ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.4 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:ಕವಿರಾಜ ಮಾರ್ಗಂ.pdf/೫ 104 16236 322844 277236 2026-05-27T02:15:50Z Pragathi. BH 7585 /* Validated */ 322844 proofread-page text/x-wiki <noinclude><pagequality level="4" user="Pragathi. BH" /></noinclude>{{center|}}'''ಅಧ್ಯಕ್ಷರ ಮಾತು'''{{center|}} ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್‌ ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು. ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. ಕನ್ನಡದ ಮೇರು ಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಕಷ್ಟಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೆಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣ ಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. {{center|}}ಸಿರಿಗನ್ನಡಂ ಗೆಲ್ಲೆ ! ದಿನಾಂಕ ೧೬.೧೨.೨೦೧೦ {{Right|}}ಎಲ್.ಎಸ್. ಶೇಷಗಿರಿ ರಾವ್ ಅಧ್ಯಕ್ಷ ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ<noinclude></noinclude> aymt73wwjxsd2c9jqvudvnp3pfb5rea 322845 322844 2026-05-27T02:16:47Z Pragathi. BH 7585 322845 proofread-page text/x-wiki <noinclude><pagequality level="4" user="Pragathi. BH" /></noinclude>{{center|}}'''ಅಧ್ಯಕ್ಷರ ಮಾತು'''{{center|}} ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್‌ ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು. ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. ಕನ್ನಡದ ಮೇರು ಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಕಷ್ಟಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೆಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣ ಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. {{center|ಸಿರಿಗನ್ನಡಂ ಗೆಲ್ಲೆ !}} ದಿನಾಂಕ ೧೬.೧೨.೨೦೧೦ {{Right|ಎಲ್.ಎಸ್. ಶೇಷಗಿರಿ ರಾವ್}} {{Right|ಅಧ್ಯಕ್ಷ}} {{Right|ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ}}<noinclude></noinclude> l39r8ultw90sdnmm70w5llgpel3tlu0 322846 322845 2026-05-27T02:17:34Z Pragathi. BH 7585 322846 proofread-page text/x-wiki <noinclude><pagequality level="4" user="Pragathi. BH" /></noinclude>{{center|}}'''ಅಧ್ಯಕ್ಷರ ಮಾತು'''{{center|}} ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್‌ ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು. ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. ಕನ್ನಡದ ಮೇರು ಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಕಷ್ಟಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೆಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣ ಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. {{center|ಸಿರಿಗನ್ನಡಂ ಗೆಲ್ಲೆ !}} ದಿನಾಂಕ ೧೬.೧೨.೨೦೧೦ {{Right|ಎಲ್.ಎಸ್. ಶೇಷಗಿರಿ ರಾವ್}} {{Right|ಅಧ್ಯಕ್ಷ}} {{rh|center=|left=ದಿನಾಂಕ ೧೬.೧೨.೨೦೧೦|right=ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ}}<noinclude></noinclude> j9rwqeozsv2k4yhmz37erg1sqyolrms 322847 322846 2026-05-27T02:17:53Z Pragathi. BH 7585 322847 proofread-page text/x-wiki <noinclude><pagequality level="4" user="Pragathi. BH" /></noinclude>{{center|}}'''ಅಧ್ಯಕ್ಷರ ಮಾತು'''{{center|}} ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಮೇರುಕೃತಿಗಳನ್ನು ಪುನರ್‌ ಮುದ್ರಣ ಮಾಡಲು ಒಂದು ಯೋಜನೆಯನ್ನು ಕೈಗೊಂಡಿತು. ಕೃತಿಗಳ ಆಯ್ಕೆಗಾಗಿ ಸರ್ಕಾರವು ಒಂದು ಸಮಿತಿಯನ್ನು ರಚಿಸಿತು. ಈ ಮಹತ್ವದ ಯೋಜನೆಯ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಯಿತು. ಈ ಯೋಜನೆಯ ಮಹತ್ವವನ್ನು ನಾನು ವಿವರಿಸುವ ಅಗತ್ಯವಿಲ್ಲ. ಕನ್ನಡದ ಶ್ರೇಷ್ಠ ಕೃತಿಗಳನ್ನು ಸುಲಭ ಬೆಲೆಗೆ ಕನ್ನಡಿಗರ ಕೈಗಳಲ್ಲಿರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಲವು ಯೋಜನೆಗಳನ್ನು ಕೈಗೊಂಡಿರುವುದಕ್ಕಾಗಿ ಸರ್ಕಾರವನ್ನೂ ಇಲಾಖೆಯನ್ನೂ ಹೃತ್ತೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡ ಸಂಸ್ಕೃತಿಗೆ ಈ ಯೋಜನೆಗಳು ಮಹತ್ವದ ಕೊಡುಗೆಯನ್ನು ನೀಡುತ್ತವೆ. ಕನ್ನಡದ ಮೇರು ಕೃತಿಗಳನ್ನು ಆರಿಸುವುದು ಸುಲಭದ ಕೆಲಸವಲ್ಲ. ಇಂತಹ ಆಯ್ಕೆಯಲ್ಲಿ ಬೇರೆ ಬೇರೆ ಅಭಿಪ್ರಾಯಗಳಿಗೆ ಸಾಧಾರವಾಗಿಯೇ ಅವಕಾಶವಿರುತ್ತದೆ. ಕನ್ನಡ ನಾಡಿನ ಶ್ರೇಷ್ಠ ಸಾಹಿತಿಗಳು ಈ ಸಮಿತಿಯ ಸದಸ್ಯರಾಗಿದ್ದದ್ದು ಸುದೈವದ ಸಂಗತಿ. ಕೃತಿಗಳನ್ನು ಚರ್ಚಿಸಿ ಮಹತ್ವದ ನಿರ್ಧಾರಕ್ಕೆ ಬಂದ ಸಮಿತಿಯು ಕಷ್ಟಸಾಧ್ಯವಾದ ಕಾರ್ಯವನ್ನು ಸಾಧಿಸಿದೆ. ಇದಕ್ಕಾಗಿ ನಾನು ಸಮಿತಿಯ ಎಲ್ಲ ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಈ ಕಾರ್ಯದ ನಿರ್ವಹಣೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೆಶಕರಾದ ಶ್ರೀ ಮನು ಬಳಿಗಾರ್ ಅವರು ನೆರವಾಗಿದ್ದಾರೆ. ಅವರ ಮತ್ತು ಅವರ ಸಿಬ್ಬಂದಿಯವರ ಅಮೂಲ್ಯ ಸಹಕಾರಕ್ಕೆ ನಾನು ಕೃತಜ್ಞ ಕನ್ನಡ ನಾಡಿನ ಮನೆಮನೆಗಳಲ್ಲಿ ಸಾಹಿತ್ಯದ ಮಂಗಳ ದೀಪದ ಬೆಳಕನ್ನು ಹರಡುವ ಈ ಯೋಜನೆಯ ಪೂರ್ಣ ಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ. {{center|ಸಿರಿಗನ್ನಡಂ ಗೆಲ್ಲೆ !}} {{Right|ಎಲ್.ಎಸ್. ಶೇಷಗಿರಿ ರಾವ್}} {{Right|ಅಧ್ಯಕ್ಷ}} {{rh|center=|left=ದಿನಾಂಕ ೧೬.೧೨.೨೦೧೦|right=ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ}}<noinclude></noinclude> sgukztmdqmv4twe0w4c5k2eqasvu0rv ಪುಟ:ಕವಿರಾಜ ಮಾರ್ಗಂ.pdf/೧೬ 104 16247 322848 322490 2026-05-27T02:20:18Z Pragathi. BH 7585 322848 proofread-page text/x-wiki <noinclude><pagequality level="3" user="Pragathi. BH" /></noinclude>ಶ್ರೀವಿಜಯಕೃತ {{centerbig|ಕವಿರಾಜಮಾರ್ಗಂ}}<noinclude></noinclude> 4wy07316q3qj86vhw3ydfe8izaoruex 322849 322848 2026-05-27T02:21:06Z Pragathi. BH 7585 322849 proofread-page text/x-wiki <noinclude><pagequality level="3" user="Pragathi. BH" /></noinclude> {{center|ಶ್ರೀವಿಜಯಕೃತ}} {{center|ಕವಿರಾಜಮಾರ್ಗಂ}}<noinclude></noinclude> gwd02gy3e9ob9qr2ldd87x66e503d0p ಪುಟ:ಕವಿರಾಜ ಮಾರ್ಗಂ.pdf/೨೬ 104 16257 322856 322553 2026-05-27T02:53:49Z Shreesha Sharma 7840 /* Proofread */ 322856 proofread-page text/x-wiki <noinclude><pagequality level="3" user="Shreesha Sharma" /></noinclude> {{rh|center=|left=೧೦|right=ಕವಿರಾಜಮಾರ್ಗಂ}} ಇಟ್ಟುಕೊಂಡರೂ, ತನ್ನನ್ನು ವಿಷ್ಣುವಿಗೆ ಹೋಲಿಸಿಕೊಂಡು ಆತ್ಮಪ್ರಶಂಸೆ ಮಾಡಿಕೊಂಡಿರುವನೆಂದು ಊಹಿಸುವುದೂ ಸಾಧ್ಯವಿಲ್ಲ. ಮೊದಲ ಮೂರು ಪದ್ಯಗಳಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಗೋಚರವಾಗುತ್ತದೆ : ಎರಡನೆಯ ಸ್ತೋತ್ರ ಪದ್ಯದಲ್ಲಿ, ವೀರನಾರಾಯಣನಪ್ಪ ಅತಿಶಯಧವಳಂ ನಮಗೆ ಈಗ ಪ್ರತಾಪೋದಯಮಂ" ಎಂಬ ವಾಕ್ಯದಲ್ಲಿನ ಬಹುವಚನದ ಸ್ವಾರ್ಥಕ ಸರ್ವನಾಮವೂ,ಮೂರನೆಯದಾದ ಸರಸ್ವತೀಸ್ತುತಿ ಪದ್ಯದಲ್ಲಿನ “ಸರಸ್ವತಿ ನೆಲೆಗೊಳ್ ಮನ್ಮಾನಸದೊಳ್" (ನನ್ನ ಮನಸ್ಸಿನಲ್ಲಿ ನೆಲೆಸಲಿ ಎಂಬ ಏಕವಚನ ಸರ್ವನಾಮವೂ ಸ್ಪಷ್ಟವಾಗಿ ಭಿನ್ನವ್ಯಕ್ತಿಗಳನ್ನು ಸೂಚಿಸುತ್ತಿವೆ. ಮೊದಲೆರಡು ಪದ್ಯಗಳಲ್ಲಿ ವಿಷ್ಣು ಕಲ್ಪನಾದನೃಪತುಂಗನು 'ನಮಗೆ' (ಎಂದರೆ, ತನಗೆ + ನೃಪತುಂಗ ಸಭೆಯ ಶೋತೃಗಳಿಗೆ ಅಥವಾ ವಾಚಕರಿಗೆ) ಪ್ರತಾಪೋದಯವನ್ನು ಕೊಡಲಿ ಎಂದು ಪ್ರಾರ್ಥಿಸಿ, ಮುಂದಿನ ಪದ್ಯದಲ್ಲಿ ನನ್ನ ಮನಸ್ಸಿನಲ್ಲಿ ಸರಸ್ವತಿ 'ನೆಲಸಿರಲಿ' ಎಂದು ಗ್ರಂಥಕರ್ತನು ಪ್ರಾರ್ಥಿಸಿದ್ದಾನೆ. ಗ್ರಂಥಾರಂಭದ ಮೂರು ಪದ್ಯಗಳಲ್ಲಿ ಆಶ್ರಯದಾತನಾದ ವಿಷ್ಣುಭಕ್ತ ನೃಪತುಂಗ ಮತ್ತು (ಗ್ರಂಥದ ಜೈನಧರ್ಮಪರವಾದ ಸಂದರ್ಭಗಳಿಂದಲೂ ಸೂಚಿತವಾಗುವಂತೆ) ಜೈನಧರ್ಮಿಯನಾದ ಆಶ್ರಿತಕವಿ-ಇವರಿಬ್ಬರ ಸಂಬಂಧದ ಸೂಚನೆ ವಿಚಾರದೃಷ್ಟಿಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. {{gap}}ಗ್ರಂಥದ ಉದ್ದಕ್ಕೂ ನೃಪತುಂಗಪರವಾದ ಉಕ್ತಿಗಳು ವಿಪುಲಸಂಖ್ಯೆ ಯಲ್ಲಿ ಮೇಲಿಂದ ಮೇಲೆ ಕಣ್ಣಿಗೆ ಬೀಳುತ್ತವ. ಕೆಲವು ಉದಾಹರಣೆಗಳು: {{gap}}(i)ನರಲೋಕಚಂದ್ರಮತದಿಂ, ಅತಿಶಯಧವಳೋಕ್ತಕ್ರಮದ, ನೃಪತುಂಗದೇವ ಮತದಿಂ, ಇತ್ಯಾದಿ ಇಂತಹ ಹಲವಾರು ಹೇಳಿಕೆಗಳಿವೆ. ಕಾವ್ಯಶಾಸ್ತ್ರ ವಿಚಾರದಲ್ಲಿ ನೃಪತುಂಗನಿಗೆ ಸಮ್ಮತವಾದ ಮಾರ್ಗವೊಂದು ಇದ್ದಿತು ಎಂದು ಇವುಗಳಿಂದ ಸಿದ್ಧವಾಗುತ್ತದೆಯೇ ಹೊರತು, ಇವುಗಳ ಆಧಾರದ ಮೇಲೆ ನೃಪತುಂಗನೇ ಕರ್ತೃ ಎಂದು ತೀರ್ಮಾನಿಸಲಾಗುವುದಿಲ್ಲ. (ii) ಆದರೆ, 'ಭಾವಿಸಿ ಬೆಸಸಿದನ್ ಅಖಿಳಧರಾವಲ್ಲಭಂ ಅಮೋಗವರ್ಷ ನೃಪೇಂದ್ರಂ', 'ಎಂದನತಿಶಯಧವಳಂ, 'ಮಹಾನೃಪತುಂಗದೇವನಾದರದೊಳ ಪೇಳ್ ಮಾರ್ಗ ಗತಿ' ಎಂಬ ಉಕ್ತಿಗಳು ನೃಪತುಂಗ ಪಕ್ಷದವರಿಗೆ ಸಹಾಯವಾಗುವ ಪ್ರಮಾಣಗಳು ನೃಪತುಂಗನೇ ಕರ್ತೃವಾಗಿದ್ದಲ್ಲಿ ಉತ್ತಮಪುರುಷದಲ್ಲಿ ಹೇಳದೆ ಪ್ರಥಮ ಪುರುಷದಲ್ಲಿ ಏಕೆ ಹೇಳಿದ್ದಾನೆ ಎಂದು ಆಕ್ಷೇಪಿಸಬಹುದು. ಇದಕ್ಕೆ ಉತ್ತಮಪುರುಷಾರ್ಥದಲ್ಲಿ ಪ್ರಥಮಪುರುಷ ಪ್ರಯೋಗಮಾಡುವ ಸಂಪ್ರದಾಯವುಂಟು ಎಂಬ ಸಮಾಧಾನವನ್ನೂ ಹೇಳಬಹುದು(iii) ಆದರೆ, ಒಂದೇ ಪದ್ಯದ ಒಂದೇ ಸಂದರ್ಭದಲ್ಲಿ ಪ್ರಥಮ ಪುರುಷ<noinclude></noinclude> fq9oz7rj9tjw3tvdf6njbjbgzw34dvd 322858 322856 2026-05-27T02:56:53Z Shreelatha.Halemane 7642 /* Validated */ 322858 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೦|right=ಕವಿರಾಜಮಾರ್ಗಂ}} ಇಟ್ಟುಕೊಂಡರೂ, ತನ್ನನ್ನು ವಿಷ್ಣುವಿಗೆ ಹೋಲಿಸಿಕೊಂಡು ಆತ್ಮಪ್ರಶಂಸೆ ಮಾಡಿಕೊಂಡಿರುವನೆಂದು ಊಹಿಸುವುದೂ ಸಾಧ್ಯವಿಲ್ಲ. ಮೊದಲ ಮೂರು ಪದ್ಯಗಳಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಗೋಚರವಾಗುತ್ತದೆ : ಎರಡನೆಯ ಸ್ತೋತ್ರ ಪದ್ಯದಲ್ಲಿ, ವೀರನಾರಾಯಣನಪ್ಪ ಅತಿಶಯಧವಳಂ ನಮಗೆ ಈಗ ಪ್ರತಾಪೋದಯಮಂ" ಎಂಬ ವಾಕ್ಯದಲ್ಲಿನ ಬಹುವಚನದ ಸ್ವಾರ್ಥಕ ಸರ್ವನಾಮವೂ,ಮೂರನೆಯದಾದ ಸರಸ್ವತೀಸ್ತುತಿ ಪದ್ಯದಲ್ಲಿನ “ಸರಸ್ವತಿ ನೆಲೆಗೊಳ್ ಮನ್ಮಾನಸದೊಳ್" (ನನ್ನ ಮನಸ್ಸಿನಲ್ಲಿ ನೆಲೆಸಲಿ ಎಂಬ ಏಕವಚನ ಸರ್ವನಾಮವೂ ಸ್ಪಷ್ಟವಾಗಿ ಭಿನ್ನವ್ಯಕ್ತಿಗಳನ್ನು ಸೂಚಿಸುತ್ತಿವೆ. ಮೊದಲೆರಡು ಪದ್ಯಗಳಲ್ಲಿ ವಿಷ್ಣು ಕಲ್ಪನಾದನೃಪತುಂಗನು 'ನಮಗೆ' (ಎಂದರೆ, ತನಗೆ + ನೃಪತುಂಗ ಸಭೆಯ ಶೋತೃಗಳಿಗೆ ಅಥವಾ ವಾಚಕರಿಗೆ) ಪ್ರತಾಪೋದಯವನ್ನು ಕೊಡಲಿ ಎಂದು ಪ್ರಾರ್ಥಿಸಿ, ಮುಂದಿನ ಪದ್ಯದಲ್ಲಿ ನನ್ನ ಮನಸ್ಸಿನಲ್ಲಿ ಸರಸ್ವತಿ 'ನೆಲಸಿರಲಿ' ಎಂದು ಗ್ರಂಥಕರ್ತನು ಪ್ರಾರ್ಥಿಸಿದ್ದಾನೆ. ಗ್ರಂಥಾರಂಭದ ಮೂರು ಪದ್ಯಗಳಲ್ಲಿ ಆಶ್ರಯದಾತನಾದ ವಿಷ್ಣುಭಕ್ತ ನೃಪತುಂಗ ಮತ್ತು (ಗ್ರಂಥದ ಜೈನಧರ್ಮಪರವಾದ ಸಂದರ್ಭಗಳಿಂದಲೂ ಸೂಚಿತವಾಗುವಂತೆ) ಜೈನಧರ್ಮಿಯನಾದ ಆಶ್ರಿತಕವಿ-ಇವರಿಬ್ಬರ ಸಂಬಂಧದ ಸೂಚನೆ ವಿಚಾರದೃಷ್ಟಿಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. {{gap}}ಗ್ರಂಥದ ಉದ್ದಕ್ಕೂ ನೃಪತುಂಗಪರವಾದ ಉಕ್ತಿಗಳು ವಿಪುಲಸಂಖ್ಯೆಯಲ್ಲಿ ಮೇಲಿಂದ ಮೇಲೆ ಕಣ್ಣಿಗೆ ಬೀಳುತ್ತವ. ಕೆಲವು ಉದಾಹರಣೆಗಳು: {{gap}}(i)ನರಲೋಕಚಂದ್ರಮತದಿಂ, ಅತಿಶಯಧವಳೋಕ್ತಕ್ರಮದ, ನೃಪತುಂಗದೇವ ಮತದಿಂ, ಇತ್ಯಾದಿ ಇಂತಹ ಹಲವಾರು ಹೇಳಿಕೆಗಳಿವೆ. ಕಾವ್ಯಶಾಸ್ತ್ರ ವಿಚಾರದಲ್ಲಿ ನೃಪತುಂಗನಿಗೆ ಸಮ್ಮತವಾದ ಮಾರ್ಗವೊಂದು ಇದ್ದಿತು ಎಂದು ಇವುಗಳಿಂದ ಸಿದ್ಧವಾಗುತ್ತದೆಯೇ ಹೊರತು, ಇವುಗಳ ಆಧಾರದ ಮೇಲೆ ನೃಪತುಂಗನೇ ಕರ್ತೃ ಎಂದು ತೀರ್ಮಾನಿಸಲಾಗುವುದಿಲ್ಲ. (ii) ಆದರೆ, 'ಭಾವಿಸಿ ಬೆಸಸಿದನ್ ಅಖಿಳಧರಾವಲ್ಲಭಂ ಅಮೋಗವರ್ಷ ನೃಪೇಂದ್ರಂ', 'ಎಂದನತಿಶಯಧವಳಂ, 'ಮಹಾನೃಪತುಂಗದೇವನಾದರದೊಳ ಪೇಳ್ ಮಾರ್ಗ ಗತಿ' ಎಂಬ ಉಕ್ತಿಗಳು ನೃಪತುಂಗ ಪಕ್ಷದವರಿಗೆ ಸಹಾಯವಾಗುವ ಪ್ರಮಾಣಗಳು ನೃಪತುಂಗನೇ ಕರ್ತೃವಾಗಿದ್ದಲ್ಲಿ ಉತ್ತಮಪುರುಷದಲ್ಲಿ ಹೇಳದೆ ಪ್ರಥಮ ಪುರುಷದಲ್ಲಿ ಏಕೆ ಹೇಳಿದ್ದಾನೆ ಎಂದು ಆಕ್ಷೇಪಿಸಬಹುದು. ಇದಕ್ಕೆ ಉತ್ತಮಪುರುಷಾರ್ಥದಲ್ಲಿ ಪ್ರಥಮಪುರುಷ ಪ್ರಯೋಗಮಾಡುವ ಸಂಪ್ರದಾಯವುಂಟು ಎಂಬ ಸಮಾಧಾನವನ್ನೂ ಹೇಳಬಹುದು(iii) ಆದರೆ, ಒಂದೇ ಪದ್ಯದ ಒಂದೇ ಸಂದರ್ಭದಲ್ಲಿ ಪ್ರಥಮ ಪುರುಷ<noinclude></noinclude> kvm9h589ldxzgnz4fr7cde2xqaz3bkt ಪುಟ:ಕವಿರಾಜ ಮಾರ್ಗಂ.pdf/೨೭ 104 16258 322857 157005 2026-05-27T02:54:39Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 322857 proofread-page text/x-wiki <noinclude><pagequality level="1" user="Shreesha Sharma" /></noinclude>ಪೀಠಿಕೆ ಪ್ರಯೋಗಗಳೊಂದಿಗೆಯೇ ಉತ್ತಮಪುರುಷಪ್ರಯೋಗಗಳೂ ಒಡಗೂಡಿ ಹಣೆದುಕೊಂಡಿರುವುದಕ್ಕೆ ಸಮಾಧಾನ ಹೇಳುವುದು ಕಷ್ಟ “ಸವಿಶೇಷಗುಣಮ ನತಿಶಯಧವಳೋಕ್ತಿ ಕ್ರಮದಿನ ಪುವಂ ತದ್ಭವದೊಳ್" (II೫೫) ಎಂಬೀ ಉಕ್ತಿಯನ್ನು ಗಮನಿಸಿದ ಕೆ.ಬಿ. ಪಾಠಕರು-ಕೃತಿಕಾರನು ನೃಪತುಂಗನಿಗಿಂತ ಭಿನ್ನನು ಎಂಬ ಅಭಿಪ್ರಾಯ ಇದರಿಂದ ಉಂಟಾಗುತ್ತದೆ ; ಆದರೆ ಇದು ಒಂದೇ ಒಂದಾದ ನಿದರ್ಶನ. ನೃಪತುಂಗನೇ ಗ್ರಂಥಕರ್ತನೆಂಬ (ನಮ್ಮ ಸಿದ್ಧಾಂತಕ್ಕೆ ವಿರೋಧವಾಗದಂತೆ ಇದಕ್ಕೆ ತೃಪ್ತಿಕರವಾದ ವಿವರಣೆ ಕೊಡುವುದು ಸುಲಭಸಾಧ್ಯವಲ್ಲ" ಎಂದು ತಮ್ಮ ಪ್ರಾಮಾಣಿಕವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ಎತ್ತಿತೋರಿಸಿದಂಥ ಇನ್ನೂ ಕೆಲವು ಉಕ್ತಿಗಳಿದ್ದುದು ಅವರ ಗಮನಕ್ಕೆ ಬಂದಿದ್ದರೆ, ನೃಪತುಂಗನು ಕೃತಿಕಾರನಲ್ಲ ಎಂಬ ತೀರ್ಮಾನಕ್ಕೆ ಬರುತ್ತಿದ್ದರೇನೋ ಅವರು ! “ಶ್ರೀ ನೃಪತುಂಗ ವಿಚಾರಕ್ರಮ ಮಾರ್ಗಗಣನೆಯೊಳ್ ಪರಮಾಲಂಕಾರಂ ಶಬ್ದಾರ್ಥಭೇದದಿಂದೆರಡಕ್ಕುಂ' ಎಂದು ಹೇಳಿ (II-೨), ಒಡನೆಯೇ “ಶಬ್ದಾಳಂಕಾರನ್ನಿಶ್ಚಿತಮಕ್ಕೆ ಪೇಟ್ಟಿ ಮಾಯೊಳನ್ನಾ" (II-೩) ಎಂದು ಹೇಳುವುದು ಸೋಜಿಗವಾಗಿ ಕಾಣುವುದಿಲ್ಲವ? “ಬೆಸಸಿದನ್ ಧರಾವಲ್ಲಭಂ' (III-೧) ಮತ್ತು 'ಅನುಕ್ರಮೋಕ್ತಿಯ ಪೇಟೈಂ' (III-೫) ಎಂಬ ಪ್ರಥಮ-ಉತ್ತಮ ಪುರುಷ ಪ್ರಯೋಗಗಳೂ ಅದೇ ಪ್ರಕಾರದವು. ಇಂಥ ಉಕ್ತಿಗಳಲ್ಲಿ ಕಂಡುಬರುವ ವಿರೋಧಾ ಭಾಸವನ್ನು, 'ಗ್ರಂಥಕರ್ತ ನೃಪತುಂಗನಿಗಿಂತ ಭಿನ್ನನು' ಎಂಬ ವಿವರಣೆಯಿಂದ ಮಾತ್ರ ಪರಿಹರಿಸಲು ಸಾಧ್ಯ. ೩. ಮಂಗಳ ಶ್ಲೋಕಗಳಿಂದಲೂ ಶಾಸನಾಧಾರಗಳಿಂದಲೂ ನೃಪತುಂಗನು ವೈದಿಕ ಮತಾವಲಂಬಿ ಎಂಬುದು ಸ್ಪಷ್ಟ ಇತರ ಕೆಲವು ಲಕ್ಷ್ಯಪದ್ಯಗಳಿಂದಲೂ, ಉದಾರಶೀಲನೂ ಉದಾತ್ತ ಸ್ವಭಾವದವನೂ ಸಾಮಂತಚೂಡಾಮಣಿಯೂ ಆದ ನೃಪತುಂಗ ಚಕ್ರವರ್ತಿಯ ವ್ಯಕ್ತಿಚಿತ್ರ ಕಣ್ಣಿಗೆ ಕಟ್ಟಿ ನಿಲ್ಲುತ್ತದೆ. ನೃಪತುಂಗನ ಚಿತ್ರಣವಾದಮೇಲೆ ಕಡೆಯಲ್ಲಿ, ಸುಮಾರು ೧೫ ಪದ್ಯಗಳಲ್ಲಿ (III-೨೧೮ ರಿಂದ ೨೩೧) ನೃಪತುಂಗ ಸಭಾಸದನ ವ್ಯಕ್ತಿತ್ವದ ಚಿತ್ರಣ ಸವಿವರವಾಗಿ ನಿರೂಪಿತವಾಗಿದೆ. ನೃಪತುಂಗನೇ ಗ್ರಂಥಕರ್ತನಾಗಿದ್ದ ಪಕ್ಷದಲ್ಲಿ, ಯಾವ ಸ್ಪಷ್ಟ ಕಾರಣವೂ ಇಲ್ಲದ ತನ್ನ ಸಭಾಸದನನ್ನು ವರ್ಣಿಸುವ ಅಗತ್ಯವೇನಿತ್ತು? ಈ ಸಭಾಸದನ ಗುಣಗಳ ವರ್ಣನೆಯಲ್ಲಿ ಬರುವ 'ಮಹಾಪುರಷವ್ರತನಿಶ್ಚಿತ' ಎಂಬ ವಿಶೇಷಣ ಗಮನಾರ್ಹ (III-೨೩೩), ಪಂಪಭಾರತ, ವಡ್ಡಾರಾಧನೆ, ನೇಮಿಚಂದ್ರನ ಲೀಲಾವತಿ, ಮುಂತಾದ ಕಾವ್ಯಗಳಲ್ಲಿಯೂ 'ಪುರುಷವ್ರತ' ಎಂಬ ಮಾತು 'ಸ್ತ್ರೀಮಾತ್ರ ಪರಿಗ್ರಹತ್ಯಾಗ' ನಿಷ್ಠವಾದ<noinclude></noinclude> fq0pay38nqz9ytwidjg7m02ytqotv6i 322859 322857 2026-05-27T02:57:32Z Shreesha Sharma 7840 /* Proofread */ 322859 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಪೀಠಿಕೆ|right=೧೧}} ಪ್ರಯೋಗಗಳೊಂದಿಗೆಯೇ ಉತ್ತಮಪುರುಷಪ್ರಯೋಗಗಳೂ ಒಡಗೂಡಿ ಹಣೆದುಕೊಂಡಿರುವುದಕ್ಕೆ ಸಮಾಧಾನ ಹೇಳುವುದು ಕಷ್ಟ “ಸವಿಶೇಷಗುಣಮ ನತಿಶಯಧವಳೋಕ್ತಿ ಕ್ರಮದಿನ ಪುವಂ ತದ್ಭವದೊಳ್" (II೫೫) ಎಂಬೀ ಉಕ್ತಿಯನ್ನು ಗಮನಿಸಿದ ಕೆ.ಬಿ. ಪಾಠಕರು-ಕೃತಿಕಾರನು ನೃಪತುಂಗನಿಗಿಂತ ಭಿನ್ನನು ಎಂಬ ಅಭಿಪ್ರಾಯ ಇದರಿಂದ ಉಂಟಾಗುತ್ತದೆ ; ಆದರೆ ಇದು ಒಂದೇ ಒಂದಾದ ನಿದರ್ಶನ. ನೃಪತುಂಗನೇ ಗ್ರಂಥಕರ್ತನೆಂಬ (ನಮ್ಮ ಸಿದ್ಧಾಂತಕ್ಕೆ ವಿರೋಧವಾಗದಂತೆ ಇದಕ್ಕೆ ತೃಪ್ತಿಕರವಾದ ವಿವರಣೆ ಕೊಡುವುದು ಸುಲಭಸಾಧ್ಯವಲ್ಲ" ಎಂದು ತಮ್ಮ ಪ್ರಾಮಾಣಿಕವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ಎತ್ತಿತೋರಿಸಿದಂಥ ಇನ್ನೂ ಕೆಲವು ಉಕ್ತಿಗಳಿದ್ದುದು ಅವರ ಗಮನಕ್ಕೆ ಬಂದಿದ್ದರೆ, ನೃಪತುಂಗನು ಕೃತಿಕಾರನಲ್ಲ ಎಂಬ ತೀರ್ಮಾನಕ್ಕೆ ಬರುತ್ತಿದ್ದರೇನೋ ಅವರು ! “ಶ್ರೀ ನೃಪತುಂಗ ವಿಚಾರಕ್ರಮ ಮಾರ್ಗಗಣನೆಯೊಳ್ ಪರಮಾಲಂಕಾರಂ ಶಬ್ದಾರ್ಥಭೇದದಿಂದೆರಡಕ್ಕುಂ' ಎಂದು ಹೇಳಿ (II-೨), ಒಡನೆಯೇ “ಶಬ್ದಾಳಂಕಾರನ್ನಿಶ್ಚಿತಮಕ್ಕೆ ಪೇಟ್ಟಿ ಮಾಯೊಳನ್ನಾ" (II-೩) ಎಂದು ಹೇಳುವುದು ಸೋಜಿಗವಾಗಿ ಕಾಣುವುದಿಲ್ಲವ? “ಬೆಸಸಿದನ್ ಧರಾವಲ್ಲಭಂ' (III-೧) ಮತ್ತು 'ಅನುಕ್ರಮೋಕ್ತಿಯ ಪೇಟೈಂ' (III-೫) ಎಂಬ ಪ್ರಥಮ-ಉತ್ತಮ ಪುರುಷ ಪ್ರಯೋಗಗಳೂ ಅದೇ ಪ್ರಕಾರದವು. ಇಂಥ ಉಕ್ತಿಗಳಲ್ಲಿ ಕಂಡುಬರುವ ವಿರೋಧಾ ಭಾಸವನ್ನು, 'ಗ್ರಂಥಕರ್ತ ನೃಪತುಂಗನಿಗಿಂತ ಭಿನ್ನನು' ಎಂಬ ವಿವರಣೆಯಿಂದ ಮಾತ್ರ ಪರಿಹರಿಸಲು ಸಾಧ್ಯ. {{gap}}೩. ಮಂಗಳ ಶ್ಲೋಕಗಳಿಂದಲೂ ಶಾಸನಾಧಾರಗಳಿಂದಲೂ ನೃಪತುಂಗನು ವೈದಿಕ ಮತಾವಲಂಬಿ ಎಂಬುದು ಸ್ಪಷ್ಟ ಇತರ ಕೆಲವು ಲಕ್ಷ್ಯಪದ್ಯಗಳಿಂದಲೂ, ಉದಾರಶೀಲನೂ ಉದಾತ್ತ ಸ್ವಭಾವದವನೂ ಸಾಮಂತಚೂಡಾಮಣಿಯೂ ಆದ ನೃಪತುಂಗ ಚಕ್ರವರ್ತಿಯ ವ್ಯಕ್ತಿಚಿತ್ರ ಕಣ್ಣಿಗೆ ಕಟ್ಟಿ ನಿಲ್ಲುತ್ತದೆ. ನೃಪತುಂಗನ ಚಿತ್ರಣವಾದಮೇಲೆ ಕಡೆಯಲ್ಲಿ, ಸುಮಾರು ೧೫ ಪದ್ಯಗಳಲ್ಲಿ (III-೨೧೮ ರಿಂದ ೨೩೧) ನೃಪತುಂಗ ಸಭಾಸದನ ವ್ಯಕ್ತಿತ್ವದ ಚಿತ್ರಣ ಸವಿವರವಾಗಿ ನಿರೂಪಿತವಾಗಿದೆ. ನೃಪತುಂಗನೇ ಗ್ರಂಥಕರ್ತನಾಗಿದ್ದ ಪಕ್ಷದಲ್ಲಿ, ಯಾವ ಸ್ಪಷ್ಟ ಕಾರಣವೂ ಇಲ್ಲದ ತನ್ನ ಸಭಾಸದನನ್ನು ವರ್ಣಿಸುವ ಅಗತ್ಯವೇನಿತ್ತು? ಈ ಸಭಾಸದನ ಗುಣಗಳ ವರ್ಣನೆಯಲ್ಲಿ ಬರುವ 'ಮಹಾಪುರಷವ್ರತನಿಶ್ಚಿತ' ಎಂಬ ವಿಶೇಷಣ ಗಮನಾರ್ಹ (III-೨೩೩), ಪಂಪಭಾರತ, ವಡ್ಡಾರಾಧನೆ, ನೇಮಿಚಂದ್ರನ ಲೀಲಾವತಿ, ಮುಂತಾದ ಕಾವ್ಯಗಳಲ್ಲಿಯೂ 'ಪುರುಷವ್ರತ' ಎಂಬ ಮಾತು 'ಸ್ತ್ರೀಮಾತ್ರ ಪರಿಗ್ರಹತ್ಯಾಗ' ನಿಷ್ಠವಾದ<noinclude></noinclude> dqexs6m0dbdx8ajps5xp0o3sgrcxedy 322862 322859 2026-05-27T03:03:38Z Shreelatha.Halemane 7642 /* Validated */ 322862 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಪೀಠಿಕೆ|right=೧೧}} ಪ್ರಯೋಗಗಳೊಂದಿಗೆಯೇ ಉತ್ತಮಪುರುಷಪ್ರಯೋಗಗಳೂ ಒಡಗೂಡಿ ಹಣೆದುಕೊಂಡಿರುವುದಕ್ಕೆ ಸಮಾಧಾನ ಹೇಳುವುದು ಕಷ್ಟ “ಸವಿಶೇಷಗುಣಮ ನತಿಶಯಧವಳೋಕ್ತಿ ಕ್ರಮದಿನ ಪುವಂ ತದ್ಭವದೊಳ್" (II೫೫) ಎಂಬೀ ಉಕ್ತಿಯನ್ನು ಗಮನಿಸಿದ ಕೆ.ಬಿ. ಪಾಠಕರು-ಕೃತಿಕಾರನು ನೃಪತುಂಗನಿಗಿಂತ ಭಿನ್ನನು ಎಂಬ ಅಭಿಪ್ರಾಯ ಇದರಿಂದ ಉಂಟಾಗುತ್ತದೆ ; ಆದರೆ ಇದು ಒಂದೇ ಒಂದಾದ ನಿದರ್ಶನ. ನೃಪತುಂಗನೇ ಗ್ರಂಥಕರ್ತನೆಂಬ (ನಮ್ಮ ಸಿದ್ಧಾಂತಕ್ಕೆ ವಿರೋಧವಾಗದಂತೆ ಇದಕ್ಕೆ ತೃಪ್ತಿಕರವಾದ ವಿವರಣೆ ಕೊಡುವುದು ಸುಲಭಸಾಧ್ಯವಲ್ಲ" ಎಂದು ತಮ್ಮ ಪ್ರಾಮಾಣಿಕವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ಎತ್ತಿತೋರಿಸಿದಂಥ ಇನ್ನೂ ಕೆಲವು ಉಕ್ತಿಗಳಿದ್ದುದು ಅವರ ಗಮನಕ್ಕೆ ಬಂದಿದ್ದರೆ, ನೃಪತುಂಗನು ಕೃತಿಕಾರನಲ್ಲ ಎಂಬ ತೀರ್ಮಾನಕ್ಕೆ ಬರುತ್ತಿದ್ದರೇನೋ ಅವರು ! “ಶ್ರೀ ನೃಪತುಂಗ ವಿಚಾರಕ್ರಮ ಮಾರ್ಗಗಣನೆಯೊಳ್ ಪರಮಾಲಂಕಾರಂ ಶಬ್ದಾರ್ಥಭೇದದಿಂದೆರಡಕ್ಕುಂ' ಎಂದು ಹೇಳಿ (II-೨), ಒಡನೆಯೇ “ಶಬ್ದಾಳಂಕಾರನ್ನಿಶ್ಚಿತಮಕ್ಕೆ ಪೇಟ್ಟಿ ಮಾಯೊಳನ್ನಾ" (II-೩) ಎಂದು ಹೇಳುವುದು ಸೋಜಿಗವಾಗಿ ಕಾಣುವುದಿಲ್ಲವ? “ಬೆಸಸಿದನ್ ಧರಾವಲ್ಲಭಂ' (III-೧) ಮತ್ತು 'ಅನುಕ್ರಮೋಕ್ತಿಯ ಪೇಟೈಂ' (III-೫) ಎಂಬ ಪ್ರಥಮ-ಉತ್ತಮ ಪುರುಷ ಪ್ರಯೋಗಗಳೂ ಅದೇ ಪ್ರಕಾರದವು. ಇಂಥ ಉಕ್ತಿಗಳಲ್ಲಿ ಕಂಡುಬರುವ ವಿರೋಧಾ ಭಾಸವನ್ನು, 'ಗ್ರಂಥಕರ್ತ ನೃಪತುಂಗನಿಗಿಂತ ಭಿನ್ನನು' ಎಂಬ ವಿವರಣೆಯಿಂದ ಮಾತ್ರ ಪರಿಹರಿಸಲು ಸಾಧ್ಯ. {{gap}}೩. ಮಂಗಳ ಶ್ಲೋಕಗಳಿಂದಲೂ ಶಾಸನಾಧಾರಗಳಿಂದಲೂ ನೃಪತುಂಗನು ವೈದಿಕ ಮತಾವಲಂಬಿ ಎಂಬುದು ಸ್ಪಷ್ಟ ಇತರ ಕೆಲವು ಲಕ್ಷ್ಯಪದ್ಯಗಳಿಂದಲೂ, ಉದಾರಶೀಲನೂ ಉದಾತ್ತ ಸ್ವಭಾವದವನೂ ಸಾಮಂತಚೂಡಾಮಣಿಯೂ ಆದ ನೃಪತುಂಗ ಚಕ್ರವರ್ತಿಯ ವ್ಯಕ್ತಿಚಿತ್ರ ಕಣ್ಣಿಗೆ ಕಟ್ಟಿ ನಿಲ್ಲುತ್ತದೆ. ನೃಪತುಂಗನ ಚಿತ್ರಣವಾದಮೇಲೆ ಕಡೆಯಲ್ಲಿ, ಸುಮಾರು ೧೫ ಪದ್ಯಗಳಲ್ಲಿ (III-೨೧೮ ರಿಂದ ೨೩೧) ನೃಪತುಂಗ ಸಭಾಸದನ ವ್ಯಕ್ತಿತ್ವದ ಚಿತ್ರಣ ಸವಿವರವಾಗಿ ನಿರೂಪಿತವಾಗಿದೆ. ನೃಪತುಂಗನೇ ಗ್ರಂಥಕರ್ತನಾಗಿದ್ದ ಪಕ್ಷದಲ್ಲಿ, ಯಾವ ಸ್ಪಷ್ಟ ಕಾರಣವೂ ಇಲ್ಲದ ತನ್ನ ಸಭಾಸದನನ್ನು ವರ್ಣಿಸುವ ಅಗತ್ಯವೇನಿತ್ತು? ಈ ಸಭಾಸದನ ಗುಣಗಳ ವರ್ಣನೆಯಲ್ಲಿ ಬರುವ 'ಮಹಾಪುರಷವ್ರತನಿಶ್ಚಿತ' ಎಂಬ ವಿಶೇಷಣ ಗಮನಾರ್ಹ (III-೨೩೩), ಪಂಪಭಾರತ, ವಡ್ಡಾರಾಧನೆ, ನೇಮಿಚಂದ್ರನ ಲೀಲಾವತಿ, ಮುಂತಾದ ಕಾವ್ಯಗಳಲ್ಲಿಯೂ 'ಪುರುಷವ್ರತ' ಎಂಬ ಮಾತು 'ಸ್ತ್ರೀಮಾತ್ರ ಪರಿಗ್ರಹತ್ಯಾಗ' ನಿಷ್ಠವಾದ<noinclude></noinclude> 1hjrkpwy1fz1b96w9e56tycbruqjoxz ಪುಟ:ಕವಿರಾಜ ಮಾರ್ಗಂ.pdf/೨೮ 104 16259 322860 157016 2026-05-27T03:01:56Z Shreesha Sharma 7840 /* Proofread */ 322860 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೧೨|right=ಕವಿರಾಜಮಾರ್ಗ}} ನೈಷ್ಠಿಕ ಬ್ರಹ್ಮಚಯ್ಯ ಎಂಬ ಅರ್ಥದಲ್ಲಿ ಪ್ರಯುಕ್ತವಾಗಿದೆ. (ಸ್ತ್ರೀಸಂಬಂಧವಾಗಿ, ಪಾತಿವ್ರತ್ಯ ಎಂಬ ಅರ್ಥಕೊಡುವ ಪ್ರಯೋಗಗಳೂ ಉಂಟು. ನೃಪತುಂಗನು ವಿವಾಹಿತನಾಗಿದ್ದು, ಇಬ್ಬರು ಹೆಣ್ಣುಮಕ್ಕಳ ಹಾಗೂ ಒಬ್ಬ ಪುತ್ರನ ತಂದೆ ಎಂಬುದು ಇತಿಹಾಸಪ್ರಸಿದ್ಧ ಸಂಗತಿ. 'ಪುರುಷವ್ರತ' ಎಂಬ ಪದ ಜಿನಸಮಯದ ರಾಜ್‌ಯದಲ್ಲಿ ಮಾತ್ರ ಪ್ರಚುರ ವಾಗಿರುವ ಪದವೆಂದು ಗ್ರಂಥಾಧಾರಗಳಿಂದಲೂ ಶಾಸನಾಧಾರಗಳಿಂದಲೂ ಕಂಡುಬರುತ್ತದೆ. ಹೇಗೆ ವಿಚಾರ ಮಾಡಿದರೂ, ಕವಿರಾಜಮಾರ್ಗದಲ್ಲಿ ವೈದಿಕಮತಾನುಯಾಯಿಯೂ ಆಶ್ರಯದಾಯನೂ ಆದ ನೃಪತುಂಗನ ವ್ಯಕ್ತಿತ್ವಚಿತ್ರವೂ ಜೈನಮತಾನುಯಾಯಿಯಾದ ಆಶ್ರಿತ ಸಭಾಸದನ ಚಿತ್ರವೂ ಒಟ್ಟಿಗೆ ಬಂದಿರುವುದು, ಆ 'ಮಹಾಪುರುಷವ್ರತ ನಿಶ್ಚಿತ'ನಾದ ಸಭಾಸದನ ಕವಿರಾಜಮಾರ್ಗಕಾರ ಎಂಬ ಅನುಮಾನಕ್ಕೆ ಕಾರಣವಾಗುತ್ತದೆ. {{gap}}೪.ನೃಪತುಂಗ ಪಕ್ಷದವರು ತಮ್ಮ ವಾದಕ್ಕೆ ಒಂದು ಬಲವಾದ ಪ್ರಮಾಣ ಎಂದು ಉಪಯೋಗಿಸಿಕೊಳ್ಳುವ ಮಾತು ಎಂದರೆ. ಪ್ರತಿ ಪರಿಚ್ಛೇದಾಂತ ಗದ್ಯದಲ್ಲಿ ಕಾಣಿಸಿಕೊಳ್ಳುವ "ಪರಮಶ್ರೀ ನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗ ದೊಳ್" ಎಂಬುದು. ಅವರು ಅನುಮತ ಎಂಬ ಪದಕ್ಕೆ ವಿರಚಿತ ಎಂದು ಅರ್ಥನಿರ್ವಚನಮಾಡುವುದಕ್ಕೆ ನಿಘಂಟು, ಶಬ್ದಶಾಸ್ತ್ರ, ಮುಂತಾದ ಯಾವ ಶಾಸ್ತ್ರದಲ್ಲಿಯೂ ಆಧಾರವಿಲ್ಲ, ಗ್ರಂಥದಲ್ಲಿ ಹಲವು ಕಡೆ ನೃಪತುಂಗದೇವಮತ, ಕ್ರಮ, ಮಾರ್ಗ ಎಂಬ ಮಾತುಗಳ ಪ್ರಯೋಗವಾಗಿದೆ. 'ಅನುಮತ' ಪದಕ್ಕೆ ಅನುಮೋದನೆ, ಒಪ್ಪಿಗೆ, ಎಂಬ ಅರ್ಥವನ್ನೇ ಹೇಳಬೇಕು. ದಂಡಿ ಭಾಮಹರನ್ನು ಅನುಸರಿಸಿರುವ ಕವಿರಾಜಮಾರ್ಗದಲ್ಲಿ ಎಲ್ಲೆಲ್ಲಿ ಸ್ವತಂತ್ರ ವಿಚಾರಸರಣಿ ೨. 'ಪುರುಷವತ' ಪದದ ಅರ್ಥನಿರ್ಣಯ ವಿಚಾರಕ್ಕೆ ಇದೇ ಲೇಖಕನ 'ಪುರುಷವ್ರತ ಮತ್ತು ಕವಿರಾಜಮಾರ್ಗ' ಎಂಬ ಲೇಖನವನ್ನು ನೋಡಿ: ಕನ್ನಡ ಸಾಹಿತ್ಯ ಪರಿಷತ್‌ ಪತ್ರಿಕೆ, ಸಂ. 89-9. OFF. ಈಚೆಗೆ ಡಾ|| ಎ.ಎನ್. ಉಪಾಧ್ಯೆ ಅವರು ಪರಿಷತ್ಪತ್ರಿಕೆಯಲ್ಲಿ ಒಂದು ಲೇಖನವನ್ನು ಬರೆದಿದ್ದಾರೆ. (ಸ೦.೫೦-೧), ಅದರಲ್ಲಿ ಬಂಧುವರ್ಮನ (ಕ್ರಿ.ಶ. ೧೨೦0) 'ಜೀವಸಂಬೋಧನ' ಹಾಗೂ ಜಟಾಸಿಂಹನಂದಿಯ 'ವಾರಾಂಗ ಚರಿತ'ದ ಪ್ರಯೋಗಗಳ ಆಧಾರದ ಮೇಲೆ, ಪುರುಷವ್ರತ ಎಂದರೆ - ಸ್ತ್ರೀಯರ ಸಂದರ್ಭದಲ್ಲಿ ಪಾತಿವ್ರತ್ಯ ಮತ್ತು ಪುರುಷರ ಸಂಬಂಧದಲ್ಲಿ 'ಸ್ವದಾರ ಸಂತೋಷ ಎಂಬ ಅರ್ಥಗಳನ್ನು ನಿಷ್ಕರ್ಷಿಸಿದ್ದಾರೆ. ಇದು ಸರಿಯಾದರೂ, ಪಂಪಭಾರತದಲ್ಲಿ ಭೀಷ್ಮನ ಸಂಬಂಧವಾಗಿ ಈ ಮಾತು ಪ್ರಯೋಗವಾಗಿರುವುದರಿಂದ, ಅದಕ್ಕೆ ನೈಷ್ಠಿಕ ಬ್ರಹ್ಮಚರ್ಯ' ಎಂದೂ ಅರ್ಥ ಇದೇ 'ಮಹಾಪುರುಷವ್ರತ'.<noinclude></noinclude> by1o6koh4eqz001v854ibbjtur8wqwu 322865 322860 2026-05-27T03:06:04Z Shreelatha.Halemane 7642 /* Validated */ 322865 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೨|right=ಕವಿರಾಜಮಾರ್ಗ}} ನೈಷ್ಠಿಕ ಬ್ರಹ್ಮಚಯ್ಯ ಎಂಬ ಅರ್ಥದಲ್ಲಿ ಪ್ರಯುಕ್ತವಾಗಿದೆ. (ಸ್ತ್ರೀಸಂಬಂಧವಾಗಿ, ಪಾತಿವ್ರತ್ಯ ಎಂಬ ಅರ್ಥಕೊಡುವ ಪ್ರಯೋಗಗಳೂ ಉಂಟು. ನೃಪತುಂಗನು ವಿವಾಹಿತನಾಗಿದ್ದು, ಇಬ್ಬರು ಹೆಣ್ಣುಮಕ್ಕಳ ಹಾಗೂ ಒಬ್ಬ ಪುತ್ರನ ತಂದೆ ಎಂಬುದು ಇತಿಹಾಸಪ್ರಸಿದ್ಧ ಸಂಗತಿ. 'ಪುರುಷವ್ರತ' ಎಂಬ ಪದ ಜಿನಸಮಯದ ವಾಗ್ಮಯದಲ್ಲಿ ಮಾತ್ರ ಪ್ರಚುರ ವಾಗಿರುವ ಪದವೆಂದು ಗ್ರಂಥಾಧಾರಗಳಿಂದಲೂ ಶಾಸನಾಧಾರಗಳಿಂದಲೂ ಕಂಡುಬರುತ್ತದೆ. ಹೇಗೆ ವಿಚಾರ ಮಾಡಿದರೂ, ಕವಿರಾಜಮಾರ್ಗದಲ್ಲಿ ವೈದಿಕಮತಾನುಯಾಯಿಯೂ ಆಶ್ರಯದಾಯನೂ ಆದ ನೃಪತುಂಗನ ವ್ಯಕ್ತಿತ್ವಚಿತ್ರವೂ ಜೈನಮತಾನುಯಾಯಿಯಾದ ಆಶ್ರಿತ ಸಭಾಸದನ ಚಿತ್ರವೂ ಒಟ್ಟಿಗೆ ಬಂದಿರುವುದು, ಆ 'ಮಹಾಪುರುಷವ್ರತ ನಿಶ್ಚಿತ'ನಾದ ಸಭಾಸದನ ಕವಿರಾಜಮಾರ್ಗಕಾರ ಎಂಬ ಅನುಮಾನಕ್ಕೆ ಕಾರಣವಾಗುತ್ತದೆ. {{gap}}೪.ನೃಪತುಂಗ ಪಕ್ಷದವರು ತಮ್ಮ ವಾದಕ್ಕೆ ಒಂದು ಬಲವಾದ ಪ್ರಮಾಣ ಎಂದು ಉಪಯೋಗಿಸಿಕೊಳ್ಳುವ ಮಾತು ಎಂದರೆ. ಪ್ರತಿ ಪರಿಚ್ಛೇದಾಂತ ಗದ್ಯದಲ್ಲಿ ಕಾಣಿಸಿಕೊಳ್ಳುವ "ಪರಮಶ್ರೀ ನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗ ದೊಳ್" ಎಂಬುದು. ಅವರು ಅನುಮತ ಎಂಬ ಪದಕ್ಕೆ ವಿರಚಿತ ಎಂದು ಅರ್ಥನಿರ್ವಚನಮಾಡುವುದಕ್ಕೆ ನಿಘಂಟು, ಶಬ್ದಶಾಸ್ತ್ರ, ಮುಂತಾದ ಯಾವ ಶಾಸ್ತ್ರದಲ್ಲಿಯೂ ಆಧಾರವಿಲ್ಲ, ಗ್ರಂಥದಲ್ಲಿ ಹಲವು ಕಡೆ ನೃಪತುಂಗದೇವಮತ, ಕ್ರಮ, ಮಾರ್ಗ ಎಂಬ ಮಾತುಗಳ ಪ್ರಯೋಗವಾಗಿದೆ. 'ಅನುಮತ' ಪದಕ್ಕೆ ಅನುಮೋದನೆ, ಒಪ್ಪಿಗೆ, ಎಂಬ ಅರ್ಥವನ್ನೇ ಹೇಳಬೇಕು. ದಂಡಿ ಭಾಮಹರನ್ನು ಅನುಸರಿಸಿರುವ ಕವಿರಾಜಮಾರ್ಗದಲ್ಲಿ ಎಲ್ಲೆಲ್ಲಿ ಸ್ವತಂತ್ರ ವಿಚಾರಸರಣಿ ———————————————— ೨. 'ಪುರುಷವತ' ಪದದ ಅರ್ಥನಿರ್ಣಯ ವಿಚಾರಕ್ಕೆ ಇದೇ ಲೇಖಕನ 'ಪುರುಷವ್ರತ ಮತ್ತು ಕವಿರಾಜಮಾರ್ಗ' ಎಂಬ ಲೇಖನವನ್ನು ನೋಡಿ: ಕನ್ನಡ ಸಾಹಿತ್ಯ ಪರಿಷತ್‌ ಪತ್ರಿಕೆ, ಸಂ.೫೪-.೧೯೬೯ ಈಚೆಗೆ ಡಾ|| ಎ.ಎನ್. ಉಪಾಧ್ಯೆ ಅವರು ಪರಿಷತ್ಪತ್ರಿಕೆಯಲ್ಲಿ ಒಂದು ಲೇಖನವನ್ನು ಬರೆದಿದ್ದಾರೆ. (ಸ೦.೫೦-೧), ಅದರಲ್ಲಿ ಬಂಧುವರ್ಮನ (ಕ್ರಿ.ಶ. ೧೨೦0) 'ಜೀವಸಂಬೋಧನ' ಹಾಗೂ ಜಟಾಸಿಂಹನಂದಿಯ 'ವಾರಾಂಗ ಚರಿತ'ದ ಪ್ರಯೋಗಗಳ ಆಧಾರದ ಮೇಲೆ, ಪುರುಷವ್ರತ ಎಂದರೆ - ಸ್ತ್ರೀಯರ ಸಂದರ್ಭದಲ್ಲಿ ಪಾತಿವ್ರತ್ಯ ಮತ್ತು ಪುರುಷರ ಸಂಬಂಧದಲ್ಲಿ 'ಸ್ವದಾರ ಸಂತೋಷ ಎಂಬ ಅರ್ಥಗಳನ್ನು ನಿಷ್ಕರ್ಷಿಸಿದ್ದಾರೆ. ಇದು ಸರಿಯಾದರೂ, ಪಂಪಭಾರತದಲ್ಲಿ ಭೀಷ್ಮನ ಸಂಬಂಧವಾಗಿ ಈ ಮಾತು ಪ್ರಯೋಗವಾಗಿರುವುದರಿಂದ, ಅದಕ್ಕೆ ನೈಷ್ಠಿಕ ಬ್ರಹ್ಮಚರ್ಯ' ಎಂದೂ ಅರ್ಥ ಇದೇ 'ಮಹಾಪುರುಷವ್ರತ'.<noinclude></noinclude> m7789l25drm9x2lbp2l21xksz0anzqz ಪುಟ:ಕವಿರಾಜ ಮಾರ್ಗಂ.pdf/೨೯ 104 16260 322863 157027 2026-05-27T03:03:59Z Shreesha Sharma 7840 /* Proofread */ 322863 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಪೀಠಿಕ|right=೧೩}} ಕಂಡುಬರುತ್ತದೆಯೋ ಅಲ್ಲೆಲ್ಲ ಸಾಧಾರಣವಾಗಿ ನೃಪತುಂಗದೇವಮತ, ಕ್ರಮ, ಮುಂತಾದ ಪದಗಳು ಪ್ರಯೋಗವಾಗಿರುವುದು ಗಮನಾರ್ಹ. ಕವಿರಾಜಮಾರ್ಗದಲ್ಲಿನ ಚರ್ಚಾಸ್ಪರ್ದ ವಿಷಯಗಳು ನೃಪತುಂಗನ ವಿದ್ವತ್ಸಭೆಯಲ್ಲಿ ಚರ್ಚೆಯಾಗುತ್ತಿದ್ದುವು, ವಿಷಯ ಒಂದು ತೀರ್ಮಾನಕ್ಕೆ ಬಂದಾಗ ನೃಪತುಂಗನು ತನ್ನ ಅನುಮೋದನೆಯನ್ನು ಸೂಚಿಸುತ್ತಿದ್ದನು ಎಂದು ತಿಳಿಯಬೇಕಾಗಿದೆ. ಆದ್ದರಿಂದ, 'ನೃಪತುಂಗ ದೇವಾನುಮತಮಪ್ಪ' ಎಂಬ ಮಾತು ನೃಪತುಂಗ ಕರ್ತೃತ್ವವನ್ನು ಸೂಚಿಸುವುದಿಲ್ಲ ಎಂದು ಖಚಿತವಾಗಿ ಹೇಳಬಹುದು. - {{gap}}೫. ಪರಿಚ್ಛೇದಾಂತ ಗದ್ಯವಾಕ್ಯಕ್ಕೆ ಪೂರ್ವಭಾವಿಯಾಗಿ ಬರುವ ಪರಿಚ್ಛೇದಾಂತ ಪದ್ಯಗಳಲ್ಲಿ ಬರುವ ಉಕ್ತಿಗಳು : {{gap}}(i) ಕವಿಪ್ರಕರಂ ಶ್ರೀವಿಜಯ ಪ್ರಭೂತಮಂ ಇದಂ ಕೈ ಕೊಳ್ಳುದು..." {{gap}}(ii) “ಶ್ರೀವಿಜಯ ಪ್ರಭೂತಮುದಮಂ ತನಗಾಗಿಸಿದೊಂ ಕವೀಶ್ವರಂ..." {{gap}}(iii) ಪರಮ ಶ್ರೀವಿಜಯಪ್ರಭೂತಿಜಯಶಂ... ನೆಲೆಗೊಳ್ಳೆ ಆ ಚಂದ್ರತಾ ರಂಬರಂ" {{gap}}'ಶ್ರೀವಿಜಯ' ಎಂಬ ಇಲ್ಲಿನ ಮಾತು ಗ್ರಂಥಕರ್ತನನ್ನು ಸೂಚಿಸುತ್ತದೆ ಎಂಬುದಕ್ಕೆ ಬಾಹ್ಯ ಪ್ರಮಾಣಗಳ ಸಮರ್ಥನೆಯಿದೆ. 'ಶ್ರೀವಿಜಯ ಪ್ರಭೂತ' ಮತ್ತು 'ಶ್ರೀವಿಜಯ ಪ್ರಭೂತಿ' ಎಂಬ ಮಾತುಗಳಿಗೆ ಕ್ರಮವಾಗಿ 'ಶ್ರೀವಿಜಯನಿಂದ ಉಂಟಾದದ್ದು – ಉತ್ಪನ್ನವಾದದ್ದು - ಜನಿಸಿದ್ದು - ನಿರ್ಮಾಣವಾದದ್ದು ಹಾಗೂ ಶ್ರೀವಿಜಯಮೂಲವಾದದ್ದು ಎಂಬ ಅರ್ಥಗಳು ಪ್ರಸಿದ್ಧವಾದವು. ಬೇರೆಯ ರೀತಿಯಲ್ಲಿ ಅರ್ಥಮಾಡುವುದು ಸಾಧ್ಯವಿಲ್ಲ. ಆದ್ದರಿಂದ, ಈ ಪ್ರಮಾಣಗಳು ನೃಪತುಂಗ ಪಕ್ಷದವರಿಗೆ ವಿರುದ್ಧ ಸಾಕ್ಷ್ಯಗಳಾಗಿ ಪರಿಣಮಿಸುತ್ತವೆ. ಈ ವಿರೋಧವನ್ನು ನಿವಾರಿಸುವುದಕ್ಕಾಗಿ, ಒಬ್ಬೊಬ್ಬ ವಿದ್ವಾಂಸರು ಒಂದೊಂದು ರೀತಿಯಲ್ಲಿ ವಾದಮಾಡಿದ್ದಾರೆ: {{gap}}(i) ನಾ. ಶ್ರೀ. ರಾಜಪುರೋಹಿತರು ಭಗವದ್ಗೀತೆಯ ಶ್ಲೋಕವೊಂದರಲ್ಲಿ (೧೮-೭೮) ಉಕ್ತವಾದ 'ಶ್ರೀ. ವಿಜಯ, ಭೂತಿ' ಎಂಬ ಮಾತುಗಳನ್ನು ಸ್ಮರಿಸಿಕೊಂಡು, ನೃಪತುಂಗನಿಗೆ 'ಶ್ರೀವಿಜಯ' ಎಂಬ ಬಿರುದಿದ್ದಿತೆಂದೂ, ಅದನ್ನೇ ನೃಪತುಂಗನು ಇಲ್ಲಿ ಹೇಳಿಕೊಂಡಿರುವನೆಂದೂ ವಾದಿಸಿದ್ದಾರೆ. ಈ ವಾದವನ್ನು ಆರ್. ೩. ಕನ್ನಡ ಸಾಹಿತ್ಯ ಪರಿಷತ್‌ ಪತ್ರಿಕೆ, ಜುಲೈ ೧೯೨೩, ೪.ಕವಿಚರಿತೆ, ಸಂಪುಟ ೧; ತಿದ್ದಿದ ಮುದ್ರಣ, ೧೯೨೪;ಅವತರಣಿಕೆ, ಪು.೨೦<noinclude></noinclude> cisokcpx7z2q7u6pfls37x7if1qng9i 322866 322863 2026-05-27T03:07:34Z Shreelatha.Halemane 7642 /* Validated */ 322866 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಪೀಠಿಕೆ|right=೧೩}} ಕಂಡುಬರುತ್ತದೆಯೋ ಅಲ್ಲೆಲ್ಲ ಸಾಧಾರಣವಾಗಿ ನೃಪತುಂಗದೇವಮತ, ಕ್ರಮ, ಮುಂತಾದ ಪದಗಳು ಪ್ರಯೋಗವಾಗಿರುವುದು ಗಮನಾರ್ಹ. ಕವಿರಾಜಮಾರ್ಗದಲ್ಲಿನ ಚರ್ಚಾಸ್ಪರ್ದ ವಿಷಯಗಳು ನೃಪತುಂಗನ ವಿದ್ವತ್ಸಭೆಯಲ್ಲಿ ಚರ್ಚೆಯಾಗುತ್ತಿದ್ದುವು, ವಿಷಯ ಒಂದು ತೀರ್ಮಾನಕ್ಕೆ ಬಂದಾಗ ನೃಪತುಂಗನು ತನ್ನ ಅನುಮೋದನೆಯನ್ನು ಸೂಚಿಸುತ್ತಿದ್ದನು ಎಂದು ತಿಳಿಯಬೇಕಾಗಿದೆ. ಆದ್ದರಿಂದ, 'ನೃಪತುಂಗ ದೇವಾನುಮತಮಪ್ಪ' ಎಂಬ ಮಾತು ನೃಪತುಂಗ ಕರ್ತೃತ್ವವನ್ನು ಸೂಚಿಸುವುದಿಲ್ಲ ಎಂದು ಖಚಿತವಾಗಿ ಹೇಳಬಹುದು. {{gap}}೫. ಪರಿಚ್ಛೇದಾಂತ ಗದ್ಯವಾಕ್ಯಕ್ಕೆ ಪೂರ್ವಭಾವಿಯಾಗಿ ಬರುವ ಪರಿಚ್ಛೇದಾಂತ ಪದ್ಯಗಳಲ್ಲಿ ಬರುವ ಉಕ್ತಿಗಳು : {{gap}}(i) ಕವಿಪ್ರಕರಂ ಶ್ರೀವಿಜಯ ಪ್ರಭೂತಮಂ ಇದಂ ಕೈ ಕೊಳ್ವುದು..." {{gap}}(ii) “ಶ್ರೀವಿಜಯ ಪ್ರಭೂತಮುದಮಂ ತನಗಾಗಿಸಿದೊಂ ಕವೀಶ್ವರಂ..." {{gap}}(iii) ಪರಮ ಶ್ರೀವಿಜಯಪ್ರಭೂತಿಜಯಶಂ... ನೆಲೆಗೊಳ್ಗೆ ಆ ಚಂದ್ರತಾ ರಂಬರಂ" {{gap}}'ಶ್ರೀವಿಜಯ' ಎಂಬ ಇಲ್ಲಿನ ಮಾತು ಗ್ರಂಥಕರ್ತನನ್ನು ಸೂಚಿಸುತ್ತದೆ ಎಂಬುದಕ್ಕೆ ಬಾಹ್ಯ ಪ್ರಮಾಣಗಳ ಸಮರ್ಥನೆಯಿದೆ. 'ಶ್ರೀವಿಜಯ ಪ್ರಭೂತ' ಮತ್ತು 'ಶ್ರೀವಿಜಯ ಪ್ರಭೂತಿ' ಎಂಬ ಮಾತುಗಳಿಗೆ ಕ್ರಮವಾಗಿ 'ಶ್ರೀವಿಜಯನಿಂದ ಉಂಟಾದದ್ದು – ಉತ್ಪನ್ನವಾದದ್ದು - ಜನಿಸಿದ್ದು - ನಿರ್ಮಾಣವಾದದ್ದು ಹಾಗೂ ಶ್ರೀವಿಜಯಮೂಲವಾದದ್ದು ಎಂಬ ಅರ್ಥಗಳು ಪ್ರಸಿದ್ಧವಾದವು. ಬೇರೆಯ ರೀತಿಯಲ್ಲಿ ಅರ್ಥಮಾಡುವುದು ಸಾಧ್ಯವಿಲ್ಲ. ಆದ್ದರಿಂದ, ಈ ಪ್ರಮಾಣಗಳು ನೃಪತುಂಗ ಪಕ್ಷದವರಿಗೆ ವಿರುದ್ಧ ಸಾಕ್ಷ್ಯಗಳಾಗಿ ಪರಿಣಮಿಸುತ್ತವೆ. ಈ ವಿರೋಧವನ್ನು ನಿವಾರಿಸುವುದಕ್ಕಾಗಿ, ಒಬ್ಬೊಬ್ಬ ವಿದ್ವಾಂಸರು ಒಂದೊಂದು ರೀತಿಯಲ್ಲಿ ವಾದಮಾಡಿದ್ದಾರೆ: {{gap}}(i) ನಾ. ಶ್ರೀ. ರಾಜಪುರೋಹಿತರು ಭಗವದ್ಗೀತೆಯ ಶ್ಲೋಕವೊಂದರಲ್ಲಿ (೧೮-೭೮) ಉಕ್ತವಾದ 'ಶ್ರೀ. ವಿಜಯ, ಭೂತಿ' ಎಂಬ ಮಾತುಗಳನ್ನು ಸ್ಮರಿಸಿಕೊಂಡು, ನೃಪತುಂಗನಿಗೆ 'ಶ್ರೀವಿಜಯ' ಎಂಬ ಬಿರುದಿದ್ದಿತೆಂದೂ, ಅದನ್ನೇ ನೃಪತುಂಗನು ಇಲ್ಲಿ ಹೇಳಿಕೊಂಡಿರುವನೆಂದೂ ವಾದಿಸಿದ್ದಾರೆ. ಈ ವಾದವನ್ನು ಆರ್. ———————— ೩. ಕನ್ನಡ ಸಾಹಿತ್ಯ ಪರಿಷತ್‌ ಪತ್ರಿಕೆ, ಜುಲೈ ೧೯೨೩, ೪.ಕವಿಚರಿತೆ, ಸಂಪುಟ ೧; ತಿದ್ದಿದ ಮುದ್ರಣ, ೧೯೨೪;ಅವತರಣಿಕೆ, ಪು.೨೦<noinclude></noinclude> g4g6rukwkpyazdbkf5rp07bz2kbvzed ಪುಟ:ಕವಿರಾಜ ಮಾರ್ಗಂ.pdf/೩೦ 104 16261 322864 157039 2026-05-27T03:05:07Z Shreesha Sharma 7840 /* Proofread */ 322864 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೧೪|right=ಕವಿರಾಜಮಾರ್ಗ}} ನರಸಿಂಹಾಚಾರರು ಸಮರ್ಥವಾಗಿ ಖಂಡಿಸಿದ್ದಾರೆ. ಈ ವಾದದಲ್ಲಿ ಸ್ವಲ್ಪವೂ ಹುರುಳಿಲ್ಲ. ಶಾಸನಗಳಲ್ಲಿ ದೊರೆಯುವ ನೃಪತುಂಗಪರವಾದ ಬಿರುದುಗಳು ಕವಿರಾಜಮಾರ್ಗದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಕಾಣಸಿಕ್ಕುತ್ತವೆ. ಆದರೆ, ಶ್ರೀವಿಜಯ ಎಂಬುದು ಅಷ್ಟು ಪ್ರಸಿದ್ಧವಾದ ಬಿರುದಾಗಿದ್ದಲ್ಲಿ, ಅದು ಯಾವೊಂದು ಶಾಸನದಲ್ಲಿಯೇ ಆಗಲಿ ಗ್ರಂಥದಲ್ಲಿನ ಇತರ ಬಿರುದುಗಳಂತೆ ಬೇರ ಬೇರ ಗ್ರಂಥಸಂದರ್ಭಗಳಲ್ಲಿಯೇ ಆಗಲಿ ಏಕೆ ಕಾಣಬರುವುದಿಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ. {{gap}}(ii) 'ಶ್ರೀವಿಜಯ' ಇದು ನೃಪತುಂಗನ ಕೃತಿಮುದ್ರಿಕೆ ಎಂಬುದು ಇನ್ನೊಂದು ವಾದ. ಇದನ್ನು ಎತ್ತಿರುವವರು ಡಾ|| ಕೆ. ಕೃಷ್ಣಮೂರ್ತಿಗಳು. ಈ ವಾದದ ಸಾರಾಂಶ : ಭಾರವಿ ತನ್ನ ಕಾವ್ಯ 'ಕಿರಾತಾರ್ಜುನೀಯ'ದಲ್ಲಿ 'ಲಕ್ಷ್ಮೀ ಎಂಬ ಮುದ್ರೆಯನ್ನು ಉಪಯೋಗಿಸಿದ್ದಾನೆ; ಈ ಕಾವ್ಯದ ಕೆಲವು ಶ್ಲೋಕಗಳನ್ನು ಕವಿರಾಜಮಾರ್ಗಕಾರನು ನಿದರ್ಶನಾಲಂಕಾರಕ್ಕೆ ಕೊಡುವ ಲಕ್ಷ್ಮ ಪದ್ಯಗಳಲ್ಲಿ ಭಾವಾನುವಾದ ಮಾಡಿದ್ದಾನೆ; ಅವನ ಮಾದರಿಯನ್ನು ಅನುಸರಿಸಿ, 'ಶ್ರೀವಿಜಯ ಎಂಬ ಮುದ್ರೆಯನ್ನು ಇಟ್ಟುಕೊಳ್ಳುವುದರಲ್ಲಿ ಮಾತ್ರ ಭಾರವಿಯನ್ನು ಅನುಸರಿಸಿ, 'ನೃಪತುಂಗದೇವಕೃತ' ಎಂದು ಹೇಳದ, 'ನೃಪತುಂಗದೇವಾನುಮತಮಪ್ಪ' ಎಂದು ಏಕೆ ಹೇಳಿದೆ? ಈ ಪ್ರಶ್ನೆಗೆ ಸಮಂಜಸವಾಗಿ ಉತ್ತರ ಹೇಳುವುದು ಸಾಧ್ಯವಿಲ್ಲ. {{gap}}(iii) 'ಶ್ರೀವಿಜಯ' ಎಂಬುದು ನೃಪತುಂಗನ ಆಚಾರ್ಯಮುದ್ರ ಎಂಬುದು ಇನ್ನೊಂದು ಅತ್ಯಂತ ಈಚಿನ ವಾದ. ದುರ್ಗಸಿಂಹನು (ಕ್ರಿ.ಶ. ೧೦೩೧) ಒಂದು ಪದ್ಯದಲ್ಲಿ “ಶ್ರೀವಿಜಯರ ಕವಿಮಾರ್ಗಂ" ಎಂದು ಹೊಗಳಿದ್ದಾನೆ. ಜಿನಸೇನಾಚಾರರು ನೃಪತುಂಗನ ಗುರು ಎಂದು ಬಹುಮಂದಿ ವಿದ್ವಾಂಸರು ಒಪ್ಪಿರುವರಪ್ಪ, ಶ್ರೀವಿಜಯ ಜಿನಸೇನರ ಅಂಕಿತವೆಂದೂ, ಅವರು 'ಕವಿಮಾರ್ಗ'ವನ್ನು ರಚಿಸಿದ್ದರೆಂದೂ ದುರ್ಗಸಿಂಹನ ಹೇಳಿಕೆಗೆ ಉಪಪತ್ತಿಯನ್ನು ಕಲ್ಪಿಸಿ, ಶ್ರೀವಿಜಯನ (ಎಂದರೆ ಜಿನಸೇನರ) ಮೂಲಕೃತಿ “ಕವಿಮಾರ್ಗ'ವನ್ನು ರಚಿಸಿರುವನು-ಎಂಬುದು ಈ ವಾದದ ಸಾರಾಂಶ ; 'ಶ್ರೀವಿಜಯ ಪ್ರಭೂತ' ಇತ್ಯಾದಿ ಮಾತುಗಳಿಂದ ಅರ್ಥವಾಗುವ 'ಶ್ರೀವಿಜಯನಿಂದ ಹುಟ್ಟಿದ್ದು' ಎನ್ನುವುದಕ್ಕೆ 'ಶ್ರೀವಿಜಯ (ಜನಸೇನ) ರಚಿತ ಕವಿಮಾರ್ಗ ಎಂದು ಸಾಮಂಜಸ್ಯವನ್ನು ಕಲ್ಪಿಸಲಾಗಿದೆ. "ಶ್ರೀವಿಜಯ ಪ್ರಭೂತ {{gap}}೫. ಶ್ರೀ ಭೀಮರಾವ್‌ ಚಿಟಗುಪ್ಪಿಯವರು ತಮ್ಮ 'ಕವಿರಾಜಮಾರ್ಗ ಪ್ರಶಸ್ತಿ' ಎಂಬ ಗ್ರಂಥದಲ್ಲಿ (ಮನ್ವಂತರ ಪ್ರಕಾಶನ, ಧಾರವಾಡ೧೯೭೨) ಈ ವಾದವನ್ನು ವಿಸ್ತಾರವಾಗಿ ಪ್ರತಿಪಾದಿಸಿದ್ದಾರೆ. (ಪು. ೧೩೫-೧೪೮).<noinclude></noinclude> 2lazara07x3586iyqt5bv2ec7hh017v 322868 322864 2026-05-27T03:08:48Z Shreelatha.Halemane 7642 /* Validated */ 322868 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೪|right=ಕವಿರಾಜಮಾರ್ಗ}} ನರಸಿಂಹಾಚಾರರು ಸಮರ್ಥವಾಗಿ ಖಂಡಿಸಿದ್ದಾರೆ. ಈ ವಾದದಲ್ಲಿ ಸ್ವಲ್ಪವೂ ಹುರುಳಿಲ್ಲ. ಶಾಸನಗಳಲ್ಲಿ ದೊರೆಯುವ ನೃಪತುಂಗಪರವಾದ ಬಿರುದುಗಳು ಕವಿರಾಜಮಾರ್ಗದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಕಾಣಸಿಕ್ಕುತ್ತವೆ. ಆದರೆ, ಶ್ರೀವಿಜಯ ಎಂಬುದು ಅಷ್ಟು ಪ್ರಸಿದ್ಧವಾದ ಬಿರುದಾಗಿದ್ದಲ್ಲಿ, ಅದು ಯಾವೊಂದು ಶಾಸನದಲ್ಲಿಯೇ ಆಗಲಿ ಗ್ರಂಥದಲ್ಲಿನ ಇತರ ಬಿರುದುಗಳಂತೆ ಬೇರೆ ಬೇರೆ ಗ್ರಂಥಸಂದರ್ಭಗಳಲ್ಲಿಯೇ ಆಗಲಿ ಏಕೆ ಕಾಣಬರುವುದಿಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ. {{gap}}(ii) 'ಶ್ರೀವಿಜಯ' ಇದು ನೃಪತುಂಗನ ಕೃತಿಮುದ್ರಿಕೆ ಎಂಬುದು ಇನ್ನೊಂದು ವಾದ. ಇದನ್ನು ಎತ್ತಿರುವವರು ಡಾ|| ಕೆ. ಕೃಷ್ಣಮೂರ್ತಿಗಳು. ಈ ವಾದದ ಸಾರಾಂಶ : ಭಾರವಿ ತನ್ನ ಕಾವ್ಯ 'ಕಿರಾತಾರ್ಜುನೀಯ'ದಲ್ಲಿ 'ಲಕ್ಷ್ಮೀ ಎಂಬ ಮುದ್ರೆಯನ್ನು ಉಪಯೋಗಿಸಿದ್ದಾನೆ; ಈ ಕಾವ್ಯದ ಕೆಲವು ಶ್ಲೋಕಗಳನ್ನು ಕವಿರಾಜಮಾರ್ಗಕಾರನು ನಿದರ್ಶನಾಲಂಕಾರಕ್ಕೆ ಕೊಡುವ ಲಕ್ಷ್ಮ ಪದ್ಯಗಳಲ್ಲಿ ಭಾವಾನುವಾದ ಮಾಡಿದ್ದಾನೆ; ಅವನ ಮಾದರಿಯನ್ನು ಅನುಸರಿಸಿ, 'ಶ್ರೀವಿಜಯ ಎಂಬ ಮುದ್ರೆಯನ್ನು ಇಟ್ಟುಕೊಳ್ಳುವುದರಲ್ಲಿ ಮಾತ್ರ ಭಾರವಿಯನ್ನು ಅನುಸರಿಸಿ, 'ನೃಪತುಂಗದೇವಕೃತ' ಎಂದು ಹೇಳದ, 'ನೃಪತುಂಗದೇವಾನುಮತಮಪ್ಪ' ಎಂದು ಏಕೆ ಹೇಳಿದೆ? ಈ ಪ್ರಶ್ನೆಗೆ ಸಮಂಜಸವಾಗಿ ಉತ್ತರ ಹೇಳುವುದು ಸಾಧ್ಯವಿಲ್ಲ. {{gap}}(iii) 'ಶ್ರೀವಿಜಯ' ಎಂಬುದು ನೃಪತುಂಗನ ಆಚಾರ್ಯಮುದ್ರ ಎಂಬುದು ಇನ್ನೊಂದು ಅತ್ಯಂತ ಈಚಿನ ವಾದ. ದುರ್ಗಸಿಂಹನು (ಕ್ರಿ.ಶ. ೧೦೩೧) ಒಂದು ಪದ್ಯದಲ್ಲಿ “ಶ್ರೀವಿಜಯರ ಕವಿಮಾರ್ಗಂ" ಎಂದು ಹೊಗಳಿದ್ದಾನೆ. ಜಿನಸೇನಾಚಾರರು ನೃಪತುಂಗನ ಗುರು ಎಂದು ಬಹುಮಂದಿ ವಿದ್ವಾಂಸರು ಒಪ್ಪಿರುವರಪ್ಪ, ಶ್ರೀವಿಜಯ ಜಿನಸೇನರ ಅಂಕಿತವೆಂದೂ, ಅವರು 'ಕವಿಮಾರ್ಗ'ವನ್ನು ರಚಿಸಿದ್ದರೆಂದೂ ದುರ್ಗಸಿಂಹನ ಹೇಳಿಕೆಗೆ ಉಪಪತ್ತಿಯನ್ನು ಕಲ್ಪಿಸಿ, ಶ್ರೀವಿಜಯನ (ಎಂದರೆ ಜಿನಸೇನರ) ಮೂಲಕೃತಿ “ಕವಿಮಾರ್ಗ'ವನ್ನು ರಚಿಸಿರುವನು-ಎಂಬುದು ಈ ವಾದದ ಸಾರಾಂಶ ; 'ಶ್ರೀವಿಜಯ ಪ್ರಭೂತ' ಇತ್ಯಾದಿ ಮಾತುಗಳಿಂದ ಅರ್ಥವಾಗುವ 'ಶ್ರೀವಿಜಯನಿಂದ ಹುಟ್ಟಿದ್ದು' ಎನ್ನುವುದಕ್ಕೆ 'ಶ್ರೀವಿಜಯ (ಜನಸೇನ) ರಚಿತ ಕವಿಮಾರ್ಗ ಎಂದು ಸಾಮಂಜಸ್ಯವನ್ನು ಕಲ್ಪಿಸಲಾಗಿದೆ. "ಶ್ರೀವಿಜಯ ಪ್ರಭೂತ ———————— {{gap}}೫. ಶ್ರೀ ಭೀಮರಾವ್‌ ಚಿಟಗುಪ್ಪಿಯವರು ತಮ್ಮ 'ಕವಿರಾಜಮಾರ್ಗ ಪ್ರಶಸ್ತಿ' ಎಂಬ ಗ್ರಂಥದಲ್ಲಿ (ಮನ್ವಂತರ ಪ್ರಕಾಶನ, ಧಾರವಾಡ೧೯೭೨) ಈ ವಾದವನ್ನು ವಿಸ್ತಾರವಾಗಿ ಪ್ರತಿಪಾದಿಸಿದ್ದಾರೆ. (ಪು. ೧೩೫-೧೪೮).<noinclude></noinclude> s5qxc44tmrjuobl78kn09p7fv0m7epl ಪುಟ:ಕವಿರಾಜ ಮಾರ್ಗಂ.pdf/೩೧ 104 16262 322867 157050 2026-05-27T03:08:38Z Shreesha Sharma 7840 /* Proofread */ 322867 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಪೀಠಿಕ|right=೧೫}} ಮುದಮಂ ತನಗಾಗಿಸಿದೊಂ ಕವೀಶ್ವರಂ' (I-೧೫೫) ಎಂಬ ವಾಕ್ಯದ ಹಾಗೂ ದುರ್ಗಸಿಂಹನ ಹೇಳಿಕೆ, ಇವುಗಳ ಆಧಾರದ ಮೇಲೆ-ಕವೀಶ್ವರನೆಂಬ ಕವಿ 'ಶ್ರೀವಿಜಯ ಕವಿಮಾರ್ಗ'ವನ್ನು ತನ್ನದಾಗಿ ಮಾಡಿಕೊಂಡನು. (ಶ್ರೀವಿಜಯ ಪ್ರಭೂತ ಮುದಮಂ ತನಗಾಗಿಸಿದೊಂ ಕವೀಶ್ವರಂ'), ಎಂದರೆ ಅದರ ಆಧಾರದ ಮೇಲೆ ಕವಿರಾಜಮಾರ್ಗವನ್ನು ರಚಿಸಿ, ಆಶ್ರಯದಾತ ನೃಪತುಂಗನ ಹೆಸರನ್ನೇ ಮುಂದುಮಾಡಿ, ತಾನು ಆತನಿಂದ ಪ್ರಯೋಜನ ಪಡೆದನು ಎಂಬ ಕವೀಶ್ವರಪಕ್ಷವೂ ಇದೆಯಷ್ಟೆ ಕವಿರಾಜಮಾರ್ಗದಲ್ಲಿಯ ಉಕ್ತನಾದ 'ಪರಮ ಶ್ರೀವಿಜಯ* (೧-೩೨) ಎಂಬ ಪೂರ್ವಕವಿಯೇ 'ಕವಿಮಾರ್ಗ'ದ ಕರ್ತ ಎಂಬುದು ಈ ಪಕ್ಷದ ನಿಲುವು, ಇದನ್ನು ಸ್ವಲ್ಪ ವ್ಯತ್ಯಾಸ ಮಾಡಿಕೊಂಡು, ಶ್ರೀವಿಜಯ ಎಂಬ ನಾಮಾಂತರವುಳ್ಳ ಜಿನಸೇನರು 'ಕವಿಮಾರ್ಗ' ಕರ್ತ ಎಂಬುದು ಈ ಪಕ್ಷದ ನಿಲುವು. ಇದನ್ನು ಸ್ವಲ್ಪ ವ್ಯತ್ಯಾಸ ಮಾಡಿಕೊಂಡು, ಶ್ರೀವಿಜಯ ಎಂಬ ನಾಮಾಂತರವುಳ್ಳ ಜಿನಸೇನರು 'ಕವಿಮಾರ್ಗ' ಕರ್ತ ಹಾಗೂ ಅವರ ಹೆಸರನ್ನು ಧರಿಸಿದ ನೃಪತುಂಗನೇ ಕವೀಶ್ವರ ಎಂದು ವಾದಿಸಿ, ಶ್ರೀವಿಜಯ-ಕವೀಶ್ವರ- ನೃಪತುಂಗ ಏಕೈಕ ವ್ಯಕ್ತಿ ಎಂದು ಸಿದ್ಧಾಂತಮಾಡಲಾಗಿದೆ. {{gap}}ಈ ಹೊಸ ವಾದಕ್ಕೆ ಬುಡವೇ ಇಲ್ಲ. ಮಂಗಳ ಶ್ಲೋಕಗಳನ್ನು ನೃಪತುಂಗನು ಬರದಿರಲಾರನೆಂದು ಈ ಹಿಂದೆಯೇ ಹೇಳಿದೆ. ಈ ಪದ್ಯಗಳಲ್ಲಿಯೂ, ನೃಪತುಂಗ ಪ್ರಶಸ್ತಿಯುಳ್ಳ ಬೇರೊಂದು ಪದ್ಯದಲ್ಲಿಯೂ (III-೧೮೦) 'ವೀರ ನಾರಾಯಣ" ಎಂಬ ಅವನ ಬಿರುದು ಉಕ್ತವಾಗಿದೆ. ಈ ಪದ್ಯಗಳು ನೃಪತುಂಗ ಕೃತವಲ್ಲ ಎಂದ ಮೇಲೆ, 'ಕವಿಮಾರ್ಗ'ದ ಪದ್ಯಗಳು ಎನ್ನಬೇಕಾಗುತ್ತದೆ. ನೃಪತುಂಗನಿಗೆ 'ವೀರನಾರಾಯಣ' ಎಂಬ ಬಿರುದು ಸಂದದ್ದು ಕ್ರಿ.ಶ. ೮೪೫-೮೫೦ ರ ಸುಮಾರಿನಲ್ಲಿ ೬.ಈ ಪಕ್ಷದವರ ವಾದ ಬಹಳ ದುರ್ಬಲವಾದದ್ದು, ಆದ್ದರಿಂದ, ಅದನ್ನು ಇಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸುವ ಅಗತ್ಯವಿಲ್ಲ. 'ತನಗಾಗಿಸಿದೊಂ ಕವೀಶ್ವರಂ' ಎಂಬಲ್ಲಿ ಕವೀಶ್ವರನು 'ತನಗಾಗಿಸಿಕೊಂಡನು' ಎಂಬ ಕವೀಶ್ವರ ಪಕ್ಷದವರ ಕ್ರಿಯಾರ್ಥ ಹೊಂದುವುದಿಲ್ಲ. 'ತನಗಾಗಿಸಿದವನು' ಎಂಬ ಕೃಲ್ಲಿಂಗದ ಅರ್ಥ ಹಿಡಿಯಬೇಕು ಎಂಬ ನನ್ನ ಅಭಿಪ್ರಾಯವನ್ನು ಪ್ರಶ್ನಿಸಿ, ಪಾಡಿದಂ / ಪಾಡಿದೊಂ ಎಂಬ ಕಿಟ್ಟೆಲ್ ವ್ಯಾಕರಣದ (ಪು. ೧೩೮) ದೃಷ್ಟಾಂತಗಳನ್ನು ಕೊಟ್ಟು, "ಈ ಬಗೆಯ ಪ್ರಯೋಗದ ಒಂದು ಉದಾಹರಣೆಯನ್ನು ಕೊಟ್ಟಿದ್ದರೆ ಶ್ರೀ ವಿಜಯವಾದಿಗಳ ಈ ಆಗ್ರಹದ ಸೂಚನೆ ವಿಚಾರಾರ್ಹವಾಗುತ್ತಿತ್ತು' ಎಂದು ಶ್ರೀ ಭೀಮರಾವ್‌ ಚಿಟಗುಪ್ಪಿಯವರು ಆಕ್ಷೇಪಿಸಿದ್ದಾರೆ. (ಕವಿರಾಜಮಾರ್ಗ ಪ್ರಶಸ್ತಿ ಪು.೧೧೩). ಕವಿರಾಜಮಾರ್ಗದಲ್ಲಿಯೆ ಅಂತಹ ಪ್ರಯೋಗಗಳು ಇರುವುದನ್ನು ಗಮನಿಸಬಹುದು: “ನಿನ್ನನ್ನನಪ್ಲೊನ್' (i-೧೪೮), 'ವಿಗಳಿತರಾಗನಾವೊಂ' (ii-೧೫೨)<noinclude></noinclude> eaam6l2gl050ik4jsg1amlr7vpqd43f 322870 322867 2026-05-27T03:10:25Z Shreelatha.Halemane 7642 /* Validated */ 322870 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಪೀಠಿಕೆ|right=೧೫}} ಮುದಮಂ ತನಗಾಗಿಸಿದೊಂ ಕವೀಶ್ವರಂ' (I-೧೫೫) ಎಂಬ ವಾಕ್ಯದ ಹಾಗೂ ದುರ್ಗಸಿಂಹನ ಹೇಳಿಕೆ, ಇವುಗಳ ಆಧಾರದ ಮೇಲೆ-ಕವೀಶ್ವರನೆಂಬ ಕವಿ 'ಶ್ರೀವಿಜಯ ಕವಿಮಾರ್ಗ'ವನ್ನು ತನ್ನದಾಗಿ ಮಾಡಿಕೊಂಡನು. (ಶ್ರೀವಿಜಯ ಪ್ರಭೂತ ಮುದಮಂ ತನಗಾಗಿಸಿದೊಂ ಕವೀಶ್ವರಂ'), ಎಂದರೆ ಅದರ ಆಧಾರದ ಮೇಲೆ ಕವಿರಾಜಮಾರ್ಗವನ್ನು ರಚಿಸಿ, ಆಶ್ರಯದಾತ ನೃಪತುಂಗನ ಹೆಸರನ್ನೇ ಮುಂದುಮಾಡಿ, ತಾನು ಆತನಿಂದ ಪ್ರಯೋಜನ ಪಡೆದನು ಎಂಬ ಕವೀಶ್ವರಪಕ್ಷವೂ ಇದೆಯಷ್ಟೆ ಕವಿರಾಜಮಾರ್ಗದಲ್ಲಿಯ ಉಕ್ತನಾದ 'ಪರಮ ಶ್ರೀವಿಜಯ* (೧-೩೨) ಎಂಬ ಪೂರ್ವಕವಿಯೇ 'ಕವಿಮಾರ್ಗ'ದ ಕರ್ತ ಎಂಬುದು ಈ ಪಕ್ಷದ ನಿಲುವು, ಇದನ್ನು ಸ್ವಲ್ಪ ವ್ಯತ್ಯಾಸ ಮಾಡಿಕೊಂಡು, ಶ್ರೀವಿಜಯ ಎಂಬ ನಾಮಾಂತರವುಳ್ಳ ಜಿನಸೇನರು 'ಕವಿಮಾರ್ಗ' ಕರ್ತ ಎಂಬುದು ಈ ಪಕ್ಷದ ನಿಲುವು. ಇದನ್ನು ಸ್ವಲ್ಪ ವ್ಯತ್ಯಾಸ ಮಾಡಿಕೊಂಡು, ಶ್ರೀವಿಜಯ ಎಂಬ ನಾಮಾಂತರವುಳ್ಳ ಜಿನಸೇನರು 'ಕವಿಮಾರ್ಗ' ಕರ್ತ ಹಾಗೂ ಅವರ ಹೆಸರನ್ನು ಧರಿಸಿದ ನೃಪತುಂಗನೇ ಕವೀಶ್ವರ ಎಂದು ವಾದಿಸಿ, ಶ್ರೀವಿಜಯ-ಕವೀಶ್ವರ- ನೃಪತುಂಗ ಏಕೈಕ ವ್ಯಕ್ತಿ ಎಂದು ಸಿದ್ಧಾಂತಮಾಡಲಾಗಿದೆ. {{gap}}ಈ ಹೊಸ ವಾದಕ್ಕೆ ಬುಡವೇ ಇಲ್ಲ. ಮಂಗಳ ಶ್ಲೋಕಗಳನ್ನು ನೃಪತುಂಗನು ಬರದಿರಲಾರನೆಂದು ಈ ಹಿಂದೆಯೇ ಹೇಳಿದೆ. ಈ ಪದ್ಯಗಳಲ್ಲಿಯೂ, ನೃಪತುಂಗ ಪ್ರಶಸ್ತಿಯುಳ್ಳ ಬೇರೊಂದು ಪದ್ಯದಲ್ಲಿಯೂ (III-೧೮೦) 'ವೀರ ನಾರಾಯಣ" ಎಂಬ ಅವನ ಬಿರುದು ಉಕ್ತವಾಗಿದೆ. ಈ ಪದ್ಯಗಳು ನೃಪತುಂಗ ಕೃತವಲ್ಲ ಎಂದ ಮೇಲೆ, 'ಕವಿಮಾರ್ಗ'ದ ಪದ್ಯಗಳು ಎನ್ನಬೇಕಾಗುತ್ತದೆ. ನೃಪತುಂಗನಿಗೆ 'ವೀರನಾರಾಯಣ' ಎಂಬ ಬಿರುದು ಸಂದದ್ದು ಕ್ರಿ.ಶ. ೮೪೫-೮೫೦ ರ ಸುಮಾರಿನಲ್ಲಿ ————————— ೬.ಈ ಪಕ್ಷದವರ ವಾದ ಬಹಳ ದುರ್ಬಲವಾದದ್ದು, ಆದ್ದರಿಂದ, ಅದನ್ನು ಇಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸುವ ಅಗತ್ಯವಿಲ್ಲ. 'ತನಗಾಗಿಸಿದೊಂ ಕವೀಶ್ವರಂ' ಎಂಬಲ್ಲಿ ಕವೀಶ್ವರನು 'ತನಗಾಗಿಸಿಕೊಂಡನು' ಎಂಬ ಕವೀಶ್ವರ ಪಕ್ಷದವರ ಕ್ರಿಯಾರ್ಥ ಹೊಂದುವುದಿಲ್ಲ. 'ತನಗಾಗಿಸಿದವನು' ಎಂಬ ಕೃಲ್ಲಿಂಗದ ಅರ್ಥ ಹಿಡಿಯಬೇಕು ಎಂಬ ನನ್ನ ಅಭಿಪ್ರಾಯವನ್ನು ಪ್ರಶ್ನಿಸಿ, ಪಾಡಿದಂ / ಪಾಡಿದೊಂ ಎಂಬ ಕಿಟ್ಟೆಲ್ ವ್ಯಾಕರಣದ (ಪು. ೧೩೮) ದೃಷ್ಟಾಂತಗಳನ್ನು ಕೊಟ್ಟು, "ಈ ಬಗೆಯ ಪ್ರಯೋಗದ ಒಂದು ಉದಾಹರಣೆಯನ್ನು ಕೊಟ್ಟಿದ್ದರೆ ಶ್ರೀ ವಿಜಯವಾದಿಗಳ ಈ ಆಗ್ರಹದ ಸೂಚನೆ ವಿಚಾರಾರ್ಹವಾಗುತ್ತಿತ್ತು' ಎಂದು ಶ್ರೀ ಭೀಮರಾವ್‌ ಚಿಟಗುಪ್ಪಿಯವರು ಆಕ್ಷೇಪಿಸಿದ್ದಾರೆ. (ಕವಿರಾಜಮಾರ್ಗ ಪ್ರಶಸ್ತಿ ಪು.೧೧೩). ಕವಿರಾಜಮಾರ್ಗದಲ್ಲಿಯೆ ಅಂತಹ ಪ್ರಯೋಗಗಳು ಇರುವುದನ್ನು ಗಮನಿಸಬಹುದು: “ನಿನ್ನನ್ನನಪ್ಲೊನ್' (i-೧೪೮), 'ವಿಗಳಿತರಾಗನಾವೊಂ' (ii-೧೫೨)<noinclude></noinclude> iawepwrhs3o4q8clo7zf8m6k2dfhrzb ಪುಟ:ಕವಿರಾಜ ಮಾರ್ಗಂ.pdf/೩೨ 104 16263 322869 157061 2026-05-27T03:10:12Z Shreesha Sharma 7840 /* Proofread */ 322869 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೧೬|right=ಕವಿರಾಜಮಾರ್ಗ}} ಎನ್ನುವುದಕ್ಕೆ ಶಾಸನಾಧಾರವಿದೆ. ಆದ್ದರಿಂದ, ಕವಿರಾಜಮಾರ್ಗಕ್ಕೆ ಮೂಲವಾಗಿದ್ದಿರಬಹುದಾದ 'ಕವಿಮಾರ್ಗ' ಕೂಡ ಆ ವೇಳೆಗೆ ರಚಿತವಾಗಿರಲು ಸಾಧ್ಯವಿಲ್ಲ. ಜಿನಸೇನರು ಕ್ರಿ.ಶ. ೧೪೩ ರಲ್ಲಿ ತೀರಿಕೊಂಡರು. ಹೀಗಿರುವಲ್ಲಿ, ಜಿನಸೇನರು 'ಕವಿಮಾರ್ಗ'ದ ಕರ್ತ ಎಂಬ ವಾದದ ತಳಹದಿಯೇ ಬಿದ್ದು ಹೋಗುತ್ತದೆ. {{gap}}೬. ಪ್ರಾಚೀನ ಕವಿಗಳು 'ಚಕ್ರಬಂಧ' ಪದ್ಯಗಳನ್ನು ರಚಿಸಿ, ಬಂಧ ರಚನೆಯ ಕೆಲವು ನಿರ್ದಿಷ್ಟಸ್ಥಾನಗಳಲ್ಲಿನ ಅಕ್ಷರಗಳನ್ನು ಒಂದು ನಿರ್ದಿಷ್ಟ ಅನುಪೂರ್ವಿಯಲ್ಲಿ ಓದಿದಾಗ ಕೃತಿ-ಕರ್ತನಾಮಗಳು ಹೊರಪಡುವಂತ ಪದ್ಯರಚನೆ ಮಾಡುತ್ತಿದ್ದರು. ಉದಾಹರಣೆಗೆ, ಮಾಘನ 'ಶಿಶುಪಾಲವಧ'ದ ಚಕ್ರಬಂಧ ಪದ್ಯ (೧೯-೧೨೦) ದಿಂದ 'ಮಾಘಕಾವ್ಯಮಿದಂ- ಶಿಶುಪಾಲವಧು' ಎಂಬ ಕವಿಕಾವ್ಯನಾಮಾಕ್ಷರಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಅಕ್ಷರಗಳನ್ನು ಕೂಡಿಸಿಕೊಂಡು ಓದಿದಾಗ ಹೊರ ಪಡುತ್ತವೆ. ಅಂತೆಯೇ ರುದ್ರಟನ ಕಾವ್ಯಾಲಂಕಾರದಲ್ಲೂ ಕವಿಕಾವ್ಯಾದಿನಾಮನಿರ್ದೇಶ ಚಕ್ರಬಂಧ ಶ್ಲೋಕಗಳಿಂದ ದೊರಕುತ್ತದೆ. ಕವಿರಾಜಮಾರ್ಗಕಾರನೂ ಈ ಪೂರ್ವ ಕವಿಗಳನ್ನು ಅನುಸರಿಸಿರುವ ಸಂಭವವುಂಟು. ಕವಿರಾಜಮಾರ್ಗದ II-೧೪ನೆಯ ಪದ್ಯ ಚಕ್ರಶ್ಲೋಕ ಎಂದು ಉಕ್ತವಾಗಿದೆ. ಚಕ್ರಶ್ಲೋಕದಲ್ಲಿ ಅನೇಕ ಪ್ರಕಾರಗಳುಂಟು. ದಿವಂಗತ ವಿದ್ವಾನ್ ಮುಳಿಯ ತಿಮ್ಮಪ್ಪಯ್ಯನವರು 'ಷಡರಬಂಧ' (ಆರು ಅರಗಳುಳ್ಳ ಚಕ್ರಬಂಧರಚನೆ) ಕ್ರಮಕ್ಕ ಅನುಸಾರವಾಗಿ ಪದ್ಯವನ್ನು ಓದಿ, 'ಸಂದಪಿಂದಾಳಾನಾ-ಸಾಮಾಪಾ ಜಯಾಂ ಎಂಬ ಕವಿನಾಮವನ್ನು ಉದ್ಧರಣ ಮಾಡಿದ್ದಾರೆ. ಶ್ರೀವಿಜಯನೇ ಕವಿರಾಜಮಾರ್ಗದ ಕರ್ತ ಎಂಬ ತಮ್ಮ ವಾದಕ್ಕೆ ಈ ಚಕ್ರಬಂಧವನ್ನೂ ಒಂದು ಪ್ರಬಲ ಆಂತರಿಕ ಪ್ರಮಾಣವಾಗಿ ಮುಂದಿಟ್ಟಿದ್ದಾರೆ. ಅವರ ಈ ಪ್ರಯತ್ನದಲ್ಲಿನ ಮುಖ್ಯ ದೋಷಗಳೆಂದರೆ : (i) ಪದ್ಯವನ್ನು ಅಲ್ಲಲ್ಲಿ ತಿದ್ದುಪಾಟು ಮಾಡಿಕೊಂಡಿರುವುದು. ಪಾಠಾಂತರಗಳ ನೆರವಿಲ್ಲದೆ ಈ ರೀತಿ ತಿದ್ದುಪಾಟು ಮಾಡುವುದು ಸರಿಯಲ್ಲ. (ii) ಚಕ್ರಶ್ಲೋಕದ ಪದ್ಧತಿಯ ಮೇರೆಗೆ ಕವಿನಾಮವೊಂದು ಉದ್ಭತವಾಗಿದೆಯೇ ಹೊರತು, ಕೃತಿನಾಮ ಉದ್ಭತವಾಗಿಲ್ಲ. (iii) 'ಜಯಾ' ಎನ್ನುವುದು 'ಶ್ರೀವಿಜಯ' ಆಗಲಾರದು. ತಿಮ್ಮಪ್ಪಯ್ಯನವರ ಪ್ರಯತ್ನವೇನೋ ಅತ್ಯಂತ ಶ್ಲಾಘಿ ಇತರ ಯಾರಿಗೂ ಈ ಪದ್ಯ ತನ್ನ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ. ಹೀಗಿರುವುದರಿಂದ, ಈ ಪದ್ಯ ಪ್ರಕ್ಷಿಪ್ತವಾಗಿರಬಹುದೇ ಎಂಬ ಸಂದೇಹಕ್ಕೂ ಅವಕಾಶವಿದೆ. ಕರ್ತವಿನ ಬಗೆಗೆ<noinclude></noinclude> tjhj2cey50yidsjkwvmrisl6jovj2yu 322871 322869 2026-05-27T03:13:18Z Shreelatha.Halemane 7642 /* Validated */ 322871 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೬|right=ಕವಿರಾಜಮಾರ್ಗ}} ಎನ್ನುವುದಕ್ಕೆ ಶಾಸನಾಧಾರವಿದೆ. ಆದ್ದರಿಂದ, ಕವಿರಾಜಮಾರ್ಗಕ್ಕೆ ಮೂಲವಾಗಿದ್ದಿರಬಹುದಾದ 'ಕವಿಮಾರ್ಗ' ಕೂಡ ಆ ವೇಳೆಗೆ ರಚಿತವಾಗಿರಲು ಸಾಧ್ಯವಿಲ್ಲ. ಜಿನಸೇನರು ಕ್ರಿ.ಶ. ೧೪೩ ರಲ್ಲಿ ತೀರಿಕೊಂಡರು. ಹೀಗಿರುವಲ್ಲಿ, ಜಿನಸೇನರು 'ಕವಿಮಾರ್ಗ'ದ ಕರ್ತೃ ಎಂಬ ವಾದದ ತಳಹದಿಯೇ ಬಿದ್ದು ಹೋಗುತ್ತದೆ. {{gap}}೬. ಪ್ರಾಚೀನ ಕವಿಗಳು 'ಚಕ್ರಬಂಧ' ಪದ್ಯಗಳನ್ನು ರಚಿಸಿ, ಬಂಧ ರಚನೆಯ ಕೆಲವು ನಿರ್ದಿಷ್ಟಸ್ಥಾನಗಳಲ್ಲಿನ ಅಕ್ಷರಗಳನ್ನು ಒಂದು ನಿರ್ದಿಷ್ಟ ಅನುಪೂರ್ವಿಯಲ್ಲಿ ಓದಿದಾಗ ಕೃತಿ-ಕರ್ತನಾಮಗಳು ಹೊರಪಡುವಂತ ಪದ್ಯರಚನೆ ಮಾಡುತ್ತಿದ್ದರು. ಉದಾಹರಣೆಗೆ, ಮಾಘನ 'ಶಿಶುಪಾಲವಧ'ದ ಚಕ್ರಬಂಧ ಪದ್ಯ (೧೯-೧೨೦) ದಿಂದ 'ಮಾಘಕಾವ್ಯಮಿದಂ- ಶಿಶುಪಾಲವಧು' ಎಂಬ ಕವಿಕಾವ್ಯನಾಮಾಕ್ಷರಗಳು ಒಂದು ನಿರ್ದಿಷ್ಟ ಕ್ರಮದಲ್ಲಿ ಅಕ್ಷರಗಳನ್ನು ಕೂಡಿಸಿಕೊಂಡು ಓದಿದಾಗ ಹೊರ ಪಡುತ್ತವೆ. ಅಂತೆಯೇ ರುದ್ರಟನ ಕಾವ್ಯಾಲಂಕಾರದಲ್ಲೂ ಕವಿಕಾವ್ಯಾದಿನಾಮನಿರ್ದೇಶ ಚಕ್ರಬಂಧ ಶ್ಲೋಕಗಳಿಂದ ದೊರಕುತ್ತದೆ. ಕವಿರಾಜಮಾರ್ಗಕಾರನೂ ಈ ಪೂರ್ವ ಕವಿಗಳನ್ನು ಅನುಸರಿಸಿರುವ ಸಂಭವವುಂಟು. ಕವಿರಾಜಮಾರ್ಗದ II-೧೪ನೆಯ ಪದ್ಯ ಚಕ್ರಶ್ಲೋಕ ಎಂದು ಉಕ್ತವಾಗಿದೆ. ಚಕ್ರಶ್ಲೋಕದಲ್ಲಿ ಅನೇಕ ಪ್ರಕಾರಗಳುಂಟು. ದಿವಂಗತ ವಿದ್ವಾನ್ ಮುಳಿಯ ತಿಮ್ಮಪ್ಪಯ್ಯನವರು 'ಷಡರಬಂಧ' (ಆರು ಅರಗಳುಳ್ಳ ಚಕ್ರಬಂಧರಚನೆ) ಕ್ರಮಕ್ಕೆ ಅನುಸಾರವಾಗಿ ಪದ್ಯವನ್ನು ಓದಿ, 'ಸಂದಪಿಂದಾಳಾನಾ-ಸಾಮಾಪಾ ಜಯಾಂ ಎಂಬ ಕವಿನಾಮವನ್ನು ಉದ್ಧರಣ ಮಾಡಿದ್ದಾರೆ. ಶ್ರೀವಿಜಯನೇ ಕವಿರಾಜಮಾರ್ಗದ ಕರ್ತೃ ಎಂಬ ತಮ್ಮ ವಾದಕ್ಕೆ ಈ ಚಕ್ರಬಂಧವನ್ನೂ ಒಂದು ಪ್ರಬಲ ಆಂತರಿಕ ಪ್ರಮಾಣವಾಗಿ ಮುಂದಿಟ್ಟಿದ್ದಾರೆ. ಅವರ ಈ ಪ್ರಯತ್ನದಲ್ಲಿನ ಮುಖ್ಯ ದೋಷಗಳೆಂದರೆ : (i) ಪದ್ಯವನ್ನು ಅಲ್ಲಲ್ಲಿ ತಿದ್ದುಪಾಟು ಮಾಡಿಕೊಂಡಿರುವುದು. ಪಾಠಾಂತರಗಳ ನೆರವಿಲ್ಲದೆ ಈ ರೀತಿ ತಿದ್ದುಪಾಟು ಮಾಡುವುದು ಸರಿಯಲ್ಲ. (ii) ಚಕ್ರಶ್ಲೋಕದ ಪದ್ಧತಿಯ ಮೇರೆಗೆ ಕವಿನಾಮವೊಂದು ಉದ್ಭತವಾಗಿದೆಯೇ ಹೊರತು, ಕೃತಿನಾಮ ಉದ್ಭತವಾಗಿಲ್ಲ. (iii) 'ಜಯಾ' ಎನ್ನುವುದು 'ಶ್ರೀವಿಜಯ' ಆಗಲಾರದು. ತಿಮ್ಮಪ್ಪಯ್ಯನವರ ಪ್ರಯತ್ನವೇನೋ ಅತ್ಯಂತ ಶ್ಲಾಘಿ ಇತರ ಯಾರಿಗೂ ಈ ಪದ್ಯ ತನ್ನ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ. ಹೀಗಿರುವುದರಿಂದ, ಈ ಪದ್ಯ ಪ್ರಕ್ಷಿಪ್ತವಾಗಿರಬಹುದೇ ಎಂಬ ಸಂದೇಹಕ್ಕೂ ಅವಕಾಶವಿದೆ. ಕೃರ್ತೃವಿನ ಬಗೆಗೆ<noinclude></noinclude> qidapqpmyxyfvt0gqpzflujf33ucra4 ಪುಟ:ಕವಿರಾಜ ಮಾರ್ಗಂ.pdf/೩೩ 104 16264 322872 157072 2026-05-27T03:14:06Z Shreesha Sharma 7840 /* Proofread */ 322872 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಪೀಠಿಕ|right=೧೭}} ನಮ್ಮ ಮುಂದಿರುವ ಹೆಸರುಗಳ ಪೈಕಿ ಯಾವುದೊಂದೂ ಈ ಪದ್ಯದಿಂದ ಉದ್ಧರಣವಾದರೂ ಸರಿಯೆ, ಆ ಹಸರಿನಾತ ಕೃತಿಕರ್ತ ಎಂದು ನಿರ್ವಿವಾದವಾಗಿ ತೀರ್ಮಾನಿಸಬಹುದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಪದ್ಯ ಯಾವ ಪಕ್ಷದವರಿಗೂ ಅನುಕೂಲವಾಗುವಂತಿಲ್ಲ. (II) ಬಾಹ್ಯಪ್ರಮಾಣಗಳು : {{gap}}(೧) ಶಬ್ದಮಣಿದರ್ಪಣದಲ್ಲಿ ಕೇಶಿರಾಜನು ಪ್ರಮಾಣ ಗ್ರಂಥಕಾರರ ಗುಂಪಿನಲ್ಲಿ 'ಶ್ರೀವಿಜಯ'ನನ್ನೂ ಸೇರಿಸಿ, ಅವರ 'ಸುಮಾರ್ಗವಿದಳ ಲಕ್ಷಂ' ಎಂದು ಹೇಳಿದ್ದಾನೆ. ಈ ಶ್ರೀವಿಜಯನು ಕವಿರಾಜಮಾರ್ಗವನ್ನು ರಚಿಸಿದ ಶ್ರೀವಿಜಯನೋ, ದೊಡ್ಡಯ್ಯ ಮಂಗರಸ ಮುಂತಾದವರು ಸ್ಮರಿಸಿರುವ 'ಚಂದ್ರಪ್ರಭಪುರಾಣ' ಕರ್ತನಾದ ಶ್ರೀವಿಜಯನೋ, ಖಂಡಿತವಾಗಿ ಹೇಳುವುದು ಕಷ್ಟ ಇಬ್ಬರು ಶ್ರೀವಿಜಯರೂ ಏಕ ವ್ಯಕ್ತಿ ಎಂದು ಭಾವಿಸುವುದಕ್ಕೂ ಅವಕಾಶವಿದೆ. ಕವಿರಾಜಮಾರ್ಗದ ಪದ್ಯಗಳು ಶಬ್ದಮಣಿದರ್ಪಣದಲ್ಲಿ ಉದಾಹೃತವಾಗಿರುವುದರಿಂದ, ಕೇಶಿರಾಜನು ಕವಿರಾಜ ಮಾರ್ಗದ ಕರ್ತ ಶ್ರೀವಿಜಯ ಎಂದು ತಿಳಿದಿದ್ದ ಕಾರಣ ಅವನ ಹೆಸರನ್ನು ೭. ಪ್ರಾಚೀನ ಕನ್ನಡ ಗ್ರಂಥಗಳಿಂದಲೂ ಕೆಲವು ಶಾಸನಗಳಿಂದಲೂ ಅನೇಕ ಶ್ರೀವಿಜಯರು ಇದ್ದರೆಂಬ ಸಂಗತಿ ತಿಳಿದು ಬರುತ್ತದೆ. ಶಬ್ದಮಣಿದರ್ಪಣದಲ್ಲಿ ಉಕ್ತನಾದ ಶ್ರೀವಿಜಯ ಕವಿರಾಜಮಾರ್ಗಕಾರನೇ ಎಂಬುದು ಪಂಜೆ ಮಂಗೇಶರಾಯರ ಅಭಿಪ್ರಾಯ. "ಶ್ರೀವಿಜಯWho is generally addressed in the plural by the succeeding poets is the reputed author of the famous poem, ಕವಿರಾಜಮಾರ್ಗ, a book of the ೮th century on poetics." {{gap}}ಮೊದಲ ಸಲ ೧೮೭೨ರಲ್ಲಿ ಕಿಟ್ಟೆಲ್ ಅವರಿಂದ ಸಂಪಾದಿತವಾದ ಶಬ್ದಮಣಿದರ್ಪಣದಮೂರನೆಯ ಆವೃತ್ತಿ ೧೯೨೦, ಪು.೬ರಲ್ಲಿನ ಅಡಿ ಟಿಪ್ಪಣಿ. ಈ ಮೂರನೆಯ ಆವೃತ್ತಿಯನ್ನುಪರಿಷ್ಕರಿಸಿದವರು ದಿ॥ ಪಂಜೆ ಮಂಗೇಶರಾಯರು. ೧೮೯೪ರಲ್ಲಿ ಪ್ರಕಟವಾದ ಕಿಟ್ಟೆಲ್ನಿಗಂಟಿನಲ್ಲಿ ಕವಿರಾಜಮಾರ್ಗದ ಶಬ್ದ ಪ್ರಯೋಗಗಳನ್ನು ತೆಗೆದುಕೊಂಡಿಲ್ಲ. ಕವಿರಾಜಮಾರ್ಗದ ಪ್ರಥಮ ಮುದ್ರಣ ಪ್ರಕಟವಾದದ್ದು ೧೮೯೮ರಲ್ಲಿ. ಆದ್ದರಿಂದ ಈ ಅಡಿ ಟಿಪ್ಪಣಿಯನ್ನು ಬರೆದವರು ಪಂಜೆಯವರಿರಬೇಕು. ಈ ಅಡಿ ಟಿಪ್ಪಣಿಯ ಅಭಿಪ್ರಾಯವನ್ನು ನಾನು ಇದಕ್ಕೆ ಮೊದಲು ಗಮನಿಸಿರಲಿಲ್ಲ. ಇತರ ವಿದ್ವಾಂಸರೂ ಗಮನಿಸಿದಂತೆ ಕಂಡುಬರುವುದಿಲ್ಲ. ಆರ್. ನರಸಿಂಹಾಚಾರೈರು ಕವಿಚರಿತೆಯಲ್ಲಿ (೧೯೧೭ ಮತ್ತು ೧೯೨೦) ಕರ್ತ - ಶ್ರೀ ವಿಜಯನಿರಬಹುದು ಎಂದು ಸಂದೇಹಪೂರ್ವಕ ಹೇಳಿರುವಲ್ಲಿ ಪಂಜೆ ಮಂಗೇಶರಾಯರು ನಿಶ್ಚಿತವಾಗಿ ಹೇಳಿರುವುದು ಗಮನಾರ್ಹ. ಯಾವುದೇ ಒಂದು ಪ್ರಮಾಣಭೂತ ಗ್ರಂಥದಲ್ಲಿನ ಅಡಿ ಟಿಪ್ಪಣಿಗಳನ್ನು ಅಮುಖ್ಯ ಎಂದು ಅಲಕ್ಷಿಸಲಾಗದು ಎಂಬುದಕ್ಕೆ ಇದೊಂದು ನಿದರ್ಶನ.<noinclude></noinclude> pb1u2lrxscmdqar6rarxddb5omi70h4 322876 322872 2026-05-27T03:20:02Z Shreelatha.Halemane 7642 /* Validated */ 322876 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಪೀಠಿಕೆ|right=೧೭}} ನಮ್ಮ ಮುಂದಿರುವ ಹೆಸರುಗಳ ಪೈಕಿ ಯಾವುದೊಂದೂ ಈ ಪದ್ಯದಿಂದ ಉದ್ಧರಣವಾದರೂ ಸರಿಯೆ, ಆ ಹಸರಿನಾತ ಕೃತಿಕರ್ತೃ ಎಂದು ನಿರ್ವಿವಾದವಾಗಿ ತೀರ್ಮಾನಿಸಬಹುದು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಪದ್ಯ ಯಾವ ಪಕ್ಷದವರಿಗೂ ಅನುಕೂಲವಾಗುವಂತಿಲ್ಲ. (II) '''ಬಾಹ್ಯಪ್ರಮಾಣಗಳು''' : {{gap}}(೧) ಶಬ್ದಮಣಿದರ್ಪಣದಲ್ಲಿ ಕೇಶಿರಾಜನು ಪ್ರಮಾಣ ಗ್ರಂಥಕಾರರ ಗುಂಪಿನಲ್ಲಿ 'ಶ್ರೀವಿಜಯ'ನನ್ನೂ ಸೇರಿಸಿ, ಅವರ 'ಸುಮಾರ್ಗವಿದಳ ಲಕ್ಷಂ' ಎಂದು ಹೇಳಿದ್ದಾನೆ. ಈ ಶ್ರೀವಿಜಯನು ಕವಿರಾಜಮಾರ್ಗವನ್ನು ರಚಿಸಿದ ಶ್ರೀವಿಜಯನೋ, ದೊಡ್ಡಯ್ಯ ಮಂಗರಸ ಮುಂತಾದವರು ಸ್ಮರಿಸಿರುವ 'ಚಂದ್ರಪ್ರಭಪುರಾಣ' ಕರ್ತನಾದ ಶ್ರೀವಿಜಯನೋ, ಖಂಡಿತವಾಗಿ ಹೇಳುವುದು ಕಷ್ಟ ಇಬ್ಬರು ಶ್ರೀವಿಜಯರೂ ಏಕ ವ್ಯಕ್ತಿ ಎಂದು ಭಾವಿಸುವುದಕ್ಕೂ ಅವಕಾಶವಿದೆ. ಕವಿರಾಜಮಾರ್ಗದ ಪದ್ಯಗಳು ಶಬ್ದಮಣಿದರ್ಪಣದಲ್ಲಿ ಉದಾಹೃತವಾಗಿರುವುದರಿಂದ, ಕೇಶಿರಾಜನು ಕವಿರಾಜ ಮಾರ್ಗದ ಕರ್ತ ಶ್ರೀವಿಜಯ ಎಂದು ತಿಳಿದಿದ್ದ ಕಾರಣ ಅವನ ಹೆಸರನ್ನು ————————— ೭. ಪ್ರಾಚೀನ ಕನ್ನಡ ಗ್ರಂಥಗಳಿಂದಲೂ ಕೆಲವು ಶಾಸನಗಳಿಂದಲೂ ಅನೇಕ ಶ್ರೀವಿಜಯರು ಇದ್ದರೆಂಬ ಸಂಗತಿ ತಿಳಿದು ಬರುತ್ತದೆ. ಶಬ್ದಮಣಿದರ್ಪಣದಲ್ಲಿ ಉಕ್ತನಾದ ಶ್ರೀವಿಜಯ ಕವಿರಾಜಮಾರ್ಗಕಾರನೇ ಎಂಬುದು ಪಂಜೆ ಮಂಗೇಶರಾಯರ ಅಭಿಪ್ರಾಯ. "ಶ್ರೀವಿಜಯWho is generally addressed in the plural by the succeeding poets is the reputed author of the famous poem, ಕವಿರಾಜಮಾರ್ಗ, a book of the ೮th century on poetics." {{gap}}ಮೊದಲ ಸಲ ೧೮೭೨ರಲ್ಲಿ ಕಿಟ್ಟೆಲ್ ಅವರಿಂದ ಸಂಪಾದಿತವಾದ ಶಬ್ದಮಣಿದರ್ಪಣದಮೂರನೆಯ ಆವೃತ್ತಿ ೧೯೨೦, ಪು.೬ರಲ್ಲಿನ ಅಡಿ ಟಿಪ್ಪಣಿ. ಈ ಮೂರನೆಯ ಆವೃತ್ತಿಯನ್ನುಪರಿಷ್ಕರಿಸಿದವರು ದಿ॥ ಪಂಜೆ ಮಂಗೇಶರಾಯರು. ೧೮೯೪ರಲ್ಲಿ ಪ್ರಕಟವಾದ ಕಿಟ್ಟೆಲ್ನಿಗಂಟಿನಲ್ಲಿ ಕವಿರಾಜಮಾರ್ಗದ ಶಬ್ದ ಪ್ರಯೋಗಗಳನ್ನು ತೆಗೆದುಕೊಂಡಿಲ್ಲ. ಕವಿರಾಜಮಾರ್ಗದ ಪ್ರಥಮ ಮುದ್ರಣ ಪ್ರಕಟವಾದದ್ದು ೧೮೯೮ರಲ್ಲಿ. ಆದ್ದರಿಂದ ಈ ಅಡಿ ಟಿಪ್ಪಣಿಯನ್ನು ಬರೆದವರು ಪಂಜೆಯವರಿರಬೇಕು. ಈ ಅಡಿ ಟಿಪ್ಪಣಿಯ ಅಭಿಪ್ರಾಯವನ್ನು ನಾನು ಇದಕ್ಕೆ ಮೊದಲು ಗಮನಿಸಿರಲಿಲ್ಲ. ಇತರ ವಿದ್ವಾಂಸರೂ ಗಮನಿಸಿದಂತೆ ಕಂಡುಬರುವುದಿಲ್ಲ. ಆರ್. ನರಸಿಂಹಾಚಾರೈರು ಕವಿಚರಿತೆಯಲ್ಲಿ (೧೯೧೭ ಮತ್ತು ೧೯೨೦) ಕರ್ತ - ಶ್ರೀ ವಿಜಯನಿರಬಹುದು ಎಂದು ಸಂದೇಹಪೂರ್ವಕ ಹೇಳಿರುವಲ್ಲಿ ಪಂಜೆ ಮಂಗೇಶರಾಯರು ನಿಶ್ಚಿತವಾಗಿ ಹೇಳಿರುವುದು ಗಮನಾರ್ಹ. ಯಾವುದೇ ಒಂದು ಪ್ರಮಾಣಭೂತ ಗ್ರಂಥದಲ್ಲಿನ ಅಡಿ ಟಿಪ್ಪಣಿಗಳನ್ನು ಅಮುಖ್ಯ ಎಂದು ಅಲಕ್ಷಿಸಲಾಗದು ಎಂಬುದಕ್ಕೆ ಇದೊಂದು ನಿದರ್ಶನ.<noinclude></noinclude> izhw38whdfqkdbjrngoi1uzkkparwnf ಪುಟ:ಕವಿರಾಜ ಮಾರ್ಗಂ.pdf/೩೪ 104 16265 322873 157083 2026-05-27T03:16:51Z Shreesha Sharma 7840 /* Proofread */ 322873 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೧೮|right=ಕವಿರಾಜಮಾರ್ಗ}} ಸ್ಮರಿಸಿದ್ದಾನೆ. ಹೀಗೆ ಊಹಿಸುವುದು ತರ್ಕಬದ್ಧ {{gap}}(೨) ದಿ|| ಡಿ.ಕೆ. ಭೀಮಸೇನರಾಯರು ತಮ್ಮ 'ಶಬ್ದಮಣಿದರ್ಪಣದ ಪಾಠಾಂತರಗಳು' ಎಂಬ ಗ್ರಂಥದಲ್ಲಿ (೧೯೫೧, ಪು. ೪೧೪೪) ತಮಗೆ ದೊರೆತ ಆ ಗ್ರಂಥದ ಹಸ್ತಪ್ರತಿಯಲ್ಲಿ ಕವಿರಾಜಮಾರ್ಗದ II-೫, ೨೮,೨೯, ೩೦ ಮತ್ತು ೪೩ ಪದ್ಯಗಳು ಉದಾಹೃತವಾಗಿವೆಯೆಂದೂ, ಶಬ್ದಮಣಿದರ್ಪಣದ ವ್ಯಾಖ್ಯಾನಕಾರನು ಅವುಗಳಿಗೆ ವೃತ್ತಿಯನ್ನು ಬರೆದಿರುವನೆಂದೂ, ಪದ್ಯ II-೮೨ರ ವೃತ್ತಿಯಲ್ಲಿ 'ನೃಪತುಂಗದೇವನ ಮತದಿಂದ ಪೇಂ' ಎಂದೂ, II-೫ ಪದ್ಯದ ಕೆಳಗೆ 'ಶ್ರೀವಿಜಯನ ಪ್ರಯೋಗಂ' ಎಂದೂ ವ್ಯಾಖ್ಯಾನಕಾರನು ಬರದಿರುವುದಾಗಿಯೂ ತಿಳಿಸಿದ್ದಾರೆ ; ಮತ್ತು “ಶ್ರೀವಿಜಯನೇ ನೃಪತುಂಗದೇವನೆಂಬುದು ಈ ವ್ಯಾಖ್ಯಾನಕಾರನ ಬರವಣಿಗೆಯಿಂದ ಸ್ಪಷ್ಟವಾಗಿದೆ" ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಅಭಿಪ್ರಾಯದಲ್ಲಿ, ವ್ಯಾಖ್ಯಾನಕಾರನು ಕವಿರಾಜಮಾರ್ಗದ ಕರ್ತತ್ವದ ಬಗೆಗೆ ಸ್ಪಷ್ಟವಾದ ಅಭಿಪ್ರಾಯವನ್ನು ಹೊಂದಿಲ್ಲ. {{gap}}(೩) ಭಟ್ಟಾಕಲಂಕನು (ಕ್ರಿಶ. ೧೬೦೪) ತನ್ನ 'ಶಬ್ದಾನುಶಾಸನ'ದಲ್ಲಿ ೨೮೮ನೆಯ ಸೂತ್ರದ ವ್ಯಾಖ್ಯಾನದಲ್ಲಿ ದಕ್ಷಿಣೋತ್ತರವಾರ್ಗಪ್ರಯೋಗ ಭೇದವನ್ನು ಪ್ರಸ್ತಾಪಿಸಿ, ಅದನ್ನು 'ನೃಪತುಂಗಗ್ರಂಥ ದ್ರಷ್ಟವ್ಯ ಇತಿ' (ನೃಪತುಂಗ ಗ್ರಂಥದಲ್ಲಿ ನೋಡತಕ್ಕದ್ದು) ಎಂದು ಹೇಳಿದ್ದಾನೆ. ಇಲ್ಲಿ, 'ನೃಪತುಂಗ ಗ್ರಂಥ' ಎಂದರೆ ಅವನು ಕವಿರಾಜಮಾರ್ಗವನ್ನ ಉದ್ದೇಶಿಸಿದ್ದಾನೆ ಎಂಬ ಬಗೆಗೆ ಸಂಶಯವಿಲ್ಲ. ಆದರೆ, ಕವಿರಾಜಮಾರ್ಗ ಹುಟ್ಟಿ ೬೦೦ ವರ್ಷಗಳಾದ ಮೇಲೆ ಕಾಣಿಸಿಕೊಂಡ ಗ್ರಂಥದ ಮಾತಿಗೆ ಕಾಲದೃಷ್ಟಿಯಿಂದ ಸಮೀಪಸ್ಥರಾದ ಕೇಶರಾಜ ದುರ್ಗಸಿಂಹರ ಹೇಳಿಕೆಗಳಿಗಿಂತ ಹೆಚ್ಚಿನ ಬೆಲೆ ಕೊಡುವುದು ಸರಿಯಾಗದು. ಕವಿರಾಜಮಾರ್ಗದಲ್ಲಿ ಪ್ರತಿ ಪರಿಚ್ಛೇದಾಂತದಲ್ಲೂ 'ನೃಪತುಂಗ ದೇವಾನುಮತಮಪ್ಪ' ಎಂಬ ಮಾತೂ ಗ್ರಂಥದುದ್ದಕ್ಕೂ ಮೇಲಿಂದಮೇಲೆ ಬರುವ ನೃಪತುಂಗಪರವಾದ ಉಕ್ತಿಗಳೂ ಗ್ರಂಥವು ನೃಪತುಂಗರಚಿತ ಎಂಬ ಪ್ರತೀತಿ ಹುಟ್ಟಿ ಬೆಳೆಯಲು ಕಾರಣವಾಗಿವೆ. ಭಟ್ಟಾಕಳಂಕನ ಮಾತಿಗೂ ಆ ಉಕ್ತಿಗಳೂ ಈ ಪ್ರತೀತಿಯೂ ಆಧಾರಗಳು, ಆಗಿನ ದಿನಗಳಲ್ಲಿ ಈಗಿನಂತೆ ಗ್ರಂಥದ ಕರ್ತತ್ವದ ನಿಜಾಂಶವನ್ನು ಹುಡುಕಿ ತಿಳಿಯಲು ಯಾರೂ ಆಸಕ್ತರಾಗಿರಲಿಲ್ಲ. {{gap}}(೪) ದುರ್ಗಸಿಂಹನು (ಸು. ಕ್ರಿ.ಶ. ೧೧೧೫) ತನ್ನ ಪಂಚತಂತ್ರದಲ್ಲಿ - {{gap}}ಶ್ರೀವಿಜಯರ ಕವಿಮಾರ್ಗ ಭಾವಿಪ ಕವಿಜನದಮನಕ ಕನ್ನಡಿಯುಂ<noinclude></noinclude> iyfgvc1yrt90vprk7g8v5s2z1y9ig94 322877 322873 2026-05-27T03:21:33Z Shreelatha.Halemane 7642 /* Validated */ 322877 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೮|right=ಕವಿರಾಜಮಾರ್ಗ}} ಸ್ಮರಿಸಿದ್ದಾನೆ. ಹೀಗೆ ಊಹಿಸುವುದು ತರ್ಕಬದ್ಧ {{gap}}(೨) ದಿ|| ಡಿ.ಕೆ. ಭೀಮಸೇನರಾಯರು ತಮ್ಮ 'ಶಬ್ದಮಣಿದರ್ಪಣದ ಪಾಠಾಂತರಗಳು' ಎಂಬ ಗ್ರಂಥದಲ್ಲಿ (೧೯೫೧, ಪು. ೪೧೪೪) ತಮಗೆ ದೊರೆತ ಆ ಗ್ರಂಥದ ಹಸ್ತಪ್ರತಿಯಲ್ಲಿ ಕವಿರಾಜಮಾರ್ಗದ II-೫, ೨೮,೨೯, ೩೦ ಮತ್ತು ೪೩ ಪದ್ಯಗಳು ಉದಾಹೃತವಾಗಿವೆಯೆಂದೂ, ಶಬ್ದಮಣಿದರ್ಪಣದ ವ್ಯಾಖ್ಯಾನಕಾರನು ಅವುಗಳಿಗೆ ವೃತ್ತಿಯನ್ನು ಬರೆದಿರುವನೆಂದೂ, ಪದ್ಯ II-೮೨ರ ವೃತ್ತಿಯಲ್ಲಿ 'ನೃಪತುಂಗದೇವನ ಮತದಿಂದ ಪೇಂ' ಎಂದೂ, II-೫ ಪದ್ಯದ ಕೆಳಗೆ 'ಶ್ರೀವಿಜಯನ ಪ್ರಯೋಗಂ' ಎಂದೂ ವ್ಯಾಖ್ಯಾನಕಾರನು ಬರದಿರುವುದಾಗಿಯೂ ತಿಳಿಸಿದ್ದಾರೆ ; ಮತ್ತು “ಶ್ರೀವಿಜಯನೇ ನೃಪತುಂಗದೇವನೆಂಬುದು ಈ ವ್ಯಾಖ್ಯಾನಕಾರನ ಬರವಣಿಗೆಯಿಂದ ಸ್ಪಷ್ಟವಾಗಿದೆ" ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಅಭಿಪ್ರಾಯದಲ್ಲಿ, ವ್ಯಾಖ್ಯಾನಕಾರನು ಕವಿರಾಜಮಾರ್ಗದ ಕರ್ತತ್ವದ ಬಗೆಗೆ ಸ್ಪಷ್ಟವಾದ ಅಭಿಪ್ರಾಯವನ್ನು ಹೊಂದಿಲ್ಲ. {{gap}}(೩) ಭಟ್ಟಾಕಲಂಕನು (ಕ್ರಿಶ. ೧೬೦೪) ತನ್ನ 'ಶಬ್ದಾನುಶಾಸನ'ದಲ್ಲಿ ೨೮೮ನೆಯ ಸೂತ್ರದ ವ್ಯಾಖ್ಯಾನದಲ್ಲಿ ದಕ್ಷಿಣೋತ್ತರವಾರ್ಗಪ್ರಯೋಗ ಭೇದವನ್ನು ಪ್ರಸ್ತಾಪಿಸಿ, ಅದನ್ನು 'ನೃಪತುಂಗಗ್ರಂಥ ದ್ರಷ್ಟವ್ಯ ಇತಿ' (ನೃಪತುಂಗ ಗ್ರಂಥದಲ್ಲಿ ನೋಡತಕ್ಕದ್ದು) ಎಂದು ಹೇಳಿದ್ದಾನೆ. ಇಲ್ಲಿ, 'ನೃಪತುಂಗ ಗ್ರಂಥ' ಎಂದರೆ ಅವನು ಕವಿರಾಜಮಾರ್ಗವನ್ನ ಉದ್ದೇಶಿಸಿದ್ದಾನೆ ಎಂಬ ಬಗೆಗೆ ಸಂಶಯವಿಲ್ಲ. ಆದರೆ, ಕವಿರಾಜಮಾರ್ಗ ಹುಟ್ಟಿ ೬೦೦ ವರ್ಷಗಳಾದ ಮೇಲೆ ಕಾಣಿಸಿಕೊಂಡ ಗ್ರಂಥದ ಮಾತಿಗೆ ಕಾಲದೃಷ್ಟಿಯಿಂದ ಸಮೀಪಸ್ಥರಾದ ಕೇಶರಾಜ ದುರ್ಗಸಿಂಹರ ಹೇಳಿಕೆಗಳಿಗಿಂತ ಹೆಚ್ಚಿನ ಬೆಲೆ ಕೊಡುವುದು ಸರಿಯಾಗದು. ಕವಿರಾಜಮಾರ್ಗದಲ್ಲಿ ಪ್ರತಿ ಪರಿಚ್ಛೇದಾಂತದಲ್ಲೂ 'ನೃಪತುಂಗ ದೇವಾನುಮತಮಪ್ಪ' ಎಂಬ ಮಾತೂ ಗ್ರಂಥದುದ್ದಕ್ಕೂ ಮೇಲಿಂದಮೇಲೆ ಬರುವ ನೃಪತುಂಗಪರವಾದ ಉಕ್ತಿಗಳೂ ಗ್ರಂಥವು ನೃಪತುಂಗರಚಿತ ಎಂಬ ಪ್ರತೀತಿ ಹುಟ್ಟಿ ಬೆಳೆಯಲು ಕಾರಣವಾಗಿವೆ. ಭಟ್ಟಾಕಳಂಕನ ಮಾತಿಗೂ ಆ ಉಕ್ತಿಗಳೂ ಈ ಪ್ರತೀತಿಯೂ ಆಧಾರಗಳು, ಆಗಿನ ದಿನಗಳಲ್ಲಿ ಈಗಿನಂತೆ ಗ್ರಂಥದ ಕರ್ತತ್ವದ ನಿಜಾಂಶವನ್ನು ಹುಡುಕಿ ತಿಳಿಯಲು ಯಾರೂ ಆಸಕ್ತರಾಗಿರಲಿಲ್ಲ. {{gap}}(೪) ದುರ್ಗಸಿಂಹನು (ಸು. ಕ್ರಿ.ಶ. ೧೧೧೫) ತನ್ನ ಪಂಚತಂತ್ರದಲ್ಲಿ - {{gap}}ಶ್ರೀವಿಜಯರ ಕವಿಮಾರ್ಗ ಭಾವಿಪ ಕವಿಜನದಮನಕ ಕನ್ನಡಿಯುಂ ಕೈ<noinclude></noinclude> 47f5xjnrhzgbyxdu2sspgwhxb418o0i ಪುಟ:ಕವಿರಾಜ ಮಾರ್ಗಂ.pdf/೩೫ 104 16266 322875 157094 2026-05-27T03:19:11Z Shreesha Sharma 7840 /* Proofread */ 322875 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಪೀಠಿಕ|right=೧೯}} {{gap}}ದೀವಿಗೆಯುವಾದುದಛಂ | ಶ್ರೀವಿಜಯರ್ ದೇವರವರನೇ ವಣ್ಣಿಪುದೋ ಎಂದು ಶ್ರೀವಿಜಯನನ್ನೂ ಆತನ ಕೃತಿಯನ್ನೂ ಮಾನ್ಯಮಾಡಿ ಕೊಂಡಾಡಿದ್ದಾನೆ. 'ಕವಿಮಾರ್ಗ' ಎಂಬ ಮಾತು ವಿವಾದಕ್ಕೆ ಒಳಗಾಗಿದೆ. ದುರ್ಗಸಿಂಹನು 'ಕವಿರಾಜಮಾರ್ಗ' ಎಂಬ ಗ್ರಂಥವನ್ನು ಕುರಿತಿದ್ದರೆ, 'ಕವಿಮಾರ್ಗ' ಎಂದು ಗ್ರಂಥನಾಮವನ್ನು ಸಂಕ್ಷೇಪಗೊಳಿಸಲು ಕಾರಣವೇನು ? ಎಂಬ ಪ್ರಶ್ನೆಗೆ ಸೂಕ್ತ ಸಮಾಧಾನವನ್ನು ಕೊಡಬೇಕಾಗುತ್ತದೆ. ಛಂದಸ್ಸಿನ ಅಗತ್ಯಕ್ಕೋಸ್ಕರ ಹಾಗೆ ಮಾಡಿರಬಹುದು, ಎಂದರೆ, ದುರ್ಗಸಿಂಹನಂಥ ಸಮರ್ಥ ಕವಿ ಕವಿರಾಜಮಾರ್ಗ ಪದವನ್ನು ಪದ್ಯದಲ್ಲಿ ಅಳವಡಿಸಿಕೊಳ್ಳಲಾರದೆ ಹೋದನು ಎಂದು ತೀರ್ಮಾನಿಸಬೇಕಾಗುತ್ತದೆ. ಹಾಗೇನೂ ತೀರ್ಮಾನಿಸಬೇಕಾಗಿಲ್ಲ. ಕನ್ನಡ ಕಾವ್ಯ ಪ್ರಪಂಚದಲ್ಲಿ ಕವಿಗಳು ತಮ್ಮ ಕೃತಿಗಳನ್ನು ಸಮಾನಾರ್ಥಕವಾದ ಬೇರೆಯ ಹೆಸರಿನಿಂದ ನಿರ್ದೇಶಿಸುವ ಪದ್ಧತಿಯೂ ಇದೆ. ದುರ್ಗಸಿಂಹನ ಕಾಲದಲ್ಲಿ 'ಕವಿರಾಜಮಾರ್ಗ' “ಕವಿಮಾರ್ಗ' ಎಂದೂ ಪ್ರಸಿದ್ಧವಾಗಿದ್ದಿರಬಹುದು ; ಅವನ ಕೈಗೆ ಬಂದ ಹಸ್ತಪ್ರತಿಯಲ್ಲಿ ಆ ಹೆಸರೇ ಲಿಖಿತವಾಗಿದ್ದಿರಬಹುದು. {{gap}}ಶ್ರೀ ವಿಜಯನ ಕರ್ತತ್ವವನ್ನು ಒಪ್ಪದವರು 'ಶ್ರೀವಿಜಯರ ಕವಿಮಾರ್ಗ' ಎಂಬ ಉಕ್ತಿಯನ್ನು ಹೇಗೆ ವಿವರಿಸಿದ್ದಾರೆ ಎಂಬ ವಿಚಾರವನ್ನು ಬೇರೆಯ ಸಂದರ್ಭದಲ್ಲಿ ಈ ಹಿಂದೆ ಪ್ರಸ್ತಾಪಿಸಲಾಗಿದೆ. ಶ್ರೀವಿಜಯ ಜಿನಸೇನರ ನಾಮಾಂತರ, ಅವರು “ಕವಿಮಾರ್ಗ'ವನ್ನು ರಚಿಸಿದ್ದರು, ಅವರ ಹೆಸರನ್ನೇ ತಾನೂ ಧರಿಸಿ ನೃಪತುಂಗನು ಅದನ್ನು 'ಕವಿರಾಜಮಾರ್ಗ'ವನ್ನಾಗಿ ಮಾಡಿಕೊಂಡನು ಇದು ಒಂದು ವಿವರಣೆ, ಶ್ರೀವಿಜಯನೆಂಬ ಕವಿಯ 'ಕವಿಮಾರ್ಗ'ವನ್ನು ಕವೀಶ್ವರನೆಂಬ ಕವಿ ಉಪಯೋಗಿಸಿಕೊಂಡು, ಪ್ರಭುವಾದ ನೃಪತುಂಗನಿಗೆ ಕೀರ್ತಿ ಬರಲೆಂದು ಅವನ ಗ್ರಂಥವೆಂಬ ಭ್ರಾಂತಿ ಬರುವಂತ 'ಕವಿರಾಜಮಾರ್ಗ'ವನ್ನು ರಚಿಸಿ ತಾನು ಪ್ರಯೋಜನ ಪಡೆದನು - ಎಂಬುದಿನ್ನೊಂದು ವಿವರಣೆ. ಈ ಎರಡು ವಾದಗಳಲ್ಲಿಯೂ ಹುರುಳಿಲ್ಲವೆಂಬುದನ್ನು ಈ ಮೊದಲೇ ಸಾಧಿಸಿ ತೋರಿಸಿದೆ. {{gap}}ಈ ವಾದಗಳ ಸರಣಿಯನ್ನೇ ಹಿಡಿದು, ದುರ್ಗಸಿಂಹನ ಪದ್ಯವನ್ನು ಶ್ರೀವಿಜಯಕರ್ತತ್ವ ಪರವಾಗಿಯೇ ಯುಕ್ತಿಯುಕ್ತವಾಗಿ ವಿವರಿಸಬಹುದು. ಶ್ರೀವಿಜಯನು ನೃಪತುಂಗಸಭಾಸದ ; ಕವಿ ಮತ್ತು ಲಕ್ಷಣಶಾಸ್ತ್ರಜ್ಞ : ಬಹುಶಃ ನೃಪತುಂಗನ ಕೋರಿಕೆಯಂತ, ದಂಡಿಭಾಮಹರನ್ನು ಅನುಸರಿಸಿ ಆತ 'ಕವಿಮಾರ್ಗ'ವನ್ನು ರಚಿಸಿದ್ದನು. ಅವನು ಅದನ್ನು ನೃಪತುಂಗ ಸಭೆಯಲ್ಲಿ ಶ್ರುತಪಡಿಸಿದನು. ಕನ್ನಡನಾಡಿನ ಚಕ್ರವರ್ತಿಯಾಗಿದ್ದ ನೃಪತುಂಗನು ಕನ್ನಡಕ್ಕೆ<noinclude></noinclude> minpa0746r0laco007tt09xcf82tchn 322880 322875 2026-05-27T03:22:54Z Shreelatha.Halemane 7642 /* Validated */ 322880 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಪೀಠಿಕೆ|right=೧೯}} ದೀವಿಗೆಯುವಾದುದಛಂ | ಶ್ರೀವಿಜಯರ್ ದೇವರವರನೇ ವಣ್ಣಿಪುದೋ|| {{gap}}ಎಂದು ಶ್ರೀವಿಜಯನನ್ನೂ ಆತನ ಕೃತಿಯನ್ನೂ ಮಾನ್ಯಮಾಡಿ ಕೊಂಡಾಡಿದ್ದಾನೆ. 'ಕವಿಮಾರ್ಗ' ಎಂಬ ಮಾತು ವಿವಾದಕ್ಕೆ ಒಳಗಾಗಿದೆ. ದುರ್ಗಸಿಂಹನು 'ಕವಿರಾಜಮಾರ್ಗ' ಎಂಬ ಗ್ರಂಥವನ್ನು ಕುರಿತಿದ್ದರೆ, 'ಕವಿಮಾರ್ಗ' ಎಂದು ಗ್ರಂಥನಾಮವನ್ನು ಸಂಕ್ಷೇಪಗೊಳಿಸಲು ಕಾರಣವೇನು ? ಎಂಬ ಪ್ರಶ್ನೆಗೆ ಸೂಕ್ತ ಸಮಾಧಾನವನ್ನು ಕೊಡಬೇಕಾಗುತ್ತದೆ. ಛಂದಸ್ಸಿನ ಅಗತ್ಯಕ್ಕೋಸ್ಕರ ಹಾಗೆ ಮಾಡಿರಬಹುದು, ಎಂದರೆ, ದುರ್ಗಸಿಂಹನಂಥ ಸಮರ್ಥ ಕವಿ ಕವಿರಾಜಮಾರ್ಗ ಪದವನ್ನು ಪದ್ಯದಲ್ಲಿ ಅಳವಡಿಸಿಕೊಳ್ಳಲಾರದೆ ಹೋದನು ಎಂದು ತೀರ್ಮಾನಿಸಬೇಕಾಗುತ್ತದೆ. ಹಾಗೇನೂ ತೀರ್ಮಾನಿಸಬೇಕಾಗಿಲ್ಲ. ಕನ್ನಡ ಕಾವ್ಯ ಪ್ರಪಂಚದಲ್ಲಿ ಕವಿಗಳು ತಮ್ಮ ಕೃತಿಗಳನ್ನು ಸಮಾನಾರ್ಥಕವಾದ ಬೇರೆಯ ಹೆಸರಿನಿಂದ ನಿರ್ದೇಶಿಸುವ ಪದ್ಧತಿಯೂ ಇದೆ. ದುರ್ಗಸಿಂಹನ ಕಾಲದಲ್ಲಿ 'ಕವಿರಾಜಮಾರ್ಗ' “ಕವಿಮಾರ್ಗ' ಎಂದೂ ಪ್ರಸಿದ್ಧವಾಗಿದ್ದಿರಬಹುದು ; ಅವನ ಕೈಗೆ ಬಂದ ಹಸ್ತಪ್ರತಿಯಲ್ಲಿ ಆ ಹೆಸರೇ ಲಿಖಿತವಾಗಿದ್ದಿರಬಹುದು. {{gap}}ಶ್ರೀ ವಿಜಯನ ಕರ್ತೃತ್ವವನ್ನು ಒಪ್ಪದವರು 'ಶ್ರೀವಿಜಯರ ಕವಿಮಾರ್ಗ' ಎಂಬ ಉಕ್ತಿಯನ್ನು ಹೇಗೆ ವಿವರಿಸಿದ್ದಾರೆ ಎಂಬ ವಿಚಾರವನ್ನು ಬೇರೆಯ ಸಂದರ್ಭದಲ್ಲಿ ಈ ಹಿಂದೆ ಪ್ರಸ್ತಾಪಿಸಲಾಗಿದೆ. ಶ್ರೀವಿಜಯ ಜಿನಸೇನರ ನಾಮಾಂತರ, ಅವರು “ಕವಿಮಾರ್ಗ'ವನ್ನು ರಚಿಸಿದ್ದರು, ಅವರ ಹೆಸರನ್ನೇ ತಾನೂ ಧರಿಸಿ ನೃಪತುಂಗನು ಅದನ್ನು 'ಕವಿರಾಜಮಾರ್ಗ'ವನ್ನಾಗಿ ಮಾಡಿಕೊಂಡನು ಇದು ಒಂದು ವಿವರಣೆ, ಶ್ರೀವಿಜಯನೆಂಬ ಕವಿಯ 'ಕವಿಮಾರ್ಗ'ವನ್ನು ಕವೀಶ್ವರನೆಂಬ ಕವಿ ಉಪಯೋಗಿಸಿಕೊಂಡು, ಪ್ರಭುವಾದ ನೃಪತುಂಗನಿಗೆ ಕೀರ್ತಿ ಬರಲೆಂದು ಅವನ ಗ್ರಂಥವೆಂಬ ಭ್ರಾಂತಿ ಬರುವಂತ 'ಕವಿರಾಜಮಾರ್ಗ'ವನ್ನು ರಚಿಸಿ ತಾನು ಪ್ರಯೋಜನ ಪಡೆದನು - ಎಂಬುದಿನ್ನೊಂದು ವಿವರಣೆ. ಈ ಎರಡು ವಾದಗಳಲ್ಲಿಯೂ ಹುರುಳಿಲ್ಲವೆಂಬುದನ್ನು ಈ ಮೊದಲೇ ಸಾಧಿಸಿ ತೋರಿಸಿದೆ. {{gap}}ಈ ವಾದಗಳ ಸರಣಿಯನ್ನೇ ಹಿಡಿದು, ದುರ್ಗಸಿಂಹನ ಪದ್ಯವನ್ನು ಶ್ರೀವಿಜಯಕರ್ತತ್ವ ಪರವಾಗಿಯೇ ಯುಕ್ತಿಯುಕ್ತವಾಗಿ ವಿವರಿಸಬಹುದು. ಶ್ರೀವಿಜಯನು ನೃಪತುಂಗಸಭಾಸದ ; ಕವಿ ಮತ್ತು ಲಕ್ಷಣಶಾಸ್ತ್ರಜ್ಞ : ಬಹುಶಃ ನೃಪತುಂಗನ ಕೋರಿಕೆಯಂತ, ದಂಡಿಭಾಮಹರನ್ನು ಅನುಸರಿಸಿ ಆತ 'ಕವಿಮಾರ್ಗ'ವನ್ನು ರಚಿಸಿದ್ದನು. ಅವನು ಅದನ್ನು ನೃಪತುಂಗ ಸಭೆಯಲ್ಲಿ ಶ್ರುತಪಡಿಸಿದನು. ಕನ್ನಡನಾಡಿನ ಚಕ್ರವರ್ತಿಯಾಗಿದ್ದ ನೃಪತುಂಗನು ಕನ್ನಡಕ್ಕೆ<noinclude></noinclude> jck4bflnruhg253mkfi0pthwc2qvz8k ಪುಟ:ಕವಿರಾಜ ಮಾರ್ಗಂ.pdf/೩೬ 104 16267 322878 157105 2026-05-27T03:21:44Z Shreesha Sharma 7840 /* Proofread */ 322878 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೨೦|right=ಕವಿರಾಜಮಾರ್ಗ}} ಸಂಬಂಧಪಟ್ಟಂತೆ ಶಾಸ್ತ್ರವಿಚಾರವನ್ನು ವಿಸ್ತರಿಸಿ ಪ್ರತಿಪಾದಿಸಬೇಕೆಂದು ಸೂಚಿಸಿರಬಹುದು ; ಅಲ್ಲದೆ, ಸ್ವತಃ ವಿದ್ವಾಂಸನಾಗಿದ್ದ ನೃಪತುಂಗನು “ಕವಿಮಾರ್ಗ'ದ ಇತರ ಶಾಸ್ತ್ರವಿಚಾರಗಳನ್ನು ತನ್ನ ಸಭೆಯಲ್ಲಿ ಚರ್ಚಿಸಿ, ತನ್ನ ಅಭಿಪ್ರಾಯಗಳನ್ನೂ ಸೂಚಿಸಿರಬಹುದು. ಇಂಥ ಒಂದು ವಿಚಾರಮಥನದ ಫಲಿತವಾಗಿ 'ಕವಿರಾಜಮಾರ್ಗ' ರೂಪಗೊಂಡಿರಬೇಕೆ೦ಬುದಕ್ಕೆ ಗ್ರಂಥದಿಂದ ಅನೇಕ ಸಂದರ್ಭೋಕ್ತಿಗಳನ್ನು ನಿದರ್ಶನಗಳಾಗಿ ಕೊಡಬಹುದು. ಶ್ರೀವಿಜಯನು ತನ್ನ ಪ್ರಭುವಿನ ಹಾಗೂ ಇತರ ವಿದ್ವಾಂಸರ ಅಭಿಪ್ರಾಯಗಳೆಲ್ಲವನ್ನೂ ಸ್ವೀಕರಿಸಿ ಅಳವಡಿಸಿ, ತನ್ನ ಕವಿಮಾರ್ಗ'ವನ್ನು 'ಕವಿರಾಜಮಾರ್ಗ' ಎಂದು ಕರೆದು, ಪರಿಚ್ಛೇದಾಂತ ಪದ್ಯಗಳಲ್ಲಿ 'ಶ್ರೀವಿಜಯ ಪ್ರಭೂತ' ಮುಂತಾಗಿ ತನ್ನ ಕರ್ತತ್ವವನ್ನೂ ಸೂಚಿಸಿ, ಪರಿಚ್ಛೇದಾಂತ ಗದ್ಯದಲ್ಲಿ ತನ್ನ ಕೃತಿಗೆ ಆಶ್ರಯದಾತ ನೃಪತುಂಗನ ಮಾನ್ಯತೆಯಿದೆ, ಒಪ್ಪಿಗೆಯಿದೆ ಎಂಬುದನ್ನು 'ನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗ' ಎಂಬ ಮಾತುಗಳಲ್ಲಿ ಸ್ಮರಿಸಿದ್ದಾನೆ. ಅಲ್ಲದೆ, ಗ್ರಂಥದ ಅನೇಕ ಕಡೆಗಳಲ್ಲಿ ಇದು ನೃಪತುಂಗನ ಮತ, ವಿಚಾರಕ್ರಮ, ಮಾರ್ಗ' ಎಂದು ಮುಂತಾಗಿ ಹೇಳಿ, ಗ್ರಂಥರಚನೆಯಲ್ಲಿ ನೃಪತುಂಗನ ಪಾಲುಗಾರಿಕೆ ಎಷ್ಟು ಎಂಥದು ಎಂಬುದನ್ನು ಸ್ಪಷ್ಟವಾಗಿ ಸೂಚಿಸಿದ್ದಾನೆ. 'ಕವಿಮಾರ್ಗ' ಪೂರ್ತಿಯಾಗಿ ಶ್ರೀವಿಜಯನದು; ಈ ಕವಿಕಾವ್ಯ ನಾಮಗಳನ್ನು ಉಲ್ಲೇಖಿಸಿರುವ ಹಸ್ತಪ್ರತಿ ದುರ್ಗ ಸಿಂಹನ ಕೈಗೆ ಬಂದಿದೆಯೆಂದು ಕಾಣುತ್ತದೆ. ಅವನು 'ಶ್ರೀವಿಜಯರ ಕವಿಮಾರ್ಗಂ' ಎಂದು ಹೇಳಲು ಈ ಸಂದರ್ಭ ಕಾರಣವಾಗಿದ್ದಿರಬಹುದು. {{gap}}(೫) ಈಚೆಗೆ, ಎರಡನೆಯ ನಾಗವರ್ಮನ 'ವರ್ಧಮಾನ ಪುರಾಣ'ದ ಹಸ್ತಪ್ರತಿ ದೊರಕಿದ್ದು, ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಿದೆ. ಇದರಲ್ಲಿ, ಪೂರ್ವಕವಿಗಳನ್ನು ಹೊಗಳುವ ಸಂದರ್ಭದಲ್ಲಿ ಶ್ರೀವಿಜಯನನ್ನು ರಘುವಂಶ ಪುರಾಣ ಕರ್ತವೆಂದು ಹೊಗಳುವ ಪದ್ಯ ಹೀಗಿದೆ : {{gap}}ಅಘವಿಘಟನ ಕಾರಣಮಂ । {{gap}}[ಸು]ಘಟಿತ ಪದಬಂಧ ಬಂಧುರಾಳಂಕೃತಿಯಂ ॥ {{gap}}ಲಘುವಾಗ ಪೊಗಟೆಪೇಟ್ಟಂ {{gap}}ರಘುವಂಶ ಮಹಾಪುರಾಣಮಂ ಶ್ರೀವಿಜಯಂ ॥ (೧-೨) {{gap}}ವರ್ಧಮಾನಪುರಾಣಕವಿ ನಾಗವರ್ಮನು ಗುಣವರ್ಮ ಪಂಪ ಪೊನ್ನ ರನ್ನ ಮೊದಲಾದ ಪ್ರಾಚೀನ ಜೈನಕವಿಗಳ ಪಂಕ್ತಿಯಲ್ಲಿ ಮೊತ್ತಮೊದಲು ಒಂದು ಪುರಾಣ ಕಾವ್ಯವನ್ನೂ ಅದರ ಕವಿಯನ್ನೂ ಕೊಂಡಾಡಿರುವುದರಿಂದ, ಕೃತಿ ಜೈನದರ್ಮಾನುಸಾರಿಯಾದುದೆಂದೂ ಕೃತಿಕಾರ ಶ್ರೀವಿಜಯ ಜೈನಧರ್ಮಿಯ<noinclude></noinclude> rudx2g9b3q8uam4f2brgj0o4hvbdyne 322881 322878 2026-05-27T03:24:23Z Shreelatha.Halemane 7642 /* Validated */ 322881 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೦|right=ಕವಿರಾಜಮಾರ್ಗ}} ಸಂಬಂಧಪಟ್ಟಂತೆ ಶಾಸ್ತ್ರವಿಚಾರವನ್ನು ವಿಸ್ತರಿಸಿ ಪ್ರತಿಪಾದಿಸಬೇಕೆಂದು ಸೂಚಿಸಿರಬಹುದು ; ಅಲ್ಲದೆ, ಸ್ವತಃ ವಿದ್ವಾಂಸನಾಗಿದ್ದ ನೃಪತುಂಗನು “ಕವಿಮಾರ್ಗ'ದ ಇತರ ಶಾಸ್ತ್ರವಿಚಾರಗಳನ್ನು ತನ್ನ ಸಭೆಯಲ್ಲಿ ಚರ್ಚಿಸಿ, ತನ್ನ ಅಭಿಪ್ರಾಯಗಳನ್ನೂ ಸೂಚಿಸಿರಬಹುದು. ಇಂಥ ಒಂದು ವಿಚಾರಮಥನದ ಫಲಿತವಾಗಿ 'ಕವಿರಾಜಮಾರ್ಗ' ರೂಪಗೊಂಡಿರಬೇಕೆ೦ಬುದಕ್ಕೆ ಗ್ರಂಥದಿಂದ ಅನೇಕ ಸಂದರ್ಭೋಕ್ತಿಗಳನ್ನು ನಿದರ್ಶನಗಳಾಗಿ ಕೊಡಬಹುದು. ಶ್ರೀವಿಜಯನು ತನ್ನ ಪ್ರಭುವಿನ ಹಾಗೂ ಇತರ ವಿದ್ವಾಂಸರ ಅಭಿಪ್ರಾಯಗಳೆಲ್ಲವನ್ನೂ ಸ್ವೀಕರಿಸಿ ಅಳವಡಿಸಿ, ತನ್ನ ಕವಿಮಾರ್ಗ'ವನ್ನು 'ಕವಿರಾಜಮಾರ್ಗ' ಎಂದು ಕರೆದು, ಪರಿಚ್ಛೇದಾಂತ ಪದ್ಯಗಳಲ್ಲಿ 'ಶ್ರೀವಿಜಯ ಪ್ರಭೂತ' ಮುಂತಾಗಿ ತನ್ನ ಕರ್ತತ್ವವನ್ನೂ ಸೂಚಿಸಿ, ಪರಿಚ್ಛೇದಾಂತ ಗದ್ಯದಲ್ಲಿ ತನ್ನ ಕೃತಿಗೆ ಆಶ್ರಯದಾತ ನೃಪತುಂಗನ ಮಾನ್ಯತೆಯಿದೆ, ಒಪ್ಪಿಗೆಯಿದೆ ಎಂಬುದನ್ನು 'ನೃಪತುಂಗದೇವಾನುಮತಮಪ್ಪ ಕವಿರಾಜಮಾರ್ಗ' ಎಂಬ ಮಾತುಗಳಲ್ಲಿ ಸ್ಮರಿಸಿದ್ದಾನೆ. ಅಲ್ಲದೆ, ಗ್ರಂಥದ ಅನೇಕ ಕಡೆಗಳಲ್ಲಿ ಇದು ನೃಪತುಂಗನ ಮತ, ವಿಚಾರಕ್ರಮ, ಮಾರ್ಗ' ಎಂದು ಮುಂತಾಗಿ ಹೇಳಿ, ಗ್ರಂಥರಚನೆಯಲ್ಲಿ ನೃಪತುಂಗನ ಪಾಲುಗಾರಿಕೆ ಎಷ್ಟು ಎಂಥದು ಎಂಬುದನ್ನು ಸ್ಪಷ್ಟವಾಗಿ ಸೂಚಿಸಿದ್ದಾನೆ. 'ಕವಿಮಾರ್ಗ' ಪೂರ್ತಿಯಾಗಿ ಶ್ರೀವಿಜಯನದು; ಈ ಕವಿಕಾವ್ಯ ನಾಮಗಳನ್ನು ಉಲ್ಲೇಖಿಸಿರುವ ಹಸ್ತಪ್ರತಿ ದುರ್ಗ ಸಿಂಹನ ಕೈಗೆ ಬಂದಿದೆಯೆಂದು ಕಾಣುತ್ತದೆ. ಅವನು 'ಶ್ರೀವಿಜಯರ ಕವಿಮಾರ್ಗಂ' ಎಂದು ಹೇಳಲು ಈ ಸಂದರ್ಭ ಕಾರಣವಾಗಿದ್ದಿರಬಹುದು. {{gap}}(೫) ಈಚೆಗೆ, ಎರಡನೆಯ ನಾಗವರ್ಮನ 'ವರ್ಧಮಾನ ಪುರಾಣ'ದ ಹಸ್ತಪ್ರತಿ ದೊರಕಿದ್ದು, ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಿದೆ. ಇದರಲ್ಲಿ, ಪೂರ್ವಕವಿಗಳನ್ನು ಹೊಗಳುವ ಸಂದರ್ಭದಲ್ಲಿ ಶ್ರೀವಿಜಯನನ್ನು ರಘುವಂಶ ಪುರಾಣ ಕರ್ತವೆಂದು ಹೊಗಳುವ ಪದ್ಯ ಹೀಗಿದೆ : {{gap}}ಅಘವಿಘಟನ ಕಾರಣಮಂ । {{gap}}[ಸು]ಘಟಿತ ಪದಬಂಧ ಬಂಧುರಾಳಂಕೃತಿಯಂ ॥ {{gap}}ಲಘುವಾಗ ಪೊಗಟೆಪೇಟ್ಟಂ {{gap}}ರಘುವಂಶ ಮಹಾಪುರಾಣಮಂ ಶ್ರೀವಿಜಯಂ ॥ (೧-೨) {{gap}}ವರ್ಧಮಾನಪುರಾಣಕವಿ ನಾಗವರ್ಮನು ಗುಣವರ್ಮ ಪಂಪ ಪೊನ್ನ ರನ್ನ ಮೊದಲಾದ ಪ್ರಾಚೀನ ಜೈನಕವಿಗಳ ಪಂಕ್ತಿಯಲ್ಲಿ ಮೊತ್ತಮೊದಲು ಒಂದು ಪುರಾಣ ಕಾವ್ಯವನ್ನೂ ಅದರ ಕವಿಯನ್ನೂ ಕೊಂಡಾಡಿರುವುದರಿಂದ, ಕೃತಿ ಜೈನದರ್ಮಾನುಸಾರಿಯಾದುದೆಂದೂ ಕೃತಿಕಾರ ಶ್ರೀವಿಜಯ ಜೈನಧರ್ಮಿಯ<noinclude></noinclude> czgd7scpz0tygzbmnpsf4n8cte87r20 ಪುಟ:ಕವಿರಾಜ ಮಾರ್ಗಂ.pdf/೩೭ 104 16268 322879 157116 2026-05-27T03:22:44Z Shreesha Sharma 7840 /* Proofread */ 322879 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಪೀಠಿಕ|right=೨೧}} ನಂದೂ ಎಣಿಸಬಹುದು. 'ಲಘುವಾಗೆ... ಪೇಟ್ಟಂ' ಎಂದರೆ 'ಸಂಕ್ಷೇಪ'ವಾಗಿ ಹೇಳಿದನು ಎಂದು ಅರ್ಥವಾಗುತ್ತದೆ. ಆದ್ದರಿಂದ, ಸಂಸ್ಕೃತ ಇಲ್ಲವೆ ಪ್ರಾಕೃತ ಮೂಲ ರಘವಂಶ ಮಹಾ ಪುರಾಣವನ್ನು ಆಧರಿಸಿ ಈ ಕನ್ನಡ ಕೃತಿ ರಚಿತವಾಗಿದೆಯೆಂದು ತೋರುತ್ತದೆ. ಈ ರಘುವಂಶ ಮಹಾಪುರಾಣದಲ್ಲಿ ರಾಮಾಯಣದ ಕಥೆಯೂ ಇರಬೇಕಷ್ಟೆ ಕವಿರಾಜಮಾರ್ಗದಲ್ಲಿ ರಾಮಾಯಣದ ಕಥೆಗೆ ಸಂಬಂಧಪಟ್ಟ ಹಲವಾರು ಲಕ್ಷ ಪದ್ಯಗಳಿವೆ. ಜೈನಸಂಪ್ರದಾಯದ ರಾಮಾಯಣದಿಂದ ಈ ಪದ್ಯಗಳು ಉದ್ಧತವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇತರ ಲಕ್ಷ್ಮ ಪದ್ಯಗಳಂತ ಈ ಪದ್ಯಗಳಾದರೂ ಕವಿರಾಜಮಾರ್ಗಕಾರನಿಂದಲೇ ರಚಿತವಾದವು ಎಂದು ಸಕಾರಣವಾಗಿ ಊಹಿಸಬಹುದು. ನೃಪತುಂಗನ ಆಶ್ರಿತ ಸಭಾಸದನೂ ಜೈನನ ಆದ ವ್ಯಕ್ತಿಯೊಬ್ಬನಿಂದ ಕವಿರಾಜಮಾರ್ಗ ರಚಿತವಾಗಿರಬೇಕೆಂಬ ಅಭಿಪ್ರಾಯವನ್ನು ಈ ಹಿಂದೆಯೇ ವ್ಯಕ್ತಪಡಿಸಿದೆ. {{gap}}ಈವರೆಗೆ ಪರಿಶೀಲಿಸಿದ ಕೆಲವು ಆಂತರಿಕ ಹಾಗೂ ಬಾಹ್ಯ ಪ್ರಮಾಣಗಳಿಂದ ಕೃತಿಕಾರನು ಶ್ರೀವಿಜಯ ಎಂದೂ ವ್ಯಕ್ತಪಡುತ್ತದೆ. ಆದ್ದರಿಂದ, ರಘವಂಶ ಮಹಾಪುರಾಣವನ್ನೂ ಕವಿರಾಜಮಾರ್ಗವನ್ನೂ ರಚಿಸಿದವನು ಒಬ್ಬನೇ ಎಂದು ಸದ್ಯದಮಟ್ಟಿಗೆ ನಿಶ್ಚಯಿಸಬಹುದು. ಕವಿರಾಜಮಾರ್ಗದಲ್ಲಿ ನೃಪತುಂಗ ಸಭಾಸದನು 'ಮಹಾಪುರುಷವ್ರತನಿತಂ', ಹಾಗೂ 'ಲಕ್ಷ ಲಕ್ಷಣಂ' ಎಂಬಿವೇ ಮುಂತಾದ ಅರ್ಥಪೂರ್ಣ ವಿಶೇಷಣಗಳಿಂದ ವರ್ಣಿತನಾಗಿರುವನಷ್ಟೆ, ಕವಿರಾಜಮಾರ್ಗವು ಅವನ ಲಕ್ಷಣ ಜ್ಞಾನಕ್ಕೂ ರಘುವಂಶ ಮಹಾಪುರಾಣವು ಅವನ ಲಕ್ಷ ಗ್ರಂಥಕ್ಕೂ ನಿದರ್ಶನಗಳು, ಮಂಗರಸನು (ಸು. ೧೫೦ ೮) 'ದೇವಚಂದ್ರಪ್ರಭರನು ಕೊಂಡಾಡಿದ ಶ್ರೀವಿಜಯರ'... ಎಂದು ಚಂಪೂ ಕವಿಗಳ ಗುಂಪಿನಲ್ಲಿ ಶ್ರೀವಿಜಯನ ಹೆಸರನ್ನು ಬಹುವಚನದ ಗೌರವದಿಂದ ಸ್ಮರಿಸಿರುವುದು ದುರ್ಗಸಿಂಹನ ಗೌರವಾರ್ಥಕ 'ಶ್ರೀವಿಜಯರ್‌ದೇವ‌' ಎಂಬ ಬಹುವಚನದ ಪ್ರಯೋಗವನ್ನು ನೆನಪಿಗೆ ತರುತ್ತದೆ. ಲಕ್ಷ ಲಕ್ಷಣ ನಿರ್ಮಾಪಕನೂ ಜೈನಧರ್ಮ ದೀಪಕನೂ ಆದ ಕವಿರಾಜಮಾರ್ಗಕಾರ ಶ್ರೀವಿಜಯನನ್ನೇ ಇವರಿಬ್ಬರೂ ಗೌರವಪೂರ್ವಕ ಸ್ಮರಿಸಿದ್ದಾರೆ ಎಂದು ತಿಳಿಯಬಹುದಾಗಿದೆ. ದೊಡ್ಡಯ್ಯನು (ಸು. ೧೫೫೦) 'ಚಂದ್ರಪ್ರಭ ಪುರಾಣವ ೮. ಡಾ. ರಂ. ಶ್ರೀ. ಮುಗಳಿ : 'ಕನ್ನಡ ಸಾಹಿತ್ಯ ಚರಿತ್ರೆ' (೧೯೬೦), ಪು. ೨೨.<noinclude></noinclude> 905s04wh0yibw229utcndijqsuckxq0 322883 322879 2026-05-27T03:26:09Z Shreelatha.Halemane 7642 /* Validated */ 322883 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಪೀಠಿಕೆ|right=೨೧}} ನೆಂದೂ ಎಣಿಸಬಹುದು. 'ಲಘುವಾಗೆ... ಪೇಟ್ಟಂ' ಎಂದರೆ 'ಸಂಕ್ಷೇಪ'ವಾಗಿ ಹೇಳಿದನು ಎಂದು ಅರ್ಥವಾಗುತ್ತದೆ. ಆದ್ದರಿಂದ, ಸಂಸ್ಕೃತ ಇಲ್ಲವೆ ಪ್ರಾಕೃತ ಮೂಲ ರಘವಂಶ ಮಹಾ ಪುರಾಣವನ್ನು ಆಧರಿಸಿ ಈ ಕನ್ನಡ ಕೃತಿ ರಚಿತವಾಗಿದೆಯೆಂದು ತೋರುತ್ತದೆ. ಈ ರಘುವಂಶ ಮಹಾಪುರಾಣದಲ್ಲಿ ರಾಮಾಯಣದ ಕಥೆಯೂ ಇರಬೇಕಷ್ಟೆ ಕವಿರಾಜಮಾರ್ಗದಲ್ಲಿ ರಾಮಾಯಣದ ಕಥೆಗೆ ಸಂಬಂಧಪಟ್ಟ ಹಲವಾರು ಲಕ್ಷ ಪದ್ಯಗಳಿವೆ. ಜೈನಸಂಪ್ರದಾಯದ ರಾಮಾಯಣದಿಂದ ಈ ಪದ್ಯಗಳು ಉದೃತವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇತರ ಲಕ್ಷ್ಯ ಪದ್ಯಗಳಂತ ಈ ಪದ್ಯಗಳಾದರೂ ಕವಿರಾಜಮಾರ್ಗಕಾರನಿಂದಲೇ ರಚಿತವಾದವು ಎಂದು ಸಕಾರಣವಾಗಿ ಊಹಿಸಬಹುದು. ನೃಪತುಂಗನ ಆಶ್ರಿತ ಸಭಾಸದನೂ ಜೈನನ ಆದ ವ್ಯಕ್ತಿಯೊಬ್ಬನಿಂದ ಕವಿರಾಜಮಾರ್ಗ ರಚಿತವಾಗಿರಬೇಕೆಂಬ ಅಭಿಪ್ರಾಯವನ್ನು ಈ ಹಿಂದೆಯೇ ವ್ಯಕ್ತಪಡಿಸಿದೆ. {{gap}}ಈವರೆಗೆ ಪರಿಶೀಲಿಸಿದ ಕೆಲವು ಆಂತರಿಕ ಹಾಗೂ ಬಾಹ್ಯ ಪ್ರಮಾಣಗಳಿಂದ ಕೃತಿಕಾರನು ಶ್ರೀವಿಜಯ ಎಂದೂ ವ್ಯಕ್ತಪಡುತ್ತದೆ. ಆದ್ದರಿಂದ, ರಘವಂಶ ಮಹಾಪುರಾಣವನ್ನೂ ಕವಿರಾಜಮಾರ್ಗವನ್ನೂ ರಚಿಸಿದವನು ಒಬ್ಬನೇ ಎಂದು ಸದ್ಯದಮಟ್ಟಿಗೆ ನಿಶ್ಚಯಿಸಬಹುದು. ಕವಿರಾಜಮಾರ್ಗದಲ್ಲಿ ನೃಪತುಂಗ ಸಭಾಸದನು 'ಮಹಾಪುರುಷವ್ರತನಿಷ್ಚಿತಂ', ಹಾಗೂ 'ಲಕ್ಷ ಲಕ್ಷಣಂ' ಎಂಬಿವೇ ಮುಂತಾದ ಅರ್ಥಪೂರ್ಣ ವಿಶೇಷಣಗಳಿಂದ ವರ್ಣಿತನಾಗಿರುವನಷ್ಟೆ, ಕವಿರಾಜಮಾರ್ಗವು ಅವನ ಲಕ್ಷಣ ಜ್ಞಾನಕ್ಕೂ ರಘುವಂಶ ಮಹಾಪುರಾಣವು ಅವನ ಲಕ್ಷ ಗ್ರಂಥಕ್ಕೂ ನಿದರ್ಶನಗಳು, ಮಂಗರಸನು (ಸು. ೧೫೦ ೮) 'ದೇವಚಂದ್ರಪ್ರಭರನು ಕೊಂಡಾಡಿದ ಶ್ರೀವಿಜಯರ'... ಎಂದು ಚಂಪೂ ಕವಿಗಳ ಗುಂಪಿನಲ್ಲಿ ಶ್ರೀವಿಜಯನ ಹೆಸರನ್ನು ಬಹುವಚನದ ಗೌರವದಿಂದ ಸ್ಮರಿಸಿರುವುದು ದುರ್ಗಸಿಂಹನ ಗೌರವಾರ್ಥಕ 'ಶ್ರೀವಿಜಯರ್‌ದೇವ‌' ಎಂಬ ಬಹುವಚನದ ಪ್ರಯೋಗವನ್ನು ನೆನಪಿಗೆ ತರುತ್ತದೆ. ಲಕ್ಷ ಲಕ್ಷಣ ನಿರ್ಮಾಪಕನೂ ಜೈನಧರ್ಮ ದೀಪಕನೂ ಆದ ಕವಿರಾಜಮಾರ್ಗಕಾರ ಶ್ರೀವಿಜಯನನ್ನೇ ಇವರಿಬ್ಬರೂ ಗೌರವಪೂರ್ವಕ ಸ್ಮರಿಸಿದ್ದಾರೆ ಎಂದು ತಿಳಿಯಬಹುದಾಗಿದೆ. ದೊಡ್ಡಯ್ಯನು (ಸು. ೧೫೫೦) 'ಚಂದ್ರಪ್ರಭ ಪುರಾಣವ —————————— ೮. ಡಾ. ರಂ. ಶ್ರೀ. ಮುಗಳಿ : 'ಕನ್ನಡ ಸಾಹಿತ್ಯ ಚರಿತ್ರೆ' (೧೯೬೦), ಪು. ೨೨.<noinclude></noinclude> h0w0axyawrqaiblypn5wugvxa0fjkoc ಪುಟ:ಕವಿರಾಜ ಮಾರ್ಗಂ.pdf/೩೮ 104 16269 322882 157127 2026-05-27T03:24:33Z Shreesha Sharma 7840 /* Proofread */ 322882 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೨೨|right=ಕವಿರಾಜಮಾರ್ಗ}} ಪೇಟ್ಟಿ ವಿಜಯಕವೀಂದ್ರ' ಎಂದು ಹೇಳಿರುವುದನ್ನೂ ನೆನೆಯಬಹುದು. ಕವಿರಾಜಮಾರ್ಗ ಶ್ರೀವಿಜಯಕೃತ {{gap}}ಈವರೆಗೆ ಪರಿಶೀಲಿಸಿದ ಎಲ್ಲ ಪ್ರಮಾಣಗಳನ್ನೂ ಒಟ್ಟಿನಲ್ಲಿ ತೂಗಿ ನೋಡಿದಾಗ, ಕವಿರಾಜಮಾರ್ಗ, ರಘುವಂಶ ಮಹಾಪುರಾಣ, ಚಂದ್ರಪ್ರಭ ಪುರಾಣ ಈ ಮೂರೂ ಏಕಕರ್ತಕ, ಆ ಕರ್ತ ಶ್ರೀವಿಜಯ, ಎಂಬ ತೀರ್ಮಾನಕ್ಕೆ ಧಾರಾಳವಾದ ಅವಕಾಶವಿದೆ. ಕವಿರಾಜಮಾರ್ಗದಲ್ಲಿ ಪದ್ಯಕವಿಗಳ ಸಾಲಿನಲ್ಲಿ ಮೊದಲಿನಲ್ಲೇ ಉಕ್ತನಾದ 'ಪರಮ ಶ್ರೀವಿಜಯ ಕವೀಶ್ವರನು ಒಬ್ಬ ಪೂರ್ವ ಕವಿಯೋ, ಕವಿರಾಜಮಾರ್ಗಕಾರನಾದ ಶ್ರೀವಿಜಯನೇ ತನ್ನ ಹೆಸರನ್ನು ಮೊದಲು ಹೇಳಿಕೊ೦ಡಿರುವನೋ – ನಿಶ್ಚಯಿಸುವುದು ಕಷ್ಟ ಅವನು ಪೂರ್ವ ಕವಿ ಎನ್ನುವುದಕ್ಕೆ ಆಧಾರ ಸಿಕ್ಕಿದರೆ, ಆತ ಚಂದ್ರಪ್ರಭ ಪುರಾಣಕರ್ತ ಎಂದು ಊಹಿಸಲೂಬಹುದು. ಸದ್ಯದ ಪರಿಸ್ಥಿತಿಯಲ್ಲಿ ಸಕಾರಣವಾದ ಊಹೆಗಳ ಮೇಲೆಯೇ ನಮ್ಮ ತೀರ್ಮಾನಗಳ ಕಟ್ಟಡ ನಿಲ್ಲಬೇಕಾಗಿದೆ. ಆದರೆ, ಕವಿರಾಜಮಾರ್ಗ ಮತ್ತು ರಘುವಂಶ ಮಹಾಪುರಾಣಗಳ ಕರ್ತ ಒಬ್ಬನೇ ಶ್ರೀವಿಜಯ ಎಂಬ ತೀರ್ಮಾನ ಊಹೆಗಳ ಸೀಮೆಯನ್ನು ದಾಟಿ, ನಿಶ್ಚಿತದಲ್ಲಿ ನೆಲೆಗೊಂಡಿದೆ ಎಂದು ನಾನು ಭಾವಿಸಿದ್ದೇನ. ಇದು ಹೇಗಿದ್ದರೂ, ಕವಿರಾಜಮಾರ್ಗವಂತೂ ಶ್ರೀವಿಜಯಕೃತ; ಅದರ ಮೇಲೆ ಅಷ್ಟೊತ್ತಿ ಬಿದ್ದಿರುವುದು ನೃಪತುಂಗದೇವಮತ. {{rh|center=|left=ಆಗಸ್ಟ್ ೧೫, ೧೯೭೪|right=ಎಂ. ವಿ. ಸೀತಾರಾಮಯ್ಯ}} ಬೆಂಗಳೂರು<noinclude></noinclude> m9vs7b1bqjn7xb1fpffuqczx4ayl2ms 322885 322882 2026-05-27T03:27:34Z Shreelatha.Halemane 7642 /* Validated */ 322885 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೨|right=ಕವಿರಾಜಮಾರ್ಗ}} ಪೇಟ್ಟಿ ವಿಜಯಕವೀಂದ್ರ' ಎಂದು ಹೇಳಿರುವುದನ್ನೂ ನೆನೆಯಬಹುದು. '''ಕವಿರಾಜಮಾರ್ಗ ಶ್ರೀವಿಜಯಕೃತ''' {{gap}}ಈವರೆಗೆ ಪರಿಶೀಲಿಸಿದ ಎಲ್ಲ ಪ್ರಮಾಣಗಳನ್ನೂ ಒಟ್ಟಿನಲ್ಲಿ ತೂಗಿ ನೋಡಿದಾಗ, ಕವಿರಾಜಮಾರ್ಗ, ರಘುವಂಶ ಮಹಾಪುರಾಣ, ಚಂದ್ರಪ್ರಭ ಪುರಾಣ ಈ ಮೂರೂ ಏಕಕರ್ತಕ, ಆ ಕರ್ತ ಶ್ರೀವಿಜಯ, ಎಂಬ ತೀರ್ಮಾನಕ್ಕೆ ಧಾರಾಳವಾದ ಅವಕಾಶವಿದೆ. ಕವಿರಾಜಮಾರ್ಗದಲ್ಲಿ ಪದ್ಯಕವಿಗಳ ಸಾಲಿನಲ್ಲಿ ಮೊದಲಿನಲ್ಲೇ ಉಕ್ತನಾದ 'ಪರಮ ಶ್ರೀವಿಜಯ ಕವೀಶ್ವರನು ಒಬ್ಬ ಪೂರ್ವ ಕವಿಯೋ, ಕವಿರಾಜಮಾರ್ಗಕಾರನಾದ ಶ್ರೀವಿಜಯನೇ ತನ್ನ ಹೆಸರನ್ನು ಮೊದಲು ಹೇಳಿಕೊ೦ಡಿರುವನೋ – ನಿಶ್ಚಯಿಸುವುದು ಕಷ್ಟ ಅವನು ಪೂರ್ವ ಕವಿ ಎನ್ನುವುದಕ್ಕೆ ಆಧಾರ ಸಿಕ್ಕಿದರೆ, ಆತ ಚಂದ್ರಪ್ರಭ ಪುರಾಣಕರ್ತ ಎಂದು ಊಹಿಸಲೂಬಹುದು. ಸದ್ಯದ ಪರಿಸ್ಥಿತಿಯಲ್ಲಿ ಸಕಾರಣವಾದ ಊಹೆಗಳ ಮೇಲೆಯೇ ನಮ್ಮ ತೀರ್ಮಾನಗಳ ಕಟ್ಟಡ ನಿಲ್ಲಬೇಕಾಗಿದೆ. ಆದರೆ, ಕವಿರಾಜಮಾರ್ಗ ಮತ್ತು ರಘುವಂಶ ಮಹಾಪುರಾಣಗಳ ಕರ್ತೃ ಒಬ್ಬನೇ ಶ್ರೀವಿಜಯ ಎಂಬ ತೀರ್ಮಾನ ಊಹೆಗಳ ಸೀಮೆಯನ್ನು ದಾಟಿ, ನಿಶ್ಚಿತದಲ್ಲಿ ನೆಲೆಗೊಂಡಿದೆ ಎಂದು ನಾನು ಭಾವಿಸಿದ್ದೇನ. ಇದು ಹೇಗಿದ್ದರೂ, ಕವಿರಾಜಮಾರ್ಗವಂತೂ ಶ್ರೀವಿಜಯಕೃತ; ಅದರ ಮೇಲೆ ಅಚ್ಚೊತ್ತಿ ಬಿದ್ದಿರುವುದು ನೃಪತುಂಗದೇವಮತ. {{rh|center=|left=ಆಗಸ್ಟ್ ೧೫, ೧೯೭೪|right=ಎಂ. ವಿ. ಸೀತಾರಾಮಯ್ಯ}} {{rh|center=|left=ಬೆಂಗಳೂರು|right=}}<noinclude></noinclude> clzz3d99u4r90ct093wgdgo30nc2tzq ಪುಟ:ಕವಿರಾಜ ಮಾರ್ಗಂ.pdf/೩೯ 104 16270 322884 157138 2026-05-27T03:26:19Z Shreesha Sharma 7840 /* Proofread */ 322884 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''ಪೀಠಿಕೆ'''}} {{center|(ವಿದ್ಯಾರ್ಥಿ ಆವೃತ್ತಿ)}} {{gap}}ಚಾರಿತ್ರಿಕ ಹಿನ್ನೆಲೆ : ಕವಿರಾಜಮಾರ್ಗವು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟವೂ ಮಹತ್ತ್ವಪೂರ್ಣವೂ ಆದ ಸ್ಥಾನವನ್ನು ಪಡೆದಿದೆ. ಈವರೆಗೆ ಉಪಲಬ್ಧವಾಗಿರುವ ಕನ್ನಡ ಗ್ರಂಥಗಳಲ್ಲಿ ಕವಿರಾಜಮಾರ್ಗವು ಮೊತ್ತ ಮೊದಲನೆಯದು. ಇದು ಅಲಂಕಾರಶಾಸ್ತ್ರಕ್ಕೆ ಸಂಬಂಧಪಟ್ಟ ಲಕ್ಷಣ ಗ್ರಂಥ; ಕನ್ನಡದಲ್ಲಿ ಕಾವ್ಯಮೀಮಾಂಸೆಯ ಪರಂಪರೆಗೆ ತಲಕಾವೇರಿ. ಹೀಗೆ, ಅನೇಕ ದೃಷ್ಟಿಗಳಿಂದ ಅಮೂಲ್ಯವೆನಿಸಿರುವ ಈ ಗ್ರಂಥವನ್ನು ರಚಿಸಿದವನು ಕರ್ಣಾಟಕದ ರಾಷ್ಟ್ರಕೂಟ ವಂಶದ ದೊರೆ ನೃಪತುಂಗನೆಂದು ಕೆಲವು ವಿದ್ವಾಂಸರ ಅಭಿಪ್ರಾಯ; ಆತನ ಸಭಾಸದನಾಗಿದ್ದ ಕವಿಯೊಬ್ಬನು ಇದರ ಕರ್ತ ಎಂದು ಬೇರೆ ಹಲವು ಮಂದಿ ವಿದ್ವಾಂಸರ ಅಭಿಮತ. ನೃಪತುಂಗ ಸಭಾಸದನಾದ ಆ ಕವಿ ಶ್ರೀ ವಿಜಯನೆಂದು ಕೆಲವರೂ, ಕವೀಶ್ವರನೆಂದು ಇನ್ನೂ ಕೆಲವರೂ ವಾದಿಸಿದ್ದಾರೆ. ಕವಿ ಯಾರೇ ಆಗಿದ್ದರೂ, ಗ್ರಂಥವು ನೃಪತುಂಗನ ಆಳಿಕೆಯಲ್ಲಿ (ಕ್ರಿ.ಶ. ೮೧೪- ೮೭೭) ರಚಿತವಾಗಿರುವುದು ನಿರ್ವಿವಾದವಾಗಿರುವುದರಿಂದಲೂ, ಆತನೆ (ಅದರ ಕರ್ತವಲ್ಲದಿದ್ದರೂ) ಅದರ ನಿರ್ಮಾಣಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿರುವ ಪ್ರೇರಕಶಕ್ತಿಯೂ ಕವಿಯ ಆಶ್ರಯದಾತನೂ ಆಗಿರುವುದರಿಂದಲೂ, ನೃಪತುಂಗನ ಮತ, ವ್ಯಕ್ತಿತ್ವ ಮುಂತಾದ ಸಂಗತಿಗಳ ವಿವೇಚನೆಯಿಂದ ಗ್ರಂಥದ ಕರ್ತತ್ವ ವಿಚಾರದ ಗೋಜನ್ನು ಬಿಡಿಸಿ, ಆ ಸಂಬಂಧದ ವಿವಾದವನ್ನು ಕೊನೆಮುಟ್ಟಿಸುವ ಮಾತು ಎಂದು ಹೇಳುವುದು ಸಾಹಸವಾಗಬಹುದಾದರೂ ನಾವು ವಹಿಸಿರುವ ಪಕ್ಷದ ನಿಲುವನ್ನು ಇನ್ನಷ್ಟು ಬಲಪಡಿಸುವ ನಮ್ಮ ಕೊನೆಯ ಮಾತನ್ನು ಜಿಜ್ಞಾಸುಗಳ ಮುಂದಿಡಲು ತಕ್ಕಮಟ್ಟಿಗೆ ನೆರವು ದೊರೆಯುವುದರಿಂದಲೂ, ನೃಪತುಂಗನ ವಿಚಾರವನ್ನು ಸಂಕ್ಷೇಪವಾಗಿಯಾದರೂ ಪ್ರಸ್ತಾಪಿಸಬೇಕಾದದ್ದು ಅಗತ್ಯ. {{gap}}ರಾಷ್ಟ್ರಕೂಟ ವಂಶ : ರಾಷ್ಟ್ರಕೂಟವಂಶವು ಕರ್ನಾಟಕ ಮತ್ತು ಮಹಾರಾಷ್ಟ್ರ ಪ್ರದೇಶಗಳನ್ನು ಸುಮಾರು ಎರಡು ಶತಮಾನಗಳಿಗಿಂತ ಹೆಚ್ಚು ಕಾಲ ತನ್ನ ಆಳ್ವಿಕೆಯಲ್ಲಿ ಇಟ್ಟುಕೊಂಡಿದ್ದಿತು. ಈ ವಂಶದ ಹೆಸರಿನ ಬಗೆಗೆ ಬೇರೆ ಬೇರೆ<noinclude></noinclude> 9mtag28rn9v9zfhwxo92dwad6mz06ty 322887 322884 2026-05-27T03:30:16Z Shreelatha.Halemane 7642 /* Validated */ 322887 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ಪೀಠಿಕೆ'''}} {{center|(ವಿದ್ಯಾರ್ಥಿ ಆವೃತ್ತಿ)}} {{gap}}'''ಚಾರಿತ್ರಿಕ ಹಿನ್ನೆಲೆ''' : ಕವಿರಾಜಮಾರ್ಗವು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟವೂ ಮಹತ್ತ್ವಪೂರ್ಣವೂ ಆದ ಸ್ಥಾನವನ್ನು ಪಡೆದಿದೆ. ಈವರೆಗೆ ಉಪಲಬ್ಧವಾಗಿರುವ ಕನ್ನಡ ಗ್ರಂಥಗಳಲ್ಲಿ ಕವಿರಾಜಮಾರ್ಗವು ಮೊತ್ತ ಮೊದಲನೆಯದು. ಇದು ಅಲಂಕಾರಶಾಸ್ತ್ರಕ್ಕೆ ಸಂಬಂಧಪಟ್ಟ ಲಕ್ಷಣ ಗ್ರಂಥ; ಕನ್ನಡದಲ್ಲಿ ಕಾವ್ಯಮೀಮಾಂಸೆಯ ಪರಂಪರೆಗೆ ತಲಕಾವೇರಿ. ಹೀಗೆ, ಅನೇಕ ದೃಷ್ಟಿಗಳಿಂದ ಅಮೂಲ್ಯವೆನಿಸಿರುವ ಈ ಗ್ರಂಥವನ್ನು ರಚಿಸಿದವನು ಕರ್ಣಾಟಕದ ರಾಷ್ಟ್ರಕೂಟ ವಂಶದ ದೊರೆ ನೃಪತುಂಗನೆಂದು ಕೆಲವು ವಿದ್ವಾಂಸರ ಅಭಿಪ್ರಾಯ; ಆತನ ಸಭಾಸದನಾಗಿದ್ದ ಕವಿಯೊಬ್ಬನು ಇದರ ಕರ್ತೃ ಎಂದು ಬೇರೆ ಹಲವು ಮಂದಿ ವಿದ್ವಾಂಸರ ಅಭಿಮತ. ನೃಪತುಂಗ ಸಭಾಸದನಾದ ಆ ಕವಿ ಶ್ರೀ ವಿಜಯನೆಂದು ಕೆಲವರೂ, ಕವೀಶ್ವರನೆಂದು ಇನ್ನೂ ಕೆಲವರೂ ವಾದಿಸಿದ್ದಾರೆ. ಕವಿ ಯಾರೇ ಆಗಿದ್ದರೂ, ಗ್ರಂಥವು ನೃಪತುಂಗನ ಆಳಿಕೆಯಲ್ಲಿ (ಕ್ರಿ.ಶ. ೮೧೪- ೮೭೭) ರಚಿತವಾಗಿರುವುದು ನಿರ್ವಿವಾದವಾಗಿರುವುದರಿಂದಲೂ, ಆತನೆ (ಅದರ ಕರ್ತವಲ್ಲದಿದ್ದರೂ) ಅದರ ನಿರ್ಮಾಣಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿರುವ ಪ್ರೇರಕಶಕ್ತಿಯೂ ಕವಿಯ ಆಶ್ರಯದಾತನೂ ಆಗಿರುವುದರಿಂದಲೂ, ನೃಪತುಂಗನ ಮತ, ವ್ಯಕ್ತಿತ್ವ ಮುಂತಾದ ಸಂಗತಿಗಳ ವಿವೇಚನೆಯಿಂದ ಗ್ರಂಥದ ಕರ್ತತ್ವ ವಿಚಾರದ ಗೋಜನ್ನು ಬಿಡಿಸಿ, ಆ ಸಂಬಂಧದ ವಿವಾದವನ್ನು ಕೊನೆಮುಟ್ಟಿಸುವ ಮಾತು ಎಂದು ಹೇಳುವುದು ಸಾಹಸವಾಗಬಹುದಾದರೂ ನಾವು ವಹಿಸಿರುವ ಪಕ್ಷದ ನಿಲುವನ್ನು ಇನ್ನಷ್ಟು ಬಲಪಡಿಸುವ ನಮ್ಮ ಕೊನೆಯ ಮಾತನ್ನು ಜಿಜ್ಞಾಸುಗಳ ಮುಂದಿಡಲು ತಕ್ಕಮಟ್ಟಿಗೆ ನೆರವು ದೊರೆಯುವುದರಿಂದಲೂ, ನೃಪತುಂಗನ ವಿಚಾರವನ್ನು ಸಂಕ್ಷೇಪವಾಗಿಯಾದರೂ ಪ್ರಸ್ತಾಪಿಸಬೇಕಾದದ್ದು ಅಗತ್ಯ. {{gap}}ರಾಷ್ಟ್ರಕೂಟ ವಂಶ : ರಾಷ್ಟ್ರಕೂಟವಂಶವು ಕರ್ನಾಟಕ ಮತ್ತು ಮಹಾರಾಷ್ಟ್ರ ಪ್ರದೇಶಗಳನ್ನು ಸುಮಾರು ಎರಡು ಶತಮಾನಗಳಿಗಿಂತ ಹೆಚ್ಚು ಕಾಲ ತನ್ನ ಆಳ್ವಿಕೆಯಲ್ಲಿ ಇಟ್ಟುಕೊಂಡಿದ್ದಿತು. ಈ ವಂಶದ ಹೆಸರಿನ ಬಗೆಗೆ ಬೇರೆ ಬೇರೆ<noinclude></noinclude> gwxqcqdixhfob89san4d2mblx86hyuo ಪುಟ:ಕವಿರಾಜ ಮಾರ್ಗಂ.pdf/೪೦ 104 16271 322886 157150 2026-05-27T03:29:01Z Shreesha Sharma 7840 /* Proofread */ 322886 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೨೪|right=ಕವಿರಾಜಮಾರ್ಗ}} ವಿದ್ವಾಂಸರು ಬೇರೆ ಬೇರೆ ನಿರ್ವಚನಗಳನ್ನು ನೀಡಿದ್ದಾರೆ. ರಾಷ್ಟ್ರಕೂಟರು ಕನ್ನಡಿಗರು ಎಂಬುದಷ್ಟನ್ನು ನಾವು ನೆನಪಿಟ್ಟರೆ ಸಾಕು. ಈ ವಂಶದ ಮೂಲಪುರುಷ ಯದು ಎಂದು ಶಾಸನದ ಉಲ್ಲೇಖವಿದ್ದರೂ ಮೊದಲ ದೊರೆ ದಂತಿದುರ್ಗ. (ಇವನ ಹೆಸರು ದಂತಿವರ್ಮ, ದಂತಿಗ ಎಂದೂ ಉಲ್ಲೇಖಗಳಿವೆ). ಬಾದಾಮಿಯ ಚಾಲುಕ್ಯರ ಸಾಮಂತನಾಗಿದ್ದ ಅವನು ಕ್ರಿ.ಶ. ೭೫೩ರಲ್ಲಿ ಚಾಲುಕ್ಯರನ್ನು ಸೋಲಿಸಿ, ತಾನೇ ಪ್ರಭುವಾದನು ; `ರಾಜಪರಮೇಶ್ವರ' ಎಂಬ ಸಾರ್ವಭೌಮಾಂಕಿತವನ್ನು ಇರಿಸಿಕೊಂಡನು. ಅವನಿಗೆ ಪೃಥ್ವಿ ವಲ್ಲಭ, ಖಡ್ಡಾವಲೋಕ ಎಂಬ ಬಿರುದುಗಳೂ ಇದ್ದುವು. (ಇವನಿಗೂ ಹಿಂದಿನ ರಾಷ್ಟ್ರಕೂಟ ಸಾಮಂತರಾಜರ ಹೆಸರುಗಳನ್ನು ರಾಷ್ಟ್ರಕೂಟ ವಂಶವೃಕ್ಷದಲ್ಲಿ ಕೊಟ್ಟಿದೆ. ನೋಡಿ : ಅನುಬಂಧ). ಅವನು ತಾನು ಸಂಪಾದಿಸಿದ ಹೊಸ ರಾಜ್ಯವನ್ನು ಉತ್ತರದಲ್ಲಿ ಮಾಳವದವರೆಗೂ ವಿಸ್ತರಿಸಿ, ಕ್ರಿ.ಶ. ೭೫೮ರಲ್ಲಿ ಮರಣ ಹೊಂದಿದನು. ದಂತಿದುರ್ಗನ ತರುವಾಯ ಸಿಂಹಾಸನವನ್ನೇರಿದ (ಅವನ ಚಿಕ್ಕಪ್ಪ) ೧ನೇಯ ಕೃಷ್ಣನ ಕಾಲದಲ್ಲಿ (ಕ್ರಿ.ಶ. ೭೫೮-೭೭೨) ರಾಷ್ಟ್ರಕೂಟ ಸಾಮ್ರಾಜ್ಯವು ದಕ್ಷಿಣದಲ್ಲಿ ಗಂಗವಾಡಿಯನ್ನು ಬೇಧಿಸಿ, ವಿಸ್ತಾರಗೊಂಡಿತು. ರಾಜ್ಯವಿಸ್ತರಣೆಯ ಕಾರ್ಯದಲ್ಲಿ ಯುವರಾಜ ಗೋವಿಂದನ ನೆರವೂ ಇದ್ದಿತು. ಕೃಷ್ಣನ ಹೆಸರು ನಿಂತಿರುವುದು ಅವನು ಎಲ್ಲೋರದಲ್ಲಿ ಅಖಂಡ ಶಿಲೆಯಲ್ಲಿ ಕೊರೆಯಿಸಿ ಕಟ್ಟಿರುವ ಶಿವದೇವಾಲಯದಿಂದ (ಕೃಷ್ಣನಿಗೆ ಅಕಾಲವರ್ಷ, ಶುಭತುಂಗ ಎಂಬ ಬಿರುದುಗಳಿದ್ದವು. ತಂದೆಯ ಕಾಲದಲ್ಲಿ ಪರಾಕ್ರಮಿಯೆನಿಸಿದ್ದ ಯುವರಾಜ ಗೋವಿಂದನು (೨ನೆಯ ಗೋವಿಂದ : ಕ್ರಿ.ಶ. ೭೭೨-೭೭೯) ಪಟ್ಟಕ್ಕೆ ಬಂದಮೇಲೆ ವಿಷಯಲೋಲುಪನಾಗಿ ರಾಜ್ಯಭಾರವಿಚಾರಗಳಲ್ಲಿ ಉದಾಸೀನನಾಗಿದ್ದನು. ಗೋವಿಂದನಿಗೂ ಅವನ ತಮ್ಮ ಧ್ರುವನಿಗೂ ಯಾದವೀ ಕಲಹ ನಡೆದು, ಗಂಗರಸರು ಗೋವಿಂದನ ಪಕ್ಷವನ್ನು ವಹಿಸಿದ್ದರು. ಇದೇ ನೆವವಾಗಿ ಪ್ರಬಲನಾದ ಧ್ರುವನು ಸಿಂಹಾಸನವನ್ನು ಆಕ್ರಮಿಸಿಕೊಂಡು ಗಂಗರಾಜ್ಯವನ್ನೆಲ್ಲ ಸ್ವಾಧೀನಪಡಿಸಿಕೊಂಡನು. ಹೀಗೆ, ಧ್ರುವನ ಕಾಲದಲ್ಲಿ (ಕ್ರಿ.ಶ. ೭೭೯-೭೯೩), ರಾಷ್ಟ್ರಕೂಟ ಸಾಮ್ರಾಜ್ಯವು ದಕ್ಷಿಣದಲ್ಲಿ ಕಾವೇರಿಯವರೆಗೂ ಹಬ್ಬಿತು. ಇಷ್ಟರಿಂದ ತೃಪ್ತನಾಗದೆ, ವೆಂಗಿಯ ಚಾಲುಕ್ಯರನ್ನೂ, ಪಲ್ಲವರನ್ನೂ ಸೋಲಿಸಿ, ಉತ್ತರ ದಿಗ್ವಿಜಯದತ್ತ ದೃಷ್ಟಿ ಹರಿಸಿದನು. ಉತ್ತರದಲ್ಲಿ ಗುಜರಾತಿನ ವತ್ಸರಾಜನನ್ನೂ ಗೌಡದೇಶದ (ಬಂಗಾಳದ) ಧರ್ಮಪಾಲನನ್ನೂ ಸೋಲಿಸಿದನು. (ಧ್ರುವನಿಗೆ ನಿರುಪಮ, ಧಾರಾವರ್ಷ, ಕಲಿವಲ್ಲಭ ಎಂಬ ಬಿರುದುಗಳಿದ್ದವು. ತನ್ನ ಮಕ್ಕಳಲ್ಲೆಲ್ಲಾ ಗೋವಿಂದನೇ ಉತ್ತರಾಧಿಕಾರಿಯಾಗಲು<noinclude></noinclude> bywpifdtc4zjc46zwr3p63l8x1wc04b 322888 322886 2026-05-27T03:31:08Z Shreelatha.Halemane 7642 /* Validated */ 322888 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೪|right=ಕವಿರಾಜಮಾರ್ಗ}} ವಿದ್ವಾಂಸರು ಬೇರೆ ಬೇರೆ ನಿರ್ವಚನಗಳನ್ನು ನೀಡಿದ್ದಾರೆ. ರಾಷ್ಟ್ರಕೂಟರು ಕನ್ನಡಿಗರು ಎಂಬುದಷ್ಟನ್ನು ನಾವು ನೆನಪಿಟ್ಟರೆ ಸಾಕು. ಈ ವಂಶದ ಮೂಲಪುರುಷ ಯದು ಎಂದು ಶಾಸನದ ಉಲ್ಲೇಖವಿದ್ದರೂ ಮೊದಲ ದೊರೆ ದಂತಿದುರ್ಗ. (ಇವನ ಹೆಸರು ದಂತಿವರ್ಮ, ದಂತಿಗ ಎಂದೂ ಉಲ್ಲೇಖಗಳಿವೆ). ಬಾದಾಮಿಯ ಚಾಲುಕ್ಯರ ಸಾಮಂತನಾಗಿದ್ದ ಅವನು ಕ್ರಿ.ಶ. ೭೫೩ರಲ್ಲಿ ಚಾಲುಕ್ಯರನ್ನು ಸೋಲಿಸಿ, ತಾನೇ ಪ್ರಭುವಾದನು ; `ರಾಜಪರಮೇಶ್ವರ' ಎಂಬ ಸಾರ್ವಭೌಮಾಂಕಿತವನ್ನು ಇರಿಸಿಕೊಂಡನು. ಅವನಿಗೆ ಪೃಥ್ವಿ ವಲ್ಲಭ, ಖಡ್ಡಾವಲೋಕ ಎಂಬ ಬಿರುದುಗಳೂ ಇದ್ದುವು. (ಇವನಿಗೂ ಹಿಂದಿನ ರಾಷ್ಟ್ರಕೂಟ ಸಾಮಂತರಾಜರ ಹೆಸರುಗಳನ್ನು ರಾಷ್ಟ್ರಕೂಟ ವಂಶವೃಕ್ಷದಲ್ಲಿ ಕೊಟ್ಟಿದೆ. ನೋಡಿ : ಅನುಬಂಧ). ಅವನು ತಾನು ಸಂಪಾದಿಸಿದ ಹೊಸ ರಾಜ್ಯವನ್ನು ಉತ್ತರದಲ್ಲಿ ಮಾಳವದವರೆಗೂ ವಿಸ್ತರಿಸಿ, ಕ್ರಿ.ಶ. ೭೫೮ರಲ್ಲಿ ಮರಣ ಹೊಂದಿದನು. ದಂತಿದುರ್ಗನ ತರುವಾಯ ಸಿಂಹಾಸನವನ್ನೇರಿದ (ಅವನ ಚಿಕ್ಕಪ್ಪ) ೧ನೇಯ ಕೃಷ್ಣನ ಕಾಲದಲ್ಲಿ (ಕ್ರಿ.ಶ. ೭೫೮-೭೭೨) ರಾಷ್ಟ್ರಕೂಟ ಸಾಮ್ರಾಜ್ಯವು ದಕ್ಷಿಣದಲ್ಲಿ ಗಂಗವಾಡಿಯನ್ನು ಬೇಧಿಸಿ, ವಿಸ್ತಾರಗೊಂಡಿತು. ರಾಜ್ಯವಿಸ್ತರಣೆಯ ಕಾರ್ಯದಲ್ಲಿ ಯುವರಾಜ ಗೋವಿಂದನ ನೆರವೂ ಇದ್ದಿತು. ಕೃಷ್ಣನ ಹೆಸರು ನಿಂತಿರುವುದು ಅವನು ಎಲ್ಲೋರದಲ್ಲಿ ಅಖಂಡ ಶಿಲೆಯಲ್ಲಿ ಕೊರೆಯಿಸಿ ಕಟ್ಟಿರುವ ಶಿವದೇವಾಲಯದಿಂದ (ಕೃಷ್ಣನಿಗೆ ಅಕಾಲವರ್ಷ, ಶುಭತುಂಗ ಎಂಬ ಬಿರುದುಗಳಿದ್ದವು. ತಂದೆಯ ಕಾಲದಲ್ಲಿ ಪರಾಕ್ರಮಿಯೆನಿಸಿದ್ದ ಯುವರಾಜ ಗೋವಿಂದನು (೨ನೆಯ ಗೋವಿಂದ : ಕ್ರಿ.ಶ. ೭೭೨-೭೭೯) ಪಟ್ಟಕ್ಕೆ ಬಂದಮೇಲೆ ವಿಷಯಲೋಲುಪನಾಗಿ ರಾಜ್ಯಭಾರವಿಚಾರಗಳಲ್ಲಿ ಉದಾಸೀನನಾಗಿದ್ದನು. ಗೋವಿಂದನಿಗೂ ಅವನ ತಮ್ಮ ಧ್ರುವನಿಗೂ ಯಾದವೀ ಕಲಹ ನಡೆದು, ಗಂಗರಸರು ಗೋವಿಂದನ ಪಕ್ಷವನ್ನು ವಹಿಸಿದ್ದರು. ಇದೇ ನೆವವಾಗಿ ಪ್ರಬಲನಾದ ಧ್ರುವನು ಸಿಂಹಾಸನವನ್ನು ಆಕ್ರಮಿಸಿಕೊಂಡು ಗಂಗರಾಜ್ಯವನ್ನೆಲ್ಲ ಸ್ವಾಧೀನಪಡಿಸಿಕೊಂಡನು. ಹೀಗೆ, ಧ್ರುವನ ಕಾಲದಲ್ಲಿ (ಕ್ರಿ.ಶ. ೭೭೯-೭೯೩), ರಾಷ್ಟ್ರಕೂಟ ಸಾಮ್ರಾಜ್ಯವು ದಕ್ಷಿಣದಲ್ಲಿ ಕಾವೇರಿಯವರೆಗೂ ಹಬ್ಬಿತು. ಇಷ್ಟರಿಂದ ತೃಪ್ತನಾಗದೆ, ವೆಂಗಿಯ ಚಾಲುಕ್ಯರನ್ನೂ, ಪಲ್ಲವರನ್ನೂ ಸೋಲಿಸಿ, ಉತ್ತರ ದಿಗ್ವಿಜಯದತ್ತ ದೃಷ್ಟಿ ಹರಿಸಿದನು. ಉತ್ತರದಲ್ಲಿ ಗುಜರಾತಿನ ವತ್ಸರಾಜನನ್ನೂ ಗೌಡದೇಶದ (ಬಂಗಾಳದ) ಧರ್ಮಪಾಲನನ್ನೂ ಸೋಲಿಸಿದನು. (ಧ್ರುವನಿಗೆ ನಿರುಪಮ, ಧಾರಾವರ್ಷ, ಕಲಿವಲ್ಲಭ ಎಂಬ ಬಿರುದುಗಳಿದ್ದವು. ತನ್ನ ಮಕ್ಕಳಲ್ಲೆಲ್ಲಾ ಗೋವಿಂದನೇ ಉತ್ತರಾಧಿಕಾರಿಯಾಗಲು<noinclude></noinclude> j5amh2i28pxhxr4emwhuvgnr9z5wj32 ಪುಟ:ಕವಿರಾಜ ಮಾರ್ಗಂ.pdf/೪೧ 104 16272 322889 157161 2026-05-27T03:32:57Z Shreesha Sharma 7840 /* Proofread */ 322889 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಪೀಠಿಕ|right=೨೪}} ಸಮರ್ಥನೆಂದು ಅರಿತಿದ್ದ ಧ್ರುವನು, ಅವನಿಗೆ ಯುವರಾಜ ಪಟ್ಟವನ್ನು ಕಟ್ಟಿದನು. ಧ್ರುವನ ಕಾಲದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವು ರಾಜಕೀಯ ದೃಷ್ಟಿಯಿಂದ ಅಖಂಡ ಭಾರತದಲ್ಲಿ ಅತ್ಯಂತ ಪ್ರಬಲವಾಗಿತ್ತು. ಧ್ರುವನ ಮರಣಾನಂತರ, ಅವನ ಹಿರಿಯ ಮಗನಾದ ಕಂಭನ ಪ್ರತಿಭಟನೆಯನ್ನು ಯುವರಾಜ ಗೋವಿಂದನು ಎದುರಿಸಬೇಕಾಯಿತು. ಕಂಭನಿಗೆ ಗಂಗರಾಜರ ಬೆಂಬಲವಿತ್ತು ; ಏಕೆಂದರೆ, ಅವನು ಗಂಗವಾಡಿಯಲ್ಲಿ ರಾಷ್ಟ್ರಕೂಟ ಪ್ರತಿನಿಧಿಯಾಗಿದ್ದನು. ಕಂಭವನ್ನೂ ಅವನ ಪಕ್ಷದವರನ್ನೂ ಅಡಗಿಸಿ, ಸಿಂಹಾಸನವನ್ನೇರುವುದು ಗೋವಿಂದನಿಗೆ ಕಷ್ಟವಾಗಲಿಲ್ಲ. ಪಟ್ಟಕ್ಕೆ ಬಂದ ಮೇಲೆ ಅವನು ಕಂಭನನ್ನು ಮತ್ತೆ ಗಂಗವಾಡಿಯ ಪ್ರತಿನಿಧಿಯಾಗಿ ನೇಮಿಸಿ, ಕೃತಘ್ನರಾಗಿ ವರ್ತಿಸಿದ್ದ ಸಾಮಂತರನ್ನು ಅವರವರ ರಾಜ್ಯಗಳಲ್ಲಿ ನೆಲೆಗೊಳಿಸಿದನು. ಈ ಮುನ್ನವೇ ಗೋವಿಂದನು ತನ್ನ ತಮ್ಮಂದಿರಾದ ಕರ್ಕ (I) ಇಂದ್ರ (I) ರನ್ನು ಗುರ್ಜರ (ಗುಜರಾತ್) ಪ್ರಾಂತದಲ್ಲಿ ನೆಲೆ ಗೊಳಿಸಿದ್ದನು. ರಾಷ್ಟ್ರಕೂಟವಂಶದ ಗುಜರಾತ್ ಶಾಖೆ ಅವರಿಂದ ಮೊದಲಾಯಿತು. ೩ನೆಯ ಗೋವಿಂದನೂ ತನ್ನ ತಂದೆಯಂತೆಯೇ ಉತ್ತರ ದಿಗ್ವಿಜಯಕ್ಕೆ ಹೊರಟು ಹಿಮವತ್ಪರ್ವತದವರೆಗೂ ದಂಡಯಾತ್ರೆಗೈದು, ಮತ್ತೆ ತಲೆಯೆತ್ತಿದ್ದ ಗುರ್ಜರರಾಜನನ್ನು ಅಂಕೆಯಲ್ಲಿಟ್ಟು, ಕನೂಜದ ಚಕ್ರಾಯುಧನನ್ನೂ ನರ್ಮದಾ ತೀರದಲ್ಲಿ 'ಶ್ರೀಭುವನ' (ಶ್ರೀಭವನ?) ಎಂಬಲ್ಲಿ ಕೆಲಕಾಲ ತಂಗಿದ್ದನೆಂದೂ, ಅಲ್ಲಿಯೇ ಅವನ ಮಗನಾದ ನೃಪತುಂಗನು ಜನಿಸಿದುದಾಗಿಯೂ ಚರಿತ್ರಕಾರರು ಅಭಿಪ್ರಾಯಪಟ್ಟಿದ್ದಾರೆ. ಅದು ಹೇಗಾದರೂ ಇರಲಿ. ಉತ್ತರ ದಿಗ್ವಿಜಯದಿಂದ ಹಿಂದಿರುಗುತ್ತಿದ್ದಾಗಲೇ, ದಕ್ಷಿಣದ ಅರಸರು ರಾಷ್ಟ್ರಕೂಟ ರಾಜ್ಯದ ಮೇಲೆ ಒಟ್ಟಾಗಿ ಆಕ್ರಮಣ ಮಾಡುವ ಹವಣಿಕೆ ಮಾಡಿದಂತೆ ಕಂಡುಬರುತ್ತದೆ. ಇದನ್ನರಿತ ಗೋವಿಂದನು ತನ್ನ ದೃಷ್ಟಿಯನ್ನು ದಕ್ಷಿಣಕ್ಕೆ ತಿರುಗಿಸಿ, ದಕ್ಷಿಣಪಥದ ಮೇಲೆ ದಂಡೆತ್ತಿ ಬಂದನು. ಕೇರಳದ ರಾಜರು, ಚೋಳರು, ಪಲ್ಲವರು, ಪಾಂಡ್ಯರು - ಇವರೆಲ್ಲ ಗೋವಿಂದನ ಸಾರ್ವಭೌಮತ್ವವನ್ನು ಒಪ್ಪಿಕೊಂಡರು. ಸಿಂಹಳದ ದೊರೆಯೂ ಇವನಿಗೆ ಶರಣಾಗತನಾದನು. ಹೀಗೆ ೩ನೆಯ ಗೋವಿಂದನು ಅಖಂಡಭಾರತದ ಮೇಲೆ ತನ್ನ ಪ್ರತಾಪಾಂಕಿತವನ್ನು ಒತ್ತಿ, ಬಹುಮಟ್ಟಿಗೆ ಸಮಗ್ರಭಾರತದ ಪ್ರಥಮ ಸಾಮ್ರಾಟನೆನಿಸಿಕೊಂಡು, ಜಗತ್ತುಂಗ, ಪ್ರಭೂತವರ್ಷ, ಶ್ರೀವಲ್ಲಭ, ಪೃಥ್ವಿವಲ್ಲಭ, ಕೀರ್ತಿನಾರಾಯಣ ಎಂಬ ಬಿರುದು ಗಳಿಂದ ಮೆರೆದನು. ಇವನ ಆಳ್ವಿಕೆಯಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ರಾಜಕೀಯ ದೃಷ್ಟಿಯಿಂದ ತನ್ನ ವೈಭವದ ಶಿಖರವನ್ನು ಮುಟ್ಟಿತು.<noinclude></noinclude> 5j6du4m9eajyyliyb6khd81iklopnq4 322896 322889 2026-05-27T03:40:51Z Shreelatha.Halemane 7642 /* Validated */ 322896 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಪೀಠಿಕೆ|right=೨೫}} ಸಮರ್ಥನೆಂದು ಅರಿತಿದ್ದ ಧ್ರುವನು, ಅವನಿಗೆ ಯುವರಾಜ ಪಟ್ಟವನ್ನು ಕಟ್ಟಿದನು. ಧ್ರುವನ ಕಾಲದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವು ರಾಜಕೀಯ ದೃಷ್ಟಿಯಿಂದ ಅಖಂಡ ಭಾರತದಲ್ಲಿ ಅತ್ಯಂತ ಪ್ರಬಲವಾಗಿತ್ತು. ಧ್ರುವನ ಮರಣಾನಂತರ, ಅವನ ಹಿರಿಯ ಮಗನಾದ ಕಂಭನ ಪ್ರತಿಭಟನೆಯನ್ನು ಯುವರಾಜ ಗೋವಿಂದನು ಎದುರಿಸಬೇಕಾಯಿತು. ಕಂಭನಿಗೆ ಗಂಗರಾಜರ ಬೆಂಬಲವಿತ್ತು ; ಏಕೆಂದರೆ, ಅವನು ಗಂಗವಾಡಿಯಲ್ಲಿ ರಾಷ್ಟ್ರಕೂಟ ಪ್ರತಿನಿಧಿಯಾಗಿದ್ದನು. ಕಂಭವನ್ನೂ ಅವನ ಪಕ್ಷದವರನ್ನೂ ಅಡಗಿಸಿ, ಸಿಂಹಾಸನವನ್ನೇರುವುದು ಗೋವಿಂದನಿಗೆ ಕಷ್ಟವಾಗಲಿಲ್ಲ. ಪಟ್ಟಕ್ಕೆ ಬಂದ ಮೇಲೆ ಅವನು ಕಂಭನನ್ನು ಮತ್ತೆ ಗಂಗವಾಡಿಯ ಪ್ರತಿನಿಧಿಯಾಗಿ ನೇಮಿಸಿ, ಕೃತಘ್ನರಾಗಿ ವರ್ತಿಸಿದ್ದ ಸಾಮಂತರನ್ನು ಅವರವರ ರಾಜ್ಯಗಳಲ್ಲಿ ನೆಲೆಗೊಳಿಸಿದನು. ಈ ಮುನ್ನವೇ ಗೋವಿಂದನು ತನ್ನ ತಮ್ಮಂದಿರಾದ ಕರ್ಕ (I) ಇಂದ್ರ (I) ರನ್ನು ಗುರ್ಜರ (ಗುಜರಾತ್) ಪ್ರಾಂತದಲ್ಲಿ ನೆಲೆ ಗೊಳಿಸಿದ್ದನು. ರಾಷ್ಟ್ರಕೂಟವಂಶದ ಗುಜರಾತ್ ಶಾಖೆ ಅವರಿಂದ ಮೊದಲಾಯಿತು. ೩ನೆಯ ಗೋವಿಂದನೂ ತನ್ನ ತಂದೆಯಂತೆಯೇ ಉತ್ತರ ದಿಗ್ವಿಜಯಕ್ಕೆ ಹೊರಟು ಹಿಮವತ್ಪರ್ವತದವರೆಗೂ ದಂಡಯಾತ್ರೆಗೈದು, ಮತ್ತೆ ತಲೆಯೆತ್ತಿದ್ದ ಗುರ್ಜರರಾಜನನ್ನು ಅಂಕೆಯಲ್ಲಿಟ್ಟು, ಕನೂಜದ ಚಕ್ರಾಯುಧನನ್ನೂ ನರ್ಮದಾ ತೀರದಲ್ಲಿ 'ಶ್ರೀಭುವನ' (ಶ್ರೀಭವನ?) ಎಂಬಲ್ಲಿ ಕೆಲಕಾಲ ತಂಗಿದ್ದನೆಂದೂ, ಅಲ್ಲಿಯೇ ಅವನ ಮಗನಾದ ನೃಪತುಂಗನು ಜನಿಸಿದುದಾಗಿಯೂ ಚರಿತ್ರಕಾರರು ಅಭಿಪ್ರಾಯಪಟ್ಟಿದ್ದಾರೆ. ಅದು ಹೇಗಾದರೂ ಇರಲಿ. ಉತ್ತರ ದಿಗ್ವಿಜಯದಿಂದ ಹಿಂದಿರುಗುತ್ತಿದ್ದಾಗಲೇ, ದಕ್ಷಿಣದ ಅರಸರು ರಾಷ್ಟ್ರಕೂಟ ರಾಜ್ಯದ ಮೇಲೆ ಒಟ್ಟಾಗಿ ಆಕ್ರಮಣ ಮಾಡುವ ಹವಣಿಕೆ ಮಾಡಿದಂತೆ ಕಂಡುಬರುತ್ತದೆ. ಇದನ್ನರಿತ ಗೋವಿಂದನು ತನ್ನ ದೃಷ್ಟಿಯನ್ನು ದಕ್ಷಿಣಕ್ಕೆ ತಿರುಗಿಸಿ, ದಕ್ಷಿಣಪಥದ ಮೇಲೆ ದಂಡೆತ್ತಿ ಬಂದನು. ಕೇರಳದ ರಾಜರು, ಚೋಳರು, ಪಲ್ಲವರು, ಪಾಂಡ್ಯರು - ಇವರೆಲ್ಲ ಗೋವಿಂದನ ಸಾರ್ವಭೌಮತ್ವವನ್ನು ಒಪ್ಪಿಕೊಂಡರು. ಸಿಂಹಳದ ದೊರೆಯೂ ಇವನಿಗೆ ಶರಣಾಗತನಾದನು. ಹೀಗೆ ೩ನೆಯ ಗೋವಿಂದನು ಅಖಂಡಭಾರತದ ಮೇಲೆ ತನ್ನ ಪ್ರತಾಪಾಂಕಿತವನ್ನು ಒತ್ತಿ, ಬಹುಮಟ್ಟಿಗೆ ಸಮಗ್ರಭಾರತದ ಪ್ರಥಮ ಸಾಮ್ರಾಟನೆನಿಸಿಕೊಂಡು, ಜಗತ್ತುಂಗ, ಪ್ರಭೂತವರ್ಷ, ಶ್ರೀವಲ್ಲಭ, ಪೃಥ್ವಿವಲ್ಲಭ, ಕೀರ್ತಿನಾರಾಯಣ ಎಂಬ ಬಿರುದು ಗಳಿಂದ ಮೆರೆದನು. ಇವನ ಆಳ್ವಿಕೆಯಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ರಾಜಕೀಯ ದೃಷ್ಟಿಯಿಂದ ತನ್ನ ವೈಭವದ ಶಿಖರವನ್ನು ಮುಟ್ಟಿತು.<noinclude></noinclude> e04w2kennn6t1gqva009m9gz16635td ಪುಟ:ಕವಿರಾಜ ಮಾರ್ಗಂ.pdf/೪೨ 104 16273 322890 157172 2026-05-27T03:33:51Z Shreesha Sharma 7840 /* Proofread */ 322890 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೨೬|right=ಕವಿರಾಜಮಾರ್ಗ}} ನೃಪತುಂಗನ ಸಾಧನೆ, ವ್ಯಕ್ತಿತ್ವ : ನೃಪತುಂಗನು ೩ನೆಯ ಗೋವಿಂದನ ಏಕಮಾತ್ರ ಪುತ್ರ ಅವನಿಗೆ ತಂದೆ ಇಟ್ಟ ಹೆಸರು ಶರ್ವ (ಕ್ರಿ.ಶ. ೮೬೭ರ ಶಾಸನವೊಂದರಲ್ಲಿ `ಶರ್ವ' ಎಂಬ ಹೆಸರೇ ಕಂಡುಬರುತ್ತದೆ). ಅವನು ಪಟ್ಟಕ್ಕೆ ಬಂದಾಗ “ಅಮೋಘವರ್ಷ' ಎಂಬ ಹೆಸರನ್ನು ತಳೆದು, ತಂದೆ “ಜಗತ್ತುಂಗನೆಂದು ಪ್ರಸಿದ್ಧನಾಗಿದ್ದಂತೆ ಇವನು “ನೃಪತುಂಗನೆಂದು ಪ್ರಸಿದ್ಧನಾದನು. ಸಮಕಾಲೀನ ಶಾಸನಗಳಲ್ಲಿ ಅತಿಶಯಧವಳ, ಲಕ್ಷ್ಮೀವಲ್ಲಭ, ಮಹಾರಾಜ ಶರ್ವ, ನೃಪತುಂಗ, ಪೃಥ್ವಿವಲ್ಲಭ ಎಂದೂ, ತರುವಾಯದ ಶಾಸನಗಳಲ್ಲಿ ಮಹಾರಾಜಷಂಡ, ಶ್ರೀವಲ್ಲಭ ವೀರನಾರಾಯಣ ಎಂದೂ ನೃಪತುಂಗನ ಬಿರುದುಗಳು ಉಲ್ಲೇಖಗೊಂಡಿವೆ. ಕವಿರಾಜಮಾರ್ಗದಲ್ಲಿ ಕಂಡುಬರುವ ಬಿರುದುಗಳೆಂದರೆ - ನೀತಿ ನಿರಂತರ, ಕೃತಕೃತ್ಯಮಲ್ಲ (ವಲ್ಲಭ), ವೀರನಾರಾಯಣ, ನಿತ್ಯಮಲ್ಲವಲ್ಲಭ, ನರಲೋಕಚಂದ್ರ ಕವಿರಾಜಮಾರ್ಗದಲ್ಲಿ ಮೇಲಿಂದ ಮೇಲೆ ಉಕ್ತವಾಗಿರುವವು: ಅತಿಶಯಧವಳ, ನೃಪತುಂಗ, ಅಮೋಘವರ್ಷ ಎಂಬ ಬಿರುದುಗಳು. ರಾಷ್ಟ್ರಕೂಟ ವಂಶದ ದೊರೆಗಳಲ್ಲಿ ಅನೇಕ ಮಂದಿಗೆ ಅಮೋಘವರ್ಷ ಎಂಬ ಬಿರುದಿರುವುದೂ, ನೃಪತುಂಗನೊಬ್ಬನಿಗೆ ಮಾತ್ರ ಅತಿಶಯಧವಳ ಎಂಬ ಬಿರುದಿರುವುದೂ ಗಮನಾರ್ಹ. (ನೋಡಿ ಅನುಬಂಧ : ರಾಷ್ಟ್ರಕೂಟ ವಂಶಾವಳಿ) ಈ ಬಿರುದುಗಳಲ್ಲಿ ಹಲವನ್ನು ನೃಪತುಂಗನು ರಾಜ್ಯಭಾರವಹಿಸಿಕೊಂಡು ಬಹುಕಾಲವಾದ ಮೇಲೆ ತಳೆದಿರಬೇಕು ; ಏಕೆಂದರೆ, ರಾಜ್ಯವನ್ನು ರೂಢಿಸಿಕೊಳ್ಳುವುದಕ್ಕೇ ಅವನಿಗೆ ಬಹುಕಾಲ ಹಿಡಿಯಿತು. {{gap}}ತಂದೆ ಗೋವಿಂದನು ಅವಸಾನಹೊಂದಿದ ಮೇಲೆ ಕ್ರಿ.ಶ. ೮೧೪ರಲ್ಲಿ ನೃಪತುಂಗನು ಸಿಂಹಾಸನವನ್ನೇರಿ ಸುಮಾರು ೬೫ವರ್ಷಗಳಷ್ಟು ದೀರ್ಘಕಾಲ ರಾಜ್ಯಭಾರ ಮಾಡಿದನು. (ಗೋವಿಂದನ ಅವಸಾನ ವಿಚಾರವು ಕ.ರಾ. ಮಾರ್ಗದ ಒಂದು ಪದ್ಯದಲ್ಲಿ ಸೂಚಿತವಾಗಿದೆಯೆಂದು ಊಹಿಸಲಾಗಿದೆ. (ನೋಡಿ: III - ೩೦ ಟಿಪ್ಪಣಿ) ನೃಪತುಂಗನು ರಾಜ್ಯಾಧಿಕಾರವನ್ನು ವಹಿಸಿಕೊಂಡಮೇಲೆ, ತನ್ನ ತಂದೆ ಕಟ್ಟಿದ ವಿಸ್ತಾರವಾದ ರಾಜ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅವನಿಗೆ ಸಹಜವಾಗಿಯೆ ಕಷ್ಟವಾಗಿ ಪರಿಣಮಿಸಿತು. ಪಟ್ಟಕ್ಕೆ ಬಂದಾಗ ನೃಪತುಂಗನು ಸುಮಾರು ೧೫-೧೬ರ ಹರೆಯದವನು. ಈ ಸುಸಂಧಿಯನ್ನು ರಾಜ್ಯದ ಪೂರ್ವವೈರಿಗಳು ಉಪಯೋಗಿಸಿಕೊಂಡರು. ಜಗತ್ತುಂಗ ಗೋವಿಂದನೊಡನೆ ಅನೇಕವೇಳೆ ಹೋರಾಡಿ ಸೋತಿದ್ದ ವೆಂಗಿಯ ಅಥವಾ ಮೂಡಣ ಚಾಲುಕ್ಯವಂಶದ ಎರಡನೆಯ ವಿಜಯಾದಿತ್ಯನು (ಸು. ಕ್ರಿ.ಶ. ೭೯೩-೮೪೧), ಗೋವಿಂದನು<noinclude></noinclude> e89cjr3dqs9ut7lxo344yrv5wsyqt9h 322895 322890 2026-05-27T03:40:18Z Shreelatha.Halemane 7642 /* Validated */ 322895 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೬|right=ಕವಿರಾಜಮಾರ್ಗ}} '''ನೃಪತುಂಗನ ಸಾಧನೆ, ವ್ಯಕ್ತಿತ್ವ''' : ನೃಪತುಂಗನು ೩ನೆಯ ಗೋವಿಂದನ ಏಕಮಾತ್ರ ಪುತ್ರ ಅವನಿಗೆ ತಂದೆ ಇಟ್ಟ ಹೆಸರು ಶರ್ವ (ಕ್ರಿ.ಶ. ೮೬೭ರ ಶಾಸನವೊಂದರಲ್ಲಿ `ಶರ್ವ' ಎಂಬ ಹೆಸರೇ ಕಂಡುಬರುತ್ತದೆ). ಅವನು ಪಟ್ಟಕ್ಕೆ ಬಂದಾಗ “ಅಮೋಘವರ್ಷ' ಎಂಬ ಹೆಸರನ್ನು ತಳೆದು, ತಂದೆ “ಜಗತ್ತುಂಗನೆಂದು ಪ್ರಸಿದ್ಧನಾಗಿದ್ದಂತೆ ಇವನು “ನೃಪತುಂಗನೆಂದು ಪ್ರಸಿದ್ಧನಾದನು. ಸಮಕಾಲೀನ ಶಾಸನಗಳಲ್ಲಿ ಅತಿಶಯಧವಳ, ಲಕ್ಷ್ಮೀವಲ್ಲಭ, ಮಹಾರಾಜ ಶರ್ವ, ನೃಪತುಂಗ, ಪೃಥ್ವಿವಲ್ಲಭ ಎಂದೂ, ತರುವಾಯದ ಶಾಸನಗಳಲ್ಲಿ ಮಹಾರಾಜಷಂಡ, ಶ್ರೀವಲ್ಲಭ ವೀರನಾರಾಯಣ ಎಂದೂ ನೃಪತುಂಗನ ಬಿರುದುಗಳು ಉಲ್ಲೇಖಗೊಂಡಿವೆ. ಕವಿರಾಜಮಾರ್ಗದಲ್ಲಿ ಕಂಡುಬರುವ ಬಿರುದುಗಳೆಂದರೆ - ನೀತಿ ನಿರಂತರ, ಕೃತಕೃತ್ಯಮಲ್ಲ (ವಲ್ಲಭ), ವೀರನಾರಾಯಣ, ನಿತ್ಯಮಲ್ಲವಲ್ಲಭ, ನರಲೋಕಚಂದ್ರ ಕವಿರಾಜಮಾರ್ಗದಲ್ಲಿ ಮೇಲಿಂದ ಮೇಲೆ ಉಕ್ತವಾಗಿರುವವು: ಅತಿಶಯಧವಳ, ನೃಪತುಂಗ, ಅಮೋಘವರ್ಷ ಎಂಬ ಬಿರುದುಗಳು. ರಾಷ್ಟ್ರಕೂಟ ವಂಶದ ದೊರೆಗಳಲ್ಲಿ ಅನೇಕ ಮಂದಿಗೆ ಅಮೋಘವರ್ಷ ಎಂಬ ಬಿರುದಿರುವುದೂ, ನೃಪತುಂಗನೊಬ್ಬನಿಗೆ ಮಾತ್ರ ಅತಿಶಯಧವಳ ಎಂಬ ಬಿರುದಿರುವುದೂ ಗಮನಾರ್ಹ. (ನೋಡಿ ಅನುಬಂಧ : ರಾಷ್ಟ್ರಕೂಟ ವಂಶಾವಳಿ) ಈ ಬಿರುದುಗಳಲ್ಲಿ ಹಲವನ್ನು ನೃಪತುಂಗನು ರಾಜ್ಯಭಾರವಹಿಸಿಕೊಂಡು ಬಹುಕಾಲವಾದ ಮೇಲೆ ತಳೆದಿರಬೇಕು ; ಏಕೆಂದರೆ, ರಾಜ್ಯವನ್ನು ರೂಢಿಸಿಕೊಳ್ಳುವುದಕ್ಕೇ ಅವನಿಗೆ ಬಹುಕಾಲ ಹಿಡಿಯಿತು. {{gap}}ತಂದೆ ಗೋವಿಂದನು ಅವಸಾನಹೊಂದಿದ ಮೇಲೆ ಕ್ರಿ.ಶ. ೮೧೪ರಲ್ಲಿ ನೃಪತುಂಗನು ಸಿಂಹಾಸನವನ್ನೇರಿ ಸುಮಾರು ೬೫ವರ್ಷಗಳಷ್ಟು ದೀರ್ಘಕಾಲ ರಾಜ್ಯಭಾರ ಮಾಡಿದನು. (ಗೋವಿಂದನ ಅವಸಾನ ವಿಚಾರವು ಕ.ರಾ. ಮಾರ್ಗದ ಒಂದು ಪದ್ಯದಲ್ಲಿ ಸೂಚಿತವಾಗಿದೆಯೆಂದು ಊಹಿಸಲಾಗಿದೆ. (ನೋಡಿ: III - ೩೦ ಟಿಪ್ಪಣಿ) ನೃಪತುಂಗನು ರಾಜ್ಯಾಧಿಕಾರವನ್ನು ವಹಿಸಿಕೊಂಡಮೇಲೆ, ತನ್ನ ತಂದೆ ಕಟ್ಟಿದ ವಿಸ್ತಾರವಾದ ರಾಜ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅವನಿಗೆ ಸಹಜವಾಗಿಯೆ ಕಷ್ಟವಾಗಿ ಪರಿಣಮಿಸಿತು. ಪಟ್ಟಕ್ಕೆ ಬಂದಾಗ ನೃಪತುಂಗನು ಸುಮಾರು ೧೫-೧೬ರ ಹರೆಯದವನು. ಈ ಸುಸಂಧಿಯನ್ನು ರಾಜ್ಯದ ಪೂರ್ವವೈರಿಗಳು ಉಪಯೋಗಿಸಿಕೊಂಡರು. ಜಗತ್ತುಂಗ ಗೋವಿಂದನೊಡನೆ ಅನೇಕವೇಳೆ ಹೋರಾಡಿ ಸೋತಿದ್ದ ವೆಂಗಿಯ ಅಥವಾ ಮೂಡಣ ಚಾಲುಕ್ಯವಂಶದ ಎರಡನೆಯ ವಿಜಯಾದಿತ್ಯನು (ಸು. ಕ್ರಿ.ಶ. ೭೯೩-೮೪೧), ಗೋವಿಂದನು<noinclude></noinclude> d6wpeqhzbqy4i9fb6t3ohy3gswl8y9h ಪುಟ:ಕವಿರಾಜ ಮಾರ್ಗಂ.pdf/೪೩ 104 16274 322892 157183 2026-05-27T03:38:54Z Shreesha Sharma 7840 /* Proofread */ 322892 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಪೀಠಿಕ|right=೨೭}} “ಅಸ್ತಂಗತನಾದ ಕೂಡಲೆ, ರಾಷ್ಟ್ರಕೂಟ ರಾಜಧಾನಿಯನ್ನಾಕ್ರಮಿಸಿ 'ರಾಜಾಧಿರಾಜ', 'ರಾಜಪರಮೇಶ್ವರ' ಮುಂತಾದ ರಾಷ್ಟ್ರಕೂಟ ಪರಮಾಧಿಕಾರ ಸೂಚಕ ಬಿರುದುಗಳನ್ನು ತಾನು ವಹಿಸಿಕೊಂಡನೆಂದು ಚರಿತ್ರಕಾರರು ತಿಳಿಸಿದ್ದಾರೆ.” ವಿಜಯಾದಿತ್ಯನ ಈ ದ್ರೋಹಕಾರ್ಯವಲ್ಲದೆ, ಇನ್ನೂ ಅನೇಕ ಆಘಾತಗಳನ್ನು ನೃಪತುಂಗನು ಎದುರಿಸಬೇಕಾಗಿ ಬಂದದ್ದನ್ನು ಕೆಲವು ಶಾಸನಗಳು ಉಲ್ಲೇಖಿಸಿವೆ. ಸ್ವಭಾವತಃ ಶಾಂತಿಪ್ರಿಯನಾದ ನೃಪತುಂಗನು ಏಕಕಾಲದಲ್ಲಿ 'ಒಳಹಗೆ'ಗಳನ್ನೂ 'ಹೊರಹಗೆ'ಗಳನ್ನೂ ಎದುರಿಸಬೇಕಾಗಿ ಬಂದು, ಯುದ್ಧಗಳು ಅನಿವಾರವಾದುವು. ಸಾಮಂತರು, ಮಂತ್ರಿಗಳು, ಬಾಂಧವರು ಮುಂತಾದವರೆಲ್ಲ ವಿರೋಧಿಗಳಾದಂತೆ ಕಾಣುತ್ತದೆ ; ಇತ್ತ ದಕ್ಷಿಣದಲ್ಲಿ, ಸಾಮಂತರಾಗಿದ್ದ ಗಂಗರು ಮತ್ತೆ ತಲೆಯೆತ್ತಿಕೊಂಡು ರಾಷ್ಟ್ರಕೂಟರ ಪ್ರಬಲವೈರಿಗಳಾಗಿದ್ದರು. ನೃಪತುಂಗನು ಸುಮಾರು ೨೦ ವರ್ಷಕಾಲ ಒಂದೇ ಸಮನಾಗಿ ಅವರೊಂದಿಗೆ ಹೋರಾಡಬೇಕಾಯಿತು. ಸಾಲದುದಕ್ಕೆ, ಅವರು ಅವನ ಏಕಮಾತ್ರ ಪುತ್ರ ಯುವರಾಜ ಕೃಷ್ಣನನ್ನು ಪ್ರಲೋಭನಗೊಳಿಸಿ ತಮ್ಮ ಬಲೆಗೆ ಹಾಕಿಕೊಂಡಿದ್ದರು. ದಂಡನಾಯಕ ವೀರಬಂಕೆಯನು ಗಂಗರ ಮೇಲೆ ದಂಡೆತ್ತಿ ಹೋಗಿ ಕಡೆಗೊಮ್ಮೆ ಅವರನ್ನು ಪರಾಭವಗೊಳಿಸಿ, ದಕ್ಷಿಣದಲ್ಲಿ ನೃಪತುಂಗನ ಸಾರ್ವಭೌಮತ್ವ ಮತ್ತೆ ನೆಲೆಗೊಳ್ಳಲು ವಿಶೇಷವಾಗಿ ನೆರವಾದನು. ನೃಪತುಂಗನು ತನ್ನ ಇಬ್ಬರು ಪುತ್ರಿಯರಲ್ಲಿ (ಚಂದ್ರೋಬಲಬ್ಬೆ ಮತ್ತು ಶಂಖಾದೇವಿ) ಹಿರಿಯಳನ್ನು ಗಂಗರಾಜಕುಮಾರ ೧ನೆಯ ಬೂತುಗನಿಗೆ ವಿವಾಹ ಮಾಡಿಕೊಟ್ಟು, ಗಂಗರೊಂದಿಗೆ ಮೈತ್ರಿಯನ್ನು ಬಲಪಡಿಸಿಕೊಂಡನು. (ಕಿರಿಯ ಮಗಳನ್ನು ಪಲ್ಲವ ರಾಜಕುಮಾರನಿಗೆ ಮದುವೆ ಮಾಡಿಕೊಟ್ಟಂತೆ ತಿಳಿದುಬರುತ್ತದೆ). ಅತ್ತ ಉತ್ತರದಲ್ಲಿ ವಂಗದೇಶ ಮತ್ತು ಮಗಧರಾಜ್ಯಗಳೊಂದಿಗೆ ಘರ್ಷಣೆಯೊದಗಿತು. ಈಯೆಲ್ಲ ಕಾಳಗಗಳಲ್ಲಿ ವೀರಬಂಕೆಯನ ನೆರವು ನೃಪತುಂಗನಿಗೆ ವಿಶೇಷವಾಗಿತ್ತು; ಜೊತೆಗೆ, ಗುಜರಾತಿನಲ್ಲಿ ರಾಷ್ಟ್ರಕೂಟ ಪ್ರತಿನಿಧಿಯಾಗಿ ಆಳುತ್ತಿದ್ದ ಅವನ ಚಿಕ್ಕಪ್ಪ ಕರ್ಕನ ನೆರವೂ ಇದ್ದಿತು. ಅಂತೂ, ನೃಪತುಂಗನು ಸಿಂಹಾಸನವೇರಿದ ಮೇಲೆ ತಂದೆ ಗೋವಿಂದನು ಕಟ್ಟಿದ ವಿಸ್ತಾರವಾದ ರಾಜ್ಯವನ್ನು – ಬೆಳೆಸುವ ಮಾತಿರಲಿ - ಉಳಿಸಿಕೊಳ್ಳಲು ಬಹಳ ಪ್ರಯಾಸಪಟ್ಟಂತೆ ಕಂಡುಬರುತ್ತದೆ ; ರಾಜ್ಯದಲ್ಲಿ ಶಾಂತಿ ನೆಲೆಗೊಂಡಮೇಲೆ, ಪ್ರಜೆಗಳ ಮನಸ್ಸನ್ನು ಒಲಿಸಿಕೊಂಡು ರಾಜ್ಯವನ್ನು ಸುಭದ್ರಗೊಳಿಸುವ ಕಾರ್ಯಕ್ಕೆ ಅವನು ಮನಸ್ಸು ಕೊಟ್ಟಿರಬೇಕು. ನೃಪತುಂಗನ ಆಳ್ವಿಕೆಯ ಮುಖ್ಯ ಚಾರಿತ್ರಿಕ ಘಟನೆಗಳನ್ನು ಸಂಕ್ಷೇಪವಾಗಿಯಾದರೂ ಇಲ್ಲಿ ಉಲ್ಲೇಖಿಸಿರುವ ಉದ್ದೇಶ ಇಷ್ಟೆ : ಕವಿರಾಜಮಾರ್ಗದ ಹಲವಾರು -<noinclude></noinclude> kvw5b1nrg8y7ccrxxnjoamva0ff27mu 322894 322892 2026-05-27T03:39:46Z Shreelatha.Halemane 7642 /* Validated */ 322894 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಪೀಠಿಕ|right=೨೭}} “ಅಸ್ತಂಗತನಾದ ಕೂಡಲೆ, ರಾಷ್ಟ್ರಕೂಟ ರಾಜಧಾನಿಯನ್ನಾಕ್ರಮಿಸಿ 'ರಾಜಾಧಿರಾಜ', 'ರಾಜಪರಮೇಶ್ವರ' ಮುಂತಾದ ರಾಷ್ಟ್ರಕೂಟ ಪರಮಾಧಿಕಾರ ಸೂಚಕ ಬಿರುದುಗಳನ್ನು ತಾನು ವಹಿಸಿಕೊಂಡನೆಂದು ಚರಿತ್ರಕಾರರು ತಿಳಿಸಿದ್ದಾರೆ.” ವಿಜಯಾದಿತ್ಯನ ಈ ದ್ರೋಹಕಾರ್ಯವಲ್ಲದೆ, ಇನ್ನೂ ಅನೇಕ ಆಘಾತಗಳನ್ನು ನೃಪತುಂಗನು ಎದುರಿಸಬೇಕಾಗಿ ಬಂದದ್ದನ್ನು ಕೆಲವು ಶಾಸನಗಳು ಉಲ್ಲೇಖಿಸಿವೆ. ಸ್ವಭಾವತಃ ಶಾಂತಿಪ್ರಿಯನಾದ ನೃಪತುಂಗನು ಏಕಕಾಲದಲ್ಲಿ 'ಒಳಹಗೆ'ಗಳನ್ನೂ 'ಹೊರಹಗೆ'ಗಳನ್ನೂ ಎದುರಿಸಬೇಕಾಗಿ ಬಂದು, ಯುದ್ಧಗಳು ಅನಿವಾರವಾದುವು. ಸಾಮಂತರು, ಮಂತ್ರಿಗಳು, ಬಾಂಧವರು ಮುಂತಾದವರೆಲ್ಲ ವಿರೋಧಿಗಳಾದಂತೆ ಕಾಣುತ್ತದೆ ; ಇತ್ತ ದಕ್ಷಿಣದಲ್ಲಿ, ಸಾಮಂತರಾಗಿದ್ದ ಗಂಗರು ಮತ್ತೆ ತಲೆಯೆತ್ತಿಕೊಂಡು ರಾಷ್ಟ್ರಕೂಟರ ಪ್ರಬಲವೈರಿಗಳಾಗಿದ್ದರು. ನೃಪತುಂಗನು ಸುಮಾರು ೨೦ ವರ್ಷಕಾಲ ಒಂದೇ ಸಮನಾಗಿ ಅವರೊಂದಿಗೆ ಹೋರಾಡಬೇಕಾಯಿತು. ಸಾಲದುದಕ್ಕೆ, ಅವರು ಅವನ ಏಕಮಾತ್ರ ಪುತ್ರ ಯುವರಾಜ ಕೃಷ್ಣನನ್ನು ಪ್ರಲೋಭನಗೊಳಿಸಿ ತಮ್ಮ ಬಲೆಗೆ ಹಾಕಿಕೊಂಡಿದ್ದರು. ದಂಡನಾಯಕ ವೀರಬಂಕೆಯನು ಗಂಗರ ಮೇಲೆ ದಂಡೆತ್ತಿ ಹೋಗಿ ಕಡೆಗೊಮ್ಮೆ ಅವರನ್ನು ಪರಾಭವಗೊಳಿಸಿ, ದಕ್ಷಿಣದಲ್ಲಿ ನೃಪತುಂಗನ ಸಾರ್ವಭೌಮತ್ವ ಮತ್ತೆ ನೆಲೆಗೊಳ್ಳಲು ವಿಶೇಷವಾಗಿ ನೆರವಾದನು. ನೃಪತುಂಗನು ತನ್ನ ಇಬ್ಬರು ಪುತ್ರಿಯರಲ್ಲಿ (ಚಂದ್ರೋಬಲಬ್ಬೆ ಮತ್ತು ಶಂಖಾದೇವಿ) ಹಿರಿಯಳನ್ನು ಗಂಗರಾಜಕುಮಾರ ೧ನೆಯ ಬೂತುಗನಿಗೆ ವಿವಾಹ ಮಾಡಿಕೊಟ್ಟು, ಗಂಗರೊಂದಿಗೆ ಮೈತ್ರಿಯನ್ನು ಬಲಪಡಿಸಿಕೊಂಡನು. (ಕಿರಿಯ ಮಗಳನ್ನು ಪಲ್ಲವ ರಾಜಕುಮಾರನಿಗೆ ಮದುವೆ ಮಾಡಿಕೊಟ್ಟಂತೆ ತಿಳಿದುಬರುತ್ತದೆ). ಅತ್ತ ಉತ್ತರದಲ್ಲಿ ವಂಗದೇಶ ಮತ್ತು ಮಗಧರಾಜ್ಯಗಳೊಂದಿಗೆ ಘರ್ಷಣೆಯೊದಗಿತು. ಈಯೆಲ್ಲ ಕಾಳಗಗಳಲ್ಲಿ ವೀರಬಂಕೆಯನ ನೆರವು ನೃಪತುಂಗನಿಗೆ ವಿಶೇಷವಾಗಿತ್ತು; ಜೊತೆಗೆ, ಗುಜರಾತಿನಲ್ಲಿ ರಾಷ್ಟ್ರಕೂಟ ಪ್ರತಿನಿಧಿಯಾಗಿ ಆಳುತ್ತಿದ್ದ ಅವನ ಚಿಕ್ಕಪ್ಪ ಕರ್ಕನ ನೆರವೂ ಇದ್ದಿತು. ಅಂತೂ, ನೃಪತುಂಗನು ಸಿಂಹಾಸನವೇರಿದ ಮೇಲೆ ತಂದೆ ಗೋವಿಂದನು ಕಟ್ಟಿದ ವಿಸ್ತಾರವಾದ ರಾಜ್ಯವನ್ನು – ಬೆಳೆಸುವ ಮಾತಿರಲಿ - ಉಳಿಸಿಕೊಳ್ಳಲು ಬಹಳ ಪ್ರಯಾಸಪಟ್ಟಂತೆ ಕಂಡುಬರುತ್ತದೆ ; ರಾಜ್ಯದಲ್ಲಿ ಶಾಂತಿ ನೆಲೆಗೊಂಡಮೇಲೆ, ಪ್ರಜೆಗಳ ಮನಸ್ಸನ್ನು ಒಲಿಸಿಕೊಂಡು ರಾಜ್ಯವನ್ನು ಸುಭದ್ರಗೊಳಿಸುವ ಕಾರ್ಯಕ್ಕೆ ಅವನು ಮನಸ್ಸು ಕೊಟ್ಟಿರಬೇಕು. ನೃಪತುಂಗನ ಆಳ್ವಿಕೆಯ ಮುಖ್ಯ ಚಾರಿತ್ರಿಕ ಘಟನೆಗಳನ್ನು ಸಂಕ್ಷೇಪವಾಗಿಯಾದರೂ ಇಲ್ಲಿ ಉಲ್ಲೇಖಿಸಿರುವ ಉದ್ದೇಶ ಇಷ್ಟೆ : ಕವಿರಾಜಮಾರ್ಗದ ಹಲವಾರು -<noinclude></noinclude> q6wb9t48yv6pn78f4ch5otw1bht8z8m ಪುಟ:ನೋವು.pdf/೨ 104 20734 322851 223341 2026-05-27T02:34:13Z Pragathi. BH 7585 /* Validated */ 322851 proofread-page text/x-wiki <noinclude><pagequality level="4" user="Pragathi. BH" /></noinclude> <big><big>{{center|'''CI'''}}</big></big><noinclude></noinclude> a2yzqa1wmdo6kjriw4bulx8wwwytxk7 ಪುಟ:ನೋವು.pdf/೧೬ 104 20748 322852 277097 2026-05-27T02:37:51Z Pragathi. BH 7585 /* Validated */ 322852 proofread-page text/x-wiki <noinclude><pagequality level="4" user="Pragathi. BH" />{{rh|center=ನೋವು|left=೬|right=}}</noinclude> ತರ್ಕಿಸಿ, ಅದೇನೋ ತೀರ್ಮಾನಕ್ಕೆ ಆತ ಬಂದಿದ್ದನಲ್ಲ? ಹದಿನೇಳನೆಯ ಶತಮಾನದ ಯಾವನೋ ಪಾಳೆಯಗಾರ ನಾಯಕ ಕಟ್ಟಿಸಿದ ಗುಡಿ ಇದು–ಅಂತ ಹೇಳಿದ್ದನಲ್ಲ?<br /> {{gap}}ಹೊರಗೆ ಬಿಸಿಲು. ಕಾದ ಕಲ್ಲು. ಆದರೂ ಮುಖಮಂಟಪದ ನೆಲ ತಣ್ಣಗಿತ್ತು. ತಂಪಾದ ಗಾಳಿ ಬೇರೆ ಸದ್ದಿಲ್ಲದೆ ಬೀಸುತ್ತಿತ್ತು. ಅಲ್ಲಿ ಒಂದು ಕ್ಷಣ ರಂಗಣ್ಣ ಎಲ್ಲವನ್ನೂ ಮರೆತ. ಗುಡಿಯದು ಮುಕ್ತದ್ವಾರ, ಒಳಗೆ ಈಶ್ವರ ಲಿಂಗ, ದಿನದ ಪೂಜೆ ಮುಗಿಸಿ ಸೂರ್ಯ ನೆತ್ತಿಗೇರುವುದರೊಳಗೆ ಮರಳಿರಬೇಕು ಅರ್ಚಕ ಗಂಗಾಧರ ಶಾಸ್ತ್ರಿ, ಹಿಂದೆ ಸಂಜೆಯೂ ಅರ್ಚನೆ ಇರುತ್ತಿತ್ತಂತೆ. ಆದರೆ ಕಾಡು ಮೃಗಗಳ ಭಯದಿಂದ ದೇವರ ಸೇವೆ ಒಂದು ಬಾರಿಗೆ ಇಳಿದಿತ್ತಂತೆ. ಇದರ ವಿಷಯವಾಗಿಯೇ ಅಲ್ಲವೆ ಪದ್ಮನಾಭ ಯಾವುದೋ ವಚನವನ್ನು ಹೇಳುತ್ತಿದ್ದುದು?<br /> {{gap}}–ರಂಗಣ್ಣ ದೇವರಿಗೆ ಕೈಮುಗಿದ.<br /> {{gap}}...ಯಾವ ವಚನ ಅದು? ತಮಾಷೆಯಾಗಿತು, ಆತ ಅದನ್ನು ಆಗಾಗ್ಗೆ ಹೇಳಿ ಹೇಳಿ, ತಾನು ಕೇಳಿ ಕೇಳಿ,ತನಗೂ ಕಂಠಪಾಠವಾಗಿತ್ತಲ್ಲ?<br /> {{gap}}ಬರ ಬರ<br /> {{gap}} -ಹ್ಞಾ !<br /> {{gap}}ಬರಬರ ಭಕ್ತಿ ಮರೆಯಾಯಿತ್ತು ಕಾಣಿರಣ್ಣಾ[[Category:]] {{gap}}–ಮುಂದೇನು ?<br /> {{gap}}ಮೊದಲ ದಿನ ಹಣೆ ಮುಟ್ಟಿ, ಮರುದಿನ <br /> {{gap}}ಕೈ ಮುಟ್ಟಿ, ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ.<br /> {{gap}}ಹಹ ! ವಚನ ಎಷ್ಟು ಸಮಂಜಸ! ಪದ್ಮನಾಭ ಬುದ್ಧಿವಂತ. ಹೈಸ್ಕೂಲಿನಲ್ಲಿ ದ್ದಾಗಲಂತೂ ತನಗಿಂತಲೂ ಹೆಚ್ಚು బుద్ధి ವಂತ. ಆದರೆ ಮುಂದೆ? ಬರ ಬರ ವಿದ್ಯೆಯಲ್ಲಿ ಭಕ್ತಿ ಮರೆಯಾಯಿತ್ತು...<br /> {{gap}}ಮುಖಮಂಪದಲ್ಲಿ ಕುಳಿತು ಸುತ್ತಲೂ ಒಮ್ಮೆ ದೃಷ್ಟಿ ಬೀರಿ, ನಿಟ್ಟುಸಿರು ಬಿಟ್ಟು, ರಂಗಣ್ಣ ಯೋಚಿಸಿದ:<br /> {{gap}}ನಾವು ಭಕ್ತಿಯಿಂದ ನಡೆದುಕೊಳ್ಳುತ್ತೇವೆ. ಆದರೆ ದೇವರ ಕೆಲಸವೇನು? ಅವನು ಮೂಕನೆ? ಕುರುಡನೆ? ಅನ್ಯಾಯದ ದಾರಿಯಲ್ಲಿ ಯಾರಾದರೂ ನಡೆಯಲು ಹೊರಟರೆ ಅವರಲ್ಲಿ ವಿವೇಕ ಮೂಡುವಂತೆ ಮಾಡಬಾರದೆ ಆತ?<br /> {{gap}}ತನಗೊ೦ದು ಹುಚ್ಚು. ಪದ್ಮನಾಭನಲ್ಲಿ ವಿವೇಕ ಮೂಡೀತೆಂದು ಭಾವಿಸುವುದು ಬರಿಯ ಭ್ರಮೆ. ಅವನು ವಿವೇಕಿಯಾದರೇನು? ಆಗದಿದ್ದರೇನು? ಒಡಹುಟ್ಟಿದವಳನ್ನು ತಾನು ಅಂಕೆಯಲ್ಲಿ ಇಟುಕೊಂಡರಾಯಿತು...... <br /> {{gap}}ಎಷ್ಟು ಹೊತ್ತಾಯಿತೊ? ಕೈ ಗಡಿಯಾರವನ್ನು ತಂದಿರಲಿಲ್ಲ. ಕಟ್ಟಿಕೊಳ್ಳಲು ಸಂಕೋಚ. ಅದರ ಪೂರ್ಣ ಉಪಯೋಗ ನಗರದಲ್ಲಿ ಮಾತ್ರ. ಆದರೂ ಜೇಬಿನೊಳಗಿಟ್ಟು ಕೊಂಡು ಬರಬಹುದಾಗಿತ್ತು. ಗುಡ್ಡ ಹತ್ತಲು ನಾಲ್ವತ್ತೈದು ನಿಮಿಷ. ಒಂದು ಗಂಟೆಯೇ ಎನ್ನೋಣ. ನಾಲ್ಕು ದಾಟಿರಬಹದು.<br /> {{gap}}ಎಲ್ಲಿ ಹುಡುಕಲಿ ಇವರನ್ನು?<noinclude></noinclude> j2q993876b7a09skjyh74uuyizqrhvg ಪುಟ:ನೋವು.pdf/೧೭ 104 20749 322853 277098 2026-05-27T02:43:22Z Pragathi. BH 7585 /* Validated */ 322853 proofread-page text/x-wiki <noinclude><pagequality level="4" user="Pragathi. BH" />{{rh|center=ನೋವು|left=|right=೭}}</noinclude> {{gap}}ತಂದೆ ಹೊಸಳ್ಳಿಗೆ ಹೋದವರು ಸಂಜೆಗೆ ಮರಳಬಹುದು. ಅವರು ಮನೆಯಲ್ಲಿಲ್ಲ ಅಂತ ಇಷ್ಟು ಧೈರ್ಯ ಸುಭದ್ರೆಗೆ .<br /> {{gap}}ತಂದೆ ಕನಲಿದ ರುದ್ರನಾದರೆ ಮರಗಿಡಗಳೂ ನಡುಗಬೇಕು. ಈ ಪ್ರಕರಣ ಅವರ ತನಕ ಹೋಗದೆಯೇ ಮುಕ್ತಾಯವಾದರೆ ಚೆನ್ನು. ಆಗದೇ ಇದ್ದರೆ, ಮುಂದಿನ ಮಾತು ಬೇರೆ,ನೋಡೋಣ.<br /> {{gap}}"ಅಂಬಾ "....<br /> {{gap}}–ಸಮಿಾಪದಿಂದಲೇ ಒಂದು ಹಸು ತನ್ನ ಜೋಡಿಯನ್ನು ಕರೆಯಿತು.<br /> {{gap}}ರಂಗಣ್ಣ ಕತ್ತು ಹೊರಳಿಸಿ ಅದನ್ನು ದಿಟ್ಟಿಸಿದ. ಕಪಿಲೆ, ಶ್ರಿನಿವಾಸಯ್ಯನವರ ಮನೆಯದೇ ಇರಬೇಕು. ಅಲೆಯುತ್ತ ಒಂದೇ ಬಂದುಬಿಟ್ಟಿದೆ. ಅಗೋ, ಕೆಳಕ್ಕೆ ಐದಾರು ಹಸು, ಎತ್ತುಗಳು ಮೇಯುತ್ತಿವೆ. ಅವೂ ಅವರವೇ. ದನಕಾಯುವ ಹುಡುಗ ಕಪಿಲೆಯನ್ನು ಕರೆಯುತ್ತಿದ್ದಾನೆ.<br /> {{gap}}ಆ ಹಸು ಏಕೆ "ಅಂಬಾ" ಎಂದಿತು? ಪದ್ಮನನ್ನು ದೂರದಿಂದ ಕಂಡು ಗುರುತು ಹಿಡಿಯಿತೊ ಕಡೆಗೆ?<br /> {{gap}}ಇರಲಾರದು, ಪದ್ಮನಾಭನಿಗೆ ಹಸುಗಳ ಮೇಲೆ ಪ್ರೀತಿ ಇಲ್ಲ. ಆತ ಹಳ್ಳಿಗೆ ಬಂದರೂ ಅತಿಥಿ ಇದ್ದ ಹಾಗೆ.<br /> {{gap}}ಕಣಿವೇಹಳ್ಳಿಯಲ್ಲಿ ಕಳೆದ ಎರಡು ತಲೆಮಾರುಗಳಿಂದ ಅವರ ಮನೆತನವೇ ಆತಿಥ್ಯ ಸ್ವೀಕರಿಸಿದೆ ಎನ್ನಬಹುದಲ್ಲ?<br /> {{gap}}ಪದ್ಮನಾಭನ ತಾತ ತನ್ನ ಚಿಕ್ಕ ವಯಸ್ಸಿನಲ್ಲಿ ಮಲೆನಾಡು ಕಡೆಯಿಂದ ಹೆಂಡತಿಯೊಡನೆ ಇಲ್ಲಿಗೆ ಬಂದರಂತೆ. ಆಗಿನ ಅರ್ಚಕರ ಮನೆಯಲ್ಲಿ ಬಿಡಾರ ಹೂಡಿದರಂತೆ. ಸೊಗಸಾದ ಊರು, ಇಲ್ಲಿಯೇ ಉಳಿದು ಬಾಳಿ ಬೆಳೆದರಾದೀತು ಎಂದರಂತೆ, ಕೈಯಲ್ಲಿ ಸ್ವಲ್ಪ ಹಣವಿತ್ತು. ಲೇವಾದೇವಿ ಮಾಡಿದರು. ಕ್ರಮೇಣ ಒಂದೊಂದಾಗಿ ಅನೇಕ ಹೊಲಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡರು.<br /> {{gap}}ರಂಗಣ್ಣ ತನ್ನ ಗೆಳೆಯನನ್ನು ಒಮ್ಮೆ ಕೇಳಿದ್ದ:<br /> {{gap}}"ಈ ಸಾಲ ಕೊಡೋದಿದೆಯಲ್ಲ, ಇದು ಒಳ್ಳೇ ಕಸಬೇನಪ್ಪ?”<br /> {{gap}}ಪದ್ಮನಾಭನೆಂದಿದ್ದ:<br /> {{gap}}"ದೇಶದ ಸರಕಾರವೇ ಸಾಲದ ಮೇಲೆ ನಡೀತಿರುವಾಗ ಇಂಥ ಪ್ರಶ್ನೆಗೆ ಅವಕಾಶವೇ ಇಲ್ವಲ್ಲೋ ......"<br /> {{gap}}" ಏನೋಪ್ಪ, ರೈತಾಪಿ ಜನ ಸಾಲಗಾರರ ಬಲೆಯಿಂದ ಪಾರಾದಾಗ ಮಾತ್ರ ದೇಶದ ಉದ್ಧಾರ ಸಾಧ್ಯ ಅನಿಸುತ್ತೆ."<br /> {{gap}}ತನ್ನ ಪೂರ್ವಜರ ಕಥೆಯನ್ನು ಪದ್ಮನಾಭ ಹೇಳಿದ್ದು ಆ ದಿನ. ಇತಿಹಾಸದ ಭಕ್ತ ಹಿಂದಿನದನ್ನೆಲ್ಲ ಕೇಳಿ ತಿಳಿದಿದ್ದ. ಅವನ ತಂದೆಯ ತಾಯಿ, ಹಣ್ಣು ಮುದುಕಿ, ಇನ್ನೂ ಬದುಕಿದ್ದರು.<br /> {{gap}}"ನಮ್ಮ ತಾತ ಸಾಲ ಕೊಟ್ಟು ಶ್ರೀಮಂತನಾದ ಅಂತ ಒಪ್ಕೋತೀನಿ, ಆದರೆ ಆಸ್ತಿ {{gap}}ಮಾಡಿದ್ಮೇಲೆ ಅವನು ಸ್ವತಃ ನೇಗಿಲು ಹಿಡಿದು ಉಳ್ತೆದ್ನ೦ತೆ."<noinclude></noinclude> l0rqe0d0bhhkja87ylut2gjv5usxuhn ಪುಟ:ನೋವು.pdf/೧೮ 104 20750 322854 277100 2026-05-27T02:46:13Z Pragathi. BH 7585 /* Validated */ 322854 proofread-page text/x-wiki <noinclude><pagequality level="4" user="Pragathi. BH" />{{rh|center=ನೋವು|left=೮|right=}}</noinclude> {{gap}}"ಪೌರೋಹಿತ್ಯ ಮಾಡೋದೆಲ್ಲಿ, ಭೂಮಿ ಸಾಗುವಳಿ ಎಲ್ಲಿ! ಆಶ್ಚರ್ಯವಪ್ಪ."<br /> {{gap}}"ಮಂತ್ರ ಹೇಳಿ ಮಾವಿನಕಾಯಿ ಉದುರಿಸಿದವನು ನಮ್ಮ ತಾತ!"<br /> {{gap}}–ರಂಗಣ್ಣ ನೀಳವಾಗಿ ಉಸಿರುಬಿಟ್ಟ. ಇನ್ನಿಲ್ಲವಲ್ಲ ಆ ಬಗೆಯ ಮಾತುಕತೆಗಳು.ಮಂತ್ರ ಹೇಳಿ ಮಾವಿನಕಾಯಿ ಉದುರಿಸಿದರಂತೆ. ಮಾವಿನ ಹಣ್ಣಿನ ಸುಗ್ಗಿ ಈಗ. ಆದರೆ ಕಣಿವೇಹಳ್ಳಿಯಲ್ಲಿ ವಾಟೆಗಳಿಗೂ ಬರಗಾಲವಾಗಿದೆಯಲ್ಲ! ಬಲಿಯುವುದಕ್ಕೆ ಮುನ್ನವೇ ಕಾಯಿಗಳನ್ನು ಕಿತ್ತು ಭಾಗ್ಯನಗರಕ್ಕೆ ಸಾಗಿಸುತ್ತಿದ್ದಾರೆ. ಅದರಲ್ಲೂ ಹೆಚ್ಚು ಕಾಯಿ ಸರಬರಾಜಾಗುವುದು ಶ್ರೀನಿವಾಸಯ್ಯನವರ ಮಾವಿನ ತೋಪಿನಿಂದ. ಪದ್ಮನ ಅಣ್ಣ ಗೋವಿಂದ ಆರಂಭಿಸಿರುವ ಸೊಸೈಟಿ ಈ ವ್ಯಾಪಾರ ಮಾಡುತ್ತಿದೆ. ಹೈಸ್ಕೂಲಲ್ಲಿ ಒಂದೆರಡು ವರ್ಷ ఓది, ಹೆಚ್ಚಿನ ವಿದ್ಯಾಭ್ಯಾಸದ ಗೋಜಿಗೆ ಹೋಗದೆ, ಹಳ್ಳಿಗೆ ಗೋವಿಂದ ವಾಪಸಾಗಿದ್ದ. ಮುಂದೆ ನಾಲ್ಕೈದು ವರ್ಷಗಳಲ್ಲೇ ಹಳ್ಳಿಯನ್ನು ಉದ್ಧರಿಸಲು ಹೊರಟಿದ್ದ! ಅವನ ಚಟುವಟಿಕೆಗಳಿಗೆ ತನ್ನ ತಂದೆಯೂ ಪ್ರೋತ್ಸಾಹವೀಯುತ್ತಿದ್ದಾರೆ ಎಂದು ರಂಗಣ್ಣನಿಗೆ ಕಸಿವಿಸಿ.<br /> {{gap}}ಎದ್ದು ರಂಗಣ್ಣ ಎರಡೂ ತೋಳುಗಳನ್ನು ಕೊಡವಿ ಮೈಮುರಿದ. ಕಪಿಲೆ ಹಸು ಕೆಳಕ್ಕಿಳಿದು ಸಂಗಡಿಗರನ್ನು ಸೇರಿಕೊಂಡಿತು. ಬಿಸಿಲು ಬಾಡಿತ್ತು.<br /> {{gap}}ಇವರು ಕಾಣಲಿಲ್ಲ. ಸುಭದ್ರೆ ಈ ಕಡೆಗೆ ಬರಲಿಲ್ಲವೇನೋ, ನಿಧಾನವಾಗಿ ಇಳಿಯುತ್ತ ನೋಡಿಕೊಂಡು ಹೋಗೋಣ–ಎಂದುಕೊಂಡು ಪಾಯಜಾಮ ಮತ್ತೊಮ್ಮೆ ಮುಳ್ಳಿಗೆ ಸಿಲುಕಿ ಹರಿಯದಿರಲೆಂದು, ಕಟಿ ಭಾಗದಲ್ಲಿ ಅದರ ಲಾಡಿಯನ್ನು ಹಿಡಿದು ಸ್ವಲ್ಪ ಮೇಲಕ್ಕೆ ಎಳೆದ. ಜಲಬಾಧೆ ತೀರಿಸಬೇಕೆನ್ನಿಸಿ ಗುಡಿಯ ಹಿಂಭಾಗಕ್ಕೆ ಹೋದ. ಛೆ! ಪವಿತ್ರ ಸ್ಥಳದಲ್ಲಿ ಈ ಕೆಲಸ ಮಾಡಬಾರದು ಎಂದು, ತುಸು ದೂರ ನಡೆದು ಒಂದು ಪೊದೆಯ ಬುಡಕ್ಕೆ ನೀರೆರೆದ.<br /> {{gap}}ರಂಗಣ್ಣ ಇಳಿಯತೊಡಗಿದುದು ಬೇರೆ ದಿಕ್ಕಿನಿಂದ. <br /> {{gap}}ಅಲ್ಲೇ ಕೆಳಗೆ ಒಂದೆಡೆ ಕಾಗೆಗಳು ವಿಕಾರವಾಗಿ ಕೂಗಿಕೊಳ್ಳುತ್ತಿದ್ದುವು. ಒಂದೆರಡು ಹದ್ದುಗಳು ಮೇಲೆ ಎತ್ತರದಲ್ಲಿ ವೃತ್ತಗಳನ್ನು ರಚಿಸುತ್ತಿದ್ದುವು.<br /> {{gap}}ರಂಗಣ್ಣನಿಗೆ ಅನಿಸಿತು; <br /> {{gap}}ಏನೋ ಪ್ರಾಣಿ ಸತ್ತುಬಿದ್ದಿರಬೇಕು.<br /> {{gap}}ಪ್ರಾಣಿಗಳನ್ನು ಕುಯ್ಯುವ, ಪರೀಕ್ಷಿಸುವ ವೃತ್ತಿಯವನು ರಂಗಣ್ಣ. ಈಗ ಮಾತ್ರ ಆ ಜಾಗದಿಂದ ದೂರ ಸರಿದು ನಡೆಯತೊಡಗಿದ. <br /> {{gap}}(ವಾಸನೆ ತಿನ್ನುವವರು ಯಾರು ?)<br /> {{gap}} ಸುತ್ತಲೂ ಬಂಡೆಗಳಿಂದ ಆವೃತವಾಗಿದ್ದ ಹೊಂಡ. ಪದ್ಮ ಹೇಳುತ್ತಿದ್ದ: ನಾಯಕರ ಕಾಲದಲ್ಲಿ ವಧಸ್ಥಾನವಾಗಿದ್ದಿರಬೇಕು ಅದು.<br /> {{gap}}ಒಮ್ಮೆ ಅಂಥ ಮಾತಿಗೆ ರಂಗಣ್ಣನೆಂದಿದ್ದ: <br /> {{gap}}"ಬರೀ ಬುರುಡೆ."<br /> {{gap}}ಪದ್ಮ ಕೊಟ್ಟ ಉತ್ತರ :<br /> {{gap}}“ ಹಾಗಾದರೆ ಇತಿಹಾಸವೆಲ್ಲ ಬುರುಡೇನೇ."<br /> {{gap}}ಇಷ್ಟು ಮಾತ್ರ ನಿಜ: ಆ ಹೊಂಡದ ಹತ್ತಿರಕ್ಕೆ ಹಳ್ಳಿಯವರು ಹೆಚ್ಚಾಗಿ ಹೋಗು<noinclude></noinclude> shcjy4xvqlaea00aet9tu8zhy4evzom ಪುಟ:ನೋವು.pdf/೧೯ 104 20751 322855 277106 2026-05-27T02:53:22Z Pragathi. BH 7585 /* Validated */ 322855 proofread-page text/x-wiki <noinclude><pagequality level="4" user="Pragathi. BH" />{{rh|center=ನೋವು|left=೯|right=}}</noinclude> ತ್ತಿರಲಿಲ್ಲ. {{gap}}ಆ ಸ್ಥಳದಿಂದ ರಂಗಣ್ಣ ಸಾಕಷ್ಟು ದೂರವಿದ್ದನಾದರೂ ಅವನ ದೃಷ್ಟಿ ಆಗಾಗ್ಗೆ ಅತ್ತ ಸರಿಯಿತು.<br /> {{gap}}ಒಮ್ಮೆ ನೋಡಿದಾಗ, ಇದ್ದಕ್ಕಿದ್ದಂತೆ ರಂಗಣ್ಣನ ಪಾದಗಳು ಬೇರುಬಿಟ್ಟುವು. <br /> {{gap}}ಇಬ್ಬರು ಆ ಹೊಂಡದತ್ತ ನಡೆದು ಬರುತ್ತಿದ್ದರು.<br /> {{gap}}ಹುಡುಗಿ, ಹುಡುಗ.<br /> {{gap}}ಹೆಣ್ಣು, ಗಂಡು. <br /> {{gap}}ಸುಭದ್ರೆ, ಪದ್ಮನಾಭ.<br /> {{gap}}ರಂಗಣ್ಣನ ಮೈ ಉರಿಯಿತು. ಎದೆಗುಂಡಿಗೆಯ ಬಡಿತ ತೀವ್ರಗೊಂಡಿತು.<br /> {{gap}}ಅಂತೂ ಸಿಕ್ಕಿದರು !<br /> {{gap}}ರಂಗಣ್ಣ ಸರಸರನೆ ಅತ್ತ ಸರಿಯತೊಡಗಿದ.<br /> {{gap}}ಆದರೆ ಅವರಿಬ್ಬರು ಅದೇನು ಕಂಡರೊ? ಹೊಂಡದ ಅಂಚಿನಿಂದ ಒಮ್ಮೆಲೆ ಹಳ್ಳಿಯ ಕಡೆಗೆ ತಿರುಗಿದರು; ಒಟ್ಟಿಗೆ ಬೇಗ ಬೇಗನೆ ನಡೆದರು. ರಂಗಣ್ಣನದೊಂದೇ ಯೋಚನೆ :<br /> {{gap}}'ನನ್ನನ್ನು ನೋಡಿಬಿಟ್ರು. ಓಡಿಹೋಗ್ತಿದಾರೆ.'<br /> {{gap}}ರಂಗಣ್ಣ ನಡಿಗೆಯನ್ನು ತೀವ್ರಗೊಳಿಸಿದ.<br /> {{gap}}ಸ್ವಲ್ಪ ದೂರ ಇಬ್ಬರೂ ಸಾಗಿದ ಮೇಲೆ ಪದ್ಮ, ಸುಭದ್ರೆ ಬೇರೆ ಬೇರೆಯಾದರು.<br /> {{gap}}ಕೂಗಿ ಕರೆಯಬೇಕು ಎನ್ನಿಸಿತು ರಂಗಣ್ಣನಿಗೆ. ಗಂಟಲೊಣಗಿತು.<br /> {{gap}}'ನಾನು ಸೋತೆ' ಎಂದುಕೊಂಡು, ಹೊಂಡದ ಅಂಚಿನಲ್ಲಿ ನಿಂತ.<br /> {{gap}}ದೊಡ್ಡದೊಂದು ಗಿಡುಗ ಭರ್‍ರೆಂದು ಹೊಂಡದಿಂದೆದ್ದು ಕರ್ಕಶವಾಗಿ ಕಿರಿಚಿಕೊಳ್ಳುತ್ತ ರೆಕ್ಕೆ ಬಡಿಯುತ್ತ ರಂಗಣ್ಣನ ಸಮಿಾಪದಿಂದಲೇ ಹಾರಿಹೋಯಿತು. ಅದರ ರೆಕ್ಕೆ ತನಗೆ ತಗಲದಂತೆ ರಂಗಣ್ಣ ಸರಕ್ಕನೆ ಮೈ ಬಾಗಿಸಿ ತಪ್ಪಿಸಿಕೊಂಡು ಉದ್ಗರಿಸಿದ:<br /> {{gap}}"ಅಬ್ಬ ! "<br /> {{gap}}ಅವನ ದೃಷ್ಟಿ ಹೊಂಡದ ತಳವನ್ನು ಕಂಡಿತು.<br /> {{gap}}"ಆ!"<br /> {{gap}}ಆರ್ತನಾದದಂತಹ ಒಂದು ಧ್ವನಿ ರಂಗಣ್ಣನ ಅರಿವಿಲ್ಲದೆ ಅವನ ಗಂಟಲಿನಿಂದ ಹೊರಟಿತು. ಮೊಣಕಾಲುಗಳು ಕಂಪಿಸಿದುವು–ತಲೆ ಗಿರ್‍ರನೆ ತಿರುಗಿದಂತಾಯಿತು. ಮೈ ಬೆವರೊಡೆಯಿತು. ಹೊಂಡಕ್ಕೆ ಬೀಳುವೆನೇನೋ ಎಂದು ಅವನಿಗೆ ಭಯವಾಯಿತು. ಆತ ಪ್ರಯಾಸಪಟ್ಟು ಎರಡು ಹೆಜ್ಜೆ ಹಿಂದಕ್ಕೆ ಸರಿದ. <br /> {{gap}}ಅಲ್ಲಿ ಏನನ್ನು ಕಂಡ ರಂಗಣ್ಣ? <br /> {{gap}}ಅಂಗಾತ ಬಿದ್ದಿದ್ದ ಕಪ್ಪು ಬಣ್ಣದ ಒಂದು ನಿರ್ಜೀವ ದೇಹವನ್ನು. ಮುಖ ಊದಿ ಕೊಂಡಿತ್ತು. ಕಣ್ಣು ಗುಡ್ಡೆಗಳು ಹೊರಕ್ಕೆ ಬಂದಿದ್ದುವು.<br /> {{gap}}ಭಾಗ್ಯನಗರದ ಆಸ್ಪತ್ರೆಯಲ್ಲಿ ಎಷ್ಟೋ ಶವಗಳನ್ನು ಮುಟ್ಟಿದ್ದ,ಕುಯ್ದಿದ್ದ ರಂಗಣ್ಣ ಕಣಿವೇಹಳ್ಳಿಯ ದಿಬ್ಬದಲ್ಲಿ ಭಯಭೀತನಾದ.<noinclude></noinclude> 3ji6krfennu39ik8so2fd1lz8nbqbmi ಪುಟ:ನೋವು.pdf/೨೦ 104 20752 322861 277120 2026-05-27T03:02:38Z Shreelatha.Halemane 7642 /* Validated */ 322861 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೦ |right=ನೋವು}} {{gap}}ಕೊಲೆ ? ಸಾವು ? {{gap}}ಯಾರ ಶವ ? ಯಾರದು ? {{gap}}ಪ್ರಯತ್ನಪಟ್ಟು ಮತ್ತೊಮ್ಮೆ ಅದರತ್ತ ರಂಗಣ್ಣ ನೋಡಿದ. ಮೃತ ಶರೀರದ ಮುಖ ಅವನಿಗೆ ಪರಿಚಿತವಾಗಿತ್ತು. {{center|೨}} {{gap}}–ಮುನಿಯ ಸತ್ತುಹೋದ ! {{gap}}–ಮುನಿಯನ ಕೊಲೆಯಾಗಿದೆ! {{gap}}ಆಕಾಶ ತಲೆಯ ಮೇಲೆ ಕಳಚಿಬಿದ್ದಂತಾಯಿತು ಆರಾಮಕುರ್ಚಿಯಲ್ಲಿ ಕುಳಿತಿದ್ದ ಶ್ರಿನಿವಾಸಯ್ಯನವರಿಗೆ. {{gap}}ಐವತ್ತು ಚಿಲ್ಲರೆ ವರ್ಷಗಳ ಬದುಕಿನಲ್ಲಿ ರೈತರು' ಹಾವು ಕಡಿದು ಸತ್ತುದನ್ನು,ಹುಲಿ ತಿಂದು ಹತರಾದುದನ್ನು ಮಳೆಗಾಲದಲ್ಲಿ ನದಿಯ ಪಾಲಾದುದನ್ನು ಶ್ರಿನಿವಾಸಯ್ಯ ಕಂಡಿದ್ದರು. ಆದರೆ ಕೊಲೆ – ಎಂದೂ ಕಣಿವೇಹಳ್ಳಿಯಲ್ಲಿ ಆಗಿರಲಿಲ್ಲ. {{gap}}ಅವರು ಅಂಗವಸ್ತ್ರವನ್ನು ಎಡ ಭುಜದಿಂದ ಎತ್ತಿ ಬಲ ಭುಜಕ್ಕೆ ವರ್ಗಾಯಿಸಿದರು.ಕಂಕುಳುಗಳಿಂದ ಬೆವರು ಹನಿಗೂಡಿ ಧಾರೆಗಟ್ಟಿ ಹರಿಯಿತು. ಹೊಟ್ಟೆ, ಎದೆಗೂಡನ್ನು ಸಂಧಿಸುವ ಪದರ ತೇವಗೊಂಡಿತು.. ದಂಗು ಬಡೆದಿದ್ದ ಮೆದುಳನ್ನು ತಟ್ಟಿ ಎಚ್ಚರಿಸುವವರಂತೆ ಬೊಕ್ಕತಲೆಯ ಮೇಲೆ ಅವರು ಅಂಗೈ ಆಡಿಸಿದರು. ಮಿಾಸೆ ಮತ್ತಷ್ಟು ಬಾಗಿ ಜೋತಿತು. {{gap}}ಹೇಳಿದ ಮೇಲೂ ಇವರು ಸುಮ್ಮನಿರುವರಲ್ಲ ಎಂದು ರಂಗಣ್ಣ ವಿಸ್ಮಿತನಾದ. ತನ್ನ ಕೆಲಸ ಮಾಡಿದಮೇಲೆ ತುಸು ಸಮಾಧಾನವೆನಿಸಿತಾದರೂ ಶ್ರಿನಿವಾಸಯ್ಯ ಗರಬಡಿದವರಂತೆ ಕುಳಿತೇ ಇದ್ದುದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. {{gap}}ಶ್ರೀನಿವಾಸಯ್ಯನ ಹುಬ್ಬಗಳು ಪರಸ್ಪರ ಹತ್ತಿರಕ್ಕೆ ಸರಿದುವು. ಹಣೆ ನೆರಿಗೆ ಕಟ್ಟಿತು. ಅವರು ಯೋಚಿಸಲೆತ್ನಿಸಿದರು: {{gap}}– 'ಈ ಹುಡುಗ ಇಲ್ಲಿ ಯಾಕಿದ್ದಾನೆ?' {{gap}}– 'ನನ್ನಲ್ಲಿಗೆ ಬಂದು ಯಾಕೆ ಈ ಸುದ್ದಿ ಮುಟ್ಟಿಸಿದ?' {{gap}}– 'ಊರಿಗೆ ಮುಖ್ಯಸ್ಥ ಪಟೇಲ ಶಾಮೇಗೌಡ; ನಾನಲ್ಲ. ಇಂಥ ಸಮಸ್ಯೆ ಏನು ಬಂದರೂ ಇದಿರಿಸಬೇಕಾದವನು ಆತ, ನಾನಲ್ಲ.' {{gap}}"ಮಗೂ." {{gap}}ಶ್ರೀನಿವಾಸಯ್ಯ ವಾತ್ಸಲ್ಯದಿಂದ ರಂಗಣ್ಣನನ್ನು ಯಾವಾಗಲೂ ಸಂಬೋಧಿಸುತ್ತಿದ್ದುದು ಆ ರೀತಿಯಾಗಿ. {{gap}}"ಏನ್ಸಾರ್ ?” {{gap}}[ತಂದೆ ಹೇಳುವುದಿತ್ತು: "ಅಯ್ಯನೋರಿದಾರೋ ನೋಡ್ಕೊಂಡ್ಬಾ." ಅಯ್ಯ-<noinclude></noinclude> t50gr5wb3xyt3wixjklp65bzemuegli 322937 322861 2026-05-27T08:43:28Z Pragathi. BH 7585 322937 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೦ |right=ನೋವು}} {{gap}}ಕೊಲೆ ? ಸಾವು ? {{gap}}ಯಾರ ಶವ ? ಯಾರದು ? {{gap}}ಪ್ರಯತ್ನಪಟ್ಟು ಮತ್ತೊಮ್ಮೆ ಅದರತ್ತ ರಂಗಣ್ಣ ನೋಡಿದ. ಮೃತ ಶರೀರದ ಮುಖ ಅವನಿಗೆ ಪರಿಚಿತವಾಗಿತ್ತು. {{center|೨}} {{gap}}–ಮುನಿಯ ಸತ್ತುಹೋದ ! {{gap}}–ಮುನಿಯನ ಕೊಲೆಯಾಗಿದೆ! {{gap}}ಆಕಾಶ ತಲೆಯ ಮೇಲೆ ಕಳಚಿಬಿದ್ದಂತಾಯಿತು ಆರಾಮಕುರ್ಚಿಯಲ್ಲಿ ಕುಳಿತಿದ್ದ ಶ್ರಿನಿವಾಸಯ್ಯನವರಿಗೆ. {{gap}}ಐವತ್ತು ಚಿಲ್ಲರೆ ವರ್ಷಗಳ ಬದುಕಿನಲ್ಲಿ ರೈತರು' ಹಾವು ಕಡಿದು ಸತ್ತುದನ್ನು,ಹುಲಿ ತಿಂದು ಹತರಾದುದನ್ನು ಮಳೆಗಾಲದಲ್ಲಿ ನದಿಯ ಪಾಲಾದುದನ್ನು ಶ್ರಿನಿವಾಸಯ್ಯ ಕಂಡಿದ್ದರು. ಆದರೆ ಕೊಲೆ – ಎಂದೂ ಕಣಿವೇಹಳ್ಳಿಯಲ್ಲಿ ಆಗಿರಲಿಲ್ಲ. {{gap}}ಅವರು ಅಂಗವಸ್ತ್ರವನ್ನು ಎಡ ಭುಜದಿಂದ ಎತ್ತಿ ಬಲ ಭುಜಕ್ಕೆ ವರ್ಗಾಯಿಸಿದರು.ಕಂಕುಳುಗಳಿಂದ ಬೆವರು ಹನಿಗೂಡಿ ಧಾರೆಗಟ್ಟಿ ಹರಿಯಿತು. ಹೊಟ್ಟೆ, ಎದೆಗೂಡನ್ನು ಸಂಧಿಸುವ ಪದರ ತೇವಗೊಂಡಿತು.. ದಂಗು ಬಡೆದಿದ್ದ ಮೆದುಳನ್ನು ತಟ್ಟಿ ಎಚ್ಚರಿಸುವವರಂತೆ ಬೊಕ್ಕತಲೆಯ ಮೇಲೆ ಅವರು ಅಂಗೈ ಆಡಿಸಿದರು. ಮಿಾಸೆ ಮತ್ತಷ್ಟು ಬಾಗಿ ಜೋತಿತು. {{gap}}ಹೇಳಿದ ಮೇಲೂ ಇವರು ಸುಮ್ಮನಿರುವರಲ್ಲ ಎಂದು ರಂಗಣ್ಣ ವಿಸ್ಮಿತನಾದ. ತನ್ನ ಕೆಲಸ ಮಾಡಿದಮೇಲೆ ತುಸು ಸಮಾಧಾನವೆನಿಸಿತಾದರೂ ಶ್ರಿನಿವಾಸಯ್ಯ ಗರಬಡಿದವರಂತೆ ಕುಳಿತೇ ಇದ್ದುದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. {{gap}}ಶ್ರೀನಿವಾಸಯ್ಯನ ಹುಬ್ಬಗಳು ಪರಸ್ಪರ ಹತ್ತಿರಕ್ಕೆ ಸರಿದುವು. ಹಣೆ ನೆರಿಗೆ ಕಟ್ಟಿತು. ಅವರು ಯೋಚಿಸಲೆತ್ನಿಸಿದರು: {{gap}}– 'ಈ ಹುಡುಗ ಇಲ್ಲಿ ಯಾಕಿದ್ದಾನೆ?' {{gap}}– 'ನನ್ನಲ್ಲಿಗೆ ಬಂದು ಯಾಕೆ ಈ ಸುದ್ದಿ ಮುಟ್ಟಿಸಿದ?' {{gap}}– 'ಊರಿಗೆ ಮುಖ್ಯಸ್ಥ ಪಟೇಲ ಶಾಮೇಗೌಡ; ನಾನಲ್ಲ. ಇಂಥ ಸಮಸ್ಯೆ ಏನು ಬಂದರೂ ಇದಿರಿಸಬೇಕಾದವನು ಆತ, ನಾನಲ್ಲ.' {{gap}}"ಮಗೂ." {{gap}}ಶ್ರೀನಿವಾಸಯ್ಯ ವಾತ್ಸಲ್ಯದಿಂದ ರಂಗಣ್ಣನನ್ನು ಯಾವಾಗಲೂ ಸಂಬೋಧಿಸುತ್ತಿದ್ದುದು ಆ ರೀತಿಯಾಗಿ. {{gap}}"ಏನ್ಸಾರ್ ?” {{gap}}[ತಂದೆ ಹೇಳುವುದಿತ್ತು: "ಅಯ್ಯನೋರಿದಾರೋ ನೋಡ್ಕೊಂಡ್ಬಾ." ಅಯ್ಯ-<noinclude></noinclude> jhi4xfgc936rngs1uoz5sc4hxa0mo59 322938 322937 2026-05-27T08:51:59Z Pragathi. BH 7585 322938 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೧೦ |right=ನೋವು}} {{gap}}ಕೊಲೆ ? ಸಾವು ?<br /> {{gap}}ಯಾರ ಶವ ? ಯಾರದು ?<br /> {{gap}}ಪ್ರಯತ್ನಪಟ್ಟು ಮತ್ತೊಮ್ಮೆ ಅದರತ್ತ ರಂಗಣ್ಣ ನೋಡಿದ. ಮೃತ ಶರೀರದ ಮುಖ ಅವನಿಗೆ ಪರಿಚಿತವಾಗಿತ್ತು.<br /> {{center|೨}} {{gap}}–ಮುನಿಯ ಸತ್ತುಹೋದ ! {{gap}}–ಮುನಿಯನ ಕೊಲೆಯಾಗಿದೆ! {{gap}}ಆಕಾಶ ತಲೆಯ ಮೇಲೆ ಕಳಚಿಬಿದ್ದಂತಾಯಿತು ಆರಾಮಕುರ್ಚಿಯಲ್ಲಿ ಕುಳಿತಿದ್ದ ಶ್ರಿನಿವಾಸಯ್ಯನವರಿಗೆ. {{gap}}ಐವತ್ತು ಚಿಲ್ಲರೆ ವರ್ಷಗಳ ಬದುಕಿನಲ್ಲಿ ರೈತರು' ಹಾವು ಕಡಿದು ಸತ್ತುದನ್ನು,ಹುಲಿ ತಿಂದು ಹತರಾದುದನ್ನು ಮಳೆಗಾಲದಲ್ಲಿ ನದಿಯ ಪಾಲಾದುದನ್ನು ಶ್ರಿನಿವಾಸಯ್ಯ ಕಂಡಿದ್ದರು. ಆದರೆ ಕೊಲೆ – ಎಂದೂ ಕಣಿವೇಹಳ್ಳಿಯಲ್ಲಿ ಆಗಿರಲಿಲ್ಲ. {{gap}}ಅವರು ಅಂಗವಸ್ತ್ರವನ್ನು ಎಡ ಭುಜದಿಂದ ಎತ್ತಿ ಬಲ ಭುಜಕ್ಕೆ ವರ್ಗಾಯಿಸಿದರು.ಕಂಕುಳುಗಳಿಂದ ಬೆವರು ಹನಿಗೂಡಿ ಧಾರೆಗಟ್ಟಿ ಹರಿಯಿತು. ಹೊಟ್ಟೆ, ಎದೆಗೂಡನ್ನು ಸಂಧಿಸುವ ಪದರ ತೇವಗೊಂಡಿತು.. ದಂಗು ಬಡೆದಿದ್ದ ಮೆದುಳನ್ನು ತಟ್ಟಿ ಎಚ್ಚರಿಸುವವರಂತೆ ಬೊಕ್ಕತಲೆಯ ಮೇಲೆ ಅವರು ಅಂಗೈ ಆಡಿಸಿದರು. ಮಿಾಸೆ ಮತ್ತಷ್ಟು ಬಾಗಿ ಜೋತಿತು. {{gap}}ಹೇಳಿದ ಮೇಲೂ ಇವರು ಸುಮ್ಮನಿರುವರಲ್ಲ ಎಂದು ರಂಗಣ್ಣ ವಿಸ್ಮಿತನಾದ. ತನ್ನ ಕೆಲಸ ಮಾಡಿದಮೇಲೆ ತುಸು ಸಮಾಧಾನವೆನಿಸಿತಾದರೂ ಶ್ರಿನಿವಾಸಯ್ಯ ಗರಬಡಿದವರಂತೆ ಕುಳಿತೇ ಇದ್ದುದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. {{gap}}ಶ್ರೀನಿವಾಸಯ್ಯನ ಹುಬ್ಬಗಳು ಪರಸ್ಪರ ಹತ್ತಿರಕ್ಕೆ ಸರಿದುವು. ಹಣೆ ನೆರಿಗೆ ಕಟ್ಟಿತು. ಅವರು ಯೋಚಿಸಲೆತ್ನಿಸಿದರು: {{gap}}– 'ಈ ಹುಡುಗ ಇಲ್ಲಿ ಯಾಕಿದ್ದಾನೆ?' {{gap}}– 'ನನ್ನಲ್ಲಿಗೆ ಬಂದು ಯಾಕೆ ಈ ಸುದ್ದಿ ಮುಟ್ಟಿಸಿದ?' {{gap}}– 'ಊರಿಗೆ ಮುಖ್ಯಸ್ಥ ಪಟೇಲ ಶಾಮೇಗೌಡ; ನಾನಲ್ಲ. ಇಂಥ ಸಮಸ್ಯೆ ಏನು ಬಂದರೂ ಇದಿರಿಸಬೇಕಾದವನು ಆತ, ನಾನಲ್ಲ.' {{gap}}"ಮಗೂ." {{gap}}ಶ್ರೀನಿವಾಸಯ್ಯ ವಾತ್ಸಲ್ಯದಿಂದ ರಂಗಣ್ಣನನ್ನು ಯಾವಾಗಲೂ ಸಂಬೋಧಿಸುತ್ತಿದ್ದುದು ಆ ರೀತಿಯಾಗಿ. {{gap}}"ಏನ್ಸಾರ್ ?” {{gap}}[ತಂದೆ ಹೇಳುವುದಿತ್ತು: "ಅಯ್ಯನೋರಿದಾರೋ ನೋಡ್ಕೊಂಡ್ಬಾ." ಅಯ್ಯ-<noinclude></noinclude> p741lrctpmbbikga47ny7ha6p44axgu ಪುಟ:ನೋವು.pdf/೨೧ 104 20753 322874 277125 2026-05-27T03:17:55Z Shreelatha.Halemane 7642 /* Validated */ 322874 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''ನೋವು'''}} ಅಯ್ಯ, ರಂಗಣ್ಣನೂ ಅನ್ನುತ್ತಿದ್ದನಲ್ಲ: " ಅಯ್ಯನೋರಿದಾರೋ ನೋಡ್ಕೊಂಬಾ ಅಂದ್ರು ." ಆದರೆ ಮೆಡಿಕಲ್ ಕಾಲೇಜು ಸೇರಿದಮೇಲೆ—ಪದ್ಮನೊಡನೆ ವಿರಸ ಆದಮೇಲೆ–ರಂಗಣ್ಣ ಶ್ರಿನಿವಾಸಯ್ಯನವರನ್ನು ಸಾರ್ ಎಂದು ಸಂಬೋಧಿಸತೊಡಗಿದ್ದ "ಸಾರ್”–ಯಾವ ಅರ್ಥವನ್ನು ಬೇಕಾದರೂ ಹೊರಡಿಸುವ ಪದ. ದೈನ್ಯದಿಂದ: ದಯವಿಟ್ಟು ಬನ್ನಿ, ಸಾರ್. ಅಥವಾ ಸಿಟ್ಟಿನಿಂದ, ಏನೂಂತ ತಿಳ್ಕೊಂಡಿದೀರಿ ಸಾರ್?] {{gap}}"ಶಾಮಣ್ಣ ಮನೇಲಿಲ್ವಾ ?” {{gap}}" ಹೊಸಳ್ಳಿಗೆ ಹೋಗಿದಾರೆ ಸಾರ್.” {{gap}}" ಇವತ್ತೇ ಬರ್ತನೆ ಅಲ್ವೆ?” {{gap}}" ಹೂ೦.‍‍‍ ‍ಏಳು ಘ೦ಟೆಯೊಳಗೆ ಬರಬೌದು." {{gap}}ಶ್ರಿನಿವಾಸಯ್ಯಗೆ ಈಗ ಅರ್ಥವಾಯಿತು, ರಂಗಣ್ಣ ತನ್ನಲ್ಲಿಗೆ ಯಾಕೆ ಬಂದ ಎಂಬುದು. {{gap}}ಒಳ್ಳೇ ಗ್ರಹಚಾರ–ಎಂದು ಅರ್ಧ ತಮ್ಮಷ್ಟಕ್ಕೆ ಅವರು ಗೊಣಗಿದರು. {{gap}}" ಗೋಪೂ," ಎಂದು ಹಿರಿಯ ಮಗನನ್ನು ಕರೆದರು. {{gap}}ಒಂದು ವರ್ಷದ ಮಗುವನ್ನೆತ್ತಿಕೊಂಡು ಬಂದು ಪಡಸಾಲೆಯತ್ತ ಇಣಿಕಿ ನೋಡಿ, " ನದೀ ಕಡೆಗೆ ಹೋಗಿದಾರೆ,” ಎಂದಳು ಶ್ರಿನಿವಾಸಯ್ಯನವರ ಸೊಸೆ, ಭಾಗೀರಥಿ. {{gap}}ಸಂದರ್ಭ ಏನು ಎಂದು ತಿಳಿಯದೆ ರಂಗಣ್ಣನನ್ನು ಅವಳು ನೋಡಿ ಮುಗುಳು ನಕ್ಕಳು, {{gap}}" ಅಮ್ಮ ಎಲ್ಲಿ ? " ಎ೦ದು ಕೇಳಿದರು ಶ್ರಿನಿವಾಸಯ್ಯ . {{gap}}" ಅಡಿಗೆ ಮನೇಲಿದಾರೆ.” {{gap}}" ನಾನು ಕರೆದೇಂತ ಹೇಳು." {{gap}}ಭಾಗೀರಥಿ ಒಳಕ್ಕೆ ಹೋದಳು. {{gap}}ತಮ್ಮ ಬೊಕ್ಕತಲೆಯ ಮೇಲೆ ಮತ್ತೊಮ್ಮೆ ಅಂಗೈ ಆಡಿಸಿದರು ಶ್ರಿನಿವಾಸಯ್ಯ. ತಾಯಿಯನ್ನು ಕೇಳದೆ ಯಾವ ಹೆಜ್ಜೆಯನ್ನೂ ಎಂದೂ ಇಟ್ಟವರಲ್ಲ ಅವರು. {{gap}}ರಂಗಣ್ಣ ಬೇಸರಗೊಳ್ಳುತ್ತ ಶ್ರಿನಿವಾಸಯ್ಯನವರನ್ನು ದಿಟ್ಟಿಸಿದ. ಆರಾಮಕುರ್ಚಿಯಲ್ಲಿ ಅವರ ಶರೀರ ಕ್ಷಣದಿಂದ ಕ್ಷಣಕ್ಕೆ ಕುಗ್ಗುತ್ತ ನಡೆದಂತೆ ಕಂಡಿತು. ತನ್ನ ತಂದೆಗೂ ಇವರಿಗೂ ಎಷ್ಟು ಅಂತರ! ತಂದೆಯಾಗಿದ್ದರೆ ಇಷ್ಟು ಹೊತ್ತಿಗೆ ಮನೆ ಬಿಟ್ಟು ಹೊರಟು ಹಳ್ಳಿಯ ಪ್ರಮುಖರನ್ನು ಕರೆದು, ಮುಂದಿನ ಕ್ರಮ ಕೈಗೊಳ್ಳುತ್ತಿದ್ದರು. {{gap}}ನಿಂತೇ ಇದ್ದ ರಂಗಣ್ಣ ಪಡಸಾಲೆಯ ಗೋಡೆಯತ್ತ ನೋಡಿದ. ಅವನಿಗೆ ಪರಿಚಿತ ವಾಗಿದ್ದ ದೇವರ ಪಠಗಳು. ಗೋಡೆಯ ಗೂಟದ ಮೇಲೆ ನೇತುಬಿದ್ದಿದ್ದ ಶರಟು, ಟೋಪಿ, ಶ್ರಿನಿವಾಸಯ್ಯನವರದು. ಪಠಗಳ ನಡುವೆ ಕುಟುಂಬದ ಭಾವಚಿತ್ರಗಳು. ಒಂದರ ಹೊರತಾಗಿ ಉಳಿದುದನ್ನೆಲ್ಲ ರಂಗಣ್ಣ ಹಿಂದೆ ನೋಡಿದವನೇ. ಆ ಹೊಸದು? ಪದ್ಮನಾಭನ ಹಿರಿ ಯಣ್ಣ ಗೋಪಾಲನ ಮದುವೆಯ ವೇಳೆ ತೆಗೆದುದಿರಬೇಕು–ಎಂದು ತೋರಿತು. ಸೋಮ ಪುರದಲ್ಲಿ ಅಲ್ಲವೆ ಮದುವೆಯಾದದ್ದು? ಅಲ್ಲಿಯೇ ತೆಗೆಸಿರಬೇಕು... {{gap}}ಶ್ರಿನಿವಾಸಯ್ಯನವರ ತಾಯಿ ಪಡಸಾಲೆಗೆ ಬಂದರು. ಎಪ್ಪತ್ತೈದು ದಾಟಿದ್ದರೂ ನಡು ಬಾಗದ ಜೀವ. ಕ್ಷೌರಿಕನ ಕತ್ತಿಗೆ ಬಲಿಯಾಗಲು ಸಿದ್ದವಾಗಿದ್ದ ಬಿಳಿಯ ಕುಚ್ಚುಕೂದಲ ಬೆಳೆ ತಲೆಯನ್ನು ಆವರಿಸಿ ಅವರ ಸೆರಗಿನೊಳಗಿಂದ ಇಣಿಕಿನೋಡುತ್ತಿತ್ತು. ರಂಗಣ್ಣ ಬಂದಿದ್ದಾನೆ.<noinclude></noinclude> s4t837o8b83crepunoqzlcs237nawd5 ಪುಟ:ನೋವು.pdf/೨೨ 104 20754 322891 277127 2026-05-27T03:35:32Z Shreelatha.Halemane 7642 /* Validated */ 322891 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=೧೨|right=}} ಎಂದು ಭಾಗೀರಥಿ——ಅವರ ಮೊಮ್ಮಗನ ಮಡದಿ——ಅವರಿಗೆ ತಿಳಿಸಿದ್ದಳು. ಯಾಕೆ ಬ೦ದಿದ್ಧಾನೊ? ಶಾಮಣ್ಣನ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವೊ ಏನೊ——ಎಂದು ಕೊಳ್ಳುತ್ತ ಅವರು ಅಡುಗೆಮನೆಯಿಂದ ಹೊರಬಂದರು. {{gap}}ಎತ್ತರದ ನಿಲುವು, ಗೋದಿಗೆಂಪು ಮೈ........ {{gap}}" ಏನ್ಮಗೂ, ಚೆನ್ನಾಗಿದೀಯಾ ? " {{gap}}ಲಯಬದ್ದವಾದ ಮಾತು. ಇಂಪಾದ ಸ್ವರ. {{gap}}ರಂಗಣ್ಣ ಉತ್ತರವೀಯುವುದಕ್ಕೆ ಮುಂಚೆಯೇ ಅವರು ಮತ್ತೂ ಅಂದರು: {{gap}}" ಒಂದು ವಾರವಾಯ್ತಲ್ಲೋ ಭಾಗ್ಯನಗರದಿ೦ದ ಬಂದು ? ದೊಡ್ಡಮ್ಮನ್ನ ನೋಡೋಕೆ ಈ ಮೊದಲೇ ಬರಬಾರದಾಗಿತ್ತೇನೋ ? " {{gap}}ಆ ಧ್ವನಿ ತನ್ನ ಮೈದಡವಿ ಮುತ್ತಿಟ್ಟಂತಾಯಿತು ರಂಗಣ್ಣನಿಗೆ. ಅದು, ತಾನು ಈ ಜಗತ್ತಿಗೆ ಬರಲು ನೆರವಾದ ವ್ಯಕ್ತಿ. ಸುಭದ್ರೆಯ ಮುಖವನ್ನು ಮೊದಲು ಕಂಡವರೂ ಆಕೆಯೇ. ತನ್ನ ತಾಯಿಯನ್ನು ಉಳಿಸುವುದು ಅವರಿಂದ ಆಗಿರಲಿಲ್ಲ ನಿಜ. ಆದರೂ ಅವರು ತನಗೆ ಆತ್ಮೀಯರು. {{gap}}" ಬರಬೇಕಾಗಿತ್ತು ದೊಡ್ಡಮ್ಮ. ಆದರೆ ಏನೋ ಕೆಲಸ......" {{gap}}"ಹೂನಪ್ಫಾ, ನಾಳೆ ಡಾಕ್ಟರಾಗುವವನು." {{gap}}(ಹಳ್ಳಿಯವರಿಗೆಲ್ಲ " ದೊಡ್ಡಮ್ಮ" ಆ ವೃದ್ದೆ). {{gap}}ಈ ಪರಿಸ್ಥಿತಿಯಲ್ಲಿ ಇಂಥ ಮಾತುಕತೆ ಆಭಾಸಕರ ಎನ್ನುವಂತೆ ಶ್ರಿನಿವಾಸಯ್ಯ ಗಾಳಿ ಯಲ್ಲಿ ಕೈಯಾಡಿಸಿದರು. {{gap}}ಅವರೆಂದರು : {{gap}}"ಅಮ್ಮ! ಮುನಿಯನನ್ನು ದಿಬ್ಬದ ಹೊಂಡದಲ್ಲಿ ಯಾರೋ ಕೊಂದಾಕಿದಾರ೦ತೆ. ರಂಗಣ್ಣ ಹೇಳಿದ್ದಾನೆ. ಹೆಣಾನ ನೋಡಿ ಬಂದ್ನಂತೆ. ಶಾಮಣ್ಣ ಊರಲ್ಲಿಲ್ಲ. ಈಗ ಏನಾಡೋಣ? ” {{gap}}ದೊಡ್ಡಮ್ಮ ಎವೆ ಮುಚ್ಚದೆ ನಿಂತು ಮಗನ ಮಾತುಗಳನ್ನು ಆಲಿಸಿದರು. ಒಂದು ಕ್ಷಣ ಸುಮ್ಮನಿದ್ದರು. ಏನನ್ನೋ ಹೇಳುತ್ತಲಿದ್ದವರಂತೆ ತುಟಿಗಳು ಮೌನವಾಗಿ ಚಲಿಸಿದುವು. {{gap}}ಕಟ್ಟಿಕೊಂಡಿದ್ದ ಗಂಟಲನ್ನು ಸರಿಪಡಿಸಿ ಅವರೆಂದರು: {{gap}}" ಪಾಪಿ ಮುಂಡೇಗಂಡ. ಏನೋ ಮಾಡೋಕೆ ಹೋಗಿ ಪ್ರಾಣಾನೇ ಕಳಕೊಂಡ್ರಲ್ಲಾ...." {{gap}}ಧ್ವನಿ ಅಲೆಅಲೆಯಾಗಿ ಗಾಳಿಯೊಡನೆ ಲೀನವಾಯಿತು. {{gap}}ಮತ್ತೊಂದು ಕ್ಷಣ ಮಾತಿಲ್ಲದೆ ನಿಂತ ಬಳಿಕ ದೊಡ್ಡಮ್ಮ ಅಂದರು: {{gap}}" ಏಳು ಶೀನ,ಕೃಷ್ಟೇಗೌಡನನ್ನ ಕರೆಸು. ಮುನಿಯನ ಹೆಂಡತಿಗೂ ಮಗನಿಗೂ ವಿಷಯ ಗೊತ್ತಿದೆಯೋ ಇಲ್ಲವೋ. ಮಾದನಿಗೆ ಹೇಳಿಕಳಿಸು. ತಮ್ಮ ಜನವನ್ನ ಕರ್ಕೊಂಡ್ಬರ್ತಾನೆ. ಕತ್ತಲಾಗೋದರೊಳಗೆ ಶವವನ್ನ ಹಳ್ಳಿಗೆ ತಂದ್ಬಿಡ್ಲಿ. ಶಾಮಣ್ಣ ಇವತು ಬರ್ತಾನೆ, ಅಲ್ವೆ?" {{gap}}ರಂಗಣ್ಣನೆಂದ:<noinclude></noinclude> f8387bgc34zd0ra965hrmtjtu44mu8m ಪುಟ:ನೋವು.pdf/೨೩ 104 20755 322893 277132 2026-05-27T03:39:18Z Shreelatha.Halemane 7642 /* Validated */ 322893 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right=೧೩ }} {{gap}}" ಹೂಂ." {{gap}}" ಸರಿ. ಆಮೇಲೆ ಶವ ಸಂಸ್ಕಾರ ಮಾಡಿದರಾಯ್ತು." {{gap}}ಅಷ್ಟು ಹೇಳಿ ದೊಡ್ಡಮ್ಮ, ಆಗಲೇ ನಿಂತಿದ್ದ ಮಗನ ಕಡೆ ನೋಡಿ, "ಅಂಗಿ ಹಾಕ್ಕೋ" ಎಂದರು. {{gap}}ಶ್ರೀನಿವಾಸಯ್ಯ ಶರಟು ತೊಟ್ಟುಕೊಳ್ಳುತ್ತಿದ್ದಂತೆ ದೊಡ್ಡಮ್ಮ ಮಾತು ಮುಂದು ವರಿಸಿದರು: {{gap}}" ದಿಬ್ಬದ ಹೊಂಡ ಕೆಟ್ಟ ಜಾಗ. ಹಾವು ಕಚ್ಚಿತೋ, ದೆವ್ವ ಬಡೀತೋ ಯಾರು ಬల్ల ? " {{gap}}ಶ್ರೀನಿವಾಸಯ್ಯ ತಾಯಿಯ ಮುಖ ನೋಡಿದರು. {{gap}}" ಏನಮ್ಮ ನೀನು ಹೇಳ್ತಿರೋದು ? ಯಾರೋ ಕೊಂದ್ಹಾಕಿದಾರೆ ಅಂತಾನೆ ರಂಗಣ್ಣ!"... {{gap}}ದೊಡ್ಡಮ್ಮ ಅಂದರು: {{gap}}" ಈ ಮಗೂಗೆ ಏನು ಗೊತ್ತಾಗುತ್ತೆ ಅದೆಲ್ಲ? ನಮ್ಮ ಹಳ್ಳಿಯವರೇ ಕೊಂದರೂಂತ ಹೇಳೋಕಾಗುತ್ತೇನೋ? ಶಾಮಣ್ಣನ ಕೇಳಿ ನೋಡು ಬೇಕಾದರೆ. ಅದೇನಿದ್ದರೂ ಪಂಚಾಯತಿಯವರು ತೀರ್ಮಾನ ಮಾಡ್ತಾರೆ. ನೀನು ಹೋಗು." {{gap}}ಶ್ರೀನಿವಾಸಯ್ಯ ತಮ್ಮ ಕರಿಯ ಟೋಪಿಯನ್ನು ಇಟುಕೊಳ್ಳಲೋ ಬೇಡವೋ ಎಂದು ಅನುಮಾನಿಸಿ, ಟೋಪಿಯನ್ನು ಗೂಟದಲ್ಲೇ ಬಿಟ್ಟು ಬಾಗಿಲಲ್ಲಿ ನಿಂತಿದ್ದ ರಂಗಣ್ಣನನ್ನು ದಾಟಿ ಹೊರಬಂದು, ಜಗಲಿಯ ಮೂಲೆಯಲ್ಲಿದ್ದ ಎಕ್ಕಡ ಮೆಟ್ಟಿಕೊಂಡು, "ಬರ್ತೀನಿ ಅಮ್ಮ" ಎಂದು ಅಂಗಳಕ್ಕಿಳಿದರು. {{gap}}ಹಾಗೆ ಅವರು ಇಳಿಯುವುದಕ್ಕೂ ಪದ್ಮನಾಭ ಒಳಕ್ಕೆ ಬರುವುದಕ್ಕೂ ಸರಿಹೋಯಿತು. " ಪದ್ಮ ಬಂದ. ನೀವಿಬ್ರೂ ಇಲ್ಲೀ ಮಾತಾಡ್ತಾ ಇರಿ ರಂಗ " ಎಂದು ನುಡಿದು, ದೊಡ್ಡಮ್ಮ ಒಳಹೋದರು. ಮೊದಲೇ ಕಳೆಗುಂದಿದ್ದ ಪದ್ಮನಾಭನ ಮುಖ ರಂಗಣ್ಣನನ್ನು ನೋಡಿದೊಡನೆ ಪೂರ್ಣ ಕಪ್ಪಿಟ್ಟಿತು. ಅವನು ಪಡಸಾಲೆಗೆ ಬರದೆ ಜಗದಲ್ಲೀ ನಿಂತ. {{gap}}ಆ ನಿಮಿ‍‌‍ಷದಲ್ಲಿ ರಂಗಣ್ಣನ ಪಾಲಿಗೆ ಮಧ್ಯಾಹ್ನದ ಅನಂತರದ ಘಟನೆಗಳೆಲ್ಲ ಪುನಃ ಜೀವ ತಳೆದುವು. ದೊಡ್ಡಮ್ಮನ ದರ್ಶನದಿಂದ ಶಾಂತವಾಗಿದ್ದ ಮನಸ್ಸು ಮರಳಿ ಕೆರಳಿತು. ಮುನಿಯನ ಕೊಲೆ (ಸಾವು?) ಹೇಗೆ ಆಗಿರಬಹುದೆಂಬುದನ್ನು ತರ್ಕಿಸಹೊರಟಿದ್ದ ರಂಗಣ್ಣ ಯೋಚನೆಯ ಜಾಲದಿಂದ ಹೊರಬಂದು ಪದ್ಮನಾಭನಿಗೆ ಇದಿರಾದ. {{gap}}ಅವನ ಅಂತರಾಳದಲ್ಲಿ ಪದಗಳು ಗುಡುಗಿದುವು: {{gap}}——ನೀಚ! {{gap}}——ಪಾಪಿ! {{gap}}ರಂಗಣ್ಣನೆಂದುಕೊಂಡ : {{gap}}" ಮುನಿಯನ ಬದಲು ಈತ ಬಿದ್ದಿರಬಾರದಾಗಿತ್ತೆ ಆ ಹೊಂಡದಲ್ಲಿ?” ದೊಡ್ಡಮ್ಮನನ್ನು ಕರೆದು ಇವನ ಪಾಪ ಕಾರ್ಯದ ಬಗ್ಗೆ ಹೇಳಲೆ? ಎನಿಸಿತು.<noinclude></noinclude> mkdk30yayeoe6wkkqpyohgphje7rjwa ಪುಟ:ನೋವು.pdf/೨೪ 104 20756 322897 277149 2026-05-27T03:44:21Z Shreelatha.Halemane 7642 /* Validated */ 322897 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center= ನೋವು|left=೧೪ |right=}} {{gap}}ಇವನ ಮೇಲೆ ಬಿದ್ದು ಕತ್ತು ಹಿಸುಕಿಬಿಡಬೇಕು ಎಂದು ಬಂಜೆ ಕ್ರೋಧ ಹೊಗೆ ಯಾಡಿತು. {{gap}}ನೇರವಾಗಿ ರಂಗಣ್ಣನನ್ನು ನೋಡದೆ ಅಧೀರನಾಗಿ ನಿಂತ ಪದ್ಮನಾಭ, ಈಗೇನು ಮಾಡಲಿ? ಒಳಗೆ ಬಂದ ರೀತಿಯಲ್ಲೇ ತೆಪ್ಪಗೆ ಹೊರಟುಬಿಡಲೆ? ಎಂದು ಯೋಚಿಸಿದ. {{gap}}ಆದರೂ ಧೈರ್ಯ ತಳೆದು, ಕ್ಷೀಣ ಧ್ವನಿಯಲ್ಲ ಅವನೆಂದ: {{gap}}"ಯಾವಾಗ್ಬಂದೆ?" {{gap}}"ಇದೇ ಈಗ್ಬಂದೆ," ಎಂದು ಹೇಳಿ, ನಿಮಿಷ ತಡೆದು, ತುಟಿ ಕೊಂಕಿಸಿ ರಂಗಣ್ಣ ಮತ್ತೂ ಅ೦ದ: {{gap}}" ನೀನೇ ಮೊದಲು ತಲಪಬೇಕಾಗಿತ್ತು. ಬಳಸು ದಾರಿ ಹಿಡಿದೇಂತ ಕಾಣುತ್ತೆ." ಪದ್ಮನಾಭ ಜಗಲಿಯಲ್ಲಿ ನಿಂತಲ್ಲೇ ನಿಂತ. {{gap}}" ಏನು ಹಾಗಂದ್ರೆ ? ಯಾವ ಬಳಸು ದಾರಿ ?" {{gap}}" ಅಡ್ಡದಾರಿ ಕಣಪ್ಪ!" {{gap}}" ವ್ಯಂಗ್ಯ ಮಾತಾಡ್ತಿದೀಯೊ?" {{gap}}" ವ್ಯಂಗ್ಯ ಯಾತಕ್ಕೆ? ದಿಬ್ಬದಿಂದಲ್ವೆ ನೀನೀಗ ಬಂದದ್ದು?" {{gap}}ತಡವರಿಸಿ ಪದ್ಮನಾಭನೆಂದ: {{gap}}" ಅ-ಲ್ಲ..." {{gap}}" ಅಲ್ಲ–ಬಿಸ್ಮಿಲ್ಲ. ನಾಚ್ಕೆ ಆಗೊಲ್ವೇನೊ?" {{gap}}" ನಾಚ್ಕೆ ? ಯಾತಕ್ಕೆ?" {{gap}}" ನೀನು ಹೇಡಿ ! ಆಗ್ಲೇ ನಿನ್ನೆ ಹಿಡಿದ್ಬಿಡ್ತಿದ್ದೆ. ಓಡಿ ತಪ್ಪಿಸ್ಕೊಂಡೆ." {{gap}}" ನಾಲಿಗೆ ಉದ್ದ ಬೆಳೆಸ್ತಿದೀಯಲ್ಲೊ... " {{gap}}" ಒಳಗ್ಹೋಗು, ಕನ್ನಡೀಲಿ ಮುಖ ನೋಡ್ಕೊ. ಹೆಣ ನೋಡಿ ಇಷ್ಟೊಂದು ಹೆದರ್ಕೂಂಡಿದೀಯಲ್ಲೊ...! " {{gap}}" ಯಾವ ಹೆಣ ? ಯಾರ ಹೆಣ ? " {{gap}}" ಮುನಿಯನ್ದು. ನಿನ್ನ ಮುಖ ನೋಡಿದರೆ ಅವನ ಕತ್ತು ಹಿಸುಕಿ ನೀನೇ ಕೊಂದ ಹಾಗಿದೆಯಲ್ಲ!” {{gap}}"ಷಟಪ್ ! ಹೊರಡಿಲ್ಲಿಂದ!" {{gap}}" ನಿನ್ನ ಮನೆ ಅನ್ನೋ ಅಧಿಕಾರದಿಂದ ಹೇಳ್ತಿದೀಯೀನಯ್ಯ? ಇಲ್ಲೇ ಇರೋಕೆ ಬಂದಿದೀನಿ ಅಂದ್ಕೊಂಡಿಯಾ? ಹೊರಡ್ತೀನಿ. ಇನ್ನೊಮ್ಮೆ ಈ ಮನೆಗೆ ಕಾಲಿಡೋದಿಲ್ಲ, ನೆನಪಿರ್ಲಿ !" {{gap}}" ಥಾಂಕ್ಸ್." {{gap}}ರಂಗಣ್ಣ ನಿಂತಲ್ಲಿಂದ ಕದಲಿ ಹೊರ ಬಾಗಿಲಿನತ್ತ ಹೆಜ್ಜೆ ಇರಿಸಿದ. ಪದ್ಮನಾಭನ ಬಳಿ ನಿಂತು, ಕೆಂಗಣ್ಣುಗಳಿಂದ ಅವನನ್ನು ದುರುಗುಟ್ಟಿ ನೋಡಿದ. ರಂಗಣ್ಣನ ಕೈಗಳು ಮುಷ್ಟಿ ಕಟ್ಟಿದ್ದುವು. ಪದ್ಮನಾಭನ ಮುಖಕ್ಕೊಂದು ಗುದ್ದಲೇ ಎನ್ನಿಸಿತು. ಆ ಯೋಚನೆಯಿಂದ ಅವನ ಮೈ ಕಂಪಿಸಿತು.<noinclude></noinclude> teolywzoahliboc1alccbfewotw8clq ಪುಟ:ನೋವು.pdf/೨೫ 104 20757 322899 277150 2026-05-27T03:48:52Z Shreelatha.Halemane 7642 /* Validated */ 322899 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right=೧೫}} {{gap}}"ಥುತ್!” ಎಂದಿಷ್ಟೆ ಧ್ವನಿ ಹೊರಡಿಸಿ ರಂಗಣ್ಣ ಬಾಗಿಲನ್ನು ದಾಟಿದ. ಪಡಸಾಲೆಯ ಒಳಬಾಗಿಲಿನಾಚೆಯಿಂದ ದೊಡ್ಡಮ್ಮನ ಧ್ವನಿ ಕೇಳಿಸಿತು. {{gap}}"ರಂಗ ಹೋದ್ನೇನೊ ಪದ್ಮ?" {{gap}}ಪದ್ಮನಾಭ ಉತ್ತರಿಸಲಿಲ್ಲ. ಪಡಸಾಲೆಯ ಎಡಕ್ಕಿದ್ದ ತನ್ನ ಕೊಠಡಿಯನ್ನು ಹೊಕ್ಕ. ಬೆಳಗ್ಗೆ ಮುಖ ಕ್ಷೌರಕ್ಕೆಂದು ಕಿಟಕಿಗೆ ಸಿಲುಕಿಸಿದ್ದ ಕನ್ನಡಿ ಅಲ್ಲೇ ಇತ್ತು. ಆ ಕನ್ನಡಿಯ ಬಳಿ ಸಾರಿ ಅದರಲ್ಲಿ ತನ್ನ ಮುಖ ನೋಡಿಕೊಂಡ. {{gap}}ಆ ಕಿಟಕಿಯಿಂದ ಕಾಣಿಸುತ್ತಿತ್ತು. ಆಂಗಳ ದಾಟಿ, ಹೊಲಗಳ ಏರಿಯ ಮೇಲಿಂದ ಕಣಿವೇಹಳ್ಳಿಯ ಏಕಮಾತ್ರ ರಸ್ತೆಯ ಕಡೆಗೆ ನಡೆದಿದ್ದ ರಂಗಣ್ಣನ ಹಿಮ್ಮೈ..... {{gap}}...ಆ ರಸ್ತೆಯಲ್ಲಿ ರಂಗಣ್ಣ ಹತ್ತು ಹೆಜ್ಜೆ ಹೋಗಿದ್ದನೋ ಇಲ್ಲವೋ ಹಳ್ಳಿಯ ಹತ್ತಾರು ಜನ ಆ ಕಡೆ ಈ ಕಡೆಗಳಿಂದ ಅವನ ಬಳಿಗೆ ಬಂದರು. ಎಲ್ಲರೂ ಅವನನ್ನು ಪ್ರಶ್ನಿಸುವವರೇ. {{gap}}"ಎಷ್ಟು ಹೊತ್ತಿಗೆ ನೋಡಿದಿರಿ ರಂಗಣ್ಣ?" {{gap}}"ಸಾಯಂಕಾಲ.” {{gap}}"ಎದರ್ಕೆ ಆಗ್ನಿಲ್ವಾ ?" {{gap}}"ಯಾಕಪ್ಪ ಎದರ್ಬೇಕು ?" {{gap}}"ಗಾಯ ಗೀಯ ಇತ್ತಾ?" {{gap}}"ಕಾಣ್ಲಿಲ್ಲ." {{gap}}"ದೆವ್ವ ಬಡಿದಿರ್ಬೇಕು?" {{gap}}"ಹ್ಯಾಗೆ ಹೇಳಾನ?" {{gap}}ಇನ್ನೊಬ್ಬನೆಂದ: {{gap}}" ದೆವ್ವವೂ ಇಲ್ಲ, ಮಣ್ಣೂ ಇಲ್ಲ. ಅವನು ಸಾಯೋಕೆ ಯಾರು ಕಾರಣ ಅಂತ ನನಗೆ ಗೊತ್ತು." {{gap}}ಮತ್ತೊಬ್ಬ ಆಕ್ಷೇಪಿಸಿದ : {{gap}}" ಮಾಡಿದವರ ಪಾಪ ಆಡಿದವರ ಬಾಯಲ್ಲಿ. ನಿನಗ್ಯಾತಕ್ಕಪ್ಪ ಅದೆಲ್ಲ?” {{gap}}ಹಿಂಬಾಲಿಸುತ್ತ ಬಂದ ಜನರ ಗುಂಪಿನೊಡನೆ ರಂಗಣ್ಣ ಮುಂದುವರಿದ. ಕೃಷ್ಣೇಗೌಡನ ಮನೆಯ ಮುಂದೆ ಜನ ನೆರೆದಿದ್ದರು. ಆ ಜನರ ಮಧ್ಯೆ ಶ್ರಿನಿವಾಸಯ್ಯ ನಿಂತಿದ್ದರು. {{gap}}ಮಾತುಗಳು ಕೇಳಿಸುತ್ತಿದ್ದುವು. {{gap}}" ಬನ್ನಿ ಕೃಷ್ಣೇಗೌಡರ, ಮಾದನನ್ನು ಕರೆಯೋಣ. ಕತ್ಲಾದ್ಮೇಲೆ ಶವ ತರೋದು ಕಷ್ಟ.” {{gap}}"ಮುಚ್ಚಂಜೆ ಒತ್ನಲ್ಲಿ ಆ ಹೊಂಡದೊಳಕ್ಕೆ ಜನ ಇಳೀತಾರೋ ಇಲ್ವೋ?" {{gap}}" ಏನಾದ್ರೂ ಮಾಡ್ಬೇಕಪ್ಪ. ಲಾಟೀನು, ಟಾರ್ಚು ಏನೇನಿದೆಯೋ ತಗೊಂಡ್ಹೋ ಗೋಣ". {{gap}}" ನಿಂಗಿಗೆ ಯೋಳ್ಕಳ್ಸಿ, ಅವರ ಐದನನ್ನು ಕರೀರಿ." {{gap}}" ಅಕಾ, ಅವಳೇ ಬರ್ತಾ ಅವ್ಳೆ." {{gap}}ರಂಗಣ್ಣನೆ ಜತೆಗಿದ್ದವರು ಅವನನ್ನು ಬಿಟ್ಟು ಕೃಷ್ಟೇಗೌಡನ ಮನೆಯ ಮುಂದಿದ್ದವರನ್ನು.<noinclude></noinclude> ei4lk5cni8c4ckweng6vc5h1xxokn1u ಪುಟ:ನೋವು.pdf/೨೬ 104 20758 322900 277153 2026-05-27T03:53:31Z Shreelatha.Halemane 7642 /* Validated */ 322900 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center= ನೋವು |left=೧೬|right=}} ಸೇರಿಕೊಂಡರು. ಅವರೆಲ್ಲರ ದೃಷ್ಟಿ ರಸ್ತೆಯುದ್ದಕ್ಕೂ ರೋದಿಸುತ್ತ ಓಡಿ ಬರುತ್ತಿದ್ದ ನಿಂಗಿಯ ಮೇಲೆ ನೆಟ್ಟಿತು. ಮೈ ಮುಚ್ಚಿದ್ದ ಮಾಸಲು ಚಿಂದಿ ಸೀರೆ, ಕೆದರಿದ ತಲೆಗೂದಲು. ಬೇಟೆಗಾರರ ಬಲೆಯೊಳಗೆ ಬಿದ್ದ ಕಾಡು ಮಿಕದಂತೆ ಅವಳು ತತ್ತರಿಸುತ್ತಿದ್ದಳು. {{gap}}ಜನರಿಂದ ದೂರ ನಿಂತು ಕುಕ್ಕರ ಕುಳಿತು ಮೊಣಕಾಲುಗಳಿಗೆ ಹಣೆ ಜಪ್ಪಿಕೊಳ್ಳುತ್ತ, ಮುಷ್ಟಿಗಳಿಂದ ಎದೆ ಬಡಿದುಕೊಳ್ಳುತ್ತ, ತಲೆಗೂದಲನ್ನು ಕಿತ್ತು ಕಿತ್ತು ಎಳೆಯುತ್ತ ಅವಳು ಕಿವಿಯೊಡೆಯುವ೦ತೆ ಆತ್ತಳು. {{gap}}"ದಣಿಗಳೇ, ಅಪ್ಪಗಳೇ, ಅಯ್ಯನವರೇ, ನನ್ನ ಇರಿಯನ್ನ ಉಳಿಸ್ಕೊಡಿ! ಅವನು ಸತ್ರಾಕಿಲ್ಲ ! ಕಂಡಿತ ಸತ್ರಾಕಿಲ್ಲ!" {{gap}}ಆ ಆಕ್ರಂದನದೆದುರು, ದಿಬ್ಬಕ್ಕೆ ನಾಳೆ ಹೋದರಾಗದೆ ಎಂದು ಯೋಚಿಸಿದ ಕೆಲವರು ಮನಸ್ಸು ಬದಲಾಯಿಸಿದರು. {{gap}}ಮುನಿಯನ ಜನರೇ ಆದ ಮಾದ, ಈರ, ಬಸಯ್ಯ ಓಡಿಬಂದರು. ಲಾಟೀನು ಟಾರ್ಚುಗಳೂ ಬಡಿಗೆ ದೊಣ್ಣೆಗಳೂ ಸಿದ್ದವಾದವು. {{gap}}ಶ್ರೀನಿವಾಸಯ್ಯ ಅಂದರು : {{gap}}" ನೀನು ಹಟ್ಟಿಗ್ಹೋಗು. ನಮ್ಜತೆ ಬರಬೇಡ.” {{gap}}ನಿಂಗಿ ರೋದಿಸಿದಳು : {{gap}}ಅಂಗನ್ವ್ಯಾಡಿ ಅಯ್ಯನರೇ ! ಅಂಗನ್ವ್ಯಾಡಿ ಅಯ್ಯನರೇ !" {{gap}}ಬೇರೆ ಒಬ್ಬಿಬ್ಬರು ಗದರಿಸಿ ನೋಡಿದರು : {{gap}}"ಓಗು! ಅಟ್ಟೀಲಿರು!” {{gap}}ಆದರೆ ನಿಂಗಿ ಕೇಳಲಿಲ್ಲ, ಆಕೆಯೂ ಮೌನವಾಗಿ ಕಂಬನಿ ಸುರಿಸುತ್ತಿದ್ದ ಹದಿನಾಲ್ಕರ ಹರೆಯದ ಅವಳ ಮಗನೂ ಜನರ ಗುಂಪನ್ನು ಹಿಂಬಾಲಿಸಿದರು. {{gap}}ರಂಗಣ್ಣ ಒಬ್ಬನೇ ಬೀದಿಯುದ್ದಕ್ಕೂ ನಡೆದ. ತನ್ನ ಮನೆಯ ಕಡೆಗೆ ಸಾಗಿದ್ದ ಕವಲು ದಾರಿಯನ್ನು ತುಳಿದ ನದಿಯಿಂದ ಬಂದ ಕಾಲಿವೆ ತಮ್ಮ ಹೊಲಗಳನ್ನು ಮುಟ್ಟಿದ ಕಡೆ, ಒಂಟಿಯಾಗಿದ್ದ ಬಂಡೆಕಲ್ಲಿನ ಮೇಲೆ ಕುಳಿತ. {{gap}}ಪಶ್ಚಿಮ ಕೆಂಪಗಾಗಿತ್ತು. ಅದರ ಹಿನ್ನೆಲೆಯಲ್ಲಿ ದೂರದ ಮರಗಳ ಹಸಿರೆಲೆಗಳು ಕಪ್ಪಗೆ ಕಾಣಿಸುತ್ತಿದ್ದುವು. {{gap}}ರಂಗಣ್ಣ ವ್ಯಥಿತನಾಗಿ ತನ್ನೆದುರು ದೃಷ್ಟಿಯನ್ನು ಅಲೆಯ ಬಿಟ್ಟ. ನೆಲ ಒಣಗಿತು.ಕಾಲಿವೆಯ ತಳದಲ್ಲಿ ನಯವಾದ ಮರಳಿತ್ತು. {{gap}}ಹೊಲಗಳಾಚೆಗೆ ಮಂಗಳೂರು ಹೆಂಚಿನ ಮನೆ, ತನ್ನೆದು. (ಇದು ಕಣಿವೇಹಳ್ಳಿಯ ಎರಡೇ ಎರಡು ಹೆಂಚಿನ ಮನೆಗಳಲ್ಲಿ ಒಂದು, ಶಾಮೇಗೌಡರೂ ಶ್ರೀನಿವಾಸಯ್ಯನವರೂ ಒಂದೇ ವರ್ಷ ಛಾವಣಿಗೆ ಹೆಂಚುಗೂಡಿಸಿದ್ದರು.) {{gap}}ರಂಗಣ್ಣ ನೆನಪಿನ ಆಳದೊಳಕ್ಕೆ ಕೈ ಇಕ್ಕಿ ನೋಡಿದ. ತನಗಾಗ ನಾಲ್ಕೋ ಐದೋ ವರ್ಷ.ಆಗಿನ್ನೂ ಪದ್ಮನಾಭನ ತಾಯಿ ಬದುಕಿದ್ದರು. ಸುಭದ್ರೆ ಹುಟ್ಟಿರಲಿಲ್ಲ. ತನ್ನ ತಾಯಿ ಬಸುರಿ.ಪದ್ಮನನ್ನು ಎತ್ತಿಕೊಂಡು ಆತನ ತಾಯಿ ಮನೆಗೆ ಬಂದಿದ್ದರು. {{gap}}" ಬಾಪ್ಪ, ಬಾ, ನಿನ್ನ ಗೆಳೆಯನನ್ನ ಕರಕೊಂಡು ಬಂದಿದೀನಿ," ಎಂದಿದ್ದರು, ದೂರ<noinclude></noinclude> 7s4hy6kf35byc44005ooyfo86wpobss ಪುಟ:ನೋವು.pdf/೨೭ 104 20759 322901 277154 2026-05-27T03:58:43Z Shreelatha.Halemane 7642 /* Validated */ 322901 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right=೧೭}} ನಿಂತಿದ್ದ ತನ್ನನ್ನು ಉದ್ದೇಶಿಸಿ. {{gap}}ತಾನು ನಾಚಿಕೊಂಡು ತಾಯಿಯ ಸೆರಗಿನ ಹಿಂದೆ ಅವಿತಿದ್ದೆ. ಸಂಜೆಯ ಹೊತ್ತು, ಛಾವಣಿಗೆ_ಹೆಂಚು ಹಾಕುತ್ತಿದ್ದುದರಿಂದ ಮನೆಯೊಳಗೆಲ್ಲಾ ಅವ್ಯವಸ್ಥೆ. ಅಂಗಳದಲ್ಲಿ ತನ್ನ ತಾಯಿ ಪದ್ಮನ ತಾಯಿಗಾಗಿ ಚಾಪೆ ಹಾಸಿದ್ದರು. {{gap}}"ಆಲು ಕೊಡ್ಲೇ ?” ಎಂದಿದ್ದರು ತನ್ನ ತಾಯಿ. {{gap}}ಪದ್ಮನನ್ನು ನೆಲದ ಮೇಲೆ ಇಳಿಬಿಟ್ಟು ಅವರ ತಾಯಿ ಅಂದಿದ್ದರು : {{gap}}" ಏನೂ ಬ್ಯಾಡಿ ; ನನಗೇನೂ ಬ್ಯಾಡಿ, ಸೀತಮ್ಮ." {{gap}}ಅವರನ್ನು ಅವರ ಪಾಡಿಗೆ ಬಿಟು ತಾನೂ ಪದ್ಮನೂ ಮನೆಯ ಹಿಂದೆ ಅಲೆಯಲು ಹೋಗಿದ್ದೆವು. ಪದ್ಮನ ತಾಯಿಗೂ ತನ್ನ ತಾಯಿಗೂ ಮಕ್ಕಳ ನೆನಪಾದುದು ಪದ್ಮನೆ ತಾಯಿ ಹೊರಡಲೆಂದು ಎದ್ದಾಗ. ಅವರಿಬ್ಬರೂ ತಮ್ಮನ್ನು ಹುಡುಕಿದ್ದೇ ಹುಡುಕ್ಕಿದು. {{gap}}ತಾವು ಸಿಕ್ಕಾಗ, " ಈ ಹುಡುಗರನ್ನ ನೋಡ್ಕೊಳ್ಳೋದು ಕಷ್ಟವಪ್ಪಾ ಕಷ್ಟ," ಎಂದಿದ್ದರು ಪದ್ಮನ ತಾಯಿ. {{gap}}ರಂಗಣ್ಣನೆಂದುಕೊಂಡ : {{gap}}ಅವರು ಬೇರೆ, ನಾವು ಬೇರೆ. ಒಂದಾಗಬೇಕು ಎಂದರೂ ಅದು ಹೇಗೆ ಸಾಧ್ಯ? {{gap}}ಕತ್ತಲು ಕವಿಯತೊಡಗಿದಂತೆ ರಂಗಣ್ಣ ಎದ್ದು ಮನೆಗೆ ನಡೆದ. {{gap}}ಚಪ್ಪಲಿ ಕಳಚಿಟ್ಟು ಬಂದು ಅಂಗಳದ ಮೂಲೆಯಲ್ಲಿ ಕೈಕಾಲು ತೊಳೆದು ಪಡಸಾಲೆ ಯನ್ನು ಪ್ರವೇಶಿಸಿದ. ಅಲ್ಲಿ ದೀಪ ಉರಿಯುತ್ತಿತು. ಗೋಡೆಯಲ್ಲಿ ಚಿತ್ತಾರ. ದೇವರ ಪಠಗಳು ಕಡಮೆ. ಬಾಗಿಲ ಮೇಲ್ಗಡೆ ದೊಡ್ಡದಾದೊಂದು ಬಣ್ಣ ಬಳೆದ ಭಾವಚಿತ್ರ. ರಂಗಣ್ಣನ ತಾತನದು. ಓಬೀರಾಯನ ಕಾಲದಲ್ಲಿ ಭಾಗ್ಯನಗರದಲ್ಲಿ ತೆಗೆದ ಒಂದು ಚಿತ್ರದ ನೆರವಿನಿಂದ ಆದನ್ನು ಮಾಡಿಸಿತು. {{gap}}ಶ್ಯಾಮೇಗೌಡರ ತಂದೆ ದಾವೇಗೌಡರು..... {{gap}}ತಮ್ಮ ಮನೆತನದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರು...... {{gap}}.....ಎಲ್ಲಿಯೂ ಸುಭದ್ರೆಯ ಸುಳಿವಿರಲಿಲ್ಲ. {{gap}}ರಂಗಣ್ಣ ಒಳಗೆ ಹಣಿಕಿ ನೋಡಿ ಕೇಳಿದ: {{gap}}" ಅತ್ತೆಮ್ಮ, ಸುಬ್ಬಿ ಎಲ್ಲಿ? " {{gap}}"ತಲೆನೋವಂತೆ ಕಣಪ್ಪಾ, ಮಲಕ್ಕೊಂಡವಳೆ, ಒಸಿ ನೋಡು. ಬ್ಯಾಡ ಅಂದ್ರೂ ಬಿಸಿಲ್ನಾಗೆ ಅಲೀತೀರಿ........" {{gap}}ಒಳಗಿನ ಕೊಠಡಿಗೆ ರಂಗಣ್ಣ ಹೋದ, ಕತ್ತಲಲ್ಲಿ ನೆಲದ ಮೇಲೆ ಹಾಸಿಗೆ ಹಾಸಿ ಸುಭದ್ರಾ ಮಲಗಿದ್ದಳು. {{gap}}ರಂಗಣ್ಣ ನಿಂತುಕೊಂಡೇ ಕೇಳಿದ: {{gap}}''ಸುಬ್ಬೀ, ಮುನಿಯ ಸತ್ತ. ನಿನಗೆ ಗೊತ್ತಿಲ್ಲ ತಾನೆ?” {{gap}}ಉತ್ತರ ಬರಲಿల్ల. {{gap}}ರಂಗಣ್ಣ ಮುಂದುವರಿದ : {{gap}}" ಹೋಗಲಿ. ಅವನು ಯಾಕೆ ಸತ್ತ ಅನ್ನೋದಾದ್ರೂ ಗೊತ್ತೊ ?" {{Left|2}}<noinclude></noinclude> hdqmsbqweqqrmajzx2n5t6dnx2tp9zj ಪುಟ:ನೋವು.pdf/೨೮ 104 20760 322902 277155 2026-05-27T04:04:28Z Shreelatha.Halemane 7642 /* Validated */ 322902 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=೧೮|right=}} {{gap}}ಅದಕ್ಕೂ ಉತ್ತರವಿಲ್ಲ. {{gap}}"ಗೊತ್ತಿಲ್ಲಾಂತಾದ್ರೆ ನಾನ್ಹೇಳ್ತೀನಿ ಕೇಳು. ಮುನಿಯ ಕುಲದ ಮರ್‍ಯಾದೆ ಮಿಾರಿ ನಡೆಯೋಕೋದ . ಅದಕ್ಕೆ ಸತ್ತ.” {{gap}}ಮಲಗಿದ್ದಲ್ಲಿಂದ ಸುಭದ್ರಾ ಚಿಟ್ಟನೆ ಚೀರಿದಳು. {{center|೩}} {{gap}}ಶಾಮೇಗೌಡರು ಹೊಸಳ್ಳಿಯಿಂದ ಮರಳಿ ಸ್ವಗ್ರಾಮವನ್ನು ಸೇರಿದಾಗ ಸೂರ್ಯ ಮುಳುಗಿ ಒಂದು ಘಳಿಗೆಯಾಗಿತ್ತು, ಮುನಿಯನ ಶವವನ್ನು ದಿಬ್ಬದ ಹೊಂಡದಿಂದ ಎತ್ತಿ, ಕೆಳಕ್ಕೆ ತಂದಿದ್ದರು. {{gap}}ದಾರಿಯಲ್ಲಿ ಶಾಮೇಗೌಡನನ್ನು ಸಂಧಿಸಿ ಮೊದಲು ಸುದ್ದಿ ತಿಳಿಸಿದವನು ಶ್ರೀನಿವಾಸಯ್ಯ ನವರ ಎರಡನೆಯ ಮಗ ಗೋವಿಂದ. {{gap}}" ಶಿವ, ಶಿವ!"ಎಂದರು ಗೌಡರು. {{gap}}ಅವರು ಕಟುಮಸ್ತಾದ ಆಳು. ಆಯುಸ್ಸಿನ ಮಡ ದಾಟಿದ್ದರೂ ಯೌವನದ ಕಳೆಯಿದ್ದ ಎಣ್ಣೆಗಪ್ಪು ಮುಖ, ಎದ್ದು ಕಾಣಿಸುತ್ತಿದ್ದ ಮೂಗಿನ ಕೆಳಗೆ ಗಿರಿಜಾ ಮಿಾಸೆ. ಕಪ್ಪು ತಲೆಗೂದಲನ್ನು–ಬಿಗಿದು ಕಟ್ಟಿದ್ದ ಪುಟ್ಟ ಚಂಡಿಕೆಯನ್ನು–ಮರೆಮಾಡಿದ್ದ ಬಿಳಿಯ ರುಮಾಲು. ಎತ್ತಿ ಕಟ್ಟಿದ್ದ ಪಂಚೆ ಜುಬ್ಬಗಳ ಮೇಲೆ ಕಪ್ಪು ಕೋಟು. ಇಸ್ತ್ರಿ ಮಾಡಿ ಮಡಚಿ ಕತ್ತನ್ನು ಬಳಸಿ ಎದೆಯ ಮೇಲೂ ಬೆನ್ನ ಮೇಲೂ ಇಳಿಬಿದ್ದಿದ್ದ ಜರಿ ಶಾಲು. ಕಂಕುಳಲ್ಲಿ ಹಗಲಿನ ಬಿಸಿಲಿನಿಂದ ಆಶ್ರಶ್ಯಯ ಪಡೆಯಲೆಂದು ಕೈಯಲ್ಲಿ ಒಯ್ದಿದ್ದ ಕೊಡೆ. {{gap}}ದಿನವಿಡೀ ಸುತ್ತಿದ್ದರೂ ಆಯಾಸವಾಗದೇ ಇದ್ದ ಗೌಡರು ಈಗ ಮುನಿಯ ಕೊಲೆ ಯಾದನೆಂದು ಕೇಳಿದಾಗ ಅಂಗೈಯಿಂದ ಮುಖ ಒರೆಸಿಕೊಂಡರು. {{gap}}ನೆಟ್ಟ ದೃಷ್ಟಿಯಿಂದ ಗೋವಿಂದನನ್ನು ನೋಡಿ ಅವರು ಕೇಳಿದರು: {{center|}}" అಯ್ನೋರೆಲ್ಲಿ ? " {{gap}}" ಅಣ್ಣಯ್ಯ ಮಾರಿಚಾವಡೀಲಿದಾರೆ." {{gap}}" ಹೆಣ ? ” {{gap}}" ಮಾದ ತಮ್ಮ ಕೇರಿಗೆ ಹೊರಿಸ್ಕೊಂಡು ಹೋದ." {{gap}}" ನಡಿ, ಗೋವಿಂದ ಶವ ಇಷ್ಟು ನೋಡ್ಕಂಡು ಬರಾನ." {{gap}}ಗೋವಿಂದನ ಟಾರ್ಚು ಆಗೊಮ್ಮೆ ಈಗೊಮ್ಮೆ ಬೆಳಕು ಹಾಯಿಸಿತು. ಆ ಇರುಳಲ್ಲಿ ಗೌಡರ ಜೀಕು ಎಕ್ಕಡಗಳೂ ಗೋವಿಂದನ ಚಪ್ಪಲಿಗಳೂ ಲಯಬದ್ಧವಾಗಿ ಸದ್ದುಮಾಡಿದವು. {{gap}}ತನ್ನ ಯೋಚನೆಗಳಿಗೆ ಮಾತಿನ ರೂಪ ಕೊಡಲೆತ್ನಿಸುತ್ತ ಗೋವಿಂದ ಕತ್ತಲಲ್ಲಿ ತನ್ನ ಟೋಪಿಯನ್ನೊಮ್ಮೆ ಮುಟ್ಟಿ ನೋಡಿದ. {{gap}}ಗಂಟಲು ಸರಿಪಡಿಸಿ ಅವನೆಂದ: {{gap}}" ನಗರಕ್ಕೆ ಹೋಗಿ ಪೋಲೀಸ್ನೋರಿಗೆ ಕಂಪ್ಲೇಂಟು ಕೊಡಬೇಕಾಗುತ್ತೋ ಏನೋ."<noinclude></noinclude> 1vm9tlu977q3a8hjrih4rqbtho4y5k2 ಪುಟ:ನೋವು.pdf/೨೯ 104 20761 322903 277157 2026-05-27T04:09:12Z Shreelatha.Halemane 7642 /* Validated */ 322903 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right= ೧೬}} ನಡೆಯುತ್ತ ಮುಂದೇನು ಮಾಡಬೇಕೆಂದು ಆಲೋಚಿಸುತ್ತಲಿದ್ದ ಗೌಡರು ಈ ಹುಡುಗ *ಪೋಲೀಸರು' ಎಂದಂತಾಯಿತಲ್ಲ-ಎಂದು " ಏನಂದೆ ಗೋವಿಂದ ? " ಎಂದು ಕೇಳಿ ದರು . {{gap}}ಆತ ಪುನಃ ಅಂದ : {{gap}}"ಪೋಲೀಸರಿಗೆ ಕಂಪ್ಲೇಂಟು ಕೊಡಬೇಕಾಗುತ್ತೇನೋ ಅಂತ." {{gap}}ಗೌಡರು ಧ್ವನಿ ಏರಿಸಿದರು : {{gap}}" ಪೋಲೀಸರಿಗೆ? ಯಾತಕ್ಕೆ?” I {{gap}}"ಹಾಗಲ್ಲ, ಮುಂದೆ ಯಾರಾದರೂ ಏನಾದರೂ..." {{gap}}"ಯಾರು? ಏನು? ಕಣಿವೇಹಳ್ಳಿಲಿ ಪೋಲೀಸರಿಗೆ ಏನು ಕೆಲಸ ಗೋವಿಂದ?” {{gap}}" ಹಾಗಲ್ಲ.” {{gap}}ಗೌಡರಿಗೆ ಸಿಟು ಬಂತು. {{gap}}"ಮತ್ತೆ ಹ್ಯಾಗೆ?" {{gap}}ನಿಧಾನವಾగి ಗೋವಿಂದನೆಂದ : {{gap}}"ಮುನಿಯ ಸಾಯೋದಕ್ಕೆ ಏನು ಕಾರಣ ಅಂತ....." {{gap}}" ಸಾಯೋದಕ್ಕೆ ಸಾವಿರ ಕಾರಣ. ಗೋವಿಂದಪ್ಪ, ನೀನು ಚಿಕ್ಕೋನು. ಇಲ್ಲದ್ದೆಲ್ಲ ಯೋಚಿಸ್ಕೊಂಡು ತಲೆ ಕೆಡಿಸ್ಕೋಬ್ಯಡ." {{gap}}ಗೋವಿಂದ ಎದುರಾಡಲಿಲ್ಲ ಉಗುಳು ನುಂಗಿದ. ಮತ್ತೊಮ್ಮೆ ಟೋಪಿಯನ್ನು ಮುಟ್ಟಿ, ಅತ್ತಿತ್ತ ಸರಿಸಿ, ಸರಿಯಾಗಿಟುಕೊಂಡ. {{gap}}ನಡೆಯುತ್ತಿದ್ದವರಿಗೆ ನಿಂಗಿಯ ರೋದನ ಕೇಳಿಸತೊಡಗಿತು. ಆ ಶೋಕಧ್ವನಿ ಅಲೆ ಯಲೆಯಾಗಿ ಸುತ್ತಲೂ ಹಬ್ಬತ್ತಿತ್ತು . {{gap}}ಕೇರಿಯ ಹೊರಗೆ ಆಕಾಶ ನೋಡುತ್ತ ಮಲಗಿತ್ತು. ಮುನಿಯನ ನಿರ್ಜಿವ ದೇಹ. ನೆಲದ ಮೇಲೆ ಕೃಷ್ಟೇಗೌಡನ ಲಾಟೀನು. ಗಂಡನ ಶವದ ಮೇಲೆ ಬಿದ್ದು ಬಿದ್ದು ನಿಂಗಿ ಗೋಳಾಡುತ್ತಿದ್ದಳು. ಈರ-ಮಾದರ ಹೆಂಡತಿಯರೂ ಅಳುತ್ತಿದ್ದರು. ಮೂವತ್ತು ನಾಲ್ವತು ಜನರ ಗುಂಪು ಬೆಳಕಿಗಿಂತ ತುಸು ದೂರದಲ್ಲಿ ಅರ್ಧವೃತ್ತ ರಚಿಸಿತ್ತು. {{gap}}ಯಾವನೋ ಅಂದ: {{gap}}" ಗೌಡರು ಬಂದ್ರು." {{gap}}ಬೇರೆಯೂ ಇಬ್ಬರು ಮೂವರು ಒಟ್ಟಾಗಿ ಅಂದರು; {{gap}}" ಗೌಡರು ಬಂದ್ರು." {{gap}}ಇನ್ನು ಪರವಾಗಿಲ್ಲ – ಎಂಬ ಧ್ವನಿಯಿತ್ತು ಆ ಮಾತಿನಲ್ಲಿ. {{gap}}ಒಬ್ಬ ಕಂದೀಲನ್ನು ಶವದ ಸಮಿಾಪಕ್ಕೆ ತಂದು ಎತ್ತಿ ಹಿಡಿದ, ಗೌಡರಿಗೆ ಕಾಣಿಸಲಿ ಎಂದು. ಶಾಮೇಗೌಡರು ತುಸು ಬಾಗಿ ನೋಡಿದರು. ಊದಿಕೊಂಡಿದ್ದ ಮುಖ ಒಂದು ಬದಿಗೆ ಜೋತಿತ್ತು, ಮೈಯಲ್ಲಿ ಯಾವ ಗಾಯವೂ ಇರಲಿಲ್ಲ, ಕತ್ತು, ಹಿಸುಕಿ ಉಸಿರು ಕಟ್ಟಿಸಿ ಪ್ರಾಣ ತೆಗೆದಿರಬೇಕೆಂಬುದು ಸ್ಪಷ್ಟವಾಗಿತ್ತು. ಉಟ್ಟಿದ್ದ ಮಾಸಲು ಅಡ್ಡಪಂಚೆಗೂ ಹಳೆಯ ఆంగిಗೂ ಅಲ್ಲಲ್ಲಿ ಹಸಿಮಣ್ಣು ಮೆತ್ತಿತ್ತು.<noinclude></noinclude> anymn1wd81zbmpp7cckl2p93ii3rp7v ಪುಟ:ನೋವು.pdf/೩೦ 104 20762 322905 277160 2026-05-27T04:14:39Z Shreelatha.Halemane 7642 /* Validated */ 322905 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=೨೦|right=}} {{gap}}ಮನಸಿನೊಳಗಿದ್ದುದನ್ನು ಬದಿಗೆ ತಳ್ಳಿ, ತಲೆ ಎತ್ತಿ ಗೌಡರೆಂದರು: {{gap}}"ಮನುಷ್ಯ ಮಾಡಿರೋ ಕೆಲಸ ಇದಲ್ಲ." {{gap}}ಗೌಡರ ಧ್ವನಿ ಕೇಳಿದ ನಿಂಗಿ ಮತ್ತಷ್ಟು ಗಟ್ಟಿಯಾಗಿ ಎದೆ ಬಡಿದುಕೊಂಡು ಅಳ ತೊಡಗಿದಳು. {{gap}}ಒಬ್ಬನೆಂದ: {{gap}}" ಸುಮ್ನಿರು. ಓದ ಜೀವ ಬತ್ತದಾ?" {{gap}}ನಿಂಗಿ ಪ್ರಲಾಪಿಸಿದಳು: {{gap}}" ಒಲ ಒಲ ಅಂತ ಉಚ್ಮುಂಡೆ ಮಾಡ್ಡ. ಬ್ಯಾಡ ಅಂದ್ರೆ ಕೇಳ್ನಿಲ್ಲಪೋ...” {{gap}}ನೆರೆದವರು ಗೌಡರು ಇನ್ನೇನು ಹೇಳುವರೋ ಎಂದು ಅವರ ಕಡೆಗೇ ನೋಡಿದರು. ಶಾಮೇಗೌಡರು ತಲೆಯಾಡಿಸಿ ನಿಟ್ಟುಸಿರು ಬಿಟ್ಟರೇ ಹೊರತು, ಏನನ್ನೂ ಆಡಲಿಲ್ಲ. {{gap}}ಜನಸಂದಣಿಯಿ೦ದ ಮಾತುಗಳು ಬಂದುವು: {{gap}}–" ಕೈಚೀಲ ಎಣದತ್ರಾನೇ ಬಿದ್ದಿತ್ತು.” {{gap}}–" ಒಂದು ಸಣ್ಣ ಸರ್ಟು, ಎಲೆ ಅಡಿಕೆ, ಒಂದೊಂದು ರೂಪಾಯಿನ ಐದು ನೋಟು ಅಷ್ಟೇ." {{gap}}–" ಸರ್ಟು ಐದನಿಗೇಂತ ಕೊಂಡಿರ್‍ಬೇಕು.” {{gap}}–" ಕಾಸು ಯಾರೂ ಮುಟ್ಟಿಲ್ಲ." {{gap}}ಧ್ವನಿ ಏರಿಸಿ ಗೊಗ್ಗರ ಗಂಟಲಲ್ಲಿ ಗೌಡರೆಂದರು: {{gap}}ಯೋಳ್ಲಿಲ್ವ? ಮನಿಷ್ನಾದೋನು ಮಾಡಿರೋ ಕೆಲಸ ಇದಲ್ಲ." {{gap}}ಜನರ ಗು೦ಪಿನಿಂದ ಮಾತುಗಳು ಮತ್ತೂ ಕೇಳಿಸಿದುವು: {{gap}}–" ವಕೀಲರ್‍ನ ನೋಡೋಕೆ ಅಂತ ನಿನ್ನೆ ಒತ್ತಾರೆ ನಗರಕ್ಕೆ ಓದ್ದಂತೆ." {{gap}}–" ನಿನ್ನೆ ರಾತ್ರಿ ವಾಪ್ಸು ಬರುವಾಗ ಇಂಗಾಗಿರ್‍ಬೇಕು." {{gap}}–" ಪಾಪ! ಒಳ್ಳೇ ಕೆಲಸಗಾರ!" {{gap}}–"ತನ್ನದೇ ಒಲ ಇರಬೇಕೂಂತ ಎರಡೆಕರೆ ಕೊಂಡ. ಅನುಬೋಗಿಸೋ ಅದೃಷ್ಟ ఇರ್ಲಿಲ್ಲ" ಗಟ್ಟಿಯಾಗಿ ಗೌಡರೆಂದರು: {{gap}}"ಈರ! ಮಾದ! ಹೆಣ ಇಟ್ಕೂಂಡು ಸುಮ್ಕೆ ಯಾಕ್ನಿಂತಿದೀರಾ? ಮುಂದಿನ ಕೆಲಸ ಮುಗಿಸ್ಬಿಡಿ." {{gap}}ಗವಿಯಾಗಿದ್ದ ಗಂಟಲಿನಿಂದ ಮಾದನೆಂದ: {{gap}}"ಆಗಲಿ, ಒಡೆಯಾ." {{gap}}"ಓಗಿ ನಿಮ್ನಿಮ್ಮನೆಗಳಿಗೆ" ಎಂದರು ಗೌಡರು ನೆರೆದಿದ್ದವರತ್ತ ನೋಡಿ. {{gap}}ಊರ ಅಕ್ಕಸಾಲಿಗ ವೀರಾಚಾರಿ ನಿಂತಿದ್ದ, ಜನರ ನಡುವೆ. {{gap}}"ಆಚಾರಿ, ಇಲ್ಲಿ ಬಾ,” ಎಂದರು ಗೌಡರು. {{gap}}ಆತ ಹತ್ತಿರ ಬಂದಾಗ, ಪಿಸು ಧ್ವನಿಯಲ್ಲಿ, " ಅಬ್ದುಲ್ಲ ಹಟ್ಟೀಲಿದ್ರೆ ಕರಕೊಂಡ್ಬಾ," ಎಂದರು. {{gap}}ಒಳಗಿನ ಸಂದೇಹದ ಕೆಂಡಕ್ಕೆ ತಿದಿಯೊತ್ತಿದಂತಾಗಿ ವೀರಾಚಾರಿ, ಅಬ್ದುಲ್ಲ ವಾಸವಾಗಿದ್ದ<noinclude></noinclude> t8er5ubjc87z7j72a2e1o9ib0v5pgo5 ಪುಟ:ನೋವು.pdf/೩೧ 104 20763 322906 277162 2026-05-27T04:19:24Z Shreelatha.Halemane 7642 /* Validated */ 322906 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right=೨೧}} ಹಳ್ಳಿಯ ಹೊರ ವಲಯದತ್ತ ಧಾವಿಸಿದ. {{gap}}ಗೌಡರು ಗೋವಿಂದನೊಡನೆ, ಹಾಗೂ ಹಿಂಬಾಲಿಸಿ ಬಂದ ಇತರ ಮೂವರು ನಾಲ್ವರೊಡನೆ, ಚಾವಡಿಯ ಕಡೆಗೆ ನಡೆದರು. ಹೆಜ್ಜೆಗಳು ಭಾರವಾಗಿದ್ದುವು. ಹಗಲೆಲ್ಲ ಬಿಸಿಲನ್ನು ಸಹಿಸಿಕೊಂಡಿದ್ದ ಅವರ ಕಣ್ಣುಗಳು ಈಗ ಉರಿಯತೊಡಗಿದುವು. {{gap}}ಟಾರ್ಚನ್ನು ಆಗೊಮ್ಮೆ ಈಗೊಮ್ಮೆ ಉರಿಸುತ್ತ ಆರಿಸುತ್ತ ಗೌಡರ ಮಗ್ಗುಲಲ್ಲಿ ಅವರಿಗಿಂತ ಒಂದು ಹೆಜ್ಜೆ ಹಿಂದೆ ನಡೆದಿದ್ದ ಗೋವಿಂದ, ತನ್ನ ಯೋಚನೆಗಳ ಕುದುರೆಯ ಕಡಿವಾಣವನ್ನು ಸಡಿಲಿಸಿದ. {{gap}}ತನಗೆ ಕೇಳಿಸಲಿಲ್ಲವೆ? ಅಬ್ದುಲ್ಲ ಮನೆಯಲ್ಲಿದ್ದರೆ ಕರಕೊಂಡ್ಬಾ–ಎಂದರು ಗೌಡರು. ಯಾಕೆ? ಸಂಶಯ ಪರಿಹಾರಕ್ಕೊ?ಸಂಶಯ ಏನು ಬಂತು? ಅಂಗೈ ಹುಣ್ಣಿಗೆ ಬೇಕೆ ಕನ್ನಡಿ? ಮುನಿಯನನ್ನು ಯಾರು ಕೊಂದಿರಬಹುದು? ಆ ಪ್ರಶ್ನೆಗೆ ಕಣಿವೇಹಳ್ಳಿಯ ಎಳೇ ಮಗು ಕೂಡಾ ಉತ್ತರ ಕೊಟ್ಟೀತು; ಸರಿಯಾದ ಉತ್ತರ ಕೊಟ್ಟೀತು. ಅದಕ್ಕೇ ತಾನು ಅಂದದ್ದು: ಪೋಲೀಸರಿಗೆ ಕಂಪ್ಲೇಂಟು ಕೊಡಬೇಕಾಗುತ್ತೇನೋ ಅಂತ. ಮುನಿಯನ ಜೀವ ದೊಡ್ಡದಾಗಿ ಇವರಿಗೆ ಕಾಣಿಸದೇ ಇರಬಹುದು. ಅಥವಾ, ಸತ್ತವನ್ನು ಸತ್ತ, ಇನ್ನು ಯಾಕೆ ಹಗರಣ? –ಅಂತ ಇರಬಹುದು. ಅಬ್ದುಲ್ಲನ ಕುರೂಪಿ ಹೆಂಡತಿಯ ಮುಖ ನೋಡಿ ಯಾರೂ ಅವನನ್ನು ಫಾಶೀ ಶಿಕ್ಷೆಯಿಂದ ಉಳಿಸಹೋಗುವುದಿಲ್ಲ. ಮತ್ತೆ? ಶಾಮೇಗೌಡರ ರಾಜ್ಯ ಕಣಿವೇಹಳ್ಳಿ. ಪೋಲೀಸರು ಇಲ್ಲಿಗೆ ಬರುವುದು ಅವರಿಗೆ ಇಷ್ಟವಿಲ್ಲ... {{gap}}ಒಬ್ಬರಿಗೆ ಇಷ್ಟವಿಲ್ಲ ಅಂತ ಇಷ್ಟೊಂದು ಕೌತುಕದ ಘಟನೆ ಹೊರಗಿನ ಲೋಕಕ್ಕೆ ತಿಳಿಯದೆ ಹೋಗಬೇಕೆ? ತಾನೇ ನಗರಕ್ಕೆ ಹೋಗಿ ಪೋಲೀಸರಿಗೆ ಒಂದು ಮೂಕರ್ಜಿ ಕೊಟ್ಟರೇನಾದೀತು? ಓರ್ವ ಸುದ್ದಿಗಾರರಿಂದ ಅಂತ, ಪತ್ರಿಕೆಗಳಿಗೆ ಬಾತ್ಮಿ ಕಳಿಸಿದರೇನಾದೀತು? ಹೇಗೂ ನಗರಕ್ಕೆ ಹೋದಾಗಲೆಲ್ಲ ವೃತ್ತಪತ್ರಿಕೆ ಕೊಂಡು ತರುವುದು ತನಗೆ ಅಭ್ಯಾಸವಾಗಿದೆ. ಒಮ್ಮೆ ಆ ಪತ್ರಿಕೆಯ ಸಂಪಾದಕರನ್ನೇ ಮುಖತಃ ಕಂಡು ನಿಜ ಸಂಗತಿ ತಿಳಿಸಿಬಿಟ್ಟರಾಯಿತು. ಶಾಮೇಗೌಡರಿಗೆ ಗೊತ್ತಾದರೆ ಮಾತ್ರ ಅವಾಂತರವಾಗಬಹುದು. ಅಪ್ಪಯ್ಯ ಕೊಗಾಡ ಬಹುದು. ಆದರೆ, ಇದಕ್ಕೆಲ್ಲ ಹೆದರಿ ಸುಮ್ಮನಿರಬೇಕೆ ತಾನು? {{gap}}ಅಸ್ಪ್ರುಶ್ಯರ ಉದ್ಧಾರ ಮಾಡಿ–ಅಂತ ಗಾಂಧಿ ಹೇಳಿದಾಗ ತಾನು ಹುಟ್ಟಿರಲಿಲ್ಲ, ನಿಜ. ಆದರೇನಾಯಿತು? ಅದರ ಮಹತ್ವ ತನಗೆ ತಿಳಿಯದೆ? ಈಗ ಗಾಂಧಿ ಇಲ್ಲ; ಸತ್ತು ಅನೇಕ ವರ್ಷಗಳಾದುವು. ಅವನ ಜತೆ ಅವನ ಉಪದೇಶಗಳೂ ಸತ್ತವೆ? {{gap}}ಗೋವಿಂದನಿಗೆ ನಗು ಬಂತು. ಆತ ಗಾಂಧೀ ಅನುಯಾಯಿ ಎಂದಲ್ಲ. ಆದರೂ ಹಳ್ಳಿಯ ರಾಜಕಾರಣದಲ್ಲಿ ಗಾಂಧೀ ತತ್ವದ ಪ್ರತಿಪಾದನೆಯಿಂದ ಲಾಭವಾಗುವಂತಿದ್ದರೆ ಆ ಕೆಲಸ ಯಾಕೆ ತಾನು ಮಾಡಬಾರದು ? {{gap}}ಎಂಟು ತಿಂಗಳಾಯಿತಲ್ಲ ಮುನಿಯ ಬಂದು ಹೊಲ ಕೊಳ್ಳುವ ವಿಷಯ ತನ್ನೊಡನೆ ಪ್ರಸ್ತಾಪಿಸಿ? {{gap}}ಆಗ ತಾನೆಂದಿದ್ದೆ: {{gap}}"ಕೊಂಡ್ಕೋ ಮುನಿಯ, ಭೂಮಿತಾಯಿಾನ ಬ್ರಾಹ್ಮಣರಾಗಲೀ ಗೌಡರಾಗಲಿ ಗುತ್ತಿಗೆ ಹಿಡಿದಿದಾರಾ? ಕೊಂಡ್ಕೋ."<noinclude></noinclude> ervny0puomqc04a2zjyhfze6zd5a5z5 ಪುಟ:ನೋವು.pdf/೩೨ 104 20764 322907 277163 2026-05-27T04:24:44Z Shreelatha.Halemane 7642 /* Validated */ 322907 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=೨೨|right=}} {{gap}}ಹುಚ್ಚ ಬಹಳ ಅಳುಕಿದ್ದ. {{gap}}" ಅಂಗನ್ಬಾರದು, ಒಡೆಯಾ, ಏನೋ ಆಸೆ. ನಾನು ಸತ್ಮ್ಯಾಕೆ ನನ್ನ ಐದ ಆ ಒಲದಾಗೆ ದುಡ್ಡು ಒಟ್ಟೆ ಒರಕೋತವ್ನೆ." {{gap}}" ನಿಜ, ಕಣಯ್ಯ. ಸಿದ್ದಪ್ಪ ಎಷ್ಟು ಕೇಳ್ತಾನೆ?" {{gap}}" ಐನೂರು ರೂಪಾಯಿ." {{gap}}" ಶಾನೇ ಜಾಸ್ತಿ." {{gap}}" ಮುನ್ನೂರಕ್ಕೆ ಒಪ್ಪಿಸ್ಬೋದ." {{gap}}" ಸೊಸೈಟೀಲಿ ಹಣವಿಲ್ಲ. ಇಲ್ದೇ ಹೋಗಿದ್ರೆ ನಿನಗೆ ಸಾಲ ಕೊಡ್ತಿದ್ದೆ." {{gap}}" ಇಷ್ಟು ವರ್ಸ ಜೀವ ತೇದು ತೇದು ಮುನ್ನೂರು ಉಳಿಸಿವ್ನಿ, ಒಡೆಯಾ." {{gap}}"ಭಲೆ! ಹಾಗಿರ್‍ಬೇಕು ಸೊಸೈಟಿಲಾದ್ರೂ ಇಟ್ಟಿದ್ರೆ ಬಡ್ಡಿ ಬರ್‍ತಿತ್ತಲ್ಲೋ.ಎಲ್ಲಿ___ ನೆಲದ ಕೆಳಗೆ ಹೂತಿಟ್ಟಿದ್ಯಾ?" {{gap}}ಮುನಿಯ ಹೌದೋ ಇಲ್ಲವೋ ಎನ್ನುವಂತೆ ನಕ್ಕಿದ್ದ .ಉತ್ತರ ಕೊಟ್ಟಿರಲಿಲ್ಲ. ತಾನು ಅಂದಿದ್ದೆ: {{gap}}" ಎಲ್ಲಾ ಸರಿ, ಮುನಿಯ. ಶಾನುಭೋಗರ್‍ನ ಹಿಡಿದು ಕಾಗದ ಪತ್ರ ಮಾಡ್ಕಾಂಡೆ ಅನ್ನು. ಸಿದ್ಧಪ್ಪನ ಒಕ್ಕಲಾಗಿ ಅಬ್ದುಲ್ಲ ಇದಾನಲ್ಲ. ಅವನನ್ನ ಎಬ್ಬಿಸಿ ಹೊಲ ನಿನ್ನ ವಶಕ್ಕೆ ಕೊಡ್ತಾನಂತೊ?" {{gap}}"ಓ__" {{gap}}" ಹಾಗಾದರೆ ಸರಿ, ಅಬ್ದುಲ್ಲ ಆಮೇಲೆ ತಕರಾರು ಮಾಡ್ಬಾರ್‍ದು ನೋಡು." - {{gap}}" ಯಾಕ್ಮಾಡಾನು? ಯಾವೂರಿಂದ್ರೋ ಬಂದೋನು.. ಒಕ್ಕಲಾಗಿ ಇದಾನೆ. ಈ ಅಳ್ಳಿ ಬಿಟ್ಟ;ಇನ್ನೊಂದಳ್ಳಿಗ್‍ ಹೋದ." {{gap}}"ನಿಜ ಅನ್ನು," ಎಂದಿದ್ದ ಗೋವಿಂದ. {{gap}}ಮುಂದೆ ಕಾಗದ ಪತ್ರಗಳಾದುವು, ಸಿದ್ದಪ್ಪ ಹೊಲವನ್ನು ಮುನಿಯನಿಗೆ ಮಾರಿ ಸಂಸಾರ ಸಮೇತನಾಗಿ ಹಳ್ಳಿ ಬಿಟ್ಟು ನಗರಕ್ಕೆ ಹೋದುದೂ ಆಯಿತು. ಆದರೆ ಅಬ್ದುಲ್ಲ ಹೊಲವನ್ನು ಮುನಿಯನ ಸ್ವಾಧೀನಕ್ಕೆ ಕೊಡಲಿಲ್ಲ! {{gap}}ಮುನಿಯ ಪಟೇಲರಿಗೆ ದೂರುಕೊಟ್ಟ. ಹಳ್ಳಿಯ ಪ್ರಮುಖರಿಗೆ ಹೇಳಿದ, ಪ್ರಯೋಜನ ವಾಗಲ್ಲಿಲ. {{gap}}ಹೊಲ ಉಳ್ಳವನಾಗಲು ಮುನಿಯ ಮಾಡುತ್ತಿದ್ದ ಯತ್ನದ ಬಗೆಗೆ ಯಾರೂ ಸಹಾನುಭೂತಿ ವ್ಯಕ್ತಪಡಿಸಲಿಲ್ಲ. {{gap}}ಶಾಮೇಗೌಡರೆಂದರು: {{gap}}"ತಾಳಿದವ ಬಾಳುತಾನೆ, ಮುನಿಯ, ಒಸಿ ದಿನ ಓಗ್ಲಿ." {{gap}}ಕೃಷ್ಟೇಗೌಡನೆಂದ: - {{gap}}" ಮುಂಚೆ ಅಬ್ದುಲ್ಲ ಸಿದ್ಧಪ್ನಿಗೆ ಗೇಣಿ ಒಪ್ಪಿಸ್ತಿದ್ದ. ಇನ್ನು ನಿನಗೆ ಕೊಡ್ಲಿ." {{gap}}ಆದರೆ ಮುನಿಯನಿಗೆ ಆ ಸಲಹೆ ಇಷ್ಟವಿರಲಿಲ್ಲ, ಸ್ವತಃ ತಾನೇ ಸಾಗುವಳಿ ಮಾಡಬೇಕೆಂಬ ಆಸೆ ಆತನಿಗೆ. -<noinclude></noinclude> otnr5j75uxcevt3vvnjgh7exa98dmfr ಪುಟ:ನೋವು.pdf/೩೩ 104 20765 322908 277164 2026-05-27T04:28:19Z Shreelatha.Halemane 7642 /* Validated */ 322908 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right=೨೩}} {{gap}}ಶ್ರೀನಿವಾಸಯ್ಯ ಅಂದರು: {{gap}}"ಸುಮ್ನಿರೋದು ಬಿಟ್ಟ ಇದೆಲ್ಲ ಯಾಕೋ ಕಟ್ಕಾಂಡೆ?" {{gap}}ಯಾರಿಗೂ ತಿಳಿಯದಂತೆ ಮುನಿಯ ಗೋವಿಂದನ ಬಳಿಗೆ ಬಂದಿದ್ದ. {{gap}}"ದಾರಿ ಕಾಣ್ಸಿ, ಒಡೆಯಾ." {{gap}}ಗೋವಿಂದ ಆತನಿಗೆ ಕಾಣಿಸಿದ್ದು ನಗರದ ದಾರಿ. ವಕೀಲರೊಬ್ಬರ ಮನೆಗೆ ಪ್ರದಕ್ಷಿಣೆ ಹಾಕಿ ಆ ದಾರಿ ತಲಪಿದ್ದು ನ್ಯಾಯಸ್ಥಾನವನ್ನು. {{gap}}ಕಾಗದದ ಮೇಲೆ ತನ್ನದಾಗಿದ್ದ ಹೊಲವನ್ನು ಮುನಿಯ ವೆಂಕಟಪ್ಪನಿಗೆ ಒತ್ತೆ ಇಟ್ಟು ಚಕ್ರಬಡ್ಡಿಯ ಮೇಲೆ ನೂರು ರೂಪಾಯಿ ಸಾಲ ಪಡೆದ. ಆ ಹಣದಿಂದ ಒಂದಂಶ ಗೋವಿಂದನಿಗೆ ಕಾಣಿಕೆಯಾಗಿ ಬಂತು. ಉಳಿದುದು ವಕೀಲರಿಗೆ ಸಂದಾಯವಾಯಿತು. {{gap}}ಅಬ್ದುಲ್ಲನೂ ವಕೀಲರನ್ನು ನೇಮಿಸಬಹುದು; ಬೇಕಿದ್ದರೆ ಅವನಿಗೂ ಒಬ್ಬ ವಕೀಲರ ಪರಿಚಯ ಮಾಡಿಸಿಕೊಡಬೇಕು– ಎಂದುಕೊಂಡಿದ್ದ ಗೋವಿಂದ. ಆದರೆ ಅಬ್ದುಲ್ಲನಿಗೆ ಆ ವಿಷಯದಲ್ಲಿ ಆಸಕ್ತಿ ಇದ್ದಂತೆ ತೋರಲಿಲ್ಲ. {{gap}}ಮುನಿಯನಿಗೆ ತಿಳಿಯದಂತೆ ಎಚ್ಚರಿಕೆ ವಹಿಸಿ ಗೋವಿಂದನೇ ಒಮ್ಮೆ ಅಬ್ದುಲ್ಲನನ್ನು ಮಾತನಾಡಿಸಿದ. {{gap}}"ಏನಾದರೂ ಮಾಡ್ಬೇಕಪ್ಪ ನೀನು.” {{gap}}ಅಬ್ದುಲ್ಲನ ಮಾತು ಕಟುವಾಗಿತ್ತು: {{gap}}"ಎಂಡತಿ ಮಕಳ್ನ ಕೊಂಧ್ಹಾಕಿ ನಾನು ತಲೆ ಒಡ್ಕೊಳ್ಲಾ?" {{gap}}"ಹಾಗಲ್ಲ, ಅಬ್ದುಲ್ಲ." {{gap}}"ಮತ್ತೆ?” {{gap}}"ಮತ್ತೆ ಅಂದ್ರೆ? ನಗರಕ್ಕೆ . ದೊಡ್ಡ ವಕೀಲರು ಯಾರನಾದರೂ ಕೇಳಿ ನೋಡ್ಬೇಕು." {{gap}}"ಬ್ಯಾಡಿ ಅ. ನನಗೆ ಬ್ಯಾಡಿ ಅದೆಲ್ಲ.” {{gap}}" ಸರಿ! ನೀನು ಹೊಲ ಬಿಡ್ಬೇಕೂಂತ ಕೋರ್ಟ್ನಲ್ಲಿ ನಾಳೆ ಆರ್ಡರಾದ್ರೆ?" {{gap}}"ಅಯ್ಯೋ ,ಬಿಡಿ ಬುದ್ದಿ. ಆ ಕಾಲಕ್ಕೆ ನೋಡ್ಕೊಳ್ಳಾನ." {{gap}}ಗೋವಿಂದನಿಗೆ ಉತ್ಸಾಹ ಭಂಗವಾಗಿತ್ತು. {{gap}}...ಹೀಗೆ, ಮುನಿಯನ ಪ್ರಕರಣವನ್ನು ಚೆನ್ನಾಗಿ ಬಲ್ಲ ಅವನಿಗೆ ತಿಳಿಯದೆ ಆತನ ಅವಸಾನಕ್ಕೆ ಯಾರು ಕಾರಣ ಎಂಬುದು? {{gap}}ಅವನೊಬ್ಬನೇ ಅಲ್ಲ; ಹಳ್ಳಿಯ ಎಲ್ಲರೂ, ಒಂದಕ್ಕೆ ಒಂದು ಸೇರಿಸಿ ಎರಡಾಯಿತು ಎಂದು ಹೇಳಬಲ್ಲವರೇ. {{gap}}...ಜನೆ ಹಾಗೆ ಹೇಳುವುದು ಶಾಮೇಗೌಡರಿಗೆ ಇಷ್ಟವಿರಲಿಲ್ಲ. {{gap}}...ಅವರು ಬಿರುಸಾಗಿ ಮಾರಿಗುಡಿಯತ್ತ ನಡೆದರು. {{gap}}ಒಂದು ತಪ್ಪು ಮಾದಿದ ಮುನಿಯ,ಮತ್ತೊಂದು ತಪ್ಪು ಮಾದಿದ.ಹೊಲ ಕೊಳ್ಳುವ ಯೋಚನೆ ಮಾಡಿದ್ದೇ ತಪ್ಪು. ಅದಾದಮೇಲೆ ಕೋರ್ಟಿಗೆ ಹೋದದ್ದು ಎರಡನೆಯ ತಪ್ಪು.<noinclude></noinclude> 79wfcr0wp62ijiqgejwa5sisll70o2o ಪುಟ:ನೋವು.pdf/೩೪ 104 20766 322909 277165 2026-05-27T04:32:36Z Shreelatha.Halemane 7642 /* Validated */ 322909 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center= ನೋವು|left=೨೪|right=}} {{gap}}ಶಾಮೇಗೌಡರು ಮುನಿಯನನ್ನು ಕೇಳಿದ್ದರು: {{gap}}" ಯಾರು ನಿನಗೆ ವಕೀಲರ ಅಡ್ರೆಸ್ ಕೊಟ್ಟೋರು?" - {{gap}}ಮುನಿಯ ಗೋವಿಂದನ ಹೆಸರು ಹೇಳಲಿಲ್ಲ. - {{gap}}" ಯಾರ್ನೋ ಕೇಳ್ಕಂಡೋದೆ, ಒಡೆಯಾ." - {{gap}}ಈ ಕಾರಭಾರ ಗೋವಿಂದನದೇ ಇರಬೇಕೆಂಬ ಬಗೆಗೆ ಸಂದೇಹವಿಲ್ಲ ಗೌಡರಿಗೆ. ಆದರೆ ಬಹಿರಂಗವಾಗಿ ಹಾಗೆ ಹೇಳುವಂತಿಲ್ಲ . ಸ್ನೇಹಿತನ ಮನಸ್ಸು ನೋಯಿಸಬಾರದೆಂದು, ಶ್ರಿನಿವಾಸಯ್ಯನವರೊಡನೆ ಆ ಪ್ರಸ್ತಾಪವನ್ನು ಮಾಡಿರಲೂ ಇಲ್ಲ. {{gap}}ಈಗ ಆಗಬಾರದ್ದು ಆಗಿಹೋಯಿತು. - {{gap}}ಬೆಂಕಿ ಮನೆಯನ್ನು ಅರ್ಧ ಸುಟ್ಟದ್ದಾಯಿತು; ಉಳಿದರ್ಧವನ್ನಾದರೂ ಉಳಿಸಬೇಕು. {{gap}}ಯಾವುದೋ ಮನೆ ಉರಿಯುತ್ತಿದ್ದರೆ, ಅದರ ಹತ್ತಿರ ನಿಂತು ಮೈ ಕಾಯಿಸಿಕೊಳ್ಳುವ ಪ್ರವೃತ್ತಿ ಎಷ್ಟು ಕೆಟ್ಟದ್ದು! ಒಳ್ಳೆಯ ಸಮಯ ನೋಡಿ ಗೋವಿಂದನಿಗೆ ತಾವು ಬುದ್ಧಿ ಹೇಳಬೇಕು. ಅವನ ತಂದೆ ಆ ಕೆಲಸ ಮಾಡದಿದ್ದರೆ ತಾವಾದರೂ ಮಾಡಬೇಕು...... {{gap}}....ಚಾವಡಿ ಸಮಿಾಪಿಸಿತು. {{gap}}ಅಲ್ಲಿ ಕಂದೀಲು ಉರಿಸಿದ್ದರು. ಪಂಚಾಯತಿಯ ವಿಷಯದಲ್ಲಿ ಯಾವಾಗಲೂ ಹೊರಗಿನವರು ಶ್ರಿನಿವಾಸಯ್ಯ. ಅವರು ಒತ್ತಟ್ಟಿಗೆ ಕುಳಿತಿದ್ದರು. ಚಾವಡಿಯ ಮಧ್ಯದಲ್ಲಿ ಕೃಷ್ಣೇಗೌಡ ಮತ್ತು ಇತರರಿದ್ದರು. {{gap}}ಶಾಮೇಗೌಡರು ಬಂದಾಗ ಮಾತು ಅಡಗಿ ಮೌನ ನೆಲೆಸಿತು. {{gap}}ಗೌಡರು ಶ್ರಿನಿವಾಸಯ್ಯನವರ ಮಗ್ಗುಲಲ್ಲಿ ಕುಳಿತರು. {{gap}}ಒಂದು ನಿಮಿಷ ಸುಮ್ಮನಿದ್ದು ಗೌಡರು ಶ್ರೀನಿವಾಸಯ್ಯನವರೊಡನೆ, ಇತರರಿಗೂ ಕೇಳಿಸುವಂತೆ ಗಟ್ಟಿಯಾಗಿಯೇ, “ ಏನೋ ಲೋಪ ಆಗೋ ಹಂಗೆ ನಡಕಂಡಿದೀವೀಂತಾಯ್ತು. ಊರ ದೈವ ಮುನಿದಿದೆ. ಮುನಿಯ ಬಲಿಯಾದ ಪಾಪ!" ಎಂದರು. {{gap}}ಎಲ್ಲರನ್ನೂ ದಹಿಸುತ್ತಿದ್ದ ಸಂಶಯದ ಬೆಂಕಿಗೆ ಆ ಮಾತು ನೀರಾಯಿತು. ಇನ್ನು ಉಳಿದದ್ದು ಕಪ್ಪು ಕೆಂಡಗಳಿಂದ ಹೊರಡುತ್ತಿದ್ದ ಬಿಸಿ ಹೊಗೆ. {{gap}}ಅಷ್ಟರಲ್ಲಿ ವೀರಾಚಾರಿ ಬಂದ, ಶಾಮೇಗೌಡರ ಬಳಿ ಬಾಗಿ ಕುಳಿತು ಇಳಿದನಿಯಲ್ಲಿ ಅಂದ: - {{gap}}" ಮಗನಿಗೆ ಎಣ್ಣು ನೋಡಾಕೆ ಅಂತ ನಿನ್ನೆ ಒತ್ತಾರೇನೇ ಚಿತ್ರಾಪುರಕ್ಕೆ ಓದ್ನಂತೆ. ವಾಪ್ಸು ಬರೋಕೆ ಎ೦ಟತ್ತು ದಿವಸ ಆದಾತೂಂತ ಅವನ ಎಣ್ತಿ ಯೋಳ್ತಾಳೆ," - {{gap}}"ಸರಿ!" - {{gap}}ಕಿವಿ ನಿಮಿರಿಸಿ ನಿಂತಿದ್ದ ಗೋವಿಂದನಿಗೆ ಆ ಮಾತು ಕೇಳಿಸಿತು. {{gap}}ಚಾವಡಿಯ ಮಧ್ಯದಿಂದಲೂ ಒಬ್ಬನೆಂದ : {{gap}}" ಯಾರು ಅಬ್ದುಲ್ಲನೇ? ಅವನು ಊರಲ್ಲಿಲ್ಲ." {{gap}}" ಸರಿ! ಸರಿ!" ಎಂದರು ಗೌಡರು, ಗಟ್ಟಿಯಾಗಿ. - {{gap}}- ಅಬ್ದುಲ್ಲ ಇಲ್ಲವೆಂಬ ಸುದ್ದಿಯಿಂದ, ಹೊಗೆಯಾಡುತ್ತಿದ್ದ ಇದ್ದಲು ಚೂರುಗಳೂ ತಣ್ಣ ಗಾದುವು.<noinclude></noinclude> 0kpee41yaoyqz2cesvcvujtdim35x3s ಪುಟ:ನೋವು.pdf/೩೫ 104 20767 322910 277167 2026-05-27T04:39:15Z Shreelatha.Halemane 7642 /* Validated */ 322910 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right=೨೫}} {{gap}}"ನಡೀರಿ ಅಯ್ನೋರೇ, ಆಯ್ತಲ್ಲ.” ಎಂದರು ಗೌಡರು, ಏಳುತ್ತ. {{gap}}ಚಾವಡಿಯಲ್ಲಿದ್ದವರೆಲ್ಲ ಎದ್ದು, ಮುನಿಯ-ಪಾಪ-ಸತ್ತನಲ್ಲ ಎಂದು ಮಾತನಾಡುತ್ತ ಚೆದರಿದರು. {{gap}}ಶ್ರೀನಿವಾಸಯ್ಯ ಮಗನ ಕಡೆ ನೋಡಿ ಅಂದರು : {{gap}}" ಮನೆಗೆ ಹೋಗು, ಗೋವಿಂದ. ನಾನು ಈಗ ಬ೦ದೆ." {{gap}}ಗೋವಿಂದ ಕೇಳಿದ: {{gap}}"ಟಾರ್ಚು ಬೇಕಾ?” {{gap}}" ಬೇಡ," ಎಂದರು ಶ್ರೀನಿವಾಸಯ್ಯ; ಕ್ಷಣ ಬಿಟ್ಟು, " ಕೊಟ್ಟಿರು," ಎಂದರು. ನಿಧಾನವಾಗಿ ನಡೆಯತೊಡಗಿದ ತಂದೆಯನ್ನೂ ಗೌಡರನ್ನೂ ಬಿಟ್ಟು ಗೋವಿಂದ ಮನೆಯ ಕಡೆ ಹೆಜ್ಜೆ ಹಾಕಿದ. {{gap}}ಅವನಿಗನಿಸಿತು: {{gap}}ಐವತ್ತು ದಾಟಿದವರು ಹೀಗೆಯೇ. ಪ್ರತಿಯೊಂದು ಚೂರು ಪ್ರಗತಿಗೂ ಇವರು ಅಡ್ಡಿ. ಹಳೆಯ ಕಟ್ಟುಪಾಡುಗಳಿಗೆ ಅನುಸಾರವಾಗಿಯೇ ಇವರು ನಡೆಯಬೇಕು. ಶಾಮೇಗೌಡರ ಮಾತಂತಿರಲಿ. ವಯಸ್ಸಿನಲ್ಲಿ ಚಿಕ್ಕವನಾದ ಕೃಷ್ಣೇಗೌಡನಿಗಾದರೂ ಬುದ್ಧಿ ಬೇಡವೆ? ದೇಶಕ್ಕೆ ಸ್ವಾತಂತ್ರ ಬಂದು ಹತ್ತು ಹನ್ನೆರಡು ವರ್ಷ ಸಂದಿವೆ. ನಡೆದಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಎಲ್ಲ ಓಟು ಕೊಟ್ಟಿದ್ದಾರೆ. ಹೊಸ ಶಾಸನಗಳು ಜಾರಿಗೆ ಬಂದಿದೆ. ಆದರೆ ಈ ಜನರ ಪಾಲಿಗೆ ಲೋಕದಲ್ಲಿ ಯಾವ ಬದಲಾವಣೆಯೂ ಆಗಿಲ್ಲ.... {{gap}}ಮನೆ ತಲಪಿದಾಗ ಗೋವಿಂದನೆಂದುಕೊಂಡ : {{gap}}"ಯಾರ ಹಂಗೇನು ನನಗೆ ? ಆದಷ್ಟು ಬೇಗನೆ—ಊಹೂಂ-ನಾಳೆಯೇ ನಗರಕ್ಕೆ ಹೋಗಿ ಬರಬೇಕು..." {{gap}}ಸ್ವಲ್ಪ ದೂರ ಮೌನವಾಗಿ ನಡೆದ ಶ್ರೀನಿವಾಸಯ್ಯ – ಶಾಮೇಗೌಡರು, ದಾರಿ ಕವಲೊಡೆದಿದ್ದ ನಿರ್ಜನ ಪ್ರದೇಶದಲ್ಲಿ ಕೆಲ ನಿಮಿಷ ನಿಂತರು. {{gap}}ಗೌಡರೆಂದರು : {{gap}}" ಅಬ್ದುಲ್ಲ ನಿನ್ನೆಯೇ ಊರು ಬಿಟ್ಟದ್ದು ಒಳ್ಳೆದಾಯ್ತು." {{gap}}“ ಹೌದು," ಎಂದರು ಶ್ರೀನಿವಾಸಯ್ಯ. {{gap}}" ಅವನು ಬಂದ್ಮೇಕೇ ಮುನಿಯನ ಮಗನಿಗೆ ಹೊಲ ಕೊಡಿಸ್ಬಿಡ್ಬೇಕು." {{gap}}" ಸరి ... ಕೋರ್ಟು-" {{gap}}"ಅದೇನು ಮಾಡ್ತದೆ? ಕಾಗದ ಪತ್ರ ಸರಿಯಾಗೈತೆ, ಹೊಲ ಬಿಟ್ಕೊಡು ಅಂತ ಪ್ರತಿವಾದಿಗೆ ತಾಕೀತು ಮಾಡ್ತದೆ, ಅಷ್ಟೆ." {{gap}}" ಹುಂ." {{gap}}" ಅವನು ಊರು ಬಿಟ್ಟು ಓದ್ರೂ ಸರಿ; ಇಲ್ಲೇ ಕೂಲಿ ನಾಲಿ ಮಾಡಿದ್ರೂ ಸರಿ." {{gap}}"ಹು೦." - {{gap}}ಗೌಡರ ನಾಲಿಗೆಯ ತುದಿವರೆಗೂ ಬಂತು: 'ಗೋವಿಂದನಿಗಷ್ಟು ಹೇಳಿ-ಗಲಾಟೆ ಮಾಡ್ಬೇಡ ಅಂತ' ಎಂಬ ಮಾತು.<noinclude></noinclude> omlrgtwatptdpz634a6lpog9lqwheo5 ಪುಟ:ನೋವು.pdf/೩೬ 104 20768 322911 277168 2026-05-27T04:45:32Z Shreelatha.Halemane 7642 /* Validated */ 322911 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=೨೬|right=}} {{gap}}ಆದರೂ, 'ಇವತು ಬೇಡ ಇನ್ನೊಂದು ದಿವಸ ಹೇಳೋಣ' ಎಂದು ಅದನ್ನು ಅವರು ತಡೆದರು. . {{gap}}ಗೌಡರು ನಿಟ್ಟುಸಿರುಬಿಟ್ಟರು, ಶ್ರೀನಿವಾಸಯ್ಯ ಕೂಡಾ. {{gap}}"ನಡೀರಿ ಇನ್ನು," ಎಂದರು ಗೌಡರು. {{gap}}ಶ್ರೀನಿವಾಸಯ್ಯ ಮೌನವಾಗಿ ಪಾದಕಿತ್ತರು. .. {{gap}}ಮನೆ ಸೇರುವುದಕ್ಕೆ ಮುಂಚೆ ಶಾಮೇಗೌಡರು ಅದೆಷ್ಟು ಸಾರಿ ನೀಳವಾಗಿ ಉಸಿರು ಬಿಟ್ಟರೊ, ಅದೆಷ್ಟು ಸಾರೆ ತಲೆಯಲ್ಲಾಡಿಸಿದರೊ. - {{gap}}ಅವರೆಂದುಕೊ೦ಡರು; {{gap}}ಮುನಿಯ ತಾನಾಗಿಯೆ ಸಾವನ್ನು ಬರಮಾಡಿದಂತಾಯಿತು. ಕುಲ ಮರ್ಯಾದೆ ಮಿಾರಿ ಅವನು ಹೋಗಬಾರದಿತ್ತು, ಅಬ್ಧುಲ್ಲನೂ ಬಹಳ ತಪ್ಪು ಮಾಡಿದ. ಹೊರಗಿನ ಜನವನ್ನ ಇಲ್ಲಿ ನೆಲೆ ಊರಲು ತಾವು ಬಿಡಬಾರದಾಗಿತು, ನೋಟಕ್ಕೆ ಎಷ್ಟೊಂದು ಸಾತ್ವಿಕ! ಕಡಮೆ ಮಾತು. ಹೃದಯ ಮಾತ್ರ ರಾಕ್ಷಸನದು ಅಂತ ಯಾರಿಗೆ ಗೊತ್ತಿತು? {{gap}}ಅಂಗಳಕ್ಕೆ ಕಾಲಿರಿಸಿದ ಅಣ್ಣನನ್ನು ಕ೦ಡೂ ಬಾಗಿಲಲ್ಲಿ ನಿ೦ತಿದ್ದ ನಾಗಮ್ಮ ಅಂದರು; {{gap}}“ ಬ೦ದೆಯಾ?" {{gap}}ಗೌಡರು ಕೇಳಿದರೂ {{gap}}ಸಾನಕ್ಕೆ ನೀರೈತಾ?" {{gap}}ಐತೆ, ಒಗೆದ ಬಟ್ಟೆನೂ ಮಡಗಿವ್ನಿ. {{gap}}" ಗೌಡರು ಕೊಡೆ, ಎಕ್ಕಡಗಳನ್ನು ಬಾಗಿಲಲ್ಲಿ ಬಿಟ್ಟೂ ಮನೆಯನ್ನು ಪ್ರವೇಶಿಸದೆ ಹಿಂಬದಿಗೆ ಹೋದರು. ಶುಚಿರ್ಭೂತರಾಗಿ ಒಳಗೆ ಬ೦ದರು. {{gap}}ಊಟಕ್ಕೆ ಕುಳಿತಾಗ ಗೌಡರು ಕೇಳಿದರು: {{gap}}"ಉಡುಗರ್ದು ಆಯ್ತೆನು?" {{gap}}"ಆಯ್ತು ಎಂದರು ನಾಗಮ್ಮ, ತುಟಿಕಚ್ಚಿ, {{gap}}ಬೇರೆ ದಿನವಾಗಿದ್ದರೆ ಉಣ್ಣುತ್ತ, ಹೊಸಳ್ಳಿಗೆ ಹೋದ ಕೆಲಸವೇನಾದರು ಶಾಮೆ ಗೌಡರು ಹೇಳಬೇಕು. - {{gap}}ಆದರೆ ಇವತ್ತು ಮೌನದ ಊಟ. {{gap}}ಗೌಡರಿಗೋ ಊಟದ ಕಡೆಗೆ ಲಕ್ಷ್ಯವಿರಲಿಲ್ಲ, ಹಸಿವಿನ ಶಮನಕ್ಕೆಂದು ಎರಡು ತುತ್ತು ಉಂಡು ಅವರೆದ್ದರು {{gap}}" ಸುಬ್ಬಿಗೆ ಜರ. ಒಮ್ಮೆ ಚೀರ್ಕೊಂಡ್ಲು, ಮುನಿಯಂದು ಕೇಳಿ ಇಂಗಾಗಿರ್ಬೊದು."– {{gap}}ಗೌಡರ ಹುಬ್ಬಗಳು ಮೇಲೇರಿದುವು. - {{gap}}" ಮತ್ತೆ ಹುಡುಗರ ಊಟ ಆಯ್ತು ಅಂದೆ." {{gap}}" ರಂಗನ್ದಾಯ್ತು" - - - [ಮೊದಲೇ ಆ ಮಾತು ಹೇಳಿದ್ದರೆ ಅಣ್ಣ ಉಣ್ಣೂತ್ತಿರಲಿಲ್ಲ ಎಂದು ತಿಳಿಯದೆ ನಾಗಮ್ಮನಿಗೆ ?] . {{gap}}ಶಾಮೇಗೌಡರು ಮಗಳು ಮಲಗಿದ್ದಲ್ಲಿಗೆ ಹೋಗಲೆಂದು ಪಡಸಾಲೆಗೆ ಬ೦ದರು.<noinclude></noinclude> em84jxirhgkxuyd5npvt2obk14av374 ಪುಟ:ನೋವು.pdf/೩೭ 104 20769 322946 205420 2026-05-27T09:06:42Z Shreesha Sharma 7840 /* Proofread */ 322946 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ನೋವು|left=|right=೨೭}} ಜಗಲಿಯಲ್ಲಿ ರಂಗಣ್ಣ ನಿಂತಿದ್ದ. {{gap}}" ಅಪ್ಪ, ಒಸಿ ಈ ಕಡೆ ಬನ್ನಿ" ಎಂದು, ಕೈಸನ್ನೆಮಾಡಿ ತಗ್ಗಿದ ಧ್ವನಿಯಲ್ಲಿ ತಂದೆಯನ್ನು ಅವನು ಕರೆದ. {{center|೪}} {{gap}}ಮಗ ರಂಗಣ್ಣ ಸನ್ನೆ ಮಾಡಿ ತಮ್ಮನ್ನು ಕರೆದಾಗ ಶಾಮೇಗೌಡರು ಹುಬ್ಬು ಗಂಟಿಕ್ಕಿ, “ ಏನೋ ಅದು?” ಎಂದು ಕೇಳಿದರು. {{gap}}ಆದರೆ, ಹಾಗೆ ಪ್ರಶ್ನಿಸಿದ ಮರುಕ್ಷಣವೆ, ರಂಗಣ್ಣ ಡಾಕ್ಟರ್ ಪರೀಕ್ಷೆಗೆ ಓದುತ್ತಿರುವವನು ಎಂಬುದು ನೆನಪಾಗಿ, ತನ್ನ ತಂಗಿಯ ಅಸ್ವಾಸ್ಥದ ವಿಷಯ ಆತ ಏನನ್ನೋ ಹೇಳಬಯಸುತ್ತಿರಬಹುದೆನಿಸಿ, ತುಸು ಅಧೀರರಾಗಿಯೇ ಮಗನನ್ನು ಸಮೀಪಿಸಿದರು. {{gap}}ರಂಗಣ್ಣ ಅಂಗಳಕ್ಕಿಳಿದ. ಅಡ್ಡಪಂಚೆಯನ್ನೆಷ್ಟೆ ಉಟ್ಟಿದ್ದ ಗೌಡರು ಅವನನ್ನು ಹಿ೦ಬಾಲಿಸಿದರು. - {{gap}}ಈಗ ಕಾತರ ತುಂಬಿದ ಧ್ವನಿಯಲ್ಲಿ ಗೌಡರು ಕೇಳಿದರು: {{gap}}"ಸುಬ್ಬಿಗೆ ಏನಾಗದೆ?" {{gap}}- ಅಪ್ರಿಯವಾದರೂ ಹೇಳಬೇಕಾದುದು ತನ್ನ ಕರ್ತವ್ಯ ಎಂಬ ನಿರ್ಧಾರಕ್ಕೆ ಬಂದಿದ್ದ ರಂಗಣ್ಣ ತನ್ನ ಉಸಿರೆಳೆದು ಬಿಟ್ಟೂ, ಗಂಟಲು ಸರಿಪಡಿಸಿದ. {{gap}}" ಸುಬ್ಬಿ ಮುನಿಯನ ಹೆಣ ನೋಡಿ ಹೆದರ್ಕೊಂಡವಳೆ ಅಪ್ಪ {{gap}}"ಹಾ " ಯೆಲ್ನೊಡೀದ್ಲು?" {{gap}}" ಅಲ್ಲೇ, ದಿಬ್ಬದ ಹೊಂಡದಲ್ಲೇ." {{gap}}" ದಿಬ್ಬದೊಂಡದಲ್ಲಿ ? ಅಲ್ಲಿಗ್ಯಾಕೊದ್ಲು ? {{gap}}"ಅಲ್ಲಿ...ಅಲ್ಲಿ..." {{gap}}ರಂಗಣ್ಣ ತಡವರಿಸಿದ ಪದಗಳು ಕೈಕೊಟ್ಟುವು. {{gap}}ಶಾಮೇಗೌಡರ ಮೀಸೆ ಅಲುಗಿತು. {{gap}}" ಏನೋ ಅದು?” {{gap}}ಮುಚ್ಚಿಕೊಂಡಿದ್ದ ತನ್ನ ತುಟಿಗಳನ್ನು ಪ್ರಯತ್ನಪೂರ್ವಕವಾಗಿ ತೆರೆದು ರಂಗಣ್ಣನೆಂದ: {{gap}}" ಸುಬ್ಬಿ ಪದ್ಮನ ಜತೆ ದಿಬ್ಬದ ತಾವ ಹೋಗಿದ್ಲು. {{gap}}" ಡಕ್ ಡಕ್ ಡಕ್ ಎಂದು ವಿಪರೀತ ಸದ್ದು ಮಾಡಿತು ಗೌಡರ ಎದೆಗುಂಡಿಗೆ ತೋಪು ಗುಂಡುಗಳನ್ನು ಉಗುಳುವಂತೆ ಅವರೆಂದರು: : - {{gap}}“ ಯಾಕೆ ? ಯಾವಾಗ?" {{gap}}ಪಡಸಾಲೆಯ ಗೋಡೆ ಗೂಡಿನಲ್ಲಿದ್ದ ಕಂದೀಲು ಬೆಳಕು ಬಾಗಿಲಿನೆಡೆಗೆ ಹರಿದು ಹಿರಿದಾಗುತ್ತ ಅಂಗಳಕ್ಕಿಳಿದು ಮಂದವಾಗಿ ಕೃಷ್ಣ ಪಕ್ಷದ ಇರುಳಲ್ಲಿ ಲೀನವಾಗಿತು, ಆಕಾಶದಲ್ಲಿ ನಕ್ಷತ್ರಗಳು. ಆ ನಸುಬೆಳಕಿನಲ್ಲಿ ತಂದೆ ಮತ್ತು ಮಗ ಪರಸ್ಪರರ ಶರೀರದ ಸ್ಥೂಲ ರೇಖೆಗಳನ್ನಷ್ಟೇ<noinclude></noinclude> st1r9np8l7xuawyfso7y291v2u2nzo2 322947 322946 2026-05-27T09:07:09Z Shreelatha.Halemane 7642 /* Validated */ 322947 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right=೨೭}} ಜಗಲಿಯಲ್ಲಿ ರಂಗಣ್ಣ ನಿಂತಿದ್ದ. {{gap}}" ಅಪ್ಪ, ಒಸಿ ಈ ಕಡೆ ಬನ್ನಿ" ಎಂದು, ಕೈಸನ್ನೆಮಾಡಿ ತಗ್ಗಿದ ಧ್ವನಿಯಲ್ಲಿ ತಂದೆಯನ್ನು ಅವನು ಕರೆದ. {{center|೪}} {{gap}}ಮಗ ರಂಗಣ್ಣ ಸನ್ನೆ ಮಾಡಿ ತಮ್ಮನ್ನು ಕರೆದಾಗ ಶಾಮೇಗೌಡರು ಹುಬ್ಬು ಗಂಟಿಕ್ಕಿ, “ ಏನೋ ಅದು?” ಎಂದು ಕೇಳಿದರು. {{gap}}ಆದರೆ, ಹಾಗೆ ಪ್ರಶ್ನಿಸಿದ ಮರುಕ್ಷಣವೆ, ರಂಗಣ್ಣ ಡಾಕ್ಟರ್ ಪರೀಕ್ಷೆಗೆ ಓದುತ್ತಿರುವವನು ಎಂಬುದು ನೆನಪಾಗಿ, ತನ್ನ ತಂಗಿಯ ಅಸ್ವಾಸ್ಥದ ವಿಷಯ ಆತ ಏನನ್ನೋ ಹೇಳಬಯಸುತ್ತಿರಬಹುದೆನಿಸಿ, ತುಸು ಅಧೀರರಾಗಿಯೇ ಮಗನನ್ನು ಸಮೀಪಿಸಿದರು. {{gap}}ರಂಗಣ್ಣ ಅಂಗಳಕ್ಕಿಳಿದ. ಅಡ್ಡಪಂಚೆಯನ್ನೆಷ್ಟೆ ಉಟ್ಟಿದ್ದ ಗೌಡರು ಅವನನ್ನು ಹಿ೦ಬಾಲಿಸಿದರು. - {{gap}}ಈಗ ಕಾತರ ತುಂಬಿದ ಧ್ವನಿಯಲ್ಲಿ ಗೌಡರು ಕೇಳಿದರು: {{gap}}"ಸುಬ್ಬಿಗೆ ಏನಾಗದೆ?" {{gap}}- ಅಪ್ರಿಯವಾದರೂ ಹೇಳಬೇಕಾದುದು ತನ್ನ ಕರ್ತವ್ಯ ಎಂಬ ನಿರ್ಧಾರಕ್ಕೆ ಬಂದಿದ್ದ ರಂಗಣ್ಣ ತನ್ನ ಉಸಿರೆಳೆದು ಬಿಟ್ಟೂ, ಗಂಟಲು ಸರಿಪಡಿಸಿದ. {{gap}}" ಸುಬ್ಬಿ ಮುನಿಯನ ಹೆಣ ನೋಡಿ ಹೆದರ್ಕೊಂಡವಳೆ ಅಪ್ಪ {{gap}}"ಹಾ " ಯೆಲ್ನೊಡೀದ್ಲು?" {{gap}}" ಅಲ್ಲೇ, ದಿಬ್ಬದ ಹೊಂಡದಲ್ಲೇ." {{gap}}" ದಿಬ್ಬದೊಂಡದಲ್ಲಿ ? ಅಲ್ಲಿಗ್ಯಾಕೊದ್ಲು ? {{gap}}"ಅಲ್ಲಿ...ಅಲ್ಲಿ..." {{gap}}ರಂಗಣ್ಣ ತಡವರಿಸಿದ ಪದಗಳು ಕೈಕೊಟ್ಟುವು. {{gap}}ಶಾಮೇಗೌಡರ ಮೀಸೆ ಅಲುಗಿತು. {{gap}}" ಏನೋ ಅದು?” {{gap}}ಮುಚ್ಚಿಕೊಂಡಿದ್ದ ತನ್ನ ತುಟಿಗಳನ್ನು ಪ್ರಯತ್ನಪೂರ್ವಕವಾಗಿ ತೆರೆದು ರಂಗಣ್ಣನೆಂದ: {{gap}}" ಸುಬ್ಬಿ ಪದ್ಮನ ಜತೆ ದಿಬ್ಬದ ತಾವ ಹೋಗಿದ್ಲು. {{gap}}" ಡಕ್ ಡಕ್ ಡಕ್ ಎಂದು ವಿಪರೀತ ಸದ್ದು ಮಾಡಿತು ಗೌಡರ ಎದೆಗುಂಡಿಗೆ ತೋಪು ಗುಂಡುಗಳನ್ನು ಉಗುಳುವಂತೆ ಅವರೆಂದರು: : - {{gap}}“ ಯಾಕೆ ? ಯಾವಾಗ?" {{gap}}ಪಡಸಾಲೆಯ ಗೋಡೆ ಗೂಡಿನಲ್ಲಿದ್ದ ಕಂದೀಲು ಬೆಳಕು ಬಾಗಿಲಿನೆಡೆಗೆ ಹರಿದು ಹಿರಿದಾಗುತ್ತ ಅಂಗಳಕ್ಕಿಳಿದು ಮಂದವಾಗಿ ಕೃಷ್ಣ ಪಕ್ಷದ ಇರುಳಲ್ಲಿ ಲೀನವಾಗಿತು, ಆಕಾಶದಲ್ಲಿ ನಕ್ಷತ್ರಗಳು. ಆ ನಸುಬೆಳಕಿನಲ್ಲಿ ತಂದೆ ಮತ್ತು ಮಗ ಪರಸ್ಪರರ ಶರೀರದ ಸ್ಥೂಲ ರೇಖೆಗಳನ್ನಷ್ಟೇ<noinclude></noinclude> t2wtblayps2s3c99s8h1nxzzwzd1gl1 ಪುಟ:ನೋವು.pdf/೩೮ 104 20770 322953 205421 2026-05-27T09:14:35Z Shreesha Sharma 7840 /* Proofread */ 322953 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ನೋವು|left=೨೮|right=}} ಕಾಣುತ್ತಿದ್ದರು, ಮುಖಭಾವವನ್ನಲ್ಲ. {{gap}}ಸುಬ್ಬಿ ಪದ್ಮನ ಜತೆ ದಿಬ್ಬದ ತಾವ ಯಾಕೆ ಹೋದಳು ಎಂದು ಕೇಳುವರಲ್ಲ ಅಪ್ಪ? ಆ ಪ್ರಶ್ನೆಗೆ ಉತ್ತರ ಬೇರೆ ಹೇಳಬೇಕೆ ತಾನು ? {{gap}}ರಂಗಣ್ಣನೆಂದುಕೊಂಡಃ ಯಾವಾಗ? ಎಂಬುದಕ್ಕೆ ಉತ್ತರವಿತ್ತರಾಯಿತು. {{gap}}"ಮಧ್ಯಾಹ್ನ ಅಪ್ಪ.ನಾಲ್ಕು ಐದರ ಸುಮಾರಿಗೆ." {{gap}}ಘಂಟೆ ಮುಖ್ಯವಾಗಿರಲಿಲ್ಲ ಶಾಮೇಗೌಡರಿಗೆ. {{gap}}" ಅಗలు? ಆಡೇ ಅಗలు?". {{gap}}" ಹೂಂ ಅಪ್ಪ." {{gap}}ಮತ್ತೊಮ್ಮೆ "ಯಾಕೆ?” ಎಂದು ಕೇಳಲಿಲ್ಲ ಅವರು. ಕರ್ಕಶವಾಗಿದ್ದ ಅದುರುತ್ತಿದ್ದ ಸ್ವರದಲ್ಲಿ ಅವರೆಂದರು; {{gap}}"ಓಗೋಕೆ ಯಾಕ್ಟಿಟ್ಟೆ ? ನೀನು ಏನ್ಮಾಡ್ತಿದ್ದೆ ?" {{gap}}" ಸೀಬೇಕಾಯಿ ಕಿತ್ಕಂಬರ್ತೀನಿ ಅಂತ ಅತ್ತೆಮ್ಮನಿಗೆ ಹೇಳಿ ನಂಗೆ ತಿಳಿಯದ ಹಾಗೇನೇ ఓಗ್ಬುಟ್ಲು . ನಾನು ಹುಡುಕ್ಕೊಂಡೋದೆ. ದಿಬ್ಬದ ಹೊಂಡದತ್ತ ಹೆಣ ನೋಡಿ ಹೆದರಿಕೊಂಡು ಇಬ್ರೂ ಓಡ್ತಿದ್ದಾಗ ನಾನು ಕಂಡೆ." {{gap}}ಒಂದು ನಿಮಿಷ ಶಾಮೇಗೌಡರು ಏನನ್ನೂ ಹೇಳಲಿಲ್ಲ. {{gap}}ತಂಗಾಳಿ ಬೀಸಿತು. ಆದರೆ ಶಾಮೇಗೌಡರ ಪಾಲಿಗೆ ಅದು ಬಿರುಗಾಳಿ,ಅವರು ತರಗೆಲೆ. {{gap}}ಹೆಪ್ಪುಗಟ್ಟುತ್ತಿದ್ದ ನೀರಲ್ಲಿ ಮೈ ಅದ್ದಿ ಎದ್ದವರಂತೆ ಗೌಡರು ನಡುಗಿದರು, ಆ ನಡುಕದಿಂದ ಕಟ ಕಟ ಕಟ ಎಂದುವು ಅವರ ಹಲ್ಲುಗಳು. ಚಿಟ್ ಚಿಟ್ ಚಿಟ್ ಎನ್ನುತ್ತಿತು ತಲೆ. ಸಣ್ಣಗೆ ಕಾಣಿಸಿಕೊಂಡು ಒಮ್ಮೆಲೆ ವ್ಯಾಪಿಸಿದ ಒಳಗಿನ ಯಾತನೆ ನರಳಾಟದ ಸದ್ದನ್ನು ಅವರ ಬಾಯಿಯಿಂದ ಹೊರಡಿಸಿತು. ಕಾಲುಗಳು ಕ್ಷೀಣಗೊಂಡಂತೆ ಕಂಡು, ನಿಂತಿರುವುದಾಗದೆ, ಅಂಗಳದ ದಂಡೆಯ ಮೇಲೆ ಅವರು ಕುಳಿತರು. ಅಲ್ಲಿಂದಲೂ ಆಗೊಮ್ಮೆ ಈಗೊಮ್ಮೆ ಕ್ಷೀಣವಾಗಿ ನರಳಾಟ ಕೇಳಿಸಿತೇ ಹೊರತು ಮಾತಲ್ಲ. - {{gap}}ರಂಗಣ್ಣ ಆತಂಕಗೊಂಡ. ತಂದೆಗೆ ಹೇಳದೇ ಇದ್ದರೂ ಆಗುತ್ತಿತ್ತೇನೊ ಎನಿಸಿತು. ಅವನು ಬಲ್ಲ. ಬೇರೆ ದಿನವಾಗಿದ್ದರೆ, ಸುಭದ್ರೆಯ ಜ್ವರದ ಪ್ರಸ್ತಾಪವೂ ಇಲ್ಲದಿರು ತ್ತಿದ್ದರೆ, ತಂದೆ ಒಳಕ್ಕೆ ಧಾವಿಸಿ ತಂಗಿಯ ಭೂತ ಬಿಡಿಸುತ್ತಿದ್ದರು. ಆದರೆ ಈ ದಿನ ಅವರು ನಿತ್ಯದ ಮನುಷ್ಯನಲ್ಲ. {{gap}}ಗೌಡರು ಕುಳಿತೇ ಇದ್ದರು. ಏನು ಮಾಡಬೇಕೆಂದು ರಂಗಣ್ಣನಿಗೆ ತೋಚಲಿಲ್ಲ. ತಾನು ಒಳಗೆ ಹೋಗುವುದು ಮೇಲು ಎನಿಸಿತು. ತಂದೆಗೆ ಕೇಳಿಸಲಿ ಎಂದು ಬಾಯಿ ತೆರೆದು ಗಟ್ಟಿಯಾಗಿ ಆತ ಉಸಿರು ಬಿಟ್ಟ. {{gap}}ಗೌಡರು ಯಾವ ಪ್ರತಿಕ್ರಿಯೆಯನ್ನೂ ತೋರಿಸಲಿಲ್ಲ. {{gap}}ಆ ಕ್ಷಣ ಕೊಟ್ಟಿಗೆಯಿಂದ ಎಳೆಗರು 'ಅಂಬಾ' ಎಂದಿತು. ಅದರ ತಾಯಿ 'ಹೂ' ಎಂದು ಉತ್ತರವಿತ್ತಿತು. {{gap}}ತುಸು ಮುದುಡಿದ್ದ ಗೌಡರು ನೆಟ್ಟಗೆ ಕುಳಿತರು. ಅವರ ತಲೆ ಯಾಂತ್ರಿಕವಾಗಿ ಕೊಟ್ಟಿಗೆಯಿದ್ದ ದಿಕ್ಕಿಗೆ' ಹೊರಳಿತು.<noinclude></noinclude> cnuagajtet1k2pa7gfoiwe68h8hhh87 322954 322953 2026-05-27T09:14:55Z Shreelatha.Halemane 7642 /* Validated */ 322954 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=೨೮|right=}} ಕಾಣುತ್ತಿದ್ದರು, ಮುಖಭಾವವನ್ನಲ್ಲ. {{gap}}ಸುಬ್ಬಿ ಪದ್ಮನ ಜತೆ ದಿಬ್ಬದ ತಾವ ಯಾಕೆ ಹೋದಳು ಎಂದು ಕೇಳುವರಲ್ಲ ಅಪ್ಪ? ಆ ಪ್ರಶ್ನೆಗೆ ಉತ್ತರ ಬೇರೆ ಹೇಳಬೇಕೆ ತಾನು ? {{gap}}ರಂಗಣ್ಣನೆಂದುಕೊಂಡಃ ಯಾವಾಗ? ಎಂಬುದಕ್ಕೆ ಉತ್ತರವಿತ್ತರಾಯಿತು. {{gap}}"ಮಧ್ಯಾಹ್ನ ಅಪ್ಪ.ನಾಲ್ಕು ಐದರ ಸುಮಾರಿಗೆ." {{gap}}ಘಂಟೆ ಮುಖ್ಯವಾಗಿರಲಿಲ್ಲ ಶಾಮೇಗೌಡರಿಗೆ. {{gap}}" ಅಗలు? ಆಡೇ ಅಗలు?". {{gap}}" ಹೂಂ ಅಪ್ಪ." {{gap}}ಮತ್ತೊಮ್ಮೆ "ಯಾಕೆ?” ಎಂದು ಕೇಳಲಿಲ್ಲ ಅವರು. ಕರ್ಕಶವಾಗಿದ್ದ ಅದುರುತ್ತಿದ್ದ ಸ್ವರದಲ್ಲಿ ಅವರೆಂದರು; {{gap}}"ಓಗೋಕೆ ಯಾಕ್ಟಿಟ್ಟೆ ? ನೀನು ಏನ್ಮಾಡ್ತಿದ್ದೆ ?" {{gap}}" ಸೀಬೇಕಾಯಿ ಕಿತ್ಕಂಬರ್ತೀನಿ ಅಂತ ಅತ್ತೆಮ್ಮನಿಗೆ ಹೇಳಿ ನಂಗೆ ತಿಳಿಯದ ಹಾಗೇನೇ ఓಗ್ಬುಟ್ಲು . ನಾನು ಹುಡುಕ್ಕೊಂಡೋದೆ. ದಿಬ್ಬದ ಹೊಂಡದತ್ತ ಹೆಣ ನೋಡಿ ಹೆದರಿಕೊಂಡು ಇಬ್ರೂ ಓಡ್ತಿದ್ದಾಗ ನಾನು ಕಂಡೆ." {{gap}}ಒಂದು ನಿಮಿಷ ಶಾಮೇಗೌಡರು ಏನನ್ನೂ ಹೇಳಲಿಲ್ಲ. {{gap}}ತಂಗಾಳಿ ಬೀಸಿತು. ಆದರೆ ಶಾಮೇಗೌಡರ ಪಾಲಿಗೆ ಅದು ಬಿರುಗಾಳಿ,ಅವರು ತರಗೆಲೆ. {{gap}}ಹೆಪ್ಪುಗಟ್ಟುತ್ತಿದ್ದ ನೀರಲ್ಲಿ ಮೈ ಅದ್ದಿ ಎದ್ದವರಂತೆ ಗೌಡರು ನಡುಗಿದರು, ಆ ನಡುಕದಿಂದ ಕಟ ಕಟ ಕಟ ಎಂದುವು ಅವರ ಹಲ್ಲುಗಳು. ಚಿಟ್ ಚಿಟ್ ಚಿಟ್ ಎನ್ನುತ್ತಿತು ತಲೆ. ಸಣ್ಣಗೆ ಕಾಣಿಸಿಕೊಂಡು ಒಮ್ಮೆಲೆ ವ್ಯಾಪಿಸಿದ ಒಳಗಿನ ಯಾತನೆ ನರಳಾಟದ ಸದ್ದನ್ನು ಅವರ ಬಾಯಿಯಿಂದ ಹೊರಡಿಸಿತು. ಕಾಲುಗಳು ಕ್ಷೀಣಗೊಂಡಂತೆ ಕಂಡು, ನಿಂತಿರುವುದಾಗದೆ, ಅಂಗಳದ ದಂಡೆಯ ಮೇಲೆ ಅವರು ಕುಳಿತರು. ಅಲ್ಲಿಂದಲೂ ಆಗೊಮ್ಮೆ ಈಗೊಮ್ಮೆ ಕ್ಷೀಣವಾಗಿ ನರಳಾಟ ಕೇಳಿಸಿತೇ ಹೊರತು ಮಾತಲ್ಲ. - {{gap}}ರಂಗಣ್ಣ ಆತಂಕಗೊಂಡ. ತಂದೆಗೆ ಹೇಳದೇ ಇದ್ದರೂ ಆಗುತ್ತಿತ್ತೇನೊ ಎನಿಸಿತು. ಅವನು ಬಲ್ಲ. ಬೇರೆ ದಿನವಾಗಿದ್ದರೆ, ಸುಭದ್ರೆಯ ಜ್ವರದ ಪ್ರಸ್ತಾಪವೂ ಇಲ್ಲದಿರು ತ್ತಿದ್ದರೆ, ತಂದೆ ಒಳಕ್ಕೆ ಧಾವಿಸಿ ತಂಗಿಯ ಭೂತ ಬಿಡಿಸುತ್ತಿದ್ದರು. ಆದರೆ ಈ ದಿನ ಅವರು ನಿತ್ಯದ ಮನುಷ್ಯನಲ್ಲ. {{gap}}ಗೌಡರು ಕುಳಿತೇ ಇದ್ದರು. ಏನು ಮಾಡಬೇಕೆಂದು ರಂಗಣ್ಣನಿಗೆ ತೋಚಲಿಲ್ಲ. ತಾನು ಒಳಗೆ ಹೋಗುವುದು ಮೇಲು ಎನಿಸಿತು. ತಂದೆಗೆ ಕೇಳಿಸಲಿ ಎಂದು ಬಾಯಿ ತೆರೆದು ಗಟ್ಟಿಯಾಗಿ ಆತ ಉಸಿರು ಬಿಟ್ಟ. {{gap}}ಗೌಡರು ಯಾವ ಪ್ರತಿಕ್ರಿಯೆಯನ್ನೂ ತೋರಿಸಲಿಲ್ಲ. {{gap}}ಆ ಕ್ಷಣ ಕೊಟ್ಟಿಗೆಯಿಂದ ಎಳೆಗರು 'ಅಂಬಾ' ಎಂದಿತು. ಅದರ ತಾಯಿ 'ಹೂ' ಎಂದು ಉತ್ತರವಿತ್ತಿತು. {{gap}}ತುಸು ಮುದುಡಿದ್ದ ಗೌಡರು ನೆಟ್ಟಗೆ ಕುಳಿತರು. ಅವರ ತಲೆ ಯಾಂತ್ರಿಕವಾಗಿ ಕೊಟ್ಟಿಗೆಯಿದ್ದ ದಿಕ್ಕಿಗೆ' ಹೊರಳಿತು.<noinclude></noinclude> jjcv8dhnhkve84e7513caiscdc34u9z ಪುಟ:ನೋವು.pdf/೩೯ 104 20771 322956 205422 2026-05-27T09:19:48Z Shreesha Sharma 7840 /* Proofread */ 322956 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ನೋವು|left=|right= ೨೯}} {{gap}}ಅಂಥ ಸಂದರ್ಭಗಳಲ್ಲಿ ಮಗ ಮನೆಯಲ್ಲಿದ್ದರೆ, "ರಂಗಾ, ಅದೇನೂಂತ ನೋಡ್ಕೊಂಡ್ಬಾ,” ಎಂದು ಅವರು ಹೇಳಬೇಕು. {{gap}}ಎಳೆಗರು 'ಅಂಬಾ' ಎಂದಿದೆ, ಹೋಗಿ ನೋಡಬೇಕಾದುದು ಧರ್ಮ-ಎಂದು ಅವರ ಒಳದನಿ ಕ್ಷೀಣವಾಗಿ ನುಡಿಯುತ್ತಿತು. ಆದರೆ ಅವರನ್ನು ತಟ್ಟಿ ಎಚ್ಚರಿಸುವಷ್ಟು ಆ ಧ್ವನಿ ಬಲವಾಗಿರಲಿಲ್ಲ . {{gap}}ಕರು ಯಾಕೆ ಕೂಗಿತು? ಅಣ್ಣನ ಸದ್ದಿಲ್ಲವಲ್ಲ? ಯಾರ ಮಾತೂ ಕೇಳಿಸುತ್ತಿಲ್ಲವಲ್ಲ? -ಎಂದು ಚಿಂತಿಸುತ್ತ ನಾಗಮ್ಮ ಅಡುಗೆ ಮನೆಯಲ್ಲಿದ್ದವರು ಪಡಸಾಲೆಗೆ ಬಂದರು. ಕಂದೀಲನ್ನೆತ್ತಿಕೊಂಡು ಅಂಗಳಕ್ಕಿಳಿದರು. ಅದರ ಬೆಳಕಿನ ಝರಿಯಲ್ಲಿ ಸೋದರನನ್ನೂ ಅಳಿಯನನ್ನೂ ಕಂಡರು. {{gap}}ಅವರೆಂದರು : - {{gap}}"ಕರ ಅಂಬಾ ಅಂತು. ನೋಡ್ಕಂಬತ್ತಿನಿ." {{gap}}ರಂಗಣ್ಣ ಕೇಳಿದ: {{gap}}" ನಾನೂ ಬರಲಾ ಅತ್ತೆಮ್ಮ?" {{gap}}" ಬ್ಯಾಡ, ಯಾತಕ್ಕೆ?" - {{gap}}ಶಾಮೇಗೌಡರ ದೃಷ್ಟಿ ತಂಗಿಯ ಮೇಲೆ ನೆಟ್ಟಿತು. ಆಕೆಯನ್ನೂ ಕಂದೀಲನ್ನೂ ಅದು ಹಿಂಬಾಲಿಸಿತ್ತು. {{gap}}ಕೊಟ್ಟಿಗೆಯಲ್ಲಿ ಏನಾಯಿತೆಂಬುದನ್ನು ತಿಳಿಯಲು ತಂಗಿಯ ಪುನರಾಗಮನವನ್ನು ಇದಿರು ನೋಡುವವರಂತೆ ಗೌಡರು ಮೂಕರಾಗಿ ಕುಳಿತರು. {{gap}}ಕೆಲ ನಿಮಿಷಗಳಲ್ಲೆ ನಾಗಮ್ಮ ಹಿಂತಿರುಗಿದಾಗ ರಂಗಣ್ಣ ಕೇಳಿದ: {{gap}}" ಏನಾಯ್ತು ಅತ್ತೆಮ್ಮ?" . {{gap}}" ಯಾನಿಲ್ಲ ಮೊಗ. ಕಾಲಿಗೆ ಅಗ್ಗ ಸುತ್ಕಂಡಿತ್ತು." {{gap}}ಶಾಮಣ್ಣನ ಮನಸ್ಸೆಂದಿತು: ಏನೂ ಆಗಿರಲಿಲ್ಲ, ಕಾಲಿಗೆ ಹಗ್ಗ ಸುತ್ತಿಕೊಂಡಿತ್ತು. ಅಷ್ಟೆ, అಷ್ಟೆ...... ... " {{gap}}ರಂಗ ಕಡ್ಡಿಯನ್ನು ಗುಡ್ಡ ಮಾಡಿ ಹೇಳಿದನೋ ಹೇಗೆ? ಕಾಲಿಗೆ ಸುತ್ತಿಕೊಂಡಿದ್ದ ಹಗ್ಗವನ್ನು ಹಾವು ಎಂದು ಆತ ಭಾವಿಸಿಲ್ಲವಷ್ಟೆ? ಹಾವೊ ಹಗ್ಗವೊ. ಹಗ್ಗವೇ ಆದರೂ ಏನು ಕಡಮೆಯೆ ? ಅದು ಉರುಳಾಗಬಹುದಲ್ಲ ? {{gap}}ಅಂಗಳದ ಮಧ್ಯದಲ್ಲಿ ನಾಗಮ್ಮ ನಿಂತರು. ಇದೇನು ತಂದೆ ಮಗ ಇಲ್ಲಿ? ಮುನಿಯ ಸತ್ತ ಅಂತ ಇಷ್ಟೊಂದು ಮೌನವಾಗಿ [ಗುಸುಗುಸು ಮಾತನಾಡುತ್ತಾ.] ಅಂಗಳದ ಮೂಲೆಯಲ್ಲಿ ಇರಬೇಕೆ ಇವರು ? , ". {{gap}}ಸುಬ್ಬಿ. ಸುಬ್ಬಿಯ ಮೈ ಕಾದಿದೆ. ಈಗ ಹೇಗಿದೆಯೊ ? {{gap}}ನಾಗಮ್ಮ ಕೇಳಿದರು : - {{gap}}" ಇಲ್ಯಾಕೆ ಕುಂತಿದೀ ಅಣ್ಣ?” {{gap}}ತಮ್ಮದಲ್ಲದ ಧ್ವೈಯಲ್ಲಿ ಗೌಡರೆಂದರು: {{gap}}"ನೀನು ಒಳಕ್ಕೋಗು, ನಾಗೂ."<noinclude></noinclude> 0wuib0ma0558cfpjfvh3cqowadck9nl 322958 322956 2026-05-27T09:20:15Z Shreelatha.Halemane 7642 /* Validated */ 322958 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right= ೨೯}} {{gap}}ಅಂಥ ಸಂದರ್ಭಗಳಲ್ಲಿ ಮಗ ಮನೆಯಲ್ಲಿದ್ದರೆ, "ರಂಗಾ, ಅದೇನೂಂತ ನೋಡ್ಕೊಂಡ್ಬಾ,” ಎಂದು ಅವರು ಹೇಳಬೇಕು. {{gap}}ಎಳೆಗರು 'ಅಂಬಾ' ಎಂದಿದೆ, ಹೋಗಿ ನೋಡಬೇಕಾದುದು ಧರ್ಮ-ಎಂದು ಅವರ ಒಳದನಿ ಕ್ಷೀಣವಾಗಿ ನುಡಿಯುತ್ತಿತು. ಆದರೆ ಅವರನ್ನು ತಟ್ಟಿ ಎಚ್ಚರಿಸುವಷ್ಟು ಆ ಧ್ವನಿ ಬಲವಾಗಿರಲಿಲ್ಲ . {{gap}}ಕರು ಯಾಕೆ ಕೂಗಿತು? ಅಣ್ಣನ ಸದ್ದಿಲ್ಲವಲ್ಲ? ಯಾರ ಮಾತೂ ಕೇಳಿಸುತ್ತಿಲ್ಲವಲ್ಲ? -ಎಂದು ಚಿಂತಿಸುತ್ತ ನಾಗಮ್ಮ ಅಡುಗೆ ಮನೆಯಲ್ಲಿದ್ದವರು ಪಡಸಾಲೆಗೆ ಬಂದರು. ಕಂದೀಲನ್ನೆತ್ತಿಕೊಂಡು ಅಂಗಳಕ್ಕಿಳಿದರು. ಅದರ ಬೆಳಕಿನ ಝರಿಯಲ್ಲಿ ಸೋದರನನ್ನೂ ಅಳಿಯನನ್ನೂ ಕಂಡರು. {{gap}}ಅವರೆಂದರು : - {{gap}}"ಕರ ಅಂಬಾ ಅಂತು. ನೋಡ್ಕಂಬತ್ತಿನಿ." {{gap}}ರಂಗಣ್ಣ ಕೇಳಿದ: {{gap}}" ನಾನೂ ಬರಲಾ ಅತ್ತೆಮ್ಮ?" {{gap}}" ಬ್ಯಾಡ, ಯಾತಕ್ಕೆ?" - {{gap}}ಶಾಮೇಗೌಡರ ದೃಷ್ಟಿ ತಂಗಿಯ ಮೇಲೆ ನೆಟ್ಟಿತು. ಆಕೆಯನ್ನೂ ಕಂದೀಲನ್ನೂ ಅದು ಹಿಂಬಾಲಿಸಿತ್ತು. {{gap}}ಕೊಟ್ಟಿಗೆಯಲ್ಲಿ ಏನಾಯಿತೆಂಬುದನ್ನು ತಿಳಿಯಲು ತಂಗಿಯ ಪುನರಾಗಮನವನ್ನು ಇದಿರು ನೋಡುವವರಂತೆ ಗೌಡರು ಮೂಕರಾಗಿ ಕುಳಿತರು. {{gap}}ಕೆಲ ನಿಮಿಷಗಳಲ್ಲೆ ನಾಗಮ್ಮ ಹಿಂತಿರುಗಿದಾಗ ರಂಗಣ್ಣ ಕೇಳಿದ: {{gap}}" ಏನಾಯ್ತು ಅತ್ತೆಮ್ಮ?" . {{gap}}" ಯಾನಿಲ್ಲ ಮೊಗ. ಕಾಲಿಗೆ ಅಗ್ಗ ಸುತ್ಕಂಡಿತ್ತು." {{gap}}ಶಾಮಣ್ಣನ ಮನಸ್ಸೆಂದಿತು: ಏನೂ ಆಗಿರಲಿಲ್ಲ, ಕಾಲಿಗೆ ಹಗ್ಗ ಸುತ್ತಿಕೊಂಡಿತ್ತು. ಅಷ್ಟೆ, అಷ್ಟೆ...... ... " {{gap}}ರಂಗ ಕಡ್ಡಿಯನ್ನು ಗುಡ್ಡ ಮಾಡಿ ಹೇಳಿದನೋ ಹೇಗೆ? ಕಾಲಿಗೆ ಸುತ್ತಿಕೊಂಡಿದ್ದ ಹಗ್ಗವನ್ನು ಹಾವು ಎಂದು ಆತ ಭಾವಿಸಿಲ್ಲವಷ್ಟೆ? ಹಾವೊ ಹಗ್ಗವೊ. ಹಗ್ಗವೇ ಆದರೂ ಏನು ಕಡಮೆಯೆ ? ಅದು ಉರುಳಾಗಬಹುದಲ್ಲ ? {{gap}}ಅಂಗಳದ ಮಧ್ಯದಲ್ಲಿ ನಾಗಮ್ಮ ನಿಂತರು. ಇದೇನು ತಂದೆ ಮಗ ಇಲ್ಲಿ? ಮುನಿಯ ಸತ್ತ ಅಂತ ಇಷ್ಟೊಂದು ಮೌನವಾಗಿ [ಗುಸುಗುಸು ಮಾತನಾಡುತ್ತಾ.] ಅಂಗಳದ ಮೂಲೆಯಲ್ಲಿ ಇರಬೇಕೆ ಇವರು ? , ". {{gap}}ಸುಬ್ಬಿ. ಸುಬ್ಬಿಯ ಮೈ ಕಾದಿದೆ. ಈಗ ಹೇಗಿದೆಯೊ ? {{gap}}ನಾಗಮ್ಮ ಕೇಳಿದರು : - {{gap}}" ಇಲ್ಯಾಕೆ ಕುಂತಿದೀ ಅಣ್ಣ?” {{gap}}ತಮ್ಮದಲ್ಲದ ಧ್ವೈಯಲ್ಲಿ ಗೌಡರೆಂದರು: {{gap}}"ನೀನು ಒಳಕ್ಕೋಗು, ನಾಗೂ."<noinclude></noinclude> g7g6q0k1yu4qtdvwwbxa3xabuxwfndu ಪುಟ:ನೋವು.pdf/೪೦ 104 20772 322962 210744 2026-05-27T09:25:55Z Shreesha Sharma 7840 /* Proofread */ 322962 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ನೋವು|left=೩೦|right=}} {{gap}}ಮುನಿಯ ಸತ್ತ ಎಂದು ನಾಗಮ್ಮನವರಿಗೆ ವ್ಯಥೆ ಇಲ್ಲವೆಂದಲ್ಲ. ಆದರೆ, ಆಕಾಶವೇ ಕಳಚಿಬಿದ್ದಂತೆ ಧೈರ್ಯಗೆಡಬೇಕೆ ಗಂಡಸರು? ಅವರಿಗೆ ಆಶ್ಚ ರ್ಯ, ಅಣ್ಣ ಎಂದೂ ಹೀಗೆ ವರ್ತಿಸಿದವನಲ್ಲ. ಇವತ್ತು ಯಾಕೆ? {{gap}}ಗಂಡನ ಮನೆಯಲ್ಲಿರಲಿ, ತವರು ಮನೆಯಲ್ಲಿರಲಿ, ಎಂದೂ ಇದಿರು ಮಾತು ಆಡಿದವರಲ್ಲ ನಾಗಮ್ಮ. ಅವರು ಮನೆಯ ಒಳಹೊಕ್ಕು ಕಂದೀಲನ್ನು ಅದರ ಸ್ಥಾನದಲ್ಲಿರಿಸಿದರು. ಅಣ್ಣನ ಹಾಸಿಗೆ ಬಿಡಿಸಿದರು. ಸುಭದ್ರೆ ಮಲಗಿದ್ದ ಕೊಠಡಿಗೆ ಹೋದರು. ಅಲ್ಲಿ ಸೀಮೆ ಎಣ್ಣೆಯ ಬುಡ್ಡಿ ಉರಿಯುತ್ತಿತು, ಸುಭದ್ರೆಯ ಮಗುಲಲ್ಲಿ ಕುಳಿತು, ತಮ್ಮ ಅಂಗೈಯಿಂದ ಆಕೆಯ ಹಣೆ ಮುಟ್ಟಿ ನೋಡಿದರು. ಕಾದ ಕೆಂಡ, ಹಸ್ತ ಸ್ಪರ್ಶಕ್ಕೆ ಹುಡುಗಿಗೆ ಎಚ್ಚರವಾಗಲಿಲ್ಲ. ಅವಳು ನಿದ್ರಿಸುತ್ತಿದ್ದಳು. ಆದರೆ ತುಟಿಗಳು ಸದ್ದಿಲ್ಲದೆ ಚಲಿಸುತ್ತಿದ್ದುವು. ಕನವರಿಸುತ್ತಿರಬೇಕು. {{gap}}ಅಲ್ಲಾ–ಬೆಳಗ್ಗೆ ಎಲ್ಲಾ ಓಡಾಡಿಕೊಂಡಿದ್ದವಳು ಇದ್ದಕ್ಕಿದ್ದ ಹಾಗೆ ಮಲಗಿಬಿಟ್ಟಳಲ್ಲ! – {{gap}}ಅದು ವಿಚಿತ್ರವಾಗಿ ಕಂಡಿತು ನಾಗಮ್ಮನಿಗೆ. {{gap}}ಒಳಗಿನ ಒಂದು ಸಂಕಟ ಅವರ ಯೋಚನೆಯನ್ನು ಕೆದಕಿತು; ದೃಷ್ಟಿ ತಾಕಿರಬಹುದು. ದೊಡ್ಡವಳಾದ ಮೇಲೂ ಮಗಳನ್ನು ಶಾಮಣ್ಣ ಮನೆಯಲ್ಲಿ ಇರಿಸಿಕೊಳ್ಳಬಾರದಾಗಿತ್ತು. {{gap}}ಆ ಪ್ರಸ್ತಾಪ ತಾನು ಮಾಡಿದಾಗಲೆಲ್ಲ ಅಣ್ಣ ಎನ್ನುತ್ತಿದ್ದನಲ್ಲ? {{gap}}"ಈಗಿನ ಕಾಲದಲ್ಲಿ ಪರವಾಗಿಲ್ಲ ನಾಗೂ.ಮಕ್ಕಳಿಗೆ ತಡವಾಗಿ ಮದುವೆ ಮಾಡ್ಬೊದು.” - {{gap}}ಎಷ್ಟು ತಪ್ಪು! ನಾಗಮ್ಮನಿಗೆ ತಿಳಿಯದು ಎಂದಲ್ಲ, ಹೊಸಳ್ಳಿಯ ಗೌಡರ ಎರಡನೆಯ ಮಗ ವಕೀಲಿ ಓದುತ್ತಿದ್ದಾನೆ. ಆ ಪರೀಕ್ಷೆ ಮುಗಿದು ನಾಲ್ಕು ಕೈ ಕೋಟು ಹಾಕಿಕೊಳ್ಳುವ ವರೆಗೂ ಮದುವೆ ಬೇಡವಂತೆ ಅವನಿಗೆ. ಆತನೇ ಅಳಿಯನಾಗಬೇಕೆಂದು ಅಣ್ಣನ ಹಂಬಲ. {{gap}}ಈಗಿನ ಕಾಲದ ವಿಚಾರವೊಂದೂ ಅರ್ಥವಾಗದು ನಾಗಮ್ಮನಿಗೆ. ಹನ್ನೆರಡನೆಯ ವಯಸ್ಸಿನಲ್ಲಿ ಅಲ್ಲವೆ ತನಗೆ ಮದುವೆಯಾದದ್ದು? ಹನ್ನೆರಡೊ ಅಥವಾ ಹನ್ನೊಂದೊ? ಸುಬ್ಬಿಗೋ ಹದಿನೇಳು ದಾಟಿದೆ. ಮೈ ಕೈ ತುಂಬಿವೆ. ದೃಷ್ಟಿ ತಾಕದೆ ಇನ್ನೇನಾದೀತು?... {{gap}}'ಆ ಜಾಡು ಹಿಡಿದು ನಾಗಮ್ಮನವರ ಯೋಚನೆ ಸಾಗಿತು. ಕಣ್ಣುಗಳು ತೇವಗೊಂಡು ಎರಡು ಅಶ್ರುಬಿಂದು ಒಸರಿದವು. {{gap}}ಹೊರಗೆ ರಂಗಣ್ಣ ತಂದೆಗೆ ಹೇಳಿದ: {{gap}}" ಅಪ್ಪ, ಒಳಕ್ಕೋಗೋಣ." {{gap}}"ಹು..?” ಎಂದರು, ಅಂತರ್ಮುಖಿಯಾಗಿದ್ದ ಗೌಡರು, ಪ್ರಶ್ನೆ ಸರಿಯಾಗಿ ಕೇಳಿಸದೆ. {{gap}}"ಒಳಕ್ಕೋಗೋಣ, ಅಪ್ಪ." {{gap}}" ನೀನು ಓಗು, ಮನಿಕ್ಕೋ. {{gap}}"ರಂಗಣ್ಣ ಒಬ್ಬನೇ ಮನೆಯೊಳಕ್ಕೆ ನಡೆದ. {{gap}}ಪಡಸಾಲೆಯಲ್ಲಿದ್ದ ಪಲ್ಲಂಗದ ಮೇಲೆ ಗೌಡರ ಶಯನ. ರಂಗಣ್ಣನ ಕೊಠಡಿ ಅಂಗಳಕ್ಕೆ ತಾಗಿಕೊಂಡು ಇತ್ತು, ಸುಬ್ಬಿ-ನಾಗಮ್ಮರಿದ್ದ ಕೋಣೆಯ ಮಗ್ಗುಲಲ್ಲಿ, ಅವನ ಕೊಠಡಿಯಲ್ಲಿ, ಅದೇ ವರ್ಷ ಗೌಡರು ಮಗನಿಗಾಗಿ ಮಾಡಿಸಿದ್ದ ಮೇಜಿನ ಮೇಲೆ, ಭಾಗ್ಯನಗರದಿಂದ ರಂಗಣ್ಣ ಕೊಂಡು ತಂದಿದ್ದ ಲಾಂಪ್ ಉರಿಯುತ್ತಿತು, ಅದರ ಬತ್ತಿಯನ್ನು ರಂಗಣ್ಣ ಕಿರಿದುಗೊಳಿಸಿದ.<noinclude></noinclude> jntl7vj9knyv77wy68xu577et0nfv8v 322963 322962 2026-05-27T09:26:11Z Shreelatha.Halemane 7642 /* Validated */ 322963 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=೩೦|right=}} {{gap}}ಮುನಿಯ ಸತ್ತ ಎಂದು ನಾಗಮ್ಮನವರಿಗೆ ವ್ಯಥೆ ಇಲ್ಲವೆಂದಲ್ಲ. ಆದರೆ, ಆಕಾಶವೇ ಕಳಚಿಬಿದ್ದಂತೆ ಧೈರ್ಯಗೆಡಬೇಕೆ ಗಂಡಸರು? ಅವರಿಗೆ ಆಶ್ಚ ರ್ಯ, ಅಣ್ಣ ಎಂದೂ ಹೀಗೆ ವರ್ತಿಸಿದವನಲ್ಲ. ಇವತ್ತು ಯಾಕೆ? {{gap}}ಗಂಡನ ಮನೆಯಲ್ಲಿರಲಿ, ತವರು ಮನೆಯಲ್ಲಿರಲಿ, ಎಂದೂ ಇದಿರು ಮಾತು ಆಡಿದವರಲ್ಲ ನಾಗಮ್ಮ. ಅವರು ಮನೆಯ ಒಳಹೊಕ್ಕು ಕಂದೀಲನ್ನು ಅದರ ಸ್ಥಾನದಲ್ಲಿರಿಸಿದರು. ಅಣ್ಣನ ಹಾಸಿಗೆ ಬಿಡಿಸಿದರು. ಸುಭದ್ರೆ ಮಲಗಿದ್ದ ಕೊಠಡಿಗೆ ಹೋದರು. ಅಲ್ಲಿ ಸೀಮೆ ಎಣ್ಣೆಯ ಬುಡ್ಡಿ ಉರಿಯುತ್ತಿತು, ಸುಭದ್ರೆಯ ಮಗುಲಲ್ಲಿ ಕುಳಿತು, ತಮ್ಮ ಅಂಗೈಯಿಂದ ಆಕೆಯ ಹಣೆ ಮುಟ್ಟಿ ನೋಡಿದರು. ಕಾದ ಕೆಂಡ, ಹಸ್ತ ಸ್ಪರ್ಶಕ್ಕೆ ಹುಡುಗಿಗೆ ಎಚ್ಚರವಾಗಲಿಲ್ಲ. ಅವಳು ನಿದ್ರಿಸುತ್ತಿದ್ದಳು. ಆದರೆ ತುಟಿಗಳು ಸದ್ದಿಲ್ಲದೆ ಚಲಿಸುತ್ತಿದ್ದುವು. ಕನವರಿಸುತ್ತಿರಬೇಕು. {{gap}}ಅಲ್ಲಾ–ಬೆಳಗ್ಗೆ ಎಲ್ಲಾ ಓಡಾಡಿಕೊಂಡಿದ್ದವಳು ಇದ್ದಕ್ಕಿದ್ದ ಹಾಗೆ ಮಲಗಿಬಿಟ್ಟಳಲ್ಲ! – {{gap}}ಅದು ವಿಚಿತ್ರವಾಗಿ ಕಂಡಿತು ನಾಗಮ್ಮನಿಗೆ. {{gap}}ಒಳಗಿನ ಒಂದು ಸಂಕಟ ಅವರ ಯೋಚನೆಯನ್ನು ಕೆದಕಿತು; ದೃಷ್ಟಿ ತಾಕಿರಬಹುದು. ದೊಡ್ಡವಳಾದ ಮೇಲೂ ಮಗಳನ್ನು ಶಾಮಣ್ಣ ಮನೆಯಲ್ಲಿ ಇರಿಸಿಕೊಳ್ಳಬಾರದಾಗಿತ್ತು. {{gap}}ಆ ಪ್ರಸ್ತಾಪ ತಾನು ಮಾಡಿದಾಗಲೆಲ್ಲ ಅಣ್ಣ ಎನ್ನುತ್ತಿದ್ದನಲ್ಲ? {{gap}}"ಈಗಿನ ಕಾಲದಲ್ಲಿ ಪರವಾಗಿಲ್ಲ ನಾಗೂ.ಮಕ್ಕಳಿಗೆ ತಡವಾಗಿ ಮದುವೆ ಮಾಡ್ಬೊದು.” - {{gap}}ಎಷ್ಟು ತಪ್ಪು! ನಾಗಮ್ಮನಿಗೆ ತಿಳಿಯದು ಎಂದಲ್ಲ, ಹೊಸಳ್ಳಿಯ ಗೌಡರ ಎರಡನೆಯ ಮಗ ವಕೀಲಿ ಓದುತ್ತಿದ್ದಾನೆ. ಆ ಪರೀಕ್ಷೆ ಮುಗಿದು ನಾಲ್ಕು ಕೈ ಕೋಟು ಹಾಕಿಕೊಳ್ಳುವ ವರೆಗೂ ಮದುವೆ ಬೇಡವಂತೆ ಅವನಿಗೆ. ಆತನೇ ಅಳಿಯನಾಗಬೇಕೆಂದು ಅಣ್ಣನ ಹಂಬಲ. {{gap}}ಈಗಿನ ಕಾಲದ ವಿಚಾರವೊಂದೂ ಅರ್ಥವಾಗದು ನಾಗಮ್ಮನಿಗೆ. ಹನ್ನೆರಡನೆಯ ವಯಸ್ಸಿನಲ್ಲಿ ಅಲ್ಲವೆ ತನಗೆ ಮದುವೆಯಾದದ್ದು? ಹನ್ನೆರಡೊ ಅಥವಾ ಹನ್ನೊಂದೊ? ಸುಬ್ಬಿಗೋ ಹದಿನೇಳು ದಾಟಿದೆ. ಮೈ ಕೈ ತುಂಬಿವೆ. ದೃಷ್ಟಿ ತಾಕದೆ ಇನ್ನೇನಾದೀತು?... {{gap}}'ಆ ಜಾಡು ಹಿಡಿದು ನಾಗಮ್ಮನವರ ಯೋಚನೆ ಸಾಗಿತು. ಕಣ್ಣುಗಳು ತೇವಗೊಂಡು ಎರಡು ಅಶ್ರುಬಿಂದು ಒಸರಿದವು. {{gap}}ಹೊರಗೆ ರಂಗಣ್ಣ ತಂದೆಗೆ ಹೇಳಿದ: {{gap}}" ಅಪ್ಪ, ಒಳಕ್ಕೋಗೋಣ." {{gap}}"ಹು..?” ಎಂದರು, ಅಂತರ್ಮುಖಿಯಾಗಿದ್ದ ಗೌಡರು, ಪ್ರಶ್ನೆ ಸರಿಯಾಗಿ ಕೇಳಿಸದೆ. {{gap}}"ಒಳಕ್ಕೋಗೋಣ, ಅಪ್ಪ." {{gap}}" ನೀನು ಓಗು, ಮನಿಕ್ಕೋ. {{gap}}"ರಂಗಣ್ಣ ಒಬ್ಬನೇ ಮನೆಯೊಳಕ್ಕೆ ನಡೆದ. {{gap}}ಪಡಸಾಲೆಯಲ್ಲಿದ್ದ ಪಲ್ಲಂಗದ ಮೇಲೆ ಗೌಡರ ಶಯನ. ರಂಗಣ್ಣನ ಕೊಠಡಿ ಅಂಗಳಕ್ಕೆ ತಾಗಿಕೊಂಡು ಇತ್ತು, ಸುಬ್ಬಿ-ನಾಗಮ್ಮರಿದ್ದ ಕೋಣೆಯ ಮಗ್ಗುಲಲ್ಲಿ, ಅವನ ಕೊಠಡಿಯಲ್ಲಿ, ಅದೇ ವರ್ಷ ಗೌಡರು ಮಗನಿಗಾಗಿ ಮಾಡಿಸಿದ್ದ ಮೇಜಿನ ಮೇಲೆ, ಭಾಗ್ಯನಗರದಿಂದ ರಂಗಣ್ಣ ಕೊಂಡು ತಂದಿದ್ದ ಲಾಂಪ್ ಉರಿಯುತ್ತಿತು, ಅದರ ಬತ್ತಿಯನ್ನು ರಂಗಣ್ಣ ಕಿರಿದುಗೊಳಿಸಿದ.<noinclude></noinclude> 9lutfhpxxi8va3wgc18hvi9wel92e0b ಪುಟ:ನೋವು.pdf/೪೧ 104 20773 322967 205424 2026-05-27T09:34:06Z Shreesha Sharma 7840 /* Proofread */ 322967 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ನೋವು |left=|right=೩೧}} {{gap}}ಅವನ ಕೋಣೆಯಿಂದ ಮಗ್ಗುಲ ಕೊಠಡಿಗೆ ಹೋಗುವ ಬಾಗಿಲು ತೆರೆದಿತ್ತು, ರಂಗಣ್ಣ ಅತ್ತ ಸರಿದು ಬಾಗಿಲಲ್ಲಿ ನಿಂತ. {{gap}}ಸೋದರಳಿಯನನ್ನು ನೋಡಿ ನಾಗಮ್ಮ ಅಂದರು: {{gap}}"ಒತ್ತಾರೆ ಅಯ್ನೋರಲ್ಲಿಗೆ ಓಗಿ, ದೊಡ್ಡಮ್ಮಾವರನ್ನ ಕೇಳಿ, ಅವುಸದಿ ಇಸಕೊಂಡು ಬರಬೇಕಲ್ಲ ಮೊಗ." {{gap}}ಅಯ್ಯನವರು–ದೊಡ್ಡಮ್ಮನವರು. ವಸ್ತುಸ್ಥಿತಿಯ ಅರಿವಿಲ್ಲದ ಅತ್ತೆ... {{gap}}“ ಬೆಳಗ್ಗೆ ನೋಡಾನ, ಅತ್ತೆಮ್ಮ. ಜ್ವರ ಬಿಟ್ಟಾತು. ಈಗ ನೀವು ಮನಿಕೊಳ್ಳಿ." {{gap}}" ಅಣ್ಣ ಒಳಕ್ಬಂದ್ನಾ?" {{gap}}" ಇಲ್ಲ, ಬರ್ತೀನಿ, ನೀನು ಹೋಗು ಅಂದ್ರು." {{gap}}ಆ ವಾರವಷ್ಟೇ ರಂಗಣ್ಣ ಅಂದುಕೊಂಡಿದ್ದನಲ್ಲ? ಒಂದು ಬ್ಯಾಗ್ ಕೊಳ್ಳಬೇಕು. ಭಾಗ್ಯನಗರದಲ್ಲಾದರೆ ಮೆಡಿಕಲ್ ವಿದ್ಯಾರ್ಥಿಯ ವಶ ಡಾಕ್ಟರರ ಬ್ಯಾಗ್ ಕಂಡರೆ ಜನ ನಗಬಹುದು. ಹಳ್ಳಿಯಲ್ಲಿ ಹಾಗಲ್ಲವಲ್ಲ. ಅದು ಭೂಷಣ. ಸಣ್ಣಪುಟ್ಟ ಸಾಮಾನ್ಯ ರೋಗಗಳಿಗಾಗುವ ಔಷಧಿಗಳನ್ನು ಕೊಂಡು ಆ ಬಾಗಿನಲ್ಲಿಡಬೇಕು. ಪದ್ಮನಾಭನ ಅಜ್ಜಿಯ ಬೇರು ನಾರುಗಳನ್ನು ಬಿಟ್ಟರೆ ಬೇರೆ ಗತಿಯೇ ಇಲ್ಲದಂತಾಯಿತಲ್ಲ ಕಣಿವೇಹಳ್ಳಿಯಲ್ಲಿ? ರಜಾ ದಿನಗಳಲ್ಲಿ ಊರಿಗೆ ಬಂದಾಗ ನಾಲ್ಕು ಜನರಿಗೆ ಒಳ್ಳೆಯ ಔಷಧಿ ಸಿಗುವಂತಾಗಬೇಕು..., {{gap}}ಆ ಯೋಚನೆ ಇನ್ನೂ ಸ್ವಲ್ಪ ಮುಂಚಿತವಾಗಿ ಹೊಳೆದಿದ್ದರೆ, ಸುಬ್ಬಿಗೆ ಜ್ವರ ಬಂತೆಂದು ಚಿಂತಿಸಬೇಕಾದುದಿರಲಿಲ್ಲ. {{gap}}ಜ್ವರ ಎಷ್ಟಿದೆ ಎಂದು ನೋಡಲು ಒಂದು ಥರ್ಮಾಮಿಾಟರ್ ಕೂಡಾ ಇರಲಿಲ್ಲ ಮನೆಯಲ್ಲಿ. {{gap}}ತಾನು ಕಂಡಿದ್ದ ಶುಶ್ರೊಷೆಗಳನ್ನು ನೆನಪಿಗೆ ತಂದುಕೊಳ್ಳಲು ರಂಗಣ್ಣ ಯತ್ನಿಸಿದ. ಜ್ವರದ ತಾಪ ಹೆಚ್ಚಿದ್ದ ರೋಗಿಗೆ ಏನು ಮಾಡಬೇಕು? ಹಣೆಗೆ ತಣ್ಣೀರಿನ ಪಟ್ಟಿ–ಕೋಲ್ಡ್ ಪಾಕ್. {{gap}}ಹಾಗೆ ಪಟ್ಟಿ ಇಡುವಂತೆ ಅತ್ತೆಗೆ ಸೂಚಿಸಲು ರಂಗಣ್ಣ ಬಾಯಿ ತೆರೆದ. ಆದರೆ ಆಕೆ ಏನೆನ್ನುವರೋ ಎಂದು ಅಳುಕಿದ. ಬಯ್ದರೋ? ಅವರ ದೃಷ್ಟಿಯಲ್ಲಿ, ಅಯ್ಯನವರ ಮನೆಯ ದೊಡ್ಡಮ್ಮನನ್ನು ಬಿಟ್ಟು ಬೇರೆ ಯಾರಿಗೂ ಔಷಧೋಪಚಾರ ತಿಳಿಯದಲ್ಲ? {{gap}}ನಾಗಮ್ಮ ಮತ್ತೊಮ್ಮೆ ಸುಭದ್ರೆಯ ಹಣೆ ಮುಟ್ಟಿ ನೋಡಿದರು. ಶಾಮೇಗೌಡರನ್ನು ನೆನಪಿಗೆ ತರುವ ಮುಖ, ಗೌಡರ ಮಿಾಸೆ ಅವರ ವ್ಯಕ್ತಿತ್ವಕ್ಕೆ ಅಲಂಕಾರಪ್ರಾಯವಾಗಿತು. ನಾಗಮ್ಮನಿಗಾದರೋ, ಬದುಕಿನುದ್ದಕ್ಕೂ ಅವರು ಕಹಿಯುಂಡುದಕ್ಕೆ ಸಾಕ್ಷಿಯಾಗಿದ್ದುವು ಮುಖದ ಮೇಲಿನ ನೇಗಿಲ ಗೆರೆಗಳು ಎರಡು : {{gap}}ರಂಗಣ್ಣನಿಗೆನಿಸಿತು: ಈ ಮನೆಯಲ್ಲಿ ಎರಡು ಜೋಡಿ. ವಯಸ್ಸಾದ ಅಣ್ಣ ತಂಗಿಯದು ಒಂದು; ಎಳೆಯ ಸೋದರ ಸೋದರಿಯರದು ಒಂದು. {{gap}}ಹಣೆಯಿಂದ ಅಂಗೈಯನ್ನು ನಿಧಾನವಾಗಿ ಹಿಂದಕ್ಕೆ ತೆಗೆದು, ರಂಗಣ್ಣನತ್ತ ನೋಡಿ, ನಾಗಮ್ಮ ಅಂದರು: - {{gap}}''ಭಾರಿ ಜೊರ, ಮೊಗ."<noinclude></noinclude> toe6jyk9vawggj9m9z9z8bm0zhbcsgm 322968 322967 2026-05-27T09:34:26Z Shreelatha.Halemane 7642 /* Validated */ 322968 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು |left=|right=೩೧}} {{gap}}ಅವನ ಕೋಣೆಯಿಂದ ಮಗ್ಗುಲ ಕೊಠಡಿಗೆ ಹೋಗುವ ಬಾಗಿಲು ತೆರೆದಿತ್ತು, ರಂಗಣ್ಣ ಅತ್ತ ಸರಿದು ಬಾಗಿಲಲ್ಲಿ ನಿಂತ. {{gap}}ಸೋದರಳಿಯನನ್ನು ನೋಡಿ ನಾಗಮ್ಮ ಅಂದರು: {{gap}}"ಒತ್ತಾರೆ ಅಯ್ನೋರಲ್ಲಿಗೆ ಓಗಿ, ದೊಡ್ಡಮ್ಮಾವರನ್ನ ಕೇಳಿ, ಅವುಸದಿ ಇಸಕೊಂಡು ಬರಬೇಕಲ್ಲ ಮೊಗ." {{gap}}ಅಯ್ಯನವರು–ದೊಡ್ಡಮ್ಮನವರು. ವಸ್ತುಸ್ಥಿತಿಯ ಅರಿವಿಲ್ಲದ ಅತ್ತೆ... {{gap}}“ ಬೆಳಗ್ಗೆ ನೋಡಾನ, ಅತ್ತೆಮ್ಮ. ಜ್ವರ ಬಿಟ್ಟಾತು. ಈಗ ನೀವು ಮನಿಕೊಳ್ಳಿ." {{gap}}" ಅಣ್ಣ ಒಳಕ್ಬಂದ್ನಾ?" {{gap}}" ಇಲ್ಲ, ಬರ್ತೀನಿ, ನೀನು ಹೋಗು ಅಂದ್ರು." {{gap}}ಆ ವಾರವಷ್ಟೇ ರಂಗಣ್ಣ ಅಂದುಕೊಂಡಿದ್ದನಲ್ಲ? ಒಂದು ಬ್ಯಾಗ್ ಕೊಳ್ಳಬೇಕು. ಭಾಗ್ಯನಗರದಲ್ಲಾದರೆ ಮೆಡಿಕಲ್ ವಿದ್ಯಾರ್ಥಿಯ ವಶ ಡಾಕ್ಟರರ ಬ್ಯಾಗ್ ಕಂಡರೆ ಜನ ನಗಬಹುದು. ಹಳ್ಳಿಯಲ್ಲಿ ಹಾಗಲ್ಲವಲ್ಲ. ಅದು ಭೂಷಣ. ಸಣ್ಣಪುಟ್ಟ ಸಾಮಾನ್ಯ ರೋಗಗಳಿಗಾಗುವ ಔಷಧಿಗಳನ್ನು ಕೊಂಡು ಆ ಬಾಗಿನಲ್ಲಿಡಬೇಕು. ಪದ್ಮನಾಭನ ಅಜ್ಜಿಯ ಬೇರು ನಾರುಗಳನ್ನು ಬಿಟ್ಟರೆ ಬೇರೆ ಗತಿಯೇ ಇಲ್ಲದಂತಾಯಿತಲ್ಲ ಕಣಿವೇಹಳ್ಳಿಯಲ್ಲಿ? ರಜಾ ದಿನಗಳಲ್ಲಿ ಊರಿಗೆ ಬಂದಾಗ ನಾಲ್ಕು ಜನರಿಗೆ ಒಳ್ಳೆಯ ಔಷಧಿ ಸಿಗುವಂತಾಗಬೇಕು..., {{gap}}ಆ ಯೋಚನೆ ಇನ್ನೂ ಸ್ವಲ್ಪ ಮುಂಚಿತವಾಗಿ ಹೊಳೆದಿದ್ದರೆ, ಸುಬ್ಬಿಗೆ ಜ್ವರ ಬಂತೆಂದು ಚಿಂತಿಸಬೇಕಾದುದಿರಲಿಲ್ಲ. {{gap}}ಜ್ವರ ಎಷ್ಟಿದೆ ಎಂದು ನೋಡಲು ಒಂದು ಥರ್ಮಾಮಿಾಟರ್ ಕೂಡಾ ಇರಲಿಲ್ಲ ಮನೆಯಲ್ಲಿ. {{gap}}ತಾನು ಕಂಡಿದ್ದ ಶುಶ್ರೊಷೆಗಳನ್ನು ನೆನಪಿಗೆ ತಂದುಕೊಳ್ಳಲು ರಂಗಣ್ಣ ಯತ್ನಿಸಿದ. ಜ್ವರದ ತಾಪ ಹೆಚ್ಚಿದ್ದ ರೋಗಿಗೆ ಏನು ಮಾಡಬೇಕು? ಹಣೆಗೆ ತಣ್ಣೀರಿನ ಪಟ್ಟಿ–ಕೋಲ್ಡ್ ಪಾಕ್. {{gap}}ಹಾಗೆ ಪಟ್ಟಿ ಇಡುವಂತೆ ಅತ್ತೆಗೆ ಸೂಚಿಸಲು ರಂಗಣ್ಣ ಬಾಯಿ ತೆರೆದ. ಆದರೆ ಆಕೆ ಏನೆನ್ನುವರೋ ಎಂದು ಅಳುಕಿದ. ಬಯ್ದರೋ? ಅವರ ದೃಷ್ಟಿಯಲ್ಲಿ, ಅಯ್ಯನವರ ಮನೆಯ ದೊಡ್ಡಮ್ಮನನ್ನು ಬಿಟ್ಟು ಬೇರೆ ಯಾರಿಗೂ ಔಷಧೋಪಚಾರ ತಿಳಿಯದಲ್ಲ? {{gap}}ನಾಗಮ್ಮ ಮತ್ತೊಮ್ಮೆ ಸುಭದ್ರೆಯ ಹಣೆ ಮುಟ್ಟಿ ನೋಡಿದರು. ಶಾಮೇಗೌಡರನ್ನು ನೆನಪಿಗೆ ತರುವ ಮುಖ, ಗೌಡರ ಮಿಾಸೆ ಅವರ ವ್ಯಕ್ತಿತ್ವಕ್ಕೆ ಅಲಂಕಾರಪ್ರಾಯವಾಗಿತು. ನಾಗಮ್ಮನಿಗಾದರೋ, ಬದುಕಿನುದ್ದಕ್ಕೂ ಅವರು ಕಹಿಯುಂಡುದಕ್ಕೆ ಸಾಕ್ಷಿಯಾಗಿದ್ದುವು ಮುಖದ ಮೇಲಿನ ನೇಗಿಲ ಗೆರೆಗಳು ಎರಡು : {{gap}}ರಂಗಣ್ಣನಿಗೆನಿಸಿತು: ಈ ಮನೆಯಲ್ಲಿ ಎರಡು ಜೋಡಿ. ವಯಸ್ಸಾದ ಅಣ್ಣ ತಂಗಿಯದು ಒಂದು; ಎಳೆಯ ಸೋದರ ಸೋದರಿಯರದು ಒಂದು. {{gap}}ಹಣೆಯಿಂದ ಅಂಗೈಯನ್ನು ನಿಧಾನವಾಗಿ ಹಿಂದಕ್ಕೆ ತೆಗೆದು, ರಂಗಣ್ಣನತ್ತ ನೋಡಿ, ನಾಗಮ್ಮ ಅಂದರು: - {{gap}}''ಭಾರಿ ಜೊರ, ಮೊಗ."<noinclude></noinclude> c9y3ei47laygvaqs7hpq240leiq6d2v ಪುಟ:ನೋವು.pdf/೪೨ 104 20774 322912 205425 2026-05-27T04:48:59Z Shreelatha.Halemane 7642 /* Validated */ 322912 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center= ನೋವು|left=೩೨ |right=}} {{gap}}"ಎದರ್ಬೇಡಿ, ಅತ್ತೆಮ್ಮ. ನಾಳೆಗೆ ವಾಸಿಯಾಯ್ತದೆ." {{gap}}ಧೈರ್ಯ ನೀಡುವ ಮಾತುಗಳನ್ನಾಡುವುದು ಡಾಕ್ಟರಾದವನ ವೃತ್ತಿಗುಣ. ನಾಗಮ್ಮನೆಂದರು : {{gap}}" ಆಗಲಿ ಮೊಗ, ನಿನ್ನ ನಾಲಿಗೆ ಗುಣದಿಂದ ಅಂಗೇ ಆಗಲಿ, ನಿದ್ದೆ ಬಂದ್ಬಿಟ್ಟೈತೆ, ಎಚ್ಚರಾದ್ರೆ ಒಂದಿಷ್ಟು ಹಾಲಾದರೂ ಕುಡಿಸ ಬಹುದಾಗಿತ್ತು." - {{gap}}" ಏನೂ ಬೇಡಿ, ಅತ್ತೆಮ್ಮ. ಒಂದು ರಾತ್ರೆ ಉಪವಾಸ ಇದ್ರೇನೇ ಒಳ್ಳೆದು." {{gap}}"ಊಂ.. ನೀನು ಮನಿಕ್ಕೋ ರಂಗ." {{gap}}ರಂಗಣ್ಣ ಸುರುಳಿ ಸುತ್ತಿದ್ದ ತನ್ನ ಹಾಸಿಗೆಯನ್ನು ಬಿಡಿಸಿದ. ಮಲಗಲು ಮನಸ್ಸಾಗಲಿಲ್ಲ. ಮೇಜಿನ ಕೆಳಗಿದ್ದ ಸ್ಟೂಲನ್ನು ಹೊರಕ್ಕೆಳೆದ. ಲ್ಯಾoಪಿನ ಬತ್ತಿಯನ್ನು ಹಿರಿದುಗೊಳಿಸಿದ. ಗೋಡೆಯ ಗೂಡಿನಲ್ಲಿ ಅವನ ಅಧ್ಯಯನದ ಮೂರು ಪುಸ್ತಕಗಳಿದ್ದವು. ಅವುಗಳ ಮಗ್ಗುಲಲ್ಲಿ ಕೈಗಡಿಯಾರವಿತ್ತು. ವೇಳೆ ನೋಡಿದ. ಹತ್ತೂವರೆ ಘಂಟೆ, ವಾಚನ್ನೂ 'ಸಾವಿಲ್ಸ್ ಮೆಡಿಸಿನ್' ಗ್ರಂಥವನ್ನೂ ಎತ್ತಿಕೊಂಡು, ಮೇಜಿನ ಮೇಲಿರಿಸಿ, ಸ್ಟೂಲಿನ ಮೇಲೆ ಕುಳಿತು, ಪುಸ್ತಕವನ್ನು ಬಿಡಿಸಿ, ಪರಿವಿಡಿಯನ್ನು ನೋಡಿ, ಪುಟಗಳನ್ನು ಕಂಡುಹಿಡಿದು ಓದತೊಡಗಿದ. {{gap}}ಸ್ವಲ್ಪ ಹೊತ್ತಾದ ಮೇಲೆ ಪಡಸಾಲೆಯ ಗೋಡೆ ಗಡಿಯಾರದಲ್ಲಿ ಒಂದು ಬಾರಿಸಿತು. ರಂಗಣ್ಣನ ದೃಷ್ಟಿ ಎದುರಿಗಿಟ್ಟುಕೊಂಡಿದ್ದ ವಾಚಿನತ್ತ ಹರಿಯಿತು. ಅದರಲ್ಲಿ ಹತ್ತೂ ಐವತ್ತು. {{gap}}ಮನೆ ಗಡಿಯಾರ ಇಪ್ಪತು ನಿಮಿಷ ಹಿಂದೆ–ಎಂದುಕೊಂಡ. ಕತ್ತು ತಿರುಗಿಸಿ ಮಗ್ಗುಲ ಕೊಠಡಿಯತ್ತ ನೋಡಿದ. ಸುಭದ್ರೆಯ ಪಕ್ಕದಲ್ಲಿ ತಮ್ಮ ಚಾಪೆಯನ್ನೂ ಕಂಬಳಿಯನ್ನೂ ಹಾಸಿಕೊಂಡು, ಅದರ ಮೇಲೆ ಬೆನ್ನ ಬಾಗಿಸಿ ಕುಳಿತೇ ಇದ್ದರು ನಾಗಮ್ಮ. {{gap}}ರಂಗಣ್ಣ ಎದ್ದು ಹಿತ್ತಲ ಬಾಗಿಲಿಗೆ ಹೋಗಿ ಬಂದ. ಜಗಲಿಯಲ್ಲಿ ನಿಂತು ಅಂಗಳದತ್ತ ದಿಟ್ಟಿಸಿದ. ಘನೀಭವಿಸಿದ್ದ ಇರುಳಲ್ಲಿ ಅವನ ತಂದೆಯೊಂದು ಪ್ರತಿಮೆಯಾಗಿದ್ದರು. 'ಅಪ್ಪಾ' ಎಂದು ಕರೆಯೋಣವೆ ಎನ್ನಿಸಿತು. ಆದರೆ ಧೈರ್ಯ ಬರಲಿಲ್ಲ. ತನ್ನ ಕೊಠಡಿಗೆ ಹೋಗಿ ಲ್ಯಾoಪ್ ಆರಿಸಿ ಹಾಸಿಗೆಯ ಮೇಲೆ ಉರುಳಿದ. {{gap}}ಆ ದಿನದ ಘಟನೆಗಳೆಲ್ಲ ಮತ್ತೊಮ್ಮೆ ರಂಗಣ್ಣನ ಕಣ್ಣೆದುರು ಸುಳಿದವು. ಮುನಿಯನ ಶವವೂ ಅವನಿಗೆ ಕಾಣಿಸಿತು. ಕಣ್ಣುಗಳನ್ನು ಆತ ಭದ್ರವಾಗಿ ಮುಚ್ಚಿಕೊಂಡ. {{gap}}ಅವನಿಗೆನ್ನಿಸಿತು : {{gap}}'ಸುಬ್ಬಿ ಹೆದರಿ ಜ್ವರ ಬರಿಸಿಕೊಂಡದ್ದು ಒಳ್ಳೆದೇ ಆಯ್ತು. ಇದಾದ ಮೇಲೆ ತುಳಿದ ಅಡ್ಡ ದಾರಿಯಿಂದ ಸರಿದಾರಿಗೆ ಅವಳು ವಾಪಸಾಗಲೂಬಹುದು.' {{gap}}ಹಾಗೆಯೇ ಅವನಿಗೆ ನಿದ್ದೆ ಬಂತು. ಕನಸಿನಲ್ಲಿ ಆತ ಭಾಗ್ಯನಗರಕ್ಕೆ ಹೋಗಿ ಒಬ್ಬ ಔಷಧಿ ವಾಪಾರಿಯಿಂದ ಕೆಲ ಔಷಧಿಗಳನ್ನು ಕೊಂಡ... {{gap}}...ಮಗನನ್ನು ಗೌಡರು ಒಳಕ್ಕೆ ಕಳುಹಿಸಿದ ಮೇಲೆ ಅವರ ಮನಸ್ಸು ನಿರಾತಂಕವಾಗಿ ಅತ್ತಿತು. ಕಣ್ಣುಗಳು ಒಣ ನೆಲ. ಒಳಗೆ ಮಾತ್ರ, ಗುಡುಗು. {{gap}}ಯಾಕೆ ಹೀಗಾಯಿತು? ಯಾಕೆ ಹೀಗಾಯಿತು? {{gap}}ಪದ್ಮನ ಜತೆ ಸುಬ್ಬಿ ದಿಬ್ಬದ ಹತ್ತಿರ ಹೋದಳೆಂದು ಮಗ ಮೊದಲು ಹೇಳಿದಾಗ<noinclude></noinclude> qv71q0wmlvjsbktp93iprrafyrroyuv ಪುಟ:ನೋವು.pdf/೬೪ 104 20796 322922 205447 2026-05-27T07:16:32Z Shreesha Sharma 7840 /* Validated */ 322922 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center= ನೋವು|left=೫೪ |right=|}} ನಿನ್ನ ತಾಯಿ ಇದ್ದಾಗಲೂ ನೀನು ನನಗೇ ಅಂಟಿಕೊಳ್ತಿದ್ದೆ. ನೀವೆಲ್ಲ ತಬ್ಬಲಿಗಳಾದ ಮೇಲೂ ನನ್ನ ಕೈ ಅನ್ನ ಉಂಡೇ ನೀನು ಬೆಳೆದೆ. ಸಾಕಿದ ಅಜ್ಜಿ ಮೇಲೆ ನಿನಗೆ ಪ್ರೀತಿ ಇದೆಯೇನಪ್ಪ?" {{gap}}" ಏನು ದೊಡ್ಡಮ್ಮ ಇದೆಲ್ಲ?" {{gap}}"ಪ್ರೀತಿ ಇದ್ದರೆ ನಾನೊಂದು ಕೇLtIನಿ, ನಡಸ್ಕೊಡು." {{gap}}"............" {{gap}}" ಸುಮ್ಮನಿದೀಯಲ್ಲೆಯೊ.. ಹೂಂ ಅನ್ನೋಲ್ಟೆ?" {{gap}}" ಹೇಳು ದೊಡ್ಡಮ್ಮ." - {{gap}}" ಕಿರೇ ಮೊಮ್ಮಗನ ನಡತೆ ನೋಡಿ ಮುದುಕಿ ಕೊರಗಿ ಕೊರಗಿ ಸತೋದ್ಲು ಅ೦ತ ಜನ ಅಡ್ಕೊಳ್ಳದ ಹಾಗೆ ಮಾಡಿಕೊಡಪ್ಪ." {{gap}}"ಈಗೇನಾಯಿತು ?" {{gap}}"ಸುಬ್ಬೀನ ಕಂಡರೆ ನಿನಗೆ ಇಷ್ಟವೇನೊ ಪದ್ಮ?" {{gap}}"............" {{gap}}"ನೀನೂ ಸುಬ್ಬಿಯೂ ಅಣ್ಣ ತಂಗಿ ಹಾಗೆ. ನಿಮ್ಮ ವಿಷಯ ಅಪಖ್ಯಾತಿ ಬರೋ ಮಾತು ಯಾರಾದರೂ ಆಡಿದರೆ ಅವರ ನಾಲಿಗೆಗೆ ಹುಳ ಬೀಳ್ಲಿ." {{gap}}"..........." {{gap}}" ಇಷ್ಟೇ ಪದ್ಮ, ತನ್ನ ಮಗಳ ಹತ್ತಿರ ನೀನು ಮಾತಾಡೋದು ಶಾಮಣ್ಣನಿಗೆ ಇಷ್ಟ ವಿಲ್ಲವಂತೆ. ನೀನು ಅಲ್ಲಿಗೆ ಹೋಗಲೇಬೇಡ." {{gap}}"ಕಾಫಿ ತಿ೦ಡಿಗೆ ಬಾ" {{gap}}“ನನಗೇನೂ ಬೇಡ ದೊಡ್ಡಮ್ಮ." {{gap}}" ಮುದುಕಿ ಏನೋ ಅಂದೂಂತ ಬೇಜಾರಾಯ್ತೇನಪ್ಪ? ಗೋವಿಂದನಿಗೂ ನಿನಗೂ ಮದುವೆಯಾಗಿ, ಇನ್ನಿಬ್ಬರು ಗೃಹಲಕ್ಷ್ಮಿಯರು ಮನೆಗೆ ಬಂದು, ನಿಮ್ಮ ಮಕ್ಕಳನ್ನೂ ಎತ್ತಿ ಆಡಿಸಿ, ನಿಮ್ಮ ಕಣ್ಣೆದುರಲ್ಲೇ ಸಾಯಬೇಕೂಂತ ನನ್ನ ಆಸೆ, ಪದ್ಮ- ಪ್ರೀತಿಯ ಮೊಮ್ಮಗ ಕುಲಕ್ಕೆ ಕಳಂಕಪ್ರಾಯನಾದ ಅಂತ ಕಣ್ಣೀರಿಟು ಕೊರಗಿ ನಾನು ಸಾಯೋ ಹಾಗೆ ಮಾಡ್ಬೇಡ." {{gap}}" ಸಾಕು, ಸಾಕು ದೊಡ್ಡಮ್ಮ, ದಯವಿಟು ಒಳಗೆ ಹೋಗು." {{gap}}"ಹೋಗ್ತಿನಿ ಕ೦ದ ಕಾಫಿ ತಿ೦ಡಿ ಇಲ್ಲಿಗೇ ತೊಗೊ೦ಡ್ಭ. {{gap}}"ಬೇಡ, ನನ್ನಾಣೆ, ಹಸಿವಾದರೆ ನಾನೇ ಕೇಳ್ತೀನಿ." {{gap}}"ನಿನ್ನಿಷ್ಟ" ಎಂದು ಹೇಳಿ ದೊಡ್ಡಮ್ಮ ನೆಟ್ಟುಸಿರು ಬಿಟ್ಟು, ಅಗಣಿ ತೆಗೆದರು. {{gap}}"ಇವttu ಕೆಟ್ಟ ದಿವಸ ಮನೆ ಬಿಟು ಹೋಗ್ಭೇಡ ಅಂತ ಆಗ್ಲೆ ಅಂದಿದೀನಿ," {{gap}}–ಎಂದು ಮತ್ತೊಮ್ಮೆ ನೆನಪು ಮಾಡಿಕೊಟ್ಟು ಹೊರಬಿದ್ದರು. ತಾವು ಆಡಿದುದನ್ನು ಜೀರ್ಣಿಸಿಕೊಳ್ಳಲು ಮೊಮ್ಮಗನಿಗೆ ಏಕಾಂತ ಬೇಕು ಎಂದು, ಬಾಗಿಲನ್ನೆಳೆದು ಮುಚ್ಚಿಕೊಂಡರು. {{gap}}ಆ ಏಕಾಂತದಲ್ಲಿ ಪದ್ಮನಾಭನ ಮನಸ್ಸು ಬಹಳ ಹೊttu ರೋದಿಸಿತು. ತಂದೆ ಚೀರಾಡಿ ಏನಾದರೂ ಅಂದಿದ್ದರೆ ಖಂಡತುಂಡವಾಗಿ ತಾನೂ ಉತ್ತರಿಸಬಹುದಿತು, ಆದರೆ ಮಮತೆಯ ಅಜ್ಜಿಗೆ ಹೇಗೆ ತಾನೇ ಆತ ಇದಿರಾಡಬಲ್ಲ ?<noinclude></noinclude> tl95ylmknpv5yi0o8d0g0j2d8mf77hq ಪುಟ:ನೋವು.pdf/೬೫ 104 20797 322924 205448 2026-05-27T07:24:15Z ~2026-31610-21 8564 /* Validated */ 322924 proofread-page text/x-wiki <noinclude><pagequality level="3" user="Raksha shetty N" /></noinclude>{{rh|center=ನೋವು|left=|right=೫೫}} {{gap}}ಸುಭದ್ರೆಯ ಮನಸ್ಸಿನಲ್ಲಿ ಏನಿರಲಿಲ್ಲವೋ, ಪದ್ಮನಾಭ ಅವಳನ್ನು ಬಯಸಿದ್ದು ನಿಜ. ಕಾರಣವಿಷ್ಟೆ: ಕಾಲೇಜಿನ ತನ್ನ ತರಗತಿಯ ಹೆಣ್ಹೊಬ್ಬಳಿಗೆ ಅವನು ಮರುಳಾಗಿದ್ದ. ಇನ್ನೇನು ತನ್ನ ಹೃದಯವನ್ನು ಅವಳೆದುರು ತೋಡಿಕೊಳ್ಳಬೇಕು ಎನುಷ್ಟರಲ್ಲೆ ಆಕೆ ತನ್ನ ರವಕೆಯೊಳಗೆ ಅಷ್ಟು ದಿನ ಹುದುಗಿಸಿದ್ದ ಮಾಂಗಲ್ಯ ಚಿಹ್ನೆಯನ್ನು ಹೊರಕ್ಕೆ ಮೆರೆಸಿದ್ದಳು. {{gap}}ಆ ಮನೋವ್ಯಾಕುಲದೊಡನೆ ಊರಿಗೆ ಬಂದ ಪದ್ಮನಾಭ, ಸುಭದ್ರೆಯನ್ನು ಕಂಡಾಗ ಒಮ್ಮೆಲೆ ಬೆಚ್ಚಿಬಿದ್ದ. ಇವಳಿಗೂ ಅವನು ಬಯಸಿದ ಹೆಣ್ಣಿಗೂ ರೂಪದಲ್ಲಿ ಹೋಲಿಕೆ ಇದ್ದಂತೆ ಕಂಡಿತು ! ಅಷ್ಟು ದಿನ ಅದನ್ನವನ್ನು ಗಮನಿಸಿಯೇ ಇರಲಿಲ್ಲ, ಪರಿಣಾಮ : {{gap}}ಸುಭದ್ರೆಯ ಸಾನ್ನಿಧ್ಯಕ್ಕಾಗಿ ಪರದಾಟ. {{gap}}ಆ ಗುಂಗಿನಲ್ಲಿ ಅವಳನ್ನು ಪದ್ಮನಾಭ ಕೇಳಿದ್ದ: {{gap}}" ನೀನು ನನ್ನ ಮದುವೆಯಾಗ್ತೀಯಾ ಸುಬ್ಬಿ?" {{gap}}" ಏ, ಅದೆಂಗಾತದೆ ?' {{gap}}"ಯಾಕೆ? ನೀನು ಯಾರ ಹೆಂಡತೀನೂ ಅಲ್ವಲ್ಲ?" {{gap}}" ಇಸ್ಸೀ !" {{gap}}" ಅಂದರೆ? ನಾನು ಒಪ್ಪಿಗೆ ಇಲ್ಲ ಅಂತಲಾ ? " {{gap}}"ನಿಮ್ಮನ್ನ ನಾನು ಒಪ್ಪ್ಕಂಡು ಎಷ್ಟೋ ವರ್ಸ ಆಯ್ತು." {{gap}}" ಎಲಾ ಕಳ್ಳಿ ! ಇಷ್ಟು ದಿನ ಹೇಳೇ ಇರ್ಲಿಲ್ಲ“ {{gap}}" ನಾಚ್ಕೆ" {{gap}}''ಹಾಗಾದರೆ ನಡಿ. ದಿಬ್ಬದ ಹೊಂಡಕ್ಕೆ ಹೋಗೋಣ. ನಾಚ್ಕೆ ಬಿಟ್ಟು ಒಪ್ಪಿಗೆ ಅನ್ನೋದನ್ನ ತೋರಿಸ್ಕೊಡು." {{gap}}''ಹೆಂಗೆ?'' {{gap}}"ತುಟಿಗೆ ತುಟಿ..." {{gap}}"ಥುತ್ ಥುತ್ !" {{gap}}"ಹಾಗಾದರೆ ಠೂ ಬಿಟ್ಟೆ." {{gap}}ನೀವು ಕೆಟ್ಟೋರು.” {{gap}}"ಯಾಕೆ ? ನಿಂತುಬಿಟ್ಟೆಯಲ್ಲ ! ಎತ್ಕೊಂಡು ಹೋಗ್ಲೇನು ?" {{gap}}"ನನಗೆ ಭಯ.” {{gap}}"ನಾನಿದೀನಿ ಸುಬ್ಬಿ.” {{gap}}ಅವಳೊಬ್ಬಳಿಗೇ ಅಲ್ಲ; ದಿಬ್ಬದ ಹೊಂಡದಲ್ಲಿ ಮುನಿಯನ ಶವವನ್ನೂ ಅದರ ಮೇಲೆ ಎರಗುತ್ತಿದ್ದ ಹದ್ದುಗಳನ್ನೂ ಕಂಡೊಡನೆ ಇಬ್ಬರಿಗೂ ಭಯವಾಇತ್ತು. ಹುಲಿ ಬಂತೆಂದು ಬಾಲ ಎತ್ತಿ ಓಡುವ ಬಡಪಶುಗಳಾಗಿ ಅವರು ಅಲ್ಲಿಂದ ಹಳ್ಳಿಗೆ ಓಡಿಬಂದಿದ್ದರು. {{gap}}ಅದಾದ ಮೇಲೆ ಈ ಘಟನೆ... {{gap}}ಆ ಹಗಲು ಪದ್ಮನಾಭ ಬಹಳ ಯೋಚಿಸಿದ. ಅವನಿಗನಿಸಿತು: ಅರೆನಿದ್ದೆಯಲ್ಲಿದ್ದವ ತಡಕಾಡುವ ಹಾಗೆ ವರ್ತಿಸಿದ್ದೆನಲ್ಲವೆ ? ಈಗ ಪೂರ್ತಿ ಎಚ್ಚರವಾಗಿದೆ. ಸುಬ್ಬಿಯನೆ ಮದುವೆಯಾಗಬೇಕೆಂಬ ಛಲ ತನಗಿಲ್ಲವಲ್ಲ! ಪ್ರೇಮಕ್ಕಾಗಿ ತ್ಯಾಗ ಮಾಡಬಹುದ<noinclude></noinclude> 21nq4r8h67jciw1g0bycveblc3guynu 322925 322924 2026-05-27T07:27:09Z Shreelatha.Halemane 7642 /* Validated */ 322925 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right=೫೫}} {{gap}}ಸುಭದ್ರೆಯ ಮನಸ್ಸಿನಲ್ಲಿ ಏನಿರಲಿಲ್ಲವೋ, ಪದ್ಮನಾಭ ಅವಳನ್ನು ಬಯಸಿದ್ದು ನಿಜ. ಕಾರಣವಿಷ್ಟೆ: ಕಾಲೇಜಿನ ತನ್ನ ತರಗತಿಯ ಹೆಣ್ಹೊಬ್ಬಳಿಗೆ ಅವನು ಮರುಳಾಗಿದ್ದ. ಇನ್ನೇನು ತನ್ನ ಹೃದಯವನ್ನು ಅವಳೆದುರು ತೋಡಿಕೊಳ್ಳಬೇಕು ಎನುಷ್ಟರಲ್ಲೆ ಆಕೆ ತನ್ನ ರವಕೆಯೊಳಗೆ ಅಷ್ಟು ದಿನ ಹುದುಗಿಸಿದ್ದ ಮಾಂಗಲ್ಯ ಚಿಹ್ನೆಯನ್ನು ಹೊರಕ್ಕೆ ಮೆರೆಸಿದ್ದಳು. {{gap}}ಆ ಮನೋವ್ಯಾಕುಲದೊಡನೆ ಊರಿಗೆ ಬಂದ ಪದ್ಮನಾಭ, ಸುಭದ್ರೆಯನ್ನು ಕಂಡಾಗ ಒಮ್ಮೆಲೆ ಬೆಚ್ಚಿಬಿದ್ದ. ಇವಳಿಗೂ ಅವನು ಬಯಸಿದ ಹೆಣ್ಣಿಗೂ ರೂಪದಲ್ಲಿ ಹೋಲಿಕೆ ಇದ್ದಂತೆ ಕಂಡಿತು ! ಅಷ್ಟು ದಿನ ಅದನ್ನವನ್ನು ಗಮನಿಸಿಯೇ ಇರಲಿಲ್ಲ, ಪರಿಣಾಮ : {{gap}}ಸುಭದ್ರೆಯ ಸಾನ್ನಿಧ್ಯಕ್ಕಾಗಿ ಪರದಾಟ. {{gap}}ಆ ಗುಂಗಿನಲ್ಲಿ ಅವಳನ್ನು ಪದ್ಮನಾಭ ಕೇಳಿದ್ದ: {{gap}}" ನೀನು ನನ್ನ ಮದುವೆಯಾಗ್ತೀಯಾ ಸುಬ್ಬಿ?" {{gap}}" ಏ, ಅದೆಂಗಾತದೆ ?' {{gap}}"ಯಾಕೆ? ನೀನು ಯಾರ ಹೆಂಡತೀನೂ ಅಲ್ವಲ್ಲ?" {{gap}}" ಇಸ್ಸೀ !" {{gap}}" ಅಂದರೆ? ನಾನು ಒಪ್ಪಿಗೆ ಇಲ್ಲ ಅಂತಲಾ ? " {{gap}}"ನಿಮ್ಮನ್ನ ನಾನು ಒಪ್ಪ್ಕಂಡು ಎಷ್ಟೋ ವರ್ಸ ಆಯ್ತು." {{gap}}" ಎಲಾ ಕಳ್ಳಿ ! ಇಷ್ಟು ದಿನ ಹೇಳೇ ಇರ್ಲಿಲ್ಲ“ {{gap}}" ನಾಚ್ಕೆ" {{gap}}''ಹಾಗಾದರೆ ನಡಿ. ದಿಬ್ಬದ ಹೊಂಡಕ್ಕೆ ಹೋಗೋಣ. ನಾಚ್ಕೆ ಬಿಟ್ಟು ಒಪ್ಪಿಗೆ ಅನ್ನೋದನ್ನ ತೋರಿಸ್ಕೊಡು." {{gap}}''ಹೆಂಗೆ?'' {{gap}}"ತುಟಿಗೆ ತುಟಿ..." {{gap}}"ಥುತ್ ಥುತ್ !" {{gap}}"ಹಾಗಾದರೆ ಠೂ ಬಿಟ್ಟೆ." {{gap}}ನೀವು ಕೆಟ್ಟೋರು.” {{gap}}"ಯಾಕೆ ? ನಿಂತುಬಿಟ್ಟೆಯಲ್ಲ ! ಎತ್ಕೊಂಡು ಹೋಗ್ಲೇನು ?" {{gap}}"ನನಗೆ ಭಯ.” {{gap}}"ನಾನಿದೀನಿ ಸುಬ್ಬಿ.” {{gap}}ಅವಳೊಬ್ಬಳಿಗೇ ಅಲ್ಲ; ದಿಬ್ಬದ ಹೊಂಡದಲ್ಲಿ ಮುನಿಯನ ಶವವನ್ನೂ ಅದರ ಮೇಲೆ ಎರಗುತ್ತಿದ್ದ ಹದ್ದುಗಳನ್ನೂ ಕಂಡೊಡನೆ ಇಬ್ಬರಿಗೂ ಭಯವಾಇತ್ತು. ಹುಲಿ ಬಂತೆಂದು ಬಾಲ ಎತ್ತಿ ಓಡುವ ಬಡಪಶುಗಳಾಗಿ ಅವರು ಅಲ್ಲಿಂದ ಹಳ್ಳಿಗೆ ಓಡಿಬಂದಿದ್ದರು. {{gap}}ಅದಾದ ಮೇಲೆ ಈ ಘಟನೆ... {{gap}}ಆ ಹಗಲು ಪದ್ಮನಾಭ ಬಹಳ ಯೋಚಿಸಿದ. ಅವನಿಗನಿಸಿತು: ಅರೆನಿದ್ದೆಯಲ್ಲಿದ್ದವ ತಡಕಾಡುವ ಹಾಗೆ ವರ್ತಿಸಿದ್ದೆನಲ್ಲವೆ ? ಈಗ ಪೂರ್ತಿ ಎಚ್ಚರವಾಗಿದೆ. ಸುಬ್ಬಿಯನೆ ಮದುವೆಯಾಗಬೇಕೆಂಬ ಛಲ ತನಗಿಲ್ಲವಲ್ಲ! ಪ್ರೇಮಕ್ಕಾಗಿ ತ್ಯಾಗ ಮಾಡಬಹುದ<noinclude></noinclude> 9tsi978sha5seowtud99oknq1oxn2n4 322933 322925 2026-05-27T08:05:00Z Shreelatha.Halemane 7642 322933 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right=೫೫}} {{gap}}ಸುಭದ್ರೆಯ ಮನಸ್ಸಿನಲ್ಲಿ ಏನಿರಲಿಲ್ಲವೋ, ಪದ್ಮನಾಭ ಅವಳನ್ನು ಬಯಸಿದ್ದು ನಿಜ. ಕಾರಣವಿಷ್ಟೆ: ಕಾಲೇಜಿನ ತನ್ನ ತರಗತಿಯ ಹೆಣ್ಹೊಬ್ಬಳಿಗೆ ಅವನು ಮರುಳಾಗಿದ್ದ. ಇನ್ನೇನು ತನ್ನ ಹೃದಯವನ್ನು ಅವಳೆದುರು ತೋಡಿಕೊಳ್ಳಬೇಕು ಎನುಷ್ಟರಲ್ಲೆ ಆಕೆ ತನ್ನ ರವಕೆಯೊಳಗೆ ಅಷ್ಟು ದಿನ ಹುದುಗಿಸಿದ್ದ ಮಾಂಗಲ್ಯ ಚಿಹ್ನೆಯನ್ನು ಹೊರಕ್ಕೆ ಮೆರೆಸಿದ್ದಳು. {{gap}}ಆ ಮನೋವ್ಯಾಕುಲದೊಡನೆ ಊರಿಗೆ ಬಂದ ಪದ್ಮನಾಭ, ಸುಭದ್ರೆಯನ್ನು ಕಂಡಾಗ ಒಮ್ಮೆಲೆ ಬೆಚ್ಚಿಬಿದ್ದ. ಇವಳಿಗೂ ಅವನು ಬಯಸಿದ ಹೆಣ್ಣಿಗೂ ರೂಪದಲ್ಲಿ ಹೋಲಿಕೆ ಇದ್ದಂತೆ ಕಂಡಿತು ! ಅಷ್ಟು ದಿನ ಅದನ್ನವನ್ನು ಗಮನಿಸಿಯೇ ಇರಲಿಲ್ಲ, ಪರಿಣಾಮ : {{gap}}ಸುಭದ್ರೆಯ ಸಾನ್ನಿಧ್ಯಕ್ಕಾಗಿ ಪರದಾಟ. {{gap}}ಆ ಗುಂಗಿನಲ್ಲಿ ಅವಳನ್ನು ಪದ್ಮನಾಭ ಕೇಳಿದ್ದ: {{gap}}" ನೀನು ನನ್ನ ಮದುವೆಯಾಗ್ತೀಯಾ ಸುಬ್ಬಿ?" {{gap}}" ಏ, ಅದೆಂಗಾತದೆ ?' {{gap}}"ಯಾಕೆ? ನೀನು ಯಾರ ಹೆಂಡತೀನೂ ಅಲ್ವಲ್ಲ?" {{gap}}" ಇಸ್ಸೀ !" {{gap}}" ಅಂದರೆ? ನಾನು ಒಪ್ಪಿಗೆ ಇಲ್ಲ ಅಂತಲಾ ? " {{gap}}"ನಿಮ್ಮನ್ನ ನಾನು ಒಪ್ಪ್ಕಂಡು ಎಷ್ಟೋ ವರ್ಸ ಆಯ್ತು." {{gap}}" ಎಲಾ ಕಳ್ಳಿ ! ಇಷ್ಟು ದಿನ ಹೇಳೇ ಇರ್ಲಿಲ್ಲ“ {{gap}}" ನಾಚ್ಕೆ" {{gap}}''ಹಾಗಾದರೆ ನಡಿ. ದಿಬ್ಬದ ಹೊಂಡಕ್ಕೆ ಹೋಗೋಣ. ನಾಚ್ಕೆ ಬಿಟ್ಟು ಒಪ್ಪಿಗೆ ಅನ್ನೋದನ್ನ ತೋರಿಸ್ಕೊಡು." {{gap}}''ಹೆಂಗೆ?'' {{gap}}"ತುಟಿಗೆ ತುಟಿ..." {{gap}}"ಥುತ್ ಥುತ್ !" {{gap}}"ಹಾಗಾದರೆ ಠೂ ಬಿಟ್ಟೆ." {{gap}}ನೀವು ಕೆಟ್ಟೋರು.” {{gap}}"ಯಾಕೆ ? ನಿಂತುಬಿಟ್ಟೆಯಲ್ಲ ! ಎತ್ಕೊಂಡು ಹೋಗ್ಲೇನು ?" {{gap}}"ನನಗೆ ಭಯ.” {{gap}}"ನಾನಿದೀನಿ ಸುಬ್ಬಿ.” {{gap}}ಅವಳೊಬ್ಬಳಿಗೇ ಅಲ್ಲ; ದಿಬ್ಬದ ಹೊಂಡದಲ್ಲಿ ಮುನಿಯನ ಶವವನ್ನೂ ಅದರ ಮೇಲೆ ಎರಗುತ್ತಿದ್ದ ಹದ್ದುಗಳನ್ನೂ ಕಂಡೊಡನೆ ಇಬ್ಬರಿಗೂ ಭಯವಾಇತ್ತು. ಹುಲಿ ಬಂತೆಂದು ಬಾಲ ಎತ್ತಿ ಓಡುವ ಬಡಪಶುಗಳಾಗಿ ಅವರು ಅಲ್ಲಿಂದ ಹಳ್ಳಿಗೆ ಓಡಿಬಂದಿದ್ದರು. {{gap}}ಅದಾದ ಮೇಲೆ ಈ ಘಟನೆ... {{gap}}ಆ ಹಗಲು ಪದ್ಮನಾಭ ಬಹಳ ಯೋಚಿಸಿದ. ಅವನಿಗನಿಸಿತು: ಅರೆನಿದ್ದೆಯಲ್ಲಿದ್ದವ ತಡಕಾಡುವ ಹಾಗೆ ವರ್ತಿಸಿದ್ದೆನಲ್ಲವೆ ? ಈಗ ಪೂರ್ತಿ ಎಚ್ಚರವಾಗಿದೆ. ಸುಬ್ಬಿಯನೆ ಮದುವೆಯಾಗಬೇಕೆಂಬ ಛಲ ತನಗಿಲ್ಲವಲ್ಲ! ಪ್ರೇಮಕ್ಕಾಗಿ ತ್ಯಾಗ ಮಾಡಬಹುದ<noinclude></noinclude> 73ds4csedk9c6g3m8vxrx1z1x5ndiba ಪುಟ:ನೋವು.pdf/೬೬ 104 20798 322926 205449 2026-05-27T07:31:01Z Shreelatha.Halemane 7642 /* Validated */ 322926 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=೫೬ |right=}} ಎಷ್ಟೋ ಜನ ಹಿಂದೆ ಮಾಡಿದ್ದಾರೆ; ಮುಂದೆಯೂ ಮಾಡುತ್ತಾರೆ. ಆದರೆ ಸುಬ್ಬಿಯ ಮೇಲೆ ತನಗೆ ಪ್ರೇಮ ಎಲ್ಲಿಯದು? ಇಲ್ಲ ಎಂದಾದ ಮೇಲೆ ಯಾಕೆ ಗಾಬರಿಯಾಗಬೇಕು ತಾನು? ರಂಗಣ್ಣ ದಿಬ್ಬದ ಮೇಲಿದ್ದ. ತಮ್ಮನ್ನು ಕಂಡಿದ್ದ. ಕಾಣಲಿ. ಸಲ್ಲದುದೇನನ್ನೂ ತಾವು ಮಾಡಿಲ್ಲವಲ್ಲ? ಅಷ್ಟಕ್ಕೂ ಪ್ರಕರಣ ಈಗ ಮುಗಿದಂತೆಯೇ. ಅಬ್ಬ! ಹೀಗೂ ಆಗಬಹುದೆಂದು ಯಾರು ಊಹಿಸಿದ್ದರು ? {{gap}}ಪದ್ಮನಾಭನಿಗೆ ಅವಮಾನವಾಗಿತ್ತು. ಆದರೆ ದೊಡ್ಡಮ್ಮ ಆರೋಪಗಳನ್ನೇನೂ ಸದ್ಯ ಹೊರಿಸಲಿಲ್ಲ! ರಂಗಣ್ಣನಿಗೂ ತನಗೂ ಒಂದು ಕಾಲದಲ್ಲಿ ಸ್ನೇಹವಿತ್ತು. ಮುಂದೆ ಅವನಾಗಿಯೇ ದೂರ ಹೋದ. ಆ ಕಾರಣಕ್ಕಾದರೂ ಸುಭದ್ರೆಯನ್ನು ಹತ್ತಿರಕ್ಕೆ ಸೆಳೆದುಕೊಂಡು ರಂಗಣ್ಣನ ಮಖ ಭಂಗ ಮಾಡಲು ತಾನು ಇಚ್ಛಿಸಿದೆ–ಎಂದರೆ, ಸ್ವಲ್ಪ ಮಟ್ಟಿಗೆ ಅದು ನಿಜವೇ. {{gap}}ರಂಗಣ್ಣನನ್ನು ಕೆರಳಿಸಿದೆ ಎಂದು ತಾನು ಸಮಾಧಾನಪಟ್ಟುಕೊಳ್ಳಬಹುದು–ಎಂದು ಕೊಂಡ ಪದ್ಮನಾಭ. {{gap}}ಒಟ್ಟಿನಲ್ಲಿ? {{gap}}ವಿಚಾರಗಳ ಮೊತ್ತ ಪದ್ಮನಾಭನನ್ನು ಅಣಕಿಸಿತು: {{gap}}" ಈ ಕೆಲಸ ನಾನು ಮಾಡಬಾರದಾಗಿತ್ತೂ." {{gap}}ಮತ್ತೆ ಮತ್ತೆ ಆ ಮಾತನ್ನು ಆತ ತನ್ನಷ್ಟಕ್ಕೆ ಆಡಿಕೊಂಡ. {{gap}}ಮಧಾಹ್ನ ಹಸಿವಾಗಿತ್ತು. ಎದ್ದು ಊಟಕ್ಕೆ ಹೋದನೋ ಸ್ವಾಭಿಮಾನಕ್ಕೆ ಕುಂದು-ಕಣ್ಣು ಮುಚ್ಚಿ ಮಲಗಿದ. {{gap}}ದೊಡ್ಡಮ್ಮ ಬಂದು ನೋಡಿದರು. ಆದರೆ ಮೈ ಮುಟ್ಟಿ ಮೊಮ್ಮಗನನ್ನು ಎಬ್ಬಿಸಲಿಲ್ಲ. ಲೋಟ ತುಂಬ ಹಾಲನ್ನು ಮೇಜಿನ ಮೇಲಿಟ್ಟು ಹೋದರು. {{gap}}ಕತ್ತಲಾದ ಮೇಲೆ ಅವರು ಬಂದು ಕರೆದಾಗ ತಕ್ಷಣವೇ ಏಳಲು ಪದ್ಮನಾಭ ಸಿದ್ದನಾಗಿದ್ದ. ಆದರೂ ತನಗೆ ಸೋಲಾಯಿತೆಂಬುದನ್ನು ತೋರಿಸಿಕೊಳ್ಳದೆಯೇ ಆತ ದೊಡ್ಡಮ್ಮನನ್ನು ಹಿಂಬಾಲಿಸಿದ್ದ. {{gap}}.....ಅಜ್ಜಿ----- ಮೊಮ್ಮಗನ ಪಾರಣೆಯಾಗುತ್ತಿದ್ದಂತೆ ಹೊರಗೆ ಗೋವಿ೦ದ ಹಾಗೂ ಇನ್ನೊಬ್ಬರ ಸ್ವರಗಳು ಕೇಳಿಸಿದುವು. {{gap}}ಅಪರಿಚಿತ ಧ್ವನಿ : {{gap}}“ಕೈ ಕಾಲು ತೊಳಕೊಂಡೇ ಒಳಗೆ ಹೋಗೋಣ." {{gap}}ಗೋವಿ೦ದ: - {{gap}}" ಅ೦ಗಳದ ಮೂಲೇಲಿ ನೀರಿದೆ. బನ್ನಿ {{gap}}"ನಿಮ್ಮ ತಂದೆಯವರು ಇದ್ದಾರೇಂತ ಕಾಣುತ್ತೆ." {{gap}}" ಇಷ್ಟು ಹೊತ್ನಲ್ಲಿ ಎಲ್ಲರೂ ಮನೇಲಿರ್ತಾರೆ. ಬಹುಶಃ ಅಣ್ಣಯ್ಯ ಸಂಧ್ಯಾವ೦ದನೆಗೆ ಕೂತಿರಬೇಕು" - {{gap}}"ಕತ್ತಲಾದ್ಮೇಲೆ ಹಳ್ಳಿಗೆ ಬಂದ ಹಾಗಾಯ್ತು. ಸೋಮಪುರ ಎಕ್ಸ್ ಪ್ರೆಸ್ನನಲ್ಲೇ ಸೀಟು ಸಿಕ್ಕಿದ್ದಿದ್ರೆ ಸೂರ್ಯ ಮುಳುಗೋದಕ್ಕೆ ಒಂದು ಘಳಿಗೆ ಮುಂಚೇನೆ ಬರ್ತಿದ್ದೆವೂ೦ತ<noinclude></noinclude> sjq7so5v451s0zzkjvpriudkugrjphe ಪುಟ:ನೋವು.pdf/೬೭ 104 20799 322927 205450 2026-05-27T07:37:06Z Shreelatha.Halemane 7642 /* Validated */ 322927 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right=೫೭}} ಕಾಣ್ತದೆ." {{gap}}“ ಹೌದು. ತಾಳಿ.ಟವೆಲ್ ತರ್ತೀನಿ" {{gap}}" ಬೇಡಿ, ಗೋವಿಂದರಾವ್, ಟವೆಲು ಯಾಕೆ ? ತಾನೇ ಒಣಗ್ತದೆ". {{gap}}ಆ ಸ್ವರದ ಪರಿಚಯ ಪದ್ಮನಾಭನಿಗಿರಲಿಲ್ಲ. {{gap}}ಗೋವಿಂದ ಯಾರನ್ನೋ ಕರಕೊಂಡು ಬಂದ ಹಾಗಿದೆ. ಕಣಿವೇಹಳ್ಳಿಯವರಲ್ಲಾಂತ ಕಾಣುತ್ತೆ.' {{gap}}ಮತ್ತೆ ಹೊರಗಿನಿಂದ ಮಾತುಗಳು ಕೇಳಿಸಿದುವು. {{gap}}" ಬನ್ನಿ.ಕೂತ್ಕೊಳ್ಳಿ. ನಾನು ಈ ಯೂನಿಫಾರ್ಮ್ ಬಿಚ್ಚಿ ಬರ್ತೀನಿ." {{gap}}“ಹಹ್ಹ! ಆಗಲಿ ಗೋವಿಂದರಾವ್.” {{gap}}ಗೋವಿಂದ ಪದ್ಮನಾಭನ [ಹಾಗೂ ತನ್ನ] ಕೊಠಡಿಗೆ ಹೋದ. {{gap}}ಅಷ್ಟರಲ್ಲಿ ಶ್ರೀನಿವಾಸಯ್ಯ ಪಡಸಾಲೆಗೆ ಬಂದರು. ಜಗಲಿಯಲ್ಲಿ ಯಾರೋ ಕುಳಿತಿದ್ದುದನ್ನು ಕಂಡು [ಅಸ್ಪಷ್ಟ ಸಂಭಾಷಣೆ ಅವರಿಗೂ ಕೇಳಿಸಿತ್ತು.] ಅಲ್ಲಿಗೆ ನಡೆದರು. {{gap}}ಅಪರಿಚಿತ ಎದ್ದು ನಿಂತು, "ನಮಸ್ಕಾರ," ಎಂದು ಕೈಜೋಡಿಸಿದರು. {{gap}}" ನಮಸ್ಕಾರ, ನಮಸ್ಕಾರ.ಗೋವಿಂದನ ಜತೆ ಬಂದಿರೊ? ತಮ್ಮ ಪರಿಚಯ ನನಗಿಲ್ಲ ಅಂತ ತೋರುತ್ತೆ." {{gap}}ಶ್ರೀನಿವಾಸಯ್ಯ ಇನ್ನೊಂದು ಕುರ್ಚಿಯಲ್ಲಿ ಆಸೀನರಾದ ಮೇಲೆ ಬಂದವರು ಕುಳಿತು ಕೊಂಡರು, ಆತನೆಂದರು: {{gap}}"ಉಂಟು, ಇಲ್ಲ. ಹ್ಯಾಗೆ ಹೇಳಿದರೂ ಸರಿಯೇ." {{gap}}ಎಲ್ಲೊ ಇವನನ್ನು ಕಂಡಿದೀನಲ್ಲ–ಎನಿಸಿತು ಶ್ರೀನಿವಾಸಯ್ಯನವರಿಗೆ. ನೆನೆಪು ಮಾಡಿಕೊಳ್ಳುವ ಪ್ರಯತ್ನದಲ್ಲಿ ಹಣೆ ನೆರಿಗೆ ಕಟ್ಟಿತು. ಪ್ರಯೋಜನವಾಗಲಿಲ್ಲ. {{gap}}ಆತನೆ ಮು೦ದುವರಿಸಿದರು: {{gap}}" ಮೂರು ವರ್ಷಗಳಿಗೆ ಹಿಂದೆ ತಾವೂ –ಈ ಊರಿನ ಗೌಡರೂ ನನಲ್ಲಿ ಆತಿಥ್ಯ ಸ್ವೀಕರಿಸಿದ್ದಿರಿ. ಅದನ್ನು ಆತಿಥ್ಯ ಅಂತ ಕರೀಬಹುದೋ ಬಾರದೊ ಅದು ಮಾತ್ರ ಗೊತ್ತಿಲ್ಲ. {{gap}}- ಶ್ರೀನಿವಾಸಯ್ಯ ಯೋಚಿಸಿದರು: {{gap}}ಮೂರು ವರ್ಷಗಳಿಗೆ ಹಿಂದೆ ತಾವೂ ಶಾಮೇಗೌಡರೂ ಜತೆಯಾಗಿ ಮಕ್ಕಳನ್ನು ಕಾಲೇಜುಗಳಿಗೆ ಸೇರಿಸುವುದಕ್ಕೋಸ್ಕರ ಭಾಗ್ಯನಗರಕ್ಕೆ ಹೋಗಿದ್ದರು. ಆತಿಥ್ಯ ಸ್ವೀಕರಿಸಿದ್ದರೆ ಅದು ಅಲ್ಲಿಯೇ ಇರಬೇಕು... .ಅಲ್ಲಿ – ಹಾಂ ! {{gap}}ಅಷ್ಟರಲ್ಲಿ ಗೋವಿಂದ ಮಾತನಾಡುತ್ತ ಅವರಿದ್ದಲ್ಲಿಗೆ ಬಂದ. {{gap}}" ಇವರು ನ್ಯೂ ಗಣೇಶ ಭವನದ ಮಾಲಿಕರು ಅಣ್ಣಯ್ಯ, ಗಣೇಶ ಭವನ ಗೊತ್ತಿಲ್ವೆ ? ನಗರದ ಬಸ್ಸ್ಟ್ಯಾಂಡ್ ದಕ್ಷಿಣದಲ್ಲಿ ಭೋಲಾಪಂತ್ ರಸ್ತೆಲಿದೆ. ನೀವಲ್ಲೇ ಹಿಂದೆ ಇಳ ಕೊ೦ಡಿದ್ರಿ.” {{gap}}" ಆ ಆತಿಥ್ಯವಾ ? ಹೊಹೊ ! ಸಂತೋಷ ಸಂತೋಷ !" {{gap}}ಆ ಮನುಷ್ಯನೆಂದರು; {{gap}}“ನನ್ನ ಹೆಸರು ವಿಷ್ಣುಮೂರ್ತಿ ಅಂತ."<noinclude></noinclude> 69kqhpje84mx8jgqnpz1qe84x0vmtav ಪುಟ:ನೋವು.pdf/೭೬ 104 20808 322929 205459 2026-05-27T07:44:15Z Shreelatha.Halemane 7642 /* Validated */ 322929 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=೬೬|right=}} {{gap}}ಗೌಡರು ಮಗನನ್ನು ಕರೆದರು : {{gap}}"ರ‍೦ಗಾ." {{gap}}ರಂಗಣ್ಣ ಕಾಣಿಸಿಕೊಂಡ. ಗೌಡರು ಕೇಳಿದರು: {{gap}}"ಸುಬ್ಬಿಗೆ ಜರ ಬಿಟ್ಟೈತಾ? ಡಿಕ್ರಿ ಇಟ್ಟು ನೋಡ್ದಾ ?" {{gap}}"ಹುಂ. ಈಗ ಕಮ್ಮಿ," ಎಂದ ರಂಗಣ್ಣ, ಜಮಖಾನದ ಮೇಲೆ ಕುಳಿತಿದ್ದ ಇಬ್ಬರನ್ನೂ ಮೂಸಂಬಿ ಹಣ್ಣುಗಳನ್ನೂ ನೋಡಿ. {{gap}}''ಸುಬ್ಬಿಗೆ ಈ ಹಣ್ಣಿನ ರಸ ಕೊಡಬೌದು, ಅಲ್ಲವಾ ? {{gap}}"ಕೊಡಬಹುದು." ಎಂದು ನುಡಿದು, ರಂಗಣ್ಣ ಒಳಕ್ಕೆ ಸರಿದ. {{gap}}"ಮಗ. ಇವನೇ ಡಾಕ್ಟರಾಗೋನು," ಎಂದರು ಗೌಡರು ಅಭಿಮಾನದಿಂದ. {{gap}}ತುಸು ಯೋಚಿಸಿ ಶಾಮೇಗೌಡರು ಗೋವಿ೦ದನೊಡನೆ ಅ೦ದರು: {{gap}}" ಓಗ್ತಾ ಈ ಇವರಿಗೆ ಗ್ರಾಮಚಾವಡಿ ಮಗ್ಗುಲಲ್ಲಿ ಒಂದು ಖಾಲಿ ಮನೆ ‍ಐತಲ್ಲ, ಅದನ್ನ ತೋರ್ಸು, ಕೃಷ್ಣೇಗೌಡನ್ದು. ಇವರಿಗೆ ಒಪ್ಗೆ ಆದ್ರೆ, ಹೇಳಿ ಕೊಡ್ಸಾನ." {{gap}}" ಹುಂ,"ಎಂದ ಗೋವಿಂದ. {{gap}}" ಯಾವುದಾದರೂ ಸರಿಯೆ. ಒಪ್ಗೆ ಆಗ್ದೆ ಏನು? ನೋಡ್ಕೊ೦ಡು ಹೋಗ್ತೀನಿ,"ಎ೦ದರು ವಿ‌‌‌‌ಷ್ಣುಮೂರ್ತಿ. {{gap}}ಹೋಟೆಲು ಮಾಲಿಕನ ಬಗೆಗೆ ಗೌಡರು ಒಂದೆರಡು ಪ್ರಶ್ನೆ ಕೇಳಿದರು. ಉತ್ತರಿಸಿದ ವಿಮೂರ್ತಿ ತಾವು ಸ್ಥಿತಿವಂತರೆಂಬುದನ್ನು ಸೂಚಿಸದಿರಲಿಲ್ಲ. {{gap}}ಕೆಲ ನಿಮಿಷಗಳಲ್ಲಿ ಅವರು ಎದ್ದು ಗೌಡರಿಗೆ ಕೃತಜ್ಞತೆ ಸೂಚಿಸಿ, ಹೊರಟರು. ಮಾವಿನ ಹಣ್ಣುಗಳಿಂದ ಬೀಗುತ್ತಿದ್ದ ಚೀಲ ಹೊತ್ತುಕೊ೦ಡು ಕರಿಯ ಅವರನ್ನು ಹಿಂಬಾಲಿಸಿದ. {{gap}}ದಾರಿಯಲ್ಲಿ ಗೋವಿಂದ ಯೋಚಿಸಿದ: {{gap}}ಸುಬ್ಬಿಗೆ ಜ್ವರ, ಈಗ ಕಮ್ಮಿ, ಇಂಗ್ಲಿಷ್ ಔಷಧಿ. ಹಾಗಾದರೆ ರಂಗಣ್ಣ ಭಾಗ್ಯನಗರಕ್ಕೆ ನಿನ್ನೆ ಹೋದುದು ಔಷಧಿ ತರಲು. ತನಗೆ ಹೇಳಲೇ ಇಲ್ಲ. ತುರ್ತು ಕೆಲಸ; ಡೀನ್ನ್ರನ್ನು ಕಾಣಬೇಕು–ಎಂದ. ಗೌಡರು ನಿನ್ನೆ ಬೆಳಗ್ಗೆ ಮನೆಗೆ ಬಂದು ತಂದೆಯವರನ್ನು ಕಂಡರು. ಮಾತನಾಡಿಸಿದ ದೊಡ್ಡಮ್ಮನಿಗೆ ಮಗಳ ಅಸ್ವಾಸ್ಥದ ವಿಷಯ ತಿಳಿಸಲಿಲ್ಲ. {{gap}}ಏನೋ ನೆಡೆಯುತ್ತಿದೆ-ಎನಿಸಿತು ಗೋವಿ೦ದನಿಗೆ. {{gap}}"ಸುಮ್ನಿದೀರಲ್ಲ ಗೋವಿಂದರಾವ್ ?” ಎಂದು ಕೇಳಿದರು ವಿಷ್ಣುಮೂರ್ತಿ {{gap}}“ ಏನಿಲ್ಲ, ಏನಿಲ್ಲ ”ಏ೦ದ ಗೋವಿ೦ದ. {{gap}}ಮನೆ ತಲಪಿದಾಗ ವಿಷ್ಣುಮೂರ್ತಿಯನ್ನು ಕುರಿತು ಶ್ರೀನಿವಾಸಯ್ಯ ಕೇಳಿದರು: {{gap}}“ಏನಾಯ್ತು ಹೋದ ಕೆಲಸ ? ಗಂಡೋ ಹೆಣ್ಣೋ ?” {{gap}}ತಾವು ವಿಜಯಿ ಎಂಬುದನ್ನು ಮುಖಭಾವದಿಂದಲೇ ತೋರಿಸುತ್ತ, “ಹೆಹ್ಹೆ !” ಎಂದು ವಿಷ್ಣುಮೂರ್ತಿ ನಕ್ಕರು. {{gap}}ಗೋವಿ೦ದನೆ೦ದ: {{gap}}" ಹೈಸ್ಕೂಲು, ಹೋಟೆಲು ಇ೦ತಾದೆಲ್ಲ ಪಟೇಲರಿಗೆ ಇಷ್ಟವಿಲ್ವಂತೆ. ಆದರೂ ವಿಷ್ಣುಮೂರ್ತಿಯವರಿಗೆ ಅನುಮತಿ ಕೊಟ್ರು."<noinclude></noinclude> jullo20ofoahgsp7idgzjti8olp4hx8 ಪುಟ:ನೋವು.pdf/೭೭ 104 20809 322930 205460 2026-05-27T07:49:50Z Shreelatha.Halemane 7642 /* Validated */ 322930 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right=೬೭}} {{gap}}" ಹುಂ," ಎಂದರು ಶ್ರೀನಿವಾಸಯ್ಯ. {{gap}}"ಈಗ ಹೊರಟರೆ ಹನ್ನೊಂದು ಘಂಟೆಯ ಬಸ್ಸು ಸಿಗುತ್ತಾ ?” ಎಂದು ವಿಷ್ಣುಮೂರ್ತಿ ಕೇಳಿದರು. {{gap}}"ಏನವಸರ ? ಇದ್ದು ಹೋಗಿ. ಊಟ ಮಾಡ್ಕೊ೦ಡು..." ಎಂದರು ಶ್ರೀನಿವಾಸಯ್ಯ, {{gap}}" ಗ್ರಾಮ ಚಾವಡಿ ಹತ್ತಿರದ ಮನೆ ಬೇರೆ ನೀವು ನೋಡ್ಬೇಕು," ಎಂದು ಗೋವಿಂದ ನೆನಪು ಹುಟ್ಟಿಸಿದ. {{gap}}" ಹೋಗ್ತಾ ನೋಡ್ತೀನಿ. ನಗರದಲ್ಲಿ ಕೆಲಸ ಧಂಡಿಯಾಗಿ ಬಿದ್ದಿದೆ." {{gap}}" ಎರಡು ಘಂಟೆಗೆ ನಿಮಗೊಂದು ಬಸ್ಸು ಸಿಗುತ್ತೆ, ಸೀಟು ಕೊಡಿಸಿ ಕಳಿಸೋ ಜವಾಬ್ದಾರಿ ನನ್ದು," ಎಂದ ಗೋವಿಂದ. {{gap}}“ ಸರಿ.” {{gap}}ಗೋವಿಂದ ಅಜ್ಜಿಗೆ ತಿಳಿಸಬೇಕಾದ ವಿಷಯದ ನೆನಪಾಗಿ, " ದೊಡ್ಡಮ್ಮ!" ಎಂದು ಕೂಗುತ್ತ ಒಳಕ್ಕೆ ಹೋದ {{gap}}ವಿಷ್ಣುಮೂರ್ತಿ ಶ್ರೀನಿವಾಸಯ್ಯನವರ ಕಡೆ ತಿರುಗಿ, " ಬಂದ ಕೆಲಸ ಅರ್ಧ ಆಯ್ತು," ಎ೦ದರು. {{gap}}" ಅರ್ಧ ?" {{gap}}" ಹೌದು. ಉಳಿದದ್ದು ನಿಮ್ಮ ಹತ್ತಿರ ಈಗ ನಾನು ಪ್ರಸ್ತಾಪಿಸಬೇಕು." {{gap}}"ಹೇಳೋಣಾಗಲಿ." {{gap}}ವಿಷ್ಣುಮೂರ್ತಿ ಅರ್ಧ ಕ್ಷಣ ಸುಮ್ಮನಿದ್ದು, ಗಂಟಲು ಸರಿಪಡಿಸಿಕೊಂಡರು. {{center|'''೯'''} {{gap}}ಗೋಪಾಲ ಮರಗಳಿಂದ ಕಾಯಿ ಇಳಿಸಲು ಮಾವಿನ ತೋಪಿಗೆ ಆಳುಗಳೊಡನೆ ಹೋಗಿದ್ದ. {{gap}}ಅವನ ಹೆ೦ಡತಿ ಭಾಗೀರಥಿ ಅಡುಗೆಮನೆಯಲ್ಲಿದ್ದಳು. ಆ ಬೆಳಗ್ಗೆ ಅವಳು ಕೇಳಿದ್ದ ಮಾತುಕತೆ ಒಂದು ಬಗೆಯ ಗೊಂದಲದಲ್ಲಿ ಆಕೆಯನ್ನು ಕೆಡವಿತ್ತು; ವಿಸ್ಮಯ ಒಂದೆಡೆ, ಸಂತೋಷ ಇನ್ನೊಂದೆಡೆ. {{gap}}ಗೋವಿ೦ದ ಮತ್ತು ಅಜ್ಜಿ....... {{gap}}"ದೊಡ್ಡಮ್ಮ, ಕೇಳಿದೆಯಾ ? ಸುಬ್ಬಿಗೆ ಜ್ವರವಂತೆ." {{gap}}"ಹೌದೆ?" {{gap}}"ಮೊನ್ನೆಯಿಂದ." {{gap}}"ಆಹಾ? ಶಾಮಣ್ಣ ನಿನ್ನೆ ಬಂದಿದ್ದ ಹೇಳ್ಳೇ ಇಲ್ಲ." {{gap}}"ಅವರು ಬಂದು ಹೇಳೋ ಕಾಲ ಕಳೆದೋಯ್ತು, ದೊಡ್ಡಮ್ಮ." {{gap}}"ಹಾಗಂದರೇನು ಗೋವಿಂದೂ ?"<noinclude></noinclude> sk7aznkaa0i188k2oj34utivczvftva ಪುಟ:ನೋವು.pdf/೧೯೪ 104 20926 322931 205577 2026-05-27T07:57:34Z Shreelatha.Halemane 7642 /* Validated */ 322931 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=౧೮೪ |right=}} ಹಾಗೆಯೇ ನಿದ್ದೆ ಬಂದು ತಾನು ಕೆಳಗೆ ಉರುಳಬಹುದು ಎನಿಸಿತು. {{gap}}ಆದರೆ ಮರುಕ್ಷಣವೇ ಮಂಪರಿನ ಪರದೆ ಸರಿದು ಎಲ್ಲವೂ ಸ್ಪಷ್ಟವಾಗತೊಡಗಿತು ಸುಭದ್ರೆಗೆ. - {{gap}}ನಾನಿದ್ದೀನಿ ಸುಬ್ಬೀ- ಎಂದು ಆತ ಹೇಳಿದುದು ಆಡಂಬರದ ಮಾತು, ನಟನೆ, ಕೃತ್ರಿಮ. {{gap}}ಅದು ನಿಜವಾಗಿದ್ದರೆ ಬೇರೆ ಮದುವೆಯಾಗುತ್ತಿದ್ದರೆ ಅವರು ? ಬೇರೆ ಮದುವೆ? ಬೇರೆ ಎನ್ನುವುದು ಸರಿಯೆ ? ನನ್ನನ್ನ ಅವರು ಮದುವೆಯಾಗಲಿಲ್ಲ? ತನಗೆ ತಾಳಿ ಕಟ್ಟಿರಲಿಲ್ಲವಲ್ಲ ? ಹೊಸಳ್ಳಿಯಿಂದ ಮುನಿಸಾಮಿ ಬಂದು ವಾಲಗ ಬಾರಿಸಲಿಲ್ಲವಲ್ಲ ? {{gap}}ಈಗ ತನಗೆ ಕೇಳಿಸುತ್ತಿರುವುದು ವಾಲಗದ ಸದ್ದು. ನಗರದಿಂದ. ರಂಗಣ್ಣನಿಗೆ ಇನ್ನೂ ಚೆನ್ನಾಗಿ ಕೇಳಿಸುತ್ತಿರಬಹುದು. ರಂಗಣ್ಣ– - {{gap}}ಅಣ್ಣನಾದವನೇ ಕತ್ತು ಹಿಸುಕಿದ. {{gap}}ಆದರೆ, ಅಣ್ಣನ ತಪ್ಪೇನಿದೆ ಇದರಲ್ಲಿ? ಹೆತ್ತವರಿಗೆ ಹೆದರಿಕೊಂಡು ತನ್ನನ್ನು ಮರೆತವರು ಅವರೇ ಅಲ್ಲವೆ? {{gap}}ಅತ್ತೆ ಹೇಳಿದ್ದಾರೆ : ಈ ವರ್ಷವೇ-ನವರಾತ್ರಿಗೆ ಎಂದರಲ್ಲವೆ? ತನ್ನ ಮದುವೆ. ಹೊಸಳ್ಳಿಯ ಗೌಡರ ಮಗ ವರ, ಮುನಿಸಾಮಿ ಅವರ ಜತೆಯಲ್ಲೇ ಬರುವನೊ ? ಮುಂಚಿತ ವಾಗಿಯೆ ಹಾಜರಾಗುವನೊ ? {{gap}}ಆ ವರನನ್ನು ತಾನು ನೋಡಿದ್ದುಂಟು. ಆದರೆ, "ನಿಮ್ಮನ್ನೆ ನಾನು ಒಪ್ಕಂಡು ಎಷ್ಟೋ ವರ್ಸ ಆಯ್ತು' ಎನ್ನುವ ಹಾಗಿಲ್ಲ. {{gap}}ತಾನು ಒಪ್ಪಿಕೊಂಡವರಿಗೆ ಬೇರೆ ಮದುವೆ. ಇನ್ನು ತನಗೂ ಬೇರೆ ಮದುವೆ. . {{gap}}ಸುಭದ್ರೆಯ ಗಂಟಲೊಳಗೇನೋ ಗೊರಗೊರ ಸದ್ದಾಗುತ್ತಿತ್ತು, ಬಾಯಿ ತೆರೆದು ಗಟ್ಟಿಯಾಗಿ ಅರಚಬೇಕು ಅನ್ನಿಸಿತು ಆಕೆಗೆ. ಆದರೆ ಕೊರಳಿನ ಸೆರೆಗಳು ಉಬ್ಬಿಕೊಂಡಿದ್ದುವು. ತನ್ನ ಕತ್ತನ್ನು ಬಲಿಷ್ಟ ಕೈಗಳು ಒತ್ತುತ್ತಿದ್ದಂತೆ ಭಾಸವಾಯಿತು. {{gap}}ಸುಭದ್ರೆಯ ಮೈಯೆಲ್ಲ ಒಮ್ಮೆ ನಡುಗಿತು. ಕಂಕುಳಲ್ಲಿ ಬೆವರ ಹನಿ ಮೂಡಿತು. ಮೈ ತಣುಪೇರಿತು - {{gap}}ವಾಲಗದ ಸದ್ದಿಲ್ಲ. ಎಲಾ! ಇದೇನು ? ಏನಾಗಿರಬಹುದು ? ನಗರದಲ್ಲಿ– {{gap}}ಸುಭದ್ರೆ ಕಣ್ಣುಗಳನ್ನು ಅರಳಿಸಿ ಕಿಟಿಕಿಯಿಂದ ಹೊರಕ್ಕೆ ನೋಡಿದಳು. ಮಳೆ ನಿಂತಿತು, ಪೂರ್ತಿಯಾಗಿ. - {{gap}}ಕಡಮೆಯಾಗಿ, ಹನಿಯಾಗಿ, ಅದು ನಿಂತೇ ಹೋದುದನ್ನು ತಾನು ಕಾಣಲಿಲ್ಲವಲ್ಲ- ಎಂದು ಸುಭದ್ರೇಗೆ ಆಶ್ಚರ್ಯವಾಯಿತು. {{gap}}ಹಾಗಾದರೆ ತಾನು ಕೇಳುತ್ತಿದ್ದುದು ವಾಲಗದ ಸದ್ದನ್ನಲ್ಲ, ಮಳೆಯ ಸಪ್ಪಳವನ್ನು, {{gap}}ಅಲ್ಲಿ ಮದುವೆ ನಿಂತಿಲ್ಲ. ಜುಟ್ಟಿನ ಭಟ್ಟರು ಮಂತ್ರ ಹೇಳುತ್ತಿರಬೇಕು ಈಗ... {{gap}}ಕಿಟಿಕಿಯ ಕಂಬಿಗಳಿಂದ ಕೈಗಳನ್ನು ಕಿತ್ತು, ಕೊಠಡಿಯಿಂದ ಹೊರಬರಲು ಸುಭದ್ರೆ ಯತ್ನಿಸಿದಳು. ಎಡಗಾಲಿಗೆ ಜೋಮು ಹಿಡಿದಿತ್ತು, ಬೀಳುವ ಹಾಗಾಯಿತು. ಮತ್ತೆ ಕಿಟಕಿಯ ದಂಡೆಗೆ ಆತು ನಿಂತಳು. - {{gap}}ಈ ಜೋಮು ದೇಹವನ್ನೆಲ್ಲ ಆವರಿಸಿ, ಸಹಸ್ರ ಸಹಸ್ರ ಸೂಜಿಗಳು ಶರೀರವನ್ನು<noinclude></noinclude> 5amme7l5gzsfas6xdll2xlliwxe44kr ಪುಟ:ನೋವು.pdf/೧೯೮ 104 20930 322932 205581 2026-05-27T08:04:11Z Shreelatha.Halemane 7642 /* Validated */ 322932 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=೧೮೮|right=}} {{gap}}ನಾಗಮ್ಮ ಆಡಿದ್ದನ್ನೇ ಆಡಿದರು : {{gap}}"ಓಗ್ತೀನಿ ಅಂತ ಒಂದು ಮಾತು ಯೋಳಿದ್ದಿದ್ರೆ ನಾ ಬಿಡ್ತಿದ್ನಾ ?" {{gap}}ಬೇಸತ್ತ ಗೌಡರೆಂದರು {{gap}}"ಓಗ್ಲಿ ಬುಡು. ಏಟು ಸಾರೆ ಅದನ್ನೇ ಅ೦ತಿಯಾ ?" {{gap}}ದಂಡೆಯಲ್ಲಿ ನೆರೆದಿದ್ದವರೆಲ್ಲ ನುಡಿದುದಿಷ್ಟೆ : ಅಡಿ ಜಾರಿ ಪ್ರಮಾದವಾಯಿತು. {{gap}}ನಿಜ,ನಿಜ. ಉದ್ದೇಶಪೂರ್ವಕವಾಗಿ ಸುಬ್ಬಿ ನೀರಲ್ಲಿ ಬಿದ್ದಳೆ೦ಬ ಯೋಚನೆ ಕೂಡಾ ಸರಿಯಲ್ಲ, ಆದರೂ ಮರಿಚೇಳೊಂದು ಬಾಲದ ಕೊಂಡಿ ಎತ್ತಲು ನೋಡುತ್ತಿತ್ತು, ಇರಬಹುದೆ? ತಾನಾಗಿಯೇ ಸುಬ್ಬಿ-? ಛಕ್ !-ಎಂದು ಧ್ವನಿ ಹೊರಡಿಸಿ ಗೌಡರು ಮನಸ್ಸಿನಿಂದ ಆ ಚೇಳನ್ನು ಕಿತ್ತು ದೂರ ಎಸೆದರು. {{gap}}ನಗರಕ್ಕೆ ಹೇಳಿ ಕಳುಹಿಸಿ ಮಗನನ್ನು ಕರೆಸುವುದು ಮೇಲಲ್ಲವೆ?-ಎಂದು ಒಮ್ಮೆ ಗೌಡರಿಗೆ ಅನಿಸಿತು. ಬಹಳ ಹೊತ್ತಿನ ನಿದ್ದೆಯ ಬಳಿಕ ಎಚ್ಚೆತು ತಂದೆಯ ಮುಖ ನೋಡಿ ಸುಭದ್ರೆ ನಸುನಕ್ಕಾಗ, ಮಗನನ್ನು ಕರೆಸುವ ಯೋಚನೆಯನ್ನು ಗೌಡರು ಬಿಟುಕೊಟ್ಟರು. {{gap}}ಒಂದಿಷ್ಟು ಬಿಸಿ ಗಂಜಿ ಸೇವಿಸಿದ ಮೇಲೆ ಸುಭದ್ರೆ ಅಂದಳು : " ನದೀಲಿ ಏನೋ ಬೆಳ್ಳಗೆ ಕಾಣಿಸ್ತು, ಅಪ್ಪ, ಅಕಾ ಅಂದೆ. ಅಡಿ ಜಾರ್ತು." {{gap}}ತಾನು ಒಂದು ಹೆಜ್ಜೆ ಮುಂದಿಟ್ಟುದನ್ನು ಅವಳು ಬಲ್ಲಳು. ಯಾಕೆ? ಯಾಕೆ ಇಟ್ಟಳು ? ಅವಳಿಗೆ ತಿಳಿಯದು. ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳಲಾರಳು ಆಕೆ. {{gap}}ಗೌಡರೆಂದರು ; {{gap}}"ಓಗ್ಲಿ ಬುಡು. ಪರಮಾತ್ಮ ಕಾಪಾಡ್ದ." {{gap}}" ಒಂದೆರಡು ದಿನಗಳಲ್ಲಿ ಸುಬ್ಬಿ ಓಡಾಡತೊಡಗಿದಳು. ನದಿಯ ಪ್ರವಾಹ ಕಡಮೆಯಾದ ದಿನ ಅವಳು ಅಂಗಳಕ್ಕಿಳಿದು, ಹಗಲು ಬೆಳಕಿನಲ್ಲಿ ತನ್ನ ಪರಿಸರವನ್ನು ದಿಟ್ಟಿಸಿದಳು. ಎಲ್ಲವೂ ಹೊಸದಾಗಿ ಆಕೆಗೆ ಕಂಡಿತು. {{gap}}ನಗರದಲ್ಲಿ ಮದುವೆ ಮುಗಿಸಿಕೊಂಡು ಶ್ರೀನಿವಾಸಯ್ಯ ತಮ್ಮ ಪರಿವಾರದೊಡನೆ ಆ ದಿವಸ ಕಣಿವೇಹಳ್ಳಿಗೆ ವಾಪಸಾದರು. {{gap}}ಹಳ್ಳಿಯ ಜನ ಕೆಲಸ ಬೊಗಸೆಗಳನ್ನು ಬಿಟ್ಟು ಅಯ್ಯನವರ ಸೊಸೆಯರನ್ನು ನೋಡಲು ಹೋದರು. {{gap}}ವಿಷ್ಣು ಮೂರ್ತಿಯವರ ಸಂಧಾನದ ಫಲವಾಗಿ ಕಾಮಾಕ್ಷಿ ಆರತಿಯರಿಬ್ಬರ ತಮ್ಮ ಗಂಡಂದಿರನ್ನು ಹಿಂಬಾಲಿಸಿದ್ದರು. ಕಣಿವೇಹಳ್ಳಿಗೆ ನಾಲ್ಕು ದಿನ ಬಿಟು ಹಳ್ಳಿಯಲ್ಲಿ ಆರತಕ್ಷತೆ ಎಂದು ಗೊತ್ತಾಗಿತ್ತು. {{gap}}" ನೀವೇನೂ ಯೋಚಿಸ್ಬೇಡಿ ಶ್ರೀನಿವಾಸಯ್ಯನವರೇ, ದಂಡು ಬಂದ ಹಾಗೆ ಬರ್ತೀವಿ ಅವತ್ತು." ಎಂದಿದ್ದರು ವಿಷ್ಣುಮೂರ್ತಿ. {{gap}}ದುಃಖಿ ಗೋಪಾಲನೊಬ್ಬನೇ. ಹೆಂಡತಿಯನ್ನು ಕರೆದುಕೊಂಡು ನಗರಕ್ಕೆ ಹೋಗಲೆಂದು ಆತ ಸೋಮಪುರ ತಲಪಿದ್ದ. ಭಾಗೀರಥಿ ಅಲ್ಲಿ ಹರ್ಷಚಿತ್ತಳಾಗಿದ್ದಳು. {{gap}}ಗೋಪಾಲ ವಿಳಂಬವಿಲ್ಲದೆ, " ನಾಳೆ ಬೆಳಗ್ಗೆ ಹೊರಡ್ಬೇಕಲ್ಲ," ಎಂದ ಹೆಂಡತಿಯೊಡನೆ. {{gap}}ಅವಳ ದೃಷ್ಟಿ ಗಂಡನನ್ನು ನೇರವಾಗಿ ಸಂಧಿಸಿತು.<noinclude></noinclude> 4d4w6ychuxqvr53kybloyjsl9p8ait9 ಪುಟ:ನೋವು.pdf/೧೯೯ 104 20931 322935 205582 2026-05-27T08:11:09Z Shreelatha.Halemane 7642 /* Validated */ 322935 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=|right=೧೮೯}} {{gap}}" ನಾನು ಬರೋದಿಲ್ಲ." {{gap}}" ಅದು ಹ್ಯಾಗಾಗುತ್ತೆ?" {{gap}}" ಬರೋದಿಲ್ಲ, ಅಂದೆ. ನೀವು ಬೇಕಾದರೆ ಹೋಗ್ಬಹುದು." {{gap}}" ದೊಡ್ಡಮ್ಮ ಏನೆಂದಾರು?" {{gap}}"ಏನು ಬೇಕಾದರೂ ಅನ್ಲಿ, ನಾನು ಬರೋದಿಲ್ಲ." {{gap}}" ಇಷ್ಟು ದಿವಸವಾದರೂ ನಗರ ನೋಡ್ಲಿಲ್ಲ ಅಂತಿದ್ದೆ." {{gap}}"ಮಗ ದೊಡ್ಡವನಾದ್ಮೇಲೆ ಕರಕೊಂಡು ಹೋಗ್ತಾನೆ. ಮದುವೆಗೆ ನಾನು ಬರೋದಿಲ್ಲ." {{gap}}ಗೋಪಾಲ ನಿಟ್ಟುಸಿರುಬಿಟ್ಟ. {{gap}}ಅವನ ಮಾವ ಅಳಿಯನನ್ನು ಪಕ್ಕಕ್ಕೆ ಕರೆದು, "ಓರಗಿತ್ತಿಯರು ಮನೆಗೆ ಬರೋ ಕ್ಕೂ ಮೂಂಚೇನೆ ಹೀಗೆ. ಮುಂದೆ ಏನಾಗುತ್ತೋ ಏನೋ. ಸುಮ್ನೆ ಮನಸ್ಸಿಗೆ ಹಚ್ಕೊಂಡಿದಾಳೆ. ಮದುವೆಗೆ ಬರ್ಲೇ ಬೇಕೂಂತ ಒತ್ತಾಯ ಮಾಡ್ಬೇಡಿ," ಎಂದರು. {{gap}}ಗೋಪಾಲ ಕೇಳಿದ : {{gap}}" ನೀವು ?" {{gap}}" ಅವಳ್ನ ಇಲ್ಲಿ ಬಿಟ್ಬಿಟ್ಟು ಹ್ಯಾಗ್ಬರ್ಲಿ?" {{gap}}" ಆಧ್ನಿಜ. ನಾನೊಬ್ಬನೇ ಹೋಗ್ತೀನಿ." . {{gap}}ದಾರಿಯುದ್ದಕ್ಕೂ ತಲೆ ಕೆರೆದುಕೊಂಡ ಗೋಪಾಲ, ನಗರ ತಲಪಿ, ಕಲ್ಯಾಣ ಮಂಟಪಕ್ಕೆ ಬಂದು, "ಅವಳಿಗಿನ್ನೂ ಆರೋಗ್ಯ ಸರಿಯಿಲ್ಲ. ಅವತು ಇದ್ದ ಹಾಗೇ ಇದಾಳೆ," ಎಂದ. {{gap}}ಮೊಮ್ಮಗ ಆಡಿದುದು ಎಷ್ಟು ನಿಜವೋ ಎಷ್ಟು ಸುಳ್ಳೋ, ಮನೆಯ ಹಿರಿಯ ಸೊಸೆ ಮೈದುನಂದಿರ ಮದುವೆಗೆ ಬರಲಿಲ್ಲ ಎನ್ನುವುದಷ್ಟೇ ತಥ್ಯ, ದೊಡ್ಡಮ್ಮನ ಪಾಲಿಗೆ ಚಿಂತೆ ಯಿಂದ ಅವರ ಹುಬ್ಬಗಳು ಭಾರವಾದವು. {{gap}}ಮದುವೆ ಮನೆಯಲ್ಲಿ 'ಅಸ್ವಸ್ಥ'ಳಾಗುವುದಕ್ಕಿಂತ ಬರದಿದ್ದುದೇ ಒಳಿತಾಯಿತು– ಎಂದುಕೊಂಡರು ಕೊನೆಯಲ್ಲಿ. {{gap}}ಗೋಪಾಲನೊಬ್ಬನೇ ಬಂದುದನ್ನು ಕಂಡ ವಿಷ್ಣುಮೂರ್ತಿಯಾವರೂ ಮೋಹನ ರಾಯರೂ ಸಮಾಧಾನದ ನಿಟುಸಿರುಬಿಟ್ಟರು. . {{gap}}ಈಗ ಅಯ್ಯನವರ ಹೊಸ ಸೊಸೆಯರು ಮನೆಗೆ ಬಂದಾಗ ಹಿರಿಯವಳು ಕಣ್ಣಿಗೆ ಬೀಳದುದನ್ನು ಕಂಡು ಹಳ್ಳಿಯವರಿಗೆ ವಿಸ್ಮಯವಾಯಿತು. {{gap}}ಮಾತುಗಳಿಗೇನು ಕಡಮೆ ? – {{gap}}" ತವರಿಗೆ ಹೋದಾಕೆ ಬಂದೇ ಇಲ್ಲ." {{gap}}" ಆವತ್ತಿಂದೇ ಕಾಯಿಲೆ. ಭೂತಚೇಷ್ಟೆ." {{gap}}[ಗೌಡರ ಕಿವಿಗೂ ಅದು ಬಿತ್ತು. ತಮಗೆ ದಿನಗಳು ಯಾತನಾಮಯ ಎನಿಸಿದಾಗ, ಅವರಿಗೆ ಸಂತೋಷ-ಸಂಭ್ರಮ ಎಂದುಕೊಂಡಿದ್ದರು. ಅದು ವಿಚಿತ್ರವಾಗಿ ಕಂಡಿತ್ತು. ಆದರೆ ಈಗ, ಒಂದಿಷ್ಟು ಕಹಿಯನ್ನು ದೇವರು ಅವರಿಗೂ ಬಡಿಸಿದ್ದಾನೆ -ಎಂದು ತಮ್ಮನ್ನು ತಾವೇ ಸಂತೈಸಿದರು.]<noinclude></noinclude> 5tyqd9gv7r73tuwlygqpb1dq6aexfv1 ಪುಟ:ನೋವು.pdf/೨೦೦ 104 20932 322936 205583 2026-05-27T08:16:53Z Shreelatha.Halemane 7642 /* Validated */ 322936 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=೧೯೦|right=}} {{gap}}ಗಜಾನನ ಹೋಟೆಲಿನ ಒಲೆಗೆ ಮತ್ತೆ ಉರಿಹಾಕಿದ. {{gap}}"ನೀನು ಇಲ್ಲೇ ಇರ್ಬೇಕು ಜಲ್ಜಾ," ಎಂದು ಕಾಮಾಕ್ಷಿ ದುಂಬಾಲು ಬಿದ್ದುದರಿಂದ, "ಆರತಕ್ಷತೆ ಆಗೋತನಕ ಇರ್ತೀನೆಮ್ಮ," ಎಂದು ಜಲಜಮ್ಮ ತನ್ನ ಮಗುವಿನೊಡನೆ ಶ್ರಿನಿವಾಸಯ್ಯನವರಲ್ಲಿಯೇ ಉಳಿದಳು. {{gap}}ಆರತಿಗೆ ಆ ಬದುಕು ಒಗ್ಗುವುದು ಸಾಧ್ಯವೇ ಇರಲಿಲ್ಲ. ತನ್ನ ತಂದೆಗೂ ವಿಷ್ಣುಮೂರ್ತಿಯವರಿಗೂ ಇರುವ ಸಖ್ಯವನ್ನು ಸ್ಮರಿಸಿಕೊಂಡು, ಕಾಮಾಕ್ಷಿಯೊಡನೆ ಸ್ನೇಹದಿಂದಿರಲು ಅವಳು ಪ್ರಯತ್ನಪಟ್ಟಳು. ವಿದ್ಯೆಯಲ್ಲಿ ಸಂಸಾರದಲ್ಲಿ ಅಂತಸ್ತಿನಲ್ಲಿ ಹೋಟೆಲು ಮಾಲಿಕನ ಆ ಮಗಳು ತನಗಿಂತ ಕೀಳು ಎಂಬ ಅರತಿಯ ಖಚಿತಾಭಿಪ್ರಾಯ ಅವರೊಳಗೆ ಆತ್ಮೀಯತೆ ಬೆಳೆಯಲು ಅಡ್ಡಿಯಾಯಿತು. ನಿಷೇಕ ಪ್ರಸ್ತದ ಶಾಸ್ತ್ರವೂ ಮುಗಿದಿದ್ದ ದಂಪತಿಗಳು. ಆರತಿ ಪದ್ಮನಾಭನ ಕೊಠಡಿಯನ್ನು ತನ್ನ'ಕೋಟೆಯಾಗಿ ಮಾಡಿಕೊಂಡಳು. ಅಗಣಿ ಹಾಕಿಕೊಂಡು ಹಗಲೋ, ಇರುಳೋ, ಹೆಣ್ಣುಗಂಡಿನ ಆಟ ಅವರು ಆಡಿದ್ದೇ ಆಡಿದ್ದು. {{gap}}ಗೋಪಾಲನಿಗೆ ಪಡಸಾಲೆಗೆ ವರ್ಗವಾಗಿತ್ತು. ಗೋವಿಂದ ಕಾಮಾಕ್ಷಿಯರ ಚೆಲ್ಲಾಟಕ್ಕೆ ಅವನ ಕೊಠಡಿ ಸ್ಥಳಾವಕಾಶವಿತ್ತಿತು. {{gap}}ಕಾಮಾಕ್ಷಿ ಗಂಡನನ್ನು ಕೇಳಿದಳು : {{gap}}"ಯಾವುದ್ರೀ ನಿಮ್ಮ ರೂಮು ?" {{gap}}"ಅದೇ-ಪದ್ಮ ಇರೋದು." {{gap}}"ಆ ರೂಮು ಇದಕ್ಕಿಂತ ಚೆನ್ನಾಗಿದೆ. ಅಲ್ಲೇ ಇರೋಕಾಗ್ತಿರ್ಲಿಲ್ವ ನಾವು? ಈ ಕತ್ತಲೆ ಕೋಣೇಲಿ-" {{gap}}"ಕತ್ತಲೆ ಕೋಣೇನೇ ಮೇಲು ಅಲ್ಲಾ ?" {{gap}}"ಅದೇನು ಮೇಲು, ಬೆಳಕಿಲ್ದೆ ?” {{gap}}"ದೀಪ ಹಚ್ಕೊಂಡರಾಯ್ತು." {{gap}}"ದೀಪ ? ಹಗಲು ?" {{gap}}"ಅಲ್ಲ, ರಾತ್ರೆ." {{gap}}"ಹೋಗ್ರಿ ನೀವು. ನಾನು ಹೇಳಿದ್ದು ನಿಮಗೆ ಅರ್ಥವಾಗೊಲ್ಲ" {{gap}}"ಬಿಚ್ಚಿ ಹೇಳು," ಎಂದು ಹೆಂಡತಿಯ ಉಡಿಯತ್ತ ಕೈಚಾಚಿ ಗೋವಿಂದನೆಂದ. {{gap}}ಕಾಮಾಕ್ಷಿ ಗಂಡನಿಗೆ ಆತುಕೊಂಡು ಅವನ ಭುಜವನ್ನು ಕಚ್ಚಿದಳು. {{gap}}ಆ ವಿಷಯದಲ್ಲಿ ಅವಳು ಮದವೇರಿದ ಹೆಣ್ಣಾನೆ. ಹೊರಗೆ ಜನರಿದ್ದಾರೆ;ಘೀಳಿಡಬೆಡ–ಎಂದು ಎಷ್ಟು ಹೇಳಿದರೂ ಕಿವಿಗೆ ನಾಟುವಂತಿರಲಿಲ್ಲ. ಗಟ್ಟಿ ಉಸಿರಾಡ್ಬೇಡ-ಎನ್ನುತ್ತಿದ್ದ ಗೋವಿಂದ ಪದೇ ಪದೇ. ಗಂಟಲಿನಿಂದ ಸ್ವರ ಹೊರಬೀಳದಿರಲೆಂದು ತನ್ನ ಬಾಯಿಯಿಂದ ಅವಳ ಬಾಯಿಯನ್ನು ಒತ್ತಿ ಹಿಡಿಯುತ್ತಿದ್ದ. {{gap}}ದಣಿವು ಎಂಬುದಿರಲಿಲ್ಲ ಕಾಮಾಕ್ಷಿಗೆ. ಮತ್ತೆ ಕೆಲ ನಿಮಿಷಗಳಲ್ಲೇ ಮಾತು. {{gap}}"ಅಲ್ರೀ, ಆ ಸಣಕಲಮ್ಮ ಏನ್ಮಾಡ್ತಿದಾಳೇಂತ ಆ ರೂಮ್ನಲ್ಲಿ ಬಚ್ಚಿಟ್ಕೊಂಡು." {{gap}}"ಇನ್ನೇನ್ಮಾಡ್ತಾಳೆ? ಕಥೆ ಪುಸ್ತಕ ಓದ್ತಿರ್ಬೇಕು.” {{gap}}"ಅವಳು ಅದಕ್ಕೇ ಲಾಯಕ್ಕು. ಓದೋದು ಅಂದರೆ ನನಗೆ ತಲೆನೋವು.”<noinclude></noinclude> mjyi3qciur90x7j2qado5e4dgceaxit ಪುಟ:ನೋವು.pdf/೨೦೧ 104 20933 322850 205584 2026-05-27T02:25:37Z Pragathi. BH 7585 /* Validated */ 322850 proofread-page text/x-wiki <noinclude><pagequality level="4" user="Pragathi. BH" /></noinclude> ನೋವು ೧೯೧ {{gap}}"ಇನ್ಯಾವುದು ನಿನಗಿಷ್ಟ?"<br /> {{gap}}“ಇದು!”<br /> {{gap}}ತೋರು ಬೆರಳಿನಿಂದ ಗೋವಿಂದನ ಹೊಟ್ಟೆಯನ್ನು ತಿವಿದಳು ಕಾಮಾಕ್ಷಿ.<br /> {{gap}}"ಜಲಜ ಪಾಪ, ದೊಡ್ಡಮ್ಮನೊಟ್ಟಿಗೆ ಒಬ್ಳೇ ಇದಾಳೆ. ಹೋಗಿ ಅವಳ ಜತೇಲಿರು.”<br /> {{gap}}"ಯಾಕಪ್ಪ ಅವಳ ಮೇಲೆ ನಿಮಗಿಷ್ಟೊಂದು ಕನಿಕರ ?" <br /> {{gap}}"ಸುಮ್ನೆ ಹೇಳ‍್ದೆ. ಮಗು ಚಿಕ್ದು."<br /> {{gap}}"ಮಗೂಗೇನು, ಮಲ್ಕೊಂಡಿರುತ್ತೆ."<br /> {{gap}}"ಕೆಲಸ್ದಲ್ಲಾದರೂ ಸಹಾಯ ಮಾಡು."<br /> {{gap}}ಕಾಮಾಕ್ಷಿ ಗಟ್ಟಿಯಾಗಿ ನಕ್ಕಳು.<br /> {{gap}}"ನಾನೆ ? ನಾನು ಕೆಲಸ ಮಾಡ್ಲೆ ? ಹಹ್ಹಹ್ಹ..." <br /> {{gap}}"ಶ್ !" ಎಂದ ಗೋವಿಂದ. ಪ್ರಯೋಜನವಾಗಲಿಲ್ಲ. ಮಾತು ನಿಲ್ಲಿಸಬೇಕಾದರೆ ಆಟವಾಡಬೇಕು. ಕಾಮಾಕ್ಷಿ ಸಿದ್ಧವಾಗಿದ್ದಳು.<br /> {{gap}}ಗೋವಿಂದ ಮನಸ್ಸಿಲ್ಲದ ಮನಸ್ಸಿನಿಂದ ಕಣಕ್ಕಿಳಿದ.<br /> {{gap}}...ಹಳ್ಳಿಗೆ ಬಂದ ಮಾರನೆಯ ದಿನ ಕಾಮಾಕ್ಷಿ ಗಂಡನನ್ನು ಕೇಳಿದಳು :<br /> {{gap}}"ಅಲ್ರೀ, ಅಮ್ಮಾವ್ರು ಯಾವಾಗ್ಬರ್ತರಂತೆ ?"<br /> {{gap}}ಗೋವಿಂದನೆಂದ :<br /> {{gap}}"ಗೊತ್ತಿಲ್ಲ, ಆರತ್ಯಕ್ಷತೆ ದಿವಸ ಹಾಜರಾಗ್ಬಹುದೂಂತ ಕಾಣುತ್ತೆ. ಕರಕೊಂಡ್ಬ ರೋಕೆ ಗೋಪಾಲನ್ನ ಕಳಿಸ್ತಾರಂತೆ.”<br /> {{gap}}"ಆಕೆ ಬಂದ್ಮೇಲೆ ನಮಗೆ ರೂಮು ?”<br /> {{gap}}"ಪದ್ಮನಿಗೆ ಕಾಲೇಜಿಲ್ವೆ ? ಹೊರಟ್ಹೋಗ್ತಾನೆ."<br /> {{gap}}"ಸಣಕಲಮ್ಮ ?"<br /> {{gap}}"ಹಾಗನ್ಬಾರ್ದು ಕಾಮೂ. ಅವಳಿಗೇನು ಹೆಸರಿಲ್ವೆ ?"<br /> {{gap}}"ಇದೆ. ಆ-ರತಿ ದೇವಿ; ಕಾಮನರಗಿಣಿ."<br /> {{gap}}"ಅವನ ಹಿಂದೆ ಅವಳೂ ಹೋಗ್ತಾಳೆ."<br /> {{gap}}"ಆಮೇಲೆ ಆ ರೂಮು ನನ್ದೊ ?”<br /> {{gap}}"ಹ್ಞು."<br /> {{gap}}"ಅಲ್ರೀ... ಈ ಮನೆ ಒಂದು ಹಳೇಕಾಲದ ಹೋಟ್ಲ ಥರ ಇಲ್ವೆ ?”<br /> {{gap}}"ಏನು ಹಾಗಂದ್ರೆ?"<br /> {{gap}}"ಒಂದೊಂದು ರೂಮ್ನಲ್ಲಿ ಒಂದೊಂದು ಸಂಸಾರ. ರೂಮುಗಳಿಗೆ ನಂಬರ್ ಹಾಕ್ಬೌದು. <br /> {{gap}}"ಗಣೇಶ ಭವನದ ಜ್ಞಾಪಕ ಬರುತ್ತೊ ?”<br /> {{gap}}"ಹೂ೦ದ್ರೆ..." <br /> {{gap}}“ಸರಿಹೋಯ್ತು. ಅಮ್ಮನ ನೆನಪಾಗುತ್ತೇನೊ ?”<br /> {{gap}}"ಊಹೂಂ. ಕೇಸರಿಭಾತಿಂದು. ಆ ಜಲಜೆಗೆ ಹೇಳಿ ಬೆಳಗ್ಗೆ ಮಾಡಿಸ್ಬೇಕು.” <br /> {{gap}}"ಮಾಡ್ಸು, ಅದಕ್ಕೇನು?"<noinclude></noinclude> 74kccwus0wullfxmdgpjbcjpwwlmssw ಪುಟ:ನೋವು.pdf/೨೦೪ 104 20936 322939 205587 2026-05-27T08:53:47Z Shreelatha.Halemane 7642 /* Validated */ 322939 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ನೋವು|left=೧೯೪|right=}} ಇಲ್ಲಿ ಪರಾಜಿತನಾದುದಷ್ಟೇ ಸತ್ಯ. ಅದೊಂದು ಕಳಂಕ. ತಾನು ಗಂಡಸು. ಅದನ್ನು ತಾನು ತೊಡೆಯಬೇಕು. ತೊಡೆ-'] {{gap}}" ಅಯ್ಯೋ ఆ ಮೂಲೇಲಿ ನೀರಿದೆಯಲ್ರೀ. {{gap}}" ಅದೇನ್ಮಾಡುತ್ತೆ ? ಈ ಕಡೆ ನೋಡು ಹುಲ್ಲಿನ ಹಾಸಿಗೆ." {{gap}}" ಇಳಿಯೋದು ಯಾತಕ್ಕೇಂತ ?" {{gap}}" ಬಾ, ಹೇಳ್ತೀನಿ." {{gap}}"......" {{gap}}" ಇಲ್ಲಿ ಕೂತ್ಕೊಳ್ಳೋಣ." {{gap}}"......" {{gap}}" ನನ್ನ ಎದೆಗೆ ಒರಕ್ಕೊ..." {{gap}}" ಎಂಥ ಆಸೆಯಪ್ಪ ನಿಮ್ಮದು. ಭಯವಾಗುತ್ತಲ್ರೀ ಇಲ್ಲಿ. .." {{gap}}''ನಾನಿದೀನಿ ಸಾರತೀ..." {{gap}}" ಹೆಸರು ಬದಲಾಯಿಸ್ತೀರಲ್ರೀ ನಿವು..." {{gap}}" ಸಮ್ಮೂ, ಸಾರೂ... ಯಾವ ಹೆಸರಿಟ್ಟರೂ ನೀನು ನನ್ನ ಗುಲಾಬಿಯೇ..." {{gap}}ತುಟಿಗಳಿಗೆ ತುಟಿ. ಎದೆಯ ಮೇಲೆ ಕೈ. ಕೊರಳಿಗೆ ಕೈಗಳ ಹಾರ. {{gap}}" ಸ್ವಲ್ಪ ಹೊತ್ತು ಮಲಕೊಂಡಿರೋಣ." {{gap}}" ಥೂ, ಬೇಡ." {{gap}}" ಸುಮ್ನೆ ಒಂದೈದ್ನಿಮಿಷ... " {{gap}}" ಯಾರಾದರೂ ನೋಡೊಲ್ವೆ ಅಂದ್ರೆ ?" {{gap}}" ಒಂದು ನರಹುಳವೂ ಇಲ್ಲಿಗೆ ಬರೋಲ್ಲ." {{gap}}ಹುಲ್ಲಿನ ಹಾಸಿಗೆ ಕಾವೇರಿತು. ಪದ್ಮನಾಭನ ಉಸಿರು ಬಿಸಿಯಾಯಿತು. ಗಂಟಲು ಗೊರಗೊರವೆಂದಿತು. ಆರತಿಯನ್ನು ಸುಭದ್ರೆಯಾಗಿ ಮಾಡಿ ಆ ದೇಹವನ್ನು ಆತ ಬಿಗಿದಪ್ಪಿ ಕೊಂಡ. {{gap}}ಆರತಿಯ ಬೇಡ ಬೇಡ ಪದ ಕ್ರಮೇಣ ಕ್ಷೀಣವಾಯಿತು... {{gap}}...ಮೂರು ಲೋಕಗಳನ್ನು ಗೆದ್ದ ದೊರೆಯಾಗಿ ಪದ್ಮನಾಭ ಹೆಂಡತಿಯೊಡನೆ ಗುಡ್ಡ ವಿಳಿಯತೊಡಗಿದ. {{gap}}" ಸೀರೆಯೆಲ್ಲಾ ಪುಡಿ, ಪುಡಿ. ನೀವು ನಿರ್ಲಜ್ಜರು. ಕತ್ತಲೆಯಾಗೋವರೆಗೂ ಇಲ್ಲಿಯೇ ಇರೋಣ. ಮನೇಲಿ ಮುಖ ತೋರಿಸೋಕಾಗೊಲ್ಲ," ಎಂದಳು ಆರತಿ. {{gap}}" ಬಾ ಬಾ, ನೀನೊಬ್ಬಳು. ಯಾರಿಗೆ ಏನು ಗೊತ್ತಾಗುತ್ತೆ ?” ಎಂದು ಪದ್ಮನಾಭ ಮುಂದಕ್ಕೆ ಹೆಜ್ಜೆ ಇರಿಸಿದ. {{gap}}...ಮನೆಯಲ್ಲಿ ಅವರಿಬ್ಬರನ್ನೂ ಕಾಮಾಕ್ಷಿ ದುರದುರನೆ ನೋಡಿದಳು . {{gap}}ಆ ರಾತ್ರೆ ಪದ್ಮನಾಭನಿಗೆ ಗಾಢ ನಿದ್ದೆ. ಆರತಿ ಪಿಳಿಪಿಳಿ ನೋಟದಿಂದ ಛಾವಣಿ ದಿಟ್ಟಿಸುತ್ತ ನಡುರಾತ್ರೆಯವರೆಗೂ ಕಾಲ ಕಳೆದಳು. {{gap}}ಮಾರನೆಯ ದಿನ ಗೋಪಾಲ ಸಂಸಾರ ಸಮೇತನಾಗಿ ಸೋಮಪುರದಿಂದ ಬಂದ.<noinclude></noinclude> evf6yqsd51p5gziim20h2u1wai3z1tx ಪುಟ:ನೋವು.pdf/೨೦೫ 104 20937 322940 205588 2026-05-27T08:55:34Z Pragathi. BH 7585 /* Validated */ 322940 proofread-page text/x-wiki <noinclude><pagequality level="4" user="Pragathi. BH" /></noinclude> ನೋವು ೧೯೫ ಭಾಗೀರಥಿ ಉಲ್ಲಸಿತಳಾಗಿದ್ದಳು. ಕಾಮಾಕ್ಷಿಯೇನೋ ಧಡೂತಿ ವ್ಯಕ್ತಿಯೇ. ಆರತಿ ಮಾತ್ರ ಸೀರೆ ಉಟ್ಟ ದೊರೆಸಾನಿ. ಶ್ರೀಪಾದನನ್ನು ಅವರ ಕೈಗೆ ಕೊಡದೆ, “ನನ್ನ ಕಾಯಿಲೆಯಿಂದ ಮದುವೆ ತಪ್ಪೋಯ್ತು ," ಎಂದಳು ಭಾಗೀರಥಿ ಓರಗಿತ್ತಿಯರೊಡನೆ. ದೊಡ್ಡಮ್ಮ ಅವಳನ್ನು ಒಳಕ್ಕೆ ಕರೆದು, " ಆರತ್ಯಕ್ಷತೆ ಮುಗಿಸ್ಕೊಂಡು ಹೆಂಡತಿ ಜತೆ ಪದ್ಮ ನಗರಕ್ಕೆ ಹೋಗ್ತಾನೆ. ಅಷ್ಟರವರೆಗೆ ನನ್ಜತೆ ಮಲಕೊ, ಭಾಗೀ. ಸಹಾಯಕ್ಕೆ ಇರ್ಲೀಂತ ಜಲಜೇನ ಇಲ್ಲಿ ಇರಿಸ್ಕೊಂಡಿದೀನಿ. ಆಮೇಲೆ ಅವಳೂ ಹೊರಹೋಗ್ತಾಳೆ," ಎಂದರು. " ಆಗಲಿ ದೊಡ್ಡಮ್ಮ," ಎಂದಳು ಭಾಗೀರಥಿ. ಆರತ್ಯಕ್ಷತೆಯ ದಿನ ಬೆಳಗ್ಗೆ ವಿಷ್ಣುಮೂರ್ತಿಯವರು ಹೇಳಿದ್ದಂತೆ ನಗರದಿಂದ 'ದಂಡು' ಬಂದಿಳಿಯಿತು. ದುಂಡಿನವರು ನಾಲ್ಕು ಗ್ಯಾಸ್ ದೀಪಗಳನ್ನು ತಂದಿದ್ದರು. ಆ ಜನ ಆ ಸಡಗರ-ನಗರದ ಥಳಕು. ಕಣಿವೇಹಳ್ಳಿಯವರು ಬೆರಗಾಗಿ ನೋಡಿದರು. ಆರತ್ಯಕ್ಷತೆ, ಭೂರಿ ಭೋಜನ. ಶಾಮೇಗೌಡರು ಬಂದರು. " ಏನು ಶಾಮಣ್ಣ? ನಾಗಮ್ಮ-ಸುಬ್ಬಿ ಬರಲಿಲ್ವಲ್ಲ," ಎಂದರು ದೊಡ್ಡಮ್ಮ, ಮುಗುಳುನಗೆ ಬೀರಿ, " ನಾನೊಬ್ನೇ ಬಂದೆ," ಎಂದರು ಗೌಡರು. " ನಗರದಲ್ಲಿ ಧಾರೆಗೆ ರಂಗಣ್ಣನೂ ಬರ್ಲಲ್ಲ," ಎಂದು ದೊಡ್ಡಮ್ಮ ತಮ್ಮ ಬೇಸರವನ್ನು ತೋಡಿಕೊಂಡರು. ಗೌಡರು ಸುಳ್ಳಾಡಬೇಕಾಯ್ತು : "ರಂಗನಿಗೆ ತಿಳಿಸಿದ್ದೆ. ಅದೇನು ತೊಂದರೆಯಾಯ್ತೊ ?” "ನಾವು ನಗರಕ್ಕೆ ಹೋದ ಸಮಯ ಸುಬ್ಬಿ ನೀರಿಗೆ ಬಿದ್ಲೂಂತ ಕೇಳ್ದೇ..." " ಊಂ. ಕಾಲು ಜಾರ್ತು." " ಈಗ ಚೆನ್ನಾಗಿದಾಳಾ ?” "ಓ..." ಗೌಡರು ಎರಡು ಜೋಡಿಗೂ ಐವತ್ತು ಐವತ್ತು ರೂಪಾಯಿಗಳ ಉಡುಗೊರೆ ಓದಿದರು. ದೊಡ್ಡಮ್ಮ ಸಿಹಿ ಭಕ್ಷ್ಮಗಳನ್ನು ಪಾತ್ರೆಯಲ್ಲಿಟ್ಟು ಗಜಾನನನ ಕೈಲಿ ಗೌಡರ ಮನೆಗೆ ಕಳುಹಿಸಿದರು. ... ಈ ಎಲ್ಲ ಸಂಭ್ರಮದಲ್ಲಿ ಭಾಗೀರಥಿಯನ್ನು ಕೇಳುವವರೇ ಇರಲಿಲ್ಲ. ಅಡುಗೆ ಮನೆಯ ಉಸ್ತುವಾರಿ ಅವಳದು. ದೊಡ್ಡಮ್ಮ ತನ್ನದೊಂದು ದೃಷ್ಟಿಯನ್ನು ಆಕೆಯ ಮೇಲೆಯೇ ಇಟ್ಟಿದ್ದರು.<noinclude></noinclude> 6233s5stvdjbd35ioypzysevfb24end 322941 322940 2026-05-27T08:58:26Z Shreelatha.Halemane 7642 /* Validated */ 322941 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ನೋವು|left=|right= ೧೯೫}} {{gap}}ಭಾಗೀರಥಿ ಉಲ್ಲಸಿತಳಾಗಿದ್ದಳು. {{gap}}ಕಾಮಾಕ್ಷಿಯೇನೋ ಧಡೂತಿ ವ್ಯಕ್ತಿಯೇ. ಆರತಿ ಮಾತ್ರ ಸೀರೆ ಉಟ್ಟ ದೊರೆಸಾನಿ. {{gap}}ಶ್ರೀಪಾದನನ್ನು ಅವರ ಕೈಗೆ ಕೊಡದೆ, “ನನ್ನ ಕಾಯಿಲೆಯಿಂದ ಮದುವೆ ತಪ್ಪೋಯ್ತು ," ಎಂದಳು ಭಾಗೀರಥಿ ಓರಗಿತ್ತಿಯರೊಡನೆ. {{gap}}ದೊಡ್ಡಮ್ಮ ಅವಳನ್ನು ಒಳಕ್ಕೆ ಕರೆದು, " ಆರತಕ್ಷತೆ ಮುಗಿಸ್ಕೊಂಡು ಹೆಂಡತಿ ಜತೆ ಪದ್ಮ ನಗರಕ್ಕೆ ಹೋಗ್ತಾನೆ. ಅಷ್ಟರವರೆಗೆ ನನ್ಜತೆ ಮಲಕೊ, ಭಾಗೀ. ಸಹಾಯಕ್ಕೆ ಇರ್ಲೀಂತ ಜಲಜೇನ ಇಲ್ಲಿ ಇರಿಸ್ಕೊಂಡಿದೀನಿ. ಆಮೇಲೆ ಅವಳೂ ಹೊರಹೋಗ್ತಾಳೆ," ಎಂದರು. {{gap}}" ಆಗಲಿ ದೊಡ್ಡಮ್ಮ," ಎಂದಳು ಭಾಗೀರಥಿ. {{gap}}ಆರತಕ್ಷತೆಯ ದಿನ ಬೆಳಗ್ಗೆ ವಿಷ್ಣುಮೂರ್ತಿಯವರು ಹೇಳಿದ್ದಂತೆ ನಗರದಿಂದ 'ದಂಡು' ಬಂದಿಳಿಯಿತು. {{gap}}ದುಂಡಿನವರು ನಾಲ್ಕು ಗ್ಯಾಸ್ ದೀಪಗಳನ್ನು ತಂದಿದ್ದರು. {{gap}}ಆ ಜನ ಆ ಸಡಗರ-ನಗರದ ಥಳಕು. ಕಣಿವೇಹಳ್ಳಿಯವರು ಬೆರಗಾಗಿ ನೋಡಿದರು. ಆರತಕ್ಷತೆ, ಭೂರಿ ಭೋಜನ. {{gap}}ಶಾಮೇಗೌಡರು ಬಂದರು. {{gap}}" ಏನು ಶಾಮಣ್ಣ? ನಾಗಮ್ಮ-ಸುಬ್ಬಿ ಬರಲಿಲ್ವಲ್ಲ," ಎಂದರು ದೊಡ್ಡಮ್ಮ, {{gap}}ಮುಗುಳುನಗೆ ಬೀರಿ, " ನಾನೊಬ್ನೇ ಬಂದೆ," ಎಂದರು ಗೌಡರು. {{gap}}" ನಗರದಲ್ಲಿ ಧಾರೆಗೆ ರಂಗಣ್ಣನೂ ಬರ್ಲಿಲ್ಲ," ಎಂದು ದೊಡ್ಡಮ್ಮ ತಮ್ಮ ಬೇಸರವನ್ನು ತೋಡಿಕೊಂಡರು. {{gap}}ಗೌಡರು ಸುಳ್ಳಾಡಬೇಕಾಯ್ತು : {{gap}}"ರಂಗನಿಗೆ ತಿಳಿಸಿದ್ದೆ. ಅದೇನು ತೊಂದರೆಯಾಯ್ತೊ ?” {{gap}}"ನಾವು ನಗರಕ್ಕೆ ಹೋದ ಸಮಯ ಸುಬ್ಬಿ ನೀರಿಗೆ ಬಿದ್ಲೂಂತ ಕೇಳ್ದೇ..." {{gap}}" ಊಂ. ಕಾಲು ಜಾರ್ತು." {{gap}}" ಈಗ ಚೆನ್ನಾಗಿದಾಳಾ ?” {{gap}}"ಓ..." {{gap}}ಗೌಡರು ಎರಡು ಜೋಡಿಗೂ ಐವತ್ತು ಐವತ್ತು ರೂಪಾಯಿಗಳ ಉಡುಗೊರೆ ಓದಿಸಿದರು. {{gap}}ದೊಡ್ಡಮ್ಮ ಸಿಹಿ ಭಕ್ಷ್ಮಗಳನ್ನು ಪಾತ್ರೆಯಲ್ಲಿಟ್ಟು ಗಜಾನನನ ಕೈಲಿ ಗೌಡರ ಮನೆಗೆ ಕಳುಹಿಸಿದರು. {{gap}}.. ಈ ಎಲ್ಲ ಸಂಭ್ರಮದಲ್ಲಿ ಭಾಗೀರಥಿಯನ್ನು ಕೇಳುವವರೇ ಇರಲಿಲ್ಲ. ಅಡುಗೆ ಮನೆಯ ಉಸ್ತುವಾರಿ ಅವಳದು. {{gap}}ದೊಡ್ಡಮ್ಮ ತನ್ನದೊಂದು ದೃಷ್ಟಿಯನ್ನು ಆಕೆಯ ಮೇಲೆಯೇ ಇಟ್ಟಿದ್ದರು.<noinclude></noinclude> csfht0sux2zfad3mkuchkt4otcdorr3 ಪುಟ:ಸ್ವಾಮಿ ಅಪರಂಪಾರ.pdf/೧೦೮ 104 21258 322991 206421 2026-05-27T11:46:40Z Pragathi. BH 7585 /* Validated */ 322991 proofread-page text/x-wiki <noinclude><pagequality level="4" user="Pragathi. BH" />{{rh|left=೧೦೬|center=ಸ್ವಾಮಿ ಅಪರಂಪಾರ |right=}}</noinclude> {{gap}}"ಮನೆ ಜಗಳ. ಮೂರನೆಯವರು ಬರಬಾರದಿತ್ತು." {{gap}}“ಇದೆಲ್ಲ ಪ್ರಾಪಂಚಿಕರಿಗೆ ಸೇರಿದ್ದು. ತಮ್ಮಂಥ ವಿರಕ್ತರು ಇದನ್ನು ಮನಸ್ಸಿಗೆ ತಕೋ ಬಾರದು." {{gap}}ಚನ್ನಬಸಪ್ಪನ ಧ್ವನಿಯಲ್ಲಿ ಕಾಠಿನ್ಯದ ಛಾಯೆ ಬೆರೆಯಿತು. {{gap}}"ಸಿಟ್ಟಾಗಬೇಡ, ಚನ್ನಬಸಪ್ಪ. ಸಹಜವ ದುಡಿದರೆ ಯಾರಿಗೂ ಸೇರದು; ಅಸಹಜ ಕಲ್ಲದೆ ಲೋಕ ಭಜಿಸದು. ರಾಜ್ಯ ಹಾಳಾಗತದೆ ಅಂತ ಸಂಕಟವಾಗಿ ಒಂದು ಮಾತು ಹೇಳೋಕೆ ಬಂದೆವು. ಇನ್ನು ಹೊರಡತೀವಿ." {{gap}}ಅಪರಂಪಾರ ಎದ್ದ. {{gap}}ಇಷ್ಟು ಬೇಗ ಸ್ವಾಮಿಗಳು ಹೊರಟರಲ್ಲ ಎಂದು ದೇವಮ್ಮಾಜಿ ಕಕ್ಕಾವಿಕ್ಕೆಯಾದಳು. ಅವಳು ఆంజಲೀಬದ್ಧ್ ఆంದಳು: {{gap}}“ಹಣ್ಣು ಹಂಪಲು ಏನಾದರೂ..." {{gap}}"ಈಗ ಬೇಡ, ತಾಯಿ" ಎಂದ ಅಪರಂಪಾರ. {{gap}}"ಹೋಗಲಿ, ಬಿಡು. ಇನ್ನೊಮ್ಮೆ ಬರತಾರೆ" ಎಂದು ಚನ್ನಬಸಪ್ಪ ನುಡಿದ. {{gap}}ಜಂಗಮರು ಅಂಗಳ ದಾಟುತ್ತಿದ್ದಂತೆ ಅವನೆಂದ: {{gap}}"ಸ್ವಾಮಿಗಳ ಹೆಸರು ತಿಳೀಲಿಲ್ಲ." {{gap}}"ನಮ್ಮ ಹೆಸರೆ? ನಾವು ಅಪರಂಪಾರರು...ಅಪರಂಪಾರರು!" {{gap}}...ಮನೆಯೊಳಕ್ಕೆ ಮರಳಿದ ಚನ್ನಬಸಪ್ಪ ನಡುಮನೆಯ ಉಯ್ಯಾಲೆಯ ಮೇಲೆ ಕುಳಿತು, 'ಅಪರಂಪಾರ...ಈ ಹೆಸರು ಕೇಳಿರುವೆನಲ್ಲ? ವೀರಪ್ಪಾಜಿಯೇನು ಈತ?' ಎಂದು ಗೊಂದಲಕ್ಕೀಡಾದ. {{gap}}"ಸೋಮಿಗಳು ಹಾಗಂದರೂಂತ ಬೇಜಾರಾಯಾತ?” ಎಂದು ಕೇಳಿದಳು ದೇವಮಾಜಿ, ನಿ೦ತು. {{gap}}"ಇವನು ಠಕ್ಕ ಸನ್ಯಾಸಿ ಅನಿಸತದೆ." {{gap}}"ಶ್ ! ಹಾಗನ್ನಬಾರದು." {{gap}}"ಸುಮ್ಮನಿರು!" {{gap}}ರಾತ್ರೆ ಬಹಳ ಹೊತ್ತು ಚನ್ನಬಸಪ್ಪನಿಗೆ ನಿದ್ರೆ ಹತ್ತಲಿಲ್ಲ. {{gap}}'ವೀರಪ್ಪಾಜಿಯೆಂಬುದು ನಿಜವಾದರೂ ಇವನೇನು ಅರಸನ ಸ್ನೇಹಿತ ಅಲ್ಲವಲ್ಲ' ಎಂದು ಕೊಂಡ ಆತ. {{gap}}'ಆದರೂ. ಚಳಿಗಾಲ ಕಳೆದ ಕೂಡಲೆ ದೌಡು ನಡೀತದೆ ಅಂತ ನಾನು ಹೇಳಬಾರ ದಿತ್ತು' ಎಂದು ವ್ಯಥಿತನಾದ. {{gap}}...ದಾರಿಯಲ್ಲಿ ಅಪರಂಪಾರನೆಂದ: {{gap}}"ಸಿದ್ಧಲಿ೦ಗ!" {{gap}}"ಏನಪ್ಪಣೆ?" {{gap}}"ನಾವೀಗ ಹೋಗೋದು ಕಾವೇರಿ ತಟಕ್ಕಲ್ಲ. ಇಲ್ಲಿಂದ ಪಾರಾಗಬೇಕು." {{gap}}"ಹ್ಞು." {{gap}} "ದಂಡಯಾತ್ರೆಯ ವಿಷಯ ಆತ ಹೇಳಿದನಲ್ಲ_?"<noinclude></noinclude> 1i8xcda8njx1y0ufgwz087jcyoaps6c ಪುಟ:ಸ್ವಾಮಿ ಅಪರಂಪಾರ.pdf/೧೦೯ 104 21259 322989 206422 2026-05-27T11:03:54Z Pragathi. BH 7585 /* Validated */ 322989 proofread-page text/x-wiki <noinclude><pagequality level="4" user="Pragathi. BH" />{{rh|left=|center=ಸ್ವಾಮಿ ಅಪರಂಪಾರ |right=೧೦೭}}</noinclude> {{gap}}'ಹ್ಮ, ಮಡಕೇರಿಗೆ ಈ ಸಂಗತಿ ಗೊತಾಗಬೇಕಾ ?" {{gap}}"ಹೌದು, ನೋಡು, ನೀನೀಗಲೇ ಹೊರಡಬೇಕು. ಮತ್ತೆ ಕೂಡೋಣ." {{gap}}...ಚನ್ನಬಸಪ್ಪ ನಸುಕಿನಲ್ಲೆದು ಕಾವೇರಿನದಿಯತ್ತ ನಡೆದ. ಆ ಇಬ್ಬರು ಜಂಗಮರು ಎಲ್ಲಾದರೂ ಮಲಗಿರುವರೇನೋ ಎಂದು ದಂಡೆಯಗುಂಟ ಓಡಾಡಿದ. ಕಣ್ಣಿಗೆ ಬೀಳ ದಿರಲು, 'ಕೈಕೊಟ್ಟರು' ಎಂದುಕೊಂಡ. ರೆಸಿಡೆಂಟನಿಗೆ ಹೇಳಬೇಕು, ಸೈನಿಕರನ್ನು ನಾಲೂ ದಿಕ್ಕಿಗೆ ಅಟ್ಟಬೇಕು-ಎನಿಸಿತು. 'ನಿನ್ನೆ ರಾತ್ರೆಯೇ ಯಾಕೆ ತಿಳಿಸಲಿಲ್ಲ? ನೀನು ನಾಲಾಯಕು' ಎಂದು ಆತ ಬಯ್ದರೆ? ಅದನ್ನು ಯೋಚಿಸಿ ಚನ್ನಬಸಪ್ಪ ಬೆವರಿದ. {{gap}}ತೆಪ್ಪಗೆ, ಬಂದ ದಾರಿ ಹಿಡಿದು ತನ್ನ ಬಿಡಾರಕ್ಕೆ ನಡೆದ {{gap}}ಎಚ್ಚರಗೊಂಡು ಗಂಡನನ್ನು ಕಾಣದೆ, ತನ್ನಲ್ಲೆ, ತರ್ಕಿಸಿದ್ದ ದೇಮಾಜಿ ಕೇಳಿದಳು : {{gap}}"ಸೋಮಿಗಳನ್ನು ಕರಕೊಂಡು ಬರೋಕೆ ಓಗಿದ್ದಾ?" {{gap}}"ಹೂಂ. ಸಿಕಲಿಲ್ಲ" ಎಂದ ಚನ್ನಬಸಪ್ಪ. ೩೪ {{gap}}ಕರುಣಾಕರ ಮೆನೊನ್ ಕೈಸೆರೆ ಹಿಡಿಯಲ್ಪಟ್ಟ ಬಳಿಕ ದಿವಾನ ಬೋಪಣ್ಣ ರಹಸ್ಯ {{gap}}ಕಾರಾಚರಣೆಯಲ್ಲಿ ನಿರತನಾದ. ವಿವಿಧ ನಾಡುಗಳಲ್ಲಿ ತನ್ನ ವಿಶ್ವಾಸಕ್ಕೆ ಪಾತ್ರರಾಗಿದ್ದ {{gap}}ಕೆಲ ತಕ್ಕರೆಡೆಗೆ ನಂಬುಗೆಯ ಬಂಟರನ್ನು ಕಳುಹಿಸಿದ. ಕೆಲ ಕಾರಕಾರರೆದುರಿನಲ್ಲಿ ದ್ರೋಹದ {{gap}}ಪುಂಗಿಯನೂದಿದ. ರಾಜಧಾನಿಯ ಪ್ರಮುಖಿ ವರ್ತಕರಿಬ್ಬರು ತನ್ನ ಸಂಚಿನಲ್ಲಿ ಭಾಗಿಯಾಗು ವಂತೆ ಮಾಡಿದ. {{gap}}ಹಿಂದಿನ ದಿವಾನ ಪೊನ್ನಪ್ಪನ ಪೂರ್ಣ ಬೆಂಬಲ ಅವನಿಗಿತ್ತು. ಲಕ್ಷ್ಮಿನಾರಾಯಣ ನೊಬ್ಬನೇ ವಿಮನಸ್ಕನಾಗಿದ್ದ. {{gap}}ಯುದ್ಧ ವೇರ್ಪಟ್ಟು ಇಂಗ್ಲಿಷರ ದಂಡು ಬಂದಾಗ ಪ್ರತಿಭಟನೆಯನ್ನು ಕುಂಠಿತಗೊಳಿಸಿ ಶರಣಾಗತಿಯನ್ನು ಆಗಮಾಡುವುದು ಬೋಪಣ್ಣನ ಹಂಚಿಕೆಯಾಗಿತ್ತು. {{gap}}...ಶ್ರೀರಂಗಪಟ್ಟಣದಿಂದ ಹೊರಟ ಸಿದ್ಧಲಿಂಗ ಒಂದಿಷ್ಟು ದೂರ ನಡೆದ. ಇದು ವಾಯುವೇಗವೂ ಆಗಲಿಲ್ಲ, ಶರವೇಗವೂ ಆಗಲಿಲ್ಲ–ಎಂದು ಚಿಂತಿಸಿದ. ರಾಜಧಾನಿಗೆ ಹೊರಟಿದ್ದ ಹೇರುಬಂಡಿಯಲ್ಲಿ ಮತ್ತೆ ಒಂದಷ್ಟು ದೂರ ಪ್ರಯಾಣ ಬೆಳೆಸಿದ. ಇದಕ್ಕ ನಿದ್ದರೂ ಕುದುರೆ ರಾವುತರೇ ಸರಿ ಎಂದು ಗೊಣಗಿದ ದಾರಿ. ಕವಲೊಡೆಯುವಲ್ಲಿ ಇಳಿದು ಹೊಸಳ್ಳಿಗೆ ಸಾಗಿದ. {{gap}}ಮಲ್ಲಪ್ಪಗೌಡರನ್ನು ತಾನು ಕಾಣಬೇಕೆಂದು ಸಿದ್ದಲಿಂಗನಿಗೆ ಹೊಳೆದುದು ಆತ ಹೇರು ಬಂಡಿಯಲ್ಲಿದ್ದಾಗ. ಮಲ್ಲಪ್ಪನನ್ನು ಜತೆಯಲ್ಲಿ ಕರೆದೊಯ್ದರೆ ಮಡಕೇರಿಯಲ್ಲಿ ಕೆಲಸ ಸುಲಭಾವಾಗುತ್ತದೆ ಎ೦ದು ಅವನ ಎಣಕೆ. {{gap}}ಹದಿಮೂರು ವರ್ಷಗಳಿಗೂ ಮೇಲಾಗಿತು ಆ ಇಬ್ಬರು ಪರಸ್ಪರರನ್ನು ಕಂಡು. ಆದರೂ ಸುಲಭವಾಗಿ ಸಿದ್ದಲಿಂಗನ ಗುರುತು ಹಿಡಿದ, ಮಲ್ಲಪ್ಪ. {{gap}}"ಅಯ್ಯನವರು ರವಷ್ಟೂ ಬದಲಾಗಿಲ್ಲ." {{gap}}"ಯಾಕಾದೇನು? ನನಗೇನು ಮುಪ್ಪೆ, ಸಾವೆ?" ಇಸ್ಕಾಂತಿ ತಗೊಳ್ಳಿ.'<noinclude></noinclude> bffggxhplc113a6w5m6lefl8wjqr5tb 322990 322989 2026-05-27T11:04:25Z Pragathi. BH 7585 322990 proofread-page text/x-wiki <noinclude><pagequality level="4" user="Pragathi. BH" />{{rh|left=|center=ಸ್ವಾಮಿ ಅಪರಂಪಾರ |right=೧೦೭}}</noinclude> {{gap}}'ಹ್ಮ, ಮಡಕೇರಿಗೆ ಈ ಸಂಗತಿ ಗೊತಾಗಬೇಕಾ ?" {{gap}}"ಹೌದು, ನೋಡು, ನೀನೀಗಲೇ ಹೊರಡಬೇಕು. ಮತ್ತೆ ಕೂಡೋಣ." {{gap}}...ಚನ್ನಬಸಪ್ಪ ನಸುಕಿನಲ್ಲೆದು ಕಾವೇರಿನದಿಯತ್ತ ನಡೆದ. ಆ ಇಬ್ಬರು ಜಂಗಮರು ಎಲ್ಲಾದರೂ ಮಲಗಿರುವರೇನೋ ಎಂದು ದಂಡೆಯಗುಂಟ ಓಡಾಡಿದ. ಕಣ್ಣಿಗೆ ಬೀಳ ದಿರಲು, 'ಕೈಕೊಟ್ಟರು' ಎಂದುಕೊಂಡ. ರೆಸಿಡೆಂಟನಿಗೆ ಹೇಳಬೇಕು, ಸೈನಿಕರನ್ನು ನಾಲೂ ದಿಕ್ಕಿಗೆ ಅಟ್ಟಬೇಕು-ಎನಿಸಿತು. 'ನಿನ್ನೆ ರಾತ್ರೆಯೇ ಯಾಕೆ ತಿಳಿಸಲಿಲ್ಲ? ನೀನು ನಾಲಾಯಕು' ಎಂದು ಆತ ಬಯ್ದರೆ? ಅದನ್ನು ಯೋಚಿಸಿ ಚನ್ನಬಸಪ್ಪ ಬೆವರಿದ. {{gap}}ತೆಪ್ಪಗೆ, ಬಂದ ದಾರಿ ಹಿಡಿದು ತನ್ನ ಬಿಡಾರಕ್ಕೆ ನಡೆದ {{gap}}ಎಚ್ಚರಗೊಂಡು ಗಂಡನನ್ನು ಕಾಣದೆ, ತನ್ನಲ್ಲೆ, ತರ್ಕಿಸಿದ್ದ ದೇಮಾಜಿ ಕೇಳಿದಳು : {{gap}}"ಸೋಮಿಗಳನ್ನು ಕರಕೊಂಡು ಬರೋಕೆ ಓಗಿದ್ದಾ?" {{gap}}"ಹೂಂ. ಸಿಕಲಿಲ್ಲ" ಎಂದ ಚನ್ನಬಸಪ್ಪ. {{center|೩೪}} {{gap}}ಕರುಣಾಕರ ಮೆನೊನ್ ಕೈಸೆರೆ ಹಿಡಿಯಲ್ಪಟ್ಟ ಬಳಿಕ ದಿವಾನ ಬೋಪಣ್ಣ ರಹಸ್ಯ {{gap}}ಕಾರಾಚರಣೆಯಲ್ಲಿ ನಿರತನಾದ. ವಿವಿಧ ನಾಡುಗಳಲ್ಲಿ ತನ್ನ ವಿಶ್ವಾಸಕ್ಕೆ ಪಾತ್ರರಾಗಿದ್ದ {{gap}}ಕೆಲ ತಕ್ಕರೆಡೆಗೆ ನಂಬುಗೆಯ ಬಂಟರನ್ನು ಕಳುಹಿಸಿದ. ಕೆಲ ಕಾರಕಾರರೆದುರಿನಲ್ಲಿ ದ್ರೋಹದ {{gap}}ಪುಂಗಿಯನೂದಿದ. ರಾಜಧಾನಿಯ ಪ್ರಮುಖಿ ವರ್ತಕರಿಬ್ಬರು ತನ್ನ ಸಂಚಿನಲ್ಲಿ ಭಾಗಿಯಾಗು ವಂತೆ ಮಾಡಿದ. {{gap}}ಹಿಂದಿನ ದಿವಾನ ಪೊನ್ನಪ್ಪನ ಪೂರ್ಣ ಬೆಂಬಲ ಅವನಿಗಿತ್ತು. ಲಕ್ಷ್ಮಿನಾರಾಯಣ ನೊಬ್ಬನೇ ವಿಮನಸ್ಕನಾಗಿದ್ದ. {{gap}}ಯುದ್ಧ ವೇರ್ಪಟ್ಟು ಇಂಗ್ಲಿಷರ ದಂಡು ಬಂದಾಗ ಪ್ರತಿಭಟನೆಯನ್ನು ಕುಂಠಿತಗೊಳಿಸಿ ಶರಣಾಗತಿಯನ್ನು ಆಗಮಾಡುವುದು ಬೋಪಣ್ಣನ ಹಂಚಿಕೆಯಾಗಿತ್ತು. {{gap}}...ಶ್ರೀರಂಗಪಟ್ಟಣದಿಂದ ಹೊರಟ ಸಿದ್ಧಲಿಂಗ ಒಂದಿಷ್ಟು ದೂರ ನಡೆದ. ಇದು ವಾಯುವೇಗವೂ ಆಗಲಿಲ್ಲ, ಶರವೇಗವೂ ಆಗಲಿಲ್ಲ–ಎಂದು ಚಿಂತಿಸಿದ. ರಾಜಧಾನಿಗೆ ಹೊರಟಿದ್ದ ಹೇರುಬಂಡಿಯಲ್ಲಿ ಮತ್ತೆ ಒಂದಷ್ಟು ದೂರ ಪ್ರಯಾಣ ಬೆಳೆಸಿದ. ಇದಕ್ಕ ನಿದ್ದರೂ ಕುದುರೆ ರಾವುತರೇ ಸರಿ ಎಂದು ಗೊಣಗಿದ ದಾರಿ. ಕವಲೊಡೆಯುವಲ್ಲಿ ಇಳಿದು ಹೊಸಳ್ಳಿಗೆ ಸಾಗಿದ. {{gap}}ಮಲ್ಲಪ್ಪಗೌಡರನ್ನು ತಾನು ಕಾಣಬೇಕೆಂದು ಸಿದ್ದಲಿಂಗನಿಗೆ ಹೊಳೆದುದು ಆತ ಹೇರು ಬಂಡಿಯಲ್ಲಿದ್ದಾಗ. ಮಲ್ಲಪ್ಪನನ್ನು ಜತೆಯಲ್ಲಿ ಕರೆದೊಯ್ದರೆ ಮಡಕೇರಿಯಲ್ಲಿ ಕೆಲಸ ಸುಲಭಾವಾಗುತ್ತದೆ ಎ೦ದು ಅವನ ಎಣಕೆ. {{gap}}ಹದಿಮೂರು ವರ್ಷಗಳಿಗೂ ಮೇಲಾಗಿತು ಆ ಇಬ್ಬರು ಪರಸ್ಪರರನ್ನು ಕಂಡು. ಆದರೂ ಸುಲಭವಾಗಿ ಸಿದ್ದಲಿಂಗನ ಗುರುತು ಹಿಡಿದ, ಮಲ್ಲಪ್ಪ. {{gap}}"ಅಯ್ಯನವರು ರವಷ್ಟೂ ಬದಲಾಗಿಲ್ಲ." {{gap}}"ಯಾಕಾದೇನು? ನನಗೇನು ಮುಪ್ಪೆ, ಸಾವೆ?" ಇಸ್ಕಾಂತಿ ತಗೊಳ್ಳಿ.'<noinclude></noinclude> nwhqabv7lvb6cee97khgebwrjy0cmiy ಪುಟ:ಸ್ವಾಮಿ ಅಪರಂಪಾರ.pdf/೧೧೦ 104 21260 322988 206423 2026-05-27T10:49:57Z Pragathi. BH 7585 /* Validated */ 322988 proofread-page text/x-wiki <noinclude><pagequality level="4" user="Pragathi. BH" />{{rh|left=೧೦೮|center=ಸ್ವಾಮಿ ಅಪರಂಪಾರ |right=}}</noinclude> {{gap}}"ಹುಡುಗನಿದ್ದಾಗಲೇ ಅದಕ್ಕೆ ಎಳ್ಳು ನೀರು ಬಿಟ್ಟೆನಪ್ಪ. ಎಲ್ಲೀದು ವಿಶ್ರಾಂತಿ? ಇಕಾ, ದಾಸೋಹ ಪಾದಪೂಜೆ ಒಂದೂ ಬ್ಯಾಡ. ನಿಂತ ಕಾಲಲ್ಲೆ ಹೊರಡು. ನನ್ನ ಸಂಗಾತ ನೀನು ಮಡಕೇರಿ ತನಕ ಬರಬೇಕು. ಯಾಕೆ? ಏನು ?–ಅಂಬೋದೆಲ್ಲಾ ದಾರಿ ಯಾಗೆ ಹೇಳತೀನಿ." {{gap}}...ದಾರಿಯಲ್ಲಿ ಮಲ್ಲಪ್ಪ ಕೇಳಿದ: {{gap}}"ನಮ್ಮ ವೀರಪ್ಪಾಜಿಯವರನ್ನ ಆಮ್ಯಾಕೆ ಕಂಡದ್ದುಂಟಾ ಅಯ್ಯನವರೆ ?" {{gap}}"ಶ್! ಅಪರಂಪಾರಸ್ವಾಮಿಯವರನ್ನ ಅನ್ನು." {{gap}}"ಹಂಗಾರೆ ದೊರೆ ಮಗ ಜಂಗಮ ಆದದ್ದು ದಿಟಾನೇ. ಎಲ್ಲೋ ಪುಕಾರು ಕೇಳಿದ್ದೆ.” {{gap}}"ಅವರು, ಜಂಗಮರಲ್ಲಿ ದೊರೆ ಮಗ. ಅವರ ಸಹವಾಸದೋಷದಿಂದ ನಾನು ಈ ಸ್ಥಿತಿಗೆ ಇಳಿದಿದೀನಿ. ನಾ ಅರಮನೆಗೆ ಹೋಗತಿರೋದು ಶಿವಕಥೆ ಮಾಡೋದಕ್ಕಲ್ಲ, {{gap}}ರಾಜಕಾರ್ಯನಿಮಿತ್ತ." {{gap}}ಮಲ್ಲಪ್ಪನಿಗೆ ಸಂತೋಷ. ಅದರ ಬೆನ್ನಲ್ಲೇ ದಿಗಿಲು. {{gap}}"ಚೆಂದಾಕಿದಾರೆ,ಅಲ್ಲವರಾ?" {{gap}}"ಹ್ಞ. ಅರಸನಿಗೆ ಒಂದು ಸುದ್ದಿ ಮುಟ್ಟಿಸಿ ಬಾ ಅಂತ ಅವರೇ ಕಳಿಸಿದ್ರು." {{gap}}"ಅಂಗಾ ? ಅರಮನೆಗೆ ಒಂದ್ಸಾರ್ತಿ ಅಪರಂಪಾರ ಸೋಮಿಯೋರು ಬಂದಿದ್ರು, {{gap}}ಸಿಟ್ಟಮಾಡ್ಕೊಂಡು ಓದ್ರು–ಅಂತ ಕೇಳಿವ್ನಿ." ಥ "ಎಲ್ಲಿಯ ಸಿಟ್ಟು, ಕಾಮಕ್ರೋಧಗಳನ್ನು ಜಯಿಸಿದ ಪುರುಷಶ್ರೇಷ್ಠನಿಗೆ ?" {{gap}}ಅಪರಂಪಾರ ಕಳುಹಿಸುವ ವಾರ್ತೆ ಏನು ಅಂತ ಮಲ್ಲಪ್ಪ ಕೇಳಲಿ, ಎಂದು ಸಿದ್ಧಲಿಂಗ {{gap}}ಕಾದು ನೋಡಿದ. ನಿರಾಸೆಯಾಯಿತು. ಕಡೆಗೆ ಅವನೇ ಅ೦ದ : {{gap}}"ಇಂಗ್ರೇಜಿಯವರು ದಂಡಯಾತ್ರೆಗೆ ತಯಾರು ಮಾಡತಾ ಇದಾರೆ. ಅದನ್ನ ಅರಸನಿಗೆ ತಿಳಿಸಬೇಕಾಗದೆ.” {{gap}}"ಅಂಗಾರೆ ಲಡಾಯಿ ಕಂಡಿತ ಅನ್ನಿ. ಇವತ್ತು ನಾಳೆಯಲ್ಲಿ ಜಮ್ಮ ಕೊಡವರಿಗೆಲ್ಲ ಕರೆ ಬರಬೌದು." {{gap}}"ಯುದ್ಧ ಅಂದರೆ ಸಾಕು, ಬಾಹು ಸ್ಫುರಿಸತದೆ, ಅಲ್ಲವಾ?" {{gap}}"ಅಂಗಲ್ಲ, ಅಯ್ಯನವರೆ. ಅರಸರ ಅನ್ನ ತಿನ್ನತೀವಿ. ಅವರ ಸೇವೆ ಮಾಡೋ ಸಮಯ ಬಂದಾಗ ಸಂತೋಸ ಆಗತದೆ." {{gap}}...ಮಡಕೇರಿಯಲ್ಲಿ ಇವರಿಬ್ಬರು ಚಾವಡಿಕಾರ ಶಂಕರಪ್ಪನನ್ನು ಕಂಡರು. ಸಿದ್ಧಲಿಂಗ {{gap}}ಸ್ವಾಮಿ ಅಪರಂಪಾರರ ದೂತ ಎಂದು ತಿಳಿದಾಗ ಅವನು ಹಿಗ್ಗಿದ ; ಬಸವನಿಗೆ ಸುದ್ದಿ ಮುಟ್ಟಿಸಿದ. {{gap}}ಸ್ವಲ್ಪ ಹೊತ್ತಿನಲ್ಲೆ ಚಿಕವೀರರಾಜೇಂದ್ರನ ಸಮ್ಮುಖಕ್ಕೆ ಸಿದ್ಧಲಿಂಗನನ್ನು ಒಯ್ದರು. {{gap}}"ಅರಸನಿಗೆ ಜಯವಾಗಲಿ, ಶುಭವಾಗಲಿ ; ವೈರಿಕುಲ ಅಳಿಯಲಿ" ಎಂದು ಸಿದ್ಧಲಿಂಗ ಹರಸಿದ. {{gap}}ನಡೆದು ನಡೆದು ಪಾದಗಳು ಊದಿಕೊಂಡಿದ್ದ, ಮೈಯೆಲ್ಲ ಧೂಳು ತುಂಬಿದ್ದ, ಜಂಗಮ {{gap}}ನತ್ತ ನೋಡಿ ಚಿಕವೀರರಾಜನೆಂದ: {{gap}}"ಅಯ್ಯನವರು ಶ್ರೀರಂಗಪಟ್ಟಣದಿಂದ ಬಂದಿರಂತೆ."<noinclude></noinclude> gd366fixc5un4bmo1j2lsdyeynjt4p9 ಪುಟ:ಸ್ವಾಮಿ ಅಪರಂಪಾರ.pdf/೧೨೦ 104 21270 322984 206433 2026-05-27T10:07:43Z Shreelatha.Halemane 7642 /* Validated */ 322984 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಸ್ವಾಮಿ ಅಪರಂಪಾರ|left=೧೧೮|right=}} {{gap}}"ಕೊಡಗು ದೇಶದ ನಿವಾಸಿಗಳು, ಬ್ರಿಟಿಷ್ ಸರಕಾರದ ಅಧೀನದಲ್ಲಿರಬೇಕೆಂದು ಏಕಮತಸ್ಥರಾಗಿ ಇಷ್ಟಪಡುವುದರಿಂದ, ಚಿಕವೀರರಾಜೇಂದ್ರ ಒಡೆಯರಿಂದ ಆಳಲ್ಪಡು ತ್ತಿದ್ದ ಈ ದೇಶವನ್ನು ಘನವುಳ್ಳ ಕುಂಪಣಿ ಸರಕಾರದ ತಾಬೆಗೆ ವರ್ಗಮಾಡಾಲು ಇಂಡಿಯಾ ದೇಶದ ಗವರ್ನರ್ ಜನರಲ್ ಸಾಹೇಬರವರು ಸಂತೋಷಪಡುತ್ತರೆ. {{gap}}"ಈ ದೇಶದ ನಿವಾಸಿಗಳನ್ನು ಪುನಃ ಸ್ವದೇಶೀ ರಾಜರ ಆಳ್ವಿಕೆಗೆ ಬಿಟ್ಟುಕೊಡೂವು ದಿಲ್ಲವಾಗಿಯೂ ಇವರ ಮುಲ್ಕಿ ಮತ್ತು ಮತಸಂಬಂಧವಾದ ಎಲ್ಲಾ ಪದ್ದತಿಗಳು ಬಹುಮಾನದಿಂದ ಅಂಗೀಕರಿಸಲ್ಪಡುವುಹದಾಗಿಯೂ ಮತ್ತು ಇವರ ಭದ್ರತೆ ಸುಖಕ್ಷೇಮಗಳನ್ನು ಹೆಚ್ಚಿಸಲು ಬ್ರಿಟೀಷ್ ಸರಕಾರದವರು ಯಾವಾಗಲೂ ಸಂತೋಷಪಡುವವರಾಗಿಯೂ ಇದರ ಮೂಲಕ ಖಂಡಿತವಾಗಿ ತಿಳಿಸಲ್ಪಟ್ಟಿದೆ." {{gap}}ಪ್ರೇಸರ್, ಕೊಡಗಿನ ಪ್ರಮುಖರ ಸಭೆಯೊಂದನ್ನು ಕರೆಸಿ, ಅವರ ಅಪೇಕ್ಷೆಯಂತೆಯೇ ಆ ಇಸ್ತಿಹಾರನ್ನು ತಾನು ಹೊರಡಿಸುತ್ತಿರುವೆನೆಂದು ನಂಬಿರುವ ಒಂದು ನಾಟಕವನ್ನು ಆಡಿದ. {{gap}}ಅನಂತರ ಅರಸನ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಲು ಆತ ಉದ್ಯುಕ್ತನಾದ. {{center|೪೦}} ಆಂಗ್ಲರ ವಿಜಯದ ದಾರುಣ ವಾರ್ತೆ ಮಡಕೇರಿಯಿಂದ ಬಂದಾಗ, ಕುಡಿಯ ಸೋದರ ರಿಗೆ ಆಕಾಶವೇ ಕಳಚಿಬಿದ್ದಂತಾಯಿತು. ಅವರು ಸಂಪಾಜೆ ಘಟ್ಟವನ್ನೇರಿ, ನಾಲ್ಕುನಾಡು ಅರಮನೆಗೆ ಧಾವಿಸಿದರು. ಐಯಣ್ಣನಾಗಲೇ ಅಲ್ಲಿಗೆ ಬಂದಿದ್ದ. ಅವನ ಜತೆಗಾರರಾಗಿದ್ದ ಹುಲಿಕುಂದ ನಂಜಯ್ಯನೂ ಪುಟ್ಟಬಸವನೂ ಬಂದು ತಲುಪಿದರು. ಅಬ್ಬಾಸ್ ಅಲಿಯೊಬ್ಬನದೇ ಸುಳಿವಿರಲಿಲ್ಲ. {{gap}}ನಡೆದುದು ದುಃಸ್ವಪ್ಪ ಎಂದೇ ಅವರ ನಂಬಿಕೆ. ಎಚ್ಚರಗೊಳ್ಳಬೇಕು. ಹೋರಾಡ ಬೇಕು. {{gap}}ಆದರೆ ಹೇಗೆ? ಸೇನೆ ಗಡಿಗಳಲ್ಲಿ ಹಂಚಿಹೋಗಿರುವಾಗ. ನಾಲ್ಕು ಕಡೆ ದಳಗಳು ಶರಣಾಗತವಾಗಿರುವಾಗ. ಯುದ್ಧ ಮುಂದುವರಿಸುವುದೆಂತು ? {{gap}}ಬಸವನೆಂದ : {{gap}}"ದುಖಃಪಟ್ಟುಕೊಂಡು ಹೇಳತಾ ಇದೀನಿ. ಬೇಕಿದ್ದರೆ ಇಲ್ಲೇ ನಿಂತು ಹೋರಾಡಿ ಸಾಯೋಣ, ಇಲ್ಲವಾದರೆ, ಸಂಧಾನದ ಸೋಗು ಹಾಕಿ ಸಮಯ ಕಾಯೋಣ. ಸೈನಿಕರೆಲ್ಲ ಒಟ್ಟಾಗೋದಕ್ಕೆ ಕಾಲಾವಕಾಶ ಸಿಕ್ಕರೆ, ಮುಂದೆ ವೈರಿಗಳ ಮೇಲೆ ಎರಗಬೌದು." {{gap}}ಅಭಿಮಾನಧನನಾದ ಚಿಕವೀರರಾಜ ಈಗ ಅಸಹಾಯ. ತನಗೆ ತಟ್ಟಿದ ಕಳಂಕವನ್ನು ತಾನು ನಿವಾರಿಸಬೇಕು. ಯಶಸ್ವಿಯಾಗಿ ನಿವಾರಿಸಬೇಕು. ಯಾವ ಬಗೆಯಾಗಿ? {{gap}}ಆತನೆಂದ : {{gap}}"ಸಂಧಾನ ಅನಿವಾರ್ಯ ಎಂದಾದರೇ ಆಗಲಿ." {{gap}}ಫ್ರೇಸರನ ಅಪ್ಪಣೆಯಂತೆ ಮಹಾರಾಜನನ್ನೂ ಅವನ ಪರಿವಾರವನ್ನೂ ಕರೆತರುವುದ ಕ್ಕೋಸ್ಕರ ಆಂಗ್ಲ ದಳದ ತುಕಡಿಯೊಂದು ನಾಲ್ಕುನಾಡು ಅರಮನೆಗೆ ಬಂದಿತು. ಅರಸನ ಅಂಗರಕ್ಷಕರು, ಸಂಗಡಿಗರಾದ ಇತರ ಶೂರರು, ಕೈದುಗಳನ್ನು ಕೆಳಗಿಟ್ಟರು.<noinclude></noinclude> jpkjtxn25lwhpz8of0c9utzzcrw2d3k ಪುಟ:ಸ್ವಾಮಿ ಅಪರಂಪಾರ.pdf/೧೨೭ 104 21277 322964 206440 2026-05-27T09:32:04Z Pragathi. BH 7585 /* Validated */ 322964 proofread-page text/x-wiki <noinclude><pagequality level="4" user="Pragathi. BH" /></noinclude> ಸ್ವಮಿ ಅಪರಂಪಾರ ಕಸಿದುಕೊಂಡಿದ್ದರೂ ಅರಮನೆಯಿಂದ ಹೊರಹಾಕಿರಲಿಲ್ಲ, ಹೊಸದಾಗಿ ಕಟ್ಟಿಸಿದ ರಾಜ ಗೃಹ, ಅದರೊಳಗೇ ಕೃಷ್ಣರಾಜ ವಾಸವಾಗಿದ್ದ. {{gap}}ಚಾಮುಂಡಿಬೆಟ್ಟದ ತಪ್ಪಲಲ್ಲಿ ಮೈಸೂರಿನ ಬೆಳವಣಿಗೆ ಕುಂಟುತ್ತ ಸಾಗಿತು, ಶ್ರೀರಂಗ ಪಟ್ಟಣ-ಮೈಸೂರುಗಳ ಅಂತರ ಒಂದು ಕೂಗಳತೆಯ ದೂರ ಎನ್ನುವಂತೆ, ಬಿಳಿಯ ಆಡಳಿತಾಧಿಕಾರಿಗಳ ಹಾಗೂ ಸೈನ್ಯಧಿಕಾರಿಗಳ ತಂಡಗಳೂ ಪರಿವಾರಗಳೂ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದುವು. ಆಂಗ್ಲರಿಗೆ ಅಧೀನನಾಗಿದ್ದು ದಿವಾನ ವೆಂಕಟರಮಣಯ್ಯ ಆಡಳಿತ ನಡೆಸುತ್ತಿದ್ದ. {{gap}}ಅರಮನೆಯ ತುಸು ದೂರದಲ್ಲಿ ಗರಡಿಮನೆ, ಇನ್ನೊಂದೆಡೆ ಅಗ್ರಹಾರ ಕೋಟೆಯ. ಆವರಣದೊಳಗೂ ಹೊರಗೂ ಅಲ್ಲಿ ಇಲ್ಲಿ ರಾಜಸಂಬಂಧಿಗಳ ನಿವಾಸಗಳು. {{gap}}ಮುಮ್ಮಡಿ ಕೃಷ್ಣರಾಜ ಒಡೆಯನ ಸಮೀಪದ ಸಂಬಂಧಿಗಳಲ್ಲೊಬ್ಬ, ಮಧ್ಯವಯಸ್ಕ ನಾದ ಅರಪುರದ ಬಸಪ್ಪಜಅರಸು. ಸ್ವಭಿಮಾನಿ. ಮೈಸೂರಿಗೊದಗಿದ ದುರ್ದೆಶೆಯಿಂದ. ವ್ಯಥಿತನಾಗಿ, ಏನನ್ನೂ ತಾವು ಮಾಡಲಾರೆವೆ ?–ಎಂದು ಪರಿತಪಿಸುತ್ತಿದ್ದ ವ್ಯಕ್ತಿ. {{gap}}ಅರಮನೆಗೆ ನಿಷ್ಟರಾಗಿದ್ದ ಕೆಲವರೊಡನೆ ಮಾತನಾಡಿ ಇಷ್ಟನ್ನು ತಿಳಿದುಕೊಂಡ ಅಪರಂಪಾರ, ಬಸಪ್ಪಜಿ ಅರಸನ ನಿವಾಸದೆದುರು ಪ್ರತ್ಯಕ್ಷನಾದ. {{gap}}ಆಳುಗಳು ಭಿಕ್ಷೆ ನೀಡಲು ಬಂದರು. ಜಂಗಮರಿಬ್ಬರು ಕದಲಲಿಲ್ಲ, ಅರಸನ ಮಕ್ಕಳು ಬಂದು ಕೇಳಿದರು : {{gap}}"ಇನ್ನೇನು ಬೇಕು, ಸ್ವಾಮಿಗೋಳೆ?” {{gap}}"ನಿಮ್ಮ ಅಪ್ಪಾಜಿಯವರನ್ನು ಕಾಣಬೇಕು." {{gap}}ಬಸಪ್ಪಾಜಿ ಅರಸು ಜಂಗಮರನ್ನು ಬರಮಾಡಿಕೊಂಡ. ರಾಜಕಾರಣವನ್ನು ಪ್ರಸ್ತಪಿಸಿದ ಕಾವಿಧಾರಿಗಳ ವಿಷಯದಲ್ಲಿ ಅವನಿಗೆ ಯಾಕೋ ಅವಿಶ್ವಾಸ. ಇವರು ಆಂಗ್ಲರ ಗೂಢಚಾರರಿರಬಹುದೆ? ತನಗೆ ಆಗದವರು ಯಾರಾದರೂ ಒಳಸಂಚು ಹೂಡಿ ಇವರನ್ನು ಕಳುಹಿರಬಹುದೆ? {{gap}}ಆದರೂ, ಎಚ್ಚರ ವಹಿಸಿ ಮಾತನಾಡಿದಷ್ಟೂ, ಮನಸ್ಸೆನ್ನುತಿತ್ತು : {{gap}}“ಈ ಅಪರಂಪಾರನಂತೂ ಬರಿ ಜೋಳಿಗೆಯವನಂತಿಲ್ಲ. ಇವನು ಅಸಾಧಾರಣ ವ್ಯಕ್ತಿ ವಂಚಕರು ಹೀಗಿರುತಾರಾ?" {{gap}}ಕೊಡಗಿನ ದುರವಸ್ಥೆ ಹಾಗೂ ಆಂಗ್ಲರ ಧೂರ್ತತನಗಳನ್ನು ಕುರಿತು ಅಪರಂಪಾರ ಆಡುತ್ತಿದ್ದ ಮಾತುಗಳನ್ನು ಕೇಳುತ್ತ, ಥಟ್ಟನೆ ಬಸಪ್ಪಾಜಿ ಅರಸನೆಂದ : {{gap}}"ಪೂರ್ವಾಶ್ರಮದಲ್ಲಿ ತಾವು ಹಾಲೇರಿ ವಂಶಸ್ಥರೊ?" ಮಂದಸ್ಮಿತವಾಗಿ ಅಪರಂಪಾರನೆಂದ: {{gap}}“ಅಪನಂಬಿಕೆಯ ಗುಡ್ಡದಿಂದ ಬಯಲಿನ ವಿಸ್ತಾರಕೆ ಬಂದಿರಾ ? ಒಳ್ಳೆದು.. ನಿಮ್ಮ ಪ್ರಶ್ನೆಗೆ ಉತ್ತರ ಕೊಡುತೇವೆ. ಹಾಲೇರಿ ವಂಶಕ್ಕೂ ನಮಗೂ ಪೂರ್ವಜನ್ಮದಲ್ಲಿ ಸಂಬಂಧ ವಿದ್ದದ್ದು ನಿಜ. ಆದರೆ ಅದು ಮುಖ್ಯವಲ್ಲ." - {{gap}}“ಕೊಡಗಿನ ಸಿಂಹಾಸನಕ್ಕೆ ಯಾರು ಹಕ್ಕುದಾರರು ಅನ್ನುತೀರಿ?" {{gap}}“ಮೈಸೂರಿಗೆ ಯಾರು? ಮುಮ್ಮಡಿ ಕೃಷ್ಣರಾಜರಲ್ಲವೆ? ಹಾಗೆಯೇ ಕೊಡಗಿಗೆ ಚಿಕವೀರರಾಜರು. ಇಂಗ್ರೇಜಿಯವರಿಗೆ ಬೇಡವಾದ ಮಾತ್ರಕ್ಕೆ ಪ್ರಜೆಗಳಿಗೆ ಬೇಡವಾಗತಾ<noinclude></noinclude> kuho6ul11rwx5sytxb0eqtiemjahfhx 322965 322964 2026-05-27T09:32:57Z Pragathi. BH 7585 322965 proofread-page text/x-wiki <noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ |left=|right=೧೨೫}}</noinclude> ಸ್ವಾಮಿ ಅಪರಂಪಾರ ಕಸಿದುಕೊಂಡಿದ್ದರೂ ಅರಮನೆಯಿಂದ ಹೊರಹಾಕಿರಲಿಲ್ಲ, ಹೊಸದಾಗಿ ಕಟ್ಟಿಸಿದ ರಾಜ ಗೃಹ, ಅದರೊಳಗೇ ಕೃಷ್ಣರಾಜ ವಾಸವಾಗಿದ್ದ. {{gap}}ಚಾಮುಂಡಿಬೆಟ್ಟದ ತಪ್ಪಲಲ್ಲಿ ಮೈಸೂರಿನ ಬೆಳವಣಿಗೆ ಕುಂಟುತ್ತ ಸಾಗಿತು, ಶ್ರೀರಂಗ ಪಟ್ಟಣ-ಮೈಸೂರುಗಳ ಅಂತರ ಒಂದು ಕೂಗಳತೆಯ ದೂರ ಎನ್ನುವಂತೆ, ಬಿಳಿಯ ಆಡಳಿತಾಧಿಕಾರಿಗಳ ಹಾಗೂ ಸೈನ್ಯಧಿಕಾರಿಗಳ ತಂಡಗಳೂ ಪರಿವಾರಗಳೂ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದುವು. ಆಂಗ್ಲರಿಗೆ ಅಧೀನನಾಗಿದ್ದು ದಿವಾನ ವೆಂಕಟರಮಣಯ್ಯ ಆಡಳಿತ ನಡೆಸುತ್ತಿದ್ದ. {{gap}}ಅರಮನೆಯ ತುಸು ದೂರದಲ್ಲಿ ಗರಡಿಮನೆ, ಇನ್ನೊಂದೆಡೆ ಅಗ್ರಹಾರ ಕೋಟೆಯ. ಆವರಣದೊಳಗೂ ಹೊರಗೂ ಅಲ್ಲಿ ಇಲ್ಲಿ ರಾಜಸಂಬಂಧಿಗಳ ನಿವಾಸಗಳು. {{gap}}ಮುಮ್ಮಡಿ ಕೃಷ್ಣರಾಜ ಒಡೆಯನ ಸಮೀಪದ ಸಂಬಂಧಿಗಳಲ್ಲೊಬ್ಬ, ಮಧ್ಯವಯಸ್ಕ ನಾದ ಅರಪುರದ ಬಸಪ್ಪಜಅರಸು. ಸ್ವಭಿಮಾನಿ. ಮೈಸೂರಿಗೊದಗಿದ ದುರ್ದೆಶೆಯಿಂದ. ವ್ಯಥಿತನಾಗಿ, ಏನನ್ನೂ ತಾವು ಮಾಡಲಾರೆವೆ ?–ಎಂದು ಪರಿತಪಿಸುತ್ತಿದ್ದ ವ್ಯಕ್ತಿ. {{gap}}ಅರಮನೆಗೆ ನಿಷ್ಟರಾಗಿದ್ದ ಕೆಲವರೊಡನೆ ಮಾತನಾಡಿ ಇಷ್ಟನ್ನು ತಿಳಿದುಕೊಂಡ ಅಪರಂಪಾರ, ಬಸಪ್ಪಜಿ ಅರಸನ ನಿವಾಸದೆದುರು ಪ್ರತ್ಯಕ್ಷನಾದ. {{gap}}ಆಳುಗಳು ಭಿಕ್ಷೆ ನೀಡಲು ಬಂದರು. ಜಂಗಮರಿಬ್ಬರು ಕದಲಲಿಲ್ಲ, ಅರಸನ ಮಕ್ಕಳು ಬಂದು ಕೇಳಿದರು : {{gap}}"ಇನ್ನೇನು ಬೇಕು, ಸ್ವಾಮಿಗೋಳೆ?” {{gap}}"ನಿಮ್ಮ ಅಪ್ಪಾಜಿಯವರನ್ನು ಕಾಣಬೇಕು." {{gap}}ಬಸಪ್ಪಾಜಿ ಅರಸು ಜಂಗಮರನ್ನು ಬರಮಾಡಿಕೊಂಡ. ರಾಜಕಾರಣವನ್ನು ಪ್ರಸ್ತಪಿಸಿದ ಕಾವಿಧಾರಿಗಳ ವಿಷಯದಲ್ಲಿ ಅವನಿಗೆ ಯಾಕೋ ಅವಿಶ್ವಾಸ. ಇವರು ಆಂಗ್ಲರ ಗೂಢಚಾರರಿರಬಹುದೆ? ತನಗೆ ಆಗದವರು ಯಾರಾದರೂ ಒಳಸಂಚು ಹೂಡಿ ಇವರನ್ನು ಕಳುಹಿರಬಹುದೆ? {{gap}}ಆದರೂ, ಎಚ್ಚರ ವಹಿಸಿ ಮಾತನಾಡಿದಷ್ಟೂ, ಮನಸ್ಸೆನ್ನುತಿತ್ತು : {{gap}}“ಈ ಅಪರಂಪಾರನಂತೂ ಬರಿ ಜೋಳಿಗೆಯವನಂತಿಲ್ಲ. ಇವನು ಅಸಾಧಾರಣ ವ್ಯಕ್ತಿ ವಂಚಕರು ಹೀಗಿರುತಾರಾ?" {{gap}}ಕೊಡಗಿನ ದುರವಸ್ಥೆ ಹಾಗೂ ಆಂಗ್ಲರ ಧೂರ್ತತನಗಳನ್ನು ಕುರಿತು ಅಪರಂಪಾರ ಆಡುತ್ತಿದ್ದ ಮಾತುಗಳನ್ನು ಕೇಳುತ್ತ, ಥಟ್ಟನೆ ಬಸಪ್ಪಾಜಿ ಅರಸನೆಂದ : {{gap}}"ಪೂರ್ವಾಶ್ರಮದಲ್ಲಿ ತಾವು ಹಾಲೇರಿ ವಂಶಸ್ಥರೊ?" ಮಂದಸ್ಮಿತವಾಗಿ ಅಪರಂಪಾರನೆಂದ: {{gap}}“ಅಪನಂಬಿಕೆಯ ಗುಡ್ಡದಿಂದ ಬಯಲಿನ ವಿಸ್ತಾರಕೆ ಬಂದಿರಾ ? ಒಳ್ಳೆದು.. ನಿಮ್ಮ ಪ್ರಶ್ನೆಗೆ ಉತ್ತರ ಕೊಡುತೇವೆ. ಹಾಲೇರಿ ವಂಶಕ್ಕೂ ನಮಗೂ ಪೂರ್ವಜನ್ಮದಲ್ಲಿ ಸಂಬಂಧ ವಿದ್ದದ್ದು ನಿಜ. ಆದರೆ ಅದು ಮುಖ್ಯವಲ್ಲ." - {{gap}}“ಕೊಡಗಿನ ಸಿಂಹಾಸನಕ್ಕೆ ಯಾರು ಹಕ್ಕುದಾರರು ಅನ್ನುತೀರಿ?" {{gap}}“ಮೈಸೂರಿಗೆ ಯಾರು? ಮುಮ್ಮಡಿ ಕೃಷ್ಣರಾಜರಲ್ಲವೆ? ಹಾಗೆಯೇ ಕೊಡಗಿಗೆ ಚಿಕವೀರರಾಜರು. ಇಂಗ್ರೇಜಿಯವರಿಗೆ ಬೇಡವಾದ ಮಾತ್ರಕ್ಕೆ ಪ್ರಜೆಗಳಿಗೆ ಬೇಡವಾಗತಾ<noinclude></noinclude> 9kzfl5qc15ktyaxcjg0l3rkzo8y82gi 322966 322965 2026-05-27T09:33:15Z Pragathi. BH 7585 322966 proofread-page text/x-wiki <noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ |left=|right=೧೨೫}}</noinclude> ಕಸಿದುಕೊಂಡಿದ್ದರೂ ಅರಮನೆಯಿಂದ ಹೊರಹಾಕಿರಲಿಲ್ಲ, ಹೊಸದಾಗಿ ಕಟ್ಟಿಸಿದ ರಾಜ ಗೃಹ, ಅದರೊಳಗೇ ಕೃಷ್ಣರಾಜ ವಾಸವಾಗಿದ್ದ. {{gap}}ಚಾಮುಂಡಿಬೆಟ್ಟದ ತಪ್ಪಲಲ್ಲಿ ಮೈಸೂರಿನ ಬೆಳವಣಿಗೆ ಕುಂಟುತ್ತ ಸಾಗಿತು, ಶ್ರೀರಂಗ ಪಟ್ಟಣ-ಮೈಸೂರುಗಳ ಅಂತರ ಒಂದು ಕೂಗಳತೆಯ ದೂರ ಎನ್ನುವಂತೆ, ಬಿಳಿಯ ಆಡಳಿತಾಧಿಕಾರಿಗಳ ಹಾಗೂ ಸೈನ್ಯಧಿಕಾರಿಗಳ ತಂಡಗಳೂ ಪರಿವಾರಗಳೂ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದುವು. ಆಂಗ್ಲರಿಗೆ ಅಧೀನನಾಗಿದ್ದು ದಿವಾನ ವೆಂಕಟರಮಣಯ್ಯ ಆಡಳಿತ ನಡೆಸುತ್ತಿದ್ದ. {{gap}}ಅರಮನೆಯ ತುಸು ದೂರದಲ್ಲಿ ಗರಡಿಮನೆ, ಇನ್ನೊಂದೆಡೆ ಅಗ್ರಹಾರ ಕೋಟೆಯ. ಆವರಣದೊಳಗೂ ಹೊರಗೂ ಅಲ್ಲಿ ಇಲ್ಲಿ ರಾಜಸಂಬಂಧಿಗಳ ನಿವಾಸಗಳು. {{gap}}ಮುಮ್ಮಡಿ ಕೃಷ್ಣರಾಜ ಒಡೆಯನ ಸಮೀಪದ ಸಂಬಂಧಿಗಳಲ್ಲೊಬ್ಬ, ಮಧ್ಯವಯಸ್ಕ ನಾದ ಅರಪುರದ ಬಸಪ್ಪಜಅರಸು. ಸ್ವಭಿಮಾನಿ. ಮೈಸೂರಿಗೊದಗಿದ ದುರ್ದೆಶೆಯಿಂದ. ವ್ಯಥಿತನಾಗಿ, ಏನನ್ನೂ ತಾವು ಮಾಡಲಾರೆವೆ ?–ಎಂದು ಪರಿತಪಿಸುತ್ತಿದ್ದ ವ್ಯಕ್ತಿ. {{gap}}ಅರಮನೆಗೆ ನಿಷ್ಟರಾಗಿದ್ದ ಕೆಲವರೊಡನೆ ಮಾತನಾಡಿ ಇಷ್ಟನ್ನು ತಿಳಿದುಕೊಂಡ ಅಪರಂಪಾರ, ಬಸಪ್ಪಜಿ ಅರಸನ ನಿವಾಸದೆದುರು ಪ್ರತ್ಯಕ್ಷನಾದ. {{gap}}ಆಳುಗಳು ಭಿಕ್ಷೆ ನೀಡಲು ಬಂದರು. ಜಂಗಮರಿಬ್ಬರು ಕದಲಲಿಲ್ಲ, ಅರಸನ ಮಕ್ಕಳು ಬಂದು ಕೇಳಿದರು : {{gap}}"ಇನ್ನೇನು ಬೇಕು, ಸ್ವಾಮಿಗೋಳೆ?” {{gap}}"ನಿಮ್ಮ ಅಪ್ಪಾಜಿಯವರನ್ನು ಕಾಣಬೇಕು." {{gap}}ಬಸಪ್ಪಾಜಿ ಅರಸು ಜಂಗಮರನ್ನು ಬರಮಾಡಿಕೊಂಡ. ರಾಜಕಾರಣವನ್ನು ಪ್ರಸ್ತಪಿಸಿದ ಕಾವಿಧಾರಿಗಳ ವಿಷಯದಲ್ಲಿ ಅವನಿಗೆ ಯಾಕೋ ಅವಿಶ್ವಾಸ. ಇವರು ಆಂಗ್ಲರ ಗೂಢಚಾರರಿರಬಹುದೆ? ತನಗೆ ಆಗದವರು ಯಾರಾದರೂ ಒಳಸಂಚು ಹೂಡಿ ಇವರನ್ನು ಕಳುಹಿರಬಹುದೆ? {{gap}}ಆದರೂ, ಎಚ್ಚರ ವಹಿಸಿ ಮಾತನಾಡಿದಷ್ಟೂ, ಮನಸ್ಸೆನ್ನುತಿತ್ತು : {{gap}}“ಈ ಅಪರಂಪಾರನಂತೂ ಬರಿ ಜೋಳಿಗೆಯವನಂತಿಲ್ಲ. ಇವನು ಅಸಾಧಾರಣ ವ್ಯಕ್ತಿ ವಂಚಕರು ಹೀಗಿರುತಾರಾ?" {{gap}}ಕೊಡಗಿನ ದುರವಸ್ಥೆ ಹಾಗೂ ಆಂಗ್ಲರ ಧೂರ್ತತನಗಳನ್ನು ಕುರಿತು ಅಪರಂಪಾರ ಆಡುತ್ತಿದ್ದ ಮಾತುಗಳನ್ನು ಕೇಳುತ್ತ, ಥಟ್ಟನೆ ಬಸಪ್ಪಾಜಿ ಅರಸನೆಂದ : {{gap}}"ಪೂರ್ವಾಶ್ರಮದಲ್ಲಿ ತಾವು ಹಾಲೇರಿ ವಂಶಸ್ಥರೊ?" ಮಂದಸ್ಮಿತವಾಗಿ ಅಪರಂಪಾರನೆಂದ: {{gap}}“ಅಪನಂಬಿಕೆಯ ಗುಡ್ಡದಿಂದ ಬಯಲಿನ ವಿಸ್ತಾರಕೆ ಬಂದಿರಾ ? ಒಳ್ಳೆದು.. ನಿಮ್ಮ ಪ್ರಶ್ನೆಗೆ ಉತ್ತರ ಕೊಡುತೇವೆ. ಹಾಲೇರಿ ವಂಶಕ್ಕೂ ನಮಗೂ ಪೂರ್ವಜನ್ಮದಲ್ಲಿ ಸಂಬಂಧ ವಿದ್ದದ್ದು ನಿಜ. ಆದರೆ ಅದು ಮುಖ್ಯವಲ್ಲ." - {{gap}}“ಕೊಡಗಿನ ಸಿಂಹಾಸನಕ್ಕೆ ಯಾರು ಹಕ್ಕುದಾರರು ಅನ್ನುತೀರಿ?" {{gap}}“ಮೈಸೂರಿಗೆ ಯಾರು? ಮುಮ್ಮಡಿ ಕೃಷ್ಣರಾಜರಲ್ಲವೆ? ಹಾಗೆಯೇ ಕೊಡಗಿಗೆ ಚಿಕವೀರರಾಜರು. ಇಂಗ್ರೇಜಿಯವರಿಗೆ ಬೇಡವಾದ ಮಾತ್ರಕ್ಕೆ ಪ್ರಜೆಗಳಿಗೆ ಬೇಡವಾಗತಾ<noinclude></noinclude> o5uk7ciswznk78eux7w7w16sq5moafe ಪುಟ:ಸ್ವಾಮಿ ಅಪರಂಪಾರ.pdf/೧೨೮ 104 21278 322971 206441 2026-05-27T09:39:24Z Pragathi. BH 7585 /* Validated */ 322971 proofread-page text/x-wiki <noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ |left=೧೨೬|right=}}</noinclude> ರೆಯೆ? ಪ್ರಾಕು ಮೈಸೂರನ್ನು ಯದುವಂಶದ ಅರಸರು ಆಳುತಾ ಇದ್ದಾಗ ಬಿದನೂರು ಸ್ವತಂತ್ರ ರಾಜ್ಯವಾಗಿತು. ಆ ಸ್ಥಿತಿ ಮತ್ತೆ ಬರಬೇಕಾದ್ದು ಸಾಜ ತಾನೆ?" {{gap}}ಬಸಪ್ಪಾಜಿ ತಲೆಯಾಡಿಸಿದನೇ ಹೊರತು, ಪ್ರತುತ್ತರ ನೀಡಲಿಲ್ಲ. ಅವನು ಯೋಚನೆಗೀಡಾದ. {{gap}}ಅಪರಂಪಾರನ ಗುರಿ ನಿರೂಪಣೆ ಆಕರ್ಷಕವಾಗಿತ್ತು. {{gap}}"ಕೊಡಗರು, ಗೌಡರು, ಶಿವಾಚಾರದವರು ಎಲ್ಲ ಸೇರಿ ಅರ್ಧ ಲಕ್ಷ ಜನರ ದಂಡು ಸಿದ್ಧಮಾಡತೇವೆ. ಮೈಸೂರಲ್ಲೂ ಇಕ್ಕೇರಿಯಲ್ಲೂ ಇನ್ನರ್ಧ ಲಕ್ಷ ಆಗ್ತದೆ! ಮರಮರ ಮಥನಿಸಿ ಕಿಚ್ಚು ಹುಟ್ಟಿ ಕಾಳ್ಗಿಚ್ಚಾಗುದೆ. ಪರಕೀಯರು ಉರಿದು ಹೊಗತಾರೆ." {{gap}}"ಇಕ್ಕೇರಿಯವರು ಒಪ್ಪಿದ್ದಾರೇನು?" {{gap}}"ಅಲ್ಲಿಗೆ ಇನ್ನು ಹೋಗತೇವೆ, ವೇಲೂರಿಗೂ ಹೋಗಿಬರತೇವೆ.ಎಲ್ಲಕ್ಕೂ ಮೊದಲು ನಿಮ್ಮ ಕೂಡೆ ಮಾತಾಡಬೇಕು, ಅನಿಸಿತು. ಬಂದೆವು." {{gap}}"ನನ್ನಲ್ಲಿರಿಸಿದ ವಿಶ್ವಾಸಕ್ಕಾಗಿ ಧನ್ಯ. ಈ ಮಾತು ಹೊರಹೋಗೋದಿಲ್ಲ. ಕುದುರೆ ಹತ್ತೋಕೆ ಬಾರದೆ. ಕೋವಿ ಎತ್ತೋಕೆ ಆಗದೆ, ನಮ್ಮ ಜನ ನಿರ್ವೀರ್ಯರಾಗತಾ ಇದಾರೆ. ಮೊದಲು ಅವರಲ್ಲಿ ಜೀವ ತುಂಬಬೇಕು. ಆಗಲಿ : ಬಹಳ ಎಚ್ಚರದಿಂದ ನಾವು ಮು೦ದು ವರಿಯಬೇಕು..." ಸಂದೇಹದ ಮಂಪರು ಹರಿದು ಬಸಪ್ಪಾಜಿಯ ಮನಸ್ಸು ಜಾಗೃತವಾಗಿ, ತಾನು ಹಿಡಿಯ ಬೇಕಾದ ದಾರಿ ಇಂಥದೇ ಎಂಬುದನ್ನು ನಿಚ್ಚಳವಾಗಿ ಕಂಡಿತ್ತು. {{gap}}ಆಪರಂಪಾರನೆಂದ : {{gap}}"ಇವತ್ತು ರಾತ್ರೆ ಚಾಮುಂಡೇಶ್ವರಿಯ ಸನ್ನಿಧಿಗೆ ಹೋಗೋಣ. ಅಲ್ಲಿ ವಿಶ್ವಾಸದ ಆಣೆ ಆಗಲಿ." {{gap}}ಬಸಪ್ಪಾಜಿ ಅರಸನೆಂದ: {{gap}}"ಒಪ್ಪಿಗೆ." {{center|'''೪೪'''}} {{gap}}ಅರಸಾಳು, ಆನಂದಪುರ, ಕಪಾಲಿದುರ್ಗ-ಒಂದೊಂದು ಸ್ಥಳವೂ ಹೆಸರೂ ರೋಮಾಂಚನ ಉಂಟುಮಾಡುತ್ತಿದ್ದುವು. {{gap}}"ಇದು ಮಾಯಾಲೋಕ, ಸ್ವಾಮಿಯವರೆ" ಎಂದ ಸಿದ್ಧಲಿಂಗ. {{gap}}ಅಪರಂಪಾರನಿಗೆ ಅದು ಪರಿಚಿತ ಸ್ಥಳ. ದೇಶಪರ್ಯಟನ ಮಾಡುತ್ತ ಹಿಂದೊಮ್ಮೆ ಬಂದಿದ್ದಾಗ ದೇವಗಂಗೆಯ ಬಳಿಯ ಹಳ್ಳಿಯಲ್ಲಿ. ರೈತನೊಬ್ಬನ ಮನೆಯಲ್ಲಿ, ದಾಸೋಹ ಕ್ಕಾಗಿ ಆತ ನಿಂತಿದ್ದ. {{gap}}ಅಪರಂಪಾರ ಒಂದು ಮನೆಯ ಮುಂದೆ ನಿ೦ತಾಗ, "ಶಿವ, ಶಂಭೋ, ಶಂಕರ" ಎಂದು ಸಿದ್ಧಲಿಂಗ ಹರನಾಮೋಚ್ಚಾರ ಮಾಡಿದ. {{gap}}ಸಂಗಡಿಗನತ್ತ ಮುಗುಳುನಗೆ ಬೀರಿ ಅಪರಂಪಾರ ಬಾಗಿಲು ತಟ್ಟಿ, "ಗುರುಮೂರ್ತಪ್ಪ, ಗುರುಮೂರ್ತಪ್ಪ" ಎಂದು ಕರೆದ.<noinclude></noinclude> 17wdjikmhwkd69vztnhf98eqju2gvyv ಪುಟ:ಸ್ವಾಮಿ ಅಪರಂಪಾರ.pdf/೧೨೯ 104 21279 322973 206442 2026-05-27T09:44:26Z Pragathi. BH 7585 /* Validated */ 322973 proofread-page text/x-wiki <noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ |left=|right=೧೨೭}}</noinclude> {{gap}}"ಬೇಕಾದವರ ಮನೆಗೇ ಬಂದಿದೇವೆ. ಅನ್ನಿ!" ಎಂದ ಸಿದ್ಧಲಿಂಗ. {{gap}}ಎಂಟು ಹತ್ತು ವರ್ಷಗಳ ಅಂತರದ ಬಳಿಕ ಕಂಡ ಶರಣನ ಗುರುತು ಹಿಡಿಯಲು ಗುರು ಮೂರ್ತಪ್ಪನಿಗೆ ಒಂದೆರಡು ನಿಮಿಷಗಳು ಬೇಕಾದುವು. ಇವನು ಅಪರಂಪಾರ ಎಂಬುದನ್ನು ಅರಿತಾಗ ಆತ ಹಿಗ್ಗಿದ. {{gap}}ತನ್ನ ಪಾದಗಳನ್ನು ಗುರುಮೂರ್ತಪ್ಪ ತೊಳೆಯುತ್ತಿರಲು ಅಪರಂಪಾರ ಕೇಳಿದ: {{gap}}"ಸೂರಪ್ಪನಾಯಕರನ್ನು ಭೇಟಿಯಾಗಬೇಕಲ್ಲ. ಅವರು ಎಲ್ಲಿ ಸಿಗಬಹುದು. ಗುರು ಮೂರ್ತಿಪ್ಪ?" {{gap}}ಉದಕ ಮುಗಿದಿದ್ದ ತಂಬಿಗೆ ಗುರುಮೂರ್ತಪ್ಪನ ಕೈಯಿಂದ ತುಸು ಜಾರಿ ನೆಲಮುಟ್ಟಿತು. ಅವನೆಂದ : {{gap}}ಸ್ವಾಮಿಯವರಿಗೆ ಗೊತ್ತಿಲ್ಲಾಂತ ಕಾಣತದೆ. ನಾಯಕರೀಗ ಅಡವಿ ಸೇರಿದಾರೆ. ಇಂಗ್ರೇಜಿಯವರಿರುವ ಕಡೆ ಕಾಣಿಸಿಕೊಳ್ಳೋದಿಲ್ಲ. {{gap}}"ಸ್ವಲ್ಪ ಸ್ವಲ್ಪ ಕೇಳಿ ಬಲ್ಲೆವು. ಬಿಳಿಯರ ಅಸ್ತಿತ್ವಕ್ಕೇ ನಾಯಕರು ಕಂಟಕಪ್ರಾಯರಾಗಿ ದಾರಂತೆ.' {{gap}}"ಅದು ನಿಜ" ಎಂದು ನುಡಿದು ಗುರುಮೂರ್ತಪ್ಪ ಪೂಜಾಪರಿಕರಗಳನ್ನು ತರಲು ಎದ್ದು ಒಳಹೋದ. {{gap}}....ದಾಸೋಹ ಸ್ವೀಕರಿಸುತ್ತಿದ್ದ ಅಪರಂಪಾರ, ಮನೆತುಂಬ ಜನರಿದ್ದುದನ್ನು ಗಮನಿಸಿದ. {{gap}}"ಬೀಗರೊ ನೆಂಟರೊ ಬಂದ ಹಾಗಿದೆ" ಎಂದ {{gap}}ಗುರುಮೂರ್ತಪ್ಪ ಏನನ್ನೂ ಹೇಳದೆ ನರೊಸುನಕ್ಕ. {{gap}}ಪವಡಿಸಿ ದಣಿವಾರಿಸಿಕೊಳ್ಳಲು ಸಿದ್ದಲಿಂಗ ಅಣಿಮಾಡುತ್ತಲಿದ್ದಂತೆ, ಅವರಿದ್ದ ಕೊಠಡಿ ಯೊಳಕ್ಕೆ ಯಾರೋ ಕಾಲಿಟ್ಟರು. {{gap}}"ಶರಣು, ಸ್ವಾಮಿಗಳೆ, ನಾನು ಸೂರಪ್ಪ." {{gap}}ಧ್ವನಿಯಲ್ಲಿ ಒಲವು ತುಂಬಿ ಅಪರಂಪಾರನೆಂದ: {{gap}}"ಚೆನ್ನಾಯಿತು! ಭಾಗೀರಥಿ ಇಷ್ಟೊಂದು ಸುಲಭಪ್ರಪ್ತಳು ಅಂತ ನಾವು ತಿಳಿದಿರ ಲಿಲ್ಲ. ಪ್ರಾಯಶಃ ದೇವಗಂಗೆಯ ಸಮಿಾಪದಲ್ಲೇ ನಾವಿರೋದರಿಂದ ಹೀಗಾಗಿದೆಯೋ ಕಾಣೆ! ಬನ್ನಿ, ಕುಳಿತುಕೊಳ್ಳಿ." {{gap}}ಮಾಟವಾದ ನಿಲುವು. ಕುಡಿಗಳನ್ನು ಹುರಿಗೊಳಿಸಿದ ಕಿರುಮಿಾಸೆ ಮುಖವನ್ನು ಆಕರ್ಷ ಣೀಯವಾಗಿ ಮಾಡಿತ್ತು. ಹೊದೆದುಕೊಂಡಿದ್ದ ಉತ್ತರೀಯ. ಹರವಾದ ಎದೆ ಭುಜಗಳನ್ನೂ ಬಲಿಷ್ಟ ತೋಳುಗಳನ್ನೂ ಮರೆಮಾಡಲು ಶಕ್ತವಾಗಿರಲಿಲ್ಲ. ಸೂರಪ್ಪನೆಂದ: {{gap}}"ತಮ್ಮ ವಿಷಯ ನಾನು ಬಲ್ಲೆ ಎಂದರೆ ಸ್ವಾಮಿಗಳಿಗೆ ಆಶ್ಚರ್ಯವಾಗಬಹುದು." {{gap}}"ಗುರುಮೂರ್ತಪ್ಪ ಹೇಳಿದ್ದಾನು." {{gap}}"ಅಲ್ಲ. ವರ್ಷಗಳಿಗೆ ಹಿಂದೆ ಬಿರುಗಾಳಿಯ ಹಾಗೆ ತಾವು ಊರೂರು ಸುತ್ತುತ್ತಿದ್ದಾಗಲೇ ನನ್ನ ಗೂಢಚಾರರಿಂದ ತಿಳಿದೆ. ಆವರ್ತಿಗೊಮ್ಮೆ ಬರಬೇಕೆಂತಲೂ ಇತ್ತು. ಆಗಲಿಲ್ಲ. ತಮ್ಮನ್ನು ಕಾಣಬೇಕೆಂಬ ಆಸೆ ಅನಿರೀಕ್ಷಿತವಾಗಿ ಈಗ ಫಲಿಸಿದೆ.” {{gap}}''ನಾವೂ ನಿಮ್ಮನ್ನು ನೋಡಬೇಕೆಂತಲೇ ಈ ಕಡೆಗೆ ಬಂದೆವು. ಇಕ್ಕೇರಿಗೂ ಮಡಕೇರಿಗೂ<noinclude></noinclude> pnjmhgtfl3ockpr27bvfi09ht1wohdo ಪುಟ:ಸ್ವಾಮಿ ಅಪರಂಪಾರ.pdf/೧೩೦ 104 21280 322974 206443 2026-05-27T09:44:59Z Pragathi. BH 7585 /* Validated */ 322974 proofread-page text/x-wiki <noinclude><pagequality level="4" user="Pragathi. BH" /></noinclude>೧೨೮ ಸ್ವಾಮಿ ಅಪರಂಪಾರೆ ಇರುವ ಸಂಬಂಧ ನಿಮಗೆ ತಿಳಿಯದ್ದಲ್ಲ. ಸೋಮಶೇಖರ ನಾಯಕರೂ ದೊಡ್ಡವೀರ ರಾಜೇಂದ್ರ ಒಡೆಯರೂ ಪರಮಾಪ್ತರಾಗಿದ್ದರು.' "ನಾನು ಆರಿಯೆನೆ?" "ಆದರೆ ಈಗ___" ...ಸೂರಪ್ಪ ಕುಶಾಗ್ರಮತಿಯಾಗಿದ್ದ, ಯಾವುದನ್ನೂ ಬಿಡಿಸಿ ಹೇಳಬೇಕಾದ ಅಗತ್ಯ ವಿರಲಿಲ್ಲ. ತಾನು ಬಂದ ಉದ್ದೇಶವನ್ನು ಅಪರಂಪಾರ ಪ್ರಸ್ತಾಪಿಸಿದೊಡನೆಯೇ ಸೂರಪ್ಪನ ಕಣ್ಣುಗಳು ಮಿಂಚಿದುವು. ''ಘಟ್ಟದ ಕೆಳಗೆ ಕನ್ನಡ ಜಿಲ್ಲೆಗೆ ಹೋಗುವ ಇರಸಾಲು-ಟಪಾಲುಗಳನ್ನು ತಡೆದು ವಶಪಡಿಸಿಕೊಳ್ಳೋದು. ಅಡವಿದಾರಿಯಲ್ಲಿ ಸಣ್ಣ ಸಣ್ಣ ಇಂಗ್ರೇಜಿ ತುಕ್ಕಡಿಗಳ ಮೇಲೆ ಹಲ್ಲೆ ಮಾಡೋದ್ದು—ಇದೀಗ ಈಗಿನ ನನ್ನ ಕಾರ್ಯಕ್ರಮ, ಮೈಸೂರಿನ ಅರಸ ಮೆತ್ತಗಿನ ಮನುಷ್ಯ. ಆತ ಹೋರಾಡುತಾನೆ ಅನ್ನೋ ನಂಬಿಕೆ ನನಗಿಲ್ಲ. ಬಸಪ್ಪಾಜಿಯವರ ಮಾತು ಬೇರೆ ಅನ್ನಿ. ಆಗಲಿ, ನೋಡೋಣ. ಇಲ್ಲಿಗೆ ಬರುತ್ತ ಬೆಟ್ಟದ ಸಾಲುಗಳು ಚಕ್ರಾಕಾರದಲ್ಲಿ ಇರುವುದನ್ನು ಕಂಡಿರಲ್ಲ? ಬಿದನೂರು ಸ್ವತಂತ್ರ ರಾಜ್ಯವಾಗಿರಬೇಕು ಅಂತ ನಿಸರ್ಗದ ನೇಮವಿತ್ತು. ಆ ಸ್ವಾತಂತ್ರ್ಯವನ್ನು ನಮ್ಮವರು ಉಳಿಸಿಕೊಳ್ಳಲಿಲ್ಲ. ಈಗ ಪುನಃ ಅದನ್ನು ಗಳಿಸತೇವಾ? ಚಿಕವೀರರಾಜರೂ ನನ್ನ ಸ್ನೇಹ ಬಯಸಿದ್ದರು. ಜತೆಯಾಗಿ ಹೋರಾಡುವ ವಿಷಯ ಬಸವಯ್ಯನ ಮೂಲಕ ಆಡಿದ್ದರು. ಆದರೂ ಗ್ರಹಗಳು ಮುನಿದು ಕೊಡಗು ಪರಾಧೀನವಾಯಿತು..." ಎಂದು, ತನ್ನ ವಿಚಾರಗಳನ್ನು ಸೂರಪ್ಪ ಅಪರಂಪಾರನ ಮುಂದಿರಿಸಿದ. "ಅದೆಲ್ಲ ನಿಜ, ನಾಯಕರೆ. ಇಂಗ್ರೇಜಿಯವರನ್ನು ಹೊಡೆದೋಡಿಸುವ ಕೆಲಸ ನಾಳೆಯಲ್ಲ ಇವತ್ತೇ ಆಗಲಿ, ಇವತ್ತಲ್ಲ ಈಗಲೇ ಆಗಲಿ-ಅಂತ ನಾವು ಹೇಳುತ್ತಿಲ್ಲ. ಸಿದ್ಧತೆಗೆ ಸಮಯ ಬೇಕು. ಎಳ್ಳಿಲ್ಲದ ಗಾಣದಲ್ಲಿ ಎಣ್ಣೆಯುಂಟೆ? ಜೊಳ್ಳು ತೂರಿದಲ್ಲಿ ಬತ್ತವುಂಟೆ? ಎಳ್ಳನ್ನೂ ಒಳ್ಳೆಯ ಬತ್ತವನ್ನೂ ನಾವು ಮೊದಲು ಸಂಗ್ರಹಿಸಬೇಕು. ನೆಲನ ಶೋಧಿಸಿ ನೆಲೆಯನರಿ ಯದೆ ಕೆರೆಯ ಕಟ್ಟಿಸುತಾರಾ ? ಪಾತಾಳದಗ್ಗವಣಿಯ ನೇಣಿಲ್ಲದೆ, ಸೋಪಾನದ ಬಲದಿಂದ ಲ್ಲದೆ, ತೆಗೆಯಬಹುದೆ?" ಅಪರಂಪಾರನ ಮಾತುಗಳನ್ನು ಏಕಾಗ್ರಚಿತ್ತದಿಂದ ಸೂರಪ್ಪ ಆಲಿಸಿದ. ನಿಟ್ಟುಸಿರುಗರೆದು ಆತನೆಂದ: "ನಾವು ಧರ್ಮ ಮರೆತು ಕೆಟ್ಟೆವು. ಗುರುಮನೆಯವರಾದ ತಾವು ರಾಜಕಾರ್ಯದ ಹಿತೋಪ ದೇಶ ಮಾಡುವಾಗ, ಹೆಚ್ಚ ಹೆಚ್ಚಾಗಿ ನನಗೆ ಅದು ಮನವರಿಕೆಯಾಗತದೆ, ಅಹಂಕಾರದಿಂದ ಮೆರೆದು ಪಾಪಿಗಳಾದೆವು. ನಮ್ಮೊಳಗಿನ ಅನೈಕ್ಕವೇ ನಮಗೆ ಮುಳಿವಾಯಿತು...ಆಗಲಿ, ಸ್ವಾಮಿಯೋರೆ.ನನ್ನ ಕರ್ತವ್ಯ ನಾನು ಪಾಲಿಸತೇನೆ." "ಜನ ಕಣ್ಣೋಳಗೆ ಕಣ್ಣಿರ್ದು ಕಾಣಲರಿಯರಯ್ಯ! ಕಿವಿಯೊಳಗೆ ಕಿವಿಯಿರ್ದು ಕೇಳಲರಿ ಯರಯ್ಯ! ಅವರನ್ನು ನಾವು ಎಚ್ಚರಿಸಬೇಕು." "ತಮ್ಮ ವಾಣಿಗೆ ಪ್ರಜೆಗಳು ಕಿವಿಗೊಡುತಾರೆ, ಸಂಶಯವಿಲ್ಲ." "ನಾವು ನಿಮ್ಮ ಕೂಡೆ ಸಂಬಂಧವಿಟ್ಟಿರತೇವೆ."<noinclude></noinclude> 14ewsz375rydinaa5ag4pzi12n01di2 322976 322974 2026-05-27T09:48:33Z Pragathi. BH 7585 322976 proofread-page text/x-wiki <noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ |left=೧೨೮|right=}}</noinclude> ಇರುವ ಸಂಬಂಧ ನಿಮಗೆ ತಿಳಿಯದ್ದಲ್ಲ. ಸೋಮಶೇಖರ ನಾಯಕರೂ ದೊಡ್ಡವೀರ ರಾಜೇಂದ್ರ ಒಡೆಯರೂ ಪರಮಾಪ್ತರಾಗಿದ್ದರು.' {{gap}}"ನಾನು ಆರಿಯೆನೆ?" {{gap}}"ಆದರೆ ಈಗ___" {{gap}}...ಸೂರಪ್ಪ ಕುಶಾಗ್ರಮತಿಯಾಗಿದ್ದ, ಯಾವುದನ್ನೂ ಬಿಡಿಸಿ ಹೇಳಬೇಕಾದ ಅಗತ್ಯ ವಿರಲಿಲ್ಲ. {{gap}}ತಾನು ಬಂದ ಉದ್ದೇಶವನ್ನು ಅಪರಂಪಾರ ಪ್ರಸ್ತಾಪಿಸಿದೊಡನೆಯೇ ಸೂರಪ್ಪನ ಕಣ್ಣುಗಳು ಮಿಂಚಿದುವು. {{gap}}''ಘಟ್ಟದ ಕೆಳಗೆ ಕನ್ನಡ ಜಿಲ್ಲೆಗೆ ಹೋಗುವ ಇರಸಾಲು-ಟಪಾಲುಗಳನ್ನು ತಡೆದು ವಶಪಡಿಸಿಕೊಳ್ಳೋದು. ಅಡವಿದಾರಿಯಲ್ಲಿ ಸಣ್ಣ ಸಣ್ಣ ಇಂಗ್ರೇಜಿ ತುಕ್ಕಡಿಗಳ ಮೇಲೆ ಹಲ್ಲೆ ಮಾಡೋದ್ದು—ಇದೀಗ ಈಗಿನ ನನ್ನ ಕಾರ್ಯಕ್ರಮ, ಮೈಸೂರಿನ ಅರಸ ಮೆತ್ತಗಿನ ಮನುಷ್ಯ. ಆತ ಹೋರಾಡುತಾನೆ ಅನ್ನೋ ನಂಬಿಕೆ ನನಗಿಲ್ಲ. ಬಸಪ್ಪಾಜಿಯವರ ಮಾತು ಬೇರೆ ಅನ್ನಿ. ಆಗಲಿ, ನೋಡೋಣ. ಇಲ್ಲಿಗೆ ಬರುತ್ತ ಬೆಟ್ಟದ ಸಾಲುಗಳು ಚಕ್ರಾಕಾರದಲ್ಲಿ ಇರುವುದನ್ನು ಕಂಡಿರಲ್ಲ? ಬಿದನೂರು ಸ್ವತಂತ್ರ ರಾಜ್ಯವಾಗಿರಬೇಕು ಅಂತ ನಿಸರ್ಗದ ನೇಮವಿತ್ತು. ಆ ಸ್ವಾತಂತ್ರ್ಯವನ್ನು ನಮ್ಮವರು ಉಳಿಸಿಕೊಳ್ಳಲಿಲ್ಲ. ಈಗ ಪುನಃ ಅದನ್ನು ಗಳಿಸತೇವಾ? ಚಿಕವೀರರಾಜರೂ ನನ್ನ ಸ್ನೇಹ ಬಯಸಿದ್ದರು. ಜತೆಯಾಗಿ ಹೋರಾಡುವ ವಿಷಯ ಬಸವಯ್ಯನ ಮೂಲಕ ಆಡಿದ್ದರು. ಆದರೂ ಗ್ರಹಗಳು ಮುನಿದು ಕೊಡಗು ಪರಾಧೀನವಾಯಿತು..." ಎಂದು, ತನ್ನ ವಿಚಾರಗಳನ್ನು ಸೂರಪ್ಪ ಅಪರಂಪಾರನ ಮುಂದಿರಿಸಿದ. {{gap}}"ಅದೆಲ್ಲ ನಿಜ, ನಾಯಕರೆ. ಇಂಗ್ರೇಜಿಯವರನ್ನು ಹೊಡೆದೋಡಿಸುವ ಕೆಲಸ ನಾಳೆಯಲ್ಲ ಇವತ್ತೇ ಆಗಲಿ, ಇವತ್ತಲ್ಲ ಈಗಲೇ ಆಗಲಿ-ಅಂತ ನಾವು ಹೇಳುತ್ತಿಲ್ಲ. ಸಿದ್ಧತೆಗೆ ಸಮಯ ಬೇಕು. ಎಳ್ಳಿಲ್ಲದ ಗಾಣದಲ್ಲಿ ಎಣ್ಣೆಯುಂಟೆ? ಜೊಳ್ಳು ತೂರಿದಲ್ಲಿ ಬತ್ತವುಂಟೆ? ಎಳ್ಳನ್ನೂ ಒಳ್ಳೆಯ ಬತ್ತವನ್ನೂ ನಾವು ಮೊದಲು ಸಂಗ್ರಹಿಸಬೇಕು. ನೆಲನ ಶೋಧಿಸಿ ನೆಲೆಯನರಿ ಯದೆ ಕೆರೆಯ ಕಟ್ಟಿಸುತಾರಾ ? ಪಾತಾಳದಗ್ಗವಣಿಯ ನೇಣಿಲ್ಲದೆ, ಸೋಪಾನದ ಬಲದಿಂದ ಲ್ಲದೆ, ತೆಗೆಯಬಹುದೆ?" {{gap}}ಅಪರಂಪಾರನ ಮಾತುಗಳನ್ನು ಏಕಾಗ್ರಚಿತ್ತದಿಂದ ಸೂರಪ್ಪ ಆಲಿಸಿದ. {{gap}}ನಿಟ್ಟುಸಿರುಗರೆದು ಆತನೆಂದ: {{gap}}"ನಾವು ಧರ್ಮ ಮರೆತು ಕೆಟ್ಟೆವು. ಗುರುಮನೆಯವರಾದ ತಾವು ರಾಜಕಾರ್ಯದ ಹಿತೋಪ ದೇಶ ಮಾಡುವಾಗ, ಹೆಚ್ಚ ಹೆಚ್ಚಾಗಿ ನನಗೆ ಅದು ಮನವರಿಕೆಯಾಗತದೆ, ಅಹಂಕಾರದಿಂದ ಮೆರೆದು ಪಾಪಿಗಳಾದೆವು. ನಮ್ಮೊಳಗಿನ ಅನೈಕ್ಕವೇ ನಮಗೆ ಮುಳಿವಾಯಿತು...ಆಗಲಿ, ಸ್ವಾಮಿಯೋರೆ.ನನ್ನ ಕರ್ತವ್ಯ ನಾನು ಪಾಲಿಸತೇನೆ." {{gap}}"ಜನ ಕಣ್ಣೋಳಗೆ ಕಣ್ಣಿರ್ದು ಕಾಣಲರಿಯರಯ್ಯ! ಕಿವಿಯೊಳಗೆ ಕಿವಿಯಿರ್ದು ಕೇಳಲರಿ ಯರಯ್ಯ! ಅವರನ್ನು ನಾವು ಎಚ್ಚರಿಸಬೇಕು." {{gap}}"ತಮ್ಮ ವಾಣಿಗೆ ಪ್ರಜೆಗಳು ಕಿವಿಗೊಡುತಾರೆ, ಸಂಶಯವಿಲ್ಲ." {{gap}}"ನಾವು ನಿಮ್ಮ ಕೂಡೆ ಸಂಬಂಧವಿಟ್ಟಿರತೇವೆ."<noinclude></noinclude> f9mqe4a7f9kpmt70xoqcvrltrxhfnch ಪುಟ:ಸ್ವಾಮಿ ಅಪರಂಪಾರ.pdf/೧೩೧ 104 21281 322978 206444 2026-05-27T09:53:56Z Pragathi. BH 7585 /* Validated */ 322978 proofread-page text/x-wiki <noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ |left=|right=೧೨೯}}</noinclude> {{gap}}"ಇವತ್ತು ಇಲ್ಲಿದೇನೆ. ನಾಳೆ ಇನ್ನೊಂದೂರಲ್ಲಿ, ಏನಿದ್ದರೂ ನನ್ನತಾಣ ಗುರುಮೂರ್ತಪ್ಪ ತಿಳಿದಿರತಾನೆ." {{gap}}“ಇಕ್ಕೇರಿ-ಕೊಡಗುಗಳ ಬಾಂಧವ್ಯ ಶಿವಲಿಂಗಸಾಕ್ಷಿಯಾಗಿ ಏರ್ಪಟ್ಟಿದೆ–ಎಂದು ಕೊಳ್ಳೋಣವೆ ನಾಯಕರೆ?" {{gap}}“ಹೌದು, ಸ್ವಾಮಿಗಳೇ. ಕೊಡಗಿನ ಹೋರಾಟದಲ್ಲಿ ನಾವೂ ಸಹಭಾಗಿಗಳು. ಪರಕೀಯರ ವಿರುದ್ಧ ಶಸ್ತ್ರ ಹಿರಿಯುತೇವೆ ಅಂತ ಶಿವಲಿಂಗಸಾಕ್ಷಿಯಾಗಿ ಪ್ರತಿಜ್ಞೆ ಮಾಡುತಿದೇನೆ." {{gap}}...ದೀರ್ಘ ಮಾತುಕತೆಯಿಂದ ಇರುಳು ಕಿರಿದಾಯಿತು, ಬೆಳ್ಳಿಮೂಡಿ ಬಿದನೂರಿನ ಹಸುರಿನ ಮೇಲೆ ನಸುಬೆಳಕು ನರ್ತಿಸಿತು. {{gap}}ಸೂರಪ್ಪ ನಾಯಕನೂ ಅವನ ಸಂಗಡಿಗರೂ ಆಗಲೇ ಎಚ್ಚತ್ತಿದ್ದರು. ಸೂರಪ್ಪ ಅಪರಂಪಾರನನ್ನೆಬ್ಬಿಸಿ, ಪಾದಮುಟ್ಟಿ, "ಹೊರಡುತೇವೆ, ಅಪ್ಪಣೆಯಾಗಬೇಕು" ಎಂದ. {{gap}}“ಮಹಾದೇವ ನಿಮ್ಮ ಮೈಗಾವಲಿಗಿರುತಾನೆ" ಎಂದ ಅಪರಂಪಾರ. {{gap}}ನಾಯಕ ಅಪರಂಪಾರನ ಅಡಿಗಳ ಬಳಿ ಏನನ್ನೋ ಇರಿಸಿದ. {{gap}}"ಅಲ್ಪ ಕಾಣಿಕೆ. ಸದಾ ತಮ್ಮ ಹತ್ತಿರವಿರಬೇಕು." {{gap}}ಅಪರಂಪಾರ ಅದನ್ನೆತ್ತಿಕೊಂಡು, ಮಂದಹಾಸ ಸೂಸಿದ. {{gap}}“ಆಗಲಿ, ಜಂಗಮನ ಜೋಳಿಗೆಯಲ್ಲಿರತದೆ" ಎಂದ. {{gap}}ಕಾಣಿಕೆ, ಆಂಗ್ಲ ಸಿಪಾಯರ ಕಪ್ತಾನನೊಬ್ಬನನ್ನು ಹೊಡೆದುರುಳಿಸಿ ಸೂರಪ್ಪ ವಶಪಡಿಸಿ ಕೊಂಡಿದ್ದ ಕೈಬಂದೂಕು, ಸೊಗಸಾಗಿತ್ತು. {{center|೪೫}} {{gap}}ಗೌರಮ್ಮನೆದು, ಮಗ್ಗುಲಲ್ಲಿ ಮಲಗಿದ್ದ ಮಗಳ ಹೊದಿಕೆಯನ್ನು ಸರಿಪಡಿಸಿದಳು. ಇನ್ನು ಒಂದೆರಡು ವರ್ಷಗಳಲ್ಲೇ ಹದಿನಾರು ತುಂಬುವ ಕೋಮಲಾಂಗಿ, ಯುವರಾಣಿ. ಕಂಡವರು ದೃಷ್ಟಿ ತಾಕೀತೆಂದು ನೆಟಿಕೆ ಮುರಿಯುವಂತಿತ್ತು ಆಕೆಯ ರೂಪರಾಶಿ. ತಾಯಿಯ ಜೀವಕ್ಕೆ ಅಂಟಿಕೊಂಡೇ ಬೆಳೆದ ಈ ಬಳ್ಳಿ ಒಂದು ಇರುಳನ್ನೂ ಆಕೆಯಿಂದ ಬೇರೆಯಾಗಿ ಕಳೆಯದು. {{gap}}ಇನ್ನೆರಡು ಘಳಿಗೆ ಬಿಟ್ಟು ಆಕೆ ಎಚ್ಚರಗೊಳ್ಳುವಳು. {{gap}}ಎಲ್ಲರಿಗಿಂತ ತಡವಾಗಿ ಏಳುವವನು ಅರಸ.. ಕಣ್ಣು ತೆರೆದೊಡನೆ ಆತ ಮಗಳನ್ನು ಕೂಗಿ ಕರೆಯುವ : {{gap}}"ಪುಟ್ಟಮ್ಮಾಜೀ..." {{gap}}"ಬಂದೇ ಅಫ್ಫಾಜೀ" ಎಂದು ಮಾರ್ನುಡಿದು, ತಂದೆಯ ಬಳಿ ಸಾರಿ ಹಾಸಿಗೆಯ ಮೇಲೆ ಆಕೆ ಕುಳಿತುಕೊಳ್ಳಬೇಕು. {{gap}}ಈ ನತದೃಷ್ಟೆಯ ಹಣೆಯಲ್ಲಿ ಏನು ಬರೆದಿದೆ ಎಂದು ಓದಲೆಳಸುವವನಂತೆ ಅರಸ ಮಗಳ ಮುಖವನ್ನು ದಿಟ್ಟಿಸಬೇಕು: ಮುಂಗುರುಳನ್ನು ನೇವರಿಸಬೇಕು. {{gap}}ಆಗ ಮಗಳೆನ್ನುವಳು : {{gap}}“ನೀರು ಕಾದದೆ, ಏಳಿ, ಅಫ್ಫಾಜಿ..."<noinclude></noinclude> hdr2n5025ubku5bq92dw4f05sfkx1vr ಪುಟ:ಸ್ವಾಮಿ ಅಪರಂಪಾರ.pdf/೧೩೨ 104 21282 322981 206445 2026-05-27T09:59:11Z Pragathi. BH 7585 /* Validated */ 322981 proofread-page text/x-wiki <noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ |left=೧೩೦|right=}}</noinclude> {{gap}}ಅದು ವೇಲೂರಿನ ಕೋಟೆಯೊಳಗಿನ ಅರಮನೆ, ಟೀಪೂ ಮಡಿದ ಬಳಿಕ ಆತನ ಸಂಸಾರವನ್ನು ಕೆಲ ವರ್ಷಗಳ ಕಾಲ ಆಂಗ್ಲರು ಅಲ್ಲಿರಿಸಿದ್ದರು. ಟೀಪೂವಿನ ಮಕ್ಕಳು ರಾಜ ಬಂದಿಗಳಾಗಿ ಅಲ್ಲಿ ದಿನ ಕಳೆದಿದ್ದರು. ಚಿಕವೀರರಾಜ ಕೈದಿಯೆ? ಹಾಗೆಂದು ನಿರ್ದಿಷ್ಟವಾಗಿ ಹೇಳುವಂತಿರಲಿಲ್ಲ. ಅರಮನೆಯ ಬಾಗಿಲುಗಳನ್ನು ಆಂಗ್ಲ ಪಹರೆಯಾಳುಗಳು ಕಾಯುತ್ತಿರಲಿಲ್ಲ. ಹಾಗಾದರೆ ಆತ ಸ್ವತಂತ್ರನೇ? ಆ ರೀತಿ ನುಡಿಯುವುದೂ ಕಷ್ಟವೇ. ಕೋಟೆ ಬ್ರಿಟಿಷರ ಅಧೀನದಲ್ಲಿತ್ತು ; ಅದಕ್ಕೆ ಭದ್ರ ಕಾವಲಿತ್ತು. ಮಡಕೇರಿಗಾಗಲೀ ಇನ್ನೆಲ್ಲಿಗೇ ಆಗಲೀ ಇಷ್ಟಬಂದಂತೆ ಹೊರಟು ಹೋಗುವ ಸ್ವಾತಂತ್ರ್ಯ ಅರಸನಿಗಿರಲಿಲ್ಲ. {{gap}}ಅರಮನೆಯ ಸುತ್ತಲೂ ಹಲವಾರು ಸಣ್ಣಪುಟ್ಟ ಮನೆಗಳಿದ್ದುವು. ಚಿಕವೀರರಾಜ ನೊಡನೆ ಹೊರಟು ಬಂದಿದ್ದ ಇನ್ನೂರಕ್ಕೂ ಮಿಕ್ಕಿದ ಪರಿವಾರ ಆ ಮನೆಗಳಲ್ಲಿ ಬಿಡಾರ ಮಾಡಿತು. ಕೊಡಗಿನ ಪಡಿವಾಳರೂ ಚಾವಡಿಕಾರರೂ ಅರಮನೆಯಲ್ಲಿ ಓಡಾಡುತ್ತಿದ್ದರು. ಆದರೆ ಒಬ್ಬನೇ ಒಬ್ಬಾತನಲ್ಲೂ ಶಸ್ತ್ರವಿರಲ್ಲಿಲ್ಲ. {{gap}}“ಅಕ್ಕಿ ಮತ್ತಿತರ ಸಾಮಗ್ರಿ ಒದಗಿಸುತೇವೆ" ಎಂದಿದ್ದರು ಆಂಗ್ಲ ಅಧಿಕಾರಿಗಳು. {{gap}}ಸ್ವಾಭಿಮಾನಿಯಾದ ಚಿಕ್ಕವೀರರಾಜ ನುಡಿದಿದ್ದ: {{gap}}"ನಮ್ಮ ವ್ಯವಸ್ಥೆ ನಾವು ಮಾಡಿಕೋತೇವೆ." {{gap}}ರಾಜಭಂಡಾರವನ್ನು ತನ್ನ ಜತೆಗೆ ತಂದಿದ್ದ ಅರಸ ತನ್ನ ಘನತೆಗೆ ಕುಂದು ತಂದು ಕೊಳ್ಳಲಿಲ್ಲ..... {{gap}}...ತಂದೆ ಸ್ನಾನದ ಮನೆಗೆ ಹೋದೊಡನೆ ರಾಜಕುಮಾರಿ ತನ್ನ ತಾಯಿ ಇದ್ದಲ್ಲಿಗೆ ನಡೆದಳು. {{gap}}ಹಿತ್ತಿಲ ಮರದಲ್ಲೊಂದು ಕಾಗೆ ಒಂದೇ ಸಮನೆ ಕಾಕಾಕಾ ಎನ್ನುತ್ತಿತ್ತು. ರಾಣಿ ಗೌರಮ್ಮನೆಂದಳು : {{gap}}"ಯಾರೋ ನೆಂಟರು ಬರೋ ಹಂಗದೆ." {{gap}}"ನಿನಗೆ ಊರಿನ ಧ್ಯಾನ. ಯಾರು ಬರುತಾರಮ್ಮ ಇಷ್ಟು ದೂರಕ್ಕೆ?" ಎಂದಳು ರಾಜಕುಮಾರಿ. {{gap}}ಅಷ್ಟು ಹೊತ್ತಿಗೆ ಪಡಿವಳನೊಬ್ಬ ಬಂದು ನುಡಿದ: {{gap}}"ಇಬ್ಬರು ಅಯ್ಯಗೋಳು ತಲೆಬಾಕಿಲ್ನಾಗೆ ನಿಂತವರೆ. ಊರು ಕಡೆ ಮಂದೀಂತ ಆನಿಸತದೆ.” {{gap}}"ನೆಂಟರು ಬರಲಿಲ್ಲ. ಸ್ವಾಮಿಗಳು ಬಂದರು. ನಡೆಯವ್ವ" ಎಂದಳು ರಾಣಿ. {{gap}}ಗೌರಮ್ಮನೂ ಆಕೆಯ ಮಗಳೂ ತನ್ನ ಅಡಿಗಳಿಗೆ ಎರಗಿದಾಗ ಅಪರಂಪಾರನ ಕಂಠ ಉಮ್ಮಳಿಸಿತು. {{gap}}"ಏಳು ತಾಯೀ, ಏಳು ತಂಗೀ. ಮಹಾರಾಣಿ–ಯುವರಾಣಿ ಅಲ್ಲವಾ ? ಮಹಾದೇವ ಕಾಪಾಡುತಾನೆ,ಎಳಿರಿ." {{gap}}ಅಪರಂಪಾರನ ಧ್ವನಿ ಕೇಳಿ ಗೌರಮ್ಮನ ಮೈ ಪುಲಕಗೊಂಡಿತು. ಗಡ್ಡ ಮಿಾಸೆಗಳ ವೇಷಧಾರಿಯಲ್ಲ. ಅದೇ ಕಣ್ಣುಗಳು, ಅದೇ ಕಂಠ, ಆ ಠೀವಿಯೀ. {{gap}}ನಮಿಸಿದವರನ್ನು ಸಿದ್ಧಲಿಂಗನೂ ಆಶೀರ್ವದಿಸಿದ. [ಈತನೊಬ್ಬ ಆಗ ಇರಲಿಲ್ಲ.]<noinclude></noinclude> jekozhpsz174e0grnftskftdcnbpkgz ಪುಟ:ಸ್ವಾಮಿ ಅಪರಂಪಾರ.pdf/೧೩೩ 104 21283 322982 206446 2026-05-27T09:59:33Z Pragathi. BH 7585 /* Validated */ 322982 proofread-page text/x-wiki <noinclude><pagequality level="4" user="Pragathi. BH" /></noinclude> ಸಾಮಿ ಅಪರಂಪಾರ ೧೩೧ ಗೌರಮ್ಮನೆದ್ದು, ತಲೆಯ ಮೇಲಣ ಸೆರಗನ್ನು ಸರಿಪಡಿಸಿ, ಪರೀಕ್ಷಿಸುವ ನೋಟದಿಂದ ಅಪರಂಪಾರನನ್ನೊಮ್ಮೆ ನೋಡಿ ಅಂದಳು : "ಮಡಕೇರಿಯ ಅರಮನೆಗೊಮ್ಮೆ ಸ್ವಾಮಿಗಳು ದಯೆಮಾಡಿಸಿದ್ದ ನೆನಪು.” "ಹೌದು, ತಾಯಿಾ. ಆಗ ಕರೆಸಿ ಬಂದೆವು ; ಈಗ ನಾವಾಗಿಯೇ ಬಂದಿದೀವಿ." "ತಾವು ದಾಸೋಹ ಸ್ವೀಕರಿಸದೇ ಹೋದಿರಿ. ಕೊಡಗಿನ ರಾಜ್ಯಲಕ್ಷ್ಮಿಯೂ ಹೊರಟು ಹೋದಳು." "ಅದಕ್ಕೂ ಇದಕ್ಕೂ ಏನು ಸಂಬಂಧವಮ್ಮ?..." ಸಿದ್ಧಲಿಂಗನೆಂದ : “ಸ್ವಾಮಿಗಳು ಪ್ರಸನ್ನರಾಗಿ ಬಂದಿದಾರೆ. ಇನ್ನು ರಾಜ್ಯಲಕ್ಷ್ಮಿಯೂ ಬರತಾಳೆ, ರಾಣಿ ಯವರೆ." ಗೌರಮ್ಮನ ಕಣ್ಣುಗಳು ಅಶ್ರುಭರಿತವಾದುವು. "ತಾವು ಕೂತುಕೋಬೇಕು. ಸನ್ನಿಧಿಗೆ ಸುದ್ದಿ ಮುಟ್ಟಿಸಿ ಬರತೇನೆ" ಎಂದು ನುಡಿದು ಗೌರಮ್ಮ ಮಗಳೊಡನೆ ಒಳ ಹೋದಳು. ಅರಸ, ಬಹಳ ಕಾಲ ಅಗಲಿದ್ದ ಬಂಧುವನ್ನು ಕಾಣಬಂದವನಂತೆ ಆನಂದೋದ್ವೇಗದಿಂದ, ನಡುಹಜಾರಕ್ಕೆ ಬಂದ. ಅಪರಂಪಾರನನ್ನು ಕಂಡೊಡನೆ, 'ಇವರು ಅವರೇ ಏನು?' ಎಂದು ಕಕ್ಕಾವಿಕ್ಕಿಯಾಗಿ ನಿಂತ. ಯಾವ ರಕ್ಷೆಯೂ ಇಲ್ಲದ ಅಸಹಾಯ ತಾನು ಎಂಬಂತೆ ಅಪರಂಪಾರನಿಗೆ ಒಂದು ಕ್ಷಣ ಭಾಸವಾಯಿತು. ವಿಶ್ವವ್ಯಾಪಾರವೆಲ್ಲ ಸ್ತಬ್ದವಾಗಿದೆ, ತಾನೊಂದು ಶಿಲಾಮೂರ್ತಿ–ಎಂದು ಅವನಿಗೆ ಅನಿಸಿತು. ಆದರೆ ಮರುಕ್ಷಣದಲ್ಲೆ, ಅರಸ ಅವನ ಪಾದಗಳನ್ನು ಮುಟ್ಟಿದ. ಅಪರಂಪಾರ ಜಾಗೃತನಾಗಿ ಸಲಿಗೆಯ ಧ್ವನಿಯಲ್ಲಿ ಅಂದ : "ಏಳು ಮಹರಾಜ.” - ಆ ಸ್ವರ ಕೇಳಿ, ಅರಸನ ಮನಸಿನ ತುಮುಲ' ಕೊನೆಗಂಡಿತು, ಆತ ಸಿದ್ಧಲಿಂಗನಿಗೂ ನಮಿಸಿ, ಎದು ನಿಂತು, ವಿನೀತನಾಗಿ ನುಡಿದ: "ಸ್ವಾಮಿಗಳೇ, ಅಧಿಕಾರ ಅನಶ್ವರ ಅಂತ ನಾನು ಭಾವಿಸಿದ್ದ ಘಳಿಗೆಯಲ್ಲಿ ಹಿಂದೆ ಒಮ್ಮೆ ಬಂದಿದ್ದಿರಿ. ತಾವು ನನ್ನ ದಾಯಾದಿ ವೀರಪ್ಪನಿರಬಹುದು ಎಂಬ ಶಂಕೆ ಯೊಂದಿತ್ತು, ಸ್ವಲ್ಪ ಉದ್ಧಟನಾಗಿ ನಾನು ವರ್ತಿಸಿದೆ. ತಪ್ಪನ್ನು ಉಡಿಯಲ್ಲಿ ಹಾಕಿ ಕೊಂಡು ಮತ್ತೆ ಇಷ್ಟು ದೂರ ಬಂದಿದೀರಿ, ನಾನು ಭಾಗ್ಯಶಾಲಿ.” ಕವಿದು ಬರುತ್ತಿದ್ದ ಕತ್ತಲನ್ನು ಪ್ರಯತ್ನಪೂರ್ವಕವಾಗಿ ದೂರ ಸರಿಸುತ್ತ ಅಪರಂಪಾರ ನೆಂದ : “ಹಳೆಯ ಮಾತು ಇನ್ಯಾತಕ್ಕೆ ಅರಸ? ಶಿವನು ಗುರುವಾಗಿ ಬಂದಾಗ ತನುವನ್ನು ನೀಡಬೇಕು; ಶಿವನು ಲಿಂಗವಾಗಿ ಬಂದಾಗ ಮನವನ್ನು ನೀಡಬೇಕು: ಶಿವನು ಜಂಗಮ ನಾಗಿ ಬಂದಾಗ ಧನವನ್ನು ನೀಡಬೇಕು. ಬಲ್ಲೆಯಾ?" “ಇಲ್ಲಿರುವುದೆಲ್ಲ ನಿಮಗರ್ಪಿತ, ಸ್ವಾಮಿಗಳೇ, ಅಪ್ಪಣೆಯಾಗಲಿ." "ಆದರೆ ಈ ಜಂಗಮನಿಗೆ ಬೇಕಾಗಿರುವುದು ನಿನ್ನ ಧನವಲ್ಲ, ನಿನ್ನಿಂದ ಒಂದು ವಾಗ್ದಾನ."<noinclude></noinclude> 0ecz0jjl3rrr78yf49xbg9klne4lq9l 322987 322982 2026-05-27T10:37:24Z Pragathi. BH 7585 322987 proofread-page text/x-wiki <noinclude><pagequality level="4" user="Pragathi. BH" />{{rh|left=೧೩೧|center=ಸ್ವಾಮಿ ಅಪರಂಪಾರ |right=}}</noinclude> {{gap}}ಗೌರಮ್ಮನೆದ್ದು, ತಲೆಯ ಮೇಲಣ ಸೆರಗನ್ನು ಸರಿಪಡಿಸಿ, ಪರೀಕ್ಷಿಸುವ ನೋಟದಿಂದ ಅಪರಂಪಾರನನ್ನೊಮ್ಮೆ ನೋಡಿ ಅಂದಳು : {{gap}}"ಮಡಕೇರಿಯ ಅರಮನೆಗೊಮ್ಮೆ ಸ್ವಾಮಿಗಳು ದಯೆಮಾಡಿಸಿದ್ದ ನೆನಪು.” {{gap}}"ಹೌದು, ತಾಯಿಾ. ಆಗ ಕರೆಸಿ ಬಂದೆವು ; ಈಗ ನಾವಾಗಿಯೇ ಬಂದಿದೀವಿ." {{gap}}"ತಾವು ದಾಸೋಹ ಸ್ವೀಕರಿಸದೇ ಹೋದಿರಿ. ಕೊಡಗಿನ ರಾಜ್ಯಲಕ್ಷ್ಮಿಯೂ ಹೊರಟು ಹೋದಳು." {{gap}}"ಅದಕ್ಕೂ ಇದಕ್ಕೂ ಏನು ಸಂಬಂಧವಮ್ಮ?..." ಸಿದ್ಧಲಿಂಗನೆಂದ : {{gap}}“ಸ್ವಾಮಿಗಳು ಪ್ರಸನ್ನರಾಗಿ ಬಂದಿದಾರೆ. ಇನ್ನು ರಾಜ್ಯಲಕ್ಷ್ಮಿಯೂ ಬರತಾಳೆ, ರಾಣಿ ಯವರೆ." {{gap}}ಗೌರಮ್ಮನ ಕಣ್ಣುಗಳು ಅಶ್ರುಭರಿತವಾದುವು. {{gap}}"ತಾವು ಕೂತುಕೋಬೇಕು. ಸನ್ನಿಧಿಗೆ ಸುದ್ದಿ ಮುಟ್ಟಿಸಿ ಬರತೇನೆ" ಎಂದು ನುಡಿದು ಗೌರಮ್ಮ ಮಗಳೊಡನೆ ಒಳ ಹೋದಳು. {{gap}}ಅರಸ, ಬಹಳ ಕಾಲ ಅಗಲಿದ್ದ ಬಂಧುವನ್ನು ಕಾಣಬಂದವನಂತೆ ಆನಂದೋದ್ವೇಗದಿಂದ, ನಡುಹಜಾರಕ್ಕೆ ಬಂದ. ಅಪರಂಪಾರನನ್ನು ಕಂಡೊಡನೆ, 'ಇವರು ಅವರೇ ಏನು?' ಎಂದು ಕಕ್ಕಾವಿಕ್ಕಿಯಾಗಿ ನಿಂತ. {{gap}}ಯಾವ ರಕ್ಷೆಯೂ ಇಲ್ಲದ ಅಸಹಾಯ ತಾನು ಎಂಬಂತೆ ಅಪರಂಪಾರನಿಗೆ ಒಂದು ಕ್ಷಣ ಭಾಸವಾಯಿತು. ವಿಶ್ವವ್ಯಾಪಾರವೆಲ್ಲ ಸ್ತಬ್ದವಾಗಿದೆ, ತಾನೊಂದು ಶಿಲಾಮೂರ್ತಿ–ಎಂದು ಅವನಿಗೆ ಅನಿಸಿತು. {{gap}}ಆದರೆ ಮರುಕ್ಷಣದಲ್ಲೆ, ಅರಸ ಅವನ ಪಾದಗಳನ್ನು ಮುಟ್ಟಿದ. ಅಪರಂಪಾರ ಜಾಗೃತನಾಗಿ ಸಲಿಗೆಯ ಧ್ವನಿಯಲ್ಲಿ ಅಂದ : {{gap}}"ಏಳು ಮಹರಾಜ.” - {{gap}}ಆ ಸ್ವರ ಕೇಳಿ, ಅರಸನ ಮನಸಿನ ತುಮುಲ' ಕೊನೆಗಂಡಿತು, ಆತ ಸಿದ್ಧಲಿಂಗನಿಗೂ ನಮಿಸಿ, ಎದು ನಿಂತು, ವಿನೀತನಾಗಿ ನುಡಿದ: {{gap}}"ಸ್ವಾಮಿಗಳೇ, ಅಧಿಕಾರ ಅನಶ್ವರ ಅಂತ ನಾನು ಭಾವಿಸಿದ್ದ ಘಳಿಗೆಯಲ್ಲಿ ಹಿಂದೆ ಒಮ್ಮೆ ಬಂದಿದ್ದಿರಿ. ತಾವು ನನ್ನ ದಾಯಾದಿ ವೀರಪ್ಪನಿರಬಹುದು ಎಂಬ ಶಂಕೆ ಯೊಂದಿತ್ತು, ಸ್ವಲ್ಪ ಉದ್ಧಟನಾಗಿ ನಾನು ವರ್ತಿಸಿದೆ. ತಪ್ಪನ್ನು ಉಡಿಯಲ್ಲಿ ಹಾಕಿ ಕೊಂಡು ಮತ್ತೆ ಇಷ್ಟು ದೂರ ಬಂದಿದೀರಿ, ನಾನು ಭಾಗ್ಯಶಾಲಿ.” {{gap}}ಕವಿದು ಬರುತ್ತಿದ್ದ ಕತ್ತಲನ್ನು ಪ್ರಯತ್ನಪೂರ್ವಕವಾಗಿ ದೂರ ಸರಿಸುತ್ತ ಅಪರಂಪಾರ ನೆಂದ : {{gap}}“ಹಳೆಯ ಮಾತು ಇನ್ಯಾತಕ್ಕೆ ಅರಸ? ಶಿವನು ಗುರುವಾಗಿ ಬಂದಾಗ ತನುವನ್ನು ನೀಡಬೇಕು; ಶಿವನು ಲಿಂಗವಾಗಿ ಬಂದಾಗ ಮನವನ್ನು ನೀಡಬೇಕು: ಶಿವನು ಜಂಗಮ ನಾಗಿ ಬಂದಾಗ ಧನವನ್ನು ನೀಡಬೇಕು. ಬಲ್ಲೆಯಾ?" {{gap}}“ಇಲ್ಲಿರುವುದೆಲ್ಲ ನಿಮಗರ್ಪಿತ, ಸ್ವಾಮಿಗಳೇ, ಅಪ್ಪಣೆಯಾಗಲಿ." {{gap}}"ಆದರೆ ಈ ಜಂಗಮನಿಗೆ ಬೇಕಾಗಿರುವುದು ನಿನ್ನ ಧನವಲ್ಲ, ನಿನ್ನಿಂದ ಒಂದು ವಾಗ್ದಾನ."<noinclude></noinclude> 5jr4nvcpj4l48cqjcb2foxvnpg4hocb ಪುಟ:ಸ್ವಾಮಿ ಅಪರಂಪಾರ.pdf/೧೩೪ 104 21284 322985 206447 2026-05-27T10:26:57Z Pragathi. BH 7585 /* Validated */ 322985 proofread-page text/x-wiki <noinclude><pagequality level="4" user="Pragathi. BH" /></noinclude>೧೩೨ ಸ್ವಾಮಿ ಅಪರಂಪಾರ "ಮಾತು ಕೊಡುತೇನೆ. ಕೊಟ್ಟದಕ್ಕೆ ತಪುವುದಿಲ್ಲ." "ಪ್ರಜೆಗಳು ಬಂದು ಕರೆಯುವಾಗ ಮಡಕೇರಿಗೆ ಮರಳಿ ನೀನು ಅಧಿಪತಿಯಾಗ ಬೇಕು." ಅಪರಂಪಾರ ನುಡಿದುದನ್ನು ಮೆಲುಕು ಹಾಕುತ್ತ ಅರಸನೆಂದ: “ಕೊಡಗಿಗೆ ಎಂಥ ಗತಿ ಪ್ರಾಪ್ತವಾಗಿದೆ ಅಂಬೋದನ್ನು ತಾವು ಬಲ್ಲಿರಿ." "ಸುಖವಳಿದು ಕಷ್ಟವಾಯ್ತೆಂದು ನೀನು ಅಳಲದಿರು. ಮೊದಲು ಸುಖಿಗಳು ಅತಿ ಕಷ್ಟಪಡಲಿಲ್ಲವೆ ಅರಸ?" “ನಿಜ...ದ್ರೋಹಿಗಳ ಛದಿಸಂಧಾನದಿಂದ ಹೀಗಾಯಿತು, ಸ್ವಾಮಿಗಳೆ." “ಮಾರಿಯ ಪೂಜಿಸಿ ಮಸಣಕ್ಕೆ ಹೋಗಿ ಗೋರಿಗೊಳಿಸಿ ಕುರಿಯ ಕೊರಳನೆ ಕೊಯಿ ದುಂಬ ಕ್ರೂರಕರ್ಮಿಗಳು ಅವರು. ಆ ಜನಕ್ಕೆ ಮಹಾದೇವ ಶಾಸ್ತಿ ಮಾಡುತಾನೆ." ಗೌರಮ್ಮ ಒಳಬಾಗಿಲ ಬಳಿ ಕಾಣಿಸಿಕೊಂಡು ತಗ್ಗಿದ ಧ್ವನಿಯಲ್ಲಿ ಅಂದಳು : "ಶಿವಪೂಜೆಗೆ ಅಣಿಮಾಡಲೆ?" ಚಿಕವೀರರಾಜನೆ೦ದ : "ಹ್ಞ.. ಹ್ಞ.....ಸೋಮಯ್ಯನನ್ನೂ ಐಯಣ್ಣನನ್ನೂ ಕರೆಸಬೇಕು...ತಿಮ್ಮಣ್ಣಗೌಡನಿಗೂ ಹೇಳಿಕಳಿಸಬೇಕು. ಏ, ಯಾರಲ್ಲಿ ?" ಅಪರಂಪಾರನೆಂದ : "ಮಹಾರಾಜ, ನಾವಾಡಿದ್ದು ನಮ್ಮ ನಮ್ಮಲ್ಲೇ ಇರಬೇಕು." “ಆಗಲಿ,ಆಗಲಿ.” ...ಪೂಜೆಯಾಯಿತು. ಪ್ರಸಾದವಾಯಿತು. ಹಗಲು ಕಳೆದು ಇರುಳು ಬಹಳ ಹೊತ್ತಿನ ವರೆಗೆ ಮಾತುಕತೆ ನಡೆಯಿತು. ಕೊನೆಯಲ್ಲಿ ಚಿಕವೀರರಾಜನೆಂದ: "ನನ್ನನ್ನು ಬೇಸರ ಕವಿದಿತ್ತು, ಈ ಜೀವನದಲ್ಲಿ ಪುನಃ ಚೇತನ ತುಂಬಿದಿರಿ." ಅಪರಂಪಾರ ಮುಗುಳುನಕ್ಕ. "ಹರನೀವ ಕಾಲಕ್ಕೆ ಸಿರಿ ಬೆನ್ನಲ್ಲಿ ಬಕ್ಕು. ಹರಿದು ಹೆದ್ದೊರೆ ಕೆರೆಯ ತುಂಬಿದಂತಯ್ಯ. ನೆರೆಯದ ವಸ್ತು ನೆರೆವುದು ನೋಡಯ್ಯ. ಅರಸು, ಪರಿವಾರ, ಕೈವಾರವಯ್ಯ..." "ಸಂಪತ್ತು ಸೌಭಾಗ್ಯಗಳ ಯೋಚನೆ ನಾನು ಮಾಡುತಾ ಇಲ್ಲ, ಸ್ವಾಮಿಗಳೆ, ವೀರನಂತೆ ಕಾದಿ ಹಾಲೇರಿ ವಂಶಕ್ಕೆ ತಟ್ಟಿದ ಕಳಂಕವನ್ನು ಹೋಗಲಾಡಿಸಬೇಕು ಅನ್ನೋದೊಂದೇ ನನ್ನ ಹಂಬಲ." ಅರಸನನ್ನೊಮ್ಮೆ ದಿಟ್ಟಿಸಿ ನೋಡಿ ಅಪರಂಪಾರನೆಂದ: "ಇಂಗ್ರೇಜಿಯವರೀಗ ಹೊಲಬು ತಪ್ಪಿದ ಮೃಗ. ಕೊಡಗಿನ ಕಾಡಿನಿಂದ ಅದಕ್ಕೆ ವಿಮೋಚನೆ ಇಲ್ಲ. ಅದು ಬಲೆಗೆ ಬೀಳುತದೆ. ನಿನ್ನ ಹಂಬಲ ಈಡೇರುತದೆ." ೪೯ ಅಪರಂಪಾರ ವೇಲೂರನ್ನು ಬಿಟ್ಟು ಹೊರಟ ಕೆಲ ದಿನಗಳಲ್ಲಿ ಮೈಸೂರನ್ನು ತಲಪಿದ. ಟಪಾಲಿನಲ್ಲಿ, ಕಾಸ್ಸಾ ಮೇಜರನನ್ನು ಯೋಚನೆಗೀಡುಮಾಡಿದ ಒಂದು ವರದಿಯಿತ್ತು.<noinclude></noinclude> fcbkazjzuqs0b86lh2jvytims71sna9 322986 322985 2026-05-27T10:34:19Z Pragathi. BH 7585 322986 proofread-page text/x-wiki <noinclude><pagequality level="4" user="Pragathi. BH" />{{rh|center=ಸ್ವಾಮಿ ಅಪರಂಪಾರ |left=೧೩೨|right=}}</noinclude> {{gap}}"ಮಾತು ಕೊಡುತೇನೆ. ಕೊಟ್ಟದಕ್ಕೆ ತಪುವುದಿಲ್ಲ." {{gap}}"ಪ್ರಜೆಗಳು ಬಂದು ಕರೆಯುವಾಗ ಮಡಕೇರಿಗೆ ಮರಳಿ ನೀನು ಅಧಿಪತಿಯಾಗ ಬೇಕು." {{gap}}ಅಪರಂಪಾರ ನುಡಿದುದನ್ನು ಮೆಲುಕು ಹಾಕುತ್ತ ಅರಸನೆಂದ: {{gap}}“ಕೊಡಗಿಗೆ ಎಂಥ ಗತಿ ಪ್ರಾಪ್ತವಾಗಿದೆ ಅಂಬೋದನ್ನು ತಾವು ಬಲ್ಲಿರಿ." {{gap}}"ಸುಖವಳಿದು ಕಷ್ಟವಾಯ್ತೆಂದು ನೀನು ಅಳಲದಿರು. ಮೊದಲು ಸುಖಿಗಳು ಅತಿ ಕಷ್ಟಪಡಲಿಲ್ಲವೆ ಅರಸ?" {{gap}}“ನಿಜ...ದ್ರೋಹಿಗಳ ಛದಿಸಂಧಾನದಿಂದ ಹೀಗಾಯಿತು, ಸ್ವಾಮಿಗಳೆ." {{gap}}“ಮಾರಿಯ ಪೂಜಿಸಿ ಮಸಣಕ್ಕೆ ಹೋಗಿ ಗೋರಿಗೊಳಿಸಿ ಕುರಿಯ ಕೊರಳನೆ ಕೊಯಿ ದುಂಬ ಕ್ರೂರಕರ್ಮಿಗಳು ಅವರು. ಆ ಜನಕ್ಕೆ ಮಹಾದೇವ ಶಾಸ್ತಿ ಮಾಡುತಾನೆ." {{gap}}ಗೌರಮ್ಮ ಒಳಬಾಗಿಲ ಬಳಿ ಕಾಣಿಸಿಕೊಂಡು ತಗ್ಗಿದ ಧ್ವನಿಯಲ್ಲಿ ಅಂದಳು : {{gap}}"ಶಿವಪೂಜೆಗೆ ಅಣಿಮಾಡಲೆ?" ಚಿಕವೀರರಾಜನೆ೦ದ : {{gap}}"ಹ್ಞ.. ಹ್ಞ.....ಸೋಮಯ್ಯನನ್ನೂ ಐಯಣ್ಣನನ್ನೂ ಕರೆಸಬೇಕು...ತಿಮ್ಮಣ್ಣಗೌಡನಿಗೂ ಹೇಳಿಕಳಿಸಬೇಕು. ಏ, ಯಾರಲ್ಲಿ ?" {{gap}}ಅಪರಂಪಾರನೆಂದ : {{gap}}"ಮಹಾರಾಜ, ನಾವಾಡಿದ್ದು ನಮ್ಮ ನಮ್ಮಲ್ಲೇ ಇರಬೇಕು." {{gap}}“ಆಗಲಿ,ಆಗಲಿ.” {{gap}}...ಪೂಜೆಯಾಯಿತು. ಪ್ರಸಾದವಾಯಿತು. ಹಗಲು ಕಳೆದು ಇರುಳು ಬಹಳ ಹೊತ್ತಿನ ವರೆಗೆ ಮಾತುಕತೆ ನಡೆಯಿತು. ಕೊನೆಯಲ್ಲಿ ಚಿಕವೀರರಾಜನೆಂದ: {{gap}}"ನನ್ನನ್ನು ಬೇಸರ ಕವಿದಿತ್ತು, ಈ ಜೀವನದಲ್ಲಿ ಪುನಃ ಚೇತನ ತುಂಬಿದಿರಿ." {{gap}}ಅಪರಂಪಾರ ಮುಗುಳುನಕ್ಕ. {{gap}}"ಹರನೀವ ಕಾಲಕ್ಕೆ ಸಿರಿ ಬೆನ್ನಲ್ಲಿ ಬಕ್ಕು. ಹರಿದು ಹೆದ್ದೊರೆ ಕೆರೆಯ ತುಂಬಿದಂತಯ್ಯ. ನೆರೆಯದ ವಸ್ತು ನೆರೆವುದು ನೋಡಯ್ಯ. ಅರಸು, ಪರಿವಾರ, ಕೈವಾರವಯ್ಯ..." {{gap}}"ಸಂಪತ್ತು ಸೌಭಾಗ್ಯಗಳ ಯೋಚನೆ ನಾನು ಮಾಡುತಾ ಇಲ್ಲ, ಸ್ವಾಮಿಗಳೆ, ವೀರನಂತೆ ಕಾದಿ ಹಾಲೇರಿ ವಂಶಕ್ಕೆ ತಟ್ಟಿದ ಕಳಂಕವನ್ನು ಹೋಗಲಾಡಿಸಬೇಕು ಅನ್ನೋದೊಂದೇ ನನ್ನ ಹಂಬಲ." {{gap}}ಅರಸನನ್ನೊಮ್ಮೆ ದಿಟ್ಟಿಸಿ ನೋಡಿ ಅಪರಂಪಾರನೆಂದ: {{gap}}"ಇಂಗ್ರೇಜಿಯವರೀಗ ಹೊಲಬು ತಪ್ಪಿದ ಮೃಗ. ಕೊಡಗಿನ ಕಾಡಿನಿಂದ ಅದಕ್ಕೆ ವಿಮೋಚನೆ ಇಲ್ಲ. ಅದು ಬಲೆಗೆ ಬೀಳುತದೆ. ನಿನ್ನ ಹಂಬಲ ಈಡೇರುತದೆ." {{center|೪೯}} {{gap}}ಅಪರಂಪಾರ ವೇಲೂರನ್ನು ಬಿಟ್ಟು ಹೊರಟ ಕೆಲ ದಿನಗಳಲ್ಲಿ ಮೈಸೂರನ್ನು ತಲಪಿದ. ಟಪಾಲಿನಲ್ಲಿ, ಕಾಸ್ಸಾ ಮೇಜರನನ್ನು ಯೋಚನೆಗೀಡುಮಾಡಿದ ಒಂದು ವರದಿಯಿತ್ತು.<noinclude></noinclude> kl23el6qtiuyo4er62zxxog7vmbb84a ಪುಟ:ಸ್ವಾಮಿ ಅಪರಂಪಾರ.pdf/೧೩೬ 104 21286 322983 206449 2026-05-27T10:02:12Z Shreelatha.Halemane 7642 /* Validated */ 322983 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center= ಸ್ವಾಮಿ ಅಪರಂಪಾರ|left=೧೩೪|right=}} {{gap}}ಲೀಹಾರ್ಡಿಯೆಂದ: {{gap}}“ಅವನು ಎಲ್ಲಿದಾನೇಂತ ನಮ್ಮ ಗೂಢಚಾರರು ಕಂಡುಹಿಡಿಯಲಿ." * * * {{gap}}...ಆ ವೇಳೆಗೆ ಅಪರಂಪಾರ ಕಾಜಗೋಡನ್ನು ತಲಪಿ ಅಪ್ಪಯ್ಯನ ಅತಿಥಿಯಾಗಿದ್ದ. ಅಪ್ಪಯ್ಯ ಆ ನಾಡಿನ ಪ್ರಮುಖ. ಆಂಗ್ಲರಿಗಿದಿರಾದ ಹೋರಾಟದಲ್ಲಿ ಭಾಗಿಯಾಗಲು ಹಾತೊರೆಯುತ್ತಿದ್ದ ಮನುಷ್ಯ. {{gap}}ಅಲ್ಲಿ ಅಪರಂಪಾರ ಮೈಸೂರು ರಾಜ್ಯದ ಆಡಳಿತಗಾರ ಕಾಸ್ಸಾಮೇಜರನಿಗೆ ಕಳುಹಲೆಂದು ಸುದೀರ್ಘ ಪತ್ರವೊಂದನ್ನು ಸಿದ್ಧಗೊಳಿಸಿದ. {{gap}}ಅದರಲ್ಲಿ ಮುಖ್ಯವಾಗಿದ್ದುದು, ದಕ್ಷಿಣ ಭಾರತದ ಮೂರು ರಾಜ್ಯಗಳ ಮೈಸೂರು, ಬಿದನೂರು, ಕೊಡಗುಗಳ—ಇತಿಹಾಸದ ಸಿಂಹಾವಲೋಕನ ; ಪರದೇಶದಿಂದ ಬಂದು ಹಿಂದೂಸ್ಥಾನದ ಭೂಭಾಗಗಳನ್ನು ಪದಕ್ರಾಂತ ಮಾಡುವ ನೀತಿ ತಪ್ಪೆಂಬ ವಿನಮ್ರ ಸೂಚನೆ; ಈ ರಾಜ್ಯಗಳನ್ನು ನ್ಯಾಯವಾದ ಹಕ್ಕುದಾರರಿಗೆ ಮರಳಿ ಕೊಟ್ಟು ಬಂದವರು ತಮ್ಮ ದೇಶಕ್ಕೆ ಹಿಂತೆರಳಿ, ಮಿತ್ರರಾಗಿ ಉಳಿಯಬೇಕೆಂಬ ಕರೆ; ಇಲ್ಲದೆ ಹೋದರೆ ಅನಾಹುತ ಸಂಭವಿಸುವುದೆಂಬ ಎಚ್ಚರಿಕೆ. {{gap}}ಅಪರಂಪಾರ ಆ ಪತ್ರಕ್ಕೆ 'ಹಾಲೇರಿ ಸಂಸ್ಥಾನದ ರಾಜಗುರು' ಎಂದು ಸಹಿ ಹಾಕಿದ. {{gap}}ಅಪ್ಪಯ್ಯನನ್ನು ಆತ ಕೇಳಿದ: {{gap}}“ಯಾರ ವಶ ಕೊಟ್ಟ ಕಳಿಸೋಣ ?" {{gap}}ಸಿದ್ದಲಿಂಗನೆಂದ: {{gap}}“ಸಂಜಯ ನಾನಾಗತೇನೆ, ಸ್ವಾಮಿಗಳೆ." {{gap}}"ಅವರು ಹಿಡಿದು ಹಾಕಿದರೊ ?" {{gap}}“ಅಷ್ಟೇ ತಾನೇ? ನನಗೇನು ಹೆಂಡಿರೆ, ಮಕ್ಕಳೆ–ಅನ್ನಕ್ಕಿನ್ನೇನು ಗತಿ ಅಂತ ಅಳೋದಕ್ಕೆ?" {{gap}}“ಸರಿಯಪ್ಪ, ಮೊದಲು ಬಸಪ್ಪಾಜಿ ಅರಸರನ್ನು ಕಂಡು ವಿಷಯ ತಿಳಿಸಿ, ಕಾಸ್ಸಾಮೇಜರನ ಭೇಟಿಗೆ ನೀವು ಹೋಗಬೇಕು." {{gap}}"ಹ್ಞು. ಬೇಕಿದ್ದರೆ, ಮದರಾಸಿಗೂ ಹೋಗಿಬರತೇನೆ. ಅವರಾಚೆಯವನು ಕಲಕತ್ತೆಯಲ್ಲಿದಾನಂತಲ್ಲ, ಅಲ್ಲಿಗೂ ಹೋಗತೇನೆ. ಆಜ್ಞಾಪಿಸುವಿರಾದರೆ ಸಮುದ್ರೋಲ್ಲಂಘನವನ್ನೂ ಮಾಡತೇನೆ." {{gap}}"ಚೇಳಿನ ಮಂತ್ರವನ್ನು ಈಗ ಪಠಿಸುತಿದೇವೆ. ಹಾವಿನ ಹುತ್ತಕ್ಕೆ ಮುಂದೆ ಕೈ ಹಾಕೋಣ." {{center|೪೭}} {{gap}}“ಸುಮಾರು ಒಂದು ವರುಷವಾಗತಾ ಬಂತು; ಹೋದವರ ಸುದ್ದಿ ಇಲ್ಲ–ಅಂತ ಸ್ವಲ್ಪ ವಿವಂಚನೆಯಾಗಿತ್ತು.ಅಂತೂ ಬಂದಿರಲ್ಲ, ದಯಮಾಡಿಸಿ, ದಯಮಾಡಿಸಿ" ಎಂದು ಬಸಪ್ಪಾಜಿ ಅರಸು ಸಿದ್ದಲಿಂಗನ ಕೈಹಿಡಿದು ಒಳಕ್ಕೆ ಕರೆದೊಯ್ದ. {{gap}}ಇಕ್ಕೇರಿ-ವೇಲೂರುಗಳಿಗೆ ಅಪರಂಪಾರ ಕೈಗೊಂಡ ಪ್ರವಾಸ, ಕಾಜಗೋಡಿನಲ್ಲಿ<noinclude></noinclude> 5wmjbhcpa2jkrch7bwh66lxsmjc3bzy ಪುಟ:Mrutyunjaya.pdf/೧೪೦ 104 21624 322666 321279 2026-05-26T13:48:01Z Pragathi. BH 7585 /* Validated */ 322666 proofread-page text/x-wiki <noinclude><pagequality level="4" user="Pragathi. BH" />{{rh|left=|center=ಮೃತ್ಯು೦ಜಯ|right= ೧೨೭}}</noinclude> {{gap}}ಇಪ್ಯುವರ್ ಬಂದು," ಇವತ್ತು ಮಾತಾಡಿದ್ದನ್ನು‌ ಬರಕೊಂಡಿಲ್ಲ"ಎಂದ.<br /> {{gap}}ತೀರ್ಮಾನಗಳೆಲ್ಲಾ ದಾಖಲೆಯಾಗ್ಬೇಕು.ಬರೆದು ನಾಳೆ ನನಗೆ ಓದಿ ಹೇಳಿ," ಎಂದ ಮೆನೆಪ್ ಟಾ.<br /> {{gap}}"ರಾತ್ರಿಯೇ ಬರೆದಿಡ್ತೇನೆ..."<br /> {{gap}}ರಾಜಗೃಹದಲ್ಲಿ ವಾಸಿಸುವುದು ಇಪ್ಯೂವರ್ ಗೆ ಅಪ್ರಿಯವೇನೂ ఆಗಿರಲಿಲ್ಲ. ಆದರೆ ಅವನ ಪಾಲಿಗೆ ಆ ಮಾತು ಹಠಾತ್ತನೆ ಬಂದಿತ್ತು. ಕೆಲವು ದಿನಗಳಲ್ಲಿ ಈ ಕನಸು ಒಡೆದರೆ ? ಆತ ಕೇಳಿದ:<br /> {{gap}}“ನಾನು. ನನ್ನ ಮನೆಯಲ್ಲೇ ಇದ್ದರಾಗದೆ?”<br /> {{gap}}“ರಾಜಗೃಹ ಅನಾಥವಾಗ್ಭಾರ್ದು, ಇಪ್ಯುವರ್.ನಾಳೆ ದೇವಮಂದಿರಕ್ಕೆ ಬನ್ನಿ ಪೂಜೆ ಆದ ಮೇಲೆ ಇಲ್ಲಿಗೆ ಸಾಮಾನು ಸಾಗಿಸಿ.”<br /> {{gap}}"ರಾಮೆರಿಪ್ ಟಾಗೆ ಓದು ಬರಹ"<br /> {{gap}}“ಎರಡು ದಿನ ಹೋಗಲಿ. ಹೇಳ್ತೇನೆ.”<br /> {{gap}}ಮೆನೆಪ್ ಟಾ, ಇತರ ಪ್ರಮುಖರು ಮತ್ತು ಹಿಂಬಾಲಿಸಿದ ಹಲವರು ತಮ್ಮ ತಮ್ಮ ಮನೆಗಳಿಗೆ ಹೊರಟರು.<br /> {{gap}}ನೆಜಮುಟ್ ತಗ್ಗಿದ ಧ್ವನಿಯಲ್ಲಿ ನೆಫಿಸಳೊಡನೆ ಅಂದಳು :<br /> {{gap}}“ನಾಯಕರು! ಊಹ್! ಒಂದು ಪೀಠ ಪಲ್ಲಕಿಯಾದರೂ ಬೇಡವೆ? ನೋಡು, ನಡೀತಿರೋದು_ಪಾದರಕ್ಷೇನೂ ಇಲ್ದೆ!”<br /> {{gap}}ಸ್ನೋಪ್ರಗೆ ಪತ್ನಿಯ ಸ್ವರ ಕೇಳಿಸಿತು, ಹೊರಳಿ ನೋಡಿ, “ಏನದು?” ಎಂದು ಕೇಳಿದ.<br /> {{gap}}ನೆಜಮುಟಾ ಉತ್ತರವೀಯಲಿಲ್ಲ.<br /> {{rh|left=*|center=*|right=*}} {{gap}}ವಿಶೇಷ ಪೂಜೆಯ ಸುದ್ದಿ ಹಬ್ಬಿತ್ತು. ಬೆಳಗ್ಗೆ ಬಿಡುವಾಗಿದ್ದ ನೂರಾರು ಜನ ಮೆನೆಪ್ ಟಾನ ತಂಡವನ್ನು ಹಿಂಬಾಲಿಸಿ ದೇವಮಂದಿರಕ್ಕೆ ಬಂದರು.<br /> {{gap}}ಅರ್ಚಕನ ಮಂತ್ರೋಚ್ಚಾರ ; ಉಳಿದವರ ಮೌನ ಪ್ರಾರ್ಥನೆ. ಕೊನೆಯಲ್ಲಿ, ಎಲ್ಲರಿಗೂ ಕೇಳಿಸುವಂತೆ ಉಚ್ಚ ಕಂಠದಲ್ಲಿ ದೇವರನ್ನು<noinclude></noinclude> dm11y0tsz3cxqr31vv0geecy5kiv22m ಪುಟ:Mrutyunjaya.pdf/೪೧೪ 104 21903 322667 246913 2026-05-26T13:49:57Z Pragathi. BH 7585 /* Validated */ 322667 proofread-page text/x-wiki <noinclude><pagequality level="4" user="Pragathi. BH" /></noinclude> ಮೃತ್ಯುಂಜಯ ೪೦೧ ಹೋಗ್ತೇನೆ. ನೀರಾನೆ ಪ್ರಾಂತದ ಪ್ರಜೆಗಳು ಮತ್ತೆ ದೇವರ ದಾರಿ ತುಳಿಯೋ ಹಾಗೆ ಮಾಡ್ತೇನೆ."<br/> {{gap}}“ಇದು ಎಲ್ಲರಿಗೂ ಹರ್ಷ ನೀಡುವ ಯೋಜನೆ !” ಎಂದಳು ಅರಸಿ.<br/> {{gap}}“ಅದು ಧರ್ಮದ ಜೈತ್ರ ಯಾತ್ರೆ. ಆಗ ದುಷ್ಟರು ದಂಡನೆಗೆ ಗುರಿಯಗ್ತಾರೆ; ಶಿಷ್ಟರು ದೈವಕೃಪೆಗೆ ಪಾತ್ರರಾಗ್ತಾರೆ. ಈ ದಿಗ್ವಿಜಯಕ್ಕೆ ದಂಡಿನ ಬೆಂಬಲ ಬೇಕು. ಸೈನ್ಯ ಗಡಿಯಿಂದ ರಾಜಧಾನಿಗೆ ಇನ್ನೂರು ಯೋಧರನ್ನು ಕರೆಸಿ."<br/> {{gap}}ಅಮಾತ್ಯ ಆತಂಕಕ್ಕೊಳಗಾದ. ಏನಾದರೂ ಒಳಸಂಚು ? ಹೇಪಾಟ್‍ನ ಮನಸ್ಸಿನಲ್ಲಿರುವುದೇನು ? ಧರ್ಮ ಯಾತ್ರೆಯೋ ? ದಂಡಯಾತ್ರೆಯೋ ? ಹೆಖ್ವೆಟ್ ತಿಳಿಸಿದ್ದ ಆ ಸುದ್ದಿ ? ಸೈನ್ಯಗಡಿಯ ದಂಡನಾಯಕ ಅಮೆನೆ. ಮೋಪೆಟ್ ಜತೆ ಮಹಾ ಅರ್ಚಕ ಬೆಳೆಸಿರಬಹುದಾದ ಸ್ನೇಹ ?<br/> {{gap}}ಕಸಿವಿಸಿ. ಆತ ಅಮಾತ್ಯನ ಮುಖ ನೋಡಿದ.<br/> {{gap}}ಹೆಖ್ವೆಟ್ ಯೋಚಿಸಿದ: ಭೂಮಾಲಿಕರೊಡನೆ ಹೇಪಾಟ್ ನಡೆಸಿದ್ದ ಸಮಾಲೋಚನೆ, ದಂಡನ್ನು ಒಲಿಸಿಕೊಳ್ಳಲು ಮಾಡಿರುವ ಪ್ರಯತ್ನ ಇದನ್ನೆಲ್ಲ ಬಯಲಿಗೆಳೆಯಲೆ ? ಅಮಾತ್ಯನ ಮನಸ್ಸಿನಲ್ಲಿ ಏನಿದೆಯೋ ?<br/> {{gap}}ಮಹಾರಾಣಿ ಕಕ್ಕಾವಿಕ್ಕಿಯಾದಳು. ಸದ್ಯದ ಮಟ್ಟಿಗೆ ಸಮಸ್ಯೆ ಶಾಂತವಾಗಿ ಬಗೆ ಹರೀತಿದೆ ಎನ್ನುವಾಗಲೇ ಪುನಃ ಬಿಕ್ಕಟ್ಟು ತಲೆದೋರುತ್ತಿದೆಯಲ್ಲ? (ಒಳಮನಸ್ಸಿನಲ್ಲಿ- ಪ್ರಾಯಶಃ ಇನ್ನೂ ಒಂದೆರಡು ವರ್ಷ... ಮಹಾ ಅರ್ಚಕನ ಬೆಂಬಲ ನಾನು ಪಡೆಯಲೇ ಬೇಕು.. ಆಮೇಲೆ ಸಮಯ ಸಾಧಿಸಿ ರಾಜಕುಮಾರನಿಗೆ...)<br/> {{gap}}ರಾಜಕೀಯ ಮುತ್ಸದ್ದಿ ಆಮೆರಬ್ ಒಳಗಿನ ಅಳುಕನ್ನು ಹತ್ತಿಕ್ಕಿ, ಧ್ವನಿಯಲ್ಲಿ ದೃಢತೆ ತುಂಬಿ ನಿಧಾನವಾಗಿ ಅಂದ:<br/> {{gap}}"ಸೆಡ್ ಉತ್ಸವಕ್ಕೆ ಹೇಗಿದ್ದರೂ ದಂಡಿನ ಒಂದು ಭಾಗವನ್ನು ಕರೀಬೇಕು. ದಂಡನಾಯಕ ಅಮೆನೆಮೆಪೆಟ್‍ನನ್ನೂ ಬರಹೇಳ್ತೇನೆ. (ತಿಳಿದುಕೋ, ಹೇಪಾಟ್, ನಿನ್ನ ಗೂಢ ಯೋಚನೆ ನಾನು ಬಲ್ಲೆ.”) ನೀರಾನೆ ಪಾಂತದಲ್ಲಿ ಶಾಂತಿ ಸ್ಥಾಪಿಸೋದಕ್ಕೆ ಯೋಧರನ್ನು ಬಳಸೋದರಲ್ಲಿ ತಪ್ಪಿಲ್ಲ.”<br/> {{gap}}"ಸದ್ಯಃ !" ಎಂದು ಮನಸ್ಸಿನೊಳಗೇ ಉದ್ಗರಿಸಿದಳು ಮಹಾರಾಣಿ.<br/> ೨೬<br/><noinclude></noinclude> 9zj8af2loblqa7ypbbmctdri2g67q0a ಪುಟ:Mrutyunjaya.pdf/೪೧೮ 104 21907 322672 246899 2026-05-26T13:57:59Z Pragathi. BH 7585 /* Validated */ 322672 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೪೦೫}}</noinclude> ಬಂದಿದ್ದ. ಮಹಾ ಅರ್ಚಕರು ಅರಮನೆಗೆ ಆಗಮಿಸಿದರೆಂಬ ಸುದ್ದಿ ಆ ವಿಶಾಲ ಆವರಣದಲ್ಲೆಲ್ಲ ಹರಡಿತ್ತು.<BR/> {{gap}}ಮೆನೆಪ್‍ಟಾ ಆತನೆಂದ :<BR/> {{gap}}“ಮಹತ್ವದ ಸಭೆ, ಕಾತರಕ್ಕೆ ಕಾರಣವಿಲ್ಲ. ಯಾಕೆ ಅಂದರೆ ಇದು ಸ್ನೇಹದ ವಾತಾವರಣದಲ್ಲಿ ನಡೀತಿದೆ, ದಾಸದಾಸಿಯರು ಯಾರೂ ಇಲ್ಲವಂತೆ. ಮಾತುಕತೆಯಲ್ಲಿ ಮಹಾರಾಣಿಯವರೂ ಭಾಗವಹಿ‍ಸ್ತಿದ್ದಾರೆ. ಸೋಜಿಗ.”<BR/> {{gap}}ಅಂತೂ ಸೆಡ್ ಉತ್ಸವ ನಡೆಯೋ ಹಾಗೆ ಕಾಣದೆ, ಅಲ್ಲವಾ ?” ಎಂದ ಮೆನೆ‍ಪ್‍ಟಾ.<BR/> {{gap}}“ನಡೀತದೆ, ನಡೀತದೆ. ಪೆರೋಗೆ ಕಾಯಕಲ್ಪ ಬೇಡ ಅಂತ ಯಾರು ತಾನೇ ಅಂದಾರು ?”<BR/> {{gap}}ಕೆಲ ಕ್ಷಣಗಳ ಮನದ ಬಳಿಕ ಸೆನೆಟ್ {{gap}}“ಇನೇನಿ....ಇನೇನಿ”....ಎಂದು ಗೊಣಗಿದ.<BR/> {{gap}}“ಏನದು ?”<BR/> {{gap}}“ಸಭೆಯ ತೀರ್ಮಾನಗಳು ಮಂದಿರಿದ ಅರ್ಚಕ ಇನೇನಿಗೆ ಮೊದಲು ಗೊತ್ತಾಗ್ತವೆ. ಧರ್ಮ ಗುರು ಅವರಿಗೆ ಹೇಳ್ತಾರೆ.... ನಾನು ಪುನಃ ಬಂದು ನಿಮ್ಮನ್ನು ನೋಡ್ತೇನೆ.”<BR/> {{gap}}ಅಷ್ಟು ಹೇಳಿ ಸೆನೆಟ್ ಬಿರಬಿರನೆ ರಾಣೀವಾಸದತ್ತ ಹೋದ.<BR/> {{gap}}ಮೆನೆಪ್‍ಟಾ ನಗು ಬಂತು.<BR/> {{gap}}ಯಾವಾಗಲೂ ಆ ಹೊತ್ತಿನಲ್ಲಿಶಾಂತವಾಗಿರುತ್ತಿದ್ದ ಅರಮನೆಯ ಆವ ರಣದಲ್ಲಿ ಇಂದು ಅತೀವ ಚಟುವಟಿಕೆ. ಧರ್ಮಗುರುವನ್ನು ಕಂಡು ನಮಿಸಿ ಪುಣ್ಯ ಸಂಪಾದಿಸುವ ಅಪೇಕ್ಷೆ ಅಲ್ಲಿನ ದುಡಿಯುವ ಜನರಿಗೆ, ಅತಿಥಿಗೃಹದ ಸೇವಕನೊಬ್ಬ ಹಿಂದಿನ ಸಂಜೆಯೇ ರಾಜಕುಮಾರನ ಮೊದಲ ಬೇಟೆಯ ಸುದ್ದಿ ತಂದಿದ್ದ. ಈಗ ಸೆನೆಬ್ ಹೋದ ಬಳಿಕ ಆತ ಇನ್ನೊಂದು ವಾರ್ತೆ ತಂದ :<BR/> {{gap}}“ಇವತ್ತು ಮಹಾ ಅರ್ಚಕರಿಗೆ ಅರಮನೆಯಲ್ಲಿ ಭೋಜನ, ರಾಜ ಕುಮಾರ ಹೊಡೆದ ಬಾತುಕೋಳಿನ ಅಡುಗೆ ಮಾಡ್ತಾರೆ.”<BR/> {{gap}}ಮುಂದೆ ಕೆಲ ಕ್ಷಣಗಳಲ್ಲಿ ದಾಸಿಯರಿಂದ ಆವೃತನಾದ ಅಲಂಕೃತ ರಾಜ ಕುಮಾರ ದೇವ ಮಂದಿರಕ್ಕೆ ಬಂದ. ಮುಗುಳು ನಗುತ್ತಲಿದ್ದ ಒಬ್ಬಳು ಸುಂದರಿ<BR/><noinclude></noinclude> jqxgx1chod9xa51q3x92vltuzjjpv72 ಪುಟ:Mrutyunjaya.pdf/೪೨೪ 104 21913 322676 65403 2026-05-26T14:03:13Z Pragathi. BH 7585 /* Validated */ 322676 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೪೧೧}}</noinclude> {{gap}}ಅಮಾತ್ಯನ ಮುಂದೆ ದಳಪತಿ ಮಂಡಿಯೂರಿ ನಮಿಸಿದ.<br /> {{gap}}ಸಂಜೆ ಆಮೆರಬ್ ಅರಮನೆಯಿಂದ ಹೊರಟ ಮೇಲೆ ಸೆನೆಬ್ ಇನೇನಿಯ ಬಳಿಗೆ ಧಾವಿಸಿದ. <br /> {{gap}}ದಳಪತಿಗೆ ಅಮಾತ್ಯ ಮಾಡಿದ ಆಜ್ಞೆಯನ್ನು ತಿಳಿಸಿ, “ಏನು ಹಾಗಂದರೆ?” ಎಂದು ಕೇಳಿದ.<br /> {{gap}}ಇನೇನಿ ತಲೆಯಾಡಿಸಿದ.<br / {{gap}}"ಬಹಳ ಗೋಷ್ಯ. ಬಹಳ ಗೋಷ್ಯ. ಮಹಾ ಅರ್ಚಕರು ನನಗೂ ಹೇಳಿಲ್ಲ. ಏನೋ ಇರಬೇಕು. ಗೆದ್ದದ್ದಂತೂ ಗುರುಮನೆಯೇ. ಸಂಶಯವಿಲ್ಲ."<br /> {{gap}}"ಟೆಹುಟಿ ಅಮಾತ್ಯರಾಗ್ತಾರಾ?"<br /> {{gap}}“ಹ್ಯಾಗೆ ಹೇಳೋಕಾಗ್ತದೆ? ನೀನು ಇಲ್ಲದ್ದೆಲ್ಲ ತಲೇಲಿ ಹಾಕ್ಕೊಂಡು ಇರೋ ಹುದ್ದೇನೂ ಕಳಕೋಬೇಡ."<br /> {{gap}}ಸೆನೆಬ್ ಸಣ್ಣನೆ ನಕ್ಕು. ಸಿಕ್ಕುಗಳು ಹಾಗೆಯೇ ಉಳಿದು ತಲೆ ನೋಯ ತೊಡಗಿತು. ಆತ ರಾಣೀವಾಸದತ್ತ ಸುಳಿದ ನೆಫರ್ ಟೀಮ್ ಅಮಾತ್ಯನ ಆಜ್ಞೆಯ ವಿಷಯ ಕೇಳಿ."ಸಾಮಾನ್ಯ ಆದೇಶ. ರಕ್ಷಣೆಗೆ ಮೊದಲೇ ಏರ್ಪಾಟು ಮಾಡ್ಬೇಕಾಗಿತ್ತು . ಆ ನಾಯಕನಿಗೆ ಏನಾದರೂ ಆದರೆ ಅಮಾತ್ಯರಿಗೆ ಅಪಾಯ ಅಲ್ಲವಾ?” ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿ, ಸೆನೆಬ್ ನನ್ನು ಕಳುಹಿಸಿಬಿಟ್ಟಳು.<br /> {{gap}}ಲಿಪಿಕಾರ ಅತಿಥಿಗೃಹಕ್ಕೆ ಹೋದ. ಬಳಸಿ,ಬಳಸಿ ನೀರಾನೆ ಪ್ರಾಂತದ ನಾಯಕನಿಗೆ ವಿಷಯ ತಿಳಿಸಿದ. ಮನೆ ಟಾ ಮುಗುಳುನಕ್ಕ. ಏನನ್ನೂ ಹೇಳಲಿಲ್ಲ.<br /> {{gap}}(ಎದೆಗುದಿ ನಾಯಕನಿಗೆ. ಸೆಡ್ ಉತ್ಸವ ನಡೆಯುತ್ತದೆನ್ನುವುದು ಸಮಾಧಾನದ ವಿಷಯ. ಇನ್ನು ಹದಿನೈದು ದಿನ. ఆ ಬಳಿಕ ಹಕ್ಕಿಯ ವೇಗದಲ್ಲಿ ನೀರಾನೆ ಪ್ರಾಂತಕ್ಕೆ ನಾನು ಹಾರಿ ಹೋಗಬೇಕು. ಆದರೆ ಈ ರಕ್ಷಣೆಯ ಮಾತು ? ಒಂದು ಬಗೆಯದಿಗ್ಬಂಧನ? ಬೆಳಿಗ್ಗೆ ಅರಮನೆಯಲ್ಲಿ ನಡೆದ ಸಂಧಾನದ ನಿಜವಿವರಗಳು ಸೆನೆಬ್ ಗೆ ತಿಳಿದಂತಿದೆ ಅಥವಾ,ರಹಸ್ಯದ್ದು ಮಹತ್ವದ್ದು ಏನೂ ಇಲ್ಲ ಎಂದೆ?ಹಾಗಾದರೆ ತನ್ನ ತ್ತಲೂ ಮುಳ್ಳು ಬೇಲಿ ಯಾಕೆ ? ಇದಕ್ಕೆ ಹೆದರಬೇಕೆ ತಾನು ? ಮೆನ್ನನಿ ನಾದರೂ ಗೊತ್ತಿರ<noinclude></noinclude> 0em8uo5hr13vc3fvk7op045p01k4d72 ಪುಟ:Mrutyunjaya.pdf/೪೨೫ 104 21914 322677 65405 2026-05-26T14:07:39Z Pragathi. BH 7585 /* Validated */ 322677 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೪೧೨|right=}}</noinclude> ಬಹುದು. ಆತ ತನ್ನನ್ನು ಭೇಟಿ ಮಾಡುವುದು ಕೂಡಾ ಸಾಧ್ಯವಾಗುತ್ತದೋ ಇಲ್ಲವೋ ?) {{gap}}ಹತ್ತಾರು ಭಟರು ಕೈಗಳಲ್ಲಿ ಈಟಿ ಹಿಡಿದು ಅತ್ತಿತ್ತ ಚಲಿಸುವುದು ಮೆನೆಪ್ ಟಾಗೆ ಕಾಣಿಸಿತು.ಎದೆಗುಂಡಿಗೆಯ ಬಡಿತ ತೀವ್ರಗೊಂಡಿತು, ಒಂದು ಕ್ಷಣ. ಶಾಂತ ಚಿತ್ತನಾಗಿರಲು ಅವನು ಯತ್ನಿಸಿದ.<br /> {{gap}}ಅತಿಥಿಗೃಹದಿಂದ ಹೊರಟು ಸೆನೆಬ್ ನೀರಾನೆ ಪ್ರಾಂತದ ಭೂಮಾಲಿಕ ನುಟ್ ಮೋಸ್ ನಲ್ಲಿಗೆ ಧಾವಿಸಿದ. ಮಧ್ಯಾಹ್ನದ ಭೋಜನದಲ್ಲಿ ದೊಡ್ಡವರು ಎಷ್ಟು ವರ್ಷ ಹಿಂದಿನ ದ್ರಾಕ್ಷಾಸುರೆಯನ್ನು ಕುಡಿದರೊ ? ರಾಜಕುಮಾರ ಬೇಟಿಯಾಡಿದ ಬಾತುಕೋಳಿಯ ಆಡುಗೆ. ಅದೇನೂ ತನಗೆ ಬೇಕಿರಲಿಲ್ಲ.ಆದರೆ ಒಂದಿಷ್ಟು ಒಳ್ಳೆಯ ಸುರೆ....ಅರಮನೆಯ ದಳಪತಿಗೆ ಅಮಾತ್ಯ ನೀಡಿದ ಅನುಜ್ಞೆಗೆ ಉಪ್ಪುಖಾರ ಹಚ್ಚಿ ನುಟ್ ಮೋಸ್ ಗೆ ತಿಳಿಸಬೇಕು. ಆಗ ಆತ ಸಂತುಷ್ಟನಾಗುತ್ತಾನೆ. ಹೊರಬರುತ್ತವೆ ಮದಿರೆಯ ಬಟ್ಟಲುಗಳು.ಬ<br /> {{gap}}ಸೆನೆಬ್ ಸರಿಯಾಗಿಯೇ ತರ್ಕಿಸಿದ್ದ, ನುಟ್ ಮೋಸ್ ಹರ್ಷಾ ತಿರೇಕದಿಂದ ಕುಣಿದಾಡಿದ. “ಕಾರಾಗ ಹಕ್ಕೆ ತಳ್ಬೇಕು ಕತ್ತೆಮಗನನ್ನು,” ಎಂದ.ಮದಿರೆಯ ಬಟ್ಟಲುಗಳು ಹೊಗ ಂದುವು.<br /> {{rh|center= * * * *}} {{gap}}ಕತ್ತಲಾದ ಮೇಲೆ ಇನೇನಿ ಕೈಯಲ್ಲಿ ಬಟ್ಟೆಯ ಚಿಕ್ಕ ಗಂಟು ಹಿಡಿದು ಹೊರಟುದನ್ನು ಔಟ ನೋಡಿದ. ಮೆನೆಪ್ ಟಾನ ಸೂಚನೆಯಂತೆ ಆತ ಮೆನ್ನ ನನ್ನು ಕಾಣಲು ಮಂದಿರಕ್ಕೆ ಹೋದ.<br /> {{gap}}ಮೆನ್ನನ ನೆರವು ಪಡೆದ ನೀರಾನೆ ಪ್ರಾಂತಕ್ಕೆ ಸುದ್ದಿ ಮುಟ್ಟಿಸುವ ತವಕ ನಾಯಕನಿಗೆ.<br /> {{gap}}ಕತ್ತಲೆಯ ಮರೆಯ ಮೆನ್ನ, ಉದ್ವಿಗ್ನತೆಯನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕುತ್ತ, ಪಿಸ ನುಡಿದ :<br /> {{gap}}“ರಕ್ಷಕರ ಕಣ್ಣು ತಪ್ಪಿಸಿ ಬರೋದಕ್ಕೆ ಎರಡು ಸల ನೋಡ್ದೆ.ಆಗಲಿಲ್ಲ. ಇನೇನಿ ಇಲ್ಲ. ಸೆಡ್ ಉತ್ಸವದವರೆಗೆ ಬೇರೆ ಅರ್ಚಕರು ಪೂಜೆ ಮಾಡ್ತಾರೆ.<noinclude></noinclude> n1jdhs1ofnig1x60fze4p87zmlttarb 322678 322677 2026-05-26T14:08:29Z Pragathi. BH 7585 322678 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೪೧೨|right=}}</noinclude> ಬಹುದು. ಆತ ತನ್ನನ್ನು ಭೇಟಿ ಮಾಡುವುದು ಕೂಡಾ ಸಾಧ್ಯವಾಗುತ್ತದೋ ಇಲ್ಲವೋ ?)<br /> {{gap}}ಹತ್ತಾರು ಭಟರು ಕೈಗಳಲ್ಲಿ ಈಟಿ ಹಿಡಿದು ಅತ್ತಿತ್ತ ಚಲಿಸುವುದು ಮೆನೆಪ್ ಟಾಗೆ ಕಾಣಿಸಿತು.ಎದೆಗುಂಡಿಗೆಯ ಬಡಿತ ತೀವ್ರಗೊಂಡಿತು, ಒಂದು ಕ್ಷಣ. ಶಾಂತ ಚಿತ್ತನಾಗಿರಲು ಅವನು ಯತ್ನಿಸಿದ.<br /> {{gap}}ಅತಿಥಿಗೃಹದಿಂದ ಹೊರಟು ಸೆನೆಬ್ ನೀರಾನೆ ಪ್ರಾಂತದ ಭೂಮಾಲಿಕ ನುಟ್ ಮೋಸ್ ನಲ್ಲಿಗೆ ಧಾವಿಸಿದ. ಮಧ್ಯಾಹ್ನದ ಭೋಜನದಲ್ಲಿ ದೊಡ್ಡವರು ಎಷ್ಟು ವರ್ಷ ಹಿಂದಿನ ದ್ರಾಕ್ಷಾಸುರೆಯನ್ನು ಕುಡಿದರೊ ? ರಾಜಕುಮಾರ ಬೇಟಿಯಾಡಿದ ಬಾತುಕೋಳಿಯ ಆಡುಗೆ. ಅದೇನೂ ತನಗೆ ಬೇಕಿರಲಿಲ್ಲ.ಆದರೆ ಒಂದಿಷ್ಟು ಒಳ್ಳೆಯ ಸುರೆ....ಅರಮನೆಯ ದಳಪತಿಗೆ ಅಮಾತ್ಯ ನೀಡಿದ ಅನುಜ್ಞೆಗೆ ಉಪ್ಪುಖಾರ ಹಚ್ಚಿ ನುಟ್ ಮೋಸ್ ಗೆ ತಿಳಿಸಬೇಕು. ಆಗ ಆತ ಸಂತುಷ್ಟನಾಗುತ್ತಾನೆ. ಹೊರಬರುತ್ತವೆ ಮದಿರೆಯ ಬಟ್ಟಲುಗಳು.ಬ<br /> {{gap}}ಸೆನೆಬ್ ಸರಿಯಾಗಿಯೇ ತರ್ಕಿಸಿದ್ದ, ನುಟ್ ಮೋಸ್ ಹರ್ಷಾ ತಿರೇಕದಿಂದ ಕುಣಿದಾಡಿದ. “ಕಾರಾಗ ಹಕ್ಕೆ ತಳ್ಬೇಕು ಕತ್ತೆಮಗನನ್ನು,” ಎಂದ.ಮದಿರೆಯ ಬಟ್ಟಲುಗಳು ಹೊಗ ಂದುವು.<br /> {{rh|center= * * * *}} {{gap}}ಕತ್ತಲಾದ ಮೇಲೆ ಇನೇನಿ ಕೈಯಲ್ಲಿ ಬಟ್ಟೆಯ ಚಿಕ್ಕ ಗಂಟು ಹಿಡಿದು ಹೊರಟುದನ್ನು ಔಟ ನೋಡಿದ. ಮೆನೆಪ್ ಟಾನ ಸೂಚನೆಯಂತೆ ಆತ ಮೆನ್ನ ನನ್ನು ಕಾಣಲು ಮಂದಿರಕ್ಕೆ ಹೋದ.<br /> {{gap}}ಮೆನ್ನನ ನೆರವು ಪಡೆದ ನೀರಾನೆ ಪ್ರಾಂತಕ್ಕೆ ಸುದ್ದಿ ಮುಟ್ಟಿಸುವ ತವಕ ನಾಯಕನಿಗೆ.<br /> {{gap}}ಕತ್ತಲೆಯ ಮರೆಯ ಮೆನ್ನ, ಉದ್ವಿಗ್ನತೆಯನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕುತ್ತ, ಪಿಸ ನುಡಿದ :<br /> {{gap}}“ರಕ್ಷಕರ ಕಣ್ಣು ತಪ್ಪಿಸಿ ಬರೋದಕ್ಕೆ ಎರಡು ಸల ನೋಡ್ದೆ.ಆಗಲಿಲ್ಲ. ಇನೇನಿ ಇಲ್ಲ. ಸೆಡ್ ಉತ್ಸವದವರೆಗೆ ಬೇರೆ ಅರ್ಚಕರು ಪೂಜೆ ಮಾಡ್ತಾರೆ.<noinclude></noinclude> rlkq7ikyt1sq2ptgyj8hds1cx2xle5g ಪುಟ:Mrutyunjaya.pdf/೪೨೬ 104 21915 322679 65248 2026-05-26T14:13:33Z Pragathi. BH 7585 /* Validated */ 322679 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೪೧೩}}</noinclude> ನೀವು ದಿನವೂ ಬೆಳಿಗ್ಗೆ ಒಮ್ಮೆ ರಾತ್ರೆ ಒಮ್ಮೆ ಇಲ್ಲಿಗೆ ಬರ್ತಿರಿ. ಪ್ರತಿಬಂಧ ನಿಮ್ಮ ನಾಯಕರಿಗೆ ಮಾತ್ರ.”<br /> {{gap}}“ಸೆಡ್ ಉತ್ಸವ ಗೊತ್ತಾಗಿರೋ ಸಂಗತಿ ನಮ್ಮ ಪ್ರಾಂತದವರಿಗೆ ತಿಳಿಸಬೇಕಲ್ಲ....” <br /> {{gap}}“ಹೌದು. ಅದು ನನ್ನ ಜವಾಬ್ದಾರಿ. ಬಟಾ ಬೇಗ್ನೆ ಇಲ್ಲಿಗೆ ವಾಪಸಾಗ್ಬೇಕು. ಆ ಕಡೆ ಹೋಗೋ ದೋಣಿಗಳಿರಬಹುದು. ಕಟ್ಟೆಗೆ ಹೋಗಿ ನೋಡ್ತೇನೆ.”<br /> {{gap}}"ನಾಳೆ ಬೆಳಿಗ್ಗೆ ಬರ್ತೇನೆ, ಹಾಗಾದರೆ.”<br /> {{gap}}“ಹ್ಞ. ದೇವರ ದರ್ಶನಕ್ಕೆ ಬನ್ನಿ”<br /> {{rh|center= * * * *}} {{gap}}ನದಿಯ ಅಂಚಿಗೆ ಹೋಗಬೇಕು. ದ್ವಾರಪಾಲಕರು. ಬಿಡಲಾರರು. ತಾನು ಲಬೊ ಲಬೊ ಎಂದು ಗೋಳಾಡಿದರೂ ಬಾಗಿಲು ತೆರೆಯದಿದ್ದರೆ ? ಮೆನ್ನನಿಗೆ ಕಸಿವಿಸಿ.<br /> {{gap}}ಮಂದಿರದ ಬಲದಿಕ್ಕಿಗೆ ಮುಂದಕ್ಕೆ ಮೇಲಟ್ಟಣಿಗೆಯ ಕೊಳಗಳಿರುವಲ್ಲಿ, ಒಂದು ಮನುಷ್ಯ ಸುಲಭವಾಗಿ ತೂರಿಹೋಗಲು ಸಾಕಾಗುವಷ್ಟು ತೂಬು ಇತ್ತು . ಅದು ಆಗೊಮ್ಮೆ ಈಗೊಮ್ಮೆ ಅರಮನೆಯ ಅ೦ಗಳವನ್ನು ಸ್ವಚ್ಛಗೊಳಿಸಿ, ಕೊಳಕು ನೀರು ಹರಿದು ನದಿ ಸೇರಲು ನಿರ್ಮಿಸಿದ್ದ ದ್ವಾರ. ಅದಕ್ಕೆ ಅಡ್ಡವಾಗಿ ಒಂದು ಕಲ್ಲನ್ನು ಇಡುತ್ತಿದ್ದರು. ಆ ಕಲ್ಲನ್ನು ಸರಿಸುವುದು ಸಾಧ್ಯವಾದರೆ_ಎಂದುಕೊಂಡ ಮೆನ್ನ....<br /> {{gap}}ಇನೇನಿಯ ಬದಲು ಪೂಜೆಗೆಂದು ನಿಯೋಜಿತನಾದ ದೇವಸೇವಕ ಬಂದ.<br /> {{gap}}"ಈಗ ನಿನ್ನದೇನೂ ಗಲಾಟೆ ಇಲ್ಲವಾ ಮೆನ್ನ ?" ಎಂದು ಕೇಳಿದ.<br /> {{gap}}“ಗಲಾಟೆ ಎಲ್ಲ ಮುಗೀತಲ್ಲ,” ಎಂದ ಈತ.<br /> {{gap}}“ಒಳ್ಳೇದಪ್ಪ ಇನ್ನು ಮಲಕೋ.”<br /> {{gap}}ಮೆನ್ನನ ಮೇಲೆ ಲಕ್ಷ್ಯವಿಡಬೇಕೆಂದು ಇನೇನಿ ಆ ದೇವಸೇವಕನಿಗೆ ಹೇಳಿದ್ದ. ಮೆನ್ನ ಅಪಾಯಕಾರಿಯಾಗಿ ಬದಲಿ ಬಂದವನಿಗೆ ತೋರಲಿಲ್ಲ. ತುಂಬ ಸಾಧುವಾಗಿದ್ದಾನೆ ಎನಿಸಿತು.<noinclude></noinclude> g7esu5rfs2h9kjp9g1etnk6xecv3gbc ಪುಟ:Mrutyunjaya.pdf/೪೨೭ 104 21916 322680 65401 2026-05-26T14:17:03Z Pragathi. BH 7585 /* Validated */ 322680 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೪೧೪|right=}}</noinclude> {{gap}}ಬಂದವನು ನಿದ್ದೆಹೋದೊಡನೆ, ಮೆನ್ನ ಒಂದು ಬಟ್ಟೆ ಹೊದೆದು ಕತ್ತಲೆಯ ಮರೆಯಲ್ಲಿ ಪ್ರಾಕಾರದ ತೂಬಿನತ್ತ ನಡೆದ. ಎರಡು ಮೂರು ಸಾರಿ ಯತ್ನಿಸಿದ ಮೇಲೆ ಕಲ್ಲನ್ನು ಬದಿಗೆ ಸರಿಸುವುದು ಸಾಧ್ಯವಾಯಿತು. ಪ್ರಾಕಾರದಾಚೆಗೆ ನದಿಯ ದಂಡೆ. ಅದನ್ನು ತಲಪಿ ಎದ್ದು ನಿಂತು,'ಆಹಾ!' ಎಂದು ಮನಸ್ಸಿನೊಳಗೇ ಆತ ಉದ್ಗರಿಸಿದ.<br /> {{gap}}ಆದರೆ ದೋಣಿಕಟ್ಟೆ ಮುಟ್ಟಿದಾಗ ಮೆನ್ನನಉತ್ಸಾಹ ಇಳಿದುಹೋಯಿತು. ನೀರಾನೆ ಪ್ರಾಂತವನ್ನು ಹಾದು ಮುಂದೆ ಹೋಗುವ ಒಂದು ದೋಣಿಯೂ ಅಲ್ಲಿರಲಿಲ್ಲ. ಗೂಡಾರದಲ್ಲಿ ಕಟ್ಟೆಯ ಸಹಾಯಕ ಅಧಿಕಾರಿ ಇದ್ದ. ರಾತ್ರಿ ಪಾಳಿಯವನು. ಮೆನ್ನ ಅತ್ತ ಸುಳಿಯಲಿಲ್ಲ. ಆ ಅವೇಳೆಯಲ್ಲಿ ಅವನ ಗುರುತು ಹಿಡಿಯುವವರು ಕಟ್ಟೆಯಲ್ಲಿ ಯಾರೂ ಇರಲಿಲ್ಲವಾದರೂ ಜಾಗರೂಕನಾಗಿದ್ದು ಉತ್ತರದಿಂದ ಬರುವ ದೋಣಿಗಳಿಗಾಗಿ ಮೆನ್ನ ಕಾದು ಕುಳಿತ.<br /> {{gap}}ನಡುವಿರುಳು ದಾಟಿ ಸ್ವಲ್ಪ ಹೊತ್ತಾದ ಮೇಲೆ ಒಂದು ದೋಣಿ ಬಂತು. ಅದು ಹೊರಟಿದ್ದುದು ನೀರಾನೆ ಪ್ರಾಂತದ ಎದುರುದಂಡೆಯ ಟಗರು ಪ್ರಾಂತಕ್ಕೆ .'ಕೇಳಿಕೊಂಡರೆ ಇವರು ಸುದ್ದಿ ಮುಟ್ಟಿಸಲೂ ಬಹುದು.' ಆ ವಿಷಯವಾಗಿ ಅಂಬಿಗರೊಡನೆ ಮಾತು ಆರಂಭಿಸೋಣ ಎನ್ನುವಷ್ಟರಲ್ಲಿ ದೊಡ್ಡ ಹೇರುನಾವೆ ಕೆಳಗಿನಿಂದ ಬರುತ್ತಿರುವುದು ಕಾಣಿಸಿತು. ಕಟ್ಟೆಯನ್ನೇರಿದ್ದ ಟಗರು ಪ್ರಾಂತದ ಅಂಬಿಗರು ಆ ನಾವೆಯತ್ತ ನೋಡಿ, “ಕೆಫ್ಟು" “ಕೆಫ್ಟು” ಎಂದುದು ಕೇಳಿಸಿತು. ಮೆನ್ನನಿಗೆ ಪಾರವಿಲ್ಲದ ಹರ್ಷ. ತನ್ನನ್ನು ತಾನೆ ನಂಬದಂಥ ಪರಿಸ್ಥಿತಿ.<br /> {{gap}}ಹೇರುನಾವೆ ದೋಣಿಕಟ್ಟೆಯ ದಕ್ಷಿಣ ತುದಿಯಲ್ಲಿ ತಂಗಿತು. ನಿಧಾನವಾಗಿ ನಾವೆಯಿಂದ ಕಟ್ಟೆಗೆ ಹಲಗೆಗಳನ್ನು ಹಾಸಿ ವಿದೇಶಿ ಅಂಬಿಗರು ಕೆಲವರು ನಡೆದು ಬಂದರು.<br /> {{gap}}ಅವರ ಬಳಿ ಸಾರಿ ಮೆನ್ನ ಕೇಳಿದ :<br /> {{gap}}“ಕೆಫ್ಟು ನಾವೆಯಲ್ಲಿದ್ದಾರಾ?"<br /> {{gap}}ಆ ಅಂಬಿಗರು ಕಟ್ಟೆಯ ದೀಪದ ಮಬ್ಬು ಬೆಳಕಿನಲ್ಲಿ ಮೆನ್ನನನ್ನು ದಿಟ್ಟಿಸಿದರು. ಅವರಲ್ಲೊಬ್ಬ ಸ್ನೇಹಪರವಲ್ಲದ ಸ್ವರದಲ್ಲಿ ಕೇಳಿದ:<noinclude></noinclude> n3wpupoqw4zueshx2nq4yjxcea69m97 ಪುಟ:Mrutyunjaya.pdf/೪೨೮ 104 21917 322681 65440 2026-05-26T14:20:07Z Pragathi. BH 7585 /* Validated */ 322681 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೪೧೫}}</noinclude> {{gap}}“ಯಾರಯ್ಯ ನೀನು?”<br /> {{gap}}“ಮೆನ್ನ.”<br /> {{gap}}“ಮೆನ್ನ?”<br /> {{gap}}“ಹುಚ್ಚ ಮೆನ್ನ. ಈ ಊರಿನವನೇ,”<br /> {{gap}}“ಹುಚ್ಚ ಮೆನ್ನ!” ಅವನಿಗೂ ಉಳಿದ ಅಂಬಿಗರಿಗೂ ನಗು.<br /> {{gap}}ಒಬ್ಬ ಗದರಿದ :<br /> {{gap}}“ಸಾಹುಕಾರರು ಮಲಗಿದ್ದಾರೆ. ಗಲಾಟೆ ಮಾಡ್ಬೇಡ. ಹೊರಠೋಗು.”<br /> {{gap}}ಪಿಸುದನಿಯಲ್ಲಿ ಮೆನ್ನನೆಂದ :<br /> {{gap}}“ನೀರಾನೆ ಪ್ರಾಂತಕ್ಕೆ ಸಂಬಂಧಿಸಿದ ಸುದ್ದಿ. ನಾನು ನಿಮ್ಮ ಸಾಹುಕಾರ್ರನ್ನು ತಕ್ಷಣ ಕಾಣ್ಬೇಕು.”<br /> {{gap}}ನೀರಾನೆಪ್ರಾಂತ ಎಂದೊಡನೆ ಅಂಬಿಗರಲ್ಲಿ ಇಬ್ಬರು ಪರಸ್ಪರ ಮುಖ ನೋಡಿದರು. ಈತ ಹುಚ್ಚ ಎಂದು ತಾವೇನೋ ಉಪೇಕ್ಷೆ ಮಾಡಬಹುದು. ಆದರೆ ಕೆಫ್ಟು ತಮ್ಮನ್ನು ತರಾಟೆಗೆ ತೆಗೆದುಕೊಂಡರೊ?<br /> {{gap}}ತಮ್ಮ ಭಾಷೆಯಲ್ಲಿ ಅವರೇನನ್ನೋ ಚರ್ಚಿಸಿದರು. ಒಬ್ಬ ನಾವೆಗೆ ಮರಳಿದ. ಕೆಲ ಕ್ಷಣಗಳಲ್ಲೇ ಹಿಂದಿರುಗಿ, ಮೆನ್ನನನ್ನು ಕರೆದ.<br /> {{gap}}ಯಾವ ಊರಾದರೂ ಸರಿಯೆ, ಎಂಥ ಅಪರಾತ್ರಿಯಾದರೂ ಸರಿಯೆ, ದೋಣಿಕಟ್ಟೆ ಸವಿಾಪಿಸುವಾಗ ಕೆಫ್ಟುಗೆ ಎಚ್ಚರವಾಗುತ್ತಿತ್ತು. ಮೆಂಫಿಸ್ ತಲಪಿದಾಗಲೂ ಅಷ್ಟೆ, ಅವನು ಎದ್ದು ಕುಳಿತಿದ್ದ. ಸೆಡ್ ಉತ್ಸವ ಇನ್ನೂ ಜರಗಿಲ್ಲ ಎಂದು ಅವನಿಗೆ ಗೊತ್ತಾದುದು ಆನ ನಗರಿಯಲ್ಲಿ. ಗುರುಮನೆ-ಅರಮನೆ ವಿರಸದ ವಷಯವೂ ತಿಳಿಯಿತು; ಮಹಾ ಅರ್ಚಕ ರಾಜಧಾನಿಗೆ ವಾಪಸಾದ ಸಂಗತಿಯನ್ನು ಅಲ್ಲಿಯೇ ಆತ ಅರಿತ. ನೀರಾನೆ ಪ್ರಾಂತದ ನಾಯಕ ಮೆಂಫಿಸ್ ನಲ್ಲಿರುವನಂತೆ. ಪೆರೋ ಅವನನ್ನು ಕ್ಷಮಿಸಬಹುದೇ ? ತಾನು ಹೇಳಿ ಕೊಡಿಸಿದ ಆಮಂತ್ರಣ. ಇದರಿಂದ ಒಳ್ಳೆಯ ಪರಿಣಾಮ ಉಂಟಾದರೆ ತನಗೆ ಕೀರ್ತಿ. ವ್ಯಾಪಾರದ ದೃಷ್ಟಿಯಿಂದ ನೀರಾನೆ ಪ್ರಾಂತ ಪ್ರತ್ಯೇಕವಾಗಿ ಉಳಿದರೂ ನಷ್ಟವಿಲ್ಲ. ಬದಲು, ಲಾಭವೇ ಎನ್ನಬಹುದು. ಆದರೆ ಆ ಮೆನೆಪ್ ಟಾನಿಗೆ ಏನಾದರೂ ಧಕ್ಕೆ ತಟ್ಟಿದರೊ? ಹಾಗಾಗಬಾರದು, ಹಾಗಾಗಬಾರದು.<noinclude></noinclude> tleyjxkukhwa4tchualro4icc8w8zpm ಪುಟ:Mrutyunjaya.pdf/೪೩೯ 104 21928 322689 64686 2026-05-26T14:33:09Z Pragathi. BH 7585 /* Validated */ 322689 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೪೨೬|right=}}</noinclude>{{gap}}ಮೆನೆಪ್‍ಟಾ ಅಂದಿದ್ದ:<br /> {{gap}}"ಐದಾರು ದಿನ ಇದ್ದು ವಾಪಸಾಗು....”<br /> {{gap}} ಬಟಾ ನುಡಿದಿದ್ದ:<br /> {{gap}}"ನಾನು ಹೋಗ್ತಿರೋದು ನಮ್ಮವರನ್ನು ಕರಕೊಂಡು ಬರೋದಕ್ಕೆ. ನಾವಿಷ್ಟೇ ಜನ ಇದ್ದು ಏನಾದರೂ ಅಚಾತುರ್ಯ ಆದರೆ,ನಾಳೆ ನಮ್ಮ ಜನರಿಗೆ ಹ್ಯಾಗೆ ಮುಖ ತೋರಿಸಲಿ? ಏನೂಂತ ಹೇಳಲಿ?"<br /> {{gap}}ಔಟ, ಬೆಕ್ ನಂಬುಗೆಯ ಸಹಚರರು. ನಾಯಕನನ್ನು ಅವರು ನೋಡಿಕೊಳ್ತಾರೆ. ಆದರೂ ಬೇಗ, ಆದಷ್ಟು ಬೇಗ ತಾನು ಅವರ ಬಳಿಗೆ ಮರಳಬೇಕು, ಇತರ ಬಂಧುಗಳೊಡನೆ.<br /> {{gap}}ಮೇಲು ದಿಕ್ಕಿನಿಂದ ಬಂದ ಕೆಲ ನಾವೆಗಳ ಅಂಬಿಗರು “ಹೋಯ್‍!” ಎಂದರು, ದಾಟುತ್ತ. ಪರಿಚಯವಿದ್ದವರು "ಹೋಯ್‍! ಬಟಾ!" ಎಂದೂ ಕೂಗಿದರು.<br /> {{gap}}ನೀರಾನೆ ಪ್ರಾಂತದ ಗಡಿ ಕಾಣಿಸಿತು.<br /> {{gap}}ಅಂಬಿಗರೆಲ್ಲರಿಗೂ ಮಾತಾಡುವ ಆತುರ.<br /> {{gap}} _"ಪೈರು ಚೆನ್ನಾಗಿದೆ !"<br /> {{gap}}_“ಬೇರೆ ಪ್ರಾಂತಗಳ ಬೆಳೆಗಿಂತ ನಮ್ಮದೇ ಚೆನ್ನ!”<br /> {{gap}}_"ನೋಡಿ. ರೈತರು ಹೊಲಗಳ ಕಡೆ ಬರ್ತಿದ್ದಾರೆ. ಕುಯಿಲು ಯಾವತ್ತು ಅಂತ ನಿಷ್ಕರ್ಷೆ ಮಾಡ್ತಾರೇನೋ...."<br /> {{gap}}ಸ್ವಲ್ಪ ಹೊತ್ತು ಕಳೆದೊಡನೆ ಬಟಾ ಆಳವಾಗಿ ಉಸಿರೆಳೆದು, ಎದೆ ಹಿಗ್ಗಿಸಿಕೊಂಡು,ಚಲಿಸದೆ ನಿಂತ.<br /> {{gap}}"ಇದು ನಮ್ಮ ಜನರ ವಾಸನೆ! ಊರು ಬಂತು!” ಎಂದ.<br /> {{gap}}ಹೀಗೆ,ಮೆಂಫಿಸಿನಲ್ಲಿ ಕೆಫ್ಟು ಸರಕು ಇಳಿಸುತ್ತಿದ್ದಾಗ; ಬಟಾ ನೀರಾನೆ ಪ್ರಾಂತದ ಮುಖ್ಯಪಟ್ಟಣದ ದೋಣಿಕಟ್ಟೆಯನ್ನು ಮುಟ್ಟಿದ.<br /> {{gap}}ಬಟಾ ನೇಮಿಸಿದ್ದ ಕಿರಿಯ ಸಹಾಯಕ ಕಟ್ಟೆಯಲ್ಲಿದ್ದ. ಮರದ ಬುಡದಲ್ಲಿ ಅವನ ಕಾರ್ಯಾಲಯ. ಒಂದು ಲಿಪಿಸುರುಳಿ ಮತ್ತು ಮಸಿಪಾತ್ರೆ. ಪೀಠಗಳಿರಲಿಲ್ಲ.<noinclude></noinclude> 7g3btwv3ex69kfxhw0t889s0mq0kxqm ಪುಟ:Mrutyunjaya.pdf/೪೪೦ 104 21929 322682 64708 2026-05-26T14:22:28Z Pragathi. BH 7585 /* Validated */ 322682 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೪೨೭}}</noinclude>{{gap}}ಇವನು ಯಾವಾಗ ಬರೆಯಲು ಕಲಿತ ಎಂದು ಬಟಾನಿಗೆ ಅಚ್ಚರಿ. ಅವನ ಅಂಬಿಗರು ಬೆರಗಾಗಿ ಆ ಎಳೆಯನನ್ನು ನೋಡಿದರು.<br /> {{gap}}ಊರೊಳಗೆ ಧಾವಿಸುವ ಆತುರದಲ್ಲಿದ್ದರೂ ಬಟಾ ಆತನನ್ನು ಕೇಳಿದ:<br /> {{gap}}"ಅದೇನು ಲೆಕ್ಕ ಬರೆದಿದ್ದೀಯೋ ನೋಡೋಣ."<br /> {{gap}}ಆತ ಲಿಪಿಸುರುಳಿಯನ್ನು ತಂದ. ಎರಡು ಭಾಗ ಮಾಡಿ ತುಂಡು ಗೆರೆಗಳನ್ನು ಮೂಡಿಸಿದ್ದ. ಬಂದ ದೋಣಿಗೊಂದು ಗೆರೆ, ಹೋದ ದೋಣಿಗೊಂದು.<br /> {{gap}}"ಭೇಷ್‍! ಈ ಲಿಪಿ ನಾನೂ ಕಲೀಬೌದು,"ಎಂದ ಬಟಾ.<br /> {{gap}}ನಾಯಕ ಬರಲಿಲ್ಲವೆ ಎಂದು ಕೇಳುವ ಆಸೆ ಆ ಯುವಕಗೆ. ಆದರೆ ಬಾಯಿ ಬಿಡಲಾರ. ಕುತೂಹಲದ ಎಲ್ಲ ಪ್ರಶ್ನೆಗಳಿಗೂ ಮುಂಚಿತವಾಗಿಯೇ ಬಟಾ ಉತ್ತರ ನೀಡಿದ:<br /> {{gap}}"ನಾವು ಐದಾರು ದಿನಗಳ ಮಟ್ಟಿಗೆ ಬಂದಿದ್ದೇವೆ. ನಾಯಕರನ್ನು ಕರಕೊಂಡು ಬರೋಕೆ ಪುನಃ ಹೋಗ್ಬೇಕು. ಲೆಕ್ಕ ಇಡೋ ಕೆಲಸ ನೀನು ಮುಂದುವರಿಸು. ಊರಲ್ಲೆಲ್ಲ ಚೆನ್ನಾಗಿದ್ದಾರಾ?"<br /> {{gap}}ಎಡಗೈಯಲ್ಲಿ ಬಟ್ಟೆ ಸುತ್ತಿದ ಥೊಎರಿಸ್ ಮೂರ್ತಿ,ಕಂಕುಳಲ್ಲಿ ಕೊಳಲು ದಾಪುಗಾಲಿಡುತ್ತ ಬಟಾ ನಡೆದ. "ಹೂಂ. ಹೂಂ....” ಕ್ಷೀಣಸದ್ದು ಅವನನ್ನು ಹಿಂಬಾಲಿಸಿತು.<br /> {{gap}}ನೇರವಾಗಿ ಸ್ನೋಫ್ರುವಿನ ಮನೆಗೆ ಹೋಗಬೇಕೆಂದು ಬಟಾ ಉದ್ದೇಶಿಸಿದ್ದ. ಮುಖ್ಯ ಬೀದಿ ಆರಂಭವಾಗುವಲ್ಲಿ ಜನ ಅವನನ್ನು ಕಂಡರು. ಅವನಿಗಿಂತ ಮುಂಚೆಯೇ, ಬಟಾ ಬಂದನೆಂಬ ಸುದ್ದಿ ಹಾರುವ ಹಕ್ಕಿಯಾಯಿತು. ಸೂರ್ಯನಾಗಲೇ ಎರಡು ಮಾರು ಮೇಲಕ್ಕೆ ಏರಿದ್ದ. ಕಿರಣಗಳು ಪ್ರಖರವಾಗಿದ್ದವು. ಕುಶಲಕರ್ಮಿಗಳ ಮನೆಗಳಿಂದ ದುಡಿಮೆಯ ಸದ್ದು ಕೇಳಿಸುತ್ತಿತ್ತು. ರೈತರ ಮನೆಗಳ ಸ್ವಚ್ಛ ಅಂಗಳಗಳು ಪೈರನ್ನು ಸ್ವಾಗತಿಸಲು ಅಣಿಯಾಗಿದ್ದುವು.'ಎಲ್ಲ ಎಷ್ಟೊಂದು ಚೊಕ್ಕಟವಾಗಿದೆ! ನನ್ನೂರು ಇಷ್ಟು ಸೊಗಸಾಗಿ ಯಾವತ್ತೂ ಕಂಡಿರಲಿಲ್ಲ,' ಎಂದುಕೊಳ್ಳುತ್ತ ಬಟಾ ತನ್ನನ್ನು ಇದಿರ್ಗೊಂಡವರಿಗೆಲ್ಲ ಆತ್ಮೀಯತೆಯಿಂದ ಕೈಬೀಸಿದ.<br /> {{gap}}ಆತ ನಿಲ್ಲುತ್ತಿಲ್ಲವಲ್ಲ ಎಂದು ಜನರಿಗೆ ಕಸಿವಿಸಿ. "ನಿಲ್ಲಪ್ಪೋ" ಎನ್ನುತ್ತ<noinclude></noinclude> 88dhvsbjwehbf2xg969ml53bytrtd8f ಪುಟ:Mrutyunjaya.pdf/೪೪೧ 104 21930 322683 64714 2026-05-26T14:25:01Z Pragathi. BH 7585 /* Validated */ 322683 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೪೨೮|right=}}</noinclude>ಹಲವರು ಅವನನ್ನು ಅಡ್ಡಗಟ್ಟಿದರು.<br /> {{gap}}"ನಾಯಕರು ಬಂದರಾ? ಔಟ_ಬೆಕ್ ಬರಲಿಲ್ಲವಾ ? ನೀನೊಬ್ಬನೇ ಯಾಕ್ಬಂದೆ ತಿರ್ಗಾ ಹೋಗ್ತೀಯಾ?"<br /> {{gap}}ಇವನೂ ಪ್ರಶ್ನೆ ಕೇಳಿದ:<br /> {{gap}}"ನಾವೆಲ್ಲ ಚೆನ್ನಾಗಿದ್ದೇವೇಂತ ಸುದ್ದಿ ಹೇಳಿ ಕಳಿಸಿದ್ದೆ ; ಸುದ್ದಿ ಬಂತಾ?"<br /> {{gap}}"ಹೂಂ ಹೂಂ. ಮಹಾ ಸುದ್ದಿ....ನೀನು ಹೇಳು, ನೀನು ಹೇಳು."<br /> {{gap}}ದಾರಿಯಲ್ಲಿ ನಿಂತರೆ ಆದೀತೇ ಕೆಲಸ ? ಬಟಾ ಸ್ನೊಫ್ರುವಿನ ಮನೆಯತ್ತ ಧಾವಿಸಿದೆ {{gap}}ಸ್ನೊಫ್ರುವಿನ ಮನೆ ತಲಪುವವರೆಗೂ ಬೀದಿಯುದ್ದಕ್ಕೂ ಜನ. ಮನೆಯೊಳಕ್ಕೆ ಕಾಲಿರಿಸಿದಾಗ 'ಅಬ್ಬ! ಪಾರಾದೆ'! ಎನಿಸಿತು. ಆದರೆ ಆ ಭಾವನೆಗಿದ್ದ ಆಯುಸ್ಸು ಒಂದೇ ಕ್ಷಣ. ಜನ ನುಗ್ಗಿದರು. ಒಳಗಿನ ಸ್ಥಳ ಸಾಲದೆ ಹೊರಗೂ ಸಂದಣಿ ನೆರೆಯಿತು.<br /> {{gap}}ಕಲರವವನ್ನು ಮೀರಿಸಿ ದಳಪತಿಯ ಗಂಟಲು ಕೇಳಿಸಿತು:<br /> {{gap}}"ಶಿಸ್ತು ! ಶಿಸ್ತು ಮರೀಬೇಡಿ !"<br /> {{gap}}ಕ್ಷಣ ಮೌನ. ಬಳಿಕ ಒಂದು ಧ್ವನಿ.<br /> {{gap}}"ವಿಷಯವೆಲ್ಲಾ ಬಟಾ ತಿಳಿಸ್ಲಿ. ಕೇಳ್ಕೊಂಡು ಹೊರಟ್ಹೋಗ್ತೇವೆ."<br /> {{gap}}ಅದಕ್ಕೆ ಹಲವು ಕಂಠಗಳ ಬೆಂಬಲ.<br /> {{gap}}"ಹೌದು, ಹೌದು."<br /> {{gap}}ಖ್ನೆಮ್‍ಹೊಟೆಪ್ ದಾರಿಮಾಡಿಕೊಂಡು, ಒಳಗೆ ಸ್ನೊಫ್ರುವಿನ ಮಗ್ಗುಲಲ್ಲಿ ನಿಂತಿದ್ದ ಬಟಾನೆಡೆಗೆ ಸಾಗಿ ಪ್ರೀತಿಯಿಂದ ಅವನ ತೋಳು ಮುಟ್ಟಿದ.<br /> {{gap}}"ಜನರಿಗೇನಾದರೂ ಹೇಳಪ್ಪ ಬಟಾ," ಎಂದು ಸ್ನೊಫ್ರು.<br /> {{gap}}"ಸೆತ್‍ ನನ್ಮಗಂದು. ಇದು ಚೆನ್ನಾಗಿದೆ," ಎಂದು, ಸುತ್ತಲೂ ಇದ್ದವರಿಗೆ ಕೇಳಿಸುವಂತೆ, ಬಟಾ ಗೊಣಗಿದ. ಬಳಿಕ ಇದ್ದಕ್ಕಿದ್ದಂತೆ, ಅರ್ಚಕ ಅಪೆಟ್‍ನ ಹಾಗೆ ಆಶೀರ್ವದಿಸುವ ಭಂಗಿಯಲ್ಲಿ ತೋಳನ್ನೆತ್ತಿದ. ಒಂದೇ ಕ್ಷಣದಲ್ಲಿ ಜನರಿಗೆ ಅರ್ಥವಾಯಿತು. ಹಲವರು ಒಟ್ಟಿಗೆ "ಹೊಹ್ಹೋ !" ಎಂದು ನಕ್ಕರು.<br /> {{gap}}"ಥೂ ನಿಮ್ಮ! ನಮಸ್ಕಾರ ಮಾಡೋದ್ಬಿಟ್ಟು ನಗ್ತೀರಾ?" ಎಂದು<noinclude></noinclude> 2k4v543zdok0nfd9le8skoseeojcegi ಪುಟ:Mrutyunjaya.pdf/೪೪೨ 104 21931 322684 64732 2026-05-26T14:25:40Z Pragathi. BH 7585 /* Validated */ 322684 proofread-page text/x-wiki <noinclude><pagequality level="4" user="Pragathi. BH" /></noinclude>ಬಟಾ ಹುಸಿ ಮುನಿಸು ತೋರಿದ. ಜನ ಬಿದ್ದು ಬಿದ್ದು ನಕ್ಕರು. ಅವರ ಜತೆ ಬಟಾನೂ ಸೇರಿಕೊಂಡ.<br /> {{gap}}ಆ ನಗೆ ನಿಲ್ಲುತ್ತಿದ್ದಂತೆ ಅವನೆಂದ:<br /> {{gap}}"ಕೇಳ್ರಪೋ. ಈಗಾಗಲೇ ನಿಮಗೆ ತಿಳಿದಿರೋ ಹಾಗೆ, ಮೆನೆಪ್‍ಟಾ ಅಣ್ಣ ಚೆನ್ನಾಗಿ ಇದ್ದಾರೆ. ಅವರು ರಾಜಧಾನಿ ತಲಪ್ದಾಗ, ಇಲ್ಲಿ ಪ್ರಾಂತಪಾಲನಾಗಿದ್ನಲ್ಲ ಗೇಬು_ಅವನು ಬಂದು ಕೈಹಿಡಿದು ಕುಣಿದ. ಪಲ್ಲಕೀಲಿ ಅರಮನೆಗೆ ಕರಕೊಂಡ್ಹೋದ. (ಕೇಳುತ್ತಿದ್ದವರಿಗೆ ಅಚ್ಚರಿ, ವಿಸ್ಮಯ.) ಟೆಹುಟಿ ಊರಲ್ಲಿರ್ಲಿಲ್ಲ. ನಮ್ಮ ನಾಯಕನ ರಾಜವಂಶದ ಕುಡಿಯೋ ಅನ್ನೋ ಹಾಗೆ ನೋಡ್ಕೊಂಡ್ರಪ್ಪ. ಅರಮನೆಯ ಅತಿಥಿಗೃಹದಲ್ಲಿ ವಾಸ. ಅಲ್ಲಿ ಊಟಕ್ಕೆ ಭೋಜನ ಅನ್ತಾರೆ. ಭೂರಿ ಭೋಜನ. ತಿನ್ನೋದು ಕುಡಿಯೋದು. (ಒಂದು ಸ್ವರ : ಮಜಾ ಮಾಡಿದಿಯಾ ಬಟಾ?”) ಎಲ್ಬಂತು? ಯಾವ ಘಳಿಗೇಲಿ ಏನಾಗ್ತದೋ ಅಂತ. ನಾನೆ ಹೇಳ್ಬಿಟ್ಟೆ_ದಿವಸಕ್ಕೆ ಒಂದೇ ಬಟ್ಟಲು ಸಾಕು ಅಂತ. ಅಮಾತ್ಯರನ್ನು ನಾಯಕರನ್ನು ಕಂಡ್ರು. ಪೆರೋನ ಭೇಟಿಯೂ ಆಯ್ತು. ಹೋದ ವಾರ ಒಂದು ಭಾರೀ ಔತಣವೂ ಜರುಗ್ತು. ಭೋಜನಕ್ಕಿಂತಲೂ ದೊಡ್ದು ಔತಣ. ಹೊರಟು ಬರೋಣ ಅಂದರೆ ಸೆಡ್ ಉತ್ಸವ ಒಂದು ಆಗ್ಬೇಕಲ್ಲ. ಆ ಉತ್ಸವ ನಡೀಬೇಕಾದ್ರೆ ಮಹಾ ಅರ್ಚಕರು ಮಂತ್ರ ಹೇಳ್ಬೇಕು. ಅವರೇ ಇಲ್ಲ. ಅವರ್ನ ಕರಕೊಂಡು ಬರೋಕೆ ಹೆಖ್ವೆಟ್ ಅಂತ ಒಬ್ಬ ಅನ್‍ನಗರಿಗೆ ಹೋದ. ನಾನು ಈ ಕಡೆ ಬಂದೆ. ಊರಿಗೆ ಹೋಗಿ ಐದಾರು ದಿನ ಇದ್ಬಿಟ್ಟು ಬಾ ಅಂತ ಅಣ್ಣನೇ ಹೇಳಿದ್ದು. ಮೆನೆಪ್‍ಟಾ ಅಣ್ಣ ಇದನ್ನೂ ಅಂದ : ನೀರಾನೆ ಪ್ರಾಂತದ ಜನ ನೆಮ್ಮದಿಯಿಂದ ಬದುಕೋದು ಸಾಧ್ಯವಾಗ್ಬೇಕು; ರಾಜಧಾನಿ ಇದಕ್ಕೆ ಆಸ್ಪದವಿತ್ತರೆ ಎಲ್ರಿಗೂ ಹಿತ; ಅದಕ್ಕಾಗಿ ಇಲ್ಲಿದ್ದು ನಾನು ಪ್ರಯತ್ನಿಸ್ತೇನೆ; ಊರಲ್ಲಿ ನಮ್ಮ ಜನಕ್ಕೆ ಅದನ್ನು ವಿವರಿಸಿ ಹೇಳು_ಅಂತ. (ಜನರಿಗೆ ಸಮಾಧಾನ, ಅಸಮಾಧಾನ ಎರಡೂ.) ಕುಯಿಲಿಗೆ ತಾನು ಇಲ್ಲಿರ್ಬೇಕು ಅನ್ತಾನೆ ಮೆನೆಪ್‍ಟಾ ಅಣ್ಣ. ಒಂದಷ್ಟು ಜನರ ಜತೆ ಹೋಗಿ ಅಣ್ಣನನ್ನು ಕರಕೊಂಡ್ಬರ್ತೇನೆ. ಸೆಡ್ ಉತ್ಸವ ಮುಗಿದ್ಮೇಲೆ ಒಂದು ಕ್ಷಣವೂ ಅಲ್ಲಿ ನಿಲ್ಲೋದಿಲ್ಲ. (ಒಬ್ಬ : "ಏನೂ ಅಪಾಯ ಇಲ್ಲವಾ?") ಔಟ ಬೆಕ್ ಇದ್ದಾರೆ. ರಕ್ಷಣೆಗೆ ಅಮನ್‍ ಮೂರ್ತಿ ಕೊಟ್ಬಂದಿದ್ದೇನೆ ''''''''''<noinclude></noinclude> l7xlz3zmif0mlxm7g1ykyrv347rnfpy 322685 322684 2026-05-26T14:26:08Z Pragathi. BH 7585 322685 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೪೨೯}}</noinclude>ಬಟಾ ಹುಸಿ ಮುನಿಸು ತೋರಿದ. ಜನ ಬಿದ್ದು ಬಿದ್ದು ನಕ್ಕರು. ಅವರ ಜತೆ ಬಟಾನೂ ಸೇರಿಕೊಂಡ.<br /> {{gap}}ಆ ನಗೆ ನಿಲ್ಲುತ್ತಿದ್ದಂತೆ ಅವನೆಂದ:<br /> {{gap}}"ಕೇಳ್ರಪೋ. ಈಗಾಗಲೇ ನಿಮಗೆ ತಿಳಿದಿರೋ ಹಾಗೆ, ಮೆನೆಪ್‍ಟಾ ಅಣ್ಣ ಚೆನ್ನಾಗಿ ಇದ್ದಾರೆ. ಅವರು ರಾಜಧಾನಿ ತಲಪ್ದಾಗ, ಇಲ್ಲಿ ಪ್ರಾಂತಪಾಲನಾಗಿದ್ನಲ್ಲ ಗೇಬು_ಅವನು ಬಂದು ಕೈಹಿಡಿದು ಕುಣಿದ. ಪಲ್ಲಕೀಲಿ ಅರಮನೆಗೆ ಕರಕೊಂಡ್ಹೋದ. (ಕೇಳುತ್ತಿದ್ದವರಿಗೆ ಅಚ್ಚರಿ, ವಿಸ್ಮಯ.) ಟೆಹುಟಿ ಊರಲ್ಲಿರ್ಲಿಲ್ಲ. ನಮ್ಮ ನಾಯಕನ ರಾಜವಂಶದ ಕುಡಿಯೋ ಅನ್ನೋ ಹಾಗೆ ನೋಡ್ಕೊಂಡ್ರಪ್ಪ. ಅರಮನೆಯ ಅತಿಥಿಗೃಹದಲ್ಲಿ ವಾಸ. ಅಲ್ಲಿ ಊಟಕ್ಕೆ ಭೋಜನ ಅನ್ತಾರೆ. ಭೂರಿ ಭೋಜನ. ತಿನ್ನೋದು ಕುಡಿಯೋದು. (ಒಂದು ಸ್ವರ : ಮಜಾ ಮಾಡಿದಿಯಾ ಬಟಾ?”) ಎಲ್ಬಂತು? ಯಾವ ಘಳಿಗೇಲಿ ಏನಾಗ್ತದೋ ಅಂತ. ನಾನೆ ಹೇಳ್ಬಿಟ್ಟೆ_ದಿವಸಕ್ಕೆ ಒಂದೇ ಬಟ್ಟಲು ಸಾಕು ಅಂತ. ಅಮಾತ್ಯರನ್ನು ನಾಯಕರನ್ನು ಕಂಡ್ರು. ಪೆರೋನ ಭೇಟಿಯೂ ಆಯ್ತು. ಹೋದ ವಾರ ಒಂದು ಭಾರೀ ಔತಣವೂ ಜರುಗ್ತು. ಭೋಜನಕ್ಕಿಂತಲೂ ದೊಡ್ದು ಔತಣ. ಹೊರಟು ಬರೋಣ ಅಂದರೆ ಸೆಡ್ ಉತ್ಸವ ಒಂದು ಆಗ್ಬೇಕಲ್ಲ. ಆ ಉತ್ಸವ ನಡೀಬೇಕಾದ್ರೆ ಮಹಾ ಅರ್ಚಕರು ಮಂತ್ರ ಹೇಳ್ಬೇಕು. ಅವರೇ ಇಲ್ಲ. ಅವರ್ನ ಕರಕೊಂಡು ಬರೋಕೆ ಹೆಖ್ವೆಟ್ ಅಂತ ಒಬ್ಬ ಅನ್‍ನಗರಿಗೆ ಹೋದ. ನಾನು ಈ ಕಡೆ ಬಂದೆ. ಊರಿಗೆ ಹೋಗಿ ಐದಾರು ದಿನ ಇದ್ಬಿಟ್ಟು ಬಾ ಅಂತ ಅಣ್ಣನೇ ಹೇಳಿದ್ದು. ಮೆನೆಪ್‍ಟಾ ಅಣ್ಣ ಇದನ್ನೂ ಅಂದ : ನೀರಾನೆ ಪ್ರಾಂತದ ಜನ ನೆಮ್ಮದಿಯಿಂದ ಬದುಕೋದು ಸಾಧ್ಯವಾಗ್ಬೇಕು; ರಾಜಧಾನಿ ಇದಕ್ಕೆ ಆಸ್ಪದವಿತ್ತರೆ ಎಲ್ರಿಗೂ ಹಿತ; ಅದಕ್ಕಾಗಿ ಇಲ್ಲಿದ್ದು ನಾನು ಪ್ರಯತ್ನಿಸ್ತೇನೆ; ಊರಲ್ಲಿ ನಮ್ಮ ಜನಕ್ಕೆ ಅದನ್ನು ವಿವರಿಸಿ ಹೇಳು_ಅಂತ. (ಜನರಿಗೆ ಸಮಾಧಾನ, ಅಸಮಾಧಾನ ಎರಡೂ.) ಕುಯಿಲಿಗೆ ತಾನು ಇಲ್ಲಿರ್ಬೇಕು ಅನ್ತಾನೆ ಮೆನೆಪ್‍ಟಾ ಅಣ್ಣ. ಒಂದಷ್ಟು ಜನರ ಜತೆ ಹೋಗಿ ಅಣ್ಣನನ್ನು ಕರಕೊಂಡ್ಬರ್ತೇನೆ. ಸೆಡ್ ಉತ್ಸವ ಮುಗಿದ್ಮೇಲೆ ಒಂದು ಕ್ಷಣವೂ ಅಲ್ಲಿ ನಿಲ್ಲೋದಿಲ್ಲ. (ಒಬ್ಬ : "ಏನೂ ಅಪಾಯ ಇಲ್ಲವಾ?") ಔಟ ಬೆಕ್ ಇದ್ದಾರೆ. ರಕ್ಷಣೆಗೆ ಅಮನ್‍ ಮೂರ್ತಿ ಕೊಟ್ಬಂದಿದ್ದೇನೆ ''''''''''<noinclude></noinclude> ovbwegyqypru8rh3avhlzzvb1ye2wbs ಪುಟ:Mrutyunjaya.pdf/೪೪೩ 104 21932 322686 64746 2026-05-26T14:28:28Z Pragathi. BH 7585 /* Validated */ 322686 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೪೩೦|right=}}</noinclude>(ಇನ್ನೊಬ್ಬ: "ಅದೇನು ನಿನ್ನ ಎಡಗೈಲಿ?") ಥೊಎರಿಸ್ ಮೂರ್ತಿ ನೆಫಿಸ್ ಅತ್ತಿಗೆಗೆ. (ಮತ್ತೊಬ್ಬ : "ಹೌದು. ಅವಳಿಗೆ ಇದು ಒಂಭತ್ನೇ ತಿಂಗಳು.") ಮೆನೆಪ್‍ಟಾ ಅಣ್ಣನಿಗೆ ಅಲ್ಲಿರೋದಕ್ಕೆ ಬೇಸರ. ಆದರೂ ಆಮಂತ್ರಣ ಸ್ವೀಕರಿಸಿ ಹೋದ್ಮೇಲೆ ಉತ್ಸವ ಮುಗಿಯೋ ನಕ ಇರಬೇಕಲ್ಲ? (ಒಂದು ಧ್ವನಿ : "ನಮ್ಮ ಭೂಮಾಲಿಕರು ಸಿಕ್ಕಿದ್ರಾ?") ಮಾತಾಡೋಕೆ ಸಿಗಲಿಲ್ಲ. ಅಲ್ಲೇ ಇದ್ದಾರೆ. ರಾಜಧಾನಿ ಬಲು ದೊಡ್ಡ ಊರು. ಒಂದು ಮೂಲೇಲಿ ಸೇರ್ಕೊಂಡಿದ್ದಾರೆ. ಅವರ ಖರ್ಚು ಅರಮನೆ ನೋಡ್ಕೊಳ್ತದೆ. (ಒಬ್ಬ : "ಒಳ್ಳೇ ಅರಮನೆ." ಸುತ್ತಲೂ ನಗೆ.) ಚುಟುಕಾಗಿ ಹೇಳಿದ್ರೂ ಇಷ್ಟೆ, ಉದ್ದವಾಗಿ ಎಳೆದ್ರೂ ಇಷ್ಟೆ, ಕಣ್ರಪೋ...."<br /> {{gap}}ಜನ ನಗುತ್ತ ಅದೂ ಇದೂ ಮಾತನಾಡುತ್ತ ಚೆದರತೊಡಗಿದರು.<br /> {{gap}}"ಸೊಗಸಾಗಿ ಮಾತಾಡ್ದೆ, ಬಟಾ ಅಣ್ಣ," ಎಂದ ಖ್ನೆಮ್‍ಹೊಟೆಪ್.<br /> {{gap}}"ಹೋಗಲಿ ಬಿಡಪ್ಪ!” ಎಂದು ಬಟಾ ಹೇಳುತ್ತಿದ್ದಂತೆ ರಾಮೆರಿಪ್‍ಟಾ ಕಾಣಿಸಿಕೊಂಡ.<br /> {{gap}}"ಅಮ್ಮ ಕರೀತಾಳೆ. ಬರ್ತೀರಾ?" ಎಂದ.<br /> {{gap}}"ನೆಫಿಸ್‍ ಅತ್ತಿಗೇನ ನೋಡಿ ಬರ್ತೇನೆ." ಎಂದು ಬಟಾ ಸ್ನೊಫ್ರುಗೆ ಹೇಳಿ ಮಗ್ಗುಲು ಮನೆಗೆ ಹೋದ.<br /> {{gap}}ಸ್ನೊಫ್ರುವಿನ ಪತ್ನಿ ನೆಜಮುಟ್ ತಲೆ ಹೊರಹಾಕಿ, "ನಿನ್ನ ಮನೆಗೂ ಹೋಗೋದಕ್ಕೆ ಮರೀಬೇಡ!" ಎಂದಳು.<br /> {{gap}}ಸ್ನೊಫ್ರುವೆಂದ:<br /> {{gap}}"ಅವಸರ ಬೇಡ. ನಾಯಕರ ಮನೆಯಿಂದ ನಿನ್ನಲ್ಲಿಗೆ ಹೋಗಿ ಊಟ ಮಾಡ್ಕೊಂಡು ಬಾ. ಸಾಯಂಕಾಲ ಹಿರಿಯರ ಸಮಿತಿ ಸಭೆ ಕರೆಯೋಣ. ಎಲ್ಲ ವಿಷಯ ಅಲ್ಲಿಯೇ ಮಾತಾಡಿದರಾಯ್ತು."<br /> {{gap}}"ಹೂಂ ಹೂಂ."<br /> {{rh|center= * * * *}} {{gap}}ತುಂಬು ಗರ್ಭಿಣಿ ನೆಫಿಸ್ ಬಟಾ ತಂದಿತ್ತ ಥೊಎರಿಸ್ ಮೂರ್ತಿಯನ್ನು<noinclude></noinclude> hsiprfmx7y0exwhn56flk2ksv9jiehj ಪುಟ:VISHAALAAKSHI - Niranjana.pdf/೨೪ 104 37860 322668 100019 2026-05-26T13:50:20Z Shreesha Sharma 7840 /* Proofread */ 322668 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೨೨|right=ವಿಶಾಲಾಕ್ಷಿ}} {{gap}}ಪೂರ್ವಜನ್ಮದಲ್ಲಿ ಯಾವ ಬಗೆಯ ಪಾಪಿಯಾಗಿದ್ದೆನೊ ? ಮುತ್ತೈದೆಯ ಸಾವು, ಪಡೆದುಬಂದಿರಬೇಕಾದ ಭಾಗ್ಯ, ತನಗೆಲ್ಲಿಂದ ಬರಬೇಕು ಅದು ? {{gap}}ಸಮಯಕ್ಕೆ ಮುನ್ನವೇ ಮುಪ್ಪು ಅಡರಿತ್ತು ತನ್ನನ್ನು, ರಾತ್ರೆ ಎಷ್ಟು ಹೊತ್ತಾದರೂ ಈಗ ನಿದ್ದೆ ಬರುತ್ತಿರಲಿಲ್ಲ, ಯೋಚನೆಗಳು-ಆದಿ ಅಂತ್ಯ ಒಂದೂ ಇಲ್ಲದ ಯೋಚನೆಗಳು ಎಲ್ಲಿಂದಲೋ ಆರಂಭಿಸಿ ಎಲ್ಲೆಲ್ಲಿಗೋ ಮನಸ್ಸು. ತಾನು ಮಾತ್ರ ಅಜ್ಜಿಯಾಗಿರಲಿಲ್ಲ, ಅತ್ತೆಯೂ ಆಗಿರಲಿಲ್ಲ. {{gap}}ಮುಂದೇನಿನ್ನು ?, ಮುಂದೇನು ? ಗಂಡು ಹುಡುಕುವವರು ಯಾರು ? ಗಂಡು ಮಾತ್ರವಲ್ಲ, ವಿಶಾಲಿಗೆ ಮದುವೆಯಾದೊಡನೆ ಸೊಸೆಯೂ ಒಬ್ಬಳು ಈ ಮನೆಗೆ ಬರಬೇಕು.... {{gap}}ತನ್ನ ಅಣ್ಣ ಈಗ ಇದ್ದಿದ್ದರೆ ನೆರವಾಗುತ್ತಿದ್ದ, ಆ ವಿಷಯದಲ್ಲೂ ತಾನು ದುರ್ಭಾಗ್ಯವಂತೆ, ಮೈದುನನಿಂದಂತೂ ಯಾವ ಸಹಾಯವನ್ನೂ ನಿರೀಕ್ಷಿಸ ಬೇಕಾದುದಿಲ್ಲ, ಒಡಹುಟ್ಟಿದ ತಂಗಿಯನ್ನಾದರೂ ತಾನೊಮ್ಮೆ ಕಾಣಬೇಕು, ಆಕೆಯ ಗಂಡ ಒಳ್ಳೆಯವನು ಬಡವನಾದರೇನಂತೆ ? ಎಲ್ಲಾದರೂ ಒಳ್ಳೆಯ ಕಡೆ........ಈಸಲದ ದಸರೆಗೆ ಅವರನ್ನು ಕರೆಯಬೇಕು. ಅಥವಾ, ತಾನೇ ವಿಶಾಲಿಯ ಜತೆ ತುಮಕೂರಿಗೆ ಹೋದರೆ ? ಬೇಡ, ವಿಶಾಲಿಯ ಜತೆಯಲ್ಲಲ್ಲ. ಒಟ್ಟಿಗೆ ಜಯರಾಮುವನ್ನು ಕರೆದೊಯ್ದರಾಯಿತು, ಯಾವುದಕ್ಕೂ ಮೊದಲು ಕಾಗದ ಬರೆಯಬೇಕು ತಂಗಿಗೆ | {{gap}}'ಕಾಗದ ಬರೆಯಬೇಕು.” ವಾರಕ್ಕೊಂದು ತಪ್ಪದೆ ಬರುತ್ತಿತ್ತು ರಂಗ ರಾಜನಿಂದ ಅಲ್ಲ, ಅಷ್ಟು ದೂರ ಆತ ಮರಳಿ ಹೋಗಲು ತಾನು ಯಾಕೆ ಒಪ್ಪಿದೆ ಅಂತ ? ಪ್ರತಿ ತಿಂಗಳೂ ಅವನು ಕಳುಹಿಕೊಡುತ್ತಿದ್ದ ನೂರೈವತ್ತು ರೂಪಾಯಿ ಕಡಮೆ ಹಣವಲ್ಲ. ಆದರೂ, ಇಲ್ಲಿಯೇ ಕೆಲಸಕ್ಕೆ ಯತ್ನಿಸಿದ್ದರೆ ? ಹಿರಿಯ ಹುಡುಗ ಬಳಿಯಲ್ಲಿದ್ದ ನೆಂದರೆ ತನಗೆ ಅದೇ ಒಂದು ಸಮಾಧಾನ. ಇನ್ನಾದರೂ-ಇನ್ನಾದರೂ-ಬಾ' ಅಂತ ಅವನಿಗೆ ಬರೆಸಬೇಕು, ಬರೆಯು ನವಳು ವಿಶಾಲಿ, ಈಕೆ ಒಪ್ಪಬೇಕಲ್ಲ ಅದಕ್ಕೆ ? {{gap}}ಈ ಮನೆಯಲ್ಲಿ ಒಂಟಿಯಾಗಿ ಕಾಲ ಕಳೆಯುವುದಂತೂ ಎಷ್ಟು ಬೇಸರ! ಹುಲ್ಲು ಕಮರಿದ ಬಟ್ಟ ಬಯಲಿನಲ್ಲಿ ಏಕಾಕಿಯಾಗಿ ತನ್ನನ್ನು ಬಿಟ್ಟ ಹಾಗೆ.... {{gap}}...ಅಲ್ಲಿಯೇ ಅವರು ಕೂತಿರುತ್ತಿದ್ದುದು.<noinclude></noinclude> 79jf062cd6mtw9q8brroa7f2y5m54kw 322675 322668 2026-05-26T13:58:44Z Shreelatha.Halemane 7642 /* Validated */ 322675 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೨೨|right=ವಿಶಾಲಾಕ್ಷಿ}} {{gap}}ಪೂರ್ವಜನ್ಮದಲ್ಲಿ ಯಾವ ಬಗೆಯ ಪಾಪಿಯಾಗಿದ್ದೆನೊ ? ಮುತ್ತೈದೆಯ ಸಾವು, ಪಡೆದುಬಂದಿರಬೇಕಾದ ಭಾಗ್ಯ, ತನಗೆಲ್ಲಿಂದ ಬರಬೇಕು ಅದು ? {{gap}}ಸಮಯಕ್ಕೆ ಮುನ್ನವೇ ಮುಪ್ಪು ಅಡರಿತ್ತು ತನ್ನನ್ನು, ರಾತ್ರೆ ಎಷ್ಟು ಹೊತ್ತಾದರೂ ಈಗ ನಿದ್ದೆ ಬರುತ್ತಿರಲಿಲ್ಲ, ಯೋಚನೆಗಳು-ಆದಿ ಅಂತ್ಯ ಒಂದೂ ಇಲ್ಲದ ಯೋಚನೆಗಳು ಎಲ್ಲಿಂದಲೋ ಆರಂಭಿಸಿ ಎಲ್ಲೆಲ್ಲಿಗೋ ಮನಸ್ಸು. ತಾನು ಮಾತ್ರ ಅಜ್ಜಿಯಾಗಿರಲಿಲ್ಲ, ಅತ್ತೆಯೂ ಆಗಿರಲಿಲ್ಲ. {{gap}}ಮುಂದೇನಿನ್ನು ?, ಮುಂದೇನು ? ಗಂಡು ಹುಡುಕುವವರು ಯಾರು ? ಗಂಡು ಮಾತ್ರವಲ್ಲ, ವಿಶಾಲಿಗೆ ಮದುವೆಯಾದೊಡನೆ ಸೊಸೆಯೂ ಒಬ್ಬಳು ಈ ಮನೆಗೆ ಬರಬೇಕು.... {{gap}}ತನ್ನ ಅಣ್ಣ ಈಗ ಇದ್ದಿದ್ದರೆ ನೆರವಾಗುತ್ತಿದ್ದ, ಆ ವಿಷಯದಲ್ಲೂ ತಾನು ದುರ್ಭಾಗ್ಯವಂತೆ, ಮೈದುನನಿಂದಂತೂ ಯಾವ ಸಹಾಯವನ್ನೂ ನಿರೀಕ್ಷಿಸ ಬೇಕಾದುದಿಲ್ಲ, ಒಡಹುಟ್ಟಿದ ತಂಗಿಯನ್ನಾದರೂ ತಾನೊಮ್ಮೆ ಕಾಣಬೇಕು, ಆಕೆಯ ಗಂಡ ಒಳ್ಳೆಯವನು ಬಡವನಾದರೇನಂತೆ ? ಎಲ್ಲಾದರೂ ಒಳ್ಳೆಯ ಕಡೆ........ಈಸಲದ ದಸರೆಗೆ ಅವರನ್ನು ಕರೆಯಬೇಕು. ಅಥವಾ, ತಾನೇ ವಿಶಾಲಿಯ ಜತೆ ತುಮಕೂರಿಗೆ ಹೋದರೆ ? ಬೇಡ, ವಿಶಾಲಿಯ ಜತೆಯಲ್ಲಲ್ಲ. ಒಟ್ಟಿಗೆ ಜಯರಾಮುವನ್ನು ಕರೆದೊಯ್ದರಾಯಿತು, ಯಾವುದಕ್ಕೂ ಮೊದಲು ಕಾಗದ ಬರೆಯಬೇಕು ತಂಗಿಗೆ | {{gap}}'ಕಾಗದ ಬರೆಯಬೇಕು.” ವಾರಕ್ಕೊಂದು ತಪ್ಪದೆ ಬರುತ್ತಿತ್ತು ರಂಗ ರಾಜನಿಂದ ಅಲ್ಲ, ಅಷ್ಟು ದೂರ ಆತ ಮರಳಿ ಹೋಗಲು ತಾನು ಯಾಕೆ ಒಪ್ಪಿದೆ ಅಂತ ? ಪ್ರತಿ ತಿಂಗಳೂ ಅವನು ಕಳುಹಿಕೊಡುತ್ತಿದ್ದ ನೂರೈವತ್ತು ರೂಪಾಯಿ ಕಡಮೆ ಹಣವಲ್ಲ. ಆದರೂ, ಇಲ್ಲಿಯೇ ಕೆಲಸಕ್ಕೆ ಯತ್ನಿಸಿದ್ದರೆ ? ಹಿರಿಯ ಹುಡುಗ ಬಳಿಯಲ್ಲಿದ್ದ ನೆಂದರೆ ತನಗೆ ಅದೇ ಒಂದು ಸಮಾಧಾನ. ಇನ್ನಾದರೂ-ಇನ್ನಾದರೂ-ಬಾ' ಅಂತ ಅವನಿಗೆ ಬರೆಸಬೇಕು, ಬರೆಯು ನವಳು ವಿಶಾಲಿ, ಈಕೆ ಒಪ್ಪಬೇಕಲ್ಲ ಅದಕ್ಕೆ ? {{gap}}ಈ ಮನೆಯಲ್ಲಿ ಒಂಟಿಯಾಗಿ ಕಾಲ ಕಳೆಯುವುದಂತೂ ಎಷ್ಟು ಬೇಸರ! ಹುಲ್ಲು ಕಮರಿದ ಬಟ್ಟ ಬಯಲಿನಲ್ಲಿ ಏಕಾಕಿಯಾಗಿ ತನ್ನನ್ನು ಬಿಟ್ಟ ಹಾಗೆ.... {{gap}}...ಅಲ್ಲಿಯೇ ಅವರು ಕೂತಿರುತ್ತಿದ್ದುದು.<noinclude></noinclude> rujm3l4cuyq2fx6rb6w6gvm4x6tq282 ಪುಟ:VISHAALAAKSHI - Niranjana.pdf/೨೫ 104 37861 322670 100020 2026-05-26T13:53:56Z Shreesha Sharma 7840 /* Proofread */ 322670 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೨೩}} {{gap}}—ನಾಗೂ, ನನ್ನ ಕೋಟೆಲ್ಲಿ ? {{gap}}—'ನಾದ್ರೂ ನನ್ನ ಕರ್ಚೀಫ್ ನೋಡಿದಿಯಾ ?' {{gap}}—'ನಾಗೂ, ಸಾಮಾನು ಏನಾದರೂ ತರಬೇಕೇನು ?? {{gap}}ಸಾಮಾನು ಏನಾದರೂ ತರಬೇಕೆ ? -ಎಂದು ಈಗ ಕೇಳುವವಳು ವಿಶಾಲಿ, ಹೆಣ್ಣಾದರೇನು ? ಎಲ್ಲವೂ ಅಪ್ಪನಂತೆಯೇ.... {{gap}}ಕಾಹಿಲೆ ಉಲ್ಬಣವಾದಾಗಲೇ ಅವರಿಗೆ ಅನಿಸಿರಬೇಕು, ಕೊನೆ ನಿಶ್ಚಿತ ಅಂತ ಮಕ್ಕಳು ಹೊರಗಿದ್ದಾಗ ತನ್ನನ್ನು ಸವಿಾಪಕ್ಕೆ ಕರೆದು, ಅಂದಿದ್ದರು : {{gap}}“ನೀನು ಧೈರ್ಯವಾಗಿದ್ದೇಕು, ನಾಗೂ. {{gap}}'ಸಂದರ್ಭ ಅರ್ಥವಾಗಿದ್ದರೂ ಒಪ್ಪಿಕೊಳ್ಳಲು ಇಷ್ಟಪಡದೆ ತಾನು ಅಂದಿದ್ದೆ : {{gap}}'ಧೈರ್ಯವಾಗೇ ಇದೀನಿ.' {{gap}}(ಈಗಿನದಲ್ಲ, ಮುಂದೆ, ಯಾವಾಗಲೂ.' {{gap}}ತನಗೆ ದುಃಖ ಉಮ್ಮಳಿಸಿ ಬಂದಿತ್ತು. {{gap}}“ಸುಮ್ಮನಿರಬಾರದೇ ನೀವು ?” {{gap}}ನನ್ನ ಚಿನ್ನ! {{gap}}ಸೂಕ್ಷತರ ಮಧುರ ಭಾವವನ್ನು ಸೂಚಿಸುವ ಸಂಶೋಧನೆ, ಇನ್ನು. ಆ ಧ್ವನಿ ಇಲ್ಲವೇನೋ ಎಂಬಂತೆ ಗಳಗಳನೆ ಅತ್ತಿದ್ದೆ, ಅಥವಾ ತಾನು ನಿರ್ಗತಿಕ ಳಾದೆನೆಂದು ಆಗಲೇ ತನಗೆ ಅನಿಸಿರಬೇಕು, ತನ್ನ ಪಾಲಿಗೆ ಕೊನೆಯದೇ ಆಗಿತ್ತು ಆ ಕರೆ-ಕೊನೆಯದೇ ಆಗಿತ್ತು... {{gap}}ಬಹಳ ಹೊತ್ತು ಬಾಗಿಲ ಬಳಿಯಲ್ಲೇ, ಬಳಿಕ ಗೋಡೆಗೊರಗಿ ನಿಂತೇ ಇದ್ದ ನಾಗಮ್ಮ, ಬವಳಿ ಬಂದಂತಾಗಿ ನೆಲದ ಮೇಲೆ ಕುಸಿಕುಳಿತರು, ಮಂಡಿಗಳಿಗೆ ಹಣೆಯಾನಿಸಿ ಒಂದೇಸಮನೆ ಅತ್ಯರು, ಮೂಗಿನಿಂದ ಸುರಿದುಬಂದ ನೀರು ಸಿಂಬಳವನ್ನು ಬೆರಳುಗಳಿಂದ ನೆಲಕ್ಕೊರಸಿದರು, [ರಂಗರಾಜ ಅನ್ನುತ್ತಿದ್ದ : “ನಿನ್ನದೊಂದು ಕೆಟ್ಟ ಅಭ್ಯಾಸವನ್ನ ಇದು.] ಸೆರಗಿನಿಂದ ಕಣ್ಣು ಗಳನ್ನು ಮೆಲ್ಲನೆ ಒತ್ತಿಕೊಂಡರು. {{gap}}ಹೃದಯದ ಭಾರ ತುಸು ಕಡಮೆಯಾದಂತೆನಿಸಿತು.<noinclude></noinclude> 0f8x8f58tvx8v9hf5ahnbl710z9hwld 322674 322670 2026-05-26T13:58:31Z Shreelatha.Halemane 7642 /* Validated */ 322674 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೨೩}} {{gap}}—ನಾಗೂ, ನನ್ನ ಕೋಟೆಲ್ಲಿ ? {{gap}}—'ನಾದ್ರೂ ನನ್ನ ಕರ್ಚೀಫ್ ನೋಡಿದಿಯಾ ?' {{gap}}—'ನಾಗೂ, ಸಾಮಾನು ಏನಾದರೂ ತರಬೇಕೇನು ?? {{gap}}ಸಾಮಾನು ಏನಾದರೂ ತರಬೇಕೆ ? -ಎಂದು ಈಗ ಕೇಳುವವಳು ವಿಶಾಲಿ, ಹೆಣ್ಣಾದರೇನು ? ಎಲ್ಲವೂ ಅಪ್ಪನಂತೆಯೇ.... {{gap}}ಕಾಹಿಲೆ ಉಲ್ಬಣವಾದಾಗಲೇ ಅವರಿಗೆ ಅನಿಸಿರಬೇಕು, ಕೊನೆ ನಿಶ್ಚಿತ ಅಂತ ಮಕ್ಕಳು ಹೊರಗಿದ್ದಾಗ ತನ್ನನ್ನು ಸವಿಾಪಕ್ಕೆ ಕರೆದು, ಅಂದಿದ್ದರು : {{gap}}“ನೀನು ಧೈರ್ಯವಾಗಿದ್ದೇಕು, ನಾಗೂ. {{gap}}'ಸಂದರ್ಭ ಅರ್ಥವಾಗಿದ್ದರೂ ಒಪ್ಪಿಕೊಳ್ಳಲು ಇಷ್ಟಪಡದೆ ತಾನು ಅಂದಿದ್ದೆ : {{gap}}'ಧೈರ್ಯವಾಗೇ ಇದೀನಿ.' {{gap}}(ಈಗಿನದಲ್ಲ, ಮುಂದೆ, ಯಾವಾಗಲೂ.' {{gap}}ತನಗೆ ದುಃಖ ಉಮ್ಮಳಿಸಿ ಬಂದಿತ್ತು. {{gap}}“ಸುಮ್ಮನಿರಬಾರದೇ ನೀವು ?” {{gap}}ನನ್ನ ಚಿನ್ನ! {{gap}}ಸೂಕ್ಷತರ ಮಧುರ ಭಾವವನ್ನು ಸೂಚಿಸುವ ಸಂಶೋಧನೆ, ಇನ್ನು. ಆ ಧ್ವನಿ ಇಲ್ಲವೇನೋ ಎಂಬಂತೆ ಗಳಗಳನೆ ಅತ್ತಿದ್ದೆ, ಅಥವಾ ತಾನು ನಿರ್ಗತಿಕ ಳಾದೆನೆಂದು ಆಗಲೇ ತನಗೆ ಅನಿಸಿರಬೇಕು, ತನ್ನ ಪಾಲಿಗೆ ಕೊನೆಯದೇ ಆಗಿತ್ತು ಆ ಕರೆ-ಕೊನೆಯದೇ ಆಗಿತ್ತು... {{gap}}ಬಹಳ ಹೊತ್ತು ಬಾಗಿಲ ಬಳಿಯಲ್ಲೇ, ಬಳಿಕ ಗೋಡೆಗೊರಗಿ ನಿಂತೇ ಇದ್ದ ನಾಗಮ್ಮ, ಬವಳಿ ಬಂದಂತಾಗಿ ನೆಲದ ಮೇಲೆ ಕುಸಿಕುಳಿತರು, ಮಂಡಿಗಳಿಗೆ ಹಣೆಯಾನಿಸಿ ಒಂದೇಸಮನೆ ಅತ್ಯರು, ಮೂಗಿನಿಂದ ಸುರಿದುಬಂದ ನೀರು ಸಿಂಬಳವನ್ನು ಬೆರಳುಗಳಿಂದ ನೆಲಕ್ಕೊರಸಿದರು, [ರಂಗರಾಜ ಅನ್ನುತ್ತಿದ್ದ : “ನಿನ್ನದೊಂದು ಕೆಟ್ಟ ಅಭ್ಯಾಸವನ್ನ ಇದು.] ಸೆರಗಿನಿಂದ ಕಣ್ಣು ಗಳನ್ನು ಮೆಲ್ಲನೆ ಒತ್ತಿಕೊಂಡರು. {{gap}}ಹೃದಯದ ಭಾರ ತುಸು ಕಡಮೆಯಾದಂತೆನಿಸಿತು.<noinclude></noinclude> 7spqrum5qqbzdv27bq3kkwr7baz3h2x ಪುಟ:VISHAALAAKSHI - Niranjana.pdf/೨೬ 104 37862 322671 100021 2026-05-26T13:57:21Z Shreesha Sharma 7840 /* Proofread */ 322671 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೨೪|right=}} {{gap}}ಅಲ್ಲ, ಚಂದ್ರ- ಜಯ ಬರಲೇ ಇಲ್ವಲ್ಲಾ... ಮಧ್ಯಾಹ್ನವಾಗಿಬಿಟ್ಟಿದೆ. ಆಗಲೇ ಎಷ್ಟಾಯಿತೋ ಗಂಟೆ ?' {{gap}}ನಾಗಮ್ಮ ಮೆಲ್ಲನೆದ್ದು, ಮಕ್ಕಳ ಕೊಠಡಿಗೆ ನಡೆದರು. ಕಿಟಕಿಯ ದಂಡೆಯ ಮೇಲೆ ಹಳೆಯ ಟೈಂಪೀಸು ಬೋರಲು ಮಲಗಿತ್ತು, ಅದು ಕೆಟ್ಟುಹೋಗಿ ಆಗಲೇ ನಾಲ್ಕು ತಿಂಗಳಾಗಿದ್ದುವು. ಸರಿಯಾದ ವೇಳೆ ಸೂಚಿಸುತ್ತಿದ್ದುದು ವಿಶಾಲಿಯ ಕೈಗಡಿಯಾರವೊಂದೇ. ಅದಿಲ್ಲದಾಗ, ಟೈಂಪೀಸನ್ನೆ ಎತ್ತಿ ನೋಡಿ ಅಲ್ಲಿದ್ದು ದಕ್ಕೆ ಅದೆಷ್ಟನ್ನೋ ಕೂಡಿಸಿಯೋ ಕಳೆದೊ, ವೇಳೆಯನ್ನು ಹುಡುಗರು ಗೊತ್ತುಹಚ್ಚು ತಿದ್ದರು. ನಾಗಮ್ಮನೂ ಬಲು ಜಾಗರೂಕತೆಯಿಂದ ಅದನ್ನು ಎತ್ತಿದರು, ಸಣ್ಣ ಮುಳ್ಳು ಹನ್ನೆರಡನ್ನು ಸಮಿಾಪಿಸುತ್ತಿತ್ತು, ಅದರ ಬೆನ್ನಲ್ಲೆ ಇತ್ತು ದೊಡ್ಡ ಮುಳ್ಳು, - ಆದರೆ, ಅದಕ್ಕೆ ಎಷ್ಟನ್ನು ಕೂಡಿಸಬೇಕು ಅಥವಾ ಎಷ್ಟನ್ನು ಅದರಿಂದ ಕಳೆಯ ಬೇಕು ಎಂಬುದು ಅವರಿಗೆ ಗೊತ್ತಿರಲಿಲ್ಲ, ತಾನು ಮುಟ್ಟದುದರಿಂದ ಆ ಟೈಂ ಪೀಸಲ್ಲಿ ನಿಂತುಹೋಗುವುದೋ ಎಂದು ಅಂಜಿ ಮೊದಲಿದ್ದಂತೆಯೇ ಅದನ್ನು ಬೋರಲು ಮಲಗಿಸಿದರು, {{gap}}ಗೋಡೆಯಲ್ಲಿ ಬೆಂಗಳೂರು ಪ್ರೆಸ್ಸಿನ ಕ್ಯಾಲೆಂಡರಿತ್ತು, ಇವತ್ತೆಷ್ಟು ತಾರೀಕು? ಹಾಲಿನವನು ದುಡ್ಡು ಇಸಕೊಂಡುದು ಆರು ದಿನಗಳಿಗೆ ಹಿಂದೆ, ಆ ದಿನ ತಾರೀಕು ಐದು ಅಂದರೆ ಹನ್ನೊಂದಿರಬೇಕು ಇವತ್ತು...ಮಗನಿಂದ ಮನಿಯಾರ್ಡರು * ಬರುವುದು ನಾಡದು, ಇಲ್ಲವೆ ಆಚೆನಾಡದು, ಈಗ ಈ ಎಂ ಎ, ಮುಗಿಯುವತನಕ ವಿಶಾಲಾಕ್ಷಿಗೆ ಸಂಪಾದನೆ ಇಲ್ಲ....ಅಲ್ಲ, ಪುನಃ ಓದುವ ಅಗತ್ಯ ನಿಜವಾಗಿಯೂ ಇತ್ತೆ ಅಂತ ? ಅವರಿದ್ದಾಗಲೇ ಒಪ್ಪಿಗೆ ಇತ್ತಿದ್ದರು: 'ಮುಂದಿನ ವರ್ಷ ಎಂ.ಎ. ಮಾಡೋ ವಿಶಾಲಿ' ಅದೇನೆಂಬುದು ನಾಗಮ್ಮನಿಗೆ ತಿಳಿಯದು, ಓದು ಕಲಿತು ಉದ್ಯೋಗ ದೊರೆತಮೇಲೆ ಪುನಃ ಓದುವುದು ಅಂದರೇನು ? ಅದೇನು ಹೆಚ್ಚು ಗಾರಿಕೆ ಅಂತ?” ತಂದೆ ಹಿಂದೆ ಹೇಳಿದ್ದು ದನ್ನೇ ರಾಜುವೂ ಒತ್ತಿ ನುಡಿದಿದ್ದ. ನಮ್ಮ ವಿಶಾಲಿಗೆ ಎಂಥ ಪರೀಕ್ಷೆ ಇದ್ದರೂ ನೀರು ಕುಡಿದಹಾಗೆ.' ಮಗಳಿಗೂ ಇಷ್ಟ ಓದುವುದೆಂದರೆ. {{gap}}ತಾರೀಕು ಪಟ್ಟಿಯ ಬಲಕ್ಕೆ ಎರಡು ಭಾವಚಿತ್ರಗಳಿದ್ದುವು-ರಾಜುವಿನ ದೊಂದು ವಿಶಾಲಿಯದೊಂದು, ಕಪ್ಪುಕೋಟುಗಳನ್ನು ಧರಿಸಿ, ಕೈಯಲ್ಲಿ ಬಿಳಿಯ 1 ಸುರುಳಿ [/ಡಿಕ್ರಿ] ಹಿಡಿದು, ತೆಗೆಸಿದ ಚಿತ್ರಗಳು ನೋಡಲು ತಮಾಷೆಯಾಗಿದ್ದುವು.<noinclude></noinclude> 703wi5o7x3ppot3mxaarz9uwtkm2m8t 322673 322671 2026-05-26T13:58:17Z Shreelatha.Halemane 7642 /* Validated */ 322673 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವಿಶಾಲಾಕ್ಷಿ|left=೨೪|right=}} {{gap}}ಅಲ್ಲ, ಚಂದ್ರ- ಜಯ ಬರಲೇ ಇಲ್ವಲ್ಲಾ... ಮಧ್ಯಾಹ್ನವಾಗಿಬಿಟ್ಟಿದೆ. ಆಗಲೇ ಎಷ್ಟಾಯಿತೋ ಗಂಟೆ ?' {{gap}}ನಾಗಮ್ಮ ಮೆಲ್ಲನೆದ್ದು, ಮಕ್ಕಳ ಕೊಠಡಿಗೆ ನಡೆದರು. ಕಿಟಕಿಯ ದಂಡೆಯ ಮೇಲೆ ಹಳೆಯ ಟೈಂಪೀಸು ಬೋರಲು ಮಲಗಿತ್ತು, ಅದು ಕೆಟ್ಟುಹೋಗಿ ಆಗಲೇ ನಾಲ್ಕು ತಿಂಗಳಾಗಿದ್ದುವು. ಸರಿಯಾದ ವೇಳೆ ಸೂಚಿಸುತ್ತಿದ್ದುದು ವಿಶಾಲಿಯ ಕೈಗಡಿಯಾರವೊಂದೇ. ಅದಿಲ್ಲದಾಗ, ಟೈಂಪೀಸನ್ನೆ ಎತ್ತಿ ನೋಡಿ ಅಲ್ಲಿದ್ದು ದಕ್ಕೆ ಅದೆಷ್ಟನ್ನೋ ಕೂಡಿಸಿಯೋ ಕಳೆದೊ, ವೇಳೆಯನ್ನು ಹುಡುಗರು ಗೊತ್ತುಹಚ್ಚು ತಿದ್ದರು. ನಾಗಮ್ಮನೂ ಬಲು ಜಾಗರೂಕತೆಯಿಂದ ಅದನ್ನು ಎತ್ತಿದರು, ಸಣ್ಣ ಮುಳ್ಳು ಹನ್ನೆರಡನ್ನು ಸಮಿಾಪಿಸುತ್ತಿತ್ತು, ಅದರ ಬೆನ್ನಲ್ಲೆ ಇತ್ತು ದೊಡ್ಡ ಮುಳ್ಳು, - ಆದರೆ, ಅದಕ್ಕೆ ಎಷ್ಟನ್ನು ಕೂಡಿಸಬೇಕು ಅಥವಾ ಎಷ್ಟನ್ನು ಅದರಿಂದ ಕಳೆಯ ಬೇಕು ಎಂಬುದು ಅವರಿಗೆ ಗೊತ್ತಿರಲಿಲ್ಲ, ತಾನು ಮುಟ್ಟದುದರಿಂದ ಆ ಟೈಂ ಪೀಸಲ್ಲಿ ನಿಂತುಹೋಗುವುದೋ ಎಂದು ಅಂಜಿ ಮೊದಲಿದ್ದಂತೆಯೇ ಅದನ್ನು ಬೋರಲು ಮಲಗಿಸಿದರು, {{gap}}ಗೋಡೆಯಲ್ಲಿ ಬೆಂಗಳೂರು ಪ್ರೆಸ್ಸಿನ ಕ್ಯಾಲೆಂಡರಿತ್ತು, ಇವತ್ತೆಷ್ಟು ತಾರೀಕು? ಹಾಲಿನವನು ದುಡ್ಡು ಇಸಕೊಂಡುದು ಆರು ದಿನಗಳಿಗೆ ಹಿಂದೆ, ಆ ದಿನ ತಾರೀಕು ಐದು ಅಂದರೆ ಹನ್ನೊಂದಿರಬೇಕು ಇವತ್ತು...ಮಗನಿಂದ ಮನಿಯಾರ್ಡರು * ಬರುವುದು ನಾಡದು, ಇಲ್ಲವೆ ಆಚೆನಾಡದು, ಈಗ ಈ ಎಂ ಎ, ಮುಗಿಯುವತನಕ ವಿಶಾಲಾಕ್ಷಿಗೆ ಸಂಪಾದನೆ ಇಲ್ಲ....ಅಲ್ಲ, ಪುನಃ ಓದುವ ಅಗತ್ಯ ನಿಜವಾಗಿಯೂ ಇತ್ತೆ ಅಂತ ? ಅವರಿದ್ದಾಗಲೇ ಒಪ್ಪಿಗೆ ಇತ್ತಿದ್ದರು: 'ಮುಂದಿನ ವರ್ಷ ಎಂ.ಎ. ಮಾಡೋ ವಿಶಾಲಿ' ಅದೇನೆಂಬುದು ನಾಗಮ್ಮನಿಗೆ ತಿಳಿಯದು, ಓದು ಕಲಿತು ಉದ್ಯೋಗ ದೊರೆತಮೇಲೆ ಪುನಃ ಓದುವುದು ಅಂದರೇನು ? ಅದೇನು ಹೆಚ್ಚು ಗಾರಿಕೆ ಅಂತ?” ತಂದೆ ಹಿಂದೆ ಹೇಳಿದ್ದು ದನ್ನೇ ರಾಜುವೂ ಒತ್ತಿ ನುಡಿದಿದ್ದ. ನಮ್ಮ ವಿಶಾಲಿಗೆ ಎಂಥ ಪರೀಕ್ಷೆ ಇದ್ದರೂ ನೀರು ಕುಡಿದಹಾಗೆ.' ಮಗಳಿಗೂ ಇಷ್ಟ ಓದುವುದೆಂದರೆ. {{gap}}ತಾರೀಕು ಪಟ್ಟಿಯ ಬಲಕ್ಕೆ ಎರಡು ಭಾವಚಿತ್ರಗಳಿದ್ದುವು-ರಾಜುವಿನ ದೊಂದು ವಿಶಾಲಿಯದೊಂದು, ಕಪ್ಪುಕೋಟುಗಳನ್ನು ಧರಿಸಿ, ಕೈಯಲ್ಲಿ ಬಿಳಿಯ 1 ಸುರುಳಿ [/ಡಿಕ್ರಿ] ಹಿಡಿದು, ತೆಗೆಸಿದ ಚಿತ್ರಗಳು ನೋಡಲು ತಮಾಷೆಯಾಗಿದ್ದುವು.<noinclude></noinclude> a9uys5abv6ikba2ecgvyua78cjbz383 ಪುಟ:VISHAALAAKSHI - Niranjana.pdf/೨೭ 104 37863 322687 100022 2026-05-26T14:31:02Z Shreesha Sharma 7840 /* Proofread */ 322687 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೨೫}} {{gap}}ಎದುರು ಬದಿಯಲ್ಲಿ ಬಲು ಹಳೆಯದಾದೊಂದು ಸಂಸಾರ-ಭಾವಚಿತ್ರವಿತ್ತು. ನಾಗಮ್ಮ ಮತ್ತು ಅವರ ಯಜಮಾನರು, ಚಡ್ಡಿ ಧರಿಸಿದ್ದ ರಾಜು, ಲಂಗ ತೊಟ್ಟಿದ್ದ ವಿಶಾಲಿ, ತಾಯಿಯ ತೊಡೆಯ ಮೇಲಿದ್ದ ಕೂಸು ಚಂದ್ರ. ಆಗ ಇನ್ನೂ ಜಯನ ಆಗಮನವಾಗಿರಲಿಲ್ಲ. {{gap}}ವಿಶಾಲಿ ಅಂದಿದ್ದಳು : {{gap}}ಈ ಚಿತ್ರ ಚೆನ್ನಾಗಿದೆಯಮ್ಮ ನಮ್ಮ ತಂದೆದನ್ನು ಅಷ್ಟೇ ಬೇರೆ ತೆಗೆದು, ದೊಡ್ಡದಾಗಿ ಮಾಡಿಸೋಕು ಕಮಲ್ ಸ್ಟುಡಿ ಯೋನವರು ಚೆನ್ನಾಗಿ ಮಾಡ್ಕೊಡ್ತಾರೆ. {{gap}}ಎಷ್ಟು ಖರ್ಚಾಗಬಹುದು ?-ಎಂದು ನಾಗಮ್ಮ ಕೇಳಿರಲಿಲ್ಲ. ಒಳ್ಳೆಯ ಕೆಲಸಕ್ಕೆ ಖರ್ಚು ಎಷ್ಟಾದರೇನಂತೆ ? ಯೋಚಿಸಲೇಬಾರದು ಆ ವಿಷಯ. ತನ್ನ ದೇವರ ಚಿತ್ರ, ದೊಡ್ಡದಾಗಿ, ಮನೆಗೇ ಶೋಭೆಯಾಗಿ....... {{gap}}“ಅಮ್ಮಾ, ಏನ್ಮಾಡ್ತಿದೀಯಾ? ಬಡಿಸು ನಂಗೆ.” ನುಡಿದ. {{gap}}ಅವಸರವಾಗಿ ಒಳಕ್ಕೆ ಬಂದು, ತಾಯಿಯ ಬಳಿಸಾರಿ, ಜಯರಾಮು ಹಾಗೆ {{gap}}ಸರಿಯಾಗಿ ಕೈಕಾಲು ತೊಳೆಯುವ ವ್ಯವಧಾನವೂ ಇಲ್ಲ ಅವನಿಗೆ {{gap}}ತಮ್ಮ ಸುತ್ತಲೂ ನೇಯತೊಡಗಿದ್ದ ಯೋಚನೆಗಳ ನೆನಪುಗಳ-ಬಲೆಗಳ ನ್ನೆಲ್ಲ ಬದಿಗೆ ಸವರಿ, ಲಗುಬಗೆಯಿಂದ ನಾಗಮ್ಮ ಅಡುಗೆ ಮನೆಯತ್ತ ನಡೆದರು. {{gap}}ಮಗನ ಒದ್ದೆ ಪಾದಗಳನ್ನು ನೋಡಿ ಅವರೆಂದರು : {{gap}}“ಸರಿಯಾಗಿ ಒರಸ್ಕೋಬಾರದೇನೋ ?” {{gap}}“ಇರಲಿ, ಬಿಡಮ್ಮ.” {{gap}}ತಾಯಿಯಬಳಿ ಹೆಚ್ಚು ಸಲಿಗೆ ಕಿರಿಯವನಿಗೆ ಅವರಿಗೂ ಆತ ಮುದ್ದಿನಮಗ {{gap}}....ಉಣ್ಣುತ್ತ ಜಯರಾಮು ಕೇಳಿದ : {{gap}}“ಅಕ್ಕ ಕಾಲೇಜಿಗೆ ಹೋದಳಾ ?” {{gap}}"Joso." {{gap}}“ನಿನ್ನ ಊಟ ಆಯ್ತಾ ?” {{gap}}“ಇನ್ನೂ ಇಲ್ಲವಪ್ಪ.” {{gap}}ಚಂದ್ರ ಉಂಡುಹೋದನೆ?-ಎಂದು ಜಯರಾಮು ಇನ್ನು ಕೇಳಬೇಕು. ಅಷ್ಟರಲ್ಲಿ, ಆತ ಬಂದನೆಂಬುದಕ್ಕೆ ಸಾಕ್ಷಿಯಾಗಿ, ಹೊರಗೆ ಸೈಕಲ್ಲಿನ ಸದ್ದಾಯಿತು.<noinclude></noinclude> rl97fv9wqrvf7avegz6xwjekud1we01 322688 322687 2026-05-26T14:31:45Z Shreesha Sharma 7840 322688 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೨೫}} {{gap}}ಎದುರು ಬದಿಯಲ್ಲಿ ಬಲು ಹಳೆಯದಾದೊಂದು ಸಂಸಾರ-ಭಾವಚಿತ್ರವಿತ್ತು. ನಾಗಮ್ಮ ಮತ್ತು ಅವರ ಯಜಮಾನರು, ಚಡ್ಡಿ ಧರಿಸಿದ್ದ ರಾಜು, ಲಂಗ ತೊಟ್ಟಿದ್ದ ವಿಶಾಲಿ, ತಾಯಿಯ ತೊಡೆಯ ಮೇಲಿದ್ದ ಕೂಸು ಚಂದ್ರ. ಆಗ ಇನ್ನೂ ಜಯನ ಆಗಮನವಾಗಿರಲಿಲ್ಲ. {{gap}}ವಿಶಾಲಿ ಅಂದಿದ್ದಳು : {{gap}}ಈ ಚಿತ್ರ ಚೆನ್ನಾಗಿದೆಯಮ್ಮ ನಮ್ಮ ತಂದೆದನ್ನು ಅಷ್ಟೇ ಬೇರೆ ತೆಗೆದು, ದೊಡ್ಡದಾಗಿ ಮಾಡಿಸೋಕು ಕಮಲ್ ಸ್ಟುಡಿ ಯೋನವರು ಚೆನ್ನಾಗಿ ಮಾಡ್ಕೊಡ್ತಾರೆ. {{gap}}ಎಷ್ಟು ಖರ್ಚಾಗಬಹುದು ?-ಎಂದು ನಾಗಮ್ಮ ಕೇಳಿರಲಿಲ್ಲ. ಒಳ್ಳೆಯ ಕೆಲಸಕ್ಕೆ ಖರ್ಚು ಎಷ್ಟಾದರೇನಂತೆ ? ಯೋಚಿಸಲೇಬಾರದು ಆ ವಿಷಯ. ತನ್ನ ದೇವರ ಚಿತ್ರ, ದೊಡ್ಡದಾಗಿ, ಮನೆಗೇ ಶೋಭೆಯಾಗಿ....... {{gap}}“ಅಮ್ಮಾ, ಏನ್ಮಾಡ್ತಿದೀಯಾ? ಬಡಿಸು ನಂಗೆ.” ನುಡಿದ. {{gap}}ಅವಸರವಾಗಿ ಒಳಕ್ಕೆ ಬಂದು, ತಾಯಿಯ ಬಳಿಸಾರಿ, ಜಯರಾಮು ಹಾಗೆ {{gap}}ಸರಿಯಾಗಿ ಕೈಕಾಲು ತೊಳೆಯುವ ವ್ಯವಧಾನವೂ ಇಲ್ಲ ಅವನಿಗೆ {{gap}}ತಮ್ಮ ಸುತ್ತಲೂ ನೇಯತೊಡಗಿದ್ದ ಯೋಚನೆಗಳ ನೆನಪುಗಳ-ಬಲೆಗಳ ನ್ನೆಲ್ಲ ಬದಿಗೆ ಸವರಿ, ಲಗುಬಗೆಯಿಂದ ನಾಗಮ್ಮ ಅಡುಗೆ ಮನೆಯತ್ತ ನಡೆದರು. {{gap}}ಮಗನ ಒದ್ದೆ ಪಾದಗಳನ್ನು ನೋಡಿ ಅವರೆಂದರು : {{gap}}“ಸರಿಯಾಗಿ ಒರಸ್ಕೋಬಾರದೇನೋ ?” {{gap}}“ಇರಲಿ, ಬಿಡಮ್ಮ.” {{gap}}ತಾಯಿಯಬಳಿ ಹೆಚ್ಚು ಸಲಿಗೆ ಕಿರಿಯವನಿಗೆ ಅವರಿಗೂ ಆತ ಮುದ್ದಿನಮಗ {{gap}}....ಉಣ್ಣುತ್ತ ಜಯರಾಮು ಕೇಳಿದ : {{gap}}“ಅಕ್ಕ ಕಾಲೇಜಿಗೆ ಹೋದಳಾ ?” {{gap}}"Joso." {{gap}}“ನಿನ್ನ ಊಟ ಆಯ್ತಾ ?” {{gap}}“ಇನ್ನೂ ಇಲ್ಲವಪ್ಪ.” {{gap}}ಚಂದ್ರ ಉಂಡುಹೋದನೆ?-ಎಂದು ಜಯರಾಮು ಇನ್ನು ಕೇಳಬೇಕು. ಅಷ್ಟರಲ್ಲಿ, ಆತ ಬಂದನೆಂಬುದಕ್ಕೆ ಸಾಕ್ಷಿಯಾಗಿ, ಹೊರಗೆ ಸೈಕಲ್ಲಿನ ಸದ್ದಾಯಿತು.<noinclude></noinclude> nqyc1eqlrowh1othpyneqye9vwb2fcm 322692 322688 2026-05-26T14:35:39Z Shreelatha.Halemane 7642 /* Validated */ 322692 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೨೫}} {{gap}}ಎದುರು ಬದಿಯಲ್ಲಿ ಬಲು ಹಳೆಯದಾದೊಂದು ಸಂಸಾರ-ಭಾವಚಿತ್ರವಿತ್ತು. ನಾಗಮ್ಮ ಮತ್ತು ಅವರ ಯಜಮಾನರು, ಚಡ್ಡಿ ಧರಿಸಿದ್ದ ರಾಜು, ಲಂಗ ತೊಟ್ಟಿದ್ದ ವಿಶಾಲಿ, ತಾಯಿಯ ತೊಡೆಯ ಮೇಲಿದ್ದ ಕೂಸು ಚಂದ್ರ. ಆಗ ಇನ್ನೂ ಜಯನ ಆಗಮನವಾಗಿರಲಿಲ್ಲ. {{gap}}ವಿಶಾಲಿ ಅಂದಿದ್ದಳು : {{gap}}ಈ ಚಿತ್ರ ಚೆನ್ನಾಗಿದೆಯಮ್ಮ ನಮ್ಮ ತಂದೆದನ್ನು ಅಷ್ಟೇ ಬೇರೆ ತೆಗೆದು, ದೊಡ್ಡದಾಗಿ ಮಾಡಿಸೋಕು ಕಮಲ್ ಸ್ಟುಡಿ ಯೋನವರು ಚೆನ್ನಾಗಿ ಮಾಡ್ಕೊಡ್ತಾರೆ. {{gap}}ಎಷ್ಟು ಖರ್ಚಾಗಬಹುದು ?-ಎಂದು ನಾಗಮ್ಮ ಕೇಳಿರಲಿಲ್ಲ. ಒಳ್ಳೆಯ ಕೆಲಸಕ್ಕೆ ಖರ್ಚು ಎಷ್ಟಾದರೇನಂತೆ ? ಯೋಚಿಸಲೇಬಾರದು ಆ ವಿಷಯ. ತನ್ನ ದೇವರ ಚಿತ್ರ, ದೊಡ್ಡದಾಗಿ, ಮನೆಗೇ ಶೋಭೆಯಾಗಿ....... {{gap}}“ಅಮ್ಮಾ, ಏನ್ಮಾಡ್ತಿದೀಯಾ? ಬಡಿಸು ನಂಗೆ.”ನುಡಿದ. {{gap}}ಅವಸರವಾಗಿ ಒಳಕ್ಕೆ ಬಂದು, ತಾಯಿಯ ಬಳಿಸಾರಿ, ಜಯರಾಮು ಹಾಗೆ ನುಡಿದ {{gap}}ಸರಿಯಾಗಿ ಕೈಕಾಲು ತೊಳೆಯುವ ವ್ಯವಧಾನವೂ ಇಲ್ಲ ಅವನಿಗೆ {{gap}}ತಮ್ಮ ಸುತ್ತಲೂ ನೇಯತೊಡಗಿದ್ದ ಯೋಚನೆಗಳ ನೆನಪುಗಳ-ಬಲೆಗಳ ನ್ನೆಲ್ಲ ಬದಿಗೆ ಸವರಿ, ಲಗುಬಗೆಯಿಂದ ನಾಗಮ್ಮ ಅಡುಗೆ ಮನೆಯತ್ತ ನಡೆದರು. {{gap}}ಮಗನ ಒದ್ದೆ ಪಾದಗಳನ್ನು ನೋಡಿ ಅವರೆಂದರು : {{gap}}“ಸರಿಯಾಗಿ ಒರಸ್ಕೋಬಾರದೇನೋ ?” {{gap}}“ಇರಲಿ, ಬಿಡಮ್ಮ.” {{gap}}ತಾಯಿಯಬಳಿ ಹೆಚ್ಚು ಸಲಿಗೆ ಕಿರಿಯವನಿಗೆ ಅವರಿಗೂ ಆತ ಮುದ್ದಿನಮಗ {{gap}}....ಉಣ್ಣುತ್ತ ಜಯರಾಮು ಕೇಳಿದ : {{gap}}“ಅಕ್ಕ ಕಾಲೇಜಿಗೆ ಹೋದಳಾ ?” {{gap}}" ಹೂಂ." {{gap}}“ನಿನ್ನ ಊಟ ಆಯ್ತಾ ?” {{gap}}“ಇನ್ನೂ ಇಲ್ಲವಪ್ಪ.” {{gap}}ಚಂದ್ರ ಉಂಡುಹೋದನೆ?-ಎಂದು ಜಯರಾಮು ಇನ್ನು ಕೇಳಬೇಕು. ಅಷ್ಟರಲ್ಲಿ, ಆತ ಬಂದನೆಂಬುದಕ್ಕೆ ಸಾಕ್ಷಿಯಾಗಿ, ಹೊರಗೆ ಸೈಕಲ್ಲಿನ ಸದ್ದಾಯಿತು.<noinclude></noinclude> mzel2wfudnmex1c0hslnzv6gqxsoniv ಪುಟ:VISHAALAAKSHI - Niranjana.pdf/೨೮ 104 37864 322691 100023 2026-05-26T14:35:29Z Shreesha Sharma 7840 /* Proofread */ 322691 proofread-page text/x-wiki <noinclude><pagequality level="3" user="Shreesha Sharma" /></noinclude>{{gap}}“ಬಾರೇ, ಬಾರೇ ! ಒಂದು ಯುಗವಾಯ್ತಲ್ಲೇ ನಿನ್ನನ್ನು ನೋಡಿ ! ಈಗಲೇ ಪರೀಕ್ಷೆಗೆ ಓದೋಕೆ ಶುರುಮಾಡ್ಕೊಟ್ಟಿದೀಯೋ ಹೇಗೆ ? ಹೂಂ, ಅಂತೂ ಬಂದೆಯಲ್ಲ!” {{gap}}ಸೊಸೆ ಸ್ವಾಗತ ಬಯಸುತ್ತಿದ್ದುದು ಯಾರಿಗೆ ? ಆ ಮಟಮಟ ಮಧ್ಯಾಹ್ನ ದಲ್ಲಿ ಮನೆಗೆ ಬಂದವರು ಯಾರು ? ಎಂದು ತಿಳಿಯಲು, ಭಾಗೀರಥಮ್ಮ ಅಡುಗೆ ಮನೆಯಿಂದ ಹೊರಬಂದರು, ಒಗ್ಗರಣೆ ಕೊಡಲೆಂದು ಕೈಯಲ್ಲೆತ್ತಿದ್ದ ಸೌಟನ್ನು ಹಾಗೆಯೇ ಕೆಳಕ್ಕಿರಿಸಿ. {{gap}}ಬಂದಿದ್ದವಳು ವಿಶಾಲಾಕ್ಷಿ, {{gap}}ಅವಳನ್ನು, 'ನೀನಾ ?' ಎಂಬರ್ಥದಲ್ಲಿ ನಸುನಗುತ್ತ ನೋಡಿ ಅವರು ಒಳಹೋದರು. {{gap}}ಬಿಸಿಲಿನ ಬಳಲಿಕೆಯನ್ನು ನಿವಾಳಿಸಿ ತೆಗೆದು ಒಗೆಯುವವಳಂತೆ, ವಿಶಾಲಾಕ್ಷಿ ಉಶ್ !” ಎಂದಳು. {{gap}}ನಡುಮನೆಗೆ ಸೋಫಾಗಳು ಬಂದಿದ್ದುವು. ಗೆಳತಿಯನ್ನು ಕುಳಿತಿರ ಹೇಳಿ ನರ್ಮದಾ ಅಂದಳು : {{gap}}“ತಾಳು, ಫ್ಯಾನ್ ಹಾಡ್ತೀನಿ.” {{gap}}ಮೂಲೆಯಲ್ಲಿದ್ದ ವಿದ್ಯುತ್‌ ಬೀಸಣಿಗೆ ತನ್ನ ಪಂಜರದೊಳಗೆ ಗಿರಗಿರ ಎಂದು ತಿರುಗಿತು. {{gap}}[ಹಿಂದೆ ಆಗಿದ್ದರೆ ಸೋಫಾಗಳಿಗೆ ಸಂಬಂಧಿಸಿಯೇ ಮಾತು ಆರಂಭವಾಗು ಇತ್ತು. ನರ್ಮದೆಯೇ ಅನ್ನುತ್ತಿದ್ದಳು: 'ಹೊಸದು ಕಣೇ, ಒಂದು ಸೆಟ್ ಕೊಂಡುಕೊಂಡ್ತಿ, ಇಷ್ಟು ಬಿತ್ತು ಅಷ್ಟು ಬಿತ್ತು' ಅಂತ.]<noinclude></noinclude> i890kph16u0ol8pqitkqgq3u2iqtki5 322696 322691 2026-05-26T14:38:14Z Shreelatha.Halemane 7642 /* Validated */ 322696 proofread-page text/x-wiki <noinclude><pagequality level="4" user="Shreelatha.Halemane" /></noinclude>{{gap}}“ಬಾರೇ, ಬಾರೇ ! ಒಂದು ಯುಗವಾಯ್ತಲ್ಲೇ ನಿನ್ನನ್ನು ನೋಡಿ ! ಈಗಲೇ ಪರೀಕ್ಷೆಗೆ ಓದೋಕೆ ಶುರುಮಾಡ್ಕೊಟ್ಟಿದೀಯೋ ಹೇಗೆ ? ಹೂಂ, ಅಂತೂ ಬಂದೆಯಲ್ಲ!” {{gap}}ಸೊಸೆ ಸ್ವಾಗತ ಬಯಸುತ್ತಿದ್ದುದು ಯಾರಿಗೆ ? ಆ ಮಟಮಟ ಮಧ್ಯಾಹ್ನ ದಲ್ಲಿ ಮನೆಗೆ ಬಂದವರು ಯಾರು ? ಎಂದು ತಿಳಿಯಲು, ಭಾಗೀರಥಮ್ಮ ಅಡುಗೆ ಮನೆಯಿಂದ ಹೊರಬಂದರು, ಒಗ್ಗರಣೆ ಕೊಡಲೆಂದು ಕೈಯಲ್ಲೆತ್ತಿದ್ದ ಸೌಟನ್ನು ಹಾಗೆಯೇ ಕೆಳಕ್ಕಿರಿಸಿ. {{gap}}ಬಂದಿದ್ದವಳು ವಿಶಾಲಾಕ್ಷಿ, {{gap}}ಅವಳನ್ನು, 'ನೀನಾ ?' ಎಂಬರ್ಥದಲ್ಲಿ ನಸುನಗುತ್ತ ನೋಡಿ ಅವರು ಒಳಹೋದರು. {{gap}}ಬಿಸಿಲಿನ ಬಳಲಿಕೆಯನ್ನು ನಿವಾಳಿಸಿ ತೆಗೆದು ಒಗೆಯುವವಳಂತೆ, ವಿಶಾಲಾಕ್ಷಿ ಉಶ್ !” ಎಂದಳು. {{gap}}ನಡುಮನೆಗೆ ಸೋಫಾಗಳು ಬಂದಿದ್ದುವು. ಗೆಳತಿಯನ್ನು ಕುಳಿತಿರ ಹೇಳಿ ನರ್ಮದಾ ಅಂದಳು : {{gap}}“ತಾಳು, ಫ್ಯಾನ್ ಹಾಕ್ತೀನಿ” {{gap}}ಮೂಲೆಯಲ್ಲಿದ್ದ ವಿದ್ಯುತ್‌ ಬೀಸಣಿಗೆ ತನ್ನ ಪಂಜರದೊಳಗೆ ಗಿರಗಿರ ಎಂದು ತಿರುಗಿತು. {{gap}}[ಹಿಂದೆ ಆಗಿದ್ದರೆ ಸೋಫಾಗಳಿಗೆ ಸಂಬಂಧಿಸಿಯೇ ಮಾತು ಆರಂಭವಾಗು ಇತ್ತು. ನರ್ಮದೆಯೇ ಅನ್ನುತ್ತಿದ್ದಳು: 'ಹೊಸದು ಕಣೇ, ಒಂದು ಸೆಟ್ ಕೊಂಡುಕೊಂಡ್ವಿ, ಇಷ್ಟು ಬಿತ್ತು ಅಷ್ಟು ಬಿತ್ತು' ಅಂತ.]<noinclude></noinclude> ne9p38xki4rkvwe67jf3mqi0gah0w4t ಪುಟ:VISHAALAAKSHI - Niranjana.pdf/೨೯ 104 37865 322701 100024 2026-05-26T14:42:26Z Shreesha Sharma 7840 /* Proofread */ 322701 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೨೭}} ಸೋಫಾದ ಮೇಲೆ ಕುಳಿತುಕೊಳ್ಳುವುದು ವಿಶಾಲಾಕ್ಷಿಗೆ ಹೊಸ ಅನುಭವ ವೇನೂ ಅಲ್ಲ. ಆದರೂ, ತನ್ನ ಭಾಗಕ್ಕೆ ಆ ಮೆತ್ತನೆಯ ಆಸನ ಕೆಳಕ್ಕೆ ಕುಸಿ ದಂತಾಗಿ ಸಂಕೋಚವೆನಿಸುತ್ತಿತ್ತು. {{gap}}ಫ್ಯಾನ್ ಕೂಡಾ ಹೊಸದಾಗಿ ಬಂದಿತ್ತು. {{gap}}ಕಿಟಕಿ ಬಾಗಿಲುಗಳಿಗೆ ದಪ್ಪನೆಯ ಸೊಗಸಾದ ಹೊಸ ಅರಿವೆಗಳಿದ್ದುವು. {{gap}}ಇಷ್ಟನ್ನೆಲ್ಲ ನೋಡಿಯೂ ವಿಶಾಲಿ ಸುಮ್ಮನೆಯೇ ಇರುವಳಲ್ಲ – ಎಂದು ನರ್ಮದೆಗೆ ತುಸು ಕಸಿವಿಸಿ ಎನಿಸಿತು. {{gap}}ಮೌನ ನೆಲೆಸಿಬಿಟ್ಟಿತ್ತು ಅವರಿಬ್ಬರೂ ಕುಳಿತ ಮೇಲೆ. ಇದು ಗಮನಕ್ಕೆ ಬಿದ್ದಾಗ, ಚಕಿತಳಾಗಿ, ವಿಶಾಲಾಕ್ಷಿ ಅಂದಳು : {{gap}}“ಬಹಳ ಬದಲಾಯಿಸ್ಬಿಟ್ಟಿದೆ. ಎಲ್ಲಿಂದ ಕೊಂಡುಕೊಂಡೆಯೋ ಅದನ್ನ?” ಸೋಫಾಗಳನ್ನಲ್ಲ, ಫ್ಯಾನನ್ನಲ್ಲ, ಕಿಟಕಿ ಬಾಗಿಲುಗಳಿಗೆ ಹಾಕಿದ್ದ ಪರದೆಯನ್ನು. {{gap}}“ಮೊನ್ನೆ ಕೈಮಗ್ಗ ಸಪ್ತಾಹ ಆಯ್ತು ನೋಡು. ಆಗ ಏನೋ ಪ್ರದರ್ಶನ ಏರ್ಪಡಿಸಿದ್ದರಲ್ಲಾ ಅಲ್ಲಿಂದ. ಡಾಕ್ಟರೂ [ಅಂದರೆ, ಕೈಹಿಡಿದ ಶ್ರೀಕಾಂತ ನಾನೂ ಹೋಗಿದ್ವಿ.” {{gap}}ಪರದೆಗಳನ್ನು ನೋಡುತ್ತ, (ದೊರೆತರೆ ತಾನೂ ಕೊಳ್ಳಬಹುದೆಂದು ಯೋಚಿ ಸುತ್ತ ಸುಮ್ಮನಿದ್ದಳು ವಿಶಾಲಿ, {{gap}}ಇಷ್ಟೊಂದು ಸಂಯಮ ಅರ್ಥವಿಲ್ಲವೆಂದು ನರ್ಮದಾ ಕೇಳಿದಳು :\ {{gap}}“ಚೆನ್ನಾಗಿದೆಯಾ ?” {{gap}}“ತುಂಬಾ ಚೆನ್ನಾಗಿದೆ.” {{gap}}ಮುಂದಿನ ಮಾಹಿತಿ ಒದಗಿಸುವುದು ಅನಿವಾರ್ಯವಾಯಿತು ನರ್ಮದೆಗೆ {{gap}}“ಆದರೆ ಬೆಲೆ ಜಾಸ್ತಿ ಕಣೇ” {{gap}}“ಎಷ್ಟು ಬಿತ್ತು ?” [ಹೆಚ್ಚಿರಲಾರದು ಎಂಬ ಆಸೆ.] {{gap}}“ಗಜಕ್ಕೆ ಮೂರೂಮುಕ್ಕಾಲೋ ಏನೋ, ಇಷ್ಟಕ್ಕೇ ಮೂವತ್ತು ಚಿಲ್ಲರೆ `ಬಿತ್ತು. ಮಹಡಿ ಮೇಲ್ಗಡೆ ಬೇಡ ಅಂದ್ದಿಟ್ಟೆ.” {{gap}}ತನ್ನ ಕೊಠಡಿಗಳಿಗೆ ಬೇಡ ಅಂದುದು, ನರ್ಮದೆಯ ಪಾಲಿನ ತ್ಯಾಗ<noinclude></noinclude> muhu0i9tnjysnt9kp1uojwlvcc0rwcn 322702 322701 2026-05-26T14:45:56Z Shreelatha.Halemane 7642 /* Validated */ 322702 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೨೭}} {{gap}}ಸೋಫಾದ ಮೇಲೆ ಕುಳಿತುಕೊಳ್ಳುವುದು ವಿಶಾಲಾಕ್ಷಿಗೆ ಹೊಸ ಅನುಭವವೇನೂ ಅಲ್ಲ. ಆದರೂ, ತನ್ನ ಭಾರಕ್ಕೆ ಆ ಮೆತ್ತನೆಯ ಆಸನ ಕೆಳಕ್ಕೆ ಕುಸಿ ದಂತಾಗಿ ಸಂಕೋಚವೆನಿಸುತ್ತಿತ್ತು. {{gap}}ಫ್ಯಾನ್ ಕೂಡಾ ಹೊಸದಾಗಿ ಬಂದಿತ್ತು. {{gap}}ಕಿಟಕಿ ಬಾಗಿಲುಗಳಿಗೆ ದಪ್ಪನೆಯ ಸೊಗಸಾದ ಹೊಸ ಅರಿವೆಗಳಿದ್ದುವು. {{gap}}ಇಷ್ಟನ್ನೆಲ್ಲ ನೋಡಿಯೂ ವಿಶಾಲಿ ಸುಮ್ಮನೆಯೇ ಇರುವಳಲ್ಲ – ಎಂದು ನರ್ಮದೆಗೆ ತುಸು ಕಸಿವಿಸಿ ಎನಿಸಿತು. {{gap}}ಮೌನ ನೆಲೆಸಿಬಿಟ್ಟಿತ್ತು ಅವರಿಬ್ಬರೂ ಕುಳಿತ ಮೇಲೆ. ಇದು ಗಮನಕ್ಕೆ ಬಿದ್ದಾಗ,ಚಕಿತಳಾಗಿ, ವಿಶಾಲಾಕ್ಷಿ ಅಂದಳು : {{gap}}“ಬಹಳ ಬದಲಾಯಿಸ್ಬಿಟ್ಟಿದೆ. ಎಲ್ಲಿಂದ ಕೊಂಡುಕೊಂಡೆಯೋ ಅದನ್ನ?” {{gap}}ಸೋಫಾಗಳನ್ನಲ್ಲ, ಫ್ಯಾನನ್ನಲ್ಲ, ಕಿಟಕಿ ಬಾಗಿಲುಗಳಿಗೆ ಹಾಕಿದ್ದ ಪರದೆಯನ್ನು. {{gap}}“ಮೊನ್ನೆ ಕೈಮಗ್ಗ ಸಪ್ತಾಹ ಆಯ್ತು ನೋಡು. ಆಗ ಏನೋ ಪ್ರದರ್ಶನ ಏರ್ಪಡಿಸಿದ್ದರಲ್ಲಾ ಅಲ್ಲಿಂದ. ಡಾಕ್ಟರೂ [ಅಂದರೆ, ಕೈಹಿಡಿದ ಶ್ರೀಕಾಂತ ನಾನೂ ಹೋಗಿದ್ವಿ.” {{gap}}ಪರದೆಗಳನ್ನು ನೋಡುತ್ತ, (ದೊರೆತರೆ ತಾನೂ ಕೊಳ್ಳಬಹುದೆಂದು ಯೋಚಿ ಸುತ್ತ ಸುಮ್ಮನಿದ್ದಳು ವಿಶಾಲಿ, {{gap}}ಇಷ್ಟೊಂದು ಸಂಯಮ ಅರ್ಥವಿಲ್ಲವೆಂದು ನರ್ಮದಾ ಕೇಳಿದಳು {{gap}}“ಚೆನ್ನಾಗಿದೆಯಾ ?” {{gap}}“ತುಂಬಾ ಚೆನ್ನಾಗಿದೆ.” {{gap}}ಮುಂದಿನ ಮಾಹಿತಿ ಒದಗಿಸುವುದು ಅನಿವಾರ್ಯವಾಯಿತು ನರ್ಮದೆಗೆ {{gap}}“ಆದರೆ ಬೆಲೆ ಜಾಸ್ತಿ ಕಣೇ” {{gap}}“ಎಷ್ಟು ಬಿತ್ತು ?” {{gap}}[ಹೆಚ್ಚಿರಲಾರದು ಎಂಬ ಆಸೆ.] {{gap}}“ಗಜಕ್ಕೆ ಮೂರೂಮುಕ್ಕಾಲೋ ಏನೋ, ಇಷ್ಟಕ್ಕೇ ಮೂವತ್ತು ಚಿಲ್ಲರೆ ಬಿತ್ತು. ಮಹಡಿ ಮೇಲ್ಗಡೆ ಬೇಡ ಅಂದ್ದಿಟ್ಟೆ.” {{gap}}ತನ್ನ ಕೊಠಡಿಗಳಿಗೆ ಬೇಡ ಅಂದುದು, ನರ್ಮದೆಯ ಪಾಲಿನ ತ್ಯಾಗ<noinclude></noinclude> krmbfi321hqs8socaid6fgfoyuwjc4d ಪುಟ:VISHAALAAKSHI - Niranjana.pdf/೩೦ 104 37866 322704 100025 2026-05-26T14:51:26Z Shreesha Sharma 7840 /* Proofread */ 322704 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ |left=೨೮|right=}} ಆದರೆ, ವಿಶಾಲಾಕ್ಷಿ ಯೋಚಿಸುತ್ತಿದ್ದುದು ಬೇರೆಯೇ : “ದುಬಾರಿ ಬೆಲೆ. ತನ್ನ `ಮನೆಗೆ ಹೇಳಿಸಿದ್ದಲ್ಲ ಇದೆಲ್ಲ.” - {{gap}}ಆ ವಿಚಾರ ಅಲ್ಲಿಗೇ ಮುಗಿಯಿತೆಂದು, ಅವಳ ದೃಷ್ಟಿ ಮಗ್ಗುಲಲ್ಲಿದ್ದ ಕೊಠ ಡಿಯ ಕಡೆಗೆ ಹರಿಯಿತು. {{gap}}... “ಮುರಲಿ ಎಲ್ಲೇ ?” {{gap}}.ತಾಯ್ತನದ ಸೊಬಗು ಬೀರಿತು ನರ್ಮದಾ ಸೂಸಿದ ಮುಗುಳುನಗೆ. - {{gap}}“ಹಿತ್ತಿಲಲ್ಲಿರಬೇಕು.” {{gap}}“ಹಿತ್ತಿಲಲ್ಲಿ ? ಒಬ್ಬನೇ ?” - {{gap}}“ಮುರಲೀನ ನೋಡ್ಕೊಳ್ಳೋದಕ್ಕೋಸ್ಕರವೇ ಅಂತ ಒಬ್ಬಳು ಹುಡುಗೀನ ಗೊತ್ಮಾಡಿದೀವಿ.” - {{gap}}ಗೊತ್ಮಾಡಿದೀನಿ' ಅಲ್ಲ-'ಗೊತ್ಮಾಡಿದೀವಿ.'- .ಸಂಸಾರವೆಲ್ಲ ಒಂದು ಘಟಕ ಎನ್ನುವ ಹಾಗೆ ಬಹುವಚನ ಪ್ರಯೋಗ, {{gap}}ಸೋಫಾ, ಫ್ಯಾನ್, ಪರದೆಗಳಲ್ಲ: [ತನ್ನ ಸೀರೆಗಳೂ ಅಲ್ಲ;] ಎಲ್ಲರೂ ನೋಡಬೇಕಾದ - ನೋಡಿ ಮೆಚ್ಚಬೇಕಾದ – ಏಕಮಾತ್ರ ಅಮೂಲ್ಯ ಒಡವೆ ; ಆ ಮುರಲಿ. {{gap}}“ಸೀತಾ, ಮಗೂನ ಕರಕೊಂಡ್ವಾ....ಏ ಸೀತಾ, ಕೇಳಿಸ್ತೀನೇ ?” {{gap}}ಹೊರಗಿನಿಂದೊಂದು ಎಳೆಯ ಧ್ವನಿ ಬಂತು.: , {{gap}}“ಬಂದೆ ಅಮ್ಮಾವೇ...” {{gap}}ಚುರುಕಾಗಿದ್ದ ಹತ್ತರ ಹುಡುಗಿಯೊಬ್ಬಳು, ಕೆಂವಗಿನ ದುಂಡಗಿನ ಕೂಸನ್ನು ಹೊತ್ತು ತಂದಳು, ಬಾಹ್ಯ ಪ್ರಪಂಚದಿಂದ ಮನೆಯೊಳಕ್ಕೆ ಬಂದ ಪೋರ, ತಾಯಿಗೆ ಸುದ್ದಿ ಮುಟ್ಟಿಸಿದ {{gap}}“ಮ್ಯಾ-ಬಚ್ಚು-ಪೊಂಪೊಂ-ಭುರ್... {{gap}}” ಕಚಗುಳಿ ಇಟ್ಟಂತಾಗಿ ವಿಶಾಲಾಕ್ಷಿ ಸಂತಸದಿಂದ ಉದ್ಧರಿಸಿದಳು : - {{gap}}“ಅಯ್ಯೋ, ಎಷ್ಟು ಮುದ್ದಾಗಿ ಮಾತಾಡ್ತಾನೆ !? {{gap}}'ನೀನು ಉಟ್ಟಿರೋ ಸೀರೆ ನಿನಗೆ ಬಹಳ ಒಪ್ಪುತ್ತೆ' ಎಂದು ಹೇಳಿದ್ದರೂ ನರ್ಮದೆಗೆ ಅಷ್ಟು ಸಂತೋಷ ಖಂಡಿತವಾಗಿಯೂ ಆಗುತ್ತಿರಲಿಲ್ಲ. {{gap}}ಎಡಗೈಯಲ್ಲಿದ್ದ ಕಟ್ಟನ್ನು ಸೋಫಾದ ಮೇಲಿರಿಸಿ [ನರ್ಮದೆಯಾಗಲೆ<noinclude></noinclude> pktyfdxcb6uhdjeybrdm7eops7nae2q 322706 322704 2026-05-26T14:53:35Z Shreelatha.Halemane 7642 /* Validated */ 322706 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವಿಶಾಲಾಕ್ಷಿ |left=೨೮|right=}} ಆದರೆ, ವಿಶಾಲಾಕ್ಷಿ ಯೋಚಿಸುತ್ತಿದ್ದುದು ಬೇರೆಯೇ : “ದುಬಾರಿ ಬೆಲೆ. ತನ್ನ `ಮನೆಗೆ ಹೇಳಿಸಿದ್ದಲ್ಲ ಇದೆಲ್ಲ.” - {{gap}}ಆ ವಿಚಾರ ಅಲ್ಲಿಗೇ ಮುಗಿಯಿತೆಂದು, ಅವಳ ದೃಷ್ಟಿ ಮಗ್ಗುಲಲ್ಲಿದ್ದ ಕೊಠ ಡಿಯ ಕಡೆಗೆ ಹರಿಯಿತು. {{gap}}... “ಮುರಲಿ ಎಲ್ಲೇ ?” {{gap}}.ತಾಯ್ತನದ ಸೊಬಗು ಬೀರಿತು ನರ್ಮದಾ ಸೂಸಿದ ಮುಗುಳುನಗೆ. - {{gap}}“ಹಿತ್ತಿಲಲ್ಲಿರಬೇಕು.” {{gap}}“ಹಿತ್ತಿಲಲ್ಲಿ ? ಒಬ್ಬನೇ ?” - {{gap}}“ಮುರಲೀನ ನೋಡ್ಕೊಳ್ಳೋದಕ್ಕೋಸ್ಕರವೇ ಅಂತ ಒಬ್ಬಳು ಹುಡುಗೀನ ಗೊತ್ಮಾಡಿದೀವಿ.” - {{gap}}ಗೊತ್ಮಾಡಿದೀನಿ' ಅಲ್ಲ-'ಗೊತ್ಮಾಡಿದೀವಿ.'- .ಸಂಸಾರವೆಲ್ಲ ಒಂದು ಘಟಕ ಎನ್ನುವ ಹಾಗೆ ಬಹುವಚನ ಪ್ರಯೋಗ, {{gap}}ಸೋಫಾ, ಫ್ಯಾನ್, ಪರದೆಗಳಲ್ಲ: [ತನ್ನ ಸೀರೆಗಳೂ ಅಲ್ಲ;] ಎಲ್ಲರೂ ನೋಡಬೇಕಾದ - ನೋಡಿ ಮೆಚ್ಚಬೇಕಾದ – ಏಕಮಾತ್ರ ಅಮೂಲ್ಯ ಒಡವೆ ; ಆ ಮುರಲಿ. {{gap}}“ಸೀತಾ, ಮಗೂನ ಕರಕೊಂಡ್ ಬಾ....ಏ ಸೀತಾ, ಕೇಳಿಸ್ತೀನೇ ?” {{gap}}ಹೊರಗಿನಿಂದೊಂದು ಎಳೆಯ ಧ್ವನಿ ಬಂತು.: , {{gap}}“ಬಂದೆ ಅಮ್ಮಾವ್ರೇ...” {{gap}}ಚುರುಕಾಗಿದ್ದ ಹತ್ತರ ಹುಡುಗಿಯೊಬ್ಬಳು, ಕೆಂಪಗಿನ ದುಂಡಗಿನ ಕೂಸನ್ನು ಹೊತ್ತು ತಂದಳು, ಬಾಹ್ಯ ಪ್ರಪಂಚದಿಂದ ಮನೆಯೊಳಕ್ಕೆ ಬಂದ ಪೋರ, ತಾಯಿಗೆ ಸುದ್ದಿ ಮುಟ್ಟಿಸಿದ {{gap}}“ಮ್ಯಾ-ಬಚ್ಚು-ಪೊಂಪೊಂ-ಭುರ್... {{gap}}” ಕಚಗುಳಿ ಇಟ್ಟಂತಾಗಿ ವಿಶಾಲಾಕ್ಷಿ ಸಂತಸದಿಂದ ಉದ್ಧರಿಸಿದಳು : - {{gap}}“ಅಯ್ಯೋ, ಎಷ್ಟು ಮುದ್ದಾಗಿ ಮಾತಾಡ್ತಾನೆ !? {{gap}}'ನೀನು ಉಟ್ಟಿರೋ ಸೀರೆ ನಿನಗೆ ಬಹಳ ಒಪ್ಪುತ್ತೆ' ಎಂದು ಹೇಳಿದ್ದರೂ ನರ್ಮದೆಗೆ ಅಷ್ಟು ಸಂತೋಷ ಖಂಡಿತವಾಗಿಯೂ ಆಗುತ್ತಿರಲಿಲ್ಲ. {{gap}}ಎಡಗೈಯಲ್ಲಿದ್ದ ಕಟ್ಟನ್ನು ಸೋಫಾದ ಮೇಲಿರಿಸಿ [ನರ್ಮದೆಯಾಗಲೆ<noinclude></noinclude> 23w46s4t1u35y0gr7poxftd82rfarkc ಪುಟ:ಸಂತಾಪಕ.djvu/೬೮ 104 40295 322915 321907 2026-05-27T06:39:16Z Anzx-ooo 3060 322915 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಕರ್ಣಾಟಕ ಚಂದ್ರಿಕೆ.|left=೬೨|right=}} {{rule}} {{center|<big>ಉಪಸಂಹಾರ.</big>}} {{gap}}<big>ಪಾ</big>ಠಕಮಹಾಶಯರೇ! ಭುಜಂಗಮನು ಪಾದಹೀನನಾಗಿ ಕಿಂಶುಕಾಟವಿಯಲ್ಲಿ ಬಿದ್ದು ಕೆಲದಿವಸ ನರಳಿ ಸತ್ತುಹೋದನೆಂದು ನಮಗೆ ತಿಳಿಯಿತು.ಭುಜಂಗಮನೂ, ನಂದಕುಮಾರನೂ ಮೃತರಾದುದಕ್ಕಿಂತ ಪ್ರೀತಿಪಾತ್ರಳಾದಕಮಲಕುಮಾರಿಯು ಮೃತಳಾದ ವ್ಯಸನವು ಮಿತಿಮೀರಲು ಸಂತಾಪಕನಿಗೆಹುಚ್ಚು ಹಿಡಿಯಿತೆಂದೂ, ಆ ದುಃಖವನ್ನು ಸೈಸಲಾರದೆ ಅವನು ಪಾಟಿಲಕುಮಾರಿಯು ಕೊಟ್ಟಸರವನ್ನೇ ಕೊರಲಿಗೆ ಬಿಗಿದುಕೊಂಡು ಮೃತನಾದನೆಂದೂ ನಮ್ಮ ವಿಚಾರಣೆಯಿಂದ ತಿಳಿಯಿತು. ಕಮಲಾಕರದತ್ತನೂ,ವಿನಯಚಂದ್ರದತ್ತನೂ ಪುತ್ರೀಪುತ್ರರ ಮರಣದಿಂದ ವ್ಯಥಿತರಾಗಿ ನಿರುಪಮಾವಿಜಯವರ್ಮರನ್ನೇ ತಮ್ಮ ಮಕ್ಕಳೆಂದು ಭಾವಿಸಿ, ಅವರಿಗೆ ವಿವಾಹವನ್ನುಮಾಡಿ ತಂತಮ್ಮ ಆಸ್ತಿಯನ್ನು ಅವರಿಗೆ ಕೊಟ್ಟು ತಮ್ಮ ಜೀವಿತಕಾಲವನ್ನುಕಳಾಮಾಲಿನಿಯ ಆಶ್ರಮದಲ್ಲಿ ಕಳೆದರೆಂದೂ ತಿಳಿಯಿತು. ನಿರುಪಮಾವಿಜಯವರ್ಮರ ಮದುವೆಯ ಉಡುಗೆರೆಯು ಮಾತ್ರ ನಮಗೆ ಬರಲಿಲ್ಲ.ಇನ್ನೆಷ್ಟುದಿವಸ ತಾನೆ ಅದನ್ನು ನಿರೀಕ್ಷಿಸಲಾದೀತು? ಇಂದಲ್ಲದಿದ್ದರೆ ನಾಳೆಯಾದರೂ ಬಂದೇಬರುವುದು. ದಂಪತಿಗಳು ಚಿರಕಾಲಸೌಖ್ಯವಾಗಿರಲಿ. {{center|ಸಂಪೂರ್ಣ೦.}} {{center|{{bar}}}} {{center|'''ಬಿಕರಿಗೆ ಸಿದ್ಧವಾಗಿದೆ.'''}} ಚಂದ್ರಮತಿ - [ ಪರಿಷ್ಕೃತವಾದ ದ್ವಿತೀಯಮುದ್ರಣ. ]{{gap}}ಬೆಲೆ 8 ಆಣೆ.{{gap}}<small>ಮೈಸೂರು ಆಸ್ಥಾನ ವಿರ್ದ್ವಾ ನಂಜನಗೂಡು ಶ್ರೀಕಂಠಶಾಸ್ತ್ರಿಗಳವರಿಂದ ರಚಿತವಾದಎಲ್ಲಾ ಪುಸ್ತಕಗಳೂ ನಮ್ಮಲ್ಲಿ ದೊರೆಯುತ್ತವೆ. ಪಟ್ಟಿಗಾಗಿ ಮುಖಪತ್ರದ ಕಡೆಯ ಪುಟವನ್ನು ನೋಡಿ.</small> {{center|'''ವಿಳಾಸ:- ಎಂ. ಎಸ್. ರಾವ್ ಕಂಪೆನಿ,'''}} {{Right|ಪುಸ್ತಕ ವ್ಯಾಪಾರಿಗಳು,}} {{Right|ಅವೆನ್ಯೂ ರೋಡ್, ಬೆಂಗಳೂರು ಸಿಟಿ.}}<noinclude></noinclude> 6he8hhflanhepim9a5ohk9m4n8fn61z 322916 322915 2026-05-27T06:39:52Z Anzx-ooo 3060 322916 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಕರ್ಣಾಟಕ ಚಂದ್ರಿಕೆ.|left=೬೨|right=}} {{rule}} {{center|<big>ಉಪಸಂಹಾರ.</big>}} {{gap}}<big>ಪಾ</big>ಠಕಮಹಾಶಯರೇ! ಭುಜಂಗಮನು ಪಾದಹೀನನಾಗಿ ಕಿಂಶುಕಾಟವಿಯಲ್ಲಿ ಬಿದ್ದು ಕೆಲದಿವಸ ನರಳಿ ಸತ್ತುಹೋದನೆಂದು ನಮಗೆ ತಿಳಿಯಿತು.ಭುಜಂಗಮನೂ, ನಂದಕುಮಾರನೂ ಮೃತರಾದುದಕ್ಕಿಂತ ಪ್ರೀತಿಪಾತ್ರಳಾದಕಮಲಕುಮಾರಿಯು ಮೃತಳಾದ ವ್ಯಸನವು ಮಿತಿಮೀರಲು ಸಂತಾಪಕನಿಗೆಹುಚ್ಚು ಹಿಡಿಯಿತೆಂದೂ, ಆ ದುಃಖವನ್ನು ಸೈಸಲಾರದೆ ಅವನು ಪಾಟಿಲಕುಮಾರಿಯು ಕೊಟ್ಟಸರವನ್ನೇ ಕೊರಲಿಗೆ ಬಿಗಿದುಕೊಂಡು ಮೃತನಾದನೆಂದೂ ನಮ್ಮ ವಿಚಾರಣೆಯಿಂದ ತಿಳಿಯಿತು. ಕಮಲಾಕರದತ್ತನೂ, ವಿನಯಚಂದ್ರದತ್ತನೂ ಪುತ್ರೀಪುತ್ರರ ಮರಣದಿಂದ ವ್ಯಥಿತರಾಗಿ ನಿರುಪಮಾವಿಜಯವರ್ಮರನ್ನೇ ತಮ್ಮ ಮಕ್ಕಳೆಂದು ಭಾವಿಸಿ, ಅವರಿಗೆ ವಿವಾಹವನ್ನುಮಾಡಿ ತಂತಮ್ಮ ಆಸ್ತಿಯನ್ನು ಅವರಿಗೆ ಕೊಟ್ಟು ತಮ್ಮ ಜೀವಿತಕಾಲವನ್ನುಕಳಾಮಾಲಿನಿಯ ಆಶ್ರಮದಲ್ಲಿ ಕಳೆದರೆಂದೂ ತಿಳಿಯಿತು. ನಿರುಪಮಾವಿಜಯವರ್ಮರ ಮದುವೆಯ ಉಡುಗೆರೆಯು ಮಾತ್ರ ನಮಗೆ ಬರಲಿಲ್ಲ.ಇನ್ನೆಷ್ಟುದಿವಸ ತಾನೆ ಅದನ್ನು ನಿರೀಕ್ಷಿಸಲಾದೀತು? ಇಂದಲ್ಲದಿದ್ದರೆ ನಾಳೆಯಾದರೂ ಬಂದೇಬರುವುದು. ದಂಪತಿಗಳು ಚಿರಕಾಲಸೌಖ್ಯವಾಗಿರಲಿ. {{center|ಸಂಪೂರ್ಣ೦.}} {{center|{{bar}}}} {{center|'''ಬಿಕರಿಗೆ ಸಿದ್ಧವಾಗಿದೆ.'''}} ಚಂದ್ರಮತಿ - [ ಪರಿಷ್ಕೃತವಾದ ದ್ವಿತೀಯಮುದ್ರಣ. ]{{gap}}ಬೆಲೆ 8 ಆಣೆ.{{gap}}<small> ಮೈಸೂರು ಆಸ್ಥಾನ ವಿರ್ದ್ವಾ ನಂಜನಗೂಡು ಶ್ರೀಕಂಠಶಾಸ್ತ್ರಿಗಳವರಿಂದ ರಚಿತವಾದಎಲ್ಲಾ ಪುಸ್ತಕಗಳೂ ನಮ್ಮಲ್ಲಿ ದೊರೆಯುತ್ತವೆ. ಪಟ್ಟಿಗಾಗಿ ಮುಖಪತ್ರದ ಕಡೆಯ ಪುಟವನ್ನು ನೋಡಿ.</small> {{center|'''ವಿಳಾಸ:- ಎಂ. ಎಸ್. ರಾವ್ ಕಂಪೆನಿ,'''}} {{Right|ಪುಸ್ತಕ ವ್ಯಾಪಾರಿಗಳು,}} {{Right|ಅವೆನ್ಯೂ ರೋಡ್, ಬೆಂಗಳೂರು ಸಿಟಿ.}}<noinclude></noinclude> fj7z1zijrsvg8fqf5ggq79zhs9wddht ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೫೫ 104 66362 322942 204438 2026-05-27T09:02:12Z Pragathi. BH 7585 /* Validated */ 322942 proofread-page text/x-wiki <noinclude><pagequality level="4" user="Pragathi. BH" /></noinclude> -65- ಆ 11 ಆ ಕೃಷ್ಣಮಣಿಯ ಗೋಲಾಕಾರವು ಪ್ರಾಯದಿಂದ ಸ್ವಲ್ಪಮಟ್ಟಿಗೆ ಹೆಚ್ಚು ಕಡಿಮೆ ಆಗುತ್ತದೆ. ದೃಷ್ಟಿ ಮಂಡಲವು ಬೇಕಾದ ಹಾಗ ದೊಡ್ಡದು ಅಧವಾ ಸಣ್ಣದು ಆಗುತ್ತದೆ. ಕಣ್ಣುಮುಚ್ಚಿ ದಾಗ್ಗೆ ಗುಡ್ಡೆ ಸ್ವಲ್ಪ ಮೇಲಕ್ಕೂ ಒಳಕ್ಕೂ ತಿರುಗಿ ನಿಲ್ಲುತ್ತದೆ 140. ಮೂಗಿನ ಮುಚ್ಚಿಗೆಯ (ಬುಡದ ಮೇಲಿನ) 3ನೇ 1 ಅಂಶದಲ್ಲಿ ಎರಡು ಕಣ್ಣುಗಳ ನಡುವೆ ಮೆದುಳಿನ ಅಡಿಯಾಗಿರುವ ಎಲುಬಿನಲ್ಲಿರುವ ಅನೇಕವಾದ (ಸುಮಾರು 20) ಮೂಗು ರಂಧ್ರಗಳ ಮುಖವಾಗಿ ಮೆದುಳಿನಿಂದ ಹೊರಟುಬಂದ ನರಗಳು ಪಸರಿಸಿ ಇವೆ. ಮೂಗಿನ ಆ ಭಾಗದಲ್ಲೇ ವಾಸನೆಯ ಜ್ಞಾನ ಉಂಟಾಗುವಂಧಾದ್ದು. ಸಾಧಾರಣವಾಗಿ ಎಡದ ಸೊಳ್ಳೆಯು ಬಲದ ಸೊಳ್ಳೆಗಿಂತ ಸ್ವಲ್ಪ ಸಪೂರವಾಗಿರುತ್ತದೆ. ಈ ಸೊಳ್ಳೆಗಳ ಒಳಗಿನ ದ್ವಾರಗಳು ಬಾಯಿಯೊಳಗೆ ತಾಲುವಿನ ಹಿಂದಕಡೆ ಇರುತ್ತವೆ. ಪನ್ನೀರನ್ನು ಅಧವಾ ಬೇರೆ ಪರಿಮಳವುಳ್ಳ ದ್ರವವನ್ನು ಮೂಗಿನ ಸೊಳ್ಳೆಗಳೊಳಗೆ ತುಂಬಿಸಿದಾಗ್ಗೆ ಪರಿಮಳ ಜ್ಞಾನವಿರುವದಿಲ್ಲವಾದ್ದರಿಂದ ಒಕ್ಸಿಜನ್ ಎಂಬ ಪ್ರಾಣವಾಯುವು ಆ ಜ್ಞಾನಕ್ಕೆ ಅವಶ್ಯಕವೆಂತ ತಿಳಿಯುತ್ತಾರೆ. ಕಿವಿ 141. ಕಿವಿಯಲ್ಲಿ ಒಳಕಿವಿ, ಹೊರಕಿವಿ, ಮಧ್ಯಕಿವಿ, ಎಂಬ 3 ಭಾಗಗಳಿವೆ. ಹೊರ ಕಿವಿಯ ಸ್ರೋತಸ್ಸು (ಅಂದರೆ ತೂತು) ಸುಮಾರು 1¼ ಇಂಚು ಉದ್ದವಿದೆ. ಮಧ್ಯಕಿವಿಯಿಂದ ಎಲುಬು, ಮೃದು ಎಲುಬು ಮೊದಲಾದವುಗಳಿಂದ ಮಾಡಲ್ಪಟ್ಟ ಒಂದು ನಾಳವು ಹೊರಟು ಗಂಟಲಿಗೆ ಕೂಡಿಯದೆ. ಈ ನಾಳದೊಳಗೆ ಬಾಯಿಯಿಂದ ಗಾಳಿಯು ಮಧ್ಯ ಕಿವಿ ಕಿವಿಗೆ ಹೋಗುತ್ತದೆ ನುಂಗುವ ಕಾಲದಲ್ಲಿ ‌ ಬಾಯಿಯಲ್ಲಿರುವ ಈ ನಾಳದ ದ್ವಾರವು ತೆರೆಯುತ್ತದೆ. ಇದು ಸುಮಾರು 1½ ಇಂಚು ಉದ್ದವಿದೆ. ಹೊರ ಕಿವಿಗೂ ಮಧ್ಯಕಿವಿಗೂ ಇರುವ ಒಂದೇ ದ್ವಾರವು ಪರದೆ ಹಾಗಿನ ಒಂದು ತೆಳ್ಳಗಿನ ಸ್ವಚ್ಛ ಪರೆಯಿಂದ ಮುಚ್ಚಲ್ಪಟ್ಟದೆ ಈ ಮುಚ್ಚಳವಿಲ್ಲದಿದ್ದರೆ, ಕಿವಿಗೆ ಹೊಕ್ಕ ಗಾಳಿ ಮುಂತಾದ್ದು ಬಾಯಿಗೆ ಬರುತ್ತಿತ್ತು. ಮಧ್ಯಕಿವಿಗೂ ಒಳಕಿವಿಗೂ ಮಧ್ಯ ಇರುವ 2 ರಂಧ್ರಗಳು ಸಹ ಪರೆಗಳಿಂದ ಮುಚ್ಚಲ್ಪಟ್ಟವೆ. ಮಧ್ಯಕಿವಿ, ಒಳಕಿವಿ ಸಹ ಕಪಾಲದ ಭಾಗ ವಾದ ಕೆನ್ನೆಲುಬಿನೊಳಗೆ ಇರುತ್ತವೆ. ಮಧ್ಯದ ಕಿವಿಯೊಳಗೆ ಮೂರು ಸೂಕ್ಷ್ಮವಾದ ಎಲುಬುಗಳಿಂದ ಕೂಡಿದ ಅಲಗಾಡುವ ಒಂದು ಸರಪಣಿಯ ಹಾಗಿನದು ಹೊರಕಿವಿಯ ಒಳ ಗಿನ ಅಂತ್ಯದ ಪರೆಯಿಂದ ಒಳಕಿವಿಗೆ ಕೂಡಿರುತ್ತದೆ. ಒಳಕಿವಿಯು ಕೇಳುವಿಕೆಗೆ ಮುಖ್ಯ ವಾದ ಅಂಗವಾಗಿ, ವರ್ಣಿಸಲಿಕ್ಕೆ ಕಷ್ಟವಾದ ಆಕಾರವುಳ್ಳದ್ದಾಗಿದೆ. ಶಬ್ದಜ್ಞಾನಕ್ಕೆ ಕಾರಣ ವಾದ ಮೆದುಳಿನ ನರವು ಈ ಒಳಕಿವಿಯಲ್ಲಿ ವಿಸ್ತರಿಸಿಯದೆ. ಈ ಒಳಕಿವಿಯ ಮಧ್ಯ ಇರುವ ಅನೇಕವಾದ ಅರೆಗಳಲ್ಲಿ ಒಂದು ಅಂಟಾಗಿರುವ ದ್ರವಪದಾರ್ಧವಿದೆ. ಶಬ್ದಕ್ಕೆ ಹೇತು ವಾಯುವಿನ ತೆರೆಗಳು ಈ ತೆರೆಗಳು ಮಧ್ಯಕಿವಿಯ ಪರೆಗೆ ಬಡಿಯುವದರಿಂದ ಅದು ಅದರುತ್ತದೆ. ಈ ಚಲನೆಯು ಮಧ್ಯಕಿವಿಯ ಅಲಗಾಡುವ 3 ಎಲುಬುಗಳ ಪರಿಮುಖವಾಗಿ ಒಳಕಿವಿಯ ದ್ವಾರಕ್ಕೆ ತಗಲಿ, ಅಲ್ಲಿಂದ ಅದನ್ನು ಶ್ರೋತ್ರ ನರವು ಮೆದುಳಿಗೆ ಒಯ್ಯುತ್ತದೆ. ಗಾಳಿಯಲ್ಲಿ ಶಬ್ದವು ಒಂದು ಸೆಕುಂದಿಗೆ 1100 ಅಡಿ ಪ್ರಕಾರ ಸಂಚಾರಮಾಡುತ್ತದೆ.<noinclude></noinclude> h0q5tsu6v2co7d2rw9z4dm3u6cei44j 322943 322942 2026-05-27T09:06:14Z Pragathi. BH 7585 322943 proofread-page text/x-wiki <noinclude><pagequality level="4" user="Pragathi. BH" />{{rh|center=-65-|left=|right=ಆ ||}}</noinclude> ಆ ಕೃಷ್ಣಮಣಿಯ ಗೋಲಾಕಾರವು ಪ್ರಾಯದಿಂದ ಸ್ವಲ್ಪಮಟ್ಟಿಗೆ ಹೆಚ್ಚು ಕಡಿಮೆ ಆಗುತ್ತದೆ. ದೃಷ್ಟಿ ಮಂಡಲವು ಬೇಕಾದ ಹಾಗ ದೊಡ್ಡದು ಅಧವಾ ಸಣ್ಣದು ಆಗುತ್ತದೆ. ಕಣ್ಣುಮುಚ್ಚಿ ದಾಗ್ಗೆ ಗುಡ್ಡೆ ಸ್ವಲ್ಪ ಮೇಲಕ್ಕೂ ಒಳಕ್ಕೂ ತಿರುಗಿ ನಿಲ್ಲುತ್ತದೆ {{gap}}140. ಮೂಗಿನ ಮುಚ್ಚಿಗೆಯ (ಬುಡದ ಮೇಲಿನ) 3ನೇ 1 ಅಂಶದಲ್ಲಿ ಎರಡು ಕಣ್ಣುಗಳ ನಡುವೆ ಮೆದುಳಿನ ಅಡಿಯಾಗಿರುವ ಎಲುಬಿನಲ್ಲಿರುವ ಅನೇಕವಾದ (ಸುಮಾರು 20) ಮೂಗು ರಂಧ್ರಗಳ ಮುಖವಾಗಿ ಮೆದುಳಿನಿಂದ ಹೊರಟುಬಂದ ನರಗಳು ಪಸರಿಸಿ ಇವೆ. ಮೂಗಿನ ಆ ಭಾಗದಲ್ಲೇ ವಾಸನೆಯ ಜ್ಞಾನ ಉಂಟಾಗುವಂಧಾದ್ದು. ಸಾಧಾರಣವಾಗಿ ಎಡದ ಸೊಳ್ಳೆಯು ಬಲದ ಸೊಳ್ಳೆಗಿಂತ ಸ್ವಲ್ಪ ಸಪೂರವಾಗಿರುತ್ತದೆ. ಈ ಸೊಳ್ಳೆಗಳ ಒಳಗಿನ ದ್ವಾರಗಳು ಬಾಯಿಯೊಳಗೆ ತಾಲುವಿನ ಹಿಂದಕಡೆ ಇರುತ್ತವೆ. ಪನ್ನೀರನ್ನು ಅಧವಾ ಬೇರೆ ಪರಿಮಳವುಳ್ಳ ದ್ರವವನ್ನು ಮೂಗಿನ ಸೊಳ್ಳೆಗಳೊಳಗೆ ತುಂಬಿಸಿದಾಗ್ಗೆ ಪರಿಮಳ ಜ್ಞಾನವಿರುವದಿಲ್ಲವಾದ್ದರಿಂದ ಒಕ್ಸಿಜನ್ ಎಂಬ ಪ್ರಾಣವಾಯುವು ಆ ಜ್ಞಾನಕ್ಕೆ ಅವಶ್ಯಕವೆಂತ ತಿಳಿಯುತ್ತಾರೆ. {{gap}}141. ಕಿವಿಯಲ್ಲಿ ಒಳಕಿವಿ, ಹೊರಕಿವಿ, ಮಧ್ಯಕಿವಿ, ಎಂಬ 3 ಭಾಗಗಳಿವೆ. ಹೊರ ಕಿವಿಯ ಸ್ರೋತಸ್ಸು (ಅಂದರೆ ತೂತು) ಸುಮಾರು 1¼ ಇಂಚು ಉದ್ದವಿದೆ. ಮಧ್ಯಕಿವಿಯಿಂದ ಎಲುಬು, ಮೃದು ಎಲುಬು ಮೊದಲಾದವುಗಳಿಂದ ಮಾಡಲ್ಪಟ್ಟ ಒಂದು ನಾಳವು ಹೊರಟು ಗಂಟಲಿಗೆ ಕೂಡಿಯದೆ. ಈ ನಾಳದೊಳಗೆ ಬಾಯಿಯಿಂದ ಗಾಳಿಯು ಮಧ್ಯ ಕಿವಿ ಕಿವಿಗೆ ಹೋಗುತ್ತದೆ ನುಂಗುವ ಕಾಲದಲ್ಲಿ ‌ ಬಾಯಿಯಲ್ಲಿರುವ ಈ ನಾಳದ ದ್ವಾರವು ತೆರೆಯುತ್ತದೆ. ಇದು ಸುಮಾರು 1½ ಇಂಚು ಉದ್ದವಿದೆ. ಹೊರ ಕಿವಿಗೂ ಮಧ್ಯಕಿವಿಗೂ ಇರುವ ಒಂದೇ ದ್ವಾರವು ಪರದೆ ಹಾಗಿನ ಒಂದು ತೆಳ್ಳಗಿನ ಸ್ವಚ್ಛ ಪರೆಯಿಂದ ಮುಚ್ಚಲ್ಪಟ್ಟದೆ ಈ ಮುಚ್ಚಳವಿಲ್ಲದಿದ್ದರೆ, ಕಿವಿಗೆ ಹೊಕ್ಕ ಗಾಳಿ ಮುಂತಾದ್ದು ಬಾಯಿಗೆ ಬರುತ್ತಿತ್ತು. ಮಧ್ಯಕಿವಿಗೂ ಒಳಕಿವಿಗೂ ಮಧ್ಯ ಇರುವ 2 ರಂಧ್ರಗಳು ಸಹ ಪರೆಗಳಿಂದ ಮುಚ್ಚಲ್ಪಟ್ಟವೆ. ಮಧ್ಯಕಿವಿ, ಒಳಕಿವಿ ಸಹ ಕಪಾಲದ ಭಾಗ ವಾದ ಕೆನ್ನೆಲುಬಿನೊಳಗೆ ಇರುತ್ತವೆ. ಮಧ್ಯದ ಕಿವಿಯೊಳಗೆ ಮೂರು ಸೂಕ್ಷ್ಮವಾದ ಎಲುಬುಗಳಿಂದ ಕೂಡಿದ ಅಲಗಾಡುವ ಒಂದು ಸರಪಣಿಯ ಹಾಗಿನದು ಹೊರಕಿವಿಯ ಒಳ ಗಿನ ಅಂತ್ಯದ ಪರೆಯಿಂದ ಒಳಕಿವಿಗೆ ಕೂಡಿರುತ್ತದೆ. ಒಳಕಿವಿಯು ಕೇಳುವಿಕೆಗೆ ಮುಖ್ಯ ವಾದ ಅಂಗವಾಗಿ, ವರ್ಣಿಸಲಿಕ್ಕೆ ಕಷ್ಟವಾದ ಆಕಾರವುಳ್ಳದ್ದಾಗಿದೆ. ಶಬ್ದಜ್ಞಾನಕ್ಕೆ ಕಾರಣ ವಾದ ಮೆದುಳಿನ ನರವು ಈ ಒಳಕಿವಿಯಲ್ಲಿ ವಿಸ್ತರಿಸಿಯದೆ. ಈ ಒಳಕಿವಿಯ ಮಧ್ಯ ಇರುವ ಅನೇಕವಾದ ಅರೆಗಳಲ್ಲಿ ಒಂದು ಅಂಟಾಗಿರುವ ದ್ರವಪದಾರ್ಧವಿದೆ. ಶಬ್ದಕ್ಕೆ ಹೇತು ವಾಯುವಿನ ತೆರೆಗಳು ಈ ತೆರೆಗಳು ಮಧ್ಯಕಿವಿಯ ಪರೆಗೆ ಬಡಿಯುವದರಿಂದ ಅದು ಅದರುತ್ತದೆ. ಈ ಚಲನೆಯು ಮಧ್ಯಕಿವಿಯ ಅಲಗಾಡುವ 3 ಎಲುಬುಗಳ ಪರಿಮುಖವಾಗಿ ಒಳಕಿವಿಯ ದ್ವಾರಕ್ಕೆ ತಗಲಿ, ಅಲ್ಲಿಂದ ಅದನ್ನು ಶ್ರೋತ್ರ ನರವು ಮೆದುಳಿಗೆ ಒಯ್ಯುತ್ತದೆ. ಗಾಳಿಯಲ್ಲಿ ಶಬ್ದವು ಒಂದು ಸೆಕುಂದಿಗೆ 1100 ಅಡಿ ಪ್ರಕಾರ ಸಂಚಾರಮಾಡುತ್ತದೆ.<noinclude></noinclude> 8jyozdpthq82uavwlvhmauro5bkn9fn 322944 322943 2026-05-27T09:06:31Z Pragathi. BH 7585 322944 proofread-page text/x-wiki <noinclude><pagequality level="4" user="Pragathi. BH" />{{rh|center=-65-|left=|right=ಆ ||}}</noinclude> ಆ ಕೃಷ್ಣಮಣಿಯ ಗೋಲಾಕಾರವು ಪ್ರಾಯದಿಂದ ಸ್ವಲ್ಪಮಟ್ಟಿಗೆ ಹೆಚ್ಚು ಕಡಿಮೆ ಆಗುತ್ತದೆ. ದೃಷ್ಟಿ ಮಂಡಲವು ಬೇಕಾದ ಹಾಗ ದೊಡ್ಡದು ಅಧವಾ ಸಣ್ಣದು ಆಗುತ್ತದೆ. ಕಣ್ಣುಮುಚ್ಚಿ ದಾಗ್ಗೆ ಗುಡ್ಡೆ ಸ್ವಲ್ಪ ಮೇಲಕ್ಕೂ ಒಳಕ್ಕೂ ತಿರುಗಿ ನಿಲ್ಲುತ್ತದೆ {{gap}}140. ಮೂಗಿನ ಮುಚ್ಚಿಗೆಯ (ಬುಡದ ಮೇಲಿನ) 3ನೇ 1 ಅಂಶದಲ್ಲಿ ಎರಡು ಕಣ್ಣುಗಳ ನಡುವೆ ಮೆದುಳಿನ ಅಡಿಯಾಗಿರುವ ಎಲುಬಿನಲ್ಲಿರುವ ಅನೇಕವಾದ (ಸುಮಾರು 20) ಮೂಗು ರಂಧ್ರಗಳ ಮುಖವಾಗಿ ಮೆದುಳಿನಿಂದ ಹೊರಟುಬಂದ ನರಗಳು ಪಸರಿಸಿ ಇವೆ. ಮೂಗಿನ ಆ ಭಾಗದಲ್ಲೇ ವಾಸನೆಯ ಜ್ಞಾನ ಉಂಟಾಗುವಂಧಾದ್ದು. ಸಾಧಾರಣವಾಗಿ ಎಡದ ಸೊಳ್ಳೆಯು ಬಲದ ಸೊಳ್ಳೆಗಿಂತ ಸ್ವಲ್ಪ ಸಪೂರವಾಗಿರುತ್ತದೆ. ಈ ಸೊಳ್ಳೆಗಳ ಒಳಗಿನ ದ್ವಾರಗಳು ಬಾಯಿಯೊಳಗೆ ತಾಲುವಿನ ಹಿಂದಕಡೆ ಇರುತ್ತವೆ. ಪನ್ನೀರನ್ನು ಅಧವಾ ಬೇರೆ ಪರಿಮಳವುಳ್ಳ ದ್ರವವನ್ನು ಮೂಗಿನ ಸೊಳ್ಳೆಗಳೊಳಗೆ ತುಂಬಿಸಿದಾಗ್ಗೆ ಪರಿಮಳ ಜ್ಞಾನವಿರುವದಿಲ್ಲವಾದ್ದರಿಂದ ಒಕ್ಸಿಜನ್ ಎಂಬ ಪ್ರಾಣವಾಯುವು ಆ ಜ್ಞಾನಕ್ಕೆ ಅವಶ್ಯಕವೆಂತ ತಿಳಿಯುತ್ತಾರೆ. {{gap}}141. ಕಿವಿಯಲ್ಲಿ ಒಳಕಿವಿ, ಹೊರಕಿವಿ, ಮಧ್ಯಕಿವಿ, ಎಂಬ 3 ಭಾಗಗಳಿವೆ. ಹೊರ ಕಿವಿಯ ಸ್ರೋತಸ್ಸು (ಅಂದರೆ ತೂತು) ಸುಮಾರು 1¼ ಇಂಚು ಉದ್ದವಿದೆ. ಮಧ್ಯಕಿವಿಯಿಂದ ಎಲುಬು, ಮೃದು ಎಲುಬು ಮೊದಲಾದವುಗಳಿಂದ ಮಾಡಲ್ಪಟ್ಟ ಒಂದು ನಾಳವು ಹೊರಟು ಗಂಟಲಿಗೆ ಕೂಡಿಯದೆ. ಈ ನಾಳದೊಳಗೆ ಬಾಯಿಯಿಂದ ಗಾಳಿಯು ಮಧ್ಯ ಕಿವಿ ಕಿವಿಗೆ ಹೋಗುತ್ತದೆ ನುಂಗುವ ಕಾಲದಲ್ಲಿ ‌ ಬಾಯಿಯಲ್ಲಿರುವ ಈ ನಾಳದ ದ್ವಾರವು ತೆರೆಯುತ್ತದೆ. ಇದು ಸುಮಾರು 1½ ಇಂಚು ಉದ್ದವಿದೆ. ಹೊರ ಕಿವಿಗೂ ಮಧ್ಯಕಿವಿಗೂ ಇರುವ ಒಂದೇ ದ್ವಾರವು ಪರದೆ ಹಾಗಿನ ಒಂದು ತೆಳ್ಳಗಿನ ಸ್ವಚ್ಛ ಪರೆಯಿಂದ ಮುಚ್ಚಲ್ಪಟ್ಟದೆ ಈ ಮುಚ್ಚಳವಿಲ್ಲದಿದ್ದರೆ, ಕಿವಿಗೆ ಹೊಕ್ಕ ಗಾಳಿ ಮುಂತಾದ್ದು ಬಾಯಿಗೆ ಬರುತ್ತಿತ್ತು. ಮಧ್ಯಕಿವಿಗೂ ಒಳಕಿವಿಗೂ ಮಧ್ಯ ಇರುವ 2 ರಂಧ್ರಗಳು ಸಹ ಪರೆಗಳಿಂದ ಮುಚ್ಚಲ್ಪಟ್ಟವೆ. ಮಧ್ಯಕಿವಿ, ಒಳಕಿವಿ ಸಹ ಕಪಾಲದ ಭಾಗ ವಾದ ಕೆನ್ನೆಲುಬಿನೊಳಗೆ ಇರುತ್ತವೆ. ಮಧ್ಯದ ಕಿವಿಯೊಳಗೆ ಮೂರು ಸೂಕ್ಷ್ಮವಾದ ಎಲುಬುಗಳಿಂದ ಕೂಡಿದ ಅಲಗಾಡುವ ಒಂದು ಸರಪಣಿಯ ಹಾಗಿನದು ಹೊರಕಿವಿಯ ಒಳ ಗಿನ ಅಂತ್ಯದ ಪರೆಯಿಂದ ಒಳಕಿವಿಗೆ ಕೂಡಿರುತ್ತದೆ. ಒಳಕಿವಿಯು ಕೇಳುವಿಕೆಗೆ ಮುಖ್ಯ ವಾದ ಅಂಗವಾಗಿ, ವರ್ಣಿಸಲಿಕ್ಕೆ ಕಷ್ಟವಾದ ಆಕಾರವುಳ್ಳದ್ದಾಗಿದೆ. ಶಬ್ದಜ್ಞಾನಕ್ಕೆ ಕಾರಣ ವಾದ ಮೆದುಳಿನ ನರವು ಈ ಒಳಕಿವಿಯಲ್ಲಿ ವಿಸ್ತರಿಸಿಯದೆ. ಈ ಒಳಕಿವಿಯ ಮಧ್ಯ ಇರುವ ಅನೇಕವಾದ ಅರೆಗಳಲ್ಲಿ ಒಂದು ಅಂಟಾಗಿರುವ ದ್ರವಪದಾರ್ಧವಿದೆ. ಶಬ್ದಕ್ಕೆ ಹೇತು ವಾಯುವಿನ ತೆರೆಗಳು ಈ ತೆರೆಗಳು ಮಧ್ಯಕಿವಿಯ ಪರೆಗೆ ಬಡಿಯುವದರಿಂದ ಅದು ಅದರುತ್ತದೆ. ಈ ಚಲನೆಯು ಮಧ್ಯಕಿವಿಯ ಅಲಗಾಡುವ 3 ಎಲುಬುಗಳ ಪರಿಮುಖವಾಗಿ ಒಳಕಿವಿಯ ದ್ವಾರಕ್ಕೆ ತಗಲಿ, ಅಲ್ಲಿಂದ ಅದನ್ನು ಶ್ರೋತ್ರ ನರವು ಮೆದುಳಿಗೆ ಒಯ್ಯುತ್ತದೆ. ಗಾಳಿಯಲ್ಲಿ ಶಬ್ದವು ಒಂದು ಸೆಕುಂದಿಗೆ 1100 ಅಡಿ ಪ್ರಕಾರ ಸಂಚಾರಮಾಡುತ್ತದೆ.<noinclude></noinclude> 69b6s4ju1ie7qm3572zyud50f1x444s ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೫೬ 104 66363 322945 204439 2026-05-27T09:06:41Z Pragathi. BH 7585 /* Validated */ 322945 proofread-page text/x-wiki <noinclude><pagequality level="4" user="Pragathi. BH" /></noinclude>ಆ 11 - 66 - ವಾಯುವಿನ ತೆರೆಗಳು 1 ಸೆಕುಂದಿಗೆ 30ಕ್ಕೂ ಕಡಿಮೆಯಾಗಿ ಬಂದರೆ, ಆ ಸ್ವರವು ಮನುಷ್ಯರಿಗೆ ಕೇಳದು. ತಾರಕದಲ್ಲಿ ಸೆಕುಂದಿಗೆ 30,000 ತೆರೆಗಳಂತೆ ಬರುವದರಿಂದ, ಉಂಟಾದ ಶಬ್ದವನ್ನು ಕೂಡ ಕೇಳಲಿಕ್ಕೆ ಸಾಮಧ್ಯವುಳ್ಳವರು ಕೆಲವರು ಇದ್ದರೂ, ಅದಕ್ಕಿಂತ ಬಹು ತಗ್ಗಿನ ಸ್ವರವಾದ ಬಾವಲಿಯ ಕೂಗನ್ನು, ಅಥವಾ ಇಲಿಯ ಕಿರಿಕಿರಿಯನ್ನು ಸಹ ಕೇಳಲಿಕ್ಕೆ ಕೂಡದವರೂ ಇರುವದುಂಟು. 142. ಬಾಲ್ಯದಲ್ಲಿ 6 ತಿಂಗಳನಂತರ 2½ ವರ್ಷಗಳ ಒಳಗೆ 20 ಹಲ್ಲುಗಳು ಬರುತ್ತವೆ. ಈ ಹಂಗಾಮಿ ಹಲ್ಲುಗಳು 6 ವರ್ಷ ಪ್ರಾಯದನಂತರ 13ನೇ ವರ್ಷದೊಳಗೆ ಬಿದ್ದು ಹೋಗಿ, ಅವುಗಳ ಸ್ಥಾನದಲ್ಲಿ ಹೊಸ ಹಲ್ಲುಗಳು ಬರುತ್ತವೆ. ಅನಂತರ ಬೇರೆ 12 ಹಲ್ಲುಗಳು ಹುಟ್ಟಿ, 21ನೇ ವರ್ಷ ಪ್ರಾಯದೊಳಗೆ 32 ಹಲ್ಲುಗಳು ಭರ್ತಿಯಾಗುತ್ತವೆ. ಪ್ರತಿ ಸಾಲಿನ 16ರಲ್ಲಿ ಎಡಬಲಗಳಲ್ಲಿ ಎಂಟೆಂಟು ಯಧಾಕ್ರಮವಾಗಿ ಒಂದಕ್ಕೊಂದು ಹಬ್ಬಗಳು ಸದೃಶವಾಗಿವೆ ಪ್ರತಿ ಹಲ್ಲಿಗೆ ತಲೆ, ಕುತ್ತಿಗೆ ಮತ್ತು ಬೇರು, ಎಂಬ 3 ಭಾಗಗಳು ಇವೆ. ಸಿಜಿಯ (ವಸಡಿನ) ಮೇಲಿನ ಭಾಗ, ತಲೆ, ಅದಕ್ಕೆ ಎನೇಮಲ್ ಎಂಬ ಗಟ್ಟಿ ಅಂಟಿನ ಕವಚವಿದೆ. ನಿಚಿಯಲ್ಲಿ ಅಡಗಿರುವ ಭಾಗವು ಕುತ್ತಿಗೆ ಬೇರು ಅಧವಾ ಬೇರುಗಳು ದವಡೆ ಎಲುಬಿನಲ್ಲಿರುವ ಗುಣಿಗಳಲ್ಲಿ ಹುಗಿದಿರುತ್ತವೆ ಹಲ್ಲು ಬೇರೆ ಎಲುಬುಗಳಿಗಿಂತ ಗಟ್ಟಿಯಾಗಿರುತ್ತದೆ. ಅದರೊಳಗಿನ ತಿರುಳಿನಲ್ಲಿ ಸೂಕ್ಷ್ಮವಾದ ರಕ್ತಸಿರೆಗಳು ಮತ್ತು ನರಗಳು ತುಂಬಿರುವವು. _143, ನಾಲಿಗೆಯು ಮುಖ್ಯವಾಗಿ ಎರಡು ಸರಿಸಮವಾದ ಮಾಂಸದ ಸಂಯೋಗದಿಂದ ರಚಿತವಾಗಿ, ಎರಡು ಪರೆಗಳಿಂದ ಹೊದಿಸಲ್ಪಟ್ಟ ಅಂಗವಾಗಿದೆ. ಅದು ಉಚ್ಚಾರಕ್ಕೂ, ಅಗಿಯುವದಕ್ಕೂ, ನುಂಗುವದಕ್ಕೂ ಮುಖ್ಯ ಸಹಾಯ ಮಾಡುತ್ತದೆ. ಅದರ ಮೇಲಿನ ಕಫಯುಕ್ತವಾದ ಹೊದಿಕೆಯಲ್ಲಿ ರುಚಿಗೆ ಕಾರಣವಾದ ಸೂಕ್ಷ್ಮವಾದ ಮೊನೆಗಳು (ನಾಲಿಗೆಯ ಮುಳ್ಳು) ಇವ. ಮತ್ತು ಆ ಹೊದಿಕೆಯ ಅಡಿಯಲ್ಲಿ ಎಂಜಲಿನ ಚಿಕ್ಕ ಗ್ರಂಧಿಗಳು ಇವೆ. ಬಾಯಿಯಲ್ಲಿ ಬರತಕ್ಕ ರಸಗಳಿಗೆ ಮೂಲವಾದ ಗ್ರಂಧಿಗಳು ಮುಖ್ಯವಾಗಿ ನಾಲಿಗೆಯ ಹಿಂಬದಿಯಲ್ಲಿಯೂ ಬದಿಗಳಲ್ಲಿಯೂ, ನಾಲಿಗೆ ತುದಿಯಲ್ಲಿಯೂ , ತುದಿಯ ಬುಡದ ಎರಡು ಪಕ್ಕಗಳಲ್ಲಿಯೂ ವಿಸ್ತರಿಸಿವೆ. ಇವಲ್ಲದೆ ಪ್ರತಿ ಕಿವಿಯ ಎದುರು ಒಂದೊಂದರಂತೆ ಎರಡು, ಕೆಳಗಿನ ದವಡೆಯ ಅಡಿ ಇತ್ತಟ್ಟು ಒಂದೊಂದರಂತೆ ಎರಡು, ನಾಲಿಗೆಯ ಅಡಿಯಲ್ಲಿ ಒಂದು ಜೋಡು, ಹೀಗೆ ಆರು ದೊಡ್ಡ ಗ್ರಂಧಿಗಳು ಸಹ ಬಾಯಿಯಲ್ಲಿ ಬರುವ ರಸ ಅಧವಾ ಎಂಜಲಿಗೆ ತಮ್ಮ ರಸವನ್ನು ಚಿಕ್ಕನಾಳಗಳ ದ್ವಾರಾ ಕಳುಹಿಸುತ್ತವೆ. ರುಚಿಜ್ಞಾನಕ್ಕೆ ವಸ್ತುವು ಒದ್ದೆ ಯಾಗಿರುವದು ಅಗತ್ಯ; ಆ ಕೆಲಸವನ್ನು ಎಂಜಲು ಮಾಡುತ್ತದೆ; ಮತ್ತು ಹಿಟ್ಟು ಮುಂತಾದವುಗಳ ಜೀರ್ಣಕ್ಕೆ ಎಂಜಲು ಬಹಳ ಉಪ ಯೋಗಕರವಾದದ್ದು. ಬಾಯಿಯೊಳಗೆ ಎಂಜಲು ದಿನ 1ರ 1 ಕುತ್ತಿ*ಯಿಂದ 2 ಕುತ್ತಿ ವರೆಗೆ ಇಳಿಯುತ್ತದೆಂತ ಎಣಿಸಿದ್ದಾರೆ. * ಷರಾ 1 ಕುತ್ತಿ=2 ಪೈಂಟ್ (Pint)<noinclude></noinclude> 1fd9e6cjpk47ei4kzm375i2i8wr17gr 322950 322945 2026-05-27T09:11:02Z Pragathi. BH 7585 322950 proofread-page text/x-wiki <noinclude><pagequality level="4" user="Pragathi. BH" />{{rh|center=- 66 -|left=ಆ11|right=}}</noinclude> ವಾಯುವಿನ ತೆರೆಗಳು 1 ಸೆಕುಂದಿಗೆ 30ಕ್ಕೂ ಕಡಿಮೆಯಾಗಿ ಬಂದರೆ, ಆ ಸ್ವರವು ಮನುಷ್ಯರಿಗೆ ಕೇಳದು. ತಾರಕದಲ್ಲಿ ಸೆಕುಂದಿಗೆ 30,000 ತೆರೆಗಳಂತೆ ಬರುವದರಿಂದ, ಉಂಟಾದ ಶಬ್ದವನ್ನು ಕೂಡ ಕೇಳಲಿಕ್ಕೆ ಸಾಮಧ್ಯವುಳ್ಳವರು ಕೆಲವರು ಇದ್ದರೂ, ಅದಕ್ಕಿಂತ ಬಹು ತಗ್ಗಿನ ಸ್ವರವಾದ ಬಾವಲಿಯ ಕೂಗನ್ನು, ಅಥವಾ ಇಲಿಯ ಕಿರಿಕಿರಿಯನ್ನು ಸಹ ಕೇಳಲಿಕ್ಕೆ ಕೂಡದವರೂ ಇರುವದುಂಟು. {{gap}}142. ಬಾಲ್ಯದಲ್ಲಿ 6 ತಿಂಗಳನಂತರ 2½ ವರ್ಷಗಳ ಒಳಗೆ 20 ಹಲ್ಲುಗಳು ಬರುತ್ತವೆ. ಈ ಹಂಗಾಮಿ ಹಲ್ಲುಗಳು 6 ವರ್ಷ ಪ್ರಾಯದನಂತರ 13ನೇ ವರ್ಷದೊಳಗೆ ಬಿದ್ದು ಹೋಗಿ, ಅವುಗಳ ಸ್ಥಾನದಲ್ಲಿ ಹೊಸ ಹಲ್ಲುಗಳು ಬರುತ್ತವೆ. ಅನಂತರ ಬೇರೆ 12 ಹಲ್ಲುಗಳು ಹುಟ್ಟಿ, 21ನೇ ವರ್ಷ ಪ್ರಾಯದೊಳಗೆ 32 ಹಲ್ಲುಗಳು ಭರ್ತಿಯಾಗುತ್ತವೆ. ಪ್ರತಿ ಸಾಲಿನ 16ರಲ್ಲಿ ಎಡಬಲಗಳಲ್ಲಿ ಎಂಟೆಂಟು ಯಧಾಕ್ರಮವಾಗಿ ಒಂದಕ್ಕೊಂದು ಹಬ್ಬಗಳು ಸದೃಶವಾಗಿವೆ ಪ್ರತಿ ಹಲ್ಲಿಗೆ ತಲೆ, ಕುತ್ತಿಗೆ ಮತ್ತು ಬೇರು, ಎಂಬ 3 ಭಾಗಗಳು ಇವೆ. ಸಿಜಿಯ (ವಸಡಿನ) ಮೇಲಿನ ಭಾಗ, ತಲೆ, ಅದಕ್ಕೆ ಎನೇಮಲ್ ಎಂಬ ಗಟ್ಟಿ ಅಂಟಿನ ಕವಚವಿದೆ. ನಿಚಿಯಲ್ಲಿ ಅಡಗಿರುವ ಭಾಗವು ಕುತ್ತಿಗೆ ಬೇರು ಅಧವಾ ಬೇರುಗಳು ದವಡೆ ಎಲುಬಿನಲ್ಲಿರುವ ಗುಣಿಗಳಲ್ಲಿ ಹುಗಿದಿರುತ್ತವೆ ಹಲ್ಲು ಬೇರೆ ಎಲುಬುಗಳಿಗಿಂತ ಗಟ್ಟಿಯಾಗಿರುತ್ತದೆ. ಅದರೊಳಗಿನ ತಿರುಳಿನಲ್ಲಿ ಸೂಕ್ಷ್ಮವಾದ ರಕ್ತಸಿರೆಗಳು ಮತ್ತು ನರಗಳು ತುಂಬಿರುವವು. {{gap}}_143, ನಾಲಿಗೆಯು ಮುಖ್ಯವಾಗಿ ಎರಡು ಸರಿಸಮವಾದ ಮಾಂಸದ ಸಂಯೋಗದಿಂದ ರಚಿತವಾಗಿ, ಎರಡು ಪರೆಗಳಿಂದ ಹೊದಿಸಲ್ಪಟ್ಟ ಅಂಗವಾಗಿದೆ. ಅದು ಉಚ್ಚಾರಕ್ಕೂ, ಅಗಿಯುವದಕ್ಕೂ, ನುಂಗುವದಕ್ಕೂ ಮುಖ್ಯ ಸಹಾಯ ಮಾಡುತ್ತದೆ. ಅದರ ಮೇಲಿನ ಕಫಯುಕ್ತವಾದ ಹೊದಿಕೆಯಲ್ಲಿ ರುಚಿಗೆ ಕಾರಣವಾದ ಸೂಕ್ಷ್ಮವಾದ ಮೊನೆಗಳು (ನಾಲಿಗೆಯ ಮುಳ್ಳು) ಇವ. ಮತ್ತು ಆ ಹೊದಿಕೆಯ ಅಡಿಯಲ್ಲಿ ಎಂಜಲಿನ ಚಿಕ್ಕ ಗ್ರಂಧಿಗಳು ಇವೆ. ಬಾಯಿಯಲ್ಲಿ ಬರತಕ್ಕ ರಸಗಳಿಗೆ ಮೂಲವಾದ ಗ್ರಂಧಿಗಳು ಮುಖ್ಯವಾಗಿ ನಾಲಿಗೆಯ ಹಿಂಬದಿಯಲ್ಲಿಯೂ ಬದಿಗಳಲ್ಲಿಯೂ, ನಾಲಿಗೆ ತುದಿಯಲ್ಲಿಯೂ , ತುದಿಯ ಬುಡದ ಎರಡು ಪಕ್ಕಗಳಲ್ಲಿಯೂ ವಿಸ್ತರಿಸಿವೆ. ಇವಲ್ಲದೆ ಪ್ರತಿ ಕಿವಿಯ ಎದುರು ಒಂದೊಂದರಂತೆ ಎರಡು, ಕೆಳಗಿನ ದವಡೆಯ ಅಡಿ ಇತ್ತಟ್ಟು ಒಂದೊಂದರಂತೆ ಎರಡು, ನಾಲಿಗೆಯ ಅಡಿಯಲ್ಲಿ ಒಂದು ಜೋಡು, ಹೀಗೆ ಆರು ದೊಡ್ಡ ಗ್ರಂಧಿಗಳು ಸಹ ಬಾಯಿಯಲ್ಲಿ ಬರುವ ರಸ ಅಧವಾ ಎಂಜಲಿಗೆ ತಮ್ಮ ರಸವನ್ನು ಚಿಕ್ಕನಾಳಗಳ ದ್ವಾರಾ ಕಳುಹಿಸುತ್ತವೆ. ರುಚಿಜ್ಞಾನಕ್ಕೆ ವಸ್ತುವು ಒದ್ದೆ ಯಾಗಿರುವದು ಅಗತ್ಯ; ಆ ಕೆಲಸವನ್ನು ಎಂಜಲು ಮಾಡುತ್ತದೆ; ಮತ್ತು ಹಿಟ್ಟು ಮುಂತಾದವುಗಳ ಜೀರ್ಣಕ್ಕೆ ಎಂಜಲು ಬಹಳ ಉಪ ಯೋಗಕರವಾದದ್ದು. ಬಾಯಿಯೊಳಗೆ ಎಂಜಲು ದಿನ 1ರ 1 ಕುತ್ತಿ*ಯಿಂದ 2 ಕುತ್ತಿ ವರೆಗೆ ಇಳಿಯುತ್ತದೆಂತ ಎಣಿಸಿದ್ದಾರೆ. {{gap}} ಷರಾ 1 ಕುತ್ತಿ=2 ಪೈಂಟ್ (Pint)<noinclude></noinclude> k7pgpoj6sqvlu5lgfnr5t0ia9s3sad1 322951 322950 2026-05-27T09:11:47Z Pragathi. BH 7585 322951 proofread-page text/x-wiki <noinclude><pagequality level="4" user="Pragathi. BH" />{{rh|center=- 66 -|left=ಆ11|right=}}</noinclude> ವಾಯುವಿನ ತೆರೆಗಳು 1 ಸೆಕುಂದಿಗೆ 30ಕ್ಕೂ ಕಡಿಮೆಯಾಗಿ ಬಂದರೆ, ಆ ಸ್ವರವು ಮನುಷ್ಯರಿಗೆ ಕೇಳದು. ತಾರಕದಲ್ಲಿ ಸೆಕುಂದಿಗೆ 30,000 ತೆರೆಗಳಂತೆ ಬರುವದರಿಂದ, ಉಂಟಾದ ಶಬ್ದವನ್ನು ಕೂಡ ಕೇಳಲಿಕ್ಕೆ ಸಾಮಧ್ಯವುಳ್ಳವರು ಕೆಲವರು ಇದ್ದರೂ, ಅದಕ್ಕಿಂತ ಬಹು ತಗ್ಗಿನ ಸ್ವರವಾದ ಬಾವಲಿಯ ಕೂಗನ್ನು, ಅಥವಾ ಇಲಿಯ ಕಿರಿಕಿರಿಯನ್ನು ಸಹ ಕೇಳಲಿಕ್ಕೆ ಕೂಡದವರೂ ಇರುವದುಂಟು. {{gap}}142. ಬಾಲ್ಯದಲ್ಲಿ 6 ತಿಂಗಳನಂತರ 2½ ವರ್ಷಗಳ ಒಳಗೆ 20 ಹಲ್ಲುಗಳು ಬರುತ್ತವೆ. ಈ ಹಂಗಾಮಿ ಹಲ್ಲುಗಳು 6 ವರ್ಷ ಪ್ರಾಯದನಂತರ 13ನೇ ವರ್ಷದೊಳಗೆ ಬಿದ್ದು ಹೋಗಿ, ಅವುಗಳ ಸ್ಥಾನದಲ್ಲಿ ಹೊಸ ಹಲ್ಲುಗಳು ಬರುತ್ತವೆ. ಅನಂತರ ಬೇರೆ 12 ಹಲ್ಲುಗಳು ಹುಟ್ಟಿ, 21ನೇ ವರ್ಷ ಪ್ರಾಯದೊಳಗೆ 32 ಹಲ್ಲುಗಳು ಭರ್ತಿಯಾಗುತ್ತವೆ. ಪ್ರತಿ ಸಾಲಿನ 16ರಲ್ಲಿ ಎಡಬಲಗಳಲ್ಲಿ ಎಂಟೆಂಟು ಯಧಾಕ್ರಮವಾಗಿ ಒಂದಕ್ಕೊಂದು ಹಬ್ಬಗಳು ಸದೃಶವಾಗಿವೆ ಪ್ರತಿ ಹಲ್ಲಿಗೆ ತಲೆ, ಕುತ್ತಿಗೆ ಮತ್ತು ಬೇರು, ಎಂಬ 3 ಭಾಗಗಳು ಇವೆ. ಸಿಜಿಯ (ವಸಡಿನ) ಮೇಲಿನ ಭಾಗ, ತಲೆ, ಅದಕ್ಕೆ ಎನೇಮಲ್ ಎಂಬ ಗಟ್ಟಿ ಅಂಟಿನ ಕವಚವಿದೆ. ನಿಚಿಯಲ್ಲಿ ಅಡಗಿರುವ ಭಾಗವು ಕುತ್ತಿಗೆ ಬೇರು ಅಧವಾ ಬೇರುಗಳು ದವಡೆ ಎಲುಬಿನಲ್ಲಿರುವ ಗುಣಿಗಳಲ್ಲಿ ಹುಗಿದಿರುತ್ತವೆ ಹಲ್ಲು ಬೇರೆ ಎಲುಬುಗಳಿಗಿಂತ ಗಟ್ಟಿಯಾಗಿರುತ್ತದೆ. ಅದರೊಳಗಿನ ತಿರುಳಿನಲ್ಲಿ ಸೂಕ್ಷ್ಮವಾದ ರಕ್ತಸಿರೆಗಳು ಮತ್ತು ನರಗಳು ತುಂಬಿರುವವು. {{gap}}_143, ನಾಲಿಗೆಯು ಮುಖ್ಯವಾಗಿ ಎರಡು ಸರಿಸಮವಾದ ಮಾಂಸದ ಸಂಯೋಗದಿಂದ ರಚಿತವಾಗಿ, ಎರಡು ಪರೆಗಳಿಂದ ಹೊದಿಸಲ್ಪಟ್ಟ ಅಂಗವಾಗಿದೆ. ಅದು ಉಚ್ಚಾರಕ್ಕೂ, ಅಗಿಯುವದಕ್ಕೂ, ನುಂಗುವದಕ್ಕೂ ಮುಖ್ಯ ಸಹಾಯ ಮಾಡುತ್ತದೆ. ಅದರ ಮೇಲಿನ ಕಫಯುಕ್ತವಾದ ಹೊದಿಕೆಯಲ್ಲಿ ರುಚಿಗೆ ಕಾರಣವಾದ ಸೂಕ್ಷ್ಮವಾದ ಮೊನೆಗಳು (ನಾಲಿಗೆಯ ಮುಳ್ಳು) ಇವ. ಮತ್ತು ಆ ಹೊದಿಕೆಯ ಅಡಿಯಲ್ಲಿ ಎಂಜಲಿನ ಚಿಕ್ಕ ಗ್ರಂಧಿಗಳು ಇವೆ. ಬಾಯಿಯಲ್ಲಿ ಬರತಕ್ಕ ರಸಗಳಿಗೆ ಮೂಲವಾದ ಗ್ರಂಧಿಗಳು ಮುಖ್ಯವಾಗಿ ನಾಲಿಗೆಯ ಹಿಂಬದಿಯಲ್ಲಿಯೂ ಬದಿಗಳಲ್ಲಿಯೂ, ನಾಲಿಗೆ ತುದಿಯಲ್ಲಿಯೂ , ತುದಿಯ ಬುಡದ ಎರಡು ಪಕ್ಕಗಳಲ್ಲಿಯೂ ವಿಸ್ತರಿಸಿವೆ. ಇವಲ್ಲದೆ ಪ್ರತಿ ಕಿವಿಯ ಎದುರು ಒಂದೊಂದರಂತೆ ಎರಡು, ಕೆಳಗಿನ ದವಡೆಯ ಅಡಿ ಇತ್ತಟ್ಟು ಒಂದೊಂದರಂತೆ ಎರಡು, ನಾಲಿಗೆಯ ಅಡಿಯಲ್ಲಿ ಒಂದು ಜೋಡು, ಹೀಗೆ ಆರು ದೊಡ್ಡ ಗ್ರಂಧಿಗಳು ಸಹ ಬಾಯಿಯಲ್ಲಿ ಬರುವ ರಸ ಅಧವಾ ಎಂಜಲಿಗೆ ತಮ್ಮ ರಸವನ್ನು ಚಿಕ್ಕನಾಳಗಳ ದ್ವಾರಾ ಕಳುಹಿಸುತ್ತವೆ. ರುಚಿಜ್ಞಾನಕ್ಕೆ ವಸ್ತುವು ಒದ್ದೆ ಯಾಗಿರುವದು ಅಗತ್ಯ; ಆ ಕೆಲಸವನ್ನು ಎಂಜಲು ಮಾಡುತ್ತದೆ; ಮತ್ತು ಹಿಟ್ಟು ಮುಂತಾದವುಗಳ ಜೀರ್ಣಕ್ಕೆ ಎಂಜಲು ಬಹಳ ಉಪ ಯೋಗಕರವಾದದ್ದು. ಬಾಯಿಯೊಳಗೆ ಎಂಜಲು ದಿನ 1ರ 1 ಕುತ್ತಿ*ಯಿಂದ 2 ಕುತ್ತಿ ವರೆಗೆ ಇಳಿಯುತ್ತದೆಂತ ಎಣಿಸಿದ್ದಾರೆ. {{gap}} ಷರಾ 1 ಕುತ್ತಿ=2 ಪೈಂಟ್ (Pint)<noinclude></noinclude> ew8nz97k74isfctac17r8ri9vtbrn8w 322952 322951 2026-05-27T09:12:22Z Pragathi. BH 7585 322952 proofread-page text/x-wiki <noinclude><pagequality level="4" user="Pragathi. BH" />{{rh|center=- 66 -|left=ಆ11|right=}}</noinclude> ವಾಯುವಿನ ತೆರೆಗಳು 1 ಸೆಕುಂದಿಗೆ 30ಕ್ಕೂ ಕಡಿಮೆಯಾಗಿ ಬಂದರೆ, ಆ ಸ್ವರವು ಮನುಷ್ಯರಿಗೆ ಕೇಳದು. ತಾರಕದಲ್ಲಿ ಸೆಕುಂದಿಗೆ 30,000 ತೆರೆಗಳಂತೆ ಬರುವದರಿಂದ, ಉಂಟಾದ ಶಬ್ದವನ್ನು ಕೂಡ ಕೇಳಲಿಕ್ಕೆ ಸಾಮಧ್ಯವುಳ್ಳವರು ಕೆಲವರು ಇದ್ದರೂ, ಅದಕ್ಕಿಂತ ಬಹು ತಗ್ಗಿನ ಸ್ವರವಾದ ಬಾವಲಿಯ ಕೂಗನ್ನು, ಅಥವಾ ಇಲಿಯ ಕಿರಿಕಿರಿಯನ್ನು ಸಹ ಕೇಳಲಿಕ್ಕೆ ಕೂಡದವರೂ ಇರುವದುಂಟು. {{gap}}142. ಬಾಲ್ಯದಲ್ಲಿ 6 ತಿಂಗಳನಂತರ 2½ ವರ್ಷಗಳ ಒಳಗೆ 20 ಹಲ್ಲುಗಳು ಬರುತ್ತವೆ. ಈ ಹಂಗಾಮಿ ಹಲ್ಲುಗಳು 6 ವರ್ಷ ಪ್ರಾಯದನಂತರ 13ನೇ ವರ್ಷದೊಳಗೆ ಬಿದ್ದು ಹೋಗಿ, ಅವುಗಳ ಸ್ಥಾನದಲ್ಲಿ ಹೊಸ ಹಲ್ಲುಗಳು ಬರುತ್ತವೆ. ಅನಂತರ ಬೇರೆ 12 ಹಲ್ಲುಗಳು ಹುಟ್ಟಿ, 21ನೇ ವರ್ಷ ಪ್ರಾಯದೊಳಗೆ 32 ಹಲ್ಲುಗಳು ಭರ್ತಿಯಾಗುತ್ತವೆ. ಪ್ರತಿ ಸಾಲಿನ 16ರಲ್ಲಿ ಎಡಬಲಗಳಲ್ಲಿ ಎಂಟೆಂಟು ಯಧಾಕ್ರಮವಾಗಿ ಒಂದಕ್ಕೊಂದು ಹಬ್ಬಗಳು ಸದೃಶವಾಗಿವೆ ಪ್ರತಿ ಹಲ್ಲಿಗೆ ತಲೆ, ಕುತ್ತಿಗೆ ಮತ್ತು ಬೇರು, ಎಂಬ 3 ಭಾಗಗಳು ಇವೆ. ಸಿಜಿಯ (ವಸಡಿನ) ಮೇಲಿನ ಭಾಗ, ತಲೆ, ಅದಕ್ಕೆ ಎನೇಮಲ್ ಎಂಬ ಗಟ್ಟಿ ಅಂಟಿನ ಕವಚವಿದೆ. ನಿಚಿಯಲ್ಲಿ ಅಡಗಿರುವ ಭಾಗವು ಕುತ್ತಿಗೆ ಬೇರು ಅಧವಾ ಬೇರುಗಳು ದವಡೆ ಎಲುಬಿನಲ್ಲಿರುವ ಗುಣಿಗಳಲ್ಲಿ ಹುಗಿದಿರುತ್ತವೆ ಹಲ್ಲು ಬೇರೆ ಎಲುಬುಗಳಿಗಿಂತ ಗಟ್ಟಿಯಾಗಿರುತ್ತದೆ. ಅದರೊಳಗಿನ ತಿರುಳಿನಲ್ಲಿ ಸೂಕ್ಷ್ಮವಾದ ರಕ್ತಸಿರೆಗಳು ಮತ್ತು ನರಗಳು ತುಂಬಿರುವವು. {{gap}}_143, ನಾಲಿಗೆಯು ಮುಖ್ಯವಾಗಿ ಎರಡು ಸರಿಸಮವಾದ ಮಾಂಸದ ಸಂಯೋಗದಿಂದ ರಚಿತವಾಗಿ, ಎರಡು ಪರೆಗಳಿಂದ ಹೊದಿಸಲ್ಪಟ್ಟ ಅಂಗವಾಗಿದೆ. ಅದು ಉಚ್ಚಾರಕ್ಕೂ, ಅಗಿಯುವದಕ್ಕೂ, ನುಂಗುವದಕ್ಕೂ ಮುಖ್ಯ ಸಹಾಯ ಮಾಡುತ್ತದೆ. ಅದರ ಮೇಲಿನ ಕಫಯುಕ್ತವಾದ ಹೊದಿಕೆಯಲ್ಲಿ ರುಚಿಗೆ ಕಾರಣವಾದ ಸೂಕ್ಷ್ಮವಾದ ಮೊನೆಗಳು (ನಾಲಿಗೆಯ ಮುಳ್ಳು) ಇವ. ಮತ್ತು ಆ ಹೊದಿಕೆಯ ಅಡಿಯಲ್ಲಿ ಎಂಜಲಿನ ಚಿಕ್ಕ ಗ್ರಂಧಿಗಳು ಇವೆ. ಬಾಯಿಯಲ್ಲಿ ಬರತಕ್ಕ ರಸಗಳಿಗೆ ಮೂಲವಾದ ಗ್ರಂಧಿಗಳು ಮುಖ್ಯವಾಗಿ ನಾಲಿಗೆಯ ಹಿಂಬದಿಯಲ್ಲಿಯೂ ಬದಿಗಳಲ್ಲಿಯೂ, ನಾಲಿಗೆ ತುದಿಯಲ್ಲಿಯೂ , ತುದಿಯ ಬುಡದ ಎರಡು ಪಕ್ಕಗಳಲ್ಲಿಯೂ ವಿಸ್ತರಿಸಿವೆ. ಇವಲ್ಲದೆ ಪ್ರತಿ ಕಿವಿಯ ಎದುರು ಒಂದೊಂದರಂತೆ ಎರಡು, ಕೆಳಗಿನ ದವಡೆಯ ಅಡಿ ಇತ್ತಟ್ಟು ಒಂದೊಂದರಂತೆ ಎರಡು, ನಾಲಿಗೆಯ ಅಡಿಯಲ್ಲಿ ಒಂದು ಜೋಡು, ಹೀಗೆ ಆರು ದೊಡ್ಡ ಗ್ರಂಧಿಗಳು ಸಹ ಬಾಯಿಯಲ್ಲಿ ಬರುವ ರಸ ಅಧವಾ ಎಂಜಲಿಗೆ ತಮ್ಮ ರಸವನ್ನು ಚಿಕ್ಕನಾಳಗಳ ದ್ವಾರಾ ಕಳುಹಿಸುತ್ತವೆ. ರುಚಿಜ್ಞಾನಕ್ಕೆ ವಸ್ತುವು ಒದ್ದೆ ಯಾಗಿರುವದು ಅಗತ್ಯ; ಆ ಕೆಲಸವನ್ನು ಎಂಜಲು ಮಾಡುತ್ತದೆ; ಮತ್ತು ಹಿಟ್ಟು ಮುಂತಾದವುಗಳ ಜೀರ್ಣಕ್ಕೆ ಎಂಜಲು ಬಹಳ ಉಪ ಯೋಗಕರವಾದದ್ದು. ಬಾಯಿಯೊಳಗೆ ಎಂಜಲು ದಿನ 1ರ 1 ಕುತ್ತಿ*ಯಿಂದ 2 ಕುತ್ತಿ ವರೆಗೆ ಇಳಿಯುತ್ತದೆಂತ ಎಣಿಸಿದ್ದಾರೆ. {{gap}} ಷರಾ 1 ಕುತ್ತಿ=2 ಪೈಂಟ್ (Pint)<noinclude></noinclude> 9epz548x79upw7fitdz22xobawz2p5z ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೫೭ 104 66364 322948 204440 2026-05-27T09:08:42Z Pragathi. BH 7585 /* Validated */ 322948 proofread-page text/x-wiki <noinclude><pagequality level="4" user="Pragathi. BH" />{{rh|center=- 67 -|left=|right=ಆ||}}</noinclude> 144 ತಾಲುವಿನ ಹೊದಿಕೆಯು ನಾಲಿಗೆಯ ಹೊದಿಕೆಗೆ ಸದೃಶವಾಗಿದೆ. ಅದರಲ್ಲಿಯೂ ರುಚಿಮೊಗ್ಗುಗಳು ಅಧವಾ ಮೊನೆಗಳು ಇವೆ, ಆದರೆ, ನಾಲಿಗೆಯಲ್ಲಿ ಇರುವಷ್ಟು ಅಲ್ಲ. {{gap}}145 ನುಂಗುವಿಕೆ ಎಂಬದರಲ್ಲಿ ಮೂರು ಕೆಲಸಗಳಿವೆ, ಆಹಾರವು ನಾಲಿಗೆಯ ಬುಡಕ್ಕೆ ಹೋಗುವದು, ಕಫನಾಳದ ದ್ವಾರವನ್ನು ದಾಟುವದು, ಮತ್ತು ಅನ್ನನಾಳದೊಳಗೆ ಸೇರುವದು. ಇವುಗಳೊಳಗೆ ಒಂದನೇದು, ಇಚ್ಛೆಗೊಳಪಟ್ಟು, ನಾಲಿಗೆಯಿಂದ ಮಾಡಲ್ಪಡುತ್ತದೆ. ಎರಡನೇ ಮೂರನೇ ಕಲಸಗಳು ನಮ್ಮ ಸ್ವಾಧೀನವಿಲ್ಲ. ನುಂಗುವ ಸಮಯದಲ್ಲಿ ತಾಲುವಿನ ಹಿಂಭಾಗವು, ಎತ್ತಿಕೊಂಡು, ಮೂಗಿನೊಳಕ್ಕೆ ಹೋಗುವ ರಂಧ್ರಗಳನ್ನು ಮುಚ್ಚಿಬಿಡುತ್ತದೆ, ಹಾಗೆಯೇ ಕಫನಾಳದ ದ್ವಾರವು ಮುಚ್ಚಿ ಹೋಗುತ್ತದೆ.<noinclude></noinclude> mdbpbeoxckvvlzhirqdavmgqp4m3u1t 322949 322948 2026-05-27T09:09:37Z A826 6806 322949 proofread-page text/x-wiki <noinclude><pagequality level="4" user="Pragathi. BH" />{{rh|center=- 67 -|left=|right=ಆ॥}}</noinclude> 144 ತಾಲುವಿನ ಹೊದಿಕೆಯು ನಾಲಿಗೆಯ ಹೊದಿಕೆಗೆ ಸದೃಶವಾಗಿದೆ. ಅದರಲ್ಲಿಯೂ ರುಚಿಮೊಗ್ಗುಗಳು ಅಧವಾ ಮೊನೆಗಳು ಇವೆ, ಆದರೆ, ನಾಲಿಗೆಯಲ್ಲಿ ಇರುವಷ್ಟು ಅಲ್ಲ. {{gap}}145 ನುಂಗುವಿಕೆ ಎಂಬದರಲ್ಲಿ ಮೂರು ಕೆಲಸಗಳಿವೆ, ಆಹಾರವು ನಾಲಿಗೆಯ ಬುಡಕ್ಕೆ ಹೋಗುವದು, ಕಫನಾಳದ ದ್ವಾರವನ್ನು ದಾಟುವದು, ಮತ್ತು ಅನ್ನನಾಳದೊಳಗೆ ಸೇರುವದು. ಇವುಗಳೊಳಗೆ ಒಂದನೇದು, ಇಚ್ಛೆಗೊಳಪಟ್ಟು, ನಾಲಿಗೆಯಿಂದ ಮಾಡಲ್ಪಡುತ್ತದೆ. ಎರಡನೇ ಮೂರನೇ ಕಲಸಗಳು ನಮ್ಮ ಸ್ವಾಧೀನವಿಲ್ಲ. ನುಂಗುವ ಸಮಯದಲ್ಲಿ ತಾಲುವಿನ ಹಿಂಭಾಗವು, ಎತ್ತಿಕೊಂಡು, ಮೂಗಿನೊಳಕ್ಕೆ ಹೋಗುವ ರಂಧ್ರಗಳನ್ನು ಮುಚ್ಚಿಬಿಡುತ್ತದೆ, ಹಾಗೆಯೇ ಕಫನಾಳದ ದ್ವಾರವು ಮುಚ್ಚಿ ಹೋಗುತ್ತದೆ.<noinclude></noinclude> da0g0wact1qmaeocipeobw4iy17pk6b ಪುಟ:ರಾಮಚಂದ್ರ ಚರಿತ ಪುರಾಣಂ.djvu/೯೧ 104 66913 322690 169041 2026-05-26T14:35:10Z Pragathi. BH 7585 322690 proofread-page text/x-wiki <noinclude><pagequality level="3" user="Jhansi.kl" /></noinclude>{{running header|center= ಶ್ರೀ}} <center>'''<big><big><big>ರಾಮಚಂದ್ರ ಚರಿತ ಪುರಾಣಂ</big></big></big>'''<br/></center> <center>ಪ್ರಥಮಾಶ್ವಾಸಂ<br/>,</center> <poem> ಶಾ || ಶ್ರೀಕೇಳೀ ನಿಲಯಂ ನಿಜಾಂಫ್ರಿಕಮಲಂ ವಿದ್ಯಾನಟೀ ನಾಟ್ಯ ವೇ | ದೀಕಲ್ಪಂ ಮುಖ ಚಂದ್ರಬಿಂಬಮಖಿಲೇಂದೋತ್ತಂಸ ಮಾಣಿಕ್ಯ ದೀ || ಪಾಕೀರ್ಣಂ ಹರಿಪೀಠ ಪಾರ್ಶ್ವವೆನಿಸಂ ಪೂಜಾರ್ಹನಾರ್ಹ೦ತ್ಯ ಲ | ಕ್ಷ್ಮೀಕಾಂತಂ ಮುನಿಸುವ್ರತಂ ನಮಗೆ ಮಾಲಷ್ಟಾರ್ಥ ಸಂಸಿದ್ಧಿಯ೦{{gap}} || ೧ || </poem> <poem> ಸ್ರ ಏನಸ್ಸಂತಾನವೆಂಟುಂ ಕಿಡೆನಿಜಗುಣಮೆಂಟು ಮೊಗಂದೋಜಿ ಮೆಯ್ಯಿಂ | ದೇನಾನುಂ ಕುಂದೆ ಲೋಕಾಗ್ರದೊಳಿರೆ ಸಹಜಾನಂದ ಚೈತನ್ಯ ರೂಪಂ|| ಜ್ಞಾನಂ ಪ್ಲೇಯ ಪ್ರಮಾಣ೦ ಪಸರಿಸೆಗಣನಾತೀತರಾಗಿರ್ದ ಮುಕ್ತಿ | ಶ್ರೀನಾಥರ್ ಸಿದ್ಧರಾತ್ಯಂತಿಕ ಸುಖ ಪದವೀಸಿದ್ಧಿಯಂ ಮಾಜಕ್ಕೆ ನಮ್ಮೊಳ್{{gap}}||೨|| </poem> <poem> ಮ || ಮನಮಂ ಕಟ್ಟಿ ಗುಣಂಗಳಿ೦ತುಬಿದು ಪಂಚಾಚಾರದಿಂ ಪಂಚಬಾ | ಣನ ಬಾಹಾಬಲಮಂ( ಸಮಗ್ರತರ ಶಿಷ್ಯಾನುಗ್ರಹ ಪ್ರೌಢಿವೆ || ತ್ತನವದ್ಯರ್ ದಯೆಗೆಯ್ಸರಕ್ಕೆ ದಯೆಯಿಂ ಭವ್ಯಾಳಿಗುದತ್ತಪೋ | ಧನ ವಿದ್ಯಾಧನದಿ ಮಹಾಮಹಿಮೆವಾಚಾರರಾಚಾರಮ{{gap}}|| ೩ || </poem> <poem> ಶಾ || ಪಾತ್ರೀಭೂತ ಏನೇಹ ಸಂತತಿಗೆ ಸಮ್ಯಗ್ದರ್ಶನ ಜ್ಞಾನ ಚಾ | ರಿತ್ರಂಗಳ್ ನಿಜಮಪ್ಪನಂತ ಸುಖಮಂ ರಾಗಾದಿಗಳ್ ಜನ್ಮ ಮೃ || ತ್ಯು ತ್ರಾಸಂಗಳನೀವುವೆಂದು ಸದಸಧೈದಂಗಳಂ ಪೇಳ್ವಿವರ್ || ಸೂತ್ರಪ್ರಾಯರಜೇಯರೀಗೆಮುಗುಪಾಧ್ಯಾಯರ್‌ ಸುಖೋಪಾಯಮಂ{{gap}}|| ೪ || </poem> <poem> ಮ|| ತಪಮಂ ಶೀಲಮನಸ್ಸು ಕೆಯ್ದು, ಕರಣ ಗ್ರಾಮಂಗಳಂ ಗೆಲ್ದುಚಿ | ತ್ತಪದೈ ಕಾತಿಥಿಮಾಡಿ ಶಾಂತರಸಮಂ} ಕಾರುಣ್ಯಮಂ ತಾಳ್ದಿತ || ತ್ತ್ವಪರಿಜ್ಞಾನಮಪ್ರಮತ್ತಚರಿತ ಪ್ರಸ್ಥಾನಮಗೆ ಸಾರ್ದ ಸಾ | ಧುಪದ್ಯಂಗಲ್ ನಮಗೀಗೆ ಸಾಧುಪದಮ್ಮ ಕೈವಲ್ಯ ಮಾಂಗಲ್ಯಮಂ{{gap}}|| ೫ || </poem> {{rule|12cm}} <small>1. ಮಯಂ ದೇನಾನು೦ಗು೦ದೆ. ಫ. <br/> 2. ಜ್ಞಾನಜೇಯ. ಕ. ಖ. ಗ. ಘ. </small><noinclude></noinclude> gvvois6ti1exj47mt66m37mrbyax50w 322693 322690 2026-05-26T14:36:31Z Pragathi. BH 7585 322693 proofread-page text/x-wiki <noinclude><pagequality level="3" user="Jhansi.kl" /></noinclude>{{running header|center= ಶ್ರೀ}} <center>'''<big><big><big>ರಾಮಚಂದ್ರ ಚರಿತ ಪುರಾಣಂ</big></big></big>'''<br/></center> <center>ಪ್ರಥಮಾಶ್ವಾಸಂ<br/>,</center> <poem> ಶಾ || ಶ್ರೀಕೇಳೀ ನಿಲಯಂ ನಿಜಾಂಫ್ರಿಕಮಲಂ ವಿದ್ಯಾನಟೀ ನಾಟ್ಯ ವೇ | ದೀಕಲ್ಪಂ ಮುಖ ಚಂದ್ರಬಿಂಬಮಖಿಲೇಂದೋತ್ತಂಸ ಮಾಣಿಕ್ಯ ದೀ || ಪಾಕೀರ್ಣಂ ಹರಿಪೀಠ ಪಾರ್ಶ್ವವೆನಿಸಂ ಪೂಜಾರ್ಹನಾರ್ಹ೦ತ್ಯ ಲ | ಕ್ಷ್ಮೀಕಾಂತಂ ಮುನಿಸುವ್ರತಂ ನಮಗೆ ಮಾಲಷ್ಟಾರ್ಥ ಸಂಸಿದ್ಧಿಯ೦{{gap}} ||೧|| </poem> <poem> ಸ್ರ ಏನಸ್ಸಂತಾನವೆಂಟುಂ ಕಿಡೆನಿಜಗುಣಮೆಂಟು ಮೊಗಂದೋಜಿ ಮೆಯ್ಯಿಂ | ದೇನಾನುಂ ಕುಂದೆ ಲೋಕಾಗ್ರದೊಳಿರೆ ಸಹಜಾನಂದ ಚೈತನ್ಯ ರೂಪಂ|| ಜ್ಞಾನಂ ಪ್ಲೇಯ ಪ್ರಮಾಣ೦ ಪಸರಿಸೆಗಣನಾತೀತರಾಗಿರ್ದ ಮುಕ್ತಿ | ಶ್ರೀನಾಥರ್ ಸಿದ್ಧರಾತ್ಯಂತಿಕ ಸುಖ ಪದವೀಸಿದ್ಧಿಯಂ ಮಾಜಕ್ಕೆ ನಮ್ಮೊಳ್{{gap}}||೨|| </poem> <poem> ಮ || ಮನಮಂ ಕಟ್ಟಿ ಗುಣಂಗಳಿ೦ತುಬಿದು ಪಂಚಾಚಾರದಿಂ ಪಂಚಬಾ | ಣನ ಬಾಹಾಬಲಮಂ( ಸಮಗ್ರತರ ಶಿಷ್ಯಾನುಗ್ರಹ ಪ್ರೌಢಿವೆ || ತ್ತನವದ್ಯರ್ ದಯೆಗೆಯ್ಸರಕ್ಕೆ ದಯೆಯಿಂ ಭವ್ಯಾಳಿಗುದತ್ತಪೋ | ಧನ ವಿದ್ಯಾಧನದಿ ಮಹಾಮಹಿಮೆವಾಚಾರರಾಚಾರಮ{{gap}}||೩|| </poem> <poem> ಶಾ || ಪಾತ್ರೀಭೂತ ಏನೇಹ ಸಂತತಿಗೆ ಸಮ್ಯಗ್ದರ್ಶನ ಜ್ಞಾನ ಚಾ | ರಿತ್ರಂಗಳ್ ನಿಜಮಪ್ಪನಂತ ಸುಖಮಂ ರಾಗಾದಿಗಳ್ ಜನ್ಮ ಮೃ || ತ್ಯು ತ್ರಾಸಂಗಳನೀವುವೆಂದು ಸದಸಧೈದಂಗಳಂ ಪೇಳ್ವಿವರ್ || ಸೂತ್ರಪ್ರಾಯರಜೇಯರೀಗೆಮುಗುಪಾಧ್ಯಾಯರ್‌ ಸುಖೋಪಾಯಮಂ{{gap}}||೪|| </poem> <poem> ಮ|| ತಪಮಂ ಶೀಲಮನಸ್ಸು ಕೆಯ್ದು, ಕರಣ ಗ್ರಾಮಂಗಳಂ ಗೆಲ್ದುಚಿ | ತ್ತಪದೈ ಕಾತಿಥಿಮಾಡಿ ಶಾಂತರಸಮಂ} ಕಾರುಣ್ಯಮಂ ತಾಳ್ದಿತ || ತ್ತ್ವಪರಿಜ್ಞಾನಮಪ್ರಮತ್ತಚರಿತ ಪ್ರಸ್ಥಾನಮಗೆ ಸಾರ್ದ ಸಾ | ಧುಪದ್ಯಂಗಲ್ ನಮಗೀಗೆ ಸಾಧುಪದಮ್ಮ ಕೈವಲ್ಯ ಮಾಂಗಲ್ಯಮಂ{{gap}}||೫|| </poem> {{rule|12cm}} <small>1. ಮಯಂ ದೇನಾನು೦ಗು೦ದೆ. ಫ. <br/> 2. ಜ್ಞಾನಜೇಯ. ಕ. ಖ. ಗ. ಘ. </small><noinclude></noinclude> 5dm3asdiyzu7wwrqc58jnfta3nz04mo 322694 322693 2026-05-26T14:36:42Z Pragathi. BH 7585 /* Validated */ 322694 proofread-page text/x-wiki <noinclude><pagequality level="4" user="Pragathi. BH" /></noinclude>{{running header|center= ಶ್ರೀ}} <center>'''<big><big><big>ರಾಮಚಂದ್ರ ಚರಿತ ಪುರಾಣಂ</big></big></big>'''<br/></center> <center>ಪ್ರಥಮಾಶ್ವಾಸಂ<br/>,</center> <poem> ಶಾ || ಶ್ರೀಕೇಳೀ ನಿಲಯಂ ನಿಜಾಂಫ್ರಿಕಮಲಂ ವಿದ್ಯಾನಟೀ ನಾಟ್ಯ ವೇ | ದೀಕಲ್ಪಂ ಮುಖ ಚಂದ್ರಬಿಂಬಮಖಿಲೇಂದೋತ್ತಂಸ ಮಾಣಿಕ್ಯ ದೀ || ಪಾಕೀರ್ಣಂ ಹರಿಪೀಠ ಪಾರ್ಶ್ವವೆನಿಸಂ ಪೂಜಾರ್ಹನಾರ್ಹ೦ತ್ಯ ಲ | ಕ್ಷ್ಮೀಕಾಂತಂ ಮುನಿಸುವ್ರತಂ ನಮಗೆ ಮಾಲಷ್ಟಾರ್ಥ ಸಂಸಿದ್ಧಿಯ೦{{gap}} ||೧|| </poem> <poem> ಸ್ರ ಏನಸ್ಸಂತಾನವೆಂಟುಂ ಕಿಡೆನಿಜಗುಣಮೆಂಟು ಮೊಗಂದೋಜಿ ಮೆಯ್ಯಿಂ | ದೇನಾನುಂ ಕುಂದೆ ಲೋಕಾಗ್ರದೊಳಿರೆ ಸಹಜಾನಂದ ಚೈತನ್ಯ ರೂಪಂ|| ಜ್ಞಾನಂ ಪ್ಲೇಯ ಪ್ರಮಾಣ೦ ಪಸರಿಸೆಗಣನಾತೀತರಾಗಿರ್ದ ಮುಕ್ತಿ | ಶ್ರೀನಾಥರ್ ಸಿದ್ಧರಾತ್ಯಂತಿಕ ಸುಖ ಪದವೀಸಿದ್ಧಿಯಂ ಮಾಜಕ್ಕೆ ನಮ್ಮೊಳ್{{gap}}||೨|| </poem> <poem> ಮ || ಮನಮಂ ಕಟ್ಟಿ ಗುಣಂಗಳಿ೦ತುಬಿದು ಪಂಚಾಚಾರದಿಂ ಪಂಚಬಾ | ಣನ ಬಾಹಾಬಲಮಂ( ಸಮಗ್ರತರ ಶಿಷ್ಯಾನುಗ್ರಹ ಪ್ರೌಢಿವೆ || ತ್ತನವದ್ಯರ್ ದಯೆಗೆಯ್ಸರಕ್ಕೆ ದಯೆಯಿಂ ಭವ್ಯಾಳಿಗುದತ್ತಪೋ | ಧನ ವಿದ್ಯಾಧನದಿ ಮಹಾಮಹಿಮೆವಾಚಾರರಾಚಾರಮ{{gap}}||೩|| </poem> <poem> ಶಾ || ಪಾತ್ರೀಭೂತ ಏನೇಹ ಸಂತತಿಗೆ ಸಮ್ಯಗ್ದರ್ಶನ ಜ್ಞಾನ ಚಾ | ರಿತ್ರಂಗಳ್ ನಿಜಮಪ್ಪನಂತ ಸುಖಮಂ ರಾಗಾದಿಗಳ್ ಜನ್ಮ ಮೃ || ತ್ಯು ತ್ರಾಸಂಗಳನೀವುವೆಂದು ಸದಸಧೈದಂಗಳಂ ಪೇಳ್ವಿವರ್ || ಸೂತ್ರಪ್ರಾಯರಜೇಯರೀಗೆಮುಗುಪಾಧ್ಯಾಯರ್‌ ಸುಖೋಪಾಯಮಂ{{gap}}||೪|| </poem> <poem> ಮ|| ತಪಮಂ ಶೀಲಮನಸ್ಸು ಕೆಯ್ದು, ಕರಣ ಗ್ರಾಮಂಗಳಂ ಗೆಲ್ದುಚಿ | ತ್ತಪದೈ ಕಾತಿಥಿಮಾಡಿ ಶಾಂತರಸಮಂ} ಕಾರುಣ್ಯಮಂ ತಾಳ್ದಿತ || ತ್ತ್ವಪರಿಜ್ಞಾನಮಪ್ರಮತ್ತಚರಿತ ಪ್ರಸ್ಥಾನಮಗೆ ಸಾರ್ದ ಸಾ | ಧುಪದ್ಯಂಗಲ್ ನಮಗೀಗೆ ಸಾಧುಪದಮ್ಮ ಕೈವಲ್ಯ ಮಾಂಗಲ್ಯಮಂ{{gap}}||೫|| </poem> {{rule|12cm}} <small>1. ಮಯಂ ದೇನಾನು೦ಗು೦ದೆ. ಫ. <br/> 2. ಜ್ಞಾನಜೇಯ. ಕ. ಖ. ಗ. ಘ. </small><noinclude></noinclude> 9szuuwe5o3s9v53b0bwg4udhk7dgfkx ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೨ 104 66954 322695 166305 2026-05-26T14:37:33Z Pragathi. BH 7585 /* Validated */ 322695 proofread-page text/x-wiki <noinclude><pagequality level="4" user="Pragathi. BH" /></noinclude>೪೨{{RunningHeader|center=ರಾಮಚಂದ್ರಚರಿತಪುರಾಣಂ}} <poem> ಮ||ಸ್ರ|| ಅಮರೇಂದ್ರೋದ್ಯಾನದಿ೦ ಪೂಮಳಿ ಕರೆಯೆ ಸುರೇ೦ದ್ರಾಗಮಂ ರಾಗಮಂ ಬೀ| ರೆ ಮರುದ್ಗಂಭೀರ ಭೇರೀನಿನದಮೊದವೆ ನಿರ್ವಾಣ<sup>೧</sup>ಕೈವಲ್ಯಮಾಂಗ|| ಲ್ಯ ಮಹೋತ್ಸಾಹಪ್ರಮೋದಾಮರ ಕಲಕಲಮಾನಂದಮಂಮಾಡೆರೋಮಾಂ| ಚಮನಾನಂದಾಶ್ರುವಂ ತಾಳ್ದಿದನಮಲಯಶಂ ಭಾರತೀಕರ್ಣಪೂರಂ{{gap}}||೭೭|| ಇದು ಪರಮಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ ಮುನೀಂದ್ರ ಚರಣನಖಕಿರಣ ಚಂದ್ರಿಕಾಚಕೋರ ಭಾರತೀಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ ರಾಮಚಂದ್ರ ಚರಿತ ಪುರಾಣದೊಳ್ ವಂಶವರ್ಣನಂ -ದ್ವಿತೀಯಾಶ್ವಾಸಂ- </poem><noinclude></noinclude> 407f1woewgcokmf3wcnvday9mo22fsp 322697 322695 2026-05-26T14:38:15Z Pragathi. BH 7585 322697 proofread-page text/x-wiki <noinclude><pagequality level="4" user="Pragathi. BH" /></noinclude>೪೨{{RunningHeader|center=ರಾಮಚಂದ್ರಚರಿತಪುರಾಣಂ}} <poem> ಮ||ಸ್ರ|| ಅಮರೇಂದ್ರೋದ್ಯಾನದಿ೦ ಪೂಮಳಿ ಕರೆಯೆ ಸುರೇ೦ದ್ರಾಗಮಂ ರಾಗಮಂ ಬೀ| ರೆ ಮರುದ್ಗಂಭೀರ ಭೇರೀನಿನದಮೊದವೆ ನಿರ್ವಾಣ<sup>೧</sup>ಕೈವಲ್ಯಮಾಂಗ|| ಲ್ಯ ಮಹೋತ್ಸಾಹಪ್ರಮೋದಾಮರ ಕಲಕಲಮಾನಂದಮಂಮಾಡೆರೋಮಾಂ| ಚಮನಾನಂದಾಶ್ರುವಂ ತಾಳ್ದಿದನಮಲಯಶಂ ಭಾರತೀಕರ್ಣಪೂರಂ{{gap}}||೭೭|| ಇದು ಪರಮಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ ಮುನೀಂದ್ರ ಚರಣನಖಕಿರಣ ಚಂದ್ರಿಕಾಚಕೋರ ಭಾರತೀಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ ರಾಮಚಂದ್ರ ಚರಿತ ಪುರಾಣದೊಳ್ ವಂಶವರ್ಣನಂ -ದ್ವಿತೀಯಾಶ್ವಾಸಂ- </poem><noinclude></noinclude> kss8un86teogn2smttz884hk4ejp2j8 322698 322697 2026-05-26T14:38:44Z Pragathi. BH 7585 322698 proofread-page text/x-wiki <noinclude><pagequality level="4" user="Pragathi. BH" /></noinclude>೪೨{{RunningHeader|center=ರಾಮಚಂದ್ರಚರಿತಪುರಾಣಂ}} <poem> ಮ||ಸ್ರ|| ಅಮರೇಂದ್ರೋದ್ಯಾನದಿ೦ ಪೂಮಳಿ ಕರೆಯೆ ಸುರೇ೦ದ್ರಾಗಮಂ {{Right|ರಾಗಮಂ ಬೀ|}} ರೆ ಮರುದ್ಗಂಭೀರ ಭೇರೀನಿನದಮೊದವೆ ನಿರ್ವಾಣ<sup>೧</sup>ಕೈವಲ್ಯಮಾಂಗ|| ಲ್ಯ ಮಹೋತ್ಸಾಹಪ್ರಮೋದಾಮರ ಕಲಕಲಮಾನಂದಮಂಮಾಡೆರೋಮಾಂ| ಚಮನಾನಂದಾಶ್ರುವಂ ತಾಳ್ದಿದನಮಲಯಶಂ ಭಾರತೀಕರ್ಣಪೂರಂ{{gap}}||೭೭|| ಇದು ಪರಮಜಿನಸಮಯ ಕುಮುದಿನೀ ಶರಚ್ಚಂದ್ರ ಬಾಲಚಂದ್ರ ಮುನೀಂದ್ರ ಚರಣನಖಕಿರಣ ಚಂದ್ರಿಕಾಚಕೋರ ಭಾರತೀಕರ್ಣಪೂರ ಶ್ರೀಮದಭಿನವಪಂಪ ವಿರಚಿತಮಪ್ಪ ರಾಮಚಂದ್ರ ಚರಿತ ಪುರಾಣದೊಳ್ ವಂಶವರ್ಣನಂ -ದ್ವಿತೀಯಾಶ್ವಾಸಂ- </poem><noinclude></noinclude> d32m2anyxrj0ud2jawrs21c7q4oqsn9 ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೦೪ 104 67126 322699 137127 2026-05-26T14:39:57Z Shreelatha.Halemane 7642 /* Proofread */ 322699 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|left=೨೧೪|center=ರಾಮಚಂದ್ರಚರಿತಪುರಾಣಂ|right=}} {{gap}}ಮತಲವರ್ಗಪಾಯಮಂ ಬಗೆದ ಬೇಡಂ ವಿಗತಾಸು ದುರಂತ ದುರ್ಗತಿ ಯೊಳ್ ತೊಅಲ್ವೆಂತಾನುಂ ಮನುಷ್ಯ ಗತಿವೆತ್ತು ತಾಪಸನಾಗಿ ಸತ್ತಾತಂ ಜ್ಯೋತಿ ರ್ಲೋಕದೊಳಗ್ನಿ ಪ್ರಭನೆಂಬ ದೇವನಾದನಿತ್ತ ಭರತಕ್ಷೇತ್ರದಂಷ್ಟ ಪುರಮನಾಳ್ವ ಪ್ರಿಯ ವ್ರತಮಹೀಭುಜಂಗೆ ಪದ್ಮಾವತಿಯುಂ ಕನಕಾಭ್ಯುಮೆಂಬರಿರ್ವರರಸಿಯರಾದರಲ್ಲಿ ಪದ್ಮಾವತಿಗೆ ಮುನ್ನ ಮಮರಗತಿವಡೆದುದಿತಾನುದಿತರಿರ್ವರುಂ ಬಂದು ರತ್ನರಥ ವಿಚಿತ್ರರಥರೆಂಬ ತನಯರಾದರಾ ಜ್ಯೋತಿ ಹೈನಲ್ಲಿಂ ಬಂದು ಕನಕಾಭೆಗೆ ತನೂಭವ ನನುಂದರನೆಂಬನಾದನಾ ಪ್ರಿಯವ್ರತನುಂ ತನ್ನ ಮಕ್ಕಳ್ಳರಸುತನಮಂ ಕೊಟ್ಟು ತೊರೆದಾಯುದಿವಸಂ ಸಂನ್ಯಸನಂಗೆಯ್ದು ಸಮಾಧಿ ಮರಣದಿಂ ಸ್ವರ್ಗಕ್ಕೆ ಪೋದನಿತ್ತ ಲರಸುಮಗನೊರ್ವ೦ ನಿಜತನೂಭವಯಂ ಶ್ರೀ ಪ್ರಭೆಯಂ ರತ್ನರಥಂಗೆ ಮದುವೆ ಮಾಚ್ಛೆನೆಂದಿರ್ಪುದುಮಾಕೆಯನನುಂದರಂ ತನಗೆ ಬೇಡಿ ಪಡೆಯದೆ ಕೂಸುಗುಡ ದಾತನಮೇಲೆತ್ತಿ ಬರ್ಪುದುಂ ರತ್ನರಥನುಂ ವಿಚಿತ್ರರಥನುಂ ಕೇಳು ಮುಳಿದು ದಾಳಿಯಿಟ್ಟು ಸುತ್ತಿ ಮುತ್ತಿ ಕಂ| ಪಿಡಿದು ಪರಿಭವಿಸಿ ಕೊಲ್ಲದೆ ಕಡಂಗಿ ಪೊಅಮಡಿಸಿ ಕಳೆದು ನಾಡಿಂ ದೈನ೦ || ಬಡಿಸಿದೊಡನುಂದರಂ ಬ ಿಡಿದೇವದನುಗ್ರಕೋಪಿ ತಾಪಸನಾದಂ11 ೫೬ || {{gap}}ಇತ್ತಲಾ ರತ್ನರಥ ವಿಚಿತ್ರರಥ ಚಿರಕಾಲಮರಸುಗೆಯುತಿರ್ದು ವೈರಾಗ್ಯದಿಂ ತೊಳೆದು ತಪಂಗೆಯ್ದು ಶರೀರಭಾರಮನಿಸಿಪಿ ನಾಕಲೋಕ ಸುಖಮನನುಭವಿಸಿ ಬಂದು ಸಿದ್ದಾರ್ಥನಗರಮನಾಳ ಕ್ಷೇಮಂಕರ ನರೇಂದ್ರಂಗಂ ವಿಮಲಾದೇವಿಗಂ ದೇಶಭೂಷಣ ಕುಲಭೂಷಣರೆಂಬ ತನಯರಾಗಿರ್ಪುದುಮೆಮ್ಮನೆಮ್ಮ ತಂದೆ ವಿದ್ಯಾ ಭ್ಯಾಸ ನಿಮಿತ್ತಂ ಮತ್ತೊಂದು ಪುರದೊಳಿರಿಸೆ ಸಕಲವಿದ್ಯೆಗಳುಮಂ ಸಾಗರಘೋಷ ರೆಂಬುಪಾಧ್ಯಾಯ ಕಲಿಸೆ ಕಲ್ಲು ಗುರುಗೃಹಾಗಮನ ಪೂಜಾನಂತರಂ ಮಹಾ ವಿಭೂತಿಯಿನೆಮ್ಮ ಪುರಮಂ ಪುಗುವ ಸಮಯದೊಳ್ ಕೈಗೆಯು ಕರುನಾಡದ ಮೇಲಿರ್ದ ಕನ್ನೆಯಂ ಕಂಡೆಮಗೆ ಪರಿಣಯನಕ್ಕೆ ತಂದರಸುಮಗಳೆಂದು ಬಗೆದು ಬಯಸಿ ನೋಡುತ್ತರಮನೆಯಂ ಪೊಕ್ಕೆ ಮೊಡವುಟ್ಟ ದಳೆಂದ ಅದು ಪೊಲ್ಲದಂ ಬಗೆದೆ ವೆಂದು ಅದುವೆ ನಿರ್ವಗ ನಿಮಿತ್ತವಾಗೆ ತೋಜಿದು ತಪಂಬಟ್ಟು ಚಾರಣ ಖುದ್ದಿ ವಡೆದು ಪೋಗಿಡಮೆಮಗೆ ಅ೦ಜನ್ಮದೊಳಂ ಜನಕನಾದ ನಿರತಿ ಶಯ ಪ್ರೇಮಾನುಬಂಧದಿಂ ಕ್ಷೇಮಂಕರ ಮಹಾರಾಜನೆಮ್ಮದಿಗೆ ಸೈರಿಸಲಾರದೆ 1. ಬಲ್ವಿಡಿದೇವಮನುಗ್ರಕೋಪಿ. ಘ. ; ಬಲ್ವಡಿದೇವನುದಗ್ರ, ಈ, ಬಲ್ವಿಡಿದಿವಮನುಜಗ್ರ, ಚ.<noinclude></noinclude> nl2dzw4lqqjmvryziwl7urxgry8vo16 ಪುಟ:ಶ್ರೀ ಕೃಷ್ಣ ಲೀಲೆ.djvu/೧೩೭ 104 68811 322700 139397 2026-05-26T14:42:24Z Shreelatha.Halemane 7642 /* Proofread */ 322700 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|left=|center=ಚತುರ್ಥಾoಕಂ|right=೧೨೧}} ಯಮುನಾನದಿಯು ಅನೇಕ ಪ್ರಾಣಿಗಳಿಗೂ, ಸಸ್ಯವರ ಕ್ಕೂ ಆಧಾರ ವಾಗಿರುವುದರಿಂದ, ನೀನು ಕ್ಷಣಮಾತ್ರವೂ ಇಲ್ಲಿರಕೂಡದು. ನಿನ್ನ ಕುಟುಂಬದೊಂದಿಗೆ ಈಗಲೇ ತರಳು, ಸಮುದ್ರ ಮಧ್ಯದಲ್ಲಿರುವ ರಮ ಣಕದ್ವೀಪಕ್ಕೆ ಹೋಗು. ಅಲ್ಲಿಗೆ ಹೋಗುತ್ತಲೇ ನಿನ್ನ ಶಾಪವಿಮೋಚನ ವಾಗುವುದು. ನನ್ನ ಹೆಜ್ಜೆಗಳಗುರುತು ನಿನ್ನ ಹೆಡೆಗಳಮೇಲಿರುವುದ ರಿಂದ ನಿನಗಿನ್ನು ಗರುಡನ ಭಯವಿಲ್ಲವು. ಯಾವ ಪ್ರಾಣಿಗಾದರೂ ಎಂದಿ ಗೂ ಕೇಡುಬಗೆಯದೆ, ಸಾಧುವಾರದಿಂದ ಸುಖವಾಗಿಬಾಳು, ಅರಳು! {{gap}}(ಕಾಳೀಯನೂ, ಅವನ ಪತ್ನಿಯರೂ ಕೃಷಮರಿಗೆ ನಮಸ್ಕರಿಸಿ ತೆರಳುವರು. ಕೃಷ್ಣನು ಗೋಪಾಲಕನಂದದಿ ಸಾಮಾನ್ಯರೂಪವನ್ನು ಧರಿಸಿ ನಡುವಿನಿಂದೀಚೆಗೆ ಬರುವನು. ಯಶೋದೆಯ, ನಂದನ, ಗೋಪಿಯರೂ, ಗೋಪರೂ ಒಂದೇ ಧ್ವನಿಯಿಂದ ತಮ್ಮ ಸಂತೋಷ ವನ್ನು ಸೂಚಿಸುವರು.) {{gap}}ಯಶೋದೆ:-ಮುದ್ದು ಕುಮಾರಾ | ಮನ್ಮಥಾಕಾರಾ ! ನನ್ನ ಭಾಗ್ಯದರಾಶಿಯೇ ! ಬಾ ! ಬಾ ! (ಎಂದು ಕೃಷ್ಮೆ ನನ್ನ ತಿಕೊಳ್ಳುವಳು.) ಎಲ್ಲರ ಗೋಕುಲಕ್ಕೆ ತೆರಳುವರು. *ರ್ಣಾಾ-AGE * ಚತುರ್ಥಾ೦ಕಂ ಸಂಪೂರ್ಣ೦. 72-೨ -ESS , ಕರುಣಾಸಮುದ್ರಾಯನಮಃ, OF ಜನ 16<noinclude></noinclude> hlrq1tcl3ijkzujry6w4lyxobc7818j ಮೀಡಿಯವಿಕಿ:Gadget-charinsert-core.js 8 76654 322919 277078 2026-05-27T06:58:46Z A826 6806 322919 javascript text/javascript /** * Originally copied from [[mw:User:Alex Smotrov/edittools.js]], * modified for use on English Wikisource. * * Configuration (to be set from [[Special:MyPage/common.js]]): * window.charinsertCustom – Object. Merged into the default charinsert list. For example, setting * this to { Symbols: '‽' } will add the interrobang to the end of the Symbols section. * window.editToolsRecall – Boolean. Set true to create a recall switch. * window.charinsertDontMove – Boolean. Set true to leave the box in its default position, rather * than moving it above the edit summary. * window.updateEditTools() – Function. Call after updating window.charinsertCustom to regenerate the * EditTools window. */ /* global $, mw, charinsertCustom */ window.updateEditTools = function () { }; $(function () { var $currentFocused, editTools; function getSelectedSection() { var selectedSection = mw.storage.get( editTools.storageKey ) || mw.storage.session.get( editTools.storageKey ); return selectedSection; } function saveSelectedSection( newIndex ) { mw.storage.set( editTools.storageKey, newIndex ) || mw.storage.session.set( editTools.storageKey, newIndex ); } editTools = { // Entries prefixed with ␥ (U+2425 SYMBOL FOR DELETE FORM TWO) will not appear in the article namespace (namespace 0). // Please make any changes to [[MediaWiki:Edittools]] as well, however, instead of using the ␥ symbol, use {{#ifeq:{{NAMESPACE}}|{{ns:0}}| | }}. charinsert: { "Insert": " ॥ । – — <br./> {\{gap}} {\{Right|}} {\{center|}} {\{Left|}} {\{rh|left=|center=+|right=}} {\{+}} {\{\{+|}}} | [+] [\[+|]] \"+\" „ = [\[Category:+]] #REDIRECT.[\[+]] &nb'+'sp; <nowiki>+</nowiki> ␥Sign_your_posts: ␥~~\\~~ {\{xxxx-smaller}} {\{xxx-smaller}} {\{xx-smaller}} {\{x-smaller}} {\{smaller}} {\{fine}} {\{larger}} {\{x-larger}} {\{xx-larger}} {\{xxx-larger}} {\{xxxx-larger}} ", "Wiki markup": " <br./> {\{gap}} {\{Right|}} {\{center|}} {\{Left|}} {\{rh|center=+|left=|right=}} – — {\{+}} {\{\{+|}}} | [+] [\[+|]] \"+\" = [\[Category:+]] #REDIRECT.[\[+]] &nb'+'sp; &#1'+'60; <nowiki>+</nowiki> ␥~~\\~~ <span.class=\"plainlinks\">+</span> <s>+</s> <sub>+</sub> <sup>+</sup> <ref>+</ref> <ref.name=\"+\" /> {\{smallrefs}} {\{reflist}} <references/> <includeonly>+</includeonly> <noinclude>+</noinclude> <onlyinclude>+</onlyinclude> <poem>+</poem> <blockquote>+</blockquote> <pre>+</pre> <kbd>+</kbd> {\{DEFAULTSORT:+}} <!--.+_--> {\{sc|+}} {\{center|+}} [\[Author:+|]] {\{fs90/s}}+{\{fs90/e}} {\{gap}} {\{nop}} {\{hws|+|}} {\{hwe|+|}} <section.begin=\"+\" /> <section.end=\"+\" /> <pages index=\"filename\" include=\"X\" header=\"1\" /> <pages index=\"filename\" from=\"X\" to=\"X\" header=\"1\" /> {\{xxxx-smaller}} {\{xxx-smaller}} {\{xx-smaller}} {\{x-smaller}} {\{smaller}} {\{fine}} {\{larger}} {\{x-larger}} {\{xx-larger}} {\{xxx-larger}} {\{xxxx-larger}} {\{xx-smaller block}} {\{x-smaller block}} {\{smaller block}} {\{fine block}} {\{larger block}} {\{x-larger block}} {\{xx-larger block}} {\{xxx-larger block}} {\{xxxx-larger block}} <syntaxhighlight.lang=\"wikitext\">+</syntaxhighlight>", 'Math & logic': ' ≤ ≥ ≈ ﴾+﴿ ± − × ÷ = ≠ √ ≡ ° ′ ″ ¹ ² ³ ¼ ½ ¾ ⅓ ⅔ ⅛ ⅜ ⅝ ⅞ ∞ ฿ ¢ $ € ₭ £ ₦ ¥ ₩ ₪ ∞ ← ↔ → ↑ ↕ ↓ m² m³ ∩ ∑ ∏ ∐ ′ ∫ ⟨+⟩ ∬ ∭ ∮ ∇ ∂ ∆ ⋅ ∗ ∘ ∓ ≅ ≜ ≝ ≐ ≃ ⊕ ⊗ ⇐ ⇔ ⇒ ≪ ≫ ∝ ∤ ≀ ◅ ▻ ⋉ ⋊ ⋈ ∴ ∵ ↦ ∧ ∨ ⊻ ∀ ∃ ∈ ∉ ∋ ⊆ ⊈ ⊊ ⊂ ⊄ ⊇ ⊉ ⊋ ⊃ ⊅ ∪ ∅ ℂ ℍ ℕ ℙ ℚ ℝ ℤ ℵ ¬ ⌊ ⌋ ⌈ ⌉ ⊤ ⊥ ⊢ ⊣ ⊧ □ ∠ ⟨ ⟩ {\{frac|+|}} &nb'+'sp; &minus; <math>+</math>' }, charinsertDivider: "\240", storageKey: 'edittoolscharsubset', createEditTools: function ( placeholder ) { var sel, id; var box = document.createElement( 'div' ); var prevSubset = 0, curSubset = 0; box.id = 'editpage-specialchars'; box.title = 'Click on the character or tag to insert it into the edit window'; // append user-defined sets if ( window.charinsertCustom ) { for ( id in charinsertCustom ) { if ( !editTools.charinsert[id] ) { editTools.charinsert[id] = ''; } } } // create drop-down select sel = document.createElement( 'select' ); for ( id in editTools.charinsert ) { sel.options[sel.options.length] = new Option( id, id ); } sel.selectedIndex = 0; sel.style.marginRight = '.3em'; sel.title = 'Choose character subset'; sel.onchange = sel.onkeyup = selectSubset; box.appendChild( sel ); // create "recall" switch if ( window.editToolsRecall ) { var recall = document.createElement( 'span' ); recall.appendChild( document.createTextNode( '↕' ) ); // ↔ recall.onclick = function() { sel.selectedIndex = prevSubset; selectSubset(); }; recall.style.cssFloat = 'left'; recall.style.marginRight = '5px'; recall.style.cursor = 'pointer'; box.appendChild( recall ); } if ( getSelectedSection() ) { sel.selectedIndex = getSelectedSection(); } placeholder.parentNode.replaceChild( box, placeholder ); selectSubset(); return; function selectSubset() { // remember previous (for "recall" button) prevSubset = curSubset; curSubset = sel.selectedIndex; //save into web storage for persistence saveSelectedSection( curSubset ); //hide other subsets var pp = box.getElementsByTagName( 'p' ) ; for ( var i = 0; i < pp.length; i++ ) { pp[i].style.display = 'none'; } //show/create current subset var id = sel.options[curSubset].value; var p = document.getElementById( id ); if ( !p ) { p = document.createElement( 'p' ); p.className = 'nowraplinks'; p.id = id; if ( id == 'Arabic' || id == 'Hebrew' ) { p.style.fontSize = '120%'; p.dir = 'rtl'; } var tokens = editTools.charinsert[id]; if ( window.charinsertCustom && charinsertCustom[id] ) { if ( tokens.length > 0 ) { tokens += ' '; } tokens += charinsertCustom[id]; } editTools.createTokens( p, tokens ); box.appendChild( p ); } p.style.display = 'inline'; } }, createTokens: function ( paragraph, str ) { var tokens = str.split( ' ' ), token, i, n; for ( i = 0; i < tokens.length; i++ ) { token = tokens[i]; n = token.indexOf( '+' ); if ( token.charAt( 0 ) === '␥' ) { if ( token.length > 1 && mw.config.get( 'wgNamespaceNumber' ) === 0 ) { continue; } else { token = token.substring( 1 ); } } if ( token === '' || token === '_' ) { addText( editTools.charinsertDivider + ' ' ); } else if ( token === '\n' ) { paragraph.appendChild( document.createElement( 'br' ) ); } else if ( token === '___' ) { paragraph.appendChild( document.createElement( 'hr' ) ); } else if ( token.charAt( token.length-1 ) === ':' ) { // : at the end means just text addBold( token ); } else if ( n === 0 ) { // +<tag> -> <tag>+</tag> addLink( token.substring( 1 ), '</' + token.substring( 2 ), token.substring( 1 ) ); } else if ( n > 0 ) { // <tag>+</tag> addLink( token.substring( 0, n ), token.substring( n+1 ) ); } else if ( token.length > 2 && token.charCodeAt( 0 ) > 127 ) { // a string of insertable characters for ( var j = 0; j < token.length; j++ ) { addLink( token.charAt( j ), '' ); } } else { addLink( token, '' ); } } return; function addLink( tagOpen, tagClose, name ) { var handler; var dle = tagOpen.indexOf( '\x10' ); var a = document.createElement( 'a' ); if ( dle > 0 ) { var path = tagOpen.substring( dle + 1 ).split( '.' ); tagOpen = tagOpen.substring( 0, dle ); handler = window; for ( var i = 0; i < path.length; i++ ) { handler = handler[path[i]]; } $( a ).on( 'click', handler ); } else { tagOpen = tagOpen.replace( /\./g,' ' ); tagClose = tagClose ? tagClose.replace( /_/g,' ' ) : ''; $( a ).on( 'click', { tagOpen: tagOpen, sampleText: '', tagClose: tagClose }, insertTags ); } name = name || tagOpen + tagClose; name = name.replace( /\\n/g,'' ); a.appendChild( document.createTextNode( name ) ); a.href = ''; paragraph.appendChild( a ); addText( ' ' ); } function addBold( text ) { var b = document.createElement( 'b' ); b.appendChild( document.createTextNode( text.replace( /_/g,' ' ) ) ); paragraph.appendChild( b ); addText( ' ' ); } function addText( txt ) { paragraph.appendChild( document.createTextNode( txt ) ); } function insertTags( e ) { e.preventDefault(); if ( $currentFocused && $currentFocused.length ) { $currentFocused.textSelection( 'encapsulateSelection', { pre: e.data.tagOpen, peri: e.data.sampleText, post: e.data.tagClose } ); } } }, setup: function () { var placeholder; if ( $( '#editpage-specialchars' ).length ) { placeholder = $( '#editpage-specialchars' )[0]; } else { placeholder = $( '<div id="editpage-specialchars"> </div>' ).prependTo( '.mw-editTools' )[0]; } if ( !placeholder ) { return; } if ( !window.charinsertDontMove ) { $( '.editOptions' ).before( placeholder ); } // Find the element that is focused $currentFocused = $( '#wpTextbox1' ); // Apply to dynamically created textboxes as well as normal ones $( document ).on( 'focus', 'textarea, input:text', function () { $currentFocused = $( this ); } ); // Used to determine where to insert tags editTools.createEditTools( placeholder ); window.updateEditTools = function () { editTools.createEditTools( $( '#editpage-specialchars' )[0] ); }; } }; // end editTools editTools.setup(); } ); ihglqbayo7pv35z4bruybz02jiqvj5r 322920 322919 2026-05-27T07:10:24Z A826 6806 322920 javascript text/javascript /** * Originally copied from [[mw:User:Alex Smotrov/edittools.js]], * modified for use on English Wikisource. * * Configuration (to be set from [[Special:MyPage/common.js]]): * window.charinsertCustom – Object. Merged into the default charinsert list. For example, setting * this to { Symbols: '‽' } will add the interrobang to the end of the Symbols section. * window.editToolsRecall – Boolean. Set true to create a recall switch. * window.charinsertDontMove – Boolean. Set true to leave the box in its default position, rather * than moving it above the edit summary. * window.updateEditTools() – Function. Call after updating window.charinsertCustom to regenerate the * EditTools window. */ /* global $, mw, charinsertCustom */ window.updateEditTools = function () { }; $(function () { var $currentFocused, editTools; function getSelectedSection() { var selectedSection = mw.storage.get( editTools.storageKey ) || mw.storage.session.get( editTools.storageKey ); return selectedSection; } function saveSelectedSection( newIndex ) { mw.storage.set( editTools.storageKey, newIndex ) || mw.storage.session.set( editTools.storageKey, newIndex ); } editTools = { // Entries prefixed with ␥ (U+2425 SYMBOL FOR DELETE FORM TWO) will not appear in the article namespace (namespace 0). // Please make any changes to [[MediaWiki:Edittools]] as well, however, instead of using the ␥ symbol, use {{#ifeq:{{NAMESPACE}}|{{ns:0}}| | }}. charinsert: { 'Insert': " ॥ । – — <br./> {\{gap}} {\{Right|+}} {\{center|+}} {\{Left|+}} {\{rh|left=|center=+|right=}} {\{+}} {\{\{+|}}} | [+] [\[+|]] \"+\" „ = [\[Category:+]] #REDIRECT.[\[+]] &nb'+'sp; <nowiki>+</nowiki> {\{xxxx-smaller|+}} {\{xxx-smaller|+}} {\{xx-smaller|+}} {\{x-smaller|+}} {\{smaller|+}} {\{fine|+}} {\{larger|+}} {\{x-larger|+}} {\{xx-larger|+}} {\{xxx-larger|+}} {\{xxxx-larger|+}} ␥Sign_your_posts: ␥~~\\~~", 'Wiki markup': " <br./> {\{gap}} {\{Right|+}} {\{center|+}} {\{Left|+}} {\{rh|center=+|left=|right=}} – — {\{+}} {\{\{+|}}} | [+] [\[+|]] \"+\" = [\[Category:+]] #REDIRECT.[\[+]] &nb'+'sp; &#1'+'60; <nowiki>+</nowiki> ␥~~\\~~ <span.class=\"plainlinks\">+</span> <s>+</s> <sub>+</sub> <sup>+</sup> <ref>+</ref> <ref.name=\"+\" /> {\{smallrefs}} {\{reflist}} <references/> <includeonly>+</includeonly> <noinclude>+</noinclude> <onlyinclude>+</onlyinclude> <poem>+</poem> <blockquote>+</blockquote> <pre>+</pre> <kbd>+</kbd> {\{DEFAULTSORT:+}} <!--.+_--> {\{sc|+}} {\{center|+}} [\[Author:+|]] {\{fs90/s}}+{\{fs90/e}} {\{gap}} {\{nop}} {\{hws|+|}} {\{hwe|+|}} <section.begin=\"+\" /> <section.end=\"+\" /> <pages index=\"filename\" include=\"X\" header=\"1\" /> <pages index=\"filename\" from=\"X\" to=\"X\" header=\"1\" /> {\{xxxx-smaller|+}} {\{xxx-smaller|+}} {\{xx-smaller|+}} {\{x-smaller|+}} {\{smaller|+}} {\{fine|+}} {\{larger|+}} {\{x-larger|+}} {\{xx-larger|+}} {\{xxx-larger|+}} {\{xxxx-larger|+}} {\{xx-smaller block}} {\{x-smaller block}} {\{smaller block}} {\{fine block}} {\{larger block}} {\{x-larger block}} {\{xx-larger block}} {\{xxx-larger block}} {\{xxxx-larger block}} <syntaxhighlight.lang=\"wikitext\">+</syntaxhighlight>", 'Math & logic': ' ≤ ≥ ≈ ﴾+﴿ ± − × ÷ = ≠ √ ≡ ° ′ ″ ¹ ² ³ ¼ ½ ¾ ⅓ ⅔ ⅛ ⅜ ⅝ ⅞ ∞ ฿ ¢ $ € ₭ £ ₦ ¥ ₩ ₪ ∞ ← ↔ → ↑ ↕ ↓ m² m³ ∩ ∑ ∏ ∐ ′ ∫ ⟨+⟩ ∬ ∭ ∮ ∇ ∂ ∆ ⋅ ∗ ∘ ∓ ≅ ≜ ≝ ≐ ≃ ⊕ ⊗ ⇐ ⇔ ⇒ ≪ ≫ ∝ ∤ ≀ ◅ ▻ ⋉ ⋊ ⋈ ∴ ∵ ↦ ∧ ∨ ⊻ ∀ ∃ ∈ ∉ ∋ ⊆ ⊈ ⊊ ⊂ ⊄ ⊇ ⊉ ⊋ ⊃ ⊅ ∪ ∅ ℂ ℍ ℕ ℙ ℚ ℝ ℤ ℵ ¬ ⌊ ⌋ ⌈ ⌉ ⊤ ⊥ ⊢ ⊣ ⊧ □ ∠ ⟨ ⟩ {\{frac|+|}} &nb'+'sp; &minus; <math>+</math>' }, charinsertDivider: "\240", storageKey: 'edittoolscharsubset', createEditTools: function ( placeholder ) { var sel, id; var box = document.createElement( 'div' ); var prevSubset = 0, curSubset = 0; box.id = 'editpage-specialchars'; box.title = 'Click on the character or tag to insert it into the edit window'; // append user-defined sets if ( window.charinsertCustom ) { for ( id in charinsertCustom ) { if ( !editTools.charinsert[id] ) { editTools.charinsert[id] = ''; } } } // create drop-down select sel = document.createElement( 'select' ); for ( id in editTools.charinsert ) { sel.options[sel.options.length] = new Option( id, id ); } sel.selectedIndex = 0; sel.style.marginRight = '.3em'; sel.title = 'Choose character subset'; sel.onchange = sel.onkeyup = selectSubset; box.appendChild( sel ); // create "recall" switch if ( window.editToolsRecall ) { var recall = document.createElement( 'span' ); recall.appendChild( document.createTextNode( '↕' ) ); // ↔ recall.onclick = function() { sel.selectedIndex = prevSubset; selectSubset(); }; recall.style.cssFloat = 'left'; recall.style.marginRight = '5px'; recall.style.cursor = 'pointer'; box.appendChild( recall ); } if ( getSelectedSection() ) { sel.selectedIndex = getSelectedSection(); } placeholder.parentNode.replaceChild( box, placeholder ); selectSubset(); return; function selectSubset() { // remember previous (for "recall" button) prevSubset = curSubset; curSubset = sel.selectedIndex; //save into web storage for persistence saveSelectedSection( curSubset ); //hide other subsets var pp = box.getElementsByTagName( 'p' ) ; for ( var i = 0; i < pp.length; i++ ) { pp[i].style.display = 'none'; } //show/create current subset var id = sel.options[curSubset].value; var p = document.getElementById( id ); if ( !p ) { p = document.createElement( 'p' ); p.className = 'nowraplinks'; p.id = id; if ( id == 'Arabic' || id == 'Hebrew' ) { p.style.fontSize = '120%'; p.dir = 'rtl'; } var tokens = editTools.charinsert[id]; if ( window.charinsertCustom && charinsertCustom[id] ) { if ( tokens.length > 0 ) { tokens += ' '; } tokens += charinsertCustom[id]; } editTools.createTokens( p, tokens ); box.appendChild( p ); } p.style.display = 'inline'; } }, createTokens: function ( paragraph, str ) { var tokens = str.split( ' ' ), token, i, n; for ( i = 0; i < tokens.length; i++ ) { token = tokens[i]; n = token.indexOf( '+' ); if ( token.charAt( 0 ) === '␥' ) { if ( token.length > 1 && mw.config.get( 'wgNamespaceNumber' ) === 0 ) { continue; } else { token = token.substring( 1 ); } } if ( token === '' || token === '_' ) { addText( editTools.charinsertDivider + ' ' ); } else if ( token === '\n' ) { paragraph.appendChild( document.createElement( 'br' ) ); } else if ( token === '___' ) { paragraph.appendChild( document.createElement( 'hr' ) ); } else if ( token.charAt( token.length-1 ) === ':' ) { // : at the end means just text addBold( token ); } else if ( n === 0 ) { // +<tag> -> <tag>+</tag> addLink( token.substring( 1 ), '</' + token.substring( 2 ), token.substring( 1 ) ); } else if ( n > 0 ) { // <tag>+</tag> addLink( token.substring( 0, n ), token.substring( n+1 ) ); } else if ( token.length > 2 && token.charCodeAt( 0 ) > 127 ) { // a string of insertable characters for ( var j = 0; j < token.length; j++ ) { addLink( token.charAt( j ), '' ); } } else { addLink( token, '' ); } } return; function addLink( tagOpen, tagClose, name ) { var handler; var dle = tagOpen.indexOf( '\x10' ); var a = document.createElement( 'a' ); if ( dle > 0 ) { var path = tagOpen.substring( dle + 1 ).split( '.' ); tagOpen = tagOpen.substring( 0, dle ); handler = window; for ( var i = 0; i < path.length; i++ ) { handler = handler[path[i]]; } $( a ).on( 'click', handler ); } else { tagOpen = tagOpen.replace( /\./g,' ' ); tagClose = tagClose ? tagClose.replace( /_/g,' ' ) : ''; $( a ).on( 'click', { tagOpen: tagOpen, sampleText: '', tagClose: tagClose }, insertTags ); } name = name || tagOpen + tagClose; name = name.replace( /\\n/g,'' ); a.appendChild( document.createTextNode( name ) ); a.href = ''; paragraph.appendChild( a ); addText( ' ' ); } function addBold( text ) { var b = document.createElement( 'b' ); b.appendChild( document.createTextNode( text.replace( /_/g,' ' ) ) ); paragraph.appendChild( b ); addText( ' ' ); } function addText( txt ) { paragraph.appendChild( document.createTextNode( txt ) ); } function insertTags( e ) { e.preventDefault(); if ( $currentFocused && $currentFocused.length ) { $currentFocused.textSelection( 'encapsulateSelection', { pre: e.data.tagOpen, peri: e.data.sampleText, post: e.data.tagClose } ); } } }, setup: function () { var placeholder; if ( $( '#editpage-specialchars' ).length ) { placeholder = $( '#editpage-specialchars' )[0]; } else { placeholder = $( '<div id="editpage-specialchars"> </div>' ).prependTo( '.mw-editTools' )[0]; } if ( !placeholder ) { return; } if ( !window.charinsertDontMove ) { $( '.editOptions' ).before( placeholder ); } // Find the element that is focused $currentFocused = $( '#wpTextbox1' ); // Apply to dynamically created textboxes as well as normal ones $( document ).on( 'focus', 'textarea, input:text', function () { $currentFocused = $( this ); } ); // Used to determine where to insert tags editTools.createEditTools( placeholder ); window.updateEditTools = function () { editTools.createEditTools( $( '#editpage-specialchars' )[0] ); }; } }; // end editTools editTools.setup(); } ); tctd8v1474wz0d7dlo1law26w1abfpo 322921 322920 2026-05-27T07:13:31Z A826 6806 322921 javascript text/javascript /** * Originally copied from [[mw:User:Alex Smotrov/edittools.js]], * modified for use on English Wikisource. * * Configuration (to be set from [[Special:MyPage/common.js]]): * window.charinsertCustom – Object. Merged into the default charinsert list. For example, setting * this to { Symbols: '‽' } will add the interrobang to the end of the Symbols section. * window.editToolsRecall – Boolean. Set true to create a recall switch. * window.charinsertDontMove – Boolean. Set true to leave the box in its default position, rather * than moving it above the edit summary. * window.updateEditTools() – Function. Call after updating window.charinsertCustom to regenerate the * EditTools window. */ /* global $, mw, charinsertCustom */ window.updateEditTools = function () { }; $(function () { var $currentFocused, editTools; function getSelectedSection() { var selectedSection = mw.storage.get( editTools.storageKey ) || mw.storage.session.get( editTools.storageKey ); return selectedSection; } function saveSelectedSection( newIndex ) { mw.storage.set( editTools.storageKey, newIndex ) || mw.storage.session.set( editTools.storageKey, newIndex ); } editTools = { // Entries prefixed with ␥ (U+2425 SYMBOL FOR DELETE FORM TWO) will not appear in the article namespace (namespace 0). // Please make any changes to [[MediaWiki:Edittools]] as well, however, instead of using the ␥ symbol, use {{#ifeq:{{NAMESPACE}}|{{ns:0}}| | }}. charinsert: { "Insert": " ॥ । – — <br./> {\{gap}} {\{Right|+}} {\{center|+}} {\{Left|+}} {\{rh|left=|center=+|right=}} {\{+}} {\{\{+|}}} | [+] [\[+|]] \"+\" „ = [\[Category:+]] #REDIRECT.[\[+]] &nb'+'sp; <nowiki>+</nowiki> {\{xxxx-smaller|+}} {\{xxx-smaller|+}} {\{xx-smaller|+}} {\{x-smaller|+}} {\{smaller|+}} {\{fine|+}} {\{larger|+}} {\{x-larger|+}} {\{xx-larger|+}} {\{xxx-larger|+}} {\{xxxx-larger|+}} ␥Sign_your_posts: ␥~~\\~~", "Wiki markup": " <br./> {\{gap}} {\{Right|+}} {\{center|+}} {\{Left|+}} {\{rh|center=+|left=|right=}} – — {\{+}} {\{\{+|}}} | [+] [\[+|]] \"+\" = [\[Category:+]] #REDIRECT.[\[+]] &nb'+'sp; &#1'+'60; <nowiki>+</nowiki> ␥~~\\~~ <span.class=\"plainlinks\">+</span> <s>+</s> <sub>+</sub> <sup>+</sup> <ref>+</ref> <ref.name=\"+\" /> {\{smallrefs}} {\{reflist}} <references/> <includeonly>+</includeonly> <noinclude>+</noinclude> <onlyinclude>+</onlyinclude> <poem>+</poem> <blockquote>+</blockquote> <pre>+</pre> <kbd>+</kbd> {\{DEFAULTSORT:+}} <!--.+_--> {\{sc|+}} {\{center|+}} [\[Author:+|]] {\{fs90/s}}+{\{fs90/e}} {\{gap}} {\{nop}} {\{hws|+|}} {\{hwe|+|}} <section.begin=\"+\" /> <section.end=\"+\" /> <pages index=\"filename\" include=\"X\" header=\"1\" /> <pages index=\"filename\" from=\"X\" to=\"X\" header=\"1\" /> {\{xxxx-smaller|+}} {\{xxx-smaller|+}} {\{xx-smaller|+}} {\{x-smaller|+}} {\{smaller|+}} {\{fine|+}} {\{larger|+}} {\{x-larger|+}} {\{xx-larger|+}} {\{xxx-larger|+}} {\{xxxx-larger|+}} {\{xx-smaller block}} {\{x-smaller block}} {\{smaller block}} {\{fine block}} {\{larger block}} {\{x-larger block}} {\{xx-larger block}} {\{xxx-larger block}} {\{xxxx-larger block}} <syntaxhighlight.lang=\"wikitext\">+</syntaxhighlight>", 'Math & logic': ' ≤ ≥ ≈ ﴾+﴿ ± − × ÷ = ≠ √ ≡ ° ′ ″ ¹ ² ³ ¼ ½ ¾ ⅓ ⅔ ⅛ ⅜ ⅝ ⅞ ∞ ฿ ¢ $ € ₭ £ ₦ ¥ ₩ ₪ ∞ ← ↔ → ↑ ↕ ↓ m² m³ ∩ ∑ ∏ ∐ ′ ∫ ⟨+⟩ ∬ ∭ ∮ ∇ ∂ ∆ ⋅ ∗ ∘ ∓ ≅ ≜ ≝ ≐ ≃ ⊕ ⊗ ⇐ ⇔ ⇒ ≪ ≫ ∝ ∤ ≀ ◅ ▻ ⋉ ⋊ ⋈ ∴ ∵ ↦ ∧ ∨ ⊻ ∀ ∃ ∈ ∉ ∋ ⊆ ⊈ ⊊ ⊂ ⊄ ⊇ ⊉ ⊋ ⊃ ⊅ ∪ ∅ ℂ ℍ ℕ ℙ ℚ ℝ ℤ ℵ ¬ ⌊ ⌋ ⌈ ⌉ ⊤ ⊥ ⊢ ⊣ ⊧ □ ∠ ⟨ ⟩ {\{frac|+|}} &nb'+'sp; &minus; <math>+</math>' }, charinsertDivider: "\240", storageKey: 'edittoolscharsubset', createEditTools: function ( placeholder ) { var sel, id; var box = document.createElement( 'div' ); var prevSubset = 0, curSubset = 0; box.id = 'editpage-specialchars'; box.title = 'Click on the character or tag to insert it into the edit window'; // Add CSS to style the toolbar box.style.cssText = 'position: sticky; top: 0; background: white; z-index: 100; padding: 5px; border-bottom: 1px solid #ccc; margin-bottom: 10px;'; // append user-defined sets if ( window.charinsertCustom ) { for ( id in charinsertCustom ) { if ( !editTools.charinsert[id] ) { editTools.charinsert[id] = ''; } } } // create drop-down select sel = document.createElement( 'select' ); for ( id in editTools.charinsert ) { sel.options[sel.options.length] = new Option( id, id ); } sel.selectedIndex = 0; sel.style.marginRight = '.3em'; sel.title = 'Choose character subset'; sel.onchange = sel.onkeyup = selectSubset; box.appendChild( sel ); // create "recall" switch if ( window.editToolsRecall ) { var recall = document.createElement( 'span' ); recall.appendChild( document.createTextNode( '↕' ) ); // ↔ recall.onclick = function() { sel.selectedIndex = prevSubset; selectSubset(); }; recall.style.cssFloat = 'left'; recall.style.marginRight = '5px'; recall.style.cursor = 'pointer'; box.appendChild( recall ); } if ( getSelectedSection() ) { sel.selectedIndex = getSelectedSection(); } placeholder.parentNode.replaceChild( box, placeholder ); selectSubset(); return; function selectSubset() { // remember previous (for "recall" button) prevSubset = curSubset; curSubset = sel.selectedIndex; //save into web storage for persistence saveSelectedSection( curSubset ); //hide other subsets var pp = box.getElementsByTagName( 'p' ) ; for ( var i = 0; i < pp.length; i++ ) { pp[i].style.display = 'none'; } //show/create current subset var id = sel.options[curSubset].value; var p = document.getElementById( id ); if ( !p ) { p = document.createElement( 'p' ); p.className = 'nowraplinks'; p.id = id; if ( id == 'Arabic' || id == 'Hebrew' ) { p.style.fontSize = '120%'; p.dir = 'rtl'; } var tokens = editTools.charinsert[id]; if ( window.charinsertCustom && charinsertCustom[id] ) { if ( tokens.length > 0 ) { tokens += ' '; } tokens += charinsertCustom[id]; } editTools.createTokens( p, tokens ); box.appendChild( p ); } p.style.display = 'inline'; } }, createTokens: function ( paragraph, str ) { var tokens = str.split( ' ' ), token, i, n; for ( i = 0; i < tokens.length; i++ ) { token = tokens[i]; n = token.indexOf( '+' ); if ( token.charAt( 0 ) === '␥' ) { if ( token.length > 1 && mw.config.get( 'wgNamespaceNumber' ) === 0 ) { continue; } else { token = token.substring( 1 ); } } if ( token === '' || token === '_' ) { addText( editTools.charinsertDivider + ' ' ); } else if ( token === '\n' ) { paragraph.appendChild( document.createElement( 'br' ) ); } else if ( token === '___' ) { paragraph.appendChild( document.createElement( 'hr' ) ); } else if ( token.charAt( token.length-1 ) === ':' ) { // : at the end means just text addBold( token ); } else if ( n === 0 ) { // +<tag> -> <tag>+</tag> addLink( token.substring( 1 ), '</' + token.substring( 2 ), token.substring( 1 ) ); } else if ( n > 0 ) { // <tag>+</tag> addLink( token.substring( 0, n ), token.substring( n+1 ) ); } else if ( token.length > 2 && token.charCodeAt( 0 ) > 127 ) { // a string of insertable characters for ( var j = 0; j < token.length; j++ ) { addLink( token.charAt( j ), '' ); } } else { addLink( token, '' ); } } return; function addLink( tagOpen, tagClose, name ) { var handler; var dle = tagOpen.indexOf( '\x10' ); var a = document.createElement( 'a' ); if ( dle > 0 ) { var path = tagOpen.substring( dle + 1 ).split( '.' ); tagOpen = tagOpen.substring( 0, dle ); handler = window; for ( var i = 0; i < path.length; i++ ) { handler = handler[path[i]]; } $( a ).on( 'click', handler ); } else { tagOpen = tagOpen.replace( /\./g,' ' ); tagClose = tagClose ? tagClose.replace( /_/g,' ' ) : ''; $( a ).on( 'click', { tagOpen: tagOpen, sampleText: '', tagClose: tagClose }, insertTags ); } name = name || tagOpen + tagClose; name = name.replace( /\\n/g,'' ); a.appendChild( document.createTextNode( name ) ); a.href = ''; paragraph.appendChild( a ); addText( ' ' ); } function addBold( text ) { var b = document.createElement( 'b' ); b.appendChild( document.createTextNode( text.replace( /_/g,' ' ) ) ); paragraph.appendChild( b ); addText( ' ' ); } function addText( txt ) { paragraph.appendChild( document.createTextNode( txt ) ); } function insertTags( e ) { e.preventDefault(); if ( $currentFocused && $currentFocused.length ) { $currentFocused.textSelection( 'encapsulateSelection', { pre: e.data.tagOpen, peri: e.data.sampleText, post: e.data.tagClose } ); } } }, setup: function () { var placeholder; // First, check if toolbar already exists and remove it var existingToolbar = $( '#editpage-specialchars' ); if ( existingToolbar.length ) { existingToolbar.remove(); } // Create new placeholder placeholder = $( '<div id="editpage-specialchars"> </div>' )[0]; // FORCE toolbar to be at the TOP of edit window // Find the edit form container var editForm = $( '#editform' ); if ( editForm.length ) { // Insert at the very beginning of the edit form editForm.prepend( placeholder ); } else { // Fallback: try to put before the textarea $( '#wpTextbox1' ).before( placeholder ); } // Find the element that is focused $currentFocused = $( '#wpTextbox1' ); // Apply to dynamically created textboxes as well as normal ones $( document ).on( 'focus', 'textarea, input:text', function () { $currentFocused = $( this ); } ); // Used to determine where to insert tags editTools.createEditTools( placeholder ); window.updateEditTools = function () { editTools.createEditTools( $( '#editpage-specialchars' )[0] ); }; } }; // end editTools editTools.setup(); } ); jzx282gpte1csudb2n4qgtf7r43sygu 322923 322921 2026-05-27T07:18:40Z A826 6806 - nolonger applicable 322923 javascript text/javascript /** * Originally copied from [[mw:User:Alex Smotrov/edittools.js]], * modified for use on English Wikisource. * * Configuration (to be set from [[Special:MyPage/common.js]]): * window.charinsertCustom – Object. Merged into the default charinsert list. For example, setting * this to { Symbols: '‽' } will add the interrobang to the end of the Symbols section. * window.editToolsRecall – Boolean. Set true to create a recall switch. * window.charinsertDontMove – Boolean. Set true to leave the box in its default position, rather * than moving it above the edit summary. * window.updateEditTools() – Function. Call after updating window.charinsertCustom to regenerate the * EditTools window. */ /* global $, mw, charinsertCustom */ window.updateEditTools = function () { }; $(function () { var $currentFocused, editTools; function getSelectedSection() { var selectedSection = mw.storage.get( editTools.storageKey ) || mw.storage.session.get( editTools.storageKey ); return selectedSection; } function saveSelectedSection( newIndex ) { mw.storage.set( editTools.storageKey, newIndex ) || mw.storage.session.set( editTools.storageKey, newIndex ); } editTools = { // Entries prefixed with ␥ (U+2425 SYMBOL FOR DELETE FORM TWO) will not appear in the article namespace (namespace 0). charinsert: { "Insert": " ॥ । – — <br./> {\{gap}} {\{Right|+}} {\{center|+}} {\{Left|+}} {\{rh|left=|center=+|right=}} {\{+}} {\{\{+|}}} | [+] [\[+|]] \"+\" „ = [\[Category:+]] #REDIRECT.[\[+]] &nb'+'sp; <nowiki>+</nowiki> {\{xxxx-smaller|+}} {\{xxx-smaller|+}} {\{xx-smaller|+}} {\{x-smaller|+}} {\{smaller|+}} {\{fine|+}} {\{larger|+}} {\{x-larger|+}} {\{xx-larger|+}} {\{xxx-larger|+}} {\{xxxx-larger|+}} ␥Sign_your_posts: ␥~~\\~~", "Wiki markup": " <br./> {\{gap}} {\{Right|+}} {\{center|+}} {\{Left|+}} {\{rh|center=+|left=|right=}} – — {\{+}} {\{\{+|}}} | [+] [\[+|]] \"+\" = [\[Category:+]] #REDIRECT.[\[+]] &nb'+'sp; &#1'+'60; <nowiki>+</nowiki> ␥~~\\~~ <span.class=\"plainlinks\">+</span> <s>+</s> <sub>+</sub> <sup>+</sup> <ref>+</ref> <ref.name=\"+\" /> {\{smallrefs}} {\{reflist}} <references/> <includeonly>+</includeonly> <noinclude>+</noinclude> <onlyinclude>+</onlyinclude> <poem>+</poem> <blockquote>+</blockquote> <pre>+</pre> <kbd>+</kbd> {\{DEFAULTSORT:+}} <!--.+_--> {\{sc|+}} {\{center|+}} [\[Author:+|]] {\{fs90/s}}+{\{fs90/e}} {\{gap}} {\{nop}} {\{hws|+|}} {\{hwe|+|}} <section.begin=\"+\" /> <section.end=\"+\" /> <pages index=\"filename\" include=\"X\" header=\"1\" /> <pages index=\"filename\" from=\"X\" to=\"X\" header=\"1\" /> {\{xxxx-smaller|+}} {\{xxx-smaller|+}} {\{xx-smaller|+}} {\{x-smaller|+}} {\{smaller|+}} {\{fine|+}} {\{larger|+}} {\{x-larger|+}} {\{xx-larger|+}} {\{xxx-larger|+}} {\{xxxx-larger|+}} {\{xx-smaller block}} {\{x-smaller block}} {\{smaller block}} {\{fine block}} {\{larger block}} {\{x-larger block}} {\{xx-larger block}} {\{xxx-larger block}} {\{xxxx-larger block}} <syntaxhighlight.lang=\"wikitext\">+</syntaxhighlight>", 'Math & logic': ' ≤ ≥ ≈ ﴾+﴿ ± − × ÷ = ≠ √ ≡ ° ′ ″ ¹ ² ³ ¼ ½ ¾ ⅓ ⅔ ⅛ ⅜ ⅝ ⅞ ∞ ฿ ¢ $ € ₭ £ ₦ ¥ ₩ ₪ ∞ ← ↔ → ↑ ↕ ↓ m² m³ ∩ ∑ ∏ ∐ ′ ∫ ⟨+⟩ ∬ ∭ ∮ ∇ ∂ ∆ ⋅ ∗ ∘ ∓ ≅ ≜ ≝ ≐ ≃ ⊕ ⊗ ⇐ ⇔ ⇒ ≪ ≫ ∝ ∤ ≀ ◅ ▻ ⋉ ⋊ ⋈ ∴ ∵ ↦ ∧ ∨ ⊻ ∀ ∃ ∈ ∉ ∋ ⊆ ⊈ ⊊ ⊂ ⊄ ⊇ ⊉ ⊋ ⊃ ⊅ ∪ ∅ ℂ ℍ ℕ ℙ ℚ ℝ ℤ ℵ ¬ ⌊ ⌋ ⌈ ⌉ ⊤ ⊥ ⊢ ⊣ ⊧ □ ∠ ⟨ ⟩ {\{frac|+|}} &nb'+'sp; &minus; <math>+</math>' }, charinsertDivider: "\240", storageKey: 'edittoolscharsubset', createEditTools: function ( placeholder ) { var sel, id; var box = document.createElement( 'div' ); var prevSubset = 0, curSubset = 0; box.id = 'editpage-specialchars'; box.title = 'Click on the character or tag to insert it into the edit window'; // Add CSS to style the toolbar box.style.cssText = 'position: sticky; top: 0; background: white; z-index: 100; padding: 5px; border-bottom: 1px solid #ccc; margin-bottom: 10px;'; // append user-defined sets if ( window.charinsertCustom ) { for ( id in charinsertCustom ) { if ( !editTools.charinsert[id] ) { editTools.charinsert[id] = ''; } } } // create drop-down select sel = document.createElement( 'select' ); for ( id in editTools.charinsert ) { sel.options[sel.options.length] = new Option( id, id ); } sel.selectedIndex = 0; sel.style.marginRight = '.3em'; sel.title = 'Choose character subset'; sel.onchange = sel.onkeyup = selectSubset; box.appendChild( sel ); // create "recall" switch if ( window.editToolsRecall ) { var recall = document.createElement( 'span' ); recall.appendChild( document.createTextNode( '↕' ) ); // ↔ recall.onclick = function() { sel.selectedIndex = prevSubset; selectSubset(); }; recall.style.cssFloat = 'left'; recall.style.marginRight = '5px'; recall.style.cursor = 'pointer'; box.appendChild( recall ); } if ( getSelectedSection() ) { sel.selectedIndex = getSelectedSection(); } placeholder.parentNode.replaceChild( box, placeholder ); selectSubset(); return; function selectSubset() { // remember previous (for "recall" button) prevSubset = curSubset; curSubset = sel.selectedIndex; //save into web storage for persistence saveSelectedSection( curSubset ); //hide other subsets var pp = box.getElementsByTagName( 'p' ) ; for ( var i = 0; i < pp.length; i++ ) { pp[i].style.display = 'none'; } //show/create current subset var id = sel.options[curSubset].value; var p = document.getElementById( id ); if ( !p ) { p = document.createElement( 'p' ); p.className = 'nowraplinks'; p.id = id; if ( id == 'Arabic' || id == 'Hebrew' ) { p.style.fontSize = '120%'; p.dir = 'rtl'; } var tokens = editTools.charinsert[id]; if ( window.charinsertCustom && charinsertCustom[id] ) { if ( tokens.length > 0 ) { tokens += ' '; } tokens += charinsertCustom[id]; } editTools.createTokens( p, tokens ); box.appendChild( p ); } p.style.display = 'inline'; } }, createTokens: function ( paragraph, str ) { var tokens = str.split( ' ' ), token, i, n; for ( i = 0; i < tokens.length; i++ ) { token = tokens[i]; n = token.indexOf( '+' ); if ( token.charAt( 0 ) === '␥' ) { if ( token.length > 1 && mw.config.get( 'wgNamespaceNumber' ) === 0 ) { continue; } else { token = token.substring( 1 ); } } if ( token === '' || token === '_' ) { addText( editTools.charinsertDivider + ' ' ); } else if ( token === '\n' ) { paragraph.appendChild( document.createElement( 'br' ) ); } else if ( token === '___' ) { paragraph.appendChild( document.createElement( 'hr' ) ); } else if ( token.charAt( token.length-1 ) === ':' ) { // : at the end means just text addBold( token ); } else if ( n === 0 ) { // +<tag> -> <tag>+</tag> addLink( token.substring( 1 ), '</' + token.substring( 2 ), token.substring( 1 ) ); } else if ( n > 0 ) { // <tag>+</tag> addLink( token.substring( 0, n ), token.substring( n+1 ) ); } else if ( token.length > 2 && token.charCodeAt( 0 ) > 127 ) { // a string of insertable characters for ( var j = 0; j < token.length; j++ ) { addLink( token.charAt( j ), '' ); } } else { addLink( token, '' ); } } return; function addLink( tagOpen, tagClose, name ) { var handler; var dle = tagOpen.indexOf( '\x10' ); var a = document.createElement( 'a' ); if ( dle > 0 ) { var path = tagOpen.substring( dle + 1 ).split( '.' ); tagOpen = tagOpen.substring( 0, dle ); handler = window; for ( var i = 0; i < path.length; i++ ) { handler = handler[path[i]]; } $( a ).on( 'click', handler ); } else { tagOpen = tagOpen.replace( /\./g,' ' ); tagClose = tagClose ? tagClose.replace( /_/g,' ' ) : ''; $( a ).on( 'click', { tagOpen: tagOpen, sampleText: '', tagClose: tagClose }, insertTags ); } name = name || tagOpen + tagClose; name = name.replace( /\\n/g,'' ); a.appendChild( document.createTextNode( name ) ); a.href = ''; paragraph.appendChild( a ); addText( ' ' ); } function addBold( text ) { var b = document.createElement( 'b' ); b.appendChild( document.createTextNode( text.replace( /_/g,' ' ) ) ); paragraph.appendChild( b ); addText( ' ' ); } function addText( txt ) { paragraph.appendChild( document.createTextNode( txt ) ); } function insertTags( e ) { e.preventDefault(); if ( $currentFocused && $currentFocused.length ) { $currentFocused.textSelection( 'encapsulateSelection', { pre: e.data.tagOpen, peri: e.data.sampleText, post: e.data.tagClose } ); } } }, setup: function () { var placeholder; // First, check if toolbar already exists and remove it var existingToolbar = $( '#editpage-specialchars' ); if ( existingToolbar.length ) { existingToolbar.remove(); } // Create new placeholder placeholder = $( '<div id="editpage-specialchars"> </div>' )[0]; // FORCE toolbar to be at the TOP of edit window // Find the edit form container var editForm = $( '#editform' ); if ( editForm.length ) { // Insert at the very beginning of the edit form editForm.prepend( placeholder ); } else { // Fallback: try to put before the textarea $( '#wpTextbox1' ).before( placeholder ); } // Find the element that is focused $currentFocused = $( '#wpTextbox1' ); // Apply to dynamically created textboxes as well as normal ones $( document ).on( 'focus', 'textarea, input:text', function () { $currentFocused = $( this ); } ); // Used to determine where to insert tags editTools.createEditTools( placeholder ); window.updateEditTools = function () { editTools.createEditTools( $( '#editpage-specialchars' )[0] ); }; } }; // end editTools editTools.setup(); } ); 6clp9o4lr6wonrxhjnjqlcc3uzmtdgj ಪುಟ:ಅರಮನೆ.pdf/೭೨ 104 77157 322634 169866 2026-05-26T12:57:18Z Shreelatha.Halemane 7642 /* Proofread */ 322634 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=ಅರಮನೆ|right=೪೧}} ನಿನಗೆ ಜಗಲೂರವನ ನಿಜ ಸಂಗತಿ ತಿಳದಂಗಿಲ್ಲ. ಆಕೆ ಬಲು ಕುಕ್ಕುಲಾತಿ ಹೆಣ್ಣು ಮಗಳಯಾಳ.. ಆಕೆಯ ಹೊಟ್ಟೆಯೊಳಗೆ ಸಾವುದ ಗಾವುದ ವುದ್ದದ ಕರುಳಯ್ಕೆ.. ಆಕೆಯ ಯದೆಯೊಳಗೆ ಭೂಮಿತೂಕದ ರುದಯ ಅಯ್ಕೆ.. ದುಕ್ತ ಮಾಡೋರ ಕಣ್ಣೀರು ವರಸುತಾಳ.. ಹೆಗಲಿಗೆ ಹೆಗಲು ಕೊಡುತಾಳ.. ಬಗಲಿಗೆ ಬಗಲು ಕೊಡುತಾಳ.. ನಮ್ಮ ಯಜಮಾನಿ ಬೇಯಿನ ಮರದವ್ವನ್ನ ತನ್ನ ತವರೂರಿಂದ ತಂದು ನೆಟ್ಟಿಲ್ಲಿ ಪಾಲಿನ ಪೋಷಣೆ ಮಾಡಿದಾಕಿ ತಾನಿದ್ದಾಳ.. ನಮ್ಮಂಥ ಗಿಡ ಮರಗಳಂದರ ಆಕೆಗೆ ಪಂಚ ಪ್ರಾಣ ಕಣತಾಯಿ, ಆಕೆ ಯಿರದಿದ್ದಲ್ಲಿ ನಾವೆಲ್ಲರು ಯಂದೋ ಸರುವ ನಾಸಣ ಆಗುತಿದ್ದೆವು. ಅಂಥಾಕೀನ ಬೇಬಿಷ್ಟೆ ಮಾಡಿದಲ್ಲಿ ಲೋಕ ಯೇನಂದೀತು.. ಅದಕ ಆಕೀನ ಬಲಗಣ್ಣಿಂದ ನೀನು ನೋಡಲಕ ಬೇಕವ್ವಾ” ಯಂದು ಪರಿಪರಿಯಿಂದ ಬೇಡಿಕೊಂಡಿತಂತೆ. ಆದರ ತಾಯಿ ರುದಯ ವಂಥಟಗಾದರೂ ಕರಗಿ ತೊಟ್ಟಿಕ್ಕಲಿಲ್ಲವಂತೆ.. ಬ್ಯಾಡ ಅಂದರೆ ಬ್ಯಾಡ ಅಂತ ನಿಷು«ರದಿಂದ ಹೇಳಿದಳಂತೆ.. ಮತ ಮತ್ತ ರಾಯಭಾರಿಯು ''ರುಕ್ಷೇ ರಕ್ಷತಿ ರಕ್ಷಿತಃ ಅಂತ ಹಿರೇರು ಹೇಳುತಾರವ್ಯಾ. ಮತ್ತೊಮ್ಮೆ ಯೋಚನ ಮಾಡು” ಯಂದು ಕೇಳಿಕೊಂಡಿತಂತೆ. ಸಹವರಿಯಾಗಿ ಬಂದಿದ್ದ ಸಾಲುಮರದವನೂ ಜಗಲೂರವ್ವನ ಪರಗಟ್ಟಿ ಹೇಳಿದಳಂತೆ.. ಆದರ ಮಾತಾಯಿ ಜುಮ್ಮನ್ನಲಿಲ್ಲವಂತೆ. ಆಗ ಬೇರಪ್ಪ ನಿನ್ನಿಷ್ಟ ತಾಯಿ, ನೀನು ಲೋಕಗ್ನಾನವುಳ್ಳಾಕಿ, ನಿನಗ ಯದರುತ್ತರ ಕೊಡೋ ಸಗುತಿ ನನಗಿಲ್ಲ.. ಯಿದ್ದದ್ದು ಯಿದ್ದಂಗ ನಮ ಬೇಯಿನ ಮರದವ್ವಗ ಹೇಳುತೀನಿ.. ಆಕಿ ಬಲ.. ನೀನು ಬಲ.. ಸರಣು” ಯಂದು ವಾಪಾಸಾತಂತೆ.... {{gap}}ಬೇರವ್ವ ಹೇಳಿದ್ದು ಕೇಳಿ ಬೇಯಿನ ಮರದವ್ವ ಮಮ್ಮಲ ಮರುಗಿದಳಂತೆ. ಬರೋದು ಬರಲಿ ಯಂದು ನಿಲ್ದಾರ ಮಾಡಿದಳಂತೆ. ಜಗಲೂರೆವ್ವ ಲವುಕಿಕ ಲೋಕದ ಸರಣೆದಾಳ, ಮೇಲಾಗಿ ಮಾ ಪತಿವುರೊತೆ ಅದಾಳ.. ಪತಿವುರೊತಾ ಧರುಮದ ಮುಂದ ದಯವಿಕ ಸಕ್ತಿಯೇನೂ ಅಲ್ಲ. ಬೇಯಿನ ಮರದವ್ವ 'ತಾಯಿ ಜಗಲೂರವ್ವ. ನೀನು ಅನುಗಾಲ ನನ್ನ ನೆಳೊಳಗ ಯಿದ್ದು ಕಳ್ಳವ್ವಾ.. ನೀನು ಗುಡುಲು ಹಾಕ್ಕೋತೀನಂದರ ನಾನು ನನ್ನ ಕೊಂಬೆ ರೆಂಬೆ ಸೊಪ್ಪು ಸೆದೆ ಕೊಡುತೀನಿ, ವಲೆ ವುರುವಲಿಗೆ ಕಟ್ಟಿಗೆ ಕೊಡುತೀನಿ.. ನೀನು ಹೇಳಿದಂಗ ಕೇಳಬೇಕಂತ ನನ್ನ ಮ್ಯಾಲ ವಾಸ ಮಾಡುತಿರೋ ಸಕಲೊಂದು ಪಕ್ಷಿಗಳಿಗೆ ಹೇಳುತೀನಿ ಯಂದು ಹೇಳಿದಂಗಾಗಲು ನಿದ್ದೆಯೊಳಗಿಂದ ಸಡನ್ನ ಯದ್ದು ಕೂತಳು ಜಗಲೂರವ್ವ. ಯಂಥ ಕನುಕರದಾಕಿ ಕನವ್ವಾ ಯಂದು ಮರದ<noinclude><references/></noinclude> ka27j3ximzad0igl01wby58mho2vq90 322643 322634 2026-05-26T13:08:29Z Shreesha Sharma 7840 /* Validated */ 322643 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೪೧}} ನಿನಗೆ ಜಗಲೂರ್ವ್ವನ ನಿಜ ಸಂಗತಿ ತಿಳದಂಗಿಲ್ಲ. ಆಕೆ ಬಲು ಕುಕ್ಕುಲಾತಿ ಹೆಣ್ಣು ಮಗಳಯಾದಳ.. ಆಕೆಯ ಹೊಟ್ಟೆಯೊಳಗೆ ಸಾವುರ ಗಾವುದ ವುದ್ದದ ಕರುಳಯ್ತೆ.. ಆಕೆಯ ಯದೆಯೊಳಗೆ ಭೂಮಿತೂಕದ ರುದಯ ಅಯ್ತೆ.. ದುಕ್ಕ ಮಾಡೋರ ಕಣ್ಣೀರು ವರಸುತಾಳ.. ಹೆಗಲಿಗೆ ಹೆಗಲು ಕೊಡುತಾಳ.. ಬಗಲಿಗೆ ಬಗಲು ಕೊಡುತಾಳ.. ನಮ್ಮ ಯಜಮಾನಿ ಬೇಯಿನ ಮರದವ್ವನ್ನ ತನ್ನ ತವರೂರಿಂದ ತಂದು ನೆಟ್ಟಿಲ್ಲಿ ಪಾಲಿನ ಪೋಷಣೆ ಮಾಡಿದಾಕಿ ತಾನಿದ್ದಾಳ.. ನಮ್ಮಂಥ ಗಿಡ ಮರಗಳಂದರ ಆಕೆಗೆ ಪಂಚ ಪ್ರಾಣ ಕಣತಾಯಿ, ಆಕೆ ಯಿರದಿದ್ದಲ್ಲಿ ನಾವೆಲ್ಲರು ಯಂದೋ ಸರುವ ನಾಸಣ ಆಗುತಿದ್ದೆವು. ಅಂಥಾಕೀನ ಬೇಬಿಷ್ಟೆ ಮಾಡಿದಲ್ಲಿ ಲೋಕ ಯೇನಂದೀತು.. ಅದಕ ಆಕೀನ ಬಲಗಣ್ಣಿಂದ ನೀನು ನೋಡಲಕ ಬೇಕವ್ವಾ” ಯಂದು ಪರಿಪರಿಯಿಂದ ಬೇಡಿಕೊಂಡಿತಂತೆ. ಆದರ ತಾಯಿ ರುದಯ ವಂಥಟಗಾದರೂ ಕರಗಿ ತೊಟ್ಟಿಕ್ಕಲಿಲ್ಲವಂತೆ.. ಬ್ಯಾಡ ಅಂದರೆ ಬ್ಯಾಡ ಅಂತ ನಿಷ್ಟುರದಿಂದ ಹೇಳಿದಳಂತೆ.. ಮತ ಮತ್ತ ರಾಯಭಾರಿಯು ''ರುಕ್ಷೇ ರಕ್ಷತಿ ರಕ್ಷಿತಃ ಅಂತ ಹಿರೇರು ಹೇಳುತಾರವ್ಯಾ. ಮತ್ತೊಮ್ಮೆ ಯೋಚನ ಮಾಡು” ಯಂದು ಕೇಳಿಕೊಂಡಿತಂತೆ. ಸಹವರಿಯಾಗಿ ಬಂದಿದ್ದ ಸಾಲುಮರದವನೂ ಜಗಲೂರವ್ವನ ಪರಗಟ್ಟಿ ಹೇಳಿದಳಂತೆ.. ಆದರ ಮಾತಾಯಿ ಜುಮ್ಮನ್ನಲಿಲ್ಲವಂತೆ. ಆಗ ಬೇರಪ್ಪ ನಿನ್ನಿಷ್ಟ ತಾಯಿ, ನೀನು ಲೋಕಗ್ನಾನವುಳ್ಳಾಕಿ, ನಿನಗ ಯದರುತ್ತರ ಕೊಡೋ ಸಗುತಿ ನನಗಿಲ್ಲ.. ಯಿದ್ದದ್ದು ಯಿದ್ದಂಗ ನಮ ಬೇಯಿನ ಮರದವ್ವಗ ಹೇಳುತೀನಿ.. ಆಕಿ ಬಲ.. ನೀನು ಬಲ.. ಸರಣು” ಯಂದು ವಾಪಾಸಾತಂತೆ.... {{gap}}ಬೇರವ್ವ ಹೇಳಿದ್ದು ಕೇಳಿ ಬೇಯಿನ ಮರದವ್ವ ಮಮ್ಮಲ ಮರುಗಿದಳಂತೆ. ಬರೋದು ಬರಲಿ ಯಂದು ನಿರ್ಧಾರ ಮಾಡಿದಳಂತೆ. ಜಗಲೂರೆವ್ವ ಲವುಕಿಕ ಲೋಕದ ಸರಣೆದಾಳ, ಮೇಲಾಗಿ ಮಾ ಪತಿವುರೊತೆ ಅದಾಳ.. ಪತಿವುರೊತಾ ಧರುಮದ ಮುಂದ ದಯವಿಕ ಸಕ್ತಿಯೇನೂ ಅಲ್ಲ. ಬೇಯಿನ ಮರದವ್ವ 'ತಾಯಿ ಜಗಲೂರವ್ವ. ನೀನು ಅನುಗಾಲ ನನ್ನ ನೆಳೊಳಗ ಯಿದ್ದು ಕಳ್ಳವ್ವಾ.. ನೀನು ಗುಡುಲು ಹಾಕ್ಕೋತೀನಂದರ ನಾನು ನನ್ನ ಕೊಂಬೆ ರೆಂಬೆ ಸೊಪ್ಪು ಸೆದೆ ಕೊಡುತೀನಿ, ವಲೆ ವುರುವಲಿಗೆ ಕಟ್ಟಿಗೆ ಕೊಡುತೀನಿ.. ನೀನು ಹೇಳಿದಂಗ ಕೇಳಬೇಕಂತ ನನ್ನ ಮ್ಯಾಲ ವಾಸ ಮಾಡುತಿರೋ ಸಕಲೊಂದು ಪಕ್ಷಿಗಳಿಗೆ ಹೇಳುತೀನಿ ಯಂದು ಹೇಳಿದಂಗಾಗಲು ನಿದ್ದೆಯೊಳಗಿಂದ ಸಡನ್ನ ಯದ್ದು ಕೂತಳು ಜಗಲೂರವ್ವ. ಯಂಥ ಕನುಕರದಾಕಿ ಕನವ್ವಾ ಯಂದು ಮರದ<noinclude><references/></noinclude> rmxotxzek5v5kbw4oltbixalgwmx88f ಪುಟ:ಅರಮನೆ.pdf/೭೩ 104 77158 322635 169867 2026-05-26T12:58:12Z Shreelatha.Halemane 7642 /* Proofread */ 322635 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=೪೨|right=ಅರಮನೆ}} ಬೊಡ್ಡೆಗೆ ಮುತ್ತುಕೊಟ್ಟಳು, ಕಣ್ಣೀರು ಸುರಿಸಿದಳು, ವುಸ್ತಂತ ಕೂತಳು, ವಂಚೂರು ಗೆಲುವಾದಳು. ಹಸು ಮಗೀನಂಗ ಸುತ್ತಮುತ್ತ ನೋಡಿದಳು. ಅಗೋ ಅಲ್ಲಿ ತನ್ನ ಗಂಡನ ಸರೀರ, ಸಂಬಂಧ ಬಿಡುಗಡೆ ಮಾಡಿಕೊಂಡಿರೋ ಹಂಗಯ್ಯ.. ತನ್ನತ್ತ ವಂದು ಸಲನಾದರು ನೋಡುವಲ್ಲದು.. ಯೇನು ಬಂದಿದ್ದೀತು ಅದಕ? ಯೇನು ಬಡುಕೊಂಡಿರಬೌದು ಅದಕ? ಜಗಲೂರಜ್ಜ ನೋಡಿದ್ಯಾ... ಯಂದು ಆ ದಿಕ್ಕಿಗೆ ಮುಖಮಾಡಿ ಕಯ್ಕ ಮುಗುದಳು. {{gap}}ನಿನ್ನರುದಯ ಟೋಂದು ತಟಗಯ್ತಂತ ಗೊತ್ತಿರಲಿಲ್ಲ ಯಂದಳಾಕೆ ತನ್ನ ಗಂಡನ ಕಡೇಕ ದುರುಗುಟ್ಟಿ ನೋಡುತ್ತ.... {{gap}}ಅಝಗೇಡಿಯಂತಾಡುತಲಿದ್ದ ಅವಯ್ಯನು ಆಗೊಮ್ಮೆ ಯಿಗೊಮ್ಮೆ ತನ್ನ ಹೆಂಡತಿಯ ಕಡೇಕ ಒಳಕೂ ಒಳಕೂ ಅಂತ ನೋಡುತಲಿದ್ದನು. ನೀನು ಯಾರೋ? ತಾನು ಯಾರೋ? ಯಂಬಂತೆ ಯಿದ್ದನು. ಅಷ್ಟು ಬಿಟ್ಟರೆ ಅವರಿಬ್ಬರ ನಡುವೆ ಯಾವುದೇ ಮಾತಾಗಲೀ, ಕಥೆಯಾಗಲೀ ಯಿರಲಿಲ್ಲ. ಹೋಗೋರು ಬರೋರು ಯಿದಿಲಿಖಿತ ಎಂಬೊಂದು ಸಬುಧವನ್ನು ಆಡೋದು ಬಿಟ್ಟರೆ.... {{gap}}- ಅತ್ತ ಥಾಮಸು ಮನ್ನೇ ತನ್ನ ಮಯ್ಯೋಳಗ ಹುಳಾ.. ಹುಪ್ಪಡಿ ಹೊಕ್ಕೊಂಡು ಹರದಾಡಲು ಹತ್ತಿರುವವೇನೋ ಯಂಬಂತೆ ವಂದಲ್ಲಾ ಎಂದು ದಗದಗಳನ್ನು ಹಚಕಂಡು ಕುಂತಲ್ಲಿ ಕೂಡ್ರದೆ, ನಿಂತಲ್ಲಿ ನಿಲ್ಲದೆ ಸದಾ ಗಿಜಿಗಿಗಟ್ಟತೊಡಗಿದ್ದನು. ತನ ಕಮ್ಮಿ ಕೆಳಗಿನ ಅಧಿಕಾರಿಗಳಾದ ಅಂಥೋಣಿ, ರಾಬರು, ಯಿಲ್ಲಿಯಮ್ಮ, ಜೇಕಬ್ಯೂ ಜಾನು, ಗೀನು ಯಿವರೇ ಮೊದಲಾದವರನ್ನು ಯದುರಿಗೆ ಕುಂಡರಿಸಿಕೊಂಡು ಕುಂಪಣಿ ಸರಕಾರದ ಬಗ್ಗೆ ಜನರು ವಲವು ತೋರಿಸಬೇಕಾದರೆ ನೀವೆಲ್ಲ ಯಲ್ಲಿನ ಸ್ಥಳೀಕ ಭಾಷೆಯನ್ನು ಕಲುತುಕೊಳ್ಳಬೇಕೆಂದು ತಾಕೀತು ಮಾಡುತ್ತಿದ್ದನಲ್ಲದೆ ಅವರಿಗೆ ತೆಲುಗು, ಕನ್ನಡ ಭಾಷೆಗಳನ್ನು ಮೋದಲಕ.. ಬರೆಯಲಕ. ಕಲಿಸಲಕಂತ ಮಾಸ್ತರರನ್ನು ನೇಮಕ ಮಾಡಿ ರಾತ್ರಿಸಾಲೆಗಳನ್ನು ತೆರೆದಿದ್ದನು. ಕಲುತೋರನ್ನು ಯದುರಿಗೆ ಕರೆಯಿಸಿಕೊಂಡು ಸೊತಹ ಬಹು ಭಾಷಾ ಕೋಯಿದನಾದ ತಾನು ಪ್ರಶ್ನೆಗಳನ್ನು ಕೇಳಿ ಪರೀಕ್ಷೆ ಮಾಡುತಲಿದ್ದನು. ಜಾನಪದ ಗಾಯಕರನ್ನು ಗುರವ ಪೂರುವಕವಾಗಿ ತನ್ನ ಆಸ್ಥಾನಕ ಬರಮಾಡಿಕೊಂಡು ಹಾಡಿಸಿ, ಕುಣಿಸಿ ಸಂತೋಷಪಟ್ಟು ಮಾನ ಸನುಮಾನ ಮಾಡಿ ಕಳುವುತಲಿದ್ದನು. ಹೀಗಾಗಿ<noinclude><references/></noinclude> qhginb4wnf4f8q555goeuyu7ymmnvt6 322650 322635 2026-05-26T13:11:40Z Shreesha Sharma 7840 /* Validated */ 322650 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೪೨|right=ಅರಮನೆ}} ಬೊಡ್ಡೆಗೆ ಮುತ್ತುಕೊಟ್ಟಳು, ಕಣ್ಣೀರು ಸುರಿಸಿದಳು, ವುಸ್ತಂತ ಕೂತಳು, ವಂಚೂರು ಗೆಲುವಾದಳು. ಹಸು ಮಗೀನಂಗ ಸುತ್ತಮುತ್ತ ನೋಡಿದಳು. ಅಗೋ ಅಲ್ಲಿ ತನ್ನ ಗಂಡನ ಸರೀರ, ಸಂಬಂಧ ಬಿಡುಗಡೆ ಮಾಡಿಕೊಂಡಿರೋ ಹಂಗಯ್ಯ.. ತನ್ನತ್ತ ವಂದು ಸಲನಾದರು ನೋಡುವಲ್ಲದು.. ಯೇನು ಬಂದಿದ್ದೀತು ಅದಕ? ಯೇನು ಬಡುಕೊಂಡಿರಬೌದು ಅದಕ? ಜಗಲೂರಜ್ಜ ನೋಡಿದ್ಯಾ... ಯಂದು ಆ ದಿಕ್ಕಿಗೆ ಮುಖಮಾಡಿ ಕಯ್ಕ ಮುಗುದಳು. {{gap}}ನಿನ್ನರುದಯ ಟೋಂದು ತಟಗಯ್ತಂತ ಗೊತ್ತಿರಲಿಲ್ಲ ಯಂದಳಾಕೆ ತನ್ನ ಗಂಡನ ಕಡೇಕ ದುರುಗುಟ್ಟಿ ನೋಡುತ್ತ.... {{gap}}ಅಝಗೇಡಿಯಂತಾಡುತಲಿದ್ದ ಅವಯ್ಯನು ಆಗೊಮ್ಮೆ ಯಿಗೊಮ್ಮೆ ತನ್ನ ಹೆಂಡತಿಯ ಕಡೇಕ ಒಳಕೂ ಒಳಕೂ ಅಂತ ನೋಡುತಲಿದ್ದನು. ನೀನು ಯಾರೋ? ತಾನು ಯಾರೋ? ಯಂಬಂತೆ ಯಿದ್ದನು. ಅಷ್ಟು ಬಿಟ್ಟರೆ ಅವರಿಬ್ಬರ ನಡುವೆ ಯಾವುದೇ ಮಾತಾಗಲೀ, ಕಥೆಯಾಗಲೀ ಯಿರಲಿಲ್ಲ. ಹೋಗೋರು ಬರೋರು ಯಿದಿಲಿಖಿತ ಎಂಬೊಂದು ಸಬುಧವನ್ನು ಆಡೋದು ಬಿಟ್ಟರೆ.... {{gap}}- ಅತ್ತ ಥಾಮಸು ಮನ್ನೇ ತನ್ನ ಮಯ್ಯೋಳಗ ಹುಳಾ.. ಹುಪ್ಪಡಿ ಹೊಕ್ಕೊಂಡು ಹರದಾಡಲು ಹತ್ತಿರುವವೇನೋ ಯಂಬಂತೆ ವಂದಲ್ಲಾ ಎಂದು ದಗದಗಳನ್ನು ಹಚಕಂಡು ಕುಂತಲ್ಲಿ ಕೂಡ್ರದೆ, ನಿಂತಲ್ಲಿ ನಿಲ್ಲದೆ ಸದಾ ಗಿಜಿಗಿಗಟ್ಟತೊಡಗಿದ್ದನು. ತನ ಕಮ್ಮಿ ಕೆಳಗಿನ ಅಧಿಕಾರಿಗಳಾದ ಅಂಥೋಣಿ, ರಾಬರು, ಯಿಲ್ಲಿಯಮ್ಮ, ಜೇಕಬ್ಯೂ ಜಾನು, ಗೀನು ಯಿವರೇ ಮೊದಲಾದವರನ್ನು ಯದುರಿಗೆ ಕುಂಡರಿಸಿಕೊಂಡು ಕುಂಪಣಿ ಸರಕಾರದ ಬಗ್ಗೆ ಜನರು ವಲವು ತೋರಿಸಬೇಕಾದರೆ ನೀವೆಲ್ಲ ಯಲ್ಲಿನ ಸ್ಥಳೀಕ ಭಾಷೆಯನ್ನು ಕಲುತುಕೊಳ್ಳಬೇಕೆಂದು ತಾಕೀತು ಮಾಡುತ್ತಿದ್ದನಲ್ಲದೆ ಅವರಿಗೆ ತೆಲುಗು, ಕನ್ನಡ ಭಾಷೆಗಳನ್ನು ಮೋದಲಕ.. ಬರೆಯಲಕ. ಕಲಿಸಲಕಂತ ಮಾಸ್ತರರನ್ನು ನೇಮಕ ಮಾಡಿ ರಾತ್ರಿಸಾಲೆಗಳನ್ನು ತೆರೆದಿದ್ದನು. ಕಲುತೋರನ್ನು ಯದುರಿಗೆ ಕರೆಯಿಸಿಕೊಂಡು ಸೊತಹ ಬಹು ಭಾಷಾ ಕೋಯಿದನಾದ ತಾನು ಪ್ರಶ್ನೆಗಳನ್ನು ಕೇಳಿ ಪರೀಕ್ಷೆ ಮಾಡುತಲಿದ್ದನು. ಜಾನಪದ ಗಾಯಕರನ್ನು ಗುರವ ಪೂರುವಕವಾಗಿ ತನ್ನ ಆಸ್ಥಾನಕ ಬರಮಾಡಿಕೊಂಡು ಹಾಡಿಸಿ, ಕುಣಿಸಿ ಸಂತೋಷಪಟ್ಟು ಮಾನ ಸನುಮಾನ ಮಾಡಿ ಕಳುವುತಲಿದ್ದನು. ಹೀಗಾಗಿ<noinclude><references/></noinclude> bb15f2iry9vjr3fkadkrpj61ghg19eu ಪುಟ:ಅರಮನೆ.pdf/೭೪ 104 77159 322636 169868 2026-05-26T12:59:05Z Shreelatha.Halemane 7642 /* Proofread */ 322636 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=ಅರಮನೆ|right=೪೩}} ಯಲ್ಲಾರು ನಾಲಿಗೆ ಮಾಲ ತಾನೇ ತಾನಾಗಿ ಯಿಜ್ರುಂಭಿಸ ತೊಡಗಿದ್ದನು. ಬುಕಥೆಗಳೊಳಗ, ಗೀಗೀ, ಲಾವಣಿ ಪದಗಳೊಳಗ, ಅಡುಗೂಲಜ್ಜಿ ಕಥಿಗಳೊಳಗೆ ಯಿರಾಮ ಮಾಡಿಕೊಂಡಿದ್ದ ಮನೋ ಸಾಹೇಬ.. ಅಳುವವರ ಕಣ್ಣೀರೊರೆಸಲು ಮುಂದಾಗುತಲಿದ್ದ ಮನೋ ಸಾಹೇಬ.. ಮೂಢ ನಂಬಿಕೆಗಳನ್ನು ನಿರುಮೂಲ ಮಾಡಲು ಸದಾ ಶ್ರಮಿಸುತಲಿದ್ದ ಮನೋ ಸಾಹೇಬ.. ತರತಮ ಭಾವನೆಗಳ ಯಿರುದ್ಧ ಹೋರಾಡುತಲಿದ್ದ ಮನೋ ಸಾಹೇಬ.. ಮನೋ ಸಾಹೇಬಾ........ ಸಾಹೇಬಾ....... {{gap}}ಅತ್ತ ಜರುಮಲಿ ರಾಜನು ತನಗೆ ಕಪ್ಪಕಾಣಿಕೆ ಸಂದಾಯ ಮಾಡಿ ಸರಣಾಗಬೇಕಂದು ಕವುಡಿಕೆ ಕರೀರನೆಂಬ ಧೂತನನ್ನು ನಿಚ್ಚಾಪುರದ ರಾಜನಲ್ಲಿಗೆ ಕಳುವಿದ್ದನಷ್ಟೆ. ಪರಮಾನಿನ ಮ್ಯಾಲ ತೊಂಬಲ ವುಗುಳಿ ಧೂತನ ತಲೆ ಬೋಳಿಸಿ ಸುಣ್ಣ ಹಚ್ಚಿ ಅರೆ ನಗ್ನನನ್ನಾಗಿ ಮಾಡಿ ವಾಪಾಸು ಕಳುವಿದ್ದ ನಿಚ್ಚಾಪುರದ ರಾಜನು ಜರಮಲಿಯೊಂದಿಗೆ ಕಾದಾಡಲಕ ತನಗೆ ಸಾವುರ ಮಂದಿ ಕಾಲಾಳನ್ನು ಬಾಡಿಗೆಗೆ ತುತ್ತಾಗಿ ಕಳುವಬೇಕೆಂದು ತನ್ನ ವಳಿತದ ಕುಂಪಣಿ ಅಧಿಕಾರಿ ಯಾದ ರೆಬೆರೋ ಯಂಬಾತನನ್ನು ವಳಗೊಳಗೆ ಕೇಳಿಕೊಂಡಿದ್ದನು. ದಿನಕ್ಕೊಂದೊತ್ತು ಸಸ್ಯಾಹಾರ, ಯರಡೊತ್ತು ಮಾವುಸಾಹಾರ, ರಾತ್ರಿ ಕುಡಿದು ಮಲಗಲಕ ಸೆರೆ ಮತ್ತು ತಲೆಗೊಂದೊಂದರಂತೆ ಅಯ್ತು ಬೆಳ್ಳಿ ರೂಪಾಯಿ ಕೊಡಬೇಕೆಂಬ ಕರಾರು ಮಾಡಿಕೊಂಡು, ಅದಕ ದಸರತ್ತು ಮಾಡಿಸಿಕೊಂಡು ಅದೇ ಪ್ರಾಂತದೊಳಗೆ ಹುಟ್ಟಿ ಬೆಳೆದಿದ್ದ ಸಾವುರ ಸಂಖ್ಯೆಯ ಕಾಲಾಳುಗಳನ್ನು ದತ್ತೂರಾಮನೆಂಬ ಮರಾಠಿ ಸರದಾರನ ನೇತ್ರುತ್ವದಲ್ಲಿ ನಿಚ್ಚಾಪುರದ ದಿಕ್ಕಿಗೆ ಹರಿಬಿಟ್ಟಿದ್ದನು. ಯಿಂಥದೇ ಮನವಿಯನ್ನು ಜರುಮಲಿ ರಾಜನು ರೆಬೆರೋ ಮಾಶಯನಿಗೆ ಮಾಡಿಕೊಂಡಿರದೆ ಯಿರಲಿಲ್ಲ. ಆತನಿಂದಲೂ ಮೊಗದಿ ಗೊತ್ತುಪಡಿಸಿ ಮುಂಗಡ ಬಾಬತ್ತು ವಸೂಲಿ ಮಾಡಿಕೊಂಡು ಅಷ್ಟೇ ಸಂಖ್ಯೆಯ ಕಾಲಾಳುಗಳನ್ನು ಜರುಮಲಿಯ ಹಾದಿಗುಂಟ ಹರಿಬಿಟ್ಟಿರದೆ ಯಿರಲಿಲ್ಲ.. ಸ್ಯಾಮುಸನ್ ಯಂಬಾತಗೆ, ವಳ್ಳಿಯಮ್ಮಯಂಬ ಕೊಂಗರ ತಾಯಿಗೆ ಹುಟ್ಟಿದ್ದಂಥ ರೆಬೆರೋ, ದ್ವಾಪರ ಕಾಲದ ಸಕುನಿಯ ಕಟ್ಟಾ ಅಭಿಮಾನಿಯಾಗಿದ್ದ ರೆಬೆರೋ ವುಭಯ ರಾಜರುಗಳಿಂದ ಸುಲ್ಕದ ರೂಪದಲ್ಲಿ ಪಡೆದಂಥಾ ಅಪಾರ ಹಣವನ್ನು ಕುಂಪಣಿ ಸರಕಾರದ ಬೊಕ್ಕಸಕ್ಕೆ ಸಂದಾಯ ಮಾಡಿ ತನ್ನ ಮೇಲಧಿಕಾರಿಗಳಿಂದ ಯಿಶೇಷ ಪ್ರಶಂಸೆಗೆ ಪಾತ್ರನಾದನು. {{gap}}ಅತ್ತ ಮದ್ದಿಕೇರಿ ಸಮುಸ್ಥಾನದ ಹಣಕಾಸಿನ ಪರಿಸ್ಥಿತಿ ಸತ್ರುಸಮಾರಯಾಗ<noinclude><references/></noinclude> jqc5dpvr4sf4pisl5wqr4o7y7d9ist7 322649 322636 2026-05-26T13:11:27Z Shreesha Sharma 7840 /* Validated */ 322649 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೪೩}} ಯಲ್ಲಾರು ನಾಲಿಗೆ ಮಾಲ ತಾನೇ ತಾನಾಗಿ ಯಿಜ್ರುಂಭಿಸ ತೊಡಗಿದ್ದನು. ಬುಕಥೆಗಳೊಳಗ, ಗೀಗೀ, ಲಾವಣಿ ಪದಗಳೊಳಗ, ಅಡುಗೂಲಜ್ಜಿ ಕಥಿಗಳೊಳಗೆ ಯಿರಾಮ ಮಾಡಿಕೊಂಡಿದ್ದ ಮನೋ ಸಾಹೇಬ.. ಅಳುವವರ ಕಣ್ಣೀರೊರೆಸಲು ಮುಂದಾಗುತಲಿದ್ದ ಮನೋ ಸಾಹೇಬ.. ಮೂಢ ನಂಬಿಕೆಗಳನ್ನು ನಿರುಮೂಲ ಮಾಡಲು ಸದಾ ಶ್ರಮಿಸುತಲಿದ್ದ ಮನೋ ಸಾಹೇಬ.. ತರತಮ ಭಾವನೆಗಳ ಯಿರುದ್ಧ ಹೋರಾಡುತಲಿದ್ದ ಮನೋ ಸಾಹೇಬ.. ಮನೋ ಸಾಹೇಬಾ........ ಸಾಹೇಬಾ....... {{gap}}ಅತ್ತ ಜರುಮಲಿ ರಾಜನು ತನಗೆ ಕಪ್ಪಕಾಣಿಕೆ ಸಂದಾಯ ಮಾಡಿ ಸರಣಾಗಬೇಕಂದು ಕವುಡಿಕೆ ಕರೀರನೆಂಬ ಧೂತನನ್ನು ನಿಚ್ಚಾಪುರದ ರಾಜನಲ್ಲಿಗೆ ಕಳುವಿದ್ದನಷ್ಟೆ. ಪರಮಾನಿನ ಮ್ಯಾಲ ತೊಂಬಲ ವುಗುಳಿ ಧೂತನ ತಲೆ ಬೋಳಿಸಿ ಸುಣ್ಣ ಹಚ್ಚಿ ಅರೆ ನಗ್ನನನ್ನಾಗಿ ಮಾಡಿ ವಾಪಾಸು ಕಳುವಿದ್ದ ನಿಚ್ಚಾಪುರದ ರಾಜನು ಜರಮಲಿಯೊಂದಿಗೆ ಕಾದಾಡಲಕ ತನಗೆ ಸಾವುರ ಮಂದಿ ಕಾಲಾಳನ್ನು ಬಾಡಿಗೆಗೆ ತುತ್ತಾಗಿ ಕಳುವಬೇಕೆಂದು ತನ್ನ ವಳಿತದ ಕುಂಪಣಿ ಅಧಿಕಾರಿ ಯಾದ ರೆಬೆರೋ ಯಂಬಾತನನ್ನು ವಳಗೊಳಗೆ ಕೇಳಿಕೊಂಡಿದ್ದನು. ದಿನಕ್ಕೊಂದೊತ್ತು ಸಸ್ಯಾಹಾರ, ಯರಡೊತ್ತು ಮಾವುಸಾಹಾರ, ರಾತ್ರಿ ಕುಡಿದು ಮಲಗಲಕ ಸೆರೆ ಮತ್ತು ತಲೆಗೊಂದೊಂದರಂತೆ ಅಯ್ತು ಬೆಳ್ಳಿ ರೂಪಾಯಿ ಕೊಡಬೇಕೆಂಬ ಕರಾರು ಮಾಡಿಕೊಂಡು, ಅದಕ ದಸರತ್ತು ಮಾಡಿಸಿಕೊಂಡು ಅದೇ ಪ್ರಾಂತದೊಳಗೆ ಹುಟ್ಟಿ ಬೆಳೆದಿದ್ದ ಸಾವುರ ಸಂಖ್ಯೆಯ ಕಾಲಾಳುಗಳನ್ನು ದತ್ತೂರಾಮನೆಂಬ ಮರಾಠಿ ಸರದಾರನ ನೇತ್ರುತ್ವದಲ್ಲಿ ನಿಚ್ಚಾಪುರದ ದಿಕ್ಕಿಗೆ ಹರಿಬಿಟ್ಟಿದ್ದನು. ಯಿಂಥದೇ ಮನವಿಯನ್ನು ಜರುಮಲಿ ರಾಜನು ರೆಬೆರೋ ಮಾಶಯನಿಗೆ ಮಾಡಿಕೊಂಡಿರದೆ ಯಿರಲಿಲ್ಲ. ಆತನಿಂದಲೂ ಮೊಗದಿ ಗೊತ್ತುಪಡಿಸಿ ಮುಂಗಡ ಬಾಬತ್ತು ವಸೂಲಿ ಮಾಡಿಕೊಂಡು ಅಷ್ಟೇ ಸಂಖ್ಯೆಯ ಕಾಲಾಳುಗಳನ್ನು ಜರುಮಲಿಯ ಹಾದಿಗುಂಟ ಹರಿಬಿಟ್ಟಿರದೆ ಯಿರಲಿಲ್ಲ.. ಸ್ಯಾಮುಸನ್ ಯಂಬಾತಗೆ, ವಳ್ಳಿಯಮ್ಮಯಂಬ ಕೊಂಗರ ತಾಯಿಗೆ ಹುಟ್ಟಿದ್ದಂಥ ರೆಬೆರೋ, ದ್ವಾಪರ ಕಾಲದ ಸಕುನಿಯ ಕಟ್ಟಾ ಅಭಿಮಾನಿಯಾಗಿದ್ದ ರೆಬೆರೋ ವುಭಯ ರಾಜರುಗಳಿಂದ ಸುಲ್ಕದ ರೂಪದಲ್ಲಿ ಪಡೆದಂಥಾ ಅಪಾರ ಹಣವನ್ನು ಕುಂಪಣಿ ಸರಕಾರದ ಬೊಕ್ಕಸಕ್ಕೆ ಸಂದಾಯ ಮಾಡಿ ತನ್ನ ಮೇಲಧಿಕಾರಿಗಳಿಂದ ಯಿಶೇಷ ಪ್ರಶಂಸೆಗೆ ಪಾತ್ರನಾದನು. {{gap}}ಅತ್ತ ಮದ್ದಿಕೇರಿ ಸಮುಸ್ಥಾನದ ಹಣಕಾಸಿನ ಪರಿಸ್ಥಿತಿ ಸತ್ರುಸಮಾರಯಾಗ<noinclude><references/></noinclude> junyouw58qmbp92y88srldg35c50v0x ಪುಟ:ಅರಮನೆ.pdf/೭೫ 104 77160 322637 169869 2026-05-26T13:00:01Z Shreelatha.Halemane 7642 /* Proofread */ 322637 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=೪೪|right=ಅರಮನೆ}} ಮುಗಿದ ಮಾಲ ಯಷ್ಟು ಹದಗೆಟ್ಟಿತೆಂದರೆ ವಂದಿಮಾಗದವರಿಗೆ, ರಾಜನರಕಿಯರಿಗೆ ಭಕ್ಷೀಸು ಕೊಡಲಾರದಷ್ಟು ಹದಗೆಟ್ಟುಬಿಟ್ಟಿತ್ತು. ದುಬಾರಿಯ ಸತ್ತುಸಾರ ಯಾಗ ಮಾಡಬೇಕೆಂಬ ಯಿರಾದೆ ರಾಜ ಕದಿರೆ ನಾಯಕನಿಗೆ ಖಂಡಿತ ಯಿರಲಿಲ್ಲ.. ಆಸ್ಥಾನ ಪುರೋಹಿತರಾದ ವಸಂಕರ ಸಾಸ್ತ್ರಿಗಳು ತಮ್ಮ ಬಂಧು ಬಳಗ ನೆಂಟರಿಷ್ಟರ ಜೀವನದ ಜೀರೋದ್ದಾರ ಮಾಡುವ ಸಲುವಾಗಿ ಯಿಂಥದೊಂದು ಸಲಹೆಯನ್ನು ತಮ್ಮ ನಾಯಕನ ಮುಂದಿಟ್ಟು ಅದರಿಂದಾಗುವ ಲವುಕಿಕ ಪ್ರಯೋಜನಗಳನ್ನು ಯಿವರಿಸಿ ವಪ್ಪುವಂತೆ ಮಾಡಿದ್ದರು. ದ್ವಾಪರಯುಗದಲ್ಲಿ ಪಾಂಡವರು ಮಾಡಿದ್ದ ರಾಜಾಸೂಯಯಾಗಕ್ಕೆ ಸರಿಸಮನಾದ ಸತ್ರುಸವಾರ ಯಾಗ ಯಂದರ ಸಣ್ಣ ಬಾಬತ್ತಿನದೇನು? ನವರಾತ್ರಿಗಳುದ್ದಕ್ಕೂ ನಡೆದ ಯಾಗಕ್ಕೆ ಯಷ್ಟು ಖಾಯಿತು? ಯೇನು ಕಥಿ? ಸಾವಿರದಾವಂದು ಬ್ರಾಹ್ಮಣರಿಗೆ ಧನಕನಕ ವಸ್ತಗಳನ್ನು ದಾನ ಮಾಡಲಾಯಿತಲ್ಲದೆ ಭೂರೀ ಭೋಜನದ ಯವಸ್ಥೆಯನ್ನು ಕಂದನೂಲು ಸ್ವೀಕರಾಚಾದ್ಯರ ನೇತ್ರುತ್ವದಲ್ಲಿ ಮಾಡಲಾಗಿತ್ತು. ಅಂದ ಮೇಲೆ ಹಣ ಕಾಸಿನ ಪರಿಸ್ಥಿತಿ ಚಿಂತಾಜನಕವಾಗದಿದ್ದೀತೇನು? ಭಕ್ಷೀಸು ಕೊಡೋ ಯಿಷಯದಲ್ಲಿ ರಾಜ ಕಯ್ಯ ಹಿಡಿದಿದ್ದರಿಂದಾಗಿ ವಂದಿಮಾಗಧರು ಹೊಗಳೊ ಯಿಷಯದಲ್ಲಿ ಗಂಟಲು ಬಿಗಿದರು. ರಾಜನರಕಿಯರು ರಾಜನಲ್ಲಿ ಹರೆಯ ಮರುಕಳಿಸುವಂತೆ ನೃತ್ಯ ಮಾಡದಾದರು. ಆಡೋ ಹುಡುಗರು ಸುಲಭವಾಗಿ ಯತ್ತಬಹುದಾದಷ್ಟು ಅರಮನೆಯ ತಿಜೋರಿಯು ಹಗುರಾಗಿಬಿಟ್ಟಿತ್ತು. ಯಿದೆಲ್ಲ ಯಂದಿನಂತೆ ಸಾಂಗೋಪಸಾಂಗವಾಗಿ ನಡೆಯಬೇಕಾದರೆ ತಾನು ಹೆಂಗಾದರೂ ಮಾಡಿ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವಂತೆ ಮಾಡಬೇಕು.. ಗುತ್ತಿಗೆ, ತೆರಿಗೆಗಳಿತ್ಯಾದಿಗಳನ್ನು ದುಪ್ಪಟ್ಟು ಮಾಡಬೇಕೆಂದರೆ ರಾಜ್ಯದೊಳಗೆ ಸಕಾಲಕ್ಕೆ ಮಳೆ ಬೆಳೆ ಆಗದ ಕಾರಣದಿಂಗಾಗಿ ಪ್ರಜೆಗಳು ವಂದೊತ್ತು ವುಂಡು, ವಂದೊತ್ತು ವುಪಾಸಯಿರುವರು. ಕುಂತಳ ಸೀಮೆಯೊಳಗಿರುವಂಥ ಯಲ್ಲಾಪ್ರಕೊರಚರಟ್ಟಿಯು ತಮ್ಮ ರಾಜ್ಯದೊಳಗಿಲ್ಲ. ಹಿಂದೆ ಪಡೆದಿರುವುದನ್ನು ಬಡ್ಡಿ ಸಮೇತ ಚುಕ್ತಾ ಮಾಡದ ಹೊರತು ಕುಂಪಣಿ ಸರಕಾರವು ವಂದು ದಮ್ಮಡಿಯನ್ನೂ ನೀಡುವುದಿಲ್ಲ.. ಯಂದು ರಾಜ ಕದಿರೆಪ್ಪನಾಯಕ ಚಿಂತಿಸಿ ಕಳವಳಗೊಂಡನು. {{gap}}ಬಲಿಪಾಡ್ಯದ ಮಿಶೇಷ ಪೂಜೆ ಮಾಡಲಕೆಂದು ಬಂದಿದ್ದ ಸಿವಸಂಕರ ಸಾಸ್ತ್ರಿಗಳನ್ನು ಯೇಕಾಂತಕ್ಕೆ ಬರಮಾಡಿಕೊಂಡು ಯಲ್ಲಯಿವರಿಸಿ ಅರಮನೆಯ ಹಣಕಾಸಿನ ಪರಿಸ್ಥಿತಿ ಹದಗೆಡಲು ಕಾರಣಕತ್ತರಾದ ನೀವೇ ಹಣ ಹರಿದು<noinclude><references/></noinclude> 9p93v41eedv0riboagkunpk5cyc2t2h 322648 322637 2026-05-26T13:11:14Z Shreesha Sharma 7840 /* Validated */ 322648 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೪೪|right=ಅರಮನೆ}} ಮುಗಿದ ಮಾಲ ಯಷ್ಟು ಹದಗೆಟ್ಟಿತೆಂದರೆ ವಂದಿಮಾಗದವರಿಗೆ, ರಾಜನರಕಿಯರಿಗೆ ಭಕ್ಷೀಸು ಕೊಡಲಾರದಷ್ಟು ಹದಗೆಟ್ಟುಬಿಟ್ಟಿತ್ತು. ದುಬಾರಿಯ ಸತ್ತುಸಾರ ಯಾಗ ಮಾಡಬೇಕೆಂಬ ಯಿರಾದೆ ರಾಜ ಕದಿರೆ ನಾಯಕನಿಗೆ ಖಂಡಿತ ಯಿರಲಿಲ್ಲ.. ಆಸ್ಥಾನ ಪುರೋಹಿತರಾದ ವಸಂಕರ ಸಾಸ್ತ್ರಿಗಳು ತಮ್ಮ ಬಂಧು ಬಳಗ ನೆಂಟರಿಷ್ಟರ ಜೀವನದ ಜೀರೋದ್ದಾರ ಮಾಡುವ ಸಲುವಾಗಿ ಯಿಂಥದೊಂದು ಸಲಹೆಯನ್ನು ತಮ್ಮ ನಾಯಕನ ಮುಂದಿಟ್ಟು ಅದರಿಂದಾಗುವ ಲವುಕಿಕ ಪ್ರಯೋಜನಗಳನ್ನು ಯಿವರಿಸಿ ವಪ್ಪುವಂತೆ ಮಾಡಿದ್ದರು. ದ್ವಾಪರಯುಗದಲ್ಲಿ ಪಾಂಡವರು ಮಾಡಿದ್ದ ರಾಜಾಸೂಯಯಾಗಕ್ಕೆ ಸರಿಸಮನಾದ ಸತ್ರುಸವಾರ ಯಾಗ ಯಂದರ ಸಣ್ಣ ಬಾಬತ್ತಿನದೇನು? ನವರಾತ್ರಿಗಳುದ್ದಕ್ಕೂ ನಡೆದ ಯಾಗಕ್ಕೆ ಯಷ್ಟು ಖಾಯಿತು? ಯೇನು ಕಥಿ? ಸಾವಿರದಾವಂದು ಬ್ರಾಹ್ಮಣರಿಗೆ ಧನಕನಕ ವಸ್ತಗಳನ್ನು ದಾನ ಮಾಡಲಾಯಿತಲ್ಲದೆ ಭೂರೀ ಭೋಜನದ ಯವಸ್ಥೆಯನ್ನು ಕಂದನೂಲು ಸ್ವೀಕರಾಚಾದ್ಯರ ನೇತ್ರುತ್ವದಲ್ಲಿ ಮಾಡಲಾಗಿತ್ತು. ಅಂದ ಮೇಲೆ ಹಣ ಕಾಸಿನ ಪರಿಸ್ಥಿತಿ ಚಿಂತಾಜನಕವಾಗದಿದ್ದೀತೇನು? ಭಕ್ಷೀಸು ಕೊಡೋ ಯಿಷಯದಲ್ಲಿ ರಾಜ ಕಯ್ಯ ಹಿಡಿದಿದ್ದರಿಂದಾಗಿ ವಂದಿಮಾಗಧರು ಹೊಗಳೊ ಯಿಷಯದಲ್ಲಿ ಗಂಟಲು ಬಿಗಿದರು. ರಾಜನರಕಿಯರು ರಾಜನಲ್ಲಿ ಹರೆಯ ಮರುಕಳಿಸುವಂತೆ ನೃತ್ಯ ಮಾಡದಾದರು. ಆಡೋ ಹುಡುಗರು ಸುಲಭವಾಗಿ ಯತ್ತಬಹುದಾದಷ್ಟು ಅರಮನೆಯ ತಿಜೋರಿಯು ಹಗುರಾಗಿಬಿಟ್ಟಿತ್ತು. ಯಿದೆಲ್ಲ ಯಂದಿನಂತೆ ಸಾಂಗೋಪಸಾಂಗವಾಗಿ ನಡೆಯಬೇಕಾದರೆ ತಾನು ಹೆಂಗಾದರೂ ಮಾಡಿ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವಂತೆ ಮಾಡಬೇಕು.. ಗುತ್ತಿಗೆ, ತೆರಿಗೆಗಳಿತ್ಯಾದಿಗಳನ್ನು ದುಪ್ಪಟ್ಟು ಮಾಡಬೇಕೆಂದರೆ ರಾಜ್ಯದೊಳಗೆ ಸಕಾಲಕ್ಕೆ ಮಳೆ ಬೆಳೆ ಆಗದ ಕಾರಣದಿಂಗಾಗಿ ಪ್ರಜೆಗಳು ವಂದೊತ್ತು ವುಂಡು, ವಂದೊತ್ತು ವುಪಾಸಯಿರುವರು. ಕುಂತಳ ಸೀಮೆಯೊಳಗಿರುವಂಥ ಯಲ್ಲಾಪ್ರಕೊರಚರಟ್ಟಿಯು ತಮ್ಮ ರಾಜ್ಯದೊಳಗಿಲ್ಲ. ಹಿಂದೆ ಪಡೆದಿರುವುದನ್ನು ಬಡ್ಡಿ ಸಮೇತ ಚುಕ್ತಾ ಮಾಡದ ಹೊರತು ಕುಂಪಣಿ ಸರಕಾರವು ವಂದು ದಮ್ಮಡಿಯನ್ನೂ ನೀಡುವುದಿಲ್ಲ.. ಯಂದು ರಾಜ ಕದಿರೆಪ್ಪನಾಯಕ ಚಿಂತಿಸಿ ಕಳವಳಗೊಂಡನು. {{gap}}ಬಲಿಪಾಡ್ಯದ ಮಿಶೇಷ ಪೂಜೆ ಮಾಡಲಕೆಂದು ಬಂದಿದ್ದ ಸಿವಸಂಕರ ಸಾಸ್ತ್ರಿಗಳನ್ನು ಯೇಕಾಂತಕ್ಕೆ ಬರಮಾಡಿಕೊಂಡು ಯಲ್ಲಯಿವರಿಸಿ ಅರಮನೆಯ ಹಣಕಾಸಿನ ಪರಿಸ್ಥಿತಿ ಹದಗೆಡಲು ಕಾರಣಕತ್ತರಾದ ನೀವೇ ಹಣ ಹರಿದು<noinclude><references/></noinclude> i2hugdi6ifx316sk4namha00er63l20 ಪುಟ:ಅರಮನೆ.pdf/೭೬ 104 77161 322638 169871 2026-05-26T13:00:44Z Shreelatha.Halemane 7642 /* Proofread */ 322638 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=ಅರಮನೆ|right=೪೫}} ಬರೋ ಹಾದಿ ಹುಡುಕಿಕೊಡಬೇಕೆಂದು ಕೇಳಿಕೊಂಡನು. ಆಗ ಸಾಸಿಗಳು ಜೊನ್ನಗಿರಿ, ಯದ್ದುಲದೊಡ್ಡಿ, ಕರಿಯೇಮುಲ, ಸಿಂಗನಮಲ, ಯಾಡಕಿತಾಂಡ ಯವೇ ಮೊದಲಾದ ಮರುಗಳಿಂದ ಬಂದು ಆಶ್ರಯ ಪಡೆದಿರುವಂಥ ಸಾವುರಗಟಲೆ ಹೆಣ್ಣು ಗಂಡುಗಳನು ಯಿಟುಕೊಂಡು ಸಾಕುವುದು ದಂಡವೆಂದೂ, ಅವರನ್ನು ಯಿಂಥಿಂಥ ಕಡೆ, ಯಿಷ್ಟಷ್ಟಕ್ಕೆ ಯಿಲೇವಾರಿ ಮಾಡಿ ಧನವಂತನಾಗಬೇಕೆಂದೂ ಸಲಹೆ ನೀಡಿದರು. ಅದು ನಾಯಕನಿಗೆ ತುಂಬಾ ಹಿಡಿಸಿತು. ತನ್ನಲ್ಲಿದ್ದ ಸಂತರಸ್ತ ಮಂದಿಯಲ್ಲಿ ಹೆಣ್ಣಾಳೆಷ್ಟು ಸಂಖ್ಯೆ ಲಿದ್ದಾರೆ? ಗಂಡಾಳು ಯಷ್ಟು ಸಂಖ್ಯೆಯಲ್ಲಿದ್ದಾರೆ? ಅವರವರ ವಯಸ್ಸು, ತೂಕ ಯಿತ್ಯಾದಿ ಯಿವರಗಳನ್ನು ಗುಟ್ಟಾಗಿ ಸಂಗ್ರಹಿಸಿದನು. ದೂತರನ್ನು ಕಳಿಸಿ ಸುತ್ತನ್ನಾಕಡೇಲಿಂದ ಶ್ರೀಮಂತ ರನ್ನೂ, ಕುಂಪಣಿ ಸರಕಾರದ ಅಧಿಕಾರಿಗಳನ್ನೂ ಫಲನಾ ದಿವಸದಂದು ಮದ್ದಿಕೇರಿಗೆ ಬರಮಾಡಿ ಕೊಂಡನು. ವಯಸ್ಸು, ಬಣ್ಣ, ಅಗಲೆತ್ತರದ ಆಧಾರದ ಮ್ಯಾಲ ಯಿಂಥಿಂಥೋರ ಮುಖ ಬೆಲೆ ಯಿಷಿಷ್ಟೆಂದೂ, ಸೇಕಡಾ ಹತ್ತರಷ್ಟು ಭಾಗವನ್ನು ನೋಡಿ ಬಿಡುವುದಾಗಿಯೂ ಹೇಳಿ ಜೀವಂತ ಸರಕುಗಳನ್ನು ತೋರಿಸಿದನು. ಅತಿಥಿಗಳು ತಮ್ಮ ತಮ್ಮ ಯೋಗ್ಯತೆ, ಅಭಿರುಚಿ, ಅಂತಸ್ತು ಪ್ರಕಾರ ಯಿಂಥಿಂಥೋರು ತಮಗೆ ಬೇಕೆಂದು ಹೇಳಿ ಮುಂಗಡ ಕೊಟ್ಟರು. ಫಲಾನ ದಿವಸ ನಿಮ್ಮ ನಿಮ್ಮ ಸರಕುಗಳನ್ನು ನಿಮ ನಿಮಗೆ ತಲುಪಿಸುವುದಾಗಿ ಹೇಳಿದ್ದಲ್ಲದೆ ಚೆನ್ನಾಗಿ ನೋಡಿಕೊಳ್ಳಬೇಕೆಂದೂ ಕಳಕಳಿಯಿಂದ ಕೇಳಿಕೊಂಡನು. ಅವರೆಲ್ಲ ಅತ್ತ ಹೋದ ನಂತರ ಬಿಕರಿಗೊಂಡಿದ್ದಂಥ ಹೆಣ್ಣಾಳು ಗಂಡಾಳುಗಳಿಗೆ ವುಡಲಕ ಕೊಡುತ, ತಿಂಬಲಕ ನೀಡುತ ನೀವೆಲ್ಲ ನನಗೆ ಮಕ್ಕಳಿದ್ದಂಗೆ.. ಯಂದು ಹೇಳುತ ಗದ್ಗದಿತನಾಗಿ ಕಣ್ಣಲ್ಲಿ ನೀರು ತಂದುಕೊಂಡನು. ಆಗ ಪಕ್ಕದಲ್ಲಿದ್ದ ಸಾಸ್ತ್ರಿಗಳು ತಮ್ಮ ಕಂಕುಳಿಂದ ಹೊರತೆಗೆದ ಹೊತ್ತಿಗೆಯು ಮನುಸೃತಿ ಆಗಿತ್ತು. ಅದರೊಂದಿಗೆ ಶ್ರೀ ಕುಷ್ಟ ಪ್ರಣೀತ ಭಗವದ್ಗೀತೆಯೂ ಆಲಾಪನ ಮಾಡುತಲಿತ್ತು. {{gap}}ಯಿತ್ತ ಕುದುರೆಡವು ಪಟ್ಟಣದೊಳಗೆ ಹಗಲು ಪಾವಲಿ ಭಾಗ, ಯಿರುಳು ಮೂರು ಪಾವಲಿ ಭಾಗ, ಯಿರುಳಿಗೆ ಹೊಸ ಕಳೆ ಬಂದಿತ್ತು. ಸೂರ ಹುಟ್ಟಿದಾಗ ವಂದ ನಮೂನಿ ಯಿರುಳು. ಮುಳುಗಿದಾಗ ಯಿನ್ನೊಂದು ನಮೂನಿ ಯಿರುಳು.. ಕಣ್ಣು ತೆರಕೊಂಡರೂ ವಂದೇ... ಕಣ್ಣು ಮುಚ್ಚಿಕೊಂಡರೂ ವಂದೆಯಾ.. ಗಂಡ ಸೇರದ ಹೆಣ್ಣು ಗುಂಡುಕಲ್ಲಿಗೆ ಸಮವಂತೆ. ಸದರಿ ಪಟ್ಟಣದೊಳಗೆ ತನ್ನ ಕಷ್ಟ ಕೇಳುವವರಿಲ್ಲ, ಸಮಾಧಾನ ಹೇಳುವವರಿಲ್ಲ. ಗಂಡ ಹೆಂಡರನು ಎಂದು<noinclude><references/></noinclude> 8yltl9zwnu1bx3ym9vc5u4js6xeqyzn 322647 322638 2026-05-26T13:10:56Z Shreesha Sharma 7840 /* Validated */ 322647 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೪೫}} ಬರೋ ಹಾದಿ ಹುಡುಕಿಕೊಡಬೇಕೆಂದು ಕೇಳಿಕೊಂಡನು. ಆಗ ಸಾಸಿಗಳು ಜೊನ್ನಗಿರಿ, ಯದ್ದುಲದೊಡ್ಡಿ, ಕರಿಯೇಮುಲ, ಸಿಂಗನಮಲ, ಯಾಡಕಿತಾಂಡ ಯವೇ ಮೊದಲಾದ ಮರುಗಳಿಂದ ಬಂದು ಆಶ್ರಯ ಪಡೆದಿರುವಂಥ ಸಾವುರಗಟಲೆ ಹೆಣ್ಣು ಗಂಡುಗಳನು ಯಿಟುಕೊಂಡು ಸಾಕುವುದು ದಂಡವೆಂದೂ, ಅವರನ್ನು ಯಿಂಥಿಂಥ ಕಡೆ, ಯಿಷ್ಟಷ್ಟಕ್ಕೆ ಯಿಲೇವಾರಿ ಮಾಡಿ ಧನವಂತನಾಗಬೇಕೆಂದೂ ಸಲಹೆ ನೀಡಿದರು. ಅದು ನಾಯಕನಿಗೆ ತುಂಬಾ ಹಿಡಿಸಿತು. ತನ್ನಲ್ಲಿದ್ದ ಸಂತರಸ್ತ ಮಂದಿಯಲ್ಲಿ ಹೆಣ್ಣಾಳೆಷ್ಟು ಸಂಖ್ಯೆ ಲಿದ್ದಾರೆ? ಗಂಡಾಳು ಯಷ್ಟು ಸಂಖ್ಯೆಯಲ್ಲಿದ್ದಾರೆ? ಅವರವರ ವಯಸ್ಸು, ತೂಕ ಯಿತ್ಯಾದಿ ಯಿವರಗಳನ್ನು ಗುಟ್ಟಾಗಿ ಸಂಗ್ರಹಿಸಿದನು. ದೂತರನ್ನು ಕಳಿಸಿ ಸುತ್ತನ್ನಾಕಡೇಲಿಂದ ಶ್ರೀಮಂತ ರನ್ನೂ, ಕುಂಪಣಿ ಸರಕಾರದ ಅಧಿಕಾರಿಗಳನ್ನೂ ಫಲನಾ ದಿವಸದಂದು ಮದ್ದಿಕೇರಿಗೆ ಬರಮಾಡಿ ಕೊಂಡನು. ವಯಸ್ಸು, ಬಣ್ಣ, ಅಗಲೆತ್ತರದ ಆಧಾರದ ಮ್ಯಾಲ ಯಿಂಥಿಂಥೋರ ಮುಖ ಬೆಲೆ ಯಿಷಿಷ್ಟೆಂದೂ, ಸೇಕಡಾ ಹತ್ತರಷ್ಟು ಭಾಗವನ್ನು ನೋಡಿ ಬಿಡುವುದಾಗಿಯೂ ಹೇಳಿ ಜೀವಂತ ಸರಕುಗಳನ್ನು ತೋರಿಸಿದನು. ಅತಿಥಿಗಳು ತಮ್ಮ ತಮ್ಮ ಯೋಗ್ಯತೆ, ಅಭಿರುಚಿ, ಅಂತಸ್ತು ಪ್ರಕಾರ ಯಿಂಥಿಂಥೋರು ತಮಗೆ ಬೇಕೆಂದು ಹೇಳಿ ಮುಂಗಡ ಕೊಟ್ಟರು. ಫಲಾನ ದಿವಸ ನಿಮ್ಮ ನಿಮ್ಮ ಸರಕುಗಳನ್ನು ನಿಮ ನಿಮಗೆ ತಲುಪಿಸುವುದಾಗಿ ಹೇಳಿದ್ದಲ್ಲದೆ ಚೆನ್ನಾಗಿ ನೋಡಿಕೊಳ್ಳಬೇಕೆಂದೂ ಕಳಕಳಿಯಿಂದ ಕೇಳಿಕೊಂಡನು. ಅವರೆಲ್ಲ ಅತ್ತ ಹೋದ ನಂತರ ಬಿಕರಿಗೊಂಡಿದ್ದಂಥ ಹೆಣ್ಣಾಳು ಗಂಡಾಳುಗಳಿಗೆ ವುಡಲಕ ಕೊಡುತ, ತಿಂಬಲಕ ನೀಡುತ ನೀವೆಲ್ಲ ನನಗೆ ಮಕ್ಕಳಿದ್ದಂಗೆ.. ಯಂದು ಹೇಳುತ ಗದ್ಗದಿತನಾಗಿ ಕಣ್ಣಲ್ಲಿ ನೀರು ತಂದುಕೊಂಡನು. ಆಗ ಪಕ್ಕದಲ್ಲಿದ್ದ ಸಾಸ್ತ್ರಿಗಳು ತಮ್ಮ ಕಂಕುಳಿಂದ ಹೊರತೆಗೆದ ಹೊತ್ತಿಗೆಯು ಮನುಸೃತಿ ಆಗಿತ್ತು. ಅದರೊಂದಿಗೆ ಶ್ರೀ ಕುಷ್ಟ ಪ್ರಣೀತ ಭಗವದ್ಗೀತೆಯೂ ಆಲಾಪನ ಮಾಡುತಲಿತ್ತು. {{gap}}ಯಿತ್ತ ಕುದುರೆಡವು ಪಟ್ಟಣದೊಳಗೆ ಹಗಲು ಪಾವಲಿ ಭಾಗ, ಯಿರುಳು ಮೂರು ಪಾವಲಿ ಭಾಗ, ಯಿರುಳಿಗೆ ಹೊಸ ಕಳೆ ಬಂದಿತ್ತು. ಸೂರ ಹುಟ್ಟಿದಾಗ ವಂದ ನಮೂನಿ ಯಿರುಳು. ಮುಳುಗಿದಾಗ ಯಿನ್ನೊಂದು ನಮೂನಿ ಯಿರುಳು.. ಕಣ್ಣು ತೆರಕೊಂಡರೂ ವಂದೇ... ಕಣ್ಣು ಮುಚ್ಚಿಕೊಂಡರೂ ವಂದೆಯಾ.. ಗಂಡ ಸೇರದ ಹೆಣ್ಣು ಗುಂಡುಕಲ್ಲಿಗೆ ಸಮವಂತೆ. ಸದರಿ ಪಟ್ಟಣದೊಳಗೆ ತನ್ನ ಕಷ್ಟ ಕೇಳುವವರಿಲ್ಲ, ಸಮಾಧಾನ ಹೇಳುವವರಿಲ್ಲ. ಗಂಡ ಹೆಂಡರನು ಎಂದು<noinclude><references/></noinclude> 58vnggv51d7365ypdq35bbqvym8q19f ಪುಟ:ಅರಮನೆ.pdf/೭೭ 104 77162 322639 169872 2026-05-26T13:01:34Z Shreelatha.Halemane 7642 /* Proofread */ 322639 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=೪೬|right=ಅರಮನೆ}}ಅರಮನೆ ಮಾಡುವವರಿಲ್ಲ... ನೀನು ಪಡಕೊಂಡು ಬಂದಿರೋದೇ ಯಿಷ್ಟು ಕನವ್ವಾ.. ನೀನು ಹ್ಯಾದ ಜೆಲುಮದಲ್ಲಿ ಮಾಡಿರೋ ಕರುಮವನ್ನು ಯೀ ಜುಮದಲ್ಲಿ ತೀರಿಸಬೇಕಯ್ಯವ್ವಾ.. ನೀನು ಬಲ, ನಿನ್ನ ಗಂಡ ಬಲ ಕನವ್ವಾ... ಮೂರೊಳಗಿದು ಕೊಂಡು ವನವಾಸ ಅನುಬೋಸವ್ವಾ. ಮಂದಿ ನಡುವೆ ಯಿದುಕೊಂಡು ಅಗಾತ ವಾಸ ಅನುಭೋಸವ್ಯಾ. ನಿನ್ನ ಸರೀರದೊಳಗೆ ಮೋಬಯ್ಯ ಅದಾನಂದರ ಅದಾನವ್ವಾ. ಯಲ್ಲಾಂದರ ಯಿಲ್ಲಕನವ್ವಾ.. ನಿನಗೂ ಅವಗೂ ನಡುವೆ ಅಲವುಕಿಕ ಮಾಯ ಮುಸುಕಮ್ರವ್ಯಾ. ಅದು ಕರಗದ ಹೊರತು ನಿನ್ನ ಕಣ್ಣೆಳಗಿನ ವುದುಕ ಬತ್ತೋದಿಲ್ಲವ್ವಾ.. ಮುಂದ ವಂದಲ್ಲಾ ವಂದಿವಸ ಗಂಡ ಹೆಂಡಿರು ವಂದಾಗುತೀರವ್ವಾ.. ಅಲ್ಲಿಗಂಟಾ ಜೀವ ಹಿಡಕಳ್ಳವ್ವಾ.. ಕಣ್ಣೀರು ಸುರಿಸಿ ಕಲ್ಲು ಕರಗಿಸವ್ವಾ.. ಕರುಣೆ ಹುಟ್ಟಿಸವ್ವಾ.. ಹಿಂಗ ವಬ್ದಬ್ಬರದು ವಂದಂದು ಮಾತು.... {{gap}}ಬೇಯಿನ ವರದವ್ವನ ಬುಡದಲ್ಲಿ ಜಗಲೂರೆವ್ವ ಮಲಗವಳಂದರ ಮಲಗವಳೆ, ಕಣ್ಣು ಮುಚ್ಚವಳಂದರ ಮುಚ್ಚವಳೆ.. ವಡಲೊಳಗೆ ಮಣ ಮಣ ಸಂಕಟ ತುಂಬಿಕೊಂಡಿರೋ ಆಕೆಯ ಕಣ್ಣಿಗೆ ಗಪ್ಪಂತ ನಿದುರೆ ಹತ್ತುವಲ್ಲದು.. ಚಣಚಣಕೊಂದಾವರಿ ಮಗ್ಗುಲು ಮ್ಯಾಲ ಮಗ್ಗುಲು ಬದಲಾಯಿಸುತ ತನಗೆ ತಾನು ಮರುಗುತ ನಿಂದಿಸಿಕೊಳ್ಳುತ ರೆಪ್ಪೆಗೆ ರಪ್ಪ ಅಂಟಿಸೋದು, ತೆರೆಯೋದು ಮಾಡುತವಳೆ.. ಕಣ್ಣೀರು ಹನದೂ ಹನದೂ ನೆಲ ವಜ್ಜಲು ಮಾಡುತವಳೆ, ಸಿವಸಂಕರ ಮಾದೇವಾss. {{gap}}ಮಂದಿ ಯಂಬುವ ಮಂದಿ ತನ್ನನ್ನು ನಡೋ ನೀರಿನಾಗ ಕಯ್ಯ ಬಿಟ್ಟಾರ.. ಆದರ ಅನುಗಾಲ ದಿಕ್ಕುಗಳಿಗೆ ದಿಕ್ಕು ತೋರಿಸೂತ.. ಆಕಾಸ ಮಾರಗದಲ್ಲಿ ಮಿಣುಕು ಮಿಣಕು ಮಿನುಗೂತಲಿರುವ ಚುಕ್ಕಿಗಳಿಗಾರ ತನ ಮ್ಯಾಲ ಕನುಕರ ಯಿಲ್ಲದಂಗಾಯ್ತಲ್ಲ. ಅವುಗಳ ಮಾಲ ತಾನು ಬಿದ್ದು ಸಾಯುತಿದ್ದೆನಲ್ಲಾ.. ವಂದೊಂದು ಚುಕ್ಕಿನ ಮಾತಿನೇಣಿ ಯಿಂದ ಭೂಮಿಗಿಳಿಸಿಕೊಂಡು ಬಂದು ಕಥಿ ಕಟ್ಟಿ ಹೇಳುತ್ತಿದ್ದೆನಲ್ಲಾ.. ನೆಲ ಮುಗುಲ ನಡುವಿನ ದೂರ ಕಮ್ಮಿ ಮಾಡಿದ್ದೆನಲ್ಲಾ.. ತನಮ್ಯಾಲ ಅವುಕಾರsss.... {{gap}}ಹ್ಯಾಂಗ ಹೇಳುದು ಬರೋದೇ ತಾಯಿ S... ನೀನು ತಿಳಕೊಂಡಿರೋವಷ್ಟು ಭೂಮಿ ನಮಗ ಸನೇವಿಲ್ಲ.. ವಂದರ ಮುಂದ ಲಕ್ಷ ಸೊನ್ನೆಗಳನ್ನಿಟ್ಟರೆ ಯಷ್ಟಾಗತಯೋ ಅಷ್ಟು ದೂರ ಅದೀವಿ ಕನವ್ವಾ.. ನಮ್ಮ ಕಣ್ಣಿಂದ ವುದುರೋ ನೀರು ನೆಲಕ ತಗಲಲಕ ಯೋಸೋ ವರುಷ ತಗಂತಯ್ಕೆ ಕನವ್ವಾ.. ನಾವಾಡೋ ಮಾತು ನಿನ ಕಿವಿ ತಗಲಲಕ...<noinclude><references/></noinclude> 2n5xprd2wvqiwcjqunvqlwco4weq70k 322646 322639 2026-05-26T13:10:34Z Shreesha Sharma 7840 /* Validated */ 322646 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೪೬|right=ಅರಮನೆ}}ಅರಮನೆ ಮಾಡುವವರಿಲ್ಲ... ನೀನು ಪಡಕೊಂಡು ಬಂದಿರೋದೇ ಯಿಷ್ಟು ಕನವ್ವಾ.. ನೀನು ಹ್ವಾದ ಜೆಲುಮದಲ್ಲಿ ಮಾಡಿರೋ ಕರುಮವನ್ನು ಯೀ ಜುಮದಲ್ಲಿ ತೀರಿಸಬೇಕಯ್ಯವ್ವಾ.. ನೀನು ಬಲ, ನಿನ್ನ ಗಂಡ ಬಲ ಕನವ್ವಾ... ಮೂರೊಳಗಿದು ಕೊಂಡು ವನವಾಸ ಅನುಬೋಸವ್ವಾ. ಮಂದಿ ನಡುವೆ ಯಿದುಕೊಂಡು ಅಗಾತ ವಾಸ ಅನುಭೋಸವ್ಯಾ. ನಿನ್ನ ಸರೀರದೊಳಗೆ ಮೋಬಯ್ಯ ಅದಾನಂದರ ಅದಾನವ್ವಾ. ಯಲ್ಲಾಂದರ ಯಿಲ್ಲಕನವ್ವಾ.. ನಿನಗೂ ಅವಗೂ ನಡುವೆ ಅಲವುಕಿಕ ಮಾಯ ಮುಸುಕಮ್ರವ್ಯಾ. ಅದು ಕರಗದ ಹೊರತು ನಿನ್ನ ಕಣ್ಣೆಳಗಿನ ವುದುಕ ಬತ್ತೋದಿಲ್ಲವ್ವಾ.. ಮುಂದ ವಂದಲ್ಲಾ ವಂದಿವಸ ಗಂಡ ಹೆಂಡಿರು ವಂದಾಗುತೀರವ್ವಾ.. ಅಲ್ಲಿಗಂಟಾ ಜೀವ ಹಿಡಕಳ್ಳವ್ವಾ.. ಕಣ್ಣೀರು ಸುರಿಸಿ ಕಲ್ಲು ಕರಗಿಸವ್ವಾ.. ಕರುಣೆ ಹುಟ್ಟಿಸವ್ವಾ.. ಹಿಂಗ ವಬ್ದಬ್ಬರದು ವಂದಂದು ಮಾತು.... {{gap}}ಬೇಯಿನ ವರದವ್ವನ ಬುಡದಲ್ಲಿ ಜಗಲೂರೆವ್ವ ಮಲಗವಳಂದರ ಮಲಗವಳೆ, ಕಣ್ಣು ಮುಚ್ಚವಳಂದರ ಮುಚ್ಚವಳೆ.. ವಡಲೊಳಗೆ ಮಣ ಮಣ ಸಂಕಟ ತುಂಬಿಕೊಂಡಿರೋ ಆಕೆಯ ಕಣ್ಣಿಗೆ ಗಪ್ಪಂತ ನಿದುರೆ ಹತ್ತುವಲ್ಲದು.. ಚಣಚಣಕೊಂದಾವರಿ ಮಗ್ಗುಲು ಮ್ಯಾಲ ಮಗ್ಗುಲು ಬದಲಾಯಿಸುತ ತನಗೆ ತಾನು ಮರುಗುತ ನಿಂದಿಸಿಕೊಳ್ಳುತ ರೆಪ್ಪೆಗೆ ರಪ್ಪ ಅಂಟಿಸೋದು, ತೆರೆಯೋದು ಮಾಡುತವಳೆ.. ಕಣ್ಣೀರು ಹನದೂ ಹನದೂ ನೆಲ ವಜ್ಜಲು ಮಾಡುತವಳೆ, ಸಿವಸಂಕರ ಮಾದೇವಾss. {{gap}}ಮಂದಿ ಯಂಬುವ ಮಂದಿ ತನ್ನನ್ನು ನಡೋ ನೀರಿನಾಗ ಕಯ್ಯ ಬಿಟ್ಟಾರ.. ಆದರ ಅನುಗಾಲ ದಿಕ್ಕುಗಳಿಗೆ ದಿಕ್ಕು ತೋರಿಸೂತ.. ಆಕಾಸ ಮಾರಗದಲ್ಲಿ ಮಿಣುಕು ಮಿಣಕು ಮಿನುಗೂತಲಿರುವ ಚುಕ್ಕಿಗಳಿಗಾರ ತನ ಮ್ಯಾಲ ಕನುಕರ ಯಿಲ್ಲದಂಗಾಯ್ತಲ್ಲ. ಅವುಗಳ ಮಾಲ ತಾನು ಬಿದ್ದು ಸಾಯುತಿದ್ದೆನಲ್ಲಾ.. ವಂದೊಂದು ಚುಕ್ಕಿನ ಮಾತಿನೇಣಿ ಯಿಂದ ಭೂಮಿಗಿಳಿಸಿಕೊಂಡು ಬಂದು ಕಥಿ ಕಟ್ಟಿ ಹೇಳುತ್ತಿದ್ದೆನಲ್ಲಾ.. ನೆಲ ಮುಗುಲ ನಡುವಿನ ದೂರ ಕಮ್ಮಿ ಮಾಡಿದ್ದೆನಲ್ಲಾ.. ತನಮ್ಯಾಲ ಅವುಕಾರsss.... {{gap}}ಹ್ಯಾಂಗ ಹೇಳುದು ಬರೋದೇ ತಾಯಿ S... ನೀನು ತಿಳಕೊಂಡಿರೋವಷ್ಟು ಭೂಮಿ ನಮಗ ಸನೇವಿಲ್ಲ.. ವಂದರ ಮುಂದ ಲಕ್ಷ ಸೊನ್ನೆಗಳನ್ನಿಟ್ಟರೆ ಯಷ್ಟಾಗತಯೋ ಅಷ್ಟು ದೂರ ಅದೀವಿ ಕನವ್ವಾ.. ನಮ್ಮ ಕಣ್ಣಿಂದ ವುದುರೋ ನೀರು ನೆಲಕ ತಗಲಲಕ ಯೋಸೋ ವರುಷ ತಗಂತಯ್ಕೆ ಕನವ್ವಾ.. ನಾವಾಡೋ ಮಾತು ನಿನ ಕಿವಿ ತಗಲಲಕ...<noinclude><references/></noinclude> oemvddx2odkcfr0kcjnvjnbpw24e0ke 322785 322646 2026-05-26T19:14:20Z Vikashegde 1258 /* Validated */ 322785 proofread-page text/x-wiki <noinclude><pagequality level="4" user="Shreesha Sharma" />{{rh|center=|left=೪೬|right=ಅರಮನೆ}}</noinclude>ಮಾಡುವವರಿಲ್ಲ... ನೀನು ಪಡಕೊಂಡು ಬಂದಿರೋದೇ ಯಿಷ್ಟು ಕನವ್ವಾ.. ನೀನು ಹ್ವಾದ ಜೆಲುಮದಲ್ಲಿ ಮಾಡಿರೋ ಕರುಮವನ್ನು ಯೀ ಜುಮದಲ್ಲಿ ತೀರಿಸಬೇಕಯ್ಯವ್ವಾ.. ನೀನು ಬಲ, ನಿನ್ನ ಗಂಡ ಬಲ ಕನವ್ವಾ... ಮೂರೊಳಗಿದು ಕೊಂಡು ವನವಾಸ ಅನುಬೋಸವ್ವಾ. ಮಂದಿ ನಡುವೆ ಯಿದುಕೊಂಡು ಅಗಾತ ವಾಸ ಅನುಭೋಸವ್ಯಾ. ನಿನ್ನ ಸರೀರದೊಳಗೆ ಮೋಬಯ್ಯ ಅದಾನಂದರ ಅದಾನವ್ವಾ. ಯಲ್ಲಾಂದರ ಯಿಲ್ಲಕನವ್ವಾ.. ನಿನಗೂ ಅವಗೂ ನಡುವೆ ಅಲವುಕಿಕ ಮಾಯ ಮುಸುಕಮ್ರವ್ಯಾ. ಅದು ಕರಗದ ಹೊರತು ನಿನ್ನ ಕಣ್ಣೆಳಗಿನ ವುದುಕ ಬತ್ತೋದಿಲ್ಲವ್ವಾ.. ಮುಂದ ವಂದಲ್ಲಾ ವಂದಿವಸ ಗಂಡ ಹೆಂಡಿರು ವಂದಾಗುತೀರವ್ವಾ.. ಅಲ್ಲಿಗಂಟಾ ಜೀವ ಹಿಡಕಳ್ಳವ್ವಾ.. ಕಣ್ಣೀರು ಸುರಿಸಿ ಕಲ್ಲು ಕರಗಿಸವ್ವಾ.. ಕರುಣೆ ಹುಟ್ಟಿಸವ್ವಾ.. ಹಿಂಗ ವಬ್ದಬ್ಬರದು ವಂದಂದು ಮಾತು.... {{gap}}ಬೇಯಿನ ವರದವ್ವನ ಬುಡದಲ್ಲಿ ಜಗಲೂರೆವ್ವ ಮಲಗವಳಂದರ ಮಲಗವಳೆ, ಕಣ್ಣು ಮುಚ್ಚವಳಂದರ ಮುಚ್ಚವಳೆ.. ವಡಲೊಳಗೆ ಮಣ ಮಣ ಸಂಕಟ ತುಂಬಿಕೊಂಡಿರೋ ಆಕೆಯ ಕಣ್ಣಿಗೆ ಗಪ್ಪಂತ ನಿದುರೆ ಹತ್ತುವಲ್ಲದು.. ಚಣಚಣಕೊಂದಾವರಿ ಮಗ್ಗುಲು ಮ್ಯಾಲ ಮಗ್ಗುಲು ಬದಲಾಯಿಸುತ ತನಗೆ ತಾನು ಮರುಗುತ ನಿಂದಿಸಿಕೊಳ್ಳುತ ರೆಪ್ಪೆಗೆ ರಪ್ಪ ಅಂಟಿಸೋದು, ತೆರೆಯೋದು ಮಾಡುತವಳೆ.. ಕಣ್ಣೀರು ಹನದೂ ಹನದೂ ನೆಲ ವಜ್ಜಲು ಮಾಡುತವಳೆ, ಸಿವಸಂಕರ ಮಾದೇವಾss. {{gap}}ಮಂದಿ ಯಂಬುವ ಮಂದಿ ತನ್ನನ್ನು ನಡೋ ನೀರಿನಾಗ ಕಯ್ಯ ಬಿಟ್ಟಾರ.. ಆದರ ಅನುಗಾಲ ದಿಕ್ಕುಗಳಿಗೆ ದಿಕ್ಕು ತೋರಿಸೂತ.. ಆಕಾಸ ಮಾರಗದಲ್ಲಿ ಮಿಣುಕು ಮಿಣಕು ಮಿನುಗೂತಲಿರುವ ಚುಕ್ಕಿಗಳಿಗಾರ ತನ ಮ್ಯಾಲ ಕನುಕರ ಯಿಲ್ಲದಂಗಾಯ್ತಲ್ಲ. ಅವುಗಳ ಮಾಲ ತಾನು ಬಿದ್ದು ಸಾಯುತಿದ್ದೆನಲ್ಲಾ.. ವಂದೊಂದು ಚುಕ್ಕಿನ ಮಾತಿನೇಣಿ ಯಿಂದ ಭೂಮಿಗಿಳಿಸಿಕೊಂಡು ಬಂದು ಕಥಿ ಕಟ್ಟಿ ಹೇಳುತ್ತಿದ್ದೆನಲ್ಲಾ.. ನೆಲ ಮುಗುಲ ನಡುವಿನ ದೂರ ಕಮ್ಮಿ ಮಾಡಿದ್ದೆನಲ್ಲಾ.. ತನಮ್ಯಾಲ ಅವುಕಾರsss.... {{gap}}ಹ್ಯಾಂಗ ಹೇಳುದು ಬರೋದೇ ತಾಯಿ<sub>ss</sub>... ನೀನು ತಿಳಕೊಂಡಿರೋವಷ್ಟು ಭೂಮಿ ನಮಗ ಸನೇವಿಲ್ಲ.. ವಂದರ ಮುಂದ ಲಕ್ಷ ಸೊನ್ನೆಗಳನ್ನಿಟ್ಟರೆ ಯಷ್ಟಾಗತಯೋ ಅಷ್ಟು ದೂರ ಅದೀವಿ ಕನವ್ವಾ.. ನಮ್ಮ ಕಣ್ಣಿಂದ ವುದುರೋ ನೀರು ನೆಲಕ ತಗಲಲಕ ಯೋಸೋ ವರುಷ ತಗಂತಯ್ತೆ ಕನವ್ವಾ.. ನಾವಾಡೋ ಮಾತು ನಿನ ಕಿವಿ ತಗಲಲಕ...<noinclude><references/></noinclude> m9xz1wcck6cei2ov4vmsszi4oezxpv9 ಪುಟ:ಅರಮನೆ.pdf/೭೮ 104 77163 322640 169873 2026-05-26T13:02:20Z Shreelatha.Halemane 7642 /* Proofread */ 322640 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=ಅರಮನೆ|right=೪೭}} ಆಕಾಸದ ಕರಿಗಂಬಳಿ ಮಾಲ ಕಾಳು ಕಡಿ ವಣಹಾಕಿದಂಗಿದ್ದ ಚುಕ್ಕಿ ನಕ್ಷತ್ರಗಳು ಬಿದ್ದವು. ಅವುಗಳನು ಮಾಂಯಾದ ಪಕ್ಷಿಗಳು ಬಂದು ಗುಳುಂ ಗುಳುಂ ಅಂತ ನುಂಗಿಯಾವು ಯಂದು ಚಂದ್ರಾಮ ತನ ಕಯ್ಯೋಳಗ ಬೆಳದಿಂಗಳ ಬಡಿಗೆ ಹಿಡಕೊಂಡು ಕಾಯಕಂತ ಯಿದ್ದನು. ಆಕೆಯ ದುಕ್ಕ ಕಂಡು ಮರುಗದೆಯಿರಲಿಲ್ಲ ಚಂದ್ರಾಮ. {{gap}}ಆಕಾಸದ ಚುಕ್ಕಿಗಳಿಗೂ ದುಕ್ಕ ತಡಕೊಳ್ಳಲಾಗುತ್ತಿಲ್ಲ.. ಅದೂಮಿಣಕೂ ಮಿಣಕೂ ಅಂತ ದುಕ್ಕ ಮಾಡುತಲಿದ್ದವು. {{gap}}ಅವುಗಳ ಪಯ್ಕೆ ಒಂದು ದಂಡೆಗೆ ವಡತಿಯಾಗಿದ್ದ ಸಿವಸರಣೆ ಚನ್ನವ್ವ ತಾನೆಷ್ಟಿದ್ದರೂ ವಂದಾನೊಂದು ಕಾಲದಲ್ಲಿ ಕಾಳಿಂಗರಾಯನ ಧರುಮ ಪತ್ನಿಯಾಗಿದ್ದಾರೆ, ಪಡಬಾರದ ಕಷ್ಟ ನಷ್ಟ ಅನುಭವಿಸಿ ಬದುಕನು ತೇದಿರುವಾಕಿ, ಪುಣ್ಯದ ಫಲವಾಗಿ ತಾನು ಚುಕ್ಕಿಯಾಗಿ ಆಕಾಸಕ್ಕೆ ಸೋಭೆ ತಂದುಥಾಕಿ. ಮೂರು ಗಾವುದ ವುದ್ದ ತನ್ನ ಕಥೆಯನ್ನು ಹಾಡು ಕಟ್ಟಿ ಹಾಡುತ ಅಜರಾಮಗೊಳಿಸಿದಂಥಾಕಿಯಾದ ಜಗಲೂರ ಅಂದರ ಆಕೆಗೆ ಯಷ್ಟೋ ಕಕ್ಕುಲಾತಿ. ಯಾವಾಕಿ ನೂರು ಕಾಲ ಸುಖವಾಗಿರಬೇಕಂತ ತಾನು ಅನುಗಾಲ ಬಯಸುತ್ತಿದ್ದಳೋ ಅಂಥಾಕೆ ಕುಂತಲ್ಲಿ ವನವಾಸ, ನಿಂತಲ್ಲಿ ಅಗ್ನಾತವಾಸ ಅನುಭೋಸುತ್ತಿರುವುದನ್ನು ನೋಡುತ... ಅಯ್ಯೋ, ಯಂಥ ಸಾದ್ವಿಗೆ ಯಂಥ ಗತಿ ವದಗಿರುವದಲ್ಲಾ ಯಂದು ಮರುಗುತ ತಾನು ಪಡಬಾರದ ಸಂಕಟ ಪಡುತಲಿದ್ದಳು. ತಾನು ಹೆಂಗಾದರೂ ಮಾಡಿ ಆಕೆಯ ಸಂಕಟವನ್ನು ಪರಿಹಾರ ಮಾಡಬೇಕೆಂದು ನಿರರಿಸಿದಳು. ಮಡಗಯ್ಲಿ ಬೆಳಕಿನ ಬೆತ್ತವ ಹಿಡಿದು, ಬಲಗಯ್ಲಿ ಜೋಳಿಗೆ ಹಿಡಿದು ಪುಣ್ಯದ ಬಿಕ್ಷೆ ಹಾಕಿಸಿಕೊಳ್ಳುತ ಚುಕ್ಕಿಯಿಂದ ಚುಕ್ಕಿಗೆ ಅಡ್ಡಾಡುತಲಿದ್ದ ಆಕೆಯು ಪುರನರನು, ಗರಧರನು ಆಗಿದ್ದ ಪರಸಿವನಲ್ಲಿಗೆ ಹೋಗಿ ಕಯ್ಯ ಮುಕ್ಕಂಡು ನಿಂತಳು. ಯೇಟೋ ಹೊತ್ತಾದ ಮ್ಯಾಲ ನೀಲಕಂಠನು ಕಣ್ಣು ತೆರೆದು ನೋಡಿ ಯಾಕ ತಾಯಿ ಮುಖ ಮಾರೀನ ಸಪ್ಪಗೆ ಮಾಡಿಕಂಡಿದ್ದೀಯಾ?” ಯಂದು ಯಿಚಾರಿಸಿದನು. ಅದಕಿದ್ದು ಸರಣೆಯು “ಯೇನಪ್ಪಾ ಪರಮೇಸುರss.. ವಪ್ಪ ಮೋರಣದ ವುಪ್ಪರಿಗೆ ಮ್ಯಾಲ ಕುಂತಿರೋ ನಿನಗ ಭೂಲೋಕದಲ್ಲಿ ನರಮನುಶೋರು ಮಾಡುತ್ತಿರೋ ದುಕ್ಕ ಕೇಳಿಸದೇನು ತಂದೆಯೇ?” ಯಂದು ಕೇಳಿದ್ದಕ್ಕೆ ಭವಭಯಹರನು “ಯಾಕ ಕೇಳಿಸುವದಿಲ್ಲವ್ವಾ.. ಕೇಳಿಸತಯ್ಕೆ.. ನನ್ನ ಗಮನಕ್ಕೆ ಬಾರದಿರೋದು ಯಾರಿದ್ದಾರಲ್ವಾ?” ಯಂದು ಆಗ್ಗೆ ಭೂರಿ ಭೋಜನ ವುಂಡು, ಯಂಜಲಗಯ್ಯ ತೊಳಕೊಂಡು ತ್ಯಾವವನ್ನು<noinclude><references/></noinclude> 2qadvrpq6hzfm34jh8am3ln4qxduahf 322645 322640 2026-05-26T13:10:04Z Shreesha Sharma 7840 /* Validated */ 322645 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=ಅರಮನೆ|right=೪೭}} ಆಕಾಸದ ಕರಿಗಂಬಳಿ ಮಾಲ ಕಾಳು ಕಡಿ ವಣಹಾಕಿದಂಗಿದ್ದ ಚುಕ್ಕಿ ನಕ್ಷತ್ರಗಳು ಬಿದ್ದವು. ಅವುಗಳನು ಮಾಯಾದ ಪಕ್ಷಿಗಳು ಬಂದು ಗುಳುಂ ಗುಳುಂ ಅಂತ ನುಂಗಿಯಾವು ಯಂದು ಚಂದ್ರಾಮ ತನ ಕಯ್ಯೋಳಗ ಬೆಳದಿಂಗಳ ಬಡಿಗೆ ಹಿಡಕೊಂಡು ಕಾಯಕಂತ ಯಿದ್ದನು. ಆಕೆಯ ದುಕ್ಕ ಕಂಡು ಮರುಗದೆಯಿರಲಿಲ್ಲ ಚಂದ್ರಾಮ. {{gap}}ಆಕಾಸದ ಚುಕ್ಕಿಗಳಿಗೂ ದುಕ್ಕ ತಡಕೊಳ್ಳಲಾಗುತ್ತಿಲ್ಲ.. ಅದೂಮಿಣಕೂ ಮಿಣಕೂ ಅಂತ ದುಕ್ಕ ಮಾಡುತಲಿದ್ದವು. {{gap}}ಅವುಗಳ ಪಯ್ಕೆ ಒಂದು ದಂಡೆಗೆ ವಡತಿಯಾಗಿದ್ದ ಸಿವಸರಣೆ ಚನ್ನವ್ವ ತಾನೆಷ್ಟಿದ್ದರೂ ವಂದಾನೊಂದು ಕಾಲದಲ್ಲಿ ಕಾಳಿಂಗರಾಯನ ಧರುಮ ಪತ್ನಿಯಾಗಿದ್ದಾರೆ, ಪಡಬಾರದ ಕಷ್ಟ ನಷ್ಟ ಅನುಭವಿಸಿ ಬದುಕನು ತೇದಿರುವಾಕಿ, ಪುಣ್ಯದ ಫಲವಾಗಿ ತಾನು ಚುಕ್ಕಿಯಾಗಿ ಆಕಾಸಕ್ಕೆ ಸೋಭೆ ತಂದುಥಾಕಿ. ಮೂರು ಗಾವುದ ವುದ್ದ ತನ್ನ ಕಥೆಯನ್ನು ಹಾಡು ಕಟ್ಟಿ ಹಾಡುತ ಅಜರಾಮಗೊಳಿಸಿದಂಥಾಕಿಯಾದ ಜಗಲೂರ ಅಂದರ ಆಕೆಗೆ ಯಷ್ಟೋ ಕಕ್ಕುಲಾತಿ. ಯಾವಾಕಿ ನೂರು ಕಾಲ ಸುಖವಾಗಿರಬೇಕಂತ ತಾನು ಅನುಗಾಲ ಬಯಸುತ್ತಿದ್ದಳೋ ಅಂಥಾಕೆ ಕುಂತಲ್ಲಿ ವನವಾಸ, ನಿಂತಲ್ಲಿ ಅಗ್ನಾತವಾಸ ಅನುಭೋಸುತ್ತಿರುವುದನ್ನು ನೋಡುತ... ಅಯ್ಯೋ, ಯಂಥ ಸಾದ್ವಿಗೆ ಯಂಥ ಗತಿ ವದಗಿರುವದಲ್ಲಾ ಯಂದು ಮರುಗುತ ತಾನು ಪಡಬಾರದ ಸಂಕಟ ಪಡುತಲಿದ್ದಳು. ತಾನು ಹೆಂಗಾದರೂ ಮಾಡಿ ಆಕೆಯ ಸಂಕಟವನ್ನು ಪರಿಹಾರ ಮಾಡಬೇಕೆಂದು ನಿರರಿಸಿದಳು. ಮಡಗಯ್ಲಿ ಬೆಳಕಿನ ಬೆತ್ತವ ಹಿಡಿದು, ಬಲಗಯ್ಲಿ ಜೋಳಿಗೆ ಹಿಡಿದು ಪುಣ್ಯದ ಬಿಕ್ಷೆ ಹಾಕಿಸಿಕೊಳ್ಳುತ ಚುಕ್ಕಿಯಿಂದ ಚುಕ್ಕಿಗೆ ಅಡ್ಡಾಡುತಲಿದ್ದ ಆಕೆಯು ಪುರನರನು, ಗರಧರನು ಆಗಿದ್ದ ಪರಸಿವನಲ್ಲಿಗೆ ಹೋಗಿ ಕಯ್ಯ ಮುಕ್ಕಂಡು ನಿಂತಳು. ಯೇಟೋ ಹೊತ್ತಾದ ಮ್ಯಾಲ ನೀಲಕಂಠನು ಕಣ್ಣು ತೆರೆದು ನೋಡಿ ಯಾಕ ತಾಯಿ ಮುಖ ಮಾರೀನ ಸಪ್ಪಗೆ ಮಾಡಿಕಂಡಿದ್ದೀಯಾ?” ಯಂದು ಯಿಚಾರಿಸಿದನು. ಅದಕಿದ್ದು ಸರಣೆಯು “ಯೇನಪ್ಪಾ ಪರಮೇಸುರss.. ವಪ್ಪ ಮೋರಣದ ವುಪ್ಪರಿಗೆ ಮ್ಯಾಲ ಕುಂತಿರೋ ನಿನಗ ಭೂಲೋಕದಲ್ಲಿ ನರಮನುಶೋರು ಮಾಡುತ್ತಿರೋ ದುಕ್ಕ ಕೇಳಿಸದೇನು ತಂದೆಯೇ?” ಯಂದು ಕೇಳಿದ್ದಕ್ಕೆ ಭವಭಯಹರನು “ಯಾಕ ಕೇಳಿಸುವದಿಲ್ಲವ್ವಾ.. ಕೇಳಿಸತಯ್ಕೆ.. ನನ್ನ ಗಮನಕ್ಕೆ ಬಾರದಿರೋದು ಯಾರಿದ್ದಾರಲ್ವಾ?” ಯಂದು ಆಗ್ಗೆ ಭೂರಿ ಭೋಜನ ವುಂಡು, ಯಂಜಲಗಯ್ಯ ತೊಳಕೊಂಡು ತ್ಯಾವವನ್ನು<noinclude><references/></noinclude> g2uc3bem1lis41hu6hswnjkfcu81csq ಪುಟ:ಅರಮನೆ.pdf/೭೯ 104 77164 322641 169874 2026-05-26T13:03:16Z Shreelatha.Halemane 7642 /* Proofread */ 322641 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=೪೮|right=ಅರಮನೆ}} ಹುಲಿ ಚರುಮಕ ವರಸಿಕೊಂಡು ಯಲಡಕೆ ನಮಲುತ್ತ ಗಂಧದ ಮರದಡೀಲಿ ಗದ್ದುಗೆ ಮ್ಯಾಲ ಯಿರಾಮವಾಗಿ ಕೂಕಂಡಿದ್ದ ಆ ಜಗನ್ನಾಥನು ಆಚ್ಚರಿಪಟ್ಟು ಕೇಳಿದನು. ಆಗ ಚನ್ನವನು “ಅಗೋ ಅಣುಕಿ ನೋಡಲ್ಲಿ.. ಭೂಲೋಕಕ್ಕಧಿಕವಾಗಿ ಕುಂತಳ ದೇಸ ವಂದಯ್ತಲ್ಲ... ಆ ಕುಂತಳ ದೇಸಕ್ಕಧಿಕವಾದ ಕುದುರೆಡವು ಪಟ್ಟಣ ವಂದಯ..ಆ ಕುದುರೆಡವು ಪಟ್ಟಣಕ್ಕಧಿಕವಾಗಿ ಥಳಗೇರಿ ವಂದತ್ತ.. ಆ ಥಳಗೇರಿಗೆ ಛತ್ರಿಚಾಮರ ಹಿಡದಂಗ ಬೇಯಿನ ಮರ ತೊಂದರೆಯಲ್ಲ.. ಆ ಮರದಡೀಲಿ ಜಗಲೂರೆವ್ವ ಯಂಬ ಸಾದ್ವಿಯು ಗಂಡನಿದ್ದೂ ರಂಡೆಯಾಗಿ, ಯಂಜಲೆಲೆಯಂಥಾಗಿ ದುಕ್ತ ಮಾಡುತ್ತಿರುವಳು.. ನೋಡು” ಯಂದು ಬೊಟ್ಟು ಮಾಡಿ ತೋರಿಸಿದಳು. ಪರಮಾತುಮನು ಆಕೆ ಮಾಡಿದ ಬೊಟ್ಟಿನ ಗುಂಟ ಹೋಗಿ ನೋಡಿಯೂ ನೋಡದವನಂಗೆ “ನನ್ನ ಪರಮ ಭಕುತೆಯಾದ ಚನ್ನವ್ವನೇ.. ಚಿತ್ತಯಿಟ್ಟು ಕೇಳು ತಾಯಿss ತಿರುಗಾಡಿ ತಿರುಗಾಡಿ ಪಾದ ನೊಂದವವ್ವಾ.. ಕೊಟ್ಟೂ ಕೊಟ್ಟೂ ಕಮ್ಮಿಗಳು ನೊಂದಾವವ್ವಾ..” ಎನ್ನಲು ಆಕೆಯು “ಕಾಲನೊಂದರ ಹಿಜಗತೀನಪ್ಪಾ.. ಆದರೆ ನೀನು ಮಾತ್ರಜಗಲೂರವ್ವನ ದುಕ್ತ ಕಮ್ಮಿ ಮಾಡಬೇಕಪ್ಪಾ' ಯಂದೆನ್ನಲು, ಅದಕಿದ್ದು ಆ ಸಾಯಿರ ಸರುಪಗಳ ಸರದಾರನು ನನ್ನ ಮನೆ ವಳ ಹೊರಗ ಕಸ ಮುಸುರೆ ಮಾಡೋರಿಲ್ಲ... ನಂದೇ ನನಗ ಮಸ್ತುದಗದ ಅಯ್ಕೆ.. ನಾನು ಹೀರೇಳು ಲೋಕಕ ಮರುಗಬೇಕು. ಆದರ ಯೀರೇಳು ಲೋಕದೊಳಗ ನನಗ ಮರುಗೋರು ಯಾರಿದ್ದಾರೆ ನೀನೇ ಹೇಳು ತಾಯಿ” ಯಂದೆನ್ನಲು ಅದಕಿದ್ದು ಆಕೆಯು “ಯಾಕಿಲ್ಲಪ್ಪಾ.. ನಾನೇ ನಿನ್ನ ಚಾಕರಿ ಮಾಡತೇನ.. ಆದರೆ ನೀನು ಮಾತ್ರಜಗಲೂರೆವ್ವನ ದುಕ್ಕ ಕಮ್ಮಿ ಮಾಡಲಕ ಬೇಕಪ್ಪಾ.” ಯಂದು ಜವಾಬಿಗೆ ಯದುರು ಜವಾಬನ ಕೊಡುತ ಅಂದಳು. ಹಿಂಗ ಅವರಿಬ್ಬರ ನಡುವೆ ವಾದ ಪ್ರತಿವಾದ ನಡೆಯಿತು. ವಬ್ಬರೂ ಸೋಲುವಲ್ಲರು, ವಬ್ಬರೂ ಮಣಿವಲ್ಲರು, ಕೊನೀಕದ್ದು ಚನ್ನವ್ವನು “ಹಿಂಗ ನೀನು ನೆಪ ಹೇಳಿ ಜಾರಿಕೊಂಡರ ನಾನು ನನ್ನ ಪಾತಿವ್ರತ್ಯದ ಅಸ್ತರವನ್ನು ನಿನ ಮ್ಯಾಲ ಪ್ರಯೋಗ ಮಾಡಬೇಕಾಗತಯ್ಕೆ.. ಅದರ ಮ್ಯಾಲ ನಿನ್ನಿಷ್ಟ' ಯಂದು ನಿಷು«ರವಾಗಿ ಅಂದುಬಿಟ್ಟಳು. ಅದನು ಕೇಳಿ ಹೆದರಿದ ಸಿವನು “ಮಾ ಪತಿವ್ರತೆಯಾದ ನೀನೆ ಹಿಂಗಾಡಿದರ ಹೆಂಗ ಕನವ್ಯಾ. ಕಲಿ ಕಾಲ ಬಂತೂ ಬಂತು ನನ ನಸೀಬ ನೆಟ್ಟಗಿಲ್ಲದಂಗಾಗಯ್ಯ, ಕಲಿಯ ತಿಕ್ಕಡಿ ನನಗೂ ಬಡಕೊಂಡಯ್ಕೆ. ಕೊಡೋದು ಕಾಪಾಡೋದೆಲ್ಲ ದ್ವಾಪರಕ ಮುಗುದು ಹೋಯ್ತು ತಾಯಿ.. ಜಗಲೂರೆವ್ವ ನಿನ್ನಂಗ ಸರಣೆ<noinclude><references/></noinclude> h25yt9jjddyaay5lh36lm5io9qq68j8 322644 322641 2026-05-26T13:09:16Z Shreesha Sharma 7840 /* Validated */ 322644 proofread-page text/x-wiki <noinclude><pagequality level="4" user="Shreesha Sharma" /></noinclude>________________ {{rh|center=|left=೪೮|right=ಅರಮನೆ}} ಹುಲಿ ಚರುಮಕ ವರಸಿಕೊಂಡು ಯಲಡಕೆ ನಮಲುತ್ತ ಗಂಧದ ಮರದಡೀಲಿ ಗದ್ದುಗೆ ಮ್ಯಾಲ ಯಿರಾಮವಾಗಿ ಕೂಕಂಡಿದ್ದ ಆ ಜಗನ್ನಾಥನು ಆಚ್ಚರಿಪಟ್ಟು ಕೇಳಿದನು. ಆಗ ಚನ್ನವನು “ಅಗೋ ಅಣುಕಿ ನೋಡಲ್ಲಿ.. ಭೂಲೋಕಕ್ಕಧಿಕವಾಗಿ ಕುಂತಳ ದೇಸ ವಂದಯ್ತಲ್ಲ... ಆ ಕುಂತಳ ದೇಸಕ್ಕಧಿಕವಾದ ಕುದುರೆಡವು ಪಟ್ಟಣ ವಂದಯ..ಆ ಕುದುರೆಡವು ಪಟ್ಟಣಕ್ಕಧಿಕವಾಗಿ ಥಳಗೇರಿ ವಂದತ್ತ.. ಆ ಥಳಗೇರಿಗೆ ಛತ್ರಿಚಾಮರ ಹಿಡದಂಗ ಬೇಯಿನ ಮರ ತೊಂದರೆಯಲ್ಲ.. ಆ ಮರದಡೀಲಿ ಜಗಲೂರೆವ್ವ ಯಂಬ ಸಾದ್ವಿಯು ಗಂಡನಿದ್ದೂ ರಂಡೆಯಾಗಿ, ಯಂಜಲೆಲೆಯಂಥಾಗಿ ದುಕ್ತ ಮಾಡುತ್ತಿರುವಳು.. ನೋಡು” ಯಂದು ಬೊಟ್ಟು ಮಾಡಿ ತೋರಿಸಿದಳು. ಪರಮಾತುಮನು ಆಕೆ ಮಾಡಿದ ಬೊಟ್ಟಿನ ಗುಂಟ ಹೋಗಿ ನೋಡಿಯೂ ನೋಡದವನಂಗೆ “ನನ್ನ ಪರಮ ಭಕುತೆಯಾದ ಚನ್ನವ್ವನೇ.. ಚಿತ್ತಯಿಟ್ಟು ಕೇಳು ತಾಯಿss ತಿರುಗಾಡಿ ತಿರುಗಾಡಿ ಪಾದ ನೊಂದವವ್ವಾ.. ಕೊಟ್ಟೂ ಕೊಟ್ಟೂ ಕಮ್ಮಿಗಳು ನೊಂದಾವವ್ವಾ..” ಎನ್ನಲು ಆಕೆಯು “ಕಾಲನೊಂದರ ಹಿಜಗತೀನಪ್ಪಾ.. ಆದರೆ ನೀನು ಮಾತ್ರಜಗಲೂರವ್ವನ ದುಕ್ತ ಕಮ್ಮಿ ಮಾಡಬೇಕಪ್ಪಾ' ಯಂದೆನ್ನಲು, ಅದಕಿದ್ದು ಆ ಸಾಯಿರ ಸರುಪಗಳ ಸರದಾರನು ನನ್ನ ಮನೆ ವಳ ಹೊರಗ ಕಸ ಮುಸುರೆ ಮಾಡೋರಿಲ್ಲ... ನಂದೇ ನನಗ ಮಸ್ತುದಗದ ಅಯ್ಕೆ.. ನಾನು ಹೀರೇಳು ಲೋಕಕ ಮರುಗಬೇಕು. ಆದರ ಯೀರೇಳು ಲೋಕದೊಳಗ ನನಗ ಮರುಗೋರು ಯಾರಿದ್ದಾರೆ ನೀನೇ ಹೇಳು ತಾಯಿ” ಯಂದೆನ್ನಲು ಅದಕಿದ್ದು ಆಕೆಯು “ಯಾಕಿಲ್ಲಪ್ಪಾ.. ನಾನೇ ನಿನ್ನ ಚಾಕರಿ ಮಾಡತೇನ.. ಆದರೆ ನೀನು ಮಾತ್ರಜಗಲೂರೆವ್ವನ ದುಕ್ಕ ಕಮ್ಮಿ ಮಾಡಲಕ ಬೇಕಪ್ಪಾ.” ಯಂದು ಜವಾಬಿಗೆ ಯದುರು ಜವಾಬನ ಕೊಡುತ ಅಂದಳು. ಹಿಂಗ ಅವರಿಬ್ಬರ ನಡುವೆ ವಾದ ಪ್ರತಿವಾದ ನಡೆಯಿತು. ವಬ್ಬರೂ ಸೋಲುವಲ್ಲರು, ವಬ್ಬರೂ ಮಣಿವಲ್ಲರು, ಕೊನೀಕದ್ದು ಚನ್ನವ್ವನು “ಹಿಂಗ ನೀನು ನೆಪ ಹೇಳಿ ಜಾರಿಕೊಂಡರ ನಾನು ನನ್ನ ಪಾತಿವ್ರತ್ಯದ ಅಸ್ತರವನ್ನು ನಿನ ಮ್ಯಾಲ ಪ್ರಯೋಗ ಮಾಡಬೇಕಾಗತಯ್ಕೆ.. ಅದರ ಮ್ಯಾಲ ನಿನ್ನಿಷ್ಟ' ಯಂದು ನಿಷು«ರವಾಗಿ ಅಂದುಬಿಟ್ಟಳು. ಅದನು ಕೇಳಿ ಹೆದರಿದ ಸಿವನು “ಮಾ ಪತಿವ್ರತೆಯಾದ ನೀನೆ ಹಿಂಗಾಡಿದರ ಹೆಂಗ ಕನವ್ಯಾ. ಕಲಿ ಕಾಲ ಬಂತೂ ಬಂತು ನನ ನಸೀಬ ನೆಟ್ಟಗಿಲ್ಲದಂಗಾಗಯ್ಯ, ಕಲಿಯ ತಿಕ್ಕಡಿ ನನಗೂ ಬಡಕೊಂಡಯ್ಕೆ. ಕೊಡೋದು ಕಾಪಾಡೋದೆಲ್ಲ ದ್ವಾಪರಕ ಮುಗುದು ಹೋಯ್ತು ತಾಯಿ.. ಜಗಲೂರೆವ್ವ ನಿನ್ನಂಗ ಸರಣೆ<noinclude><references/></noinclude> hd9qhlhb47lo99jta7xi44m01tvan4f ಪುಟ:ಅರಮನೆ.pdf/೮೦ 104 77165 322642 317191 2026-05-26T13:03:43Z Shreelatha.Halemane 7642 322642 proofread-page text/x-wiki <noinclude><pagequality level="4" user="Ashwini Rai K" /></noinclude>________________ {{rh|left=ಅರಮನೆ|center=|right=೪೯}} ಅದಾಳ.. ಆಕೆ ಬಿಡುತಿರೋ ವಂದೊಂದುಸುರು ನನ್ನೆದೆಗೆ ಬಡೀತಯ್ಕೆ.. ಆಕೆ ಮಾಡುತಿರೋ ದುಕ್ಕ ನನ್ನ ಕಿವಿಗೆ ಅಟೇತಯ್ಕೆ.. ಆದರ ಯೇನು ಮಾಡಲಾವ್ವಾ.. ಅದು ಆಕೆಯ ಪೂರುವಾನ್ವಿತ ಕರುಮ ಅಯ್ಕೆ, ಆಕೆಗೆ, ಆಕೆಯಂಥವರಿಗೆ ಪಾಠ ಕಲಸಲಕೆಂದೇ ಆದಿಸಗುತಿಯು ಭೂತಪ್ರೇತಾದಿ ಗಣಗಳೊಂದಿಗೆ ಆಕೆಯ ಗಂಡನಾದ ಮೋಬಯ್ಯನ ಸರೀರದೊಳಗ ವಸ್ತಿ ಮಾಡಿದ್ದಾಳಂತೆ.. ಜಮಾ ಬಂದಿಕಾರೈವ ಸುರುವು ಮಾಡುತಾಳಂತೆ.. ಅಲ್ಲೀತನಕ ಆಕೆ ದುಕ್ಕ ಮಾಡಲಕ ಬೇಕು.. ತಪ್ಪಿದ್ದಲ್ಲ...” ಯಂದು ಯಿವರಿಸಿದನು. ಅದಕಿದ್ದು ಸರಣೆ “ಆದಿಸುಗುತಿ ಅಂದರ ನಿನಗ ಖಾಸಾ ಹೆಂಡತಿ ಆಗಬೇಕಲ್ಲಪ್ಪಾ.. ಖುದ್ದಾಗಿ ನೀನೇ ಆಕೆಗೆ ಬುದ್ದಿ ಹೇಳಬಾರದೇನು?” ಯಂದು ಹೇಳಿದ್ದಕ್ಕೆ ಸಿವನು “ಅದು ಆಗದ ಮಾತವ್ವಾ.. ಆಕೆ ಮಾ ಕೋಪಿಷ« ಅದಾಳ. ಆಕೆ ಯದುರು ನಾನೆಷ್ಟರವನು?” ಯಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡನು.. “ಸರೆ ಬಿಡಪ್ಪ” ಯಂದಲ್ಲಿಂದ ವಾಪಸಾದ.. - {{gap}}ಚನ್ನವ್ವ ಸಾವುರ ಬಯಲ ಹಾದಿ ಕಲೆಯುವ ಕಡೆ ನಿಂತುಕೊಂಡಳು. ತನ್ನನ್ನು ಹಾಡುಕಟ್ಟಿ ಅಜರಾಮರಗೊಳಿಸಿರುವ, ಹೆಣ್ಣುಮಕ್ಕಳಿಗೆ ಆದರಸಪ್ರಾಯ ಯೆನಿಸಿರುವ ಜಗಲೂರವ್ವಗೆ ತಾನು ಆಸರೆಯಾಗಿ ನಿಲ್ಲಬೇಕು ಯಂದು ನಿರರಿಸಿದಳು. ಭೂಮಾಯಿ ಯಲ್ಲಿದಾಳ ಯಂದು ಹುಡುಕ್ತ ಪ್ರಯಾಣ ಹೊಂಟಳು. ಆಕಾಸ ವಾರಗದಲ್ಲಿ ತಾನು ನಡೆಯುತ್ತಿರಬೇಕಾದರ ಹಾದಿಲೀ ರತುನ ಕೊಳ, ಮುತ್ತಿನ ಕೊಳ ತುಳುಕಿದಂತಾದವು, ಅವನ್ನೆಲ್ಲಾ ತನ್ನ ಮೂನ್ನೂರಾ ಮುವ್ವತ್ತು ಮೂರು ಗಾವುದ ವುದ್ದದ ಕಯ್ಕೆಗಳನ್ನು ಚಾಚಿ ಸರಿಸುತ ಮುಂದ ಮುಂದಕ ನಡೆದಳು. ತನ್ನ ಪಾಡಿಗೆ ತಾನು ಹೋಗುತ್ತಿರಬೇಕಾದರ ತನ್ನ ಹೆಸರಗುಂಟ ಯಾರೋ ಕೂಗಿದಂಗಾತು, ಅದರೊಟ್ಟಿಗೆ ಭೂಮಿಯೋಟ ಗಲದ ಜಾಗಟೆ ಭಾರಿಸಿದಂಗಾತು, ಪಾತಾಳ ಗಾತುರದ ಗಂಟೆ ಬಡದಂಗಾತು, ವಯಕುಂಠ ತೂಕದ ಸಂಖ ವೂದಿದಂಗಾತು. ತಿರುಗಿ ನೋಡಿದಳು, ಯದುರಿಗೆ ಸತಸಹಸ್ರಸ್ಪಟಿಕ ಲಿಂಗಗಳು ಕೋರಯಿಸು ತಿರುವಂಥ ದ್ರುಸ್ಯವು, ವಂದು ನದಿ ಯಿನ್ನೊಂದು ನದಿಯೊಳಗ ಜಳಕ ಮಾಡುತ್ತಿರುವಂಥ ದ್ರುಸ್ಯವು, ಅಷ್ಟಾಶಿತಿ ಸಹಸ್ತರುಷಿಗಳು ಯೇಕಾಗಿ ನಿಂತಿರುವಂಥ ದ್ರುಸ್ಯವು, ನಾಮ ರೂಪ ಕ್ರಿಯಾ ಕಲಾಪಗಳ ಜಾಲ ಪ್ರಭಾವದೊಳಗೆ ನಿಂತಿರುವ ಯಕ್ತಿ ಕಡೇಕ ತಿಳಿಸಿ ನೋಡಿದಳು. ಆಕೆ ಹೆಣ್ಣು ಹೆಂಗಸು ಯಂದು ಖಾತರಿ ಮಾಡಿಕೊಂಡಳು. ಗುರುತು ಸಿಗಲಿಲ್ಲ. ಹುಬ್ಬಿನ ಮ್ಯಾಲ ಕಯ್ಯಚ್ಚಿ ಕಣ್ಣಿಗೆ ಮಬ್ಬು ಕವಿಯುವ<noinclude><references/></noinclude> f394dzi6kn7p60kg8s7vxo88pi7vay9 ಪುಟ:ಅರಮನೆ.pdf/೮೨ 104 77167 322652 169877 2026-05-26T13:33:53Z Shreesha Sharma 7840 /* Proofread */ 322652 proofread-page text/x-wiki <noinclude><pagequality level="3" user="Shreesha Sharma" /></noinclude>________________ {{rh|center=|left=ಅರಮನೆ|right=೫೧}} ಯಾತ್ರೆಮಾಡಲಕ ಯಲ್ಲಯ್ತಕ್ಕಾ ಕಾಶಿ?.. ಲಿಂಗಗಳೊಳಗ ಲಿಂಗತನ ಯಲ್ಲು೦ಟಕ್ಕಾ?.. ಯಿಲ್ಲದವುಗಳನ್ನು ಹುಡುಕೋತಾ ಯಾಕ ಅಲೆದಾಡುತೀಯಾ ?” ಯಂದಳು ಸಂಕಟದಿಂದ.. ಧರುಮ ದೇವತೆಯು ಅವುದು ತಂಗಿ, ಕಲಿ ಕಾಲದಿಂದಾಗಿ ಮಯ್ಲಿಗಿ ಮಯ್ಯ ತುಂಬಾ ಮೆತ್ತಯ್ತೆ.. ಜಳಕ ಮಾಡಿ ಪರಿಸುದ್ದಳಾಗಬೇಕಂತ ನದಿಗಳಿಗಾಗಿ ಹಂಬಲಿಸಲಕ ಹತ್ತೀನಿ.. ವಂದಾರ ಜಲಧಿ ಸಿಗವಲ್ಲದು.. ನಂದೊತ್ತಟ್ಟಿಗಿರಲಿ, ತಂಗೀ ನೀನ್ಯಾಕ ಅಲೆದಾಡುತ್ತಿರುವೆಯಲ್ಲ, ಕಾರಣವೇನು?” ಯಂದು ಕೇಳಲು ಚನ್ನಮ್ಮ ತಾಯಿಯು ಸವಿಸ್ತಾರವಾಗಿ ಯಿವರಿಸಿದಳು. ಆ ರುದಯ ಯಿದ್ರಾವಕ ಕಥೆ ಆಲಿಸಿದ ಧರುಮ ದೇವತೆಯು ಮರುಗದೆ ಯಿರಲಿಲ್ಲ. “ತಂಗೀ ನೀನೆಂಗೋ ನಾನಂಗೆ” ಯಂದು ಹೆಗಲಿಗೆ ಹೆಗಲು ಕೊಟ್ಟಳು. ಅವರೀರ್ವರೂ ಹಗಲಿರುಳೆನ್ನದೆ ಪ್ರಯಾಣ ಮಾಡಿ ಮಾಡಿ ಭೂಲೋಕ ತಲುಪಿದರು. ಹುಡುಕೋತ ಹುಡುಕೋತ ಕುದುರರೆಡವು ಯಂಬುವ ಚೋದ್ಯವನ್ನು ಪ್ರವೇಸ ಮಾಡಿದರು. ಸಾಂಬವಿಗಾಗಿ, ಮೋಬಯ್ಯನ ಸರೀರಕ್ಕಾಗಿ ಹುಡುಕಾಡಿ ಆ ಸರೀರದೊಳಗೆ ಪ್ರವೇಶ ಮಾಡಿದರು. "ಯಲ್ಲದಿಯೇ ತಾಯಿ.. ಯಲ್ಲದಿಯೇ?” ಯಂದು ಕೂಗಾಡಿದರು. ವಳಗಡೆ ಯಲ್ಲೋ ಯಿದ್ದ ಸಾಂಬವಿಯು ಅಮಾಯಕಳಂತೆ “ಯಾರವ್ವಾ ನೀವು? ಯದಕ ಬಂದಿರಲ್ವಾ?” ಯಂದು ಕೇಳಿದಳು. ಅವರಿಬ್ಬರು ಸಣು ಮಾಡಿ ಹೇಳಿಕೊಂಡರು. ಜಗಲೂರೆವ್ವ ಮಾ ಪತಿರೊತೆ ಅದಾಳ.. ಆಕೀನ ನೀನು ಗಂಡನಿಂದ ದೂರ ಮಾಡಿರೋದು ಸರಿಯಲ್ಲ, ಸೋಲುಪ ಕರುಣೆ ತೋರಿಸವ್ವಾ. ಯಂದು ಕಯ್ಕ ಮುಗುದು ಕೇಳಿಕೊಂಡರು. ಅದಕ ಸಾಂಬವಿಯ ರುದಯ ಕರಗಲಿಲ್ಲ. ಅಲ್ಲಿಂದ ಅವರು ಹೊರ ಬಂದು ನಂಬುಗಸ್ತ ಪ್ರಾಣಿ ಪ್ರಾಕಾರವಾದ ಸುನಕ ರೂಪ ಧಾರಣ ಮಾಡಿ ಜಗೂಲುರೆವ್ವನ ಯಡ ಬಲಕ ಕಾವಲಿಗೆ ನಿಂತರೆಂಬ ಕಥೆ ನೀಲಗಾರರು ಹೇಳುತಾರ.... ಕಸಬಾ ಕುದುರೆಡವು ಯಂಬ ಪಟ್ಟಣ ಯೀಗ ಯೇನುಂಟು, ಅದು ಹಿಂದಲ ಕಾಲದಲ್ಲಿ ಹೀಂಗಯಿರಲಿಲ್ಲ. ಸಿಲ ಸಿಲಾ ಪ್ರದೇಶವಾಗಿತ್ತು. ಪೂರುವ ಕಾಲದಲ್ಲಿ ಕೊಮಾರ ರಾಮನು ಪ್ರತಿಪಾಲನ ಮಾಡುತಲಿದ್ದಂಥ ಕಮ್ಮಟ ದುರದ ರಾಜ್ಯದೊಳಗೆ ಯಿದು ಯಿತ್ತೂ ಅಂದರ ಯಿತ್ತು, ಯಿರಲಿಲ್ಲ ಅಂದರ ಯಿರಲಿಲ್ಲ. ಅದಕ್ಕೂ ದೂರುವ ಕಾಲದಲ್ಲಿದ್ದಂಥಾ ವುಪನಾಮ ಆವುದೆಂದರೆ ದ್ವಾರಾವತಿ<noinclude><references/></noinclude> hm9ru0bq1yhiro80wk0yacv3ingujz0 322658 322652 2026-05-26T13:42:25Z Pragathi. BH 7585 /* ಪ್ರಕಟಿಸಿದವು */ 322658 proofread-page text/x-wiki <noinclude><pagequality level="4" user="Pragathi. BH" /></noinclude>________________ {{rh|center=|left=ಅರಮನೆ|right=೫೧}} ಯಾತ್ರೆಮಾಡಲಕ ಯಲ್ಲಯ್ತಕ್ಕಾ ಕಾಶಿ?.. ಲಿಂಗಗಳೊಳಗ ಲಿಂಗತನ ಯಲ್ಲು೦ಟಕ್ಕಾ?.. ಯಿಲ್ಲದವುಗಳನ್ನು ಹುಡುಕೋತಾ ಯಾಕ ಅಲೆದಾಡುತೀಯಾ ?” ಯಂದಳು ಸಂಕಟದಿಂದ.. ಧರುಮ ದೇವತೆಯು ಅವುದು ತಂಗಿ, ಕಲಿ ಕಾಲದಿಂದಾಗಿ ಮಯ್ಲಿಗಿ ಮಯ್ಯ ತುಂಬಾ ಮೆತ್ತಯ್ತೆ.. ಜಳಕ ಮಾಡಿ ಪರಿಸುದ್ದಳಾಗಬೇಕಂತ ನದಿಗಳಿಗಾಗಿ ಹಂಬಲಿಸಲಕ ಹತ್ತೀನಿ.. ವಂದಾರ ಜಲಧಿ ಸಿಗವಲ್ಲದು.. ನಂದೊತ್ತಟ್ಟಿಗಿರಲಿ, ತಂಗೀ ನೀನ್ಯಾಕ ಅಲೆದಾಡುತ್ತಿರುವೆಯಲ್ಲ, ಕಾರಣವೇನು?” ಯಂದು ಕೇಳಲು ಚನ್ನಮ್ಮ ತಾಯಿಯು ಸವಿಸ್ತಾರವಾಗಿ ಯಿವರಿಸಿದಳು. ಆ ರುದಯ ಯಿದ್ರಾವಕ ಕಥೆ ಆಲಿಸಿದ ಧರುಮ ದೇವತೆಯು ಮರುಗದೆ ಯಿರಲಿಲ್ಲ. “ತಂಗೀ ನೀನೆಂಗೋ ನಾನಂಗೆ” ಯಂದು ಹೆಗಲಿಗೆ ಹೆಗಲು ಕೊಟ್ಟಳು. ಅವರೀರ್ವರೂ ಹಗಲಿರುಳೆನ್ನದೆ ಪ್ರಯಾಣ ಮಾಡಿ ಮಾಡಿ ಭೂಲೋಕ ತಲುಪಿದರು. ಹುಡುಕೋತ ಹುಡುಕೋತ ಕುದುರರೆಡವು ಯಂಬುವ ಚೋದ್ಯವನ್ನು ಪ್ರವೇಸ ಮಾಡಿದರು. ಸಾಂಬವಿಗಾಗಿ, ಮೋಬಯ್ಯನ ಸರೀರಕ್ಕಾಗಿ ಹುಡುಕಾಡಿ ಆ ಸರೀರದೊಳಗೆ ಪ್ರವೇಶ ಮಾಡಿದರು. "ಯಲ್ಲದಿಯೇ ತಾಯಿ.. ಯಲ್ಲದಿಯೇ?” ಯಂದು ಕೂಗಾಡಿದರು. ವಳಗಡೆ ಯಲ್ಲೋ ಯಿದ್ದ ಸಾಂಬವಿಯು ಅಮಾಯಕಳಂತೆ “ಯಾರವ್ವಾ ನೀವು? ಯದಕ ಬಂದಿರಲ್ವಾ?” ಯಂದು ಕೇಳಿದಳು. ಅವರಿಬ್ಬರು ಸಣು ಮಾಡಿ ಹೇಳಿಕೊಂಡರು. ಜಗಲೂರೆವ್ವ ಮಾ ಪತಿರೊತೆ ಅದಾಳ.. ಆಕೀನ ನೀನು ಗಂಡನಿಂದ ದೂರ ಮಾಡಿರೋದು ಸರಿಯಲ್ಲ, ಸೋಲುಪ ಕರುಣೆ ತೋರಿಸವ್ವಾ. ಯಂದು ಕಯ್ಕ ಮುಗುದು ಕೇಳಿಕೊಂಡರು. ಅದಕ ಸಾಂಬವಿಯ ರುದಯ ಕರಗಲಿಲ್ಲ. ಅಲ್ಲಿಂದ ಅವರು ಹೊರ ಬಂದು ನಂಬುಗಸ್ತ ಪ್ರಾಣಿ ಪ್ರಾಕಾರವಾದ ಸುನಕ ರೂಪ ಧಾರಣ ಮಾಡಿ ಜಗೂಲುರೆವ್ವನ ಯಡ ಬಲಕ ಕಾವಲಿಗೆ ನಿಂತರೆಂಬ ಕಥೆ ನೀಲಗಾರರು ಹೇಳುತಾರ.... ಕಸಬಾ ಕುದುರೆಡವು ಯಂಬ ಪಟ್ಟಣ ಯೀಗ ಯೇನುಂಟು, ಅದು ಹಿಂದಲ ಕಾಲದಲ್ಲಿ ಹೀಂಗಯಿರಲಿಲ್ಲ. ಸಿಲ ಸಿಲಾ ಪ್ರದೇಶವಾಗಿತ್ತು. ಪೂರುವ ಕಾಲದಲ್ಲಿ ಕೊಮಾರ ರಾಮನು ಪ್ರತಿಪಾಲನ ಮಾಡುತಲಿದ್ದಂಥ ಕಮ್ಮಟ ದುರದ ರಾಜ್ಯದೊಳಗೆ ಯಿದು ಯಿತ್ತೂ ಅಂದರ ಯಿತ್ತು, ಯಿರಲಿಲ್ಲ ಅಂದರ ಯಿರಲಿಲ್ಲ. ಅದಕ್ಕೂ ದೂರುವ ಕಾಲದಲ್ಲಿದ್ದಂಥಾ ವುಪನಾಮ ಆವುದೆಂದರೆ ದ್ವಾರಾವತಿ<noinclude><references/></noinclude> b03ogb0rm8bli5pny4h7f887t8fuxgx 322665 322658 2026-05-26T13:45:30Z Pragathi. BH 7585 322665 proofread-page text/x-wiki <noinclude><pagequality level="4" user="Pragathi. BH" /></noinclude>________________ {{rh|center=|left=ಅರಮನೆ|right=೫೧}} ಯಾತ್ರೆಮಾಡಲಕ ಯಲ್ಲಯ್ತಕ್ಕಾ ಕಾಶಿ?.. ಲಿಂಗಗಳೊಳಗ ಲಿಂಗತನ ಯಲ್ಲು೦ಟಕ್ಕಾ?.. ಯಿಲ್ಲದವುಗಳನ್ನು ಹುಡುಕೋತಾ ಯಾಕ ಅಲೆದಾಡುತೀಯಾ ?” ಯಂದಳು ಸಂಕಟದಿಂದ.. {{gap}}ಧರುಮ ದೇವತೆಯು ಅವುದು ತಂಗಿ, ಕಲಿ ಕಾಲದಿಂದಾಗಿ ಮಯ್ಲಿಗಿ ಮಯ್ಯ ತುಂಬಾ ಮೆತ್ತಯ್ತೆ.. ಜಳಕ ಮಾಡಿ ಪರಿಸುದ್ದಳಾಗಬೇಕಂತ ನದಿಗಳಿಗಾಗಿ ಹಂಬಲಿಸಲಕ ಹತ್ತೀನಿ.. ವಂದಾರ ಜಲಧಿ ಸಿಗವಲ್ಲದು.. ನಂದೊತ್ತಟ್ಟಿಗಿರಲಿ, ತಂಗೀ ನೀನ್ಯಾಕ ಅಲೆದಾಡುತ್ತಿರುವೆಯಲ್ಲ, ಕಾರಣವೇನು?” ಯಂದು ಕೇಳಲು {{gap}}ಚನ್ನಮ್ಮ ತಾಯಿಯು ಸವಿಸ್ತಾರವಾಗಿ ಯಿವರಿಸಿದಳು. ಆ ರುದಯ ಯಿದ್ರಾವಕ ಕಥೆ ಆಲಿಸಿದ ಧರುಮ ದೇವತೆಯು ಮರುಗದೆ ಯಿರಲಿಲ್ಲ. “ತಂಗೀ ನೀನೆಂಗೋ ನಾನಂಗೆ” ಯಂದು ಹೆಗಲಿಗೆ ಹೆಗಲು ಕೊಟ್ಟಳು. {{gap}}ಅವರೀರ್ವರೂ ಹಗಲಿರುಳೆನ್ನದೆ ಪ್ರಯಾಣ ಮಾಡಿ ಮಾಡಿ ಭೂಲೋಕ ತಲುಪಿದರು. ಹುಡುಕೋತ ಹುಡುಕೋತ ಕುದುರರೆಡವು ಯಂಬುವ ಚೋದ್ಯವನ್ನು ಪ್ರವೇಸ ಮಾಡಿದರು. ಸಾಂಬವಿಗಾಗಿ, ಮೋಬಯ್ಯನ ಸರೀರಕ್ಕಾಗಿ ಹುಡುಕಾಡಿ ಆ ಸರೀರದೊಳಗೆ ಪ್ರವೇಶ ಮಾಡಿದರು. "ಯಲ್ಲದಿಯೇ ತಾಯಿ.. ಯಲ್ಲದಿಯೇ?” ಯಂದು ಕೂಗಾಡಿದರು. ವಳಗಡೆ ಯಲ್ಲೋ ಯಿದ್ದ ಸಾಂಬವಿಯು ಅಮಾಯಕಳಂತೆ “ಯಾರವ್ವಾ ನೀವು? ಯದಕ ಬಂದಿರಲ್ವಾ?” ಯಂದು ಕೇಳಿದಳು. ಅವರಿಬ್ಬರು ಸಣು ಮಾಡಿ ಹೇಳಿಕೊಂಡರು. ಜಗಲೂರೆವ್ವ ಮಾ ಪತಿರೊತೆ ಅದಾಳ.. ಆಕೀನ ನೀನು ಗಂಡನಿಂದ ದೂರ ಮಾಡಿರೋದು ಸರಿಯಲ್ಲ, ಸೋಲುಪ ಕರುಣೆ ತೋರಿಸವ್ವಾ. ಯಂದು ಕಯ್ಕ ಮುಗುದು ಕೇಳಿಕೊಂಡರು. ಅದಕ ಸಾಂಬವಿಯ ರುದಯ ಕರಗಲಿಲ್ಲ. ಅಲ್ಲಿಂದ ಅವರು ಹೊರ ಬಂದು ನಂಬುಗಸ್ತ ಪ್ರಾಣಿ ಪ್ರಾಕಾರವಾದ ಸುನಕ ರೂಪ ಧಾರಣ ಮಾಡಿ ಜಗೂಲುರೆವ್ವನ ಯಡ ಬಲಕ ಕಾವಲಿಗೆ ನಿಂತರೆಂಬ ಕಥೆ ನೀಲಗಾರರು ಹೇಳುತಾರ.... {{rh|center= * * * *}} {{gap}}ಕಸಬಾ ಕುದುರೆಡವು ಯಂಬ ಪಟ್ಟಣ ಯೀಗ ಯೇನುಂಟು, ಅದು ಹಿಂದಲ ಕಾಲದಲ್ಲಿ ಹೀಂಗಯಿರಲಿಲ್ಲ. ಸಿಲ ಸಿಲಾ ಪ್ರದೇಶವಾಗಿತ್ತು. ಪೂರುವ ಕಾಲದಲ್ಲಿ ಕೊಮಾರ ರಾಮನು ಪ್ರತಿಪಾಲನ ಮಾಡುತಲಿದ್ದಂಥ ಕಮ್ಮಟ ದುರದ ರಾಜ್ಯದೊಳಗೆ ಯಿದು ಯಿತ್ತೂ ಅಂದರ ಯಿತ್ತು, ಯಿರಲಿಲ್ಲ ಅಂದರ ಯಿರಲಿಲ್ಲ. ಅದಕ್ಕೂ ದೂರುವ ಕಾಲದಲ್ಲಿದ್ದಂಥಾ ವುಪನಾಮ ಆವುದೆಂದರೆ ದ್ವಾರಾವತಿ<noinclude><references/></noinclude> nfjkjg2pjv09sq3nveafus5bnw4tv52 ಪುಟ:ಗಿಳಿವಿಂಡು.djvu/೨೪ 104 87662 322957 317450 2026-05-27T09:19:51Z Pragathi. BH 7585 322957 proofread-page text/x-wiki <noinclude><pagequality level="3" user="Pragathi. BH" />{{rh|center=ಹೊಲೆಯನು ಯಾರು?|left=12|right=}}</noinclude>_____________ <poem> ಅಕ್ಕಾ ಮಗುವೆಲ್ಲಿಹುದೆಂದು ಕೇಳುವಳಾಕೆಗೆ ಪೇಳಂದು_ಎಲ್ಲೆಲ್ಲಿಯು ನನ್ನ ಮಗುವಿಹುದು, ನೋಡೆನ್ನಯ ಕಣ್ಣಾಲಿಯದು ! ಎನ್ನಯ ಮೊಲೆಯ ಕುಡಿಯುತಿಹುದು, ಎನ್ನಂಕದಲಿದೊ ಕುಳಿತಿಹುದು ! ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು{{Right|70}} </poem> {{center|ಹೊಲೆಯನು ಯಾರು ?}} || ಪಲ್ಲ|| ಹೊಲೆಯನಾರೂರ ಹೊರಗಿರುವವನೆ ಗೆಳೆಯ ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ | ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುವವ ಹೊಲೆಯ ಬಾಯಿಬಾರದ ಜಂತುಗಳ ಕಾಡುವವ ಹೊಲೆಯ, ಪಾಲ ಕುಡಿದಾಕಳನು ಸದೆವಾತ ಹೊಲೆಯ | ಮನೆಯ ಬತ್ತಿದ ಪಶುವಿಗುಣಿಸು ಕೊಡದವ ಹೊಲೆಯ, ಜೀವಿಗಳ ಕೊಂದು ಜೀವಿಸುವವನೆ ಹೊಲೆಯ ಹೆಂಡ ಕುಡಿದರಸುಬೀದಿಯಲಿ ತಿರಿವವ ಹೊಲೆಯ, ಹಣವಿಟ್ಟು ಜೂಜಾಟವಾಡುವವ ಹೊಲೆಯ | ತನ್ನೊಡನೆ ಮಡದಿಯಲಿ ತೃಪ್ತಿ ಪಡದವ ಹೊಲೆಯ, ಪರರ ಧನವನಿತೆಯರ ಬಯಸುವವ ಹೊಲೆಯ<noinclude></noinclude> nset19wc8crj2ntnvdl6k7ai3lb6b9q 322959 322957 2026-05-27T09:21:30Z Pragathi. BH 7585 322959 proofread-page text/x-wiki <noinclude><pagequality level="3" user="Pragathi. BH" />{{rh|center=ಹೊಲೆಯನು ಯಾರು?|left=12|right=}}</noinclude>_____________ <poem> ಅಕ್ಕಾ ಮಗುವೆಲ್ಲಿಹುದೆಂದು ಕೇಳುವಳಾಕೆಗೆ ಪೇಳಂದು_ ಎಲ್ಲೆಲ್ಲಿಯು ನನ್ನ ಮಗುವಿಹುದು, ನೋಡೆನ್ನಯ ಕಣ್ಣಾಲಿಯದು ! ಎನ್ನಯ ಮೊಲೆಯ ಕುಡಿಯುತಿಹುದು, ಎನ್ನಂಕದಲಿದೊ ಕುಳಿತಿಹುದು ! ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು{{Right|70}} </poem> {{center|ಹೊಲೆಯನು ಯಾರು ?}} || ಪಲ್ಲ|| ಹೊಲೆಯನಾರೂರ ಹೊರಗಿರುವವನೆ ಗೆಳೆಯ ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ | ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುವವ ಹೊಲೆಯ ಬಾಯಿಬಾರದ ಜಂತುಗಳ ಕಾಡುವವ ಹೊಲೆಯ, ಪಾಲ ಕುಡಿದಾಕಳನು ಸದೆವಾತ ಹೊಲೆಯ | ಮನೆಯ ಬತ್ತಿದ ಪಶುವಿಗುಣಿಸು ಕೊಡದವ ಹೊಲೆಯ, ಜೀವಿಗಳ ಕೊಂದು ಜೀವಿಸುವವನೆ ಹೊಲೆಯ ಹೆಂಡ ಕುಡಿದರಸುಬೀದಿಯಲಿ ತಿರಿವವ ಹೊಲೆಯ, ಹಣವಿಟ್ಟು ಜೂಜಾಟವಾಡುವವ ಹೊಲೆಯ | ತನ್ನೊಡನೆ ಮಡದಿಯಲಿ ತೃಪ್ತಿ ಪಡದವ ಹೊಲೆಯ, ಪರರ ಧನವನಿತೆಯರ ಬಯಸುವವ ಹೊಲೆಯ<noinclude></noinclude> 82ftkmc7gxtuypu1q0gwee01t1hb2uy 322960 322959 2026-05-27T09:24:57Z Pragathi. BH 7585 /* Not proofread */ 322960 proofread-page text/x-wiki <noinclude><pagequality level="1" user="Pragathi. BH" />{{rh|center=ಹೊಲೆಯನು ಯಾರು?|left=12|right=}}</noinclude>_____________ <poem> ಅಕ್ಕಾ ಮಗುವೆಲ್ಲಿಹುದೆಂದು ಕೇಳುವಳಾಕೆಗೆ ಪೇಳಂದು_ ಎಲ್ಲೆಲ್ಲಿಯು ನನ್ನ ಮಗುವಿಹುದು, ನೋಡೆನ್ನಯ ಕಣ್ಣಾಲಿಯದು ! ಎನ್ನಯ ಮೊಲೆಯ ಕುಡಿಯುತಿಹುದು, ಎನ್ನಂಕದಲಿದೊ ಕುಳಿತಿಹುದು ! ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು{{Right|70}} </poem> {{center|ಹೊಲೆಯನು ಯಾರು ?}} || ಪಲ್ಲ|| ಹೊಲೆಯನಾರೂರ ಹೊರಗಿರುವವನೆ ಗೆಳೆಯ ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ | ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುವವ ಹೊಲೆಯ ಬಾಯಿಬಾರದ ಜಂತುಗಳ ಕಾಡುವವ ಹೊಲೆಯ, ಪಾಲ ಕುಡಿದಾಕಳನು ಸದೆವಾತ ಹೊಲೆಯ | ಮನೆಯ ಬತ್ತಿದ ಪಶುವಿಗುಣಿಸು ಕೊಡದವ ಹೊಲೆಯ, ಜೀವಿಗಳ ಕೊಂದು ಜೀವಿಸುವವನೆ ಹೊಲೆಯ ಹೆಂಡ ಕುಡಿದರಸುಬೀದಿಯಲಿ ತಿರಿವವ ಹೊಲೆಯ, ಹಣವಿಟ್ಟು ಜೂಜಾಟವಾಡುವವ ಹೊಲೆಯ | ತನ್ನೊಡನೆ ಮಡದಿಯಲಿ ತೃಪ್ತಿ ಪಡದವ ಹೊಲೆಯ, ಪರರ ಧನವನಿತೆಯರ ಬಯಸುವವ ಹೊಲೆಯ<noinclude></noinclude> g3lnjmr24pead7dd9xdh1d3b4xfad28 322961 322960 2026-05-27T09:25:25Z Pragathi. BH 7585 /* Proofread */ 322961 proofread-page text/x-wiki <noinclude><pagequality level="3" user="Pragathi. BH" />{{rh|center=ಹೊಲೆಯನು ಯಾರು?|left=12|right=}}</noinclude>_____________ <poem> ಅಕ್ಕಾ ಮಗುವೆಲ್ಲಿಹುದೆಂದು ಕೇಳುವಳಾಕೆಗೆ ಪೇಳಂದು_ ಎಲ್ಲೆಲ್ಲಿಯು ನನ್ನ ಮಗುವಿಹುದು, ನೋಡೆನ್ನಯ ಕಣ್ಣಾಲಿಯದು ! ಎನ್ನಯ ಮೊಲೆಯ ಕುಡಿಯುತಿಹುದು, ಎನ್ನಂಕದಲಿದೊ ಕುಳಿತಿಹುದು ! ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು{{Right|70}} </poem> {{center|ಹೊಲೆಯನು ಯಾರು ?}} || ಪಲ್ಲ|| ಹೊಲೆಯನಾರೂರ ಹೊರಗಿರುವವನೆ ಗೆಳೆಯ ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ | ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುವವ ಹೊಲೆಯ ಬಾಯಿಬಾರದ ಜಂತುಗಳ ಕಾಡುವವ ಹೊಲೆಯ, ಪಾಲ ಕುಡಿದಾಕಳನು ಸದೆವಾತ ಹೊಲೆಯ | ಮನೆಯ ಬತ್ತಿದ ಪಶುವಿಗುಣಿಸು ಕೊಡದವ ಹೊಲೆಯ, ಜೀವಿಗಳ ಕೊಂದು ಜೀವಿಸುವವನೆ ಹೊಲೆಯ ಹೆಂಡ ಕುಡಿದರಸುಬೀದಿಯಲಿ ತಿರಿವವ ಹೊಲೆಯ, ಹಣವಿಟ್ಟು ಜೂಜಾಟವಾಡುವವ ಹೊಲೆಯ | ತನ್ನೊಡನೆ ಮಡದಿಯಲಿ ತೃಪ್ತಿ ಪಡದವ ಹೊಲೆಯ, ಪರರ ಧನವನಿತೆಯರ ಬಯಸುವವ ಹೊಲೆಯ<noinclude></noinclude> 3bkt43xrndd8xl0rph6vlbt325hsrpe 322969 322961 2026-05-27T09:37:10Z Shreelatha.Halemane 7642 /* Validated */ 322969 proofread-page text/x-wiki <noinclude><pagequality level="4" user="Shreelatha.Halemane" />{{rh|center=ಹೊಲೆಯನು ಯಾರು?|left=12|right=}}</noinclude>_____________ <poem> ಅಕ್ಕಾ ಮಗುವೆಲ್ಲಿಹುದೆಂದು ಕೇಳುವಳಾಕೆಗೆ ಪೇಳಂದು_ ಎಲ್ಲೆಲ್ಲಿಯು ನನ್ನ ಮಗುವಿಹುದು, ನೋಡೆನ್ನಯ ಕಣ್ಣಾಲಿಯದು ! ಎನ್ನಯ ಮೊಲೆಯ ಕುಡಿಯುತಿಹುದು, ಎನ್ನಂಕದಲಿದೊ ಕುಳಿತಿಹುದು ! ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು{{Right|70}} </poem> {{center|ಹೊಲೆಯನು ಯಾರು ?}} ಹೊಲೆಯನಾರೂರ ಹೊರಗಿರುವವನೆ ಗೆಳೆಯ ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ || ಪಲ್ಲ|| ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ | ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುವವ ಹೊಲೆಯ ಬಾಯಿಬಾರದ ಜಂತುಗಳ ಕಾಡುವವ ಹೊಲೆಯ, ಪಾಲ ಕುಡಿದಾಕಳನು ಸದೆವಾತ ಹೊಲೆಯ | ಮನೆಯ ಬತ್ತಿದ ಪಶುವಿಗುಣಿಸು ಕೊಡದವ ಹೊಲೆಯ, ಜೀವಿಗಳ ಕೊಂದು ಜೀವಿಸುವವನೆ ಹೊಲೆಯ ಹೆಂಡ ಕುಡಿದರಸುಬೀದಿಯಲಿ ತಿರಿವವ ಹೊಲೆಯ, ಹಣವಿಟ್ಟು ಜೂಜಾಟವಾಡುವವ ಹೊಲೆಯ | ತನ್ನೊಡನೆ ಮಡದಿಯಲಿ ತೃಪ್ತಿ ಪಡದವ ಹೊಲೆಯ, ಪರರ ಧನವನಿತೆಯರ ಬಯಸುವವ ಹೊಲೆಯ<noinclude></noinclude> k506hrpvifwmm3s2u7p2832tge1w9iq 322970 322969 2026-05-27T09:38:56Z Shreelatha.Halemane 7642 322970 proofread-page text/x-wiki <noinclude><pagequality level="4" user="Shreelatha.Halemane" />{{rh|center=ಹೊಲೆಯನು ಯಾರು?|left=12|right=}}</noinclude>_____________ <poem> ಅಕ್ಕಾ ಮಗುವೆಲ್ಲಿಹುದೆಂದು ಕೇಳುವಳಾಕೆಗೆ ಪೇಳಂದು_ ಎಲ್ಲೆಲ್ಲಿಯು ನನ್ನ ಮಗುವಿಹುದು, ನೋಡೆನ್ನಯ ಕಣ್ಣಾಲಿಯದು ! ಎನ್ನಯ ಮೊಲೆಯ ಕುಡಿಯುತಿಹುದು, ಎನ್ನಂಕದಲಿದೊ ಕುಳಿತಿಹುದು ! ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು{{Right|70}} {{center|————}} </poem> {{center|ಹೊಲೆಯನು ಯಾರು ?}} ಹೊಲೆಯನಾರೂರ ಹೊರಗಿರುವವನೆ ಗೆಳೆಯ ? ಜಾತಿಯಿಂದಲ್ಲ ಗುಣದಿಂದಹನು ಹೊಲೆಯ || ಪಲ್ಲ|| ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ, ಗಂಡಹೆಂಡಿರ ಬೇರೆ ಮಾಡುವವ ಹೊಲೆಯ | ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ, ಒಣಹರಟೆಯಿಂ ಕಾಲ ಕಳೆಯುವವ ಹೊಲೆಯ||೧|| ಬಾಯಿಬಾರದ ಜಂತುಗಳ ಕಾಡುವವ ಹೊಲೆಯ, ಪಾಲ ಕುಡಿದಾಕಳನು ಸದೆವಾತ ಹೊಲೆಯ | ಮನೆಯ ಬತ್ತಿದ ಪಶುವಿಗುಣಿಸು ಕೊಡದವ ಹೊಲೆಯ, ಜೀವಿಗಳ ಕೊಂದು ಜೀವಿಸುವವನೆ ಹೊಲೆಯ||೨|| ಹೆಂಡ ಕುಡಿದರಸುಬೀದಿಯಲಿ ತಿರಿವವ ಹೊಲೆಯ, ಹಣವಿಟ್ಟು ಜೂಜಾಟವಾಡುವವ ಹೊಲೆಯ | ತನ್ನೊಡನೆ ಮಡದಿಯಲಿ ತೃಪ್ತಿ ಪಡದವ ಹೊಲೆಯ, ಪರರ ಧನವನಿತೆಯರ ಬಯಸುವವ ಹೊಲೆಯ||೩||<noinclude></noinclude> ookypphva2ucxemupbi0was0a70926l ಪುಟ:ಗಿಳಿವಿಂಡು.djvu/೨೫ 104 87663 322955 317451 2026-05-27T09:18:07Z Pragathi. BH 7585 322955 proofread-page text/x-wiki <noinclude><pagequality level="3" user="Pragathi. BH" />{{rh|center=ಗಿಳಿವಿಂಡು|left=|right=13}}</noinclude>________________ <poem> ಎಳೆಮಕ್ಕಳಿಗೆ ವಿದ್ಯೆ ಕಲಿಸಿಕೊಡದವ ಹೊಲೆಯ, ಯುವಕರಿಗೆ ದುರ್ಬುದ್ಧಿ ಕಲಿಸುವವ ಹೊಲೆಯ | ತಾನರಿತ ಜ್ಞಾನ ಪರರಿಗೆ ಪೇಳದವ ಹೊಲೆಯ, ತನ್ನಿಂದ ಹಿರಿಯರನು ಮನ್ನಿಸದ ಹೊಲೆಯ ಪರರ ಬೇನೆಯಲಿ ಮನಹಿಗ್ಗು ವಾತನೆ ಹೊಲೆಯ, ಪೀಡಿತರನಿನಿಸು ಕನಿಕರಿಸದವ ಹೊಲೆಯ | ಪರರ ಹೊಗೆಯನು ನೋಡೆ ಕಾದಿರುವವನೆ ಹೊಲೆಯ, ಪಸಿದವರಿಗೊಂದು ತುತ್ತೆರಚದವ ಹೊಲೆಯ ಹಣವ ಪಡೆದೊತ್ತೆಯನು ಹಿಂದೆ ಕೊಡದವ ಹೊಲೆಯ, ಹಣವಿದ್ದು ಸಾಲವನ್ನು ತೀರಿಸದ ಹೊಲೆಯ | * ಆಶೆವಾತನು ಕೊಟ್ಟು ಭಾಷೆ ತಪ್ಪುವ ಹೊಲೆಯ,' ಬಗೆಬಗೆದು ಮೋಸವನು ಮಾಡುವವ ಹೊಲೆಯ ಶುದ್ದ ತಾನೆಂದು ಪರರನು ಮುಟ್ಟಿದವ ಹೊಲೆಯ, ಹೊಲೆಯರೆಂದನ್ಯರನು ಕರೆವವನೆ ಹೊಲೆಯ | ತಾನು ಮೇಲೆಂದುಚ್ಚಿ ಹೀನೈಸುವವ ಹೊಲೆಯ, ಕೀಳುದಸೆಯವರನುದ್ಧರಿಸದವ ಹೊಲೆಯ || ೬ || ತಾ ಬೋಧಿಸುವ ಧರ್ಮವಾಚರಿಸದವ ಹೊಲೆಯ, ತಾನು ತಾನೆಂದು ಶ್ಲಾಘಿಸುವವನು ಹೊಲೆಯ | ಪರರ ಹೊಲ್ಲೆ ಹದ ಕಾವ್ಯವ ಬಿತ್ತರಿಪ ಹೊಲೆಯ, ಪರರ ಗುಣಗಳಿಗೆ ಕುರುಡಾಗಿಹನೆ ಹೊಲೆಯ || ೮ || ರಾಷ್ಟ್ರದುನ್ನತಿಯ ಸಾಧಿಸಿ ಶ್ರಮಿಸದವ ಹೊಲೆಯ, ತನ್ನ ರಾಷ್ಟ್ರಕೆ ದ್ರೋಹ ಚಿಂತಿಪನೆ ಹೊಲೆಯ | ಸ್ವಾರ್ಥದಿಂ ರಾಷ್ಟ್ರಹಿತವನು ಮರೆವವನು ಹೊಲೆಯ, ರಾಷ್ಟ್ರಭಕ್ತಿಯ ಲೇಶವಿಲ್ಲದವ ಹೊಲೆಯ </poem><noinclude></noinclude> hjqrzp9anq6ukgsn7kppbia5ydg3rf4 322972 322955 2026-05-27T09:43:18Z Shreelatha.Halemane 7642 /* Validated */ 322972 proofread-page text/x-wiki <noinclude><pagequality level="4" user="Shreelatha.Halemane" />{{rh|center=ಗಿಳಿವಿಂಡು|left=|right=13}}</noinclude>________________ <poem> ಎಳೆಮಕ್ಕಳಿಗೆ ವಿದ್ಯೆ ಕಲಿಸಿಕೊಡದವ ಹೊಲೆಯ, ಯುವಕರಿಗೆ ದುರ್ಬುದ್ಧಿ ಕಲಿಸುವವ ಹೊಲೆಯ | ತಾನರಿತ ಜ್ಞಾನ ಪರರಿಗೆ ಪೇಳದವ ಹೊಲೆಯ, ತನ್ನಿಂದ ಹಿರಿಯರನು ಮನ್ನಿಸದ ಹೊಲೆಯ||೪|| ಪರರ ಬೇನೆಯಲಿ ಮನಹಿಗ್ಗುವಾತನೆ ಹೊಲೆಯ, ಪೀಡಿತರನಿನಿಸು ಕನಿಕರಿಸದವ ಹೊಲೆಯ | ಪರರ ಹೊಗೆಯನು ನೋಡೆ ಕಾದಿರುವವನೆ ಹೊಲೆಯ, ಪಸಿದವರಿಗೊಂದು ತುತ್ತೆರಚದವ ಹೊಲೆಯ||೫|| ಹಣವ ಪಡೆದೊತ್ತೆಯನು ಹಿಂದೆ ಕೊಡದವ ಹೊಲೆಯ, ಹಣವಿದ್ದು ಸಾಲವನ್ನು ತೀರಿಸದ ಹೊಲೆಯ | ಆಶೆಮಾತನು ಕೊಟ್ಟು ಭಾಷೆ ತಪ್ಪುವ ಹೊಲೆಯ,' ಬಗೆಬಗೆದು ಮೋಸವನು ಮಾಡುವವ ಹೊಲೆಯ||೬|| ಶುದ್ದ ತಾನೆಂದು ಪರರನು ಮುಟ್ಟಿದವ ಹೊಲೆಯ, ಹೊಲೆಯರೆಂದನ್ಯರನು ಕರೆವವನೆ ಹೊಲೆಯ | ತಾನು ಮೇಲೆಂದುಚ್ಚಿ ಹೀನೈಸುವವ ಹೊಲೆಯ, ಕೀಳುದಸೆಯವರನುದ್ಧರಿಸದವ ಹೊಲೆ|| ೭ || ತಾ ಬೋಧಿಸುವ ಧರ್ಮವಾಚರಿಸದವ ಹೊಲೆಯ, ತಾನು ತಾನೆಂದು ಶ್ಲಾಘಿಸುವವನು ಹೊಲೆಯ | ಪರರ ಹೊಲ್ಲೆ ಹದ ಕಾವ್ಯವ ಬಿತ್ತರಿಪ ಹೊಲೆಯ, ಪರರ ಗುಣಗಳಿಗೆ ಕುರುಡಾಗಿಹನೆ ಹೊಲೆಯ||೮ || ರಾಷ್ಟ್ರದುನ್ನತಿಯ ಸಾಧಿಸಿ ಶ್ರಮಿಸದವ ಹೊಲೆಯ, ತನ್ನ ರಾಷ್ಟ್ರಕೆ ದ್ರೋಹ ಚಿಂತಿಪನೆ ಹೊಲೆಯ | ಸ್ವಾರ್ಥದಿಂ ರಾಷ್ಟ್ರಹಿತವನು ಮರೆವವನು ಹೊಲೆಯ, ರಾಷ್ಟ್ರಭಕ್ತಿಯ ಲೇಶವಿಲ್ಲದವ ಹೊಲೆಯ||೯|| </poem><noinclude></noinclude> 1qim9xptbkw4xaak88zqzr33hixrjnb ಪುಟ:ಗಿಳಿವಿಂಡು.djvu/೨೬ 104 87664 322975 317452 2026-05-27T09:47:44Z Shreelatha.Halemane 7642 /* Validated */ 322975 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=ತುರ್ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ|left=14|right=}} ಎಲ್ಲವುಗಳಲ್ಲಿ ಹರಿಯನು ಕಾಣದವ ಹೊಲೆಯ, ಶ್ರೀಹರಿಯೊಳೆಲ್ಲವನು ಕಾಣದವ ಹೊಲೆಯ | ಮುಂಗೆಯ್ದ ಪಾಪಕನುತಾಪ ಪಡದವ ಹೊಲೆಯ, ದೇವಕೀನಂದನನ ನೆನೆಯದವ ಹೊಲೆಯ|| ೧೦ || {{center|——————}} {{center|'''ತುರ್ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ'''}} {{center|ಭೂಪಾಳಿ-ಝಂಪೆ}} ನೋಡು ನೋಡೆಲೊ ದೇವ | ಗತಿಸಿಹೀನರ ಕಾವ, ನೋಡು ನಿನ್ನಯ ರಾಜ್ಯದೊಳರಾಜಕತೆಯ ! ನೋಡು ಪಡುವಣ ದಿಕ್ಕ, ನೋಡು ಇತಲಿಯ ಸೊಕ್ಕ, ನೋಡು ದೀನ ತುರುಷ್ಕ ತ್ರಿಪಲಿಯರ ಕತೆಯ ! ||೧|| ಬಡ ತ್ರಿಪಲಿಯನ್ನಿತಲಿ ಪಿಡಿದಿರುವುದೆನ್ನುತಲಿ ಮೊರೆಯಿಡುವ ಕ್ರಂದನಕೆ ಕಿವಿಯ ಮುಚ್ಚಿಹೆಯಾ ? ತೋಳಿನಬ್ಬರವನ್ನು ಜಗಕೆ ತೋರುವೆನೆನ್ನು ತಿತಲಿ ಬೊಬ್ಬಿರಿವುದನು ತಾತ ಮೆಚ್ಚು ವೆಯಾ ? ||೨|| ನೆಲವ ನುಂಗುವ ಹಸಿವೆ ತಡೆಯದರಚುತ ಕಸಿವೆ ನೆನುತಲಿ ತುಡುಕಿಹುದು ತ್ರಿಪಲಿಯನು ದೊರೆಯೆ ! ಹೆಬ್ಬುಲಿಯ ಕಂಗೆದುರು ಸಿಕ್ಕಿದಳೆವಲ್ಲಗರು ವಂದದಿಂತಕಿಯಷ ತಿಪಲಿಯನು ಪೊರೆಯೈ !|| ೩ ||<noinclude></noinclude> eulq0a0y2tmaswmulin2kjm6p0zs70f ಪುಟ:ಗಿಳಿವಿಂಡು.djvu/೨೭ 104 87665 322977 317453 2026-05-27T09:52:50Z Shreelatha.Halemane 7642 /* Validated */ 322977 proofread-page text/x-wiki <noinclude><pagequality level="4" user="Shreelatha.Halemane" /></noinclude>________________ {{rh|center=ಗಿಳಿವಿಂಡು|left=|right=15}} ಮೊನ್ನೆವರಮೀ ಇತಲಿ ಪರವಶತೆಯಿಂದಲಿಲಿ ಯಂತೆ ಕಂಬನಿಯಗುಳ ನೆಕ್ಕಿದುದ ಮರೆಯ, ಇಂದು ಗರ್ಜಿಸುತಿಹುದೆ ? ಕಷ್ಟವಿನೊ೦ದಿಹುದೆ ? ಮಾನವರೋ ? ದಾನವರೋ ? ನಾನವರನರಿಯೆ !|| ೪ || ಯಾವ ಇತಲಿಯ ವೀರ ಮಾಝಿನಿ ರಣಧೀರ ಪರತಂತ್ರದಿಂದಲುದ್ದರಿಸಿದನಿಲಿಯಂ, ಸಕಲರಿಗೆ ಸ್ವಾತಂತ್ರ್ಯ, ವೆಂದವನ ಗುರುಮಂತ್ರ ವಿದನಿತಲಿ ಮರೆತಿಹುದೆ ಸೊಕ್ಕಡರಿ ತಲೆಯಂ !||೫|| ಪೂರ್ವದಿ ವಿಲಾಯಿತಿಯ ಹೃದಯವಾವಳ ಗತಿಯ ಭಾರದಿಂ ಜಗ್ಗಿ ದುದೊ ಆ ತುರುಕರವನೀ ಅಬಲೆಯಾಗಿಹಳೀಗ. ಇತಲಿಯವಳನು ಬೇಗ ಸುಲಿಯುತಿದೆ-ಕದಕದಿಸು ತುರುಕರೆದೆ ಧಮನಿ !|| ೬ || ಆಧುನಿಕ ರಾಜ್ಯ ಕಲೆ ಯನ್ನರಿಯದವರ ಸಲೆ ಬೆಂಬಲಿಸಿ ನೀನಿಂದು ನಡೆಸವರ ಪಡೆಯ ! ಅನುಕರಿಸಗತಿಕರನ್ನು, ತೊರೆಯದಿರಪಥಿಕರನು, ಸುಕ್ಕಿಸದಿರರ್ಧಚಂದ್ರ ಧ್ವಜವನೊಡೆಯಾ || ೬ ||<noinclude></noinclude> kiud9hjxwsl1uzjjmu1xwfc3vn07hut ಪುಟ:ಗಿಳಿವಿಂಡು.djvu/೨೮ 104 87666 322979 317454 2026-05-27T09:56:41Z Shreelatha.Halemane 7642 /* Validated */ 322979 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ತುರ್ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ|left=16|right=} ನವನಾಗರಿಕಳಲ್ಲ ದೀ ತುರುಕಿಯಿರಸಲ್ಲ ಬೆಂದವಳ ರುಜೆಗೆ ನಾಗರವಿಷಮನೀಯೆ, ಯಮವೈದ್ಯ ರೂಪಿಂದ ನಟಸುವಿತಲಿಯ ಚಂದ ತ್ರಿಪಲಿಯನ್ನಪಹರಿಸಲಿದುವಿ ಮಾಯೆ ? ||೮|| ಮುಸಲಮಾನರ ಧರ್ಮ ಸಾಳೆಗಿಳ ಮರ್ಮ ದಿಂದಿತಲಿ ಬಂದಿಹುದೆ ಕೋಳುಗುಳಕೆ ಮುಂದು ? ಪೈಗಂಬರನು ನೀನೆ, ತಮರಿಯಾಜನು ನೀನೆ ಎಂಬ ಸತ್ಯವನೀ ಜಗತ್ತರಿವುದೆಂದು ?||೯|| ಶತ್ರುವನು ಕೂರೆಂದು ಯೇಸು ರೂಪದೊಳಂದು ನೀನೊರೆದುದಕ ನರ್ಥವಾದಪುದೆ ಇಂದು ? ಅನಘರನು ಕಡಿಯೆಂದು, ಗೆಳೆಯರನು ಬಡಿಯೆಂದು ನಿನ್ನ ವಾಕ್ಯಕೆ, ಹರಿಯೆ, ತಟ್ಟುವುದೆ ಕುಂದು ?|| ೧೦ || ಧರ್ಮಕೆಡೆ ಬರಿದಾಯ್ತೆ ? ನೀತಿ ತೇಲುವುದಾಯ್ತೆ ? ನಿನ್ನ ತಿರೆಯೊಳಧರ್ಮಕಾದಪುದೆ ಗೆಲುಹು ? ಧರ್ಮವುಳ್ಳಡೆ ನೀನು ಎಂಬರದು ಸಟೆಯನು ? ಧರ್ಮವನ್ನು ಕಾದು ಬಲಹೀನರನು ಸಲಹು |||೧೧|| 2 ಮಹಮ್ಮದ್ 3 ಯೇಸು<noinclude></noinclude> 8sg8mypm4qdnedudghcejemrre98k9l 322980 322979 2026-05-27T09:56:58Z Shreelatha.Halemane 7642 322980 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ತುರ್ಕಿಯ ಪರವಾಗಿ ದೇವರೊಡನೆ ಪ್ರಾರ್ಥನೆ|left=16|right=}} ನವನಾಗರಿಕಳಲ್ಲ ದೀ ತುರುಕಿಯಿರಸಲ್ಲ ಬೆಂದವಳ ರುಜೆಗೆ ನಾಗರವಿಷಮನೀಯೆ, ಯಮವೈದ್ಯ ರೂಪಿಂದ ನಟಸುವಿತಲಿಯ ಚಂದ ತ್ರಿಪಲಿಯನ್ನಪಹರಿಸಲಿದುವಿ ಮಾಯೆ ? ||೮|| ಮುಸಲಮಾನರ ಧರ್ಮ ಸಾಳೆಗಿಳ ಮರ್ಮ ದಿಂದಿತಲಿ ಬಂದಿಹುದೆ ಕೋಳುಗುಳಕೆ ಮುಂದು ? ಪೈಗಂಬರನು ನೀನೆ, ತಮರಿಯಾಜನು ನೀನೆ ಎಂಬ ಸತ್ಯವನೀ ಜಗತ್ತರಿವುದೆಂದು ?||೯|| ಶತ್ರುವನು ಕೂರೆಂದು ಯೇಸು ರೂಪದೊಳಂದು ನೀನೊರೆದುದಕ ನರ್ಥವಾದಪುದೆ ಇಂದು ? ಅನಘರನು ಕಡಿಯೆಂದು, ಗೆಳೆಯರನು ಬಡಿಯೆಂದು ನಿನ್ನ ವಾಕ್ಯಕೆ, ಹರಿಯೆ, ತಟ್ಟುವುದೆ ಕುಂದು ?|| ೧೦ || ಧರ್ಮಕೆಡೆ ಬರಿದಾಯ್ತೆ ? ನೀತಿ ತೇಲುವುದಾಯ್ತೆ ? ನಿನ್ನ ತಿರೆಯೊಳಧರ್ಮಕಾದಪುದೆ ಗೆಲುಹು ? ಧರ್ಮವುಳ್ಳಡೆ ನೀನು ಎಂಬರದು ಸಟೆಯನು ? ಧರ್ಮವನ್ನು ಕಾದು ಬಲಹೀನರನು ಸಲಹು |||೧೧|| 2 ಮಹಮ್ಮದ್ 3 ಯೇಸು<noinclude></noinclude> nxknl8d405w8zdm41nx2lw59jinnvs8 ಪುಟ:ಬೆಳಗಿದ ದೀಪಗಳು.pdf/೧೦೪ 104 92381 322775 240535 2026-05-26T18:34:15Z Vikashegde 1258 /* Proofread */ 322775 proofread-page text/x-wiki <noinclude><pagequality level="3" user="Vikashegde" /></noinclude></big>{{center|'''ಕೊಡೆಯಾಳು ಭೂಪಾಲ'''}}</big> {{center|ಕ್ರಿಯಾಸಿದ್ಧಿ: ಸತ್ವೇ ಭವತಿ ಮಹತಾಂ ನೋಪಕರಣೇ}} {{gap}}ಹೊಳೆಯುವದೆಲ್ಲ ಒಳಿತಾದದ್ದೆಂದು ಹೇಳಲಾಗದಷ್ಟೆ? ಕೀಳವಾಗಿ ಕಾಣುವದಾದರೂ ಕೆಟ್ಟದ್ದೆಂದು ನಿಶ್ಚಯವಾಗಿ ಹೇಳಲಾಗದು. ಕಣ್ಣಿಗೆ ನುಣ್ಣಗಾಗಿ ಕಾಣುವ ಕೆಲವೊಂದು ಫಲವು ತಿಂದವರ ಪ್ರಾಣಹರಣವನ್ನೇ ಮಾಡುವದು; ಕರಿಮಾವು ಕಣ್ಣಿಗೆ ಕೆಟ್ಟದ್ದಾಗಿ ಕಂಡರೂ ಅದರ ರಸವು ಅಮೃತೋಪಮವಾಗಿರುವದು. ಅದರಂತೆಯೇ ಮನುಷ್ಯರ ಗುಣಾವಗುಣಗಳ ನಿರ್ಣಯವನ್ನು ಅವರವರ ಸ್ಥಾನಮಾನಗಳ ಮೇಲಿಂದಾಗಲಿ, ಬಣ್ಣ ರೂಪಗಳಿ೦ದಾಗಲಿ, ವಿದ್ಯಾ ವಿಭವಗಳಿ೦ದಾಗಲಿ ಮಾಡಲಾಗದು. <poem><small> ಕನಕದ ಸಿಂಹಾಸನದೊಳ್ | ಶುನಕನ ತಂದಿರಿಸಿ ಪಟ್ಟಗಟ್ಟಲು ಮತ್ತಂ || ಮನದಣಿಯೆ ಬೊಗಳ್ಳುದಲ್ಲದೆ | ಘನತೆಯನರಿದಪುದೆ ಮುಕ್ತಿ ರಾಮೇಶ್ವರನೆ ||</small></poem> {{gap}}ಸಿಂಹಾಸನವನ್ನು ದೂಷಿಸುವವರ ರಾಜಪದಕ್ಕಿಂತಲೂ ಉದಾರಬುದ್ಧಿಯವನಾದ ಸತ್ವಶಾಲಿಯ ನೀಚಸ್ಥಿತಿಯು ಎಷ್ಟಾದರೂ ಪ್ರಶಂಸನೀಯವಾದದ್ದು. ಈ ಬಗ್ಗೆ ಒಂದು ಕಥೆ ಹೇಳುತ್ತೇವೆ, ಕೇಳಿರಿ. {{gap}}ಹಿಂದಕ್ಕೆ ಕೇರಳ ದೇಶಾಧಿಪತಿಯ ಸೇವೆಯಲ್ಲಿ ಆ ರಾಜೇಶ್ವರನ ಕುದುರೆಯ ಆರೈಕೆ ಮಾಡುವ ಒಬ್ಬ ಸೇವಕನಿದ್ದನು. ಸ್ವಾಮಿಭಕ್ತನಾದ ಆ ಸೇವಕನಿಗೆ ರಾಜನ ಸೇವೆಯ ಹೊರತಾಗಿ ಬೇರೊಂದು ವಿಷಯದಲ್ಲಿ ಧ್ಯಾನವೇ ಇಲ್ಲ. ರಾಜನು ರಾವುತನಾಗಿ ಕುದುರೆಯನ್ನೇರಿ ಹೊರಟರೆ, ಸೇವಕನು ರಾಜನ ತಲೆಯ ಮೇಲೆ ದೊಡ್ಡದೊಂದು ಕೊಡೆ ಹಿಡಿದು ಆ ಕುದುರೆಯ ಆರ್ಭಟೆಯ ವೇಗಕ್ಕೆ ಸರಿಯಾಗಿ ಓಡುತ್ತಿದ್ದನು. ಬಡವರಾದ ಆಳುಗಳಿ೦ದ ಇ೦ಥ ಸೇವೆಯನ್ನು ತೆಗೆದುಕೊಳ್ಳುವದು ನಿರ್ದಯದ ಕೆಲಸ ಎಂದು ಪಾದ್ರಿಗಳು ನಮಗೆ ಬೋಧಿಸುತ್ತಿರುವರು. ಮೃಗಯಾಸಕ್ತರಾದ ಸಾಹೇಬರು ಅನೇಕ ಜನ ಬೇಟೆಗಾರ ಬಂಟರ ದೇಹಗಳನ್ನು ಹುಲಿ ಕರಡಿಗಳ {{nop}}<noinclude></noinclude> so8tocz5r7ojapwyymyckv4sqw8n4qi 322779 322775 2026-05-26T18:36:42Z Pragathi. BH 7585 /* Validated */ 322779 proofread-page text/x-wiki <noinclude><pagequality level="4" user="Pragathi. BH" /></noinclude></big>{{center|'''ಕೊಡೆಯಾಳು ಭೂಪಾಲ'''}}</big> {{center|ಕ್ರಿಯಾಸಿದ್ಧಿ: ಸತ್ವೇ ಭವತಿ ಮಹತಾಂ ನೋಪಕರಣೇ}} {{gap}}ಹೊಳೆಯುವದೆಲ್ಲ ಒಳಿತಾದದ್ದೆಂದು ಹೇಳಲಾಗದಷ್ಟೆ? ಕೀಳವಾಗಿ ಕಾಣುವದಾದರೂ ಕೆಟ್ಟದ್ದೆಂದು ನಿಶ್ಚಯವಾಗಿ ಹೇಳಲಾಗದು. ಕಣ್ಣಿಗೆ ನುಣ್ಣಗಾಗಿ ಕಾಣುವ ಕೆಲವೊಂದು ಫಲವು ತಿಂದವರ ಪ್ರಾಣಹರಣವನ್ನೇ ಮಾಡುವದು; ಕರಿಮಾವು ಕಣ್ಣಿಗೆ ಕೆಟ್ಟದ್ದಾಗಿ ಕಂಡರೂ ಅದರ ರಸವು ಅಮೃತೋಪಮವಾಗಿರುವದು. ಅದರಂತೆಯೇ ಮನುಷ್ಯರ ಗುಣಾವಗುಣಗಳ ನಿರ್ಣಯವನ್ನು ಅವರವರ ಸ್ಥಾನಮಾನಗಳ ಮೇಲಿಂದಾಗಲಿ, ಬಣ್ಣ ರೂಪಗಳಿ೦ದಾಗಲಿ, ವಿದ್ಯಾ ವಿಭವಗಳಿ೦ದಾಗಲಿ ಮಾಡಲಾಗದು. <poem><small> ಕನಕದ ಸಿಂಹಾಸನದೊಳ್ | ಶುನಕನ ತಂದಿರಿಸಿ ಪಟ್ಟಗಟ್ಟಲು ಮತ್ತಂ || ಮನದಣಿಯೆ ಬೊಗಳ್ಳುದಲ್ಲದೆ | ಘನತೆಯನರಿದಪುದೆ ಮುಕ್ತಿ ರಾಮೇಶ್ವರನೆ ||</small></poem> {{gap}}ಸಿಂಹಾಸನವನ್ನು ದೂಷಿಸುವವರ ರಾಜಪದಕ್ಕಿಂತಲೂ ಉದಾರಬುದ್ಧಿಯವನಾದ ಸತ್ವಶಾಲಿಯ ನೀಚಸ್ಥಿತಿಯು ಎಷ್ಟಾದರೂ ಪ್ರಶಂಸನೀಯವಾದದ್ದು. ಈ ಬಗ್ಗೆ ಒಂದು ಕಥೆ ಹೇಳುತ್ತೇವೆ, ಕೇಳಿರಿ. {{gap}}ಹಿಂದಕ್ಕೆ ಕೇರಳ ದೇಶಾಧಿಪತಿಯ ಸೇವೆಯಲ್ಲಿ ಆ ರಾಜೇಶ್ವರನ ಕುದುರೆಯ ಆರೈಕೆ ಮಾಡುವ ಒಬ್ಬ ಸೇವಕನಿದ್ದನು. ಸ್ವಾಮಿಭಕ್ತನಾದ ಆ ಸೇವಕನಿಗೆ ರಾಜನ ಸೇವೆಯ ಹೊರತಾಗಿ ಬೇರೊಂದು ವಿಷಯದಲ್ಲಿ ಧ್ಯಾನವೇ ಇಲ್ಲ. ರಾಜನು ರಾವುತನಾಗಿ ಕುದುರೆಯನ್ನೇರಿ ಹೊರಟರೆ, ಸೇವಕನು ರಾಜನ ತಲೆಯ ಮೇಲೆ ದೊಡ್ಡದೊಂದು ಕೊಡೆ ಹಿಡಿದು ಆ ಕುದುರೆಯ ಆರ್ಭಟೆಯ ವೇಗಕ್ಕೆ ಸರಿಯಾಗಿ ಓಡುತ್ತಿದ್ದನು. ಬಡವರಾದ ಆಳುಗಳಿ೦ದ ಇ೦ಥ ಸೇವೆಯನ್ನು ತೆಗೆದುಕೊಳ್ಳುವದು ನಿರ್ದಯದ ಕೆಲಸ ಎಂದು ಪಾದ್ರಿಗಳು ನಮಗೆ ಬೋಧಿಸುತ್ತಿರುವರು. ಮೃಗಯಾಸಕ್ತರಾದ ಸಾಹೇಬರು ಅನೇಕ ಜನ ಬೇಟೆಗಾರ ಬಂಟರ ದೇಹಗಳನ್ನು ಹುಲಿ ಕರಡಿಗಳ {{nop}}<noinclude></noinclude> t30pkcg16ee7nor5599nnokzixokjkh 322780 322779 2026-05-26T18:37:30Z Vikashegde 1258 /* Validated */ 322780 proofread-page text/x-wiki <noinclude><pagequality level="4" user="Pragathi. BH" /></noinclude></big>{{center|'''ಕೊಡೆಯಾಳು ಭೂಪಾಲ'''}}</big> {{center|ಕ್ರಿಯಾಸಿದ್ಧಿ: ಸತ್ವೇ ಭವತಿ ಮಹತಾಂ ನೋಪಕರಣೇ}} {{gap}}ಹೊಳೆಯುವದೆಲ್ಲ ಒಳಿತಾದದ್ದೆಂದು ಹೇಳಲಾಗದಷ್ಟೆ? ಕೀಳವಾಗಿ ಕಾಣುವದಾದರೂ ಕೆಟ್ಟದ್ದೆಂದು ನಿಶ್ಚಯವಾಗಿ ಹೇಳಲಾಗದು. ಕಣ್ಣಿಗೆ ನುಣ್ಣಗಾಗಿ ಕಾಣುವ ಕೆಲವೊಂದು ಫಲವು ತಿಂದವರ ಪ್ರಾಣಹರಣವನ್ನೇ ಮಾಡುವದು; ಕರಿಮಾವು ಕಣ್ಣಿಗೆ ಕೆಟ್ಟದ್ದಾಗಿ ಕಂಡರೂ ಅದರ ರಸವು ಅಮೃತೋಪಮವಾಗಿರುವದು. ಅದರಂತೆಯೇ ಮನುಷ್ಯರ ಗುಣಾವಗುಣಗಳ ನಿರ್ಣಯವನ್ನು ಅವರವರ ಸ್ಥಾನಮಾನಗಳ ಮೇಲಿಂದಾಗಲಿ, ಬಣ್ಣ ರೂಪಗಳಿ೦ದಾಗಲಿ, ವಿದ್ಯಾ ವಿಭವಗಳಿ೦ದಾಗಲಿ ಮಾಡಲಾಗದು. <small> {{center| <poem>ಕನಕದ ಸಿಂಹಾಸನದೊಳ್ | ಶುನಕನ ತಂದಿರಿಸಿ ಪಟ್ಟಗಟ್ಟಲು ಮತ್ತಂ || ಮನದಣಿಯೆ ಬೊಗಳ್ಳುದಲ್ಲದೆ | ಘನತೆಯನರಿದಪುದೆ ಮುಕ್ತಿ ರಾಮೇಶ್ವರನೆ ||</poem>}} </small> {{gap}}ಸಿಂಹಾಸನವನ್ನು ದೂಷಿಸುವವರ ರಾಜಪದಕ್ಕಿಂತಲೂ ಉದಾರಬುದ್ಧಿಯವನಾದ ಸತ್ವಶಾಲಿಯ ನೀಚಸ್ಥಿತಿಯು ಎಷ್ಟಾದರೂ ಪ್ರಶಂಸನೀಯವಾದದ್ದು. ಈ ಬಗ್ಗೆ ಒಂದು ಕಥೆ ಹೇಳುತ್ತೇವೆ, ಕೇಳಿರಿ. {{gap}}ಹಿಂದಕ್ಕೆ ಕೇರಳ ದೇಶಾಧಿಪತಿಯ ಸೇವೆಯಲ್ಲಿ ಆ ರಾಜೇಶ್ವರನ ಕುದುರೆಯ ಆರೈಕೆ ಮಾಡುವ ಒಬ್ಬ ಸೇವಕನಿದ್ದನು. ಸ್ವಾಮಿಭಕ್ತನಾದ ಆ ಸೇವಕನಿಗೆ ರಾಜನ ಸೇವೆಯ ಹೊರತಾಗಿ ಬೇರೊಂದು ವಿಷಯದಲ್ಲಿ ಧ್ಯಾನವೇ ಇಲ್ಲ. ರಾಜನು ರಾವುತನಾಗಿ ಕುದುರೆಯನ್ನೇರಿ ಹೊರಟರೆ, ಸೇವಕನು ರಾಜನ ತಲೆಯ ಮೇಲೆ ದೊಡ್ಡದೊಂದು ಕೊಡೆ ಹಿಡಿದು ಆ ಕುದುರೆಯ ಆರ್ಭಟೆಯ ವೇಗಕ್ಕೆ ಸರಿಯಾಗಿ ಓಡುತ್ತಿದ್ದನು. ಬಡವರಾದ ಆಳುಗಳಿ೦ದ ಇ೦ಥ ಸೇವೆಯನ್ನು ತೆಗೆದುಕೊಳ್ಳುವದು ನಿರ್ದಯದ ಕೆಲಸವೆಂದು ಪಾದ್ರಿಗಳು ನಮಗೆ ಬೋಧಿಸುತ್ತಿರುವರು. ಮೃಗಯಾಸಕ್ತರಾದ ಸಾಹೇಬರು ಅನೇಕ ಜನ ಬೇಟೆಗಾರ ಬಂಟರ ದೇಹಗಳನ್ನು ಹುಲಿ ಕರಡಿಗಳ {{nop}}<noinclude></noinclude> b2ug060gxnbvzr9fioqegahbbdpz1n1 ಪುಟ:ಬೆಳಗಿದ ದೀಪಗಳು.pdf/೧೦೭ 104 92384 322772 240046 2026-05-26T18:26:25Z Vikashegde 1258 /* Proofread */ 322772 proofread-page text/x-wiki <noinclude><pagequality level="3" user="Vikashegde" />{{rh|center=ಕೊಡಯಾಳು ಭೂಪಾಲ|left=|right=೯೭}}</noinclude>ಉಚಿತವಾದ ಲೇಹ್ಯಪೇರುಗಳನ್ನು ಕೊಟ್ಟು ಸಮಾಧಾನಗೊಳಿಸಿ ಹೀಗೆ ನಿಷ್ಕಾರಣವಾಗಿ ಸಾಹಸವನ್ನು ಮಾಡಿದ್ದಕ್ಕಾಗಿ ಅವನಿಗೆ ಸಿಟ್ಟು ಮಾಡಿದರು. ಅಷ್ಟರಲ್ಲಿ ರಾಯನ ಕುದುರೆಯು ನಿಂತನಿಂತಲ್ಲಿಯೇ ಪ್ರಾಣ ಬಿಟ್ಟಿತೆಂದು ಓರ್ವ ಸೇವಕನು ನಿವೇದಿಸಿದ್ದನ್ನು ಕೇಳಿ ಅರಸನು ವಿಸ್ಮಯಾಕುಲನಾಗಿ, ತನ್ನ ಕೊಡೆಯಾಳಿನ ಗತಿಯೇನಾಯಿತೋ ನೋಡಿರಿ ಎಂದು ವ್ಯಾಕುಲಚಿತ್ತನಾಗಿ ರಾಜವೈದ್ಯರಿಗೆ ಹೇಳಿದನು. {{gap}}"ಉಪಾಯವಿಲ್ಲ, ರಾಜಾಧಿರಾಜರೆ, ಕುದುರೆಗಾದ ಗತಿಯೇ ಕೊಡೆಯಾಳಿಗೆ ಆಗಿರುವದು!” ಎಂದು ರಾಜವೈದ್ಯರು ವಿಷಾದದಿಂದ ಹೇಳಿದರು. {{gap}}"ಏನೂ ಉಪಾಯವಿಲ್ಲವೆ? ನೋಡಿರಿ, ಹೇಗಾದರೂ ಮಾಡಿ ಆ ನನ್ನ ಪ್ರಿಯ ಭೃತ್ಯನನ್ನು ಬದುಕಿಸಿಕೊಳ್ಳಿರಿ." {{gap}}"ಮಹಾರಾಜರ ಕೃಪಾಪಾತ್ರನಾದ ಆ ಭೃತ್ಯನು ಓಡುವದನ್ನು ಬಿಟ್ಟು ನಿಂತಾಕ್ಷಣವೇ, ಅವನ ಹಣೆಯೊಡೆದು ರಕ್ತ ತೆಗೆದು ಅವನಿಗೆ ನೆನೆಗಡಲೆ ತಿನ್ನಲಿಕ್ಕೆ ಕೊಟ್ಟು, ಅವನನ್ನು ಕಾಲುಮೇಲಾಗಿ ಮಾಡಿ ಮಲಿಗಿಸಿದ್ದರೆ ಬದುಕಬಹುದಾಗಿತ್ತು. ಇಷ್ಟು ಹೊತ್ತಾದ ಬಳಿಕ ಯಾವ ಉಪಾಯಗಳಿಂದಲೂ ಪ್ರಯೋಜನವಿಲ್ಲ." {{gap}}"ಅವನಿದ್ದೆಡೆಗೆ ಹೋಗಿ ನೋಡಿಯಾದರೂ ಬರೋಣ ಬನ್ನಿರಿ,” ಎಂದು ಆ ಮಹಾರಾಜನು ರಾಜವೈದ್ಯನನ್ನು ಕರಕೊಂಡು ಕೊಡೆಯಾಳು ಇದ್ದ ಸ್ಥಳಕ್ಕೆ ಬಂದನು. {{gap}}ಅಲ್ಲಿ ಒಂದು ಚಮತ್ಕಾರವೇ ಆಗಿತ್ತು. "ಪಥಿ ಸ್ತ್ಯುತಂ ತಿಷ್ಠತಿ ದೈವ ರಕ್ಷಿತಂ" ಎಂಬಂತೆ, ರಾಜವೈದ್ಯರು ಹೇಳಿದ ಉಪಚಾರಗಳೆಲ್ಲ ಆ ಕೊಡೆಯಾಳಿಗೆ ದೈವಯೋಗದಿಂದೆ ಸಲ್ಲಿದ್ದವು. ಆ ಸಾಹಸಿಯಾದ ಸೇವಕನು ತನಿ ನೆಳಲಿನ ಆಸೆಗಾಗಿ ಬಳಿಯಲ್ಲಿಯೇ ಇರುವ ದುರ್ಗಾದೇವಿಯ ಗುಡಿಹೊಕ್ಕನು. ದೇವಾಲಯದ ಬಾಗಿಲದ ಹಣೆಪಟ್ಟಿಯು ಅವನ ಹಣೆಗೆ ಥಟ್ಟನೆ ಬಡಿದದ್ದರಿಂದ ಬಳಬಳನೆ ರಕ್ತ ಸುರಿದಿತ್ತು. ಭಕ್ತ ಜನರು ದೇವಿಗೆ ಉಡಿತುಂಬಿದ ನೆನೆಗಡಲೆಯ ಕಾಳುಗಳನ್ನು ಅವನು ಸಂಕಟಗರೆದು ತಿಂದಿದ್ದನು. ಮೂರು ಮೊಳ ಅಗಲವಾಗಿದ್ದ ಆ ಚಿಕ್ಕ ಗುಡಿಯಲ್ಲಿ ಅವನು ಮಲಗುವದು ಹೇಗೆ? ಅರ್ಥಾತ್ ಕಾಲು ಮೇಲೆಮಾಡಿ ಗೋಡೆಗೆ ಆನಿಸಿ ಇಟ್ಟು ಕೊಂಡು ಅವನು{{nop}}<noinclude></noinclude> i64idqbc4oe8xnvxym6iefc8qlvnrwf 322778 322772 2026-05-26T18:35:48Z Pragathi. BH 7585 /* Validated */ 322778 proofread-page text/x-wiki <noinclude><pagequality level="4" user="Pragathi. BH" />{{rh|center=ಕೊಡಯಾಳು ಭೂಪಾಲ|left=|right=೯೭}}</noinclude>ಉಚಿತವಾದ ಲೇಹ್ಯಪೇರುಗಳನ್ನು ಕೊಟ್ಟು ಸಮಾಧಾನಗೊಳಿಸಿ ಹೀಗೆ ನಿಷ್ಕಾರಣವಾಗಿ ಸಾಹಸವನ್ನು ಮಾಡಿದ್ದಕ್ಕಾಗಿ ಅವನಿಗೆ ಸಿಟ್ಟು ಮಾಡಿದರು. ಅಷ್ಟರಲ್ಲಿ ರಾಯನ ಕುದುರೆಯು ನಿಂತನಿಂತಲ್ಲಿಯೇ ಪ್ರಾಣ ಬಿಟ್ಟಿತೆಂದು ಓರ್ವ ಸೇವಕನು ನಿವೇದಿಸಿದ್ದನ್ನು ಕೇಳಿ ಅರಸನು ವಿಸ್ಮಯಾಕುಲನಾಗಿ, ತನ್ನ ಕೊಡೆಯಾಳಿನ ಗತಿಯೇನಾಯಿತೋ ನೋಡಿರಿ ಎಂದು ವ್ಯಾಕುಲಚಿತ್ತನಾಗಿ ರಾಜವೈದ್ಯರಿಗೆ ಹೇಳಿದನು. {{gap}}"ಉಪಾಯವಿಲ್ಲ, ರಾಜಾಧಿರಾಜರೆ, ಕುದುರೆಗಾದ ಗತಿಯೇ ಕೊಡೆಯಾಳಿಗೆ ಆಗಿರುವದು!” ಎಂದು ರಾಜವೈದ್ಯರು ವಿಷಾದದಿಂದ ಹೇಳಿದರು. {{gap}}"ಏನೂ ಉಪಾಯವಿಲ್ಲವೆ? ನೋಡಿರಿ, ಹೇಗಾದರೂ ಮಾಡಿ ಆ ನನ್ನ ಪ್ರಿಯ ಭೃತ್ಯನನ್ನು ಬದುಕಿಸಿಕೊಳ್ಳಿರಿ." {{gap}}"ಮಹಾರಾಜರ ಕೃಪಾಪಾತ್ರನಾದ ಆ ಭೃತ್ಯನು ಓಡುವದನ್ನು ಬಿಟ್ಟು ನಿಂತಾಕ್ಷಣವೇ, ಅವನ ಹಣೆಯೊಡೆದು ರಕ್ತ ತೆಗೆದು ಅವನಿಗೆ ನೆನೆಗಡಲೆ ತಿನ್ನಲಿಕ್ಕೆ ಕೊಟ್ಟು, ಅವನನ್ನು ಕಾಲುಮೇಲಾಗಿ ಮಾಡಿ ಮಲಿಗಿಸಿದ್ದರೆ ಬದುಕಬಹುದಾಗಿತ್ತು. ಇಷ್ಟು ಹೊತ್ತಾದ ಬಳಿಕ ಯಾವ ಉಪಾಯಗಳಿಂದಲೂ ಪ್ರಯೋಜನವಿಲ್ಲ." {{gap}}"ಅವನಿದ್ದೆಡೆಗೆ ಹೋಗಿ ನೋಡಿಯಾದರೂ ಬರೋಣ ಬನ್ನಿರಿ,” ಎಂದು ಆ ಮಹಾರಾಜನು ರಾಜವೈದ್ಯನನ್ನು ಕರಕೊಂಡು ಕೊಡೆಯಾಳು ಇದ್ದ ಸ್ಥಳಕ್ಕೆ ಬಂದನು. {{gap}}ಅಲ್ಲಿ ಒಂದು ಚಮತ್ಕಾರವೇ ಆಗಿತ್ತು. "ಪಥಿ ಸ್ತ್ಯುತಂ ತಿಷ್ಠತಿ ದೈವ ರಕ್ಷಿತಂ" ಎಂಬಂತೆ, ರಾಜವೈದ್ಯರು ಹೇಳಿದ ಉಪಚಾರಗಳೆಲ್ಲ ಆ ಕೊಡೆಯಾಳಿಗೆ ದೈವಯೋಗದಿಂದೆ ಸಲ್ಲಿದ್ದವು. ಆ ಸಾಹಸಿಯಾದ ಸೇವಕನು ತನಿ ನೆಳಲಿನ ಆಸೆಗಾಗಿ ಬಳಿಯಲ್ಲಿಯೇ ಇರುವ ದುರ್ಗಾದೇವಿಯ ಗುಡಿಹೊಕ್ಕನು. ದೇವಾಲಯದ ಬಾಗಿಲದ ಹಣೆಪಟ್ಟಿಯು ಅವನ ಹಣೆಗೆ ಥಟ್ಟನೆ ಬಡಿದದ್ದರಿಂದ ಬಳಬಳನೆ ರಕ್ತ ಸುರಿದಿತ್ತು. ಭಕ್ತ ಜನರು ದೇವಿಗೆ ಉಡಿತುಂಬಿದ ನೆನೆಗಡಲೆಯ ಕಾಳುಗಳನ್ನು ಅವನು ಸಂಕಟಗರೆದು ತಿಂದಿದ್ದನು. ಮೂರು ಮೊಳ ಅಗಲವಾಗಿದ್ದ ಆ ಚಿಕ್ಕ ಗುಡಿಯಲ್ಲಿ ಅವನು ಮಲಗುವದು ಹೇಗೆ? ಅರ್ಥಾತ್ ಕಾಲು ಮೇಲೆಮಾಡಿ ಗೋಡೆಗೆ ಆನಿಸಿ ಇಟ್ಟು ಕೊಂಡು ಅವನು{{nop}}<noinclude></noinclude> l9sgw0husxybwkr67j8aq0wmqveftnh ಪುಟ:ಬೆಳಗಿದ ದೀಪಗಳು.pdf/೧೩೪ 104 92412 322770 240085 2026-05-26T18:10:11Z Vikashegde 1258 /* Proofread */ 322770 proofread-page text/x-wiki <noinclude><pagequality level="3" user="Vikashegde" />{{rh|೧೨೪|ಸಂಪೂರ್ಣ ಕಥೆಗಳು|}}</noinclude>ಮೋಹರಗಳನ್ನು ತೆಗೆದುಕೊಂಡು ಬಂದರೆಂದರೆ, ಇವರ ಕೈ ಕಾಲುಗಳು ನಡುಗುತ್ತಿದ್ದವು, ಮೈಯೆಲ್ಲ ಬೆವರಿನಿಂದ ತಪತಪ ತೊಯ್ಯುತ್ತಿತ್ತು, ಹಾಗೂ ಆ ಬಳಿಕ ಮೈಯಲ್ಲಿ ಚಳಿ ತುಂಬಿ ಹಾಸಿಗೆಯನ್ನು ಹಿಡಿದು ಮಲಗುತ್ತಿದ್ದರು. ಜ್ವರದ ಸಂತಾಪದಿಂದ ಬಡಬಡಿಸಹತ್ತಿದರೆಂದರೆ, ಅದರಲ್ಲಿ ಭೂತ ಪಿಶಾಚಾದಿಗಳ ಸುದ್ದಿಯೇ. ಈಗಿನ ವರೆಗೆ ನನಗೆ ಇದರ ಗೂಢವೇ ತಿಳಿದಿಲ್ಲ. ಆದರೆ ಭೋಲಾನಾಥನೆ, ನೀನು ಈಗ ಹೇಳುತ್ತಿರುವ ಭಯಂಕರವಾದ ಸುದ್ದಿಯಿಂದ ಎಲ್ಲ ಸಂಗತಿಗಳು ಚನ್ನಾಗಿ ನನ್ನ ಲಕ್ಷದಲ್ಲಿ ಬಂದಿವೆ. {{gap}}ಭೋಲಾನಾಥ: ತಾಯಿಯ ಭಯಂಕರವಾದ ಸುದ್ದಿಯೆ೦ದು ಏನು ಹೇಳಲಿ! ಪಿಕಾಚಿರೂಪಗಳನ್ನು ಧರಿಸಿದ ಮನುಷ್ಯರು ಸತ್ತುಹೋಗಿದ್ದರೂ ಅವರ ವಾಸನೆಗಳು ಜೀವಂತವಾಗಿವೆ. ಸುಟ್ಟು ಬೂದಿಯಾದ ಶರೀರಿಗಳು ಭಯಾನಕವಾದ ಬೀಭತ್ಸ ರೂಪಾಂತರಗಳನ್ನು ಹೊಂದಿವೆ. ಇಂಥ ನೋಟವನ್ನು ಯಾರೂ ನೋಡಿರಲಿಕ್ಕಿಲ್ಲೆಂದು ನನಗಂತೂ ತೋರುತ್ತದೆ. ಬೇಡ, ಅದರ ಸ್ಮರಣವಾಗುವದೂ ಕೂಡ ನನಗೆ ಬೇಡ. ಇಡೀ ಜಗತ್ತಿನಲ್ಲಿ ಸಂಚಿತವಾಗಿರುವ ದ್ರವ್ಯವನ್ನು ಕೊಡುವೆನೆಂದು ಯಾವನಾದರೂ ನನಗೆ ಹೇಳಿದರೂ ಕೂಡ ನಾನು ಅಲ್ಲಿಗೆ ಹೋಗಲಿಕ್ಕಿಲ್ಲ. ಇಕೋ, ಎದುರಿನಲ್ಲಿ ಕಾಣುತ್ತಿರುವ ಕಟ್ಟಡದಲ್ಲಿ ಪಿಶಾಚಿಗಳ ರೂಪಗಳನ್ನು ಧಾರಣ ಮಾಡಿಕೊಂಡು ಕ್ಲೇಶಗಳನ್ನು ಪಡುತ್ತಿರುವವರ ದ್ರವ್ಯವನ್ನು, ನಮ್ಮ ಪೂರ್ವಜರಲ್ಲೊಬ್ಬನು ಅವರನ್ನು ಅನ್ಯಾಯದಿಂದ ಘಾತಿಸಿ, ಅವರಿ೦ವ ಸುಲಿದುಕೊಂಡಿರಲೇಬೇಕು. ದ್ರವ್ಯದ ಹಂಬಲವಾದರೂ ಎಷ್ಟು? ಒಂದು ಕುಟುಂಬದವರ ಸಲುವಾಗಿ ಯಃಕಶ್ಚಿತನಾದ ಒಬ್ಬ ಮಾನವೀ ಪ್ರಾಣಿಯ ಕ್ಷಣಿಕ ಸುಖದ ಸಲುವಾಗಿ-ನೂರಾರು ಕುಟುಂಬದವರನ್ನು ದಾರಿದ್ರ್ಯದ ಪಂಕದಲ್ಲಿ ಕೊಳೆಹಾಕಿ, ಬಂಗಾರದ ಮೊಹರಗಳಿಂದ ತುಂಬಿದ ಇಷ್ಟು ಕೊಪ್ಪರಿಗೆಗಳನ್ನು ಒಂದು ಸ್ಥಳದಲ್ಲಿ ಕೂಡಿ ಹಾಕುವದರಿಂದ ಲಾಭವಾದರೂ ಯಾವದು? ತನ್ನ ಗೇಣು ಹೊಟ್ಟೆಗಾಗಿ, ಉಳಿದ ಸಾವಿರಾರು ಜನರನ್ನು ಉಪವಾಸದ ಪಥಕ್ಕೆ ಹಚ್ಚಿ ಅವರ ಪ್ರಾಣಗಳನ್ನು ಹಿಂಡಿ ಹಿಪ್ಪೆ ಮಾಡಿದವನ ವಂಶದಲ್ಲಿ ಮುಂದೆ ಔರಸ ಸಂತತಿಯು ಹುಟ್ಟದಿದ್ದರೆ, ಅದರಲ್ಲಿ ಯಾವ ಆಶ್ಚರ್ಯವು? ಅನೇಕರ ಗೋಣುಗಳನ್ನು ಮುರಿದು ಅವರ ದ್ರವ್ಯವನ್ನೆಲ್ಲ ನಾನೊಬ್ಬನೇ ನನ್ನ ಕೊಪ್ಪರಿಗೆಯ{{nop}}<noinclude></noinclude> aeuspmojk7x7bxfubabb4q5zs3jq17r 322773 322770 2026-05-26T18:32:57Z Pragathi. BH 7585 /* Validated */ 322773 proofread-page text/x-wiki <noinclude><pagequality level="4" user="Pragathi. BH" />{{rh|೧೨೪|ಸಂಪೂರ್ಣ ಕಥೆಗಳು|}}</noinclude>ಮೋಹರಗಳನ್ನು ತೆಗೆದುಕೊಂಡು ಬಂದರೆಂದರೆ, ಇವರ ಕೈ ಕಾಲುಗಳು ನಡುಗುತ್ತಿದ್ದವು, ಮೈಯೆಲ್ಲ ಬೆವರಿನಿಂದ ತಪತಪ ತೊಯ್ಯುತ್ತಿತ್ತು, ಹಾಗೂ ಆ ಬಳಿಕ ಮೈಯಲ್ಲಿ ಚಳಿ ತುಂಬಿ ಹಾಸಿಗೆಯನ್ನು ಹಿಡಿದು ಮಲಗುತ್ತಿದ್ದರು. ಜ್ವರದ ಸಂತಾಪದಿಂದ ಬಡಬಡಿಸಹತ್ತಿದರೆಂದರೆ, ಅದರಲ್ಲಿ ಭೂತ ಪಿಶಾಚಾದಿಗಳ ಸುದ್ದಿಯೇ. ಈಗಿನ ವರೆಗೆ ನನಗೆ ಇದರ ಗೂಢವೇ ತಿಳಿದಿಲ್ಲ. ಆದರೆ ಭೋಲಾನಾಥನೆ, ನೀನು ಈಗ ಹೇಳುತ್ತಿರುವ ಭಯಂಕರವಾದ ಸುದ್ದಿಯಿಂದ ಎಲ್ಲ ಸಂಗತಿಗಳು ಚನ್ನಾಗಿ ನನ್ನ ಲಕ್ಷದಲ್ಲಿ ಬಂದಿವೆ. {{gap}}ಭೋಲಾನಾಥ: ತಾಯಿಯ ಭಯಂಕರವಾದ ಸುದ್ದಿಯೆ೦ದು ಏನು ಹೇಳಲಿ! ಪಿಕಾಚಿರೂಪಗಳನ್ನು ಧರಿಸಿದ ಮನುಷ್ಯರು ಸತ್ತುಹೋಗಿದ್ದರೂ ಅವರ ವಾಸನೆಗಳು ಜೀವಂತವಾಗಿವೆ. ಸುಟ್ಟು ಬೂದಿಯಾದ ಶರೀರಿಗಳು ಭಯಾನಕವಾದ ಬೀಭತ್ಸ ರೂಪಾಂತರಗಳನ್ನು ಹೊಂದಿವೆ. ಇಂಥ ನೋಟವನ್ನು ಯಾರೂ ನೋಡಿರಲಿಕ್ಕಿಲ್ಲೆಂದು ನನಗಂತೂ ತೋರುತ್ತದೆ. ಬೇಡ, ಅದರ ಸ್ಮರಣವಾಗುವದೂ ಕೂಡ ನನಗೆ ಬೇಡ. ಇಡೀ ಜಗತ್ತಿನಲ್ಲಿ ಸಂಚಿತವಾಗಿರುವ ದ್ರವ್ಯವನ್ನು ಕೊಡುವೆನೆಂದು ಯಾವನಾದರೂ ನನಗೆ ಹೇಳಿದರೂ ಕೂಡ ನಾನು ಅಲ್ಲಿಗೆ ಹೋಗಲಿಕ್ಕಿಲ್ಲ. ಇಕೋ, ಎದುರಿನಲ್ಲಿ ಕಾಣುತ್ತಿರುವ ಕಟ್ಟಡದಲ್ಲಿ ಪಿಶಾಚಿಗಳ ರೂಪಗಳನ್ನು ಧಾರಣ ಮಾಡಿಕೊಂಡು ಕ್ಲೇಶಗಳನ್ನು ಪಡುತ್ತಿರುವವರ ದ್ರವ್ಯವನ್ನು, ನಮ್ಮ ಪೂರ್ವಜರಲ್ಲೊಬ್ಬನು ಅವರನ್ನು ಅನ್ಯಾಯದಿಂದ ಘಾತಿಸಿ, ಅವರಿ೦ವ ಸುಲಿದುಕೊಂಡಿರಲೇಬೇಕು. ದ್ರವ್ಯದ ಹಂಬಲವಾದರೂ ಎಷ್ಟು? ಒಂದು ಕುಟುಂಬದವರ ಸಲುವಾಗಿ ಯಃಕಶ್ಚಿತನಾದ ಒಬ್ಬ ಮಾನವೀ ಪ್ರಾಣಿಯ ಕ್ಷಣಿಕ ಸುಖದ ಸಲುವಾಗಿ-ನೂರಾರು ಕುಟುಂಬದವರನ್ನು ದಾರಿದ್ರ್ಯದ ಪಂಕದಲ್ಲಿ ಕೊಳೆಹಾಕಿ, ಬಂಗಾರದ ಮೊಹರಗಳಿಂದ ತುಂಬಿದ ಇಷ್ಟು ಕೊಪ್ಪರಿಗೆಗಳನ್ನು ಒಂದು ಸ್ಥಳದಲ್ಲಿ ಕೂಡಿ ಹಾಕುವದರಿಂದ ಲಾಭವಾದರೂ ಯಾವದು? ತನ್ನ ಗೇಣು ಹೊಟ್ಟೆಗಾಗಿ, ಉಳಿದ ಸಾವಿರಾರು ಜನರನ್ನು ಉಪವಾಸದ ಪಥಕ್ಕೆ ಹಚ್ಚಿ ಅವರ ಪ್ರಾಣಗಳನ್ನು ಹಿಂಡಿ ಹಿಪ್ಪೆ ಮಾಡಿದವನ ವಂಶದಲ್ಲಿ ಮುಂದೆ ಔರಸ ಸಂತತಿಯು ಹುಟ್ಟದಿದ್ದರೆ, ಅದರಲ್ಲಿ ಯಾವ ಆಶ್ಚರ್ಯವು? ಅನೇಕರ ಗೋಣುಗಳನ್ನು ಮುರಿದು ಅವರ ದ್ರವ್ಯವನ್ನೆಲ್ಲ ನಾನೊಬ್ಬನೇ ನನ್ನ ಕೊಪ್ಪರಿಗೆಯ{{nop}}<noinclude></noinclude> q0u1akczhzbhlc1wt0bw56dtpit64vb 322774 322773 2026-05-26T18:33:49Z Pragathi. BH 7585 322774 proofread-page text/x-wiki <noinclude><pagequality level="4" user="Pragathi. BH" />{{rh|೧೨೪|ಸಂಪೂರ್ಣ ಕಥೆಗಳು|}}</noinclude>ಮೋಹರಗಳನ್ನು ತೆಗೆದುಕೊಂಡು ಬಂದರೆಂದರೆ, ಇವರ ಕೈ ಕಾಲುಗಳು ನಡುಗುತ್ತಿದ್ದವು, ಮೈಯೆಲ್ಲ ಬೆವರಿನಿಂದ ತಪತಪ ತೊಯ್ಯುತ್ತಿತ್ತು, ಹಾಗೂ ಆ ಬಳಿಕ ಮೈಯಲ್ಲಿ ಚಳಿ ತುಂಬಿ ಹಾಸಿಗೆಯನ್ನು ಹಿಡಿದು ಮಲಗುತ್ತಿದ್ದರು. ಜ್ವರದ ಸಂತಾಪದಿಂದ ಬಡಬಡಿಸಹತ್ತಿದರೆಂದರೆ, ಅದರಲ್ಲಿ ಭೂತ ಪಿಶಾಚಾದಿಗಳ ಸುದ್ದಿಯೇ. ಈಗಿನ ವರೆಗೆ ನನಗೆ ಇದರ ಗೂಢವೇ ತಿಳಿದಿಲ್ಲ. ಆದರೆ ಭೋಲಾನಾಥನೆ, ನೀನು ಈಗ ಹೇಳುತ್ತಿರುವ ಭಯಂಕರವಾದ ಸುದ್ದಿಯಿಂದ ಎಲ್ಲ ಸಂಗತಿಗಳು ಚನ್ನಾಗಿ ನನ್ನ ಲಕ್ಷದಲ್ಲಿ ಬಂದಿವೆ. {{gap}}ಭೋಲಾನಾಥ: ತಾಯಿಯ ಭಯಂಕರವಾದ ಸುದ್ದಿಯೆ೦ದು ಏನು ಹೇಳಲಿ! ಪಿಕಾಚಿರೂಪಗಳನ್ನು ಧರಿಸಿದ ಮನುಷ್ಯರು ಸತ್ತುಹೋಗಿದ್ದರೂ ಅವರ ವಾಸನೆಗಳು ಜೀವಂತವಾಗಿವೆ. ಸುಟ್ಟು ಬೂದಿಯಾದ ಶರೀರಿಗಳು ಭಯಾನಕವಾದ ಬೀಭತ್ಸ ರೂಪಾಂತರಗಳನ್ನು ಹೊಂದಿವೆ. ಇಂಥ ನೋಟವನ್ನು ಯಾರೂ ನೋಡಿರಲಿಕ್ಕಿಲ್ಲೆಂದು ನನಗಂತೂ ತೋರುತ್ತದೆ. ಬೇಡ, ಅದರ ಸ್ಮರಣವಾಗುವದೂ ಕೂಡ ನನಗೆ ಬೇಡ. ಇಡೀ ಜಗತ್ತಿನಲ್ಲಿ ಸಂಚಿತವಾಗಿರುವ ದ್ರವ್ಯವನ್ನು ಕೊಡುವೆನೆಂದು ಯಾವನಾದರೂ ನನಗೆ ಹೇಳಿದರೂ ಕೂಡ ನಾನು ಅಲ್ಲಿಗೆ ಹೋಗಲಿಕ್ಕಿಲ್ಲ. ಇಕೋ, ಎದುರಿನಲ್ಲಿ ಕಾಣುತ್ತಿರುವ ಕಟ್ಟಡದಲ್ಲಿ ಪಿಶಾಚಿಗಳ ರೂಪಗಳನ್ನು ಧಾರಣ ಮಾಡಿಕೊಂಡು ಕ್ಲೇಶಗಳನ್ನು ಪಡುತ್ತಿರುವವರ ದ್ರವ್ಯವನ್ನು, ನಮ್ಮ ಪೂರ್ವಜರಲ್ಲೊಬ್ಬನು ಅವರನ್ನು ಅನ್ಯಾಯದಿಂದ ಘಾತಿಸಿ, ಅವರಿಂದ ಸುಲಿದುಕೊಂಡಿರಲೇಬೇಕು. ದ್ರವ್ಯದ ಹಂಬಲವಾದರೂ ಎಷ್ಟು? ಒಂದು ಕುಟುಂಬದವರ ಸಲುವಾಗಿ ಯಃಕಶ್ಚಿತನಾದ ಒಬ್ಬ ಮಾನವೀ ಪ್ರಾಣಿಯ ಕ್ಷಣಿಕ ಸುಖದ ಸಲುವಾಗಿ-ನೂರಾರು ಕುಟುಂಬದವರನ್ನು ದಾರಿದ್ರ್ಯದ ಪಂಕದಲ್ಲಿ ಕೊಳೆಹಾಕಿ, ಬಂಗಾರದ ಮೊಹರಗಳಿಂದ ತುಂಬಿದ ಇಷ್ಟು ಕೊಪ್ಪರಿಗೆಗಳನ್ನು ಒಂದು ಸ್ಥಳದಲ್ಲಿ ಕೂಡಿ ಹಾಕುವದರಿಂದ ಲಾಭವಾದರೂ ಯಾವದು? ತನ್ನ ಗೇಣು ಹೊಟ್ಟೆಗಾಗಿ, ಉಳಿದ ಸಾವಿರಾರು ಜನರನ್ನು ಉಪವಾಸದ ಪಥಕ್ಕೆ ಹಚ್ಚಿ ಅವರ ಪ್ರಾಣಗಳನ್ನು ಹಿಂಡಿ ಹಿಪ್ಪೆ ಮಾಡಿದವನ ವಂಶದಲ್ಲಿ ಮುಂದೆ ಔರಸ ಸಂತತಿಯು ಹುಟ್ಟದಿದ್ದರೆ, ಅದರಲ್ಲಿ ಯಾವ ಆಶ್ಚರ್ಯವು? ಅನೇಕರ ಗೋಣುಗಳನ್ನು ಮುರಿದು ಅವರ ದ್ರವ್ಯವನ್ನೆಲ್ಲ ನಾನೊಬ್ಬನೇ ನನ್ನ ಕೊಪ್ಪರಿಗೆಯ{{nop}}<noinclude></noinclude> exh9ar39dwbut01bmduxfp8h7dragnb ಪುಟ:ಬೆಳಗಿದ ದೀಪಗಳು.pdf/೧೫ 104 92418 322784 240132 2026-05-26T19:09:11Z Vikashegde 1258 /* Proofread */ 322784 proofread-page text/x-wiki <noinclude><pagequality level="3" user="Vikashegde" />{{rh|center=ನರಗುಂದದ ಸಾವಿತ್ರಿಬಾಯಿ|left=|right=೫}}</noinclude>ಬೆಂಕಿಹಚ್ಚಿದರು. ಸುಲಿಗೆಯೇ ಅದು, ಯಾರಿಗೆ ದೋಷವನ್ನಿಡುವಿರಿ ? ತನ್ನ ಅಚಾತುರ್ಯದ ಮೂಲಕವಾಗಿ ಪ್ರಜರಿಗೆ ಇಂಥ ವ್ಯಸನವನ್ನು ತಂದಿಟ್ಟ ಬಾಬಾಸಾಹೇಬನೇ ದೋಷಿಯು; ರಾಜಾ ಕಾಲಸ್ಯ ಕಾರಣಂ. {{gap}}ಸುಲಿಗೆಯ ಗೊಂದಲವು ಭರಕ್ಕೆ ಬಂದಿರುವಾಗ ಬಾಬಾಸಾಹೇಬನ ಮನೆಯ ಹೆಂಗಸರನ್ನು ಬ೦ದಿಗಳನ್ನಾಗಿ ಮಾಡಿ ತರಬೇಕೆಂದು ಸೇನಾಧಿಕಾರಿಯ ಅಪ್ಪಣೆಯಾಯಿತು. ಕೇಳುವದೇನು? ಹೂಲಿಯು ಅರಮನೆಯ ಕಡೆಗೆ ಮತ್ತೆ ನಡೆದಿತ್ತು. ಬಾಬಾಸಾಹೇಬನ ಪತ್ನಿಯಾದ ಸಾವಿತ್ರಿಬಾಯಿಯನ್ನೂ ಆವನ ಮಲತಾಯಿಯಾದ ಯಮುನಾಬಾಯಿಯನ್ನ ಹಿಡಿತಂದು ಕೊಟ್ಟವರಿಗೆ ಇನಾಮು ಸಿಕ್ಕುವದಿತ್ತಾದ ಕಾರಣ ಸೈನಿಕರು ಅರಮನೆಯನ್ನು ಬಹುಪರಿಯಾಗಿ ಶೋಧಿಸಿ ನೋಡಿದರು. ಆ ಹೆಣ್ಣುಮಕ್ಕಳು ಸಿಕ್ಕಲೇಇಲ್ಲ. ರಾಜನ ಕಾರಭಾರಿ ಪುರೋಹಿತ ಆಶ್ರಿತ ಮುಂತಾದವರ ಮನೆಗಳನ್ನು ಅವರು ಅಗಿದು ನೋಡಿದರು. ಆ ಸ್ತ್ರೀಯರೆಲ್ಲಿಯೂ ಸಿಕ್ಕಲಿಲ್ಲ. ಆ ರಾಜಸ್ತ್ರೀಯರನ್ನು ಹಿಡಿದು ಮಾನ ತೆಗೆದುಕೊಳ್ಳಬೇಕೆಂಬ ಆಗ್ರಹವು ಇಂಗ್ಲಿಶ್ ಅಧಿಕಾರಿಗಿಲ್ಲದಿದ್ದರೂ ಸ್ವಾಮಿದ್ರೋಹಿಗಳೂ ಉಂಡಮನೆಯ ಗಳಗಳನ್ನೆಣಿಸುವವರೂ ಆದ ನರಾಧಮರಾದ ಬಾಹ್ಮಣರಿಗೆ ಅ೦ಥ ಆಗ್ರಹವು ಅಧಿಕವಾಗಿತ್ತು. ಆದರೂ ಆ ಪಾಪಿಗಳ ಕೈಗೆ ಆ ಪುಣ್ಯಾತ್ಮೆಯರು ಸಿಕ್ಕಲೇ ಇಲ್ಲ. {{gap}}ಮಂಗಳವಾರ ಮಧ್ಯರಾತ್ರಿಯ ಸುಮಾರಕ್ಕೆ ಯಾರೆಣ? ಇಬ್ಬರು ಕಂಬಳಿಯ ಮುಸುಗಿಟ್ಟುಕೊಂಡು ನರಗುಂದದಿಂದ ದಕ್ಷಿಣಾಭಿಮುಖಿಗಳಾಗಿ ನಡೆದಿದ್ದರು. ಬೆಳದಿಂಗಳು ಮುಳುಗಿ ಹೋಗಿದೆ; ಜನರು ಹೋಗಿ ಬರುವ ದಾರಿಯಲ್ಲಿಯೂ ಕಾಣಲಿಲ್ಲದು. ಆ ಪ್ರಯಾಣಸ್ಥರು ಬಹು ಕಷ್ಟದೊಂದಿಗೆ ನಡೆದಿದ್ದರು. ಯಾರವರು? ಎಲ್ಲಿಗೆ ನಡೆದಿರುವರು? ಅವರ ಆಕೃತಿಗಳನ್ನು ನೋಡಿದರೆ ಅವರು ಹೆಣ್ಣು ಮಕ್ಕಳಾಗಿ ತೋರಿದರು. ಅಕೋ ಅಲ್ಲಿ ನೋಡಿರಿ; ಓರ್ವಳು ದೊಡ್ಡದೊಂದು ಮುಳ್ಳುಹೆಟ್ಟವನ್ನೆಡವಿ ಧಡಕ್ಕದೆ ಬಿದ್ದಳು. ಮತ್ತೋರ್ವಳು ಅವಳನ್ನು ಎತ್ತಿಕೊಳ್ಳಲು ಯತ್ನ ಮಾಡುತ್ತಿರುವಳು, ಬಿದ್ದವಳು ಸುವಾಸಿನಿಯಾದ ಸ್ತ್ರೀಯು. ಅವಳುಟ್ಟಿರುವ ಜರದ ದುಕೂಲದ{{nop}}<noinclude></noinclude> pr8e1prnx751vydeqot629ximutwnvr ಪುಟ:ಬೆಳಗಿದ ದೀಪಗಳು.pdf/೧೬೦ 104 92445 322771 240173 2026-05-26T18:17:23Z Vikashegde 1258 /* Proofread */ 322771 proofread-page text/x-wiki <noinclude><pagequality level="3" user="Vikashegde" />{{rh|center=ಸಂಪೂರ್ಣ ಕಥೆಗಳು|left=೧೫೦|right=}}</noinclude>ಗಿನ ಒಂದು ಪಂಚಮಾಂಶಭಾಗವು ಸ್ಪೇನದ ಅರಸನದೆಂದು ಬೇರೆ ತೆಗೆಯಲ್ಪಟ್ಟು, ಉಳಿದ ದ್ರವ್ಯವು ಪಿಝಾರೋನ ಕೈ ಕೆಳಗಿನವರಲ್ಲಿ ಹಂಚಲ್ಪಟ್ಟಿತು. ಈ ಪ್ರಕಾರ ಪ್ರಥಮಾರಂಭದಲ್ಲಿಯೇ ತನ್ನ ಸೈನಿಕರನ್ನು ಬೆಳ್ಳಿ ಬಂಗಾರದಿಂದ ಸಂತೋಷಪಡಿಸಿ ಪೇರೂ ದೇಶದ ಮೇಲೆ ಸಾಮ್ರಾಜ್ಯಸತ್ತೆಯನ್ನು ನಡೆಸುತ್ತಿದ್ದ ಇಂಕಾ ಎಂಬ ಹೆಸರಿನ ಕ್ಷತ್ರಿಯರ ಮುಖ್ಯ ರಾಜಧಾನಿಯಾಗಿದ್ದ ಕುಝ್ಕೋ ಪಟ್ಟಣದ ಮೇಲೆ ಹಲ್ಲಾ ಮಾಡುವ ವಿಚಾರವನ್ನು ಪಿಝಾರೋನು ಮಾಡಿದನು. ಈ ರಾಜಧಾನಿಯ ಪಟ್ಟಣವು ಅಂಡೀಜ ಪರ್ವತದ ಇಳಿವಾರದಲ್ಲಿ ಸಮುದ್ರ ದಂಡೆಯಿಂದ ದಕ್ಷಿಣಕ್ಕೆ ಒಳ್ಳೇ ಅಂತರದ ಮೇಲಿತ್ತು. ಟುಂಬೇಝದಿಂದ ೧೦೦ ಮೈಲುಗಳ ಅಂತರದ ಮೇಲಿರುವ ಒಂದು ಆರೋಗ್ಯಕರವಾದ ಪ್ರದೇಶದಲ್ಲಿ ತನ್ನ ಠಾಣ್ಯವನ್ನೂರಿ ಅವನು ಅದಕ್ಕೆ ಸಾನಮಿಗ್ಯೂಏಲ (ಸೇಂಟ ಮಾಯಕೇಲ) ಎಂಬ ಖ್ರಿಸ್ತಿ ಸಾಧು ಪುರುಷನ ಹೆಸರು ಕೊಟ್ಟನು. ಈ ಸ್ಥಳದಿಂದ ಸ ೧೩೫೨ ನೇ ಇಸ್ವಿಯ ನವ್ವ೦ಬರ ತಿ೦ಗಳದ ೨೪ನೇ ತಾರೀಖಿನ ದಿವಸ ಪಿಝಾರೋನು ತನ್ನ ಸಂಗಡ ೨೦೦ ಶಿಪಾಯವನ್ನು ತೆಗೆದುಕೊಂಡು ಇಂಕಾನ ಬಲಾಢವಾದ ಸಾಮ್ರಾಜ್ಯದ ಮೇಲೆ ದಂಡೆತ್ತಿ ಹೊರಟನು. {{gap}}ಪಿಝಾರೋನ ಈ ಮುಂದಿನ ವೃತ್ತಾಂತವನ್ನು ಕೊಡುವದರ ಮುಂಚಿತವಾಗಿ ಅವನು ಯಾವ ದೇಶದ ಮೇಲೆ ಸಾಗಿಹೋಗಬೇಕೆಂದು ಮಾಡಿದ್ದನೋ ಆ ದೇಶದ, ಅಲ್ಲಿಯ ಲೋಕಸ್ಥಿತಿಯ ಹಾಗೂ ಅಲ್ಲಿಯ ಸಾಮರ್ಥ್ಯದ ಇಲ್ಲವೆ ಬಲಾಬಲದ ದಿಗ್ದರ್ಶನವನ್ನು ಅಲ್ಪದರಲ್ಲಿ ಮಾಡುವದು ಅವಶ್ಯವಾಗಿದೆ. ಇಂಕಾನ ರಾಜ್ಯದೊಳಗಿನ ಜನರು ಅಜ್ಞಾನಿಗಳಾಗಿರದೆ, ಒಳಿತಾಗಿ ಸುಧಾರಿಸಿದವರಾಗಿದ್ದರು. ಅವರಿಗೆ ಲೇಖನ ಕಲೆಯು ಅವಗತವಿದ್ದಿಲ್ಲ. ಆದರೂ ಲಿಪಿಯ ಬದಲು ಬಣ್ಣದ ದಾರಗಳಿಗೆ ಗಂಟುಗಳನ್ನು ಹಾಕಿ, ಹಾಗೂ ಭಿನ್ನ ಭಿನ್ನ ಬಣ್ಣಗಳಿಂದ ಭಿನ್ನ ಭಿನ್ನ ಅರ್ಥಗಳ ಕಲ್ಪನೆಗಳನ್ನಾಗಲಿ, ಪದಾರ್ಥಗಳನ್ನಾಗಲಿ ತೋರಿಸತಕ್ಕದ್ದೆಂಬ ಪ್ರಕಾರದ ಪದ್ಧತಿಯನ್ನು ನಿಶ್ಚಯಿಸಿ, ಅವರು ಗಣಿತವನ್ನು ಮಾಡುತ್ತಿದ್ದರು. ಈ ಭಿನ್ನ ಭಿನ್ನ ಬಣ್ಣದದಾರಗಳ ಹೆಣಿಕೆಯಿಂದ ಅವರ ಪತ್ರವ್ಯವಹಾರವೂ ಪರಸ್ಪರರ ವಿಚಾರ ವಿನಿಮಯದ ವ್ಯವಹಾರವೂ ನಡೆಯುತ್ತಿದ್ದವು. ಈ ಪದ್ಧತಿಗೆ 'ಕ್ವಿಪ್ಸ'{{nop}}<noinclude></noinclude> 8m82l20rdnoh1b2hm1m0itgyg7cls65 322776 322771 2026-05-26T18:34:20Z Pragathi. BH 7585 /* Validated */ 322776 proofread-page text/x-wiki <noinclude><pagequality level="4" user="Pragathi. BH" />{{rh|center=ಸಂಪೂರ್ಣ ಕಥೆಗಳು|left=೧೫೦|right=}}</noinclude>ಗಿನ ಒಂದು ಪಂಚಮಾಂಶಭಾಗವು ಸ್ಪೇನದ ಅರಸನದೆಂದು ಬೇರೆ ತೆಗೆಯಲ್ಪಟ್ಟು, ಉಳಿದ ದ್ರವ್ಯವು ಪಿಝಾರೋನ ಕೈ ಕೆಳಗಿನವರಲ್ಲಿ ಹಂಚಲ್ಪಟ್ಟಿತು. ಈ ಪ್ರಕಾರ ಪ್ರಥಮಾರಂಭದಲ್ಲಿಯೇ ತನ್ನ ಸೈನಿಕರನ್ನು ಬೆಳ್ಳಿ ಬಂಗಾರದಿಂದ ಸಂತೋಷಪಡಿಸಿ ಪೇರೂ ದೇಶದ ಮೇಲೆ ಸಾಮ್ರಾಜ್ಯಸತ್ತೆಯನ್ನು ನಡೆಸುತ್ತಿದ್ದ ಇಂಕಾ ಎಂಬ ಹೆಸರಿನ ಕ್ಷತ್ರಿಯರ ಮುಖ್ಯ ರಾಜಧಾನಿಯಾಗಿದ್ದ ಕುಝ್ಕೋ ಪಟ್ಟಣದ ಮೇಲೆ ಹಲ್ಲಾ ಮಾಡುವ ವಿಚಾರವನ್ನು ಪಿಝಾರೋನು ಮಾಡಿದನು. ಈ ರಾಜಧಾನಿಯ ಪಟ್ಟಣವು ಅಂಡೀಜ ಪರ್ವತದ ಇಳಿವಾರದಲ್ಲಿ ಸಮುದ್ರ ದಂಡೆಯಿಂದ ದಕ್ಷಿಣಕ್ಕೆ ಒಳ್ಳೇ ಅಂತರದ ಮೇಲಿತ್ತು. ಟುಂಬೇಝದಿಂದ ೧೦೦ ಮೈಲುಗಳ ಅಂತರದ ಮೇಲಿರುವ ಒಂದು ಆರೋಗ್ಯಕರವಾದ ಪ್ರದೇಶದಲ್ಲಿ ತನ್ನ ಠಾಣ್ಯವನ್ನೂರಿ ಅವನು ಅದಕ್ಕೆ ಸಾನಮಿಗ್ಯೂಏಲ (ಸೇಂಟ ಮಾಯಕೇಲ) ಎಂಬ ಖ್ರಿಸ್ತಿ ಸಾಧು ಪುರುಷನ ಹೆಸರು ಕೊಟ್ಟನು. ಈ ಸ್ಥಳದಿಂದ ಸ ೧೩೫೨ ನೇ ಇಸ್ವಿಯ ನವ್ವ೦ಬರ ತಿ೦ಗಳದ ೨೪ನೇ ತಾರೀಖಿನ ದಿವಸ ಪಿಝಾರೋನು ತನ್ನ ಸಂಗಡ ೨೦೦ ಶಿಪಾಯವನ್ನು ತೆಗೆದುಕೊಂಡು ಇಂಕಾನ ಬಲಾಢವಾದ ಸಾಮ್ರಾಜ್ಯದ ಮೇಲೆ ದಂಡೆತ್ತಿ ಹೊರಟನು. {{gap}}ಪಿಝಾರೋನ ಈ ಮುಂದಿನ ವೃತ್ತಾಂತವನ್ನು ಕೊಡುವದರ ಮುಂಚಿತವಾಗಿ ಅವನು ಯಾವ ದೇಶದ ಮೇಲೆ ಸಾಗಿಹೋಗಬೇಕೆಂದು ಮಾಡಿದ್ದನೋ ಆ ದೇಶದ, ಅಲ್ಲಿಯ ಲೋಕಸ್ಥಿತಿಯ ಹಾಗೂ ಅಲ್ಲಿಯ ಸಾಮರ್ಥ್ಯದ ಇಲ್ಲವೆ ಬಲಾಬಲದ ದಿಗ್ದರ್ಶನವನ್ನು ಅಲ್ಪದರಲ್ಲಿ ಮಾಡುವದು ಅವಶ್ಯವಾಗಿದೆ. ಇಂಕಾನ ರಾಜ್ಯದೊಳಗಿನ ಜನರು ಅಜ್ಞಾನಿಗಳಾಗಿರದೆ, ಒಳಿತಾಗಿ ಸುಧಾರಿಸಿದವರಾಗಿದ್ದರು. ಅವರಿಗೆ ಲೇಖನ ಕಲೆಯು ಅವಗತವಿದ್ದಿಲ್ಲ. ಆದರೂ ಲಿಪಿಯ ಬದಲು ಬಣ್ಣದ ದಾರಗಳಿಗೆ ಗಂಟುಗಳನ್ನು ಹಾಕಿ, ಹಾಗೂ ಭಿನ್ನ ಭಿನ್ನ ಬಣ್ಣಗಳಿಂದ ಭಿನ್ನ ಭಿನ್ನ ಅರ್ಥಗಳ ಕಲ್ಪನೆಗಳನ್ನಾಗಲಿ, ಪದಾರ್ಥಗಳನ್ನಾಗಲಿ ತೋರಿಸತಕ್ಕದ್ದೆಂಬ ಪ್ರಕಾರದ ಪದ್ಧತಿಯನ್ನು ನಿಶ್ಚಯಿಸಿ, ಅವರು ಗಣಿತವನ್ನು ಮಾಡುತ್ತಿದ್ದರು. ಈ ಭಿನ್ನ ಭಿನ್ನ ಬಣ್ಣದದಾರಗಳ ಹೆಣಿಕೆಯಿಂದ ಅವರ ಪತ್ರವ್ಯವಹಾರವೂ ಪರಸ್ಪರರ ವಿಚಾರ ವಿನಿಮಯದ ವ್ಯವಹಾರವೂ ನಡೆಯುತ್ತಿದ್ದವು. ಈ ಪದ್ಧತಿಗೆ 'ಕ್ವಿಪ್ಸ'{{nop}}<noinclude></noinclude> lq5rpap4a2u3rzczue7w8f5gwks2ina 322777 322776 2026-05-26T18:35:19Z Pragathi. BH 7585 322777 proofread-page text/x-wiki <noinclude><pagequality level="4" user="Pragathi. BH" />{{rh|center=ಸಂಪೂರ್ಣ ಕಥೆಗಳು|left=೧೫೦|right=}}</noinclude>ಗಿನ ಒಂದು ಪಂಚಮಾಂಶಭಾಗವು ಸ್ಪೇನದ ಅರಸನದೆಂದು ಬೇರೆ ತೆಗೆಯಲ್ಪಟ್ಟು, ಉಳಿದ ದ್ರವ್ಯವು ಪಿಝಾರೋನ ಕೈ ಕೆಳಗಿನವರಲ್ಲಿ ಹಂಚಲ್ಪಟ್ಟಿತು. ಈ ಪ್ರಕಾರ ಪ್ರಥಮಾರಂಭದಲ್ಲಿಯೇ ತನ್ನ ಸೈನಿಕರನ್ನು ಬೆಳ್ಳಿ ಬಂಗಾರದಿಂದ ಸಂತೋಷಪಡಿಸಿ ಪೇರೂ ದೇಶದ ಮೇಲೆ ಸಾಮ್ರಾಜ್ಯಸತ್ತೆಯನ್ನು ನಡೆಸುತ್ತಿದ್ದ ಇಂಕಾ ಎಂಬ ಹೆಸರಿನ ಕ್ಷತ್ರಿಯರ ಮುಖ್ಯ ರಾಜಧಾನಿಯಾಗಿದ್ದ ಕುಝ್ಕೋ ಪಟ್ಟಣದ ಮೇಲೆ ಹಲ್ಲಾ ಮಾಡುವ ವಿಚಾರವನ್ನು ಪಿಝಾರೋನು ಮಾಡಿದನು. ಈ ರಾಜಧಾನಿಯ ಪಟ್ಟಣವು ಅಂಡೀಜ ಪರ್ವತದ ಇಳಿವಾರದಲ್ಲಿ ಸಮುದ್ರ ದಂಡೆಯಿಂದ ದಕ್ಷಿಣಕ್ಕೆ ಒಳ್ಳೇ ಅಂತರದ ಮೇಲಿತ್ತು. ಟುಂಬೇಝದಿಂದ ೧೦೦ ಮೈಲುಗಳ ಅಂತರದ ಮೇಲಿರುವ ಒಂದು ಆರೋಗ್ಯಕರವಾದ ಪ್ರದೇಶದಲ್ಲಿ ತನ್ನ ಠಾಣ್ಯವನ್ನೂರಿ ಅವನು ಅದಕ್ಕೆ ಸಾನಮಿಗ್ಯೂಏಲ (ಸೇಂಟ ಮಾಯಕೇಲ) ಎಂಬ ಖ್ರಿಸ್ತಿ ಸಾಧು ಪುರುಷನ ಹೆಸರು ಕೊಟ್ಟನು. ಈ ಸ್ಥಳದಿಂದ ಸ ೧೩೫೨ ನೇ ಇಸ್ವಿಯ ನವ್ವ೦ಬರ ತಿ೦ಗಳದ ೨೪ನೇ ತಾರೀಖಿನ ದಿವಸ ಪಿಝಾರೋನು ತನ್ನ ಸಂಗಡ ೨೦೦ ಶಿಪಾಯವನ್ನು ತೆಗೆದುಕೊಂಡು ಇಂಕಾನ ಬಲಾಢವಾದ ಸಾಮ್ರಾಜ್ಯದ ಮೇಲೆ ದಂಡೆತ್ತಿ ಹೊರಟನು. {{gap}}ಪಿಝಾರೋನ ಈ ಮುಂದಿನ ವೃತ್ತಾಂತವನ್ನು ಕೊಡುವದರ ಮುಂಚಿತವಾಗಿ ಅವನು ಯಾವ ದೇಶದ ಮೇಲೆ ಸಾಗಿಹೋಗಬೇಕೆಂದು ಮಾಡಿದ್ದನೋ ಆ ದೇಶದ, ಅಲ್ಲಿಯ ಲೋಕಸ್ಥಿತಿಯ ಹಾಗೂ ಅಲ್ಲಿಯ ಸಾಮರ್ಥ್ಯದ ಇಲ್ಲವೆ ಬಲಾಬಲದ ದಿಗ್ದರ್ಶನವನ್ನು ಅಲ್ಪದರಲ್ಲಿ ಮಾಡುವದು ಅವಶ್ಯವಾಗಿದೆ. ಇಂಕಾನ ರಾಜ್ಯದೊಳಗಿನ ಜನರು ಅಜ್ಞಾನಿಗಳಾಗಿರದೆ, ಒಳಿತಾಗಿ ಸುಧಾರಿಸಿದವರಾಗಿದ್ದರು. ಅವರಿಗೆ ಲೇಖನ ಕಲೆಯು ಅವಗತವಿದ್ದಿಲ್ಲ. ಆದರೂ ಲಿಪಿಯ ಬದಲು ಬಣ್ಣದ ದಾರಗಳಿಗೆ ಗಂಟುಗಳನ್ನು ಹಾಕಿ,ಹಾಗೂ ಭಿನ್ನ ಭಿನ್ನ ಬಣ್ಣಗಳಿಂದ ಭಿನ್ನ ಭಿನ್ನ ಅರ್ಥಗಳ ಕಲ್ಪನೆಗಳನ್ನಾಗಲಿ, ಪದಾರ್ಥಗಳನ್ನಾಗಲಿ ತೋರಿಸತಕ್ಕದ್ದೆಂಬ ಪ್ರಕಾರದ ಪದ್ಧತಿಯನ್ನು ನಿಶ್ಚಯಿಸಿ, ಅವರು ಗಣಿತವನ್ನು ಮಾಡುತ್ತಿದ್ದರು. ಈ ಭಿನ್ನ ಭಿನ್ನ ಬಣ್ಣದದಾರಗಳ ಹೆಣಿಕೆಯಿಂದ ಅವರ ಪತ್ರವ್ಯವಹಾರವೂ ಪರಸ್ಪರರ ವಿಚಾರ ವಿನಿಮಯದ ವ್ಯವಹಾರವೂ ನಡೆಯುತ್ತಿದ್ದವು. ಈ ಪದ್ಧತಿಗೆ 'ಕ್ವಿಪ್ಸ'{{nop}}<noinclude></noinclude> sroayfbbkagmiu5tt8tymk8q0pte4jj ಪುಟ:ಬೆಳಗಿದ ದೀಪಗಳು.pdf/೬೫ 104 92542 322783 240404 2026-05-26T19:01:06Z Vikashegde 1258 /* Proofread */ 322783 proofread-page text/x-wiki <noinclude><pagequality level="3" user="Vikashegde" />{{rh|center=ಶಿಕಂದರ ಬಾದಶಹ|left=|right=೫೫}}</noinclude>ಶಿಷ್ಯತ್ವವನ್ನು ವಹಿಸಿ ಅವನು ಶೋತೃಗಳ ಮನಸ್ಸುಗಳನ್ನು ತನ್ನೆಡೆ ಆಕರ್ಷಿಸಿಕೊಳ್ಳುವಂಥ ವಾಕ್ಚಾಪಲ್ಯವನ್ನು ಗಳಿಸಿಕೊಂಡನು. ವಿನಯಾನ್ವಿತನೂ, ಸುಂದರನೂ, ಪ್ರಸನ್ನ ವದನನೂ ಆಗಿದ್ದ ಫಿಲ್ಲಿಪನ ಬಯಕೆಯನ್ನು ಪೂರೈಸದಿದ್ದ ಜನರೇ ಇರಲಿಲ್ಲ. ಸಾಧುವಾಗಿ ತೋರುವ ತನ್ನ ಬಹಿರಂಗದ ಆಡಂಬರಕ್ಕೆ ಬೆನ್ನಾಸರವೆಂದು ನೆನೆದು ಅವನು ಪ್ರಸಂಗ ಬಂದಾಗ ಕುಟಲನೀತಿಯ ಆಶ್ರಯವನ್ನಾದರೂ ಮಾಡಿಕೊಳ್ಳುವದರಲ್ಲಿ ಹಿಂದು ಮುಂದು ನೋಡಿದವನಲ್ಲ. ''ಪರಾತಿ ಸಂಧಾನಮಧೀಯತೇ ಯೈರ್ವಿಧ್ಯೇತಿ ತೇ ಸಂತು ಕಿಲಾಪ್ತತ್ರಾವಂ'' ಎಂದು ನಿಂದಾವ್ಯಂಜಕವಾದ ನುಡಿಗಳನ್ನಾಡುವವರಾದ ನಾವು ಆರ್ಯಜನರು ಕೆಟ್ಟುಹೋದೆವು. ಫಿಲ್ಲಿಪರಾಜನು ಮುಂದಕ್ಕಾದವನು ಆಗಿಹೋಗಿ ಅಜರಾಮರವಾದ ಕೀರ್ತಿಯನ್ನು ಪಡೆದನು. {{gap}}ಹೀಗೆ ವಿದ್ಯಾಸಂಪನ್ನನಾದ ಫಿಲ್ಲಿಪ ರಾಜಕುಮಾರ ಥೀಬ್ಸದಿಂದ ಬಿಡುಗಡೆಯನ್ನು ಹೊಂದಿ ತನ್ನ ದೇಶವಾದ ಮಾಸಿಡೊನಿಯಾಕ್ಕೆ ಬರುವಷ್ಟರಲ್ಲಿ ತೆರವಾಗಿದ್ದ ಸಿಂಹಾಸನವು ಅವನ ಮಾರ್ಗಪ್ರತೀಕ್ಷೆ ಮಾಡುತ್ತಲಿತ್ತು. ಅವನ ಅಣ್ಣನಾದ ಪರ್ದಿಕರಾಜನು ಪರರಾಯರೊಡನೆ ಯುದ್ಧ ಮಾಡುವಾಗ ಮಡಿದುಹೋಗಿದ್ದನು. ಪ್ರಜರೆಲ್ಲರೂ ಫಿಲ್ಲಿಪನನ್ನು ಆದರದಿಂದ ಸಿ೦ಹಾಸನದ ಮೇಲೆ ಕುಳ್ಳಿರಿಸಿದರು. ಅನಲಸನಾದ ಆ ರಾಜನು ತಡಮಾಡದೆ ತನ್ನ ರಾಜ್ಯದಲ್ಲಿ ಸುವ್ಯವಸ್ಥೆಯನ್ನುಂಟುಮಾಡಿ ಪ್ರಜರಲ್ಲಿ ವಿದ್ಯಾಪ್ರಸಾರವಾಗುವಂತೆ ಮಾಡಿದನು. ದೊಡ್ಡದೊಂದು ಸೇನೆಯನ್ನು ಕೂಡಿಸಿ ಅದಕ್ಕೆ ಯುದ್ಧ ಕಲೆಯನ್ನು ಚೆನ್ನಾಗಿ ಕಲಿಸಿದನು. ಚುಚ್ಚು ಗೋಲಿನ (ಬರ್ಚಿಯ) ಭಟರದೊಂದು ಚಮತ್ಕಾರವಾದ ವ್ಯೂಹವನ್ನು (ಫ್ಯಾಲಾಂಕ್ಸ) ಇವನೇ ನಿರ್ಮಿಸಿದವನು. ಫಿಲ್ಲಿಪನ ಕೈ ಕೆಳಗೆ ವಿನೂತನವಾದ ಯುದ್ಧ ಕಲೆಯನ್ನು ಕಲಿತುಕೊಂಡ ಅವನ ಸೇನೆಯು ಸಮಗ್ರವಾದ ಗ್ರೀಸದೇಶಕ್ಕೆ ಮೀರಿದ್ದಾಯಿತು. ಮಾಸಿಡೋನಿಯಾದ ಪೂರ್ವಕ್ಕಿದ್ದ ಫ್ರೇಸ (ಬಲ್ಗೇರಿಯಾದ ಪೂರ್ವಭಾಗ+ ಈಗಿನ ಯುರೋಪದ ತುರ್ಕಸ್ಥಾನ) ದೇಶವನ್ನೂ ಪಶ್ಚಿಮಕ್ಕಿದ್ದ ಇಲ್ಲೀರಿಯಾ ದೇಶವನ್ನೂ ದಕ್ಷಿಣಕ್ಕೆ ಥೀಬ್ಸ, ಅಥೆನ್ಸ ಮುಂತಾದ ಸಂಸ್ಥಾನಗಳನ್ನೂ ಫಿಲ್ಲಿಪನು ಹೊಡೆದು ಕೆಡವಿ ಮಣಿಸಿದನು. ಕ್ಷುದ್ರವಾದದ್ದೆನ್ನಿಸಿಕೊಳ್ಳುತ್ತಿದ್ದ ಮಾಸಿಡೋನಿಯಾ ಸಂಸ್ಥಾನವು ಫಿಲ್ಲಿಪನ ಆಳಿಕೆಯಲ್ಲಿ{{nop}}<noinclude></noinclude> k8g8jt6zp72j0fjye3qv5ol9n3m2c0p 322787 322783 2026-05-27T00:03:51Z Shreesha Sharma 7840 /* Validated */ 322787 proofread-page text/x-wiki <noinclude><pagequality level="4" user="Shreesha Sharma" />{{rh|center=ಶಿಕಂದರ ಬಾದಶಹ|left=|right=೫೫}}</noinclude>ಶಿಷ್ಯತ್ವವನ್ನು ವಹಿಸಿ ಅವನು ಶೋತೃಗಳ ಮನಸ್ಸುಗಳನ್ನು ತನ್ನೆಡೆ ಆಕರ್ಷಿಸಿಕೊಳ್ಳುವಂಥ ವಾಕ್ಚಾಪಲ್ಯವನ್ನು ಗಳಿಸಿಕೊಂಡನು. ವಿನಯಾನ್ವಿತನೂ, ಸುಂದರನೂ, ಪ್ರಸನ್ನ ವದನನೂ ಆಗಿದ್ದ ಫಿಲ್ಲಿಪನ ಬಯಕೆಯನ್ನು ಪೂರೈಸದಿದ್ದ ಜನರೇ ಇರಲಿಲ್ಲ. ಸಾಧುವಾಗಿ ತೋರುವ ತನ್ನ ಬಹಿರಂಗದ ಆಡಂಬರಕ್ಕೆ ಬೆನ್ನಾಸರವೆಂದು ನೆನೆದು ಅವನು ಪ್ರಸಂಗ ಬಂದಾಗ ಕುಟಲನೀತಿಯ ಆಶ್ರಯವನ್ನಾದರೂ ಮಾಡಿಕೊಳ್ಳುವದರಲ್ಲಿ ಹಿಂದು ಮುಂದು ನೋಡಿದವನಲ್ಲ. ''ಪರಾತಿ ಸಂಧಾನಮಧೀಯತೇ ಯೈರ್ವಿಧ್ಯೇತಿ ತೇ ಸಂತು ಕಿಲಾಪ್ತತ್ರಾವಂ'' ಎಂದು ನಿಂದಾವ್ಯಂಜಕವಾದ ನುಡಿಗಳನ್ನಾಡುವವರಾದ ನಾವು ಆರ್ಯಜನರು ಕೆಟ್ಟುಹೋದೆವು. ಫಿಲ್ಲಿಪರಾಜನು ಮುಂದಕ್ಕಾದವನು ಆಗಿಹೋಗಿ ಅಜರಾಮರವಾದ ಕೀರ್ತಿಯನ್ನು ಪಡೆದನು. {{gap}}ಹೀಗೆ ವಿದ್ಯಾಸಂಪನ್ನನಾದ ಫಿಲ್ಲಿಪ ರಾಜಕುಮಾರ ಥೀಬ್ಸದಿಂದ ಬಿಡುಗಡೆಯನ್ನು ಹೊಂದಿ ತನ್ನ ದೇಶವಾದ ಮಾಸಿಡೊನಿಯಾಕ್ಕೆ ಬರುವಷ್ಟರಲ್ಲಿ ತೆರವಾಗಿದ್ದ ಸಿಂಹಾಸನವು ಅವನ ಮಾರ್ಗಪ್ರತೀಕ್ಷೆ ಮಾಡುತ್ತಲಿತ್ತು. ಅವನ ಅಣ್ಣನಾದ ಪರ್ದಿಕರಾಜನು ಪರರಾಯರೊಡನೆ ಯುದ್ಧ ಮಾಡುವಾಗ ಮಡಿದುಹೋಗಿದ್ದನು. ಪ್ರಜರೆಲ್ಲರೂ ಫಿಲ್ಲಿಪನನ್ನು ಆದರದಿಂದ ಸಿ೦ಹಾಸನದ ಮೇಲೆ ಕುಳ್ಳಿರಿಸಿದರು. ಅನಲಸನಾದ ಆ ರಾಜನು ತಡಮಾಡದೆ ತನ್ನ ರಾಜ್ಯದಲ್ಲಿ ಸುವ್ಯವಸ್ಥೆಯನ್ನುಂಟುಮಾಡಿ ಪ್ರಜರಲ್ಲಿ ವಿದ್ಯಾಪ್ರಸಾರವಾಗುವಂತೆ ಮಾಡಿದನು. ದೊಡ್ಡದೊಂದು ಸೇನೆಯನ್ನು ಕೂಡಿಸಿ ಅದಕ್ಕೆ ಯುದ್ಧ ಕಲೆಯನ್ನು ಚೆನ್ನಾಗಿ ಕಲಿಸಿದನು. ಚುಚ್ಚು ಗೋಲಿನ (ಬರ್ಚಿಯ) ಭಟರದೊಂದು ಚಮತ್ಕಾರವಾದ ವ್ಯೂಹವನ್ನು (ಫ್ಯಾಲಾಂಕ್ಸ) ಇವನೇ ನಿರ್ಮಿಸಿದವನು. ಫಿಲ್ಲಿಪನ ಕೈ ಕೆಳಗೆ ವಿನೂತನವಾದ ಯುದ್ಧ ಕಲೆಯನ್ನು ಕಲಿತುಕೊಂಡ ಅವನ ಸೇನೆಯು ಸಮಗ್ರವಾದ ಗ್ರೀಸದೇಶಕ್ಕೆ ಮೀರಿದ್ದಾಯಿತು. ಮಾಸಿಡೋನಿಯಾದ ಪೂರ್ವಕ್ಕಿದ್ದ ಫ್ರೇಸ (ಬಲ್ಗೇರಿಯಾದ ಪೂರ್ವಭಾಗ+ ಈಗಿನ ಯುರೋಪದ ತುರ್ಕಸ್ಥಾನ) ದೇಶವನ್ನೂ ಪಶ್ಚಿಮಕ್ಕಿದ್ದ ಇಲ್ಲೀರಿಯಾ ದೇಶವನ್ನೂ ದಕ್ಷಿಣಕ್ಕೆ ಥೀಬ್ಸ, ಅಥೆನ್ಸ ಮುಂತಾದ ಸಂಸ್ಥಾನಗಳನ್ನೂ ಫಿಲ್ಲಿಪನು ಹೊಡೆದು ಕೆಡವಿ ಮಣಿಸಿದನು. ಕ್ಷುದ್ರವಾದದ್ದೆನ್ನಿಸಿಕೊಳ್ಳುತ್ತಿದ್ದ ಮಾಸಿಡೋನಿಯಾ ಸಂಸ್ಥಾನವು ಫಿಲ್ಲಿಪನ ಆಳಿಕೆಯಲ್ಲಿ{{nop}}<noinclude></noinclude> mg690wqp6dir4xcxvtpu6zp41n6otfs ಪುಟ:ಬೆಳಗಿದ ದೀಪಗಳು.pdf/೯೨ 104 92544 322782 240406 2026-05-26T18:50:31Z Vikashegde 1258 /* Proofread */ 322782 proofread-page text/x-wiki <noinclude><pagequality level="3" user="Vikashegde" /></noinclude><big>{{center|'''ಮಹಾರಾಣಾ ಪ್ರತಾಪಸಿಂಹ'''}}</big> {{Css image crop |Image = ಬೆಳಗಿದ ದೀಪಗಳು.pdf |Page = 92 |bSize = 365 |cWidth = 400 |cHeight = 120 |oTop = 10 |oLeft = 3 |Location = center |Description = }} {{gap}}ಅಗ್ನಿಯ ಜ್ವಾಲೆಯನ್ನು ಬಲಾತ್ಕಾರದಿಂದ ಅಧೋಮುಖವಾಗಿ ಮಾಡಬೇಕೆಂದು ಎಷ್ಟು ಮಾಡಿದರೂ ಅದು ಉದಮ್ಮುಖವಾಗಿಯೇ ಪ್ರಜ್ವಲಿಸುವದು; ಅದರಂತೆಯೇ ಧೈರ್ಯಶಾಲಿಯಾದ ಪುರುಷನು ಅನೇಕ ಸಂಕಟಗಳಿಂದ ಜರ್ಜರಿತನಾದರೂ ಅವನು ಅವುಗಳಿಗೆ ಈಡಾಗದೆ, ತನ್ನ ಶೀಲವನ್ನು ಕಾಯ್ದುಕೊಳ್ಳುತ್ತಾನೆಂಬ ಅಭಿಪ್ರಾಯವು ಮೇಲಿನ ಪದ್ಯದಲ್ಲಿ ವ್ಯಕ್ತವಾಗಿದೆ. ಈ ಪದ್ಯಾರ್ಥದ ಸತ್ಯತೆಯನ್ನು ತೋರಿಸುವ ಅತ್ಯಂತ ಉಜ್ವಲಿತವಾದ ಉದಾಹರಣವೆಂದರೆ, ಮೇವಾಡದೇಶದ ರಾಣಾ ಪ್ರತಾಪಸಿಂಹನ ಚರಿತ್ರವು. ಸ್ವದೇಶಾಭಿಮಾನದ ಸಂಚಾರವು ಯಾವ ಬಗೆಯದಾಗಿರುತ್ತದೆ, ಪ್ರಬಲರಾದ ಶತ್ರುಗಳಿಂದ ದುರ್ದೈವದಿಂದಲೂ ಸುತ್ತುಗಟ್ಟಲ್ಪಟ್ಟರೂ ಅವುಗಳನ್ನು ಗಣನೆಗೆ ತಾರದೆ, ಅವುಗಳ ಪೇಚಿನೊಳಗಿಂದ ನಿಶ್ಚಲವಾದ ಧೈರ್ಯದಿಂದಲೂ ದೃಢನಿಶ್ಚಯದಿಂದಲೂ ಪರಾಕ್ರಮಶಾಲಿಯಾದ ಪುರುಷನು ಹೇಗೆ ಪಾರಾಗುತ್ತಾನೆ, ನಾನಾವಿಧವಾದ ವಿಪತ್ತುಗಳೂ ಸಂಕಟಗಳೂ ಬೆನ್ನಟ್ಟಿದರೂ ಅವುಗಳಿಗೆ ಅಭಿಮುಖವಾಗಿ ನಿಂತು ಧೀರೋದಾತ್ತನಾದ ಪುರುಷನು ತನ್ನ ವ್ರತವನ್ನು ಹೇಗೆ ಪರಿಪಾಲಿಸುತ್ತಾನೆ ಮುಂತಾದ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಬೇಕಾಗಿದ್ದರೆ ಮೇವಾಡದ ರಾಣಾ ಪ್ರತಾಪಸಿಂಹನ ಚರಿತ್ರವನ್ನು ಅವಲೋಕಿಸಬೇಕು. {{gap}}ಪ್ರತಾಪಸಿಂಹನು ಇ. ಸ. ೧೫೭೨ನೇ ಇಸ್ವಿಯಲ್ಲಿ ಮೇವಾಡ ದೇಶದ ಪಟ್ಟದ ಮೇಲೆ ಕುಳಿತನು. ಆದರೆ 'ಗಡೋಮೆ ಗಡ ಚಿತೋಡಗಡ' ಎಂದು ರಜಪೂತಸ್ಥಾನದಲ್ಲಿ ಪ್ರಸಿದ್ಧಿಯನ್ನು ಹೊಂದಿದ ಹಾಗೂ ರಜಪೂತರ ಅಭಿಮಾನಕ್ಕೆ ಅನೇಕ ಸಂಗತಿಗಳಿಂದ ಕಾರಣವಾಗಿದ್ದ ಚಿತೋಡಗಡದ ಪಟ್ಟವನ್ನು ಅವನು ಅಲಂಕರಿಸಲಿಲ್ಲ. ಪ್ರತಾಪಸಿಂಹನ ತಂದೆಯಾದ ಉದೇಸಿಂಗನು-ಯಾವವನ್ನು ಸ್ವಾಮಿಭಕ್ತಳಾದ ಪನ್ನಾ ತಾಯಿಯು ತನ್ನ {{nop}}<noinclude></noinclude> 9isiam4ui00c3mbedqp2x8ufusmtgzi 322786 322782 2026-05-27T00:03:32Z Shreesha Sharma 7840 /* Validated */ 322786 proofread-page text/x-wiki <noinclude><pagequality level="4" user="Shreesha Sharma" /></noinclude><big>{{center|'''ಮಹಾರಾಣಾ ಪ್ರತಾಪಸಿಂಹ'''}}</big> {{Css image crop |Image = ಬೆಳಗಿದ ದೀಪಗಳು.pdf |Page = 92 |bSize = 365 |cWidth = 400 |cHeight = 120 |oTop = 10 |oLeft = 3 |Location = center |Description = }} {{gap}}ಅಗ್ನಿಯ ಜ್ವಾಲೆಯನ್ನು ಬಲಾತ್ಕಾರದಿಂದ ಅಧೋಮುಖವಾಗಿ ಮಾಡಬೇಕೆಂದು ಎಷ್ಟು ಮಾಡಿದರೂ ಅದು ಉದಮ್ಮುಖವಾಗಿಯೇ ಪ್ರಜ್ವಲಿಸುವದು; ಅದರಂತೆಯೇ ಧೈರ್ಯಶಾಲಿಯಾದ ಪುರುಷನು ಅನೇಕ ಸಂಕಟಗಳಿಂದ ಜರ್ಜರಿತನಾದರೂ ಅವನು ಅವುಗಳಿಗೆ ಈಡಾಗದೆ, ತನ್ನ ಶೀಲವನ್ನು ಕಾಯ್ದುಕೊಳ್ಳುತ್ತಾನೆಂಬ ಅಭಿಪ್ರಾಯವು ಮೇಲಿನ ಪದ್ಯದಲ್ಲಿ ವ್ಯಕ್ತವಾಗಿದೆ. ಈ ಪದ್ಯಾರ್ಥದ ಸತ್ಯತೆಯನ್ನು ತೋರಿಸುವ ಅತ್ಯಂತ ಉಜ್ವಲಿತವಾದ ಉದಾಹರಣವೆಂದರೆ, ಮೇವಾಡದೇಶದ ರಾಣಾ ಪ್ರತಾಪಸಿಂಹನ ಚರಿತ್ರವು. ಸ್ವದೇಶಾಭಿಮಾನದ ಸಂಚಾರವು ಯಾವ ಬಗೆಯದಾಗಿರುತ್ತದೆ, ಪ್ರಬಲರಾದ ಶತ್ರುಗಳಿಂದ ದುರ್ದೈವದಿಂದಲೂ ಸುತ್ತುಗಟ್ಟಲ್ಪಟ್ಟರೂ ಅವುಗಳನ್ನು ಗಣನೆಗೆ ತಾರದೆ, ಅವುಗಳ ಪೇಚಿನೊಳಗಿಂದ ನಿಶ್ಚಲವಾದ ಧೈರ್ಯದಿಂದಲೂ ದೃಢನಿಶ್ಚಯದಿಂದಲೂ ಪರಾಕ್ರಮಶಾಲಿಯಾದ ಪುರುಷನು ಹೇಗೆ ಪಾರಾಗುತ್ತಾನೆ, ನಾನಾವಿಧವಾದ ವಿಪತ್ತುಗಳೂ ಸಂಕಟಗಳೂ ಬೆನ್ನಟ್ಟಿದರೂ ಅವುಗಳಿಗೆ ಅಭಿಮುಖವಾಗಿ ನಿಂತು ಧೀರೋದಾತ್ತನಾದ ಪುರುಷನು ತನ್ನ ವ್ರತವನ್ನು ಹೇಗೆ ಪರಿಪಾಲಿಸುತ್ತಾನೆ ಮುಂತಾದ ಅನೇಕ ಸಂಗತಿಗಳನ್ನು ತಿಳಿದುಕೊಳ್ಳಬೇಕಾಗಿದ್ದರೆ ಮೇವಾಡದ ರಾಣಾ ಪ್ರತಾಪಸಿಂಹನ ಚರಿತ್ರವನ್ನು ಅವಲೋಕಿಸಬೇಕು. {{gap}}ಪ್ರತಾಪಸಿಂಹನು ಇ. ಸ. ೧೫೭೨ನೇ ಇಸ್ವಿಯಲ್ಲಿ ಮೇವಾಡ ದೇಶದ ಪಟ್ಟದ ಮೇಲೆ ಕುಳಿತನು. ಆದರೆ 'ಗಡೋಮೆ ಗಡ ಚಿತೋಡಗಡ' ಎಂದು ರಜಪೂತಸ್ಥಾನದಲ್ಲಿ ಪ್ರಸಿದ್ಧಿಯನ್ನು ಹೊಂದಿದ ಹಾಗೂ ರಜಪೂತರ ಅಭಿಮಾನಕ್ಕೆ ಅನೇಕ ಸಂಗತಿಗಳಿಂದ ಕಾರಣವಾಗಿದ್ದ ಚಿತೋಡಗಡದ ಪಟ್ಟವನ್ನು ಅವನು ಅಲಂಕರಿಸಲಿಲ್ಲ. ಪ್ರತಾಪಸಿಂಹನ ತಂದೆಯಾದ ಉದೇಸಿಂಗನು-ಯಾವವನ್ನು ಸ್ವಾಮಿಭಕ್ತಳಾದ ಪನ್ನಾ ತಾಯಿಯು ತನ್ನ {{nop}}<noinclude></noinclude> fbm33j8ekf6tfu2sdd3335nd20qj27f ಪುಟ:ಯಕ್ಷಗಾನ ಮಕರಂದ.pdf/೨೭೩ 104 100194 322653 319729 2026-05-26T13:35:57Z Shreesha Sharma 7840 /* Proofread */ 322653 proofread-page text/x-wiki <noinclude><pagequality level="3" user="Shreesha Sharma" />{{Right|23}}</noinclude>ಅನೇನ ಲಕ್ಷ್ಯತೇಯಸ್ಮಾತ್ ಪ್ರಯೋಗ: ಕರ್ಮ ಚೈವಹಿ | ತಸ್ಮಾಲಕ್ಷಣಮೇತದ್ವಿ ನಾಟ್ಯೇ ಸಮ್ಯಕ್ ಯೋಜಿತಂ | ಅನಾಚಾರ್ಯೋದಿತಾಯೇಚ ಯೇಚ ಶಾಸ್ತ್ರ ಬಹಿಃಸೃತಾಃ | ಬಾಹ್ಯಂ ತೇ ತು ಪ್ರಯೋಕ್ಷಂತೆ ಕ್ರಿಯಾ ಕ (ಮಾತ್ರೆ:) ಪ್ರಯೋಜಿತಾ: || {{gap}}ತಾತ್ಪರ್ಯವೇನೆಂದರೆ, ಶಾಸ್ತ್ರ ನಿರ್ದಿಷ್ಟವಾದ ಲಕ್ಷಣಕ್ಕೆ ಸಂಪೂರ್ಣ ಒಳ ಪಟ್ಟ ನಾಟ್ಯ ಪ್ರಯೋಗವು 'ಆಭ್ಯಂತರ' ವೆಂದ, ನಾಟ್ಯಾಚಾರನ ನಿರ್ದೇಶವಿಲ್ಲದೆ ಆಡಲ್ಪಡುವಂಥವು ಮತ್ತು ಶಾಸ್ತ್ರದಲ್ಲಿ ಹೇಳುವ ಲಕ್ಷಣಕ್ಕಿಂತ ಹೊರಗೆ ಕಾಲಿಟ್ಟ ಪ್ರಯೋಗಗಳು 'ಬಾಹ್ಯ ಪ್ರಯೋಗ'ಗಳೆಂದೂ ಕರೆಯಲ್ಪಡುತ್ತವೆ; ಇಲ್ಲಿ, ಎಂದರೆ ಸಾಮಾನ್ಯಾಭಿನಯ'ವೆಂಬ ಈ ಅಧ್ಯಾಯದಲ್ಲಿ (ಹಿಂದಿನ ಅಧ್ಯಾಯಗಳಲ್ಲಿ ವಿಸ್ತಾರ ವಾಗಿ ನಿರೂಪಿಸಿದ್ದನ್ನು ಸರ್ವಂಗ್ರಾಹಕವಾಗಿ ಕ್ರೋಡೀಕರಿಸಿ ಅತಿ ಮುಖ್ಯವಾ ಎಂದು) ನಿರ್ದಿಷ್ಟ ಪಡಿಸಿದ ಏನೊಂದು ಲಕ್ಷಣಗಳಿವೆಯೋ ಆ ಲಕ್ಷಣಗಳೇ ಪ್ರಯೋಗದ ಅಭ್ಯಂತರ ಬಾಹ್ಯ ಪರಿಚ್ಛೇದಕ್ಕೆ ಪ್ರಮಾಣವಾಗಿವೆ; ಹೊರವಲಯ ದಲ್ಲೇ ಪ್ರಯೋಗಿಸಲ್ಪಡುವ 'ಶಾಸ್ತ್ರ ಬಹಿಃಸೃತ'ವಾದ ಬಾಹ್ಯ ಪ್ರಯೋಗಗಳ ಕೃತಿಗಳೂ ನಾಟಕಾದಿ ರೂಪಕ ಲಕ್ಷಣಗಳಿಂದ ಬಹಿಃಸೃತವಾದುವು ಹಾಗೂ ಕೆಳ ಮಟ್ಟದವು ಆಗಿರುತ್ತವೆ, ಎಂದಾಗಿದೆ. [ಕ್ರಿಯಾ: ಎಂದರೆ ನಾಟಕಾದಿ ದೃಶ್ಯಕಾವ್ಯಗಳು ಎಂದರ್ಥ. 'ಕಲ್ಪ' ಎಂದರೆ ಸ್ವಲ್ಪ ಕೀಳ್ಕೊಟ್ಟದ್ದು ಎಂದರ್ಥ. ಕಲ್ಪ = A termination added to nouns and adjectives in the sense of 'a little less than, almost like, nearly equal to' (denoting similarity with a degree of inferiority) - ಆಪಟೆ ನಿಘಂಟು] ಇಂತಹ ಕೃತಿಗಳೇ ಪ್ರಾಯಶಃ, ಉತ್ತರ ಕಾಲದ ಲಕ್ಷಣ ಗ್ರಂಥಗಳಲ್ಲಿ ಉಪರೂಪಕಗಳೆಂದು ಕರೆಯಲ್ಪಟ್ಟ ಗೇಯ ಕಾವ್ಯಗಳೆಂದು ನ್ಯಾಯವಾಗಿ ಊಹಿಸಬಹುದು. ಭರತನು ಉಪರೂಪಕಗಳನ್ನು ಹೇಳಲಿಲ್ಲವಾದರೂ 'ದಶರೂಪಕ ಲಕ್ಷಣ'ದ ಕೊನೆಗೆ, ಅಲ್ಲಿ ಹೇಳಲ್ಪಡದವು ಬೇರೆ ಇರುತ್ತವೆ ಎಂಬ ಸೂಚನೆ ಕಂಡುಬರುತ್ತದೆ. ಶಾಸ್ತ್ರೀಯ ಪ್ರಯೋಗಗಳೆನ್ನುವ ಕೂಚಿಪುಡಿ' 'ಮೇಳತ್ತೂರು' ದಕ್ಷಿಣ ಕನ್ನಡ (ತೆಂಕ ಮಟ್ಟು') 'ತಂಜಾವೂರು' ಇತ್ಯಾದಿ ಯಕ್ಷಗಾನ ಪ್ರಯೋಗಗಳಾದರೂ ಕೇರ ಳದ 'ಕಥಕಳಿ'ಯಾದರೂ ನಾಟ್ಯಶಾಕ್ತ ಲಕ್ಷಣಕ್ಕೆ ಸಂಪೂರ್ಣ ಒಳಪಟ್ಟಿರುವು ದಿಲ್ಲ. ದೇಶೀ (ಶಾಸ್ತ್ರೀಯ) ವಿಧಾನಗಳು ಕೆಲಮಟ್ಟಿಗೆ ಅವುಗಳಲ್ಲಿ ಸೇರಿಕೊಂಡಿವೆ. ಆದುದರಿಂದ ಇವೆಲ್ಲ ಸಂಪ್ರದಾಯಗಳೂ 'ಬಾಹ್ಯಪ್ರಯೋಗ' ಪರಂಪರೆಯಲ್ಲಿ ನಡೆದು ಬಂದಿರಬೇಕು. ಆದುದರಿಂದಲೇ ಬಯಲಾಟ, ವೀಥಿನಾಟಕ, ತೆರುಕ್ಕೂತ್ತು, ಪುರಕ್ಕೊತ್ತು ಎಂಬ ಹೆಸರಾಗಲು ಕಾರಣವೆಂದೆಣಿಸಬಹುದು - – ಶಾಸ್ತ್ರ ಬಹಿಃಸೃತ ಎಂಬ ಅರ್ಥದಲ್ಲಿ. ಅಂತಹ ಬಾಹ್ಯಪ್ರಯೋಗಗಳು ಪ್ರೇಕ್ಷಾಗೃಹಗಳಿಲ್ಲದೆ, ಬಾಹ್ಯ<noinclude></noinclude> ki4qycnlyaqn3kqxbszrkxfmld0lelb 322662 322653 2026-05-26T13:44:28Z Shreelatha.Halemane 7642 /* Validated */ 322662 proofread-page text/x-wiki <noinclude><pagequality level="4" user="Shreelatha.Halemane" />{{Right|23}}</noinclude>ಅನೇನ ಲಕ್ಷ್ಯತೇಯಸ್ಮಾತ್ ಪ್ರಯೋಗ: ಕರ್ಮ ಚೈವಹಿ | ತಸ್ಮಾಲಕ್ಷಣಮೇತದ್ವಿ ನಾಟ್ಯೇ ಸಮ್ಯಕ್ ಯೋಜಿತಂ | ಅನಾಚಾರ್ಯೋದಿತಾಯೇಚ ಯೇಚ ಶಾಸ್ತ್ರ ಬಹಿಃಸೃತಾಃ | ಬಾಹ್ಯಂ ತೇ ತು ಪ್ರಯೋಕ್ಷಂತೆ ಕ್ರಿಯಾ ಕ (ಮಾತ್ರೆ:) ಪ್ರಯೋಜಿತಾ: || {{gap}}ತಾತ್ಪರ್ಯವೇನೆಂದರೆ, ಶಾಸ್ತ್ರ ನಿರ್ದಿಷ್ಟವಾದ ಲಕ್ಷಣಕ್ಕೆ ಸಂಪೂರ್ಣ ಒಳ ಪಟ್ಟ ನಾಟ್ಯ ಪ್ರಯೋಗವು 'ಆಭ್ಯಂತರ' ವೆಂದ, ನಾಟ್ಯಾಚಾರನ ನಿರ್ದೇಶವಿಲ್ಲದೆ ಆಡಲ್ಪಡುವಂಥವು ಮತ್ತು ಶಾಸ್ತ್ರದಲ್ಲಿ ಹೇಳುವ ಲಕ್ಷಣಕ್ಕಿಂತ ಹೊರಗೆ ಕಾಲಿಟ್ಟ ಪ್ರಯೋಗಗಳು 'ಬಾಹ್ಯ ಪ್ರಯೋಗ'ಗಳೆಂದೂ ಕರೆಯಲ್ಪಡುತ್ತವೆ; ಇಲ್ಲಿ, ಎಂದರೆ ಸಾಮಾನ್ಯಾಭಿನಯ'ವೆಂಬ ಈ ಅಧ್ಯಾಯದಲ್ಲಿ (ಹಿಂದಿನ ಅಧ್ಯಾಯಗಳಲ್ಲಿ ವಿಸ್ತಾರ ವಾಗಿ ನಿರೂಪಿಸಿದ್ದನ್ನು ಸರ್ವಂಗ್ರಾಹಕವಾಗಿ ಕ್ರೋಡೀಕರಿಸಿ ಅತಿ ಮುಖ್ಯವಾ ಎಂದು) ನಿರ್ದಿಷ್ಟ ಪಡಿಸಿದ ಏನೊಂದು ಲಕ್ಷಣಗಳಿವೆಯೋ ಆ ಲಕ್ಷಣಗಳೇ ಪ್ರಯೋಗದ ಅಭ್ಯಂತರ ಬಾಹ್ಯ ಪರಿಚ್ಛೇದಕ್ಕೆ ಪ್ರಮಾಣವಾಗಿವೆ; ಹೊರವಲಯ ದಲ್ಲೇ ಪ್ರಯೋಗಿಸಲ್ಪಡುವ 'ಶಾಸ್ತ್ರ ಬಹಿಃಸೃತ'ವಾದ ಬಾಹ್ಯ ಪ್ರಯೋಗಗಳ ಕೃತಿಗಳೂ ನಾಟಕಾದಿ ರೂಪಕ ಲಕ್ಷಣಗಳಿಂದ ಬಹಿಃಸೃತವಾದುವು ಹಾಗೂ ಕೆಳ ಮಟ್ಟದವು ಆಗಿರುತ್ತವೆ, ಎಂದಾಗಿದೆ. [ಕ್ರಿಯಾ: ಎಂದರೆ ನಾಟಕಾದಿ ದೃಶ್ಯಕಾವ್ಯಗಳು ಎಂದರ್ಥ. 'ಕಲ್ಪ' ಎಂದರೆ ಸ್ವಲ್ಪ ಕೀಳ್ಕೊಟ್ಟದ್ದು ಎಂದರ್ಥ. ಕಲ್ಪ = A termination added to nouns and adjectives in the sense of 'a little less than, almost like, nearly equal to' (denoting similarity with a degree of inferiority) - ಆಪಟೆ ನಿಘಂಟು] ಇಂತಹ ಕೃತಿಗಳೇ ಪ್ರಾಯಶಃ, ಉತ್ತರ ಕಾಲದ ಲಕ್ಷಣ ಗ್ರಂಥಗಳಲ್ಲಿ ಉಪರೂಪಕಗಳೆಂದು ಕರೆಯಲ್ಪಟ್ಟ ಗೇಯ ಕಾವ್ಯಗಳೆಂದು ನ್ಯಾಯವಾಗಿ ಊಹಿಸಬಹುದು. ಭರತನು ಉಪರೂಪಕಗಳನ್ನು ಹೇಳಲಿಲ್ಲವಾದರೂ 'ದಶರೂಪಕ ಲಕ್ಷಣ'ದ ಕೊನೆಗೆ, ಅಲ್ಲಿ ಹೇಳಲ್ಪಡದವು ಬೇರೆ ಇರುತ್ತವೆ ಎಂಬ ಸೂಚನೆ ಕಂಡುಬರುತ್ತದೆ. ಶಾಸ್ತ್ರೀಯ ಪ್ರಯೋಗಗಳೆನ್ನುವ ಕೂಚಿಪುಡಿ' 'ಮೇಳತ್ತೂರು' ದಕ್ಷಿಣ ಕನ್ನಡ (ತೆಂಕ ಮಟ್ಟು') 'ತಂಜಾವೂರು' ಇತ್ಯಾದಿ ಯಕ್ಷಗಾನ ಪ್ರಯೋಗಗಳಾದರೂ ಕೇರ ಳದ 'ಕಥಕಳಿ'ಯಾದರೂ ನಾಟ್ಯಶಾಕ್ತ ಲಕ್ಷಣಕ್ಕೆ ಸಂಪೂರ್ಣ ಒಳಪಟ್ಟಿರುವು ದಿಲ್ಲ. ದೇಶೀ (ಶಾಸ್ತ್ರೀಯ) ವಿಧಾನಗಳು ಕೆಲಮಟ್ಟಿಗೆ ಅವುಗಳಲ್ಲಿ ಸೇರಿಕೊಂಡಿವೆ. ಆದುದರಿಂದ ಇವೆಲ್ಲ ಸಂಪ್ರದಾಯಗಳೂ 'ಬಾಹ್ಯಪ್ರಯೋಗ' ಪರಂಪರೆಯಲ್ಲಿ ನಡೆದು ಬಂದಿರಬೇಕು. ಆದುದರಿಂದಲೇ ಬಯಲಾಟ, ವೀಥಿನಾಟಕ, ತೆರುಕ್ಕೂತ್ತು, ಪುರಕ್ಕೊತ್ತು ಎಂಬ ಹೆಸರಾಗಲು ಕಾರಣವೆಂದೆಣಿಸಬಹುದು - – ಶಾಸ್ತ್ರ ಬಹಿಃಸೃತ ಎಂಬ ಅರ್ಥದಲ್ಲಿ. ಅಂತಹ ಬಾಹ್ಯಪ್ರಯೋಗಗಳು ಪ್ರೇಕ್ಷಾಗೃಹಗಳಿಲ್ಲದೆ, ಬಾಹ್ಯ<noinclude></noinclude> q704dl50bswzlclr7cymc8onspypf5h ಪುಟ:ಯಕ್ಷಗಾನ ಮಕರಂದ.pdf/೨೭೪ 104 100195 322655 281822 2026-05-26T13:39:45Z Shreesha Sharma 7840 /* Proofread */ 322655 proofread-page text/x-wiki <noinclude><pagequality level="3" user="Shreesha Sharma" /></noinclude>{{Left|24}} ಪ್ರದೇಶಗಳಲ್ಲಿ ಎಲ್ಲಿ ಬೇಕೆಂದರಲ್ಲಿ ರಂಗಸ್ಥಳಗಳನ್ನು ಹಾಕಿ ಆಡಲ್ಪಡುತ್ತವೆಂದೂ ಭರತನು ಹೇಳುವುದನ್ನು ಪರಿಶೀಲಿಸಿರಿ. ಅಥ ಬಾಹ್ಯಪ್ರಯೋಗೇ ತು ಪ್ರೇಕ್ಷಾಗೃಹ ವಿವರ್ಜಿತೇ ವಿದಿಕ್ಶ್ವಪಿ ಭವೇದ್ರಂಗಃ ಕದಾಚಿರ್ತುರಾಜ್ಞಯಾ || {{gap}}ಇದುವರೆಗೆ ಮಾಡಿದ ವಿವೇಚನೆಯಿಂದ ಯಕ್ಷಗಾನ-ಬಯಲಾಟ'ವೆಂಬುದು ನಾಟ್ಯಶಾಸ್ತ್ರ ಪರಂಪರೆಯಲ್ಲಿ ನಡೆದುಬಂದಿರುವ (ಶಾಸ್ತ್ರೀಯ) ಸಂಪ್ರದಾಯವೇ ಹೊರತು 'ಜಾನಪದ'ವಲ್ಲವೆಂದು ವಾಚಕರಿಗೆ ಮನದಟ್ಟಾಗಬಹುದೆಂದು ನಂಬುತ್ತೇನೆ. ಯಕ್ಷಗಾನ ಮೇಳದವರ, ಪೋಷಕರೂ, ಪ್ರೋತ್ಸಾಹಕರ, ಅಭಿಮಾನಿಗಳೂ, ಸಾಮಾಜಿಕರ, ಯಕ್ಷಗಾನ ಬಯಲಾಟದಲ್ಲಿ ಪರಂಪರೆಯಿಂದ ನಡೆದು ಬಂದಿರುವ ಶಾಸ್ತ್ರೀಯಾಂಶಗಳನ್ನು ಉಳಿಸಿ ಬೆಳೆಸುವುದಕ್ಕೆ ಪ್ರಯತ್ನಿಸಬೇಕೆಂದು ಪ್ರಾರ್ಥಿಸು ತೇನೆ. ಸಂಗೀತ ವಿದ್ವಾಂಸರೂ ಇದರ ಕಡೆಗೆ ದೃಷ್ಟಿ ಹಾಯಿಸುವರೆಂದು ಆಶಿಸುತ್ತೇನೆ. {{gap}}ನಾಟ್ಯಶಾಸ್ತ್ರಕಾರನಾದ ಭರತನು ದಾಕ್ಷಿಣಾತ್ಯರಾದ ನಮ್ಮಲ್ಲಿ ರಕ್ತಗತವಾಗಿದ್ದ ಸಂಗೀತ ನಾಟ್ಯ ಪ್ರವೃತ್ತಿಯನ್ನು ಗುರುತಿಸಿದವನೇ, ನಮ್ಮ ಮೇಲೆ ಆತನಿಗಿದ್ದ ಆದ ರಾಭಿಮಾನಗಳನ್ನು ನಾಟ್ಯಶಾಸ್ತ್ರದಲ್ಲಿ - ತತ್ರ ದಾಕ್ಷಿಣಾತ್ಯಾಸ್ತಾವತ್ ಬಹುನೃತ್ಯ ಗೀತ ವಾದ್ಯಾಃ ಕೈಶಿಕೀಪ್ರಾಯಾಃ ಚತುರ ಮಧುರ ಲಲಿತಾಂಗಾಭಿನಯಾಶ್ಚ” ಎಂಬ ಮಾತುಗಳಿಂದ ವ್ಯಕ್ತಪಡಿಸಿದ್ದಾನೆ. ನಾವಾದರೂ ಆತನ ನಾಟ್ಯವನ್ನು ಕಲ್ಲುಗಳಲ್ಲಿ ಕೆತ್ತಿ, ಗೋಡೆಗಳಲ್ಲಿ ಬರೆದು, ಉಳಿಸಿ ಬೆಳೆಸಿ ಆತನಿಗೆ ಪ್ರತಿಗೌರವವನ್ನು ಸಲ್ಲಿಸಿದವರು. ನಮ್ಮ ಕವಿಗಳೆಲ್ಲ ಭರತಾಗದು ಪಾಠಕರು. ಅಗ್ಗಳನಂಥ ಕೆಲವರು ಕಾವ್ಯನೆಪದಿಂದ ಭರತಾಗಮವನ್ನೇ ಕನ್ನಡಿಸಿದವರು. ಸಂಗೀತ, ನಾಟ್ಯ, ಸಾಹಿತ್ಯಗಳಲ್ಲಿ ಭರತನ 'ಮಾರ್ಗ' ನಮ್ಮ 'ದೇಸಿ'ಗಳೊಳಗೆ ಸಮರಸವನ್ನು ಸಾಧಿಸಿರುವುದು ನಮ್ಮ ಕಲಾ ಸಂಸ್ಕೃತಿಗಳ ವೈಶಿಷ್ಟ್ಯ. ಇದರ ಹೆಗ್ಗುರುತು 'ಯಕ್ಷಗಾನ ಬಯಲಾಟ'. ಒಂದು ಹೆಜ್ಜೆ ಯನ್ನು 'ದೇಸಿ'ಯಲ್ಲಿಯೂ ಇನ್ನೊಂದನ್ನು ಮಾರ್ಗದಲ್ಲಿಯೂ ಇಟ್ಟು, ಲಾಸ್ಯ ತಾಂಡವ ಆಡುವ ಈ ದೇಶೀ ವಿಶಿಷ್ಟ ಮಾರ್ಗ ಸಂಪ್ರದಾಯವು ಚಿರಕಾಲ ಬಾಳಲಿ. ಹೃದಯ ಕಮಲವೆಂಬ ಹರಿವಾಣದೊಳು ದಿವ್ಯ ಸದಮಲ ಭಕ್ತಿರಸದ ತೈಲದಿ | ಪದುಮನಾಭನ ನಾಮವೆಂಬ ಜ್ಯೋತಿಯ ತಂದು ಮುದದಿಂದ ಜ್ಞಾನದಾರತಿಯೆತ್ತಿರೇ || (ಪಾರ್ತಿಸುಬ್ಬನ ಯಕ್ಷಗಾನಗಳು) {{center|--ಮಂಗಲಂ--}} -<noinclude></noinclude> 24seko0ksh0966l8vb2ym5u9yre3nru 322663 322655 2026-05-26T13:44:41Z Shreelatha.Halemane 7642 /* Validated */ 322663 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|24}} ಪ್ರದೇಶಗಳಲ್ಲಿ ಎಲ್ಲಿ ಬೇಕೆಂದರಲ್ಲಿ ರಂಗಸ್ಥಳಗಳನ್ನು ಹಾಕಿ ಆಡಲ್ಪಡುತ್ತವೆಂದೂ ಭರತನು ಹೇಳುವುದನ್ನು ಪರಿಶೀಲಿಸಿರಿ. ಅಥ ಬಾಹ್ಯಪ್ರಯೋಗೇ ತು ಪ್ರೇಕ್ಷಾಗೃಹ ವಿವರ್ಜಿತೇ ವಿದಿಕ್ಶ್ವಪಿ ಭವೇದ್ರಂಗಃ ಕದಾಚಿರ್ತುರಾಜ್ಞಯಾ || {{gap}}ಇದುವರೆಗೆ ಮಾಡಿದ ವಿವೇಚನೆಯಿಂದ ಯಕ್ಷಗಾನ-ಬಯಲಾಟ'ವೆಂಬುದು ನಾಟ್ಯಶಾಸ್ತ್ರ ಪರಂಪರೆಯಲ್ಲಿ ನಡೆದುಬಂದಿರುವ (ಶಾಸ್ತ್ರೀಯ) ಸಂಪ್ರದಾಯವೇ ಹೊರತು 'ಜಾನಪದ'ವಲ್ಲವೆಂದು ವಾಚಕರಿಗೆ ಮನದಟ್ಟಾಗಬಹುದೆಂದು ನಂಬುತ್ತೇನೆ. ಯಕ್ಷಗಾನ ಮೇಳದವರ, ಪೋಷಕರೂ, ಪ್ರೋತ್ಸಾಹಕರ, ಅಭಿಮಾನಿಗಳೂ, ಸಾಮಾಜಿಕರ, ಯಕ್ಷಗಾನ ಬಯಲಾಟದಲ್ಲಿ ಪರಂಪರೆಯಿಂದ ನಡೆದು ಬಂದಿರುವ ಶಾಸ್ತ್ರೀಯಾಂಶಗಳನ್ನು ಉಳಿಸಿ ಬೆಳೆಸುವುದಕ್ಕೆ ಪ್ರಯತ್ನಿಸಬೇಕೆಂದು ಪ್ರಾರ್ಥಿಸು ತೇನೆ. ಸಂಗೀತ ವಿದ್ವಾಂಸರೂ ಇದರ ಕಡೆಗೆ ದೃಷ್ಟಿ ಹಾಯಿಸುವರೆಂದು ಆಶಿಸುತ್ತೇನೆ. {{gap}}ನಾಟ್ಯಶಾಸ್ತ್ರಕಾರನಾದ ಭರತನು ದಾಕ್ಷಿಣಾತ್ಯರಾದ ನಮ್ಮಲ್ಲಿ ರಕ್ತಗತವಾಗಿದ್ದ ಸಂಗೀತ ನಾಟ್ಯ ಪ್ರವೃತ್ತಿಯನ್ನು ಗುರುತಿಸಿದವನೇ, ನಮ್ಮ ಮೇಲೆ ಆತನಿಗಿದ್ದ ಆದ ರಾಭಿಮಾನಗಳನ್ನು ನಾಟ್ಯಶಾಸ್ತ್ರದಲ್ಲಿ - ತತ್ರ ದಾಕ್ಷಿಣಾತ್ಯಾಸ್ತಾವತ್ ಬಹುನೃತ್ಯ ಗೀತ ವಾದ್ಯಾಃ ಕೈಶಿಕೀಪ್ರಾಯಾಃ ಚತುರ ಮಧುರ ಲಲಿತಾಂಗಾಭಿನಯಾಶ್ಚ” ಎಂಬ ಮಾತುಗಳಿಂದ ವ್ಯಕ್ತಪಡಿಸಿದ್ದಾನೆ. ನಾವಾದರೂ ಆತನ ನಾಟ್ಯವನ್ನು ಕಲ್ಲುಗಳಲ್ಲಿ ಕೆತ್ತಿ, ಗೋಡೆಗಳಲ್ಲಿ ಬರೆದು, ಉಳಿಸಿ ಬೆಳೆಸಿ ಆತನಿಗೆ ಪ್ರತಿಗೌರವವನ್ನು ಸಲ್ಲಿಸಿದವರು. ನಮ್ಮ ಕವಿಗಳೆಲ್ಲ ಭರತಾಗದು ಪಾಠಕರು. ಅಗ್ಗಳನಂಥ ಕೆಲವರು ಕಾವ್ಯನೆಪದಿಂದ ಭರತಾಗಮವನ್ನೇ ಕನ್ನಡಿಸಿದವರು. ಸಂಗೀತ, ನಾಟ್ಯ, ಸಾಹಿತ್ಯಗಳಲ್ಲಿ ಭರತನ 'ಮಾರ್ಗ' ನಮ್ಮ 'ದೇಸಿ'ಗಳೊಳಗೆ ಸಮರಸವನ್ನು ಸಾಧಿಸಿರುವುದು ನಮ್ಮ ಕಲಾ ಸಂಸ್ಕೃತಿಗಳ ವೈಶಿಷ್ಟ್ಯ. ಇದರ ಹೆಗ್ಗುರುತು 'ಯಕ್ಷಗಾನ ಬಯಲಾಟ'. ಒಂದು ಹೆಜ್ಜೆ ಯನ್ನು 'ದೇಸಿ'ಯಲ್ಲಿಯೂ ಇನ್ನೊಂದನ್ನು ಮಾರ್ಗದಲ್ಲಿಯೂ ಇಟ್ಟು, ಲಾಸ್ಯ ತಾಂಡವ ಆಡುವ ಈ ದೇಶೀ ವಿಶಿಷ್ಟ ಮಾರ್ಗ ಸಂಪ್ರದಾಯವು ಚಿರಕಾಲ ಬಾಳಲಿ. ಹೃದಯ ಕಮಲವೆಂಬ ಹರಿವಾಣದೊಳು ದಿವ್ಯ ಸದಮಲ ಭಕ್ತಿರಸದ ತೈಲದಿ | ಪದುಮನಾಭನ ನಾಮವೆಂಬ ಜ್ಯೋತಿಯ ತಂದು ಮುದದಿಂದ ಜ್ಞಾನದಾರತಿಯೆತ್ತಿರೇ || (ಪಾರ್ತಿಸುಬ್ಬನ ಯಕ್ಷಗಾನಗಳು) {{center|--ಮಂಗಲಂ--}} -<noinclude></noinclude> heo30te31dvcvqkgyz5605leeguri6o ಪುಟ:ಯಕ್ಷಗಾನ ಮಕರಂದ.pdf/೨೭೬ 104 100197 322657 281824 2026-05-26T13:41:17Z Shreesha Sharma 7840 /* Proofread */ 322657 proofread-page text/x-wiki <noinclude><pagequality level="3" user="Shreesha Sharma" /></noinclude>{{Left|26}} {{center|೨}} {{gap}}ಪದಗಳು ಅನೇಕ ವಿಧಗಳಾದ ಗೀತಗಳ ಲಕ್ಷಣಗಳಿಂದ ರಚಿಸಲ್ಪಟ್ಟಿರುವವು. ಅವುಗಳಲ್ಲಿ ಮುಖ್ಯವಾಗಿ ಎರಡು ಭೇದಗಳು ಇವೆ. ಒಂದನೆಯದು ಗಂಧರ್ವ ಗೀತ, ಎರಡನೆಯದು ಯಕ್ಷಗೀತ, ಗಾಂಧರ್ವಗೀತವನ್ನು ಉಗಾಭೋಗಗಳ ಮಾದರಿಯಲ್ಲಿ ರಾಗಪ್ರಧಾನವಾಗಿಯ, ತಾಲಯುಕ್ತವಾಗಿಯ ಹಾಡುವರು. ಉಗಾಭೋಗಗಳು ವಿಲಂಬಲಯದಲ್ಲಿ, ಪದಗಳು ಮಧ್ಯಲಯದಲ್ಲಿ, ಯಕ್ಷಗೀತ ಗಳು ತಾಲ-ನರ್ತನ ಪ್ರಧಾನವಾಗಿದ್ದುದರಿಂದ ಇವುಗಳ ರಚನೆಯು ತಾಳಗಳನ್ನು ಬದಲು ಮಾಡಿ, ನರ್ತನದ ಕೌಶಲ್ಯವನ್ನು ವ್ಯಕ್ತ ಮಾಡುವುದಕ್ಕೆ ಅನುಕೂಲವಾಗಿರು ವುದು, ಸುಳಾದಿಯ ಪ್ರತಿಯೊಂದು ಖಂಡವನ್ನು ಅದೇ ತಾಳದಲ್ಲಿ ಹಾಡಬೇಕಾದ ನಿರ್ಬಂಧವಿದ್ದಂತೆ ಯಕ್ಷಗೀತಗಳಲ್ಲಿಲ್ಲ. ಇವುಗಳಲ್ಲಿಯ ಪದಗಳನ್ನು ಕೆಲವೆಡೆ ಲೋಪದಿಂದ, ಕೆಲವೆಡೆ ಪುನರುಕ್ತಿಯಿಂದ, ಕೆಲವೆಡೆ ಪತ್ಯಾಯ ಶಬ್ದಗಳಿಂದ ಅನ್ನುವ ಕ್ರಮವು ಪ್ರಾಚೀನ ಪರಂಪರವಾಗಿ ಬಂದಿದೆ. ಗಾಂಧರ್ವ ಗೀತಗಳಿಗೆ ಅಕ್ಷರಗಳು ತೀರ ಕಡಿಮೆ ಇರಬೇಕಾಗುವುದು, ಏಕೆಂದರೆ ಆಯಾ ಸ್ಥಾನಗಳಲ್ಲಿ ಗಮಕಾಲಂಕಾರ ಗಳನ್ನು ಜೋಡಿಸಲಿಕ್ಕೆ ಅನುಕೂಲವಾಗುವುದು. ಗಮಕಾಲಂಕಾರಗಳು ಹೆಚ್ಚು ಸೇರದ ಹೊರತು ರಾಗಪ್ರಧಾನವಾಗಲಾರದು........ ಗಾಂಧರ್ವ ಗೀತೆಗಳಲ್ಲಿ ಗಮಕಾಲಂಕಾರಗಳೇ ಹೆಚ್ಚು, ಯಕ್ಷಗೀತಗಳಲ್ಲಿ ಲಯತಾಲದ ವಿನ್ಯಾಸವೈಚಿತ್ರವೇ ಹೆಚ್ಚು.” (ಕರ್ನಾಟಕ ಸಂಗೀತವೂ ದಾಸ ಕೂಟವೂ, ಪು. 108-9), ಗೀತಗಳಲ್ಲಿ ಗಾಂಧರ್ವಗೀತ, ಯಕ್ಷಗೀತಗಳೆಂಬ ಇಬ್ಬಗೆಯಿದೆಯೆಂದು ಇಲ್ಲಿ ಸ್ಪಷ್ಟ! ಇದನ್ನು ಕುರಿತು ಇನ್ನೂ ತುಸು ಹೇಳಿದೆ. (ಅದೇ, ಪು. 111): “ಹರಿದಾಸರ ಪದಸಾಹಿತ್ಯವನ್ನು ಪ್ರಯೋಗಿಸುವವರು ಮೊದಲು ಆ ಪದವು ಗಾಂಧರ್ವಗೀತವೋ, ಯಕ್ಷಗೀತವೋ ಎಂಬುದನ್ನು ಅದರ ರಚನೆಯ ಮೇಲಿಂದ ನಿರ್ಣಯಿಸಿ, ಆ ಮೇಲೆ ಅವುಗಳನ್ನು ಸಂಗೀತ ಪಾಠ, ಸಂಕೀರ್ತನ ಪಾಠ, ಸಂಪ್ರವಚನ ಪಾಠಗಳ ಕಾಲಕ್ಕೆ ಎಷ್ಟು ವ್ಯತ್ಯಾಸವು ಉಚಿತವಾಗಿದೆಯೆಂಬುದನ್ನು ತಿಳಿದು ಅದ ರಂತೆ ಆಯಾ ಸಂದರ್ಭದಲ್ಲಿ ಪ್ರಯೋಗಿಸುವುದು ತಪ್ಪಾಗಲಾರದು.” “ಪದ್ಯಗಳು ವಿಲಂಬಿತ, ಮಧ್ಯ, ದ್ರುತ ಹೀಗೆ ಮೂರು ಲಯವಿಶಿಷ್ಟವಾಗಿ ರಚಿಸಲ್ಪಟ್ಟಿವೆಯೆಂದು ಹಿಂದೆಯೇ ಹೇಳಿದ್ದೇವೆ. ಅದರಲ್ಲಿ ಗಾಂಧರ್ವ ಗೀತೆಗಳು ವಿಲಂಬ ಮತ್ತು ಮಧ್ಯಲಯದಲ್ಲಿಯೂ, ಯಕ್ಷಗೀತಗಳು ಮಧ್ಯ ಮತ್ತು ದ್ರುತಲಯದಲ್ಲಿಯೂ ರಚಿಸಲ್ಪಟ್ಟಿವೆ. ಗಾಂಧರ್ವಗೀತಗಳು ಒಂದು ತಾಳಕ್ಕೆ ಅನ್ವಯಿಸಿ ಹಾಡಲ್ಪಡುವುವು. ಆದರೆ ಯಕ್ಷಗೀತಗಳು ಒಂದು ತಾಳದಲ್ಲಿ ಪಲ್ಲವಿ, ಮತ್ತೊಂದು ತಾಳದಲ್ಲಿ ಅನುಪಲ್ಲವಿ, ಹಾಗೂ ನುಡಿ<noinclude></noinclude> hstdknry91y6o7qk8i7q8bdy9kj50d0 322660 322657 2026-05-26T13:43:11Z Pragathi. BH 7585 /* Validated */ 322660 proofread-page text/x-wiki <noinclude><pagequality level="4" user="Pragathi. BH" /></noinclude>{{Left|26}} {{center|೨}} {{gap}}ಪದಗಳು ಅನೇಕ ವಿಧಗಳಾದ ಗೀತಗಳ ಲಕ್ಷಣಗಳಿಂದ ರಚಿಸಲ್ಪಟ್ಟಿರುವವು. ಅವುಗಳಲ್ಲಿ ಮುಖ್ಯವಾಗಿ ಎರಡು ಭೇದಗಳು ಇವೆ. ಒಂದನೆಯದು ಗಂಧರ್ವ ಗೀತ, ಎರಡನೆಯದು ಯಕ್ಷಗೀತ, ಗಾಂಧರ್ವಗೀತವನ್ನು ಉಗಾಭೋಗಗಳ ಮಾದರಿಯಲ್ಲಿ ರಾಗಪ್ರಧಾನವಾಗಿಯ, ತಾಲಯುಕ್ತವಾಗಿಯ ಹಾಡುವರು. ಉಗಾಭೋಗಗಳು ವಿಲಂಬಲಯದಲ್ಲಿ, ಪದಗಳು ಮಧ್ಯಲಯದಲ್ಲಿ, ಯಕ್ಷಗೀತ ಗಳು ತಾಲ-ನರ್ತನ ಪ್ರಧಾನವಾಗಿದ್ದುದರಿಂದ ಇವುಗಳ ರಚನೆಯು ತಾಳಗಳನ್ನು ಬದಲು ಮಾಡಿ, ನರ್ತನದ ಕೌಶಲ್ಯವನ್ನು ವ್ಯಕ್ತ ಮಾಡುವುದಕ್ಕೆ ಅನುಕೂಲವಾಗಿರು ವುದು, ಸುಳಾದಿಯ ಪ್ರತಿಯೊಂದು ಖಂಡವನ್ನು ಅದೇ ತಾಳದಲ್ಲಿ ಹಾಡಬೇಕಾದ ನಿರ್ಬಂಧವಿದ್ದಂತೆ ಯಕ್ಷಗೀತಗಳಲ್ಲಿಲ್ಲ. ಇವುಗಳಲ್ಲಿಯ ಪದಗಳನ್ನು ಕೆಲವೆಡೆ ಲೋಪದಿಂದ, ಕೆಲವೆಡೆ ಪುನರುಕ್ತಿಯಿಂದ, ಕೆಲವೆಡೆ ಪತ್ಯಾಯ ಶಬ್ದಗಳಿಂದ ಅನ್ನುವ ಕ್ರಮವು ಪ್ರಾಚೀನ ಪರಂಪರವಾಗಿ ಬಂದಿದೆ. ಗಾಂಧರ್ವ ಗೀತಗಳಿಗೆ ಅಕ್ಷರಗಳು ತೀರ ಕಡಿಮೆ ಇರಬೇಕಾಗುವುದು, ಏಕೆಂದರೆ ಆಯಾ ಸ್ಥಾನಗಳಲ್ಲಿ ಗಮಕಾಲಂಕಾರ ಗಳನ್ನು ಜೋಡಿಸಲಿಕ್ಕೆ ಅನುಕೂಲವಾಗುವುದು. ಗಮಕಾಲಂಕಾರಗಳು ಹೆಚ್ಚು ಸೇರದ ಹೊರತು ರಾಗಪ್ರಧಾನವಾಗಲಾರದು........ ಗಾಂಧರ್ವ ಗೀತೆಗಳಲ್ಲಿ ಗಮಕಾಲಂಕಾರಗಳೇ ಹೆಚ್ಚು, ಯಕ್ಷಗೀತಗಳಲ್ಲಿ ಲಯತಾಲದ ವಿನ್ಯಾಸವೈಚಿತ್ರವೇ ಹೆಚ್ಚು.” (ಕರ್ನಾಟಕ ಸಂಗೀತವೂ ದಾಸ ಕೂಟವೂ, ಪು. 108-9), ಗೀತಗಳಲ್ಲಿ ಗಾಂಧರ್ವಗೀತ, ಯಕ್ಷಗೀತಗಳೆಂಬ ಇಬ್ಬಗೆಯಿದೆಯೆಂದು ಇಲ್ಲಿ ಸ್ಪಷ್ಟ! ಇದನ್ನು ಕುರಿತು ಇನ್ನೂ ತುಸು ಹೇಳಿದೆ. (ಅದೇ, ಪು. 111): “ಹರಿದಾಸರ ಪದಸಾಹಿತ್ಯವನ್ನು ಪ್ರಯೋಗಿಸುವವರು ಮೊದಲು ಆ ಪದವು ಗಾಂಧರ್ವಗೀತವೋ, ಯಕ್ಷಗೀತವೋ ಎಂಬುದನ್ನು ಅದರ ರಚನೆಯ ಮೇಲಿಂದ ನಿರ್ಣಯಿಸಿ, ಆ ಮೇಲೆ ಅವುಗಳನ್ನು ಸಂಗೀತ ಪಾಠ, ಸಂಕೀರ್ತನ ಪಾಠ, ಸಂಪ್ರವಚನ ಪಾಠಗಳ ಕಾಲಕ್ಕೆ ಎಷ್ಟು ವ್ಯತ್ಯಾಸವು ಉಚಿತವಾಗಿದೆಯೆಂಬುದನ್ನು ತಿಳಿದು ಅದ ರಂತೆ ಆಯಾ ಸಂದರ್ಭದಲ್ಲಿ ಪ್ರಯೋಗಿಸುವುದು ತಪ್ಪಾಗಲಾರದು.” “ಪದ್ಯಗಳು ವಿಲಂಬಿತ, ಮಧ್ಯ, ದ್ರುತ ಹೀಗೆ ಮೂರು ಲಯವಿಶಿಷ್ಟವಾಗಿ ರಚಿಸಲ್ಪಟ್ಟಿವೆಯೆಂದು ಹಿಂದೆಯೇ ಹೇಳಿದ್ದೇವೆ. ಅದರಲ್ಲಿ ಗಾಂಧರ್ವ ಗೀತೆಗಳು ವಿಲಂಬ ಮತ್ತು ಮಧ್ಯಲಯದಲ್ಲಿಯೂ, ಯಕ್ಷಗೀತಗಳು ಮಧ್ಯ ಮತ್ತು ದ್ರುತಲಯದಲ್ಲಿಯೂ ರಚಿಸಲ್ಪಟ್ಟಿವೆ. ಗಾಂಧರ್ವಗೀತಗಳು ಒಂದು ತಾಳಕ್ಕೆ ಅನ್ವಯಿಸಿ ಹಾಡಲ್ಪಡುವುವು. ಆದರೆ ಯಕ್ಷಗೀತಗಳು ಒಂದು ತಾಳದಲ್ಲಿ ಪಲ್ಲವಿ, ಮತ್ತೊಂದು ತಾಳದಲ್ಲಿ ಅನುಪಲ್ಲವಿ, ಹಾಗೂ ನುಡಿ<noinclude></noinclude> e8tjurv2ob100r9ln5onj4wyiyu4wij 322661 322660 2026-05-26T13:43:41Z Pragathi. BH 7585 322661 proofread-page text/x-wiki <noinclude><pagequality level="4" user="Pragathi. BH" /></noinclude>{{Left|26}} {{center|೨}} {{gap}}ಪದಗಳು ಅನೇಕ ವಿಧಗಳಾದ ಗೀತಗಳ ಲಕ್ಷಣಗಳಿಂದ ರಚಿಸಲ್ಪಟ್ಟಿರುವವು. ಅವುಗಳಲ್ಲಿ ಮುಖ್ಯವಾಗಿ ಎರಡು ಭೇದಗಳು ಇವೆ. ಒಂದನೆಯದು ಗಂಧರ್ವ ಗೀತ, ಎರಡನೆಯದು ಯಕ್ಷಗೀತ, ಗಾಂಧರ್ವಗೀತವನ್ನು ಉಗಾಭೋಗಗಳ ಮಾದರಿಯಲ್ಲಿ ರಾಗಪ್ರಧಾನವಾಗಿಯ, ತಾಲಯುಕ್ತವಾಗಿಯ ಹಾಡುವರು. ಉಗಾಭೋಗಗಳು ವಿಲಂಬಲಯದಲ್ಲಿ, ಪದಗಳು ಮಧ್ಯಲಯದಲ್ಲಿ, ಯಕ್ಷಗೀತ ಗಳು ತಾಲ-ನರ್ತನ ಪ್ರಧಾನವಾಗಿದ್ದುದರಿಂದ ಇವುಗಳ ರಚನೆಯು ತಾಳಗಳನ್ನು ಬದಲು ಮಾಡಿ, ನರ್ತನದ ಕೌಶಲ್ಯವನ್ನು ವ್ಯಕ್ತ ಮಾಡುವುದಕ್ಕೆ ಅನುಕೂಲವಾಗಿರು ವುದು, ಸುಳಾದಿಯ ಪ್ರತಿಯೊಂದು ಖಂಡವನ್ನು ಅದೇ ತಾಳದಲ್ಲಿ ಹಾಡಬೇಕಾದ ನಿರ್ಬಂಧವಿದ್ದಂತೆ ಯಕ್ಷಗೀತಗಳಲ್ಲಿಲ್ಲ. ಇವುಗಳಲ್ಲಿಯ ಪದಗಳನ್ನು ಕೆಲವೆಡೆ ಲೋಪದಿಂದ, ಕೆಲವೆಡೆ ಪುನರುಕ್ತಿಯಿಂದ, ಕೆಲವೆಡೆ ಪತ್ಯಾಯ ಶಬ್ದಗಳಿಂದ ಅನ್ನುವ ಕ್ರಮವು ಪ್ರಾಚೀನ ಪರಂಪರವಾಗಿ ಬಂದಿದೆ. ಗಾಂಧರ್ವ ಗೀತಗಳಿಗೆ ಅಕ್ಷರಗಳು ತೀರ ಕಡಿಮೆ ಇರಬೇಕಾಗುವುದು, ಏಕೆಂದರೆ ಆಯಾ ಸ್ಥಾನಗಳಲ್ಲಿ ಗಮಕಾಲಂಕಾರ ಗಳನ್ನು ಜೋಡಿಸಲಿಕ್ಕೆ ಅನುಕೂಲವಾಗುವುದು. ಗಮಕಾಲಂಕಾರಗಳು ಹೆಚ್ಚು ಸೇರದ ಹೊರತು ರಾಗಪ್ರಧಾನವಾಗಲಾರದು........ ಗಾಂಧರ್ವ ಗೀತೆಗಳಲ್ಲಿ ಗಮಕಾಲಂಕಾರಗಳೇ ಹೆಚ್ಚು, ಯಕ್ಷಗೀತಗಳಲ್ಲಿ ಲಯತಾಲದ ವಿನ್ಯಾಸವೈಚಿತ್ರವೇ ಹೆಚ್ಚು.” (ಕರ್ನಾಟಕ ಸಂಗೀತವೂ ದಾಸ ಕೂಟವೂ, ಪು. 108-9), ಗೀತಗಳಲ್ಲಿ ಗಾಂಧರ್ವಗೀತ, ಯಕ್ಷಗೀತಗಳೆಂಬ ಇಬ್ಬಗೆಯಿದೆಯೆಂದು ಇಲ್ಲಿ ಸ್ಪಷ್ಟ! ಇದನ್ನು ಕುರಿತು ಇನ್ನೂ ತುಸು ಹೇಳಿದೆ. (ಅದೇ, ಪು. 111): {{gap}}“ಹರಿದಾಸರ ಪದಸಾಹಿತ್ಯವನ್ನು ಪ್ರಯೋಗಿಸುವವರು ಮೊದಲು ಆ ಪದವು ಗಾಂಧರ್ವಗೀತವೋ, ಯಕ್ಷಗೀತವೋ ಎಂಬುದನ್ನು ಅದರ ರಚನೆಯ ಮೇಲಿಂದ ನಿರ್ಣಯಿಸಿ, ಆ ಮೇಲೆ ಅವುಗಳನ್ನು ಸಂಗೀತ ಪಾಠ, ಸಂಕೀರ್ತನ ಪಾಠ, ಸಂಪ್ರವಚನ ಪಾಠಗಳ ಕಾಲಕ್ಕೆ ಎಷ್ಟು ವ್ಯತ್ಯಾಸವು ಉಚಿತವಾಗಿದೆಯೆಂಬುದನ್ನು ತಿಳಿದು ಅದ ರಂತೆ ಆಯಾ ಸಂದರ್ಭದಲ್ಲಿ ಪ್ರಯೋಗಿಸುವುದು ತಪ್ಪಾಗಲಾರದು.” {{gap}}“ಪದ್ಯಗಳು ವಿಲಂಬಿತ, ಮಧ್ಯ, ದ್ರುತ ಹೀಗೆ ಮೂರು ಲಯವಿಶಿಷ್ಟವಾಗಿ ರಚಿಸಲ್ಪಟ್ಟಿವೆಯೆಂದು ಹಿಂದೆಯೇ ಹೇಳಿದ್ದೇವೆ. ಅದರಲ್ಲಿ ಗಾಂಧರ್ವ ಗೀತೆಗಳು ವಿಲಂಬ ಮತ್ತು ಮಧ್ಯಲಯದಲ್ಲಿಯೂ, ಯಕ್ಷಗೀತಗಳು ಮಧ್ಯ ಮತ್ತು ದ್ರುತಲಯದಲ್ಲಿಯೂ ರಚಿಸಲ್ಪಟ್ಟಿವೆ. ಗಾಂಧರ್ವಗೀತಗಳು ಒಂದು ತಾಳಕ್ಕೆ ಅನ್ವಯಿಸಿ ಹಾಡಲ್ಪಡುವುವು. ಆದರೆ ಯಕ್ಷಗೀತಗಳು ಒಂದು ತಾಳದಲ್ಲಿ ಪಲ್ಲವಿ, ಮತ್ತೊಂದು ತಾಳದಲ್ಲಿ ಅನುಪಲ್ಲವಿ, ಹಾಗೂ ನುಡಿ<noinclude></noinclude> c4lbkzncxfvhsffsrs60qgngakvh689 ಪುಟ:ಯಕ್ಷಗಾನ ಮಕರಂದ.pdf/೨೭೭ 104 100198 322659 281825 2026-05-26T13:42:56Z Shreesha Sharma 7840 /* Proofread */ 322659 proofread-page text/x-wiki <noinclude><pagequality level="3" user="Shreesha Sharma" /></noinclude>{{Left|27}} ಗಳು ಒಂದು ತಾಳದಲ್ಲಿ, ಹೀಗೆ ತಾಳ ವೈಚಿತ್ರದಿಂದಲೂ ಹಾಡಲ್ಪಡು ತ್ತವೆ. ಈ ಶೈಲಿಯು ನರ್ತನಕ್ಕೆ ಮತ್ತು ಅವನದ್ಧ ವಾದ್ಯಗಳಿಗೆ ಬಹಳ ಅನು ಕೂಲವಾಗಿರುವುದರಿಂದ ಗಾಯನ, ವಾದನ, ನರ್ತನ ಮತ್ತು ಸಾಹಿತ್ಯವನ್ನು ಆಗಾಗ್ಗೆ ವೈವಿಧ್ಯದಿಂದ ಪ್ರಯೋಗಿಸುವುದು ಶೋತೃವೃಂದದಕ್ಕೆ ಬಹು ಮನೋರಂಜಕ ವಾಗಿರುವುದು. ಇದೊಂದು ಕರ್ಣಾಟಕ ಸಂಗೀತದಲ್ಲಿಯ ವೈಶಿಷ್ಟ್ಯ ಈ ಶೈಲಿಯು ದಾಕ್ಷಿಣಾತ್ಯ ಸಂಗೀತದಲ್ಲಿ ಇಲ್ಲ. ಹರಿದಾಸರ ಸಾಹಿತ್ಯದಲ್ಲಿ ಮಾತ್ರ ಇದೆ.” (ಅದೇ, ಪು. 114). {{gap}}ಈ ಮೇಲಿನ ಮಾತಿನಂತೆ, ಹರಿದಾಸರ ಕೆಲವು ಕೀರ್ತನೆಗಳಲ್ಲಿ ಆಡಿದನೋ ರಂಗ ಅದ್ಭುತದಿಂದಲಿ', 'ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ' ಇತ್ಯಾದಿ ಗಳಲ್ಲಿ ದೇವರ ಹೆಸರುಗಳೊಂದಿಗೆ ಮಹಿಮೆಗಳ ಉದಾಹರಣಗಳಿರುವುದರಿಂದ ಅವು ಗಾಂಧರ್ವಗೀತಗಳೆನ್ನಬಹುದು. ಭ್ರಮರಗೀತೆ, ವೇಣುಗೀತೆ, ಮೊದಲಾದವು ಒಂದೊಂದು ರಾಗ-ತಾಳದಲ್ಲಿ 5-7 ಸೆಲ್ಲುಗಳಲ್ಲಿ ಒಂದು ಬಗೆಯನ್ನು ವಿವರಿಸಿ, ಮುಂದೆ ಬೇರೆ ರಾಗ-ತಾಳದಲ್ಲಿ 5-7 ಸೊಲ್ಲಿನಲ್ಲಿ ಮುನ್ನಡೆದು ಹಲವು ಪುಟದಲ್ಲಿ ಕತೆಯನ್ನು ಪೂರೈಸುವುದರಿಂದ ಅವು ಯಕ್ಷಗೀತಗಳೆನ್ನಬಹುದು. {{gap}}ಅಂತೆ, ಹರಿದಾಸರ ಕೀರ್ತನೆಗಳಲ್ಲಿ ಯಕ್ಷಗೀತಗಳನ್ನು ಅನುಸರಿಸಿ, ಪ್ರಾಚೀನ ಕತೆಗಳನ್ನು ಅಳವಡಿಸಿ, ಪ್ರಸಂಗ ಪ್ರಬಂಧಗಳನ್ನು ಯಕ್ಷಗಾನ ಕವಿಗಳು ರಚಿಸಿದರೆನ್ನ ಬಹುದು. ಯಕ್ಷಗಾನ ಪ್ರಸಂಗಗಳಲ್ಲಿ ಹೆಚ್ಚಾಗಿ ಕನ್ನಡ ಕವಿವರೇಣ್ಯರಾದ ಗದಗಿನ ಕುಮಾರವ್ಯಾಸನ ಭಾರತ, ತೊರವೆಯ ಕುಮಾರ ವಾಲ್ಮೀಕಿಯ ರಾಮಾ ಯಣ, ಚಾಟುವಿಠಲನ ಭಾಗವತ, ಲಕ್ಷ್ಮಿ ಶನ ಜೈಮಿನಿಭಾರತ ಇತ್ಯಾದಿಗಳು ಅನುವಾದಿಸಲ್ಪಟ್ಟಿವೆ. {{center|2}} “ಯಕ್ಷಗಾನ'ವೆಂಬ ಹೆಸರು :ಶಾರ್ಙ್ಗದೇವನು ಕನ್ನಡದ ದೇವ ಗಿರಿಯ ಯಾದವವಂಶದ ಸಿಂಘಣನ ಆಶ್ರಯದಲ್ಲಿದ್ದವನು (ಇ. 1210-24). ಇವನು ಸಂಸ್ಕೃತದಲ್ಲಿ 'ಸಂಗೀತ ರತ್ನಾಕರ'ವನ್ನು ಬರೆದಿದ್ದಾನೆ (ಮದ್ರಾಸಿನ ಅಡ್ಯಾರ್ ಲೈಬ್ರೆರಿ), ಆಗಿನ ಕಾಲದಲ್ಲಿ ಬಳಕೆಯಿದ್ದ ಕೆಲವು ನರ್ತನಾದಿಗಳು ಇಲ್ಲಿ ಹೇಳಿವೆ: 'ಗೊಂದಲ' ನೃತ್ಯಕ್ಕೆ 'ಗೊಂಡಲಿ'ಯೆಂದು ಹೇಳಿದೆ (7-1281,89). ಕೆಲವು ಪ್ರಾದೇಶಿಕ ಪದಗಳು ಇದರಲ್ಲಿ ಬಳಸಲಾಗಿವೆ: 'ಮಾತು ಧಾತುಗಳು ಸಮನಾಗಿರಬೇಕು' ಎಂಬಲ್ಲಿ, 'ಮಾತು' ಎಂಬುದು ಅಚ್ಚಗನ್ನಡವಾಗಿದೆ. ಈ ಗ್ರಂಥದ ಪ್ರಕೀರ್ಣಕಾಧ್ಯಾಯದಲ್ಲಿ, ಸಂಕೀರ್ಣ ಸ್ಥಾಯಗಳನ್ನು ಹೇಳುವಲ್ಲಿದೆ: (ಚಾಲಿರ್ಜತಿ ಕೀರ್ತಿತಾ' (3-165). “ಚಾಲಿಃ ಭಂಗಿವಿಶೇಷೇಣ ಸ್ವರಾಣಾಂ ಚಾಲನಂ ಸಾ ಲೋಕೇ ಜತಿ ಕಥ್ಯತೇ' ಎಂದು ಕಲ್ಲಿ<noinclude></noinclude> qr8p2yzf8uyzxnnnz2rjwdwj2sdkala 322664 322659 2026-05-26T13:44:57Z Shreelatha.Halemane 7642 /* Validated */ 322664 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|27}} ಗಳು ಒಂದು ತಾಳದಲ್ಲಿ, ಹೀಗೆ ತಾಳ ವೈಚಿತ್ರದಿಂದಲೂ ಹಾಡಲ್ಪಡು ತ್ತವೆ. ಈ ಶೈಲಿಯು ನರ್ತನಕ್ಕೆ ಮತ್ತು ಅವನದ್ಧ ವಾದ್ಯಗಳಿಗೆ ಬಹಳ ಅನು ಕೂಲವಾಗಿರುವುದರಿಂದ ಗಾಯನ, ವಾದನ, ನರ್ತನ ಮತ್ತು ಸಾಹಿತ್ಯವನ್ನು ಆಗಾಗ್ಗೆ ವೈವಿಧ್ಯದಿಂದ ಪ್ರಯೋಗಿಸುವುದು ಶೋತೃವೃಂದದಕ್ಕೆ ಬಹು ಮನೋರಂಜಕ ವಾಗಿರುವುದು. ಇದೊಂದು ಕರ್ಣಾಟಕ ಸಂಗೀತದಲ್ಲಿಯ ವೈಶಿಷ್ಟ್ಯ ಈ ಶೈಲಿಯು ದಾಕ್ಷಿಣಾತ್ಯ ಸಂಗೀತದಲ್ಲಿ ಇಲ್ಲ. ಹರಿದಾಸರ ಸಾಹಿತ್ಯದಲ್ಲಿ ಮಾತ್ರ ಇದೆ.” (ಅದೇ, ಪು. 114). {{gap}}ಈ ಮೇಲಿನ ಮಾತಿನಂತೆ, ಹರಿದಾಸರ ಕೆಲವು ಕೀರ್ತನೆಗಳಲ್ಲಿ ಆಡಿದನೋ ರಂಗ ಅದ್ಭುತದಿಂದಲಿ', 'ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ' ಇತ್ಯಾದಿ ಗಳಲ್ಲಿ ದೇವರ ಹೆಸರುಗಳೊಂದಿಗೆ ಮಹಿಮೆಗಳ ಉದಾಹರಣಗಳಿರುವುದರಿಂದ ಅವು ಗಾಂಧರ್ವಗೀತಗಳೆನ್ನಬಹುದು. ಭ್ರಮರಗೀತೆ, ವೇಣುಗೀತೆ, ಮೊದಲಾದವು ಒಂದೊಂದು ರಾಗ-ತಾಳದಲ್ಲಿ 5-7 ಸೆಲ್ಲುಗಳಲ್ಲಿ ಒಂದು ಬಗೆಯನ್ನು ವಿವರಿಸಿ, ಮುಂದೆ ಬೇರೆ ರಾಗ-ತಾಳದಲ್ಲಿ 5-7 ಸೊಲ್ಲಿನಲ್ಲಿ ಮುನ್ನಡೆದು ಹಲವು ಪುಟದಲ್ಲಿ ಕತೆಯನ್ನು ಪೂರೈಸುವುದರಿಂದ ಅವು ಯಕ್ಷಗೀತಗಳೆನ್ನಬಹುದು. {{gap}}ಅಂತೆ, ಹರಿದಾಸರ ಕೀರ್ತನೆಗಳಲ್ಲಿ ಯಕ್ಷಗೀತಗಳನ್ನು ಅನುಸರಿಸಿ, ಪ್ರಾಚೀನ ಕತೆಗಳನ್ನು ಅಳವಡಿಸಿ, ಪ್ರಸಂಗ ಪ್ರಬಂಧಗಳನ್ನು ಯಕ್ಷಗಾನ ಕವಿಗಳು ರಚಿಸಿದರೆನ್ನ ಬಹುದು. ಯಕ್ಷಗಾನ ಪ್ರಸಂಗಗಳಲ್ಲಿ ಹೆಚ್ಚಾಗಿ ಕನ್ನಡ ಕವಿವರೇಣ್ಯರಾದ ಗದಗಿನ ಕುಮಾರವ್ಯಾಸನ ಭಾರತ, ತೊರವೆಯ ಕುಮಾರ ವಾಲ್ಮೀಕಿಯ ರಾಮಾ ಯಣ, ಚಾಟುವಿಠಲನ ಭಾಗವತ, ಲಕ್ಷ್ಮಿ ಶನ ಜೈಮಿನಿಭಾರತ ಇತ್ಯಾದಿಗಳು ಅನುವಾದಿಸಲ್ಪಟ್ಟಿವೆ. {{center|2}} “ಯಕ್ಷಗಾನ'ವೆಂಬ ಹೆಸರು :ಶಾರ್ಙ್ಗದೇವನು ಕನ್ನಡದ ದೇವ ಗಿರಿಯ ಯಾದವವಂಶದ ಸಿಂಘಣನ ಆಶ್ರಯದಲ್ಲಿದ್ದವನು (ಇ. 1210-24). ಇವನು ಸಂಸ್ಕೃತದಲ್ಲಿ 'ಸಂಗೀತ ರತ್ನಾಕರ'ವನ್ನು ಬರೆದಿದ್ದಾನೆ (ಮದ್ರಾಸಿನ ಅಡ್ಯಾರ್ ಲೈಬ್ರೆರಿ), ಆಗಿನ ಕಾಲದಲ್ಲಿ ಬಳಕೆಯಿದ್ದ ಕೆಲವು ನರ್ತನಾದಿಗಳು ಇಲ್ಲಿ ಹೇಳಿವೆ: 'ಗೊಂದಲ' ನೃತ್ಯಕ್ಕೆ 'ಗೊಂಡಲಿ'ಯೆಂದು ಹೇಳಿದೆ (7-1281,89). ಕೆಲವು ಪ್ರಾದೇಶಿಕ ಪದಗಳು ಇದರಲ್ಲಿ ಬಳಸಲಾಗಿವೆ: 'ಮಾತು ಧಾತುಗಳು ಸಮನಾಗಿರಬೇಕು' ಎಂಬಲ್ಲಿ, 'ಮಾತು' ಎಂಬುದು ಅಚ್ಚಗನ್ನಡವಾಗಿದೆ. ಈ ಗ್ರಂಥದ ಪ್ರಕೀರ್ಣಕಾಧ್ಯಾಯದಲ್ಲಿ, ಸಂಕೀರ್ಣ ಸ್ಥಾಯಗಳನ್ನು ಹೇಳುವಲ್ಲಿದೆ: (ಚಾಲಿರ್ಜತಿ ಕೀರ್ತಿತಾ' (3-165). “ಚಾಲಿಃ ಭಂಗಿವಿಶೇಷೇಣ ಸ್ವರಾಣಾಂ ಚಾಲನಂ ಸಾ ಲೋಕೇ ಜತಿ ಕಥ್ಯತೇ' ಎಂದು ಕಲ್ಲಿ<noinclude></noinclude> devju5b4yobh0i1yxnfc7vsc65pm3m2 ಪುಟ:ಯಕ್ಷಗಾನ ಮಕರಂದ.pdf/೬೮೦ 104 100589 322898 282217 2026-05-27T03:45:49Z Viveka BG 8559 ಸರಿಪಡಿಸಿದೆ, 322898 proofread-page text/x-wiki <noinclude><pagequality level="1" user="PraneethGanesh" /></noinclude>420 ತಾಂ ತದ್ದೀಂ ದಿಮಿತ | 4 ಸಲ ತತ್ತದಿಂ ತತ್ತದಿಂ | ತತ್ತದಿಂ | ತರಿಕಿಟತಾಂ | ದಿತೋಂ ತಾಕಡತಕ ದೀಗಡ ದಿತ್ತಾಂ ತಯತ್ತ ದಿನ್ನಾ |। ಇಲ್ಲಿಂದ ಪುನಃ ಕೋರೆತಾಳದಲ್ಲಿ ಇಡೀ ಪದ್ಯವನ್ನು ಹೇಳಬೇಕು. ಬಂದನು ದೇವರ ದೇವ | ಕರುಣ ಸಂಜೀವ॥ ಇಲ್ಲಿನ ಕೊನೆಯ ಚರಣದ ಒಳಗೆ ಕೋರೆತಾಳದ “ಡಬ್ಬಲ್ ಮುಕ್ತಾಯ” ಮಾಡಬೇಕು. ಡಬ್ಬಲ್ ಮುಕ್ತಾಯದ ದಸ್ತೆ ಹೀಗೆ: ತೋಂ | ದಿನ್ನಾ ಕಡತ ದೀಂ ದಿನ್ನಾ ಕಡತ ದೀಂ ದಿನ್ನಾ ಕಡತ | X ದಿ - ತ್ತೋಂ ದಿ - ತ್ತೋಂ ದಿ - ತ್ತೋಂ ದಿ – ತ್ತೋಂ। ದಿನ್ನಾ ಕಡತ ದೀಂ ದಿನ್ನಾ ಕಡತ ದೀ೦ ದಿನ್ನಾ ಕಡತ || X ಚರಣದಲ್ಲಿ ಇಂದ್ರ ನಂದನನ ಭಾವ” ಎಂಬಲ್ಲಿಗೆ ಮುಕ್ತಾಯ ಆರಂಭಿಸಿ ಚರಣ ವನ್ನು ಪೂರ್ತಿಗೊಳಿಸಿ ಪುನಃ “ದಿ -ತ್ತೋಂ ದಿತ್ತೋಂ" ಎಂಬ ಭಾಗಕ್ಕೆ ಮತ್ತೆ ಇಂದ್ರ ನಂದನನ........” ಎಂಬಲ್ಲಿಂದ ಆರಂಭಿಸಿ ಇಡೀ ಚರಣವನ್ನು ಹಾಡಿದಾಗ ಮುಕ್ತಾಯ ಮುಗಿಯುವಷ್ಟಕ್ಕೆ ಚರಣ ಮುಗಿಯುತ್ತದೆ. ಮುಕ್ತಾಯದ ಕೊನೆಯ “ದೀಂ'ಗೆ ಮುಂದಿನ ಪದ್ಯವನ್ನು ಎತ್ತಿಕೊಳ್ಳಬೇಕು. ನೀಲ ಮೇಘ ನಿಭಾಂಗ - ತರಿಕಿಟ ತಾಂ-ದಿತ್ತೋಂ ತಾಕಡತಕ | ಇದo ಏಕತಾಳದ ಮುಕ್ತಾಯ. ಇದರ ಕೊನೆಯ 'ದೀಂ'ಗೆ ಸರಿಯಾಗಿ ಮುಂದಿನ ಚಾಲು ಕುಣಿತದ ಆರಂಭ. ಇಲ್ಲಿಂದ ಮತ್ತೆ ಕೋರೆತಾಳದಲ್ಲಿ ಮುಂದಿನ ಇಡೀ ಪದ್ಯ ಹೇಳಿ ಡಬ್ಬಲ್ ಮುಕ್ತಾಯ ಮಾಡಬೇಕು, ನೀಲ ಮೇಘ ನಿಭಾಂಗ | ...............ಕಂಸ ಸಂಹಾರ॥೨॥ ಡಬ್ಬಲ್ ಮುಕ್ತಾಯದ ಕೊನೆಯ “ದೀಂಗೆ ಕೆಳಗಿನ ಪದ್ಯವನ್ನು ಆರಂಭಿಸಿ ಏಕತಾಳದ ಮುಕ್ತಾಯ ಮಾಡಬೇಕು. ಮುಕ್ತಾಯದ ಕೊನೆಯಲ್ಲಿ “ತೋಂ- ತೋಂ - ” ಎಂಬ ಗತ್ತುಗಳೊಡನೆ ಕುಣಿಸಿ ಮತ್ತೆ ಏಕತಾಳದ ಮುಕ್ತಾಯದ ಅನಂತರ ಇಡೀ ಪದ್ಯವನ್ನು ಕೋರತಾಳದಲ್ಲಿ ಹೇಳಬೇಕು,<noinclude></noinclude> 1a5gubw982ftpjz5vxbt0wf8cbtxnv1 ಪುಟ:ಯಕ್ಷಗಾನ ಮಕರಂದ.pdf/೬೯೦ 104 100590 322768 282218 2026-05-26T17:35:04Z Reema Jalihal 7674 /* Proofread */ 322768 proofread-page text/x-wiki <noinclude><pagequality level="3" user="Reema Jalihal" /></noinclude>ಯಕ್ಷಗಾನ ರೂಪಕದ ಗಾನ-ಹೆಜ್ಜೆ-ಗೆಜ್ಜೆ {{center|_ಡಾ. ಮಾರ್ತಾ ಎಷ್ಟನ್ - ಅನುವಾದ: ಲೀಲಾ ಭಟ್.}} ಇಂತೀ ತಾಳಮೇಳ ಶ್ರುತಿಗೆಜ್ಜೆಗಳಿಂದ ತುಂಬುರ ನಾರದರು ಮೇಳಯಿಸಿ ನಡೆಯುತ್ತಾ ಅಂಧಕಾಸುರನಲ್ಲಿ ಹರನಾಟ್ಯವಾಡಿದಂತೆ ಕಾಳಿಯ ನಾಗನ ಶಿರದಲ್ಲಿ ಹರಿ ನಾಟ್ಯವಾಡಿದಂತೆ ದೇವೇಂದ್ರನ ಒಡ್ಡೋಲಗದಲ್ಲಿ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರಾಡಿದಂತೆ ನಾಟ್ಯಕ್ರಮ ವಿಧಾನಂಗಳಂ ತೋರ್ಪರೆನ್ನಳವಲ್ಲ__ __ಎಂದು ಯಕ್ಷಗಾನ ನೃತ್ಯದ ಒಂದೇ ಒಂದಾದ ಪ್ರಾಯೋಗಿಕ ವರ್ಣನೆಯು ಹದಿನೇಳನೆಯ ಶತಮಾನದ ಯಾವನೋ ಅಜ್ಞಾತ ಕವಿಯ 'ಸಭಾ ಲಕ್ಷಣ'ವೆಂಬ ಗ್ರಂಥದಲ್ಲಿ ದೊರೆಯುತ್ತದೆ. ಈ ನೃತ್ಯವನ್ನು ಶಬ್ದದ್ವಾರಾ ವರ್ಣಿಸುವುದು ಕಷ್ಟ ಸಾಧ್ಯ. ಆದರೂ ಬಡಗಂತಿಟ್ಟಿನ ಬಯಲಾಟದ ವಿಷಯವಾಗಿ ನನ್ನ ಕಣ್ಣರಿಕೆಯ ಅನುಭವ, ಅನಿಸಿಕೆಗಳನ್ನು ವಾಚಕರೊಡನೆ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ. ಎಣ್ಣೆ ದೀಪಗಳ ಬೆಳಕಿನಲ್ಲಿ ಮಾನವ ಮುಖಗಳ ಸಾಗರದ ನಡುವೆ ರಾತ್ರಿಯ ಕತ್ತಲಿನ ಮೇಲ್ಕಟ್ಟಿನಡಿಯಲ್ಲಿ ನರ್ತಕನ ಚೆಂಡೆ ಮದ್ದಲೆಗಳ ದಿವ್ಯವಾದ ನಾದಕ್ಕೆ ಸರಿಯಾಗಿ ತನ್ನ ಗೆಜ್ಜೆಯ ಉಲಿಯನ್ನು ತೊಡಗುತ್ತಾನೆ. ದೇವಿ ಚಾಮುಂಡೇಶ್ವರಿಯ ಸಿಂಹದ ದೃಢತೆ ಮತ್ತು ರೌದ್ರತೆಯಿಂದ ಚಲಿಸುತ್ತಾನೆ. ಪ್ರಲಯ ರುದ್ರನ ಸೇಡಿನಿಂದೆಂಬಂತೆ ಈ ಚಲನೆ ಇರುತ್ತದೆ. ಗಣಪತಿಯ ಮೂಷಿಕದ ಚಟುಲತೆ, ಮೂಷಿಕ ವಾಹನನ ಲಘುತ್ವ ಈ ಹೆಜ್ಜೆಗಳಲ್ಲಿರುತ್ತದೆ. ಮಾತಂಗವದನನ ಸೊಂಡಿಲಿನ ತೊನೆದಾಟದಂತೆ, ಕರ್ಣಚಾಮರಗಳ ವೀಜನದಂತೆ ನರ್ತಕನ ಗತಿಪಥಗಳಿರುತ್ತವೆ. ಪ್ರಲಯ ಸಾಗರದ ಮೇಲಿನ ವಟಪತ್ರಶಯನನ ಕೋಮಲ ಮುಲುಗಾಟದಂತೆಯು ವಿಷ್ಣುವಿನ ಶಯ್ಯಯಾಗಿ ಮಂಡಳಿಸಿದ ಮಹಾಶೇಷನ ತೊಯ್ದಾಟದಂತೆಯ ರಾವಣನ ಸೆರೆಯಲ್ಲಿ ಬಂಧಿತೆಯಾದ ಸೀತೆಯ ಅನ್ವೇಷಣೆಗಾಗಿ ಲಂಕೆಗೆ ಜಿಗಿದ ವಾನರ ಮುಖ್ಯ ಹನುಮನ ನೆಗೆತದಂತೆಯು ಈ ನರ್ತಕರು ನಾಟ್ಯದ ವಿವಿಧ ವಿನ್ಯಾಸಗಳಿಂದ ಪ್ರೇಕ್ಷಕರ ಹೃನ್ಮನಗಳನ್ನು ಗೆಲ್ಲುತ್ತಾರೆ. ಇದಲ್ಲದೆ ಜಗತ್ತನ್ನು ದುಷ್ಕಾರ್ಯಭಾರದಿಂದ ತಲ್ಲಣಿಸುವಂತೆ ಮಾಡಿದ ರಾಕ್ಷಸ ಚಕ್ರವರ್ತಿ ರಾವಣನ ಪರಾಕ್ರಮದಂತೆ ಅವರ ಪಾದಗಳು ಭೂಮಿಯನ್ನು ಬಲವಾಗಿ ಅಪ್ಪಳಿಸುತ್ತವೆ.<noinclude></noinclude> 09xkmfk3fw31h1tqaolxief66vlv66u 322781 322768 2026-05-26T18:38:07Z Pragathi. BH 7585 /* Validated */ 322781 proofread-page text/x-wiki <noinclude><pagequality level="4" user="Pragathi. BH" /></noinclude>ಯಕ್ಷಗಾನ ರೂಪಕದ ಗಾನ-ಹೆಜ್ಜೆ-ಗೆಜ್ಜೆ {{Rule}} {{center|_ಡಾ. ಮಾರ್ತಾ ಎಷ್ಟನ್ - ಅನುವಾದ: ಲೀಲಾ ಭಟ್.}} {{gap}}ಇಂತೀ ತಾಳಮೇಳ ಶ್ರುತಿಗೆಜ್ಜೆಗಳಿಂದ ತುಂಬುರ ನಾರದರು ಮೇಳಯಿಸಿ ನಡೆಯುತ್ತಾ ಅಂಧಕಾಸುರನಲ್ಲಿ ಹರನಾಟ್ಯವಾಡಿದಂತೆ ಕಾಳಿಯ ನಾಗನ ಶಿರದಲ್ಲಿ ಹರಿ ನಾಟ್ಯವಾಡಿದಂತೆ ದೇವೇಂದ್ರನ ಒಡ್ಡೋಲಗದಲ್ಲಿ ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರಾಡಿದಂತೆ ನಾಟ್ಯಕ್ರಮ ವಿಧಾನಂಗಳಂ ತೋರ್ಪರೆನ್ನಳವಲ್ಲ__ {{gap}}__ಎಂದು ಯಕ್ಷಗಾನ ನೃತ್ಯದ ಒಂದೇ ಒಂದಾದ ಪ್ರಾಯೋಗಿಕ ವರ್ಣನೆಯು ಹದಿನೇಳನೆಯ ಶತಮಾನದ ಯಾವನೋ ಅಜ್ಞಾತ ಕವಿಯ 'ಸಭಾ ಲಕ್ಷಣ'ವೆಂಬ ಗ್ರಂಥದಲ್ಲಿ ದೊರೆಯುತ್ತದೆ. ಈ ನೃತ್ಯವನ್ನು ಶಬ್ದದ್ವಾರಾ ವರ್ಣಿಸುವುದು ಕಷ್ಟ ಸಾಧ್ಯ. ಆದರೂ ಬಡಗಂತಿಟ್ಟಿನ ಬಯಲಾಟದ ವಿಷಯವಾಗಿ ನನ್ನ ಕಣ್ಣರಿಕೆಯ ಅನುಭವ, ಅನಿಸಿಕೆಗಳನ್ನು ವಾಚಕರೊಡನೆ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ. {{gap}}ಎಣ್ಣೆ ದೀಪಗಳ ಬೆಳಕಿನಲ್ಲಿ ಮಾನವ ಮುಖಗಳ ಸಾಗರದ ನಡುವೆ ರಾತ್ರಿಯ ಕತ್ತಲಿನ ಮೇಲ್ಕಟ್ಟಿನಡಿಯಲ್ಲಿ ನರ್ತಕನ ಚೆಂಡೆ ಮದ್ದಲೆಗಳ ದಿವ್ಯವಾದ ನಾದಕ್ಕೆ ಸರಿಯಾಗಿ ತನ್ನ ಗೆಜ್ಜೆಯ ಉಲಿಯನ್ನು ತೊಡಗುತ್ತಾನೆ. ದೇವಿ ಚಾಮುಂಡೇಶ್ವರಿಯ ಸಿಂಹದ ದೃಢತೆ ಮತ್ತು ರೌದ್ರತೆಯಿಂದ ಚಲಿಸುತ್ತಾನೆ. ಪ್ರಲಯ ರುದ್ರನ ಸೇಡಿನಿಂದೆಂಬಂತೆ ಈ ಚಲನೆ ಇರುತ್ತದೆ. ಗಣಪತಿಯ ಮೂಷಿಕದ ಚಟುಲತೆ, ಮೂಷಿಕ ವಾಹನನ ಲಘುತ್ವ ಈ ಹೆಜ್ಜೆಗಳಲ್ಲಿರುತ್ತದೆ. ಮಾತಂಗವದನನ ಸೊಂಡಿಲಿನ {{gap}}ತೊನೆದಾಟದಂತೆ, ಕರ್ಣಚಾಮರಗಳ ವೀಜನದಂತೆ ನರ್ತಕನ ಗತಿಪಥಗಳಿರುತ್ತವೆ. ಪ್ರಲಯ ಸಾಗರದ ಮೇಲಿನ ವಟಪತ್ರಶಯನನ ಕೋಮಲ ಮುಲುಗಾಟದಂತೆಯು ವಿಷ್ಣುವಿನ ಶಯ್ಯಯಾಗಿ ಮಂಡಳಿಸಿದ ಮಹಾಶೇಷನ ತೊಯ್ದಾಟದಂತೆಯ ರಾವಣನ ಸೆರೆಯಲ್ಲಿ ಬಂಧಿತೆಯಾದ ಸೀತೆಯ ಅನ್ವೇಷಣೆಗಾಗಿ ಲಂಕೆಗೆ ಜಿಗಿದ ವಾನರ ಮುಖ್ಯ ಹನುಮನ ನೆಗೆತದಂತೆಯು ಈ ನರ್ತಕರು ನಾಟ್ಯದ ವಿವಿಧ ವಿನ್ಯಾಸಗಳಿಂದ ಪ್ರೇಕ್ಷಕರ ಹೃನ್ಮನಗಳನ್ನು ಗೆಲ್ಲುತ್ತಾರೆ. ಇದಲ್ಲದೆ ಜಗತ್ತನ್ನು ದುಷ್ಕಾರ್ಯಭಾರದಿಂದ ತಲ್ಲಣಿಸುವಂತೆ ಮಾಡಿದ ರಾಕ್ಷಸ ಚಕ್ರವರ್ತಿ ರಾವಣನ ಪರಾಕ್ರಮದಂತೆ ಅವರ ಪಾದಗಳು ಭೂಮಿಯನ್ನು ಬಲವಾಗಿ ಅಪ್ಪಳಿಸುತ್ತವೆ.<noinclude></noinclude> 5utpd2p602gzky4184fgxez9b88vx0d ಪುಟ:ಯಕ್ಷಗಾನ ಮಕರಂದ.pdf/೬೭೯ 104 100607 322717 282235 2026-05-26T15:57:13Z Viveka BG 8559 ಸರಿಪಡಿಸಿದೆ, 322717 proofread-page text/x-wiki <noinclude><pagequality level="1" user="PraneethGanesh" /></noinclude>41 ಇಲ್ಲಿಂದ 'ಪರಾಕ್ರಮ ಕಂಠೀರವ' ಮಂತಾಾಗಿ ಪರಿಚಯಿಸುವ ಮಾತು ಆರಂಭವಾಗುತ್ತದೆ. ಒಂದಕ್ಕಿಂತ ಹೆಚ್ಚು ವೇಷಗಳಿದ್ದಾಗ ತೆರೆಕುಣಿತವನ್ನೂ, 'ದಿಗಿಣ' ಕುಣಿತವನ್ನೂ ಪ್ರತಿಯೊಬ್ಬರಿಗೂ ಬೇರೆ ಬೇರೆಯಾಗಿ ಕುಣಿಸಬೇಕು. ತರುಣ ವೇಷಗಳನ್ನು ರಂಗಕ್ಕೆ ಬರಿಸುವಾಗ ಕೇವಲ 'ದಿಗಿಣ'ದಿಂದ ಆರಂಭಿಸುವುದು ರೂಢಿ, ಟೆಂಟು ಮೇಳಗಳಲ್ಲಿ ತೆರೆಕುಣಿತದ ಅವಕಾಶವಿಲ್ಲದಾಗ ನೇರವಾಗಿ ಕೋರೆ ತಾಳ'ದ ದಸ್ತೆಯಿಂದ ಆರಂಭ ಮಾಡುವ ಅಭ್ಯಾಸವಾಗಿದೆ. ಪಾಂಡವರ ಒಡ್ಡೋ ಲಗದಲ್ಲಿ ಇದೇ ಕ್ರಮ ಇನ್ನೂ ಸ್ವಲ್ಪ ವಿಸ್ತಾರವಾಗಿ ಪದ್ಯ ಸಹಿತವಾಗಿರುತ್ತದೆ. ದಿಗಿಣ ಕುಣಿತ ಎರಡೆರಡು ಬಾರಿಯಿದ್ದು ರಂಗಕ್ಕೆ ಪ್ರವೇಶಿಸಿದ ಕೂಡಲೇ ಬೇರೆ ಬೇರೆ ವಿಧದ ಚಾಲು ಕುಣಿತವಿರುತ್ತದೆ. ಪಾಂಡವರ ಒಡ್ಡೋಲಗದಂತೆಯೇ ಇಂದ್ರಾದಿ ದೇವತೆಗಳ ಅಥವಾ ಪ್ರಸಂಗದ ಆರಂಭಕ್ಕೆ ಬರುವ ಎಲ್ಲಾ ರಾಜರ ಒಡ್ಡೋಲಗ, ರಾಮಲಕ್ಷ್ಮಣರ ಒಡೋಲಗಕ್ಕೆ ಪದ್ಯ ಮಾತ್ರ ಬೇರೆ ಇರುತ್ತದೆ. ೨. ಕೃಷ್ಣನ ಒಡ್ಡೋಲಗ ಆರಂಭದಲ್ಲಿ ಕೆಳಗಿನ ಶ್ಲೋಕವನ್ನು ಕೇದಾರಗೌಳ ರಾಗದಲ್ಲಿ ಹಾಡಬೇಕು. "ಕಸ್ತೂರೀ ತಿಲಕಂ..... ಗೋಪಾಲ ಚೂಡಾಮಣಿ | “ ಇನ್ನು ಮುಂದೆ ಕೆಳಗಿನ ಪದ್ಯವನ್ನು ಹಾಡುವಾಗ ಪ್ರತಿಯೊಂದು ಸಲವೂ ಮುಕ್ತಾಯಕ್ಕೆ ತೆರೆಯನ್ನು ಅರ್ಧಕ್ಕೆ ಇಳಿಸಿ ಪದ್ಯಕ್ಕೆ ಕುಳಿತಲ್ಲಿಂದಲೇ ಹಸ್ತಾಭಿನಯ ಮಾಡಿ ಕೊನೆಯ ಮುಕ್ತಾಯಕ್ಕೆ ತೆರೆ ಎತ್ತಿ ಬಿಡಬೇಕು. ರಾಗ_ಕೇದಾರ ಗೌಳ_ಏಕತಾಳ ದೇವ ಬಂದ | ದೇವರ ದೇವ ಬಂದ || ಪ. |। ದೇವರ ದೇವ ಶಿಖಾಮಣಿ ಬಂದ || ಅ. ಪ.॥ ಮಂದರೋದ್ಧಾರ ರ ಬಂದ । ಮಾಮನೋಹರಹರ ಬಂದ। ಪ್ರತಿಯೊಂದು ಪದ್ಯಕ್ಕೂ ಆರಂಭ ಮತ್ತು ಕೊನೆಯಲ್ಲಿ ಏಕತಾಳದ ಮುಕ್ತಾಯ. ಒಮ್ಮೆ ಇಡೀ ಪದ್ಯವನ್ನು ಏಕದಲ್ಲಿ ಹೇಳಿ, ಮತ್ತೆ ಉತ್ತರಾರ್ಧ ವನ್ನು ಕೋರೆತಾಳದಲ್ಲಿ ಹೇಳಬೇಕು. ಮುಂದಿನ ಪದ್ಯದ ಮುಕ್ತಾಯಕ್ಕೆ ಕೃಷ್ಣನಂ ರಂಗಪ್ರವೇಶ ಮಾಡಬೇಕು. ರಾಗ ನವರೋಜು-ಕೋರೆತಾಳದಲ್ಲಿ ಆರಂಭ. ಬಂದನು ದೇವರ ದೇವ || ತರಿಕಿಟ ತತ್ | ತಾಕಿಟ ಕಿಟತಕ...... ಈ ಮುಕ್ತಾಯ ಆದಿತಾಳದ್ದು, ಮುಕ್ತಾಯದ ಕೊನೆಯ “ದೀಂ'ಗೆ ಸರಿ ಯಾಗಿ ಮುಂದಿನ ಕುಣಿತ -ಅರ್ಧ ಕುಳಿತು,<noinclude></noinclude> eiuki78bg7l9luh944zl8bh7pc2zx8p ಪುಟ:ಯಕ್ಷಗಾನ ಮಕರಂದ.pdf/೬೮೧ 104 100608 322904 282236 2026-05-27T04:14:30Z Viveka BG 8559 ಸರಿಪಡಿಸಿದೆ, 322904 proofread-page text/x-wiki <noinclude><pagequality level="1" user="PraneethGanesh" /></noinclude>421 ವೇದಾಂತ ವೇದ್ಯ ವಿಶಾಲ।................ ಕೀರ್ತಿ ವಿಖ್ಯಾತ ॥೩॥ ಈ ಪದ್ಯದ ಕೊನೆಯಲ್ಲಿ ಡಬ್ಬಲ್ ಮುಕ್ತಾಯ ಮಾಡಿ ಕೊನೆಯ “ದೀಂ ನೊಡನೆ ನಿಲ್ಲಿಸಬೇಕು. " X" ಮುಕ್ತಾಯದ ಅತೀ ಕೊನೆಯ ಭಾಗದ ಪದ್ಯವನ್ನು ಹೇಳದೇ ದಿ-ತೈತತ | -ಎಂಬ ದಸ್ತೆಯ ಉಚ್ಚಾರವನ್ನು ಭಾಗವತರು ಬಾಯಿಂದ ಹೇಳುವ ಕ್ರಮವೂ ಇದೆ. ಇಲ್ಲಿಂದ “ದೇವ ದೇವೋತ್ತಮ ಮುಂತಾದ ಸ್ತುತಿಯೊಡನೆ ಪಾತ್ರಧಾರಿಯನ್ನು ಮಾತನಾಡಿಸುವುದು, ಜೋಡು ಮುಕ್ತಾಯದ ಕೊನೆಯ ದೀಂ'ಗೆ ಸರಿಯಾಗಿ ಮತ್ತೆ “ಬಂದನು ದೇವರ ದೇವ” ಎಂಬ ಆರಂಭದ ಚರಣವನ್ನು ತ್ವರಿತ ಏಕದಲ್ಲಿ ಹಾಡಿ, ತ್ವರಿತ ಏಕದ “ಚಾಲು ಮುಕ್ತಾಯ' ಮಾಡಿ ನಿಲ್ಲಿಸುವುದೂ ಇದೆ. ಅಂದರೆ ಅನುಕ್ರಮವಾಗಿ ಕುಣಿತದ ಬೇರೆ ಬೇರೆ ಹಂತಗಳಿವೆ. ೩.ಬಣ್ಣದ ಒಡ್ಡೋಲಗ ಬಣ್ಣದ ವೇಷದ (ರಾಕ್ಷಸ ಪಾತ್ರದ) ಒಡೋಲಗಕ್ಕೆ ಆರಂಭದಲ್ಲಿ ಸಾಮಾನ್ಯ ವಾಗಿ ಒಂದು ಪದ್ಯದ ಅಥವಾ ಗದ್ಯದ (ವಚನ) ತುಣುಕು ಇರುತ್ತದೆ. ಉದಾ:- 'ಇತ್ತಾ ಘೋರ ಭೀಷಣ ದೈತ್ಯನೋಲಗವಿತ್ತನೆಂತೆನೆ' ಇದರ ಕೊನೆಯಲ್ಲಿ ಏಕತಾಳದಲ್ಲಿ ಕೆಳಗಿನ ಅಬ್ಬರ ದಸ್ತೆ” ಮಾಡಬೇಕು: X X 1. ತಾಂತಾಂ ತಾಂತಾ | ತಾಂತಾಂ ತಾಂತಾಂ ।ತಾಂತಾಂ ತಾಂತಾಂ | X ತಾಂತಾಂ ತಾಂತುಂ | X X X ದೇo ದೇಂತ ದಿ -ತ್ತಾಂ ॥ 2.ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ತಾಂ। 3.ದಿಗ್ಡ್ ದಿಗ್ಡ್ ದಿಗ್ಡ್ ತಾಂ। 4.ದಿಗ್ಡ್ ತಾಂ ದಿಗ್ಡ್ ತಾಂ ದಿಗ್ಡ್ ತಾಂ ದಿಗ್ಡ್ ತಾಂ ದಿಗ್ಡ್ ತಾಂ ದಿಗ್ಡ್ ತಾಂ ದಿಂದಾತ್ತಂ। 5.ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ದಿ ದಿಗ್ಡ್<noinclude></noinclude> fxm8ficlk9u8vwz372maua05ynnbo6e ಪುಟ:ಯಕ್ಷಗಾನ ಮಕರಂದ.pdf/೬೮೨ 104 100609 322917 282237 2026-05-27T06:52:27Z Viveka BG 8559 ಸರಿಪಡಿಸಿದೆ, 322917 proofread-page text/x-wiki <noinclude><pagequality level="1" user="PraneethGanesh" /></noinclude>422 X ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್।ತೋಂ ತೋಂ- X ದಿ ರ್ರ್ ರ್ರ್ ರ್ರ್ ರ್ರ್ ರ್ರ್ ರ್ರ್ ರ್ರ್ ರ್ರ್ .....। ತೋಂ ತೋಂ॥ । ಈ ಅಬ್ಬರ ದಸ್ತೆ ಮುಗಿದ ತತ್‌ಕ್ಷಣ ರಕ್ಕಸನ ಆರ್ಭಟೆ. (ಬಣ್ಣದ ಕೂಗು ಎಂದೇ ಇದಕ್ಕೆ ಹೆಸರು ಮತ್ತೆ ಅಬ್ಬರ ದಸ್ತೆ. ಮತ್ತೆ ಆರ್ಭಟೆ. ಮೂರನೆಯ ಅಬ್ಬರ ದಸ್ತೆಯ ಅಂತ್ಯಕ್ಕೆ ಪಾತ್ರಧಾರಿ ರಂಗಕ್ಕೆ ಬಂದು ತೆರೆಯ ಮರೆಯಲ್ಲಿ ಆರ್ಭ ಟಿಸುತ್ತಾನೆ. ಅದರ ಅಂತ್ಯದಲ್ಲಿ ತೆರೆಯನ್ನು ಕೆಳಗಿಳಿಸದೇ (ಬಣ್ಣದ ಕಿರೀಟದ ಹಿಂಭಾಗ ಮಾತ್ರ ಕಾಣಿಸುವಂತೆ) ಬೆನ್ನು ಹಾಕಿ ಕೆಳಗಿನ ಮೂರು ವಿಧದ ತೆರೆ ಕುಣಿತ X X 1. ದೇಂ - ದಿನ್ನಾ ದೇಂ - ದಿನ್ನಾ | X 4 ಸಲ ದೇಂ ದೇಂತ ದಿ - ತ್ತಾ| ದೀಗಡ ದಿನ್ನಾ ದೀಗಡ ದಿನ್ನ । ದಿತ್ತೋoತ | ಕಡತಕ ದೀಗಡ | ದಿತ್ತಾಂತಯತ್ತ ದಿನ್ನ॥ಮುಕ್ತಾಯ -4 ಸಲ 2. ದಿಗಣಾಂತಯತ್ತ ದಿನ್ನ | ದೀಗಡ ಕಡತಕ ತರಿಕಿಟ ಕಡತಕ | ದೇಂದೇಂತ ದಿತ್ತಾ ದಿತ್ತಾoತಯತ್ತ ದಿನ್ನ. - ಮುಕ್ತಾಯ - 4 ಸಲ X X X X 3. ತೈಯತಾತಾ ತಾ ತೈಯ್ಯತಾತಾ ತೋದಿಂದ ಕಡತದಿಂದ ತೋಂತದಿನ್ನಕ ದಿನ್ನ 4 ಸಲ ಮುಕ್ತಾಯ ಅಷ್ಟತಾಳ ಮೇಲಿನ ಭಾಗಗಳಲ್ಲಿ ಹಿಂದೆ ಸರಿದು ಮತ್ತೆ ಕುಣಿತದ ಭಾಗಕ್ಕೆ ತೆರೆಯ ಬಳಿ ತಾಗಬೇಕು. ಕೊನೆಯ ಮುಕ್ತಾಯದ ಕೊನೆಗೆ “ದೇಂತತ ಕಿಟತಕ....” ಎಂಬ ಏಕತಾಳ ದಸ್ತೆಯ ಭಾಗವನ್ನು ಹಿಂದೆ ರಾಜನ ಒಡ್ಡೋಲಗಕ್ಕೆ ಇರುವಂತೆ ಮಾಡಿ ಮುಕ್ತಾಯದ ಕೊನೆಯಲ್ಲಿ ಕೆಳಗಿನ ದಸ್ತೆಯಲ್ಲಿ ಮೊದಲು ಎಡಕ್ಕೆ, ಕ್ರಮೇಣ ತೆರೆಯನ್ನು ಸ್ವಲ್ಪ ಸ್ವಲ್ಪವೇ ಇಳಿಸುತ್ತಾ ಮುಖ ತೋರಿಸುವುದು. X X X 1. -ತೋದಿಂದ ತಾಂ ದಿತ್ತೊಂತದಿನ್ನಾ ಕಡತಕ ದೀಂ।..,....| ದೇಂ - ತ ದಿಂದತ್ತಾಂ || ದಿಂತ್ತೊಂತ ಕಡತಕ....ದಿನ್ನಾ ಮುಕ್ತಾಯ 0060 APPL<noinclude></noinclude> ck1aqnwbakp5gzt2wfc6psb1616biq6 ಪುಟ:ಯಕ್ಷಗಾನ ಮಕರಂದ.pdf/೬೮೩ 104 100610 322928 282238 2026-05-27T07:42:50Z Viveka BG 8559 ಸರಿಪಡಿಸಿದೆ, 322928 proofread-page text/x-wiki <noinclude><pagequality level="1" user="PraneethGanesh" /></noinclude>423 'ದೇಂತ ದಿಂದತ್ತಾಂ' ಎಂಬ ಭಾಗಕ್ಕೆ ತೆರೆಯನ್ನು ಮೇಲಕ್ಕೆ ಬಿಡಬೇಕು, ಹೀಗೆಯೇ ಬಲಕ್ಕೂ, ಎದುರಿಗೂ ಮುಖ ತೋರಿಸಿ, ಮುಕ್ತಾಯದ ಅನಂತರ ತೆರೆ ಯನ್ನು ನಡುವಿನ ತನಕ ಇಳಿಸಿ ಕೆಳಗಿನ 1ರಲ್ಲಿ ಮುಂದಕ್ಕೂ 2ರಲ್ಲಿ ಹಿಂದಕ್ಕೂ ಕುಣಿದು ಮುಕ್ತಾಯ, 1. - X X - ದಿನ್ನದಿಂ - ದಿನ್ನದಿಂ X X ಮುಂದಕ್ಕೆ X X ಹಿಂದಕ್ಕೆ ... 2. ತೈತತಾ ದೀಂ - ತೈತ ತಾದೀಂ -ದೇಂ – ತ ದಿಂದ ತಾಂ -ದಿತ್ತೋoತಾಗಡತಕ... ........ತಯ ತದಿನ್ನ | -ಮುಕ್ತಾಯ. ಇಲ್ಲಿಂದ ಮತ್ತೆ “ದೇಂತತ ಕಿಟತಕ........” ದಸ್ತೆ ಮಾಡಿ ಮುಕ್ತಾಯದ ಅನಂತರ ಕೆಳಗಿನ ದಸ್ತೆಗಳಲ್ಲಿ ಕ್ರಮೇಣ ಹಲ್ಲುಜ್ಜುವುದು, ಮುಖ ತೊಳೆಯುವುದು, ಸ್ನಾನ, ಭಸ್ಮಧಾರಣೆ ಮಾಡುವುದು, ಶಿವಪೂಜೆ ಮಾಡಿ ಪ್ರಸಾದ ಸ್ವೀಕರಿಸುವುದು. ದಸ್ತೆಯ ಪ್ರತಿ ಮುಕ್ತಾಯಕ್ಕೆ ತೆರೆಯನ್ನು ಮೇಲಕ್ಕೆ ಬಿಟ್ಟು ಮತ್ತೆ ದಸ್ತೆಗಳಲ್ಲಿ ತೆರೆಯನ್ನು ಸೊಂಟದ ತನಕ ಇಳಿಸಿ ಈ ಕ್ರಿಯೆಗಳನ್ನು ಅಭಿನಯಿಸಬೇಕು. ಈ ಸಮಯಕ್ಕೆ ಕಾಲಿನಲ್ಲಿ ಕಿರುಹೆಜ್ಜೆಗಳನ್ನು ಮಾತ್ರ ಹಾಕಬೇಕು. X X X X X X 1. .ತಾಕಡತಕ ದಿನ್ನ ದಿಂ| ತಾಕಡತಕ ದಿನ್ನ ದಿಂ | – 2 ಸಲ X X X X X -ದಿನ್ನ ದಿಂ ದಿನ್ನ ದಿಂ | ದಿನ್ನದಿಂ ದಿನ್ನದಿಂ 2 ಸಲ | ಹಲ್ಲುಜ್ಜುವುದು. X X X X ದೀಂ ದೀಂ ದೀಂ ದೀಂ ದೀಂ ದೀಂ ದೀಂ ದೀಂ | -ದಿತ್ತೋಂ ತಾಕಡತ್ತಕ ತಯತ ದಿನ್ನಾ॥ಮುಕ್ತಯ। 2, ತೋಂ ತೋಂ ತೋಂ ತಾ ಧೀಂ - ತಾಕಡ ದಿನ | 4 ಸಲ X X X X ತೋಂತತಾಧೀಂ | ತೋಂತ ತಾಧೀಂ | 4 ಸಲ X X X X ತಾದಿಂ - ತಾದಿಂ - ತಾದಿಂ - ತಾದಿಂ | X X X X ದಿಂ - ದಿ೦ – ದಿಂ- ದಿಂ - ದಿಂ ದಿಂ - ದಿಂ - ದಿಂ | ದಿ ತೋಂ ತಾ ಕಡತಕ......ದಿನ್ನಾ ಮುಖಪ್ರಕ್ಷಾಲನ ಸ್ನಾನ, ಭಸ್ಮ ಧಾರಣೆ -ಮುಕ್ತಾಯ,<noinclude></noinclude> 8mq3bu1twi7lq6bji5raebpatbgcokx ಪುಟ:ಯಕ್ಷಗಾನ ಮಕರಂದ.pdf/೬೮೪ 104 100611 322934 282239 2026-05-27T08:07:54Z Viveka BG 8559 ಸರಿಪಡಿಸಿದೆ, 322934 proofread-page text/x-wiki <noinclude><pagequality level="1" user="PraneethGanesh" /></noinclude>424 x X X X 3. - ತಾಕಡತಕ ದಿನ್ನ ದಿಂ | - ತಾಕಡತಕ ದಿನ್ನ ದಿಂ | X X X X ದಿನ್ನ ದಿಂ ದಿನ್ನ ದಿಂ ದಿನ್ನ ದಿಂ ದಿನ್ನ ದಿಂ X X ದಿಂ ದಿಂ ದಿಂ ದಿಂ "X X -ದಿತ್ತೊಂ ತಾಕಡತಕ ದೀಗಡ X ದಿನ್ನ | X X ಶಿವಲಿಂಗಕ್ಕೆ ಅಭಿ ಷೇಕ, ಪೂಜೆ, ಪ್ರಸಾದ ಸ್ವೀಕ ರಿಸಿ, ಪೂಜೆ ವಿಸ ರ್ಜನೆ ಮಾಡು ವದು. ಮುಕ್ತಾಯ ಇಲ್ಲಿಂದ - ದಾಂ ದಾಂದ ದೇಂ - ದಾಂ ದಾಂದ ದೇಂ ಎಂಬ ದಸ್ತೆಯಲ್ಲಿ ಅರ್ಧ ಚಂದ್ರಾಕಾರವಾಗಿ ಕುಣಿಯುತ್ತಾ ರಂಗದ ಮುಂಭಾಗಕ್ಕೆ ಬಂದು ಒಂದು ಕೂಗು ಕೂಗಿದ ಅನಂತರ ಸಭೆಗೆ ನಮಸ್ಕಾರ ಮಾಡಬೇಕು. ನಮಸ್ಕಾರ ಮಾಡು ವಾಗ ಕೆಳಗಿನ ದಸ್ತೆಯೊಡನೆ ನಿಧಾನವಾಗಿ ಕೈಯನ್ನು ಅಗಲಿಸಿ, ಜೋಡಿಸಬೇಕು. X X X X -ತೋದಿಂದ ತಾಕಡ ದಿತ್ತಾಂ ತಯತ್ತ ದಿನ್ನ | ದೇಂ ತೋದಿಂದ ತಾಕಡ ದಿತಾಂತಯತ್ತ ದಿನ್ನ | ದೇಂ ತೋಂದಿಂದ ತಾಕಡ ದಿತಾಂತ ಯತ್ತ ದಿನ್ನ || ದೇಂ - ತ ದಿತ್ತಾಂ ದೀಗಡ ದಿನ್ನ ದೀಗಡ ದಿನ್ನ ದಿತ್ತೊಂ ತಾಕಡತಕ.... ದಿನ್ನ ಮುಕ್ತಾಯ ಈ ಮುಕ್ತಾಯದ ಅಂತ್ಯಕ್ಕೆ ಆರಂಭದಲ್ಲಿಯಂತೆ 'ಅಬ್ಬರ ದಸ್ತೆ' ಮಾಡಿ ಕೊನೆಯ ಹಂತದ ಹೊರಳಿಕೆಯಲ್ಲಿ ರಂಗ ಪ್ರವೇಶ ಮಾಡಿ 'ತೋಂ - ತೋಂ .' ಗತ್ತಿನೊಂದಿಗೆ ನಿಂತು ಆರ್ಭಟೆ ಮಾಡಿದ ಅನಂತರ ಕೆಳಗಿನ ದಸ್ತೆಯಲ್ಲಿ ದೊಡ್ಡ ಹೆಜ್ಜೆಯ ಕುಣಿತ: X X X X X 1, ದೇಂ ದಿತ್ತಾ ದೇಂ ದಿತ್ತಕ | ದೇಂ X X X X 2, ದಿತ್ತಾಂ ದೇಂತಾಂ ದಿತ್ತಾಂ ದೇಂ ತಾಂ | X X 3. ದೇಂ ದೇಂ ದೇಂ ದೇಂ | ದೇಂ ದೇಂತ ದಿತ್ತಾ | ದೀಗಡ ದಿನ್ನಾ ದೀಗಡ ದಿನ್ನಾ ದಿತ್ತೋಂ ತಾಕಡತಕ..... ದಿನ್ನ | ದೇಂ ||ಮುಕ್ತಾಯ<noinclude></noinclude> 3vainul0n8v6jbzlidfwtxgwh2gwk4h ಪುಟ:ಯಕ್ಷಗಾನ ಮಕರಂದ.pdf/೬೮೫ 104 100612 322705 282240 2026-05-26T14:53:11Z Reema Jalihal 7674 /* Not proofread */ 322705 proofread-page text/x-wiki <noinclude><pagequality level="1" user="PraneethGanesh" /></noinclude>{{right|425}} : ಈ ಮುಕ್ತಾಯದ ಅಂತ್ಯಕ್ಕೆ ಮತ್ತೆ ರಕ್ಕಸ ಆರ್ಭಟಿಸಿ ಮುಗಿಸಿದಾಗ “ಭಳಿರೇ ರಕ್ಕಸ ಕುಲೋದ್ಧಾರಕ” ಎಂದು ಮುಂತಾಗಿ ಭಾಗವತರು ಅವನನ್ನು ಸಭೆಗೆ ಪರಿ ಚಯ ಮಾಡಿಸುವುದು. ೪. ಹೆಣ್ಣು ಬಣ್ಣದ ಪ್ರವೇಶ ಹೆಣ್ಣು ಬಣ್ಣದ ಒಡೋಲಗಕ್ಕೂ ಇದೇ ರೀತಿಯ ದಸ್ತೆಗಳು ಒಂದೆರಡು ಸಂದರ್ಭ ಹೊರತಾಗಿ ಸ್ನಾನ, ಶಿವಪೂಜೆ ಇತ್ಯಾದಿಗಳ ಬದಲಾಗಿ ತಲೆ ಬಾಚಂ ವುದು, ಕುಂಕುಮ ಧರಿಸುವುದು, ಕಾಡಿಗೆ ಹಚ್ಚುವುದು ಇತ್ಯಾದಿ ಮಾಡುವುದು, ರಂಗ ಪ್ರವೇಶವಾದ ಕೂಡಲೇ “ದೇಂದಿತ್ತಾ” ಎಂಬ ದೊಡ್ಡ ಹೆಜ್ಜೆಯ ಬದಲು ದುಡುಕು ಅಷ್ಟತಾಳದ “ಯತಾತಾ" ದಸ್ತೆಯಿಂದ ಕುಣಿಸಿ, ಅದೇ ತಾಳದ ಮುಕ್ತಾಯದೊಂದಿಗೆ ನಿಲ್ಲಿಸಬೇಕು. ಅವಳು ಆರ್ಭಟಿಸಿದ ಅನಂತರ “ಯಾರೇ ನೀನು ?” ಎಂದು ವಂತಾಗಿ ಪರಿಚಯ ಮಾಡಿಸುವುದು. 99. ಕಿರಾತನ ಒಡೋಲಗ ತೆರೆಯ ಕುಣಿತ-ಪಡೆಯ ಹುಡುಗರಿಗೆ X x X X 1. ದಿಗಣಾಂ ತಯತ್ತ ದಿನ್ನ ದೀಗಡ ಕಡತಕ ತರಿಕಿಟ ಕಡತಕ ದೇಂ - ತದಿತ್ತಾಂ | ದಿನ್ನದಿಂ ದಿನ್ನದಿಂ ದಿಂ ತಾಕಡತಕ ದಿನ್ನಾ | 11 4 ಸಲ ಮುಕ್ತಾಯ " ಅನಂತರ, ಕಿರಾತರಾಜನಿಗೆ ಇತರ ರಾಜರಿಗಿರುವಂತೆ “ತತಾ ದಿತ್ತಾಂ ಕಡತಕ ” ದಸ್ತೆಯಿಂದ ತೆರೆ ಕುಣಿತ, ಮುಕ್ತಾಯದ ಕೊನೆಯಲ್ಲಿ ಕೋರೆ ತಾಳದ "ತೈ ತೈ ತದಿನ ದೇಂ......” ದ ಆರಂಭ. ಈ ಸಮಯದಲ್ಲಿ ತೆರೆಯ ಹಿಂಗಡೆ ಕಿರಾತನು ರಥವೇರಿದ್ದು ಸುತ್ತ ಬೆಂಕಿ ಹಾಕಿ ಹುಡುಗರು ಬೆಂಕಿಯ ಸುತ್ತ ಕುಣಿಯುತ್ತಾರೆ. ಮುಕ್ತಾಯಕ್ಕೆ ರಂಗ ಪ್ರವೇಶ ಮಾಡಿ “ತೈತ ತೈತ ತೈತ... ಎಂಬ ಏಕತಾಳದ ದಸ್ತೆಯಿರುವಾಗ ಮೃಗನಿರೀಕ್ಷೆ ಮುಂತಾದ ಬೇಟೆಯ ವಿವಿಧ ಚಲನ ಗಳನ್ನು ತೋರುತ್ತಾರೆ. ಆಗ ಏಕತಾಳದ ಮುಕ್ತಾಯದ ಅನಂತರ ಪಡೆಯ ಹುಡು ಗರಿಗೆಲ್ಲ ಅರ್ಧ ದಿಗಿಣ ಮಾಡಿ ಕಿರಾತರಾಜನಿಗೆ ಪೂರ್ತಿ ದಿಗಿಣ ಮಾಡಿ ಮುಗಿಸಬೇಕು. ೬. ಪ್ರಮುಖ ಪಾತ್ರ ಪ್ರವೇಶ ಪ್ರಸಂಗದ ಪ್ರಮುಖ ಪಾತ್ರ ಪ್ರವೇಶ ಪದ್ಯವನ್ನು ಕೊನೆಯಲ್ಲಿ ಏಕ ಕೋರೆ ತಾಳದಲ್ಲಿ ಹೇಳುವ ಅವಕಾಶವಿದ್ದಾಗ ಕರತಾಳದ ಅನಂತರ ಪುನಃ ತ್ವರಿತ ಏಕತಾಳದಲ್ಲಿ ಪದ್ಯ ಎತ್ತಿ ಕೆಳಗಿನ ಚಾಲು ಕುಣಿತ ಕಂಣಿಸಬೇಕು. ಪ್ರತಿಯೊಂದು<noinclude></noinclude> nv3fvcag7q7wc7f8xfzrf3s3e1qh5lk 322709 322705 2026-05-26T14:58:41Z Reema Jalihal 7674 /* Not proofread */ 322709 proofread-page text/x-wiki <noinclude><pagequality level="1" user="PraneethGanesh" /></noinclude>{{right|425}} ಈ ಮುಕ್ತಾಯದ ಅಂತ್ಯಕ್ಕೆ ಮತ್ತೆ ರಕ್ಕಸ ಆರ್ಭಟಿಸಿ ಮುಗಿಸಿದಾಗ “ಭಳಿರೇ ರಕ್ಕಸ ಕುಲೋದ್ಧಾರಕ” ಎಂದು ಮುಂತಾಗಿ ಭಾಗವತರು ಅವನನ್ನು ಸಭೆಗೆ ಪರಿ ಚಯ ಮಾಡಿಸುವುದು. {{center|೪. ಹೆಣ್ಣು ಬಣ್ಣದ ಪ್ರವೇಶ}} ಹೆಣ್ಣು ಬಣ್ಣದ ಒಡೋಲಗಕ್ಕೂ ಇದೇ ರೀತಿಯ ದಸ್ತೆಗಳು_ ಒಂದೆರಡು ಸಂದರ್ಭ ಹೊರತಾಗಿ_ಸ್ನಾನ, ಶಿವಪೂಜೆ ಇತ್ಯಾದಿಗಳ ಬದಲಾಗಿ ತಲೆ ಬಾಚುವುದು, ಕುಂಕುಮ ಧರಿಸುವುದು, ಕಾಡಿಗೆ ಹಚ್ಚುವುದು ಇತ್ಯಾದಿ ಮಾಡುವುದು, ರಂಗ ಪ್ರವೇಶವಾದ ಕೂಡಲೇ “ದೇಂದಿತ್ತಾ” ಎಂಬ ದೊಡ್ಡ ಹೆಜ್ಜೆಯ ಬದಲು ದುಡುಕು ಅಷ್ಟತಾಳದ “ತೈಯತಾತಾ" ದಸ್ತೆಯಿಂದ ಕುಣಿಸಿ, ಅದೇ ತಾಳದ ಮುಕ್ತಾಯದೊಂದಿಗೆ ನಿಲ್ಲಿಸಬೇಕು. ಅವಳು ಆರ್ಭಟಿಸಿದ ಅನಂತರ “ಯಾರೇ ನೀನು ?” ಎಂದು ವಂತಾಗಿ ಪರಿಚಯ ಮಾಡಿಸುವುದು. {{center|೫. ಕಿರಾತನ ಒಡೋಲಗ ತೆರೆಯ ಕುಣಿತ-ಪಡೆಯ ಹುಡುಗರಿಗೆ X x X X 1. ದಿಗಣಾಂ ತಯತ್ತ ದಿನ್ನ ದೀಗಡ ಕಡತಕ ತರಿಕಿಟ ಕಡತಕ ದೇಂ - ತದಿತ್ತಾಂ | ದಿನ್ನದಿಂ ದಿನ್ನದಿಂ ದಿಂ ತಾಕಡತಕ ದಿನ್ನಾ | 11 4 ಸಲ ಮುಕ್ತಾಯ " ಅನಂತರ, ಕಿರಾತರಾಜನಿಗೆ ಇತರ ರಾಜರಿಗಿರುವಂತೆ “ತತಾ ದಿತ್ತಾಂ ಕಡತಕ ” ದಸ್ತೆಯಿಂದ ತೆರೆ ಕುಣಿತ, ಮುಕ್ತಾಯದ ಕೊನೆಯಲ್ಲಿ ಕೋರೆ ತಾಳದ "ತೈ ತೈ ತದಿನ ದೇಂ......” ದ ಆರಂಭ. ಈ ಸಮಯದಲ್ಲಿ ತೆರೆಯ ಹಿಂಗಡೆ ಕಿರಾತನು ರಥವೇರಿದ್ದು ಸುತ್ತ ಬೆಂಕಿ ಹಾಕಿ ಹುಡುಗರು ಬೆಂಕಿಯ ಸುತ್ತ ಕುಣಿಯುತ್ತಾರೆ. ಮುಕ್ತಾಯಕ್ಕೆ ರಂಗ ಪ್ರವೇಶ ಮಾಡಿ “ತೈತ ತೈತ ತೈತ... ಎಂಬ ಏಕತಾಳದ ದಸ್ತೆಯಿರುವಾಗ ಮೃಗನಿರೀಕ್ಷೆ ಮುಂತಾದ ಬೇಟೆಯ ವಿವಿಧ ಚಲನ ಗಳನ್ನು ತೋರುತ್ತಾರೆ. ಆಗ ಏಕತಾಳದ ಮುಕ್ತಾಯದ ಅನಂತರ ಪಡೆಯ ಹುಡು ಗರಿಗೆಲ್ಲ ಅರ್ಧ ದಿಗಿಣ ಮಾಡಿ ಕಿರಾತರಾಜನಿಗೆ ಪೂರ್ತಿ ದಿಗಿಣ ಮಾಡಿ ಮುಗಿಸಬೇಕು. ೬. ಪ್ರಮುಖ ಪಾತ್ರ ಪ್ರವೇಶ ಪ್ರಸಂಗದ ಪ್ರಮುಖ ಪಾತ್ರ ಪ್ರವೇಶ ಪದ್ಯವನ್ನು ಕೊನೆಯಲ್ಲಿ ಏಕ ಕೋರೆ ತಾಳದಲ್ಲಿ ಹೇಳುವ ಅವಕಾಶವಿದ್ದಾಗ ಕರತಾಳದ ಅನಂತರ ಪುನಃ ತ್ವರಿತ ಏಕತಾಳದಲ್ಲಿ ಪದ್ಯ ಎತ್ತಿ ಕೆಳಗಿನ ಚಾಲು ಕುಣಿತ ಕಂಣಿಸಬೇಕು. ಪ್ರತಿಯೊಂದು<noinclude></noinclude> glw47ha11zg5tnbvzenxp55d2yfppi1 322763 322709 2026-05-26T17:18:55Z Reema Jalihal 7674 /* Proofread */ 322763 proofread-page text/x-wiki <noinclude><pagequality level="3" user="Reema Jalihal" /></noinclude>{{right|425}} ಈ ಮುಕ್ತಾಯದ ಅಂತ್ಯಕ್ಕೆ ಮತ್ತೆ ರಕ್ಕಸ ಆರ್ಭಟಿಸಿ ಮುಗಿಸಿದಾಗ “ಭಳಿರೇ ರಕ್ಕಸ ಕುಲೋದ್ಧಾರಕ” ಎಂದು ಮುಂತಾಗಿ ಭಾಗವತರು ಅವನನ್ನು ಸಭೆಗೆ ಪರಿ ಚಯ ಮಾಡಿಸುವುದು. {{center|೪. ಹೆಣ್ಣು ಬಣ್ಣದ ಪ್ರವೇಶ}} ಹೆಣ್ಣು ಬಣ್ಣದ ಒಡೋಲಗಕ್ಕೂ ಇದೇ ರೀತಿಯ ದಸ್ತೆಗಳು_ ಒಂದೆರಡು ಸಂದರ್ಭ ಹೊರತಾಗಿ_ಸ್ನಾನ, ಶಿವಪೂಜೆ ಇತ್ಯಾದಿಗಳ ಬದಲಾಗಿ ತಲೆ ಬಾಚುವುದು, ಕುಂಕುಮ ಧರಿಸುವುದು, ಕಾಡಿಗೆ ಹಚ್ಚುವುದು ಇತ್ಯಾದಿ ಮಾಡುವುದು, ರಂಗ ಪ್ರವೇಶವಾದ ಕೂಡಲೇ “ದೇಂದಿತ್ತಾ” ಎಂಬ ದೊಡ್ಡ ಹೆಜ್ಜೆಯ ಬದಲು ದುಡುಕು ಅಷ್ಟತಾಳದ “ತೈಯತಾತಾ" ದಸ್ತೆಯಿಂದ ಕುಣಿಸಿ, ಅದೇ ತಾಳದ ಮುಕ್ತಾಯದೊಂದಿಗೆ ನಿಲ್ಲಿಸಬೇಕು. ಅವಳು ಆರ್ಭಟಿಸಿದ ಅನಂತರ “ಯಾರೇ ನೀನು ?” ಎಂದು ಮುಂತಾಗಿ ಪರಿಚಯ ಮಾಡಿಸುವುದು. {{center|೫. ಕಿರಾತನ ಒಡೋಲಗ ತೆರೆಯ ಕುಣಿತ-ಪಡೆಯ ಹುಡುಗರಿಗೆ X X X X 1. ದಿಗಣಾಂ ತಯತ್ತ ದಿನ್ನ ದೀಗಡ ಕಡತಕ ತರಿಕಿಟ ಕಡತಕ || _4 ಸಲ ದೇಂ - ತದಿತ್ತಾಂ | ದಿನ್ನದಿಂ ದಿನ್ನದಿಂ ದಿತೊo ತಾಕಡತಕ.........ದಿನ್ನಾ | ಮುಕ್ತಾಯ ಅನಂತರ, ಕಿರಾತರಾಜನಿಗೆ ಇತರ ರಾಜರಿಗಿರುವಂತೆ “ತತಾ ದಿತ್ತಾಂ ಕಡತಕ.... ” ದಸ್ತೆಯಿಂದ ತೆರೆ ಕುಣಿತ, ಮುಕ್ತಾಯದ ಕೊನೆಯಲ್ಲಿ ಕೋರೆ ತಾಳದ "ತೈ ತೈ ತದಿನ ದೇಂ......” ದಸ್ತೆ ಆರಂಭ. ಈ ಸಮಯದಲ್ಲಿ ತೆರೆಯ ಹಿಂಗಡೆ ಕಿರಾತನು ರಥವೇರಿದ್ದು ಸುತ್ತ ಬೆಂಕಿ ಹಾಕಿ ಹುಡುಗರು ಬೆಂಕಿಯ ಸುತ್ತ ಕುಣಿಯುತ್ತಾರೆ. ಮುಕ್ತಾಯಕ್ಕೆ ರಂಗ ಪ್ರವೇಶ ಮಾಡಿ “ತೈತ ತೈತ ತೈತ....." ಎಂಬ ಏಕತಾಳದ ದಸ್ತೆಯಿರುವಾಗ ಮೃಗನಿರೀಕ್ಷೆ ಮುಂತಾದ ಬೇಟೆಯ ವಿವಿಧ ಚಲನ ಗಳನ್ನು ತೋರುತ್ತಾರೆ. ಆಗ ಏಕತಾಳದ ಮುಕ್ತಾಯದ ಅನಂತರ ಪಡೆಯ ಹುಡುಗರಿಗೆಲ್ಲ ಅರ್ಧ ದಿಗಿಣ ಮಾಡಿ ಕಿರಾತರಾಜನಿಗೆ ಪೂರ್ತಿ ದಿಗಿಣ ಮಾಡಿ ಮುಗಿಸಬೇಕು. {{center|೬. ಪ್ರಮುಖ ಪಾತ್ರ ಪ್ರವೇಶ}} ಪ್ರಸಂಗದ ಪ್ರಮುಖ ಸ್ತ್ರೀಪಾತ್ರ ಪ್ರವೇಶ ಪದ್ಯವನ್ನು ಕೊನೆಯಲ್ಲಿ ಏಕ_ಕೋರೆ ತಾಳದಲ್ಲಿ ಹೇಳುವ ಅವಕಾಶವಿದ್ದಾಗ ಕೋರೆತಾಳದ ಅನಂತರ ಪುನಃ ತ್ವರಿತ ಏಕತಾಳದಲ್ಲಿ ಪದ್ಯ ಎತ್ತಿ ಕೆಳಗಿನ ಚಾಲು ಕುಣಿತ ಕಂಣಿಸಬೇಕು. ಪ್ರತಿಯೊಂದು<noinclude></noinclude> 7kbvbpxkv25h8louoonttzwj7260owv 322764 322763 2026-05-26T17:21:46Z Reema Jalihal 7674 322764 proofread-page text/x-wiki <noinclude><pagequality level="3" user="Reema Jalihal" /></noinclude>{{right|425}} ಈ ಮುಕ್ತಾಯದ ಅಂತ್ಯಕ್ಕೆ ಮತ್ತೆ ರಕ್ಕಸ ಆರ್ಭಟಿಸಿ ಮುಗಿಸಿದಾಗ “ಭಳಿರೇ ರಕ್ಕಸ ಕುಲೋದ್ಧಾರಕ” ಎಂದು ಮುಂತಾಗಿ ಭಾಗವತರು ಅವನನ್ನು ಸಭೆಗೆ ಪರಿ ಚಯ ಮಾಡಿಸುವುದು. {{center|೪. ಹೆಣ್ಣು ಬಣ್ಣದ ಪ್ರವೇಶ}} ಹೆಣ್ಣು ಬಣ್ಣದ ಒಡೋಲಗಕ್ಕೂ ಇದೇ ರೀತಿಯ ದಸ್ತೆಗಳು_ ಒಂದೆರಡು ಸಂದರ್ಭ ಹೊರತಾಗಿ_ಸ್ನಾನ, ಶಿವಪೂಜೆ ಇತ್ಯಾದಿಗಳ ಬದಲಾಗಿ ತಲೆ ಬಾಚುವುದು, ಕುಂಕುಮ ಧರಿಸುವುದು, ಕಾಡಿಗೆ ಹಚ್ಚುವುದು ಇತ್ಯಾದಿ ಮಾಡುವುದು, ರಂಗ ಪ್ರವೇಶವಾದ ಕೂಡಲೇ “ದೇಂದಿತ್ತಾ” ಎಂಬ ದೊಡ್ಡ ಹೆಜ್ಜೆಯ ಬದಲು ದುಡುಕು ಅಷ್ಟತಾಳದ “ತೈಯತಾತಾ" ದಸ್ತೆಯಿಂದ ಕುಣಿಸಿ, ಅದೇ ತಾಳದ ಮುಕ್ತಾಯದೊಂದಿಗೆ ನಿಲ್ಲಿಸಬೇಕು. ಅವಳು ಆರ್ಭಟಿಸಿದ ಅನಂತರ “ಯಾರೇ ನೀನು ?” ಎಂದು ಮುಂತಾಗಿ ಪರಿಚಯ ಮಾಡಿಸುವುದು. {{center|೫. ಕಿರಾತನ ಒಡೋಲಗ}} ತೆರೆಯ ಕುಣಿತ-ಪಡೆಯ ಹುಡುಗರಿಗೆ. <pre> X X X X </pre> 1. ದಿಗಣಾಂ ತಯತ್ತ ದಿನ್ನ ದೀಗಡ ಕಡತಕ ತರಿಕಿಟ ಕಡತಕ || _4 ಸಲ ದೇಂ - ತದಿತ್ತಾಂ | ದಿನ್ನದಿಂ ದಿನ್ನದಿಂ ದಿತೊo ತಾಕಡತಕ.........ದಿನ್ನಾ | ಮುಕ್ತಾಯ ಅನಂತರ, ಕಿರಾತರಾಜನಿಗೆ ಇತರ ರಾಜರಿಗಿರುವಂತೆ “ತತಾ ದಿತ್ತಾಂ ಕಡತಕ.... ” ದಸ್ತೆಯಿಂದ ತೆರೆ ಕುಣಿತ, ಮುಕ್ತಾಯದ ಕೊನೆಯಲ್ಲಿ ಕೋರೆ ತಾಳದ "ತೈ ತೈ ತದಿನ ದೇಂ......” ದಸ್ತೆ ಆರಂಭ. ಈ ಸಮಯದಲ್ಲಿ ತೆರೆಯ ಹಿಂಗಡೆ ಕಿರಾತನು ರಥವೇರಿದ್ದು ಸುತ್ತ ಬೆಂಕಿ ಹಾಕಿ ಹುಡುಗರು ಬೆಂಕಿಯ ಸುತ್ತ ಕುಣಿಯುತ್ತಾರೆ. ಮುಕ್ತಾಯಕ್ಕೆ ರಂಗ ಪ್ರವೇಶ ಮಾಡಿ “ತೈತ ತೈತ ತೈತ....." ಎಂಬ ಏಕತಾಳದ ದಸ್ತೆಯಿರುವಾಗ ಮೃಗನಿರೀಕ್ಷೆ ಮುಂತಾದ ಬೇಟೆಯ ವಿವಿಧ ಚಲನ ಗಳನ್ನು ತೋರುತ್ತಾರೆ. ಆಗ ಏಕತಾಳದ ಮುಕ್ತಾಯದ ಅನಂತರ ಪಡೆಯ ಹುಡುಗರಿಗೆಲ್ಲ ಅರ್ಧ ದಿಗಿಣ ಮಾಡಿ ಕಿರಾತರಾಜನಿಗೆ ಪೂರ್ತಿ ದಿಗಿಣ ಮಾಡಿ ಮುಗಿಸಬೇಕು. {{center|೬. ಪ್ರಮುಖ ಪಾತ್ರ ಪ್ರವೇಶ}} ಪ್ರಸಂಗದ ಪ್ರಮುಖ ಸ್ತ್ರೀಪಾತ್ರ ಪ್ರವೇಶ ಪದ್ಯವನ್ನು ಕೊನೆಯಲ್ಲಿ ಏಕ_ಕೋರೆ ತಾಳದಲ್ಲಿ ಹೇಳುವ ಅವಕಾಶವಿದ್ದಾಗ ಕೋರೆತಾಳದ ಅನಂತರ ಪುನಃ ತ್ವರಿತ ಏಕತಾಳದಲ್ಲಿ ಪದ್ಯ ಎತ್ತಿ ಕೆಳಗಿನ ಚಾಲು ಕುಣಿತ ಕಂಣಿಸಬೇಕು. ಪ್ರತಿಯೊಂದು<noinclude></noinclude> 2fkb7abhwtdvyqh5kijeze63zt2t0q1 322769 322764 2026-05-26T17:45:10Z Pragathi. BH 7585 /* Validated */ 322769 proofread-page text/x-wiki <noinclude><pagequality level="4" user="Pragathi. BH" /></noinclude>{{right|425}} ಈ ಮುಕ್ತಾಯದ ಅಂತ್ಯಕ್ಕೆ ಮತ್ತೆ ರಕ್ಕಸ ಆರ್ಭಟಿಸಿ ಮುಗಿಸಿದಾಗ “ಭಳಿರೇ ರಕ್ಕಸ ಕುಲೋದ್ಧಾರಕ” ಎಂದು ಮುಂತಾಗಿ ಭಾಗವತರು ಅವನನ್ನು ಸಭೆಗೆ ಪರಿ ಚಯ ಮಾಡಿಸುವುದು. {{center|೪. ಹೆಣ್ಣು ಬಣ್ಣದ ಪ್ರವೇಶ}} ಹೆಣ್ಣು ಬಣ್ಣದ ಒಡೋಲಗಕ್ಕೂ ಇದೇ ರೀತಿಯ ದಸ್ತೆಗಳು_ ಒಂದೆರಡು ಸಂದರ್ಭ ಹೊರತಾಗಿ_ಸ್ನಾನ, ಶಿವಪೂಜೆ ಇತ್ಯಾದಿಗಳ ಬದಲಾಗಿ ತಲೆ ಬಾಚುವುದು, ಕುಂಕುಮ ಧರಿಸುವುದು, ಕಾಡಿಗೆ ಹಚ್ಚುವುದು ಇತ್ಯಾದಿ ಮಾಡುವುದು, ರಂಗ ಪ್ರವೇಶವಾದ ಕೂಡಲೇ “ದೇಂದಿತ್ತಾ” ಎಂಬ ದೊಡ್ಡ ಹೆಜ್ಜೆಯ ಬದಲು ದುಡುಕು ಅಷ್ಟತಾಳದ “ತೈಯತಾತಾ" ದಸ್ತೆಯಿಂದ ಕುಣಿಸಿ, ಅದೇ ತಾಳದ ಮುಕ್ತಾಯದೊಂದಿಗೆ ನಿಲ್ಲಿಸಬೇಕು. ಅವಳು ಆರ್ಭಟಿಸಿದ ಅನಂತರ “ಯಾರೇ ನೀನು ?” ಎಂದು ಮುಂತಾಗಿ ಪರಿಚಯ ಮಾಡಿಸುವುದು. {{center|೫. ಕಿರಾತನ ಒಡೋಲಗ}} ತೆರೆಯ ಕುಣಿತ-ಪಡೆಯ ಹುಡುಗರಿಗೆ. <pre> X X X X </pre> 1. ದಿಗಣಾಂ ತಯತ್ತ ದಿನ್ನ ದೀಗಡ ಕಡತಕ ತರಿಕಿಟ ಕಡತಕ || _4 ಸಲ ದೇಂ - ತದಿತ್ತಾಂ | ದಿನ್ನದಿಂ ದಿನ್ನದಿಂ ದಿತೊo ತಾಕಡತಕ.........ದಿನ್ನಾ | ಮುಕ್ತಾಯ ಅನಂತರ, ಕಿರಾತರಾಜನಿಗೆ ಇತರ ರಾಜರಿಗಿರುವಂತೆ “ತತಾ ದಿತ್ತಾಂ ಕಡತಕ.... ” ದಸ್ತೆಯಿಂದ ತೆರೆ ಕುಣಿತ, ಮುಕ್ತಾಯದ ಕೊನೆಯಲ್ಲಿ ಕೋರೆ ತಾಳದ "ತೈ ತೈ ತದಿನ ದೇಂ......” ದಸ್ತೆ ಆರಂಭ. ಈ ಸಮಯದಲ್ಲಿ ತೆರೆಯ ಹಿಂಗಡೆ ಕಿರಾತನು ರಥವೇರಿದ್ದು ಸುತ್ತ ಬೆಂಕಿ ಹಾಕಿ ಹುಡುಗರು ಬೆಂಕಿಯ ಸುತ್ತ ಕುಣಿಯುತ್ತಾರೆ. ಮುಕ್ತಾಯಕ್ಕೆ ರಂಗ ಪ್ರವೇಶ ಮಾಡಿ “ತೈತ ತೈತ ತೈತ....." ಎಂಬ ಏಕತಾಳದ ದಸ್ತೆಯಿರುವಾಗ ಮೃಗನಿರೀಕ್ಷೆ ಮುಂತಾದ ಬೇಟೆಯ ವಿವಿಧ ಚಲನ ಗಳನ್ನು ತೋರುತ್ತಾರೆ. ಆಗ ಏಕತಾಳದ ಮುಕ್ತಾಯದ ಅನಂತರ ಪಡೆಯ ಹುಡುಗರಿಗೆಲ್ಲ ಅರ್ಧ ದಿಗಿಣ ಮಾಡಿ ಕಿರಾತರಾಜನಿಗೆ ಪೂರ್ತಿ ದಿಗಿಣ ಮಾಡಿ ಮುಗಿಸಬೇಕು. {{center|೬. ಪ್ರಮುಖ ಪಾತ್ರ ಪ್ರವೇಶ}} ಪ್ರಸಂಗದ ಪ್ರಮುಖ ಸ್ತ್ರೀಪಾತ್ರ ಪ್ರವೇಶ ಪದ್ಯವನ್ನು ಕೊನೆಯಲ್ಲಿ ಏಕ_ಕೋರೆ ತಾಳದಲ್ಲಿ ಹೇಳುವ ಅವಕಾಶವಿದ್ದಾಗ ಕೋರೆತಾಳದ ಅನಂತರ ಪುನಃ ತ್ವರಿತ ಏಕತಾಳದಲ್ಲಿ ಪದ್ಯ ಎತ್ತಿ ಕೆಳಗಿನ ಚಾಲು ಕುಣಿತ ಕಂಣಿಸಬೇಕು. ಪ್ರತಿಯೊಂದು<noinclude></noinclude> lg9kwmz6ovnq33lrtu7o6w01xascdqp ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 322913 322623 2026-05-27T06:22:40Z Anzx-ooo 3060 322913 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 39135<br><small>ದತ್ತಾಂಶ ಪಡೆದ ಸಮಯ: 2026-05-27 06:20:35 UTC / 2026-05-27 11:50:35 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Pragathi. BH|Pragathi. BH]] || 0 || 0 || 9373 (11199) || 0 || 0 || 7987 || 162 (324) || 1176 (3528) || 10067 || '''11199''' |- | 2 || [[Special:Contributions/Shreelatha.Halemane|Shreelatha.Halemane]] || 0 || 0 || 7408 (11180) || 0 || 0 || 4890 || 840 (1680) || 1571 (4713) || 7826 || '''11180''' |- | 3 || [[Special:Contributions/Shreesha Sharma|Shreesha Sharma]] || 0 || 0 || 3435 (4774) || 0 || 0 || 2097 || 481 (962) || 450 (1350) || 3961 || '''4774''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 535 (1269) || 0 || 0 || 70 || 63 (126) || 397 (1191) || 665 || '''1269''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/Vikashegde|Vikashegde]] || 0 || 0 || 135 (290) || 4 || 0 || 0 || 48 (96) || 70 (210) || 167 || '''293''' |- | 8 || [[Special:Contributions/A826|A826]] || 10740 || 1 || 197 (245) || 26 || 0 || 6 || 4 (8) || 28 (84) || 10980 || '''269''' |- | 9 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 10 || [[Special:Contributions/Hariprasad Shetty10|Hariprasad Shetty10]] || 0 || 0 || 91 (190) || 0 || 0 || 0 || 28 (56) || 41 (123) || 388 || '''190''' |- | 11 || [[Special:Contributions/Anzx-ooo|Anzx-ooo]] || 2 || 0 || 69 (151) || 1 || 0 || 0 || 8 (16) || 49 (147) || 103 || '''154''' |- | 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/Viveka BG|Viveka BG]] || 0 || 0 || 3 (3) || 0 || 0 || 0 || 0 (0) || 0 (0) || 3 || '''3''' |- | 19 || [[Special:Contributions/Reema Jalihal|Reema Jalihal]] || 0 || 0 || 2 (3) || 0 || 0 || 0 || 2 (4) || 0 (0) || 5 || '''3''' |- | 20 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 23 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 24 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 26 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 27 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 28 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] nbk4uyms49bp52fjn4ul09rh91b2jfx ಪುಟ:ನಿತ್ಯ ನೇಮಾವಲಿ.pdf/೧೦೧ 104 101919 322722 319906 2026-05-26T16:07:30Z Shreesha Sharma 7840 /* Validated */ 322722 proofread-page text/x-wiki <noinclude><pagequality level="4" user="Shreesha Sharma" /></noinclude> {{center|ನಿತ್ಯನೇಮಾವಲಿ}} ಗುರುವಾರ: ಜಯ ಜಯ ಗುರುಮಹಾರಾಜ ಗುರು (೪ ಸಲ) ಜಯಗುರು, ಜಯಗುರು, ಜಯಗುರು, ಜಯಗುರು {{Right|(೨ ಸಲ)}} ಜಯಜಯ ಗುರುಮಹಾರಾಜ ಗುರು ಜಯಜಯ ಪರಬ್ರಹ್ಮ ಸದ್ಗುರು (೧ ಸಲ) ಶುಕ್ರವಾರ:ಪಾವನಾ ರಾಮಾ, ಪತಿತಪಾವನ ರಾಮಾ (ಸಾವಕಾಶ ೨ ಸಲ) ಪಾವನಾ ರಾಮಾ (ಉಚ್ಚಸ್ವರದಿಂದ ಮತ್ತೆ ಮೊದಲಿನಂತೆ) ಪಾವನಾ ರಾಮಾ ಪತಿತಪಾವನಾ ರಾಮಾ (೨ಸಲ) ಹರಿ ನಾರಾಯಣ, ಗುರು ನಾರಾಯಣ |ಘಡಿ ಘಡಿ ಜಿವೇ ಕರಿ ಪಾರಾಯಣ| ತವ ದಾಸೋಹಂ ನಾರಾಯಣ| ಹರಿ ನಾರಾಯಣ, ಗುರು ನಾರಾಯಣ| ಲಕ್ಷ್ಮೀಶ್ರೀರಂಗಧರ ಸೀತಾರಘುವೀರ ರಾಧೆಗೋವಿಂದಾ| ಹರಿ ಹರಿ ರಾಧೇಗೋವಿಂದಾ |ರಖುಮಾಯೀ ಪಾಂಡುರಂಗಾ| ( ೩ಸಲ) {{center|೧೦೦}}<noinclude></noinclude> d9iin15d7a7i06myalpzko40eqyhlre ಪುಟ:ನಿತ್ಯ ನೇಮಾವಲಿ.pdf/೧೦೪ 104 101925 322723 319962 2026-05-26T16:07:48Z Shreesha Sharma 7840 /* Validated */ 322723 proofread-page text/x-wiki <noinclude><pagequality level="4" user="Shreesha Sharma" /></noinclude>{{center|ರಾತ್ರಿ ಭಜನೆ}} ಪಾಪಪುಣ್ಯಗಳ ಫಲರೂಪವಾಗಿ ಮಾನವ ದೇಹ ಪಡೆಯುತ್ತಾನೆ. ಆದರೆ ಅದರ ಹಾನಿಯನ್ನು ಮಾಡಿಕೊಳ್ಳುತ್ತಿದ್ದಾನೆ. ರಜ, ತಮ, ಸತ್ವಗುಣಗಳೇ ಈ ಹಾನಿಗೆ ಕಾರಣಗಳು, ತಮೋ ಗುಣವೆಂದರೆ ನರಕವೇ ಸೈ; ರಜೋ ಗುಣ ಮಾಯಾ ಜಾಲಕ್ಕೆ ಕಾರಣ. ಆದ್ದರಿಂದ ತುಕಾರಾಮರು ಸತ್ವಗುಣದ ಸಾಮರ್ಥ್ಯದಿಂದ ಹಗಲೂರಾತ್ರಿ ಪರಮಾರ್ಥ ಸಾಧಿಸಬೇಕು” ಎಂದು ಹೇಳುತ್ತಾರೆ. {{center|೨}} ಅಹರ್ನಿಶೀ ಸದಾ ಪರಮಾರ್ಥ ಕರಾವಾ| ಪಾಯ ನ ಠೇವಾವಾ ಆಡಮಾರ್ಗೀ||೧|| ಆಡಮಾರ್ಗಿ ಕೋಣೀ ಜನ ಜೇ ಜಾತಿಲ। ತ್ಯಾತುನೀ ಕಾಢೀಲ ತೋಚಿ ಜ್ಞಾನೀ||೨|| ತೋಚಿ ಜ್ಞಾನೀ ಖರಾ ತಾರೀ ದುಜಿಯಾಸೀ। ವೇಳೊವೇಳಾ ತ್ಯಾಸೀ ಶರಣ ಜಾವೇ||೩|| ಆಪಣ ತರೇಲ ನವೇ ತೇ ನವಲ| ಕುಳೇ ಉದ್ಧರೀಲ ಸರ್ವಾಂಟೀ ತೋ||೪|| ಶರಣ ಗೇಲಿಯಾನೇ ಕಾಯ ಹೋತೇ ಫಳ| ತುಕಾ ಮ್ಹಣೇ ಕೂಳ ಉದ್ಧರೀಲೇ||೫|| {{center|೧೦೩}}<noinclude></noinclude> mx8akxg50gib0nlmy2v3p7mksokmwjf ಪುಟ:ನಿತ್ಯ ನೇಮಾವಲಿ.pdf/೧೦೭ 104 101931 322707 284304 2026-05-26T14:57:29Z Shreesha Sharma 7840 /* Proofread */ 322707 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಆನಂದ ಸ್ವರೂಪನಾದ ದೇವನ ದರ್ಶನ ಅಂಗುಷ್ಠ ಪ್ರಮಾಣದಂತೆ ಆಗುತ್ತದೆ. ಈ ಕುರುಹು (ಗುರುತು) ಸಾಕ್ಷಾತ್ಕಾರ ಪಡೆದ ಸಾಧಕನಿಗೆ ಮಾತ್ರ ತಿಳಿಯುತ್ತದೆ. ಎಂದು ತುಕಾರಾಮರು ಹೇಳುತ್ತಾರೆ. “ಅಂಗುಷ್ಠ ಪ್ರಮಾಣ'ವೆಂದರೆ ನಾಸಿಕಾಗ್ರದೃಷ್ಟಿಯಲ್ಲಿ ಅಂಗುಷ್ಠದಷ್ಟು ಮಾತ್ರ ಕಾಣುವದು. {{center|೫}} ಜ್ಯಾಚೀ ತ್ಯಾಲಾ ಪದವೀ ಇತರಾ ನ ಸಾಜೇ| ಸಂತಾಲಾ ಉಮಜೇ ಆತ್ಮಸುಖ||೧|| ಆತ್ಮಸುಖ ಫ್ಯಾರೇ ಉಘಡ ಜ್ಞಾನದೃಷ್ಟಿ| ಯಾವಿಣ ಚಾವಟಿ ಕರೂ ನಕಾ||೨|| ಕರೂ ನಕಾ ಕಾಹೀ ಸಂತಸಂಗ ಧರಾ| ಪೂರ್ವಿಚಾ ತೋ ದೋರಾ ಉಗವೇಲ||೩|| ಉಗವೇಲ ಪ್ರಾರಬ್ಧ ಸಂತಸಂಗೇಕರುನೀ| ಪ್ರತ್ಯಕ್ಷ ಪುರಾಣೀ ವರ್ಣಿಯಲೇ||೪|| ವರ್ಣಿಯಲೇ ಏಕಾ ಗುಣನಾಮಘೋಷೇ| ಜಾತೀಲ ರೇ ದೋಷ ತುಕಾ ಮಣೇ||೫|| {{center|೧೦೬}}<noinclude></noinclude> cl7i6qc5imuoiqx6idgfvszeikiz2ht 322708 322707 2026-05-26T14:58:33Z Shreelatha.Halemane 7642 /* Validated */ 322708 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಆನಂದ ಸ್ವರೂಪನಾದ ದೇವನ ದರ್ಶನ ಅಂಗುಷ್ಠ ಪ್ರಮಾಣದಂತೆ ಆಗುತ್ತದೆ. ಈ ಕುರುಹು (ಗುರುತು) ಸಾಕ್ಷಾತ್ಕಾರ ಪಡೆದ ಸಾಧಕನಿಗೆ ಮಾತ್ರ ತಿಳಿಯುತ್ತದೆ. ಎಂದು ತುಕಾರಾಮರು ಹೇಳುತ್ತಾರೆ. “ಅಂಗುಷ್ಠ ಪ್ರಮಾಣ'ವೆಂದರೆ ನಾಸಿಕಾಗ್ರದೃಷ್ಟಿಯಲ್ಲಿ ಅಂಗುಷ್ಠದಷ್ಟು ಮಾತ್ರ ಕಾಣುವದು. {{center|೫}} ಜ್ಯಾಚೀ ತ್ಯಾಲಾ ಪದವೀ ಇತರಾ ನ ಸಾಜೇ| ಸಂತಾಲಾ ಉಮಜೇ ಆತ್ಮಸುಖ||೧|| ಆತ್ಮಸುಖ ಫ್ಯಾರೇ ಉಘಡ ಜ್ಞಾನದೃಷ್ಟಿ| ಯಾವಿಣ ಚಾವಟಿ ಕರೂ ನಕಾ||೨|| ಕರೂ ನಕಾ ಕಾಹೀ ಸಂತಸಂಗ ಧರಾ| ಪೂರ್ವಿಚಾ ತೋ ದೋರಾ ಉಗವೇಲ||೩|| ಉಗವೇಲ ಪ್ರಾರಬ್ಧ ಸಂತಸಂಗೇಕರುನೀ| ಪ್ರತ್ಯಕ್ಷ ಪುರಾಣೀ ವರ್ಣಿಯಲೇ||೪|| ವರ್ಣಿಯಲೇ ಏಕಾ ಗುಣನಾಮಘೋಷೇ| ಜಾತೀಲ ರೇ ದೋಷ ತುಕಾ ಮಣೇ||೫|| {{center|೧೦೬}}<noinclude></noinclude> 5slza0tgrou9k4dvkd9xegvyc9y6pfk ಪುಟ:ನಿತ್ಯ ನೇಮಾವಲಿ.pdf/೧೦೮ 104 101933 322710 284306 2026-05-26T15:01:39Z Shreesha Sharma 7840 /* Proofread */ 322710 proofread-page text/x-wiki <noinclude><pagequality level="3" user="Shreesha Sharma" /></noinclude>{{center|ರಾತ್ರಿ ಭಜನೆ}} '''ಭಾವಾರ್ಥ''': ಯಾರು ಎಷ್ಟೆಷ್ಟು ನಾಮಸ್ಮರಣೆ ಮಾಡುವರೋ ಅಷ್ಟಷ್ಟು ಅವರಿಗೆ ಸಾಕ್ಷಾತ್ಕಾರದ ಫಲ ದೊರೆಯುವದು. ಅವರದು ಅವರಿಗೆ. ಯಾರೂ, ಬೇರೆಯವರಿಗೆ ಸಾಕ್ಷಾತ್ಕಾರದ ಅನುಭವವನ್ನು ಕೊಡಲಾರರು. ಶ್ರೇಷ್ಠ ಸಾಕ್ಷಾತ್ಕಾರ ಪಡೆದ ಸಂತರಿಗೆ ಶ್ರೇಷ್ಠತಮ ಆತ್ಮಾನಂದದ ಅನುಭವವಾಗುತ್ತದೆ. ಆದ್ದರಿಂದ ಜ್ಞಾನ ದೃಷ್ಟಿಯನ್ನು ಪಡೆಯಿರಿ. ನಾಮಸ್ಮರಣೆಯಿಂದ ಆತ್ಮಸುಖವನ್ನು ಪಡೆಯಿರಿ. ವ್ಯರ್ಥ ವೇಳೆಯನ್ನು ಕಳೆಯಬೇಡಿರಿ. ಹೀಗೆ ಸತ್ಸಂಗದಿಂದ ಪೂರ್ವದ ಸುಕೃತದ ಸೂತ್ರವು ಈ ಜನ್ಮದಲ್ಲಿ ಕೈಗೆ ದೊರತು, ಯೋಗ್ಯ ರೀತಿಯಿಂದ ಪರಮಾರ್ಥ ಸಾಧನೆಯು ಆಗುವದು. ನಾಮಸ್ಮರಣೆಯಿಂದ ದೋಷಗಳ ಪರಿಹಾರವಾಗುವದು; ಎಲ್ಲ ಪುರಾಣಗಳೂ ಇದನ್ನೇ ಹೇಳುತ್ತವೆ ಎಂದು ತುಕಾರಾಮರು ಹೇಳುತ್ತಾರೆ. {{center|೬}} ದೋಷ ರೇ ಜಾತೀಲ ಅನಂತ ಜನ್ಮೀಂಚೇ| ಪಾಯ ತ್ಯಾ ದೇವಾಚೇ ನ ಸೋಡಾವೇ||೧|| ನ ಸೋಡಾವೇ ಪಾಯ ನಿಶ್ಚಯ ತೋ ಕರಾ| ಆಳವಾ ಶಾರಂಗಧರಾ ಭಾವಬಳೇ||೨|| ಧರೂನಿ ಕೇಶವ ಆಣಾ ಭಾವಬಳೇ। ಪಾಪಿಯಾ ನ ಕಳೇ ಕಾಹೀ ಕೇಲ್ಯಾ||೩|| {{center|೧೦೭}}<noinclude></noinclude> r66o892dconoyupydxv9mtxbc4at6hp 322711 322710 2026-05-26T15:03:46Z Shreelatha.Halemane 7642 /* Validated */ 322711 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}} '''ಭಾವಾರ್ಥ''': ಯಾರು ಎಷ್ಟೆಷ್ಟು ನಾಮಸ್ಮರಣೆ ಮಾಡುವರೋ ಅಷ್ಟಷ್ಟು ಅವರಿಗೆ ಸಾಕ್ಷಾತ್ಕಾರದ ಫಲ ದೊರೆಯುವದು. ಅವರದು ಅವರಿಗೆ. ಯಾರೂ, ಬೇರೆಯವರಿಗೆ ಸಾಕ್ಷಾತ್ಕಾರದ ಅನುಭವವನ್ನು ಕೊಡಲಾರರು. ಶ್ರೇಷ್ಠ ಸಾಕ್ಷಾತ್ಕಾರ ಪಡೆದ ಸಂತರಿಗೆ ಶ್ರೇಷ್ಠತಮ ಆತ್ಮಾನಂದದ ಅನುಭವವಾಗುತ್ತದೆ. ಆದ್ದರಿಂದ ಜ್ಞಾನ ದೃಷ್ಟಿಯನ್ನು ಪಡೆಯಿರಿ. ನಾಮಸ್ಮರಣೆಯಿಂದ ಆತ್ಮಸುಖವನ್ನು ಪಡೆಯಿರಿ. ವ್ಯರ್ಥ ವೇಳೆಯನ್ನು ಕಳೆಯಬೇಡಿರಿ. ಹೀಗೆ ಸತ್ಸಂಗದಿಂದ ಪೂರ್ವದ ಸುಕೃತದ ಸೂತ್ರವು ಈ ಜನ್ಮದಲ್ಲಿ ಕೈಗೆ ದೊರತು, ಯೋಗ್ಯ ರೀತಿಯಿಂದ ಪರಮಾರ್ಥ ಸಾಧನೆಯು ಆಗುವದು. ನಾಮಸ್ಮರಣೆಯಿಂದ ದೋಷಗಳ ಪರಿಹಾರವಾಗುವದು; ಎಲ್ಲ ಪುರಾಣಗಳೂ ಇದನ್ನೇ ಹೇಳುತ್ತವೆ ಎಂದು ತುಕಾರಾಮರು ಹೇಳುತ್ತಾರೆ. {{center|೬}} ದೋಷ ರೇ ಜಾತೀಲ ಅನಂತ ಜನ್ಮೀಂಚೇ| ಪಾಯ ತ್ಯಾ ದೇವಾಚೇ ನ ಸೋಡಾವೇ||೧|| ನ ಸೋಡಾವೇ ಪಾಯ ನಿಶ್ಚಯ ತೋ ಕರಾ| ಆಳವಾ ಶಾರಂಗಧರಾ ಭಾವಬಳೇ||೨|| ಧರೂನಿ ಕೇಶವ ಆಣಾ ಭಾವಬಳೇ। ಪಾಪಿಯಾ ನ ಕಳೇ ಕಾಹೀ ಕೇಲ್ಯಾ||೩|| {{center|೧೦೭}}<noinclude></noinclude> ncuyxpvaja0e6mcqhszlx0ti3ms29uy ಪುಟ:ನಿತ್ಯ ನೇಮಾವಲಿ.pdf/೧೦೯ 104 101935 322712 284308 2026-05-26T15:05:46Z Shreesha Sharma 7840 /* Proofread */ 322712 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ನ ಕಳೇ ತೂ ದೇವ ಸಂತಸಂಗಾವಾಚುನಿ| ವಾಸನಾ ಜಾಳೋನಿ ಶುದ್ಧ ಕರಾ||೪|| ಶುದ್ಧ ಕರಾ ಮನ ದೇಹಾತೀತ ವ್ಹಾವೇ| ವಸ್ತೂಸೀ ವೋಳಖಾವೇ ತುಕಾ ಮ್ಹಣೇ||೫|| '''ಭಾವಾರ್ಥ''': ದೇವರ ಪಾದಗಳನ್ನು ಬಿಡುವದಿಲ್ಲವೆಂಬ ದೃಢ ನಿರ್ಧಾರ ಮಾಡಿದರೆ ಅನಂತ ಜನ್ಮದ ಪಾಪಗಳೆಲ್ಲ ನಾಶವಾಗುವವು. ಭಕ್ತಿಭಾವದಿಂದ ಕೃಷ್ಣನನ್ನು ಪ್ರಸನ್ನಗೊಳಿಸಿ ಕರೆದು ತನ್ನಿರಿ. ಪಾಪಿಗಳಿಗೆ ಇದು ಏನು ಮಾಡಿದರೂ ತಿಳಿಯಲಾರದು. ಸತ್ಸಂಗವಿಲ್ಲದೆ ದೇವರ ದರ್ಶನವಾಗಲಾರದು. ವಾಸನೆಗಳನ್ನು ಸುಟ್ಟುಬೂದಿಮಾಡಿ, ದೇಹ ಬುದ್ಧಿಯನ್ನು ಇಲ್ಲದಂತೆ ಮಾಡಿದರೆ, ಚಿತ್ತಶುದ್ಧಿಯಾಗಿ ಸತ್ಯವಸ್ತುವಿನ ಗುರುತು ಸಿಗುವಂತೆ ಮಾಡಿಕೊಳ್ಳುವಿರಿ ಎಂದು ತುಕಾರಾಮರು ಹೇಳುತ್ತಾರೆ. {{center|೭}} ಓಳಖಾ ರೇ ವಸ್ತು ಸಾಂಡಾ ಈ ಕಲ್ಪನಾ| ನಕಾ ಆಡರಾನಾ ಜಾವೂ ಝಣೀ||೧|| ಝಣೀ ಜಾಲ ಕೋಠೇ ಬುಡವಾಲ ಹೀತ| ವಿಚಾರೀ ಮನಾತ ಆಪುಲಿಯಾ'||೨|| ಆಪುಲಿಯಾ ಜೀವೇ ಶಿವಾಸಿ ಪಹಾವೇ| ಆತ್ಮಸುಖ ಫ್ಯಾವೇ ವೇಳೋವೇಳಾ||೩|| {{center|೧೦೮}}<noinclude></noinclude> 7n5wclawd5vxbeskeqh54t86t46narw 322713 322712 2026-05-26T15:06:39Z Shreelatha.Halemane 7642 /* Validated */ 322713 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ನ ಕಳೇ ತೂ ದೇವ ಸಂತಸಂಗಾವಾಚುನಿ| ವಾಸನಾ ಜಾಳೋನಿ ಶುದ್ಧ ಕರಾ||೪|| ಶುದ್ಧ ಕರಾ ಮನ ದೇಹಾತೀತ ವ್ಹಾವೇ| ವಸ್ತೂಸೀ ವೋಳಖಾವೇ ತುಕಾ ಮ್ಹಣೇ||೫|| '''ಭಾವಾರ್ಥ''': ದೇವರ ಪಾದಗಳನ್ನು ಬಿಡುವದಿಲ್ಲವೆಂಬ ದೃಢ ನಿರ್ಧಾರ ಮಾಡಿದರೆ ಅನಂತ ಜನ್ಮದ ಪಾಪಗಳೆಲ್ಲ ನಾಶವಾಗುವವು. ಭಕ್ತಿಭಾವದಿಂದ ಕೃಷ್ಣನನ್ನು ಪ್ರಸನ್ನಗೊಳಿಸಿ ಕರೆದು ತನ್ನಿರಿ. ಪಾಪಿಗಳಿಗೆ ಇದು ಏನು ಮಾಡಿದರೂ ತಿಳಿಯಲಾರದು. ಸತ್ಸಂಗವಿಲ್ಲದೆ ದೇವರ ದರ್ಶನವಾಗಲಾರದು. ವಾಸನೆಗಳನ್ನು ಸುಟ್ಟುಬೂದಿಮಾಡಿ, ದೇಹ ಬುದ್ಧಿಯನ್ನು ಇಲ್ಲದಂತೆ ಮಾಡಿದರೆ, ಚಿತ್ತಶುದ್ಧಿಯಾಗಿ ಸತ್ಯವಸ್ತುವಿನ ಗುರುತು ಸಿಗುವಂತೆ ಮಾಡಿಕೊಳ್ಳುವಿರಿ ಎಂದು ತುಕಾರಾಮರು ಹೇಳುತ್ತಾರೆ. {{center|೭}} ಓಳಖಾ ರೇ ವಸ್ತು ಸಾಂಡಾ ಈ ಕಲ್ಪನಾ| ನಕಾ ಆಡರಾನಾ ಜಾವೂ ಝಣೀ||೧|| ಝಣೀ ಜಾಲ ಕೋಠೇ ಬುಡವಾಲ ಹೀತ| ವಿಚಾರೀ ಮನಾತ ಆಪುಲಿಯಾ'||೨|| ಆಪುಲಿಯಾ ಜೀವೇ ಶಿವಾಸಿ ಪಹಾವೇ| ಆತ್ಮಸುಖ ಫ್ಯಾವೇ ವೇಳೋವೇಳಾ||೩|| {{center|೧೦೮}}<noinclude></noinclude> egek6kdliy2c2nsosjf249l1zxvxcqc ಪುಟ:ನಿತ್ಯ ನೇಮಾವಲಿ.pdf/೧೧೦ 104 101937 322714 284310 2026-05-26T15:10:15Z Shreesha Sharma 7840 /* Proofread */ 322714 proofread-page text/x-wiki <noinclude><pagequality level="3" user="Shreesha Sharma" /></noinclude>{{center|ರಾತ್ರಿ ಭಜನೆ}} ಫ್ಯಾವೇ ಆತ್ಮಸುಖ ಸ್ವರೂಪೀ ಮಿಳಾವೇ| ಭೂತೀ ಲೀನ ವ್ಹಾವೇ ತುಕಾ ಮ್ಹಣೇ||೪|| '''ಭಾವಾರ್ಥ''': ಶಾಶ್ವತ ಸತ್ಯವಸ್ತುವನ್ನು ಪಡೆಯಬೇಕಾದರೆ, ವಿಷಯ ಕಲ್ಪನೆಗಳ ಅಡ್ಡದಾರಿಯನ್ನು ಬಿಡಬೇಕು. ಮಾಯೆಯ ಬೆನ್ನು ಹತ್ತಿದರೆ ನಿನ್ನ ಹಿತವು ಮುಳುಗಿ ಹೋದೀತು. ಆದ್ದರಿಂದ ಆಂತರ್ಯದಲ್ಲಿ ವಿವೇಕ ಬುದ್ಧಿಯಿಂದ ವಿಚಾರಮಾಡಿ ಆತ್ಮಸುಖವನ್ನು ಪಡೆಯಬೇಕು. ಆತ್ಮಸುಖವನ್ನು ಅನುಭವಿಸುತ್ತ ಸಕಲ ಜೀವಿಗಳೊಂದಿಗೆ (ವಿಶ್ವದೊಂದಿಗೆ) ಒಂದಾಗಬೇಕು ಎಂದು ತುಕಾರಾಮರು ಹೇಳುತ್ತಾರೆ. {{center|೮}} ಭೂತೀ ಲೀನ ವ್ಯಾವೇ ಸಾಂಗಾವೇ ನಲಗೇಚಿ| ಆತಾ ಅಹಂಕಾರಾಚೀ ಶಾಂತಿ ಕರಾ||೧|| ಶಾಂತಿ ಕರಾ ತುಮಿ ಮಮತಾ ನಾವೀ| ಅಂತರೀ ವಸಾವೀ ಭೂತದಯಾ||೨|| ಭೂತದಯಾ ಠೇವಾ ಮಗ ಕಾಯ ಉಣೇ। ಪ್ರಥಮ ಸಾಧನ ಹೇಚಿ ಅಸೇ||೩|| ಅಸೋ ಹೇ ಸಾಧನ ಜ್ಯಾಚೇ ಚಿತ್ತೀ ವಸೇ| ಮಾಯಾಜಾಳ ನಾಸೇ ತುಕಾ ಮ್ಹಣೇ||೪|| {{center|೧೦೯}}<noinclude></noinclude> coifv8r82wacl4j89fxkdis9g7larh4 322715 322714 2026-05-26T15:10:41Z Shreelatha.Halemane 7642 /* Validated */ 322715 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}} ಫ್ಯಾವೇ ಆತ್ಮಸುಖ ಸ್ವರೂಪೀ ಮಿಳಾವೇ| ಭೂತೀ ಲೀನ ವ್ಹಾವೇ ತುಕಾ ಮ್ಹಣೇ||೪|| '''ಭಾವಾರ್ಥ''': ಶಾಶ್ವತ ಸತ್ಯವಸ್ತುವನ್ನು ಪಡೆಯಬೇಕಾದರೆ, ವಿಷಯ ಕಲ್ಪನೆಗಳ ಅಡ್ಡದಾರಿಯನ್ನು ಬಿಡಬೇಕು. ಮಾಯೆಯ ಬೆನ್ನು ಹತ್ತಿದರೆ ನಿನ್ನ ಹಿತವು ಮುಳುಗಿ ಹೋದೀತು. ಆದ್ದರಿಂದ ಆಂತರ್ಯದಲ್ಲಿ ವಿವೇಕ ಬುದ್ಧಿಯಿಂದ ವಿಚಾರಮಾಡಿ ಆತ್ಮಸುಖವನ್ನು ಪಡೆಯಬೇಕು. ಆತ್ಮಸುಖವನ್ನು ಅನುಭವಿಸುತ್ತ ಸಕಲ ಜೀವಿಗಳೊಂದಿಗೆ (ವಿಶ್ವದೊಂದಿಗೆ) ಒಂದಾಗಬೇಕು ಎಂದು ತುಕಾರಾಮರು ಹೇಳುತ್ತಾರೆ. {{center|೮}} ಭೂತೀ ಲೀನ ವ್ಯಾವೇ ಸಾಂಗಾವೇ ನಲಗೇಚಿ| ಆತಾ ಅಹಂಕಾರಾಚೀ ಶಾಂತಿ ಕರಾ||೧|| ಶಾಂತಿ ಕರಾ ತುಮಿ ಮಮತಾ ನಾವೀ| ಅಂತರೀ ವಸಾವೀ ಭೂತದಯಾ||೨|| ಭೂತದಯಾ ಠೇವಾ ಮಗ ಕಾಯ ಉಣೇ। ಪ್ರಥಮ ಸಾಧನ ಹೇಚಿ ಅಸೇ||೩|| ಅಸೋ ಹೇ ಸಾಧನ ಜ್ಯಾಚೇ ಚಿತ್ತೀ ವಸೇ| ಮಾಯಾಜಾಳ ನಾಸೇ ತುಕಾ ಮ್ಹಣೇ||೪|| {{center|೧೦೯}}<noinclude></noinclude> 4baukzmy6wkghrs85rwwc525xtogp0u ಪುಟ:ನಿತ್ಯ ನೇಮಾವಲಿ.pdf/೧೧೧ 104 101939 322718 284312 2026-05-26T16:03:27Z Shreesha Sharma 7840 /* Proofread */ 322718 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} '''ಭಾವಾರ್ಥ''': ಭೂತದಯೆ ಎಂದರೆ ಎಲ್ಲ ಪ್ರಾಣಿಮಾತ್ರಗಳಲ್ಲಿ ಪ್ರೀತಿ ಅಂತಃಕರಣವಿರಬೇಕು, ಎಂದು ಬೇರೆ ಹೇಳಬೇಕಾಗಿಲ್ಲ. ಏಕೆಂದರೆ ಭೂತದಯಯೇ ಪ್ರಥಮ ಸಾಧನವು. ಅಹಂಕಾರವು ಹೋದರೆ ಮಾತ್ರ ಇದು ಸಾಧ್ಯವು ಅಹಂಕಾರವು ಹೋಗಬೇಕು. ಮಾಯೆಯು ತೊಲಗಬೇಕು; ಎಂದು ನಾಮಸ್ಮರಣೆಯ ಜೊತೆಗೆ ಭೂತದಯಾ ಮನೋಭಾವವು ಬೆಳೆದು ಸರ್ವಾತ್ಮಭಾವವು ಮೂಡುವದು. ಆಗ ನಾನು, ನನ್ನದು, ನಶಿಸಿ ಮಾಯಾಜಾಲವು ನಷ್ಟವಾಗುವದು ಎಂದು ತುಕಾರಾಮರು ಹೇಳುತ್ತಾರೆ. {{center|೯}} ಮಾಯಾಜಾಳ ನಾಸೇ ಯಾ ನಾಮಕರುನೀ| ಪ್ರೀತಿ ಚಕ್ರಪಾಣೀ ಅಸೋ ದ್ಯಾವೀ||೧|| ಅಸೋ ದ್ಯಾವೀ ಪ್ರೀತಿ, ಸಾಧೂಂಚೇ ಪಾಯಾಸೀ| ಕದಾ ಕೀರ್ತನಾಸಿ ಸೋಡೂ ನಯೇ||೨|| ಸೋಡೂ ನಯೇ ಪುರಾಣ ಶ್ರವಣ ಕೀರ್ತನ| ಮನನ ನಿದಿಧ್ಯಾಸ ಸಾಕ್ಷಾತ್ಕಾರ||೩|| ಸಾಕ್ಷಾತ್ಕಾರ ಝಾಲಿಯಾ ಸಹಜ ಸಮಾಧಿ| ತುಕಾ ಮ್ಹಣೇ ಉಪಾಧಿ ಗಲೀ ತ್ಯಾಚೀ||೪|| {{center|೧೧೦}}<noinclude></noinclude> 38xm3jw8qenqaiqobivibw7dtb77kx2 322720 322718 2026-05-26T16:06:39Z Shreelatha.Halemane 7642 /* Validated */ 322720 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} '''ಭಾವಾರ್ಥ''': ಭೂತದಯೆ ಎಂದರೆ ಎಲ್ಲ ಪ್ರಾಣಿಮಾತ್ರಗಳಲ್ಲಿ ಪ್ರೀತಿ ಅಂತಃಕರಣವಿರಬೇಕು, ಎಂದು ಬೇರೆ ಹೇಳಬೇಕಾಗಿಲ್ಲ. ಏಕೆಂದರೆ ಭೂತದಯಯೇ ಪ್ರಥಮ ಸಾಧನವು. ಅಹಂಕಾರವು ಹೋದರೆ ಮಾತ್ರ ಇದು ಸಾಧ್ಯವು ಅಹಂಕಾರವು ಹೋಗಬೇಕು. ಮಾಯೆಯು ತೊಲಗಬೇಕು; ಎಂದು ನಾಮಸ್ಮರಣೆಯ ಜೊತೆಗೆ ಭೂತದಯಾ ಮನೋಭಾವವು ಬೆಳೆದು ಸರ್ವಾತ್ಮಭಾವವು ಮೂಡುವದು. ಆಗ ನಾನು, ನನ್ನದು, ನಶಿಸಿ ಮಾಯಾಜಾಲವು ನಷ್ಟವಾಗುವದು ಎಂದು ತುಕಾರಾಮರು ಹೇಳುತ್ತಾರೆ. {{center|೯}} ಮಾಯಾಜಾಳ ನಾಸೇ ಯಾ ನಾಮಕರುನೀ| ಪ್ರೀತಿ ಚಕ್ರಪಾಣೀ ಅಸೋ ದ್ಯಾವೀ||೧|| ಅಸೋ ದ್ಯಾವೀ ಪ್ರೀತಿ, ಸಾಧೂಂಚೇ ಪಾಯಾಸೀ| ಕದಾ ಕೀರ್ತನಾಸಿ ಸೋಡೂ ನಯೇ||೨|| ಸೋಡೂ ನಯೇ ಪುರಾಣ ಶ್ರವಣ ಕೀರ್ತನ| ಮನನ ನಿದಿಧ್ಯಾಸ ಸಾಕ್ಷಾತ್ಕಾರ||೩|| ಸಾಕ್ಷಾತ್ಕಾರ ಝಾಲಿಯಾ ಸಹಜ ಸಮಾಧಿ| ತುಕಾ ಮ್ಹಣೇ ಉಪಾಧಿ ಗಲೀ ತ್ಯಾಚೀ||೪|| {{center|೧೧೦}}<noinclude></noinclude> 5ense2bno5z46lbwsd4nt5ot843vree ಪುಟ:ನಿತ್ಯ ನೇಮಾವಲಿ.pdf/೧೧೨ 104 101941 322719 284314 2026-05-26T16:06:13Z Shreesha Sharma 7840 /* Proofread */ 322719 proofread-page text/x-wiki <noinclude><pagequality level="3" user="Shreesha Sharma" /></noinclude>{{center|ರಾತ್ರಿ ಭಜನೆ}} '''ಭಾವಾರ್ಥ''': ನಾಮಸ್ಮರಣೆಯಿಂದ ಮಾಯಾಜಾಲವು ನಷ್ಟವಾಗುವದು. ಭೂತದಯೆಯು ನಾಮಸಾಧನೆಯ ಒಂದು ಅಂಗವಿರುವದೇ ವಿನಃ ಸ್ವತಂತ್ರ ಸಾಧನವಲ್ಲ. ನಾಮಸ್ಮರಣೆಯೇ ಮುಖ್ಯ ಸಾಧನ. ಇದು ಏಕಾಗ್ರತೆಯಿಂದ ನಡೆಯಬೇಕಾದರೆ ಭಗವಂತನಲ್ಲಿ ಪ್ರೀತಿ ಬೇಕು. ಇದಕ್ಕಾಗಿ ಸತ್ಸಂಗದಲ್ಲಿ ಶ್ರದ್ಧೆ ಇಟ್ಟು ಕೀರ್ತನ ಕೇಳಬೇಕು. ಶ್ರವಣ, ಕೀರ್ತನ, ಮನನ, ನಿದಿಧ್ಯಾಸ, ಸಾಕ್ಷಾತ್ಕಾರ, ಇವುಗಳಿಂದ ಭಗವದ್ಭಕ್ತಿಯು ವರ್ಧಿಸುವದು. ಹೀಗೆ ನಿರಂತರವಾಗಿ ನಡೆಯುವ ನಾಮಸಾಧನೆಯಿಂದ ಸಾಕ್ಷಾತ್ಕಾರವಾಗಿ ಸ್ವರೂಪ ದರ್ಶನವಾಗುತ್ತಿದೆ; ಅಂದರೆ ಅದೇ ಸಹಜ ಸಮಾಧಿ, ಆಮೇಲೆ ಉಪಾಧಿ ನಷ್ಟವಾಗುತ್ತಿದೆ ಎಂದು ತುಕಾರಾಮರು ಹೇಳುತ್ತಾರೆ. {{center|೧೦}} ಗೇಲೀ ತ್ಯಾಚೀ ಜಾಣಾ ಬ್ರಹ್ಮತೋಟಿ ಝಾಲಾ| ಅಂತರೀ ನಿವಾಲಾ ಪೂರ್ಣಪಣೇ||೧|| ಪೂರ್ಣಪಣೇ ಧಾಲಾ ರಾಹತೋ ಕೈಶಾ ರೀತಿ। ತ್ಯಾಚೀ ಆತಾ ಸ್ಥಿತಿ ಸಾಂಗತೋ ಮೀ||೨|| ಸಾಂಗತೋ ಮೀ ತುಮ್ಹಾ ಐಕಾ ಮನೋಗತ! ರಾಹತೂ ಮೂರ್ಖವತ ಜಗಾಮಾಜೀ||೩|| ಜಗಾತ ಪಿಶಾಚ್ಚ ಅಂತರೀ ಶಹಾಣಾ| ಸದಾ ಬ್ರಹ್ಮೀ ಜಾಣಾ ನಿಮಗ್ನ ತೋ||೪|| {{center|იიი}}<noinclude></noinclude> f0xo1pwkrplmmjq7iaxs2n5kg73qr7k 322721 322719 2026-05-26T16:06:48Z Shreelatha.Halemane 7642 /* Validated */ 322721 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}} '''ಭಾವಾರ್ಥ''': ನಾಮಸ್ಮರಣೆಯಿಂದ ಮಾಯಾಜಾಲವು ನಷ್ಟವಾಗುವದು. ಭೂತದಯೆಯು ನಾಮಸಾಧನೆಯ ಒಂದು ಅಂಗವಿರುವದೇ ವಿನಃ ಸ್ವತಂತ್ರ ಸಾಧನವಲ್ಲ. ನಾಮಸ್ಮರಣೆಯೇ ಮುಖ್ಯ ಸಾಧನ. ಇದು ಏಕಾಗ್ರತೆಯಿಂದ ನಡೆಯಬೇಕಾದರೆ ಭಗವಂತನಲ್ಲಿ ಪ್ರೀತಿ ಬೇಕು. ಇದಕ್ಕಾಗಿ ಸತ್ಸಂಗದಲ್ಲಿ ಶ್ರದ್ಧೆ ಇಟ್ಟು ಕೀರ್ತನ ಕೇಳಬೇಕು. ಶ್ರವಣ, ಕೀರ್ತನ, ಮನನ, ನಿದಿಧ್ಯಾಸ, ಸಾಕ್ಷಾತ್ಕಾರ, ಇವುಗಳಿಂದ ಭಗವದ್ಭಕ್ತಿಯು ವರ್ಧಿಸುವದು. ಹೀಗೆ ನಿರಂತರವಾಗಿ ನಡೆಯುವ ನಾಮಸಾಧನೆಯಿಂದ ಸಾಕ್ಷಾತ್ಕಾರವಾಗಿ ಸ್ವರೂಪ ದರ್ಶನವಾಗುತ್ತಿದೆ; ಅಂದರೆ ಅದೇ ಸಹಜ ಸಮಾಧಿ, ಆಮೇಲೆ ಉಪಾಧಿ ನಷ್ಟವಾಗುತ್ತಿದೆ ಎಂದು ತುಕಾರಾಮರು ಹೇಳುತ್ತಾರೆ. {{center|೧೦}} ಗೇಲೀ ತ್ಯಾಚೀ ಜಾಣಾ ಬ್ರಹ್ಮತೋಟಿ ಝಾಲಾ| ಅಂತರೀ ನಿವಾಲಾ ಪೂರ್ಣಪಣೇ||೧|| ಪೂರ್ಣಪಣೇ ಧಾಲಾ ರಾಹತೋ ಕೈಶಾ ರೀತಿ। ತ್ಯಾಚೀ ಆತಾ ಸ್ಥಿತಿ ಸಾಂಗತೋ ಮೀ||೨|| ಸಾಂಗತೋ ಮೀ ತುಮ್ಹಾ ಐಕಾ ಮನೋಗತ! ರಾಹತೂ ಮೂರ್ಖವತ ಜಗಾಮಾಜೀ||೩|| ಜಗಾತ ಪಿಶಾಚ್ಚ ಅಂತರೀ ಶಹಾಣಾ| ಸದಾ ಬ್ರಹ್ಮೀ ಜಾಣಾ ನಿಮಗ್ನ ತೋ||೪|| {{center|იიი}}<noinclude></noinclude> nr07432f4yarp5m2x5uffmqpmvwdeuq ಪುಟ:ನಿತ್ಯ ನೇಮಾವಲಿ.pdf/೧೧೩ 104 101942 322724 284315 2026-05-26T16:11:47Z Shreesha Sharma 7840 /* Proofread */ 322724 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ನಿಮಗ್ನ ತೋ ಸದಾ ಜೈಸಾ ಮಕರಂದ| ಅಂತರ್ಬಾಹ್ಯ ಭೇದ ವೇಗಳಾಲೇ||೫|| ವೇಗಳಾಲೇ ಭೇದ ಕಿತೀ ತ್ಯಾ ಅಸತೀ| ಹೃದ್ಗತ ತ್ಯಾಚೀ ಗತಿ ನ ಕಳೇ ಕವಣ||೬|| ನ ಕಳೆ ಕವಣಾಲಾ ತ್ಯಾಚೇ ಹೇಚಿ ವರ್ಮ| ಯೋಗೀ ಜಾಣೇ ವರ್ಮ ಋಣ ತ್ಯಾಚೀ||೭|| ಖಣ ತ್ಯಾಚೀ ಜಾಣೇ ಜೇ ತೈಸೇ ಅಸತೀ। ತುಕಾ ಮ್ಹಣೇ ಭ್ರಾಂತೀ ದುಜಿಯಾಲಾ||೮|| '''ಭಾವಾರ್ಥ''': ಅವನು ಬ್ರಹ್ಮನಾದಮೇಲೆ ಆಂತರ್ಯದಲ್ಲಿ ನಿಜವಾದ ಆನಂದವನ್ನೂ ಸಂಪೂರ್ಣ ಶಾಂತಿಯನ್ನೂ ಅನುಭವಿಸುತ್ತಾನೆ. ಆದರೆ ಅವನು ಹೇಗೆ ವ್ಯವಹರಿಸುತ್ತಾನೆಂಬುದನ್ನು ಹೇಳುತ್ತೇನೆ ಕೇಳಿರಿ. ಹೊರಗಿನ ಜಗತ್ತಿಗೆ ಅವನು ಮೂರ್ಖನಂತ, ಪಿಶಾಚಿಯಂತೆ ಕಂಡರೂ, ಜೇನುನೊಣವು ಮಕರಂದದಲ್ಲಿ ಸ್ಥಿರವಾಗಿರುವಂತೆ, ಅವನು ಆತ್ಮಾನಂದದಲ್ಲಿ ಮಗ್ನನಾಗಿರುತ್ತಾನೆ. ಹೀಗೆ ಅವನ ಅಂತರ್ಬಾಹ್ಯ ಜೀವನದಲ್ಲಿ ಬಹಳ ಅಂತರವಿರುತ್ತದೆ. ಈ ರಹಸ್ಯವು ಯಾರಿಗೂ ತಿಳಿಯುವದಿಲ್ಲ. ಕೇವಲ ಯೋಗಿಗಳಿಗೆ ಮಾತ್ರ ಇದರ ರಹಸ್ಯವು ತಿಳಿಯುವದು. ಏಕೆಂದರೆ ಅವರೂ ಅವನಂತೆಯೇ ಇರುತ್ತಾರೆ. ಬೇರೆಯವರಿಗೆ ಭ್ರಾಂತನಂತೆ (ಹುಚ್ಚನಂತೆ) {{center|იი೨}}<noinclude></noinclude> ptzfywyojzgqab9g5rckyaspn1jnxkf 322727 322724 2026-05-26T16:19:59Z Shreelatha.Halemane 7642 /* Validated */ 322727 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ನಿಮಗ್ನ ತೋ ಸದಾ ಜೈಸಾ ಮಕರಂದ| ಅಂತರ್ಬಾಹ್ಯ ಭೇದ ವೇಗಳಾಲೇ||೫|| ವೇಗಳಾಲೇ ಭೇದ ಕಿತೀ ತ್ಯಾ ಅಸತೀ| ಹೃದ್ಗತ ತ್ಯಾಚೀ ಗತಿ ನ ಕಳೇ ಕವಣ||೬|| ನ ಕಳೆ ಕವಣಾಲಾ ತ್ಯಾಚೇ ಹೇಚಿ ವರ್ಮ| ಯೋಗೀ ಜಾಣೇ ವರ್ಮ ಋಣ ತ್ಯಾಚೀ||೭|| ಖಣ ತ್ಯಾಚೀ ಜಾಣೇ ಜೇ ತೈಸೇ ಅಸತೀ। ತುಕಾ ಮ್ಹಣೇ ಭ್ರಾಂತೀ ದುಜಿಯಾಲಾ||೮|| '''ಭಾವಾರ್ಥ''': ಅವನು ಬ್ರಹ್ಮನಾದಮೇಲೆ ಆಂತರ್ಯದಲ್ಲಿ ನಿಜವಾದ ಆನಂದವನ್ನೂ ಸಂಪೂರ್ಣ ಶಾಂತಿಯನ್ನೂ ಅನುಭವಿಸುತ್ತಾನೆ. ಆದರೆ ಅವನು ಹೇಗೆ ವ್ಯವಹರಿಸುತ್ತಾನೆಂಬುದನ್ನು ಹೇಳುತ್ತೇನೆ ಕೇಳಿರಿ. ಹೊರಗಿನ ಜಗತ್ತಿಗೆ ಅವನು ಮೂರ್ಖನಂತ, ಪಿಶಾಚಿಯಂತೆ ಕಂಡರೂ, ಜೇನುನೊಣವು ಮಕರಂದದಲ್ಲಿ ಸ್ಥಿರವಾಗಿರುವಂತೆ, ಅವನು ಆತ್ಮಾನಂದದಲ್ಲಿ ಮಗ್ನನಾಗಿರುತ್ತಾನೆ. ಹೀಗೆ ಅವನ ಅಂತರ್ಬಾಹ್ಯ ಜೀವನದಲ್ಲಿ ಬಹಳ ಅಂತರವಿರುತ್ತದೆ. ಈ ರಹಸ್ಯವು ಯಾರಿಗೂ ತಿಳಿಯುವದಿಲ್ಲ. ಕೇವಲ ಯೋಗಿಗಳಿಗೆ ಮಾತ್ರ ಇದರ ರಹಸ್ಯವು ತಿಳಿಯುವದು. ಏಕೆಂದರೆ ಅವರೂ ಅವನಂತೆಯೇ ಇರುತ್ತಾರೆ. ಬೇರೆಯವರಿಗೆ ಭ್ರಾಂತನಂತೆ (ಹುಚ್ಚನಂತೆ) {{center|იი೨}}<noinclude></noinclude> kxsy36p7ug3omti5dxy0xqu447gje8g ಪುಟ:ನಿತ್ಯ ನೇಮಾವಲಿ.pdf/೧೧೪ 104 101944 322725 284317 2026-05-26T16:15:58Z Shreesha Sharma 7840 /* Proofread */ 322725 proofread-page text/x-wiki <noinclude><pagequality level="3" user="Shreesha Sharma" /></noinclude>{{center|ರಾತ್ರಿ ಭಜನೆ}} ಕಾಣುತ್ತಾನೆ ಎಂದು ತುಕಾರಾಮರು ಹೇಳುತ್ತಾರೆ. (ಸಾಕ್ಷಾತ್ಕಾರ ಮಾಡಿಕೊಂಡ ಸಂತರಿಗೆ ಮಾತ್ರ ಅವನ ಲಕ್ಷಣ ತಿಳಿಯುತ್ತದೆ.) {{center|೧೧}} ದುಜಿಯಾಲಾ ಭ್ರಾಂತೀ ಭಾವಿಕಾಲಾ ಶಾಂತೀ| ಸಾಧೂಂಚೀ ತೀ ವೃತ್ತಿ ಲೀನ ಝಾಲೀ||೧|| ಲೀನ ಝಾಲೀ ವೃತ್ತಿ ಬ್ರಹ್ಮಾತೇ ಮಿಳಾಲೇ| ಜಳಾತ ಆಟಲೇ ಲವಣ ಜೈಸೇ||೨|| ಲವಣ ಜೈಸೇ ಪುನ್ಹಾ ಜಳಾಚೆ ಬಾಹೇ‌ರೀ| ಯೇತ ನಾಹೀ ಖರೇ ತ್ಯಾತೂನಿಯಾ||೩|| ತ್ಯಾಸಾರಿಖೇ ತುಮ್ಹೀ ಜಾಣಾ ಸಾಧುವೃತ್ತಿ| ಪುನ್ಹಾ ನ ಮಿಳತೀ ಮಾಯಾಜಾಳೀ||೪|| ಮಾಯಾಜಾಳ ತ್ಯಾನಾ ಪುನ್ಹಾ ರೇ ಬಾಧೇನಾ| ಸತ್ಯ ಸತ್ಯ ಜಾಣಾ ತುಕಾ ಮ್ಹಣೇ||೫|| '''ಭಾವಾರ್ಥ''' : ಹೊರಗಿನಿಂದ ನೋಡುವವರಿಗೆ ಭ್ರಾಂತಿ ಎಂದು ಕಂಡರೂ, ಜ್ಞಾನಿಗೆ ಮಾತ್ರ ಪರಮಶಾಂತಿ ಲಭಿಸಿರುತ್ತದೆ. ಉಪ್ಪು ಹೇಗೆ ಸಮುದ್ರದ ನೀರಿನಲ್ಲಿ ಕರಗಿ ಹೋಗಿರುತ್ತದೆಯೋ, ಹಾಗೆ ಅವನು ಬ್ರಹ್ಮನಲ್ಲಿ ಲೀನನಾಗಿ {{center|იი೩}}<noinclude></noinclude> ihgbmt7hkx3rtttmc7oknb84a3bite8 322728 322725 2026-05-26T16:20:08Z Shreelatha.Halemane 7642 /* Validated */ 322728 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}} ಕಾಣುತ್ತಾನೆ ಎಂದು ತುಕಾರಾಮರು ಹೇಳುತ್ತಾರೆ. (ಸಾಕ್ಷಾತ್ಕಾರ ಮಾಡಿಕೊಂಡ ಸಂತರಿಗೆ ಮಾತ್ರ ಅವನ ಲಕ್ಷಣ ತಿಳಿಯುತ್ತದೆ.) {{center|೧೧}} ದುಜಿಯಾಲಾ ಭ್ರಾಂತೀ ಭಾವಿಕಾಲಾ ಶಾಂತೀ| ಸಾಧೂಂಚೀ ತೀ ವೃತ್ತಿ ಲೀನ ಝಾಲೀ||೧|| ಲೀನ ಝಾಲೀ ವೃತ್ತಿ ಬ್ರಹ್ಮಾತೇ ಮಿಳಾಲೇ| ಜಳಾತ ಆಟಲೇ ಲವಣ ಜೈಸೇ||೨|| ಲವಣ ಜೈಸೇ ಪುನ್ಹಾ ಜಳಾಚೆ ಬಾಹೇ‌ರೀ| ಯೇತ ನಾಹೀ ಖರೇ ತ್ಯಾತೂನಿಯಾ||೩|| ತ್ಯಾಸಾರಿಖೇ ತುಮ್ಹೀ ಜಾಣಾ ಸಾಧುವೃತ್ತಿ| ಪುನ್ಹಾ ನ ಮಿಳತೀ ಮಾಯಾಜಾಳೀ||೪|| ಮಾಯಾಜಾಳ ತ್ಯಾನಾ ಪುನ್ಹಾ ರೇ ಬಾಧೇನಾ| ಸತ್ಯ ಸತ್ಯ ಜಾಣಾ ತುಕಾ ಮ್ಹಣೇ||೫|| '''ಭಾವಾರ್ಥ''' : ಹೊರಗಿನಿಂದ ನೋಡುವವರಿಗೆ ಭ್ರಾಂತಿ ಎಂದು ಕಂಡರೂ, ಜ್ಞಾನಿಗೆ ಮಾತ್ರ ಪರಮಶಾಂತಿ ಲಭಿಸಿರುತ್ತದೆ. ಉಪ್ಪು ಹೇಗೆ ಸಮುದ್ರದ ನೀರಿನಲ್ಲಿ ಕರಗಿ ಹೋಗಿರುತ್ತದೆಯೋ, ಹಾಗೆ ಅವನು ಬ್ರಹ್ಮನಲ್ಲಿ ಲೀನನಾಗಿ {{center|იი೩}}<noinclude></noinclude> 4y7xva7ljyv9pf6o2tgp55li6jbclg7 ಪುಟ:ನಿತ್ಯ ನೇಮಾವಲಿ.pdf/೧೧೫ 104 101945 322726 284318 2026-05-26T16:19:40Z Shreesha Sharma 7840 /* Proofread */ 322726 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಹೋಗಿರುತ್ತಾನೆ. ಕರಗಿದ ಉಪ್ಪು ಹೇಗೆ ನೀರನ್ನು ಬಿಟ್ಟು ಹೊರಗೆ ಬರಲಾರದೋ, ಹಾಗೆ ಅವನು ಪುನಃ ಮಾಯಾ ಪ್ರಪಂಚಕ್ಕೆ ತಿರುಗಿ ಬರುವದಿಲ್ಲ, ಮಾಯಾಜಾಲವು ಅವನನ್ನು ಪುನಃ ಬಾಧಿಸುವದಿಲ್ಲ. ಇದು ಕಾಲಾಬಾಧಿತ ಸತ್ಯವೆಂದು ತುಕಾರಾಮಮಹಾರಾಜರು ಹೇಳುತ್ತಾರೆ. {{center|೧೨}} ಸ್ವರ್ಗಲೋಕೀಹೂನಿ ಆಲೇ ಹ ಅಭಂಗ| ಧಾಡಿಯಲೇ ಸಾಂಗ ತುಮ್ಹಾಲಾಗಿ||೧|| ನಿತ್ಯನೇಮೇ ಯಾಸಿ ಪಠತಾ ಪ್ರತಾಪೇ| ಜಳತಿಲ ಪಾಪೇ ಜನ್ಮಾಂತರೀಚೀ||೨|| ತಯಾ ಮಾಗೇಪುಡೇ ರಕ್ಷೀ ನಾರಾಯಣ| ಮಾಂಡಿಲ್ಯಾ ನಿರ್ವಾಣ ಉಡೀ ಘಾಲೀ||೩|| ಬುದ್ಧಿಜಾ ಪಾಲಟ ನಾಸೇಲ ಕುಮತೀ| ಹೋಯಿಲ ಸದ್ಭಕ್ತಿ ಯೇಣೇ ಪಂಥೇ||೪|| ಸದ್ಭಕ್ತಿ ಝಾಲಿಯಾ ಸಹಜ ಸಾಕ್ಷಾತ್ಕಾರ!| ಹೋಯಿಲ ಉದ್ಧಾರ ಪೂರ್ವಜಾಂಚಾ||೫|| ಸಾಧತೀಲ ಯ ಇಹಪರಲೋಕ| ಸತ್ಯ ಸತ್ಯ ಭಾಕ ಮಾಜೀ ತುಮ್ಹಾ||೬|| {{center|೧೧೪}}<noinclude></noinclude> ltqyr596epw40s27mneux43fy3ypr6m 322729 322726 2026-05-26T16:20:17Z Shreelatha.Halemane 7642 /* Validated */ 322729 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಹೋಗಿರುತ್ತಾನೆ. ಕರಗಿದ ಉಪ್ಪು ಹೇಗೆ ನೀರನ್ನು ಬಿಟ್ಟು ಹೊರಗೆ ಬರಲಾರದೋ, ಹಾಗೆ ಅವನು ಪುನಃ ಮಾಯಾ ಪ್ರಪಂಚಕ್ಕೆ ತಿರುಗಿ ಬರುವದಿಲ್ಲ, ಮಾಯಾಜಾಲವು ಅವನನ್ನು ಪುನಃ ಬಾಧಿಸುವದಿಲ್ಲ. ಇದು ಕಾಲಾಬಾಧಿತ ಸತ್ಯವೆಂದು ತುಕಾರಾಮಮಹಾರಾಜರು ಹೇಳುತ್ತಾರೆ. {{center|೧೨}} ಸ್ವರ್ಗಲೋಕೀಹೂನಿ ಆಲೇ ಹ ಅಭಂಗ| ಧಾಡಿಯಲೇ ಸಾಂಗ ತುಮ್ಹಾಲಾಗಿ||೧|| ನಿತ್ಯನೇಮೇ ಯಾಸಿ ಪಠತಾ ಪ್ರತಾಪೇ| ಜಳತಿಲ ಪಾಪೇ ಜನ್ಮಾಂತರೀಚೀ||೨|| ತಯಾ ಮಾಗೇಪುಡೇ ರಕ್ಷೀ ನಾರಾಯಣ| ಮಾಂಡಿಲ್ಯಾ ನಿರ್ವಾಣ ಉಡೀ ಘಾಲೀ||೩|| ಬುದ್ಧಿಜಾ ಪಾಲಟ ನಾಸೇಲ ಕುಮತೀ| ಹೋಯಿಲ ಸದ್ಭಕ್ತಿ ಯೇಣೇ ಪಂಥೇ||೪|| ಸದ್ಭಕ್ತಿ ಝಾಲಿಯಾ ಸಹಜ ಸಾಕ್ಷಾತ್ಕಾರ!| ಹೋಯಿಲ ಉದ್ಧಾರ ಪೂರ್ವಜಾಂಚಾ||೫|| ಸಾಧತೀಲ ಯ ಇಹಪರಲೋಕ| ಸತ್ಯ ಸತ್ಯ ಭಾಕ ಮಾಜೀ ತುಮ್ಹಾ||೬|| {{center|೧೧೪}}<noinclude></noinclude> bhfjjfkekr8ogpcmhtrb855ajo9vixg ಪುಟ:ನಿತ್ಯ ನೇಮಾವಲಿ.pdf/೧೧೬ 104 101946 322730 284319 2026-05-26T16:23:23Z Shreesha Sharma 7840 /* Proofread */ 322730 proofread-page text/x-wiki <noinclude><pagequality level="3" user="Shreesha Sharma" /></noinclude>{{center|ರಾತ್ರಿ ಭಜನೆ}} ಪರೋಪಕಾರಾ ಸಾಠೀ ಸಾಂಗಿತಲೇ ದೇವಾ| ಪ್ರಾಸಾದಿಕ ಮೇವಾ ಗ್ರಹಣ ಕರಾ||೭|| ಯೇಣೇ ಭವವ್ಯಥಾ ಜಾಯಿಲ ತುಮಚೀ| ಸಖ್ಯಾ ವಿಠಲಾಚಿ ಆಣ ಮಜ||೮|| ಟಾಳ ಆಣಿ ಕಂಥಾ ಧಾಡಿಲೀ ನಿಶಾಣೀ| ಫ್ಯಾರೇ ಓಳಖೋನಿ ಸಜ್ಜನ ಹೋ||೯|| ಮಾಝೇ ದಂಡವತ ತುಮ್ಹಾ ಸರ್ವ ಲೋಕಾ| ದೇಹಾಸಹಿತ ತುಕಾ ವೈಕುಂಠಾಸೀ||೧೦|| '''ಭಾವಾರ್ಥ''': ಸ್ವರ್ಗಲೋಕದಿಂದ ಈ ಅಭಂಗವನ್ನು ನಿಮ್ಮ ಹಿತದ ಸಲುವಾಗಿ ಕಳುಹಿಸಿದ್ದೇನೆ. ಯಾರು ನೇಮದಿಂದ ಈ ಅಭಂಗಗಳನ್ನು ನಿತ್ಯಪಠನ ಮಾಡುತ್ತಾರೋ ಅವರ ಜನ್ಮಾಂತರ ಪಾಪಗಳೆಲ್ಲವೂ ನಾಶವಾಗುತ್ತವೆ. ಅವರನ್ನು ನಾರಾಯಣನು ಹಿಂದೆ ಮುಂದೆ ಇದ್ದು ರಕ್ಷಿಸುತ್ತಾನೆ. ನಿರ್ಯಾಣದ ಕಾಲದಲ್ಲಿಯೂ ಬರುತ್ತಾನೆ. ನಿತ್ಯ ಪಠನದಿಂದ ಅವರಲ್ಲಿಯ ದುಷ್ಟಬುದ್ಧಿಯು ಹೋಗಿ, ಸದ್ಭಕ್ತಿ ಉಂಟಾಗುತ್ತದೆ. ಅದರಿಂದ ಅವರಿಗೆ ಸಹಜ ಸಾಕ್ಷಾತ್ಕಾರವು ದೊರೆಯುವದು. ಅವರ ಕುಲ-ಪರಿವಾರವು ಉದ್ಧಾರವಾಗುವದು. ಇದರಿಂದ ಇಹಲೋಕ ಪರಲೋಕಗಳೆರಡೂ ಸಾಧಿಸುವವು. ಈ ಮಾತು ಅತ್ಯಂತ ಸತ್ಯ, ಪರೋಪಕಾರಕ್ಕಾಗಿ ಇದನ್ನು ಹೇಳುತ್ತೇನೆ. ಈ ಪ್ರಾಸಾದಿಕ {{center|೧೧೫}}<noinclude></noinclude> ecewmn0nqutnlo8zvt8zigifo08xt0e 322733 322730 2026-05-26T16:29:41Z Shreelatha.Halemane 7642 /* Validated */ 322733 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}} ಪರೋಪಕಾರಾ ಸಾಠೀ ಸಾಂಗಿತಲೇ ದೇವಾ| ಪ್ರಾಸಾದಿಕ ಮೇವಾ ಗ್ರಹಣ ಕರಾ||೭|| ಯೇಣೇ ಭವವ್ಯಥಾ ಜಾಯಿಲ ತುಮಚೀ| ಸಖ್ಯಾ ವಿಠಲಾಚಿ ಆಣ ಮಜ||೮|| ಟಾಳ ಆಣಿ ಕಂಥಾ ಧಾಡಿಲೀ ನಿಶಾಣೀ| ಫ್ಯಾರೇ ಓಳಖೋನಿ ಸಜ್ಜನ ಹೋ||೯|| ಮಾಝೇ ದಂಡವತ ತುಮ್ಹಾ ಸರ್ವ ಲೋಕಾ| ದೇಹಾಸಹಿತ ತುಕಾ ವೈಕುಂಠಾಸೀ||೧೦|| '''ಭಾವಾರ್ಥ''': ಸ್ವರ್ಗಲೋಕದಿಂದ ಈ ಅಭಂಗವನ್ನು ನಿಮ್ಮ ಹಿತದ ಸಲುವಾಗಿ ಕಳುಹಿಸಿದ್ದೇನೆ. ಯಾರು ನೇಮದಿಂದ ಈ ಅಭಂಗಗಳನ್ನು ನಿತ್ಯಪಠನ ಮಾಡುತ್ತಾರೋ ಅವರ ಜನ್ಮಾಂತರ ಪಾಪಗಳೆಲ್ಲವೂ ನಾಶವಾಗುತ್ತವೆ. ಅವರನ್ನು ನಾರಾಯಣನು ಹಿಂದೆ ಮುಂದೆ ಇದ್ದು ರಕ್ಷಿಸುತ್ತಾನೆ. ನಿರ್ಯಾಣದ ಕಾಲದಲ್ಲಿಯೂ ಬರುತ್ತಾನೆ. ನಿತ್ಯ ಪಠನದಿಂದ ಅವರಲ್ಲಿಯ ದುಷ್ಟಬುದ್ಧಿಯು ಹೋಗಿ, ಸದ್ಭಕ್ತಿ ಉಂಟಾಗುತ್ತದೆ. ಅದರಿಂದ ಅವರಿಗೆ ಸಹಜ ಸಾಕ್ಷಾತ್ಕಾರವು ದೊರೆಯುವದು. ಅವರ ಕುಲ-ಪರಿವಾರವು ಉದ್ಧಾರವಾಗುವದು. ಇದರಿಂದ ಇಹಲೋಕ ಪರಲೋಕಗಳೆರಡೂ ಸಾಧಿಸುವವು. ಈ ಮಾತು ಅತ್ಯಂತ ಸತ್ಯ, ಪರೋಪಕಾರಕ್ಕಾಗಿ ಇದನ್ನು ಹೇಳುತ್ತೇನೆ. ಈ ಪ್ರಾಸಾದಿಕ {{center|೧೧೫}}<noinclude></noinclude> 1cipcnxa0ppgjqv9dwe0uorf3tlesb4 ಪುಟ:ನಿತ್ಯ ನೇಮಾವಲಿ.pdf/೧೧೭ 104 101947 322731 284320 2026-05-26T16:26:52Z Shreesha Sharma 7840 /* Proofread */ 322731 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಮಿಠಾಯಿಯನ್ನು ಸ್ವೀಕರಿಸಿರಿ. ನಿಮ್ಮ ಸಂಸಾರಿಕ ವ್ಯಥೆ ದೂರಾಗುವದೆಂದು ಪ್ರತಿಜ್ಞೆ ಮಾಡಿಹೇಳುತ್ತೇನೆ. ನಿಮಗೆಲ್ಲ ಸಾಷ್ಟಾಂಗ ನಮಸ್ಕಾರ, ತಾಳ, ಕೌದಿಯನ್ನು ಕಳಿಸಿರುತ್ತೇನೆ. ಅದರ ಗುರುತನ್ನು ಇಟ್ಟುಕೊಳ್ಳಿರಿ. ಹೀಗೆ, ತುಕಾರಾಮರು ದೇವನೊಡನೆ ವೈಕುಂಠಕ್ಕೆ ಸದೇಹ ಹೋದರು. {{center|೧೩}} ಸತ್ಯ ಸತ್ಯ ಜಾಣಾ ತ್ರಿವಾಚಾ ನೇಮ ಹಾ। ಅನುಭವ ಪಹಾ ಪದೇಪದೀ||೧|| ಪದೋಪದೀ ಪಹಾ ಶ್ರೀಮುಖ ಚಾಂಗಲೇ| ಪ್ರತ್ಯಕ್ಷ ಪಾವೊಲೇ ವಿಠೋಬಾಚೀ||೨|| ವಿಠೋಬಾಚೀ ಭೇಟೀ ಹರೇಲ ಬಾ ಚಿಂತಾ| ತುಮ್ಹಾಲಾಗಿ ಆತಾ ಸಾಂಗಿತಲೇ||೩|| ಸಾಂಗಿತಲೇ ಖರೇ ವಿಶ್ವಾಚಿಯಾ ಹಿತಾ। ಅಭಂಗ ವಾಚಿತೀ ಜೇ ಕಾ ನರ||೪|| ಈ ನರ ಪಠಣೀ ಜೀವನ್ಮುಕ್ತ ಝಾಲೇ| ಪುನ್ಹಾ ನಾಹೀ ಆಲೇ ಸಂಸಾರಾಸೀ||೫|| ಸಂಸಾರ ಉಡಾಲಾ ಸಂದೇಹ ಫಿಟಲಾ| ಪೂರ್ಣ ತೋಚಿ ಝಾಲಾ ತುಕಾ ಮ್ಹಣೇ||೬|| {{center|೧೧೬}}<noinclude></noinclude> ie6wejzpbz932k5ep6aan4cfsujo7h3 322734 322731 2026-05-26T16:29:49Z Shreelatha.Halemane 7642 /* Validated */ 322734 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಮಿಠಾಯಿಯನ್ನು ಸ್ವೀಕರಿಸಿರಿ. ನಿಮ್ಮ ಸಂಸಾರಿಕ ವ್ಯಥೆ ದೂರಾಗುವದೆಂದು ಪ್ರತಿಜ್ಞೆ ಮಾಡಿಹೇಳುತ್ತೇನೆ. ನಿಮಗೆಲ್ಲ ಸಾಷ್ಟಾಂಗ ನಮಸ್ಕಾರ, ತಾಳ, ಕೌದಿಯನ್ನು ಕಳಿಸಿರುತ್ತೇನೆ. ಅದರ ಗುರುತನ್ನು ಇಟ್ಟುಕೊಳ್ಳಿರಿ. ಹೀಗೆ, ತುಕಾರಾಮರು ದೇವನೊಡನೆ ವೈಕುಂಠಕ್ಕೆ ಸದೇಹ ಹೋದರು. {{center|೧೩}} ಸತ್ಯ ಸತ್ಯ ಜಾಣಾ ತ್ರಿವಾಚಾ ನೇಮ ಹಾ। ಅನುಭವ ಪಹಾ ಪದೇಪದೀ||೧|| ಪದೋಪದೀ ಪಹಾ ಶ್ರೀಮುಖ ಚಾಂಗಲೇ| ಪ್ರತ್ಯಕ್ಷ ಪಾವೊಲೇ ವಿಠೋಬಾಚೀ||೨|| ವಿಠೋಬಾಚೀ ಭೇಟೀ ಹರೇಲ ಬಾ ಚಿಂತಾ| ತುಮ್ಹಾಲಾಗಿ ಆತಾ ಸಾಂಗಿತಲೇ||೩|| ಸಾಂಗಿತಲೇ ಖರೇ ವಿಶ್ವಾಚಿಯಾ ಹಿತಾ। ಅಭಂಗ ವಾಚಿತೀ ಜೇ ಕಾ ನರ||೪|| ಈ ನರ ಪಠಣೀ ಜೀವನ್ಮುಕ್ತ ಝಾಲೇ| ಪುನ್ಹಾ ನಾಹೀ ಆಲೇ ಸಂಸಾರಾಸೀ||೫|| ಸಂಸಾರ ಉಡಾಲಾ ಸಂದೇಹ ಫಿಟಲಾ| ಪೂರ್ಣ ತೋಚಿ ಝಾಲಾ ತುಕಾ ಮ್ಹಣೇ||೬|| {{center|೧೧೬}}<noinclude></noinclude> 9872gq40zckyn3to8xca484qb7idvbs ಪುಟ:ನಿತ್ಯ ನೇಮಾವಲಿ.pdf/೧೧೮ 104 101949 322732 284322 2026-05-26T16:29:24Z Shreesha Sharma 7840 /* Proofread */ 322732 proofread-page text/x-wiki <noinclude><pagequality level="3" user="Shreesha Sharma" /></noinclude>{{center|ರಾತ್ರಿ ಭಜನೆ}} '''ಭಾವಾರ್ಥ''': ಈ ಮಾತು ಪರಮಸತ್ಯವೆಂದು ತಿಳಿಯಿರಿ, ಹೆಜ್ಜೆಹೆಜ್ಜೆಗೂ ಇದರ ಅನುಭವವನ್ನು ಪಡೆಯಿರಿ. ಮೊದಲು ಕಾಣುವ ಶ್ರೀಮುಖವನ್ನು ಚೆನ್ನಾಗಿ ನೋಡಿರಿ. ನಂತರ ವಿಠಲನ ಚರಣಕಮಲಗಳ ದರ್ಶನ ಪಡೆಯಿರಿ. ವಿಠಲನ ದರ್ಶನದಿಂದ ನಿಮ್ಮ ಚಿಂತೆಯಲ್ಲ ಮಾಯವಾಗುವದು. ಜಗತ್ತಿನ ಕಲ್ಯಾಣಕ್ಕಾಗಿಯೂ ನಿಮಗಾಗಿಯೂ, ಈ ಹಿತದ ಮಾತುಗಳನ್ನು ಹೇಳುತ್ತಿದ್ದೇನೆ. ಯಾವ ಮನುಷ್ಯರು ಈ ಅಭಂಗ ಪಠನ ಮಾಡುತ್ತಾರೋ ಅವರಿಗೆ ಜೀವನ್ಮುಕ್ತಿಯಾಗುತ್ತದೆ. ಪುನಃ ಅವರು ಸಂಸಾರಕ್ಕೆ ಬರುವದಿಲ್ಲ. ಸಂದೇಹವು ಮಾಯವಾಗಿ, ಸಂಸಾರದಿಂದಲೂ ಮುಕ್ತರಾಗಿ ಅವರು ಬ್ರಹ್ಮನೇ ಆಗುತ್ತಾರೆ, ಎಂದು ತುಕಾರಾಮರು ಹೇಳುತ್ತಾರೆ. {{center|೧೪}} ಚಾರ ಕೋಟಿ ಏಕ ಲಕ್ಷಾಚಾ ಶೇವಟ| ಚೌತೀಸ ಸಹಸ್ರ ಸ್ಪಷ್ಟ ಸಾಂಗಿತಲೇ||೧|| ಸಾಂಗಿತಲೇ ಹೇ ತುಕಾ ಕಥೋನಿಯಾ ಗೇಲಾ| ಬಾರಾ ಅಭಂಗಾಲಾ ಸೋಡೂ ನಕಾ||೨|| ಸೋಡೂ ನಕಾ ತುಮ್ಹಾ ಸಾಂಗಿತಲೇ ವರ್ಮ | ಭವಪಾಶೀ ಕರ್ಮೇ ಚುಕತೀಲ||೩|| {{center|೧೧೭}}<noinclude></noinclude> 1q82ncnmiagdvdcqg5z7x6qr3yfeuer 322735 322732 2026-05-26T16:29:58Z Shreelatha.Halemane 7642 /* Validated */ 322735 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}} '''ಭಾವಾರ್ಥ''': ಈ ಮಾತು ಪರಮಸತ್ಯವೆಂದು ತಿಳಿಯಿರಿ, ಹೆಜ್ಜೆಹೆಜ್ಜೆಗೂ ಇದರ ಅನುಭವವನ್ನು ಪಡೆಯಿರಿ. ಮೊದಲು ಕಾಣುವ ಶ್ರೀಮುಖವನ್ನು ಚೆನ್ನಾಗಿ ನೋಡಿರಿ. ನಂತರ ವಿಠಲನ ಚರಣಕಮಲಗಳ ದರ್ಶನ ಪಡೆಯಿರಿ. ವಿಠಲನ ದರ್ಶನದಿಂದ ನಿಮ್ಮ ಚಿಂತೆಯಲ್ಲ ಮಾಯವಾಗುವದು. ಜಗತ್ತಿನ ಕಲ್ಯಾಣಕ್ಕಾಗಿಯೂ ನಿಮಗಾಗಿಯೂ, ಈ ಹಿತದ ಮಾತುಗಳನ್ನು ಹೇಳುತ್ತಿದ್ದೇನೆ. ಯಾವ ಮನುಷ್ಯರು ಈ ಅಭಂಗ ಪಠನ ಮಾಡುತ್ತಾರೋ ಅವರಿಗೆ ಜೀವನ್ಮುಕ್ತಿಯಾಗುತ್ತದೆ. ಪುನಃ ಅವರು ಸಂಸಾರಕ್ಕೆ ಬರುವದಿಲ್ಲ. ಸಂದೇಹವು ಮಾಯವಾಗಿ, ಸಂಸಾರದಿಂದಲೂ ಮುಕ್ತರಾಗಿ ಅವರು ಬ್ರಹ್ಮನೇ ಆಗುತ್ತಾರೆ, ಎಂದು ತುಕಾರಾಮರು ಹೇಳುತ್ತಾರೆ. {{center|೧೪}} ಚಾರ ಕೋಟಿ ಏಕ ಲಕ್ಷಾಚಾ ಶೇವಟ| ಚೌತೀಸ ಸಹಸ್ರ ಸ್ಪಷ್ಟ ಸಾಂಗಿತಲೇ||೧|| ಸಾಂಗಿತಲೇ ಹೇ ತುಕಾ ಕಥೋನಿಯಾ ಗೇಲಾ| ಬಾರಾ ಅಭಂಗಾಲಾ ಸೋಡೂ ನಕಾ||೨|| ಸೋಡೂ ನಕಾ ತುಮ್ಹಾ ಸಾಂಗಿತಲೇ ವರ್ಮ | ಭವಪಾಶೀ ಕರ್ಮೇ ಚುಕತೀಲ||೩|| {{center|೧೧೭}}<noinclude></noinclude> sjxympdszxqx5ihjsk1z2300vmnpy9p ಪುಟ:ನಿತ್ಯ ನೇಮಾವಲಿ.pdf/೧೧೯ 104 101951 322736 284324 2026-05-26T16:33:22Z Shreesha Sharma 7840 /* Proofread */ 322736 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಚುಕತೀ ಯಾತಾಯಾತೀ ವಿಠೋಬಾಚಿ ಆಣ| ಕರಾ ಹೇ ಪಠಣ ಜೀವೇಭಾವೇ||೪|| ಜೀವೇಭಾವೇ ಕರಿತಾ ಹೋಯೀಲ ದರ್ಶನ| ಪ್ರತ್ಯಕ್ಷ ಸಗುಣ ತುಕಾ ಮ್ಹಣೇ||೫|| '''ಭಾವಾರ್ಥ''': ನಾಲ್ಕು ಕೋಟೆಗಳನ್ನು ಎಂದರೆ ಮನಸ್ಸಿನ ನಾಲ್ಕು ಅವಸ್ಥೆ (ಜಾಗೃತ, ಸ್ವಪ್ನ, ಸುಷುಪ್ತಿ, ತುರ್ಯಾ)ಗಳಲ್ಲಿಯೂ, ನಾಮಸ್ಮರಣೆಯ ಒಂದೇ ಗುರಿ(ಲಕ್ಷ)ಯನ್ನು ಮುಟ್ಟಿದಾಗ, ಎಂದರೆ ನಾಮಸ್ಮರಣೆಯಿಂದ ಮನುಷ್ಯ, ಸ್ವರೂಪದಲ್ಲಿ ಲೀನನಾದಾಗ “ಸಹಸ್ರದಲ ಕಮಲ'ದಿಂದ ಅಮೃತ ಸೇವನೆಯ ಅನುಭವವು ಅವನಿಗೆ ಆಗುತ್ತದೆ. ಹನ್ನೆರಡು ಅಭಂಗಗಳನ್ನು ಬಿಡಬೇಡಿರಿ. ಅದರ ರಹಸ್ಯವನ್ನು ಕೇಳಿರಿ. ಅದು ಭವಪಾಶವನ್ನು ಕಿತ್ತಿ ಒಗೆಯುತ್ತದೆ. ವಿಠಲನ ಸ್ಮರಣೆ ಭವಯಾತನೆಯನ್ನು ದೂರಮಾಡುತ್ತದೆ. ಭಕ್ತಿಭಾವದಿಂದ ಪಠನ ಮಾಡಿದರೆ ವಿಠಲನು ತಾನೇ ಸ್ವತಃ ಪ್ರತ್ಯಕ್ಷ ದರ್ಶನ ಕೊಡುತ್ತಾನೆ ಎಂದು ತುಕಾರಾಮರು ಹೇಳುತ್ತಾರೆ. {{center|೧೫}} ವೇದಾಚೇ ಅಭಂಗ ಕೇಲೇ ಶ್ರುತಿಪರ| ದ್ವಾದಶ ಸಹಸ್ರ ಸಂಹಿತೇಚೇ||೧|| ನಿಘಂಟ ನಿರುಕ್ತ ಆಣಿ ಬ್ರಹ್ಮಸೂತ್ರ| ಅವತಾರ ಸಹಸ್ರ ಉಪಗ್ರಂಥ||೨|| {{center|೧೧೮}}<noinclude></noinclude> 6s8mt0jcrcy4r3w7cxvlze5hdp91ddj 322738 322736 2026-05-26T16:37:21Z Pragathi. BH 7585 /* Validated */ 322738 proofread-page text/x-wiki <noinclude><pagequality level="4" user="Pragathi. BH" /></noinclude>{{center|ನಿತ್ಯನೇಮಾವಲಿ}} ಚುಕತೀ ಯಾತಾಯಾತೀ ವಿಠೋಬಾಚಿ ಆಣ| ಕರಾ ಹೇ ಪಠಣ ಜೀವೇಭಾವೇ||೪|| ಜೀವೇಭಾವೇ ಕರಿತಾ ಹೋಯೀಲ ದರ್ಶನ| ಪ್ರತ್ಯಕ್ಷ ಸಗುಣ ತುಕಾ ಮ್ಹಣೇ||೫|| '''ಭಾವಾರ್ಥ''': ನಾಲ್ಕು ಕೋಟೆಗಳನ್ನು ಎಂದರೆ ಮನಸ್ಸಿನ ನಾಲ್ಕು ಅವಸ್ಥೆ (ಜಾಗೃತ, ಸ್ವಪ್ನ, ಸುಷುಪ್ತಿ, ತುರ್ಯಾ)ಗಳಲ್ಲಿಯೂ, ನಾಮಸ್ಮರಣೆಯ ಒಂದೇ ಗುರಿ(ಲಕ್ಷ)ಯನ್ನು ಮುಟ್ಟಿದಾಗ, ಎಂದರೆ ನಾಮಸ್ಮರಣೆಯಿಂದ ಮನುಷ್ಯ, ಸ್ವರೂಪದಲ್ಲಿ ಲೀನನಾದಾಗ “ಸಹಸ್ರದಲ ಕಮಲ'ದಿಂದ ಅಮೃತ ಸೇವನೆಯ ಅನುಭವವು ಅವನಿಗೆ ಆಗುತ್ತದೆ. ಹನ್ನೆರಡು ಅಭಂಗಗಳನ್ನು ಬಿಡಬೇಡಿರಿ. ಅದರ ರಹಸ್ಯವನ್ನು ಕೇಳಿರಿ. ಅದು ಭವಪಾಶವನ್ನು ಕಿತ್ತಿ ಒಗೆಯುತ್ತದೆ. ವಿಠಲನ ಸ್ಮರಣೆ ಭವಯಾತನೆಯನ್ನು ದೂರಮಾಡುತ್ತದೆ. ಭಕ್ತಿಭಾವದಿಂದ ಪಠನ ಮಾಡಿದರೆ ವಿಠಲನು ತಾನೇ ಸ್ವತಃ ಪ್ರತ್ಯಕ್ಷ ದರ್ಶನ ಕೊಡುತ್ತಾನೆ ಎಂದು ತುಕಾರಾಮರು ಹೇಳುತ್ತಾರೆ. {{center|೧೫}} ವೇದಾಚೇ ಅಭಂಗ ಕೇಲೇ ಶ್ರುತಿಪರ| ದ್ವಾದಶ ಸಹಸ್ರ ಸಂಹಿತೇಚೇ||೧|| ನಿಘಂಟ ನಿರುಕ್ತ ಆಣಿ ಬ್ರಹ್ಮಸೂತ್ರ| ಅವತಾರ ಸಹಸ್ರ ಉಪಗ್ರಂಥ||೨|| {{center|೧೧೮}}<noinclude></noinclude> lza6jgwy8hd00wvrstfn4u2d7ymuq00 322739 322738 2026-05-26T16:38:09Z Pragathi. BH 7585 322739 proofread-page text/x-wiki <noinclude><pagequality level="4" user="Pragathi. BH" /></noinclude>{{center|ನಿತ್ಯನೇಮಾವಲಿ}} ಚುಕತೀ ಯಾತಾಯಾತೀ ವಿಠೋಬಾಚಿ ಆಣ| ಕರಾ ಹೇ ಪಠಣ ಜೀವೇಭಾವೇ||೪|| ಜೀವೇಭಾವೇ ಕರಿತಾ ಹೋಯೀಲ ದರ್ಶನ| ಪ್ರತ್ಯಕ್ಷ ಸಗುಣ ತುಕಾ ಮ್ಹಣೇ||೫|| '''ಭಾವಾರ್ಥ''': ನಾಲ್ಕು ಕೋಟೆಗಳನ್ನು ಎಂದರೆ ಮನಸ್ಸಿನ ನಾಲ್ಕು ಅವಸ್ಥೆ (ಜಾಗೃತ, ಸ್ವಪ್ನ, ಸುಷುಪ್ತಿ, ತುರ್ಯಾ)ಗಳಲ್ಲಿಯೂ, ನಾಮಸ್ಮರಣೆಯ ಒಂದೇ ಗುರಿ(ಲಕ್ಷ)ಯನ್ನು ಮುಟ್ಟಿದಾಗ, ಎಂದರೆ ನಾಮಸ್ಮರಣೆಯಿಂದ ಮನುಷ್ಯ, ಸ್ವರೂಪದಲ್ಲಿ ಲೀನನಾದಾಗ “ಸಹಸ್ರದಲ ಕಮಲ'ದಿಂದ ಅಮೃತ ಸೇವನೆಯ ಅನುಭವವು ಅವನಿಗೆ ಆಗುತ್ತದೆ. ಹನ್ನೆರಡು ಅಭಂಗಗಳನ್ನು ಬಿಡಬೇಡಿರಿ. ಅದರ ರಹಸ್ಯವನ್ನು ಕೇಳಿರಿ. ಅದು ಭವಪಾಶವನ್ನು ಕಿತ್ತಿ ಒಗೆಯುತ್ತದೆ. ವಿಠಲನ ಸ್ಮರಣೆ ಭವಯಾತನೆಯನ್ನು ದೂರಮಾಡುತ್ತದೆ. ಭಕ್ತಿಭಾವದಿಂದ ಪಠನ ಮಾಡಿದರೆ ವಿಠಲನು ತಾನೇ ಸ್ವತಃ ಪ್ರತ್ಯಕ್ಷ ದರ್ಶನ ಕೊಡುತ್ತಾನೆ ಎಂದು ತುಕಾರಾಮರು ಹೇಳುತ್ತಾರೆ. {{center|೧೫}} <poem> ವೇದಾಚೇ ಅಭಂಗ ಕೇಲೇ ಶ್ರುತಿಪರ| ದ್ವಾದಶ ಸಹಸ್ರ ಸಂಹಿತೇಚೇ||೧|| ನಿಘಂಟ ನಿರುಕ್ತ ಆಣಿ ಬ್ರಹ್ಮಸೂತ್ರ| ಅವತಾರ ಸಹಸ್ರ ಉಪಗ್ರಂಥ||೨|| </poem> {{center|೧೧೮}}<noinclude></noinclude> jcugd2nvniazyp7wryj8wvx3ltdhc16 322740 322739 2026-05-26T16:38:34Z Pragathi. BH 7585 322740 proofread-page text/x-wiki <noinclude><pagequality level="4" user="Pragathi. BH" /></noinclude>{{center|ನಿತ್ಯನೇಮಾವಲಿ}} <poem> ಚುಕತೀ ಯಾತಾಯಾತೀ ವಿಠೋಬಾಚಿ ಆಣ| ಕರಾ ಹೇ ಪಠಣ ಜೀವೇಭಾವೇ||೪|| ಜೀವೇಭಾವೇ ಕರಿತಾ ಹೋಯೀಲ ದರ್ಶನ| ಪ್ರತ್ಯಕ್ಷ ಸಗುಣ ತುಕಾ ಮ್ಹಣೇ||೫|| </poem> '''ಭಾವಾರ್ಥ''': ನಾಲ್ಕು ಕೋಟೆಗಳನ್ನು ಎಂದರೆ ಮನಸ್ಸಿನ ನಾಲ್ಕು ಅವಸ್ಥೆ (ಜಾಗೃತ, ಸ್ವಪ್ನ, ಸುಷುಪ್ತಿ, ತುರ್ಯಾ)ಗಳಲ್ಲಿಯೂ, ನಾಮಸ್ಮರಣೆಯ ಒಂದೇ ಗುರಿ(ಲಕ್ಷ)ಯನ್ನು ಮುಟ್ಟಿದಾಗ, ಎಂದರೆ ನಾಮಸ್ಮರಣೆಯಿಂದ ಮನುಷ್ಯ, ಸ್ವರೂಪದಲ್ಲಿ ಲೀನನಾದಾಗ “ಸಹಸ್ರದಲ ಕಮಲ'ದಿಂದ ಅಮೃತ ಸೇವನೆಯ ಅನುಭವವು ಅವನಿಗೆ ಆಗುತ್ತದೆ. ಹನ್ನೆರಡು ಅಭಂಗಗಳನ್ನು ಬಿಡಬೇಡಿರಿ. ಅದರ ರಹಸ್ಯವನ್ನು ಕೇಳಿರಿ. ಅದು ಭವಪಾಶವನ್ನು ಕಿತ್ತಿ ಒಗೆಯುತ್ತದೆ. ವಿಠಲನ ಸ್ಮರಣೆ ಭವಯಾತನೆಯನ್ನು ದೂರಮಾಡುತ್ತದೆ. ಭಕ್ತಿಭಾವದಿಂದ ಪಠನ ಮಾಡಿದರೆ ವಿಠಲನು ತಾನೇ ಸ್ವತಃ ಪ್ರತ್ಯಕ್ಷ ದರ್ಶನ ಕೊಡುತ್ತಾನೆ ಎಂದು ತುಕಾರಾಮರು ಹೇಳುತ್ತಾರೆ. {{center|೧೫}} <poem> ವೇದಾಚೇ ಅಭಂಗ ಕೇಲೇ ಶ್ರುತಿಪರ| ದ್ವಾದಶ ಸಹಸ್ರ ಸಂಹಿತೇಚೇ||೧|| ನಿಘಂಟ ನಿರುಕ್ತ ಆಣಿ ಬ್ರಹ್ಮಸೂತ್ರ| ಅವತಾರ ಸಹಸ್ರ ಉಪಗ್ರಂಥ||೨|| </poem> {{center|೧೧೮}}<noinclude></noinclude> kw598o6kf6vqs2vu7g7s4gs4ao0k21e ಪುಟ:ನಿತ್ಯ ನೇಮಾವಲಿ.pdf/೧೨೦ 104 101953 322737 284326 2026-05-26T16:37:16Z Shreesha Sharma 7840 /* Proofread */ 322737 proofread-page text/x-wiki <noinclude><pagequality level="3" user="Shreesha Sharma" /></noinclude>{{center|ರಾತ್ರಿ ಭಜನೆ}} ಅಭಂಗ ಹೇ ಕೋಟೀ ಭಕ್ತಿಪರ ಝಾಲೇ| ಜ್ಞಾನಪರ ಕೇಲೇ ತಿತುಕೇಚೀ||೩|| ಪಂಚಾಹತ್ತರ ಲಕ್ಷ ವೈರಾಗ್ಯ ವರ್ಣಲೇ| ನಾಮ ತೇ ಗಾಯೀಲೇ ತಿತುಕೇಚೀ||೪|| ಸಾಠ ಲಕ್ಷ ಕೇಲಾ ಬೋಧ ಯಾ ಜಗಾಸೀ| ವರ್ಣೀಲೇ ರೂಪಾಸೀ ತಿತುಕೇಚೀ .||೫|| ತೀಸ ಲಕ್ಷ ಕೇಲಿ ದೇವಾಸಿ ಕರುಣಾ| ಕರ್ಮಕಾಂಡ ಜಾಣಾ ಏಕ ಲಕ್ಷ||೬|| ದ್ವಾದಶಸಹಸ್ರ ಸ್ವಾತ್ಮಾನುಭವೀ| ಏವಂ ಜಾಣಾ ಸರ್ವ ಸಂಖ್ಯಾ ಐಶೀ||೭|| ಐಸೇ ಹೇ ಅಭಂಗ ಝಾಲೇಸೇ ಭೂತಳೀ| ಪಾಚ ಅಂತರಾಳೀ ಪತ್ರಿಕೇಚೀ||೮|| ಚೌತೀಸ ಸಹಸ್ರ ಲಕ್ಷ ಏಕ ಕೋಟಿ ಪಾಚ| ಸಾಂಗೋನಿಯಾ ಸಾಚ ಗೇಲಾ ತುಕಾ||೯|| '''ಭಾವಾರ್ಥ''': ತುಕಾರಾಮರು ಮಾಡಿದ ಅಭಂಗಗಳ ಲೆಕ್ಕ ಹೀಗಿದೆ. ವೇದ, ಶ್ರುತಿ ಮತ್ತು ಸಂಹಿತ ಪರವಾಗಿ ಹನ್ನೆರಡು ಸಾವಿರ ಅಭಂಗಗಳು, ನಿಘಂಟು, {{center|೧೧೯}}<noinclude></noinclude> gero2g2p2u1cmg3pdea2imac8sah3eo 322741 322737 2026-05-26T16:38:51Z Shreelatha.Halemane 7642 /* Validated */ 322741 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}} ಅಭಂಗ ಹೇ ಕೋಟೀ ಭಕ್ತಿಪರ ಝಾಲೇ| ಜ್ಞಾನಪರ ಕೇಲೇ ತಿತುಕೇಚೀ||೩|| ಪಂಚಾಹತ್ತರ ಲಕ್ಷ ವೈರಾಗ್ಯ ವರ್ಣಲೇ| ನಾಮ ತೇ ಗಾಯೀಲೇ ತಿತುಕೇಚೀ||೪|| ಸಾಠ ಲಕ್ಷ ಕೇಲಾ ಬೋಧ ಯಾ ಜಗಾಸೀ| ವರ್ಣೀಲೇ ರೂಪಾಸೀ ತಿತುಕೇಚೀ .||೫|| ತೀಸ ಲಕ್ಷ ಕೇಲಿ ದೇವಾಸಿ ಕರುಣಾ| ಕರ್ಮಕಾಂಡ ಜಾಣಾ ಏಕ ಲಕ್ಷ||೬|| ದ್ವಾದಶಸಹಸ್ರ ಸ್ವಾತ್ಮಾನುಭವೀ| ಏವಂ ಜಾಣಾ ಸರ್ವ ಸಂಖ್ಯಾ ಐಶೀ||೭|| ಐಸೇ ಹೇ ಅಭಂಗ ಝಾಲೇಸೇ ಭೂತಳೀ| ಪಾಚ ಅಂತರಾಳೀ ಪತ್ರಿಕೇಚೀ||೮|| ಚೌತೀಸ ಸಹಸ್ರ ಲಕ್ಷ ಏಕ ಕೋಟಿ ಪಾಚ| ಸಾಂಗೋನಿಯಾ ಸಾಚ ಗೇಲಾ ತುಕಾ||೯|| '''ಭಾವಾರ್ಥ''': ತುಕಾರಾಮರು ಮಾಡಿದ ಅಭಂಗಗಳ ಲೆಕ್ಕ ಹೀಗಿದೆ. ವೇದ, ಶ್ರುತಿ ಮತ್ತು ಸಂಹಿತ ಪರವಾಗಿ ಹನ್ನೆರಡು ಸಾವಿರ ಅಭಂಗಗಳು, ನಿಘಂಟು, {{center|೧೧೯}}<noinclude></noinclude> sjwextcpmy1d3kaehpsvmh57slb6z9f ಪುಟ:ನಿತ್ಯ ನೇಮಾವಲಿ.pdf/೧೨೧ 104 101955 322742 284328 2026-05-26T16:40:43Z Shreesha Sharma 7840 /* Proofread */ 322742 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಬ್ರಹ್ಮಸೂತ್ರ, ನಿರುಕ್ತ, ಉಪಗ್ರಂಥಗಳನ್ನು ಕುರಿತು ಹತ್ತು ಸಾವಿರ ಅಭಂಗಗಳು. ಭಕ್ತಿಪರ ಅಭಂಗಗಳು ಒಂದು ಕೋಟಿ. ಜ್ಞಾನಪರ ಅಭಂಗಗಳೂ ಅಷ್ಟೇ. ವೈರಾಗ್ಯಪೂರ್ಣವಾದವು ಎಪ್ಪತ್ತೈದು ಲಕ್ಷ. ನಾಮದ ಮೇಲಿನ ಅಭಂಗಗಳೂ ಅಷ್ಟೇ. ಜಗತ್ತಿಗೆ ಬೋಧ ಮಾಡಿದವೂ ಸಗುಣರೂಪವನ್ನು ವರ್ಣಿಸಿದವೂ ಅರವತ್ತು ಲಕ್ಷ. ಮೂವತ್ತು ಲಕ್ಷ ದೇವರ ಕರುಣೆಯನ್ನು ಕುರಿತು. ಒಂದು ಲಕ್ಷ ಕರ್ಮಕಾಂಡಕ್ಕೆ ಸೇರಿದವು. ಹನ್ನೆರಡು ಸಾವಿರ ಸ್ವಾತ್ಮಾನುಭವಕ್ಕೆ ಸಂಬಂಧಿಸಿದವು. ಹೀಗೆ ಎಲ್ಲ ಸೇರಿ ಒಟ್ಟು ಐದು ಕೋಟಿ, ಒಂದು ಲಕ್ಷ, ಮೂವತ್ನಾಲ್ಕು ಸಹಸ್ರ ಎಂದು ತುಕಾರಾಮರು ಹೇಳಿ ನಿಜಧಾಮಕ್ಕೆ ಹೋದರು. {{center|೧೬} ಸಗುಣ ಹೇ ಬ್ರಹ್ಮ ವಿಠಲಚಿ ಬೋಲೇ| ಐಕ ಪಾ ವಹಿಲೇ ತುಕಾರಾಮಾ||೧|| ತುಕಾರಾಮಾ ತುವಾ ಕೇಲೇ ಜೀ ಅಭಂಗ| ಕರಿತೀ ಜೇ ಕಾ ಜಗೀ ನಿತ್ಯ ಪಾಠ||೨|| ಜಗೀ ಪಾಠ ಕರಿತಾ ಆವಡೀ ಸದ್ಭಾವೇ| ವಿಪತ್ತಿ ನ ಹೋಯ ತ್ಯಾ ಪ್ರಾಣ್ಯಾಸಿ||೩|| ಪ್ರಾಣ್ಯಾಚೀ ಕಲ್ಯಾಣ ಹೋಯೀಲ ಬಾ ಪಾಹೇ। ಭಾವೇ ವಾಚಿತಾ ಹೇ ನಿತ್ಯನೇಮೇ||೪|| {{center|೧೨೦}}<noinclude></noinclude> bue4kpsnqhxx6sd873vg7t6v7l9whzw 322743 322742 2026-05-26T16:43:40Z Shreelatha.Halemane 7642 /* Validated */ 322743 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಬ್ರಹ್ಮಸೂತ್ರ, ನಿರುಕ್ತ, ಉಪಗ್ರಂಥಗಳನ್ನು ಕುರಿತು ಹತ್ತು ಸಾವಿರ ಅಭಂಗಗಳು. ಭಕ್ತಿಪರ ಅಭಂಗಗಳು ಒಂದು ಕೋಟಿ. ಜ್ಞಾನಪರ ಅಭಂಗಗಳೂ ಅಷ್ಟೇ. ವೈರಾಗ್ಯಪೂರ್ಣವಾದವು ಎಪ್ಪತ್ತೈದು ಲಕ್ಷ. ನಾಮದ ಮೇಲಿನ ಅಭಂಗಗಳೂ ಅಷ್ಟೇ. ಜಗತ್ತಿಗೆ ಬೋಧ ಮಾಡಿದವೂ ಸಗುಣರೂಪವನ್ನು ವರ್ಣಿಸಿದವೂ ಅರವತ್ತು ಲಕ್ಷ. ಮೂವತ್ತು ಲಕ್ಷ ದೇವರ ಕರುಣೆಯನ್ನು ಕುರಿತು. ಒಂದು ಲಕ್ಷ ಕರ್ಮಕಾಂಡಕ್ಕೆ ಸೇರಿದವು. ಹನ್ನೆರಡು ಸಾವಿರ ಸ್ವಾತ್ಮಾನುಭವಕ್ಕೆ ಸಂಬಂಧಿಸಿದವು. ಹೀಗೆ ಎಲ್ಲ ಸೇರಿ ಒಟ್ಟು ಐದು ಕೋಟಿ, ಒಂದು ಲಕ್ಷ, ಮೂವತ್ನಾಲ್ಕು ಸಹಸ್ರ ಎಂದು ತುಕಾರಾಮರು ಹೇಳಿ ನಿಜಧಾಮಕ್ಕೆ ಹೋದರು. {{center|೧೬} ಸಗುಣ ಹೇ ಬ್ರಹ್ಮ ವಿಠಲಚಿ ಬೋಲೇ| ಐಕ ಪಾ ವಹಿಲೇ ತುಕಾರಾಮಾ||೧|| ತುಕಾರಾಮಾ ತುವಾ ಕೇಲೇ ಜೀ ಅಭಂಗ| ಕರಿತೀ ಜೇ ಕಾ ಜಗೀ ನಿತ್ಯ ಪಾಠ||೨|| ಜಗೀ ಪಾಠ ಕರಿತಾ ಆವಡೀ ಸದ್ಭಾವೇ| ವಿಪತ್ತಿ ನ ಹೋಯ ತ್ಯಾ ಪ್ರಾಣ್ಯಾಸಿ||೩|| ಪ್ರಾಣ್ಯಾಚೀ ಕಲ್ಯಾಣ ಹೋಯೀಲ ಬಾ ಪಾಹೇ। ಭಾವೇ ವಾಚಿತಾ ಹೇ ನಿತ್ಯನೇಮೇ||೪|| {{center|೧೨೦}}<noinclude></noinclude> 5kam2chdjfkfudbxvaei9kuqiaocbzl 322744 322743 2026-05-26T16:44:18Z Shreelatha.Halemane 7642 322744 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಬ್ರಹ್ಮಸೂತ್ರ, ನಿರುಕ್ತ, ಉಪಗ್ರಂಥಗಳನ್ನು ಕುರಿತು ಹತ್ತು ಸಾವಿರ ಅಭಂಗಗಳು. ಭಕ್ತಿಪರ ಅಭಂಗಗಳು ಒಂದು ಕೋಟಿ. ಜ್ಞಾನಪರ ಅಭಂಗಗಳೂ ಅಷ್ಟೇ. ವೈರಾಗ್ಯಪೂರ್ಣವಾದವು ಎಪ್ಪತ್ತೈದು ಲಕ್ಷ. ನಾಮದ ಮೇಲಿನ ಅಭಂಗಗಳೂ ಅಷ್ಟೇ. ಜಗತ್ತಿಗೆ ಬೋಧ ಮಾಡಿದವೂ ಸಗುಣರೂಪವನ್ನು ವರ್ಣಿಸಿದವೂ ಅರವತ್ತು ಲಕ್ಷ. ಮೂವತ್ತು ಲಕ್ಷ ದೇವರ ಕರುಣೆಯನ್ನು ಕುರಿತು. ಒಂದು ಲಕ್ಷ ಕರ್ಮಕಾಂಡಕ್ಕೆ ಸೇರಿದವು. ಹನ್ನೆರಡು ಸಾವಿರ ಸ್ವಾತ್ಮಾನುಭವಕ್ಕೆ ಸಂಬಂಧಿಸಿದವು. ಹೀಗೆ ಎಲ್ಲ ಸೇರಿ ಒಟ್ಟು ಐದು ಕೋಟಿ, ಒಂದು ಲಕ್ಷ, ಮೂವತ್ನಾಲ್ಕು ಸಹಸ್ರ ಎಂದು ತುಕಾರಾಮರು ಹೇಳಿ ನಿಜಧಾಮಕ್ಕೆ ಹೋದರು. {{center|೧೬}} ಸಗುಣ ಹೇ ಬ್ರಹ್ಮ ವಿಠಲಚಿ ಬೋಲೇ| ಐಕ ಪಾ ವಹಿಲೇ ತುಕಾರಾಮಾ||೧|| ತುಕಾರಾಮಾ ತುವಾ ಕೇಲೇ ಜೀ ಅಭಂಗ| ಕರಿತೀ ಜೇ ಕಾ ಜಗೀ ನಿತ್ಯ ಪಾಠ||೨|| ಜಗೀ ಪಾಠ ಕರಿತಾ ಆವಡೀ ಸದ್ಭಾವೇ| ವಿಪತ್ತಿ ನ ಹೋಯ ತ್ಯಾ ಪ್ರಾಣ್ಯಾಸಿ||೩|| ಪ್ರಾಣ್ಯಾಚೀ ಕಲ್ಯಾಣ ಹೋಯೀಲ ಬಾ ಪಾಹೇ। ಭಾವೇ ವಾಚಿತಾ ಹೇ ನಿತ್ಯನೇಮೇ||೪|| {{center|೧೨೦}}<noinclude></noinclude> dfv24qwqdzm5jidjw255yotb4myz3ic ಪುಟ:ನಿತ್ಯ ನೇಮಾವಲಿ.pdf/೧೨೨ 104 101957 322745 284330 2026-05-26T16:47:37Z Shreesha Sharma 7840 /* Proofread */ 322745 proofread-page text/x-wiki <noinclude><pagequality level="3" user="Shreesha Sharma" /></noinclude>{{center|ರಾತ್ರಿ ಭಜನೆ}} ನೇಮೇ ಸಂಕಷ್ಟಾಸೀ ಕರೀ ಆಕರಾ ಪಾಠ| ವಿಘ್ನ ತ್ಯಾಚೇ ಸ್ಪಷ್ಟ ದೂರ ಹೋಯ||೫|| ದೂರ ಹೋಯ ವಿಘ್ನ ವಿಠಲ ಮ್ಹಣೇ ತುಕಯಾ| ಶೇವಟೀ ನಿಜ ಠಾಯಾ ನೇಯೀನ ಮೀ||೬|| '''ಭಾವಾರ್ಥ''': ಸಗುಣ ಬ್ರಹ್ಮನೆಂದರೆ ವಿಠಲನೇ, ತುಕಾರಾಮನೇ, ನೀನು ಮಾಡಿದ ಅಭಂಗಗಳನ್ನು ಯಾರು ನಿತ್ಯ ಪಠನ ಮಾಡುತ್ತಾರೆಯೋ, ಅವರಲ್ಲಿ ಸದ್ಭಾವವು ಉದಯಿಸುವುದು. ಅದರಿಂದ ಸಂಕಟಗಳು ದೂರಾಗುವವು. ಸರ್ವರ ಕಲ್ಯಾಣವಾಗುವುದು. ಸಂಕಷ್ಟ ದಿನಗಳಲ್ಲಿ ಹನ್ನೊಂದು ಸಲ ಅಭಂಗ ಪಠನ ಮಾಡಿದರೆ ಖಂಡಿತವಾಗಿ ವಿಘ್ನಗಳು ದೂರಾಗುವವು. ಕೊನೆಗೆ ಅವರನ್ನು ನನ್ನ ಸ್ಥಾನಕ್ಕೆ ಕರೆದೊಯ್ಯುವನು ಎಂದು ವಿಠಲನು ತುಕಾರಾಮರಿ ಹೇಳುತ್ತಾನೆ. {{center|೧೭}} ಗುರುಚರಣೀ ಠೇವಿತಿ ಭಾವ| ಆಪೇಆಪ ಭಟ್ ದೇವ||೧|| ಮ್ಹಣೂನೀ ಗುರೂಸೀ ಭಜಾವೇ| ರೂಪ ಧ್ಯಾನಾಸೀ ಆಣಾವೇ||೨|| {{center|೧೨೧}}<noinclude></noinclude> py9hce4njcy8eydys1n6ppz9iwae0hr 322752 322745 2026-05-26T16:55:37Z Shreelatha.Halemane 7642 /* Validated */ 322752 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}} ನೇಮೇ ಸಂಕಷ್ಟಾಸೀ ಕರೀ ಆಕರಾ ಪಾಠ| ವಿಘ್ನ ತ್ಯಾಚೇ ಸ್ಪಷ್ಟ ದೂರ ಹೋಯ||೫|| ದೂರ ಹೋಯ ವಿಘ್ನ ವಿಠಲ ಮ್ಹಣೇ ತುಕಯಾ| ಶೇವಟೀ ನಿಜ ಠಾಯಾ ನೇಯೀನ ಮೀ||೬|| '''ಭಾವಾರ್ಥ''': ಸಗುಣ ಬ್ರಹ್ಮನೆಂದರೆ ವಿಠಲನೇ, ತುಕಾರಾಮನೇ, ನೀನು ಮಾಡಿದ ಅಭಂಗಗಳನ್ನು ಯಾರು ನಿತ್ಯ ಪಠನ ಮಾಡುತ್ತಾರೆಯೋ, ಅವರಲ್ಲಿ ಸದ್ಭಾವವು ಉದಯಿಸುವುದು. ಅದರಿಂದ ಸಂಕಟಗಳು ದೂರಾಗುವವು. ಸರ್ವರ ಕಲ್ಯಾಣವಾಗುವುದು. ಸಂಕಷ್ಟ ದಿನಗಳಲ್ಲಿ ಹನ್ನೊಂದು ಸಲ ಅಭಂಗ ಪಠನ ಮಾಡಿದರೆ ಖಂಡಿತವಾಗಿ ವಿಘ್ನಗಳು ದೂರಾಗುವವು. ಕೊನೆಗೆ ಅವರನ್ನು ನನ್ನ ಸ್ಥಾನಕ್ಕೆ ಕರೆದೊಯ್ಯುವನು ಎಂದು ವಿಠಲನು ತುಕಾರಾಮರಿ ಹೇಳುತ್ತಾನೆ. {{center|೧೭}} ಗುರುಚರಣೀ ಠೇವಿತಿ ಭಾವ| ಆಪೇಆಪ ಭಟ್ ದೇವ||೧|| ಮ್ಹಣೂನೀ ಗುರೂಸೀ ಭಜಾವೇ| ರೂಪ ಧ್ಯಾನಾಸೀ ಆಣಾವೇ||೨|| {{center|೧೨೧}}<noinclude></noinclude> 4zcpb3mhqa17lwu0dhz03kkfr2sxhsl ಪುಟ:ನಿತ್ಯ ನೇಮಾವಲಿ.pdf/೧೨೩ 104 101959 322747 284332 2026-05-26T16:50:06Z Shreesha Sharma 7840 /* Proofread */ 322747 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ದೇವ ಗುರೂಪಾಶೀ ಆಹೇ। ವಾರಂವಾರ ಸಾಂಗೂ ಕಾಯೇ||೩|| ತುಕಾ ಮ್ಹಣೇ ಗುರುಭಜನೀ | ದೇವ ಭೇಟೇ ಜನೀ ವನೀ||೪|| '''ಭಾವಾರ್ಥ''': ಗುರುಚರಣದಲ್ಲಿ ಭಕ್ತಿ-ಶ್ರದ್ಧೆ ಇಟ್ಟರೆ ದೇವನು ತಾನಾಗಿಯೇ ಬಂದು ಭೆಟ್ಟಿಯಾಗುತ್ತಾನೆ. ಆದ್ದರಿಂದ ಗುರುವಿನ ರೂಪವನ್ನು ಧ್ಯಾನಿಸಿ ಭಜನೆ ಮಾಡಬೇಕು. ದೇವನು ಗುರುವಿನಲ್ಲಿ ಇರುತ್ತಾನೆಂದು ಎಷ್ಟು ಸಲ ಹೇಳಲಿ? ಗುರುಭಜನೆ ಮಾಡುವುದರಿಂದ ದೇವನು (ಪ್ರಪಂಚದಲ್ಲಿಯೂ, ಅರಣ್ಯದಲ್ಲಿಯೂ) ಎಲ್ಲೆಡೆಯಲ್ಲಿಯೂ ಕಾಣುತ್ತಾನೆಂದು ತುಕಾರಾಮರು ಹೇಳುತ್ತಾರೆ. {{center|೧೮}} ಜಯಜಯ ಗುರುಮಹಾರಾಜ ಗುರು (೫ ಸಲ) ಜಯಜಯ ಪರಬ್ರಹ್ಮ ಸದ್ಗುರು (೧ ಸಲ) ಜಯಗುರು ಜಯಗುರು ಜಯಗುರು ಜಯಗುರು ಜಯಗುರು ಜಯಗುರು ಜಯಗುರು ಜಯಗುರು {{center|೧೨೨}}<noinclude></noinclude> kgn2q78szna252walfpobtwd5ek84rk 322753 322747 2026-05-26T16:55:46Z Shreelatha.Halemane 7642 /* Validated */ 322753 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ದೇವ ಗುರೂಪಾಶೀ ಆಹೇ। ವಾರಂವಾರ ಸಾಂಗೂ ಕಾಯೇ||೩|| ತುಕಾ ಮ್ಹಣೇ ಗುರುಭಜನೀ | ದೇವ ಭೇಟೇ ಜನೀ ವನೀ||೪|| '''ಭಾವಾರ್ಥ''': ಗುರುಚರಣದಲ್ಲಿ ಭಕ್ತಿ-ಶ್ರದ್ಧೆ ಇಟ್ಟರೆ ದೇವನು ತಾನಾಗಿಯೇ ಬಂದು ಭೆಟ್ಟಿಯಾಗುತ್ತಾನೆ. ಆದ್ದರಿಂದ ಗುರುವಿನ ರೂಪವನ್ನು ಧ್ಯಾನಿಸಿ ಭಜನೆ ಮಾಡಬೇಕು. ದೇವನು ಗುರುವಿನಲ್ಲಿ ಇರುತ್ತಾನೆಂದು ಎಷ್ಟು ಸಲ ಹೇಳಲಿ? ಗುರುಭಜನೆ ಮಾಡುವುದರಿಂದ ದೇವನು (ಪ್ರಪಂಚದಲ್ಲಿಯೂ, ಅರಣ್ಯದಲ್ಲಿಯೂ) ಎಲ್ಲೆಡೆಯಲ್ಲಿಯೂ ಕಾಣುತ್ತಾನೆಂದು ತುಕಾರಾಮರು ಹೇಳುತ್ತಾರೆ. {{center|೧೮}} ಜಯಜಯ ಗುರುಮಹಾರಾಜ ಗುರು (೫ ಸಲ) ಜಯಜಯ ಪರಬ್ರಹ್ಮ ಸದ್ಗುರು (೧ ಸಲ) ಜಯಗುರು ಜಯಗುರು ಜಯಗುರು ಜಯಗುರು ಜಯಗುರು ಜಯಗುರು ಜಯಗುರು ಜಯಗುರು {{center|೧೨೨}}<noinclude></noinclude> gqgblj7wry0xjwx3zatntc3og9bqm81 ಪುಟ:ನಿತ್ಯ ನೇಮಾವಲಿ.pdf/೧೩೫ 104 101981 322748 284354 2026-05-26T16:51:33Z Shreesha Sharma 7840 /* Proofread */ 322748 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} '''ಭಾವಾರ್ಥ''': ಶ್ರೇಷ್ಠವಾದ ಜ್ಞಾನವನ್ನು ನೀಡುವ, ಬಾಲಬೋಧದಂತೆ ಸರಳವಿರುವ, ಗ್ರಂಥಗಳ ರಾಜನೆನಿಸುವ, ದಾಸಬೋಧಕ್ಕೆ ಜಯಜಯವೆಂದು ಆರತಿ ಬೆಳಗುವ. ವೇದಾಂತಸಿದ್ಧಾಂತಗಳು ಮಾನ್ಯಮಾಡಿದ ವಿಚಾರಗಳ ಕಾವ್ಯ-ಸಿಂಧು ನೀನಾಗಿರುವೆ. ಶ್ರುತಿ-ಶಾಸ್ತ್ರ, ಗೀತಾ ಗ್ರಂಥಗಳ ಸಂಗಮವಾಗಿರುವೆ. (ಎಂದರೆ ಇದರಲ್ಲಿ ಅವಲ್ಲ ಸಮಾವೇಶವಾಗಿವೆ). ಮಹಾನುಭಾವರಾದ ಸಂತರು ನಿನ್ನ ಈ ಗ್ರಂಥದ ಸ್ವಾದ ಮಾಡಿ ಪಡೆದ ಅನುಭವದಿಂದ, ಅಜ್ಞಾನಿಗಳಾದ ಜಡ-ಜೀವರಿಗೆ ಸುಲಭಮಾರ್ಗವನ್ನು ತೋರಿಸುವಂತೆ ಆಯಿತು. ನವವಿಧ ಭಕ್ತಿಪಂಥದಿಂದ ರಾಮನ ದರ್ಶನ ಪಡೆಯುವಂತೆ ಮಾಡಿರುವೆ. ಅದು ಚಾತುರ್ಯದ ಖಣಿಯೇ ಇದ್ದು ಮಾಯಾಚಕ್ರವನ್ನು ನಿಲ್ಲಿಸಿದೆ. ಹರಿಹರರ ಗುಹ್ಯತತ್ತ್ವವನ್ನು ತೋರಿಸಿ ಕೊಟ್ಟಿರುವೆ. ಇದರಿಂದ ಅಸಂಖ್ಯಾತ ಬದ್ಧರು ಸಿದ್ಧರಾಗಿದ್ದಾರೆ. ದಾಸಬೋಧದ ಇಪ್ಪತ್ತು ದಶಕಗಳನ್ನು ಓದಿ ಅನುಭವವನ್ನು ಯಾರು ತೆಗೆದುಕೊಳ್ಳುತ್ತಾರೋ, ಪ್ರತಿದಿನ ತಪ್ಪದೇ ವಿವರಿಸುತ್ತಾರೋ, ಅವರು ಸ್ವತಃ ಬ್ರಹ್ಮಸ್ವರೂಪರಾಗಿ ಹೋಗುತ್ತಾರೆ. ಇಂಥಹ ಗ್ರಂಥದ ಶ್ರವಣದ ಲಾಭವಾಗಬೇಕಾದರೆ, ಹಿಂದಿನ ಜನ್ಮದ ಅಪಾರ ಪುಣ್ಯಸಂಗ್ರಹವಿರಬೇಕಾಗುತ್ತದೆ. ರಾಮದಾಸರ ಶಿಷ್ಯ ಹಾಗೂ ಈ ಗ್ರಂಥದ ಲೇಖನವನ್ನು ಬರೆದ ಕಲ್ಯಾಣಸ್ವಾಮಿಯ ಅಂತಃಕರಣ ದಲ್ಲಿಯ ಭಾವವಿದು. ಗ್ರಂಥರಾಜವಾದ ದಾಸಬೋಧಕ್ಕೆ ಜಯಜಯಕಾರವು. {{center|೧೩೪}}<noinclude></noinclude> ks90g3xfet41lbq4l9ruq2vl0oreyoq 322750 322748 2026-05-26T16:55:08Z Shreelatha.Halemane 7642 /* Validated */ 322750 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} '''ಭಾವಾರ್ಥ''': ಶ್ರೇಷ್ಠವಾದ ಜ್ಞಾನವನ್ನು ನೀಡುವ, ಬಾಲಬೋಧದಂತೆ ಸರಳವಿರುವ, ಗ್ರಂಥಗಳ ರಾಜನೆನಿಸುವ, ದಾಸಬೋಧಕ್ಕೆ ಜಯಜಯವೆಂದು ಆರತಿ ಬೆಳಗುವ. ವೇದಾಂತಸಿದ್ಧಾಂತಗಳು ಮಾನ್ಯಮಾಡಿದ ವಿಚಾರಗಳ ಕಾವ್ಯ-ಸಿಂಧು ನೀನಾಗಿರುವೆ. ಶ್ರುತಿ-ಶಾಸ್ತ್ರ, ಗೀತಾ ಗ್ರಂಥಗಳ ಸಂಗಮವಾಗಿರುವೆ. (ಎಂದರೆ ಇದರಲ್ಲಿ ಅವಲ್ಲ ಸಮಾವೇಶವಾಗಿವೆ). ಮಹಾನುಭಾವರಾದ ಸಂತರು ನಿನ್ನ ಈ ಗ್ರಂಥದ ಸ್ವಾದ ಮಾಡಿ ಪಡೆದ ಅನುಭವದಿಂದ, ಅಜ್ಞಾನಿಗಳಾದ ಜಡ-ಜೀವರಿಗೆ ಸುಲಭಮಾರ್ಗವನ್ನು ತೋರಿಸುವಂತೆ ಆಯಿತು. ನವವಿಧ ಭಕ್ತಿಪಂಥದಿಂದ ರಾಮನ ದರ್ಶನ ಪಡೆಯುವಂತೆ ಮಾಡಿರುವೆ. ಅದು ಚಾತುರ್ಯದ ಖಣಿಯೇ ಇದ್ದು ಮಾಯಾಚಕ್ರವನ್ನು ನಿಲ್ಲಿಸಿದೆ. ಹರಿಹರರ ಗುಹ್ಯತತ್ತ್ವವನ್ನು ತೋರಿಸಿ ಕೊಟ್ಟಿರುವೆ. ಇದರಿಂದ ಅಸಂಖ್ಯಾತ ಬದ್ಧರು ಸಿದ್ಧರಾಗಿದ್ದಾರೆ. ದಾಸಬೋಧದ ಇಪ್ಪತ್ತು ದಶಕಗಳನ್ನು ಓದಿ ಅನುಭವವನ್ನು ಯಾರು ತೆಗೆದುಕೊಳ್ಳುತ್ತಾರೋ, ಪ್ರತಿದಿನ ತಪ್ಪದೇ ವಿವರಿಸುತ್ತಾರೋ, ಅವರು ಸ್ವತಃ ಬ್ರಹ್ಮಸ್ವರೂಪರಾಗಿ ಹೋಗುತ್ತಾರೆ. ಇಂಥಹ ಗ್ರಂಥದ ಶ್ರವಣದ ಲಾಭವಾಗಬೇಕಾದರೆ, ಹಿಂದಿನ ಜನ್ಮದ ಅಪಾರ ಪುಣ್ಯಸಂಗ್ರಹವಿರಬೇಕಾಗುತ್ತದೆ. ರಾಮದಾಸರ ಶಿಷ್ಯ ಹಾಗೂ ಈ ಗ್ರಂಥದ ಲೇಖನವನ್ನು ಬರೆದ ಕಲ್ಯಾಣಸ್ವಾಮಿಯ ಅಂತಃಕರಣ ದಲ್ಲಿಯ ಭಾವವಿದು. ಗ್ರಂಥರಾಜವಾದ ದಾಸಬೋಧಕ್ಕೆ ಜಯಜಯಕಾರವು. {{center|೧೩೪}}<noinclude></noinclude> r8vypx1dpk4ly731hscopcjt5e3jc9c ಪುಟ:ನಿತ್ಯ ನೇಮಾವಲಿ.pdf/೧೩೬ 104 101983 322749 284356 2026-05-26T16:54:40Z Shreesha Sharma 7840 /* Proofread */ 322749 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಆರತಿಗಳು}} {{center|(೨)}} ಸುಖಸಹಿತಾ ದುಃಖರಹಿತಾ ನಿರ್ಮಳ ಏಕಾಂತಾ |ಕಲಿಮಲದಹನಾ ಗಹನಾ ಸ್ವಾಮಿ ಸಮರ್ಥಾ|| ನ ಕಳೆ ಬ್ರಹ್ಮಾದಿಕಾ ಅಂತ ಅನಂತಾ |ತೋ ತೂ ಆಮ್ಹಾ ಸುಲಭ ಜಯ ಕೃಪಾವಂತಾ || ೧ || ಜಯದೇವ ಜಯದೇವ ಜಯ ಕರುಣಾಕರಾ| ಆರತೀ ವೋವಾಳೂ ಸದ್ಗುರುಮಾಹೇರಾ || ಧೃ || ಮಾಯೇವಿಣ ಮಾಹೇರ ವಿಶ್ರಾಂತಿ ಠಾವ |ಶಬ್ದೀ ಅರ್ಥಲಾಭ ಬೋಲಣೇ ವಾವ|| ಸದ್ಗುರು ಪ್ರಸಾದೇ ಸುಲಭ ಉಪಾವ| ರಾಮ ರಾಮದಾಸಾ ಫಳಲಾ ಸದ್ಭಾವ || ೨ || '''ಭಾವಾರ್ಥ''': ಸ್ವಾಮೀ ಸಮರ್ಥಾ ನೀನು ನಿಜವಾದ ಸುಖವನ್ನನು ಭವಿಸುವವನೂ ದುಃಖವಿಲ್ಲದ ಆನಂದಸ್ವರೂಪನೂ, ನಿರ್ಮಲನೂ, ಏಕಾಂತನೂ, ದೈತಸಂಘರ್ಷದಿಂದ, ರಾಗದ್ವೇಷದಿಂದ ಉಂಟಾಗುವ ಮಲಿನತೆಯನ್ನು ಸುಟ್ಟು ಹಾಕಿರುವವನೂ ಆಗಿರುವೆ. ಬ್ರಹ್ಮಾದಿಗಳಿಗೂ ತಿಳಿಯದಂಥ ಗುಹ್ಯವನ್ನು ಸುಲಭವಾಗಿ ನಮಗೆ ತಿಳಿಸಿ ಕೊಟ್ಟಿರುವೆ. ಕರುಣಾಕರಾ, ನಿನಗೆ ಆರತಿ ಬೆಳಗುವೆನು. ಮಾಯೆ ಇಲ್ಲದಂಥ ತಾಯಿಯಮನೆ ನೀನಾಗಿರುವೆ. ಅದೇ ವಿಶ್ರಾಂತಿ ಧಾಮವು. ನಾಮಸ್ಮರಣೆಯಿಂದ ಆತ್ಮ ಪ್ರಾಪ್ತಿಯ ಲಾಭವಾಗುತ್ತದೆ. ಶಬ್ದಗಳು ಅರ್ಥ ನೀಡುವವು. ಆಮೇಲೆ ಮಾತು ವ್ಯರ್ಥವಾಗುತ್ತದೆ. ಎಂದರೆ ಅನುಭವವು {{center|೧೩೪}}<noinclude></noinclude> k4vbtin8lvspzi1k3jyyhqiif5xlm5t 322751 322749 2026-05-26T16:55:17Z Shreelatha.Halemane 7642 /* Validated */ 322751 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಆರತಿಗಳು}} {{center|(೨)}} ಸುಖಸಹಿತಾ ದುಃಖರಹಿತಾ ನಿರ್ಮಳ ಏಕಾಂತಾ |ಕಲಿಮಲದಹನಾ ಗಹನಾ ಸ್ವಾಮಿ ಸಮರ್ಥಾ|| ನ ಕಳೆ ಬ್ರಹ್ಮಾದಿಕಾ ಅಂತ ಅನಂತಾ |ತೋ ತೂ ಆಮ್ಹಾ ಸುಲಭ ಜಯ ಕೃಪಾವಂತಾ || ೧ || ಜಯದೇವ ಜಯದೇವ ಜಯ ಕರುಣಾಕರಾ| ಆರತೀ ವೋವಾಳೂ ಸದ್ಗುರುಮಾಹೇರಾ || ಧೃ || ಮಾಯೇವಿಣ ಮಾಹೇರ ವಿಶ್ರಾಂತಿ ಠಾವ |ಶಬ್ದೀ ಅರ್ಥಲಾಭ ಬೋಲಣೇ ವಾವ|| ಸದ್ಗುರು ಪ್ರಸಾದೇ ಸುಲಭ ಉಪಾವ| ರಾಮ ರಾಮದಾಸಾ ಫಳಲಾ ಸದ್ಭಾವ || ೨ || '''ಭಾವಾರ್ಥ''': ಸ್ವಾಮೀ ಸಮರ್ಥಾ ನೀನು ನಿಜವಾದ ಸುಖವನ್ನನು ಭವಿಸುವವನೂ ದುಃಖವಿಲ್ಲದ ಆನಂದಸ್ವರೂಪನೂ, ನಿರ್ಮಲನೂ, ಏಕಾಂತನೂ, ದೈತಸಂಘರ್ಷದಿಂದ, ರಾಗದ್ವೇಷದಿಂದ ಉಂಟಾಗುವ ಮಲಿನತೆಯನ್ನು ಸುಟ್ಟು ಹಾಕಿರುವವನೂ ಆಗಿರುವೆ. ಬ್ರಹ್ಮಾದಿಗಳಿಗೂ ತಿಳಿಯದಂಥ ಗುಹ್ಯವನ್ನು ಸುಲಭವಾಗಿ ನಮಗೆ ತಿಳಿಸಿ ಕೊಟ್ಟಿರುವೆ. ಕರುಣಾಕರಾ, ನಿನಗೆ ಆರತಿ ಬೆಳಗುವೆನು. ಮಾಯೆ ಇಲ್ಲದಂಥ ತಾಯಿಯಮನೆ ನೀನಾಗಿರುವೆ. ಅದೇ ವಿಶ್ರಾಂತಿ ಧಾಮವು. ನಾಮಸ್ಮರಣೆಯಿಂದ ಆತ್ಮ ಪ್ರಾಪ್ತಿಯ ಲಾಭವಾಗುತ್ತದೆ. ಶಬ್ದಗಳು ಅರ್ಥ ನೀಡುವವು. ಆಮೇಲೆ ಮಾತು ವ್ಯರ್ಥವಾಗುತ್ತದೆ. ಎಂದರೆ ಅನುಭವವು {{center|೧೩೪}}<noinclude></noinclude> avzjy36jhb13awom18s4e3k2juy735e ಪುಟ:ನಿತ್ಯ ನೇಮಾವಲಿ.pdf/೧೩೮ 104 101988 322754 284361 2026-05-26T17:01:39Z Shreesha Sharma 7840 /* Proofread */ 322754 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಆರತಿಗಳು}} ದ್ವೈತಾತೀತ ಬುದ್ದಿ || ೧ || ಇಡಾ ಪಿಂಗಳಾ| ಸುಷುಮ್ನಾ ಮಾರ್ಗ ಆಹೇ ಕಠೀಣ| ತ್ರಿಕೂಟ ಸಂಗಮ। ಸಮರ್ಚನ। ಮಹಾಲಿಂಗದರ್ಶನ || ೨ || ಚಿನ್ಮಯ ಗುರುಮೂರ್ತಿ| ಗುರುಮೂರ್ತಿ| ಅಣುರೇಣು ಭಾಸತೀ।। ಬುದ್ಧಿ ಭಾಸಾಚೀ। ಭಾಸಾಚೇ| ಗುರುಪುತ್ರ ಜಾಣತೀ || ೩ || '''ಭಾವಾರ್ಥ''': ಸಜ್ಜನರೇ, ದೈತಭಾವವನ್ನು ಬಿಟ್ಟು ಆರತಿ ಮಾಡಿರಿ. ವಿವೇಕ ಸದ್ಬುದ್ದಿಗಳ ಸಹಾಯಹೊಂದಿ ಪರಮೇಶ್ವರನ ಚರಣಕಮಲದಲ್ಲಿ ಲಕ್ಷವಿಡಿರಿ. ಅಂತಃಕರಣ ಮತ್ತು ಮನವನ್ನು ಶುದ್ಧಮಾಡಿರಿ. ಅಂದರೆ ಬುದ್ಧಿತದಾಚೆಗ ಹೋಗುವುದು. ಇಡಾ, ಪಿಂಗಳಾ, ಸುಷುಮ್ನಾ ಮಾರ್ಗ ಕಠಿಣವಿದೆ. ಈ ಮೂರರ ಸಂಗಮದಲ್ಲಿ ಮಹಾಲಿಂಗನ ದರ್ಶನವಿದೆ. ಚಿನ್ಮಯ ಮೂರ್ತಿಯು ಅಣುರೇಣುವಿನಲ್ಲಿ ತುಂಬಿದ್ದನ್ನು ನೋಡಬೇಕು. ರೈತಬುದ್ಧಿಯನ್ನು ದಾಟಬೇಕು. ಇದು ಗುರುಪುತ್ರನಿಗೆ ತಿಳಿಯುವುದು. {{center|(೫)}} ಆರತೀ ಜ್ಞಾನರಾಜಾ |ಮಹಾಕೈವಲ್ಯ ತೇಜಾ| ಸೇವಿತೀ ಸಾಧುಸಂತ| ಮನು ವೇಧಲಾ ಮಾಝಾ || ದೃ || ಲೋಪಲೇ ಜ್ಞಾನ ಜಗೀ|ಹಿತ ನೇಣತೀ ಕೋಣೀ। ಅವತಾರ ಪಾಂಡುರಂಗ| ನಾಮ ಠೇವಿಲೇ ಜ್ಞಾನೀ || ೧. || ಕನಕಾಚೇ ತಾಟಕರೀ ಉಭ್ಯಾ ಗೋಪಿಕಾ ನಾರೀ| ನಾರದ ತುಂಬರ ಹೋ| {{center|೧೩೭}}<noinclude></noinclude> gz01zsqmbwr1geakdx8crgaia7o6i43 322758 322754 2026-05-26T17:12:42Z Shreelatha.Halemane 7642 /* Validated */ 322758 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಆರತಿಗಳು}} ದ್ವೈತಾತೀತ ಬುದ್ದಿ || ೧ || ಇಡಾ ಪಿಂಗಳಾ| ಸುಷುಮ್ನಾ ಮಾರ್ಗ ಆಹೇ ಕಠೀಣ| ತ್ರಿಕೂಟ ಸಂಗಮ। ಸಮರ್ಚನ। ಮಹಾಲಿಂಗದರ್ಶನ || ೨ || ಚಿನ್ಮಯ ಗುರುಮೂರ್ತಿ| ಗುರುಮೂರ್ತಿ| ಅಣುರೇಣು ಭಾಸತೀ।। ಬುದ್ಧಿ ಭಾಸಾಚೀ। ಭಾಸಾಚೇ| ಗುರುಪುತ್ರ ಜಾಣತೀ || ೩ || '''ಭಾವಾರ್ಥ''': ಸಜ್ಜನರೇ, ದೈತಭಾವವನ್ನು ಬಿಟ್ಟು ಆರತಿ ಮಾಡಿರಿ. ವಿವೇಕ ಸದ್ಬುದ್ದಿಗಳ ಸಹಾಯಹೊಂದಿ ಪರಮೇಶ್ವರನ ಚರಣಕಮಲದಲ್ಲಿ ಲಕ್ಷವಿಡಿರಿ. ಅಂತಃಕರಣ ಮತ್ತು ಮನವನ್ನು ಶುದ್ಧಮಾಡಿರಿ. ಅಂದರೆ ಬುದ್ಧಿತದಾಚೆಗ ಹೋಗುವುದು. ಇಡಾ, ಪಿಂಗಳಾ, ಸುಷುಮ್ನಾ ಮಾರ್ಗ ಕಠಿಣವಿದೆ. ಈ ಮೂರರ ಸಂಗಮದಲ್ಲಿ ಮಹಾಲಿಂಗನ ದರ್ಶನವಿದೆ. ಚಿನ್ಮಯ ಮೂರ್ತಿಯು ಅಣುರೇಣುವಿನಲ್ಲಿ ತುಂಬಿದ್ದನ್ನು ನೋಡಬೇಕು. ರೈತಬುದ್ಧಿಯನ್ನು ದಾಟಬೇಕು. ಇದು ಗುರುಪುತ್ರನಿಗೆ ತಿಳಿಯುವುದು. {{center|(೫)}} ಆರತೀ ಜ್ಞಾನರಾಜಾ |ಮಹಾಕೈವಲ್ಯ ತೇಜಾ| ಸೇವಿತೀ ಸಾಧುಸಂತ| ಮನು ವೇಧಲಾ ಮಾಝಾ || ದೃ || ಲೋಪಲೇ ಜ್ಞಾನ ಜಗೀ|ಹಿತ ನೇಣತೀ ಕೋಣೀ। ಅವತಾರ ಪಾಂಡುರಂಗ| ನಾಮ ಠೇವಿಲೇ ಜ್ಞಾನೀ || ೧. || ಕನಕಾಚೇ ತಾಟಕರೀ ಉಭ್ಯಾ ಗೋಪಿಕಾ ನಾರೀ| ನಾರದ ತುಂಬರ ಹೋ| {{center|೧೩೭}}<noinclude></noinclude> e3cotqmjxk6nkmpfnsbs0rrw2fauzet ಪುಟ:ನಿತ್ಯ ನೇಮಾವಲಿ.pdf/೧೩೯ 104 101990 322755 284363 2026-05-26T17:05:18Z Shreesha Sharma 7840 /* Proofread */ 322755 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಸಾಮಗಾಯನ ಕರೀ || ೨ || ಪ್ರಕಟ ಗುಹ್ಯ ಬೋಲೇ| ವಿಶ್ವ ಬ್ರಹ್ಮಚಿ ಕಲೇ ರಾಮಾ ಜನಾರ್ದನೀ ಪಾಯೀ ಟಕಚಿ ಠೇಲೇ || ೩ || '''ಭಾವಾರ್ಥ''': ಜ್ಞಾನರಾಜನಿಗೆ ಆರತಿ ಬೆಳಗುವನು. ಘನಚಿತ್ ಸ್ವರೂಪ ಪ್ರಕಾಶನ, ಸಾಧುಸಂತರು ನಿನ್ನ ಸೇವೆ ಮಾಡುತ್ತಾರೆ. ನನ್ನ ಮನಸ್ಸನ್ನು ಸರಹಿಡಿದಿರುವ ಜನರಲ್ಲಿ ಆತ್ಮಜ್ಞಾನವು ಇಲ್ಲದಾಗಿದೆ. ತಮ್ಮ ಹಿತವನ್ನು ಅವರು ಅರಿಯರು. ಅದಕ್ಕೆಂದೇ ಅವತರಿಸಿದ ಪಾಂಡುರಂಗ-ದೇವನು ನೀನು ಎಂದು ಜ್ಞಾನಿಗಳು ಹೇಳುತ್ತಾರೆ. ಬಂಗಾರದ ತಾಟನ್ನು ಹಿಡಿದುಕೊಂಡು ಗೋಪಿಕೆಯರು ನಿನ್ನೆದುರು ನಿಂತಿದ್ದಾರೆ. ನಾರದತುಂಬುರರು ವೇದಗಾಯನ ಮಾಡುತ್ತಿದ್ದಾರೆ. ಗುಹ್ಯವಾದ ವಿಶ್ವವ್ಯಾಪಿಯಾದ ಬ್ರಹ್ಮನನ್ನು ನೀನು ಪ್ರಕಟಗೊಳಿಸಿದ್ದ ಎಂದು ತಿಳಿಸಿ, ರಾಮಾ ಜನಾರ್ದನರು ನಿನ್ನ ಚರಣದಲ್ಲಿ ಲೀನರಾಗಿದ್ದಾರೆ. {{center|(೬)}} ಕರ್ಪೂರಾರತಿ ಎತ್ತಿ ಬೆಳಗಿರೇ। ಕಾರುಣ್ಯಾಮೃತಕರ ದೇವಗೇ||ಪ|| ನೀಲಕಂಧರ ನಿಗಮಗೋಚರ| ಭಾಲಚಂದ್ರಾಭರಣಗೇ| ಬಾಲಗೊಲಿದನು ಹಾಲಾಹಲ ಸವಿದನು|. ಲೋಲ ಶ್ರೀಗುರುರಾಯಗೇ ||೧|| ವಾರಿಜೋದ್ಭವಶಿರವ ಹರಿದನು| ಮಾರಹರ ಮಹಾದೇವಗೇ! ಘೋರ ದುರಿತವ ದೂರ ಮಾಡುವ ಶೂರ ಸನ್ಮುಖನಯ್ಯಗೇ || ೨ || ಶರಣು {{center|೧೩೮}}<noinclude></noinclude> 6aj4de2bu3rmid9hzpalf8kgp8uw8oy 322759 322755 2026-05-26T17:12:50Z Shreelatha.Halemane 7642 /* Validated */ 322759 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಸಾಮಗಾಯನ ಕರೀ || ೨ || ಪ್ರಕಟ ಗುಹ್ಯ ಬೋಲೇ| ವಿಶ್ವ ಬ್ರಹ್ಮಚಿ ಕಲೇ ರಾಮಾ ಜನಾರ್ದನೀ ಪಾಯೀ ಟಕಚಿ ಠೇಲೇ || ೩ || '''ಭಾವಾರ್ಥ''': ಜ್ಞಾನರಾಜನಿಗೆ ಆರತಿ ಬೆಳಗುವನು. ಘನಚಿತ್ ಸ್ವರೂಪ ಪ್ರಕಾಶನ, ಸಾಧುಸಂತರು ನಿನ್ನ ಸೇವೆ ಮಾಡುತ್ತಾರೆ. ನನ್ನ ಮನಸ್ಸನ್ನು ಸರಹಿಡಿದಿರುವ ಜನರಲ್ಲಿ ಆತ್ಮಜ್ಞಾನವು ಇಲ್ಲದಾಗಿದೆ. ತಮ್ಮ ಹಿತವನ್ನು ಅವರು ಅರಿಯರು. ಅದಕ್ಕೆಂದೇ ಅವತರಿಸಿದ ಪಾಂಡುರಂಗ-ದೇವನು ನೀನು ಎಂದು ಜ್ಞಾನಿಗಳು ಹೇಳುತ್ತಾರೆ. ಬಂಗಾರದ ತಾಟನ್ನು ಹಿಡಿದುಕೊಂಡು ಗೋಪಿಕೆಯರು ನಿನ್ನೆದುರು ನಿಂತಿದ್ದಾರೆ. ನಾರದತುಂಬುರರು ವೇದಗಾಯನ ಮಾಡುತ್ತಿದ್ದಾರೆ. ಗುಹ್ಯವಾದ ವಿಶ್ವವ್ಯಾಪಿಯಾದ ಬ್ರಹ್ಮನನ್ನು ನೀನು ಪ್ರಕಟಗೊಳಿಸಿದ್ದ ಎಂದು ತಿಳಿಸಿ, ರಾಮಾ ಜನಾರ್ದನರು ನಿನ್ನ ಚರಣದಲ್ಲಿ ಲೀನರಾಗಿದ್ದಾರೆ. {{center|(೬)}} ಕರ್ಪೂರಾರತಿ ಎತ್ತಿ ಬೆಳಗಿರೇ। ಕಾರುಣ್ಯಾಮೃತಕರ ದೇವಗೇ||ಪ|| ನೀಲಕಂಧರ ನಿಗಮಗೋಚರ| ಭಾಲಚಂದ್ರಾಭರಣಗೇ| ಬಾಲಗೊಲಿದನು ಹಾಲಾಹಲ ಸವಿದನು|. ಲೋಲ ಶ್ರೀಗುರುರಾಯಗೇ ||೧|| ವಾರಿಜೋದ್ಭವಶಿರವ ಹರಿದನು| ಮಾರಹರ ಮಹಾದೇವಗೇ! ಘೋರ ದುರಿತವ ದೂರ ಮಾಡುವ ಶೂರ ಸನ್ಮುಖನಯ್ಯಗೇ || ೨ || ಶರಣು {{center|೧೩೮}}<noinclude></noinclude> 6845nxqqcp7sbjksdwo6vraml7sjobl ಪುಟ:ನಿತ್ಯ ನೇಮಾವಲಿ.pdf/೧೪೦ 104 101992 322762 284365 2026-05-26T17:17:26Z Shreesha Sharma 7840 /* Proofread */ 322762 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಆರತಿಗಳು}} ಜನಕೆ ವರವನಿತ್ತನು| ಪರಮ ಪಾರ್ವತಿಯರಸಗೇ| ಧರೆಯೊಳಧಿಕವಾದ ಮುರಶಿಂಗರ |ಪುರದ ಸಿದ್ಧನಾಥನೇ || ೩ || {{center|(೭)}} ಜಯ ಜಯ ಕಾಡಸಿದ್ದಾ! ಆರತಿ ಮಾಡುವೇ ಸಿನ್ಹಾ || ಪ || ಮುತ್ತಿನ ಆರತಿ ಬಂಗಾರದ ಬತ್ತಿ| ದೀವಿಗೀ ಚಂದ್ರದೀಪ್ತಿ| ಬೆಳಗುವೇ ಪೂರ್ಣ ಭಕ್ತಿ || ೧ || ಆರತಿ ಮಾಡುತ ಪ್ರೇಮದಿ ಹಾಡುತ| ಸ್ವಾಮಿ ನಾ ನಿನ್ನ ದೂತ| ಕರುಣಾ ಮಾಡೋ ಕೃಪಾವಂತ || ೨ || ಆರತಿ ಮೆಚ್ಚಿದ ತಾನು ವರವ ಕೊಡಬಂದ |ಕೃಪಾ ದೃಷ್ಟಿಯಿಂದ ತುಳಜಾಗೆ ಸದಾನಂದ || ೩ || {{center|(೮)}} ಜಯ ಜಯ ಜಯ ಜಯ ಆರತಿ ಮಾಡುವ|| ಜಯ ಜಯ ಜಯ ಜಯ ಆರತಿ ತುಂಬುವೇ|| ಜಯ ಜಯ ಜಯ ಜಯ ಆರತಿ ಬೆಳಗುವೇ|| ಅಂಗದಾಯತ ಸ್ವಾಮಿಗೇ || ಪ || ಸೂರ್ಯವರ್ಣಗೆ ಸುಂದರರೂಪಗೇ| ಮಂದಿರದೊಳು ಕುಣಿದಾಡು ದೇವರೇ!! ಚೌರಿಚಾಮರ ಚಕ್ರದೊಡೆಯಗೇ| ಮುಪ್ಪಿನ ಮುನಿಗೆ ಒಪ್ಪುವ ರೂಪಗೇ|| ಸಾಂಬಹರನಿಗೆ ಸಾಕ್ಷಾತ್ ಶಿವನಿಗೇ| ಬೆಳಗುವೇ ಆರತಿಯ || ೧ || ಚಂದ್ರವರ್ಣಗೆ ಚಿನ್ನರೂಪಗೇ| ಮಂಜಿನೊಳಗಿರು ಮಹಾಹರ ಶಿವಗೇ!! ಪಂಜಿನ ಬೆಳಕಿಲೇ ರಂಜಿಸು ಮುಖಗೇ! ನೀಲವರ್ಣಗೇ ಬಾಲರೂಪಗೆ || ೨ || ಜ್ಯೋತಿವರ್ಣಗೆ {{center|೧೩೯}}<noinclude></noinclude> msa1rrolar0xre9uyh20aub0ni2cmxe 322766 322762 2026-05-26T17:23:01Z Shreelatha.Halemane 7642 /* Validated */ 322766 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಆರತಿಗಳು}} ಜನಕೆ ವರವನಿತ್ತನು| ಪರಮ ಪಾರ್ವತಿಯರಸಗೇ| ಧರೆಯೊಳಧಿಕವಾದ ಮುರಶಿಂಗರ |ಪುರದ ಸಿದ್ಧನಾಥನೇ || ೩ || {{center|(೭)}} ಜಯ ಜಯ ಕಾಡಸಿದ್ದಾ! ಆರತಿ ಮಾಡುವೇ ಸಿನ್ಹಾ || ಪ || ಮುತ್ತಿನ ಆರತಿ ಬಂಗಾರದ ಬತ್ತಿ| ದೀವಿಗೀ ಚಂದ್ರದೀಪ್ತಿ| ಬೆಳಗುವೇ ಪೂರ್ಣ ಭಕ್ತಿ || ೧ || ಆರತಿ ಮಾಡುತ ಪ್ರೇಮದಿ ಹಾಡುತ| ಸ್ವಾಮಿ ನಾ ನಿನ್ನ ದೂತ| ಕರುಣಾ ಮಾಡೋ ಕೃಪಾವಂತ || ೨ || ಆರತಿ ಮೆಚ್ಚಿದ ತಾನು ವರವ ಕೊಡಬಂದ |ಕೃಪಾ ದೃಷ್ಟಿಯಿಂದ ತುಳಜಾಗೆ ಸದಾನಂದ || ೩ || {{center|(೮)}} ಜಯ ಜಯ ಜಯ ಜಯ ಆರತಿ ಮಾಡುವ|| ಜಯ ಜಯ ಜಯ ಜಯ ಆರತಿ ತುಂಬುವೇ|| ಜಯ ಜಯ ಜಯ ಜಯ ಆರತಿ ಬೆಳಗುವೇ|| ಅಂಗದಾಯತ ಸ್ವಾಮಿಗೇ || ಪ || ಸೂರ್ಯವರ್ಣಗೆ ಸುಂದರರೂಪಗೇ| ಮಂದಿರದೊಳು ಕುಣಿದಾಡು ದೇವರೇ!! ಚೌರಿಚಾಮರ ಚಕ್ರದೊಡೆಯಗೇ| ಮುಪ್ಪಿನ ಮುನಿಗೆ ಒಪ್ಪುವ ರೂಪಗೇ|| ಸಾಂಬಹರನಿಗೆ ಸಾಕ್ಷಾತ್ ಶಿವನಿಗೇ| ಬೆಳಗುವೇ ಆರತಿಯ || ೧ || ಚಂದ್ರವರ್ಣಗೆ ಚಿನ್ನರೂಪಗೇ| ಮಂಜಿನೊಳಗಿರು ಮಹಾಹರ ಶಿವಗೇ!! ಪಂಜಿನ ಬೆಳಕಿಲೇ ರಂಜಿಸು ಮುಖಗೇ! ನೀಲವರ್ಣಗೇ ಬಾಲರೂಪಗೆ || ೨ || ಜ್ಯೋತಿವರ್ಣಗೆ {{center|೧೩೯}}<noinclude></noinclude> bqugzqyau1o5xkfcdk9zwdep71mxgr7 ಪುಟ:ನಿತ್ಯ ನೇಮಾವಲಿ.pdf/೧೪೧ 104 101994 322765 284367 2026-05-26T17:22:26Z Shreesha Sharma 7840 /* Proofread */ 322765 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಡುಲಾಸುರೂಪಗೇ| ನಲಿನಲಿದಾಡುವ ನಾಗರ ಹೆಡಿಗೇ |ಆಗಮಕಾರಗೇ ಅನೇಕರೂಪಗೇ |ಜಗದ ಅರಸಗೇಜನ್ಮ ವಿನಾಶಗೇ II ೩ || ಲಿಂಗವರ್ಣಗೇ ನಿಝಂಕಾರಗೇ। ಝಣಾ ಝಣಾ ಬಹುನಾದ ಭೋರಗೇ!! ಅಂಗದೊಳಗಿರು ಸಂಗಮೇಶಗೇ| ಗಂಗಾಧರಗೇ ಗೌರೀಹರಗೇ || ೪ || ಎನ್ನವರ್ಣಗೇ ಚನ್ನರೂಪಗೇ| ಭಿನ್ನವಿಲ್ಲದೆ ಪಾದ ತೋರುವಗೇ||ಮತ್ತೆ ಬಾರದ ಮುಕ್ತಿಕೊಟ್ಟಗೇ| ನಂಬಿದ ಭಕ್ತಗೇ ತುಂಬಿತುಳುಕುವರೇ || ೫ || ದೇಶಕಧಿಕವಾದ ವಾಸ ಉಮದೀ| ಗುರುವಿನ ಪಾದದೊಳಾನಂದ ಶಿವಾ|| ಆತನ ಬೋಧದೊಳು ನಿಮಗ್ನ ಹರಾ| ನಡುಮಧ್ಯದಲ್ಲಿ ಕಂಡೆವು ಘನ|| ಪರಿಪರಿಯಿಂದಲಿ| ಪರಮಾತ್ಮನಿಗೇ ಬೆಳಗುವ ಆರತಿಯಾ || ೬ || {{center|(೯)}} ಜ್ಯೋತಿ ಬೆಳಗುತದೇ |ಝಗಾಝಗ! ಜ್ಯೋತಿ ಬೆಳಗುತದೇ || ಪ || ಅಸ್ತಮಗಿರಿ ಚನ್ನ ಮಸ್ತಕದೊಳು ಚಲುವ| ವಸ್ತು ಕಾಣುತದೇ ಝಗಾಝಗ || ೧ || ಮಾನಸ ತುದಿಯಲಿ ಧ್ಯಾನಕ್ಕೆ ನಿಲುಕದೇ |ತಾನೇ ಹೊಳೆಯುತದೇ ಝಗಾಝಗ || ೨ || ಕಂಗಳ ಮಧ್ಯದಿ ತುಂಗ ಗುಡ್ಡದ ಯೋಗಿ |ಅಂಗ ಹೊಳೆಯುತದೇ ಝಗಾಝಗ,| ಲಿಂಗ ಹೊಳೆಯುತದೇ ಝಗಾಝಗ||೩|| {{center|(೧೦)}} ನಮೋ ನಮೋ ಎಂಬೆ| ಗುರುವೇ ಕಡೆಗ್ಗಾಯಿಸು ತಂದೇ || ಪ || ಸದಾಭರಿತ ಎನ್ನ ಹೃದಯಕಮಲದೊಳು |ಸುಧಾಮೃತವನು ಸುರಿಸು ನೀ {{center|೧೪೦}}<noinclude></noinclude> kprgzxg3d69k2bwh7cm0iak7f9wrrmi 322767 322765 2026-05-26T17:23:10Z Shreelatha.Halemane 7642 /* Validated */ 322767 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಡುಲಾಸುರೂಪಗೇ| ನಲಿನಲಿದಾಡುವ ನಾಗರ ಹೆಡಿಗೇ |ಆಗಮಕಾರಗೇ ಅನೇಕರೂಪಗೇ |ಜಗದ ಅರಸಗೇಜನ್ಮ ವಿನಾಶಗೇ II ೩ || ಲಿಂಗವರ್ಣಗೇ ನಿಝಂಕಾರಗೇ। ಝಣಾ ಝಣಾ ಬಹುನಾದ ಭೋರಗೇ!! ಅಂಗದೊಳಗಿರು ಸಂಗಮೇಶಗೇ| ಗಂಗಾಧರಗೇ ಗೌರೀಹರಗೇ || ೪ || ಎನ್ನವರ್ಣಗೇ ಚನ್ನರೂಪಗೇ| ಭಿನ್ನವಿಲ್ಲದೆ ಪಾದ ತೋರುವಗೇ||ಮತ್ತೆ ಬಾರದ ಮುಕ್ತಿಕೊಟ್ಟಗೇ| ನಂಬಿದ ಭಕ್ತಗೇ ತುಂಬಿತುಳುಕುವರೇ || ೫ || ದೇಶಕಧಿಕವಾದ ವಾಸ ಉಮದೀ| ಗುರುವಿನ ಪಾದದೊಳಾನಂದ ಶಿವಾ|| ಆತನ ಬೋಧದೊಳು ನಿಮಗ್ನ ಹರಾ| ನಡುಮಧ್ಯದಲ್ಲಿ ಕಂಡೆವು ಘನ|| ಪರಿಪರಿಯಿಂದಲಿ| ಪರಮಾತ್ಮನಿಗೇ ಬೆಳಗುವ ಆರತಿಯಾ || ೬ || {{center|(೯)}} ಜ್ಯೋತಿ ಬೆಳಗುತದೇ |ಝಗಾಝಗ! ಜ್ಯೋತಿ ಬೆಳಗುತದೇ || ಪ || ಅಸ್ತಮಗಿರಿ ಚನ್ನ ಮಸ್ತಕದೊಳು ಚಲುವ| ವಸ್ತು ಕಾಣುತದೇ ಝಗಾಝಗ || ೧ || ಮಾನಸ ತುದಿಯಲಿ ಧ್ಯಾನಕ್ಕೆ ನಿಲುಕದೇ |ತಾನೇ ಹೊಳೆಯುತದೇ ಝಗಾಝಗ || ೨ || ಕಂಗಳ ಮಧ್ಯದಿ ತುಂಗ ಗುಡ್ಡದ ಯೋಗಿ |ಅಂಗ ಹೊಳೆಯುತದೇ ಝಗಾಝಗ,| ಲಿಂಗ ಹೊಳೆಯುತದೇ ಝಗಾಝಗ||೩|| {{center|(೧೦)}} ನಮೋ ನಮೋ ಎಂಬೆ| ಗುರುವೇ ಕಡೆಗ್ಗಾಯಿಸು ತಂದೇ || ಪ || ಸದಾಭರಿತ ಎನ್ನ ಹೃದಯಕಮಲದೊಳು |ಸುಧಾಮೃತವನು ಸುರಿಸು ನೀ {{center|೧೪೦}}<noinclude></noinclude> 9lxzg0cjnw1rnolfhas3lg2i1zqnb5a ಪುಟ:ನಿತ್ಯ ನೇಮಾವಲಿ.pdf/೧೪೨ 104 101995 322788 284368 2026-05-27T00:13:12Z Shreesha Sharma 7840 /* Proofread */ 322788 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಆರತಿಗಳು}} ಎಂಬೇ || ಅ.ಪ || ಆಶೆ ಮಾಡಿ ಬಂದೇ ನಿಮ್ಮ ಅನುಭವದೊಳು ಕುಂತೇ| ಮೋಸವಾಗದೇ ಭಾಸುರ ಪ್ರಣವದೊಳು! ನಿರಾಶತಪದೊಳು ನಿಲಿಸಿದೇ ತಂದ || ೧ || ಅರ್ಥವಾಗುವಂತೇ। ಅನುಮಾನ ಬಿಟ್ಟು ಹೋಗುವಂತೇ |ಸತ್ಯದಿ ಶಿವಭಜನಿ ನಿತ್ಯದಿ ಮಾಡುವಾಗ| ವ್ಯರ್ಥ ಚಿಂತೆಗಳ ಪರಿಹರಿಸೊ ತಂದೇ || ೨ || ಪುಣ್ಯ ಸುಕೃತದಿಂದೇ! ನಿಮಗೆ ಎಲ್ಲ ಜೀವಗಳೊಂದೇ! ಬಲ್ಲಿದ ಶ್ರೀಗುರು ಬಸವಲಿಂಗಗೇ| ಮಂಗಳ ಆರತಿ ಬೆಳಗುವೆನೆಂಬೆ || ೩ || {{center|(೧೧)}} ಜಯ ಜಯ ಜಯ ಗುರುಲಿಂಗಾ, ಸಚ್ಚಿತ್ಸುಖ ಕಂದಾ| ತವ ಪದಿ ಶರಣ ಯತಾ, ಹರಸಿ ಭವಬಂಧಾ ||ಜಯ ಜಯ || ಧೃ || ಜಗದ್ರೂಪ ತೂ ಅಸಸೀ, ಅಸಸಿ ನಿಜಯೋಗೀ। ವಸತಿಸ್ಥಾನ ತುಮಚೇ |ಧಾಮ ನಿಂಬರಗೀ | ೧ || ಬ್ರಹ್ಮನಿದ್ರೆಮಾಜಿ, ಮಾಜೀ ತೂ ರಮಸೀ|ಪರಮಾರ್ಥಾಚಿ ಕಿಲ್ಲೀ, ನಿಜದಾಸಾ ದೇಸೀ || ೨ || ತವ ಪದಯುಗಲರಜಾಜಾ, ಲಾಗತ ಮಧುವಾರಾ| ಮಾಯಾ ಭರೂನಿ ವಾರೂನಿ, ದೇಸೀ ಸುಖಸಾರಾ || ೩ || ನಾರಾಯಣ ಗುರುಚರಣೀ, ಚರಣೀ ಅನನ್ಯ |ಪ್ರೇಮೇ ಆರತಿ ಕರಿತಾ, ದಾಸ ಮ್ಹಣೇ ಧನ್ಯ || ೪ || '''ಭಾವಾರ್ಥ''': ಜಯ ಜಯ ಗುರುಲಿಂಗಾ, ಸಚ್ಚಿತ್ಸುಖಕಂದಾ; ನಿನಗೆ ಶರಣು ಬಂದವರ ಭವಬಂಧನವನ್ನು ದೂರಮಾಡುವಿ ನೀನು {{center|೧೧೪೧}}<noinclude></noinclude> 2xr9cro6m7pkf761kus2ewqy8ziz6z2 322794 322788 2026-05-27T00:28:55Z Shreelatha.Halemane 7642 /* Validated */ 322794 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಆರತಿಗಳು}} ಎಂಬೇ || ಅ.ಪ || ಆಶೆ ಮಾಡಿ ಬಂದೇ ನಿಮ್ಮ ಅನುಭವದೊಳು ಕುಂತೇ| ಮೋಸವಾಗದೇ ಭಾಸುರ ಪ್ರಣವದೊಳು! ನಿರಾಶತಪದೊಳು ನಿಲಿಸಿದೇ ತಂದ || ೧ || ಅರ್ಥವಾಗುವಂತೇ। ಅನುಮಾನ ಬಿಟ್ಟು ಹೋಗುವಂತೇ |ಸತ್ಯದಿ ಶಿವಭಜನಿ ನಿತ್ಯದಿ ಮಾಡುವಾಗ| ವ್ಯರ್ಥ ಚಿಂತೆಗಳ ಪರಿಹರಿಸೊ ತಂದೇ || ೨ || ಪುಣ್ಯ ಸುಕೃತದಿಂದೇ! ನಿಮಗೆ ಎಲ್ಲ ಜೀವಗಳೊಂದೇ! ಬಲ್ಲಿದ ಶ್ರೀಗುರು ಬಸವಲಿಂಗಗೇ| ಮಂಗಳ ಆರತಿ ಬೆಳಗುವೆನೆಂಬೆ || ೩ || {{center|(೧೧)}} ಜಯ ಜಯ ಜಯ ಗುರುಲಿಂಗಾ, ಸಚ್ಚಿತ್ಸುಖ ಕಂದಾ| ತವ ಪದಿ ಶರಣ ಯತಾ, ಹರಸಿ ಭವಬಂಧಾ ||ಜಯ ಜಯ || ಧೃ || ಜಗದ್ರೂಪ ತೂ ಅಸಸೀ, ಅಸಸಿ ನಿಜಯೋಗೀ। ವಸತಿಸ್ಥಾನ ತುಮಚೇ |ಧಾಮ ನಿಂಬರಗೀ | ೧ || ಬ್ರಹ್ಮನಿದ್ರೆಮಾಜಿ, ಮಾಜೀ ತೂ ರಮಸೀ|ಪರಮಾರ್ಥಾಚಿ ಕಿಲ್ಲೀ, ನಿಜದಾಸಾ ದೇಸೀ || ೨ || ತವ ಪದಯುಗಲರಜಾಜಾ, ಲಾಗತ ಮಧುವಾರಾ| ಮಾಯಾ ಭರೂನಿ ವಾರೂನಿ, ದೇಸೀ ಸುಖಸಾರಾ || ೩ || ನಾರಾಯಣ ಗುರುಚರಣೀ, ಚರಣೀ ಅನನ್ಯ |ಪ್ರೇಮೇ ಆರತಿ ಕರಿತಾ, ದಾಸ ಮ್ಹಣೇ ಧನ್ಯ || ೪ || '''ಭಾವಾರ್ಥ''': ಜಯ ಜಯ ಗುರುಲಿಂಗಾ, ಸಚ್ಚಿತ್ಸುಖಕಂದಾ; ನಿನಗೆ ಶರಣು ಬಂದವರ ಭವಬಂಧನವನ್ನು ದೂರಮಾಡುವಿ ನೀನು {{center|೧೧೪೧}}<noinclude></noinclude> 4scc6hwehdsijg7779o4dxgeld3l6hc ಪುಟ:ನಿತ್ಯ ನೇಮಾವಲಿ.pdf/೧೪೩ 104 101997 322789 284370 2026-05-27T00:15:54Z Shreesha Sharma 7840 /* Proofread */ 322789 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಜಗದ್ರೂಪಿಯಾಗಿರುವಿ. ನಿಜಯೋಗಿಯೂ ಅಹುದು. ನಿಮ್ಮ ವಾಸಸ್ಥಾನವು ನಿಂಬರಗಿ, ಬ್ರಹ್ಮನಿದ್ರೆಯಲ್ಲಿ ನೀವು ತಲ್ಲೀನರಾಗಿ ಆನಂದದಲ್ಲಿರುವಿರಿ. ಪರಮಾರ್ಥದ ಕೀಲಿಯ ಕೈಯನ್ನು ನಿಜದಾಸರಿಗೆ ಕೊಡುವಿರಿ. ನಿಮ್ಮ ಚರಣಧೂಳಿಯ ಮಧುರ ತಂಪಾದ ಗಾಳಿಯಿಂದ ಮಾಯೆಯನ್ನು ಓಡಿಸಿ, ಸುಖದ ಸಾರವನ್ನು ಕೊಡುವಿರಿ. ನಾರಾಯಣ ಗುರುಚರಣದಲ್ಲಿ ಅನನ್ಯ ಭಕ್ತಿಯಿಂದ ಆರತಿ ಮಾಡಿ ದಾಸನು ಧನ್ಯನಾದನು. {{center|(೧೨)}} ಮಂಗಲಂ ಮಹಾಲಿಂಗ ಉಮದಿಶಾ| ಮುನಿಜನ ಪೋಷಾ |ಭಾಸ ಉಪಾಧಿತೀತ ಸರ್ವೇಶಾ। ಇಂಚಗೇರಿವಾಸಾ || ಧೃ || ಪೃಥ್ವಿಮೇಲಿನ ಪ್ರೇಮ ಭಕ್ತರನು ಪರಿಪಾಲಿಸುವ| ನಿತ್ಯನಿತ್ಯದಿ ಸತ್ಯ ಶಂಕರನೇ| ಚಿತ್ತಶುದ್ಧಿ ಮಾಡು ಎನ್ನ ಕರ್ತೃ ನಿನ್ನ ಕರುಣವಿಟ್ಟು| ಮೃತ್ಯುವಿನ ಬಾಧೆಯನು ಬಿಡಿಸುವ ಸತ್ಯ ಸದ್ಗುರು ಕಾಡಸಿದ್ದಾ || ೧ || ಧರಣಿ ಪಾಲಿಪ ದುರಿತ ಸಂಹರನೇ| ತ್ರಿಪುರಾಂತಕನೇ| ಚರಣ ಸೇವಕ ಭಜಕ ರಕ್ಷಕನೇ ||ಮಾಯಾವಿ ನೀನೇ ಪರಮಪಾವನ ಪಂಚಪಾಶಕನೇ |ಮೊರೆಯ ಹೊಕ್ಕರ ಬಿರುದು ಕಾಯುವ ಅರವು ಕೊಟ್ಟು ಮರವು ಬಿಡಿಸುವ| ಶರಣುಜನರಸ್ಮರಣೆ ತಾರಕ ಸುಂದರಾತ್ಮಕ ಸಗುಣ ನಿಧಿಯೇ || ೨ || ಅಷ್ಟದಿಕ್ಷಾಲಕರ ಒಡೆಯನೇ ಸೃಷ್ಟಿಕರ್ತಾ| ಶ್ರೇಷ್ಠ ಸದ್ಗುರುಲಿಂಗಜಂಗಮನೇ। ನಿಷ್ಠೆಯಿಂದಲಿ ನಂಬಿದವರ {{center|೧೪೨}}<noinclude></noinclude> gwu5qc1d5b0flk1yivaeaqvqkje0v2e 322795 322789 2026-05-27T00:29:06Z Shreelatha.Halemane 7642 /* Validated */ 322795 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಜಗದ್ರೂಪಿಯಾಗಿರುವಿ. ನಿಜಯೋಗಿಯೂ ಅಹುದು. ನಿಮ್ಮ ವಾಸಸ್ಥಾನವು ನಿಂಬರಗಿ, ಬ್ರಹ್ಮನಿದ್ರೆಯಲ್ಲಿ ನೀವು ತಲ್ಲೀನರಾಗಿ ಆನಂದದಲ್ಲಿರುವಿರಿ. ಪರಮಾರ್ಥದ ಕೀಲಿಯ ಕೈಯನ್ನು ನಿಜದಾಸರಿಗೆ ಕೊಡುವಿರಿ. ನಿಮ್ಮ ಚರಣಧೂಳಿಯ ಮಧುರ ತಂಪಾದ ಗಾಳಿಯಿಂದ ಮಾಯೆಯನ್ನು ಓಡಿಸಿ, ಸುಖದ ಸಾರವನ್ನು ಕೊಡುವಿರಿ. ನಾರಾಯಣ ಗುರುಚರಣದಲ್ಲಿ ಅನನ್ಯ ಭಕ್ತಿಯಿಂದ ಆರತಿ ಮಾಡಿ ದಾಸನು ಧನ್ಯನಾದನು. {{center|(೧೨)}} ಮಂಗಲಂ ಮಹಾಲಿಂಗ ಉಮದಿಶಾ| ಮುನಿಜನ ಪೋಷಾ |ಭಾಸ ಉಪಾಧಿತೀತ ಸರ್ವೇಶಾ। ಇಂಚಗೇರಿವಾಸಾ || ಧೃ || ಪೃಥ್ವಿಮೇಲಿನ ಪ್ರೇಮ ಭಕ್ತರನು ಪರಿಪಾಲಿಸುವ| ನಿತ್ಯನಿತ್ಯದಿ ಸತ್ಯ ಶಂಕರನೇ| ಚಿತ್ತಶುದ್ಧಿ ಮಾಡು ಎನ್ನ ಕರ್ತೃ ನಿನ್ನ ಕರುಣವಿಟ್ಟು| ಮೃತ್ಯುವಿನ ಬಾಧೆಯನು ಬಿಡಿಸುವ ಸತ್ಯ ಸದ್ಗುರು ಕಾಡಸಿದ್ದಾ || ೧ || ಧರಣಿ ಪಾಲಿಪ ದುರಿತ ಸಂಹರನೇ| ತ್ರಿಪುರಾಂತಕನೇ| ಚರಣ ಸೇವಕ ಭಜಕ ರಕ್ಷಕನೇ ||ಮಾಯಾವಿ ನೀನೇ ಪರಮಪಾವನ ಪಂಚಪಾಶಕನೇ |ಮೊರೆಯ ಹೊಕ್ಕರ ಬಿರುದು ಕಾಯುವ ಅರವು ಕೊಟ್ಟು ಮರವು ಬಿಡಿಸುವ| ಶರಣುಜನರಸ್ಮರಣೆ ತಾರಕ ಸುಂದರಾತ್ಮಕ ಸಗುಣ ನಿಧಿಯೇ || ೨ || ಅಷ್ಟದಿಕ್ಷಾಲಕರ ಒಡೆಯನೇ ಸೃಷ್ಟಿಕರ್ತಾ| ಶ್ರೇಷ್ಠ ಸದ್ಗುರುಲಿಂಗಜಂಗಮನೇ। ನಿಷ್ಠೆಯಿಂದಲಿ ನಂಬಿದವರ {{center|೧೪೨}}<noinclude></noinclude> lw2z32ad4jr1f2rdunq324nehlhnlzq ಪುಟ:ನಿತ್ಯ ನೇಮಾವಲಿ.pdf/೧೪೪ 104 101999 322790 284372 2026-05-27T00:19:30Z Shreesha Sharma 7840 /* Proofread */ 322790 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಆರತಿಗಳು|left=|right=}} ಕಷ್ಟ ಕಡಿದು ಕಡೆಗೆ ಹಾಯಿಸುವ ದೃಷ್ಟಿ ಅಮೃತ ಸುರಿದು ಜಗದಿ| ಜಯ ಜಯ ಪಡೆದಂಥ ಸದ್ಗುರು || ೩ || {{center|(೧೩)}} ಆರತಿ ಉಮದೀಶಾ |ತೂಚಿ ಸ್ವಯಂಪ್ರಕಾಶಾ| ವ್ಯಾಪುನೀ ಜಗದೀಶಾ| ಪುರವೀ ಭಕ್ತಮನೀಷಾ || ಧೃ || ಸ್ಮರತಾ ತವ ನಾಮ| ನಾಮಿ ಜಡಲೇ ಪ್ರೇಮ| ಪ್ರಗಟಲಾ ಆತ್ಮಾರಾಮ! ನಾಮೀ ರಂಗಲೇ ಮನ || ೧ || ಅಸಂಖ್ಯ ತವ ಭಕ್ತಾ ಸಂರಕ್ಷಿಸಿ ಅನಂತಾ| ತೂ ತವ ನಿಜರೂಪಾ ದಾವಿಸೀ ಸಮರ್ಥಾ || ೨ || ದೇವಾಧಿನಿಜದೇವ| ಪ್ರಗಟಸಿ ಸ್ವಭಾವ|ಘೇತಾ ತವ ಭಾವ |ಐಸಾ ಸದ್ಗುರು ತೂ ದೇವ|| || ೩ || '''ಭಾವಾರ್ಥ''': ಸ್ವಯಂಪ್ರಕಾಶನಾದ ಉಮದೀಶನಿಗೆ ಆರತಿ. ಜಗತ್ತನ್ನು ವ್ಯಾಪಿ ಭಕ್ತರ ಮನೋರಥಗಳನ್ನು ಈಡೇರಿಸುವಿ. ನಿನ್ನ ನಾಮಸ್ಮರಣೆಯಿಂದ ಪ್ರೇಮವುಕ್ಕಿ ಆತ್ಮಾರಾಮನು ಪ್ರಕಟವಾಗುತ್ತಾನೆ. ಅದರಲ್ಲಿ ಮನಸ್ಸು ಸಂತುಷ್ಟಗೊಳ್ಳುತ್ತದೆ. ಅಸಂಖ್ಯ ಭಕ್ತರನ್ನು ಸಂರಕ್ಷಿಸಿರುವಿ. ಅವರಿಗೆ ನಿಜರೂಪವನ್ನು ತೋರಿಸುವಿ, ದೇವಾಧಿದೇವನಾದ ನೀನು ಭಕ್ತರ ಭಾವ ಹಾಗೂ ಭಕ್ತಿಗೆ ಅನುಸರಿಸಿ ಪ್ರಕಟನಾಗುತ್ತೀ. {{center|(೧೪)}} ಓವಾಳೂ ಆರತಿ ಪೂಜ್ಯ ಬಾಬಾಲಾ| ನಿರಂಜನಾಚ್ಯಾ ದಿವ್ಯಕೀರ್ತಿಲಾ || ಧೃ || ಸ್ವರ್ಗಾತುನಿ ಜಣು ನಿಷ್ಠಾ ಉತರೀ| ತಪ ತಳಪತ ಅವತರೇ {{center|೧೪೩}}<noinclude></noinclude> huia0d9b5l8slzihzpqrwqr41tvbvqj 322796 322790 2026-05-27T00:29:15Z Shreelatha.Halemane 7642 /* Validated */ 322796 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಆರತಿಗಳು|left=|right=}} ಕಷ್ಟ ಕಡಿದು ಕಡೆಗೆ ಹಾಯಿಸುವ ದೃಷ್ಟಿ ಅಮೃತ ಸುರಿದು ಜಗದಿ| ಜಯ ಜಯ ಪಡೆದಂಥ ಸದ್ಗುರು || ೩ || {{center|(೧೩)}} ಆರತಿ ಉಮದೀಶಾ |ತೂಚಿ ಸ್ವಯಂಪ್ರಕಾಶಾ| ವ್ಯಾಪುನೀ ಜಗದೀಶಾ| ಪುರವೀ ಭಕ್ತಮನೀಷಾ || ಧೃ || ಸ್ಮರತಾ ತವ ನಾಮ| ನಾಮಿ ಜಡಲೇ ಪ್ರೇಮ| ಪ್ರಗಟಲಾ ಆತ್ಮಾರಾಮ! ನಾಮೀ ರಂಗಲೇ ಮನ || ೧ || ಅಸಂಖ್ಯ ತವ ಭಕ್ತಾ ಸಂರಕ್ಷಿಸಿ ಅನಂತಾ| ತೂ ತವ ನಿಜರೂಪಾ ದಾವಿಸೀ ಸಮರ್ಥಾ || ೨ || ದೇವಾಧಿನಿಜದೇವ| ಪ್ರಗಟಸಿ ಸ್ವಭಾವ|ಘೇತಾ ತವ ಭಾವ |ಐಸಾ ಸದ್ಗುರು ತೂ ದೇವ|| || ೩ || '''ಭಾವಾರ್ಥ''': ಸ್ವಯಂಪ್ರಕಾಶನಾದ ಉಮದೀಶನಿಗೆ ಆರತಿ. ಜಗತ್ತನ್ನು ವ್ಯಾಪಿ ಭಕ್ತರ ಮನೋರಥಗಳನ್ನು ಈಡೇರಿಸುವಿ. ನಿನ್ನ ನಾಮಸ್ಮರಣೆಯಿಂದ ಪ್ರೇಮವುಕ್ಕಿ ಆತ್ಮಾರಾಮನು ಪ್ರಕಟವಾಗುತ್ತಾನೆ. ಅದರಲ್ಲಿ ಮನಸ್ಸು ಸಂತುಷ್ಟಗೊಳ್ಳುತ್ತದೆ. ಅಸಂಖ್ಯ ಭಕ್ತರನ್ನು ಸಂರಕ್ಷಿಸಿರುವಿ. ಅವರಿಗೆ ನಿಜರೂಪವನ್ನು ತೋರಿಸುವಿ, ದೇವಾಧಿದೇವನಾದ ನೀನು ಭಕ್ತರ ಭಾವ ಹಾಗೂ ಭಕ್ತಿಗೆ ಅನುಸರಿಸಿ ಪ್ರಕಟನಾಗುತ್ತೀ. {{center|(೧೪)}} ಓವಾಳೂ ಆರತಿ ಪೂಜ್ಯ ಬಾಬಾಲಾ| ನಿರಂಜನಾಚ್ಯಾ ದಿವ್ಯಕೀರ್ತಿಲಾ || ಧೃ || ಸ್ವರ್ಗಾತುನಿ ಜಣು ನಿಷ್ಠಾ ಉತರೀ| ತಪ ತಳಪತ ಅವತರೇ {{center|೧೪೩}}<noinclude></noinclude> duo3guyi3ivdz1krgeu58ersy4mbhsq ಪುಟ:ನಿತ್ಯ ನೇಮಾವಲಿ.pdf/೧೪೫ 104 102000 322757 284373 2026-05-26T17:12:12Z Shreesha Sharma 7840 /* Proofread */ 322757 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಭೂವರೀ |ಸದ್ಗುರುಮಹಿಮಾ ವರ್ಣಿ ಭಾರೀ| ಗುರುಕರಿಚ್ಯಾ ಮಂಗಲ ಮುರಲೀಲಾ || ೧ || ಜ್ಯೋತಿಮಧ್ಯೇ ಕರ್ಪುರ ಜೇವೀ| ಸದ್ಗುರುಪದಿ ತೈಸಾ ರತ ಹೋಯೀ ದಿವ್ಯಾನಂದ ಸುಧೇಲಾ ಸ್ರವವೀ! ಭಗವಂತಾಚ್ಯಾ ಭವ್ಯ ಪ್ರಭೇಲಾ || ೨ || '''ಭಾವಾರ್ಥ''': ಕರ್ಪುರಾರುತಿಯನ್ನು ಬೆಳಗುವನು |ಜಿಗಜಿಣ್ಣಿಜೀಯಗೆ || ಪಲ್ಲ || ಕರ್ಪುರಾರತಿಯನ್ನು ಬೆಳಗುವೇ| ನಿರ್ಮಲಾಂತಃಕರಣಯತಿಗೇ| ನಿರ್ಮಲತ್ವದ ಮಾನ್ಯ ಮೂರ್ತಿಗೇ| ನಿರ್ಗುಣದ ನಿರ್ಬಯಲ ಕೀರ್ತಿಗೇ || ಅ.ಪ || ನಂಬಿಗೆಯು ಆಂಬರದಿ ಬಂದಿಹುದೋ! ಉದ್ಧಾರ ಕಾರ್ಯಕೆ ತಪವೆ ತೊಳಗುತ ಇಳೆಯೊಳಿಳಿದಿಹುದೋ||ತನ್ನ ಹಿರಿತನವನ್ನು ಅರಿಯದೇ| ಧನ್ಯಗುರುವಿನ ಮಹಿಮೆ ಸಾರುವ ಚಿನ್ಮಯದ ಚಿನ್ನಾದ ಬೀರುವ| ಭಾವುರಾಯರ ಭವ್ಯ ಕೊಳಲಿಗೇ || ೧ || ಕರ್ಪುರವುತಾನುರಿಯನಪ್ಪತಲೀ ಅದು ಉರಿಯುತುರಿಯುತ| ಉರಿಯೊಳಗೆ ಅಳಿದುಳಿಯುವಂದದಲೀ!! ಗುರುವಿನಲ್ಲಿಯೇ ತಾನು ಬೆರೆಯುವ| ಅವರ ಹಿರಿತನದಲ್ಲಿ ಮರೆಯುವ| ಹಿರಿಯ ಆನಂದವನು ಕರೆಯುವ |ದೇವರಾಯನ ದಿವ್ಯ ಬೆಳಕಿಗೇ||೨|| {{center|(೧೫)}} ಜಯದೇವ ಜಯದೇವ ಜಯ ಸದ್ಗುರುರಾಯಾ, ಜಯ ಅಂಬುರಾಯಾ ಓವಾಳೂ ಪಂಚಾರತಿ ಪ್ರೇಮ ತವ ಪಾಯಾ|| ಜಯದೇವ || ದೃ || {{center|೧೪೪}}<noinclude></noinclude> k9ghxd5b2dsvmgfopm40oetnpb2pksm 322760 322757 2026-05-26T17:13:07Z Shreelatha.Halemane 7642 /* Validated */ 322760 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಭೂವರೀ |ಸದ್ಗುರುಮಹಿಮಾ ವರ್ಣಿ ಭಾರೀ| ಗುರುಕರಿಚ್ಯಾ ಮಂಗಲ ಮುರಲೀಲಾ || ೧ || ಜ್ಯೋತಿಮಧ್ಯೇ ಕರ್ಪುರ ಜೇವೀ| ಸದ್ಗುರುಪದಿ ತೈಸಾ ರತ ಹೋಯೀ ದಿವ್ಯಾನಂದ ಸುಧೇಲಾ ಸ್ರವವೀ! ಭಗವಂತಾಚ್ಯಾ ಭವ್ಯ ಪ್ರಭೇಲಾ || ೨ || '''ಭಾವಾರ್ಥ''': ಕರ್ಪುರಾರುತಿಯನ್ನು ಬೆಳಗುವನು |ಜಿಗಜಿಣ್ಣಿಜೀಯಗೆ || ಪಲ್ಲ || ಕರ್ಪುರಾರತಿಯನ್ನು ಬೆಳಗುವೇ| ನಿರ್ಮಲಾಂತಃಕರಣಯತಿಗೇ| ನಿರ್ಮಲತ್ವದ ಮಾನ್ಯ ಮೂರ್ತಿಗೇ| ನಿರ್ಗುಣದ ನಿರ್ಬಯಲ ಕೀರ್ತಿಗೇ || ಅ.ಪ || ನಂಬಿಗೆಯು ಆಂಬರದಿ ಬಂದಿಹುದೋ! ಉದ್ಧಾರ ಕಾರ್ಯಕೆ ತಪವೆ ತೊಳಗುತ ಇಳೆಯೊಳಿಳಿದಿಹುದೋ||ತನ್ನ ಹಿರಿತನವನ್ನು ಅರಿಯದೇ| ಧನ್ಯಗುರುವಿನ ಮಹಿಮೆ ಸಾರುವ ಚಿನ್ಮಯದ ಚಿನ್ನಾದ ಬೀರುವ| ಭಾವುರಾಯರ ಭವ್ಯ ಕೊಳಲಿಗೇ || ೧ || ಕರ್ಪುರವುತಾನುರಿಯನಪ್ಪತಲೀ ಅದು ಉರಿಯುತುರಿಯುತ| ಉರಿಯೊಳಗೆ ಅಳಿದುಳಿಯುವಂದದಲೀ!! ಗುರುವಿನಲ್ಲಿಯೇ ತಾನು ಬೆರೆಯುವ| ಅವರ ಹಿರಿತನದಲ್ಲಿ ಮರೆಯುವ| ಹಿರಿಯ ಆನಂದವನು ಕರೆಯುವ |ದೇವರಾಯನ ದಿವ್ಯ ಬೆಳಕಿಗೇ||೨|| {{center|(೧೫)}} ಜಯದೇವ ಜಯದೇವ ಜಯ ಸದ್ಗುರುರಾಯಾ, ಜಯ ಅಂಬುರಾಯಾ ಓವಾಳೂ ಪಂಚಾರತಿ ಪ್ರೇಮ ತವ ಪಾಯಾ|| ಜಯದೇವ || ದೃ || {{center|೧೪೪}}<noinclude></noinclude> g53nzn93m4yznx6rw5lzsgwfjit22c5 ಪುಟ:ನಿತ್ಯ ನೇಮಾವಲಿ.pdf/೧೪೬ 104 102002 322756 284375 2026-05-26T17:08:26Z Shreesha Sharma 7840 /* Proofread */ 322756 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಆರತಿಗಳು}} ಜೀರ್ಣೋದ್ದಾರ ಕರಾಯಾ ಆತ್ಮಜ್ಞಾನಾಚಾ |ಝಾಲಾಸೇ ಅವತಾರ ಭಕ್ತಿಭಾವಾಚಾ। ಪ್ರಭಾವ ಪಾಹುನಿ ಗುರುನೀ ಅಂತಃಶಕ್ತಿಚಾ |ಪ್ರೇಮೇ ತುಜ ಘಟ ದಿಧಲಾ ಅಮೃತನಾಮಾಚಾ || ೧ || ಭಕ್ತಿಭಾವೇ ತನಮನ ಗುರುಪದೀ ಅರ್ಪಿಯಲೇ| ತ್ರಿಕಾಲ ಸಾಧನ ಕರುನಿ ತೇ ವನ ಉದ್ಧರಿಲೇ| ಸೇವಾ ತವ ಪಾಹುನಿಯಾ ಭಾವೂರಾವ ಭುಲಲೇ। ಝಾಲೋ ಧನ್ಯ ಮಣುನಿ ಬಿರೂದ ಬಾಂಧಿಯಲೇ || ೨ || ಸಾದರ ಸದ್ಗುರುಚರಣೀ ಸರ್ವಾರ್ಪಣ ಕೇಲೇ| 'ಮಾಝಏ ಮೀ ಪಣ” ತೇಣೇ ವಿರೂನಿಯಾ ಗೇಲೇ। ಪರಮಾನಂದೀ ಅವಘೇ ಮನ ತೇ ಮಾವಳಲೇ| ಆತ್ಮಪದಾವರಿ ಶ್ರೀ ಗುರುರಾಏ ಭೂಷವಿಲೇ || ೩ || ಸದ್ಗುರುನಾಮಾಚಾ ತೋ ಝಂಡಾ ಕೋವಿಯಲಾ| ಕರ್ನಾಟಕ ಮಹಾರಾಷ್ಟ್ರೀ ಡಂಕಾ ಮಜವಿಲಾ| ಜೀವನಮುಕ್ತಿಚಾ ನಿಜಮಾರ್ಗಹೀ ದಾವಿಯಲಾ। ಆರತೀ ಕರುನಿ ಪಾವನ ದಾಸ ರಾಮ ಝಾಲಾ || ೪ || '''ಭಾವಾರ್ಥ''': ಜಯದೇವ ಜಯದೇವ ಸದ್ಗುರುರಾಯಾ, ಜಯ ಅಂಬೂರಾಯಾ, ನಿನ್ನ ಚರಣಗಳಿಗೆ ಭಕ್ತಿಯಿಂದ ಪಂಚಾರತಿ ಬೆಳಗುವನು. ಆತ್ಮಜ್ಞಾನದ ಜೀರ್ಣೋದ್ಧಾರದ ಕೆಲಸಕ್ಕೇ ನೀನು ಅವತರಿಸಿರುವಿ. ಗುರುವಿನ ಮೇಲಿನ ಅನನ್ಯ ಭಕ್ತಿಯನ್ನೂ, ಪ್ರೀತಿಯನ್ನೂ, ನಿನ್ನ ಅಂತಃಶಕ್ತಿಯ ಪ್ರಭಾವವನ್ನೂ ನೋಡಿ, ನಾಮಸ್ಮರಣೆಯ ಅಮೃತದ ಕೊಡವನ್ನೇ ನಿನಗೆ ಕೊಟ್ಟಿದ್ದಾರೆ. ಭಕ್ತಿಭಾವದಿಂದ ಗುರುವಿನ ಚರಣದಲ್ಲಿ ತನುಮನವನ್ನು {{center|೧೪೫}}<noinclude></noinclude> hy1n6e08qwrdapy84arjo643lzw2cky 322761 322756 2026-05-26T17:13:17Z Shreelatha.Halemane 7642 /* Validated */ 322761 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಆರತಿಗಳು}} ಜೀರ್ಣೋದ್ದಾರ ಕರಾಯಾ ಆತ್ಮಜ್ಞಾನಾಚಾ |ಝಾಲಾಸೇ ಅವತಾರ ಭಕ್ತಿಭಾವಾಚಾ। ಪ್ರಭಾವ ಪಾಹುನಿ ಗುರುನೀ ಅಂತಃಶಕ್ತಿಚಾ |ಪ್ರೇಮೇ ತುಜ ಘಟ ದಿಧಲಾ ಅಮೃತನಾಮಾಚಾ || ೧ || ಭಕ್ತಿಭಾವೇ ತನಮನ ಗುರುಪದೀ ಅರ್ಪಿಯಲೇ| ತ್ರಿಕಾಲ ಸಾಧನ ಕರುನಿ ತೇ ವನ ಉದ್ಧರಿಲೇ| ಸೇವಾ ತವ ಪಾಹುನಿಯಾ ಭಾವೂರಾವ ಭುಲಲೇ। ಝಾಲೋ ಧನ್ಯ ಮಣುನಿ ಬಿರೂದ ಬಾಂಧಿಯಲೇ || ೨ || ಸಾದರ ಸದ್ಗುರುಚರಣೀ ಸರ್ವಾರ್ಪಣ ಕೇಲೇ| 'ಮಾಝಏ ಮೀ ಪಣ” ತೇಣೇ ವಿರೂನಿಯಾ ಗೇಲೇ। ಪರಮಾನಂದೀ ಅವಘೇ ಮನ ತೇ ಮಾವಳಲೇ| ಆತ್ಮಪದಾವರಿ ಶ್ರೀ ಗುರುರಾಏ ಭೂಷವಿಲೇ || ೩ || ಸದ್ಗುರುನಾಮಾಚಾ ತೋ ಝಂಡಾ ಕೋವಿಯಲಾ| ಕರ್ನಾಟಕ ಮಹಾರಾಷ್ಟ್ರೀ ಡಂಕಾ ಮಜವಿಲಾ| ಜೀವನಮುಕ್ತಿಚಾ ನಿಜಮಾರ್ಗಹೀ ದಾವಿಯಲಾ। ಆರತೀ ಕರುನಿ ಪಾವನ ದಾಸ ರಾಮ ಝಾಲಾ || ೪ || '''ಭಾವಾರ್ಥ''': ಜಯದೇವ ಜಯದೇವ ಸದ್ಗುರುರಾಯಾ, ಜಯ ಅಂಬೂರಾಯಾ, ನಿನ್ನ ಚರಣಗಳಿಗೆ ಭಕ್ತಿಯಿಂದ ಪಂಚಾರತಿ ಬೆಳಗುವನು. ಆತ್ಮಜ್ಞಾನದ ಜೀರ್ಣೋದ್ಧಾರದ ಕೆಲಸಕ್ಕೇ ನೀನು ಅವತರಿಸಿರುವಿ. ಗುರುವಿನ ಮೇಲಿನ ಅನನ್ಯ ಭಕ್ತಿಯನ್ನೂ, ಪ್ರೀತಿಯನ್ನೂ, ನಿನ್ನ ಅಂತಃಶಕ್ತಿಯ ಪ್ರಭಾವವನ್ನೂ ನೋಡಿ, ನಾಮಸ್ಮರಣೆಯ ಅಮೃತದ ಕೊಡವನ್ನೇ ನಿನಗೆ ಕೊಟ್ಟಿದ್ದಾರೆ. ಭಕ್ತಿಭಾವದಿಂದ ಗುರುವಿನ ಚರಣದಲ್ಲಿ ತನುಮನವನ್ನು {{center|೧೪೫}}<noinclude></noinclude> 4t64ryq9rec7j9niwhmhinr4znqi2uo ಪುಟ:ನಿತ್ಯ ನೇಮಾವಲಿ.pdf/೧೪೭ 104 102005 322791 284378 2026-05-27T00:22:02Z Shreesha Sharma 7840 /* Proofread */ 322791 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಅರ್ಪಿಸಿದೆ. ತ್ರಿಕಾಲ ಸಾಧನೆಮಾಡಿ ಆ ಪ್ರದೇಶವನ್ನು ಪಾವನಗೊಳಿಸಿದೆ. ನಿನ್ನ ನಿಶ್ಚಲ ಸೇವೆಯಿಂದ ಭಾವೂರಾವಮಹಾರಾಜರು ಮುಗ್ಧರಾಗಿ “ನಾನು ಧನ್ಯನಾದೆನು” ಎಂದು ನಿನಗೆ ಬಿರುದು ಕೊಟ್ಟರು. ಆದರದಿಂದ ಸದ್ಗುರುಚರಣದಲ್ಲಿ ಸರ್ವಾರ್ಪಣ ಮಾಡಿದೆ. ನಾನು, ನನ್ನದು ಎಂಬ ಅಹಂಕಾರವು ನಷ್ಟವಾಯಿತು. ಮನಸ್ಸು ಸಹಜವಾಗಿ ಪರಮಾನಂದದಲ್ಲಿ ತಲ್ಲೀನವಾಯಿತು. ಗುರುಗಳಿಂದ ನೀನು ಸ್ವರೂಪ ಸ್ಥಿತಿಯನ್ನು (ಆತ್ಮಸ್ವರೂಪವನ್ನು ಅಲಂಕರಿಸಿದೆ. ಸದ್ಗುರುವಿನ ನಾಮದ ಪತಾಕೆ ಹಾರಿಸಿ ಕರ್ನಾಟಕ ಮಹಾರಾಷ್ಟ್ರದಲ್ಲಿ ಡಂಗುರ ಸಾರಿ ಜೀವನ್ಮುಕ್ತಿಯ ನಿಜವಾದ ಮಾರ್ಗವನ್ನು ತೋರಿಸಿದೆ. ನಿನಗೆ ಆರುತಿ ಮಾಡಿ ದಾಸನಾದ ರಾಮನು ಪಾವನನಾದನು. {{center|(೧೬)}} ಜಯದೇವ ಜಯದೇವ ಜಯಸದ್ಗುರು ರಾಮಾ। ಗುರುದೇವ ರಾಮಾ|| ಆರತೀ ಓವಾಳೂ ತುಜ ಆತ್ಮಾರಾಮಾ || ಧೃ || ಜಂಬೂಖಂಡಿ ಗ್ರಾಮೀ ಕರ್ನಾಟಕ ದೇಶೀ| ರಾಮೇಶ್ವರ ವರದಾನೇ ಅವತಾರ ಘೇಶೀ| ಉಮದೀಶಾನುಗ್ರಹ ತುಜ ಲಾಭೇ ಬಾಲ್ಯದಶೀ| ಸಾಧನಯೋಗೇ ಕೈವಲ್ಯಾಚಾ ಪ್ರಭು ಹೋಶೀ || ೧ || ಗುರುಲಿಂಗಜಂಗಮಪ್ರಭೂಜಾ ತೂ ನವಅವತಾರ| ಸದ್ಗುರು ಉಮದೀಶಾಚಾ ಶಿಷ್ಯತ್ತಮ ಥೋರ| ಭಕ್ತಿಪಥಾಚಾ ಪ್ರೇಷಿತ ಸಿದ್ಧ ಮಹೋದಾರ| ಸಾಕ್ಷಾತ್ಕಾರಾಚಾ ತೂ {{center|೧೪೬}}<noinclude></noinclude> 68c4chny21egricmpubqtsy8akucrar 322797 322791 2026-05-27T00:29:33Z Shreelatha.Halemane 7642 /* Validated */ 322797 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಅರ್ಪಿಸಿದೆ. ತ್ರಿಕಾಲ ಸಾಧನೆಮಾಡಿ ಆ ಪ್ರದೇಶವನ್ನು ಪಾವನಗೊಳಿಸಿದೆ. ನಿನ್ನ ನಿಶ್ಚಲ ಸೇವೆಯಿಂದ ಭಾವೂರಾವಮಹಾರಾಜರು ಮುಗ್ಧರಾಗಿ “ನಾನು ಧನ್ಯನಾದೆನು” ಎಂದು ನಿನಗೆ ಬಿರುದು ಕೊಟ್ಟರು. ಆದರದಿಂದ ಸದ್ಗುರುಚರಣದಲ್ಲಿ ಸರ್ವಾರ್ಪಣ ಮಾಡಿದೆ. ನಾನು, ನನ್ನದು ಎಂಬ ಅಹಂಕಾರವು ನಷ್ಟವಾಯಿತು. ಮನಸ್ಸು ಸಹಜವಾಗಿ ಪರಮಾನಂದದಲ್ಲಿ ತಲ್ಲೀನವಾಯಿತು. ಗುರುಗಳಿಂದ ನೀನು ಸ್ವರೂಪ ಸ್ಥಿತಿಯನ್ನು (ಆತ್ಮಸ್ವರೂಪವನ್ನು ಅಲಂಕರಿಸಿದೆ. ಸದ್ಗುರುವಿನ ನಾಮದ ಪತಾಕೆ ಹಾರಿಸಿ ಕರ್ನಾಟಕ ಮಹಾರಾಷ್ಟ್ರದಲ್ಲಿ ಡಂಗುರ ಸಾರಿ ಜೀವನ್ಮುಕ್ತಿಯ ನಿಜವಾದ ಮಾರ್ಗವನ್ನು ತೋರಿಸಿದೆ. ನಿನಗೆ ಆರುತಿ ಮಾಡಿ ದಾಸನಾದ ರಾಮನು ಪಾವನನಾದನು. {{center|(೧೬)}} ಜಯದೇವ ಜಯದೇವ ಜಯಸದ್ಗುರು ರಾಮಾ। ಗುರುದೇವ ರಾಮಾ|| ಆರತೀ ಓವಾಳೂ ತುಜ ಆತ್ಮಾರಾಮಾ || ಧೃ || ಜಂಬೂಖಂಡಿ ಗ್ರಾಮೀ ಕರ್ನಾಟಕ ದೇಶೀ| ರಾಮೇಶ್ವರ ವರದಾನೇ ಅವತಾರ ಘೇಶೀ| ಉಮದೀಶಾನುಗ್ರಹ ತುಜ ಲಾಭೇ ಬಾಲ್ಯದಶೀ| ಸಾಧನಯೋಗೇ ಕೈವಲ್ಯಾಚಾ ಪ್ರಭು ಹೋಶೀ || ೧ || ಗುರುಲಿಂಗಜಂಗಮಪ್ರಭೂಜಾ ತೂ ನವಅವತಾರ| ಸದ್ಗುರು ಉಮದೀಶಾಚಾ ಶಿಷ್ಯತ್ತಮ ಥೋರ| ಭಕ್ತಿಪಥಾಚಾ ಪ್ರೇಷಿತ ಸಿದ್ಧ ಮಹೋದಾರ| ಸಾಕ್ಷಾತ್ಕಾರಾಚಾ ತೂ {{center|೧೪೬}}<noinclude></noinclude> hswd0yulc4iqhsaqvnq9ojgk7nk2yhb ಪುಟ:ನಿತ್ಯ ನೇಮಾವಲಿ.pdf/೧೪೮ 104 102007 322792 284380 2026-05-27T00:24:34Z Shreesha Sharma 7840 /* Proofread */ 322792 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಆರತಿಗಳು}} ಮಹಾಭಾಷ್ಯಕಾರ || ೨ || ನಿಂಬಾಳಾಶ್ರಮ ತವ ಹೇ ಮುಕ್ತಿಚೇ ತೀರ್ಥ| ಪರಮಾರ್ಥಾಚೆ ಮಂದಿರ ಅಧ್ಯಾತ್ಮಪೀಠ |ನಾಮಾಚೀ ನೇಮಾಚೀ ಹೇ ಸಾಧನಪೇಠ |ಭಕ್ತಜನಾನಾ ವಾಟೆ ಭೂವರಿ ವೈಕುಂಠ || ೩ || ಭಕ್ತಿಚೀ ಫಲ್ಗುನದೀ ಪುನರಪಿ ಪ್ರಕಟಾಯಾ |ಜಡಜೀವಾ ತಾರಾಯಾ ಅವತಾರ ಫ್ಯಾವಾ| ಭಕ್ತಜನಾಂಚೇ ವಾಂಛಿತ ಪರವಾ ಗುರುದೇವಾ| ಲಕ್ಷ್ಮೀಸುತ ಪ್ರಾರ್ಥಿತಸೇ ಧರುನಿ ನಮ್ರಭಾವಾ || ೪ || ಜಯದೇವ ಜಯದೇವ|| '''ಭಾವಾರ್ಥ''': ಜಯದೇವ ಜಯದೇವ ಜಯ ಸದ್ಗುರು ರಾಮಾ, ಗುರುದೇವ ರಾಮಾ, ಆತ್ಮಾರಾಮನಾದ ನಿನಗೆ ಆರತಿ ಬೆಳಗುವನು. ಕರ್ನಾಟಕದ ಜಮಖಂಡಿ ಗ್ರಾಮದಲ್ಲಿ ರಾಮೇಶ್ವರನ ಅನುಗ್ರಹದಿಂದ ಜನ್ಮ ಪಡೆದು ಬಾಲ್ಯದಲ್ಲಿಯೇ ಉಮದೀಶನ ಅನುಗ್ರಹ ಸಂಪಾದಿಸಿದೆ. ಸಾಧನೆಯ ಬಲದಿಂದ ಕೈವಲ್ಯ ಪ್ರಭುವಾದ. ಗುರುಲಿಂಗಜಂಗಮಪ್ರಭುಗಳ ಹೊಸ ಅವತಾರವಾಗಿರುವ. ಸದ್ಗುರು ಉಮದೀಶರ ಶಿಷ್ಯತ್ತಮನು, ಭಕ್ತಿಪಂಥವನ್ನು ಪ್ರಚಾರಮಾಡಲಿಕ್ಕೆಂದು ಕಳಿಸಿದ ಮಹಾಸಿದ್ದಪುರುಷನು ನೀನು. ಸಾಕ್ಷಾತ್ಕಾರದ ಶ್ರೇಷ್ಠ ಭಾಷ್ಯಕಾರನು. ನಿಂಬಾಳಾಶ್ರಮವು ಮುಕ್ತಿಯ ಸ್ಥಾನವು. ಪರಮಾರ್ಥ ಸಾಧನೆಯ ಮಂದಿರವು, ಆಧ್ಯಾತ್ಮ ಪೀಠವು. ಅಲ್ಲದೆ ಧ್ಯಾನ, ನಿತ್ಯನೇಮದ ಭಕ್ತಿಯ ಪೀಠವೂ ಆಗಿ, ಭಕ್ತ ಜನರಿಗೆ ಭೂಮಿಯ ಮೇಲಿನ ವೈಕುಂಠವೇ ಎನಿಸಿದೆ. ಭಕ್ತಿಯ ಫಲ್ಗುನದಿಯು ಪುನಃ ಪ್ರಕಟವಾಗಿ ಜಡಜೀವರ {{center|೧೪೭}}<noinclude></noinclude> os60hzpo67y1b59btc7agv8w4w2rw67 322798 322792 2026-05-27T00:29:43Z Shreelatha.Halemane 7642 /* Validated */ 322798 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಆರತಿಗಳು}} ಮಹಾಭಾಷ್ಯಕಾರ || ೨ || ನಿಂಬಾಳಾಶ್ರಮ ತವ ಹೇ ಮುಕ್ತಿಚೇ ತೀರ್ಥ| ಪರಮಾರ್ಥಾಚೆ ಮಂದಿರ ಅಧ್ಯಾತ್ಮಪೀಠ |ನಾಮಾಚೀ ನೇಮಾಚೀ ಹೇ ಸಾಧನಪೇಠ |ಭಕ್ತಜನಾನಾ ವಾಟೆ ಭೂವರಿ ವೈಕುಂಠ || ೩ || ಭಕ್ತಿಚೀ ಫಲ್ಗುನದೀ ಪುನರಪಿ ಪ್ರಕಟಾಯಾ |ಜಡಜೀವಾ ತಾರಾಯಾ ಅವತಾರ ಫ್ಯಾವಾ| ಭಕ್ತಜನಾಂಚೇ ವಾಂಛಿತ ಪರವಾ ಗುರುದೇವಾ| ಲಕ್ಷ್ಮೀಸುತ ಪ್ರಾರ್ಥಿತಸೇ ಧರುನಿ ನಮ್ರಭಾವಾ || ೪ || ಜಯದೇವ ಜಯದೇವ|| '''ಭಾವಾರ್ಥ''': ಜಯದೇವ ಜಯದೇವ ಜಯ ಸದ್ಗುರು ರಾಮಾ, ಗುರುದೇವ ರಾಮಾ, ಆತ್ಮಾರಾಮನಾದ ನಿನಗೆ ಆರತಿ ಬೆಳಗುವನು. ಕರ್ನಾಟಕದ ಜಮಖಂಡಿ ಗ್ರಾಮದಲ್ಲಿ ರಾಮೇಶ್ವರನ ಅನುಗ್ರಹದಿಂದ ಜನ್ಮ ಪಡೆದು ಬಾಲ್ಯದಲ್ಲಿಯೇ ಉಮದೀಶನ ಅನುಗ್ರಹ ಸಂಪಾದಿಸಿದೆ. ಸಾಧನೆಯ ಬಲದಿಂದ ಕೈವಲ್ಯ ಪ್ರಭುವಾದ. ಗುರುಲಿಂಗಜಂಗಮಪ್ರಭುಗಳ ಹೊಸ ಅವತಾರವಾಗಿರುವ. ಸದ್ಗುರು ಉಮದೀಶರ ಶಿಷ್ಯತ್ತಮನು, ಭಕ್ತಿಪಂಥವನ್ನು ಪ್ರಚಾರಮಾಡಲಿಕ್ಕೆಂದು ಕಳಿಸಿದ ಮಹಾಸಿದ್ದಪುರುಷನು ನೀನು. ಸಾಕ್ಷಾತ್ಕಾರದ ಶ್ರೇಷ್ಠ ಭಾಷ್ಯಕಾರನು. ನಿಂಬಾಳಾಶ್ರಮವು ಮುಕ್ತಿಯ ಸ್ಥಾನವು. ಪರಮಾರ್ಥ ಸಾಧನೆಯ ಮಂದಿರವು, ಆಧ್ಯಾತ್ಮ ಪೀಠವು. ಅಲ್ಲದೆ ಧ್ಯಾನ, ನಿತ್ಯನೇಮದ ಭಕ್ತಿಯ ಪೀಠವೂ ಆಗಿ, ಭಕ್ತ ಜನರಿಗೆ ಭೂಮಿಯ ಮೇಲಿನ ವೈಕುಂಠವೇ ಎನಿಸಿದೆ. ಭಕ್ತಿಯ ಫಲ್ಗುನದಿಯು ಪುನಃ ಪ್ರಕಟವಾಗಿ ಜಡಜೀವರ {{center|೧೪೭}}<noinclude></noinclude> hi0zc855691dh0oc3xkp3zvpvqjffiq ಪುಟ:ನಿತ್ಯ ನೇಮಾವಲಿ.pdf/೧೪೯ 104 102009 322793 284382 2026-05-27T00:27:57Z Shreesha Sharma 7840 /* Proofread */ 322793 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಉದ್ಧಾರಕ್ಕಾಗಿ ಅವತರಿಸಿರಿ. ಗುರುದೇವಾ, ಭಕ್ತರ ಕಾಮನೆಗಳನ್ನು ಪೂರೈಸಿರಿ, ಎಂದು ನಮ್ರಭಾವದಿಂದ ಲಕ್ಷ್ಮೀಸುತನು ಪ್ರಾರ್ಥಿಸುತ್ತಾನೆ. ಜಯದೇವ ಜಯದೇವ. {{center|(೧೭)}} ಜಯಜಯ ಶ್ರೀ ಗುರುದೇವಾ| ವಾಢವಿ ಸದ್ಭಾವಾ| ಭಕ್ತಜನಾನಾ ದಾವಾ। ಅಕ್ಷಯ ನಿಜ ಠೇವಾ ||ಧೃ || ನವಯುಗಿಚಾ ವರ ಸಂತ ಅಭಿನವ ಹೃದಯಾತ। ನವಜೀವನಮೂಲ್ಯಾನಾ ಫಲವಿಸಿ ಗ ತ್ವರಿತ | ೧ || ವಿಜ್ಞಾನಾತ್ಮಜ್ಞಾನ |ಪೂರಕ ಜಾಣೋನ ತೇಣೇ ಕರಣ್ಯಾ ಕಥಿಸೀ? |ಜೀವನ ಪರಿಪೂರ್ಣ || ೨ || ಆತ್ಮಜ್ಞಾನಾಚಾರ್ಯಾ |ಸಾಕ್ಷಾಚಿತ್ಸೂರ್ಯಾ ಆತ್ಮಪ್ರಭಾ ದಾವುನಿಯಾ| ಧನ್ಯ ಕರಿಸಿ ಆರ್ಯಾ || ೩ || ಸ್ಥಾನಂದಾಸ್ತವ ಯೇತ| ಭಾವಿಕಜನ ಆರ್ತ |ನಾಮಸುಧಾ ಸೇವುನಿಯಾ ಹೋತೀ ಕೃತಾರ್ಥ || ೪ || ಆರತೀ ಮನೋಹರ ಮಂಗಲಮಯ ಥೋರ |ಓವಾಳೀ ಪ್ರೇಮಭರೇ| ಕರೀ ಜಯಜಯಕಾರ || ೫ | '''ಭಾವಾರ್ಥ''': ಜಯ ಜಯ ಶ್ರೀಗುರುದೇವಾ, ಭಕ್ತರಲ್ಲಿ ಸದ್ಭಾವನೆಯನ್ನು ಹುಟ್ಟಿಸಿ ಆಕ್ಷಯಸುಖದಮಾರ್ಗ ತೋರಿಸಿರಿ. ನವಯುಗದ ಶ್ರೇಷ್ಠ ಸಂತರೆಂದೆನಿಸಿರುವಿರಿ. ನವಜೀವನದ ಜನರ ಹೃದಯಗಳಲ್ಲಿ ಮೌಲ್ಯಗಳನ್ನು {{center|೧೪೮}}<noinclude></noinclude> q2y2vc4ycte3ctzn4jdjnhi3d1r98zj 322799 322793 2026-05-27T00:29:52Z Shreelatha.Halemane 7642 /* Validated */ 322799 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಉದ್ಧಾರಕ್ಕಾಗಿ ಅವತರಿಸಿರಿ. ಗುರುದೇವಾ, ಭಕ್ತರ ಕಾಮನೆಗಳನ್ನು ಪೂರೈಸಿರಿ, ಎಂದು ನಮ್ರಭಾವದಿಂದ ಲಕ್ಷ್ಮೀಸುತನು ಪ್ರಾರ್ಥಿಸುತ್ತಾನೆ. ಜಯದೇವ ಜಯದೇವ. {{center|(೧೭)}} ಜಯಜಯ ಶ್ರೀ ಗುರುದೇವಾ| ವಾಢವಿ ಸದ್ಭಾವಾ| ಭಕ್ತಜನಾನಾ ದಾವಾ। ಅಕ್ಷಯ ನಿಜ ಠೇವಾ ||ಧೃ || ನವಯುಗಿಚಾ ವರ ಸಂತ ಅಭಿನವ ಹೃದಯಾತ। ನವಜೀವನಮೂಲ್ಯಾನಾ ಫಲವಿಸಿ ಗ ತ್ವರಿತ | ೧ || ವಿಜ್ಞಾನಾತ್ಮಜ್ಞಾನ |ಪೂರಕ ಜಾಣೋನ ತೇಣೇ ಕರಣ್ಯಾ ಕಥಿಸೀ? |ಜೀವನ ಪರಿಪೂರ್ಣ || ೨ || ಆತ್ಮಜ್ಞಾನಾಚಾರ್ಯಾ |ಸಾಕ್ಷಾಚಿತ್ಸೂರ್ಯಾ ಆತ್ಮಪ್ರಭಾ ದಾವುನಿಯಾ| ಧನ್ಯ ಕರಿಸಿ ಆರ್ಯಾ || ೩ || ಸ್ಥಾನಂದಾಸ್ತವ ಯೇತ| ಭಾವಿಕಜನ ಆರ್ತ |ನಾಮಸುಧಾ ಸೇವುನಿಯಾ ಹೋತೀ ಕೃತಾರ್ಥ || ೪ || ಆರತೀ ಮನೋಹರ ಮಂಗಲಮಯ ಥೋರ |ಓವಾಳೀ ಪ್ರೇಮಭರೇ| ಕರೀ ಜಯಜಯಕಾರ || ೫ | '''ಭಾವಾರ್ಥ''': ಜಯ ಜಯ ಶ್ರೀಗುರುದೇವಾ, ಭಕ್ತರಲ್ಲಿ ಸದ್ಭಾವನೆಯನ್ನು ಹುಟ್ಟಿಸಿ ಆಕ್ಷಯಸುಖದಮಾರ್ಗ ತೋರಿಸಿರಿ. ನವಯುಗದ ಶ್ರೇಷ್ಠ ಸಂತರೆಂದೆನಿಸಿರುವಿರಿ. ನವಜೀವನದ ಜನರ ಹೃದಯಗಳಲ್ಲಿ ಮೌಲ್ಯಗಳನ್ನು {{center|೧೪೮}}<noinclude></noinclude> mtcqb9vtvo32sfyinlpqycluzrniesa ಪುಟ:ನಿತ್ಯ ನೇಮಾವಲಿ.pdf/೧೫೦ 104 102011 322800 284384 2026-05-27T00:31:00Z Shreesha Sharma 7840 /* Proofread */ 322800 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಆರತಿಗಳು}} ಬಿತ್ತಿದಿರಿ, ವಿಜ್ಞಾನ ಮತ್ತು ಆತ್ಮಜ್ಞಾನಗಳಲ್ಲಿಯ ಭೇದವನ್ನರಿತು, ಅವು ಪೂರಕವೆಂದು ತಿಳಿದು ಜೀವನ ಪರಿಪೂರ್ಣ ಮಾಡಿಕೊಳ್ಳುವ ಮಾರ್ಗವನ್ನು ಹೇಳಿಕೊಟ್ಟಿರುವಿರಿ. ಆತ್ಮಜ್ಞಾನದ ಆಚಾರ್ಯರಾಗಿ, ಸಾಕ್ಷಾತ್ ಚಿತ್‌ಸೂರ್ಯರಾಗಿರುವ ನೀವು ಆತ್ಮಪ್ರಭೆಯನ್ನು ಬಿತ್ತರಿಸಿ ಭಾರತದೇಶವನ್ನು ಧನ್ಯಮಾಡಿದಿರಿ. ಭಾವಿಕರೂ, ದುಃಖಿತರೂ ನಿಮ್ಮೆಡೆಗೆ ಸ್ವಾನಂದದ ಸಲುವಾಗಿ ಬರುತ್ತಾರೆ ಮತ್ತು ನಾಮಸ್ಮರಣೆಯ ಸೇವನೆಯಿಂದ ಕೃತಾರ್ಥರಾಗುತ್ತಾರೆ. ಮನೋಹರನು ಮಂಗಲಮಯವಾದ ಆರತಿಯನ್ನು ಭಕ್ತಿಪೂರ್ವಕ ಬೆಳಗಿ ನಿಮಗೆ ಜಯಜಯಕಾರ ಮಾಡಿದನು. ಜಯ ಜಯ ಗುರುದೇವಾ. {{center|೧೪೯}}<noinclude></noinclude> bu7qnj3xs5b9roqpkmla34533t9be9g 322804 322800 2026-05-27T00:41:28Z Shreelatha.Halemane 7642 /* Validated */ 322804 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಆರತಿಗಳು}} ಬಿತ್ತಿದಿರಿ, ವಿಜ್ಞಾನ ಮತ್ತು ಆತ್ಮಜ್ಞಾನಗಳಲ್ಲಿಯ ಭೇದವನ್ನರಿತು, ಅವು ಪೂರಕವೆಂದು ತಿಳಿದು ಜೀವನ ಪರಿಪೂರ್ಣ ಮಾಡಿಕೊಳ್ಳುವ ಮಾರ್ಗವನ್ನು ಹೇಳಿಕೊಟ್ಟಿರುವಿರಿ. ಆತ್ಮಜ್ಞಾನದ ಆಚಾರ್ಯರಾಗಿ, ಸಾಕ್ಷಾತ್ ಚಿತ್‌ಸೂರ್ಯರಾಗಿರುವ ನೀವು ಆತ್ಮಪ್ರಭೆಯನ್ನು ಬಿತ್ತರಿಸಿ ಭಾರತದೇಶವನ್ನು ಧನ್ಯಮಾಡಿದಿರಿ. ಭಾವಿಕರೂ, ದುಃಖಿತರೂ ನಿಮ್ಮೆಡೆಗೆ ಸ್ವಾನಂದದ ಸಲುವಾಗಿ ಬರುತ್ತಾರೆ ಮತ್ತು ನಾಮಸ್ಮರಣೆಯ ಸೇವನೆಯಿಂದ ಕೃತಾರ್ಥರಾಗುತ್ತಾರೆ. ಮನೋಹರನು ಮಂಗಲಮಯವಾದ ಆರತಿಯನ್ನು ಭಕ್ತಿಪೂರ್ವಕ ಬೆಳಗಿ ನಿಮಗೆ ಜಯಜಯಕಾರ ಮಾಡಿದನು. ಜಯ ಜಯ ಗುರುದೇವಾ. {{center|೧೪೯}}<noinclude></noinclude> 9cd0t4rh84ll9lcwl2ufs8ld1zguhnn ಪುಟ:ನಿತ್ಯ ನೇಮಾವಲಿ.pdf/೧೫೧ 104 102013 322801 284386 2026-05-27T00:35:31Z Shreesha Sharma 7840 /* Proofread */ 322801 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಶೇಜಾರತಿಗಳು (ಲಾಲಿ)}} {{center|೧}} ಆತಾ ಸ್ವಾಮೀ ಸುಖೇ ನಿದ್ರಾ ಕರಾ ಅವಧೂತಾ। ನರಸಿಂಹಸರಸ್ವತಿ ಅವಧೂತಾ। ಚಿನ್ಮಯ ಸುಖಧಾಮೀ ಜಾವುನಿ ಪಹುಡಾ ಏಕಾಂತಾ ||ಧೃ || ವೈರಾಗ್ಯಾಚಾ ಕುಂಚಾ ಘೇವೂನಿ ಚೌಕ ಝಾಡಿಲಾ|ತಯಾವರೀ ಸಪ್ರೇಮಾಚಾ ಶಿಡಕಾವಾ ಕೇಲಾ ||೧ || ಪಾಯಘಡ್ಯಾ ಘಾತಲ್ಯಾ ಸುಂದರ ನವವಿಧಾ ಭಕ್ತಿ| ಜ್ಞಾನಾಚ್ಯಾ ಸಮಯಾ ಉಜಳುನಿ ಲಾವಿಲ್ಯಾ ಜ್ಯೋತೀ ||೨ || ಭಾವಾರ್ಥಾಚಾ ಮಂಚಕ ಹೃದಯಾಕಾಶೀ ಟಾಂಗಿಲಾ। ಮನಾಚೀ ಸುಮನೇ ಜೋಡುನಿ ಕೇಲೇ ಶೇಜೇಲಾ || ೩ || ದ್ವೈತಾಚೇ ಕಪಾಟ ಲಾವುನಿ ಏಕತ್ರ ಕೇಲೇ |ದುರ್ಬುದೀಚ್ಯಾ ಗಾಠೀ ಸೋಡುನಿ ಪಡದೇ ಸೋಡಿಲೇ || ೪ || ಆಶಾತೃಷ್ಣಾಕಲ್ಪನಾಂಚಾ ಸಾಂಡುನಿ ಗಲಬಲಾ| ಕ್ಷಮಾ ದಯಾ ಶಾಂತಿ ದಾಸೀ ಉಬ್ಯಾ ಸೇವೇಲಾ || ೫ || ಅಲಕ್ಷ್ಯ ಉನ್ಮನಿ ಘಉನಿ ನಾಜುಕ ದುಶೇಲಾ| ನಿರಂಜನೀ ಸದ್ಗುರು ಮಾಝಾ ನಿಜ ನಿಜೇಲಾ || ೬ || {{center|೧೫೦}}<noinclude></noinclude> irlaadvu7r3r1c75mgab15f05j4zkua 322805 322801 2026-05-27T00:41:37Z Shreelatha.Halemane 7642 /* Validated */ 322805 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಶೇಜಾರತಿಗಳು (ಲಾಲಿ)}} {{center|೧}} ಆತಾ ಸ್ವಾಮೀ ಸುಖೇ ನಿದ್ರಾ ಕರಾ ಅವಧೂತಾ। ನರಸಿಂಹಸರಸ್ವತಿ ಅವಧೂತಾ। ಚಿನ್ಮಯ ಸುಖಧಾಮೀ ಜಾವುನಿ ಪಹುಡಾ ಏಕಾಂತಾ ||ಧೃ || ವೈರಾಗ್ಯಾಚಾ ಕುಂಚಾ ಘೇವೂನಿ ಚೌಕ ಝಾಡಿಲಾ|ತಯಾವರೀ ಸಪ್ರೇಮಾಚಾ ಶಿಡಕಾವಾ ಕೇಲಾ ||೧ || ಪಾಯಘಡ್ಯಾ ಘಾತಲ್ಯಾ ಸುಂದರ ನವವಿಧಾ ಭಕ್ತಿ| ಜ್ಞಾನಾಚ್ಯಾ ಸಮಯಾ ಉಜಳುನಿ ಲಾವಿಲ್ಯಾ ಜ್ಯೋತೀ ||೨ || ಭಾವಾರ್ಥಾಚಾ ಮಂಚಕ ಹೃದಯಾಕಾಶೀ ಟಾಂಗಿಲಾ। ಮನಾಚೀ ಸುಮನೇ ಜೋಡುನಿ ಕೇಲೇ ಶೇಜೇಲಾ || ೩ || ದ್ವೈತಾಚೇ ಕಪಾಟ ಲಾವುನಿ ಏಕತ್ರ ಕೇಲೇ |ದುರ್ಬುದೀಚ್ಯಾ ಗಾಠೀ ಸೋಡುನಿ ಪಡದೇ ಸೋಡಿಲೇ || ೪ || ಆಶಾತೃಷ್ಣಾಕಲ್ಪನಾಂಚಾ ಸಾಂಡುನಿ ಗಲಬಲಾ| ಕ್ಷಮಾ ದಯಾ ಶಾಂತಿ ದಾಸೀ ಉಬ್ಯಾ ಸೇವೇಲಾ || ೫ || ಅಲಕ್ಷ್ಯ ಉನ್ಮನಿ ಘಉನಿ ನಾಜುಕ ದುಶೇಲಾ| ನಿರಂಜನೀ ಸದ್ಗುರು ಮಾಝಾ ನಿಜ ನಿಜೇಲಾ || ೬ || {{center|೧೫೦}}<noinclude></noinclude> pfz6cjm99vemms3xy03txt0xxoaq6bc ಪುಟ:ನಿತ್ಯ ನೇಮಾವಲಿ.pdf/೧೫೨ 104 102015 322802 284388 2026-05-27T00:37:42Z Shreesha Sharma 7840 /* Proofread */ 322802 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಆರ್ತ ಪ್ರಾರ್ಥನೆ}} '''ಭಾವಾರ್ಥ''': ಸದ್ಗುರು ಸ್ವಾಮಿಗಳೇ, ತಾವು ಸುಖವಾಗಿ ನಿದ್ರೆ ಮಾಡಿರಿ. ನರಸಿಂಹ ಸರಸ್ವತಿ ಅವಧೂತಾ, ಚಿನ್ಮಯ ಸುಖರೂಪದ ಮಂದಿರದಲ್ಲಿ ಏಕಾಂತದಲ್ಲಿ ಸುಖದಿಂದ ನಿದ್ರೆಯನ್ನು ಮಾಡಿರಿ. ವೈರಾಗ್ಯದ ಕುಂಚ (ಪೊರಕೆ)ದಿಂದ ಚೌಕವನ್ನು ಉಡುಗಿ, ಭಕ್ತಿ-ಪ್ರೇಮದ ನೀರನ್ನು ಸಿಂಪಡಿಸಿ, ಸುಂದರವಾದ ನವವಿಧ ಭಕ್ತಿಗಳ ಮೆಟ್ಟಲುಗಳನ್ನು ನಿರ್ಮಿಸಿರುವೆನು. ಜ್ಞಾನರೂಪೀ ದೀಪದ ಕಂಬಗಳನ್ನು ಬೆಳಗಿ ದೀಪವನ್ನು ಹಚ್ಚಿದ್ದೇನೆ. ಹೃದಯಾಕಾಶದಲ್ಲಿ ಪರಮ ಭಕ್ತಿಯೆಂಬ ಮಂಚವನ್ನು ಹಾಕಿ, ಅದರಮೇಲೆ ಮನಸ್ಸೆಂಬ ಹೂಗಳ ಹಾಸಿಗೆ ಹಾಕಿದ್ದೇನೆ. ದೈತದ ಎರಡೂ ಫಲಕುಗಳನ್ನು ಒಂದುಗೂಡಿಸಿದ್ದೇನೆ. ದುರ್ಬುದ್ದಿಯ ಗಂಟುಗಳನ್ನು ಬಿಚ್ಚಿ ಪರದೆಯನ್ನು ಇಳಿಬಿಟ್ಟಿದ್ದೇನೆ. ಆಸೆ, ತೃಷ್ಣ ಇವುಗಳ ಕಲ್ಪನೆಗಳ ಗದ್ದಲವನ್ನು ನಿಲ್ಲಿಸಿದ್ದೇನೆ. ಕ್ಷಮ-ದಯ-ಶಾಂತಿ ಎಂಬ ದಾಸಿಯರು ಸೇವೆಗೆ ನಿಂತಿದ್ದಾರೆ. ನನ್ನ ಸದ್ಗುರುಗಳು ಅಲಕ್ಷವಾದ ಉನ್ಮನಿ ಸ್ಥಿತಿಯೆಂಬ ಮೃದುವಾದ ಹೊದಿಕೆ ಹೊದ್ದುಕೊಂಡು ನಿಜಸ್ವರೂಪದಲ್ಲಿ ಮಲಗಿದ್ದಾರೆ (ಇಲ್ಲಿ ಸ್ವಾಮಿಯೆಂದರೆ ಆತ್ಮದೇವನೆಂಬ ಅರ್ಥವೂ ಇದೆ). {{center|'''ಧಾವಾ (ಆರ್ತ ಪ್ರಾರ್ಥನೆ'''')}} {{center|(ಏಕಾದಶಿಯಂದು ಅನ್ನುವದು)}} {{gap}}ಕೃಷ್ಣಾ ಧಾವ ಬಾ, ಲವಕರೀ, ಸಂಕಟ ಪಡಲೇ ಭಾರೀ {{gap}}ಹರಿ ತೂ ಆಮುಚಾ, ಕೈವಾರೀ ಆಲೇ ವಿಘ್ನ ನಿವಾರೀ||ಧೃ|| {{center|೧೫೧}}<noinclude></noinclude> hlt17vua15qzgdgb8un9d4to1qywqc6 322806 322802 2026-05-27T00:41:46Z Shreelatha.Halemane 7642 /* Validated */ 322806 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಆರ್ತ ಪ್ರಾರ್ಥನೆ}} '''ಭಾವಾರ್ಥ''': ಸದ್ಗುರು ಸ್ವಾಮಿಗಳೇ, ತಾವು ಸುಖವಾಗಿ ನಿದ್ರೆ ಮಾಡಿರಿ. ನರಸಿಂಹ ಸರಸ್ವತಿ ಅವಧೂತಾ, ಚಿನ್ಮಯ ಸುಖರೂಪದ ಮಂದಿರದಲ್ಲಿ ಏಕಾಂತದಲ್ಲಿ ಸುಖದಿಂದ ನಿದ್ರೆಯನ್ನು ಮಾಡಿರಿ. ವೈರಾಗ್ಯದ ಕುಂಚ (ಪೊರಕೆ)ದಿಂದ ಚೌಕವನ್ನು ಉಡುಗಿ, ಭಕ್ತಿ-ಪ್ರೇಮದ ನೀರನ್ನು ಸಿಂಪಡಿಸಿ, ಸುಂದರವಾದ ನವವಿಧ ಭಕ್ತಿಗಳ ಮೆಟ್ಟಲುಗಳನ್ನು ನಿರ್ಮಿಸಿರುವೆನು. ಜ್ಞಾನರೂಪೀ ದೀಪದ ಕಂಬಗಳನ್ನು ಬೆಳಗಿ ದೀಪವನ್ನು ಹಚ್ಚಿದ್ದೇನೆ. ಹೃದಯಾಕಾಶದಲ್ಲಿ ಪರಮ ಭಕ್ತಿಯೆಂಬ ಮಂಚವನ್ನು ಹಾಕಿ, ಅದರಮೇಲೆ ಮನಸ್ಸೆಂಬ ಹೂಗಳ ಹಾಸಿಗೆ ಹಾಕಿದ್ದೇನೆ. ದೈತದ ಎರಡೂ ಫಲಕುಗಳನ್ನು ಒಂದುಗೂಡಿಸಿದ್ದೇನೆ. ದುರ್ಬುದ್ದಿಯ ಗಂಟುಗಳನ್ನು ಬಿಚ್ಚಿ ಪರದೆಯನ್ನು ಇಳಿಬಿಟ್ಟಿದ್ದೇನೆ. ಆಸೆ, ತೃಷ್ಣ ಇವುಗಳ ಕಲ್ಪನೆಗಳ ಗದ್ದಲವನ್ನು ನಿಲ್ಲಿಸಿದ್ದೇನೆ. ಕ್ಷಮ-ದಯ-ಶಾಂತಿ ಎಂಬ ದಾಸಿಯರು ಸೇವೆಗೆ ನಿಂತಿದ್ದಾರೆ. ನನ್ನ ಸದ್ಗುರುಗಳು ಅಲಕ್ಷವಾದ ಉನ್ಮನಿ ಸ್ಥಿತಿಯೆಂಬ ಮೃದುವಾದ ಹೊದಿಕೆ ಹೊದ್ದುಕೊಂಡು ನಿಜಸ್ವರೂಪದಲ್ಲಿ ಮಲಗಿದ್ದಾರೆ (ಇಲ್ಲಿ ಸ್ವಾಮಿಯೆಂದರೆ ಆತ್ಮದೇವನೆಂಬ ಅರ್ಥವೂ ಇದೆ). {{center|'''ಧಾವಾ (ಆರ್ತ ಪ್ರಾರ್ಥನೆ'''')}} {{center|(ಏಕಾದಶಿಯಂದು ಅನ್ನುವದು)}} {{gap}}ಕೃಷ್ಣಾ ಧಾವ ಬಾ, ಲವಕರೀ, ಸಂಕಟ ಪಡಲೇ ಭಾರೀ {{gap}}ಹರಿ ತೂ ಆಮುಚಾ, ಕೈವಾರೀ ಆಲೇ ವಿಘ್ನ ನಿವಾರೀ||ಧೃ|| {{center|೧೫೧}}<noinclude></noinclude> k8dpo6w9dl3tc7dnji5ttbu9ipltlz0 ಪುಟ:ನಿತ್ಯ ನೇಮಾವಲಿ.pdf/೧೫೩ 104 102018 322803 284391 2026-05-27T00:40:51Z Shreesha Sharma 7840 /* Proofread */ 322803 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಪಾಂಡವ ಅಸತಾ ವನವಾಸೀ, ಕಳಲೇ ಕೌರವಾಸೀ| ತ್ಯಾನಿ ಪಾಠವಿಲೇ, ತೇ ಋಷಿ, ಸತ್ವಹರಾಯಾಸೀ||೧|| ರಾತ್ರ ಝಾಲೀಸ, ದೋನ ಪ್ರಹರ, ಆಲೇ ಋಷೀಶ್ವರ| ಭೋಜನ ಮಾಗತೀ ಸತ್ವರ, ಕರೂ ಕೈಸಾ ವಿಚಾರ||೨|| ಸಾರೀ ಸಹಸ್ರ ಖಂಡ್ಯಾ ಅನ್ನ ದುರ್ವಾಸಾ ಭೋಜನ| ಸತ್ವ ಜಾತೀಲ, ಘವನ, ಅಂತರ ಪಡತಾ ಜಾಣ||೩|| ಆಜಿ ನಿಷ್ಟುರ ಕಾ, ಝಾಲಾಸೀ, ಕೋಠೇ ಗುಂತಲಾಸೀ| ಮಾಝಿ ಹೊಯಿಲ ಬಾ, ಗತ ಕೈಶಿ, ಅನಾಥ ಮೀ ಪರದೇಶೀ||೪|| ಕಂಠ ಶೋಷಲಾ, ಅನಂತಾ, ಪ್ರಾಣ ಜಾಯಿಲ ಆತಾ| ಪದರ ಪಸರೀತೇ, ತುಜ ಆತಾ, ಪಾವ ರುಕ್ಷ್ಮಿಣೀಕಾಂತಾ||೫|| ಆತಾ ನ ಲಾವೀ, ಉಶೀರ, ಧರ್ಮ ಚಿಂತಾತುರ| ಅನರ್ಥ ಕರೀಲ, ತೊ ಫಾರ, ಎವಢಾ ಕರೀ ಉಪಕಾರ||೬|| ಐಕುನಿ ಬಹಿಣೀಚೀ, ಕರುಣಾ, ಆಲಾ ಯಾದವ ರಾಣಾ| ದೌಪದೀ ಲೋಳತಸೇ, ಹರಿಚರಣಾ, ಉದ್ಧವಚಿದ್ಧನ ಜಾಣಾ||೭|| {{center|೧೫೨}}<noinclude></noinclude> bhkck3omkfkdqsd4pnjxhyjzozg2zwc 322807 322803 2026-05-27T00:41:55Z Shreelatha.Halemane 7642 /* Validated */ 322807 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಪಾಂಡವ ಅಸತಾ ವನವಾಸೀ, ಕಳಲೇ ಕೌರವಾಸೀ| ತ್ಯಾನಿ ಪಾಠವಿಲೇ, ತೇ ಋಷಿ, ಸತ್ವಹರಾಯಾಸೀ||೧|| ರಾತ್ರ ಝಾಲೀಸ, ದೋನ ಪ್ರಹರ, ಆಲೇ ಋಷೀಶ್ವರ| ಭೋಜನ ಮಾಗತೀ ಸತ್ವರ, ಕರೂ ಕೈಸಾ ವಿಚಾರ||೨|| ಸಾರೀ ಸಹಸ್ರ ಖಂಡ್ಯಾ ಅನ್ನ ದುರ್ವಾಸಾ ಭೋಜನ| ಸತ್ವ ಜಾತೀಲ, ಘವನ, ಅಂತರ ಪಡತಾ ಜಾಣ||೩|| ಆಜಿ ನಿಷ್ಟುರ ಕಾ, ಝಾಲಾಸೀ, ಕೋಠೇ ಗುಂತಲಾಸೀ| ಮಾಝಿ ಹೊಯಿಲ ಬಾ, ಗತ ಕೈಶಿ, ಅನಾಥ ಮೀ ಪರದೇಶೀ||೪|| ಕಂಠ ಶೋಷಲಾ, ಅನಂತಾ, ಪ್ರಾಣ ಜಾಯಿಲ ಆತಾ| ಪದರ ಪಸರೀತೇ, ತುಜ ಆತಾ, ಪಾವ ರುಕ್ಷ್ಮಿಣೀಕಾಂತಾ||೫|| ಆತಾ ನ ಲಾವೀ, ಉಶೀರ, ಧರ್ಮ ಚಿಂತಾತುರ| ಅನರ್ಥ ಕರೀಲ, ತೊ ಫಾರ, ಎವಢಾ ಕರೀ ಉಪಕಾರ||೬|| ಐಕುನಿ ಬಹಿಣೀಚೀ, ಕರುಣಾ, ಆಲಾ ಯಾದವ ರಾಣಾ| ದೌಪದೀ ಲೋಳತಸೇ, ಹರಿಚರಣಾ, ಉದ್ಧವಚಿದ್ಧನ ಜಾಣಾ||೭|| {{center|೧೫೨}}<noinclude></noinclude> i5n9n1wmhi005ir7m9fxxjw2e63adxs ಪುಟ:ನಿತ್ಯ ನೇಮಾವಲಿ.pdf/೧೫೪ 104 102019 322808 284392 2026-05-27T00:42:56Z Shreesha Sharma 7840 /* Proofread */ 322808 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಆರ್ತ ಪ್ರಾರ್ಥನ}} '''ಭಾವಾರ್ಥ''': ಹೇ ಕೃಷ್ಣಾ, ಬೇಗನೇ ಓಡಿ ಬಾರಯ್ಯಾ, ನಮಗೆ ಸಂಕಟ ಬಂದ ಸಮಯದಲ್ಲಿ ನಮ್ಮನ್ನು ರಕ್ಷಿಸುವ ಕೈವಾರಿ ನೀನು. ಪಾಂಡವರು ವನವಾಸದಲ್ಲಿದ್ದಾಗ, ಕೌರವರಿಗೆ ಅದು ತಿಳಿದು, ಅವರ ಸತ್ವಹರಣ ಮಾಡಲಿಕ್ಕೆಂದು ದೂರ್ವಾಸ ಋಷಿಯನ್ನು ಕಳಿಸಿದರು. ರಾತ್ರಿಯ ಎರಡನೆಯ ಪ್ರಹರದಲ್ಲಿ ಋಷಿಗಳು ಭೋಜನಕ್ಕೆ ಹಾಕು ಎಂದು, ಅರವತ್ತು ಸಾವಿರ ಖಂಡಗ ಅನ್ನವನ್ನು ಬೇಗನೇ ನೀಡು ಎಂದು ಕೇಳಿದರು. ಊಟ ಕೊಡಲು ತಪ್ಪಿದರೆ ಅವರು ನಮ್ಮ ಸತ್ವಹರಣ ಮಾಡಿಕೊಂಡು ಹೋಗುವರು. ದೌಪದಿಯು ಅನನ್ಯಭಕ್ತಿಯಿಂದ “ಕೃಷ್ಣಾ, ನೀನು ನನ್ನ ಮೇಲೆ ಇಂದು ನಿರ್ದಯನೇಕೆ ಆಗಿರುವಿ? ಎಲ್ಲಿ ಸಿಕ್ಕಿಕೊಂಡಿರುವಿ ? ನಾನು ಅನಾಥಳೂ ಪರದೇಶಿಯೂ ಆಗಿದ್ದೇನೆ. ಕಂಠವು ಒಣಗಿತು. ಇನ್ನು ಪ್ರಾಣವೂ ಹೋಗುವುದು. ನೀನು ಕೈ ಬಿಟ್ಟರೆ ನನ್ನ ಗತಿ ಏನು ? ಸೆರಗೊಡ್ಡಿ ನಿನಗೆ ಪ್ರಾರ್ಥಿಸುತ್ತೇನೆ. ನನ್ನನ್ನು ರಕ್ಷಿಸು, ರುಕ್ಕಿಣಿಕಾಂತಾ ತಡಮಾಡಬೇಡ; ಧರ್ಮರಾಜನು ಚಿಂತಾತುರನಾಗಿದ್ದಾನೆ. ಇನ್ನು ನೀನು ತಡಮಾಡಿದರೆ ಅನರ್ಥವಾದೀತು. ನನ್ನ ಮೇಲೆ ಉಪಕಾರ ಮಾಡು” ಎಂದು ಪ್ರಾರ್ಥಿಸಿದಾಗ, ಕೃಷ್ಣನು ತಂಗಿಯ ಆರ್ತಧ್ವನಿ ಕ ಪ್ರತ್ಯಕ್ಷನಾಗಲಾಗಿ, ಅವನ ಚರಣದ ಮೇಲೆ ಬ್ರೌಪದಿಯು ಹೊರಳಾಡಿದಳು ಎಂದು ಉದ್ಧವಚಿದ್ಧನರು ಹೇಳುತ್ತಾರೆ. {{center|೧೫೩}}<noinclude></noinclude> 7vidm9y6txohz2wp6h1x29k99010adn 322814 322808 2026-05-27T00:57:55Z Shreelatha.Halemane 7642 /* Validated */ 322814 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಆರ್ತ ಪ್ರಾರ್ಥನ}} '''ಭಾವಾರ್ಥ''': ಹೇ ಕೃಷ್ಣಾ, ಬೇಗನೇ ಓಡಿ ಬಾರಯ್ಯಾ, ನಮಗೆ ಸಂಕಟ ಬಂದ ಸಮಯದಲ್ಲಿ ನಮ್ಮನ್ನು ರಕ್ಷಿಸುವ ಕೈವಾರಿ ನೀನು. ಪಾಂಡವರು ವನವಾಸದಲ್ಲಿದ್ದಾಗ, ಕೌರವರಿಗೆ ಅದು ತಿಳಿದು, ಅವರ ಸತ್ವಹರಣ ಮಾಡಲಿಕ್ಕೆಂದು ದೂರ್ವಾಸ ಋಷಿಯನ್ನು ಕಳಿಸಿದರು. ರಾತ್ರಿಯ ಎರಡನೆಯ ಪ್ರಹರದಲ್ಲಿ ಋಷಿಗಳು ಭೋಜನಕ್ಕೆ ಹಾಕು ಎಂದು, ಅರವತ್ತು ಸಾವಿರ ಖಂಡಗ ಅನ್ನವನ್ನು ಬೇಗನೇ ನೀಡು ಎಂದು ಕೇಳಿದರು. ಊಟ ಕೊಡಲು ತಪ್ಪಿದರೆ ಅವರು ನಮ್ಮ ಸತ್ವಹರಣ ಮಾಡಿಕೊಂಡು ಹೋಗುವರು. ದೌಪದಿಯು ಅನನ್ಯಭಕ್ತಿಯಿಂದ “ಕೃಷ್ಣಾ, ನೀನು ನನ್ನ ಮೇಲೆ ಇಂದು ನಿರ್ದಯನೇಕೆ ಆಗಿರುವಿ? ಎಲ್ಲಿ ಸಿಕ್ಕಿಕೊಂಡಿರುವಿ ? ನಾನು ಅನಾಥಳೂ ಪರದೇಶಿಯೂ ಆಗಿದ್ದೇನೆ. ಕಂಠವು ಒಣಗಿತು. ಇನ್ನು ಪ್ರಾಣವೂ ಹೋಗುವುದು. ನೀನು ಕೈ ಬಿಟ್ಟರೆ ನನ್ನ ಗತಿ ಏನು ? ಸೆರಗೊಡ್ಡಿ ನಿನಗೆ ಪ್ರಾರ್ಥಿಸುತ್ತೇನೆ. ನನ್ನನ್ನು ರಕ್ಷಿಸು, ರುಕ್ಕಿಣಿಕಾಂತಾ ತಡಮಾಡಬೇಡ; ಧರ್ಮರಾಜನು ಚಿಂತಾತುರನಾಗಿದ್ದಾನೆ. ಇನ್ನು ನೀನು ತಡಮಾಡಿದರೆ ಅನರ್ಥವಾದೀತು. ನನ್ನ ಮೇಲೆ ಉಪಕಾರ ಮಾಡು” ಎಂದು ಪ್ರಾರ್ಥಿಸಿದಾಗ, ಕೃಷ್ಣನು ತಂಗಿಯ ಆರ್ತಧ್ವನಿ ಕ ಪ್ರತ್ಯಕ್ಷನಾಗಲಾಗಿ, ಅವನ ಚರಣದ ಮೇಲೆ ಬ್ರೌಪದಿಯು ಹೊರಳಾಡಿದಳು ಎಂದು ಉದ್ಧವಚಿದ್ಧನರು ಹೇಳುತ್ತಾರೆ. {{center|೧೫೩}}<noinclude></noinclude> 0gwdpdvtcfj7c74z29p14ngnyjpj0sj ಪುಟ:ನಿತ್ಯ ನೇಮಾವಲಿ.pdf/೧೫೫ 104 102022 322809 284395 2026-05-27T00:48:11Z Shreesha Sharma 7840 /* Proofread */ 322809 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} {{center|'''ಕರುಣಾಷ್ಟಕ'''}} {{center|(ಏಕಾದಶಿಯ ದಿನ ಹೇಳುವುದು)}} ತತ್ವ ಕಳತಾ ಮಗ ಜಾಣೀವಭಾವ ನಾಹೀ |ಸ್ವಾನಂದತೃಪ್ತಿ ಸಕಳಾಸಹಿ ಮುಕ್ತಿ ಪಾಹೀ। ರಾಹೋsಥವಾ ತನು ಪಡೋ ಸಮತಾ ಜಯಾಲಾ| ಅದೈತ-ಬೋಧ-ಪದ ನಿಶ್ಚಯ ಪೂರ್ಣ ಝಾಲಾ || ೧ || ಸ್ವಪ್ನೇಂದ್ರಜಾಲವತ ಮಾಯಿಕ ಸರ್ವ ಆಹೇ। ಯಾಲಾಗಿ ನಿಶ್ಚಯ ಮನೀ ಭಯ ಕೋಣ ವಾಹೇ। ಸ್ವಪ್ರತ್ಯಯೇ ವಿವಿಧ ಭಾವಅಭಾವ ಗೇಲಾ ಅದ್ಭತ ಬೋಧಪದ..... | ೨ || ಜ್ಞಾನಾನಳೇ ವಿವಿಧ ಸಂಚಿತ ದಗ್ಧ ಝಾಲೇ। ವಂಧ್ಯಾವಿಲಾಸವತ ತೇ ಕ್ರಿಯಮಾಣ ಝಾಲೇ| ಪ್ರಾರಬ್ಧ ಶೇಷ ಉರಲೇ ಜನ ನಿಶ್ಚಯಾಲಾ ಅದೈತಬೋಧ ಪದ..... || ೩ || ಕೋಣೀ ಉದಾಸ ವನವಾಸಿಚ ಖೇಳ ಖೇಳೇ ಕೋಣಿಹಿ ಕರ್ಮರತ ಆಶ್ರಯಧರ್ಮ ಕೇಲೇ |ಸ್ವಚ್ಛಂದತಾ ರಮತ ಏಕ ವಿಕಲ್ಪ ಗೇಲಾ| ಅತಬೋಧ ಪದ || ೪ || ರಕ್ಶೂ ಗಜಾ ಮದಗಜಾರೂಢ ರಾಜಭದ್ರಿ ಭಿಕ್ಖೂ ಅಕಿಂಚನ ಉದಾಸಿನ ಹೋ ದರಿದ್ರಿ| ಸಂಕಲ್ಪಶೂನ್ಯ ಮನ ಆಗ್ರಹಿ ಭಾವ ಠೇಲಾ| ಅದೈತಬೋಧ ಪದ.... 11 ೫ || ಜೀವೇಶ್ವರಾ ಆಣಿ ಜಗಪ್ರತಿ ಏಕ ಕಾಳೇ |ನಿರ್ಧಾರಿಲೇ ಘಟಮಠೀ ನಭ ಜೀವಿ ಖೇಳೇ |ವೇದಾಂತಸಂತ-ನಿಜಸಮ್ಮತ ಯಾಚ ಬೋಲಾ| {{center|೧೫೪}}<noinclude></noinclude> matl92xmbwz2lhria083wxa4b47bny0 322815 322809 2026-05-27T00:58:04Z Shreelatha.Halemane 7642 /* Validated */ 322815 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} {{center|'''ಕರುಣಾಷ್ಟಕ'''}} {{center|(ಏಕಾದಶಿಯ ದಿನ ಹೇಳುವುದು)}} ತತ್ವ ಕಳತಾ ಮಗ ಜಾಣೀವಭಾವ ನಾಹೀ |ಸ್ವಾನಂದತೃಪ್ತಿ ಸಕಳಾಸಹಿ ಮುಕ್ತಿ ಪಾಹೀ। ರಾಹೋsಥವಾ ತನು ಪಡೋ ಸಮತಾ ಜಯಾಲಾ| ಅದೈತ-ಬೋಧ-ಪದ ನಿಶ್ಚಯ ಪೂರ್ಣ ಝಾಲಾ || ೧ || ಸ್ವಪ್ನೇಂದ್ರಜಾಲವತ ಮಾಯಿಕ ಸರ್ವ ಆಹೇ। ಯಾಲಾಗಿ ನಿಶ್ಚಯ ಮನೀ ಭಯ ಕೋಣ ವಾಹೇ। ಸ್ವಪ್ರತ್ಯಯೇ ವಿವಿಧ ಭಾವಅಭಾವ ಗೇಲಾ ಅದ್ಭತ ಬೋಧಪದ..... | ೨ || ಜ್ಞಾನಾನಳೇ ವಿವಿಧ ಸಂಚಿತ ದಗ್ಧ ಝಾಲೇ। ವಂಧ್ಯಾವಿಲಾಸವತ ತೇ ಕ್ರಿಯಮಾಣ ಝಾಲೇ| ಪ್ರಾರಬ್ಧ ಶೇಷ ಉರಲೇ ಜನ ನಿಶ್ಚಯಾಲಾ ಅದೈತಬೋಧ ಪದ..... || ೩ || ಕೋಣೀ ಉದಾಸ ವನವಾಸಿಚ ಖೇಳ ಖೇಳೇ ಕೋಣಿಹಿ ಕರ್ಮರತ ಆಶ್ರಯಧರ್ಮ ಕೇಲೇ |ಸ್ವಚ್ಛಂದತಾ ರಮತ ಏಕ ವಿಕಲ್ಪ ಗೇಲಾ| ಅತಬೋಧ ಪದ || ೪ || ರಕ್ಶೂ ಗಜಾ ಮದಗಜಾರೂಢ ರಾಜಭದ್ರಿ ಭಿಕ್ಖೂ ಅಕಿಂಚನ ಉದಾಸಿನ ಹೋ ದರಿದ್ರಿ| ಸಂಕಲ್ಪಶೂನ್ಯ ಮನ ಆಗ್ರಹಿ ಭಾವ ಠೇಲಾ| ಅದೈತಬೋಧ ಪದ.... 11 ೫ || ಜೀವೇಶ್ವರಾ ಆಣಿ ಜಗಪ್ರತಿ ಏಕ ಕಾಳೇ |ನಿರ್ಧಾರಿಲೇ ಘಟಮಠೀ ನಭ ಜೀವಿ ಖೇಳೇ |ವೇದಾಂತಸಂತ-ನಿಜಸಮ್ಮತ ಯಾಚ ಬೋಲಾ| {{center|೧೫೪}}<noinclude></noinclude> b262p3m320hkmjp4wdy8b56lxtw0be1 ಪುಟ:ನಿತ್ಯ ನೇಮಾವಲಿ.pdf/೧೫೬ 104 102023 322810 284396 2026-05-27T00:50:11Z Shreesha Sharma 7840 /* Proofread */ 322810 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಕರುಣಾಷ್ಟಕ}} ಅದ್ವೈತಬೋಧ ಪದ... || ೬ || ಸಿಂಧೂಹಿ ಸಿಂಧುಸ ಭಾಸ್ಕರ ಜೋ ತಯಾತೇ। ತ್ಯಾಹೂನಿ ಚೋಜ ಉಪಮಾ ನ ದಿಸೇ ತಯಾತೇ। ವರ್ಣಿಲ ಕೋಣ ಗುಣವರ್ಜಿತ ನಿರ್ಗುಣಾಲಾ| ಅದ್ವೈತಬೋಧ ಪದ.... || ೭ || ಹಾ ಚಿದ್ವಿಲಾಸ ಮುನಿಮಾನಸ-ಹಂಸ ಜಾಣಾ| ವಿಶ್ವ ವಸೇ ಪರಿ ನಿರಂಕುಶ-ಗಮ್ಯ ಜಾಣಾ| ರಂಗೋನಿ ಭಾಸ್ಕರ ನಿಜಾನುಭವೀ ಬುಡಾಲಾ| ಅತಬೋಧ ಪದ... || ೮ || '''ಭಾವಾರ್ಥ''': ತತ್ವಗಳು ತಿಳಿದ ನಂತರ ''ನನಗೆ ತಿಳಿದಿದೆ” ಎನ್ನುವ ಭಾವನೆ ಇರಲಾರದು. ಆಗ ಲಭಿಸುವ ಜ್ಞಾನದಿಂದ ಎಲ್ಲರಿಗೂ ಆನಂದತೃಪ್ತಿಯೂ ಮುಕ್ತಿಯೂ ಲಭಿಸುವುದು. ಶರೀರವು ಇರಲಿ, ಇಲ್ಲವೆ ಬಿದ್ದು ಹೋಗಲಿ, ಎಲ್ಲವೂ ಒಂದೇ ಎಂಬ ಸಮಭಾವ ಬಂದವನಿಗೆ ಅಂತ ಬೋಧದ ಸ್ಥಿತಿಯ ನಿರ್ಧಾರವು ಪೂರ್ಣವಾಯಿತು. || ೧ || ಸ್ವಪ್ನದಂತೆ ಇಂದ್ರಜಾಲದಂತ ಎಲ್ಲವೂ ಮಾಯಾರೂಪಿಯಾಗಿರುವುದು. ಇದಕ್ಕಾಗಿ ಮನಸ್ಸಿನಲ್ಲಿ ಯಾರೂ ಭಯ ತಾಳುವುದಿಲ್ಲ. ಸ್ವಾನುಭವದಿಂದ ಇದೆ, ಇಲ್ಲ ಎನ್ನುವ ಭಾವನ ಹೋಗಿಬಿಡುವುದು. ಹೀಗೆ ಅದೈತ ಬೋಧದ || ೨ || ಜ್ಞಾನದ ಅಗ್ನಿಯೊಳಗೆ ಪೂರ್ವಸಂಚಿತ ಕರ್ಮಗಳಲ್ಲಿ ಸುಟ್ಟು ಹೋದವು. ಅದರಿಂದ ಬಂಜೆಯ ಆಟದಂತೆ ಕರ್ಮಗಳೆಲ್ಲ ವ್ಯರ್ಥವಾದವು. ಪ್ರಾರಬ್ಧದ ಶೇಷಭಾಗವು ಜನರ ದೃಷ್ಟಿಯಲ್ಲಿ ಉಳಿಯಿತು. ಹೀಗೆ ಅಕ್ಷಿತಬೋಧದ... || ೩ || ಕೆಲವರು {{center|೧೫೫}}<noinclude></noinclude> cdti439052cy837f47p3wzt22fjwsao 322816 322810 2026-05-27T00:58:12Z Shreelatha.Halemane 7642 /* Validated */ 322816 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಕರುಣಾಷ್ಟಕ}} ಅದ್ವೈತಬೋಧ ಪದ... || ೬ || ಸಿಂಧೂಹಿ ಸಿಂಧುಸ ಭಾಸ್ಕರ ಜೋ ತಯಾತೇ। ತ್ಯಾಹೂನಿ ಚೋಜ ಉಪಮಾ ನ ದಿಸೇ ತಯಾತೇ। ವರ್ಣಿಲ ಕೋಣ ಗುಣವರ್ಜಿತ ನಿರ್ಗುಣಾಲಾ| ಅದ್ವೈತಬೋಧ ಪದ.... || ೭ || ಹಾ ಚಿದ್ವಿಲಾಸ ಮುನಿಮಾನಸ-ಹಂಸ ಜಾಣಾ| ವಿಶ್ವ ವಸೇ ಪರಿ ನಿರಂಕುಶ-ಗಮ್ಯ ಜಾಣಾ| ರಂಗೋನಿ ಭಾಸ್ಕರ ನಿಜಾನುಭವೀ ಬುಡಾಲಾ| ಅತಬೋಧ ಪದ... || ೮ || '''ಭಾವಾರ್ಥ''': ತತ್ವಗಳು ತಿಳಿದ ನಂತರ ''ನನಗೆ ತಿಳಿದಿದೆ” ಎನ್ನುವ ಭಾವನೆ ಇರಲಾರದು. ಆಗ ಲಭಿಸುವ ಜ್ಞಾನದಿಂದ ಎಲ್ಲರಿಗೂ ಆನಂದತೃಪ್ತಿಯೂ ಮುಕ್ತಿಯೂ ಲಭಿಸುವುದು. ಶರೀರವು ಇರಲಿ, ಇಲ್ಲವೆ ಬಿದ್ದು ಹೋಗಲಿ, ಎಲ್ಲವೂ ಒಂದೇ ಎಂಬ ಸಮಭಾವ ಬಂದವನಿಗೆ ಅಂತ ಬೋಧದ ಸ್ಥಿತಿಯ ನಿರ್ಧಾರವು ಪೂರ್ಣವಾಯಿತು. || ೧ || ಸ್ವಪ್ನದಂತೆ ಇಂದ್ರಜಾಲದಂತ ಎಲ್ಲವೂ ಮಾಯಾರೂಪಿಯಾಗಿರುವುದು. ಇದಕ್ಕಾಗಿ ಮನಸ್ಸಿನಲ್ಲಿ ಯಾರೂ ಭಯ ತಾಳುವುದಿಲ್ಲ. ಸ್ವಾನುಭವದಿಂದ ಇದೆ, ಇಲ್ಲ ಎನ್ನುವ ಭಾವನ ಹೋಗಿಬಿಡುವುದು. ಹೀಗೆ ಅದೈತ ಬೋಧದ || ೨ || ಜ್ಞಾನದ ಅಗ್ನಿಯೊಳಗೆ ಪೂರ್ವಸಂಚಿತ ಕರ್ಮಗಳಲ್ಲಿ ಸುಟ್ಟು ಹೋದವು. ಅದರಿಂದ ಬಂಜೆಯ ಆಟದಂತೆ ಕರ್ಮಗಳೆಲ್ಲ ವ್ಯರ್ಥವಾದವು. ಪ್ರಾರಬ್ಧದ ಶೇಷಭಾಗವು ಜನರ ದೃಷ್ಟಿಯಲ್ಲಿ ಉಳಿಯಿತು. ಹೀಗೆ ಅಕ್ಷಿತಬೋಧದ... || ೩ || ಕೆಲವರು {{center|೧೫೫}}<noinclude></noinclude> 0t30bhmg3ub7ssmk0savubf8k4221sg ಪುಟ:ನಿತ್ಯ ನೇಮಾವಲಿ.pdf/೧೫೭ 104 102024 322811 284397 2026-05-27T00:51:20Z Shreesha Sharma 7840 /* Proofread */ 322811 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಉದಾಸೀನ ವೃತ್ತಿಯಿಂದ ಅರಣ್ಯದಲ್ಲಿ ಕಾಲ ಕಳೆದರು; ಕೆಲವರು ಗ್ರಹಸ್ಥಾಶ್ರಮಿಗಳಾಗಿ ಕಾರ್ಯನಿರತರಾದರು. ಆದರೆ ಸ್ವಚ್ಛಂದದಿಂದ ಆನಂದ ಪಡುವವರಲ್ಲಿ ಹೆಚ್ಚು ಕಡಿಮೆ ಎಂಬ ವಿಕಲ್ಪ ಉಳಿಯಲಿಲ್ಲ. ಹೀಗೆ ಅದೈತಬೋಧದ.... ||೪|| ಜ್ಞಾನಿಯು ಆನೆಯನ್ನು ಕಟ್ಟಿ ಪಟ್ಟದ ಮದ್ದಾನೆಯ ಮೇಲೆ ಕುಳಿತಿರಲಿ ಅಥವಾ ಬಡ ಭಿಕ್ಷುಕನಂತೆ ದಾರಿದ್ರದಲ್ಲಿ ಉದಾಸೀನನಾಗಿರಲಿ, ಸಂಕಲ್ಪರಹಿತವಾದ ಅವನ ಮನಸ್ಸು ಬ್ರಹ್ಮನಲ್ಲಿ ನೆಲೆಸಿರುತ್ತದೆ. ಹೀಗೆ ಅಕ್ಷಿತಬೋಧದ... || ೫ || ಆಕಾಶವು ಕೊಡದ ಮತ್ತು ಮನೆಯ ಉಪಾಧಿಯಿಂದ, ಘಟಾಕಾಶ, ಮಠಾಕಾಶವೆಂದೆನಿಸಿದರೂ ಅದು ಒಂದೇ ಆಗಿರುವಂತೆ, ಜೀವ-ಈಶ್ವರ-ಜಗತ್ತು ಎಲ್ಲವೂ ಒಂದೇ ಬ್ರಹ್ಮಸ್ವರೂಪವಿರುತ್ತವೆಂಬ ಸಿದ್ಧಾಂತಕ್ಕೆ ಜ್ಞಾನಿಯು ಬರುತ್ತಾನೆ. ಇದೇ ದ್ಧಾಂತವನ್ನು ವೇದಗಳೂ, ಸಂತರೂ, ಸಾರಿ ಸಾರಿ ಹೇಳುತ್ತಾರೆ. ಹೀಗೆ ದೈತಬೋಧದ.. || ೬ || ಸಮುದ್ರಕ್ಕೆ ಉಪಮೆಯು ಸಮುದ್ರವೇ. ಸೂರ್ಯನಿಗೆ ಉಪಮೆಯು ಸೂರ್ಯನೇ. ಇದಕ್ಕಿಂತಲೂ ಒಳ್ಳೆಯ ಉಪಮ ಸಿಗಲಾರದು. ಅದರಂತೆ ಗುಣರಹಿತನಾದ ನಿರ್ಗುಣಬ್ರಹ್ಮನನ್ನು ಗುಣದಲ್ಲಿಯ ಉಪಮೆಗಳಿಂದ ವರ್ಣಿಸಲು ಯಾರಿಗೆ ಸಾಧ್ಯ? ಇಂಥ ಜ್ಞಾನಿಗೆ ಅತಬೋಧದ... || ೭ || ಈ ಚಿತ್‌ಸರೋವರದಲ್ಲಿ ಜ್ಞಾನಿಗಳ ಮನಸ್ಸು ಹಂಸದಂತೆ ಇರುವುದು. ವಿಶ್ವದಲ್ಲಿದ್ದರೂ ಯಾವ ಬಂಧನಕ್ಕೊಳಗಾಗದೆ ಸ್ವತಂತ್ರರಾಗಿರುವರು. ಭಾಸ್ಕರನು ತಲ್ಲೀನನಾಗಿ ಆತ್ಮಾನುಭವದಲ್ಲಿ {{center|೧೫೬}}<noinclude></noinclude> akap4s80og3hnqx83kwc9m5bfacrawx 322817 322811 2026-05-27T00:58:21Z Shreelatha.Halemane 7642 /* Validated */ 322817 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಉದಾಸೀನ ವೃತ್ತಿಯಿಂದ ಅರಣ್ಯದಲ್ಲಿ ಕಾಲ ಕಳೆದರು; ಕೆಲವರು ಗ್ರಹಸ್ಥಾಶ್ರಮಿಗಳಾಗಿ ಕಾರ್ಯನಿರತರಾದರು. ಆದರೆ ಸ್ವಚ್ಛಂದದಿಂದ ಆನಂದ ಪಡುವವರಲ್ಲಿ ಹೆಚ್ಚು ಕಡಿಮೆ ಎಂಬ ವಿಕಲ್ಪ ಉಳಿಯಲಿಲ್ಲ. ಹೀಗೆ ಅದೈತಬೋಧದ.... ||೪|| ಜ್ಞಾನಿಯು ಆನೆಯನ್ನು ಕಟ್ಟಿ ಪಟ್ಟದ ಮದ್ದಾನೆಯ ಮೇಲೆ ಕುಳಿತಿರಲಿ ಅಥವಾ ಬಡ ಭಿಕ್ಷುಕನಂತೆ ದಾರಿದ್ರದಲ್ಲಿ ಉದಾಸೀನನಾಗಿರಲಿ, ಸಂಕಲ್ಪರಹಿತವಾದ ಅವನ ಮನಸ್ಸು ಬ್ರಹ್ಮನಲ್ಲಿ ನೆಲೆಸಿರುತ್ತದೆ. ಹೀಗೆ ಅಕ್ಷಿತಬೋಧದ... || ೫ || ಆಕಾಶವು ಕೊಡದ ಮತ್ತು ಮನೆಯ ಉಪಾಧಿಯಿಂದ, ಘಟಾಕಾಶ, ಮಠಾಕಾಶವೆಂದೆನಿಸಿದರೂ ಅದು ಒಂದೇ ಆಗಿರುವಂತೆ, ಜೀವ-ಈಶ್ವರ-ಜಗತ್ತು ಎಲ್ಲವೂ ಒಂದೇ ಬ್ರಹ್ಮಸ್ವರೂಪವಿರುತ್ತವೆಂಬ ಸಿದ್ಧಾಂತಕ್ಕೆ ಜ್ಞಾನಿಯು ಬರುತ್ತಾನೆ. ಇದೇ ದ್ಧಾಂತವನ್ನು ವೇದಗಳೂ, ಸಂತರೂ, ಸಾರಿ ಸಾರಿ ಹೇಳುತ್ತಾರೆ. ಹೀಗೆ ದೈತಬೋಧದ.. || ೬ || ಸಮುದ್ರಕ್ಕೆ ಉಪಮೆಯು ಸಮುದ್ರವೇ. ಸೂರ್ಯನಿಗೆ ಉಪಮೆಯು ಸೂರ್ಯನೇ. ಇದಕ್ಕಿಂತಲೂ ಒಳ್ಳೆಯ ಉಪಮ ಸಿಗಲಾರದು. ಅದರಂತೆ ಗುಣರಹಿತನಾದ ನಿರ್ಗುಣಬ್ರಹ್ಮನನ್ನು ಗುಣದಲ್ಲಿಯ ಉಪಮೆಗಳಿಂದ ವರ್ಣಿಸಲು ಯಾರಿಗೆ ಸಾಧ್ಯ? ಇಂಥ ಜ್ಞಾನಿಗೆ ಅತಬೋಧದ... || ೭ || ಈ ಚಿತ್‌ಸರೋವರದಲ್ಲಿ ಜ್ಞಾನಿಗಳ ಮನಸ್ಸು ಹಂಸದಂತೆ ಇರುವುದು. ವಿಶ್ವದಲ್ಲಿದ್ದರೂ ಯಾವ ಬಂಧನಕ್ಕೊಳಗಾಗದೆ ಸ್ವತಂತ್ರರಾಗಿರುವರು. ಭಾಸ್ಕರನು ತಲ್ಲೀನನಾಗಿ ಆತ್ಮಾನುಭವದಲ್ಲಿ {{center|೧೫೬}}<noinclude></noinclude> 77nhyfolzmmwy1r82wkb8v8g21bewpl ಪುಟ:ನಿತ್ಯ ನೇಮಾವಲಿ.pdf/೧೫೮ 104 102026 322812 284399 2026-05-27T00:54:53Z Shreesha Sharma 7840 /* Proofread */ 322812 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಕರುಣಾಷ್ಟಕಗಳು}} ಮುಳುಗಿದನು. ಹೀಗೆ ಅವನಿಗೆ ಅದೈತ ಬೋಧದ ನಿರ್ಧಾರವು ಪೂರ್ಣವಾಯಿತು || ೮ || {{center|'''ಕರುಣಾಷ್ಟಕಗಳು'''}} {{center|ಸೋಮವಾರ}} ಜ್ಯಾ ಸಂಗತಿನೇಚ ವಿರಾಗ ಝಾಲಾ| ಮನೋದರೀಂಚ ಜಡಭಾಸ ಗೇಲಾ| ಸಾಕ್ಷಾತ್ಪರಾತ್ಮಾ ಮಜ ಭೇಟಿವೀಲಾ ವಿಸರೂ ಕಸಾಮೀ ಗುರುಪಾದುಕಾಲಾ || ೧ || ಸದ್ಯೋಗದಂಥ ಘರಿ ಆಣಿಯಲೇ |ಅಂಗೇಚ ಮಾತೇ ಪರಬ್ರಹ್ಮ ಕೇಲೇ ಪ್ರಚಂಡ ತೊ ಬೋಧರವೀ ಉದ್ದೇಲಾ| ವಿಸರೂ.... || ೨ || ಚರಾಚರೀ ವ್ಯಾಪಕತಾ ಜಯಾಚೀ |ಅಖಂಡ ಭೇಟಿ ಮಜಲಾ ತಯಾಚಿ। ಪರಂಪದೀ ಸಂಗಮ ಪೂರ್ಣ ಝಾಲಾ| ವಿಸರೂ.... || ೩ || ಜೋ ಸರ್ವದಾ ಗುಪ್ತ ಜನಾತ ವಾಗೇ! ಪ್ರಪನ್ನ ಭಕ್ತಾ ನಿಜಬೋಧ ಸಾಂಗೇ |ಸದ್ಭಕ್ತಿ ಭಾವಾಕರಿತಾ ಭುಕೇಲಾ| ವಿಸರೂ... ||೪|| ಅನಂತ ಮಾಝೇ ಅಪರಾಧ ಕೋಟಿ| ನಾಣೀ ಮನೀ ಘಾಲುನಿ ಸರ್ವ ಪೋಟೀ। ಪ್ರಬೋಧಿತಾ ತೋ ಶ್ರಮ ಫಾರ ಝಾಲಾ| ವಿಸರೂ.... || ೫ || ಕಾಹೀ ಮಲಾ ಸೇವನಹೀ ನ ಝಾಲೇ |ತಥಾಪಿ ತೇಣೇ ಮಜ ಉದ್ಧರೀಲೇ| ಆತಾ ತರೀ ಅರ್ಪಿನ ಪ್ರಾಣ ತ್ಯಾಲಾ |ವಿಸರೂ..... || ೬ || ಮಾಝಾ {{center|೧೫೭}}<noinclude></noinclude> 9q7rzzolkxm4rtdgjc9f0wj6z1pq9wl 322818 322812 2026-05-27T00:58:30Z Shreelatha.Halemane 7642 /* Validated */ 322818 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಕರುಣಾಷ್ಟಕಗಳು}} ಮುಳುಗಿದನು. ಹೀಗೆ ಅವನಿಗೆ ಅದೈತ ಬೋಧದ ನಿರ್ಧಾರವು ಪೂರ್ಣವಾಯಿತು || ೮ || {{center|'''ಕರುಣಾಷ್ಟಕಗಳು'''}} {{center|ಸೋಮವಾರ}} ಜ್ಯಾ ಸಂಗತಿನೇಚ ವಿರಾಗ ಝಾಲಾ| ಮನೋದರೀಂಚ ಜಡಭಾಸ ಗೇಲಾ| ಸಾಕ್ಷಾತ್ಪರಾತ್ಮಾ ಮಜ ಭೇಟಿವೀಲಾ ವಿಸರೂ ಕಸಾಮೀ ಗುರುಪಾದುಕಾಲಾ || ೧ || ಸದ್ಯೋಗದಂಥ ಘರಿ ಆಣಿಯಲೇ |ಅಂಗೇಚ ಮಾತೇ ಪರಬ್ರಹ್ಮ ಕೇಲೇ ಪ್ರಚಂಡ ತೊ ಬೋಧರವೀ ಉದ್ದೇಲಾ| ವಿಸರೂ.... || ೨ || ಚರಾಚರೀ ವ್ಯಾಪಕತಾ ಜಯಾಚೀ |ಅಖಂಡ ಭೇಟಿ ಮಜಲಾ ತಯಾಚಿ। ಪರಂಪದೀ ಸಂಗಮ ಪೂರ್ಣ ಝಾಲಾ| ವಿಸರೂ.... || ೩ || ಜೋ ಸರ್ವದಾ ಗುಪ್ತ ಜನಾತ ವಾಗೇ! ಪ್ರಪನ್ನ ಭಕ್ತಾ ನಿಜಬೋಧ ಸಾಂಗೇ |ಸದ್ಭಕ್ತಿ ಭಾವಾಕರಿತಾ ಭುಕೇಲಾ| ವಿಸರೂ... ||೪|| ಅನಂತ ಮಾಝೇ ಅಪರಾಧ ಕೋಟಿ| ನಾಣೀ ಮನೀ ಘಾಲುನಿ ಸರ್ವ ಪೋಟೀ। ಪ್ರಬೋಧಿತಾ ತೋ ಶ್ರಮ ಫಾರ ಝಾಲಾ| ವಿಸರೂ.... || ೫ || ಕಾಹೀ ಮಲಾ ಸೇವನಹೀ ನ ಝಾಲೇ |ತಥಾಪಿ ತೇಣೇ ಮಜ ಉದ್ಧರೀಲೇ| ಆತಾ ತರೀ ಅರ್ಪಿನ ಪ್ರಾಣ ತ್ಯಾಲಾ |ವಿಸರೂ..... || ೬ || ಮಾಝಾ {{center|೧೫೭}}<noinclude></noinclude> 1urlmghedxnkeidl3uelnulk52v1d3j ಪುಟ:ನಿತ್ಯ ನೇಮಾವಲಿ.pdf/೧೫೯ 104 102029 322813 284402 2026-05-27T00:57:35Z Shreesha Sharma 7840 /* Proofread */ 322813 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಅಹಂಭಾವ ಅಸೆ ಶರೀರೀ| ತಥಾಪಿ ತೋ ಸದ್ಗುರು ಅಂಗಿಕಾರೀ! ನಾಹೀ ಮನೀ ಅಲ್ಪ ವಿಕಾರ ಝಾಲಾ ವಿಸರೂ.... || ೭ || ಆತಾ ಕಸಾ ಹಾ ಉಪಕಾರ ಫೇಡೂ| ಹಾ ದೇಹ ಓವಾಳು ನೀ ದೂರ ಸೋಡೂ|ಮ್ಯಾಂ ಏಕಭಾವೇ ಪ್ರಣಿಪಾತ ಕಲಾ| ವಿಸರೂ... || ೮ || ಜಯಾ ವಾನಿತಾ ವಾನಿತಾ ವೇದವಾಣೀ|ಮ್ಹಣೇ ನೇತಿ ನೇತಿ ತಿಲಾ ಜೇ ದುರೂನೀ|ನವೇ ಅಂತ ನಾ ಪಾರ ಜ್ಯಾಚ್ಯಾ ರುಪಾಲಾ| ವಿಸರೂ.... || ೯ || ಜೋ ಸಾಧುಚಾ ಅಂಕಿತ ಜೀವ ಝಾಲಾ ತ್ಯಾಚಾ ಅಸೇ ಭಾರ ನಿರಂಜನಾಲಾ|ನಾರಾಯಣಾಚಾ ಭ್ರಮ ದೂರ ಕೇಲಾ ವಿಸರೂ.... || ೧೦ || '''ಭಾವಾರ್ಥ''': ಯಾವ ಸದ್ಗುರುವಿನ ಕೃಪೆಯಿಂದ ವೈರಾಗ್ಯವುಂಟಾಗಿ ಮನಸ್ಸಿನಲ್ಲಿಯ ಜಡಪ್ರಪಂಚದ ಮೋಹವು ಹೋಗಿ ಪರಮಾತ್ಮನ ದರ್ಶನವಾಯಿತೋ ಅಂಥ ಗುರುವಿನ ಪಾದಗಳನ್ನು ನಾನು ಹೇಗೆ ಮರೆಯಲಿ? ಯಾರು ಯೋಗಮಾರ್ಗದಿಂದ ಬ್ರಹ್ಮಸ್ವರೂಪ ತಾಳುವಂತೆ ಮಾಡಿದರೋ, ಯಾರ ಕೃಪೆಯಿಂದ ಬೋಧಸೂರ್ಯನು ಉದಯಿಸಿದನೋ, ಅಂಥ ಸದ್ಗುರುವಿನ ಪಾದಗಳನ್ನು ನಾನು ಹೇಗೆ ಮರೆಯಲಿ? ಚರಾಚರ ಸೃಷ್ಟಿಯನ್ನೆಲ್ಲ ವ್ಯಾಪಿಸಿದ ಗುರುವು ನನಗೆ ನಿರಂತರವಾಗಿ ಭೆಟ್ಟಿಯಾಗುವನು. ಯಾರಿಂದ ಪರಮಪದದಲ್ಲಿ ಐಕ್ಯತವುಂಟಾಯಿತೋ ಅಂಥ ಗುರುವಿನ ಪಾದಗಳನ್ನು ನಾನು ಹೇಗೆ ಮರೆತೇನು? ಯಾರು ಯಾವಾಗಲೂ ಗುಪ್ತ ರೀತಿಯಲ್ಲಿ ಸಂಚರಿಸುತ್ತ ಶರಣುಬಂದ ಭಕ್ತರಿಗೆ ಸ್ವರೂಪಬೋಧನೆಯನ್ನು ಮಾಡುವರೋ, ಮತ್ತು {{center|೧೫೮}}<noinclude></noinclude> rsc3fslbtxnf8k07oe2hhlqh0kitekv 322819 322813 2026-05-27T00:58:43Z Shreelatha.Halemane 7642 /* Validated */ 322819 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಅಹಂಭಾವ ಅಸೆ ಶರೀರೀ| ತಥಾಪಿ ತೋ ಸದ್ಗುರು ಅಂಗಿಕಾರೀ! ನಾಹೀ ಮನೀ ಅಲ್ಪ ವಿಕಾರ ಝಾಲಾ ವಿಸರೂ.... || ೭ || ಆತಾ ಕಸಾ ಹಾ ಉಪಕಾರ ಫೇಡೂ| ಹಾ ದೇಹ ಓವಾಳು ನೀ ದೂರ ಸೋಡೂ|ಮ್ಯಾಂ ಏಕಭಾವೇ ಪ್ರಣಿಪಾತ ಕಲಾ| ವಿಸರೂ... || ೮ || ಜಯಾ ವಾನಿತಾ ವಾನಿತಾ ವೇದವಾಣೀ|ಮ್ಹಣೇ ನೇತಿ ನೇತಿ ತಿಲಾ ಜೇ ದುರೂನೀ|ನವೇ ಅಂತ ನಾ ಪಾರ ಜ್ಯಾಚ್ಯಾ ರುಪಾಲಾ| ವಿಸರೂ.... || ೯ || ಜೋ ಸಾಧುಚಾ ಅಂಕಿತ ಜೀವ ಝಾಲಾ ತ್ಯಾಚಾ ಅಸೇ ಭಾರ ನಿರಂಜನಾಲಾ|ನಾರಾಯಣಾಚಾ ಭ್ರಮ ದೂರ ಕೇಲಾ ವಿಸರೂ.... || ೧೦ || '''ಭಾವಾರ್ಥ''': ಯಾವ ಸದ್ಗುರುವಿನ ಕೃಪೆಯಿಂದ ವೈರಾಗ್ಯವುಂಟಾಗಿ ಮನಸ್ಸಿನಲ್ಲಿಯ ಜಡಪ್ರಪಂಚದ ಮೋಹವು ಹೋಗಿ ಪರಮಾತ್ಮನ ದರ್ಶನವಾಯಿತೋ ಅಂಥ ಗುರುವಿನ ಪಾದಗಳನ್ನು ನಾನು ಹೇಗೆ ಮರೆಯಲಿ? ಯಾರು ಯೋಗಮಾರ್ಗದಿಂದ ಬ್ರಹ್ಮಸ್ವರೂಪ ತಾಳುವಂತೆ ಮಾಡಿದರೋ, ಯಾರ ಕೃಪೆಯಿಂದ ಬೋಧಸೂರ್ಯನು ಉದಯಿಸಿದನೋ, ಅಂಥ ಸದ್ಗುರುವಿನ ಪಾದಗಳನ್ನು ನಾನು ಹೇಗೆ ಮರೆಯಲಿ? ಚರಾಚರ ಸೃಷ್ಟಿಯನ್ನೆಲ್ಲ ವ್ಯಾಪಿಸಿದ ಗುರುವು ನನಗೆ ನಿರಂತರವಾಗಿ ಭೆಟ್ಟಿಯಾಗುವನು. ಯಾರಿಂದ ಪರಮಪದದಲ್ಲಿ ಐಕ್ಯತವುಂಟಾಯಿತೋ ಅಂಥ ಗುರುವಿನ ಪಾದಗಳನ್ನು ನಾನು ಹೇಗೆ ಮರೆತೇನು? ಯಾರು ಯಾವಾಗಲೂ ಗುಪ್ತ ರೀತಿಯಲ್ಲಿ ಸಂಚರಿಸುತ್ತ ಶರಣುಬಂದ ಭಕ್ತರಿಗೆ ಸ್ವರೂಪಬೋಧನೆಯನ್ನು ಮಾಡುವರೋ, ಮತ್ತು {{center|೧೫೮}}<noinclude></noinclude> f4j5qd7u2pftrgrzu6zj5vg83vyf199 ಪುಟ:ನಿತ್ಯ ನೇಮಾವಲಿ.pdf/೧೬೦ 104 102031 322820 284404 2026-05-27T01:00:32Z Shreesha Sharma 7840 /* Proofread */ 322820 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಕರುಣಾಷ್ಟಕಗಳು}} ಅನನ್ಯಭಕ್ತಿಭಾವಕ್ಕಾಗಿ ಯಾರು ಹಸಿದಿರುವರೋ, ಅಂಥ ಗುರುಪಾದಗಳನ್ನು ನಾನು ಹೇಗೆ ಮರೆಯಲಿ ? ನನ್ನ ಅಪರಾಧಗಳು ಅನಂತವಾಗಿದ್ದು ಕೋಟಿಗಟ್ಟಲೆ ಇವೆ; ಅವುಗಳನ್ನು ಮನಸ್ಸಿನಲ್ಲಿ ತರದ ಹೊಟ್ಟೆಯಲ್ಲಿ ಹಾಕಿಕೊಂಡು ನನ್ನನ್ನು ಎಚ್ಚರಿಸಿದರು. ಅವರಿಗೆ ಶ್ರಮವೆಷ್ಟಾಗಿರಬಹುದು ? ಅಂಥ ಗುರುಪಾದಗಳನ್ನು ನಾನು ಹೇಗೆ ಮರೆಯಲಿ? ನನ್ನಿಂದ ಯಾವ ಸೇವೆ ಸಲ್ಲದಿದ್ದರೂ, ನನ್ನನ್ನು ಯಾರು ಉದ್ಧರಿಸಿದರೋ ಅಂಥ ಗುರುವಿಗೆ ಈಗಲಾದರೂ ಪ್ರಾಣಾರ್ಪಣೆ ಮಾಡುವನು. ಇಂಥ ಗುರುಪಾದಗಳನ್ನು ನಾನು ಹೇಗೆ ಮರೆಯಲಿ? ನನ್ನಲ್ಲಿ ಅಹಂಭಾವವಿದ್ದರೂ, ಗುರುಗಳು ನನ್ನನ್ನು ಅಂಗೀಕರಿಸಿದರು. ನನ್ನ ಬಗ್ಗೆ ಅವರಿಗೆ ಲವಲೇಶವಾದರೂ ಯಾವ ವಿಕಲ್ಪವಾಗಲಿಲ್ಲ. ಅಂಥ ಗುರುವಿನ ಪಾದಗಳನ್ನು ಹೇಗೆ ಮರೆಯಲಿ? ಈ ಉಪಕಾರವನ್ನು ಹೇಗೆ ತೀರಿಸಲಿ? ಈ ದೇಹವನ್ನು ನಿವಾಳಿಸಿ ಒಗೆದರೂ ಅದು ತೀರದೆಂದು ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಮಾಡುವನು. ಇಂಥ ಗುರುವಿನ ಪಾದಗಳನ್ನು ಹೇಗೆ ಮರೆಯಲಿ? ಯಾರ ಸ್ವರೂಪ ಸ್ಥಿತಿಯನ್ನು ವರ್ಣಿಸಲಿಕ್ಕೆ ವೇದಗಳಿಗೂ ಸಾಧ್ಯವಾಗದ “ನೇತಿ ನೇತಿ” ಎಂದು ಘೋಷಿಸಿದವೋ, ಯಾರ ಸ್ವರೂಪಕ್ಕೆ ತುದಿ ಮೊದಲಿಲ್ಲವೋ, ಅಂಥ ಗುರುವಿನ ಪಾದಗಳನ್ನು ಹೇಗೆ ಮರೆತೇನು? ಯಾವ ಜೀವನು ಸದ್ಗುರುವಿನ ವಶನಾಗುವನೋ ಅವನ ಭಾರವು ಪರಮಾತ್ಮನ ಮೇಲೆ ಇರುವುದು. ನಾರಾಯಣನ ಭ್ರಮೆ ದೂರ ಮಾಡಿದನು. ಅಂಥ ಗುರುವಿನ ಪಾದಗಳನ್ನು ಹಗೆ ಮರೆಯಲಿ? {{center|೧೫೯}}<noinclude></noinclude> lrtavblq6x2c5a2o80i2k8kca4ro227 322825 322820 2026-05-27T01:16:21Z Shreelatha.Halemane 7642 /* Validated */ 322825 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಕರುಣಾಷ್ಟಕಗಳು}} ಅನನ್ಯಭಕ್ತಿಭಾವಕ್ಕಾಗಿ ಯಾರು ಹಸಿದಿರುವರೋ, ಅಂಥ ಗುರುಪಾದಗಳನ್ನು ನಾನು ಹೇಗೆ ಮರೆಯಲಿ ? ನನ್ನ ಅಪರಾಧಗಳು ಅನಂತವಾಗಿದ್ದು ಕೋಟಿಗಟ್ಟಲೆ ಇವೆ; ಅವುಗಳನ್ನು ಮನಸ್ಸಿನಲ್ಲಿ ತರದ ಹೊಟ್ಟೆಯಲ್ಲಿ ಹಾಕಿಕೊಂಡು ನನ್ನನ್ನು ಎಚ್ಚರಿಸಿದರು. ಅವರಿಗೆ ಶ್ರಮವೆಷ್ಟಾಗಿರಬಹುದು ? ಅಂಥ ಗುರುಪಾದಗಳನ್ನು ನಾನು ಹೇಗೆ ಮರೆಯಲಿ? ನನ್ನಿಂದ ಯಾವ ಸೇವೆ ಸಲ್ಲದಿದ್ದರೂ, ನನ್ನನ್ನು ಯಾರು ಉದ್ಧರಿಸಿದರೋ ಅಂಥ ಗುರುವಿಗೆ ಈಗಲಾದರೂ ಪ್ರಾಣಾರ್ಪಣೆ ಮಾಡುವನು. ಇಂಥ ಗುರುಪಾದಗಳನ್ನು ನಾನು ಹೇಗೆ ಮರೆಯಲಿ? ನನ್ನಲ್ಲಿ ಅಹಂಭಾವವಿದ್ದರೂ, ಗುರುಗಳು ನನ್ನನ್ನು ಅಂಗೀಕರಿಸಿದರು. ನನ್ನ ಬಗ್ಗೆ ಅವರಿಗೆ ಲವಲೇಶವಾದರೂ ಯಾವ ವಿಕಲ್ಪವಾಗಲಿಲ್ಲ. ಅಂಥ ಗುರುವಿನ ಪಾದಗಳನ್ನು ಹೇಗೆ ಮರೆಯಲಿ? ಈ ಉಪಕಾರವನ್ನು ಹೇಗೆ ತೀರಿಸಲಿ? ಈ ದೇಹವನ್ನು ನಿವಾಳಿಸಿ ಒಗೆದರೂ ಅದು ತೀರದೆಂದು ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಮಾಡುವನು. ಇಂಥ ಗುರುವಿನ ಪಾದಗಳನ್ನು ಹೇಗೆ ಮರೆಯಲಿ? ಯಾರ ಸ್ವರೂಪ ಸ್ಥಿತಿಯನ್ನು ವರ್ಣಿಸಲಿಕ್ಕೆ ವೇದಗಳಿಗೂ ಸಾಧ್ಯವಾಗದ “ನೇತಿ ನೇತಿ” ಎಂದು ಘೋಷಿಸಿದವೋ, ಯಾರ ಸ್ವರೂಪಕ್ಕೆ ತುದಿ ಮೊದಲಿಲ್ಲವೋ, ಅಂಥ ಗುರುವಿನ ಪಾದಗಳನ್ನು ಹೇಗೆ ಮರೆತೇನು? ಯಾವ ಜೀವನು ಸದ್ಗುರುವಿನ ವಶನಾಗುವನೋ ಅವನ ಭಾರವು ಪರಮಾತ್ಮನ ಮೇಲೆ ಇರುವುದು. ನಾರಾಯಣನ ಭ್ರಮೆ ದೂರ ಮಾಡಿದನು. ಅಂಥ ಗುರುವಿನ ಪಾದಗಳನ್ನು ಹಗೆ ಮರೆಯಲಿ? {{center|೧೫೯}}<noinclude></noinclude> qknl21qg8kv2xubkbjx7wf01dwrfica ಪುಟ:ನಿತ್ಯ ನೇಮಾವಲಿ.pdf/೧೬೧ 104 102033 322821 284406 2026-05-27T01:05:26Z Shreesha Sharma 7840 /* Proofread */ 322821 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} {{center|ಮಂಗಳವಾರ}} {{center|೧}} ಸಮಾಧಾನ ಸಾಧುಜನಾಚೀನಿ ಯೋಗೇ |ಪರಿ ಮಾಗುತೇ ದುಃಖ ಹೋತೇ ವಿಯೋಗೇ| ಘಡೀನೇ ಘಡೀ ಶೀಣ ಅತ್ಯಂತ ವಾಟೇ| ಉದಾಸೀನ ಹಾ ಕಾಳ ಕೋಠೇ ನ ಕಂಠೇ || ೧ || ಘರೇ ಸುಂದರೇ ಸೌಖ್ಯ ನಾನಾಪರೀಚೇ| ಪರೀ ಕೋಣ ಜಾಲ ಈ ಅಂತರೀಚೀ| ಮನೀ ಆಠವಿತಾಚಿ ತೋ ಕಂಠ ದಾಟೇ। ಉದಾಸೀನ... ||೨ || ಬಳೇ ಲಾವಿತಾ ಚಿತ್ತಕೋಠೇ ಜಡೇನಾ| ಸಮಾಧಾನ ತೇ ಕಾಹಿ ಕೇಲ್ಯಾ ಘಢೇನಾ| ನಯೇ ಧೀರ ಡೋಳಾ ಸದಾ ನೀರ ಲೋಟೇ| ಉದಾಸೀನ.... || ೩ || ಅವಸ್ಥಾಮನೀ ಲಾಗಲೀ ಕಾಯ ಸಾಂಗೋ| ಗುಣಿ ಗುಂತಲಾ ಹೇತ ಕೋಣಾಸಿ ಮಾಗೋ| ಬಹೂಸಾಲ ಭೇಟಾವಯ ಪ್ರಾಣ ಪೂಟೇ |ಉದಾಸೀನ.... || ೪ || ಕೃಪಾಳೂಪಣೇ ಭೇಟಿ ರೇ ರಾಮರಾಯಾ| ವಿಯೋಗೇ ತುಝಾ ಸರ್ವ ವ್ಯಾಕೂಳ ಕಾಯಾ| ಜನಾಮಾಜ ಲೌಕಿಕ ಹಾಹಿ ನ ಸೂಟೇ ಉದಾಸೀನ.... || ೫ || ಅಹಾ ರೇ ವಿಧಿ ತ್ವಾಂ ಅಸೇ ಕಾಯ ಕೇಲೇ| ಪರಾಧೀನತಾ ಪಾಪ ಮಾಝ ಉದೇಲೇ| ಬಹೂತಾಮಧೇ ಕತಾ ತೂಕ ತೂಟೇ|ಉದಾಸೀನ... || ೬ || ಸಮರ್ಥಾ ಮನೀ ಸಾಂಡಿ ಮಾಝೀ ನಸಾವೀ| ಸದಾ ಸರ್ವದಾ ಭಕ್ತಚಿಂತಾ ಅಸಾವೀ |ಘಢೇನಾ ತುಝಾ ಯೋಗ ಹಾ ಪ್ರಾಪ್ತ ಖೋಟೇ|ಉದಾಸೀನ... || ೭ || ಅಖಂಡೀತ ಹೇ {{center|೧೬೦}}<noinclude></noinclude> bjkla1ichmq1rpd4hh9fimak7au5aut 322826 322821 2026-05-27T01:16:30Z Shreelatha.Halemane 7642 /* Validated */ 322826 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} {{center|ಮಂಗಳವಾರ}} {{center|೧}} ಸಮಾಧಾನ ಸಾಧುಜನಾಚೀನಿ ಯೋಗೇ |ಪರಿ ಮಾಗುತೇ ದುಃಖ ಹೋತೇ ವಿಯೋಗೇ| ಘಡೀನೇ ಘಡೀ ಶೀಣ ಅತ್ಯಂತ ವಾಟೇ| ಉದಾಸೀನ ಹಾ ಕಾಳ ಕೋಠೇ ನ ಕಂಠೇ || ೧ || ಘರೇ ಸುಂದರೇ ಸೌಖ್ಯ ನಾನಾಪರೀಚೇ| ಪರೀ ಕೋಣ ಜಾಲ ಈ ಅಂತರೀಚೀ| ಮನೀ ಆಠವಿತಾಚಿ ತೋ ಕಂಠ ದಾಟೇ। ಉದಾಸೀನ... ||೨ || ಬಳೇ ಲಾವಿತಾ ಚಿತ್ತಕೋಠೇ ಜಡೇನಾ| ಸಮಾಧಾನ ತೇ ಕಾಹಿ ಕೇಲ್ಯಾ ಘಢೇನಾ| ನಯೇ ಧೀರ ಡೋಳಾ ಸದಾ ನೀರ ಲೋಟೇ| ಉದಾಸೀನ.... || ೩ || ಅವಸ್ಥಾಮನೀ ಲಾಗಲೀ ಕಾಯ ಸಾಂಗೋ| ಗುಣಿ ಗುಂತಲಾ ಹೇತ ಕೋಣಾಸಿ ಮಾಗೋ| ಬಹೂಸಾಲ ಭೇಟಾವಯ ಪ್ರಾಣ ಪೂಟೇ |ಉದಾಸೀನ.... || ೪ || ಕೃಪಾಳೂಪಣೇ ಭೇಟಿ ರೇ ರಾಮರಾಯಾ| ವಿಯೋಗೇ ತುಝಾ ಸರ್ವ ವ್ಯಾಕೂಳ ಕಾಯಾ| ಜನಾಮಾಜ ಲೌಕಿಕ ಹಾಹಿ ನ ಸೂಟೇ ಉದಾಸೀನ.... || ೫ || ಅಹಾ ರೇ ವಿಧಿ ತ್ವಾಂ ಅಸೇ ಕಾಯ ಕೇಲೇ| ಪರಾಧೀನತಾ ಪಾಪ ಮಾಝ ಉದೇಲೇ| ಬಹೂತಾಮಧೇ ಕತಾ ತೂಕ ತೂಟೇ|ಉದಾಸೀನ... || ೬ || ಸಮರ್ಥಾ ಮನೀ ಸಾಂಡಿ ಮಾಝೀ ನಸಾವೀ| ಸದಾ ಸರ್ವದಾ ಭಕ್ತಚಿಂತಾ ಅಸಾವೀ |ಘಢೇನಾ ತುಝಾ ಯೋಗ ಹಾ ಪ್ರಾಪ್ತ ಖೋಟೇ|ಉದಾಸೀನ... || ೭ || ಅಖಂಡೀತ ಹೇ {{center|೧೬೦}}<noinclude></noinclude> 6fb2xna6lne0a6gm9wt9ws5g4clg2v1 ಪುಟ:ನಿತ್ಯ ನೇಮಾವಲಿ.pdf/೧೬೨ 104 102035 322822 284408 2026-05-27T01:09:03Z Shreesha Sharma 7840 /* Proofread */ 322822 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಕರುಣಾಷ್ಟಕಗಳು}} ಸಾಂಗ ಸೇವಾ ಘಢಾವೀ| ನ ಹೋತಾ ತುಝೀ ಭೇಟಿ ಕಾಯಾ ಪಡಾವೀ| ದಿಸೇಂದೀಸ ಆಯುಷ್ಯ ಹೇ ವ್ಯರ್ಥ ಲೋಟೆ| ಉದಾಸೀನ... || ೮ || ಭಜೋ ಕಾಯ ಸರ್ವಾಪರೀ ಹೀನ ದೇವಾ| ಕರೂ ಕಾಯ ಈ ಸರ್ವ ಮಾಝಾಚಿ ಠೇವಾ' |ಮ್ಹಣೋ ಕಾಯ ಮೀ ಕರ್ಮರೇಖಾ ನ ಲೋಟೇ| ಉದಾಸೀನ... || ೯ || ಮಣೇ ದಾಸ ಮೀ ವಾಟ ಪಾಹೇ ದಯಾಳಾ| ರಘನಾಯಕಾ ಭಕ್ತಾಳಾ ಭಪಾಳಾ| ಪಹಾವೇ ತುಲಾ ಹೇ ಜಿವೀ ಆರ್ತ ಮೋಟೇ। ಉದಾಸೀನ.... || ೧೦ || ಭಾವಾರ್ಥ: ಸಾಧು ಜನರ ಯೋಗದಿಂದ (ಸಂಗದಿಂದ) ಸಮಾಧಾನ ಸಿಗುತ್ತದೆ; ಆದರೆ ಸತ್ಸಂಗದ ಅಗಲುವಿಕೆಯಿಂದ ದುಃಖವಾಗುತ್ತದೆ. ಕ್ಷಣಕ್ಷಣಕ್ಕೂ ಜೀವನವು ಹೇಯವೆಂದೆನಿಸುತ್ತದೆ. ಉದಾಸೀನನಾದದ್ದರಿಂದ ಬಾಳುವ ಸಾಗಿಸುವದು ಅತಿ ಘೋರವಾಗಿದೆ. ನಾನಾತರದ ಸುಖ ಎಂದರೆ ಸುಂದರವಾದ ಮನಗಳು ಮುಂತಾದ ಐಹಿಕ ಸುಖಗಳು ಇವೆ. ಆದರೆ ಮನಸ್ಸಿನಲ್ಲಿಯ ವೇದನೆಯನ್ನು ಯಾರೂ ಅರಿಯರು. ದ್ವಂದ್ವಭಾವನೆಯಿಂದ ಕಂಠವು ಬಿಗಿದು ಬರುವುದು. ಬಲವಂತದಿಂದ ಮನಸ್ಸನ್ನು ಹತೋಟಿಯಲ್ಲಿಡಲೂ ಬರುವುದಿಲ್ಲ. ಏನು ಮಾಡಿದರೂ ಮನಸ್ಸಿಗೆ ಸಮಾಧಾನವಿಲ್ಲ. ಕಣ್ಣೀರು ಧಾರಾಕಾರವಾಗಿ ಬರುತ್ತದೆ. ಧೈರ್ಯವೆಲ್ಲ {{center|೧೬೧}}<noinclude></noinclude> jnw31ojhp77b3g0n7cgf1irqm6xmnju 322827 322822 2026-05-27T01:16:39Z Shreelatha.Halemane 7642 /* Validated */ 322827 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಕರುಣಾಷ್ಟಕಗಳು}} ಸಾಂಗ ಸೇವಾ ಘಢಾವೀ| ನ ಹೋತಾ ತುಝೀ ಭೇಟಿ ಕಾಯಾ ಪಡಾವೀ| ದಿಸೇಂದೀಸ ಆಯುಷ್ಯ ಹೇ ವ್ಯರ್ಥ ಲೋಟೆ| ಉದಾಸೀನ... || ೮ || ಭಜೋ ಕಾಯ ಸರ್ವಾಪರೀ ಹೀನ ದೇವಾ| ಕರೂ ಕಾಯ ಈ ಸರ್ವ ಮಾಝಾಚಿ ಠೇವಾ' |ಮ್ಹಣೋ ಕಾಯ ಮೀ ಕರ್ಮರೇಖಾ ನ ಲೋಟೇ| ಉದಾಸೀನ... || ೯ || ಮಣೇ ದಾಸ ಮೀ ವಾಟ ಪಾಹೇ ದಯಾಳಾ| ರಘನಾಯಕಾ ಭಕ್ತಾಳಾ ಭಪಾಳಾ| ಪಹಾವೇ ತುಲಾ ಹೇ ಜಿವೀ ಆರ್ತ ಮೋಟೇ। ಉದಾಸೀನ.... || ೧೦ || ಭಾವಾರ್ಥ: ಸಾಧು ಜನರ ಯೋಗದಿಂದ (ಸಂಗದಿಂದ) ಸಮಾಧಾನ ಸಿಗುತ್ತದೆ; ಆದರೆ ಸತ್ಸಂಗದ ಅಗಲುವಿಕೆಯಿಂದ ದುಃಖವಾಗುತ್ತದೆ. ಕ್ಷಣಕ್ಷಣಕ್ಕೂ ಜೀವನವು ಹೇಯವೆಂದೆನಿಸುತ್ತದೆ. ಉದಾಸೀನನಾದದ್ದರಿಂದ ಬಾಳುವ ಸಾಗಿಸುವದು ಅತಿ ಘೋರವಾಗಿದೆ. ನಾನಾತರದ ಸುಖ ಎಂದರೆ ಸುಂದರವಾದ ಮನಗಳು ಮುಂತಾದ ಐಹಿಕ ಸುಖಗಳು ಇವೆ. ಆದರೆ ಮನಸ್ಸಿನಲ್ಲಿಯ ವೇದನೆಯನ್ನು ಯಾರೂ ಅರಿಯರು. ದ್ವಂದ್ವಭಾವನೆಯಿಂದ ಕಂಠವು ಬಿಗಿದು ಬರುವುದು. ಬಲವಂತದಿಂದ ಮನಸ್ಸನ್ನು ಹತೋಟಿಯಲ್ಲಿಡಲೂ ಬರುವುದಿಲ್ಲ. ಏನು ಮಾಡಿದರೂ ಮನಸ್ಸಿಗೆ ಸಮಾಧಾನವಿಲ್ಲ. ಕಣ್ಣೀರು ಧಾರಾಕಾರವಾಗಿ ಬರುತ್ತದೆ. ಧೈರ್ಯವೆಲ್ಲ {{center|೧೬೧}}<noinclude></noinclude> p0x64g0xyw2xh6pf0i5mu5q2ttaetlq ಪುಟ:ನಿತ್ಯ ನೇಮಾವಲಿ.pdf/೧೬೩ 104 102037 322823 284410 2026-05-27T01:10:10Z Shreesha Sharma 7840 /* Proofread */ 322823 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಅಡಗಿಹೋಯಿತು. ಮನಸ್ಸಿನಲ್ಲಿ ನಡೆದಿರುವ ಸಂಘರ್ಷವನ್ನು ಹೇಗೆ ಹೇಳಲಿ? ಪ್ರಪಂಚದಲ್ಲಿ ಮುಳುಗಿರುವ. ನನ್ನ ಜೀವಿತದ ಆದರ್ಶವನ್ನು ಯಾರಿಗೆ ಬೇಡಲಿ? ಪರಮೆಶ್ವರನ ಭೆಟ್ಟಿಗಾಗಿ ಪ್ರಾಣವು ಹಾತೊರೆಯುತ್ತಿರುವುದು. ಆದ್ದರಿಂದ ರಾಮಾರಾಯಾ, ಕೃಪೆ ಮಾಡಿ ಭಟ್ಟಿಯಾಗು; ನೀನು ಇಲ್ಲವಾದರೆ ವ್ಯಾಕುಲತ ಆವರಿಸುವುದು. ಲೌಕಿಕವನ್ನೂ ಬಿಡುವಂತಿಲ್ಲ, ಏನು ಮಾಡಲಿ? ಎಲೈ ವಿಧಿಯೇ, ನೀನು ಹೀಗೇಕೆ ತಮಾಷೆ ಮಾಡುತ್ತಿದ್ದೀ. ಪರತಂತ್ರವೆಂಬ ನನ್ನ ಪಾಪವು ಪ್ರಕಟವಾಯಿತಲ್ಲ, ದೇವರೇ, ನನ್ನ ಕೈಬಿಡಬೇಡ, ನಿನ್ನ ಯೋಗವು ಲಭಿಸದು; ಅದು ಸುಲಭಸಾಧ್ಯವಿಲ್ಲ. ಆದ್ದರಿಂದ ಸಮರ್ಥಾ, ನನ್ನ ದೇಹಬುದ್ಧಿ ಹೋಗಬೇಕು. ನಿನಗೆ ಭಕ್ತನ ಚಿಂತೆ ಹತ್ತಬೇಕು. ನಿನ್ನ ಸೇವೆಯು ಅಖಂಡವಾಗಿ ನನಗೆ ಸಿಗಬೇಕು. ಇಲ್ಲದಿದ್ದರೆ ಈ ದೇಹವು ನಶಿಸಿಹೋಗಬೇಕು. ಇಲ್ಲವಾದರೆ ದಿನದಿನಕ್ಕೂ ವ್ಯರ್ಥವಾಗಿ, ಆಯುಷ್ಯ ಹಾಳಾಗುತ್ತದೆ. ನಾನು ಎಲ್ಲರಿಗಿಂತ ಹೀನನಾಗಿರುವುದರಿಂದ, ನಿನ್ನ ಭಜನೆಯನ್ನು ಹೇಗೆ ಮಾಡೇನು? ಎಲ್ಲವೂ ಪೂರ್ವಸಂಚಿತ ಕರ್ಮವಾಗಿದ್ದು ವಿಧಿರೇಖೆಯನ್ನು ಅಳಿಸಲಾಗದು. ನಿನ್ನ ದರ್ಶನದ ದಾರಿಯನ್ನೇ ಕಾಯುತ್ತಲಿರುವೆ;ಹೇ ದಯಾಳುವಾದ ರಘನಾಯಕಾ, ಭಕ್ತಪರಿಪಾಲಕಾ, ಈ ಜನ್ಮದಲ್ಲಿ ನಿನ್ನ ದರ್ಶನ ಪಡೆಯಬೇಕೆಂಬ ಹಂಬಲ ನನಗಿದೆ ದೇವಾ, ಎಂದು ರಾಮದಾಸರ ಹೇಳುತ್ತಾರೆ. ಜಯಜಯ ರಘುವೀರ ಸಮರ್ಥ, {{center|೧೬೨}}<noinclude></noinclude> b7eja1k7rstwa2q0koe3xggwia5rp2d 322828 322823 2026-05-27T01:16:47Z Shreelatha.Halemane 7642 /* Validated */ 322828 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಅಡಗಿಹೋಯಿತು. ಮನಸ್ಸಿನಲ್ಲಿ ನಡೆದಿರುವ ಸಂಘರ್ಷವನ್ನು ಹೇಗೆ ಹೇಳಲಿ? ಪ್ರಪಂಚದಲ್ಲಿ ಮುಳುಗಿರುವ. ನನ್ನ ಜೀವಿತದ ಆದರ್ಶವನ್ನು ಯಾರಿಗೆ ಬೇಡಲಿ? ಪರಮೆಶ್ವರನ ಭೆಟ್ಟಿಗಾಗಿ ಪ್ರಾಣವು ಹಾತೊರೆಯುತ್ತಿರುವುದು. ಆದ್ದರಿಂದ ರಾಮಾರಾಯಾ, ಕೃಪೆ ಮಾಡಿ ಭಟ್ಟಿಯಾಗು; ನೀನು ಇಲ್ಲವಾದರೆ ವ್ಯಾಕುಲತ ಆವರಿಸುವುದು. ಲೌಕಿಕವನ್ನೂ ಬಿಡುವಂತಿಲ್ಲ, ಏನು ಮಾಡಲಿ? ಎಲೈ ವಿಧಿಯೇ, ನೀನು ಹೀಗೇಕೆ ತಮಾಷೆ ಮಾಡುತ್ತಿದ್ದೀ. ಪರತಂತ್ರವೆಂಬ ನನ್ನ ಪಾಪವು ಪ್ರಕಟವಾಯಿತಲ್ಲ, ದೇವರೇ, ನನ್ನ ಕೈಬಿಡಬೇಡ, ನಿನ್ನ ಯೋಗವು ಲಭಿಸದು; ಅದು ಸುಲಭಸಾಧ್ಯವಿಲ್ಲ. ಆದ್ದರಿಂದ ಸಮರ್ಥಾ, ನನ್ನ ದೇಹಬುದ್ಧಿ ಹೋಗಬೇಕು. ನಿನಗೆ ಭಕ್ತನ ಚಿಂತೆ ಹತ್ತಬೇಕು. ನಿನ್ನ ಸೇವೆಯು ಅಖಂಡವಾಗಿ ನನಗೆ ಸಿಗಬೇಕು. ಇಲ್ಲದಿದ್ದರೆ ಈ ದೇಹವು ನಶಿಸಿಹೋಗಬೇಕು. ಇಲ್ಲವಾದರೆ ದಿನದಿನಕ್ಕೂ ವ್ಯರ್ಥವಾಗಿ, ಆಯುಷ್ಯ ಹಾಳಾಗುತ್ತದೆ. ನಾನು ಎಲ್ಲರಿಗಿಂತ ಹೀನನಾಗಿರುವುದರಿಂದ, ನಿನ್ನ ಭಜನೆಯನ್ನು ಹೇಗೆ ಮಾಡೇನು? ಎಲ್ಲವೂ ಪೂರ್ವಸಂಚಿತ ಕರ್ಮವಾಗಿದ್ದು ವಿಧಿರೇಖೆಯನ್ನು ಅಳಿಸಲಾಗದು. ನಿನ್ನ ದರ್ಶನದ ದಾರಿಯನ್ನೇ ಕಾಯುತ್ತಲಿರುವೆ;ಹೇ ದಯಾಳುವಾದ ರಘನಾಯಕಾ, ಭಕ್ತಪರಿಪಾಲಕಾ, ಈ ಜನ್ಮದಲ್ಲಿ ನಿನ್ನ ದರ್ಶನ ಪಡೆಯಬೇಕೆಂಬ ಹಂಬಲ ನನಗಿದೆ ದೇವಾ, ಎಂದು ರಾಮದಾಸರ ಹೇಳುತ್ತಾರೆ. ಜಯಜಯ ರಘುವೀರ ಸಮರ್ಥ, {{center|೧೬೨}}<noinclude></noinclude> 0etvlz7jyapa7alh01tro01itpc4e6t ಪುಟ:ನಿತ್ಯ ನೇಮಾವಲಿ.pdf/೧೬೪ 104 102039 322824 284412 2026-05-27T01:16:00Z Shreesha Sharma 7840 /* Proofread */ 322824 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಕರುಣಾಷ್ಟಕಗಳು}} {{center|ಮಂಗಳವಾರ}} {{center|(೨)}} ವೃಥಾ ಹಿಂಪುಟೀ ಕಾಸಯಾಲಾಗಿ ಹೋತಾ| ಗೃಹೀ ಆಯತಾ ಮೋಕ್ಷಲಾಭೇ ಸ್ವಹಸ್ತಾ| ವದೇ ಏಕ ಸಾಂಗೋ ತಶಾ ಸಾಧನಾಲಾ| ಮುಖೀ ರಾಮಚಂದ್ರ ಸ್ಮರಾ ವೇಳೋವೇಳಾ || ೧ || ಸ್ನುಷಾ ಪಾಂಡುಚೀ ಬ್ರೌಪದೀ ರಾಜಕನ್ಯಾ| ಮುಖೀ ಕೃಷ್ಣನಾಮೇ ಸ್ಮರೇ ಲೋಕಮಾನ್ಯಾ |ಸಭೇಮಾಜಿ ವಸ್ತ್ರ-ಪ್ರದಾತಾ ತಿಯೇಲಾ| ಮುಖೀ... || ೨ || ಬುಡೋ ಹೀ ಧರಾ ಕೀ ಲಯಾ ವಿಶ್ವ ಜಾವೋ|ಪಡೋ ಕಾಳಹಸ್ತ ಶಿರೀ ವಜ್ರ ಘಾವೋ| ವಿಸಂಬೇಚಿನಾ ಸರ್ವಥಾ ನಾಮಮಾಲಾ |ಮುಖೀ... || ೩ || ನಕಾ ಯಾಗ ಮಾಂಡೂ ನಕಾ ಪ್ರಾಣ ಕೋಂಡೂ| ನಕಾ ದ್ರವ್ಯದಾರಾ ಘರೇ ಭೋಗ ಸೋಡೂ| ನಕಾ ಕಷ್ಟವೂ ಪರ್ವತಾಗ್ರೀ ತನೂಲಾ |ಮುಖಿ... || ೪ || ವಧೂ ಗೌತಮಾಚಿ ಪತೀಶಾಪಡೋಹಿ! ಬುಡಾಲೀ ಅಥಾಂಬಿ ಶಿಲಾರೂಪ ಹೋಯಿ| ಪದೀ ಉದ್ಧರೀ ಜೋ ವಿರಂಚ್ಯಾತ್ಮ ಜೇಲಾ| ಮುಖಿ.... || ೫ || ರಘನಾಥಕಾಜೀ ಝಿಜೇ ದೇಹ ಜ್ಯಾಚಾ। ನ ತ್ಯಾ ಪ್ರಾಪ್ತ ಬೋಲೋ ಶಕೇ ವೇದವಾಚಾ| ಜಟಾಯೂ ವಿಮಾನೀ ಸುಖೀ ಬೈಸವೀಲಾ| ಮುಖ್ಹೀ.. || ೬ || ಫಳೇ ಭಿಲ್ಲಿಣೀ ವೇಚಿತಾ ಗಾತ ಓವೀ| ಜಿಛೇ ಗೋಡ ತೀ ರಾಘವಾಲಾಗಿ ಠೇವೀ| ತಿಚ್ಯಾ ಆವಡೀ ಭಕ್ತಿಲಾಗಿ ಭುಕಲಾಗಿ| ಮುಖೀ.. ||೭|| ಪ್ರತಾಪೇ ಬಳೇ ನಾಮ ತಾರೀ ಶಿಲೇತೇ| ರಣೀ ಭೀಡತಾ ಶ್ರೇಯ ಗೋಲಾಂಗುಲಾತೇ| ನಸೇ {{center|೧೬೩}}<noinclude></noinclude> 4bcydz1i5nrbxgboesfna2zbves7obb 322829 322824 2026-05-27T01:16:56Z Shreelatha.Halemane 7642 /* Validated */ 322829 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಕರುಣಾಷ್ಟಕಗಳು}} {{center|ಮಂಗಳವಾರ}} {{center|(೨)}} ವೃಥಾ ಹಿಂಪುಟೀ ಕಾಸಯಾಲಾಗಿ ಹೋತಾ| ಗೃಹೀ ಆಯತಾ ಮೋಕ್ಷಲಾಭೇ ಸ್ವಹಸ್ತಾ| ವದೇ ಏಕ ಸಾಂಗೋ ತಶಾ ಸಾಧನಾಲಾ| ಮುಖೀ ರಾಮಚಂದ್ರ ಸ್ಮರಾ ವೇಳೋವೇಳಾ || ೧ || ಸ್ನುಷಾ ಪಾಂಡುಚೀ ಬ್ರೌಪದೀ ರಾಜಕನ್ಯಾ| ಮುಖೀ ಕೃಷ್ಣನಾಮೇ ಸ್ಮರೇ ಲೋಕಮಾನ್ಯಾ |ಸಭೇಮಾಜಿ ವಸ್ತ್ರ-ಪ್ರದಾತಾ ತಿಯೇಲಾ| ಮುಖೀ... || ೨ || ಬುಡೋ ಹೀ ಧರಾ ಕೀ ಲಯಾ ವಿಶ್ವ ಜಾವೋ|ಪಡೋ ಕಾಳಹಸ್ತ ಶಿರೀ ವಜ್ರ ಘಾವೋ| ವಿಸಂಬೇಚಿನಾ ಸರ್ವಥಾ ನಾಮಮಾಲಾ |ಮುಖೀ... || ೩ || ನಕಾ ಯಾಗ ಮಾಂಡೂ ನಕಾ ಪ್ರಾಣ ಕೋಂಡೂ| ನಕಾ ದ್ರವ್ಯದಾರಾ ಘರೇ ಭೋಗ ಸೋಡೂ| ನಕಾ ಕಷ್ಟವೂ ಪರ್ವತಾಗ್ರೀ ತನೂಲಾ |ಮುಖಿ... || ೪ || ವಧೂ ಗೌತಮಾಚಿ ಪತೀಶಾಪಡೋಹಿ! ಬುಡಾಲೀ ಅಥಾಂಬಿ ಶಿಲಾರೂಪ ಹೋಯಿ| ಪದೀ ಉದ್ಧರೀ ಜೋ ವಿರಂಚ್ಯಾತ್ಮ ಜೇಲಾ| ಮುಖಿ.... || ೫ || ರಘನಾಥಕಾಜೀ ಝಿಜೇ ದೇಹ ಜ್ಯಾಚಾ। ನ ತ್ಯಾ ಪ್ರಾಪ್ತ ಬೋಲೋ ಶಕೇ ವೇದವಾಚಾ| ಜಟಾಯೂ ವಿಮಾನೀ ಸುಖೀ ಬೈಸವೀಲಾ| ಮುಖ್ಹೀ.. || ೬ || ಫಳೇ ಭಿಲ್ಲಿಣೀ ವೇಚಿತಾ ಗಾತ ಓವೀ| ಜಿಛೇ ಗೋಡ ತೀ ರಾಘವಾಲಾಗಿ ಠೇವೀ| ತಿಚ್ಯಾ ಆವಡೀ ಭಕ್ತಿಲಾಗಿ ಭುಕಲಾಗಿ| ಮುಖೀ.. ||೭|| ಪ್ರತಾಪೇ ಬಳೇ ನಾಮ ತಾರೀ ಶಿಲೇತೇ| ರಣೀ ಭೀಡತಾ ಶ್ರೇಯ ಗೋಲಾಂಗುಲಾತೇ| ನಸೇ {{center|೧೬೩}}<noinclude></noinclude> 218ua3go4odegdmvwhfyl99rsqek0bl ಪುಟ:ನಿತ್ಯ ನೇಮಾವಲಿ.pdf/೧೬೫ 104 102041 322830 284414 2026-05-27T01:18:39Z Shreesha Sharma 7840 /* Proofread */ 322830 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ತಾಪ ತ್ಯಾಲಾ ರುಚಿ ನಾಮ ಜ್ವಾಲಾ| ಮುಖ್ಹೀ.... || ೮ || ಆಶಾ ನಿಶ್ಚಯೇ ವಾಮನೇ ಯಾ ಮನಾಲಾ। ಸುಖಪ್ರಾಪ್ತಿಲಾಗೀ ಅಸಾ ಬೋಧ ಕೇಲಾ| ಮಣೋನಿ ತುಮ್ಹಾ ಪ್ರಾರ್ಥಿತೋ ಭಾವಿಕಾಲಾ ಮುಖೀ... || ೯ || '''ಭಾವಾರ್ಥ''': ವ್ಯರ್ಥವಾಗಿ ಏಕೆ ಕಷ್ಟಪಡುತ್ತೀರಿ? ಮನೆಯಲ್ಲಿದ್ದುಕೊಂಡೇ ಮೋಕ್ಷಪ್ರಾಪ್ತಿಯಾಗುವ ಒಂದು ಸಾಧನವನ್ನು ಹೇಳುತ್ತೇನೆ. ಅದೇನೆಂದರೆ ಮೇಲಿಂದ ಮೇಲೆ ರಾಮಸ್ಮರಣೆ ಮಾಡಿರಿ. ಪಾಂಡವರ ಸೊಸೆ ದ್ರೌಪದಿ ತುಂಬಿದ ಸಭೆಯಲ್ಲಿ ಕೃಷ್ಣನನ್ನು ಪ್ರಾರ್ಥಿಸಿದಾಗ ವಸ್ತ್ರವನ್ನು ಅವನು ದಯಪಾಲಿಸಿದನು. ನಾಮಸ್ಮರಣೆ ಮಾಡಿರಿ, ಭೂಮಿಯು ಮುಳುಗಿ ವಿಶ್ವ ಪ್ರಳಯವಾದರೂ ಚಿಂತೆ ಇಲ್ಲ. ಯಮದೂತರು ಎಳೆದೊಯ್ಯುವಾಗಲೂ ತಲೆಯ ಮೇಲೆ ವಾಘಾತವಾಗುವಾಗಲೂ ನಾಮಸ್ಮರಣೆ ಮರೆಯಬೇಡಿರಿ. ಯಾಗ ಬೇಡ, ವಾಯು ಬಂಧನ ಬೇಡ; ಹೆಂಡತಿ, ದ್ರವ್ಯ, ಮನೆಯ ಸುಖವನ್ನು ಬಿಡಬೇಡಿರಿ. ಅಡವಿಗೆ ಹೋಗಿ ಕಷ್ಟಪಡಬೇಡಿರಿ. ನಾಮಸ್ಮರಣೆ ಮೇಲಿಂದಮೇಲೆ ಮಾಡಿರಿ. ಪತಿಯ ಶಾಪದಿಂದ ಶಿಲೆಯಾದ ಅಹಲೈಯನ್ನು ತನ್ನ ಪಾದಸ್ಪರ್ಶದಿಂದ ಉದ್ಧರಿಸಿದ ಶ್ರೀರಾಮನ ನಾಮ ತೆಗೆದುಕೊಳ್ಳಿರಿ. ರಾಮನ ಕಾರ್ಯಕ್ಕಾಗಿ ತನ್ನ ದೇಹವನ್ನೇ ಅರ್ಪಿಸಿದ ಹಾಗೂ ವೇದಗಳನ್ನು ಅರಿಯದ ಜಟಾಯುವಿಗೆ ವಿಮಾನದಲ್ಲಿ ಕೂಡಿಸಿ ನಿಜಧಾಮಕ್ಕೆ ಕಳಿಸಿದ ಶ್ರೀರಾಮನನ್ನು ನೆನೆಯಿರಿ, ರಾಮನಾಮ ಹಾಡುತ್ತ, ಹಣ್ಣು ಕಚ್ಚಿ ಕಚ್ಚಿ ನೋಡಿ ಸಿಹಿ ಹಣ್ಣುಗಳನ್ನು ತಿನ್ನಲಿಕ್ಕೆ ಕೊಟ್ಟ, ಶಬರಿಯ ಭಕ್ತಿಗೆ ಮಾರುಹೋದ {{center|೧೬೪}}<noinclude></noinclude> eigv704acxfwyixv6ocpg2dedsm5sey 322837 322830 2026-05-27T01:39:10Z Shreelatha.Halemane 7642 /* Validated */ 322837 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ತಾಪ ತ್ಯಾಲಾ ರುಚಿ ನಾಮ ಜ್ವಾಲಾ| ಮುಖ್ಹೀ.... || ೮ || ಆಶಾ ನಿಶ್ಚಯೇ ವಾಮನೇ ಯಾ ಮನಾಲಾ। ಸುಖಪ್ರಾಪ್ತಿಲಾಗೀ ಅಸಾ ಬೋಧ ಕೇಲಾ| ಮಣೋನಿ ತುಮ್ಹಾ ಪ್ರಾರ್ಥಿತೋ ಭಾವಿಕಾಲಾ ಮುಖೀ... || ೯ || '''ಭಾವಾರ್ಥ''': ವ್ಯರ್ಥವಾಗಿ ಏಕೆ ಕಷ್ಟಪಡುತ್ತೀರಿ? ಮನೆಯಲ್ಲಿದ್ದುಕೊಂಡೇ ಮೋಕ್ಷಪ್ರಾಪ್ತಿಯಾಗುವ ಒಂದು ಸಾಧನವನ್ನು ಹೇಳುತ್ತೇನೆ. ಅದೇನೆಂದರೆ ಮೇಲಿಂದ ಮೇಲೆ ರಾಮಸ್ಮರಣೆ ಮಾಡಿರಿ. ಪಾಂಡವರ ಸೊಸೆ ದ್ರೌಪದಿ ತುಂಬಿದ ಸಭೆಯಲ್ಲಿ ಕೃಷ್ಣನನ್ನು ಪ್ರಾರ್ಥಿಸಿದಾಗ ವಸ್ತ್ರವನ್ನು ಅವನು ದಯಪಾಲಿಸಿದನು. ನಾಮಸ್ಮರಣೆ ಮಾಡಿರಿ, ಭೂಮಿಯು ಮುಳುಗಿ ವಿಶ್ವ ಪ್ರಳಯವಾದರೂ ಚಿಂತೆ ಇಲ್ಲ. ಯಮದೂತರು ಎಳೆದೊಯ್ಯುವಾಗಲೂ ತಲೆಯ ಮೇಲೆ ವಾಘಾತವಾಗುವಾಗಲೂ ನಾಮಸ್ಮರಣೆ ಮರೆಯಬೇಡಿರಿ. ಯಾಗ ಬೇಡ, ವಾಯು ಬಂಧನ ಬೇಡ; ಹೆಂಡತಿ, ದ್ರವ್ಯ, ಮನೆಯ ಸುಖವನ್ನು ಬಿಡಬೇಡಿರಿ. ಅಡವಿಗೆ ಹೋಗಿ ಕಷ್ಟಪಡಬೇಡಿರಿ. ನಾಮಸ್ಮರಣೆ ಮೇಲಿಂದಮೇಲೆ ಮಾಡಿರಿ. ಪತಿಯ ಶಾಪದಿಂದ ಶಿಲೆಯಾದ ಅಹಲೈಯನ್ನು ತನ್ನ ಪಾದಸ್ಪರ್ಶದಿಂದ ಉದ್ಧರಿಸಿದ ಶ್ರೀರಾಮನ ನಾಮ ತೆಗೆದುಕೊಳ್ಳಿರಿ. ರಾಮನ ಕಾರ್ಯಕ್ಕಾಗಿ ತನ್ನ ದೇಹವನ್ನೇ ಅರ್ಪಿಸಿದ ಹಾಗೂ ವೇದಗಳನ್ನು ಅರಿಯದ ಜಟಾಯುವಿಗೆ ವಿಮಾನದಲ್ಲಿ ಕೂಡಿಸಿ ನಿಜಧಾಮಕ್ಕೆ ಕಳಿಸಿದ ಶ್ರೀರಾಮನನ್ನು ನೆನೆಯಿರಿ, ರಾಮನಾಮ ಹಾಡುತ್ತ, ಹಣ್ಣು ಕಚ್ಚಿ ಕಚ್ಚಿ ನೋಡಿ ಸಿಹಿ ಹಣ್ಣುಗಳನ್ನು ತಿನ್ನಲಿಕ್ಕೆ ಕೊಟ್ಟ, ಶಬರಿಯ ಭಕ್ತಿಗೆ ಮಾರುಹೋದ {{center|೧೬೪}}<noinclude></noinclude> l6fpe2ud0ojfpnhng1ov7m8zxspvpmi ಪುಟ:ನಿತ್ಯ ನೇಮಾವಲಿ.pdf/೧೬೬ 104 102043 322831 284416 2026-05-27T01:22:00Z Shreesha Sharma 7840 /* Proofread */ 322831 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಕರುಣಾಷ್ಟಕಗಳು}} ಶ್ರೀರಾಮನ ಸ್ಮರಣೆ ಬಿಡಬೇಡಿರಿ. ನಾಮದ ಪ್ರಭಾವದಿಂದ ಕಲ್ಲುಗಳೂ ಸಮುದ್ರದಲ್ಲಿ ತೇಲಿದವು. ಶ್ರೀರಾಮನು ತಾನೇ ಯುದ್ಧದಲ್ಲಿ ಗೆದ್ದರೂ ಶ್ರೇಯವನ್ನೆಲ್ಲ ವಾನರರಿಗೆ ಕೊಟ್ಟನು. ನಾಮದ ರುಚಿಯನ್ನು ಸವಿದವರಿಗೆ ಭವದ ತಾಪವಿಲ್ಲ. ಮನಸ್ಸಿನಿಂದ ನಿಶ್ಚಯಿಸಿ ನಿಜಸುಖಪ್ರಾಪ್ತಿಗೋಸ್ಕರ ನಾಮಸ್ಮರಣೆಮಾಡಿರೆಂದು ಎಲ್ಲ ಭಾವಿಕರಿಗೆ ವಾಮನಕವಿಯು ಪ್ರಾರ್ಥಿಸುತ್ತಾನೆ. {{center|ಬುಧವಾರ}} ಯುಕ್ತಿನಾಹೀ ಬುದ್ಧಿ ನಾಹೀ ವಿದ್ಯಾ ನಾಹೀ ವಿವಂಚಿತಾ |ನೇಣತಾ ಭಕ್ತ ಮೀ ತೂಝಾ |ಬುದ್ದಿದೇಂ ರಘುನಾಯಕಾ || ೧ || ಮನ ಹೇ ಆವರೇನಾ ಕೀ ವಾಸನಾ ವಾವರೇ ಸದಾ |ಕಲ್ಪನಾ ಧಾವತೇ ಸೈರಾ ಬುದ್ಧಿ ದೇ.... || ೨ || ಅನ್ನ ನಾಹೀ ವಸ್ತ್ರನಾಹೀ ಸೌಖ್ಯ ನಾಹೀ ಜನಾಮಧೇ। ಆಶ್ರಯೋ ಪಾಹತಾ ನಾಹೀ ಬುದ್ಧಿ ದೇ... || ೩ || ಬೋಲತಾ ಜಾಲತಾ ಏನಾ ಕಾರ್ಯಭಾಗ ಕಳೇಚಿನಾ |ಬಹೂತ ಪೀಡಲೋ ಲೋಕೀ ಬುದ್ಧಿದೇ.... || ೪ || ತುಝಾ ಮೀ ಟೊಣಪಾ ಝಾಲೋ| ಕಷ್ಟಲೋ ಬಹುತಾ ಪರೀ| ಸೌಖ್ಯ ತೋ ಪಾಹತಾ ನಾಹೀ ಬುದ್ಧಿದೇ.... || ೫ || ನೇಟಕೇ ಲಿಹಿತಾ ಯೇನಾ ವಾಚಿತಾ ಚುಕತೋ ಸದಾ|ಅರ್ಥ ತೋ ಸಾಂಗತಾ ಯೇನಾ ಬುದ್ಧಿದೇ.... || ೬ || ಪ್ರಸಂಗ ವೇಳ ತರ್ಕನಾ ಸುಚೇನಾ ದೀರ್ಘ ಸೂಚನಾ ಮೈತ್ರಿಕೀ ರಾಖಿತಾ {{center|೧೬೫}}<noinclude></noinclude> b89je6hrytiodv8ulgpgekvthbmewe6 322838 322831 2026-05-27T01:39:19Z Shreelatha.Halemane 7642 /* Validated */ 322838 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಕರುಣಾಷ್ಟಕಗಳು}} ಶ್ರೀರಾಮನ ಸ್ಮರಣೆ ಬಿಡಬೇಡಿರಿ. ನಾಮದ ಪ್ರಭಾವದಿಂದ ಕಲ್ಲುಗಳೂ ಸಮುದ್ರದಲ್ಲಿ ತೇಲಿದವು. ಶ್ರೀರಾಮನು ತಾನೇ ಯುದ್ಧದಲ್ಲಿ ಗೆದ್ದರೂ ಶ್ರೇಯವನ್ನೆಲ್ಲ ವಾನರರಿಗೆ ಕೊಟ್ಟನು. ನಾಮದ ರುಚಿಯನ್ನು ಸವಿದವರಿಗೆ ಭವದ ತಾಪವಿಲ್ಲ. ಮನಸ್ಸಿನಿಂದ ನಿಶ್ಚಯಿಸಿ ನಿಜಸುಖಪ್ರಾಪ್ತಿಗೋಸ್ಕರ ನಾಮಸ್ಮರಣೆಮಾಡಿರೆಂದು ಎಲ್ಲ ಭಾವಿಕರಿಗೆ ವಾಮನಕವಿಯು ಪ್ರಾರ್ಥಿಸುತ್ತಾನೆ. {{center|ಬುಧವಾರ}} ಯುಕ್ತಿನಾಹೀ ಬುದ್ಧಿ ನಾಹೀ ವಿದ್ಯಾ ನಾಹೀ ವಿವಂಚಿತಾ |ನೇಣತಾ ಭಕ್ತ ಮೀ ತೂಝಾ |ಬುದ್ದಿದೇಂ ರಘುನಾಯಕಾ || ೧ || ಮನ ಹೇ ಆವರೇನಾ ಕೀ ವಾಸನಾ ವಾವರೇ ಸದಾ |ಕಲ್ಪನಾ ಧಾವತೇ ಸೈರಾ ಬುದ್ಧಿ ದೇ.... || ೨ || ಅನ್ನ ನಾಹೀ ವಸ್ತ್ರನಾಹೀ ಸೌಖ್ಯ ನಾಹೀ ಜನಾಮಧೇ। ಆಶ್ರಯೋ ಪಾಹತಾ ನಾಹೀ ಬುದ್ಧಿ ದೇ... || ೩ || ಬೋಲತಾ ಜಾಲತಾ ಏನಾ ಕಾರ್ಯಭಾಗ ಕಳೇಚಿನಾ |ಬಹೂತ ಪೀಡಲೋ ಲೋಕೀ ಬುದ್ಧಿದೇ.... || ೪ || ತುಝಾ ಮೀ ಟೊಣಪಾ ಝಾಲೋ| ಕಷ್ಟಲೋ ಬಹುತಾ ಪರೀ| ಸೌಖ್ಯ ತೋ ಪಾಹತಾ ನಾಹೀ ಬುದ್ಧಿದೇ.... || ೫ || ನೇಟಕೇ ಲಿಹಿತಾ ಯೇನಾ ವಾಚಿತಾ ಚುಕತೋ ಸದಾ|ಅರ್ಥ ತೋ ಸಾಂಗತಾ ಯೇನಾ ಬುದ್ಧಿದೇ.... || ೬ || ಪ್ರಸಂಗ ವೇಳ ತರ್ಕನಾ ಸುಚೇನಾ ದೀರ್ಘ ಸೂಚನಾ ಮೈತ್ರಿಕೀ ರಾಖಿತಾ {{center|೧೬೫}}<noinclude></noinclude> p511pbbqd9mgk7q48zqcuqcov7xakrq ಪುಟ:ನಿತ್ಯ ನೇಮಾವಲಿ.pdf/೧೬೭ 104 102045 322833 284418 2026-05-27T01:27:12Z Shreesha Sharma 7840 /* Proofread */ 322833 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಯೇನಾ ಬುದ್ಧಿದೇ.... || ೭ || ಸಂಸಾರೀ ಶ್ಲಾಘತಾ ನಾಹೀ ಸರ್ವಹೀ ಲೋಕ ಹಾಸತೀ |ವಿಸರೂ ಪಡತೋ ಪೋಟೀ ಬುದ್ಧಿದೇ.... || ೮ || ಚಿತ್ತ ದುಶ್ಚಿತ್ತ ಹೋತೇ ಹೇ ತಾಳತಂತ್ರ ಕಳೇಚಿನಾ| ಆಳಸೂ ಲಾಗಲಾ ಪಾಠೀ ಬುದ್ದಿದೇ... || ೯ || ಕಳೇನಾ ಸ್ಫೂರ್ತಿ ಹೋಯೀನಾ ಅಪದಾ ಲಾಗಲೀ ಬಹೂ| ಪ್ರತ್ಯಹೀ ಪೋಟ ಸೋಡೀನಾ ಬುದ್ಧಿ ದೇ.... || ೧೦ || ಸಂಸಾರ ನೇಟಕಾ ನಾಹೀ ಉದ್ವೇಗ ವಾಟತೋ ಜಿವೀ| ಪರಮಾರ್ಥ ಆಕಳೇನಾ ಕೀ ಬುದ್ಧಿದೇ.... || ೧೧ || ದೇಯೀನಾ ಪುರ್ವಿನಾ ಕೋಣ್ಹೀ ಉಗೇಚೀ ಜನ ಹಾಸತೀ| ಲೌಕಿಕ ರಾಖತಾ ಯೇನಾ ಬುದ್ಧಿ ದೇ.... || ೧೨ || ಪಿಸುಣೇ ವಾಟತೀ ಸರ್ವೇ ಕೋಣೀಹೀ ಮಜಲಾ ನಸೇ। ಸಮರ್ಥಾ ತೂ ದಯಾಸಿಂಧೂ ಬುದ್ಧಿದೇ... || ೧೩ || ಉದಾಸ ವಾಟತೇ ಜೀವೀ ಆತಾ ಜಾವೇ ಕುಣೀಕಡೇ| ತೂ ಭಕ್ತವತ್ಸಲಾ ರಾಮಾ ಬುದ್ಧಿದೇ || ೧೪ || ಕಾಯಾವಾಚಾ ಮನೋಭಾವೇ ತುಝಾ ಮೀ ಮ್ಹಣವೀತಸೇ| ಹೇ ಲಾಜ ತುಜಲಾ ಮಾಝೀ ಬುದ್ಧಿದೇ.... ೧೫ || ಸೋಡವಿಲ್ಯಾ ದೇವಕೋಟೀ ಭೂಭಾರ ಫೇಡಿಲಾ ಬಳೇ। ಭಕ್ತಾಸೀ ಆಶ್ರಯೋ ಮೋಠಾ ಬುದ್ಧಿದೇ... || ೧೬ || ಉದಂಡ ಭಕ್ತ ತುಮ್ಹಾಲಾ ಆಮ್ಹಾಲಾ ಕೋಣ ಪೂಸತೇ| ಬ್ರೀದ ಹೇ ರಾಖಣೇ ಆಧೀ ಬುದ್ಧಿದೇ.... || ೧೭ || ಉದಂಡ ಐಕಿಲಿ ಕೀರ್ತಿ ಪತಿತಪಾವನಾ ಪ್ರಭು|ಮೀ ಏಕ ರಂಕ ದುರ್ಬುದ್ಧಿಬುದ್ಧಿ ದೇ... || ೧೮ ||ಆಶಾ ಹೇಲಾಗಲೀ ಮೋಠಿ ದಯಾಳೂ {{center|೧೬೬}}<noinclude></noinclude> tjw4nkogxk1m2fzqxzgizhh6afg2l5x 322839 322833 2026-05-27T01:39:33Z Shreelatha.Halemane 7642 /* Validated */ 322839 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಯೇನಾ ಬುದ್ಧಿದೇ.... || ೭ || ಸಂಸಾರೀ ಶ್ಲಾಘತಾ ನಾಹೀ ಸರ್ವಹೀ ಲೋಕ ಹಾಸತೀ |ವಿಸರೂ ಪಡತೋ ಪೋಟೀ ಬುದ್ಧಿದೇ.... || ೮ || ಚಿತ್ತ ದುಶ್ಚಿತ್ತ ಹೋತೇ ಹೇ ತಾಳತಂತ್ರ ಕಳೇಚಿನಾ| ಆಳಸೂ ಲಾಗಲಾ ಪಾಠೀ ಬುದ್ದಿದೇ... || ೯ || ಕಳೇನಾ ಸ್ಫೂರ್ತಿ ಹೋಯೀನಾ ಅಪದಾ ಲಾಗಲೀ ಬಹೂ| ಪ್ರತ್ಯಹೀ ಪೋಟ ಸೋಡೀನಾ ಬುದ್ಧಿ ದೇ.... || ೧೦ || ಸಂಸಾರ ನೇಟಕಾ ನಾಹೀ ಉದ್ವೇಗ ವಾಟತೋ ಜಿವೀ| ಪರಮಾರ್ಥ ಆಕಳೇನಾ ಕೀ ಬುದ್ಧಿದೇ.... || ೧೧ || ದೇಯೀನಾ ಪುರ್ವಿನಾ ಕೋಣ್ಹೀ ಉಗೇಚೀ ಜನ ಹಾಸತೀ| ಲೌಕಿಕ ರಾಖತಾ ಯೇನಾ ಬುದ್ಧಿ ದೇ.... || ೧೨ || ಪಿಸುಣೇ ವಾಟತೀ ಸರ್ವೇ ಕೋಣೀಹೀ ಮಜಲಾ ನಸೇ। ಸಮರ್ಥಾ ತೂ ದಯಾಸಿಂಧೂ ಬುದ್ಧಿದೇ... || ೧೩ || ಉದಾಸ ವಾಟತೇ ಜೀವೀ ಆತಾ ಜಾವೇ ಕುಣೀಕಡೇ| ತೂ ಭಕ್ತವತ್ಸಲಾ ರಾಮಾ ಬುದ್ಧಿದೇ || ೧೪ || ಕಾಯಾವಾಚಾ ಮನೋಭಾವೇ ತುಝಾ ಮೀ ಮ್ಹಣವೀತಸೇ| ಹೇ ಲಾಜ ತುಜಲಾ ಮಾಝೀ ಬುದ್ಧಿದೇ.... ೧೫ || ಸೋಡವಿಲ್ಯಾ ದೇವಕೋಟೀ ಭೂಭಾರ ಫೇಡಿಲಾ ಬಳೇ। ಭಕ್ತಾಸೀ ಆಶ್ರಯೋ ಮೋಠಾ ಬುದ್ಧಿದೇ... || ೧೬ || ಉದಂಡ ಭಕ್ತ ತುಮ್ಹಾಲಾ ಆಮ್ಹಾಲಾ ಕೋಣ ಪೂಸತೇ| ಬ್ರೀದ ಹೇ ರಾಖಣೇ ಆಧೀ ಬುದ್ಧಿದೇ.... || ೧೭ || ಉದಂಡ ಐಕಿಲಿ ಕೀರ್ತಿ ಪತಿತಪಾವನಾ ಪ್ರಭು|ಮೀ ಏಕ ರಂಕ ದುರ್ಬುದ್ಧಿಬುದ್ಧಿ ದೇ... || ೧೮ ||ಆಶಾ ಹೇಲಾಗಲೀ ಮೋಠಿ ದಯಾಳೂ {{center|೧೬೬}}<noinclude></noinclude> 1ovgjkcj6oiesh5bfyl0mp5vtu6ko9c ಪುಟ:ನಿತ್ಯ ನೇಮಾವಲಿ.pdf/೧೬೮ 104 102047 322832 284420 2026-05-27T01:23:33Z Shreesha Sharma 7840 /* Proofread */ 322832 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಕರುಣಾಷ್ಟಕಗಳು}} ಬಾ ಕೃಪಾ ಕರೀ | ಆಣಿಕ ನಲಗೆ ಕಾಹೀ ಬುದ್ಧಿದೇ.... || ೧೯ ||ರಾಮದಾಸ ಮಣೇ ಮಾಝಾ ಸಂಸಾರ ತುಜ ಲಾಗಲಾ| ಸಂಶಯೋ ವಾಟತೋ ಪೋಟೀ ಬುದ್ಧಿದ ದೇ || ೨೦ ||ಜಯ ಜಯ ರಘುವೀರ ಸಮರ್ಥ|| '''ಭಾವಾರ್ಥ''': ರಘನಾಯಕಾ, ನಾನು ಯುಕ್ತಿಯನ್ನರಿಯೆ, ಬುದ್ಧಿಯನ್ನರಿಯೆ, ವಿದ್ಯೆಯನ್ನರಿಯೆ, ಇಂಥ ಅಜ್ಞಾನಿ ಭಕ್ತ ನಾನು. ನನಗೆ (ಈಶ್ವರ ಪ್ರಾಪ್ತಿಯ) ಬುದ್ದಿ ಕೊಡು. ಮನಸ್ಸು ವಶದಲ್ಲಿರಲಾರದು, ದುಷ್ಟವಾಸನೆಗಳು ಹೋಗಲಾರವು, ಸ್ವಚ್ಛಂದವೃತ್ತಿಯಿಂದ ವಿಷಯ ಕಲ್ಪನೆಗಳ ಕಡೆಗೆ ಮನಸ್ಸು ಓಡುತ್ತದೆ. ನನಗೆ ಅನ್ನವಿಲ್ಲ, ವಸ್ತ್ರವಿಲ್ಲ, ಸೌಖ್ಯವಿಲ್ಲ. ಆಪತ್ತು ಬಂದಾಗ ಯಾರ ಆಶ್ರಯವೂ ಇಲ್ಲ, ಮಾತು ಬರುವುದಿಲ್ಲ. ನಡೆಯಲು ಬರದು. ಕಾರ್ಯಪ್ರವೃತ್ತಿ ತಿಳಿಯುವುದಿಲ್ಲ, ಸಂಸಾರದಲ್ಲಿ ಬಹಳ ಕಷ್ಟಪಟ್ಟಿದ್ದೇನೆ. ಆಲಸ್ಯದಿಂದ ಮುಗ್ದಾಳುವಿನಂತೆ ಅಡ್ಡಾಡಿ ಕಷ್ಟಪಟ್ಟಿದ್ದೇನೆ. ಸುಖವು ಕಾಣಲಾರದು. ಸರಿಯಾಗಿ ಓದಲಾರ, ಬರೆಯಲಾರ, ಅರ್ಥ ತಿಳಿಯುವದಂತೂ ದೂರದ ಮಾತು. ಹೊತ್ತು-ಪ್ರಸಂಗವನ್ನು ತಿಳಿಯಲಾರೆ. ದೂರದೃಷ್ಟಿಯ ಸೂಚನೆ ಕೂಡ ಇಲ್ಲ. ಮಿತ್ರತ್ವ ಕಾಪಾಡಿಕೊಳ್ಳುವ ಸಾಮರ್ಥ್ಯವೂ ಇಲ್ಲ. ಸಂಸಾರದಲ್ಲಿ ಹೊಗಳಿಕೆಯ ಬದಲು ಎಲ್ಲರೂ ನನ್ನನ್ನು ಪರಿಹಾಸ ಮಾಡುತ್ತಾರೆ. ಅಂತಃಕರಣದಲ್ಲಿ ವಿಸ್ಮರಣೆಯಾಗುತ್ತದೆ. ಚಿತ್ತವು ದುಷ್ಟವಾಸನೆಯಿಂದ ಕೂಡಿದೆ. ಅದನ್ನು ನಿವಾರಿಸುವ ಬಗೆ ತಿಳಿಯಲಾರೆ. ಅಲಸ್ಯ ಬೆನ್ನು ಹತ್ತಿದೆ. {{center|೧೬೭}}<noinclude></noinclude> na45m36fqlwca9a3gz4holguxtdvoxm 322840 322832 2026-05-27T01:39:43Z Shreelatha.Halemane 7642 /* Validated */ 322840 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಕರುಣಾಷ್ಟಕಗಳು}} ಬಾ ಕೃಪಾ ಕರೀ | ಆಣಿಕ ನಲಗೆ ಕಾಹೀ ಬುದ್ಧಿದೇ.... || ೧೯ ||ರಾಮದಾಸ ಮಣೇ ಮಾಝಾ ಸಂಸಾರ ತುಜ ಲಾಗಲಾ| ಸಂಶಯೋ ವಾಟತೋ ಪೋಟೀ ಬುದ್ಧಿದ ದೇ || ೨೦ ||ಜಯ ಜಯ ರಘುವೀರ ಸಮರ್ಥ|| '''ಭಾವಾರ್ಥ''': ರಘನಾಯಕಾ, ನಾನು ಯುಕ್ತಿಯನ್ನರಿಯೆ, ಬುದ್ಧಿಯನ್ನರಿಯೆ, ವಿದ್ಯೆಯನ್ನರಿಯೆ, ಇಂಥ ಅಜ್ಞಾನಿ ಭಕ್ತ ನಾನು. ನನಗೆ (ಈಶ್ವರ ಪ್ರಾಪ್ತಿಯ) ಬುದ್ದಿ ಕೊಡು. ಮನಸ್ಸು ವಶದಲ್ಲಿರಲಾರದು, ದುಷ್ಟವಾಸನೆಗಳು ಹೋಗಲಾರವು, ಸ್ವಚ್ಛಂದವೃತ್ತಿಯಿಂದ ವಿಷಯ ಕಲ್ಪನೆಗಳ ಕಡೆಗೆ ಮನಸ್ಸು ಓಡುತ್ತದೆ. ನನಗೆ ಅನ್ನವಿಲ್ಲ, ವಸ್ತ್ರವಿಲ್ಲ, ಸೌಖ್ಯವಿಲ್ಲ. ಆಪತ್ತು ಬಂದಾಗ ಯಾರ ಆಶ್ರಯವೂ ಇಲ್ಲ, ಮಾತು ಬರುವುದಿಲ್ಲ. ನಡೆಯಲು ಬರದು. ಕಾರ್ಯಪ್ರವೃತ್ತಿ ತಿಳಿಯುವುದಿಲ್ಲ, ಸಂಸಾರದಲ್ಲಿ ಬಹಳ ಕಷ್ಟಪಟ್ಟಿದ್ದೇನೆ. ಆಲಸ್ಯದಿಂದ ಮುಗ್ದಾಳುವಿನಂತೆ ಅಡ್ಡಾಡಿ ಕಷ್ಟಪಟ್ಟಿದ್ದೇನೆ. ಸುಖವು ಕಾಣಲಾರದು. ಸರಿಯಾಗಿ ಓದಲಾರ, ಬರೆಯಲಾರ, ಅರ್ಥ ತಿಳಿಯುವದಂತೂ ದೂರದ ಮಾತು. ಹೊತ್ತು-ಪ್ರಸಂಗವನ್ನು ತಿಳಿಯಲಾರೆ. ದೂರದೃಷ್ಟಿಯ ಸೂಚನೆ ಕೂಡ ಇಲ್ಲ. ಮಿತ್ರತ್ವ ಕಾಪಾಡಿಕೊಳ್ಳುವ ಸಾಮರ್ಥ್ಯವೂ ಇಲ್ಲ. ಸಂಸಾರದಲ್ಲಿ ಹೊಗಳಿಕೆಯ ಬದಲು ಎಲ್ಲರೂ ನನ್ನನ್ನು ಪರಿಹಾಸ ಮಾಡುತ್ತಾರೆ. ಅಂತಃಕರಣದಲ್ಲಿ ವಿಸ್ಮರಣೆಯಾಗುತ್ತದೆ. ಚಿತ್ತವು ದುಷ್ಟವಾಸನೆಯಿಂದ ಕೂಡಿದೆ. ಅದನ್ನು ನಿವಾರಿಸುವ ಬಗೆ ತಿಳಿಯಲಾರೆ. ಅಲಸ್ಯ ಬೆನ್ನು ಹತ್ತಿದೆ. {{center|೧೬೭}}<noinclude></noinclude> 8fsgt15d1ys576urvwu81e0fpi9d3i2 ಪುಟ:ನಿತ್ಯ ನೇಮಾವಲಿ.pdf/೧೬೯ 104 102049 322834 284422 2026-05-27T01:28:13Z Shreesha Sharma 7840 /* Proofread */ 322834 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ದೇವಾ, ಯಾವುದೂ ತಿಳಿಯಲೊಲ್ಲದು. ಸ್ಫೂರ್ತಿ ಇಲ್ಲ. ಸಂಕಟಗಳು ಬೆನ್ನಟ್ಟಿವೆ. ಹೊಟ್ಟೆಯ ಹಸಿವು ಅಹರ್ನಿಶಿ ಕಾಡುತ್ತದೆ. ಸಂಸಾರವು ಸಮಾಧಾನಕರವಿಲ್ಲ. ಉದ್ವೇಗ ಹೆಚ್ಚಾಗಿದೆ. ಪರಮಾರ್ಥದ ಬುದ್ದಿ ಹುಟ್ಟಲೊಲ್ಲದು. ಯಾರೂ ಏನನ್ನೂ ಕೊಡುವುದಿಲ್ಲ. ಸುಮ್ಮನೆ ನೋಡಿ ನಗುತ್ತಾರೆ. ಹೀಗಾಗಿ ಲೌಕಿಕದಲ್ಲಿ ಇರುವುದೂ ಕಷ್ಟವಾಗಿದೆ. ಎಲ್ಲರೂ ನನ್ನನ್ನು ಹೀಯಾಳಿಸುವವರೇ. ಸಮರ್ಥಾ, ದಯಾಸಿಂಧುವಾದ ನೀನು ನನಗೆ ಸದ್ಭುದ್ಧಿ ಕೊಡು. ಜೀವವೇ ಬೇಡ ಎಂದೆನಿಸಹತ್ತಿದೆ. ಆದರೆ ಎಲ್ಲಿ ಹೋಗಲಿ? ರಾಮಾ ನೀನು ಭಕ್ತವತ್ಸಲನು, ಕಾಯಾ-ವಾಜಾ-ಮನಸಾ, ನಾನು ನಿನ್ನವನು. ನನ್ನನ್ನು ರಕ್ಷಣೆ ಮಾಡುವ ಹೊಣೆ ನಿನ್ನದು. ದೇವಾ ನೀನು ಅಸಂಖ್ಯ ದೇವತೆಗಳನ್ನು ಮುಕ್ತಮಾಡಿ, ಭೂ-ಭಾರವನ್ನು ಇಳಿಸಿದೆ. ಭಕ್ತರಿಗೆ ಆಶ್ರಯದಾತನು. ಶ್ರೇಷ್ಠ ಭಕ್ತರಿರುವಾಗ ನನ್ನಂಥ ಪಾಮರನನ್ನು ಯಾರು ಕೇಳುವರು ? ನನ್ನ ಮಾನರಕ್ಷಣೆ ನಿನ್ನ ಕೆಲಸ. ನಿನ್ನ ಕೀರ್ತಿ ದಿಗಂತದವರೆಗೂ ಕೇಳುತ್ತದೆ. ನೀನು ಪತಿತಪಾವನಾ, ನಾನು ದರಿದ್ರ ಮಾನವ. ಭಗವದ್ಭಕ್ತಿಯ ಆಸೆಯು ಬಲವತ್ತರವಾಗ ಹತ್ತಿದೆ. ಪ್ರಭುವೇ, ಅನುಗ್ರಹ ಮಾಡು, ನಿನ್ನ ದರ್ಶನದ ಹೊರತು ನನಗೇನೂ ಬೇಕಾಗಿಲ್ಲ. ರಾಮದಾಸರು ಹೇಳುವಂತೆ ನನ್ನ ಸಂಸಾರದ ಚಿಂತೆ ನಿನಗೆ ಸೇರಿದೆ. ಇನ್ನೇಕೆ ವಿಳಂಬ? ಇನ್ನೂ ಏಕೆ ಸಂಶಯ ? ನನಗೆ ಬುದ್ಧಿಕೊಡು. ಜಯಜಯ ರಘುವೀರ ಸಮರ್ಥ, {{center|೧೬೮}}<noinclude></noinclude> 588cy7a9ebih6cxoaat4wkedfwyo8ho 322841 322834 2026-05-27T01:39:52Z Shreelatha.Halemane 7642 /* Validated */ 322841 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ದೇವಾ, ಯಾವುದೂ ತಿಳಿಯಲೊಲ್ಲದು. ಸ್ಫೂರ್ತಿ ಇಲ್ಲ. ಸಂಕಟಗಳು ಬೆನ್ನಟ್ಟಿವೆ. ಹೊಟ್ಟೆಯ ಹಸಿವು ಅಹರ್ನಿಶಿ ಕಾಡುತ್ತದೆ. ಸಂಸಾರವು ಸಮಾಧಾನಕರವಿಲ್ಲ. ಉದ್ವೇಗ ಹೆಚ್ಚಾಗಿದೆ. ಪರಮಾರ್ಥದ ಬುದ್ದಿ ಹುಟ್ಟಲೊಲ್ಲದು. ಯಾರೂ ಏನನ್ನೂ ಕೊಡುವುದಿಲ್ಲ. ಸುಮ್ಮನೆ ನೋಡಿ ನಗುತ್ತಾರೆ. ಹೀಗಾಗಿ ಲೌಕಿಕದಲ್ಲಿ ಇರುವುದೂ ಕಷ್ಟವಾಗಿದೆ. ಎಲ್ಲರೂ ನನ್ನನ್ನು ಹೀಯಾಳಿಸುವವರೇ. ಸಮರ್ಥಾ, ದಯಾಸಿಂಧುವಾದ ನೀನು ನನಗೆ ಸದ್ಭುದ್ಧಿ ಕೊಡು. ಜೀವವೇ ಬೇಡ ಎಂದೆನಿಸಹತ್ತಿದೆ. ಆದರೆ ಎಲ್ಲಿ ಹೋಗಲಿ? ರಾಮಾ ನೀನು ಭಕ್ತವತ್ಸಲನು, ಕಾಯಾ-ವಾಜಾ-ಮನಸಾ, ನಾನು ನಿನ್ನವನು. ನನ್ನನ್ನು ರಕ್ಷಣೆ ಮಾಡುವ ಹೊಣೆ ನಿನ್ನದು. ದೇವಾ ನೀನು ಅಸಂಖ್ಯ ದೇವತೆಗಳನ್ನು ಮುಕ್ತಮಾಡಿ, ಭೂ-ಭಾರವನ್ನು ಇಳಿಸಿದೆ. ಭಕ್ತರಿಗೆ ಆಶ್ರಯದಾತನು. ಶ್ರೇಷ್ಠ ಭಕ್ತರಿರುವಾಗ ನನ್ನಂಥ ಪಾಮರನನ್ನು ಯಾರು ಕೇಳುವರು ? ನನ್ನ ಮಾನರಕ್ಷಣೆ ನಿನ್ನ ಕೆಲಸ. ನಿನ್ನ ಕೀರ್ತಿ ದಿಗಂತದವರೆಗೂ ಕೇಳುತ್ತದೆ. ನೀನು ಪತಿತಪಾವನಾ, ನಾನು ದರಿದ್ರ ಮಾನವ. ಭಗವದ್ಭಕ್ತಿಯ ಆಸೆಯು ಬಲವತ್ತರವಾಗ ಹತ್ತಿದೆ. ಪ್ರಭುವೇ, ಅನುಗ್ರಹ ಮಾಡು, ನಿನ್ನ ದರ್ಶನದ ಹೊರತು ನನಗೇನೂ ಬೇಕಾಗಿಲ್ಲ. ರಾಮದಾಸರು ಹೇಳುವಂತೆ ನನ್ನ ಸಂಸಾರದ ಚಿಂತೆ ನಿನಗೆ ಸೇರಿದೆ. ಇನ್ನೇಕೆ ವಿಳಂಬ? ಇನ್ನೂ ಏಕೆ ಸಂಶಯ ? ನನಗೆ ಬುದ್ಧಿಕೊಡು. ಜಯಜಯ ರಘುವೀರ ಸಮರ್ಥ, {{center|೧೬೮}}<noinclude></noinclude> q0yisx2254jjwqk4mhf82djq0awlhpg ಪುಟ:ನಿತ್ಯ ನೇಮಾವಲಿ.pdf/೧೭೦ 104 102051 322835 284424 2026-05-27T01:35:42Z Shreesha Sharma 7840 /* Proofread */ 322835 proofread-page text/x-wiki <noinclude><pagequality level="3" user="Shreesha Sharma" /></noinclude>{{center|ಕರುಣಾಷ್ಟಕಗಳು}} {{center|}}ಗುರುವಾರ {{center|(೧)}} ಸದಾ ಪ್ರಾರ್ಥಿತ ಶ್ರೀಗುರೂಚ್ಯಾ ಪದಾಸೀ| ಧರೀತೋ ಶಿರೀ ವಂದಿತೋ ಆದರೇಸೀ |ಧರೂನಿ ಕರೀ ತಾರಿ ಯಾ ಬಾಲಕಾಸೀ। ನಮಸ್ಕಾರ ಹಾ ಸ್ವಾಮಿ ದತ್ತಾತ್ರೇಯಾಸೀ || ೧ || ಮತಿಹೀನ ಮೀ ದೀನ ಆಹೇ ಖರಾ ಹೋ। ಪರೀ ಮಿ ತುಝಾ ದಾಸ ಕೃಪಾ ಕರಾಹೋ| ಜಸೇ ಲೇಕರೂ ಪಾಳಿತೇ ಮಾಯ ಕೂಶೀ| ನಮಸ್ಕಾರ.. || ೨ || ಲಡೀವಾಳ ಮೀ ಬಾಳ ಅಜ್ಞಾನ ತುಝಾ| ಗುರುವಾಚುನಿ ಪಾಂಗ ಫೇಡಿಲ ಮಾಝಾ |ತುಝಾವೀಣ ದೂಜಾ ಕೋಣ ಆಹೇ ಆಮ್ಹಾಸೀ। ನಮಸ್ಕಾರ.... || ೩ || ಪಿತಾ ಮಾಯ ಬಂಧು ಸಜ್ ತೂಚಿ ದೇವಾ! ಮುಲೇ ಮಿತ್ರ ಸಾರೇ ಸೋಯರೇ ವ್ಯರ್ಥ ಹೇವಾ| ಕಳೋನಿ ಆಸೇ ಭ್ರಾಂತಿ ಹೋಯೀ ಆಮ್ಹಾಸೀ। ನಮಸ್ಕಾರ... || ೪ || ಚರಿತ್ರೆ ಗುರೂಚೀ ಕರೀ ನಿತ್ಯ ಪಾಠ ಜಯಾ ಭಕ್ತಿಲಾಗೆ ಪದೀ ಏಕನಿಷ್ಠ| ತಯಾಚೇ ಕುಳಿ ದೀಪ ಸಜ್ಞಾನರಾಶೀ| ನಮಸ್ಕಾರ.... || ೫ || ವಸೇ ಉಂಬರಾಸನ್ನಿಧ ಸರ್ವಕಾಳ| ಜನೀ ಕಾನನೀ ಫಾಲವೀ ನಿತ್ಯಕಾಳ |ತಯಾ ಸದ್ಗುರೂಚೇ ನಾಮ ಕಲ್ಯಾಣರಾಶಿ ನಮಸ್ಕಾರ.... || ೬ || ಶ್ರಮೋನೀ ಗುರೂಪಾಶೀ ತೋ ಮೇಂಛ ಆಲಾ| ತಯಾ ಸ್ಫೋಟರೋಗಾತು ಮುಕ್ತ ಕೇಲಾ| ಕೃಪೇನೇ ತಸೇ ಸ್ವಾಮಿ ಪಾಳೀ ಆಮ್ಲಾಸೀ| ನಮಸ್ಕಾರ.... || ೭ || ಸತಿ ಅನುಸೂಯಾ ಸುಧೀ ಆದಿಮಾತಾ| ತ್ರಯೀಮೂರ್ತಿ ಧ್ಯಾನೀ ಮನೀ ನಿತ್ಯ ಗಾತಾ| ಹರೇ ರೋಗ {{center|೧೬೯}}<noinclude></noinclude> dzch9yp6nb396dift6mfn06ehn8jual 322842 322835 2026-05-27T01:40:01Z Shreelatha.Halemane 7642 /* Validated */ 322842 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ಕರುಣಾಷ್ಟಕಗಳು}} {{center|}}ಗುರುವಾರ {{center|(೧)}} ಸದಾ ಪ್ರಾರ್ಥಿತ ಶ್ರೀಗುರೂಚ್ಯಾ ಪದಾಸೀ| ಧರೀತೋ ಶಿರೀ ವಂದಿತೋ ಆದರೇಸೀ |ಧರೂನಿ ಕರೀ ತಾರಿ ಯಾ ಬಾಲಕಾಸೀ। ನಮಸ್ಕಾರ ಹಾ ಸ್ವಾಮಿ ದತ್ತಾತ್ರೇಯಾಸೀ || ೧ || ಮತಿಹೀನ ಮೀ ದೀನ ಆಹೇ ಖರಾ ಹೋ। ಪರೀ ಮಿ ತುಝಾ ದಾಸ ಕೃಪಾ ಕರಾಹೋ| ಜಸೇ ಲೇಕರೂ ಪಾಳಿತೇ ಮಾಯ ಕೂಶೀ| ನಮಸ್ಕಾರ.. || ೨ || ಲಡೀವಾಳ ಮೀ ಬಾಳ ಅಜ್ಞಾನ ತುಝಾ| ಗುರುವಾಚುನಿ ಪಾಂಗ ಫೇಡಿಲ ಮಾಝಾ |ತುಝಾವೀಣ ದೂಜಾ ಕೋಣ ಆಹೇ ಆಮ್ಹಾಸೀ। ನಮಸ್ಕಾರ.... || ೩ || ಪಿತಾ ಮಾಯ ಬಂಧು ಸಜ್ ತೂಚಿ ದೇವಾ! ಮುಲೇ ಮಿತ್ರ ಸಾರೇ ಸೋಯರೇ ವ್ಯರ್ಥ ಹೇವಾ| ಕಳೋನಿ ಆಸೇ ಭ್ರಾಂತಿ ಹೋಯೀ ಆಮ್ಹಾಸೀ। ನಮಸ್ಕಾರ... || ೪ || ಚರಿತ್ರೆ ಗುರೂಚೀ ಕರೀ ನಿತ್ಯ ಪಾಠ ಜಯಾ ಭಕ್ತಿಲಾಗೆ ಪದೀ ಏಕನಿಷ್ಠ| ತಯಾಚೇ ಕುಳಿ ದೀಪ ಸಜ್ಞಾನರಾಶೀ| ನಮಸ್ಕಾರ.... || ೫ || ವಸೇ ಉಂಬರಾಸನ್ನಿಧ ಸರ್ವಕಾಳ| ಜನೀ ಕಾನನೀ ಫಾಲವೀ ನಿತ್ಯಕಾಳ |ತಯಾ ಸದ್ಗುರೂಚೇ ನಾಮ ಕಲ್ಯಾಣರಾಶಿ ನಮಸ್ಕಾರ.... || ೬ || ಶ್ರಮೋನೀ ಗುರೂಪಾಶೀ ತೋ ಮೇಂಛ ಆಲಾ| ತಯಾ ಸ್ಫೋಟರೋಗಾತು ಮುಕ್ತ ಕೇಲಾ| ಕೃಪೇನೇ ತಸೇ ಸ್ವಾಮಿ ಪಾಳೀ ಆಮ್ಲಾಸೀ| ನಮಸ್ಕಾರ.... || ೭ || ಸತಿ ಅನುಸೂಯಾ ಸುಧೀ ಆದಿಮಾತಾ| ತ್ರಯೀಮೂರ್ತಿ ಧ್ಯಾನೀ ಮನೀ ನಿತ್ಯ ಗಾತಾ| ಹರೇ ರೋಗ {{center|೧೬೯}}<noinclude></noinclude> qjvieax1jkvg87d65k6x1elwjn6ijoi ಪುಟ:ನಿತ್ಯ ನೇಮಾವಲಿ.pdf/೧೭೧ 104 102053 322836 284426 2026-05-27T01:38:45Z Shreesha Sharma 7840 /* Proofread */ 322836 proofread-page text/x-wiki <noinclude><pagequality level="3" user="Shreesha Sharma" /></noinclude>{{center|ನಿತ್ಯನೇಮಾವಲಿ}} ಪೀಡಾ ದರಿದ್ರಾಸಿ ನಾಶೀ ನಮಸ್ಕಾರ.... || ೮ || ಕರೋನೀ ಮನೀ ನಿಶ್ಚಯೋ ಅಷ್ಟಕಾಚಾ! ಕರಾಹೋ ಜನೀ ಪಾಠ ದತ್ತಾತ್ರೇಯಾಚಾ ಕರೀಮಾಧವಾಚ್ಯಾ ಸುತಾ ದಾಸ ದಾಸೀ ನಮಸ್ಕಾರ.... || ೯ || '''ಭಾವಾರ್ಥ''': ಸ್ವಾಮಿ ದತ್ತಾತ್ರೇಯನಿಗೆ ಪ್ರಾರ್ಥಿಸುತ್ತೇನೆ. ನಿನ್ನ ಪಾದಗಳ ಮೇಲೆ ತಲೆ ಇಟ್ಟು, ನಿನಗೆ ವಂದಿಸುವೆ. ಈ ಬಾಲಕನನ್ನು ಕೈಹಿಡಿದು ನಡೆಸು ಎಂದು ಬೇಡಿಕೊಳ್ಳುತ್ತೇನೆ. ನಾನು ಮತಿಹೀನನಾದರೂ ನಿನ್ನ ದಾಸನು. ತಾಯಿಯು ತನ್ನ ಮಗುವನ್ನು ಪೋಷಿಸುವಂತ ನನ್ನನ್ನು ಕಾಪಾಡು, ನಿನ್ನ ಪ್ರೀತಿಯ ಅಜ್ಞಾನಿ ಮಗು ನಾನು. ಗುರುವಿನ ಹೊರತು ಬೇರೆ ಯಾರು ಇದ್ದಾರೆ ? ತಾಯಿ-ತಂದೆ, ಬಂಧು-ಮಿತ್ರ ಎಲ್ಲವೂ ನೀನೇ, ಮಕ್ಕಳು-ಮಿತ್ರರು ಸಹಾಯಕರು ಎಂಬ ಭ್ರಾಂತಿಯಿಂದ ಇದ್ದೆ. ಗುರುಚರಿತ್ರೆಯ ನಿತ್ಯ ಪಠಣ ಮಾಡಿ ಅವನ ಚಿತ್ತದಲ್ಲಿ ಮನಸ್ಸು ನೆಲೆಸಿದಾಗ, ಅವನ ಕುಲದ ಜ್ಯೋತಿ ಬೆಳಗುತ್ತಿದೆ. ಯಾವಾಗಲೂ ಔದುಂಬರ ವೃಕ್ಷದ ಸನ್ನಿಧಿಯಲ್ಲಿ ಇದ್ದು, ಜನರಲ್ಲಿಯೂ ಅಡವಿಗಳಲ್ಲಿಯೂ ಸುತ್ತಾಡಿ, ಅವರೆಲ್ಲರ ಕಲ್ಯಾಣಪ್ರದಾಯಕನಾದ ಸದ್ಗುರುವಿಗೆ ನಮಸ್ಕಾರ. ತೊಂದರೆಗೊಳಗಾದ ಮೈಂಭರಾಜನು ಗುರುವಿನ ಹತ್ತಿರ ಬರಲು ಅವನಿಗಾದ ಸ್ಫೋಟ (ಹುಣ್ಣು) ರೋಗವನ್ನು ಕಳೆದಿರಿ. ಅದರಂತೆಯೇ ನಮ್ಮನು ರಕ್ಷಿಸಿರಿ. ಆದಿಮಾತೆಯಾದ ಸತಿ ಅನುಸೂಯಾದೇವಿಯು ಯಾವಾಗಲೂ ತ್ರಿಮೂರ್ತಿಗಳ ಧ್ಯಾನಮಾಡುತ್ತಾಳೆ. ಅದರಿಂದ ದೀನ ದರಿದ್ರರ ರೋಗ ಹರಣವಾಯಿತು. ಮನದಲ್ಲಿ ತ್ರಿಮೂರ್ತಿಗಳ ಅಷ್ಟಕಗಳನ್ನು ಸ್ಮರಿಸುತ್ತ {{center|೧೭೦}}<noinclude></noinclude> rohzz4gahwaa87iwg092ttq8xigi63v 322843 322836 2026-05-27T01:40:14Z Shreelatha.Halemane 7642 /* Validated */ 322843 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}} ಪೀಡಾ ದರಿದ್ರಾಸಿ ನಾಶೀ ನಮಸ್ಕಾರ.... || ೮ || ಕರೋನೀ ಮನೀ ನಿಶ್ಚಯೋ ಅಷ್ಟಕಾಚಾ! ಕರಾಹೋ ಜನೀ ಪಾಠ ದತ್ತಾತ್ರೇಯಾಚಾ ಕರೀಮಾಧವಾಚ್ಯಾ ಸುತಾ ದಾಸ ದಾಸೀ ನಮಸ್ಕಾರ.... || ೯ || '''ಭಾವಾರ್ಥ''': ಸ್ವಾಮಿ ದತ್ತಾತ್ರೇಯನಿಗೆ ಪ್ರಾರ್ಥಿಸುತ್ತೇನೆ. ನಿನ್ನ ಪಾದಗಳ ಮೇಲೆ ತಲೆ ಇಟ್ಟು, ನಿನಗೆ ವಂದಿಸುವೆ. ಈ ಬಾಲಕನನ್ನು ಕೈಹಿಡಿದು ನಡೆಸು ಎಂದು ಬೇಡಿಕೊಳ್ಳುತ್ತೇನೆ. ನಾನು ಮತಿಹೀನನಾದರೂ ನಿನ್ನ ದಾಸನು. ತಾಯಿಯು ತನ್ನ ಮಗುವನ್ನು ಪೋಷಿಸುವಂತ ನನ್ನನ್ನು ಕಾಪಾಡು, ನಿನ್ನ ಪ್ರೀತಿಯ ಅಜ್ಞಾನಿ ಮಗು ನಾನು. ಗುರುವಿನ ಹೊರತು ಬೇರೆ ಯಾರು ಇದ್ದಾರೆ ? ತಾಯಿ-ತಂದೆ, ಬಂಧು-ಮಿತ್ರ ಎಲ್ಲವೂ ನೀನೇ, ಮಕ್ಕಳು-ಮಿತ್ರರು ಸಹಾಯಕರು ಎಂಬ ಭ್ರಾಂತಿಯಿಂದ ಇದ್ದೆ. ಗುರುಚರಿತ್ರೆಯ ನಿತ್ಯ ಪಠಣ ಮಾಡಿ ಅವನ ಚಿತ್ತದಲ್ಲಿ ಮನಸ್ಸು ನೆಲೆಸಿದಾಗ, ಅವನ ಕುಲದ ಜ್ಯೋತಿ ಬೆಳಗುತ್ತಿದೆ. ಯಾವಾಗಲೂ ಔದುಂಬರ ವೃಕ್ಷದ ಸನ್ನಿಧಿಯಲ್ಲಿ ಇದ್ದು, ಜನರಲ್ಲಿಯೂ ಅಡವಿಗಳಲ್ಲಿಯೂ ಸುತ್ತಾಡಿ, ಅವರೆಲ್ಲರ ಕಲ್ಯಾಣಪ್ರದಾಯಕನಾದ ಸದ್ಗುರುವಿಗೆ ನಮಸ್ಕಾರ. ತೊಂದರೆಗೊಳಗಾದ ಮೈಂಭರಾಜನು ಗುರುವಿನ ಹತ್ತಿರ ಬರಲು ಅವನಿಗಾದ ಸ್ಫೋಟ (ಹುಣ್ಣು) ರೋಗವನ್ನು ಕಳೆದಿರಿ. ಅದರಂತೆಯೇ ನಮ್ಮನು ರಕ್ಷಿಸಿರಿ. ಆದಿಮಾತೆಯಾದ ಸತಿ ಅನುಸೂಯಾದೇವಿಯು ಯಾವಾಗಲೂ ತ್ರಿಮೂರ್ತಿಗಳ ಧ್ಯಾನಮಾಡುತ್ತಾಳೆ. ಅದರಿಂದ ದೀನ ದರಿದ್ರರ ರೋಗ ಹರಣವಾಯಿತು. ಮನದಲ್ಲಿ ತ್ರಿಮೂರ್ತಿಗಳ ಅಷ್ಟಕಗಳನ್ನು ಸ್ಮರಿಸುತ್ತ {{center|೧೭೦}}<noinclude></noinclude> pvhth9vmh0k1xmggafcepcbtweo9ifg ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬ 4 120710 322651 322633 2026-05-26T13:25:22Z A826 6806 322651 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | 🗹 | 🗹 |- |Hemanth Krishni P |Hemanth .03 |❌ |❌ |- |Viveka B G |Viveka B G | 🗹 | 🗹 |- |Reema Krishna Jalihal |Reema Jalihal | ❌ | 🗹 |- |Shyama Sundara Shastry K R |Shyam 2808 |❌ |❌ |- |Nihar Chakravarti |Nihar Chakravarti | ❌ | 🗹 |- |Deepak V S |vyangyeah |❌ |❌ |- |Vaishnu Pilar |Vaishnu Pilar | 🗹 | 🗹 |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== {| class="wikitable" ! Wikipedia User Name !! Assigned pages |- |Vikas shetty14 || |- |Hemanth .03 || |- |Viveka B G || |- |Reema Jalihal || |- |Shyam 2808 || |- |Nihar Chakravarti || |- |vyangyeah || |- |Vaishnu Pilar || |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] qbj6q9ty5u8ztll8rzvsuudq1tb27at 322656 322651 2026-05-26T13:39:58Z A826 6806 /* ವಿಕಿಸೋರ್ಸ್ ಫ್ರೂಫ಼್‌ರೀಡ್ */ 322656 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | 🗹 | 🗹 |- |Hemanth Krishni P |Hemanth .03 |❌ |❌ |- |Viveka B G |Viveka B G | 🗹 | 🗹 |- |Reema Krishna Jalihal |Reema Jalihal | ❌ | 🗹 |- |Shyama Sundara Shastry K R |Shyam 2808 |❌ |❌ |- |Nihar Chakravarti |Nihar Chakravarti | ❌ | 🗹 |- |Deepak V S |vyangyeah |❌ |❌ |- |Vaishnu Pilar |Vaishnu Pilar | 🗹 | 🗹 |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages |- |Vikas shetty14 || |- |Hemanth .03 || |- |Viveka B G || |- |Reema Jalihal || |- |Shyam 2808 || |- |Nihar Chakravarti || |- |vyangyeah || |- |Vaishnu Pilar || |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] bhn4hlje9pquk4i5o3isjypal0gxn6y 322669 322656 2026-05-26T13:50:51Z A826 6806 /* ವಿಕಿಸೋರ್ಸ್ ಫ್ರೂಫ಼್‌ರೀಡ್ */ 322669 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | 🗹 | 🗹 |- |Hemanth Krishni P |Hemanth .03 |❌ |❌ |- |Viveka B G |Viveka B G | 🗹 | 🗹 |- |Reema Krishna Jalihal |Reema Jalihal | ❌ | 🗹 |- |Shyama Sundara Shastry K R |Shyam 2808 |❌ |❌ |- |Nihar Chakravarti |Nihar Chakravarti | ❌ | 🗹 |- |Deepak V S |vyangyeah |❌ |❌ |- |Vaishnu Pilar |Vaishnu Pilar | 🗹 | 🗹 |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages !! progress |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{inprogress}} <!--replace inprogress with {{done}} when proofreading in done--> |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{inprogress}} <!--replace inprogress with {{done}} when proofreading in done--> |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{inprogress}} <!--replace inprogress with {{done}} when proofreading in done--> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{inprogress}} <!--replace inprogress with {{done}} when proofreading in done--> |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{inprogress}} <!--replace inprogress with {{done}} when proofreading in done--> |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{inprogress}} <!--replace inprogress with {{done}} when proofreading in done--> |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] s1ujio4fmnk0oorbojs8z2kblxj6490 322716 322669 2026-05-26T15:27:27Z A826 6806 /* ಭಾಗವಹಿಸುವವರು */ 322716 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | 🗹 | 🗹 |- |Hemanth Krishni P |Hemanth .03 |❌ |❌ |- |Viveka B G |Viveka B G | 🗹 | 🗹 |- |Reema Krishna Jalihal |Reema Jalihal | ❌ | 🗹 |- |Shyama Sundara Shastry K R |Shyam 2808 |❌ |❌ |- |Nihar Chakravarti |Nihar Chakravarti | ❌ | 🗹 |- |Deepak V S |vyangyeah |❌ |❌ |- |Vaishnu Pilar |Vaishnu Pilar | 🗹 | 🗹 |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages !! progress |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{inprogress}} <!--replace inprogress with {{done}} when proofreading in done--> |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{inprogress}} <!--replace inprogress with {{done}} when proofreading in done--> |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{inprogress}} <!--replace inprogress with {{done}} when proofreading in done--> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{inprogress}} <!--replace inprogress with {{done}} when proofreading in done--> |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{inprogress}} <!--replace inprogress with {{done}} when proofreading in done--> |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{inprogress}} <!--replace inprogress with {{done}} when proofreading in done--> |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] ne80fgl81t2zyfi26wea5az0mv2ssan 322746 322716 2026-05-26T16:48:59Z A826 6806 /* ಭಾಗವಹಿಸುವವರು */ 322746 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | ✓ | ✓ |- |Hemanth Krishni P |Hemanth .03 |❌ |❌ |- |Viveka B G |Viveka B G | ✓ | ✓ |- |Reema Krishna Jalihal |Reema Jalihal | ❌ | ✓ |- |Shyama Sundara Shastry K R |Shyam 2808 |❌ |❌ |- |Nihar Chakravarti |Nihar Chakravarti | ❌ | ✓ |- |Deepak V S |vyangyeah |❌ |❌ |- |Vaishnu Pilar |Vaishnu Pilar | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages !! progress |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{inprogress}} <!--replace inprogress with {{done}} when proofreading in done--> |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{inprogress}} <!--replace inprogress with {{done}} when proofreading in done--> |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{inprogress}} <!--replace inprogress with {{done}} when proofreading in done--> |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{inprogress}} <!--replace inprogress with {{done}} when proofreading in done--> |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{inprogress}} <!--replace inprogress with {{done}} when proofreading in done--> |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{inprogress}} <!--replace inprogress with {{done}} when proofreading in done--> |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] cc44b47ha654uvcvd6u3h8ctnx2ugwb 322914 322746 2026-05-27T06:33:04Z Anzx-ooo 3060 /* ವಿಕಿಸೋರ್ಸ್ ಫ್ರೂಫ಼್‌ರೀಡ್ */ 322914 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | ✓ | ✓ |- |Hemanth Krishni P |Hemanth .03 |❌ |❌ |- |Viveka B G |Viveka B G | ✓ | ✓ |- |Reema Krishna Jalihal |Reema Jalihal | ❌ | ✓ |- |Shyama Sundara Shastry K R |Shyam 2808 |❌ |❌ |- |Nihar Chakravarti |Nihar Chakravarti | ❌ | ✓ |- |Deepak V S |vyangyeah |❌ |❌ |- |Vaishnu Pilar |Vaishnu Pilar | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{inprogress}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{inprogress}} <!--replace inprogress with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{inprogress}} <!--replace inprogress with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{inprogress}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{inprogress}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{inprogress}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] icdota9okc7ov6crettbfs34cdggf8q ಪುಟ:Epigraphia carnatica - Volume II.djvu/೫೮ 104 120718 322654 2026-05-26T13:36:43Z A826 6806 /* Without text */ 322654 proofread-page text/x-wiki <noinclude><pagequality level="0" user="A826" /></noinclude><noinclude></noinclude> 8jv1m79oqytrvomi8no9d8impdweq4n ಸದಸ್ಯರ ಚರ್ಚೆಪುಟ:Reema Jalihal 3 120719 322703 2026-05-26T14:50:39Z Reema Jalihal 7674 ಹೊಸ ಪುಟ: Hi!! Iam Reema Jalihal. 322703 wikitext text/x-wiki Hi!! Iam Reema Jalihal. 1b11gwddvkhvwt9y33vhny1xta7gp4r