ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.3 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:Mysore-University-Encyclopaedia-Vol-1-Part-1.pdf/೪೫೧ 104 4750 322517 310097 2026-05-25T16:10:28Z Pragathi. BH 7585 322517 proofread-page text/x-wiki <noinclude><pagequality level="3" user="Shreekant.mishrikoti" /></noinclude>ಅರಬ್ಬಿ ಸಮುದ್ರ - ಅರಬ್ಬಿ ಸಾಹಿತ್ಯ ಅರಬ್ಬಿ ಸಮುದ್ರ: ಹಿಂದೂ ಮಹಾಸಾಗರದ ಒಂದು ಭಾಗ, ಅದರ ವಾಯವ್ಯ ಭಾಗದಲ್ಲಿದೆ. ಇದರ ಹಳೆಯ ಹೆಸರು ಎರಿಥಿಯನ್ ಸಮುದ್ರ ಅರಬ್ಬರ ವಾಣಿಜ್ಯ ಈ ಭಾಗದಲ್ಲಿ ಹೆಚ್ಚಾಗಿರುವುದರಿಂದ, ಇದನ್ನು ಅರಬ್ಬಿ ಸಮುದ್ರವೆಂದು ಕರೆಯಲಾಯಿತು. ಪೂರ್ವಕ್ಕೆ ಭಾರತವೂ ಉತ್ತರಕ್ಕೆ ಪಾಕಿಸ್ತಾನ ಮತ್ತು ಇರಾನ್ ದೇಶಗಳ ಪಶ್ಚಿಮ ಭಾಗಗಳೂ ಪಶ್ಚಿಮಕ್ಕೆ ಅರೇಬಿಯ, ಆಫ್ರಿಕಗಳ ಪೂರ್ವಭಾಗಗಳೂ ಇವೆ. ಕೆಂಪು ಸಮುದ್ರವೂ ಪರ್ಷಿಯ ಕೊಲ್ಲಿಯೂ ಅರಬ್ಬಿ ಸಮುದ್ರಕ್ಕೆ ಸೇರಿಕೊಂಡಿವೆ. ಸಿಂಧು, ನರ್ಮದಾ ಮತ್ತು ತಪತಿ- ಇವು ಈ ಸಮುದ್ರವನ್ನು ಸೇರುವ ಮುಖ್ಯ ನದಿಗಳು. ಒಂದಾನೊಂದು ಕಾಲದಲ್ಲಿ ಈ ಸಮುದ್ರತೀರ ಹಡಗಿನ ಸಂಚಾರಕ್ಕೆ ಪ್ರಖ್ಯಾತಿ ಹೊಂದಿತ್ತು. ಈಗ ಯುರೋಪ್ ಮತ್ತು ಭಾರತಗಳ ಮಧ್ಯೆ ಪ್ರಮುಖ ನೌಕಾಮಾರ್ಗವಾಗಿದೆ. ಅಕ್ಟೋಬರ್‌ನಿಂದ ಮೇವರೆಗೆ ಈಶಾನ್ಯ ವಾಣಿಜ್ಯ ಮಾರುತವೂ ಜೂನ್‌ನಿಂದ ಸೆಪ್ಟೆಂಬರ್ ವರೆಗೆ ನೈರುತ್ಯ ವಾಣಿಜ್ಯ ಮಾರುತವೂ ಬೀಸುತ್ತವೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈರುತ್ಯ ವಾಣಿಜ್ಯ ಮಾರುತವೂ ಅರಬ್ಬಿ ಸಮುದ್ರದ ಪ್ರಾಮುಖ್ಯ ಸೂಯೆಜ್ ಕಾಲುವೆಯನ್ನು ತೆರೆದ ಅನಂತರ (1869) ಬಹಳ ಹೆಚ್ಚಿತು. ಏಡನ್, ಬೊಂಬಾಯಿ ಮತ್ತು ಕರಾಚಿ ಈ ಸಮುದ್ರತೀರದ ಪ್ರಖ್ಯಾತ ಬಂದರುಗಳು. ಇಲ್ಲಿನ ಕೆಲವು ದ್ವೀಪಗಳಲ್ಲಿ ಸೊಟಾ ಮತ್ತು ಲಕ್ಷದ್ವೀಪ ಎಂಬುವು ಮುಖ್ಯವಾದುವು, ಒಟ್ಟು ವಿಸ್ತೀರ್ಣ 3,863,000 ಚ.ಕಿಮೀ. ಸರಾಸರಿ ಆಳ 2,734 ಮೀ. ಸಮುದ್ರದ ಮಧ್ಯಭಾಗದ ಆಳ 2,900 ಮೀ ಮೀರುತ್ತದೆ. ಇಲ್ಲಿ ಯಾವುದೇ ದ್ವೀಪಗಳಿಲ್ಲ, ದಾಖಲಾಗಿರುವ ಸಮುದ್ರದ ಅತೀ ಆಳ 4,850 ಮೀ. ಬೇಸಗೆಯಲ್ಲಿ ಸಮುದ್ರದ ಮಧ್ಯ ಭಾಗದ ಮೇಲ್ಮ ನೀರಿನ ಉಷ್ಣಾಂಶ 24-25° ಸೆಂ. ಸಮುದ್ರ ಪಶ್ಚಿಮ ಭಾಗ ಸಮೃದ್ಧ ಮೀನು ಸಂಪತ್ತು ಹೊಂದಿದೆ. (ಎಂ.ಎಸ್.ಎಂ.) ಅರಭೀ ಸಾಹಿತ್ಯ: ಪ್ರಪಂಚದ ಎಲ್ಲ ಶ್ರೇಷ್ಟ ಸಾಹಿತ್ಯಗಳಂತೆ, ಇಸ್ಲಾಮಿಗೆ ಹಿಂದಿನ ಅರಬ್ಬರ ಬೌದ್ಧಿಕ ಜೀವನ ಕಾವ್ಯರೂಪದಲ್ಲಿ ಪ್ರಕಟವಾಯಿತು. ಧರ್ಮಬಾಹಿರರು ತಮ್ಮ ಆವೇಶಕಾಲದಲ್ಲಿ ಉಚ್ಚರಿಸುತ್ತಿದ್ದ ಅಶರೀರವಾಣಿಗಳ ಪ್ರಾಸಬದ್ಧ ಗದ್ಯದಲ್ಲಿ ಅರಬ್ಬಿ ಕಾವ್ಯ ಪ್ರಾರಂಭವಾಯಿತು. ಕಾಲಕ್ರಮದಲ್ಲಿ ಅದು ಹೆಚ್ಚು ಛಂದೋಬದ್ಧ ರೂಪ ಪಡೆಯಿತು. ತದನಂತರ ಅದು 16 ಮುಖ್ಯ ಛಂದಸ್ಸುಗಳಾಗಿ ವರ್ಗಿಕೃತವಾಯಿತು. ಅರಬ್ಬರ ಪ್ರತಿಭಾಸಂಪನ್ನ ಸಾಹಿತ್ಯ ಈ ಛಂದಸ್ಸುಗಳ ಚೌಕಟ್ಟಿನಲ್ಲಿ ಮೈದೋರಿತು. ಕಾಲಕ್ಕೆ ವಶವಾಗಿ ನಾಶಹೊಂದದೆ ಉಳಿದಿರುವ ಈ ಕಾವ್ಯದ ತುಣುಕುಗಳು ಪ್ರಶ 5ನೆಯ ಶತಮಾನಕ್ಕೆ ಈಚಿನವು. ನಮಗೆ ದೊರೆತಿರುವ ಅತ್ಯಂತ ಪ್ರಾಚೀನ ಪದ್ಯಗಳು ಆ ಕವಿಗಳಿಗಿದ್ದ ಭಾಷಾಪ್ರಭುತ್ವ ಮತ್ತು ಉಕ್ತಿಕೌಶಲವನ್ನು ತೋರುತ್ತವೆ. ಉಕಾಜ್ ಮತ್ತು ಮಕ್ಕ ಪಟ್ಟಣಗಳಲ್ಲಿ ಜರುಗುತ್ತಿದ್ದ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿಗಳು ಕಲೆತು ಅವಿತ್ವದಲ್ಲಿ ಒಬ್ಬರೊಡನೊಬ್ಬರು ಸ್ಪರ್ಧಿಸುತ್ತಿದ್ದುದೂ ಇದಕ್ಕೆ ಕಾರಣವಾಗಿರಬಹುದು. ಆದರೆ ಸ್ಥಳೀಯವಾದ ಅನೇಕ ಉಪಭಾಷೆಗಳಿದ್ದರೂ ಅರೇಬಿಯದ ಎಲ್ಲ ಭಾಗಗಳ ಕವಿಗಳೂ ತಮ್ಮ ಕವಿತ್ವಕ್ಕೆ ಒಂದೇ ವಿಧವಾದ ಭಾಷೆಯನ್ನು ಉಪಯೋಗಿಸಿರುವ ಅಂಶ ಒಂದು ಒಗಟಾಗಿಯೇ ಉಳಿದಿದೆ. ಇವರು ರಚಿಸಿದ ಕವಿತೆಗಳಿಗೆ ಕಾಸಿಡ (ಪ್ರಗಾಥ) ಗಳೆಂದು ಹೆಸರು. ಅವುಗಳ ಪ್ರಮಾಣ 60 ಸಾಲುಗಳಿಂದ ಹಿಡಿದು 100 ಸಾಲುಗಳವರೆಗೆ, ಅತ್ಯಂತ ಪ್ರಾಚೀನ ಕಾಲದಿಂದಲೂ ಪ್ರಗಾಥಕ್ಕೆ ಒಂದು ಸಾಂಪ್ರದಾಯಿಕವಾದ ಕವಿತಾ ತಂತ್ರವಿದೆ. ಅದು ಸಾಮಾನ್ಯವಾಗಿ, ಪಾಂಥನೊಬ್ಬ ತನ್ನ ಮಿತ್ರರೊಂದಿಗೆ ಸುಖಜೀವನ ನಡೆಸಿ ಸ್ವಗ್ರಾಮಕ್ಕೆ ಹಿಂದಿರುಗಿ ಬಂದು, ಅದು ಪಾಳು ಬಿದ್ದಿರುವುದನ್ನೂ, ಮಿತ್ರರಿಂದ ತಾನು ಅಗಲಿದುದನ್ನೂ ನೆನೆದುಕೊಂಡು ಪರಿತಪಿಸುವುದರ ವರ್ಣನೆಯಿಂದ ಪ್ರಾರಂಭವಾಗುತ್ತದೆ. ಬಳಿಕ ಆತ ಅದರ ಹಿಂದಿನ ನಿರ್ಮಲ ಸೌಂದರ್ಯವನ್ನು ಈಗಣ ಅದರ ಉಳಿಕೆಯ ಹಾಳುತನ ದೊಂದಿಗೆ ಹೋಲಿಸುತ್ತಾನೆ; ಅಂದಿನ ಸುಖಗಳನ್ನು ನೆನೆಯುತ್ತಾನೆ, ಕಾಸಿಡದಲ್ಲಿ ಮರಳು ಗಾಡಿನ ಮತ್ತು ಬೆದೂಯಿನ್ ಸಮಾಜದ ವಿವಿಧ ಮುಖಗಳು, ಪಾಂಥನ ಒಂಟೆ ಅಥವಾ ಕುದುರೆ, ಇತರ ಪ್ರಾಣಿಗಳ ಜೀವೋಲ್ಲಾಸ, ಮೃಗಯಾವಿನೋದ, ಇಲ್ಲದಿದ್ದರೆ ಚಂಡಮಾರುತದ ಕುಶಲವರ್ಣನೆ ಇತ್ಯಾದಿ ಚಿತ್ರಗಳು ಸಾಲುಸಾಲಾಗಿ ಬರುತ್ತವೆ. ಕಥೆಯ ಮುಖ್ಯ ವಿಷಯವೇನೇ ಇರಲಿ ಈ ನಿಯತಪ್ರಸಂಗಗಳನ್ನು (ಅಥವಾ ಪ್ರಣಯ ಪೀಠಿಕೆಯನ್ನು) ಬಿಡದೆ ಹೇಳುತ್ತಾನೆ. ಈ ಕಾಸಿಡಗಳಲ್ಲಿ ಕೆಲವು (ಅವುಗಳ ಸಂಖ್ಯೆ 7 ಅಥವಾ 10) ಅವುಗಳ ಆಂತರಿಕ ಸೌಂದರ್ಯಕ್ಕಾಗಿಯೂ ಕಲೆಗಾಗಿಯೂ ಸಾಹಿತ್ಯ ಸಮ್ಮೇಳನಗಳಲ್ಲಿ ಬಹುಮಾನಿತವಾದವೆಂದು ಊಹಿಸಲಾಗಿದೆ. ಅವನ್ನು ಮು ಅಲ್ಲಾಕತ್ (ಎಂದರೆ ತಮ್ಮ ಅಮೋಘವಾದ ಗುಣದ ದೆಸೆಯಿಂದ ಕಾಬಾದ ಮೇಲೆ ನೇತು ಹಾಕಿದ ಪದ್ಯಗಳು) ಎಂದು ಕರೆಯಲಾಗಿದೆ. ಇಸ್ಲಾಮಿಗೆ ಪೂರ್ವಭಾವಿಯಾಗಿ ಅರೇಬಿಯದ ಕೆಲವು ಆದರ್ಶಕವಿಗಳಲ್ಲಿ ಪ್ರಥಮ ಸ್ಥಾನ ಇಮ್-ರಉಲ್-ಕೈಸ್‌ಗೆ (560) ದೊರೆತಿದೆ. ಆತ ದೇಶಭ್ರಷ್ಟನಾದ ದೊರೆಯೊಬ್ಬನ ಮಗ; ಜೀವಮಾನದ ಕೊನೆಯ ವರ್ಷಗಳನ್ನು ತಂದೆಯ ಮರಣಕ್ಕೆ ಮುಖ್ಯಿ ತೀರಿಸುವ ಉದ್ಯಮದಲ್ಲಿ ಕಳೆದ ಅವನ ಮು ಅಲ್ಲಾಕತ್ (ಪ್ರಗಾಥ) ಮರಳುಗಾಡಿನ ವರ್ಣನೆಗಾಗಿಯೂ ಮುಚ್ಚುಮರೆಯಿಲ್ಲದ ಪ್ರಣಯ ಪೀಠಿಕೆಗಾಗಿಯೂ ಪ್ರಸಿದ್ಧವಾಗಿದೆ. ಇವನಂತೆ ಲಬೀದ್ (675), ತರಾಫ (550), ತ'ಅಬ್ಬತ ಷರ (530), ಅಷ್-ಷಾರ (510) ಅನ್ತರ (615), ಮೊದಲಾದ ದರೋಡೆಕೋರ (ರಾಬರ್) ಕವಿಗಳು ಮರಳುಗಾಡಿನ ಜೀವನದ ಚಿತ್ರಗಳನ್ನು ಕಳಕಳಿಸುವಂತೆ ವರ್ಣಿಸಿದ್ದಾರೆ. ಅಮ್-ಬ್-ಕುಲ್‌ತುಮ್ (600), ಹರಿತ-ಬ್-ಹಿಲ್ಲಿ (580) ಎಂಬುವರು ತಮ್ಮ ಕುಲದವರ ಮಹತ್ ಕಾರ್ಯಗಳನ್ನು ಕುರಿತು ಹಾಡುಗಳನ್ನು ಕಟ್ಟಿದ್ದಾರೆ. ಜುಹೇರ್‌ನಿಗೆ (631) ಉಪದೇಶ ಮಾಡುವುದರಲ್ಲೂ ಧರ್ಮವನ್ನು ಕುರಿತು ಹೇಳುವುದರಲ್ಲೂ ಇಷ್ಟ. ಆತ ತನ್ನ ಪದ್ಯಗಳನ್ನು ತಮ್ಮ ಭ್ರಾತೃಘಾತಕ ವೈರವನ್ನು ಬಗೆಹರಿಸಿಕೊಂಡ ಇಬ್ಬರು ಕುಲನಾಯಕರ ಪ್ರಶಂಸೆಗೆ ಮೀಸಲಿಟ್ಟಿದ್ದಾನೆ. ಇಸ್ಲಾಮಿಗೆ ಪೂರ್ವದ ಅದೇರೆಯದಲ್ಲಿ ಅದರ ಎರಡು ರಾಜಾಸ್ಥಾನಗಳಿದ್ದುವ ಫಸ್ಸನಿದ್ ವಂಶದವರು ಆಳುತ್ತಿದ್ದ ಪ್ರದೇಶ ಅರೇಬಿಯದ ಈಶಾನ್ಯ ಭಾಗಗಳಲ್ಲಿ ಹಬ್ಬಿತ್ತು. ಲಖಿ ವಂಶದವರು ಆಳುತ್ತಿದ್ದ ಪ್ರದೇಶ ಯೂಫ್ರೆಟೀಸ್ ನದಿಯ ಪಶ್ಚಿಮಕ್ಕೆ ಹರಡಿತ್ತು. ಫಸ್ಸನಿದ್‌ ಭಾಗದ ಸಂಸ್ಕೃತಿಯಿಂದ ಪ್ರಭಾವಿತವಾಯಿತು. ಎರಡು ದರ್ಬಾರುಗಳೂ ರೋಮ್ ಮತ್ತು ಪರ್ಷಿಯಗಳ ನಡುವೆ ಜರುಗಿದ ಯುದ್ಧದಲ್ಲಿ ಮುಖ್ಯ ಪಾತ್ರವನ್ನು ವಹಿಸಿದವು. ಈ ರಾಜ್ಯಗಳು ತಮ್ಮ ರಾಜಸಭೆಗೆ ಬರುತ್ತಿದ್ದ ಅನೇಕ ಕವಿಗಳನ್ನು ಪ್ರೋತ್ಸಾಹಿಸು ತಿದ್ದುವು. ಈ ರೀತಿಯಲ್ಲಿ ಪ್ರಗಾಥ ಬೆದೂಯಿನ್ ಜನಾಂಗದ ಉತ್ತಮ ಕಾವ್ಯವಾಗಿ ಬೆಳೆದುದಲ್ಲದೆ ರಾಜಸಭೆಗೆ ಯೋಗ್ಯವಾದ ರಚನೆಯೂ ಆಯಿತು. ಈ ಕಾರಣದಿಂದ ಮೆಸಪೊಟೇಮಿಯ ಅರಸರ ಪ್ರಭಾವಕ್ಕೊಳಗಾದ ಕವಿಗಳ ಒಂದು ಪಂಗಡವೂ ಕ್ರೈಸ್ತರಾದ ಸಿರಿಯ ದೇಶದ ಫಸ್ಸನಿದ್ ದೊರೆಗಳ ಆಶ್ರಯಕ್ಕೆ ಸೇರಿದ ಕವಿಗಳ ಮತ್ತೊಂದು ಪಂಗಡವೂ ಏರ್ಪಟ್ಟುವು. ಈ ಕವಿಗಳ ಪ್ರಭಾವದಿಂದ ಬೈಜಾಂಟೈನ್ ಮತ್ತು ಅರಾಮೇಯಿಕ್ ಸಂಸ್ಕೃತಿ ದನಗಾಹಿ ಅಲೆಮಾರಿ ಜನರ ಕೈಸೇರಿತು. ಈ ಕವಿಗಳ ಪೈಕಿ ಜುಬ್ಬಿಯನ್ನರ ಆನ್-ನಬಿಘ (604), ಅಲ್‌ಅಷ (629) ಮುಖ್ಯರು, ಆನ್-ನಬಿಘನ ಕವಿತೆಯಲ್ಲಿ ಆತನಿದ್ದ ರಾಜಾಸ್ಥಾನದ ಪ್ರಭಾವಗಳು ಎದ್ದು ಕಾಣುತ್ತವೆ. ಅವುಗಳಲ್ಲಿ ಕಂಡುಬರುವ ನೀತಿ ಮತ್ತು ಉಪದೇಶಗಳ ಧ್ವನಿಗಾಗಿ ಆತ ತುಂಬ ಪ್ರಸಿದ್ಧನಾಗಿದ್ದಾನೆ. ಗಾಯಕ ವೃತ್ತಿಯ ಅಲ್'ಅಷನ ಯಶಸ್ಸು ಆತನ ವಿಡಂಬನ ಮತ್ತು ವಿಲಾಸ ಗೀತಗಳನ್ನವಲಂಬಿಸಿದೆ. ಇಸ್ಲಾಮಿಗೆ ಪೂರ್ವದ ಪದ್ಯಗಳಲ್ಲಿ ಕಂಡುಬರುವ ಹಾಗೆ, ಈ ಮರಳುಗಾಡಿನ ಮಕ್ಕಳು ತಾವು ತಂಗಲು ಅನುಕೂಲವಾದ ಹುಲ್ಲುಗಾವಲುಗಳನ್ನೂ ಫಲವತ್ತಾದ ಭೂಮಿಗಳನ್ನು ಹುಡುಕುತ್ತಾ ಅಲೆಯುತ್ತಿದ್ದರು. ಅವರು ಪ್ರಕೃತಿಯನ್ನು ಬಹಳ ಸೂಕ್ಷ್ಮ ದೃಷ್ಟಿಯಿಂದ ನೋಡುವರು ಮತ್ತು ಇದ್ದುದನ್ನು ಇದ್ದ ಹಾಗೆ ಗ್ರಹಿಸುವುದು ಅವರ ಸಹ ಮನೋಧರ್ಮ. ಮರಳುಗಾಡಿನ ಏಕಪ್ರಕಾರದ ಜೀವನವನ್ನು ಮುಚ್ಚುಮರೆಯಿಲ್ಲದೆ ಹೇಳಿ, ಮನುಷ್ಯ ಮತ್ತು ಪ್ರಾಣಿಗಳ ಸಹಜ ಪ್ರವೃತ್ತಿಗಳನ್ನು ವರ್ಣಿಸುವುದರಲ್ಲಿ ಬಹಳ ಆಸಕ್ತಿಯನ್ನು ತೋರಿದ ಬೆದೂಯಿನ್ ಕವಿಗಳ ಬಗೆಗೆ, ಅವರದಲ್ಲ ಒಂದೇ ರಾಗವೆಂದೂ ಭಾಷಾಪಂಡಿತರಿಗೆ ಮಾತ್ರ ರುಚಿಸಬಲ್ಲ ಶಬ್ದಪ್ರಯೋಗಗಳಿಂದ ತುಂಬಿವೆ ಎಂದೂ ಮುಂದಿನ ತಲೆಮಾರಿನವರು ಭಾವಿಸಿದರು. ಇಸ್ಲಾಮಿಗೆ ಹಿಂದಿನ ಕವಿತೆಗಳಲ್ಲಿ ಯಾವ ತಾತ್ವಿಕ ವಿಚಾರವಾಗಲಿ ದೈವನಿಷ್ಠೆಯಾಗಲಿ ಇಲ್ಲವೆಂಬುದು ನಿಜ. ಬೆದೂಯಿನ್ ಅರಬ್ಬರು ನೀತಿಯಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ತಮ್ಮ ಕುಲಾಚಾರಕ್ಕೆ ತುಂಬ ಮರ್ಯಾದೆ ಕೊಡುತ್ತಿದ್ದರು. ಅವರನ್ನು ಆಕರ್ಷಿಸಿದ ಕೆಲವು ಜನಪ್ರಿಯ ವಿಷಯಗಳೆಂದರೆ ಶೌರ್ಯ, ಪೂಣಯ, ಶೋಕ, ಅವಮಾನ, ಪ್ರತಿಷ್ಠಾ ವೈಭವ, ಆತಿಥ್ಯ - ಮೊದಲಾದುವು. ಅವರು ಧಾರ್ಮಿಕ ಕ್ರಿಯಾವಿಧಿಗಳನ್ನು ಆಚರಿಸುತ್ತಿದ್ದುದು ಶ್ರದ್ಧಾಭಕ್ತಿಯಿಂದಲ್ಲ; ಬರಿಯ ಕುಲಾಚಾರವೆಂದು. ಯಾವ ದೇವರೇ ಆಗಲಿ ಅವನಿದಿರು ದೀನಭಾವವನ್ನು ತೋರುವುದು ಅವರ ಸಹಜಪ್ರವೃತ್ತಿಗೆ ಸರಿಹೊಂದುತ್ತಿರಲಿಲ್ಲ. ಆದರೆ ದಕ್ಷಿಣ ಅರಬ್ಬರ ವರ್ತನೆ ತದ್ವಿರುದ್ಧವಾದುದು. ಅವರ ಜೀವನದ ಸ್ಥಿತಿಗತಿಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕುಲದೇವತೆಗಳಿಗೆ ಆಂತಿಕೆ ಬಂದದ್ದನ್ನು ಉತ್ತರ ಅರಬ್ಬರು ಸೇನಾರವೃತ್ತಿಯುಳ್ಳವರು, ಹೆಸರು, ತಿಂದು ಕುಡಿದು ವಿಲಾಸಮಗ್ನರಾಗುವುದೇ ಅವರ ಜೀವನದ ಗುರಿ, ಸದ್ಧರ್ಮ ಮಾರ್ಗದಿಂದ ನಮ್ಮ ನಡತೆಯನ್ನು ತಿದ್ದಿಕೊಳ್ಳುವುದು ಅವರಿಗೆಷ್ಟರಮಟ್ಟಿಗೂ ಸೇರುತ್ತಿರಲಿಲ್ಲವೆಂಬುದು ಪ್ರವಾದಿಗಳಾದ ಮಹಮ್ಮದರ ಉಪದೇಶಗಳನ್ನು ಪರಿಗ್ರಹಿಸುವುದರಲ್ಲಿ ಅವರು ತೋರಿದ ಶುದ್ಧ ಮೂರ್ಖ ಪ್ರತಿಭಟನೆಯಲ್ಲಿ ವ್ಯಕ್ತವಾಯಿತು. ಒಂದು ಮಾತಿನಲ್ಲಿ ಹೇಳಬೇಕಾದರೆ, ಪ್ರಾಚೀನ ಅರೇಬಿಯದ ಕವಿತೆ ಅರಬ್ಬರ ಎಲ್ಲ ರಾಗೋದ್ರೇಕಗಳನ್ನೂ ಕುಲಾಚಾರಗಳನ್ನೂ ಒಳಗೊಂಡ ಅವರ ಕುಲಜೀವನವನ್ನು ಪ್ರತಿಫಲಿಸುತ್ತದೆ. ಕುದುರೆ ಜೂಜಿನ ಯಾವುದೋ ಒಂದು ಸಣ್ಣ ನಿಯಮಭಂಗದಂಥ ಅಲ್ಪ ವಿಷಯಗಳು ಹೇಗೆ ಕುಲಗಳಲ್ಲಿ ತಳಮಳ ಎಬ್ಬಿಸಿ ವರ್ಷಗಟ್ಟಲೆ ನಡೆಯುವ ಯುದ್ಧಗಳನ್ನು ಪ್ರೇರಿಸುತ್ತಿದ್ದವು, ಅವು ಹೇಗೆ ಕಾವ್ಯ ವಸ್ತುಗಳಾಗುತ್ತಿದ್ದವು ಎಂಬುದನ್ನು ಈ ಕವಿತೆ ತಿಳಿಸಿಕೊಡುತ್ತದೆ. ಆದರೂ ಇಸ್ಲಾಂ ಪೂರ್ವದ ಕವಿತೆಗಳಲ್ಲಿ ಕುಲಗಳೊಳಗಿನ<noinclude></noinclude> 5lit3iw5425fb7zpuii13229k08j8ct 322518 322517 2026-05-25T16:10:41Z Pragathi. BH 7585 /* Not proofread */ 322518 proofread-page text/x-wiki <noinclude><pagequality level="1" user="Pragathi. BH" /></noinclude>ಅರಬ್ಬಿ ಸಮುದ್ರ - ಅರಬ್ಬಿ ಸಾಹಿತ್ಯ ಅರಬ್ಬಿ ಸಮುದ್ರ: ಹಿಂದೂ ಮಹಾಸಾಗರದ ಒಂದು ಭಾಗ, ಅದರ ವಾಯವ್ಯ ಭಾಗದಲ್ಲಿದೆ. ಇದರ ಹಳೆಯ ಹೆಸರು ಎರಿಥಿಯನ್ ಸಮುದ್ರ ಅರಬ್ಬರ ವಾಣಿಜ್ಯ ಈ ಭಾಗದಲ್ಲಿ ಹೆಚ್ಚಾಗಿರುವುದರಿಂದ, ಇದನ್ನು ಅರಬ್ಬಿ ಸಮುದ್ರವೆಂದು ಕರೆಯಲಾಯಿತು. ಪೂರ್ವಕ್ಕೆ ಭಾರತವೂ ಉತ್ತರಕ್ಕೆ ಪಾಕಿಸ್ತಾನ ಮತ್ತು ಇರಾನ್ ದೇಶಗಳ ಪಶ್ಚಿಮ ಭಾಗಗಳೂ ಪಶ್ಚಿಮಕ್ಕೆ ಅರೇಬಿಯ, ಆಫ್ರಿಕಗಳ ಪೂರ್ವಭಾಗಗಳೂ ಇವೆ. ಕೆಂಪು ಸಮುದ್ರವೂ ಪರ್ಷಿಯ ಕೊಲ್ಲಿಯೂ ಅರಬ್ಬಿ ಸಮುದ್ರಕ್ಕೆ ಸೇರಿಕೊಂಡಿವೆ. ಸಿಂಧು, ನರ್ಮದಾ ಮತ್ತು ತಪತಿ- ಇವು ಈ ಸಮುದ್ರವನ್ನು ಸೇರುವ ಮುಖ್ಯ ನದಿಗಳು. ಒಂದಾನೊಂದು ಕಾಲದಲ್ಲಿ ಈ ಸಮುದ್ರತೀರ ಹಡಗಿನ ಸಂಚಾರಕ್ಕೆ ಪ್ರಖ್ಯಾತಿ ಹೊಂದಿತ್ತು. ಈಗ ಯುರೋಪ್ ಮತ್ತು ಭಾರತಗಳ ಮಧ್ಯೆ ಪ್ರಮುಖ ನೌಕಾಮಾರ್ಗವಾಗಿದೆ. ಅಕ್ಟೋಬರ್‌ನಿಂದ ಮೇವರೆಗೆ ಈಶಾನ್ಯ ವಾಣಿಜ್ಯ ಮಾರುತವೂ ಜೂನ್‌ನಿಂದ ಸೆಪ್ಟೆಂಬರ್ ವರೆಗೆ ನೈರುತ್ಯ ವಾಣಿಜ್ಯ ಮಾರುತವೂ ಬೀಸುತ್ತವೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ನೈರುತ್ಯ ವಾಣಿಜ್ಯ ಮಾರುತವೂ ಅರಬ್ಬಿ ಸಮುದ್ರದ ಪ್ರಾಮುಖ್ಯ ಸೂಯೆಜ್ ಕಾಲುವೆಯನ್ನು ತೆರೆದ ಅನಂತರ (1869) ಬಹಳ ಹೆಚ್ಚಿತು. ಏಡನ್, ಬೊಂಬಾಯಿ ಮತ್ತು ಕರಾಚಿ ಈ ಸಮುದ್ರತೀರದ ಪ್ರಖ್ಯಾತ ಬಂದರುಗಳು. ಇಲ್ಲಿನ ಕೆಲವು ದ್ವೀಪಗಳಲ್ಲಿ ಸೊಟಾ ಮತ್ತು ಲಕ್ಷದ್ವೀಪ ಎಂಬುವು ಮುಖ್ಯವಾದುವು, ಒಟ್ಟು ವಿಸ್ತೀರ್ಣ 3,863,000 ಚ.ಕಿಮೀ. ಸರಾಸರಿ ಆಳ 2,734 ಮೀ. ಸಮುದ್ರದ ಮಧ್ಯಭಾಗದ ಆಳ 2,900 ಮೀ ಮೀರುತ್ತದೆ. ಇಲ್ಲಿ ಯಾವುದೇ ದ್ವೀಪಗಳಿಲ್ಲ, ದಾಖಲಾಗಿರುವ ಸಮುದ್ರದ ಅತೀ ಆಳ 4,850 ಮೀ. ಬೇಸಗೆಯಲ್ಲಿ ಸಮುದ್ರದ ಮಧ್ಯ ಭಾಗದ ಮೇಲ್ಮ ನೀರಿನ ಉಷ್ಣಾಂಶ 24-25° ಸೆಂ. ಸಮುದ್ರ ಪಶ್ಚಿಮ ಭಾಗ ಸಮೃದ್ಧ ಮೀನು ಸಂಪತ್ತು ಹೊಂದಿದೆ. (ಎಂ.ಎಸ್.ಎಂ.) ಅರಭೀ ಸಾಹಿತ್ಯ: ಪ್ರಪಂಚದ ಎಲ್ಲ ಶ್ರೇಷ್ಟ ಸಾಹಿತ್ಯಗಳಂತೆ, ಇಸ್ಲಾಮಿಗೆ ಹಿಂದಿನ ಅರಬ್ಬರ ಬೌದ್ಧಿಕ ಜೀವನ ಕಾವ್ಯರೂಪದಲ್ಲಿ ಪ್ರಕಟವಾಯಿತು. ಧರ್ಮಬಾಹಿರರು ತಮ್ಮ ಆವೇಶಕಾಲದಲ್ಲಿ ಉಚ್ಚರಿಸುತ್ತಿದ್ದ ಅಶರೀರವಾಣಿಗಳ ಪ್ರಾಸಬದ್ಧ ಗದ್ಯದಲ್ಲಿ ಅರಬ್ಬಿ ಕಾವ್ಯ ಪ್ರಾರಂಭವಾಯಿತು. ಕಾಲಕ್ರಮದಲ್ಲಿ ಅದು ಹೆಚ್ಚು ಛಂದೋಬದ್ಧ ರೂಪ ಪಡೆಯಿತು. ತದನಂತರ ಅದು 16 ಮುಖ್ಯ ಛಂದಸ್ಸುಗಳಾಗಿ ವರ್ಗಿಕೃತವಾಯಿತು. ಅರಬ್ಬರ ಪ್ರತಿಭಾಸಂಪನ್ನ ಸಾಹಿತ್ಯ ಈ ಛಂದಸ್ಸುಗಳ ಚೌಕಟ್ಟಿನಲ್ಲಿ ಮೈದೋರಿತು. ಕಾಲಕ್ಕೆ ವಶವಾಗಿ ನಾಶಹೊಂದದೆ ಉಳಿದಿರುವ ಈ ಕಾವ್ಯದ ತುಣುಕುಗಳು ಪ್ರಶ 5ನೆಯ ಶತಮಾನಕ್ಕೆ ಈಚಿನವು. ನಮಗೆ ದೊರೆತಿರುವ ಅತ್ಯಂತ ಪ್ರಾಚೀನ ಪದ್ಯಗಳು ಆ ಕವಿಗಳಿಗಿದ್ದ ಭಾಷಾಪ್ರಭುತ್ವ ಮತ್ತು ಉಕ್ತಿಕೌಶಲವನ್ನು ತೋರುತ್ತವೆ. ಉಕಾಜ್ ಮತ್ತು ಮಕ್ಕ ಪಟ್ಟಣಗಳಲ್ಲಿ ಜರುಗುತ್ತಿದ್ದ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿಗಳು ಕಲೆತು ಅವಿತ್ವದಲ್ಲಿ ಒಬ್ಬರೊಡನೊಬ್ಬರು ಸ್ಪರ್ಧಿಸುತ್ತಿದ್ದುದೂ ಇದಕ್ಕೆ ಕಾರಣವಾಗಿರಬಹುದು. ಆದರೆ ಸ್ಥಳೀಯವಾದ ಅನೇಕ ಉಪಭಾಷೆಗಳಿದ್ದರೂ ಅರೇಬಿಯದ ಎಲ್ಲ ಭಾಗಗಳ ಕವಿಗಳೂ ತಮ್ಮ ಕವಿತ್ವಕ್ಕೆ ಒಂದೇ ವಿಧವಾದ ಭಾಷೆಯನ್ನು ಉಪಯೋಗಿಸಿರುವ ಅಂಶ ಒಂದು ಒಗಟಾಗಿಯೇ ಉಳಿದಿದೆ. ಇವರು ರಚಿಸಿದ ಕವಿತೆಗಳಿಗೆ ಕಾಸಿಡ (ಪ್ರಗಾಥ) ಗಳೆಂದು ಹೆಸರು. ಅವುಗಳ ಪ್ರಮಾಣ 60 ಸಾಲುಗಳಿಂದ ಹಿಡಿದು 100 ಸಾಲುಗಳವರೆಗೆ, ಅತ್ಯಂತ ಪ್ರಾಚೀನ ಕಾಲದಿಂದಲೂ ಪ್ರಗಾಥಕ್ಕೆ ಒಂದು ಸಾಂಪ್ರದಾಯಿಕವಾದ ಕವಿತಾ ತಂತ್ರವಿದೆ. ಅದು ಸಾಮಾನ್ಯವಾಗಿ, ಪಾಂಥನೊಬ್ಬ ತನ್ನ ಮಿತ್ರರೊಂದಿಗೆ ಸುಖಜೀವನ ನಡೆಸಿ ಸ್ವಗ್ರಾಮಕ್ಕೆ ಹಿಂದಿರುಗಿ ಬಂದು, ಅದು ಪಾಳು ಬಿದ್ದಿರುವುದನ್ನೂ, ಮಿತ್ರರಿಂದ ತಾನು ಅಗಲಿದುದನ್ನೂ ನೆನೆದುಕೊಂಡು ಪರಿತಪಿಸುವುದರ ವರ್ಣನೆಯಿಂದ ಪ್ರಾರಂಭವಾಗುತ್ತದೆ. ಬಳಿಕ ಆತ ಅದರ ಹಿಂದಿನ ನಿರ್ಮಲ ಸೌಂದರ್ಯವನ್ನು ಈಗಣ ಅದರ ಉಳಿಕೆಯ ಹಾಳುತನ ದೊಂದಿಗೆ ಹೋಲಿಸುತ್ತಾನೆ; ಅಂದಿನ ಸುಖಗಳನ್ನು ನೆನೆಯುತ್ತಾನೆ, ಕಾಸಿಡದಲ್ಲಿ ಮರಳು ಗಾಡಿನ ಮತ್ತು ಬೆದೂಯಿನ್ ಸಮಾಜದ ವಿವಿಧ ಮುಖಗಳು, ಪಾಂಥನ ಒಂಟೆ ಅಥವಾ ಕುದುರೆ, ಇತರ ಪ್ರಾಣಿಗಳ ಜೀವೋಲ್ಲಾಸ, ಮೃಗಯಾವಿನೋದ, ಇಲ್ಲದಿದ್ದರೆ ಚಂಡಮಾರುತದ ಕುಶಲವರ್ಣನೆ ಇತ್ಯಾದಿ ಚಿತ್ರಗಳು ಸಾಲುಸಾಲಾಗಿ ಬರುತ್ತವೆ. ಕಥೆಯ ಮುಖ್ಯ ವಿಷಯವೇನೇ ಇರಲಿ ಈ ನಿಯತಪ್ರಸಂಗಗಳನ್ನು (ಅಥವಾ ಪ್ರಣಯ ಪೀಠಿಕೆಯನ್ನು) ಬಿಡದೆ ಹೇಳುತ್ತಾನೆ. ಈ ಕಾಸಿಡಗಳಲ್ಲಿ ಕೆಲವು (ಅವುಗಳ ಸಂಖ್ಯೆ 7 ಅಥವಾ 10) ಅವುಗಳ ಆಂತರಿಕ ಸೌಂದರ್ಯಕ್ಕಾಗಿಯೂ ಕಲೆಗಾಗಿಯೂ ಸಾಹಿತ್ಯ ಸಮ್ಮೇಳನಗಳಲ್ಲಿ ಬಹುಮಾನಿತವಾದವೆಂದು ಊಹಿಸಲಾಗಿದೆ. ಅವನ್ನು ಮು ಅಲ್ಲಾಕತ್ (ಎಂದರೆ ತಮ್ಮ ಅಮೋಘವಾದ ಗುಣದ ದೆಸೆಯಿಂದ ಕಾಬಾದ ಮೇಲೆ ನೇತು ಹಾಕಿದ ಪದ್ಯಗಳು) ಎಂದು ಕರೆಯಲಾಗಿದೆ. ಇಸ್ಲಾಮಿಗೆ ಪೂರ್ವಭಾವಿಯಾಗಿ ಅರೇಬಿಯದ ಕೆಲವು ಆದರ್ಶಕವಿಗಳಲ್ಲಿ ಪ್ರಥಮ ಸ್ಥಾನ ಇಮ್-ರಉಲ್-ಕೈಸ್‌ಗೆ (560) ದೊರೆತಿದೆ. ಆತ ದೇಶಭ್ರಷ್ಟನಾದ ದೊರೆಯೊಬ್ಬನ ಮಗ; ಜೀವಮಾನದ ಕೊನೆಯ ವರ್ಷಗಳನ್ನು ತಂದೆಯ ಮರಣಕ್ಕೆ ಮುಖ್ಯಿ ತೀರಿಸುವ ಉದ್ಯಮದಲ್ಲಿ ಕಳೆದ ಅವನ ಮು ಅಲ್ಲಾಕತ್ (ಪ್ರಗಾಥ) ಮರಳುಗಾಡಿನ ವರ್ಣನೆಗಾಗಿಯೂ ಮುಚ್ಚುಮರೆಯಿಲ್ಲದ ಪ್ರಣಯ ಪೀಠಿಕೆಗಾಗಿಯೂ ಪ್ರಸಿದ್ಧವಾಗಿದೆ. ಇವನಂತೆ ಲಬೀದ್ (675), ತರಾಫ (550), ತ'ಅಬ್ಬತ ಷರ (530), ಅಷ್-ಷಾರ (510) ಅನ್ತರ (615), ಮೊದಲಾದ ದರೋಡೆಕೋರ (ರಾಬರ್) ಕವಿಗಳು ಮರಳುಗಾಡಿನ ಜೀವನದ ಚಿತ್ರಗಳನ್ನು ಕಳಕಳಿಸುವಂತೆ ವರ್ಣಿಸಿದ್ದಾರೆ. ಅಮ್-ಬ್-ಕುಲ್‌ತುಮ್ (600), ಹರಿತ-ಬ್-ಹಿಲ್ಲಿ (580) ಎಂಬುವರು ತಮ್ಮ ಕುಲದವರ ಮಹತ್ ಕಾರ್ಯಗಳನ್ನು ಕುರಿತು ಹಾಡುಗಳನ್ನು ಕಟ್ಟಿದ್ದಾರೆ. ಜುಹೇರ್‌ನಿಗೆ (631) ಉಪದೇಶ ಮಾಡುವುದರಲ್ಲೂ ಧರ್ಮವನ್ನು ಕುರಿತು ಹೇಳುವುದರಲ್ಲೂ ಇಷ್ಟ. ಆತ ತನ್ನ ಪದ್ಯಗಳನ್ನು ತಮ್ಮ ಭ್ರಾತೃಘಾತಕ ವೈರವನ್ನು ಬಗೆಹರಿಸಿಕೊಂಡ ಇಬ್ಬರು ಕುಲನಾಯಕರ ಪ್ರಶಂಸೆಗೆ ಮೀಸಲಿಟ್ಟಿದ್ದಾನೆ. ಇಸ್ಲಾಮಿಗೆ ಪೂರ್ವದ ಅದೇರೆಯದಲ್ಲಿ ಅದರ ಎರಡು ರಾಜಾಸ್ಥಾನಗಳಿದ್ದುವ ಫಸ್ಸನಿದ್ ವಂಶದವರು ಆಳುತ್ತಿದ್ದ ಪ್ರದೇಶ ಅರೇಬಿಯದ ಈಶಾನ್ಯ ಭಾಗಗಳಲ್ಲಿ ಹಬ್ಬಿತ್ತು. ಲಖಿ ವಂಶದವರು ಆಳುತ್ತಿದ್ದ ಪ್ರದೇಶ ಯೂಫ್ರೆಟೀಸ್ ನದಿಯ ಪಶ್ಚಿಮಕ್ಕೆ ಹರಡಿತ್ತು. ಫಸ್ಸನಿದ್‌ ಭಾಗದ ಸಂಸ್ಕೃತಿಯಿಂದ ಪ್ರಭಾವಿತವಾಯಿತು. ಎರಡು ದರ್ಬಾರುಗಳೂ ರೋಮ್ ಮತ್ತು ಪರ್ಷಿಯಗಳ ನಡುವೆ ಜರುಗಿದ ಯುದ್ಧದಲ್ಲಿ ಮುಖ್ಯ ಪಾತ್ರವನ್ನು ವಹಿಸಿದವು. ಈ ರಾಜ್ಯಗಳು ತಮ್ಮ ರಾಜಸಭೆಗೆ ಬರುತ್ತಿದ್ದ ಅನೇಕ ಕವಿಗಳನ್ನು ಪ್ರೋತ್ಸಾಹಿಸು ತಿದ್ದುವು. ಈ ರೀತಿಯಲ್ಲಿ ಪ್ರಗಾಥ ಬೆದೂಯಿನ್ ಜನಾಂಗದ ಉತ್ತಮ ಕಾವ್ಯವಾಗಿ ಬೆಳೆದುದಲ್ಲದೆ ರಾಜಸಭೆಗೆ ಯೋಗ್ಯವಾದ ರಚನೆಯೂ ಆಯಿತು. ಈ ಕಾರಣದಿಂದ ಮೆಸಪೊಟೇಮಿಯ ಅರಸರ ಪ್ರಭಾವಕ್ಕೊಳಗಾದ ಕವಿಗಳ ಒಂದು ಪಂಗಡವೂ ಕ್ರೈಸ್ತರಾದ ಸಿರಿಯ ದೇಶದ ಫಸ್ಸನಿದ್ ದೊರೆಗಳ ಆಶ್ರಯಕ್ಕೆ ಸೇರಿದ ಕವಿಗಳ ಮತ್ತೊಂದು ಪಂಗಡವೂ ಏರ್ಪಟ್ಟುವು. ಈ ಕವಿಗಳ ಪ್ರಭಾವದಿಂದ ಬೈಜಾಂಟೈನ್ ಮತ್ತು ಅರಾಮೇಯಿಕ್ ಸಂಸ್ಕೃತಿ ದನಗಾಹಿ ಅಲೆಮಾರಿ ಜನರ ಕೈಸೇರಿತು. ಈ ಕವಿಗಳ ಪೈಕಿ ಜುಬ್ಬಿಯನ್ನರ ಆನ್-ನಬಿಘ (604), ಅಲ್‌ಅಷ (629) ಮುಖ್ಯರು, ಆನ್-ನಬಿಘನ ಕವಿತೆಯಲ್ಲಿ ಆತನಿದ್ದ ರಾಜಾಸ್ಥಾನದ ಪ್ರಭಾವಗಳು ಎದ್ದು ಕಾಣುತ್ತವೆ. ಅವುಗಳಲ್ಲಿ ಕಂಡುಬರುವ ನೀತಿ ಮತ್ತು ಉಪದೇಶಗಳ ಧ್ವನಿಗಾಗಿ ಆತ ತುಂಬ ಪ್ರಸಿದ್ಧನಾಗಿದ್ದಾನೆ. ಗಾಯಕ ವೃತ್ತಿಯ ಅಲ್'ಅಷನ ಯಶಸ್ಸು ಆತನ ವಿಡಂಬನ ಮತ್ತು ವಿಲಾಸ ಗೀತಗಳನ್ನವಲಂಬಿಸಿದೆ. ಇಸ್ಲಾಮಿಗೆ ಪೂರ್ವದ ಪದ್ಯಗಳಲ್ಲಿ ಕಂಡುಬರುವ ಹಾಗೆ, ಈ ಮರಳುಗಾಡಿನ ಮಕ್ಕಳು ತಾವು ತಂಗಲು ಅನುಕೂಲವಾದ ಹುಲ್ಲುಗಾವಲುಗಳನ್ನೂ ಫಲವತ್ತಾದ ಭೂಮಿಗಳನ್ನು ಹುಡುಕುತ್ತಾ ಅಲೆಯುತ್ತಿದ್ದರು. ಅವರು ಪ್ರಕೃತಿಯನ್ನು ಬಹಳ ಸೂಕ್ಷ್ಮ ದೃಷ್ಟಿಯಿಂದ ನೋಡುವರು ಮತ್ತು ಇದ್ದುದನ್ನು ಇದ್ದ ಹಾಗೆ ಗ್ರಹಿಸುವುದು ಅವರ ಸಹ ಮನೋಧರ್ಮ. ಮರಳುಗಾಡಿನ ಏಕಪ್ರಕಾರದ ಜೀವನವನ್ನು ಮುಚ್ಚುಮರೆಯಿಲ್ಲದೆ ಹೇಳಿ, ಮನುಷ್ಯ ಮತ್ತು ಪ್ರಾಣಿಗಳ ಸಹಜ ಪ್ರವೃತ್ತಿಗಳನ್ನು ವರ್ಣಿಸುವುದರಲ್ಲಿ ಬಹಳ ಆಸಕ್ತಿಯನ್ನು ತೋರಿದ ಬೆದೂಯಿನ್ ಕವಿಗಳ ಬಗೆಗೆ, ಅವರದಲ್ಲ ಒಂದೇ ರಾಗವೆಂದೂ ಭಾಷಾಪಂಡಿತರಿಗೆ ಮಾತ್ರ ರುಚಿಸಬಲ್ಲ ಶಬ್ದಪ್ರಯೋಗಗಳಿಂದ ತುಂಬಿವೆ ಎಂದೂ ಮುಂದಿನ ತಲೆಮಾರಿನವರು ಭಾವಿಸಿದರು. ಇಸ್ಲಾಮಿಗೆ ಹಿಂದಿನ ಕವಿತೆಗಳಲ್ಲಿ ಯಾವ ತಾತ್ವಿಕ ವಿಚಾರವಾಗಲಿ ದೈವನಿಷ್ಠೆಯಾಗಲಿ ಇಲ್ಲವೆಂಬುದು ನಿಜ. ಬೆದೂಯಿನ್ ಅರಬ್ಬರು ನೀತಿಯಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ತಮ್ಮ ಕುಲಾಚಾರಕ್ಕೆ ತುಂಬ ಮರ್ಯಾದೆ ಕೊಡುತ್ತಿದ್ದರು. ಅವರನ್ನು ಆಕರ್ಷಿಸಿದ ಕೆಲವು ಜನಪ್ರಿಯ ವಿಷಯಗಳೆಂದರೆ ಶೌರ್ಯ, ಪೂಣಯ, ಶೋಕ, ಅವಮಾನ, ಪ್ರತಿಷ್ಠಾ ವೈಭವ, ಆತಿಥ್ಯ - ಮೊದಲಾದುವು. ಅವರು ಧಾರ್ಮಿಕ ಕ್ರಿಯಾವಿಧಿಗಳನ್ನು ಆಚರಿಸುತ್ತಿದ್ದುದು ಶ್ರದ್ಧಾಭಕ್ತಿಯಿಂದಲ್ಲ; ಬರಿಯ ಕುಲಾಚಾರವೆಂದು. ಯಾವ ದೇವರೇ ಆಗಲಿ ಅವನಿದಿರು ದೀನಭಾವವನ್ನು ತೋರುವುದು ಅವರ ಸಹಜಪ್ರವೃತ್ತಿಗೆ ಸರಿಹೊಂದುತ್ತಿರಲಿಲ್ಲ. ಆದರೆ ದಕ್ಷಿಣ ಅರಬ್ಬರ ವರ್ತನೆ ತದ್ವಿರುದ್ಧವಾದುದು. ಅವರ ಜೀವನದ ಸ್ಥಿತಿಗತಿಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕುಲದೇವತೆಗಳಿಗೆ ಆಂತಿಕೆ ಬಂದದ್ದನ್ನು ಉತ್ತರ ಅರಬ್ಬರು ಸೇನಾರವೃತ್ತಿಯುಳ್ಳವರು, ಹೆಸರು, ತಿಂದು ಕುಡಿದು ವಿಲಾಸಮಗ್ನರಾಗುವುದೇ ಅವರ ಜೀವನದ ಗುರಿ, ಸದ್ಧರ್ಮ ಮಾರ್ಗದಿಂದ ನಮ್ಮ ನಡತೆಯನ್ನು ತಿದ್ದಿಕೊಳ್ಳುವುದು ಅವರಿಗೆಷ್ಟರಮಟ್ಟಿಗೂ ಸೇರುತ್ತಿರಲಿಲ್ಲವೆಂಬುದು ಪ್ರವಾದಿಗಳಾದ ಮಹಮ್ಮದರ ಉಪದೇಶಗಳನ್ನು ಪರಿಗ್ರಹಿಸುವುದರಲ್ಲಿ ಅವರು ತೋರಿದ ಶುದ್ಧ ಮೂರ್ಖ ಪ್ರತಿಭಟನೆಯಲ್ಲಿ ವ್ಯಕ್ತವಾಯಿತು. ಒಂದು ಮಾತಿನಲ್ಲಿ ಹೇಳಬೇಕಾದರೆ, ಪ್ರಾಚೀನ ಅರೇಬಿಯದ ಕವಿತೆ ಅರಬ್ಬರ ಎಲ್ಲ ರಾಗೋದ್ರೇಕಗಳನ್ನೂ ಕುಲಾಚಾರಗಳನ್ನೂ ಒಳಗೊಂಡ ಅವರ ಕುಲಜೀವನವನ್ನು ಪ್ರತಿಫಲಿಸುತ್ತದೆ. ಕುದುರೆ ಜೂಜಿನ ಯಾವುದೋ ಒಂದು ಸಣ್ಣ ನಿಯಮಭಂಗದಂಥ ಅಲ್ಪ ವಿಷಯಗಳು ಹೇಗೆ ಕುಲಗಳಲ್ಲಿ ತಳಮಳ ಎಬ್ಬಿಸಿ ವರ್ಷಗಟ್ಟಲೆ ನಡೆಯುವ ಯುದ್ಧಗಳನ್ನು ಪ್ರೇರಿಸುತ್ತಿದ್ದವು, ಅವು ಹೇಗೆ ಕಾವ್ಯ ವಸ್ತುಗಳಾಗುತ್ತಿದ್ದವು ಎಂಬುದನ್ನು ಈ ಕವಿತೆ ತಿಳಿಸಿಕೊಡುತ್ತದೆ. ಆದರೂ ಇಸ್ಲಾಂ ಪೂರ್ವದ ಕವಿತೆಗಳಲ್ಲಿ ಕುಲಗಳೊಳಗಿನ<noinclude></noinclude> 8uyuh8ic3m8un2wp4knsjbfmexfcmtk ಪುಟ:Chirasmarane-Niranjana.pdf/೪೯ 104 12868 322523 256323 2026-05-25T16:16:24Z Pragathi. BH 7585 /* Validated */ 322523 proofread-page text/x-wiki <noinclude><pagequality level="4" user="Pragathi. BH" />{{rh|center=|left=ಚಿರಸ್ಮರಣೆ|right=೪೯}}</noinclude> <p>ಧರಿಸಿದ್ದ ಒಬ್ಬರು, ಸುತ್ತುವರಿದಿದ್ದ ಜನರು ನಡುವೆ ನಿಂತು, ಭಾಷಣ ಕೊಡುವುದನ್ನು ಆತ ಕಂಡಿದ್ದ. ಅದೇನೋ ತಮಾಷೆ ಇರಬಹುದೆಂದು ಬಾಗಿ ಇಣಿಕಿ ನೋಡಿದ್ದ ತಂದೆಗೂ ಮಗನಿಗೂ ನಿರಾಶೆಯಾಗಿತ್ತು. ಪಂಡಿತರೂ ಈಗ ಎದ್ದು ನಿಂತು ಹಾಗೆಯೇ ಭಾಷಣ ಕೊಡುವರೇನೋ ಎಂದು ಚಿರುಕಂಡ ಕುತೂಹಲದಿಂದ ಇದಿರು ನೋಡಿದ.</p> <p>ಪಂಡಿತರು ಎದ್ದು ನಿಲ್ಲಲಿಲ್ಲ. ಕುಳಿತಲ್ಲೆ ಮಾತನಾಡಿದರು. ತೋಳು ಕೈ ಬೀಸಿ, ಮುಷ್ಟಿ ಬಿಗಿದು, ಅಂಗವಿನ್ಯಾಸಗಳನ್ನು ಮಾಡಲಿಲ್ಲ. ಸರಳವಾಗಿ ಒಬ್ಬರೊಡನೊಬ್ಬರು ಸಂಭಾಷಣೆ ನಡೆಸುವಂತೆ, ನಡುನಡುವೆ ತಡೆದು ನಿಂತು ಯಾವುದಾದರೂ ಒಂದಂಶವನ್ನು ಹೆಚ್ಚಾಗಿ ವಿವರಿಸುತ್ತ, ಮಾತುಗಳನ್ನಾಡಿದರು.</p> <p>ಲೋಕ ಸೃಷ್ಟಿಯಾಗಿ, ಈ ಲೋಕದಲ್ಲಿ ಮನುಷ್ಯ ಹುಟ್ಟಿದ ಕಥೆ, ಮಾನವರು ಆರಂಭದಲ್ಲಿ ಬದುಕಿದ ರೀತಿ.... ಆಗಿನ ಸಮಾಜ... ಬಳಿಕ ಸಮಾಜದಲ್ಲಿ ಉಂಟಾದ ಗುಂಪುಗಳು.... ಆ ಗುಂಪುಗಳೊಳಗೆ ಕದನ... ಮನುಷ್ಯ ಮನುಷ್ಯನನ್ನು ಗುಲಾಮನನ್ನಾಗಿ ಮಾಡಿಕೊಂಡುದು.... ಬಲ ಉಳ್ಳವರು ಮತ್ತು ಬಲವಿಲ್ಲದವರು... ಹಸಿದವರು ಮತ್ತು ಕಸಿದವರು... ಮಣ್ಣಿಗಾಗಿ ಹೋರಾಟ... ಮಾನವ ವಿಶೇಷ ಜ್ಞಾನವನ್ನು ಸಂಪಾದಿಸಿದ ಬಗ.... ಯಂತ್ರಗಳ ರಚನೆ... ವರ್ಗ ಸಂಘರ್ಷ. ಮುಂದುವರಿದ ದೇಶದ ಜನ ವ್ಯಾಪಾರಕ್ಕೆಂದು ತಕ್ಕಡಿ ಹಿಡಿದು ಲೋಕದ ನಾನಾ ಕಡೆಗೆ ಹೋದುದು... ಅಲ್ಲಿ ಆ ದೇಶಗಳನ್ನು ಪದಾಕ್ರಾಂತ ಮಾಡಿದುದು... ಭಾರತ ಪರತಂತ್ರವಾದ ಕರ್ಮಕಥೆ.... ಎಡೆಬಿಡದೆ ಇಲ್ಲಿ ನಡೆದ ಸುಲಿಗೆ... ಕಳೆದ ಶತಮಾನದ ಕೊನೆಯಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಮರ... ಜನತೆಯ ಸೋಲು.... ಮತ್ತೆ ಕ್ರಾಂತಿಯ ಕಿಡಿಗಳು.... ಈ ಶತಮಾನದಲ್ಲಿ ರಷ್ಯಾ ದೇಶದಲ್ಲಿ ಜಗತ್ತಿನ ಆರರಲ್ಲೊಂದು ಭಾಗದಲ್ಲಿ ದುಡಿಯುವ ಕಾರ್ಮಿಕನೇ ಆಳುವ ಪ್ರಭುವಾದದ್ದು.... ವಿದೇಶೀಯ ಸುಲಿಗೆಗಾರರಿಗಿದಿರು ನಮ್ಮಲ್ಲೂ ಬೆಂಕಿ ಭುಗಿಲೆಂದುದು.... ರಾಷ್ಟ್ರೀಯ ಸಂಘಟನೆ.... ಜನತೆಯ ಮಹಾ ಹೋರಾಟಗಳು.</p> {{gap}}<p>ಹುಡುಗರಿಗೆ ಅದೆಲ್ಲವೂ ಅರ್ಥವಾಗಲಿಲ್ಲ. ಚಿರುಕಂಡ ಒಂದೊಂದು ಪದವನ್ನೂ ಆತುರದಿಂದ ಕೇಳಿದ. ಅರ್ಥವಾದುದು ಮನಸ್ಸಿಗೆ ಇಳಿಯಿತು. ಅರ್ಥವಾಗದುದು ನೆನಪಿನಲ್ಲಿ ಉಳಿಯಿತು. ಅಪ್ಪುವಿಗೆ ಹಾಗಲ್ಲ. ಆತನೆದುರು ಹರಿದುಹೋಗುತ್ತಿದ್ದುದೊಂದು ವಾಕ್‌ಪ್ರವಾಹ. ಒಮ್ಮೊಮ್ಮೆ ಪ್ರಶಾಂತ ಹೊನಲು ಮತ್ತೆ ಒಮ್ಮೊಮ್ಮೆ ಧುಮುಧುಮಿಸುವ ಜಲರಾಶಿ-ಎಲ್ಲವೂ ತೇಜಸ್ವಿನಿ ನದಿಯ ಹಾಗೆ, ಆತನಿಗೆ ಸ್ಪಷ್ಟವಾದುದೊಂದೇ ಜನರು ಕಷ್ಟದಲ್ಲಿದ್ದಾರೆ. ಜನರಿಗೆ</p> 4<noinclude></noinclude> k6loi8ut647s6suupzhyuvlpz8bmusp 322524 322523 2026-05-25T16:17:02Z Pragathi. BH 7585 322524 proofread-page text/x-wiki <noinclude><pagequality level="4" user="Pragathi. BH" />{{rh|center=|left=ಚಿರಸ್ಮರಣೆ|right=೪೯}}</noinclude> <p>ಧರಿಸಿದ್ದ ಒಬ್ಬರು, ಸುತ್ತುವರಿದಿದ್ದ ಜನರು ನಡುವೆ ನಿಂತು, ಭಾಷಣ ಕೊಡುವುದನ್ನು ಆತ ಕಂಡಿದ್ದ. ಅದೇನೋ ತಮಾಷೆ ಇರಬಹುದೆಂದು ಬಾಗಿ ಇಣಿಕಿ ನೋಡಿದ್ದ ತಂದೆಗೂ ಮಗನಿಗೂ ನಿರಾಶೆಯಾಗಿತ್ತು. ಪಂಡಿತರೂ ಈಗ ಎದ್ದು ನಿಂತು ಹಾಗೆಯೇ ಭಾಷಣ ಕೊಡುವರೇನೋ ಎಂದು ಚಿರುಕಂಡ ಕುತೂಹಲದಿಂದ ಇದಿರು ನೋಡಿದ.</p> <p>ಪಂಡಿತರು ಎದ್ದು ನಿಲ್ಲಲಿಲ್ಲ. ಕುಳಿತಲ್ಲೆ ಮಾತನಾಡಿದರು. ತೋಳು ಕೈ ಬೀಸಿ, ಮುಷ್ಟಿ ಬಿಗಿದು, ಅಂಗವಿನ್ಯಾಸಗಳನ್ನು ಮಾಡಲಿಲ್ಲ. ಸರಳವಾಗಿ ಒಬ್ಬರೊಡನೊಬ್ಬರು ಸಂಭಾಷಣೆ ನಡೆಸುವಂತೆ, ನಡುನಡುವೆ ತಡೆದು ನಿಂತು ಯಾವುದಾದರೂ ಒಂದಂಶವನ್ನು ಹೆಚ್ಚಾಗಿ ವಿವರಿಸುತ್ತ, ಮಾತುಗಳನ್ನಾಡಿದರು.<br /> {{gap}}ಲೋಕ ಸೃಷ್ಟಿಯಾಗಿ, ಈ ಲೋಕದಲ್ಲಿ ಮನುಷ್ಯ ಹುಟ್ಟಿದ ಕಥೆ, ಮಾನವರು ಆರಂಭದಲ್ಲಿ ಬದುಕಿದ ರೀತಿ.... ಆಗಿನ ಸಮಾಜ... ಬಳಿಕ ಸಮಾಜದಲ್ಲಿ ಉಂಟಾದ ಗುಂಪುಗಳು.... ಆ ಗುಂಪುಗಳೊಳಗೆ ಕದನ... ಮನುಷ್ಯ ಮನುಷ್ಯನನ್ನು ಗುಲಾಮನನ್ನಾಗಿ ಮಾಡಿಕೊಂಡುದು.... ಬಲ ಉಳ್ಳವರು ಮತ್ತು ಬಲವಿಲ್ಲದವರು... ಹಸಿದವರು ಮತ್ತು ಕಸಿದವರು... ಮಣ್ಣಿಗಾಗಿ ಹೋರಾಟ... ಮಾನವ ವಿಶೇಷ ಜ್ಞಾನವನ್ನು ಸಂಪಾದಿಸಿದ ಬಗ.... ಯಂತ್ರಗಳ ರಚನೆ... ವರ್ಗ ಸಂಘರ್ಷ. ಮುಂದುವರಿದ ದೇಶದ ಜನ ವ್ಯಾಪಾರಕ್ಕೆಂದು ತಕ್ಕಡಿ ಹಿಡಿದು ಲೋಕದ ನಾನಾ ಕಡೆಗೆ ಹೋದುದು... ಅಲ್ಲಿ ಆ ದೇಶಗಳನ್ನು ಪದಾಕ್ರಾಂತ ಮಾಡಿದುದು... ಭಾರತ ಪರತಂತ್ರವಾದ ಕರ್ಮಕಥೆ.... ಎಡೆಬಿಡದೆ ಇಲ್ಲಿ ನಡೆದ ಸುಲಿಗೆ... ಕಳೆದ ಶತಮಾನದ ಕೊನೆಯಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಮರ... ಜನತೆಯ ಸೋಲು.... ಮತ್ತೆ ಕ್ರಾಂತಿಯ ಕಿಡಿಗಳು.... ಈ ಶತಮಾನದಲ್ಲಿ ರಷ್ಯಾ ದೇಶದಲ್ಲಿ ಜಗತ್ತಿನ ಆರರಲ್ಲೊಂದು ಭಾಗದಲ್ಲಿ ದುಡಿಯುವ ಕಾರ್ಮಿಕನೇ ಆಳುವ ಪ್ರಭುವಾದದ್ದು.... ವಿದೇಶೀಯ ಸುಲಿಗೆಗಾರರಿಗಿದಿರು ನಮ್ಮಲ್ಲೂ ಬೆಂಕಿ ಭುಗಿಲೆಂದುದು.... ರಾಷ್ಟ್ರೀಯ ಸಂಘಟನೆ.... ಜನತೆಯ ಮಹಾ ಹೋರಾಟಗಳು.</p> {{gap}}ಹುಡುಗರಿಗೆ ಅದೆಲ್ಲವೂ ಅರ್ಥವಾಗಲಿಲ್ಲ. ಚಿರುಕಂಡ ಒಂದೊಂದು ಪದವನ್ನೂ ಆತುರದಿಂದ ಕೇಳಿದ. ಅರ್ಥವಾದುದು ಮನಸ್ಸಿಗೆ ಇಳಿಯಿತು. ಅರ್ಥವಾಗದುದು ನೆನಪಿನಲ್ಲಿ ಉಳಿಯಿತು. ಅಪ್ಪುವಿಗೆ ಹಾಗಲ್ಲ. ಆತನೆದುರು ಹರಿದುಹೋಗುತ್ತಿದ್ದುದೊಂದು ವಾಕ್‌ಪ್ರವಾಹ. ಒಮ್ಮೊಮ್ಮೆ ಪ್ರಶಾಂತ ಹೊನಲು ಮತ್ತೆ ಒಮ್ಮೊಮ್ಮೆ ಧುಮುಧುಮಿಸುವ ಜಲರಾಶಿ-ಎಲ್ಲವೂ ತೇಜಸ್ವಿನಿ ನದಿಯ ಹಾಗೆ, ಆತನಿಗೆ ಸ್ಪಷ್ಟವಾದುದೊಂದೇ ಜನರು ಕಷ್ಟದಲ್ಲಿದ್ದಾರೆ. ಜನರಿಗೆ</p> 4<noinclude></noinclude> 9o5xi73sq1613vo6t7yy3at54mmnevr 322525 322524 2026-05-25T16:17:29Z Pragathi. BH 7585 322525 proofread-page text/x-wiki <noinclude><pagequality level="4" user="Pragathi. BH" />{{rh|center=|left=ಚಿರಸ್ಮರಣೆ|right=೪೯}}</noinclude> <p>ಧರಿಸಿದ್ದ ಒಬ್ಬರು, ಸುತ್ತುವರಿದಿದ್ದ ಜನರು ನಡುವೆ ನಿಂತು, ಭಾಷಣ ಕೊಡುವುದನ್ನು ಆತ ಕಂಡಿದ್ದ. ಅದೇನೋ ತಮಾಷೆ ಇರಬಹುದೆಂದು ಬಾಗಿ ಇಣಿಕಿ ನೋಡಿದ್ದ ತಂದೆಗೂ ಮಗನಿಗೂ ನಿರಾಶೆಯಾಗಿತ್ತು. ಪಂಡಿತರೂ ಈಗ ಎದ್ದು ನಿಂತು ಹಾಗೆಯೇ ಭಾಷಣ ಕೊಡುವರೇನೋ ಎಂದು ಚಿರುಕಂಡ ಕುತೂಹಲದಿಂದ ಇದಿರು ನೋಡಿದ.</p> {{gap}}ಪಂಡಿತರು ಎದ್ದು ನಿಲ್ಲಲಿಲ್ಲ. ಕುಳಿತಲ್ಲೆ ಮಾತನಾಡಿದರು. ತೋಳು ಕೈ ಬೀಸಿ, ಮುಷ್ಟಿ ಬಿಗಿದು, ಅಂಗವಿನ್ಯಾಸಗಳನ್ನು ಮಾಡಲಿಲ್ಲ. ಸರಳವಾಗಿ ಒಬ್ಬರೊಡನೊಬ್ಬರು ಸಂಭಾಷಣೆ ನಡೆಸುವಂತೆ, ನಡುನಡುವೆ ತಡೆದು ನಿಂತು ಯಾವುದಾದರೂ ಒಂದಂಶವನ್ನು ಹೆಚ್ಚಾಗಿ ವಿವರಿಸುತ್ತ, ಮಾತುಗಳನ್ನಾಡಿದರು.<br /> {{gap}}ಲೋಕ ಸೃಷ್ಟಿಯಾಗಿ, ಈ ಲೋಕದಲ್ಲಿ ಮನುಷ್ಯ ಹುಟ್ಟಿದ ಕಥೆ, ಮಾನವರು ಆರಂಭದಲ್ಲಿ ಬದುಕಿದ ರೀತಿ.... ಆಗಿನ ಸಮಾಜ... ಬಳಿಕ ಸಮಾಜದಲ್ಲಿ ಉಂಟಾದ ಗುಂಪುಗಳು.... ಆ ಗುಂಪುಗಳೊಳಗೆ ಕದನ... ಮನುಷ್ಯ ಮನುಷ್ಯನನ್ನು ಗುಲಾಮನನ್ನಾಗಿ ಮಾಡಿಕೊಂಡುದು.... ಬಲ ಉಳ್ಳವರು ಮತ್ತು ಬಲವಿಲ್ಲದವರು... ಹಸಿದವರು ಮತ್ತು ಕಸಿದವರು... ಮಣ್ಣಿಗಾಗಿ ಹೋರಾಟ... ಮಾನವ ವಿಶೇಷ ಜ್ಞಾನವನ್ನು ಸಂಪಾದಿಸಿದ ಬಗ.... ಯಂತ್ರಗಳ ರಚನೆ... ವರ್ಗ ಸಂಘರ್ಷ. ಮುಂದುವರಿದ ದೇಶದ ಜನ ವ್ಯಾಪಾರಕ್ಕೆಂದು ತಕ್ಕಡಿ ಹಿಡಿದು ಲೋಕದ ನಾನಾ ಕಡೆಗೆ ಹೋದುದು... ಅಲ್ಲಿ ಆ ದೇಶಗಳನ್ನು ಪದಾಕ್ರಾಂತ ಮಾಡಿದುದು... ಭಾರತ ಪರತಂತ್ರವಾದ ಕರ್ಮಕಥೆ.... ಎಡೆಬಿಡದೆ ಇಲ್ಲಿ ನಡೆದ ಸುಲಿಗೆ... ಕಳೆದ ಶತಮಾನದ ಕೊನೆಯಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಮರ... ಜನತೆಯ ಸೋಲು.... ಮತ್ತೆ ಕ್ರಾಂತಿಯ ಕಿಡಿಗಳು.... ಈ ಶತಮಾನದಲ್ಲಿ ರಷ್ಯಾ ದೇಶದಲ್ಲಿ ಜಗತ್ತಿನ ಆರರಲ್ಲೊಂದು ಭಾಗದಲ್ಲಿ ದುಡಿಯುವ ಕಾರ್ಮಿಕನೇ ಆಳುವ ಪ್ರಭುವಾದದ್ದು.... ವಿದೇಶೀಯ ಸುಲಿಗೆಗಾರರಿಗಿದಿರು ನಮ್ಮಲ್ಲೂ ಬೆಂಕಿ ಭುಗಿಲೆಂದುದು.... ರಾಷ್ಟ್ರೀಯ ಸಂಘಟನೆ.... ಜನತೆಯ ಮಹಾ ಹೋರಾಟಗಳು.</p> {{gap}}ಹುಡುಗರಿಗೆ ಅದೆಲ್ಲವೂ ಅರ್ಥವಾಗಲಿಲ್ಲ. ಚಿರುಕಂಡ ಒಂದೊಂದು ಪದವನ್ನೂ ಆತುರದಿಂದ ಕೇಳಿದ. ಅರ್ಥವಾದುದು ಮನಸ್ಸಿಗೆ ಇಳಿಯಿತು. ಅರ್ಥವಾಗದುದು ನೆನಪಿನಲ್ಲಿ ಉಳಿಯಿತು. ಅಪ್ಪುವಿಗೆ ಹಾಗಲ್ಲ. ಆತನೆದುರು ಹರಿದುಹೋಗುತ್ತಿದ್ದುದೊಂದು ವಾಕ್‌ಪ್ರವಾಹ. ಒಮ್ಮೊಮ್ಮೆ ಪ್ರಶಾಂತ ಹೊನಲು ಮತ್ತೆ ಒಮ್ಮೊಮ್ಮೆ ಧುಮುಧುಮಿಸುವ ಜಲರಾಶಿ-ಎಲ್ಲವೂ ತೇಜಸ್ವಿನಿ ನದಿಯ ಹಾಗೆ, ಆತನಿಗೆ ಸ್ಪಷ್ಟವಾದುದೊಂದೇ ಜನರು ಕಷ್ಟದಲ್ಲಿದ್ದಾರೆ. ಜನರಿಗೆ</p> 4<noinclude></noinclude> oem2dy3rs81uts7icuz20atw60jc1m6 322526 322525 2026-05-25T16:17:58Z Pragathi. BH 7585 322526 proofread-page text/x-wiki <noinclude><pagequality level="4" user="Pragathi. BH" />{{rh|center=|left=ಚಿರಸ್ಮರಣೆ|right=೪೯}}</noinclude> <p>ಧರಿಸಿದ್ದ ಒಬ್ಬರು, ಸುತ್ತುವರಿದಿದ್ದ ಜನರು ನಡುವೆ ನಿಂತು, ಭಾಷಣ ಕೊಡುವುದನ್ನು ಆತ ಕಂಡಿದ್ದ. ಅದೇನೋ ತಮಾಷೆ ಇರಬಹುದೆಂದು ಬಾಗಿ ಇಣಿಕಿ ನೋಡಿದ್ದ ತಂದೆಗೂ ಮಗನಿಗೂ ನಿರಾಶೆಯಾಗಿತ್ತು. ಪಂಡಿತರೂ ಈಗ ಎದ್ದು ನಿಂತು ಹಾಗೆಯೇ ಭಾಷಣ ಕೊಡುವರೇನೋ ಎಂದು ಚಿರುಕಂಡ ಕುತೂಹಲದಿಂದ ಇದಿರು ನೋಡಿದ.</p> {{gap}}ಪಂಡಿತರು ಎದ್ದು ನಿಲ್ಲಲಿಲ್ಲ. ಕುಳಿತಲ್ಲೆ ಮಾತನಾಡಿದರು. ತೋಳು ಕೈ ಬೀಸಿ, ಮುಷ್ಟಿ ಬಿಗಿದು, ಅಂಗವಿನ್ಯಾಸಗಳನ್ನು ಮಾಡಲಿಲ್ಲ. ಸರಳವಾಗಿ ಒಬ್ಬರೊಡನೊಬ್ಬರು ಸಂಭಾಷಣೆ ನಡೆಸುವಂತೆ, ನಡುನಡುವೆ ತಡೆದು ನಿಂತು ಯಾವುದಾದರೂ ಒಂದಂಶವನ್ನು ಹೆಚ್ಚಾಗಿ ವಿವರಿಸುತ್ತ, ಮಾತುಗಳನ್ನಾಡಿದರು.<br /> {{gap}}ಲೋಕ ಸೃಷ್ಟಿಯಾಗಿ, ಈ ಲೋಕದಲ್ಲಿ ಮನುಷ್ಯ ಹುಟ್ಟಿದ ಕಥೆ, ಮಾನವರು ಆರಂಭದಲ್ಲಿ ಬದುಕಿದ ರೀತಿ.... ಆಗಿನ ಸಮಾಜ... ಬಳಿಕ ಸಮಾಜದಲ್ಲಿ ಉಂಟಾದ ಗುಂಪುಗಳು.... ಆ ಗುಂಪುಗಳೊಳಗೆ ಕದನ... ಮನುಷ್ಯ ಮನುಷ್ಯನನ್ನು ಗುಲಾಮನನ್ನಾಗಿ ಮಾಡಿಕೊಂಡುದು.... ಬಲ ಉಳ್ಳವರು ಮತ್ತು ಬಲವಿಲ್ಲದವರು... ಹಸಿದವರು ಮತ್ತು ಕಸಿದವರು... ಮಣ್ಣಿಗಾಗಿ ಹೋರಾಟ... ಮಾನವ ವಿಶೇಷ ಜ್ಞಾನವನ್ನು ಸಂಪಾದಿಸಿದ ಬಗ.... ಯಂತ್ರಗಳ ರಚನೆ... ವರ್ಗ ಸಂಘರ್ಷ. ಮುಂದುವರಿದ ದೇಶದ ಜನ ವ್ಯಾಪಾರಕ್ಕೆಂದು ತಕ್ಕಡಿ ಹಿಡಿದು ಲೋಕದ ನಾನಾ ಕಡೆಗೆ ಹೋದುದು... ಅಲ್ಲಿ ಆ ದೇಶಗಳನ್ನು ಪದಾಕ್ರಾಂತ ಮಾಡಿದುದು... ಭಾರತ ಪರತಂತ್ರವಾದ ಕರ್ಮಕಥೆ.... ಎಡೆಬಿಡದೆ ಇಲ್ಲಿ ನಡೆದ ಸುಲಿಗೆ... ಕಳೆದ ಶತಮಾನದ ಕೊನೆಯಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಮರ... ಜನತೆಯ ಸೋಲು.... ಮತ್ತೆ ಕ್ರಾಂತಿಯ ಕಿಡಿಗಳು.... ಈ ಶತಮಾನದಲ್ಲಿ ರಷ್ಯಾ ದೇಶದಲ್ಲಿ ಜಗತ್ತಿನ ಆರರಲ್ಲೊಂದು ಭಾಗದಲ್ಲಿ ದುಡಿಯುವ ಕಾರ್ಮಿಕನೇ ಆಳುವ ಪ್ರಭುವಾದದ್ದು.... ವಿದೇಶೀಯ ಸುಲಿಗೆಗಾರರಿಗಿದಿರು ನಮ್ಮಲ್ಲೂ ಬೆಂಕಿ ಭುಗಿಲೆಂದುದು.... ರಾಷ್ಟ್ರೀಯ ಸಂಘಟನೆ.... ಜನತೆಯ ಮಹಾ ಹೋರಾಟಗಳು.<br /> {{gap}}ಹುಡುಗರಿಗೆ ಅದೆಲ್ಲವೂ ಅರ್ಥವಾಗಲಿಲ್ಲ. ಚಿರುಕಂಡ ಒಂದೊಂದು ಪದವನ್ನೂ ಆತುರದಿಂದ ಕೇಳಿದ. ಅರ್ಥವಾದುದು ಮನಸ್ಸಿಗೆ ಇಳಿಯಿತು. ಅರ್ಥವಾಗದುದು ನೆನಪಿನಲ್ಲಿ ಉಳಿಯಿತು. ಅಪ್ಪುವಿಗೆ ಹಾಗಲ್ಲ. ಆತನೆದುರು ಹರಿದುಹೋಗುತ್ತಿದ್ದುದೊಂದು ವಾಕ್‌ಪ್ರವಾಹ. ಒಮ್ಮೊಮ್ಮೆ ಪ್ರಶಾಂತ ಹೊನಲು ಮತ್ತೆ ಒಮ್ಮೊಮ್ಮೆ ಧುಮುಧುಮಿಸುವ ಜಲರಾಶಿ-ಎಲ್ಲವೂ ತೇಜಸ್ವಿನಿ ನದಿಯ ಹಾಗೆ, ಆತನಿಗೆ ಸ್ಪಷ್ಟವಾದುದೊಂದೇ ಜನರು ಕಷ್ಟದಲ್ಲಿದ್ದಾರೆ. ಜನರಿಗೆ 4<noinclude></noinclude> 4be03tik3frud8gx17o7yvit6jout4p ಪುಟ:Chirasmarane-Niranjana.pdf/೫೦ 104 12869 322527 256342 2026-05-25T16:22:09Z Pragathi. BH 7585 /* Validated */ 322527 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=ಚಿರಸ್ಮರಣೆ|right=೫೧}} ಪಂಡಿತರು ಮಾಸ್ತರೊಡನೆ ಮೆಲ್ಲನೆ ಅಂದರು:</br> “ಆಗಲೇ ಘಂಟೆ ಐದಾಯ್ತು. ಆರೂವರೆಗೆಲ್ಲ ಕತ್ತಲಾಗದೆ ಅಲ್ವ?"</br> "ಹೌದು; ಹೊರಟ್ಟಿಡೋಣ ಇನ್ನು."</br> {{gap}}ಅಲ್ಲಿದ್ದವರಲ್ಲಿ ಒಂದು ತಂಡ ಹೊರಟುಹೋದಮೇಲೆ, ಪಂಡಿತರೂ ಉಳಿದವರೂ ಎದ್ದರು. ಗಂಡಸರು ಆಡುತ್ತಿದ್ದ ಮಾತುಗಳನ್ನೆಲ್ಲ ಅಡುಗೆಯ ಮೂಲೆಯಿಂದಲೇ ಕೇಳುತ್ತಿದ್ದ ಮನೆಯೊಡತಿ, ಚಹ ಮಾಡಲೆಂದು ಚಡಪಡಿಸಿದಳು. ಮಾತು ಅರ್ಥವಾಗದೆ ತನ್ನ ಬಳಿಯಲ್ಲಿ ನಿದ್ದೆ ಹೋಗಿದ್ದ ಮಗಳನ್ನು ಅವಳು ಎಬ್ಬಿಸಿದಳು. ಚಹ ತಡವಾಗುತ್ತದೆಂದು, "ಇಷ್ಟು ಹೊತ್ತು ಸುಮ್ಮಗೆ ಇದ್ದೆಯಲ್ಲ.... ಏನೂ ಬುದ್ದಿ ಇಲ್ಲ ನಿನಗೆ!” ಎಂದು ಕೇಳಪ್ಪನ್ ಕೂಗಾಡಿದ. <br /> {{gap}}ಪಂಡಿತರು ಮೃದುವಾದ ಸ್ವರದಲ್ಲಿ ಅಂದರು:</br> {{gap}}"ಈಗೇನೂ ಬೇಡೀಮ್ಮ, ಹೋಗ್ರ ರಾಮುಣ್ಣಿ ಹೋಟೆಲ್ಲಿ ಚಾ ಕುಡಿದು ಹೋಗ್ತವೆ ಅಲ್ದೆ, ಹೊತ್ತಾಯ್ತು ಬೇರೆ. ಇನ್ನೊಂದ್ಬಲ ಬರ್ತೇವಲ್ಲ, ಆಗ ಇವತ್ತಿಂದೂ ಸೇರಿಸಿ ಚಾ ಕೊಟ್ಟಿಡಿ."<br /> {{gap}}“ಸಕ್ರೆ ಚಾಪುಡಿ ಜಾಸ್ತಿ ಇದೇಂತಾದ್ರೆ ನಾನೇನೋ ನಾಳೇನೇ ಬತ್ತೇನಪ್ಪೋ! ಎಂದು ಧಾಂಡಿಗ ನುಡಿದು ಎಲ್ಲರೂ ನಗುವಂತೆ ಮಾಡಿದ.</br> {{gap}}ಅಂತೂ ಅವರು ಹೊರಟರು.</br> {{gap}}ಬೆಳಗ್ಗಿನ ಹೊತ್ತು ಮರದ ಕೆಳಗೆ ಕುಳಿತಿದ್ದ ಜಾಗಕ್ಕೆ ಬಂದಾಗ, ಅಪ್ಪು ಪಿಸುದನಿಯಲ್ಲಿ ಚಿರುಕಂಡನನ್ನು ಕೇಳಿದ:</br> {{gap}}“ಈಗ ಪಂಡಿತರು ಎಲ್ಲಿಗೆ ಹೋಗ್ತಾರೋ?"</br> {{gap}}ಚಿರುಕಂಡನಿಗೆ ರೇಗಿತು.</br> {{gap}}“ಶ್! ಹಾಗೆಲ್ಲ ಕೇಳ್ಳಾರು.”</br> {{gap}}“ನಮ್ಮ ಹಳ್ಳಿಗೆ ಬರೋದಾದ್ರೆ ನಾವೇ ಕರಕೊಂಡು ಹೋಗೃಹುದಲ್ಲಾಂತ."<br /> {{gap}}ಆ ಯೋಚನೆ ಅರ್ಥಪೂರ್ಣವಾಗಿತ್ತು. ಏನೂ ಹೇಳಲು ತೋಚದೆ ಚಿರುಕಂಡ ಸುಮ್ಮನೆ ನಿಂತ.</br> {{gap}}“ಮಾಸ್ತರು ಬಂದೇ ಬರ್ತಾರೆ. ಅವರನ್ನಾದರೂ ಕರಕೊಂಡು ಹೋಗೋಣ" ಎಂದು ಅಪ್ಪುವೇ ಮಾತು ಮುಂದುವರಿಸಿದ.<br /> {{gap}}“ಏನು, ಆ ಒಡಕು ದೋಣೀಲೇ?"<br /> {{gap}}"ಓ.... ಆ ಜವಾಬ್ದಾರಿ ನನಗೆ ಬಿಟ್ಟಿಡು. ನೀನು ಸರಿಯಾಗಿ ನೀರು ತೆಗೀತಾ ಇದ್ರೆ ಸಾಕು."</br><noinclude></noinclude> 8p9whgq559lr4yxmasyyh7bltomollr ಪುಟ:Chirasmarane-Niranjana.pdf/೫೧ 104 12870 322530 256335 2026-05-25T16:26:33Z Pragathi. BH 7585 /* Validated */ 322530 proofread-page text/x-wiki <noinclude><pagequality level="4" user="Pragathi. BH" />{{rh|center=|left=೫೨|right=ಚಿರಸ್ಮರಣೆ}}</noinclude>{{gap}}"ಬೇಡ!ಏನಾದರೂ ಆದರೆ? "<br /> {{gap}}ಅಪ್ಪುವಿಗೆ ರೇಗಿತು. ಆದರೆ ಮರುಕ್ಷಣವೆ, ಚಿರುಕಂಡನ ಮಾತಿನಲ್ಲಿ ಸತ್ಯಾಂಶ ಇದೆ ಎಂಬುದನ್ನು ಮನಗಂಡು, ಆತ ಸುಮ್ಮನಾದ. {{gap}}ಅಷ್ಟರಲ್ಲೆ ಮಾಸ್ತರು, ಹುಡುಗರ ಯೋಚನೆಗಳಿಗೆಲ್ಲ ಪೂರ್ಣ ವಿರಾಮ ಇತ್ತರು.<br /> {{gap}}"ನೋಡಿರೊ-ಎಡಕ್ಕೆ ಈ ಹಾದಿ ಹೋಗ್ತದಲ್ಲ?ಇದರಲ್ಲಿ ಹೊರಟ್ಠೋಗಿ,ಇದು ನೀವು ಬಂದ ದಾರಿಗೇ ಸೇರ್ತದೆ."<br /> {{gap}}ಅಪ್ಪು ಅಳುಕುತ್ತ ಕೇಳಿದ:"ನೀವು ಸರ್?" {{gap}}ಮಾಸ್ತರು ಸ್ವರ ತಗ್ಗಿಸಿ ಹೇಳಿದರು:<br /> {{gap}}"ನಾನು ಇವರ ಜತೆ ಈಗ ನೀಲೇಶ್ವರಕ್ಕೆ ಹೋಗ್ತೇನೆ. ಬೆಳಿಗ್ಗಿನ ರೈಲಲ್ಲಿ ಚರ್ವತ್ತೂರಿಗೆ ಬಂದು, ಅಲ್ಲಿಂದ ನಡ್ಕೊಂಡು ಬರ್ತೆನೆ. ಹೊತ್ತಾಗ್ತಾ ಬಂತು.ನೀವಿನ್ನು ಹೊರಡೀಪ್ಪ.<br /> {{gap}}"ಅವರನ್ನು ಬಿಟ್ಟು, ಹೊರಡಲೇಬೇಕಾದುದು ಅನಿವಾರ್ಯವಾದಾಗ ಹುಡುಗರಿಗೆ ದುಃಖವೆನಿಸಿತು.ಪಂಡಿತರು ಹುಡುಗರ ಅಂಗೈಗಳನ್ನು ಹಿಸುಕಿ, ಬೆನ್ನು ತಟ್ಟಿ, ಮುಗುಳುನಕ್ಕರು. ಪ್ರಭು ದೂರದಲ್ಲೆ ನಿಂತು, ತಲೆಬಾಗಿ, ಹುಡುಗರ ವಂದನೆ ಸ್ವೀಕರಿಸಿದ. ಧಾಂಡಿಗ ಗೊಗ್ಗರ ಧ್ವನಿಯಲ್ಲಿ ಹೇಳಿದ:<br /> {{gap}}"ನನ್ನನ್ನು ಮರೀಬೇಡ್ರೊ ಮರಿಗಳ್ರಾ,ಒಂದ್ಸಲ ಕಯ್ಯೂರಿಗೆಸ್ ಬಂದು ನಿಮ್ಮನ್ನೆಲ್ಲ ನೋಡ್ತೇನೆ." {{gap}}ಆಮೇಲೂ ಹುಡುಗರು ಹೋಗದೆ ನಿಂತಾಗ, ಮಾಸ್ತರೆಂದರು: <br />"ಹೋಗೀಪ್ಪಾ.... ಇಲ್ಲಿಗೆ ಬಂದದ್ದು ಯಾರಿಗೂ ಹೇಳ್ಬೇಡಿ."<br /> {{gap}}ಅದು ಅನಗತ್ಯ ಎಚ್ಚರಕೆ ಎಂದು ಗೊತ್ತಿದ್ದರೂ, ಹುಡುಗರು ಪ್ರತಿಭಟಿಸಲಿಲ್ಲ. 'ಹೇಳೋದಿಲ್ಲ' ಎನ್ನುವಂತೆ ತಲೆ ಅಲ್ಲಾಡಿಸಿದರು.<br /> {{gap}}ತಿರುತಿರುಗಿ ನೋಡುತ್ತ ಹುಡುಗರು ಹೊರಟಾಗ ಮಾಸ್ತರು ನುಡಿದರು:<br /> {{gap}}"ಹೊಳೆ ದಾಟುವಾಗ ಹುಷಾರಿ.ಒಡಕು ದೋಣಿ ಬೇರೆ.ನೀರು ಸರಿಯಾಗಿ ಎತ್ತುತ್ತ ಇರಪ್ಪ ಚಿರುಕಂಡ. ಅಪ್ಪು,ಕತ್ತಲಾಗೋಕ್ಮುಂಚೆ ಆಚೆ ದಡ ಸೇರ್ಬೆಕು ಕಣೋ."<br /> {{gap}}ಹುಡುಗರು ನಡಿಗೆಯನ್ನು ತೀವ್ರಗೊಳಿಸುತ್ತ "ಹೂಂ" ಅಂದರು.<noinclude></noinclude> i9kkvaz817nolnq5cyvqk8n00imhvaq ಪುಟ:Chirasmarane-Niranjana.pdf/೫೨ 104 12871 322531 256376 2026-05-25T16:31:27Z Pragathi. BH 7585 /* Validated */ 322531 proofread-page text/x-wiki <noinclude><pagequality level="4" user="Pragathi. BH" /></noinclude>{{rh|centre=೪}} ತೇಜಸ್ವಿನಿ ನದಿಯನ್ನು ದಾಟಿ ಹುಡುಗರು ಆಚೆಯ ದಡ ಸಮೀಪಿಸಿದಾಗ ಇನ್ನೂ ಕತ್ತಲಾಗಿರಲಿಲ್ಲ.</br> {{gap}}"ಆ ಮುದುಕಪ್ಪನ ಕೈಯಿಂದ ಹ್ಯಾಗಪ್ಪಾ ತಪ್ಪಿಸ್ಕೊಳ್ಳೋದು?" </br>ಎಂದು ಅಪ್ಪು, ಚಿರುಕಂಡನಿಗೆ ತಮ್ಮ ಮುಂದಿದ್ದ ಸಮಸ್ಯೆಯ ನೆನಪು ಹುಟ್ಟಿಸಿದ.</br> {{gap}}"ಮುದುಕಪ್ಪನ ಮಗ-ಸೊಸೆ ಬೇರೆ ಮನೆಗೆ ಬಂದಿರ್ತಾರೆ ಈಗ."</br> {{gap}}ಎಂದು ಚಿರುಕಂಡ ಸಮಸ್ಯೆಯ ಚಿತ್ರವನ್ನು ಪೂರ್ಣಗೊಳಿಸಿದ. </br>{{gap}} ಇಬ್ಬರಿಗೂ ಹೊಳೆದುದೊಂದೇ ಉಪಾಯ-ಕತ್ತಲಾಗುವ ತನಕ ದಡ ಸೇರದೆ ಇರುವುದು. ಅಪ್ಪು, ಮೇಲಿನ ತೋಟವಿದ್ದ ಜಾಗದಿಂದಲೂ ಸ್ವಲ್ಪ ಮೇಲಕ್ಕೆ ದೋಣಿಯನ್ನು ತಿರುಗಿಸಿದ. ತೋಟದ ನಡುವೆ ಇದ್ದ ಗುಡಿಸಿಲಿನ ಹೊರಗೆ ಹೆಂಗಸೊಬ್ಬಳು ನಿಂತು ನದಿಯತ್ತ ನೋಡುತ್ತಿದ್ದುದು ಚಿರುಕಂಡನಿಗೆ ಕಂಡಿತು. ಆತ ಅಪ್ಪುವನ್ನು ಉದ್ದೇಶಿಸಿ ಹೇಳಿದ:<br /> {{gap}}"ಆ ಮುದುಕಪ್ಪನ ಸೊಸೆ ನಮ್ಮನ್ನೇ ನೋಡ್ತಿದಾಳೆ ಕಣೊ." </br>{{gap}}"ಪಾಪ! ನೋಡದೇನು ಮಾಡಿಯಾಳು? ಅಂತೂ ಮೀನು ಬರ್ತದೇಂತ ಮೆಟ್ಟುಗತ್ತಿ ಹಿಡಿಕೊಂಡು ಸಿದ್ದವಾಗಿದ್ದಾಳೆ-ಅನ್ನು!"</br> {{gap}}ಮೇಲುಗಡೆ ದಡ ಸಮೀಪಿಸಿ ಅಲ್ಲೇ ಸ್ವಲ್ಪ ಹೊತ್ತು ಅವರು ನಿಂತರು.ಕೆಲ ನಿಮಿಷಗಳಲ್ಲೇ ಕತ್ತಲಾಯಿತು.ಬಳಿಕ ಮೆಲ್ಲನೆ ದಂಡೆಯುದ್ದಕ್ಕೂ ಕೆಳಗೆ ಬಂದು,ತೋಟದ ಬಳಿ ಸದ್ದಿಲ್ಲದೆ ನೆಲ ಸೇರಿದರು.ದೋಣಿಯನ್ನು ಇಬ್ಬರೂ ಎತ್ತಿ ದಡದ ಮೇಲಿರಿಸಿದರು. <br /> {{gap}}ಹುಡುಗರು ಎಷ್ಟು ಎಚ್ಚರವಹಿಸಿದರೂ ಸ್ವಲ್ಪ ಸದ್ದಾಯಿತು. ಆಗ ಗುಡಿಸಲಿನ ಹೊರಗೆ ಕಂದೀಲಿನೊಡನೆ ನಿಂತು, ಮುದುಕಪ್ಪನ ಮಗ ಗಟ್ಟಿಯಾಗಿ ಹೇಳಿದ:<br /> {{gap}}"ಯಾರೋ ಅದು? ಅಪ್ಪುವೇನೋ? ದೀಪ ತರಲಾ? "<br /> {{gap}}'ಒಳ್ಳೆಯ ಗಂಡಾಂತರ ಇದು' ಎಂದು ಹುಡುಗರ ಎದೆಗುಂಡಿಗೆ ಡವಡವನೆ ಹೊಡೆದುಕೊಂಡಿತು.ಅವರು ಉಸಿರು ಬಿಗಿ ಹಿಡಿದು ಅತ್ತಿತ್ತ ಚಲಿಸದೆ ಅಲ್ಲೇ ನಿಂತರು .<br /> {{gap}}ಎರಡು ನಿಮಿಷ ಹಾಗೆಯೇ ನಿಂತಿದ್ದು,ಉತ್ತರ ಬರದಿದ್ದುದನ್ನು ಕಂಡು,ದೋಣಿಯ ಒಡೆಯ ಗುಡಿಸಲಿನೂಳಕ್ಕೆ ಕಂದೀಲಿನೊಡನೆ ಹಿಂತಿರುಗಿದ.<noinclude></noinclude> hcwb50fe234quh7ms3a1t567wguag5v ಪುಟ:Chirasmarane-Niranjana.pdf/೫೩ 104 12872 322532 256667 2026-05-25T16:31:59Z Pragathi. BH 7585 /* Validated */ 322532 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=೫೪|right=ಚಿರಸ್ಮರಣೆ}} {{gap}}ಹುಣ್ಣಿಮೆ ಕಳೆದು ನಾಲ್ಕು ದಿನಗಳಾಗಿದ್ದುವು. ಚಂದಿರ ಮೂಡಲು ಇನ್ನೂ ಹೊತ್ತಿತ್ತು. ಆದರಿಂದ ಸಮಾಧಾನಪಡುತ್ತ, ಆ ಕತ್ತಲೆಯಲ್ಲಿ ಹಾದಿ ಹುಡುಕಿ ಕೊಂಡು, ಹುಡುಗರು ತಮ್ಮ ಮನೆಗಳ ಕಡೆಗೆ ಬೇಗಬೇಗನೆ ನಡೆದರು.</br> {{gap}}ಅಪ್ಪುವಿನ ಗುಡಿಸಲು ಹತ್ತಿರ ಬಂದಂತೆ ಚಿರುಕಂಡನೆಂದ:</br> {{gap}}"ಎಲ್ಲಿಗೆ ಹೋಗಿದ್ದೆ ಅಂತ ಕೇಳಿದ್ರೆ ಏನ್ಹೇಳ್ತೀಯಾ ಮನೇಲಿ?"</br> {{gap}}'ಅದೆಲ್ಲಾ ನೋಡ್ಕೋತೇನೆ ಬಿಡು' ಎಂದು ಹೇಳಲು ಬಾಯಿ ತೆರೆದಿದ್ದ ಅಪ್ಪು ತಡೆದು ನಿಂತು ಕೇಳಿದ:</br> {{gap}}"ಏನಪ್ಪ ಹೇಳೋದು?"</br> {{gap}}"ಮಾಸ್ತರು ಸಿಕ್ಕಿದ್ರು; ಅದೇನೋ ಶಾಲೆಯ ಸಾಮಾನು ಚರ್ವತ್ತೂರಿನಿಂದ ತರೋದಿತ್ತು; ಅವರ ಜತೇಲಿ ಹೋದೆವೂಂತ ಹೇಳು. ನಾಳೆ ಬೆಳಿಗ್ಗೆ ಮಾಸ್ತರು ಬಂದ ತಕ್ಷಣ, ಹೀಗೆ ಹೇಳಿದೇವೇಂತ ತಿಳಿಸಿದರಾಯ್ತು."</br> {{gap}}"ಹೂ೦... ನಾಳೆ ನನಗೆಲ್ಲಿ ಸಿಗ್ತೀಯಾ?"</br> {{gap}}"ನೀನು ಹೊಲಕ್ಕೆ ಹೋಗ್ತೀಯೇನು?"</br> {{gap}}"ಹೌದು."</br> {{gap}}"ಸರಿ, ಅಲ್ಲಿಗೇ ಬರ್ರ್ತೆನೇ. ನಿನ್ನೆ ಪಂಡಿತರು ಹೇಳಿದ್ರಲ್ಲ-ಅದನ್ನು ನಾವಿಬ್ಬರೂ ಚರ್ಚೆ ಮಾಡ್ಬೇಕು."</br> {{gap}}ಚಿರುಕಂಡನ ಆ ಮಾತು ಪಿಸುದನಿಯಲ್ಲಿ ಬಂತು.</br> {{gap}}"ಆಗಲಿ" ಎಂದು ಹೇಳಿ ಅಪ್ಪು, ತನ್ನ ಗುಡಿಸಲಿನ ಕಡೆಗೆ ತಿರುಗಿದ.</br> {{gap}}ಅಲ್ಲಿ ಬಾಗಿಲು ತೆರೆದವಳು ಅವನ ಅಜ್ಜಿ. ಬಡಕಲು ದೇಹ, ನೆರಿಗೆ ಕಟ್ಟಿದ ಮುಖ. ತಾಳೆಯ ಗರಿಯನ್ನು ಉರುಟಾದ ಓಲೆಮಾಡಿ ಇರಿಸಿದ್ದ ಕಿವಿಯ ತೂತುಗಳು ದೊಡ್ದದಾಗಿ ಕೆಳಕ್ಕೆ ಜೋತುಕೊಂಡಿದ್ದುವು.</br> {{gap}}ತಾನು ನಿರೀಕ್ಷಿಸಿದ್ದ ಬಯ್ಗಳನ್ನು ತಪ್ಪಿಸುವುದಕ್ಕಾಗಿ ಅಪ್ಪುವೇ ಮೊದಲು ಕೇಳಿದ:</br> {{gap}}"ಅರೇ! ಯಾವಾಗ್ಬಂದೆ ಅಜ್ಜಿ?ನೀನು ಇಷ್ಟು ಬೇಗ ಬರ್ರ್ತೀಂತ ನನಗೆ ಗೊತ್ತೇ ಇರ್ರ್ಲಿಲ್ಲ."</br> {{gap}}ನಾಲ್ಕು ದಿನಗಳಿಂದ ತಾನು ಕಂಡಿರದೆ ಇದ್ದ ಮೊಮ್ಮಗನನ್ನು ತುಂಬು ದೃಷ್ಟಿಯಿಂದ ನೋಡುತ್ತ ಅಜ್ಜಿಯೆಂದಳು:</br> {{gap}}"ಮಧಾಹ್ನವೇ ಬಂದೆನಪ್ಪ. ನಿನ್ನ ಅವತಾರ ಇದೇನು?ಎಲ್ಲಿಗೆ ಹೋಗಿದ್ದೆ?ನಾನು ಇಲ್ದೇ ಇದ್ರೆ ನಿನಗೆ ಹೇಳೋರು ಕೇಳೋರು ಯಾರೂ ಇಲ್ಲಾಂತ ತಿಳಕೊಂಡ್ಯೋ?'<noinclude></noinclude> 24jcxwe0fhjms69rvk906zokts36uy2 ಪುಟ:Chirasmarane-Niranjana.pdf/೫೪ 104 12873 322533 256668 2026-05-25T16:32:14Z Pragathi. BH 7585 /* Validated */ 322533 proofread-page text/x-wiki <noinclude><pagequality level="4" user="Pragathi. BH" /></noinclude>{{rh|left=ಚಿರಸ್ಮರಣೆ|right=೫೫}} {{gap}}ಅಪ್ಪು,ತಾನು ಮಲಗುವ ಮೂಲೆಗೆ ದೃಷ್ಟಿ ಹರಿಸಿದ. ಅವನ ತಮ್ಮಂದಿರು ಆಗಲೆ ಅಲ್ಲಿ ನಿದ್ದೆ ಹೋಗಿದ್ದರು.ಇನ್ನೊಂದು ಮೂಲೆಯಲ್ಲಿ ತಣ್ಣನೆಯ ನೆಲದ ಮೇಲೆ ಬರಿಮೈ ಚಾಚಿ ಅಪ್ಪುವಿನ ತಂದೆ ಮಲಗಿದ್ದ.ಆತ ಕುಡಿದು ಬಂದಿರಲಿಲ್ಲ ಎಂಬುದು ನೋಡಿದೊಡನೆಯೆ ಅಪ್ಪುವಿಗೆ ಗೊತ್ತಾಯಿತು.ಕುಡಿಯದೆ ಇದ್ದ ದಿನಗಳಲ್ಲಿ ಮಾತ್ರ ಹಾಗೆ ಆತ ಊಟಕ್ಕೆ ಮುಂಚೆ ನೆಲದ ಮೇಲೆ ಮಲಗಿ ದಣಿವಾರಿಸಿಕೊಳ್ಳುವ ಪದ್ಧತಿ. ಆ ದಿನವಷ್ಟೇ ಅಜ್ಜಿ ಬಂದುದರಿಂದ ತನಗೆ ಹೊಡೆತ ತಪ್ಪಿತೆಂಬುದೂ ಅಪ್ಪುವಿಗೆ ಗೊತ್ತಿತ್ತು.</br> {{gap}}ಮಗ ಬಂದುದನ್ನು ಕಂಡೊಡನೆಯೆ ಮತ್ತೊಮ್ಮೆ ತಾಯಿ ಹೇಳಿದಳು:</br> {{gap}}"ಬೆಳಗಾಗ್ಬೇಕಾದರೆ ಆ ಚಿರುಕಂಡ ಬಂದು ಕರಕೊಂಡು ಹೋದ. ಅದೇನು ಕಥೆಯೋ,ಏನು ಕೆಲಸವೋ..."</br> {{gap}}"ಎಲ್ಲೋ ಹೋಗಿದ್ದೆ?"</br> {{gap}}ಎಂದು ಕೇಳಿದ ಅಪ್ಪುವಿನ ತಂದೆ, 'ಏಟು ತಪ್ಪಿದರೂ ಮಾತು ತಪ್ಪೋಲ್ಲ'ಎನ್ನುವುದನ್ನು ತನ್ನ ನೋಟದಲ್ಲೆ ಸ್ಪಷ್ಟಗೊಳಿಸುತ್ತ.</br> {{gap}}ಅಪ್ಪು ತನ್ನ ಅಂಗಿ ತೆಗೆದು ಗೂಟಕ್ಕೆ ನೇತು ಹಾಕಿದ. ಅದರ ಕೆಳಗೇ ನೆಲದ ಮೇಲೆ ಉರಿಯುತ್ತಿದ್ದ ದೀಪವನ್ನು ಹೊಗೆ ಅಂಗಿಗೆ ತಗಲದಂತೆ, ಬದಿಗೆ ಸರಿಸಿದ.</br> {{gap}}ಪ್ರಶ್ನೆಗೆ ಉತ್ತರ ಬರಲಿಲ್ಲವೆಂದು ಅಪ್ಪುವಿನ ತಂದೆಗೆ ರೇಗಿತು.</br> {{gap}}"ಅದು ಯಾವ ಸುಡುಗಾಡಿಗೊ ಹೋಗಿದ್ದೆ ನೀನು?ಎಲ್ಲಿ ಪೋಲಿ ಅಲೀತಿದ್ದೆ?"</br> {{gap}}ಪೋಲಿ ಅಲೆಯುವ ಮಾತಿನಿಂದ ಅಪ್ಪುವಿಗೆ ಅವಮಾನವಾಯಿತು.ಆತ ಬಾಯಿ ತೆರೆದ.ಚಿರುಕಂಡ ಹೇಳಿದುದನ್ನೇ ಏನೂ ತಡವರಿಸದೆ ತಿಳಿಸಿದ.</br> {{gap}}"ಹುಂ!"</br> {{gap}}ಎಂದು ಅವನ ತಂದೆ ಹುಂಕರಿಸಿದ, ಮಾಸ್ತರರ ಹೆಸರು ಹೇಳಿದ್ದರಿಂದ ಆತ ಸುಮ್ಮನಾದನೆಂದು ಅಪ್ಪುವಿಗೆ ಸ್ಪಷ್ಟವಾಯಿತು.</br> {{gap}}ಅಜ್ಜಿಗೂ ಮಾಸ್ತರೆಂದರೆ ಇಷ್ಟ ಒಂದೆರಡು ಸಾರೆ ಆಕೆ ಹಗಲು ಹೊತ್ತು ಅಂಗಳದಲ್ಲಿ, ತಾಳೆಯ ಗರಿಯಿಂದ ತಡಿಕೆ ಹೆಣೆಯುತ್ತ ಕುಳಿತಿದಾಗ, ಆ ಹಾದಿಯಾಗಿ ಬಂದ ಮಾಸ್ತರು ತಡೆದು ನಿಂತು ಆಕೆಯನ್ನು ಮಾತಾಡಿಸಿದ್ದರು.ತುಂಬಾ ವಿನಯಸಂಪನ್ನ, "ಚಾ ಕುಡಿದು ಹೋಗಿ" ಎಂದರೂ ಬೇಡ ಎಂದಿದ್ದರು.</br> {{gap}}ಆ ಮಾಸ್ತರರ ಮಾತು ಬಂತೆಂದು ಅಜ್ಜಿ ಕೇಳಿದಳು;</br> {{gap}}"ಅವರಿನ್ನೂ ಸ್ವಂತ ಅಡುಗೆ ಮಾಡ್ಕೊಂಡೆ ಇದ್ದಾರಾ?"</br> {{gap}}"ಹೂ೦.. ಇನ್ಯಾರು ಮಾಡ್ತಾರೇಂತ ತಿಳ್ಕೊಂಡೆ?"</br><noinclude></noinclude> 4c85jq1b68w38fgkb9gwpwwxkdrbwfs ಪುಟ:Chirasmarane-Niranjana.pdf/೧೨೪ 104 12943 322534 65602 2026-05-26T01:54:31Z Shreesha Sharma 7840 /* Proofread */ 322534 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಚಿರಸ್ಮರಣೆ |right=೧೨೫ }} {{gap}}"ತಪ್ಪೇನೂ ಅಲ್ಲ. ಅದರೂ ಹೆಚ್ಚು ಕಡಿಮೆ ಆಗಿದ್ದರೆ, ಆ ಸಣ್ಣ ಕಾರಣದಿಂದ ನಮಗೆಲ್ಲರಿಗೂ ಗಂಡಾಂತರ ಒದಗ್ತಿತ್ತು." {{gap}}ಕ್ರಾಂತಿಕಾರಿ ಎಂದು ತಾನು ಭಾವಿಸಿದ್ದ ಈ ಚಿರುಕಂಡ ಅಂಜುಗುಳಿಯೇ-- ಎಂಬ ಶಂಕೆ ಅಪ್ಪುವಿನ ಮನಸ್ಸನ್ನು ಹೊಕ್ಕು, ಕಣ್ಣುಗಳ ಕಾವು ಅರಿ, ಅವು ತಣ್ಣಗಾದುವು. ಆತ ಕೇಳಿದ:"ಅಂದರೆ?" {{gap}}"ರಾತ್ರೆ ಶಾಲೆ ನಡೆಸೋದು ನಂಬಿಯಾರಿಗೆ ಏನೇನೂ ಇಷ್ಟವಿಲ್ಲ. ಏನಾದರೂ ನೆಪ ಸಿಕ್ಕಿದ್ಕೂಡ್ಲೆ ಅವರು ಇದನ್ನು ನಿಲ್ಲಿಸ್ಬಹುದೂಂತ ಮಾಸ್ತರು ಹೇಳಿದ್ರು. ರಾತ್ರೆ ಕಣ್ಣನೂ ನೀನೂ ಸಿಕ್ಕಿಬಿದ್ದಿದ್ರೆ ನಂಬಿಯಾರಿಗೆ ಎಷ್ಟು ಸಂತೋಷವಾಗ್ತಿತ್ತೊ! ಹೀಗೆ ಈ ಸಣ್ಣ ವಿಷಯಕ್ಕೇ ದೊಡ್ಡ ಹೊಡೆತ ಬಿದ್ದರೆ, ಬೇರೆ ಕೆಲಸಕ್ಕೆಲ್ಲ ಅಡ್ಡಿಯಾಗ್ತಿತ್ತು. ಹೌದಾ?." {{gap}}ಅಪ್ಪುವಿನ ಕಣ್ಣುಗಳು ಮತ್ತೇ ಚಲಿಸಿದುವು: ಚಿರುಕಂಡ ಅಂಜುಗುಳಿಯಾಗುವುದು ಎಂದಿಗೂ ಸಾಧ್ಯವಿರಲಿಲ್ಲ. ಆತ ವಿಚಾರವಂತ, ದೂರಾಲೋಚನೆಯುಳ್ಳವನು. ಅದೊಂದು ವಿಷಯ ತನಗೆ ಹೊಳೆದೇ ಇರಲಿಲ್ಲ... {{gap}}ಅಪ್ಪು ನುಡಿದ: {{gap}}"ನೀನು ಹೇಳೋದು ನಿಜ. ಆದರೆ ಆತ ಬದುಕಿದ್ದಾನೆ. ಈಗೇನೂ ಆಗಲಾರದು, ಅಲ್ವ? ಅಲ್ಧೆ, ನಾವು ಯಾರು ಅನ್ನೋದೂ ಅವನಿಗೆ ಗೊತ್ತಾಗಿರೋದಿಲ್ಲ." {{gap}}"ಹೂಂ. ಈಗ ಅಪಾಯ ಕಮ್ಮಿ. ಆದರೂ ನಂಬಿಯಾರಿಗೆ ಕಣ್ಣನ ಮೇಲೆ ಸಂಶಯ ಬಂದೇಬರ್ರ್ತದೆ. ಅವರು ಬೇಟೆಯಾಡೋಕೇಂತ ಗುರುತು ಹಾಕಿದ್ದ ಮಿಕ, ದೇವಕಿ. ಈಗ ಆಕೆ ಕೈಗೆ ಸಿಗೋದಿಲ್ಲಾಂತ ಆದ್ಮೇಲೆ, ಸುಮ್ನಿರ್ರ್ತಾರಾ?" {{gap}}ಚಿರುಕಂಡನ ಆ ಎಣಿಕೆಯೂ ಅಪ್ಪುವಿಗೆ ನಿಜವಾಗಿ ತೋರಿತು. ನೆಮ್ಮದಿ ನೀಡುವ ಉತ್ತರ ತೋರದೆ ಅವನ ಮನಸ್ಸು ಕಸಿವಿಸಿಗೊಂಡಿತು. {{gap}}....ಶಾಲೆ ಸೇರಿ, ಅದರ ಹಿಂಭಾಗದಲ್ಲಿದ್ದ ಮಾಸ್ತರ ಕೊಠಡಿಯತ್ತ ಅವರು ನಡೆದರು. ಆದರೆ ಕಣ್ಣ ಅಲ್ಲಿಗೆ ಬಂದಿದ್ದ. ಹಾಸಿಗೆ ಇನ್ನೂ ಮಡಚಿಯೇ ಇರಲಿಲ್ಲ. ಅದರ ಮೇಲೆಯೇ ಕುಳಿತು ಬೀಡಿ ಸೇದುತ್ತ ಕಣ್ಣನ ಮಾತುಗಳಿಗೆ ಮಾಸ್ತರು ಕಿವಿಗೊಟ್ಟಹಾಗಿತ್ತು. ಹುಡುಗರು ಒಳಕ್ಕೆ ಬಂದಾಗ ಅವರತ್ತ ನೋಡಿ, ಅಪ್ಪುವನ್ನು ದಿಟ್ಟಿಸಿ, ಮಾಸ್ತರು ಮುಗುಳು ನಕ್ಕರು. ಗಾಬರಿ ತಾಂಡವವಾಡದೆ ಮಾಸ್ತರ ತುಟಿಗಳ ಮೇಲೆ ನಗೆ ಕುಣಿದುದನ್ನು ಕಂಡು, ಅಪ್ಪುವಿಗೆ ಸಮಾಧಾನವಾಯಿತು. ಅವರಿಬ್ಬರೂ ಹಾಸಿಗೆಯ ಬಳಿ ನೆಲದ ಮೇಲೆ ಕುಳಿತರು. ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ. <noinclude></noinclude> 27uewturuet3lwr1f96oj4tebdc77c1 322536 322534 2026-05-26T02:00:57Z Pragathi. BH 7585 /* Validated */ 322536 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಚಿರಸ್ಮರಣೆ |right=೧೨೫ }} {{gap}}"ತಪ್ಪೇನೂ ಅಲ್ಲ. ಅದರೂ ಹೆಚ್ಚು ಕಡಿಮೆ ಆಗಿದ್ದರೆ, ಆ ಸಣ್ಣ ಕಾರಣದಿಂದ ನಮಗೆಲ್ಲರಿಗೂ ಗಂಡಾಂತರ ಒದಗ್ತಿತ್ತು." {{gap}}ಕ್ರಾಂತಿಕಾರಿ ಎಂದು ತಾನು ಭಾವಿಸಿದ್ದ ಈ ಚಿರುಕಂಡ ಅಂಜುಗುಳಿಯೇ-- ಎಂಬ ಶಂಕೆ ಅಪ್ಪುವಿನ ಮನಸ್ಸನ್ನು ಹೊಕ್ಕು, ಕಣ್ಣುಗಳ ಕಾವು ಅರಿ, ಅವು ತಣ್ಣಗಾದುವು. ಆತ ಕೇಳಿದ:"ಅಂದರೆ?" {{gap}}"ರಾತ್ರೆ ಶಾಲೆ ನಡೆಸೋದು ನಂಬಿಯಾರಿಗೆ ಏನೇನೂ ಇಷ್ಟವಿಲ್ಲ. ಏನಾದರೂ ನೆಪ ಸಿಕ್ಕಿದ್ಕೂಡ್ಲೆ ಅವರು ಇದನ್ನು ನಿಲ್ಲಿಸ್ಬಹುದೂಂತ ಮಾಸ್ತರು ಹೇಳಿದ್ರು. ರಾತ್ರೆ ಕಣ್ಣನೂ ನೀನೂ ಸಿಕ್ಕಿಬಿದ್ದಿದ್ರೆ ನಂಬಿಯಾರಿಗೆ ಎಷ್ಟು ಸಂತೋಷವಾಗ್ತಿತ್ತೊ! ಹೀಗೆ ಈ ಸಣ್ಣ ವಿಷಯಕ್ಕೇ ದೊಡ್ಡ ಹೊಡೆತ ಬಿದ್ದರೆ, ಬೇರೆ ಕೆಲಸಕ್ಕೆಲ್ಲ ಅಡ್ಡಿಯಾಗ್ತಿತ್ತು. ಹೌದಾ?." {{gap}}ಅಪ್ಪುವಿನ ಕಣ್ಣುಗಳು ಮತ್ತೇ ಚಲಿಸಿದುವು: ಚಿರುಕಂಡ ಅಂಜುಗುಳಿಯಾಗುವುದು ಎಂದಿಗೂ ಸಾಧ್ಯವಿರಲಿಲ್ಲ. ಆತ ವಿಚಾರವಂತ, ದೂರಾಲೋಚನೆಯುಳ್ಳವನು. ಅದೊಂದು ವಿಷಯ ತನಗೆ ಹೊಳೆದೇ ಇರಲಿಲ್ಲ... {{gap}}ಅಪ್ಪು ನುಡಿದ: {{gap}}"ನೀನು ಹೇಳೋದು ನಿಜ. ಆದರೆ ಆತ ಬದುಕಿದ್ದಾನೆ. ಈಗೇನೂ ಆಗಲಾರದು, ಅಲ್ವ? ಅಲ್ಧೆ, ನಾವು ಯಾರು ಅನ್ನೋದೂ ಅವನಿಗೆ ಗೊತ್ತಾಗಿರೋದಿಲ್ಲ." {{gap}}"ಹೂಂ. ಈಗ ಅಪಾಯ ಕಮ್ಮಿ. ಆದರೂ ನಂಬಿಯಾರಿಗೆ ಕಣ್ಣನ ಮೇಲೆ ಸಂಶಯ ಬಂದೇಬರ್ರ್ತದೆ. ಅವರು ಬೇಟೆಯಾಡೋಕೇಂತ ಗುರುತು ಹಾಕಿದ್ದ ಮಿಕ, ದೇವಕಿ. ಈಗ ಆಕೆ ಕೈಗೆ ಸಿಗೋದಿಲ್ಲಾಂತ ಆದ್ಮೇಲೆ, ಸುಮ್ನಿರ್ರ್ತಾರಾ?" {{gap}}ಚಿರುಕಂಡನ ಆ ಎಣಿಕೆಯೂ ಅಪ್ಪುವಿಗೆ ನಿಜವಾಗಿ ತೋರಿತು. ನೆಮ್ಮದಿ ನೀಡುವ ಉತ್ತರ ತೋರದೆ ಅವನ ಮನಸ್ಸು ಕಸಿವಿಸಿಗೊಂಡಿತು. {{gap}}....ಶಾಲೆ ಸೇರಿ, ಅದರ ಹಿಂಭಾಗದಲ್ಲಿದ್ದ ಮಾಸ್ತರ ಕೊಠಡಿಯತ್ತ ಅವರು ನಡೆದರು. ಆದರೆ ಕಣ್ಣ ಅಲ್ಲಿಗೆ ಬಂದಿದ್ದ. ಹಾಸಿಗೆ ಇನ್ನೂ ಮಡಚಿಯೇ ಇರಲಿಲ್ಲ. ಅದರ ಮೇಲೆಯೇ ಕುಳಿತು ಬೀಡಿ ಸೇದುತ್ತ ಕಣ್ಣನ ಮಾತುಗಳಿಗೆ ಮಾಸ್ತರು ಕಿವಿಗೊಟ್ಟಹಾಗಿತ್ತು. ಹುಡುಗರು ಒಳಕ್ಕೆ ಬಂದಾಗ ಅವರತ್ತ ನೋಡಿ, ಅಪ್ಪುವನ್ನು ದಿಟ್ಟಿಸಿ, ಮಾಸ್ತರು ಮುಗುಳು ನಕ್ಕರು. ಗಾಬರಿ ತಾಂಡವವಾಡದೆ ಮಾಸ್ತರ ತುಟಿಗಳ ಮೇಲೆ ನಗೆ ಕುಣಿದುದನ್ನು ಕಂಡು, ಅಪ್ಪುವಿಗೆ ಸಮಾಧಾನವಾಯಿತು. ಅವರಿಬ್ಬರೂ ಹಾಸಿಗೆಯ ಬಳಿ ನೆಲದ ಮೇಲೆ ಕುಳಿತರು. ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ. <noinclude></noinclude> qk9dhjimk6cl5vaf2p2z1818eoua6ke ಪುಟ:Chirasmarane-Niranjana.pdf/೧೨೫ 104 12944 322535 65604 2026-05-26T01:59:44Z Shreesha Sharma 7840 /* Proofread */ 322535 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೧೨೬|right=ಚಿರಸ್ಮರಣೆ}} {{gap}}ಯೋಚಿಸುತ್ತಿದ್ದುದು ಮುಗಿದು, ಮಾಸ್ತರು ಮೌನವನ್ನು ಮುರಿದರು: {{gap}}"ಕಣ್ಣ, ನೀನೇನೂ ಚಿಂತಿಸ್ಬೇಡ. ಅವರಿಗೆ ಸಂಶಯ ಬಂದೇ ಬಂದೀತು.ಆದರೆ ನೀನು, ಏನೂ ಆಗೇ ಇಲ್ಲ ಅನ್ನೋಹಾಗೆ ಇದ್ದುಬಿಡು." {{gap}}ಈ ಒಂದು ವಿಷಯ ಪ್ರಾಯಶಃ ಇವರಿಗೆ ತಿಳಿದಿರಲಾದೆಂದು ಅಪ್ಪುವೆಂದ: "ಅವನು ಅಲ್ಲಿಲ್ಲ. ಎದ್ದು ಹೋಗಿದ್ದಾನೆ." {{gap}}"ಹೂಂ. ನಸುಕಿನಲ್ಲೇ ಹೋದ. ಕುಂಟಿಕೊಂಡು ಜಮೀನ್ದಾರರ ಮನೆ ಕಡೆ ಹೋದದ್ದನ್ನು ನಾನೇ ನೋಡ್ದೆ" ಎಂದ ಕಣ್ಣ. {{gap}}ಮಾಸ್ತರು ಕಣ್ಣನ ಮುಖವನ್ನೇ ನೋಡುತ್ತ ಇನ್ನೊಂದು ಪ್ರಶ್ನೆ ಕೇಳಿದರು: "ದೇವಕಿ ಸ್ವಲ್ಪ ದಿವಸ ನಿಮ್ಮನೇಲೇ ಇರ್ರ್ಲಿ, ಆಗ್ದಾ?" {{gap}}ಕಣ್ಣನ ಮುಖ ಬಣ್ಣ ಬದಲಿಸಿತು. ಆತ ದೃಷ್ಟಿ ತಗ್ಗಿಸಿ ನೆಲವನ್ನು ನೋಡಿದ. "ಆಗಲಿ. ಅಮ್ಮನಿಗೆ ಹೇಳ್ತೇನೆ." {{gap}}"ಹಾಗೆ ಮಾಡು.. ಇಲ್ಲದೆ ಹೋದರೆ ಅವಳು ಮರ್ಯಾದೆಯಿಂದ ಬದುಕುವುದಕ್ಕೆ ಈ ಜನ ಖಂಡಿತ ಬಿಡೋದಿಲ್ಲ." {{gap}}ಕಣ್ಣ ತಲೆಯೆತ್ತಿ ಮಾಸ್ತರನ್ನೇ ನೋಡಿದ. ತುಟಿಗಳು ಬಿಗಿದು ಅವನ ಮುಖ ಬೀಗಿತು. ಆತ ಎದ್ದು ನಿಂತು ಹೊರಕ್ಕಿಳಿದ. ನಡಿಗೆಯಲ್ಲಿ ಆತುರ ಇರಲಿಲ್ಲವಾದರೂ ಹೆಜ್ಜೆಗಳು ಭದ್ರವಾಗಿದ್ದುವು. {{gap}}ಮಾಸ್ತರು ಎದ್ದು ಹಾಸಿಗೆ ಸುರುಳಿ ಸುತ್ತಿದರು. ಹುಡುಗರತ್ತ ನೋಡಿ ನಕ್ಕರು. ಬಾಗಿ, ಅಪ್ಪುವಿನ ಬೆನ್ನಿಗೆ ಮೆಲ್ಲನೆ ಗುದ್ದಿ ಅಂದರು: {{gap}}"ಏನೋಂತಿದ್ದೆ. ಅಂತೂ ಪರವಾಗಿಲ್ಲ ನೀನು!" {{gap}}ಒಳಗಿನ ಎದೆಗುದಿಯೆಲ್ಲವೂ ಮಾಯವಾಗಿ, ಅಪ್ಪು ಉಲ್ಲಾಸಗೊಂಡ ಚಿರುಕಂಡನ ಮುಖದಲ್ಲೂ ಗೆಲವು ಮೂಡಿತು. ರಾತ್ರೆಯ ಘಟನೆಯನ್ನು ಮಾಸ್ತರಿಗೆ ವಿವರಿಸಿ ಹೇಳಬೇಕೆಂಬ ಆಸೆಯಿಂದ ಅಪ್ಪು ಕೇಳಿದ: {{gap}}"ಕಣ್ಣ ಎಲ್ಲಾ ಹೇಳಿದನಾ, ಸರ್?" {{gap}}"ಹೂನಪ್ಪಾ ಆದರೇನು? --ನೀನೂ ಒಂದ್ಸಲ ಹೇಳೀಯಂತೆ. ನಾನು ಮುಖ ತೊಳೆಯೋ ತನಕ ಕಾದಿರ್ರ್ಬೆಕು--ಅಷ್ಟೆ!" - {{gap}}ಶಿಷ್ಯನಲ್ಲಿ ಸ್ವಂತದ ಸಾಧನೆಗಳನ್ನು ಬಣ್ಣಿಸುವ ಚಪಲ ಹೇರಳವಾಗಿತ್ತು ಎಂಬುದು ಮಾಸ್ತರಿಗೆ ಚೆನ್ನಾಗಿ ಗೊತ್ತಿತ್ತು. {{gap}}ಬಹುಶಃ ಚಿರುಕಂಡ ಊಹಿಸಿದಷ್ಟು ಪರಿಸ್ಥಿತಿ ಗಂಭೀರವಾಗಿರಲಾರದೆಂದು ಅಪ್ಪು ಭಾವಿಸಿದ. ಆದರೆ ಆ ಭಾವನೆ ಬಲವಾಗುವುದಕ್ಕೆ ಮೊದಲೆ ಮಾಸ್ತರರೆಂದರು:<noinclude></noinclude> etlaxj3xrhsguhj1effw8bjv8o8a3eh 322537 322535 2026-05-26T02:01:12Z Pragathi. BH 7585 /* Validated */ 322537 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೨೬|right=ಚಿರಸ್ಮರಣೆ}} {{gap}}ಯೋಚಿಸುತ್ತಿದ್ದುದು ಮುಗಿದು, ಮಾಸ್ತರು ಮೌನವನ್ನು ಮುರಿದರು: {{gap}}"ಕಣ್ಣ, ನೀನೇನೂ ಚಿಂತಿಸ್ಬೇಡ. ಅವರಿಗೆ ಸಂಶಯ ಬಂದೇ ಬಂದೀತು.ಆದರೆ ನೀನು, ಏನೂ ಆಗೇ ಇಲ್ಲ ಅನ್ನೋಹಾಗೆ ಇದ್ದುಬಿಡು." {{gap}}ಈ ಒಂದು ವಿಷಯ ಪ್ರಾಯಶಃ ಇವರಿಗೆ ತಿಳಿದಿರಲಾದೆಂದು ಅಪ್ಪುವೆಂದ: "ಅವನು ಅಲ್ಲಿಲ್ಲ. ಎದ್ದು ಹೋಗಿದ್ದಾನೆ." {{gap}}"ಹೂಂ. ನಸುಕಿನಲ್ಲೇ ಹೋದ. ಕುಂಟಿಕೊಂಡು ಜಮೀನ್ದಾರರ ಮನೆ ಕಡೆ ಹೋದದ್ದನ್ನು ನಾನೇ ನೋಡ್ದೆ" ಎಂದ ಕಣ್ಣ. {{gap}}ಮಾಸ್ತರು ಕಣ್ಣನ ಮುಖವನ್ನೇ ನೋಡುತ್ತ ಇನ್ನೊಂದು ಪ್ರಶ್ನೆ ಕೇಳಿದರು: "ದೇವಕಿ ಸ್ವಲ್ಪ ದಿವಸ ನಿಮ್ಮನೇಲೇ ಇರ್ರ್ಲಿ, ಆಗ್ದಾ?" {{gap}}ಕಣ್ಣನ ಮುಖ ಬಣ್ಣ ಬದಲಿಸಿತು. ಆತ ದೃಷ್ಟಿ ತಗ್ಗಿಸಿ ನೆಲವನ್ನು ನೋಡಿದ. "ಆಗಲಿ. ಅಮ್ಮನಿಗೆ ಹೇಳ್ತೇನೆ." {{gap}}"ಹಾಗೆ ಮಾಡು.. ಇಲ್ಲದೆ ಹೋದರೆ ಅವಳು ಮರ್ಯಾದೆಯಿಂದ ಬದುಕುವುದಕ್ಕೆ ಈ ಜನ ಖಂಡಿತ ಬಿಡೋದಿಲ್ಲ." {{gap}}ಕಣ್ಣ ತಲೆಯೆತ್ತಿ ಮಾಸ್ತರನ್ನೇ ನೋಡಿದ. ತುಟಿಗಳು ಬಿಗಿದು ಅವನ ಮುಖ ಬೀಗಿತು. ಆತ ಎದ್ದು ನಿಂತು ಹೊರಕ್ಕಿಳಿದ. ನಡಿಗೆಯಲ್ಲಿ ಆತುರ ಇರಲಿಲ್ಲವಾದರೂ ಹೆಜ್ಜೆಗಳು ಭದ್ರವಾಗಿದ್ದುವು. {{gap}}ಮಾಸ್ತರು ಎದ್ದು ಹಾಸಿಗೆ ಸುರುಳಿ ಸುತ್ತಿದರು. ಹುಡುಗರತ್ತ ನೋಡಿ ನಕ್ಕರು. ಬಾಗಿ, ಅಪ್ಪುವಿನ ಬೆನ್ನಿಗೆ ಮೆಲ್ಲನೆ ಗುದ್ದಿ ಅಂದರು: {{gap}}"ಏನೋಂತಿದ್ದೆ. ಅಂತೂ ಪರವಾಗಿಲ್ಲ ನೀನು!" {{gap}}ಒಳಗಿನ ಎದೆಗುದಿಯೆಲ್ಲವೂ ಮಾಯವಾಗಿ, ಅಪ್ಪು ಉಲ್ಲಾಸಗೊಂಡ ಚಿರುಕಂಡನ ಮುಖದಲ್ಲೂ ಗೆಲವು ಮೂಡಿತು. ರಾತ್ರೆಯ ಘಟನೆಯನ್ನು ಮಾಸ್ತರಿಗೆ ವಿವರಿಸಿ ಹೇಳಬೇಕೆಂಬ ಆಸೆಯಿಂದ ಅಪ್ಪು ಕೇಳಿದ: {{gap}}"ಕಣ್ಣ ಎಲ್ಲಾ ಹೇಳಿದನಾ, ಸರ್?" {{gap}}"ಹೂನಪ್ಪಾ ಆದರೇನು? --ನೀನೂ ಒಂದ್ಸಲ ಹೇಳೀಯಂತೆ. ನಾನು ಮುಖ ತೊಳೆಯೋ ತನಕ ಕಾದಿರ್ರ್ಬೆಕು--ಅಷ್ಟೆ!" - {{gap}}ಶಿಷ್ಯನಲ್ಲಿ ಸ್ವಂತದ ಸಾಧನೆಗಳನ್ನು ಬಣ್ಣಿಸುವ ಚಪಲ ಹೇರಳವಾಗಿತ್ತು ಎಂಬುದು ಮಾಸ್ತರಿಗೆ ಚೆನ್ನಾಗಿ ಗೊತ್ತಿತ್ತು. {{gap}}ಬಹುಶಃ ಚಿರುಕಂಡ ಊಹಿಸಿದಷ್ಟು ಪರಿಸ್ಥಿತಿ ಗಂಭೀರವಾಗಿರಲಾರದೆಂದು ಅಪ್ಪು ಭಾವಿಸಿದ. ಆದರೆ ಆ ಭಾವನೆ ಬಲವಾಗುವುದಕ್ಕೆ ಮೊದಲೆ ಮಾಸ್ತರರೆಂದರು:<noinclude></noinclude> 7n72lj2l04ovxv251l15ed7tyofu4ej ಪುಟ:Chirasmarane-Niranjana.pdf/೧೨೬ 104 12945 322538 65962 2026-05-26T02:01:36Z Shreesha Sharma 7840 /* Proofread */ 322538 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಚಿರಸ್ಮರಣೆ |right=೧೨೭}} "ಇಂಥದ್ದೆಲ್ಲ ನಾವು ನಿರೀಕ್ಷಿಸೋದುಕ್ಕೆ ಮುಂಚೆಯೇ ಬರ್ತದೆ.ಏನು ಮಾಡದೇ ಇರೋದು ಹೇಡಿತನ. ಮಾಡಿದ್ದೇನಾದರೂ ಅತಿಯಾದರೆ ಈವರೆಗಿನ ಕೆಲಸಕ್ಕೆಲ್ಲ ಧಕ್ಕೆ ಇದೊಳ್ಳೆ ಸಂದಿಗ್ಧ.". {{gap}}ಮತ್ತೆ ಹೃದಯ ವೇಗವಾಗಿ ಹೊಡೆದುಕೊಳ್ಳತೊಡಗಿ ಅಪ್ಪು ಹೇಳಿದ: {{gap}}"ಮುಂದೇನಾಯಿತು ಸರ್ ?” "ಈಗ್ಲೇ ಹ್ಯಾಗೆ ಹೇಳೋಣ? ಆದರೂ ಕಣ್ಣನನ್ನು ಅವರು ಸುಮ್ನೆ ಬಿಡೋದಿಲ್ಲ, ದೇವಕಿಗೆ ಆಶ್ರಯ ಕೊಟ್ಟಿದ್ದಕ್ಕೆ ಅವನಿಗೆ ಕಷ್ಟ ಒದಗಿಯೇ ಒದಗ್ತದೆ." ಮಾಸ್ತರು ಹೊರಹೋಗಿ ಒಂದು ಮಾವಿನೆಲೆ ತಂದು, ಅದನ್ನ ಸೀಳಿ ಸುರುಳಿ ಸುತ್ತಿ ಹಲುಜ್ಜಿದರು. ಅವರು ಹೇಳಿದುದೂ ಚಿರುಕಂಡ ಊಹಿಸಿದುದೂ ಹೆಚ್ಚುಕಡಿಮೆ ಒಂದೇ ಆಗಿದ್ದವು. ಮಾಸ್ತರು ಮುಖ ತೊಳೆದು ಬಂದಾಗ ಘಟನೆಯ ವರದಿ ಕೊಡುವ ಉತ್ಸಾಹವೇ ಅಪ್ಪುವಿಗಿರಲಿಲ್ಲ.ಆತನ ಮುಖ ಬಾಡಿತ್ತು. ಸ್ವಲ್ಪ ಹೊತ್ತು ಮಾಸ್ತರು ಸುಮ್ಮನಿದು ಹೇಳಿದರು: "ಅನ್ಯಾಯವನ್ನು ಪ್ರತಿಭಟಿಸುವವರು ಈ ಹಳ್ಳಿಯಲ್ಲಿದ್ದಾರೆ ಅಂತ ಇನ್ನು ಜನಕ್ಕ ಗೊತ್ತಾಗ್ತದೆ. ನಿನ್ನೆ ನಡೆದ ವಿಷಯ ಬಹಿರಂಗವಾಗಿ ಯಾರೂ ಮಾತಾಡದೆ ಇರಬಹುದು.ಆದರೆ ಗುಟ್ಟಾಗಿ ಅದು,ಕಿವಿಯಿಂದ ಕಿವಿಗೆ ಸಂಚಾರ ಮಾಡಿಯೇ ಮಾಡೀತು. ಜನ, ಎದ್ದು ನಿಲ್ಲೋದೆ ಹೀಗೆ. ನಿನ್ನೇದು ವೈಯಕ್ತಿಕ ಪ್ರಶ್ನೆ, ಆದರೆ ಮುಂದೆ ಸಾಮೂಹಿಕ ಪ್ರಶ್ನೆ ಬಂದಾಗಲೂ ನಮ್ಮ ಜನ ಇಂಥದೇ ಧೈರ್ಯ ಸಾಹಸ ತೋರಿಸ್ಬೇಕು." ಹಿಂದಿನ ರಾತ್ರೆ ನಡೆದುದರ ವಿಷಯವಾಗಿ, 'ಇದು ಹೀಗೆ'ಇದು ಹಾಗೆ' ಎಂದು ತೀರ್ಪುಕೊಟ್ಟು, ನಾಳೆ ನಡೆಯುವುದರ ಮುನ್ಸೂಚನೆಯನ್ನಿತ್ತ ಹಾಗಿತ್ತು,ಅವರ ಮಾತು. ಮತ್ತೊಂದು ಬೀಡಿ ಹಚ್ಚಿ ಮಾಸ್ತರೆಂದರು; "ಇನ್ನು ಹೋಗಿ, ಜಮೀನ್ದಾರರ ಕಡೆಯೋರು ಯಾರಾದರೂ ಬಂದರೂ ಬರಬಹುದು.ನೀವಿಲ್ಲಿ ಸಪ್ಪೆಮೋರೆ ಹಾಕಿ ನಿಂತಿರೋದು ಸರಿಯಲ್ಲ ಏನೂ ಆಗ್ದೆ ಇರೋಹಾಗೆ , ಏನೂ ಗೊತ್ತಿಲ್ದೆ ಇರೋರಹಾಗೆ, ಇದ್ಬಿಡಿ. ಸ್ವಲ್ಪ ಹೊತ್ತಾದೆಲೆ ಚಿರುಕಂಡ, ಹೋಟೆಲಿನ ಹತ್ತಿರ ಸುಮ್ನೆ ಹೋಗಿರು. ಜನ ಏನೇನು ಮಾತು ಆಡ್ತಾರೆ'ಅನ್ನೋದು ಗೊತ್ತಾಗ್ತದೆ.<noinclude></noinclude> he57isgsnno7ndxxwldp62szqfo5i7p 322539 322538 2026-05-26T02:02:43Z Pragathi. BH 7585 /* Validated */ 322539 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಚಿರಸ್ಮರಣೆ |right=೧೨೭}} "ಇಂಥದ್ದೆಲ್ಲ ನಾವು ನಿರೀಕ್ಷಿಸೋದುಕ್ಕೆ ಮುಂಚೆಯೇ ಬರ್ತದೆ.ಏನು ಮಾಡದೇ ಇರೋದು ಹೇಡಿತನ. ಮಾಡಿದ್ದೇನಾದರೂ ಅತಿಯಾದರೆ ಈವರೆಗಿನ ಕೆಲಸಕ್ಕೆಲ್ಲ ಧಕ್ಕೆ ಇದೊಳ್ಳೆ ಸಂದಿಗ್ಧ.". {{gap}}ಮತ್ತೆ ಹೃದಯ ವೇಗವಾಗಿ ಹೊಡೆದುಕೊಳ್ಳತೊಡಗಿ ಅಪ್ಪು ಹೇಳಿದ: {{gap}}"ಮುಂದೇನಾಯಿತು ಸರ್ ?” "ಈಗ್ಲೇ ಹ್ಯಾಗೆ ಹೇಳೋಣ? ಆದರೂ ಕಣ್ಣನನ್ನು ಅವರು ಸುಮ್ನೆ ಬಿಡೋದಿಲ್ಲ, ದೇವಕಿಗೆ ಆಶ್ರಯ ಕೊಟ್ಟಿದ್ದಕ್ಕೆ ಅವನಿಗೆ ಕಷ್ಟ ಒದಗಿಯೇ ಒದಗ್ತದೆ." ಮಾಸ್ತರು ಹೊರಹೋಗಿ ಒಂದು ಮಾವಿನೆಲೆ ತಂದು, ಅದನ್ನ ಸೀಳಿ ಸುರುಳಿ ಸುತ್ತಿ ಹಲುಜ್ಜಿದರು. ಅವರು ಹೇಳಿದುದೂ ಚಿರುಕಂಡ ಊಹಿಸಿದುದೂ ಹೆಚ್ಚುಕಡಿಮೆ ಒಂದೇ ಆಗಿದ್ದವು. ಮಾಸ್ತರು ಮುಖ ತೊಳೆದು ಬಂದಾಗ ಘಟನೆಯ ವರದಿ ಕೊಡುವ ಉತ್ಸಾಹವೇ ಅಪ್ಪುವಿಗಿರಲಿಲ್ಲ.ಆತನ ಮುಖ ಬಾಡಿತ್ತು. ಸ್ವಲ್ಪ ಹೊತ್ತು ಮಾಸ್ತರು ಸುಮ್ಮನಿದು ಹೇಳಿದರು: "ಅನ್ಯಾಯವನ್ನು ಪ್ರತಿಭಟಿಸುವವರು ಈ ಹಳ್ಳಿಯಲ್ಲಿದ್ದಾರೆ ಅಂತ ಇನ್ನು ಜನಕ್ಕ ಗೊತ್ತಾಗ್ತದೆ. ನಿನ್ನೆ ನಡೆದ ವಿಷಯ ಬಹಿರಂಗವಾಗಿ ಯಾರೂ ಮಾತಾಡದೆ ಇರಬಹುದು.ಆದರೆ ಗುಟ್ಟಾಗಿ ಅದು,ಕಿವಿಯಿಂದ ಕಿವಿಗೆ ಸಂಚಾರ ಮಾಡಿಯೇ ಮಾಡೀತು. ಜನ, ಎದ್ದು ನಿಲ್ಲೋದೆ ಹೀಗೆ. ನಿನ್ನೇದು ವೈಯಕ್ತಿಕ ಪ್ರಶ್ನೆ, ಆದರೆ ಮುಂದೆ ಸಾಮೂಹಿಕ ಪ್ರಶ್ನೆ ಬಂದಾಗಲೂ ನಮ್ಮ ಜನ ಇಂಥದೇ ಧೈರ್ಯ ಸಾಹಸ ತೋರಿಸ್ಬೇಕು." ಹಿಂದಿನ ರಾತ್ರೆ ನಡೆದುದರ ವಿಷಯವಾಗಿ, 'ಇದು ಹೀಗೆ'ಇದು ಹಾಗೆ' ಎಂದು ತೀರ್ಪುಕೊಟ್ಟು, ನಾಳೆ ನಡೆಯುವುದರ ಮುನ್ಸೂಚನೆಯನ್ನಿತ್ತ ಹಾಗಿತ್ತು,ಅವರ ಮಾತು. ಮತ್ತೊಂದು ಬೀಡಿ ಹಚ್ಚಿ ಮಾಸ್ತರೆಂದರು; "ಇನ್ನು ಹೋಗಿ, ಜಮೀನ್ದಾರರ ಕಡೆಯೋರು ಯಾರಾದರೂ ಬಂದರೂ ಬರಬಹುದು.ನೀವಿಲ್ಲಿ ಸಪ್ಪೆಮೋರೆ ಹಾಕಿ ನಿಂತಿರೋದು ಸರಿಯಲ್ಲ ಏನೂ ಆಗ್ದೆ ಇರೋಹಾಗೆ , ಏನೂ ಗೊತ್ತಿಲ್ದೆ ಇರೋರಹಾಗೆ, ಇದ್ಬಿಡಿ. ಸ್ವಲ್ಪ ಹೊತ್ತಾದೆಲೆ ಚಿರುಕಂಡ, ಹೋಟೆಲಿನ ಹತ್ತಿರ ಸುಮ್ನೆ ಹೋಗಿರು. ಜನ ಏನೇನು ಮಾತು ಆಡ್ತಾರೆ'ಅನ್ನೋದು ಗೊತ್ತಾಗ್ತದೆ.<noinclude></noinclude> 8uxp227jfgq0qvpbgb5tcyvc2q5iky8 ಪುಟ:Chirasmarane-Niranjana.pdf/೧೨೭ 104 12946 322540 65963 2026-05-26T02:03:18Z Shreesha Sharma 7840 /* Proofread */ 322540 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೧೨೮|right=ಚಿರಸ್ಮರಣೆ}} ಹುಡುಗರು ಹೊರಟುಹೋದರು, ಸೂರ್ಯ ನೆತ್ತಿಗೇರಿದ. ಅಪ್ಪು ತೇಜಸ್ವಿನಿಯ ತಣುಪು ನೀರಿನಲ್ಲಿ ಮೈಮರೆಯಲು ಹೋದ ಮೇಲೆ, ಚಿರುಕಂಡ ಜನ ಆಡುವ ಮಾತುಗಳಿಗೆ ಕಿವಿಗೊಡುತ್ತ ಸುತ್ತಾಡಿದ. ನಂಬಿಯಾರರ ಆ ಚಾಕರ ದುರ್ನಡತೆಯವನೆಂದು ಕುಖ್ಯಾತನೇ ಆಗಿದ್ದ. ಹಿಂದಿನ ರಾತ್ರೆ ಯಾರ ಮನೆಗೊ ಹೋಗಿ ಆತ ಮಂಗಳಾರತಿ ಮಾಡಿಸಿಕೊಂಡನೆಂಬ ಸುದ್ದಿ ಹರಡಿತು. ಅದನ್ನು ಕೇಳುತ್ತ ಜನ ನಕ್ಕರು. ಆ ಮಾತುಕತೆಯಲ್ಲೆಲ್ಲ ನಂಬಿಯಾರರ ಪ್ರಸ್ತಾಪವೇ ಇರಲಿಲ್ಲ... ......ಮಾರನೆಯ ದಿನ ಅಲ್ಲಲ್ಲಿ ದೇವಕಿಯ ಹೆಸರು ಕೇಳಿಬಂತು. ನಗೆ ಮಾತು, ಪ್ರಶಾರ್ಥಕ ಚಿಹ್ನೆಯಾಗಿ ಗಂಟಿಕ್ಕಿದ ಹುಬ್ಬು, ಸಹಾನುಭೂತಿಯ ಧ್ವನಿ, ಬಳಿಕ ಅವರ ಸಂಭಾಷಣೆಯೊಳಗೆ ನುಸುಳಿಕೊಂಡ ಕಣ್ಣ, ಅರ್ಥಪೂರ್ಣ ನೋಟಗಳು. ಬೀಸಿದ್ದ ಬಿರುಗಾಳಿ ಶಮನವಾಗಿರಲಿಲ್ಲ, ಶಾಂತತೆ ನೆಲಸಿದ್ದಂತೆ ಕಂಡರೂ ಒಮ್ಮೆಲೆ ಗಾಳಿ ಗಿಡುಗನಂತೆ ಎರಗಿಬಂದು ತರಗೆಲೆಗಳನ್ನೆತ್ತಿಕೊಂಡು ಏರುವ ಹಾಗೆ, ಮಾತುಗಲು ಕೇಳಿ ಬಂದವು. ಜಮೀನ್ದಾರರಿಂದ ಮಾಸ್ತರಿಗೆ ಕರೆಬಂತು. ದೇವಕಿಯ ಹೆಸರನ್ನೇ ಎತ್ತದೆ ಅವರು ಹೇಳಿದರು: "ರಾತ್ರೆ ಹೊತ್ತು ನಮ್ಮ ಒಬ್ಬ ಆಳಿಗೆ ಕಣ್ಣ ಅಂತ ಯಾವನೋ ಹೊಡೆದನಂತೆ." ಅದೇ ಮೊದಲ ಬಾರಿ ಆ ವಿಷಯ ಕೇಳಿದವರಂತೆ ಮಾಸ್ತರೆಂದರು: "ಹಾದೇನು?ಕಣ್ಣನೆ? ರಾತ್ರಿ ಶಾಲೆಗೆ ಕಣ್ಣ ಅಂತ ಒಬ್ಬ ಬರ್ತಿರ್ತಾನೆ. ಯುವಕ." ನಂಬಿಯಾರರು ಮಾಸ್ತರ ಪ್ರಾಮಾಣಿಕತೆಯನ್ನು ತೂಗುವಂತೆ ಸೂಕ್ಷ್ಮ ನೋಟದಿಂದ ನೋಡಿದರು: "ಅವನೇ ಈ ಕಯ್ಯೂರಿನಲ್ಲಿ ಬೇರೆ ಕಣ್ಣ ಯಾವನಿದ್ದಾನೆ?ನನಗೆ ಗೊತ್ತಿಲ್ವ?" "ಏನು ವಿಷಯ ಅಂತ ವಿಚಾರಿಸ್ತೇನೆ.'' "ನೀವೇನು ವಿಚಾರಿಸ್ತೀರಿ ಮಾಸ್ತರೆ? ವಿಚಾರಣೆ ಮಾಡೋದೆಲ್ಲ ನನಗೆ ಬಿಟ್ಬಿಡಿ. ಏನು ಕ್ರಮ ತಗೋಬೇಕು ಅನ್ನೋದನ್ನು ನಾನೇ ಇತ್ಯರ್ಥ ಮಾಡ್ತೇನೆ. ನಿಮ್ಮ ರಾತ್ರಿ ಶಾಲೆಗೆ ಆತ ಬರ್ತಾ ಇರ್ತಾನಲ್ಲ -ಅದಕ್ಕೋಸ್ಕರ ಅವನ ವಿಷಯದಲ್ಲಿ ನಿಮಗಿಷ್ಟು ಎಚ್ಚರಿಕೆ ಹೇಳೋಣಾಂತ ಕರೆದೆ. ನೀವಿನ್ನು ಹೋಗ್ಬಹುದು." ಸಂಭಾಷಣೆ ಚುಟುಕಾಗಿ ಮುಗಿದುದು ಅನಿರೀಕ್ಷಿತವಾಗಿತ್ತು.ಮಾಸ್ತರು ಎದ್ದು ನಿಂತರು. ಅವರು ಹೊರಡುತ್ತಿದ್ದಂತೆ ನಂಬಿಯಾರರು ಕೊನೆಯ ಮಾತೆಂದರು:<noinclude></noinclude> jzqmwmzevyrstjn330uxl6rlzckiu2b 322543 322540 2026-05-26T02:08:22Z Pragathi. BH 7585 /* Validated */ 322543 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೨೮|right=ಚಿರಸ್ಮರಣೆ}} ಹುಡುಗರು ಹೊರಟುಹೋದರು, ಸೂರ್ಯ ನೆತ್ತಿಗೇರಿದ. ಅಪ್ಪು ತೇಜಸ್ವಿನಿಯ ತಣುಪು ನೀರಿನಲ್ಲಿ ಮೈಮರೆಯಲು ಹೋದ ಮೇಲೆ, ಚಿರುಕಂಡ ಜನ ಆಡುವ ಮಾತುಗಳಿಗೆ ಕಿವಿಗೊಡುತ್ತ ಸುತ್ತಾಡಿದ. ನಂಬಿಯಾರರ ಆ ಚಾಕರ ದುರ್ನಡತೆಯವನೆಂದು ಕುಖ್ಯಾತನೇ ಆಗಿದ್ದ. ಹಿಂದಿನ ರಾತ್ರೆ ಯಾರ ಮನೆಗೊ ಹೋಗಿ ಆತ ಮಂಗಳಾರತಿ ಮಾಡಿಸಿಕೊಂಡನೆಂಬ ಸುದ್ದಿ ಹರಡಿತು. ಅದನ್ನು ಕೇಳುತ್ತ ಜನ ನಕ್ಕರು. ಆ ಮಾತುಕತೆಯಲ್ಲೆಲ್ಲ ನಂಬಿಯಾರರ ಪ್ರಸ್ತಾಪವೇ ಇರಲಿಲ್ಲ... ......ಮಾರನೆಯ ದಿನ ಅಲ್ಲಲ್ಲಿ ದೇವಕಿಯ ಹೆಸರು ಕೇಳಿಬಂತು. ನಗೆ ಮಾತು, ಪ್ರಶಾರ್ಥಕ ಚಿಹ್ನೆಯಾಗಿ ಗಂಟಿಕ್ಕಿದ ಹುಬ್ಬು, ಸಹಾನುಭೂತಿಯ ಧ್ವನಿ, ಬಳಿಕ ಅವರ ಸಂಭಾಷಣೆಯೊಳಗೆ ನುಸುಳಿಕೊಂಡ ಕಣ್ಣ, ಅರ್ಥಪೂರ್ಣ ನೋಟಗಳು. ಬೀಸಿದ್ದ ಬಿರುಗಾಳಿ ಶಮನವಾಗಿರಲಿಲ್ಲ, ಶಾಂತತೆ ನೆಲಸಿದ್ದಂತೆ ಕಂಡರೂ ಒಮ್ಮೆಲೆ ಗಾಳಿ ಗಿಡುಗನಂತೆ ಎರಗಿಬಂದು ತರಗೆಲೆಗಳನ್ನೆತ್ತಿಕೊಂಡು ಏರುವ ಹಾಗೆ, ಮಾತುಗಲು ಕೇಳಿ ಬಂದವು. ಜಮೀನ್ದಾರರಿಂದ ಮಾಸ್ತರಿಗೆ ಕರೆಬಂತು. ದೇವಕಿಯ ಹೆಸರನ್ನೇ ಎತ್ತದೆ ಅವರು ಹೇಳಿದರು: "ರಾತ್ರೆ ಹೊತ್ತು ನಮ್ಮ ಒಬ್ಬ ಆಳಿಗೆ ಕಣ್ಣ ಅಂತ ಯಾವನೋ ಹೊಡೆದನಂತೆ." ಅದೇ ಮೊದಲ ಬಾರಿ ಆ ವಿಷಯ ಕೇಳಿದವರಂತೆ ಮಾಸ್ತರೆಂದರು: "ಹಾದೇನು?ಕಣ್ಣನೆ? ರಾತ್ರಿ ಶಾಲೆಗೆ ಕಣ್ಣ ಅಂತ ಒಬ್ಬ ಬರ್ತಿರ್ತಾನೆ. ಯುವಕ." ನಂಬಿಯಾರರು ಮಾಸ್ತರ ಪ್ರಾಮಾಣಿಕತೆಯನ್ನು ತೂಗುವಂತೆ ಸೂಕ್ಷ್ಮ ನೋಟದಿಂದ ನೋಡಿದರು: "ಅವನೇ ಈ ಕಯ್ಯೂರಿನಲ್ಲಿ ಬೇರೆ ಕಣ್ಣ ಯಾವನಿದ್ದಾನೆ?ನನಗೆ ಗೊತ್ತಿಲ್ವ?" "ಏನು ವಿಷಯ ಅಂತ ವಿಚಾರಿಸ್ತೇನೆ.'' "ನೀವೇನು ವಿಚಾರಿಸ್ತೀರಿ ಮಾಸ್ತರೆ? ವಿಚಾರಣೆ ಮಾಡೋದೆಲ್ಲ ನನಗೆ ಬಿಟ್ಬಿಡಿ. ಏನು ಕ್ರಮ ತಗೋಬೇಕು ಅನ್ನೋದನ್ನು ನಾನೇ ಇತ್ಯರ್ಥ ಮಾಡ್ತೇನೆ. ನಿಮ್ಮ ರಾತ್ರಿ ಶಾಲೆಗೆ ಆತ ಬರ್ತಾ ಇರ್ತಾನಲ್ಲ -ಅದಕ್ಕೋಸ್ಕರ ಅವನ ವಿಷಯದಲ್ಲಿ ನಿಮಗಿಷ್ಟು ಎಚ್ಚರಿಕೆ ಹೇಳೋಣಾಂತ ಕರೆದೆ. ನೀವಿನ್ನು ಹೋಗ್ಬಹುದು." ಸಂಭಾಷಣೆ ಚುಟುಕಾಗಿ ಮುಗಿದುದು ಅನಿರೀಕ್ಷಿತವಾಗಿತ್ತು.ಮಾಸ್ತರು ಎದ್ದು ನಿಂತರು. ಅವರು ಹೊರಡುತ್ತಿದ್ದಂತೆ ನಂಬಿಯಾರರು ಕೊನೆಯ ಮಾತೆಂದರು:<noinclude></noinclude> icppryt2yd6s42d9rzp0jcaw2cv0jln 322548 322543 2026-05-26T02:12:25Z Pragathi. BH 7585 322548 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೧೨೮|right=ಚಿರಸ್ಮರಣೆ}} {{gap}}ಹುಡುಗರು ಹೊರಟುಹೋದರು, ಸೂರ್ಯ ನೆತ್ತಿಗೇರಿದ. ಅಪ್ಪು ತೇಜಸ್ವಿನಿಯ ತಣುಪು ನೀರಿನಲ್ಲಿ ಮೈಮರೆಯಲು ಹೋದ ಮೇಲೆ, ಚಿರುಕಂಡ ಜನ ಆಡುವ ಮಾತುಗಳಿಗೆ ಕಿವಿಗೊಡುತ್ತ ಸುತ್ತಾಡಿದ. {{gap}}ನಂಬಿಯಾರರ ಆ ಚಾಕರ ದುರ್ನಡತೆಯವನೆಂದು ಕುಖ್ಯಾತನೇ ಆಗಿದ್ದ. ಹಿಂದಿನ ರಾತ್ರೆ ಯಾರ ಮನೆಗೊ ಹೋಗಿ ಆತ ಮಂಗಳಾರತಿ ಮಾಡಿಸಿಕೊಂಡನೆಂಬ ಸುದ್ದಿ ಹರಡಿತು. ಅದನ್ನು ಕೇಳುತ್ತ ಜನ ನಕ್ಕರು. ಆ ಮಾತುಕತೆಯಲ್ಲೆಲ್ಲ ನಂಬಿಯಾರರ ಪ್ರಸ್ತಾಪವೇ ಇರಲಿಲ್ಲ... {{gap}}......ಮಾರನೆಯ ದಿನ ಅಲ್ಲಲ್ಲಿ ದೇವಕಿಯ ಹೆಸರು ಕೇಳಿಬಂತು. ನಗೆ ಮಾತು, ಪ್ರಶಾರ್ಥಕ ಚಿಹ್ನೆಯಾಗಿ ಗಂಟಿಕ್ಕಿದ ಹುಬ್ಬು, ಸಹಾನುಭೂತಿಯ ಧ್ವನಿ, ಬಳಿಕ ಅವರ ಸಂಭಾಷಣೆಯೊಳಗೆ ನುಸುಳಿಕೊಂಡ ಕಣ್ಣ, ಅರ್ಥಪೂರ್ಣ ನೋಟಗಳು. <br /> {{gap}}ಬೀಸಿದ್ದ ಬಿರುಗಾಳಿ ಶಮನವಾಗಿರಲಿಲ್ಲ, ಶಾಂತತೆ ನೆಲಸಿದ್ದಂತೆ ಕಂಡರೂ ಒಮ್ಮೆಲೆ ಗಾಳಿ ಗಿಡುಗನಂತೆ ಎರಗಿಬಂದು ತರಗೆಲೆಗಳನ್ನೆತ್ತಿಕೊಂಡು ಏರುವ ಹಾಗೆ, ಮಾತುಗಲು ಕೇಳಿ ಬಂದವು. {{gap}}ಜಮೀನ್ದಾರರಿಂದ ಮಾಸ್ತರಿಗೆ ಕರೆಬಂತು. ದೇವಕಿಯ ಹೆಸರನ್ನೇ ಎತ್ತದೆ ಅವರು ಹೇಳಿದರು: {{gap}}"ರಾತ್ರೆ ಹೊತ್ತು ನಮ್ಮ ಒಬ್ಬ ಆಳಿಗೆ ಕಣ್ಣ ಅಂತ ಯಾವನೋ ಹೊಡೆದನಂತೆ." ಅದೇ ಮೊದಲ ಬಾರಿ ಆ ವಿಷಯ ಕೇಳಿದವರಂತೆ ಮಾಸ್ತರೆಂದರು: {{gap}}"ಹಾದೇನು?ಕಣ್ಣನೆ? ರಾತ್ರಿ ಶಾಲೆಗೆ ಕಣ್ಣ ಅಂತ ಒಬ್ಬ ಬರ್ತಿರ್ತಾನೆ. ಯುವಕ." ನಂಬಿಯಾರರು ಮಾಸ್ತರ ಪ್ರಾಮಾಣಿಕತೆಯನ್ನು ತೂಗುವಂತೆ ಸೂಕ್ಷ್ಮ ನೋಟದಿಂದ ನೋಡಿದರು: {{gap}}"ಅವನೇ ಈ ಕಯ್ಯೂರಿನಲ್ಲಿ ಬೇರೆ ಕಣ್ಣ ಯಾವನಿದ್ದಾನೆ?ನನಗೆ ಗೊತ್ತಿಲ್ವ?" {{gap}}"ಏನು ವಿಷಯ ಅಂತ ವಿಚಾರಿಸ್ತೇನೆ.'' {{gap}}"ನೀವೇನು ವಿಚಾರಿಸ್ತೀರಿ ಮಾಸ್ತರೆ? ವಿಚಾರಣೆ ಮಾಡೋದೆಲ್ಲ ನನಗೆ ಬಿಟ್ಬಿಡಿ. ಏನು ಕ್ರಮ ತಗೋಬೇಕು ಅನ್ನೋದನ್ನು ನಾನೇ ಇತ್ಯರ್ಥ ಮಾಡ್ತೇನೆ. ನಿಮ್ಮ ರಾತ್ರಿ ಶಾಲೆಗೆ ಆತ ಬರ್ತಾ ಇರ್ತಾನಲ್ಲ -ಅದಕ್ಕೋಸ್ಕರ ಅವನ ವಿಷಯದಲ್ಲಿ ನಿಮಗಿಷ್ಟು ಎಚ್ಚರಿಕೆ ಹೇಳೋಣಾಂತ ಕರೆದೆ. ನೀವಿನ್ನು ಹೋಗ್ಬಹುದು." {{gap}}ಸಂಭಾಷಣೆ ಚುಟುಕಾಗಿ ಮುಗಿದುದು ಅನಿರೀಕ್ಷಿತವಾಗಿತ್ತು.ಮಾಸ್ತರು ಎದ್ದು ನಿಂತರು. {{gap}}ಅವರು ಹೊರಡುತ್ತಿದ್ದಂತೆ ನಂಬಿಯಾರರು ಕೊನೆಯ ಮಾತೆಂದರು:<noinclude></noinclude> oayhv2ol2hffdlqxchec85mavhubu22 ಪುಟ:Chirasmarane-Niranjana.pdf/೧೨೮ 104 12947 322541 65965 2026-05-26T02:04:59Z Shreesha Sharma 7840 /* Proofread */ 322541 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಚಿರಸ್ಮರಣೆ|right=೧೨೯}} {{gap}}"ಅವರೆಲ್ಲ ಪೋಲಿಗಳು. ಪೋಲಿಗಳ ಸಹವಾಸದಿಂದ ನಿಮಗೆ ತೊಂದರೆಯಾಗಬಾರ್ದು ಮಾಸ್ತರೆ.ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಾರ್ದು.ತಿಳಿತೇ?" {{gap}}ಗಂಟಲು ಒಣಗಿದ್ದರೂ ಮಾಸ್ತರು ಪ್ರಯತ್ನ ಪಟ್ಟು,"ಹೂಂ ಬರ್ತೇನೆ ನಮಸ್ಕಾರ"ಎಂದರು ಆನಂತರದ ನಾಲ್ಕಾರು ದಿನಗಳಲ್ಲೂ ಕಣ್ಣನಿಗೇನೂ ಆಗಲಿಲ್ಲ.ಅದೊಂದು ರೀತಿಯಲ್ಲಿ ಆಶ್ಚರ್ಯದ ವಿಷಯವಾಗಿತ್ತು.ತಮಗಾದ ಅವಮಾನವನ್ನು ನುಂಗಿಕೊಂಡು ನಂಬಿಯಾರರೆಂದೂ ಸುಮ್ಮನೆ ಕುಳಿತವರಲ್ಲ.ಈಗ ತಮಗೆ ಇದಿರಾದವನು ಒಬ್ಬ ವ್ಯಕ್ತಿ ಮಾತ್ರವಲ್ಲ ಎಂಬ ಅಸ್ಪಷ್ಟ ಭೀತಿಯೇ ದುಡುಕದಂತೆ ಅವರನ್ನು ತಡೆಹಿಡಿದಿರಬೇಕೆಂದು ಮಾಸ್ತರು ಯೋಚಿಸಿದರು.ಈಗ ಪ್ರತಿ ರಾತ್ರೆಯೂ ಅವರು ಕಾಣುತ್ತಿದ್ದುದು ನಿರುತ್ಸಾಹಿಯಾದ ಕಣ್ಣನನ್ನು,ಲತನ ಮುಖ ನಿಸ್ತೇಜವಾಗಿರುತಿತ್ತು. ಆ ಹೃದಯದೊಳಗಿನ ಸಂಕಟವನ್ನು ಸ್ವಲ್ಪ ಮಟ್ಟಿಗೆ ಸರಿಯಾಗಿಯೇ ಊಹಿಸಿದ್ದರು.ಆದರೆ,ಅದಕ್ಕೆ ಇಂತಹದೇ ಪರಿಹಾರವೆಂದು ಬಾಯಿ ತೆರೆದು ಸಲಹೆ ಮಾಡಲು ಅವರು ಹಿಂಜರಿದರು ಆ ಹೃದಯದ ಗೊಂದಲವೇನೆಂಬುದನ್ನೂ ಆ ಮೆದುಳಿನಲ್ಲಿ ಸುಳಿಯುತಿದ್ದ ವಿಚಾರಗಳನ್ನೂ ಮೊದಲು ತಿಳಿದವನು ಅಪ್ಪು ,ಸ್ನಾನಕ್ಕೆಂದು ನದಿಗೆ ಹೋಗಿದ್ದ ಆತ,ಕಲ್ಲುಬಂಡೆಯ ಮೇಲೆ ಒಬ್ಬಂಟಿಗನಾಗಿಯೆ ಕುಳಿತಿದ್ದ ಕಣ್ಣನನ್ನು ಕಂಡ.ಇಬ್ಬರೂ ನೀರಿಗಿಳಿದು ಈಸಿದರು,ಮಿಂದರು ,ಆದರೆ ಮನದಣಿಯುವವರೆಗೂ ನೀರಲ್ಲಿರಲು ಇಬ್ಬರಿಗೂ ಆಸಕ್ತಿ ಇರಲಿಲ್ಲ .ದಡವನ್ನೇರಿ ಅವರು ಬಿಸಿಲಲ್ಲಿ ಮೈ ಕಾಯಿಸಿದರು. ಕಣ್ಣನನ್ನೇ ದಿಟ್ಟಿಸಿ ಅಪ್ಪು ಕೇಳಿದ : "ಯಾಕೋ ಸಪ್ಪಗಿದ್ದೀಯಲ್ಲಣ್ಣ.?" ಆ ಪ್ರಶ್ನೆಗೆ ಉತ್ತರವಿರಲಿಲ್ಲ.ಆದರೆ ಸ್ವಲ್ಪ ಹೊತ್ತು ತಡೆದು ಕಣ್ಣ ಕೇಳಿದ: "ಮಾಸ್ತರು ನನ್ನ ವಿಷಯ ಏನದರೂ ಹೇಳಿದರಾ?" "ಇಲ್ವಲ್ಲ!" ಮತ್ತೂ ಮೌನ ಅಪ್ಪುವಿನ ಸಹನೆಯನ್ನು ಪರೀಕ್ಷಿಸಿತು. "ನಾನು ಈ ಊರು ಬಿಟ್ಟು ಹೋಗ್ಬೇಕೂಂತ ಮಾಡಿದ್ದೇನೆ ಅಪ್ಪು." ಅಪ್ಪು ನಿರೀಕ್ಷಿಸಿದುದಕ್ಕಿಂತಲೂ ಕೆಟ್ಟುದಾಗಿತ್ತು ಉತ್ತರ . "ಯಾಕಣ್ಣ?" "ನಿನಗೆ ಗೊತ್ತಾಗಲ್ವ? ಇಲ್ಲಿರೋದು ಕಷ್ಟವಾಗ್ತದೆ.ಜನ ಏನೇನು<noinclude></noinclude> 3lfz794sf2fl83zg87cg4c72k06ygs1 322545 322541 2026-05-26T02:09:53Z Shreelatha.Halemane 7642 /* Validated */ 322545 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೧೨೯}} {{gap}}"ಅವರೆಲ್ಲ ಪೋಲಿಗಳು. ಪೋಲಿಗಳ ಸಹವಾಸದಿಂದ ನಿಮಗೆ ತೊಂದರೆಯಾಗಬಾರ್ದು ಮಾಸ್ತರೆ.ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಾರ್ದು.ತಿಳಿತೇ?" {{gap}}ಗಂಟಲು ಒಣಗಿದ್ದರೂ ಮಾಸ್ತರು ಪ್ರಯತ್ನ ಪಟ್ಟು,"ಹೂಂ ಬರ್ತೇನೆ ನಮಸ್ಕಾರ"ಎಂದರು {{gap}}ಆನಂತರದ ನಾಲ್ಕಾರು ದಿನಗಳಲ್ಲೂ ಕಣ್ಣನಿಗೇನೂ ಆಗಲಿಲ್ಲ.ಅದೊಂದು ರೀತಿಯಲ್ಲಿ ಆಶ್ಚರ್ಯದ ವಿಷಯವಾಗಿತ್ತು.ತಮಗಾದ ಅವಮಾನವನ್ನು ನುಂಗಿಕೊಂಡು ನಂಬಿಯಾರರೆಂದೂ ಸುಮ್ಮನೆ ಕುಳಿತವರಲ್ಲ.ಈಗ ತಮಗೆ ಇದಿರಾದವನು ಒಬ್ಬ ವ್ಯಕ್ತಿ ಮಾತ್ರವಲ್ಲ ಎಂಬ ಅಸ್ಪಷ್ಟ ಭೀತಿಯೇ ದುಡುಕದಂತೆ ಅವರನ್ನು ತಡೆಹಿಡಿದಿರಬೇಕೆಂದು ಮಾಸ್ತರು ಯೋಚಿಸಿದರು.ಈಗ ಪ್ರತಿ ರಾತ್ರೆಯೂ ಅವರು ಕಾಣುತ್ತಿದ್ದುದು ನಿರುತ್ಸಾಹಿಯಾದ ಕಣ್ಣನನ್ನು,ಲತನ ಮುಖ ನಿಸ್ತೇಜವಾಗಿರುತಿತ್ತು. {{gap}}ಆ ಹೃದಯದೊಳಗಿನ ಸಂಕಟವನ್ನು ಸ್ವಲ್ಪ ಮಟ್ಟಿಗೆ ಸರಿಯಾಗಿಯೇ ಊಹಿಸಿದ್ದರು.ಆದರೆ,ಅದಕ್ಕೆ ಇಂತಹದೇ ಪರಿಹಾರವೆಂದು ಬಾಯಿ ತೆರೆದು ಸಲಹೆ ಮಾಡಲು ಅವರು ಹಿಂಜರಿದರು {{gap}}ಆ ಹೃದಯದ ಗೊಂದಲವೇನೆಂಬುದನ್ನೂ ಆ ಮೆದುಳಿನಲ್ಲಿ ಸುಳಿಯುತಿದ್ದ ವಿಚಾರಗಳನ್ನೂ ಮೊದಲು ತಿಳಿದವನು ಅಪ್ಪು ,ಸ್ನಾನಕ್ಕೆಂದು ನದಿಗೆ ಹೋಗಿದ್ದ ಆತ,ಕಲ್ಲುಬಂಡೆಯ ಮೇಲೆ ಒಬ್ಬಂಟಿಗನಾಗಿಯೆ ಕುಳಿತಿದ್ದ ಕಣ್ಣನನ್ನು ಕಂಡ.ಇಬ್ಬರೂ ನೀರಿಗಿಳಿದು ಈಸಿದರು,ಮಿಂದರು ,ಆದರೆ ಮನದಣಿಯುವವರೆಗೂ ನೀರಲ್ಲಿರಲು ಇಬ್ಬರಿಗೂ ಆಸಕ್ತಿ ಇರಲಿಲ್ಲ .ದಡವನ್ನೇರಿ ಅವರು ಬಿಸಿಲಲ್ಲಿ ಮೈ ಕಾಯಿಸಿದರು. {{gap}}ಕಣ್ಣನನ್ನೇ ದಿಟ್ಟಿಸಿ ಅಪ್ಪು ಕೇಳಿದ : {{gap}}"ಯಾಕೋ ಸಪ್ಪಗಿದ್ದೀಯಲ್ಲಣ್ಣ.?" {{gap}}ಆ ಪ್ರಶ್ನೆಗೆ ಉತ್ತರವಿರಲಿಲ್ಲ.ಆದರೆ ಸ್ವಲ್ಪ ಹೊತ್ತು ತಡೆದು ಕಣ್ಣ ಕೇಳಿದ: {{gap}}"ಮಾಸ್ತರು ನನ್ನ ವಿಷಯ ಏನದರೂ ಹೇಳಿದರಾ?" {{gap}}"ಇಲ್ವಲ್ಲ!" {{gap}}ಮತ್ತೂ ಮೌನ ಅಪ್ಪುವಿನ ಸಹನೆಯನ್ನು ಪರೀಕ್ಷಿಸಿತು. {{gap}}"ನಾನು ಈ ಊರು ಬಿಟ್ಟು ಹೋಗ್ಬೇಕೂಂತ ಮಾಡಿದ್ದೇನೆ ಅಪ್ಪು." {{gap}}ಅಪ್ಪು ನಿರೀಕ್ಷಿಸಿದುದಕ್ಕಿಂತಲೂ ಕೆಟ್ಟುದಾಗಿತ್ತು ಉತ್ತರ . {{gap}}"ಯಾಕಣ್ಣ?" {{gap}}"ನಿನಗೆ ಗೊತ್ತಾಗಲ್ವ? ಇಲ್ಲಿರೋದು ಕಷ್ಟವಾಗ್ತದೆ.ಜನ ಏನೇನು<noinclude></noinclude> b6st6ykdengkhyqtvblgg6l561vgxz3 ಪುಟ:Chirasmarane-Niranjana.pdf/೧೨೯ 104 12948 322542 64083 2026-05-26T02:06:48Z Shreesha Sharma 7840 /* Proofread */ 322542 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೧೩೦|right=ಚಿರಸ್ಮರಣೆ }} ಮಾತಾಡ್ತಿದ್ದಾರೆ? ನನಗೆ ಕಿವಿ ಇಲ್ವೇನು? ಕೇಳಿಸೋಲ್ವೇ?" ಅದು ಕಣ್ಣ-ದೇವಕಿಯರಿಗೆ ಸಂಬಂಧಿಸಿದ ಮಾತುಕತೆ, ವಯಸ್ಸಿನಲ್ಲಿ ಕಿರಿಯವನಾದ ತಾನು ಈವಿಷಯ ಏನು ಹೇಳಬೇಕೆಂದು ತಡವರಿಸಿದ, ಆದರೂ, ಏನೂ ಹೇಳದೆ ಸುಮ್ಮನಿರುವುದು ಸರಿ ಎನಿಸದೆ ಆತನೆಂದ: "ಅದನ್ನೆಲ್ಲ ನೀನು ಮನಸ್ಸಿಗೆ ಹಚ್ಕೊಬಾರ್ದು, ಜನ ಎಲ್ರೂ, ಕೆಟ್ಟೋರೆ ಇರ್ತಾರ?" ಅದು ಮಾಸ್ತರಿಂದ ಅಪ್ಪು ಕಲಿತಿದ್ದ ಪಾಠ, ಎಲ್ಲ ಜನರೂ ಯಾವಾಗಲೂ ಕೆಟ್ಟವರಲ್ಲ, ಜನರಲ್ಲಿ ಒಳ್ಳಯವರೂ ಇರ್ತಾರೆ, ಕೆಟ್ಟವರೂ ಇರ್ತಾರೆ, ಅತಿ ಕೆಟ್ಟವರ ಸಂಖ್ಯೆಯಂತೂ ಬಹಳ ಕಡಮೆ..... "ದೇವಕಿ ಹೀಗೆ ಇರೋಕಾಗೋದಿಲ್ಲ, ಅಪು, ಅವಳ್ನ ನಾನು ಮದುವೆಯಾಗ್ತೇನೆ." ಆ ಉತ್ತರ ಕೇಳಿದಾಗ ಅಪ್ಪುವಿನ ಒಳಗೇನೋ ಕುಪ್ಪಳಿಸಿತು. ತನಗೆ ತಿಳಿದ ರೀತಿಯಲ್ಲಿ ಆತನೂ ಆ ವಿಷಯ ಯೋಚಿಸಿದ್ದ, ದೇವಕಿಯನ್ನು ಕಣ್ಣ ಮದುವೆಯಾದರೆ ಸಮಸ್ಯೆ ಬಹಳ ಮಟ್ಟಿಗೆ ಬಗೆಹರಿಯುವುದೆಂದು ಆತನಿಗೆ ತೋರಿತ್ತು.ಆದರೆ ದೇವಕಿ ವಿಧವೆ,ಎಳೆಯ ಮಗುನವಿನ ತಾಯಿ,ಆದರೂ.... ಕಣ್ಣನೇ ಮಾತು ಮುಂದುವರಿಸಿದ: "ಕಾಸರಗೋಡಿಗೊ ಕಣ್ಣಾನೂರಿಗೊ ಹೋಗಿ ಕೂಲಿಯಾಗ್ತೇನೆ. ಈ ಊರಿನ ನೀರಿನ ಋಣ ಮುಗೀತೂಂತ ತಿಳಿತೇನೆ." ಆತನ ಕಂಠ ಗದ್ಗದಿತವಾಗಿ ಕಣ್ಣಿನ ಅಂಚಿನಲ್ಲಿ ನೀರು ತುಳುಕಾಡಿತು. ನೀರಿನ ಋಣ-ಎನ್ನುವ ಮಾತೆಲ್ಲ ಸಾಂಪ್ರದಾಯಿಕ.ಅಪ್ಪುವಿಗೆ ಅದು ಗೊತ್ತಿತ್ತು,ಆ ಮಾತಿನ ಹಿಂದಿನ ಭಾವನೆಯ ಆಳವೂ ಆತನಿಗೆ ಅರಿವಾಗುತಿತ್ತು. "ಯಾಕೆ ಹಾಗೆ ಹೇಳ್ತೀಯಾ? ಈ ಊರು ಬಿಟ್ಟು ಯಾಕೆ ಹೋಗ್ಬೇಕು?" "ಮತ್ತೆ ಇಲ್ಲಿ ಬದುಕೋದಕ್ಕೆ ಬಿಡ್ತಾರೇಂತ ತಿಳಿದ್ಯೇನು?" ಆ ದೌರ್ಬಲ್ಯದ ಧ್ವನಿ ಅಪ್ಪುವಿಗೆ ಏನೇನೂ ಇಷ್ಟವಾಗಲಿಲ್ಲ. "ನಾವು ಇಷ್ಟೊಂದು ಜನ ಇರುವಾಗ ನಿನಗೆ ಯಾವ ಭಯ? ದುಡಿದು ಬದುಕುವ ಜನ ಯಾರಿಗೆ ಯಾಕೆ ಹೆದರ್ಬೇಕು?ನಾವು ಒಗ್ಗಟಾಗಿದ್ದರೆ...." ಸಾವಿರ ಸಾರೆ ಕೇಳಿದ, ನೂರು ಸಾರೆ ತಾನೇ ಹೇಳಿದ್ದ ಮಾತನ್ನೇ ಇಲ್ಲಿ ಪುನರುಚ್ಚರಿಸುತ್ತಿದ್ದನೆಂದು ಅಪ್ಪುವಿಗೆ ಮನವರಿಕೆಯಾಯಿತು, ಅದು ಮೂಲಮಂತ್ರ: ಒಗ್ಗಟ್ಟು-ಜನರ ಐಕ್ಯ, ಆ ಮಾತುಗಳನ್ನು ಆಡಿದ್ದ ನಿಜ. ಆದರೆ<noinclude></noinclude> 20c6eigx8arf6xn7qgqj6fwa3vbgpos 322546 322542 2026-05-26T02:10:46Z Shreelatha.Halemane 7642 /* Validated */ 322546 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೩೦|right=ಚಿರಸ್ಮರಣೆ }} ಮಾತಾಡ್ತಿದ್ದಾರೆ? ನನಗೆ ಕಿವಿ ಇಲ್ವೇನು? ಕೇಳಿಸೋಲ್ವೇ?" {{gap}}ಅದು ಕಣ್ಣ-ದೇವಕಿಯರಿಗೆ ಸಂಬಂಧಿಸಿದ ಮಾತುಕತೆ, ವಯಸ್ಸಿನಲ್ಲಿ ಕಿರಿಯವನಾದ ತಾನು ಈವಿಷಯ ಏನು ಹೇಳಬೇಕೆಂದು ತಡವರಿಸಿದ, ಆದರೂ, ಏನೂ ಹೇಳದೆ ಸುಮ್ಮನಿರುವುದು ಸರಿ ಎನಿಸದೆ ಆತನೆಂದ: {{gap}}"ಅದನ್ನೆಲ್ಲ ನೀನು ಮನಸ್ಸಿಗೆ ಹಚ್ಕೊಬಾರ್ದು, ಜನ ಎಲ್ರೂ, ಕೆಟ್ಟೋರೆ ಇರ್ತಾರ?" {{gap}}ಅದು ಮಾಸ್ತರಿಂದ ಅಪ್ಪು ಕಲಿತಿದ್ದ ಪಾಠ, ಎಲ್ಲ ಜನರೂ ಯಾವಾಗಲೂ ಕೆಟ್ಟವರಲ್ಲ, ಜನರಲ್ಲಿ ಒಳ್ಳಯವರೂ ಇರ್ತಾರೆ, ಕೆಟ್ಟವರೂ ಇರ್ತಾರೆ, ಅತಿ ಕೆಟ್ಟವರ ಸಂಖ್ಯೆಯಂತೂ ಬಹಳ ಕಡಮೆ..... {{gap}}"ದೇವಕಿ ಹೀಗೆ ಇರೋಕಾಗೋದಿಲ್ಲ, ಅಪು, ಅವಳ್ನ ನಾನು ಮದುವೆಯಾಗ್ತೇನೆ." {{gap}}ಆ ಉತ್ತರ ಕೇಳಿದಾಗ ಅಪ್ಪುವಿನ ಒಳಗೇನೋ ಕುಪ್ಪಳಿಸಿತು. ತನಗೆ ತಿಳಿದ ರೀತಿಯಲ್ಲಿ ಆತನೂ ಆ ವಿಷಯ ಯೋಚಿಸಿದ್ದ, ದೇವಕಿಯನ್ನು ಕಣ್ಣ ಮದುವೆಯಾದರೆ ಸಮಸ್ಯೆ ಬಹಳ ಮಟ್ಟಿಗೆ ಬಗೆಹರಿಯುವುದೆಂದು ಆತನಿಗೆ ತೋರಿತ್ತು.ಆದರೆ ದೇವಕಿ ವಿಧವೆ,ಎಳೆಯ ಮಗುನವಿನ ತಾಯಿ,ಆದರೂ.... {{gap}}ಕಣ್ಣನೇ ಮಾತು ಮುಂದುವರಿಸಿದ: {{gap}}"ಕಾಸರಗೋಡಿಗೊ ಕಣ್ಣಾನೂರಿಗೊ ಹೋಗಿ ಕೂಲಿಯಾಗ್ತೇನೆ. ಈ ಊರಿನ ನೀರಿನ ಋಣ ಮುಗೀತೂಂತ ತಿಳಿತೇನೆ." {{gap}}ಆತನ ಕಂಠ ಗದ್ಗದಿತವಾಗಿ ಕಣ್ಣಿನ ಅಂಚಿನಲ್ಲಿ ನೀರು ತುಳುಕಾಡಿತು. ನೀರಿನ ಋಣ-ಎನ್ನುವ ಮಾತೆಲ್ಲ ಸಾಂಪ್ರದಾಯಿಕ.ಅಪ್ಪುವಿಗೆ ಅದು ಗೊತ್ತಿತ್ತು,ಆ ಮಾತಿನ ಹಿಂದಿನ ಭಾವನೆಯ ಆಳವೂ ಆತನಿಗೆ ಅರಿವಾಗುತಿತ್ತು. {{gap}}"ಯಾಕೆ ಹಾಗೆ ಹೇಳ್ತೀಯಾ? ಈ ಊರು ಬಿಟ್ಟು ಯಾಕೆ ಹೋಗ್ಬೇಕು?" "ಮತ್ತೆ ಇಲ್ಲಿ ಬದುಕೋದಕ್ಕೆ ಬಿಡ್ತಾರೇಂತ ತಿಳಿದ್ಯೇನು?" {{gap}}ಆ ದೌರ್ಬಲ್ಯದ ಧ್ವನಿ ಅಪ್ಪುವಿಗೆ ಏನೇನೂ ಇಷ್ಟವಾಗಲಿಲ್ಲ. {{gap}}"ನಾವು ಇಷ್ಟೊಂದು ಜನ ಇರುವಾಗ ನಿನಗೆ ಯಾವ ಭಯ? ದುಡಿದು ಬದುಕುವ ಜನ ಯಾರಿಗೆ ಯಾಕೆ ಹೆದರ್ಬೇಕು?ನಾವು ಒಗ್ಗಟಾಗಿದ್ದರೆ...." {{gap}}ಸಾವಿರ ಸಾರೆ ಕೇಳಿದ, ನೂರು ಸಾರೆ ತಾನೇ ಹೇಳಿದ್ದ ಮಾತನ್ನೇ ಇಲ್ಲಿ ಪುನರುಚ್ಚರಿಸುತ್ತಿದ್ದನೆಂದು ಅಪ್ಪುವಿಗೆ ಮನವರಿಕೆಯಾಯಿತು, ಅದು ಮೂಲಮಂತ್ರ: ಒಗ್ಗಟ್ಟು-ಜನರ ಐಕ್ಯ, ಆ ಮಾತುಗಳನ್ನು ಆಡಿದ್ದ ನಿಜ. ಆದರೆ<noinclude></noinclude> 7w6b44k6vocyefi0mjgqpagbvn7pxql ಪುಟ:Chirasmarane-Niranjana.pdf/೧೩೦ 104 12949 322544 64102 2026-05-26T02:08:23Z Shreesha Sharma 7840 /* Proofread */ 322544 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಚಿರಸ್ಮರಣೆ|right=೧೨೧}} ಕಣ್ಣನ ಮೇಲೆ ಅದು ಅಪೇಕ್ಷಿಸಿದಷ್ಟು ಪರಿಣಾಮ ಬೀರಿದಂತೆ ತೋರಲಿಲ್ಲ. ಒಡನೆಯೆ ಮಾಸ್ತರ ನೆನಪಾಗಿ ಆತ ಕೇಳಿದ: {{gap}}"ಮಾಸ್ತರಿಗೆ ಹೇಳಿದ್ಯಾ?" “ಇಲ್ಲ." "ಮತ್ತೆ? ಹೇಳೋದು ಬೇಡವಾ?" "ಹೇಳೋದಕ್ಕೆ ಒಂದು ರೀತಿಯ ಸಂಕೋಚ ಅಪ್ಪು, ಅವರು ಏನು ಅಂದ್ಕೋಲ್ತಾರೋ ?" - "ಛೆ! ಛೆ! ಒಳ್ಳೆ ಹೇಳ್ದೆವೆ! ಇಂಥಾದ್ದೆಲ್ಲ ಅವರಿಗೆ ತಿಳಿಸದೆ ಇರೋದಕಾಗ್ರದಾ?" ಎರಡು ನಿಮಿಷ ಸುಮ್ಮನಿದ್ದು ಶಾಂತಸ್ವರದಲ್ಲಿ ಕಣ್ಣ ಹೇಳಿದ: "ಮಾಸ್ತರ ಎದುರು ಕೂತಾಗ ನನಗೆ ಮಾತೇ ಬರೋದಿಲ್ಲ, ನೀನೊಂದು ಕೆಲಸ ಮಾಡ್ತೀಯಾ ಅಪ್ಪು...?ನನ್ನ ಮನಸ್ಸಿನಲ್ಲಿ ಏನಿದೆ ಅನ್ನೋದನ್ನ ಮಾಸ್ತರಿಗೆ ಹೇಳ್ತೀಯಾ?" "ಹೂಂ" ಎಂದ ಅಪ್ಪು... ತನ್ನಲ್ಲಿ ವಿಶಾಸವಿಟ್ಟು ಕಣ್ಣ ಅಂತಹ ಕೆಲಸ ಒಪ್ಪಿಸಿದನೆಂದು ಆತನಿಗೆ ಸಂತೋಷವಾಯಿತು.... .... ಮಾಸ್ತರಿಗೆ ಆಶ್ಚರ್ಯವಾಗಲಿಲ್ಲ, ಕಣ್ಣ ದೇವಕಿಯನ್ನು ಮದುವೆಯಾದರೆ ಒಳಿತಾಗುವುದೆಂದು ಅವರು ಆ ಮೊದಲೇ ಯೋಚಿಸಿದ್ದರು. ಆದರೆ ಕಣ್ಣ ಮತ್ತು ದೇವಕಿಯ ಮನಸ್ಸನ್ನು ತಿಳಿಯದೆ ಏನನ್ನೂ ಹೇಳುವುದು ಸರಿಯಲ್ಲವೆಂಬುದು ಅವರ ಅಭಿಪ್ರಾಯವಾಗಿತ್ತು, ಮದುವೆಗೆ ಕರುಣೆ ಸಹಾನುಭೂತಿ ಮಾತ್ರ ಸಾಲದು. ಗಂಡು ಹೆಣ್ಣು ಪರಸ್ಪರ ನೀಡುವ ಒಲವೂ ಬೇಕು-ಎಂದು ನಂಬಿದ್ದ ಮಾಸ್ತರು, ಕಣ್ಣನಿಂದಲೇ ಈ ಪ್ರಸ್ತಾಪ ಬರುವವರೆಗೂ ತಾವು ಸುಮ್ಮನಿರಬೇಕು ಎಂದು ಕೊಂಡಿದ್ದರು. ಈಗ ವಿಷಯ ಸ್ಪಷ್ಟವಾದುದಕ್ಕಾಗಿ ಅವರಿಗೆ ಸಮಾಧಾನವಾಯಿತು. ತನ್ನ ಪಾಲಿಗೆ ವ್ಯಾಕುಲಕ್ಕೆ ಕಾರಣವಾಗಿದ್ದೊಂದು ಮಾತನ್ನು ಅಪ್ಪು... ಹೇಳಿದ: "ಮದುವೆ ಆದ್ಮಲೆ ಊರುಬಿಟ್ಟು ಹೋಗ್ತೇನೇಂತ ಕಣ್ಣ ಮಾತಾಡ್ತಿದ್ದ." ಮಾಸ್ತರಿಗೆ ಸೋಜಿಗವೆನಿಸಲಿಲ್ಲ. “ವ್ಯಥೆಯಾದಾಗ ಹಾಗೆ ಮಾತಾಡೋದು ಸ್ವಾಭಾವಿಕ. ನಾನು ಅವನಿಗೆ ಹೇಳ್ತೇನೆ. " ...ಆ ರಾತ್ರಿಯೆ ಮಾಸ್ತರು ಕಣ್ಣನನ್ನು ಕರೆದು ಪ್ರತ್ಯೇಕವಾಗಿ ಮಾತನಾಡಿದರು. ಪರಿಣಾಮವಾಗಿ, ಬಹಳ ದಿನಗಳ ಬಳಿಕ ಕಣ್ಣ ಮತ್ತೊಮ್ಮೆ ಹಸನ್ಮುಖಿಯಾದ. ತೊಯ್ದ ಕಣ್ಣುಗಳು ಮಿನುಗಿದುವು. ತುಟಿಗಳ ಮೇಲೆ ನಗೆ ಮತ್ತೆ ಕಾಣಿಸಿಕೊಂಡಿತು. ರಾತ್ರಿ ಶಾಲೆಯ ತರಗತಿ ಮುಗಿಯುವ ಹೊತ್ತಿಗೆ ಅಲ್ಲಿದ್ದವರನ್ನು ಉದ್ದೇಶಿಸಿ<noinclude></noinclude> 7yiyser2pxpvl26kf45k1kr2ptjb6ho 322547 322544 2026-05-26T02:11:51Z Shreelatha.Halemane 7642 /* Validated */ 322547 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಚಿರಸ್ಮರಣೆ|right=೧೨೧}} ಕಣ್ಣನ ಮೇಲೆ ಅದು ಅಪೇಕ್ಷಿಸಿದಷ್ಟು ಪರಿಣಾಮ ಬೀರಿದಂತೆ ತೋರಲಿಲ್ಲ. ಒಡನೆಯೆ ಮಾಸ್ತರ ನೆನಪಾಗಿ ಆತ ಕೇಳಿದ: {{gap}}"ಮಾಸ್ತರಿಗೆ ಹೇಳಿದ್ಯಾ?" {{gap}}“ಇಲ್ಲ." {{gap}}"ಮತ್ತೆ? ಹೇಳೋದು ಬೇಡವಾ?" {{gap}}"ಹೇಳೋದಕ್ಕೆ ಒಂದು ರೀತಿಯ ಸಂಕೋಚ ಅಪ್ಪು, ಅವರು ಏನು ಅಂದ್ಕೋಲ್ತಾರೋ ?" - {{gap}}"ಛೆ! ಛೆ! ಒಳ್ಳೆ ಹೇಳ್ದೆವೆ! ಇಂಥಾದ್ದೆಲ್ಲ ಅವರಿಗೆ ತಿಳಿಸದೆ ಇರೋದಕಾಗ್ರದಾ?" ಎರಡು ನಿಮಿಷ ಸುಮ್ಮನಿದ್ದು ಶಾಂತಸ್ವರದಲ್ಲಿ ಕಣ್ಣ ಹೇಳಿದ: {{gap}}"ಮಾಸ್ತರ ಎದುರು ಕೂತಾಗ ನನಗೆ ಮಾತೇ ಬರೋದಿಲ್ಲ, ನೀನೊಂದು ಕೆಲಸ ಮಾಡ್ತೀಯಾ ಅಪ್ಪು...?ನನ್ನ ಮನಸ್ಸಿನಲ್ಲಿ ಏನಿದೆ ಅನ್ನೋದನ್ನ ಮಾಸ್ತರಿಗೆ ಹೇಳ್ತೀಯಾ?" {{gap}}"ಹೂಂ" ಎಂದ ಅಪ್ಪು... ತನ್ನಲ್ಲಿ ವಿಶಾಸವಿಟ್ಟು ಕಣ್ಣ ಅಂತಹ ಕೆಲಸ ಒಪ್ಪಿಸಿದನೆಂದು ಆತನಿಗೆ ಸಂತೋಷವಾಯಿತು.... {{gap}}.... ಮಾಸ್ತರಿಗೆ ಆಶ್ಚರ್ಯವಾಗಲಿಲ್ಲ, ಕಣ್ಣ ದೇವಕಿಯನ್ನು ಮದುವೆಯಾದರೆ ಒಳಿತಾಗುವುದೆಂದು ಅವರು ಆ ಮೊದಲೇ ಯೋಚಿಸಿದ್ದರು. ಆದರೆ ಕಣ್ಣ ಮತ್ತು ದೇವಕಿಯ ಮನಸ್ಸನ್ನು ತಿಳಿಯದೆ ಏನನ್ನೂ ಹೇಳುವುದು ಸರಿಯಲ್ಲವೆಂಬುದು ಅವರ ಅಭಿಪ್ರಾಯವಾಗಿತ್ತು, ಮದುವೆಗೆ ಕರುಣೆ ಸಹಾನುಭೂತಿ ಮಾತ್ರ ಸಾಲದು. ಗಂಡು ಹೆಣ್ಣು ಪರಸ್ಪರ ನೀಡುವ ಒಲವೂ ಬೇಕು-ಎಂದು ನಂಬಿದ್ದ ಮಾಸ್ತರು, ಕಣ್ಣನಿಂದಲೇ ಈ ಪ್ರಸ್ತಾಪ ಬರುವವರೆಗೂ ತಾವು ಸುಮ್ಮನಿರಬೇಕು ಎಂದು ಕೊಂಡಿದ್ದರು. ಈಗ ವಿಷಯ ಸ್ಪಷ್ಟವಾದುದಕ್ಕಾಗಿ ಅವರಿಗೆ ಸಮಾಧಾನವಾಯಿತು. {{gap}}ತನ್ನ ಪಾಲಿಗೆ ವ್ಯಾಕುಲಕ್ಕೆ ಕಾರಣವಾಗಿದ್ದೊಂದು ಮಾತನ್ನು ಅಪ್ಪು... ಹೇಳಿದ: {{gap}}"ಮದುವೆ ಆದ್ಮಲೆ ಊರುಬಿಟ್ಟು ಹೋಗ್ತೇನೇಂತ ಕಣ್ಣ ಮಾತಾಡ್ತಿದ್ದ." ಮಾಸ್ತರಿಗೆ ಸೋಜಿಗವೆನಿಸಲಿಲ್ಲ. {{gap}}“ವ್ಯಥೆಯಾದಾಗ ಹಾಗೆ ಮಾತಾಡೋದು ಸ್ವಾಭಾವಿಕ. ನಾನು ಅವನಿಗೆ ಹೇಳ್ತೇನೆ. {{gap}}" ...ಆ ರಾತ್ರಿಯೆ ಮಾಸ್ತರು ಕಣ್ಣನನ್ನು ಕರೆದು ಪ್ರತ್ಯೇಕವಾಗಿ ಮಾತನಾಡಿದರು. ಪರಿಣಾಮವಾಗಿ, ಬಹಳ ದಿನಗಳ ಬಳಿಕ ಕಣ್ಣ ಮತ್ತೊಮ್ಮೆ ಹಸನ್ಮುಖಿಯಾದ. ತೊಯ್ದ ಕಣ್ಣುಗಳು ಮಿನುಗಿದುವು. ತುಟಿಗಳ ಮೇಲೆ ನಗೆ ಮತ್ತೆ ಕಾಣಿಸಿಕೊಂಡಿತು. {{gap}}ರಾತ್ರಿ ಶಾಲೆಯ ತರಗತಿ ಮುಗಿಯುವ ಹೊತ್ತಿಗೆ ಅಲ್ಲಿದ್ದವರನ್ನು ಉದ್ದೇಶಿಸಿ<noinclude></noinclude> nq7lmim8vesmv22hxp3z0wblfujlhrt ಪುಟ:ಕವಿರಾಜ ಮಾರ್ಗಂ.pdf/೧೪ 104 16245 322492 156861 2026-05-25T14:07:41Z Pragathi. BH 7585 /* ಪರಿಶೀಲಿಸಲಾಗಿಲ್ಲ */ 322492 proofread-page text/x-wiki <noinclude><pagequality level="1" user="Pragathi. BH" /></noinclude>xiv ಸಹೃದಯ ಓದುಗರು ಇಂಥ ದೋಷಗಳನ್ನು ನಮ್ಮ ಗಮನಕ್ಕೆ ತರಬೇಕಾಗಿ ಕೋರಿಕೆ. ಈ ಗ್ರಂಥ ಮುದ್ರಣದ ಕಾರ್ಯದಲ್ಲಿ ನೆರವಾದರು ಹಲವರು. ಮೊದಲಿಗೆ ಆರ್ಥಿಕ ನೆರವು ನೀಡಿದ ನ್ಯೂಯಾರ್ಕ್ ಕನ್ನಡ ಕೂಟ, ಅದನ್ನು ಒದಗಿಸಿಕೊಟ್ಟ ಗೌರವಾಧ್ಯಕ್ಷರಾದ ನಿಟ್ಟೂರು ಶ್ರೀನಿವಾಸ ರಾವ್ ಅವರು ; ಮುದ್ರಣ ಜವಾಬ್ದಾರಿಯನ್ನು ನಮಗೆ ವಹಿಸಿದ ಅಧ್ಯಕ್ಷರಾದ ಶ್ರೀ ಎನ್.ಬಸವಾರಾಧ್ಯ ಅವರು ; ಇವರೊಂದಿಗೆ ಮುದ್ರಣದ ಪ್ರಗತಿಯನ್ನು ವಿಚಾರಿಸುತ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದ ಶ್ರೀ ಜಿ. ಚನ್ನವೀರಸ್ವಾಮಿ ಮತ್ತು ಪ್ರೊ| ಎಂ.ವಿ. ಸತ್ಯನಾರಾಯಣ. ಇವರುಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನ. ಹಿರಿಯರಾದ ಶ್ರೀ ಎನ್. ಎಸ್. ರಾಮಸ್ವಾಮಿ ಅಯ್ಯರ್ ಅವರು ನನ್ನ ಒತ್ತಾಯವನ್ನು ಮನ್ನಿಸಿ ಶ್ರಮಸಾಧ್ಯವಾದ ಕರಡು ತಿದ್ದುವ ಕೆಲಸವನ್ನು ಬೇಸರವಿಲ್ಲದೆ ಮಾಡಿಕೊಟ್ಟಿದ್ದಾರೆ, ಮಿತ್ರ ಪರಮಶಿವಮೂರ್ತಿ ಅವರು ಲೇಖನ ಸೂಚಿಯನ್ನು ಸಿದ್ಧಪಡಿಸಲು ಹಾಗೂ ಸ್ನೇಹಿತರಾದ ಶಂಭಣ್ಣ, ಕೃಷ್ಣಯ್ಯ, ವರದರಾಜು, ಕುಮಾರ್, ಶಶಿಧರ್ ಹಲವು ರೀತಿಯಲ್ಲಿ ನೆರವಾಗಿದ್ದಾರೆ. ಇವರುಗಳನ್ನೂ ಇಲ್ಲಿ ಕೃತಜ್ಞತೆಯಿಂದ ನೆನೆಯುತ್ತೇನೆ. ಮುದ್ರಣ ಕಾರವನ್ನು ನೆರವೇರಿಸಿ ಕೊಟ್ಟ ನೇತ್ರಾ ಪಿಂಟರ್‌ನ ಶ್ರೀ ಮುನಿಧರ್ಮಯ್ಯ, ಶ್ರೀರಾಜು ಮತ್ತು ಅವರ ಸಿಬ್ಬಂದಿಯವರಿಗೂ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ. ಈ ಪುಸ್ತಕದ ಪ್ರಕಟನೆಯ ಜವಾಬ್ದಾರಿಯನ್ನು ನಮಗೆ ಒಪ್ಪಿಸಿದುದಕ್ಕಾಗಿ ನಾನು ಅಧ್ಯಕ್ಷರಾದ ಶ್ರೀ ಎನ್. ಬಸವಾರಾಧ್ಯ ಅವರಿಗೂ ಸಮಿತಿಯ ಎಲ್ಲ ಸದಸ್ಯರಿಗೂ ಋಣಿಯಾಗಿದ್ದೇನೆ. ಬದುಕನ್ನು ರೂಪಿಸಿಕೊಟ್ಟ ಪೂಜ್ಯ ಸೀತಾರಾಮಯ್ಯನವರ ಸಾಹಿತ್ಯ ಸೇವೆ ನನ್ನ ಪಾಲೀನ ಶ್ರದ್ಧಾಪೂರ್ಣ ಕರ್ತವ್ಯವಾಗಿದೆ. ಅವರೇ ಕಲಿಸಿಕೊಟ್ಟ ಅಚ್ಚುಕಟ್ಟುತನ ಈ ಕರ್ತವ್ಯಪಾಲನೆಯಲ್ಲಿ ಎಲ್ಲಿಯಾದರೂ ಕಾಣದ ಹೋದಲ್ಲಿ ಸಹೃದಯರು ದಯಮಾಡಿ ಮನ್ನಿಸಬೇಕಾಗಿ ವಿನಂತಿ, ೧೯೯೪ ನಾ. ಗೀತಾಚಾರ್ಯ ಸಂಯೋಜಕ ಮತ್ತು ಗೌ ಕಾವ್ಯದರ್ಶಿ ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ ಎಂ.ವಿ.ಸೀ. ಸಂಶೋಧನ ಕೇಂದ್ರ ಬಿ.ಎಂ.ಶ್ರೀ. ಕಲಾಭವನ, ನರಸಿಂಹರಾಜ ಕಾಲೋನಿ ಬೆಂಗಳೂರು - ೫೬೦ ೦೧೯<noinclude></noinclude> 3hj6gyuzeplbm4dcije07yng75sae9r ಪುಟ:ಕವಿರಾಜ ಮಾರ್ಗಂ.pdf/೧೫ 104 16246 322491 252593 2026-05-25T14:07:11Z Pragathi. BH 7585 /* Validated */ 322491 proofread-page text/x-wiki <noinclude><pagequality level="4" user="Pragathi. BH" /></noinclude>{{center|ಪರಿವಿಡಿ}} {{rh|left=ಶುಭ ಸಂದೇಶ |right=iii}} {{rh|left=ಚೆನ್ನುಡಿ |right=iv}} {{rh|left=ಅಧ್ಯಕ್ಷರ ಮಾತು |right=v}} {{rh|left=ಹೊನ್ನುಡಿ |right=vi}} {{rh|left=ಎರಡು ನುಡಿ |right=vii}} {{rh|left=ಪ್ರಕಾಶಕರ ಮಾತು |right=viii}} {{rh|left=ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ |right=x}} {{rh|left=ಅರಿಕೆ |right=xi}} ೧. ಕವಿರಾಜಮಾರ್ಗಂ :೧. ಪ್ರಥಮ ಪರಿಚ್ಛೇದಂ :೨. ದ್ವಿತೀಯ ಪರಿಚ್ಛೇದಂ :೩. ತೃತೀಯ ಪರಿಚ್ಛೇದಂ :೪. ಅನುಬಂಧ : ಪ್ರಾಸ ವಿಚಾರ ಅಧಿಕ ಪಾಠ :೨. ಟಿಪ್ಪಣಿಗಳು :೩. ಅನುಬಂಧಗಳು :೧. ರಾಷ್ಟ್ರಕೂಟವಂಶಾವಳಿ :೨. ಮುಖ್ಯಪಾಠಾ೦ತರಗಳು :೩. ಕೆ.ಬಿ. ಪಾಠಕ್‌ ಮತ್ತು ಮದ್ರಾಸ್‌ ಮುದ್ರಣಗಳ ಸಂಪಾದಕೀಯ ಟಿಪ್ಪಣಿಗಳು :೪. ಇತರ ಗ್ರಂಥಗಳಲ್ಲಿ ಉದಾಹೃತಗಳಾದ ಕವಿರಾಜಮಾರ್ಗದ ಪದ್ಯಗಳು :೫. ಪದ್ಯಗಳ ಅಕಾರಾದಿ :೬. ಪಾರಿಭಾಷಿಕ ಪದಗಳ ಅಕಾರಾದಿ :೭. ಹೆಸರುಗಳ ಅಕಾರಾದಿ :೮. ವಿಶೇಷ ಟಿಪ್ಪಣಿಗಳು :೯. ಗ್ರಂಥಯಣ<noinclude></noinclude> n7725lw2vi1piulbq9l4uvsqfht0500 ಪುಟ:ಕವಿರಾಜ ಮಾರ್ಗಂ.pdf/೧೬ 104 16247 322490 156883 2026-05-25T14:06:20Z Pragathi. BH 7585 /* Proofread */ 322490 proofread-page text/x-wiki <noinclude><pagequality level="3" user="Pragathi. BH" /></noinclude>ಶ್ರೀವಿಜಯಕೃತ ಕವಿರಾಜಮಾರ್ಗಂ<noinclude></noinclude> 4bo7gia083r7kw7qo8o2v4ia5ocgnfg ಪುಟ:ಕವಿರಾಜ ಮಾರ್ಗಂ.pdf/೧೭ 104 16248 322488 275918 2026-05-25T14:05:27Z Pragathi. BH 7585 /* Validated */ 322488 proofread-page text/x-wiki <noinclude><pagequality level="4" user="Pragathi. BH" /></noinclude>{{c|{{big|'''ಸಂಪಾದಕನ ಅರಿಕೆ'''}}<br /> {{center|(ವಿದ್ಯಾರ್ಥಿ ಆವೃತ್ತಿ)}} {{gap}}ನಾನು ಎಂ.ಎ. ತರಗತಿಯ ವಿದ್ಯಾರ್ಥಿಯಾಗಿದ್ದಾಗ (೧೯೩೧-೩೩) ನನ್ನ ವಿದ್ಯಾಗುರು ದಿವ೦ಗತ ಪ್ರೊ. ಟಿ.ಎಸ್‌. ವೆಂಕಣ್ಣಯ್ಯನವರು ಕನ್ನಡ ಸಾಹಿತ್ಯ ಚರಿತ್ರೆಯ ಪಾಠದ ಅಂಗವಾಗಿ ಕವಿರಾಜಮಾರ್ಗದ ಕೆಲವು ಭಾಗಗಳನ್ನು ಸ್ಥೂಲವಾಗಿ ತಿಳಿಯಹೇಳಿದರು. ಕವಿರಾಜಮಾರ್ಗದ ಕರ್ತೃತ್ವದ ವಿಚಾರವಾಗಿ ಅವರಿಗೂ ನಾ.ಶ್ರೀ. ರಾಜಪುರೋಹಿತರಿಗೂ ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ನಡೆದಿದ್ದ ಪತ್ರವ್ಯವಹಾರವನ್ನು ನಾನು ಆಸಕ್ತಿಯಿಂದ ಓದಿದ್ದು ಆಗಲೇ. ಮದ್ರಾಸು ವಿಶ್ವವಿದ್ಯಾನಿಲಂಯುದವರು ಅದೇ ತಾನೇ ಕವಿರಾಜವರಾರ್ಗದ ದ್ವಿತೀಂಯು ಮುದ್ರಣವನ್ನು ಹೊರತಂದಿದ್ದರು. ಆಗ ಮದರಾಸಿನಿಂದ ಪ್ರಕಟವಾಗುತ್ತಿದ್ದ "ಪ್ರಜಾಮತ" ವಾರಪತ್ರಿಕೆಗೆ ಹೋದ ವಿಮರ್ಶೆಯ ಪ್ರಶಕಿ ವಿಮರ್ಶೆಗೆಂದು ನನ್ನ ಬಳಿ ಬ೦ದಿತು. ವಿದ್ವಾಂಸರೊಬ್ಬರು ಮಾಡಬೇಕಾಗಿದ್ದ ಕಾರ್ಯವನ್ನು ನನ್ನಂತಹ ಅಪರಿಣತ ವಿದ್ಯಾರ್ಥಿಯೊಬ್ಬನು ಮಾಡುವುದು ಹೇಗೆ ಎಂದು ಅಧೀರನಾಗಿ ಹಿ೦ಜರಿಯುತ್ತಿದ್ದ ನನ್ನನ್ನು ಉತ್ತೇಜಿಸಿ ವಿಮರ್ಶೆಯನ್ನು ಮಾಡಿಸಿದವರು ವೆಂಕಣ್ಣಯ್ಯನವರು. ಅಂದಿನಿಂದ ನಾನು ಕವಿರಾಜಮಾರ್ಗದ ಭಕ್ತ {{gap}}ಈಗ್ಲೆ ಮೂರು ನಾಲ್ಕು ವರ್ಷಗಳ ಹಿಂದೆ ಬಿ.ಎ. ಪದವಿ ಪರೀಕ್ಷೆಗೆ ಕನ್ನಡವನ್ನು ಪ್ರಧಾನ (Major) ವಿಷಯವಾಗಿ ವ್ಯಾಸಂಗಮಾಡುವ ವಿದ್ಯಾರ್ಥಿಗಳಿಗೆ ಕವಿರಾಜಮಾರ್ಗವನ್ನು ನಾನು ಪಾಠ ಹೇಳಬೇಕಾಗಿ ಬ೦ದಿತು. ಆಗ ನನಗೆ ಗೋಚರವಾಯಿತು, ಕವಿರಾಜಮಾರ್ಗವನ್ನು ಪಾಠ ಹೇಳಬೇಕಾದರೆ ಕೇವಲ ಗ್ರಂಥಭಕ್ತಿ ಸಾಲದು ಎಂಬ ಸತ್ಯಸಂಗತಿ; ಅದನ್ನು ಪಾಠಮಾಡಬೇಕಾದ ಅಧ್ಯಾಪಕನ ಬವಣೆ ಎಂಥದು ಎಂಬ ನಿಜ ವಿಚಾರ, ಗ್ರಂಥದ ಮುದ್ರಿತ ಪ್ರತಿಗಳಲ್ಲಿ ಕಂಡುಬರುತ್ತಿದ್ದ ಪಾಠಗ್ರಂಥಿಗಳು, ಅರ್ಥಕ್ಷೇಶಗಳು, ಸಹಾಯಕ ಟಿಪ್ಪಣಿಗಳ ಕೊರತೆ—ಇವೆಲ್ಲ ಬೋಧಕನನ್ನು ಸವಾಲು ಹಾಕಿ ಎದುರಿಸುತ್ತಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ವಿದ್ಯಾರ್ಥಿಗಳಿಗೆ ಎಲ್ಲಿಯೂ ಒಂದು ಪ್ರಕಿ ಕೂಡ ದೊರಕದಿದ್ದ ಪರಿಸ್ಥಿತಿ ನನಗೆ ತುಂಬ ವ್ಯಥೆಯನ್ನುಂಟುಮಾಡಿತು; ಏನಾದರೂ ಪರಿಹಾರ ಹುಡುಕುವಂತೆ<noinclude></noinclude> 1i56r47bgtmrvh049283384sobvaqbx 322489 322488 2026-05-25T14:05:53Z Pragathi. BH 7585 322489 proofread-page text/x-wiki <noinclude><pagequality level="4" user="Pragathi. BH" /></noinclude>{{c|{{big|'''ಸಂಪಾದಕನ ಅರಿಕೆ'''}}}}<br /> {{center|(ವಿದ್ಯಾರ್ಥಿ ಆವೃತ್ತಿ)}} {{gap}}ನಾನು ಎಂ.ಎ. ತರಗತಿಯ ವಿದ್ಯಾರ್ಥಿಯಾಗಿದ್ದಾಗ (೧೯೩೧-೩೩) ನನ್ನ ವಿದ್ಯಾಗುರು ದಿವ೦ಗತ ಪ್ರೊ. ಟಿ.ಎಸ್‌. ವೆಂಕಣ್ಣಯ್ಯನವರು ಕನ್ನಡ ಸಾಹಿತ್ಯ ಚರಿತ್ರೆಯ ಪಾಠದ ಅಂಗವಾಗಿ ಕವಿರಾಜಮಾರ್ಗದ ಕೆಲವು ಭಾಗಗಳನ್ನು ಸ್ಥೂಲವಾಗಿ ತಿಳಿಯಹೇಳಿದರು. ಕವಿರಾಜಮಾರ್ಗದ ಕರ್ತೃತ್ವದ ವಿಚಾರವಾಗಿ ಅವರಿಗೂ ನಾ.ಶ್ರೀ. ರಾಜಪುರೋಹಿತರಿಗೂ ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ನಡೆದಿದ್ದ ಪತ್ರವ್ಯವಹಾರವನ್ನು ನಾನು ಆಸಕ್ತಿಯಿಂದ ಓದಿದ್ದು ಆಗಲೇ. ಮದ್ರಾಸು ವಿಶ್ವವಿದ್ಯಾನಿಲಂಯುದವರು ಅದೇ ತಾನೇ ಕವಿರಾಜವರಾರ್ಗದ ದ್ವಿತೀಂಯು ಮುದ್ರಣವನ್ನು ಹೊರತಂದಿದ್ದರು. ಆಗ ಮದರಾಸಿನಿಂದ ಪ್ರಕಟವಾಗುತ್ತಿದ್ದ "ಪ್ರಜಾಮತ" ವಾರಪತ್ರಿಕೆಗೆ ಹೋದ ವಿಮರ್ಶೆಯ ಪ್ರಶಕಿ ವಿಮರ್ಶೆಗೆಂದು ನನ್ನ ಬಳಿ ಬ೦ದಿತು. ವಿದ್ವಾಂಸರೊಬ್ಬರು ಮಾಡಬೇಕಾಗಿದ್ದ ಕಾರ್ಯವನ್ನು ನನ್ನಂತಹ ಅಪರಿಣತ ವಿದ್ಯಾರ್ಥಿಯೊಬ್ಬನು ಮಾಡುವುದು ಹೇಗೆ ಎಂದು ಅಧೀರನಾಗಿ ಹಿ೦ಜರಿಯುತ್ತಿದ್ದ ನನ್ನನ್ನು ಉತ್ತೇಜಿಸಿ ವಿಮರ್ಶೆಯನ್ನು ಮಾಡಿಸಿದವರು ವೆಂಕಣ್ಣಯ್ಯನವರು. ಅಂದಿನಿಂದ ನಾನು ಕವಿರಾಜಮಾರ್ಗದ ಭಕ್ತ {{gap}}ಈಗ್ಲೆ ಮೂರು ನಾಲ್ಕು ವರ್ಷಗಳ ಹಿಂದೆ ಬಿ.ಎ. ಪದವಿ ಪರೀಕ್ಷೆಗೆ ಕನ್ನಡವನ್ನು ಪ್ರಧಾನ (Major) ವಿಷಯವಾಗಿ ವ್ಯಾಸಂಗಮಾಡುವ ವಿದ್ಯಾರ್ಥಿಗಳಿಗೆ ಕವಿರಾಜಮಾರ್ಗವನ್ನು ನಾನು ಪಾಠ ಹೇಳಬೇಕಾಗಿ ಬ೦ದಿತು. ಆಗ ನನಗೆ ಗೋಚರವಾಯಿತು, ಕವಿರಾಜಮಾರ್ಗವನ್ನು ಪಾಠ ಹೇಳಬೇಕಾದರೆ ಕೇವಲ ಗ್ರಂಥಭಕ್ತಿ ಸಾಲದು ಎಂಬ ಸತ್ಯಸಂಗತಿ; ಅದನ್ನು ಪಾಠಮಾಡಬೇಕಾದ ಅಧ್ಯಾಪಕನ ಬವಣೆ ಎಂಥದು ಎಂಬ ನಿಜ ವಿಚಾರ, ಗ್ರಂಥದ ಮುದ್ರಿತ ಪ್ರತಿಗಳಲ್ಲಿ ಕಂಡುಬರುತ್ತಿದ್ದ ಪಾಠಗ್ರಂಥಿಗಳು, ಅರ್ಥಕ್ಷೇಶಗಳು, ಸಹಾಯಕ ಟಿಪ್ಪಣಿಗಳ ಕೊರತೆ—ಇವೆಲ್ಲ ಬೋಧಕನನ್ನು ಸವಾಲು ಹಾಕಿ ಎದುರಿಸುತ್ತಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ವಿದ್ಯಾರ್ಥಿಗಳಿಗೆ ಎಲ್ಲಿಯೂ ಒಂದು ಪ್ರಕಿ ಕೂಡ ದೊರಕದಿದ್ದ ಪರಿಸ್ಥಿತಿ ನನಗೆ ತುಂಬ ವ್ಯಥೆಯನ್ನುಂಟುಮಾಡಿತು; ಏನಾದರೂ ಪರಿಹಾರ ಹುಡುಕುವಂತೆ<noinclude></noinclude> 4zf027om9bqigqmjo65cyx67kac7b3n ಪುಟ:ಕವಿರಾಜ ಮಾರ್ಗಂ.pdf/೧೮ 104 16249 322493 276724 2026-05-25T15:30:07Z Shreelatha.Halemane 7642 /* Proofread */ 322493 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|left=೨|center=|right=ಕವಿರಾಜಮಾರ್ಗ}} ನನ್ನನ್ನು ಪ್ರಚೋದಿಸಿತು. ನಮ್ಮ ಸಂಘದ ಮೂಲಕ ಗ್ರಂಥವನ್ನು ಪ್ರಕಟಿಸಬಹುದೆಂಬ ನನ್ನ ಸೂಚನೆಯನ್ನು ನನ್ನ ಸಹೋದ್ಯೋಗಿಗಳೂ ಸಂಘದ ಕಾರ್ಯಸಮಿತಿಯ ಸದಸ್ಯರೂ ಅಂಗೀಕರಿಸಿ ಗ್ರಂಥಸಂಪಾದನೆಯ ಕಾರ್ಯವನ್ನು ನನಗೇ ವಹಿಸಿಬಿಟ್ಟರು. ಸಲಹೆ ಕೊಟ್ಟಿದ್ದಕ್ಕೆ ವಿಶ್ವಾಸದ ಶಿಕ್ಷೆ ! ಕವಿರಾಜಮಾರ್ಗದ ಈ ಮೂರನೆಯ ಮುದ್ರಣ ಕಾರ್ಯದ ಹಿನ್ನೆಲೆ ಇದು. ಸಂಪಾದಕನ ಕಾರ್ಯವನ್ನು ವಹಿಸಿಕೊಂಡು ಸುಮಾರು ಎರಡು ವರ್ಷಗಳಾದ ಮೇಲೆ ಗ್ರಂಥ ಈಗಲಾದರೂ ಹೊರಬರುತ್ತಿರುವುದು ನನಗೆ ನೆಮ್ಮದಿಯುಂಟು ಮಾಡಿದೆ. {{gap}}ಗ್ರಂಥ ಸಂಪಾದನೆಯ ಕಾರ್ಯದಲ್ಲಿ ನನಗೆ ಹಲವು ಮಂದಿ ಹಲವು ಬಗೆಗಳಲ್ಲಿ ನೆರವು ನೀಡಿದ್ದಾರೆ. ಅವರಲ್ಲಿ ಮುಖ್ಯವಾದ ಕೆಲವರ ಹೆಸರನ್ನಾದರೂ ಹೇಳದಿದ್ದರೆ ಕರ್ತವ್ಯಲೋಪವಾಗುವುದು. ಗ್ರಂಥವನ್ನು ಅಚ್ಚಿಗಾಗಿ ಪ್ರತಿಮಾಡಿ ಸಿದ್ಧಗೊಳಿಸುವ ಕಾರ್ಯದಲ್ಲಿ ನನ್ನ ಸಹೋದ್ಯೋಗಿಗಳಾಗಿದ್ದ, ಸಂಪಾದಕ ಮಂಡಲಿಯ ಸದಸ್ಯರಾದ ಶ್ರೀ ಹಂ.ಪ. ನಾಗರಾಜಯ್ಯ ಎಂ.ಎ., ಮತ್ತು ಶ್ರೀಮತಿ ಲಲಿತಮ್ಮ ಎಂ.ಎ. ಇವರುಗಳು ನೆರವಾಗಿದ್ದಾರೆ; ಪಾಠ ನಿಷ್ಕರ್ಷೆಯ ಕಾರ್ಯದಲ್ಲಿ ಶ್ರೀ ಹಂ.ಪ. ನಾ. ಅವರ ಸಲಹೆ ಸೂಚನೆಗಳಿಂದ ಬಹಳ ಪ್ರಯೋಜನ ಪಡೆದಿದ್ದೇನೆ; ಪದ್ಯಗಳ ಅಕಾರಾದಿ, ನಾಮಸೂಚೀ ಪುತ್ರ ಪಾರಿಭಾಷಿಕ ಪದಗಳ ಪಟ್ಟಿ ಇವುಗಳನ್ನೂ ಬೇಸರಪಡದ ಸಿದ್ಧಪಡಿಸಿಕೊಟ್ಟವರು ಅವರ. ಅವರ ಉಪಕಾರದ ಹೊರೆ ಹಿರಿದು. ಅಲಂಕಾರ ಶಾಸ್ತ್ರದ ಎಷ್ಟೋ ವಿಚಾರಗಳನ್ನು ಗ್ರಹಿಸುವುದರಲ್ಲಿ ಪ್ರೊ. ಕೆ.ಟಿ. ಪಾಂಡುರಂಗಿ ಎಂ.ಎ., ಅವರಿಂದ ತಿಳಿವಳಿಕೆ ಪಡೆದಿದ್ದೇನೆ ; ಸಂಘದ ಅಧ್ಯಾಪಕ ಕಾರ್ಯದರ್ಶಿ ಶ್ರೀ ಆರ್.ಎನ್. ಪಟ್ಟಾರಿ ಎಂ.ಎ. ಅವರು ಅನೇಕ ವಿಧಗಳಲ್ಲಿ ಸಹಕರಿಸಿದ್ದಾರೆ. ಇವರೆಲ್ಲರಿಗೂ ಒಟ್ಟಿಗೆ ಕೃತಜ್ಞತೆಯನ್ನು ತಿಳಿಸುವ ಮಾತು ಒಂದೇ ಆದರೂ ಅದು ಒಳಗೊಂಡ ಕೃತಜ್ಞತಾಭಾವ ಅಪಾರ, ಅನಂತ ಎಂದು ಹೇಳಬಯಸುತ್ತೇನೆ. {{gap}}ನಾನು ಕಾಲೇಜಿನಿಂದ ನಿವೃತ್ತನಾದಾಗ (೨೪.೩.೧೯೬೭) ಕೆಲಸ ಅರ್ಧಾಂತರವಾಗಿತ್ತು. ಕೈಕೊಂಡ ಕಾರ್ಯವನ್ನು ಮುಗಿಸಿ ಕೃತಕೃತ್ಯನಾಗುವ ಅವಕಾಶವನ್ನು ಕಲ್ಪಿಸಿಕೊಟ್ಟದ್ದಕ್ಕಾಗಿ ಸಂಘದ ಈಗಿನ ಅಧ್ಯಕ್ಷರು ಶ್ರೀ ಜಿ. ಬ್ರಹ್ಮಪ್ಪ ಎಂ.ಎ. ಅವರಿಗೆ ನಾನು ಋಣಿಯಾಗಿದ್ದೇನೆ. {{gap}}ಈ ಮುದ್ರಣದಲ್ಲಿ ಹಲವು ಬಗೆಯ ಹಲವಾರು ಲೋಪದೋಷಗಳು ಕಂಡಬಂದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಅವು ನನ್ನ ಗಮನಕ್ಕೆ ಬಾರದೆ, ಇತರರ ಗಮನಕ್ಕೆ ಬರುವ ಸಂಭವ ಹೆಚ್ಚು : 'ಕಾಣನೇಗೆಯುಂ ತನ್ನ ದೋಷಮಂ ।<noinclude></noinclude> d6f6jsgebitxgkoi49u1usulvltspnh 322498 322493 2026-05-25T15:40:46Z Shreesha Sharma 7840 /* Validated */ 322498 proofread-page text/x-wiki <noinclude><pagequality level="4" user="Shreesha Sharma" /></noinclude>{{rh|left=೨|center=|right=ಕವಿರಾಜಮಾರ್ಗ}} ನನ್ನನ್ನು ಪ್ರಚೋದಿಸಿತು. ನಮ್ಮ ಸಂಘದ ಮೂಲಕ ಗ್ರಂಥವನ್ನು ಪ್ರಕಟಿಸಬಹುದೆಂಬ ನನ್ನ ಸೂಚನೆಯನ್ನು ನನ್ನ ಸಹೋದ್ಯೋಗಿಗಳೂ ಸಂಘದ ಕಾರ್ಯಸಮಿತಿಯ ಸದಸ್ಯರೂ ಅಂಗೀಕರಿಸಿ ಗ್ರಂಥಸಂಪಾದನೆಯ ಕಾರ್ಯವನ್ನು ನನಗೇ ವಹಿಸಿಬಿಟ್ಟರು. ಸಲಹೆ ಕೊಟ್ಟಿದ್ದಕ್ಕೆ ವಿಶ್ವಾಸದ ಶಿಕ್ಷೆ ! ಕವಿರಾಜಮಾರ್ಗದ ಈ ಮೂರನೆಯ ಮುದ್ರಣ ಕಾರ್ಯದ ಹಿನ್ನೆಲೆ ಇದು. ಸಂಪಾದಕನ ಕಾರ್ಯವನ್ನು ವಹಿಸಿಕೊಂಡು ಸುಮಾರು ಎರಡು ವರ್ಷಗಳಾದ ಮೇಲೆ ಗ್ರಂಥ ಈಗಲಾದರೂ ಹೊರಬರುತ್ತಿರುವುದು ನನಗೆ ನೆಮ್ಮದಿಯುಂಟು ಮಾಡಿದೆ. {{gap}}ಗ್ರಂಥ ಸಂಪಾದನೆಯ ಕಾರ್ಯದಲ್ಲಿ ನನಗೆ ಹಲವು ಮಂದಿ ಹಲವು ಬಗೆಗಳಲ್ಲಿ ನೆರವು ನೀಡಿದ್ದಾರೆ. ಅವರಲ್ಲಿ ಮುಖ್ಯವಾದ ಕೆಲವರ ಹೆಸರನ್ನಾದರೂ ಹೇಳದಿದ್ದರೆ ಕರ್ತವ್ಯಲೋಪವಾಗುವುದು. ಗ್ರಂಥವನ್ನು ಅಚ್ಚಿಗಾಗಿ ಪ್ರತಿಮಾಡಿ ಸಿದ್ಧಗೊಳಿಸುವ ಕಾರ್ಯದಲ್ಲಿ ನನ್ನ ಸಹೋದ್ಯೋಗಿಗಳಾಗಿದ್ದ, ಸಂಪಾದಕ ಮಂಡಲಿಯ ಸದಸ್ಯರಾದ ಶ್ರೀ ಹಂ.ಪ. ನಾಗರಾಜಯ್ಯ ಎಂ.ಎ., ಮತ್ತು ಶ್ರೀಮತಿ ಲಲಿತಮ್ಮ ಎಂ.ಎ. ಇವರುಗಳು ನೆರವಾಗಿದ್ದಾರೆ; ಪಾಠ ನಿಷ್ಕರ್ಷೆಯ ಕಾರ್ಯದಲ್ಲಿ ಶ್ರೀ ಹಂ.ಪ. ನಾ. ಅವರ ಸಲಹೆ ಸೂಚನೆಗಳಿಂದ ಬಹಳ ಪ್ರಯೋಜನ ಪಡೆದಿದ್ದೇನೆ; ಪದ್ಯಗಳ ಅಕಾರಾದಿ, ನಾಮಸೂಚೀ ಪುತ್ರ ಪಾರಿಭಾಷಿಕ ಪದಗಳ ಪಟ್ಟಿ ಇವುಗಳನ್ನೂ ಬೇಸರಪಡದ ಸಿದ್ಧಪಡಿಸಿಕೊಟ್ಟವರು ಅವರ. ಅವರ ಉಪಕಾರದ ಹೊರೆ ಹಿರಿದು. ಅಲಂಕಾರ ಶಾಸ್ತ್ರದ ಎಷ್ಟೋ ವಿಚಾರಗಳನ್ನು ಗ್ರಹಿಸುವುದರಲ್ಲಿ ಪ್ರೊ. ಕೆ.ಟಿ. ಪಾಂಡುರಂಗಿ ಎಂ.ಎ., ಅವರಿಂದ ತಿಳಿವಳಿಕೆ ಪಡೆದಿದ್ದೇನೆ ; ಸಂಘದ ಅಧ್ಯಾಪಕ ಕಾರ್ಯದರ್ಶಿ ಶ್ರೀ ಆರ್.ಎನ್. ಪಟ್ಟಾರಿ ಎಂ.ಎ. ಅವರು ಅನೇಕ ವಿಧಗಳಲ್ಲಿ ಸಹಕರಿಸಿದ್ದಾರೆ. ಇವರೆಲ್ಲರಿಗೂ ಒಟ್ಟಿಗೆ ಕೃತಜ್ಞತೆಯನ್ನು ತಿಳಿಸುವ ಮಾತು ಒಂದೇ ಆದರೂ ಅದು ಒಳಗೊಂಡ ಕೃತಜ್ಞತಾಭಾವ ಅಪಾರ, ಅನಂತ ಎಂದು ಹೇಳಬಯಸುತ್ತೇನೆ. {{gap}}ನಾನು ಕಾಲೇಜಿನಿಂದ ನಿವೃತ್ತನಾದಾಗ (೨೪.೩.೧೯೬೭) ಕೆಲಸ ಅರ್ಧಾಂತರವಾಗಿತ್ತು. ಕೈಕೊಂಡ ಕಾರ್ಯವನ್ನು ಮುಗಿಸಿ ಕೃತಕೃತ್ಯನಾಗುವ ಅವಕಾಶವನ್ನು ಕಲ್ಪಿಸಿಕೊಟ್ಟದ್ದಕ್ಕಾಗಿ ಸಂಘದ ಈಗಿನ ಅಧ್ಯಕ್ಷರು ಶ್ರೀ ಜಿ. ಬ್ರಹ್ಮಪ್ಪ ಎಂ.ಎ. ಅವರಿಗೆ ನಾನು ಋಣಿಯಾಗಿದ್ದೇನೆ. {{gap}}ಈ ಮುದ್ರಣದಲ್ಲಿ ಹಲವು ಬಗೆಯ ಹಲವಾರು ಲೋಪದೋಷಗಳು ಕಂಡಬಂದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಅವು ನನ್ನ ಗಮನಕ್ಕೆ ಬಾರದೆ, ಇತರರ ಗಮನಕ್ಕೆ ಬರುವ ಸಂಭವ ಹೆಚ್ಚು : 'ಕಾಣನೇಗೆಯುಂ ತನ್ನ ದೋಷಮಂ ।<noinclude></noinclude> r2qhnbw9gd50zqbkmdg7ojqgs8mersp ಪುಟ:ಕವಿರಾಜ ಮಾರ್ಗಂ.pdf/೧೯ 104 16250 322494 276725 2026-05-25T15:33:48Z Shreelatha.Halemane 7642 /* Proofread */ 322494 proofread-page text/x-wiki <noinclude><pagequality level="3" user="Shreelatha.Halemane" />{{rh|left=ಅರಿಕೆ|center=|right=೩}}</noinclude> ಕಾಣದಂತೆಂದುಂ ಕಣ್ಣಳ್ ತಮ್ಮ ಕಾಡಿಗೆಯಂ'! ಇದು ಮುಖ್ಯವಾಗಿ 'ವಿದ್ಯಾರ್ಥಿಗಳ ಮುದ್ರಣ' ; ವಿದ್ವಾಂಸರದ್ದಲ್ಲ. ಇದು ಈಗಿಗಿಂತ ಹೆಚ್ಚು ಉಪಯುಕ್ತವಾಗುವಂತೆ ಪ್ರಾಜ್ಞರು ನೀಡುವ ಸಲಹೆ ಸೂಚನೆಗಳನ್ನು ಕೃತಜ್ಞತೆಯಿಂದ ಸ್ವೀಕರಿಸಿ, ಗ್ರಂಥದ ಮರು ಆವೃತ್ತಿಯಲ್ಲಿ - ಆ ಯೋಗ ಒದಗಿಬಂದರೆ - ಅವನ್ನು ಅಳವಡಿಸಿಕೊಳ್ಳುತ್ತೇನೆ. {{gap}}ದಿವಂಗತ ವಿದ್ವಾನ್ ಮುಳಿಯ ತಿಮ್ಮಪ್ಪಯ್ಯನವರ ಸತ್ಪುತ್ರರಾದ, ಮೈಸೂರು ಸರ್ಕಾರದ ಮುಖ್ಯ ಭಾಷಾಂತರಕಾರರಾದ ಶ್ರೀ ಎಂ. ಕೇಶವ ಭಟ್ಟ, ಎಂ.ಎ. ಅವರು ನಾನು ಕೇಳಿದೊಡನೆಯ ತಮ್ಮ ತೀರ್ಥರೂಪರವರು ಬರೆದಿರುವ 'ಕವಿರಾಜಮಾರ್ಗ ವಿವೇಕ' ಗ್ರಂಥದ (ಎರಡನೆಯ ಭಾಗ) ಅಪ್ರಕಟಿತ ಹಸ್ತಪ್ರತಿಯನ್ನು ನನ್ನ ವಶಕ್ಕೆ ಕೊಟ್ಟಿದ್ದಲ್ಲದೆ, ನನ್ನ ಇಚ್ಛೆಯಂತೆ ಅದನ್ನು ಉಪಯೋಗಿಸಿಕೊಳ್ಳಲೂ ಅದರಿಂದ ಅಗತ್ಯಕಂಡ ಭಾಗಗಳನ್ನು ಉದ್ಧರಿಸಲೂ ಅನುಮತಿಯನ್ನು ನೀಡಿದರು. ಗ್ರಂಥಕ್ಕೆ ಟಿಪ್ಪಣಿ ಬರೆಯುವ ಕೆಲಸದಲ್ಲಿ ದಿವಂಗತರ ವಿದ್ವತ್ತೂರ್ಣವಾದ ವ್ಯಾಖ್ಯಾನದಿಂದ ಅಪಾರವಾದ ಪ್ರಯೋಜನವನ್ನು ಪಡೆದಿರುತ್ತೇನೆ. ಈವೊಂದು ಪ್ರಂಯೋಜನವನ್ನು ದೊರಕಿಸಿಕೊಟ್ಟದ್ದಕ್ಕಾಗಿ, ಪ೦ಡಿತೋತ್ತಮರೂ ಪಾಂಡಿತ್ಯಪಕ್ಷಪಾತಿಗಳೂ ಆದ ಶ್ರೀ ಕೇಶವ ಭಟ್ಟರಿಗೆ ನಾನು ಚಿರಋಣಿಯಾಗಿದ್ದೇನೆ. ಕವಿರಾಜಮಾರ್ಗವನ್ನು ವ್ಯಾಸಂಗ ಮಾಡಬೇಕೆನ್ನುವವರಿಗೆ ಅತ್ಯಂತ ಉಪಯುಕ್ತವಾದ ಆ ಗ್ರಂಥ ಬೇಗನೆ ಬೆಳಕನ್ನು ಕಾಣಲಿ ಎಂದು ಹಾರೈಸುತ್ತೇನೆ. {{gap}}ನಾನು ಕೊಟ್ಟ ಕಿರುಕುಳವನ್ನೆಲ್ಲಾ ಸಹಿಸಿಕೊಂಡು, ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಎಂ. ಶ್ರೀಕಂಠಯ್ಯ ಅಚ್ಚುಕೂಟದವರು ವಿಶೇಷ ಶ್ರಮವಹಿಸಿ ಗ್ರಂಥವನ್ನು ಚೆನ್ನಾಗಿ ಅಚ್ಚುಮಾಡಿಕೊಟ್ಟಿದ್ದಾರೆ. ಅಚ್ಚುಕೂಟದಿಂದ ದೊರೆತ ಎಲ್ಲ ಬಗೆಯ ಸಹಾಯ ಸಹಕಾರಗಳಿಗಾಗಿ ನಾನು ಅದರ ವ್ಯವಸ್ಥಾಪಕರಾದ ಶ್ರೀ ಶೇಷನಾರಾಯಣರಿಗೂ ಸಂಬಂಧಪಟ್ಟ ಕೆಲಸಗಾರರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. {{rh|left=ಬೆಂಗಳೂರು|center=|right=ಎಂ.ವಿ. ಸೀತಾರಾಮಯ್ಯ}} {{rh|left=ಫೆಬ್ರವರಿ ೧೨, ೧೯೬೮|center=|right=ಸಂಪಾದಕ}}<noinclude></noinclude> 04bg0qhksx2o5ghhd7hh0cbfotvyxgp 322497 322494 2026-05-25T15:40:23Z Shreesha Sharma 7840 /* Validated */ 322497 proofread-page text/x-wiki <noinclude><pagequality level="4" user="Shreesha Sharma" />{{rh|left=ಅರಿಕೆ|center=|right=೩}}</noinclude> ಕಾಣದಂತೆಂದುಂ ಕಣ್ಣಳ್ ತಮ್ಮ ಕಾಡಿಗೆಯಂ'! ಇದು ಮುಖ್ಯವಾಗಿ 'ವಿದ್ಯಾರ್ಥಿಗಳ ಮುದ್ರಣ' ; ವಿದ್ವಾಂಸರದ್ದಲ್ಲ. ಇದು ಈಗಿಗಿಂತ ಹೆಚ್ಚು ಉಪಯುಕ್ತವಾಗುವಂತೆ ಪ್ರಾಜ್ಞರು ನೀಡುವ ಸಲಹೆ ಸೂಚನೆಗಳನ್ನು ಕೃತಜ್ಞತೆಯಿಂದ ಸ್ವೀಕರಿಸಿ, ಗ್ರಂಥದ ಮರು ಆವೃತ್ತಿಯಲ್ಲಿ - ಆ ಯೋಗ ಒದಗಿಬಂದರೆ - ಅವನ್ನು ಅಳವಡಿಸಿಕೊಳ್ಳುತ್ತೇನೆ. {{gap}}ದಿವಂಗತ ವಿದ್ವಾನ್ ಮುಳಿಯ ತಿಮ್ಮಪ್ಪಯ್ಯನವರ ಸತ್ಪುತ್ರರಾದ, ಮೈಸೂರು ಸರ್ಕಾರದ ಮುಖ್ಯ ಭಾಷಾಂತರಕಾರರಾದ ಶ್ರೀ ಎಂ. ಕೇಶವ ಭಟ್ಟ, ಎಂ.ಎ. ಅವರು ನಾನು ಕೇಳಿದೊಡನೆಯ ತಮ್ಮ ತೀರ್ಥರೂಪರವರು ಬರೆದಿರುವ 'ಕವಿರಾಜಮಾರ್ಗ ವಿವೇಕ' ಗ್ರಂಥದ (ಎರಡನೆಯ ಭಾಗ) ಅಪ್ರಕಟಿತ ಹಸ್ತಪ್ರತಿಯನ್ನು ನನ್ನ ವಶಕ್ಕೆ ಕೊಟ್ಟಿದ್ದಲ್ಲದೆ, ನನ್ನ ಇಚ್ಛೆಯಂತೆ ಅದನ್ನು ಉಪಯೋಗಿಸಿಕೊಳ್ಳಲೂ ಅದರಿಂದ ಅಗತ್ಯಕಂಡ ಭಾಗಗಳನ್ನು ಉದ್ಧರಿಸಲೂ ಅನುಮತಿಯನ್ನು ನೀಡಿದರು. ಗ್ರಂಥಕ್ಕೆ ಟಿಪ್ಪಣಿ ಬರೆಯುವ ಕೆಲಸದಲ್ಲಿ ದಿವಂಗತರ ವಿದ್ವತ್ತೂರ್ಣವಾದ ವ್ಯಾಖ್ಯಾನದಿಂದ ಅಪಾರವಾದ ಪ್ರಯೋಜನವನ್ನು ಪಡೆದಿರುತ್ತೇನೆ. ಈವೊಂದು ಪ್ರಂಯೋಜನವನ್ನು ದೊರಕಿಸಿಕೊಟ್ಟದ್ದಕ್ಕಾಗಿ, ಪ೦ಡಿತೋತ್ತಮರೂ ಪಾಂಡಿತ್ಯಪಕ್ಷಪಾತಿಗಳೂ ಆದ ಶ್ರೀ ಕೇಶವ ಭಟ್ಟರಿಗೆ ನಾನು ಚಿರಋಣಿಯಾಗಿದ್ದೇನೆ. ಕವಿರಾಜಮಾರ್ಗವನ್ನು ವ್ಯಾಸಂಗ ಮಾಡಬೇಕೆನ್ನುವವರಿಗೆ ಅತ್ಯಂತ ಉಪಯುಕ್ತವಾದ ಆ ಗ್ರಂಥ ಬೇಗನೆ ಬೆಳಕನ್ನು ಕಾಣಲಿ ಎಂದು ಹಾರೈಸುತ್ತೇನೆ. {{gap}}ನಾನು ಕೊಟ್ಟ ಕಿರುಕುಳವನ್ನೆಲ್ಲಾ ಸಹಿಸಿಕೊಂಡು, ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಎಂ. ಶ್ರೀಕಂಠಯ್ಯ ಅಚ್ಚುಕೂಟದವರು ವಿಶೇಷ ಶ್ರಮವಹಿಸಿ ಗ್ರಂಥವನ್ನು ಚೆನ್ನಾಗಿ ಅಚ್ಚುಮಾಡಿಕೊಟ್ಟಿದ್ದಾರೆ. ಅಚ್ಚುಕೂಟದಿಂದ ದೊರೆತ ಎಲ್ಲ ಬಗೆಯ ಸಹಾಯ ಸಹಕಾರಗಳಿಗಾಗಿ ನಾನು ಅದರ ವ್ಯವಸ್ಥಾಪಕರಾದ ಶ್ರೀ ಶೇಷನಾರಾಯಣರಿಗೂ ಸಂಬಂಧಪಟ್ಟ ಕೆಲಸಗಾರರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. {{rh|left=ಬೆಂಗಳೂರು|center=|right=ಎಂ.ವಿ. ಸೀತಾರಾಮಯ್ಯ}} {{rh|left=ಫೆಬ್ರವರಿ ೧೨, ೧೯೬೮|center=|right=ಸಂಪಾದಕ}}<noinclude></noinclude> 745vfusnl0pbkfhch6vd4681e45tnxl ಪುಟ:ಕವಿರಾಜ ಮಾರ್ಗಂ.pdf/೨೦ 104 16251 322495 279865 2026-05-25T15:38:07Z Shreelatha.Halemane 7642 /* Proofread */ 322495 proofread-page text/x-wiki <noinclude><pagequality level="3" user="Shreelatha.Halemane" />{{rh|left= ೪|center=|right=ಕವಿರಾಜ ಮಾರ್ಗ}}</noinclude> {{center| ಬಿನ್ನಹ}} {{center|(ಕಿರಿಯ ಆವೃತ್ತಿ)}} {{gap}}'ಕವಿರಾಜಮಾರ್ಗ'ವನ್ನು ನಾನು ೧೯೬೮ರಲ್ಲಿ ಆವರೆಗೆ ಉಪಲಬ್ಧವಾಗಿದ್ದ ಆಧಾರ ಸಾಮಗ್ರಿಯಲ್ಲವನ್ನೂ ಕೂಲಂಕುಷವಾಗಿ ಅಧ್ಯಯನ ಮಾಡಿ ಪರಿಷ್ಕೃತ ಗ್ರಂಥಪಾಠ, ವಿಸ್ತಾರವಾದ ಪೀಠಿಕೆ, ವಿಮರ್ಶಾತ್ಮಕವಾದ ಟಿಪ್ಪಣಿಗಳು, ಅಧ್ಯಯನಕ್ಕ ಸಹಾಯಕವಾದ ಪರಿಕರಗಳನ್ನುಳ್ಳ ಅನುಬಂಧಗಳು ಇವುಗಳೊಂದಿಗೆ ಸಂಪಾದಿಸಿದನು. ನನ್ನಿಂದ ಸಂಪಾದಿತವಾದ ಈ ಅಮೂಲ್ಯ ಗ್ರಂಥವನ್ನು ನಾನು ಕೆಲಸ ಮಾಡುತ್ತಿದ್ದ ಬೆಂಗಳೂರು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಕರ್ಣಾಟಕ ಸಂಘವು ಪ್ರಕಾಶಪಡಿಸಿತು. ಈ ಆವೃತ್ತಿಯನ್ನು ಕನ್ನಡ ವಿದ್ವತ್ಪಂಚ ಅತ್ಯಂತ ಆದರದಿಂದ ಸ್ವಾಗತಿಸಿತು. ಗ್ರಂಥ ಪ್ರತಿಗಳ ಮಾರಾಟದ ಎಲ್ಲಾ ಹೊಣೆಗಾರಿಕೆಯನ್ನೂ ವಹಿಸಿಕೊಂಡು ಶ್ರೀ ಡಿ. ವಿ. ಕೆ. ಮೂರ್ತಿಯವರು ಆಗ ತುಂಬ ಉಪಕಾರ ಮಾಡಿದರು. ಇವರ ಸಕಾಲಿಕ ಸಹಾಯದಿಂದಾಗಿ, ಸಂಘವು ನನಗೆ ಕೊಡಬಂದ ಸಂಭಾವನೆಯ ದ್ರವ್ಯವನ್ನು ಸಂಘಕ್ಕೆ ಹಿಂದಿರುಗಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ. ಪದವಿ ಪರೀಕ್ಷೆಯ ವ್ಯಾಸಂಗದ ಉತ್ತೇಜನಾರ್ಥ ಕವಿರಾಜಮಾರ್ಗಕಾರ ಶ್ರೀ ವಿಜಯನ ಹೆಸರಿನಲ್ಲಿ ಒಂದು ಚಿನ್ನದ ಪದಕವನ್ನು ಇರಿಸುವ ಏರ್ಪಾಡು ಮಾಡುವುದು ಸಾಧ್ಯವಾಯಿತು. ಗ್ರಂಥಪ್ರತಿಗಳ ಮಾರಾಟಕ್ಕೆ ಹತ್ತಾರು ವರ್ಷ ಕಾಯುವಂತಾಗಿದ್ದರೆ, ಈ ಏರ್ಪಾಡು ಸಾಧ್ಯವಾಗದಿರುವುದು ಹಾಗಿರಲಿ, ಮುದ್ರಣದ ವೆಚ್ಚ ಸಾಲದ ಹೊರೆಯಾಗಿ ಹೆಗಲೇರುತ್ತಿತ್ತು. ಶ್ರೀ ಮೂರ್ತಿಯವರ ಸಕಾಲಿಕ ಸಹಾಯವನ್ನು ಆಗ ಸ್ಮರಿಸಲು ಅವಕಾಶವಾಗಲಿಲ್ಲ ; ಈಗ ಸ್ಮರಿಸಿಕೊಳ್ಳುತ್ತೇನೆ : {{gap}}೧೯೬೮ರ ಆವೃತ್ತಿಯನ್ನು 'ವಿದ್ಯಾರ್ಥಿಗಳ ಮುದ್ರಣ" ಎಂದು (ನನ್ನ 'ಅರಿಕೆ'ಯಲ್ಲಿ) ಕರೆದಿದೆ. ಆದರೆ, ಸುಮಾರು ೫೩೦ ಪುಟಗಳ ಪುಸ್ತಕಕ್ಕೆ ಆಗ {{center|}}ಇಟ್ಟಿದ್ದ ಬೆಲೆ ೧೫ ರೂ. ಹೆಚ್ಚಲ್ಲವಾದರೂ ವಿದ್ಯಾರ್ಥಿಗಳು ಕೊಳ್ಳುವ ಶಕ್ತಿಗೆ ಮೀರಿದ್ದು ಎನಿಸಿತು. ಒಂದು ಸಣ್ಣ ಪ್ರಮಾಣದ ಅಗ್ಗದ ಮುದ್ರಣವನ್ನು<noinclude></noinclude> nx3j16xiwnzdchjvn9h5ohu0qest09w 322496 322495 2026-05-25T15:40:02Z Shreesha Sharma 7840 /* Validated */ 322496 proofread-page text/x-wiki <noinclude><pagequality level="4" user="Shreesha Sharma" />{{rh|left= ೪|center=|right=ಕವಿರಾಜ ಮಾರ್ಗ}}</noinclude> {{center|ಬಿನ್ನಹ}} {{center|(ಕಿರಿಯ ಆವೃತ್ತಿ)}} {{gap}}'ಕವಿರಾಜಮಾರ್ಗ'ವನ್ನು ನಾನು ೧೯೬೮ರಲ್ಲಿ ಆವರೆಗೆ ಉಪಲಬ್ಧವಾಗಿದ್ದ ಆಧಾರ ಸಾಮಗ್ರಿಯಲ್ಲವನ್ನೂ ಕೂಲಂಕುಷವಾಗಿ ಅಧ್ಯಯನ ಮಾಡಿ ಪರಿಷ್ಕೃತ ಗ್ರಂಥಪಾಠ, ವಿಸ್ತಾರವಾದ ಪೀಠಿಕೆ, ವಿಮರ್ಶಾತ್ಮಕವಾದ ಟಿಪ್ಪಣಿಗಳು, ಅಧ್ಯಯನಕ್ಕ ಸಹಾಯಕವಾದ ಪರಿಕರಗಳನ್ನುಳ್ಳ ಅನುಬಂಧಗಳು ಇವುಗಳೊಂದಿಗೆ ಸಂಪಾದಿಸಿದನು. ನನ್ನಿಂದ ಸಂಪಾದಿತವಾದ ಈ ಅಮೂಲ್ಯ ಗ್ರಂಥವನ್ನು ನಾನು ಕೆಲಸ ಮಾಡುತ್ತಿದ್ದ ಬೆಂಗಳೂರು ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಕರ್ಣಾಟಕ ಸಂಘವು ಪ್ರಕಾಶಪಡಿಸಿತು. ಈ ಆವೃತ್ತಿಯನ್ನು ಕನ್ನಡ ವಿದ್ವತ್ಪಂಚ ಅತ್ಯಂತ ಆದರದಿಂದ ಸ್ವಾಗತಿಸಿತು. ಗ್ರಂಥ ಪ್ರತಿಗಳ ಮಾರಾಟದ ಎಲ್ಲಾ ಹೊಣೆಗಾರಿಕೆಯನ್ನೂ ವಹಿಸಿಕೊಂಡು ಶ್ರೀ ಡಿ. ವಿ. ಕೆ. ಮೂರ್ತಿಯವರು ಆಗ ತುಂಬ ಉಪಕಾರ ಮಾಡಿದರು. ಇವರ ಸಕಾಲಿಕ ಸಹಾಯದಿಂದಾಗಿ, ಸಂಘವು ನನಗೆ ಕೊಡಬಂದ ಸಂಭಾವನೆಯ ದ್ರವ್ಯವನ್ನು ಸಂಘಕ್ಕೆ ಹಿಂದಿರುಗಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ. ಪದವಿ ಪರೀಕ್ಷೆಯ ವ್ಯಾಸಂಗದ ಉತ್ತೇಜನಾರ್ಥ ಕವಿರಾಜಮಾರ್ಗಕಾರ ಶ್ರೀ ವಿಜಯನ ಹೆಸರಿನಲ್ಲಿ ಒಂದು ಚಿನ್ನದ ಪದಕವನ್ನು ಇರಿಸುವ ಏರ್ಪಾಡು ಮಾಡುವುದು ಸಾಧ್ಯವಾಯಿತು. ಗ್ರಂಥಪ್ರತಿಗಳ ಮಾರಾಟಕ್ಕೆ ಹತ್ತಾರು ವರ್ಷ ಕಾಯುವಂತಾಗಿದ್ದರೆ, ಈ ಏರ್ಪಾಡು ಸಾಧ್ಯವಾಗದಿರುವುದು ಹಾಗಿರಲಿ, ಮುದ್ರಣದ ವೆಚ್ಚ ಸಾಲದ ಹೊರೆಯಾಗಿ ಹೆಗಲೇರುತ್ತಿತ್ತು. ಶ್ರೀ ಮೂರ್ತಿಯವರ ಸಕಾಲಿಕ ಸಹಾಯವನ್ನು ಆಗ ಸ್ಮರಿಸಲು ಅವಕಾಶವಾಗಲಿಲ್ಲ ; ಈಗ ಸ್ಮರಿಸಿಕೊಳ್ಳುತ್ತೇನೆ : {{gap}}೧೯೬೮ರ ಆವೃತ್ತಿಯನ್ನು 'ವಿದ್ಯಾರ್ಥಿಗಳ ಮುದ್ರಣ" ಎಂದು (ನನ್ನ 'ಅರಿಕೆ'ಯಲ್ಲಿ) ಕರೆದಿದೆ. ಆದರೆ, ಸುಮಾರು ೫೩೦ ಪುಟಗಳ ಪುಸ್ತಕಕ್ಕೆ ಆಗ {{center|}}ಇಟ್ಟಿದ್ದ ಬೆಲೆ ೧೫ ರೂ. ಹೆಚ್ಚಲ್ಲವಾದರೂ ವಿದ್ಯಾರ್ಥಿಗಳು ಕೊಳ್ಳುವ ಶಕ್ತಿಗೆ ಮೀರಿದ್ದು ಎನಿಸಿತು. ಒಂದು ಸಣ್ಣ ಪ್ರಮಾಣದ ಅಗ್ಗದ ಮುದ್ರಣವನ್ನು<noinclude></noinclude> fz2s8v42vh9lbtrmu07ey5hp2rnzx0j ಪುಟ:ಕವಿರಾಜ ಮಾರ್ಗಂ.pdf/೨೧ 104 16252 322499 156939 2026-05-25T15:43:53Z Shreesha Sharma 7840 /* Proofread */ 322499 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಬಿನ್ನಹ|right=೫}} ಹೊರತರಬೇಕೆಂದು ಶ್ರೀ ಡಿ.ವಿ.ಕೆ. ಮೂರ್ತಿಯವರು ಎರಡು ವರ್ಷಗಳ ಹಿಂದೆಯೆ ಸೂಚಿಸಿದರು. ಅವರ ವಿಶ್ವಾಸದ ಒತ್ತಾಯದ ಫಲ ಈ ಕಿರಿಯ ಆವೃತ್ತಿ. {{gap}}ಹಿಂದಿನ ಆವೃತ್ತಿಯ ಸುಮಾರು ೧೦೦ ಪುಟಗಳ ಪೀಠಿಕೆಯನ್ನು ಇಲ್ಲಿ ಕೇವಲ ಮೂವತ್ತೈದು ಪುಟಗಳಿಗೆ ಇಳಿಸಬೇಕಾದದ್ದು ಅನಿವಾರ್ಯವಾಯಿತು. ಆದರೂ, ಹೇಳಬೇಕಾದ ಮುಖ್ಯ ಸಂಗತಿಗಳನ್ನೆಲ್ಲ ಪೀಠಿಕೆಯಲ್ಲಿ ಅಡಕ ಮಾಡಿರುವುದಲ್ಲದೆ, ಆ ಗ್ರಂಥ ಪ್ರಕಟವಾದ ಮೇಲೆ ವಿದ್ವಾಂಸರು ಮುಖ್ಯವಾಗಿ ಕರ್ತೃತ್ವ ವಿಚಾರವಾಗಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಗಮನಿಸಿ ವಿಮರ್ಶಿಸಲಾಗಿದೆ ; ಗಮನಕ್ಕೆ ಬಂದ ಒಂದೆರಡು ಹೊಸ ಅಂಶಗಳನ್ನೂ ಸೇರಿಸಿದೆ. ಒಟ್ಟಿನ ಮೇಲೆ, ವಿಷಯ ವಿವೇಚನೆಯನ್ನು ಕೂಡಿದಮಟ್ಟಿಗೂ ಇಂದಿನವರಗಿನ (up-to-date) ವಿಚಾರಸೀಮೆಗೆ ತಂದು ನಿಲ್ಲಿಸಿದ. ಪೀಠಿಕೆಯನ್ನು ಯಾವ ಕಾರಣಕ್ಕಾಗಿ ಸಂಕ್ಷೇಪಿಸಬೇಕಾಯಿತೋ ಅದೇ ಕಾರಣಕ್ಕಾಗಿ ಟಿಪ್ಪಣಿಗಳ ವಿಭಾಗವನ್ನೂ ಪಾಠಾಂತರಗಳು, ನಾಮಸೂಚಿ, ಮುಂತಾದ ಅಧ್ಯಯನ ಪರಿಕರಗಳನ್ನುಳ್ಳ ಅನುಬಂಧಗಳನ್ನೂ ಕೈಬಿಡಬೇಕಾಯಿತು. ಆದರೆ, ಹೊಸದಾಗಿ ಸೇರಿಸಿರುವ ಶಬ್ದಕೋಶದಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸ್ವಲ್ಪಮಟ್ಟಿಗೆ ಸಹಾಯವಾಗುವುದೆಂದು ನಂಬಿದ್ದೇನೆ. {{gap}}ಹಿಂದಿನ ಮುದ್ರಣದಲ್ಲಿ ಉಳಿದುಕೊಂಡು ಬಂದಿದ್ದ ಹಲಕೆಲವು ದೋಷಗಳನ್ನು ಪರಿಹರಿಸಿ, ಗ್ರಂಥಪಾಠವನ್ನು ಮೇಲ್ಪಾಟು ಮಾಡಿದ ; ಹಾಗಿದ್ದೂ ಪಾಠ ಕೇಶಗಳು ಇಲ್ಲದಿಲ್ಲ; ಹೊಸ ಹಸ್ತಪ್ರತಿಗಳ ನೆರವು ಸಂಗಡಿಸಿದಲ್ಲದೆ, ಅವುಗಳ ಪರಿಹಾರ ಸಾಧ್ಯವಿಲ್ಲ. {{gap}}ವಿದ್ವದಭಿಮಾನಿಗಳೂ ಶಾಸ್ತ್ರಗ್ರಂಥಗಳ ಪ್ರಕಟನೆಯಲ್ಲಿ ಅಮಿತ ಉತ್ಸಾಹವುಳ್ಳವರೂ ಆದ ಶ್ರೀ ಡಿ. ವಿ. ಕೆ. ಮೂರ್ತಿಯವರ ಸೂಚನೆ, ಉತ್ತೇಜನ ಒತ್ತಾಯಗಳಿಲ್ಲವಾಗಿದ್ದರೆ, ಕವಿರಾಜಮಾರ್ಗದ ಈ ಆವೃತ್ತಿಯನ್ನು ಸಿದ್ಧಪಡಿಸುವ ಯೋಚನೆಯನ್ನು ಮಾಡುತ್ತಿರಲಿಲ್ಲ. ಸರ್ವವಿಧಗಳಲ್ಲೂ ಇದರ ಪ್ರಕಟನೆಗೆ ಕಾರಣಕರ್ತರಾದ ಅವರಿಗೆ ನಾನು ಅತ್ಯಂತ ಋಣಿಯಾಗಿದ್ದೇನೆ ; ಅವರ ಶ್ರೇಯಸ್ಸನ್ನು ಕೋರುತ್ತೇನೆ. ಪುಸ್ತಕವನ್ನು ತುಂಬ ಅಚ್ಚುಕಟ್ಟಾಗಿ ಅಂದವಾಗಿ ಮುದ್ರಿಸಿಕೊಟ್ಟಿರುವ ಶ್ರೀ ಜಿ.ಎಸ್. ಮೂರ್ತಿಯವರಿಗೂ ನಾನು ಕೃತಜ್ಞ {{rh|center=|left=ಏಪ್ರಿಲ್ ೧೦, ೧೯೭೫|right=ಎಂ. ವಿ. ಸೀತಾರಾಮಯ್ಯ}} {{rh|center=|left=ಬೆಂಗಳೂರು|right=}}.<noinclude></noinclude> qqtbs0alxmacn1ek1zyj9if64siomoj 322500 322499 2026-05-25T15:44:41Z Shreelatha.Halemane 7642 /* Validated */ 322500 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಬಿನ್ನಹ|right=೫}} ಹೊರತರಬೇಕೆಂದು ಶ್ರೀ ಡಿ.ವಿ.ಕೆ. ಮೂರ್ತಿಯವರು ಎರಡು ವರ್ಷಗಳ ಹಿಂದೆಯೆ ಸೂಚಿಸಿದರು. ಅವರ ವಿಶ್ವಾಸದ ಒತ್ತಾಯದ ಫಲ ಈ ಕಿರಿಯ ಆವೃತ್ತಿ. {{gap}}ಹಿಂದಿನ ಆವೃತ್ತಿಯ ಸುಮಾರು ೧೦೦ ಪುಟಗಳ ಪೀಠಿಕೆಯನ್ನು ಇಲ್ಲಿ ಕೇವಲ ಮೂವತ್ತೈದು ಪುಟಗಳಿಗೆ ಇಳಿಸಬೇಕಾದದ್ದು ಅನಿವಾರ್ಯವಾಯಿತು. ಆದರೂ, ಹೇಳಬೇಕಾದ ಮುಖ್ಯ ಸಂಗತಿಗಳನ್ನೆಲ್ಲ ಪೀಠಿಕೆಯಲ್ಲಿ ಅಡಕ ಮಾಡಿರುವುದಲ್ಲದೆ, ಆ ಗ್ರಂಥ ಪ್ರಕಟವಾದ ಮೇಲೆ ವಿದ್ವಾಂಸರು ಮುಖ್ಯವಾಗಿ ಕರ್ತೃತ್ವ ವಿಚಾರವಾಗಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಗಮನಿಸಿ ವಿಮರ್ಶಿಸಲಾಗಿದೆ ; ಗಮನಕ್ಕೆ ಬಂದ ಒಂದೆರಡು ಹೊಸ ಅಂಶಗಳನ್ನೂ ಸೇರಿಸಿದೆ. ಒಟ್ಟಿನ ಮೇಲೆ, ವಿಷಯ ವಿವೇಚನೆಯನ್ನು ಕೂಡಿದಮಟ್ಟಿಗೂ ಇಂದಿನವರಗಿನ (up-to-date) ವಿಚಾರಸೀಮೆಗೆ ತಂದು ನಿಲ್ಲಿಸಿದ. ಪೀಠಿಕೆಯನ್ನು ಯಾವ ಕಾರಣಕ್ಕಾಗಿ ಸಂಕ್ಷೇಪಿಸಬೇಕಾಯಿತೋ ಅದೇ ಕಾರಣಕ್ಕಾಗಿ ಟಿಪ್ಪಣಿಗಳ ವಿಭಾಗವನ್ನೂ ಪಾಠಾಂತರಗಳು, ನಾಮಸೂಚಿ, ಮುಂತಾದ ಅಧ್ಯಯನ ಪರಿಕರಗಳನ್ನುಳ್ಳ ಅನುಬಂಧಗಳನ್ನೂ ಕೈಬಿಡಬೇಕಾಯಿತು. ಆದರೆ, ಹೊಸದಾಗಿ ಸೇರಿಸಿರುವ ಶಬ್ದಕೋಶದಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸ್ವಲ್ಪಮಟ್ಟಿಗೆ ಸಹಾಯವಾಗುವುದೆಂದು ನಂಬಿದ್ದೇನೆ. {{gap}}ಹಿಂದಿನ ಮುದ್ರಣದಲ್ಲಿ ಉಳಿದುಕೊಂಡು ಬಂದಿದ್ದ ಹಲಕೆಲವು ದೋಷಗಳನ್ನು ಪರಿಹರಿಸಿ, ಗ್ರಂಥಪಾಠವನ್ನು ಮೇಲ್ಪಾಟು ಮಾಡಿದ ; ಹಾಗಿದ್ದೂ ಪಾಠ ಕೇಶಗಳು ಇಲ್ಲದಿಲ್ಲ; ಹೊಸ ಹಸ್ತಪ್ರತಿಗಳ ನೆರವು ಸಂಗಡಿಸಿದಲ್ಲದೆ, ಅವುಗಳ ಪರಿಹಾರ ಸಾಧ್ಯವಿಲ್ಲ. {{gap}}ವಿದ್ವದಭಿಮಾನಿಗಳೂ ಶಾಸ್ತ್ರಗ್ರಂಥಗಳ ಪ್ರಕಟನೆಯಲ್ಲಿ ಅಮಿತ ಉತ್ಸಾಹವುಳ್ಳವರೂ ಆದ ಶ್ರೀ ಡಿ. ವಿ. ಕೆ. ಮೂರ್ತಿಯವರ ಸೂಚನೆ, ಉತ್ತೇಜನ ಒತ್ತಾಯಗಳಿಲ್ಲವಾಗಿದ್ದರೆ, ಕವಿರಾಜಮಾರ್ಗದ ಈ ಆವೃತ್ತಿಯನ್ನು ಸಿದ್ಧಪಡಿಸುವ ಯೋಚನೆಯನ್ನು ಮಾಡುತ್ತಿರಲಿಲ್ಲ. ಸರ್ವವಿಧಗಳಲ್ಲೂ ಇದರ ಪ್ರಕಟನೆಗೆ ಕಾರಣಕರ್ತರಾದ ಅವರಿಗೆ ನಾನು ಅತ್ಯಂತ ಋಣಿಯಾಗಿದ್ದೇನೆ ; ಅವರ ಶ್ರೇಯಸ್ಸನ್ನು ಕೋರುತ್ತೇನೆ. ಪುಸ್ತಕವನ್ನು ತುಂಬ ಅಚ್ಚುಕಟ್ಟಾಗಿ ಅಂದವಾಗಿ ಮುದ್ರಿಸಿಕೊಟ್ಟಿರುವ ಶ್ರೀ ಜಿ.ಎಸ್. ಮೂರ್ತಿಯವರಿಗೂ ನಾನು ಕೃತಜ್ಞ {{rh|center=|left=ಏಪ್ರಿಲ್ ೧೦, ೧೯೭೫|right=ಎಂ. ವಿ. ಸೀತಾರಾಮಯ್ಯ}} {{rh|center=|left=ಬೆಂಗಳೂರು|right=}}.<noinclude></noinclude> iv0wp73xwkc7c7fxgubelvofz2ggz39 ಪುಟ:ಕವಿರಾಜ ಮಾರ್ಗಂ.pdf/೨೨ 104 16253 322501 156950 2026-05-25T15:47:06Z Shreesha Sharma 7840 /* Proofread */ 322501 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೬|right=ಕವಿರಾಜ ಮಾರ್ಗ}} {{center|'''ಕಿರಿಯ ಆವೃತ್ತಿಯ ಪೀಠಿಕೆ'''}} {{center|೧. ರಚನಾಸಂದರ್ಭ}} {{gap}}ಕನ್ನಡ ಸಾಹಿತ್ಯದಲ್ಲಿಯೂ ಕನ್ನಡ ಕಾವ್ಯಮೀಮಾಂಸೆಯ ಬೆಳವಣಿಗೆಯಲ್ಲಿಯೂ ಕವಿರಾಜಮಾರ್ಗಕ್ಕೆ ನಾನಾ ಕಾರಣಗಳಿಂದ ಅತ್ಯಂತ ಮಹತ್ತ್ವದ ಸ್ಥಾನವಿದೆ. ನಮಗೆ ಈವರೆಗೆ ದೊರೆತಿರುವ ಅತ್ಯಂತ ಪ್ರಾಚೀನ ಕನ್ನಡ ಗ್ರಂಥಗಳಲ್ಲಿ ಇದೇ ಮೊದಲನೆಯದು. ಇದು ಕಾವ್ಯಶಾಸ್ತ್ರವನ್ನು ನಿರೂಪಿಸುವ ಸ್ವತಂತ್ರದೃಷ್ಟಿಯ ಲಕ್ಷಣಗ್ರಂಥ; ಆದ್ದರಿಂದ, ಇದು ರಚಿತವಾಗುವ ವೇಳೆಗೆ ಕನ್ನಡ ಸಾಹಿತ್ಯ ಒಂದು ಪ್ರೌಢಾವಸ್ಥೆಯ ಹಂತವನ್ನು ಮುಟ್ಟಿತ್ತು ಎಂದು ಊಹಿಸಬಹುದು. ಏಕೆಂದರೆ, ಲಕ್ಷ್ಯಗಳ ಹಿನ್ನಲೆಯಿಲ್ಲದ ಲಕ್ಷಣಗ್ರಂಥ ನಿರ್ಮಾಣವಾಗುವ ಸಂಭವ ಬಹು ಕಡಿಮೆ, ಸಂಸ್ಕೃತ ಲಕ್ಷಣ ಗ್ರಂಥಗಳನ್ನು ಅವಲಂಬಿಸಿ ಕವಿರಾಜಮಾರ್ಗದ ಬಹುಭಾಗವು ರಚಿತವಾಗಿದ್ದರೂ, ಒಂದು ಗಣ್ಯವಾದ ಗ್ರಂಥಭಾಗ ಪೂರ್ವಕಾವ್ಯಗಳನ್ನು ಅನುಲಕ್ಷಿಸಿಯ ಸಿದ್ಧವಾಗಿರುವುದು ಗ್ರಂಥದಿಂದಲೇ ವ್ಯಕ್ತಪಡುತ್ತದೆ. ತನ್ನ ಕಾಲದವರೆಗಿನ ಕನ್ನಡ ಕಾವ್ಯಮಾರ್ಗಕ್ರಮಣಪದ್ಧತಿಯ ತಪ್ಪು ಒಪ್ಪುಗಳನ್ನು ಗುರುತಿಸಿ ತಿಳಿಸುವುದರ ಜೊತೆಗೆ, ಕವೀಶ್ವರ (ಅಥವಾ 'ಕವಿರಾಜ') ಎನ್ನಿಸಿಕೊಳ್ಳಬೇಕೆಂಬ ಕವಿಗಳಿಗೆ ಒಂದು ಹೆದ್ದಾರಿಯನ್ನು (ರಾಜಮಾರ್ಗವನ್ನು ಕಲ್ಪಿಸಿಕೊಡುವ ಘನವಾದ ಉದ್ದೇಶದಿಂದ ರಚಿತವಾದದ್ದು ಈ 'ಕವಿರಾಜ' ರಚಿತವಾದ 'ಕವಿಮಾರ್ಗ', ಇದು ರಚಿತವಾದದ್ದಾದರೂ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಸಮ್ಮುಖದಲ್ಲಿ; ಆತನ ಸಹಯೋಗದೊಂದಿಗೆ; ಗ್ರಂಥದಲ್ಲಿ ನಿರೂಪಿತವಾಗಿರುವುದು {{gap}}'ನೃಪತುಂಗದೇವಮಾರ್ಗ' ; ಸ್ವತಃ ವಿದ್ವಾಂಸನೂ ಕವಿಯೂ ಕವಿ-ವಿದ್ವಾಂಸರ ಆಶ್ರಯದಾತನೂ ಆಗಿದ್ದ ನೃಪತುಂಗನ ಕವಿರಾಜನೇ, ಯಾವ ಮುಖದಿಂದ ನೋಡಿದರೂ 'ಕವಿರಾಜಮಾರ್ಗ' ಎಂಬ ಗ್ರಂಥದ ಹಸರು ಸಾರ್ಥಕ. {{gap}}ನೃಪತುಂಗನ ಆಳ್ವಿಕೆಯ ಕಾಲ ಕ್ರಿ.ಶ. ೮೧೪-೮೭೭. ಚಿಕ್ಕ ವಯಸ್ಸಿನಲ್ಲಿ ಪಟ್ಟಕ್ಕೆ ಬಂದ ನೃಪತುಂಗನು ಒಳ ಹೊರ ಹಗಗಳನ್ನೆಲ್ಲಾ ದಮನಮಾಡಿ ರಾಜ್ಯವನ್ನು ನಿಷ್ಕಂಟಕವಾಗಿಸಿ, ಕಾವ್ಯರಚನೆ ವಿದ್ವಜ್ಜನ ಪ್ರೋತ್ಸಾಹ ಮುಂತಾದ ಶಾಂತಿಕಾಲದ<noinclude></noinclude> 2cbf46sugnmk0un7d2z3rck0udxhpp0 322549 322501 2026-05-26T02:13:48Z Shreelatha.Halemane 7642 /* Validated */ 322549 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೬|right=ಕವಿರಾಜ ಮಾರ್ಗ}} {{center|'''ಕಿರಿಯ ಆವೃತ್ತಿಯ ಪೀಠಿಕೆ'''}} {{center|೧. ರಚನಾಸಂದರ್ಭ}} {{gap}}ಕನ್ನಡ ಸಾಹಿತ್ಯದಲ್ಲಿಯೂ ಕನ್ನಡ ಕಾವ್ಯಮೀಮಾಂಸೆಯ ಬೆಳವಣಿಗೆಯಲ್ಲಿಯೂ ಕವಿರಾಜಮಾರ್ಗಕ್ಕೆ ನಾನಾ ಕಾರಣಗಳಿಂದ ಅತ್ಯಂತ ಮಹತ್ತ್ವದ ಸ್ಥಾನವಿದೆ. ನಮಗೆ ಈವರೆಗೆ ದೊರೆತಿರುವ ಅತ್ಯಂತ ಪ್ರಾಚೀನ ಕನ್ನಡ ಗ್ರಂಥಗಳಲ್ಲಿ ಇದೇ ಮೊದಲನೆಯದು. ಇದು ಕಾವ್ಯಶಾಸ್ತ್ರವನ್ನು ನಿರೂಪಿಸುವ ಸ್ವತಂತ್ರದೃಷ್ಟಿಯ ಲಕ್ಷಣಗ್ರಂಥ; ಆದ್ದರಿಂದ, ಇದು ರಚಿತವಾಗುವ ವೇಳೆಗೆ ಕನ್ನಡ ಸಾಹಿತ್ಯ ಒಂದು ಪ್ರೌಢಾವಸ್ಥೆಯ ಹಂತವನ್ನು ಮುಟ್ಟಿತ್ತು ಎಂದು ಊಹಿಸಬಹುದು. ಏಕೆಂದರೆ, ಲಕ್ಷ್ಯಗಳ ಹಿನ್ನಲೆಯಿಲ್ಲದ ಲಕ್ಷಣಗ್ರಂಥ ನಿರ್ಮಾಣವಾಗುವ ಸಂಭವ ಬಹು ಕಡಿಮೆ, ಸಂಸ್ಕೃತ ಲಕ್ಷಣ ಗ್ರಂಥಗಳನ್ನು ಅವಲಂಬಿಸಿ ಕವಿರಾಜಮಾರ್ಗದ ಬಹುಭಾಗವು ರಚಿತವಾಗಿದ್ದರೂ, ಒಂದು ಗಣ್ಯವಾದ ಗ್ರಂಥಭಾಗ ಪೂರ್ವಕಾವ್ಯಗಳನ್ನು ಅನುಲಕ್ಷಿಸಿಯ ಸಿದ್ಧವಾಗಿರುವುದು ಗ್ರಂಥದಿಂದಲೇ ವ್ಯಕ್ತಪಡುತ್ತದೆ. ತನ್ನ ಕಾಲದವರೆಗಿನ ಕನ್ನಡ ಕಾವ್ಯಮಾರ್ಗಕ್ರಮಣಪದ್ಧತಿಯ ತಪ್ಪು ಒಪ್ಪುಗಳನ್ನು ಗುರುತಿಸಿ ತಿಳಿಸುವುದರ ಜೊತೆಗೆ, ಕವೀಶ್ವರ (ಅಥವಾ 'ಕವಿರಾಜ') ಎನ್ನಿಸಿಕೊಳ್ಳಬೇಕೆಂಬ ಕವಿಗಳಿಗೆ ಒಂದು ಹೆದ್ದಾರಿಯನ್ನು (ರಾಜಮಾರ್ಗವನ್ನು ಕಲ್ಪಿಸಿಕೊಡುವ ಘನವಾದ ಉದ್ದೇಶದಿಂದ ರಚಿತವಾದದ್ದು ಈ 'ಕವಿರಾಜ' ರಚಿತವಾದ 'ಕವಿಮಾರ್ಗ', ಇದು ರಚಿತವಾದದ್ದಾದರೂ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಸಮ್ಮುಖದಲ್ಲಿ; ಆತನ ಸಹಯೋಗದೊಂದಿಗೆ; ಗ್ರಂಥದಲ್ಲಿ ನಿರೂಪಿತವಾಗಿರುವುದು {{gap}}'ನೃಪತುಂಗದೇವಮಾರ್ಗ' ; ಸ್ವತಃ ವಿದ್ವಾಂಸನೂ ಕವಿಯೂ ಕವಿ-ವಿದ್ವಾಂಸರ ಆಶ್ರಯದಾತನೂ ಆಗಿದ್ದ ನೃಪತುಂಗನ ಕವಿರಾಜನೇ, ಯಾವ ಮುಖದಿಂದ ನೋಡಿದರೂ 'ಕವಿರಾಜಮಾರ್ಗ' ಎಂಬ ಗ್ರಂಥದ ಹಸರು ಸಾರ್ಥಕ. {{gap}}ನೃಪತುಂಗನ ಆಳ್ವಿಕೆಯ ಕಾಲ ಕ್ರಿ.ಶ. ೮೧೪-೮೭೭. ಚಿಕ್ಕ ವಯಸ್ಸಿನಲ್ಲಿ ಪಟ್ಟಕ್ಕೆ ಬಂದ ನೃಪತುಂಗನು ಒಳ ಹೊರ ಹಗಗಳನ್ನೆಲ್ಲಾ ದಮನಮಾಡಿ ರಾಜ್ಯವನ್ನು ನಿಷ್ಕಂಟಕವಾಗಿಸಿ, ಕಾವ್ಯರಚನೆ ವಿದ್ವಜ್ಜನ ಪ್ರೋತ್ಸಾಹ ಮುಂತಾದ ಶಾಂತಿಕಾಲದ<noinclude></noinclude> qtftcj090aow2xxoonl5a0glpuwl8nx ಪುಟ:ಕವಿರಾಜ ಮಾರ್ಗಂ.pdf/೨೩ 104 16254 322502 156961 2026-05-25T15:47:22Z Shreesha Sharma 7840 /* Proofread */ 322502 proofread-page text/x-wiki <noinclude><pagequality level="3" user="Shreesha Sharma" /></noinclude>ಪೀಠಿಕ 2 ರಚನಾಕಾರ್ಯಗಳಿಗೆ ಗಮನಕೊಡಲು ಬಹಳ ಕಾಲವೇ ಹಿಡಿಯಿತು. ರಾಜ್ಯವು ಸುಭಿಕ್ಷವಾಗಿದ್ದು, ರಾಜಪ್ರಜೆಗಳು ನೆಮ್ಮದಿಯಿಂದ ಇದ್ದ ಕಾಲದಲ್ಲಿ ಗ್ರಂಥರಚನೆಯಾಯಿತೆಂದು ಕವಿರಾಜಮಾರ್ಗದ ಕೆಲವು ಪದ್ಯಗಳಿಂದಲೂ ಶಾಸನಗಳ ಆಧಾರದಿಂದಲೂ ಹೇಳಬಹುದು. ಬಹುಜನ ವಿದ್ವಾಂಸರು ಗ್ರಂಥರಚನಾ ಕಾಲವನ್ನು ಕ್ರಿ.ಶ. ೮೫೦ ಎಂದು ನಿರ್ಣಯಿಸಿದ್ದಾರೆ; ೮೫೦-೮೭೦ ನಡುವಣ ಅವಧಿಯಲ್ಲಿ ರಚಿತವಾಗಿರಬಹುದೆಂದು ಶಾಸನಾಧಾರಗಳಿಂದ ಊಹಿಸಲು ಅವಕಾಶವಿದೆ. ೨. ಕರ್ತೃತ್ವ ಕವಿರಾಜಮಾರ್ಗವು ೧೮೯೮ರಲ್ಲಿ ಪ್ರಪ್ರಥಮವಾಗಿ ಕೆ.ಬಿ. ಪಾಠಕರಿಂದ ಸಂಪಾದಿತವಾಗಿ ಪ್ರಕಟವಾದಂದಿನಿಂದ ಈವೊತ್ತಿನವರೆಗೂ ಗ್ರಂಥಕರ್ತೃ ಯಾರು ಎಂಬ ಬಗೆಗೆ ವಾದವಿವಾದಗಳು ನಡೆಯುತ್ತಲೇ ಇವೆ. ಅವರ ನಿರ್ಣಯದ ಪ್ರಕಾರ ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗ ಅದರ ಕರ್ತೃ. ಡಾ|| ಜೆ.ಎಫ್. ಫೀಟ್ ಎಂಬ ಪಾಶ್ಚಾತ್ಯ ವಿದ್ವಾಂಸನು (೧೯೦೪ರಲ್ಲಿ) 'ಇಂಡಿಯನ್ ಆಂಟಿಕ್ವೆರಿ'ಯಲ್ಲಿ 'ಕವೀಶ್ವರನ ಕವಿರಾಜಮಾರ್ಗ' ಎಂಬ ಲೇಖನವನ್ನು ಬರದು, ಗ್ರಂಥಕರ್ತ ನೃಪತುಂಗ ಸಭಾಸದನಾದ 'ಕವೀಶ್ವರ' ಎಂಬ ವಾದವನ್ನು ಮಂಡಿಸಿದರು. ಕವಿಚರಿತೆಕಾರರಾದ ಆರ್. ನರಸಿಂಹಾಚಾರೈರು ಕವಿಚರಿತೆಯ ಪ್ರಥಮ ಸಂಪುಟದಲ್ಲಿ - “ಯದ್ಯಪಿ ಈ ಗ್ರಂಥವು ನೃಪತುಂಗ ಕೃತವೆಂದು ಪ್ರತೀತಿಯಿದ್ದರೂ ಶ್ರೀವಿಜಯಕೃತವೋ ಎಂದು ಸಂದೇಹಪಡುವುದಕ್ಕೆ ಅವಕಾಶವಿದೆ" ಎಂದು ಹೇಳಿ, ಹಾಗೆ ಹೇಳಲು ಸಾಧಕಗಳಾದ ಕೆಲವು ಗ್ರಂಥಸ್ಥ ಪ್ರಮಾಣಗಳನ್ನೂ ಬಾಹ್ಯ ಪ್ರಮಾಣಗಳನ್ನೂ ಸೂಚಿಸಿದರು. “ಆದರೆ, ಈ ವಿಷಯದಲ್ಲಿ ಹೀಗೆಯೇ ಸರಿ ಎಂದು ನಿಶ್ಚಯಿಸಲಾಗುವುದಿಲ್ಲ. ಒಂದು ವೇಳೆ ನೃಪತುಂಗನಿಗೆ ಶ್ರೀವಿಜಯ ಎಂಬ ಬಿರುದೂ ಇದ್ದಿರಬಹುದು ಎಂದರೆ ಅದಕ್ಕೆ ಶಾಸನಗಳಲ್ಲಿಯಾಗಲಿ ಈ ಗ್ರಂಥದಲ್ಲಿಯಾಗಲಿ ಆವ ಆಧಾರವೂ ಸಿಕ್ಕುವುದಿಲ್ಲ" ಎಂದು ಕರ್ತೃತ್ವವಿಚಾರವನ್ನು ಅನಿಶ್ಚಿತವಾಗಿಯೇ ಉಳಿಸಿದರು. ಆದರೂ, ತಮ್ಮ ಆಮೇಲಿನ ಬರಹಗಳಲ್ಲಿ 'ನೃಪತುಂಗನ ಕವಿರಾಜಮಾರ್ಗ ಎಂದು ಉಲ್ಲೇಖಿಸಿದರು. ಹೀಗೆ, ಕವಿರಾಜಮಾರ್ಗ ಕರ್ತೃತ್ವ ವಿಚಾರದಲ್ಲಿ-೧ ನೃಪತುಂಗಪಕ್ಷ, ೨. ಕವೀಶ್ವರಪಕ್ಷ, ೩. ಶ್ರೀವಿಜಯಪಕ್ಷ ಎಂದು ಮೂರು ಪಕ್ಷಗಳು ಹುಟ್ಟಿಕೊಂಡುವು. ದಿವಂಗತ ನಾ.ಶ್ರೀ. ರಾಜಪುರೋಹಿತರು,<noinclude></noinclude> 3a5w2hhk975jgt512chpihg6ti2tu6l 322504 322502 2026-05-25T15:51:56Z Shreesha Sharma 7840 322504 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಪೀಠಿಕೆ|right=೭}} ರಚನಾಕಾರ್ಯಗಳಿಗೆ ಗಮನಕೊಡಲು ಬಹಳ ಕಾಲವೇ ಹಿಡಿಯಿತು. ರಾಜ್ಯವು ಸುಭಿಕ್ಷವಾಗಿದ್ದು, ರಾಜಪ್ರಜೆಗಳು ನೆಮ್ಮದಿಯಿಂದ ಇದ್ದ ಕಾಲದಲ್ಲಿ ಗ್ರಂಥರಚನೆಯಾಯಿತೆಂದು ಕವಿರಾಜಮಾರ್ಗದ ಕೆಲವು ಪದ್ಯಗಳಿಂದಲೂ ಶಾಸನಗಳ ಆಧಾರದಿಂದಲೂ ಹೇಳಬಹುದು. ಬಹುಜನ ವಿದ್ವಾಂಸರು ಗ್ರಂಥರಚನಾ ಕಾಲವನ್ನು ಕ್ರಿ.ಶ. ೮೫೦ ಎಂದು ನಿರ್ಣಯಿಸಿದ್ದಾರೆ; ೮೫೦-೮೭೦ ನಡುವಣ ಅವಧಿಯಲ್ಲಿ ರಚಿತವಾಗಿರಬಹುದೆಂದು ಶಾಸನಾಧಾರಗಳಿಂದ ಊಹಿಸಲು ಅವಕಾಶವಿದೆ. {{center|'''೨. ಕರ್ತೃತ್ವ'''}} {{gap}}ಕವಿರಾಜಮಾರ್ಗವು ೧೮೯೮ರಲ್ಲಿ ಪ್ರಪ್ರಥಮವಾಗಿ ಕೆ.ಬಿ. ಪಾಠಕರಿಂದ ಸಂಪಾದಿತವಾಗಿ ಪ್ರಕಟವಾದಂದಿನಿಂದ ಈವೊತ್ತಿನವರೆಗೂ ಗ್ರಂಥಕರ್ತೃ ಯಾರು ಎಂಬ ಬಗೆಗೆ ವಾದವಿವಾದಗಳು ನಡೆಯುತ್ತಲೇ ಇವೆ. ಅವರ ನಿರ್ಣಯದ ಪ್ರಕಾರ ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗ ಅದರ ಕರ್ತೃ. ಡಾ|| ಜೆ.ಎಫ್. ಫೀಟ್ ಎಂಬ ಪಾಶ್ಚಾತ್ಯ ವಿದ್ವಾಂಸನು (೧೯೦೪ರಲ್ಲಿ) 'ಇಂಡಿಯನ್ ಆಂಟಿಕ್ವೆರಿ'ಯಲ್ಲಿ 'ಕವೀಶ್ವರನ ಕವಿರಾಜಮಾರ್ಗ' ಎಂಬ ಲೇಖನವನ್ನು ಬರದು, ಗ್ರಂಥಕರ್ತ ನೃಪತುಂಗ ಸಭಾಸದನಾದ 'ಕವೀಶ್ವರ' ಎಂಬ ವಾದವನ್ನು ಮಂಡಿಸಿದರು. ಕವಿಚರಿತೆಕಾರರಾದ ಆರ್. ನರಸಿಂಹಾಚಾರೈರು ಕವಿಚರಿತೆಯ ಪ್ರಥಮ ಸಂಪುಟದಲ್ಲಿ - “ಯದ್ಯಪಿ ಈ ಗ್ರಂಥವು ನೃಪತುಂಗ ಕೃತವೆಂದು ಪ್ರತೀತಿಯಿದ್ದರೂ ಶ್ರೀವಿಜಯಕೃತವೋ ಎಂದು ಸಂದೇಹಪಡುವುದಕ್ಕೆ ಅವಕಾಶವಿದೆ" ಎಂದು ಹೇಳಿ, ಹಾಗೆ ಹೇಳಲು ಸಾಧಕಗಳಾದ ಕೆಲವು ಗ್ರಂಥಸ್ಥ ಪ್ರಮಾಣಗಳನ್ನೂ ಬಾಹ್ಯ ಪ್ರಮಾಣಗಳನ್ನೂ ಸೂಚಿಸಿದರು. “ಆದರೆ, ಈ ವಿಷಯದಲ್ಲಿ ಹೀಗೆಯೇ ಸರಿ ಎಂದು ನಿಶ್ಚಯಿಸಲಾಗುವುದಿಲ್ಲ. ಒಂದು ವೇಳೆ ನೃಪತುಂಗನಿಗೆ ಶ್ರೀವಿಜಯ ಎಂಬ ಬಿರುದೂ ಇದ್ದಿರಬಹುದು ಎಂದರೆ ಅದಕ್ಕೆ ಶಾಸನಗಳಲ್ಲಿಯಾಗಲಿ ಈ ಗ್ರಂಥದಲ್ಲಿಯಾಗಲಿ ಆವ ಆಧಾರವೂ ಸಿಕ್ಕುವುದಿಲ್ಲ" ಎಂದು ಕರ್ತೃತ್ವವಿಚಾರವನ್ನು ಅನಿಶ್ಚಿತವಾಗಿಯೇ ಉಳಿಸಿದರು. ಆದರೂ, ತಮ್ಮ ಆಮೇಲಿನ ಬರಹಗಳಲ್ಲಿ 'ನೃಪತುಂಗನ ಕವಿರಾಜಮಾರ್ಗ ಎಂದು ಉಲ್ಲೇಖಿಸಿದರು. ಹೀಗೆ, ಕವಿರಾಜಮಾರ್ಗ ಕರ್ತೃತ್ವ ವಿಚಾರದಲ್ಲಿ-೧ ನೃಪತುಂಗಪಕ್ಷ, ೨. ಕವೀಶ್ವರಪಕ್ಷ, ೩. ಶ್ರೀವಿಜಯಪಕ್ಷ ಎಂದು ಮೂರು ಪಕ್ಷಗಳು ಹುಟ್ಟಿಕೊಂಡುವು. ದಿವಂಗತ ನಾ.ಶ್ರೀ. ರಾಜಪುರೋಹಿತರು,<noinclude></noinclude> hxnte1j6ahgmsw8ffujy2wxzivnrwwo 322550 322504 2026-05-26T02:14:00Z Shreelatha.Halemane 7642 /* Validated */ 322550 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಪೀಠಿಕೆ|right=೭}} ರಚನಾಕಾರ್ಯಗಳಿಗೆ ಗಮನಕೊಡಲು ಬಹಳ ಕಾಲವೇ ಹಿಡಿಯಿತು. ರಾಜ್ಯವು ಸುಭಿಕ್ಷವಾಗಿದ್ದು, ರಾಜಪ್ರಜೆಗಳು ನೆಮ್ಮದಿಯಿಂದ ಇದ್ದ ಕಾಲದಲ್ಲಿ ಗ್ರಂಥರಚನೆಯಾಯಿತೆಂದು ಕವಿರಾಜಮಾರ್ಗದ ಕೆಲವು ಪದ್ಯಗಳಿಂದಲೂ ಶಾಸನಗಳ ಆಧಾರದಿಂದಲೂ ಹೇಳಬಹುದು. ಬಹುಜನ ವಿದ್ವಾಂಸರು ಗ್ರಂಥರಚನಾ ಕಾಲವನ್ನು ಕ್ರಿ.ಶ. ೮೫೦ ಎಂದು ನಿರ್ಣಯಿಸಿದ್ದಾರೆ; ೮೫೦-೮೭೦ ನಡುವಣ ಅವಧಿಯಲ್ಲಿ ರಚಿತವಾಗಿರಬಹುದೆಂದು ಶಾಸನಾಧಾರಗಳಿಂದ ಊಹಿಸಲು ಅವಕಾಶವಿದೆ. {{center|'''೨. ಕರ್ತೃತ್ವ'''}} {{gap}}ಕವಿರಾಜಮಾರ್ಗವು ೧೮೯೮ರಲ್ಲಿ ಪ್ರಪ್ರಥಮವಾಗಿ ಕೆ.ಬಿ. ಪಾಠಕರಿಂದ ಸಂಪಾದಿತವಾಗಿ ಪ್ರಕಟವಾದಂದಿನಿಂದ ಈವೊತ್ತಿನವರೆಗೂ ಗ್ರಂಥಕರ್ತೃ ಯಾರು ಎಂಬ ಬಗೆಗೆ ವಾದವಿವಾದಗಳು ನಡೆಯುತ್ತಲೇ ಇವೆ. ಅವರ ನಿರ್ಣಯದ ಪ್ರಕಾರ ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗ ಅದರ ಕರ್ತೃ. ಡಾ|| ಜೆ.ಎಫ್. ಫೀಟ್ ಎಂಬ ಪಾಶ್ಚಾತ್ಯ ವಿದ್ವಾಂಸನು (೧೯೦೪ರಲ್ಲಿ) 'ಇಂಡಿಯನ್ ಆಂಟಿಕ್ವೆರಿ'ಯಲ್ಲಿ 'ಕವೀಶ್ವರನ ಕವಿರಾಜಮಾರ್ಗ' ಎಂಬ ಲೇಖನವನ್ನು ಬರದು, ಗ್ರಂಥಕರ್ತ ನೃಪತುಂಗ ಸಭಾಸದನಾದ 'ಕವೀಶ್ವರ' ಎಂಬ ವಾದವನ್ನು ಮಂಡಿಸಿದರು. ಕವಿಚರಿತೆಕಾರರಾದ ಆರ್. ನರಸಿಂಹಾಚಾರೈರು ಕವಿಚರಿತೆಯ ಪ್ರಥಮ ಸಂಪುಟದಲ್ಲಿ - “ಯದ್ಯಪಿ ಈ ಗ್ರಂಥವು ನೃಪತುಂಗ ಕೃತವೆಂದು ಪ್ರತೀತಿಯಿದ್ದರೂ ಶ್ರೀವಿಜಯಕೃತವೋ ಎಂದು ಸಂದೇಹಪಡುವುದಕ್ಕೆ ಅವಕಾಶವಿದೆ" ಎಂದು ಹೇಳಿ, ಹಾಗೆ ಹೇಳಲು ಸಾಧಕಗಳಾದ ಕೆಲವು ಗ್ರಂಥಸ್ಥ ಪ್ರಮಾಣಗಳನ್ನೂ ಬಾಹ್ಯ ಪ್ರಮಾಣಗಳನ್ನೂ ಸೂಚಿಸಿದರು. “ಆದರೆ, ಈ ವಿಷಯದಲ್ಲಿ ಹೀಗೆಯೇ ಸರಿ ಎಂದು ನಿಶ್ಚಯಿಸಲಾಗುವುದಿಲ್ಲ. ಒಂದು ವೇಳೆ ನೃಪತುಂಗನಿಗೆ ಶ್ರೀವಿಜಯ ಎಂಬ ಬಿರುದೂ ಇದ್ದಿರಬಹುದು ಎಂದರೆ ಅದಕ್ಕೆ ಶಾಸನಗಳಲ್ಲಿಯಾಗಲಿ ಈ ಗ್ರಂಥದಲ್ಲಿಯಾಗಲಿ ಆವ ಆಧಾರವೂ ಸಿಕ್ಕುವುದಿಲ್ಲ" ಎಂದು ಕರ್ತೃತ್ವವಿಚಾರವನ್ನು ಅನಿಶ್ಚಿತವಾಗಿಯೇ ಉಳಿಸಿದರು. ಆದರೂ, ತಮ್ಮ ಆಮೇಲಿನ ಬರಹಗಳಲ್ಲಿ 'ನೃಪತುಂಗನ ಕವಿರಾಜಮಾರ್ಗ ಎಂದು ಉಲ್ಲೇಖಿಸಿದರು. ಹೀಗೆ, ಕವಿರಾಜಮಾರ್ಗ ಕರ್ತೃತ್ವ ವಿಚಾರದಲ್ಲಿ-೧ ನೃಪತುಂಗಪಕ್ಷ, ೨. ಕವೀಶ್ವರಪಕ್ಷ, ೩. ಶ್ರೀವಿಜಯಪಕ್ಷ ಎಂದು ಮೂರು ಪಕ್ಷಗಳು ಹುಟ್ಟಿಕೊಂಡುವು. ದಿವಂಗತ ನಾ.ಶ್ರೀ. ರಾಜಪುರೋಹಿತರು,<noinclude></noinclude> m54kc4wcmj7l0h34vedkliz8gc6tbnw ಪುಟ:ಕವಿರಾಜ ಮಾರ್ಗಂ.pdf/೨೪ 104 16255 322503 156972 2026-05-25T15:47:41Z Shreesha Sharma 7840 /* Proofread */ 322503 proofread-page text/x-wiki <noinclude><pagequality level="3" user="Shreesha Sharma" /></noinclude>ಕವಿರಾಜಮಾರ್ಗ - ದಿವಂಗತ ಡಿ.ಕೆ. ಭೀಮಸೇನರಾಯರು ಮತ್ತು ಈಚೆಗೆ, ಡಾ|| ಎಸ್.ಸಿ. ನಂದೀಮಠ, ಡಾ|| ಕೆ. ಕೃಷ್ಣಮೂರ್ತಿ, ಭೀಮರಾವ್ ಚಿಟಗುಪ್ಪಿ ಇವರುಗಳು ನೃಪತುಂಗಕರ್ತೃತ್ವವಾದದ ಪುರಸ್ಕೃತರು. ದಿವಂಗತರುಗಳಾದ ಟಿ.ಎಸ್.ವೆಂಕಣ್ಣಯ್ಯ, ಡಾ|| ಎ.ಆರ್. ಕೃಷ್ಣಶಾಸ್ತ್ರೀ, ಮುಳಿಯ ತಿಮ್ಮಪ್ಪಯ್ಯ, ತೀ.ನಂ. ಶ್ರೀಕಂಠಯ್ಯ; ಮತ್ತು ಡಾ|| ರಂ.ಶ್ರೀ. ಮುಗಳಿ, ಎಂ.ವಿ. ಸೀತಾರಾಮಯ್ಯ, ಡಾ|| ಎಂ.ಎಂ. ಕಲಬುರ್ಗಿ-ಇವರುಗಳು, ನೃಪತುಂಗ ಸಭಾಸದನಾದ ಶ್ರೀವಿಜಯನು ತನ್ನ ಆಶ್ರಯದಾತನಾದ ನೃಪತುಂಗನ ಅಭಿಮತಾನುಸಾರವಾಗಿ, ಅವನ ಅಂಕಿತಕ್ಕೂ ಬಿರುದಾವಳಿಗೂ ಕೃತಿಯಲ್ಲಿ ಪ್ರಾಮುಖ್ಯವನ್ನು ಕೊಟ್ಟು, ಪರಿಚ್ಛೇದಾಂತ ಪದ್ಯಗಳಲ್ಲಿ ಸೂಚ್ಯವಾಗಿ ತನ್ನ ಹೆಸರನ್ನೂ ಅಡಕಮಾಡಿ ಕೃತಿರಚನೆ ಮಾಡಿದ್ದಾನೆ ಎಂದು ವಾದಿಸಿದ್ದಾರೆ. ಡಾ|| ಪ್ಲೇಟ್ ಅವರು ಮುಂದಿಟ್ಟ ಕವೀಶ್ವರ ಕರ್ತೃತ್ವವಾದವನ್ನು ಎತ್ತಿಹಿಡಿದವರು-ಮದರಾಸು ವಿಶ್ವವಿದ್ಯಾನಿಲಯಕ್ಕಾಗಿ ಕವಿರಾಜಮಾರ್ಗವನ್ನು ಎರಡನೆಯಬಾರಿಗೆ ಪರಿಷ್ಕರಿಸಿ ಸಂಪಾದನೆ ಮಾಡಿದ ದಿವಂಗತ ಎ. ವೆಂಕಟರಾವ್ ಮತ್ತು ಪಂಡಿತ ಎಚ್. ಶೇಷಯ್ಯಂಗಾರ್, ಕರ್ತೃತ್ವ ನಿರ್ಣಯದಲ್ಲಿ ಯಾವ ಪಕ್ಷದವರೇ ಆಗಲಿ ೧, ಆಂತರಿಕ ಹಾಗೂ ೨. ಬಾಹ್ಯ ಪ್ರಮಾಣಗಳನ್ನು ಅವಲಂಬಿಸಿ ವಾದ ಮಾಡಬೇಕಾಗುತ್ತದೆ; ಅವರು ತಮಗೆ ಅನುಕೂಲವಾದ ಪ್ರಮಾಣಗಳಿಗೆ ಪ್ರಾಮುಖ್ಯತೆ ಕೊಟ್ಟು, ಪ್ರತಿಕೂಲ ಪ್ರಮಾಣಗಳನ್ನು ಉಪೇಕ್ಷಮಾಡುವುದೋ ಇಲ್ಲವೆ ತಮ್ಮ ವಾದಕ್ಕೆ ಅನುಕೂಲವಾಗುವಂತೆ ತಿರುಗಿಸಿಕೊಂಡು ವಿವರಿಸುವುದೋ ಸಹಜ; ಸಾಧ್ಯ ಇಲ್ಲಿನ ಪರಿಮಿತ ಅವಕಾಶದಲ್ಲಿ ಎಲ್ಲ ಪ್ರಮಾಣಗಳನ್ನೂ ಪರಿಶೀಲಿಸುವುದು ಸಾಧ್ಯವಿಲ್ಲವಾದ್ದರಿಂದ ಬಹುಮುಖ್ಯ ಪ್ರಮಾಣಗಳನ್ನು ಮಾತ್ರ ಕೂಡಿದಮಟ್ಟಿಗೂ ವಸ್ತುನಿಷ್ಠವಾಗಿ ಪರೀಕ್ಷಿಸಿ, ಅವು ಯಾವ ಪಕ್ಷಕ್ಕೆ ಹೆಚ್ಚು ಅನುಕೂಲವಾಗಿವೆ ಎಂದು ಕಂಡುಕೊಂಡು, ಕರ್ತೃತ್ವದ ಬಗೆಗೆ ತೀರ್ಮಾನ ಮಾಡುವುದು ಸಕ್ರಮ. (I) ಅಂತರಿಕ ಪ್ರಮಾಣಗಳು : ೧. ಮೊದಲ ಪರಿಚ್ಛೇದದ ಮೂರು ಮಂಗಳ ಶ್ಲೋಕಗಳು. ಇವುಗಳ ಪೈಕಿ ಮೊದಲ ಎರಡು ಪದ್ಯಗಳು ವಿಷ್ಣುಸ್ತುತಿ. ಇವುಗಳಲ್ಲಿ ವಿಷ್ಣುವಿಗೂ ನೃಪತುಂಗನಿಗೂ ಅಭೇದವನ್ನು ಕಲ್ಪಿಸಿ ಸ್ತೋತ್ರಮಾಡಿದೆ. ಈ ಸಂದರ್ಭದಲ್ಲಿ, ನೃಪತುಂಗನ ಮತವನ್ನೂ ಗ್ರಂಥದಲ್ಲಿ ಕಂಡುಬರುವ ಜೈನಧರ್ಮಪರವಾದ ಕೆಲವು ಸ್ಪಷ್ಟ ಉಲ್ಲೇಖಗಳನ್ನೂ ಗಮನಿಸುವುದು ಅಗತ್ಯ.<noinclude></noinclude> 9pzx60lx1elxky11ntsx8xtdlyog57a 322551 322503 2026-05-26T02:15:19Z Shreelatha.Halemane 7642 /* Validated */ 322551 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೮|right=ಕವಿರಾಜಮಾರ್ಗ}} - ದಿವಂಗತ ಡಿ.ಕೆ. ಭೀಮಸೇನರಾಯರು ಮತ್ತು ಈಚೆಗೆ, ಡಾ|| ಎಸ್.ಸಿ. ನಂದೀಮಠ, ಡಾ|| ಕೆ. ಕೃಷ್ಣಮೂರ್ತಿ, ಭೀಮರಾವ್ ಚಿಟಗುಪ್ಪಿ ಇವರುಗಳು ನೃಪತುಂಗಕರ್ತೃತ್ವವಾದದ ಪುರಸ್ಕೃತರು. ದಿವಂಗತರುಗಳಾದ ಟಿ.ಎಸ್.ವೆಂಕಣ್ಣಯ್ಯ, ಡಾ|| ಎ.ಆರ್. ಕೃಷ್ಣಶಾಸ್ತ್ರೀ, ಮುಳಿಯ ತಿಮ್ಮಪ್ಪಯ್ಯ, ತೀ.ನಂ. ಶ್ರೀಕಂಠಯ್ಯ; ಮತ್ತು ಡಾ|| ರಂ.ಶ್ರೀ. ಮುಗಳಿ, ಎಂ.ವಿ. ಸೀತಾರಾಮಯ್ಯ, ಡಾ|| ಎಂ.ಎಂ. ಕಲಬುರ್ಗಿ-ಇವರುಗಳು, ನೃಪತುಂಗ ಸಭಾಸದನಾದ ಶ್ರೀವಿಜಯನು ತನ್ನ ಆಶ್ರಯದಾತನಾದ ನೃಪತುಂಗನ ಅಭಿಮತಾನುಸಾರವಾಗಿ, ಅವನ ಅಂಕಿತಕ್ಕೂ ಬಿರುದಾವಳಿಗೂ ಕೃತಿಯಲ್ಲಿ ಪ್ರಾಮುಖ್ಯವನ್ನು ಕೊಟ್ಟು, ಪರಿಚ್ಛೇದಾಂತ ಪದ್ಯಗಳಲ್ಲಿ ಸೂಚ್ಯವಾಗಿ ತನ್ನ ಹೆಸರನ್ನೂ ಅಡಕಮಾಡಿ ಕೃತಿರಚನೆ ಮಾಡಿದ್ದಾನೆ ಎಂದು ವಾದಿಸಿದ್ದಾರೆ. ಡಾ|| ಪ್ಲೇಟ್ ಅವರು ಮುಂದಿಟ್ಟ ಕವೀಶ್ವರ ಕರ್ತೃತ್ವವಾದವನ್ನು ಎತ್ತಿಹಿಡಿದವರು-ಮದರಾಸು ವಿಶ್ವವಿದ್ಯಾನಿಲಯಕ್ಕಾಗಿ ಕವಿರಾಜಮಾರ್ಗವನ್ನು ಎರಡನೆಯಬಾರಿಗೆ ಪರಿಷ್ಕರಿಸಿ ಸಂಪಾದನೆ ಮಾಡಿದ ದಿವಂಗತ ಎ. ವೆಂಕಟರಾವ್ ಮತ್ತು ಪಂಡಿತ ಎಚ್. ಶೇಷಯ್ಯಂಗಾರ್, {{gap}}ಕರ್ತೃತ್ವ ನಿರ್ಣಯದಲ್ಲಿ ಯಾವ ಪಕ್ಷದವರೇ ಆಗಲಿ ೧, ಆಂತರಿಕ ಹಾಗೂ ೨. ಬಾಹ್ಯ ಪ್ರಮಾಣಗಳನ್ನು ಅವಲಂಬಿಸಿ ವಾದ ಮಾಡಬೇಕಾಗುತ್ತದೆ; ಅವರು ತಮಗೆ ಅನುಕೂಲವಾದ ಪ್ರಮಾಣಗಳಿಗೆ ಪ್ರಾಮುಖ್ಯತೆ ಕೊಟ್ಟು, ಪ್ರತಿಕೂಲ ಪ್ರಮಾಣಗಳನ್ನು ಉಪೇಕ್ಷಮಾಡುವುದೋ ಇಲ್ಲವೆ ತಮ್ಮ ವಾದಕ್ಕೆ ಅನುಕೂಲವಾಗುವಂತೆ ತಿರುಗಿಸಿಕೊಂಡು ವಿವರಿಸುವುದೋ ಸಹಜ; ಸಾಧ್ಯ ಇಲ್ಲಿನ ಪರಿಮಿತ ಅವಕಾಶದಲ್ಲಿ ಎಲ್ಲ ಪ್ರಮಾಣಗಳನ್ನೂ ಪರಿಶೀಲಿಸುವುದು ಸಾಧ್ಯವಿಲ್ಲವಾದ್ದರಿಂದ ಬಹುಮುಖ್ಯ ಪ್ರಮಾಣಗಳನ್ನು ಮಾತ್ರ ಕೂಡಿದಮಟ್ಟಿಗೂ ವಸ್ತುನಿಷ್ಠವಾಗಿ ಪರೀಕ್ಷಿಸಿ, ಅವು ಯಾವ ಪಕ್ಷಕ್ಕೆ ಹೆಚ್ಚು ಅನುಕೂಲವಾಗಿವೆ ಎಂದು ಕಂಡುಕೊಂಡು, ಕರ್ತೃತ್ವದ ಬಗೆಗೆ ತೀರ್ಮಾನ ಮಾಡುವುದು ಸಕ್ರಮ. '''(I) ಅಂತರಿಕ ಪ್ರಮಾಣಗಳು''' : {{gap}}೧. ಮೊದಲ ಪರಿಚ್ಛೇದದ ಮೂರು ಮಂಗಳ ಶ್ಲೋಕಗಳು. ಇವುಗಳ ಪೈಕಿ ಮೊದಲ ಎರಡು ಪದ್ಯಗಳು ವಿಷ್ಣುಸ್ತುತಿ. ಇವುಗಳಲ್ಲಿ ವಿಷ್ಣುವಿಗೂ ನೃಪತುಂಗನಿಗೂ ಅಭೇದವನ್ನು ಕಲ್ಪಿಸಿ ಸ್ತೋತ್ರಮಾಡಿದೆ. {{gap}}ಈ ಸಂದರ್ಭದಲ್ಲಿ, ನೃಪತುಂಗನ ಮತವನ್ನೂ ಗ್ರಂಥದಲ್ಲಿ ಕಂಡುಬರುವ ಜೈನಧರ್ಮಪರವಾದ ಕೆಲವು ಸ್ಪಷ್ಟ ಉಲ್ಲೇಖಗಳನ್ನೂ ಗಮನಿಸುವುದು ಅಗತ್ಯ.<noinclude></noinclude> 5rheoouluaau0i6zkxshysol36a648n ಪುಟ:ಕವಿರಾಜ ಮಾರ್ಗಂ.pdf/೨೫ 104 16256 322552 156983 2026-05-26T02:15:39Z Shreelatha.Halemane 7642 /* Proofread */ 322552 proofread-page text/x-wiki <noinclude><pagequality level="3" user="Shreelatha.Halemane" /></noinclude>ನೃಪತುಂಗನು ಜೈನ ಮಹಾಪುರಾಣ ಕರ್ತೃ ಜಿನಸೇನಾಚಾರದಲ್ಲಿ ಗುರುಭಾವನೆಯನ್ನು ಇಟ್ಟಿದ್ದನೆಂದು ಹೇಳಲು ಅಭ್ಯಂತರವಿಲ್ಲ. ಅವನು ಜಿನಸೇನ, ಗುಣಭದ್ರ, ಮಹಾವೀರಾಚಾರ, ಶಾಕಟಾಯನ, ಶ್ರೀವಿಜಯ, ಮುಂತಾದ ಅನೇಕ ಜೈನ ವಿದ್ವಾಂಸರುಗಳಿಗೂ ಕವಿಗಳಿಗೂ ಆಶ್ರಯಕೊಟ್ಟಿದ್ದನು. ಕನ್ನಡ ನಾಡಿನಲ್ಲಿ ಜೈನಮತವು ಪ್ರಚಾರಕ್ಕೆ ಬಂದು, ಪ್ರಬಲಗೊಂಡು, ಜನಪ್ರೀತಿಯನ್ನು ಗಳಿಸುತ್ತಿದ್ದ ಕಾಲವದು. ಪರಮತಸಹಿಷ್ಣುವಾದ ನೃಪತುಂಗನು ಜೈನಧರ್ಮದಲ್ಲಿಯೂ ಜೈನಾಚಾರರಲ್ಲಿಯೂ ಪೂಜ್ಯಭಾವನೆಯನ್ನಿರಿಸಿದ್ದನೆಂದ ಮಾತ್ರಕ್ಕೆ ಅವನು ಜೈನಮತಕ್ಕೆ ಸೇರಿದ್ದನೆಂದು ಹೇಳಲಾಗದು. ಕ್ರಿ.ಶ. ೮೭೦ರವರೆಗೆ, ಕವಿರಾಜಮಾರ್ಗ ರಚಿತವಾದ ವೇಳೆಯಲ್ಲಿ, ಅವನು ವೈದಿಕ ಮತಾನುಯಾಯಿಯಾಗಿದ್ದನೆಂದು ಹೇಳಲು ಅವನೇ ಹೊರಡಿಸಿದ ಸಂಜಾನ ಶಾಸನ (ಕ್ರಿ.ಶ. ೮೭೧) ಪ್ರಬಲವಾದ ಪ್ರಮಾಣವಾಗಿದೆ. ಕವಿರಾಜಮಾರ್ಗದ ವಿಷ್ಣುಪರಸ್ತೋತ್ರಗಳೂ ಈ ಅಂಶವನ್ನ ಸಾರಿ ಹೇಳುತ್ತಿವೆ. ಮೂರನೆಯ ಪದ್ಯ ದಂಡಿಯ ಶ್ಲೋಕದ ಅನುವಾದ. ಅದರಲ್ಲಿ - “ಚತುರ್ಮುಖ ಮುಖಾಂಭೋಜವನ ಸವಧೂ" ಎಂಬ ಸರಸ್ವತೀಸ್ವರೂಪವರ್ಣನೆಯ ರೂಪಕದಲ್ಲಿನ ಬ್ರಹ್ಮವಾಚಕವನ್ನು ಕೃತಿಕಾರ ಉದ್ದೇಶಪೂರ್ವಕವಾಗಿ ಬಿಟ್ಟುಬಿಟ್ಟಿರುವಂತಿದೆ. ನೃಪತುಂಗನೇ ಕರ್ತೃವಾಗಿದ್ದ ಪಕ್ಷದಲ್ಲಿ, ಈ ವೈದಿಕಾಂಶವನ್ನು ಕಳೆಯಬೇಕಾದ ಅಗತ್ಯವಿರುತ್ತಿರಲಿಲ್ಲ. ಈ ಪದ್ಯವೊಂದು ಮಾತ್ರವಲ್ಲದೆ, ಗ್ರಂಥದ ಅನೇಕ ಕಡೆಗಳಲ್ಲಿ ಜೈನಧರ್ಮಪರವಾದ ಉಲ್ಲೇಖಗಳು ಗೋಚರಿಸುತ್ತವೆ. (ನೋಡಿ: -೧೯, ೨೮,೯೧, ೧೦೪, ೧೦೯; I-೧೦೯, ೧೩೫ ೧೫೨; ೧-೧೮, ೯೪, ೨೨೭).೧ ಒಂದು ಉದಾಹರಣೆ ಗಮನಾರ್ಹ: 'ಹರಿಪಾದಕ್ಕಿರೋಲಗ್ನ ಜುಹುಕನ್ಯಾ ಜಲಾಂಶುಕ: ಜಯತ್ಯಸುರನಿಶಂಕ ಸುರಾನಂದೋತ್ಸವಧ್ವಜ' (ಕಾವ್ಯಾದರ್ಶ, ೮೧) ಎಂಬ ದಂಡಿಯ ವಿಷ್ಣುಸ್ತುತಿ, ''ಜಿನಚರಣನಖಾದರ್ಶಂ ವಿನತಾಮರರಾಜ ರಾಜವದನ ಪ್ರತಿಮಂ" (-೧೮) ಎಂದು ಜಿನಸ್ತುತಿಯಾಗಿ ಮಾರ್ಪಟ್ಟಿದೆ. ಇಂತಹ ಮಾರ್ಪಾಟುಗಳನ್ನು ಆಕಸ್ಮಿಕ ಇಲ್ಲವೆ ಅನುದ್ದಿಷ್ಟ ಎದು ಅಲಕ್ಷಿಸುವಂತಿಲ್ಲ. ವಿಷ್ಣುಭಕ್ತನಾದ ನೃಪತುಂಗನು ತನ್ನ ಕೃತಿಯಲ್ಲಿ ಈ ಬಗೆಯ ಸ್ವಧರ್ಮವಿರುದ್ಧವಾದ ಮಾರ್ಪಾಟುಗಳನ್ನು ಖಂಡಿತವಾಗಿಯೂ ಮಾಡಿಕೊಳ್ಳುತ್ತಿರಲಿಲ್ಲ, ಅಲ್ಲದೆ, ಆತ ಎಷ್ಟೇ ಆತ್ಮಸ್ತುತಿಪ್ರಿಯನೆಂದು ೧. ಈ ಜೈನಪರ ಉಲ್ಲೇಖಗಳ ವಿವರಣೆಯನ್ನು ತಿಳಿಯಬಯಸುವವರು ಮದರಾಸು ವಿಶ್ವವಿದ್ಯಾನಿಲಯವು ಪ್ರಕಟಿಸಿರುವ ಕವಿರಾಜಮಾರ್ಗದ ಮುದ್ರಣದಲ್ಲಿನ ೬ನೆಯ ಪರಿಶಿಷ್ಟವನ್ನು (ಪು. ೧೭೨-೧೭೫) ನೋಡಬಹುದು.<noinclude></noinclude> ombyk7e7uu76d55b5o8ms9q44vex7qv 322554 322552 2026-05-26T02:15:56Z Pragathi. BH 7585 /* Validated */ 322554 proofread-page text/x-wiki <noinclude><pagequality level="4" user="Pragathi. BH" /></noinclude>ನೃಪತುಂಗನು ಜೈನ ಮಹಾಪುರಾಣ ಕರ್ತೃ ಜಿನಸೇನಾಚಾರದಲ್ಲಿ ಗುರುಭಾವನೆಯನ್ನು ಇಟ್ಟಿದ್ದನೆಂದು ಹೇಳಲು ಅಭ್ಯಂತರವಿಲ್ಲ. ಅವನು ಜಿನಸೇನ, ಗುಣಭದ್ರ, ಮಹಾವೀರಾಚಾರ, ಶಾಕಟಾಯನ, ಶ್ರೀವಿಜಯ, ಮುಂತಾದ ಅನೇಕ ಜೈನ ವಿದ್ವಾಂಸರುಗಳಿಗೂ ಕವಿಗಳಿಗೂ ಆಶ್ರಯಕೊಟ್ಟಿದ್ದನು. ಕನ್ನಡ ನಾಡಿನಲ್ಲಿ ಜೈನಮತವು ಪ್ರಚಾರಕ್ಕೆ ಬಂದು, ಪ್ರಬಲಗೊಂಡು, ಜನಪ್ರೀತಿಯನ್ನು ಗಳಿಸುತ್ತಿದ್ದ ಕಾಲವದು. ಪರಮತಸಹಿಷ್ಣುವಾದ ನೃಪತುಂಗನು ಜೈನಧರ್ಮದಲ್ಲಿಯೂ ಜೈನಾಚಾರರಲ್ಲಿಯೂ ಪೂಜ್ಯಭಾವನೆಯನ್ನಿರಿಸಿದ್ದನೆಂದ ಮಾತ್ರಕ್ಕೆ ಅವನು ಜೈನಮತಕ್ಕೆ ಸೇರಿದ್ದನೆಂದು ಹೇಳಲಾಗದು. ಕ್ರಿ.ಶ. ೮೭೦ರವರೆಗೆ, ಕವಿರಾಜಮಾರ್ಗ ರಚಿತವಾದ ವೇಳೆಯಲ್ಲಿ, ಅವನು ವೈದಿಕ ಮತಾನುಯಾಯಿಯಾಗಿದ್ದನೆಂದು ಹೇಳಲು ಅವನೇ ಹೊರಡಿಸಿದ ಸಂಜಾನ ಶಾಸನ (ಕ್ರಿ.ಶ. ೮೭೧) ಪ್ರಬಲವಾದ ಪ್ರಮಾಣವಾಗಿದೆ. ಕವಿರಾಜಮಾರ್ಗದ ವಿಷ್ಣುಪರಸ್ತೋತ್ರಗಳೂ ಈ ಅಂಶವನ್ನ ಸಾರಿ ಹೇಳುತ್ತಿವೆ. ಮೂರನೆಯ ಪದ್ಯ ದಂಡಿಯ ಶ್ಲೋಕದ ಅನುವಾದ. ಅದರಲ್ಲಿ - “ಚತುರ್ಮುಖ ಮುಖಾಂಭೋಜವನ ಸವಧೂ" ಎಂಬ ಸರಸ್ವತೀಸ್ವರೂಪವರ್ಣನೆಯ ರೂಪಕದಲ್ಲಿನ ಬ್ರಹ್ಮವಾಚಕವನ್ನು ಕೃತಿಕಾರ ಉದ್ದೇಶಪೂರ್ವಕವಾಗಿ ಬಿಟ್ಟುಬಿಟ್ಟಿರುವಂತಿದೆ. ನೃಪತುಂಗನೇ ಕರ್ತೃವಾಗಿದ್ದ ಪಕ್ಷದಲ್ಲಿ, ಈ ವೈದಿಕಾಂಶವನ್ನು ಕಳೆಯಬೇಕಾದ ಅಗತ್ಯವಿರುತ್ತಿರಲಿಲ್ಲ. ಈ ಪದ್ಯವೊಂದು ಮಾತ್ರವಲ್ಲದೆ, ಗ್ರಂಥದ ಅನೇಕ ಕಡೆಗಳಲ್ಲಿ ಜೈನಧರ್ಮಪರವಾದ ಉಲ್ಲೇಖಗಳು ಗೋಚರಿಸುತ್ತವೆ. (ನೋಡಿ: -೧೯, ೨೮,೯೧, ೧೦೪, ೧೦೯; I-೧೦೯, ೧೩೫ ೧೫೨; ೧-೧೮, ೯೪, ೨೨೭).೧ ಒಂದು ಉದಾಹರಣೆ ಗಮನಾರ್ಹ: 'ಹರಿಪಾದಕ್ಕಿರೋಲಗ್ನ ಜುಹುಕನ್ಯಾ ಜಲಾಂಶುಕ: ಜಯತ್ಯಸುರನಿಶಂಕ ಸುರಾನಂದೋತ್ಸವಧ್ವಜ' (ಕಾವ್ಯಾದರ್ಶ, ೮೧) ಎಂಬ ದಂಡಿಯ ವಿಷ್ಣುಸ್ತುತಿ, ''ಜಿನಚರಣನಖಾದರ್ಶಂ ವಿನತಾಮರರಾಜ ರಾಜವದನ ಪ್ರತಿಮಂ" (-೧೮) ಎಂದು ಜಿನಸ್ತುತಿಯಾಗಿ ಮಾರ್ಪಟ್ಟಿದೆ. ಇಂತಹ ಮಾರ್ಪಾಟುಗಳನ್ನು ಆಕಸ್ಮಿಕ ಇಲ್ಲವೆ ಅನುದ್ದಿಷ್ಟ ಎದು ಅಲಕ್ಷಿಸುವಂತಿಲ್ಲ. ವಿಷ್ಣುಭಕ್ತನಾದ ನೃಪತುಂಗನು ತನ್ನ ಕೃತಿಯಲ್ಲಿ ಈ ಬಗೆಯ ಸ್ವಧರ್ಮವಿರುದ್ಧವಾದ ಮಾರ್ಪಾಟುಗಳನ್ನು ಖಂಡಿತವಾಗಿಯೂ ಮಾಡಿಕೊಳ್ಳುತ್ತಿರಲಿಲ್ಲ, ಅಲ್ಲದೆ, ಆತ ಎಷ್ಟೇ ಆತ್ಮಸ್ತುತಿಪ್ರಿಯನೆಂದು ೧. ಈ ಜೈನಪರ ಉಲ್ಲೇಖಗಳ ವಿವರಣೆಯನ್ನು ತಿಳಿಯಬಯಸುವವರು ಮದರಾಸು ವಿಶ್ವವಿದ್ಯಾನಿಲಯವು ಪ್ರಕಟಿಸಿರುವ ಕವಿರಾಜಮಾರ್ಗದ ಮುದ್ರಣದಲ್ಲಿನ ೬ನೆಯ ಪರಿಶಿಷ್ಟವನ್ನು (ಪು. ೧೭೨-೧೭೫) ನೋಡಬಹುದು.<noinclude></noinclude> o2pkddj1vvrtz9oq4masp013pblxu77 322557 322554 2026-05-26T02:19:52Z Pragathi. BH 7585 322557 proofread-page text/x-wiki <noinclude><pagequality level="4" user="Pragathi. BH" />{{rh|center=|left=ಪೀಠಿಕೆ|right=೯}}</noinclude>ನೃಪತುಂಗನು ಜೈನ ಮಹಾಪುರಾಣ ಕರ್ತೃ ಜಿನಸೇನಾಚಾರದಲ್ಲಿ ಗುರುಭಾವನೆಯನ್ನು ಇಟ್ಟಿದ್ದನೆಂದು ಹೇಳಲು ಅಭ್ಯಂತರವಿಲ್ಲ. ಅವನು ಜಿನಸೇನ, ಗುಣಭದ್ರ, ಮಹಾವೀರಾಚಾರ, ಶಾಕಟಾಯನ, ಶ್ರೀವಿಜಯ, ಮುಂತಾದ ಅನೇಕ ಜೈನ ವಿದ್ವಾಂಸರುಗಳಿಗೂ ಕವಿಗಳಿಗೂ ಆಶ್ರಯಕೊಟ್ಟಿದ್ದನು. ಕನ್ನಡ ನಾಡಿನಲ್ಲಿ ಜೈನಮತವು ಪ್ರಚಾರಕ್ಕೆ ಬಂದು, ಪ್ರಬಲಗೊಂಡು, ಜನಪ್ರೀತಿಯನ್ನು ಗಳಿಸುತ್ತಿದ್ದ ಕಾಲವದು. ಪರಮತಸಹಿಷ್ಣುವಾದ ನೃಪತುಂಗನು ಜೈನಧರ್ಮದಲ್ಲಿಯೂ ಜೈನಾಚಾರರಲ್ಲಿಯೂ ಪೂಜ್ಯಭಾವನೆಯನ್ನಿರಿಸಿದ್ದನೆಂದ ಮಾತ್ರಕ್ಕೆ ಅವನು ಜೈನಮತಕ್ಕೆ ಸೇರಿದ್ದನೆಂದು ಹೇಳಲಾಗದು. ಕ್ರಿ.ಶ. ೮೭೦ರವರೆಗೆ, ಕವಿರಾಜಮಾರ್ಗ ರಚಿತವಾದ ವೇಳೆಯಲ್ಲಿ, ಅವನು ವೈದಿಕ ಮತಾನುಯಾಯಿಯಾಗಿದ್ದನೆಂದು ಹೇಳಲು ಅವನೇ ಹೊರಡಿಸಿದ ಸಂಜಾನ ಶಾಸನ (ಕ್ರಿ.ಶ. ೮೭೧) ಪ್ರಬಲವಾದ ಪ್ರಮಾಣವಾಗಿದೆ. ಕವಿರಾಜಮಾರ್ಗದ ವಿಷ್ಣುಪರಸ್ತೋತ್ರಗಳೂ ಈ ಅಂಶವನ್ನ ಸಾರಿ ಹೇಳುತ್ತಿವೆ. ಮೂರನೆಯ ಪದ್ಯ ದಂಡಿಯ ಶ್ಲೋಕದ ಅನುವಾದ. ಅದರಲ್ಲಿ - “ಚತುರ್ಮುಖ ಮುಖಾಂಭೋಜವನ ಸವಧೂ" ಎಂಬ ಸರಸ್ವತೀಸ್ವರೂಪವರ್ಣನೆಯ ರೂಪಕದಲ್ಲಿನ ಬ್ರಹ್ಮವಾಚಕವನ್ನು ಕೃತಿಕಾರ ಉದ್ದೇಶಪೂರ್ವಕವಾಗಿ ಬಿಟ್ಟುಬಿಟ್ಟಿರುವಂತಿದೆ. ನೃಪತುಂಗನೇ ಕರ್ತೃವಾಗಿದ್ದ ಪಕ್ಷದಲ್ಲಿ, ಈ ವೈದಿಕಾಂಶವನ್ನು ಕಳೆಯಬೇಕಾದ ಅಗತ್ಯವಿರುತ್ತಿರಲಿಲ್ಲ. ಈ ಪದ್ಯವೊಂದು ಮಾತ್ರವಲ್ಲದೆ, ಗ್ರಂಥದ ಅನೇಕ ಕಡೆಗಳಲ್ಲಿ ಜೈನಧರ್ಮಪರವಾದ ಉಲ್ಲೇಖಗಳು ಗೋಚರಿಸುತ್ತವೆ. (ನೋಡಿ: -೧೯, ೨೮,೯೧, ೧೦೪, ೧೦೯; I-೧೦೯, ೧೩೫ ೧೫೨; ೧-೧೮, ೯೪, ೨೨೭).೧ ಒಂದು ಉದಾಹರಣೆ ಗಮನಾರ್ಹ: 'ಹರಿಪಾದಕ್ಕಿರೋಲಗ್ನ ಜುಹುಕನ್ಯಾ ಜಲಾಂಶುಕ: ಜಯತ್ಯಸುರನಿಶಂಕ ಸುರಾನಂದೋತ್ಸವಧ್ವಜ' (ಕಾವ್ಯಾದರ್ಶ, ೮೧) ಎಂಬ ದಂಡಿಯ ವಿಷ್ಣುಸ್ತುತಿ, ''ಜಿನಚರಣನಖಾದರ್ಶಂ ವಿನತಾಮರರಾಜ ರಾಜವದನ ಪ್ರತಿಮಂ" (-೧೮) ಎಂದು ಜಿನಸ್ತುತಿಯಾಗಿ ಮಾರ್ಪಟ್ಟಿದೆ. ಇಂತಹ ಮಾರ್ಪಾಟುಗಳನ್ನು ಆಕಸ್ಮಿಕ ಇಲ್ಲವೆ ಅನುದ್ದಿಷ್ಟ ಎದು ಅಲಕ್ಷಿಸುವಂತಿಲ್ಲ. ವಿಷ್ಣುಭಕ್ತನಾದ ನೃಪತುಂಗನು ತನ್ನ ಕೃತಿಯಲ್ಲಿ ಈ ಬಗೆಯ ಸ್ವಧರ್ಮವಿರುದ್ಧವಾದ ಮಾರ್ಪಾಟುಗಳನ್ನು ಖಂಡಿತವಾಗಿಯೂ ಮಾಡಿಕೊಳ್ಳುತ್ತಿರಲಿಲ್ಲ, ಅಲ್ಲದೆ, ಆತ ಎಷ್ಟೇ ಆತ್ಮಸ್ತುತಿಪ್ರಿಯನೆಂದು {{Longdash}} ೧. ಈ ಜೈನಪರ ಉಲ್ಲೇಖಗಳ ವಿವರಣೆಯನ್ನು ತಿಳಿಯಬಯಸುವವರು ಮದರಾಸು ವಿಶ್ವವಿದ್ಯಾನಿಲಯವು ಪ್ರಕಟಿಸಿರುವ ಕವಿರಾಜಮಾರ್ಗದ ಮುದ್ರಣದಲ್ಲಿನ ೬ನೆಯ ಪರಿಶಿಷ್ಟವನ್ನು (ಪು. ೧೭೨-೧೭೫) ನೋಡಬಹುದು.<noinclude></noinclude> 71tdopjaygrugpdtnqvcfc517siu9s5 322558 322557 2026-05-26T02:20:19Z Pragathi. BH 7585 322558 proofread-page text/x-wiki <noinclude><pagequality level="4" user="Pragathi. BH" />{{rh|center=|left=ಪೀಠಿಕೆ|right=೯}}</noinclude>ನೃಪತುಂಗನು ಜೈನ ಮಹಾಪುರಾಣ ಕರ್ತೃ ಜಿನಸೇನಾಚಾರದಲ್ಲಿ ಗುರುಭಾವನೆಯನ್ನು ಇಟ್ಟಿದ್ದನೆಂದು ಹೇಳಲು ಅಭ್ಯಂತರವಿಲ್ಲ. ಅವನು ಜಿನಸೇನ, ಗುಣಭದ್ರ, ಮಹಾವೀರಾಚಾರ, ಶಾಕಟಾಯನ, ಶ್ರೀವಿಜಯ, ಮುಂತಾದ ಅನೇಕ ಜೈನ ವಿದ್ವಾಂಸರುಗಳಿಗೂ ಕವಿಗಳಿಗೂ ಆಶ್ರಯಕೊಟ್ಟಿದ್ದನು. ಕನ್ನಡ ನಾಡಿನಲ್ಲಿ ಜೈನಮತವು ಪ್ರಚಾರಕ್ಕೆ ಬಂದು, ಪ್ರಬಲಗೊಂಡು, ಜನಪ್ರೀತಿಯನ್ನು ಗಳಿಸುತ್ತಿದ್ದ ಕಾಲವದು. ಪರಮತಸಹಿಷ್ಣುವಾದ ನೃಪತುಂಗನು ಜೈನಧರ್ಮದಲ್ಲಿಯೂ ಜೈನಾಚಾರರಲ್ಲಿಯೂ ಪೂಜ್ಯಭಾವನೆಯನ್ನಿರಿಸಿದ್ದನೆಂದ ಮಾತ್ರಕ್ಕೆ ಅವನು ಜೈನಮತಕ್ಕೆ ಸೇರಿದ್ದನೆಂದು ಹೇಳಲಾಗದು. ಕ್ರಿ.ಶ. ೮೭೦ರವರೆಗೆ, ಕವಿರಾಜಮಾರ್ಗ ರಚಿತವಾದ ವೇಳೆಯಲ್ಲಿ, ಅವನು ವೈದಿಕ ಮತಾನುಯಾಯಿಯಾಗಿದ್ದನೆಂದು ಹೇಳಲು ಅವನೇ ಹೊರಡಿಸಿದ ಸಂಜಾನ ಶಾಸನ (ಕ್ರಿ.ಶ. ೮೭೧) ಪ್ರಬಲವಾದ ಪ್ರಮಾಣವಾಗಿದೆ. ಕವಿರಾಜಮಾರ್ಗದ ವಿಷ್ಣುಪರಸ್ತೋತ್ರಗಳೂ ಈ ಅಂಶವನ್ನ ಸಾರಿ ಹೇಳುತ್ತಿವೆ. ಮೂರನೆಯ ಪದ್ಯ ದಂಡಿಯ ಶ್ಲೋಕದ ಅನುವಾದ. ಅದರಲ್ಲಿ - “ಚತುರ್ಮುಖ ಮುಖಾಂಭೋಜವನ ಸವಧೂ" ಎಂಬ ಸರಸ್ವತೀಸ್ವರೂಪವರ್ಣನೆಯ ರೂಪಕದಲ್ಲಿನ ಬ್ರಹ್ಮವಾಚಕವನ್ನು ಕೃತಿಕಾರ ಉದ್ದೇಶಪೂರ್ವಕವಾಗಿ ಬಿಟ್ಟುಬಿಟ್ಟಿರುವಂತಿದೆ. ನೃಪತುಂಗನೇ ಕರ್ತೃವಾಗಿದ್ದ ಪಕ್ಷದಲ್ಲಿ, ಈ ವೈದಿಕಾಂಶವನ್ನು ಕಳೆಯಬೇಕಾದ ಅಗತ್ಯವಿರುತ್ತಿರಲಿಲ್ಲ. ಈ ಪದ್ಯವೊಂದು ಮಾತ್ರವಲ್ಲದೆ, ಗ್ರಂಥದ ಅನೇಕ ಕಡೆಗಳಲ್ಲಿ ಜೈನಧರ್ಮಪರವಾದ ಉಲ್ಲೇಖಗಳು ಗೋಚರಿಸುತ್ತವೆ. (ನೋಡಿ: -೧೯, ೨೮,೯೧, ೧೦೪, ೧೦೯; I-೧೦೯, ೧೩೫ ೧೫೨; ೧-೧೮, ೯೪, ೨೨೭).೧ ಒಂದು ಉದಾಹರಣೆ ಗಮನಾರ್ಹ: 'ಹರಿಪಾದಕ್ಕಿರೋಲಗ್ನ ಜುಹುಕನ್ಯಾ ಜಲಾಂಶುಕ: ಜಯತ್ಯಸುರನಿಶಂಕ ಸುರಾನಂದೋತ್ಸವಧ್ವಜ' (ಕಾವ್ಯಾದರ್ಶ, ೮೧) ಎಂಬ ದಂಡಿಯ ವಿಷ್ಣುಸ್ತುತಿ, ''ಜಿನಚರಣನಖಾದರ್ಶಂ ವಿನತಾಮರರಾಜ ರಾಜವದನ ಪ್ರತಿಮಂ" (-೧೮) ಎಂದು ಜಿನಸ್ತುತಿಯಾಗಿ ಮಾರ್ಪಟ್ಟಿದೆ. ಇಂತಹ ಮಾರ್ಪಾಟುಗಳನ್ನು ಆಕಸ್ಮಿಕ ಇಲ್ಲವೆ ಅನುದ್ದಿಷ್ಟ ಎದು ಅಲಕ್ಷಿಸುವಂತಿಲ್ಲ. ವಿಷ್ಣುಭಕ್ತನಾದ ನೃಪತುಂಗನು ತನ್ನ ಕೃತಿಯಲ್ಲಿ ಈ ಬಗೆಯ ಸ್ವಧರ್ಮವಿರುದ್ಧವಾದ ಮಾರ್ಪಾಟುಗಳನ್ನು ಖಂಡಿತವಾಗಿಯೂ ಮಾಡಿಕೊಳ್ಳುತ್ತಿರಲಿಲ್ಲ, ಅಲ್ಲದೆ, ಆತ ಎಷ್ಟೇ ಆತ್ಮಸ್ತುತಿಪ್ರಿಯನೆಂದು<br /> {{Longdash}}<br /> ೧. ಈ ಜೈನಪರ ಉಲ್ಲೇಖಗಳ ವಿವರಣೆಯನ್ನು ತಿಳಿಯಬಯಸುವವರು ಮದರಾಸು ವಿಶ್ವವಿದ್ಯಾನಿಲಯವು ಪ್ರಕಟಿಸಿರುವ ಕವಿರಾಜಮಾರ್ಗದ ಮುದ್ರಣದಲ್ಲಿನ ೬ನೆಯ ಪರಿಶಿಷ್ಟವನ್ನು (ಪು. ೧೭೨-೧೭೫) ನೋಡಬಹುದು.<noinclude></noinclude> pw3aouvwifdyxgdgqn36086nbnjw2ph ಪುಟ:ಕವಿರಾಜ ಮಾರ್ಗಂ.pdf/೨೬ 104 16257 322553 156994 2026-05-26T02:15:55Z Shreelatha.Halemane 7642 /* ಪರಿಶೀಲಿಸಲಾಗಿಲ್ಲ */ 322553 proofread-page text/x-wiki <noinclude><pagequality level="1" user="Shreelatha.Halemane" /></noinclude>00 ಕವಿರಾಜಮಾರ್ಗ ಇಟ್ಟುಕೊಂಡರೂ, ತನ್ನನ್ನು ವಿಷ್ಣುವಿಗೆ ಹೋಲಿಸಿಕೊಂಡು ಆತ್ಮಪ್ರಶಂಸೆ ಮಾಡಿಕೊಂಡಿರುವನೆಂದು ಊಹಿಸುವುದೂ ಸಾಧ್ಯವಿಲ್ಲ. ಮೊದಲ ಮೂರು ಪದ್ಯಗಳಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಗೋಚರವಾಗುತ್ತದೆ : ಎರಡನೆಯ ಸ್ತೋತ್ರ ಪದ್ಯದಲ್ಲಿ, ವೀರನಾರಾಯಣನಪ್ಪ ಅತಿಶಯಧವಳಂ ನಮಗೆ ಈಗ ಪ್ರತಾಪೋದಯಮಂ" ಎಂಬ ವಾಕ್ಯದಲ್ಲಿನ ಬಹುವಚನದ ಸ್ವಾರ್ಥಕ ಸರ್ವನಾಮವೂ, ಮೂರನೆಯದಾದ ಸರಸ್ವತೀಸ್ತುತಿ ಪದ್ಯದಲ್ಲಿನ “ಸರಸ್ವತಿ ನೆಲೆಗೊಳ್ ಮನ್ಮಾನಸದೊಳ್" (ನನ್ನ ಮನಸ್ಸಿನಲ್ಲಿ ನೆಲೆಸಲಿ ಎಂಬ ಏಕವಚನ ಸರ್ವನಾಮವೂ ಸ್ಪಷ್ಟವಾಗಿ ಭಿನ್ನವ್ಯಕ್ತಿಗಳನ್ನು ಸೂಚಿಸುತ್ತಿವೆ. ಮೊದಲೆರಡು ಪದ್ಯಗಳಲ್ಲಿ ವಿಷ್ಣು ಕಲ್ಪನಾದ ನೃಪತುಂಗನು 'ನಮಗೆ' (ಎಂದರೆ, ತನಗೆ + ನೃಪತುಂಗ ಸಭೆಯ ಶೋತೃಗಳಿಗೆ ಅಥವಾ ವಾಚಕರಿಗೆ) ಪ್ರತಾಪೋದಯವನ್ನು ಕೊಡಲಿ ಎಂದು ಪ್ರಾರ್ಥಿಸಿ, ಮುಂದಿನ ಪದ್ಯದಲ್ಲಿ ನನ್ನ ಮನಸ್ಸಿನಲ್ಲಿ ಸರಸ್ವತಿ 'ನೆಲಸಿರಲಿ' ಎಂದು ಗ್ರಂಥಕರ್ತನು ಪ್ರಾರ್ಥಿಸಿದ್ದಾನೆ. ಗ್ರಂಥಾರಂಭದ ಮೂರು ಪದ್ಯಗಳಲ್ಲಿ ಆಶ್ರಯದಾತನಾದ ವಿಷ್ಣುಭಕ್ತ ನೃಪತುಂಗ ಮತ್ತು (ಗ್ರಂಥದ ಜೈನಧರ್ಮಪರವಾದ ಸಂದರ್ಭಗಳಿಂದಲೂ ಸೂಚಿತವಾಗುವಂತೆ) ಜೈನಧರ್ಮಿಯನಾದ ಆಶ್ರಿತಕವಿ-ಇವರಿಬ್ಬರ ಸಂಬಂಧದ ಸೂಚನೆ ವಿಚಾರದೃಷ್ಟಿಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಗ್ರಂಥದ ಉದ್ದಕ್ಕೂ ನೃಪತುಂಗಪರವಾದ ಉಕ್ತಿಗಳು ವಿಪುಲಸಂಖ್ಯೆ ಯಲ್ಲಿ ಮೇಲಿಂದ ಮೇಲೆ ಕಣ್ಣಿಗೆ ಬೀಳುತ್ತವ. ಕೆಲವು ಉದಾಹರಣೆಗಳು: (i)ನರಲೋಕಚಂದ್ರಮತದಿಂ, ಅತಿಶಯಧವಳೋಕ್ತಕ್ರಮದ, ನೃಪತುಂಗದೇವ ಮತದಿಂ, ಇತ್ಯಾದಿ ಇಂತಹ ಹಲವಾರು ಹೇಳಿಕೆಗಳಿವೆ. ಕಾವ್ಯಶಾಸ್ತ್ರ ವಿಚಾರದಲ್ಲಿ ನೃಪತುಂಗನಿಗೆ ಸಮ್ಮತವಾದ ಮಾರ್ಗವೊಂದು ಇದ್ದಿತು ಎಂದು ಇವುಗಳಿಂದ ಸಿದ್ಧವಾಗುತ್ತದೆಯೇ ಹೊರತು, ಇವುಗಳ ಆಧಾರದ ಮೇಲೆ ನೃಪತುಂಗನೇ ಕರ್ತೃ ಎಂದು ತೀರ್ಮಾನಿಸಲಾಗುವುದಿಲ್ಲ. (ii) ಆದರೆ, 'ಭಾವಿಸಿ ಬೆಸಸಿದನ್ ಅಖಿಳಧರಾವಲ್ಲಭಂ ಅಮೋಗವರ್ಷ ನೃಪೇಂದ್ರಂ', 'ಎಂದನತಿಶಯಧವಳಂ, 'ಮಹಾನೃಪತುಂಗದೇವನಾದರದೊಳ ಪೇಳ್ ಮಾರ್ಗ ಗತಿ' ಎಂಬ ಉಕ್ತಿಗಳು ನೃಪತುಂಗ ಪಕ್ಷದವರಿಗೆ ಸಹಾಯವಾಗುವ ಪ್ರಮಾಣಗಳು ನೃಪತುಂಗನೇ ಕರ್ತೃವಾಗಿದ್ದಲ್ಲಿ ಉತ್ತಮಪುರುಷದಲ್ಲಿ ಹೇಳದೆ ಪ್ರಥಮ ಪುರುಷದಲ್ಲಿ ಏಕೆ ಹೇಳಿದ್ದಾನೆ ಎಂದು ಆಕ್ಷೇಪಿಸಬಹುದು. ಇದಕ್ಕೆ ಉತ್ತಮಪುರುಷಾರ್ಥದಲ್ಲಿ ಪ್ರಥಮಪುರುಷ ಪ್ರಯೋಗಮಾಡುವ ಸಂಪ್ರದಾಯವುಂಟು ಎಂಬ ಸಮಾಧಾನವನ್ನೂ ಹೇಳಬಹುದು. (iii) ಆದರೆ, ಒಂದೇ ಪದ್ಯದ ಒಂದೇ ಸಂದರ್ಭದಲ್ಲಿ ಪ್ರಥಮ ಪುರುಷ<noinclude></noinclude> agoopl1hwy7vg02y8wq7dl17cxmcsbs ಪುಟ:ಬನಶಂಕರಿ.pdf/೧೩೧ 104 18851 322483 180147 2026-05-25T13:52:24Z Pragathi. BH 7585 /* Validated */ 322483 proofread-page text/x-wiki <noinclude><pagequality level="4" user="Pragathi. BH" />{{rh|center=ಬನಶಂಕರಿ|left=|right=೧೨೭}}</noinclude> ಬನಶೇಕರಿ ಪಾತ್ರೆಯಲ್ಲಿಯೇ ಇರುವ ತೊತುಗಳೆಷ್ಟೆಯಿಂದು ಅವರಿಗೆ ಗೊತ್ತಿರಲಿಲ್ಲವೆ? ಎದುರೆದುರು ನಿಂತಾಗ ತಮ್ಮ ವಿರುದ್ಧ ಚಕಾರವೆತ್ತದ ಸ್ವಾಮಿಗಳೊಡನೆ ಒಮ್ಮೆ ನಾರಾಯಣರಾದರು ಸೂಚ್ಯವಾಗಿ ಹೇಳಿದ್ದರು :{{gap}} {{gap}}"ಮಠದ ಕೆಲವು ಜನ ಏನೇನೋ ಮಾತಾಡ್ತಿರೊಂದು ಸ್ವಾಮಿಗಳ ಗಮನಕ್ಕೆ ಬಂದಿರ್ಬೇಕು "<br /> {{gap}}ಏನು! ಏನೂ ಇಲ್ವಲ್ಲಾ ! ಹೇಳಿ ಸಂಕೋಚ ಯಾಕೆ ? ಹೇಳಿ " {{gap}}"ಬಾಯಿ ಬಿಟ್ಟು ಹೇಳ್ಭೇಕಾದ್ದಿಲ್ಲ. ಸ್ವಮಿಗಳಿಗೆ ಗೊತ್ತಿದೆ ಇದರಿಂದ ಯಾರಿಗೂ ಹಿತವಾಗೋದ್ದಿಲ್ಲ ಅನ್ನೋದನ್ನ ಮಾತ್ರ ಗಮನಿಸಬೇಕು " <br /> {{gap}}ಆ ಎಚ್ಚರಿಕೆಯಿಂದ ಸ್ವಲ್ಪ ಮಟ್ಟಗೆ ಪ್ರಯೋಜನವಾಯಿತು ಪೂರ್ತಿ ನಿಲ್ಲದಿದ್ದರೂ ಕಡಿಮೆಯಾಯಿತು.<br /> {{gap}}ಅದರೆ ನಾರಾಯಣರಾಯರ ಮನಸ್ಸಿನ ನೆಮ್ಮದಿ ಕೆಡದೆ ಹೋಗಲ್ಲಿಲ ಬನಶಂಕರಿಯನ್ನು ಅವರು ಪ್ರೀತಿಸುತ್ತಿದ್ದರು , ಬಯಸುತ್ತಿದ್ದರು - ಮಾನವ ಜೀವಿಯಾಗಿ ಹೆಣ್ಣಾಗಿ, ಆಕೆ ನೊಂದರು ಅವರಿಗೆ ಬೇಸರವಾಗುತ್ತಿತ್ತು . ಆಕೆಗೆ ಯಾವ ಕೊರತೆಯೂ ಆಗದಂತೆ ಅವರು ನೋಡಿಕೊಳ್ಳುತ್ತಿದ್ದರು.<br /> {{gap}}ಈಗ ?ಬನಶಂಕರಿ ತಾಯಿಯಾಗಿರುವ ಹೊಸ ಸನ್ನಿವೇಶ .... {{gap}}ರಾಯರಿಗನಿಸಿತ್ತು ಇವರಿಬ್ಬರಲ್ಲಿ ಮಗು ಯಾರು? ಏನು ಅಬಯದ ಆ ಎಳೆಯ ಕೂಸೆ? ಅಥವಾ ಆ ಕೂಸಿನ ಹೊರಕಾಗಿ ಉಳಿವಿಲ್ಲವನ್ನೂ ಮರೆತುರುವ ಅದರ ತಾಯಿಯೆ?<br /> {{gap}}ಅಮ್ಮ ಬಾಣಾಂತಿಯಾದ ಬಳಿಕ ಆ ಮನೆಯಲ್ಲಿ ತಿಮ್ಮಪ್ಪನೊಬ್ಬನೇ ಇರಲ್ಲಿಲ್ಲ. ಒಡತಿಯ ಆರೈಕೆಗಾಗಿ ತಿಮ್ಮಪ್ಪನ ಮಗಳು ಬಿದು ಅಲ್ಲೆ ನೆಲೆಸಿದ್ದಳು <br /> {{gap}}ರಾಯರು ರಾತ್ರೆ ಈಗ ಅಲ್ಲಿರುತ್ತಲೇ ಇರಲಿಲ್ಲ . ಸ್ವಲ್ಪ ಹೊತ್ತಿದ್ದು ತಮ್ಮ ಮನೆಗೇ ಹೊರಟುಹೋಗುತ್ತಿದ್ದರು, ಇಲ್ಲವೆ ದೇವಸ್ಥಾನದ ಹೊರ ಮಹಡಿಯ ಮೇಲೆ ಇದ್ದು ಬರುತ್ತಿದ್ದರು.<br /> {{gap}}ಅವನ್ನು ತನ್ನ ಜತೆಯಲ್ಲೇ ರಾತ್ರೆ ಇರು ಎಂದು ಒತ್ತಾಯಿಸಿಲೇ ಇಲ್ಲ ಮಗು ರಾತ್ರೆ ಎಷ್ಟೂ ಸಾರೆ ಎಚ್ಚರುತ್ತದೆ ? ತಾನು ಅದರಷ್ಟೌ ಸಾರಿ ಹಾಲೂಡುತ್ತೇನೆ ಮಗುವಿಗೆ ತೊಂಡಾರೆಯಾಗಬಾರದು ತಾನೆಷ್ಟೂ ಸಾರಿ ಎಚ್ಚರವಾಗಿಯೆ ಇರುತ್ತೇನೆ ? ಎಂದು ಅಮ್ಮ ಮತ್ತೆ ಮತ್ತೆ ಹೆಳಿದ್ದನೆ ಹೆಳುತಾಳೆ ಕೊರಳು ,ಆಸೆಯ ಆಹ್ಹ್ವಾನದ ದೃಷ್ಟಿಯಿಂದ ಇಲ್ಲದೆ ಸಮ್ಮಿತ್ತಿಯ ದೃಷ್ಟಿಯಿಂದ ರಾಯರನ್ನು ನೋಡುತ್ತಲೇ ಇರಲಿಲ್ಲ<br /> {{gap}}ಊಟ ಮಾಡಿಯೋ ಇಲ್ಲದೆ ಹ್ಹಗೆಯೊ ರಾಯರು ಹೊರಡುತ್ತ ಹೆಳುತ್ತಿದ್ದರು;<br /> {{gap}}"ಬರಲಾ ಶಂಕರಿ ?"<br /> {{gap}}''ಹೊಗಿ ನಾಳೆ ಬೇಗ್ಬನ್ನ್ನಿ "<br /> {{gap}}ಆ ಉತ್ತರ ಕೇಳಿ ,ಕತ್ತಲೆಯಲ್ಲಿ ಬೀದಿಗೆಳೆಯೂಕ್ತ ರಾಯರು ನೋವಿನಿಂದ ನಿರಸೆಯಿಂದ ನಸುನಗುತ್ತಿದ್ದರು<br /> {{gap}}ಒಂದು ಸಂಜೆ ಊಟಬೇಡವೆಂದ ರಾಯರಿಗೆ ಅಮ್ಮ ಒಂದು ಲೋಟ ಹಾಲು ಕೊಟ್ಟಳು ಆದನ್ನು ಕುಡಿಯುತ್ತ ಅವರೆಂದರು;<noinclude></noinclude> mh2mn5u627iy4wziw5aigb8wk7u3zii ಪುಟ:AAHVANA.pdf/೫೯ 104 20025 322484 321761 2026-05-25T14:00:54Z Pragathi. BH 7585 /* Validated */ 322484 proofread-page text/x-wiki <noinclude><pagequality level="4" user="Pragathi. BH" />{{center|ಆಹ್ವಾನ}}</noinclude>'''ನಿರೂಪಕ''' : ನಾವಾದರೋ ನೆಲದ ಮೇಲೆ ನಿಂತು ಮುಗಿಲಿನ ಚಿತ್ರಶಾಲೆಯನ್ನು ನೋಡುವ ಪ್ರೇಕ್ಷಕರು. ಆತ ಮೇಘಕ್ಕಿಂತಲೂ ಮೇಲಿದ್ದು,ಎಲ್ಲವನ್ನೂ ದಿಟ್ಟಿಸುವ ಭಾಗ್ಯಶಾಲಿ. '''ಸತ್ಯಾನ್ವೇಷಕ''': [ಯೋಚನೆಗೊಳಗಾಗಿ, ನಿಧಾನವಾಗಿ] {{gap}}ಅಲ್ಲಿಂದ ಸತ್ಯಾನ್ವೇಷಣೆ ಎಷ್ಟೊಂದು ಸುಲಭವಿದ್ದೀತು! ನಿಜಸ್ಥಿತಿಯ ಸಮೀಕ್ಷೆ ಸಮರ್ಪಕವಾದೀತು! [ಒಮ್ಮೆಲೆ ಗಟ್ಟಿಯಾಗಿ, ಆಕಾಶ ದತ್ತ ಮುಖಮಾಡಿ] ಅಪ್ಪಾ, ಅಪ್ಪಾ, ವಿಶ್ವಮಾನವ ! '''ವಿಶ್ವಮಾನವ''' : [Beep Beep] ಯಾರು ? '''ಸತ್ಯಾನ್ವೇಷಕ''' : ನಾನು ಸತ್ಯಾನ್ವೇಷಕ. ಬಡ ಭಾರತೀಯ. '''ನಿರೂಪಕ''' : ಬಡ ಭಾರತೀಯ! ಯುಗಯುಗಗಳ ಸಂಸಾರದ ಲಕ್ಷಣ ಈ ವಿನಯಶೀಲತೆ . '''ವಿಶ್ವಮಾನವ''' : ಮಹಾನ್ ರಾಷ್ಟ್ರವೊಂದರ ಪ್ರಜೆ. '''ಸತಾನ್ವೇಷಕ'' : [ಭಾವೋದ್ವೇಗದಿಂದೆ] ಹಾಗಾದರೆ ನನ್ನ ದೇಶವನ್ನು ನೀನು ಬಲ್ಲೆ ! '''ವಿಶ್ವಮಾನವ''' : ಹಲವು ಹೆಸರುಗಳ ನಾಡು : ಜಂಬೂದ್ವೀಪ, ಆರ್ಯಾವರ್ತ, ಭರತವರ್ಷ, ಹಿಂದೂಸ್ಥಾನ, ಇಂಡಿಯಾ. ಗತವೈಭವಗಳ ಭಾರತವನ್ನು ಯಾರು ತಾನೇ ಅರಿಯರು? {{center|೫೯}}<noinclude></noinclude> gjdvksjolezjhs5pli5r1dqybjdutvd ಪುಟ:ಸ್ವಾಮಿ ಅಪರಂಪಾರ.pdf/೭ 104 20731 322574 206320 2026-05-26T04:31:59Z Pragathi. BH 7585 /* Validated */ 322574 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=೭|right=|left=}} {{rh|center=೧|right=|left=}} {{gap}}ಕೊಡಗಿನ ರಾಜಧಾನಿಯಾದ ಮಡಕೇರಿ ಮಲಗಿ ನಿದ್ರಿಸುತ್ತಿತ್ತು. ಊರು ಕನವರಿಸು ತ್ತಿತ್ತೇನೋ ಎನ್ನುವಂತೆ ಕುಡುಕನೊಬ್ಬ ಬೀದಿಯಲ್ಲಿ ತೂರಾಡುತ್ತ ವಿಕಾರ ಸ್ವರಗಳನ್ನು ಹೊರಡಿಸುತ್ತಲಿದ್ದ.<br /> {{gap}}ಲಿಂಗರಾಜನ ಮಗ ಚಿಕವೀರರಾಜ ತಂದೆಯ ಮರಣದ ಬಳಿಕ ರಾಜ್ಯದ ಗದ್ದುಗೆ ಯನ್ನೇರಿ ಮೂರು ತಿಂಗಳು ಕಳೆದಿದ್ದುವು. ಅದು ಶಾಲಿವಾಹನ ಶಕ ಸಾವಿರದೇಳುನೂರ ನಾಲ್ವತ್ತೆರಡನೆಯ ವರ್ಷ: ವಿಕ್ರಮ ಸಂವತ್ಸರ. ಪಟ್ಟಾಭಿಷೇಕ ಸಮಾರಂಭದ ಸಡಗರವೆಲ್ಲ ಮುಗಿದು ನಿತ್ಯದ ಜೀವನ ಕ್ರಮಕ್ಕೆ ರಾಜ್ಯ ಮರಳಿತ್ತು.</br> {{gap}}ನಾಲ್ಕು ದಿನಗಳಿಗೆ ಹಿಂದೆ ಮೃಗಯಾ ವಿನೋದಕ್ಕೆ ತೆರಳಿದ್ದ ಅರಸು ಆ ಸಂಜೆಯಷ್ಟೇ ರಾಜಧಾನಿಗೆ ಹಿಂತಿರುಗಿದ್ದ. ಯುದ್ಧದಲ್ಲಿ ಜಯಿಸಿ ಬಂದವರ ಉತ್ಸಾಹದಿಂದ,ಬೇಟೆಯ ಪರಿವಾರ ಪೌರರ ಕಣ್ಣಿಗೆ ಹಬ್ಬದೂಟವನ್ನು ಬಡಿಸುತ್ತ, ಕೋಟೆಯನ್ನು ಹೊಕ್ಕಿತ್ತು. ಯುವಕ ಚಿಕವೀರರಾಜನ ಗುಂಡುಗಳಿಗೆ ಬಲಿಯಾದ ನಾಲ್ಕು ಹೆಬ್ಬುಲಿಗಳು ಬೇಟೆಯ ಭಟರು ಹೊತ್ತ ಬಿದಿರುಗಳ ಮೇಲಿಂದ ಜನರನ್ನು ನೋಡುತ್ತಿದ್ದುವು. ರಾಜಬೀದಿಯಲ್ಲಿ ಪ್ರಜಾಸಮುದಾಯದ ವಂದನೆ–ಜಯಕಾರಗಳನ್ನು ಸ್ವೀಕರಿಸುತ್ತ ಅಶ್ವಾ ರೂಢನಾದ ಅರಸು ಅರಮನೆಯ ಕಡೆಗೆ ಸಾಗಿದ.ಅಪ್ರತಿಮ ಗುರಿಕಾರರಾದ ಚೆಟ್ಟಿ–ಕರ್ತು ಸೋದರರು, ಅಂತರಂಗದ ಸಖನಾದ ಪುಟ್ಟಬಸವ, ಮೂವರು ನಾಲ್ವರು ಕಾರ್ಯಕಾರರು, ರಾಜನನ್ನು ಹಿಂಬಾಲಿಸಿದರು. ತುತೂರಿಯ ಸ್ವಾಗತ ಕೇಳಿಬಂದಂತೆ, ಕುದುರೆಗಳು ನಡಿಗೆಯ ಗತಿ ಯನ್ನು ಕುಂಠಿತಗೊಳಿಸಿದುವು.</br> {{gap}}ಚಿಕವೀರರಾಜ ಬೇಟೆಯ ಸಂಗಡಿಗರನ್ನು ಬೀಳ್ಕೊಟ್ಟು, ತನ್ನ ದರ್ಶನಕ್ಕಾಗಿ ಕಾದಿದ್ದ ರಾಣಿಯೊಡನೆ ಕುಶಲ ಮಾತುಗಳನ್ನಾಡಿದ. ಸ್ನಾನದ ಮನೆಗೆ ನಡೆದು ತೈಲಾಭ್ಯಂಜನದಿಂದ ಮೈಯ ದಣಿವಾರಿಸಿಕೊಂಡು, ಭೋಜನಗೃಹವನ್ನು ಪ್ರವೇಶಿಸಿದ.</br> {{gap}}ಆ ರಾತ್ರಿ ಎಂದಿನ ಕಟ್ಟಳೆಗಿಂತ ತುಸು ಬೇಗನೆ ರಾಣೀವಾಸದಲ್ಲಿ ದೀಪ ಆರಿತು... </br>{{gap}}ಜನವೆಲ್ಲ ನಿದ್ದೆ ಹೋದಂತೆ ಕಂಡರೂ ಕೋಟೆಯ ದಕ್ಷಿಣ ಭಾಗದಲ್ಲಿದ್ದ ಸೆರೆಮನೆಯಲ್ಲಿ ಹೊಂಗೆ ಎಣ್ಣೆಯ ದೀಪ ಮಂದ ಪ್ರಕಾಶದಿಂದ ಉರಿಯುತ್ತಿತು.ಅಭಿಷಿಕ್ತನಾದೊಡನೆಯೇ ಅರಸ ಹಿಡಿದು ತಂದಿರಿಸಿದ್ದ ಮಿಕಗಳೆರಡು ಒಂದು ಕೊಠಡಿಯಲ್ಲಿ ಕೊನೆಯುಸಿರನ್ನೆಳೆಯು ತ್ತಿದುವು. ಎಳೆಯರಿಬ್ಬರು ಅನ್ನಾಹಾರಗಳಿಲ್ಲದೆ ಆಗಲೇ ಒಂದು ತಿಂಗಳು ದಾಟಿತ್ತು. ಬೇಟೆಗೆ ಹೊರಡುವುದಕ್ಕೆ ಮುನ್ನ ಬಸವ ಆಣತಿಮಾಡಿದ್ದ:</br> {{gap}}“ಈ ಹೊತ್ತಿನಿಂದ ನೀರೂ ನಿಲ್ಲಿಸಿಬಿಡಿ."</br>{{gap}}ತುತೂರಿಯ ಸದ್ದು ರಾಜನ ಪುನರಾಗಮನವನ್ನು ಸಾರಿತ್ತು.ಇರುಳಿನ ಸರದಿಯ ಕಾವಲುಗಾರರ ತಂಡ ಸೆರೆಮನೆಗೆ ಬಂದಿತು.ಇಂದು ಆ ಪಾದಗಳಲ್ಲಿ ಹೆಚ್ಚಿನ ಚುರುಕು.</br> ಅವರ ಮುಖ್ಯಸ್ಥ ಸ್ವಲ್ಪ ಕುತೂಹಲದಿಂದ ಆ ಇಬ್ಬರು ಕೈದಿಗಳನ್ನು ಕುರಿತು ವಿಚಾರಿಸಿದ:</br> {{gap}}"ಏನಂತವೆ ?"</br>{{gap}}ಉತ್ತರ:<noinclude></noinclude> c6j4sjj8nwdx7s2s9aqbs4gtr1a48ic ಪುಟ:ಸ್ವಾಮಿ ಅಪರಂಪಾರ.pdf/೧೩೫ 104 21285 322575 206448 2026-05-26T04:50:27Z Pragathi. BH 7585 /* Validated */ 322575 proofread-page text/x-wiki <noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ |left=|right=೧೩೩}}</noinclude> ಅದು, ವೇಲೂರಿನ ಕಲೆಕ್ಟರ್ ಮದರಾಸಿನ ಗವರ್ನರನಿಗೆ ಕಳುಹಿಸಿದ ವರದಿಯ 'ತಾಜಾ ನಕಲು.'<br /> {{gap}}"ಇದನ್ನು ಕುರಿತು ವಿಚಾರಿಸಿ ಬರೆ” ಎಂದು ಷರಾ ಬರೆದಿದ್ದ, ಮದರಾಸಿನ ಗವರ್ನರ್.<br /> {{gap}}ವರದಿಯಲ್ಲಿ ಕಾಸ್ಸಾಮೇಜರನಿಗೆ ಸಂಬಂಧಿಸಿ ಇದ್ದ ಅಂಶವಿದು; <br /> {{gap}} "ಇಬ್ಬರು ಫಕೀರರು-ಇವರನ್ನು ಜಂಗಮರೆಂತಲೂ ದಾಸರೆಂತಲೂ ಕರೆಯುತ್ತಾರೆ –ನಿನ್ನೆ ದಿವಸ ಇಲ್ಲಿಗೆ ಬಂದರೆಂದೂ ಭಿಕ್ಷುಕರಾದ್ದರಿಂದ ಕೋಟೆಯನ್ನು ಪ್ರವೇಶಿಸಲು ಅವರಿಗೆ ಪರವಾನಿಗಿ ಕೊಡಲಾಯಿತೆಂದೂ ಕೊಡಗಿನ ಮಾಜೀ ಅರಸ ಹಾಗೂ ಪ್ರಸ್ತುತ ನಮ್ಮ ಕೈದಿಯಾಗಿರುವ ಚಿಕವೀರರಾಜೇಂದ್ರನ ಜತೆ ಆ ಇಬ್ಬರು ಒಂದು ದಿನ ಇದ್ದರೆಂದೂ ತಿಳಿದುಬಂದಿದೆ. ಸಂಶಯ ಬಂದು ವಿಚಾರಿಸಲಾಯಿತು. ಒಬ್ಬ ಅಪರಂಪಾರಸ್ವಾಮಿಯೆಂದೂ ಇನ್ನೊಬ್ಬ ಅವನ ಶಿಷ್ಯನೆಂದೂ ಇಬ್ಬರೂ ಕೊಡಗಿನವರೆಂದೂ ತಿಳಿದುಬಂತು. ಇವರು ಲಯಕರ್ತನಾದ ಶಿವನ ಭಕ್ತರೆಂದೂ ಯಾವುದಾದರೂ ಮನೆ ಹೊಕ್ಕರೆ ಪೂಜೆಗೆ ನಿಂತುಹೋಗುವುದು ಪದ್ಧತಿಯೆಂದೂ ತಿಳಿಯಿತು. ಚಿಕವೀರರಾಜನ ಜತೆ ನಡೆದಿರಬಹುದುದಾದ ಮಾತುಕತೆಯ ಬಗ್ಗೆ ಏನೂ ಗೊತ್ತಾಗಲಿಲ್ಲ. ರಾಜನ ಪರಿವಾರದವರು 'ನಾವು ಯಾವ ಪಾಪವನ್ನೂ ಕಾಣದವರು, ಕೇಳದವರು, ಆಡದವರು' ಎಂಬಂತೆ ವರ್ತಿಸುತ್ತಾರೆ. ಸದ್ಯಕ್ಕೆ ಗೊತ್ತಾಗಿರುವುದು ಇಷ್ಟೇ ಆದರೂ, ಖಾವಂದರ ಗಮನಕ್ಕೆ ತರುವುದು ಉಚಿತವೆಂದು ಇಲ್ಲಿ ಬರೆಯಲಾಗಿದೆ.”<br /> {{gap}}ಕಾಸ್ಸಾಮೇಜರ್ ಮುಖ್ಯ ಕಾರಕೂನನನ್ನು ಕರೆದು ಆಜ್ಞಾಪಿಸಿದ :<br /> {{gap}}"ಇದರದೊಂದು ತಾಜಾ ನಕಲನ್ನು ಮಡಕೇರಿಗೆ ರವಾನಿಸಬೇಕು. ಇದನ್ನು ಕುರಿತು ವಿಚಾರಿಸಿ ತಿಳಿಸುವಂತೆ - ಎಂದು ಷರಾ ಬರೆಯಬೇಕು."<br /> {{gap}}ಮಡಕೇರಿಯಲ್ಲಿ ಫ್ರೇಸರನ ಬದಲು ಕ್ಯಾಪ್ಟನ್ ಲೀಹಾರ್ಡಿ ಕಮಿಾಷನರಾಗಿ ಅಧಿಕಾರ ಸ್ವೀಕರಿಸಿದ್ದ. ಕೊಡಗಿನಲ್ಲಿ ತಮಗೆ ನಿಷ್ಪರಾಗಿರುವ ಪ್ರಮುಖರ ಬಗೆಗೆ ಫ್ರೇಸರ್ ಸಾಕಷ್ಟು ತಿಳಿವಳಿಕೆ ಕೊಟ್ಟಿದ್ದನಾದರೂ ಲೀಹಾರ್ಡಿಗೆ ಹೆಜ್ಜೆ ಹೆಜ್ಜೆಗೂ ಅಳುಕು. ಚೆಪ್ಪುದೀರ ಪೊನ್ನಪ್ಪ ಮತ್ತು ಅಪ್ಪಾರಂಡ ಬೋಪಣ್ಣ ಲೀಹಾರ್ಡಿಯ ದಿವಾನರು. ಸಾತ್ವಿಕನಾದ ಲಕ್ಷ್ಮೀನಾರಾಯಣನನ್ನು ನಂಬಿಕೆಗೆ ಅರ್ಹನಲ್ಲವೆಂದು ಫ್ರೇಸರ್ ಆಗಲೇ ಮೂಲೆಗೆ ತಳ್ಳಿದ್ದ. ಲೀಹಾರ್ಡಿಗೆ ತನ್ನ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಭಡತಿಗೆ ಪಾತ್ರನಾಗಬೇಕೆಂಬ ಆಸೆ. ಆದರೆ ದೇಶೀಯರ ಮೋಸದ ಯಾವ ಕಂದಕದಲ್ಲಿ ಬಿದ್ದು ತಾನು ಹೆಳವನಾಗುವೆನೋ ಎಂಬ ದಿಗಿಲು. <br /> {{gap}}'ಇದನ್ನು ಕುರಿತು ವಿಚಾರಿಸಿ ತಿಳಿಸು.'<br /> {{gap}}–ಕಾಸ್ಸಾಮೇಜರನ ಆದೇಶ.<br /> {{gap}}'ಯಾರಿವನು ಈ ಸ್ವಾಮಿ ?'<br /> {{gap}}ಬೋಪಣ್ಣನೆಂದ:<br /> {{gap}}"ಅಪರಂಪಾರ ಎಂದೆ? ಆ ಹೆಸರು ಕೇಳಿದ್ದ ನೆನಪು. ಚಿಕವೀರರಾಜನ ದಾಯಾದಿ ವೇಷಧಾರಿ ಜಂಗಮನಾಗಿದಾನೆ ಅಂತ ಪುಕಾರು ಹುಟ್ಟಿತು. ಕಡೆಗೆ ಅಲ್ಲ ಅಂತಾಯು.."<br /> {{gap}}ಪೊನ್ನಪ್ಪನೆಂದ : <br /> {{gap}}"ದಾಯಾದಿಯೊ, ದಾಯಾದಿಯ ಅಪ್ಪನೊ, ಹಿಡಿದುತಂದು ಗತಿಕಾಣಿಸಿದರಾಯ್ತು...”<noinclude></noinclude> 5u7rlx3c9ivzrhbp699c1r0mp45f39x ಪುಟ:ಉಲ್ಲಾಸಿನಿ.djvu/೧೪ 104 44969 322505 278047 2026-05-25T16:03:41Z Pragathi. BH 7585 /* Validated */ 322505 proofread-page text/x-wiki <noinclude><pagequality level="4" user="Pragathi. BH" /></noinclude> {{center|॥ ಶ್ರೀ ॥}} {{center|___}} <poem> ಕಂ||ನಾರೀರೂಪದಿ ಸುರರಂ | ::ಪಾರಾವಾರೋದ್ಭವ ಸುಧೆಯುಂ ಪೊರೆದೆರೆಯಂ || ::ವಾರಾಸಿಜೆಗಾವನವಂ| ::ನಾರಾಯಣನೀಗೆಮಗೆ ಸುಖವನಿಹಪರದೊಳ್| ::ಸತ್ಥವೆ ಪೊರವುದು ನರನಂ | ::ಸತ್ಥದೆ ಬರ್ವುದು ಮನುಜಗೆ ಕೀರ್ತಿಯು ಜಗದೊಳ್|| ::ಸತ್ಯವ ಪಿರಿದೆಂದೊರೆಯಲ್ | ::ಸತ್ಯವ್ರತಾವನಿವನಾಚರಿತವನುಸಿರ್ದೆಂ || </poem> {{Css image crop |Image = ಉಲ್ಲಾಸಿನಿ.djvu |Page = 14 |bSize = 384 |cWidth = 143 |cHeight = 56 |oTop = 450 |oLeft = 125 |Location = center |Description = }}<noinclude></noinclude> mzh6z62j7u6webxqba9aytalxo8qsx3 ಪುಟ:ಉಲ್ಲಾಸಿನಿ.djvu/೧೫ 104 44970 322507 278023 2026-05-25T16:04:50Z Pragathi. BH 7585 /* Validated */ 322507 proofread-page text/x-wiki <noinclude><pagequality level="4" user="Pragathi. BH" /></noinclude> ಉಲ್ಲಾಸಿನಿ. ಮೊದಲನೆಯ ಅಧ್ಯಾಯ . ಸತ್ಯವತನ ಬಾಲ್ಯ . {{gap}}ಪ್ರವೀಣ ದೊಡ್ಡ ಪದವಿಗೆ ಬಂದವರು ಕೇವಲ ಬಡತನದ ಸಂಸಾರದಲ್ಲಿ ಹುಟ್ಟಿರುವರು. ಇದಕ್ಕೆ ಎಷ್ಟೋ ದೃಷ್ಟಾಂತಗಳು ಕಂಡುಬಂದಿವೆ. ಈ ಜೀವನ ಚರಿತ್ರೆಯು ನಾಯಕನಾದ ಸತ್ಯವ್ರತನ ಮತ್ತೊಂದುದಾಹರಣೆ. ಪಶ್ಚಿಮ ಸಮುದ್ರದಲ್ಲಿರುವ ಉಪಖಂಡವೆಂದು ಕರೆಯಬಹುದಾದ ಶುಕ ದ್ವೀಪದಲ್ಲಿ ಪುಂಗನೂರು ಸಂಸ್ಥಾನದಷ್ಟು ಸೀಮೆಗೆ ಈ ಸತ್ಯವ್ರತನ ತಂದೆ ದೇವದತ್ತನು ದೊರೆಯಾಗಿದ್ದನು. ವಿಭವ ಸಂವತ್ಸರದ ವೈಶಾಖ ಶುದ್ಧ ಚತುರ್ದಶಿಯೊಳು ಜನಿಸಿದ ಈ ಸತ್ಯವ್ರತನಿಗೆ ನೀತಿ, ತಿಲಕ, ಗಾರು ಡ, ಲೋಹಿತ ಎಂಬ ನಾಲ್ವರು ಅಣ್ಣತಮ್ಮಂದಿರು. ಕುಲವರ್ಧಿನಿ ಎಂಬ ಒಬ್ಬಳೇ ಸಹೋದರಿ. ಸತ್ಸವೇ ಮನುಷ್ಯನನ್ನು ಕೊನೆಗಾಣಿಸುವು ದೆಂದು ದೇವದತ್ತನು ತನ್ನೊಬ್ಬ ಮಿತ್ರನೊಡನೆ ಚರ್ಚಿಸುತ್ತಿದ್ದ ಸಮಯಕ್ಕೆ ಸರಿಯಾಗಿ ಸತ್ಯವ್ರತನ ಜನನ ವಾರ್ತೆಯು ಕಿವಿಯೊಳು ಬಿದ್ದುದರಿಂದಲೋ, ಮುಂದೆ ನಡೆಯಬೇಕಾದ ಸತ್ಯಭಾಷಣದ ಕಥಾಕೌತುಕವನ್ನು ಜಾತಕ ಬಲದಿಂದ ಗ್ರಹಿಸಿಯೊ ಹುಟ್ಟಿದ ಮಗುವಿಗೆ ಬೇರೊಂದು ಹೆಸರಿ ಡದೆ ಸತ್ಥವ್ರತನೆಂತಲೇ ನಾಮಕರಣವನ್ನು ಮಾಡಿ ಈ ಐದುಮಂದಿ ಗಂಡು ನುಕ್ಕಳು ಪಂಚಪ್ರಾಣವೆಂತಲೂ, ಉಭಯ ಕುಲ ವಿವರ್ಧಿನಿಯಾಗಬಹುವಾದ ಕುಲವರ್ಧಿನಿಯು ಚೇತೋಭಿಮಾನಿಯಂತಲೂ ಭಾವಿಸಿ ಅಕ್ಕರೆಯಿಂದ ಲಹಿ, ಹುಡುಗರಿಗೆ ತಕ್ಕ ವಯಸ್ಸಿನಲ್ಲಿ ವಿದ್ಯಾಭ್ಯಾಸಕ್ಕೆ ಕಳುಹಿ,<noinclude></noinclude> 49ml4b3odbh30ksn5398s0la4j0gbdj 322509 322507 2026-05-25T16:06:59Z Pragathi. BH 7585 322509 proofread-page text/x-wiki <noinclude><pagequality level="4" user="Pragathi. BH" /></noinclude> {{center|ಉಲ್ಲಾಸಿನಿ.}} {{center|ಮೊದಲನೆಯ ಅಧ್ಯಾಯ .}} {{center|ಸತ್ಯವ್ರತನ ಬಾಲ್ಯ .}} {{gap}}ಪ್ರವೀಣ ದೊಡ್ಡ ಪದವಿಗೆ ಬಂದವರು ಕೇವಲ ಬಡತನದ ಸಂಸಾರದಲ್ಲಿ ಹುಟ್ಟಿರುವರು. ಇದಕ್ಕೆ ಎಷ್ಟೋ ದೃಷ್ಟಾಂತಗಳು ಕಂಡುಬಂದಿವೆ. ಈ ಜೀವನ ಚರಿತ್ರೆಯು ನಾಯಕನಾದ ಸತ್ಯವ್ರತನ ಮತ್ತೊಂದುದಾಹರಣೆ. ಪಶ್ಚಿಮ ಸಮುದ್ರದಲ್ಲಿರುವ ಉಪಖಂಡವೆಂದು ಕರೆಯಬಹುದಾದ ಶುಕ ದ್ವೀಪದಲ್ಲಿ ಪುಂಗನೂರು ಸಂಸ್ಥಾನದಷ್ಟು ಸೀಮೆಗೆ ಈ ಸತ್ಯವ್ರತನ ತಂದೆ ದೇವದತ್ತನು ದೊರೆಯಾಗಿದ್ದನು. ವಿಭವ ಸಂವತ್ಸರದ ವೈಶಾಖ ಶುದ್ಧ ಚತುರ್ದಶಿಯೊಳು ಜನಿಸಿದ ಈ ಸತ್ಯವ್ರತನಿಗೆ ನೀತಿ, ತಿಲಕ, ಗಾರು ಡ, ಲೋಹಿತ ಎಂಬ ನಾಲ್ವರು ಅಣ್ಣತಮ್ಮಂದಿರು. ಕುಲವರ್ಧಿನಿ ಎಂಬ ಒಬ್ಬಳೇ ಸಹೋದರಿ. ಸತ್ಸವೇ ಮನುಷ್ಯನನ್ನು ಕೊನೆಗಾಣಿಸುವು ದೆಂದು ದೇವದತ್ತನು ತನ್ನೊಬ್ಬ ಮಿತ್ರನೊಡನೆ ಚರ್ಚಿಸುತ್ತಿದ್ದ ಸಮಯಕ್ಕೆ ಸರಿಯಾಗಿ ಸತ್ಯವ್ರತನ ಜನನ ವಾರ್ತೆಯು ಕಿವಿಯೊಳು ಬಿದ್ದುದರಿಂದಲೋ, ಮುಂದೆ ನಡೆಯಬೇಕಾದ ಸತ್ಯಭಾಷಣದ ಕಥಾಕೌತುಕವನ್ನು ಜಾತಕ ಬಲದಿಂದ ಗ್ರಹಿಸಿಯೊ ಹುಟ್ಟಿದ ಮಗುವಿಗೆ ಬೇರೊಂದು ಹೆಸರಿ ಡದೆ ಸತ್ಥವ್ರತನೆಂತಲೇ ನಾಮಕರಣವನ್ನು ಮಾಡಿ ಈ ಐದುಮಂದಿ ಗಂಡು ನುಕ್ಕಳು ಪಂಚಪ್ರಾಣವೆಂತಲೂ, ಉಭಯ ಕುಲ ವಿವರ್ಧಿನಿಯಾಗಬಹುವಾದ ಕುಲವರ್ಧಿನಿಯು ಚೇತೋಭಿಮಾನಿಯಂತಲೂ ಭಾವಿಸಿ ಅಕ್ಕರೆಯಿಂದ ಲಹಿ, ಹುಡುಗರಿಗೆ ತಕ್ಕ ವಯಸ್ಸಿನಲ್ಲಿ ವಿದ್ಯಾಭ್ಯಾಸಕ್ಕೆ ಕಳುಹಿ,<noinclude></noinclude> g8eaymgkgp4q5lr3udf64yk4h60jzfy ಪುಟ:ಪಂಪರಾಮಾಯಣ ಕಥೆ.djvu/೧ 104 58863 322485 319481 2026-05-25T14:01:46Z Pragathi. BH 7585 /* Without text */ 322485 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಪಂಪರಾಮಾಯಣ ಕಥೆ.djvu/೩ 104 58865 322486 319483 2026-05-25T14:02:07Z Pragathi. BH 7585 /* Without text */ 322486 proofread-page text/x-wiki <noinclude><pagequality level="0" user="Pragathi. BH" /></noinclude><noinclude></noinclude> 4gl9xhymplktzzqjyrslkxbe03b704i ಪುಟ:ಪಂಪರಾಮಾಯಣ ಕಥೆ.djvu/೯ 104 58871 322487 319542 2026-05-25T14:02:46Z Pragathi. BH 7585 /* Validated */ 322487 proofread-page text/x-wiki <noinclude><pagequality level="4" user="Pragathi. BH" />{{Left|2}}</noinclude>{{center|ಪ೦ಪ ರಾಮಾಯಣದ ಕಥೆ}} ತನ್ನ ತಂದೆಯು ತನ್ನನ್ನು ಕಳುಹಿಸಿದನೆಂದು ಹೇಳಲು, ದೊರೆಯು ಸಂತೋಷ ಪಟ್ಟು ಅದಕ್ಕೆ ಸಮ್ಮತಿಸಿದನು. ಕೂಡಲೆ ಶುಭದಿನ ಮುಹೂರ್ತದಲ್ಲಿ ವಿವಾಹ ಮಂಗಳೋಪಕರಣಗಳೊಡನೆ ವಜ್ರಬಾಹುವು ಆನೆಯನ್ನೇರಿ ಉಚಿತ ಪರಿವಾರ ದೊಡನೆ ಪ್ರಯಾಣವನ್ನು ಬೆಳೆಯಿಸಿ ವಸಂತಗಿರಿಯ ಬಳಿಗೆ ಬಂದು ಅದರ ಸೊಬಗುನ್ನು ನೋಡುತ್ತಿರುವಲ್ಲಿ, ತಪಸ್ಸು ಮಾಡುತ್ತಿರುವ ಗುಣ ಸಾಗರ ಭಟ್ಟಾರಕನೆಂಬ ಒಬ್ಬ ಮುನಿಯು ಆತನ ಕಣ್ಣಿಗೆ ಬಿದ್ದನು. ವಜ್ರಬಾಹುವು ಆ ಮುನಿಯನ್ನು ಕಂಡು ಅತ್ಯಂತ ಭಕ್ತಿಯಿಂದ ಕೂಡಲೆ ಆ ಮುನಿಯ ಬಳಿಯಲ್ಲಿ ದೀಕ್ಷೆಗೊಂಡನು. ಇದನ್ನು ನೋಡಿ ಉದಯಸುಂದರನೂ ಇಪ್ಪತ್ತು ಮೂವರು ಅರಸುವ ಕೈ ತಪಕ್ಕೆ ನಿಂತರು. ಅಣ್ಣನು ದೀಕ್ಷೆಗೊ೦ಡ ವಾರ್ತೆಯನ್ನು ಕೇ ಅನಂಗೊನ್ನಾವೆಯ ದೀಕ್ಷೆ ಗೊ೦ಡಳು. ಮದುವೆಗಾಗಿ ಹೊರಟ ಮೊಮ್ಮಗನು ಪ್ರಪಂಚದ ಸುಖವನ್ನು ಬಿಟ್ಟು ತಪೋರಾಜ್ಯದಲ್ಲಿ ನಿಂತದ್ದನ್ನು ಕೇಳಿ ವಿಜಯರಥನು ತನ್ನ ಮೊಮ್ಮಗನಾದ ಪುರಂದರನಿಗೆ ಪಟ್ಟವನ್ನು ಕಟ್ಟಿ, ತಾನೂ ದೀಕ್ಷೆಗೊಂಡನು. ಪುರ೦ದರನು ಸಕಲ ಸಾಮ್ರಾಜ್ಯ ಸುಖ ಸುಧಾರಸದಿಂದ ತಣಿದು ಮಗನಾದ ಕೀರ್ತಿಧರನಿಗೆ ಪಟ್ಟ ವನ್ನು ಕಟ್ಟಿ ತಾನೂ ದೀಕ್ಷೆಗೊಂಡನು. ಕೀರ್ತಿ ಧರನು ಒಂದು ದಿನ ಸೂರ್ಯಗಣನನ್ನು ನೋಡಿ ಜಗತ್ತನ್ನು ಬೆಳಗುವ ಸೂರ್ಯನಿಗೂ ರಾಹುವಿನಿಂದ ಈ ಸ್ಥಿತಿಯ ಬ೦ದಿತಲ್ಲವೆ ಎಂದು, ಭೂಮಂಡಲವನ್ನು ಹುಲ್ಲುಕಡ್ಡಿಗೆ ಸಮ ಮಾಡಿ, ವೈರಾಗ್ಯ ಪರನಾದನು. ಆಗ ಮಂತ್ರಿಗಳು ರಾಜ್ಯವು ಅನಾಯಕನಾಗುವುದೆಂದು ಭಯಪಟ್ಟ ದೊರೆಯನ್ನು ತನಗೊಬ್ಬ ಮಗನು ಹುಟ್ಟುವವರೆಗೂ ರಾಜ್ಯಭಾರ ಮಾಡುವಂತೆ ಒಡಂಬಡಿಸಿದರು. ಮಗನು ಹುಟ್ಟಿದ ಕೂಡಲೆ, ಸುಕೌಶಲನೆ೦ಬ ಆ ತೊಟ್ಟಿಲ ಮಗುವಿಗೆ ಪಟ್ಟ ವನ್ನು ಕಟ್ಟಿ, ಕೀರ್ತಿಧರನು ಜನದೀಕ್ಷೆಗೊಂಡನು. ಸುಕೌಶಲನು ತನ್ನ ಕೀರ್ತಿಯನ್ನು ನಾಲ್ಕು ಕಡೆಗಳಲ್ಲಿಯೂ ಹಬ್ಬಿಸಿ ಅರಸುಗೆಯ್ಯುತ್ತಿರುವಲ್ಲಿ ಒ೦ದು ದಿನ ಆತನ ತಾಯಿ ಯಾದ ಸಹದೇವಿಯು ಸಹಚರಿಯರೊಡನೆ ಮಣಿಮಂಟಪದಲ್ಲಿಯ ಮಣಿ ಮಯಾಸನದ ಮೇಲೆ ಲೀಲೆಯಿಂದ ಕುಳ್ಳಿರಲು, ಕಾ೦ತಿಯುತನಾದ ಒಬ್ಬ ಯತಿಯು ಇವರ ಮನೆಯನ್ನು ಹೊಕ್ಕನು. ಇದನ್ನು ನೋಡಿ ಗುಣಹೀನೆಯಾದ ಸಹದೇವಿಯ ತನ್ನ ಮಗನು ಎಲ್ಲಿ ದೀಕ್ಷೆಗೊಳ್ಳುವನೋ ಎಂಬ ಭಯದಿಂದ ಪಾಪಕ್ಕೆ೦ಜದೆ ಆ ಯತಿ ಯನ್ನು ಪಟ್ಟಣದಿಂದ ಆಟ ಸಿಬಿಟ್ಟಳು. ಸುಕ್ಕಲನ ದಾದಿಯೊಬ್ಬಳು ಈ ಯತಿ ಯು ಕೀರ್ತಿಧರನೆಂದರಿತು ನೊ೦ದು ಎದೆಯನ್ನು ಗುದ್ದಿಕೊಳ್ಳುತ್ತ ಅಳತೊಡಗಿ ದಳು. ಸುಕೌಶಲನು ಇದಕ್ಕೆ ಕಾರಣವನ್ನು ತಿಳಿದು ಬಹಳ ದುಖಪಟ್ಟು, ಇಹ ಲೋಕ ಸೌಖ್ಯವು ಮುಖ್ಯವಲ್ಲಿಂದು ತಿಳಿದು, ಕೀರ್ತಿಧರ ಮುನೀಂದ್ರರ ಸಾದಾರ ವಿಂದದಲ್ಲಿ ಮುಕ್ತಿ ಸುಖವನ್ನು ಪಡೆಯುವೆನೆಂದು ನಿಶ್ಚಯಿಸಿ ಅರಮನೆಯನ್ನು ಬಿಟ್ಟ ಹೊರಟು, ಉಪವನವನ್ನು ಸೇರಿ ಕೀರ್ತಿಧರ ಭಟ್ಟಾರಕರ ಮುಂದೆ ನಿಂತನು. ಅವನ ಮಾಂಡಲಿಕರೂ ಸಾಮಂತರೂ ಮಂತ್ರಿಗಳೂ ಅಂತ:ಪುರ ಸ್ತ್ರೀಯರೂ ತಮಗಿನ್ನೇನು<noinclude></noinclude> ri1uvyi1eqwlk9lp5eawmql3t1agp5e ಪುಟ:ಪಂಪರಾಮಾಯಣ ಕಥೆ.djvu/೧೦ 104 58872 322506 127737 2026-05-25T16:04:33Z Shreesha Sharma 7840 /* Proofread */ 322506 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪಂಪ ರಾಮಾಯಣದ ಕಥೆ|left=|right=3}} ಗತಿಯೆಂದು ಗೋಳಿಡುತ್ತಿರುವಲ್ಲಿ, ತನ್ನರಸಿಯ ಗರ್ಭದಲ್ಲಿರುವ ಮಗುವೇ ಅವರನ್ನು ಸಲಹುವನೆಂದು ಎಲ್ಲರನ್ನೂ ಸಮಾಧಾನಪಡಿಸಿ ತಾನು ದೀಕ್ಷೆಗೊ೦ಡನು. ಕಾಲಾನು ಕ್ರಮದಲ್ಲಿ ಸಹದೇವಿಯ ಹೆಣ್ಣು ಹುಲಿಯಾಗಿ ಹುಟ್ಟಿ ಈ ಮುನಿಗಳಿಬ್ಬರೂ ಅಡವಿ ಯಲ್ಲಿ ಹೋಗುತ್ತಿರುವಾಗ ಅವರ ಮೇಲ್ಬಿದ್ದು ಅವರನ್ನು ಕೊಂದನು. {{gap}}ಇತ್ತ, ಸುಕೌಶಲನ ಮಗನಾದ ಹಿರಣ್ಯಗರ್ಭನು ವೈಭವದಿಂದ ರಾಜ್ಯಭಾರ ಮಾಡಿ ಅ೦ತರಿಸಿದನಂತರ ಅವನ ಮಗನಾದ ನಹುಷನೂ ತರುವಾಯ ಅವನ ವಂಶ ದವರಾದ ಸ೦ವಾಸ, ಸಿಂಹರದ, ಚತುರಖ. ಹೇಮರಥ, ಭಾನುರಥ, ಮಯ, ಮಾಂಧಾತ್ರ, ವೀರಸೇನ, ಕಮಲಬಂಧು, ವಸನ್ತತಿಲಕ, ಕುಬೇರದತ್ತ, ಮೃಗಾರಿ ದಮನ, ದ್ವಿ ಪರಥ, ಹಿರಣ್ಯ, ಕಶಿಪು, ಆರ್ಕರಥ, ದಿಲೀಪ, ರಘುವೀರ ಮೊದಲಾದ ಹಲವರು ತೊರೆಗಳು ಅನುಕ್ರಮವಾಗಿ ರಾಜ್ಯಭಾರ ಮಾಡಿದರು. ಅವರಲ್ಲಿ ಅನರಣ್ಯ ನೆ೦ಬರಸು ಬಹಳ ಪ್ರಖ್ಯಾತನು. ಈತನಿಗೆ ಅನಂತರ ದಶರಥರೆಂಬ ಇಬ್ಬರು ಮಕ್ಕಳು ಹುಟ್ಟಿದರು... ಅನರಣ್ಯನು ಧರ್ಮಾರ್ಥ ವಿರುಧವಾಗದಂತೆ ವಿಷಯಸುಖ ನನ್ನನುಭವಿಸುತ್ತಿರುವಲ್ಲ. ಒಂದಾನೊಂದು ದಿನ ಬಹಳ ಬಲಶಾಲಿಯಾದ ಮಾಹಿಷ್ಮತಿ ವಲ್ಲಭನು ದಶಾನನನೊಡನೆ ಕಾದಿ ಸೋತನೆಂದು ಕೇಳಿ ತಾನು ದೀಕ್ಷೆ ಪಡೆಯುವೆನೆಂದು ನಿಶ್ಚಯಿಸಲು, ಅವನ ದೊಡ್ಡ ಮಗನಾದ ಅನಂತರಥನು ರಾಜ್ಯವನ್ನು ವಹಿಸುವುದಕೊಡಂಬಡದೆ ತಾನೂ ದೀಕ್ಷೆಗೊಳ್ಳಲು ಉದ್ಯುಕ್ತನಾದನು. ಇದನ್ನು ಕಂಡು ಅನರಣ್ಯನು ಒ೦ದು ತಿ೦ಗಳ ಮಗುವಾದ “ದಶರಥನಿಗೆ ಪಟ್ಟವನ್ನು ಕಟ್ಟಿ ತಾನೂ ತನ್ನ ಹಿರಿಯಮಗನೂ ಅಭಯಘೋಶ ಘಟಾ ರಕರ ಪಾದಗಳಿಗೆಯಲ್ಲಿ ದೀಕ್ಷೆಗೊಂಡರು. {{center|ಆಶ್ವಾಸ ೩- ದಶರಥನ ಮಕ್ಕಳು}} {{gap}}ದಶರಧನು ಪ್ರವರ್ಧಮಾನನಾಗಿ ಧರ್ಮದಿಂದಲೂ ಶೌರ್ಯದಿಂದಲೂ ರಾಜ್ಯ ಪರಿಪಾಲನೆ ಮಾಡುತ್ತ ಅಪರಾಜಿತೆ, ಸುಮಿತ್ರೆ, ಸುಪ್ರಭ ಎಂಬ ಮೂವರು ಪಟ್ಟ ಮಹಿಷಿಯರೊಡನೆ ಸುಖದಿ೦ದಿದ್ದನು. ಒ೦ದು ದಿನ ಆತನ ಸಭೆಗೆ ನಾರದನು ಬಂದು ಆತನೊಡನೆ ಏಕಾಂತವಾಗಿ ಹೀಗೆ ಹೇಳಿದನು : “ಅಯ್ಯ! ನಾನು ಲಂಕೆಯಲ್ಲಿರುವ ಕಾಂತ ಜಿನೇಶ್ವರನನ್ನು ಪೂಜಿಸುವುದಕ್ಕಾಗಿ ಹೋಗಿದ್ದೆನು. ಅಲ್ಲಿ ರಾವಣನರಮನೆಯಲ್ಲಿ ನಡೆದ ವೃತ್ತಾಂತವನ್ನು ನಿನಗೆ ಹೇಳುವೆನು ಕೇಳು.ರಾವಣನು ಜಾನಕಿಯ ನಿಮಿತ್ತ ವಾಗಿ ಯುದ್ಧ ಮಾಡಿ ದಾಶರಧಿಯ ಕೈಯಲ್ಲಿ ಮರಣವನ್ನು ಹೊಂದುವನೆಂಬ ವಿಷಯ ವನ್ನು ವಿಭೀಷಣನು ತನ್ನ ಜೋತಿಷ್ಯನ ಮೂಲಕ ತಿಳಿದು ದಾಶರಥಿಯ ಜಾನಕಿ ಯೂ ಹುಟ್ಟದ೦ತೆ ಮಾಡುವುದಕ್ಕಾಗಿ ನಿನ್ನನ್ನೂ ಜನಕನನ್ನೂ ಕೊಲ್ಲಲು ನಿಶ್ಚಯಿ ಸಿರುವನು. ಇದಕ್ಕೆ ತಕ್ಕ ಉಪಾಯವನ್ನು ಆಲೋಚಿಸು; ಇನ್ನು ನಾನು ಈ ಸುದ್ದಿ<noinclude></noinclude> gpwjh4j1mlhf7lsamb7t3g1g7no5eje 322508 322506 2026-05-25T16:05:09Z Shreelatha.Halemane 7642 /* Validated */ 322508 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಪಂಪ ರಾಮಾಯಣದ ಕಥೆ|left=|right=3}} ಗತಿಯೆಂದು ಗೋಳಿಡುತ್ತಿರುವಲ್ಲಿ, ತನ್ನರಸಿಯ ಗರ್ಭದಲ್ಲಿರುವ ಮಗುವೇ ಅವರನ್ನು ಸಲಹುವನೆಂದು ಎಲ್ಲರನ್ನೂ ಸಮಾಧಾನಪಡಿಸಿ ತಾನು ದೀಕ್ಷೆಗೊ೦ಡನು. ಕಾಲಾನು ಕ್ರಮದಲ್ಲಿ ಸಹದೇವಿಯ ಹೆಣ್ಣು ಹುಲಿಯಾಗಿ ಹುಟ್ಟಿ ಈ ಮುನಿಗಳಿಬ್ಬರೂ ಅಡವಿ ಯಲ್ಲಿ ಹೋಗುತ್ತಿರುವಾಗ ಅವರ ಮೇಲ್ಬಿದ್ದು ಅವರನ್ನು ಕೊಂದನು. {{gap}}ಇತ್ತ, ಸುಕೌಶಲನ ಮಗನಾದ ಹಿರಣ್ಯಗರ್ಭನು ವೈಭವದಿಂದ ರಾಜ್ಯಭಾರ ಮಾಡಿ ಅ೦ತರಿಸಿದನಂತರ ಅವನ ಮಗನಾದ ನಹುಷನೂ ತರುವಾಯ ಅವನ ವಂಶ ದವರಾದ ಸ೦ವಾಸ, ಸಿಂಹರದ, ಚತುರಖ. ಹೇಮರಥ, ಭಾನುರಥ, ಮಯ, ಮಾಂಧಾತ್ರ, ವೀರಸೇನ, ಕಮಲಬಂಧು, ವಸನ್ತತಿಲಕ, ಕುಬೇರದತ್ತ, ಮೃಗಾರಿ ದಮನ, ದ್ವಿ ಪರಥ, ಹಿರಣ್ಯ, ಕಶಿಪು, ಆರ್ಕರಥ, ದಿಲೀಪ, ರಘುವೀರ ಮೊದಲಾದ ಹಲವರು ತೊರೆಗಳು ಅನುಕ್ರಮವಾಗಿ ರಾಜ್ಯಭಾರ ಮಾಡಿದರು. ಅವರಲ್ಲಿ ಅನರಣ್ಯ ನೆ೦ಬರಸು ಬಹಳ ಪ್ರಖ್ಯಾತನು. ಈತನಿಗೆ ಅನಂತರ ದಶರಥರೆಂಬ ಇಬ್ಬರು ಮಕ್ಕಳು ಹುಟ್ಟಿದರು... ಅನರಣ್ಯನು ಧರ್ಮಾರ್ಥ ವಿರುಧವಾಗದಂತೆ ವಿಷಯಸುಖ ನನ್ನನುಭವಿಸುತ್ತಿರುವಲ್ಲ. ಒಂದಾನೊಂದು ದಿನ ಬಹಳ ಬಲಶಾಲಿಯಾದ ಮಾಹಿಷ್ಮತಿ ವಲ್ಲಭನು ದಶಾನನನೊಡನೆ ಕಾದಿ ಸೋತನೆಂದು ಕೇಳಿ ತಾನು ದೀಕ್ಷೆ ಪಡೆಯುವೆನೆಂದು ನಿಶ್ಚಯಿಸಲು, ಅವನ ದೊಡ್ಡ ಮಗನಾದ ಅನಂತರಥನು ರಾಜ್ಯವನ್ನು ವಹಿಸುವುದಕೊಡಂಬಡದೆ ತಾನೂ ದೀಕ್ಷೆಗೊಳ್ಳಲು ಉದ್ಯುಕ್ತನಾದನು. ಇದನ್ನು ಕಂಡು ಅನರಣ್ಯನು ಒ೦ದು ತಿ೦ಗಳ ಮಗುವಾದ “ದಶರಥನಿಗೆ ಪಟ್ಟವನ್ನು ಕಟ್ಟಿ ತಾನೂ ತನ್ನ ಹಿರಿಯಮಗನೂ ಅಭಯಘೋಶ ಘಟಾ ರಕರ ಪಾದಗಳಿಗೆಯಲ್ಲಿ ದೀಕ್ಷೆಗೊಂಡರು. {{center|ಆಶ್ವಾಸ ೩- ದಶರಥನ ಮಕ್ಕಳು}} {{gap}}ದಶರಧನು ಪ್ರವರ್ಧಮಾನನಾಗಿ ಧರ್ಮದಿಂದಲೂ ಶೌರ್ಯದಿಂದಲೂ ರಾಜ್ಯ ಪರಿಪಾಲನೆ ಮಾಡುತ್ತ ಅಪರಾಜಿತೆ, ಸುಮಿತ್ರೆ, ಸುಪ್ರಭ ಎಂಬ ಮೂವರು ಪಟ್ಟ ಮಹಿಷಿಯರೊಡನೆ ಸುಖದಿ೦ದಿದ್ದನು. ಒ೦ದು ದಿನ ಆತನ ಸಭೆಗೆ ನಾರದನು ಬಂದು ಆತನೊಡನೆ ಏಕಾಂತವಾಗಿ ಹೀಗೆ ಹೇಳಿದನು : “ಅಯ್ಯ! ನಾನು ಲಂಕೆಯಲ್ಲಿರುವ ಕಾಂತ ಜಿನೇಶ್ವರನನ್ನು ಪೂಜಿಸುವುದಕ್ಕಾಗಿ ಹೋಗಿದ್ದೆನು. ಅಲ್ಲಿ ರಾವಣನರಮನೆಯಲ್ಲಿ ನಡೆದ ವೃತ್ತಾಂತವನ್ನು ನಿನಗೆ ಹೇಳುವೆನು ಕೇಳು.ರಾವಣನು ಜಾನಕಿಯ ನಿಮಿತ್ತ ವಾಗಿ ಯುದ್ಧ ಮಾಡಿ ದಾಶರಧಿಯ ಕೈಯಲ್ಲಿ ಮರಣವನ್ನು ಹೊಂದುವನೆಂಬ ವಿಷಯ ವನ್ನು ವಿಭೀಷಣನು ತನ್ನ ಜೋತಿಷ್ಯನ ಮೂಲಕ ತಿಳಿದು ದಾಶರಥಿಯ ಜಾನಕಿ ಯೂ ಹುಟ್ಟದ೦ತೆ ಮಾಡುವುದಕ್ಕಾಗಿ ನಿನ್ನನ್ನೂ ಜನಕನನ್ನೂ ಕೊಲ್ಲಲು ನಿಶ್ಚಯಿ ಸಿರುವನು. ಇದಕ್ಕೆ ತಕ್ಕ ಉಪಾಯವನ್ನು ಆಲೋಚಿಸು; ಇನ್ನು ನಾನು ಈ ಸುದ್ದಿ<noinclude></noinclude> cub6w535e9eh10lyign014pnderfxm9 ಪುಟ:ಮನಮಂಥನ.pdf/೧ 104 62449 322616 322288 2026-05-26T09:15:57Z Pragathi. BH 7585 /* Validated */ 322616 proofread-page text/x-wiki <noinclude><pagequality level="4" user="Pragathi. BH" /></noinclude>{{Css image crop |Image = ಮನಮಂಥನ.pdf |Page = 1 |bSize = 365 |cWidth = 405 |cHeight = 690 |oTop = 3 |oLeft = 3 |Location = center |Description = }} <noinclude></noinclude> 443j8v1g5ymti8mweleomjjuewtmmkq ಪುಟ:ಮನಮಂಥನ.pdf/೭ 104 62454 322615 322292 2026-05-26T09:15:22Z Pragathi. BH 7585 /* Validated */ 322615 proofread-page text/x-wiki <noinclude><pagequality level="4" user="Pragathi. BH" /></noinclude>{{center|'''ಎರಡು ನುಡಿ'''}} {{gap}}ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 'ವಿಶ್ವ ಕನ್ನಡ ಸಮ್ಮೇಳನ'ದ ಅಂಗವಾಗಿ ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಯಡಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿರುವ ಸಾಹಿತಿಗಳ ಮಹತ್ವದ ಕೃತಿಗಳನ್ನು ಓದುಗರಿಗೆ ಒದಗಿಸಬೇಕೆಂಬ ಸದಾಶಯ ಹೊಂದಿರುತ್ತದೆ. ಈ ಯೋಜನೆಯಡಿ ಸುಮಾರು ೧೦೦ ಕೃತಿಗಳನ್ನು ಪ್ರಕಟಿಸಲು ಉದ್ದೇಶಿಸಿದೆ. {{gap}}ಈ ಕೃತಿಗಳನ್ನು ಆಯ್ಕೆಮಾಡಲು ಖ್ಯಾತ ವಿದ್ವಾಂಸರಾದ ಪ್ರೊ. ಎಲ್.ಎಸ್. ಶೇಷಗಿರಿರಾವ್‌ ರವರ ಅಧ್ಯಕ್ಷತೆಯಲ್ಲಿ ನಾಡಿನ ಹೆಸರಾಂತ ಸಾಹಿತಿ / ವಿದ್ವಾಂಸರುಗಳನ್ನೊಳಗೊಂಡ ಆಯ್ಕೆ ಸಮಿತಿಯನ್ನು ರಚಿಸಿದೆ. ಈ ಆಯ್ಕೆ ಸಮಿತಿಯು ಕನ್ನಡದ ಮೇರುಕೃತಿಗಳ ಮರುಮುದ್ರಣ ಯೋಜನೆಗೆ ಕನ್ನಡ ಸಾಹಿತ್ಯದ ವಿವಿಧ ಕಾಲಘಟ್ಟಗಳಲ್ಲಿ ಬಂದ ಪ್ರಾತಿನಿಧಿಕ ಕೃತಿಗಳನ್ನು ಆಯ್ಕೆ ಮಾಡಿರುತ್ತದೆ. ಆಯ್ಕೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸರ್ಕಾರದ ಪರವಾಗಿ ವಂದನೆಗಳು ಸಲ್ಲುತ್ತವೆ. ಈ ಪುಸ್ತಕಗಳನ್ನು ಹೊರತರಲು ಅನುಮತಿ ನೀಡಿ ಸಹಕರಿಸಿದ ಎಲ್ಲಾ ಲೇಖಕರು ಹಾಗೂ ಹಕ್ಕುದಾರರುಗಳಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಕನ್ನಡದ ಮೇರುಕೃತಿ ಸಾಹಿತ್ಯ ಮಾಲಿಕೆಯನ್ನು ಓದುಗರು ಸ್ವಾಗತಿಸುತ್ತಾರೆಂದು ನಂಬಿದ್ದೇನೆ. {{rh|center=|left=ದಿನಾಂಕ ೧೭.೦೧.೨೦೧೧|right=(ರಮೇಶ್ ಬಿ.ಝಳಕಿ)}} {{rh|center=|left=|right=ಸರ್ಕಾರದ ಕಾರ್ಯದರ್ಶಿಗಳು}} {{rh|center=|left=|right=ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ}}<noinclude></noinclude> aro9c5106nj62yki8xfldn7xznj2q56 ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೧೪ 104 66521 322604 204597 2026-05-26T05:53:13Z Pragathi. BH 7585 /* Validated */ 322604 proofread-page text/x-wiki <noinclude><pagequality level="4" user="Pragathi. BH" />{{rh|center=- 224 -|left=ಅ XI.|right=}}</noinclude><poem> {{gap}}ನ ಚಾಸ್ತಿ ಸದೃಶಂ ತೇನ ಕಿಂಚಿತ್ ಸ್ಥೌಲ್ಯಾಪಕರ್ಷಕಂ | {{gap}}ಸ ಸದಾ ಗುಣಮಾಧತ್ತೇ ಒಲಿನಾಂ ಸ್ನಿಗ್ಧಭೋಜಿನಾ೦ || {{gap}}ವಸಂತೇ ಶೀತಸಮಯೇ ಸುತರಾಂ ಸ ಹಿತೋ ಮತಃ | {{gap}}ಅನ್ಯದಾಪಿ ಚ ಕರ್ತವ್ಯೂ ಬಲಾರ್ಧೇನ ಯಧಾಬಲಂ || {{gap}}ಹೃದಯಸ್ಛೋ ಯದಾ ವಾಯುರ್ವಕ್ತ್ರಂ ಶೀಘ್ರಂ ಪ್ರಪದ್ಯತೇ || {{gap}}ಮುಖಂ ಚ ಶೋಷಂ ಲಭತೇ ತದ್ಬಲಾರ್ಧಸ್ಯ ಲಕ್ಷಣಂ || {{gap}}ಕಿಂ ವಾ ಲಲಾಟೇ ನಾಸಾಯಾಂ ಗಾತ್ರಸಂಧಿಷು ಕಕ್ಷಯೋಃ | {{gap}}ಯದಾ ಸಂಜಾಯತೇ ಸ್ವೇದೋ ಒಲಾರ್ಧಂ ತು ತದಾದಿಶೇತ್ || {{gap}}ಭುಕ್ತವಾನ್ ಕೃತಸಂಭೋಗಃ ಕಾಸೀ ಶ್ವಾಸೀ ಕೃಶಃ ಕ್ಷಯಿಾ | {{gap}}ರಕ್ತಪಿತ್ತೀ ಕ್ಷತೀ ಶೋಷೀ ತ ಕುರ್ಯಾತ್ಕದಾಚನ || {{gap}}ಅತಿವ್ಯಾಯಾಮತಃ ಕಾಸೋ ಜ್ವರಶ್ಛರ್ದಿಃ ಶ್ರಮಃ ಕ್ಲಮಃ | {{gap}}ತೃಷ್ಣಾ ಕ್ಷಯಃ ಪ್ರತಮಕೋ ರಕ್ತಪಿತ್ತಂ ಚ ಜಾಯತೇ || {{Right|(ಭಾ. ಪ್ರ. 46.) }} {{gap}}ವ್ಯಾಯಾಮದಿಂದ ಲಘುತ್ವ, ಕೆಲಸಮಾಡುವ ಸಾಮರ್ಧ್ಯ, ಶರೀರದ ಎಲ್ಲಾ ಭಾಗ ಗಳು ಸರಿಯಾಗಿ ಗಟ್ಟಿಯಾಗಿರೋಣ, ದೋಷಗಳ ಕ್ಷಯ, ಅಗ್ನಿ ವೃದ್ಧಿ, ಸಹ ಉಂಟಾಗು ತ್ತವೆ. ವ್ಯಾಯಾಮದಿಂದ ದೃಢವಾದ ಶರೀರವುಳ್ಳವನಿಗೆ ಯಾವಾಗಲಾದರೂ ರೋಗ ಇಲ್ಲ, ಉಂಡದ್ದು ವಿರುದ್ಧವಾದದ್ದಾದರೂ, ಅತಿಯಾಗಿ ಸುಡಲ್ಪಟ್ಟಿದ್ದಾದರೂ, (ಹುಳಿಯಾದ ದ್ದಾದರೂ) ಬೇಗನೇ ಪಚನವಾಗುವದು, ಇಂಧವನಿಗೆ ದೇಹದಲ್ಲಿ ಶಿಧಿಲತ್ವ ಮುಂತಾದ್ದು ಬೇಗನೇ ಉಂಟಾಗಲಾರದು; ಮತ್ತು ಮುದಿತನವು ಇವನಲ್ಲಿ ಒಡನೆ ಆಕ್ರಮಿಸಿ ವೃದ್ಧಿಯಾಗ ಲಾರದು. ಸ್ಧೂಲತೆಯ ಪರಿಹಾರಕ್ಕೆ ವ್ಯಾಯಾಮಕ್ಕೆ ಸರಿಯಾದದ್ದು ಯಾವದೂ ಇಲ್ಲ. ಸ್ನಿಗ್ಧವಾಗಿ ಭೋಜನ ಮಾಡುವ ಬಲವಂತರಿಗೆ ವ್ಯಾಯಾಮವು ಯಾವಾಗಲೂ ಗುಣ ಕೊಡುತ್ತದೆ. ವಸಂತ ಋತುವಿನಲ್ಲಿಯೂ, ಶೀತಕಾಲದಲ್ಲಿಯೂ, ವ್ಯಾಯಾಮವು ಬಹಳ ಹಿತವೆನ್ನಿಸಿಕೊಂಡದೆ. ಇತರ ಕಾಲದಲ್ಲಿಯೂ ತನ್ನ ಬಲದ ಮೇಲೆ ಲಕ್ಷ್ಯವಿಟ್ಟು ಅರ್ಧ ಬಲ ದಿಂದ ವ್ಯಾಯಾಮಮಾಡತಕ್ಕದ್ದು. ಹೃದಯದ ವಾಯು ಶೀಘ್ರವಾಗಿ ಬಾಯಿಗೆ ಬರುವದು ಮತ್ತು ಮುಖವು ಬಾಡುವದು ಅರ್ಧ ಬಲದ ಲಕ್ಷಣವೆಂತ ತಿಳಿಯಬೇಕು; ಅಥವಾ, ಹಣೆ ಯಲ್ಲಿ, ಮೂಗಿನಲ್ಲಿ, ಶರೀರದ ಸಂದುಗಳಲ್ಲಿ, ಮತ್ತು ಕಂಕುಳಲ್ಲಿ ಯಾವಾಗ ಬೆವರು ಬರು ತ್ತದೋ ಆಗ್ಗೆ ಬಲಾರ್ಧವಾಯಿತೆಂತ ತಿಳಿಯಬೇಕು. ಉಂಡ ಕೂಡಲೇ, ಸಂಭೋಗ ಮಾಡಿದ ಕೂಡಲೇ, ಮತ್ತು ಕೆಮ್ಮು, ಉಬ್ಬಸ, ಕೃಶತೆ, ಕ್ಷಯ, ರಕ್ತಪಿತ್ತ, ಕ್ಷತ, ಶೋಷ, ಈ ರೋಗಗಳಿಂದ ಪೀಡಿತರಾದವರು ಯಾವಾಗಲಾದರೂ ವ್ಯಾಯಾಮವನ್ನು ಅವಲಂಬಿಸ ಬಾರದು. ವ್ಯಾಯಾಮದ ಸೇವನೆಯು ಅತಿಯಾದರೆ, ಕೆಮ್ಮು, ಜ್ವರ, ವಾಂತಿ, ಶ್ರಮ, ಅಶಕ್ತಿ, ಬಾಯಾರಿಕೆ, ಕ್ಷಯ, ತಮಕವ್ಯಾಧಿ, ರಕ್ತಪಿತ್ತ, ಈ ರೋಗಗಳು ಉಂಟಾಗುವವು.<br /> {{gap}}ಷರಾ ಇದೇ ಅಭಿಪ್ರಾಯಕ್ಕೆ ಸು 503 04 ನೋಡು<br /> {{gap}}ವಯೋಬಲಶರೀರಾಣಿ ದೇಶಕಾಲಾಶನಾನಿ ಚ |<noinclude></noinclude> b1abydbat2v5ewq4z5vpttes1bwdked 322605 322604 2026-05-26T05:53:55Z Pragathi. BH 7585 322605 proofread-page text/x-wiki <noinclude><pagequality level="4" user="Pragathi. BH" />{{rh|center=- 224 -|left=ಅ XI.|right=}}</noinclude><poem> {{gap}}ನ ಚಾಸ್ತಿ ಸದೃಶಂ ತೇನ ಕಿಂಚಿತ್ ಸ್ಥೌಲ್ಯಾಪಕರ್ಷಕಂ | {{gap}}ಸ ಸದಾ ಗುಣಮಾಧತ್ತೇ ಒಲಿನಾಂ ಸ್ನಿಗ್ಧಭೋಜಿನಾ೦ || {{gap}}ವಸಂತೇ ಶೀತಸಮಯೇ ಸುತರಾಂ ಸ ಹಿತೋ ಮತಃ | {{gap}}ಅನ್ಯದಾಪಿ ಚ ಕರ್ತವ್ಯೂ ಬಲಾರ್ಧೇನ ಯಧಾಬಲಂ || {{gap}}ಹೃದಯಸ್ಛೋ ಯದಾ ವಾಯುರ್ವಕ್ತ್ರಂ ಶೀಘ್ರಂ ಪ್ರಪದ್ಯತೇ || {{gap}}ಮುಖಂ ಚ ಶೋಷಂ ಲಭತೇ ತದ್ಬಲಾರ್ಧಸ್ಯ ಲಕ್ಷಣಂ || {{gap}}ಕಿಂ ವಾ ಲಲಾಟೇ ನಾಸಾಯಾಂ ಗಾತ್ರಸಂಧಿಷು ಕಕ್ಷಯೋಃ | {{gap}}ಯದಾ ಸಂಜಾಯತೇ ಸ್ವೇದೋ ಒಲಾರ್ಧಂ ತು ತದಾದಿಶೇತ್ || {{gap}}ಭುಕ್ತವಾನ್ ಕೃತಸಂಭೋಗಃ ಕಾಸೀ ಶ್ವಾಸೀ ಕೃಶಃ ಕ್ಷಯಿಾ | {{gap}}ರಕ್ತಪಿತ್ತೀ ಕ್ಷತೀ ಶೋಷೀ ತ ಕುರ್ಯಾತ್ಕದಾಚನ || {{gap}}ಅತಿವ್ಯಾಯಾಮತಃ ಕಾಸೋ ಜ್ವರಶ್ಛರ್ದಿಃ ಶ್ರಮಃ ಕ್ಲಮಃ|| {{gap}}ತೃಷ್ಣಾ ಕ್ಷಯಃ ಪ್ರತಮಕೋ ರಕ್ತಪಿತ್ತಂ ಚ ಜಾಯತೇ || {{Right|(ಭಾ. ಪ್ರ. 46.) }} {{gap}}ವ್ಯಾಯಾಮದಿಂದ ಲಘುತ್ವ, ಕೆಲಸಮಾಡುವ ಸಾಮರ್ಧ್ಯ, ಶರೀರದ ಎಲ್ಲಾ ಭಾಗ ಗಳು ಸರಿಯಾಗಿ ಗಟ್ಟಿಯಾಗಿರೋಣ, ದೋಷಗಳ ಕ್ಷಯ, ಅಗ್ನಿ ವೃದ್ಧಿ, ಸಹ ಉಂಟಾಗು ತ್ತವೆ. ವ್ಯಾಯಾಮದಿಂದ ದೃಢವಾದ ಶರೀರವುಳ್ಳವನಿಗೆ ಯಾವಾಗಲಾದರೂ ರೋಗ ಇಲ್ಲ, ಉಂಡದ್ದು ವಿರುದ್ಧವಾದದ್ದಾದರೂ, ಅತಿಯಾಗಿ ಸುಡಲ್ಪಟ್ಟಿದ್ದಾದರೂ, (ಹುಳಿಯಾದ ದ್ದಾದರೂ) ಬೇಗನೇ ಪಚನವಾಗುವದು, ಇಂಧವನಿಗೆ ದೇಹದಲ್ಲಿ ಶಿಧಿಲತ್ವ ಮುಂತಾದ್ದು ಬೇಗನೇ ಉಂಟಾಗಲಾರದು; ಮತ್ತು ಮುದಿತನವು ಇವನಲ್ಲಿ ಒಡನೆ ಆಕ್ರಮಿಸಿ ವೃದ್ಧಿಯಾಗ ಲಾರದು. ಸ್ಧೂಲತೆಯ ಪರಿಹಾರಕ್ಕೆ ವ್ಯಾಯಾಮಕ್ಕೆ ಸರಿಯಾದದ್ದು ಯಾವದೂ ಇಲ್ಲ. ಸ್ನಿಗ್ಧವಾಗಿ ಭೋಜನ ಮಾಡುವ ಬಲವಂತರಿಗೆ ವ್ಯಾಯಾಮವು ಯಾವಾಗಲೂ ಗುಣ ಕೊಡುತ್ತದೆ. ವಸಂತ ಋತುವಿನಲ್ಲಿಯೂ, ಶೀತಕಾಲದಲ್ಲಿಯೂ, ವ್ಯಾಯಾಮವು ಬಹಳ ಹಿತವೆನ್ನಿಸಿಕೊಂಡದೆ. ಇತರ ಕಾಲದಲ್ಲಿಯೂ ತನ್ನ ಬಲದ ಮೇಲೆ ಲಕ್ಷ್ಯವಿಟ್ಟು ಅರ್ಧ ಬಲ ದಿಂದ ವ್ಯಾಯಾಮಮಾಡತಕ್ಕದ್ದು. ಹೃದಯದ ವಾಯು ಶೀಘ್ರವಾಗಿ ಬಾಯಿಗೆ ಬರುವದು ಮತ್ತು ಮುಖವು ಬಾಡುವದು ಅರ್ಧ ಬಲದ ಲಕ್ಷಣವೆಂತ ತಿಳಿಯಬೇಕು; ಅಥವಾ, ಹಣೆ ಯಲ್ಲಿ, ಮೂಗಿನಲ್ಲಿ, ಶರೀರದ ಸಂದುಗಳಲ್ಲಿ, ಮತ್ತು ಕಂಕುಳಲ್ಲಿ ಯಾವಾಗ ಬೆವರು ಬರು ತ್ತದೋ ಆಗ್ಗೆ ಬಲಾರ್ಧವಾಯಿತೆಂತ ತಿಳಿಯಬೇಕು. ಉಂಡ ಕೂಡಲೇ, ಸಂಭೋಗ ಮಾಡಿದ ಕೂಡಲೇ, ಮತ್ತು ಕೆಮ್ಮು, ಉಬ್ಬಸ, ಕೃಶತೆ, ಕ್ಷಯ, ರಕ್ತಪಿತ್ತ, ಕ್ಷತ, ಶೋಷ, ಈ ರೋಗಗಳಿಂದ ಪೀಡಿತರಾದವರು ಯಾವಾಗಲಾದರೂ ವ್ಯಾಯಾಮವನ್ನು ಅವಲಂಬಿಸ ಬಾರದು. ವ್ಯಾಯಾಮದ ಸೇವನೆಯು ಅತಿಯಾದರೆ, ಕೆಮ್ಮು, ಜ್ವರ, ವಾಂತಿ, ಶ್ರಮ, ಅಶಕ್ತಿ, ಬಾಯಾರಿಕೆ, ಕ್ಷಯ, ತಮಕವ್ಯಾಧಿ, ರಕ್ತಪಿತ್ತ, ಈ ರೋಗಗಳು ಉಂಟಾಗುವವು.<br /> {{gap}}ಷರಾ ಇದೇ ಅಭಿಪ್ರಾಯಕ್ಕೆ ಸು 503 04 ನೋಡು<br /> {{gap}}ವಯೋಬಲಶರೀರಾಣಿ ದೇಶಕಾಲಾಶನಾನಿ ಚ |<noinclude></noinclude> lc18wy7bkiims8jxkpgma3m745b54rz ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೦ 104 66952 322622 166289 2026-05-26T10:34:27Z Pragathi. BH 7585 322622 proofread-page text/x-wiki <noinclude><pagequality level="3" user="Br Bharath Kumar" /></noinclude>೪೦{{RunningHeader|center=ರಾಮಚಂದ್ರಚರಿತಪುರಾಣಂ}} <poem> {{gap}}ಮತ್ತಂ ತದನ್ವಯದೊಳ್ ಮಯಮಾಂಧಾತೃವೀರಸೇನ ಕಮಲಬಂಧು ವಸnta ತಿಲಕ ಕುಬೇರದತ್ತ<sup>1</sup>ಮೃಗಾರಿದಮನ ದ್ವಿಪರಥ ಹಿರಣ್ಯಕಶಿಪ್ವರ್ಕರಥ<sup>೨</sup> ದಿಲೀಪ ರಘು ವೀರ ಪ್ರಮುಖರೆನಿಬರಾನುಮರಸುಗಳನುಕ್ರಮದಿಂ ರಾಜ್ಯಂಗೆಯ್ದು ಕೆಲಬರಮರ ಕಾಮಿನೀ ಕಚಗ್ರಹಣಮಂ ಕೆಲಂಬರಮೃತಲಕ್ಷ್ಮೀಪಾಣಿಗ್ರಹಣಮಂ ಪಡೆವುದುಂ---- ಕಂ॥ ಧರಣೀಪ್ರಾಕಾರಂ ವೀ :ರ ರಸಾರ್ಣವ ಸೇತು ದಾನಗುಣಭೂಷಣ ದಿ|| :ಕರಿಧರರತ್ನರೋಹಣ :ಗಿರೀ೦ದ್ರಮಿಕ್ಷ್ವಾಕು ವಂಶಮಾಯ್ತಪ್ರತಿಮಂ{{gap}}{{gap}}||೬೭|| {{gap}}ಆ ವಂಶದೊಳ್ ವಿನೀತಾಪುರಮನಾಳ್ವನವರಣನೆಂಬರಸನಖಿಲ ರಾಜಕುಲ ಮಣಿಮಕುಟ ಮಕರಿಕಾಪತ್ರ ವಿಚಿತ್ರಚಿತ್ರಿತ ಪಾದಪೀಠ೦--- ಕಂ॥ ನೆನೆಯಿಸುವಂ ಮಾನ್ಯಪುರಾ ತನ ರಾಜನ್ಯಕಮನತುಲ ಬಾಹಾ ಬಲದಿಂ|| ದನರಣ್ಯಂ ಕೃತಪುಣ್ಯಂ ಮನುವಂಶ ವರೇಣ್ಯ ನಖಿಲ ಭುವನ ಶರಣ್ಯಂ{{gap}}{{gap}}||೬೮|| ಅನರಣ್ಯನೆಂಬ ಪೆಸರಂ, ಜನಪತಿ ದೇಶದೊಳರಣ್ಯಮಿಲ್ಲೆನೆ ನಾನಾ|| ಜನಪದಮಂ ಪಡೆದು ಜಗ ಜ್ಜನಂ ಕುಡಲ್ ಪಡೆದನುಂತ ಪಡದನ ಪಸರಂ{{gap}}{{gap}}||೬೯|| ನ್ಯಾಯಾರ್ಜಿತವಿತ್ತಂ ಧ ರ್ಮಾಯತ್ತ ಮೆನಿಪ್ಪ ರಾಜವೃತ್ತಂ ತನಗೇ|| ಕಾಯತ್ತಮಾಗೆ ಧರೆಯಂ ಜೀಯೆನಿಸಿದನಿ೦ತುದಾತ್ತ ಚರಿತರುಮೊಳರೇ{{gap}}{{gap}}{{gap}}||೭೦|| ಆ ವಸುಧಾವಲ್ಲಭನ ಮ ನೋವಲ್ಲಭೆ ರೂಪವತಿ ಕಲಾವತಿ ಪೃ|| ಥ್ವೀವದು ಧೈಯ್ಯದೊಳಂ ಪೃ ಥ್ವೀವನಿತೆಗೆ ಯುವತಿ ಸವತಿಯೆನೆ ಪೆಸರ್ವಡೆದಳ್{{gap}}{{gap}}||೭೧|| ---------------------------------------------------------------------------- ೧. ಮೃಗಾರಿ ಮದನದ್ವಿಪ, ಚ. ಮೃಗಾರಿ ಮದದ್ವಿಪ ಕ, ಖ. ೨. ದಿಲೀಪ ಪುರೂರವ ರಘುವೀರ ಗ. ಘ. </poem><noinclude></noinclude> qypo619hft0tekbzmei8rlibp8u1m3x 322624 322622 2026-05-26T10:38:25Z Pragathi. BH 7585 322624 proofread-page text/x-wiki <noinclude><pagequality level="3" user="Br Bharath Kumar" /></noinclude>೪೦{{RunningHeader|center=ರಾಮಚಂದ್ರಚರಿತಪುರಾಣಂ}} <poem> {{gap}}ಮತ್ತಂ ತದನ್ವಯದೊಳ್ ಮಯಮಾಂಧಾತೃವೀರಸೇನ ಕಮಲಬಂಧು ವಸnta ತಿಲಕ ಕುಬೇರದತ್ತ<sup>1</sup>ಮೃಗಾರಿದಮನ ದ್ವಿಪರಥ ಹಿರಣ್ಯಕಶಿಪ್ವರ್ಕರಥ<sup>೨</sup> ದಿಲೀಪ ರಘು ವೀರ ಪ್ರಮುಖರೆನಿಬರಾನುಮರಸುಗಳನುಕ್ರಮದಿಂ ರಾಜ್ಯಂಗೆಯ್ದು ಕೆಲಬರಮರ ಕಾಮಿನೀ ಕಚಗ್ರಹಣಮಂ ಕೆಲಂಬರಮೃತಲಕ್ಷ್ಮೀಪಾಣಿಗ್ರಹಣಮಂ ಪಡೆವುದುಂ---- ಕಂ॥ ಧರಣೀಪ್ರಾಕಾರಂ ವೀ :ರ ರಸಾರ್ಣವ ಸೇತು ದಾನಗುಣಭೂಷಣ ದಿ|| :ಕರಿಧರರತ್ನರೋಹಣ :ಗಿರೀ೦ದ್ರಮಿಕ್ಷ್ವಾಕು ವಂಶಮಾಯ್ತಪ್ರತಿಮಂ{{gap}}{{gap}}||೬೭|| {{gap}}ಆ ವಂಶದೊಳ್ ವಿನೀತಾಪುರಮನಾಳ್ವನವರಣನೆಂಬರಸನಖಿಲ ರಾಜಕುಲ ಮಣಿಮಕುಟ ಮಕರಿಕಾಪತ್ರ ವಿಚಿತ್ರಚಿತ್ರಿತ ಪಾದಪೀಠ೦--- ಕಂ॥ ನೆನೆಯಿಸುವಂ ಮಾನ್ಯಪುರಾ :ತನ ರಾಜನ್ಯಕಮನತುಲ ಬಾಹಾ ಬಲದಿಂ|| :ದನರಣ್ಯಂ ಕೃತಪುಣ್ಯಂ :ಮನುವಂಶ ವರೇಣ್ಯ ನಖಿಲ ಭುವನ ಶರಣ್ಯಂ{{gap}}||೬೮|| :ಅನರಣ್ಯನೆಂಬ ಪೆಸರಂ, :ಜನಪತಿ ದೇಶದೊಳರಣ್ಯಮಿಲ್ಲೆನೆ ನಾನಾ|| :ಜನಪದಮಂ ಪಡೆದು ಜಗ :ಜ್ಜನಂ ಕುಡಲ್ ಪಡೆದನುಂತ ಪಡದನ ಪಸರಂ{{gap}}||೬೯|| :ನ್ಯಾಯಾರ್ಜಿತವಿತ್ತಂ ಧ :ರ್ಮಾಯತ್ತ ಮೆನಿಪ್ಪ ರಾಜವೃತ್ತಂ ತನಗೇ|| :ಕಾಯತ್ತಮಾಗೆ ಧರೆಯಂ :ಜೀಯೆನಿಸಿದನಿ೦ತುದಾತ್ತ ಚರಿತರುಮೊಳರೇ{{gap}}{{gap}}||೭೦|| :ಆ ವಸುಧಾವಲ್ಲಭನ ಮ :ನೋವಲ್ಲಭೆ ರೂಪವತಿ ಕಲಾವತಿ ಪೃ|| :ಥ್ವೀವದು ಧೈಯ್ಯದೊಳಂ ಪೃ :ಯುವತಿ ಸವತಿಯೆನೆ ಪೆಸರ್ವಡೆದಳ್{{gap}}{{gap}}||೭೧|| ---------------------------------------------------------------------------- ೧. ಮೃಗಾರಿ ಮದನದ್ವಿಪ, ಚ. ಮೃಗಾರಿ ಮದದ್ವಿಪ ಕ, ಖ. ೨. ದಿಲೀಪ ಪುರೂರವ ರಘುವೀರ ಗ. ಘ. </poem><noinclude></noinclude> onquwp6lyz70rflx1sbs0nhqus3pht9 322625 322624 2026-05-26T10:39:00Z Pragathi. BH 7585 /* Validated */ 322625 proofread-page text/x-wiki <noinclude><pagequality level="4" user="Pragathi. BH" /></noinclude>೪೦{{RunningHeader|center=ರಾಮಚಂದ್ರಚರಿತಪುರಾಣಂ}} <poem> {{gap}}ಮತ್ತಂ ತದನ್ವಯದೊಳ್ ಮಯಮಾಂಧಾತೃವೀರಸೇನ ಕಮಲಬಂಧು ವಸnta ತಿಲಕ ಕುಬೇರದತ್ತ<sup>1</sup>ಮೃಗಾರಿದಮನ ದ್ವಿಪರಥ ಹಿರಣ್ಯಕಶಿಪ್ವರ್ಕರಥ<sup>೨</sup> ದಿಲೀಪ ರಘು ವೀರ ಪ್ರಮುಖರೆನಿಬರಾನುಮರಸುಗಳನುಕ್ರಮದಿಂ ರಾಜ್ಯಂಗೆಯ್ದು ಕೆಲಬರಮರ ಕಾಮಿನೀ ಕಚಗ್ರಹಣಮಂ ಕೆಲಂಬರಮೃತಲಕ್ಷ್ಮೀಪಾಣಿಗ್ರಹಣಮಂ ಪಡೆವುದುಂ---- ಕಂ॥ ಧರಣೀಪ್ರಾಕಾರಂ ವೀ :ರ ರಸಾರ್ಣವ ಸೇತು ದಾನಗುಣಭೂಷಣ ದಿ|| :ಕರಿಧರರತ್ನರೋಹಣ :ಗಿರೀ೦ದ್ರಮಿಕ್ಷ್ವಾಕು ವಂಶಮಾಯ್ತಪ್ರತಿಮಂ{{gap}}{{gap}}||೬೭|| {{gap}}ಆ ವಂಶದೊಳ್ ವಿನೀತಾಪುರಮನಾಳ್ವನವರಣನೆಂಬರಸನಖಿಲ ರಾಜಕುಲ ಮಣಿಮಕುಟ ಮಕರಿಕಾಪತ್ರ ವಿಚಿತ್ರಚಿತ್ರಿತ ಪಾದಪೀಠ೦--- ಕಂ॥ ನೆನೆಯಿಸುವಂ ಮಾನ್ಯಪುರಾ :ತನ ರಾಜನ್ಯಕಮನತುಲ ಬಾಹಾ ಬಲದಿಂ|| :ದನರಣ್ಯಂ ಕೃತಪುಣ್ಯಂ :ಮನುವಂಶ ವರೇಣ್ಯ ನಖಿಲ ಭುವನ ಶರಣ್ಯಂ{{gap}}||೬೮|| :ಅನರಣ್ಯನೆಂಬ ಪೆಸರಂ, :ಜನಪತಿ ದೇಶದೊಳರಣ್ಯಮಿಲ್ಲೆನೆ ನಾನಾ|| :ಜನಪದಮಂ ಪಡೆದು ಜಗ :ಜ್ಜನಂ ಕುಡಲ್ ಪಡೆದನುಂತ ಪಡದನ ಪಸರಂ{{gap}}||೬೯|| :ನ್ಯಾಯಾರ್ಜಿತವಿತ್ತಂ ಧ :ರ್ಮಾಯತ್ತ ಮೆನಿಪ್ಪ ರಾಜವೃತ್ತಂ ತನಗೇ|| :ಕಾಯತ್ತಮಾಗೆ ಧರೆಯಂ :ಜೀಯೆನಿಸಿದನಿ೦ತುದಾತ್ತ ಚರಿತರುಮೊಳರೇ{{gap}}{{gap}}||೭೦|| :ಆ ವಸುಧಾವಲ್ಲಭನ ಮ :ನೋವಲ್ಲಭೆ ರೂಪವತಿ ಕಲಾವತಿ ಪೃ|| :ಥ್ವೀವದು ಧೈಯ್ಯದೊಳಂ ಪೃ :ಯುವತಿ ಸವತಿಯೆನೆ ಪೆಸರ್ವಡೆದಳ್{{gap}}{{gap}}||೭೧|| ---------------------------------------------------------------------------- ೧. ಮೃಗಾರಿ ಮದನದ್ವಿಪ, ಚ. ಮೃಗಾರಿ ಮದದ್ವಿಪ ಕ, ಖ. ೨. ದಿಲೀಪ ಪುರೂರವ ರಘುವೀರ ಗ. ಘ. </poem><noinclude></noinclude> 7aln2gvcx3tfxriqwz7wyb9oir7nntf ಪುಟ:ಶ್ರೀ ಕೃಷ್ಣ ಲೀಲೆ.djvu/೧೪೦ 104 68814 322585 320788 2026-05-26T05:26:21Z Hariprasad Shetty10 7490 322585 proofread-page text/x-wiki <noinclude><pagequality level="1" user="Hariprasad Shetty10" />{{rh|left=೧೨೪|center=ಕೃಷ್ಣ ಲೀಲೆ|right=}}</noinclude>ಪರಬ್ರಹವರ್ತಿಯಾದ ತನ್ನ ಅದ್ರಾಕೃತ ದಿವ್ಯಸಂದರ್ಶನವನ್ನು ಮಾಡಬೇಕೆಂದಪೇಕ್ಷಿಸಿದ ಗೋಪಿಯರ ವಸ್ತ್ರಗಳೆಂಬ ಅಜ್ಞಾನಾವರಣಗಳನ್ನು ಅಪಹರಿಸಿ, ಅವರಿಗೆ ತನ್ನ ಅಮಾನುಷವಾದ ಪರಂಜ್ಯೋತಿ ಸ್ವರೂಪಸಂದರ್ಶನವನ್ನು ಅನುಗ್ರಹಿಸಿ ತನ್ಮೂಲಕವಾಗಿ ಶ್ರೀರಾಮಾವತಾರದಲ್ಲಿ ತಾನು ಮಾಡಿದ್ದ ವಾಗ್ದಾನವನ್ನು ಸಫಲಗೊಳಿಸಿದನು. ಒಮ್ಮೆ ಅವರು ತಮ್ಮ ಪೂರ್ವಸ್ಮ್ರತಿಯುಂಟಾಗಿರುವರು. ಮತ್ತೊಮ್ಮೆ ಭಗವನ್ಮಾಯೆಗೆ ಸಿಲುಕಿ ಅದನ್ನು ಮರೆತು ಪರಿತಪಿಸುವರು. ಇಂತು ಬ್ರಹ್ಮರ್ಷಿಗಳಾದ ಗೋಪಿಯರ ಸ್ಥಿತಿಯೇ ಈ ರೀತಿಯಾಗಿರುವಲ್ಲಿ ಕೇವಲ ಆಹಾರನಿದ್ರಾದಿ ತುಚ್ಛಭೋಗಗಳಲ್ಲಿ ಮಗ್ನರಾಗಿರುವ ನರಪಶುಗಳಿಗೆ ದೈವಲೀಲೆಗಳು ಅರ್ಥವಾಗಬಲ್ಲವೆ! ಪಾಂಡುರೋಗಿಯ ಕಣ್ಗಳಿಗೆ ಪ್ರಪಂಚವೆಲ್ಲವೂ ಹಳದಿಯಾಗಿ ಕಾಣುವಂತೆ, ಕೇವಲ ಲೌಕಿಕ ಕ್ಷರ ಮತ್ರರಿಗೂ, ಧನಾಧಿಕಾರ ಮದಾಂಧರಾದ ಡಾಂಬಿಕರಿಗೂ, ಭ ಗವದ್ಗೀಲಾಸಗಳು ವಿಲಕ್ಷಣವಾಗಿ ಕಾಣುವುದರಲ್ಲಿ ಆಶ್ರವೇನು? ನಿದರ್ಶ ನಕ್ಕ ಕಂಸನೊಬ್ಬನೇ ಸಾಕಾಗಿರುವನು. ಈ ದುರಭಿಮಾನಿಯು ಐಕ್ಷ ರದಲ್ಲಿಯೂ, ಅಧಿಕಾರದಲ್ಲಿಯೂ, ಪ್ರತಾಪದಲ್ಲಿಯೂ, ತಾನೇ ಅಗ್ರ ಗಣ್ಯನೆಂತಲೂ, ತನಗೆ ಸಮಾನವಾದ ತಿಳಿವಳಿಕ ಯುಂಟಾದವರು, ಮತ್ತಾರೂ ಇಲ್ಲವೆಂತಲೂ ಕೊಬ್ಬಿರುವನು. ತನ್ನ ವಿನಾಶಕಾಲವನ್ನ ರಿಯದೆ, ಋಷಿಮುನಿಗಳನ4, ಬಚ್ಚವೇತ್ತರಾದ ಸಾಧುಜನರನ್ನೂ ಸಾಧೀಮಣಿಯರನ ಬಗೆಬಗೆಯ ಸುತ್ತಲೂ, ದ್ವೇಷಿಸು ತಲೂ ಉನ್ಮತ್ತನಾಗಿರುವನು. ತನ್ನ ತಂದೆಯನ್ನೆ ಸೆರೆಯಲ್ಲಿ ಬಂಧಿ ಸಿರುವನು. ಮೂರ್ಖನಾದ ಕಂಸನಿಗೆ ಲೇವಾದರೂ ವಿವೇಕವಿಲ್ಲ ವಲ್ಲಾ ! ಪ್ರಪಂಚದಲ್ಲಿ ಯಾವ ಮನುಷ್ಯನೇ ಆಗಲಿ, ತನ್ನ ಹಿರಿಯರ ನ್ನು ಅವಿವೇಕಿಗಳೆಂದು 'ತಾನು ಅಲ್ಲಗಳೆಯುವುದಾದರೆ ತನ್ನ ಮಕ್ಕಳು ಮೊಮ್ಮಕ್ಕಳು ಮುಂತಾದವರು ತನ್ನನ್ನು ವಜ್ರಕುಂಠನೆಂದು ದೂಷಿಸ ಲೇ ದೂಷಿಸುತ್ತಾರೆಂಬ ಪರಿಜ್ಞಾನವಿಲ್ಲದೆ ತನಗೆ ಎದುರಿಲ್ಲವೆಂದು ಗರ್ವಿಸಿ ಹಿರಿಯರಾದ ಋಷಿಮುನಿಗಳನ್ನು ದೂಷಿಸುತ್ತ ಹಾರಿಬೀಳು ತಿರುವನು. ಆಗಲಾಗಲಿ! ಇವನ ವಿನಾಶಕಾಲವೂ ಹಿತ್ರದಲ್ಲಿಯೇ ಎದಿರುನೋಡುತ್ತಿರುವುದಲ್ಲವೆ! * ವಿನಾಶಕಾಲೇ ವಿಪರೀತಬುಧ್ಧಿಃ” ಈ<noinclude></noinclude> hj31jggp4kxqqv50frozlx0czx864fs 322598 322585 2026-05-26T05:44:19Z Pragathi. BH 7585 /* Proofread */ 322598 proofread-page text/x-wiki <noinclude><pagequality level="3" user="Pragathi. BH" />{{rh|left=೧೨೪|center=ಕೃಷ್ಣ ಲೀಲೆ|right=}}</noinclude>ಪರಬ್ರಹವರ್ತಿಯಾದ ತನ್ನ ಅದ್ರಾಕೃತ ದಿವ್ಯಸಂದರ್ಶನವನ್ನು ಮಾಡಬೇಕೆಂದಪೇಕ್ಷಿಸಿದ ಗೋಪಿಯರ ವಸ್ತ್ರಗಳೆಂಬ ಅಜ್ಞಾನಾವರಣಗಳನ್ನು ಅಪಹರಿಸಿ, ಅವರಿಗೆ ತನ್ನ ಅಮಾನುಷವಾದ ಪರಂಜ್ಯೋತಿ ಸ್ವರೂಪಸಂದರ್ಶನವನ್ನು ಅನುಗ್ರಹಿಸಿ ತನ್ಮೂಲಕವಾಗಿ ಶ್ರೀರಾಮಾವತಾರದಲ್ಲಿ ತಾನು ಮಾಡಿದ್ದ ವಾಗ್ದಾನವನ್ನು ಸಫಲಗೊಳಿಸಿದನು. ಒಮ್ಮೆ ಅವರು ತಮ್ಮ ಪೂರ್ವಸ್ಮ್ರತಿಯುಂಟಾಗಿರುವರು. ಮತ್ತೊಮ್ಮೆ ಭಗವನ್ಮಾಯೆಗೆ ಸಿಲುಕಿ ಅದನ್ನು ಮರೆತು ಪರಿತಪಿಸುವರು. ಇಂತು ಬ್ರಹ್ಮರ್ಷಿಗಳಾದ ಗೋಪಿಯರ ಸ್ಥಿತಿಯೇ ಈ ರೀತಿಯಾಗಿರುವಲ್ಲಿ ಕೇವಲ ಆಹಾರನಿದ್ರಾದಿ ತುಚ್ಛಭೋಗಗಳಲ್ಲಿ ಮಗ್ನರಾಗಿರುವ ನರಪಶುಗಳಿಗೆ ದೈವಲೀಲೆಗಳು ಅರ್ಥವಾಗಬಲ್ಲವೆ! ಪಾಂಡುರೋಗಿಯ ಕಣ್ಗಳಿಗೆ ಪ್ರಪಂಚವೆಲ್ಲವೂ ಹಳದಿಯಾಗಿ ಕಾಣುವಂತೆ, ಕೇವಲ ಲೌಕಿಕ ಕ್ಷರ ಮತ್ರರಿಗೂ, ಧನಾಧಿಕಾರ ಮದಾಂಧರಾದ ಡಾಂಬಿಕರಿಗೂ, ಭ ಗವದ್ಗೀಲಾಸಗಳು ವಿಲಕ್ಷಣವಾಗಿ ಕಾಣುವುದರಲ್ಲಿ ಆಶ್ರವೇನು? ನಿದರ್ಶ ನಕ್ಕ ಕಂಸನೊಬ್ಬನೇ ಸಾಕಾಗಿರುವನು. ಈ ದುರಭಿಮಾನಿಯು ಐಕ್ಷ ರದಲ್ಲಿಯೂ, ಅಧಿಕಾರದಲ್ಲಿಯೂ, ಪ್ರತಾಪದಲ್ಲಿಯೂ, ತಾನೇ ಅಗ್ರ ಗಣ್ಯನೆಂತಲೂ, ತನಗೆ ಸಮಾನವಾದ ತಿಳಿವಳಿಕ ಯುಂಟಾದವರು, ಮತ್ತಾರೂ ಇಲ್ಲವೆಂತಲೂ ಕೊಬ್ಬಿರುವನು. ತನ್ನ ವಿನಾಶಕಾಲವನ್ನ ರಿಯದೆ, ಋಷಿಮುನಿಗಳನ4, ಬಚ್ಚವೇತ್ತರಾದ ಸಾಧುಜನರನ್ನೂ ಸಾಧೀಮಣಿಯರನ ಬಗೆಬಗೆಯ ಸುತ್ತಲೂ, ದ್ವೇಷಿಸು ತಲೂ ಉನ್ಮತ್ತನಾಗಿರುವನು. ತನ್ನ ತಂದೆಯನ್ನೆ ಸೆರೆಯಲ್ಲಿ ಬಂಧಿ ಸಿರುವನು. ಮೂರ್ಖನಾದ ಕಂಸನಿಗೆ ಲೇವಾದರೂ ವಿವೇಕವಿಲ್ಲ ವಲ್ಲಾ ! ಪ್ರಪಂಚದಲ್ಲಿ ಯಾವ ಮನುಷ್ಯನೇ ಆಗಲಿ, ತನ್ನ ಹಿರಿಯರ ನ್ನು ಅವಿವೇಕಿಗಳೆಂದು 'ತಾನು ಅಲ್ಲಗಳೆಯುವುದಾದರೆ ತನ್ನ ಮಕ್ಕಳು ಮೊಮ್ಮಕ್ಕಳು ಮುಂತಾದವರು ತನ್ನನ್ನು ವಜ್ರಕುಂಠನೆಂದು ದೂಷಿಸ ಲೇ ದೂಷಿಸುತ್ತಾರೆಂಬ ಪರಿಜ್ಞಾನವಿಲ್ಲದೆ ತನಗೆ ಎದುರಿಲ್ಲವೆಂದು ಗರ್ವಿಸಿ ಹಿರಿಯರಾದ ಋಷಿಮುನಿಗಳನ್ನು ದೂಷಿಸುತ್ತ ಹಾರಿಬೀಳು ತಿರುವನು. ಆಗಲಾಗಲಿ! ಇವನ ವಿನಾಶಕಾಲವೂ ಹಿತ್ರದಲ್ಲಿಯೇ ಎದಿರುನೋಡುತ್ತಿರುವುದಲ್ಲವೆ! * ವಿನಾಶಕಾಲೇ ವಿಪರೀತಬುಧ್ಧಿಃ” ಈ<noinclude></noinclude> ac04qh5k412jaguudn0bp6ypnxkxhw5 ಪುಟ:ಅರಮನೆ.pdf/೭೧ 104 77156 322567 322022 2026-05-26T02:33:27Z Pragathi. BH 7585 /* Validated */ 322567 proofread-page text/x-wiki <noinclude><pagequality level="4" user="Pragathi. BH" /></noinclude> {{rh|center=|left=೪೦|right=ಅರಮನೆ}} ಸಾರ್ತಕಾತು, ಜ್ವಾಪಾನ ಜತುನಾ ಮಾಡೀನಂತ ಹೇಳಿ ನಿನ್ನಾ ಹಂಗಿಸಿಲ್ಲವ್ವಾ ನನ್ನುಪಕಾರ ನಿಂಗೆ ನೆಪ್ಪಿದ್ದಲ್ಲಿ.. ನೀನು ಸರಣಾಗತ ರಚ್ಚಕಿ ಆಗಿದ್ದಲ್ಲಿ ಗಂಡ ಬಿಟ್ಟಿರೋ ನನ್ನ ನಿನ್ನ ಬುಡದಾಗಿಟಕಂಡು ಕಾಪಾಡಬೇಕು ತಾಯಿ” ಯಂದೊಂದೇ ಮಾತಲ್ಲಿ ಕೇಳಿಕೊಂಡಳು. ಆಕೆಯ ಮಾತು ಕೇಳಿ ಮರದ ಕರುಳು ಕರಗಿತು. ಜಗಲೂರೆವ್ವನ ಮಯ್ಯ ಬೆವರಿನ ವಾಸನೆ ಕುಡುದೂ ಕುಡುದು ತನಗೀ ಬಣ್ಣ ಕಸುವು ಲಭಿಸಯ್ತೆ. ಅಲ್ಲಿದ್ದ ತನ್ನನ್ನು ಯಲ್ಲಿಗೆ ತಂದು ಪಾಲಿಸಿ ಘೋಷಿಸಿರುವಳು, ಮೇಕೆಯ ಬೇಡಿಕೇನ ತಿರಸ್ಕರಿಸಿ ರಿಣಗೇಡಿ ಆಗಬಾರದು ಯಂದು ಮುಂತಾಗಿ ರುಕ್ಷ ಯೋಚಿಸಿತು. ಆದರ ಸಡನ್ನಂತ ನಿಲ್ದಾರ ತೆಗೆದುಕೊಳ್ಳಲದಕ ಸಾಧ್ಯಯಿರಲಿಲ್ಲ. ತಾನು ಹೇಳಿ ಕೇಳಿ ತಾಯಿ ಸಾಂಬವಿಯ ಆಗ್ನಾವರ್ತಿಯು, ಆಕೆಯ ಹಂಗು ಅನುಗ್ರಹಗಳಿಂದ ತುಂಬಿ ತುಳುಕಾಡುತಿರುವ ತಾನು ಸೊಸಂತರಾಲೋಚನೆ ಮಾಡಲಕ ಯಷ್ಟರವಳು? ತನ ಗಂಡನ ಸರೀರವನ್ನು ಮುಟ್ಟುವ ಹಕ್ಕನ್ನು ಕಳೆದುಕೊಂಡು ನಿರಾಶ್ರಿತಳಾಗಿರುವ ಜಗಲೂರೆವ್ವಗೆ ತನ್ನ ಬುಡದಲ್ಲಿ ಪುನರೊಸತಿ ಕಲುಪಿಸಿ ಕೊಡೋದು ಯಾವುದೇ ರುಕ್ಷದ ಧರುಮವು, ಕೆಲದಿವಸಗಳ ಯಿದ್ಯಾಮಾನಗಳನ್ನು ನೋಡುತ್ತಿದ್ದರೆ ತಾಯಿ ಸಾಂಬವಿಯ ವಲುಮೆ ಮೇಕೆಯ ಮಾಲ ಯಿರುವುದೊ ಯಿಲ್ಲವೋ ಯಂಬ ಅನುಮಾನ ಬರುವುದು. ಯೇನೇ ಆಗಲಿ, ವಂದು ಮಾತು ತಾಯಿನ ಕೇಳಿದ ಮ್ಯಾಲೆಯೇ ಮುಂದಿನಾಲೋಚನೆ ಮಾಡುವುದೆಂದು ಈ ರುಕ್ಷವು ನಿಲ್ದಾರ ಮಾಡಿತಂತೆ... {{gap}}ತನ್ನೊಂದು ಬೇರನ್ನು ರಾಯಭಾರಿಯನ್ನಾಗಿ ಮೋಬಯ್ಯನ ಸರೀರದೊಳಗಿದ್ದ ಸಾಂಬವಿಯ ಬಳಿಗೆ ಕಳಿಸಿತಂತೆ. ಬೇರು ಅಡಬಿದ್ದು “ತಾಯಿ ಸಾಂಬವೀ.. ನಿನ್ನಂಗೆ ಜಗಲೂರವ್ವ ಕೂಡ ವಂದು ಹೆಣ್ಣು ಅಂಬುದನು ಮರೀಬ್ಯಾಡಪ್ಪಾ”ಯಂದು ಬಖಯಿರು ಸಲ್ಲಿಸಿತಂತೆ. ಬಖಯರ ನ್ನಾಲಿಸಿದ ತಾಯಿಯು.. “ಆಕೆ ದೂರವ ಜಲುಮದಲ್ಲಿ ಪಾಪ ಮಾಡಿರುವಾಕಿ.. ಅಲ್ಲದ ತಾನು ಹೆಣ್ಣಾಗಿ ಜಗಲೂರಜ್ಜನ್ನ ಕುಂತರೂ ನೆನೀತಾಳ.. ನಿಂತರೂ ನೆನೀತಾಳ. ಆಕೆಯಂಥ ಹೆಣುಮಕ್ಕಳಿಗೆ ಬುದ್ದಿ ಕಲಿಸುವ ಸಲುವಾಗೇ ನಾನಾಕೆಯ ಗಂಡನ ಸರೀರದಲ್ಲಿ ವಸ್ತಿ ಮಾಡಿರೋದು. ನಾನಾ ಯದವಾದ ಪರೀಕ್ಕೇಲಿ ಗೆದ್ದ ಮಾಲೀss ಆಕೆಗೆ ಸುಕ ಸಾಂತಿ ದೊರಕೋದು.. ಅಲ್ಲಿಗಂಟಾ ಆಕೆ ಬಿಸಿಲಾಗಿದ್ದು ತಾಪ ಪಡಲೀ.. ನೆಳ್ಳಾಗಲೀ, ಆಶ್ರಯ ಆಗಲಿ ಕೊಡಕೂಡದಂತಾ ಮರದವ್ವಗೆ ಹೇಳು” ಯಂದು ಹೇಳಿದಳಂತೆ. ಅದಕಿದ್ದು ರಾಯಭಾರಿಯು “ತಾಯಿss...<noinclude><references/></noinclude> erl12xscqb7xkbjsahnn2m3uozdmhm4 ಪುಟ:ಅರಮನೆ.pdf/೮೧ 104 77166 322586 320040 2026-05-26T05:29:31Z Hariprasad Shetty10 7490 322586 proofread-page text/x-wiki <noinclude><pagequality level="1" user="Akasmita" /> {{rh|left=೫೦|center=|right=ಅರಮನೆ}}</noinclude>ಮಟ ನೋಡೇ ನೋಡಿದಳು. ಗುರುತು ಸಿಗಲಿಲ್ಲ. ಆಗಿದ್ದು ವುಸುರಳತೆ ವಳಿತದೊಳಗೆ ನಿಂತು "ಯಾರು ತಾಯಿ ತಾವುದಾರು? ತಮ್ಮ ನಾಮಾಂಕಿತ ಯೇನು?” ಯೆಂದು ಕೇಳಿದಳು. ಅದಕಾಕೆಯು ಕೇಳೆನ್ನ ಹೆಸರಾss ಯಿದರ ಮಜನೂರಾss ಯೀರೇಳು ಲೋಕದೊಳಗ ನನಗ ದರುಮ ದೇವತೇ, ದರುಮ ದೇವತೆ ಯಂದು ಕರಿತಾರವ್ವಾ........ ನಾನು ಹೊಂಟು ಬಂದಿರೋದು ತೀರ ಯಾತ್ರಾಮಾಡಲಕ್ಕೋಸ್ಕರಾ........ ಸಂಗಡಿಲ್ಲ ಯಾರಾ.. ದಾರಿ ಬಲು ದೂರಾ........ ನಾವಿಬ್ಬರು ಕೂಡೇ ಹೋಗೋಣು ಬಾರಾss” ಯಂದು ತನ್ನ ನ ಗುರುತ ಹೇಳಿಕೊಂಡಳು. ಅದಕಿದ್ದು ಸರಣೆ “ನಿನ್ನ ಹೆಸರು ಕೇಳಿದ್ದೆ, ನೋಡಿರಲಿಲ್ಲವಾ.. ನಿನ್ನದು ಯಾವ ದೇಸ? ಯಾವ ಕಡೇಕ ಪ್ರಯಾಣ ಬೆಳೆಸೀ ತಾಯಿ? ಯಂದು ಕೇಳಲದಕ ಆಕೆಯು ನಾನು ಹಸ್ತಿನಾವತಿಯನ್ನಾಳಿದ ಅರಶಮ್ರನೆಂಬುವ ಸೂರನ ಮಗಳು.. ಕಾಸೀ ಯಾತ್ರಾಮಾಡಲಕಂತ ಹೊಂಟು ಬಂದೀನಿ.. ಗಂಗಾ ನದೀಲಿ ಜಳಕಾ ಮಾಡಿ ಸ್ನಾಥಸ್ವಾಮಿಯ ದರುಸನ ಪಡೆಯಬೇಕೆಂಬೊ ಉಚ್ಚಾ ಅದ.. ಯಷ್ಟೋ ವರುಸುಗಳಿಂದ ವಂದೇ ಸಮಕ ನಡೀತಾ ಅದೀನಿ.. ಕಾಶೀ ಯದುರಿಗೆ ಬರುವಲ್ಲದು, ನದೀರೂಪೀ ಗಂಗಮ್ಮ ತಾಯಿ ಯದುರಿಗೆ ಬರುವಲ್ಲಳು.. ಹಾದಿ ಸವೆವಲ್ಲದು.. ಜೊತೇಲಿ ಬ್ಯಾರೆ ಯಾರೂ ಯಿಲ್ಲ. ನೀನಾರ ಬರಬೇಕು ನೋಡು ತಂಗಿ..” ಯಂದು ಹೇಳಿದಳು.<br /> ಅದನು ಕೇಳಿ ಚನ್ನವ್ವನ ಆನಂದಕ ಪಾರವೇ ಯಿಲ್ಲದಂಗಾತು. ತನ್ನನ್ನು ತಂಗೀ ಅಂತ ಗುರುತಿಸೋರು ವಬ್ದಾರಾರ ಅದಾರಲ್ಲ ಯಂದು ಸಮಾಧಾನಪಟ್ಟುಕೊಂಡಳು. ತನಗ ಅಕ್ಕನ ಸ್ಥಾನದಲ್ಲಿರುವಾಕಿ ಧರುಮದೇವತೆ ಅವುದೋ, ಅಲ್ಲಮೋ ಯಂಬ ಅನುಮಾನ ಬಂತು. ಸನೀಕ ಹೋಗಿ ಅಪಾದಮಸ್ತಕ ನೋಡಿದಳು. ಸಾಣಾ ಮಾಡದ ಯೇಸು ಕಾಲವಾಗಿರುವುದೋ, ಹರಕಲು ಬರಕಲು ಕಿಮುಟು ಮಯ್ಲಿಗೆ ಮಾಸಿರೋ ಸೀರೆ ಕುಬುಸ ವುಟಕೊಂಡಾಳ.. ನಡದೂ ನಡದೂ ಆಕೆಯ ಕಾಲುಗಳು ಸೀದು ಕರಕಿಟ್ಟು ಹೋದಂಗದಾವ.. ತನಗೇನೀಕಿ ಆರೀದಾಕೆಯಲ್ಲ.. ಯೇಸೋ ಯುಗಗಳ ಹಿಂದ ತಾನೀನ ನೋಡಿರುವಂಥ ನೆನಪುಂಟು. ಆಗ ಹಾಲಲಿ ಕಯ್ಯ ತೊಳಕಂಡು ಮುಟ್ಟಂಗ ಬಲು ಛಂದಕ ಯಿದ್ದಳು.. ಹೆಂಗಿದ್ದಾಕೆ ಹಿಂಗಾಗಿಬುಟ್ಟವಳಲ್ಲ.. ಯಂದು ಮನದೊಳಗೆ ಮರುಗಿ “ಅಕ್ಕಾ.. ನಿನ್ನ ದುಸನದಿಂದ ನಾನು ಪಾವನಳಾದೆನು. ನಿನ್ನ ಅವನ ನೋಡಿ ದುಕ್ಕಿತಳಾದೆನು, ನೀನು ಮಜ್ಜಣ ಮಾಡಲಕ ಯಲ್ಲಾದವಕ್ಕಾ ಹೊಳೆ ಹಳ್ಳ ನದಿಗಳು,<noinclude><references/></noinclude> 29l5g6upk8lxja6s3c8680czdmnelw2 322587 322586 2026-05-26T05:30:13Z Hariprasad Shetty10 7490 322587 proofread-page text/x-wiki <noinclude><pagequality level="1" user="Akasmita" /> {{rh|left=೫೦|center=|right=ಅರಮನೆ}}</noinclude>ಮಟ ನೋಡೇ ನೋಡಿದಳು. ಗುರುತು ಸಿಗಲಿಲ್ಲ. ಆಗಿದ್ದು ವುಸುರಳತೆ ವಳಿತದೊಳಗೆ ನಿಂತು "ಯಾರು ತಾಯಿ ತಾವುದಾರು? ತಮ್ಮ ನಾಮಾಂಕಿತ ಯೇನು?” ಯೆಂದು ಕೇಳಿದಳು. ಅದಕಾಕೆಯು ಕೇಳೆನ್ನ ಹೆಸರಾss ಯಿದರ ಮಜನೂರಾss ಯೀರೇಳು ಲೋಕದೊಳಗ ನನಗ ದರುಮ ದೇವತೇ, ದರುಮ ದೇವತೆ ಯಂದು ಕರಿತಾರವ್ವಾ........ ನಾನು ಹೊಂಟು ಬಂದಿರೋದು ತೀರ ಯಾತ್ರಾಮಾಡಲಕ್ಕೋಸ್ಕರಾ........ ಸಂಗಡಿಲ್ಲ ಯಾರಾ.. ದಾರಿ ಬಲು ದೂರಾ........ ನಾವಿಬ್ಬರು ಕೂಡೇ ಹೋಗೋಣು ಬಾರಾss” ಯಂದು ತನ್ನ ನ ಗುರುತ ಹೇಳಿಕೊಂಡಳು. ಅದಕಿದ್ದು ಸರಣೆ “ನಿನ್ನ ಹೆಸರು ಕೇಳಿದ್ದೆ, ನೋಡಿರಲಿಲ್ಲವಾ.. ನಿನ್ನದು ಯಾವ ದೇಸ? ಯಾವ ಕಡೇಕ ಪ್ರಯಾಣ ಬೆಳೆಸೀ ತಾಯಿ? ಯಂದು ಕೇಳಲದಕ ಆಕೆಯು ನಾನು ಹಸ್ತಿನಾವತಿಯನ್ನಾಳಿದ ಅರಶಮ್ರನೆಂಬುವ ಸೂರನ ಮಗಳು.. ಕಾಸೀ ಯಾತ್ರಾಮಾಡಲಕಂತ ಹೊಂಟು ಬಂದೀನಿ.. ಗಂಗಾ ನದೀಲಿ ಜಳಕಾ ಮಾಡಿ ಸ್ನಾಥಸ್ವಾಮಿಯ ದರುಸನ ಪಡೆಯಬೇಕೆಂಬೊ ಉಚ್ಚಾ ಅದ.. ಯಷ್ಟೋ ವರುಸುಗಳಿಂದ ವಂದೇ ಸಮಕ ನಡೀತಾ ಅದೀನಿ.. ಕಾಶೀ ಯದುರಿಗೆ ಬರುವಲ್ಲದು, ನದೀರೂಪೀ ಗಂಗಮ್ಮ ತಾಯಿ ಯದುರಿಗೆ ಬರುವಲ್ಲಳು.. ಹಾದಿ ಸವೆವಲ್ಲದು.. ಜೊತೇಲಿ ಬ್ಯಾರೆ ಯಾರೂ ಯಿಲ್ಲ. ನೀನಾರ ಬರಬೇಕು ನೋಡು ತಂಗಿ..” ಯಂದು ಹೇಳಿದಳು.<br /> {{gap}}ಅದನು ಕೇಳಿ ಚನ್ನವ್ವನ ಆನಂದಕ ಪಾರವೇ ಯಿಲ್ಲದಂಗಾತು. ತನ್ನನ್ನು ತಂಗೀ ಅಂತ ಗುರುತಿಸೋರು ವಬ್ದಾರಾರ ಅದಾರಲ್ಲ ಯಂದು ಸಮಾಧಾನಪಟ್ಟುಕೊಂಡಳು. ತನಗ ಅಕ್ಕನ ಸ್ಥಾನದಲ್ಲಿರುವಾಕಿ ಧರುಮದೇವತೆ ಅವುದೋ, ಅಲ್ಲಮೋ ಯಂಬ ಅನುಮಾನ ಬಂತು. ಸನೀಕ ಹೋಗಿ ಅಪಾದಮಸ್ತಕ ನೋಡಿದಳು. ಸಾಣಾ ಮಾಡದ ಯೇಸು ಕಾಲವಾಗಿರುವುದೋ, ಹರಕಲು ಬರಕಲು ಕಿಮುಟು ಮಯ್ಲಿಗೆ ಮಾಸಿರೋ ಸೀರೆ ಕುಬುಸ ವುಟಕೊಂಡಾಳ.. ನಡದೂ ನಡದೂ ಆಕೆಯ ಕಾಲುಗಳು ಸೀದು ಕರಕಿಟ್ಟು ಹೋದಂಗದಾವ.. ತನಗೇನೀಕಿ ಆರೀದಾಕೆಯಲ್ಲ.. ಯೇಸೋ ಯುಗಗಳ ಹಿಂದ ತಾನೀನ ನೋಡಿರುವಂಥ ನೆನಪುಂಟು. ಆಗ ಹಾಲಲಿ ಕಯ್ಯ ತೊಳಕಂಡು ಮುಟ್ಟಂಗ ಬಲು ಛಂದಕ ಯಿದ್ದಳು.. ಹೆಂಗಿದ್ದಾಕೆ ಹಿಂಗಾಗಿಬುಟ್ಟವಳಲ್ಲ.. ಯಂದು ಮನದೊಳಗೆ ಮರುಗಿ “ಅಕ್ಕಾ.. ನಿನ್ನ ದುಸನದಿಂದ ನಾನು ಪಾವನಳಾದೆನು. ನಿನ್ನ ಅವನ ನೋಡಿ ದುಕ್ಕಿತಳಾದೆನು, ನೀನು ಮಜ್ಜಣ ಮಾಡಲಕ ಯಲ್ಲಾದವಕ್ಕಾ ಹೊಳೆ ಹಳ್ಳ ನದಿಗಳು,<noinclude><references/></noinclude> 0ivcd1dwx4o4v2atvk6drrj13tfcri1 322588 322587 2026-05-26T05:34:16Z Hariprasad Shetty10 7490 /* Proofread */ 322588 proofread-page text/x-wiki <noinclude><pagequality level="3" user="Hariprasad Shetty10" /> {{rh|left=೫೦|center=|right=ಅರಮನೆ}}</noinclude>ಮಟ ನೋಡೇ ನೋಡಿದಳು. ಗುರುತು ಸಿಗಲಿಲ್ಲ. ಆಗಿದ್ದು ವುಸುರಳತೆ ವಳಿತದೊಳಗೆ ನಿಂತು "ಯಾರು ತಾಯಿ ತಾವುದಾರು? ತಮ್ಮ ನಾಮಾಂಕಿತ ಯೇನು?” ಯೆಂದು ಕೇಳಿದಳು. ಅದಕಾಕೆಯು ಕೇಳೆನ್ನ ಹೆಸರಾss ಯಿದರ ಮಜನೂರಾss ಯೀರೇಳು ಲೋಕದೊಳಗ ನನಗ ದರುಮ ದೇವತೇ, ದರುಮ ದೇವತೆ ಯಂದು ಕರಿತಾರವ್ವಾ........ ನಾನು ಹೊಂಟು ಬಂದಿರೋದು ತೀರ ಯಾತ್ರಾಮಾಡಲಕ್ಕೋಸ್ಕರಾ........ ಸಂಗಡಿಲ್ಲ ಯಾರಾ.. ದಾರಿ ಬಲು ದೂರಾ........ ನಾವಿಬ್ಬರು ಕೂಡೇ ಹೋಗೋಣು ಬಾರಾss” ಯಂದು ತನ್ನ ನ ಗುರುತ ಹೇಳಿಕೊಂಡಳು. ಅದಕಿದ್ದು ಸರಣೆ “ನಿನ್ನ ಹೆಸರು ಕೇಳಿದ್ದೆ, ನೋಡಿರಲಿಲ್ಲವಾ.. ನಿನ್ನದು ಯಾವ ದೇಸ? ಯಾವ ಕಡೇಕ ಪ್ರಯಾಣ ಬೆಳೆಸೀ ತಾಯಿ? ಯಂದು ಕೇಳಲದಕ ಆಕೆಯು ನಾನು ಹಸ್ತಿನಾವತಿಯನ್ನಾಳಿದ ಅರಶಮ್ರನೆಂಬುವ ಸೂರನ ಮಗಳು.. ಕಾಸೀ ಯಾತ್ರಾಮಾಡಲಕಂತ ಹೊಂಟು ಬಂದೀನಿ.. ಗಂಗಾ ನದೀಲಿ ಜಳಕಾ ಮಾಡಿ ಸ್ನಾಥಸ್ವಾಮಿಯ ದರುಸನ ಪಡೆಯಬೇಕೆಂಬೊ ಉಚ್ಚಾ ಅದ.. ಯಷ್ಟೋ ವರುಸುಗಳಿಂದ ವಂದೇ ಸಮಕ ನಡೀತಾ ಅದೀನಿ.. ಕಾಶೀ ಯದುರಿಗೆ ಬರುವಲ್ಲದು, ನದೀರೂಪೀ ಗಂಗಮ್ಮ ತಾಯಿ ಯದುರಿಗೆ ಬರುವಲ್ಲಳು.. ಹಾದಿ ಸವೆವಲ್ಲದು.. ಜೊತೇಲಿ ಬ್ಯಾರೆ ಯಾರೂ ಯಿಲ್ಲ. ನೀನಾರ ಬರಬೇಕು ನೋಡು ತಂಗಿ..” ಯಂದು ಹೇಳಿದಳು.<br /> {{gap}}ಅದನು ಕೇಳಿ ಚನ್ನವ್ವನ ಆನಂದಕ ಪಾರವೇ ಯಿಲ್ಲದಂಗಾತು. ತನ್ನನ್ನು ತಂಗೀ ಅಂತ ಗುರುತಿಸೋರು ವಬ್ದಾರಾರ ಅದಾರಲ್ಲ ಯಂದು ಸಮಾಧಾನಪಟ್ಟುಕೊಂಡಳು. ತನಗ ಅಕ್ಕನ ಸ್ಥಾನದಲ್ಲಿರುವಾಕಿ ಧರುಮದೇವತೆ ಅವುದೋ, ಅಲ್ಲಮೋ ಯಂಬ ಅನುಮಾನ ಬಂತು. ಸನೀಕ ಹೋಗಿ ಅಪಾದಮಸ್ತಕ ನೋಡಿದಳು. ಸಾಣಾ ಮಾಡದ ಯೇಸು ಕಾಲವಾಗಿರುವುದೋ, ಹರಕಲು ಬರಕಲು ಕಿಮುಟು ಮಯ್ಲಿಗೆ ಮಾಸಿರೋ ಸೀರೆ ಕುಬುಸ ವುಟಕೊಂಡಾಳ.. ನಡದೂ ನಡದೂ ಆಕೆಯ ಕಾಲುಗಳು ಸೀದು ಕರಕಿಟ್ಟು ಹೋದಂಗದಾವ.. ತನಗೇನೀಕಿ ಆರೀದಾಕೆಯಲ್ಲ.. ಯೇಸೋ ಯುಗಗಳ ಹಿಂದ ತಾನೀನ ನೋಡಿರುವಂಥ ನೆನಪುಂಟು. ಆಗ ಹಾಲಲಿ ಕಯ್ಯ ತೊಳಕಂಡು ಮುಟ್ಟಂಗ ಬಲು ಛಂದಕ ಯಿದ್ದಳು.. ಹೆಂಗಿದ್ದಾಕೆ ಹಿಂಗಾಗಿಬುಟ್ಟವಳಲ್ಲ.. ಯಂದು ಮನದೊಳಗೆ ಮರುಗಿ “ಅಕ್ಕಾ.. ನಿನ್ನ ದುಸನದಿಂದ ನಾನು ಪಾವನಳಾದೆನು. ನಿನ್ನ ಅವನ ನೋಡಿ ದುಕ್ಕಿತಳಾದೆನು, ನೀನು ಮಜ್ಜಣ ಮಾಡಲಕ ಯಲ್ಲಾದವಕ್ಕಾ ಹೊಳೆ ಹಳ್ಳ ನದಿಗಳು,<noinclude><references/></noinclude> alcnleoobzxuu1re5t19u2x5b06m7io 322599 322588 2026-05-26T05:44:47Z Pragathi. BH 7585 /* Validated */ 322599 proofread-page text/x-wiki <noinclude><pagequality level="4" user="Pragathi. BH" /> {{rh|left=೫೦|center=|right=ಅರಮನೆ}}</noinclude>ಮಟ ನೋಡೇ ನೋಡಿದಳು. ಗುರುತು ಸಿಗಲಿಲ್ಲ. ಆಗಿದ್ದು ವುಸುರಳತೆ ವಳಿತದೊಳಗೆ ನಿಂತು "ಯಾರು ತಾಯಿ ತಾವುದಾರು? ತಮ್ಮ ನಾಮಾಂಕಿತ ಯೇನು?” ಯೆಂದು ಕೇಳಿದಳು. ಅದಕಾಕೆಯು ಕೇಳೆನ್ನ ಹೆಸರಾss ಯಿದರ ಮಜನೂರಾss ಯೀರೇಳು ಲೋಕದೊಳಗ ನನಗ ದರುಮ ದೇವತೇ, ದರುಮ ದೇವತೆ ಯಂದು ಕರಿತಾರವ್ವಾ........ ನಾನು ಹೊಂಟು ಬಂದಿರೋದು ತೀರ ಯಾತ್ರಾಮಾಡಲಕ್ಕೋಸ್ಕರಾ........ ಸಂಗಡಿಲ್ಲ ಯಾರಾ.. ದಾರಿ ಬಲು ದೂರಾ........ ನಾವಿಬ್ಬರು ಕೂಡೇ ಹೋಗೋಣು ಬಾರಾss” ಯಂದು ತನ್ನ ನ ಗುರುತ ಹೇಳಿಕೊಂಡಳು. ಅದಕಿದ್ದು ಸರಣೆ “ನಿನ್ನ ಹೆಸರು ಕೇಳಿದ್ದೆ, ನೋಡಿರಲಿಲ್ಲವಾ.. ನಿನ್ನದು ಯಾವ ದೇಸ? ಯಾವ ಕಡೇಕ ಪ್ರಯಾಣ ಬೆಳೆಸೀ ತಾಯಿ? ಯಂದು ಕೇಳಲದಕ ಆಕೆಯು ನಾನು ಹಸ್ತಿನಾವತಿಯನ್ನಾಳಿದ ಅರಶಮ್ರನೆಂಬುವ ಸೂರನ ಮಗಳು.. ಕಾಸೀ ಯಾತ್ರಾಮಾಡಲಕಂತ ಹೊಂಟು ಬಂದೀನಿ.. ಗಂಗಾ ನದೀಲಿ ಜಳಕಾ ಮಾಡಿ ಸ್ನಾಥಸ್ವಾಮಿಯ ದರುಸನ ಪಡೆಯಬೇಕೆಂಬೊ ಉಚ್ಚಾ ಅದ.. ಯಷ್ಟೋ ವರುಸುಗಳಿಂದ ವಂದೇ ಸಮಕ ನಡೀತಾ ಅದೀನಿ.. ಕಾಶೀ ಯದುರಿಗೆ ಬರುವಲ್ಲದು, ನದೀರೂಪೀ ಗಂಗಮ್ಮ ತಾಯಿ ಯದುರಿಗೆ ಬರುವಲ್ಲಳು.. ಹಾದಿ ಸವೆವಲ್ಲದು.. ಜೊತೇಲಿ ಬ್ಯಾರೆ ಯಾರೂ ಯಿಲ್ಲ. ನೀನಾರ ಬರಬೇಕು ನೋಡು ತಂಗಿ..” ಯಂದು ಹೇಳಿದಳು.<br /> {{gap}}ಅದನು ಕೇಳಿ ಚನ್ನವ್ವನ ಆನಂದಕ ಪಾರವೇ ಯಿಲ್ಲದಂಗಾತು. ತನ್ನನ್ನು ತಂಗೀ ಅಂತ ಗುರುತಿಸೋರು ವಬ್ದಾರಾರ ಅದಾರಲ್ಲ ಯಂದು ಸಮಾಧಾನಪಟ್ಟುಕೊಂಡಳು. ತನಗ ಅಕ್ಕನ ಸ್ಥಾನದಲ್ಲಿರುವಾಕಿ ಧರುಮದೇವತೆ ಅವುದೋ, ಅಲ್ಲಮೋ ಯಂಬ ಅನುಮಾನ ಬಂತು. ಸನೀಕ ಹೋಗಿ ಅಪಾದಮಸ್ತಕ ನೋಡಿದಳು. ಸಾಣಾ ಮಾಡದ ಯೇಸು ಕಾಲವಾಗಿರುವುದೋ, ಹರಕಲು ಬರಕಲು ಕಿಮುಟು ಮಯ್ಲಿಗೆ ಮಾಸಿರೋ ಸೀರೆ ಕುಬುಸ ವುಟಕೊಂಡಾಳ.. ನಡದೂ ನಡದೂ ಆಕೆಯ ಕಾಲುಗಳು ಸೀದು ಕರಕಿಟ್ಟು ಹೋದಂಗದಾವ.. ತನಗೇನೀಕಿ ಆರೀದಾಕೆಯಲ್ಲ.. ಯೇಸೋ ಯುಗಗಳ ಹಿಂದ ತಾನೀನ ನೋಡಿರುವಂಥ ನೆನಪುಂಟು. ಆಗ ಹಾಲಲಿ ಕಯ್ಯ ತೊಳಕಂಡು ಮುಟ್ಟಂಗ ಬಲು ಛಂದಕ ಯಿದ್ದಳು.. ಹೆಂಗಿದ್ದಾಕೆ ಹಿಂಗಾಗಿಬುಟ್ಟವಳಲ್ಲ.. ಯಂದು ಮನದೊಳಗೆ ಮರುಗಿ “ಅಕ್ಕಾ.. ನಿನ್ನ ದುಸನದಿಂದ ನಾನು ಪಾವನಳಾದೆನು. ನಿನ್ನ ಅವನ ನೋಡಿ ದುಕ್ಕಿತಳಾದೆನು, ನೀನು ಮಜ್ಜಣ ಮಾಡಲಕ ಯಲ್ಲಾದವಕ್ಕಾ ಹೊಳೆ ಹಳ್ಳ ನದಿಗಳು,<noinclude><references/></noinclude> e64byr0rmrjxuq2v5y94imj09q59r3x ಪುಟ:ಅರಮನೆ.pdf/೧೧೦ 104 77193 322581 169903 2026-05-26T05:22:45Z Hariprasad Shetty10 7490 322581 proofread-page text/x-wiki <noinclude><pagequality level="1" user="Akasmita" />{{rh|left=ಅರಮನೆ|center=|right=೭೯}}</noinclude>ಯೀ ಸಮುಸ್ತಾನವನ್ನು ರುದಯ ಯಿದ್ರಾವಕವಾಗಿ ಯೀ ಅವಸ್ಥೆಗೆ ತಂದಿರುವ, ಯಿನಾ ಕಾರಣ ಚರಾಸ್ತಿಯನ್ನು ಮುಟ್ಟುಗೋಲು ಹಾಕ್ಕೊಂಡಿರುವ, ಸ್ಥಿರಾಸ್ತಿಯ ಯಜಮಾನಿಕೆಯನ್ನು ಸ್ಥಗಿತಗೊಳಿಸಿರುವ ಯಡ್ಡವರುಡಿಗೆ ಯಷ್ಟು ವರುಷ ತುಂಬಿದರೇನು? ಅಲ್ಲಿಗೆ ಹೋಗುವುದರಿಂದ ಅರಮನೆಗಾಗುವ ಲಾಭಯೇನು? ಯಂಬಿವೇ ಮೊದಲಾದ ಲೆಕ್ಕಾಚಾರಗಳಿಂದ ಆಕೆಯು ರಾಜಪೋಷಾಕನ್ನು ಕಬ್ಬಿಣ ಪೆಟಾರಿ ತೆಗೆದುಕೊಡುವ ಗೋಜಿಗೆ ಹೋಗಿರಲಿಲ್ಲ. ಪಿಕದಾನಿಯನ್ನು ಅಪಹರಿಸಲು ಹಿಂದೆ ಮುಂದೆ ನೋಡದವನು ರಾಜಪೋಷಾಕನ್ನು ಯಾರಿಗಾದರೂ ಮಾರದಿರುತ್ತಾನೆಯೇ? ಬಂದ ಹಣವನ್ನು ಚದುರಂಗ ದಾಟಕ್ಕೆ ಪಣ ವಡ್ಡದಿರುತ್ತಾನೆಯೇ? ಅಲ್ಲದೆ ಅವಯ್ಯ ಮುಗಬೊಟ್ಟುಗಳೆಂದರ ಮೂಗು ಕುಮ್ಮಿಸಿಕೊಳ್ಳುತ್ತಾನೆ ಯಂಬ ಸಾರುವಜನಿಕ ದೂರುಗಳುಂಟು. ಆ ವಂದು ಗಳಿಗೆ ವಳಗ ರಾಜಮಾತೆ ತನ್ನ ಬಗ್ಗೆ ಊಹಿಸಿಕೊಂಡಳೆಂಬ ಸಂಗತಿ ಗೊತ್ತಿದ್ದೇ ಕಾಟಯ್ಯ ಕಾಡಿದ, ಬೇಡಿದ. ಕೊನೆಗೆ ದಿಕ್ಕರಿಸಿ ಮಾತಾಡಿದ. ನೀವು ಹಡದಾಕಿಯಾಗಿದ್ದರೆ ನನ್ನನ್ನಲ್ಲಿಗೆ ಕಳಿಸದೆ ಯಿರುತ್ತಿರಲಿಲ್ಲ ಯಂದಾಡಿ ರಾಜಮಾತೆಯ ಕರುಳಿಗೆ ಬರೆಯೆಳೆದಿದ್ದ. ಆ ಕ್ಷಣದಿಂದ ಅವರಿಬ್ಬರ ನಡುವೆ ಮಾತುಕತೆ ಸ್ಥಿರಾಸ್ತಿಯಂತೆ ಸ್ಥಗಿತಗೊಂಡಿತ್ತು. {{gap}}ಸಣ ಕೂಸಿನಂತೆ ಚಂಡಿ ಹಿಡಿದಾತನು ಅಳುತ್ತಿದ್ದಾಗ ಅಷ್ಟೇ ಪ್ರಮಾಣದಲ್ಲಿ ಅಮಲೇರಿದ್ದರೂ ವಾಸ್ತವವನ್ನು ಅದ್ಧಮಾಡಿಕೊಂಡಿದ್ದ. ಮುವ್ವರು ಆತನನ್ನು ಪರಿಪರಿಯಿಂದ ರಮಿಸುತ್ತಿದ್ದಾಗ ವುರಗಯ್ಯನು ಅಲ್ಲಿಗೆ ಹೋದನು. ತಾನು ಬಂದ ಕಾರಣವನ್ನು ವರಿಸಿದನು. ಸಿಮ್ಮಾಸನದ ಮ್ಯಾಲ ಕೂಡಲಿ, ಬಿಡಲಿ ರಾಜಮಾತೆ ರಾಜಮಾತೆಯೇ.. ಯಂಬ ಕಾರಣಕ್ಕೆ ವುನ್ನತ ದರೈಯವರಾದ ಆ ಮುವ್ವರು ಅಮಲೇರಿಸುವುದರಲ್ಲಿ, ಅಮಲಿಳಿಸುವುದರಲ್ಲಿ ನಿಷ್ಣಾತರಾಗಿದ್ದ ಆ ಮುವ್ವರು ಬಗೆ ಬಗೆ ರೀತಿಯಲ್ಲಿ ಪ್ರಯತ್ನಿಸಿ ಕಾಟಯ್ಯನ ತಲೆಯಲ್ಲಮರಿದ್ದ ಅಮಲನ್ನು ಪಾದದುಂಗುಟದವರೆಗೆ ಯಿಳಿಸುವುದರಲ್ಲಿ ಅಂತೂ ಯಿಂತೂ ಯಶಸ್ವಿಯಾದರು. ಅಂಗಯಿಕಲನನ್ನು ನಡೆಸಿಕೊಂಡು ಬರುವಂತೆ ನಡೆಸಿಕೊಂಡು ಬಂದು ಅರಮನೆ ತಲುಪಿ ತಮ್ಮನ್ನು ಹಾಗೂ ನಾಯಕರನ್ನೂ ಕ್ಷಮಾ ಮಾಡುವಂತೆ ರಾಜಮಾತೆಯಲ್ಲಿ ಯಿನಂತಿಸಿಕೊಂಡರು. ಕುಂಪಣಿ ಸರಕಾರ ಕುದುರೆಡವು ಸಮುಸ್ಥಾನವನ್ನು ಕಬ್ಬಾ ಮಾಡಿಕೊಂಡಂದಿನಿಂದ ದಣಿವರಿಯದೆ ಕ್ಷಮಾ ಮಾಡುತ್ತ ಬಂದಿರುವ.. ಅದೇ ಅಭ್ಯಾಸವಾಗಿರುವ ರಾಜಮಾತೆ ಕಾಟಂಯ್ಯನನ್ನು ತಬ್ಬಿ ಕೊಂಡಳು. ನಾಕು ಅಕ್ಕರಂತ ಮಾತಾಡಿ<noinclude><references/></noinclude> 25wz3jxcq9taisx8rs4rohecoqhugha 322582 322581 2026-05-26T05:23:51Z Hariprasad Shetty10 7490 322582 proofread-page text/x-wiki <noinclude><pagequality level="1" user="Akasmita" />{{rh|left=ಅರಮನೆ|center=|right=೭೯}}</noinclude>ಯೀ ಸಮುಸ್ತಾನವನ್ನು ರುದಯ ಯಿದ್ರಾವಕವಾಗಿ ಯೀ ಅವಸ್ಥೆಗೆ ತಂದಿರುವ, ಯಿನಾ ಕಾರಣ ಚರಾಸ್ತಿಯನ್ನು ಮುಟ್ಟುಗೋಲು ಹಾಕ್ಕೊಂಡಿರುವ, ಸ್ಥಿರಾಸ್ತಿಯ ಯಜಮಾನಿಕೆಯನ್ನು ಸ್ಥಗಿತಗೊಳಿಸಿರುವ ಯಡ್ಡವರುಡಿಗೆ ಯಷ್ಟು ವರುಷ ತುಂಬಿದರೇನು? ಅಲ್ಲಿಗೆ ಹೋಗುವುದರಿಂದ ಅರಮನೆಗಾಗುವ ಲಾಭಯೇನು? ಯಂಬಿವೇ ಮೊದಲಾದ ಲೆಕ್ಕಾಚಾರಗಳಿಂದ ಆಕೆಯು ರಾಜಪೋಷಾಕನ್ನು ಕಬ್ಬಿಣ ಪೆಟಾರಿ ತೆಗೆದುಕೊಡುವ ಗೋಜಿಗೆ ಹೋಗಿರಲಿಲ್ಲ. ಪಿಕದಾನಿಯನ್ನು ಅಪಹರಿಸಲು ಹಿಂದೆ ಮುಂದೆ ನೋಡದವನು ರಾಜಪೋಷಾಕನ್ನು ಯಾರಿಗಾದರೂ ಮಾರದಿರುತ್ತಾನೆಯೇ? ಬಂದ ಹಣವನ್ನು ಚದುರಂಗ ದಾಟಕ್ಕೆ ಪಣ ವಡ್ಡದಿರುತ್ತಾನೆಯೇ? ಅಲ್ಲದೆ ಅವಯ್ಯ ಮುಗಬೊಟ್ಟುಗಳೆಂದರ ಮೂಗು ಕುಮ್ಮಿಸಿಕೊಳ್ಳುತ್ತಾನೆ ಯಂಬ ಸಾರುವಜನಿಕ ದೂರುಗಳುಂಟು. ಆ ವಂದು ಗಳಿಗೆ ವಳಗ ರಾಜಮಾತೆ ತನ್ನ ಬಗ್ಗೆ ಊಹಿಸಿಕೊಂಡಳೆಂಬ ಸಂಗತಿ ಗೊತ್ತಿದ್ದೇ ಕಾಟಯ್ಯ ಕಾಡಿದ, ಬೇಡಿದ. ಕೊನೆಗೆ ದಿಕ್ಕರಿಸಿ ಮಾತಾಡಿದ. ನೀವು ಹಡದಾಕಿಯಾಗಿದ್ದರೆ ನನ್ನನ್ನಲ್ಲಿಗೆ ಕಳಿಸದೆ ಯಿರುತ್ತಿರಲಿಲ್ಲ ಯಂದಾಡಿ ರಾಜಮಾತೆಯ ಕರುಳಿಗೆ ಬರೆಯೆಳೆದಿದ್ದ. ಆ ಕ್ಷಣದಿಂದ ಅವರಿಬ್ಬರ ನಡುವೆ ಮಾತುಕತೆ ಸ್ಥಿರಾಸ್ತಿಯಂತೆ ಸ್ಥಗಿತಗೊಂಡಿತ್ತು. {{gap}}ಸಣ ಕೂಸಿನಂತೆ ಚಂಡಿ ಹಿಡಿದಾತನು ಅಳುತ್ತಿದ್ದಾಗ ಅಷ್ಟೇ ಪ್ರಮಾಣದಲ್ಲಿ ಅಮಲೇರಿದ್ದರೂ ವಾಸ್ತವವನ್ನು ಅರ್ಥಮಾಡಿಕೊಂಡಿದ್ದ. ಮುವ್ವರು ಆತನನ್ನು ಪರಿಪರಿಯಿಂದ ರಮಿಸುತ್ತಿದ್ದಾಗ ವುರಗಯ್ಯನು ಅಲ್ಲಿಗೆ ಹೋದನು. ತಾನು ಬಂದ ಕಾರಣವನ್ನು ವರಿಸಿದನು. ಸಿಮ್ಮಾಸನದ ಮ್ಯಾಲ ಕೂಡಲಿ, ಬಿಡಲಿ ರಾಜಮಾತೆ ರಾಜಮಾತೆಯೇ.. ಯಂಬ ಕಾರಣಕ್ಕೆ ವುನ್ನತ ದರೈಯವರಾದ ಆ ಮುವ್ವರು ಅಮಲೇರಿಸುವುದರಲ್ಲಿ, ಅಮಲಿಳಿಸುವುದರಲ್ಲಿ ನಿಷ್ಣಾತರಾಗಿದ್ದ ಆ ಮುವ್ವರು ಬಗೆ ಬಗೆ ರೀತಿಯಲ್ಲಿ ಪ್ರಯತ್ನಿಸಿ ಕಾಟಯ್ಯನ ತಲೆಯಲ್ಲಮರಿದ್ದ ಅಮಲನ್ನು ಪಾದದುಂಗುಟದವರೆಗೆ ಯಿಳಿಸುವುದರಲ್ಲಿ ಅಂತೂ ಯಿಂತೂ ಯಶಸ್ವಿಯಾದರು. ಅಂಗಯಿಕಲನನ್ನು ನಡೆಸಿಕೊಂಡು ಬರುವಂತೆ ನಡೆಸಿಕೊಂಡು ಬಂದು ಅರಮನೆ ತಲುಪಿ ತಮ್ಮನ್ನು ಹಾಗೂ ನಾಯಕರನ್ನೂ ಕ್ಷಮಾ ಮಾಡುವಂತೆ ರಾಜಮಾತೆಯಲ್ಲಿ ಯಿನಂತಿಸಿಕೊಂಡರು. ಕುಂಪಣಿ ಸರಕಾರ ಕುದುರೆಡವು ಸಮುಸ್ಥಾನವನ್ನು ಕಬ್ಬಾ ಮಾಡಿಕೊಂಡಂದಿನಿಂದ ದಣಿವರಿಯದೆ ಕ್ಷಮಾ ಮಾಡುತ್ತ ಬಂದಿರುವ.. ಅದೇ ಅಭ್ಯಾಸವಾಗಿರುವ ರಾಜಮಾತೆ ಕಾಟಂಯ್ಯನನ್ನು ತಬ್ಬಿ ಕೊಂಡಳು. ನಾಕು ಅಕ್ಕರೆಯ ಮಾತಾಡಿ<noinclude><references/></noinclude> 1jgzmuvx6rvoyurj9k723e9flvvayxr 322583 322582 2026-05-26T05:24:09Z Hariprasad Shetty10 7490 322583 proofread-page text/x-wiki <noinclude><pagequality level="1" user="Akasmita" />{{rh|left=ಅರಮನೆ|center=|right=೭೯}}</noinclude>ಯೀ ಸಮುಸ್ತಾನವನ್ನು ರುದಯ ಯಿದ್ರಾವಕವಾಗಿ ಯೀ ಅವಸ್ಥೆಗೆ ತಂದಿರುವ, ಯಿನಾ ಕಾರಣ ಚರಾಸ್ತಿಯನ್ನು ಮುಟ್ಟುಗೋಲು ಹಾಕ್ಕೊಂಡಿರುವ, ಸ್ಥಿರಾಸ್ತಿಯ ಯಜಮಾನಿಕೆಯನ್ನು ಸ್ಥಗಿತಗೊಳಿಸಿರುವ ಯಡ್ಡವರುಡಿಗೆ ಯಷ್ಟು ವರುಷ ತುಂಬಿದರೇನು? ಅಲ್ಲಿಗೆ ಹೋಗುವುದರಿಂದ ಅರಮನೆಗಾಗುವ ಲಾಭಯೇನು? ಯಂಬಿವೇ ಮೊದಲಾದ ಲೆಕ್ಕಾಚಾರಗಳಿಂದ ಆಕೆಯು ರಾಜಪೋಷಾಕನ್ನು ಕಬ್ಬಿಣ ಪೆಟಾರಿ ತೆಗೆದುಕೊಡುವ ಗೋಜಿಗೆ ಹೋಗಿರಲಿಲ್ಲ. ಪಿಕದಾನಿಯನ್ನು ಅಪಹರಿಸಲು ಹಿಂದೆ ಮುಂದೆ ನೋಡದವನು ರಾಜಪೋಷಾಕನ್ನು ಯಾರಿಗಾದರೂ ಮಾರದಿರುತ್ತಾನೆಯೇ? ಬಂದ ಹಣವನ್ನು ಚದುರಂಗ ದಾಟಕ್ಕೆ ಪಣ ವಡ್ಡದಿರುತ್ತಾನೆಯೇ? ಅಲ್ಲದೆ ಅವಯ್ಯ ಮುಗಬೊಟ್ಟುಗಳೆಂದರ ಮೂಗು ಕುಮ್ಮಿಸಿಕೊಳ್ಳುತ್ತಾನೆ ಯಂಬ ಸಾರುವಜನಿಕ ದೂರುಗಳುಂಟು. ಆ ವಂದು ಗಳಿಗೆ ವಳಗ ರಾಜಮಾತೆ ತನ್ನ ಬಗ್ಗೆ ಊಹಿಸಿಕೊಂಡಳೆಂಬ ಸಂಗತಿ ಗೊತ್ತಿದ್ದೇ ಕಾಟಯ್ಯ ಕಾಡಿದ, ಬೇಡಿದ. ಕೊನೆಗೆ ದಿಕ್ಕರಿಸಿ ಮಾತಾಡಿದ. ನೀವು ಹಡದಾಕಿಯಾಗಿದ್ದರೆ ನನ್ನನ್ನಲ್ಲಿಗೆ ಕಳಿಸದೆ ಯಿರುತ್ತಿರಲಿಲ್ಲ ಯಂದಾಡಿ ರಾಜಮಾತೆಯ ಕರುಳಿಗೆ ಬರೆಯೆಳೆದಿದ್ದ. ಆ ಕ್ಷಣದಿಂದ ಅವರಿಬ್ಬರ ನಡುವೆ ಮಾತುಕತೆ ಸ್ಥಿರಾಸ್ತಿಯಂತೆ ಸ್ಥಗಿತಗೊಂಡಿತ್ತು.<br /> {{gap}}ಸಣ ಕೂಸಿನಂತೆ ಚಂಡಿ ಹಿಡಿದಾತನು ಅಳುತ್ತಿದ್ದಾಗ ಅಷ್ಟೇ ಪ್ರಮಾಣದಲ್ಲಿ ಅಮಲೇರಿದ್ದರೂ ವಾಸ್ತವವನ್ನು ಅರ್ಥಮಾಡಿಕೊಂಡಿದ್ದ. ಮುವ್ವರು ಆತನನ್ನು ಪರಿಪರಿಯಿಂದ ರಮಿಸುತ್ತಿದ್ದಾಗ ವುರಗಯ್ಯನು ಅಲ್ಲಿಗೆ ಹೋದನು. ತಾನು ಬಂದ ಕಾರಣವನ್ನು ವರಿಸಿದನು. ಸಿಮ್ಮಾಸನದ ಮ್ಯಾಲ ಕೂಡಲಿ, ಬಿಡಲಿ ರಾಜಮಾತೆ ರಾಜಮಾತೆಯೇ.. ಯಂಬ ಕಾರಣಕ್ಕೆ ವುನ್ನತ ದರೈಯವರಾದ ಆ ಮುವ್ವರು ಅಮಲೇರಿಸುವುದರಲ್ಲಿ, ಅಮಲಿಳಿಸುವುದರಲ್ಲಿ ನಿಷ್ಣಾತರಾಗಿದ್ದ ಆ ಮುವ್ವರು ಬಗೆ ಬಗೆ ರೀತಿಯಲ್ಲಿ ಪ್ರಯತ್ನಿಸಿ ಕಾಟಯ್ಯನ ತಲೆಯಲ್ಲಮರಿದ್ದ ಅಮಲನ್ನು ಪಾದದುಂಗುಟದವರೆಗೆ ಯಿಳಿಸುವುದರಲ್ಲಿ ಅಂತೂ ಯಿಂತೂ ಯಶಸ್ವಿಯಾದರು. ಅಂಗಯಿಕಲನನ್ನು ನಡೆಸಿಕೊಂಡು ಬರುವಂತೆ ನಡೆಸಿಕೊಂಡು ಬಂದು ಅರಮನೆ ತಲುಪಿ ತಮ್ಮನ್ನು ಹಾಗೂ ನಾಯಕರನ್ನೂ ಕ್ಷಮಾ ಮಾಡುವಂತೆ ರಾಜಮಾತೆಯಲ್ಲಿ ಯಿನಂತಿಸಿಕೊಂಡರು. ಕುಂಪಣಿ ಸರಕಾರ ಕುದುರೆಡವು ಸಮುಸ್ಥಾನವನ್ನು ಕಬ್ಬಾ ಮಾಡಿಕೊಂಡಂದಿನಿಂದ ದಣಿವರಿಯದೆ ಕ್ಷಮಾ ಮಾಡುತ್ತ ಬಂದಿರುವ.. ಅದೇ ಅಭ್ಯಾಸವಾಗಿರುವ ರಾಜಮಾತೆ ಕಾಟಂಯ್ಯನನ್ನು ತಬ್ಬಿ ಕೊಂಡಳು. ನಾಕು ಅಕ್ಕರೆಯ ಮಾತಾಡಿ<noinclude><references/></noinclude> rsduh55yjdqbrmvnm8g38gnpw80akki 322584 322583 2026-05-26T05:24:18Z Hariprasad Shetty10 7490 /* Proofread */ 322584 proofread-page text/x-wiki <noinclude><pagequality level="3" user="Hariprasad Shetty10" />{{rh|left=ಅರಮನೆ|center=|right=೭೯}}</noinclude>ಯೀ ಸಮುಸ್ತಾನವನ್ನು ರುದಯ ಯಿದ್ರಾವಕವಾಗಿ ಯೀ ಅವಸ್ಥೆಗೆ ತಂದಿರುವ, ಯಿನಾ ಕಾರಣ ಚರಾಸ್ತಿಯನ್ನು ಮುಟ್ಟುಗೋಲು ಹಾಕ್ಕೊಂಡಿರುವ, ಸ್ಥಿರಾಸ್ತಿಯ ಯಜಮಾನಿಕೆಯನ್ನು ಸ್ಥಗಿತಗೊಳಿಸಿರುವ ಯಡ್ಡವರುಡಿಗೆ ಯಷ್ಟು ವರುಷ ತುಂಬಿದರೇನು? ಅಲ್ಲಿಗೆ ಹೋಗುವುದರಿಂದ ಅರಮನೆಗಾಗುವ ಲಾಭಯೇನು? ಯಂಬಿವೇ ಮೊದಲಾದ ಲೆಕ್ಕಾಚಾರಗಳಿಂದ ಆಕೆಯು ರಾಜಪೋಷಾಕನ್ನು ಕಬ್ಬಿಣ ಪೆಟಾರಿ ತೆಗೆದುಕೊಡುವ ಗೋಜಿಗೆ ಹೋಗಿರಲಿಲ್ಲ. ಪಿಕದಾನಿಯನ್ನು ಅಪಹರಿಸಲು ಹಿಂದೆ ಮುಂದೆ ನೋಡದವನು ರಾಜಪೋಷಾಕನ್ನು ಯಾರಿಗಾದರೂ ಮಾರದಿರುತ್ತಾನೆಯೇ? ಬಂದ ಹಣವನ್ನು ಚದುರಂಗ ದಾಟಕ್ಕೆ ಪಣ ವಡ್ಡದಿರುತ್ತಾನೆಯೇ? ಅಲ್ಲದೆ ಅವಯ್ಯ ಮುಗಬೊಟ್ಟುಗಳೆಂದರ ಮೂಗು ಕುಮ್ಮಿಸಿಕೊಳ್ಳುತ್ತಾನೆ ಯಂಬ ಸಾರುವಜನಿಕ ದೂರುಗಳುಂಟು. ಆ ವಂದು ಗಳಿಗೆ ವಳಗ ರಾಜಮಾತೆ ತನ್ನ ಬಗ್ಗೆ ಊಹಿಸಿಕೊಂಡಳೆಂಬ ಸಂಗತಿ ಗೊತ್ತಿದ್ದೇ ಕಾಟಯ್ಯ ಕಾಡಿದ, ಬೇಡಿದ. ಕೊನೆಗೆ ದಿಕ್ಕರಿಸಿ ಮಾತಾಡಿದ. ನೀವು ಹಡದಾಕಿಯಾಗಿದ್ದರೆ ನನ್ನನ್ನಲ್ಲಿಗೆ ಕಳಿಸದೆ ಯಿರುತ್ತಿರಲಿಲ್ಲ ಯಂದಾಡಿ ರಾಜಮಾತೆಯ ಕರುಳಿಗೆ ಬರೆಯೆಳೆದಿದ್ದ. ಆ ಕ್ಷಣದಿಂದ ಅವರಿಬ್ಬರ ನಡುವೆ ಮಾತುಕತೆ ಸ್ಥಿರಾಸ್ತಿಯಂತೆ ಸ್ಥಗಿತಗೊಂಡಿತ್ತು.<br /> {{gap}}ಸಣ ಕೂಸಿನಂತೆ ಚಂಡಿ ಹಿಡಿದಾತನು ಅಳುತ್ತಿದ್ದಾಗ ಅಷ್ಟೇ ಪ್ರಮಾಣದಲ್ಲಿ ಅಮಲೇರಿದ್ದರೂ ವಾಸ್ತವವನ್ನು ಅರ್ಥಮಾಡಿಕೊಂಡಿದ್ದ. ಮುವ್ವರು ಆತನನ್ನು ಪರಿಪರಿಯಿಂದ ರಮಿಸುತ್ತಿದ್ದಾಗ ವುರಗಯ್ಯನು ಅಲ್ಲಿಗೆ ಹೋದನು. ತಾನು ಬಂದ ಕಾರಣವನ್ನು ವರಿಸಿದನು. ಸಿಮ್ಮಾಸನದ ಮ್ಯಾಲ ಕೂಡಲಿ, ಬಿಡಲಿ ರಾಜಮಾತೆ ರಾಜಮಾತೆಯೇ.. ಯಂಬ ಕಾರಣಕ್ಕೆ ವುನ್ನತ ದರೈಯವರಾದ ಆ ಮುವ್ವರು ಅಮಲೇರಿಸುವುದರಲ್ಲಿ, ಅಮಲಿಳಿಸುವುದರಲ್ಲಿ ನಿಷ್ಣಾತರಾಗಿದ್ದ ಆ ಮುವ್ವರು ಬಗೆ ಬಗೆ ರೀತಿಯಲ್ಲಿ ಪ್ರಯತ್ನಿಸಿ ಕಾಟಯ್ಯನ ತಲೆಯಲ್ಲಮರಿದ್ದ ಅಮಲನ್ನು ಪಾದದುಂಗುಟದವರೆಗೆ ಯಿಳಿಸುವುದರಲ್ಲಿ ಅಂತೂ ಯಿಂತೂ ಯಶಸ್ವಿಯಾದರು. ಅಂಗಯಿಕಲನನ್ನು ನಡೆಸಿಕೊಂಡು ಬರುವಂತೆ ನಡೆಸಿಕೊಂಡು ಬಂದು ಅರಮನೆ ತಲುಪಿ ತಮ್ಮನ್ನು ಹಾಗೂ ನಾಯಕರನ್ನೂ ಕ್ಷಮಾ ಮಾಡುವಂತೆ ರಾಜಮಾತೆಯಲ್ಲಿ ಯಿನಂತಿಸಿಕೊಂಡರು. ಕುಂಪಣಿ ಸರಕಾರ ಕುದುರೆಡವು ಸಮುಸ್ಥಾನವನ್ನು ಕಬ್ಬಾ ಮಾಡಿಕೊಂಡಂದಿನಿಂದ ದಣಿವರಿಯದೆ ಕ್ಷಮಾ ಮಾಡುತ್ತ ಬಂದಿರುವ.. ಅದೇ ಅಭ್ಯಾಸವಾಗಿರುವ ರಾಜಮಾತೆ ಕಾಟಂಯ್ಯನನ್ನು ತಬ್ಬಿ ಕೊಂಡಳು. ನಾಕು ಅಕ್ಕರೆಯ ಮಾತಾಡಿ<noinclude><references/></noinclude> 2vro17vn71d8ftcf5ujr1v5m19n3zwu 322595 322584 2026-05-26T05:43:30Z Pragathi. BH 7585 /* Validated */ 322595 proofread-page text/x-wiki <noinclude><pagequality level="4" user="Pragathi. BH" />{{rh|left=ಅರಮನೆ|center=|right=೭೯}}</noinclude>ಯೀ ಸಮುಸ್ತಾನವನ್ನು ರುದಯ ಯಿದ್ರಾವಕವಾಗಿ ಯೀ ಅವಸ್ಥೆಗೆ ತಂದಿರುವ, ಯಿನಾ ಕಾರಣ ಚರಾಸ್ತಿಯನ್ನು ಮುಟ್ಟುಗೋಲು ಹಾಕ್ಕೊಂಡಿರುವ, ಸ್ಥಿರಾಸ್ತಿಯ ಯಜಮಾನಿಕೆಯನ್ನು ಸ್ಥಗಿತಗೊಳಿಸಿರುವ ಯಡ್ಡವರುಡಿಗೆ ಯಷ್ಟು ವರುಷ ತುಂಬಿದರೇನು? ಅಲ್ಲಿಗೆ ಹೋಗುವುದರಿಂದ ಅರಮನೆಗಾಗುವ ಲಾಭಯೇನು? ಯಂಬಿವೇ ಮೊದಲಾದ ಲೆಕ್ಕಾಚಾರಗಳಿಂದ ಆಕೆಯು ರಾಜಪೋಷಾಕನ್ನು ಕಬ್ಬಿಣ ಪೆಟಾರಿ ತೆಗೆದುಕೊಡುವ ಗೋಜಿಗೆ ಹೋಗಿರಲಿಲ್ಲ. ಪಿಕದಾನಿಯನ್ನು ಅಪಹರಿಸಲು ಹಿಂದೆ ಮುಂದೆ ನೋಡದವನು ರಾಜಪೋಷಾಕನ್ನು ಯಾರಿಗಾದರೂ ಮಾರದಿರುತ್ತಾನೆಯೇ? ಬಂದ ಹಣವನ್ನು ಚದುರಂಗ ದಾಟಕ್ಕೆ ಪಣ ವಡ್ಡದಿರುತ್ತಾನೆಯೇ? ಅಲ್ಲದೆ ಅವಯ್ಯ ಮುಗಬೊಟ್ಟುಗಳೆಂದರ ಮೂಗು ಕುಮ್ಮಿಸಿಕೊಳ್ಳುತ್ತಾನೆ ಯಂಬ ಸಾರುವಜನಿಕ ದೂರುಗಳುಂಟು. ಆ ವಂದು ಗಳಿಗೆ ವಳಗ ರಾಜಮಾತೆ ತನ್ನ ಬಗ್ಗೆ ಊಹಿಸಿಕೊಂಡಳೆಂಬ ಸಂಗತಿ ಗೊತ್ತಿದ್ದೇ ಕಾಟಯ್ಯ ಕಾಡಿದ, ಬೇಡಿದ. ಕೊನೆಗೆ ದಿಕ್ಕರಿಸಿ ಮಾತಾಡಿದ. ನೀವು ಹಡದಾಕಿಯಾಗಿದ್ದರೆ ನನ್ನನ್ನಲ್ಲಿಗೆ ಕಳಿಸದೆ ಯಿರುತ್ತಿರಲಿಲ್ಲ ಯಂದಾಡಿ ರಾಜಮಾತೆಯ ಕರುಳಿಗೆ ಬರೆಯೆಳೆದಿದ್ದ. ಆ ಕ್ಷಣದಿಂದ ಅವರಿಬ್ಬರ ನಡುವೆ ಮಾತುಕತೆ ಸ್ಥಿರಾಸ್ತಿಯಂತೆ ಸ್ಥಗಿತಗೊಂಡಿತ್ತು.<br /> {{gap}}ಸಣ ಕೂಸಿನಂತೆ ಚಂಡಿ ಹಿಡಿದಾತನು ಅಳುತ್ತಿದ್ದಾಗ ಅಷ್ಟೇ ಪ್ರಮಾಣದಲ್ಲಿ ಅಮಲೇರಿದ್ದರೂ ವಾಸ್ತವವನ್ನು ಅರ್ಥಮಾಡಿಕೊಂಡಿದ್ದ. ಮುವ್ವರು ಆತನನ್ನು ಪರಿಪರಿಯಿಂದ ರಮಿಸುತ್ತಿದ್ದಾಗ ವುರಗಯ್ಯನು ಅಲ್ಲಿಗೆ ಹೋದನು. ತಾನು ಬಂದ ಕಾರಣವನ್ನು ವರಿಸಿದನು. ಸಿಮ್ಮಾಸನದ ಮ್ಯಾಲ ಕೂಡಲಿ, ಬಿಡಲಿ ರಾಜಮಾತೆ ರಾಜಮಾತೆಯೇ.. ಯಂಬ ಕಾರಣಕ್ಕೆ ವುನ್ನತ ದರೈಯವರಾದ ಆ ಮುವ್ವರು ಅಮಲೇರಿಸುವುದರಲ್ಲಿ, ಅಮಲಿಳಿಸುವುದರಲ್ಲಿ ನಿಷ್ಣಾತರಾಗಿದ್ದ ಆ ಮುವ್ವರು ಬಗೆ ಬಗೆ ರೀತಿಯಲ್ಲಿ ಪ್ರಯತ್ನಿಸಿ ಕಾಟಯ್ಯನ ತಲೆಯಲ್ಲಮರಿದ್ದ ಅಮಲನ್ನು ಪಾದದುಂಗುಟದವರೆಗೆ ಯಿಳಿಸುವುದರಲ್ಲಿ ಅಂತೂ ಯಿಂತೂ ಯಶಸ್ವಿಯಾದರು. ಅಂಗಯಿಕಲನನ್ನು ನಡೆಸಿಕೊಂಡು ಬರುವಂತೆ ನಡೆಸಿಕೊಂಡು ಬಂದು ಅರಮನೆ ತಲುಪಿ ತಮ್ಮನ್ನು ಹಾಗೂ ನಾಯಕರನ್ನೂ ಕ್ಷಮಾ ಮಾಡುವಂತೆ ರಾಜಮಾತೆಯಲ್ಲಿ ಯಿನಂತಿಸಿಕೊಂಡರು. ಕುಂಪಣಿ ಸರಕಾರ ಕುದುರೆಡವು ಸಮುಸ್ಥಾನವನ್ನು ಕಬ್ಬಾ ಮಾಡಿಕೊಂಡಂದಿನಿಂದ ದಣಿವರಿಯದೆ ಕ್ಷಮಾ ಮಾಡುತ್ತ ಬಂದಿರುವ.. ಅದೇ ಅಭ್ಯಾಸವಾಗಿರುವ ರಾಜಮಾತೆ ಕಾಟಂಯ್ಯನನ್ನು ತಬ್ಬಿ ಕೊಂಡಳು. ನಾಕು ಅಕ್ಕರೆಯ ಮಾತಾಡಿ<noinclude><references/></noinclude> h9ugonv1jipma3x5aw4qzz7ah47x2dq ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೫೦ 104 80624 322589 190727 2026-05-26T05:36:54Z Hariprasad Shetty10 7490 /* ಪರಿಶೀಲಿಸಲಾಗಿಲ್ಲ */ 322589 proofread-page text/x-wiki <noinclude><pagequality level="1" user="Hariprasad Shetty10" />{{rh|left=|center=ಮತ್ತೆ ಕೆಲವು ಪಂಗಡಗಳು,|right=೨೩}}</noinclude>ರಾದ ದಸ್ಯುಗಳ ಕಪ್ಪು ತೊಗಲನ್ನು ಸುಲಿದು, ಸುಟ್ಟು ಬಿಟ್ಟಿದ್ದಾನೆ. ಇಂದ್ರನು ತಮ್ಮನ್ನು ಎಂತೆಂತಹ ಕಷ್ಟ ಪ್ರಸ೦ಗದೊಳಗೆ ಅನಿಷ್ಟ ನಿವಾ ರಣೆಗೂಳಿಸಿ ತಮ್ಮನ್ನು ಪಾರು ಮಾಡಿದನೆಂಬುದನ್ನು ಬಹು ಸ್ವಾರಸ್ಯ ವಾಗಿ ಹೇಳಿದ್ದಾರೆ. ಇಂದ್ರನು ವೃತ್ರಾಸುರನನ್ನು ಕೊಂದಾಗ ಆತ ನನ್ನು ಹಾಡಿಹಸಿದ ಋಕ್ಕುಗಳು ಕರುಣಾರಸದಿ೦ದ ತುಳು ಕಾಡುತ್ತಿವೆ. ಏನೂ ಅರಿಯದ ಮಗುವು ತನ್ನ ತಾ ? ತಂದೆಗಳೊಡನೆ ತೊ ದಲ್ಕು ಡಿ ಗಳಿ೦ದ ವ. ತನಾಡು ವಂತೆ ಆರ್ಯರು ಇಂದ್ರನನ್ನು ಕುರಿತು ಮಾತಾ ಡಿದ, ಬೇಡಿದ, ಆತನ ಕೀರ್ತಿಯನ್ನು ಹೊಗಳಿದ ಋಕ್ಕುಗಳನ್ನು ಓದಿ ದಿ, ಆರ್ಯರ ನಿರ್ಮಲಾ೦ತಃಕರಣವು ಎಷ್ಟು ಬಲವಾಗಿತ್ತೆಂಬುದನ್ನು ಕ೦ಡು ಮನಸ್ಸು ಹುಚ್ಚಾಗುತ್ತದೆ. ಹಗಲಿರಳು ಇ೦ದ್ರ, ಸರ,,F ಗಳ ತೇಜಸ್ಸಿನ ಉಪಾಸನೆಯಲ್ಲಿಯೇ ತಮ್ಮ ಆಯು ರ್ದಾಯ ನನ್ನಲ್ಲ ಸೂರೆಗೆ ಇoಡಿರುವ ಅರ್ಯರ ಉಜ್ವಲವಾದ ಭಾವನೆಯ , ಅವರ ಉದಾತ್ತವಾದ ಬಾಳುವೆಯ , ಹೇಗಿರಬಹು ದೆ೦ದು ಎ೦ದೊ೦ದು ನಾರೆ ಮನಸ್ಸು ಆ ಸ್ಥಿತಿಗಾಗಿ ಹಾ ರೈ ಎತ್ತದೆ. ಆದರೆ ಆ ಬಾಲಭಾವವೂ, ಆ ಹುಚ್ಚು ಪ್ರಮವೂ ನಮ್ಮಲ್ಲಿ ಮ ಡದೆ ನಮಗೆ ಅದರ ಆನಂದಾನು ಭವವಾಗುವದೆಂತು?<br /> '''ಮತ್ತೆ ಕಲವು ಪಂಗಡಗಳು:'''-ಇಡೀ ಸೃಷ್ಟಿಗೆ ಸೃಷ್ಟಿಯನ್ನೇ ಭಗವಂತನ ರೂಪವೆಂದು ನೋಡುತ್ತಿರುವಂಥ ಆರ್ಯರಿಗೆ ಇ೦ದ್ರನಲ್ಲೆಷ್ಟು ಶ್ರೀಮತಿ ಶಯವೋ ಅಷ್ಟೇ ಅಗ್ನಿ, ಸೂರ್ಯ, ಉಸೆ, ವರುಣ ರಲ್ಲಾದರೂ ಇತ್ತೆಂಬುದು ಅವರ ಸ್ವಡಿ ದವಾದ ಸೊಲ್ಲುಗಳಿಂದ ಮನದಟ್ಟಾಗುವರು; ಇದು ಸಾಮಾನ್ಯವಾಗಿದ್ದರೂ, ವಾಡಿಕೆಯಾಗಿ, ಕೆಲವರಿಗೆ ಇ೦ದ್ರನಲ್ಲಿ ಭಕ್ತಿ, ಮತ್ತೆ ಕೆಲವರಿಗೆ ಅಕ್ಕಿಯನ್ನೇ ಕ೦ಡರೆ ಮೈ ಮರವ, ಇನ್ನು ಕೆಲವರಿಗೆ ಸೂರ್ಯನನ್ನು ನೋಡಿ ಡಿದೊಡನ ಹುಚ್ಚು ಪ್ರೇಮ, ಹೀಗಿರು ವದು ರುಚಿವೈಚಿತ್ರವಷ್ಟೆ? ಅದರಂತೆ ಆರ್ಯರಲ್ಲ ಇದ್ದೇ ಇತ್ತು. ಈ ಜನರ ಭಾವನೆಗಳು ಆಯಾ ದೇವತೆಗಳಲ್ಲಿ ಸ್ಥಿರ ವಾದಂತೆಲ್ಲ ಅವರು ತಮ್ಮ ತಮ್ಮದೆಂದು ಬೇರೆ ಬೇರೆ ಪ೦ಗಡವನ್ನ ಮಾಡಿಕೊಳ್ಳಲಾರಂಭಿಸಿದರು. ಇಂದ್ರನು ಸಮರಸ ಪ್ರಿಯ ಇರುವ<noinclude></noinclude> 5rs06gf2fis9qfb9ovp767vfw76380h 322590 322589 2026-05-26T05:37:07Z Hariprasad Shetty10 7490 /* Problematic */ 322590 proofread-page text/x-wiki <noinclude><pagequality level="2" user="Hariprasad Shetty10" />{{rh|left=|center=ಮತ್ತೆ ಕೆಲವು ಪಂಗಡಗಳು,|right=೨೩}}</noinclude>ರಾದ ದಸ್ಯುಗಳ ಕಪ್ಪು ತೊಗಲನ್ನು ಸುಲಿದು, ಸುಟ್ಟು ಬಿಟ್ಟಿದ್ದಾನೆ. ಇಂದ್ರನು ತಮ್ಮನ್ನು ಎಂತೆಂತಹ ಕಷ್ಟ ಪ್ರಸ೦ಗದೊಳಗೆ ಅನಿಷ್ಟ ನಿವಾ ರಣೆಗೂಳಿಸಿ ತಮ್ಮನ್ನು ಪಾರು ಮಾಡಿದನೆಂಬುದನ್ನು ಬಹು ಸ್ವಾರಸ್ಯ ವಾಗಿ ಹೇಳಿದ್ದಾರೆ. ಇಂದ್ರನು ವೃತ್ರಾಸುರನನ್ನು ಕೊಂದಾಗ ಆತ ನನ್ನು ಹಾಡಿಹಸಿದ ಋಕ್ಕುಗಳು ಕರುಣಾರಸದಿ೦ದ ತುಳು ಕಾಡುತ್ತಿವೆ. ಏನೂ ಅರಿಯದ ಮಗುವು ತನ್ನ ತಾ ? ತಂದೆಗಳೊಡನೆ ತೊ ದಲ್ಕು ಡಿ ಗಳಿ೦ದ ವ. ತನಾಡು ವಂತೆ ಆರ್ಯರು ಇಂದ್ರನನ್ನು ಕುರಿತು ಮಾತಾ ಡಿದ, ಬೇಡಿದ, ಆತನ ಕೀರ್ತಿಯನ್ನು ಹೊಗಳಿದ ಋಕ್ಕುಗಳನ್ನು ಓದಿ ದಿ, ಆರ್ಯರ ನಿರ್ಮಲಾ೦ತಃಕರಣವು ಎಷ್ಟು ಬಲವಾಗಿತ್ತೆಂಬುದನ್ನು ಕ೦ಡು ಮನಸ್ಸು ಹುಚ್ಚಾಗುತ್ತದೆ. ಹಗಲಿರಳು ಇ೦ದ್ರ, ಸರ,,F ಗಳ ತೇಜಸ್ಸಿನ ಉಪಾಸನೆಯಲ್ಲಿಯೇ ತಮ್ಮ ಆಯು ರ್ದಾಯ ನನ್ನಲ್ಲ ಸೂರೆಗೆ ಇoಡಿರುವ ಅರ್ಯರ ಉಜ್ವಲವಾದ ಭಾವನೆಯ , ಅವರ ಉದಾತ್ತವಾದ ಬಾಳುವೆಯ , ಹೇಗಿರಬಹು ದೆ೦ದು ಎ೦ದೊ೦ದು ನಾರೆ ಮನಸ್ಸು ಆ ಸ್ಥಿತಿಗಾಗಿ ಹಾ ರೈ ಎತ್ತದೆ. ಆದರೆ ಆ ಬಾಲಭಾವವೂ, ಆ ಹುಚ್ಚು ಪ್ರಮವೂ ನಮ್ಮಲ್ಲಿ ಮ ಡದೆ ನಮಗೆ ಅದರ ಆನಂದಾನು ಭವವಾಗುವದೆಂತು?<br /> '''ಮತ್ತೆ ಕಲವು ಪಂಗಡಗಳು:'''-ಇಡೀ ಸೃಷ್ಟಿಗೆ ಸೃಷ್ಟಿಯನ್ನೇ ಭಗವಂತನ ರೂಪವೆಂದು ನೋಡುತ್ತಿರುವಂಥ ಆರ್ಯರಿಗೆ ಇ೦ದ್ರನಲ್ಲೆಷ್ಟು ಶ್ರೀಮತಿ ಶಯವೋ ಅಷ್ಟೇ ಅಗ್ನಿ, ಸೂರ್ಯ, ಉಸೆ, ವರುಣ ರಲ್ಲಾದರೂ ಇತ್ತೆಂಬುದು ಅವರ ಸ್ವಡಿ ದವಾದ ಸೊಲ್ಲುಗಳಿಂದ ಮನದಟ್ಟಾಗುವರು; ಇದು ಸಾಮಾನ್ಯವಾಗಿದ್ದರೂ, ವಾಡಿಕೆಯಾಗಿ, ಕೆಲವರಿಗೆ ಇ೦ದ್ರನಲ್ಲಿ ಭಕ್ತಿ, ಮತ್ತೆ ಕೆಲವರಿಗೆ ಅಕ್ಕಿಯನ್ನೇ ಕ೦ಡರೆ ಮೈ ಮರವ, ಇನ್ನು ಕೆಲವರಿಗೆ ಸೂರ್ಯನನ್ನು ನೋಡಿ ಡಿದೊಡನ ಹುಚ್ಚು ಪ್ರೇಮ, ಹೀಗಿರು ವದು ರುಚಿವೈಚಿತ್ರವಷ್ಟೆ? ಅದರಂತೆ ಆರ್ಯರಲ್ಲ ಇದ್ದೇ ಇತ್ತು. ಈ ಜನರ ಭಾವನೆಗಳು ಆಯಾ ದೇವತೆಗಳಲ್ಲಿ ಸ್ಥಿರ ವಾದಂತೆಲ್ಲ ಅವರು ತಮ್ಮ ತಮ್ಮದೆಂದು ಬೇರೆ ಬೇರೆ ಪ೦ಗಡವನ್ನ ಮಾಡಿಕೊಳ್ಳಲಾರಂಭಿಸಿದರು. ಇಂದ್ರನು ಸಮರಸ ಪ್ರಿಯ ಇರುವ<noinclude></noinclude> qxuvjgpaf6z9xuoo4cyh0xz6vm6sx8g ಪುಟ:ವೈಶಾಖ.pdf/೨೫೨ 104 82181 322510 322414 2026-05-25T16:07:33Z Shreelatha.Halemane 7642 /* Validated */ 322510 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|೨೩೬}} {{Right|'''ವೈಶಾಖ'''}} ರಾದ್ದಾಂತ ಎಚ್ಚಕತ್ತಿತ್ತೆ ಜ್ವರತು ಕಮ್ಮಿ ಆಗೊ ಸುಳುವೆ ಕಾಣನಿಲ್ಲ.... ನನ್ನ ಕುಟ್ಟೆ ಹೈದ, “ಇನ್ನು ನಂಗೆ ಬದುಕಕ್ಕೆ ಆಸ್ಯೆ ಇಲ್ಲ. ಜವರಪ್ಪ” ಅಂತ ಯೋಳಿಕತ್ತಾನೇ ಇತ್ತು. “ಚಿಕ್ಕೋನು ಮುಟ್ಟೋನು- ಅಂಗೆಲ್ಲ ಮಾತಾಡಬಾರು” ಅಂತ ನಾನು ಬದ್ದಿ ಯೋಳಿದೆ. ನನ್ನ ತಬ್ಬಿಕಂಡು ಗೋಳೇಂತ ಆಳ, ಒಂದು ಆಯಿತವಾರ ಸಂದೀನಾಗ ಕೆರೆ ಅತ್ರ ನಾವಿಬ್ರೇ ಇದ್ದಾಗ, ನಡದದ್ದೆಲ್ಲ ಮುಚ್ಚುವರೆಯಿಲೆ ಯೋಳಿ “ಇನ್ನು ಯಾವ ಆಸೆಗೆ ಬದುಕಬೇಕು? ನೀನೇ ಯೋಳು...” -ನನ್ನೇ ಕೇಳು... ನಿಂಗೂ ಸ್ವತ್ತಲ್ಲ, ನಿಷ್ಟುರಗಾರ ಹೈದ, ಮನಸ್ಸಿಗೇನಾರ ಬಂದ್ರೆ, ಅನ್ನ ಸಾದಿಸೋವಂತ ಗಂಡೇಯ. ನಾನೂವೆ ತಿಳಿದ ಬುದ್ದೀನೆಲ್ಲ ಯೆಚ್ಚ ಮಾಡಿ ಯೋಳೆ, ಅವು ನಂಗೆ ಯೋಳ ಕೊನೇ ಮಾತು ಏನಂತೀಯ?... “ನಿಂಗ್ಯಾಕೆ ಜನರಯ್ಯ, ಸುಮ್ಮಕೆ ಚಪಲ. ನಮಗೂ ನಮ್ಮವ್ವಂಗೂ ಇನ್ನು ಈ ಧರೇ ಮ್ಯಾಲೆ ರುಣತೀರೋಯ್ತು ...” {{gap}}ಹಲಗೆ ಇಂಗ ನನ್ನತ್ರ ಖೈಡಾಗಿ ಯೋಳಿದ್ದು ಮಂಗಳಾವರ ಬೈಗಿನಲ್ಲಿ. ಬದುವಾರ ಬೆಳಿಗ್ಗೆ ಎದ್ದೋನು ನ್ಯಾರವಾಗಿ ಅವರ ಅಟ್ಟಿ ತಾವಿಕೋದೆ. ಅಗ ಹಲಗ ಟಿಪನ್ ಕರಾರ ವೋರೀಕೆ ತಂದಿಟ್ಟೋನು, ಅದೇನು ಮನಸ್ಸು ಬಂತೋ, ಆತರಾತರಾಗಿ ಪುನಾ ಅಟ್ಟಿ ವಳೀಕೆ ಗುಡುಕ್ಕುನೋಗಿ ಕದ ಆಕ್ಕಂಡ, ಮಟದ ಹೈಕಳೆಲ್ಲ ಆಗ್ಗೆ ಊರಿಂದ ವೊಂಟು ಬರೋವಾಗ ದಾರೀಲೆ ಸಿಕ್ಕಿದ್ದೊ. ನಿಮ್ಮ ಜತೆ ಹಲಗ ಯಾಕೆ ಬರನಿಲ್ಲಾಂತ ಕೇಳೆ, ಅಟ್ಟಿಲಿ ವಸಿ ಕೇಮೆ ಅದೆ, ಅದ ಮುಗುಸಿ ಬತ್ತೀನಿ... ಆ ಹೈಕಳು ಯೋಳಿದ್ದಕೂ ನಾನು ಅಟ್ಟಿ ತಾವು ಕಂಡ ದುರಸ್ಕಕೂ ಚಾಟಿ ಆಯ್ತು. ಅಂಗೆ ಆತರಾಗಿ ಟಿಪನ್ ಕರಾರ ಹರೀಕಿಟ್ಟು ವಳೀಕೋದ ಹೈದನ ಚರ್ಯ ಕಂಡಮಾಲಂತೂ ನಂಗೆ ಪೂರಾ ಅನುಮನಸಾಯ್ತು. ದಡದಡನೋಗಿ ಕದ ತಟ್ಟಿದೆ. ಎಸರು ಎಡದು ಕೂಗ್ಗೆ, ವಳುದ್ರಿಂದ ಏಟೋತ್ತಾದರೂವೆ ಜವಾಬೆ ಬರವಿಲ್ಲ. ಅಂಗೇ ವಸಿವೊತ್ತು ನಿಂತಿದ್ದೋನು ಕದಕ್ಕೆ ಕಿವಿ ಕ್ವಿಟ್ಟು ನಿಂತೆ. ನಳುನ್ನಿಂದ ಗೊರ್ ಗೊರ್್ರ ಅಂತ ಸದ್ದು ಬತ್ತಿತ್ತು. ನಂಗೆ ಕಯ್ಯಕಾಲು ವದುರಕ್ಕೆ ಸುರು ಆಯ್ತು. ಇನ್ನು ಅಲ್ಲಿ ನಿಂತರೆ ನನ್ನ ಮ್ಯಾಲೆ ಬಂದಾತು ಅಂತ ಆ ಜಾಗದಿಂದ ಆ ಕ್ಷಣದಲ್ಲಿ ನಿಕಾಲಾದೆ.” ಬೆಪ್ಪಾಗಿ, ಜವರಯ್ಯ ಯೋಳ ಕೇಳ್ತಾ ನಿಂತಿದ್ದೋನು, {{gap}}* ಅಂಗಾರೆ, ಟಗರೂರ ಆ ಡಬ್ಬಿ ಎತ್ತಕ್ಕೆ ಮುಂಚೆ ಹೈದ ಸತ್ತೋಗಿತ್ತು ಅನ್ನು?” ಅಂದ ಲಕ್ಕ, {{gap}}“ಅಯ್, ಟಗರೂರ ಬರಕ್ಕೆ ಸುಮಾರು ವೊತ್ನಲ್ಲೆ ಆ ಹೈದ ಪ್ರಾಣ<noinclude></noinclude> 1ej7b8fmgnxaydlhakblwscb1uy8it1 ಪುಟ:ವೈಶಾಖ.pdf/೨೫೩ 104 82182 322511 322416 2026-05-25T16:07:44Z Shreelatha.Halemane 7642 /* Validated */ 322511 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೩೭}} {{Left|ವೋಗಿರಬೇಕು.”}} “ಅಂಗಾರೆ, ಟಗರೂರ ಡಬ್ಬಿ ಎತ್ತಿದ್ರಿಂದ ಯೇನೂವೆ, ಆ ಹೈದ ಸಾಯನಿಲ್ಲ ಅಂದಂಗಾಯ್ತು?” ಲಕ್ಕ ತನಗೆ ತಾನೆ ಮಾತಾಡಿಕಳೊತರ ಕ್ಯಾಳಿದ್ದ. {{gap}}“ಅದು ಹ್ಯಾಗಲಿ ಅಂದೆ ಆ ಮಾನಗೆಟ್ಟ ಯಜಮಾನು, ಆ ಹೈದ ಮಣ್ಣು ಮಾಡಕ್ಕೆ ಎಂಕಿ ಕಯ್ಯಲಿ ಬರಿ ನೂರು ರೂಪಾಯಿ ಕ್ವಟ್ಟು, ಉಳುಕೆ ಒಂಬಯನೂರು ರೂಪಾಯೂವೆ ಮಾದೇಶ್ವರನ ಗುಡಿ ಲಿಪೇರಿ ಮಾಡಿಸ್ತೀವಿಂತ ತಾವು ತಾನೆ ಅಂಚಿಕಂಡ್ರಲ್ಲ... ಈ ಅನ್ಯಾಯಕೆ ಯೇನು ಯೋಳೋದಪ್ಪ...” {{gap}}“ಅದ್ಯಾವ ಹೊಸ ಇಸ್ಯ ಬುಡು. ಕಾಲದಿಂದ್ದೂ ಇಂಗೇ ನಡದು ಬಂದದೆ. ಈ ಅನ್ಯಾಯದಲ್ಲಿ ಹುಟ್ಟಿ, ಈ ಅನ್ಯಾಯದಲ್ಲೆ ಬೆಳೀತಾ ಅದೆ, ನಮ್ಮ ಪಂಚಾತಿ...” ಲಕ್ಕನ ಮಾತ್ನಲ್ಲಿ ಸಂಕ್ಷದ ಜ್ವತ್ತತೆ ರೋಸವೂ ಬೆರುತ್ತಿತ್ತು. ಆದರೆ, ಉಳಿಕೆ ಒಂಬೈನೂರ ರೂಪಾಯಿಗಳನ್ನು ಹಂಚಿಕೊಳ್ಳುವಾಗ, ತನಗೆ ಬಂದ ಪಾಲು ಕಡಿಮೆ ಆಯ್ತು ಎಂದು ಕೋಟೆ ಬುಳ್ಳಪನಿಗೆ ಕೋಪ ಬಂದಿತು. ಪರಿವಾರದ ಜಾತಿ ಎಂಕಿಯ ಮಗ ಹಲಗ, ಸುಮಾರು ಹನ್ನೆರಡು ವರ್ಷದ ಬಾಲಕನು ಆತ್ಮಹತ್ಯೆ ಮಾಡಿಕೊಂಡು ಸತ್ತಿರುವುದಾಗಿಯೂ ಊರಿನ ಇತರೆ ಯಜಮಾನರು ಗೋಪ್ಯವಾಗಿ ಆ ಹಣವನ್ನು ಮಣ್ಣು ಮಾಡಿರುವುದಾಗಿಯೂ ಹುಣಸೂರು ಪೋಲೀಸು ಠಾಣೆಗೆ ಮೂಗರ್ಜಿ ಬರೆದ. ಒಡನೆಯೇ ಒಬ್ಬ ಪೋಲೀಸು ಪೇದೆಯೊಡನೆ ಸಬ್ಇಬ್‌ಸೆಕ್ಟರ್‌ ಗೊಳಪ್ಪ ದರುಮನಳ್ಳಿಗೆ ಒಂದು ಬೆಳಿಗ್ಗೆ ಹಾಜರಾದರು. {{gap}}ಸಬ್ ಇನ್‌ಸ್ಪೆಕ್ಟರ್‌ ಗೊಳಪ್ಪನವರು ಹಟಾತ್ತನೇ ಪ್ರತ್ಯಕ್ಷವಾದದ್ದು ದರುಮನಳ್ಳಿಯ ಜನರನ್ನು ದಿಗೃಮೆಗೊಳಿಸಿತು. ಗೊಳಪ್ಪನವರು ತಾವು ಬಂದ ಕಾರಣವನ್ನು ತಿಳಿಸದ ಬಳಿಕವಂತೂ ಊರಿನ ಮುಖಂಡರ ಜಂಘಾಬಲವೇ ಉಡುಗಿಹೋದಂತಾಯಿತು. {{gap}}ಗೂಳಪ್ಪ ಹೊದೆ ಹೊದೆ ಮೀಸೆಯ 'ಕಪೀನಿ' ಆಳು. ಎತ್ತರದಲ್ಲಿ ಕುಳ್ಳು, ಆದರೂ ತೋರವಾದ ಮಯ್ಯ, ಮೆಡ್ಡಗಣ್ಣು, ಖಾಕಿ ಪೋಷಾಕಿನ ವೈಖರಿಯಲ್ಲಿ, ಸಾಮಾನ್ಯರನ್ನು ಅದರಲ್ಲೂ ಹಳ್ಳಿಗಾಡಿನ ಮುಗ್ಧ ಮಂದಿಯನ್ನು ಭೀತಿ ಗೊಳಿಸುವ ವ್ಯಕ್ತಿತ್ವವನ್ನು ಆತನಿಗೆ ದಯಪಾಲಸಿದ್ದವು. {{gap}}ಗಳ ಪ್ರನ ಆಗಮನದಿಂದ ಎಲ್ಲರಿಗಿಂತ ವಿಶೇಷವಾಗಿ ಕಸಿವಿಸಗೊಂಡವರೆಂದರೆ ಶ್ಯಾನುಭೋಗ ಸೀತಾರಾಮಯ್ಯ, ಈತ ತಮ್ಮ ತಂದೆ<noinclude></noinclude> cise79i1a9f13078ncaj64qlpyq8cee ಪುಟ:ವೈಶಾಖ.pdf/೨೫೪ 104 82183 322512 322417 2026-05-25T16:07:54Z Shreelatha.Halemane 7642 /* Validated */ 322512 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|೨೩೮}} {{Right|'''ವೈಶಾಖ'''}} ವೆಂಕಟಕೃಷ್ಣಯ್ಯನವರಂತೆ ತಮ್ಮ ಬದುಕಿಗೆ ಎಂದೂ ಊರಿನ ವ್ಯವಹಾರಗಳನ್ನು ಅಂಟಿಸಿಕೊಂಡವರಲ್ಲ. ತಮ್ಮ ತೋಟ, ತುಡಿಕೆ, ತಮಗೆ ರೈತರಿಂದ ಬರಬೇಕಾದ ಪೋಟಿಕೆ, ಮಸಿಕುಡಿಕೆ ಹಣ, ಜೊತೆಗೆ ರೈತಾಪಿ ಜನ ತಂದುಕೊಡುವ ಬೆಣ್ಣೆ, ಜೇನುತುಪ್ಪ, ಆಯಾ ಕಾಲದಲ್ಲಿ ದೊರೆಯುವ ಹಲಸಿಹಣ್ಣು, ಮಾವಿನಹಣ್ಣು. ಸೀಬೆಹಣ್ಣು, ಉಪ್ಪಿನಕಾಯಿ ಹಾಕಲು ಅಮಟೆಕಾಯಿ, ಬೆಟ್ಟದ ನೆಲ್ಲಿಕಾಯಿಇತ್ಯಾದಿ ಮಾಮೂಲುಗಳಲ್ಲಿ ಆಸಕ್ತಿ ವಿನಾ, ಊರಿನ ಆಗುಹೋಗುಗಳಲ್ಲಿ ಸಾಮಾನ್ಯವಾಗಿ ಅವರು ನಿರ್ಲಿಪ್ತರು. ಅಂದರೆ ಊರಿನಲ್ಲಿ ಏನೇ ಅವ್ಯವಹಾರ ನಡೆದರೂ ಉಪಾಯವಾಗಿ ಯಾವ ಏಟಿಗೂ ಸಿಕ್ಕದೆ 'ರಾಮಾ ಸ್ವಸ್ತಿ, ರಾವಣಾ ಸ್ವಸ್ತಿ' ಎಂದು ಜಾರಿಕೊಳ್ಳುವ ಸ್ವಭಾವದ ವ್ಯಕ್ತಿ.... ಈ ಊರಿನಲ್ಲಿ ನಾವು ಬ್ರಾಹ್ಮಣರು ಇರುವುದು ಕೆಲವೇ ಜನ. ಇಲ್ಲಿ ಲಿಂಗಾಯಿತರು, ಒಕ್ಕಲಿಗರು, ಕುರುಬರು, ಪರಿವಾರದವರು, ಕುಂಬಾರರು ಇತ್ಯಾದಿ ಇತರೇ ಕೋಮಿನವರದೇ ಪ್ರಾಬಲ್ಯ. ಆದ್ದರಿಂದ ತಾವು ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಿ, ಅದು ಸಾಧ್ಯವಾಗದಿದ್ದಲ್ಲಿ ಎಲ್ಲರಿಂದಲೂ ಆದಷ್ಟು ದೂರ ಇದ್ದಬಿಡುವುದು ಕ್ಷೇಮ ಎಂದು ತೀರ್ಮಾನಿಸಿದ್ದರು. ಆದರೆ ಇಂದು ಅವರು ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲಾಗದ ಸಂದರ್ಭ ಒದಗಿ ಬಂದಿತ್ತು. ಸಬ್‌ಇನ್‌ಸ್ಪೆಕ್ಟರ್‌ ಗೂಳಪ್ಪ ಒಬ್ಬ ಪೇದೆಯೊಡನೆ ಬಂದು ತಮ್ಮ ಮನೆಯ ಜಗುಲಿಯ ಮೇಲೆಯೇ ಪ್ರತಿ ಸ್ಥಾಪಿತರಾಗಿರುವರೆಂದೂ ತಮ್ಮನ್ನು ಜಾಗ್ರತೆ ಕರೆತರಲು ಹೇಳಿರುವುದೆಂದೂ ಪಟೇಲ ನಿರ್ವಾಣಯ್ಯ ತೋಟಕ್ಕೆ ಬಂದು ಸುದ್ದಿ ಮುಟ್ಟಿಸಿದಾಗ, ಸೀತಾರಾಮಯ್ಯನವರ ಶ್ಯಾನಭೋಗ ಬುದ್ದಿಗೆ ಮಂಕು ಕವಿದಂತಾಯಿತು. ಈ ಸಂದಿಗ್ಧದಿಂದ ಹೇಗೆ ಪಾರಾಗುವುದೆಂದು ತರ್ಕಿಸುತ್ತಲೆ ಬಂದರು. {{gap}}ಶ್ಯಾನುಭೋಗರು ಪಟೇಲನ ಸಂಗಡ ತಮ್ಮ ಮನೆಯ ಬಳಿ ಬಂದಾಗ, ಗೂಳಪ್ಪನಾಗಲೆ ತನ್ನ ಪೇದೆಯನ್ನು ಕಳಿಸಿ ಊರಿನ ಯಜಮಾನ್ತುರನ್ನು ಕಲೆ ಹಾಕಿ, ತನಿಖೆಗೆ ಆರಂಭಿಸಿದ್ದ. ಆಗಾಗ ಹುಷಾರು ತಪ್ಪುತ್ತಿದ್ದ ಕುಳವಾಡಿ ಕುಂದೂರಯ್ಯನಿಗೆ ಆ ದಿವಸವೂ ಆರೋಗ್ಯ ಕೆಟ್ಟು, ತನ್ನ ಪರವಾಗಿ ಲಕ್ಕನನ್ನೆ ಕಳಿಸಿದ್ದುದರಿಂದ, ಲಕ್ಕನೂ ಜಗಲಿಗೆ ಅಷ್ಟು ದೂರದಲ್ಲಿ ನಿಂತಿದ್ದ. ಶ್ಯಾನುಭೋಗರು ಬಂದವರೇ, “ಇನ್ ಸ್ಪೆಕ್ಟರ್‌ ಸಾಹೇಬರಿಗೆ ನಮಸ್ಕಾರ. ಯಾವಾಗ ದಯಾಮಾಡಿಸೋಣವಾಯ್ತು?” ಎಂದು ಕೈ ಜೋಡಿಸುತ್ತ, ದೇಶಾವರಿ ನಗು ನಕ್ಕು, “ಅಯ್ಯಯ್ಯೋ, ಇದೇನು- ಸಾಹೇಬರನ್ನ ಚಾಪೆ ಮೇಲೆ ಕೂರಿದೀರಲ್ಲ?” ಎನ್ನುತ್ತ, ಗೂಳಪ್ಪ ಬೇಡ ಬೇಡವೆಂದರೂ ಕೇಳದೆ, ಮನೆಯ ಒಳಗಿನಿಂದ<noinclude></noinclude> kajorqzkv1dbrbxb7ttnebrinv4n3gh ಪುಟ:ವೈಶಾಖ.pdf/೨೫೫ 104 82184 322513 322421 2026-05-25T16:08:08Z Shreelatha.Halemane 7642 /* Validated */ 322513 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೩೯}} ತಾವೇ ಕುರ್ಚಿಯನ್ನೆತಿ ತಂದು, “ತಾವು ಇಲ್ಲಿ ಇಲ್ಲಿ ಮುಹೂರ್ತ ಮಾಡ ಬೇಕು” ಎಂದು ವಿನೀತರಾಗಿ ಬಿಸಿದರು, ಗೂಳಪ್ಪ ಈ ಠಕ್ಕು ಉಪಚಾರಕ್ಕೆ ತಾನು ಬಲಿಬೀಳುವ ಪ್ರಧೃತಿಯಲ್ಲ ಎಂದುಕೊಳ್ಳುತ್ತ, ಹೊರಗೆ ಪ್ರಕಟವಾಗಿ ಯಾವ ಭಾವವನ್ನೂ ತೋರದೆ, ಎದ್ದು ಕುರ್ಚಿಯ ಮೇಲೆ ಠೀವಿಯಿಂದ ಕುಳಿತು, ಒಂದು ಕಾಲನ್ನೆತ್ತ ಇನ್ನೊಂದರ ಮೇಲಿಟ್ಟು ಅಲ್ಲಾಡಿಸುತ್ತ, ತನ್ನ ಕೈಕೋಲನ್ನು ತೋಡೆಯ ಮೇಲಿಟ್ಟು ಅಟ್ಟಣಿಗೆಯಂತೆ ಎರಡೂ ಹಸ್ತಗಳಿಂದ ಅದನ್ನು ಹಿಡಿದು, ಚಪಾತಿ ಒತ್ತುವಂತೆ ಹಿಂದೆ ಮುಂದೆ ಆಡಿಸುತ್ತ. {{gap}}“ಇದೇನು ಶ್ಯಾನುಭೋಗರೆ, ಊರಲ್ಲಿ ನೀವು, ಪಟೇಲರು, ಇಂಥಿಂಥ ಯಜಮಾನರು, ಎಲ್ಲರೂ ಇದ್ದು ಕೂಡ, ಇಂಥ ಅಚಾತುರ್ಯ ನಡೆಯೋಕೆ ಅವಕಾಶ ಕೊಟ್ಟಿರಿ?” ಪ್ರಶ್ನಿಸಿದ. {{gap}}- “ಅಚಾತುರ್ಯ?... ಏನು ಸ್ವಾಮಿ ತಾವು ಹೇಳಿರೋದು?- ನನಗೆ ಅರ್ಥ ಆಗ್ತಿಲ್ಲ” ಎಂದು ನಶ್ಯ ಏರಿಸುತ್ತ, ಯಜಮಾನರ ಕಡೆ ನೋಡುತ್ತ ಹೇಳಿದರು. {{gap}}“ಶ್ಯಾನುಭೋಗರೆ, ನೀವು ಹಿಂದೆ ಎಲ್ಲಾದರೂ ನಾಟಕದಲ್ಲಿ ಪಾರ್ಟುಮಾಡಿದ್ದಿರೇನ್ರಿ?” ಕೈ ಕೋಲಿನಲ್ಲಿ ತೊಡೆಯ ಮೇಲೆ ಚಪಾತಿ ಒತ್ತುತ್ತಲೆ ಕೇಳಿದ ಗೂಳಪ್ಪ. {{gap}}ಶ್ಯಾನುಭೋಗರು ಕೊಂಚ ಅಧೀರರಾದಂತೆ ಕಂಡರು. {{gap}}“ಓ ಓ ಓ... ಯಾಕೆ, ಇಲ್ಲವಲ್ಲ ಸ್ವಾಮಿ... {{gap}}” ಗೂಳಪ್ಪ ಕಣ್ಣಿನಿಂದಲೆ ಇರಿಯುತ್ತ, {{gap}}“ಈ ನಾಟಕ ಯಾವುದೂ ನನ್ನ ತಾವು ನಡೆಯಕ್ಕಿಲ್ಲ, ಶ್ಯಾನುಭೋಗರೆ. ನೇರವಾಗಿ ಮಾತಾಡಿ. ನೀವೆಲ್ಲ ಸೇರಿ ಆ ಪರಿವಾರದೋರ ಜಾತಿ ಎಂಕಿ ಅನ್ನೋಳ ಮಗ ಸುಮಾರು ಹತ್ತು ವರ್ಷದ ಹುಡುಗ ಹಲಗ ನೇಣು ಹಾಕ್ಕೊಂಡು ಸತ್ತದ್ದನ್ನ ನಮಗೆ ರಿಪೋರ್ಟ್ ಮಾಡದೆ, ಅವನ ಹೆಣಾವ ಮಣ್ಣು ಮಾಡಕ್ಕೆ ಅವಕಾಶ ಕೊಟ್ಟಿದ್ದೀರಿ. ಇದು ಸರ್ಕಾರಿ ಕಾನೂನಿನ ದೃಷ್ಠಿಲಿ ಘೋರ ಅಪರಾಧ ಅನ್ನೋ ವಿಷಯ ನಿಮಗೆ ತಿಳಿದೇ ಇದೆ...” ಎಂದು ಮಾತಿನ ಶಲಾಕೆಗಳನ್ನು ಎಸೆಯುತ್ತಿರುವ ಸಮಯದಲ್ಲಿ, ಶ್ಯಾನುಭೋಗರು {{gap}}“ಅದರಲ್ಲಿ ಮಾತ್ರ ನಾನು ಭಾಗಿಯಾಗಿಲ್ಲ, ಸ್ವಾಮಿ” ಎಂದು ಒದರಿಬಿಟ್ಟರು! ಅನಂತರ ಆ ಕ್ಷಣದಲ್ಲಿ ತಾವು ಆಡಿದ್ದು ಅವಿವೇಕವಾಯಿತು. ಎಂಬ ಅರಿವಾಗಿ, ನಾಲಿಗೆ ಕಚ್ಚಿ ಮುದುಡಿಹೋದರು.<noinclude></noinclude> oss92vnp9b66gpp9nu14kvcdd9vrjq4 ಪುಟ:ವೈಶಾಖ.pdf/೨೫೬ 104 82185 322514 322427 2026-05-25T16:08:18Z Shreelatha.Halemane 7642 /* Validated */ 322514 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|೨೪೦}} {{Right|'''ವೈಶಾಖ'''}} {{gap}}“ಅಂದರೆ ಈ ಕೂಟದಲ್ಲಿ ನೀವು ಮಾತ್ರ ಭಾಗಿಯಾಗಿಲ್ಲ. ಆದರೆ ಅದರಲ್ಲಿ ನಿಮ್ಮನ್ನು ಬಿಟ್ಟು ಈ ಪಟೇಲರು, ನಂಜೇಗೌಡರು, ಇತರೆ ಯಜಮಾನರು, ಇವರೆಲ್ಲ ಭಾಗಿಗಳು ಎಂದು ನೀವು ರುಜುವಾತುಪಡಿಸಿದ ಹಾಗಾಯ್ತು.” {{gap}}ತಾನು ಕಲಿತಿದ್ದ ಲಾ ಹೇಗೆ ಪ್ರಯೋಜನಕ್ಕೆ ಬಂತು ಎಂದು ಗೂಳಪ್ಪ ಒಳಗೊಳಗೇ ಹಿಗ್ಗಿದ್ದ. {{gap}}“ಹಾಗಲ್ಲ ಇನ್‌ಸ್ಪೆಕ್ಟರ್‌, ನಾನು ಹೇಳಿದ್ದು....ನಾನು ಏನು ಹೇಳಬೇಕು ಎಂದಿದ್ದೆ ಅಂದರೆ ಈ ಊರಿನ ಯಾವ ವ್ಯವಹಾರದಲ್ಲೂ ನಾನು ಭಾಗವಹಿಸಿಲ್ಲ... ನಾನಾಯ್ತು, ನನ್ನ ತೋಟವಾಯ್ತು. ನೀವು ಹೇಳಿರೋದು ನಮಗೆ ಗೊತ್ತೇ ಇಲ್ಲ....”- ಶ್ಯಾನುಭೋಗರ ನುಣಚಿಕೊಳ್ಳುವ ದುರ್ಬಲ ಪ್ರಯತ್ನ ಹೀಗೆ ಪ್ರಕಟವಾಗಿತ್ತು. {{gap}}“ಊರಿನಲ್ಲಿ ನಡೆಯೋ ಯಾವ ವಿಷಯವೂ ನಿಮ್ಮ ಗಮನಕ್ಕೆ ಬರದೇ ಹೋಯ್ತು ಅಂದ ಬಳಿಕ, - ಸೀತರಾಮಯ್ಯನೋರೆ, ನೀವು ನಿಮ್ಮ ಶ್ಯಾನುಬೋಗಿಕೇತನ ಊರಿನಲ್ಲಿ ಬೇರೆ ಇನಯಾರಿಗಾದರೂ ಬಿಟ್ಟು ಕೊಟ್ಟು ಸ್ವಸ್ಥವಾಗಿ ನಿಮ್ಮ ತೋಟತುಡಿಕೆ ನೋಡಿಕೋತ ಆರಾಮಾಗಿ ಇರಬಹುದಲ್ಲ?” {{gap}}ಗೋಡೆಗೆ ಮೊಳೆ ಹೊಡೆಯುವ ರೀತಿಯಲ್ಲಿ ಗೂಳಪ್ಪ ಮಾತುಗಳನ್ನೆಸೆದ. ಶ್ಯಾನುಭೋಗರು ಹೆಚ್ಚಾಗಿ, {{gap}}“ಅಯ್ಯೋ, ಕಾಲಾದಿಂದ ವಂಶಪಾರಂಪರ್ಯವಾಗಿ ನಡೆದುಬಂದದ್ದು ಈಗ ಇಷ್ಟು ಚಿಲ್ಲರೆ ವಿಷಯಕ್ಕೆಲ್ಲ ಬಿಟ್ಟು ಬಿಡೋದು ಅಂದರೆ...” ಎನ್ನುತ್ತ, ಕೈ ಕೈ ಹೊಸೆಯುತ್ತ ಹಲ್ಲುಕಿರಿದರು. {{gap}}“ಸರಿ” ಎಂದ ಗೂಳಪ್ಪ, “ವಿಷಯ ತಿಳಿದ ಹಾಗಾಯ್ತು. ಮುಂದೆ ಕಾನೂನಿನ ಪ್ರಕಾರ ಏನೇನು ಖಡ್ಡೆ ತಗೋಬೇಕೊ ಅದೆಲ್ಲ ತಗೋತೀನಿ”ನಿರ್ಧಾರವಾಗಿ ನುಡಿದ. {{gap}}ನಂಜೇಗೌಡನಿಗೆ ಇನ್ನು ಸುಮ್ಮನೆ ಕೂರುವುದು ಸಾಧ್ಯವಾಗಲಿಲ್ಲ. ಅವರು ಎದ್ದು ನಿಂತು, {{gap}}“ಈಗ ನಮ್ಮೂರಲ್ಲಿ ಯಾವಾಗದೆ ಅಂತ್ಥ, ಇನ್‌ಸ್ಪೆಕ್ಟರ್‌?... ಯಾರೋ ಹಲಾಲ್ ಕೋರು ನಿಮ್ಮೆ ಸುಳ್ಳು ಸುದ್ದಿ ಕ್ವಟ್ಟು, ಪಾಪ ನಿಮ್ಮ ಇಲ್ಲೀತಂಕ ದಣಿಸಿ, ಎಂಕಿ ಹೈದಂಗೆ ಅದೆಂತಾದ್ದೋ ಯೋಳ್ತಾರಲ್ಲ.... ನಿವೊನಿ, ಊ ನಿವೊನಿ ಜೋರಾನೊ ಯೇನೊ, ಆದಾಗಿತ್ತು. ಹೈದ ತೀರಿಕತ್ತು... ಹೆಣವ ಅಂಗೇ ಬೋ ಕಾಲ ಇಟ್ಟರೆ, ಕೊಳತು ನಮ್ಮೂರ ಬ್ಯಾರೆ ಹೈಕಳಗೂವೆ ಈ<noinclude></noinclude> nohabxdaekzc9olf7cu2bddaofage0r ಪುಟ:ವೈಶಾಖ.pdf/೨೫೭ 104 82186 322515 322428 2026-05-25T16:08:27Z Shreelatha.Halemane 7642 /* Validated */ 322515 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೪೧}} ಕಾಯ್ದೆ ಅಮರಿಕಂಡಾದು ಅಂತ ಜಟಪಟನೆ ಅದ್ರ ಮಸಣಕ್ಕೆ ತಟಾಯಿಸ್ಕೊ, ವೋಟೆಯ... ಇದ್ದ ದೊಡ್ಡದು ಮಾಡಬ್ಯಾಡಿ, ನಾನು ನಮ್ಮ ಊರಿನೋರ ಪಾಗಿ ಕಯ್ಯ ಮುಗುದು ಬೇಡಿಕತ್ತೀನಿ... ಇದರಿಂದ ನಮ್ಮೂರ ಮಾನವೇ ವೋಟೋಯ್ತದೆ...” ಎಂದು ಅಂಗಲಾಚಿದ. {{gap}}“ಹಂಗಾದರೆ-ನಿಮ್ಮೂರಲ್ಲಿ ಆ ಎಂಕಿ ಹೈದ ನೇಣು ಹಾಕೊಂಡದ್ದು, ಅದೆಲ್ಲ ಸುಳ್ಳಾ?... ಇಂತಾದೆಲ್ಲ ನಡೀಲೆ ಇಲ್ಲ ಅಂತೀರ, ಗೌಡರೆ?” “ಬೇಸಕ್ಕಾಗಿ, ನಡೀರ, ಬೇಕಾರೆ ಯಾವ ದ್ಯಾವರ ಮುಂದೆ ನಿಂತು ಬೇಕಾರೂ ಪ್ರಮಾಣ ಮಾಡ್ತೀನಿ.” “ಅಷ್ಟೆಲ್ಲ ತೊಂದರೆ ಯಾಕೆ?... ನೀವು ಪ್ರಮಾಣಾನು ಮಾಡಬೇಕಾಗಿಲ್ಲ. ಬೇರೆ ಯಾವ ತೊಂದರೇನೂ ತಕ್ಕೊಬೇಕಿಲ್ಲ... ಇದ್ದ ಪತ್ತೆ ಮಾಡಕ್ಕೆ ನಾನು ಬೇರೆ ಔಷಧಾನೆ ಇಟ್ಟಿದ್ದೀನಿ.” {{gap}}ನಂಜೇಗೌಡನ ಮಾತು ನಿಂತಿತು. ಶ್ಯಾನುಭೋಗರ ಮಡದಿ ಒಳಗಿನಿಂದ ಸನ್ನೆ ಮಾಡಿದ ಮೇರೆಗೆ, ಶ್ಯಾನು ಭೋಗರು ಎದ್ದು ಹೋಗಿ, ಬೆಳ್ಳಿ ತಟ್ಟೆಯನ್ನು ಈಸಿ ತಂದರು. ಅದರಲ್ಲಿ ಒಂದು ಚಿಪ್ಪು ಬೂದಿ ಬಾಳೆಹಣ್ಣು, ಕೆಂಪು ಬೂರಾ ಸಕ್ಕರೆ ಮತ್ತು ಬೆಳ್ಳಿಲೋಟದಲ್ಲಿ ಕಾಸಿದ ಹಾಲು. {{gap}}“ಬ್ಯಾರೆ ಔಷದಿ ಇಟ್ಟಿ~ ಅಂದಲ್ಲ- ಅಂಗಂದ್ರೇನ ಸೋಮಿ?” ಗಂಗಪ್ಪ ಧೈರ್ಯ ಮಾಡಿ ಕೇಳೇ ಬಿಟ್ಟ. {{gap}}ಗೂಳಪ್ಪ ಒಂದು ಸಲ ಗಂಗಪ್ಪ ನಿರ್ಲಕ್ಷ್ಯದಿಂದ ನೋಡಿ, ಎರಡು ಬಾಳೆಹಣ್ಣು ತಿಂದು, ಹಾಲು ಕುಡಿದು ಮುಗಿಸಿ ಎದ್ದ. ಶ್ಯಾನುಭೋಗರು ಗೂಳಪ್ಪ ಬಿಟ್ಟು ಬಾಳೆಹಣ್ಣುಗಳನ್ನು ಅವನ ಜತೆಗೆ ಬಂದಿದ್ದ ಪೇದೆಗೆ ಕೊಡಲು ಮರೆಯಲಿಲ್ಲ. {{gap}}- ಜಗಲಿಯಿಂದ ಇಳಿಯುತ್ತ, ಗಂಗಪ್ಪನತ್ತ ದೃಷ್ಟಿಹಾಯಿಸಿ, ಗೂಳಪ್ಪ {{gap}}“ಬ್ಯಾರೆ” ಔಷಧಿ ಯಾವದೂಂತ ನೀವೇನಪ್ಪ ಕೇಳಿದೋರು?... ಅದು ಬಲು ಸುಲಭದ ಔಷಧ- ಆ ಹುಡುಗನ ಹೆಣಾವ ಹೂಳಿರೋ ಜಾಗದಿಂದ ಆಗೆಸಿ ತೆಗಿಸ್ತೀನಿ. ಆಮೇಲೆ ಅದ್ರ ವೈದ್ಯರ ಪರೀಕ್ಷೆಗೆ ಗುರಿ ಮಾಡ್ತೀನಿ. ಆಗ ಆ ಹುಡುಗ ನಿಮ್ಮ ಇನ್ನೊಬ್ಬ ಯಜಮಾನ್ನು ಹೇಳಿದ ಹಾಗೆ- ನ್ಯೂಮೋನಿಯಾ ಜ್ವರದಿಂದ ಸತ್ತನೊ ಅಥವ ನನಗೆ ತಿಳಿದಬಂದಿರೊ ಹಾಗೆ ನೇಣುಹಾಕ್ಕೊಂಡು ಪ್ರಾಣ ಬಿಟ್ಟನೋ ಅನ್ನೋದು ನಿಖರವಾಗಿ, ಎಳ್ಳಷ್ಟು ಅನುಮಾನಕ್ಕೂ ಆಸ್ಪದವಿಲ್ಲದೆ ಪ್ರಕಟವಾಗುತ್ತದೆ” ಎಂದು ಹೇಳಿ, ಗಂಗಪ್ಪನೂ ಸೇರಿದಂತೆ ಅಲ್ಲಿದ್ದ<noinclude></noinclude> ogm8tk2gqm0psdt7mdetozc5kbaiij0 ಪುಟ:ವೈಶಾಖ.pdf/೨೫೮ 104 82187 322516 322430 2026-05-25T16:08:41Z Shreelatha.Halemane 7642 /* Validated */ 322516 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|೨೪೨}} {{Right|'''ವೈಶಾಖ'''}} ಯಜಮಾನರೆಲ್ಲರಿಗೂ ಜಾಪಾಳದ ಮಾತ್ರೆ ಕೊಟ್ಟ {{gap}}ಈ ಮಾತು ಕೇಳಿ, ಅಲ್ಲಿ ನೆರೆದ ಎಲ್ಲ ಯಜಮಾನರಿಗೂ ಬಾಯಿ ಒಣಗುತ್ತ ಬಂದಿತು. ಅವರೆಲ್ಲರೂ ಒಂದು ಕಡೆ ಪ್ರತ್ಯೇಕವಾಗಿ ಸೇರಿ ಪರಸ್ಪರ ವಿಚಾರ ವಿನಿಯಮಯ ಮಾಡಿಕೊಳ್ಳುತ್ತಿದ್ದರು. {{gap}}ಲಕ್ಕನಿಗೆ ಮುಸ್ಟಾನ್ನ ಉಂಡಷ್ಟು ಸಂತೋಸ ಆಗಿತ್ತು... ಈ ಯಜಮಾನ್ರು ನಮ್ಮೂರಲ್ಲಿ 'ಮಾತುಭಾರಿ' ಮನುಸು ಅಂತ ಎಲ್ಲಾರ ಬಾಯಲ್ಲೂವೆ ಉಳ್ಳಾಡ್ತಾರೆ!ಇಂಡೋರ ಈವಯ್ಯ ಎಂತೆಂತ ಪೈಲ್ವಾನ್ ವರಸೆ ಆಕಿ ಬೆಪ್ಪುಗೂಡಿಬುಟ್ಟ!ಹೀಗೆಂದು ಆ ಇನ್‌ಸೆಕ್ಟರ್ ವಿಷಯವಾಗಿ ಲಕ್ಕನಿಗೆ ಬಹಳ ಹೆಮ್ಮೆಯೆನಿಸಿತು. ಮಂಕು ಬಡಿದವರ ಹಾಗೆ ಇನ್ನೂ ಜಗಲಿ ಮುಂದುಗಡೆಯೇ ನಿಂತಿದ್ದ ಶ್ಯಾನುಭೋಗ ಸೀತಾರಾಮ್ಯನವರನ್ನು ಕೇಳಿದ: {{gap}}“ಸೋಮಿ, ಇವರು ಯಾವ ಜಾತಿ?” {{gap}}ಶ್ಯಾನುಭೋಗರು ಪಿಸುಮಾತಿನಲ್ಲೆ ಖಾರ ತುಂಬಿ, {{gap}}“ಅಯ್ಯೋ, ನಿಮ್ಮ ಜಾತಿಗೂ ಕೀಳು ಕಣೋ-ಎಡಗೈ!”- ಎಂದರು ತಿರಸ್ಕಾರವಾಗಿ, ಅವರಿಗೆ, ಬುದ್ದಿವಂತ ಬ್ರಾಹ್ಮಣನಾದ ತಾನು ಈ ಅತ್ಯಂತ ಕೀಳು ಜಾತಿಯ ಯಃಕಶ್ಚಿತನಿಂದ ಈ ದಿನ ಊರಿನ ಪ್ರಮುಖರ ಮುಂದೆ, ಅದೂ ನಡುಬೀದಿಯಲ್ಲಿ, ಮಾತುಮಾತಿಗೂ 'ಚಿತ್” ಅದೆನಲ್ಲ ಎಂಬ ಕೊರಗು ಒಳಗೊಳಗೆ ಜ್ವಾಲಾಮುಖಿಯಾಗಿ ಹೊಗೆಯಾಡುತ್ತಿತ್ತು. {{gap}}ಲಕ್ಕನಿಗೆ ಇನ್‌ಸ್ಪೆಕ್ಟರ್‌ ಗೂಳಪ್ಪನ ಬಗ್ಗೆ ಇನ್ನೂ ತಾರೀಪು ಹೆಚ್ಚಿತು. ನಮ್ಮೊನೊಬ್ಬ ಅದೇಟು ಚೆಂದಾಗಿ ನ್ಯಾಯ ಅಡ್ಡ... ಈ ಸಾಸ್ತ್ರಪುರಾಣ ಓದ್ದ ನಮ್ಮೂರ ಗಟಾನುಗಟಿಗಳ ಅದೇಟು ಸಲೀಸಾಗಿ ಮಾತ್ನಲ್ಲಿ ಸೋಲಿಸಿದ್ದ... ಬೇಸ್, ಬೇಸ್- ಲಕ್ಕನಿಗೆ ಎದೆಯುಬ್ಬಿ ಬಂತು. ಅವರನ್ನು ಮಾತಾಡಿಸಲೇಬೇಕೆಂದು ಮನಸ್ಸಾಯಿತು. ಮೋಟಾರ್ ಸೈಕಲ್ ಹಿಡಿದು ಏರಲು ಸಿದ್ಧನಾಗಿ ನಿಂತಿದ್ದ ಗೂಳಪ್ಪನ ಮುಂದೆ ಹೋಗಿ ಕೈ ಜೋಡಿಸಿ ನಿಂತ “ಕೈಮುಗುದೆ. ಸೋಮಿ ಎಂದ ಅತ್ಯಂತ ವಿನಯದಿಂದ. {{gap}}“ಇವನು ಯಾರು?” - ಸಬ್‌ಇನ್‌ಸೆಕ್ಸರ್‌ ಗೂಳಪ್ಪ ನಿರ್ಭಾವದಿಂದ ಕೇಳಿದರು. ಅಷ್ಟರ ಮಾತು ಮುಗಿಸಿ ಇತರ ಯಜಮಾನರ ಜೊತೆಯಲ್ಲಿ ಅಲ್ಲಿಗೆ ಬಂದಿದ ನಂಜೇಗೌಡ, {{gap}}“ಇವನು-ಹೊಲೇರ ಲಕ್ಕ, ಇವರ ದೊಡ್ಡಪ್ಪನೆ ನಮ್ಮೂರ ಕುಳವಾಡಿ. ಅವಸ್ಥೆ ಹುಸಾರು ತೆಪ್ಪಿ, ಅವ್ರ ಬದ್ಲಾಗಿ ಇವನ್ನ ಕಳುಸವ್ನೆ” ಎಂದು ಪರಿಚಯಿಸಿದ.<noinclude></noinclude> 92yace27kga4d3429pqaem7i0vt9fwi ಪುಟ:ವೈಶಾಖ.pdf/೨೫೯ 104 82188 322519 306416 2026-05-25T16:10:47Z Shreesha Sharma 7840 /* Proofread */ 322519 proofread-page text/x-wiki <noinclude><pagequality level="3" user="Shreesha Sharma" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೪೩}} ಒಡನೆಯೆ ಲಕ್ಕ, {{gap}}“ತಾವು ತಮ್ಮ ಹೊಗೇರಿ ಕಡೀಕು ವಸಿ ದಯಮನಾಡಿಸಬೇಕು, ಸೊಮಿ” ಎಂದು ಪುನಃ ಕೈ ಜೋಡಿಸುತ್ತ ಬೇಡಿದ. ಅದಕ್ಕುತ್ತರವಾಗಿ ಗೂಳಪ್ಪ, {{gap}}“ನೀವು ಹೋಲಗೇರಿ ಜನ ಇನ್ನೂ ಬಲು ಕೊಳಕಾಗೇ ಇದ್ದೀರಿ... ಅಲ್ಲಿಗೆ ಬರಬೇಕಾದ್ರೆ ಮೂಗು ಮುಚ್ಚೇ ಬರಬೇಕು” ಅದೋನು, ನಂಜೇಗೌಡನ ಕಡೆ ತಿರುಗಿ {{gap}}“ಎರಡು ವರ್ಷದ ಕೆಲಸ ಏನಾಯ್ತು ಅಂತೀರಿ, ಗೌಡರೆ... ತುಮಕೂರಿನ ಕಡೆಗೆ ನನ್ನ ಪೋಸ್ಟ್ ಮಾಡಿದ್ರು. ಆಗ ಆ ಸುತ್ತಿನ ಒಂದು ಹಳ್ಳಿ ಹೊಲಗೇರಿಗೆ, ಒಂದು ಪೆಟ್ಟಿ ಕೇಸನ್ನು ಪರಿಶೀಲಿಸೊದಕ್ಕೆ ನಾನು ಹೋಗಬೇಕಾಗಿ ಬಂತು. ನನ್ನ ಮರು ವರ್ಷದ ಮಗಳೂ ನನ್ನ ಜೊತೆಗೇ ಬರ್ತೀನಿ ಅಂತ ಜೋತು ಬಿದ್ದಳು. ನಿರ್ವಾಹವಿಲ್ಲದೆ, ಅವಳನ್ನೂ ಜೊತೆಯಲ್ಲಿ ಕರೆದುಕೊಂಡು ಹೋದೆ. ಅಲ್ಲಿ ನಾನೊಂದು ಕಡೆ ತಪಾಸಣೆ ಮಾಡ್ತಾ ಇದ್ದೆ. ಆಗ ನಮ್ಮ ಹುಡುಗಿಗೆ ಬಾಯಾರಿಕೆ ಆಯ್ತಂತೆ. ಯಾರೊ ಎತ್ತಿಕೊಂಡೋಗಿ ತಮ್ಮ ಜೋಪಡಿ ಮಡಿಕೆ ನೀರನ್ನ ಕುಡಿಸಿಬಿಟ್ಟರಂತೆ!... ಸರಿ, ನಮ್ಮ ಮನೆಗೆ ಹಿಂದಿರುಗಿದ ಮಾರನೆ ದಿನವೆ ಮಗೂಗೆ ನೂರಾಮೂರು ಡಿಗ್ರಿ ಜ್ವರ ಕಾಯಕ್ಕೆ ಆರಂಭವಾಯ್ತು, ಜ್ವರ ಮೂರು ದಿನ ಕಾಯೋದರಲ್ಲಿ ಆ ಜ್ವರದ ತಾಪಕ್ಕೆ ಅವಳ ಜ್ಞಾನ ತಪ್ಪಿದಹಾಗಾಗಿ, “ನನ್ನ ಯಾರೂ ಕರೀತಾ ಅವ್ರೇ- ಕರೀ ಬಟ್ಟೆ ಹಾಕ್ಕೊಂಡು ಬಂದು ನಿಂತವೆ, ನಾ ಹೋಯ್ತಿನಿ...'- ಹೀಗೆಲ್ಲ ಏನೇನೊ ಬಡಬಡಿಸಕ್ಕೆ ಸುರುಮಾಡಿದ್ದು ನನ್ನ ಹೆಂಡತಿ, 'ಅಂತಾ ಕೊಳಕು ಜಾಗಕ್ಕೆಲ್ಲ ಕೂಸನ್ನ ಯಾಕೆ ಕರೆಕೊಂಡೋಗಿದ್ರಿ?' ಅಂತ ಆಕ್ಷೇಪಣೆ ಮಾಡ, ಗೋಳೋ ಅಂದಳು. ನನಗೂ ಎಂಥ ತಪ್ಪು ಮಾಡಿದೆ ಅನ್ನಿಸಿ, ಕೂಸು ಬದುಕ್ತದೊ ಇಲ್ಲವೊ ಅಂತ ದಿಗಿಲಾಯಿತು. ಸದ್ಯಕ್ಕೆ ಅಲ್ಲಿ ಒಬ್ಬರು ಒಳ್ಳೆ ಡಾಕ್ಟರಿದ್ದರು. ಲಿಂಗಾಯಿತರು, ಅಯ್ಯೋ ಯಾವ ಜಾತಿ ಆದರೇನು?- ಒಟ್ಟಿನಲ್ಲಿ ಆ ಪುಣ್ಯಾತ್ಮ ಹಗಲೂ ರಾತ್ರಿ ಕಣೇಲೆ ಕಣ್ಣಿಟ್ಟು, ಇಲಾಜು ಮಾಡಿದರು. ಸದ್ಯ, ಕೂಸು ಬದುಕ್ಕೊಂಡು...”- ಹೀಗೆ ಒಂದು ಪುರಾಣಾನೆ ಬಿಚ್ಚಿ ಹೇಳಿದ. {{gap}}ಆ ಮಾತು ಕೇಳಿ ಲಕ್ಕ ನಾಚಿ ಒಂದು ಹಿಡಿಯಾದ, ಯಾಕಾರು ಈವಯ್ಯ ನಮೋನೂಂತ ನಮ್ಮ ಹೋಲಗೇರಿಗೆ ಕರೆಯಕ್ಕೊದೆ?- ಒಳಗೆ ಕೊರಗಿ ಕೊರಗಿ ಕಡ್ಡಿಯಾಗುತ್ತಿದ್ದ. {{gap}}ನಂಜೇಗೌಡ ಗೂಳಪ್ಪನ ಮಾತುಗಳನ್ನು ಸಂಪೂರ್ಣವಾಗಿ<noinclude></noinclude> hcxmbelnfy3mo7ecz6x3d32m91bmnh2 322555 322519 2026-05-26T02:18:01Z Shreelatha.Halemane 7642 /* Validated */ 322555 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೪೩}} ಒಡನೆಯೆ ಲಕ್ಕ, {{gap}}“ತಾವು ತಮ್ಮ ಹೊಗೇರಿ ಕಡೀಕು ವಸಿ ದಯಮನಾಡಿಸಬೇಕು, ಸೊಮಿ” ಎಂದು ಪುನಃ ಕೈ ಜೋಡಿಸುತ್ತ ಬೇಡಿದ. ಅದಕ್ಕುತ್ತರವಾಗಿ ಗೂಳಪ್ಪ, {{gap}}“ನೀವು ಹೋಲಗೇರಿ ಜನ ಇನ್ನೂ ಬಲು ಕೊಳಕಾಗೇ ಇದ್ದೀರಿ... ಅಲ್ಲಿಗೆ ಬರಬೇಕಾದ್ರೆ ಮೂಗು ಮುಚ್ಚೇ ಬರಬೇಕು” ಅದೋನು, ನಂಜೇಗೌಡನ ಕಡೆ ತಿರುಗಿ {{gap}}“ಎರಡು ವರ್ಷದ ಕೆಲಸ ಏನಾಯ್ತು ಅಂತೀರಿ, ಗೌಡರೆ... ತುಮಕೂರಿನ ಕಡೆಗೆ ನನ್ನ ಪೋಸ್ಟ್ ಮಾಡಿದ್ರು. ಆಗ ಆ ಸುತ್ತಿನ ಒಂದು ಹಳ್ಳಿ ಹೊಲಗೇರಿಗೆ, ಒಂದು ಪೆಟ್ಟಿ ಕೇಸನ್ನು ಪರಿಶೀಲಿಸೊದಕ್ಕೆ ನಾನು ಹೋಗಬೇಕಾಗಿ ಬಂತು. ನನ್ನ ಮರು ವರ್ಷದ ಮಗಳೂ ನನ್ನ ಜೊತೆಗೇ ಬರ್ತೀನಿ ಅಂತ ಜೋತು ಬಿದ್ದಳು. ನಿರ್ವಾಹವಿಲ್ಲದೆ, ಅವಳನ್ನೂ ಜೊತೆಯಲ್ಲಿ ಕರೆದುಕೊಂಡು ಹೋದೆ. ಅಲ್ಲಿ ನಾನೊಂದು ಕಡೆ ತಪಾಸಣೆ ಮಾಡ್ತಾ ಇದ್ದೆ. ಆಗ ನಮ್ಮ ಹುಡುಗಿಗೆ ಬಾಯಾರಿಕೆ ಆಯ್ತಂತೆ. ಯಾರೊ ಎತ್ತಿಕೊಂಡೋಗಿ ತಮ್ಮ ಜೋಪಡಿ ಮಡಿಕೆ ನೀರನ್ನ ಕುಡಿಸಿಬಿಟ್ಟರಂತೆ!... ಸರಿ, ನಮ್ಮ ಮನೆಗೆ ಹಿಂದಿರುಗಿದ ಮಾರನೆ ದಿನವೆ ಮಗೂಗೆ ನೂರಾಮೂರು ಡಿಗ್ರಿ ಜ್ವರ ಕಾಯಕ್ಕೆ ಆರಂಭವಾಯ್ತು, ಜ್ವರ ಮೂರು ದಿನ ಕಾಯೋದರಲ್ಲಿ ಆ ಜ್ವರದ ತಾಪಕ್ಕೆ ಅವಳ ಜ್ಞಾನ ತಪ್ಪಿದಹಾಗಾಗಿ, “ನನ್ನ ಯಾರೂ ಕರೀತಾ ಅವ್ರೇ- ಕರೀ ಬಟ್ಟೆ ಹಾಕ್ಕೊಂಡು ಬಂದು ನಿಂತವೆ, ನಾ ಹೋಯ್ತಿನಿ...'- ಹೀಗೆಲ್ಲ ಏನೇನೊ ಬಡಬಡಿಸಕ್ಕೆ ಸುರುಮಾಡಿದ್ದು ನನ್ನ ಹೆಂಡತಿ, 'ಅಂತಾ ಕೊಳಕು ಜಾಗಕ್ಕೆಲ್ಲ ಕೂಸನ್ನ ಯಾಕೆ ಕರೆಕೊಂಡೋಗಿದ್ರಿ?' ಅಂತ ಆಕ್ಷೇಪಣೆ ಮಾಡ, ಗೋಳೋ ಅಂದಳು. ನನಗೂ ಎಂಥ ತಪ್ಪು ಮಾಡಿದೆ ಅನ್ನಿಸಿ, ಕೂಸು ಬದುಕ್ತದೊ ಇಲ್ಲವೊ ಅಂತ ದಿಗಿಲಾಯಿತು. ಸದ್ಯಕ್ಕೆ ಅಲ್ಲಿ ಒಬ್ಬರು ಒಳ್ಳೆ ಡಾಕ್ಟರಿದ್ದರು. ಲಿಂಗಾಯಿತರು, ಅಯ್ಯೋ ಯಾವ ಜಾತಿ ಆದರೇನು?- ಒಟ್ಟಿನಲ್ಲಿ ಆ ಪುಣ್ಯಾತ್ಮ ಹಗಲೂ ರಾತ್ರಿ ಕಣೇಲೆ ಕಣ್ಣಿಟ್ಟು, ಇಲಾಜು ಮಾಡಿದರು. ಸದ್ಯ, ಕೂಸು ಬದುಕ್ಕೊಂಡು...”- ಹೀಗೆ ಒಂದು ಪುರಾಣಾನೆ ಬಿಚ್ಚಿ ಹೇಳಿದ. {{gap}}ಆ ಮಾತು ಕೇಳಿ ಲಕ್ಕ ನಾಚಿ ಒಂದು ಹಿಡಿಯಾದ, ಯಾಕಾರು ಈವಯ್ಯ ನಮೋನೂಂತ ನಮ್ಮ ಹೋಲಗೇರಿಗೆ ಕರೆಯಕ್ಕೊದೆ?- ಒಳಗೆ ಕೊರಗಿ ಕೊರಗಿ ಕಡ್ಡಿಯಾಗುತ್ತಿದ್ದ. {{gap}}ನಂಜೇಗೌಡ ಗೂಳಪ್ಪನ ಮಾತುಗಳನ್ನು ಸಂಪೂರ್ಣವಾಗಿ<noinclude></noinclude> cwlu4gvju609lpyi8teyy35ix4nxe38 ಪುಟ:ವೈಶಾಖ.pdf/೨೬೦ 104 82189 322578 306427 2026-05-26T05:20:20Z Hariprasad Shetty10 7490 322578 proofread-page text/x-wiki <noinclude><pagequality level="1" user="Shreesha Sharma" /> {{Left|೨೪೪}} {{Right|'''ವೈಶಾಖ'''}}</noinclude>________________ {{Left|ಅನುಮೋದಿಸಿ,}} “ತಮ್ಮನ್ನ ಹುಣಸೂರಿಗೆ ಬಂದು ನಮ್ಮ ಮನೇಲಿ ಕಾಣೀವಿ”- ಹೀಗೆ ಆಶ್ವಾಸನೆ ಕೊಟ್ಟಿದಲ್ಲದೆ, ಹಿಂದೆ ಉಳಿದ ಪೇದೆಯ ಕೈಗೆ ಹತ್ತು ರೂಪಾಯಿಗಳನ್ನೂ ಇಟ್ಟು, ಅವನೊಂದಿಗೆ ಏನೇನೊ ಗುಟ್ಟುಗುಟ್ಟಾಗಿ ಪಿಸುಮಾತಾಡಿದ. ಆ ರಾತ್ರಿಯೆ ಯಜಮಾನರೆಲ್ಲ ಹುಣಸೂರಿಗೆ ತೆರಳಿ ಸಬ್‌ಇನ್‌ಸ್ಪೆಕ್ಟರ್ ಗೂಳಪ್ಪನನ್ನು ಅವನ ಮನೆಯಲ್ಲಿಯೆ ರಹಸ್ಯವಾಗಿ ಕಂಡು ಬಂದರು. ಅನಂತರ ಗೂಳಪ್ಪ ದರುಮನಳ್ಳಿಯ ಕಡೆ, ಎಂಕಿ ಹೈದನ ಈ ಕೇಸಿನ ಸಂಬಂಧವಾಗಿ ತಲೆಹಾಕಲಿಲ್ಲ. ಊರಿನಲ್ಲಿ ಅದರ ಬಗ್ಗೆ ಪ್ರಕಟವಾಗಿ ಮಾತಾಡಲು ಧೈಯ್ ಬರದಿದ್ದರೂ ಒಳಗೊಳಗೇ ಆ ಇನ್‌ಸೆಕ್ಟರ್ ಕಯ್ಯಜಯಮಾನರುಗಳು ಸರಿಯಾಗಿ ಬೆಚ್ಚಗೆ ಮಾಡಿರಬೇಕು. ಇಲ್ಲದಿದ್ದರೆ, ಆವಯ್ಯನಾ ಇಲ್ಲೀಗಂಟ ಬರದೇ ಇರೋನು!ಎಂದು ಕೊಳ್ಳುತ್ತಿದ್ದರು ಊರಿನ ಜನ. {{gap}}ಯಜಮಾನರ ನಡತೆಯಿಂದ ಲಕ್ಕನ ಮನಸ್ಸು ಒಳಗೇ ಹೇಸಿತು. {{center|'''೨೩'''}} ಅಪರೂಪಕ್ಕೆ ಬಂದ ರುಕ್ಕಿಣಿಯನ್ನು ಅಕ್ಕ ಪಾರ್ವತಿಯು ಭೀಮನಳ್ಳಿಯ ತಮ್ಮ ಮನೆಯಲ್ಲಿ ಬೇಡಬೇಡವೆಂದೂ ಒಂದು ತಿಂಗಳಿನ ಕಾಲ ಒತ್ತಾಯಪೂರ್ವಕವಾಗಿ ಉಳಿಸಿಕೊಂಡಿದ್ದಳು. ದಿನಕ್ಕೊಂದು ಬಗೆಯಲ್ಲಿ ಉಪಚರಿಸಿದ್ದಳು. “ಇನ್ನು ದರುಮನಳ್ಳಿಯ ನಿಮ್ಮ ಮನೇಲಿ, ನಿನ್ನ ಕೈಯೂಟ ಇದ್ದೇ ಇದೆ. ಇಲ್ಲಿ ಕೆಲವು ದಿನಗಳ ಮಟ್ಟಿಗಾದರೂ ಸುಧಾರಿಸಿಕೊ. ಯಾಕೊ ಮದಲಿಗೂ ಈಗೂ ಬಲು ತೆಗೆದುಹೋಗಿದ್ದೀಯೆ” ಎಂದಿದ್ದಳು. ಭಾವ ಚಂದ್ರಶೇಖರಯ್ಯನವರು ಅದೇ ಒತ್ತಾಯ. ಮೇಲಾಗಿ ಗಿರಿಜೆಗೆ ಒಗ್ಗಿಹೋಗಿದ್ದ ಸರಸಿ ತನ್ನ ಸಂಗಾತಿಯನ್ನು ಬಿಟ್ಟು ಹೊರಡುವುದು ಅಷ್ಟು ಸುಲಭವೆ? ಭಾವನವರ ಗಾಡಿಯಲ್ಲಿ ತಮ್ಮ ಹಳ್ಳಿಗೆ ವಾಪಸು ಬರುವಾಗ ಅಕ್ಕ ಮತ್ತು ಭಾವನ ಹಾಲಿನಂತಹ ಸಂಸಾರವನ್ನು ನೆನೆದು ಸಮತೋಷಪಟ್ಟಳು. ಪುಣ್ಯಶಾಲಿಗಳು. ಭಗವಂತ ಅವರನ್ನು ಹಾಗೆಯೆ ಸುಖವಾಗಿ ಇಟ್ಟಿರಲಿ ಎಂದು ಮನಸಾರೆ ಹಾರೈಸಿದಳು. ದರುಮನಳ್ಳಿಗೆ ಬಂದ ಬಳಿಕ ಹಳೆಯ ಬದುಕಿನ ನಿರ್ವಹಣೆಗೆ ತನ್ನ ಮನಸ್ಸನ್ನು ತೊಡಗಿಸಿದಳು. ಬೇರೇನೂ ವಿಶೇಷವಿಲ್ಲದೆ ಯಾಂತ್ರಿಕವಾಗಿ ಇನ್ನೊಂದು ತಿಂಗಳು ಉರುಳಿತು.<noinclude></noinclude> ao42p21bf7gopobhyv85yio1m4kjzex 322579 322578 2026-05-26T05:20:53Z Hariprasad Shetty10 7490 322579 proofread-page text/x-wiki <noinclude><pagequality level="1" user="Shreesha Sharma" /> {{rh|left=೨೪೪|center=|right='''ವೈಶಾಖ'''}}</noinclude>________________ {{Left|ಅನುಮೋದಿಸಿ,}} “ತಮ್ಮನ್ನ ಹುಣಸೂರಿಗೆ ಬಂದು ನಮ್ಮ ಮನೇಲಿ ಕಾಣೀವಿ”- ಹೀಗೆ ಆಶ್ವಾಸನೆ ಕೊಟ್ಟಿದಲ್ಲದೆ, ಹಿಂದೆ ಉಳಿದ ಪೇದೆಯ ಕೈಗೆ ಹತ್ತು ರೂಪಾಯಿಗಳನ್ನೂ ಇಟ್ಟು, ಅವನೊಂದಿಗೆ ಏನೇನೊ ಗುಟ್ಟುಗುಟ್ಟಾಗಿ ಪಿಸುಮಾತಾಡಿದ. ಆ ರಾತ್ರಿಯೆ ಯಜಮಾನರೆಲ್ಲ ಹುಣಸೂರಿಗೆ ತೆರಳಿ ಸಬ್‌ಇನ್‌ಸ್ಪೆಕ್ಟರ್ ಗೂಳಪ್ಪನನ್ನು ಅವನ ಮನೆಯಲ್ಲಿಯೆ ರಹಸ್ಯವಾಗಿ ಕಂಡು ಬಂದರು. ಅನಂತರ ಗೂಳಪ್ಪ ದರುಮನಳ್ಳಿಯ ಕಡೆ, ಎಂಕಿ ಹೈದನ ಈ ಕೇಸಿನ ಸಂಬಂಧವಾಗಿ ತಲೆಹಾಕಲಿಲ್ಲ. ಊರಿನಲ್ಲಿ ಅದರ ಬಗ್ಗೆ ಪ್ರಕಟವಾಗಿ ಮಾತಾಡಲು ಧೈಯ್ ಬರದಿದ್ದರೂ ಒಳಗೊಳಗೇ ಆ ಇನ್‌ಸೆಕ್ಟರ್ ಕಯ್ಯಜಯಮಾನರುಗಳು ಸರಿಯಾಗಿ ಬೆಚ್ಚಗೆ ಮಾಡಿರಬೇಕು. ಇಲ್ಲದಿದ್ದರೆ, ಆವಯ್ಯನಾ ಇಲ್ಲೀಗಂಟ ಬರದೇ ಇರೋನು!ಎಂದು ಕೊಳ್ಳುತ್ತಿದ್ದರು ಊರಿನ ಜನ. {{gap}}ಯಜಮಾನರ ನಡತೆಯಿಂದ ಲಕ್ಕನ ಮನಸ್ಸು ಒಳಗೇ ಹೇಸಿತು. {{center|'''೨೩'''}} ಅಪರೂಪಕ್ಕೆ ಬಂದ ರುಕ್ಕಿಣಿಯನ್ನು ಅಕ್ಕ ಪಾರ್ವತಿಯು ಭೀಮನಳ್ಳಿಯ ತಮ್ಮ ಮನೆಯಲ್ಲಿ ಬೇಡಬೇಡವೆಂದೂ ಒಂದು ತಿಂಗಳಿನ ಕಾಲ ಒತ್ತಾಯಪೂರ್ವಕವಾಗಿ ಉಳಿಸಿಕೊಂಡಿದ್ದಳು. ದಿನಕ್ಕೊಂದು ಬಗೆಯಲ್ಲಿ ಉಪಚರಿಸಿದ್ದಳು. “ಇನ್ನು ದರುಮನಳ್ಳಿಯ ನಿಮ್ಮ ಮನೇಲಿ, ನಿನ್ನ ಕೈಯೂಟ ಇದ್ದೇ ಇದೆ. ಇಲ್ಲಿ ಕೆಲವು ದಿನಗಳ ಮಟ್ಟಿಗಾದರೂ ಸುಧಾರಿಸಿಕೊ. ಯಾಕೊ ಮದಲಿಗೂ ಈಗೂ ಬಲು ತೆಗೆದುಹೋಗಿದ್ದೀಯೆ” ಎಂದಿದ್ದಳು. ಭಾವ ಚಂದ್ರಶೇಖರಯ್ಯನವರು ಅದೇ ಒತ್ತಾಯ. ಮೇಲಾಗಿ ಗಿರಿಜೆಗೆ ಒಗ್ಗಿಹೋಗಿದ್ದ ಸರಸಿ ತನ್ನ ಸಂಗಾತಿಯನ್ನು ಬಿಟ್ಟು ಹೊರಡುವುದು ಅಷ್ಟು ಸುಲಭವೆ? ಭಾವನವರ ಗಾಡಿಯಲ್ಲಿ ತಮ್ಮ ಹಳ್ಳಿಗೆ ವಾಪಸು ಬರುವಾಗ ಅಕ್ಕ ಮತ್ತು ಭಾವನ ಹಾಲಿನಂತಹ ಸಂಸಾರವನ್ನು ನೆನೆದು ಸಮತೋಷಪಟ್ಟಳು. ಪುಣ್ಯಶಾಲಿಗಳು. ಭಗವಂತ ಅವರನ್ನು ಹಾಗೆಯೆ ಸುಖವಾಗಿ ಇಟ್ಟಿರಲಿ ಎಂದು ಮನಸಾರೆ ಹಾರೈಸಿದಳು. ದರುಮನಳ್ಳಿಗೆ ಬಂದ ಬಳಿಕ ಹಳೆಯ ಬದುಕಿನ ನಿರ್ವಹಣೆಗೆ ತನ್ನ ಮನಸ್ಸನ್ನು ತೊಡಗಿಸಿದಳು. ಬೇರೇನೂ ವಿಶೇಷವಿಲ್ಲದೆ ಯಾಂತ್ರಿಕವಾಗಿ ಇನ್ನೊಂದು ತಿಂಗಳು ಉರುಳಿತು.<noinclude></noinclude> 0fbq0obf46xogplc62vxzpp1l7qgqj2 322580 322579 2026-05-26T05:21:31Z Hariprasad Shetty10 7490 322580 proofread-page text/x-wiki <noinclude><pagequality level="1" user="Shreesha Sharma" /> {{rh|left=೨೪೪|center=|right='''ವೈಶಾಖ'''}}</noinclude>{{Left|ಅನುಮೋದಿಸಿ,}} “ತಮ್ಮನ್ನ ಹುಣಸೂರಿಗೆ ಬಂದು ನಮ್ಮ ಮನೇಲಿ ಕಾಣೀವಿ”- ಹೀಗೆ ಆಶ್ವಾಸನೆ ಕೊಟ್ಟಿದಲ್ಲದೆ, ಹಿಂದೆ ಉಳಿದ ಪೇದೆಯ ಕೈಗೆ ಹತ್ತು ರೂಪಾಯಿಗಳನ್ನೂ ಇಟ್ಟು, ಅವನೊಂದಿಗೆ ಏನೇನೊ ಗುಟ್ಟುಗುಟ್ಟಾಗಿ ಪಿಸುಮಾತಾಡಿದ. ಆ ರಾತ್ರಿಯೆ ಯಜಮಾನರೆಲ್ಲ ಹುಣಸೂರಿಗೆ ತೆರಳಿ ಸಬ್‌ಇನ್‌ಸ್ಪೆಕ್ಟರ್ ಗೂಳಪ್ಪನನ್ನು ಅವನ ಮನೆಯಲ್ಲಿಯೆ ರಹಸ್ಯವಾಗಿ ಕಂಡು ಬಂದರು. ಅನಂತರ ಗೂಳಪ್ಪ ದರುಮನಳ್ಳಿಯ ಕಡೆ, ಎಂಕಿ ಹೈದನ ಈ ಕೇಸಿನ ಸಂಬಂಧವಾಗಿ ತಲೆಹಾಕಲಿಲ್ಲ. ಊರಿನಲ್ಲಿ ಅದರ ಬಗ್ಗೆ ಪ್ರಕಟವಾಗಿ ಮಾತಾಡಲು ಧೈಯ್ ಬರದಿದ್ದರೂ ಒಳಗೊಳಗೇ ಆ ಇನ್‌ಸೆಕ್ಟರ್ ಕಯ್ಯಜಯಮಾನರುಗಳು ಸರಿಯಾಗಿ ಬೆಚ್ಚಗೆ ಮಾಡಿರಬೇಕು. ಇಲ್ಲದಿದ್ದರೆ, ಆವಯ್ಯನಾ ಇಲ್ಲೀಗಂಟ ಬರದೇ ಇರೋನು!ಎಂದು ಕೊಳ್ಳುತ್ತಿದ್ದರು ಊರಿನ ಜನ. {{gap}}ಯಜಮಾನರ ನಡತೆಯಿಂದ ಲಕ್ಕನ ಮನಸ್ಸು ಒಳಗೇ ಹೇಸಿತು. {{center|'''೨೩'''}} ಅಪರೂಪಕ್ಕೆ ಬಂದ ರುಕ್ಕಿಣಿಯನ್ನು ಅಕ್ಕ ಪಾರ್ವತಿಯು ಭೀಮನಳ್ಳಿಯ ತಮ್ಮ ಮನೆಯಲ್ಲಿ ಬೇಡಬೇಡವೆಂದೂ ಒಂದು ತಿಂಗಳಿನ ಕಾಲ ಒತ್ತಾಯಪೂರ್ವಕವಾಗಿ ಉಳಿಸಿಕೊಂಡಿದ್ದಳು. ದಿನಕ್ಕೊಂದು ಬಗೆಯಲ್ಲಿ ಉಪಚರಿಸಿದ್ದಳು. “ಇನ್ನು ದರುಮನಳ್ಳಿಯ ನಿಮ್ಮ ಮನೇಲಿ, ನಿನ್ನ ಕೈಯೂಟ ಇದ್ದೇ ಇದೆ. ಇಲ್ಲಿ ಕೆಲವು ದಿನಗಳ ಮಟ್ಟಿಗಾದರೂ ಸುಧಾರಿಸಿಕೊ. ಯಾಕೊ ಮದಲಿಗೂ ಈಗೂ ಬಲು ತೆಗೆದುಹೋಗಿದ್ದೀಯೆ” ಎಂದಿದ್ದಳು. ಭಾವ ಚಂದ್ರಶೇಖರಯ್ಯನವರು ಅದೇ ಒತ್ತಾಯ. ಮೇಲಾಗಿ ಗಿರಿಜೆಗೆ ಒಗ್ಗಿಹೋಗಿದ್ದ ಸರಸಿ ತನ್ನ ಸಂಗಾತಿಯನ್ನು ಬಿಟ್ಟು ಹೊರಡುವುದು ಅಷ್ಟು ಸುಲಭವೆ? ಭಾವನವರ ಗಾಡಿಯಲ್ಲಿ ತಮ್ಮ ಹಳ್ಳಿಗೆ ವಾಪಸು ಬರುವಾಗ ಅಕ್ಕ ಮತ್ತು ಭಾವನ ಹಾಲಿನಂತಹ ಸಂಸಾರವನ್ನು ನೆನೆದು ಸಮತೋಷಪಟ್ಟಳು. ಪುಣ್ಯಶಾಲಿಗಳು. ಭಗವಂತ ಅವರನ್ನು ಹಾಗೆಯೆ ಸುಖವಾಗಿ ಇಟ್ಟಿರಲಿ ಎಂದು ಮನಸಾರೆ ಹಾರೈಸಿದಳು. ದರುಮನಳ್ಳಿಗೆ ಬಂದ ಬಳಿಕ ಹಳೆಯ ಬದುಕಿನ ನಿರ್ವಹಣೆಗೆ ತನ್ನ ಮನಸ್ಸನ್ನು ತೊಡಗಿಸಿದಳು. ಬೇರೇನೂ ವಿಶೇಷವಿಲ್ಲದೆ ಯಾಂತ್ರಿಕವಾಗಿ ಇನ್ನೊಂದು ತಿಂಗಳು ಉರುಳಿತು.<noinclude></noinclude> 2nw6qwamwpts1l7gdr11q2uuuvsq1lj ಪುಟ:ವೈಶಾಖ.pdf/೨೬೧ 104 82190 322591 306432 2026-05-26T05:38:17Z Hariprasad Shetty10 7490 322591 proofread-page text/x-wiki <noinclude><pagequality level="1" user="Shreesha Sharma" />{{rh|left=ಸಮಗ್ರ ಕಾದಂಬರಿಗಳು|center=|right=೨೪೫}}</noinclude>{{gap}}ಎರಡು ತಿಂಗಳು ಕಳೆಯುತ್ತಿದ್ದಂತೆ ರುಕ್ಕಿಣಿಗೆ ಭಯ ಕಾಣಿಸಿಕೊಂಡಿತು. ತಿಂಗಳಿಗೆ ಸರಿಯಾಗಿ ಅವಳು 'ಹೊರಗೆ' ಕೂರಬೇಕು. ಈ ಎರಡು ತಿಂಗಳು ಉರುಳಿದರೂ ಮುಟ್ಟಾಗುವ ಯಾವ ಚಿಹ್ನೆಯೂ ಕಾಣುತ್ತಿಲ್ಲ. ಭೀಮನಳ್ಳಿಯಲ್ಲೆ ಅವಳಿಗೆ ಶಂಕೆ ಸೂಕ್ಷವಾಗಿ ತಲೆದೋರಿತ್ತು. ಅಲ್ಲಿಂದ ಬಂದೊಡನೆಯೆ ಪರಂಗಿಹಣ್ಣು, ಬೆಲ್ಲ ಇತ್ಯಾದಿ ಉಷ್ಣ ಪದಾರ್ಥಗಳನ್ನು ಯಥೇಚ್ಛವಾಗಿ ಉಪಯೋಗಿಸಿದ್ದಳು. ಗರ್ಭ ನಿಂತರೆ ಆ ಪದಾರ್ಥಗಳ ಬಳಕೆಯಿಂದ ಅದು ಒಡೆದು ಹೋಗುವುದೆಂದು ಜನ ಮಾತನಾಡುವುದನ್ನು ಅವಳು ಕೇಳಿದ್ದಳು. {{gap}}ಆದರೆ ಅವಳ ದುರದೃಷ್ಟದಿಂದ ರಕ್ತಸ್ರಾವದ ಯಾವ ಸೂಚನೆಯೂ ಕಂಡುಬರಲಿಲ್ಲ. ಈಗಲೀಗ ರುಕ್ಕಿಣಿಗೆ ತುಂಬ ದಿಗಿಲಾಯಿತು... ಈಗೇನು ಮಾಡುವುದು?... ಅನಪೇಕ್ಷಿತ ಗರ್ಭವನ್ನು ಹೇಗೆ ಕಳೆದುಕೊಳ್ಳುವುದು?...ಯಾರ ಸಂಗಡ ಹೇಳಿಕೊಳ್ಳಲಿ?... ಈ ಸಂದಗ್ನದಿಂದ ನನ್ನನ್ನು ಯಾರು ಪಾರುಮಾಡಬಲ್ಲರು?... ಮಾವನವರಿಗೇ ಹೇಳಿಕೊಳ್ಳಲೆ?... ಛೇ, ಛೇ. ಆಚಾರನಿಷ್ಠರಾದ ಅವರು ಗರ್ಭಪಾತಕ್ಕೆ ಒಪ್ಪಿಯಾರೆ?... ಅದು ಸಾಧ್ಯವಾಗದ ಮಾತು!... ಲಕ್ಷ ಮನೋರು?- ಆಯಿತು. ಅವರ ಹತ್ತಿರ ಯಾವ ಗುಟ್ಟು ಉಳಿಯುತ್ತೆ?... ಪುರೋಹಿತ ವೆಂಕಣ್ಣ ಜೋಯಿಸರ ಹೆಣ್ಣುಮಕ್ಕಳಿಗೆ ತುಂಬಾ ಸಂಭಾವಿತ ಗುಣ. ಅದರಲ್ಲೂ ಅವರ ಹಿರಿಯ ಮಗಳು ನಾಗಲಕ್ಷ್ಮಿ ವಯಸ್ಸಿನಲ್ಲಿ, ಅವರ ಇನ್ನಿಬ್ಬರು ಹೆಣ್ಣುಮಕ್ಕಳು, ವಸಂತ ಮತ್ತು ಶಾಂತಿಯನ್ನರಿಗಿನ್ನ ದೊಡ್ಡವಳು. ನಂಬಿಕೆಗೆ ಅರ್ಹಳು. ಆದರೆ ಅವಳಿಗೆ ಹೇಳಿಕೊಂಡರೆ, ಪಾಪ ಆ ಮುಗ್ಗೆ ಯಾರಿಂದ ಈ ಕಾರ್ಯ ಮಾಡಿಸಲು ಶಕ್ತಳು?- ಇನ್ನೂ ವಿವಾಹವಾಗದಿರುವ ಹೆಣ್ಣು. ಅವಳು ಬೇರೆಯವರೊಡನೆ ಇಂಥ ವಿಷಯವನ್ನು ಪ್ರಸ್ತಾಪ ಮಾಡಲು ಹೆದರುವುದಿಲ್ಲವೆ?... ಬುಂಡಮ್ಮ?- ಅವಳು ಒಳ್ಳೆಯ ಸ್ವಭಾವದವಳಾದರೂ ಹಳೆಯಕಾಲದವಳು, ಸಂಪ್ರದಾಯಬದ್ದಳು. ಭ್ರೂಣಹತ್ಯೆಗೆ ಅವಳೆಂದು ಒಪ್ಪಲಾರಳು. ಹಿಂದೊಮ್ಮೆ, ಶ್ಯಾನುಭೋಗರ ಮನೆಗೆ ಕಂದಾಯದ ಹಣ ಕಟ್ಟಲು ಬುಂಡಮ್ಮ ಬಂದಿದ್ದಳು. ಆಗ ತಾನೂ ಅಲ್ಲಿಗೆ ಆಗಾಗ ಹೋಗುತ್ತಿದ್ದ ಮಾಮೂಲಿನಂತೆ ಹೋಗಿದ್ದಲು. ಆ ಮಧ್ಯಾಹ್ನ ಶ್ಯಾನುಭೋಗರ ಹೆಂಡತಿಯ ಬಲಾತ್ಕಾರಕ್ಕೆ ಕಟ್ಟಿಬಿದ್ದು ಬುಂಡಮ್ಮ ಒಂದು ಹಾಡನ್ನು ಹಾಡಿದಳು. ಈ ವಯಸ್ಸಿನಲ್ಲೂ ಮುದುಕಿಯದು ಎಂಥ ಕಂಟ?- ಅದು ಹೇಗೂ ಇರಲಿ. ಆಗ ಅವಳು ಹಾಡಿದ ಪದದ ಎಡು ಸಾಲನ್ನು ಈಗ ನೆನಸಿಕೊಳ್ಳಲೂ ಭಯವಾಗುತ್ತದೆ. {{gap}}ಮಾನವ ಕುಲದಾಗೆ ಹತ್ಯೆ ಮಾಡಾರುಂಟ<noinclude></noinclude> 9h6xf3dh13y3gihnbcpxznx3h1di80c 322592 322591 2026-05-26T05:40:25Z Hariprasad Shetty10 7490 322592 proofread-page text/x-wiki <noinclude><pagequality level="1" user="Shreesha Sharma" />{{rh|left=ಸಮಗ್ರ ಕಾದಂಬರಿಗಳು|center=|right=೨೪೫}}</noinclude>{{gap}}ಎರಡು ತಿಂಗಳು ಕಳೆಯುತ್ತಿದ್ದಂತೆ ರುಕ್ಕಿಣಿಗೆ ಭಯ ಕಾಣಿಸಿಕೊಂಡಿತು. ತಿಂಗಳಿಗೆ ಸರಿಯಾಗಿ ಅವಳು 'ಹೊರಗೆ' ಕೂರಬೇಕು. ಈ ಎರಡು ತಿಂಗಳು ಉರುಳಿದರೂ ಮುಟ್ಟಾಗುವ ಯಾವ ಚಿಹ್ನೆಯೂ ಕಾಣುತ್ತಿಲ್ಲ. ಭೀಮನಳ್ಳಿಯಲ್ಲೆ ಅವಳಿಗೆ ಶಂಕೆ ಸೂಕ್ಷವಾಗಿ ತಲೆದೋರಿತ್ತು. ಅಲ್ಲಿಂದ ಬಂದೊಡನೆಯೆ ಪರಂಗಿಹಣ್ಣು, ಬೆಲ್ಲ ಇತ್ಯಾದಿ ಉಷ್ಣ ಪದಾರ್ಥಗಳನ್ನು ಯಥೇಚ್ಛವಾಗಿ ಉಪಯೋಗಿಸಿದ್ದಳು. ಗರ್ಭ ನಿಂತರೆ ಆ ಪದಾರ್ಥಗಳ ಬಳಕೆಯಿಂದ ಅದು ಒಡೆದು ಹೋಗುವುದೆಂದು ಜನ ಮಾತನಾಡುವುದನ್ನು ಅವಳು ಕೇಳಿದ್ದಳು. {{gap}}ಆದರೆ ಅವಳ ದುರದೃಷ್ಟದಿಂದ ರಕ್ತಸ್ರಾವದ ಯಾವ ಸೂಚನೆಯೂ ಕಂಡುಬರಲಿಲ್ಲ. ಈಗಲೀಗ ರುಕ್ಕಿಣಿಗೆ ತುಂಬ ದಿಗಿಲಾಯಿತು... ಈಗೇನು ಮಾಡುವುದು?... ಅನಪೇಕ್ಷಿತ ಗರ್ಭವನ್ನು ಹೇಗೆ ಕಳೆದುಕೊಳ್ಳುವುದು?...ಯಾರ ಸಂಗಡ ಹೇಳಿಕೊಳ್ಳಲಿ?... ಈ ಸಂದಗ್ನದಿಂದ ನನ್ನನ್ನು ಯಾರು ಪಾರುಮಾಡಬಲ್ಲರು?... ಮಾವನವರಿಗೇ ಹೇಳಿಕೊಳ್ಳಲೆ?... ಛೇ, ಛೇ. ಆಚಾರನಿಷ್ಠರಾದ ಅವರು ಗರ್ಭಪಾತಕ್ಕೆ ಒಪ್ಪಿಯಾರೆ?... ಅದು ಸಾಧ್ಯವಾಗದ ಮಾತು!... ಲಕ್ಷಮ್ಮನೋರು?- ಆಯಿತು. ಅವರ ಹತ್ತಿರ ಯಾವ ಗುಟ್ಟು ಉಳಿಯುತ್ತೆ?... ಪುರೋಹಿತ ವೆಂಕಣ್ಣ ಜೋಯಿಸರ ಹೆಣ್ಣುಮಕ್ಕಳಿಗೆ ತುಂಬಾ ಸಂಭಾವಿತ ಗುಣ. ಅದರಲ್ಲೂ ಅವರ ಹಿರಿಯ ಮಗಳು ನಾಗಲಕ್ಷ್ಮಿ ವಯಸ್ಸಿನಲ್ಲಿ, ಅವರ ಇನ್ನಿಬ್ಬರು ಹೆಣ್ಣುಮಕ್ಕಳು, ವಸಂತ ಮತ್ತು ಶಾಂತಿಯನ್ನರಿಗಿನ್ನ ದೊಡ್ಡವಳು. ನಂಬಿಕೆಗೆ ಅರ್ಹಳು. ಆದರೆ ಅವಳಿಗೆ ಹೇಳಿಕೊಂಡರೆ, ಪಾಪ ಆ ಮುಗ್ಗೆ ಯಾರಿಂದ ಈ ಕಾರ್ಯ ಮಾಡಿಸಲು ಶಕ್ತಳು?- ಇನ್ನೂ ವಿವಾಹವಾಗದಿರುವ ಹೆಣ್ಣು. ಅವಳು ಬೇರೆಯವರೊಡನೆ ಇಂಥ ವಿಷಯವನ್ನು ಪ್ರಸ್ತಾಪ ಮಾಡಲು ಹೆದರುವುದಿಲ್ಲವೆ?... ಬುಂಡಮ್ಮ?— ಅವಳು ಒಳ್ಳೆಯ ಸ್ವಭಾವದವಳಾದರೂ ಹಳೆಯಕಾಲದವಳು, ಸಂಪ್ರದಾಯಬದ್ದಳು. ಭ್ರೂಣಹತ್ಯೆಗೆ ಅವಳೆಂದು ಒಪ್ಪಲಾರಳು. ಹಿಂದೊಮ್ಮೆ, ಶ್ಯಾನುಭೋಗರ ಮನೆಗೆ ಕಂದಾಯದ ಹಣ ಕಟ್ಟಲು ಬುಂಡಮ್ಮ ಬಂದಿದ್ದಳು. ಆಗ ತಾನೂ ಅಲ್ಲಿಗೆ ಆಗಾಗ ಹೋಗುತ್ತಿದ್ದ ಮಾಮೂಲಿನಂತೆ ಹೋಗಿದ್ದಲು. ಆ ಮಧ್ಯಾಹ್ನ ಶ್ಯಾನುಭೋಗರ ಹೆಂಡತಿಯ ಬಲಾತ್ಕಾರಕ್ಕೆ ಕಟ್ಟಿಬಿದ್ದು ಬುಂಡಮ್ಮ ಒಂದು ಹಾಡನ್ನು ಹಾಡಿದಳು. ಈ ವಯಸ್ಸಿನಲ್ಲೂ ಮುದುಕಿಯದು ಎಂಥ ಕಂಟ?- ಅದು ಹೇಗೂ ಇರಲಿ. ಆಗ ಅವಳು ಹಾಡಿದ ಪದದ ಎಡು ಸಾಲನ್ನು ಈಗ ನೆನಸಿಕೊಳ್ಳಲೂ ಭಯವಾಗುತ್ತದೆ. {{gap}}ಮಾನವ ಕುಲದಾಗೆ ಹತ್ಯೆ ಮಾಡಾರುಂಟ<noinclude></noinclude> nu2g0pp24gr2wskrbrdyo5ec0677f1l 322593 322592 2026-05-26T05:40:34Z Hariprasad Shetty10 7490 /* Proofread */ 322593 proofread-page text/x-wiki <noinclude><pagequality level="3" user="Hariprasad Shetty10" />{{rh|left=ಸಮಗ್ರ ಕಾದಂಬರಿಗಳು|center=|right=೨೪೫}}</noinclude>{{gap}}ಎರಡು ತಿಂಗಳು ಕಳೆಯುತ್ತಿದ್ದಂತೆ ರುಕ್ಕಿಣಿಗೆ ಭಯ ಕಾಣಿಸಿಕೊಂಡಿತು. ತಿಂಗಳಿಗೆ ಸರಿಯಾಗಿ ಅವಳು 'ಹೊರಗೆ' ಕೂರಬೇಕು. ಈ ಎರಡು ತಿಂಗಳು ಉರುಳಿದರೂ ಮುಟ್ಟಾಗುವ ಯಾವ ಚಿಹ್ನೆಯೂ ಕಾಣುತ್ತಿಲ್ಲ. ಭೀಮನಳ್ಳಿಯಲ್ಲೆ ಅವಳಿಗೆ ಶಂಕೆ ಸೂಕ್ಷವಾಗಿ ತಲೆದೋರಿತ್ತು. ಅಲ್ಲಿಂದ ಬಂದೊಡನೆಯೆ ಪರಂಗಿಹಣ್ಣು, ಬೆಲ್ಲ ಇತ್ಯಾದಿ ಉಷ್ಣ ಪದಾರ್ಥಗಳನ್ನು ಯಥೇಚ್ಛವಾಗಿ ಉಪಯೋಗಿಸಿದ್ದಳು. ಗರ್ಭ ನಿಂತರೆ ಆ ಪದಾರ್ಥಗಳ ಬಳಕೆಯಿಂದ ಅದು ಒಡೆದು ಹೋಗುವುದೆಂದು ಜನ ಮಾತನಾಡುವುದನ್ನು ಅವಳು ಕೇಳಿದ್ದಳು. {{gap}}ಆದರೆ ಅವಳ ದುರದೃಷ್ಟದಿಂದ ರಕ್ತಸ್ರಾವದ ಯಾವ ಸೂಚನೆಯೂ ಕಂಡುಬರಲಿಲ್ಲ. ಈಗಲೀಗ ರುಕ್ಕಿಣಿಗೆ ತುಂಬ ದಿಗಿಲಾಯಿತು... ಈಗೇನು ಮಾಡುವುದು?... ಅನಪೇಕ್ಷಿತ ಗರ್ಭವನ್ನು ಹೇಗೆ ಕಳೆದುಕೊಳ್ಳುವುದು?...ಯಾರ ಸಂಗಡ ಹೇಳಿಕೊಳ್ಳಲಿ?... ಈ ಸಂದಗ್ನದಿಂದ ನನ್ನನ್ನು ಯಾರು ಪಾರುಮಾಡಬಲ್ಲರು?... ಮಾವನವರಿಗೇ ಹೇಳಿಕೊಳ್ಳಲೆ?... ಛೇ, ಛೇ. ಆಚಾರನಿಷ್ಠರಾದ ಅವರು ಗರ್ಭಪಾತಕ್ಕೆ ಒಪ್ಪಿಯಾರೆ?... ಅದು ಸಾಧ್ಯವಾಗದ ಮಾತು!... ಲಕ್ಷಮ್ಮನೋರು?- ಆಯಿತು. ಅವರ ಹತ್ತಿರ ಯಾವ ಗುಟ್ಟು ಉಳಿಯುತ್ತೆ?... ಪುರೋಹಿತ ವೆಂಕಣ್ಣ ಜೋಯಿಸರ ಹೆಣ್ಣುಮಕ್ಕಳಿಗೆ ತುಂಬಾ ಸಂಭಾವಿತ ಗುಣ. ಅದರಲ್ಲೂ ಅವರ ಹಿರಿಯ ಮಗಳು ನಾಗಲಕ್ಷ್ಮಿ ವಯಸ್ಸಿನಲ್ಲಿ, ಅವರ ಇನ್ನಿಬ್ಬರು ಹೆಣ್ಣುಮಕ್ಕಳು, ವಸಂತ ಮತ್ತು ಶಾಂತಿಯನ್ನರಿಗಿನ್ನ ದೊಡ್ಡವಳು. ನಂಬಿಕೆಗೆ ಅರ್ಹಳು. ಆದರೆ ಅವಳಿಗೆ ಹೇಳಿಕೊಂಡರೆ, ಪಾಪ ಆ ಮುಗ್ಗೆ ಯಾರಿಂದ ಈ ಕಾರ್ಯ ಮಾಡಿಸಲು ಶಕ್ತಳು?- ಇನ್ನೂ ವಿವಾಹವಾಗದಿರುವ ಹೆಣ್ಣು. ಅವಳು ಬೇರೆಯವರೊಡನೆ ಇಂಥ ವಿಷಯವನ್ನು ಪ್ರಸ್ತಾಪ ಮಾಡಲು ಹೆದರುವುದಿಲ್ಲವೆ?... ಬುಂಡಮ್ಮ?— ಅವಳು ಒಳ್ಳೆಯ ಸ್ವಭಾವದವಳಾದರೂ ಹಳೆಯಕಾಲದವಳು, ಸಂಪ್ರದಾಯಬದ್ದಳು. ಭ್ರೂಣಹತ್ಯೆಗೆ ಅವಳೆಂದು ಒಪ್ಪಲಾರಳು. ಹಿಂದೊಮ್ಮೆ, ಶ್ಯಾನುಭೋಗರ ಮನೆಗೆ ಕಂದಾಯದ ಹಣ ಕಟ್ಟಲು ಬುಂಡಮ್ಮ ಬಂದಿದ್ದಳು. ಆಗ ತಾನೂ ಅಲ್ಲಿಗೆ ಆಗಾಗ ಹೋಗುತ್ತಿದ್ದ ಮಾಮೂಲಿನಂತೆ ಹೋಗಿದ್ದಲು. ಆ ಮಧ್ಯಾಹ್ನ ಶ್ಯಾನುಭೋಗರ ಹೆಂಡತಿಯ ಬಲಾತ್ಕಾರಕ್ಕೆ ಕಟ್ಟಿಬಿದ್ದು ಬುಂಡಮ್ಮ ಒಂದು ಹಾಡನ್ನು ಹಾಡಿದಳು. ಈ ವಯಸ್ಸಿನಲ್ಲೂ ಮುದುಕಿಯದು ಎಂಥ ಕಂಟ?- ಅದು ಹೇಗೂ ಇರಲಿ. ಆಗ ಅವಳು ಹಾಡಿದ ಪದದ ಎಡು ಸಾಲನ್ನು ಈಗ ನೆನಸಿಕೊಳ್ಳಲೂ ಭಯವಾಗುತ್ತದೆ. {{gap}}ಮಾನವ ಕುಲದಾಗೆ ಹತ್ಯೆ ಮಾಡಾರುಂಟ<noinclude></noinclude> aivet444q0f90u4xxxqc69ihe006la5 322594 322593 2026-05-26T05:40:47Z Hariprasad Shetty10 7490 322594 proofread-page text/x-wiki <noinclude><pagequality level="3" user="Hariprasad Shetty10" />{{rh|left=ಸಮಗ್ರ ಕಾದಂಬರಿಗಳು|center=|right=೨೪೫}}</noinclude>{{gap}}ಎರಡು ತಿಂಗಳು ಕಳೆಯುತ್ತಿದ್ದಂತೆ ರುಕ್ಕಿಣಿಗೆ ಭಯ ಕಾಣಿಸಿಕೊಂಡಿತು. ತಿಂಗಳಿಗೆ ಸರಿಯಾಗಿ ಅವಳು 'ಹೊರಗೆ' ಕೂರಬೇಕು. ಈ ಎರಡು ತಿಂಗಳು ಉರುಳಿದರೂ ಮುಟ್ಟಾಗುವ ಯಾವ ಚಿಹ್ನೆಯೂ ಕಾಣುತ್ತಿಲ್ಲ. ಭೀಮನಳ್ಳಿಯಲ್ಲೆ ಅವಳಿಗೆ ಶಂಕೆ ಸೂಕ್ಷವಾಗಿ ತಲೆದೋರಿತ್ತು. ಅಲ್ಲಿಂದ ಬಂದೊಡನೆಯೆ ಪರಂಗಿಹಣ್ಣು, ಬೆಲ್ಲ ಇತ್ಯಾದಿ ಉಷ್ಣ ಪದಾರ್ಥಗಳನ್ನು ಯಥೇಚ್ಛವಾಗಿ ಉಪಯೋಗಿಸಿದ್ದಳು. ಗರ್ಭ ನಿಂತರೆ ಆ ಪದಾರ್ಥಗಳ ಬಳಕೆಯಿಂದ ಅದು ಒಡೆದು ಹೋಗುವುದೆಂದು ಜನ ಮಾತನಾಡುವುದನ್ನು ಅವಳು ಕೇಳಿದ್ದಳು. {{gap}}ಆದರೆ ಅವಳ ದುರದೃಷ್ಟದಿಂದ ರಕ್ತಸ್ರಾವದ ಯಾವ ಸೂಚನೆಯೂ ಕಂಡುಬರಲಿಲ್ಲ. ಈಗಲೀಗ ರುಕ್ಕಿಣಿಗೆ ತುಂಬ ದಿಗಿಲಾಯಿತು... ಈಗೇನು ಮಾಡುವುದು?... ಅನಪೇಕ್ಷಿತ ಗರ್ಭವನ್ನು ಹೇಗೆ ಕಳೆದುಕೊಳ್ಳುವುದು?...ಯಾರ ಸಂಗಡ ಹೇಳಿಕೊಳ್ಳಲಿ?... ಈ ಸಂದಗ್ನದಿಂದ ನನ್ನನ್ನು ಯಾರು ಪಾರುಮಾಡಬಲ್ಲರು?... ಮಾವನವರಿಗೇ ಹೇಳಿಕೊಳ್ಳಲೆ?... ಛೇ, ಛೇ. ಆಚಾರನಿಷ್ಠರಾದ ಅವರು ಗರ್ಭಪಾತಕ್ಕೆ ಒಪ್ಪಿಯಾರೆ?... ಅದು ಸಾಧ್ಯವಾಗದ ಮಾತು!... ಲಕ್ಷಮ್ಮನೋರು?- ಆಯಿತು. ಅವರ ಹತ್ತಿರ ಯಾವ ಗುಟ್ಟು ಉಳಿಯುತ್ತೆ?... ಪುರೋಹಿತ ವೆಂಕಣ್ಣ ಜೋಯಿಸರ ಹೆಣ್ಣುಮಕ್ಕಳಿಗೆ ತುಂಬಾ ಸಂಭಾವಿತ ಗುಣ. ಅದರಲ್ಲೂ ಅವರ ಹಿರಿಯ ಮಗಳು ನಾಗಲಕ್ಷ್ಮಿ ವಯಸ್ಸಿನಲ್ಲಿ, ಅವರ ಇನ್ನಿಬ್ಬರು ಹೆಣ್ಣುಮಕ್ಕಳು, ವಸಂತ ಮತ್ತು ಶಾಂತಿಯನ್ನರಿಗಿನ್ನ ದೊಡ್ಡವಳು. ನಂಬಿಕೆಗೆ ಅರ್ಹಳು. ಆದರೆ ಅವಳಿಗೆ ಹೇಳಿಕೊಂಡರೆ, ಪಾಪ ಆ ಮುಗ್ಗೆ ಯಾರಿಂದ ಈ ಕಾರ್ಯ ಮಾಡಿಸಲು ಶಕ್ತಳು?- ಇನ್ನೂ ವಿವಾಹವಾಗದಿರುವ ಹೆಣ್ಣು. ಅವಳು ಬೇರೆಯವರೊಡನೆ ಇಂಥ ವಿಷಯವನ್ನು ಪ್ರಸ್ತಾಪ ಮಾಡಲು ಹೆದರುವುದಿಲ್ಲವೆ?... ಬುಂಡಮ್ಮ?— ಅವಳು ಒಳ್ಳೆಯ ಸ್ವಭಾವದವಳಾದರೂ ಹಳೆಯಕಾಲದವಳು, ಸಂಪ್ರದಾಯಬದ್ದಳು. ಭ್ರೂಣಹತ್ಯೆಗೆ ಅವಳೆಂದು ಒಪ್ಪಲಾರಳು. ಹಿಂದೊಮ್ಮೆ, ಶ್ಯಾನುಭೋಗರ ಮನೆಗೆ ಕಂದಾಯದ ಹಣ ಕಟ್ಟಲು ಬುಂಡಮ್ಮ ಬಂದಿದ್ದಳು. ಆಗ ತಾನೂ ಅಲ್ಲಿಗೆ ಆಗಾಗ ಹೋಗುತ್ತಿದ್ದ ಮಾಮೂಲಿನಂತೆ ಹೋಗಿದ್ದಲು. ಆ ಮಧ್ಯಾಹ್ನ ಶ್ಯಾನುಭೋಗರ ಹೆಂಡತಿಯ ಬಲಾತ್ಕಾರಕ್ಕೆ ಕಟ್ಟಿಬಿದ್ದು ಬುಂಡಮ್ಮ ಒಂದು ಹಾಡನ್ನು ಹಾಡಿದಳು. ಈ ವಯಸ್ಸಿನಲ್ಲೂ ಮುದುಕಿಯದು ಎಂಥ ಕಂಟ?- ಅದು ಹೇಗೂ ಇರಲಿ. ಆಗ ಅವಳು ಹಾಡಿದ ಪದದ ಎಡು ಸಾಲನ್ನು ಈಗ ನೆನಸಿಕೊಳ್ಳಲೂ ಭಯವಾಗುತ್ತದೆ.<br /> {{gap}}ಮಾನವ ಕುಲದಾಗೆ ಹತ್ಯೆ ಮಾಡಾರುಂಟ<noinclude></noinclude> obhk4vwhid9868tr0a0alc9ja90wvw7 322600 322594 2026-05-26T05:45:20Z Pragathi. BH 7585 /* Validated */ 322600 proofread-page text/x-wiki <noinclude><pagequality level="4" user="Pragathi. BH" />{{rh|left=ಸಮಗ್ರ ಕಾದಂಬರಿಗಳು|center=|right=೨೪೫}}</noinclude>{{gap}}ಎರಡು ತಿಂಗಳು ಕಳೆಯುತ್ತಿದ್ದಂತೆ ರುಕ್ಕಿಣಿಗೆ ಭಯ ಕಾಣಿಸಿಕೊಂಡಿತು. ತಿಂಗಳಿಗೆ ಸರಿಯಾಗಿ ಅವಳು 'ಹೊರಗೆ' ಕೂರಬೇಕು. ಈ ಎರಡು ತಿಂಗಳು ಉರುಳಿದರೂ ಮುಟ್ಟಾಗುವ ಯಾವ ಚಿಹ್ನೆಯೂ ಕಾಣುತ್ತಿಲ್ಲ. ಭೀಮನಳ್ಳಿಯಲ್ಲೆ ಅವಳಿಗೆ ಶಂಕೆ ಸೂಕ್ಷವಾಗಿ ತಲೆದೋರಿತ್ತು. ಅಲ್ಲಿಂದ ಬಂದೊಡನೆಯೆ ಪರಂಗಿಹಣ್ಣು, ಬೆಲ್ಲ ಇತ್ಯಾದಿ ಉಷ್ಣ ಪದಾರ್ಥಗಳನ್ನು ಯಥೇಚ್ಛವಾಗಿ ಉಪಯೋಗಿಸಿದ್ದಳು. ಗರ್ಭ ನಿಂತರೆ ಆ ಪದಾರ್ಥಗಳ ಬಳಕೆಯಿಂದ ಅದು ಒಡೆದು ಹೋಗುವುದೆಂದು ಜನ ಮಾತನಾಡುವುದನ್ನು ಅವಳು ಕೇಳಿದ್ದಳು. {{gap}}ಆದರೆ ಅವಳ ದುರದೃಷ್ಟದಿಂದ ರಕ್ತಸ್ರಾವದ ಯಾವ ಸೂಚನೆಯೂ ಕಂಡುಬರಲಿಲ್ಲ. ಈಗಲೀಗ ರುಕ್ಕಿಣಿಗೆ ತುಂಬ ದಿಗಿಲಾಯಿತು... ಈಗೇನು ಮಾಡುವುದು?... ಅನಪೇಕ್ಷಿತ ಗರ್ಭವನ್ನು ಹೇಗೆ ಕಳೆದುಕೊಳ್ಳುವುದು?...ಯಾರ ಸಂಗಡ ಹೇಳಿಕೊಳ್ಳಲಿ?... ಈ ಸಂದಗ್ನದಿಂದ ನನ್ನನ್ನು ಯಾರು ಪಾರುಮಾಡಬಲ್ಲರು?... ಮಾವನವರಿಗೇ ಹೇಳಿಕೊಳ್ಳಲೆ?... ಛೇ, ಛೇ. ಆಚಾರನಿಷ್ಠರಾದ ಅವರು ಗರ್ಭಪಾತಕ್ಕೆ ಒಪ್ಪಿಯಾರೆ?... ಅದು ಸಾಧ್ಯವಾಗದ ಮಾತು!... ಲಕ್ಷಮ್ಮನೋರು?- ಆಯಿತು. ಅವರ ಹತ್ತಿರ ಯಾವ ಗುಟ್ಟು ಉಳಿಯುತ್ತೆ?... ಪುರೋಹಿತ ವೆಂಕಣ್ಣ ಜೋಯಿಸರ ಹೆಣ್ಣುಮಕ್ಕಳಿಗೆ ತುಂಬಾ ಸಂಭಾವಿತ ಗುಣ. ಅದರಲ್ಲೂ ಅವರ ಹಿರಿಯ ಮಗಳು ನಾಗಲಕ್ಷ್ಮಿ ವಯಸ್ಸಿನಲ್ಲಿ, ಅವರ ಇನ್ನಿಬ್ಬರು ಹೆಣ್ಣುಮಕ್ಕಳು, ವಸಂತ ಮತ್ತು ಶಾಂತಿಯನ್ನರಿಗಿನ್ನ ದೊಡ್ಡವಳು. ನಂಬಿಕೆಗೆ ಅರ್ಹಳು. ಆದರೆ ಅವಳಿಗೆ ಹೇಳಿಕೊಂಡರೆ, ಪಾಪ ಆ ಮುಗ್ಗೆ ಯಾರಿಂದ ಈ ಕಾರ್ಯ ಮಾಡಿಸಲು ಶಕ್ತಳು?- ಇನ್ನೂ ವಿವಾಹವಾಗದಿರುವ ಹೆಣ್ಣು. ಅವಳು ಬೇರೆಯವರೊಡನೆ ಇಂಥ ವಿಷಯವನ್ನು ಪ್ರಸ್ತಾಪ ಮಾಡಲು ಹೆದರುವುದಿಲ್ಲವೆ?... ಬುಂಡಮ್ಮ?— ಅವಳು ಒಳ್ಳೆಯ ಸ್ವಭಾವದವಳಾದರೂ ಹಳೆಯಕಾಲದವಳು, ಸಂಪ್ರದಾಯಬದ್ದಳು. ಭ್ರೂಣಹತ್ಯೆಗೆ ಅವಳೆಂದು ಒಪ್ಪಲಾರಳು. ಹಿಂದೊಮ್ಮೆ, ಶ್ಯಾನುಭೋಗರ ಮನೆಗೆ ಕಂದಾಯದ ಹಣ ಕಟ್ಟಲು ಬುಂಡಮ್ಮ ಬಂದಿದ್ದಳು. ಆಗ ತಾನೂ ಅಲ್ಲಿಗೆ ಆಗಾಗ ಹೋಗುತ್ತಿದ್ದ ಮಾಮೂಲಿನಂತೆ ಹೋಗಿದ್ದಲು. ಆ ಮಧ್ಯಾಹ್ನ ಶ್ಯಾನುಭೋಗರ ಹೆಂಡತಿಯ ಬಲಾತ್ಕಾರಕ್ಕೆ ಕಟ್ಟಿಬಿದ್ದು ಬುಂಡಮ್ಮ ಒಂದು ಹಾಡನ್ನು ಹಾಡಿದಳು. ಈ ವಯಸ್ಸಿನಲ್ಲೂ ಮುದುಕಿಯದು ಎಂಥ ಕಂಟ?- ಅದು ಹೇಗೂ ಇರಲಿ. ಆಗ ಅವಳು ಹಾಡಿದ ಪದದ ಎಡು ಸಾಲನ್ನು ಈಗ ನೆನಸಿಕೊಳ್ಳಲೂ ಭಯವಾಗುತ್ತದೆ.<br /> {{gap}}ಮಾನವ ಕುಲದಾಗೆ ಹತ್ಯೆ ಮಾಡಾರುಂಟ<noinclude></noinclude> fprkpzrnkfjf8erdmvbnj79h07lwe8a ಪುಟ:ವೈಶಾಖ.pdf/೨೬೨ 104 82191 322596 306436 2026-05-26T05:44:02Z Hariprasad Shetty10 7490 322596 proofread-page text/x-wiki <noinclude><pagequality level="1" user="Shreesha Sharma" />{{rh|left=೨೪೬|center=|right='''ವೈಶಾಖ'''}}</noinclude>{{gap}}ಹೆತ್ತ ಮಕ್ಕಳ ಕೊಲ್ವಾರುಂಟ?...<br /> {{gap}}ಇಂಥ ಅಭಿಪ್ರಾಯ ಹೊಂದಿರುವ ಮುದುಕಿ ತನ್ನ ಗರ್ಭಪಾತಕ್ಕೆ ಖಂಡಿತ ನೆರವೀಯಲಾರಳು... ಹೀಗೆಯ ಊರಿನ ಕೇರಿಗಳಲ್ಲಿ ತನಗೆ ಹಿತವರೆನಿಸದ ಒಬ್ಬೊಬ್ಬರನ್ನೂ ಮನಸ್ಸಿನಲ್ಲಿ ವಿಚಾರ ಮಾಡಿ ನೋಡಿದಳು. ಈ ವಿಷಯದಲ್ಲಿ ಯಾರೂ ಅವಳಿಗೆ ಹಿತವರಾಗಿ ತೋರಲಿಲ್ಲ. ಊರಿನ ಯಾರ ಸಂಗಡ ಬಾಯಿ ಬಿಚ್ಚಿದರೂ ತನಗೆ ಅಪಾಯವೆ ಕಾದಿತ್ತು. ಭೀಮನಳ್ಳಿಯ ಅಕ್ಕ ಪಾರ್ವತಿಗೆ ತಿಳಿಸಿದರೆ ಹೇಗೆ ಎಂಬ ಆಲೋಚನೆಯೂ ಸುಳಿಯಿತು. ಸುಳಿದಂತೆಯ ಆ ಆಲೋಚನೆಯು ಕಮರಿಹೋಯಿತು. ಅಕ್ಕ ಭಾವ ಇಬ್ಬರೂ ಬಾಕಿ ಇಲ್ಲ ವಿಷಯಗಳಲ್ಲಿ ಉದಾರಿಗಳಾದರೂ ಇಂಥ ವಿಚಾರದಲ್ಲಿ ಅವರಿಬ್ಬರೂ ಸಂಪ್ರದಾಯಶರಣರೆ ಎಂಬುದನ್ನು ಭೀಮನಳ್ಳಿಯಲ್ಲಿ ತನ್ನ ಒಂದು ತಿಂಗಳ ವಾಸ್ತವ್ಯ ಮನವರಿಗೆ ಮಾಡಿಕೊಟ್ಟಿತ್ತು. ಭೀಮನಳ್ಳಿಯಲ್ಲಿ ಯಾರಾದರೂ ಹೆಣ್ಣು ಮಕ್ಕಳು ಜಾರಿದರೆ, ಅವಳು ಯಾವ ಕೇರಿಯವಳಾದರೂ ಸರಿ, ಅವಳನ್ನು ಕುರಿತು ಲಾಘವವಾಗಿ, ತಿರಸ್ಕಾರವಾಗಿ, ಕೆಲವೊಮ್ಮೆ ಕಠೋರವಾಗಿ ಟೀಕಿಸುತ್ತಿದ್ದರು! ತನ್ನ ಭಾವನ ದೃಷ್ಟಿಯಲ್ಲಿ ಹೆಣ್ಣು ಎಂದರೆ ಪುರಾಣದ ಸೀತೆ, ಸಾವಿತ್ರಿಯರಂತಿರಬೇಕು. ಭಾವನ ಸಹಚರಿಯಾಗಿ ಅನೇಕ ಸಂವತ್ಸರ ಸವೆಸಿದ್ದ, ಅಕ್ಕ ಪಾರ್ವತಿಯೂ ಅದೇ ಭಾವನೆಯನ್ನು ಬೆಳೆಸಿಕೊಂಡಿದ್ದಳು!... ತನಗಿನೂ ನೆನಪಿದೆ. ಒಂದು ದಿನ ಬುಟ್ಟಿ ಮಾರಲು ಮುದುಕಿಯೊಬ್ಬಳು ಅಕ್ಕನ ಮನೆಗೆ ಬಂದಿದ್ದಳು. ಬುಟ್ಟಿಯನ್ನು ಕೊಳ್ಳಲು ಚೌಕಾಶಿ ನಡೆಯುತ್ತಿರುವಾಗ, ಆ ಊರಿನ ಮದುವೆಯಾದ ಒಂದು ಹೆಣ್ಣು ಗಂಡನನ್ನು ಬಿಟ್ಟು ಅದೇ ಊರಿನ ಇನ್ನೊಬ್ಬನೊಡನೆ ಬಾಳ್ವೆ ಮಾಡುತ್ತಿರುವ ಸುದ್ದಿಯನ್ನೆತ್ತಿದ್ದಳು. ಅಕ್ಕ ಪಾತು ಒಡನೆಯ “ಇಲ್ಲಿ ನೋಡು. ಇನ್ನು ಮುಂದೆ ಇಂಥ ಹಾದರಗಿತ್ತಿಯರ ಸುದ್ದಿಯನ್ನು ನಮ್ಮ ಮನೇಲಿ ಹೇಳಬೇಡ. ನಮ್ಮ ಮನೇಲಿ ಬೆಳೀತಿರುವ ಹೆಣ್ಣುಮಕ್ಕಳಿವೆ. ಇಂಥ ಮಾತು ಅವರ ಕಿವಿಗೆ ಬೀಳಬಾರದು!...” ಸಿಡುಕಿ, ಆ ಮುದುಕಿ ಅವಾಕ್ಕಾಗುವಂತೆ ಮಾಡಿದಳು... ಇಂಥ ಸಂಪ್ರದಾಯ ಶರಣರ ಮುಂದೆ ತನ್ನ ಹಗರಣವನ್ನು ಪ್ರಕಟಿಸಿ, ಅವರ ಸಹಾಯ ಕೋರಿದರೆ, ಅವರಿಂದ ಎಂಥ ಪ್ರತಿಕ್ರಿಯೆ ಬರಬಹುದೆಂಬುದು ಸ್ವಯಂ ವೇದ್ಯವೇ ಆಗಿತ್ತು... ರುಕ್ಕಿಣಿ ಹತಾಶಳಾದಳು... ಈ ತುಯ್ದಾಟದಲ್ಲಿ ಇನ್ನೂ ಎಂಟೊಂಬತ್ತು ದಿನಗಳು ಕಳೆದುಹೋಗಿದ್ದವು... {{gap}}ರುಕ್ಕಿಣಿಗೆ ಈ ತಾಳತಪ್ಪಿದ ಮನಃಸ್ಥಿತಿಯಲ್ಲಿರುವಾಗ, ತನ್ನನ್ನು ಬಹಳವಾಗಿ<noinclude></noinclude> egsbut2xvu3pec0566mj1r7yidr6ge8 322597 322596 2026-05-26T05:44:09Z Hariprasad Shetty10 7490 /* Proofread */ 322597 proofread-page text/x-wiki <noinclude><pagequality level="3" user="Hariprasad Shetty10" />{{rh|left=೨೪೬|center=|right='''ವೈಶಾಖ'''}}</noinclude>{{gap}}ಹೆತ್ತ ಮಕ್ಕಳ ಕೊಲ್ವಾರುಂಟ?...<br /> {{gap}}ಇಂಥ ಅಭಿಪ್ರಾಯ ಹೊಂದಿರುವ ಮುದುಕಿ ತನ್ನ ಗರ್ಭಪಾತಕ್ಕೆ ಖಂಡಿತ ನೆರವೀಯಲಾರಳು... ಹೀಗೆಯ ಊರಿನ ಕೇರಿಗಳಲ್ಲಿ ತನಗೆ ಹಿತವರೆನಿಸದ ಒಬ್ಬೊಬ್ಬರನ್ನೂ ಮನಸ್ಸಿನಲ್ಲಿ ವಿಚಾರ ಮಾಡಿ ನೋಡಿದಳು. ಈ ವಿಷಯದಲ್ಲಿ ಯಾರೂ ಅವಳಿಗೆ ಹಿತವರಾಗಿ ತೋರಲಿಲ್ಲ. ಊರಿನ ಯಾರ ಸಂಗಡ ಬಾಯಿ ಬಿಚ್ಚಿದರೂ ತನಗೆ ಅಪಾಯವೆ ಕಾದಿತ್ತು. ಭೀಮನಳ್ಳಿಯ ಅಕ್ಕ ಪಾರ್ವತಿಗೆ ತಿಳಿಸಿದರೆ ಹೇಗೆ ಎಂಬ ಆಲೋಚನೆಯೂ ಸುಳಿಯಿತು. ಸುಳಿದಂತೆಯ ಆ ಆಲೋಚನೆಯು ಕಮರಿಹೋಯಿತು. ಅಕ್ಕ ಭಾವ ಇಬ್ಬರೂ ಬಾಕಿ ಇಲ್ಲ ವಿಷಯಗಳಲ್ಲಿ ಉದಾರಿಗಳಾದರೂ ಇಂಥ ವಿಚಾರದಲ್ಲಿ ಅವರಿಬ್ಬರೂ ಸಂಪ್ರದಾಯಶರಣರೆ ಎಂಬುದನ್ನು ಭೀಮನಳ್ಳಿಯಲ್ಲಿ ತನ್ನ ಒಂದು ತಿಂಗಳ ವಾಸ್ತವ್ಯ ಮನವರಿಗೆ ಮಾಡಿಕೊಟ್ಟಿತ್ತು. ಭೀಮನಳ್ಳಿಯಲ್ಲಿ ಯಾರಾದರೂ ಹೆಣ್ಣು ಮಕ್ಕಳು ಜಾರಿದರೆ, ಅವಳು ಯಾವ ಕೇರಿಯವಳಾದರೂ ಸರಿ, ಅವಳನ್ನು ಕುರಿತು ಲಾಘವವಾಗಿ, ತಿರಸ್ಕಾರವಾಗಿ, ಕೆಲವೊಮ್ಮೆ ಕಠೋರವಾಗಿ ಟೀಕಿಸುತ್ತಿದ್ದರು! ತನ್ನ ಭಾವನ ದೃಷ್ಟಿಯಲ್ಲಿ ಹೆಣ್ಣು ಎಂದರೆ ಪುರಾಣದ ಸೀತೆ, ಸಾವಿತ್ರಿಯರಂತಿರಬೇಕು. ಭಾವನ ಸಹಚರಿಯಾಗಿ ಅನೇಕ ಸಂವತ್ಸರ ಸವೆಸಿದ್ದ, ಅಕ್ಕ ಪಾರ್ವತಿಯೂ ಅದೇ ಭಾವನೆಯನ್ನು ಬೆಳೆಸಿಕೊಂಡಿದ್ದಳು!... ತನಗಿನೂ ನೆನಪಿದೆ. ಒಂದು ದಿನ ಬುಟ್ಟಿ ಮಾರಲು ಮುದುಕಿಯೊಬ್ಬಳು ಅಕ್ಕನ ಮನೆಗೆ ಬಂದಿದ್ದಳು. ಬುಟ್ಟಿಯನ್ನು ಕೊಳ್ಳಲು ಚೌಕಾಶಿ ನಡೆಯುತ್ತಿರುವಾಗ, ಆ ಊರಿನ ಮದುವೆಯಾದ ಒಂದು ಹೆಣ್ಣು ಗಂಡನನ್ನು ಬಿಟ್ಟು ಅದೇ ಊರಿನ ಇನ್ನೊಬ್ಬನೊಡನೆ ಬಾಳ್ವೆ ಮಾಡುತ್ತಿರುವ ಸುದ್ದಿಯನ್ನೆತ್ತಿದ್ದಳು. ಅಕ್ಕ ಪಾತು ಒಡನೆಯ “ಇಲ್ಲಿ ನೋಡು. ಇನ್ನು ಮುಂದೆ ಇಂಥ ಹಾದರಗಿತ್ತಿಯರ ಸುದ್ದಿಯನ್ನು ನಮ್ಮ ಮನೇಲಿ ಹೇಳಬೇಡ. ನಮ್ಮ ಮನೇಲಿ ಬೆಳೀತಿರುವ ಹೆಣ್ಣುಮಕ್ಕಳಿವೆ. ಇಂಥ ಮಾತು ಅವರ ಕಿವಿಗೆ ಬೀಳಬಾರದು!...” ಸಿಡುಕಿ, ಆ ಮುದುಕಿ ಅವಾಕ್ಕಾಗುವಂತೆ ಮಾಡಿದಳು... ಇಂಥ ಸಂಪ್ರದಾಯ ಶರಣರ ಮುಂದೆ ತನ್ನ ಹಗರಣವನ್ನು ಪ್ರಕಟಿಸಿ, ಅವರ ಸಹಾಯ ಕೋರಿದರೆ, ಅವರಿಂದ ಎಂಥ ಪ್ರತಿಕ್ರಿಯೆ ಬರಬಹುದೆಂಬುದು ಸ್ವಯಂ ವೇದ್ಯವೇ ಆಗಿತ್ತು... ರುಕ್ಕಿಣಿ ಹತಾಶಳಾದಳು... ಈ ತುಯ್ದಾಟದಲ್ಲಿ ಇನ್ನೂ ಎಂಟೊಂಬತ್ತು ದಿನಗಳು ಕಳೆದುಹೋಗಿದ್ದವು... {{gap}}ರುಕ್ಕಿಣಿಗೆ ಈ ತಾಳತಪ್ಪಿದ ಮನಃಸ್ಥಿತಿಯಲ್ಲಿರುವಾಗ, ತನ್ನನ್ನು ಬಹಳವಾಗಿ<noinclude></noinclude> 8nctt2j77bpwvg2cw62cfnzz8sa67c5 322601 322597 2026-05-26T05:45:46Z Pragathi. BH 7585 /* Validated */ 322601 proofread-page text/x-wiki <noinclude><pagequality level="4" user="Pragathi. BH" />{{rh|left=೨೪೬|center=|right='''ವೈಶಾಖ'''}}</noinclude>{{gap}}ಹೆತ್ತ ಮಕ್ಕಳ ಕೊಲ್ವಾರುಂಟ?...<br /> {{gap}}ಇಂಥ ಅಭಿಪ್ರಾಯ ಹೊಂದಿರುವ ಮುದುಕಿ ತನ್ನ ಗರ್ಭಪಾತಕ್ಕೆ ಖಂಡಿತ ನೆರವೀಯಲಾರಳು... ಹೀಗೆಯ ಊರಿನ ಕೇರಿಗಳಲ್ಲಿ ತನಗೆ ಹಿತವರೆನಿಸದ ಒಬ್ಬೊಬ್ಬರನ್ನೂ ಮನಸ್ಸಿನಲ್ಲಿ ವಿಚಾರ ಮಾಡಿ ನೋಡಿದಳು. ಈ ವಿಷಯದಲ್ಲಿ ಯಾರೂ ಅವಳಿಗೆ ಹಿತವರಾಗಿ ತೋರಲಿಲ್ಲ. ಊರಿನ ಯಾರ ಸಂಗಡ ಬಾಯಿ ಬಿಚ್ಚಿದರೂ ತನಗೆ ಅಪಾಯವೆ ಕಾದಿತ್ತು. ಭೀಮನಳ್ಳಿಯ ಅಕ್ಕ ಪಾರ್ವತಿಗೆ ತಿಳಿಸಿದರೆ ಹೇಗೆ ಎಂಬ ಆಲೋಚನೆಯೂ ಸುಳಿಯಿತು. ಸುಳಿದಂತೆಯ ಆ ಆಲೋಚನೆಯು ಕಮರಿಹೋಯಿತು. ಅಕ್ಕ ಭಾವ ಇಬ್ಬರೂ ಬಾಕಿ ಇಲ್ಲ ವಿಷಯಗಳಲ್ಲಿ ಉದಾರಿಗಳಾದರೂ ಇಂಥ ವಿಚಾರದಲ್ಲಿ ಅವರಿಬ್ಬರೂ ಸಂಪ್ರದಾಯಶರಣರೆ ಎಂಬುದನ್ನು ಭೀಮನಳ್ಳಿಯಲ್ಲಿ ತನ್ನ ಒಂದು ತಿಂಗಳ ವಾಸ್ತವ್ಯ ಮನವರಿಗೆ ಮಾಡಿಕೊಟ್ಟಿತ್ತು. ಭೀಮನಳ್ಳಿಯಲ್ಲಿ ಯಾರಾದರೂ ಹೆಣ್ಣು ಮಕ್ಕಳು ಜಾರಿದರೆ, ಅವಳು ಯಾವ ಕೇರಿಯವಳಾದರೂ ಸರಿ, ಅವಳನ್ನು ಕುರಿತು ಲಾಘವವಾಗಿ, ತಿರಸ್ಕಾರವಾಗಿ, ಕೆಲವೊಮ್ಮೆ ಕಠೋರವಾಗಿ ಟೀಕಿಸುತ್ತಿದ್ದರು! ತನ್ನ ಭಾವನ ದೃಷ್ಟಿಯಲ್ಲಿ ಹೆಣ್ಣು ಎಂದರೆ ಪುರಾಣದ ಸೀತೆ, ಸಾವಿತ್ರಿಯರಂತಿರಬೇಕು. ಭಾವನ ಸಹಚರಿಯಾಗಿ ಅನೇಕ ಸಂವತ್ಸರ ಸವೆಸಿದ್ದ, ಅಕ್ಕ ಪಾರ್ವತಿಯೂ ಅದೇ ಭಾವನೆಯನ್ನು ಬೆಳೆಸಿಕೊಂಡಿದ್ದಳು!... ತನಗಿನೂ ನೆನಪಿದೆ. ಒಂದು ದಿನ ಬುಟ್ಟಿ ಮಾರಲು ಮುದುಕಿಯೊಬ್ಬಳು ಅಕ್ಕನ ಮನೆಗೆ ಬಂದಿದ್ದಳು. ಬುಟ್ಟಿಯನ್ನು ಕೊಳ್ಳಲು ಚೌಕಾಶಿ ನಡೆಯುತ್ತಿರುವಾಗ, ಆ ಊರಿನ ಮದುವೆಯಾದ ಒಂದು ಹೆಣ್ಣು ಗಂಡನನ್ನು ಬಿಟ್ಟು ಅದೇ ಊರಿನ ಇನ್ನೊಬ್ಬನೊಡನೆ ಬಾಳ್ವೆ ಮಾಡುತ್ತಿರುವ ಸುದ್ದಿಯನ್ನೆತ್ತಿದ್ದಳು. ಅಕ್ಕ ಪಾತು ಒಡನೆಯ “ಇಲ್ಲಿ ನೋಡು. ಇನ್ನು ಮುಂದೆ ಇಂಥ ಹಾದರಗಿತ್ತಿಯರ ಸುದ್ದಿಯನ್ನು ನಮ್ಮ ಮನೇಲಿ ಹೇಳಬೇಡ. ನಮ್ಮ ಮನೇಲಿ ಬೆಳೀತಿರುವ ಹೆಣ್ಣುಮಕ್ಕಳಿವೆ. ಇಂಥ ಮಾತು ಅವರ ಕಿವಿಗೆ ಬೀಳಬಾರದು!...” ಸಿಡುಕಿ, ಆ ಮುದುಕಿ ಅವಾಕ್ಕಾಗುವಂತೆ ಮಾಡಿದಳು... ಇಂಥ ಸಂಪ್ರದಾಯ ಶರಣರ ಮುಂದೆ ತನ್ನ ಹಗರಣವನ್ನು ಪ್ರಕಟಿಸಿ, ಅವರ ಸಹಾಯ ಕೋರಿದರೆ, ಅವರಿಂದ ಎಂಥ ಪ್ರತಿಕ್ರಿಯೆ ಬರಬಹುದೆಂಬುದು ಸ್ವಯಂ ವೇದ್ಯವೇ ಆಗಿತ್ತು... ರುಕ್ಕಿಣಿ ಹತಾಶಳಾದಳು... ಈ ತುಯ್ದಾಟದಲ್ಲಿ ಇನ್ನೂ ಎಂಟೊಂಬತ್ತು ದಿನಗಳು ಕಳೆದುಹೋಗಿದ್ದವು... {{gap}}ರುಕ್ಕಿಣಿಗೆ ಈ ತಾಳತಪ್ಪಿದ ಮನಃಸ್ಥಿತಿಯಲ್ಲಿರುವಾಗ, ತನ್ನನ್ನು ಬಹಳವಾಗಿ<noinclude></noinclude> a832ebdtlhvqidzj1axc2hzxena2ri1 ಪುಟ:ವೈಶಾಖ.pdf/೨೬೩ 104 82192 322602 306438 2026-05-26T05:49:56Z Hariprasad Shetty10 7490 322602 proofread-page text/x-wiki <noinclude><pagequality level="1" user="Shreesha Sharma" />{{rh|left=ಸಮಗ್ರ ಕಾದಂಬರಿಗಳು|center=|right=೨೪೭}}</noinclude>ಪ್ರೀತಿಸುವ ವೆಂಕಣ್ಣ ಜೋಯಿಸರ ಹಿರಿಯ ಮಗಳು ನಾಗಲಕ್ಷಿ ಒಮ್ಮೆ ಬಂದು, “ಇದೇನತ್ತೆ, ನೀವು ಬಂದು ಒಂದು ತಿಂಗಳ ಮೇಲಾಗಲಿಲ್ವ? ನೀರು ಹಾಕಲು ನನ್ನನ್ನು ಕರೆಯಲೇ ಇಲ್ಲ?” ಎಂದು ಕೇಳಿಯೇ ಬಿಟ್ಟಳು. ಈ ಮುಗ್ಧ ಪ್ರಶ್ನೆಯಿಂದ ಒಂದು ಕ್ಷಣ ಅಪ್ರತಿಭಳಾದರು ಅದನ್ನು ತೋರಗೊಡದೆ, “ನೋಡಮ್ಮ ನಾಗಲಕ್ಷಿ, ನಾನು ತಿಂಗಳಿಗೆ ಸರಿಯಾಗಿ ಹೊರಗೆ ಕೋರಿದ್ದೆನಲ್ಲ- ಈಗೊಂದು ಎರಡು ತಿಂಗಳಿಂದ ಅದರ ಕ್ರಮ ತಪ್ಪಿದೆ...” ಎಂದು ಮಾತನ್ನು ತೇಲಿಸಿದವಳು, ನಾಗಲಕ್ಷ್ಮಿಯನ್ನು ತಬ್ಬಿ, “ಆದರೆ ಇದರ ಬಗ್ಗೆ ನೀನು ಯಾರ ಸಂಗಡವೂ ಮಾತನಾಡಬಾರದು, ಗೊತ್ತಾಯ್ತ?” ಎಂದು ರಮಿಸಿದಳು. “ಖಂಡಿತ ಹೇಳಲ್ಲ, ಅತ್ತೆ” – ಆ ಮುಗ್ಧ ಬಾಲಕಿ ಭರವಸೆಯಿತ್ತದ್ದು ರುಕ್ಕಿಣಿಗೆ ಆ ಗಳಿಗೆಗೆ ಮಾತ್ರ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಆದರೆ ಮರುಗಳಿಗೆಯಲ್ಲಿಯೆ ಅವಳ ಅಂತರಂಗದ ಕೋಭೆ ಮರುಕಳಿಸಿತ್ತು...<br /> {{gap}}ಕೊನೆಗೆ ಲಕ್ಕನ ಸಹಾಯವನ್ನೇ ಯಾಕೆ ತೆಗೆದುಕೊಳ್ಳಬಾರದು?ಎಂಬ ಆಲೋಚನೆ ಬಂದಿತು. ನಾಚಿಕೆಯಿಲ್ಲದೆ ಅವನ ಸಂಗಡ ಹೇಗೆ ಪ್ರಸ್ತಾಪಿಸುವುದು ಎಂದು ಮನಸ್ಸು ಹಿಂದೆಗೆಯಿತು... ಮತ್ತೆ ಈ ಡೋಲಾಯಮಾನಸ್ಥಿತಿಯಲ್ಲಿ ಇನ್ನೆರಡು ದಿನಗಳು ಉರುಳಿಹೋದವು... ಕಾಲ ರಭಸವಾಗಿ ಕಳೆದು ಹೋಗುತ್ತಿದೆ ಎಂಬ ಭಾವನೆ ಬಲವಾಗತೊಡಗಿದಂತೆ, ರುಕ್ಕಿಣಿಯಲ್ಲಿ ನಡುಕ ಹುಟ್ಟಿತು. ಕಾಲ ಮಿಂಚಿದ ಬಳಿಕ ತನ್ನ ಬದುಕು ಸಂಪೂರ್ಣವಾಗಿ ಮೇಲೇಳಲು ಸಾಧ್ಯವೇ ಆಗದ ಅತ್ಯಂತ ಆಳವಾದ ಕಂದರಕ್ಕೆ ಮಗುಚಿಕೊಳ್ಳುತ್ತದೆ, ಎಂಬ ಕಟುಸತ್ಯ ಅವಳು ಒಡನೆಯೆ ಕ್ರಿಯಾಶೀಲಳಾಗುವಂತೆ ಪ್ರೇರೇಪಿಸಿತು. ಕೊನೆಗೆ ಎಲ್ಲ ಸಾಧಕಬಾಧಕಗಳನ್ನೂ ಪರಿಶೀಲಿಸಿ, ಲಕ್ಕನ ನೆರವು ಬೇಡುವುದೆ ಉಚಿತವೆಂದು ನಿರ್ಧರಿಸಿದಳು.<br /> {{gap}}ಆ ನಿರ್ಧಾರದ ಪ್ರಕಾರ ಅದೇ ಸೋಮವಾರ ಮಧ್ಯಾಹ್ನ ರುಕ್ಕಿಣಿಯೂ ಲಕ್ಕನನ್ನು ತಮ್ಮ ಮನೆಗೆ ಕರೆಸಿದಳು. ಲಕ್ಕ ಕೊಟ್ಟಿಗೆಗೆ ಬಂದವನೆ, ಗಬ್ಬದ ಕಡಸಿನ ಮೈದಡವುತ್ತ ನಿಂತ.<br /> {{gap}}ರುಕ್ಕಿಣಿಯು, ಗಬ್ಬದ ಕಡಸನ್ನೆ ನಿಟ್ಟಿಸುತ್ತ, ಕೆಲ ಸಮಯ ಏನನ್ನೂ ಹೇಳಲಾರದೆ, ಹಿತ್ತಲು ಬಾಗಿಲಿನ ಸೂರುಕಟ್ಟು ಹಿಡಿದು, ಮೌನವಾಗೇ ನಿಂತಿದ್ದಳು. ಆ ಬಳಿಕ ನಿಧಾನವಾಗಿ, ತಗ್ಗಿದ ದನಿಯಲ್ಲಿ,<br /> {{gap}}“ಲಕ್ಕ...” ಎಂದು ರಾಗವೆಳೆದಳು.<br /> {{gap}}“ಯೇನಮ್ಮ ಮಾರೆ?” ಕಡಸನ್ನು ತುರಿಸುತ್ತ ಲಕ್ಕ ಕೇಳಿದ.<br /><noinclude></noinclude> saegkv8cdhd7f335f86tbkzdqjjbln9 322603 322602 2026-05-26T05:50:22Z Hariprasad Shetty10 7490 322603 proofread-page text/x-wiki <noinclude><pagequality level="1" user="Shreesha Sharma" />{{rh|left=ಸಮಗ್ರ ಕಾದಂಬರಿಗಳು|center=|right=೨೪೭}}</noinclude>ಪ್ರೀತಿಸುವ ವೆಂಕಣ್ಣ ಜೋಯಿಸರ ಹಿರಿಯ ಮಗಳು ನಾಗಲಕ್ಷಿ ಒಮ್ಮೆ ಬಂದು, “ಇದೇನತ್ತೆ, ನೀವು ಬಂದು ಒಂದು ತಿಂಗಳ ಮೇಲಾಗಲಿಲ್ವ? ನೀರು ಹಾಕಲು ನನ್ನನ್ನು ಕರೆಯಲೇ ಇಲ್ಲ?” ಎಂದು ಕೇಳಿಯೇ ಬಿಟ್ಟಳು. ಈ ಮುಗ್ಧ ಪ್ರಶ್ನೆಯಿಂದ ಒಂದು ಕ್ಷಣ ಅಪ್ರತಿಭಳಾದರು ಅದನ್ನು ತೋರಗೊಡದೆ, “ನೋಡಮ್ಮ ನಾಗಲಕ್ಷಿ, ನಾನು ತಿಂಗಳಿಗೆ ಸರಿಯಾಗಿ ಹೊರಗೆ ಕೋರಿದ್ದೆನಲ್ಲ- ಈಗೊಂದು ಎರಡು ತಿಂಗಳಿಂದ ಅದರ ಕ್ರಮ ತಪ್ಪಿದೆ...” ಎಂದು ಮಾತನ್ನು ತೇಲಿಸಿದವಳು, ನಾಗಲಕ್ಷ್ಮಿಯನ್ನು ತಬ್ಬಿ, “ಆದರೆ ಇದರ ಬಗ್ಗೆ ನೀನು ಯಾರ ಸಂಗಡವೂ ಮಾತನಾಡಬಾರದು, ಗೊತ್ತಾಯ್ತ?” ಎಂದು ರಮಿಸಿದಳು. “ಖಂಡಿತ ಹೇಳಲ್ಲ, ಅತ್ತೆ” – ಆ ಮುಗ್ಧ ಬಾಲಕಿ ಭರವಸೆಯಿತ್ತದ್ದು ರುಕ್ಕಿಣಿಗೆ ಆ ಗಳಿಗೆಗೆ ಮಾತ್ರ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಆದರೆ ಮರುಗಳಿಗೆಯಲ್ಲಿಯೆ ಅವಳ ಅಂತರಂಗದ ಕೋಭೆ ಮರುಕಳಿಸಿತ್ತು...<br /> {{gap}}ಕೊನೆಗೆ ಲಕ್ಕನ ಸಹಾಯವನ್ನೇ ಯಾಕೆ ತೆಗೆದುಕೊಳ್ಳಬಾರದು?ಎಂಬ ಆಲೋಚನೆ ಬಂದಿತು. ನಾಚಿಕೆಯಿಲ್ಲದೆ ಅವನ ಸಂಗಡ ಹೇಗೆ ಪ್ರಸ್ತಾಪಿಸುವುದು ಎಂದು ಮನಸ್ಸು ಹಿಂದೆಗೆಯಿತು... ಮತ್ತೆ ಈ ಡೋಲಾಯಮಾನಸ್ಥಿತಿಯಲ್ಲಿ ಇನ್ನೆರಡು ದಿನಗಳು ಉರುಳಿಹೋದವು... ಕಾಲ ರಭಸವಾಗಿ ಕಳೆದು ಹೋಗುತ್ತಿದೆ ಎಂಬ ಭಾವನೆ ಬಲವಾಗತೊಡಗಿದಂತೆ, ರುಕ್ಕಿಣಿಯಲ್ಲಿ ನಡುಕ ಹುಟ್ಟಿತು. ಕಾಲ ಮಿಂಚಿದ ಬಳಿಕ ತನ್ನ ಬದುಕು ಸಂಪೂರ್ಣವಾಗಿ ಮೇಲೇಳಲು ಸಾಧ್ಯವೇ ಆಗದ ಅತ್ಯಂತ ಆಳವಾದ ಕಂದರಕ್ಕೆ ಮಗುಚಿಕೊಳ್ಳುತ್ತದೆ, ಎಂಬ ಕಟುಸತ್ಯ ಅವಳು ಒಡನೆಯೆ ಕ್ರಿಯಾಶೀಲಳಾಗುವಂತೆ ಪ್ರೇರೇಪಿಸಿತು. ಕೊನೆಗೆ ಎಲ್ಲ ಸಾಧಕಬಾಧಕಗಳನ್ನೂ ಪರಿಶೀಲಿಸಿ, ಲಕ್ಕನ ನೆರವು ಬೇಡುವುದೆ ಉಚಿತವೆಂದು ನಿರ್ಧರಿಸಿದಳು.<br /> {{gap}}ಆ ನಿರ್ಧಾರದ ಪ್ರಕಾರ ಅದೇ ಸೋಮವಾರ ಮಧ್ಯಾಹ್ನ ರುಕ್ಕಿಣಿಯೂ ಲಕ್ಕನನ್ನು ತಮ್ಮ ಮನೆಗೆ ಕರೆಸಿದಳು. ಲಕ್ಕ ಕೊಟ್ಟಿಗೆಗೆ ಬಂದವನೆ, ಗಬ್ಬದ ಕಡಸಿನ ಮೈದಡವುತ್ತ ನಿಂತ.<br /> {{gap}}ರುಕ್ಕಿಣಿಯು, ಗಬ್ಬದ ಕಡಸನ್ನೆ ನಿಟ್ಟಿಸುತ್ತ, ಕೆಲ ಸಮಯ ಏನನ್ನೂ ಹೇಳಲಾರದೆ, ಹಿತ್ತಲು ಬಾಗಿಲಿನ ಸೂರುಕಟ್ಟು ಹಿಡಿದು, ಮೌನವಾಗೇ ನಿಂತಿದ್ದಳು. ಆ ಬಳಿಕ ನಿಧಾನವಾಗಿ, ತಗ್ಗಿದ ದನಿಯಲ್ಲಿ,<br /> {{gap}}“ಲಕ್ಕ...” ಎಂದು ರಾಗವೆಳೆದಳು.<br /> {{gap}}“ಯೇನಮ್ಮ ಮಾರೆ?” ಕಡಸನ್ನು ತುರಿಸುತ್ತ ಲಕ್ಕ ಕೇಳಿದ.<br /><noinclude></noinclude> 4cjbetd7dvf100icx4nlum4p8ih1jp6 322606 322603 2026-05-26T05:55:00Z Hariprasad Shetty10 7490 /* Proofread */ 322606 proofread-page text/x-wiki <noinclude><pagequality level="3" user="Hariprasad Shetty10" />{{rh|left=ಸಮಗ್ರ ಕಾದಂಬರಿಗಳು|center=|right=೨೪೭}}</noinclude>ಪ್ರೀತಿಸುವ ವೆಂಕಣ್ಣ ಜೋಯಿಸರ ಹಿರಿಯ ಮಗಳು ನಾಗಲಕ್ಷಿ ಒಮ್ಮೆ ಬಂದು, “ಇದೇನತ್ತೆ, ನೀವು ಬಂದು ಒಂದು ತಿಂಗಳ ಮೇಲಾಗಲಿಲ್ವ? ನೀರು ಹಾಕಲು ನನ್ನನ್ನು ಕರೆಯಲೇ ಇಲ್ಲ?” ಎಂದು ಕೇಳಿಯೇ ಬಿಟ್ಟಳು. ಈ ಮುಗ್ಧ ಪ್ರಶ್ನೆಯಿಂದ ಒಂದು ಕ್ಷಣ ಅಪ್ರತಿಭಳಾದರು ಅದನ್ನು ತೋರಗೊಡದೆ, “ನೋಡಮ್ಮ ನಾಗಲಕ್ಷಿ, ನಾನು ತಿಂಗಳಿಗೆ ಸರಿಯಾಗಿ ಹೊರಗೆ ಕೋರಿದ್ದೆನಲ್ಲ- ಈಗೊಂದು ಎರಡು ತಿಂಗಳಿಂದ ಅದರ ಕ್ರಮ ತಪ್ಪಿದೆ...” ಎಂದು ಮಾತನ್ನು ತೇಲಿಸಿದವಳು, ನಾಗಲಕ್ಷ್ಮಿಯನ್ನು ತಬ್ಬಿ, “ಆದರೆ ಇದರ ಬಗ್ಗೆ ನೀನು ಯಾರ ಸಂಗಡವೂ ಮಾತನಾಡಬಾರದು, ಗೊತ್ತಾಯ್ತ?” ಎಂದು ರಮಿಸಿದಳು. “ಖಂಡಿತ ಹೇಳಲ್ಲ, ಅತ್ತೆ” – ಆ ಮುಗ್ಧ ಬಾಲಕಿ ಭರವಸೆಯಿತ್ತದ್ದು ರುಕ್ಕಿಣಿಗೆ ಆ ಗಳಿಗೆಗೆ ಮಾತ್ರ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಆದರೆ ಮರುಗಳಿಗೆಯಲ್ಲಿಯೆ ಅವಳ ಅಂತರಂಗದ ಕೋಭೆ ಮರುಕಳಿಸಿತ್ತು...<br /> {{gap}}ಕೊನೆಗೆ ಲಕ್ಕನ ಸಹಾಯವನ್ನೇ ಯಾಕೆ ತೆಗೆದುಕೊಳ್ಳಬಾರದು?ಎಂಬ ಆಲೋಚನೆ ಬಂದಿತು. ನಾಚಿಕೆಯಿಲ್ಲದೆ ಅವನ ಸಂಗಡ ಹೇಗೆ ಪ್ರಸ್ತಾಪಿಸುವುದು ಎಂದು ಮನಸ್ಸು ಹಿಂದೆಗೆಯಿತು... ಮತ್ತೆ ಈ ಡೋಲಾಯಮಾನಸ್ಥಿತಿಯಲ್ಲಿ ಇನ್ನೆರಡು ದಿನಗಳು ಉರುಳಿಹೋದವು... ಕಾಲ ರಭಸವಾಗಿ ಕಳೆದು ಹೋಗುತ್ತಿದೆ ಎಂಬ ಭಾವನೆ ಬಲವಾಗತೊಡಗಿದಂತೆ, ರುಕ್ಕಿಣಿಯಲ್ಲಿ ನಡುಕ ಹುಟ್ಟಿತು. ಕಾಲ ಮಿಂಚಿದ ಬಳಿಕ ತನ್ನ ಬದುಕು ಸಂಪೂರ್ಣವಾಗಿ ಮೇಲೇಳಲು ಸಾಧ್ಯವೇ ಆಗದ ಅತ್ಯಂತ ಆಳವಾದ ಕಂದರಕ್ಕೆ ಮಗುಚಿಕೊಳ್ಳುತ್ತದೆ, ಎಂಬ ಕಟುಸತ್ಯ ಅವಳು ಒಡನೆಯೆ ಕ್ರಿಯಾಶೀಲಳಾಗುವಂತೆ ಪ್ರೇರೇಪಿಸಿತು. ಕೊನೆಗೆ ಎಲ್ಲ ಸಾಧಕಬಾಧಕಗಳನ್ನೂ ಪರಿಶೀಲಿಸಿ, ಲಕ್ಕನ ನೆರವು ಬೇಡುವುದೆ ಉಚಿತವೆಂದು ನಿರ್ಧರಿಸಿದಳು.<br /> {{gap}}ಆ ನಿರ್ಧಾರದ ಪ್ರಕಾರ ಅದೇ ಸೋಮವಾರ ಮಧ್ಯಾಹ್ನ ರುಕ್ಕಿಣಿಯೂ ಲಕ್ಕನನ್ನು ತಮ್ಮ ಮನೆಗೆ ಕರೆಸಿದಳು. ಲಕ್ಕ ಕೊಟ್ಟಿಗೆಗೆ ಬಂದವನೆ, ಗಬ್ಬದ ಕಡಸಿನ ಮೈದಡವುತ್ತ ನಿಂತ.<br /> {{gap}}ರುಕ್ಕಿಣಿಯು, ಗಬ್ಬದ ಕಡಸನ್ನೆ ನಿಟ್ಟಿಸುತ್ತ, ಕೆಲ ಸಮಯ ಏನನ್ನೂ ಹೇಳಲಾರದೆ, ಹಿತ್ತಲು ಬಾಗಿಲಿನ ಸೂರುಕಟ್ಟು ಹಿಡಿದು, ಮೌನವಾಗೇ ನಿಂತಿದ್ದಳು. ಆ ಬಳಿಕ ನಿಧಾನವಾಗಿ, ತಗ್ಗಿದ ದನಿಯಲ್ಲಿ,<br /> {{gap}}“ಲಕ್ಕ...” ಎಂದು ರಾಗವೆಳೆದಳು.<br /> {{gap}}“ಯೇನಮ್ಮ ಮಾರೆ?” ಕಡಸನ್ನು ತುರಿಸುತ್ತ ಲಕ್ಕ ಕೇಳಿದ.<br /><noinclude></noinclude> r8ixk40ghmgrivybzyugg06so8xg68w 322607 322606 2026-05-26T05:56:33Z Hariprasad Shetty10 7490 322607 proofread-page text/x-wiki <noinclude><pagequality level="3" user="Hariprasad Shetty10" />{{rh|left=ಸಮಗ್ರ ಕಾದಂಬರಿಗಳು|center=|right=೨೪೭}}</noinclude>ಪ್ರೀತಿಸುವ ವೆಂಕಣ್ಣ ಜೋಯಿಸರ ಹಿರಿಯ ಮಗಳು ನಾಗಲಕ್ಷಿ ಒಮ್ಮೆ ಬಂದು, “ಇದೇನತ್ತೆ, ನೀವು ಬಂದು ಒಂದು ತಿಂಗಳ ಮೇಲಾಗಲಿಲ್ವ? ನೀರು ಹಾಕಲು ನನ್ನನ್ನು ಕರೆಯಲೇ ಇಲ್ಲ?” ಎಂದು ಕೇಳಿಯೇ ಬಿಟ್ಟಳು. ಈ ಮುಗ್ಧ ಪ್ರಶ್ನೆಯಿಂದ ಒಂದು ಕ್ಷಣ ಅಪ್ರತಿಭಳಾದರು ಅದನ್ನು ತೋರಗೊಡದೆ, “ನೋಡಮ್ಮ ನಾಗಲಕ್ಷಿ, ನಾನು ತಿಂಗಳಿಗೆ ಸರಿಯಾಗಿ ಹೊರಗೆ ಕೋರಿದ್ದೆನಲ್ಲ- ಈಗೊಂದು ಎರಡು ತಿಂಗಳಿಂದ ಅದರ ಕ್ರಮ ತಪ್ಪಿದೆ...” ಎಂದು ಮಾತನ್ನು ತೇಲಿಸಿದವಳು, ನಾಗಲಕ್ಷ್ಮಿಯನ್ನು ತಬ್ಬಿ, “ಆದರೆ ಇದರ ಬಗ್ಗೆ ನೀನು ಯಾರ ಸಂಗಡವೂ ಮಾತನಾಡಬಾರದು, ಗೊತ್ತಾಯ್ತ?” ಎಂದು ರಮಿಸಿದಳು. “ಖಂಡಿತ ಹೇಳಲ್ಲ, ಅತ್ತೆ” – ಆ ಮುಗ್ಧ ಬಾಲಕಿ ಭರವಸೆಯಿತ್ತದ್ದು ರುಕ್ಕಿಣಿಗೆ ಆ ಗಳಿಗೆಗೆ ಮಾತ್ರ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಆದರೆ ಮರುಗಳಿಗೆಯಲ್ಲಿಯೆ ಅವಳ ಅಂತರಂಗದ ಕೋಭೆ ಮರುಕಳಿಸಿತ್ತು...<br /> {{gap}}ಕೊನೆಗೆ ಲಕ್ಕನ ಸಹಾಯವನ್ನೇ ಯಾಕೆ ತೆಗೆದುಕೊಳ್ಳಬಾರದು?ಎಂಬ ಆಲೋಚನೆ ಬಂದಿತು. ನಾಚಿಕೆಯಿಲ್ಲದೆ ಅವನ ಸಂಗಡ ಹೇಗೆ ಪ್ರಸ್ತಾಪಿಸುವುದು ಎಂದು ಮನಸ್ಸು ಹಿಂದೆಗೆಯಿತು... ಮತ್ತೆ ಈ ಡೋಲಾಯಮಾನಸ್ಥಿತಿಯಲ್ಲಿ ಇನ್ನೆರಡು ದಿನಗಳು ಉರುಳಿಹೋದವು... ಕಾಲ ರಭಸವಾಗಿ ಕಳೆದು ಹೋಗುತ್ತಿದೆ ಎಂಬ ಭಾವನೆ ಬಲವಾಗತೊಡಗಿದಂತೆ, ರುಕ್ಕಿಣಿಯಲ್ಲಿ ನಡುಕ ಹುಟ್ಟಿತು. ಕಾಲ ಮಿಂಚಿದ ಬಳಿಕ ತನ್ನ ಬದುಕು ಸಂಪೂರ್ಣವಾಗಿ ಮೇಲೇಳಲು ಸಾಧ್ಯವೇ ಆಗದ ಅತ್ಯಂತ ಆಳವಾದ ಕಂದರಕ್ಕೆ ಮಗುಚಿಕೊಳ್ಳುತ್ತದೆ, ಎಂಬ ಕಟುಸತ್ಯ ಅವಳು ಒಡನೆಯೆ ಕ್ರಿಯಾಶೀಲಳಾಗುವಂತೆ ಪ್ರೇರೇಪಿಸಿತು. ಕೊನೆಗೆ ಎಲ್ಲ ಸಾಧಕಬಾಧಕಗಳನ್ನೂ ಪರಿಶೀಲಿಸಿ, ಲಕ್ಕನ ನೆರವು ಬೇಡುವುದೆ ಉಚಿತವೆಂದು ನಿರ್ಧರಿಸಿದಳು.<br /> {{gap}}ಆ ನಿರ್ಧಾರದ ಪ್ರಕಾರ ಅದೇ ಸೋಮವಾರ ಮಧ್ಯಾಹ್ನ ರುಕ್ಕಿಣಿಯೂ ಲಕ್ಕನನ್ನು ತಮ್ಮ ಮನೆಗೆ ಕರೆಸಿದಳು. ಲಕ್ಕ ಕೊಟ್ಟಿಗೆಗೆ ಬಂದವನೆ, ಗಬ್ಬದ ಕಡಸಿನ ಮೈದಡವುತ್ತ ನಿಂತ.<br /> {{gap}}ರುಕ್ಕಿಣಿಯು, ಗಬ್ಬದ ಕಡಸನ್ನೆ ನಿಟ್ಟಿಸುತ್ತ, ಕೆಲ ಸಮಯ ಏನನ್ನೂ ಹೇಳಲಾರದೆ, ಹಿತ್ತಲು ಬಾಗಿಲಿನ ಸೂರುಕಟ್ಟು ಹಿಡಿದು, ಮೌನವಾಗೇ ನಿಂತಿದ್ದಳು. ಆ ಬಳಿಕ ನಿಧಾನವಾಗಿ, ತಗ್ಗಿದ ದನಿಯಲ್ಲಿ,<br /> {{gap}}“ಲಕ್ಕ...” ಎಂದು ರಾಗವೆಳೆದಳು.<br /> {{gap}}“ಯೇನಮ್ಮ ಮ್ಮಾರೆ?” ಕಡಸನ್ನು ತುರಿಸುತ್ತ ಲಕ್ಕ ಕೇಳಿದ.<br /><noinclude></noinclude> jxxumbhu8wh2i9an074lbo9v1qq6kpr 322611 322607 2026-05-26T08:37:44Z Pragathi. BH 7585 /* Validated */ 322611 proofread-page text/x-wiki <noinclude><pagequality level="4" user="Pragathi. BH" />{{rh|left=ಸಮಗ್ರ ಕಾದಂಬರಿಗಳು|center=|right=೨೪೭}}</noinclude>ಪ್ರೀತಿಸುವ ವೆಂಕಣ್ಣ ಜೋಯಿಸರ ಹಿರಿಯ ಮಗಳು ನಾಗಲಕ್ಷಿ ಒಮ್ಮೆ ಬಂದು, “ಇದೇನತ್ತೆ, ನೀವು ಬಂದು ಒಂದು ತಿಂಗಳ ಮೇಲಾಗಲಿಲ್ವ? ನೀರು ಹಾಕಲು ನನ್ನನ್ನು ಕರೆಯಲೇ ಇಲ್ಲ?” ಎಂದು ಕೇಳಿಯೇ ಬಿಟ್ಟಳು. ಈ ಮುಗ್ಧ ಪ್ರಶ್ನೆಯಿಂದ ಒಂದು ಕ್ಷಣ ಅಪ್ರತಿಭಳಾದರು ಅದನ್ನು ತೋರಗೊಡದೆ, “ನೋಡಮ್ಮ ನಾಗಲಕ್ಷಿ, ನಾನು ತಿಂಗಳಿಗೆ ಸರಿಯಾಗಿ ಹೊರಗೆ ಕೋರಿದ್ದೆನಲ್ಲ- ಈಗೊಂದು ಎರಡು ತಿಂಗಳಿಂದ ಅದರ ಕ್ರಮ ತಪ್ಪಿದೆ...” ಎಂದು ಮಾತನ್ನು ತೇಲಿಸಿದವಳು, ನಾಗಲಕ್ಷ್ಮಿಯನ್ನು ತಬ್ಬಿ, “ಆದರೆ ಇದರ ಬಗ್ಗೆ ನೀನು ಯಾರ ಸಂಗಡವೂ ಮಾತನಾಡಬಾರದು, ಗೊತ್ತಾಯ್ತ?” ಎಂದು ರಮಿಸಿದಳು. “ಖಂಡಿತ ಹೇಳಲ್ಲ, ಅತ್ತೆ” – ಆ ಮುಗ್ಧ ಬಾಲಕಿ ಭರವಸೆಯಿತ್ತದ್ದು ರುಕ್ಕಿಣಿಗೆ ಆ ಗಳಿಗೆಗೆ ಮಾತ್ರ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಆದರೆ ಮರುಗಳಿಗೆಯಲ್ಲಿಯೆ ಅವಳ ಅಂತರಂಗದ ಕೋಭೆ ಮರುಕಳಿಸಿತ್ತು...<br /> {{gap}}ಕೊನೆಗೆ ಲಕ್ಕನ ಸಹಾಯವನ್ನೇ ಯಾಕೆ ತೆಗೆದುಕೊಳ್ಳಬಾರದು?ಎಂಬ ಆಲೋಚನೆ ಬಂದಿತು. ನಾಚಿಕೆಯಿಲ್ಲದೆ ಅವನ ಸಂಗಡ ಹೇಗೆ ಪ್ರಸ್ತಾಪಿಸುವುದು ಎಂದು ಮನಸ್ಸು ಹಿಂದೆಗೆಯಿತು... ಮತ್ತೆ ಈ ಡೋಲಾಯಮಾನಸ್ಥಿತಿಯಲ್ಲಿ ಇನ್ನೆರಡು ದಿನಗಳು ಉರುಳಿಹೋದವು... ಕಾಲ ರಭಸವಾಗಿ ಕಳೆದು ಹೋಗುತ್ತಿದೆ ಎಂಬ ಭಾವನೆ ಬಲವಾಗತೊಡಗಿದಂತೆ, ರುಕ್ಕಿಣಿಯಲ್ಲಿ ನಡುಕ ಹುಟ್ಟಿತು. ಕಾಲ ಮಿಂಚಿದ ಬಳಿಕ ತನ್ನ ಬದುಕು ಸಂಪೂರ್ಣವಾಗಿ ಮೇಲೇಳಲು ಸಾಧ್ಯವೇ ಆಗದ ಅತ್ಯಂತ ಆಳವಾದ ಕಂದರಕ್ಕೆ ಮಗುಚಿಕೊಳ್ಳುತ್ತದೆ, ಎಂಬ ಕಟುಸತ್ಯ ಅವಳು ಒಡನೆಯೆ ಕ್ರಿಯಾಶೀಲಳಾಗುವಂತೆ ಪ್ರೇರೇಪಿಸಿತು. ಕೊನೆಗೆ ಎಲ್ಲ ಸಾಧಕಬಾಧಕಗಳನ್ನೂ ಪರಿಶೀಲಿಸಿ, ಲಕ್ಕನ ನೆರವು ಬೇಡುವುದೆ ಉಚಿತವೆಂದು ನಿರ್ಧರಿಸಿದಳು.<br /> {{gap}}ಆ ನಿರ್ಧಾರದ ಪ್ರಕಾರ ಅದೇ ಸೋಮವಾರ ಮಧ್ಯಾಹ್ನ ರುಕ್ಕಿಣಿಯೂ ಲಕ್ಕನನ್ನು ತಮ್ಮ ಮನೆಗೆ ಕರೆಸಿದಳು. ಲಕ್ಕ ಕೊಟ್ಟಿಗೆಗೆ ಬಂದವನೆ, ಗಬ್ಬದ ಕಡಸಿನ ಮೈದಡವುತ್ತ ನಿಂತ.<br /> {{gap}}ರುಕ್ಕಿಣಿಯು, ಗಬ್ಬದ ಕಡಸನ್ನೆ ನಿಟ್ಟಿಸುತ್ತ, ಕೆಲ ಸಮಯ ಏನನ್ನೂ ಹೇಳಲಾರದೆ, ಹಿತ್ತಲು ಬಾಗಿಲಿನ ಸೂರುಕಟ್ಟು ಹಿಡಿದು, ಮೌನವಾಗೇ ನಿಂತಿದ್ದಳು. ಆ ಬಳಿಕ ನಿಧಾನವಾಗಿ, ತಗ್ಗಿದ ದನಿಯಲ್ಲಿ,<br /> {{gap}}“ಲಕ್ಕ...” ಎಂದು ರಾಗವೆಳೆದಳು.<br /> {{gap}}“ಯೇನಮ್ಮ ಮ್ಮಾರೆ?” ಕಡಸನ್ನು ತುರಿಸುತ್ತ ಲಕ್ಕ ಕೇಳಿದ.<br /><noinclude></noinclude> 5avggifb0lcfsk4216rll6ol7wvy5ge ಪುಟ:ವೈಶಾಖ.pdf/೨೬೪ 104 82193 322608 298260 2026-05-26T05:59:45Z Hariprasad Shetty10 7490 322608 proofread-page text/x-wiki <noinclude><pagequality level="1" user="Shreesha Sharma" />{{rh|left=೨೪೮|center=|right=ವೈಶಾಖ}}</noinclude>{{gap}}“ಲಕ್ಕ....” ಎಂದು ಪುನಃ ತೊದಲಿದಳು.<br /> {{gap}}“ಯೋಳಿ- ಅಮ್ಮಾರೆ”<br /> {{gap}}“ಲಕ್ಕ...” ಎಂದು ರುಕ್ಕಿಣಿ ಪುನಃ ಉಚ್ಚರಿಸಿದಂತೆ, ಗಂಟಲಲ್ಲಿ ಏನೊ ಸಿಕ್ಕಿಕೊಂಡಂತಾಯಿತು.<br /> {{gap}}“ಯೋಳಿ.”<br /> {{gap}}“ಲಕ್ಕ... ನಾನು... ನನಗೆ-ಎರಡುವರೆ ತಿಂಗಳ ಮೇಲಾಯ್ತು...” ಎಂದ ರುಕ್ಕಿಣಿಯು ಕಣ್ಣುಗಳಲ್ಲಿ ನೀರು ತುಂಬಿತು.<br /> {{gap}}ಲಕ್ಕ ಕಕ್ಕಾಬಿಕ್ಕಿಯಾದ “ಅಂಗಂದ್ರೇನು ಅವಾರೆ...” ದಿಗಿಲಾಗಿ ತಡವರಿಸಿದ..<br /> {{gap}}“ನಾನು.. ಹೊರಗಾಗಿ ಎರಡೂವರೆ ತಿಂಗಳ ಮೇಲಾಯ್ತು...”<br /> {{gap}}“ಹಯ್ಯ ದ್ವಾವರೆ!...” ಲಕ್ಕ ಕುಸಿದು ಹೋದ. ಮಾತು ಈಚೆಗೆ ಹೊರಡಲೊಲ್ಲದು.<br /> {{gap}}“ಈಗೇನು ಮಾಡೋದು?...”<br /> {{gap}}“ಮೂಢ ಮುಕ್ತ, ನಂಗೇನು ತಿಳಿದಾತು?... ಆವತ್ತು, ನಾನೇಟು ಬಗೇಲಿ ಬ್ಯಾಡಿ ಬ್ಯಾಡಿ ಅಂದರೂವೆ... ನೀವು ಕ್ಯಾಳನಿಲ್ಲ...”<br /> {{gap}}“ಹೌದು, ಆ ದಿನ ನಾನೇ ಜ್ಞಾನ ತಪ್ಪಿ ನಡೆದದ್ದು, ಇದರಲ್ಲಿ ನಿನ್ನ ತಪ್ಪೇನು ಇಲ್ಲ..... ಈಗ, ಮುಂದೇನು ಮಾಡೋದು?”<br /> {{gap}}“ನಂಗೆ ತಿಳಿಯಕ್ಕಿಲ್ಲ. ನೀವು ಎಂಗೆ ಯೋಳಿದ್ರೆ ಅಂಗೆ ಮಾಡ್ತೀನಿ!”<br /> {{gap}}“ಇದನ್ನ ಕಳೆಯಲಿಕ್ಕೆ ಏನಾದರೂ ಔಷಧಿ ತಂದು ಕೊಡಬೇಕಲ್ಲ?”<br /> {{gap}}ಲಕ್ಕ ಕೆಲ ಸಮಯ ಮಾತಾಡದೆ ಮೌನವಾಗಿ ಚಿಂತಿಸುತ್ತ ನಿಂತ. ತರುವಾಯ,<br /> {{gap}}“ತಾಳಿ, ಒಂದು ಜಿನ ಆ ಕುಂಬಾರರ ಕಾಳಮ್ಮ ಅವರಟೇಲಿ ಅವಳ ಎದುರಟ್ಟಿ ಮುಟ್ಟನಂಜಮ್ಮನ ಜ್ವಕ್ಕೆ ಅಂತಿದ್ದು ಗ್ಯಾಪಕ ಆಯ್ತಾ ಅದೆ... 'ಕ್ಯಾಳಿದೇನೆ ಮುಟ್ಟಿ, ನಮ್ಮೂರ ಅನುಕೂಲಸ್ತರ ಮನೆ ಎಣ್ಣೆ ಒಂದು ಕದ್ದು ಬೊಸಿರಾಗಿ, ಹುಣಸೂರಲಲಿ ಸಂತೆಮಾಳದ ಕಾಸಿಂಬೀ ಇಲ್ಲ, ಅವಳಿಂದ ಔಸ್ಥೆ ತಕ್ಕಂಡು ಮೈ ಇಳಿಸಿದಲಂತೆ!” ಅನ್ನೋಕೂವೆ, ನಾ ಯಾತಕೊ ಅವರಟ್ಟಿಗೆ ವೋಗಕ್ಕೂವೆ, ಒಂದೇ ಆಗಿತ್ತು. ಆ ಕ್ಷಣ ಅವಳು ತನ್ನ ಮಾತ ನಿಲ್ಲುಸಿದ್ದು... ಈಗ ಅದೊಂದೇ ದಾರಿ ಇರಾದು. ಹುಣಸೂರಿಗೋಗಿ ಆ ಕಾಸಿಂಬೀನೆ ಕ್ಯಾಬೀನಿ ಎಂದ.<br /> {{gap}}ಲಕ್ಕನ ಸಂಗಡ ರುಕ್ಕಿಣಿ ಮಾತಾನಾಡುತ್ತಿದ್ದುದು ಕೊಟ್ಟಿಗೆಯಲ್ಲಿ ತಾನೆ.<noinclude></noinclude> rzjp5ieig1r1b68ybn7j97bhgz2thlt 322609 322608 2026-05-26T06:00:06Z Hariprasad Shetty10 7490 322609 proofread-page text/x-wiki <noinclude><pagequality level="1" user="Shreesha Sharma" />{{rh|left=೨೪೮|center=|right=ವೈಶಾಖ}}</noinclude>{{gap}}“ಲಕ್ಕ....” ಎಂದು ಪುನಃ ತೊದಲಿದಳು.<br /> {{gap}}“ಯೋಳಿ- ಅಮ್ಮಾರೆ”<br /> {{gap}}“ಲಕ್ಕ...” ಎಂದು ರುಕ್ಕಿಣಿ ಪುನಃ ಉಚ್ಚರಿಸಿದಂತೆ, ಗಂಟಲಲ್ಲಿ ಏನೊ ಸಿಕ್ಕಿಕೊಂಡಂತಾಯಿತು.<br /> {{gap}}“ಯೋಳಿ.”<br /> {{gap}}“ಲಕ್ಕ... ನಾನು... ನನಗೆ-ಎರಡುವರೆ ತಿಂಗಳ ಮೇಲಾಯ್ತು...” ಎಂದ ರುಕ್ಕಿಣಿಯು ಕಣ್ಣುಗಳಲ್ಲಿ ನೀರು ತುಂಬಿತು.<br /> {{gap}}ಲಕ್ಕ ಕಕ್ಕಾಬಿಕ್ಕಿಯಾದ “ಅಂಗಂದ್ರೇನು ಅವಾರೆ...” ದಿಗಿಲಾಗಿ ತಡವರಿಸಿದ..<br /> {{gap}}“ನಾನು.. ಹೊರಗಾಗಿ ಎರಡೂವರೆ ತಿಂಗಳ ಮೇಲಾಯ್ತು...”<br /> {{gap}}“ಹಯ್ಯ ದ್ವಾವರೆ!...” ಲಕ್ಕ ಕುಸಿದು ಹೋದ. ಮಾತು ಈಚೆಗೆ ಹೊರಡಲೊಲ್ಲದು.<br /> {{gap}}“ಈಗೇನು ಮಾಡೋದು?...”<br /> {{gap}}“ಮೂಢ ಮುಕ್ತ, ನಂಗೇನು ತಿಳಿದಾತು?... ಆವತ್ತು, ನಾನೇಟು ಬಗೇಲಿ ಬ್ಯಾಡಿ ಬ್ಯಾಡಿ ಅಂದರೂವೆ... ನೀವು ಕ್ಯಾಳನಿಲ್ಲ...”<br /> {{gap}}“ಹೌದು, ಆ ದಿನ ನಾನೇ ಜ್ಞಾನ ತಪ್ಪಿ ನಡೆದದ್ದು, ಇದರಲ್ಲಿ ನಿನ್ನ ತಪ್ಪೇನು ಇಲ್ಲ..... ಈಗ, ಮುಂದೇನು ಮಾಡೋದು?”<br /> {{gap}}“ನಂಗೆ ತಿಳಿಯಕ್ಕಿಲ್ಲ. ನೀವು ಎಂಗೆ ಯೋಳಿದ್ರೆ ಅಂಗೆ ಮಾಡ್ತೀನಿ!”<br /> {{gap}}“ಇದನ್ನ ಕಳೆಯಲಿಕ್ಕೆ ಏನಾದರೂ ಔಷಧಿ ತಂದು ಕೊಡಬೇಕಲ್ಲ?”<br /> {{gap}}ಲಕ್ಕ ಕೆಲ ಸಮಯ ಮಾತಾಡದೆ ಮೌನವಾಗಿ ಚಿಂತಿಸುತ್ತ ನಿಂತ. ತರುವಾಯ,<br /> {{gap}}“ತಾಳಿ, ಒಂದು ಜಿನ ಆ ಕುಂಬಾರರ ಕಾಳಮ್ಮ ಅವರಟೇಲಿ ಅವಳ ಎದುರಟ್ಟಿ ಮುಟ್ಟನಂಜಮ್ಮನ ಜ್ವಕ್ಕೆ ಅಂತಿದ್ದು ಗ್ಯಾಪಕ ಆಯ್ತಾ ಅದೆ... 'ಕ್ಯಾಳಿದೇನೆ ಮುಟ್ಟಿ, ನಮ್ಮೂರ ಅನುಕೂಲಸ್ತರ ಮನೆ ಎಣ್ಣೆ ಒಂದು ಕದ್ದು ಬೊಸಿರಾಗಿ, ಹುಣಸೂರಲಲಿ ಸಂತೆಮಾಳದ ಕಾಸಿಂಬೀ ಇಲ್ಲ, ಅವಳಿಂದ ಔಸ್ಥೆ ತಕ್ಕಂಡು ಮೈ ಇಳಿಸಿದಲಂತೆ!” ಅನ್ನೋಕೂವೆ, ನಾ ಯಾತಕೊ ಅವರಟ್ಟಿಗೆ ವೋಗಕ್ಕೂವೆ, ಒಂದೇ ಆಗಿತ್ತು. ಆ ಕ್ಷಣ ಅವಳು ತನ್ನ ಮಾತ ನಿಲ್ಲುಸಿದ್ದು... ಈಗ ಅದೊಂದೇ ದಾರಿ ಇರಾದು. ಹುಣಸೂರಿಗೋಗಿ ಆ ಕಾಸಿಂಬೀನೆ ಕ್ಯಾಬೀನಿ ಎಂದ.<br /> {{gap}}ಲಕ್ಕನ ಸಂಗಡ ರುಕ್ಕಿಣಿ ಮಾತಾನಾಡುತ್ತಿದ್ದುದು ಕೊಟ್ಟಿಗೆಯಲ್ಲಿ ತಾನೆ.<noinclude></noinclude> 79t9oj087p3taxgb3tka1qowv9oogp4 322610 322609 2026-05-26T06:02:10Z Hariprasad Shetty10 7490 /* Proofread */ 322610 proofread-page text/x-wiki <noinclude><pagequality level="3" user="Hariprasad Shetty10" />{{rh|left=೨೪೮|center=|right=ವೈಶಾಖ}}</noinclude>{{gap}}“ಲಕ್ಕ....” ಎಂದು ಪುನಃ ತೊದಲಿದಳು.<br /> {{gap}}“ಯೋಳಿ- ಅಮ್ಮಾರೆ”<br /> {{gap}}“ಲಕ್ಕ...” ಎಂದು ರುಕ್ಕಿಣಿ ಪುನಃ ಉಚ್ಚರಿಸಿದಂತೆ, ಗಂಟಲಲ್ಲಿ ಏನೊ ಸಿಕ್ಕಿಕೊಂಡಂತಾಯಿತು.<br /> {{gap}}“ಯೋಳಿ.”<br /> {{gap}}“ಲಕ್ಕ... ನಾನು... ನನಗೆ-ಎರಡುವರೆ ತಿಂಗಳ ಮೇಲಾಯ್ತು...” ಎಂದ ರುಕ್ಕಿಣಿಯು ಕಣ್ಣುಗಳಲ್ಲಿ ನೀರು ತುಂಬಿತು.<br /> {{gap}}ಲಕ್ಕ ಕಕ್ಕಾಬಿಕ್ಕಿಯಾದ “ಅಂಗಂದ್ರೇನು ಅವಾರೆ...” ದಿಗಿಲಾಗಿ ತಡವರಿಸಿದ..<br /> {{gap}}“ನಾನು.. ಹೊರಗಾಗಿ ಎರಡೂವರೆ ತಿಂಗಳ ಮೇಲಾಯ್ತು...”<br /> {{gap}}“ಹಯ್ಯ ದ್ವಾವರೆ!...” ಲಕ್ಕ ಕುಸಿದು ಹೋದ. ಮಾತು ಈಚೆಗೆ ಹೊರಡಲೊಲ್ಲದು.<br /> {{gap}}“ಈಗೇನು ಮಾಡೋದು?...”<br /> {{gap}}“ಮೂಢ ಮುಕ್ತ, ನಂಗೇನು ತಿಳಿದಾತು?... ಆವತ್ತು, ನಾನೇಟು ಬಗೇಲಿ ಬ್ಯಾಡಿ ಬ್ಯಾಡಿ ಅಂದರೂವೆ... ನೀವು ಕ್ಯಾಳನಿಲ್ಲ...”<br /> {{gap}}“ಹೌದು, ಆ ದಿನ ನಾನೇ ಜ್ಞಾನ ತಪ್ಪಿ ನಡೆದದ್ದು, ಇದರಲ್ಲಿ ನಿನ್ನ ತಪ್ಪೇನು ಇಲ್ಲ..... ಈಗ, ಮುಂದೇನು ಮಾಡೋದು?”<br /> {{gap}}“ನಂಗೆ ತಿಳಿಯಕ್ಕಿಲ್ಲ. ನೀವು ಎಂಗೆ ಯೋಳಿದ್ರೆ ಅಂಗೆ ಮಾಡ್ತೀನಿ!”<br /> {{gap}}“ಇದನ್ನ ಕಳೆಯಲಿಕ್ಕೆ ಏನಾದರೂ ಔಷಧಿ ತಂದು ಕೊಡಬೇಕಲ್ಲ?”<br /> {{gap}}ಲಕ್ಕ ಕೆಲ ಸಮಯ ಮಾತಾಡದೆ ಮೌನವಾಗಿ ಚಿಂತಿಸುತ್ತ ನಿಂತ. ತರುವಾಯ,<br /> {{gap}}“ತಾಳಿ, ಒಂದು ಜಿನ ಆ ಕುಂಬಾರರ ಕಾಳಮ್ಮ ಅವರಟೇಲಿ ಅವಳ ಎದುರಟ್ಟಿ ಮುಟ್ಟನಂಜಮ್ಮನ ಜ್ವಕ್ಕೆ ಅಂತಿದ್ದು ಗ್ಯಾಪಕ ಆಯ್ತಾ ಅದೆ... 'ಕ್ಯಾಳಿದೇನೆ ಮುಟ್ಟಿ, ನಮ್ಮೂರ ಅನುಕೂಲಸ್ತರ ಮನೆ ಎಣ್ಣೆ ಒಂದು ಕದ್ದು ಬೊಸಿರಾಗಿ, ಹುಣಸೂರಲಲಿ ಸಂತೆಮಾಳದ ಕಾಸಿಂಬೀ ಇಲ್ಲ, ಅವಳಿಂದ ಔಸ್ಥೆ ತಕ್ಕಂಡು ಮೈ ಇಳಿಸಿದಲಂತೆ!” ಅನ್ನೋಕೂವೆ, ನಾ ಯಾತಕೊ ಅವರಟ್ಟಿಗೆ ವೋಗಕ್ಕೂವೆ, ಒಂದೇ ಆಗಿತ್ತು. ಆ ಕ್ಷಣ ಅವಳು ತನ್ನ ಮಾತ ನಿಲ್ಲುಸಿದ್ದು... ಈಗ ಅದೊಂದೇ ದಾರಿ ಇರಾದು. ಹುಣಸೂರಿಗೋಗಿ ಆ ಕಾಸಿಂಬೀನೆ ಕ್ಯಾಬೀನಿ ಎಂದ.<br /> {{gap}}ಲಕ್ಕನ ಸಂಗಡ ರುಕ್ಕಿಣಿ ಮಾತಾನಾಡುತ್ತಿದ್ದುದು ಕೊಟ್ಟಿಗೆಯಲ್ಲಿ ತಾನೆ.<noinclude></noinclude> o4qqpk7tudekvulth4bzc8foceeyom9 322612 322610 2026-05-26T08:38:08Z Pragathi. BH 7585 /* Validated */ 322612 proofread-page text/x-wiki <noinclude><pagequality level="4" user="Pragathi. BH" />{{rh|left=೨೪೮|center=|right=ವೈಶಾಖ}}</noinclude>{{gap}}“ಲಕ್ಕ....” ಎಂದು ಪುನಃ ತೊದಲಿದಳು.<br /> {{gap}}“ಯೋಳಿ- ಅಮ್ಮಾರೆ”<br /> {{gap}}“ಲಕ್ಕ...” ಎಂದು ರುಕ್ಕಿಣಿ ಪುನಃ ಉಚ್ಚರಿಸಿದಂತೆ, ಗಂಟಲಲ್ಲಿ ಏನೊ ಸಿಕ್ಕಿಕೊಂಡಂತಾಯಿತು.<br /> {{gap}}“ಯೋಳಿ.”<br /> {{gap}}“ಲಕ್ಕ... ನಾನು... ನನಗೆ-ಎರಡುವರೆ ತಿಂಗಳ ಮೇಲಾಯ್ತು...” ಎಂದ ರುಕ್ಕಿಣಿಯು ಕಣ್ಣುಗಳಲ್ಲಿ ನೀರು ತುಂಬಿತು.<br /> {{gap}}ಲಕ್ಕ ಕಕ್ಕಾಬಿಕ್ಕಿಯಾದ “ಅಂಗಂದ್ರೇನು ಅವಾರೆ...” ದಿಗಿಲಾಗಿ ತಡವರಿಸಿದ..<br /> {{gap}}“ನಾನು.. ಹೊರಗಾಗಿ ಎರಡೂವರೆ ತಿಂಗಳ ಮೇಲಾಯ್ತು...”<br /> {{gap}}“ಹಯ್ಯ ದ್ವಾವರೆ!...” ಲಕ್ಕ ಕುಸಿದು ಹೋದ. ಮಾತು ಈಚೆಗೆ ಹೊರಡಲೊಲ್ಲದು.<br /> {{gap}}“ಈಗೇನು ಮಾಡೋದು?...”<br /> {{gap}}“ಮೂಢ ಮುಕ್ತ, ನಂಗೇನು ತಿಳಿದಾತು?... ಆವತ್ತು, ನಾನೇಟು ಬಗೇಲಿ ಬ್ಯಾಡಿ ಬ್ಯಾಡಿ ಅಂದರೂವೆ... ನೀವು ಕ್ಯಾಳನಿಲ್ಲ...”<br /> {{gap}}“ಹೌದು, ಆ ದಿನ ನಾನೇ ಜ್ಞಾನ ತಪ್ಪಿ ನಡೆದದ್ದು, ಇದರಲ್ಲಿ ನಿನ್ನ ತಪ್ಪೇನು ಇಲ್ಲ..... ಈಗ, ಮುಂದೇನು ಮಾಡೋದು?”<br /> {{gap}}“ನಂಗೆ ತಿಳಿಯಕ್ಕಿಲ್ಲ. ನೀವು ಎಂಗೆ ಯೋಳಿದ್ರೆ ಅಂಗೆ ಮಾಡ್ತೀನಿ!”<br /> {{gap}}“ಇದನ್ನ ಕಳೆಯಲಿಕ್ಕೆ ಏನಾದರೂ ಔಷಧಿ ತಂದು ಕೊಡಬೇಕಲ್ಲ?”<br /> {{gap}}ಲಕ್ಕ ಕೆಲ ಸಮಯ ಮಾತಾಡದೆ ಮೌನವಾಗಿ ಚಿಂತಿಸುತ್ತ ನಿಂತ. ತರುವಾಯ,<br /> {{gap}}“ತಾಳಿ, ಒಂದು ಜಿನ ಆ ಕುಂಬಾರರ ಕಾಳಮ್ಮ ಅವರಟೇಲಿ ಅವಳ ಎದುರಟ್ಟಿ ಮುಟ್ಟನಂಜಮ್ಮನ ಜ್ವಕ್ಕೆ ಅಂತಿದ್ದು ಗ್ಯಾಪಕ ಆಯ್ತಾ ಅದೆ... 'ಕ್ಯಾಳಿದೇನೆ ಮುಟ್ಟಿ, ನಮ್ಮೂರ ಅನುಕೂಲಸ್ತರ ಮನೆ ಎಣ್ಣೆ ಒಂದು ಕದ್ದು ಬೊಸಿರಾಗಿ, ಹುಣಸೂರಲಲಿ ಸಂತೆಮಾಳದ ಕಾಸಿಂಬೀ ಇಲ್ಲ, ಅವಳಿಂದ ಔಸ್ಥೆ ತಕ್ಕಂಡು ಮೈ ಇಳಿಸಿದಲಂತೆ!” ಅನ್ನೋಕೂವೆ, ನಾ ಯಾತಕೊ ಅವರಟ್ಟಿಗೆ ವೋಗಕ್ಕೂವೆ, ಒಂದೇ ಆಗಿತ್ತು. ಆ ಕ್ಷಣ ಅವಳು ತನ್ನ ಮಾತ ನಿಲ್ಲುಸಿದ್ದು... ಈಗ ಅದೊಂದೇ ದಾರಿ ಇರಾದು. ಹುಣಸೂರಿಗೋಗಿ ಆ ಕಾಸಿಂಬೀನೆ ಕ್ಯಾಬೀನಿ ಎಂದ.<br /> {{gap}}ಲಕ್ಕನ ಸಂಗಡ ರುಕ್ಕಿಣಿ ಮಾತಾನಾಡುತ್ತಿದ್ದುದು ಕೊಟ್ಟಿಗೆಯಲ್ಲಿ ತಾನೆ.<noinclude></noinclude> larhnzdjv1w07h8rowl66xvdib3s2wv ಪುಟ:ವೈಶಾಖ.pdf/೨೬೫ 104 82194 322613 298269 2026-05-26T08:38:46Z Pragathi. BH 7585 /* Proofread */ 322613 proofread-page text/x-wiki <noinclude><pagequality level="3" user="Pragathi. BH" /></noinclude>________________ {{Left|ಸಮಗ್ರ ಕಾದಂಬರಿಗಳು}} {{Right|೨೪೯}} ಹೀಗೆ ಮಾತನಾಡುವಾಗ ಯಾವುದೊ ಜ್ಞಾನದಲ್ಲಿ ಅವಳು ಮನೆಯ ಮುಂದಿನ ಬಾಗಿಲಿಗೆ ತಾಪಾಳುಹಾಕುವುದನ್ನು ಮರೆತಿದ್ದಳು. ಒಗ್ಗರಣೆಗೆ ಸಾಸಿವೆ ಕಾಳು ಬೇಡಲು ಬಂದ ಲಕ್ಷಮ್ಮ ನಡುಮನೆಯಲ್ಲಿ ಅವಿತು ನಿಂತು ಅವರಿಬ್ಬರ ಸಂಭಾಷಣೆಯನ್ನೂ ಕೇಳಿಸಕೊಂಡವರು, ರುಕ್ಕಿಣಿ ಮತ್ತೆ ಮತ್ತೆ ಲಕ್ಕನನ್ನು ಒತ್ತಾಯಿಸಿ, ಹಿತ್ತಲಿನ ಬಾಗಿಲಿನಿಂದ ಒಳಬರುತ್ತಿರುವಂತೆ, ಮೆಲ್ಲನೆ ಮುಂಬಾಗಿಲಿನಿಂದ ಜಾರಿಕೊಂಡರು. ಅವರ ಮಾತಿನ ಒಗ್ಗರಣೆಗೆ ಈಗ ಹೇರಳ ಸಾಮಗ್ರಿ ಸಿಕ್ಕಿತ್ತು. ಅದಕ್ಕೆ ಬಣ್ಣ ಕಟ್ಟಿ, ಒಳಗಿಂದೊಳಗೆಯೆ, ಬ್ರಾಹ್ಮಣಕೇರಿಯಲ್ಲಿ ಬಿತ್ತುತ್ತ ನಡೆದಳು. ಸಮಾಚಾರ ಊರಿನ ಇತರೇ ಕೇರಿಗಳಿಗೂ ಹರಡಲು ಬಹಳ ಸಮಯವೇನೂ ಹಿಡಿಯಲಿಲ್ಲ. ಅದೇ ರಾತ್ರಿ ಮಲಗುವ ಸಮಯದಲ್ಲಿ ಪುರೋಹಿತ ವೆಂಕಣ್ಣ ಜೋಯಿಸರು ತಮ್ಮಲ್ಲಿ ವೇದಪಾಠಕ್ಕೆ ಬರುತ್ತಿದ್ದ ಬಾಲ;ಕನೊಬ್ಬನ ಸಂಗಡಕೃಷ್ಣಶಾಸ್ತಿಗಳನ್ನು ತುರ್ತಾಗಿ ನೋಡಬೇಕೆಂದೂ ಜೋಯಿಸರ ಮನೆಗೆ ಈ ಕೂಡಲೆ ಬಂದು ತಮ್ಮನ್ನು ಕಾಣಬೇಕೆಂದೂ ಹೇಳಿಕಳುಹಿಸಿದರು. ಜೋಯಿಸರ ಈ ಅನಿರೀಕ್ಷಿತ ಕರೆಗೆ ಕಾರಣವೇನಿರಬಹುದೆಂದು ಅರ್ಥವಾಗದೆ, ಚಿಂತಿಸುತ್ತಲೆ ಶಾಸ್ತ್ರಿಗಳು ಜೋಯಿಸರ ಮನೆಯೊಳಗೆ ಕಾಲಿಟ್ಟರು. ಜೋಯಿಸರು ಅವರನ್ನು ತಮ್ಮ ಅಧ್ಯಯನದ ಕೋಣೆಯೊಳಗೆ ಕರೆದೊಯ್ದು, ತಾಂಬೂಲದ ತಟ್ಟೆಯನ್ನು ಮುಂದಿಟ್ಟು. “ಶಾಸ್ತಿಗಳೆ, ನಾವು ನಿಮಗೆ ಮೊದಲೆ ಹೇಳಿದಿವಿ-ಗಂಡನನ್ನು ಕಳೆದುಕೊಂಡ ಒಡನೆಯೆ ರುಕ್ಕಿಣಿಗೆ ಕೇಶಮುಂಡನ ಮಾಡಿಸಿ, ಕೇಶಮುಂಡನ ಮಾಡಿಸಿ, ಎಂದು. ಆದರೆ ನೀವು ನಮ್ಮ ಹಿತವಚನಕ್ಕೆ ಕುರುಡುಕಾಸಿನ ಕಿಮ್ಮತ್ತನ್ನೂ ನೀಡಲಿಲ್ಲ. ಇದರಿಂದ ನಮ್ಮ ದರುಮನಳ್ಳಿಯ ಇಡೀ ಬ್ರಾಹ್ಮಣ ಸಮಾಜವನ್ನೇ ಇದಿರುಹಾಕಿಕೊಂಡಿರಿ. ನಾವೇನೂ ಸಾಂಪ್ರದಾಯಿಕವಾಗಿ ನಿಮಗೆ ಬಹಿಷ್ಕಾರ ಹಾಕಿದೂನೂವೆ, ಒಳಗಡೆ ನಮಗೆಲ್ಲರಿಗೂ ನಿಮ್ಮ ಸುಸಂಸ್ಕತ ನಡೆನುಡಿಯ ಬಗ್ಗೆ, ನಿಮ್ಮ ದೈವಭಕ್ತಿಯ ಬಗ್ಗೆ, ತೋಟದ ಕಾಯಕದಲ್ಲಿ ನೀವು ನಿಮ್ಮನ್ನೆ ಸಮರ್ಪಣಭಾವದಿಂದ ತೊಡಗಿಸಿಕೊಳ್ಳುವ ಕಾರ್ಯಕ್ಷಮತೆಯ ಬಗ್ಗೆ ಅಪಾರ ಗೌರವವಿದ್ದದ್ದರಿಂದ ನಿಮ್ಮ ಶರತ್ತವನ್ನೆಲ್ಲ ಮರೆತು ಪುನಹ ಎಂದಿನಂತೆ ನಮ್ಮನಿಮ್ಮಲ್ಲಿ ಏನೂ ಆಗಲೆ ಇಲ್ಲವೇನೋ ಎನ್ನುವ ಹಾಗೆ ನಡೆದುಕೊಳ್ಳತ್ತಾ ಬಂದಿದೀವಿ. ಆದರೆ ಈಗ...” {{Right|ವೆಂಕಣ್ಣಜೋಯಿಸರ ಮಾತುಗಳನ್ನು ನಿರ್ಭಾವದಿಂದ ಆಲಿಸುತ್ತಿದ್ದ}}<noinclude></noinclude> i1nwx3nxbtlw46nkwn9l5v0f8feqw58 ಪುಟ:ವೈಶಾಖ.pdf/೨೬೬ 104 82195 322614 298307 2026-05-26T09:13:00Z Pragathi. BH 7585 /* Proofread */ 322614 proofread-page text/x-wiki <noinclude><pagequality level="3" user="Pragathi. BH" /></noinclude>________________ {{Left|೨೫೦}} {{Right|ವೈಶಾಖ}} ಕೃಷ್ಣಶಾಸ್ತ್ರಿಗಳು ಕೊಂಚ ವಿಚಲಿತರಾದಂತೆ, {{center|“ಈಗ-?... ಈಗ ಏನಾಗಿದೆ?” ಕೇಳಿದರು.}} {{center|ಪುರೋಹಿತರ ನುಡಿಗಳ ಸುಳಿವು ಸಿಕ್ಕದೆ, ಒಳಗೆ ಸ್ವಲ್ಪ ಅಧೀರರೂ}} ಆದರು. {{center|“ತಾಂಬೂಲ ಹಾಕಿಕೊಳ್ಳಿ, ಹೇಳೇನೆ” ವೆಂಕಣ್ಣಜೋಯಿಸರು ಎಲೆ}} ಅಡಿಕೆ ತಟ್ಟೆಯನ್ನು ಮುಂದೆ ಸರಿಸಿ ಹುಸಿನಗುತ್ತ ನುಡಿದರು. {{center|ಜೋಯಿಸರು ಹುಸಿ ನಕ್ಕಾಗ, ಅದರಲ್ಲಿ ಏನೊ ಕೊಂಕು ಅಡಗಿದೆ}} ಎಂದು ಕೃಷ್ಣಶಾಸ್ತ್ರಿಗಳು ಅನುಭವದಿಂದ ಎಂದೂ ಅರಿತಿದ್ದರು. {{center|“ಬೇಡಿ-ನಾನು ಎಲೆ ಅಡಿಕೆ ಹಾಕುವುದನ್ನು ತ್ಯಜಿಸಿದ್ದೇನೆ..."}} ನಿರಾಕರಿಸುತ್ತ, ಗಂಭೀರವಾಗಿ ನುಡಿದರು. {{center|ಜೋಯಿಸರಿಗೆ ಸೋಜಿಗವೆನಿಸಿತು.}} {{center|“ಇದೇನು ವಿಚಿತ್ರ, ಎಲೆ ಅಡಿಕೆಗೂ ನಿಮಗೂ ಪ್ರಾಣ. ನಿಮ್ಮ ಬಾಯಿ}} ಸದಾಕಾಲವೂ ತಾಂಬೂಲ ರಾಗ ರಂಜಿತವಾಗಿಯೇ ಇರಬೇಕು, ಅಂಥಾದ್ದರಲ್ಲಿ ಎಂದಿನಿಂದ ಈ ತಾಂಬೂಲ ವೈರಾಗ್ಯ?” {{center|“ಬಿಟ್ಟು ಕೆಲವು ಕಾಲ ಆಯ್ತು... ವಯಸಾಗ್ತಾ ಆಗ್ತ ಈ ಚಟಗಳನ್ನ}} ಒಂದೊಂದಾಗಿ ಬಿಡುವುದು ಕ್ಷೇಮ, ಅಲ್ಲವೆ?.... ಅದಿರಲಿ ಜೋಯಿಸರೆ, ನೀವು ಅದೇನೊ ಹೇಳಲಿಕ್ಕೆ ಹೊರಟ ಹಾಗಿತ್ತಲ್ಲ. ಏನು ವಿಷಯ?” {{center|“ಅದೇ ಹೇಳಿದ್ದೆನಲ್ಲ- ನಿಮ್ಮ ರುಕ್ಕಿಣಿಯ ಕೇಶಮುಂಡನ ವಿಚಾರ.”}} {{center|“ಅದು ಆಯ್ತಲ್ಲ. ಪುನಹ ಅದರ ಪ್ರಸ್ತಾಪದಿಂದ ಯಾವ ಸಾರ್ಥಕ್ಯ?”}} {{center|“ಅದರ ಪ್ರಸ್ತಾಪ ಈಗೆ ಪ್ರಕೃತ ಆಗಿರೋದ್ದರಿಂದಲೇ ಆ ಸುದ್ದಿಯನ್ನು}} ಮತ್ತೆ ಎತ್ತಬೇಕಾಯಿತು. ನೀವು ಆಗಲೇ ಕೇಶಮುಂಡನ ಮಾಡಿಸಿದ್ದರೆ ಈ ಹಗರಣ ಆಗುತ್ತಲೇ ಇರಲಿಲ್ಲ ಎಂದು ಕಾಣತ್ತೆ...” ಜೋಯಿಸರ ಬಾಯಿ ಕಟ್ಟಿತು. ಮಾತುಗಳು ಹೊಟ್ಟೆಯೊಳಗೇ ಸತ್ತಿದ್ದವು. ಈ ಜೋಯಿಸರಿಗೆ ತನ್ನ ಮತ್ತು ರುಕ್ಕಿಣಿಯ ಸಂಬಂಧದ ಸುಳಿವು ಏನಾದರೂ ಬಿದ್ದರಬಹುದೆ?... ಅದು ಹೇಗೆ ಪ್ರಕಟವಾಗಲು ಸಾಧ್ಯ?... ರುಕ್ಕಿಣಿಯಂತೂ ಪ್ರಕಟಿಸುವಂತಿಲ್ಲ.... ರುಕ್ಕಿಣಿ ಮತ್ತು ತಾವು ಇಬ್ಬರನ್ನು ಉಳಿದು ಇನ್ನೊಂದು ನರಪಿಳ್ಳೆಗೆ ಇದು ತಿಳಿಯುವ ಸಂಭವವೇ ಇಲ್ಲ.... ಬಾಯಿಗೆ ಒತ್ತರಿಸಿದ ಎಲೆ ಅಡಿಕೆಯ ಜೊತೆಗೆ ಇನ್ನೂ ನಾಲ್ಕು ಎಲೆಗಳಿಗೆ ಸುಣ್ಣ ಹಚ್ಚಿ ದವಡೆಗೆ ಸೇರಿಸುತ್ತ, ವೆಂಕಣ್ಣ ಜೋಯಿಸರು,<noinclude></noinclude> 177irwt5pbt53o57ltlawdjoqr2d0wm ಪುಟ:ಭಾರತ ದರ್ಶನ.djvu/೧೨ 104 84904 322619 253049 2026-05-26T09:19:36Z Pragathi. BH 7585 /* Validated */ 322619 proofread-page text/x-wiki <noinclude><pagequality level="4" user="Pragathi. BH" /></noinclude>{{center|v}}{{gap}}ಗ್ರಂಥಕರ್ತರು ತಮ್ಮ ಪುಸ್ತಕಗಳನ್ನು ನೋಡಿ ಏನೆಂದುಕೊಳ್ಳುತ್ತಾರೋ ನಾನರಿಯೆ. ಆದರೆ</br>ಹಿಂದೆ ನಾನು ಬರೆದುದನ್ನು ನಾನೇ ಓದಿದಾಗ ನನಗೊಂದು ವಿಚಿತ್ರ ಅನುಭವವಾಗುತ್ತದೆ. ಆ ಬರೆ</br>ವಣಿಗೆ ಸೆರೆಮನೆಯ ವೈಪರೀತ್ಯದ ಸಂಕುಚಿತ ವಾತಾವರಣದಲ್ಲಿ ಬರೆದುದಾಗಿ ಹೊರಗೆ ಓದಿದಾಗ ಈ</br>ಅನುಭವ ಇನ್ನೂ ತೀಕ್ಷ್ಣವಾಗುತ್ತದೆ. ಅದರ ಪರಿಚಯವೇನೋ ಆಗುತ್ತದೆ; ಆದರೂ ಪೂರ್ಣ ಪರಿ</br>ಚಯವಲ್ಲ. ಬೇರೆ ಯಾರೋ ಒಬ್ಬರು-ನನಗೆ ತೀರ ಸಮೀಪದವರಾದರೂ ಬೇರೆಯವರು-ನನಗೆ</br>ಚಿರಪರಿಚಿತವಾದ ಯಾವುದೊ ಒಂದು ಗ್ರಂಥ ಬರೆಹವನ್ನು ಓದಿದಂತೆ ಆಗುತ್ತದೆ. ಪ್ರಾಯಶಃ</br>ನನ್ನಲ್ಲಿ ಆಗಿರುವ ಪರಿವರ್ತನೆಗೆ ಇವೇ ಒ೦ದು ಅಳತೆಗೋಲು.</br>{{gap}}ಈ ಪುಸ್ತಕದ ವಿಷಯದಲ್ಲೂ ನನ್ನ ಅನುಭವವು ಅದೇ ರೀತಿ ಇದೆ. ಅದು ನನ್ನದು ನಿಜ,</br>ಆದರೂ ಪೂರ್ಣ ಈಗಿನ ನನ್ನದಲ್ಲ. ಕ್ಷಣಕಾಲ ಬಾಳಿ, ಬಾಡಿ, ಒಂದು ನೆನಪನ್ನು ಮಾತ್ರ ಬಿಟ್ಟು</br>ಹೋಗಿರುವ ಹಿಂದಿನ ನೆನಹುಗಳ ಪರಿಯ೦ತೆ ಇದೂ ನನ್ನ ಯಾವುದೊ ಒಂದು ಹಿಂದಿನ ನೆನಹು.</br>{{rh|center=|left=ಆನಂದಭವನ : ಆಲಹಾಬಾದ್,|right=ಜವಹರಲಾಲ್ ನೆಹ್ರೂ.{{gap}}}}{{Left|೨೫ ಡಿಸೆಂಬರ್, ೧೯೪೫.}}</br></br></br></br></br>{{center|<big>ಬಿನ್ನಹ</big>}}{{center|————}}{{gap}}ಪಂಡಿತ ಜವಹರಲಾಲರು ಪ್ರಪಂಚದ ಮಹಾರಾಜಕಾರಣಿಗಳಲ್ಲಿ ಒಬ್ಬರು, ಭಾವನಾ</br>ಜೀವಿಗಳು, ಉದಾತ್ತಧ್ಯೇಯನಿಷ್ಠರು. ಅವರು ತಮ್ಮ 'Discovery of India '</br>(ಭಾರತದರ್ಶನ) ಗ್ರಂಥದಲ್ಲಿ ಭಾರತದ ಇತಿಹಾಸ, ಸಾಹಿತ್ಯ ಕಲೆ ಮತ್ತು ಸಂಸ್ಕೃತಿಗಳನ್ನು ಒಂದು</br>ನೂತನ ದೃಷ್ಟಿಯಿಂದ ನೋಡಿ, ಅವುಗಳ ಮೇಲೆ ಹೊಸ ಬೆಳಕನ್ನು ಬೀರಿ ಭಾರತೇಯರಿಗೂ</br>ಪ್ರಪಂಚಕ್ಕೂ ಮಹದುಪಕಾರ ಮಾಡಿದಾರೆ. ಅವರ ಇಂಗ್ಲಿಷ್ ಗ್ರಂಥವು ಈಗಾಗಲೇ ಐದು ಬಾರಿ</br>ಪುನರ್ಮುದ್ರಿತವಾಗಿದೆ. ಇತರ ಭಾಷೆಗಳಲ್ಲೂ ಅದರ ಅನುವಾದಗಳಾಗಿವೆ. ಅದನ್ನು ಕನ್ನಡಿಸಿ</br>ಕನ್ನಡಿಗರಿಗೆ ಅರ್ಪಿಸಲು ಅನುಮತಿ ಇತ್ತುದಕ್ಕಾಗಿ ಪಂಡಿತ ಜವಹರಲಾಲ್ರಿಗೂ, ಆ ಅನುಮತಿ</br>ಯನ್ನು ದೊರಕಿಸಿ ಕೊಡುವುದರಲ್ಲಿ ನೆರವಾದ ಹಿರಿಯರಾದ ಮಾನ್ಯ ರಂಗನಾಥ ರಾಮಚಂದ್ರ</br>ದಿವಾಕರರಿಗೂ, ನನ್ನ ಮಿತ್ರರಾದ ಸಿದ್ದವ್ವನಹಳ್ಳಿ ನಿಜಲಿಂಗಪ್ಪನವರಿಗೂ ತುಂಬ ಋಣಿಯಾಗಿದ್ದೇನೆ.</br>ನನ್ನ ಗೆಳೆಯರಾದ ಶ್ರೀ ಕೂಡಲಿ ಚಿದಂಬರಂ ಮುದ್ರಣದ ಹೊರೆಯನ್ನು ಹೊತ್ತು ಕರಡುಗಳನ್ನು</br>ತಿದ್ದಿ ಗ್ರಂಥವನ್ನು ಅಂದವಾಗಿ ಪ್ರಕಟಿಸಿದ್ದಾರೆ. ಅವರ ಶ್ರಮವನ್ನು ನಾನೆಂದೂ ಮರೆಯಲಾರೆ.</br>ಈ ಗ್ರಂಥಾವಲೋಕನದಿಂದ ಪಂಡಿತ ಜವಹರರ ವಿಶಾಲದೃಷ್ಟಿ ಕಿಂಚಿತ್ತಾದರೂ ಕನ್ನಡಿಗರಿಗೆ ದರ್ಶನ</br>ವಾಗಿ ಅನುಭಕ್ಕೆ ಬಂದರೆ ನನ್ನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಿತೆಂದು ಭಾವಿಸುವ,</br> {{Right|ಕನ್ನಡಿಗರ ಸೇವಕ,{{gap}}{{gap}}}}{{Right|'''ಸಂತೆಬೆನ್ನೂರು ಕೃಷ್ಣಮೂರ್ತಿರಾವ್'''}}<noinclude></noinclude> huxkdsoblea8hneh6rbw1l5hqurv4yt ಪುಟ:ಅರಮನೆ.pdf/೩೭೪ 104 86770 322626 321881 2026-05-26T11:05:33Z Hariprasad Shetty10 7490 322626 proofread-page text/x-wiki <noinclude><pagequality level="3" user="Shreesha Sharma" /> {{rh|left=ಅರಮನೆ|center=|right=೩೪೩}}</noinclude>ಮ್ಯಾಲ ತಮಗೂ ಹಕ್ಕಯ್ಕೆ.. ತಾವು ಬರೋಗಂಟಾ ವಸ್ತೀಗೆ ಮಜ್ಜಣ ಮಾಡಿಸಬಾರದೆಂಬ ನಿರೂಪ ಅಕ್ಕಪಕ್ಕದ ಗ್ರಾಮಗಳ ಪಟ್ಟಣ ಸೋಮಿಗಳಿಂದ ಬರಲಾರಂಭಿಸಿದೊಡನೆ.... {{gap}}ತನ್ನ ಗಂಡನಿದ್ದಲ್ಲಿಗೆ ತಲುಪಿದ್ದ ತನ್ನತ್ತ ಪಿಳಿಪಿಳಿಗುಟ್ಟುತಲಿದ್ದ ತನ್ನ ಗಂಡನ ಕಣ್ಣುಗಳನ್ನು ನೋಡುತ್ತಿದ್ದ... ಜಗಲೂರವ್ವಗ ಹಿಸ್ಸೀ ಅನ್ನಿಸಿಬಿಟ್ಟಿತು. ಆ ವಂದರಗಳಿಗೆಯಲ್ಲಿ ಮುಖನ ಸಿಂಡರಿಸಿಕೊಂಡಳು.. ಏಸೋ ವರುಷಂಗಳ ಹಿಂದೆ ಮುಟ್ಟಾಗಿದ್ದ ಆ ಸಾದ್ವಿಯು, ಹ್ಹಾ...ಹ್ಹಾ... ನಿನ್ ಕಟಕಂಡೀಸುವರುಸ ಬಾಳೂವೆ ಮಾಡಿದೆನಲ್ಲೋ ಸೂಗಾss ಯಂದನಕಂತ ತನ್ನ ಗಂಡನತ್ತ ನೋಡಿ ಹಲ್ಲು ಕಡಿದಳು. ಕಳ್ಳರೆಂಬ ಅಗ್ಗದಲ್ಲಿ ಹಿರೀಕರತ್ತ ದುರುಗುಟ್ಟಿ ನೋಡುತ್ತ ಪರಪರ ಕೆರೆದುಕೊಂಡು ತಲೆಗೂದಲನ್ನು ಸೆಲ್ಲೊಡೆದಳು. “ಜಗಲೂರಜ್ಜನೇ.. ನನ್ನನ್ಯಾಕ ಬದುಕಲಕ ಹಚ್ಚ ತಂದೆಯೇ..” ಯಂದು ರವುಸದಿಂದ ಚೀರಿದಳು.. ತಾನೀ ದೂರಾಗ ಯಿರೋದ್ರಿಂತ ಬ್ಯಾರೆ ಮೂರಾಗ ಮಣ್ಣಾಗೋದೇವಾಸಿ.. ಯಲ್ಲದಿಯೋ ಸೂರಾಃ ಯಲ್ಲಿದೀಯೋ.. ಯೀ ಸೂಗನಿಗೆ ನನ್ನ ಕೊಟ್ಟಾತನೇ 0ರಂದು ಚೀರಿಕೊತ ಅಲ್ಲಿಂದ ಬಿರುಗಾಳಿಯೋಪಾದಿಯಲ್ಲಿ ಹೊಂಟೋದೊಡನೆ.... {{gap}}ಹಿರೀಕರು ಹಂಪಜ್ಜನ ನೇತ್ರುತ್ವದೊಳಗ ಬಂದ ಯಿಚಾರದಾವುದೆಂದರೆ.. ನೆರಿಗೆ ಕಟ್ಟಿದ್ದೂ ತಡ ಹಿಡೀಲಿಲ್ಲ.... {{gap}}ಮೂರು ಗುಡ್ಡಗಳಿಂದ ಮೂರು ಕಲ್ಲು ಗುಂಡುಗಳನ ತರಿಸಿ ವಲೆ ಮೂಡಿದ್ದು ತಡ ಹಿಡೀಲಿಲ್ಲ... {{gap}}ಅದರ ಮ್ಯಾಲ ಪುರಾತನಕಾಲದ ಹಂಡೇವ ಯಿಟ್ಟಿದ್ದು ತಡ ಹಿಡೀಲಿಲ್ಲ... {{gap}}ಕೊಡಪಾನಗಟ್ಟಲೆ ಪಂಚೋದಕವನ್ನು ಸುರಿವಿದ್ದು ತಡ ಹಿಡೀಲಿಲ್ಲ.. {{gap}}ಬನ್ನಿ, ಬಿಲ್ವ ಗಂಧದ ಕೊರಡುಗಳನ್ನು ವಲೆಯೊಳಗಮರಿಸಿದ್ದು ತಡಃ ಹಿಡೀಲಿಲ್ಲ.. {{gap}}ಸಿವನ್ನಾಮ ಪಾರೋತಿ ಪತಿ ಹರಹರ ಮಾದೇವ ಯಂದು ಹೇಳುತ ಬೆಂಕಿ ಮುಡಿಸಿದ್ದು ತಡಃ ಹಿಡೀಲಿಲ್ಲ.... {{gap}}ಸಾಂಬವಿಯ ನಾಮಸ್ಮರಣೆ ಮಾಡುತ ಚಳ್ಳಮಳ್ಳ ನೀರು ಕಾಯಿಸಿದರು.. ವಸ್ತಿಯನ್ನು ಮೆಲುಮೆಲ್ಲಕ ಯಬ್ಬಿಸಿ ಬಚ್ಚಲಕ ಕರೆ ತಂದರು. ಅದಕ್ಕಂಟಿದ್ದ ಬಟ್ಟೆಬರೆ ವುದುರಿಸಿ ಬೆಳ್ಳಿ ಪೀಠದ ಮ್ಯಾಲ ಕುಂಡುರಿಸಿದರು... ಸುಡುಸುಡುವ<noinclude></noinclude> qodamglda1syw5i90a45bfjzbhv8m8b 322627 322626 2026-05-26T11:05:51Z Hariprasad Shetty10 7490 322627 proofread-page text/x-wiki <noinclude><pagequality level="3" user="Shreesha Sharma" /> {{rh|left=ಅರಮನೆ|center=|right=೩೪೩}}</noinclude>ಮ್ಯಾಲ ತಮಗೂ ಹಕ್ಕಯ್ಕೆ.. ತಾವು ಬರೋಗಂಟಾ ವಸ್ತೀಗೆ ಮಜ್ಜಣ ಮಾಡಿಸಬಾರದೆಂಬ ನಿರೂಪ ಅಕ್ಕಪಕ್ಕದ ಗ್ರಾಮಗಳ ಪಟ್ಟಣ ಸೋಮಿಗಳಿಂದ ಬರಲಾರಂಭಿಸಿದೊಡನೆ....<br /> {{gap}}ತನ್ನ ಗಂಡನಿದ್ದಲ್ಲಿಗೆ ತಲುಪಿದ್ದ ತನ್ನತ್ತ ಪಿಳಿಪಿಳಿಗುಟ್ಟುತಲಿದ್ದ ತನ್ನ ಗಂಡನ ಕಣ್ಣುಗಳನ್ನು ನೋಡುತ್ತಿದ್ದ... ಜಗಲೂರವ್ವಗ ಹಿಸ್ಸೀ ಅನ್ನಿಸಿಬಿಟ್ಟಿತು. ಆ ವಂದರಗಳಿಗೆಯಲ್ಲಿ ಮುಖನ ಸಿಂಡರಿಸಿಕೊಂಡಳು.. ಏಸೋ ವರುಷಂಗಳ ಹಿಂದೆ ಮುಟ್ಟಾಗಿದ್ದ ಆ ಸಾದ್ವಿಯು, ಹ್ಹಾ...ಹ್ಹಾ... ನಿನ್ ಕಟಕಂಡೀಸುವರುಸ ಬಾಳೂವೆ ಮಾಡಿದೆನಲ್ಲೋ ಸೂಗಾss ಯಂದನಕಂತ ತನ್ನ ಗಂಡನತ್ತ ನೋಡಿ ಹಲ್ಲು ಕಡಿದಳು. ಕಳ್ಳರೆಂಬ ಅಗ್ಗದಲ್ಲಿ ಹಿರೀಕರತ್ತ ದುರುಗುಟ್ಟಿ ನೋಡುತ್ತ ಪರಪರ ಕೆರೆದುಕೊಂಡು ತಲೆಗೂದಲನ್ನು ಸೆಲ್ಲೊಡೆದಳು. “ಜಗಲೂರಜ್ಜನೇ.. ನನ್ನನ್ಯಾಕ ಬದುಕಲಕ ಹಚ್ಚ ತಂದೆಯೇ..” ಯಂದು ರವುಸದಿಂದ ಚೀರಿದಳು.. ತಾನೀ ದೂರಾಗ ಯಿರೋದ್ರಿಂತ ಬ್ಯಾರೆ ಮೂರಾಗ ಮಣ್ಣಾಗೋದೇವಾಸಿ.. ಯಲ್ಲದಿಯೋ ಸೂರಾಃ ಯಲ್ಲಿದೀಯೋ.. ಯೀ ಸೂಗನಿಗೆ ನನ್ನ ಕೊಟ್ಟಾತನೇ 0ರಂದು ಚೀರಿಕೊತ ಅಲ್ಲಿಂದ ಬಿರುಗಾಳಿಯೋಪಾದಿಯಲ್ಲಿ ಹೊಂಟೋದೊಡನೆ.... {{gap}}ಹಿರೀಕರು ಹಂಪಜ್ಜನ ನೇತ್ರುತ್ವದೊಳಗ ಬಂದ ಯಿಚಾರದಾವುದೆಂದರೆ.. ನೆರಿಗೆ ಕಟ್ಟಿದ್ದೂ ತಡ ಹಿಡೀಲಿಲ್ಲ.... {{gap}}ಮೂರು ಗುಡ್ಡಗಳಿಂದ ಮೂರು ಕಲ್ಲು ಗುಂಡುಗಳನ ತರಿಸಿ ವಲೆ ಮೂಡಿದ್ದು ತಡ ಹಿಡೀಲಿಲ್ಲ... {{gap}}ಅದರ ಮ್ಯಾಲ ಪುರಾತನಕಾಲದ ಹಂಡೇವ ಯಿಟ್ಟಿದ್ದು ತಡ ಹಿಡೀಲಿಲ್ಲ... {{gap}}ಕೊಡಪಾನಗಟ್ಟಲೆ ಪಂಚೋದಕವನ್ನು ಸುರಿವಿದ್ದು ತಡ ಹಿಡೀಲಿಲ್ಲ.. {{gap}}ಬನ್ನಿ, ಬಿಲ್ವ ಗಂಧದ ಕೊರಡುಗಳನ್ನು ವಲೆಯೊಳಗಮರಿಸಿದ್ದು ತಡಃ ಹಿಡೀಲಿಲ್ಲ.. {{gap}}ಸಿವನ್ನಾಮ ಪಾರೋತಿ ಪತಿ ಹರಹರ ಮಾದೇವ ಯಂದು ಹೇಳುತ ಬೆಂಕಿ ಮುಡಿಸಿದ್ದು ತಡಃ ಹಿಡೀಲಿಲ್ಲ.... {{gap}}ಸಾಂಬವಿಯ ನಾಮಸ್ಮರಣೆ ಮಾಡುತ ಚಳ್ಳಮಳ್ಳ ನೀರು ಕಾಯಿಸಿದರು.. ವಸ್ತಿಯನ್ನು ಮೆಲುಮೆಲ್ಲಕ ಯಬ್ಬಿಸಿ ಬಚ್ಚಲಕ ಕರೆ ತಂದರು. ಅದಕ್ಕಂಟಿದ್ದ ಬಟ್ಟೆಬರೆ ವುದುರಿಸಿ ಬೆಳ್ಳಿ ಪೀಠದ ಮ್ಯಾಲ ಕುಂಡುರಿಸಿದರು... ಸುಡುಸುಡುವ<noinclude></noinclude> pe657uje0hm39deewx9slyrudvub3ng 322628 322627 2026-05-26T11:06:19Z Hariprasad Shetty10 7490 322628 proofread-page text/x-wiki <noinclude><pagequality level="3" user="Shreesha Sharma" /> {{rh|left=ಅರಮನೆ|center=|right=೩೪೩}}</noinclude>ಮ್ಯಾಲ ತಮಗೂ ಹಕ್ಕಯ್ಕೆ.. ತಾವು ಬರೋಗಂಟಾ ವಸ್ತೀಗೆ ಮಜ್ಜಣ ಮಾಡಿಸಬಾರದೆಂಬ ನಿರೂಪ ಅಕ್ಕಪಕ್ಕದ ಗ್ರಾಮಗಳ ಪಟ್ಟಣ ಸೋಮಿಗಳಿಂದ ಬರಲಾರಂಭಿಸಿದೊಡನೆ....<br /> {{gap}}ತನ್ನ ಗಂಡನಿದ್ದಲ್ಲಿಗೆ ತಲುಪಿದ್ದ ತನ್ನತ್ತ ಪಿಳಿಪಿಳಿಗುಟ್ಟುತಲಿದ್ದ ತನ್ನ ಗಂಡನ ಕಣ್ಣುಗಳನ್ನು ನೋಡುತ್ತಿದ್ದ... ಜಗಲೂರವ್ವಗ ಹಿಸ್ಸೀ ಅನ್ನಿಸಿಬಿಟ್ಟಿತು. ಆ ವಂದರಗಳಿಗೆಯಲ್ಲಿ ಮುಖನ ಸಿಂಡರಿಸಿಕೊಂಡಳು.. ಏಸೋ ವರುಷಂಗಳ ಹಿಂದೆ ಮುಟ್ಟಾಗಿದ್ದ ಆ ಸಾದ್ವಿಯು, ಹ್ಹಾ...ಹ್ಹಾ... ನಿನ್ ಕಟಕಂಡೀಸುವರುಸ ಬಾಳೂವೆ ಮಾಡಿದೆನಲ್ಲೋ ಸೂಗಾss ಯಂದನಕಂತ ತನ್ನ ಗಂಡನತ್ತ ನೋಡಿ ಹಲ್ಲು ಕಡಿದಳು. ಕಳ್ಳರೆಂಬ ಅಗ್ಗದಲ್ಲಿ ಹಿರೀಕರತ್ತ ದುರುಗುಟ್ಟಿ ನೋಡುತ್ತ ಪರಪರ ಕೆರೆದುಕೊಂಡು ತಲೆಗೂದಲನ್ನು ಸೆಲ್ಲೊಡೆದಳು. “ಜಗಲೂರಜ್ಜನೇ.. ನನ್ನನ್ಯಾಕ ಬದುಕಲಕ ಹಚ್ಚ ತಂದೆಯೇ..” ಯಂದು ರವುಸದಿಂದ ಚೀರಿದಳು.. ತಾನೀ ದೂರಾಗ ಯಿರೋದ್ರಿಂತ ಬ್ಯಾರೆ ಮೂರಾಗ ಮಣ್ಣಾಗೋದೇವಾಸಿ.. ಯಲ್ಲದಿಯೋ ಸೂರಾಃ ಯಲ್ಲಿದೀಯೋ.. ಯೀ ಸೂಗನಿಗೆ ನನ್ನ ಕೊಟ್ಟಾತನೇ 0ರಂದು ಚೀರಿಕೊತ ಅಲ್ಲಿಂದ ಬಿರುಗಾಳಿಯೋಪಾದಿಯಲ್ಲಿ ಹೊಂಟೋದೊಡನೆ....<br /> {{gap}}ಹಿರೀಕರು ಹಂಪಜ್ಜನ ನೇತ್ರುತ್ವದೊಳಗ ಬಂದ ಯಿಚಾರದಾವುದೆಂದರೆ.. ನೆರಿಗೆ ಕಟ್ಟಿದ್ದೂ ತಡ ಹಿಡೀಲಿಲ್ಲ....<br /> {{gap}}ಮೂರು ಗುಡ್ಡಗಳಿಂದ ಮೂರು ಕಲ್ಲು ಗುಂಡುಗಳನ ತರಿಸಿ ವಲೆ ಮೂಡಿದ್ದು ತಡ ಹಿಡೀಲಿಲ್ಲ... {{gap}}ಅದರ ಮ್ಯಾಲ ಪುರಾತನಕಾಲದ ಹಂಡೇವ ಯಿಟ್ಟಿದ್ದು ತಡ ಹಿಡೀಲಿಲ್ಲ... <br />{{gap}}ಕೊಡಪಾನಗಟ್ಟಲೆ ಪಂಚೋದಕವನ್ನು ಸುರಿವಿದ್ದು ತಡ ಹಿಡೀಲಿಲ್ಲ..<br /> {{gap}}ಬನ್ನಿ, ಬಿಲ್ವ ಗಂಧದ ಕೊರಡುಗಳನ್ನು ವಲೆಯೊಳಗಮರಿಸಿದ್ದು ತಡಃ ಹಿಡೀಲಿಲ್ಲ..<br /> {{gap}}ಸಿವನ್ನಾಮ ಪಾರೋತಿ ಪತಿ ಹರಹರ ಮಾದೇವ ಯಂದು ಹೇಳುತ ಬೆಂಕಿ ಮುಡಿಸಿದ್ದು ತಡಃ ಹಿಡೀಲಿಲ್ಲ....<br /> {{gap}}ಸಾಂಬವಿಯ ನಾಮಸ್ಮರಣೆ ಮಾಡುತ ಚಳ್ಳಮಳ್ಳ ನೀರು ಕಾಯಿಸಿದರು.. ವಸ್ತಿಯನ್ನು ಮೆಲುಮೆಲ್ಲಕ ಯಬ್ಬಿಸಿ ಬಚ್ಚಲಕ ಕರೆ ತಂದರು. ಅದಕ್ಕಂಟಿದ್ದ ಬಟ್ಟೆಬರೆ ವುದುರಿಸಿ ಬೆಳ್ಳಿ ಪೀಠದ ಮ್ಯಾಲ ಕುಂಡುರಿಸಿದರು... ಸುಡುಸುಡುವ<noinclude></noinclude> c2sq3r3s1kqb2a120lvb1ana1riamw7 322629 322628 2026-05-26T11:06:39Z Hariprasad Shetty10 7490 /* Validated */ 322629 proofread-page text/x-wiki <noinclude><pagequality level="4" user="Hariprasad Shetty10" /> {{rh|left=ಅರಮನೆ|center=|right=೩೪೩}}</noinclude>ಮ್ಯಾಲ ತಮಗೂ ಹಕ್ಕಯ್ಕೆ.. ತಾವು ಬರೋಗಂಟಾ ವಸ್ತೀಗೆ ಮಜ್ಜಣ ಮಾಡಿಸಬಾರದೆಂಬ ನಿರೂಪ ಅಕ್ಕಪಕ್ಕದ ಗ್ರಾಮಗಳ ಪಟ್ಟಣ ಸೋಮಿಗಳಿಂದ ಬರಲಾರಂಭಿಸಿದೊಡನೆ....<br /> {{gap}}ತನ್ನ ಗಂಡನಿದ್ದಲ್ಲಿಗೆ ತಲುಪಿದ್ದ ತನ್ನತ್ತ ಪಿಳಿಪಿಳಿಗುಟ್ಟುತಲಿದ್ದ ತನ್ನ ಗಂಡನ ಕಣ್ಣುಗಳನ್ನು ನೋಡುತ್ತಿದ್ದ... ಜಗಲೂರವ್ವಗ ಹಿಸ್ಸೀ ಅನ್ನಿಸಿಬಿಟ್ಟಿತು. ಆ ವಂದರಗಳಿಗೆಯಲ್ಲಿ ಮುಖನ ಸಿಂಡರಿಸಿಕೊಂಡಳು.. ಏಸೋ ವರುಷಂಗಳ ಹಿಂದೆ ಮುಟ್ಟಾಗಿದ್ದ ಆ ಸಾದ್ವಿಯು, ಹ್ಹಾ...ಹ್ಹಾ... ನಿನ್ ಕಟಕಂಡೀಸುವರುಸ ಬಾಳೂವೆ ಮಾಡಿದೆನಲ್ಲೋ ಸೂಗಾss ಯಂದನಕಂತ ತನ್ನ ಗಂಡನತ್ತ ನೋಡಿ ಹಲ್ಲು ಕಡಿದಳು. ಕಳ್ಳರೆಂಬ ಅಗ್ಗದಲ್ಲಿ ಹಿರೀಕರತ್ತ ದುರುಗುಟ್ಟಿ ನೋಡುತ್ತ ಪರಪರ ಕೆರೆದುಕೊಂಡು ತಲೆಗೂದಲನ್ನು ಸೆಲ್ಲೊಡೆದಳು. “ಜಗಲೂರಜ್ಜನೇ.. ನನ್ನನ್ಯಾಕ ಬದುಕಲಕ ಹಚ್ಚ ತಂದೆಯೇ..” ಯಂದು ರವುಸದಿಂದ ಚೀರಿದಳು.. ತಾನೀ ದೂರಾಗ ಯಿರೋದ್ರಿಂತ ಬ್ಯಾರೆ ಮೂರಾಗ ಮಣ್ಣಾಗೋದೇವಾಸಿ.. ಯಲ್ಲದಿಯೋ ಸೂರಾಃ ಯಲ್ಲಿದೀಯೋ.. ಯೀ ಸೂಗನಿಗೆ ನನ್ನ ಕೊಟ್ಟಾತನೇ 0ರಂದು ಚೀರಿಕೊತ ಅಲ್ಲಿಂದ ಬಿರುಗಾಳಿಯೋಪಾದಿಯಲ್ಲಿ ಹೊಂಟೋದೊಡನೆ....<br /> {{gap}}ಹಿರೀಕರು ಹಂಪಜ್ಜನ ನೇತ್ರುತ್ವದೊಳಗ ಬಂದ ಯಿಚಾರದಾವುದೆಂದರೆ.. ನೆರಿಗೆ ಕಟ್ಟಿದ್ದೂ ತಡ ಹಿಡೀಲಿಲ್ಲ....<br /> {{gap}}ಮೂರು ಗುಡ್ಡಗಳಿಂದ ಮೂರು ಕಲ್ಲು ಗುಂಡುಗಳನ ತರಿಸಿ ವಲೆ ಮೂಡಿದ್ದು ತಡ ಹಿಡೀಲಿಲ್ಲ... {{gap}}ಅದರ ಮ್ಯಾಲ ಪುರಾತನಕಾಲದ ಹಂಡೇವ ಯಿಟ್ಟಿದ್ದು ತಡ ಹಿಡೀಲಿಲ್ಲ... <br />{{gap}}ಕೊಡಪಾನಗಟ್ಟಲೆ ಪಂಚೋದಕವನ್ನು ಸುರಿವಿದ್ದು ತಡ ಹಿಡೀಲಿಲ್ಲ..<br /> {{gap}}ಬನ್ನಿ, ಬಿಲ್ವ ಗಂಧದ ಕೊರಡುಗಳನ್ನು ವಲೆಯೊಳಗಮರಿಸಿದ್ದು ತಡಃ ಹಿಡೀಲಿಲ್ಲ..<br /> {{gap}}ಸಿವನ್ನಾಮ ಪಾರೋತಿ ಪತಿ ಹರಹರ ಮಾದೇವ ಯಂದು ಹೇಳುತ ಬೆಂಕಿ ಮುಡಿಸಿದ್ದು ತಡಃ ಹಿಡೀಲಿಲ್ಲ....<br /> {{gap}}ಸಾಂಬವಿಯ ನಾಮಸ್ಮರಣೆ ಮಾಡುತ ಚಳ್ಳಮಳ್ಳ ನೀರು ಕಾಯಿಸಿದರು.. ವಸ್ತಿಯನ್ನು ಮೆಲುಮೆಲ್ಲಕ ಯಬ್ಬಿಸಿ ಬಚ್ಚಲಕ ಕರೆ ತಂದರು. ಅದಕ್ಕಂಟಿದ್ದ ಬಟ್ಟೆಬರೆ ವುದುರಿಸಿ ಬೆಳ್ಳಿ ಪೀಠದ ಮ್ಯಾಲ ಕುಂಡುರಿಸಿದರು... ಸುಡುಸುಡುವ<noinclude></noinclude> 0su1jpk41obb70v5kzl9l86vu3a176j 322630 322629 2026-05-26T11:07:06Z Hariprasad Shetty10 7490 322630 proofread-page text/x-wiki <noinclude><pagequality level="4" user="Hariprasad Shetty10" /> {{rh|left=ಅರಮನೆ|center=|right=೩೪೩}}</noinclude>ಮ್ಯಾಲ ತಮಗೂ ಹಕ್ಕಯ್ಕೆ.. ತಾವು ಬರೋಗಂಟಾ ವಸ್ತೀಗೆ ಮಜ್ಜಣ ಮಾಡಿಸಬಾರದೆಂಬ ನಿರೂಪ ಅಕ್ಕಪಕ್ಕದ ಗ್ರಾಮಗಳ ಪಟ್ಟಣ ಸೋಮಿಗಳಿಂದ ಬರಲಾರಂಭಿಸಿದೊಡನೆ....<br /> {{gap}}ತನ್ನ ಗಂಡನಿದ್ದಲ್ಲಿಗೆ ತಲುಪಿದ್ದ ತನ್ನತ್ತ ಪಿಳಿಪಿಳಿಗುಟ್ಟುತಲಿದ್ದ ತನ್ನ ಗಂಡನ ಕಣ್ಣುಗಳನ್ನು ನೋಡುತ್ತಿದ್ದ... ಜಗಲೂರವ್ವಗ ಹಿಸ್ಸೀ ಅನ್ನಿಸಿಬಿಟ್ಟಿತು. ಆ ವಂದರಗಳಿಗೆಯಲ್ಲಿ ಮುಖನ ಸಿಂಡರಿಸಿಕೊಂಡಳು.. ಏಸೋ ವರುಷಂಗಳ ಹಿಂದೆ ಮುಟ್ಟಾಗಿದ್ದ ಆ ಸಾದ್ವಿಯು, ಹ್ಹಾ...ಹ್ಹಾ... ನಿನ್ ಕಟಕಂಡೀಸುವರುಸ ಬಾಳೂವೆ ಮಾಡಿದೆನಲ್ಲೋ ಸೂಗಾss ಯಂದನಕಂತ ತನ್ನ ಗಂಡನತ್ತ ನೋಡಿ ಹಲ್ಲು ಕಡಿದಳು. ಕಳ್ಳರೆಂಬ ಅಗ್ಗದಲ್ಲಿ ಹಿರೀಕರತ್ತ ದುರುಗುಟ್ಟಿ ನೋಡುತ್ತ ಪರಪರ ಕೆರೆದುಕೊಂಡು ತಲೆಗೂದಲನ್ನು ಸೆಲ್ಲೊಡೆದಳು. “ಜಗಲೂರಜ್ಜನೇ.. ನನ್ನನ್ಯಾಕ ಬದುಕಲಕ ಹಚ್ಚ ತಂದೆಯೇ..” ಯಂದು ರವುಸದಿಂದ ಚೀರಿದಳು.. ತಾನೀ ದೂರಾಗ ಯಿರೋದ್ರಿಂತ ಬ್ಯಾರೆ ಮೂರಾಗ ಮಣ್ಣಾಗೋದೇವಾಸಿ.. ಯಲ್ಲದಿಯೋ ಸೂರಾಃ ಯಲ್ಲಿದೀಯೋ.. ಯೀ ಸೂಗನಿಗೆ ನನ್ನ ಕೊಟ್ಟಾತನೇ 0ರಂದು ಚೀರಿಕೊತ ಅಲ್ಲಿಂದ ಬಿರುಗಾಳಿಯೋಪಾದಿಯಲ್ಲಿ ಹೊಂಟೋದೊಡನೆ....<br /> {{gap}}ಹಿರೀಕರು ಹಂಪಜ್ಜನ ನೇತ್ರುತ್ವದೊಳಗ ಬಂದ ಯಿಚಾರದಾವುದೆಂದರೆ.. ನೆರಿಗೆ ಕಟ್ಟಿದ್ದೂ ತಡ ಹಿಡೀಲಿಲ್ಲ....<br /> {{gap}}ಮೂರು ಗುಡ್ಡಗಳಿಂದ ಮೂರು ಕಲ್ಲು ಗುಂಡುಗಳನ ತರಿಸಿ ವಲೆ ಮೂಡಿದ್ದು ತಡ ಹಿಡೀಲಿಲ್ಲ...<br /> {{gap}}ಅದರ ಮ್ಯಾಲ ಪುರಾತನಕಾಲದ ಹಂಡೇವ ಯಿಟ್ಟಿದ್ದು ತಡ ಹಿಡೀಲಿಲ್ಲ... <br />{{gap}}ಕೊಡಪಾನಗಟ್ಟಲೆ ಪಂಚೋದಕವನ್ನು ಸುರಿವಿದ್ದು ತಡ ಹಿಡೀಲಿಲ್ಲ..<br /> {{gap}}ಬನ್ನಿ, ಬಿಲ್ವ ಗಂಧದ ಕೊರಡುಗಳನ್ನು ವಲೆಯೊಳಗಮರಿಸಿದ್ದು ತಡಃ ಹಿಡೀಲಿಲ್ಲ..<br /> {{gap}}ಸಿವನ್ನಾಮ ಪಾರೋತಿ ಪತಿ ಹರಹರ ಮಾದೇವ ಯಂದು ಹೇಳುತ ಬೆಂಕಿ ಮುಡಿಸಿದ್ದು ತಡಃ ಹಿಡೀಲಿಲ್ಲ....<br /> {{gap}}ಸಾಂಬವಿಯ ನಾಮಸ್ಮರಣೆ ಮಾಡುತ ಚಳ್ಳಮಳ್ಳ ನೀರು ಕಾಯಿಸಿದರು.. ವಸ್ತಿಯನ್ನು ಮೆಲುಮೆಲ್ಲಕ ಯಬ್ಬಿಸಿ ಬಚ್ಚಲಕ ಕರೆ ತಂದರು. ಅದಕ್ಕಂಟಿದ್ದ ಬಟ್ಟೆಬರೆ ವುದುರಿಸಿ ಬೆಳ್ಳಿ ಪೀಠದ ಮ್ಯಾಲ ಕುಂಡುರಿಸಿದರು... ಸುಡುಸುಡುವ<noinclude></noinclude> pp1yb3iwhn1we2ldaktikefbh5srpdj ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೨ 104 89122 322617 225172 2026-05-26T09:16:51Z Pragathi. BH 7585 /* Validated */ 322617 proofread-page text/x-wiki <noinclude><pagequality level="4" user="Pragathi. BH" />{{rh|||xxiii}}</noinclude>{{center|<big>'''ಪರಿವಿಡಿ'''</big>}} {{TOC_page_listing|[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಶುಭ ಸಂದೇಶ|ಶುಭ ಸಂದೇಶ]]|iii}} {{TOC_page_listing|[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಚೆನ್ನುಡಿ|ಚೆನ್ನುಡಿ]]|iv}} {{TOC_page_listing|[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಎರಡು ನುಡಿ|ಎರಡು ನುಡಿ]]|v}} {{TOC_page_listing|[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಅಧ್ಯಕ್ಷರ ಮಾತು|ಅಧ್ಯಕ್ಷರ ಮಾತು]]|vi}} {{TOC_page_listing|[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಪ್ರಕಾಶಕರ ಮಾತು|ಪ್ರಕಾಶಕರ ಮಾತು]]|vii}} {{TOC_page_listing|[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಆಯ್ಕೆ ಸಮಿತಿ|ಆಯ್ಕೆ ಸಮಿತಿ]]|ix}} {{TOC_page_listing|[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ವತಿಯಿಂದ|ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ವತಿಯಿಂದ]]|xi}} {{TOC_page_listing|[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಇಂದು ನಾನು ಶಾಪಮುಕ್ತನಾದೆ...|ಇಂದು ನಾನು ಶಾಪಮುಕ್ತನಾದೆ...]]|xii}} {{TOC_page_listing|[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಋಣಂ ಕೃತ್ವಾ...|ಋಣಂ ಕೃತ್ವಾ...]]|xvi}} {{TOC_page_listing|[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಅನುವಾದಕಿಯ ಎರಡು ಮಾತು|ಅನುವಾದಕಿಯ ಎರಡು ಮಾತು]]|xviii}} {{TOC_page_listing|[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಈ ಕೃತಿಯ ದೃಷ್ಟಿಕೋನ|ಈ ಕೃತಿಯ ದೃಷ್ಟಿಕೋನ]]|xx}} </br> '''ವಾಲ್ಮೀಕಿ ರಾಮಾಯಣ: ಶಾಪ ಮತ್ತು ವರ''' {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಪ್ರಸ್ತಾವನೆ: ಶಾಪಾದಪಿ ವರಾದಪಿ!|ಪ್ರಸ್ತಾವನೆ: ಶಾಪಾದಪಿ ವರಾದಪಿ!]]|೧}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಶಾಪವಾಣಿ|ಶಾಪವಾಣಿ : ೧-೬೧]]|೧೦೩}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಶಪಥ, ಸತ್ಯಕ್ರಿಯೆ|ಶಪಥ, ಸತ್ಯಕ್ರಿಯೆ : ೧-೭]]|೧೯೩}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ವರದಾನ|ವರದಾನ : ೧-೮೨]]|೨೦೫}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಆಶೀರ್ವಾದ, ಹರಕೆಗಳು|ಆಶೀರ್ವಾದ, ಹರಕೆಗಳು : ೧-೭]]|೩೫೫}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ವ್ಯಕ್ತಿ ವಿಶೇಷ|ವ್ಯಕ್ತಿ ವಿಶೇಷ : ೧-೧೬೧]]|೩೬೭}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಸ್ಥಳವಿಶೇಷ|ಸ್ಥಳವಿಶೇಷ : ೧-೨೬]]|೪೯೫}}<noinclude></noinclude> gte71h6ti3ysvmryc5vgzlty7mvev5o ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೩ 104 89123 322618 225171 2026-05-26T09:17:45Z Pragathi. BH 7585 /* Validated */ 322618 proofread-page text/x-wiki <noinclude><pagequality level="4" user="Pragathi. BH" />xxiv</noinclude>{{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಪರಿಶಿಷ್ಟಗಳು|ಪರಿಶಿಷ್ಟಗಳು]] |೫೧೨}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಒಂದು : ಸಂದೇಹಾಸ್ಪದ ಶಾಪ/ವರಗಳು|ಒಂದು : ಸಂದೇಹಾಸ್ಪದ ಶಾಪ/ವರಗಳು]] |೫೧೫}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಎರಡು : ಶಾಪಗಳ ಪಟ್ಟಿ|ಎರಡು : ಶಾಪಗಳ ಪಟ್ಟಿ]] |೫೨೬}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಮೂರು : ಶಾಪಗಳ ಕಾರಣಗಳು|ಮೂರು : ಶಾಪಗಳ ಕಾರಣಗಳು]] |೫೩೮}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ನಾಲ್ಕು : ಶಾಪಗಳ ಪರಿಣಾಮಗಳು|ನಾಲ್ಕು : ಶಾಪಗಳ ಪರಿಣಾಮಗಳು]] |೫೩೯}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಐದು : ವರಗಳ ಪಟ್ಟಿ|ಐದು : ವರಗಳ ಪಟ್ಟಿ]] |೫೪೦}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಆರು : ವರಗಳ ಕಾರಣಗಳು|ಆರು : ವರಗಳ ಕಾರಣಗಳು]] |೫೫೪}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಏಳು : ವರಗಳ ಪರಿಣಾಮಗಳು|ಏಳು : ವರಗಳ ಪರಿಣಾಮಗಳು]] |೫೫೫}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಎಂಟು : ಶಾಪಗಳ ಸೂಚಿ|ಎಂಟು : ಶಾಪಗಳ ಸೂಚಿ]] |೫೫೬}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಒಂಬತ್ತು : ವರಗಳ ಸೂಚಿ|ಒಂಬತ್ತು : ವರಗಳ ಸೂಚಿ]] |೫೫೭}} {{dtpl||[[ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ/ಹತ್ತು : ಸಂದರ್ಭ ಗ್ರಂಥಗಳು|ಹತ್ತು : ಸಂದರ್ಭ ಗ್ರಂಥಗಳು]] |೫೫೯}}<noinclude></noinclude> 0jmxgj6oohrhhxag2366724wunrkwsb ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೮ 104 89240 322620 220461 2026-05-26T09:21:38Z Anzx-ooo 3060 /* Without text */ 322620 proofread-page text/x-wiki <noinclude><pagequality level="0" user="Anzx-ooo" /></noinclude><noinclude></noinclude> s3rdiuzv6bsi4vv6e4pa0oozqsh28j8 ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೧೮ 104 89358 322621 224022 2026-05-26T09:23:38Z Anzx-ooo 3060 /* Without text */ 322621 proofread-page text/x-wiki <noinclude><pagequality level="0" user="Anzx-ooo" /></noinclude><noinclude></noinclude> s3rdiuzv6bsi4vv6e4pa0oozqsh28j8 ಪುಟ:Sankeerana vachanasamputa 14.pdf/೧೯೬ 104 94521 322568 277269 2026-05-26T02:43:54Z Pragathi. BH 7585 /* Validated */ 322568 proofread-page text/x-wiki <noinclude><pagequality level="4" user="Pragathi. BH" /></noinclude>0265 ದ್ವಾಪರ ತಾಮ್ರ, ಕಲಿಯುಗಕೆ ಕಲ್ಲಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. {{center|೧೬೦}} <poem> {{gap}}ಗುರು ತೀರ್ಥಪ್ರಸಾದ ಆರುಹಿನಘಟ್ಟಿ ದೊರಕೊಂಬುದೆ ನರಕೀಲಕರಿಗೆ ಸಂಕೀರ್ಣ ವಚನಸಂಪುಟ : ಒಂಬತ್ತು ಬರಿಯ ಮಾತಿನಮಾಲೆ ಕೊಳುಕೊಡೆಯಲ್ಲವು. ಕರವೆತ್ತಿ ಕೊಟ್ಟಾತ ಗುರುವಲ್ಲ; ಕೊಂಡಾತ ಶಿಷ್ಯನಲ್ಲ ನಿರುತ ನಿಜಗೊಹೇಶ್ವರನಲ್ಲಿ ಬೆರದು ಕೊಂಬುದು ತೀರ್ಥ; ಅರಿತು ಕೊಂಬುದು ಪ್ರಸಾದ. ಮರೆಯಿದು ಮಾಟ, ಮರ್ತ್ಯದ ಕೂಟ, ಮತಿಗೆ ಬೇಟ ಕಾಣಾ ಎಲೆ ನಮ್ಮ ಕೂಡಲಚನ್ನಸಂಗಮದೇವಯ್ಯ, </poem> {{center|೧೬೧}} <poem> {{gap}}ಹೇಡಿಯ ಕೈಯಲ್ಲಿ ಚಂದ್ರಾಯುಧವಿದ್ದರೇನಯ್ಯಾ ? ಪಾಡಿಗೆ ಪಂಥ ಪರಾಕ್ರಮಿ ಪರದಳವಿಭಾತನಾಪನೆ ? ಕೋಡಗನ ಕೈಯಲ್ಲಿ ರತ್ನವಿದ್ದರೆ ರಾಜ್ಯ ರಾಷ್ಟ್ರದೊಳು ಬೆಲೆಗಾಬುದೆ ? ಮೋಡಕ್ಕೆ ಬಾಯಿದೆರದರೇನು ಕಾಲಕಾಲಕ್ಕೆ ಮಳೆಬಹುದೆ ? ಹೂಡುವರೆ ಕುದುರೆ ಕೋಣದ ರಥ ಶೃಂಗಾರಕ್ಕೆ ? ಕಾಡಿನೊಳು ಕರದ ಮಳೆ, ಓಡಿನೊಳು ಎರದ ನೀರು ಮೂಡುವೀ ಕ್ರಿಯೆಯ ಪೂಜೆಯು ಬೇಡನ ಬೇಟೆಯ ನಾಯಿ ಮೊಲನಕ೦ಡು ಆಚರಿಸಿದಂತಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. </poem> {{center|೧೬೨}} <poem> {{gap}}ಬಲ್ಲೆ ಬಲ್ಲಿದರೆಂಬ ಅಹಂಕಾರಿಗೆ ಸಲ್ಲದು ಭಕ್ತಿ, ಹುಲ್ಲ ಬೆಂಕಿಯೊಳು ಕೆಂಡ ನಿಲ್ಲುವುದೆ ಹುದುಗಿ ಮುಚ್ಚಿದರೆ ಹಲ್ಲಣವ ಕತ್ತೆಗೆ ಹಾಕಿದರೆ ಉತ್ತಮ ತೇಜಿಯಾದಪುದೇ ? ಎಲ್ಲಿಯ ಭಕ್ತಿ? ಎಲ್ಲಿ ಮುಕ್ತಿ? ಸಲ್ಲದು ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. </poem> || ೨೮ || 1| 25 || 11 2011<noinclude></noinclude> hm27ysj3os3nnht5r9pe7a92nmu3sg1 ಪುಟ:ಕುಕ್ಕಿಲ ಸಂಪುಟ.pdf/೩೦೪ 104 97808 322522 272114 2026-05-25T16:14:45Z Pragathi. BH 7585 /* Validated */ 322522 proofread-page text/x-wiki <noinclude><pagequality level="4" user="Pragathi. BH" />೨೮೮ / ಕುಕ್ಕಿಲ ಸಂಪುಟ</noinclude>{{gap}}ಗ್ರಾಮಭೇದಗಳಾದರೆ ಶ್ರುತಿಗಳ ಉತ್ಕರ್ಷಾಪಕರ್ಷದಿಂದಲೇ ನಿಯತವಾದುವು. ಆದ್ದರಿಂದ ಆ ಶ್ರುತಿಗಳನ್ನು ಮುಂದೆ ಪ್ರಸ್ತಾರದಲ್ಲಿ ಎಂದರೆ ಸ್ವರ ಮಂಡಲ ಪ್ರಸ್ತಾರ ದಲ್ಲಿ ತೋರಿಸಲಾಗುವುದು- (ಅಥ ಮಧ್ಯಮಗ್ರಾಮಃ | ಶ್ರುತಯಸ್ಕತ್ರಯಥಾಹ ಭರತ: 1-) (ಯದಾನ್ಯೂನ್ಯವಿಪರ್ಯಸ್ನೇಶ್ರುತೀಪಂಚಮಧ್ಯವತಾ ತದಾತಂ ಮಧ್ಯಮಗ್ರಾಮಂದ್ರವದಂತಿ ಮನೀಷಣ: || ೬೦ ||<br /> {{gap}}ಎಂದು ಹೇಳಿ ದೀಪ್ತಾಯತಾದಿಶ್ರುತಿಗಳೂ ಗ್ರಾಮದಲ್ಲಿ ವ್ಯತ್ಯಾಸವಾಗುವುದನ್ನು ಹೀಗೆ ಹೇಳುತ್ತಾನೆ.- <poem> ಸಂದೀಪಿನ್ಯಾಭಿಧಾ ಯತಾವತಂತ್ರಜಿತಿಂಶ್ರುತಿ: ಪಂಚಮಶ್ರುತಿಸ್ತನ ಮಧ್ಯಮಗ್ರಾಮ ಉಚ್ಯತೇ || ಆಯತಾಯಾಃ ಪ್ರಭೇದೋ ಯಃ ಸಂದೀಪಿನ್ಯಾಭಿಧಃ ಸ್ಮೃತಃ | ಪಂಚಮಾನ್ಮಧ್ಯಮಗ್ರಾಮೋ ಸದೈವತಮನುವ್ರಜೇತ್ |||| </poem> {{Right|(ಭ. ಭಾ. ಪು ೭೮)}} {{gap}}ಸಂದೀಪಿನಿ ಎಂಬುದು ಪಂಚಮದ ಪಂಚಮ ಸ್ವರಕ್ಕೆ ಹೇಳಿದ ಕ್ಷಿತಿ, ರಕ್ತಾ, ಸಂದೀಪಿನೀ, ಆಲಾಪಿನೀ ಎಂಬ ಕ್ರಮ ಶ್ರುತಿಗಳಲ್ಲಿ ಮೂರನೆಯ ಶ್ರುತಿಯಾಗುವುದು. ಉಚ್ಚನೀಚ ಶ್ರುತಿಗಳಲ್ಲಾದರೆ ಮಧ್ಯಮಗ್ರಾಮದಲ್ಲಿ ಪಂಚಮವು ಒಂದು ಶ್ರುತಿ ಕೆಳಕ್ಕಿಳಿಯುವುದರಿಂದ ಅದರ ನಾಲ್ಕನೇ ಶ್ರುತಿಯೇ ಧೈವತಕ್ಕೆ ಸೇರುವುದಾಗಿದೆಯಷ್ಟೇ? ನಾನ್ಯದೇವನು ಗಾಂಧಾರ ಗ್ರಾಮವನ್ನೂ 'ಆಗಮೋಕ್ತ ಪ್ರಕಾರ' ಹೇಳಿದ್ದಾನೆ. ಅಲ್ಲಿಯೂ ಹೆಚ್ಚು ಕಡಿಮೆಯಾಗುವ ಉಚ್ಚನೀಚ ಶ್ರುತಿಗಳ ಕ್ರಮಸಂಖ್ಯೆಯೂ ದೀಪ್ತಾಯತಾದಿಗಳ ಕ್ರಮಸಂಖ್ಯೆಯೂ ಬೇರೆ ಬೇರೆ ಇರುತ್ತವೆ. {{gap}}ಸ್ವರಸಾಧಾರಣಪ್ರಕರಣದಲ್ಲಿಯೂ ಇದೇ ಗಾಂಧಾರ ಮಧ್ಯಮದಿಂದ ಗಾಂಧಾರಕ್ಕೂ ಷಷ್ಟದಿಂದ ನಿಷಾದಕ್ಕೂ ಸೇರುವ ಈ ಎರಡೆರಡು ಶ್ರುತಿಗಳಲ್ಲಿ ಎರಡು ವಿಧದ ಶ್ರುತಿಗಳು ಸಮಾನ ಸಂಖ್ಯೆಯವಲ್ಲ. (ಭ. ಭಾ. ಪುಟ ೧೦೮) {{gap}}ಅದೂ ಅಲ್ಲದೆ ಈತನು ದೀಪಾದಿಶ್ರುತಿಗಳಿಗೆ ಬೇರೆ ಬೇರೆ ಹಾಸ್ಯಶೃಂಗಾರಾದಿ ರಸಗಳಲ್ಲಿ ಯಥೋಚಿತವಾದ ವಿನಿಯೋಗವನ್ನೂ ಹೇಳಿರುವುದನ್ನೂ ಲಕ್ಷಿಸಬಹುದು (ಭ. ಭಾ. ಪು. ೧೦೭) {{gap}}ಇದನ್ನೆಲ್ಲ ಪರಿಶೀಲಿಸುವಾಗ ನಾನ್ಯದೇವನು ಈ ದೀಪಾದಿ ಶ್ರುತಿಗಳನ್ನು ಆ ಉಚ್ಚ ನೀಚ ಶ್ರುತಿಗಳಿಂದ ಭಿನ್ನವಾಗಿರುವ ಸ್ವರಗಳೆಂದೇ ಭಾವಿಸಿದ್ದಾನೆ ಎಂಬುದರಲ್ಲಿ ಸಂದೇಹವುಳಿಯುವಂತಿಲ್ಲ. ಈ ಈ ಶ್ರುತಿಗಳೂ ಸಂಖ್ಯೆಯಲ್ಲಿ ೨೨ ಎಂದು ಆತನು ಹೇಳಿರುವುದರಿಂದ ಪ್ರಥಮದರ್ಶನಕ್ಕೆ ಮಾತ್ರ ಇವು ಅವೇ ಶ್ರುತಿಗಳು ಎಂಬ ಭ್ರಾಂತಿಗೆ ಆಸ್ಪದವಾಗಿರುವುದು ಹೊರತು ಯಥಾರ್ಥಕ್ಕೆ ನಾನ್ಯದೇವನು ಅವೆರಡೂ ಭಿನ್ನಗಳೆಂದೇ ಪರಿಗಣಿಸಿದ್ದಾನೆ . ಹಾಗೂ ಭ್ರಾಂತಿಗೆ ಆಸ್ಪದವಾಗದಂತೆ ನಿರೂಪಿಸಿದ್ದಾನೆ. {{gap}}ಇದೊಂದನ್ನೂ ಲಕ್ಷಿಸದೆ ಅಥವಾ ಕಡೆಗಣಿಸಿ ಶ್ರೀ ಸತ್ಯನಾರಾಯಣರು ತಾವು ತಪ್ಪು ತಿಳಿದುಕೊಂಡು ಅಲ್ಲದಸಲ್ಲದ ಊಹಾಪೋಹಗಳಿಂದ ಏನೇನೋ ಕಲ್ಪಿಸಿರುವುದಲ್ಲದೆ<noinclude></noinclude> c55gmftuds9xrnarrqmr9dnfthagsfz ಪುಟ:ಯಕ್ಷಗಾನ ಮಕರಂದ.pdf/೨೭೫ 104 100196 322560 321635 2026-05-26T02:24:01Z Shreelatha.Halemane 7642 /* Validated */ 322560 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|“ಯಕ್ಷಗಾನದ ಮೌಲಿಕ ವಿಚಾರ }} —————————————————————————————————— {{Right|- ಕೆ. ವೆಂಕಟರಾಯಾಚಾರ್ಯ}} {{center|೧}} {{gap}}ಸಂಗೀತದ ಮೂಲರೂಪರೇಷೆಗಳು ವೇದಗಳಲ್ಲಿ ಹಾಗೂ ವೇದಾಂಗಗಳಲ್ಲಿ ಕಾಣುತ್ತವೆ (ಶ್ರೀ ಎಂ. ರಾಜಾರಾವ್: ಡಾ| ಪಿ. ಕೆ. ಗೋಡೆಯವರ ಸಂಭಾವನಾ ಗ್ರಂಥ) ಭರತ ಮೊದಲಾದ ಪ್ರಾಚೀನ ಕೃತಿಕಾರರು ಅದನ್ನು ಮಾರ್ಗರೀತಿಯಲ್ಲಿ ವಿಸ್ತರಿಸಿದರು. ಅನಂತರ ದೇಶೀಲೌಕಿಕ ರೀತಿಯಲ್ಲಿ ಶಾರ್ಙ್ಗದೇವ, ಚಾಳುಕ್ಯ ಸೋಮೇಶ್ವರ, ವಿದ್ಯಾರಣ್ಯ, ಪುಂಡರೀಕ, ಪುರಂದರದಾಸ ಮುಂತಾದವರು ವಿವರಿ ಸಿದರು. ದಕ್ಷಿಣಾದಿ ಅಥವಾ ಕರ್ಣಾಟಕ ಸಂಗೀತವೆಂಬ ಹೆಸರಿಗೆ ಇವರೇ ಕಾರಣರು (ಶ್ರೀ ಹುಲಗೂರು ಕೃಷ್ಣಾಚಾರ: ಕರ್ನಾಟಕ ಸಂಗೀತವೂ, ಹರಿದಾಸ ಕೂಟವೂ ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯ ಪ್ರಕಟನೆ). 'ಸಂಗೀತ'ವೆಂಬುದನ್ನು ಗೀತಂ ವಾದ್ಯಂ ಚ ನೃತ್ಯಂಚ ತ್ರಯಂ ಸಂಗೀತವುಚ್ಯತೇ' ಎಂದು ಅಮರ ಸಿಂಹನು ಮುಪ್ಪುರಿಯಾಗಿದೆಯೆಂದನು, ಇಲ್ಲಿ ಗೀತವೇ ಪ್ರಧಾನವಾಗಿದೆ. ಗೀತದ ಲಕ್ಷಣ-ಭೇದಗಳು ಹೀಗಿವೆ: ರಂಜಕಃ ಸ್ವರಸಂದರ್ಭೋ ಗೀತಂ ಇತ್ಯಭಿಧೀಯತೇ ಗಾಂಧರ್ವಂ ಗಾನಮಿತ್ಯಸ್ಯ ಭೇದದ್ವಯಮುದೀರಿತಂ (ಸಂ. ರ. 4-1) {{gap}}ರಂಜಕವಾದ ಸ್ವರಗಳ ಸಂದರ್ಭವು ಗೀತವೆಂದು; ಅದು ಗಾಂಧರ್ವಗಾನ ವೆಂದು ಇಬ್ಬಗೆಯೆಂದು ಹೇಳಲಾಗಿದೆ. ಗಾಂಧರ್ವವೆಂದರೆ ಮಾರ್ಗರೀತಿಯ ರಾಗ ಗಳ ಹೆಸರು, ಅದು ದೇವತೆಗಳಿಗೆ ಹಾಗೂ ಗಂಧರ್ವರಿಗೆ ಪ್ರೀತಿಕರವು; ಗಾನವೆಂದರೆ ದೇಶೀರಾಗಗಳ ಹೆಸರೆಂದು ಅರ್ಥವಿಸಲಾಗಿದೆ. ಗಾಂಧರ್ವರೀತಿಯಲ್ಲಿ ಮೌಲಿಕ ರಾಗಗಳೂ, ಗಾನರೀತಿಯಲ್ಲಿ ಅನಂತರ ಬಿತ್ತರಿಸಿದ ದೇಶೀರಾಗಗಳೂ ಅಳವಡಿಸಿರು ಇವೆ. ಗಾಂಧರ್ವಕ್ಕಿಂತ ಗಾನವು ಪ್ರತ್ಯೇಕವೆಂದು ಹೇಳಿದಂತಾಯಿತು,<noinclude></noinclude> 5ybu2clm7ftbshfbzivcah1rmfaxaye ಪುಟ:ಯಕ್ಷಗಾನ ಮಕರಂದ.pdf/೨೮೨ 104 100204 322559 314742 2026-05-26T02:20:24Z Shreelatha.Halemane 7642 /* Validated */ 322559 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|32}} {{gap}}ಪ್ರತಿ ಗ್ರಾಮದಲ್ಲಿ ಏಳು ಸ್ವರಗಳ ಆರೋಹ ಹಾಗೂ ಅವರೋಹಣಗಳಿಗೆ ಮೂರ್ಛನಾ ಎಂದು ಹೆಸರು, ಮೂರು ಗ್ರಾಮಗಳಲ್ಲಿ ಒಟ್ಟು 21 ಮೂರ್ಛನೆ ಗಳಾಗುತ್ತವೆ. ಇದನ್ನೆ ಪಂಚತಂತ್ರ (5-54)ದಲ್ಲಿ ಹೀಗೆ ಸಂಗ್ರಹಿಸಲಾಗಿದೆ- ಸಪ್ತ ಸ್ವರಾಸ್ತ್ರಯೋ ಗ್ರಾಮಾ, ಮೂರ್ಛನಾತ್ಮಕವಿಂಶತಿಃ | {{gap}}ಹೀಗೆ ಷಡ್‌ಗ್ರಾಮ' ಎಂದರೆ ಷಡ್ಜಗ್ರಾಮ (ಛಂದಸ್ಸಿದ್ಧಿಗಾಗಿ ಜಕಾರವನ್ನು ಲೋಪ ಮಾಡಲಾಗಿದೆ) ಹಾಗೂ 'ಸಮಾಧಿ' ಎಂದರೆ ಮೂರ್ಛನೆ ಎಂಬ ಅರ್ಥ ಸಿದ್ಧಿಸುತ್ತದೆ. ಮೃದಂಗ ವಾದ್ಯಾನಪರಾಂ ವಾದ್ಯಾನ್ ವರಾಕ್ಷರಸ್ತಾ ಜಗೃಹುಃ ಪ್ರತೀತಾಃ | ಆಸಾರಿತಾಂಡೇ ಚ ತತಃ ಪ್ರತೀತಾಃ ರಂಭೋತಾ ಸಾಭಿನಯಾರ್ಥತಜ್ಞಾ || 69 || {{gap}}ಅರ್ಜುನ ಮೃದಂಗ ವಾದ್ಯಗಳನ್ನು (ಬಾರಿಸಲು) ತೆಗೆದುಕೊಂಡ. ಇತರ ವಾದ್ಯಗಳನ್ನು ಅಪ್ಸರೆಯರು ಬಾರಿಸಿದರು. ಆ ಮೇಲೆ ಆಸಾರಿತದ ಕೊನೆಯಲ್ಲಿ ಪ್ರಸಿದ್ದ ಅಭಿನಯಾರ್ಥತಜ್ಞೆಯಾದ ರಂಭೆ (ನರ್ತಿಸಲು) ಎದ್ದಳು. {{gap}}ನೃತ್ಯವಿಧಿಯಲ್ಲಿ ನಾಲ್ಕು ಬಗೆಯ ಆಸಾರಿತವಿದೆ ಎಂದು ಭರತ ಮುನಿ ಹೇಳಿ ದ್ದಾನೆ 1. ನರ್ತಕಿಯ ಪ್ರವೇಶ 2. ಅರ್ಥಾಭಿನಯ ನಾಟ್ಯ 3. ತಾಲಾನು ಗತಿಯಿಂದ ಅಂಗಾಹರಣ (ತಾಳಕ್ಕೆ ಅನುಗುಣವಾಗಿ ಅಂಗಚಲನೆ) ಮತ್ತು 4. ದೇವತಾಚಿಕ್ಕ ರೂಪದಿಂದ ನೃತ್ಯ. {{gap}}ಹೀಗೆ ಊರ್ವಶಿ, ಹೇಮಾ, ಮಿಶ್ರಕೇಶಿ, ತಿಲೋತ್ತಮೆ, ಮೇನಕೆ ಮುಂತಾ ದವರು ಹರಿಪ್ರೀತ್ಯರ್ಥವಾಗಿ ಹಾಡಿದರು ಹಾಗೂ ಮನಮೆಚ್ಚುವಂತೆ ಅಭಿನಯಿಸಿ ದರು. ಸಂತೋಷಗೊಂಡ ಬಲರಾಮ, ಕೃಷ್ಣರು ಅವರಿಗೆಲ್ಲ ವೀಳ್ಯವನ್ನಿತ್ತರು. {{gap}}ಈ ಶ್ಲೋಕಗಳಲ್ಲಿ ಬಂದ ವಿಚಾರಗಳಿಗೂ ಯಕ್ಷಗಾನದಲ್ಲಿ ಇಂದೂ ರೂಢಿ ಯಲ್ಲಿರುವ ಅನೇಕ ಅಂಶಗಳಿಗೂ ಸಾದೃಶ್ಯ ವ್ಯಕ್ತವಾಗುತ್ತದೆ. ಒಂದನೆಯದಾಗಿ, ರಾತ್ರಿ ಊಟವಾದ ಮೇಲೆ ವಿನೋದಕ್ಕಾಗಿ ಅಭಿನಯಿಸುವ ಕ್ರೀಡನೀಯಕ. ಎರಡನೆ ಯದಾಗಿ, ಇಲ್ಲಿಯ ಆಸಾರಿತ'ದ ಪ್ರತಿನಿಧಿಯಾಗಿಯೇ ಯಕ್ಷಗಾನದಲ್ಲಿಂದು ಸ್ತ್ರೀ ವೇಷದ ಪ್ರವೇಶ ಹಾಗೂ ನೃತ್ಯ ಉಳಿದಿರಬಹುದು. ಮೂರನೆಯದಾಗಿ, ಕೃಷ್ಣನು ಸ್ವತಃ 'ಹಸಕ' ಕೈಗೊಂಡನೆಂಬುದು. ಸಾಂಪ್ರದಾಯಿಕ ಕೃಷ್ಣನ ಒಡೋಲಗದಲ್ಲಿ ಬಹುಮಂದಿ ಸ್ತ್ರೀಯರಿಂದೊಡಗಡಿಯೇ ಕೃಷ್ಣನ ಪ್ರವೇಶ (ಮುಖ್ಯವಾಗಿ ತೆಂಕು ತಿಟ್ಟಿನಲ್ಲಿ) ಇರುವುದು ಗಮನಾರ್ಹ, ಕೊನೆಯದಾಗಿ ನೃತ್ಯಾಂತದಲ್ಲಿ ವೀಳ್ಯ ಕೊಡು ವುದು ಕೂಡ ಉಲ್ಲೇಖನೀಯ. ಇವಿಷ್ಟು ಎದ್ದು ಕಾಣುವ ಸಾಮ್ಯವಾದರೆ, ಗ್ರಾಮ-ರಾಗ ಮೂರ್ಛನೆಗಳ ವಿಚಾರ ಸಂಶೋಧನೆಗೆ 'ಆಹಾರ'ವಾಗಿವೆ.<noinclude></noinclude> mhdwpgo8y5tgishztlfjr8denau4bog ಪುಟ:ಯಕ್ಷಗಾನ ಮಕರಂದ.pdf/೨೯೨ 104 100213 322565 314782 2026-05-26T02:31:19Z Pragathi. BH 7585 /* Validated */ 322565 proofread-page text/x-wiki <noinclude><pagequality level="4" user="Pragathi. BH" /></noinclude>40 ಸಾಮೂಹಿಕ ಪ್ರದರ್ಶನ-ಅಲ್ಲಿ ಅದರ ಎಲ್ಲ ಕುಣಿತಗಳ ಮಾದರಿಗಳನ್ನು ಒಟ್ಟಾಗಿ ಬಿಡಿಯಾಗಿ ಕಾಣಬಹುದು. ಇದುವೆ ನಿಜವಾದ ದಶಾವತಾರ ಇಲ್ಲವೇ ಭಾಗವತರ ಆಟ, (ಆಂಧ್ರದಲ್ಲಿ ಭಾಗವತರ ಆಟ'ವೆಂಬ ಒಂದು ನಿರ್ದಿಷ್ಟ ಪ್ರಕಾರವೇ ಇದೆ ಯಂತೆ.) ಸಾಮಾನ್ಯವಾಗಿ ಈ ಒಡೋಲಗದಿಂದ ಆಟದ ಮುಖ್ಯ ಭಾಗವತ 'ರಾ'ರೂಢನಾಗುತ್ತಾನೆ. ಆ ತನಕ ಇನ್ನೊಬ್ಬ ಸಂಗೀತಗಾರ ಪ್ರಾಸ್ತಾವಿಕವನ್ನು ಸಾಗಿಸುತ್ತಾನೆ. ಹೀಗೆ ಪ್ರಾಸ್ತಾವಿಕ ಕುಣಿತಗಳೆಲ್ಲ ನಿಜವಾದ ಜಾನಪದವಾಗಿದ್ದು ಗೊಂಬೆಯಾಟದ ಜೀವಂತ ಅನುಕರಣದ ಆಖ್ಯಾನ ಭಾಗವು ಒಂದು ರೀತಿ ಮಾರ್ಗಿಯ (Classical) ಅಂಗವೆನ್ನಬಹುದು. ಯಾವದೇ ಜಾನಪದ (Folk) ನೃತ್ಯಪ್ರಕಾ ರವು ಒಂದು ಕಥಾವಸ್ತುವನ್ನು ಅಳವಡಿಸಿಕೊಂಡು ವ್ಯವಸ್ಥಿತ ರೂಪಕವಾಗಿ ಬೆಳೆ ದರೆ ಅದಕ್ಕೆ ಮಾರ್ಗೀಯ ಇಲ್ಲವೆ ಸಾಂಪ್ರದಾಯಿಕ ಅಚ್ಚು-ಕಟ್ಟಿನ ರೂಪ-ರೂಪ ಕತ್ವಗಳು ಬಂದು ಅದು ಮಾರ್ಗೀಯ (Classical) ಪ್ರಕಾರವೆನಿಸಿಕೊಳ್ಳುತ್ತದೆ. ಈ ಪ್ರಕಾರದ ರೂಪಾಂತರದಲ್ಲಿ ಬಯಲಾಟವು ಗೊಂಬೆಯಾಟದಿಂದ ಪ್ರೇರಣೆಯನ್ನು ಮಾತ್ರವಲ್ಲ, ಪ್ರಬಂಧವನ್ನು ನಿಶ್ಚಂ ಯವಾಗಿ ನಿಚ್ಚಳವಾಗಿ ಪಡೆದಿರಬೇಕು. “ಯಕ್ಷಗಾನವೆಂಬುದು ಒಂದು ವಿಶಿಷ್ಟ ಸಂಗೀತ ಪದ್ಧತಿ-ಗಾನದ ಜಾತಿ. ನೃತ್ಯ ನಾಟ್ಯ ವಿಧಾನಕ್ಕೆ ಕೇವಲ 'ಗಾನ' ಪದ್ಧತಿಯ ಹೆಸರು ಇಟ್ಟದ್ದು ಒಂದು ಸೋಜಿಗವೇ ಆಗಿದೆ. ಇಲ್ಲಿಯ 'ಯಕ್ಷಗಾನ'ವೆಂಬುದು ಹಾಡುಗಾರಿಕೆಯ ರೀತಿ ಭೇದವೇ ಹೊರತು, ಸ್ವರ ಸಂಚಾರಕ್ರಮವೇ ಹೊರತು ಅದರ ರಾಗ-ತಾಲ ಪ್ರಕ್ರಿಯೆ ಗಳೆಲ್ಲ ನಮ್ಮ ದಕ್ಷಿಣಾದಿ ಸಂಗೀತದವೇ ಆಗಿವೆ ! ಆಟದ ಪ್ರಯೋಗದಲ್ಲಿ ಈ ರಾಗ ರೀತಿಗಿಂತ ಚಂಡೆ ಮದ್ದಳೆಗಳು ನುಡಿಸುವ ತಾಲ-ಲಯಗಳ ಗತ್ತುಗಳೇ ಕುಣಿತಕ್ಕೆ ಮುಖ್ಯ. ಇಲ್ಲಿ ಈ ತಾಲವೈವಿಧ್ಯಕ್ಕೆ ರಾಗವೈಖರಿಯಾಗಲಿ ವೈಚಿತ್ರವಾಗಲಿ ಗೌಣ, ಕಥಕ್ಕಲಿಯಲ್ಲಿ ಇಷ್ಟು ರಾಗವೈವಿಧ್ಯ ವೈಭವವೇ ಇಲ್ಲ. ಆದಾಗ್ಯೂ ಈ ನೃತ್ಯ ಪ್ರಧಾನವಾದ ರಂಗ ಪ್ರದರ್ಶನಕ್ಕೆ ಗಾನಪ್ರಕಾರದ ಹೆಸರು ಹೇಗೆ ಬಂದಿರ ಬೇಕು? ಇದಕ್ಕೆ ಒಂದೇ ಖುಲಾಸೆ ಈ ಕುಣಿತ ಒಂದು ಸಂಪ್ರದಾಯವಾಗಿ ಬಂದ ಮಾರ್ಗೀಯ ಮಾದರಿ ಅಲ್ಲ. ಅದಕ್ಕೆ ಅದರದೇ ಆದ ಹೆಸರು ಇರುವದು ಸಾಧ್ಯ ಎಲ್ಲ. ಆಗ ಈ ಕುಣಿತಕ್ಕೆ ಹಿನ್ನೆಲೆಯಾಗಿ ಸೇರಿಸಿದ ಸಂಗೀತ ಪದ್ಧತಿಯ ಹೆಸರಿ ನಿಂದಲೇ ಈ ಪ್ರಕಾರವನ್ನು ಗುರುತಿಸುವ ವಾಡಿಕೆ ನಡೆದು ಬಂತು. ಗೊಂಬೆಯಾಟದ ಅನುಕೃತಿ ಮಾದರಿಯಿಂದಲೇ ಇದೆಂದು ಪಾರಂಪರಿಕ ನೃತ್ಯ ಪ್ರಕಾರವೆನಿಸಿಕೊಳ್ಳಲಿಲ್ಲ-ಕಥಕ್ಕಲಿ, ಕಥಕ, ಕುಚ್ಚಿ ಪುಡಿ, ಮುಂತಾದವುಗಳಂತೆ. ಇಲ್ಲಿ ಇನ್ನೂ ಒಂದು ಶಂಕೆ. ಕರಣವೇ ? (ಕನ್ನಡ - ಕರ್ನಾಟಕ, ವೆಂದರೆ ಎಕ್ಕಟ - ಏಕಲ - ಒಂಟಿ, 'ಯಕ್ಷಗಾನ' ಇದು 'ಎಕ್ಕಲಗಾಣ'ದ ಸಂಸ್ಕೃತಿ ಮರಹಟ್ಟ - ಮಹಾರಾಷ್ಟ್ರವಾದಂತೆ.) ಎಕ್ಕಲ ಒಬ್ಬನೇ ಹಾಡಿ ಇತರರು ಆಡುವ ಒಂದು<noinclude></noinclude> ktaj2z6bci0log2wssf1swtqrvtaud2 322566 322565 2026-05-26T02:32:35Z Pragathi. BH 7585 322566 proofread-page text/x-wiki <noinclude><pagequality level="4" user="Pragathi. BH" />{{rh|center=|left=40|right=}}</noinclude>40 ಸಾಮೂಹಿಕ ಪ್ರದರ್ಶನ-ಅಲ್ಲಿ ಅದರ ಎಲ್ಲ ಕುಣಿತಗಳ ಮಾದರಿಗಳನ್ನು ಒಟ್ಟಾಗಿ ಬಿಡಿಯಾಗಿ ಕಾಣಬಹುದು. ಇದುವೆ ನಿಜವಾದ ದಶಾವತಾರ ಇಲ್ಲವೇ ಭಾಗವತರ ಆಟ, (ಆಂಧ್ರದಲ್ಲಿ ಭಾಗವತರ ಆಟ'ವೆಂಬ ಒಂದು ನಿರ್ದಿಷ್ಟ ಪ್ರಕಾರವೇ ಇದೆ ಯಂತೆ.) ಸಾಮಾನ್ಯವಾಗಿ ಈ ಒಡೋಲಗದಿಂದ ಆಟದ ಮುಖ್ಯ ಭಾಗವತ 'ರಾ'ರೂಢನಾಗುತ್ತಾನೆ. ಆ ತನಕ ಇನ್ನೊಬ್ಬ ಸಂಗೀತಗಾರ ಪ್ರಾಸ್ತಾವಿಕವನ್ನು ಸಾಗಿಸುತ್ತಾನೆ. ಹೀಗೆ ಪ್ರಾಸ್ತಾವಿಕ ಕುಣಿತಗಳೆಲ್ಲ ನಿಜವಾದ ಜಾನಪದವಾಗಿದ್ದು ಗೊಂಬೆಯಾಟದ ಜೀವಂತ ಅನುಕರಣದ ಆಖ್ಯಾನ ಭಾಗವು ಒಂದು ರೀತಿ ಮಾರ್ಗಿಯ (Classical) ಅಂಗವೆನ್ನಬಹುದು. ಯಾವದೇ ಜಾನಪದ (Folk) ನೃತ್ಯಪ್ರಕಾ ರವು ಒಂದು ಕಥಾವಸ್ತುವನ್ನು ಅಳವಡಿಸಿಕೊಂಡು ವ್ಯವಸ್ಥಿತ ರೂಪಕವಾಗಿ ಬೆಳೆ ದರೆ ಅದಕ್ಕೆ ಮಾರ್ಗೀಯ ಇಲ್ಲವೆ ಸಾಂಪ್ರದಾಯಿಕ ಅಚ್ಚು-ಕಟ್ಟಿನ ರೂಪ-ರೂಪ ಕತ್ವಗಳು ಬಂದು ಅದು ಮಾರ್ಗೀಯ (Classical) ಪ್ರಕಾರವೆನಿಸಿಕೊಳ್ಳುತ್ತದೆ. ಈ ಪ್ರಕಾರದ ರೂಪಾಂತರದಲ್ಲಿ ಬಯಲಾಟವು ಗೊಂಬೆಯಾಟದಿಂದ ಪ್ರೇರಣೆಯನ್ನು ಮಾತ್ರವಲ್ಲ, ಪ್ರಬಂಧವನ್ನು ನಿಶ್ಚಂ ಯವಾಗಿ ನಿಚ್ಚಳವಾಗಿ ಪಡೆದಿರಬೇಕು.<br /> {{gap}}“ಯಕ್ಷಗಾನವೆಂಬುದು ಒಂದು ವಿಶಿಷ್ಟ ಸಂಗೀತ ಪದ್ಧತಿ-ಗಾನದ ಜಾತಿ. ನೃತ್ಯ ನಾಟ್ಯ ವಿಧಾನಕ್ಕೆ ಕೇವಲ 'ಗಾನ' ಪದ್ಧತಿಯ ಹೆಸರು ಇಟ್ಟದ್ದು ಒಂದು ಸೋಜಿಗವೇ ಆಗಿದೆ. ಇಲ್ಲಿಯ 'ಯಕ್ಷಗಾನ'ವೆಂಬುದು ಹಾಡುಗಾರಿಕೆಯ ರೀತಿ ಭೇದವೇ ಹೊರತು, ಸ್ವರ ಸಂಚಾರಕ್ರಮವೇ ಹೊರತು ಅದರ ರಾಗ-ತಾಲ ಪ್ರಕ್ರಿಯೆ ಗಳೆಲ್ಲ ನಮ್ಮ ದಕ್ಷಿಣಾದಿ ಸಂಗೀತದವೇ ಆಗಿವೆ ! ಆಟದ ಪ್ರಯೋಗದಲ್ಲಿ ಈ ರಾಗ ರೀತಿಗಿಂತ ಚಂಡೆ ಮದ್ದಳೆಗಳು ನುಡಿಸುವ ತಾಲ-ಲಯಗಳ ಗತ್ತುಗಳೇ ಕುಣಿತಕ್ಕೆ ಮುಖ್ಯ. ಇಲ್ಲಿ ಈ ತಾಲವೈವಿಧ್ಯಕ್ಕೆ ರಾಗವೈಖರಿಯಾಗಲಿ ವೈಚಿತ್ರವಾಗಲಿ ಗೌಣ, ಕಥಕ್ಕಲಿಯಲ್ಲಿ ಇಷ್ಟು ರಾಗವೈವಿಧ್ಯ ವೈಭವವೇ ಇಲ್ಲ. ಆದಾಗ್ಯೂ ಈ ನೃತ್ಯ ಪ್ರಧಾನವಾದ ರಂಗ ಪ್ರದರ್ಶನಕ್ಕೆ ಗಾನಪ್ರಕಾರದ ಹೆಸರು ಹೇಗೆ ಬಂದಿರ ಬೇಕು? ಇದಕ್ಕೆ ಒಂದೇ ಖುಲಾಸೆ ಈ ಕುಣಿತ ಒಂದು ಸಂಪ್ರದಾಯವಾಗಿ ಬಂದ ಮಾರ್ಗೀಯ ಮಾದರಿ ಅಲ್ಲ. ಅದಕ್ಕೆ ಅದರದೇ ಆದ ಹೆಸರು ಇರುವದು ಸಾಧ್ಯ ಎಲ್ಲ. ಆಗ ಈ ಕುಣಿತಕ್ಕೆ ಹಿನ್ನೆಲೆಯಾಗಿ ಸೇರಿಸಿದ ಸಂಗೀತ ಪದ್ಧತಿಯ ಹೆಸರಿ ನಿಂದಲೇ ಈ ಪ್ರಕಾರವನ್ನು ಗುರುತಿಸುವ ವಾಡಿಕೆ ನಡೆದು ಬಂತು.<br /> {{gap}}ಗೊಂಬೆಯಾಟದ ಅನುಕೃತಿ ಮಾದರಿಯಿಂದಲೇ ಇದೆಂದು ಪಾರಂಪರಿಕ ನೃತ್ಯ ಪ್ರಕಾರವೆನಿಸಿಕೊಳ್ಳಲಿಲ್ಲ-ಕಥಕ್ಕಲಿ, ಕಥಕ, ಕುಚ್ಚಿ ಪುಡಿ, ಮುಂತಾದವುಗಳಂತೆ.<br /> {{gap}}ಇಲ್ಲಿ ಇನ್ನೂ ಒಂದು ಶಂಕೆ. ಕರಣವೇ ? (ಕನ್ನಡ - ಕರ್ನಾಟಕ, ವೆಂದರೆ ಎಕ್ಕಟ - ಏಕಲ - ಒಂಟಿ, 'ಯಕ್ಷಗಾನ' ಇದು 'ಎಕ್ಕಲಗಾಣ'ದ ಸಂಸ್ಕೃತಿ ಮರಹಟ್ಟ - ಮಹಾರಾಷ್ಟ್ರವಾದಂತೆ.) ಎಕ್ಕಲ ಒಬ್ಬನೇ ಹಾಡಿ ಇತರರು ಆಡುವ ಒಂದು<noinclude></noinclude> jm15atp2mcjtzzwl4bwll7ofglsbk0o 322576 322566 2026-05-26T04:55:36Z Anzx-ooo 3060 322576 proofread-page text/x-wiki <noinclude><pagequality level="4" user="Pragathi. BH" />{{rh|center=|left=40|right=}}</noinclude>ಸಾಮೂಹಿಕ ಪ್ರದರ್ಶನ-ಅಲ್ಲಿ ಅದರ ಎಲ್ಲ ಕುಣಿತಗಳ ಮಾದರಿಗಳನ್ನು ಒಟ್ಟಾಗಿ ಬಿಡಿಯಾಗಿ ಕಾಣಬಹುದು. ಇದುವೆ ನಿಜವಾದ ದಶಾವತಾರ ಇಲ್ಲವೇ ಭಾಗವತರ ಆಟ, (ಆಂಧ್ರದಲ್ಲಿ ಭಾಗವತರ ಆಟ'ವೆಂಬ ಒಂದು ನಿರ್ದಿಷ್ಟ ಪ್ರಕಾರವೇ ಇದೆ ಯಂತೆ.) ಸಾಮಾನ್ಯವಾಗಿ ಈ ಒಡೋಲಗದಿಂದ ಆಟದ ಮುಖ್ಯ ಭಾಗವತ 'ರಾ'ರೂಢನಾಗುತ್ತಾನೆ. ಆ ತನಕ ಇನ್ನೊಬ್ಬ ಸಂಗೀತಗಾರ ಪ್ರಾಸ್ತಾವಿಕವನ್ನು ಸಾಗಿಸುತ್ತಾನೆ. ಹೀಗೆ ಪ್ರಾಸ್ತಾವಿಕ ಕುಣಿತಗಳೆಲ್ಲ ನಿಜವಾದ ಜಾನಪದವಾಗಿದ್ದು ಗೊಂಬೆಯಾಟದ ಜೀವಂತ ಅನುಕರಣದ ಆಖ್ಯಾನ ಭಾಗವು ಒಂದು ರೀತಿ ಮಾರ್ಗಿಯ (Classical) ಅಂಗವೆನ್ನಬಹುದು. ಯಾವದೇ ಜಾನಪದ (Folk) ನೃತ್ಯಪ್ರಕಾ ರವು ಒಂದು ಕಥಾವಸ್ತುವನ್ನು ಅಳವಡಿಸಿಕೊಂಡು ವ್ಯವಸ್ಥಿತ ರೂಪಕವಾಗಿ ಬೆಳೆ ದರೆ ಅದಕ್ಕೆ ಮಾರ್ಗೀಯ ಇಲ್ಲವೆ ಸಾಂಪ್ರದಾಯಿಕ ಅಚ್ಚು-ಕಟ್ಟಿನ ರೂಪ-ರೂಪ ಕತ್ವಗಳು ಬಂದು ಅದು ಮಾರ್ಗೀಯ (Classical) ಪ್ರಕಾರವೆನಿಸಿಕೊಳ್ಳುತ್ತದೆ. ಈ ಪ್ರಕಾರದ ರೂಪಾಂತರದಲ್ಲಿ ಬಯಲಾಟವು ಗೊಂಬೆಯಾಟದಿಂದ ಪ್ರೇರಣೆಯನ್ನು ಮಾತ್ರವಲ್ಲ, ಪ್ರಬಂಧವನ್ನು ನಿಶ್ಚಂ ಯವಾಗಿ ನಿಚ್ಚಳವಾಗಿ ಪಡೆದಿರಬೇಕು.<br /> {{gap}}"ಯಕ್ಷಗಾನವೆಂಬುದು ಒಂದು ವಿಶಿಷ್ಟ ಸಂಗೀತ ಪದ್ಧತಿ-ಗಾನದ ಜಾತಿ. ನೃತ್ಯ ನಾಟ್ಯ ವಿಧಾನಕ್ಕೆ ಕೇವಲ 'ಗಾನ' ಪದ್ಧತಿಯ ಹೆಸರು ಇಟ್ಟದ್ದು ಒಂದು ಸೋಜಿಗವೇ ಆಗಿದೆ. ಇಲ್ಲಿಯ 'ಯಕ್ಷಗಾನ'ವೆಂಬುದು ಹಾಡುಗಾರಿಕೆಯ ರೀತಿ ಭೇದವೇ ಹೊರತು, ಸ್ವರ ಸಂಚಾರಕ್ರಮವೇ ಹೊರತು ಅದರ ರಾಗ-ತಾಲ ಪ್ರಕ್ರಿಯೆ ಗಳೆಲ್ಲ ನಮ್ಮ ದಕ್ಷಿಣಾದಿ ಸಂಗೀತದವೇ ಆಗಿವೆ! ಆಟದ ಪ್ರಯೋಗದಲ್ಲಿ ಈ ರಾಗ ರೀತಿಗಿಂತ ಚಂಡೆ ಮದ್ದಳೆಗಳು ನುಡಿಸುವ ತಾಲ-ಲಯಗಳ ಗತ್ತುಗಳೇ ಕುಣಿತಕ್ಕೆ ಮುಖ್ಯ. ಇಲ್ಲಿ ಈ ತಾಲವೈವಿಧ್ಯಕ್ಕೆ ರಾಗವೈಖರಿಯಾಗಲಿ ವೈಚಿತ್ರವಾಗಲಿ ಗೌಣ, ಕಥಕ್ಕಲಿಯಲ್ಲಿ ಇಷ್ಟು ರಾಗವೈವಿಧ್ಯ ವೈಭವವೇ ಇಲ್ಲ. ಆದಾಗ್ಯೂ ಈ ನೃತ್ಯ ಪ್ರಧಾನವಾದ ರಂಗ ಪ್ರದರ್ಶನಕ್ಕೆ ಗಾನಪ್ರಕಾರದ ಹೆಸರು ಹೇಗೆ ಬಂದಿರ ಬೇಕು? ಇದಕ್ಕೆ ಒಂದೇ ಖುಲಾಸೆ ಈ ಕುಣಿತ ಒಂದು ಸಂಪ್ರದಾಯವಾಗಿ ಬಂದ ಮಾರ್ಗೀಯ ಮಾದರಿ ಅಲ್ಲ. ಅದಕ್ಕೆ ಅದರದೇ ಆದ ಹೆಸರು ಇರುವದು ಸಾಧ್ಯ ಎಲ್ಲ. ಆಗ ಈ ಕುಣಿತಕ್ಕೆ ಹಿನ್ನೆಲೆಯಾಗಿ ಸೇರಿಸಿದ ಸಂಗೀತ ಪದ್ಧತಿಯ ಹೆಸರಿ ನಿಂದಲೇ ಈ ಪ್ರಕಾರವನ್ನು ಗುರುತಿಸುವ ವಾಡಿಕೆ ನಡೆದು ಬಂತು.<br /> {{gap}}ಗೊಂಬೆಯಾಟದ ಅನುಕೃತಿ ಮಾದರಿಯಿಂದಲೇ ಇದೆಂದು ಪಾರಂಪರಿಕ ನೃತ್ಯ ಪ್ರಕಾರವೆನಿಸಿಕೊಳ್ಳಲಿಲ್ಲ-ಕಥಕ್ಕಲಿ, ಕಥಕ, ಕುಚ್ಚಿ ಪುಡಿ, ಮುಂತಾದವುಗಳಂತೆ.<br /> {{gap}}ಇಲ್ಲಿ ಇನ್ನೂ ಒಂದು ಶಂಕೆ. ಕರಣವೇ? (ಕನ್ನಡ - ಕರ್ನಾಟಕ, ವೆಂದರೆ ಎಕ್ಕಟ - ಏಕಲ - ಒಂಟಿ, 'ಯಕ್ಷಗಾನ' ಇದು 'ಎಕ್ಕಲಗಾಣ'ದ ಸಂಸ್ಕೃತಿ ಮರಹಟ್ಟ - ಮಹಾರಾಷ್ಟ್ರವಾದಂತೆ.) ಎಕ್ಕಲ ಒಬ್ಬನೇ ಹಾಡಿ ಇತರರು ಆಡುವ ಒಂದು<noinclude></noinclude> l7wu6ib1xkg5icqgfi7yl5te0z6aka1 ಪುಟ:ಯಕ್ಷಗಾನ ಮಕರಂದ.pdf/೩೦೧ 104 100223 322563 319626 2026-05-26T02:25:56Z Shreelatha.Halemane 7642 /* Validated */ 322563 proofread-page text/x-wiki <noinclude><pagequality level="4" user="Shreelatha.Halemane" /></noinclude>{{Right|49}} make a bonfire and dance round it before their action begins. All royal characters have a bow and arrow in their hands; Vishnu and Krishna bring a chakra (disc), and Narada a bunch of peacock feathers. The costume of Narada has been moder- nised, and along with it that of women characters also to a very large extent. In the midst of old picturesque make-up, the heroine now appears discordantly dressed up in modern make-up imitative of coquettish society women appearing on the modern stage. The old female make-up was full of old jewellery with 'Makuta' or 'Kirita' etc. resembling female figures in our sculpture. The make-up includes masks also. In 'Girija Kalyana', Daksha appears after Veerabhadra's onslaught with a mask of a sheep's head. I am told that Jatayus, the great eagle appearing in the 'Ramayana', is similarly made up with an eagle-mask and huge feathers. Much of the elaborate make-up which they use in the performances in their own place, the players did not bring to Madras. The colour scheme of the dress cannot be realised by seeing the photographs repro- duced here. The dresses are mostly in red colour, dull as well as deep, with a lot of dazzling lace all over. {{center|V}} {{gap}}The traditional Sanskrit play and its vernacular represen- tatives begin with some preliminary benedictory music and dance called in Sanskrit 'purva ranga'. As detailed by Bharata, not only its more variegated variety called the Chitra-purva- ranga' but also its more simple form called 'Suddha-purva ranga' was very elaborate. It is well known that the Kathakali of Malabar has its own 'purvaranga', the 'Todayam', 'Purap- padu', 'Melappadam' etc. A traditional Yaksha Gana starts something like a Tamil Terukkoottu'. There is first the worship of God Vighnesvara, the remover of obstacles, within the green room itself, with a song on this God. The 'Karpura Nirajana shown to the God is then 'taken' by the actors, the chorist and the drummers. After this 'Ganapati Prarthana', the Chorist Bhagavatar, along with the player on the 'mridanga<noinclude></noinclude> 6nfdukgfmmlhfdjd327r9ssjso660bp ಪುಟ:ಯಕ್ಷಗಾನ ಮಕರಂದ.pdf/೩೦೮ 104 100230 322564 319531 2026-05-26T02:30:55Z Pragathi. BH 7585 /* Validated */ 322564 proofread-page text/x-wiki <noinclude><pagequality level="4" user="Pragathi. BH" /></noinclude>{{Left|''ಯಕ್ಷಗಾನ ” ಗಾನವಿಧಾನ}} ———————————————————————————— {{Right|- ಶ್ರೀನಿವಾಸ ಉಡುಪ}} {{gap}}ಸಂಗೀತವನ್ನು ಮಾರ್ಗ ಮತ್ತು ದೇಶ್ಯ ಎಂಬ ಎರಡು ವಿಭಾಗಗಳನ್ನಾಗಿ ಮಾಡುವುದು ಸಂಪ್ರದಾಯ. ಆದರೆ ನಾವು ಕೆಲವೊಮ್ಮೆ ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತ ಎಂಬ ಪದಗಳನ್ನು ಉಪಯೋಗಿಸಿ ಶಾಸ್ತ್ರೀಯ ಸಂಗೀತ ಎಂದರೆ ಮಾರ್ಗಕ್ಕೆ ಸಮ; ದೇಶ್ಯ ಎಂದರೆ ಜಾನಪದ ಸಂಗೀತ ಎನ್ನುತ್ತೇವೆ. ಹಾಗೆಯೇ ಲಘುಸಂಗೀತ, ಸುಗಮಸಂಗೀತ ಎಂಬ ಪದಗಳೂ ಇತ್ತೀಚೆಗೆ ಬಳಕೆಗೆ ಬಂದವುಗಳು. ಇನ್ನು 'ಲಘು ಶಾಸ್ತ್ರೀಯ' ಎಂಬ ಒಂದು ಹೊಸ ಪದವೂ ಹುಟ್ಟಿಕೊಂಡಿದೆ. ಆದರೆ ಸಂಗೀತದ ಗುಣಮಟ್ಟಗಳನ್ನು ನಿರ್ದೇಶಿಸುವಲ್ಲಿ ಈ ಪದಗಳ ಬಳಕೆ ಸಮರ್ಪಕವಾಗಿ ಸುಗಮಸಂಗೀತ ಅಥವಾ ಲಘುಸಂಗೀತವು ಆಗುತ್ತದೆ ಎನ್ನಲು ಬರುವುದಿಲ್ಲ.ಜನಸಾಮಾನ್ಯರಿಗೆಲ್ಲ ರಂಜನೆಯೊದಗಿಸಿತು ಎನ್ನಲು ಬರುವುದಿಲ್ಲ. ಹಾಗೆಯೇಶಾಸ್ತ್ರೀಯ ಸಂಗೀತವು ಸಾಮಾನ್ಯರಿಗೆ ರುಚಿಸಲಾರದು ಎಂಬುದೂ ಸರಿಯಲ್ಲ.ಸಂಗೀತ ಪ್ರಕಾರಗಳ ಮೆಚ್ಚುವಿಕೆಗೆ ಕೇಳ್ಮೆಯಿಂದ ಬಂದ ಅಭ್ಯಾಸವೇ ಮುಖ್ಯ. {{gap}}ಮಾರ್ಗ ಸಂಗೀತ ಎಂದರೆ ಹಳೆಯ ಕಾಲದ, ಈಗ ಪ್ರಚಾರದಲ್ಲಿಲ್ಲದ ಪದ್ಧತಿ; ಇದು ಸಂಗೀತದ ನಿಯಮಗಳಿಗೆ ಹೊಂದಿಕೊಂಡಂತಹದು, ಬುದ್ಧಿ ಗಮ್ಯವಾದುದು ಎಂದು ಲಕ್ಷಣಕಾರರು ವಿವರಿಸಿದ್ದಾರೆ. ದೇಶ ಎಂದರೆ ವಿವಿಧ ಪ್ರದೇಶಗಳಲ್ಲಿ ಬಳಕೆ ಯಲ್ಲಿದ್ದಂತಹ ಸಂಗೀತ; ಇದು ಈಗ ಶಾಸ್ತ್ರನಿಬಂಧನೆಗಳಿಗೆ ಒಳಗಾಗಿದ್ದರೂ ಸಂಪೂರ್ಣವಾಗಿ ಶಾಸ್ತ್ರಾಧಾರಿತವಲ್ಲ;ಜನಜೀವನದೊಂದಿಗೆ ಹರಿದುಬರುವಾಗ ವಿವಿಧ ಪ್ರದೇಶಗಳ ವಿಶಿಷ್ಟತೆಗಳನ್ನು ತುಂಬಿಕೊಂಡು ಬಂದುದು, ಲಕ್ಷ ಲಕ್ಷಣ ಗಳನ್ನು ಸಮನ್ವಯಗೊಳಿಸಿಕೊಂಡಂತಹದು, ಹೃದಯರಂಜಕ ಗುಣಪ್ರಧಾನವಾ ದುದು ಎಂದು ಹೇಳಿದ್ದಾರೆ. {{gap}}ಕಲೆಯೇ ಆಗಲಿ, ಸಾಹಿತ್ಯವೇ ಆಗಲಿ, ಹುಟ್ಟಿನಿಂದಲೇ ಮಾರ್ಗಪದ್ಧತಿಯಲ್ಲಿರ ಇರಲಿಲ್ಲ ಎಂಬುದನ್ನು ನಾವು ಗಮನಿಸಬೇಕು.ಜಗತ್ತಿನ ಆರಂಭದಿಂದ ನಿತ್ಯಜೀವನದಲ್ಲಿ ಸೇರಿಕೊಂಡು ಅಂದಿನಿಂದ ಇಂದಿನ ವರೆಗೆ ಇಳಿದು ಬಂದ ಭಾಷೆ, ಕಲೆಗಳೆಲ್ಲ ಮೊದಲಿಗೆ ಅಸಂಸ್ಕೃತ ಮಾನವನೊಂದಿಗೆ ಅಸಂಸ್ಕೃತ<noinclude></noinclude> kwa3j5ie4low7nlnvyu5dk2ddxwll2g ಪುಟ:ಯಕ್ಷಗಾನ ಮಕರಂದ.pdf/೩೧೭ 104 100239 322561 319508 2026-05-26T02:24:37Z Shreelatha.Halemane 7642 /* Validated */ 322561 proofread-page text/x-wiki <noinclude><pagequality level="4" user="Shreelatha.Halemane" />{{Left|65}}</noinclude>ಹಾಡುವ, ಶಬ್ದ ಸ್ಪಷ್ಟತೆಗಿಂತಲೂ ಧ್ವನಿಗಾತ್ರಕ್ಕೆ ಪ್ರಾಮುಖ್ಯವಿರುವ, ಹಾಡುಗಾರಿಕೆಯ ಶೈಲಿ ಮೂಡಿರಬೇಕು. ಹಾಡುಗಳಲ್ಲಿ ಸಂಗೀತದಲ್ಲಿನ ರಾಗನಿರೂಪಣಾ ವಿನ್ಯಾಸಕ್ಕೂ ಇದಕ್ಕೂ ವ್ಯತ್ಯಾಸ ಹೀಗೆ ಬೆಳೆದು ಬಂದಿರಬೇಕು. {{gap}}ಸಂಗೀತದಲ್ಲಿ ಅಭ್ಯಾಸಗಾನ, ಸಭಾಗಾನ ಎಂಬ ಎರಡು ವಿಭಾಗಗಳಿವೆ. ಸಂಗೀತದ ವಿದ್ಯಾರ್ಥಿ ತನ್ನ ಸಂಗೀತ ಅಭ್ಯಾಸವನ್ನು ಅಭ್ಯಾಸಗಾನದ ಕಲಿಕೆಯಿಂದ ಆರಂಭಿಸುತ್ತಾನೆ. ವಿವಿಧ ಅಭ್ಯಾಸಗಳಿಂದ ಕಂಠಧ್ವನಿಯ ತಿದ್ದುವಿಕೆ, ರಾಗತಾಳ ಗಳ ಪರಿಚಯ, ಸ್ವರಜ್ಞಾನಗಳು ಸಾಧಿಸಿದ ಬಳಿಕಷ್ಟೆ ಆತ ಕೃತಿ ಅಥವಾ ಹಾಡುಗಳ ಅಭ್ಯಾಸಕ್ಕೆ ತೊಡಗುತ್ತಾನೆ. ಯಕ್ಷಗಾನ ಅಭ್ಯಾಸಕ್ಕೆ ಈ ಕ್ರಮವಿಲ್ಲ. ಇಲ್ಲಿ ವಿದ್ಯಾರ್ಥಿ ನೇರವಾಗಿ ಹಾಡುಗಳಿಂದಲೇ ಪಾಠ ತೊಡಗುತ್ತಾನೆ. ರಾಗ, ತಾಳಗಳ ಜ್ಞಾನ ಆತನಿಗೆ ಹಾಡುಗಳ ಮೂಲಕವೇ ದೊರೆಯಬೇಕಾಗುತ್ತದೆ. ಗುರುಗಳು ಹಾಡುವ ರೀತಿಯನ್ನು ಅನುಕರಿಸಿ ಹಾಡಿದುದರ ಪರಿಣಾಮವಾಗಿ ವಿವಿಧ ರಾಗಗಳ ಸ್ಥೂಲ ಪರಿಚಯ ಆತನಿಗೆ ಲಭಿಸಿದರೂ, ರಾಗಭೇದಗಳನ್ನು ಹಾಡಿಕೆಯ ಮೂಲಕ ಸಾಮಾನ್ಯವಾಗಿ ತೋರಿಸಲು ಸಾಧ್ಯವಾದರೂ, ಸ್ವರಪ್ರಭೇದಗಳ ಮೂಲಕ ರಾಗ ವೈವಿಧ್ಯಗಳನ್ನರಿಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ತನ್ನ ಹಾಡಿಕೆಯಲ್ಲಾಗಲೀ ಇತರರ ಹಾಡಿಕೆಯಲ್ಲಾಗಲೀ ಸೂಕ್ಷ್ಮ ರೀತಿಯ ರಾಗ ಛಾಯೆಗಳ ವ್ಯತ್ಯಾಸಗಳನ್ನು ಆತ ತಿಳಿಯಲಾರ. ಸುರುಟಿ-ಕೇದಾರಗೌಳ, ಆರಭಿ-ದೇವಗಾಂಧಾರಿ, ಮಧ್ಯಮಾವತಿ-ಶ್ರೀರಾಗ, ಭೈರವಿ-ಮುಖಾರಿ ಮೊದಲಾದ ರಾಗಗಳ ವ್ಯತ್ಯಾಸಗಳನ್ನು ಆತ ಹಾಡಿನ ಮೂಲಕ ತೋರಿಸಬಲ್ಲವಾದರೂ ಅವುಗಳಲ್ಲಿನ ಯಾವ ಸ್ವರಸಂಚಾರಗಳ ವ್ಯತ್ಯಾಸದಿಂತಾಗಿ ಆ ರಾಗಗಳಿಗೆ ಭಿನ್ನತೆಯೊದಗುತ್ತದೆ ಎಂದು ಹೇಳಲಾರ. {{gap}} ಈ ತೊಂದರೆಗಳನ್ನು ಗಮನಿಸಿದ ಕೆಲವು ಯಕ್ಷಗಾನ ಅಭ್ಯಾಸಿಗಳು ಮೊದಲಿಗೆ ಸಂಗೀತಾಭ್ಯಾಸ ಮಾಡಿ, ಎಂದರೆ ಸಂಗೀತದ ಅಭ್ಯಾಸಗಾನಗಳನ್ನು ಚೆನ್ನಾಗಿ ಪಾಠ ಮಾಡಿ, ಬಳಿಕ ಯಕ್ಷಗಾನದ ಹಾಡುಗಳನ್ನು ಕಲಿತರು. ಇನ್ನು ಕೆಲವು ಭಾಗವತರು ಸ್ವರಜ್ಞಾನದ ತಿಳಿವಿಗಾಗಿ ಸಂಗೀತಾಭ್ಯಾಸವನ್ನೇ ಕ್ರಮಾಗತವಾಗಿ ಮಾಡಿದರು. ಇದರ ಪರಿಣಾಮವಾಗಿ ಅಂಥವರ ಯಕ್ಷಗಾನ ಹಾಡುಗಾರಿಕೆಯಲ್ಲಿ ಸಂಗೀತದ ಶೈಲಿಯ ಛಾಯೆ ಕಾಣಿಸುವುದು ಅನಿವಾರ್ಯವಾಯಿತು. ಹಾಡುಗಾರಿಕೆಯಲ್ಲಿ ಅವರು ಸ್ಪಷ್ಟವಾಗಿ ಸೂಕ್ಷ್ಮ ರಾಗಭೇದಗಳನ್ನು ಪ್ರಜ್ಞಾಪೂರ್ವಕವಾಗಿ ಕಾಣಿಸಬಲ್ಲವರಾದುದರಿಂದ ಸಂಗೀತಶೈಲಿಯ ಛಾಯೆಯನ್ನು ಮೆಚ್ಚಿಕೊಂಡರು; ರಾಗ ಶುದ್ಧತೆಗೆ ಸಂಗೀತಾಭ್ಯಾಸವೇ ಸರಿಯಾದ ಮಾರ್ಗ ಎಂದರು. ಆದರೆ ಅಂಥವರ ಹಾಡುಗಾರಿಕೆಯಲ್ಲಿ ಯಕ್ಷಗಾನದ ವಿಶಿಷ್ಟಶೈಲಿ ಉಳಿಯಲಿಲ್ಲ, ಸಂಗೀತದಲ್ಲಿ ಯಕ್ಷಗಾನದ ಶೈಲಿಯ ಛಾಯೆ ಕಾಣಿಸಿಕೊಂಡಿತು, ಎಂಬುದಷ್ಟೆ ಪರಿಣಾಮವಾಯಿತು.ಆದುದರಿಂದ, ಯಕ್ಷಗಾನದಲ್ಲಿ ಶುದ್ಧ ಕಲಾಸಂಗೀತಕ್ಕೆ ಸಮನಾದ ರಾಗಸ್ವರೂಪ ಕಾಣಿಸುತ್ತೇವೆ ಎಂಬವರು ಅವೆರಡೂ ಗಾನಕ್ರಮಗಳಿಗೆ ಶೈಲಿಯ ಪ್ರತ್ಯೇಕತೆಯಿದೆ,<noinclude></noinclude> c21bxl23jhvs87smpyp1fvdw4zjngt2 ಪುಟ:ಯಕ್ಷಗಾನ ಮಕರಂದ.pdf/೩೧೮ 104 100240 322562 319510 2026-05-26T02:24:51Z Shreelatha.Halemane 7642 /* Validated */ 322562 proofread-page text/x-wiki <noinclude><pagequality level="4" user="Shreelatha.Halemane" />{{Left|66}}</noinclude>ಈ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಬೇಕಾದುದು ಅವುಗಳ ಉದ್ದೇಶಸಾಧನೆಗೆ ತೀರ ಅವಶ್ಯ ಎಂಬುದನ್ನು ಮೊದಲಾಗಿ ತಿಳಿಯಬೇಕು. {{gap}}ಹಾಗಾದರೆ, ಯಕ್ಷಗಾನಕ್ಕೆ ಒಂದು ಭಿನ್ನವಾದ ಶೈಲಿ ಇದ್ದುದೇ ಆದರೆ ಅದಕ್ಕೆ ಸ್ವರ-ರಾಗಗಳ ಪರಿಶುದ್ಧತೆ ಬೇಡವೆ ? ಎಂಬ ಪ್ರಶ್ನೆ ಏಳುತ್ತದೆ. ಅದು ಅವಶ್ಯವಾಗಿಯೂ ಬೇಕು. ಆದರೆ, ಅದು ಮಾತ್ರ ಯಕ್ಷಗಾನಶೈಲಿಯಲ್ಲಿ ಕಲಾಸಂಗೀತದ ಅನುಕರಣೆ ಅಥವಾ ತುರುಕಿಸುವಿಕೆಯಿಂದ ಸಾಧಿತವಾಗದು ಎಂಬುದನ್ನು ಮನಗಾಣಬೇಕು. ಹಾಗೆ ಮಾಡಿದರೆ ಎರಡೂ ಪದ್ಧತಿಗಳು ಕುಲಗೆಟ್ಟು ಹೊಸತೊಂದು ವಿಚಿತ್ರ ಶೈಲಿ ಮಾತ್ರ ಮೂಡೀತು. ಆದುದರಿಂದ ಯಕ್ಷಗಾನ ಸಂಗೀತವನ್ನು ರಾಗಶುದ್ಧ ಸ್ವರಶುದ್ಧವಾಗಿ ಮಾಡಲು ಆ ಶೈಲಿಗೆ ಅನುಗುಣವಾದ ಅಭ್ಯಾಸಗಾನ ಗಳ ರಚನೆಯಾಗಬೇಕು. ಶುದ್ಧ ಶೈಲಿಯನ್ನುಳಿಸಲು, ಬೆಳೆಯಿಸಲು ಸಹಾಯವಾಗ ಬಲ್ಲ ಅಭ್ಯಾಸಗಾನಗಳನ್ನು ಸಂಗೀತದಲ್ಲಿ ಚೆನ್ನಾಗಿ ಪಾಂಡಿತ್ಯವಿರುವಾತ, ಆದರೆ ಯಕ್ಷಗಾನ ಶೈಲಿಯ ವಿಶಿಷ್ಟತೆ, ಪ್ರತ್ಯೇಕತೆಗಳನ್ನು ಮನಗಂಡಾತ ರಚಿಸಿ, ಅವುಗಳನ್ನು ಯಕ್ಷಗಾನ ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಪರಿಣಾಮವನ್ನು ಲಕ್ಷಿಸಿ, ಅವಶ್ಯವಾಗಬಹುದಾದ ತಿದ್ದುಪಡಿಗಳನ್ನು ಮಾಡಿ, ಸಂಸ್ಕರಿಸಬೇಕು. ಆಗ ಮಾತ್ರ ಶೈಲಿಯ ವೈಶಿಷ್ಟ್ಯವೂ ಉಳಿದೀತು; ಅಭ್ಯಾಸಕ್ರಮಕ್ಕೂ ಎಲ್ಲೆಡೆಗಳಲ್ಲಿ ಒಂದೇ ನಿಶ್ಚಿತ ಕ್ರಮ ಒದಗೀತು; ಯಕ್ಷಗಾನ ಸಂಗೀತ ಕ್ರಮಬದ್ಧವಾಗಿ ಬೆಳೆದೀತು. {{gap}}ಕಲಾಸಂಗೀತದಲ್ಲಿ ಸಂಗೀತಸಾಹಿತ್ಯಗಳೆರಡೂ ಜತೆಜತೆಯಾಗಿ ಒಬ್ಬನಿಂದಲೇ ರಚನೆಯಾಗಿದ್ದರೂ, ಹಲವು ಸಂದರ್ಭಗಳಲ್ಲಿ ಅವುಗಳಲ್ಲಿ ಭಾವಕ್ಕೆ ಅನುಗುಣವಾದ ಸಂಬಂಧ ಪರಸ್ಪರ ಇಲ್ಲದಿರುವುದನ್ನೂ ಕಾಣುತ್ತೇವೆ. ಎಂದರೆ, ಸಾಹಿತ್ಯರಹಿತವಾಗಿ ಕೃತಿಗಳ ಸ್ವರಸಂಯೋಜನೆಗಳನ್ನು ಮಾತ್ರ ವಾದ್ಯಗಳಲ್ಲಿ ನುಡಿಸಿದಾಗ ಅಥವಾ ಹಾಡಿ ದಾಗ, ಸಾಹಿತ್ಯವನ್ನು ಹಾಡಿದಾಗ ಮೂಡುವ ಭಾವವಾಗಲಿ ಆ ಸಾಹಿತ್ಯ ಸಂದರ್ಭಕ್ಕೆ ಪೂರಕವಾದ ಭಾವ ಉಂಟಾಗುವುದಾಗಲಿ, ಎಲ್ಲ ರಚನೆಗಳಲ್ಲಿ ಕಂಡು ಹಾಡಿನ ಸಾಹಿತ್ಯದ ಬರುವುದಿಲ್ಲ. ಯಕ್ಷಗಾನ ಸಂಗೀತದಲ್ಲಿ ಮಾತ್ರ ಹೀಗಲ್ಲ.ಹಾಡಿನ ಸಾಹಿತ್ಯದ ಪ್ರತಿಯೊಂದು ಶಬ್ದವೂ ಭಾವವೂ ಸಂಗೀತವು ಮೂಡಿಸುವ ಭಾವದೊಂದಿಗೆ ಬೇರ್ಪ ಡಿಸಲಾರದಂತೆ ಬೆಸುಗೆಗೊಂಡಿರುವುದು ಇಲ್ಲಿನ ವೈಶಿಷ್ಟ್ಯ. {{gap}}ಕಲಾಸಂಗೀತದಲ್ಲಿ ಗೇಯಸಂಗೀತಕ್ಕೆ ಇದ್ದಷ್ಟೆ ಪ್ರಾಧಾನ್ಯ ವಾದ್ಯ ಸಂಗೀತಕ್ಕೂ ಇದೆ. ವಾದ್ಯಗಳಲ್ಲಿ ಸಂಗೀತವಾದ್ಯ ಮತ್ತು ತಾಲವಾದ್ಯಗಳೆಂಬ ಎರಡು ವರ್ಗಗಳಿವೆ. ಸಂಗೀತವನ್ನು ವಾದ್ಯಗಳ ಮೂಲಕ ಮೂಡಿಸುವಾಗ ಅಲಿ “ಮಾತು" ಅಥವಾ ಸಾಹಿತ್ಯಕ್ಕೆ ಪ್ರಾಧಾನ್ಯವಿಲ್ಲ. ಆದರೆ ಕೇವಲ 'ಧಾತು' ಅಥವಾ ಸ್ವರಗಳ ನಿರೂಪಣಾ ವೈವಿಧ್ಯಗಳಿಂದಲೇ ಭಾವಪ್ರಚೋದನೆ ಸಾಧ್ಯವಾಗುತ್ತದೆ. ವಾದ್ಯಗಳನ್ನು ಸಂಗೀತದಲ್ಲಿ ಗೇಯಕ್ಕೆ ಪೂರಕವಾಗಿ ಅನುಸರಣೆಗೆ ಉಪಯೋಗಿಸುತ್ತಾರೆ;<noinclude></noinclude> s8dyfp4cvfhnd63ueqpai2zkjs10ry5 ಪುಟ:ಯಕ್ಷಗಾನ ಮಕರಂದ.pdf/೩೨೬ 104 100247 322556 319740 2026-05-26T02:18:58Z Shreelatha.Halemane 7642 /* Validated */ 322556 proofread-page text/x-wiki <noinclude><pagequality level="4" user="Shreelatha.Halemane" />{{Left|74}}</noinclude>ಆದುದರಿಂದ ಯಕ್ಷಗಾನ ತಾಲವಿಧಾನಗಳಿಗೆ ಮದ್ದಲೆವಾದನಕ್ಕೆ ಉಪಯೋಗಿಸುವ ಜತಿಗಳನ್ನು ಬಳಸಿರುವ ಸ್ವರಪುಂಜಗಳನ್ನು ತಾಳಬದ್ಧವಾಗಿ ರಚಿಸಿ, ಅವಗಳನ್ನು ತಾಳ ಅಥವಾ ಜಾಗಟೆಗಳಲ್ಲಿ ತಾಳಸೂಚನೆಯ ಘಾತಗಳಿಗೆ ಹೊಂದಿಸಿಕೊಂಡು ಹಾಡಲು ಸಾಧ್ಯವಾಗುವಂತಹ ಅಭ್ಯಾಸಗಾನಗಳ ಪ್ರತ್ಯೇಕ ರಚನೆಯಾಗಬೇಕು. ಆಗ ಮಾತ್ರ ಯಕ್ಷಗಾನವು ತಾಳಗಳಲ್ಲಿ ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು ಆ ಸಂಗೀತಶೈಲಿಗೆ ಪೂರಕವಾದ ಗುಣವುಳ್ಳದ್ದಾಗಿರಲು ಸಾಧ್ಯವಾಗುತ್ತದೆ. {{gap}}ಯಕ್ಷಗಾನದಲ್ಲಿ ವಿಳಂಬಕಾಲದ ಲಯಗತಿಯ ಉಪಯೋಗ ತುಂಬ ಕಡಿಮೆ, ಇಲ್ಲವೆಂದರೂ ಸಲ್ಲುತ್ತದೆ. ಹಾಡುಗಳೆಲ್ಲ, ತಾಳವೈವಿಧ್ಯಗಳೆಲ್ಲ, ಸಾಮಾನ್ಯವಾಗಿ ಮಧ್ಯಲಯ ಹಾಗೂ ದ್ರುತಲಯಗತಿಗಳಲ್ಲೇ ಇರುವುದು ಕಂಡು ಬರುತ್ತದೆ. ಇದು ಸಭಾಗಾನ ವಿಧಾನವಲ್ಲ; ನಾಟಿದ್ದೇಶಿತ ಗಾನವಿಧಾನ ಎಂಬುದು ಈ ರೀತಿಗೆ ಮೂಲಕಾರಣವಾಗಿರಬಹುದು. ಹಾಗೆಯೇ 'ಯಕ್ಷ' ಎಂಬ ಪದಕ್ಕೆ 'ವೇಗ' ಎಂಬ ಅರ್ಥವೂ ನಿಘಂಟುವಿನಲ್ಲಿ ಕಾಣುವುದರಿಂದ ಯಕ್ಷಗಾನ' ಎಂದರೆ ವೇಗದ ಅಥವಾ ದ್ರುತಗತಿಯ ಗಾನವಿಧಾನ ಎಂದೂ ಅರ್ಥ ಮಾಡಬಹುದು. ಹಾಗೆ ಅರ್ಥವಿಸಿದಾಗ ಈ ಗಾನವಿಧಾನವು ಕಲಾಸಂಗೀತ ಗಾನವಿಧಾನಕ್ಕಿಂತ ಭಿನ್ನವಾದುದು ಎಂದು ಕಲ್ಪಿಸ ಬಹುದು. ಕಲಾಸಂಗೀತದಲ್ಲಿ ಮಧ್ಯ ಹಾಗೂ ದುತ ಲಯವಿಧಾನಗಳು ಹಾಡು ತಾಳಗಳಲ್ಲಿ ಸಾಕಷ್ಟು ಕಂಡು ಬಂದರೂ ವಿಳಂಬ ಹಾಗೂ ಮಧ್ಯಗತಿಯ ವಿನ್ಯಾಸ ಗಳಿಗೆ ಅಲ್ಲಿ ಹೆಚ್ಚಿನ ಪ್ರಾಶಸ್ತ್ರ. ಆದುದರಿಂದ ಸಂಗೀತವು. ವಿಲಂಬ ಹಾಗೂ ಮಧ್ಯ ಲಯಗತಿ ಪ್ರಧಾನವಾದ ಭಾವೋದ್ದೇಶಿತ ಗಾನಪದ್ಧತಿ ಎಂದೂ, ಯಕ್ಷ ಗಾನವು ಮಧ್ಯ ಹಾಗೂ ದ್ರುತಲಯಗತಿ ಪ್ರಧಾನವಾದ ನಾಟ್ಯೋದ್ದೇಶಿತ ಗಾನ ಪದ್ದತಿ ಎಂದೂ ಹೇಳಬಹುದು. {{gap}}ಈ ಉದ್ದೇಶ ಭಿನ್ನತೆಗಳಿಂದಾಗಿ ಗಾನಶೈಲಿಯ ಭಿನ್ನವಾಗಿರುವುದು ಅವಶ್ಯ ಮತ್ತು ಅನಿವಾರ್ಯ. ಆದುದರಿಂದ ಯಕ್ಷಗಾನಕ್ಕೆ ಹಿಂದಿನಿಂದಲೂ ಪ್ರತ್ಯೇಕವಾದ ಒಂದು ಶೈಲಿ ಇದ್ದಿತೆಂದು ಸಾಧಿಸಬಹುದು. ಶೈಲಿಗಳ ಪ್ರತ್ಯೇಕತೆಯನ್ನೂ ವಿಶೇಷತೆಯನ್ನೂ ಗುರುತಿಸಿ, ಎಲ್ಲೆಲ್ಲ ಇತರ ಸಂಗೀತ ಪದ್ಧತಿಗಳ ರಾಗ-ತಾಳಗಳ ಅನುಕರಣೆ ಬಂದು ದೋಷಪೂರ್ಣವಾಗಿದೆ ಎಂದು ಕಂಡುಹಿಡಿದು, ಅಂತಹ ದೋಷಗಳನ್ನು ನಿವಾರಿಸಿ, ಅಥವಾ ತಿದ್ದಿ, ಶೈಲಿಯನ್ನು ಉದ್ದೇಶಾನುವರ್ತಿಯಾಗುವಂತೆ ಶುದ್ಧವಾಗಿಸಿ ರೂಪಿಸಿದಾಗ ಯಕ್ಷಗಾನ ಶೈಲಿ ಅಥವಾ ಗಾನ ವಿಧಾನ ಎಂಬುದು ಭಾರತೀಯ ಸಂಗೀತ ಪದ್ಧತಿಗೆ ಸೇರಿದ, ಪರಂಪರಾಗತವಾಗಿ ಬಂದ, ಇನ್ನೊಂದು ಗಾನವಿಧಾನ ಎಂಬುದು ಭಾರತೀಯ ಸಂಗೀತ ಪದ್ಧತಿಗೆ ಸೇರಿದ ಪರಂಪರಾಗವಾಗಿ ಬಂದ, ಇನ್ನೊಂದು ಶೈಲಿ ಅಥವಾ ಗಾನವಿಧಾನವಾಗಿ ಕಂಗೊಳಿಸಿತು.<noinclude></noinclude> p96vhe5gwp9gdef18p7n0q2hqugid1n ಪುಟ:Sankeerana vachanasamputa 14.pdf/೬ 104 100824 322571 311960 2026-05-26T04:23:48Z Pragathi. BH 7585 /* Validated */ 322571 proofread-page text/x-wiki <noinclude><pagequality level="4" user="Pragathi. BH" /></noinclude>೧.ಬಸವಣ್ಣನವರ ವಚನಸಂಪುಟ - ಸಂ : ಡಾ . ಎಂ . ಎಂ . ಕಲಬುರ್ಗಿ<br /> ೨.ಅಲ್ಲಮಪ್ರಭುದೇವರ ವಚನಸಂಪುಟ - ಸಂ : ಡಾ . ಬಿ . ವಿ. ಮಲ್ಲಾಪುರ<br /> ೩.ಚೆನ್ನಬಸವಣ್ಣನವರ ವಚನಸಂಪುಟ - ಸಂ : ಡಾ . ಬಿ. ವಿ. ಮಲ್ಲಾಪುರ<br /> ೪.ಸಿದ್ದರಾಮೇಶ್ವರ ವಚನಸಂಪುಟ - ಸಂ : ಡಾ . ಎಸ್. ವಿದ್ಯಾಶಂಕರ<br /> ೫ಶಿವಶರಣೆಯರ ವಚನಸಂಪುಟ - ಸಂ : ಡಾ . ವೀರಣ್ಣ ರಾಜೂರ<br /> ೬.ಸಂಕೀರ್ಣ ವಚನಸಂಪುಟ : ಒಂದು - ಸಂ : ಡಾ . ಎಂ . ಎಂ . ಕಲಬುರ್ಗಿ<br /> ೭.ಸಂಕೀರ್ಣ ವಚನಸಂಪುಟ : ಎರಡು - ಸಂ : ಡಾ . ಎಸ್ . ವಿದ್ಯಾಶಂಕರ<br /> ೮.ಸಂಕೀರ್ಣ ವಚನಸಂಪುಟ : ಮೂರು - ಸಂ : ಡಾ . ಬಿ . ಆರ್ . ಹಿರೇಮಠ<br /> ೯ಸಂಕೀರ್ಣ ವಚನಸಂಪುಟ : ನಾಲ್ಕು - ಸಂ : ಡಾ . ಬಿ . ಆರ್ . ಹಿರೇಮಠ<br /> ೧೦ಸಂಕೀರ್ಣ ವಚನಸಂಪುಟ : ಐದು - ಸಂ : ಡಾ . ವೀರಣ್ಣ ರಾಜೂರ ೧೧ ಸಂಕೀರ್ಣ ವಚನಸಂಪುಟ : ಆರು - ಸಂ : ಎಸ್ . ಶಿವಣ್ಣ<br /> ೧೨ಸಂಕೀರ್ಣ ವಚನಸಂಪುಟ : ಏಳು - ಸಂ : ಡಾ . ವೀರಣ್ಣ ರಾಜೂರ<br /> ೧೩ ಸಂಕೀರ್ಣ ವಚನಸಂಪುಟ : ಎಂಟು - ಸಂ : ಡಾ . ವೀರಣ್ಣ ರಾಜೂರ<br /> ೧೪ಸಂಕೀರ್ಣ ವಚನಸಂಪುಟ : ಒಂಬತ್ತು - ಸಂ : ಡಾ . ವೀರಣ್ಣ ರಾಜೂರ<br /> ೧೫.ವಚನ ಪರಿಭಾಷಾಕೋಶ - ಸಂ : ಡಾ . ಎನ್ . ಜಿ . ಮಹಾದೇವಪ್ಪ<noinclude></noinclude> 28kmimmp28yxt7decr6ffil8c54t0vo ಪುಟ:Sankeerana vachanasamputa 14.pdf/೧೨ 104 100830 322569 320048 2026-05-26T04:21:38Z Pragathi. BH 7585 /* Validated */ 322569 proofread-page text/x-wiki <noinclude><pagequality level="4" user="Pragathi. BH" />{{Right|vii}}</noinclude>ಎರಕಗೊಂಡಿವೆ . ಹೀಗಾಗಿ ಸಮಗ್ರ ಕರ್ನಾಟಕದ ಪ್ರಾತಿನಿಧಿಕ ಧ್ವನಿಯೆನಿಸಿದ ಈ ಸಾಹಿತ್ಯದ ಪ್ರಕಟನೆಯು ತನ್ನ ಕರ್ತವ್ಯದ ಭಾಗವೆಂದು ಭಾವಿಸಿರುವ ಕರ್ನಾಟಕ ಸರ್ಕಾರ , ಅದನ್ನು ಸುಲಭ ಬೆಲೆಯಲ್ಲಿ ಜನತೆಗೆ ನೀಡುತ್ತಿದೆ. {{gap}}ಈ ಯೋಜನೆಯ ನೇತೃತ್ವವಹಿಸಿ ದುಡಿದ ಡಾ . ಎಂ . ಎಂ . ಕಲಬುರ್ಗಿ ಅವರ ಶ್ರದ್ಧೆಯನ್ನು, ಸಂಪಾದಕ ಮಂಡಳಿಯ ಮಾರ್ಗದರ್ಶನವನ್ನು , ಸಂಪಾದಕರ ಶ್ರಮವನ್ನು ಸ್ಮರಿಸುತ್ತ, ಈ ಐತಿಹಾಸಿಕ ಪ್ರಕಟನೆಯ ಪರಿಷ್ಕತ ದ್ವಿತೀಯ ಆವೃತ್ತಿ ಸಂಪುಟಗಳನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.<noinclude></noinclude> 7gaazll3tf5r9l9pj0ofewx7w2z7zn1 322570 322569 2026-05-26T04:22:06Z Pragathi. BH 7585 322570 proofread-page text/x-wiki <noinclude><pagequality level="4" user="Pragathi. BH" />{{center|vii}}</noinclude>ಎರಕಗೊಂಡಿವೆ . ಹೀಗಾಗಿ ಸಮಗ್ರ ಕರ್ನಾಟಕದ ಪ್ರಾತಿನಿಧಿಕ ಧ್ವನಿಯೆನಿಸಿದ ಈ ಸಾಹಿತ್ಯದ ಪ್ರಕಟನೆಯು ತನ್ನ ಕರ್ತವ್ಯದ ಭಾಗವೆಂದು ಭಾವಿಸಿರುವ ಕರ್ನಾಟಕ ಸರ್ಕಾರ , ಅದನ್ನು ಸುಲಭ ಬೆಲೆಯಲ್ಲಿ ಜನತೆಗೆ ನೀಡುತ್ತಿದೆ. {{gap}}ಈ ಯೋಜನೆಯ ನೇತೃತ್ವವಹಿಸಿ ದುಡಿದ ಡಾ . ಎಂ . ಎಂ . ಕಲಬುರ್ಗಿ ಅವರ ಶ್ರದ್ಧೆಯನ್ನು, ಸಂಪಾದಕ ಮಂಡಳಿಯ ಮಾರ್ಗದರ್ಶನವನ್ನು , ಸಂಪಾದಕರ ಶ್ರಮವನ್ನು ಸ್ಮರಿಸುತ್ತ, ಈ ಐತಿಹಾಸಿಕ ಪ್ರಕಟನೆಯ ಪರಿಷ್ಕತ ದ್ವಿತೀಯ ಆವೃತ್ತಿ ಸಂಪುಟಗಳನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.<noinclude></noinclude> 14s74apj6y82on1stic2gfbn6tgwv5z ಪುಟ:Sankeerana vachanasamputa 14.pdf/೧೯೭ 104 101008 322572 320281 2026-05-26T04:26:50Z Pragathi. BH 7585 322572 proofread-page text/x-wiki <noinclude><pagequality level="3" user="Pragathi. BH" /> {{rh|center=|left=ವೀರಸಂಗಯ್ಯನ ವಚನ|right=೧೩೯}}</noinclude> {{Center|೧೬೩}} <poem> {{gap}}ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ<br /> ನಿಲುಕದು ಸಂಗನ ಶರಣಸ್ಥಲ.<br /> ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ?<br /> ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ?<br /> ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ.....<br /> ಫಲ ನಿಫಲ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೨ || </poem> {{Center|೧೬೪}} <poem> {{gap}}ಮಲಿನವುಂಟೆ ಮಹಾಸಮುದ್ರಕ್ಕೆ ?<br /> ಅರಸಲು ಕೊಲೆ ಹಗೆ ಉಂಟೆ ಸರ್ವ ಜೀವದಯಾಳ್ದಂಗೆ ?<br /> ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ?<br /> ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲು? ಭೇದವುಂಟೆ ಅಗ್ನಿ ಆಪೋಷಣಕೆ ?<br /> ನಿದ್ದರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯೆ ಆಧಾರ<br /> ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. || ೩೩ | | </poem> {{center|೧೬೫}} <poem> {{gap}}ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ.<br /> ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ<br /> ಘತಘತಯ ಗೊತ್ರ ಅಜಾತಜಂಗಮಹಿತ<br /> ಅನಾದಿ ಗೊಹೇಶ್ವರಲಿಂಗಕ್ಕೆ<br /> ಆಗಮವಿಲ್ಲ ನಿಗಮವಿಲ್ಲ ಕಾಣಾ<br /> ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೪ ||<br /> </poem> {{center|೧೬೬}} <poem> {{gap}}' ಯದ್ಭಾವಂ ತದ್ಭವತಿ' ಎಂಬರಲ್ಲದೆ<br /> ತದ್ಘಾವದ ಸತಿಯನೆತ್ತಬಲ್ಲರಯ್ಯ ?<br /> ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ?<br /> ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ?<br /> ಯದ್ಭಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ || </poem><noinclude></noinclude> l2triepqafbscwpwcok6kprvl60p55q 322573 322572 2026-05-26T04:28:34Z Pragathi. BH 7585 322573 proofread-page text/x-wiki <noinclude><pagequality level="3" user="Pragathi. BH" /> {{rh|center=|left=ವೀರಸಂಗಯ್ಯನ ವಚನ|right=೧೩೯}}</noinclude> {{Center|೧೬೩}} <poem> {{gap}}ಕಲಿಕೆಯ ಮಾತಿನ ಮಾಲೆಯ ನೀಲೆಸೀಲೆಗೆ ನಿಲುಕದು ಸಂಗನ ಶರಣಸ್ಥಲ. ಬಲಾತ್ಕಾರಕೆ ಬಡಿದು ಹಾಲನೆರೆದರೆ ಬಾಲತ್ವವಹುದೆ ? ಯಲವದ ಮರದ ಎಲೆ ಹೂ ಸುಂದರ ಫಲಪದವಹುದೆ ? ಕೊಲೆ ಆತ್ಮದಲಿ ಕೊನನಾಲಿಗೆಯ ಮೃದುಕ್ರೋಧ..... ಫಲ ನಿಫಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೨ || </poem> {{Center|೧೬೪}} <poem> {{gap}}ಮಲಿನವುಂಟೆ ಮಹಾಸಮುದ್ರಕ್ಕೆ ? ಅರಸಲು ಕೊಲೆ ಹಗೆ ಉಂಟೆ ಸರ್ವ ಜೀವದಯಾಳ್ದಂಗೆ ? ವಿಸ್ತರಿಸಲು ಕುಲ ಅಕ್ಕುಲವುಂಟೆ ಋಷಿವರ್ಗದೊಳು ? ಉಚ್ಚರಿಸಲು ಎಲೋ ತಲೋ ಎಂಬುದುಂಟೆ ಜ್ಞಾನಿಸುಖಿಯಲಿ ಬೆರೆಯಲು? ಭೇದವುಂಟೆ ಅಗ್ನಿ ಆಪೋಷಣಕೆ ? ನಿದ್ದರಿಸಿನಕೆ ಪಿಂಡವೆ ಬ್ರಹ್ಮಾಂಡ, ಪೃಥ್ವಿಯೆ ಆಧಾರ ಪ್ರಿಯವ ಅಪ್ರಿಯ ಅಪ್ರಿಯವೆ ಪ್ರಿಯ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ. || ೩೩ | | </poem> {{center|೧೬೫}} <poem> {{gap}}ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯ ಗೊತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ || ೩೪ || </poem> {{center|೧೬೬}} <poem> {{gap}}' ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಘಾವದ ಸತಿಯನೆತ್ತಬಲ್ಲರಯ್ಯ ? ಬುದ್ಗುದಾಕಾರ ಭೂಮಿಯೋಳು ಹುಟ್ಟುಹೊಂದುಯಿಲ್ಲವೆ ? ಅದೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯದ್ಭಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದಿಯಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ . || ೩೨ || </poem><noinclude></noinclude> ecx1y6i2pui76bu1pydat10wr0ug59r ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 322577 322482 2026-05-26T04:58:06Z Anzx-ooo 3060 322577 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 38810<br><small>ದತ್ತಾಂಶ ಪಡೆದ ಸಮಯ: 2026-05-26 04:57:08 UTC / 2026-05-26 10:27:08 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Pragathi. BH|Pragathi. BH]] || 0 || 0 || 9326 (11082) || 0 || 0 || 7987 || 159 (318) || 1133 (3399) || 10000 || '''11082''' |- | 2 || [[Special:Contributions/Shreelatha.Halemane|Shreelatha.Halemane]] || 0 || 0 || 7300 (10868) || 0 || 0 || 4890 || 830 (1660) || 1473 (4419) || 7716 || '''10868''' |- | 3 || [[Special:Contributions/Shreesha Sharma|Shreesha Sharma]] || 0 || 0 || 3340 (4573) || 0 || 0 || 2097 || 398 (796) || 438 (1314) || 3864 || '''4573''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 535 (1269) || 0 || 0 || 70 || 63 (126) || 397 (1191) || 665 || '''1269''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/Vikashegde|Vikashegde]] || 0 || 0 || 127 (272) || 4 || 0 || 0 || 41 (82) || 68 (204) || 158 || '''275''' |- | 8 || [[Special:Contributions/A826|A826]] || 10740 || 1 || 196 (244) || 26 || 0 || 5 || 4 (8) || 28 (84) || 10979 || '''268''' |- | 9 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 10 || [[Special:Contributions/Hariprasad Shetty10|Hariprasad Shetty10]] || 0 || 0 || 83 (178) || 0 || 0 || 0 || 22 (44) || 40 (120) || 357 || '''178''' |- | 11 || [[Special:Contributions/Anzx-ooo|Anzx-ooo]] || 2 || 0 || 67 (149) || 1 || 0 || 0 || 8 (16) || 49 (147) || 101 || '''152''' |- | 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] jnb8ak3v3ik3djib2x8ociy03yoxbhg 322623 322577 2026-05-26T10:36:49Z Anzx-ooo 3060 322623 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 38855<br><small>ದತ್ತಾಂಶ ಪಡೆದ ಸಮಯ: 2026-05-26 10:35:50 UTC / 2026-05-26 16:05:50 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Pragathi. BH|Pragathi. BH]] || 0 || 0 || 9342 (11123) || 0 || 0 || 7987 || 162 (324) || 1145 (3435) || 10017 || '''11123''' |- | 2 || [[Special:Contributions/Shreelatha.Halemane|Shreelatha.Halemane]] || 0 || 0 || 7300 (10868) || 0 || 0 || 4890 || 830 (1660) || 1473 (4419) || 7716 || '''10868''' |- | 3 || [[Special:Contributions/Shreesha Sharma|Shreesha Sharma]] || 0 || 0 || 3340 (4573) || 0 || 0 || 2097 || 398 (796) || 438 (1314) || 3864 || '''4573''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 535 (1269) || 0 || 0 || 70 || 63 (126) || 397 (1191) || 665 || '''1269''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/Vikashegde|Vikashegde]] || 0 || 0 || 127 (272) || 4 || 0 || 0 || 41 (82) || 68 (204) || 158 || '''275''' |- | 8 || [[Special:Contributions/A826|A826]] || 10740 || 1 || 196 (244) || 26 || 0 || 5 || 4 (8) || 28 (84) || 10979 || '''268''' |- | 9 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 10 || [[Special:Contributions/Hariprasad Shetty10|Hariprasad Shetty10]] || 0 || 0 || 90 (189) || 0 || 0 || 0 || 28 (56) || 40 (120) || 383 || '''189''' |- | 11 || [[Special:Contributions/Anzx-ooo|Anzx-ooo]] || 2 || 0 || 69 (151) || 1 || 0 || 0 || 8 (16) || 49 (147) || 103 || '''154''' |- | 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] lvd2hk7j6stsf8y5819xav4rgy2ir56 ಪುಟ:ನಿತ್ಯ ನೇಮಾವಲಿ.pdf/೧೦೫ 104 101927 322520 320799 2026-05-25T16:13:14Z Shreesha Sharma 7840 /* Proofread */ 322520 proofread-page text/x-wiki <noinclude><pagequality level="3" user="Shreesha Sharma" />{{center|ನಿತ್ಯನೇಮಾವಲಿ}}</noinclude>'''ಭಾವಾರ್ಥ''': ಹಗಲು, ರಾತ್ರಿ ಎನ್ನದೆ ಯಾವಾಗಲೂ ಪರಮಾರ್ಥ<br /> ಸಾಧಿಸಬೇಕು. ಅದನ್ನು ಬಿಟ್ಟು ಅಡ್ಡದಾರಿಯಲ್ಲಿ ಹೋಗಬಾರದು.<br /> ಅಡ್ಡದಾರಿಯಲ್ಲಿ ಯಾರಾದರೂ ಹೋದರೆ ಅವರನ್ನು ಸರಿಯಾದ ಮಾರ್ಗಕ್ಕೆ<br /> ತರುವವನೇ ಜ್ಞಾನಿಯು. ಇತರರನ್ನು ಉದ್ಧಾರ ಮಾಡುವವನೇ ಜ್ಞಾನಿಯು.<br /> ಅವನಿಗೆ ಮೇಲಿಂದ ಮೇಲೆ ಶರಣು ಹೋಗಬೇಕು. ಜ್ಞಾನಿಯು ತಾನು<br /> ಮುಕ್ತಿಯನ್ನು ಪಡೆಯುವದು ಆಶ್ಚರ್ಯವೇನಲ್ಲ. ಇತರರ ಕುಲವನ್ನೇ<br /> ಉದ್ಧರಿಸುವನು ಎಂದು ತುಕಾರಾಮರು ಹೇಳುತ್ತಾರೆ.<br /> {{Right|೩}} ಉದ್ಧರಿಲೇ ಕೂಳ ಆಪಣ ತರಲಾ<br /> ತೋಚಿ ಏಕ ಝಾಲಾ ತ್ರೈಲೋಕ್ಯಾತ। <br/> {{Right|॥೧॥}} ತ್ರೈಲೋಕ್ಯಾತ ಝಾಲೇ ದ್ವೈತಚಿ ನಿಮಾಲೇ।<br /> ಐಸೇ ಸಾಧಿಯೆಲೇ ಸಾಧನ ಬರವೇ <br/> {{Right|॥೨॥}} <br /> ಬರವೇ ಸಾಧನ ಸುಖಶಾಂತಿ ಮನಾ।<br /> ಕ್ರೋಧ ನಾಹೀ ಜಾಣಾ ತಿಳಭರೀ <br/> {{Right|॥೩॥}} <br /> ತಿಳಭರೀ ನಾಹೀ ಚಿತ್ತಾಸೀ ತೋ ಮಳ।<br /> ತುಕಾ ಮ್ಹಣೆ ಜಳ ಗಂಗೇಚೇ ತೇ {{Right|॥೪॥}} <br /> {{center|೧೦೪}}<noinclude></noinclude> 3ho1jl6gucx9xfz756zulu1asbopzmp 322521 322520 2026-05-25T16:13:46Z Shreelatha.Halemane 7642 /* Validated */ 322521 proofread-page text/x-wiki <noinclude><pagequality level="4" user="Shreelatha.Halemane" />{{center|ನಿತ್ಯನೇಮಾವಲಿ}}</noinclude>'''ಭಾವಾರ್ಥ''': ಹಗಲು, ರಾತ್ರಿ ಎನ್ನದೆ ಯಾವಾಗಲೂ ಪರಮಾರ್ಥ<br /> ಸಾಧಿಸಬೇಕು. ಅದನ್ನು ಬಿಟ್ಟು ಅಡ್ಡದಾರಿಯಲ್ಲಿ ಹೋಗಬಾರದು.<br /> ಅಡ್ಡದಾರಿಯಲ್ಲಿ ಯಾರಾದರೂ ಹೋದರೆ ಅವರನ್ನು ಸರಿಯಾದ ಮಾರ್ಗಕ್ಕೆ<br /> ತರುವವನೇ ಜ್ಞಾನಿಯು. ಇತರರನ್ನು ಉದ್ಧಾರ ಮಾಡುವವನೇ ಜ್ಞಾನಿಯು.<br /> ಅವನಿಗೆ ಮೇಲಿಂದ ಮೇಲೆ ಶರಣು ಹೋಗಬೇಕು. ಜ್ಞಾನಿಯು ತಾನು<br /> ಮುಕ್ತಿಯನ್ನು ಪಡೆಯುವದು ಆಶ್ಚರ್ಯವೇನಲ್ಲ. ಇತರರ ಕುಲವನ್ನೇ<br /> ಉದ್ಧರಿಸುವನು ಎಂದು ತುಕಾರಾಮರು ಹೇಳುತ್ತಾರೆ.<br /> {{Right|೩}} ಉದ್ಧರಿಲೇ ಕೂಳ ಆಪಣ ತರಲಾ<br /> ತೋಚಿ ಏಕ ಝಾಲಾ ತ್ರೈಲೋಕ್ಯಾತ। <br/> {{Right|॥೧॥}} ತ್ರೈಲೋಕ್ಯಾತ ಝಾಲೇ ದ್ವೈತಚಿ ನಿಮಾಲೇ।<br /> ಐಸೇ ಸಾಧಿಯೆಲೇ ಸಾಧನ ಬರವೇ <br/> {{Right|॥೨॥}} <br /> ಬರವೇ ಸಾಧನ ಸುಖಶಾಂತಿ ಮನಾ।<br /> ಕ್ರೋಧ ನಾಹೀ ಜಾಣಾ ತಿಳಭರೀ <br/> {{Right|॥೩॥}} <br /> ತಿಳಭರೀ ನಾಹೀ ಚಿತ್ತಾಸೀ ತೋ ಮಳ।<br /> ತುಕಾ ಮ್ಹಣೆ ಜಳ ಗಂಗೇಚೇ ತೇ {{Right|॥೪॥}} <br /> {{center|೧೦೪}}<noinclude></noinclude> firttculxsj9uhkgqtd4dzoxhaonwog ಪುಟ:ನಿತ್ಯ ನೇಮಾವಲಿ.pdf/೧೦೬ 104 101929 322528 284302 2026-05-25T16:23:03Z Shreesha Sharma 7840 /* Proofread */ 322528 proofread-page text/x-wiki <noinclude><pagequality level="3" user="Shreesha Sharma" /></noinclude>{{center|ರಾತ್ರಿ ಭಜನೆ}} '''ಭಾವಾರ್ಥ''': ಕುಲವನ್ನು ಉದ್ಧಾರಮಾಡಿ ತಾನೂ ಉದ್ಧಾರನಾಗಿ (ಆತ್ಮ ಸಾಕ್ಷಾತ್ಕಾರವನ್ನು ಪಡೆದು) ತೈಲೋಕ್ಯದಲ್ಲಿ ಶ್ರೇಷ್ಠನಾದನು, ಎಂದರೆ ಪರಮಾತ್ಮನಲ್ಲಿ ಲೀನನಾದಾಗ ದೈತಭಾವವು ನಶಿಸಿ ಹೋಯಿತು. ಇಂಥ ಸಾಧನೆಯನ್ನು ಮಾಡಿದವನ ಮನಸ್ಸಿನಲ್ಲಿ ಸಿಟ್ಟು ತಿಲಮಾತ್ರವೂ ಇರುವುದಿಲ್ಲ ಸುಖ ಶಾಂತಿಗಳು ನೆಲೆಸುವವು. ನಿರ್ಮಲವಾದ ಗಂಗೆಯ ನೀರಿನಂತೆ ಚಿತ್ತವು. ನಿರ್ಮಲವಾಗುವದು ಎಂದು ತುಕಾರಾಮರು ಹೇಳುತ್ತಾರೆ. {{center|೪}} ಜೈಸೀ ಗಂಗಾ ವಾಹ ತೈಸೇ ತ್ಯಾಚೇ ಮನ| ಭಗವಂತ ಜಾಣ ತ್ಯಾಚೇಜವಲಳೀ ||೧|| ತ್ಯಾಚೇವಳಿ ದೇವ ಭಕ್ತಿಭಾವೇ ಉಭಾ| ಸ್ವಾನಂದಾಚಾ ಗಾಭಾ ತಯಾ ದಿಸೇ||೨|| ತಯಾ ದಿಸೇ ರೂಪ ಅಂಗುಷ್ಠಪ್ರಮಾಣ| ಅನುಭವೀ ಖೂಣ ಜಾಣತೀ ಹೇ||೩|| ಜಾಣತೀ ಹೇ ಖಣ ಸ್ವಾತ್ಮಾನುಭವೀ| ತುಕಾ ಮ್ಹಣ್ಹೇ ಪದವೀ ಜ್ಯಾಚೀ ತ್ಯಾಲಾ||೪|| '''ಭಾವಾರ್ಥ''': ಯಾರ ಮನಸ್ಸು ನಿರ್ಮಲವಾದ ಗಂಗೆಯ ನೀರಿನಂತಿರುವ ಅವರ ಹತ್ತಿರ ಭಗವಂತನು ಇರುತ್ತಾನೆ. ಅವನ ಅನನ್ಯ ಭಕ್ತಿಭಾವದಿಂದ, {{center|೧೦೫}}<noinclude></noinclude> 80bfets3nwd687deptzt98zxdyxcqcm 322529 322528 2026-05-25T16:23:25Z Shreelatha.Halemane 7642 /* Validated */ 322529 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}} '''ಭಾವಾರ್ಥ''': ಕುಲವನ್ನು ಉದ್ಧಾರಮಾಡಿ ತಾನೂ ಉದ್ಧಾರನಾಗಿ (ಆತ್ಮ ಸಾಕ್ಷಾತ್ಕಾರವನ್ನು ಪಡೆದು) ತೈಲೋಕ್ಯದಲ್ಲಿ ಶ್ರೇಷ್ಠನಾದನು, ಎಂದರೆ ಪರಮಾತ್ಮನಲ್ಲಿ ಲೀನನಾದಾಗ ದೈತಭಾವವು ನಶಿಸಿ ಹೋಯಿತು. ಇಂಥ ಸಾಧನೆಯನ್ನು ಮಾಡಿದವನ ಮನಸ್ಸಿನಲ್ಲಿ ಸಿಟ್ಟು ತಿಲಮಾತ್ರವೂ ಇರುವುದಿಲ್ಲ ಸುಖ ಶಾಂತಿಗಳು ನೆಲೆಸುವವು. ನಿರ್ಮಲವಾದ ಗಂಗೆಯ ನೀರಿನಂತೆ ಚಿತ್ತವು. ನಿರ್ಮಲವಾಗುವದು ಎಂದು ತುಕಾರಾಮರು ಹೇಳುತ್ತಾರೆ. {{center|೪}} ಜೈಸೀ ಗಂಗಾ ವಾಹ ತೈಸೇ ತ್ಯಾಚೇ ಮನ| ಭಗವಂತ ಜಾಣ ತ್ಯಾಚೇಜವಲಳೀ ||೧|| ತ್ಯಾಚೇವಳಿ ದೇವ ಭಕ್ತಿಭಾವೇ ಉಭಾ| ಸ್ವಾನಂದಾಚಾ ಗಾಭಾ ತಯಾ ದಿಸೇ||೨|| ತಯಾ ದಿಸೇ ರೂಪ ಅಂಗುಷ್ಠಪ್ರಮಾಣ| ಅನುಭವೀ ಖೂಣ ಜಾಣತೀ ಹೇ||೩|| ಜಾಣತೀ ಹೇ ಖಣ ಸ್ವಾತ್ಮಾನುಭವೀ| ತುಕಾ ಮ್ಹಣ್ಹೇ ಪದವೀ ಜ್ಯಾಚೀ ತ್ಯಾಲಾ||೪|| '''ಭಾವಾರ್ಥ''': ಯಾರ ಮನಸ್ಸು ನಿರ್ಮಲವಾದ ಗಂಗೆಯ ನೀರಿನಂತಿರುವ ಅವರ ಹತ್ತಿರ ಭಗವಂತನು ಇರುತ್ತಾನೆ. ಅವನ ಅನನ್ಯ ಭಕ್ತಿಭಾವದಿಂದ, {{center|೧೦೫}}<noinclude></noinclude> i6ljj7q095k33r7j83y690dmuwmwsaw ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬ 4 120710 322631 322135 2026-05-26T11:10:55Z Anzx-ooo 3060 /* ಪಠ್ಯಕ್ರಮ */ 322631 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== {| class="wikitable" ! Wikipedia User Name !! Assigned pages |- |Vikas shetty14 || |- |Hemanth .03 || |- |Viveka B G || |- |Reema Jalihal || |- |Shyam 2808 || |- |Nihar Chakravarti || |- |vyangyeah || |- |Vaishnu Pilar || |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] dbiu3rdcnu01q9unrrxby567qtaom9z 322632 322631 2026-05-26T11:13:59Z Anzx-ooo 3060 /* ವಿಕಿಡಾಟ */ 322632 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== {| class="wikitable" ! Wikipedia User Name !! Assigned pages |- |Vikas shetty14 || |- |Hemanth .03 || |- |Viveka B G || |- |Reema Jalihal || |- |Shyam 2808 || |- |Nihar Chakravarti || |- |vyangyeah || |- |Vaishnu Pilar || |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] e58mmtf6p8tpw10gaxna1mnj66w2fxw 322633 322632 2026-05-26T11:32:15Z Anzx-ooo 3060 /* ವಾರ ೨ */ 322633 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== {| class="wikitable" ! Wikipedia User Name !! Assigned pages |- |Vikas shetty14 || |- |Hemanth .03 || |- |Viveka B G || |- |Reema Jalihal || |- |Shyam 2808 || |- |Nihar Chakravarti || |- |vyangyeah || |- |Vaishnu Pilar || |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] 7m5goyfwwv1h9x61pv958fjhe0yxrix