮವೋ! ಎದೆಯಂತು ತಿದಿಯಂತೆ ಹಿಗ್ಗಿದೆ, ಕುಗ್ಗಿದೆ! ಕಡಲ ಮೈ ಒಡಲಿನುಬ್ಬರವಿಳಿತ. ಎಂಥ ನಿಟ್ಟುಸಿರೆಳೆತ! ಗೋಡೆ, ಛಾವಣಿ, ಕಿಟಕಿ, ಕುರ್ಚಿ ಮೇಜುಗಳೆಲ್ಲ ತೂಗಿವೆ, ಬಾಗಿವೆ! ಮುಗಿಲು ನೆಲಗಳ ನಡುವೆ ಉಯ್ಯಲೆಯೊಳಾಡಿವೆ! {{pline|೬}} {{center|೬}} ಚಿಟ್ ಚಿಟಾ! ಚಿಟ್ ಚಿಟಾ! ಇದು ಸದ್ದು ಚಿಗುಟ! ವಿಷ್ಣವಾದ ಅನುಭವದ ಘಳಿಗೆಯಾದರು ಏನು? ಎಲ್ಲಿ ಕೈ ಗಡಿಯಾರ? ಢಢಗಾ! ಢಗ್‌ಢಗಾ ಕೆಳ ಶ್ರುತಿಯ ಡಮರುಗ ಇಲ್ಲಿ, ಇಲ್ಲಿ! ಆಗ ಹೊಳೆಯಿತು ನನಗೆ ವಾಚು ಕ್ಲಾಕಾಯ್ದೆಂದು! </poem><noinclude></noinclude> 4hcwdh9u3qo0xbz793i7lffk9qf3pdd ಪುಟ:Elu Suthina Kote.pdf/೩೦ 104 90873 322266 234113 2026-05-24T15:23:53Z Pragathi. BH 7585 /* Validated */ 322266 proofread-page text/x-wiki <noinclude><pagequality level="4" user="Pragathi. BH" />{{Left|೬}} {{Right|ಏಳು ಸುತ್ತಿನ ಕೋಟೆ}}</noinclude><poem> (ಇರಬೇಡವೇ ಅದಕೆ ಗೋಡೆಯಾಧಾರ?) ಢಮಢಮಾ! ಢವಢವಾ ಢಮಢಮಾ! ಅಮ್ಮಾ! ತುಡಿಯುತಿದೆ ಎದೆ ತಬಲ! ಚೋಮ ಬಡಿಯಲೆಂದೇ ಅಬಲೆ ಬಾಲೆಯ ಚರ್ಮದೊಳು ತಮಟೆಯನು ಮಾಡಿ ಕೊಟ್ಟಹರು: ಹೌದು, ಚೋಮನ ದುಡಿ! ಥಕಥಕಿಟ ಥೈ ಥೈ ಥಕಥಕಿಟ ಥೈ ಥೈ! ಅವೇಶದೊಳು ಬೀರು, ಟ್ರಂಕು, ಹಾಸಿಗೆ, ಕಾಗದದ ಕಂತೆ ಕುಣಿಯತೊಡಗಿವೆ, ಅದೋ ರೆಡಿಂಡಿಯನರಂತೆ! {{pline|೬}} {{center|೭}} ಬಯಕೆಮಗು ಮೈಯನರಳಿಸುತಿರಲು ಬಿರಿಯದೇ ದಾಳಿಂಬೆಯಂತೆ ಬಸಿರು? ಬಲೂನದೊ ಬಳೆಬಳೆದು ಬ್ರಹ್ಮಾಂಡವಾಗಿರಲು ಯಾವ ಪಂಥದು ಇನ್ನು ತುಂಬುತಿದೆ ಉಸಿರು? ಎದೆ ಕೋಪದೊಳು ಸ್ವಿಚ್ಚನೊತ್ತಲು ಪ್ರಲಯ! ಪರಮಾಣು ಸಿಡಿದರೆ? ಹೀರೋಷಿಮಾ, ನಾಗಸಾಕಿಹೆಣ! ರಣರಣ! ಭಯಗ್ರಸ್ತ ಎದೆ ತುಡಿದರೆ 'ಬಾ' ಎಂದೆ; ಬಾಲೆ ಬಂದಳು ಒಳಗೆ. ಮರೆಯಾಯ್ತು ಅರೆಘಳಿಗೆಯೊಳೆ ಎಲ್ಲ ಧಾಂಧಲೆ! ಮುಗುಳ ನಕ್ಕಳು ಬಾಲೆ ಬಲು ಚೆಲುವೆ! ಚಂಚಲೆ!{{pline|೭}} </poem> {{***|4}}<noinclude></noinclude> bsbewwey8mqxohpw5u4ierok03ibydy ಪುಟ:Elu Suthina Kote.pdf/೩೭ 104 90877 322258 234117 2026-05-24T15:19:14Z Pragathi. BH 7585 /* Validated */ 322258 proofread-page text/x-wiki <noinclude><pagequality level="4" user="Pragathi. BH" /></noinclude>== ಬಿಡದೆ ಮಳೆ ಜಡಿಯುತಿದೆ == <poem> ಜರಜರೋ.. ಜರಜರೋ.. ಸಂಜೆಗತ್ತಲ ಹೊತ್ತು. ನಡುಹಗಲು ಮೊದಲಾದ ಮಳೆ ಬಿಡದೆ ಸುರಿಯುತಿದೆ; ನಿರ್ವಿಕಾರದ ಗತಿಯ ಗೋಳುಮಳೆ ಇಳಿದಿಲ್ಲ, ಬೆಳೆದಿಲ್ಲ. ಬುಮಿ ಬಾನು ಬರಿ ಬೂದಿ; ಬೂದಿ ಬಣ್ಣದ ತೆರೆಯನೆಸೆದ ಮಳೆ ಸುರಿಯುತಿದೆ ಜರಜರೋ.. ಜರಜರೋ.......... ಮಳೆ ಬಿಡದೆ ಜಡಿಯುತಿದೆ! ತನ್ನ ತೂಕದ ತಾನೆ ತಾಳಲಾರದೆ ಪಾಳುಮನೆ ಕುಸಿಯಿತು. ನೆಲಕಂಡ ನೋವಿನೊಡಲೊಳಗಿಂದ ಆಕ್ರಂದ ಮುದಿನಾಯಿ ನರಳುತಿದೆ ಎದೆಯ ವೆತೆಯನು ಒಂದೆ ನರಳುವಿಕೆಯೊಳು ತುಂಬಿ ಮಳೆ ಬಿಡದೆ ಜಡಿಯುತಿದೆ........ ಎದೆಯ ಹಸಿ ನೆಲದಲ್ಲಿ ಕಹಿ ನೆನಹ ಮೊಳಕೆಗಳು; ಸಿಡುಕೆನಿತು, ದುಡುಕೆನಿತು? ತಪ್ಪುನಡೆ ಸಾಲೆನಿತು? ಟಪ್ಪ ಟಪ ಟಪ ಟಪ್ಪ ಟಪ್ಪ ಟಪ ಟಪ ಟಪ್ಪ ಸಾಲುಗಟ್ಟಿದ ಕೋಟಿ ಬೂಟುಕಾಲಿನ ಸದ್ದು ಕೊಲಲೆಂದೆ ಹೊರಟಂದು..... ಮಳೆಹನಿಯ ಪಂಜರದ ನಡುವೆ ನುಸುಳಿದ ಕಪ್ಪು ಕವಿಯುತಿದೆ </poem><noinclude></noinclude> jr2r60dt35obpfy1752cswvfdbyx6vr ಪುಟ:Elu Suthina Kote.pdf/೩೮ 104 90879 322259 234120 2026-05-24T15:19:31Z Pragathi. BH 7585 /* Validated */ 322259 proofread-page text/x-wiki <noinclude><pagequality level="4" user="Pragathi. BH" />{{rh|೧೪||ಏಳು ಸುತ್ತಿನ ಕೋಟೆ}}</noinclude><poem> ಮನೆಯನ್ನು, ಮನವನ್ನು, ಗಿಡ ಗುಡ್ಡ ದೇಗುಲವು ಹಳೆಯ ಪಳಕೆಯ ಮೊಗದ ನೆನಹಂತೆ ಮರೆಯುತಿವೆ ಮಾಟವನ್ನು. ಬಿಡದೆ ಮಳೆ ಸುರಿಯುತಿದೆ ಜರಜರೋ......... ಜರಜರೊ......... ಹಿಂದೊಮ್ಮೆ ಹೆಮೋಡ ಇಂತೆ ಕರೆಯಲು ಸಾವ ನಿರ್ದೋಷಿ ಜನಕುಲವು ಗೋಗರೆಯಿತು. (ಮುದಿನಾಯಿ ನರಳುತಿದೆ ಎದೆಯ ವೆತೆಯನು ಒಂದೆ ನರಳುವಿಕೆಯೊಳು ತುಂಬಿ!) ಸತ್ತವರ ಎಣಿಕೆ ಅತ್ತವರ ನೆನಕೆ ನೊಂದವರ ಅರಿಕೆಯನು ಕೊಂದವರ ಮರುಕವನು ನೆನೆದ ಮನ ನೀರಾಯ್ತು; ಹರಿದ ಕಂಬನಿ ಕೊಡಿ ಮಳೆಯೊಡನೆ ಬೆರೆಯಿತು. ಬಿಡದೆ ಮಳೆ ಸುರಿಯುತಿದೆ..... (ಮುದಿನಾಯಿ ನರಳುತ್ತಿದೆ ಎದೆಯ ವೆತೆಯನು ಒಂದೆ ನರಳುವಿಕೆಯೊಳು ತುಂಬಿ!) ನಂಬಿ ಕರೆದರೆ ಶಿವನು ಓ ಎನ್ನನೆ? ಟಪ್ಪ ಟಪ ಟಪ ಟಪ್ಪ ಟಪ್ಪ ಟಪ ಟಪ ಟಪ್ಪ ಕಣ್ಣು ಕಾಣದ ಸುತ್ತಿಗೆಯ ಮೊಳೆಯ ಬಡಿಯುತಿದೆ ಮಣ್ಣು ಗೋಡೆಯ ಮೇಲೆ! ಬಿಡದೆ ಮಳೆ ಸುರಿಯುತಿದೆ ಜರಜರೊ........... ಜರಜರೊ............. </poem> {{***|4}}<noinclude></noinclude> ocachnkh37dpzbin9txrs7xe7y0qgm5 ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೭ 104 90963 322385 234702 2026-05-25T07:33:43Z Pragathi. BH 7585 /* Validated */ 322385 proofread-page text/x-wiki <noinclude><pagequality level="4" user="Pragathi. BH" /></noinclude>EINSTEIN BALIDARILLI scientific biography of Albert Einstein in Kannada written by G. T. Narayana Rao, 8 Athree, Kamakshi Hospital Road, Saraswatipura, Mysore 570009. Published by G. N. Ashokavardhana for Athree Book Centre, 4 Sharavati building, Balmatta, Mangalore 575 001 (phone 0824 2425161, 2492397); e-mail : athreebook@gmail.com; blog : athree.wordpress.com. Albert Einstein first edition (1980) was published by D.V.K.Murthy, and the second edition (1994) by Athree. Revised and enlarged third edition under the new title Einstein Balidarilli is published (2000) by Athree Book Centre. Reprint 2009. {{rh|Pages xxiv + 336, fully illustrated||Rs 70}} © ಗ್ರಂಥಸ್ವಾಮ್ಯ ಪ್ರಕಾಶಕರದು ಪುಟ ೧೯೪ ಐನ್‌ಸ್ಟೈನ್ ಮತ್ತು ಠಾಕೂರ್-ಪೃಥ್ವಿರಾಜ ಅರಸು ಅವರ ಕೃಪೆ ಪುಟ ೧೯೫ ಐನ್‌ಸ್ಟೈನ್ ಕೈಬರಹ-ಜಿ. ಜಿ. ಪ್ರಭು ಅವರ ಕೃಪೆ Photo courtesy Lotte Jacobi (USA) Cover page design R. S. Mohan Murthy ಮೊದಲನೆಯ ಮುದ್ರಣ ೧೯೮೦ (ಡಿ. ವಿ. ಕೆ. ಮೂರ್ತಿ)<br/> ಎರಡನೆಯ ಮುದ್ರಣ ೧೯೯೪<br/> ಮೂರನೆಯ ಸಂವರ್ಧಿತ ಮುದ್ರಣ ೨೦೦೦<br/> ನಾಲ್ಕನೆಯ ಮುದ್ರಣ ೨೦೦೯<br/> {{C|'''ರೂಪಾಯಿ ಎಪ್ಪತ್ತು'''}} ಮುದ್ರಕರು ಶ್ರೀ ಶಕ್ತಿ ಎಲೆಕ್ನಿಕ್ ಪ್ರೆಸ್ ಜಯನಗರ ಮೈಸೂರು ೫೭೦ ೦೧೪ ದೂರವಾಣಿ ೦೮೨೧-೨೫೬೭೭೭೫<noinclude></noinclude> 0prlosedaj1s3eqhuwjns3h75zpijn2 ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೮ 104 90964 322384 234704 2026-05-25T07:33:17Z Pragathi. BH 7585 /* Validated */ 322384 proofread-page text/x-wiki <noinclude><pagequality level="4" user="Pragathi. BH" /></noinclude> == ಅರ್ಪಣೆ == ವಿಜ್ಞಾನದ ಸುವ್ಯವಸ್ಥಿತ ಆದರೆ ಅನನ್ವೇಷಿತ ಲೋಕಕ್ಕೆ ಮೊತ್ತ ಮೊದಲು ಕೈಹಿಡಿದು ಕರೆದೊಯ್ದು ಅದನ್ನು ಅಕ್ಕರೆಯಿಂದ ತೋರಿಸಿದ {{C|'''ಶ್ರೀಮಾನ್ ಎ. ಪಿ. ಶ್ರೀನಿವಾಸರಾವ್'''}} ವಿಜ್ಞಾನಗಳ ರಾಣಿ ಎಂದು ಪ್ರಖ್ಯಾತವಾಗಿರುವ ಗಣಿತಶಾಸ್ತ್ರದ ಬಲ್ಮೆ ಸೊಗಸುಗಳನ್ನು ಸೃಷ್ಟಿಶೀಲ ಕಲಾವಿದನ ವಿನೂತನ ಕುಂಚದಿಂದ ರೇಖಿಸಿ ಕಾಣಿಸಿದ {{C|'''ಪ್ರೊಫೆಸರ್ ಕೆ. ಎ. ಕೃಷ್ಣಮೂರ್ತಿ'''}} ಪರಮಾಣು ಜಗತ್ತಿನ ಅಂತರಂಗ ವ್ಯಾಪಾರಗಳು ಬಹಿರಂಗವಾಗುತ್ತಿದ್ದ ದಿನಗಳಂದು ಅವನ್ನು ಆಕರ್ಷಕವಾಗಿಯೂ ಸ್ಪಷ್ಟವಾಗಿಯೂ ವಿವರಿಸಿದ {{C|'''ಪ್ರೊಫೆಸರ್ ಎಸ್. ನಾರಾಯಣ ಹೊಳ್ಳ'''<ref>ನಾರಾಯಣ ಹೊಳ್ಳರು ೧೯೯೩ರಲ್ಲಿಯೂ ಕೃಷ್ಣಮೂರ್ತಿಯವರು ೧೯೯೬ರಲ್ಲಿಯೂ ಅಮರರಾದರು.</ref>}} {{C|'''ಗುರುತ್ರಯರಿಗೆ'''}}<noinclude></noinclude> cgeuqwjbx5bfvnb6asa7x0v3bft3ihf ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೬ 104 90965 322386 234707 2026-05-25T07:34:08Z Pragathi. BH 7585 /* Validated */ 322386 proofread-page text/x-wiki <noinclude><pagequality level="4" user="Pragathi. BH" /></noinclude> {{C| {{xx-larger|ಐನ್‌ಸ್ಟೈನ್ ಬಾಳಿದರಿಲ್ಲಿ}} ಜಿ. ಟಿ. ನಾರಾಯಣರಾವ್ {{Css image crop |Image = ಐನ್‌ಸ್ಟೀನ್_ಬಾಳಿದರಿಲ್ಲಿ.djvu |Page = 6 |bSize = 354 |cWidth = 71 |cHeight = 95 |oTop = 410 |oLeft = 137 |Location = center |Description = }} ೨೦೦೯ {{larger|ಅತ್ರಿ ಬುಕ್ ಸೆಂಟರ್}} ಶರಾವತಿ ಕಟ್ಟಡ ಬಲ್ಮಠ ಮಂಗಳೂರು ೫೭೫೦೦೧ }}<noinclude></noinclude> dlhe8bztmit2571htwvh8gmrqy47mh4 ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೯ 104 90966 322383 234708 2026-05-25T07:30:34Z Pragathi. BH 7585 /* Validated */ 322383 proofread-page text/x-wiki <noinclude><pagequality level="4" user="Pragathi. BH" /></noinclude>'''ಶ್ರೀಮಾನ್ ಎ. ಪಿ. ಶ್ರೀನಿವಾಸರಾಯರು''' ಪ್ರೌಢಶಾಲೆಯಲ್ಲಿ ನನಗೆ ವಿಜ್ಞಾನ ಕಲಿಸಿದ ಗುರುಗಳು (೧೯೩೯-೪೨), ವಿಜ್ಞಾನ ಪ್ರಪಂಚದಲ್ಲಿ ಕಾಣಬಹುದಾದ ಕಾರ್ಯ-ಕಾರಣ ಸಂಬಂಧವನ್ನು ಇವರು ಚಿತ್ರಿಸಿದ ನವುರು, ಪ್ರಯೋಗಗಳನ್ನು ಮಾಡಿ ತೋರಿಸುವುದರಲ್ಲಿ ಪ್ರದರ್ಶಿಸಿದ ನಾಜೂಕು ಮತ್ತು ಸಮಗ್ರವಾಗಿ, ವಿಜ್ಞಾನಬೋಧನೆಗೆಂದೇ ತಮ್ಮ ವ್ಯಕ್ತಿತ್ವವನ್ನು ನಿವೇದಿಸಿಕೊಂಡ ಸಮರ್ಪಣಭಾವ ನನ್ನ ತರುಣ ಮತ್ತು ದ್ಯುತಿಗ್ರಾಹಿ ಮನಸ್ಸಿನ ಮೇಲೆ ಅಚ್ಚಳಿಯದ ದಾಖಲೆ ಮೂಡಿಸಿವೆ. '''ಪ್ರೊಫೆಸರ್ ಕೆ. ಎ. ಕೃಷ್ಣಮೂರ್ತಿಯವರು''' ಮತ್ತು '''ಪ್ರೊಫೆಸರ್ ಎಸ್. ನಾರಾಯಣ ಹೊಳ್ಳರು''' ನನಗೆ ಇಂಟರ್‌ಮೀಡಿಯೆಟ್ ತರಗತಿಗಳಲ್ಲಿ ಗಣಿತ ಮತ್ತು ಭೌತವಿಜ್ಞಾನ ಬೋಧಿಸಿದರು (೧೯೪೨-೪೪). ಮುಂದೆ, ನಾನು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದ (೧೯೪೭) ತರುವಾಯ, ನಾಲ್ಕು ವರ್ಷಗಳ ಕಾಲ, ೧೯೪೯ -೫೩, ಇವರ ಸಹೋದ್ಯೋಗಿ ಆಗಿದ್ದೆ. ನನ್ನ ವ್ಯಕ್ತಿತ್ವ ರೂಪುಗೊಳ್ಳುತ್ತಿದ್ದ ದಿನಗಳಂದು ಈ ಮಹನೀಯರ ಜೊತೆ ಒದಗಿದ ಆರು ವರ್ಷಗಳ ನಿಕಟ ಸಂಪರ್ಕ ಮತ್ತು ಸಹಯೋಗ ನನ್ನ ಅಭಿರುಚಿ ಆಸಕ್ತಿಗಳಿಗೆ ಖಚಿತ ರೂಪ ಮತ್ತು ಯುಕ್ತ ನಿರ್ದೇಶನ ನೀಡಿದುವು. ಗಣಿತದ ಎಂಥ ಸಂಕೀರ್ಣ ಪರಿಕಲ್ಪನೆಯೇ ಇರಲಿ ಯಾವ ಜಟಿಲ ಸಮಸ್ಯೆಯೇ ಎದುರಾಗಲಿ, ಕೃಷ್ಣಮೂರ್ತಿಯವರ ನಿಶಿತಮತಿಗೆ ಅದೊಂದು ಲೀಲಾವಿಹಾರ. ಅದರ ತಿರುಳನ್ನು ಅವರು ಒಡನೆ ಗ್ರಹಿಸಿ ಸ್ಪಷ್ಟವಾಗಿಯೂ ಸುಂದರವಾಗಿಯೂ ವಿವರಿಸುತ್ತಿದ್ದರು. ನಾರಾಯಣ ಹೊಳ್ಳರು ನ್ಯೂಕ್ಲಿಯರ್‌ ಯುಗ ಕ್ರಮಶಃ ಅನಾವರಣಗೊಳ್ಳುತ್ತಿದ್ದ ಆ ರೋಮಾಂಚಕಾರೀ ದಿನಗಳಂದು, ಭೌತ ಜಗತ್ತಿನ ಪ್ರಗಲ್ಬ ವಿದ್ಯಮಾನಗಳನ್ನು ಜಿಜ್ಞಾಸುವಿನ ಅನ್ವೇಷಕ ನೇತ್ರಗಳಿಂದ ಗ್ರಹಿಸಿ ಜೇಮ್ಸ್ ಜೀನ್ಸ್ ಅವರ ವಿನೂತನ ಧಾಟಿಯಲ್ಲಿ ಆಕರ್ಷಕವಾಗಿಯೂ ಸರ್ವಗ್ರಾಹ್ಯವಾಗಿಯೂ ವರ್ಣಿಸುತ್ತಿದ್ದರು. ಇವರುಗಳ ಜೇಯನಿಷ್ಠ ಸಂವಹನ ಸಾಮರ್ಥ್ಯ ನನ್ನ ಮೇಲೆ ವಿಶಿಷ್ಟ ಪ್ರಭಾವ ಬೀರಿದೆ. '''ಐನ್‌ಸ್ಟೈನ್ ಬಾಳಿದರಿಲ್ಲಿ''' ಪುಸ್ತಕವನ್ನು ಈ ಗುರುತ್ರಯರಿಗೆ ಅರ್ಪಿಸುವುದರಲ್ಲಿ ವಿನೀತ ವಿದ್ಯಾರ್ಥಿಯೊಬ್ಬನ ಸಾಂಪ್ರದಾಯಿಕ ಕೃತಜ್ಞತಾಭಾವ ಪ್ರಕಟಣೆಗಿಂತ ಹೆಚ್ಚಿನ ಒಂದು ಪ್ರತೀಕಾರ್ಥ ಹುದುಗಿದೆ ಎಂದು ಭಾವಿಸಿದ್ದೇನೆ : ಇಂಥ ಗುರುಗಳು, ಅಡಿಗರ ನುಡಿಗಳಲ್ಲಿ, “ಮಣ್ಣಿನ ಮನದಲಿ ಹೊನ್ನನೆ ಬೆಳೆಯುವ ಅಪೂರ್ವ ತೇಜದ” ಮಾಂತ್ರಿಕರು.<noinclude></noinclude> 6z251qs1pi7hdmdex6d49t9ops5k5js ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೧೩ 104 90970 322387 234712 2026-05-25T07:35:50Z Pragathi. BH 7585 /* Validated */ 322387 proofread-page text/x-wiki <noinclude><pagequality level="4" user="Pragathi. BH" /></noinclude> {{center|== ಮುನ್ನುಡಿ ==}} {{gap}}ಪುಸ್ತಕಗಳಿಗೆ ಮುನ್ನುಡಿ ಯಾಕೆ ? ಪುಸ್ತಕ ಬರೆದು ಪ್ರಕಟಿಸುವ ಕಷ್ಟ ತೆಗೆದುಕೊಂಡವನೇ ಮುನ್ನುಡಿ ಬರೆದರೆ ಅದೊಂದು ರೀತಿ. ಅವನು ತಾನು ಪಟ್ಟ ಪಾಡನ್ನು ತೋಡಿಕೊಳ್ಳುವುದಕ್ಕೆ ಅದೊಂದು ಸಾಧನ ಅಂದುಕೊಳ್ಳಬಹುದು. ಆದರೆ ಪಾಡುಪಡದವನೊಬ್ಬನಿಂದ ಮುನ್ನುಡಿ ಬರೆಸುವುದು ಏನು ಸೊಗಸು ? ಮದುವೆಗಳಲ್ಲಿ ಮದುವಣಗಿತ್ತಿಯನ್ನು ಮಂಟಪಕ್ಕೆ ಕರೆತರುವ ಸೋದರಮಾವನ ಪಾತ್ರ ಮುನ್ನುಡಿಕಾರನದ್ದೇ ? ಅಥವಾ ತಂಪು ಪಾನೀಯಗಳನ್ನು ಈಗೀಗ ಎಳನೀರನ್ನು ಕೂಡ ಕುಡಿಯುವುದಕ್ಕೆ ಒದಗಿಸುವ ಹುಲ್ಲು ನಳಿಗೆಯ ಹಾಗೆ ಪುಸ್ತಕಕ್ಕೊಂದು ಮುನ್ನುಡಿಯೇ ? {{gap}}ನಾನು ಕೇಳುವ ಅನೇಕ ಪ್ರಶ್ನೆಗಳಿಗೆ ನನಗೇ ಉತ್ತರ ಗೊತ್ತಿಲ್ಲದಿರುವ ಹಾಗೆ ಈ ಪ್ರಶ್ನೆಗಳಿಗೂ ಉತ್ತರ ನಾನರಿಯೆ. ಆದರೂ ನನ್ನ ಮಿತ್ರ ಜಿ. ಟಿ. ನಾರಾಯಣರಾಯರು ಕೇಳಿಕೊಂಡೊಡನೆ ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಒಪ್ಪಿಕೊಂಡೆ. ವಯಸ್ಸಾಗಿ, ಹೂರಣವುಳ್ಳ ಬರವಣಿಗೆಯ ಶಕ್ತಿ ಕಳೆದುಕೊಂಡವರಿಗೆ ತಾವಿನ್ನೂ ಜೀವಂತರಾಗಿದ್ದೇವೆಂದು ತಮಗೇ ಖಾತ್ರಿ ಮಾಡಿಕೊಳ್ಳುವುದಕ್ಕೆ ಮುನ್ನುಡಿ ಬರೆಯುವ ಸಂದರ್ಭ ಸಿಕ್ಕಿದರೆ ಅದು ಸುವರ್ಣ ಸಂದರ್ಭ ! ಜಿಟಿಯವರು ಈ ಸದಾಶಯದಿಂದ ನನ್ನನ್ನು ಮುನ್ನುಡಿಕಾರನ ಪಟ್ಟಕ್ಕೇರಿಸಿಲ್ಲವೆಂದು ನಾನು ಆಶಿಸುತ್ತೇನೆ. {{gap}}ಹಾಗಿದ್ದರೂ ಪರವಾ ಇಲ್ಲ. ಈ ಪುಸ್ತಕವನ್ನು ಪ್ರಕಟನಪೂರ್ವದಲ್ಲಿ ಓದುವ ಸಂದರ್ಭ ದೊರೆತದ್ದು ನನಗೆ ಸಂತೋಷ ತಂದಿದೆ. ನಾನೂರು ಪುಟಗಳ ಈ ಬೃಹದ್ಗ್ರಂಥಕ್ಕಾಗಿ ಲೇಖಕರು ತುಂಬಾ ದುಡಿದಿದ್ದಾರೆಂಬುದು ಸ್ಪಷ್ಟವೇ ಇದೆ. ಕನ್ನಡದಲ್ಲಿ ಹಲವು ವಿಜ್ಞಾನ ಲೇಖನ, ಪುಸ್ತಕಗಳ ಕರ್ತರವರು. ಚೊಕ್ಕ ಕೆಲಸ ಮಾಡುವವರು. ಪರಿಣಾಮವಾಗಿ ಈ ಶತಮಾನದ ಅತ್ಯಂತ ಪ್ರಭಾವೀ ವಿಜ್ಞಾನಿಯ ಜೀವನವನ್ನು ಕುರಿತು ಅರಿಯಬೇಕಾದದ್ದನ್ನೆಲ್ಲ ಒಳಗೊಂಡ ಒಂದು ಗ್ರಂಥವನ್ನು ಕನ್ನಡದಲ್ಲಿ ಕಾಣುತ್ತಿದ್ದೇವೆ. {{gap}}ಐನ್‌ಸ್ಟೈನರು ಪ್ರಪಂಚದಲ್ಲಿ ಬಹಳ ಅಪರೂಪವಾಗಿ 'ಅವತರಿಸುವ' ಪ್ರಚಂಡ ಬುದ್ದಿಯ ವಿಜ್ಞಾನಿಗಳಲ್ಲಿ ಒಬ್ಬರು, ಬಹುಶಃ ಐದು ಅಥವಾ ಹತ್ತು ಶತಮಾನಗಳಿಗೊಮ್ಮೆ, ಪಡುವಣ ದೇಶಗಳಲ್ಲಿ ಅರಸಿದರೆ ಕ್ರಿಸ್ತಪೂರ್ವದ ಆರ್ಕಿಮಿಡೀಸ್, ಮೂರು ಚಿಲ್ಲರೆ ಶತಮಾನಗಳ ಹಿಂದೆ ಹುಟ್ಟಿದ ನ್ಯೂಟನ್ ನಿಶ್ಚಿತವಾಗಿಯೂ ಈ ವರ್ಗದಲ್ಲಿ ಸೇರುತ್ತಾರೆ. ಜಿಟಿಯವರು ಎಲ್ಲ ವಿಜ್ಞಾನಗಳ ಅಂತಿಮ ಆಶಯವಾದ ಗಣಿತಶಾಸ್ತ್ರದಲ್ಲಿ ಶೂನ್ಯವನ್ನು ಕಂಡುಹಿಡಿದ ಭಾರತೀಯನನ್ನು ಈ ವರ್ಗದಲ್ಲಿ ಉಮೇದ್ವಾರನನ್ನಾಗಿ ನಿಲ್ಲಿಸಿರುವಂತಿದೆ. ದುರ್ದೈವದಿಂದ ಅವನು ಯಾರೋ ನಮಗೆ ತಿಳಿಯದಿದ್ದರೂ 'ಶೂನ್ಯ ಸಂಪಾದನೆ ಮಾಡಿದವನ ಆವಿಷ್ಕರಣದಿಂದ ಆದ ಕ್ರಾಂತಿ ಪರಮಾಣು- ಚ್ಛೇದನದಂಥ ತತ್‌ಕ್ಷಣದ ಪರಿಣಾಮವನ್ನು ತಾರದಿದ್ದರೂ ಮನುಷ್ಯನ ಊಹನೆ ಭಾವನೆಗಳ ಪರಿಮಾಣಾತ್ಮಕ ಅಭಿವ್ಯಂಜನೆಯನ್ನು ನಂಬಲಾರದಷ್ಟು ಸರಳಗೊಳಿಸಿದ ಆ ಅಜ್ಞಾತ ಮಹಾನು ಭಾವನನ್ನು ಪ್ರಪಂಚದ ಪ್ರಥಮ ವರ್ಗದ ಮಿದುಳುಗಳಲ್ಲಿ ಗಣಿಸಬೇಕಾದೀತು. ಇಟೆಲಿಯ ಲಿಯೊನಾರ್ಡೊ ಡ ವಿಂಚಿಯನ್ನು ಈ ಸಾಲಿನಲ್ಲಿ ಹೆಸರಿಸುವ ಚಪಲ ಬರುತ್ತದೆ. ಆದರೆ ಆತನ ಮಿದುಳು ಆರ್ಕಿಮಿಡೀಸ್‌ ಅಥವಾ ನ್ಯೂಟನ್ನನವುಗಳಿಗಿಂತ ಭಿನ್ನ ಸ್ವರೂಪದ್ದೋ ಅನಿಸುತ್ತದೆ. ಅಥವಾ ಅವನು ಕಾಲ ತಪ್ಪಿ, ನೂರಿನ್ನೂರು ವರ್ಷ ಮುಂಚಿತವಾಗಿ ಹುಟ್ಟಿ ಕೆಟ್ಟನೋ ಏನೋ! ಮಾನವೇತಿಹಾಸದಲ್ಲಿ ಕಾಲ ದೇಶ ತಪ್ಪಿ ಹುಟ್ಟುವುದು, ಸಕಾಲಕ್ಕೆ ಮುಂಚೆ ದಾರ್ಶನಿಕ ವೈಜ್ಞಾನಿಕ<noinclude></noinclude> 7ej1h63hqp6s6dm0acqlfjjcvhnn0s3 ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೧೪ 104 90971 322388 234713 2026-05-25T07:37:04Z Pragathi. BH 7585 /* Validated */ 322388 proofread-page text/x-wiki <noinclude><pagequality level="4" user="Pragathi. BH" />{{Right|ಮುನ್ನುಡಿ ix}}</noinclude>ಕಲ್ಪನೆಗಳು ಅವಿರ್ಭವಿಸುವುದು ಎಂಬುದೊಂದಿದೆ. ಕಲನಶಾಸ್ತ್ರವನ್ನು (calculus) ಮೊತ್ತಮೊದಲು ಆವಿಷ್ಕರಿಸಿದವನು ಆರ್ಕಿಮಿಡೀಸನೇ ಎಂದೂ ಆದರೆ ಅವನ ಕಾಲದಲ್ಲಿ ಅದರ ಪ್ರಯೋಜನಕ್ಕೆಡೆಯಿದ್ದಿಲ್ಲವಾಗಿ ಅದು ಮೂಲೆಗುಂಪಾಯಿತೆಂದೂ ಓದಿದ ನೆನಪಾಗುತ್ತದೆ. ಹಾಗಾಗಿ ಎರಡು ಸಾವಿರ ವರ್ಷಗಳ ಮೇಲೆ ನ್ಯೂಟನ್ ಅದನ್ನು ಪುನರಾವಿಷ್ಕರಿಸಬೇಕಾಯಿತು. ನ್ಯೂಟನ್ನನದು ಹೇಗೋ ಹಾಗೆ ಐನ್‌ಸ್ಟೈನರ ಭಾಗ್ಯವೂ ಅವರು ಇತಿಹಾಸದ ತಕ್ಕ ನಿಟ್ಟಿನಲ್ಲಿ ಹುಟ್ಟಿದರು ಎಂಬುದರಲ್ಲಿದೆ. ಇಬ್ಬರ ಮಹಿಮೆಯೂ ಒಂದೇ ಸ್ವಭಾವದ್ದು. ಅವರು ಮಹಾ ಪವಣಿಗರು. ಹಲದಶಕಗಳಿಂದ ಇತರರು ಕಲೆಹಾಕಿದ್ದ ತಥ್ಯಗಳನ್ನು ಏಕಸೂತ್ರದಲ್ಲಿ ಪವಣಿಸಿ ಅವರು ನಿಸರ್ಗದ ವರ್ತನೆಯನ್ನು ಅರ್ಥಪೂರ್ಣವಾಗಿ ಮಾಡಿ ತೋರಿಸಿದರು ; ಭಾರತೀಯ ಪರಿಭಾಷೆಯಲ್ಲಿ ಹೇಳುವುದಾದರೆ 'ಸತ್ಯ'ಗಳನ್ನು ಅಥವಾ `ತಥ್ಯ'ಗಳನ್ನು ಋತ'ದ ವ್ಯವಸ್ಥೆಗೆ ಒಳಪಡಿಸಿದರು. ಅಲೆಕ್ಸಾಂಡರ್ ಪೋಪ್ ಕವಿ “ದೇವನೆಂದನು ನ್ಯೂಟನ್ ಆಗಲಿ, ಒಡನೆ ಆಯ್ತು ಎಲ್ಲವು ಬೆಳಕು !” ಎಂದು ಹೇಳಿದಾಗ ಈ ಮಹತಿಯನ್ನೇ ಬಣ್ಣಿಸಿದ್ದ. ಕೊಪರ್ನಿಕಸ್, ಕೆಪ್ಲರ್, ಗೆಲಿಲಿಯೋ ಕಂಡದ್ದನ್ನೆಲ್ಲ ನ್ಯೂಟನ್ ಕಾಣೆಯಾಗಿ ಮಾರ್ಪಡಿಸಿದ್ದ, ಈ ಮಾತು ನ್ಯೂಟನ್ನನಿಗೆ ಅನ್ವಯಿಸುವುದಕ್ಕಿಂತಲೂ ಹೆಚ್ಚಾಗಿ ಆಲ್ಬರ್ಟ್ ಐನ್‌ಸ್ಟೈನರಿಗೆ ಅನ್ವಯಿಸುತ್ತದೆ. ೧೯ನೇ ಶತಮಾನದ ಉದ್ದಾಮ ವಿಜ್ಞಾನಿಗಳು ಕಂಡುಹಿಡಿದ ತಥ್ಯಗಳು ನ್ಯೂಟನ್ ನಿರ್ಮಿಸಿದ 'ವಿಶ್ವ'ವನ್ನು ಕದಲಿಸಿ ಭೌತಶಾಸ್ತ್ರಪ್ರಪಂಚವನ್ನು ಗೊಂದಲದಲ್ಲಿ ಕೆಡಹಿದ್ದಾಗ ಐನ್‌ಸ್ಟೈನರು ಹೊಸದೊಂದು ಕಾಣೆಯ ಸೂತ್ರಕ್ಕೆ ವಿಶ್ವವನ್ನು ಒಳಪಡಿಸಿ 'ಅನರ್ಥಗಳಿಗೆ 'ಅರ್ಥ'ದಾನ ಮಾಡಿದರು. ಅವರ ವಿಶೇಷ ಸಾಪೇಕ್ಷತಾ ಸಿದ್ದಾಂತ ಮತ್ತು ಅನಂತರ ರೂಪಿಸಿದ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತವನ್ನು ಎಷ್ಟು ಮಟ್ಟಿಗೆ ವಿಜ್ಞಾನವೆಂದು ಹೇಳಬಹುದೋ ಅಷ್ಟೇಮಟ್ಟಿಗೆ 'ದರ್ಶನ'ವೆಂದೂ ಕರೆಯಬಹುದು. ಪದಾರ್ಥ ಮತ್ತು ಶಕ್ತಿಯನ್ನು, ಕಾಲ ಮತ್ತು ದೇಶ ವನ್ನು ಒಂದೇ ಮಹಾಋತ'ದ ಅಂಕೆಯಲ್ಲಿ ನೆಲೆಗೊಳಿಸಿದ ಅವರ ಕಾರ್ಯ ಕ್ವಾಂಟಮ್ ಭೌತಶಾಸ್ತ್ರದಿಂದ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರವೊದಗಿಸಿದ ಬಗೆಯನ್ನು ಲೇಖಕರು ಈ ಪುಸ್ತಕದಲ್ಲಿ ವಿಸ್ತ್ರತವಾಗಿ ವಿವೇಚಿಸಿದ್ದಾರೆ. ಐನ್‌ಸ್ಟೈನರ ಸಿದ್ಧಿಗಳು ಐಸಾಕ್ ನ್ಯೂಟನ್ನನವುಗಳಿಗೆ ಸರಿಮಿಗಿಲಾಗಿ ನಿಲ್ಲುವ ಬುದ್ಧಿ ವೈಭವವನ್ನು ಪ್ರದರ್ಶಿಸಿದ್ದರೂ ಈ ಇಬ್ಬರು ಮಹಾಪುರುಷರು ಎಷ್ಟು ಭಿನ್ನಸ್ವಭಾವಗಳವರಾಗಿದ್ದರೆಂಬುದು ಆಶ್ಚರ್ಯ ತರಿಸುತ್ತದೆ. ನ್ಯೂಟನ್ನನ ಬಾಲ್ಯಜೀವನ ಕೆಲಮಟ್ಟಿಗೆ ಐನ್‌ಸ್ಟೈನರದಕ್ಕಿಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಹಾಯ್ದು ಬಂದಿತ್ತು. ಆದರೆ ಅವನೆಂದೂ ದಡ್ಡ ವಿದ್ಯಾರ್ಥಿ ಎನಿಸಿಕೊಂಡಿರಲಿಲ್ಲ. ಜರ್ಮನ್ ಶಿಕ್ಷಣ ವ್ಯವಸ್ಥೆಯ ಕಬ್ಬಿಣದ ಚೌಕಟ್ಟಿನಲ್ಲಿ ಸಿಕ್ಕಿದ್ದ ಐನ್‌ಸ್ಟೈನರನ್ನು ಹದಿನಾಲ್ಕನೇ ವಯಸ್ಸಿನಲ್ಲಿ ಕೆಲಸಕ್ಕೆ ಬಾರದ ದಡ್ಡನೆಂದು ಅವರ ಶಾಲೆ ಅತ್ಯಂತ 'ಸಂತೋಷ'ದಿಂದ ಹೊರಗೆ ಹಾಕಿತ್ತು. ಬಾಲಕ ಐನ್‌ಸ್ಟೈನನಿಗೂ ಈ ಬಡತರ್ಫಿಯಿಂದ ಅಷ್ಟೇ ಸಂತೋಷವಾಗಿತ್ತು ! ಅದಾಗಿ ಹನ್ನೆರಡು ವರ್ಷಗಳೊಳಗೆ ಈ ದಡ್ಡ, ಜಗತ್ತನ್ನೇ ವಿಸ್ಮಯಗೊಳಿಸುವ ವಿಜ್ಞಾನಪ್ರಬಂಧವನ್ನು ಪ್ರಕಟಿಸಬಹುದೆಂದು ಯಾರು ಎಣಿಸಿದ್ದರು ! ವಾಸ್ತವಿಕವಾಗಿ ವಿದ್ಯಾರ್ಥಿದಶೆಯ ಉದ್ದಕ್ಕೂ ನಾಲಾಯಕ'ವೆಂಬ ಬಿರುದನ್ನೇ ಜರ್ಮನಿಯಲ್ಲಿಯೂ ಸ್ವಿಟ್ಸರ್ಲೆಂಡಿ ನಲ್ಲಿಯೂ ಗಳಿಸಿದವರು ಅವರು. ಮಹಾಪ್ರಯೋಗ ಪರೀಕ್ಷೆಗಳ ಯುಗದಲ್ಲಿ ಹುಟ್ಟಿದ ಅವರು ಪ್ರಯೋಗಶಾಲೆಗಳಲ್ಲಿ ಅತ್ಯಲ್ಪ ಕಾಲವನ್ನು ಕಳೆದವರೆಂಬುದು ಇನ್ನೊಂದು ಸೋಜಿಗ, ಅವರ ಮತಿ ಅತಿಸೂಕ್ಷ್ಮ ಮತ್ತು ಅತಿ ವಿಶಾಲ ವಿಷಯಗಳಲ್ಲಿ ಮಾತ್ರ ಗ್ರಹಣಶಕ್ತಿಯನ್ನು ತೋರಿಸು<noinclude></noinclude> ta2j2vpn7dar7fljilw7sq6k3u89mi7 322389 322388 2026-05-25T07:38:09Z Pragathi. BH 7585 322389 proofread-page text/x-wiki <noinclude><pagequality level="4" user="Pragathi. BH" />{{Right|ಮುನ್ನುಡಿ ix}}</noinclude>ಕಲ್ಪನೆಗಳು ಅವಿರ್ಭವಿಸುವುದು ಎಂಬುದೊಂದಿದೆ. ಕಲನಶಾಸ್ತ್ರವನ್ನು (calculus) ಮೊತ್ತಮೊದಲು ಆವಿಷ್ಕರಿಸಿದವನು ಆರ್ಕಿಮಿಡೀಸನೇ ಎಂದೂ ಆದರೆ ಅವನ ಕಾಲದಲ್ಲಿ ಅದರ ಪ್ರಯೋಜನಕ್ಕೆಡೆಯಿದ್ದಿಲ್ಲವಾಗಿ ಅದು ಮೂಲೆಗುಂಪಾಯಿತೆಂದೂ ಓದಿದ ನೆನಪಾಗುತ್ತದೆ. ಹಾಗಾಗಿ ಎರಡು ಸಾವಿರ ವರ್ಷಗಳ ಮೇಲೆ ನ್ಯೂಟನ್ ಅದನ್ನು ಪುನರಾವಿಷ್ಕರಿಸಬೇಕಾಯಿತು. ನ್ಯೂಟನ್ನನದು ಹೇಗೋ ಹಾಗೆ ಐನ್‌ಸ್ಟೈನರ ಭಾಗ್ಯವೂ ಅವರು ಇತಿಹಾಸದ ತಕ್ಕ ನಿಟ್ಟಿನಲ್ಲಿ ಹುಟ್ಟಿದರು ಎಂಬುದರಲ್ಲಿದೆ. ಇಬ್ಬರ ಮಹಿಮೆಯೂ ಒಂದೇ ಸ್ವಭಾವದ್ದು. ಅವರು ಮಹಾ ಪವಣಿಗರು. ಹಲದಶಕಗಳಿಂದ ಇತರರು ಕಲೆಹಾಕಿದ್ದ ತಥ್ಯಗಳನ್ನು ಏಕಸೂತ್ರದಲ್ಲಿ ಪವಣಿಸಿ ಅವರು ನಿಸರ್ಗದ ವರ್ತನೆಯನ್ನು ಅರ್ಥಪೂರ್ಣವಾಗಿ ಮಾಡಿ ತೋರಿಸಿದರು ; ಭಾರತೀಯ ಪರಿಭಾಷೆಯಲ್ಲಿ ಹೇಳುವುದಾದರೆ 'ಸತ್ಯ'ಗಳನ್ನು ಅಥವಾ `ತಥ್ಯ'ಗಳನ್ನು ಋತ'ದ ವ್ಯವಸ್ಥೆಗೆ ಒಳಪಡಿಸಿದರು. ಅಲೆಕ್ಸಾಂಡರ್ ಪೋಪ್ ಕವಿ “ದೇವನೆಂದನು ನ್ಯೂಟನ್ ಆಗಲಿ, ಒಡನೆ ಆಯ್ತು ಎಲ್ಲವು ಬೆಳಕು !” ಎಂದು ಹೇಳಿದಾಗ ಈ ಮಹತಿಯನ್ನೇ ಬಣ್ಣಿಸಿದ್ದ. ಕೊಪರ್ನಿಕಸ್, ಕೆಪ್ಲರ್, ಗೆಲಿಲಿಯೋ ಕಂಡದ್ದನ್ನೆಲ್ಲ ನ್ಯೂಟನ್ ಕಾಣೆಯಾಗಿ ಮಾರ್ಪಡಿಸಿದ್ದ, {{gap}}ಈ ಮಾತು ನ್ಯೂಟನ್ನನಿಗೆ ಅನ್ವಯಿಸುವುದಕ್ಕಿಂತಲೂ ಹೆಚ್ಚಾಗಿ ಆಲ್ಬರ್ಟ್ ಐನ್‌ಸ್ಟೈನರಿಗೆ ಅನ್ವಯಿಸುತ್ತದೆ. ೧೯ನೇ ಶತಮಾನದ ಉದ್ದಾಮ ವಿಜ್ಞಾನಿಗಳು ಕಂಡುಹಿಡಿದ ತಥ್ಯಗಳು ನ್ಯೂಟನ್ ನಿರ್ಮಿಸಿದ 'ವಿಶ್ವ'ವನ್ನು ಕದಲಿಸಿ ಭೌತಶಾಸ್ತ್ರಪ್ರಪಂಚವನ್ನು ಗೊಂದಲದಲ್ಲಿ ಕೆಡಹಿದ್ದಾಗ ಐನ್‌ಸ್ಟೈನರು ಹೊಸದೊಂದು ಕಾಣೆಯ ಸೂತ್ರಕ್ಕೆ ವಿಶ್ವವನ್ನು ಒಳಪಡಿಸಿ 'ಅನರ್ಥಗಳಿಗೆ 'ಅರ್ಥ'ದಾನ ಮಾಡಿದರು. ಅವರ ವಿಶೇಷ ಸಾಪೇಕ್ಷತಾ ಸಿದ್ದಾಂತ ಮತ್ತು ಅನಂತರ ರೂಪಿಸಿದ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತವನ್ನು ಎಷ್ಟು ಮಟ್ಟಿಗೆ ವಿಜ್ಞಾನವೆಂದು ಹೇಳಬಹುದೋ ಅಷ್ಟೇಮಟ್ಟಿಗೆ 'ದರ್ಶನ'ವೆಂದೂ ಕರೆಯಬಹುದು. ಪದಾರ್ಥ ಮತ್ತು ಶಕ್ತಿಯನ್ನು, ಕಾಲ ಮತ್ತು ದೇಶ ವನ್ನು ಒಂದೇ ಮಹಾಋತ'ದ ಅಂಕೆಯಲ್ಲಿ ನೆಲೆಗೊಳಿಸಿದ ಅವರ ಕಾರ್ಯ ಕ್ವಾಂಟಮ್ ಭೌತಶಾಸ್ತ್ರದಿಂದ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರವೊದಗಿಸಿದ ಬಗೆಯನ್ನು ಲೇಖಕರು ಈ ಪುಸ್ತಕದಲ್ಲಿ ವಿಸ್ತ್ರತವಾಗಿ ವಿವೇಚಿಸಿದ್ದಾರೆ. {{gap}}ಐನ್‌ಸ್ಟೈನರ ಸಿದ್ಧಿಗಳು ಐಸಾಕ್ ನ್ಯೂಟನ್ನನವುಗಳಿಗೆ ಸರಿಮಿಗಿಲಾಗಿ ನಿಲ್ಲುವ ಬುದ್ಧಿ ವೈಭವವನ್ನು ಪ್ರದರ್ಶಿಸಿದ್ದರೂ ಈ ಇಬ್ಬರು ಮಹಾಪುರುಷರು ಎಷ್ಟು ಭಿನ್ನಸ್ವಭಾವಗಳವರಾಗಿದ್ದರೆಂಬುದು ಆಶ್ಚರ್ಯ ತರಿಸುತ್ತದೆ. ನ್ಯೂಟನ್ನನ ಬಾಲ್ಯಜೀವನ ಕೆಲಮಟ್ಟಿಗೆ ಐನ್‌ಸ್ಟೈನರದಕ್ಕಿಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಹಾಯ್ದು ಬಂದಿತ್ತು. ಆದರೆ ಅವನೆಂದೂ ದಡ್ಡ ವಿದ್ಯಾರ್ಥಿ ಎನಿಸಿಕೊಂಡಿರಲಿಲ್ಲ. ಜರ್ಮನ್ ಶಿಕ್ಷಣ ವ್ಯವಸ್ಥೆಯ ಕಬ್ಬಿಣದ ಚೌಕಟ್ಟಿನಲ್ಲಿ ಸಿಕ್ಕಿದ್ದ ಐನ್‌ಸ್ಟೈನರನ್ನು ಹದಿನಾಲ್ಕನೇ ವಯಸ್ಸಿನಲ್ಲಿ ಕೆಲಸಕ್ಕೆ ಬಾರದ ದಡ್ಡನೆಂದು ಅವರ ಶಾಲೆ ಅತ್ಯಂತ 'ಸಂತೋಷ'ದಿಂದ ಹೊರಗೆ ಹಾಕಿತ್ತು. ಬಾಲಕ ಐನ್‌ಸ್ಟೈನನಿಗೂ ಈ ಬಡತರ್ಫಿಯಿಂದ ಅಷ್ಟೇ ಸಂತೋಷವಾಗಿತ್ತು ! ಅದಾಗಿ ಹನ್ನೆರಡು ವರ್ಷಗಳೊಳಗೆ ಈ ದಡ್ಡ, ಜಗತ್ತನ್ನೇ ವಿಸ್ಮಯಗೊಳಿಸುವ ವಿಜ್ಞಾನಪ್ರಬಂಧವನ್ನು ಪ್ರಕಟಿಸಬಹುದೆಂದು ಯಾರು ಎಣಿಸಿದ್ದರು ! ವಾಸ್ತವಿಕವಾಗಿ ವಿದ್ಯಾರ್ಥಿದಶೆಯ ಉದ್ದಕ್ಕೂ ನಾಲಾಯಕ'ವೆಂಬ ಬಿರುದನ್ನೇ ಜರ್ಮನಿಯಲ್ಲಿಯೂ ಸ್ವಿಟ್ಸರ್ಲೆಂಡಿ ನಲ್ಲಿಯೂ ಗಳಿಸಿದವರು ಅವರು. ಮಹಾಪ್ರಯೋಗ ಪರೀಕ್ಷೆಗಳ ಯುಗದಲ್ಲಿ ಹುಟ್ಟಿದ ಅವರು ಪ್ರಯೋಗಶಾಲೆಗಳಲ್ಲಿ ಅತ್ಯಲ್ಪ ಕಾಲವನ್ನು ಕಳೆದವರೆಂಬುದು ಇನ್ನೊಂದು ಸೋಜಿಗ, ಅವರ ಮತಿ ಅತಿಸೂಕ್ಷ್ಮ ಮತ್ತು ಅತಿ ವಿಶಾಲ ವಿಷಯಗಳಲ್ಲಿ ಮಾತ್ರ ಗ್ರಹಣಶಕ್ತಿಯನ್ನು ತೋರಿಸು<noinclude></noinclude> 0wwg2gv2zu6nlnabn24m6uxk2qa93am ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೧೫ 104 90972 322313 234714 2026-05-24T18:14:19Z Pragathi. BH 7585 /* Validated */ 322313 proofread-page text/x-wiki <noinclude><pagequality level="4" user="Pragathi. BH" />X ಐನ್‌ಸ್ಟೈನ್ ಬಾಳಿದರಿಲ್ಲಿ</noinclude>ತಿತ್ತು. ಅದು ಮಹಾಪ್ರಶ್ನೆಗಳನ್ನು ಮಾತ್ರ ಕೇಳಬಲ್ಲದ್ದಾಗಿತ್ತು. ಚಿಲ್ಲರೆ ಸಂಗತಿಗಳ ಬಗ್ಗೆ ಆಸಕ್ತಿವಹಿಸುವುದು, ಆಸಕ್ತಿ ಇಲ್ಲದ್ದನ್ನು ಅಧ್ಯಯನ ಮಾಡುವುದು ಅವರಿಗೆ ಸುತರಾಂ ಅಸಾಧ್ಯವಾಗಿತ್ತು. ಈ ವಿಷಯದಲ್ಲಿ ಐನ್‌ಸ್ಟೈನರು ರವೀಂದ್ರನಾಥ ಠಾಕೂರರಿಗೆ ಹೆಚ್ಚು ಹತ್ತಿರದವರೇನೋ. ಠಾಕೂರರಿಗೆ ಹೈಸ್ಕೂಲ್ ಗಣಿತ ಕೂಡ ಹತ್ತದೆ ಅವರು ಮೆಟ್ರಿಕ್ ಕಾಣಲೇ ಇಲ್ಲ. ಇಬ್ಬರೂ ಒಲ್ಲದ್ದನ್ನು ಕಲಿಯಬೇಕೆಂಬುದನ್ನು ದಬ್ಬಾಳಿಕೆಯೆಂದೇ ಭಾವಿಸುವವರು ಮತ್ತು ಯಾವ ವಿಧದ ದಬ್ಬಾಳಿಕೆಗೂ ಸೊಪ್ಪು ಹಾಕುವವರಲ್ಲ.<br /> {{gap}}ಐನ್‌ಸ್ಟೈನರು ಕೇಳಿದ ಮಹಾಪ್ರಶ್ನೆಗಳು ಮತ್ತು ಪಡೆದ ಮಹಾಉತ್ತರಗಳು ಭೌತಶಾಸ್ತ್ರ ಮತ್ತು ವಿಶ್ವಸೃಷ್ಟಿಶಾಸ್ತ್ರದ ಅನೇಕ ಮೂಲ ಕಲ್ಪನೆಗಳನ್ನೇ ಬದಲು ಮಾಡಿದುವು. ಪ್ರಾರಂಭದಲ್ಲಿ ಅವು ಬಲ್ಲವರಿಗೂ ಅತ್ಯಂತ ಅಸಂಭವವೆನ್ನಿಸುವಷ್ಟು ವಿಚಿತ್ರವಾಗಿ ಕಂಡಿದ್ದು ವು. ಕಾಲವೆಂಬುದು ವಿಶ್ವದ ಚತುರ್ಥ ಆಯಾಮ, ಪ್ರಕಾಶಕ್ಕೆ ದ್ರವ್ಯರಾಶಿ ಇದೆ, ಬೆಳಕು ವಕ್ರಪಥದಲ್ಲಿ ಸಾಗುತ್ತದೆ, ದೇಶ ಬಾಗಿದೆ, ವಿಶ್ವ ಅನಂತವಲ್ಲ ಆದರೆ ಎಲ್ಲೆ ಇಲ್ಲದ್ದು, ದ್ರವ್ಯ ಮತ್ತು ಶಕ್ತಿ ಮೂಲತಃ ಒಂದೇ, ದ್ರವ್ಯನಾಶದಿಂದ ಶಕ್ತಿ ಹುಟ್ಟುತ್ತದೆ, ವೇಗವೃದ್ಧಿಯೊಡನೆ ಕಾಲ ಸಂಕುಚಿತವಾಗುತ್ತದೆ, ಇತ್ಯಾದಿಗಳು, ಅನಾದಿಯಿಂದ ಮನುಷ್ಯನಿಗೆ ಇಂದ್ರಿಯಗಳ, ಮತ್ತು ಇಂದ್ರಿಯಗಳ ವಿಸ್ತರಣೆಗಳಾದ ಉಪಕರಣಗಳ ಮೂಲಕ ಬಂದ ಅನುಭವಕ್ಕೆ ವಿರುದ್ಧವೆಂಬಂತೆ ಕಂಡುಬಂದರೂ ಕಾಲಾಂತರದಲ್ಲಿ ಅವರ ಕಲ್ಪನೆಗಳಲ್ಲಿ ಹೆಚ್ಚಿನವು ಪ್ರತ್ಯಕ್ಷ ಮತ್ತು ಪ್ರಾಯೋಗಿಕ ಪರೀಕ್ಷಣೆಗಳಲ್ಲಿ ತೇರ್ಗಡೆ ಹೊಂದಿ, ಕೇವಲ ಬುದ್ದಿ, ಕಾಗದ, ಪೆನ್ಸಿಲುಗಳ ಬಲದಿಂದ ಅವರು ಸೃಷ್ಟಿಸಿದ ಸಿದ್ದಾಂತ ಸೌಧಗಳು ಎಣೆಯಿಲ್ಲದ ಆಶ್ಚರ್ಯಕ್ಕೆ ಪಕ್ಕಾಗಿವೆ. ಅವರ ಕೆಲ ಸಿದ್ಧಾಂತಗಳು ಕೇವಲ ವಿಜ್ಞಾನಿಗಳ ಬುದ್ಧಿಯನ್ನು ಕೆಣಕಿ ಹೊಸ ಹಾದಿಗಳ ಅನ್ವೇಷಣೆಗೆ ಪ್ರೇರಣೆ ಕೊಟ್ಟರೂ ಸಾಮಾನ್ಯ ಮನುಷ್ಯನಿಗೆ ತಲೆಬುಡ ಆಗದ ಕೂಟ ಪ್ರಶ್ನೆಗಳಾಗಿ ಮಾತ್ರ ಕಾಣಿಸುತ್ತಿದ್ದರೆ, ಕೆಲ ಸಿದ್ಧಾಂತಗಳು ಆಗಲೇ ಮಾನವ ಕುಲದ ಹಣೆಬರಹವನ್ನೇ ತಿದ್ದಿ ಬರೆಯುವಂಥ ಪರಿಣಾಮಗಳನ್ನು ಮಾಡಿ ಸಾಮಾನ್ಯರ ಬದುಕಿನಲ್ಲಿ ಭಾಷೆಯಲ್ಲಿ ಆಗಲೇ ತಮ್ಮ ಸತ್ಯ ಪ್ರದರ್ಶಿಸಿವೆ. ಅವರ ಗುರುತ್ವಾಕರ್ಷಣ ತರಂಗ ಕಲ್ಪನೆಯಂಥವು ಇನ್ನೂ ಅಸಂದಿಗ್ಧ ಪ್ರಾಯೋಗಿಕ ಪ್ರಮಾಣಗಳನ್ನು ಎದುರು ನೋಡುತ್ತಿವೆ.<br /> {{gap}}ಇಂಥ ಒಬ್ಬ ಮಹಾಮತಿಯ ವೈಜ್ಞಾನಿಕ ಸಾಧನೆಗಳೇ ಅದ್ಭುತಗಳ ಸರಪಳಿಯಂತಿದ್ದರೆ, ಅವರ ಬದುಕು, ಅವರ ವ್ಯಕ್ತಿತ್ವ ತಮ್ಮ ನಂಬಲಾರದಂಥ ಸರಳತನದಿಂದ ನಮ್ಮ ಮನಸ್ಸನ್ನು ಸೆರೆಹಿಡಿ ಯುತ್ತವೆ. ಈ ಪುಸ್ತಕದಲ್ಲಿ ಅವರ ಅಷ್ಟ ಫೈಲು ಬದುಕಿನ ಅನೇಕ ಪೈಲುಗಳ ವಿವರಗಳೇ ಸಾಮಾನ್ಯ ಓದುಗನನ್ನು ಮೆಚ್ಚಿಸುವ ಅಂಶಗಳಾಗಿವೆ. ಪ್ರಪಂಚವನ್ನೇ ಅಲುಗಿಸುವ ಸಿದ್ದಾಂತಗಳನ್ನು ಮಂಡಿಸಿದ ಇಂಥ ವ್ಯಕ್ತಿಯ ಶುದ್ಧ ನಿರಹಂಕಾರತೆ ಕತೆಕತೆಯಾಗಿದೆ. ಅವರ ದೊಗಳೆ ಬಟ್ಟೆಗಳು, ಅವುಗಳಲ್ಲೇ ಎಂಥ ಪ್ರತಿಷ್ಠಿತರನ್ನೂ ಕಾಣಹೋಗುವ ಧೈರ್ಯ, ಕೂದಲು ಕತ್ತರಿಸಿಕೊಳ್ಳುವ ತೊಂದರೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅವರು 'ಸಿಂಹಕೇಶಿ'ಯಾಗಿದ್ದದ್ದು, ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ನೆರೆಮನೆಯ ಹುಡುಗಿ ಬಂದು ಕೇಳಿದರೆ ವಿಜ್ಞಾನದ ಈ ಮಹರ್ಷಿ ಅಕ್ಕರೆಯಿಂದ ಅವಳಿಗೆ ಲೆಕ್ಕ ಹೇಳಿಕೊಡುವುದು, ತಮಗೆ ಪ್ರೊಫೆಸರ್‌ ಪದವನ್ನು ಕೊಡಮಾಡಿ ಸಂಬಳ ಎಷ್ಟು ಬೇಡುತ್ತೀರಿ ಎಂದು ಕೇಳಿದರೆ ಎಷ್ಟು ಕೇಳಬೇಕೆಂದರಿಯದ ಅಮಾಯಕತನ, ಹಸುಳೆ ಮಗನನ್ನು ಎತ್ತಿಕೊಂಡು ಆಡಿಸುತ್ತಾಡಿಸುತ್ತ ಇನ್ನೊಂದು ಕೈಯಿಂದ ವಿಜ್ಞಾನದ ಘನಗಹನ ಸಮಸ್ಯೆಗಳಿಗೆ ಪರಿಹಾರವನ್ನು ಟಿಪ್ಪಣಿ ಮಾಡುತ್ತ ಹೋಗಬಲ್ಲ 'ಅಷ್ಟಾವಧಾನ' ಸಾಮರ್ಥ್ಯ, ಗುಂಪಿನಲ್ಲಿ ಬೆರೆತು ಸರಸವಾಡುವಾಗಲೂ ಆಂತರಿಕ ಏಕಾಂಗಿತನವನ್ನು ಅನುಭವಿಸುವ<noinclude></noinclude> qhfpj6qfglin3te6g2jbrgt6lhgtbxr ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೧೬ 104 90973 322311 234715 2026-05-24T18:12:07Z Pragathi. BH 7585 /* Validated */ 322311 proofread-page text/x-wiki <noinclude><pagequality level="4" user="Pragathi. BH" />ಮುನ್ನುಡಿ xi</noinclude>ನಿರ್ಲಿಪ್ತತೆ-ಇವೆಲ್ಲ ಐನ್‌ಸ್ಟೈನರನ್ನು ಅತ್ಯಂತ ವಾತ್ಸಲ್ಯಪಾತ್ರರನ್ನಾಗಿ ಅಜಾತಶತ್ರುವನ್ನಾಗಿ ಮಾಡಿದ್ದುವು. ಅಜಾತಶತ್ರು ? ಹೌದು, ಅವರ ದೃಷ್ಟಿಯಲ್ಲಿ, ಅವರಿಗೆ ಯಾರನ್ನೂ ದ್ವೇಷಿಸಲಿಕ್ಕೆ ಬರುತ್ತಿರಲಿಲ್ಲ. ಅದರ ಅರ್ಥ ಅವರಿಗೆ ಶತ್ರುಗಳಿರಲಿಲ್ಲವೆಂದಲ್ಲ. ::ಮಿಕಕೂ ಮೀನಿಗು ಒಳ್ಳೆಯ ಜನಕೂ ::ಹುಲ್ಲೂ ನೀರೂ ತೃಪ್ತಿಯೆ ಸಾಕು ; ::ಆದರೆ ಬೇಡನು ಬೆಸ್ತನು ಹಿಸುಣ ::ಹಗೆಗಳವರಿಗೂ ವಿನಾಕಾರಣ ಎಂಬ ಭರ್ತೃಹರಿಯ ಮಾತು ಐನ್‌ಸ್ಟೈನರಿಗೆ ಬಹಳ ಚೆನ್ನಾಗಿ ಅನ್ವಯಿಸುತ್ತಿತ್ತು. ಜಗತ್ತಿನಲ್ಲಿ ಹೇಗೆ ಹೇಗೆ ಅವರ ಮೇಲೆ ಪ್ರೀತಿಗೌರವ ಬೆಳೆಯುತ್ತಿತ್ತೋ ಹಾಗೆ ಹಾಗೆ ಜರ್ಮನಿಯಲ್ಲಿ ಹುಟ್ಟಿ, ಜರ್ಮನ್ ಹೊರತು ಇತರ ಭಾಷೆಗಳನ್ನು ಕೊನೆವರೆಗೂ ಸರಿಯಾಗಿ ಮಾತಾಡಲಾರದಿದ್ದ ಈ ವಿಶ್ವವಿಜ್ಞಾನಿಯನ್ನು ದ್ವೇಷಿಸುತ್ತಿದ್ದವರಲ್ಲಿ ಜರ್ಮನ್ ವಿಜ್ಞಾನಿಗಳೂ ಅವರಲ್ಲಿ ನೊಬೆಲ್ ಪಾರಿತೋಷಿಕವನ್ನು ಗೆದ್ದವರೂ ಸೇರಿದ್ದರು ಇದ್ದರೆಂಬುದನ್ನು ನೆನೆದರೆ ಸತ್ಯಶೋಧಕರೆಂದು ಬಿರುದು ಹೊತ್ತ ವಿಜ್ಞಾನಿಗಳೂ ನರಲೋಕದ ಪಿಶುನತೆಗೆ ಹೊರತಾದವರಲ್ಲ ಎಂಬುದು ಕೆನ್ನೆಗೆ ಹೊಡೆದಂತೆ ಪ್ರತೀತಿಗೆ ಬರುತ್ತದೆ. ಐನ್‌ಸ್ಟೈನರ ತಪ್ಪೆಂದರೆ ಅವರು ಯೂರೋಪಿನ 'ಹೊಲೆಯ'ರಾದ ಯೆಹೂದ್ಯರ ಜಾತಿಯಲ್ಲಿ ಹುಟ್ಟಿದ್ದು. {{gap}}ಜರ್ಮನಿಯಲ್ಲಿ ಐನ್‌ಸ್ಟೈನರಿಗೊದಗಿದ ಅವಸ್ಥೆಯ ಕಥೆ ವಿಚಿತ್ರ ಮಾರ್ಗವನ್ನು ಅನುಸರಿಸಿತು. ಹಿಂಸೆ, ಯುದ್ಧ ಎಂಬುದನ್ನು ಸಹಿಸಲಾರದ ಈ ಶಾಂತಿಪಕ್ಷಪಾತಿ ಮೊದಲನೇ ಮಹಾಯುದ್ಧ ನಡೆಯುತ್ತಿದ್ದಾಗಲೇ ಯುದ್ಧದ ಸೈನಿಕ ಮನೋವೃತ್ತಿಯ ಬಗ್ಗೆ ತಮಗಿರುವ ವಿರೋಧವನ್ನು ಬಹಿರಂಗವಾಗಿಯೇ ಪ್ರಕಟಪಡಿಸಿದ್ದರೂ ಚಕ್ರವರ್ತಿ ಕೈಸರನ ಯುದ್ಧೋತ್ಸಾಹಿ ಸರಕಾರ ಅವರಗೊಡವೆಗೆ ಹೋಗದೆ ಅವರ ವೈಜ್ಞಾನಿಕ ಕೆಲಸವನ್ನು ನಿರಾತಂಕವಾಗಿ ನಡೆಸಲು ಬಿಟ್ಟಿತ್ತಾದರೆ, ಯುದ್ಧೋತ್ತರ ಜರ್ಮನಿಯಲ್ಲಿ ತಲೆಯೆತ್ತಿದ 'ಪ್ರಜಾತಂತ್ರ ದಲ್ಲಿ ಅವರ ಮೇಲೆ ದ್ವೇಷಸಾಧನೆ ಪ್ರಾರಂಭವಾಗಿದ್ದು ಸೋಜಿಗವಾಗಿ ಕಂಡರೂ ಅದು ಬರೇ ವಿರೋಧಾಭಾಸ ಮಾತ್ರ. ಪರಂಪರಾ ಗತವಾಗಿ ಅಧಿಕಾರ ನಡೆಸುವ ಗುಂಪಿಗಿಂತಲೂ 'ಜನಪ್ರಿಯ ಮಾರ್ಗಗಳಿಂದ ಹೊಸದಾಗಿ ಅಧಿಕಾರಕ್ಕೆ ಬರುವವರಲ್ಲಿ ಮಿತಾಮಿತ ನ್ಯಾಯಾನ್ಯಾಯ ಸತ್ಯಾಸತ್ಯ ವಿವೇಕ ಕಡಿಮೆಯಿರುತ್ತದೆಂದೂ ಅವರು ಜನಜಂಗುಳಿಯ ಅವಿಚಾರಿತ ರಾಗದ್ವೇಷಗಳ ಮಿತಿಮೀರಿ ಉಬ್ಬಿಸಿದ ಆವೃತ್ತಿಗಳಾಗಿರುತ್ತಾರೆಂದೂ ಇತಿಹಾಸದ ಸಾಮಾನ್ಯ ಅನುಭವ ಹೇಳುತ್ತದೆ. ತಾನೇ ಬಲಿಯಾಗಿ ಸೋತ ಜರ್ಮನಿಯಲ್ಲಿ ತಲೆಯೆತ್ತಿದ ಹೊಸ ನಾಯಕರು, ಜನಜಂಗುಳಿಯಲ್ಲಿ ಶತಮಾನಗಳಿಂದ ತಿರಸ್ಕಾರಪಾತ್ರರಾಗಿದ್ದ ಯೆಹೂದ್ಯರ ಮೇಲಿನ ದ್ವೇಷಕ್ಕೆ ಉರುವಲು ಒಟ್ಟಿ ಅದರ ಬಲದಿಂದ ಅಧಿಕಾರಕ್ಕೆ ಯಶಸ್ವಿಯಾಗಿ ಲಗ್ಗೆ ಹಾಕಿದರು. ಯೆಹೂದ್ಯರ ದ್ವೇಷ ಅವರ ಸರಕಾರದ ಅಧಿಕೃತ ರಾಜನೀತಿಯೇ ಆಯಿತು. ಯೆಹೂದ್ಯರಾದ ಸಾಲದ್ದಕ್ಕೆ ಯುದ್ಧವಿರೋಧಿಯೂ ಅಂತಾ ರಾಷ್ಟ್ರೀಯವಾದಿಯೂ ಆಗಿ ಇಮ್ಮಡಿ 'ಅಪರಾಧ' ವೆಸಗಿದ ಐನ್‌ಸ್ಟೈನರ ಜೀವನ ಜರ್ಮನಿಯಲ್ಲಿ ಅಸಹನೀಯವಾಯಿತು. ಯೆಹೂದ್ಯರಿಗೆ ಸಂಬಂಧಪಟ್ಟಿದ್ದೆಲ್ಲ ವರ್ಜ್ಯವಾದದ್ದರೊಟ್ಟಿಗೆ ಯೆಹೂದ್ಯವಿಜ್ಞಾನವನ್ನೂ ಬಹಿಷ್ಕರಿಸುವ ವಿಪರೀತ ವೃತ್ತಿಯಲ್ಲಿ ಹೆಸರಾಂತ ಜರ್ಮನ್ ವಿಜ್ಞಾನಿಗಳಲ್ಲಿ ಬಹುಸಂಖ್ಯಾಕರು ಪಾಲುಗೊಂಡು ತಮ್ಮ 'ದೇಶಭಕ್ತಿ'ಯನ್ನು ಪ್ರದರ್ಶಿಸಿದ್ದನ್ನು ನೋಡಿ<noinclude></noinclude> 4j5wg88m8yvs43a7shxxqn8ek6eozkf 322312 322311 2026-05-24T18:12:57Z Pragathi. BH 7585 322312 proofread-page text/x-wiki <noinclude><pagequality level="4" user="Pragathi. BH" />ಮುನ್ನುಡಿ xi</noinclude>ನಿರ್ಲಿಪ್ತತೆ-ಇವೆಲ್ಲ ಐನ್‌ಸ್ಟೈನರನ್ನು ಅತ್ಯಂತ ವಾತ್ಸಲ್ಯಪಾತ್ರರನ್ನಾಗಿ ಅಜಾತಶತ್ರುವನ್ನಾಗಿ ಮಾಡಿದ್ದುವು. {{gap}}ಅಜಾತಶತ್ರು ? ಹೌದು, ಅವರ ದೃಷ್ಟಿಯಲ್ಲಿ, ಅವರಿಗೆ ಯಾರನ್ನೂ ದ್ವೇಷಿಸಲಿಕ್ಕೆ ಬರುತ್ತಿರಲಿಲ್ಲ. ಅದರ ಅರ್ಥ ಅವರಿಗೆ ಶತ್ರುಗಳಿರಲಿಲ್ಲವೆಂದಲ್ಲ. ::ಮಿಕಕೂ ಮೀನಿಗು ಒಳ್ಳೆಯ ಜನಕೂ ::ಹುಲ್ಲೂ ನೀರೂ ತೃಪ್ತಿಯೆ ಸಾಕು ; ::ಆದರೆ ಬೇಡನು ಬೆಸ್ತನು ಹಿಸುಣ ::ಹಗೆಗಳವರಿಗೂ ವಿನಾಕಾರಣ ಎಂಬ ಭರ್ತೃಹರಿಯ ಮಾತು ಐನ್‌ಸ್ಟೈನರಿಗೆ ಬಹಳ ಚೆನ್ನಾಗಿ ಅನ್ವಯಿಸುತ್ತಿತ್ತು. ಜಗತ್ತಿನಲ್ಲಿ ಹೇಗೆ ಹೇಗೆ ಅವರ ಮೇಲೆ ಪ್ರೀತಿಗೌರವ ಬೆಳೆಯುತ್ತಿತ್ತೋ ಹಾಗೆ ಹಾಗೆ ಜರ್ಮನಿಯಲ್ಲಿ ಹುಟ್ಟಿ, ಜರ್ಮನ್ ಹೊರತು ಇತರ ಭಾಷೆಗಳನ್ನು ಕೊನೆವರೆಗೂ ಸರಿಯಾಗಿ ಮಾತಾಡಲಾರದಿದ್ದ ಈ ವಿಶ್ವವಿಜ್ಞಾನಿಯನ್ನು ದ್ವೇಷಿಸುತ್ತಿದ್ದವರಲ್ಲಿ ಜರ್ಮನ್ ವಿಜ್ಞಾನಿಗಳೂ ಅವರಲ್ಲಿ ನೊಬೆಲ್ ಪಾರಿತೋಷಿಕವನ್ನು ಗೆದ್ದವರೂ ಸೇರಿದ್ದರು ಇದ್ದರೆಂಬುದನ್ನು ನೆನೆದರೆ ಸತ್ಯಶೋಧಕರೆಂದು ಬಿರುದು ಹೊತ್ತ ವಿಜ್ಞಾನಿಗಳೂ ನರಲೋಕದ ಪಿಶುನತೆಗೆ ಹೊರತಾದವರಲ್ಲ ಎಂಬುದು ಕೆನ್ನೆಗೆ ಹೊಡೆದಂತೆ ಪ್ರತೀತಿಗೆ ಬರುತ್ತದೆ. ಐನ್‌ಸ್ಟೈನರ ತಪ್ಪೆಂದರೆ ಅವರು ಯೂರೋಪಿನ 'ಹೊಲೆಯ'ರಾದ ಯೆಹೂದ್ಯರ ಜಾತಿಯಲ್ಲಿ ಹುಟ್ಟಿದ್ದು. {{gap}}ಜರ್ಮನಿಯಲ್ಲಿ ಐನ್‌ಸ್ಟೈನರಿಗೊದಗಿದ ಅವಸ್ಥೆಯ ಕಥೆ ವಿಚಿತ್ರ ಮಾರ್ಗವನ್ನು ಅನುಸರಿಸಿತು. ಹಿಂಸೆ, ಯುದ್ಧ ಎಂಬುದನ್ನು ಸಹಿಸಲಾರದ ಈ ಶಾಂತಿಪಕ್ಷಪಾತಿ ಮೊದಲನೇ ಮಹಾಯುದ್ಧ ನಡೆಯುತ್ತಿದ್ದಾಗಲೇ ಯುದ್ಧದ ಸೈನಿಕ ಮನೋವೃತ್ತಿಯ ಬಗ್ಗೆ ತಮಗಿರುವ ವಿರೋಧವನ್ನು ಬಹಿರಂಗವಾಗಿಯೇ ಪ್ರಕಟಪಡಿಸಿದ್ದರೂ ಚಕ್ರವರ್ತಿ ಕೈಸರನ ಯುದ್ಧೋತ್ಸಾಹಿ ಸರಕಾರ ಅವರಗೊಡವೆಗೆ ಹೋಗದೆ ಅವರ ವೈಜ್ಞಾನಿಕ ಕೆಲಸವನ್ನು ನಿರಾತಂಕವಾಗಿ ನಡೆಸಲು ಬಿಟ್ಟಿತ್ತಾದರೆ, ಯುದ್ಧೋತ್ತರ ಜರ್ಮನಿಯಲ್ಲಿ ತಲೆಯೆತ್ತಿದ 'ಪ್ರಜಾತಂತ್ರ ದಲ್ಲಿ ಅವರ ಮೇಲೆ ದ್ವೇಷಸಾಧನೆ ಪ್ರಾರಂಭವಾಗಿದ್ದು ಸೋಜಿಗವಾಗಿ ಕಂಡರೂ ಅದು ಬರೇ ವಿರೋಧಾಭಾಸ ಮಾತ್ರ. ಪರಂಪರಾ ಗತವಾಗಿ ಅಧಿಕಾರ ನಡೆಸುವ ಗುಂಪಿಗಿಂತಲೂ 'ಜನಪ್ರಿಯ ಮಾರ್ಗಗಳಿಂದ ಹೊಸದಾಗಿ ಅಧಿಕಾರಕ್ಕೆ ಬರುವವರಲ್ಲಿ ಮಿತಾಮಿತ ನ್ಯಾಯಾನ್ಯಾಯ ಸತ್ಯಾಸತ್ಯ ವಿವೇಕ ಕಡಿಮೆಯಿರುತ್ತದೆಂದೂ ಅವರು ಜನಜಂಗುಳಿಯ ಅವಿಚಾರಿತ ರಾಗದ್ವೇಷಗಳ ಮಿತಿಮೀರಿ ಉಬ್ಬಿಸಿದ ಆವೃತ್ತಿಗಳಾಗಿರುತ್ತಾರೆಂದೂ ಇತಿಹಾಸದ ಸಾಮಾನ್ಯ ಅನುಭವ ಹೇಳುತ್ತದೆ. ತಾನೇ ಬಲಿಯಾಗಿ ಸೋತ ಜರ್ಮನಿಯಲ್ಲಿ ತಲೆಯೆತ್ತಿದ ಹೊಸ ನಾಯಕರು, ಜನಜಂಗುಳಿಯಲ್ಲಿ ಶತಮಾನಗಳಿಂದ ತಿರಸ್ಕಾರಪಾತ್ರರಾಗಿದ್ದ ಯೆಹೂದ್ಯರ ಮೇಲಿನ ದ್ವೇಷಕ್ಕೆ ಉರುವಲು ಒಟ್ಟಿ ಅದರ ಬಲದಿಂದ ಅಧಿಕಾರಕ್ಕೆ ಯಶಸ್ವಿಯಾಗಿ ಲಗ್ಗೆ ಹಾಕಿದರು. ಯೆಹೂದ್ಯರ ದ್ವೇಷ ಅವರ ಸರಕಾರದ ಅಧಿಕೃತ ರಾಜನೀತಿಯೇ ಆಯಿತು. ಯೆಹೂದ್ಯರಾದ ಸಾಲದ್ದಕ್ಕೆ ಯುದ್ಧವಿರೋಧಿಯೂ ಅಂತಾ ರಾಷ್ಟ್ರೀಯವಾದಿಯೂ ಆಗಿ ಇಮ್ಮಡಿ 'ಅಪರಾಧ' ವೆಸಗಿದ ಐನ್‌ಸ್ಟೈನರ ಜೀವನ ಜರ್ಮನಿಯಲ್ಲಿ ಅಸಹನೀಯವಾಯಿತು. ಯೆಹೂದ್ಯರಿಗೆ ಸಂಬಂಧಪಟ್ಟಿದ್ದೆಲ್ಲ ವರ್ಜ್ಯವಾದದ್ದರೊಟ್ಟಿಗೆ ಯೆಹೂದ್ಯವಿಜ್ಞಾನವನ್ನೂ ಬಹಿಷ್ಕರಿಸುವ ವಿಪರೀತ ವೃತ್ತಿಯಲ್ಲಿ ಹೆಸರಾಂತ ಜರ್ಮನ್ ವಿಜ್ಞಾನಿಗಳಲ್ಲಿ ಬಹುಸಂಖ್ಯಾಕರು ಪಾಲುಗೊಂಡು ತಮ್ಮ 'ದೇಶಭಕ್ತಿ'ಯನ್ನು ಪ್ರದರ್ಶಿಸಿದ್ದನ್ನು ನೋಡಿ<noinclude></noinclude> kcssldn9g3ckce99evjer2z03y7fx3l ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೩೦ 104 90976 322382 234718 2026-05-25T07:30:12Z Pragathi. BH 7585 /* Validated */ 322382 proofread-page text/x-wiki <noinclude><pagequality level="4" user="Pragathi. BH" /></noinclude> == ೧. ಸುಪ್ತ ಪ್ರತಿಭೆ == ::::'''ದಿಕ್ಸೂಚಿ ಸೂಚಿಸಿದ ದಿಕ್ಕು''' ::ಬಾನಾಚೆಯಿಂ ವಿಶ್ವಸ ತಾನಿಳಿದಿಳೆಗೆ ::ನಾನೆನುವ ಚೇತನದಿ ರೂಪಗೊಂಡಿಹುದೋ ? ::ನಾನೆನುವ ಕೇಂದ್ರದಿನೆ ಹೊರಟ ಸತ್ಯದ ಪರಿಧಿ ::ಬಾನಾಚೆ ಹಬ್ಬಿಹುದೊ ? ಮಂಕುತಿಮ್ಮ {{gap}}ಯೆಹೂದ್ಯ ವಣಿಕರ ಅಲೆಮಾರಿ ಕುಟುಂಬವೊಂದು ಜರ್ಮನಿ ರಾಷ್ಟ್ರದ ವುರ್ಟೆನ್‌ಬರ್ಗ್ ರಾಜ್ಯದ ಉಲ್ಸ್ಪಟ್ಟಣದಲ್ಲಿ ನೆಲಸಿತ್ತು. ಹರ್ಮನ್ ಐನ್‌ಸ್ಟೈನ್ (೧೮೪೭-೧೯೦೨) ಮನೆಯ ಹಿರಿಯ, ಪೌಲೀನ್ (೧೮೫೮-೧೯೨೦) ಇವರ ಹೆಂಡತಿ, ಜೇಕಬ್ (೧೮೫೦-೧೯೧೦) ತಮ್ಮ. ಐನ್‌ಸ್ಟೈನ್ ಸಹೋದರರು ವಿದ್ಯುದ್ರಾಸಾಯನಿಕ ಕಾರ್ಖಾನೆಯೊಂದರ ಮಾಲಿಕರು. ಇದರ ತಾಂತ್ರಿಕಾಂಶಗಳ ನಿರ್ವಹಣೆ ತಮ್ಮನ ಹೊಣೆ, ವ್ಯಾಪಾರ ವಹಿವಾಟುಗಳ ಉಸ್ತುವಾರಿ ಅಣ್ಣನದು. ಹರ್ಮನ್ ಅಂಥ ವ್ಯವಹಾರಕುಶಲಿ ಏನೂ ಆಗಿರಲಿಲ್ಲ. ಮುಗ್ಧತೆಯ ಕಡೆಗೇ ಒತ್ತು ಜಾಸ್ತಿ. ಹೀಗಾಗಿ ಕಾರ್ಖಾನೆ ಪದೇ ಪದೇ ನಷ್ಟಕ್ಕೆ ಈಡಾಗುತ್ತಿತ್ತು. ಆದರೆ ಇವರ ಜೀವನಶ್ರದ್ದೆಯಾಗಲಿ ಸಾಹಿತ್ಯಾಸಕ್ತಿಯಾಗಲಿ ಇದರಿಂದ ಬಾಧಿತವಾಗುತ್ತಿರಲಿಲ್ಲ. {{gap}}ಪೌಲೀನ್ ವಿಶೇಷ ಸಾಮರ್ಥ್ಯವಂತ ಪ್ರಾಜ್ಞೆ, ಸಂಗೀತ, ಕಲೆ, ಸುಸಂಸ್ಕೃತ ಜೀವನ ಇವುಗಳಲ್ಲಿ ಅಪಾರ ಶ್ರದ್ಧೆ ಇರುವಾಕೆ. ಮನವೆಚ್ಚಕ್ಕೆ ಒದಗುತ್ತಿದ್ದ ರೊಕ್ಕ ಬಲು ಕಡಿಮೆ ಆಗಿದ್ದರೂ ಅಷ್ಟರಿಂದಲೇ ತೃಪ್ತಿ ತಳೆದು ಬದುಕಿಗೆ ಒಪ್ಪ ಓರಣ ತರುತ್ತಿದ್ದ ಕುಶಲಿ, ಮನೆಯಲ್ಲಿ ಹೆಚ್ಚು ಕಡಿಮೆ ಪ್ರತಿ ಸಂಜೆಯೂ ಸೇರುತ್ತಿದ್ದ ಸಂಗೀತಮೇಳದ ಕೇಂದ್ರ ವ್ಯಕ್ತಿ ಅಥವಾ ಪ್ರಧಾನಶ್ರುತಿ ಈಕೆಯೇ. ಜರ್ಮನ್‌ ಅಭಿಜಾತ (classical) ಸಂಗೀತಪ್ರಪಂಚದಲ್ಲಿ ವಿಹರಿಸುವುದು ಈ ಕಲಾಭಿಮಾನಿಗಳ ಪ್ರಿಯ ಹವ್ಯಾಸ. {{gap}}ಜೇಕಬ್ ಒಬ್ಬ ಎಂಜಿನಿಯರ್. ಈ ವೃತ್ತಿಗೆಂದೇ ಶಿಕ್ಷಣ ಪಡೆದಾತ. ಅಮೂರ್ತ ಬೌದ್ಧಿಕ ಚಿಂತನೆಗಳಲ್ಲಿ ಹೆಚ್ಚಿನ ಒಲವು. {{gap}}ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ. ಇಂದಿನ ಪಟ್ಟಣಗಳಿಗೆ ಹೋಲಿಸಿದಾಗ ಅಂದಿನ ಉಲ್ಸ್ಪಟ್ಟಣ ವಿಸ್ತ್ರತ ಗ್ರಾಮದಂತಿತ್ತು. ಸರಳ ಶಾಂತಜೀವನ. ಐನ್‌ಸ್ಟೈನ್ ಕುಟುಂಬಕ್ಕೆ ಹೇಳಿಕೊಳ್ಳುವಂಥ ಸಿರಿವಂತಿಕೆ ಇರದಿದ್ದರೂ ಬದುಕಿನಲ್ಲಿ ನೆಮ್ಮದಿಗೆ ಏನೂ ಕೊರತೆ ಇರಲಿಲ್ಲ. ಕರ್ಮಠ ಯೆಹೂದ್ಯ ಸಂಪ್ರದಾಯವಾದಿಗಳಲ್ಲದ ಇವರು ಆ ಧರ್ಮದ ಸಾರವಾದ ಮಾನವೀಯತೆ, ಸಚ್ಚಾರಿತ್ರ್ಯ ಕರ್ತವ್ಯಪರಾಯಣತೆ, ಜೀವನ ಮೌಲ್ಯಗಳ ಬಗ್ಗೆ ವಿಶ್ವಾಸ ಇವನ್ನು ಹೀರಿ ಮೈಗೂಡಿಸಿಕೊಂಡು ಋಜುಜೀವನ ಬಾಳುತ್ತಿದ್ದರು. {{gap}}ಹರ್ಮನ್ ಮತ್ತು ಪೌಲೀನ್ ಐನ್‌ಸ್ಟೈನ್ ದಂಪತಿಗಳ ಮೊದಲ ಕೂಸು ೧೮೭೯ ಮಾರ್ಚ್ ೧೪ರಂದು ಹುಟ್ಟಿತು. ಗಂಡು ಮಗು ಮನೆಗೆ ಹಬ್ಬ, ಮನಕ್ಕೆ ಮುದ ತಂದಿತ್ತು. ಮಗುವಿಗೆ ಆಲ್ಬರ್ಟ್ (ಐನ್‌ಸ್ಟೈನ್) ಎಂಬುದಾಗಿ ಹೆಸರಿಟ್ಟರು. {{gap}}ಉಲ್ಮ್ ಪಟ್ಟಣದ ವ್ಯವಹಾರದಲ್ಲಿ ಯಶಸ್ಸು ಕಾಣದ ಈ ವಣಿಕ ಕುಟುಂಬ ಮರುವರ್ಷ ನೆರೆರಾಜ್ಯ ಬವೇರಿಯಕ್ಕೆ ವಲಸೆ ಹೋಗಿ ಮ್ಯೂನಿಕ್ ನಗರದಲ್ಲಿ ನೆಲಸಿತು. ಕಾರ್ಖಾನೆಯ ಪಕ್ಕದಲ್ಲಿಯೇ ವಾಸಕ್ಕಾಗಿ ಎರಡು ಮನೆಗಳನ್ನು ಹರ್ಮನ್ ಮತ್ತು ಜೇಕಬ್ ಕುಟುಂಬಗಳು ಬಾಡಿಗೆಗೆ<noinclude></noinclude> bjsmivnrvz5od1wrzbf8ox931kvqmc3 ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೩೬೭ 104 90979 322390 234725 2026-05-25T07:38:33Z Pragathi. BH 7585 /* Validated */ 322390 proofread-page text/x-wiki <noinclude><pagequality level="4" user="Pragathi. BH" /></noinclude>{{Css image crop |Image = ಐನ್‌ಸ್ಟೀನ್_ಬಾಳಿದರಿಲ್ಲಿ.djvu |Page = 367 |bSize = 365 |cWidth = 107 |cHeight = 129 |oTop = 11 |oLeft = 14 |Location = left |Description = }} '''ಜಿ. ಟಿ. ನಾರಾಯಣರಾವ್ (೧೯೨೬-೨೦೦೮)''' ಮಡಿಕೇರಿಯ ಜಿ. ಟಿ. ನಾರಾಯಣರಾವ್ ಮದ್ರಾಸು ವಿಶ್ವ ವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಗಳಿಸಿ (೧೯೪೭) ಮದ್ರಾಸು, ಮಂಗಳೂರು, ಮಡಿಕೇರಿ ಮತ್ತು ಬೆಂಗಳೂರು ನಗರಗಳಲ್ಲಿಯ ವಿವಿಧ ಕಾಲೇಜುಗಳಲ್ಲಿ ಗಣಿತೋಪನ್ಯಾಸಕರಾಗಿ (೧೯೪೭-೬೯) ಮತ್ತು ಅದೇ ಅವಧಿಯಲ್ಲಿ ಎನ್‌ಸಿಸಿ ಅಧಿಕಾರಿಯಾಗಿ (ಬಳ್ಳಾರಿಯಲ್ಲಿ ಎರಡು ವರ್ಷ ಪೂರ್ಣಾವಧಿಯ ಅಧಿಕಾರವೂ ಸೇರಿ) ಕೂಡ ಸೇವೆ ಸಲ್ಲಿಸಿದ್ದರು. ೧೯೬೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆಹ್ವಾನ ಮನ್ನಿಸಿ ಅಲ್ಲಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕತ್ವ ವಹಿಸಿಕೊಂಡರು. ವಯಸ್ಸು ೬೦ ತುಂಬಿದಾಗ ಸೇವಾ ನಿಯಮಾನುಸಾರ ವೃತ್ತಿಯಿಂದ ನಿವೃತ್ತರಾದರು (೧೯೮೬). ವಿದ್ಯಾರ್ಥಿ ದಿನಗಳಂದು ಆರಂಭವಾದ ಕನ್ನಡದಲ್ಲಿ ಕಗ್ಗ ಹೊಸೆವ ಗೀಳು ಮುಂದೆ ಸಣ್ಣ ಕಥಾರಚನೆಯತ್ತ ಹೊರಳಿ ಉಭಯ ಕ್ಷೇತ್ರಗಳಲ್ಲಿಯೂ ಭ್ರಮನಿರಸನಗೊಂಡು ೧೯೪೯ರ ಸುಮಾರಿಗೆ ಕನ್ನಡ ಜನಪ್ರಿಯ ವಿಜ್ಞಾನ ಲೇಖನ ಬರವಣಿಗೆಯಲ್ಲಿ ಸ್ವಂತ ಅಭಿವ್ಯಕ್ತಿ ಮಾಧ್ಯಮವನ್ನು ಕಂಡುಕೊಂಡಿತು. ಇತ್ತ ಹುಟ್ಟಿನಿಂದಲೇ ಅಂಕುರಿಸಿದ್ದ ಸಂಗೀತ ಪ್ರೇಮ ಕ್ರಮೇಣ ವರ್ಧಿಸಿ ಸಂಗೀತ ಶ್ರವಣ ಇವರ ಅತ್ಯಂತ ಪ್ರೀತಿಯ ಹವ್ಯಾಸವೇ ಆಗಿತ್ತು. ಎಂದೇ ಇವರ ಬಾಳಿನ ಸೂತ್ರ,/ “ಸಂಗೀತವೆನ್ನುಸಿರು, ಸಾಹಿತ್ಯವೆನ್ನೊಡಲು, ವಿಜ್ಞಾನವೆನ್ನಶನ, ಅಧ್ಯಾತ್ಮದೆಡೆ ಗಮನ.” ಇಲ್ಲಿಯ ತನಕ ಇವರ ಸುಮಾರು ೭೦ ಕೃತಿಗಳೂ, ಅಸಂಖ್ಯಾತ ಲೇಖನಗಳೂ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಿವೆ. ಗಮನಾರ್ಹವಾದ ಕೆಲವು: ಐನ್‌ಸ್ಟೈನ್ ಬಾಳಿದರಿಲ್ಲಿ, ಸುಬ್ರಹ್ಮಣ್ಯನ್ ಚಂದ್ರಶೇಖರ್, ವೈಜ್ಞಾನಿಕ ಮನೋಧರ್ಮ, ಎನ್‌ಸಿಸಿ ದಿನಗಳು, ಮುಗಿಯದ ಪಯಣ (ಆತ್ಮಚರಿತ್ರೆ, ೨೦೦೬), ಸಂಗೀತ ರಸನಿಮಿಷಗಳು. ಇಂಗ್ಲಿಷ್ ಕೃತಿಗಳು: Scientific Temper, With The Great Minds, Crossing the Dateline. {{***}} ೧೯ನೇ ಶತಮಾನದ ಉದ್ದಾಮ ವಿಜ್ಞಾನಿಗಳು ಕಂಡುಹಿಡಿದ ತಥ್ಯಗಳು ನ್ಯೂಟನ್ ನಿರ್ಮಿಸಿದ “ವಿಶ್ವ'ವನ್ನು ಕದಲಿಸಿ ಭೌತಶಾಸ್ತ್ರಪ್ರಪಂಚವನ್ನು ಗೊಂದಲದಲ್ಲಿ ಕೆಡಹಿದ್ದಾಗ ಐನ್‌ಸ್ಟೈನರು ಹೊಸದೊಂದು ಕಾಣೆಯ ಸೂತ್ರಕ್ಕೆ ವಿಶ್ವವನ್ನು ಒಳಪಡಿಸಿ 'ಅನರ್ಥ'ಗಳಿಗೆ 'ಅರ್ಥ'ದಾನ ಮಾಡಿದರು. ಅವರ ವಿಶೇಷ ಸಾಪೇಕ್ಷತಾ ಸಿದ್ಧಾಂತ ಮತ್ತು ಅನಂತರ ರೂಪಿಸಿದ ಸಾರ್ವತ್ರಿಕ ಸಾಪೇಕ್ಷತಾಸಿದ್ಧಾಂತವನ್ನು ಎಷ್ಟು ಮಟ್ಟಿಗೆ ವಿಜ್ಞಾನವೆಂದು ಹೇಳಬಹುದೋ ಅಷ್ಟೇ ಮಟ್ಟಿಗೆ 'ದರ್ಶನ'ವೆಂದೂ ಕರೆಯಬಹುದು. ಪದಾರ್ಥ ಮತ್ತು ಶಕ್ತಿಯನ್ನು ಕಾಲ ಮತ್ತು ದೇಶವನ್ನು ಒಂದೇ ಮಹಾ'ಋತ'ದ ಅಂಕೆಯಲ್ಲಿ ನೆಲೆಗೊಳಿಸಿದ ಅವರ ಕಾರ್ಯ ಕ್ವಾಂಟಮ್ ಭೌತಶಾಸ್ತ್ರದಿಂದ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ ಬಗೆಯನ್ನು ಲೇಖಕರು ಈ ಪುಸ್ತಕದಲ್ಲಿ ವಿಸ್ತ್ರತವಾಗಿ ವಿವೇಚಿಸಿದ್ದಾರೆ. {{right|––ಮುನ್ನುಡಿಯಿಂದ}} ರೂ.೭೦ {{Css image crop |Image = ಐನ್‌ಸ್ಟೀನ್_ಬಾಳಿದರಿಲ್ಲಿ.djvu |Page = 367 |bSize = 365 |cWidth = 86 |cHeight = 99 |oTop = 518 |oLeft = 20 |Location = left |Description = }} '''ಅತ್ರಿ ಬುಕ್ ಸೆಂಟರ್'''<br/> ೪ ಶರಾವತಿ ಕಟ್ಟಡ ಬಲ್ಮಠ ಮಂಗಳೂರು ೫೭೫ ೦೦೧<br/> ದೂರವಾಣಿ ೦೮೨೪ ೨೪೨೫೧೬೧, ೨೪೯೨೩೯೭<noinclude></noinclude> 2x6xqpamijcjowojex7pmvlur8vkz2g ಪುಟ:ಬೆಳಗಿದ ದೀಪಗಳು.pdf/೧೨ 104 91636 322464 237489 2026-05-25T09:52:52Z Pragathi. BH 7585 /* Validated */ 322464 proofread-page text/x-wiki <noinclude><pagequality level="4" user="Pragathi. BH" />{{rh|೨|ಸ೦ಪೂರ್ಣಕಥೆಗಳು|}}</noinclude>ನರಗುಂದದ ಸಾವಿತ್ರಿ ಬಾಯಿಯು ಆಂಧ ಮಹಾಸತಿಯರ ಮಾಲಿಕೆಯಲ್ಲಿ ಕಂಗೊಳಿಸುವ ಅನರ್ಘವಾದ ರತ್ನವೇ ಆಗಿರುವಳು {{gap}}ಸಾವಿತ್ರಿಬಾಯಿಯು ತೇಜಸ್ವಿನಿಯಾದ ಸು೦ದರಿಯ ಸುಟ್ಟು ತಮ್ಮ ವಾದ ಆಚರಣದವಳ ಪ್ರೇಮಲವಾದ ಅಂತಃಕರಣದವಳ ಉಬಾರಚರಿ ತಳೂ ಆದ ಮಾನಿನಿಯು, ಶ.ಚಿಸ್ಮಿತೆಯಾದ ಆ ಮೃದುಭಾಷಿಣಿಯು ಅತಿಥಿ ಅಭ್ಯಾಗತರಿಗೆ ಮಾಡುತ್ತಿರುವ ಆದರಾತಿಥ್ಯಗಳು ಇಮ್ಮಡಿಯಾಗಿ ಸುಖಪ್ರದ ವಾಗುತ್ತಿದ್ದವು. ಸೇವಕಜನ ಆಶ್ರಿತ ಮುಂತಾದವರ ಪರಿಪೋಷಣವನ್ನು ಮಾಡುವದರಲ್ಲಿ ಆ ಹಿತೈಷಿಣಿಯು ಯಾವಾಗಲೂ ದಕ್ಷಳಾಗಿರುತ್ತಿದ್ದಳು. ಸೊಬಗಿನ ಹೂವಿಳ್ಯ, ವಸಂತ ಪೂಜೆ, ಗೌರೀಪೂಜನ ಮುಂತಾದ ಮಹೋ ತೃವಗಳ ಮೂಲಕ ನರಗುಂದದ ನಾರೀವೃಂದದಲ್ಲಿ ಆನಂದ ವಿನೋದ ಸ್ನೇಹಾಭಿವೃದ್ದಿಗಳನ್ನು ಅವಳು ಹೆಚ್ಚಿಸುತ್ತಿದ್ದಳು. ಕಥೆ, ಕೀರ್ತನ, ಪುರಾಣ, ಪುಣ್ಯ ಕಥೆ ಮುಂತಾದ ಧರ್ಮಜಾಗ್ರತಿಯ ಕೃತ್ಯಗಳಾದರೂ ಆ ಸಾದ್ವಿಯ ಪ್ರೋತ್ಸಾಹನದಿಂದಲೇ ನಡೆಯುತ್ತಿದ್ದವು. ಶಾಸ್ಪೋಕ್ತ ವಾದ ವ್ರತ ಉದ ಸನ ಜಪತಪಾದಿಗಳನ್ನು ಆ ಪುಣ್ಯವಂತಿಯಾಜ ಮಹಾಸತಿಯು ಆಸಕ್ತಿ ಯಿಂದ ಮಾಡ ತಿರುವದರಿಂದ ಅವಳಲ್ಲಿ ಕ್ರಿಯಾಸಿದ್ದಿ ವಾಕ್ಸಿದ್ದಿಗಳು ಪ್ರಾಪ್ತವಾಗಿದ್ದವೆಂಬದನ್ನು ಆಗಿನವರು ಮನಗಂಡಿದ್ದರು. ಮೈದೊಳೆದು ಮಡಿಯಾಗಿ ಆ ಶುಚಿತ್ರ ತೆಯು ವೃಂದಾವನಕ್ಕೆ ಬಂದು ತುಲಸೀ ಪೂಜನ ವನ್ನು ಮಾಡಿ ಪ್ರದಕ್ಷಿಣೆ ಮಾಡುವಾಗ ಭೂತಬಾಧೆಯವರೂ ಹಾವು ಚೇಳು ಗಳನು ಕಡಿಸಿಕೊಂಡವರೂ ಹೊಟ್ಟೆ ಕಡತ ಮುಂತಾದ ಬೇನೆಯವರೂ ಅಲ್ಲಿಗೆ ಬಂದು ಅವಳು ಕೊಟ್ಟ ತೀರ್ಥವನ್ನು ಸೇವಿಸಿ ವಾಸಿಯಾಗುತ್ತಿದ್ದರು. "ನಿನಗೆ ಒಳಿತಾಗುವದು ” "ನಿನ್ನ ಇಚ್ಛೆ ಕೈಗೂಡುವದು" ಎಂದು ಆ ಪುಣ್ಯಶೀಲೆಯು ಯಾರಿಗಾದರೂ ಹೇಳಿದ್ದರೆ ಅದರಂತೆಯೇ ಆಗುತ್ತಿತ್ತೆಂದು ಜನರು ಹೇಳುತ್ತಾರೆ. ಅನಸೂಯೆ ಅರುಂಧತಿ ಲೋಪಾಮುದ್ರೆ ಸಾವಿತ್ರಿ ಮುಂತಾದ ಮಹಾ ಸತಿಯರು ಪೂರ್ವ ಕಾಲದಲ್ಲಿ ತೋರಿಸಿದ ಮಾಹಾತ್ಮ ಗಳು ಕಟ್ಟು ಕಥೆಯೆಂದು ಸದ್ದು ಣಗಳ ಪ್ರಭಾವಕ್ಕೆ ಪರಕೀಯರಾದ ಜನರು ಹೇಳುತ್ತಿರುವರು. ಅಂಥವರು ನರಗುಂದದ ಸಾವಿತ್ರೀದೇವಿಯು ನಿನ್ನ ವೆನ್ನಿನ ಪ್ರತ್ಯಕ್ಷವಾದ ಉದಾಹರಣವನ್ನು ಕಂಡು ಬುದ್ದಿ ಗಲಿಯಲಿ. ಇಂಥ<noinclude></noinclude> 4lohzlbm8i7cghmyn4qw2x7mvugwvu1 ಪುಟ:ಬೆಳಗಿದ ದೀಪಗಳು.pdf/೧೩ 104 91637 322465 238660 2026-05-25T09:53:09Z Pragathi. BH 7585 /* Validated */ 322465 proofread-page text/x-wiki <noinclude><pagequality level="4" user="Pragathi. BH" />{{rh||ನರಗುಂದದ ಸಾವಿತ್ರಿಬಾಯಿ|೩}}</noinclude>ಅತ್ಯುಚ್ಚವಾದ ಸುವ್ರತೆಯರು ನಿಮ್ಮ ಆರ್ಯಭೂಮಿಯಲ್ಲಿ ಮಾತ್ರ ಜನಿಸಿದ ರೆಂದೂ ಇನ್ನಾ ದರೂ ಜನಿಸಿದರೆ ಆರ್ಯ ಭೂಮಿಯಲ್ಲಿಯೇ ಜನಿಸುವರೆಂದೂ ನಮ್ಮ ವಾಚಕರು ಚನ್ನಾಗಿ ಲಕ್ಷ್ಮದಲ್ಲಿಡತಕ್ಕದ್ದು. {{gap}}"ದೌರ್ಮ೦ತ್ರಾನ್ನ ಪತಿರ್ವಿನಶ್ಯತಿ” ಎಂಬಂತೆ ನರಗುಂದದ ಬಾಬಾಸಾಹೇಬನು ಮಮರುಕ ರಾದ ದುರ್ಜನರ ದುರ್ಬೋಧನಕ್ಕೆ ಕಿವಿ ಗೊಟ್ಟು ಇಂಗ್ಲಿಶ್ ಸರಕಾರದ ಮೇಲೆ ಬಂಡುಮಾಡಿದನು, ಬಾಬಾಸಾಹೇ ಬನ ಕ್ಷುದ್ರವಾದ ಸಂಸ್ಥಾನವೆಷ್ಟು ಮಾತ್ರದ್ದು, ಅವನ ಬಲವೇನು ಸುಟ್ಟಿತು, ಕತ್ತಿ ತುಬಾಕಿಗಳ ಉಪಯೋಗವನ್ನರಿಯದವರೂ ಸಮರವನ್ನು ಕಣ್ಣಿಲೆ ನೋಡದವರೂ ಆದ ನೂರಾರು ಜನ ರೆಂಟೆಯ ಬಂಟರನ್ನು ಕೂಡಿಸಿಕೊಂಡು ಆವಿಚಾರಿಯ ಮೂರ್ಖನೂ ಆದ ಬಾಬಾಸಾಹೇಬನು ಬಲಾಡ್ಯರಾದ ಇಂಗ್ಲಿಶ್ ಸರಕಾರದವರ ಮೇಲೆ ಬಂದು ಮಾಡ ಹೋದರೆ ಅದೆಲ್ಲಿಗೆ ಮುಟ್ಟು ವದು ? ಒಂದು ದಿನ ಒಪ್ಪತ್ತಿನಲ್ಲಿ ಬಾಬಾಸಾಹೇಬನ ಬಂಡು ಮುರಿದು ಹೋಗಿ ಅವನ ಸಂಸ್ಥಾನವು ಡಬ್ಬ ಬಿದ್ದು ಹೋಯಿತು. ( ಕಾಲಯುಕ್ತ ಸಂವತ್ಸರದ ಜೈಷ್ಠ ಶು, ೧೦ ಮಂಗಳವಾರ ) {{gap}}ವಿಜಯಿಯಾದ ಇಂಗ್ಲಿಶ್ ಸೇನಾಧೀಶನು, ನರಗುಂದ ಗ್ರಾಮವನ್ನು ಸುಲಿಯಬಹುದೆಂದು ತಳ್ಳಿ ಸೇನೆಗೆ ಆಪ್ಪಣೆಕೊಟ್ಟ ಮೇರಿಗೆ ಮರುದಿವಸ ಬುಧವಾರ ಪ್ರಾತಃಕಾಲದಲ್ಲಿಯೇ ಉದ್ರಿಕರಾದ ಆ ಸೈನಿಕರು ಕೇಕೆ ಹೊಡೆಯುತ್ತೆ ಊರಲ್ಲಿ ಹೊಕ್ಕರು. ಊರ ಅಗಸೆಯ ಬಾಗಿಲದಲ್ಲಿ ದೊಡ್ಡ ದೊಂದು ಆನೆಯು ಅಡ್ಡಾಗಿ ನಿಂತಿತ್ತು. ಗುಂಡುಗಳ ಕಡಾಟಕ್ಕು ಬರ್ಚಿಗಳ ಚುಚ್ಚು ವಿಕೆಗೂ ಅಂಜಿ ಸಜೀವವಾಗಿರುವ ಆ ಮಾಂಸದ ಸತ್ವ ತವು ಹಿಂತಿರುಗಿ ಊರಲ್ಲಿ ಹೊಕ್ಕು, ಸೈನಿಕರ ಹಾವಳಿಗೆ ಭೀತಿಗೊಂಡು ಸತ್ತೆ ಕೆಟ್ಟೆನೆಂದು ಓಡಾಡುತ್ತಿರುವ ಗ್ರಾಮವಾಸಿಗಳನ್ನು ತುಳಿಯುತ್ತೆ ಹಾಹಾಕಾರವನ್ನೆಬ್ಬಿಸಿ ಬಿಟ್ಟಿತು. {{gap}}ಇಂಗ್ಲಿಶ್ ಸೈನಿಕರು ಊರಲ್ಲಿ ಸೇರಿದವರೇ ನೆಟ್ಟಗೆ ಶ್ರೀ ವೆಂಕಟೇಶನ ಗುಡಿಗೆ ಬಂದರು. ಪೂಜಾರಿಯು ದೇವರ ಆರ್ಚೆಯನ್ನು ನಡಿಸಿದ್ದನು. ಅಶಿಕ್ಷಿತರಾದ ಸೈನಿಕರು ವೆಂಕಟೇಶನ ಮೂರ್ತಿಯ ಮೇಲೆ ಗುಂಡುಹಾರಿಸಿ ಆ ಮೂರ್ತಿಯನ್ನು ಒಡೆದುಹಾಕಿದರು. ಗುಡಿಯಲ್ಲಿ ಇದ್ದದ್ದು ಬಿದ್ದದ್ದನ್ನೆಲ್ಲ<noinclude></noinclude> 0wjsk7pedmazlg3mu4lbnfrvf2eslt3 ಪುಟ:Elu Suthina Kote.pdf/೪೨ 104 91809 322267 250500 2026-05-24T15:24:24Z Pragathi. BH 7585 /* Validated */ 322267 proofread-page text/x-wiki <noinclude><pagequality level="4" user="Pragathi. BH" /><small>{{rh|center=|left=೧೮|right=ಏಳು ಸುತ್ತಿನ ಕೋಟೆ}}</small></noinclude> ಇದನು ಗೆಲ್ಲೆಂದೆಯಲ್ಲವೆ, ಅಮ್ಮ?<br> ತಾಯೊಲವ ಹರಕೆ ಬಲ ಬೆಂಬಲವು ನನಗಿರಲು ಗೆದ್ದೆ ಗೆಲುವೆ!<br> ಜಯಪತಾಕೆಯ ನಾನು ದೆಸೆದೆಸೆಗು ಒಲೆವೆ!'<br> <center>* * * *</center><noinclude></noinclude> othqhygnaom8mo289erf8y5e2zcym0r ಪುಟ:ಕವಿಯ ಸೋಲು.pdf/೯೯ 104 91892 322212 240558 2026-05-24T14:49:30Z Pragathi. BH 7585 /* Validated */ 322212 proofread-page text/x-wiki <noinclude><pagequality level="4" user="Pragathi. BH" />{{rh||ಕವಿಯ ಸೋಲು|}}</noinclude>ಕವಿ ರಾ.- ಅಹಹಾ! ನೆನಪಾಯ್ತು! ಬಂದಿರುವನಾರೆಂದು ::ಅರಿವಾಯು, ಭಾಗ್ಯದೇವತೆ ನೀನು ಬಂದಿರುವೆ ::ದಯವಿಟ್ಟು ಬಾರಯ್ಯ, ಘೂ, ರಾ.~ ಇವಗೆಷ್ಟು ಸಂತೋಷ ! ::ಪಾಪಕಾರವ ಮಾಡಿ ನಲಿಯುತಿಹ ರಾಕ್ಷಸನು ! ಕವಿ ರಾ.- ಈ ಕವಿಯ ಮಂದಿರವ ಪಾವನವ ಮಾಡಯ್ಯ. ಘೂ, ರಾ.~ ಕವಿರಾಜ ! ಭಾಪುರೇ! ಕವಿ ರಾ.-ಎನ್ನ ದೊರೆ ಚಿತ್ರವಿಸು, ::ನಿನ್ನ ಸುಡಿ ದಿಟವಕ್ಕೆ ಚಿತ್ರವಿಸು, ಅವರಲ್ಲಿ ::ಕುಳಿತಿರಲು ಕಂಡಂತೆ ಆಡಿದೆನು. ನಿಮಗೇಕೆ ::ಕೋಪವೆಂಬುದನರಿಯೆ ಅಪಮಾನವೇನಾಯ್ಯೋ ::ನಾನರಿಯೆ, ಘೂ, ರಾ- ಹಸುಗೂಸು ! ನೀನರಿಯೆ! ಎಂತರಿವೆ! ::ಕಿವಿಯಲ್ಲಿ ಕೇಳಿದೆವು ಮನದಲ್ಲಿ ಕೊರಗಿದವು ::ಬೆಳಕು ಕಂಡಂತೆ ಸಂಕಟವಾಯು, ಬಸಿರೆಲ್ಲ ::ಕುದಿಯಾಯ್ತು. ಕವಿ ರಾ.- ಕಂಡಂತೆ ಆಡಿದರೆ ತಪ್ಪಾಯೆ? ಘೂ. ರಾ.- ಕಂಡಂತೆ ಆಡಿದೆಯ? ಸಟೆಯ ಹೇಳುವೆಯೆ? ::ಕವಿಯೆಂಬ ಹುಚ್ಚಿನಲಿ ಬಂದಂತೆ ಆಡುವುದೆ? ::ಅವರಂತೆ ನಮಗೇನು ನರೆತ ಹುಬ್ಬುಗಳಿವೆಯೆ ? ::ಅವರಂತೆ ಕಣ್ಣುಗಳು ಪಾತಾಳಕಿಳಿದಿವೆಯೆ ? ::ಅವರಂತೆ ಗೂನುಬೆನ್ನಲಿ ಕುಳಿತು ಮಡಕೆಯಲಿ ::ಕಲ್ಲನಾಡಿಸುವಂತೆ ಮಾತನೇನಾಡುವೆವೆ?<noinclude>{{rh||೮೯|}}</noinclude> iuivu0yogsjjq307yt884yv3i0eyu0x ಪುಟ:ಕವಿಯ ಸೋಲು.pdf/೧೦೦ 104 91893 322210 240563 2026-05-24T14:47:35Z Pragathi. BH 7585 /* Validated */ 322210 proofread-page text/x-wiki <noinclude><pagequality level="4" user="Pragathi. BH" />{{center|ಕವಿಯ ಸೋಲು}}</noinclude><center> <poem> ಎಮ್ಮ ಹೆಸರೆತ್ತಿ ಹೋಲಿಸಬಹುದೆ? ಶಿವ ಶಿವಾ! ನಮಗಾದ ಅಪಮಾನ ಮತ್ತಾರಿಗೂ ಬೇಡ, ಮಾಡಬಹುದೇನಯ್ಯ? ಇದು ಧರ್ಮವೇನಯ್ಯ? “ ಚಿನ್ನ ದಾನಾಡಿನಲಿ" ಹುಟ್ಟಿ ಬೆಳೆದವರಾವು "ಗಂಧದಾ ಗುಡಿಯಲ್ಲಿ" ಹೆಜ್ಜೆಗಲಿತವರಾವು "ಬೀಣೆಯಾ ಬೆಡಗಿನಲಿ" ಒಡನಾಡಿದವರಾವು ಬ್ರಾಹ್ಮಣಗೆ ಲಕ್ಷ್ಮಿಯಂ ಒಲಿಸಿಕೊಟ್ಟವರಾವ ಕಶ್ಯಪನು ದಾವೋಯಂ ತಂದೆತಾಯಿಗಳೆಮಗೆ ನೆಲಸಿತ್ತು ನಮ್ಮಲ್ಲಿ ಬುದ್ದಿಯುಂ ಸತ್ಯವುಂ ಸಂಗೀತ ಸಾಹಿತ್ಯ ಚೌಷಷ್ಠಿ ಕಲೆಗಳುಂ ಲೋಕದೊಳು ನಮ್ಮಂತೆ ಪಂಡಿತರು ಇಲ್ಲಯ್ಯ, ನಾರದಗೆ ಸಂಗೀತ ವಿದ್ಯೆಯಂ ಬೋಧಿಸಿದ ಗಾನಬಂಧುವು ಎಮ್ಮ ಕುಲಜನಾಗಿಹನಯ್ಯ, ವಿಷ್ಣುಶರ್ಮನ ಕಧೆಯು ಪಂಚತಂತ್ರದ ಕಥೆಯು ಎಮ್ಮಿಂದ ಬೆಳೆಯಿತ್ತು, ಅದರ ಕಳೆಯೇರಿತ್ತು. ಸಂಗೀತ ಸಾಹಿತ್ಯ ನಿಪುಣರಲ್ಲದೆ, ರಾಜ ನೀತಿಯಲ್ಲಿ ಮುಂಚಿದವರಾರುಂಟು ಹೇಳಯ್ಯ, ಮಲಯಕೇತುವಿನಯ್ಯ ಪರ್ವತಾಧಿಪನ ಬಳಿ ಎಮ್ಮ ಹೆಸರವನೊಬ್ಬ ಮಂತ್ರಿತನ ಮಾಡಿದನು ಶತ್ರುಮಂಡಲಕೆಲ್ಲ ಕಗ್ಗ ಪ್ಪು ಕವಿಸಿದನು ಸಚಿವರಲಿ ಆತನೇ ನಚ್ಚಿಕೆಗೆ ಮೆಚ್ಚಿಕೆಗೆ ಹೆಸರಾಗಿ ಗುಹೆಗೆ ಕತ್ತಲೆಯಂತೆ ಮೆರೆದನಯ್ಯ, ಮತ್ತೆ ನೀಂ ಕೇಳಯ್ಯ, ಇರುಳಲ್ಲಿ ನಿಮರ ತೋಟಿಗಳು ತಳವಾರರಲ್ಲಲ್ಲಿ ತೂಕಡಿಸಿ ನಿದ್ದೆಗೈಯುತ್ತಿರಲು, ಕಳ್ಳಬಂಟರು ಬಂದು </poem> </center><noinclude>{{rh||೯೦|}}</noinclude> pm089qqndiggappuaqosmv3tt7xuwub ಪುಟ:ಕವಿಯ ಸೋಲು.pdf/೧೦೧ 104 91894 322211 245003 2026-05-24T14:47:50Z Pragathi. BH 7585 /* Validated */ 322211 proofread-page text/x-wiki <noinclude><pagequality level="4" user="Pragathi. BH" /></noinclude>{{center|ಕವಿಯ ಸೋಲು}} :::ಹೊಂಚುತಿರೆ, ಕೂಗುವೆವು ಕಾಹಿನವರಂದದಲಿ :::ಎಚ್ಚರದಿ ತಿರುಗುವೆವು; ಅಪಶಕುನವಾಯ್ತೆಂದು :::ಹೆದರಿಯೋಡುವರವರು. ಉಪಕಾರವಿಷ್ಟಿರಲು :::ಸುಟ್ಟ ಮಾನವ ಜಾತಿ ಉಪಕಾರವೆಣಿಸುವುದೆ! ಕವಿ ರಾ.-ಮುಂಗಾರ ಮೊದಲ ಮಳೆ ಜಿರೆಂದು ಸುರಿವಂತೆ :::ಆಲಿಕಲ್ಗಳ ಮಳೆಯು ರಪರಪನೆ ಹೊಡೆವಂತೆ :::ಎಡೆಬಿಡದೆ ನೀಯೆನ್ನ ತಲೆಮೇಲೆ ಮಾತುಮಳೆ :::ಹೊಡೆಯುತ್ತಿವೆ. ಎನ್ನ ದೊರೆ! ಶಾಂತಿಯ೦ ತಾಳಯ್ಯ, :::ನಾನೆರಡು ಮುತ್ತುಗಳನಾಡುವೆನು ಕೇಳಯ್ಯ. ಘೂ, ರಾ - ಮುತ್ತುಗಳೆ! ಭಾಪುರೇ! ಕವಿರಾಜ! ಕವಿ ರಾ- ಎನ್ನ ದೊರೆ! :::ನಿನ್ನ ನುಡಿ ಹಿರಿಯ ನುಡಿ ಫಲಿಸುವುದು. ಎನ್ನ ನುಡಿ :::ಚಿತ್ತವಿಸು, ನಿಮಗೆ ನಾನಪಕಾರ ಮಾಡಿದೆನೆ? :::ನಿಮಗಲಂಕಾರಮಂ ನಮಗಲಂಕಾರಮಂ :::ನಲ್ಮೆಯಿಂದಾಡಿದೆನು; ಹಳಿವೆಣಿಕೆ ಎನಗಿಲ್ಲ :::ಮೆಚ್ಚುನುಡಿಯಾಡಿದೆನು; ನಿಮ್ಮ ಉಪಕೃತಿ ಹಿರಿದು :::ನಿಮ್ಮ ದೆಸೆಯಿಂದೆಮಗೆ ಉಪಮಾನ ದೊರೆಯಿತ್ತು, ಘೂ, ರಾ.- ಉಪಮಾನ ನಿಮಗಾಯು, ಅಪಮಾನ ನಮಗಾಯ್ತು :::ಆಡಿ ಫಲವೇನಯ್ಯ ಬಣ್ಣನೆಯ ಕೊಂಕು ನುಡಿ; :::ರಕ್ತೋಪವನವನ್ನು ಬಿಟ್ಟಿಹೆವು, ಇನ್ನೀಗ :::ಈವೂರು, ಈ ದೇಶ ಎಲ್ಲವಂ ಬಿಡಲಿಹೆವು. ಕವಿ ರಾ.-ಅರಸು ಮುನಿದರೆ ತಿಳುಹುವುದು ಕಷ್ಟ, ಹೇಳೆನ್ನ :::ದೊರೆಯೆ! ನೀನಿಂತು ಮುನಿದರೆ ನಾನು ಬದುಕುವೆನೆ? :::ಒಲುಮೆಯಿಂ ಎರಡು ನುಡಿ ಕೇಳಯ್ಯ ತಪ್ಪಾಯ್ತು. {{center|೯೧}}<noinclude></noinclude> se70sr5n30b1iwjnuy9cfe3uhxhoh9f ಪುಟ:ಬೆಳಗಿದ ದೀಪಗಳು.pdf/೧೪ 104 92015 322466 238662 2026-05-25T09:53:29Z Pragathi. BH 7585 /* Validated */ 322466 proofread-page text/x-wiki <noinclude><pagequality level="4" user="Pragathi. BH" />{{rh|೪|ಸಂಪೂರ್ಣ-ಕಥೆಗಳು|}}</noinclude>ಸುಲುಕೊಂಡರು, ಬಳಿ ತಲಾ ಸೈನಿಕರು ಊರ ಜನರ ಮನೆಮನೆ ಹೊಕ್ಕು ಸುಲಿಗೆಯನ್ನು ನಡೆಸಿದರು. ಅರ್ಥ ಹಾನಿ ಮಾನಹಾನಿ ಧನಹಾನಿ ಪ್ರಾಣಹಾನಿಗಳು ಒದಗಿ ಬಂದಾಗ, ಪಾಷ, ಅಲ್ಲಿಯ ಜನರ ಮನಸ್ಸಿನ ಸ್ಥಿತಿ ಏನಾಗಿರಬೇಡ ! ಎದೆಯೊಡೆದು ಕೈ ಕಾಲುಗಳಲ್ಲಿಯ ನಾಡಿಗಳು ಸತ್ತಂತಾಗಿ ಆ ಜನರು ಅಲ್ಲಲ್ಲಿ ಪ್ರೇತ ಪಾಯರಾಗಿ ಬಿದ್ದು ಕೊಂಡಿದ್ದರು. ತನ್ನ ಮನೆ ಯಲ್ಲಿಯ ವಸ್ತು ವಡವೆಗಳುಳಿದರೆ ಶ್ರೀ ವೆಂಕಟೇಶನಿಗೆ ಟೆಂಕಿಯ ಮುಡುಪು ಕೊಡುವೆನೆಂದು ಕೃಪಣನಾದ ಕೋಮಟಿಗನು ಮನಸ್ಸಿನಲ್ಲಿಯೇ ಬೇಡಿ ಕೊಳ್ಳುತ್ತಿದ್ದನು. ಏನು ಹೋದರೂ ತನ್ನ ಜನಿವಾರವೊಂದುಳಿಯಲೆಂದು ಚಿಂತಿಸಿ ಸಾಧುಭಾವನಾದ ಬ್ರಾಹ್ಮಣನೋರ್ವನು ತನ್ನ ಯಜ್ಯೋಪವೀತ ವನ್ನು ಟೊಂಕದಲ್ಲಿಯ ಪಂಚೆಯಲ್ಲಿ ಅಡಗಿಸಿಟ್ಟ, ವೆಂಕಟೇಶಸ್ತೋತ್ರವನ್ನು ಆರಂಭದಿಂದ ದ ವರೆಗೆ ಕಣ್ಣು ಮುಚ್ಚಿ ಪಠಿಸುವಷ್ಟರಲ್ಲಿ, ಸೋಲ್ಡರನೊಬ್ಬನು ಆ ಬಡಬ್ರಾಹ್ಮಣನ ಬೆನ್ನು ಮೇಲೆ ಒಳಿತಾಗಿ ಗುಮ್ಮಿ ಅವನ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಎತ್ತಿಕೊಂಡು ನಡೆದನು. ಮತ್ತೊಬ್ಬರ ಮನೆಯಲ್ಲಿಯ ಮಡಿವಸ್ತ್ರಗಳ ಮರೆಯನ್ನು ಹರಿಹೊಡೆದು ಮುಸಲ್ಮಾನ ನಾದ ಸೈನಿಕನೊಬ್ಬನು ಅಲ್ಲಿಯ ದೇವರಮನೆ ಹೊಕ್ಕು ದೇವರ ಪೆಟ್ಟಿಗೆ ದೊಡ್ಡದೇವರ ಪೆಟ್ಟಿಗೆಗಳನ್ನು ಬಿಟ್ಟು ಬಿಚ್ಚಿ ನೋಡಿದನು. ಜಂಗಮರ ಮಠವನ್ನು ಹೊಕ್ಕು ಆಡ್ಡಾಡಿ ನೋಡಿ ಹೋಗುವಾಗ ಸಿಪಾಯಿಯೊಬ್ಬನು ತರುಣಿಯಾದ ಶರಣಮ್ಮನ ಮುಖವನ್ನು ವಿನೋದಕ್ಕಾಗಿ ಚುಂಬಿಸಿದ್ದರೆ ಆ ದುರಾತ್ಮನನ್ನು ದಂಡಿಸುವವರಾರು ? ಪಟ್ಟಣಸೆಟ್ಟಿಯು ತನ್ನ ಮನೆಯ ಇದ್ದ ಮುತ್ತು ಬಂಗಾರಗಳನ್ನು ಕಟ್ಟಿಕೊಂಡು ಪಾರಾಗಿ ಹೋಗಬೇಕೆಂದು ಮಾಳಿಗೆಯನ್ನೇರಿರಲು ಸೈನಿಕನೊಬ್ಬನು ಅವನನ್ನು ಹಿಡಿದು ನಮ್ಮ ನ್ನು ವಂಚಿಸಬೇಕೆಂದು ಮಾಡಿದ್ದಿಯಾ ?” ಎಂದು ನುಡಿದು ಆ ಅಪರಾಧಕ್ಕಾಗಿ ಅವನು ಆ ಸೆಟ್ಟಿಯನ್ನು ಒಳಿತಾಗಿ ತಳಿಸಿದನು. ಕಳ್ಳನಾರು? ಸೆಟ್ಟಿಯೇ ? ದುಷ್ಕರ್ಮ | ಬಾವಲಿಗಾಗಿ ಸೈನಿಕರು ಪುರುಷ೮ ಕಿವಿಗಳನ್ನು ಹರಿದರು; ನತ್ತುಗಳಿಗಾಗಿ ಹೆಣ್ಣು ಮಕ್ಕಳ ಮೂಗುಗಳನ್ನು ಹರಿದರು, ತಮಗೆ ಬೇಕಾಗದಿದ್ದ ಕಾಳುಕಡಿಗಳನ್ನು ಆ ಮೂಥರು ನೆಲದ ಪಾಲು ಮಾಡಿ ಹೊಗ ಬೇಕೆ ? ಭಾಡಬಡಕಲುಗಳನ್ನು ಈಡಾಡಿ ಒಡೆದರು, ಅರಿವೆ. ಅಂಚಡಿಗಳಿಗೆ<noinclude></noinclude> pdogkny44jh514upbs07izumltee792 ಪುಟ:ಬೆಳಗಿದ ದೀಪಗಳು.pdf/೧೬೨ 104 92447 322468 240920 2026-05-25T09:55:54Z Pragathi. BH 7585 /* Validated */ 322468 proofread-page text/x-wiki <noinclude><pagequality level="4" user="Pragathi. BH" />{{rh|೧೫೨|ಸಂಪೂರ್ಣ-ಕಥೆಗಳು|}}</noinclude>ವರೆಗೆ ಕೂಳು ನೀರಿಲ್ಲದೆ ಈ ಲಾವಾ ಪ್ರಾಣಿಯು ಗುಡ್ಡಗಾಡ ಪ್ರದೇಶದಲ್ಲಿ ಪ್ರವಾಸವನ್ನು ಮಾಡುತ್ತದೆ. ಅದಕ್ಕಾಗಿ ಸ್ಪಾನಿಆರ್ಡರು ಇದಕ್ಕೆ 'ಚಿಕ್ಕ ಒಂಟೆ ' ಎಂಬ ಹೆಸರು ಕೊಟ್ಟಿದ್ದಾರೆ. ಈ ಲಾಮಾ ಪಶುಗಳ ದೊಡ್ಡ ದೊಡ್ಡ ಹಿಂಡುಗಳು ಸೇರೂ ದೇಶದಲ್ಲಿ ದೊರೆಯುತ್ತವೆ. ಲಾಮಾ ಪ್ರಾಣಿಯ ಮೈಮೇಲಿರುವ ಉಣ್ಣೆಯಿಂದ ಬೆಚ್ಚಗಿನೆ ಹಾಗೂ ನೋಟಕ್ಕೆ ಸುಂದರವಾದ ಬಟ್ಟೆಗಳಾಗುತ್ತವೆ. ಇಂಕಾ ಕ್ಷತ್ರಿಯರು ಇವೇ ವಸ್ತ್ರಗಳನ್ನು ಉಪಯೋಗಿ ಸುತ್ತಿದ್ದರು. ಇಂಕಾ ಕ್ಷತ್ರಿಯರು ತಾವು ಸೂರ್ಯ ವಂಶಿಗಳೆಂದು ಮನ್ನಿಸು ತ್ತಿದ್ದರು, ಹಾಗೂ ಸೂರ್ಯನು ಅವರ ಆರಾಧ್ಯ ದೈವಕನಾಗಿದ್ದನು. ಇಂಕನ ವಿಸ್ತೀರ್ಣವಾದ ಸಾಮ್ರಾಜ್ಯದಲ್ಲಿ ಸೂರ್ಯೋಪಾಸನೆಯ ಸಲು ಅನೇಕ ದೇವಾಲಯಗಳು ಕಟ್ಟಿಸಲ್ಪಟ್ಟಿದ್ದವು. ಸೂರ್ಯನಂತೆ ಚಂದ್ರ, ಶುಕ್ರ ಮುಂತಾದ ಗ್ರಹಗಳನ್ನಾದರೂ ದೇವತೆಗಳೆಂದು ಅವರು ಪೂಜಿಸುತ್ತಿದ್ದರು ವಿ೦ಚು ಹಾಗೂ ಇಂದ್ರಧನುಷ್ಯಗಳಾದರೂ ದೈವೀ ಶಕ್ತಿಯ ಸೂಚಕಗಳೆಂದು ಅವು ಅವರಿಗೆ ಪೂಜ್ಯವಾಗಿದ್ದವು. ಫಲ, ಪುಪ್ಪ, ಧಾನ್ಯ, ಸುಗಂಧಿ ಪದಾರ್ಥಗಳು ಪೂಜಾದ್ರವ್ಯಗಳೆಂದು ತಿಳಿಯಲ್ಪಡುತ್ತಿ ದ್ದವು. ಕೆಲವು ಪ್ರಸಂಗಗಳಲ್ಲಿ ದೇವಾಲಯದಲ್ಲಿ ಪಶುಬಲಿಯನ್ನಾದರೂ ಅವರು ಕೊಡುತ್ತಿದ್ದರು; ಕ್ವಚಿತ ಪ್ರಸಂಗಗಳಲ್ಲಿ ಸುಂದರಳದ ಕುಮಾರಿ ಯನ್ನಾಗಲಿ, ಅರ್ಭಕವನ್ನಾಗಲಿ ಬಲಿಯೆಂದು ದೇವರಿಗೆ ಅರ್ಪಿಸುತ್ತಿದ್ದರು. ಆದರೆ, ಇದು ಎಂದಾದರೊಮ್ಮೆ ಅಪ್ಪಿ ತಪ್ಪಿ ಸಂಭವಿಸುತ್ತಿತ್ತು. ಸೂರ್ಯೊ ಪಾಸನೆಯ ಮಹತ್ವವು ಇಂಕಾನ ರಾಜ್ಯದಲ್ಲಿ ಅತಿಶಯವಾಗಿತ್ತು, ಕುರೋ ರಾಜಧಾನಿಯೊಳಗಿನ ಸೂರ್ಯನ ದೇವಾಲಯವೆಂವರೆ, ಅದೊಂದು ಸುವರ್ಣ ರತ್ನಖಚಿತವಾದ ಮಂದಿರವಾಗಿತ್ತು. ಇಂಕಾನ ರಾಜ್ಯದಲ್ಲಿ ದೇವಾ ಲಯಗಳನ್ನೂ, ಮಂದಿರಗಳನ್ನೂ ಸುಶೋಭಿತ ಮಾಡುವದರಲ್ಲಿ ಬಂಗಾರದ ಉಪಯೋಗವಾಗುತ್ತಿತ್ತು. ಇಂಕಾ ಎಂಬ ಕ್ಷತ್ರಿಯ ಜಾತಿಯ ಮನೆತನದ ವರಲ್ಲೆಲ್ಲ ಬಂಗಾರದ ಪಾತ್ರೆಗಳ ಹೊರತು ಆನ್ಯವಾದ ಪಾತ್ರೆಗಳು ಇರು ದ್ವಿಲ್ಲ. ಸೂರ್ಯನ ಪೂಜೆಗಾಗಿ ' ಸೂರ್ಯ ಕನ್ಯಕಾ ' ಎಂಬ ಕುಮಾರಿಕೆ ಯರಿರುತ್ತಿದ್ದರು. ರಾಜಧಾನಿಯಲ್ಲಿದ್ದ ಮುಖ್ಯವಾದ ಸೂರ್ಯಮಂದಿರದಲ್ಲಿ ೧೫೦೦ - ಕುಮಾರಿಯರು ಸೂರ್ಯೋಪಾಸಿಕೆಯರೆಂದು ಇಡಲ್ಪಟ್ಟಿದ್ದರು.<noinclude></noinclude> ksa4lcuccslnp40n3gmjjrkula9z3cl 322469 322468 2026-05-25T09:56:53Z Pragathi. BH 7585 322469 proofread-page text/x-wiki <noinclude><pagequality level="4" user="Pragathi. BH" />{{rh|೧೫೨|ಸಂಪೂರ್ಣ-ಕಥೆಗಳು|}}</noinclude>ವರೆಗೆ ಕೂಳು ನೀರಿಲ್ಲದೆ ಈ ಲಾವಾ ಪ್ರಾಣಿಯು ಗುಡ್ಡಗಾಡ ಪ್ರದೇಶದಲ್ಲಿ ಪ್ರವಾಸವನ್ನು ಮಾಡುತ್ತದೆ. ಅದಕ್ಕಾಗಿ ಸ್ಪಾನಿಆರ್ಡರು ಇದಕ್ಕೆ 'ಚಿಕ್ಕ ಒಂಟೆ ' ಎಂಬ ಹೆಸರು ಕೊಟ್ಟಿದ್ದಾರೆ. ಈ ಲಾಮಾ ಪಶುಗಳ ದೊಡ್ಡ ದೊಡ್ಡ ಹಿಂಡುಗಳು ಸೇರೂ ದೇಶದಲ್ಲಿ ದೊರೆಯುತ್ತವೆ. ಲಾಮಾ ಪ್ರಾಣಿಯ ಮೈಮೇಲಿರುವ ಉಣ್ಣೆಯಿಂದ ಬೆಚ್ಚಗಿನೆ ಹಾಗೂ ನೋಟಕ್ಕೆ ಸುಂದರವಾದ ಬಟ್ಟೆಗಳಾಗುತ್ತವೆ. ಇಂಕಾ ಕ್ಷತ್ರಿಯರು ಇವೇ ವಸ್ತ್ರಗಳನ್ನು ಉಪಯೋಗಿ ಸುತ್ತಿದ್ದರು. ಇಂಕಾ ಕ್ಷತ್ರಿಯರು ತಾವು ಸೂರ್ಯ ವಂಶಿಗಳೆಂದು ಮನ್ನಿಸು ತ್ತಿದ್ದರು, ಹಾಗೂ ಸೂರ್ಯನು ಅವರ ಆರಾಧ್ಯ ದೈವಕನಾಗಿದ್ದನು. ಇಂಕನ ವಿಸ್ತೀರ್ಣವಾದ ಸಾಮ್ರಾಜ್ಯದಲ್ಲಿ ಸೂರ್ಯೋಪಾಸನೆಯ ಸಲು ಅನೇಕ ದೇವಾಲಯಗಳು ಕಟ್ಟಿಸಲ್ಪಟ್ಟಿದ್ದವು. ಸೂರ್ಯನಂತೆ ಚಂದ್ರ, ಶುಕ್ರ ಮುಂತಾದ ಗ್ರಹಗಳನ್ನಾದರೂ ದೇವತೆಗಳೆಂದು ಅವರು ಪೂಜಿಸುತ್ತಿದ್ದರು ಮಿಂಚು ಹಾಗೂ ಇಂದ್ರಧನುಷ್ಯಗಳಾದರೂ ದೈವೀ ಶಕ್ತಿಯ ಸೂಚಕಗಳೆಂದು ಅವು ಅವರಿಗೆ ಪೂಜ್ಯವಾಗಿದ್ದವು. ಫಲ, ಪುಪ್ಪ, ಧಾನ್ಯ, ಸುಗಂಧಿ ಪದಾರ್ಥಗಳು ಪೂಜಾದ್ರವ್ಯಗಳೆಂದು ತಿಳಿಯಲ್ಪಡುತ್ತಿ ದ್ದವು. ಕೆಲವು ಪ್ರಸಂಗಗಳಲ್ಲಿ ದೇವಾಲಯದಲ್ಲಿ ಪಶುಬಲಿಯನ್ನಾದರೂ ಅವರು ಕೊಡುತ್ತಿದ್ದರು; ಕ್ವಚಿತ ಪ್ರಸಂಗಗಳಲ್ಲಿ ಸುಂದರಳದ ಕುಮಾರಿ ಯನ್ನಾಗಲಿ, ಅರ್ಭಕವನ್ನಾಗಲಿ ಬಲಿಯೆಂದು ದೇವರಿಗೆ ಅರ್ಪಿಸುತ್ತಿದ್ದರು. ಆದರೆ, ಇದು ಎಂದಾದರೊಮ್ಮೆ ಅಪ್ಪಿ ತಪ್ಪಿ ಸಂಭವಿಸುತ್ತಿತ್ತು. ಸೂರ್ಯೊ ಪಾಸನೆಯ ಮಹತ್ವವು ಇಂಕಾನ ರಾಜ್ಯದಲ್ಲಿ ಅತಿಶಯವಾಗಿತ್ತು, ಕುರೋ ರಾಜಧಾನಿಯೊಳಗಿನ ಸೂರ್ಯನ ದೇವಾಲಯವೆಂವರೆ, ಅದೊಂದು ಸುವರ್ಣ ರತ್ನಖಚಿತವಾದ ಮಂದಿರವಾಗಿತ್ತು. ಇಂಕಾನ ರಾಜ್ಯದಲ್ಲಿ ದೇವಾ ಲಯಗಳನ್ನೂ, ಮಂದಿರಗಳನ್ನೂ ಸುಶೋಭಿತ ಮಾಡುವದರಲ್ಲಿ ಬಂಗಾರದ ಉಪಯೋಗವಾಗುತ್ತಿತ್ತು. ಇಂಕಾ ಎಂಬ ಕ್ಷತ್ರಿಯ ಜಾತಿಯ ಮನೆತನದ ವರಲ್ಲೆಲ್ಲ ಬಂಗಾರದ ಪಾತ್ರೆಗಳ ಹೊರತು ಆನ್ಯವಾದ ಪಾತ್ರೆಗಳು ಇರು ದ್ವಿಲ್ಲ. ಸೂರ್ಯನ ಪೂಜೆಗಾಗಿ ' ಸೂರ್ಯ ಕನ್ಯಕಾ ' ಎಂಬ ಕುಮಾರಿಕೆ ಯರಿರುತ್ತಿದ್ದರು. ರಾಜಧಾನಿಯಲ್ಲಿದ್ದ ಮುಖ್ಯವಾದ ಸೂರ್ಯಮಂದಿರದಲ್ಲಿ ೧೫೦೦ - ಕುಮಾರಿಯರು ಸೂರ್ಯೋಪಾಸಿಕೆಯರೆಂದು ಇಡಲ್ಪಟ್ಟಿದ್ದರು.<noinclude></noinclude> c60xw2959gxjrtkg1beuthi2idg6pqe ಪುಟ:ಬೆಳಗಿದ ದೀಪಗಳು.pdf/೩೮ 104 92518 322298 240940 2026-05-24T17:56:45Z Vikashegde 1258 /* Validated */ 322298 proofread-page text/x-wiki <noinclude><pagequality level="4" user="Vikashegde" />{{rh|೨೮|ಸಂಪೂರ್ಣ-ಕಥೆಗಳು|}}</noinclude>ವಿವಾಹವಾಗಿ ಉಭಯತರಲ್ಲಿ ಪತಿ ಪತ್ನಿಯರ ಸಂಬಂಧವು ಘಟಿತವಾಯಿತು. ಆ ಕಾಲಕ್ಕೆ ಉತ್ತರ ಭಾಗದಲ್ಲಿರುತ್ತಿದ್ದ ತಾರ್ತರ ಜನರಿಗೆ ದಾರಿದ್ರ್ಯದ ವ್ಯಥೆಯು ಅಸಹ್ಯವಾಗಹತ್ತಿತೆಂದರೆ, ಅವರು ಹಿಂದುಸ್ಥಾನದ ದಾರಿಯನ್ನು ಹಿಡಿಯುತ್ತಿದ್ದರು. ಮನೆ ಬಾಗಿಲವಿಲ್ಲದೆ ಗೃಹಸ್ಥಾಶ್ರಮವನ್ನು ಆರಂಭಿಸಿದ ಖ್ವಾಜಾಆಯಾಸನಿಗಾದರೂ ಇದೇ ಮಾರ್ಗವನ್ನು ಅವಲಂಬಿಸಬೇಕಾಯಿತು. {{gap}}ಪ್ರವಾಸದ ನಿಶ್ಚಯವಾದ ಕೂಡಲೆ ಖ್ಯಾಜಾಆಯಾಸನು ತನ್ನ ಹತ್ತಿರವಿದ್ದ ಎಲ್ಲ ಚೂರು ಚಾರು ಒಡಿವೆಗಳನ್ನು ಮಾರಿ, ಒಂದು ಕುದುರೆ ಮತ್ತು ಸ್ವಲ್ಪು ಹಣ, ಇಷ್ಟು ಸಾಮಗ್ರಿಯನ್ನು ತನ್ನ ಸಂಗಡ ತೆಗೆದುಕೊಂಡು ಪತ್ನಿಸಮೇತನಾಗಿ ಹಿಂದುಸ್ಥಾನಕ್ಕೆ ಬರಬೇಕೆಂದು ಹೊರಟನು. ಕೋಮಲ, ಅದರಲ್ಲಿ ಗರ್ಭಿಣಿ ಸ್ಥಿತಿಯನ್ನು ಹೊಂದಿ ತೀರ ಅಶಕ್ತಳಾದ ತನ್ನ ಹೆಂಡತಿಯನ್ನು ಕುದುರೆಯ ಮೇಲೆ ಕುಳ್ಳಿರಿಸಿ, ಖ್ವಾಜಾಆಯಾಸನು ಅವಳ ಹಿಂದೆ ನಡೆಯಹತ್ತಿದನು. {{gap}}ಕೆಲವು ಕಾಲದವರೆಗೆ ಎಲ್ಲ ಸಂಗತಿಗಳು ಸುಸೂತ್ರವಾಗಿ ನಡೆದವು. ಆದರೆ ಅವರು ಮಾಡತಕ್ಕೆ ಪ್ರವಾಸವು ಅವರು ಯೋಚಿಸಿದಷ್ಟು ಸನಿವಾಸವುಳ್ಳದ್ದಾಗಿದ್ದಿಲ್ಲ; ಹಾಗು ಹತ್ತಿರವಿದ್ದ ಗಂಟು ಸಾಕಾಗುವಂತಿದ್ದಿಲ್ಲ. ಹತ್ತರವಿದ್ದ ಎಲ್ಲ ಹಣವು ತೀರಿಹೋದ ಬಳಿಕ ಅವರು ದೊಡ್ಡ ಪೇಚಿನಲ್ಲಿ ಬಿದ್ದರು. ಭಿಕ್ಷೆಯ ವೃತ್ತಿಯನ್ನು ಸ್ವೀಕರಿಸಿ ಕೆಲವು ದಿವಸಗಳವರೆಗೆ ತಮ್ಮ ಮಾರ್ಗಕ್ರಮಣವನ್ನು ಮಾಡಿದರು. ಇವರು ಹಿಂದುಸ್ಥಾನ ಮತ್ತು ತಾರ್ತರಿ ಇವುಗಳ ಮಧ್ಯದಲ್ಲಿರುವ ನಿರ್ಜನವಾದ ಪ್ರದೇಶದ ಸೀಮೆಯನ್ನು ಹೊಕ್ಕ ಬಳಿಕ ಪ್ರಾರಂಭವಾದ ಇವರ ಕಷ್ಟಾಪೇಷ್ಟಗಳ ವರ್ಣನ ಮಾಡುವದು ತೀರ ಅಶಕ್ಯವಾದದ್ದು. ಅಸಹ್ಯವಾದ ಕಟಕಟ ಚಳಿಯು; ರಾತ್ರಿಯಲ್ಲಾದರೂ ವಿಶ್ರಮಿಸಿಕೊಳ್ಳಬೇಕೆಂದರೆ ಗಂಡು ಸಲ ಸಹ ಇಲ್ಲ; ಸಂಕಟದಲ್ಲಿ ಯಾರನ್ನಾದರೂ ಕರೆಯಬೇಕೆಂದರೆ, ಇವರ ಕೂಗು ಕೇಳಿ ಸಮೀಪದಲ್ಲಿರುವವರು ಯಾರಾದರೂ ಸಹಾಯಾರ್ಥ ಬಂದಾರೆಂದು ಕಲ್ಪಿಸುವದು ಸಹ ತೀರ ಅಸಂಭವವು; ಹಿಂದಕ್ಕೆ ತಿರುಗಿ ಹೋಗಬೇಕೆಂದರೆ, ತಮ್ಮ ದೇಶವು ಬಹಳೇ ದೂರ ಉಳಿದದ್ದರಿಂದ ಮಾರ್ಗದಲ್ಲಿ ಉಂಟಾಗುವ ಅಸಂಖ್ಯ ದುಃಖಗಳ ಕಲ್ಪನೆಯು ಅವರ ಮುಂದೆ ಬಂದು ನಿಲ್ಲುತ್ತಿತ್ತು; ಮುಂದೆ ಹೋಗ{{nop}}<noinclude></noinclude> 4myn9opf31obs3quswhn71hkw09o5dd ಪುಟ:ಬೆಳಗಿದ ದೀಪಗಳು.pdf/೫೭ 104 92539 322467 241046 2026-05-25T09:55:28Z Pragathi. BH 7585 /* Validated */ 322467 proofread-page text/x-wiki <noinclude><pagequality level="4" user="Pragathi. BH" />{{rh||ನೂರಜಹಾನ|೪೭}}</noinclude>ಅವಳನ್ನು ಆ ನಿಗ್ರಹದ ಸ್ಥಳದಿಂದ ಮುಕ್ತಮಾಡಿ, ವಿಶಾಲವಾದ ರಮ್ಯ ರಾಜಮಂದಿರಗಳನ್ನು ಅವಳ ವಶಕ್ಕೆ ಕೊಟ್ಟನು. ಅವಳ ಸೌಂದರ್ಯಕ್ಕೂ ಪರಸ್ಪರ ಪ್ರೀತಿಗೂ ಒಪ್ಪುವಂತೆ ಅವರ ವಿವಾಹವು ಒಳ್ಳೇ ಸಡಗರದಿಂದ ಆಯಿತು. ಬಾದಶಹನು ಅತ್ಯುತ್ಕಟ ಪ್ರೇಮದಿಂದ ಅವಳಿಗೆ "ನೂರಜಹಾನ” ಎಂದು ನಾಮಾಭಿಧಾನವನ್ನು ಮಾಡಿ ಅವಳ ಹೆಸರಿನ ಸುವರ್ಣದ ನಾಣ್ಯಗಳನ್ನು ಮುದ್ರಿಸುವದಕ್ಕಾಗಿ ಅಪ್ಪಣೆಯನ್ನು ಮಾಡಿದನು. {{gap}}ಬಾದಶಹನು ನೂರಜಹಾನಳ ತಂದೆಯನ್ನು ಮುಖ್ಯ ಪ್ರಧಾನನನ್ನಾಗಿ ಮಾಡಿರಿಂದ ಅವಳ ಅಮರ್ಯಾದಿತ ಸತ್ತೆಯು ಒಳಿತಾಗಿ ದೃಢವಾಯಿತು. ಅವಳ ತಮ್ಮನಾದ ಆಸಫಖಾನನನ್ನು ಜಹಂಗೀರನು ತನ್ನ ದರಬಾರದಲ್ಲಿ ಮೊದಲನೆಯ ಪ್ರತಿಯ ಉಮರಾವನನ್ನಾಗಿ ಮಾಡಿದನು. ಈ ಆಸಫಖಾನನ ಮಗಳಕೂಡ ಬಾದಶಹನ ಪುತ್ರನಾದ ಶಹಜಹಾನ ಇವನ ಲಗ್ನವಾಯಿತು. ಶೇರಆಫಗನನಿಂದ ನೂರಜಹಾನಳಿಗೆ ಹುಟ್ಟಿದ ಮಗಳ ಕೂಡ ಬಾದಶಹನ ಎರಡನೇ ಮಗನಾದ ಶಹಾಜಹಾನನು ಮದುವೆಯಾದನು. ಭಯಾನಕ ಮತ್ತು ನಿರ್ಜನವಾದ ಪ್ರದೇಶದಲ್ಲಿ ಒಂದು ಕಾಲಕ್ಕೆ ನಾಮಶೇಷವಾಗಿ ಹೋಗುವ ಪ್ರಸಂಗವು ಬಂದೊದಗಿದ ಕುಟುಂಬವು ಈ ರೀತಿಯಾಗಿ ಭಾಗ್ಯಸೂರ್ಯನ ತೇಜದಿಂದ ಇಡೀ ದೇಶದ ತುಂಬ ಪ್ರಕಾಶಿತವಾಗಹತ್ತಿತು. {{gap}}ಲಗ್ನದಿವಸದಾರಭ್ಯ ಒಂದೇ ಸಮನೆ ಇಪ್ಪತ್ತು ವರ್ಷಗಳವರೆಗೆ ಬಾದಶಹನ ಮೇಲೂ, ಹಿಂದುಸ್ಥಾನದ ವಿಸ್ತೀರ್ಣವಾದ ರಾಜ್ಯದ ಮೇಲೂ ನೂರಜಹಾನಳು ತನ್ನ ಅನಿಯಂತ್ರಿತವಾದ ಅಧಿಕಾರವನ್ನು ನಡೆಸಿದಳು. ಇಚ್ಛೆಯ ವಿರುದ್ಧವಾಗಿ ರಾಜ್ಯದಲ್ಲಿ ಯಾರಿಗೂ ಯಾವ ಪ್ರಕಾರದ ಅಧಿಕಾರವು ದೊರೆಯುತ್ತಿದ್ದಿಲ್ಲ. ಪರರಾಷ್ಟ್ರಗಳ ಕೂಡ ಆಗುತ್ತಿದ್ದ ಒಪ್ಪಂದಗಳು ಸಹ ಅವಳ ಸಮ್ಮತಿಯ ಕೊರತು ಆಗದಂತಾದವು.{{gap}} {{gap}}ಈ ರೀತಿಯಾಗಿ ಕೆಲವು ವರ್ಷಗಳವರೆಗೆ ಎಲ್ಲ ಸಂಗತಿಗಳು ಸುಸೂತ್ರವಾಗಿ ನಡೆದವು; ಆದರೆ ಜಹಾಂಗೀರ ಬಾದಶಹನ ತರುವಾಯ ಪಟ್ಟವು ಯಾರಿಗೆ ದೊರೆಯಬೇಕೆಂಬ ಪ್ರಶ್ನೆಯು ಉದ್ಭವಿಸಿದ್ದರಿಂದ ಬಡಿದಾಟಕ್ಕೆ ಪ್ರಾರಂಭವಾಯಿತು. ಜಹಾಂಗೀರ ಮತ್ತು ನೂರಜಹಾನ ಇವರ ನಡುವೆ ಕೊನೆಯ ವರೆಗೆ ಯಾವ ಪ್ರಕಾರದ ಏತುಷ್ಟವೂ ಉಂಟಾಗಲಿಲ್ಲ. ಉತ್ಪನ್ನ ಅವಳ<noinclude></noinclude> 5q9rm4yvtsghguai7qh8zm0gz742784 ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೩ 104 94486 322257 247074 2026-05-24T15:18:26Z Pragathi. BH 7585 /* Validated */ 322257 proofread-page text/x-wiki <noinclude><pagequality level="4" user="Pragathi. BH" /></noinclude>{{c|'''ಬಿನ್ನಹ'''}} <hr> {{c|'''ರಾಣಿ ಸತೀಶ್'''}} {{c|ಕನ್ನಡ ಮತ್ತು ಸಂಸ್ಕೃತಿ ಸಚಿವರು}} {{gap}}ಸಾಹಿತ್ಯಕ್ಕೆ ಸಾಹಿತ್ಯ, ಶಾಸ್ತ್ರಕ್ಕೆ ಶಾಸ್ತ್ರವಾಗಿರುವ ವಚನವಾಹ್ಮಯ ನಮ್ಮ ಪರಂಪರೆಯ ಅಪೂರ್ವ ಸೃಷ್ಟಿಯಾಗಿದೆ; ಅತ್ಯಪೂರ್ವ ಆಸ್ತಿಯೆನಿಸಿದೆ. ಪಂಡಿತರ ಮಾರ್ಗಸಾಹಿತ್ಯಕ್ಕೆ ಪ್ರತಿಯಾಗಿ ಸಾಮಾನ್ಯರ ಈ ದೇಶೀ ಸಾಹಿತ್ಯ ಹೊರಹೊಮ್ಮಿದ್ದು ೧೨ನೆಯ ಶತಮಾನದಲ್ಲಿ ಕಲಚುರಿಗಳ ರಾಜಧಾನಿಯಾಗಿದ್ದ ಕಲ್ಯಾಣದಲ್ಲಿ ಬಸವಾದಿ ಶರಣರ ಚಳುವಳಿಯಲ್ಲಿ. {{gap}}ಮೂಲತಃ ಭಾರತೀಯರದು ಆತ್ಮ ಪರಮಾತ್ಮನಾಗಬೇಕೆಂಬ ವ್ಯಕ್ತಿಕೇಂದ್ರಿತ ಸಿದ್ಧಾಂತ. ಶರಣರು ಇದನ್ನು ಸಮಾಜಕೇಂದ್ರಿತ ಸಿದ್ಧಾಂತಕ್ಕೆ ವಿಸ್ತರಿಸಿದರು. ಹೀಗಾಗಿ ವ್ಯಕ್ತಿ ಕಲ್ಯಾಣದ ಜೊತೆ ಸಮಾಜಕಲ್ಯಾಣವೂ ಈ ಚಳುವಳಿಯ ಮುಖ್ಯ ಲಕ್ಷಣವೆನಿಸಿತು. ಸಾಹಿತ್ಯ ಸಾಹಿತ್ಯಕ್ಕಾಗಿ ಅಲ್ಲ, ವ್ಯಕ್ತಿ ಪರಿವರ್ತನೆಗಾಗಿ, ಸಮಾಜ ಪರಿವರ್ತನೆಗಾಗಿಯೆಂಬ ಸಿದ್ಧಾಂತ ಇಲ್ಲಿ ಅರ್ಥ ಪಡೆಯಿತು. {{gap}}೧೨ನೆಯ ಶತಮಾನದ ಹೊತ್ತಿಗೆ, ಶೂದ್ರಜೀವ ದೇವನಾಗಲಾರನೆಂಬ ಸಿದ್ಧಾಂತ ಸ್ಥಾಪಿತವಾಗಿದ್ದಿತು. ಸಮಾಜದಲ್ಲಿ ಪುರುಷ-ಸ್ತ್ರೀ, ಪ್ರಭು-ಪ್ರಜೆ, ಬ್ರಾಹ್ಮಣ-ಶೂದ್ರರಲ್ಲಿ ಸಮಾನತೆ ಸಾಧ್ಯವಿಲ್ಲವೆಂಬ ಭೇದಸಂಸ್ಕೃತಿಯೂ ನಿರ್ಮಾಣವಾಗಿದ್ದಿತು. ಈಗ, ಶೂದ್ರನಿಗೂ ದೇವರಾಗುವ ಅರ್ಹತೆಯಿದೆ; ಸ್ತ್ರೀಗೆ ಪುರುಷನಷ್ಟು - ಪ್ರಜೆಗೆ ಪ್ರಭುವಿನಷ್ಟು - ಶೂದ್ರನಿಗೆ ಬ್ರಾಹ್ಮಣನಷ್ಟು ಅಧಿಕಾರವಿದೆಯೆಂದು ಶರಣರು ವಾದಿಸಿದರು. ಇದರ ಫಲವಾಗಿ, ಹೊಸ ಸಮಾಜವೊಂದು ಸೃಷ್ಟಿಯಾಯಿತು. ಇದರಿಂದಾಗಿ ಎಲ್ಲರೂ ಸ್ವತಂತ್ರರು, ಎಲ್ಲರೂ ಸಮಾನರು, ಎಲ್ಲರೂ ಸಹೋದರರೆಂಬ ತತ್ವ ಅನುಷ್ಠಾನಕ್ಕೆ ಬಂದಿತು. ಇದರ ಮುಂದುವರಿಕೆಯೆಂಬಂತೆ ಎಲ್ಲರೂ ದುಡಿಯಬೇಕು ಎಂಬ ಕಾಯಕತತ್ವ, ಎಲ್ಲರೂ ಹಂಚಿಕೊಂಡು ಉಣ್ಣಬೇಕು ಎಂಬ ದಾಸೋಹತತ್ವಗಳು ಆಕಾರ ಪಡೆದವು. {{gap}}ಹೊಸ ಸಮಾಜದ ಈ ಎಲ್ಲ ನೆಲೆಗಳನ್ನು ಗುರಿಯಿಟ್ಟು ಆಡಿದ ಶರಣರ ಮಾತು ವಚನವೆಂಬ ಸಾಹಿತ್ಯಪ್ರಕಾರವಾಗಿ ಮೂಡಿತು. ವರ್ಗಭೇದ, ವರ್ಣಭೇದ, ಲಿಂಗಭೇದವೆನ್ನದೆ ಎಲ್ಲ ಜನವರ್ಗದವರ ಸಾವಿರ ಸಾವಿರ ವಚನಗಳು ಈ ಕಾಲದಲ್ಲಿ ಸೃಷ್ಟಿಯಾದವು. ಆದರೆ ಒಮ್ಮೆಲೇ ತಲೆದೋರಿದ ಕಲ್ಯಾಣ ಕ್ರಾಂತಿಯಿಂದಾಗಿ ಈ ಸಾಹಿತ್ಯ ನಾಡಿನ ತುಂಬ ಹರಿದು ಹಂಚಿಹೋಯಿತು. {{gap}}ಹೀಗೆ ಹಂಚಿಹೋಗಿದ್ದ ಈ ಸಾಹಿತ್ಯವನ್ನು ೧೫-೧೬ನೆಯ ಶತಮಾನಗಳಲ್ಲಿ<noinclude></noinclude> hb4e7yakthx63b08nnp3ktn4a47n1w6 ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೪ 104 94487 322256 247063 2026-05-24T15:18:12Z Pragathi. BH 7585 /* Validated */ 322256 proofread-page text/x-wiki <noinclude><pagequality level="4" user="Pragathi. BH" /></noinclude>ಶೋಧಿಸುವ, ಸಂಪಾದಿಸುವ ಪ್ರಯತ್ನ ನಡೆದು, ನೂರಾರು ಸಂಪಾದನ ಕೃತಿಗಳು ಹುಟ್ಟಿ ಬಂದು, ವಚನಸಾಹಿತ್ಯ ವೀರಶೈವ ಮಠಗಳಲ್ಲಿ ತಕ್ಕ ಮಟ್ಟಿಗೆ ರಕ್ಷಿಸಲ್ಪಟ್ಟಿತು. ದುರ್ದೈವದ ಸಂಗತಿಯೆಂದರೆ ಮಠಗಳಲ್ಲಿ ಪ್ರವೇಶ ಪಡೆದ ಸಂಸ್ಕೃತ ಭಾಷೆಯಿಂದಾಗಿ ಕನ್ನಡ ಭಾಷೆಯ ಈ ವಚನಗಳು ಅಲ್ಲಿ ಮೂಲೆ ಸೇರಿದವು. {{gap}}ಹೀಗೆ ಮೂಲೆಗುಂಪಾಗಿದ್ದ ವಚನಸಾಹಿತ್ಯವು ೨೦ನೆಯ ಶತಮಾನದಲ್ಲಿ ಅನೇಕ ಜನ ವಿದ್ವಾಂಸರ, ಹತ್ತಾರು ಸಂಸ್ಥೆಗಳ ಪ್ರಯತ್ನದ ಫಲವಾಗಿ ಪ್ರಕಟಣೆಗೊಳ್ಳುತ್ತ ಬಂದಿತು. ಈಗ ೧೨ನೆಯ ಶತಮಾನದ ಶರಣಸಾಹಿತ್ಯ ಪ್ರಕಟನೆಗೆ ಒತ್ತುಬಿದ್ದರೂ ಅದು ಬಿಡಿಬಿಡಿಯಾಗಿ ಪ್ರಕಟಣೆಗೊಂಡಿತು. ಆ ತರುವಾಯದ ಶರಣ ಸಾಹಿತ್ಯವಂತೂ ಉಪೇಕ್ಷೆಗೆ ಗುರಿಯಾಯಿತು. ಈ ಎರಡೂ ಕೊರತೆಗಳನ್ನು ನೀಗಿಸುವ ಉದ್ದೇಶದಿಂದ ಎಲ್ಲ ಶರಣರ ಎಲ್ಲ ವಚನಗಳನ್ನು ಸಂಪುಟ ಶ್ರೇಣಿಯಲ್ಲಿ ಪ್ರಕಟಿಸಲು ಕರ್ನಾಟಕ ಸರಕಾರ “ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯನ್ನು ಕೈಗೆತ್ತಿಕೊಂಡಿತು. {{gap}}ಡಾ. ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ವ್ಯಾಪಕ ಕಾರ್ಯ ನಡೆದು, ೨೦ ಸಾವಿರ ವಚನ, ೧೦ ಸಾವಿರ ಪುಟಗಳನ್ನೊಳಗೊಂಡ ೧೫ ಸಂಪುಟಗಳು ೧೯೯೩ರಲ್ಲಿ ಬೆಳಕು ಕಂಡವು. ಆಶ್ಚರ್ಯದ ಸಂಗತಿಯೆಂದರೆ ಇದರ ೫ ಸಾವಿರ ಪ್ರತಿಗಳು ಒಂದೇ ವರ್ಷದಲ್ಲಿ ಮಾರಾಟವಾಗಿ, ಜನರಿಂದ ಬೇಡಿಕೆ ಹೆಚ್ಚುತ್ತ ನಡೆಯಿತು. ಇದನ್ನು ಪೂರೈಸುವ ದಿಕ್ಕಿನಲ್ಲಿ ಪರಿಷ್ಕೃತ ದ್ವಿತೀಯ ಆವೃತ್ತಿ ಈಗ ಹೊರಬರುತ್ತಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿ ಕನ್ನಡದ ಈ ಅಪೂರ್ವ ಆಸ್ತಿಯನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.<noinclude></noinclude> 4w043jrzaqt42t5vb0xxfckznfpxjik ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೫ 104 94489 322245 247073 2026-05-24T15:13:58Z Pragathi. BH 7585 /* Validated */ 322245 proofread-page text/x-wiki <noinclude><pagequality level="4" user="Pragathi. BH" /></noinclude>{{c|'''ನಿರ್ದೇಶಕರ ಮಾತು'''}} <hr> {{c|'''ಕೆ. ಸಿ. ರಾಮಮೂರ್ತಿ'''}} {{c|ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ}} {{gap}}ವಚನಸಾಹಿತ್ಯ, ಕರ್ನಾಟಕದ ಬಹುದೊಡ್ಡ ಸಾಂಸ್ಕೃತಿಕ ಸಂಪತ್ತು. ಪ್ರಾಚೀನ ಕರ್ನಾಟಕದ ಜನಸಾಮಾನ್ಯರ ಧ್ವನಿಯಾಗಿರುವ ಇದನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು ಜನತಂತ್ರ ಸರಕಾರದ ಮುಖ್ಯ ಕರ್ತವ್ಯವಾಗಿದೆ. {{gap}}ಭಾರತದಲ್ಲಿ ಆತ್ಮೋದ್ಧಾರದ ಬಗ್ಗೆ ಉದಾತ್ತ ತತ್ವಗಳನ್ನು ಪ್ರತಿಪಾದಿಸುತ್ತ ಬಂದಿದ್ದರೂ ಸಮಾಜೋದ್ಧಾರದ ಬಗ್ಗೆ ಉಪೇಕ್ಷೆ ಬೆಳೆದು, ಅಲ್ಲಿ ಶೋಷಣೆ ವರ್ಧಿಸುತ್ತ ಬಂದುದು ನಮ್ಮ ಇತಿಹಾಸದ ಒಂದು ವಿಪರ್ಯಾಸವೇ ಸರಿ. ೧೨ನೆಯ ಶತಮಾನದಲ್ಲಿ ಉಲ್ಬಣಗೊಂಡಿದ್ದ ಈ ವಿಷಮ ಪರಿಸ್ಥಿತಿಯನ್ನು ನಾಶಗೊಳಿಸಿ, ಸಮಸ್ಥಿತಿಯನ್ನು ಸಮಾಜದಲ್ಲಿ ತರಲು ಹೋರಾಡಿದವರು, ಕಲ್ಯಾಣದ ಶರಣರು. ಈ ಕಾರ್ಯಕ್ಕಾಗಿ ಅವರು ಕೈಕೊಡ ಜನಪರ ಆಂದೋಲನ ನಮ್ಮ ದೇಶದ ಇತಿಹಾಸದಲ್ಲಿಯೇ ಒಂದು ವಿಶಿಷ್ಟ ಘಟನೆಯಾಗಿದೆ. {{gap}}ಭಾರತದಲ್ಲಿ ರಾಜಸತ್ತೆಯ ಸ್ಥಾಪನೆಗಾಗಿ ರಾಜರು, ಮತಸತ್ತೆಯ ಸ್ಥಾಪನೆಗಾಗಿ ಧರ್ಮಗಳು ಪರಸ್ಪರ ಸಂಘರ್ಷಕ್ಕಿಳಿದುದು ಸರ್ವಶ್ರುತ, ಆದರೆ ಸಾಮಾಜಿಕ ನ್ಯಾಯದ ಸ್ಥಾಪನೆಗಾಗಿ ಈ ರಾಜಸತ್ತೆ, ಮತಸತ್ತೆಗಳ ವಿರುದ್ಧ ಸಮಾಜದ ವಿವಿಧ ಸ್ತರಗಳ ಜನತೆ, ಅದರಲ್ಲಿಯೂ ದೀನರು-ದಲಿತರು-ಮಹಿಳೆಯರು ಬೀದಿಗಿಳಿದು ನಡೆಸಿದ ಈ ಆಂದೋಲನ, ಇಪ್ಪತ್ತನೆಯ ಶತಮಾನವೂ ಆಶ್ಚರ್ಯಪಡುವ ಸಂಗತಿಯಾಗಿದೆ. {{gap}}ಅಂದಿನ ಸನ್ನಿವೇಶಕ್ಕೆ ಅನುಗುಣವಾಗಿ ಧಾರ್ಮಿಕ ಕ್ಷೇತ್ರದಲ್ಲಿ ಅಂಕುರಿಸಿದ ಈ ಆಂದೋಲನ, ಸಾಮಾಜಿಕ ಕ್ಷೇತ್ರವನ್ನೂ ಆವರಿಸಿದ ಕಾರಣ, ಇದನ್ನು 'ಸಮಾಜೋ ಧಾರ್ಮಿಕ' ಆಂದೋಲನವೆಂದು ಗುರುತಿಸಲಾಗುತ್ತದೆ. ಸಮಾಜವೆನ್ನುವುದು ಸಂಕೀರ್ಣ ವ್ಯವಸ್ಥೆ, ಅದರ ಎಲ್ಲ ಸ್ತರಗಳನ್ನೂ ಎಲ್ಲ ಮಗ್ಗಲುಗಳನ್ನೂ ಬದಲಿಸಲು ಮಾಡಿದ ಪ್ರಯತ್ನವಾಗಿರುವುದರಿಂದ ಇದು ಒಂದು “ಸಮಗ್ರ ಆಂದೋಲನವಾಗಿದೆ. ಈ ಆಂದೋಲನದ ನೇರ ಧ್ವನಿ, ವಚನಸಾಹಿತ್ಯ. {{gap}}ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನಿಂದಾಗಿ ವ್ಯಕ್ತಿ ಸ್ವಾತಂತ್ರ್ಯ ಪಡೆದ ಜನವರ್ಗವು ವ್ಯಕ್ತಪಡಿಸಿದ ಅಭಿಪ್ರಾಯ ಸ್ವಾತಂತ್ರ್ಯದ ಫಲ, ಈ ಸಾಹಿತ್ಯ. ಹೀಗಾಗಿ ಇಲ್ಲಿ ಆತ್ಮವಿಮರ್ಶೆಯಷ್ಟೇ ವಿಪುಲವಾಗಿ ಸಮಾಜವಿಮರ್ಶೆಯನ್ನೂ ಕಾಣಬಹುದಾಗಿದೆ. ಅದರಲ್ಲಿಯೂ ವರ್ಣಭೇದ ನಿರಾಕರಣೆ, ವರ್ಗಭೇದ<noinclude></noinclude> seb4bdd69fkaq6pt352lvqgxfgn5rpy ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೬ 104 94490 322246 247077 2026-05-24T15:14:11Z Pragathi. BH 7585 /* Validated */ 322246 proofread-page text/x-wiki <noinclude><pagequality level="4" user="Pragathi. BH" /></noinclude>ನಿರಾಕರಣೆ, ಲಿಂಗಭೇದ ನಿರಾಕರಣೆಗಳಂಥ ವಿಚಾರಗಳು ಸ್ಫೋಟಗೊಂಡುದು ಲಕ್ಷಿಸತಕ್ಕ ಸಂಗತಿಯಾಗಿದೆ. ಇಲ್ಲಿ ಪುರುಷರಷ್ಟೇ ಪ್ರಧಾನವಾಗಿ ಮಹಿಳೆಯರೂ, ಕುಲಜರಷ್ಟೇ ಪ್ರಧಾನವಾಗಿ ಅಂತ್ಯಜರೂ, ಪ್ರಭುಗಳಷ್ಟೇ ಪ್ರಧಾನವಾಗಿ ಪ್ರಜೆಗಳೂ ಬಾಳಿದುದು, ಬರೆದುದು ಬಹುಶಃ ಜಗತ್ತಿನ ಇತಿಹಾಸದಲ್ಲಿಯೇ ಏಕೈಕ ಉದಾಹರಣೆಯಾಗಿದೆ. ಇಂಥ ವಿಚಾರಶೀಲರ ಅಂದರೆ ಇವರ ತತ್ವ-ಸಾಹಿತ್ಯಗಳ ಉತ್ತರಾಧಿಕಾರಿಗಳಾದುದು ನಮ್ಮ ಭಾಗ್ಯ; ಇವರ ಸಾಹಿತ್ಯ ಸಂಪತ್ತನ್ನು ರಕ್ಷಿಸುವುದು, ಪ್ರಸಾರಮಾಡುವುದು ನಮ್ಮ ಕರ್ತವ್ಯ. ಈ ಕರ್ತವ್ಯದ ಭಾಗವಾಗಿ ''ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ''ಯನ್ನು ಕರ್ನಾಟಕ ಸರಕಾರ ಕೈಗೆತ್ತಿಕೊಂಡಿತು. {{gap}}ಈವರೆಗೆ ವಚನಸಾಹಿತ್ಯ ಬಿಡಿಬಿಡಿಯಾಗಿ ಭಾಗಶಃ ಪ್ರಕಟವಾಗಿದ್ದಿತು, ಕೆಲವು ಭಾಗ ಅಪ್ರಕಟಿತ ಸ್ಥಿತಿಯಲ್ಲಿ ಉಳಿದಿದ್ದಿತು. ಇದೆಲ್ಲವನ್ನು ಕ್ರೋಢೀಕರಿಸಿ, ಪರಿಷ್ಕರಿಸಿ ಪ್ರಕಟಿಸುವುದು ಶ್ರಮದ ಕೆಲಸ. ಡಾ. ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ, ಅನೇಕ ಜನ ವಿದ್ವಾಂಸರ ಮತ್ತು ಸಂಪಾದಕ ಮಂಡಳಿ ಸದಸ್ಯರ ಸಂಯುಕ್ತ ಪರಿಶ್ರಮದಿಂದ ಈ ಬೃಹತ್ ಯೋಜನೆ ಪೂರ್ತಿಗೊಂಡುದು ಸಂತೋಷದ ಸಂಗತಿ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ಅಸ್ತಿತ್ವಕ್ಕೆ ಬಂದು, ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಂಡ ಈ ಐತಿಹಾಸಿಕ ಯೋಜನೆಗಾಗಿ ಸಂಬಂಧಪಟ್ಟ ಎಲ್ಲ ವಿದ್ವಾಂಸರನ್ನು ಅಭಿನಂದಿಸುತ್ತೇನೆ. ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಪ್ರಕಟವಾಗುತ್ತಲಿರುವ ಈ ಪರಿಷ್ಕೃತ ದ್ವಿತೀಯ ಆವೃತ್ತಿ ಸಂಪುಟಗಳನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.<noinclude></noinclude> 2udq3ddau7pb21i1idd7gqa6eaoptwa ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೭ 104 94491 322247 247078 2026-05-24T15:14:21Z Pragathi. BH 7585 /* Validated */ 322247 proofread-page text/x-wiki <noinclude><pagequality level="4" user="Pragathi. BH" /></noinclude>{{c|'''ಪ್ರಕಾಶಕರ ಮಾತು'''}} <hr> {{c|'''ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ'''}} {{c|ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ}} {{gap}}ಸಮಗ್ರ ವಚನ ಸಂಪುಟಗಳ ಪರಿಷ್ಕೃತ ಆವೃತ್ತಿ ಪ್ರಕಟಣೆ ಕರ್ನಾಟಕ ಸಾಂಸ್ಕೃತಿಕ ಇತಿಹಾಸದಲ್ಲಿ ನಡೆದಿರುವ ಒಂದು ದಿವ್ಯಘಟನೆ. ವಚನಸಾಹಿತ್ಯದ ಪ್ರಕಟಣೆಗೆ ಸುಮಾರು ಎಂಬತ್ತು ವರ್ಷಗಳ ಇತಿಹಾಸವಿದೆ. ವಚನಪಿತಾಮಹ ಶ್ರೀ ಫ. ಗು. ಹಳಕಟ್ಟಿ ಅವರಿಂದ ಪ್ರಕಟಣೆಯ ದಿವ್ಯಘಟನೆ ಆರಂಭಗೊಂಡಿತು. ಇದೀಗ ಡಾ. ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದ ಮೂಲಕ ಸಹಸ್ರಮಾನದ ಸೂರ್ಯೋದಯದ ವೇಳೆಗೆ ಇದು ಒಂದು ಪೂರ್ಣ ಘಟ್ಟಕ್ಕೆ ಬಂದಿದೆ. ಶರಣ ಸಾಹಿತ್ಯದ ಪ್ರಕಟಣೆಯ ಇತಿಹಾಸದಲ್ಲಿ ಇದು ಚಾರಿತ್ರಿಕ ಘಟನೆಯೇ ಸರಿ. ಈ ನಡುವೆ ವಚನಸಾಹಿತ್ಯದ ಸಹಸ್ರಾರು ಬಿಡಿ ಪ್ರಕಟಣೆಗಳು ಹೊರಬಂದಿವೆ. ವಿಶ್ವವಿದ್ಯಾಲಯಗಳು, ಖಾಸಗಿ ಸಂಸ್ಥೆಗಳು, ಮಠಗಳು, ಶಿಕ್ಷಣ ಕೇಂದ್ರಗಳು, ಖಾಸಗಿ ಪ್ರಕಾಶಕರು, ಆಸಕ್ತ ಲೇಖಕರು ಬಿಡಿಬಿಡಿಯಾಗಿ ವಚನಸಾಹಿತ್ಯದ ಪ್ರಕಟಣೆಗಳನ್ನು ಹೊರತಂದಿದ್ದಾರೆ. ನಾವು ಪ್ರೀತಿಯಿಂದ ಇವರನ್ನೆಲ್ಲ ಈ ಹೊತ್ತಿನಲ್ಲಿ ನೆನೆಯುವುದು, ಆ ಪಾತ್ರಃಸ್ಮರಣೀಯರ ಹಾದಿಯಲ್ಲಿ ಮುನ್ನಡೆಯುವುದು ನಮ್ಮ ಸಾಂಸ್ಕೃತಿಕ ಕರ್ತವ್ಯ. {{gap}}ಸಮಗ್ರ ವಚನ ಸಂಪುಟಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ೧೯೯೩ರಲ್ಲಿ ಪ್ರಕಟಗೊಂಡಿದ್ದವು. ಆ ಸಂಪುಟಗಳು ಪ್ರಕಟವಾದ ವರ್ಷವೇ ಕನ್ನಡಿಗರ ಮನೆಯನ್ನು ಸೇರಿಕೊಂಡವು. ಆದರೆ, ಸಂಪುಟಗಳ ಬೇಡಿಕೆ ಮಹಾಜನರಿಂದ ಇದ್ದೇ ಇತ್ತು. ಆನಂತರ ಕರ್ನಾಟಕ ಸರ್ಕಾರ ಪರಿಷ್ಕೃತ ಆವೃತ್ತಿಗೆ ತಾತ್ವಿಕ ಒಪ್ಪಿಗೆ ನೀಡಿತು. ಹೀಗೆ ಒಪ್ಪಿಗೆ ನೀಡಿದ ಸಂಸ್ಕೃತಿ ಸಂಪನ್ನರೂ ಮುಖ್ಯಮಂತ್ರಿಗಳೂ ಆದ ಸನ್ಮಾನ್ಯ ಶ್ರೀ ಎಸ್. ಎಂ. ಕೃಷ್ಣ ಅವರನ್ನು ತುಂಬು ಹೃದಯದಿಂದ ಈ ಪ್ರಕಟಣೆಯ ದಿವ್ಯಘಟನೆಯ ಹೊತ್ತಿನಲ್ಲಿ ಸ್ಮರಿಸಿಕೊಳ್ಳುತ್ತೇನೆ. ಅನಂತರ ನಾಡಿನ ಶ್ರೇಷ್ಠ ವಿದ್ವಾಂಸರಾದ ಡಾ. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ವಚನ ಸಂಪುಟಗಳ ಪರಿಷ್ಕೃತ ಆವೃತ್ತಿ ಸಿದ್ಧಗೊಂಡವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಸಂಪುಟಗಳನ್ನು ಪ್ರಕಟಿಸಬೇಕಿತ್ತು. ಆದರೆ, ಆ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಒಪ್ಪಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಔದಾರ್ಯ; ಅದನ್ನು ಪಡೆದು ಪ್ರಕಟಿಸುತ್ತಿರುವುದು ಪುಸ್ತಕ ಪ್ರಾಧಿಕಾರದ ಭಾಗ್ಯ. ಈ ಭಾಗ್ಯಕ್ಕೆ ಕಾರಣರಾದವರು ಕನ್ನಡ ಮತ್ತು ಸಂಸ್ಕೃತಿ<noinclude></noinclude> p1tbr00xy8fskka6sti1b9ra2l15zjc ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೮ 104 94492 322248 247082 2026-05-24T15:14:32Z Pragathi. BH 7585 /* Validated */ 322248 proofread-page text/x-wiki <noinclude><pagequality level="4" user="Pragathi. BH" /></noinclude>ಇಲಾಖೆಯ ಸಚಿವೆಯರಾದ ಮಾನ್ಯ ಶ್ರೀಮತಿ ರಾಣಿ ಸತೀಶ್ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಕೆ. ಸಿ. ರಾಮಮೂರ್ತಿ, ಇವರಿಬ್ಬರ ಆಸಕ್ತಿಯ ಫಲ ಈ ಕಾರ್ಯವನ್ನು ಆಗುಗೊಳಿಸಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವೆಯರ ಆಪ್ತ ಕಾರ್ಯದರ್ಶಿ ಡಾ. ಎ. ಆರ್. ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀ ಸಿ. ಎಸ್. ಕೇದಾರ್, ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಶ್ರೀ ಕಾ. ತ. ಚಿಕ್ಕಣ್ಣ ಪ್ರಕಟಣೆಯ ವಿವಿಧ ಹಂತಗಳಲ್ಲಿ ನನಗೆ ನೆರವಾಗಿದ್ದಾರೆ. ಈ ಮೇಲಿನ ಎಲ್ಲ ಮಹನೀಯರಿಗೂ ಕನ್ನಡ ಪುಸ್ತಕ ಪ್ರಾಧಿಕಾರವು ಅನನ್ಯವಾದ ಕೃತಜ್ಞತೆಯನ್ನು ಅರ್ಪಿಸುತ್ತದೆ. {{gap}}ಸಮಗ್ರವಚನ ಸಂಪುಟಗಳ ಪರಿಷ್ಕೃತ ಆವೃತ್ತಿಯ ಸಂಪಾದಕ ಮಂಡಳಿಯ ವಿದ್ವಾಂಸರಾದ ಡಾ. ಎಂ. ಎಂ. ಕಲಬುರ್ಗಿ, ಡಾ. ಎಂ. ಚಿದಾನಂದಮೂರ್ತಿ, ಡಾ. ಸಿ. ಪಿ. ಕೃಷ್ಣಕುಮಾರ್, ಡಾ. ಎಸ್. ವಿದ್ಯಾಶಂಕರ್, ಎಸ್. ಶಿವಣ್ಣ ಇವರನ್ನು, ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಹೊರತರಲು ಒಪ್ಪಿಗೆ ನೀಡಿದ ಪುಸ್ತಕ ಪ್ರಾಧಿಕಾರದ ಸ್ಥಾಯಿಸಮಿತಿ ಸದಸ್ಯರಾದ ಪ್ರೊ. ರಾಮೇಗೌಡ, ಶ್ರೀ ಆರ್. ಜಿ. ಹಳ್ಳಿ ನಾಗರಾಜ್, ಪ್ರೊ. ಸಿದ್ಧಪ್ಪ ಉತ್ನಾಳ್, ಶ್ರೀ ಛಾಯಾಪತಿ ಮತ್ತು ಶ್ರೀಮತಿ ಇಂದಿರಾ ಶಿವಣ್ಣ ಇವರನ್ನು ತುಂಬು ಮನಸ್ಸಿನಿಂದ ನೆನೆಯುತ್ತೇನೆ. ಹದಿನೈದು ಸಂಪುಟಗಳ ಅಕ್ಷರ ಜೋಡಣೆ ಮಾಡಿಕೊಟ್ಟವರನ್ನು, ಬಹು ಅಂದವಾಗಿ ಮುದ್ರಿಸಿದವರನ್ನು, ಸುಂದರವಾಗಿ ಮತ್ತು ಆಕರ್ಷಕವಾಗಿ ಸಂಪುಟಗಳನ್ನು ಬೈಂಡ್ ಮಾಡಿಕೊಟ್ಟವರನ್ನು, ಮುಖಪುಟ ವಿನ್ಯಾಸ ಮಾಡಿಕೊಟ್ಟವರನ್ನು, ತುಂಬು ಪ್ರೀತಿಯಿಂದ ನೆನೆಯುವುದು ನನ್ನ ಕರ್ತವ್ಯ. ಇವರ ಮುದ್ರಣ ಪರಿಣತಿಯ ಫಲ ಈ ಸಂಪುಟಗಳಿಗೆ ದೊರಕಿ ಅಂದವಾಗಲು ಕಾರಣವಾಗಿದೆ. ಪುಸ್ತಕ ಪ್ರಾಧಿಕಾರದ ಆಡಳಿತಗಾರರಾದ ಶ್ರೀ ಬಲವಂತರಾವ್ ಪಾಟೀಲ ನನ್ನೊಡನೆ ಉದ್ದಕ್ಕೂ ಸಹಕರಿಸಿದ್ದಾರೆ. ಈ ಮೇಲೆ ಹೆಸರಿಸಿದ ಎಲ್ಲ ಮಹನೀಯರನ್ನು ಕೃತಜ್ಞತಾಪೂರ್ವಕವಾಗಿ ನೆನೆಯುತ್ತೇನೆ. {{gap}}ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸುತ್ತಿರುವ ಸಮಗ್ರ ವಚನ ಸಂಪುಟಗಳನ್ನು ಕನ್ನಡದ ಮಹಾಜನತೆ ಪ್ರೀತಿಯಿಂದ ಸ್ವೀಕರಿಸಬೇಕೆಂದು ಬೇಡುತ್ತೇನೆ.<noinclude></noinclude> rs3no6obwfif98yqv6cclx791h0yvrt ಪುಟ:ಬಸವಣ್ಣನವರ ವಚನಸಂಪುಟ - ೧.pdf/೧೯ 104 94493 322249 247085 2026-05-24T15:14:48Z Pragathi. BH 7585 /* Validated */ 322249 proofread-page text/x-wiki <noinclude><pagequality level="4" user="Pragathi. BH" /></noinclude>{{c|'''ಸಂಪಾದಕೀಯ'''}} <hr> {{c|'''ಡಾ. ಎಂ. ಎಂ. ಕಲಬುರ್ಗಿ'''}} {{c|ಪ್ರಧಾನ ಸಂಪಾದಕರು}} {{gap}}ಕರ್ನಾಟಕದ ಇತಿಹಾಸದಲ್ಲಿ ಶಿವಶರಣರ ಚಳುವಳಿ ಒಂದು ಅಪೂರ್ವ ಘಟನೆ, ವಚನಗಳ ಸೃಷ್ಟಿ ಒಂದು ಅನನ್ಯ ಪ್ರಯೋಗ. ಸಮಾಜದ ಎಲ್ಲ ವರ್ಗ, ಎಲ್ಲ ವರ್ಣಗಳ ಜನಸಮುದಾಯ ಬಸವಣ್ಣನವರ ನೇತೃತ್ವದಲ್ಲಿ ಕೈಗೊಂಡಿದ್ದ ವ್ಯಕ್ತಿಕಲ್ಯಾಣ ಮತ್ತು ಸಮಾಜಕಲ್ಯಾಣ ಚಳುವಳಿಯ ಸೃಷ್ಟಿಯೆನಿಸಿದ ಈ ವಚನಗಳು, ಜಾಗತಿಕ ಸಾಹಿತ್ಯದ ಮಹತ್ವಪೂರ್ಣ ಭಾಗವೆನಿಸಿವೆ. {{gap}}'ವಚನ' ಶಬ್ದಕ್ಕೆ ಇಲ್ಲಿ ಗದ್ಯ ಸಾಹಿತ್ಯಪ್ರಕಾರವೆಂದು ಅರ್ಥವಲ್ಲ; ಪ್ರತಿಜ್ಞೆ ಆತ್ಮಸಾಕ್ಷಿಯ ಮಾತು ಎಂದು ಅರ್ಥ. ನಡೆ ಹೇಗೇ ಇರಲಿ, ನುಡಿ ಮಾತ್ರ ಕಲಾತ್ಮಕವಾಗಿದ್ದುದು 'ರಚನೆ'ಯಾದರೆ, ನಡೆದಂತೆ ನುಡಿದ ಆತ್ಮಸಾಕ್ಷಿಯ ವಾಣಿ 'ವಚನ'ವೆನಿಸುತ್ತದೆ. {{gap}}ವಚನಗಳು ಆಚಾರ್ಯರ ಸಾಹಿತ್ಯವಲ್ಲ, ಅನುಭಾವಿಗಳ ಸಾಹಿತ್ಯ, ಆಚಾರರು ಜೀವಿಸಿರುವಾಗಲೇ ತಮ್ಮ ವಿಚಾರಗಳನ್ನು ಬರೆದು, ಅವುಗಳಿಗೆ ಸಂವಿಧಾನಾತ್ಮಕ ಮುದ್ರೆ ಒತ್ತುತ್ತಾರೆ. ಅನುಭಾವಿಗಳು ಮಾತ್ರ ತಮ್ಮ ಚಿಂತನೆಯನ್ನು ಹೃದಯದಿಂದ ಹೃದಯಕ್ಕೆ ಮುಟ್ಟುವಂತೆ ಬಿಡಿಮಾತುಗಳ ಮೂಲಕ ಹೇಳುತ್ತಾರೆ. ಬಿಡಿಮುತ್ತುಗಳಂತೆ ಸೂರೆಯಾದ ಅವುಗಳನ್ನು ಸಂಗ್ರಹಿಸುವ, ಸಂಕಲಿಸುವ, ಸಂಪಾದಿಸುವ ಕೆಲಸವನ್ನು ಉತ್ತರಕಾಲೀನ ಅನುಯಾಯಿಗಳು ಮಾಡುತ್ತಾರೆ. ಏಸುವಿನ ವಾಣಿಯಾದ ಬೈಬಲ್, ಮಹಮ್ಮದನ ಉಪದೇಶವಾದ ಕುರಾನ್, ಬುದ್ಧನ ಬೋಧೆಯಾದ ತ್ರಿಪಿಟಕ, ಶರಣರ ಸಂದೇಶವಾದ ವಚನಕೃತಿಗಳು ಈ ಬಗೆಯ ಉತ್ತರಕಾಲೀನ ಸಂಕಲನಗಳಾಗಿವೆ. {{gap}}ಮೂಲತಃ ವಚನನಿಧಿ ಜನರಿಂದ, ಜನರಿಗಾಗಿ ಹುಟ್ಟಿ, ಜನರ ಮಧ್ಯದಲ್ಲಿ ಬಾಳಿದ ಸಾಹಿತ್ಯವಾಗಿದೆ. ಹೀಗಾಗಿ ಹನ್ನೆರಡರಿಂದ ಹದಿನೈದನೆಯ ಶತಮಾನಕ್ಕೆ ಬರುವಷ್ಟರಲ್ಲಿ ಅದಕ್ಕೆ ವಿಪುಲ ಭಿನ್ನಪಾಠಗಳು ಹುಟ್ಟಿಕೊಂಡವು. ಆಮೇಲೆ ಸಂಕಲನ-ಸಂಪಾದನ ಕಾರ್ಯದಿಂದಾಗಿ ಕೆಲವೊಮ್ಮೆ ಪ್ರಕ್ಷಿಪ್ತ ವಚನಗಳೂ ತಲೆಯೆತ್ತಿದವು. ಈ ಗೊಂದಲ ಕಾರಣವಾಗಿ ಕವಿಸಾಹಿತ್ಯಕ್ಕಿಂತ ವಚನಸಾಹಿತ್ಯದ ಸಂಪಾದನಕಾರ್ಯ ತುಂಬ ಜಟಿಲಸ್ವರೂಪ ದ್ದಾಗಿದೆ. {{gap}}ಪ್ರಾಚೀನ ಕನ್ನಡ ಸಾಹಿತ್ಯದ ಪ್ರಕಟನಕಾರ್ಯವನ್ನು ಮೊದಲು ಕೈಗೆತ್ತಿಕೊಂಡವರು, ಕ್ರೈಸ್ತ ಪಾದ್ರಿಗಳು. ಜೈನ ಪುರಾಣ-ಕಾವ್ಯಗಳನ್ನು, ವೈದಿಕ ಪುರಾಣ-ಕೀರ್ತನೆಗಳನ್ನು, ವೀರಶೈವ ಶಾಸ್ತ್ರ-ಪುರಾಣಗಳನ್ನು ಪ್ರಕಟಿಸಿದ ಇವರು, ವಚನಸಾಹಿತ್ಯವನ್ನು ಮಾತ್ರ ತಪ್ಪಿಯೂ ಪ್ರಕಟಿಸಲಿಲ್ಲ. ದೇಶೀ ವಿದ್ವಾಂಸರೇ ಈ ಕೆಲಸವನ್ನು ಪ್ರಾರಂಭ ಮಾಡಬೇಕಾಯಿತು. ಈ<noinclude></noinclude> gdfw4aqretwxdemj5b672mo2fvtm0hr ಪುಟ:ಬಸವಣ್ಣನವರ ವಚನಸಂಪುಟ - ೧.pdf/೨೦ 104 94494 322250 247099 2026-05-24T15:15:02Z Pragathi. BH 7585 /* Validated */ 322250 proofread-page text/x-wiki <noinclude><pagequality level="4" user="Pragathi. BH" /></noinclude>ದಿಸೆಯಲ್ಲಿ ಮೊದಲು ಪ್ರಕಟವಾದ ವಚನಕೃತಿ (೧೮೮೩) 'ಅಪ್ರಮಾಣ ಕೂಡಲ ಸಂಗಮದೇವಾ' ಮುದ್ರಿಕೆಯ ವಚನಗಳನ್ನೊಳಗೊಂಡ “ಶಿಖಾರತ್ನಪ್ರಕಾಶ, ಆಮೇಲೆ ಒಂದು ಮೈಲಿಗಲ್ಲಿನಂತೆ ಪ್ರಕಟವಾದ ವಚನಕೃತಿ, ಬಸವಣ್ಣನವರ ಷಟ್‌ಸ್ಥಲವಚನ ಸಂಪುಟ. ಅದು ಮೊದಲು ಬೆಳಕು ಕಂಡುದು ೧೮೮೯ರಲ್ಲಿ. ಅಲ್ಲಿಂದ ಸರಿಯಾಗಿ ಒಂದು ಶತಮಾನ ಕಳೆಯುವಷ್ಟರಲ್ಲಿ ಅಂದರೆ ೧೯೮೮ರಲ್ಲಿ ಈ ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ' ಅಸ್ತಿತ್ವಕ್ಕೆ ಬಂದುದು ಒಂದು ಯೋಗಾಯೋಗವಾಗಿದೆ; ವಚನಸಾಹಿತ್ಯದ ಪ್ರಕಟನಚರಿತ್ರೆಯ ಶತಮಾನಸ್ಮರಣೆಯಾಗಿದೆ. {{gap}}ಈ ನೂರು ವರ್ಷಗಳ ಕಾಲವ್ಯಾಪ್ತಿಯಲ್ಲಿ ವಚನಸಾಹಿತ್ಯ ಪ್ರಕಟಣೆಗಾಗಿ ಅನೇಕರು ದುಡಿದಿರುವರಾದರೂ ಯೋಜನಾಬದ್ಧ ವ್ಯಾಪಕ ಪ್ರಯತ್ನಗಳು, ವಿಜಾಪುರ, ಧಾರವಾಡ, ಗದಗಗಳಲ್ಲಿ ಹೀಗೆ ಜರುಗಿವೆ : ೧. ಶಿವಾನುಭವ ಗ್ರಂಥಮಾಲೆ, ವಿಜಾಪುರ ಡಾ. ಫ. ಗು. ಹಳಕಟ್ಟಿ ೨. ಕನ್ನಡ ಅಧ್ಯಯನ ಪೀಠ, ಕ. ವಿ. ಧಾರವಾಡ - ಡಾ. ಆರ್. ಸಿ. ಹಿರೇಮಠ ೩. ತೋಂಟದಾರ್ಯಮಠ, ಗದಗ ಡಾ. ಎಂ. ಎಂ. ಕಲಬುರ್ಗಿ {{gap}}ವಚನಸಾಹಿತ್ಯದ ಪ್ರಕಟನ ಕಾರ್ಯ ಹೀಗೆ ವಿಜಾಪುರದಲ್ಲಿ ಪ್ರಾರಂಭವಾಗಿ, ಧಾರವಾಡದಲ್ಲಿ ಬೆಳೆದು, ಗದುಗಿನಲ್ಲಿ ಒಂದು ನಿಲುಗಡೆಗೆ ಬರುತ್ತಿದ್ದಂತೆಯೇ, ಈಗ ನಾಲ್ಕನೆಯ ಘಟ್ಟದಲ್ಲಿ ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯ ಅಂಗವಾಗಿ, ೧೫ ಸಂಪುಟಗಳು ಕರ್ನಾಟಕ ಸರಕಾರದ ಮೂಲಕ ಪ್ರಕಟವಾಗುತ್ತಲಿವೆ. ಸುಮಾರು ೧೧೦ ಜನ ಪ್ರಕ್ಷಿಪ್ತ ವಚನಕಾರರನ್ನೂ ಪ್ರಕ್ಷಿಪ್ತವಾಗಿರಬಹುದಾದ ಅನೇಕ ವಚನಗಳನ್ನೂ ಕೈಬಿಟ್ಟು ಸಂಯೋಜಿಸಲಾದ ಈ ಹದಿನೈದು ಸಂಪುಟಗಳ ಒಟ್ಟು ಪುಟ ಸುಮಾರು ಹತ್ತು ಸಾವಿರ; ಒಟ್ಟು ವಚನ ಸಂಖ್ಯೆ ಸುಮಾರು ಇಪ್ಪತ್ತು ಸಾವಿರ. ವಚನಸಾಹಿತ್ಯವನ್ನು ಒಮ್ಮೆ ಸಮಗ್ರವಾಗಿ ಹೊರತಂದ ಪ್ರಥಮ ಮಹತ್ವಾಕಾಂಕ್ಷೆಯ ಯೋಜನೆಯಿದು. ಈ ಸಾಹಿತ್ಯದ ಗಡಿಗೆರೆಗಳನ್ನು, ಸಂಖ್ಯಾಬಾಹುಳ್ಯವನ್ನು ವ್ಯವಸ್ಥೆಗೊಳಿಸಿ ಕೊಟ್ಟು, ವಿದ್ವಾಂಸರ ಅಧ್ಯಯನದ ಮುಂದುವರಿಕೆಗೆ ಒಂದು ನಿರ್ದಿಷ್ಟ ಚೌಕಟ್ಟನ್ನು ಒದಗಿಸಿದ ಹಿರಿಮೆ ಈ ಯೋಜನೆಗೆ ಸಲ್ಲುತ್ತದೆ. {{gap}}ಈ ಯೋಜನೆಯ ಅಂಗವಾಗಿ ಬಸವಣ್ಣನವರ ವಚನ, ಪ್ರಭುದೇವರ ವಚನ, ಚೆನ್ನಬಸವಣ್ಣನವರ ವಚನ, ಸಿದ್ಧರಾಮೇಶ್ವರ ವಚನ, ಶಿವಶರಣೆಯರ ವಚನ - ಹೀಗೆ ಐದು ಸಂಪುಟಗಳು, ಬಸವ ಸಮಕಾಲೀನ ಮಿಕ್ಕ ಶರಣರ ವಚನಗಳ ನಾಲ್ಕು ಸಂಪುಟಗಳು, ೧. ಮೊದಲು ಪ್ರಕಟವಾದ ವಚನಕೃತಿ ಅಖಂಡೇಶ್ವರ ವಚನ (೧೮೮೨)ಎಂದು ಡಾ. ಬಿ. ನಂಜುಂಡ ಸ್ವಾಮಿ ಅವರ ಅಭಿಪ್ರಾಯ. (ಬಸವಪಥ ೧೬.೬) ೨. ಬಸವಣ್ಣನವರ ಷಟ್ಟಲದ ವಚನಗಳು ಪ್ರಥಮ ಸಲ ಬೆಳಕುಕಂಡುದು ೧೮೮೬ರಲ್ಲಿಯೆಂದು ಡಾ. ಬಿ. ನಂಜುಂಡಸ್ವಾಮಿ ಹೇಳುತ್ತಾರೆ. (ಬಸವಪಥ ೧೫-೫ ಪು. ೪೫)<noinclude></noinclude> b2izqg8qeudo01cm81vfcs41iaap926 ಪುಟ:ಬಸವಣ್ಣನವರ ವಚನಸಂಪುಟ - ೧.pdf/೨೧ 104 94504 322251 247129 2026-05-24T15:15:17Z Pragathi. BH 7585 /* Validated */ 322251 proofread-page text/x-wiki <noinclude><pagequality level="4" user="Pragathi. BH" /></noinclude>6 ಬಸವೋತ್ತರ ಕಾಲೀನ ಶರಣರ ವಚನಗಳ ಐದು ಸಂಪುಟಗಳು ಮತ್ತು ಒಂದು ವಚನ ಪರಿಭಾಷಾಕೋಶ - ಹೀಗೆ ಹದಿನೈದು ಸಂಪುಟಗಳು ಬೆಳಕುಕಾಣುತ್ತಲಿವೆ. ಇವುಗಳಲ್ಲಿ ಮೊದಲಿನ ಐದು ಸಂಪುಟಗಳು (ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಸಿದ್ಧರಾಮ, ಶಿವಶರಣೆಯರು) ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯದ ಮೂಲಕ ಪ್ರಕಟವಾಗಿದ್ದವು. ಆ ಬಳಿಕ ಲಭ್ಯವಾದ ನೂರಾರು ಹೊಸ ವಚನಗಳನ್ನು ಸೇರಿಸಿ, ಈ ಐದೂ ಸಂಪುಟಗಳಿಗೆ ಸಮಗ್ರರೂಪ ಕೊಟ್ಟಿದ್ದೇವೆ ಮತ್ತು ಪರಿಷ್ಕರಿಸಿದ್ದೇವೆ. {{gap}}ಬಸವ ಸಮಕಾಲೀನ ಮಿಕ್ಕ ಶರಣರ ನಾಲ್ಕು ಸಂಪುಟಗಳ ಕೆಲಸ ಈವರೆಗೆ ಸಮರ್ಪಕವಾಗಿ ನಡೆದಿರಲಿಲ್ಲ. ಈ ಶರಣರ ಸಂಖ್ಯೆ, ಇವರ ವಚನಸಂಖ್ಯೆ ಅಸ್ಪಷ್ಟವಾಗಿಯೇ ಉಳಿದಿದ್ದಿತು. ವಚನಗಳೂ ಅಲ್ಲಿಷ್ಟು, ಇಲ್ಲಿಷ್ಟು ಪ್ರಕಟವಾಗಿದ್ದವು. ಒಂದಿಷ್ಟು ಆಪ್ರಕಟಿತ ಸ್ಥಿತಿಯಲ್ಲಿಯೇ ಉಳಿದುಬಿಟ್ಟಿದ್ದವು. ಇವೆಲ್ಲವುಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಈ ನಾಲ್ಕೂ ಸಂಪುಟಗಳಿಗೆ ಸಮಗ್ರ ರೂಪ ಕೊಟ್ಟಿದ್ದೇವೆ. ಒಟ್ಟಿನಲ್ಲಿ ಬಸವಯುಗದ ಈ ಎಲ್ಲ ಒಂಬತ್ತು ಸಂಪುಟಗಳಿಗೆ ಸುಮಾರು ಸಾವಿರದಷ್ಟು ಹೊಸ ವಚನಗಳನ್ನು ಸೇರಿಸಿದ್ದೇವೆ. {{gap}}ಬಸವೋತ್ತರ ಕಾಲೀನ ಶರಣರ ಸಂಪುಟಗಳ ಕೆಲಸ ಇನ್ನೂ ಅಲಕ್ಷಿತವಾಗಿದ್ದಿತು. ಈವರೆಗೆ ತಿಳಿದುಬಂದಿದ್ದ ವಚನಕಾರರ ಹೊಸ ವಚನಗಳನ್ನು ಶೋಧಿಸುವುದರೊಂದಿಗೆ, ಅನೇಕ ಹೊಸ ವಚನಕಾರರನ್ನೂ ಬೆಳಕಿಗೆ ತಂದಿದ್ದೇವೆ. ಇದರಿಂದಾಗಿ ಬಸವೋತ್ತರಯುಗದ ಶರಣರನ್ನೂ ಅವರ ವಚನಗಳ ವ್ಯಾಪ್ತಿಯನ್ನೂ ಜನತೆಯ ಮುಂದಿಟ್ಟ ಪ್ರಥಮ ಕೀರ್ತಿ ಈ ಐದು ಸಂಪುಟಗಳಿಗೆ ಸಲ್ಲುತ್ತದೆ. ಹೀಗೆ ಬಸವಯುಗ, ಬಸವೋತ್ತರಯುಗಗಳ ವಚನಸಾಹಿತ್ಯಕ್ಕೆ ಸಂಬಂಧಪಟ್ಟ ಎಲ್ಲ ಕೊರತೆಗಳನ್ನು ತುಂಬಿಕೊಡುವ ಒಂದು ಪರಿಪೂರ್ಣ ಯೋಜನೆ ಇದಾಗಿದೆ. ಮೊದಲ ಬಾರಿಗೆ ೧೯ನೆಯ ಶತಮಾನದವರೆಗಿನ ಎಲ್ಲ ಶರಣರ ಎಲ್ಲ ವಚನಗಳನ್ನು ಒಂದೆಡೆ ಸಂಗ್ರಹಿಸಿ, ಒಂದು ಕ್ರಮಕ್ಕೆ ಅಳವಡಿಸಿ, ಸಂಪುಟ ಶ್ರೇಣಿಯಲ್ಲಿ ಹೊರತಂದ ದೊಡ್ಡಪ್ರಯತ್ನ ಇಲ್ಲಿದೆ. {{gap}}ವಚನಸಾಹಿತ್ಯದ ಪರಿಷ್ಕರಣಕಾರ ತುಂಬ ಜಟಿಲವಾದುದು. ೧. ಎಲ್ಲ ಶರಣರ ಎಲ್ಲ ವಚನಗಳನ್ನು ಎಲ್ಲ ಪ್ರಾಚೀನ ಆಕರಗಳಿಂದ ಸಂಗ್ರಹಿಸುವುದು, ೨. ಪ್ರಕ್ಷಿಪ್ತವಾಗಿರ ಬಹುದಾದ ವಚನಕಾರರನ್ನು, ವಚನಗಳನ್ನು ಕೈಬಿಡುವುದು, ೩. ನಿಜವಚನಗಳ ಪಾಠವನ್ನು ಪರಿಷ್ಕರಿಸುವುದು - ಇದು ಈ ಯೋಜನೆಯ ಉದ್ದೇಶವಾಗಿದೆ. ಈ ಉದ್ದೇಶ ಸಾಧನೆಗಾಗಿ ಎಲ್ಲ ಪ್ರಾಚೀನ ಆಕರಗಳಿಂದ ಅಂದರೆ ಸುಮಾರು ೧೦೮ ಆಕರಗಳಿಂದ ಎಲ್ಲ ವಚನಗಳನ್ನು ಸಂಗ್ರಹಿಸಿ, ಪ್ರತಿಯೊಂದು ವಚನದ ಕೆಳಗೆ ಅದರ ಎಲ್ಲ ಆಕರಗಳನ್ನು ನಮೂದಿಸಿದ 'ವಚನ ಬ್ಯಾಂಕ'ನ್ನು ಅಸ್ತಿತ್ವಕ್ಕೆ ತರಲಾಯಿತು. ಒಂದು ವಚನಕ್ಕೆ ಇರುವ ವಿವಿಧ ಪಾಠಾಂತರ, ರೂಪಾಂತರಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು, ಮುದ್ರಿಕೆಯ ವ್ಯತ್ಯಾಸವನ್ನು ಗಮನಿಸಲು, ಒಬ್ಬ ವಚನಕಾರನ ಒಟ್ಟು ವಚನಗಳ ಸಂಖ್ಯೆಯನ್ನು ನಿರ್ಧರಿಸಲು, ಕೊನೆಯದಾಗಿ ವಚನದ ನಿಜಪಾಠವನ್ನು ನಿರ್ಣಯಿಸಲು ಈ ಬ್ಯಾಂಕ್ ತುಂಬ ನೆರವಾಯಿತು.<noinclude></noinclude> tf7qh2v7umvhv1u77p3mluck9xfruot ಪುಟ:ಬಸವಣ್ಣನವರ ವಚನಸಂಪುಟ - ೧.pdf/೨೨ 104 94505 322252 247133 2026-05-24T15:15:41Z Pragathi. BH 7585 /* Validated */ 322252 proofread-page text/x-wiki <noinclude><pagequality level="4" user="Pragathi. BH" /></noinclude>{{gap}}ಇವು ಜನಪ್ರಿಯ ಆವೃತ್ತಿಗಳಾಗಿರುವುದರಿಂದ ಲಭ್ಯವಿರುವ ಪಾಠಾಂತರಗಳಲ್ಲಿ ಯೋಗ್ಯವಾದುದನ್ನು ಸ್ವೀಕರಿಸಿ, ಅನ್ಯಪಾಠಗಳನ್ನು ಅಡಿಯಲ್ಲಿ ನಮೂದಿಸದೆ ಕೈಬಿಟ್ಟಿದ್ದೇವೆ. ಜನಸಾಮಾನ್ಯರ ಅನುಕೂಲತೆಗಾಗಿ ಶಕಟರೇಫೆಗೆ ಬದಲು ರೇಫೆ ಇಟ್ಟುಕೊಂಡಿದ್ದೇವೆ. ಅಭ್ಯಾಸಿಗಳ ಉಪಯೋಗ ದೃಷ್ಟಿಯಿಂದ ಕಠಿಣ ಪದಕೋಶ, ಅಕಾರಾದಿ, ಆಕರಸೂಚಿಗಳನ್ನು ಅನುಬಂಧದಲ್ಲಿ ಕೊಟ್ಟಿದ್ದೇವೆ. ಹೆಚ್ಚಿನದಾಗಿ ಪಾರಿಭಾಷಿಕ ಪದಗಳ ಒಂದು ಸ್ವತಂತ್ರ ಕೋಶವನ್ನೇ ಪ್ರಕಟಿಸಿದ್ದೇವೆ. ಒಟ್ಟಿನಲ್ಲಿ, ಇವು ಜನಪ್ರಿಯ ಆವೃತ್ತಿಗಳಾದರೂ ವಿದ್ವಜ್ಜನಪ್ರಿಯ ಆವೃತ್ತಿಗಳೂ ಆಗಬೇಕೆಂಬ ಆದರ್ಶದಲ್ಲಿ ಈ ಸಂಪುಟಗಳನ್ನು ರೂಪಿಸಲು ಪ್ರಯತ್ನಿಸಿದ್ದೇವೆ. <center><big>'''ಕೃತಜ್ಞತೆ'''</big></br> {{gap}}ವಿಶ್ವವಿದ್ಯಾಲಯದಂಥ ಶಿಕ್ಷಣ ಸಂಸ್ಥೆಗಳು, ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯಂಥ ಸಾರ್ವಜನಿಕ ಸಂಸ್ಥೆಗಳು, ವೀರಶೈವ ಮಠಗಳಂಥ ಧಾರ್ಮಿಕ ಸಂಸ್ಥೆಗಳು, ಡಾ. ಫ. ಗು. ಹಳಕಟ್ಟಿಯವರಂಥ ವಿದ್ವಾಂಸ ವ್ಯಕ್ತಿಗಳು ನಿರಂತರ ದುಡಿದರೂ ವಚನಸಾಹಿತ್ಯ ಪೂರ್ಣಪ್ರಮಾಣದಲ್ಲಿ ಪ್ರಕಟವಾಗಲು ಒಂದುನೂರು ವರ್ಷ ಹಿಡಿದುದು ಅದರ ಗಾತ್ರಬಾಹುಳ್ಯಕ್ಕೆ ಸಾಕ್ಷಿಯಾಗಿದೆ. ನೂರುವರ್ಷ ದುಡಿದು, ಸಾಮಗ್ರಿಯನ್ನು ಪ್ರಕಟಿಸಿದ ಈ ಎಲ್ಲ ವ್ಯಕ್ತಿ-ಸಂಸ್ಥೆಗಳಿಗೆ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು ಸಲ್ಲುತ್ತವೆ. </br> {{gap}}ಈ ಯೋಜನೆಯ ಕಾರ್ಯಾಲಯ ಅಸ್ತಿತ್ವಕ್ಕೆ ಬಂದು ಕೆಲಸ ಪ್ರಾರಂಭವಾದದ್ದು ಅಕ್ಟೋಬರ್ ೧೫, ೧೯೮೮ರಂದು, ಹಸ್ತಪ್ರತಿಗಳು ಅಚ್ಚಿಗೆ ಹೋದದ್ದು ೧೬ ಮಾರ್ಚ್ ೧೯೯೦ರಂದು. ಹೀಗೆ ಮೊದಲೇ ಯೋಜಿಸಿದಂತೆ ಎರಡು ವರ್ಷಗಳ ನಿರ್ದಿಷ್ಟ ಅವಧಿಯಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಪ್ರತಿಯೊಂದು ಹಂತದಲ್ಲಿಯೂ ಈ ಯೋಜನೆ ಸಕ್ರಮವಾಗಿ ಮುನ್ನಡೆಯುವುದಕ್ಕಾಗಿ 'ಸಂಪಾದಕ ಮಂಡಳಿ'ಯ ಸದಸ್ಯರಾದ ಡಾ. ಎಂ. ಚಿದಾನಂದಮೂರ್ತಿ, ಡಾ. ಸಿ. ಪಿ. ಕೃಷ್ಣಕುಮಾರ, ಡಾ. ಎಸ್. ವಿದ್ಯಾಶಂಕರ, ಶ್ರೀ ಎಸ್. ಶಿವಣ್ಣ ಅವರು ಉದ್ದಕ್ಕೂ ಬೆಲೆಯುಳ್ಳ ಸಲಹೆ-ಮಾರ್ಗದರ್ಶನ ನೀಡಿದ್ದಾರೆ. ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರು ಆರಂಭದ ಕೆಲವು ತಿಂಗಳು ಸಂಪಾದಕ ಮಂಡಳಿಯ ಸದಸ್ಯರಾಗಿ, ವಿಶ್ವಾಸದಿಂದ ನೆರವಾಗಿದ್ದಾರೆ. ಸಂಪಾದಕ ಮಿತ್ರರಾದ ಡಾ. ಬಿ. ವಿ. ಮಲ್ಲಾಪುರ, ಡಾ. ಎಸ್. ವಿದ್ಯಾಶಂಕರ, ಡಾ. ವಿ. ಬಿ. ರಾಜೂರ, ಡಾ. ಬಿ. ಆರ್. ಹಿರೇಮಠ, ಶ್ರೀ ಎಸ್. ಶಿವಣ್ಣ ತುಂಬ ಶ್ರಮ-ಶ್ರದ್ಧೆಗಳಿಂದ ಸಂಪಾದನ ಕೆಲಸ ಪೂರೈಸಿದ್ದಾರೆ. ಸಹಾಯಕ ಸಂಶೋಧಕರಾದ ಶ್ರೀಮತಿ ವಿಜಯಶ್ರೀ ಹಿರೇಮಠ, ಶ್ರೀ ಶ್ರೀ ವಾಯ್. ಎಂ. ಯಾಕೊಳ್ಳಿ, ಶ್ರೀ ಬಿ. ವಿ. ಕೋರಿ ಅವರು ದಣಿವನ್ನು ಲೆಕ್ಕಿಸದೆ ದುಡಿದಿದ್ದಾರೆ.ಇವರೆಲ್ಲರಿಗೆ ನಾವು ಕೃತಜ್ಞರಾಗಿದ್ದೇವೆ. </br> {{gap}}ಈ ಯೋಜನೆಯನ್ನು ಅನುದಾನ ಮಾಡಿದ ಕರ್ನಾಟಕ ಸರಕಾರದ ಔದಾರ್ಯಕ್ಕೆ ನಮ್ಮ ಅಭಿನಂದನೆಗಳು ಸಲ್ಲುತ್ತವೆ. ಈ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಶ್ರೀ ರಾಮಕೃಷ್ಣ ಹೆಗಡೆ, ಶ್ರೀ ಎಸ್. ಆರ್. ಬೊಮ್ಮಾಯಿ, ಶ್ರೀ ವೀರೇಂದ್ರ ಪಾಟೀಲ, ಶ್ರೀ ಎಸ್. ಬಂಗಾರಪ್ಪ ಅವರಿಗೂ, ಸಾಹಿತಿಗಳೂ ಸಾಹಿತ್ಯ-ಸಂಸ್ಕೃತಿಗಳ ಗಾಢ ಆಸಕ್ತರೂ<noinclude></noinclude> 3c825vx26ia8i4bcmdrwddv5j4odirf ಪುಟ:ಬಸವಣ್ಣನವರ ವಚನಸಂಪುಟ - ೧.pdf/೨೩ 104 94506 322253 247135 2026-05-24T15:16:02Z Pragathi. BH 7585 /* Validated */ 322253 proofread-page text/x-wiki <noinclude><pagequality level="4" user="Pragathi. BH" /></noinclude></br> ಆಗಿರುವ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಎಂ. ವೀರಪ್ಪ ಮೊಯಿಲಿ ಅವರಿಗೂ ಋಣಿಯಾಗಿದ್ದೇವೆ.</br> {{gap}}ಈ ಯೋಜನೆ ಅಸ್ತಿತ್ವಕ್ಕೆ ಬರುವಲ್ಲಿ ವಿಶೇಷ ಆಸಕ್ತಿ ವಹಿಸಿದವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಚಿವರಾಗಿದ್ದ ಶ್ರೀ ಎಂ. ಪಿ. ಪ್ರಕಾಶ ಅವರು. ಸಾಹಿತ್ಯ-ಸಂಸ್ಕೃತಿಗಳ ಬಗ್ಗೆ ಅನನ್ಯ ಪ್ರೀತಿ-ಗೌರವ ಬೆಳೆಸಿಕೊಂಡಿರುವ ಶ್ರೀಯುತರಿಗೆ ನಾವು ಕೃತಜ್ಞರಾಗಿದ್ದೇವೆ. ಆಮೇಲೆ ಈ ಇಲಾಖೆಗೆ ಸಚಿವರಾಗಿ ಬಂದ ಶ್ರೀ ಎಂ. ವೀರಪ್ಪ ಮೊಯಿಲಿ, ಶ್ರೀ ಕೆ. ಎಚ್. ರಂಗನಾಥ, ಶ್ರೀ ಎಸ್. ರಮೇಶ್, ಇಂದಿನ ಸಚಿವರಾದ ಮಾನ್ಯ ಶ್ರೀ ಎಚ್. ವಿಶ್ವನಾಥ್ ಅವರಿಗೆ ನಮ್ಮ ಗೌರವಗಳು ಸಲ್ಲುತ್ತವೆ.</br> {{gap}}ಈ ಪ್ರಸಂಗದಲ್ಲಿ ಆತ್ಮೀಯ ಆಡಳಿತ ನಿರ್ದೇಶನ ಮಾಡಿದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಅಂದಿನ ನಿರ್ದೇಶಕರಾಗಿದ್ದ ಶ್ರೀ ಐ. ಎಂ. ವಿಠಲಮೂರ್ತಿ, ಶ್ರೀ ಬಿ. ಪಾರ್ಥಸಾರಥಿ, ಕಮಿಷನರ್ ಡಾ. ಪಿ. ಎಸ್. ರಾಮಾನುಜಂ, ಇಂದಿನ ಕಮಿಷನರ್‌ರಾದ ಶ್ರೀ ಪಿ. ಎಸ್. ವಿ. ರಾವ್ ಅವರನ್ನೂ ಅಧಿಕ ನಿರ್ದೇಶಕರಾದ ಶ್ರೀ ಕೆ. ದೇವರಸಯ್ಯ, ಉಪನಿರ್ದೇಶಕರಾದ ಶ್ರೀ ಕಾ. ತ. ಚಿಕ್ಕಣ್ಣ ಅವರನ್ನೂ ನೆನೆಯುವುದು ಪ್ರೀತಿಯ ವಿಷಯವಾಗಿದೆ.</br> {{gap}}ಇಂಥ ಒಂದು ಬೃಹತ್ ಯೋಜನೆಗೆ ಕಾರ್ಯಾಲಯವೊಂದು ಅತ್ಯವಶ್ಯ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಈ ಅವಕಾಶ ಕಲ್ಪಿಸಿಕೊಟ್ಟ ಕರ್ನಾಟಕ ವಿಶ್ವವಿದ್ಯಾಲಯದ ಅಂದಿನ ಕುಲಪತಿ ಡಾ. ಜಿ. ಕೆ. ನಾರಾಯಣರೆಡ್ಡಿ, ಇಂದಿನ ಕುಲಪತಿ ಡಾ. ಎಸ್. ರಾಮೇಗೌಡ ಅವರ ಔದಾರ್ಯವನ್ನು, ಪೀಠದ ಮುಖ್ಯಸ್ಥರ ಸಹಕಾರವನ್ನು ಕೃತಜ್ಞತೆಯಿಂದ ನೆನೆಯುತ್ತೇವೆ.</br> {{gap}}ಇದು ಒಂದು ದೊಡ್ಡ ಯೋಜನೆ. ಇದರ ಸಂಪಾದನೆಯ ಸಮಸ್ಯೆಗಳೂ ದೊಡ್ಡವು. ಪಾಠಾಂತರ, ರೂಪಾಂತರ, ಪ್ರಕ್ಷಿಪ್ತತೆ ಇತ್ಯಾದಿಗಳ ದಾಳಿಗೆ ಗುರಿಯಾಗುತ್ತ ಬಂದ ವ್ಯಾಪಕ ಪ್ರಮಾಣದ ಈ ಸಾಹಿತ್ಯವನ್ನು ಒಂದೆಡೆ ಸಂಗ್ರಹಿಸುವುದು, ಪುನರುಕ್ತಿಗಳನ್ನು ಗುರುತಿಸುವುದು, ಮುದ್ರಿಕೆ ಪಲ್ಲಟಗಳನ್ನು ಸರಿಪಡಿಸುವುದು, ಪ್ರಕ್ಷಿಪ್ತಗಳನ್ನು ದೂರೀಕರಿಸುವುದು, ಕೊನೆಯದಾಗಿ ವಚನಗಳನ್ನು ಶುದ್ದೀಕರಿಸುವುದು - ಎಂಥವರನ್ನೂ ಧೈಯ್ಯಗೆಡಿಸುವ ಕೆಲಸ. ಹೀಗಿದ್ದೂ ವಚನಸಾಹಿತ್ಯದ ಮೇಲಿನ ಗೌರವ, ಕೆಲಸದ ಮೇಲಿನ ಪ್ರೀತಿಗಳು ನಮ್ಮಿಂದ ಈ ಕಾರ ಮಾಡಿಸಿವೆ. ನಮ್ಮ ಶಕ್ತಿಗೆ ಮೀರಿ ಉಳಿದಿರಬಹುದಾದ ದೋಷಗಳನ್ನು ಮನ್ನಿಸಬೇಕೆಂದು ಕೋರುತ್ತ, ಎರಡು ವರ್ಷ ರಾತ್ರಿಯನ್ನೂ ಹಗಲುಮಾಡಿ ದುಡಿದು ರೂಪಿಸಿದ ಈ ಹದಿನೈದು ಸಂಪುಟಗಳನ್ನು ಸಹೃದಯಲೋಕಕ್ಕೆ ಅರ್ಪಿಸುತ್ತೇವೆ. 'ಶಿವಶರಣರ ಸಮಗ್ರ ವಚನಸಾಹಿತ್ಯ' ಸುಲಭ ಬೆಲೆಯಲ್ಲಿ ಕನ್ನಡಿಗರ ಮನೆ-ಮನಗಳನ್ನು ಬೆಳಗಲೆಂದು ಹಾರೈಸುತ್ತೇವೆ.<noinclude></noinclude> c3v4qe03j129x93tdxgh4ooiz8gem0t ಪುಟ:ಬಸವಣ್ಣನವರ ವಚನಸಂಪುಟ - ೧.pdf/೨೪ 104 94507 322254 247138 2026-05-24T15:17:03Z Pragathi. BH 7585 /* Validated */ 322254 proofread-page text/x-wiki <noinclude><pagequality level="4" user="Pragathi. BH" /></noinclude></br> <center><big>'''ದ್ವಿತೀಯ ಆವೃತ್ತಿ'''</big> {{gap}}ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಸಂಪುಟಗಳು ೧೯೯೩ರಲ್ಲಿ ಪ್ರಕಟವಾಗಿ, ಒಂದು ವರ್ಷ ಕಳೆಯುವಷ್ಟರಲ್ಲಿ ಮಾರಾಟವಾದವು. ಕರ್ನಾಟಕ ಸರಕಾರದ ಗ್ರಂಥಪ್ರಕಟನೆಯ ಇತಿಹಾಸದಲ್ಲಿಯೇ ಈ ಬಗೆಯ ಮಾರಾಟ ಒಂದು ದಾಖಲೆ. ಜನತೆಯ ಅಪಾರ ಬೇಡಿಕೆಯನ್ನು ಗಮನಿಸಿ, ಈಗ ಪರಿಷ್ಕೃತ ದ್ವಿತೀಯ ಆವೃತ್ತಿಯನ್ನು ಪ್ರಕಟಿಸುತ್ತಿದ್ದೇವೆ. ಇತ್ತೀಚೆಗೆ ಲಭ್ಯವಾದ ಸುಮಾರು ಒಂದು ಸಾವಿರ ಹೊಸವಚನಗಳನ್ನು ಸೇರಿಸುವ, ಮೊದಲ ಆವೃತ್ತಿಯ ವಚನಪಾಠವನ್ನು ಮತ್ತೆ ಪರಿಷ್ಕರಿಸುವ ಮೂಲಕ ಮೊದಲಿನ ೧೪ ಸಂಪುಟಗಳನ್ನು ಸಮಗ್ರವಾಗಿ ಮತ್ತೆ ರೂಪಿಸಿದ್ದೇವೆ. ೧೫ನೆಯ ಸಂಪುಟ (ಪರಿಭಾಷಾಕೋಶ) ವನ್ನು ಹೊಸದಾಗಿ ಸಿದ್ಧಪಡಿಸಿದ್ದೇವೆ. ಹೊಸ ವಿಚಾರ, ಶೋಧಗಳ ಬೆಳಕಿನಲ್ಲಿ ಸಂಪಾದಕೀಯ, ಪ್ರಸ್ತಾಪವನೆಗಳನ್ನು ಸೂಕ್ತ ರೀತಿಯಲ್ಲಿ ಪರಿಷ್ಕರಿಸಿದ್ದೇವೆ.</br> {{gap}}ಈ ಆವೃತ್ತಿ ಬೆಳಕು ಕಾಣಲು ವಿಶೇಷ ಆಸಕ್ತಿ ವಹಿಸಿದ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಎಸ್. ಎಂ. ಕೃಷ್ಣ ಅವರಿಗೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಮಾನ್ಯ ಶ್ರೀಮತಿ ರಾಣಿ ಸತೀಶ್ ಅವರಿಗೂ ನಾವು ಋಣಿಯಾಗಿದ್ದೇವೆ. ಈ ಕೆಲಸ ನಿರ್ದಿಷ್ಟ ಕಾಲಾವಧಿಯಲ್ಲಿ ಪೂರ್ಣಗೊಳ್ಳುವಂತೆ ನೋಡಿಕೊಂಡ ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಕೆ. ಸಿ. ರಾಮಮೂರ್ತಿ ಅವರಿಗೂ ಅವರ ಸಿಬ್ಬಂದಿ ವರ್ಗಕ್ಕೂ, ಮಾರ್ಗದರ್ಶನ ಮಾಡಿ ಸಂಪುಟಗಳ ಉತ್ತಮಿಕೆ ಕಾರಣರಾದ ಸಂಪಾದಕ ಮಂಡಲದ ಸದಸ್ಯರಿಗೂ, ಸಂಸ್ಕೃತ ಶ್ಲೋಕಗಳನ್ನು ಪರಿಷ್ಕರಿಸಿಕೊಟ್ಟ ಮೈಸೂರಿನ ಪೂಜ್ಯ ಶ್ರೀ ಇಮ್ಮಡಿ ಶಿವಬಸವಸ್ವಾಮಿಗಳು ಕುಂದೂರುಮಠ ಅವರಿಗೂ, ೧೫ನೆಯ ಪರಿಭಾಷಾ ಸಂಪುಟವನ್ನು ಹೊಸದಾಗಿ ರೂಪಿಸಿಕೊಟ್ಟ ಡಾ. ಎನ್. ಜಿ. ಮಹಾದೇವಪ್ಪ ಅವರಿಗೂ ನಮ್ಮ ವಂದನೆಗಳು ಸಲ್ಲುತ್ತವೆ. ಹತ್ತು ಸಾವಿರ ಪುಟಗಳ, ಹದಿನೈದು ಸಂಪುಟಗಳ ಪ್ರಕಟನೆ ಸುಲಭದ ಕೆಲಸವೇನಲ್ಲ. ಸಾಹಿತ್ಯದ ಮೇಲಿನ, ಅದರಲ್ಲಿಯೂ ವಚನಸಾಹಿತ್ಯದ ಮೇಲಿನ ಪ್ರೀತಿ ಕಾರಣವಾಗಿ ಪುಸ್ತಕ ಪ್ರಾಧಿಕಾರದ ಮೂಲಕ ಪ್ರಕಟಿಸಿದ ಅಧ್ಯಕ್ಷರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ನಾವು ಋಣಿಯಾಗಿದ್ದೇವೆ.</br> {{gap}}ಮೊದಲ ಆವೃತ್ತಿಯಲ್ಲಿ ಉಳಿದುಕೊಂಡಿದ್ದ ಕೊರತೆ, ದೋಷಗಳನ್ನು ಕಷ್ಟಪಟ್ಟು ಹುಡುಕಿ, ನಮಗೆ ಪೂರೈಸಿದ ತುಮಕೂರಿನ ಶ್ರೀ ಎಂ. ಚಂದ್ರಪ್ಪ ಅವರಿಗೂ, ಬೆಂಗಳೂರಿನ ಶ್ರೀ ಎಸ್. ಶಿವಣ್ಣ ಅವರಿಗೂ ನಾವು ಕೃತಜ್ಞರಾಗಿದ್ದೇವೆ.<noinclude></noinclude> 10stba621rgkqizehgw3e7rjcuuh4m6 ಪುಟ:ಬಸವಣ್ಣನವರ ವಚನಸಂಪುಟ - ೧.pdf/೨೫ 104 94508 322255 249698 2026-05-24T15:17:20Z Pragathi. BH 7585 /* Validated */ 322255 proofread-page text/x-wiki <noinclude><pagequality level="4" user="Pragathi. BH" /></noinclude><center>*</br> <center><big><big>'''ಪ್ರಸ್ತಾವನೆ'''</big></big> <hr> {{gap}}ಕನ್ನಡ ನೆಲದ ಮೇಲೆ ಪ್ರಥಮ ಸಮಾಜೋಧಾರ್ಮಿಕ ಆಂದೋಲನವೊಂದು ಹನ್ನೆರಡನೆಯ ಶತಮಾನದಲ್ಲಿ ಜರುಗಿತು. ಈ ಆಂದೋಲನದ ನಾಯಕವ್ಯಕ್ತಿ ಬಸವಣ್ಣ.</br> {{gap}}ಬಸವಣ್ಣ ಬಾಳಿದ್ದು ಕನ್ನಡ ನಾಡಿನಲ್ಲಿ. ಬರೆದದ್ದು ಕನ್ನಡ ಭಾಷೆಯಲ್ಲಿ. ಈ ಪರಿಮಿತಿ ಕಾರಣವಾಗಿ ಇವನಿಗೆ ನ್ಯಾಯವಾಗಿ ಸಿಗಬೇಕಾದ ಜಾಗತಿಕ ಪ್ರಸಿದ್ದಿ ಇನ್ನೂ ಸಿಕ್ಕಿಲ್ಲವಾದರೂ, ಇವನಷ್ಟು ಸಾಹಿತ್ಯ, ಕನ್ನಡದಲ್ಲಿ ಯಾರನ್ನೂ ಕುರಿತು ಹುಟ್ಟಿಲ್ಲ: ಇವನಷ್ಟು ಪ್ರಭಾವವನ್ನು ಕರ್ನಾಟಕದ ಮೇಲೆ ಯಾವ ಧಾರ್ಮಿಕ ಮಹಾಪುರುಷನೂ ಬೀರಿಲ್ಲ.</br> {{gap}}ಜಾಗತಿಕ ಸಂಸ್ಕೃತಿಗೆ ಘನತೆಯನ್ನು ತಂದುಕೊಡುವವರೆಂದರೆ ತಮ್ಮ ವ್ಯಕ್ತಿತ್ವವನ್ನು ಉದಾತ್ತೀಕರಿಸಿಕೊಂಡ ಮಹಾಪುರುಷರು: ಮತ್ತು ತಮ್ಮ ಪರಿಸರವನ್ನು ಉದಾತ್ತೀಕರಿಸುವ ಯುಗಪುರುಷರು. ಈ ಎರಡನ್ನೂ ಸಾಧಿಸುವ ಮೂಲಕ ಬಸವಣ್ಣ ಕೇವಲ ಮಹಾಪುರುಷನಾಗಿ ಉಳಿಯದೆ, ಯುಗಪುರುಷನಾಗಿಯೂ ಬೆಳೆದಿದ್ದಾನೆ. ಸಾಮಾನ್ಯವಾಗಿ ಯುಗಪುರುಷರು ಸಾಮಾಜಿಕ, ಧಾರ್ಮಿಕ, ಸಾಹಿತ್ಯಕ- ಹೀಗೆ ಜೀವನದ ಯಾವುದೋ ಒಂದು ಕ್ಷೇತ್ರಕ್ಕೆ ಹೊಸ ತಿರುವು ತಂದುಕೊಡುತ್ತಾರೆ. ಬಸವಣ್ಣ ಇಂಥ ಎಲ್ಲ ಕ್ಷೇತ್ರಗಳಿಗೂ ಹೊಸ ತಿರುವು ಕೊಟ್ಟ ಕಾರಣ. ಅವನು ಒಂದು ಕ್ಷೇತ್ರದ ಯುಗಪುರುಷನೆನಿಸದೆ. ಜೀವನದ ಎಲ್ಲ ಕ್ಷೇತ್ರಗಳ 'ಯುಗಪುರುಷ' ನೆನಿಸಿದ್ದಾನೆ. ಹೀಗಾಗಿ ಅವನನ್ನು ಜಗತ್ತು ಕಂಡ ಒಬ್ಬ ಅಪರೂಪದ 'ಸಮಗ್ರ ಯುಗಪುರುಷ'ನೆಂದು ಗುರುತಿಸಲಾಗುತ್ತಿದೆ.</br> {{gap}}ಬಸವಪೂರ್ವಯುಗವೆಂಬುದು ಕರ್ನಾಟಕದ ಇತಿಹಾಸದಲ್ಲಿ ಪತನ ವೈಭವದ ಕಾಲವಾಗಿದ್ದಿತು. ಅಂದು ರಾಜಸತ್ತೆ, ಮತಸತ್ತೆ, ಪುರುಷಸತ್ತೆಗಳು ಸಮಾಜವನ್ನು ನಿಯಂತ್ರಿಸುವ ಶಕ್ತಿಯಾಗಿದ್ದವು. ಇವುಗಳಲ್ಲಿ “ ರಾಜಸತ್ತೆ "ಯ ಪೋಷಣೆಗಾಗಿ ಯುದ್ಧದಲ್ಲಿ ತೊಡಗುವುದು. ದುಡಿದು ಸುಂಕ ತೆರುವುದು ಅಂದಿನ ಪ್ರಜೆಗಳ ಸ್ಥಿತಿಯಾಗಿದ್ದಿತು. * ಮತಸತ್ತೆ " ಯ ಹೆಸರಿನಲ್ಲಿ ಶಿಷ್ಟ ಪದ ಮತ್ತು ಜಾನಪದ ಧರ್ಮಗಳ ಮುಖಂಡರು ಭಕ್ತರನ್ನು ಶೋಷಿಸುತ್ತಿದ್ದರು. ಇದೇ ರೀತಿ ಪುರುಷಸತ್ತೆ" ಸ್ತ್ರೀವರ್ಗವನ್ನು ತುಳಿಯುತ್ತಲಿದ್ದಿತು. ಹೀಗಾಗಿ ಸಮಾಜದಲ್ಲಿ ರಾಜವರ್ಗ- ಪ್ರಜಾವರ್ಗ, ಪುರೋಹಿತವರ್ಗ-ಭಕ್ತವರ್ಗ, ಪುರುಷವರ್ಗ-ಸ್ತ್ರೀವರ್ಗಗಳೆಂಬ ಸೀಳು ತಲೆದೋರಿ. ಒಂದು ಇನ್ನೊಂದನ್ನು ಶೋಷಿಸುವಲ್ಲಿ ಜೀವನ ವ್ಯವಸ್ಥೆಯ ಸಮತೋಲನ ತಪ್ಪಿ ಹೋಗಿದ್ದಿತು. ಈ ಅನ್ಯಾಯದ ಗರ್ಭಸೀಳಿ ಹುಟ್ಟಿಕೊಂಡು, ಸಾಮಾಜಿಕ ಸಮತೋಲನಕ್ಕಾಗಿ ಹೋರಾಡಿದವ. ಬಸವಣ್ಣ,<noinclude></noinclude> cbvkzw87dftlxabv4d3hdigs6ngsmng ಪುಟ:ಜಾಗರ.pdf/೫೭ 104 96895 322297 269645 2026-05-24T17:51:34Z Vikashegde 1258 /* Validated */ 322297 proofread-page text/x-wiki <noinclude><pagequality level="4" user="~aanzx" />{{right|ಯಕ್ಷಗಾನ ಮೇಳಗಳು / ೪೯}}</noinclude>ನಿಶ್ಚಿತ ಅಂಕದ 'ಬಟವಾಡೆ' ಇರುತ್ತದೆ. ಇದು ಖರ್ಚಿನ ಹಣ, ಹೆಚ್ಚುವರಿ ಸಂಬಳವನ್ನು ಅವರು ಬೇಕೆನಿಸಿದಾಗ ಕೇಳಿ ಪಡೆಯುತ್ತಾರೆ. {{gap}}ಕಲಾವಿದರ ಬಿಡಾರ ಮತ್ತು ಎರಡು ಊಟಗಳ ವ್ಯವಸ್ಥೆ ಮೇಳದಿಂದ ಕೆಲವು ಮೇಳಗಳಲ್ಲಿ ಕೆಲಸಗಾರರಿಗೆ ಬೆಳಗಿನ ಜಾವ ಗಂಜಿ ಊಟದ ವ್ಯವಸ್ಥೆ ಇದೆ. {{gap}}ಮೊದಲ ದರ್ಜೆಯ ಕಲಾವಿದರಿಗೆ, ಒಂದು ತಿರುಗಾಟಕ್ಕೆ ನಾಲ್ಕರಿಂದ ಎಂಟುಸಾವಿರ ರೂಪಾಯಿಗಳಷ್ಟು ಸಂಬಳ ಇದೆ. ಆ ಮೇಲೆ ಮೂರರಿಂದ ನಾಲ್ಕು ಸಾವಿರದ ದರ್ಜೆ, ಈ ಎರಡೂ ವರ್ಗಗಳ ಕಲಾವಿದರು ಒಂದು ಮೇಳದಲ್ಲಿ ಮೂರು ನಾಲ್ಕು ಮಂದಿ ಇರಬಹುದು. {{gap}}ತಿರುಗಾಟ ಮುಗಿದ ಮೇಲೆ, ಈಗ ಹೆಚ್ಚಿನ ಕಲಾವಿ ದರು ಪರ ಊರ ಸಂಚಾರಗಳಿಗೆ ಹೋಗುತ್ತಾರೆ. {{gap}}ಮಳೆಗಾಲ ಮೇಳಗಳಿಗೆ ತಯಾರಿಯ ಕಾಲ. ಮುಂದಿನ ವರ್ಷಕ್ಕೆ ಸಿದ್ಧತೆ. ಇದೇ ಸಮಯ ಮೇಳಗಳೊಳಗಿನ "ಶೀತಲಯುದ್ಧ' ಆರಂಭವಾಗುತ್ತದೆ. ಒಂದು ಮೇಳದಿಂದ ಕಲಾವಿದರನ್ನು ಇನ್ನೊಂದಕ್ಕೆ ಎಳೆಯುವ ಯತ್ನಗಳೂ, ಇದರಿಂದ ವೈಮನಸ್ಸುಗಳೂ ಉಂಟಾಗುತ್ತದೆ. ಈರ್ವರು ಮೇಳದ ಯಜಮಾನ ರೊಳಗೆ ಒಬ್ಬ ಸಾಮಾನ್ಯ ಕಲಾವಿದನಿಗಾಗಿ ಸುದೀರ್ಘ ಕೋರ್ಟು ಖಟ್ಟೆ ನಡೆದ ಪ್ರಕರಣ ಪ್ರಸಿದ್ಧವಾಗಿದೆ. ಇತ್ತೀಚೆಗೆ ಹಿರಿಯ ಭಾಗವತರೊಬ್ಬರ ಬಗ್ಗೆಯೂ ಒಂದು ಪ್ರಕರಣ ನಡೆಯಿತು. ;ಕೆಲವು ಸಮಸ್ಯೆಗಳು: {{gap}}ಯಕ್ಷಗಾನ ಕ್ಷೇತ್ರದಲ್ಲಿ ಕಲೆಗೆ, ಕಲಾವಿದರಿಗೆ, ಆಡಳಿತಕ್ಕೆ ಸಂಬಂಧಿಸಿದ ಹಲವು ಜರೂರಿನ ಸಮಸ್ಯೆಗಳಿವೆ. ;ಕಲೆಗೆ ಸಂಬಂಧಿಸಿ: {{gap}}ಹಿಂದೆ ಇದ್ದ ಕೆಲವು ಸಮಸ್ಯೆಗಳು ಮಾಯವಾಗಿ, ಆ ಸ್ಥಾನದಲ್ಲಿ ಅನೇಕ ಹೆಚ್ಚು ಶೋಚನೀಯ ಸಮಸ್ಯೆಗಳು ಎದುರಾಗಿವೆ. ಹಿಂದೆ ಆಟ ಒಂದು ಜಾತ್ರೆ, ಈಗ ಅದೊಂದು ವ್ಯಾಪಾರ. ಅಂತೂ ಅದೊಂದು ಕಲೆ ಎಂಬ ಪ್ರಜ್ಞೆ ಸಾಕಷ್ಟು ಮೂಡಿಲ್ಲ. 1. ಯಕ್ಷಗಾನದ ಪರ೦ಪರೆಯನ್ನು ಕೈಬಿಟ್ಟು ಇಷ್ಟ ಬಂದಂತೆ, ಜರಗಿಸುವ{{nop}}<noinclude></noinclude> te0n780r0ezqzre8j5gbyygwp3sbo86 ಪುಟ:ಕುಕ್ಕಿಲ ಸಂಪುಟ.pdf/೧೯೪ 104 97647 322480 273530 2026-05-25T10:13:35Z Pragathi. BH 7585 322480 proofread-page text/x-wiki <noinclude><pagequality level="4" user="~aanzx" />೧೭೮ / ಕುಕ್ಕಿಲ ಸಂಪುಟ</noinclude>{{c|ಅಷ್ಟತಾಳ: }} ಕುಕ್ಕೂಕ್ಕೂ ಎಂದು । ಕೂಗಿಡ ಸತಿಯರು । ದಿಕ್ಕೆಲ್ಲ ಕೇಳಿತು । ಕುಕ್ಕೂಕ್ಕೂ।<br> ಅಕ್ಕೂ ಮತ್ತಿಕ್ಕೊ ಮರಕ್ಕೇರದಿರು ಬೊಮ್ಮ ರಕ್ಕಸನೈದನೆ ಕುಕ್ಕೂಕ್ಕೂ ॥<br> ಕೊಲುವನು ದನುಜ ಸಾಯಲು ಬೇಡ ಮರದಿಂದ ।<br> ಇಳಿಯಯ್ಯ ಶ್ರೀ ಕೃಷ್ಣ ಕುಕ್ಕೂಕ್ಕೂ॥<br> ಮೆಲುವನು ಭೇತಾಳ ಬ್ರಹ್ಮರಾಕ್ಷಸನಿಪ್ಪ ।<br> ಸ್ಥಳವದು ತಿಳಿಯಯ್ಯ ಕುಕ್ಕೂಕ್ಕೂ ।<br> ಸೀರೆಯನೊಯ್ಯರ ಶ್ರೀಕೃಷ್ಣ ನಿನಗಿಂಥ ।<br> ಚೋರ ವಿದ್ಯೆಯದೇಕೊ ಕುಕ್ಕೂಕ್ಕೂ<br /> ಸೋರೆಯ ಮೊಸರ್ಬೇಣ್ಣ ಸೂರೆಯ ಮಾಳ್ ವಿ।<br> ಚಾರವಿದಲ್ಲಯ್ಯ ಕುಕ್ಕೂಕ್ಕೂ ॥<br> ಅಂಬರಗಳನೊಯ್ಯದುಚಿತವೆ ನಿನಗೆ ಪೀ ।<br> ತಾಂಬರ ಧಾರಿಯೆ ಕುಕ್ಕೂಕ್ಕೂ ।<br> ಈ ಶಂಬರ ವೈರಿಯ ಜನಕ ಈ ಬಗೆಯಲ್ಲಿ ।<br> ಡೊಂಬಿ ಏಳುವದಯ್ಯ? ಕುಕ್ಕೂಕ್ಕೂ ॥<br> ಮನೆಮನೆಗೈತಂದು ಕೆನೆಮೊಸರನ ತಿಂದು ।<br> ಜುಣುಗಾಡಿದಂತಲ್ಲ ಕುಕ್ಕೂಕ್ಕೂ॥<br> ಮನೆಯವರಿದ ಕೇಳಿದರೆ ನಿನ್ನನೆಳೆದೊಯ್ದು।<br> ದಣಿಸಿ ದಂಡಿಸುವರು ಕುಕ್ಕೂಕ್ಕೂ ॥<br> ಮತ್ತ್ವ ಕೂರ್ಮ ವರಾಹ ನರಸಿಂಹನಾದ ಶ್ರೀ ।<br> ಚಿತ್ರಜನಯ್ಯನ ಕುಕ್ಕೂಕ್ಕೂ ।<br> ಮತ್ತೆ ವಾಮನನಾದ ಕ್ಷತ್ರಿಯರನು ಕೊಂದ ।<br> ಉತ್ತಮ ರಾಮನ ಕುಕ್ಕೂಕ್ಕೂ ॥<br> ಹೊಡೆದಂಥ ಮಳೆಗಳ ದಿನ ಗೋವರ್ಧನವನ್ನು ।<br> ಕೊಡೆ ಮಾಡಿದವನಿಗೆ ಕುಕ್ಕೂಕ್ಕೂ ॥<br> ಮಡದಿಯ ವ್ರತವನ್ನು ಕೆಡಿಸಿ ವಾಜಿಯನ್ನೇರಿ ।<br> ನಡೆದ ನಾರಾಯಣ ಕುಕ್ಕೂಕ್ಕೂ ॥<br> ವಸನಂಗಳನು ಕದ್ದ ವಸುದೇವನಣುಗನೆ ।<br> ವಶವಾದ ನಿನ್ನ ಕುಕ್ಕೂಕ್ಕೂ ।<br> ವಸುಧೆಯೊಳಗೆ ಕಣ್ಣಪುರದ ಗೋಪಾಲನ । ಬಿಸರುಹ ಚರಣಕ್ಕೆ ಕುಕ್ಕೂಕ್ಕೂ ॥ {{c|ಏಕತಾಳ:}} ಶ್ರೀಕೃಷ್ಣ : ಮರುಳುಗ । ಳಾದಿರೇನಿರೇ... ನೀ ।ರೆಯರ್ನೀವು ॥ ಪ ॥<br> :ಮರುಳುಗ । ಘಾದಿರೇನೆ । ಕೆರೆಯಲ್ಲಿ । ನಿಂತುಕೊಂಡು ।<br> :ತಿರವಳಿ । ದವರಂತೆ । ಮೊರೆಯಿಟ್ಟು । ಮರುಗುವರೆ ॥<br> :ಬ್ರಹ್ಮರ । ಕಸ ತಿಂದ । ಡೆಮ್ಮವ । ರಿಗೆ ಕುಂದು ।<br> :ಉಮ್ಮಳಿ । ಸುತ ನೀವು । ಸುಮ್ಮನೆ । ಕರೆವುದೇಕೆ ॥<br><noinclude></noinclude> pd029cqagrhjogjer2zn7pjfywctqfx ಪುಟ:ಕುಕ್ಕಿಲ ಸಂಪುಟ.pdf/೧೯೦ 104 97680 322353 272605 2026-05-25T04:25:33Z Pragathi. BH 7585 /* Validated */ 322353 proofread-page text/x-wiki <noinclude><pagequality level="4" user="Pragathi. BH" />{{rh|೧೭೪ / ಕುಕ್ಕಿಲ ಸಂಪುಟ}}</noinclude> {{gap}}ಮೊಸರು ಬೆಣ್ಣೆ ಬಾಳೆಹಣ್ಣ ತಾ ಮೆಲುವಾಗ |<br> {{gap}}ಹಸುಮಗುವೆಂದು ಪಾಲಿಸಿಕೊಂಡೆವು ||<br> {{gap}}ನಿಶಿಯೊಳಡಗಿ ಬಳಿಗೆ ತಂದೀ ತರುಣಿಯ |<br> {{gap}}ಪೊಸಕುಚಂಗಳ ಮುಟ್ಟಲುಚಿತವೇನಮ್ಮ? |<br> {{gap}}ಕಣ್ಣಮುಚ್ಚಳಯನಾಡುವ ಎಂದು ಕರೆವಾಗ|<br> {{gap}}ಸಣ್ಣವನೆಂದು ತಣ್ಣಗೆ ಬಿಟ್ಟೆವು |<br> {{gap}}ಕಣ್ವಪುರೀಶ ಶ್ರೀಕೃಷ್ಣ ಈ ತರುಣಿಯ |<br> {{gap}}ಬೆನ್ನಿನ ಮೇಲೇರಿ ಇರಬಹುದೇನಮ್ಮ? || ಸಿಕ್ಕಿದ<br> ಸಿಕ್ಕಿದ ಕಳ್ಳ ತಪ್ಪಿಸಿಕೊಂಡೋಡದ ಹಾಗೆ ರಾತ್ರಿ ಎಲ್ಲರೂ ಕಾದಿರುತ್ತಾರೆ. ಮನೆಗೆ ಬಾರದ ಮಗನನ್ನು ಕೇರಿಕೇರಿಯಲ್ಲಿ ಹುಡುಕುತ್ತ ಬಾಲನ ಸೌಂದರ್ಯವನ್ನು ಬಣ್ಣಿಸಿ ಯಶೋದೆಯು ಹಂಬಲಿಸುವ ಪದ್ಯ : ಏಕತಾಳ :<br> {{gap}}ರಂಗ ಬಂದ | ನೆ ಪಾಂಡು | ರಂಗ ಬಂದ | ನ- <br> {{gap}}ರಂಗು ಮಾಣಿ | ಕದ ಹರಳ | ಉಂಗುರದ | ಕೈಯಬೆರಳ || ಪಲ್ಲ ||<br> {{gap}}ಸಿರಿಯ ಸೋ | ಲ್ಮುಡಿಯ ಸೌಂ| ದರಿಯ ಪು | ಪ್ರಮಾಲೆಯ |<br> {{gap}}ಧರಿಸಿ ಕುಂ | ಕುಮವ ಕ |ಸ್ತುರಿಯನಾಮ | ಹಣೆಯೊಳಿಟ್ಟು<br> {{gap}}ಕೊರಳ ಕೌ | ಸುಭಹಾರ | ಮೆರೆವ ಕ | ರ್ಣಕುಂಡಲ |<br> {{gap}}ಕರದಿ ಕಂ | ಕಣ ಪೀತಾಂ | ಬರದುಡಿ | ಗೆಯನುಟ್ಟು || ರಂಗ-<br> {{gap}}ಉರದೊಳೊ | ಪ್ಪುವ ರತ್ನ | ವರವೈಜ | ಯಂತೀಮಾಲೆ |<br> {{gap}}ಕರದ ಕೊ | ಳಲ ಕಣ್ವ | ಪುರದ ಗೋಪಾಲಕೃಷ್ಣ II ರಂಗ || Il don II ಹೀಗೆ ಅಂಗಲಾಚಿ ಕರೆಯುತ್ತ ಬರುವ ಗೋಪಿಯ ಮುಂದೆ ಗೊಲ್ಲ ಹೆಂಗುಸರು ಕಳ್ಳನನ್ನು ತಂದೊಪ್ಪಿಸಿ ಹೀಗೆನ್ನುತ್ತಾರೆ : ಏಕತಾಳ :<br> {{gap}}ಗೋ || ಪಮ್ಮ ನಿಮ್ಮ | ಕಂದನ | ಕೆಟ್ಟಚಾಳಿಯ | ಬಿಡಿಸ<br> {{gap}}ಬೇಡವೆಂದೊಡ | ಬಡಿಸೇ<br> {{gap}}ದಯದಿ೦ದೆಮ್ಮನು | ನಡೆಸೇ<br> {{gap}}ಬೇಕಾದ್ದೆಲ್ಲವ | ಕೊಡಿಸೇ || ಗೋ || ಪಲ್ಲ ||<br> {{gap}}ಸುಳ್ಳು ಮಾ | ತಾಡುವಿರಿ ನೀ | ವೆಂದೆ ಗೋ | ಪಾಲಕೃಷ್ಣ |<br> {{gap}}ಒಳ್ಳೆಯವ | ನೆಂದೆ ಗುಣದಿ | ಹಿಂದೆ - 1 - ದಯ |<br> {{gap}}ಉಳ್ಳಡಿ | ನ್ನಾದರೂ | ಮುಂದೆ - | - ಇಸ್ಕೊ |<br> {{gap}}ಕಳ್ಳನ | ನೊಪ್ಪಿಸಿದೆವು ನಾ | ಎಂದೆ - | ಸಟೆ |<br> {{gap}}ಯಲ್ಲಿ ಕೈ 1 ಮುಗಿದು ಬೇಡುವ | ದೊಂದೆ- ಗೋ | ಪಮ್ಮ ನಿಮ್ಮ ||<br> {{gap}}ಬೆಳಗು ಜಾ | ವದಲಿ ಮೆಲ್ಲಗೆ | ಬಂದ- ದಂ | ಪತಿಗಳು ಕೋಣೆ<br> {{gap}}ಯೊಳಗೆ ಮಲ | ಗಿರಲು ಲಜ್ಜ | ಮುಂಡ - ಪೇ | ಳಲೇನ್ ಬಂಡ |<br> {{gap}}ಇಳೆಯೊಳ | ಗೀತನೆ ಬಲು | ಪುಂಡ ಮಂ | ಚದ ಕೆಳಗೆ<br> {{gap}}ಕುಳಿತಲ್ಲಿ | ಯವರ ನಿಜವ | ಕಂಡ ನಾ | ಚಿಕೆ ಇಲ್ಲದೆ |<br> {{gap}}ಒಳಗೆ ನಗು | ತಿರುವನು ದೇವ ಮು 1 ಕುಂದ ಗೋ | ಪಮ್ಮ ನಿಮ್ಮ ||<br><noinclude></noinclude> 15dwjil9b7bfypyj59x4iw394kb0715 ಪುಟ:ಕುಕ್ಕಿಲ ಸಂಪುಟ.pdf/೧೯೧ 104 97681 322330 272610 2026-05-24T19:06:09Z Pragathi. BH 7585 /* Validated */ 322330 proofread-page text/x-wiki <noinclude><pagequality level="4" user="Pragathi. BH" />{{rh|||ಅಧ್ಯಕ್ಷ ಭಾಷಣ / ೧೭೫}}</noinclude> ಅಧ್ಯಕ್ಷ ಭಾಷಣ | ೧೭೫ ಕಳ್ಳನನ್ನು ಹಿಡಿದು ತಂದರೆ ದಂಡಿಸುವೆನೆಂದು ಹಿಂದೆ ಹೇಳಿದ ಮಾತಿಗೆ ಈಗೇನೆನ್ನು ವಳು ಗೋಪಿ? 'ತಿಂದ ಮೊಸರಿನ ಸೋರುದುಪ್ಪದ ಜೊಲ್ಲು ಕೈಬಾಯಿ ಎಂಜಲೂಡಿರಲು ಬೇರೆ ಸಾಕ್ಷ್ಯ ಬೇಕೆ? ಚಿಣ್ಣನ ಕಳ್ಳತನಕ್ಕೆ ತಾನೇ ನಾಚಿಕೊಂಡು ಮನೆಗೊಯ್ದು ಪರಿಪರಿಯಿಂದ ಬುದ್ದಿ ಹೇಳುತ್ತಾಳೆ, ಆ ಪದ್ಯಗಳೆಲ್ಲ ಬಹಳ ಸೊಗಸಾಗಿವೆ. ವಿಸ್ತಾರ ಭಯದಿಂದ ಬಿಟ್ಟಿದ್ದೇನೆ. ಅವುಗಳಲ್ಲಿ ಗೋಪಿಯ ಮಾತಿನ ಕೊನೆಯ ಪದ್ಯವೊಂದನ್ನು ಹಾಡುತ್ತೇನೆ-<br /> (ಚಾಪು) ಅಷ್ಟತಾಳ :<br> <poem> {{gap}}ಅರಿತವ | ರಂತರಂ | ಗದಿ ನಿನ್ನ | ವರ ಕಣ್ವ |<br> ಪುರದ ಶ್ರೀ ಗೋಪಾಲಕೃಷ್ಣನೆಂದು |<br> ಹಿರಿಯಣ್ಣ ಬಲರಾಮನುರಗೇಂದ್ರನೆಂಬಂಥ |<br> ಮರಿಯಾದೆಯಲಿ ಪಾಠಕರು ಪೊಗಳುವುದಾಗಿ | ತರವೇನೋ ರಂಗ<br> {{Right|ನಿನಗಿಂಥ ಚಾಳಿ ||}} ಬಾಲಕೃಷ್ಣನು ತಾನು ಏನೊಂದೂ ಏನೊಂದೂ ಅರಿಯದ ನಿರಪರಾಧಿ, ತಪ್ಪಲ್ಲ ಆ ಗೊಲ್ಲತಿಯರದು ಎಂದು ತಾಯಿಗೆ ತೋರಿಸುವ ಚಮತ್ಕಾರದ ಪದ್ಯವೊಂದು ಹೀಗಿದೆ : ಮಚ್ಚೆ ತಾಳ : ತಡೆಯದೆಂದಿ | ನಂತೆ ಗೋಪ | ಹುಡುಗರೊಡನೆ | ಗೋಳನ್ನು |<br> ಹೊಡೆದುಕೊಂಡು ಹೋಗಲ್ಮರೆಯೊಳಡಗಿ ಎನ್ನ ಬಾ ಬಾರೆಂದು |<br> ಕಡುವಿನೋದದಿಂದ ಕರೆವರು ಮುಂದ್ವರಿಯೆ ಕೈಯ |<br> ಪಿಡಿದು ಒಳಮಂದಿರಕೆ ಒಯ್ಯರು-ಹಲವು ಚೇಷ್ಟೆ.|<br> ನಡೆಸಿ ಉಟ್ಟವಸನ ಸುಲಿವರು ಮಂಚದ ಮೇ |<br> ಲಡರಿಸುತಲಿ ತೊಡೆಯಸಂದಿನಡೆಯೋಲೌಕಿ ಬಹಳ ಭಂಗ |<br> ಬಡಿಸಿ ವಿವಿಧ ಬೆಡಗುದೋರಿ ನಡೆವರಿವರ ಕೆಡುಕುತನಕೆ ||<br> ಬೆದರಿಸದಿರು ಇದಕೆ ಎನ್ನನು ||<br> ಇರುಳಿನಲ್ಲಿ ಬೆದರಿ ಒಳಮಂದಿರವ ಪೊರಡದಿರುವ ನಾನೋಂ |<br> ದರಿಯೆನಿವರ ದಾವಾವಡೆಯೊಳಿರುವುದೆಂಬ ತೆರನಿದೆಲ್ಲ |<br> ತಿರುಕನಂತೆ ತಿರುಗಲರಿವನೆ?- ಪಾಸರ ಗಡಿಗೆ |<br> ಸುರಿದು ಬೆಣ್ಣೆ ಮೆಲುತ ಬರುವೆನೆ? “ಬಚ್ಚಲಿನೊಳಡಗೆ ..<br> ಮರುಳನೇ ನಿನ್ನಗಲಿ ಇರುವೆನೆ? “ಬೇಕಾದುದೆಲ್ಲ |<br> ನಿರತ ಉಣಿಸುತ್ತಿರುವ ಅದನು ತೊರೆದು ಕದ್ದು ಮಲ್ಲಲೇನು |<br> ಕೆರೆಯೆ ಎನ್ನ ಹೊಟ್ಟೆ ? ಏಕೆ ಜರವೆಯವರ ಬರಿಯ ನುಡಿಗೆ ||<br> ಚಿಣ್ಣನ ಮಾತಿಗೆ ಮನ ಕರಗಿದ ಗೋಪಿ<br> ಏಕತಾಳ :<br> ಎತ್ತಿ ಆಡಿಸಿದಳು | ಚಿತ್ತ ಜಪಿತನ |<br> ಮುತ್ತಿಟ್ಟು ಪಾಲ ಕುಡಿಸಿ ಗುಣಯುತನ || ಪಲ್ಲ<noinclude></noinclude> igj7l6q7xuw1fwr8fdc0xa9p7hxr0sb ಪುಟ:ಕುಕ್ಕಿಲ ಸಂಪುಟ.pdf/೧೯೨ 104 97682 322477 272614 2026-05-25T10:11:33Z Pragathi. BH 7585 /* Validated */ 322477 proofread-page text/x-wiki <noinclude><pagequality level="4" user="Pragathi. BH" /></noinclude>{{Left|೧೭೬ | ಕುಕ್ಕಿಲ ಸಂಪುಟ}} ಅತ್ತಿತ್ತ ಪೊಗಗೊಡೆನೆನುತ ಮೋದದಲಿ |<br> ...............<br> ನಂದನ ಪವಡಿಸೆನ್ನೊತ್ತಿನೊಳೆಂದು |<br> ಮಂದಗಮನೆ ಪಾಡಿ ನಿದ್ರಿಸಲಂದು ||<br> ಅಂದಿನಿಂದ ಗೋಪಾಲಕೃಷ್ಣನನ್ನು ಇರುಳೆಲ್ಲ ಗೋಪಿಯು ತನ್ನೊತ್ತಿನಲ್ಲಿ ಮಲಗಿಸಿ ಕಾಯುತ್ತಿರುವುದು, ಹಗಲು ಹೊತ್ತಿನಲ್ಲಿ ಆತನು ನೆರೆಮನೆಯ ಲೂಟಿಗೆ ಹೋಗದಂತೆ ಬಲರಾಮ ಸಹಿತ ಗೋವಳರ ಕಾವಲಿನಲ್ಲಿ ಗೋಪಾಲನೆಗಾಗಿ ದೂರದ ಹೊಲಕ್ಕೆ ಕಳುಹಿಸುವುದು; ಗೋಪಿಯ ಈ ನೇಮದಿಂದಲಾಗಿ ಗೊಲ್ಲರ ಕೇರಿಯಲ್ಲಿ ಕೃಷ್ಣನ ಸುಳಿವಿಲ್ಲದಾಯಿತು. ಗೋಪ ಸ್ತ್ರೀಯರ ಕಣ್ಣು ಬೇಡಿತು, ಬೇಸರಿಕೆ ಹೆಚ್ಚಿತು, ವಿರಹ ಉರಿಯಿತು. ಹಿಂದೆ ದೂರಿದವರು ಇಂದು ಮರುಗಿದರು. ತಮ್ಮ ತಮ್ಮೊಳಗೆ ಚಿಣ್ಣ ಕೃಷ್ಣನ 'ಮುದ್ದು ಮೊಗ, ಮುಗುಳುನಗೆ, ತಿದ್ದಿದ ಕಪೋಲ'ಗಳ ಸೌಂದರ್ಯವನ್ನು ಕೊ೦ಡಾಡಿದರು-<br /> ಗಾಡಿಕಾರದ ಮುದ್ದು ಮೋರೆ ನಟನೆಯಿಂದ |<br> ಆಡುತ್ತ ದಿನ ದಿನ ಬರುವ ಗೋಪಾಲ |<br> ಬೆದರಿಸೆ ತಾಯ ಮಾತಿಗೆ ತಾ ಕೋಪಿಸಿಕೊಂಡು |<br> ಬದಲೊಂದು ರಾಜ್ಯವ ಸೇರಿದನೇನೊ?<br> ಎಂದು ಹಂಬಲಿಸುತ್ತ 'ಕಾಣದೆ ನಿಲಲಾರೆ ಚಿಕ್ಕಯ್ಯನ' ಎಂದು ಎಲ್ಲರೊಂದಾಗಿ ಹುಡುಕುತ್ತ ಯಮುನೆಯ ದಡಕ್ಕೆ ಬಂದು ಅಲ್ಲಿಯೂ ಕಾಣದೆ ಕಂಗೆಟ್ಟು ಕೃಷ್ಣ ದರ್ಶನದ ಇಷ್ಟಾರ್ಥ ಪ್ರಾಪ್ತಿಗಾಗಿ ಮಳಲಿನ ಗೌರಿಯನ್ನು ಮಾಡಿ 'ಧೂಪ ದೀಪ ಗಂಧಪುಷ್ಪ ಫಲ ಮಹಾನೈವೇದ್ಯ'ಗಳಿಂದ ಪೂಜಿಸಿ ಮಂಗಳಾರತಿ ಬೆಳಗಿ ಶೋಭನ ಹಾಡಿ ಈ ರೀತಿ ಪ್ರಾರ್ಥಿಸುತ್ತಾರೆ : {{Right|ತ್ರಿವುಡೆತಾಳ}} ಶರಣು ಸಕಲಾಭೀಷ್ಟದಾಯಕಿ |<br> ಶರಣು ತ್ರಿಭುವನ ಪಾಲಕಿ |<br> ಶರಣು ಪರ್ವತರಾಜಬಾಲಕಿ |<br> ಶರಣು ವರ ನೀಲಾಳಕಿ |<br> ಪಂಕಜಾನನ ಪರಮ ಪಾವನ |<br> ಶಂಕರಾರ್ಧಶರೀರಿಣಿ -<br> ಶಂಖಚಕ್ರಗದಾಬ್ಬ ಪಾಣಿ ಭ |<br> ಯಂಕರೋಂಕಾರವಾಹಿನಿ | ಶರಣು ಶರಣು || ಸುಬ್ಬನ ಈ ಪದ್ಯವನ್ನೂ ಸಭಾಲಕ್ಷಣದ 'ಶರಣುತಿರುವಗ್ರಶಾಲಿವಾಹಿನಿ' ಎಂಬ ಪದ್ಯವನ್ನೂ ಹೋಲಿಸಿ ನೋಡಿರಿ. ಹೀಗೆ ಪ್ರಾರ್ಥಿಸಿ ವಿಧಿಪ್ರಕಾರ ದಂಪತಿಗಳಿಗೆ 'ಬಾಯನ ದಾನವನ್ನಿತ್ತು' ಹರಕೆ ಹೊತ್ತು ಶ್ರೀ ಗೌರಿಯ ವರಪ್ರಸಾದವನ್ನು ಬೇಡುವ ಪದ್ಯ :<noinclude></noinclude> koy66684evkzwur84wdrx12ojh9x725 322478 322477 2026-05-25T10:12:06Z Pragathi. BH 7585 322478 proofread-page text/x-wiki <noinclude><pagequality level="4" user="Pragathi. BH" /></noinclude>{{Left|೧೭೬ | ಕುಕ್ಕಿಲ ಸಂಪುಟ}} ಅತ್ತಿತ್ತ ಪೊಗಗೊಡೆನೆನುತ ಮೋದದಲಿ |<br> ...............<br> ನಂದನ ಪವಡಿಸೆನ್ನೊತ್ತಿನೊಳೆಂದು |<br> ಮಂದಗಮನೆ ಪಾಡಿ ನಿದ್ರಿಸಲಂದು ||<br> ಅಂದಿನಿಂದ ಗೋಪಾಲಕೃಷ್ಣನನ್ನು ಇರುಳೆಲ್ಲ ಗೋಪಿಯು ತನ್ನೊತ್ತಿನಲ್ಲಿ ಮಲಗಿಸಿ ಕಾಯುತ್ತಿರುವುದು, ಹಗಲು ಹೊತ್ತಿನಲ್ಲಿ ಆತನು ನೆರೆಮನೆಯ ಲೂಟಿಗೆ ಹೋಗದಂತೆ ಬಲರಾಮ ಸಹಿತ ಗೋವಳರ ಕಾವಲಿನಲ್ಲಿ ಗೋಪಾಲನೆಗಾಗಿ ದೂರದ ಹೊಲಕ್ಕೆ ಕಳುಹಿಸುವುದು; ಗೋಪಿಯ ಈ ನೇಮದಿಂದಲಾಗಿ ಗೊಲ್ಲರ ಕೇರಿಯಲ್ಲಿ ಕೃಷ್ಣನ ಸುಳಿವಿಲ್ಲದಾಯಿತು. ಗೋಪ ಸ್ತ್ರೀಯರ ಕಣ್ಣು ಬೇಡಿತು, ಬೇಸರಿಕೆ ಹೆಚ್ಚಿತು, ವಿರಹ ಉರಿಯಿತು. ಹಿಂದೆ ದೂರಿದವರು ಇಂದು ಮರುಗಿದರು. ತಮ್ಮ ತಮ್ಮೊಳಗೆ ಚಿಣ್ಣ ಕೃಷ್ಣನ 'ಮುದ್ದು ಮೊಗ, ಮುಗುಳುನಗೆ, ತಿದ್ದಿದ ಕಪೋಲ'ಗಳ ಸೌಂದರ್ಯವನ್ನು ಕೊ೦ಡಾಡಿದರು-<br /> ಗಾಡಿಕಾರದ ಮುದ್ದು ಮೋರೆ ನಟನೆಯಿಂದ |<br> ಆಡುತ್ತ ದಿನ ದಿನ ಬರುವ ಗೋಪಾಲ |<br> ಬೆದರಿಸೆ ತಾಯ ಮಾತಿಗೆ ತಾ ಕೋಪಿಸಿಕೊಂಡು |<br> ಬದಲೊಂದು ರಾಜ್ಯವ ಸೇರಿದನೇನೊ?<br> ಎಂದು ಹಂಬಲಿಸುತ್ತ 'ಕಾಣದೆ ನಿಲಲಾರೆ ಚಿಕ್ಕಯ್ಯನ' ಎಂದು ಎಲ್ಲರೊಂದಾಗಿ ಹುಡುಕುತ್ತ ಯಮುನೆಯ ದಡಕ್ಕೆ ಬಂದು ಅಲ್ಲಿಯೂ ಕಾಣದೆ ಕಂಗೆಟ್ಟು ಕೃಷ್ಣ ದರ್ಶನದ ಇಷ್ಟಾರ್ಥ ಪ್ರಾಪ್ತಿಗಾಗಿ ಮಳಲಿನ ಗೌರಿಯನ್ನು ಮಾಡಿ 'ಧೂಪ ದೀಪ ಗಂಧಪುಷ್ಪ ಫಲ ಮಹಾನೈವೇದ್ಯ'ಗಳಿಂದ ಪೂಜಿಸಿ ಮಂಗಳಾರತಿ ಬೆಳಗಿ ಶೋಭನ ಹಾಡಿ ಈ ರೀತಿ ಪ್ರಾರ್ಥಿಸುತ್ತಾರೆ : {{Center|ತ್ರಿವುಡೆತಾಳ}} ಶರಣು ಸಕಲಾಭೀಷ್ಟದಾಯಕಿ |<br> ಶರಣು ತ್ರಿಭುವನ ಪಾಲಕಿ |<br> ಶರಣು ಪರ್ವತರಾಜಬಾಲಕಿ |<br> ಶರಣು ವರ ನೀಲಾಳಕಿ |<br> ಪಂಕಜಾನನ ಪರಮ ಪಾವನ |<br> ಶಂಕರಾರ್ಧಶರೀರಿಣಿ -<br> ಶಂಖಚಕ್ರಗದಾಬ್ಬ ಪಾಣಿ ಭ |<br> ಯಂಕರೋಂಕಾರವಾಹಿನಿ | ಶರಣು ಶರಣು || ಸುಬ್ಬನ ಈ ಪದ್ಯವನ್ನೂ ಸಭಾಲಕ್ಷಣದ 'ಶರಣುತಿರುವಗ್ರಶಾಲಿವಾಹಿನಿ' ಎಂಬ ಪದ್ಯವನ್ನೂ ಹೋಲಿಸಿ ನೋಡಿರಿ. ಹೀಗೆ ಪ್ರಾರ್ಥಿಸಿ ವಿಧಿಪ್ರಕಾರ ದಂಪತಿಗಳಿಗೆ 'ಬಾಯನ ದಾನವನ್ನಿತ್ತು' ಹರಕೆ ಹೊತ್ತು ಶ್ರೀ ಗೌರಿಯ ವರಪ್ರಸಾದವನ್ನು ಬೇಡುವ ಪದ್ಯ :<noinclude></noinclude> 98z888mya5vpgwp2xoynx1a1p6b5ttx 322479 322478 2026-05-25T10:12:51Z Pragathi. BH 7585 322479 proofread-page text/x-wiki <noinclude><pagequality level="4" user="Pragathi. BH" /></noinclude>{{Left|೧೭೬ | ಕುಕ್ಕಿಲ ಸಂಪುಟ}} ಅತ್ತಿತ್ತ ಪೊಗಗೊಡೆನೆನುತ ಮೋದದಲಿ |<br> ...............<br> ನಂದನ ಪವಡಿಸೆನ್ನೊತ್ತಿನೊಳೆಂದು |<br> ಮಂದಗಮನೆ ಪಾಡಿ ನಿದ್ರಿಸಲಂದು ||<br> ಅಂದಿನಿಂದ ಗೋಪಾಲಕೃಷ್ಣನನ್ನು ಇರುಳೆಲ್ಲ ಗೋಪಿಯು ತನ್ನೊತ್ತಿನಲ್ಲಿ ಮಲಗಿಸಿ ಕಾಯುತ್ತಿರುವುದು, ಹಗಲು ಹೊತ್ತಿನಲ್ಲಿ ಆತನು ನೆರೆಮನೆಯ ಲೂಟಿಗೆ ಹೋಗದಂತೆ ಬಲರಾಮ ಸಹಿತ ಗೋವಳರ ಕಾವಲಿನಲ್ಲಿ ಗೋಪಾಲನೆಗಾಗಿ ದೂರದ ಹೊಲಕ್ಕೆ ಕಳುಹಿಸುವುದು; ಗೋಪಿಯ ಈ ನೇಮದಿಂದಲಾಗಿ ಗೊಲ್ಲರ ಕೇರಿಯಲ್ಲಿ ಕೃಷ್ಣನ ಸುಳಿವಿಲ್ಲದಾಯಿತು. ಗೋಪ ಸ್ತ್ರೀಯರ ಕಣ್ಣು ಬೇಡಿತು, ಬೇಸರಿಕೆ ಹೆಚ್ಚಿತು, ವಿರಹ ಉರಿಯಿತು. ಹಿಂದೆ ದೂರಿದವರು ಇಂದು ಮರುಗಿದರು. ತಮ್ಮ ತಮ್ಮೊಳಗೆ ಚಿಣ್ಣ ಕೃಷ್ಣನ 'ಮುದ್ದು ಮೊಗ, ಮುಗುಳುನಗೆ, ತಿದ್ದಿದ ಕಪೋಲ'ಗಳ ಸೌಂದರ್ಯವನ್ನು ಕೊ೦ಡಾಡಿದರು-<br /> ಗಾಡಿಕಾರದ ಮುದ್ದು ಮೋರೆ ನಟನೆಯಿಂದ |<br> ಆಡುತ್ತ ದಿನ ದಿನ ಬರುವ ಗೋಪಾಲ |<br> ಬೆದರಿಸೆ ತಾಯ ಮಾತಿಗೆ ತಾ ಕೋಪಿಸಿಕೊಂಡು |<br> ಬದಲೊಂದು ರಾಜ್ಯವ ಸೇರಿದನೇನೊ?<br> ಎಂದು ಹಂಬಲಿಸುತ್ತ 'ಕಾಣದೆ ನಿಲಲಾರೆ ಚಿಕ್ಕಯ್ಯನ' ಎಂದು ಎಲ್ಲರೊಂದಾಗಿ ಹುಡುಕುತ್ತ ಯಮುನೆಯ ದಡಕ್ಕೆ ಬಂದು ಅಲ್ಲಿಯೂ ಕಾಣದೆ ಕಂಗೆಟ್ಟು ಕೃಷ್ಣ ದರ್ಶನದ ಇಷ್ಟಾರ್ಥ ಪ್ರಾಪ್ತಿಗಾಗಿ ಮಳಲಿನ ಗೌರಿಯನ್ನು ಮಾಡಿ 'ಧೂಪ ದೀಪ ಗಂಧಪುಷ್ಪ ಫಲ ಮಹಾನೈವೇದ್ಯ'ಗಳಿಂದ ಪೂಜಿಸಿ ಮಂಗಳಾರತಿ ಬೆಳಗಿ ಶೋಭನ ಹಾಡಿ ಈ ರೀತಿ ಪ್ರಾರ್ಥಿಸುತ್ತಾರೆ : {{Center|ತ್ರಿವುಡೆತಾಳ}} ಶರಣು ಸಕಲಾಭೀಷ್ಟದಾಯಕಿ |<br> ಶರಣು ತ್ರಿಭುವನ ಪಾಲಕಿ |<br> ಶರಣು ಪರ್ವತರಾಜಬಾಲಕಿ |<br> ಶರಣು ವರ ನೀಲಾಳಕಿ |<br> ಪಂಕಜಾನನ ಪರಮ ಪಾವನ |<br> ಶಂಕರಾರ್ಧಶರೀರಿಣಿ -<br> ಶಂಖಚಕ್ರಗದಾಬ್ಬ ಪಾಣಿ ಭ |<br> ಯಂಕರೋಂಕಾರವಾಹಿನಿ | ಶರಣು ಶರಣು ||<br /> {{gap}}ಸುಬ್ಬನ ಈ ಪದ್ಯವನ್ನೂ ಸಭಾಲಕ್ಷಣದ 'ಶರಣುತಿರುವಗ್ರಶಾಲಿವಾಹಿನಿ' ಎಂಬ ಪದ್ಯವನ್ನೂ ಹೋಲಿಸಿ ನೋಡಿರಿ.<br /> {{gap}}ಹೀಗೆ ಪ್ರಾರ್ಥಿಸಿ ವಿಧಿಪ್ರಕಾರ ದಂಪತಿಗಳಿಗೆ 'ಬಾಯನ ದಾನವನ್ನಿತ್ತು' ಹರಕೆ ಹೊತ್ತು ಶ್ರೀ ಗೌರಿಯ ವರಪ್ರಸಾದವನ್ನು ಬೇಡುವ ಪದ್ಯ :<noinclude></noinclude> f8vdgvz6xypwvim5gye5mc1lsis1gf7 ಪುಟ:ಕುಕ್ಕಿಲ ಸಂಪುಟ.pdf/೨೭೩ 104 97781 322352 273910 2026-05-25T04:24:58Z Pragathi. BH 7585 /* Validated */ 322352 proofread-page text/x-wiki <noinclude><pagequality level="4" user="Pragathi. BH" /></noinclude>17 {{rh||'ಬೆದಂಡೆ - ಚತ್ತಾಣ'}} {{gap}}ಪದ್ಯಕಾವ್ಯ-ಚಂಪೂಕಾವ್ಯ, ಪಾಡುಗಬ್ಬ-ಬಾಜನೆಗಬ್ಬ, ವರ್ಣಕ-ವಸ್ತುಕ, ಎಂಬಂತೆ ಲಕ್ಷಣಗ್ರಂಥಗಳಲ್ಲಿ ಕಾಣುವ ಪುರಾತನ ಕನ್ನಡಕಾವ್ಯಭೇದಗಳಲ್ಲಿ ನಮಗೆ ಉಳಿದು ಬಂದಿರುವವೆಂದರೆ ಪ್ರಾಯಶಃ ಚಂಪೂ ಪ್ರಬಂಧಗಳೇ ಆಗಿರುವುದರಿಂದ, ಅಂದಿನ ಪದ್ಯಕಾವ್ಯ ಹಾಗೂ ಪಾಡುಗಬ್ಬಗಳ ಸ್ವರೂಪ ಹೇಗಿದ್ದಿತ್ತೆಂಬುದು ಯಥಾರ್ಥ ಕಲ್ಪನೆಗೆ ಸಿಗುವುದಿಲ್ಲ. ಲಕ್ಷಣ ಗ್ರಂಥಗಳಲ್ಲಿಯೂ ಆ ಕುರಿತು ಹೆಚ್ಚಿನ ಮಾಹಿತಿ ದೊರೆಯುವು ದಿಲ್ಲ. ಕವಿರಾಜಮಾರ್ಗದಲ್ಲಿ, ಪರಮ ಶ್ರೀವಿಜಯಕವೀಶ್ವರ ಪಂಡಿತ ಚಂದ್ರಲೋಕ ಪಾಲಾದಿಗಳಾ ನಿರತಿಶಯವಸ್ತುವಿಸ್ತರವಿಚರನೆಗಳು ಮಾರ್ಗ ಪದ್ಧತಿಯ ಪದ್ಯಕಾವ್ಯಕ್ಕೆ ಉದಾಹರಣೆಗಳಾಗಿವೆಯೆಂದೂ, ಸಾಮಯಿಕ ಲಕ್ಷ್ಮಮಾರ್ಗದಲ್ಲಿ 'ಬೆದಂಡೆ' ಮತ್ತು 'ಚತ್ತಾಣ' ಎಂಬ ಹೆಸರುಗಳಿಂದ ಪ್ರಸಿದ್ಧವಾಗಿದ್ದ ಎರಡು ಪ್ರಭೇದಗಳು, ಅಧುನಾ ಪ್ರಸಿದ್ಧ ಪದ್ಯಕಾವ್ಯಗಳಿಗೆ ಲಕ್ಷ್ಯಗಳಾಗಿವೆ ಎಂದೂ ಆ ಹಿಂದಿನ ಲಾಕ್ಷಣಿಕರೇ ಪರಿಗಣಿಸಿರು ತಾರೆ ಎಂದಿದೆ. ಮತ್ತು ಬೆದಂಡೆ, ಚತ್ತಾಣಗಳಲ್ಲಿರತಕ್ಕ ಛಂದೋವಿಶೇಷಗಳನ್ನೂ ಸೂಚಿಸಿದೆ. ಕಾವ್ಯಾವಲೋಕನದಲ್ಲಿ ನಾಗವರ್ಮನೂ ಬೆದಂಡೆಯ ಲಕ್ಷಣವನ್ನು ಕೊಟ್ಟಿರು ತ್ತಾನೆ. ಆ ಪ್ರಕಾರ, ಇವುಗಳ ಸ್ವರೂಪ ವೈಶಿಷ್ಟ್ಯಗಳೇನಿದ್ದಿರಬಹುದು, ಈ ಹೆಸರುಗಳ ಅರ್ಥ ಹಾಗೂ ಔಚಿತ್ಯಗಳೇನಿದ್ದಿರಬೇಕು ಎಂಬುದನ್ನು ಯಥಾಮತಿ ಪರಿಶೀಲಿಸುವುದು ಈ ಲೇಖನದ ವಿಷಯವಾಗಿವೆ. <br> {{gap}}ಕವಿರಾಜಮಾರ್ಗದಲ್ಲಿ ಇವುಗಳ ಲಕ್ಷಣಗಳನ್ನು ಹೇಳುವ ಆ ಮೂರು ಪದ್ಯಗಳು ಹೀಗಿವೆ :<br> {{gap}}'''ನುಡಿಗೆಲ್ಲಂ ಸಲ್ಲದ ಕ'''<br> {{gap}}'''ನ್ನಡದೊಳ್ ಚತ್ತಾಣಮುಂ ಬೆದಂಡೆಯುಮಂದೀ'''<br> {{gap}}'''ಗಡಿನ ನೆಗಲಳ್ತೆಯ ಕಬ್ಬದೊ'''<br> {{gap}}'''ಳೊಡಂಬಡಂ ಮಾಡಿದರ್‌ ಪುರಾತನಕವಿಗಳ್''' <br> || ೩೩ || {{gap}}'''ಕಂದಮುಮಮಳಿನ ವೃತ್ತಮು''' <br> {{gap}}'''ಮೊಂದೊಂದಡಗೊಂಡು ಜಾತಿಜಾಣೆಸೆಯೆ ಬೆಡಂ''' <br> {{gap}}'''ಗೊಂದಿಮೊರೊಳಮರ ಪೆಳಲ್''' <br> {{gap}}'''ಸುಂದರರೂಪಿಂ ಬೆದಂಡೆಗಬ್ಬಮುಮಕ್ಕುಂ''' <br> {{gap}}'''ಕಂದಂಗಳ್ ಪಲವಾಗಿರೆ''' <br> {{gap}}'''ಸುಂದರವೃತ್ತ೦ಗಳಕ್ಕರಂ ಚೌಪದಿ ಮ''' <br> {{gap}}'''ತ್ವಂ ದಲ್ ಗೀತಿಕೆ ತಿವದಿಗ'''<br> {{gap}}'''ಳಂದಂಬೆಸೆಯೆ ಹೇಳ್ಕೊಡದು ಚತ್ತಾಣಂ''' <br> || ೩೪ || || ass 11 <br> ಮೊದಲನೆಯ ಪದ್ಯದಲ್ಲಿ 'ನುಡಿಗಲ್ಲಂ ಸಲ್ಲದ ಕನ್ನಡದೊಳ್' ಎಂಬ ಮಾತಿಗೆ ಉದ್ದಿಷ್ಟಾರ್ಥವೇನೆಂಬುದು ನಿರ್ಣಯವಾಗುವುದಿಲ್ಲ. ಆದರೆ,ಇದರ ಹಿಂದಿನ<noinclude></noinclude> 7uwhkg4upoq757voim7ahbz8dbki8rz ಪುಟ:ಕುಕ್ಕಿಲ ಸಂಪುಟ.pdf/೨೯೩ 104 97800 322348 272765 2026-05-25T04:23:00Z Pragathi. BH 7585 /* Validated */ 322348 proofread-page text/x-wiki <noinclude><pagequality level="4" user="Pragathi. BH" /></noinclude>1 {{Right|ಸಂಗೀತ ರತ್ನಾಕರ - ವ್ಯಾಖ್ಯಾನ | ೨೭೭}} <poem> ನಿಗಮೇಷು ಚತುರ್ಥ್ಯಾಂತು ವಿಶಂತಿ ಸಮಪಾಃ ಕ್ರಮಾತ್ || <br> ಶ್ರುತಿದ್ವಾವಿಂಶತಾವೇವಂ ಸಾರಣಾನಾಂ ಚತುಷ್ಟಯಾತ್ | <br> ಧ್ರುವಾಶ್ರುತಿಹು ಲೀನಾಯಾಮಿಯತ್ತಾಜ್ಞಾಯತೇ ಸ್ಸುಟಂ || <br> ಅತಃ ಪರಂ ತು ರಕ್ತಿಂ ನ ಕಾರ್ಯಮಪಕರ್ಷಣಂ <br> || sa || </poem> {{gap}}ಈ ಎರಡನೇ ಸಾರಣೆಯಲ್ಲಿ ಚಲವೀಣೆಯ ಸ್ವರಗಳು ಧ್ರುವವೀಣೆಯ ಸ್ವರಗಳಿಗಿಂತ ಎರಡು ಶ್ರುತಿಗಳಷ್ಟು ಕೆಳಗೆ ಇಳಿಯುವಾಗ ಚಲವೀಣೆಯ ಗ, ನಿ ಸ್ವರಗಳು ಎರಡು ಶ್ರುತಿಯಂತೆ ಕಳೆದುಕೊಂಡುದುದರಿಂದ ಧ್ರುವವೀಣೆಯಲ್ಲಿರುವ 'ರಿ, ಧ' ಸ್ವರಗಳಲ್ಲಿ ಸೇರುತ್ತವೆ. ಇದೇ ರೀತಿ ಮೂರನೇ ಸಾರಣೆಯನ್ನು ಮಾಡುವಾಗ ಚಲವೀಣೆಯ ರಿ ಮತ್ತು ಧ ಸ್ವರಗಳು ಧ್ರುವವೀಣೆಯ ಸ ಮತ್ತು ಪ ಸ್ವರಗಳನ್ನು ಸರಿಯಾಗಿ ಸೇರುತ್ತವೆ. ನಾಲ್ಕನೇ ಸಾರಣೆಯಲ್ಲಿ ಚಲವೀಣೆಯ ಸ, ಮ, ಪ ಸ್ವರಗಳು ಧ್ರುವವೀಣೆಯ ನಿ, ಗ, ಮ ಸ್ವರಗಳಲ್ಲಿ ಐಕ್ಯವಾಗುತ್ತವೆ. ಹೀಗೆ ನಾಲ್ಕು ಸಾರಣೆಗಳಲ್ಲಿ ಅಡಗುವುದರಿಂದ ಶ್ರುತಿ ಎಂದರೆ ಇಷ್ಟು ಎಂಬ ಮಿತಿಯು ಸ್ಪಷ್ಟವಾಗಿ ತಿಳಿಯುವುದು. ಇನ್ನು ಮುಂದೆ, ರಕ್ತಿಗೆ ಎಂದರೆ ಚಲವೀಣೆಯ ಶ್ರುತಿಗಳು ಧ್ರುವವೀಣೆಯ ಶ್ರುತಿಗಳಲ್ಲಿ ಸೇರುವುದಕ್ಕೆ ಹಾನಿ ಇರುವುದರಿಂದ ಎಂದರೆ ಇನ್ನೂ ಮಂದ್ರವಾದ ಧ್ವನಿಯು ಸ್ಪುಟಗೋಚರವಲ್ಲದಿರು ವುದರಿಂದ ಸಾರಣೆಯನ್ನು ಮಾಡತಕ್ಕದ್ದಲ್ಲ. <poem> ಶ್ರುತಿಭ್ಯಃ ಗ್ಯುಃ ಸ್ವರಾಃ ಷಡ್ವರ್ಷಭ ಗಾಂಧಾರ ಮಧ್ಯಮಾಃ |<br> ಪಂಚಮೋ ಧೈವತ ಶ್ಚಾಥ ನಿಷಾಧ ಇತಿ ಸಪ್ತತೇ <br> ತೇಷಾಂ ಸಂಜ್ಞಾ ಸರಿಗಮ ಪಧ ನೀತ್ಯಪರಾಮತಾ | <br> || ೨೪ ||</poem> {{{gap}} ಹೇಳಿದ ನಿದರ್ಶನದಿಂದ ಸ್ಪಷ್ಟವಾಗುವಂತ ಮಂದ್ರಸ್ಥಾನದ ೪ನೇ, ೭ನೇ, ೯ನೇ, ೧೩ನೇ, ೧೭ನೇ, ೨೦ನೇ, ೨೨ನೇ ಶ್ರುತಿಗಳಿಂದ ಕ್ರಮವಾಗಿ ಷಡ್ಡ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ, ನಿಷಾದ ಎಂಬ ಏಳು ಸ್ವರಗಳಾಗುವುವು. ಅವುಗಳಿಗೆ ಸರಿ ಗ ಮ ಪ ಧ ನಿ ಎಂಬ ಬೇರೆ ಸಂಜ್ಞೆಗಳಿವೆ. <poem> ಶ್ರುತ್ಯನಂತರ ಭಾವೀಯಃ ಸ್ನಿಗೋ ಅನುರಣನಾತ್ಮಕಃ | ಸ್ವತೋ ರಂಜಯತಿ ಶೋತೃಚಿತ್ರಂ ಸ ಸ್ವರಉಚ್ಚತೇ । </poem> ಶ್ರುತಿಯ, ಎಂದರೆ ಹಿಂದೆ ಹೇಳಿದಂತೆ ಸ್ವರವಿರುವ ನಾಲ್ಕನೇ, ಏಳನೇ ಇತ್ಯಾದಿ ಶ್ರುತಿಯ ಅನಂತರದಲ್ಲಿ ಉಂಟಾಗುವ ಇಂಪಾಗಿರುವ ಹಾಗೂ, ಅನುರಣನಾತ್ಮಕಃ ಎಂದರೆ ನುಡಿಯುತ್ತಲಿದ್ದು ಪ್ರೋತೃಗಳಿಗೆ ಮನೋರಂಜನೆಯನ್ನುಂಟು ಮಾಡಲು ಸಮರ್ಥವಾದ ನಾದವು ಸ್ವರವೆಂದು ಕರೆಯಲ್ಪಡುತ್ತದೆ. ನಾದವು ಸೂಕ್ಷ್ಮ ಹಾಗೂ ಪ್ರಸ್ತ ಸ್ವರೂಪದ ನಾದವು ಶ್ರುತಿ ಎಂದೂ ಅದೇ ಸಾಕಷ್ಟು ಸ್ಕೂಲ ಹಾಗೂ ದೀರ್ಘವಾಗಿದ್ದರೆ ಸ್ವರವೆಂದೂ ತಾತ್ಪರ್ಯ, <poem> ನನು ಶ್ರುತಿಶ್ಚತುರ್ಥ್ಯಾದಿ ರವಂ ಸ್ವರಕಾರಣಂ <br> ತ್ರಾದೀನಾಂ ತತ್ರ ಪೂರ್ವಾಸಾಂ ಶ್ರುತೀನಾಂ ಹೇಳುತಾ ಕಥಂ <br> ಬೂಮಸ್ತುರ್ಯಾತೃತೀಯಾದಿ: ಶ್ರುತಿಃ ಪೂರ್ವಾಭಿಕಾಂಕ್ಷೆಯಾ <br> ನಿರ್ಧಾರ್ಯತೇತಃ ಶ್ರುತಯಃ ಪೂರ್ವಾ ಅತ್ಯತ್ರಹೇತವಃ || <br> </poem> {{gap}}ಶ್ತ್ರುತಿನಿದಶ್ರನದ ಕುರಿತಾಗಿ ಹೇಳಬಹುದಾದ ಒಂದು ಆಕ್ಷೇಪವನ್ನೆತ್ತಿಕೊಂಡು ಅದಕ್ಕೆ ಸಮಾಧಾನವನ್ನು ಹೇಳುತ್ತಾನೆ- ಹಿಂದೆ ಶ್ರುತಿನಿದರ್ಶನದಲ್ಲಿ ಷಡ್ಡಾದಿಸ್ಟರಗಳು<noinclude></noinclude> 65ifih5w3oyn802pnte7mn32z9gyeqg ಪುಟ:ಕುಕ್ಕಿಲ ಸಂಪುಟ.pdf/೨೯೫ 104 97802 322329 273947 2026-05-24T19:03:04Z Pragathi. BH 7585 /* Validated */ 322329 proofread-page text/x-wiki <noinclude><pagequality level="4" user="Pragathi. BH" /> {{Right|ಸಂಗೀತ ರತ್ನಾಕರ - ವ್ಯಾಖ್ಯಾನ / ೨೭೯}}</noinclude> ಮಧ್ಯಮದ ನಾಲ್ಕು ದೀಪ್ತಾ, ಆಯತಾ, ಮೃದು, ಮಧ್ಯಾ ಜಾತಿಗಳ ಶ್ರುತಿಗಳು. ಪಂಚಮದ ನಾಲ್ಕು ಶ್ರುತಿಗಳು ಮೃದು, ಮಧ್ಯಾ, ಆಯತಾ, ಕರುಣಾ ಜಾತಿಗಳವು. ಧೈವತದಲ್ಲಿ ಕರುಣಾ, ಆಯತಾ, ಮಧ್ಯಾ ಎಂಬ ಮೂರು ಜಾತಿಯ ಶ್ರುತಿಗಳಿರುವು ದಾಗಿದೆ. ದೀಪ್ತಾ, ಮಧ್ಯಾ ಎಂಬೆರಡು ಜಾತಿಯ ಶ್ರುತಿಗಳು ನಿಷಾದ ಸ್ವರದಲ್ಲಿರುವವು. ಇನ್ನು ಈ ಐದೂ ಜಾತಿಗಳಲ್ಲಿ ಭೇದಗಳಲ್ಲಿ ಭೇದಗಳನ್ನು ಹೇಳುತ್ತಾನೆ. {{gap}}'''ತೀವ್ರಾ ರೌದ್ರೀ ವಜ್ರಕೋಗ್ರೆತ್ಯಕ್ಕಾದೀಪ್ತಾ ಚತುರ್ವಿಧಾ |'''<br> {{gap}}'''ಕುಮುದ್ವತ್ಯಾಯತಾ ಯಾಃ ಸ್ಯಾತ್‌ ಕ್ರೋಧಾ ಚಾಥ ಪ್ರಸಾರಿಣೀ |'''<br> {{gap}}'''ಸಂದೀಪಿನೀ ರೋಹಿಣೀ ಚ ಭೇದಾಃ ಪಂಚೇತಿ ಕೀರ್ತಿತಾಃ |'''<br> {{gap}}'''ದಯಾವತೀ ತಥಾ ಲಾಪಿನ್ಯಥ ಪ್ರೋಕ್ತಾ ಮದಂತಿಕಾ |'''<br> {{gap}}'''ತ್ರಯಸ್ಸೇ ಕರುಣಾ ಭೇದಾ ಮೃದೋರ್ಭೇದ ಚತುಷ್ಟಯಂ ||'''<br> {{gap}}'''ಮಂದಾ ಚ ರತಿಕಾ ಪ್ರೀತಿ: ಕ್ಷೇತಿ ಮಧ್ಯಾತು ಷಡ್ತಿದಾ |''' <br> {{gap}}'''ಛಂದೋವತೀ ರಂಜನೀ ಚ ಮಾರ್ಜನೀ ರಕಾ ತಥಾ |''' <br> {{gap}}'''ರಮ್ಯಾ ಚ ಕ್ಷೇಭಿಣೀತ್ಯಾಸಾಮಥ ಬೂಮಃ ಸ್ವರಸ್ಥಿತಿಂ |''' <br> {{gap}}ದೀಪ್ತಾ ಜಾತಿಯಲ್ಲಿ ತೀವ್ರಾ, ರೌದ್ರೀ, ವಜ್ರಕಾ, ಉಗ್ರಾ ಎಂಬ ನಾಲ್ಕು ಭೇದಗಳಿವೆ. ಆಯತ ಜಾತಿಯಲ್ಲಿ ಕುಮುದ್ವತೀ, ಕ್ರೋಧಾ, ಪ್ರಸಾರಿಣೀ, ಸಂದೀಪಿನೀ, ರೋಹಿಣೀ ಎಂಬ ಐದು ಭೇದಗಳಿರುತ್ತವೆ. ದಯಾವತೀ, ಆಲಾಪಿನೀ, ಮದಂತಿಕಾ ಎಂಬ ಮೂರು ಕರುಣಾ ಜಾತಿಯ ಭೇದಗಳು, ಮಂದಾ, ಪ್ರೀತಿ, ರತಿಕಾ, ಕ್ಯಾ ಎಂಬ ನಾಲ್ಕು ಭೇದಗಳು ಮೃದು ಜಾತಿಯವು. ಮಧ್ಯಾಜಾತಿಯಲ್ಲಿ ಛಂದೋವತೀ, ಮಾರ್ಜನೀ, ರಂಜನೀ, ರಕ್ತಿಕಾ, ಕೋಭಿಣೀ, ರಮ್ಯಾ ಎಂಬ ಆರು ಭೇದಗಳಿರುತ್ತವೆ. ಈ ಭೇದಗಳಲ್ಲಿ ಯಾವ ಯಾವುವು ಷಾದಿ ಸ್ವರಗಳ ಶ್ರುತಿಗಳಲ್ಲಿರುವಂಥವೆಂಬುದನ್ನು ಹೇಳುತ್ತಾನೆ. {{gap}}'''ತೀವ್ರಾ ಕುಮುದ್ವತೀ ಮಂದಾ ಛಂದೋವತ್ಯಸ್ತು ಷಡ್ಡಗಾ'''<br> {{gap}}'''ದಯಾವತೀ ರಂಜನೀ ಚ ರತಿಕಾ ಚರ್ಷಭೇ ಸ್ಥಿತಾಃ ||''' <br> {{gap}}'''ರೌದ್ರೀ, ಕ್ರೋಧಾಚ ಗಾಂಧಾರೇ ವಜ್ರಕಾಥ ಪ್ರಸಾರಣೀ''' <br> {{gap}}'''ಪ್ರೀತಿಶ್ಚ ಮಾರ್ಜಿನೀತ್ಯತಾಃ ಶ್ರುತಯೋ ಮಧ್ಯಮಾಶ್ರಿತಾಃ''' <br> {{gap}}'''ಪ್ರತೀ ರಕ್ತಾಚ ಸಂದೀಪಿನ್ಯಾಲಾಪಿನ್ಯಪಿ ಪಂಚಮೇ''' <br> {{gap}}'''ಮದಂತೀ ರೋಹಿಣೀ ರಮ್ಯತಾಸ್ತಿ ಪ್ರಸ್ತು ಧೈವತೇ''' <br> {{gap}}'''ಉಗ್ರಾ ಚ ಕ್ಷೇಭಿಣೀತಿ ದ್ವೇ ನಿಷಾಧೇ ವಸತಃ ಶ್ರುತೀ''' <br> || ೩೯ || ಷಡ್ಕದ ಶ್ರುತಿಗಳಲ್ಲಿ ತೀವ್ರಾ, ಕುಮುದ್ವತೀ, ಮಂದಾ, ಛಂದೋವತೀ ಎಂಬ ಭೇದ ಗಳಿರುವುದಾಗಿದೆ. ಋಷಭದಲ್ಲಿ ದಯಾವತೀ, ರಂಜನೀ, ರತಿಕಾ ಎಂಬ ಭೇದಗಳಿರುವು ದಾಗಿದೆ. ಗಾಂಧಾರದಲ್ಲಿ ರೌದ್ರೀ ಮತ್ತು ಕ್ರೋಧಾ ಎಂಬವೂ, ಮಧ್ಯಮದಲ್ಲಿ ವತ್ರಿಕಾ, ಪ್ರಸಾರಿಣೀ, ಪ್ರೀತಿ, ಮಾರ್ಜನೀ ಎಂಬವೂ ಇರುತ್ತವೆ. ಕ್ಷಿ, ರಕ್ತಾ, ಸಂದೀಪಿನೀ, ಆಲಾಪಿನೀ ಎಂಬವು ಪಂಚಮದಲ್ಲಿರುವ ಜಾತಿಭೇದಗಳು, ಮದಂತೀ, ರೋಹಿಣೀ ರಮ್ಯಾ ಎಂಬವು ಧೈವತ ಶ್ರುತಿಗಳಲ್ಲಿಯೂ, ಉಗ್ರಾ, ಕೋಭಿಣೀ ಎಂಬೆರಡು ಭೇದಗಳು ನಿಷಾದದ ಶ್ರುತಿಗಳಲ್ಲಿಯೂ ಇರುತ್ತವೆ. <br> {{gap}}ದೀಪ್ತಾಯವಾದಿ ಈ ಐದು ಶ್ರುತಿಗಳು ಸಾಮಗಾನ ಪ್ರಯೋಗದಲ್ಲಿ ರಂಜನಾರ್ಥ ವಾಗಿ ಸ್ವರಗಳಲ್ಲಿ ಸಾಧಿಸತಕ್ಕ ಗುಣವಿಶೇಷಗಳು, ಹೊರತು ಉಚ್ಚನೀಚ ಶ್ರುತಿಗಳಲ್ಲ.<noinclude></noinclude> sr1q93gy7advptpja4r895fva3fvflo ಪುಟ:ಕುಕ್ಕಿಲ ಸಂಪುಟ.pdf/೩೧೯ 104 97823 322481 273298 2026-05-25T10:29:18Z Pragathi. BH 7585 /* Validated */ 322481 proofread-page text/x-wiki <noinclude><pagequality level="4" user="Pragathi. BH" />{{right|ಎರಡು ವಿಮರ್ಶೆಗಳು / ೩೦೩}}</noinclude>ಬ್ರಾಹ್ಮಣ, ಸಂಹಿತೆ, ಶಿಕ್ಷಾ, ಪ್ರಾತಿಶಾಖ್ಯ, ರಾಮಾಯಣ, ಭಾರತ, ತೈತ್ತಿರೀಯ ಉಪನಿಷತ್ತು, ನಾರಿದೀ (?) ಹರಿವಂಶ, ಪುರಾಣಗಳು, ಭರತನ ನಾಟ್ಯಶಾಸ್ತ್ರಾದಿಗಳು ಮೊದಲಾಗಿ ೧೦೨೧ನೆಯ ಇಸವಿಯ ವರೆಗೆ ಹುಟ್ಟಿದ ಸಂಗೀತ ಶಾಸ್ತ್ರಗ್ರಂಥಗಳ ಸುದೀರ್ಘವಾದ ಪಟ್ಟಿಯನ್ನು ಕೊಟ್ಟು ಅವುಗಳಲ್ಲಿ ಸಂಗೀತದ ಆಲೋಚನೆ ಇದೆ' ಎಂದಿಷ್ಟೇ ಹೇಳಿ ಮುಗಿಸಿದ್ದಾರೆ. {{gap}}ಎರಡನೆಯದಾದ ಕರ್ಣಾಟಕ ಸಂಗೀತದ ಬೆಳವಣಿಗೆ ಎಂಬ ಅಧ್ಯಾಯವೂ ಮೊದಲ ಅಧ್ಯಾಯದಲ್ಲಿ ಹೇಳಿದ ಭರತ ಮತಂಗಾದಿ ಪುರಾತನ ಹಾಗೂ ವೆಂಕಟಮಖಿಯೇ ಮೊದಲಾದ ಅರ್ವಾಚೀನ ಶಾಸ್ತ್ರಕರ್ತರ ಹಾಗೂ ಅವರು ರಚಿಸಿರುವ ಗ್ರಂಥಗಳ ಹೆಸರುಗಳೊಂದಿಗೆ ತ್ಯಾಗರಾಜರು, ದೀಕ್ಷಿತರು, ಶ್ಯಾಮಾಶಾಸ್ತ್ರಿಗಳು, ಮೈಸೂರು ಸದಾಶಿವ ರಾಯರು, ವೀಣೆಶೇಷಣ್ಣ, ದಾಸಕೂಟ, ಅಕ್ಕಮಹಾದೇವಿ, ಬಸವಣ್ಣ, ಸರ್ಪಭೂಷ ಶಿವಯೋಗಿ ಇತ್ಯಾದಿ ಕೆಲವು ಹೆಸರುಗಳನ್ನೂ ಹೆಚ್ಚಿಗೆ ಸೇರಿಸಿಕೊಂಡು ಕೊನೆಗೆ ಇವರೆಲ್ಲರಿಂದಲೂ ತೆರೆದ ಮಾರ್ಗದಲ್ಲಿ ನಾವು ಸಾಗಬೇಕು'' ಎಂಬ ಹಿತವಚನದಲ್ಲಿ ಪರಿಸಮಾಪ್ತಿಗೊಳ್ಳುತ್ತದೆ. {{gap}}ಮೂರನೆಯದಾಗಿ 'ಸಂಗೀತ' ಎಂಬ ಅಧ್ಯಾಯವೇ ಎಲ್ಲಕ್ಕಿಂತ ದೊಡ್ಡದು ಹಾಗೂ ಮುಖ್ಯವಾದ್ದು-ಹದಿನೇಳು ಪುಟಗಳಲ್ಲಿದೆ. ಗ್ರಂಥಕರ್ತರು ಇದರಲ್ಲಿ ಸಂಗೀತದ ನಾದ, ಶ್ರುತಿ, ಸ್ವರ, ಗ್ರಾಮ, ಜಾತಿ, ಮೂರ್ಛನೆ, ವರ್ಣ, ಅಲಂಕಾರಾದಿಗಳ ಲಕ್ಷಣಗಳನ್ನು ಸಂಕ್ಷೇಪತಃ ಕೊಟ್ಟಿರುತ್ತಾರೆ. ಅವುಗಳಲ್ಲಿ ಹೆಚ್ಚಿನವು ಅಸ್ಪಷ್ಟ ಹಾಗೂ ಶಾಸೂಕ್ತ ಲಕ್ಷಣಗಳಿಗಿಂತ ಭಿನ್ನವಾಗಿಯೂ ಸಂದೇಹಾಸ್ಪದವಾಗಿಯೂ ಕಾಣುವುದರಿಂದ ವಿದ್ಯಾರ್ಥಿ ಗಳೂ ವಿದ್ವಾಂಸರೂ ಆಯಾ ಶಾಸ್ತ್ರಗ್ರಂಥಗಳನ್ನು ಪರಿಶೀಲಿಸಿ ನಿಜಾಂಶವನ್ನು ಕಂಡು ಕೊಳ್ಳುವುದೇ ವಿಹಿತವೆಂದು ಸೂಚಿಸಬಯಸುತ್ತೇವೆ. ಅಂಥ ಕೆಲವನ್ನು ಇಲ್ಲಿ ಉದಾಹರಿಸಬಹುದು. {{gap}}೧. ಒಂದೊಂದು ಸ್ಥಾಯಿಯಲ್ಲಿ ಉಂಟಾಗಬಹುದಾದ ೨೨ ಶ್ರುತಿಗಳು ಎಂಬ ನಾದವಿಶೇಷಗಳನ್ನು ಕೆಲವು ವಿಧಿಗಳಿಗೆ ಒಳಪಡಿಸಿ ಚಿಕ್ಕ ಚಿಕ್ಕ ಗುಂಪುಗಳಾಗಿ ಧ್ವನಿಸಿದೆವಾದರೆ ಆ ಶ್ರುತಿಗಳ ಗುಂಪುಗಳು ರಂಜನೆಯಿಂದ ಕೂಡಿದ ಸ್ವರವೆಂಬ ರೂಪವನ್ನು ಹೊಂದುತ್ತವೆ. (ಪು. ೨೦) <br> {{gap}}೨. 'ಸ' ಎಂಬ ಷಡ್ಡಸ್ಟರ ಮೊದಲನೇ ನಾಲ್ಕು ಶ್ರುತಿಗಳನ್ನು ಒಂದರ ಹಿಂದೆ ಒಂದ ರಂತೆ ಸೇರಿಸಿ ಉಚ್ಚರಿಸುವುದರಿಂದ ಉಂಟಾಗುತ್ತದೆ. ಇತ್ಯಾದಿ. (ಪು. ೨೦-೨೧)<br> ೩. ೨೨ ಶ್ರುತಿಗಳೆಲ್ಲವನ್ನೂ ಸ್ವರಗಳಾಗಿ ಮಾಡಬೇಕಾದರೆ ಅವುಗಳನ್ನು ಕೆಲವು ವಿಧಿ ಗಳಿಗೆ ಒಳಪಡಿಸಬೇಕು. ಆದುದರಿಂದ ಸ್ವರಗಳನ್ನು ಉಂಟುಮಾಡುವಾಗ ಒಂದು ತಾಯಿಯಂತಿರುವ ಅಥವಾ ಯಜಮಾನನಂತಿರುವ, ಶ್ರುತಿ ಸಮೂಹವನ್ನು, ಅಂದರೆ ಸ್ವರವನ್ನು ಆಧಾರವಾಗಿಟ್ಟುಕೊಂಡು ಅದರ ಅಂಶಗಳಾಗಿಯೇ ಬೇರೆಬೇರ ಸ್ವರಗಳು ರೂಪತಾಳುತ್ತವೆ. (೨೦-೨೧)<br> ೪. ಈಗಲೂ ಕೆಲವು ರಾಗಗಳನ್ನು ಮಧ್ಯಮಗ್ರಾಮದಲ್ಲೇ ಹಾಡುತ್ತಾರೆ. <br> ೫. ಶಂಕರಾಭರಣದಲ್ಲಿ (ರಾಗದಲ್ಲಿ) 'ಸ'ದಿಂದ ಮೊದಲಾಗುವ ಮೂರ್ಛನೆಯು ನವರೋಜ್ ರಾಗವಾಗುತ್ತವೆ. (೨೭)<br> - ೬. ೨೨ ಶ್ರುತಿಗಳಲ್ಲಿ ೧೬ ಸ್ವರ ಸ್ಥಾನಗಳನ್ನು ಉಪಯೋಗಿಸಿಕೊಂಡು ೭೨ ಮೇಳಕರ್ತ ರಾಗಗಳರಚನೆಯಾಗಿದೆ..... ನಾಲ್ಕರಿಂದ ೨೨ರ ವರೆಗೂ ಸ್ವರಗಳ ಹೆಸರುಗಳೇ<noinclude></noinclude> 7dddbi7hqb3yaxpbyb7pl9xdt7uf22v ಪುಟ:ಕುಕ್ಕಿಲ ಸಂಪುಟ.pdf/೩೨೮ 104 97832 322350 273930 2026-05-25T04:23:53Z Pragathi. BH 7585 /* Validated */ 322350 proofread-page text/x-wiki <noinclude><pagequality level="4" user="Pragathi. BH" />೩೧೦ / ಕುಕ್ಕಿಲ ಸಂಪುಟ</noinclude>- ಸೋಮೇಶ್ವರ ಹೇಳಿರುವುದು ಹೀಗೆ : ಸಾನುಪ್ರಾಸಂ ಪದ ದ್ವಂದ್ವಂ ಗಮಕದ ನಂತರಂ |<br> ತತೋ ವರ್ಣಾದಿಕಪದಮೇಕಮುತ್ಸಾಹ ಉಚ್ಯತೇ |<br> ಏವಮುತ್ಸಾಹ ಯುಗಳಂ ತೃತೀಯೇ ಚ ಪದದ್ವಯಂ |<br> {{Gap}}ಇವನು ಕೊಟ್ಟಿರುವ ಲಕ್ಷದಿಂದ ಮೊದಲ ಎರಡು ಪಾದಗಳಲ್ಲಿ ಎರಡೆರಡೆ ಪದಗಳಿದ್ದಂತೆ ತೋರುತ್ತದೆ. ಆ ಪಾದಾಂತ್ಯದಲ್ಲಿ ಮಾಡತಕ್ಕ ಪ್ರಯೋಗವೆಂಬ ಗಮಕಾಲಪ್ತಿಗೆ ಮೂರನೆಯ ಪದ ಸೇರತಕ್ಕದ್ದೆಂಬುದರಿಂದ ಬಂಧ ಲಕ್ಷಣದಲ್ಲಿ ಅದನ್ನು ಬಿಟ್ಟಿರಬಹುದೆಂಬುದಕ್ಕೆ ಕಾರಣವಿದೆ. ಶಾರ್ಙ್ಗದೇವನೂ ಮೂಲ ಲಕ್ಷಣದಲ್ಲಿ ಪದ ನಿಯಮವನ್ನು ಮಾತ್ರ ಹೇಳಿರುವುದು. ಹೀಗೆ ಇಂತಿಷ್ಟು ಪದಗಳಿರಬೇಕೆಂಬ ನಿಯಮ ವೊಂದೇ ಮೂಲತಃ ಎಲೆಯ ಲಕ್ಷಣವಾಗಿದ್ದುದರಿಂದ 'ಏಲಾಪದ' ಎಂಬ ಸಾರ್ಥಕವಾದ ಹೆಸರು ಇದಕ್ಕೆ ಪ್ರಸಿದ್ಧವಾಯಿತು. ಕಾಲಕ್ರಮೇಣ ನಾಯ್ಕಕ ದೇಶಗ್ರಹಣವಾಗಿ 'ಏಲಾಪದ' ಎಂಬುದಕ್ಕೆ ಬದಲು ಕೇವಲ 'ಪದ' ಎಂಬ ವ್ಯವಹಾರವೂ ರೂಢಿಯಲ್ಲಿ ಬಂತು- ಸತ್ಯಭಾಮೆಯು ಬರಿಯ 'ಭಾಮೆ'ಯಾದಂತೆ, ಬಲರಾಮ ಬರಿಯ 'ರಾಮ'ನೆಂದಾದಂತೆ. 'ದೇಶೈಲಾ ಪದವಾಚ್ಯತ್ವಂ ಭಟತೀವ ಧಾರ್ಯ ತಾಂ' ಎಂದು ವೆಂಕಟಮಖಿ ಹೇಳಿದ ಮಾತನ್ನು ಇಲ್ಲಿ ಲಕ್ಷಿಸಬಹುದು. {{Gap}}ಇನ್ನು ಗಣಮಾತ್ರಾದಿ ನಿಯಮಾನುಸಾರ ಪ್ರತ್ಯೇಕವಾಗಿ ವರ್ಣಿಸಲಾದ ಏಲಾ ಭೇದ ಗಳಲ್ಲಿ ಮುಖ್ಯವಾದವು ರತಿಲೇಖೆ, ಕಾಮಲೇಖೆ, ಬಾಣಲೇಖೆ ಎಂದು ಮೂರು. ಈ ಮೂರರಲ್ಲಿ ರತಿಲೇಖೆಯೇ ಸರ್ವ ಪ್ರಧಾನವಾದುದು. ಲಕ್ಷಣ ಗ್ರಂಥಕಾರರಲ್ಲ ಸಂಗೀತ ಪದ್ಧತಿಯಲ್ಲಿ ಇದನ್ನೇ ಮೂಲ ರೂಪವೆಂದು ಗ್ರಹಿಸಿದ್ದಾರೆ. ಈ ಹೆಸರುಗಳೇ ಸೂಚಿಸು ವಂತೆ ಇವು ಕ್ರಮವಾಗಿ ಮೂಲತಃ ರತಿ, ಕಾಮ, ಬಾಣ ಎಂಬ ಅಂಶಗಣಬದ್ಧವಾದ ಬಂಧಗಳು. (ಈ ಅಂಶಗಣಗಳು ಸಂಗೀತ ಗ್ರಂಥಗಳಲ್ಲಿ ಮಾತ್ರಾಗಣಗಳೆಂದು ಕರೆಯಲ್ಪಟ್ಟಿವೆ.) ರತಿಲೇಖಾರತಿಗಣೆ: ಕಾಮಲೇಖಾತು ಮಾನ್ಮಥ್ಯ: | ಬಾಣಲೇಖಾ ಬಾಣಗಣೆ: ಚಂದ್ರಲೇಖಾತು ಮಿಶ್ರಿತೈ: || ನಾಗವರ್ಮನು ರತಿ, ಕಾಮ, ಬಾಣ ಎಂಬ ಈ ಅಂಶಗಳನ್ನು ಬ್ರಹ್ಮ, ವಿಷ್ಣು, ರುದ್ರ ಎಂಬ ಸಂಜ್ಞೆಗಳಿಂದ ವ್ಯವಹರಿಸಿದ್ದಾನೆ. ಮತಂಗನಿಂದ ವೆಂಕಟಮಖಿಯವರೆಗಣ ಸಂಗೀತಶಾಸ್ತ್ರಗ್ರಂಥಗಳೆಲ್ಲ ದೇಶೈಲೆಗಳಲ್ಲಿ 'ರತಿಲೇಖೆ'ಯೇ ಮೂಲವೂ ಪ್ರಧಾನವೂ ಆದುದೆಂದು ಪರಿಗಣಿಸಿವೆ. ಶುದ್ಧಸೂಡಗಳ ಪ್ರಸಿದ್ಧಿಯಳಿಯುತ್ತ ಸಾಲಗ ಸೂಡಗಳು ಮುಂದೆ ಬಂದಿರುವ ವೆಂಕಟಮಖಿಯ ಕಾಲದಲ್ಲಿ ಸಹ 'ರತಿಲೇಖೆ'ಯೊಂದು ಉಳಿದಿತ್ತು ಎಂದು ಅವನ ಗ್ರಂಥದಿಂದ ತಿಳಿಯುತ್ತದೆ. ಶಾರ್ಙ್ಗದೇವಾದಿಗಳು ಹೇಳಿದ ಇತರ ಏಲಾ ಭೇದಗಳನ್ನೆಲ್ಲಾ ಪ್ರಾಕೃಸಿದ್ದ ಅಥವಾ ರೂಢಿ ಬಾಹಿರವೆಂದು ಕಡೆಗಣಿಸಿದ ಇದನ್ನೊಂದನ್ನು ಮಾತ್ರ ಲಕ್ಷಣಿಸಿದ್ದಾನೆ. ಈ ಕುರಿತು ಆತನ ಹೇಳಿಕೆ ಹೀಗಿದೆ- ಏಲಾಸ್ತು ಬಹವಃ ಸಂತಿ ಮತಂಗಾದ್ಯಾಗಮೋದಿತಾಃ | <br> ಶ್ರೀಮತಾ ಶಾರ್ಙ್ಗದೇವೇನ ಸಂಕ್ಷಿಪ್ರೋಕ್ಕಾ ಸುತಾಃ ಪುನಃ | <br> ಇದಾನೀಂ ನೈವ ಲಕ್ಷ್ಮೀ ತಾ: ಸಂಲಕ್ಷಂ ತೇಪಿ ಕುತ್ರಚಿತ್ | <br> ಇತ್ಯಸ್ಮಾಭಿರ್ವಿಸೃಜೈತಾ ಮಾಲಾ ಪ್ರತಿಪಾದ್ಯತೇ | <br> ರತಿಲೇಖಾಭಿಧಾನೈಕಾ ಮಾತ್ರೆಲಾ ಪಾರ್ವತೀ ಮತಾ | ಈತ<noinclude></noinclude> 3oadppvddawhxr5kqez52757snoirvj ಪುಟ:ಕುಕ್ಕಿಲ ಸಂಪುಟ.pdf/೩೫೪ 104 97858 322349 273864 2026-05-25T04:23:37Z Pragathi. BH 7585 /* Validated */ 322349 proofread-page text/x-wiki <noinclude><pagequality level="4" user="Pragathi. BH" />೩೩೬ / ಕುಕ್ಕಿಲ ಸಂಪುಟ</noinclude>'''ಸಂದಿಸಿರೆ ಕ೦ದಮುಂ ಪರ''' <br> '''ತೊಂದರಿಕೆಯ ವೃತ್ತಜಾತಿಯುಂ ಪದಮವು ತ''' | <br> '''ಳೊಂದಿರೆ ಪನ್ನೆರಡುವರಂ''' <br> '''ಸಂದುದು ಮೆಲ್ಬಾಡೆನಿಕ್ಕುವದು ಕನ್ನಡದೊಳ್''' || (೯೫೨) ಕಂದಪದ್ಯ, ಯಾವುದಾದರೂ ಒಂದು ವಿಧದ ವೃತ್ತ ಮತ್ತು ಹನ್ನೆರಡರವರೆಗೆ ಪದಗಳು (ತಾಳಬದ್ಧವಾದ ಹಾಡುಗಳು) ಇರುವ ಚಿಕ್ಕ ಪ್ರಬಂಧವಾದರೆ ಮೆಲ್ಬಾಡು ಎಂದು ಕರೆಯಲ್ಪಡುತ್ತದೆ ಎಂದರ್ಥ. '''ಹದಿನೈದುಮಿರ್ಪತೈದುಂ''' <br> '''ಪದಂ ಯಥಾಸಂಭವಂ ಪ್ರಬಂಧದ ಮೆಯೊಳ್ |''' <br> '''ಪುದಿದೊದವಿ ನೆಗಳ್ಳೋದಂತದು''' <br> '''ಸದಲ೦ಕಾರಂ ರಸಾಸ್ಪದಂ ಪಾಡಕ್ಕುಂ ||''' <br> ಆ (೯೫೩) ಹದಿನೈದೋ ಇಪ್ಪತ್ತೈದೋ ಅಥವಾ ವಸ್ತುಗೌರವಕ್ಕೆ ತಕ್ಕಂತೆ ಇನ್ನಷ್ಟು ಹೆಚ್ಚ ಸಂಖ್ಯೆಯ ಪದಗಳಿರುವುದಾದರೆ ಆ ಪ್ರಬಂಧಕ್ಕೆ 'ಪಾಡು'ಅಥವಾ 'ಹಾಡು'ಎಂಬ ಹೆಸರೆಂದು ಮೇಲಿನ ಲಕ್ಷಣಪದ್ಯದ ಅರ್ಥವಾಗಿದೆ. ಇಂತಹ 'ಹಾಡು'ಗಳು ಒಂದಕ್ಕಿಂತ ಹೆಚ್ಚು ಸೇರಿದ ದೊಡ್ಡ ಪ್ರಬಂಧವು 'ಮೇಲ್ಪಾಡು' ಅಥವಾ 'ಬೆದಂಡೆಗಬ್ಬ'ವೆಂದು ಕರೆಯಲ್ಪಡುವುದೆಂದೂ ಹೇಳುತ್ತಾನೆ : <br> '''ಪಾಡುಗಳಿಂದಂ ತರಿಸಲೆ''' <br> '''ಮಾಡಿದುದಂ ಪಾಡುಗಬ್ಬವೆಂದು ಬುಧರ್ಕೋಂ |''' <br> '''ಡಾಡುವರದರಿಂ ದಲ್ ಮೇಲ್''' <br> '''ವಾಡುಂ ರೂಢಿಯ ಬೆದಂಡೆಗಬ್ಬ ಮುಮಕ್ಕುಂ ||''' <br> ಈ ಹಾಡುಗಬ್ಬವೇ 'ವರ್ಣಕ'. ಇವುಗಳಲ್ಲಿ ಬರುವ ಕಂದವೃತ್ತಾದಿ ಛಂದಸ್ಸುಗಳೂ ಇಲ್ಲಿ ಹಾಡಲ್ಪಡುವಂಥವು. ಛಂದಸ್ಸಿನ ಪದ್ಯಗಳನ್ನು ಹಾಡಬಾರದೆಂದಿಲ್ಲ. ಹಾಡುವ ಮೂಲಕ ವಿಶೇಷ ಶ್ರವ್ಯಗುಣವನ್ನು ಸಾಧಿಸಲೂ ಬಹುದು. ಆ ಮೂಲಕ ಒಂದು ಪದ್ಯಕ್ಕೆ ಅನೇಕ ಸ್ವರೂಪ ಗಳುಂಟಾಗುವುವು. ವಿಷಮಾಕ್ಷರಗಳುಳ್ಳ ಛಂದಸ್ಸನ್ನು ತಾಳಕ್ಕೆ ಒಪ್ಪಿಸಿಯೂ, ಲಯಬದ್ಧ ವಾದ ರಚನೆಯನ್ನು ಅನಿಬದ್ಧವಾಗಿಯೂ ಹಾಡಬಹುದು. ಆದರೆ ಈ ಕೃತ್ರಿಮಸ್ವರೂಪವು ಛಂದಸ್ಸಿನ ನಿಜರೂಪವಲ್ಲವೆಂಬುದೇ ತತ್ತ್ವಾರ್ಥ, ಛಂದಸ್ಸಿನ ಶ್ರವ್ಯ ಸ್ವರೂಪವು ಪಾಠದಿಂದ, ಎಂದರೆ ಛಂದಸ್ಸಿನ ನಿಯಮದಂತೆ ಓದುವುದರಿಂದ ವ್ಯಕ್ತವಾಗುವುದು. ಒಂದು ಛಂದಸ್ಸಿಗೆ ಸ್ವರೂಪವಿರುವುದು ಒಂದೇ. ಹಾಡುವಾಗ ಹಾಡುವಾಗ ಆ ಸ್ವರೂಪವು ಬದಲಾಗಿಯೇ ತೀರುವುದು. ಇಲ್ಲವಾದರೆ ಅದು ಗಾನಕ್ರಿಯೆಯೆಂದಾಗುವುದಿಲ್ಲ. ಆ ಪ್ರಕಾರ ವೃತ್ತಗಳನ್ನು ಹೇಗೆ ಹಾಡಬೇಕೆಂಬುದನ್ನೂ ಭರತನೇ ಹೇಳಿರುತ್ತಾನೆ- '''ವಿಷಮಾಂಶಾಕ್ಷರಾಣಿ ಸು: ಪದೈರರ್ಥವಶಾನುಗಾ: |''' <br> '''ಶಮ್ಯಾತಾಲೇನ ತಾ ಯೋಜ್ಯಾ ವರ್ಣೆನಾಕರ್ಷಿತೇನ ತು ||''' <br> (೩೨-೪೫) ಅವಾಂತರ ವ್ಯಾಖ್ಯಾನ 'ವಿಷಮಾಂಶಾನಿ-ಮಾತ್ರಾವೃತ್ತಾನಿ, ಅಂಶ ಹಿ ಚತುರ್ಮಾತ್ರಾದಿಃ | ವಿಷಮಾಕ್ಷರಾಣಿ- ವರ್ಣವೃತ್ತಾನಿ, ವಿಷಮಾಣಿ ವೈಷಮ್ಯ ಸಂಖ್‌ಯಾ<noinclude></noinclude> 8zpg5pip51m6448odzh8zqxqymyvz9d ಪುಟ:ಕುಕ್ಕಿಲ ಸಂಪುಟ.pdf/೩೫೬ 104 97860 322331 273387 2026-05-24T19:08:20Z Pragathi. BH 7585 /* Validated */ 322331 proofread-page text/x-wiki <noinclude><pagequality level="4" user="Pragathi. BH" />೩೩೮ / ಕುಕ್ಕಿಲ ಸಂಪುಟ</noinclude>ಪೂರ್ವದಲ್ಲಿ ರೂಢಿಯಲ್ಲಿದ್ದುವೆಂದು ಅವನೇ ತನ್ನ 'ಬೃಹದೆ ಶಿ'ಯಲ್ಲಿ ಹೇಳುತಾ ನೆ.* ಅವುಗಳಲ್ಲಿ ಛಂದಶ್ಯಾಸ್ತ್ರವು ಅಂಗೀಕರಿಸಿದ ಒಲೆಯು ನಾಗವರ್ಮನು ಕೊಟ್ಟಿರುವ ಪ್ರಕಾರ ಒಂದು ಮಾತ್ರ ಕಾಣುವುದು. ಕಾರಣವೆಂದರೆ ಮಿಕ್ಕವೆಲ್ಲ ಗೇಯವಸ್ತುಗಳು, ಸಂಗೀತಶಾಸ್ತ್ರಗ್ರಂಥಗಳಲ್ಲಿಯೂ ಇದೊಂದು ಭೇದವನ್ನು ಮಾತ್ರ 'ಛಂದಸ್ವತಿ'ಯೆಂದು ಕರೆದಿರುವುದರಿಂದ ಈಯಂಶ ಸ್ಪಷ್ಟವಾಗುವುದು. :ಪಂಚಕಾಮಾ ತಿಕಾ ಕಾಮೋಂತೇ ಚರಣತ್ರಯೇ<br> :ಪ್ರತ್ಯೇಕಂ ತಾಸು ಚೇದೇತಾಶ್ಚಂದಸ್ವತ್ಯ: ಪುರಾತನ್ಯ: ||<br> (ಸಂ. ರ. -೧೨೪) ಗಾಯತ್ರಾದಿ ವೈದಿಕ ಛಂದಸ್ಸುಗಳನ್ನು ಪ್ರಮಾಣವಾಗಿಟ್ಟುಕ್ಕೊಂಡು ಪ್ರಸ್ತಾರ ಕ್ರಮದಿಂದ ಪಡೆಯಲಾಗುವ ಸಂಸ್ಕೃತ ವೃತ್ತಗಳಲ್ಲಿ, ಸಾಕಷ್ಟು ಶ್ರವ್ಯಗುಣವಿರುವಂಥವುಗಳನ್ನಷ್ಟೇ ಪಾಠಕಾವ್ಯಗಳಲ್ಲಿ ಪ್ರಯೋಗಿಸತಕ್ಕದ್ದೆಂದೂ ಮಿಕ್ಕವುಗಳನ್ನು ಗೇಯಕಾವ್ಯಗಳಲ್ಲಿ ಗೀತ ಗಳಂತೆ ಹಾಡಬಹುದೆಂದೂ ಭರತನು ಹೇಳುವುದನ್ನು ಲಕ್ಷಿಸಬೇಕು. ಬುಧಾಃ | :ಅಸಂಖ್ಯೆಯ ಪ್ರಮಾಣಾನಿ ವೃತಾನ್ಯಾಹುರಥ್ಯ<br> :ಗಾಯತ್ರೀಪ್ರಕೃತಿಷಾಂ ಪ್ರಮಾಣಂ ಸಂವಿಧೀಯತೇ ||<br> :ಪ್ರಯೋಗಜಾನಿ ಸರ್ವಾಣ ಪ್ರಾಯಶೋ ನ ಭವಂತಿ <br> (08-88) ಗಾಯತ್ರಾದಿ ಛಂದಸ್ಸುಗಳಲ್ಲಿ ಅಸಂಖ್ಯವೆಂಬಷ್ಟು ವೃತ್ತಭೇದಗಳನ್ನು ಪಡೆಯಬಹು ದಾದರೂ ಅವೆಲ್ಲವೂ ಪಾಠಕ್ಕೆ ಪ್ರಯೋಗಾರ್ಹವಾಗುವುದಿಲ್ಲ, ಆದ್ದರಿಂದ ಕಾವ್ಯಾದಿ ಗಳಲ್ಲಿ ಪ್ರಯೋಗಿಸಲ್ಪಟ್ಟಿಲ್ಲ ಎಂಬ ತಾತ್ಪರ್ಯ. ಶ್ರವ್ಯಗುಣವುಳ್ಳ ಕೆಲವು ವೃತ್ತಗಳನ್ನು ಮಾತ್ರ ಭರತನು ಆಯ್ಕೆಯಿಂದ ನಿರೂಪಿಸಿ ಮತ್ತೂ ಹೇಳುತ್ತಾನೆ- :ಏವಮೇತಾನಿ ವೃತಾನಿ ಸಮಾನಿ ವಿಷಮಾಣಿ ಚ |<br> :ನಾಟಕಾದ್ಯಷು ಕಾವ್ಯಷು ಪ್ರಯೋಕ್ತವ್ಯಾನಿ ಸೂರಿಭಿಃ ||<br> :ಸಂತ್ಯನ್ಯಾನ್ಯಪಿ ವೃತ್ತಾನಿ ಯಾನ್ಯುಕ್ಕಾನೀಹ ಪಿಂಡಶಃ |<br> {{Rule}} ಕರ್ಣಾಟೈಲಾದಿಮಧ್ಯಾಂತವರ್ತನುಪ್ರಾಸಭೂಷಿತಾ ಏಲಾನಾಂ ಬಹವಃ ಸಂತಿ ವಿಶೇಷಾಸ್ತೇಷು ಕೇವಲಂ ವ್ಯುತ್ಪತ್ತಯೇ ನಿರೂಪ್ಯಂತೇ ಮತಂಗಾದ್ಯಾಗಮೋದಿತಾಃ || ಅಂಘ್ರ ಖಂಡದ್ವಯಂ ಸಾನುಪ್ರಾಸಮೇಕೇನ ಧಾತುನಾ ತತಃ ಪ್ರಯೋಗಸ್ತದನುಪಲ್ಲವಾಖ್ಯಂ ಪದತ್ರಯಂ || ದ್ವೇಸ್ಕೋ ವಿಲಂಬಿತೇ ತತ್ರ ತೃತೀಯಂ ದ್ರುತಮಾನತಃ ಏವಂ ಪಾದತ್ರಯಂ ಗೇಯಮುದ್ರಾಹೇ ತುಲ್ಯಧಾತುಕಂ || ಕೇವಲಂ ತು ತೃತೀಯಾಂಘ ಸಂಬೋಧಕಪದಾನ್ವಿತಃ ಪ್ರಯೋಗೋಂಽತ್ಯೋ ವಿಧಾತವೋ ನ ಪಲ್ಲವಪದಸ್ಥಿತಿ: || ಅಮುಂ ಪ್ರಯೋಗಮೇಲಾಖ್ಯಂ (ಪಂ) ಪ್ರಾಹುಃ ಸೋಮೇಶ್ವರಾದಯು ಏಲಾಸಾಮಾನ್ಯ ಲಕ್ಷ್ಮತತ್ ಪೂರ್ವಾಚಾರ್ಯ್ಕರುದೀರಿತಂ || ಷಟ್‌ಪಂಚಾಶದ್ಭುತಂ ಪ್ರೋಕ್ತಮಿತ್ರೇಲಾನಾಂ ಶತತ್ರಯಂ ಅನಂತತ್ವಾತ್ತು ಸಂಕೀರ್ಣಾ ನ ಸಂಖ್ಯಾತಿ ಹರಪ್ರಿಯಃ || (ಸಂ. ರ. ೪೮-೩೮) (ಸಂ. ರ. ೮-೧೩೧)<noinclude></noinclude> kaazg9toddclsgo8s45hrr7x7y81soc 322332 322331 2026-05-24T19:08:53Z Pragathi. BH 7585 322332 proofread-page text/x-wiki <noinclude><pagequality level="4" user="Pragathi. BH" />೩೩೮ / ಕುಕ್ಕಿಲ ಸಂಪುಟ</noinclude>ಪೂರ್ವದಲ್ಲಿ ರೂಢಿಯಲ್ಲಿದ್ದುವೆಂದು ಅವನೇ ತನ್ನ 'ಬೃಹದೆ ಶಿ'ಯಲ್ಲಿ ಹೇಳುತಾ ನೆ.* ಅವುಗಳಲ್ಲಿ ಛಂದಶ್ಯಾಸ್ತ್ರವು ಅಂಗೀಕರಿಸಿದ ಒಲೆಯು ನಾಗವರ್ಮನು ಕೊಟ್ಟಿರುವ ಪ್ರಕಾರ ಒಂದು ಮಾತ್ರ ಕಾಣುವುದು. ಕಾರಣವೆಂದರೆ ಮಿಕ್ಕವೆಲ್ಲ ಗೇಯವಸ್ತುಗಳು, ಸಂಗೀತಶಾಸ್ತ್ರಗ್ರಂಥಗಳಲ್ಲಿಯೂ ಇದೊಂದು ಭೇದವನ್ನು ಮಾತ್ರ 'ಛಂದಸ್ವತಿ'ಯೆಂದು ಕರೆದಿರುವುದರಿಂದ ಈಯಂಶ ಸ್ಪಷ್ಟವಾಗುವುದು. :ಪಂಚಕಾಮಾ ತಿಕಾ ಕಾಮೋಂತೇ ಚರಣತ್ರಯೇ<br> :ಪ್ರತ್ಯೇಕಂ ತಾಸು ಚೇದೇತಾಶ್ಚಂದಸ್ವತ್ಯ: ಪುರಾತನ್ಯ: ||<br> (ಸಂ. ರ. -೧೨೪) ಗಾಯತ್ರಾದಿ ವೈದಿಕ ಛಂದಸ್ಸುಗಳನ್ನು ಪ್ರಮಾಣವಾಗಿಟ್ಟುಕ್ಕೊಂಡು ಪ್ರಸ್ತಾರ ಕ್ರಮದಿಂದ ಪಡೆಯಲಾಗುವ ಸಂಸ್ಕೃತ ವೃತ್ತಗಳಲ್ಲಿ, ಸಾಕಷ್ಟು ಶ್ರವ್ಯಗುಣವಿರುವಂಥವುಗಳನ್ನಷ್ಟೇ ಪಾಠಕಾವ್ಯಗಳಲ್ಲಿ ಪ್ರಯೋಗಿಸತಕ್ಕದ್ದೆಂದೂ ಮಿಕ್ಕವುಗಳನ್ನು ಗೇಯಕಾವ್ಯಗಳಲ್ಲಿ ಗೀತ ಗಳಂತೆ ಹಾಡಬಹುದೆಂದೂ ಭರತನು ಹೇಳುವುದನ್ನು ಲಕ್ಷಿಸಬೇಕು. ಬುಧಾಃ | :ಅಸಂಖ್ಯೆಯ ಪ್ರಮಾಣಾನಿ ವೃತಾನ್ಯಾಹುರಥ್ಯ<br> :ಗಾಯತ್ರೀಪ್ರಕೃತಿಷಾಂ ಪ್ರಮಾಣಂ ಸಂವಿಧೀಯತೇ ||<br> :ಪ್ರಯೋಗಜಾನಿ ಸರ್ವಾಣ ಪ್ರಾಯಶೋ ನ ಭವಂತಿ <br> (08-88) ಗಾಯತ್ರಾದಿ ಛಂದಸ್ಸುಗಳಲ್ಲಿ ಅಸಂಖ್ಯವೆಂಬಷ್ಟು ವೃತ್ತಭೇದಗಳನ್ನು ಪಡೆಯಬಹು ದಾದರೂ ಅವೆಲ್ಲವೂ ಪಾಠಕ್ಕೆ ಪ್ರಯೋಗಾರ್ಹವಾಗುವುದಿಲ್ಲ, ಆದ್ದರಿಂದ ಕಾವ್ಯಾದಿ ಗಳಲ್ಲಿ ಪ್ರಯೋಗಿಸಲ್ಪಟ್ಟಿಲ್ಲ ಎಂಬ ತಾತ್ಪರ್ಯ. ಶ್ರವ್ಯಗುಣವುಳ್ಳ ಕೆಲವು ವೃತ್ತಗಳನ್ನು ಮಾತ್ರ ಭರತನು ಆಯ್ಕೆಯಿಂದ ನಿರೂಪಿಸಿ ಮತ್ತೂ ಹೇಳುತ್ತಾನೆ- :ಏವಮೇತಾನಿ ವೃತಾನಿ ಸಮಾನಿ ವಿಷಮಾಣಿ ಚ |<br> :ನಾಟಕಾದ್ಯಷು ಕಾವ್ಯಷು ಪ್ರಯೋಕ್ತವ್ಯಾನಿ ಸೂರಿಭಿಃ ||<br> :ಸಂತ್ಯನ್ಯಾನ್ಯಪಿ ವೃತ್ತಾನಿ ಯಾನ್ಯುಕ್ಕಾನೀಹ ಪಿಂಡಶಃ |<br> {{Rule}} ಕರ್ಣಾಟೈಲಾದಿಮಧ್ಯಾಂತವರ್ತನುಪ್ರಾಸಭೂಷಿತಾ ಏಲಾನಾಂ ಬಹವಃ ಸಂತಿ ವಿಶೇಷಾಸ್ತೇಷು ಕೇವಲಂ ವ್ಯುತ್ಪತ್ತಯೇ ನಿರೂಪ್ಯಂತೇ ಮತಂಗಾದ್ಯಾಗಮೋದಿತಾಃ || ಅಂಘ್ರ ಖಂಡದ್ವಯಂ ಸಾನುಪ್ರಾಸಮೇಕೇನ ಧಾತುನಾ ತತಃ ಪ್ರಯೋಗಸ್ತದನುಪಲ್ಲವಾಖ್ಯಂ ಪದತ್ರಯಂ || ದ್ವೇಸ್ಕೋ ವಿಲಂಬಿತೇ ತತ್ರ ತೃತೀಯಂ ದ್ರುತಮಾನತಃ ಏವಂ ಪಾದತ್ರಯಂ ಗೇಯಮುದ್ರಾಹೇ ತುಲ್ಯಧಾತುಕಂ || ಕೇವಲಂ ತು ತೃತೀಯಾಂಘ ಸಂಬೋಧಕಪದಾನ್ವಿತಃ ಪ್ರಯೋಗೋಂಽತ್ಯೋ ವಿಧಾತವೋ ನ ಪಲ್ಲವಪದಸ್ಥಿತಿ: || ಅಮುಂ ಪ್ರಯೋಗಮೇಲಾಖ್ಯಂ (ಪಂ) ಪ್ರಾಹುಃ ಸೋಮೇಶ್ವರಾದಯು ಏಲಾಸಾಮಾನ್ಯ ಲಕ್ಷ್ಮತತ್ ಪೂರ್ವಾಚಾರ್ಯ್ಕರುದೀರಿತಂ || ಷಟ್‌ಪಂಚಾಶದ್ಭುತಂ ಪ್ರೋಕ್ತಮಿತ್ರೇಲಾನಾಂ ಶತತ್ರಯಂ ಅನಂತತ್ವಾತ್ತು ಸಂಕೀರ್ಣಾ ನ ಸಂಖ್ಯಾತಿ ಹರಪ್ರಿಯಃ || </poem> (ಸಂ. ರ. ೪೮-೩೮) (ಸಂ. ರ. ೮-೧೩೧)<noinclude></noinclude> eijdxpenbloobk12gihxltzgngk1vx9 ಪುಟ:ಕುಕ್ಕಿಲ ಸಂಪುಟ.pdf/೩೫೭ 104 97861 322341 272208 2026-05-25T04:13:55Z Pragathi. BH 7585 /* Validated */ 322341 proofread-page text/x-wiki <noinclude><pagequality level="4" user="Pragathi. BH" />{{right|ಪೀಠಿಕೆ / ೩೩೯}}</noinclude>ನ ಚ ತಾನಿ ಪ್ರಯೋಜ್ಯಾನಿ ಹತಶೋಭಾನಿ ತಾನಿ ಹಿ || ಯಾನ್ಯತ್ರ ಪ್ರತಿಷಿದ್ದಾನಿ ಗೀತಕೇ ತಾನಿ ಯೋಜಯೇತ್ || (ಭ. ನಾ. ೧೫-೧೯೪) ಇವಿಷ್ಟೇ ಸಮವಿಷಮವೃತ್ತಗಳನ್ನು ಕಾವ್ಯನಾಟಕಾದಿಗಳಲ್ಲಿ ಪ್ರಯೋಗಿಸತಕ್ಕದ್ದು, ಪ್ರಸ್ತಾರಸಂಖ್ಯೆಯಲ್ಲಿ ಹೇಳಿದ ಉಳಿದ ವೃತ್ತಗಳು ಹತಶೋಭೆಯವು, ಎಂದರೆ ಶ್ರವ್ಯ ಗುಣವಿಲ್ಲದಿರುವಂಥವು, ಅಂಥವನ್ನು ಗೀತಕಾವ್ಯಗಳಲ್ಲಿ ಪ್ರಯೋಗಿಸಬೇಕು ಎಂದರ್ಥ. ಇದರ ವ್ಯಾಖ್ಯಾನದಲ್ಲಿ ಅಭಿನವಗುಪ್ತನೂ, 'ನನು ಹತಶೋಭಾನೀತಿ ಚೇತ್ ಕಥಂ ಪ್ರಯೋಜಾನೀತ ಆಹ ಯಾನ್ಯತ್ರ ಪ್ರತಿಷಿದ್ಧಾ ನೀತಿ | ಗೀತಂ ಪಾಠಮಾನತ್ವಾಭಾವಾತ್ ನ ವೃತ್ತಗತಾ ಶ್ರವ್ಯತಾ ಆಪೇಕ್ಷ್ಯತೇ.... ಗೀಯಮಾನತಯಾ ಶೋಭಾತಿಶಯೋಭವತಿ ಶ್ಲೋಕಃ | ಸ್ರಗ್ಧರಾದೀನಾಂ ತು ಪಾಠನ' ಎನ್ನುತ್ತಾನೆ. ಅದಕ್ಕಾಗಿಯೇ ಭರತನು ಶ್ರವ್ಯಗುಣವನ್ನು ಛಂದಸ್ಸಿನ ಲಕ್ಷಣವೆಂದೇ ಹೇಳಿದ್ದಾನೆ- <poem> ನಿಬದ್ಧಾಕ್ಷರಸಂಯುಕ್ತಂ ಯತಿಚ್ಛೇದಸಮನ್ವಿತಂ | ನಿಬದ್ಧ೦ ತು ಪದಂ ಜೇಯಂ ಪ್ರಮಾಣನಿಯತಾತ್ಮಕಂ || </poem> ವ್ಯಾಖ್ಯೆ- 'ನಿಬದ್ಧ ಭಾವಿಛಂದೋವಿಧಿನಾಬದ್ಧ, ವರ್ಣಾನಾಂ ಗುರುಲಘುತ್ವಭೇದಃ; ಪಾದಸಂಖ್ಯಾ ಪ್ರಮಾಣೇನ- ಶೋತೇಂದ್ರಿಯೇಣ ನಿಯತಆತ್ಮಾ ಯತ್ರ, ಶ್ರವ್ಯತ್ವಂ ಇತ್ಯರ್ಥ ಇದಂ ತತ್ ಪದ್ಯಂ ಪಾದೇಷು ಭವತಿ', ಅಕ್ಷರ ಯತಿ ಮುಂತಾದ ಛಂದೋ ನಿಯಮಗಳಿರುವ ರಚನೆಯೇ ನಿಬದ್ಧಪದ, ಈ ನಿಯಮಗಳು ಶೌಂದ್ರಿಯಕ್ಕೆ ತೃಪ್ತಿಕರವಾದ ಶ್ರವ್ಯಗುಣವನ್ನುಂಟುಮಾಡಲು ಸಮರ್ಥವಾಗಿರಬೇಕು. ಅಂಥ ನಾಲ್ಕು ಪಾದಗಳಿರುವ ರಚನೆಯು ಛಂದಸ್ಸಿನ 'ಪದ್ಯ'ವಾಗಿದೆ ಎಂಬ ತಾತ್ಪರ್ಯ. {{Right|ಲೌಕಿಕ ಸಂಸ್ಕೃತ ಛಂದಸ್ಸು}} ವೇದಗಳಿಂದ ಬಂದ ಛಂದಸ್ಸು ಎಂಬ ಹೆಸರಿಗೆ ಅಲ್ಲಿದ್ದ ನಿಜಾರ್ಥವು ಲೌಕಿಕದಲ್ಲಿಲ್ಲವಾದರೂ ಮೂಲದ ವ್ಯವಹಾರವೇ ರೂಢಿಯಲ್ಲಿ ಉಳಿದು ಬಂದಿದೆ.* ಶಾಸ್ತ್ರಕರ್ತರಾದರೆ 'ಛಾದನೆ' ಎಂಬ ಆ ಮೂಲಾರ್ಥವನ್ನು ಇಲ್ಲಿಯೂ ಸಮರ್ಥಿಸುತ್ತಾರೆ. ಎಂದರೆ ಯತಿಪಾದಾದಿ ನಿಯಮಗಳಿಗೆ ಒಳಪಡುವ ರಚನೆಯಾದುದರಿಂದ ಈ ನಿಯಮ ಗಳೇ ಪದ್ಯದ ಆಚ್ಛಾದನೆಗಳು ಎಂದು- 'ಯತ್ಯಾದ್ಯಾಚ್ಛಾದಕಂ ಛಂದಃ ಅಕ್ಷರ ನಿಯಮಶ್ರಂದ ವಿಚ್ಛೇದ ಏವ ಛಂದಃ' ಇತ್ಯಾದಿ ನಿರ್ವಚನ ಕೊಡುತ್ತಾರೆ. ಅದಲ್ಲದೆ ಕೆಲವರು, ಶ್ರವ್ಯಗುಣವೇ ಇಲ್ಲಿ ಪ್ರಧಾನವಾಗಿರುವುದರಿಂದ ಹ್ಲಾದನಾರ್ಥವಿರುವ 'ಚಂದ್' ಧಾತುವಿನಿಂದ ಈ ಶಬ್ದದ ನಿಷ್ಪತ್ತಿಯನ್ನು ಹೊರಡಿಸುತ್ತಾರೆ. ಹೇಗೂ ಇರಲಿ, ಓದುವಾಗ ಶ್ರವ್ಯಗುಣವಿರಬೇಕಾದುದು ಲೌಕಿಕ ಛಂದಸ್ಸಿನ ಮುಖ್ಯ ಲಕ್ಷಣ, ಹಾಗೂ ವೇದಮಂತ್ರಗಳಿಗೆ ಛಂದಸ್ಸುಗಳೆಂಬ ಹೆಸರು ಯಾವುದರಿಂದ ಬಂದಿದೆ ಎಂಬ ಕುರಿತು ವೈದಿಕ ಛಂದಶ್ಯಾಸ್ತ್ರಗಳಲ್ಲಿ ಏನು ಹೇಳಿದೆ ಎಂಬುದನ್ನು ಸಂಗ್ರಹಿಸಿ ಅನುಬಂಧ ೩ರಲ್ಲಿ (ಪು. ೧೩೩-೪೩) ಕೊಟ್ಟಿರುತ್ತೇವೆ. ವಾಚಕರು ಮೊದಲಾಗಿ ಅದನ್ನು ನೋಡಿಕೊಳ್ಳುವುದು ವಿಹಿತ.<noinclude></noinclude> svx570200ube7kjyl38v6ctcskpnj5o 322342 322341 2026-05-25T04:14:30Z Pragathi. BH 7585 322342 proofread-page text/x-wiki <noinclude><pagequality level="4" user="Pragathi. BH" />{{right|ಪೀಠಿಕೆ / ೩೩೯}}</noinclude>ನ ಚ ತಾನಿ ಪ್ರಯೋಜ್ಯಾನಿ ಹತಶೋಭಾನಿ ತಾನಿ ಹಿ || ಯಾನ್ಯತ್ರ ಪ್ರತಿಷಿದ್ದಾನಿ ಗೀತಕೇ ತಾನಿ ಯೋಜಯೇತ್ || (ಭ. ನಾ. ೧೫-೧೯೪) ಇವಿಷ್ಟೇ ಸಮವಿಷಮವೃತ್ತಗಳನ್ನು ಕಾವ್ಯನಾಟಕಾದಿಗಳಲ್ಲಿ ಪ್ರಯೋಗಿಸತಕ್ಕದ್ದು, ಪ್ರಸ್ತಾರಸಂಖ್ಯೆಯಲ್ಲಿ ಹೇಳಿದ ಉಳಿದ ವೃತ್ತಗಳು ಹತಶೋಭೆಯವು, ಎಂದರೆ ಶ್ರವ್ಯ ಗುಣವಿಲ್ಲದಿರುವಂಥವು, ಅಂಥವನ್ನು ಗೀತಕಾವ್ಯಗಳಲ್ಲಿ ಪ್ರಯೋಗಿಸಬೇಕು ಎಂದರ್ಥ. ಇದರ ವ್ಯಾಖ್ಯಾನದಲ್ಲಿ ಅಭಿನವಗುಪ್ತನೂ, 'ನನು ಹತಶೋಭಾನೀತಿ ಚೇತ್ ಕಥಂ ಪ್ರಯೋಜಾನೀತ ಆಹ ಯಾನ್ಯತ್ರ ಪ್ರತಿಷಿದ್ಧಾ ನೀತಿ | ಗೀತಂ ಪಾಠಮಾನತ್ವಾಭಾವಾತ್ ನ ವೃತ್ತಗತಾ ಶ್ರವ್ಯತಾ ಆಪೇಕ್ಷ್ಯತೇ.... ಗೀಯಮಾನತಯಾ ಶೋಭಾತಿಶಯೋಭವತಿ ಶ್ಲೋಕಃ | ಸ್ರಗ್ಧರಾದೀನಾಂ ತು ಪಾಠನ' ಎನ್ನುತ್ತಾನೆ. ಅದಕ್ಕಾಗಿಯೇ ಭರತನು ಶ್ರವ್ಯಗುಣವನ್ನು ಛಂದಸ್ಸಿನ ಲಕ್ಷಣವೆಂದೇ ಹೇಳಿದ್ದಾನೆ- <poem> ನಿಬದ್ಧಾಕ್ಷರಸಂಯುಕ್ತಂ ಯತಿಚ್ಛೇದಸಮನ್ವಿತಂ | ನಿಬದ್ಧ೦ ತು ಪದಂ ಜೇಯಂ ಪ್ರಮಾಣನಿಯತಾತ್ಮಕಂ || </poem> ವ್ಯಾಖ್ಯೆ- 'ನಿಬದ್ಧ ಭಾವಿಛಂದೋವಿಧಿನಾಬದ್ಧ, ವರ್ಣಾನಾಂ ಗುರುಲಘುತ್ವಭೇದಃ; ಪಾದಸಂಖ್ಯಾ ಪ್ರಮಾಣೇನ- ಶೋತೇಂದ್ರಿಯೇಣ ನಿಯತಆತ್ಮಾ ಯತ್ರ, ಶ್ರವ್ಯತ್ವಂ ಇತ್ಯರ್ಥ ಇದಂ ತತ್ ಪದ್ಯಂ ಪಾದೇಷು ಭವತಿ', ಅಕ್ಷರ ಯತಿ ಮುಂತಾದ ಛಂದೋ ನಿಯಮಗಳಿರುವ ರಚನೆಯೇ ನಿಬದ್ಧಪದ, ಈ ನಿಯಮಗಳು ಶೌಂದ್ರಿಯಕ್ಕೆ ತೃಪ್ತಿಕರವಾದ ಶ್ರವ್ಯಗುಣವನ್ನುಂಟುಮಾಡಲು ಸಮರ್ಥವಾಗಿರಬೇಕು. ಅಂಥ ನಾಲ್ಕು ಪಾದಗಳಿರುವ ರಚನೆಯು ಛಂದಸ್ಸಿನ 'ಪದ್ಯ'ವಾಗಿದೆ ಎಂಬ ತಾತ್ಪರ್ಯ. {{Center|ಲೌಕಿಕ ಸಂಸ್ಕೃತ ಛಂದಸ್ಸು}} ವೇದಗಳಿಂದ ಬಂದ ಛಂದಸ್ಸು ಎಂಬ ಹೆಸರಿಗೆ ಅಲ್ಲಿದ್ದ ನಿಜಾರ್ಥವು ಲೌಕಿಕದಲ್ಲಿಲ್ಲವಾದರೂ ಮೂಲದ ವ್ಯವಹಾರವೇ ರೂಢಿಯಲ್ಲಿ ಉಳಿದು ಬಂದಿದೆ.* ಶಾಸ್ತ್ರಕರ್ತರಾದರೆ 'ಛಾದನೆ' ಎಂಬ ಆ ಮೂಲಾರ್ಥವನ್ನು ಇಲ್ಲಿಯೂ ಸಮರ್ಥಿಸುತ್ತಾರೆ. ಎಂದರೆ ಯತಿಪಾದಾದಿ ನಿಯಮಗಳಿಗೆ ಒಳಪಡುವ ರಚನೆಯಾದುದರಿಂದ ಈ ನಿಯಮ ಗಳೇ ಪದ್ಯದ ಆಚ್ಛಾದನೆಗಳು ಎಂದು- 'ಯತ್ಯಾದ್ಯಾಚ್ಛಾದಕಂ ಛಂದಃ ಅಕ್ಷರ ನಿಯಮಶ್ರಂದ ವಿಚ್ಛೇದ ಏವ ಛಂದಃ' ಇತ್ಯಾದಿ ನಿರ್ವಚನ ಕೊಡುತ್ತಾರೆ. ಅದಲ್ಲದೆ ಕೆಲವರು, ಶ್ರವ್ಯಗುಣವೇ ಇಲ್ಲಿ ಪ್ರಧಾನವಾಗಿರುವುದರಿಂದ ಹ್ಲಾದನಾರ್ಥವಿರುವ 'ಚಂದ್' ಧಾತುವಿನಿಂದ ಈ ಶಬ್ದದ ನಿಷ್ಪತ್ತಿಯನ್ನು ಹೊರಡಿಸುತ್ತಾರೆ. ಹೇಗೂ ಇರಲಿ, ಓದುವಾಗ ಶ್ರವ್ಯಗುಣವಿರಬೇಕಾದುದು ಲೌಕಿಕ ಛಂದಸ್ಸಿನ ಮುಖ್ಯ ಲಕ್ಷಣ, ಹಾಗೂ ವೇದಮಂತ್ರಗಳಿಗೆ ಛಂದಸ್ಸುಗಳೆಂಬ ಹೆಸರು ಯಾವುದರಿಂದ ಬಂದಿದೆ ಎಂಬ ಕುರಿತು ವೈದಿಕ ಛಂದಶ್ಯಾಸ್ತ್ರಗಳಲ್ಲಿ ಏನು ಹೇಳಿದೆ ಎಂಬುದನ್ನು ಸಂಗ್ರಹಿಸಿ ಅನುಬಂಧ ೩ರಲ್ಲಿ (ಪು. ೧೩೩-೪೩) ಕೊಟ್ಟಿರುತ್ತೇವೆ. ವಾಚಕರು ಮೊದಲಾಗಿ ಅದನ್ನು ನೋಡಿಕೊಳ್ಳುವುದು ವಿಹಿತ.<noinclude></noinclude> r6nxab814kaq7fy4upgs5lweshgefsv ಪುಟ:ಕುಕ್ಕಿಲ ಸಂಪುಟ.pdf/೩೬೧ 104 97866 322343 272365 2026-05-25T04:17:32Z Pragathi. BH 7585 /* Validated */ 322343 proofread-page text/x-wiki <noinclude><pagequality level="4" user="Pragathi. BH" />{{right|ಪೀಠಿಕೆ / ೩೪೩}}</noinclude>ವ್ಯವಹಾರವೂ ಸಲ್ಲುತ್ತದೆ. (ವಸ್ತುತಃ ಲಯವೊಂದೇ ತಾಳವಲ್ಲ- 'ಅಂಗಭೂತಾ ಹಿ ತಾಲಸ್ಯ ಯತಿಪಾಣಿಲಯಾಃ ಸ್ಮೃತಾ' ಭ. ನಾ. ೩೧-೩೬೯)* {{gap}}ಹೀಗೆ ಛಂದಸ್ಸಿನಲ್ಲಿಯೂ ಸಂಗೀತದಲ್ಲಿಯೂ ಲಯವೆಂಬುದಕ್ಕೆ ಪ್ರತ್ಯೇಕ ನಿಶ್ಚಿತ ವಾದ ಅರ್ಥಗಳಿದ್ದರೂ ರೂಢಿಯಲ್ಲಿ ವರ್ಣಗಳ ಗತಿಯನ್ನು ಲಯವೆನ್ನುವುದು ಸಾಮಾನ್ಯವಾಗಿ ಬಂದಿದೆ. ಅಕ್ಷರಗಳನ್ನು ವೇಗವಾಗಿ ಉಚ್ಚರಿಸುವುದಕ್ಕೆ ದ್ರುತಲಯ ಎಂದೂ ನಿಧಾನವಾಗಿ ಉಚ್ಚರಿಸುವಲ್ಲಿ ವಿಲಂಬಿತಲಯವೆಂದೂ ಹೇಳುತ್ತಾರೆ. ನ್ಯಾಯ ವಾಗಿ ಅದನ್ನು ವಿಲಂಬಗತಿ, ಮಂದಗತಿ ಎಂದೇ ಹೇಳಬೇಕು. {{gap}}ಸಂಗೀತದಲ್ಲಿ ನಾದಕ್ಕೆ ಸಂಬಂಧಿಸಿ, ಏಕೀಭವಿಸುವುದು ಎಂಬ ಅರ್ಥದಲ್ಲಿಯೂ ಲಯಶಬ್ದವನ್ನು ಪ್ರಯೋಗಿಸುವುದುಂಟು- ಸ್ವರಲಯ, ನಾದಲಯ, ಶ್ರುತಿಲಯ ಇತ್ಯಾದಿ. ನಾದಲಯವೆಂದರೆ ಸ್ವರಸಾಮ್ಯವೆಂದರ್ಥ; ಬೇರೆ ಬೇರೆ ವಾದ್ಯಸ್ವರಗಳು ಹಾಗೂ ಕಂಠವಾದ್ಯಗಳ ಸ್ವರಗಳು ಅನುರಕ್ತವಾಗಿರುವಲ್ಲಿ ಸ್ವರಲಯ ಶುದ್ಧವಾಗಿದೆ ಎನ್ನುತ್ತೇವೆ. ಸಂವಾದ-ಅನುವಾದಗಳು ಸರಿಯಾಗಿರುವಲ್ಲಿ ಶ್ರುತಿಲಯ ಶುದ್ಧವಾಗಿದೆ ಎನ್ನುತ್ತೇವೆ. ಸ್ವರಗಳು ಆಧಾರಶ್ರುತಿಯಲ್ಲಿ ಲೀನವಾಗುವುದಕ್ಕೂ 'ಶ್ರುತಿಲಯ' ವೆನ್ನುತ್ತೇವೆ.* {{gap}}ನಮ್ಮ ಛಂದಸ್ಸಿನ 'ಲಯ'ವೆಂಬುದು ಇಂಗ್ಲಿಷ್‌ 'Rythm' ಶಬ್ದಕ್ಕೆ ಸಮಾನ ವಾದ್ದೆಂದು ಕೆಲವರು ಊಹಿಸುವುದು ಕಾಣುತ್ತದೆ. ಆದರೆ, ಇದು ಸರಿಯಲ್ಲ. ಏಕೆಂದರೆ ಇಂಗ್ಲಿಷ್‌ 'ರಿದಂ'ನಲ್ಲಿ ಗುರು-ಲಘು ಪ್ರಮಾಣಗಳು ಸಾಪೇಕ್ಷವಾಗಿರಬೇಕೆಂದಿಲ್ಲ, ಸಾಮಾನ್ಯವಾಗಿ ಇರುವುದೂ ಇಲ್ಲ. ಅವರ ಛಂದಸ್ಸಿನ ಪಾಠ (Recitation) ಕ್ರಮ ದಲ್ಲಿ ಹೆಚ್ಚಾಗಿ ಪ್ರಸ್ತ ಕಾಲವು ದೀರ್ಘಚ್ಚಾರದ ಅರ್ಧಕ್ಕಿಂತ ಕಡಿಮೆಯಾಗಿರುವುದು ಕಾಣುತ್ತದೆ; ಕೆಲವೊಂದು 'ಲಯ' (Rythm) ಭೇದಗಳಲ್ಲಿ ದೀರ್ಘದ ಕಾಲಂಶದಷ್ಟೂ ಇರುವುದಿಲ್ಲವೆಂಬುದನ್ನೂ ಲಕ್ಷಿಸಬಹುದು. ನಮ್ಮ ಛಂದಸ್ಸಿನ ಪಾಠದಲ್ಲಿ ಹೀಗೆ ನ್ಯೂನಾಧಿಕ್ಯವಿರುವುದಿಲ್ಲ, ಇರಬಾರದು. ಆದುದರಿಂದ ಅವರ 'ರಿದಂ' ನಮ್ಮ ಛಂದೋ ಲಯವಾಗುವುದಿಲ್ಲ. ನಮ್ಮ ದೇಶೀತಾಳಭೇದಗಳಲ್ಲಾದರೆ ಗುರುಲಘುಗಳು ಸಾಪೇಕ್ಷ ವಾಗಿ ಇಲ್ಲದಿರುವುದುಂಟು. ಹಾಗೂ ಲಘುವಿನ ಅಂಶಾಂಶಗಳೂ ತಾಳಾಂಗಗಳಾಗಿ ಬರುವುದರಿಂದ, ಆ ಆ ವಿಶಿಷ್ಟ ತಾಳಭೇದಗಳಲ್ಲಿ 'ರಿದಂ'ನ ಸಮಾನ ಲಯವನ್ನು ಕಾಣಬಹುದು. ಪ್ರಚಲಿತ ನಮ್ಮ ಸಂಗೀತಗಾನದಲ್ಲಿ ಅಂಥ ತಾಳಲಯಗಳು ವಿರಳ ವಾದರೂ ನೃತ್ತಪದ್ಧತಿಗಳಲ್ಲಿ ಸಾಮಾನ್ಯವಾಗಿ ಇರುತ್ತವೆ- 'ತಿತ್ತಿತ್ಸೆ', 'ನರ್ತನಕಾಲ' 'ನಾಟ್ಯಮಟ್ಟೆ' ಇತ್ಯಾದಿ. ಆದುದರಿಂದ 'ರಿದಂ' ಎಂಬುದು ನಮ್ಮ ನೃತ್ತಲಯವಾಗ {{Rule}} * ಯತಿ ಪಾಣಿಭ್ಯಾಮುಪಕ್ರಿಯಮಾಣೋ ಲಯ ಏವ ತಾಲ (ಭ. ನಾ. ೩೧೩೭೫) ಲಯಸ್ಕಾಲಃ (ಭ. ನಾ. ೩೧-೩೭೨) ವಿಶಿಷ್ಟ ಕ್ರಿಯಾಪರಿಚ್ಛೇಯವಚ್ಛನ್ನೂ * ಶ್ರುತಿನಾಂ ಲೀಯಮಾನತ್ವಂ ಲಯೋ ನೀಚೋಚ್ಚಭಾವತಃ | ತಾಧಾ ಸ್ಯುಃ ಪುನರ್ಭಿನ್ನಾ ನ್ಯೂನಾಧಿಕವಿಭಾಗತಃ || ಗೀತವಾದ್ಯಪದನ್ಯಾಸ ಕ್ರಿಯಾಣಾಂ ಸಮತಾಮಿಥ ತಥಾ ಕ್ರಿಯಾತಾಲಯೋರ್ವಾ ಲಯ ಇತ್ಯುಚ್ಯತೇ ಬುಧ್ಯೆಃ || ತಾಲಃ ಕಾಲಕ್ರಿಯಾಮಾನಂ, ಲಯಃ ಸಾಮ್ಯಮಥಾಯಾಂ || (ಭಾವಪ್ರಕಾಶ) (ವಾಚಸ್ಸತ್ಯಂ) (ಅಮರ)<noinclude></noinclude> jvq69tz74q7cxub6o1ykrr91rpb1fxe ಪುಟ:ಕುಕ್ಕಿಲ ಸಂಪುಟ.pdf/೩೬೩ 104 97868 322345 272366 2026-05-25T04:18:39Z Pragathi. BH 7585 /* Validated */ 322345 proofread-page text/x-wiki <noinclude><pagequality level="4" user="Pragathi. BH" />{{right|ಪೀಠಿಕೆ / ೩೪೫}}</noinclude> {{Gap}}Music of Hindustan, pp 217, 218_by Fox Strangeways, quoted in Music of India by H Popely, pp.74 '''ಗತಿ''' : ಛಂದಸ್ಸಿನಲ್ಲಿ 'ಗತಿ' ಎಂದರೆ ನಿರಂತರವಾದ ವರ್ಣೋಚ್ಚಾರ. ಈ ಗತಿ ವಿಚ್ಛಿನ್ನ ವಾಗುವುದು 'ಯತಿ'ಸ್ಥಾನದಲ್ಲಿ ಮಾತ್ರ. ಆದುದರಿಂದಲೇ ಯತಿಗೆ ವಿಚ್ಛೇದವೆಂಬ ಅರ್ಥ ವಿರುವುದು (ಯತಿರ್ವಿಚ್ಛೇದಃ ಪಿಂ. ಸೂ, ೬-೧), ಗುರುಲಘಕ್ಷರಗಳ ವಿನ್ಯಾಸವಿಶೇಷ ದಿಂದ ಈ ಗತಿಯಲ್ಲಿ ನಾನಾ ನಾನಾ ವೈಚಿತ್ರಗಳುಂಟಾಗುವುದನ್ನು ವರ್ಣವೃತ್ತಗಳಲ್ಲಿ ಕಾಣಬಹುದು. ಮಾತ್ರಾಗಣ ಛಂದಸ್ಸುಗಳ ಶ್ರವ್ಯಗುಣವು ಲಯಾಶ್ರಯವಾಗಿರುವುದಾದರೆ ವರ್ಣವೃತ್ತಗಳ ಶ್ರವ್ಯತ್ವವು ಈ ಗತಿಯಲ್ಲಿರುವುದಾಗಿದೆ. ಮಾತ್ರಾವೃತ್ತಗಳಲ್ಲಿಯೂ ಗತಿಯುಂಟು; ಅದು ಲಯಬದ್ಧವಾದ ಸಮಗತಿ, ವರ್ಣವೃತ್ತಗಳದ್ದಾದರೆ ಲಯಹೀನ ವಾದ ವಿಷಮಗತಿ. ಆ ವೈಷಮ್ಯದಲ್ಲಿರುವ ಗುರುಲಘಕ್ಷರಗಳಿಂದ 'ದಿತ್ತಾಂ ದಿತಾಂ ಆಗೇತಾಂ ಧಿಮಿತಕ ಧಿಕತಾಂ' ಎಂಬಂತಿರುವ ಮೃದಂಗದ 'ಜತಿ'ಗಳಿಗೆ ಸಮಾನವಾದ ವ್ಯಗುಣವನ್ನು ಸಂಪಾದಿಸುವುದೇಅಕ್ಷರ ಛಂದಸ್ಸುಗಳ ಪರಾಯಣವಾಗಿದೆ.* ಯಥಾಕ್ಷರವಾದ ಪಾಠದಿಂದ ಮಾತ್ರ ಈ ಶೋಭೆಯುಂಟಾಗುವುದು. ಹಾಡಿದರೆ ಅದರ ಸ್ವಾರಸ್ಯ ಕೆಟ್ಟುಹೋಗುವುದು. ಯಾವ ವೃತ್ತಗಳಲ್ಲಿ ಈ ಶೋಭೆ ಇರುವುದಿಲ್ಲವೋ ಅಥವುಗಳಲ್ಲಿ ಮಾತ್ರ ಗಾನದ ಮೂಲಕ ಶ್ರವ್ಯಗುಣವನ್ನುಂಟುಮಾಡಬೇಕು ಹೊರತು ರಚನೆಯಲ್ಲಿ ಈ ಗುಣವಿರುವ ಶಾರ್ದೂಲವಿಕ್ರೀಡಿತಾದಿ ವೃತ್ತಗಳು ಪಾಠಕ್ಕೇ ಪ್ರಶಸ್ತ ವಾದವುಗಳೆಂದು ಭರತನೇ ಹೇಳಿರುತ್ತಾನೆ- (ಭ. ನಾ. ಅ. ೧೪-೧೧೨) ವ್ಯಾಖ್ಯಾನದಲ್ಲಿ ಅಭಿನವಗುಪ್ತನೂ 'ಗೀಯಮಾನತಯಾ ಶೋಭಾತಿಶಯೋ ಭವತಿ ಶ್ಲೋಕಃ, ಸ್ರಗ್ಧರಾದೀನಾಂ ತು ಪಾಠೇನ' ಎನ್ನುತ್ತಾನೆ. '''ಯತಿ :''' ಛಂದಶಾಸ್ತ್ರದಲ್ಲಿ 'ಯತಿ' ಎಂದರೆ ಮೇಲೆ ಹೇಳಿದಂತೆ ವಿಚ್ಛೇದ, ಪಾದವು ಅಲ್ಲಿ ತುಂಡಾಗುವುದು ಎಂದರ್ಥ 'ನಿಯತಃ ಪದವಿಚ್ಛೇದೋ ಯತಿರಿತ್ಯಭಿದೀ ಯತೇ'- (ಭ. ನಾ. ೧೫-೯೦), ತುಂಡಾಗುವುದೆಂದರೆ ವರ್ಣೋಚ್ಚಾರದಲ್ಲಿ ಎಡೆಕಡಿಯ ವುದು ಅಥವಾ ವಿರಮಿಸುವುದು. ಈ ವಿರಾಮವಿರುವುದು ವರ್ಣೋಚ್ಚಾರಕ್ಕೆ ಹೊರತು ಅದು ನಾದವಿರಾಮವಲ್ಲ. ಆದುದರಿಂದಲೇ ಶಾಸ್ತ್ರದಲ್ಲಿ 'ವಾಗ್ನಿ ರಾಮೋ ಯತಿಃ ಸಾ ಸಂಸ್ಥಾಪ್ಯತೇ ಶ್ರುತಿಸುಂದರಂ ಎಂಬ ಲಕ್ಷಣವಿರುವುದಾಗಿದೆ. ವಿರಾಮಸ್ಥಾನದಲ್ಲಿ ವರ್ಣಾಲಂಕಾರಗಳನ್ನು ಪ್ರಯೋಗಿಸಬಹುದೆಂದು ಭರತನು ಹೇಳಿರುವುದನ್ನೂ ಗಮನಿಸಿರಿ- 'ಯೇವಿರಾಮಾಃ ಸ್ಮೃತಾ ವೃತ್ತೇ ತೇಷ್ಟಲಂಕಾರ ಇಷ್ಯತೇ' | (ಭ. ನಾ. ೧೭-೧೩೮), ಅಲ್ಲಿ ತಪ್ಪದೇ ವಿರಮಿಸಬೇಕೆಂಬ ನಿಯಮಾರ್ಥದಲ್ಲಿ ಈ ವಿಚ್ಛೇದ ಸ್ಥಾನಕ್ಕೆ 'ಯತಿ' ಎಂಬ ಸಂಜ್ಞೆಯನ್ನು ಕೊಟ್ಟಿರುವುದಾಗಿದೆ. 'ಯಮ್ಯತೇ ಇತಿ ಯತಿಃ' ಎಂದು ಈ ಶಬ್ದದ ನಿಷ್ಪತ್ತಿಯಾಗುವುದು. {{gap}}ಸಂಗೀತಶಾಸ್ತ್ರದಲ್ಲಿ 'ಯತಿಗೆ ವಿರಾಮ ಎಂಬ ಅರ್ಥವಿಲ್ಲ. ಅಲ್ಲಿ ಇದು ತಾಳ ಲಯಕ್ಕೆ ಸಂಬಂಧಿಸಿದ ಕಾಲನಿಯಮವಾಗಿದೆ. ತಾಳದ ಆ ಯತಿಗಳೆಂದರೆ ಪ್ರಧಾನವಾಗಿ {{Rule}} ಅಪದಾನ್ಯನಿಬದ್ಧಾನಿ ತಾಲೇನ ರಹಿತಾನಿ ತು | ಆತೋಷು ನಿಯುಕ್ತಾನಿ ತಾನಿತಾನಿ ತು ಕಾರಯೇತ್ || ಅನಿಬದ್ಧಾಕ್ಷರಾಣಿಸ್ಸು ರ್ಯಾನಿ ಜಾತಿಕೃತಾನಿ ತು | ಆತೋದ್ಯ ಕರಣೇಷಾಂ ವಿಧಾನಮಭಿನಿರ್ಮಿತಂ || (J. J. 2220)<noinclude></noinclude> cubb3v3y4maip9twwjzzj8xeyvoljkq 322346 322345 2026-05-25T04:19:16Z Pragathi. BH 7585 322346 proofread-page text/x-wiki <noinclude><pagequality level="4" user="Pragathi. BH" />{{right|ಪೀಠಿಕೆ / ೩೪೫}}</noinclude> {{Gap}}Music of Hindustan, pp 217, 218_by Fox Strangeways, quoted in Music of India by H Popely, pp.74 '''ಗತಿ''' : ಛಂದಸ್ಸಿನಲ್ಲಿ 'ಗತಿ' ಎಂದರೆ ನಿರಂತರವಾದ ವರ್ಣೋಚ್ಚಾರ. ಈ ಗತಿ ವಿಚ್ಛಿನ್ನ ವಾಗುವುದು 'ಯತಿ'ಸ್ಥಾನದಲ್ಲಿ ಮಾತ್ರ. ಆದುದರಿಂದಲೇ ಯತಿಗೆ ವಿಚ್ಛೇದವೆಂಬ ಅರ್ಥ ವಿರುವುದು (ಯತಿರ್ವಿಚ್ಛೇದಃ ಪಿಂ. ಸೂ, ೬-೧), ಗುರುಲಘಕ್ಷರಗಳ ವಿನ್ಯಾಸವಿಶೇಷ ದಿಂದ ಈ ಗತಿಯಲ್ಲಿ ನಾನಾ ನಾನಾ ವೈಚಿತ್ರಗಳುಂಟಾಗುವುದನ್ನು ವರ್ಣವೃತ್ತಗಳಲ್ಲಿ ಕಾಣಬಹುದು. ಮಾತ್ರಾಗಣ ಛಂದಸ್ಸುಗಳ ಶ್ರವ್ಯಗುಣವು ಲಯಾಶ್ರಯವಾಗಿರುವುದಾದರೆ ವರ್ಣವೃತ್ತಗಳ ಶ್ರವ್ಯತ್ವವು ಈ ಗತಿಯಲ್ಲಿರುವುದಾಗಿದೆ. ಮಾತ್ರಾವೃತ್ತಗಳಲ್ಲಿಯೂ ಗತಿಯುಂಟು; ಅದು ಲಯಬದ್ಧವಾದ ಸಮಗತಿ, ವರ್ಣವೃತ್ತಗಳದ್ದಾದರೆ ಲಯಹೀನ ವಾದ ವಿಷಮಗತಿ. ಆ ವೈಷಮ್ಯದಲ್ಲಿರುವ ಗುರುಲಘಕ್ಷರಗಳಿಂದ 'ದಿತ್ತಾಂ ದಿತಾಂ ಆಗೇತಾಂ ಧಿಮಿತಕ ಧಿಕತಾಂ' ಎಂಬಂತಿರುವ ಮೃದಂಗದ 'ಜತಿ'ಗಳಿಗೆ ಸಮಾನವಾದ ವ್ಯಗುಣವನ್ನು ಸಂಪಾದಿಸುವುದೇಅಕ್ಷರ ಛಂದಸ್ಸುಗಳ ಪರಾಯಣವಾಗಿದೆ.* ಯಥಾಕ್ಷರವಾದ ಪಾಠದಿಂದ ಮಾತ್ರ ಈ ಶೋಭೆಯುಂಟಾಗುವುದು. ಹಾಡಿದರೆ ಅದರ ಸ್ವಾರಸ್ಯ ಕೆಟ್ಟುಹೋಗುವುದು. ಯಾವ ವೃತ್ತಗಳಲ್ಲಿ ಈ ಶೋಭೆ ಇರುವುದಿಲ್ಲವೋ ಅಥವುಗಳಲ್ಲಿ ಮಾತ್ರ ಗಾನದ ಮೂಲಕ ಶ್ರವ್ಯಗುಣವನ್ನುಂಟುಮಾಡಬೇಕು ಹೊರತು ರಚನೆಯಲ್ಲಿ ಈ ಗುಣವಿರುವ ಶಾರ್ದೂಲವಿಕ್ರೀಡಿತಾದಿ ವೃತ್ತಗಳು ಪಾಠಕ್ಕೇ ಪ್ರಶಸ್ತ ವಾದವುಗಳೆಂದು ಭರತನೇ ಹೇಳಿರುತ್ತಾನೆ- (ಭ. ನಾ. ಅ. ೧೪-೧೧೨) ವ್ಯಾಖ್ಯಾನದಲ್ಲಿ ಅಭಿನವಗುಪ್ತನೂ 'ಗೀಯಮಾನತಯಾ ಶೋಭಾತಿಶಯೋ ಭವತಿ ಶ್ಲೋಕಃ, ಸ್ರಗ್ಧರಾದೀನಾಂ ತು ಪಾಠೇನ' ಎನ್ನುತ್ತಾನೆ. '''ಯತಿ :''' ಛಂದಶಾಸ್ತ್ರದಲ್ಲಿ 'ಯತಿ' ಎಂದರೆ ಮೇಲೆ ಹೇಳಿದಂತೆ ವಿಚ್ಛೇದ, ಪಾದವು ಅಲ್ಲಿ ತುಂಡಾಗುವುದು ಎಂದರ್ಥ 'ನಿಯತಃ ಪದವಿಚ್ಛೇದೋ ಯತಿರಿತ್ಯಭಿದೀ ಯತೇ'- (ಭ. ನಾ. ೧೫-೯೦), ತುಂಡಾಗುವುದೆಂದರೆ ವರ್ಣೋಚ್ಚಾರದಲ್ಲಿ ಎಡೆಕಡಿಯ ವುದು ಅಥವಾ ವಿರಮಿಸುವುದು. ಈ ವಿರಾಮವಿರುವುದು ವರ್ಣೋಚ್ಚಾರಕ್ಕೆ ಹೊರತು ಅದು ನಾದವಿರಾಮವಲ್ಲ. ಆದುದರಿಂದಲೇ ಶಾಸ್ತ್ರದಲ್ಲಿ 'ವಾಗ್ನಿ ರಾಮೋ ಯತಿಃ ಸಾ ಸಂಸ್ಥಾಪ್ಯತೇ ಶ್ರುತಿಸುಂದರಂ ಎಂಬ ಲಕ್ಷಣವಿರುವುದಾಗಿದೆ. ವಿರಾಮಸ್ಥಾನದಲ್ಲಿ ವರ್ಣಾಲಂಕಾರಗಳನ್ನು ಪ್ರಯೋಗಿಸಬಹುದೆಂದು ಭರತನು ಹೇಳಿರುವುದನ್ನೂ ಗಮನಿಸಿರಿ- 'ಯೇವಿರಾಮಾಃ ಸ್ಮೃತಾ ವೃತ್ತೇ ತೇಷ್ಟಲಂಕಾರ ಇಷ್ಯತೇ' | (ಭ. ನಾ. ೧೭-೧೩೮), ಅಲ್ಲಿ ತಪ್ಪದೇ ವಿರಮಿಸಬೇಕೆಂಬ ನಿಯಮಾರ್ಥದಲ್ಲಿ ಈ ವಿಚ್ಛೇದ ಸ್ಥಾನಕ್ಕೆ 'ಯತಿ' ಎಂಬ ಸಂಜ್ಞೆಯನ್ನು ಕೊಟ್ಟಿರುವುದಾಗಿದೆ. 'ಯಮ್ಯತೇ ಇತಿ ಯತಿಃ' ಎಂದು ಈ ಶಬ್ದದ ನಿಷ್ಪತ್ತಿಯಾಗುವುದು. {{gap}}ಸಂಗೀತಶಾಸ್ತ್ರದಲ್ಲಿ 'ಯತಿಗೆ ವಿರಾಮ ಎಂಬ ಅರ್ಥವಿಲ್ಲ. ಅಲ್ಲಿ ಇದು ತಾಳ ಲಯಕ್ಕೆ ಸಂಬಂಧಿಸಿದ ಕಾಲನಿಯಮವಾಗಿದೆ. ತಾಳದ ಆ ಯತಿಗಳೆಂದರೆ ಪ್ರಧಾನವಾಗಿ {{Rule}} <poem> ಅಪದಾನ್ಯನಿಬದ್ಧಾನಿ ತಾಲೇನ ರಹಿತಾನಿ ತು | ಆತೋಷು ನಿಯುಕ್ತಾನಿ ತಾನಿತಾನಿ ತು ಕಾರಯೇತ್ || ಅನಿಬದ್ಧಾಕ್ಷರಾಣಿಸ್ಸು ರ್ಯಾನಿ ಜಾತಿಕೃತಾನಿ ತು | ಆತೋದ್ಯ ಕರಣೇಷಾಂ ವಿಧಾನಮಭಿನಿರ್ಮಿತಂ || </poem> (J. J. 2220)<noinclude></noinclude> liw9fr60os5n7phxdqjepkggf7adebv ಪುಟ:ಕುಕ್ಕಿಲ ಸಂಪುಟ.pdf/೩೬೬ 104 97869 322351 273920 2026-05-25T04:24:30Z Pragathi. BH 7585 /* Validated */ 322351 proofread-page text/x-wiki <noinclude><pagequality level="4" user="Pragathi. BH" />೩೪೮ / ಕುಕ್ಕಿಲ ಸಂಪುಟ</noinclude>'ಪ್ರಮಾಣ' ಮತ್ತು 'ಸಮಾನ' ಎಂಬ ಸಂಜ್ಞೆಗಳಿಂದ ಕರೆಯಲ್ಪಟ್ಟಿವೆ. ವೀಣಾವಾದನದಲ್ಲಿ ತಾಳನಿರೂಪಣೆಗೆ ಈ ಕಾಲಮಾನಗಳನ್ನೇ ಪ್ರಮಾಣವಾಗಿಟ್ಟುಕೊಳ್ಳುವುದಾದ್ದರಿಂದ ಈ ಲಯಗಳಿಗೆ ಅನ್ವರ್ಥವಾಗಿ ಆ ಹೆಸರುಗಳು ಬಂದಿವೆ. 'ವೀಣಾವಾದ್ಯಂ ಮಾನತಾಲ ಯುಕ್ತಂ ತಂಪಾದಿವರ್ಜಿತಂ', (ಸಂ. ರ. ೬-೩೫). ೬-೬೫), ಶಂಪಾದಿವರ್ಜಿತಂ ಎಂದರೆ ಹಸ್ತಾಂಗುಲಿಗಳ ಘಾತಪಾತಾದಿ ಕ್ರಿಯೆಗಳಿಂದ ತಾಳನಿರೂಪಣೆ ಇಲ್ಲ ಎಂದರ್ಥ. ಅನುಷ್ಟುಪ್ ಶ್ಲೋಕದಲ್ಲಿ ಸಾಮಾನ್ಯವಾಗಿ ಈ ಲಯವಿನ್ಯಾಸ ಇರುವುದನ್ನು ಕಾಣುತ್ತೇವೆ ವಾಲ್ಮೀಕಿಯ ಅದೇ ಶ್ಲೋಕದಲ್ಲಿ ಕಾಣಬಹುದು. ಪಿಂಗಳನು ಅನುಷ್ಟುಪ್ ಛಂದಸ್ಸಿನಲ್ಲಿ ಈ ಎರಡು ವಿಧದ ಲಯಗಳು ನಿರಂತರವಾಗಿ ಇರುವುದನ್ನು ವಿಶೇಷ ಲಕ್ಷಣವಾಗಿ ಕೊಟ್ಟಿರುತ್ತಾನೆ. ಲಘು ನಂತರ ಗುರು ನಿರಂತರವಾಗಿ ಬರುವುದನ್ನು 'ಪ್ರಮಾಣೀ' ಎಂದೂ ಗುರುಲಘು ಕ್ರಮದಲ್ಲಿರುವುದನ್ನು ಸಮಾನೀ ಎಂದೂ ಕರೆದಿರುತ್ತಾನೆ (ತಿಪ್ರಮಾಣೀ ಗೃತಿ ಸಮಾನೀ (ಪಿಂ. ಸೂ. ೫-೬, ೫-೭.) ಇವು ಕ್ರಮಯುಕ್ತವಾಗಿಲ್ಲದಿರುವುದನ್ನು 'ವಿತಾನ'ವೆಂದು ಕರೆದಿದ್ದಾನೆ- (ವಿತಾನಮನ್ಮತ್ ೫-೮), ಇವಕ್ಕೆ ಉದಾಹರಣೆಗಳು ಕ್ರಮವಾಗಿ ಹೀಗಿವೆ. ಪ್ರಮಾಣೀ- ಸಮಾನೀ- ವಿತಾನ- '''ಸರೋಜಯೋನಿರಂಬರೇ ರಸಾತಲೇ ತಥಾಚ್ಯುತಃ''' |<br> '''ತವ ಪ್ರಮಾಣಮೀಕ್ಷಿತುಂ ಕ್ಷಮ್ ನತ್ ಬಭೂವತುಃ ||'''<br> '''ವಾಸವೋSಪಿ ವಿಕ್ರಮೇಣ ಯತ್ಸಮಾನತಾಂ ನಯಾತಿ |'''<br> '''ತಸ್ಯ ವಲ್ಲಭೇಶ್ವರಸ್ಯ ಕೇನ ತುಲ್ಯತಾ ಕ್ರಿಯೇತ ||'''<br> '''ಹೃದಯಂ ಯಸ್ಯ ವಿಶಾಲಂ ಗಗನಾಭೋಗಸಮಾನಂ |'''<br> '''ಲಭತೇsಸೌ ಮಣಿಚಿತ್ರಂ ನೃಪತಿರ್ಮೂಧಿ ವಿತಾನಂ ||'''<br> ಕಾವ್ಯಾದಿಗಳ ಅನುಷ್ಟುಪ್ ಶ್ಲೋಕಗಳಲ್ಲಿ ಈ ತಂತ್ರಿಲಯಗಳೇ ಒಂದಂಶ ನಿಯಮತಃ ಸೇರಿಕೊಂಡಿರುವುದನ್ನು ಸಾಮಾನ್ಯವಾಗಿ ಎಲ್ಲಿಯೂ ಕಾಣಬಹುದು ಪಾದಾಂತ್ಯದ ನಾಲ್ಕು ಅಕ್ಷರಗಳಲ್ಲಿ, ವಿಶೇಷವಾಗಿ ಎರಡನೇ ನಾಲ್ಕನೇ ಪಾದಾಂತ್ಯಗಳಲ್ಲಿ ಈ ಲಯವಿದ್ದೇ ಇರುತ್ತದೆ. ಇನ್ನೂ ಅನುಷ್ಟುಪ್ಪಿನ ಪಾದಗಳಲ್ಲಿ ಒಂದರಿಂದೊಂದಕ್ಕೆ ಕ್ರಮವಾಗಿ ಅಕ್ಷರಗಳು ನಾಲ್ಕರಂತೆ ಹೆಚ್ಚಿರುವುದು 'ಪದಚತುರೂರ್ಧ್ವ'ವೆಂಬ ವಿಷಮವೃತ್ತವಾಗುವುದು. ಇದಲ್ಲದೆ ಅನುಷ್ಟುಪ್ ವಿಷಮವೃತ್ತದಲ್ಲಿ 'ಉದ್ಧತಾ', 'ಉಪಸ್ಥಿತಪ್ರಚುಪಿತ' ಎಂಬ ಇನ್ನೆರಡು ಭೇದಗಳಿವೆ. ಅವುಗಳ ಲಕ್ಷಣ ಹೀಗಿದೆ- '''ಉದ್ಧತಾ''' ಪ್ರಥಮಪಾದದಲ್ಲಿ ಸಗಣ + ಜಗಣ + ಅಕ್ಷರಗಳು, ಎರಡನೇ ಪಾದದಲ್ಲಿ ನಗಣ + ಸಗಣ ಹನ್ನೊಂದಕ್ಷರಗಳು, ಮೂರನೆಯ ಪಾದದಲ್ಲಿ ಭ + ಹನ್ನೊಂದು ಅಕ್ಷರಗಳು, ನಾಲ್ಕನೆಯದರಲ್ಲಿ ಸ + ಜ ಹದಿಮೂರು ಅಕ್ಷರಗಳಿರುತ್ತವೆ. ಉದಾ- '''ಮೃಗಲೋಚನಾ ಶಶಿಮುಖೀ ಚ |'''<br> '''ರುಚಿರದಶನಾ ನಿತಂಬಿನೀ ||'''<br> '''ಹಂಸಲಲಿತಗಮನಾ ಲಲನಾ |'''<br> '''ಪರಿಣೀಯತೇ ಯದಿ ಭವೇತ್‌ ಕುಲೋದ್ಧ ತಾ ||'''<br> ಸಗಣ + ಲಘು ಸೇರಿ ಹತ್ತು + ಜಗಣ + ಗುರು ಹೀಗೆ ನ +2+0 + ಜ + ಲ + ಗ ಸೇರಿ + ಸ + ಜ + ಗ ಸೇರಿ<noinclude></noinclude> a1tfd2w34euk10typmbzpuyxs3x1wvq ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೪ 104 99548 322473 278873 2026-05-25T10:06:17Z Pragathi. BH 7585 /* Validated */ 322473 proofread-page text/x-wiki <noinclude><pagequality level="4" user="Pragathi. BH" /></noinclude>{{rh|center='''ಅಧ್ಯಕ್ಷರ ಮಾತು'''}} “ನಾಡಿಗೆ ನಮಸ್ಕಾರ” ಎನ್ನುವುದು ಕಾಂತಾವರ ಕನ್ನಡ ಸಂಘವು ಮೂವತ್ತಕ್ಕೆ ಕಾಲಿಟ್ಟದ್ದನ್ನು ನೆನಪಿಸುವ ಮತ್ತು ಗುರುತಿಸುವ ಗ್ರಂಥಮಾಲೆ. ಆ ಮಾಲೆಯ ಮೂಲಕ ಕನಿಷ್ಠ ಮೂವತ್ತು ಹೊತ್ತಗೆಗಳನ್ನಾದರೂ ಮುಂದಿನ ಮೂರು ವರುಷಗಳಲ್ಲಿ ತರಬೇಕೆನ್ನುವುದು ಆಗ ಇದ್ದ ಸಂಕಲ್ಪ. {{gap}}ಈ ಮಾಲೆ ಯಾವ ವಿಚಾರಕ್ಕೆ ಒತ್ತುಕೊಡಬೇಕು ಎನ್ನುವಾಗ ಹೊಳೆದದ್ದು ಸಾಹಿತ್ಯಕ ಕೃತಿಗಳ ಬದಲು ಸಾಂಸ್ಕೃತಿಕ ಸ್ವರೂಪದ ಕೃತಿಗಳನ್ನು ಹೊರ ತಂದರೆ ಹೇಗೆ ಎನ್ನುವ ಕನಸು. ಅದು ಸುಸ್ವರೂಪ ಪಡೆದದ್ದು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರ ಸಾಧನೆಗಳನ್ನು ದಾಖಲಿಸಬೇಕು ಎಂದು. ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟು ನಾವು ನಮ್ಮ ಮಿತಿಗಳ ಒಳಗೆ ಮೂವತ್ತು ಸಾಧಕರನ್ನು ಪರಿಚಯಿಸಿದಾಗ, ಮುಂದೆ ಎದುರಾದದ್ದು ಆರ್ಥಿಕ ಸಂಕಷ್ಟ ಆಗ ಈ ಮಾಲೆಯನ್ನು ಮುಂದುವರಿಸಬೇಕಾದರೆ ಪ್ರಾಯೋಜಕತ್ವದ ನೆರವು ಬೇಕೆಂಬ ಸತ್ಯದ ಅರಿವು, ಸಾರ್ವಜನಿಕರು ನಮ್ಮ ಜೊತೆ ಅರ್ಥವತ್ತಾಗಿ ಸ್ಪಂದಿಸಿದ್ದರಿಂದ ಮಾಲೆಯಲ್ಲಿ ನೂರು ಹೊತ್ತಗೆಗಳು ಅರಳಿದ್ದು ಸಂಘದ ಸೌಭಾಗ್ಯ, ನಾಡಿನ ಭಾಗ್ಯ. {{gap}}ಸಂಘವು ನೂರು ಸಾಧಕರನ್ನು ಪರಿಚಯಿಸಿದರೂ ಪರಿಚಯಿಸದೇ ಇರುವವರ ಸಂಖ್ಯೆ ಇದರ ದುಪ್ಪಟ್ಟು ಇರಬಹುದಾದ್ದರಿಂದ ಈಗ ಮತ್ತೆ ಮಾಲೆಯನ್ನು ಮುಂದುವರಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಸಾರ್ವಜನಿಕರ ನೆರವು ಚಿಂತಕರ ಒಲವು ಇರುವಷ್ಟು ದಿನ ಮಾಲೆಯೂ ಚಿರಂತನ ಎನ್ನುವುದು ನಮ್ಮ ಭಾವ ಮತ್ತು ಸಂಘದ ಜೀವ. {{gap}}ಮಾಲೆಯ ಮೊದಲ ನೂರು ಕೃತಿಗಳನ್ನು ಸಂಪಾದಿಸಲು ನೆರವಾದವರು ಹಿರಿಯ ಸಾಹಿತಿ ವಿ.ಗ. ನಾಯಕರು, ನೂರರ ನಂತರ ಹೊತ್ತಗೆಗಳಿಗೆ ಸಂಪಾದಕರಾಗಿ ಒದಗಿ ಬಂದವರು ನಾಡಿನ ಖ್ಯಾತ ಸಾಹಿತಿ ಡಾ. ಬಿ. ಜನಾರ್ದನ ಭಟ್ಟರು. {{gap}}ಈ ಎಲ್ಲದರ ಯಶಸ್ಸಿಗೆ ನೆರವು ನೀಡಿದ ಲೇಖಕರ ಕೊಡುಗೆ ಬಹಳ ದೊಡ್ಡದು. ಆಯ್ಕೆ ಸಮಿತಿಯಲ್ಲಿದ್ದು ಸಹಕರಿಸಿದವರೂ ನಮಗೆ ಸದಾ ಮಾನ್ಯರು. ಹೊತ್ತಗೆಯ ಅಂದ ಚಂದಕ್ಕೆ ಕಾರಣರಾದವರು ಶ್ರೀ ಕಲ್ಲೂರು ನಾಗೇಶ ಮತ್ತು ಬಳಗದವರು. ಪ್ರಾಯೋಜಕರಾಗಿ ಒದಗಿಬಂದವರು ಮಾಲೆಯ ಮಹಾ ಪೋಷಕರೂ ಹೌದು, ನಾಡು ನಮಸ್ಕರಿಸಬೇಕಾದವರೂ ಹೌದು. {{gap}}ಹೀಗೆ ನಾವು ಈ ಮಾಲೆಯ ಮೂಲಕ ನಾಡಿಗೆ ನಮಸ್ಕರಿಸಲು ಕಾರಣರಾದವರೆಲ್ಲ ಇನ್ನೊಂದು ಅರ್ಥದಲ್ಲಿ ನಾವು ನಮಸ್ಕರಿಸಬಹುದಾದ ಅರ್ಥವಂತರು, ಈ ಕಾರಣದಿಂದ 'ನಾಡಿಗೆ ನಮಸ್ಕಾರ' ಎನ್ನುವ ಮಾಲೆಗೆ ಸಾರ್ಥಕ್ಯ ಭಾವ ಇದ್ದರೆ, ಅದರ ಸಾಧನೆಗೆ ಧನ್ಯತೆ ನಮಗೂ ಒದಗಿಬಂದಿರುವುದು ನಮ್ಮ ಪಾಲಿನ ಸಂತೋಷ. {{rh|left='''೧ ನವೆಂಬರ್ ೨೦೧೫'''|right='''ಡಾ. ನಾ. ಮೊಗಸಾಲೆ'''}}<noinclude></noinclude> k7p90utheaiy56yloqjla1co6jz2g6o ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೩೬ 104 99572 322471 278953 2026-05-25T09:58:54Z Pragathi. BH 7585 /* Validated */ 322471 proofread-page text/x-wiki <noinclude><pagequality level="4" user="Pragathi. BH" /></noinclude>ಬದುಲು ಮಾಡಲು ಸಾಧ್ಯವಿಲ್ಲದಷ್ಟು ಹೊಂದಿಕೊಳ್ಳುತ್ತವೆ. ತಲೆಗಿಂತ ದೊಡ್ಡ ಮುಂಡಾಸು ಎಂದೂ ಆಗಲಾರದು. ಇವರಿರುವ ಸ್ನೇಹಕೂಟ, ವೇದಿಕೆ, ತಾಳಮದ್ದಲೆಗಳು ಹೊಸ ಕಳೆ ಮೂಡಿಬರುತ್ತದೆ. '{{center|'''ಮಾನಪತ್ರಗಳಿಗೊಂದು ರೂಪು ಕೊಟ್ಟವರು...'''}} ಒಂದರ್ಥದಲ್ಲಿ ಕರಾವಳಿಯಲ್ಲಿ ಸಭೆ, ಸಮಾರಂಭ, ಅಭಿನಂದನ ಕಾರ್ಯಕ್ರಮಗಳಿಗೆ ಒಂದು ರೂಪು ಕೊಟ್ಟವರು ಪ್ರಭಾಕರ ಜೋಶಿ, ೧೯೭೩ರಲ್ಲಿ ಶೇಣಿಯವರಿಗೆ ಮೊತ್ತಮೊದಲು ಅಭಿನಂದನ ಸಮಾರಂಭವನ್ನು ಏರ್ಪಡಿಸಲಾಯಿತು. ಸಮಾರಂಭದ ಎಲ್ಲ ಹಂತಗಳಲ್ಲೂ ಜೋಶಿ ದುಡಿದಿದ್ದರು. ಆಹ್ವಾನ ಪತ್ರಿಕೆ ತಯಾರಿ, ವೇದಿಕೆ ರಚನೆ,ಮಾನಪತ್ರ ತಯಾರಿ- ಎಲ್ಲದರಲ್ಲೂ ಜೋಶಿ ತಮ್ಮ ಛಾಪು ಮೂಡಿಸಿದರು. {{gap}}ಅಭಿನಂದನಾ ಸಮಾರಂಭದ ಮಾನಪತ್ರವನ್ನು ಬರೆದಿದ್ದು ಜೋಶಿ. ಮುಂದೆ ಅದೇ ಮಾದರಿಯಲ್ಲಿ ಹಲವಾರು ಕಲಾವಿದರಿಗೆ ಜೋಶಿ ಮಾನಪತ್ರ ಬರೆದುಕೊಟ್ಟಿದ್ದಾರೆ. ಈಗಲೂ ಜೋಶಿಯವರ ಮನೆಗೆ ಬಂದು ಮಾನಪತ್ರ ಬರೆಸಿಕೊಂಡು ಹೋಗುವ ಸಂಘಟಕರಿದ್ದಾರೆ. ಶೇಣಿ ಮಾನಪತ್ರ ಇಡೀ ಕರಾವಳಿಯ ಅಭಿನಂದನಾ ಸಮಾರಂಭಗಳ ಸಮ್ಮಾನ ಪತ್ರಗಳ ರಚನೆಗೆ ಒಂದು ಮಾದರಿಯಾಯಿತು. ಈ ಸನ್ಮಾನದ ಬಳಿಕ ಶೇಣಿಯವರಿಗೆ ಸನ್ಮಾನಗಳ ಸರಮಾಲೆಯೇ ಶುರುವಾಯಿತು. ಸನ್ಮಾನಗಳ ಪರಿಕಲ್ಪನೆಯೇ ಹುಟ್ಟಿಕೊಂಡಿತು. {{center|'''ಜೋಶಿಯವರೆಂದರೆ ಅಭಿನಂದನಾ ಭಾಷಣ..'''}} ಮರುವರ್ಷ ದೇರಾಜೆ ಸೀತಾರಾಮಯ್ಯ ಮತ್ತು ದೊಡ್ಡ ಸಾಮಗರ ಅಭಿನಂದನ ಸಮಾರಂಭದಲ್ಲೂ ಜೋಶಿ ಸಕ್ರಿಯವಾಗಿ ತೊಡಗಿಕೊಂಡರು. ಶೇಣಿ ಮತ್ತು ದೇರಾಜೆ ಸನ್ಮಾನದ ವೇಳೆ ಜೋಶಿ ಅಭಿನಂದನಾ ಭಾಷಣ ಮಾಡಿದ್ದರು. ಆ ಭಾಷಣ, ಹೊಸ ವಾತಾವರಣವನ್ನೇ ನಿರ್ಮಿಸಿತು. ಇಡೀ ಬದುಕು, ಸಾಧನೆ, ಸ್ವಭಾವ, ಅರ್ಥಗಾರಿಕೆಯನ್ನು ೩೦ ನಿಮಿಷಗಳಲ್ಲಿ ಅನನ್ಯವಾಗಿ ಕಡೆದಿಟ್ಟರು. ಬಹುಶಃ ಮುಂದೆ ಯಾವುದೇ ಕಲಾವಿದನ ಅಭಿನಂದನಾ ನುಡಿಗಳಿಗೆ ಜೋಶಿಯವರೇ ಬೇಕು ಎಂಬಷ್ಟರಮಟ್ಟಿಗೆ ವಾತಾವರಣ ಸೃಷ್ಟಿಯಾಯಿತು. ಹಾಗೆ ಜೋಶಿ ಮಾಡಿದ ಅಭಿನಂದನಾ ಭಾಷಣಗಳ ಪಟ್ಟಿಯೇ ಕೆಲವು ನೂರು ದಾಟುತ್ತದೆ. {{center|'''ಎಂಸಿಗೂ ಸೈ..!'''}} ಕರಾವಳಿಯಲ್ಲಿ ಕಾರ್ಯಕ್ರಮ ನಿರೂಪಣೆಗೂ ಒಂದು ಹೊಸ ರೂಪ ಕೊಟ್ಟದ್ದೂ ಜೋಶಿಯವರೇ, ಸಾಂಸ್ಕೃತಿಕ ಕಾರ್ಯಕ್ರಮಗಳ ಕರಪತ್ರದಲ್ಲಿ ನೀವು ಬನ್ನಿ, ನಿಮ್ಮ ಬಂಧುಮಿತ್ರರನ್ನು ಕರೆತನ್ನಿ' ಎಂಬಂಥ ಸಾಲುಗಳನ್ನು ಮೊದಲು ಬರೆದದ್ದು ಜೋಶಿ. ಇನ್ನು ಅಧಿಕ ಇಲ್ಲದ ಕಾರ್ಯಕ್ರಮ ನಿರ್ವಹಣೆ. ೧೯೭೨ರಿಂದ ಮಂಗಳೂರಲ್ಲಿ ಕರಾವಳಿ ಉತ್ಸವ ಆರಂಭವಾಗುವವರೆಗೆ ೨-೩ ದಶಕ ಕಾಲ ಮಂಗಳೂರಿನ ಎಲ್ಲ ಕಾರ್ಯಕ್ರಮಗಳ ಎಂಸಿಗೆ {{center|'''ಡಾ.ಎಂ.ಪ್ರಭಾಕರ ಜೋಶಿ / ೩೧'''}}<noinclude></noinclude> ihjrww9c4g4sqs3mz7o16kskg0ozyv1 ಪುಟ:ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ.pdf/೩೭ 104 99573 322472 279004 2026-05-25T10:05:43Z Pragathi. BH 7585 /* Validated */ 322472 proofread-page text/x-wiki <noinclude><pagequality level="4" user="Pragathi. BH" /></noinclude>ಜೋಶಿ ಹೋಗಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ ಕಮರ್ಶಿಯಲ್ ಟ್ರಾನ್ಸ್‌ಪೋರ್ಟ್ ಕಂಪನಿಯ ಉದ್ಘಾಟನಾ ಕಾರ್ಯಕ್ರಮಕ್ಕೂ ಜೋಶಿ ಹೋಗಿ ಎಂಸಿ ಮಾಡಿದ್ದಾರೆ- ಯಾವುದೇ ಸಂಭಾವನೆ ಪಡೆಯದೆ. ಉದ್ಯೋಷಣೆ ಜೋಶಿಯವರ ಇನ್ನೊಂದು ಹವ್ಯಾಸ. {{center|'''ನೆನಪಿನ ಶಕ್ತಿ, ಅಪೂರ್ವ ಕಡತಗಳ ಸಂಗ್ರಹ'''}} ಮರೆವು ಜೋಶಿಯವರಲ್ಲಿಲ್ಲ. ಅಪ್ರತಿಮ ಜ್ಞಾಪಕಶಕ್ತಿ ಅವರಿಗೆ ದಕ್ಕಿದ ವರ. ಬಾಲ್ಯದಿಂದ ಇಂದು ನಿನ್ನೆಯವರೆಗಿನ ಅವರ ಇಡೀ ಬದುಕಿನ ವಿವರಗಳನ್ನು ಈಗಷ್ಟೇ ನಡೆದ ಘಟನೆ ಯೆಂಬಂತೆ ಸವಿವರವಾಗಿ ಹೇಳಬಲ್ಲರು. ಸಿ.ಹೆಚ್. ಕೃಷ್ಣಶಾಸ್ತ್ರಿಯವರು ಜೋಶಿಯವರದ್ದು ಫೊಟೋಗ್ರಾಫಿಕ್ ಮೆಮರಿ ಪವರ್ ಅಂತಾರೆ. ಬಹುತೇಕ ಮೊಬೈಲ್ ನಂಬರ್ ಅವರಿಗೆ ಬಾಯಿಪಾಠ, ಪುರಾಣಗಳು ಮತ್ತು ಅವತಾರಗಳ ಕಲ್ಪನೆ ಅವರಿಗೆ ಸರಳ ಸುಲಲಿತ. ಬದುಕಿನ ಅನುಭವಗಳೂ ಗಾಢ, ಉಪನಿಷತ್ತು, ಶ್ಲೋಕಗಳು, ಕನ್ನಡ ಸಂಸ್ಕೃತ ಆಡು ನುಡಿಗಳು ಸಾಕಷ್ಟು ಕರತಲಾಮಲಕ. ಆದ್ದರಿಂದಲೇ ಅವರ ಅರ್ಥದ ನಡುವೆ ಶ್ಲೋಕಗಳು ನುಡಿಗಳು ಕೃತಕವೆಂಬಂತೆ ಹಾದು ಹೋಗುವುದಿಲ್ಲ. ಅರ್ಥದ ಅನಿವಾರ್ಯ ಭಾಗದಂತೆ ಆಡುನುಡಿಗಳು ಹಾಯುತ್ತವೆ. <br /><br />{{gap}}ಜೋಶಿಯವರ ಬಳಿ ಅವರ ತಂದೆ-ಅಜ್ಜನ ಕಾಲದಿಂದಲೇ ತರಿಸುತ್ತಿದ್ದ ಮರಾಠಿ 'ಕೇಸರಿ' ಪತ್ರಿಕೆಯ ಅಪೂರ್ವ ಸಂಗ್ರಹವಿದೆ.ಕಡತಗಳನ್ನು ಕಾಪಿಟ್ಟುಕೊಳ್ಳುವುದರಲ್ಲಿ ಜೋಶಿ ಎತ್ತಿದ ಕೈ. ಸುಮಾರು ೩೦-೪೦ ವರ್ಷಗಳ ಪ್ರತಿದಿನದ ಡೈರಿ ಅವರ ಬಳಿ ಇದೆ. ಅಷ್ಟೂ ವರ್ಷ ಎಲ್ಲಿ, ಯಾವ ದಿನ, ಯಾರ ಜೊತೆಗೆ, ಯಾವ ಅರ್ಥ ಹೇಳಿದೆನೆಂಬಪೂರ್ಣ ವಿವರ ಆಪುಟಗಳಲ್ಲಿವೆ <br /> {{gap}}ಹಳೆಯ ಕಾಗದ ಪತ್ರಗಳ ದೊಡ್ಡ ಸಂಗ್ರಹವೂ ಇದೆ. {{center|'''ಪಂಡಿತರ ಹಲ್ಲು ಮತ್ತು ಜೋಶಿಯವರ ಅರ್ಜುನ'''}} ಇದು ಜೋಶಿಯವರ ವಾಚಿಕ ಸಾಮರ್ಥ್ಯ, ಪ್ರತ್ಯುತ್ಪನ್ನಮತಿಗೆ ಉದಾಹರಣೆಯಾಗ ಬಹುದಾದ ಘಟನೆ. ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಒಂದು ತಾಳಮದ್ದಲೆ. ಶರಸೇತು ಬಂಧನ, ಮಾಗಧ ವಧೆ- ಬಲಿಪರು ಭಾಗವತರು. ಮಾಗಧ ವಧೆಯಲ್ಲಿ ಶೇಣಿ ಮಾಗಧ, ದೊಡ್ಡ ಸಾಮಗರ ಕೃಷ್ಣ. ಜೋಶಿಯವರ ಭೀಮ ಎಂದು ಪಾತ್ರ ಹಂಚಿಕೆಯಾಗಿ ಮೊದಲ ಪ್ರಸಂಗ ಮುಕ್ತಾಯಕ್ಕೆ ಕಾಯುತ್ತ ಜೋಶಿಯವರು ಚೌಕಿಯಲ್ಲಿ ಕುಳಿತಿದ್ದರು. ಶರಸೇತು ಬಂಧನ ಪ್ರಸಂಗ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಅರ್ಜುನನ ಪಾತ್ರ ನಿರ್ವಹಿಸುತ್ತಿದ್ದ ಪೆರ್ಲ ಕೃಷ್ಣ ಪಂಡಿತರ ಎರಡು ಹಲ್ಲಿನ ಸೆಟ್‌ಗಳಲ್ಲಿ ಒಂದು ಸೆಟ್ ಉದುರಿದೆ. ಬಾಯಿಗೆ ಕೈ ಮುಚ್ಚಿಕೊಂಡು ವೇದಿಕೆಯಿಂದ ಹೊರ ಬಂದಿದ್ದಾರೆ. ಅರ್ಥ ಹೇಳುತ್ತಿದ್ದಂತೆ ಪ್ರೇಕ್ಷಕರಿಗೆ ಗೊತ್ತಾಗದಂತೆ. ಇತ್ತ ಮಂದಾರ ಕೇಶವ ಭಟ್ಟರು ಜೋಶಿಯವರತ್ತ ಕೈಸನ್ನೆ ಮಾಡಿ ವೇದಿಕೆಗೆ ತೆರಳಿ 'ಇನ್ನು ಅರ್ಜುನನ ಪಾತ್ರವನ್ನು ಜೋಶಿಯವರು ನಿರ್ವಹಿಸುತ್ತಾರೆ'' ಎಂದಿದ್ದಾರೆ. {{gap}}ಮಿಂಚಿನ ವೇಗದಲ್ಲಿ ಜೋಶಿ ಹೋಗಿ ಕುಳಿತಿದ್ದರು. ಆವರೆಗೆ 'ಶರಸೇತು ಬಂಧನದಲ್ಲಿ {{center|'''ಡಾ.ಎಂ.ಪ್ರಭಾಕರ ಜೋಶಿ / ೩೨'''}}<noinclude></noinclude> 19bq5vql1w4yvuvk9pkd56pswtppqxu ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 322379 322131 2026-05-25T05:17:22Z Anzx-ooo 3060 322379 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 38614<br><small>ದತ್ತಾಂಶ ಪಡೆದ ಸಮಯ: 2026-05-25 05:16:25 UTC / 2026-05-25 10:46:25 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Pragathi. BH|Pragathi. BH]] || 0 || 0 || 9250 (10905) || 0 || 0 || 7983 || 158 (316) || 1068 (3204) || 9892 || '''10905''' |- | 2 || [[Special:Contributions/Shreelatha.Halemane|Shreelatha.Halemane]] || 0 || 0 || 7259 (10758) || 0 || 0 || 4890 || 819 (1638) || 1444 (4332) || 7675 || '''10758''' |- | 3 || [[Special:Contributions/Shreesha Sharma|Shreesha Sharma]] || 0 || 0 || 3309 (4506) || 0 || 0 || 2097 || 374 (748) || 431 (1293) || 3831 || '''4506''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 535 (1269) || 0 || 0 || 70 || 63 (126) || 397 (1191) || 665 || '''1269''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/Vikashegde|Vikashegde]] || 0 || 0 || 127 (272) || 4 || 0 || 0 || 41 (82) || 68 (204) || 158 || '''275''' |- | 8 || [[Special:Contributions/A826|A826]] || 10740 || 1 || 196 (244) || 26 || 0 || 5 || 4 (8) || 28 (84) || 10979 || '''268''' |- | 9 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 10 || [[Special:Contributions/Hariprasad Shetty10|Hariprasad Shetty10]] || 0 || 0 || 80 (172) || 0 || 0 || 0 || 21 (42) || 39 (117) || 345 || '''172''' |- | 11 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150''' |- | 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] 74lz2dtv8jksqsbmzpxisijxangw7d3 322482 322379 2026-05-25T10:57:06Z Anzx-ooo 3060 322482 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 38716<br><small>ದತ್ತಾಂಶ ಪಡೆದ ಸಮಯ: 2026-05-25 10:55:47 UTC / 2026-05-25 16:25:47 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Pragathi. BH|Pragathi. BH]] || 0 || 0 || 9294 (11009) || 0 || 0 || 7987 || 158 (316) || 1106 (3318) || 9955 || '''11009''' |- | 2 || [[Special:Contributions/Shreelatha.Halemane|Shreelatha.Halemane]] || 0 || 0 || 7271 (10787) || 0 || 0 || 4890 || 826 (1652) || 1449 (4347) || 7687 || '''10787''' |- | 3 || [[Special:Contributions/Shreesha Sharma|Shreesha Sharma]] || 0 || 0 || 3322 (4535) || 0 || 0 || 2097 || 383 (766) || 435 (1305) || 3845 || '''4535''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 535 (1269) || 0 || 0 || 70 || 63 (126) || 397 (1191) || 665 || '''1269''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/Vikashegde|Vikashegde]] || 0 || 0 || 127 (272) || 4 || 0 || 0 || 41 (82) || 68 (204) || 158 || '''275''' |- | 8 || [[Special:Contributions/A826|A826]] || 10740 || 1 || 196 (244) || 26 || 0 || 5 || 4 (8) || 28 (84) || 10979 || '''268''' |- | 9 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 10 || [[Special:Contributions/Hariprasad Shetty10|Hariprasad Shetty10]] || 0 || 0 || 83 (178) || 0 || 0 || 0 || 22 (44) || 40 (120) || 357 || '''178''' |- | 11 || [[Special:Contributions/Anzx-ooo|Anzx-ooo]] || 2 || 0 || 66 (148) || 1 || 0 || 0 || 8 (16) || 49 (147) || 100 || '''151''' |- | 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] tl7z3m73et2q4tq8kjnixu3treij0xm ಪುಟ:ನಿತ್ಯ ನೇಮಾವಲಿ.pdf/೫೩ 104 101849 322226 319587 2026-05-24T15:00:59Z Pragathi. BH 7585 /* Validated */ 322226 proofread-page text/x-wiki <noinclude><pagequality level="4" user="Pragathi. BH" /></noinclude>{{center|'''ನಿತ್ಯನೇಮಾವಲಿ'''}} <poem> {{center|ದಾಸರೆಲ್ಲರು ಬಂದು ಧೂಳಿದರ್ಶನಗೊಂಡು|}} {{center|ಲೇಸಾಗಿ ತಾಳದಂಡಿಗೆಯ ಪಿಡಿದು|}} {{center|ಆದಿಕೇಶದ ನಿಮ್ಮ ಪುಣ್ಯನಾಮಸ್ಮರಣಿ}} {{center|ಉದಯದಲ್ಲೆದ್ದು ಪಾಡುತಿರ್ಪರು ಹರಿಯೇ}}||೩|| </poem> {{center|೨}} <poem> {{center|ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ|}} {{center|ಶರಣು ಪಾರ್ವತಿತನಯ ಮೂರುತಿ ಶರಣುಮೂಷಕವಾಹನ||}} {{center|ನಿಟಿಲನೇತ್ರನ ವರದಪುತ್ರನೇ ನಾಗಭೂಷಣಪ್ರಿಯನೇ।}} {{center|ಕಟಕರಾಂಕಿತಕೋಮಲಾಂಗನೇ ಕನಕಕುಂಡಲಧಾರನೇ}}||೧|| {{center|ಬಟ್ಟುಮುತ್ತಿನ ಪದಕಧಾರನೇ ಬಾಹುಹಸ್ತಚತುಷ್ಟನೇ।}} {{center|ಇಟ್ಟ ತೋಳದಿ ಹೇಮಕಂಕಣ ಪಾಶಾಂಕುಶಧಾರನೇ}}||೨|| {{center|ಕುಕ್ಷಿಮಹಾಲಂಬೋದರನೇ ಇಕ್ಷುಚಾಪನ ಗೆಲಿದನೇ।}} {{center|ಪಕ್ಷಿವಾಹನನಾದ ಪುರಂದರವಿಠಲನ ನಿಜದಾಸನೇ}}||೩|| {{center|ಏಳು ಸದ್ಗುರುನಾಥ ಏಳು ಕರುಣಾನಿಧಿಯೇ}} {{center|ಏಳು ನೀ .ಉಮದೀಶ ಜಗದೀಶನಯ್ಯಾ}}||ಪಲ್ಲ|| </poem><noinclude></noinclude> 860v9n9rsloiyee4cv0wuzernr3btm8 ಪುಟ:ನಿತ್ಯ ನೇಮಾವಲಿ.pdf/೪೭ 104 101915 322225 313603 2026-05-24T14:59:01Z Pragathi. BH 7585 /* Without text */ 322225 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ನಿತ್ಯ ನೇಮಾವಲಿ.pdf/೧೩೭ 104 101986 322224 320273 2026-05-24T14:58:38Z Pragathi. BH 7585 /* Validated */ 322224 proofread-page text/x-wiki <noinclude><pagequality level="4" user="Pragathi. BH" />{{center|ನಿತ್ಯನೇಮಾವಲಿ}}</noinclude>ಶಬ್ದಾತೀತ. ಸದ್ಗುರು ಹೇಳಿದ ಸಾಧನೆಯನ್ನು ಶ್ರದ್ಧೆಯಿಂದ ಮಾಡಿದರೆ ಸಾಕ್ಷಾತ್ಕಾರವು ಖಂಡಿತ. ಇದು ರಾಮೀರಾಮದಾಸರ ಅನುಭವ. {{center|(2)}} ಪಂಚಪ್ರಾಣವೆಂಬ ಆರತಿ ಮಾಡಿರಿ ಪಂಚತತ್ವವೆಂಬ ಬತ್ತಿ ಹಚ್ಚಿರಿ ಚಂಚಲವೃತ್ತಿಯೆಂಬ ಘೃತವನ್ಹಾಕಿರಿ| ಪಂಚಕರ್ಮೇಂದ್ರಿಯಗಳ ದಹನ ಮಾಡಿರಿ || ೧ || ಜಯದೇವ ಜಯದೇವ ಜಯಪರಮಹಂಸಾ, ಗುರುಪರಮಹಂಸಾ ದಯಮಾಡಿದಯ್ಯಾ ನೀ ಎನಗೆ ಸರ್ವೇಶಾ|| ಜಯದೇವ ಜಯದೇವ || ಪ || ಆದರ ಪರಸಿ ಆರು ಚಕ್ರಾ ಮೀರಿಸಿದಿ| ವೇದಕೆ ನಿಲುಕದ ನಿಜಗುಣರತ್ನಾ ತೋರಿಸಿದಿ| ಆದಿನಾಥನಲ್ಲಿ ಲಕ್ಷವಿಡಿಸಿದಿ| ನಾದದ ಮೂಲ ಓಂಕಾರದೊಳುಬೆರಿಸಿದಿ|| ಜಯದೇವ ಜಯದೇವ || ೨ || ತಂದೆತ್ರಿಮಲ್ಲ ನೀ ಸದ್ಗುರುನಾಥಾ | ಕಂದಗೆ ಜ್ಞಾನದ ವಸ್ತು ಕೊಟ್ಟಂಥ ದಾತಾ| ಸಂದೇಹ ಬಿಡಿಸಿ ಎನಗೆ ಮಾಡಿದಿ ಪ್ರಖ್ಯಾತಾ| ಛಂದದಿ ಭಜಿಸುವೆ ನಾ ನಿನಗೆ ಅವಧೂತಾ|| ಜಯದೇವ ಜಯದೇವ || ೩ || {{center|(೪)}} ಆರತೀ ಕರಾ ಹೋ ಸಜ್ಜನ ದೈತಭಾವ ಟಾಕೂನ || ಧೃ || ವಿವೇಕ ಸದ್ಭುದ್ಧಿ ! ಸದ್ಭುದ್ಧಿ! ಲಕ್ಷ ಲಾವುನೀ ಪದೀ | ಅಂತುಕರಣ ಮನಶುದ್ಧಿ| {{center|೧೩೬}}<noinclude></noinclude> har1h43qumlw6p8591ygskbpfs6psrw ಪುಟ:Shivasharaneyara vachanasamputa005.pdf/೧೪ 104 103928 322450 293165 2026-05-25T09:33:59Z Pragathi. BH 7585 /* Validated */ 322450 proofread-page text/x-wiki <noinclude><pagequality level="4" user="Pragathi. BH" /></noinclude>{{center|X}} ಶೋಧಿಸುವ, ಸಂಪಾದಿಸುವ ಪ್ರಯತ್ನ ನಡೆದು, ನೂರಾರು ಸಂಪಾದನ ಕೃತಿಗಳು ಹುಟ್ಟಿ ಬಂದು, ವಚನಸಾಹಿತ್ಯ ವೀರಶೈವ ಮಠಗಳಲ್ಲಿ ತಕ್ಕ ಮಟ್ಟಿಗೆ ರಕ್ಷಿಸಲ್ಪಟ್ಟಿತು. ದುರ್ದೈವದ ಸಂಗತಿಯೆಂದರೆ ಮಠಗಳಲ್ಲಿ ಪ್ರವೇಶ ಪಡೆದ ಸಂಸ್ಕೃತ ಭಾಷೆಯಿಂದಾಗಿ ಕನ್ನಡ ಭಾಷೆಯ ಈ ವಚನಗಳು ಅಲ್ಲಿ ಮೂಲೆ ಸೇರಿದವು. {{gap}}ಹೀಗೆ ಮೂಲೆಗುಂಪಾಗಿದ್ದ ವಚನಸಾಹಿತ್ಯವು ೨೦ನೆಯ ಶತಮಾನದಲ್ಲಿ ಅನೇಕ ಜನ ವಿದ್ವಾಂಸರ, ಹತ್ತಾರು ಸಂಸ್ಥೆಗಳ ಪ್ರಯತ್ನದ ಫಲವಾಗಿ ಪ್ರಕಟಣೆಗೊಳ್ಳುತ್ತ ಬಂದಿತು. ಈಗ ೧೨ನೆಯ ಶತಮಾನದ ಶರಣಸಾಹಿತ್ಯ ಪ್ರಕಟನೆಗೆ ಒತ್ತುಬಿದ್ದರೂ ಅದು ಬಿಡಿಬಿಡಿಯಾಗಿ ಪ್ರಕಟಣೆಗೊಂಡಿತು. ಆ ತರುವಾಯದ ಶರಣ ಸಾಹಿತ್ಯವಂತೂ ಉಪೇಕ್ಷೆಗೆ ಗುರಿಯಾಯಿತು. ಈ ಎರಡೂ ಕೊರತೆಗಳನ್ನು ನೀಗಿಸುವ ಉದ್ದೇಶದಿಂದ ಎಲ್ಲ ಶರಣರ ಎಲ್ಲ ವಚನಗಳನ್ನು ಸಂಪುಟ ಶ್ರೇಣಿಯಲ್ಲಿ ಪ್ರಕಟಿಸಲು ಕರ್ನಾಟಕ ಸರಕಾರ “ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯನ್ನು ಕೈಗೆತ್ತಿಕೊಂಡಿತು. {{gap}}ಡಾ. ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ವ್ಯಾಪಕ ಕಾರ್ಯ ನಡೆದು, ೨೦ ಸಾವಿರ ವಚನ, ೧೦ ಸಾವಿರ ಪುಟಗಳನ್ನೊಳಗೊಂಡ ೧೫ ಸಂಪುಟಗಳು ೧೯೯೩ರಲ್ಲಿ ಬೆಳಕು ಕಂಡವು. ಆಶ್ಚರ್ಯದ ಸಂಗತಿಯೆಂದರೆ ಇದರ ೫ ಸಾವಿರ ಪ್ರತಿಗಳು ಒಂದೇ ವರ್ಷದಲ್ಲಿ ಮಾರಾಟವಾಗಿ, ಜನರಿಂದ ಬೇಡಿಕೆ ಹೆಚ್ಚುತ್ತ ನಡೆಯಿತು. ಇದನ್ನು ಪೂರೈಸುವ ದಿಕ್ಕಿನಲ್ಲಿ ಪರಿಷ್ಕೃತ ದ್ವಿತೀಯ ಆವೃತ್ತಿ ಈಗ ಹೊರಬರುತ್ತಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿ ಕನ್ನಡದ ಈ ಅಪೂರ್ವ ಆಸ್ತಿಯನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.<noinclude></noinclude> idxefospoluwxs0kmiqulixcy93dcmb ಪುಟ:Shivasharaneyara vachanasamputa005.pdf/೧೫ 104 103929 322451 293167 2026-05-25T09:43:15Z Pragathi. BH 7585 /* Validated */ 322451 proofread-page text/x-wiki <noinclude><pagequality level="4" user="Pragathi. BH" /></noinclude>{{center|'''ನಿರ್ದೇಶಕರ ಮಾತು'''}} {{center|'''ಕೆ. ಸಿ. ರಾಮಮೂರ್ತಿ'''}} {{center|ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ}} {{gap}}ವಚನಸಾಹಿತ್ಯ, ಕರ್ನಾಟಕದ ಬಹುದೊಡ್ಡ ಸಾಂಸ್ಕೃತಿಕ ಸಂಪತ್ತು. ಪ್ರಾಚೀನ ಕರ್ನಾಟಕದ ಜನಸಾಮಾನ್ಯರ ಧ್ವನಿಯಾಗಿರುವ ಇದನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು ಜನತಂತ್ರ ಸರಕಾರದ ಮುಖ್ಯ ಕರ್ತವ್ಯವಾಗಿದೆ. {{gap}}ಭಾರತದಲ್ಲಿ ಆತ್ರೋದ್ಧಾರದ ಬಗ್ಗೆ ಉದಾತ್ತ ತತ್ವಗಳನ್ನು ಪ್ರತಿಪಾದಿಸುತ್ತ ಬಂದಿದ್ದರೂ ಸಮಾಜೋದ್ಧಾರದ ಬಗ್ಗೆ ಉಪೇಕ್ಷೆ ಬೆಳೆದು, ಅಲ್ಲಿ ಶೋಷಣೆ ವರ್ಧಿಸುತ್ತ ಬಂದುದು ನಮ್ಮ ಇತಿಹಾಸದ ಒಂದು ವಿಪನ್ಯಾಸವೇ ಸರಿ. ೧೨ನೆಯ ಶತಮಾನದಲ್ಲಿ ಉಲ್ಬಣಗೊಂಡಿದ್ದ ಈ ವಿಷಮ ಪರಿಸ್ಥಿತಿಯನ್ನು ನಾಶಗೊಳಿಸಿ, ಸಮಸ್ಥಿತಿಯನ್ನು ಸಮಾಜದಲ್ಲಿ ತರಲು ಹೋರಾಡಿದವರು, ಕಲ್ಯಾಣದ ಶರಣರು. ಈ ಕಾರಕ್ಕಾಗಿ ಅವರು ಕೈಕೊಡ ಜನಪರ ಆಂದೋಲನ ನಮ್ಮ ದೇಶದ ಇತಿಹಾಸದಲ್ಲಿಯೇ ಒಂದು ವಿಶಿಷ್ಟ ಘಟನೆಯಾಗಿದೆ. {{gap}}ಭಾರತದಲ್ಲಿ ರಾಜಸತ್ತೆಯ ಸ್ಥಾಪನೆಗಾಗಿ ರಾಜರು, ಮತಸತ್ತೆಯ ಸ್ಥಾಪನೆಗಾಗಿ ಧರ್ಮಗಳು ಪರಸ್ಪರ ಸಂಘರ್ಷಕ್ಕಿಳಿದುದು ಸರ್ವಶ್ರುತ. ಆದರೆ ಸಾಮಾಜಿಕ ನ್ಯಾಯದ ಸ್ಥಾಪನೆಗಾಗಿ ಈ ರಾಜಸತ್ತೆ, ಮತಸತ್ತೆಗಳ ವಿರುದ್ಧ ಸಮಾಜದ ವಿವಿಧ ಸ್ತರಗಳ ಜನತೆ, ಅದರಲ್ಲಿಯೂ ದೀನರು-ದಲಿತರು-ಮಹಿಳೆಯರು ಬೀದಿಗಿಳಿದು ನಡೆಸಿದ ಈ ಆಂದೋಲನ, ಇಪ್ಪತ್ತನೆಯ ಶತಮಾನವೂ ಆಶ್ಚರ್ಯಪಡುವ ಸಂಗತಿಯಾಗಿದೆ. {{gap}}ಅಂದಿನ ಸನ್ನಿವೇಶಕ್ಕೆ ಅನುಗುಣವಾಗಿ ಧಾರ್ಮಿಕ ಕ್ಷೇತ್ರದಲ್ಲಿ ಅಂಕುರಿಸಿದ ಈ ಆಂದೋಲನ, ಸಾಮಾಜಿಕ ಕ್ಷೇತ್ರವನ್ನೂ ಆವರಿಸಿದ ಕಾರಣ, ಇದನ್ನು 'ಸಮಾಜೋ ಧಾರ್ಮಿಕ' ಆಂದೋಲನವೆಂದು ಗುರುತಿಸಲಾಗುತ್ತದೆ. ಸಮಾಜವೆನ್ನುವುದು ಸಂಕೀರ್ಣ ವ್ಯವಸ್ಥೆ, ಅದರ ಎಲ್ಲ ಸ್ತರಗಳನ್ನೂ ಎಲ್ಲ ಮಗ್ಗಲುಗಳನ್ನೂ ಬದಲಿಸಲು ಮಾಡಿದ ಪ್ರಯತ್ನವಾಗಿರುವುದರಿಂದ ಇದು ಒಂದು “ಸಮಗ್ರ ಆಂದೋಲನವಾಗಿದೆ. ಈ ಆಂದೋಲನದ ನೇರ ಧ್ವನಿ, ವಚನಸಾಹಿತ್ಯ. {{gap}}ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನಿಂದಾಗಿ ವ್ಯಕ್ತಿ ಸ್ವಾತಂತ್ರ ಪಡೆದ ಜನವರ್ಗವು ವ್ಯಕ್ತಪಡಿಸಿದ ಅಭಿಪ್ರಾಯ ಸ್ವಾತಂತ್ರ್ಯದ ಫಲ, ಈ ಸಾಹಿತ್ಯ. ಹೀಗಾಗಿ ಇಲ್ಲಿ ಆತ್ಮವಿಮರ್ಶೆಯಷ್ಟೇ ವಿಪುಲವಾಗಿ ಸಮಾಜವಿಮರ್ಶೆಯನ್ನೂ ಕಾಣಬಹುದಾಗಿದೆ. ಅದರಲ್ಲಿಯೂ ವರ್ಣಭೇದ ನಿರಾಕರಣೆ, ವರ್ಗಭೇದ<noinclude></noinclude> 44q9qgctk42ssrsmqvrplsradneblfv ಪುಟ:Shivasharaneyara vachanasamputa005.pdf/೧೬ 104 103931 322452 293168 2026-05-25T09:43:48Z Pragathi. BH 7585 /* Validated */ 322452 proofread-page text/x-wiki <noinclude><pagequality level="4" user="Pragathi. BH" /></noinclude>{{center|XII}} ನಿರಾಕರಣೆ, ಲಿಂಗಭೇದ ನಿರಾಕರಣೆಗಳಂಥ ವಿಚಾರಗಳು ಸ್ಫೋಟಗೊಂಡುದು ಲಕ್ಷಿಸತಕ್ಕ ಸಂಗತಿಯಾಗಿದೆ. ಇಲ್ಲಿ ಪುರುಷರಷ್ಟೇ ಪ್ರಧಾನವಾಗಿ ಮಹಿಳೆಯರೂ, ಕುಲಜರಷ್ಟೇ ಪ್ರಧಾನವಾಗಿ ಅಂತ್ಯಜರೂ, ಪ್ರಭುಗಳಷ್ಟೇ ಪ್ರಧಾನವಾಗಿ ಪ್ರಜೆಗಳೂ ಬಾಳಿದುದು, ಬರೆದುದು ಬಹುಶಃ ಜಗತ್ತಿನ ಇತಿಹಾಸದಲ್ಲಿಯೇ ಏಕೈಕ ಉದಾಹರಣೆಯಾಗಿದೆ. ಇಂಥ ವಿಚಾರಶೀಲರ ಅಂದರೆ ಇವರ ತತ್ವ-ಸಾಹಿತ್ಯಗಳ ಉತ್ತರಾಧಿಕಾರಿಗಳಾದುದು ನಮ್ಮ ಭಾಗ್ಯ; ಇವರ ಸಾಹಿತ್ಯ ಸಂಪತ್ತನ್ನು ರಕ್ಷಿಸುವುದು, ಪ್ರಸಾರಮಾಡುವುದು ನಮ್ಮ ಕರ್ತವ್ಯ. ಈ ಕರ್ತವ್ಯದ ಭಾಗವಾಗಿ “ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯನ್ನು ಕರ್ನಾಟಕ ಸರಕಾರ ಕೈಗೆತ್ತಿಕೊಂಡಿತು. {{gap}}ಈವರೆಗೆ ವಚನಸಾಹಿತ್ಯ ಬಿಡಿಬಿಡಿಯಾಗಿ ಭಾಗಶಃ ಪ್ರಕಟವಾಗಿದ್ದಿತು, ಕೆಲವು ಭಾಗ ಅಪ್ರಕಟಿತ ಸ್ಥಿತಿಯಲ್ಲಿ ಉಳಿದಿದ್ದಿತು. ಇದೆಲ್ಲವನ್ನು ಕ್ರೋಢೀಕರಿಸಿ, ಪರಿಷ್ಕರಿಸಿ ಪ್ರಕಟಿಸುವುದು ಶ್ರಮದ ಕೆಲಸ. ಡಾ. ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ, ಅನೇಕ ಜನ ವಿದ್ವಾಂಸರ ಮತ್ತು ಸಂಪಾದಕ ಮಂಡಳಿ ಸದಸ್ಯರ ಸಂಯುಕ್ತ ಪರಿಶ್ರಮದಿಂದ ಈ ಬೃಹತ್ ಯೋಜನೆ ಪೂರ್ತಿಗೊಂಡುದು ಸಂತೋಷದ ಸಂಗತಿ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ಅಸ್ತಿತ್ವಕ್ಕೆ ಬಂದು, ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಂಡ ಈ ಐತಿಹಾಸಿಕ ಯೋಜನೆಗಾಗಿ ಸಂಬಂಧಪಟ್ಟ ಎಲ್ಲ ವಿದ್ವಾಂಸರನ್ನು ಅಭಿನಂದಿಸುತ್ತೇನೆ. ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಪ್ರಕಟವಾಗುತ್ತಲಿರುವ ಈ ಪರಿಷ್ಕತ ದ್ವಿತೀಯ ಆವೃತ್ತಿ ಸಂಪುಟಗಳನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.<noinclude></noinclude> bvbqzzpkzzk463lms542c5d9gx8u3m3 ಪುಟ:Shivasharaneyara vachanasamputa005.pdf/೧೭ 104 103935 322453 293169 2026-05-25T09:44:18Z Pragathi. BH 7585 /* Validated */ 322453 proofread-page text/x-wiki <noinclude><pagequality level="4" user="Pragathi. BH" /></noinclude>{{center|'''ಪ್ರಕಾಶಕರ ಮಾತು'''}} {{center|ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ}} {{center|ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ}} {{gap}}ಸಮಗ್ರ ವಚನ ಸಂಪುಟಗಳ ಪರಿಷ್ಕೃತ ಆವೃತ್ತಿ ಪ್ರಕಟಣೆ ಕರ್ನಾಟಕ ಸಾಂಸ್ಕೃತಿಕ ಇತಿಹಾಸದಲ್ಲಿ ನಡೆದಿರುವ ಒಂದು ದಿವ್ಯಘಟನೆ. ವಚನಸಾಹಿತ್ಯದ ಪ್ರಕಟಣೆಗೆ ಸುಮಾರು ಎಂಬತ್ತು ವರ್ಷಗಳ ಇತಿಹಾಸವಿದೆ. ವಚನಪಿತಾಮಹ ಶ್ರೀ ಫ. ಗು. ಹಳಕಟ್ಟಿ ಅವರಿಂದ ಪ್ರಕಟಣೆಯ ದಿವ್ಯಘಟನೆ ಆರಂಭಗೊಂಡಿತು. ಇದೀಗ ಡಾ. ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದ ಮೂಲಕ ಸಹಸ್ರಮಾನದ ಸೂರ್ಯೊದಯದ ವೇಳೆಗೆ ಇದು ಒಂದು ಪೂರ್ಣ ಘಟ್ಟಕ್ಕೆ ಬಂದಿದೆ. ಶರಣ ಸಾಹಿತ್ಯದ ಪ್ರಕಟಣೆಯ ಇತಿಹಾಸದಲ್ಲಿ ಇದು ಚಾರಿತ್ರಿಕ ಘಟನೆಯೇ ಸರಿ. ಈ ನಡುವೆ ವಚನಸಾಹಿತ್ಯದ ಸಹಸ್ರಾರು ಬಿಡಿ ಪ್ರಕಟಣೆಗಳು ಹೊರಬಂದಿವೆ. ವಿಶ್ವವಿದ್ಯಾಲಯಗಳು, ಖಾಸಗಿ ಸಂಸ್ಥೆಗಳು, ಮಠಗಳು, ಶಿಕ್ಷಣ ಕೇಂದ್ರಗಳು, ಖಾಸಗಿ ಪ್ರಕಾಶಕರು, ಆಸಕ್ತ ಲೇಖಕರು ಬಿಡಿಬಿಡಿಯಾಗಿ ವಚನಸಾಹಿತ್ಯದ ಪ್ರಕಟಣೆಗಳನ್ನು ಹೊರತಂದಿದ್ದಾರೆ. ನಾವು ಪ್ರೀತಿಯಿಂದ ಇವರನ್ನೆಲ್ಲ ಈ ಹೊತ್ತಿನಲ್ಲಿ ನೆನೆಯುವುದು, ಆ ಪಾತ್ರಸ್ಮರಣೀಯರ ಹಾದಿಯಲ್ಲಿ ಮುನ್ನಡೆಯುವುದು ನಮ್ಮ ಸಾಂಸ್ಕೃತಿಕ ಕರ್ತವ್ಯ. {{gap}}ಸಮಗ್ರ ವಚನ ಸಂಪುಟಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ೧೯೯೩ರಲ್ಲಿ ಪ್ರಕಟಗೊಂಡಿದ್ದವು. ಆ ಸಂಪುಟಗಳು ಪ್ರಕಟವಾದ ವರ್ಷವೇ ಕನ್ನಡಿಗರ ಮನೆಯನ್ನು ಸೇರಿಕೊಂಡವು. ಆದರೆ, ಸಂಪುಟಗಳ ಬೇಡಿಕೆ ಮಹಾಜನರಿಂದ ಇದ್ದೇ ಇತ್ತು. ಆನಂತರ ಕರ್ನಾಟಕ ಸರ್ಕಾರ ಪರಿಷ್ಕೃತ ಆವೃತ್ತಿಗೆ ತಾತ್ವಿಕ ಒಪ್ಪಿಗೆ ನೀಡಿತು. ಹೀಗೆ ಒಪ್ಪಿಗೆ ನೀಡಿದ ಸಂಸ್ಕೃತಿ ಸಂಪನ್ನರೂ ಮುಖ್ಯಮಂತ್ರಿಗಳೂ ಆದ ಸನ್ಮಾನ್ಯ ಶ್ರೀ ಎಸ್. ಎಂ. ಕೃಷ್ಣ ಅವರನ್ನು ತುಂಬು ಹೃದಯದಿಂದ ಈ ಪ್ರಕಟಣೆಯ ದಿವ್ಯಘಟನೆಯ ಹೊತ್ತಿನಲ್ಲಿ ಸ್ಮರಿಸಿಕೊಳ್ಳುತ್ತೇನೆ. ಅನಂತರ ನಾಡಿನ ಶ್ರೇಷ್ಠ ವಿದ್ವಾಂಸರಾದ ಡಾ. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ವಚನ ಸಂಪುಟಗಳ ಪರಿಷ್ಕೃತ ಆವೃತ್ತಿಸಿದಗೊಂಡವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಸಂಪುಟಗಳನ್ನು ಪ್ರಕಟಿಸಬೇಕಿತ್ತು. ಆದರೆ, ಆ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಒಪ್ಪಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಔದಾರ್ಯ, ಅದನ್ನು ಪಡೆದು ಪ್ರಕಟಿಸುತ್ತಿರುವುದು ಪುಸ್ತಕ ಪ್ರಾಧಿಕಾರದ ಭಾಗ್ಯ, ಈ ಭಾಗ್ಯಕ್ಕೆ ಕಾರಣರಾದವರು ಕನ್ನಡ ಮತ್ತು ಸಂಸ್ಕೃತಿ<noinclude></noinclude> 8jaoi8wm7ajpfbyavmjxrariovjatha ಪುಟ:Shivasharaneyara vachanasamputa005.pdf/೧೯ 104 103937 322454 293171 2026-05-25T09:45:09Z Pragathi. BH 7585 /* Validated */ 322454 proofread-page text/x-wiki <noinclude><pagequality level="4" user="Pragathi. BH" /></noinclude>{{center|'''ಸಂಪಾದಕೀಯ'''}} {{center|'''ಡಾ. ಎಂ. ಎಂ. ಕಲಬುರ್ಗಿ'''}} {{center|ಪ್ರಧಾನ ಸಂಪಾದಕರು}}ಪ್ರಧಾನ ಸಂಪಾದಕರು {{gap}}ಕರ್ನಾಟಕದ ಇತಿಹಾಸದಲ್ಲಿ ಶಿವಶರಣರ ಚಳುವಳಿ ಒಂದು ಅಪೂರ್ವ ಘಟನೆ, ವಚನಗಳ ಸೃಷ್ಟಿ ಒಂದು ಅನನ್ಯ ಪ್ರಯೋಗ. ಸಮಾಜದ ಎಲ್ಲ ವರ್ಗ, ಎಲ್ಲ ವರ್ಣಗಳ ಜನಸಮುದಾಯ ಬಸವಣ್ಣನವರ ನೇತೃತ್ವದಲ್ಲಿ ಕೈಗೊಂಡಿದ್ದ ವ್ಯಕ್ತಿಕಲ್ಯಾಣ ಮತ್ತು ಸಮಾಜಕಲ್ಯಾಣ ಚಳುವಳಿಯ ಸೃಷ್ಟಿಯೆನಿಸಿದ ಈ ವಚನಗಳು, ಜಾಗತಿಕ ಸಾಹಿತ್ಯದ ಮಹತ್ವಪೂರ್ಣ ಭಾಗವೆನಿಸಿವೆ. {{gap}}'ವಚನ' ಶಬ್ದಕ್ಕೆ ಇಲ್ಲಿ ಗದ್ಯ ಸಾಹಿತ್ಯಪ್ರಕಾರವೆಂದು ಅರ್ಥವಲ್ಲ; ಪ್ರತಿಜ್ಞೆ, ಆತ್ಮಸಾಕ್ಷಿಯ ಮಾತು ಎಂದು ಅರ್ಥ, ನಡೆ ಹೇಗೇ ಇರಲಿ, ನುಡಿ ಮಾತ್ರ ಕಲಾತ್ಮಕವಾಗಿದ್ದುದು 'ರಚನೆ'ಯಾದರೆ, ನಡೆದಂತೆ ನುಡಿದ ಆತ್ಮಸಾಕ್ಷಿಯ ವಾಣಿ 'ವಚನ'ವೆನಿಸುತ್ತದೆ. {{gap}}ವಚನಗಳು ಆಚಾರರ ಸಾಹಿತ್ಯವಲ್ಲ, ಅನುಭಾವಿಗಳ ಸಾಹಿತ್ಯ, ಆಚಾರರು ಜೀವಿಸಿರುವಾಗಲೇ ತಮ್ಮ ವಿಚಾರಗಳನ್ನು ಬರೆದು, ಅವುಗಳಿಗೆ ಸಂವಿಧಾನಾತ್ಮಕ ಮುದ್ರೆ ಒತ್ತುತ್ತಾರೆ. ಅನುಭಾವಿಗಳು ಮಾತ್ರ ತಮ್ಮ ಚಿಂತನೆಯನ್ನು ಹೃದಯದಿಂದ ಹೃದಯಕ್ಕೆ ಮುಟ್ಟುವಂತೆ ಬಿಡಿಮಾತುಗಳ ಮೂಲಕ ಹೇಳುತ್ತಾರೆ. ಬಿಡಿಮುತ್ತುಗಳಂತೆ ಸೂರೆಯಾದ ಅವುಗಳನ್ನು ಸಂಗ್ರಹಿಸುವ, ಸಂಕಲಿಸುವ, ಸಂಪಾದಿಸುವ ಕೆಲಸವನ್ನು ಉತ್ತರಕಾಲೀನ ಅನುಯಾಯಿಗಳು ಮಾಡುತ್ತಾರೆ. ಏಸುವಿನ ವಾಣಿಯಾದ ಬೈಲ್, ಮಹಮ್ಮದನ ಉಪದೇಶವಾದ ಕುರಾನ್‌, ಬುದ್ಧನ ಬೋಧೆಯಾದ ತ್ರಿಪಿಟಕ, ಶರಣರ ಸಂದೇಶವಾದ ವಚನಕೃತಿಗಳು ಈ ಬಗೆಯ ಉತ್ತರಕಾಲೀನ ಸಂಕಲನಗಳಾಗಿವೆ. {{gap}}ಮೂಲತಃ ವಚನನಿಧಿ ಜನರಿಂದ, ಜನರಿಗಾಗಿ ಹುಟ್ಟಿ, ಜನರ ಮಧ್ಯದಲ್ಲಿ ಬಾಳಿದ ಸಾಹಿತ್ಯವಾಗಿದೆ. ಹೀಗಾಗಿ ಹನ್ನೆರಡರಿಂದ ಹದಿನೈದನೆಯ ಶತಮಾನಕ್ಕೆ ಬರುವಷ್ಟರಲ್ಲಿ ಅದಕ್ಕೆ ವಿಪುಲ ಭಿನ್ನಪಾಠಗಳು ಹುಟ್ಟಿಕೊಂಡವು. ಆಮೇಲೆ ಸಂಕಲನ-ಸಂಪಾದನ ಕಾರದಿಂದಾಗಿ ಕೆಲವೊಮ್ಮೆ ಪ್ರಕ್ಷಿಪ್ತ ವಚನಗಳೂ ತಲೆಯೆತ್ತಿದವು. ಈ ಗೊಂದಲ ಕಾರಣವಾಗಿ ಕವಿಸಾಹಿತ್ಯಕ್ಕಿಂತ ವಚನಸಾಹಿತ್ಯದ ಸಂಪಾದನಕಾರ ತುಂಬ ಜಟಿಲಸ್ವರೂಪದ್ದಾಗಿದೆ. {{gap}}ಪ್ರಾಚೀನ ಕನ್ನಡ ಸಾಹಿತ್ಯದ ಪ್ರಕಟನಕಾರವನ್ನು ಮೊದಲು ಕೈಗೆತ್ತಿಕೊಂಡವರು, ಕ್ರೈಸ್ತ ಪಾದ್ರಿಗಳು. ಜೈನ ಪುರಾಣ-ಕಾವ್ಯಗಳನ್ನು, ವೈದಿಕ ಪುರಾಣ-ಕೀರ್ತನೆಗಳನ್ನು, ವೀರಶೈವ ಶಾಸ್ತ್ರ ಪುರಾಣಗಳನ್ನು ಪ್ರಕಟಿಸಿದ ಇವರು, ವಚನಸಾಹಿತ್ಯವನ್ನು ಮಾತ್ರ ತಪ್ಪಿಯೂ ಪ್ರಕಟಿಸಲಿಲ್ಲ. ದೇಶೀ ವಿದ್ವಾಂಸರೇ ಈ ಕೆಲಸವನ್ನು ಪ್ರಾರಂಭ ಮಾಡಬೇಕಾಯಿತು. ಈ<noinclude></noinclude> frgtvqgqw60jj9zun9fjmcxd4e5hf69 ಪುಟ:Shivasharaneyara vachanasamputa005.pdf/೨೦ 104 103938 322455 293173 2026-05-25T09:45:50Z Pragathi. BH 7585 /* Validated */ 322455 proofread-page text/x-wiki <noinclude><pagequality level="4" user="Pragathi. BH" /></noinclude>{{center|xvi}} ದಿಸೆಯಲ್ಲಿ ಮೊದಲು ಪ್ರಕಟವಾದ ವಚನಕೃತಿ (೧೮೮೩) 'ಅಪ್ರಮಾಣ ಕೂಡಲ ಸಂಗಮದೇವಾ' ಮುದ್ರಿಕೆಯ ವಚನಗಳನ್ನೊಳಗೊಂಡ “ಶಿಖಾರತ್ನಪ್ರಕಾಶ'. ಆಮೇಲೆ ಒಂದು ಮೈಲಿಗಲ್ಲಿನಂತೆ ಪ್ರಕಟವಾದ ವಚನಕೃತಿ, ಬಸವಣ್ಣನವರ ಷಟ್‌ ಸ್ಥಲವಚನ ಸಂಪುಟ.ಅದು ಮೊದಲು ಬೆಳಕು ಕಂಡುದು ೧೮೮೯ರಲ್ಲಿ. ಅಲ್ಲಿಂದ ಸರಿಯಾಗಿ ಒಂದು ಶತಮಾನ ಕಳೆಯುವಷ್ಟರಲ್ಲಿ ಅಂದರೆ ೧೯೮೮ರಲ್ಲಿ ಈ ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ' ಅಸ್ತಿತ್ವಕ್ಕೆ ಬಂದುದು ಒಂದು ಯೋಗಾಯೋಗವಾಗಿದೆ; ವಚನಸಾಹಿತ್ಯದ ಪ್ರಕಟನಚರಿತ್ರೆಯ ಶತಮಾನಸ್ಮರಣೆಯಾಗಿದೆ. {{gap}}ಈ ನೂರು ವರ್ಷಗಳ ಕಾಲವ್ಯಾಪ್ತಿಯಲ್ಲಿ ವಚನಸಾಹಿತ್ಯ ಪ್ರಕಟಣೆಗಾಗಿ ಅನೇಕರು ದುಡಿದಿರುವರಾದರೂ ಯೋಜನಾಬದ್ಧ ವ್ಯಾಪಕ ಪ್ರಯತ್ನಗಳು, ವಿಜಾಪುರ, ಧಾರವಾಡ, ಗದಗಗಳಲ್ಲಿ ಹೀಗೆ ಜರುಗಿವೆ : ೧.ಶಿವಾನುಭವ ಗ್ರಂಥಮಾಲೆ, ವಿಜಾಪುರ - ಡಾ. ಫ. ಗು. ಹಳಕಟ್ಟಿ ೨.ಕನ್ನಡ ಅಧ್ಯಯನ ಪೀಠ, ಕ. ವಿ.ಧಾರವಾಡ ಡಾ. ಆರ್.ಸಿ.ಹಿರೇಮಠ ೩.ತೋಂಟದಾರ್ಯಮಠ, ಗದಗ ಡಾ. ಎಂ. ಎಂ. ಕಲಬುರ್ಗಿ {{gap}}ವಚನಸಾಹಿತ್ಯದ ಪ್ರಕಟನ ಕಾರ್ಯ ಹೀಗೆ ವಿಜಾಪುರದಲ್ಲಿ ಪ್ರಾರಂಭವಾಗಿ, ಧಾರವಾಡದಲ್ಲಿ ಬೆಳೆದು, ಗದುಗಿನಲ್ಲಿ ಒಂದು ನಿಲುಗಡೆಗೆ ಬರುತ್ತಿದ್ದಂತೆಯೇ, ಈಗ ನಾಲ್ಕನೆಯ ಘಟ್ಟದಲ್ಲಿ ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯ ಅಂಗವಾಗಿ, ೧೫ ಸಂಪುಟಗಳು ಕರ್ನಾಟಕ ಸರಕಾರದ ಮೂಲಕ ಪ್ರಕಟವಾಗುತ್ತಲಿವೆ. ಸುಮಾರು ೧೧೦ ಜನ ಪ್ರಕ್ಷಿಪ್ತ ವಚನಕಾರರನ್ನೂ ಪ್ರಕ್ಷಿಪ್ತವಾಗಿರಬಹುದಾದ ಅನೇಕ ವಚನಗಳನ್ನೂ ಕೈಬಿಟ್ಟು ಸಂಯೋಜಿಸಲಾದ ಈ ಹದಿನೈದು ಸಂಪುಟಗಳ ಒಟ್ಟು ಪುಟ ಸುಮಾರು ಹತ್ತು ಸಾವಿರ; ಒಟ್ಟು ವಚನ ಸಂಖ್ಯೆ ಸುಮಾರು ಇಪ್ಪತ್ತು ಸಾವಿರ.ವಚನಸಾಹಿತ್ಯವನ್ನು ಒಮ್ಮೆ ಸಮಗ್ರವಾಗಿ ಹೊರತಂದ ಪ್ರಥಮ ಮಹತ್ವಾಕಾಂಕ್ಷೆಯ ಯೋಜನೆಯಿದು. ಈ ಸಾಹಿತ್ಯದ ಗಡಿಗೆರೆಗಳನ್ನು, ಸಂಖ್ಯಾಬಾಹುಳ್ಯವನ್ನು ವ್ಯವಸ್ಥೆಗೊಳಿಸಿಕೊಟ್ಟು, ವಿದ್ವಾಂಸರ ಅಧ್ಯಯನದ ಮುಂದುವರಿಕೆಗೆ ಒಂದು ನಿರ್ದಿಷ್ಟ ಚೌಕಟ್ಟನ್ನು ಒದಗಿಸಿದ ಹಿರಿಮೆ ಈ ಯೋಜನೆಗೆ ಸಲ್ಲುತ್ತದೆ. {{gap}}ಈ ಯೋಜನೆಯ ಅಂಗವಾಗಿ ಬಸವಣ್ಣನವರ ವಚನ, ಪ್ರಭುದೇವರ ವಚನ, ಚೆನ್ನಬಸವಣ್ಣನವರ ವಚನ, ಸಿದ್ದರಾಮೇಶ್ವರ ವಚನ, ಶಿವಶರಣೆಯರ ವಚನ ಹೀಗೆ ಐದು ಸಂಪುಟಗಳು, ಬಸವ ಸಮಕಾಲೀನ ಮಿಕ್ಕ ಶರಣರ ವಚನಗಳ ನಾಲ್ಕು ಸಂಪುಟಗಳು, ——————— ೧.ಮೊದಲು ಪ್ರಕಟವಾದ ವಚನಕೃತಿ ಅಖಂಡೇಶ್ವರ ವಚನ (೧೮೮೨)ವೆಂದು ಡಾ. ಬಿ. ನಂಜುಂಡಸ್ವಾಮಿ ಅವರ ಅಭಿಪ್ರಾಯ. (ಬಸವಪಥ ೧೬.೬) ೨.ಬಸವಣ್ಣನವರ ಷಟ್ಟಿಲದ ವಚನಗಳು ಪ್ರಥಮ ಸಲ ಬೆಳಕುಕಂಡುದು ೧೮೮೬ರಲ್ಲಿಯೆಂದು ಡಾ. ಬಿ. ನಂಜುಂಡಸ್ವಾಮಿ ಹೇಳುತ್ತಾರೆ. (ಬಸವಪಥ ೧೫-೫ ಪು. ೪೫)<noinclude></noinclude> 3owurffj1st8xng1vdyb5gz7nexm1l6 ಪುಟ:Shivasharaneyara vachanasamputa005.pdf/೨೧ 104 103939 322456 293175 2026-05-25T09:46:34Z Pragathi. BH 7585 /* Validated */ 322456 proofread-page text/x-wiki <noinclude><pagequality level="4" user="Pragathi. BH" /></noinclude>{{center|XVII}} ಬಸವೋತ್ತರ ಕಾಲೀನ ಶರಣರ ವನಡೆಗಳ ಐದು ಸಂಪುಟಗಳು ಮತ್ತು ಒಂದು ವಚನ ಪರಿಭಾಷಾಕೋಶ - ಹೀಗೆ ಹದಿನೈದು ಸಂಪುಟಗಳು ಬೆಳಕುಕಾಣುತ್ತಲಿವೆ. ಇವುಗಳಲ್ಲಿ ಮೊದಲಿನ ಐದು ಸಂಪುಟಗಳು (ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಸಿದ್ಧರಾಮ,ಶಿವಶರಣೆಯರು) ಈಗಾಗಲೇ ಕರ್ನಾಟಕ ವಿಶ್ವವಿದ್ಯಾಲಯದ ಮೂಲಕ ಪ್ರಕಟವಾಗಿದ್ದವು.ಆ ಬಳಿಕ ಲಭ್ಯವಾದ ನೂರಾರು ಹೊಸ ವಚನಗಳನ್ನು ಸೇರಿಸಿ, ಈ ಐದೂ ಸಂಪುಟಗಳಿಗೆ ಸಮಗ್ರರೂಪ ಕೊಟ್ಟಿದ್ದೇವೆ ಮತ್ತು ಪರಿಷ್ಕರಿಸಿದ್ದೇವೆ. {{gap}}ಬಸವ ಸಮಕಾಲೀನ ಮಿಕ್ಕ ಶರಣರ ನಾಲ್ಕು ಸಂಪುಟಗಳ ಕೆಲಸ ಈವರೆಗೆ ಸಮರ್ಪಕವಾಗಿ ನಡೆದಿರಲಿಲ್ಲ. ಈ ಶರಣರ ಸಂಖ್ಯೆ, ಇವರ ವಚನಸಂಖ್ಯೆ ಅಸ್ಪಷ್ಟವಾಗಿಯೇ ಉಳಿದಿದ್ದಿತು. ವಚನಗಳೂ ಅಲ್ಲಿಷ್ಟು, ಇಲ್ಲಿಷ್ಟು ಪ್ರಕಟವಾಗಿದ್ದವು. ಒಂದಿಷ್ಟು ಅಪ್ರಕಟಿತ ಸ್ಥಿತಿಯಲ್ಲಿಯೇ ಉಳಿದುಬಿಟ್ಟಿದ್ದವು. ಇವೆಲ್ಲವುಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಈ ನಾಲ್ಕೂ ಸಂಪುಟಗಳಿಗೆ ಸಮಗ್ರ ರೂಪ ಕೊಟ್ಟಿದ್ದೇವೆ. ಒಟ್ಟಿನಲ್ಲಿ ಬಸವಯುಗದ ಈ ಎಲ್ಲ ಒಂಬತ್ತು ಸಂಪುಟಗಳಿಗೆ ಸುಮಾರು ಸಾವಿರದಷ್ಟು ಹೊಸ ವಚನಗಳನ್ನು ಸೇರಿಸಿದ್ದೇವೆ. {{gap}}ಬಸವೋತ್ತರ ಕಾಲೀನ ಶರಣರ ಸಂಪುಟಗಳ ಕೆಲಸ ಇನ್ನೂ ಅಲಕ್ಷಿತವಾಗಿದ್ದಿತು. ಈವರೆಗೆ ತಿಳಿದುಬಂದಿದ್ದ ವಚನಕಾರರ ಹೊಸ ವಚನಗಳನ್ನು ಶೋಧಿಸುವುದರೊಂದಿಗೆ, ಅನೇಕ ಹೊಸ ವಚನಕಾರರನ್ನೂ ಬೆಳಕಿಗೆ ತಂದಿದ್ದೇವೆ. ಇದರಿಂದಾಗಿ ಬಸವೋತ್ತರಯುಗದ ಶರಣರನ್ನೂ ಅವರ ವಚನಗಳ ವ್ಯಾಪ್ತಿಯನ್ನೂ ಜನತೆಯ ಮುಂದಿಟ್ಟ ಪ್ರಥಮ ಕೀರ್ತಿಈ ಐದು ಸಂಪುಟಗಳಿಗೆ ಸಲ್ಲುತ್ತದೆ. ಹೀಗೆ ಬಸವಯುಗ, ಬಸವೋತ್ತರಯುಗಗಳ ವಚನಸಾಹಿತ್ಯಕ್ಕೆ ಸಂಬಂಧಪಟ್ಟ ಎಲ್ಲ ಕೊರತೆಗಳನ್ನು ತುಂಬಿಕೊಡುವ ಒಂದು ಪರಿಪೂರ್ಣ ಯೋಜನೆ ಇದಾಗಿದೆ. ಮೊದಲ ಬಾರಿಗೆ ೧೯ನೆಯ ಶತಮಾನದವರೆಗಿನ ಎಲ್ಲ ಶರಣರ ಎಲ್ಲ ವಚನಗಳನ್ನು ಒಂದೆಡೆ ಸಂಗ್ರಹಿಸಿ, ಒಂದು ಕ್ರಮಕ್ಕೆ ಅಳವಡಿಸಿ, ಸಂಪುಟ ಶ್ರೇಣಿಯಲ್ಲಿ ಹೊರತಂದ ದೊಡ್ಡಪ್ರಯತ್ನ ಇಲ್ಲಿದೆ. {{gap}}ವಚನಸಾಹಿತ್ಯದ ಪರಿಷ್ಕರಣಕಾರ ತುಂಬ ಜಟಿಲವಾದುದು. ೧. ಎಲ್ಲ ಶರಣರ ಎಲ್ಲ ವಚನಗಳನ್ನು ಎಲ್ಲ ಪ್ರಾಚೀನ ಆಕರಗಳಿಂದ ಸಂಗ್ರಹಿಸುವುದು, ೨. ಪ್ರಕ್ಷಿಪ್ತವಾಗಿರಬಹುದಾದ ವಚನಕಾರರನ್ನು, ವಚನಗಳನ್ನು ಕೈಬಿಡುವುದು, ೩. ನಿಜವಚನಗಳ ಪಾಠವನ್ನು ಪರಿಷ್ಕರಿಸುವುದು - ಇದು ಈ ಯೋಜನೆಯ ಉದ್ದೇಶವಾಗಿದೆ. ಈ ಉದ್ದೇಶ ಸಾಧನೆಗಾಗಿ ಎಲ್ಲ ಪ್ರಾಚೀನ ಆಕರಗಳಿಂದ ಅಂದರೆ ಸುಮಾರು ೧೦೮ ಆಕರಗಳಿಂದ ಎಲ್ಲ ವಚನಗಳನ್ನು ಸಂಗ್ರಹಿಸಿ, ಪ್ರತಿಯೊಂದು ವಚನದ ಕೆಳಗೆ ಅದರ ಎಲ್ಲ ಆಕರಗಳನ್ನು ನಮೂದಿಸಿದ 'ವಚನ ಬ್ಯಾಂಕ'ನ್ನು ಅಸ್ತಿತ್ವಕ್ಕೆ ತರಲಾಯಿತು. ಒಂದು ವಚನಕ್ಕೆ ಇರುವ ವಿವಿಧ ಪಾಠಾಂತರ, ರೂಪಾಂತರಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು, ಮುದ್ರಿಕೆಯ ವ್ಯತ್ಯಾಸವನ್ನು ಗಮನಿಸಲು, ಒಬ್ಬ ವಚನಕಾರನ ಒಟ್ಟು ವಚನಗಳ ಸಂಖ್ಯೆಯನ್ನು ನಿರ್ಧರಿಸಲು, ಕೊನೆಯದಾಗಿ ವಚನದ ನಿಜಪಾಠವನ್ನು ನಿರ್ಣಯಿಸಲು ಈ ಬ್ಯಾಂಕ್ ತುಂಬ ನೆರವಾಯಿತು.<noinclude></noinclude> cjyc68ijkfeuk7addijq21m72umne4o ಪುಟ:Shivasharaneyara vachanasamputa005.pdf/೨೨ 104 103940 322457 293176 2026-05-25T09:47:14Z Pragathi. BH 7585 /* Validated */ 322457 proofread-page text/x-wiki <noinclude><pagequality level="4" user="Pragathi. BH" /></noinclude>{{center|xviii}} {{gap}}ಇವು ಜನಪ್ರಿಯ ಆವೃತ್ತಿಗಳಾಗಿರುವುದರಿಂದ ಲಭ್ಯವಿರುವ ಪಾಠಾಂತರಗಳಲ್ಲಿ ಯೋಗ್ಯವಾದುದನ್ನು ಸ್ವೀಕರಿಸಿ, ಅನ್ಯಪಾಠಗಳನ್ನು ಅಡಿಯಲ್ಲಿ ನಮೂದಿಸದೆ ಕೈಬಿಟ್ಟಿದ್ದೇವೆ. ಜನಸಾಮಾನ್ಯರ ಅನುಕೂಲತೆಗಾಗಿ ಶಕಟರೇಫೆಗೆ ಬದಲು ರೇಫೆ ಇಟ್ಟುಕೊಂಡಿದ್ದೇವೆ. ಅಭ್ಯಾಸಿಗಳ ಉಪಯೋಗ ದೃಷ್ಟಿಯಿಂದ ಕಠಿಣ ಪದಕೋಶ, ಅಕಾರಾದಿ, ಆಕರಸೂಚಿಗಳನ್ನು ಅನುಬಂಧದಲ್ಲಿ ಕೊಟ್ಟಿದ್ದೇವೆ. ಹೆಚ್ಚಿನದಾಗಿ ಪಾರಿಭಾಷಿಕ ಪದಗಳ ಒಂದು ಸ್ವತಂತ್ರ ಕೋಶವನ್ನೇ ಪ್ರಕಟಿಸಿದ್ದೇವೆ. ಒಟ್ಟಿನಲ್ಲಿ, ಇವು ಜನಪ್ರಿಯ ಆವೃತ್ತಿಗಳಾದರೂ ವಿದ್ವಜ್ಜನಪ್ರಿಯ ಆವೃತ್ತಿಗಳೂ ಆಗಬೇಕೆಂಬ ಆದರ್ಶದಲ್ಲಿ ಈ ಸಂಪುಟಗಳನ್ನು ರೂಪಿಸಲು ಪ್ರಯತ್ನಿಸಿದ್ದೇವೆ. {{center|'''ಕೃತಜ್ಞತೆ'''}} {{gap}}ವಿಶ್ವವಿದ್ಯಾಲಯದಂಥ ಶಿಕ್ಷಣ ಸಂಸ್ಥೆಗಳು, ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯಂಥ ಸಾರ್ವಜನಿಕ ಸಂಸ್ಥೆಗಳು, ವೀರಶೈವ ಮಠಗಳಂಥ ಧಾರ್ಮಿಕ ಸಂಸ್ಥೆಗಳು, ಡಾ. ಫ. ಗು. ಹಳಕಟ್ಟಿಯವರಂಥ ವಿದ್ವಾಂಸ ವ್ಯಕ್ತಿಗಳು ನಿರಂತರ ದುಡಿದರೂ ವಚನಸಾಹಿತ್ಯ ಪೂರ್ಣಪ್ರಮಾಣದಲ್ಲಿ ಪ್ರಕಟವಾಗಲು ಒಂದುನೂರು ವರ್ಷ ಹಿಡಿದುದು ಅದರ ಗಾತ್ರಬಾಹುಳ್ಯಕ್ಕೆ ಸಾಕ್ಷಿಯಾಗಿದೆ. ನೂರುವರ್ಷ ದುಡಿದು, ಸಾಮಗ್ರಿಯನ್ನು ಪ್ರಕಟಿಸಿದ ಈ ಎಲ್ಲ ವ್ಯಕ್ತಿ-ಸಂಸ್ಥೆಗಳಿಗೆ ನಮ್ಮ ಕೃತಜ್ಞತಾಪೂರ್ವಕ ವಂದನೆಗಳು ಸಲ್ಲುತ್ತವೆ. {{gap}}ಈ ಯೋಜನೆಯ ಕಾವ್ಯಾಲಯ ಅಸ್ತಿತ್ವಕ್ಕೆ ಬಂದು ಕೆಲಸ ಪ್ರಾರಂಭವಾದದ್ದು ಅಕ್ಟೋಬರ್ ೧೫, ೧೯೮೮ರಂದು. ಹಸ್ತಪ್ರತಿಗಳು ಅಚ್ಚಿಗೆ ಹೋದದ್ದು ೧೬ ಮಾರ್ಚ್ ೧೯೯೦ರಂದು. ಹೀಗೆ ಮೊದಲೇ ಯೋಜಿಸಿದಂತೆ ಎರಡು ವರ್ಷಗಳ ನಿರ್ದಿಷ್ಟ ಅವಧಿಯಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಪ್ರತಿಯೊಂದು ಹಂತದಲ್ಲಿಯೂ ಈ ಯೋಜನೆ ಸಕ್ರಮವಾಗಿ ಮುನ್ನಡೆಯುವುದಕ್ಕಾಗಿ 'ಸಂಪಾದಕ ಮಂಡಳಿ'ಯ ಸದಸ್ಯರಾದ ಡಾ. ಎಂ. ಚಿದಾನಂದಮೂರ್ತಿ, ಡಾ. ಸಿ. ಪಿ. ಕೃಷ್ಣಕುಮಾರ, ಡಾ. ಎಸ್. ವಿದ್ಯಾಶಂಕರ, ಶ್ರೀ ಎಸ್. ಶಿವಣ್ಣ ಅವರು ಉದ್ದಕ್ಕೂ ಬೆಲೆಯುಳ್ಳ ಸಲಹೆ-ಮಾರ್ಗದರ್ಶನ ನೀಡಿದ್ದಾರೆ. ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರು ಆರಂಭದ ಕೆಲವು ತಿಂಗಳು ಸಂಪಾದಕ ಮಂಡಳಿಯ ಸದಸ್ಯರಾಗಿ, ವಿಶ್ವಾಸದಿಂದ ನೆರವಾಗಿದ್ದಾರೆ. ಸಂಪಾದಕ ಮಿತ್ರರಾದ ಡಾ. ಬಿ. ವಿ. ಮಲ್ಲಾಪುರ, ಡಾ. ಎಸ್. ವಿದ್ಯಾಶಂಕರ, ಡಾ. ವಿ. ಬಿ. ರಾಜೂರ, ಡಾ. ಬಿ. ಆರ್. ಹಿರೇಮಠ, ಶ್ರೀ ಎಸ್. ಶಿವಣ್ಣ ತುಂಬ ಶ್ರಮ-ಶ್ರದ್ಧೆಗಳಿಂದ ಸಂಪಾದನ ಕೆಲಸ ಪೂರೈಸಿದ್ದಾರೆ. ಸಹಾಯಕ ಸಂಶೋಧಕರಾದ ಶ್ರೀಮತಿ ವಿಜಯಶ್ರೀ ಹಿರೇಮಠ,ಶ್ರೀ ವಾಯ್. ಎಂ. ಯಾಕೊಳ್ಳಿ, ಶ್ರೀ ಬಿ. ವಿ. ಕೋರಿ ಅವರು ದಣಿವನ್ನು ಲೆಕ್ಕಿಸದೆ ದುಡಿದಿದ್ದಾರೆ. ಇವರೆಲ್ಲರಿಗೆ ನಾವು ಕೃತಜ್ಞರಾಗಿದ್ದೇವೆ. {{gap}}ಈ ಯೋಜನೆಯನ್ನು ಅನುದಾನ ಮಾಡಿದ ಕರ್ನಾಟಕ ಸರಕಾರದ ಔದಾರಕ್ಕೆ ನಮ್ಮ ಅಭಿನಂದನೆಗಳು ಸಲ್ಲುತ್ತವೆ. ಈ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಶ್ರೀ ರಾಮಕೃಷ್ಣ ಹೆಗಡೆ, ಶ್ರೀ ಎಸ್. ಆರ್. ಬೊಮ್ಮಾಯಿ, ಶ್ರೀ ವೀರೇಂದ್ರ ಪಾಟೀಲ, ಶ್ರೀ ಎಸ್‌. ಬಂಗಾರಪ್ಪ ಅವರಿಗೂ, ಸಾಹಿತಿಗಳೂ ಸಾಹಿತ್ಯ-ಸಂಸ್ಕೃತಿಗಳ ಗಾಢ ಆಸಕ್ತರೂ<noinclude></noinclude> 9fh6cdfcrsuy81coc6jidf9p4nos4t1 ಪುಟ:Shivasharaneyara vachanasamputa005.pdf/೨೩ 104 103941 322458 293177 2026-05-25T09:47:55Z Pragathi. BH 7585 /* Validated */ 322458 proofread-page text/x-wiki <noinclude><pagequality level="4" user="Pragathi. BH" /></noinclude>{{center|xix}} ಆಗಿರುವ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಎಂ. ವೀರಪ್ಪ ಮೊಯಿಲಿ ಅವರಿಗೂ ಋಣಿಯಾಗಿದ್ದೇವೆ. {{gap}}ಈ ಯೋಜನೆ ಅಸ್ತಿತ್ವಕ್ಕೆ ಬರುವಲ್ಲಿ ವಿಶೇಷ ಆಸಕ್ತಿ ವಹಿಸಿದವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಚಿವರಾಗಿದ್ದ ಶ್ರೀ ಎಂ. ಪಿ. ಪ್ರಕಾಶ ಅವರು. ಸಾಹಿತ್ಯ-ಸಂಸ್ಕೃತಿಗಳ ಬಗ್ಗೆ ಅನನ್ಯ ಪ್ರೀತಿ-ಗೌರವ ಬೆಳೆಸಿಕೊಂಡಿರುವ ಶ್ರೀಯುತರಿಗೆ ಇಲಾಖೆಗೆ ಸಚಿವರಾಗಿ ಬಂದ ನಾವು ಕೃತಜ್ಞರಾಗಿದ್ದೇವೆ. ಆಮೇಲೆ ಶ್ರೀ ಎಂ. ವೀರಪ್ಪ ಮೊಯಿಲಿ, ಶ್ರೀ ಕೆ. ಎಚ್. ರಂಗನಾಥ, ಶ್ರೀ ಎಸ್. ರಮೇಶ್, ಇಂದಿನ ಸಚಿವರಾದ ಮಾನ್ಯ ಶ್ರೀ ಎಚ್. ವಿಶ್ವನಾಥ್ ಅವರಿಗೆ ನಮ್ಮ ಗೌರವಗಳು ಸಲ್ಲುತ್ತವೆ. {{gap}}ಈ ಪ್ರಸಂಗದಲ್ಲಿ ಆತ್ಮೀಯ ಆಡಳಿತ ನಿರ್ದೇಶನ ಮಾಡಿದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಅಂದಿನ ನಿರ್ದೇಶಕರಾಗಿದ್ದ ಶ್ರೀ ಐ. ಎಂ. ವಿಠಲಮೂರ್ತಿ, ಶ್ರೀ ಬಿ. ಪಾರ್ಥಸಾರಥಿ, ಕಮಿಷನರ್ ಡಾ. ಪಿ. ಎಸ್. ರಾಮಾನುಜಂ, ಇಂದಿನ ಕಮಿಷನರ್‌ರಾದ ಶ್ರೀ ಪಿ. ಎಸ್. ವಿ. ರಾವ್ ಅವರನ್ನೂ ಅಧಿಕ ನಿರ್ದೇಶಕರಾದ ಶ್ರೀ ಕೆ. ದೇವರಸಯ್ಯ, ಉಪನಿರ್ದೆಶಕರಾದ ಶ್ರೀ ಕಾ. ತ. ಚಿಕ್ಕಣ್ಣ ಅವರನ್ನೂ ನೆನೆಯುವುದು ಪ್ರೀತಿಯ ವಿಷಯವಾಗಿದೆ. {{gap}}ಇಂಥ ಒಂದು ಬೃಹತ್‌ ಯೋಜನೆಗೆ ಕಾರಾಲಯವೊಂದು ಅತ್ಯವಶ್ಯ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಈ ಅವಕಾಶ ಕಲ್ಪಿಸಿಕೊಟ್ಟ ಕರ್ನಾಟಕ ವಿಶ್ವವಿದ್ಯಾಲಯದ ಅಂದಿನ ಕುಲಪತಿ ಡಾ. ಜಿ. ಕೆ. ನಾರಾಯಣರೆಡ್ಡಿ, ಇಂದಿನ ಕುಲಪತಿ ಡಾ. ಎಸ್. ರಾಮೇಗೌಡ ಅವರ ಔದಾರವನ್ನು, ಪೀಠದ ಮುಖ್ಯಸ್ಥರ ಸಹಕಾರವನ್ನು ಕೃತಜ್ಞತೆಯಿಂದ ನೆನೆಯುತ್ತೇವೆ. {{gap}}ಇದು ಒಂದು ದೊಡ್ಡ ಯೋಜನೆ. ಇದರ ಸಂಪಾದನೆಯ ಸಮಸ್ಯೆಗಳೂ ದೊಡ್ಡವು. ಪಾಠಾಂತರ, ರೂಪಾಂತರ, ಪ್ರಕ್ಷಿಪ್ತತೆ ಇತ್ಯಾದಿಗಳ ದಾಳಿಗೆ ಗುರಿಯಾಗುತ್ತ ಬಂದ ವ್ಯಾಪಕ ಪ್ರಮಾಣದ ಈ ಸಾಹಿತ್ಯವನ್ನು ಒಂದೆಡೆ ಸಂಗ್ರಹಿಸುವುದು, ಪುನರುಕ್ತಿಗಳನ್ನು ಗುರುತಿಸುವುದು, ಮುದ್ರಿಕೆ ಪಲ್ಲಟಗಳನ್ನು ಸರಿಪಡಿಸುವುದು, ಪ್ರಕ್ಷಿಪ್ತಗಳನ್ನು ದೂರೀಕರಿಸುವುದು, ಕೊನೆಯದಾಗಿ ವಚನಗಳನ್ನು ಶುದ್ದೀಕರಿಸುವುದು - ಎಂಥವರನ್ನೂ ಧೈರಗೆಡಿಸುವ ಕೆಲಸ. ಹೀಗಿದ್ದೂ ವಚನಸಾಹಿತ್ಯದ ಮೇಲಿನ ಗೌರವ, ಕೆಲಸದ ಮೇಲಿನ ಪ್ರೀತಿಗಳು ನಮ್ಮಿಂದ ಈ ಕಾರ ಮಾಡಿಸಿವೆ. ನಮ್ಮ ಶಕ್ತಿಗೆ ಮೀರಿ ಉಳಿದಿರಬಹುದಾದ ದೋಷಗಳನ್ನು ಮನ್ನಿಸಬೇಕೆಂದು ಕೋರುತ್ತ, ಎರಡು ವರ್ಷ ರಾತ್ರಿಯನ್ನೂ ಹಗಲುಮಾಡಿ ದುಡಿದು ರೂಪಿಸಿದ ಈ ಹದಿನೈದು ಸಂಪುಟಗಳನ್ನು ಸಹೃದಯಲೋಕಕ್ಕೆ ಅರ್ಪಿಸುತ್ತೇವೆ.'ಶಿವಶರಣರ ಸಮಗ್ರ ವಚನಸಾಹಿತ್ಯ ಸುಲಭ ಬೆಲೆಯಲ್ಲಿ ಕನ್ನಡಿಗರ ಮನೆ-ಮನಗಳನ್ನು ಬೆಳಗಲೆಂದು ಹಾರೈಸುತ್ತೇವೆ.<noinclude></noinclude> gdbgqjvfo507v42twm3sqwesdnif8kb ಪುಟ:Shivasharaneyara vachanasamputa005.pdf/೨೫ 104 103943 322459 293181 2026-05-25T09:48:57Z Pragathi. BH 7585 322459 proofread-page text/x-wiki <noinclude><pagequality level="3" user="Shreelatha.Halemane" /></noinclude>{{center|*}} {{center|'''ಪ್ರಸ್ತಾವನೆ'''}} {{}} {{Left|ಪೀಠಿಕೆ :}} "ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯ ಐದನೆಯ ಸಂಪುಟವಿದು.ಇದರಲ್ಲಿ ೩೫ ಜನ ಶಿವಶರಣೆಯರ ೧೩೫೧ ವಚನಗಳನ್ನು ಸಂಗ್ರಹಿಸಲಾಗಿದೆ. ೧೨ನೆಯ ಶತಮಾನದಲ್ಲಿ ಒಮ್ಮೆಲೆ ಇಷ್ಟು ಜನ ಮಹಿಳೆಯರು ಸಾಹಿತ್ಯಕ್ಷಿತಿಜದ ಮೇಲೆ ಕಾಣಿಸಿಕೊಂಡುದು ಪರಮ ಆಶ್ಚರ್ಯ. ಈ ಪೂರ್ವದಲ್ಲಿ ಭಾರತೀಯ ನಾರಿಯ ಸ್ಥಿತಿ ತುಂಬ ಶೋಚನೀಯವೆನಿಸಿತ್ತು. ದ್ರಾವಿಡಸಂಸ್ಕೃತಿಯಲ್ಲಿ ಎಲ್ಲ ರೀತಿಯಿಂದಲೂ ಗೌರವದ ಸ್ಥಾನವನ್ನು ಹೊಂದಿ, ಕುಟುಂಬದ ಸಮಗ್ರ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದ ಆಕೆ, ಆರ್ಯಸಂಸ್ಕೃತಿಯ ದಾಳಿಯಿಂದ ಪಿತೃಪ್ರಧಾನ ಕುಟುಂಬ ಪದ್ಧತಿಗೆ ಜಾರಿಕೊಂಡು ಪರಾಧೀನಳಾದಳು. ವೇದ-ಉಪನಿಷತ್ತುಗಳ ಕಾಲದಲ್ಲಿ ಗಾರ್ಗಿ, ಮೈತ್ರೇಯಿಯರಂಥ ಕೆಲವರು ಆಧ್ಯಾತ್ಮವಿದ್ಯೆಯಲ್ಲಿ ಬಲ್ಲಿದರಾಗಿದ್ದು, ಪುರುಷಸಮಾನ ಅವಕಾಶಗಳನ್ನು ಪಡೆದುಕೊಂಡಿದ್ದರೆಂದು ತಿಳಿದುಬಂದರೂ ಮುಂದೆ ಧರ್ಮಶಾಸ್ತ್ರಗಳು ಹುಟ್ಟಿಕೊಂಡ ಮೇಲೆ ಏನೆಲ್ಲ ಕಟ್ಟುಪಾಡುಗಳು ನಿರ್ಮಿತವಾಗಿ, ಅವಳಿಗೆ ನಿಯಮ-ನಿರ್ಬಂಧಗಳ ಶೃಂಖಲೆಯನ್ನು ತೊಡಿಸಲಾಯಿತು. ಸ್ತ್ರೀಯು ಮೋಕ್ಷಯೋಗ್ಯಳಲ್ಲವೆಂದು ಹೇಳುತ್ತ ಜೈನಧರವೂ ಇದೇ ಹಾದಿಯಲ್ಲಿ ನಡೆಯಿತು. ಹೀಗೆ ಹೇಳುವ ಮೂಲಕ ಭಾರತಿಯರು ಹೆಣ್ಣಿನ ಆಧ್ಯಾತ್ಮಿಕ- ಸಾಮಾಜಿಕ-ಆರ್ಥಿಕ-ನೈತಿಕ-ಸಾಂಸ್ಕೃತಿಕ ಅವಕಾಶಗಳನ್ನೆಲ್ಲ ಕಿತ್ತುಕೊಂಡು ಅವಳನ್ನು ಮತ್ತಷ್ಟು, ಕನಿಷ್ಟಳನ್ನಾಗಿ ಮಾಡಿದರು. ಇಂಥ ಅಗೌರವ, ಅವಹೇಳನಗಳಿಗೆ ಗುರಿಯಾದ ಆಕೆ, ಈ ನಯವಂಚಕ ಸಮಾಜದಲ್ಲಿ ದನಿಯಿಲ್ಲದವಳಾಗಿ, ಅಬಲೆಯನಿಸಿ ಕೀಳರಿಮೆಯನ್ನು ಮೈಗೂಡಿಸಿಕೊಂಡು, ಉಸುರುಗಟ್ಟುವ ವಾತಾವರಣದಲ್ಲಿ ಜೀವವಿದೂ ಶವವಾಗಿ ಬದುಕತೊಡಗಿದ್ದಳು. ಈ ಸಂದರ್ಭದಲ್ಲಿ ಹುಟ್ಟಿ ಬಂದ ಶಿವಶರಣರು ಸ್ತ್ರೀಸಮಾಜವನ್ನು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕಟ್ಟಲು ಹೆಣಗಿದರು. {{Left|ಶರಣರು ಕಟ್ಟಬಯಸಿದ ಸ್ತ್ರೀಸಮಾಜ :}} ವೈದಿಕ ವರ್ಣಾಶ್ರಮವ್ಯವಸ್ಥೆ ಮತ್ತು ಪಿತೃಪ್ರಧಾನ ಕುಟುಂಬಪದ್ಧತಿಗಳಿಂದಾಗಿ ಸಮಾಜದಲ್ಲಿ ಸ್ತ್ರೀಗೆ ಉಂಟಾಗಿದ್ದ ಅಸಮಾನತೆ, ಶೋಷಣೆಗಳನ್ನು ಕಂಡ ಶರಣರು—————<noinclude>ಈ ಮುಂದಿನ ಸಂಗತಿಗಳನ್ನು ಬರೆಯುವಲ್ಲಿ ಡಾ ಎಂ. ಎಂ. ಕಲಬುರ್ಗಿ ಅವರ ಇದೇ ಬೇಲಾಗಳ ನಿಶೇಷವಾಗಿ ಯಾಗಿದೆ ದೆ. (ನೋಡಿ ಮಾರ್ಗ - ಸರ- ಪ್ರ. ೧೧- - -೨ }</noinclude> bmd3q38v9uiizzh7sm18m7oyahw2dym 322460 322459 2026-05-25T09:49:38Z Pragathi. BH 7585 /* Validated */ 322460 proofread-page text/x-wiki <noinclude><pagequality level="4" user="Pragathi. BH" /></noinclude>{{center|*}} {{center|'''ಪ್ರಸ್ತಾವನೆ'''}} {{Rule}} {{Left|ಪೀಠಿಕೆ :}} {{gap}}"ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯ ಐದನೆಯ ಸಂಪುಟವಿದು.ಇದರಲ್ಲಿ ೩೫ ಜನ ಶಿವಶರಣೆಯರ ೧೩೫೧ ವಚನಗಳನ್ನು ಸಂಗ್ರಹಿಸಲಾಗಿದೆ. ೧೨ನೆಯ ಶತಮಾನದಲ್ಲಿ ಒಮ್ಮೆಲೆ ಇಷ್ಟು ಜನ ಮಹಿಳೆಯರು ಸಾಹಿತ್ಯಕ್ಷಿತಿಜದ ಮೇಲೆ ಕಾಣಿಸಿಕೊಂಡುದು ಪರಮ ಆಶ್ಚರ್ಯ. {{gap}}ಈ ಪೂರ್ವದಲ್ಲಿ ಭಾರತೀಯ ನಾರಿಯ ಸ್ಥಿತಿ ತುಂಬ ಶೋಚನೀಯವೆನಿಸಿತ್ತು. ದ್ರಾವಿಡಸಂಸ್ಕೃತಿಯಲ್ಲಿ ಎಲ್ಲ ರೀತಿಯಿಂದಲೂ ಗೌರವದ ಸ್ಥಾನವನ್ನು ಹೊಂದಿ, ಕುಟುಂಬದ ಸಮಗ್ರ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದ ಆಕೆ, ಆರ್ಯಸಂಸ್ಕೃತಿಯ ದಾಳಿಯಿಂದ ಪಿತೃಪ್ರಧಾನ ಕುಟುಂಬ ಪದ್ಧತಿಗೆ ಜಾರಿಕೊಂಡು ಪರಾಧೀನಳಾದಳು. ವೇದ-ಉಪನಿಷತ್ತುಗಳ ಕಾಲದಲ್ಲಿ ಗಾರ್ಗಿ, ಮೈತ್ರೇಯಿಯರಂಥ ಕೆಲವರು ಆಧ್ಯಾತ್ಮವಿದ್ಯೆಯಲ್ಲಿ ಬಲ್ಲಿದರಾಗಿದ್ದು, ಪುರುಷಸಮಾನ ಅವಕಾಶಗಳನ್ನು ಪಡೆದುಕೊಂಡಿದ್ದರೆಂದು ತಿಳಿದುಬಂದರೂ ಮುಂದೆ ಧರ್ಮಶಾಸ್ತ್ರಗಳು ಹುಟ್ಟಿಕೊಂಡ ಮೇಲೆ ಏನೆಲ್ಲ ಕಟ್ಟುಪಾಡುಗಳು ನಿರ್ಮಿತವಾಗಿ, ಅವಳಿಗೆ ನಿಯಮ-ನಿರ್ಬಂಧಗಳ ಶೃಂಖಲೆಯನ್ನು ತೊಡಿಸಲಾಯಿತು. ಸ್ತ್ರೀಯು ಮೋಕ್ಷಯೋಗ್ಯಳಲ್ಲವೆಂದು ಹೇಳುತ್ತ ಜೈನಧರವೂ ಇದೇ ಹಾದಿಯಲ್ಲಿ ನಡೆಯಿತು. ಹೀಗೆ ಹೇಳುವ ಮೂಲಕ ಭಾರತಿಯರು ಹೆಣ್ಣಿನ ಆಧ್ಯಾತ್ಮಿಕ- ಸಾಮಾಜಿಕ-ಆರ್ಥಿಕ-ನೈತಿಕ-ಸಾಂಸ್ಕೃತಿಕ ಅವಕಾಶಗಳನ್ನೆಲ್ಲ ಕಿತ್ತುಕೊಂಡು ಅವಳನ್ನು ಮತ್ತಷ್ಟು, ಕನಿಷ್ಟಳನ್ನಾಗಿ ಮಾಡಿದರು. ಇಂಥ ಅಗೌರವ, ಅವಹೇಳನಗಳಿಗೆ ಗುರಿಯಾದ ಆಕೆ, ಈ ನಯವಂಚಕ ಸಮಾಜದಲ್ಲಿ ದನಿಯಿಲ್ಲದವಳಾಗಿ, ಅಬಲೆಯನಿಸಿ ಕೀಳರಿಮೆಯನ್ನು ಮೈಗೂಡಿಸಿಕೊಂಡು, ಉಸುರುಗಟ್ಟುವ ವಾತಾವರಣದಲ್ಲಿ ಜೀವವಿದೂ ಶವವಾಗಿ ಬದುಕತೊಡಗಿದ್ದಳು. ಈ ಸಂದರ್ಭದಲ್ಲಿ ಹುಟ್ಟಿ ಬಂದ ಶಿವಶರಣರು ಸ್ತ್ರೀಸಮಾಜವನ್ನು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕಟ್ಟಲು ಹೆಣಗಿದರು. {{Left|ಶರಣರು ಕಟ್ಟಬಯಸಿದ ಸ್ತ್ರೀಸಮಾಜ :}} {{gap}}ವೈದಿಕ ವರ್ಣಾಶ್ರಮವ್ಯವಸ್ಥೆ ಮತ್ತು ಪಿತೃಪ್ರಧಾನ ಕುಟುಂಬಪದ್ಧತಿಗಳಿಂದಾಗಿ ಸಮಾಜದಲ್ಲಿ ಸ್ತ್ರೀಗೆ ಉಂಟಾಗಿದ್ದ ಅಸಮಾನತೆ, ಶೋಷಣೆಗಳನ್ನು ಕಂಡ ಶರಣರು—————<noinclude>ಈ ಮುಂದಿನ ಸಂಗತಿಗಳನ್ನು ಬರೆಯುವಲ್ಲಿ ಡಾ ಎಂ. ಎಂ. ಕಲಬುರ್ಗಿ ಅವರ ಇದೇ ಬೇಲಾಗಳ ನಿಶೇಷವಾಗಿ ಯಾಗಿದೆ ದೆ. (ನೋಡಿ ಮಾರ್ಗ - ಸರ- ಪ್ರ. ೧೧- - -೨ }</noinclude> 2bd2npjw4kzz3gtuxylgo57a5xyl7yx 322461 322460 2026-05-25T09:50:33Z Pragathi. BH 7585 322461 proofread-page text/x-wiki <noinclude><pagequality level="4" user="Pragathi. BH" /></noinclude>{{center|*}} {{center|'''ಪ್ರಸ್ತಾವನೆ'''}} {{Rule}} {{Left|ಪೀಠಿಕೆ :}} {{gap}}"ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯ ಐದನೆಯ ಸಂಪುಟವಿದು.ಇದರಲ್ಲಿ ೩೫ ಜನ ಶಿವಶರಣೆಯರ ೧೩೫೧ ವಚನಗಳನ್ನು ಸಂಗ್ರಹಿಸಲಾಗಿದೆ. ೧೨ನೆಯ ಶತಮಾನದಲ್ಲಿ ಒಮ್ಮೆಲೆ ಇಷ್ಟು ಜನ ಮಹಿಳೆಯರು ಸಾಹಿತ್ಯಕ್ಷಿತಿಜದ ಮೇಲೆ ಕಾಣಿಸಿಕೊಂಡುದು ಪರಮ ಆಶ್ಚರ್ಯ. {{gap}}ಈ ಪೂರ್ವದಲ್ಲಿ ಭಾರತೀಯ ನಾರಿಯ ಸ್ಥಿತಿ ತುಂಬ ಶೋಚನೀಯವೆನಿಸಿತ್ತು. ದ್ರಾವಿಡಸಂಸ್ಕೃತಿಯಲ್ಲಿ ಎಲ್ಲ ರೀತಿಯಿಂದಲೂ ಗೌರವದ ಸ್ಥಾನವನ್ನು ಹೊಂದಿ, ಕುಟುಂಬದ ಸಮಗ್ರ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದ ಆಕೆ, ಆರ್ಯಸಂಸ್ಕೃತಿಯ ದಾಳಿಯಿಂದ ಪಿತೃಪ್ರಧಾನ ಕುಟುಂಬ ಪದ್ಧತಿಗೆ ಜಾರಿಕೊಂಡು ಪರಾಧೀನಳಾದಳು. ವೇದ-ಉಪನಿಷತ್ತುಗಳ ಕಾಲದಲ್ಲಿ ಗಾರ್ಗಿ, ಮೈತ್ರೇಯಿಯರಂಥ ಕೆಲವರು ಆಧ್ಯಾತ್ಮವಿದ್ಯೆಯಲ್ಲಿ ಬಲ್ಲಿದರಾಗಿದ್ದು, ಪುರುಷಸಮಾನ ಅವಕಾಶಗಳನ್ನು ಪಡೆದುಕೊಂಡಿದ್ದರೆಂದು ತಿಳಿದುಬಂದರೂ ಮುಂದೆ ಧರ್ಮಶಾಸ್ತ್ರಗಳು ಹುಟ್ಟಿಕೊಂಡ ಮೇಲೆ ಏನೆಲ್ಲ ಕಟ್ಟುಪಾಡುಗಳು ನಿರ್ಮಿತವಾಗಿ, ಅವಳಿಗೆ ನಿಯಮ-ನಿರ್ಬಂಧಗಳ ಶೃಂಖಲೆಯನ್ನು ತೊಡಿಸಲಾಯಿತು. ಸ್ತ್ರೀಯು ಮೋಕ್ಷಯೋಗ್ಯಳಲ್ಲವೆಂದು ಹೇಳುತ್ತ ಜೈನಧರವೂ ಇದೇ ಹಾದಿಯಲ್ಲಿ ನಡೆಯಿತು. ಹೀಗೆ ಹೇಳುವ ಮೂಲಕ ಭಾರತಿಯರು ಹೆಣ್ಣಿನ ಆಧ್ಯಾತ್ಮಿಕ- ಸಾಮಾಜಿಕ-ಆರ್ಥಿಕ-ನೈತಿಕ-ಸಾಂಸ್ಕೃತಿಕ ಅವಕಾಶಗಳನ್ನೆಲ್ಲ ಕಿತ್ತುಕೊಂಡು ಅವಳನ್ನು ಮತ್ತಷ್ಟು, ಕನಿಷ್ಟಳನ್ನಾಗಿ ಮಾಡಿದರು. ಇಂಥ ಅಗೌರವ, ಅವಹೇಳನಗಳಿಗೆ ಗುರಿಯಾದ ಆಕೆ, ಈ ನಯವಂಚಕ ಸಮಾಜದಲ್ಲಿ ದನಿಯಿಲ್ಲದವಳಾಗಿ, ಅಬಲೆಯನಿಸಿ ಕೀಳರಿಮೆಯನ್ನು ಮೈಗೂಡಿಸಿಕೊಂಡು, ಉಸುರುಗಟ್ಟುವ ವಾತಾವರಣದಲ್ಲಿ ಜೀವವಿದೂ ಶವವಾಗಿ ಬದುಕತೊಡಗಿದ್ದಳು. ಈ ಸಂದರ್ಭದಲ್ಲಿ ಹುಟ್ಟಿ ಬಂದ ಶಿವಶರಣರು ಸ್ತ್ರೀಸಮಾಜವನ್ನು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕಟ್ಟಲು ಹೆಣಗಿದರು. {{Left|ಶರಣರು ಕಟ್ಟಬಯಸಿದ ಸ್ತ್ರೀಸಮಾಜ :}} {{gap}}ವೈದಿಕ ವರ್ಣಾಶ್ರಮವ್ಯವಸ್ಥೆ ಮತ್ತು ಪಿತೃಪ್ರಧಾನ ಕುಟುಂಬಪದ್ಧತಿಗಳಿಂದಾಗಿ ಸಮಾಜದಲ್ಲಿ ಸ್ತ್ರೀಗೆ ಉಂಟಾಗಿದ್ದ ಅಸಮಾನತೆ, ಶೋಷಣೆಗಳನ್ನು ಕಂಡ ಶರಣರು—————<br /> {{Longdash}}<noinclude>ಈ ಮುಂದಿನ ಸಂಗತಿಗಳನ್ನು ಬರೆಯುವಲ್ಲಿ ಡಾ ಎಂ. ಎಂ. ಕಲಬುರ್ಗಿ ಅವರ ಇದೇ ಬೇಲಾಗಳ ನಿಶೇಷವಾಗಿ ಯಾಗಿದೆ ದೆ. (ನೋಡಿ ಮಾರ್ಗ - ಸರ- ಪ್ರ. ೧೧- - -೨ }</noinclude> t30jt6zyuucxcqlxu9tdrmrq169jyp3 322462 322461 2026-05-25T09:50:50Z Pragathi. BH 7585 322462 proofread-page text/x-wiki <noinclude><pagequality level="4" user="Pragathi. BH" /></noinclude>{{center|*}} {{center|'''ಪ್ರಸ್ತಾವನೆ'''}} {{Rule}} {{Left|ಪೀಠಿಕೆ :}} {{gap}}"ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯ ಐದನೆಯ ಸಂಪುಟವಿದು.ಇದರಲ್ಲಿ ೩೫ ಜನ ಶಿವಶರಣೆಯರ ೧೩೫೧ ವಚನಗಳನ್ನು ಸಂಗ್ರಹಿಸಲಾಗಿದೆ. ೧೨ನೆಯ ಶತಮಾನದಲ್ಲಿ ಒಮ್ಮೆಲೆ ಇಷ್ಟು ಜನ ಮಹಿಳೆಯರು ಸಾಹಿತ್ಯಕ್ಷಿತಿಜದ ಮೇಲೆ ಕಾಣಿಸಿಕೊಂಡುದು ಪರಮ ಆಶ್ಚರ್ಯ. {{gap}}ಈ ಪೂರ್ವದಲ್ಲಿ ಭಾರತೀಯ ನಾರಿಯ ಸ್ಥಿತಿ ತುಂಬ ಶೋಚನೀಯವೆನಿಸಿತ್ತು. ದ್ರಾವಿಡಸಂಸ್ಕೃತಿಯಲ್ಲಿ ಎಲ್ಲ ರೀತಿಯಿಂದಲೂ ಗೌರವದ ಸ್ಥಾನವನ್ನು ಹೊಂದಿ, ಕುಟುಂಬದ ಸಮಗ್ರ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದ ಆಕೆ, ಆರ್ಯಸಂಸ್ಕೃತಿಯ ದಾಳಿಯಿಂದ ಪಿತೃಪ್ರಧಾನ ಕುಟುಂಬ ಪದ್ಧತಿಗೆ ಜಾರಿಕೊಂಡು ಪರಾಧೀನಳಾದಳು. ವೇದ-ಉಪನಿಷತ್ತುಗಳ ಕಾಲದಲ್ಲಿ ಗಾರ್ಗಿ, ಮೈತ್ರೇಯಿಯರಂಥ ಕೆಲವರು ಆಧ್ಯಾತ್ಮವಿದ್ಯೆಯಲ್ಲಿ ಬಲ್ಲಿದರಾಗಿದ್ದು, ಪುರುಷಸಮಾನ ಅವಕಾಶಗಳನ್ನು ಪಡೆದುಕೊಂಡಿದ್ದರೆಂದು ತಿಳಿದುಬಂದರೂ ಮುಂದೆ ಧರ್ಮಶಾಸ್ತ್ರಗಳು ಹುಟ್ಟಿಕೊಂಡ ಮೇಲೆ ಏನೆಲ್ಲ ಕಟ್ಟುಪಾಡುಗಳು ನಿರ್ಮಿತವಾಗಿ, ಅವಳಿಗೆ ನಿಯಮ-ನಿರ್ಬಂಧಗಳ ಶೃಂಖಲೆಯನ್ನು ತೊಡಿಸಲಾಯಿತು. ಸ್ತ್ರೀಯು ಮೋಕ್ಷಯೋಗ್ಯಳಲ್ಲವೆಂದು ಹೇಳುತ್ತ ಜೈನಧರವೂ ಇದೇ ಹಾದಿಯಲ್ಲಿ ನಡೆಯಿತು. ಹೀಗೆ ಹೇಳುವ ಮೂಲಕ ಭಾರತಿಯರು ಹೆಣ್ಣಿನ ಆಧ್ಯಾತ್ಮಿಕ- ಸಾಮಾಜಿಕ-ಆರ್ಥಿಕ-ನೈತಿಕ-ಸಾಂಸ್ಕೃತಿಕ ಅವಕಾಶಗಳನ್ನೆಲ್ಲ ಕಿತ್ತುಕೊಂಡು ಅವಳನ್ನು ಮತ್ತಷ್ಟು, ಕನಿಷ್ಟಳನ್ನಾಗಿ ಮಾಡಿದರು. ಇಂಥ ಅಗೌರವ, ಅವಹೇಳನಗಳಿಗೆ ಗುರಿಯಾದ ಆಕೆ, ಈ ನಯವಂಚಕ ಸಮಾಜದಲ್ಲಿ ದನಿಯಿಲ್ಲದವಳಾಗಿ, ಅಬಲೆಯನಿಸಿ ಕೀಳರಿಮೆಯನ್ನು ಮೈಗೂಡಿಸಿಕೊಂಡು, ಉಸುರುಗಟ್ಟುವ ವಾತಾವರಣದಲ್ಲಿ ಜೀವವಿದೂ ಶವವಾಗಿ ಬದುಕತೊಡಗಿದ್ದಳು. ಈ ಸಂದರ್ಭದಲ್ಲಿ ಹುಟ್ಟಿ ಬಂದ ಶಿವಶರಣರು ಸ್ತ್ರೀಸಮಾಜವನ್ನು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕಟ್ಟಲು ಹೆಣಗಿದರು. {{Left|ಶರಣರು ಕಟ್ಟಬಯಸಿದ ಸ್ತ್ರೀಸಮಾಜ :}} {{gap}}ವೈದಿಕ ವರ್ಣಾಶ್ರಮವ್ಯವಸ್ಥೆ ಮತ್ತು ಪಿತೃಪ್ರಧಾನ ಕುಟುಂಬಪದ್ಧತಿಗಳಿಂದಾಗಿ ಸಮಾಜದಲ್ಲಿ ಸ್ತ್ರೀಗೆ ಉಂಟಾಗಿದ್ದ ಅಸಮಾನತೆ, ಶೋಷಣೆಗಳನ್ನು ಕಂಡ ಶರಣರು—————<br /> {{Longdash}}<br /><noinclude>ಈ ಮುಂದಿನ ಸಂಗತಿಗಳನ್ನು ಬರೆಯುವಲ್ಲಿ ಡಾ ಎಂ. ಎಂ. ಕಲಬುರ್ಗಿ ಅವರ ಇದೇ ಬೇಲಾಗಳ ನಿಶೇಷವಾಗಿ ಯಾಗಿದೆ ದೆ. (ನೋಡಿ ಮಾರ್ಗ - ಸರ- ಪ್ರ. ೧೧- - -೨ }</noinclude> p95ps83vwm3kjx78t3hezuutjuxcyzo 322463 322462 2026-05-25T09:51:20Z Pragathi. BH 7585 322463 proofread-page text/x-wiki <noinclude><pagequality level="4" user="Pragathi. BH" /></noinclude>{{center|*}} {{center|'''ಪ್ರಸ್ತಾವನೆ'''}} {{Rule}} {{Left|ಪೀಠಿಕೆ :}} {{gap}}"ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯ ಐದನೆಯ ಸಂಪುಟವಿದು.ಇದರಲ್ಲಿ ೩೫ ಜನ ಶಿವಶರಣೆಯರ ೧೩೫೧ ವಚನಗಳನ್ನು ಸಂಗ್ರಹಿಸಲಾಗಿದೆ. ೧೨ನೆಯ ಶತಮಾನದಲ್ಲಿ ಒಮ್ಮೆಲೆ ಇಷ್ಟು ಜನ ಮಹಿಳೆಯರು ಸಾಹಿತ್ಯಕ್ಷಿತಿಜದ ಮೇಲೆ ಕಾಣಿಸಿಕೊಂಡುದು ಪರಮ ಆಶ್ಚರ್ಯ. {{gap}}ಈ ಪೂರ್ವದಲ್ಲಿ ಭಾರತೀಯ ನಾರಿಯ ಸ್ಥಿತಿ ತುಂಬ ಶೋಚನೀಯವೆನಿಸಿತ್ತು. ದ್ರಾವಿಡಸಂಸ್ಕೃತಿಯಲ್ಲಿ ಎಲ್ಲ ರೀತಿಯಿಂದಲೂ ಗೌರವದ ಸ್ಥಾನವನ್ನು ಹೊಂದಿ, ಕುಟುಂಬದ ಸಮಗ್ರ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದ ಆಕೆ, ಆರ್ಯಸಂಸ್ಕೃತಿಯ ದಾಳಿಯಿಂದ ಪಿತೃಪ್ರಧಾನ ಕುಟುಂಬ ಪದ್ಧತಿಗೆ ಜಾರಿಕೊಂಡು ಪರಾಧೀನಳಾದಳು. ವೇದ-ಉಪನಿಷತ್ತುಗಳ ಕಾಲದಲ್ಲಿ ಗಾರ್ಗಿ, ಮೈತ್ರೇಯಿಯರಂಥ ಕೆಲವರು ಆಧ್ಯಾತ್ಮವಿದ್ಯೆಯಲ್ಲಿ ಬಲ್ಲಿದರಾಗಿದ್ದು, ಪುರುಷಸಮಾನ ಅವಕಾಶಗಳನ್ನು ಪಡೆದುಕೊಂಡಿದ್ದರೆಂದು ತಿಳಿದುಬಂದರೂ ಮುಂದೆ ಧರ್ಮಶಾಸ್ತ್ರಗಳು ಹುಟ್ಟಿಕೊಂಡ ಮೇಲೆ ಏನೆಲ್ಲ ಕಟ್ಟುಪಾಡುಗಳು ನಿರ್ಮಿತವಾಗಿ, ಅವಳಿಗೆ ನಿಯಮ-ನಿರ್ಬಂಧಗಳ ಶೃಂಖಲೆಯನ್ನು ತೊಡಿಸಲಾಯಿತು. ಸ್ತ್ರೀಯು ಮೋಕ್ಷಯೋಗ್ಯಳಲ್ಲವೆಂದು ಹೇಳುತ್ತ ಜೈನಧರವೂ ಇದೇ ಹಾದಿಯಲ್ಲಿ ನಡೆಯಿತು. ಹೀಗೆ ಹೇಳುವ ಮೂಲಕ ಭಾರತಿಯರು ಹೆಣ್ಣಿನ ಆಧ್ಯಾತ್ಮಿಕ- ಸಾಮಾಜಿಕ-ಆರ್ಥಿಕ-ನೈತಿಕ-ಸಾಂಸ್ಕೃತಿಕ ಅವಕಾಶಗಳನ್ನೆಲ್ಲ ಕಿತ್ತುಕೊಂಡು ಅವಳನ್ನು ಮತ್ತಷ್ಟು, ಕನಿಷ್ಟಳನ್ನಾಗಿ ಮಾಡಿದರು. ಇಂಥ ಅಗೌರವ, ಅವಹೇಳನಗಳಿಗೆ ಗುರಿಯಾದ ಆಕೆ, ಈ ನಯವಂಚಕ ಸಮಾಜದಲ್ಲಿ ದನಿಯಿಲ್ಲದವಳಾಗಿ, ಅಬಲೆಯನಿಸಿ ಕೀಳರಿಮೆಯನ್ನು ಮೈಗೂಡಿಸಿಕೊಂಡು, ಉಸುರುಗಟ್ಟುವ ವಾತಾವರಣದಲ್ಲಿ ಜೀವವಿದೂ ಶವವಾಗಿ ಬದುಕತೊಡಗಿದ್ದಳು. ಈ ಸಂದರ್ಭದಲ್ಲಿ ಹುಟ್ಟಿ ಬಂದ ಶಿವಶರಣರು ಸ್ತ್ರೀಸಮಾಜವನ್ನು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕಟ್ಟಲು ಹೆಣಗಿದರು. {{Left|ಶರಣರು ಕಟ್ಟಬಯಸಿದ ಸ್ತ್ರೀಸಮಾಜ :}} {{gap}}ವೈದಿಕ ವರ್ಣಾಶ್ರಮವ್ಯವಸ್ಥೆ ಮತ್ತು ಪಿತೃಪ್ರಧಾನ ಕುಟುಂಬಪದ್ಧತಿಗಳಿಂದಾಗಿ ಸಮಾಜದಲ್ಲಿ ಸ್ತ್ರೀಗೆ ಉಂಟಾಗಿದ್ದ ಅಸಮಾನತೆ, ಶೋಷಣೆಗಳನ್ನು ಕಂಡ ಶರಣರು<br /> {{Longdash}}<br /><noinclude>ಈ ಮುಂದಿನ ಸಂಗತಿಗಳನ್ನು ಬರೆಯುವಲ್ಲಿ ಡಾ ಎಂ. ಎಂ. ಕಲಬುರ್ಗಿ ಅವರ ಇದೇ ಬೇಲಾಗಳ ನಿಶೇಷವಾಗಿ ಯಾಗಿದೆ ದೆ. (ನೋಡಿ ಮಾರ್ಗ - ಸರ- ಪ್ರ. ೧೧- - -೨ }</noinclude> r5ms0dxq5ti5vzbuo03dzwsp3jjlmln ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೮೮ 104 109461 322319 298641 2026-05-24T18:26:33Z Pragathi. BH 7585 322319 proofread-page text/x-wiki <noinclude><pagequality level="3" user="Pragathi. BH" />{{rh|center=|left=೨೬೪|right=ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು}}</noinclude> ಬೇರೇನ್ನೆನ್ನೋ ಕತ್ತರಿಸಿ, ಅದು ಹಾಗೆ ಉಳಿದುಕೊಂಡು ಇದ್ದ ನಿದರ್ಶನಗಳೂ ಇವೆ. ಆದುದರಿಂದ ವ್ಯಾಸೆಕ್ಸೆಮಿಯಾದವರ ಪತ್ನಿ ಗರ್ಭಿಣಿಯಾದರೆ ಈ ವಿಷಯಗಳನ್ನೆಲ್ಲಾ ಗಣನೆಗೆ ತೆಗೆದುಕೊಳ್ಳದೆ ಅಪವಾದ ಹೊರಿಸುವುದು ಸರಿಯಲ್ಲ . {{rh|center=****}}<noinclude></noinclude> oc63bb9igumxfjf50ok2z639bfwpw0v ಪುಟ:Gandhi, 1927, The Story of My Experiments With Truth, Vol 1.pdf/೩೯ 104 120714 322406 2026-05-25T08:42:58Z Pragathi. BH 7585 /* Proofread */ 322406 proofread-page text/x-wiki <noinclude><pagequality level="3" user="Pragathi. BH" /></noinclude>BIRTH AND PARENTAGE 19 and keep them without flinching. Illness was no excuse for relaxing them. I can recall her once falling ill when she was observing the Chandrayana1 vow, but the illness was not allowed to interrupt tows the observance. To keep two or three consecutive fasts was nothing to her. Living on one meal a day during Chatur¬ mas was a habit with her. Not content with that she fasted every alternate day during one Chaturmas. During another Chaturmas she vowed not to have food without seeing the sun. We children on those days would stand, staring at the sky, waiting to announce the appearance of the sun to our mother. Every one knows that at the height of the rainy season the sun often does not condescend to show his face. And I remember days, when, at his sudden appearance, we would rush and announce it to her. She would run out to see with her own eyes, but by that time the fugitive sun would 1 A sort of fast in which the daily quantity of food is increased or diminished according as the moon waxes or wanes.<noinclude></noinclude> 5fwwpu7iwqfaf3lnsepwy7mi1updk5m ಪುಟ:Gandhi, 1927, The Story of My Experiments With Truth, Vol 1.pdf/೩೨ 104 120715 322408 2026-05-25T08:44:13Z Pragathi. BH 7585 /* Without text */ 322408 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:Gandhi, 1927, The Story of My Experiments With Truth, Vol 1.pdf/೩೩ 104 120716 322409 2026-05-25T08:45:01Z Pragathi. BH 7585 /* Proofread */ 322409 proofread-page text/x-wiki <noinclude><pagequality level="3" user="Pragathi. BH" /></noinclude>The Story of My Experiments with Truth PART I<noinclude></noinclude> s3odfcru85pd8yvo1gvnkr8zsmzbl8q ಪುಟ:Gandhi, 1927, The Story of My Experiments With Truth, Vol 1.pdf/೩೪ 104 120717 322410 2026-05-25T08:45:24Z Pragathi. BH 7585 /* Without text */ 322410 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i 322412 322410 2026-05-25T08:46:21Z Pragathi. BH 7585 /* Without text */ 322412 proofread-page text/x-wiki <noinclude><pagequality level="0" user="Pragathi. BH" /></noinclude>{{gap}}<noinclude></noinclude> 7wcb1dgnzkrkbnwhbqwo67euxbxn10s