ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.4 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:ನಡೆದದ್ದೇ ದಾರಿ.pdf/೧೫೨ 104 31075 323886 83771 2026-06-01T14:20:23Z Shreesha Sharma 7840 /* Proofread */ 323886 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಕವಲು/ಕವಲು|right=೧೪೫}} ನೌಕರೀ ಸಿಕ್ಕಿತು ಅಂತ ವಾರ ಕೆನಡಾಕ್ಕ ಹೊಗ್ಲಿಕ್ಕೆ ತಯಾರಾಗೀದಿ. ಆರು ತಿಂಗಳಿಂದ ಅದರ ಸಲುವಾಗಿ ಖಟಿಪಿಟಿ ನಡಿಸೀದಿ.ನಿನ್ನ ಪಾಸ್ ಪೋರ್ಟ್ ಸುದ್ಧಾ ಬಂತು....ಆದರ ಈಗ ಎಲ್ಲಾ ಕ್ಯಾನ್ಸಲ್ ಮಾಡಬೆಕಾತು ನೊೇಡು. ನಿನಗೇನ ಇನ್ನ ದೂರ ಹೋಗೋ ಅವಶ್ಯಕತಾ ಉಳೀಲಿಲ್ಲ. ನಾ ನಿನ್ನ ಬಿಟ್ಟರ ಹೌದಲ್ಲೊ? ಇನ್ನ ಮ್ಯಾಲ ನಿನ್ನ ಎಲ್ಲಿಯೂ ಒಬ್ಬಕಿನ್ನೆ ಬಿಡೂದಿಲ್ಲ ನಾನು. ಎಲ್ಲೆ ಹೊದ್ರು ರಾಜರಾಣಿ ಜೊಡೀ ಜೊಡೀ ....' {{gap}}ನಾ ಅಂತೀನಿ ಮಿನಿ, ನೀ ಇನ್ನ ನೌಕರೀ ಬಿಟ್ಟ ಬಿಡೋದು ಛಲೋ.ನಾ ನಿವೃತ್ತಿ ಆದ ಮ್ಯಾಲಂತೂ ಇಬ್ರೂ ಹೋಗಿ ನಮ್ಮ ಎಸ್ಟೆಟಿನ್ಯಾಗ ಥಣ್ಣಗ ಇದ್ದ ಬಿಡೋಣ. ನನಗರೆ ಏನ ಜವಾಬ್ದರಿ ಉಳದದ? ನಮ್ಮ ರಾಜೂಂದಂತೂ ನೌಕರಿ ಆತು, ಲಗ್ನಾತು. ಆವನಶಕ್ಕೆ ಆವಾ ಆರಾಮಿದ್ದಾನ. ಗಿರಿಜಾಂದೂ ನಿಶೇ ಆಗೇದ. ಈ ತಿಂಗಳ ಆಖೇರಕ್ಕ ಆಕೀದೊಂದ ಲಗ್ನ ಮುಗದ ಹೋಗತದ-ಪಾಪ, ಶಾಂತಾ ಇದೊಂದ ನೋಡಿ ಹೋಗ್ಬೇಕಾಗಿತ್ತಲ್ಲ ಮಿನಿ?- ಆಮೂಲ್ಯ ನ ಅಂತೂ free bird, ನಿನ್ನ ಹಿಂದಿಂದೇ ಹಾರಲಿಕ್ಕೆ! {{gap}}ನಂತರ ಒಮ್ಮೆಲೆ ತನ್ನ ತೀರ ಸಮೀಪ ಸರಿದು ಕಿವಿಯಲ್ಲಿ ಪಿಸುಗುಡುವಶ್ಟು ಹಗುರವಾದ ಧ್ವನಿಯಲ್ಲಿ ಆತ ಕೇಳಿದ್ದ: {{gap}}ಅಂಧ್ಯಾಂಗ ನಾವು ಎಂದ ಸಬ್ ರೆಜಿಸ್ಟ್ರರ್ ಆಫ಼ೀಸೀಗೆ ಹೋಗೋಣ ಮಿನಿ?- ಒಂದು ಕ್ಶಣ ತಡೆದು ಉಗುಳು ನುಂಗಿ ಮತ್ತೆ : ಅಂದರ ಜಾತೀ ಪ್ರಶ್ನೆ ಒಂದ ಅದ ಅಲ್ಲ. ಯಾರಾದ್ರೂ ಆಹದವ್ರು ಅಡ್ಡಗಾಲು ಹಾಕ್ಯಾರು ಅಂತ. ರೆಜಿಸ್ಥ್ರೇಶನ್ ಮಾಡಿಸಿಬಿಡೂದು ಛಲೋ. ಹಾಂಗ ನಿನಗೆ ಬೇಕಾದ್ರ ಅಮೂಲ್ಯ ಯಾವ್ದರೆ ಗುಡೀಗೆ ಹೋಗಿ...' {{gap}}ನಾನು ನಾಳೆ ಸ್ವಲ್ಪ ಊರಿನ ಕಡೆ ಹೋಗಿ ಆ ಪ್ಲಾಟಿನ ಖರೀದಿಫತ್ರ ಮುಗಿಸಿಕೊಂಡ ಬರ್ಥಿನಿ. ನಿನಗೆ ಗೊತ್ತದ ಏನು ಮಿನಿ,ಪ್ಲಾಟಿನ ಖರೀದಿಪತ್ರ ಮುಗಿಸಿಕೊಂಡ ಬರ್ತಿನೀ. ನಿನಗೆ ಗೊತ್ತದ ಏನು ಮಿನಿ, ಪ್ಲಾಟಿನ ಖರೀದಿ ನಿನ್ನ ಹೆಸರ್ಲೇ ಆಗೂದದ. ನಲ್ಲ್ಕಾರು ದಿನಾ ಆದೀತು. ಅಷ್ಟರಾಗ ನೀ ಉಳದದ್ದು ತಯಾರಿ ಮಾಡಿಕೊಂಡಿರು ಆ? {{gap}}ಆತನ ಉತ್ಸಾಹ ನೆನೆಯುತದಂತೆ ಎದುರಿನ ಕನ್ನಡಿಯಲ್ಲಿನ ತನ್ನ ಪ್ರತಿಬಿಂಬ ಆಕೆಗೆ ಒಮ್ಮೆಲೆ ಕಾಣದಂತಯಿತು.ಬಹುಶಃ ಕಿಟಕಿಯಲ್ಲಿಂದ ಮಳೆನೀರು ಕನ್ನಡಿಗೆ ಸಿಡಿದು ಗಾಜು ಮಸುಕಾಗಿದೆ. {{gap}}ಆತನ ಪ್ರಶ್ನೆಗೆ ಸರಳವಾಗಿ ಉತ್ತರ ಹೇಳಲಾಗಿರಲಿಲ್ಲ ಆಕೆಗೆ. ಆತ ಮಾತ್ರ ಎಷ್ಟು ಸರಳವಾಗಿ ಕೇಳಿದ್ದ! ಆತ ಯಾವಾಗಲೂ ಹಾಗೆಯೇ.ಜೀವನದ ಕ್ಲಿಷ್ಟತಮ.<noinclude><references/></noinclude> fd2vlwf41fp4ptkyu1pqbufhqz1mdl6 ಪುಟ:ನಡೆದದ್ದೇ ದಾರಿ.pdf/೧೪೦ 104 31174 323887 307305 2026-06-01T14:24:36Z Shreesha Sharma 7840 /* Proofread */ 323887 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಕೊನೆಯ ದಾರಿ / ಹೊರಟು ಹೋದವನು.|right=೧೩೩}} ಈ ಕೊನೆ ಮೊದಲಿಲ್ಲದ ಅತೃಪ್ತಿ-ಅಶಾಂತಿ ಇಲ್ಲದಂತಾಗುವುದು- ನಡುವೆ ಎಲ್ಲೋ ಒಂದು ಇಪ್ಪತ್ತು ನಿಮಿಷ....</br> {{gap}}'ಬಾಯಿಸಾಬ್ಕೊ ಖಾನಾ ಲಾವ್ಞೂ?'</br> {{gap}}ಇದೇನು ಲೋಂಡಾ ಬಂದೇ ಬಿಟ್ಟಿತೇ ಎಂದು ತಟ್ಟನೆ ಎದ್ದಳು ಆಕೆ. ಇಲ್ಲ ಇನ್ನೂ ಮಧ್ಯ ರಾತ್ರಿ. ಲೋಂಡಾ ಬರುವುದು ಮಧ್ಯಾಹ್ನ. ಹಾಗಾದರೆ ಈ ಧ್ವನಿ? {{gap}}ಹನ್ನೆರಡು ವರ್ಷಗಳಿಂದ ಪರಿಚಿತವಾಗಿದ್ದ ಧ್ವನಿ.ತಾನು ಹುಬ್ಬಳ್ಳಿಗೆ ಪ್ರತಿಸಲ ಹೋಗುವಾಗೊಮ್ಮೆ ತಿರುಗಿ ಬರುವಾಗೊಮ್ಮೆ ತಪ್ಪದೆ ಕೇಳಿಬರುತ್ತಿದ್ದ ಧ್ವನಿ.</br> {{gap}}ಅವನೊಬ್ಬ ಮಿಠಾಯಿ ಮಾರುವ ಮನುಷ್ಯ. ಲೋಂಡಾ ಸ್ಟೇಷನ್ ಮೇಲೆ ಪ್ರತಿ ಟ್ರೇನು ಬಂದಾಗ ಪ್ಲ್ಯಾಟ್ ಫಾರ್ಮಿನ ಈ ಕೊನೆಯಿಂದ ಆ ಕೊನೆಯವರೆಗೆ ಮಿಠಾಯಿಯ ಗಾಡಿಯನ್ನು ನೂಕಿಕೊಂಡು ಹೋಗಿ ಮಾರುವ ಮನುಷ್ಯ. ಊಟದ ಹೋಟೆಲಿನಿಂದ ಊಟ ತಂದುಕೊಡುವುದೇನೂ ಅವನ ಕೆಲಸವಲ್ಲ. ಆದರೂ ಪ್ರತಿಸಲ ಈ ದಾರಿಯಲ್ಲಿ ಬಂದಾಗ ಅವನು ಬಂದು ಹಾಜರಾಗುತ್ತಾನೆ; ಹೋಟೆಲಿನಿಂದ ಊಟ ತಂದು ಕೊಡುತ್ತಾನೆ; ಒಳ್ಳೆಯ ಮಿಠಾಯಿ ಕೊಡುತ್ತಾನೆ; ತಾನು ಊಟ ಮಾಡುತ್ತಿರುವಷ್ಟು ಸಮಯವೂ ವಿನಯದಿಂದ ಪಕ್ಕದಲ್ಲಿ ನಿಂತಿರುತ್ತಾನೆ; ಬಿಲ್ಲು ಕೊಟ್ಟಾಗ ಬಾಗಿ ಸ್ವೀಕರಿಸಿ ಸಲಾಮ್ ಮಾಡುತ್ತಾನೆ; ಟ್ರೇನು ಹೊರಟಾಗ ಪ್ಲ್ಯಾಟ್ ಫಾರ್ಮಿನ ಕೊನೆಗೆ ನಿಂತು ಮರೆಯಾಗುವವರೆಗೂ ಕೈ ಬೀಸುತ್ತಾನೆ..... {{gap}}ತನ್ನ ಜೊತೆ ಮಕ್ಕಳು ಯಾರಾದರೂ ಬಂದಿದ್ದರೆ ಅವರೂ ಹುರುಪಿನಿಂದ</br> ಕಿಡಕಿಯೊಳಗೆ ಮುಖ ಹಾಕಿ ಅವನು ಕಾಣುತ್ತಿರುವವರೆಗೂ ತಿರುಗಿ ಕೈ ಬೀಸುತ್ತಾರೆ. {{gap}}ಈ ಮಿಠಾಯಿವಾಲಾ ನೋಡು ಸ್ವಲ್ಪೂ ಬದಲಾಗಿಲ್ಲ. ನಮ್ಮ ಲಗ್ನಾದ</br> ಹೊಸದಾಗಿ ಹ್ಯಾಂಗಿದ್ನೋ ಈಗೂ ಹಾಂಗಽ ಕಾಣಸ್ತಾನ ಅಲ್ಲಽ?'ಅಂದಿದ್ದ ಒಮ್ಮೆ</br> ಸತೀಶ. {{gap}}ಹೌದು. ತನ್ನ ಲಗ್ನವಾದ ನಂತರ ಮೊದಲ ಸಲ ಸತೀಶನೊಂದಿಗೆ ಹುಬ್ಬಳ್ಳಿಯಿಂದ ಪೂನಾಕ್ಕೆ ಹೊರಟಾಗ, ಹನ್ನೆರಡು ವರ್ಷಗಳ ಹಿಂದೆ, ಲೋಂಡಾ ಸ್ಟೇಷನ್ ಮೇಲೆ ಇವನನ್ನು ಮೊದಲು ನೋಡಿದ್ದು. ಟ್ರೇನಿನಲ್ಲಿ ಫರ್ಸ್ಟ್ ಕ್ಲಾಸ್ ಕಂಪಾರ್ಟಮೆಂಟಿನಲ್ಲಿ ತನ್ನನ್ನು ಒತ್ತರಿಸಿ ಕೂತಿದ್ದ ಸತೀಶನ ಕೈ-ಬಾಯಿ ಎರಡಕ್ಕೂ ಪುರಸೊತ್ತಿರಲಿಲ್ಲ. ತನಗೋ ಒಂದು ಬಗೆಯ ಮಂಪರು. ಸಾವಿನಷ್ಟು ಶೀತಲವಾದ ನಿರ್ಲಿಪ್ತ ಮಂಪರು. ದಣಿದು ಮಲಗಿ ಗಾಢ ನಿದ್ರೆಯಲ್ಲಿದ್ದಾಗ ಮೈ ಜುಮ್ಮೆನ್ನಿಸುವ ಅಂಜಿಕೆ ಬರಿಸುವ ಕನಸು ಕಂಡು ಬೆಚ್ಚಿ ಎಚ್ಚತ್ತಂತಾಗಿತ್ತು ಲೋಂಡಾ ಸ್ಟೇಷನ್ ಮೇಲೆ ಈ ಮಿಠಾಯಿವಾಲಾನನ್ನು ನೋಡಿದಾಗ.<noinclude><references/></noinclude> iqmpu0clvywwhsqqw3n3sm85syntfwh 323892 323887 2026-06-01T14:47:03Z Shreelatha.Halemane 7642 /* Validated */ 323892 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಕೊನೆಯ ದಾರಿ / ಹೊರಟು ಹೋದವನು.|right=೧೩೩}} ಈ ಕೊನೆ ಮೊದಲಿಲ್ಲದ ಅತೃಪ್ತಿ-ಅಶಾಂತಿ ಇಲ್ಲದಂತಾಗುವುದು- ನಡುವೆ ಎಲ್ಲೋ ಒಂದು ಇಪ್ಪತ್ತು ನಿಮಿಷ....</br> {{gap}}'ಬಾಯಿಸಾಬ್ಕೊ ಖಾನಾ ಲಾವ್ಞೂ?'</br> {{gap}}ಇದೇನು ಲೋಂಡಾ ಬಂದೇ ಬಿಟ್ಟಿತೇ ಎಂದು ತಟ್ಟನೆ ಎದ್ದಳು ಆಕೆ. ಇಲ್ಲ ಇನ್ನೂ ಮಧ್ಯ ರಾತ್ರಿ. ಲೋಂಡಾ ಬರುವುದು ಮಧ್ಯಾಹ್ನ. ಹಾಗಾದರೆ ಈ ಧ್ವನಿ? {{gap}}ಹನ್ನೆರಡು ವರ್ಷಗಳಿಂದ ಪರಿಚಿತವಾಗಿದ್ದ ಧ್ವನಿ.ತಾನು ಹುಬ್ಬಳ್ಳಿಗೆ ಪ್ರತಿಸಲ ಹೋಗುವಾಗೊಮ್ಮೆ ತಿರುಗಿ ಬರುವಾಗೊಮ್ಮೆ ತಪ್ಪದೆ ಕೇಳಿಬರುತ್ತಿದ್ದ ಧ್ವನಿ.</br> {{gap}}ಅವನೊಬ್ಬ ಮಿಠಾಯಿ ಮಾರುವ ಮನುಷ್ಯ. ಲೋಂಡಾ ಸ್ಟೇಷನ್ ಮೇಲೆ ಪ್ರತಿ ಟ್ರೇನು ಬಂದಾಗ ಪ್ಲ್ಯಾಟ್ ಫಾರ್ಮಿನ ಈ ಕೊನೆಯಿಂದ ಆ ಕೊನೆಯವರೆಗೆ ಮಿಠಾಯಿಯ ಗಾಡಿಯನ್ನು ನೂಕಿಕೊಂಡು ಹೋಗಿ ಮಾರುವ ಮನುಷ್ಯ. ಊಟದ ಹೋಟೆಲಿನಿಂದ ಊಟ ತಂದುಕೊಡುವುದೇನೂ ಅವನ ಕೆಲಸವಲ್ಲ. ಆದರೂ ಪ್ರತಿಸಲ ಈ ದಾರಿಯಲ್ಲಿ ಬಂದಾಗ ಅವನು ಬಂದು ಹಾಜರಾಗುತ್ತಾನೆ; ಹೋಟೆಲಿನಿಂದ ಊಟ ತಂದು ಕೊಡುತ್ತಾನೆ; ಒಳ್ಳೆಯ ಮಿಠಾಯಿ ಕೊಡುತ್ತಾನೆ; ತಾನು ಊಟ ಮಾಡುತ್ತಿರುವಷ್ಟು ಸಮಯವೂ ವಿನಯದಿಂದ ಪಕ್ಕದಲ್ಲಿ ನಿಂತಿರುತ್ತಾನೆ; ಬಿಲ್ಲು ಕೊಟ್ಟಾಗ ಬಾಗಿ ಸ್ವೀಕರಿಸಿ ಸಲಾಮ್ ಮಾಡುತ್ತಾನೆ; ಟ್ರೇನು ಹೊರಟಾಗ ಪ್ಲ್ಯಾಟ್ ಫಾರ್ಮಿನ ಕೊನೆಗೆ ನಿಂತು ಮರೆಯಾಗುವವರೆಗೂ ಕೈ ಬೀಸುತ್ತಾನೆ..... {{gap}}ತನ್ನ ಜೊತೆ ಮಕ್ಕಳು ಯಾರಾದರೂ ಬಂದಿದ್ದರೆ ಅವರೂ ಹುರುಪಿನಿಂದ</br> ಕಿಡಕಿಯೊಳಗೆ ಮುಖ ಹಾಕಿ ಅವನು ಕಾಣುತ್ತಿರುವವರೆಗೂ ತಿರುಗಿ ಕೈ ಬೀಸುತ್ತಾರೆ. {{gap}}ಈ ಮಿಠಾಯಿವಾಲಾ ನೋಡು ಸ್ವಲ್ಪೂ ಬದಲಾಗಿಲ್ಲ. ನಮ್ಮ ಲಗ್ನಾದ</br> ಹೊಸದಾಗಿ ಹ್ಯಾಂಗಿದ್ನೋ ಈಗೂ ಹಾಂಗಽ ಕಾಣಸ್ತಾನ ಅಲ್ಲಽ?'ಅಂದಿದ್ದ ಒಮ್ಮೆ</br> ಸತೀಶ. {{gap}}ಹೌದು. ತನ್ನ ಲಗ್ನವಾದ ನಂತರ ಮೊದಲ ಸಲ ಸತೀಶನೊಂದಿಗೆ ಹುಬ್ಬಳ್ಳಿಯಿಂದ ಪೂನಾಕ್ಕೆ ಹೊರಟಾಗ, ಹನ್ನೆರಡು ವರ್ಷಗಳ ಹಿಂದೆ, ಲೋಂಡಾ ಸ್ಟೇಷನ್ ಮೇಲೆ ಇವನನ್ನು ಮೊದಲು ನೋಡಿದ್ದು. ಟ್ರೇನಿನಲ್ಲಿ ಫರ್ಸ್ಟ್ ಕ್ಲಾಸ್ ಕಂಪಾರ್ಟಮೆಂಟಿನಲ್ಲಿ ತನ್ನನ್ನು ಒತ್ತರಿಸಿ ಕೂತಿದ್ದ ಸತೀಶನ ಕೈ-ಬಾಯಿ ಎರಡಕ್ಕೂ ಪುರಸೊತ್ತಿರಲಿಲ್ಲ. ತನಗೋ ಒಂದು ಬಗೆಯ ಮಂಪರು. ಸಾವಿನಷ್ಟು ಶೀತಲವಾದ ನಿರ್ಲಿಪ್ತ ಮಂಪರು. ದಣಿದು ಮಲಗಿ ಗಾಢ ನಿದ್ರೆಯಲ್ಲಿದ್ದಾಗ ಮೈ ಜುಮ್ಮೆನ್ನಿಸುವ ಅಂಜಿಕೆ ಬರಿಸುವ ಕನಸು ಕಂಡು ಬೆಚ್ಚಿ ಎಚ್ಚತ್ತಂತಾಗಿತ್ತು ಲೋಂಡಾ ಸ್ಟೇಷನ್ ಮೇಲೆ ಈ ಮಿಠಾಯಿವಾಲಾನನ್ನು ನೋಡಿದಾಗ.<noinclude><references/></noinclude> fsigx2u707ghjtpuyva2mfhbt634i50 ಪುಟ:ನಡೆದದ್ದೇ ದಾರಿ.pdf/೧೫೦ 104 31638 323893 322032 2026-06-01T14:48:53Z Shreelatha.Halemane 7642 /* Validated */ 323893 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=|center=ಕವಲು|right=೧೪೩}} {{gap}}ಒಂದು ತಿಂಗಳ ನಂತರ ಮೊನ್ನೆ ಆತ ಬಂದಾಗ ಬಹಳ ಉತ್ಸಾಹದಲ್ಲಿದ್ದ. ಇಪ್ಪತ್ತು ವರ್ಷಗಳಿಂದಲೂ ತಾವು ಭೆಟ್ಟಿಯಾಗಿದ್ದರು ಅದೇ ಮೊದಲನೆಯ ಸಲ ಭೆಟ್ಟಿಯಾದ ಹಾಗೆ ಇತಿಹಾಸ- ಭೂಗೋಲ ಕುರಿತು ಮಾತಾಡಿದೆ. ಸ್ವತಃ ಐವತ್ತರ ಗಡಿ ದಾಟಿ ಎರಡು ವರ್ಷವಾಗಿದ್ದರೂ ಇನ್ನು ಮುಂದೆಯೇ ನಿಜವಾದ ಜೀವನ ಸುರುಮಾಡಲಿರುವ ಹಾಗೆ ಕಾಣಿಸಿದೆ. ಆಗಿಹೋದದ್ದೆಲ್ಲ ತೀರ insignificant ಸುಲಭವಾಗಿ ಮರೆತು ಹೋಗಬಲ್ಲದ್ದು, ಭವಿಷ್ಯವೊಂದು ಸುಂದರ ಕನಸು - ಎಂದು ತನ್ನನ್ನು ನಂಬಿಸಲು ಹೆಣಗಿದೆ. ನಿಜವಾಗಿ ಆತ ಇಪ್ಪತ್ತು ವರ್ಷ ಚಿಕ್ಕವನಾಗಿ ತೋರಿದ. - {{gap}}ಅಸ್ವಸ್ಥ ಮನಸ್ಸಿನಿಂದ ಆಕೆ ಮಲಗಿದ್ದಂತೆಯೇ ಪಕ್ಕಕ್ಕೆ ಹೊರಳಿ ಗೋಡೆಗೆ ಹಾಕಿದ್ದ ನಿಲುಗನ್ನಡಿಯ ಕಡೆ ನೋಡಿದಳು. ಅಲ್ಲಲ್ಲಿ ನರೆತ ಕೂದಲು, ಕಣ್ಣ ಕೆಳಗೆ ಕಪ್ಪಗಿನ ಗೆರೆ, ಹಣೆಯ ಮೇಲೆರಡು ನಿರಿಗೆ ... ಇದೇನು, ಇಪ್ಪತ್ತು ವರ್ಷಗಳಲ್ಲಿಯೂ ಒಮ್ಮೆಯೂ ತಾನು ಕನ್ನಡಿ ನೋಡಲಿಲ್ಲವೇ? ಈ ಪರಿಯ ಬದಲಾವಣೆ ಅದು ಹೇಗೆ ತನ್ನ ಲಕ್ಷ್ಯಕ್ಕೆ ಬಂದಿಲ್ಲ? ಇಂದೇ ಏಕೆ ತನಗೆ ನಲವತ್ತಾಯಿತೆಂದು ಅನಿಸುತ್ತಿದೆ? - ವಯಸ್ಸು {{gap}}ತನಗೊಬ್ಬಳಿಗೇ ಆಗಬೇಕೆ? ಮೊನ್ನೆ ಅಷ್ಟೆಲ್ಲ ಮಾತಾಡಿ ಕೊನೆಗೆ ತೀರಾ ಮೃದು ಧ್ವನಿಯಲ್ಲಿ, ಆ ಕೊನೆಯ ಪ್ರಶ್ನೆ ಕೇಳುವಾಗಲಂತೂ ಆತ ನಿಜವಾಗಿ ಇಪ್ಪತ್ತು ವರ್ಷಗಳ ಹಿಂದೆ ಇದ್ದಂತೆಯೇ ಕಾಣಿಸಿದನ್ನೆಲ್ಲ, ಅದು ಹೇಗೆ? ಖರೇನೆ {{gap}}ಆತನ ಜೀವನೋತ್ಸಾಹ ಅಸೂಹೆ ಪಡುವಂಥದ್ದು : ' ಈ ಅಂಬಾಸಡರ್ ಕೊಟ್ಟಿಡಬೇಕಂತ ಮಾಡೀನಿ ಚುನುಭಾಯಿ ಸೇಠಗ. ಹ್ಯಾಂಗೂ ಹಳೇದಾಗೇದ. ನನಗ - ನಿನಗ ಒಂದು ಬೇಬಿ ಆಸ್ಟಿನ್ ಸಾಕು. ಹೋಗ್ಬಿಡೋಣ ಅದರಾಗ ಕೂತು - ದುನಿಯಾ ಕೆ ಉಸ್ಸ್ ಪಾರ ... ಈಗೇನು, ಯಾರಪ್ಪನ ಭಿದೇನು ಇಲ್ಲ ನನಗ. I am a brave ಮ್ಯಾನ್. ಏನಂತೀ ಮಿನಿ?' - ' ಅಲ್ಲ {{gap}}ಮಿನಿ, ಹ್ಯಾಂಗೂ ರಿಟೈರ್ ಆಗೋ ದಿವ್ಸ ಬಂದುವಲ್ಲ, ಇನ್ನ ಈ ಪುಣೆ ಬಿಟ್ಟು ನಮ್ಮ ಶಿರಸೀ ಕಡೆನೇ ಒಂದ ಎಸ್ಟೇಟ್ ತಗೊಂಡು ಅಲ್ಲಿ ಮಣಿ ಕಟ್ಸೋದು ಛಲೋ ಅಲ್ಲ s ? ನೀ ಹಗಲೆಲ್ಲ ಹೇಳತಿದಿಲ್ಲ s - ಅಡಿವ್ಯಾಗ ಗುಡಿಸಲು ಕಟ್ಟಿಗೊಂದು ಇರಬೇಕು ಅನಿಸ್ತದ ಅಂತ ? ಸುತ್ತಲೆಲ್ಲ ತೆಂಗಿನ ಗಿಡ.<noinclude><references/></noinclude> mswjin5txz6xmz7d5n48zsxb4kv2bet 323894 323893 2026-06-01T14:50:06Z Shreelatha.Halemane 7642 323894 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=|center=ಕವಲು|right=೧೪೩}} {{gap}}ಒಂದು ತಿಂಗಳ ನಂತರ ಮೊನ್ನೆ ಆತ ಬಂದಾಗ ಬಹಳ ಉತ್ಸಾಹದಲ್ಲಿದ್ದ. ಇಪ್ಪತ್ತು ವರ್ಷಗಳಿಂದಲೂ ತಾವು ಭೆಟ್ಟಿಯಾಗಿದ್ದರು ಅದೇ ಮೊದಲನೆಯ ಸಲ ಭೆಟ್ಟಿಯಾದ ಹಾಗೆ ಇತಿಹಾಸ- ಭೂಗೋಲ ಕುರಿತು ಮಾತಾಡಿದೆ. ಸ್ವತಃ ಐವತ್ತರ ಗಡಿ ದಾಟಿ ಎರಡು ವರ್ಷವಾಗಿದ್ದರೂ ಇನ್ನು ಮುಂದೆಯೇ ನಿಜವಾದ ಜೀವನ ಸುರುಮಾಡಲಿರುವ ಹಾಗೆ ಕಾಣಿಸಿದೆ. ಆಗಿಹೋದದ್ದೆಲ್ಲ ತೀರ insignificant ಸುಲಭವಾಗಿ ಮರೆತು ಹೋಗಬಲ್ಲದ್ದು, ಭವಿಷ್ಯವೊಂದು ಸುಂದರ ಕನಸು - ಎಂದು ತನ್ನನ್ನು ನಂಬಿಸಲು ಹೆಣಗಿದೆ. ನಿಜವಾಗಿ ಆತ ಇಪ್ಪತ್ತು ವರ್ಷ ಚಿಕ್ಕವನಾಗಿ ತೋರಿದ. - {{gap}}ಅಸ್ವಸ್ಥ ಮನಸ್ಸಿನಿಂದ ಆಕೆ ಮಲಗಿದ್ದಂತೆಯೇ ಪಕ್ಕಕ್ಕೆ ಹೊರಳಿ ಗೋಡೆಗೆ ಹಾಕಿದ್ದ ನಿಲುಗನ್ನಡಿಯ ಕಡೆ ನೋಡಿದಳು. ಅಲ್ಲಲ್ಲಿ ನರೆತ ಕೂದಲು, ಕಣ್ಣ ಕೆಳಗೆ ಕಪ್ಪಗಿನ ಗೆರೆ, ಹಣೆಯ ಮೇಲೆರಡು ನಿರಿಗೆ ... ಇದೇನು, ಇಪ್ಪತ್ತು ವರ್ಷಗಳಲ್ಲಿಯೂ ಒಮ್ಮೆಯೂ ತಾನು ಕನ್ನಡಿ ನೋಡಲಿಲ್ಲವೇ? ಈ ಪರಿಯ ಬದಲಾವಣೆ ಅದು ಹೇಗೆ ತನ್ನ ಲಕ್ಷ್ಯಕ್ಕೆ ಬಂದಿಲ್ಲ? ಇಂದೇ ಏಕೆ ತನಗೆ ನಲವತ್ತಾಯಿತೆಂದು ಅನಿಸುತ್ತಿದೆ? - ವಯಸ್ಸು {{gap}}ತನಗೊಬ್ಬಳಿಗೇ ಆಗಬೇಕೆ? ಮೊನ್ನೆ ಅಷ್ಟೆಲ್ಲ ಮಾತಾಡಿ ಕೊನೆಗೆ ತೀರಾ ಮೃದು ಧ್ವನಿಯಲ್ಲಿ, ಆ ಕೊನೆಯ ಪ್ರಶ್ನೆ ಕೇಳುವಾಗಲಂತೂ ಆತ ನಿಜವಾಗಿ ಇಪ್ಪತ್ತು ವರ್ಷಗಳ ಹಿಂದೆ ಇದ್ದಂತೆಯೇ ಕಾಣಿಸಿದನ್ನೆಲ್ಲ, ಅದು ಹೇಗೆ? {{gap}}ಖರೇನೆ ಆತನ ಜೀವನೋತ್ಸಾಹ ಅಸೂಹೆ ಪಡುವಂಥದ್ದು : ' ಈ ಅಂಬಾಸಡರ್ ಕೊಟ್ಟಿಡಬೇಕಂತ ಮಾಡೀನಿ ಚುನುಭಾಯಿ ಸೇಠಗ. ಹ್ಯಾಂಗೂ ಹಳೇದಾಗೇದ. ನನಗ - ನಿನಗ ಒಂದು ಬೇಬಿ ಆಸ್ಟಿನ್ ಸಾಕು. ಹೋಗ್ಬಿಡೋಣ ಅದರಾಗ ಕೂತು - ದುನಿಯಾ ಕೆ ಉಸ್ಸ್ ಪಾರ ... ಈಗೇನು, ಯಾರಪ್ಪನ ಭಿದೇನು ಇಲ್ಲ ನನಗ. I am a brave ಮ್ಯಾನ್. ಏನಂತೀ ಮಿನಿ?' - ' {{gap}}ಅಲ್ಲ ಮಿನಿ, ಹ್ಯಾಂಗೂ ರಿಟೈರ್ ಆಗೋ ದಿವ್ಸ ಬಂದುವಲ್ಲ, ಇನ್ನ ಈ ಪುಣೆ ಬಿಟ್ಟು ನಮ್ಮ ಶಿರಸೀ ಕಡೆನೇ ಒಂದ ಎಸ್ಟೇಟ್ ತಗೊಂಡು ಅಲ್ಲಿ ಮಣಿ ಕಟ್ಸೋದು ಛಲೋ ಅಲ್ಲ s ? ನೀ ಹಗಲೆಲ್ಲ ಹೇಳತಿದಿಲ್ಲ s - ಅಡಿವ್ಯಾಗ ಗುಡಿಸಲು ಕಟ್ಟಿಗೊಂದು ಇರಬೇಕು ಅನಿಸ್ತದ ಅಂತ ? ಸುತ್ತಲೆಲ್ಲ ತೆಂಗಿನ ಗಿಡ.<noinclude><references/></noinclude> juhn44jzs6him4j9vhc3sntvscqakm6 ಪುಟ:VISHAALAAKSHI - Niranjana.pdf/೩೧ 104 37867 323888 100026 2026-06-01T14:30:49Z Shreesha Sharma 7840 /* Proofread */ 323888 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೨೯}} ಅದನ್ನು ನೋಡಿದ್ದಳು : “ಅದೇನೇ ?” ಎಂದು ಕೇಳಿರಲಿಲ್ಲ, ಅಷ್ಟೆ: ವಿಶಾಲಾಕ್ಷಿ ಎದ್ದು ಮಗುವಿನ ಬಳಿಸಾರಿ, ಕೈಗಳನ್ನು ಮುಂದಕ್ಕೆ ಚಾಚಿದಳು ಅನಿರ್ಧಾರದ ನೋಟದಿಂದ, ಕನ್ನಡಕವಿದ್ದ ಆ ಮುಖವನ್ನು, ಒಂದು ಕ್ಷಣ ಮಗು ನೋಡಿತು... {{gap}}“ಅತ್ತೆ ಕಣೋ, ಹೋಗೋ” ಎಂದು ಉತ್ತೇಜನವಿತ್ತಳು ನರ್ಮದಾ .. {{gap}}ಮುರಲಿ 'ಗುರುತು ಸಿಕ್ಕಿತೆನ್ನುವಂತೆ ನಕ್ಕ. {{gap}}ಅವನನ್ನೆತ್ತಿಕೊಂಡು ವಿಶಾಲಾಕ್ಷಿ ಮುದ್ದಾಡಿದಳು, ತಾನು ಇರುವುದೇ ಅಂತಹ ಮುದ್ದಾಟಕ್ಕೆನ್ನುವಂತೆ, ಮುರಲೀಧರ ಆ ಒಲವನ್ನೆಲ್ಲ ಸ್ವೀಕರಿಸಿದ. {{gap}}ಮನಸ್ಸಿನಲ್ಲೇ ಲೆಕ್ಕ ಹಾಕಿ ವಿಶಾಲಾಕ್ಷಿ ಅಂದಳು: {{gap}}“ಒಂದೂವರೆ ವರ್ಷ ಆಗಿಹೋಯ್ತು, ಅಲ್ವೇನೇ ?” {{gap}}“ಗಣಿತದಲ್ಲಿ ಯಾವತ್ತು ನಿನಗೆ ಪೂರ್ತಿ ಮಾರ್ಕು ಬಂದಿರಲಿಲ್ಲ, ಹೇಳು” {{gap}}ಮುರಲಿ ಆಗಲೇ ಅತ್ತೆಯ ಕನ್ನಡಕಕ್ಕೆ ಕೈ ಹಾಕಿದ್ದ. ಅಜ್ಜನಲ್ಲಿಯೂ ಒಂದಿತ್ತು, ಇದು ಅದೇ ಇದ್ದರೂ ಇರಬಹುದು ಎಂಬ ಶಂಕೆ ಅವನಿಗೆ. {{gap}}“ಮುಟ್ಟ ಬಾರದಪ್ಪಾ ಅದನ್ನ” ಎಂದು ತಾಯಿ ಮಗುವಿಗೆ ಆದೇಶವಿತ್ತಳು. {{gap}}“ಹುಂ ?” ಎಂದು ಮುರಲಿ ಹುಬ್ಬೇರಿಸಿ ಅಬ್ಬರಿಸಿದ, ಅಂತಹ ಆಜ್ಞೆ ತನಗೆ ಅಪ್ರಿಯವೆನ್ನುವಂತೆ. {{gap}}“ಕೆಟ್ಟ ಹುಡುಗ ! ಕನ್ನಡಕ ಕೊಡಲೇನೋ ನಿಂಗೆ ?” ಎಂದು, ತನ್ನ : ಮುಖದಿಂದ ಕನ್ನಡಕವನ್ನು ತೆಗೆದು, ವಿಶಾಲಾಕ್ಷಿ ಅದನ್ನು ಕೈಯಲ್ಲಿ ಹಿಡಿದಳು. {{gap}}ಬಾಲ್ಯದಿಂದಲೂ ತನ್ನ ಗೆಳತಿಯಾಗಿದ್ದ ವಿಶಾಲಿಯ ಮುಖವನ್ನು ಒಂದು ಕ್ಷಣ ನರ್ಮದಾ ದಿಟ್ಟಿಸಿ ನೋಡಿದಳು, ಕನ್ನಡಕ ತೆಗೆದಾಗ, ಬೆಳಕನ್ನು ಇದಿರಿಸುವುದು ತಮಗೆ ಅಭ್ಯಾಸವೇ ಇಲ್ಲವೇನೋ ಎನ್ನುವಂತೆ ಎಷ್ಟೊಂದು ಕಿರಿದಾಗಿ ಕಣ್ಣುಗಳು ಕಂಡುವು! ಮುರಲಿಯ ಗಲ್ಲವನ್ನು ಚುಂಬಿಸಿದ್ದ ತುಟಿಗಳು ಮಾತ್ರ, ಹಿಂದಿನಂತೆ ಒಣಗಿರಲಿಲ್ಲ, ಸಾಕಷ್ಟು ಮೋಹಕವೂ ಆಗಿತ್ತು ಮುಗುಳುನಗೆ. ವಕ್ಷಸ್ಥಲವೂ ತುಂಬಿಕೊಂಡಿತ್ತು ಸ್ವಲ್ಪಮಟ್ಟಿಗೆ {{gap}}“ಅತ್ತೆಗೊಂದು ಉಮ್ಮ ಕೊಡು ಮರೀ.” {{gap}}ಮುರಲಿ ಬಲು ಉದಾರಿ, ಕಣ್ಣು ಮುಚ್ಚಿ ವಿಶಾಲಿಯ ಮೂಗಿಗೇ ಆತ ಮುತ್ತಿಟ್ಟ, ಕಣ್ಣು ತೆರೆದು, 'ಸಾಕೇ?” ಎನ್ನುವಂತೆ ನಕ್ಕ, ಬಾಯಲ್ಲಿ ಬೆಳ್ಳಗಿನ<noinclude></noinclude> c6s1rpyvfyeizh0wnm0kwsod5u05okz 323897 323888 2026-06-01T14:54:13Z Shreelatha.Halemane 7642 /* Validated */ 323897 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೨೯}} ಅದನ್ನು ನೋಡಿದ್ದಳು : “ಅದೇನೇ ?” ಎಂದು ಕೇಳಿರಲಿಲ್ಲ, ಅಷ್ಟೆ: ವಿಶಾಲಾಕ್ಷಿ ಎದ್ದು ಮಗುವಿನ ಬಳಿಸಾರಿ, ಕೈಗಳನ್ನು ಮುಂದಕ್ಕೆ ಚಾಚಿದಳು ಅನಿರ್ಧಾರದ ನೋಟದಿಂದ, ಕನ್ನಡಕವಿದ್ದ ಆ ಮುಖವನ್ನು, ಒಂದು ಕ್ಷಣ ಮಗು ನೋಡಿತು... {{gap}}“ಅತ್ತೆ ಕಣೋ, ಹೋಗೋ” ಎಂದು ಉತ್ತೇಜನವಿತ್ತಳು ನರ್ಮದಾ .. {{gap}}ಮುರಲಿ 'ಗುರುತು ಸಿಕ್ಕಿತೆನ್ನುವಂತೆ ನಕ್ಕ. {{gap}}ಅವನನ್ನೆತ್ತಿಕೊಂಡು ವಿಶಾಲಾಕ್ಷಿ ಮುದ್ದಾಡಿದಳು, ತಾನು ಇರುವುದೇ ಅಂತಹ ಮುದ್ದಾಟಕ್ಕೆನ್ನುವಂತೆ, ಮುರಲೀಧರ ಆ ಒಲವನ್ನೆಲ್ಲ ಸ್ವೀಕರಿಸಿದ. {{gap}}ಮನಸ್ಸಿನಲ್ಲೇ ಲೆಕ್ಕ ಹಾಕಿ ವಿಶಾಲಾಕ್ಷಿ ಅಂದಳು: {{gap}}“ಒಂದೂವರೆ ವರ್ಷ ಆಗಿಹೋಯ್ತು, ಅಲ್ವೇನೇ ?” {{gap}}“ಗಣಿತದಲ್ಲಿ ಯಾವತ್ತು ನಿನಗೆ ಪೂರ್ತಿ ಮಾರ್ಕು ಬಂದಿರಲಿಲ್ಲ, ಹೇಳು” {{gap}}ಮುರಲಿ ಆಗಲೇ ಅತ್ತೆಯ ಕನ್ನಡಕಕ್ಕೆ ಕೈ ಹಾಕಿದ್ದ. ಅಜ್ಜನಲ್ಲಿಯೂ ಒಂದಿತ್ತು, ಇದು ಅದೇ ಇದ್ದರೂ ಇರಬಹುದು ಎಂಬ ಶಂಕೆ ಅವನಿಗೆ. {{gap}}“ಮುಟ್ಟ ಬಾರದಪ್ಪಾ ಅದನ್ನ” ಎಂದು ತಾಯಿ ಮಗುವಿಗೆ ಆದೇಶವಿತ್ತಳು. {{gap}}“ಹುಂ ?” ಎಂದು ಮುರಲಿ ಹುಬ್ಬೇರಿಸಿ ಅಬ್ಬರಿಸಿದ, ಅಂತಹ ಆಜ್ಞೆ ತನಗೆ ಅಪ್ರಿಯವೆನ್ನುವಂತೆ. {{gap}}“ಕೆಟ್ಟ ಹುಡುಗ ! ಕನ್ನಡಕ ಕೊಡಲೇನೋ ನಿಂಗೆ ?” ಎಂದು, ತನ್ನ : ಮುಖದಿಂದ ಕನ್ನಡಕವನ್ನು ತೆಗೆದು, ವಿಶಾಲಾಕ್ಷಿ ಅದನ್ನು ಕೈಯಲ್ಲಿ ಹಿಡಿದಳು. {{gap}}ಬಾಲ್ಯದಿಂದಲೂ ತನ್ನ ಗೆಳತಿಯಾಗಿದ್ದ ವಿಶಾಲಿಯ ಮುಖವನ್ನು ಒಂದು ಕ್ಷಣ ನರ್ಮದಾ ದಿಟ್ಟಿಸಿ ನೋಡಿದಳು, ಕನ್ನಡಕ ತೆಗೆದಾಗ, ಬೆಳಕನ್ನು ಇದಿರಿಸುವುದು ತಮಗೆ ಅಭ್ಯಾಸವೇ ಇಲ್ಲವೇನೋ ಎನ್ನುವಂತೆ ಎಷ್ಟೊಂದು ಕಿರಿದಾಗಿ ಕಣ್ಣುಗಳು ಕಂಡುವು! ಮುರಲಿಯ ಗಲ್ಲವನ್ನು ಚುಂಬಿಸಿದ್ದ ತುಟಿಗಳು ಮಾತ್ರ, ಹಿಂದಿನಂತೆ ಒಣಗಿರಲಿಲ್ಲ, ಸಾಕಷ್ಟು ಮೋಹಕವೂ ಆಗಿತ್ತು ಮುಗುಳುನಗೆ. ವಕ್ಷಸ್ಥಲವೂ ತುಂಬಿಕೊಂಡಿತ್ತು ಸ್ವಲ್ಪಮಟ್ಟಿಗೆ {{gap}}“ಅತ್ತೆಗೊಂದು ಉಮ್ಮ ಕೊಡು ಮರೀ.” {{gap}}ಮುರಲಿ ಬಲು ಉದಾರಿ, ಕಣ್ಣು ಮುಚ್ಚಿ ವಿಶಾಲಿಯ ಮೂಗಿಗೇ ಆತ ಮುತ್ತಿಟ್ಟ, ಕಣ್ಣು ತೆರೆದು, 'ಸಾಕೇ?” ಎನ್ನುವಂತೆ ನಕ್ಕ, ಬಾಯಲ್ಲಿ ಬೆಳ್ಳಗಿನ<noinclude></noinclude> fzmwx3586lf5ojlspg0noot2h5ao4wd ಪುಟ:VISHAALAAKSHI - Niranjana.pdf/೩೨ 104 37868 323889 100027 2026-06-01T14:35:10Z Shreesha Sharma 7840 /* Proofread */ 323889 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೩೦|right=}} ಪುಟ್ಟ ಹಲ್ಲುಗಳಿದ್ದವು ಹಲವು.ಮುರಲಿ ಹಾಗೆ ನಕ್ಕಾಗ ಲೋಕವೆಲ್ಲ ಸುಂದರವಾಗಿ ವಿಶಾಲಾಕ್ಷಿಗೆ ಕಂಡಿತು. {{gap}}ಮುರಲಿಯ ಲಾಲನೆ ಪಾಲನೆಯ ಸಮಸ್ಯೆಗಳ ನೆನಪಾಗುತ್ತೆ ಆಕೆ ಕೇಳಿದಳು: {{gap}}“ತೊಟ್ಟಿಲು ಮೇಲೆಯೇ ಇದೆ, ಅಲ್ವಾ ?” {{gap}}“ತೊಟ್ಟಿಲು? ಇನ್ಯಾತಕ್ಕೇ ಅದು? ಪುಟ್ಟ ಹಾಸಿಗೆ ಮೇಲೆ ಮಲಕೋ ತಾನೆ ಈಗ? {{gap}}“ಹೌದೇ ?....ಮಹಡಿಗೆ ಹತ್ತಿಸೋದು ಇಳಿಸೋದು ತೊಂದರೆ ಯಾಗೋಲ್ವಾ?” , {{gap}}“, “ಮೇಲ್ಗಡೆ ಬಾಗಿಲು ಇಡಿಸಿಟ್ಟಿದಾರೆ ಮಾವ, ಅಲ್ಲಿ ನೋಡು, ಕೆಳಗೂ 'ಒಂದು ಗೇಟು. {{gap}}“ಒಳ್ಳೇದಾಯ್ತು.” {{gap}}ಸಂವಾದಕ್ಕೆ ಕಿವಿಗೊಡುತ್ತಿದ್ದ ಮುರಲಿ, ಮಹಡಿ ಮೆಟ್ಟಿಲ ಕಡೆಗೆ ಬೊಟ್ಟು ಮಾಡುತ್ತ ಅಂದ : {{gap}}“ಗೇತು, ಗೇತು.” {{gap}}ಮಕ್ಕಳ ಭಾಷೆಯಲ್ಲಿ ಮಾತನಾಡಲು ಯತ್ನಿಸುತ್ತ ವಿಶಾಲಿ ನುಡಿದಳು : {{gap}}“ಬಬ್ಬ ! ಆಂ ? ಹೋಗ್ಬಾರ್ದು !” {{gap}}“ಎಷ್ಟೊಂದು ಭಾರವೇ ಗು೦ಡ !” ಎನ್ನುತ್ತ ಮಗುವನ್ನು ಆಕೆ ಕೆಳಕ್ಕಿಳಿಸಿದಳು. {{gap}}ಮಗನ ಭಾರದ ಲೆಕ್ಕವನ್ನೂ ಒಪ್ಪಿಸಿದಳು ನರ್ಮದಾ. {{gap}}“ಇಪ್ಪತ್ತಾರು ಪೌಂಡು, ಅವರಪ್ಪನ ಡಿಸ್ಪೆನ್ಸರಿ ತೋರಿಸೋಣಾಂತ ಮೊನ್ನೆ ಕರಕೊಂಡು ಹೋಗಿದ್ದೆ, ಅಲ್ಲೇ ತೂಗಿ ನೋಡಿದ್ದು, ಇನ್ನು ಮನೆಗೆ ಹೋಗೋಣ ಅಂದರೆ ಕೇಳಲೇವಲ್ಲ. ಮತ್ತೆ ಮಾಡು', 'ಮತ್ತೆ ಮಾಡು'-ಅಂತ. ಮತ್ತೊಮ್ಮೆ ತೂಕ ನೋಡುವ ಯಂತ್ರದ ಮೇಲಿರಿಸೋದಕ್ಕೆ, ಯಂತ್ರದ ಮುಳ್ಳು ತಿರುಗ್ತಾ ಇದ್ದರೆ, ಆಯ್ !” ಅಂತ ಕೈತಟ್ಟಿ ಕುಣಿಯೋದು....ಡಾಕ್ಟರು ಮಾಡೋ ಕೆಲಸ ಏನು ಅನ್ನೋದೂ ಅವನಿಗೆ ಗೊತ್ತಾಗಿದೆ...ನೋಡು, ಹೇಳ್ತಾನೆ, ಅಪ್ಪಯ್ಯ. ಏನ್ಮಾಡ್ತಾರೆ ಮರೀ?”<noinclude></noinclude> jejofg8rr2y7ddofgqe98wavddzf7yl 323898 323889 2026-06-01T14:54:22Z Shreelatha.Halemane 7642 /* Validated */ 323898 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವಿಶಾಲಾಕ್ಷಿ|left=೩೦|right=}} ಪುಟ್ಟ ಹಲ್ಲುಗಳಿದ್ದವು ಹಲವು.ಮುರಲಿ ಹಾಗೆ ನಕ್ಕಾಗ ಲೋಕವೆಲ್ಲ ಸುಂದರವಾಗಿ ವಿಶಾಲಾಕ್ಷಿಗೆ ಕಂಡಿತು. {{gap}}ಮುರಲಿಯ ಲಾಲನೆ ಪಾಲನೆಯ ಸಮಸ್ಯೆಗಳ ನೆನಪಾಗುತ್ತೆ ಆಕೆ ಕೇಳಿದಳು: {{gap}}“ತೊಟ್ಟಿಲು ಮೇಲೆಯೇ ಇದೆ, ಅಲ್ವಾ ?” {{gap}}“ತೊಟ್ಟಿಲು? ಇನ್ಯಾತಕ್ಕೇ ಅದು? ಪುಟ್ಟ ಹಾಸಿಗೆ ಮೇಲೆ ಮಲಕೋ ತಾನೆ ಈಗ? {{gap}}“ಹೌದೇ ?....ಮಹಡಿಗೆ ಹತ್ತಿಸೋದು ಇಳಿಸೋದು ತೊಂದರೆ ಯಾಗೋಲ್ವಾ?” , {{gap}}“, “ಮೇಲ್ಗಡೆ ಬಾಗಿಲು ಇಡಿಸಿಟ್ಟಿದಾರೆ ಮಾವ, ಅಲ್ಲಿ ನೋಡು, ಕೆಳಗೂ 'ಒಂದು ಗೇಟು. {{gap}}“ಒಳ್ಳೇದಾಯ್ತು.” {{gap}}ಸಂವಾದಕ್ಕೆ ಕಿವಿಗೊಡುತ್ತಿದ್ದ ಮುರಲಿ, ಮಹಡಿ ಮೆಟ್ಟಿಲ ಕಡೆಗೆ ಬೊಟ್ಟು ಮಾಡುತ್ತ ಅಂದ : {{gap}}“ಗೇತು, ಗೇತು.” {{gap}}ಮಕ್ಕಳ ಭಾಷೆಯಲ್ಲಿ ಮಾತನಾಡಲು ಯತ್ನಿಸುತ್ತ ವಿಶಾಲಿ ನುಡಿದಳು : {{gap}}“ಬಬ್ಬ ! ಆಂ ? ಹೋಗ್ಬಾರ್ದು !” {{gap}}“ಎಷ್ಟೊಂದು ಭಾರವೇ ಗು೦ಡ !” ಎನ್ನುತ್ತ ಮಗುವನ್ನು ಆಕೆ ಕೆಳಕ್ಕಿಳಿಸಿದಳು. {{gap}}ಮಗನ ಭಾರದ ಲೆಕ್ಕವನ್ನೂ ಒಪ್ಪಿಸಿದಳು ನರ್ಮದಾ. {{gap}}“ಇಪ್ಪತ್ತಾರು ಪೌಂಡು, ಅವರಪ್ಪನ ಡಿಸ್ಪೆನ್ಸರಿ ತೋರಿಸೋಣಾಂತ ಮೊನ್ನೆ ಕರಕೊಂಡು ಹೋಗಿದ್ದೆ, ಅಲ್ಲೇ ತೂಗಿ ನೋಡಿದ್ದು, ಇನ್ನು ಮನೆಗೆ ಹೋಗೋಣ ಅಂದರೆ ಕೇಳಲೇವಲ್ಲ. ಮತ್ತೆ ಮಾಡು', 'ಮತ್ತೆ ಮಾಡು'-ಅಂತ. ಮತ್ತೊಮ್ಮೆ ತೂಕ ನೋಡುವ ಯಂತ್ರದ ಮೇಲಿರಿಸೋದಕ್ಕೆ, ಯಂತ್ರದ ಮುಳ್ಳು ತಿರುಗ್ತಾ ಇದ್ದರೆ, ಆಯ್ !” ಅಂತ ಕೈತಟ್ಟಿ ಕುಣಿಯೋದು....ಡಾಕ್ಟರು ಮಾಡೋ ಕೆಲಸ ಏನು ಅನ್ನೋದೂ ಅವನಿಗೆ ಗೊತ್ತಾಗಿದೆ...ನೋಡು, ಹೇಳ್ತಾನೆ, ಅಪ್ಪಯ್ಯ. ಏನ್ಮಾಡ್ತಾರೆ ಮರೀ?”<noinclude></noinclude> 5x7ugfbygyadlaqr4c6o7mshghm5ffs ಪುಟ:VISHAALAAKSHI - Niranjana.pdf/೩೩ 104 37869 323890 100028 2026-06-01T14:40:25Z Shreesha Sharma 7840 /* Proofread */ 323890 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೩೧}} {{gap}}ಮಗು ಅಂದಿತು : {{gap}}ಚುಚ್ಚು !” {{gap}}ವಿಶಾಲಿಯ ಜತೆ ನರ್ಮದೆಯೂ ನಕ್ಕಳು ಮಗುವಿನ ಮಾತು ಕೇಳಿ. {{gap}}ಅವರನ್ನು ಮತ್ತೊಮ್ಮೆ ನಗಿಸೋಣವೆಂದು ಮಗು ಹೇಳಿತು : {{gap}}“ಉಮ್ಮ! ಅಮ್ಮನಿಗೆ ಉಮ್ಮ!” {{gap}}ವಿಶಾಲಿ ಗಟ್ಟಿಯಾಗಿ ನಕ್ಕಳು, ನರ್ಮದೆಯ ಕೆನ್ನೆಗಳು ರಂಗೇರಿದುವು. “ಥೂ ನಿನ್ನ !” ಎಂದಳಾಕೆ. {{gap}}ಇವರನ್ನೆಲ್ಲ ನೋಡುತ್ತ ನಿಂತಿದ್ದ ಕೆಲಸದ ಹುಡುಗಿಯು ಮುಸಿಮುಸಿ ನಕ್ಕಳು. {{gap}}ಆಕೆಯ ಕಡೆ ನೋಡಿ, ಸ್ವರವೇರಿಸಿ, ನರ್ಮದಾ ಅಂದಳು : {{gap}}“ಮಗೂನ ಎತ್ಕೊಂಡು ಹೊರಗೆ ಆಡಿಸು, ಬೀದಿ ಕಡೆ ಹೋಗ್ಬೇಡ.” {{gap}}ಹಿರಿಯರ ಸಹವಾಸಕ್ಕಿಂತ ಸೀತೆಯೇ ಮೇಲೆಂದು, ಆ ಹುಡುಗಿಯ ಜತೆ ಮುರಲಿ ಓಡಿದ. {{gap}}ಮತ್ತೆ ಸೋಫಾದ ಮೇಲೆ ವಿಶಾಲಿ ಕುಳಿತುದು ಶೋತೃವಾಗಿ, ಹೆಚ್ಚಿನ ಮಾತೆಲ್ಲ ನರ್ಮದೆಯದೇ, ಮಗನ ಗುಣಗಾನ, ದಿನಚರಿಯ ಬಣ್ಣನೆ. ಅಳೋದೇ ಇಲ್ಲ ನೋಡು....” ಅಪ್ಪಯ್ಯ ಅಂದರಂತೂ ಬಹಳ ಇಷ್ಟ ಅವನಿಗೆ....? [ಇವಳಿಗೂ ಶ್ರೀಕಾಂತ ಈಗ ಬಹಳ ಇಷ್ಟವೇನೋ !”] 'ತುಂಟ ಅಂದರೆ ತುಂಟ.' - {{gap}}ಮುರಲಿಯೇ ಸರ್ವಸ್ವ ನರ್ಮದೆಗೆ ಈಗ, ಕ್ರಮಕ್ರಮವಾಗಿ, ನಿರ್ದಿಷ್ಟವಾಗಿ, ತರ್ಕಬದ್ಧವಾಗಿ, ಅವಳು ಬದಲಾಗಿದ್ದಳು ಎಲ್ಲಿಂದ ಎಲ್ಲಿಗೆ ! ಹಿಂದಿನ ತನ್ನ ಗೆಳತಿ ಈಕೆ ಅಲ್ಲವೇ ಅಲ್ಲ. ಪುಟಕ್ಕಿಟ್ಟ ಬಂಗಾರ. ಆಗ ಒಡ್ಡು ಒಡ್ಡಾಗಿತ್ತು. ಕಲ್ಮಶವಿತ್ತು, ಈಗ ಪುತ್ಥಳಿ, ಬಲು ಚಂದ! {{gap}}ಭಾಗೀರಥಮ್ಮ ಇಣಿಕಿ ನೋಡಿ ಅಂದರು : - {{gap}}ಇಬ್ಬರೂ ಊಟಕ್ಕೇಳಿ.” {{gap}}“ನನ್ನದು ಆಗಿದೆ ಕಣ್ರೀ, ಕಾಲೇಜಿಗೆ ಹೊರಟವಳು ಹೀಗೆಯೇ ಬಂದೆ? ಎಂದಳು ವಿಶಾಲಾಕ್ಷಿ, {{gap}}“ಅರಗಿಹೋಗಿರುತ್ತೆ, ಒಂದು ತುತ್ತು ಉಣ್ಣೋದಕ್ಕೇನು ?” {{gap}}“ಇಲ್ಲರೀ, ಖಂಡಿತ ಬೇಡಿ.”<noinclude></noinclude> la350um8mk6xyb7ic2bsp99yc7qg745 323899 323890 2026-06-01T14:54:35Z Shreelatha.Halemane 7642 /* Validated */ 323899 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೩೧}} {{gap}}ಮಗು ಅಂದಿತು : {{gap}}ಚುಚ್ಚು !” {{gap}}ವಿಶಾಲಿಯ ಜತೆ ನರ್ಮದೆಯೂ ನಕ್ಕಳು ಮಗುವಿನ ಮಾತು ಕೇಳಿ. {{gap}}ಅವರನ್ನು ಮತ್ತೊಮ್ಮೆ ನಗಿಸೋಣವೆಂದು ಮಗು ಹೇಳಿತು : {{gap}}“ಉಮ್ಮ! ಅಮ್ಮನಿಗೆ ಉಮ್ಮ!” {{gap}}ವಿಶಾಲಿ ಗಟ್ಟಿಯಾಗಿ ನಕ್ಕಳು, ನರ್ಮದೆಯ ಕೆನ್ನೆಗಳು ರಂಗೇರಿದುವು. “ಥೂ ನಿನ್ನ !” ಎಂದಳಾಕೆ. {{gap}}ಇವರನ್ನೆಲ್ಲ ನೋಡುತ್ತ ನಿಂತಿದ್ದ ಕೆಲಸದ ಹುಡುಗಿಯು ಮುಸಿಮುಸಿ ನಕ್ಕಳು. {{gap}}ಆಕೆಯ ಕಡೆ ನೋಡಿ, ಸ್ವರವೇರಿಸಿ, ನರ್ಮದಾ ಅಂದಳು : {{gap}}“ಮಗೂನ ಎತ್ಕೊಂಡು ಹೊರಗೆ ಆಡಿಸು, ಬೀದಿ ಕಡೆ ಹೋಗ್ಬೇಡ.” {{gap}}ಹಿರಿಯರ ಸಹವಾಸಕ್ಕಿಂತ ಸೀತೆಯೇ ಮೇಲೆಂದು, ಆ ಹುಡುಗಿಯ ಜತೆ ಮುರಲಿ ಓಡಿದ. {{gap}}ಮತ್ತೆ ಸೋಫಾದ ಮೇಲೆ ವಿಶಾಲಿ ಕುಳಿತುದು ಶೋತೃವಾಗಿ, ಹೆಚ್ಚಿನ ಮಾತೆಲ್ಲ ನರ್ಮದೆಯದೇ, ಮಗನ ಗುಣಗಾನ, ದಿನಚರಿಯ ಬಣ್ಣನೆ. ಅಳೋದೇ ಇಲ್ಲ ನೋಡು....” ಅಪ್ಪಯ್ಯ ಅಂದರಂತೂ ಬಹಳ ಇಷ್ಟ ಅವನಿಗೆ....? [ಇವಳಿಗೂ ಶ್ರೀಕಾಂತ ಈಗ ಬಹಳ ಇಷ್ಟವೇನೋ !”] 'ತುಂಟ ಅಂದರೆ ತುಂಟ.' - {{gap}}ಮುರಲಿಯೇ ಸರ್ವಸ್ವ ನರ್ಮದೆಗೆ ಈಗ, ಕ್ರಮಕ್ರಮವಾಗಿ, ನಿರ್ದಿಷ್ಟವಾಗಿ, ತರ್ಕಬದ್ಧವಾಗಿ, ಅವಳು ಬದಲಾಗಿದ್ದಳು ಎಲ್ಲಿಂದ ಎಲ್ಲಿಗೆ ! ಹಿಂದಿನ ತನ್ನ ಗೆಳತಿ ಈಕೆ ಅಲ್ಲವೇ ಅಲ್ಲ. ಪುಟಕ್ಕಿಟ್ಟ ಬಂಗಾರ. ಆಗ ಒಡ್ಡು ಒಡ್ಡಾಗಿತ್ತು. ಕಲ್ಮಶವಿತ್ತು, ಈಗ ಪುತ್ಥಳಿ, ಬಲು ಚಂದ! {{gap}}ಭಾಗೀರಥಮ್ಮ ಇಣಿಕಿ ನೋಡಿ ಅಂದರು : - {{gap}}ಇಬ್ಬರೂ ಊಟಕ್ಕೇಳಿ.” {{gap}}“ನನ್ನದು ಆಗಿದೆ ಕಣ್ರೀ, ಕಾಲೇಜಿಗೆ ಹೊರಟವಳು ಹೀಗೆಯೇ ಬಂದೆ? ಎಂದಳು ವಿಶಾಲಾಕ್ಷಿ, {{gap}}“ಅರಗಿಹೋಗಿರುತ್ತೆ, ಒಂದು ತುತ್ತು ಉಣ್ಣೋದಕ್ಕೇನು ?” {{gap}}“ಇಲ್ಲರೀ, ಖಂಡಿತ ಬೇಡಿ.”<noinclude></noinclude> k9xngjkwyi7j2rsevs65n3n1nwtvanf ಪುಟ:VISHAALAAKSHI - Niranjana.pdf/೩೪ 104 37870 323895 100029 2026-06-01T14:53:18Z Shreesha Sharma 7840 /* Proofread */ 323895 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೩೨|right=}} {{gap}}ಗೆಳತಿಯ ಕಡೆ ತಿರುಗಿ ವಿಶಾಲಾಕ್ಷಿ ಅಂದಳು : {{gap}}“ನೀನು ಊಟಮಾಡೇ.” {{gap}}ಭಾಗೀರಥಮ್ಮನೂ ಅಂದರು: {{gap}}“ನೀನಾದರೂ ಬಾ, ಅವನು ಬರೋದು ಇನ್ನೆಷ್ಟು ತಡವಾಗುತ್ತೋ ?” {{gap}}ದೃಢ ಧ್ವನಿಯಲ್ಲಿ ನರ್ಮದೆ ಅಂದಳು : {{gap}}“ನನಗೆ ಹಸಿವಿಲ್ಲ ಅತ್ತೆ, ಅವರ ಜತೇಲಿ ಊಟಮಾಡ್ತೀನಿ? {{gap}}ಭಾಗೀರಥಮ್ಮ ಒಳಹೋದೊಡನೆ ವಿಶಾಲಾಕ್ಷಿ ಕೇಳಿದಳು ; {{gap}}“ಮುರಲೀದು ಊಟ ಆಯ್ತಾ ?” {{gap}}“ಹತ್ತು ಗಂಟೆಗೇ ಆಯ್ತು, ಇನ್ನು ಅಪ್ಪಯ್ಯನ ಜತೆ ಪುನಃ ಕೂತ್ಕೋತಾನೆ, ಆಮೇಲೆ ನಿದ್ದೆ.” {{gap}}ಆಪ್ತರು ಪರಿಚಿತರಿಗೆ ಸಂಬಂಧಿಸಿಯೂ ಒಂದೆರಡು ಮಾತುಗಳಾದುವು. {{gap}}....'ನಿಮ್ಮಣ್ಣನಿಂದ ಕಾಗದ ಬಂತೆ ?” “ಮೈನಾವತಿ ಬರೆದಿದ್ದಳು ಕಣೇ. ಪುನಃ ಬಸುರಿಯಂತೆ, ಈ ಸಲ ಹೆಣ್ಣು ಹುಟ್ಟಲಿ: ನನ್ನ ಮಗನಿಗೆ ತಂದ್ಕೊತೀನಿಅಂತ ಉತ್ತರ ಹಾಕಿದೀನಿ, ಒಳ್ಳೆ ಹೆಸರಿಡು ; ಇಲ್ಲದೇ ಹೋದರೆ ಇಲ್ಲಿ ಬದಲಾಯಿಸಿಡ್ತೀನಿ ! ಅಂತಲೂ ಹೆದರಿಸಿದ್ದೀನಿ' 'ಗಿರಿಜಾಬಾಯಿ ಚೆನ್ನಾಗಿ ದಾರಾ ?” “ಈ ಸಲ ಮೈನಾ ಹೆರಿಗೆಗೆ ತವರಿಗೆ ಬರಲಾರಳು'.... {{gap}}ಭಾಗೀರಥಮ್ಮ ನಿಂಬೆಹಣ್ಣಿನ ಪಾನಕವನ್ನೂ ಎರಡು ಕಿತ್ತಳೆಹಣ್ಣುಗಳನ್ನೂ : ತಂದುಕೊಟ್ಟರು-ವಿಶಾಲಿಗೋಸ್ಕರ, ಆಕೆ ಪಾನಕ ಕುಡಿದಳು, ಹಣ್ಣು ತಿನ್ನಲು | ನರ್ಮದೆಯೂ ನೆರವಾದಳು. {{gap}}ತಂದಿದ್ದ ಕಟ್ಟನ್ನು ವಿಶಾಲಿ ಮರೆತಿದ್ದಳು ಎಂದಲ್ಲ. ಆದರೆ, ಹೇಗೆ. ಆ ವಿಷಯವೆತ್ತಬೇಕು ? ಒಂದು ಬಗೆಯ ಸಂಕೋಚ, ಇನ್ನೊಮ್ಮೆ ತೋರಿಸಿದರಾಯ್ತು' ಎನ್ನುವವರೆಗೂ {{gap}}ನರ್ಮದೆಯಾದರೂ ಎಷ್ಟರತನಕ ಕುತೂಹಲವನ್ನು ತಡೆ ಹಿಡಿಯಬಲ್ಲಳು ? ಆಕೆ ಕೇಳಿಯೇಬಿಟ್ಟಳು : {{gap}}ಗಾಂಭೀರ್ಯವನ್ನು ಉಳಿಸಿಕೊಳ್ಳಲು ವ್ಯರ್ಥಯತ್ನ ಮಾಡುತ್ತಾ ವಿಶಾಲಿ ಅಂದಳು : .<noinclude></noinclude> 9wf8arl32g5ngtim4idnu3bztchmxli 323896 323895 2026-06-01T14:53:53Z Shreelatha.Halemane 7642 /* Validated */ 323896 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವಿಶಾಲಾಕ್ಷಿ|left=೩೨|right=}} {{gap}}ಗೆಳತಿಯ ಕಡೆ ತಿರುಗಿ ವಿಶಾಲಾಕ್ಷಿ ಅಂದಳು : {{gap}}“ನೀನು ಊಟಮಾಡೇ.” {{gap}}ಭಾಗೀರಥಮ್ಮನೂ ಅಂದರು: {{gap}}“ನೀನಾದರೂ ಬಾ, ಅವನು ಬರೋದು ಇನ್ನೆಷ್ಟು ತಡವಾಗುತ್ತೋ ?” {{gap}}ದೃಢ ಧ್ವನಿಯಲ್ಲಿ ನರ್ಮದೆ ಅಂದಳು : {{gap}}“ನನಗೆ ಹಸಿವಿಲ್ಲ ಅತ್ತೆ, ಅವರ ಜತೇಲಿ ಊಟಮಾಡ್ತೀನಿ? {{gap}}ಭಾಗೀರಥಮ್ಮ ಒಳಹೋದೊಡನೆ ವಿಶಾಲಾಕ್ಷಿ ಕೇಳಿದಳು ; {{gap}}“ಮುರಲೀದು ಊಟ ಆಯ್ತಾ ?” {{gap}}“ಹತ್ತು ಗಂಟೆಗೇ ಆಯ್ತು, ಇನ್ನು ಅಪ್ಪಯ್ಯನ ಜತೆ ಪುನಃ ಕೂತ್ಕೋತಾನೆ, ಆಮೇಲೆ ನಿದ್ದೆ.” {{gap}}ಆಪ್ತರು ಪರಿಚಿತರಿಗೆ ಸಂಬಂಧಿಸಿಯೂ ಒಂದೆರಡು ಮಾತುಗಳಾದುವು. {{gap}}....'ನಿಮ್ಮಣ್ಣನಿಂದ ಕಾಗದ ಬಂತೆ ?” “ಮೈನಾವತಿ ಬರೆದಿದ್ದಳು ಕಣೇ. ಪುನಃ ಬಸುರಿಯಂತೆ, ಈ ಸಲ ಹೆಣ್ಣು ಹುಟ್ಟಲಿ: ನನ್ನ ಮಗನಿಗೆ ತಂದ್ಕೊತೀನಿಅಂತ ಉತ್ತರ ಹಾಕಿದೀನಿ, ಒಳ್ಳೆ ಹೆಸರಿಡು ; ಇಲ್ಲದೇ ಹೋದರೆ ಇಲ್ಲಿ ಬದಲಾಯಿಸಿಡ್ತೀನಿ ! ಅಂತಲೂ ಹೆದರಿಸಿದ್ದೀನಿ' 'ಗಿರಿಜಾಬಾಯಿ ಚೆನ್ನಾಗಿ ದಾರಾ ?” “ಈ ಸಲ ಮೈನಾ ಹೆರಿಗೆಗೆ ತವರಿಗೆ ಬರಲಾರಳು'.... {{gap}}ಭಾಗೀರಥಮ್ಮ ನಿಂಬೆಹಣ್ಣಿನ ಪಾನಕವನ್ನೂ ಎರಡು ಕಿತ್ತಳೆಹಣ್ಣುಗಳನ್ನೂ : ತಂದುಕೊಟ್ಟರು-ವಿಶಾಲಿಗೋಸ್ಕರ, ಆಕೆ ಪಾನಕ ಕುಡಿದಳು, ಹಣ್ಣು ತಿನ್ನಲು | ನರ್ಮದೆಯೂ ನೆರವಾದಳು. {{gap}}ತಂದಿದ್ದ ಕಟ್ಟನ್ನು ವಿಶಾಲಿ ಮರೆತಿದ್ದಳು ಎಂದಲ್ಲ. ಆದರೆ, ಹೇಗೆ. ಆ ವಿಷಯವೆತ್ತಬೇಕು ? ಒಂದು ಬಗೆಯ ಸಂಕೋಚ, ಇನ್ನೊಮ್ಮೆ ತೋರಿಸಿದರಾಯ್ತು' ಎನ್ನುವವರೆಗೂ {{gap}}ನರ್ಮದೆಯಾದರೂ ಎಷ್ಟರತನಕ ಕುತೂಹಲವನ್ನು ತಡೆ ಹಿಡಿಯಬಲ್ಲಳು ? ಆಕೆ ಕೇಳಿಯೇಬಿಟ್ಟಳು : {{gap}}ಗಾಂಭೀರ್ಯವನ್ನು ಉಳಿಸಿಕೊಳ್ಳಲು ವ್ಯರ್ಥಯತ್ನ ಮಾಡುತ್ತಾ ವಿಶಾಲಿ ಅಂದಳು : .<noinclude></noinclude> b7p9tc559nroe3zrhwxi915kcc0o8mj ಪುಟ:VISHAALAAKSHI - Niranjana.pdf/೩೫ 104 37871 323900 100030 2026-06-01T14:59:16Z Shreesha Sharma 7840 /* Proofread */ 323900 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೩೩}} {{gap}}“ಅದೇನೇ ಕಟ್ಟು ? ಯಾರಾದಾದರೂ ಮದುವೆ ಇದೆಯಾ ? ಉಡುಗೊರೆ ಇದ್ದ ಹಾಗಿದೆ.” {{gap}}“ಇಲ್ಲವೇ ! ಯಾವುದೋ ಒಂದು ಲೇಖನ ನನ್ನದು ಕಣೇ.”. {{gap}}“ನಿನ್ನದು ? ಅದೇನೇ ? ನೋಟಾ ?” {{gap}}“ಅಲ್ಲವಮ್ಮ, ಲೇಖನ.”. {{gap}}ವಿಶಾಲಿ ಕಟ್ಟು ಬಿಚ್ಚಿದಳು, {{gap}}“ಪ್ರಬುದ್ಧ ಕರ್ಣಾಟಕ, ನನ್ನದೊಂದು ಲೇಖನ ಇದರಲ್ಲಿ ಅಚ್ಚಾಗಿದೆ.”. {{gap}}"ಗವಿಯ ಆಳದಲ್ಲೆಲ್ಲೋ ಹುದುಗಿದ್ದ ಅಸೂಯೆಯ ಕಿಡಿಯೊಂದು ಮೇಲಕ್ಕೆ ಹಾರಲು ಯತ್ನಿಸಿತು. ಆದರೆ, ಹೊರಬರಲಾರದೆ, ಕಳೆಗುಂದಿ, ಬೂದಿಯಾಯಿತು. {{gap}}“ಭೇಷ್ ! ಗ್ರಂಥಕರ್ತೆಯಾದೆಯಲ್ಲೇ !” {{gap}}“ಗ್ರಂಥ ಎಲ್ಬಂತು ? ಏನೋ ನಾಲ್ಕು ಸಾಲು ಗೀಚಿದೆ, ಅಷ್ಟೆ.”. {{gap}}ಲೇಖನದೊಂದು ಪ್ರತಿಯ ಬಿಳಿಯ ಹಾಳೆಯ ಮೇಲೆ, 'ಗೆಳತಿ ನರ್ಮದೆಗೆ ಪ್ರೀತಿಪೂರ್ವಕ' ಎಂದು ಬರೆದು, ತನ್ನ ಸಹಿಹಾಕಿ, ಆಕೆಗೆ ಅದನ್ನು ವಿಶಾಲಾಕ್ಷಿ ಕೊಟ್ಟಳು. {{gap}}“ಇಂಥಾದ್ದು ಇಪ್ಪತ್ತೈದು ಕಳಿಸಿದಾರೆ. ಮೊದಲನೇ ಪ್ರತಿ ನಿನಗೆ ತಗೊಳೇ.” . {{gap}}ಹೃತ್ಪೂರ್ವಕವಾಗಿಯೇ ನರ್ಮದೆ ನುಡಿದಳು : {{gap}}“ಥ್ಯಾಂಕ್ಸ್ !” ಮುದ್ರಿತ ಸಂಚಿಕೆಯನ್ನೂ ತಿರುವಿ ನೋಡಿ ಅವಳು ಕೇಳಿದಳು: {{gap}}“ಇದು ಒಂದೇನಾ ಇರೋದು ?” {{gap}}“ಒಂದೇ.” {{gap}}“ಕನ್ನಡದಲ್ಲಿ ನೀನೇ ಪ್ರಥಮ ಸ್ತ್ರೀ ಲೇಖಿಕೆ ಅನ್ನು.”. {{gap}}“ಇಲ್ಲವಮ್ಮ! ಬೇಕಾದಷ್ಟು ಜನ ಇದಾರೆ, ಕೆಲವರಂತೂ ಬಹಳ ಚೆನ್ನಾಗಿ : ಬರೀತಾರೆ.” - {{gap}}“ಹೌದೆ? ನಾನೂ ಓದಿ ನೋಡೇಕು. ಇಂಗ್ಲಿಷ್ ಆನರ್ಸ್ ತಗೊಂಡಿದ್ದರಿಂದ ಕನ್ನಡದ ಸಂಪರ್ಕವೇ ನನಗಿಲ್ಲ.” {{gap}}“ನನಗೂ ಹಾಗೆಯೇ ಆಗಿತ್ತು ಕಣೇ, ಕನ್ನಡದಲ್ಲೂ ಒಳ್ಳೋಳ್ಳೆ ಪುಸ್ತಕ<noinclude></noinclude> jlvbo4wow0s7d7iotsm50bdpcgh9cr1 323903 323900 2026-06-01T15:12:59Z Pragathi. BH 7585 /* Validated */ 323903 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೩೩}} {{gap}}“ಅದೇನೇ ಕಟ್ಟು ? ಯಾರಾದಾದರೂ ಮದುವೆ ಇದೆಯಾ ? ಉಡುಗೊರೆ ಇದ್ದ ಹಾಗಿದೆ.” {{gap}}“ಇಲ್ಲವೇ ! ಯಾವುದೋ ಒಂದು ಲೇಖನ ನನ್ನದು ಕಣೇ.”. {{gap}}“ನಿನ್ನದು ? ಅದೇನೇ ? ನೋಟಾ ?” {{gap}}“ಅಲ್ಲವಮ್ಮ, ಲೇಖನ.”. {{gap}}ವಿಶಾಲಿ ಕಟ್ಟು ಬಿಚ್ಚಿದಳು, {{gap}}“ಪ್ರಬುದ್ಧ ಕರ್ಣಾಟಕ, ನನ್ನದೊಂದು ಲೇಖನ ಇದರಲ್ಲಿ ಅಚ್ಚಾಗಿದೆ.”. {{gap}}"ಗವಿಯ ಆಳದಲ್ಲೆಲ್ಲೋ ಹುದುಗಿದ್ದ ಅಸೂಯೆಯ ಕಿಡಿಯೊಂದು ಮೇಲಕ್ಕೆ ಹಾರಲು ಯತ್ನಿಸಿತು. ಆದರೆ, ಹೊರಬರಲಾರದೆ, ಕಳೆಗುಂದಿ, ಬೂದಿಯಾಯಿತು. {{gap}}“ಭೇಷ್ ! ಗ್ರಂಥಕರ್ತೆಯಾದೆಯಲ್ಲೇ !” {{gap}}“ಗ್ರಂಥ ಎಲ್ಬಂತು ? ಏನೋ ನಾಲ್ಕು ಸಾಲು ಗೀಚಿದೆ, ಅಷ್ಟೆ.”. {{gap}}ಲೇಖನದೊಂದು ಪ್ರತಿಯ ಬಿಳಿಯ ಹಾಳೆಯ ಮೇಲೆ, 'ಗೆಳತಿ ನರ್ಮದೆಗೆ ಪ್ರೀತಿಪೂರ್ವಕ' ಎಂದು ಬರೆದು, ತನ್ನ ಸಹಿಹಾಕಿ, ಆಕೆಗೆ ಅದನ್ನು ವಿಶಾಲಾಕ್ಷಿ ಕೊಟ್ಟಳು. {{gap}}“ಇಂಥಾದ್ದು ಇಪ್ಪತ್ತೈದು ಕಳಿಸಿದಾರೆ. ಮೊದಲನೇ ಪ್ರತಿ ನಿನಗೆ ತಗೊಳೇ.” . {{gap}}ಹೃತ್ಪೂರ್ವಕವಾಗಿಯೇ ನರ್ಮದೆ ನುಡಿದಳು : {{gap}}“ಥ್ಯಾಂಕ್ಸ್ !” ಮುದ್ರಿತ ಸಂಚಿಕೆಯನ್ನೂ ತಿರುವಿ ನೋಡಿ ಅವಳು ಕೇಳಿದಳು: {{gap}}“ಇದು ಒಂದೇನಾ ಇರೋದು ?” {{gap}}“ಒಂದೇ.” {{gap}}“ಕನ್ನಡದಲ್ಲಿ ನೀನೇ ಪ್ರಥಮ ಸ್ತ್ರೀ ಲೇಖಿಕೆ ಅನ್ನು.”. {{gap}}“ಇಲ್ಲವಮ್ಮ! ಬೇಕಾದಷ್ಟು ಜನ ಇದಾರೆ, ಕೆಲವರಂತೂ ಬಹಳ ಚೆನ್ನಾಗಿ : ಬರೀತಾರೆ.” - {{gap}}“ಹೌದೆ? ನಾನೂ ಓದಿ ನೋಡೇಕು. ಇಂಗ್ಲಿಷ್ ಆನರ್ಸ್ ತಗೊಂಡಿದ್ದರಿಂದ ಕನ್ನಡದ ಸಂಪರ್ಕವೇ ನನಗಿಲ್ಲ.” {{gap}}“ನನಗೂ ಹಾಗೆಯೇ ಆಗಿತ್ತು ಕಣೇ, ಕನ್ನಡದಲ್ಲೂ ಒಳ್ಳೋಳ್ಳೆ ಪುಸ್ತಕ<noinclude></noinclude> 3vyf1hv4uogup81cvc9zfe7s3ji7j40 ಪುಟ:VISHAALAAKSHI - Niranjana.pdf/೩೬ 104 37872 323901 100031 2026-06-01T15:06:54Z Shreesha Sharma 7840 /* Proofread */ 323901 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೩೪|right=}} ಇದೆ ಅಂತ ತೋರಿಸಿಕೊಟ್ಟೋರು ಗಿರಿಜಾಬಾಯಿ, ಈ ಲೇಖನ ನಾನು ಬರೆಯೋಕೆ ಸ್ಫೂರ್ತಿಯೂ ಅವರೇ.” {{gap}}ಗಿರಿಜಾಬಾಯಿ - ವಿಶಾಲಾಕ್ಷಿಯರ ಗೆಳೆತನಕ್ಕೆ ಬೌದ್ದಿಕ ತಳಹದಿಯೂ ಒಂದಿತ್ತು, ಅದನ್ನು ಅರಿಯಲಾರದೆ, ಮೊದಲು, ಅವರಿಬ್ಬರನ್ನೂ ಬರಿದೆ ಟೀಕಿಸಿದವಳು ನರ್ಮದಾ, ಆ ಇಬ್ಬರ ಗೆಳೆತನ ಅರ್ಥಪೂರ್ಣವಾಗಿ ಅವಳಿಗೆ ಕಂಡುದು ಈಗ. {{gap}}“ನಿಮ್ಮ ಗಿರಿಜಾಬಾಯಿ ಬಹಳ ಒಳ್ಳೆಯವರಮ್ಮ, [ಅವರ ಒಬ್ಬನೇ .ಹುಡುಗ ತೀರಿಕೊಂಡ ದುರ್ಘಟನೆ ಎಷ್ಟೊಂದು ಕರುಣಾಜನಕವಾಗಿತ್ತು ! ಅವರನ್ನೂ ಒಮ್ಮೆ ಕರಕೊಂಡು ಬಾರೇ ನಮ್ಮ ಮನೆಗೆ.” - {{gap}}ಆಗಲಿ, ಹೇಳ್ತೀನಿ, ಅವರಿಗೆ ಕೈತುಂಬ ಕೆಲಸ, ಬೆಳಗ್ಗೆ ಎದ್ದು ಅಡುಗೆ, ಹುಡುಗೀರು ಮೂವರನ್ನೂ ಕಾನ್ವೆಂಟ್ ಗೆ ಕಳಿಸಿದ್ಮೇಲೆ ಕಾಲೇಜಿಗೆ ಬರ್ತಾರೆ. ಸಾಯಂಕಾಲ ಬೇಗನೆ ಮನೆಗೆ ಹೊರಟುಹೋಗ್ತಾರೆ, ರಾತ್ರೆಯ ಅಡುಗೆ .. ಇದೆಯಲ್ಲ.....” {{gap}}“ಹೌದು, ಪಾಪ, ಅವರ ಯಜಮಾನರು [ಈ ಪದಪ್ರಯೋಗ ಖಂಡಿತ ಅನುಚಿತವಾಗಿರಲಿಲ್ಲ. ಈಗಲೂ ಬೆಂಗಳೂರಲ್ಲೇ ಇದಾರೆ, ಅಲ್ವಾ ?” {{gap}}“ಹೂಂ, ಇಲ್ಲಿಗೇ ವರ್ಗಮಾಡಿಸ್ಕೋಬೇಕೂಂತ ಪ್ರಯತ್ನವನ್ನೇನೋ ನಡೆಸಿದಾರೆ.” {{gap}}“ಈ ವರ್ಗದ್ದು ಬಹಳ ಕಷ್ಟವಮ್ಮ, ನಿನಗೆ ಗೊತ್ತಲ್ಲ ? ನಮ್ಮವರಂತೂ ಕೊನೇಲಿ ರಾಜಿನಾಮೆಯನ್ನೇ ಕೊಟ್ರು.” {{gap}}“ಸರಕಾರಿ ಚಾಕರಿ ಅಂದರೇ ಹೀಗೆ, ಮೇಲಧಿಕಾರಿಗಳು ಹೃದಯವಿಲ್ಲದ ಕೊರಡುಗಳಾಗಿರುತ್ತಾರೆ.” {{gap}}ನರ್ಮದೆಗೆ ಅನಿಸಿತು : ಸಂಕೋಚ ಪಡುತ್ತಿದ್ದ ಪುಕ್ಕಲು ವಿಶಾಲಿಯಲ್ಲ ಈಕೆ - ನಿರ್ದಿಷ್ಟ ಅಭಿಪ್ರಾಯಗಳಿದ್ದ ಪ್ರಬುದ್ದೆ. {{gap}}ತನ್ನಲ್ಲಾಗಿದ್ದ ಪರಿವರ್ತನೆಯನ್ನೂ ತಾನು ಗುರುತಿಸಿರಲಿಲ್ಲವೆಂದೆ? ಅದರ ನೆನಪಾಗಿ ನಗುಬಂತು ನರ್ಮದೆಗೆ. {{gap}}ವಿಶಾಲಾಕ್ಷಿ ಕೇಳಿದಳು ; {{gap}}“ಯಾಕೆ ನಗ್ತಿದೀಯಾ ?”<noinclude></noinclude> r2sdjt1i2bimu8to1c9rs8ka1fe6g60 323904 323901 2026-06-01T15:13:16Z Pragathi. BH 7585 /* Validated */ 323904 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ವಿಶಾಲಾಕ್ಷಿ|left=೩೪|right=}} ಇದೆ ಅಂತ ತೋರಿಸಿಕೊಟ್ಟೋರು ಗಿರಿಜಾಬಾಯಿ, ಈ ಲೇಖನ ನಾನು ಬರೆಯೋಕೆ ಸ್ಫೂರ್ತಿಯೂ ಅವರೇ.” {{gap}}ಗಿರಿಜಾಬಾಯಿ - ವಿಶಾಲಾಕ್ಷಿಯರ ಗೆಳೆತನಕ್ಕೆ ಬೌದ್ದಿಕ ತಳಹದಿಯೂ ಒಂದಿತ್ತು, ಅದನ್ನು ಅರಿಯಲಾರದೆ, ಮೊದಲು, ಅವರಿಬ್ಬರನ್ನೂ ಬರಿದೆ ಟೀಕಿಸಿದವಳು ನರ್ಮದಾ, ಆ ಇಬ್ಬರ ಗೆಳೆತನ ಅರ್ಥಪೂರ್ಣವಾಗಿ ಅವಳಿಗೆ ಕಂಡುದು ಈಗ. {{gap}}“ನಿಮ್ಮ ಗಿರಿಜಾಬಾಯಿ ಬಹಳ ಒಳ್ಳೆಯವರಮ್ಮ, [ಅವರ ಒಬ್ಬನೇ .ಹುಡುಗ ತೀರಿಕೊಂಡ ದುರ್ಘಟನೆ ಎಷ್ಟೊಂದು ಕರುಣಾಜನಕವಾಗಿತ್ತು ! ಅವರನ್ನೂ ಒಮ್ಮೆ ಕರಕೊಂಡು ಬಾರೇ ನಮ್ಮ ಮನೆಗೆ.” - {{gap}}ಆಗಲಿ, ಹೇಳ್ತೀನಿ, ಅವರಿಗೆ ಕೈತುಂಬ ಕೆಲಸ, ಬೆಳಗ್ಗೆ ಎದ್ದು ಅಡುಗೆ, ಹುಡುಗೀರು ಮೂವರನ್ನೂ ಕಾನ್ವೆಂಟ್ ಗೆ ಕಳಿಸಿದ್ಮೇಲೆ ಕಾಲೇಜಿಗೆ ಬರ್ತಾರೆ. ಸಾಯಂಕಾಲ ಬೇಗನೆ ಮನೆಗೆ ಹೊರಟುಹೋಗ್ತಾರೆ, ರಾತ್ರೆಯ ಅಡುಗೆ .. ಇದೆಯಲ್ಲ.....” {{gap}}“ಹೌದು, ಪಾಪ, ಅವರ ಯಜಮಾನರು [ಈ ಪದಪ್ರಯೋಗ ಖಂಡಿತ ಅನುಚಿತವಾಗಿರಲಿಲ್ಲ. ಈಗಲೂ ಬೆಂಗಳೂರಲ್ಲೇ ಇದಾರೆ, ಅಲ್ವಾ ?” {{gap}}“ಹೂಂ, ಇಲ್ಲಿಗೇ ವರ್ಗಮಾಡಿಸ್ಕೋಬೇಕೂಂತ ಪ್ರಯತ್ನವನ್ನೇನೋ ನಡೆಸಿದಾರೆ.” {{gap}}“ಈ ವರ್ಗದ್ದು ಬಹಳ ಕಷ್ಟವಮ್ಮ, ನಿನಗೆ ಗೊತ್ತಲ್ಲ ? ನಮ್ಮವರಂತೂ ಕೊನೇಲಿ ರಾಜಿನಾಮೆಯನ್ನೇ ಕೊಟ್ರು.” {{gap}}“ಸರಕಾರಿ ಚಾಕರಿ ಅಂದರೇ ಹೀಗೆ, ಮೇಲಧಿಕಾರಿಗಳು ಹೃದಯವಿಲ್ಲದ ಕೊರಡುಗಳಾಗಿರುತ್ತಾರೆ.” {{gap}}ನರ್ಮದೆಗೆ ಅನಿಸಿತು : ಸಂಕೋಚ ಪಡುತ್ತಿದ್ದ ಪುಕ್ಕಲು ವಿಶಾಲಿಯಲ್ಲ ಈಕೆ - ನಿರ್ದಿಷ್ಟ ಅಭಿಪ್ರಾಯಗಳಿದ್ದ ಪ್ರಬುದ್ದೆ. {{gap}}ತನ್ನಲ್ಲಾಗಿದ್ದ ಪರಿವರ್ತನೆಯನ್ನೂ ತಾನು ಗುರುತಿಸಿರಲಿಲ್ಲವೆಂದೆ? ಅದರ ನೆನಪಾಗಿ ನಗುಬಂತು ನರ್ಮದೆಗೆ. {{gap}}ವಿಶಾಲಾಕ್ಷಿ ಕೇಳಿದಳು ; {{gap}}“ಯಾಕೆ ನಗ್ತಿದೀಯಾ ?”<noinclude></noinclude> 85bp8163yx604rkzc18n1qcnr8u87to ಪುಟ:VISHAALAAKSHI - Niranjana.pdf/೩೭ 104 37873 323902 100032 2026-06-01T15:11:34Z Shreesha Sharma 7840 /* Proofread */ 323902 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=}} {{gap}}“ಹೇಗಿದ್ದವರು ಹೇಗಾದೆವೂಂತ ಹುಡುಗಿಯರಾಗಿದ್ದಾಗ ಅದೇ ಒಂದು ತರಹೆ, ವಯಸ್ಸು ಚಿಕ್ಕದು, ಮನಸೂ ಸ್ವಲ್ಪ ಚಿಕ್ಕದೇ !...” {{gap}}ಸಣ್ಣತನದ ಈ ಆರೋಪ ತನ್ನ ಬಗೆಗಲ್ಲ ಎಂದು ವಿಶಾಲಿ ಬಲ್ಲಳು. ಗೆಳತಿಯ ಸ್ವಯಂ ವಿಮರ್ಶೆ ಸ್ವಾರಸ್ಯಕರವಾಗಿ ಅವಳಿಗೆ ಕಂಡಿತು. {{gap}}ಇದ್ದಕ್ಕಿದ್ದಂತೆ ತರಗತಿಗೆ ತಡವಾಯಿತೇನೋ ಎಂದು ಗಾಬರಿಗೊಂಡು, ವಿಶಾಲಾಕ್ಷಿ ತನ್ನ ಕೈಗಡಿಯಾರವನ್ನು ನೋಡಿದಳು. {{gap}}“ಬಸ್ಸು ಎಷ್ಟಕ್ಕಿದೆಯೋ ಈಗ ?” {{gap}}“ಹೊತ್ತಾಯ್ತ? ಹೊರಡ್ತೀಯಾ ?” {{gap}}“ಹೂಂ, ಹೂಂ.” {{gap}}“ಒಂದೂವರೆಗೆ 'ಒನ್-ಏ'ನೋ 'ಸಿಕ್ಸ್-ಏ'ನೋ ಪ್ಯಾನಟೋರಿಯಂ ಬಿಡುತ್ತೆ.” | {{gap}}“ಸರಿ ಹಾಗಾದರೆ, ಬರ್ತೀ, ಇನ್ನು ಐದು ನಿಮಿಷ ಇದೆ.” {{gap}}“ಪುನಃ ಯಾವತ್ತು ಭೇಟಿ ?” {{gap}}“ಬಿಡುವಾದಾಗ, ನೀನೂ ಒಮ್ಮೆ ಬಾರೇ ನಮ್ಮ ಮನೆ ಕಡೆಗೆ.” {{gap}}“ಎಲ್ಲಮ್ಮ-ಡಾಕ್ಟರಿಗಂತೂ ಪುರುಸೊತ್ತೇ ಇರೋದಿಲ್ಲ.” {{gap}}“ಅದು ಗೊತ್ತಿಲ್ವಾ ನಂಗೆ ? ಟಾಂಗಾ ಮಾಡ್ಕೊಂಡು ಮುರಲೀ ಜತೆ ನೀನೇ ಬಂದ್ಬಿಡಂತೆ, ನಮ್ಮಲ್ಲಿಂದ ನಿಮ್ಮ ತಾಯಿ ಮನೆಗೂ ಹೋಗ್ಬಹುದು.” {{gap}}“ಆಗಲಿ....” ಎಂದಳು ನರ್ಮದಾ. {{gap}}ಬಳಿಕ, “ತಾಳು ಒಂದ್ನಿಮಿಷ” ಎನ್ನುತ್ತ ಒಳಹೋಗಿ, ಕುಂಕುಮ ತಂದಳು. [ಅತ್ತೆ ಜ್ಞಾಪಿಸಿಕೊಡಬೇಕಾದ ಅಗತ್ಯವೇ ಇರಲಿಲ್ಲ.] ಇದ್ದುದರ ಕೆಳಗೆ ಮತ್ತೊಂದು ಬೊಟ್ಟು-ಹುಬ್ಬುಗಳ ಮಧ್ಯೆ, {{gap}}“ಹೇಳ್ಬಿಡು ನಿಮ್ಮತ್ತೆಗೆ.” {{gap}}“ಹೂಂ.” {{gap}}“ನಿಮ್ಮ ಯಜಮಾನರಿಗೂ ನಮಸ್ಕಾರ ತಿಳಿಸಮ್ಮ.” {{gap}}“ಹೂಂ, ಹೂಂ.” {{gap}}ವಿಶಾಲಾಕ್ಷಿ, ಹೊರಬಂದು ಕಾಲಿಗೆ ಚಪ್ಪಲಿ ಸಿಕ್ಕಿಸಿಕೊಳ್ಳುತ್ತಿದ್ದಂತೆ, ಅವಳನ್ನು ಹಿಂಬಾಲಿಸಿದ ನರ್ಮದಾ ಕರೆದಳು ;<noinclude></noinclude> jpgn4xa72qr4soz6oydwr261csu4mi3 323905 323902 2026-06-01T15:13:35Z Pragathi. BH 7585 /* Validated */ 323905 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=}} {{gap}}“ಹೇಗಿದ್ದವರು ಹೇಗಾದೆವೂಂತ ಹುಡುಗಿಯರಾಗಿದ್ದಾಗ ಅದೇ ಒಂದು ತರಹೆ, ವಯಸ್ಸು ಚಿಕ್ಕದು, ಮನಸೂ ಸ್ವಲ್ಪ ಚಿಕ್ಕದೇ !...” {{gap}}ಸಣ್ಣತನದ ಈ ಆರೋಪ ತನ್ನ ಬಗೆಗಲ್ಲ ಎಂದು ವಿಶಾಲಿ ಬಲ್ಲಳು. ಗೆಳತಿಯ ಸ್ವಯಂ ವಿಮರ್ಶೆ ಸ್ವಾರಸ್ಯಕರವಾಗಿ ಅವಳಿಗೆ ಕಂಡಿತು. {{gap}}ಇದ್ದಕ್ಕಿದ್ದಂತೆ ತರಗತಿಗೆ ತಡವಾಯಿತೇನೋ ಎಂದು ಗಾಬರಿಗೊಂಡು, ವಿಶಾಲಾಕ್ಷಿ ತನ್ನ ಕೈಗಡಿಯಾರವನ್ನು ನೋಡಿದಳು. {{gap}}“ಬಸ್ಸು ಎಷ್ಟಕ್ಕಿದೆಯೋ ಈಗ ?” {{gap}}“ಹೊತ್ತಾಯ್ತ? ಹೊರಡ್ತೀಯಾ ?” {{gap}}“ಹೂಂ, ಹೂಂ.” {{gap}}“ಒಂದೂವರೆಗೆ 'ಒನ್-ಏ'ನೋ 'ಸಿಕ್ಸ್-ಏ'ನೋ ಪ್ಯಾನಟೋರಿಯಂ ಬಿಡುತ್ತೆ.” | {{gap}}“ಸರಿ ಹಾಗಾದರೆ, ಬರ್ತೀ, ಇನ್ನು ಐದು ನಿಮಿಷ ಇದೆ.” {{gap}}“ಪುನಃ ಯಾವತ್ತು ಭೇಟಿ ?” {{gap}}“ಬಿಡುವಾದಾಗ, ನೀನೂ ಒಮ್ಮೆ ಬಾರೇ ನಮ್ಮ ಮನೆ ಕಡೆಗೆ.” {{gap}}“ಎಲ್ಲಮ್ಮ-ಡಾಕ್ಟರಿಗಂತೂ ಪುರುಸೊತ್ತೇ ಇರೋದಿಲ್ಲ.” {{gap}}“ಅದು ಗೊತ್ತಿಲ್ವಾ ನಂಗೆ ? ಟಾಂಗಾ ಮಾಡ್ಕೊಂಡು ಮುರಲೀ ಜತೆ ನೀನೇ ಬಂದ್ಬಿಡಂತೆ, ನಮ್ಮಲ್ಲಿಂದ ನಿಮ್ಮ ತಾಯಿ ಮನೆಗೂ ಹೋಗ್ಬಹುದು.” {{gap}}“ಆಗಲಿ....” ಎಂದಳು ನರ್ಮದಾ. {{gap}}ಬಳಿಕ, “ತಾಳು ಒಂದ್ನಿಮಿಷ” ಎನ್ನುತ್ತ ಒಳಹೋಗಿ, ಕುಂಕುಮ ತಂದಳು. [ಅತ್ತೆ ಜ್ಞಾಪಿಸಿಕೊಡಬೇಕಾದ ಅಗತ್ಯವೇ ಇರಲಿಲ್ಲ.] ಇದ್ದುದರ ಕೆಳಗೆ ಮತ್ತೊಂದು ಬೊಟ್ಟು-ಹುಬ್ಬುಗಳ ಮಧ್ಯೆ, {{gap}}“ಹೇಳ್ಬಿಡು ನಿಮ್ಮತ್ತೆಗೆ.” {{gap}}“ಹೂಂ.” {{gap}}“ನಿಮ್ಮ ಯಜಮಾನರಿಗೂ ನಮಸ್ಕಾರ ತಿಳಿಸಮ್ಮ.” {{gap}}“ಹೂಂ, ಹೂಂ.” {{gap}}ವಿಶಾಲಾಕ್ಷಿ, ಹೊರಬಂದು ಕಾಲಿಗೆ ಚಪ್ಪಲಿ ಸಿಕ್ಕಿಸಿಕೊಳ್ಳುತ್ತಿದ್ದಂತೆ, ಅವಳನ್ನು ಹಿಂಬಾಲಿಸಿದ ನರ್ಮದಾ ಕರೆದಳು ;<noinclude></noinclude> r38pnv59d8ha4n15yb2jlxoejiui4es ಪುಟ:VISHAALAAKSHI - Niranjana.pdf/೩೮ 104 37874 323906 100033 2026-06-01T15:16:44Z Shreesha Sharma 7840 /* Proofread */ 323906 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೩೬|right=}} {{gap}}“ಸೀತಾ, ಏ ಸೀತಾ....” {{gap}}ಉತ್ತರ ಬರಲಿಲ್ಲ. - {{gap}}“ಈ ಬಿಸಿಲಿಗೆ ಎಲ್ಲೋಗ್ಬಿಟ್ಟಿದ್ದಾಳೊ ಪಾಪನ್ನ ಕರಕೊಂಡು....”. * {{gap}}ಅಂಗಳದ ಅಂಚಿನಲ್ಲಿ ಗುಲಾಬಿ ಗಿಡಗಳ ಸಾಲಿತ್ತು, ಗೊಂಚಲು ಗೊಂಚ ಲಾಗಿದ್ದುವು-ಮೊಗ್ಗುಗಳೂ ಹೂಗಳೂ, ಚೆನ್ನಾಗಿ ಅರಳಿದ್ದ ಒಂದನ್ನು ದಿಟ್ಟಿಸಿ, ಕೀಳಲೆಂದು ನರ್ಮದಾ ಕೈಚಾಚಿದಳು, {{gap}}“ಬೇಡವೇ, ಯಾಕೆ ಕೀಳ್ತೀಯಾ?” {{gap}}“ನಿನಗೋಸ್ಕರ ಕಣೇ, ಒಂದೇ ಒಂದು.” {{gap}}ಹಸುರೆಲೆಯೂ ಇದ್ದ ಉದ್ದನೆಯ ತೊಟ್ಟು, ನಾಲ್ಕೆಳೆ ಕೂದಲೆತ್ತಿ ತುರುಬಿಗೆ ಕಿರೀಟವಾಗಿ ನರ್ಮದೆಯೇ ಮುಡಿಸಿದಳು. {{gap}}“ಗಂಟು ಸೊಗಸಾಗಿದೆ ವಿಶಾಲಿ, ಇಷ್ಟು ಚೆನ್ನಾಗಿ ಹಾಕ್ಕೊಳ್ಳೋಕೆ ನನಗೆ ಬರೋದೇ ಇಲ್ಲ.” | {{gap}}“ಸರಿ, ಸರಿ! ಹೊಗಳೋದೆಲ್ಲಾ ಯಾವತ್ತು ಕಲಿಕ್ಕೊಂಡೆಯೋ ?” {{gap}}[ಹೊಗಳಿಕೆಗೆ ಮಾರು ಹೋಗಬಾರದು, ಆದರೂ, ನರ್ಮದೆಯ ಮೆಚ್ಚುಗೆಯ ನುಡಿ ಹಿತಕರವಾಗಿತ್ತು.] {{gap}}ಅಷ್ಟರಲ್ಲೆ ಮುರಲಿಯೊಡನೆ ಸೀತೆ ಬಂದಳು. {{gap}}“ಕೂಗಿದಿರಾ ಅಮ್ಮಾವರೆ ?” . {{gap}}ಹುಡುಗಿಗೆ ಉತ್ತರ ಕೊಡದೆ ನರ್ಮದಾ ಅಂದಳು: {{gap}}ಅತ್ತೆಗೆ ಟಾಟಾ ಮಾಡು ಮರೀ.” {{gap}}ಬಿಸಿಲಲ್ಲಿ ಬಳಲಿ ಬಂದವನಿಗೆ ಅದೊಂದು ಕೆಲಸ ಎಂದು ಮಗು; ಸುಮ್ಮನಿತ್ತು. {{gap}}“ಮಾಡೋ'' {{gap}}ಮಗು ಗಂಭೀರವಾಗಿ “ತಾ ತಾ” ಎಂದಿತು. {{gap}}ವಿಶಾಲಾಕ್ಷಿ ಮುರಲಿಯ ಕೆನ್ನೆ ಚಿವುಟಿ{{gap}}, ಪ್ರತಿಯಾಗಿ ತಾನೂ “ತಾ ತಾ? ಎಂದಳು. {{gap}}ಕನ್ನಡಕದ ಆ ಅತ್ತೆ ಇಷ್ಟವೆನಿಸಿ, ಮಗು ಮುಗುಳುನಕ್ಕಿತು.<noinclude></noinclude> 5lari4ovo9u4i48keerkcftclai5rl5 323907 323906 2026-06-01T15:17:15Z Shreelatha.Halemane 7642 /* Validated */ 323907 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವಿಶಾಲಾಕ್ಷಿ|left=೩೬|right=}} {{gap}}“ಸೀತಾ, ಏ ಸೀತಾ....” {{gap}}ಉತ್ತರ ಬರಲಿಲ್ಲ. - {{gap}}“ಈ ಬಿಸಿಲಿಗೆ ಎಲ್ಲೋಗ್ಬಿಟ್ಟಿದ್ದಾಳೊ ಪಾಪನ್ನ ಕರಕೊಂಡು....”. * {{gap}}ಅಂಗಳದ ಅಂಚಿನಲ್ಲಿ ಗುಲಾಬಿ ಗಿಡಗಳ ಸಾಲಿತ್ತು, ಗೊಂಚಲು ಗೊಂಚ ಲಾಗಿದ್ದುವು-ಮೊಗ್ಗುಗಳೂ ಹೂಗಳೂ, ಚೆನ್ನಾಗಿ ಅರಳಿದ್ದ ಒಂದನ್ನು ದಿಟ್ಟಿಸಿ, ಕೀಳಲೆಂದು ನರ್ಮದಾ ಕೈಚಾಚಿದಳು, {{gap}}“ಬೇಡವೇ, ಯಾಕೆ ಕೀಳ್ತೀಯಾ?” {{gap}}“ನಿನಗೋಸ್ಕರ ಕಣೇ, ಒಂದೇ ಒಂದು.” {{gap}}ಹಸುರೆಲೆಯೂ ಇದ್ದ ಉದ್ದನೆಯ ತೊಟ್ಟು, ನಾಲ್ಕೆಳೆ ಕೂದಲೆತ್ತಿ ತುರುಬಿಗೆ ಕಿರೀಟವಾಗಿ ನರ್ಮದೆಯೇ ಮುಡಿಸಿದಳು. {{gap}}“ಗಂಟು ಸೊಗಸಾಗಿದೆ ವಿಶಾಲಿ, ಇಷ್ಟು ಚೆನ್ನಾಗಿ ಹಾಕ್ಕೊಳ್ಳೋಕೆ ನನಗೆ ಬರೋದೇ ಇಲ್ಲ.” | {{gap}}“ಸರಿ, ಸರಿ! ಹೊಗಳೋದೆಲ್ಲಾ ಯಾವತ್ತು ಕಲಿಕ್ಕೊಂಡೆಯೋ ?” {{gap}}[ಹೊಗಳಿಕೆಗೆ ಮಾರು ಹೋಗಬಾರದು, ಆದರೂ, ನರ್ಮದೆಯ ಮೆಚ್ಚುಗೆಯ ನುಡಿ ಹಿತಕರವಾಗಿತ್ತು.] {{gap}}ಅಷ್ಟರಲ್ಲೆ ಮುರಲಿಯೊಡನೆ ಸೀತೆ ಬಂದಳು. {{gap}}“ಕೂಗಿದಿರಾ ಅಮ್ಮಾವರೆ ?” . {{gap}}ಹುಡುಗಿಗೆ ಉತ್ತರ ಕೊಡದೆ ನರ್ಮದಾ ಅಂದಳು: {{gap}}ಅತ್ತೆಗೆ ಟಾಟಾ ಮಾಡು ಮರೀ.” {{gap}}ಬಿಸಿಲಲ್ಲಿ ಬಳಲಿ ಬಂದವನಿಗೆ ಅದೊಂದು ಕೆಲಸ ಎಂದು ಮಗು; ಸುಮ್ಮನಿತ್ತು. {{gap}}“ಮಾಡೋ'' {{gap}}ಮಗು ಗಂಭೀರವಾಗಿ “ತಾ ತಾ” ಎಂದಿತು. {{gap}}ವಿಶಾಲಾಕ್ಷಿ ಮುರಲಿಯ ಕೆನ್ನೆ ಚಿವುಟಿ{{gap}}, ಪ್ರತಿಯಾಗಿ ತಾನೂ “ತಾ ತಾ? ಎಂದಳು. {{gap}}ಕನ್ನಡಕದ ಆ ಅತ್ತೆ ಇಷ್ಟವೆನಿಸಿ, ಮಗು ಮುಗುಳುನಕ್ಕಿತು.<noinclude></noinclude> dpgvteztk6l22t2oru3hd86m1ax1y8e ಪುಟ:VISHAALAAKSHI - Niranjana.pdf/೩೯ 104 37875 323908 100034 2026-06-01T15:20:47Z Shreesha Sharma 7840 /* Proofread */ 323908 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center='''೪'''|left=|right=}} {{gap}}ತರಗತಿಯೊಳಕ್ಕೆ ಕಾಲಿರಿಸಿದಾಗ, ಸಹಾಧ್ಯಾಯಿಗಳೆಲ್ಲ ತನ್ನನ್ನೇ ನೋಡು ತಿದ್ದಂತೆ ವಿಶಾಲಾಕ್ಷಿಗೆ ಭಾಸವಾಯಿತು, ತನ್ನ ಲೇಖನವನ್ನು ಇವರೆಲ್ಲ ಆಗಲೇ ಓದಿರಬೇಕು, ಇನ್ನು ಕೀಟಲೆ ಶುರುಮಾಡಬಹುದು ಎಂದುಕೊಂಡಳು. ಆದರೆ ವಾಸ್ತವವಾಗಿ ಹಾಗೇನೂ ಇರಲಿಲ್ಲ.. ಎಂದಿನಂತೆಯೇ ಇತ್ತು ತರಗತಿ, ಕನ್ನಡ - ಲೇಖನಗಳನ್ನೆಲ್ಲ ಅಷ್ಟೊಂದು ಬೇಗನೆ ಓದುವ ಆಸಕ್ತಿ ಅವರಿಗೆ ಇದ್ದರೆ ತಾನೆ?" {{gap}}ನರ್ಮದೆಯ ಮನೆಯಲ್ಲಿ ಅವಸರವಾಗಿ ಪುನಃ ಬಿಗಿದಿದ್ದ ಕಟ್ಟನ್ನು ಮಾತ್ರ, ವಿಶಾಲಾಕ್ಷಿ ಡೆಸ್ಕಿನ ಮೇಲಿರಿಸಲಿಲ್ಲ. “ಏನದು ?” ಎಂಬ ಪ್ರಶ್ನೆಗೆ ತುತ್ತಾಗಲು ಅವಳು ಸಿದ್ಧಳಿರಲಿಲ್ಲ. {{gap}}ಪ್ರವಚನ ನಡೆಯಿತು, ನಿತ್ಯದಂತೆಯೆ ಸರಸ ಸರಣಿಯಲ್ಲಿ ಪ್ರಾಧ್ಯಾಪಕರ ವಾಗ್ಝರಿ ಹರಿಯಿತು. {{gap}}[ಅವರಿಗೊಂದು ಪ್ರತಿಯನ್ನು ತಲುಪಿಸುವುದು ಹೇಗೆ ? ತರಗತಿಯಿಂದ ಅವರು ಹೊರಬೀಳುವಾಗ ಕೊಡಲೆ? ಈ ಪ್ರವಚನದ ಬಳಿಕ ಅವರಿಗೆ ಬಿಡುವು. ಟೆನ್ನಿಸ್ ಆಟಕ್ಕೆ ಹೋಗುವುದಕ್ಕೆ ಮುನ್ನ ತುಸು ಹೊತ್ತು ವಿರಮಿಸುವುದು ಅವರ ಅಭ್ಯಾಸ, ಇತರ ಪ್ರಾಧ್ಯಾಪಕರೂ ಹಲವಾರು ಜನರಿರುವಾಗ ಅಲ್ಲಿಗೆ ಹೋಗುವುದು ಸರಿಯಲ್ಲ, ಅಂಚೆಯ ಮೂಲಕ ಕಳುಹಿಬಿಡುವುದೇ ಮೇಲು, ಆದರೆ, 'ಕೈಯಾರೆ ಯಾಕೆ ಕೊಡಲಿಲ್ಲ ?” ಎಂದು ಅವರು ಕೇಳುವುದು ಮಾತ್ರ ಖಂಡಿತ, ಏನಪ್ಪಾ ಮಾಡಿಲಿ ? ಏನಪ್ಪಾ ಮಾಡಲಿ ?....ಇವತ್ತಲ್ಲದಿದ್ದರೆ ನಾಳೆ, ನಾಳೆಕೊಟ್ಟರಾಯ್ತು. ಅವಸರವೇನೀಗ? ಕೈಸೇರಿದೊಡನೆಯೇ ಪ್ರತಿಯನ್ನೆತ್ತಿಕೊಂಡು ಬಂದ ತಾನೊಬ್ಬಳು ಹುಚ್ಚಿಯೇ ಸರಿ.'] {{gap}}ತರಗತಿ ಮುಗಿದು ಪ್ರಾಧ್ಯಾಪಕರೆದ್ದರು. ಅವರನ್ನು ಹಿಂಬಾಲಿಸಿದರು<noinclude></noinclude> 96lpkcfr4f0nejzd4dp1v52sdrvm5n7 323909 323908 2026-06-01T15:21:01Z Shreelatha.Halemane 7642 /* Validated */ 323909 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center='''೪'''|left=|right=}} {{gap}}ತರಗತಿಯೊಳಕ್ಕೆ ಕಾಲಿರಿಸಿದಾಗ, ಸಹಾಧ್ಯಾಯಿಗಳೆಲ್ಲ ತನ್ನನ್ನೇ ನೋಡು ತಿದ್ದಂತೆ ವಿಶಾಲಾಕ್ಷಿಗೆ ಭಾಸವಾಯಿತು, ತನ್ನ ಲೇಖನವನ್ನು ಇವರೆಲ್ಲ ಆಗಲೇ ಓದಿರಬೇಕು, ಇನ್ನು ಕೀಟಲೆ ಶುರುಮಾಡಬಹುದು ಎಂದುಕೊಂಡಳು. ಆದರೆ ವಾಸ್ತವವಾಗಿ ಹಾಗೇನೂ ಇರಲಿಲ್ಲ.. ಎಂದಿನಂತೆಯೇ ಇತ್ತು ತರಗತಿ, ಕನ್ನಡ - ಲೇಖನಗಳನ್ನೆಲ್ಲ ಅಷ್ಟೊಂದು ಬೇಗನೆ ಓದುವ ಆಸಕ್ತಿ ಅವರಿಗೆ ಇದ್ದರೆ ತಾನೆ?" {{gap}}ನರ್ಮದೆಯ ಮನೆಯಲ್ಲಿ ಅವಸರವಾಗಿ ಪುನಃ ಬಿಗಿದಿದ್ದ ಕಟ್ಟನ್ನು ಮಾತ್ರ, ವಿಶಾಲಾಕ್ಷಿ ಡೆಸ್ಕಿನ ಮೇಲಿರಿಸಲಿಲ್ಲ. “ಏನದು ?” ಎಂಬ ಪ್ರಶ್ನೆಗೆ ತುತ್ತಾಗಲು ಅವಳು ಸಿದ್ಧಳಿರಲಿಲ್ಲ. {{gap}}ಪ್ರವಚನ ನಡೆಯಿತು, ನಿತ್ಯದಂತೆಯೆ ಸರಸ ಸರಣಿಯಲ್ಲಿ ಪ್ರಾಧ್ಯಾಪಕರ ವಾಗ್ಝರಿ ಹರಿಯಿತು. {{gap}}[ಅವರಿಗೊಂದು ಪ್ರತಿಯನ್ನು ತಲುಪಿಸುವುದು ಹೇಗೆ ? ತರಗತಿಯಿಂದ ಅವರು ಹೊರಬೀಳುವಾಗ ಕೊಡಲೆ? ಈ ಪ್ರವಚನದ ಬಳಿಕ ಅವರಿಗೆ ಬಿಡುವು. ಟೆನ್ನಿಸ್ ಆಟಕ್ಕೆ ಹೋಗುವುದಕ್ಕೆ ಮುನ್ನ ತುಸು ಹೊತ್ತು ವಿರಮಿಸುವುದು ಅವರ ಅಭ್ಯಾಸ, ಇತರ ಪ್ರಾಧ್ಯಾಪಕರೂ ಹಲವಾರು ಜನರಿರುವಾಗ ಅಲ್ಲಿಗೆ ಹೋಗುವುದು ಸರಿಯಲ್ಲ, ಅಂಚೆಯ ಮೂಲಕ ಕಳುಹಿಬಿಡುವುದೇ ಮೇಲು, ಆದರೆ, 'ಕೈಯಾರೆ ಯಾಕೆ ಕೊಡಲಿಲ್ಲ ?” ಎಂದು ಅವರು ಕೇಳುವುದು ಮಾತ್ರ ಖಂಡಿತ, ಏನಪ್ಪಾ ಮಾಡಿಲಿ ? ಏನಪ್ಪಾ ಮಾಡಲಿ ?....ಇವತ್ತಲ್ಲದಿದ್ದರೆ ನಾಳೆ, ನಾಳೆಕೊಟ್ಟರಾಯ್ತು. ಅವಸರವೇನೀಗ? ಕೈಸೇರಿದೊಡನೆಯೇ ಪ್ರತಿಯನ್ನೆತ್ತಿಕೊಂಡು ಬಂದ ತಾನೊಬ್ಬಳು ಹುಚ್ಚಿಯೇ ಸರಿ.'] {{gap}}ತರಗತಿ ಮುಗಿದು ಪ್ರಾಧ್ಯಾಪಕರೆದ್ದರು. ಅವರನ್ನು ಹಿಂಬಾಲಿಸಿದರು<noinclude></noinclude> 335s5ysbfj3fmw5k9n000s50oactym1 ಪುಟ:VISHAALAAKSHI - Niranjana.pdf/೪೦ 104 37876 323910 100035 2026-06-01T15:24:25Z Shreesha Sharma 7840 /* Proofread */ 323910 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೩೮|right=}}ವಿಶಾಲಾಕ್ಷಿ ವಿದ್ಯಾರ್ಥಿಗಳು, “ಮಹಾರಾಣಿ ಕಾಲೇಜಿಗೆ ಹೋಗಿ ಗಿರಿಜಾಬಾಯಿಗೆ ಚೀಟಿ ಕಳುಹೋಣ ಇನ್ನು' ಎಂದುಕೊಳ್ಳುತ್ತ ವಿಶಾಲಾಕ್ಷಿ ಎದ್ದಳು. {{gap}}ಹೊರಬಂದು ಅಂಗಳಕ್ಕಿಳಿದರೆ, ದೂರದಲ್ಲಿ ಮರದ ಕೆಳಗೆ ನೆರಳಲ್ಲಿ ಒಬ್ಬ ವಿದ್ಯಾರ್ಥಿಯೊಡನೆ ಮಾತನಾಡುತ್ತ ನಿಂತಿದ್ದರು ಪ್ರಾಧ್ಯಾಪಕರು. ['ಸ್ವಂತದ ವೈಯಕ್ತಿಕ ಸಮಸ್ಯೆಯನ್ನು ಕುರಿತು ವಿದ್ಯಾರ್ಥಿ ಅವರೆದುರು ತೋಡಿಕೊಳ್ಳುತ್ತಿರ ಬೇಕು.] ಆ ದಾರಿಯಾಗಿಯೇ, ಅವರನ್ನು ಹಾದೇ, ವಿಶಾಲಿ ಸಾಗಬೇಕಾಗಿತ್ತು. ಹಾಗೆ ಕಣ್ಣಿಗೆ ಬಿದ್ದಾಗ ಬರಿಯ ಮುಗುಳುನಗೆಗಳ ವಿನಿಮಯ, ಆದರೆ, ಈಗ ವಿಶಾಲಾಕ್ಷಿ ಅವರನ್ನು ಸಮೀಪಿಸುವಷ್ಟರಲ್ಲೇ, ಆ ವಿದ್ಯಾರ್ಥಿ ವಂದಿಸಿ ಹೊರಟು ಬಿಟ್ಟ, ಪ್ರಾಧ್ಯಾಪಕರು ನಡೆಯಲು ತೊಡಗಿದಂತೆಯೇ ಅವರ ಮಗ್ಗುಲಿಗೆ ಬಂದು ಬಿಟ್ಟಳು ವಿಶಾಲಾಕ್ಷಿ,”. {{gap}}“ಹಲೋ.?" {{gap}}ವಿಶಾಲಾಕ್ಷಿ ಮಂದಹಾಸಬೀರುತ್ತ, ಕತ್ತನ್ನು ತುಸು ಬಾಗಿಸಿ ನಮಿಸುವ ಶಾಸ್ತ್ರ ಮುಗಿಸಿದಳು.. {{gap}}ಪ್ರಾಧ್ಯಾಪಕರು ಇಂಗ್ಲಿಷಿನಲ್ಲಿ ಕೇಳಿದರು : {{gap}}“ಮನೆಗೆ ಹೊರಟಯೇನು ?” .. {{gap}}“ಹೂಂ ಸರ್.? {{gap}}“ಹೇಗಿದೀಯ ? ಯಾವುದೂ ಕಷ್ಟ ಅನಿಸೋದಿಲ್ಲ, ಅಲ್ವೇ ?” {{gap}}“ಇಲ್ಲ ಸರ್.”. (ಅಂದ ಹಾಗೆ ಮೈನಾವತಿಯಿಂದೇನಾದರೂ ಕಾಗದ ಬಂದಿದೆಯೆ ?” {{gap}}“ನರ್ಮದಾಗೆ ಮೊನ್ನೆಯಷ್ಟೇ ಬರೆದಿದ್ದು ಸರ್.” {{gap}}“ನರ್ಮದಾ? ಆ೦-ಆ ಮಗು....ಹುಂ....ಚೆನ್ನಾಗಿದಾಳಂತಾ ಮೈನಾವತಿ?” {{gap}}[ಗೃಹರಂಗದಲ್ಲಿ ಮೈನಾ ಸಾಧಿಸಿದ್ದ ಪ್ರಗತಿಯನ್ನು ಕುರಿತು ಪ್ರಾಧ್ಯಾಪಕರಿಗೆ ಹೇಳುವಂತಿರಲಿಲ್ಲ!]. {{gap}}“ಹೂಂ. ಚೆನ್ನಾಗಿದಾಳೆ.” {{gap}}“ಒಳ್ಳೆ ಹುಡುಗಿ, ನೀನು ಕಾಗದ ಬರೆದಾಗ ನನ್ನ ಶುಭಾಶಯ ತಿಳಿಸು.” {{gap}}“ ತಿಳಿಸ್ತೀನಿ.” ,<noinclude></noinclude> m7tr08sepqbwhgwjt5x4761ez67jarv 323911 323910 2026-06-01T15:24:39Z Shreelatha.Halemane 7642 /* Validated */ 323911 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವಿಶಾಲಾಕ್ಷಿ|left=೩೮|right=}}ವಿಶಾಲಾಕ್ಷಿ ವಿದ್ಯಾರ್ಥಿಗಳು, “ಮಹಾರಾಣಿ ಕಾಲೇಜಿಗೆ ಹೋಗಿ ಗಿರಿಜಾಬಾಯಿಗೆ ಚೀಟಿ ಕಳುಹೋಣ ಇನ್ನು' ಎಂದುಕೊಳ್ಳುತ್ತ ವಿಶಾಲಾಕ್ಷಿ ಎದ್ದಳು. {{gap}}ಹೊರಬಂದು ಅಂಗಳಕ್ಕಿಳಿದರೆ, ದೂರದಲ್ಲಿ ಮರದ ಕೆಳಗೆ ನೆರಳಲ್ಲಿ ಒಬ್ಬ ವಿದ್ಯಾರ್ಥಿಯೊಡನೆ ಮಾತನಾಡುತ್ತ ನಿಂತಿದ್ದರು ಪ್ರಾಧ್ಯಾಪಕರು. ['ಸ್ವಂತದ ವೈಯಕ್ತಿಕ ಸಮಸ್ಯೆಯನ್ನು ಕುರಿತು ವಿದ್ಯಾರ್ಥಿ ಅವರೆದುರು ತೋಡಿಕೊಳ್ಳುತ್ತಿರ ಬೇಕು.] ಆ ದಾರಿಯಾಗಿಯೇ, ಅವರನ್ನು ಹಾದೇ, ವಿಶಾಲಿ ಸಾಗಬೇಕಾಗಿತ್ತು. ಹಾಗೆ ಕಣ್ಣಿಗೆ ಬಿದ್ದಾಗ ಬರಿಯ ಮುಗುಳುನಗೆಗಳ ವಿನಿಮಯ, ಆದರೆ, ಈಗ ವಿಶಾಲಾಕ್ಷಿ ಅವರನ್ನು ಸಮೀಪಿಸುವಷ್ಟರಲ್ಲೇ, ಆ ವಿದ್ಯಾರ್ಥಿ ವಂದಿಸಿ ಹೊರಟು ಬಿಟ್ಟ, ಪ್ರಾಧ್ಯಾಪಕರು ನಡೆಯಲು ತೊಡಗಿದಂತೆಯೇ ಅವರ ಮಗ್ಗುಲಿಗೆ ಬಂದು ಬಿಟ್ಟಳು ವಿಶಾಲಾಕ್ಷಿ,”. {{gap}}“ಹಲೋ.?" {{gap}}ವಿಶಾಲಾಕ್ಷಿ ಮಂದಹಾಸಬೀರುತ್ತ, ಕತ್ತನ್ನು ತುಸು ಬಾಗಿಸಿ ನಮಿಸುವ ಶಾಸ್ತ್ರ ಮುಗಿಸಿದಳು.. {{gap}}ಪ್ರಾಧ್ಯಾಪಕರು ಇಂಗ್ಲಿಷಿನಲ್ಲಿ ಕೇಳಿದರು : {{gap}}“ಮನೆಗೆ ಹೊರಟಯೇನು ?” .. {{gap}}“ಹೂಂ ಸರ್.? {{gap}}“ಹೇಗಿದೀಯ ? ಯಾವುದೂ ಕಷ್ಟ ಅನಿಸೋದಿಲ್ಲ, ಅಲ್ವೇ ?” {{gap}}“ಇಲ್ಲ ಸರ್.”. (ಅಂದ ಹಾಗೆ ಮೈನಾವತಿಯಿಂದೇನಾದರೂ ಕಾಗದ ಬಂದಿದೆಯೆ ?” {{gap}}“ನರ್ಮದಾಗೆ ಮೊನ್ನೆಯಷ್ಟೇ ಬರೆದಿದ್ದು ಸರ್.” {{gap}}“ನರ್ಮದಾ? ಆ೦-ಆ ಮಗು....ಹುಂ....ಚೆನ್ನಾಗಿದಾಳಂತಾ ಮೈನಾವತಿ?” {{gap}}[ಗೃಹರಂಗದಲ್ಲಿ ಮೈನಾ ಸಾಧಿಸಿದ್ದ ಪ್ರಗತಿಯನ್ನು ಕುರಿತು ಪ್ರಾಧ್ಯಾಪಕರಿಗೆ ಹೇಳುವಂತಿರಲಿಲ್ಲ!]. {{gap}}“ಹೂಂ. ಚೆನ್ನಾಗಿದಾಳೆ.” {{gap}}“ಒಳ್ಳೆ ಹುಡುಗಿ, ನೀನು ಕಾಗದ ಬರೆದಾಗ ನನ್ನ ಶುಭಾಶಯ ತಿಳಿಸು.” {{gap}}“ ತಿಳಿಸ್ತೀನಿ.” ,<noinclude></noinclude> 9tajbj9jkita679mvin6fzaxd1z13dg ಪುಟ:VISHAALAAKSHI - Niranjana.pdf/೪೧ 104 37877 323912 100036 2026-06-01T15:33:29Z Shreesha Sharma 7840 /* Proofread */ 323912 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ |left=|right=೩೯}} {{gap}}ಎರಡೇ ಹೆಜ್ಜೆಗಳ ಬಳಿಕ ಅವರು ಎಡಕ್ಕೆ ಹೊರಳಬೇಕು, ಅಷ್ಟರಲ್ಲೆ, ಪೂರ್ವಾಲೋಚನೆ ಇಲ್ಲದೆಯೇ, ಕನ್ನಡದಲ್ಲಿ ವಿಶಾಲಾಕ್ಷಿ ಅಂದಳು : {{gap}}“ನಾನೊಂದು ಲೇಖನ ಬರೆದಿದೀನಿ ಸರ್, ಅದನ್ನು ತೋರಿಸಬೇಕೂಂತ....? {{gap}}“Yes ? ಎಲ್ಲಿದೆ ? ಯಾವುದು ?” {{gap}}ಅವಸರವಾಗಿ ಕಟ್ಟು ಬಿಚ್ಚಿ ಲೇಖನದ ಒಂದು ಪ್ರತಿಯನ್ನು ಪ್ರಾಧ್ಯಾಪಕರಿಗೆ ವಿಶಾಲಾಕ್ಷಿ ಕೊಟ್ಟಳು. {{gap}}ಅವರೆಂದರು: {{gap}}ಆಗಲೇ ಅಚ್ಚಾಗಿಬಿಟ್ಟಿದೆಯೇನು ? [ತನಗೆ ತಂದು ತೋರಿಸಿಯೇ ಇರಲಿಲ್ಲ.] ಅರೇ, ಇದು ಕನ್ನಡ !” {{gap}}“ಹೌದು ಸರ್, ಪ್ರಬುದ್ಧ ಕರ್ಣಾಟಕದಲ್ಲಿ ಬಂದಿದೆ.” {{gap}}Oh, that | ಹುಂ! [ಶೀರ್ಷಿಕೆಯ ಕಡೆಗೆ ದೃಷ್ಟಿ ಹರಿಸಿ, ರೂಢಿ ತಪ್ಪಿದ್ದ ಕನ್ನಡ ಪದಗಳನ್ನು ನಿಧಾನವಾಗಿ ಓದಿ] ಆರಿಸಿಕೊಂಡಿರೋ ವಿಷಯ ಚೆನ್ನಾಗಿದೆ. ಆದರೆ ನನಗೆ ಬೇಗ ಬೇಗನೆ ಓದೋಕೆ ಬರೋದಿಲ್ವಲ್ಲಾ ! Thanks | ನೋಡ್ತೀನಿ.” {{gap}}ತಾವು ಎಡಕ್ಕೆ ತಿರುಗಬೇಕಾಗಿದ್ದ ಕಡೆ ಆಗಲೇ ಅವರು ನಿಂತುಬಿಟ್ಟಿದ್ದರು, ಏನೋ ಹೇಳಬೇಕೆನಿಸಿ ಅವರ ಹಣೆ ನೆರಿಗೆ ಕಟ್ಟಿತು, ಆ ನೆರಿಗೆ ಕಂಡೊಡನೆ. ಬೇಸರದ ವಿಷಯವೇ ಇರಬೇಕೆಂಬುದು ವಿಶಾಲಾಕ್ಷಿಗೆ ಸ್ಪಷ್ಟವಾಯಿತು. {{gap}}ವಿದ್ಯಾರ್ಥಿನಿಯ ಮುಖವನ್ನು ದಿಟ್ಟಿಸದೆ, ಲೇಖನದ ಹಾಳೆಗಳನ್ನಷ್ಟೇ ತಿರುವುತ್ತ, ಪ್ರಾಧ್ಯಾಪಕರೆಂದರು : {{gap}}“ಇಂಗ್ಲಿಷಿನಲ್ಲಿ ಯಾಕೆ ಬರೆಯಲಿಲ್ಲ ಇದನ್ನು ? ಸಾಕಷ್ಟು ಅಭಿವ್ಯಕ್ತಿ - ಸಾಮರ್ಥ್ಯ ಇಲ್ಲ ಎಂತಲೆ ? ಈ ಮಾತೃಭಾಷಾ ವ್ಯಾಮೋಹ ನನಗೆ ಅರ್ಥವೇ ಆಗೋದಿಲ್ಲವಪ್ಪ, ನಿನ್ನನ್ನು ಟೀಕಿಸಿದೀನಿ ಅಂತ ತಿಳ್ಕೊಬೇಡ, ಇದು ಸಾರ್ವ ತ್ರಿಕವಾಗಿ ಕಾಣಿಸೋ ಲಕ್ಷಣ. ನಮ್ಮ ವಿಶ್ವವಿದ್ಯಾನಿಲಯದ ಇತಿಹಾಸವನ್ನೇ ನೋಡು, ಇಂಗ್ಲಿಷ್ ಭಾಷೆಯ ಪ್ರಾಧ್ಯಾಪಕರೂಂತ ವಿಶ್ವಮಾನ್ಯರಾಗಬೇಕಾಗಿ ದ್ದವರು, ಉದ್ದಾಮ ಕನ್ನಡ ಪಂಡಿತರೂಂತೆ ಹೊಗಳಿಸಿಕೊಂಡು ನಿವೃತ್ತರಾದರು, ಹೌದೇ ಅಲ್ಲವೇ ಯೋಚಿಸಿನೋಡು, ಕನ್ನಡದಲ್ಲಿ ನಾವು ಬರೀಬಾರದೂಂತ<noinclude></noinclude> pla9pmdjm1mbiytw782gpcmanalmopw 323913 323912 2026-06-01T15:33:59Z Shreelatha.Halemane 7642 /* Validated */ 323913 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ |left=|right=೩೯}} {{gap}}ಎರಡೇ ಹೆಜ್ಜೆಗಳ ಬಳಿಕ ಅವರು ಎಡಕ್ಕೆ ಹೊರಳಬೇಕು, ಅಷ್ಟರಲ್ಲೆ, ಪೂರ್ವಾಲೋಚನೆ ಇಲ್ಲದೆಯೇ, ಕನ್ನಡದಲ್ಲಿ ವಿಶಾಲಾಕ್ಷಿ ಅಂದಳು : {{gap}}“ನಾನೊಂದು ಲೇಖನ ಬರೆದಿದೀನಿ ಸರ್, ಅದನ್ನು ತೋರಿಸಬೇಕೂಂತ....? {{gap}}“Yes ? ಎಲ್ಲಿದೆ ? ಯಾವುದು ?” {{gap}}ಅವಸರವಾಗಿ ಕಟ್ಟು ಬಿಚ್ಚಿ ಲೇಖನದ ಒಂದು ಪ್ರತಿಯನ್ನು ಪ್ರಾಧ್ಯಾಪಕರಿಗೆ ವಿಶಾಲಾಕ್ಷಿ ಕೊಟ್ಟಳು. {{gap}}ಅವರೆಂದರು: {{gap}}ಆಗಲೇ ಅಚ್ಚಾಗಿಬಿಟ್ಟಿದೆಯೇನು ? [ತನಗೆ ತಂದು ತೋರಿಸಿಯೇ ಇರಲಿಲ್ಲ.] ಅರೇ, ಇದು ಕನ್ನಡ !” {{gap}}“ಹೌದು ಸರ್, ಪ್ರಬುದ್ಧ ಕರ್ಣಾಟಕದಲ್ಲಿ ಬಂದಿದೆ.” {{gap}}Oh, that | ಹುಂ! [ಶೀರ್ಷಿಕೆಯ ಕಡೆಗೆ ದೃಷ್ಟಿ ಹರಿಸಿ, ರೂಢಿ ತಪ್ಪಿದ್ದ ಕನ್ನಡ ಪದಗಳನ್ನು ನಿಧಾನವಾಗಿ ಓದಿ] ಆರಿಸಿಕೊಂಡಿರೋ ವಿಷಯ ಚೆನ್ನಾಗಿದೆ. ಆದರೆ ನನಗೆ ಬೇಗ ಬೇಗನೆ ಓದೋಕೆ ಬರೋದಿಲ್ವಲ್ಲಾ ! Thanks | ನೋಡ್ತೀನಿ.” {{gap}}ತಾವು ಎಡಕ್ಕೆ ತಿರುಗಬೇಕಾಗಿದ್ದ ಕಡೆ ಆಗಲೇ ಅವರು ನಿಂತುಬಿಟ್ಟಿದ್ದರು, ಏನೋ ಹೇಳಬೇಕೆನಿಸಿ ಅವರ ಹಣೆ ನೆರಿಗೆ ಕಟ್ಟಿತು, ಆ ನೆರಿಗೆ ಕಂಡೊಡನೆ. ಬೇಸರದ ವಿಷಯವೇ ಇರಬೇಕೆಂಬುದು ವಿಶಾಲಾಕ್ಷಿಗೆ ಸ್ಪಷ್ಟವಾಯಿತು. {{gap}}ವಿದ್ಯಾರ್ಥಿನಿಯ ಮುಖವನ್ನು ದಿಟ್ಟಿಸದೆ, ಲೇಖನದ ಹಾಳೆಗಳನ್ನಷ್ಟೇ ತಿರುವುತ್ತ, ಪ್ರಾಧ್ಯಾಪಕರೆಂದರು : {{gap}}“ಇಂಗ್ಲಿಷಿನಲ್ಲಿ ಯಾಕೆ ಬರೆಯಲಿಲ್ಲ ಇದನ್ನು ? ಸಾಕಷ್ಟು ಅಭಿವ್ಯಕ್ತಿ - ಸಾಮರ್ಥ್ಯ ಇಲ್ಲ ಎಂತಲೆ ? ಈ ಮಾತೃಭಾಷಾ ವ್ಯಾಮೋಹ ನನಗೆ ಅರ್ಥವೇ ಆಗೋದಿಲ್ಲವಪ್ಪ, ನಿನ್ನನ್ನು ಟೀಕಿಸಿದೀನಿ ಅಂತ ತಿಳ್ಕೊಬೇಡ, ಇದು ಸಾರ್ವ ತ್ರಿಕವಾಗಿ ಕಾಣಿಸೋ ಲಕ್ಷಣ. ನಮ್ಮ ವಿಶ್ವವಿದ್ಯಾನಿಲಯದ ಇತಿಹಾಸವನ್ನೇ ನೋಡು, ಇಂಗ್ಲಿಷ್ ಭಾಷೆಯ ಪ್ರಾಧ್ಯಾಪಕರೂಂತ ವಿಶ್ವಮಾನ್ಯರಾಗಬೇಕಾಗಿ ದ್ದವರು, ಉದ್ದಾಮ ಕನ್ನಡ ಪಂಡಿತರೂಂತೆ ಹೊಗಳಿಸಿಕೊಂಡು ನಿವೃತ್ತರಾದರು, ಹೌದೇ ಅಲ್ಲವೇ ಯೋಚಿಸಿನೋಡು, ಕನ್ನಡದಲ್ಲಿ ನಾವು ಬರೀಬಾರದೂಂತ<noinclude></noinclude> p4bovxhzgtcybjlngdv2f8xbhe19cca ಪುಟ:VISHAALAAKSHI - Niranjana.pdf/೪೨ 104 37878 323914 100037 2026-06-01T15:39:28Z Shreesha Sharma 7840 /* Proofread */ 323914 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೪೦|right=}} ನಾನು ಹೇಳೋದಿಲ್ಲ, ಆದರೆ, ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳು ಇಂಗ್ಲಿಷಿನಲ್ಲಿ ಬರೆಯಲೇಬೇಕು.” {{gap}}ತಕ್ಷಣವೆ ಏನಂತೀಯಾ?” ಎಂದು ಕೇಳಿ, ಒಪ್ಪಿಗೆ ನಿರೀಕ್ಷಿಸುವವರಲ್ಲ ಆ ಪ್ರಾಧ್ಯಪಕರು. ಮತ್ತೂ ಅಂದರು, ಮುಗುಳುನಕ್ಕು : {{gap}}“ಯೋಚಿಸಿನೋಡಿ.” {{gap}}ಅವರ ಕಳವಳ ವಿಶಾಲಾಕ್ಷಿಗೆ ಅರ್ಥವಾಗಲಿಲ್ಲ. ತಾನು ಮಾಡಿದುದು ತಪ್ಪೆಂದು ಒಪ್ಪುವುದಕ್ಕೂ ಅವಳು ಸಿದ್ಧಳಾಗಿರಲಿಲ್ಲ. ಆದರೆ, ಪ್ರಾಧ್ಯಾಪಕರಿಗೆ ಇದಿರಾಡುವಂತೆಯೂ ಇರಲಿಲ್ಲ. {{gap}}ತಮ್ಮ ಕಟುಮಾತುಗಳಿಂದ ಆಗಿರಬಹುದಾದ ನೋವಿಗೆ ಔಷಧ ಲೇಪನ ಎಂದು ಪ್ರಾಧ್ಯಾಪಕರೆಂದರು; {{gap}}“ನೀನು ಬರೆಯೋ ಪ್ರಯತ್ನ ಮಾಡಿದೀಯಾ ಅನ್ನೋದಂತೂ ಬಹಳ ಸಂತೋಷದ ವಿಷಯ. Keep it up !” {{gap}}ಮತ್ತೊಮ್ಮೆ ಮಂದಹಾಸ ಬೀರಿ, “ಗುಡ್‌ನೈಟ್”, ಎಂದು, ಅವರು ಹೊರಟೇಬಿಟ್ಟರು. {{gap}}ಅವರ ಕೊನೆಯಮಾತು ಆಪ್ಯಾಯಮಾನವಾಗಿತ್ತು, ವಿಶಾಲಾಕ್ಷಿಯೂ ಅಂದಳು : {{gap}}“ಗುಡ್‌ನೈಟ್.” {{gap}}[ಬಿಸಿಲಿನ ಝಳ ಇನ್ನೂ ಇದ್ದರೇನಂತೆ ? ಮಾರನೆಯ ದಿನದವರೆಗೂ ಮತ್ತೆ ಭೇಟಿ ಇಲ್ಲವೆಂದಾದರೆ, ಬೀಳ್ಕೊಡುಗೆಯ ವಂದನೆ ಗುಡ್ನೈಟ್' ಎಂದೇ.] {{gap}}ಪ್ರಾಧ್ಯಾಪಕರ ಮಾತಿನ ಭರಕ್ಕೆ ವಿಶಾಲಾಕ್ಷಿಯ ಪಾದಗಳು ಬೇರುಬಿಟ್ಟದ್ದುವು, ಅವುಗಳನ್ನು ಕೀಳು, ಆಕೆ ತನ್ನ ಹಾದಿ ಹಿಡಿದಳು. {{gap}}....ಮಹಾರಾಣಿ ಕಾಲೇಜಿನಲ್ಲಿ ತರಗತಿಗಳು ನಡೆಯುತ್ತಿದ್ದುವು. ಆದರೂ `ಅಧ್ಯಾಪಕ ವರ್ಗದ ಕೊಠಡಿಯಲ್ಲಿ, ವಿರಾಮದ ಹರಟೆಯಲ್ಲಿ ನಿರತರಾಗಿದ್ದ ಹಲವ ರಿದ್ದರು, ಹೊಸದಾಗಿ ಬಂದಿದ್ದ ಇಬ್ಬರ ಹೊರತಾಗಿ ಉಳಿದವರೆಲ್ಲ ಹಳೆಯ ಪರಿಚಿತರು ಸ್ನೇಹಿತರು. {{gap}}“ಹಾದಿ ತಪ್ಪಿ ಬಂಡ್ಭೀಟ್ಟ್ರೇನ್ರೀ ಈಕಡೆ ?” -ಚಟ, ಬೇಡವೆಂದರೂ ಕಾಲುಗಳು ಈ ದಿಕ್ಕಿಗೇ ತಿರುಗಿರಬೇಕು?<noinclude></noinclude> 805ecwdi5jcp6c38qgrcou29q1f6jn0 323915 323914 2026-06-01T15:39:43Z Shreelatha.Halemane 7642 /* Validated */ 323915 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವಿಶಾಲಾಕ್ಷಿ|left=೪೦|right=}} ನಾನು ಹೇಳೋದಿಲ್ಲ, ಆದರೆ, ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳು ಇಂಗ್ಲಿಷಿನಲ್ಲಿ ಬರೆಯಲೇಬೇಕು.” {{gap}}ತಕ್ಷಣವೆ ಏನಂತೀಯಾ?” ಎಂದು ಕೇಳಿ, ಒಪ್ಪಿಗೆ ನಿರೀಕ್ಷಿಸುವವರಲ್ಲ ಆ ಪ್ರಾಧ್ಯಪಕರು. ಮತ್ತೂ ಅಂದರು, ಮುಗುಳುನಕ್ಕು : {{gap}}“ಯೋಚಿಸಿನೋಡಿ.” {{gap}}ಅವರ ಕಳವಳ ವಿಶಾಲಾಕ್ಷಿಗೆ ಅರ್ಥವಾಗಲಿಲ್ಲ. ತಾನು ಮಾಡಿದುದು ತಪ್ಪೆಂದು ಒಪ್ಪುವುದಕ್ಕೂ ಅವಳು ಸಿದ್ಧಳಾಗಿರಲಿಲ್ಲ. ಆದರೆ, ಪ್ರಾಧ್ಯಾಪಕರಿಗೆ ಇದಿರಾಡುವಂತೆಯೂ ಇರಲಿಲ್ಲ. {{gap}}ತಮ್ಮ ಕಟುಮಾತುಗಳಿಂದ ಆಗಿರಬಹುದಾದ ನೋವಿಗೆ ಔಷಧ ಲೇಪನ ಎಂದು ಪ್ರಾಧ್ಯಾಪಕರೆಂದರು; {{gap}}“ನೀನು ಬರೆಯೋ ಪ್ರಯತ್ನ ಮಾಡಿದೀಯಾ ಅನ್ನೋದಂತೂ ಬಹಳ ಸಂತೋಷದ ವಿಷಯ. Keep it up !” {{gap}}ಮತ್ತೊಮ್ಮೆ ಮಂದಹಾಸ ಬೀರಿ, “ಗುಡ್‌ನೈಟ್”, ಎಂದು, ಅವರು ಹೊರಟೇಬಿಟ್ಟರು. {{gap}}ಅವರ ಕೊನೆಯಮಾತು ಆಪ್ಯಾಯಮಾನವಾಗಿತ್ತು, ವಿಶಾಲಾಕ್ಷಿಯೂ ಅಂದಳು : {{gap}}“ಗುಡ್‌ನೈಟ್.” {{gap}}[ಬಿಸಿಲಿನ ಝಳ ಇನ್ನೂ ಇದ್ದರೇನಂತೆ ? ಮಾರನೆಯ ದಿನದವರೆಗೂ ಮತ್ತೆ ಭೇಟಿ ಇಲ್ಲವೆಂದಾದರೆ, ಬೀಳ್ಕೊಡುಗೆಯ ವಂದನೆ ಗುಡ್ನೈಟ್' ಎಂದೇ.] {{gap}}ಪ್ರಾಧ್ಯಾಪಕರ ಮಾತಿನ ಭರಕ್ಕೆ ವಿಶಾಲಾಕ್ಷಿಯ ಪಾದಗಳು ಬೇರುಬಿಟ್ಟದ್ದುವು, ಅವುಗಳನ್ನು ಕೀಳು, ಆಕೆ ತನ್ನ ಹಾದಿ ಹಿಡಿದಳು. {{gap}}....ಮಹಾರಾಣಿ ಕಾಲೇಜಿನಲ್ಲಿ ತರಗತಿಗಳು ನಡೆಯುತ್ತಿದ್ದುವು. ಆದರೂ `ಅಧ್ಯಾಪಕ ವರ್ಗದ ಕೊಠಡಿಯಲ್ಲಿ, ವಿರಾಮದ ಹರಟೆಯಲ್ಲಿ ನಿರತರಾಗಿದ್ದ ಹಲವ ರಿದ್ದರು, ಹೊಸದಾಗಿ ಬಂದಿದ್ದ ಇಬ್ಬರ ಹೊರತಾಗಿ ಉಳಿದವರೆಲ್ಲ ಹಳೆಯ ಪರಿಚಿತರು ಸ್ನೇಹಿತರು. {{gap}}“ಹಾದಿ ತಪ್ಪಿ ಬಂಡ್ಭೀಟ್ಟ್ರೇನ್ರೀ ಈಕಡೆ ?” -ಚಟ, ಬೇಡವೆಂದರೂ ಕಾಲುಗಳು ಈ ದಿಕ್ಕಿಗೇ ತಿರುಗಿರಬೇಕು?<noinclude></noinclude> ddp0ym1aqvw4xwqsec3xl6klwww93ed ಪುಟ:VISHAALAAKSHI - Niranjana.pdf/೪೩ 104 37879 323916 100038 2026-06-01T15:44:11Z Shreesha Sharma 7840 /* Proofread */ 323916 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=}} {{gap}}“ಬೇಜಾರು ಬಂತೇನ್ರಿ ಎಂ.ಎ. ಕ್ಲಾಸು ?” _ {{gap}}ಅವರಿಗೇನಪ್ಪಾ-ರಾಂಕ್‌ ಬರೋರು!” {{gap}}ಮೊದಲಮಾತು ಉದ್ಗಾರಗಳೆಲ್ಲ ಮುಗಿದ ಬಳಿಕ, ಶಾಂತಾದೇವಿ-ಗಣಿತ ವಿಶಾರದೆ-ವಿಶಾಲಾಕ್ಷಿಯ ಬಳಿ ಸಾರಿ, ಮುಗುಳುನಗೆಯ ಪೀಠಿಕೆಯೊಡನೆ ಅಂದರು : {{gap}}''ಗಿರಿಜಾಬಾಯಿ ಬ೦ದಿಲ್ಲ ಕಣ್ರೀ, ಸೋಮವಾರದಿಂದಲೂ ರಜೆಯ ಮೇಲಿದಾರೆ, ಗೊತ್ತೆ ಇಲ್ವೆ ನಿಮಗೆ ?” {{gap}}ನೀನು ಬಂದುದು ಗಿರಿಜಾಬಾಯಿಗೋಸ್ಕರವೇ ಎನ್ನುವುದನ್ನು ಬಲ್ಲೆಎಂಬ ಸೂಚ್ಯಾರ್ಥವೂ ಇತ್ತು ಆ ಧ್ವನಿಯಲ್ಲಿ.. {{gap}}“ಇಲ್ಲವಲ್ರೀ...ಯಾಕೆ ? ಬೆಂಗಳೂರಿಗೆ ಹೋಗಿದಾರೇನು ?” “ಜ್ವರ ಅಂತ ಕಾಣುತ್ತೆ. ಲೀವ್‌ಲೆಟರಿನಲ್ಲಿ ಹಾಗಿದೆಯಪ್ಪ, ಇನ್ನು” {{gap}}ಅದನ್ನು ಕೇಳುತ್ತ ವಿಶಾಲಾಕ್ಷಿಯ ಮನಸಿನೊಳಗಾದ ಕಸಿವಿಸಿ, ಮಾತಿನ ರೂಪ ತಳೆಯಲಿಲ್ಲ. ಆ ಅಸ್ವಾಸ್ಥಕ್ಕೆ ತಾನೇನೂ ಪ್ರಾಧಾನ್ಯ ಕೊಡುತ್ತಿಲ್ಲವೆನ್ನುವಂತೆ ಸುಮ್ಮನಿದ್ದು, ದುಗುಡವನ್ನು ಶಾಂತಾದೇವಿಯಿಂದ ಮರೆಮಾಚಿ; ಅವಳೆಂದಳು: {{gap}}“ಇನ್ನೇನ್ರೀ ಸಮಾಚಾರ ?” . {{gap}}“ಏನಿರುತ್ತೆ ಹೇಳಿ? ಗಡಿಯಾರದ ಮುಳ್ಳಿನ ಹಾಗೆ ಜೀವನ ಇಲ್ಲಿ ನಡೀತಿದೆ.” {{gap}}ಮತ್ತೂ ಹೆಚ್ಚು ಹೊತ್ತು ಅಲ್ಲಿರಲು ಇಷ್ಟಪಡದೆ, “ಬರ್ತೀನ್ರಿ” ಎಂದು, ವಿಶಾಲಾಕ್ಷಿ ಹೊರಟಳು. {{gap}}ಗಿರಿಜಾಬಾಯಿಗೆ ಜ್ವರ, ವಿಶಾಲಾಕ್ಷಿಯ ಮನಸ್ಸನ್ನು ಆ ಸುದ್ದಿ ಅಲ್ಲೋಲಕಲ್ಲೋಲಗೊಳಿಸಿಬಿಟ್ಟಿತ್ತು.. ಎಷ್ಟು ತೊಂದರೆಯೊ-ಪಾಪ, ಎಷ್ಟು ಕಷ್ಟವೋ....ಶಾಂತಾದೇವಿ ಹೇಳಿದಾಗಲೇ, ನೋಡಲು ತಾನು ಹೋಗಬೇಕೆಂದು ವಿಶಾಲಾಕ್ಷಿ ನಿರ್ಧರಿಸಿದ್ದಳು.... {{gap}}ಶಿವರಾಮಪೇಟೆಯ ಮೂಲಕ ಬೇಗಬೇಗನೆ ಆಕೆ ದೇವರಾಜ `ಮಾರ್ಕೆಟ್ ಗೆ ನಡೆದಳು. ಮತ್ತೆ ಹತ್ತು ನಿಮಿಷಗಳಲ್ಲಿ ಕೆಸರೆಗೆ ಹೋಗುವ ಬಸ್ಸು ಬರ ಬೇಕು, ಬರಿಗೈಯಲ್ಲಿ ಹೋಗಬಾರದು ; ನಾಲ್ಕಾರು ಕಿತ್ತಳೆಹಣ್ಣುಗಳನ್ನಾದರೂ<noinclude></noinclude> slokoqn7h6cqibcxp3ur6ac8vdsgva8 323917 323916 2026-06-01T15:44:26Z Shreelatha.Halemane 7642 /* Validated */ 323917 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=}} {{gap}}“ಬೇಜಾರು ಬಂತೇನ್ರಿ ಎಂ.ಎ. ಕ್ಲಾಸು ?” _ {{gap}}ಅವರಿಗೇನಪ್ಪಾ-ರಾಂಕ್‌ ಬರೋರು!” {{gap}}ಮೊದಲಮಾತು ಉದ್ಗಾರಗಳೆಲ್ಲ ಮುಗಿದ ಬಳಿಕ, ಶಾಂತಾದೇವಿ-ಗಣಿತ ವಿಶಾರದೆ-ವಿಶಾಲಾಕ್ಷಿಯ ಬಳಿ ಸಾರಿ, ಮುಗುಳುನಗೆಯ ಪೀಠಿಕೆಯೊಡನೆ ಅಂದರು : {{gap}}''ಗಿರಿಜಾಬಾಯಿ ಬ೦ದಿಲ್ಲ ಕಣ್ರೀ, ಸೋಮವಾರದಿಂದಲೂ ರಜೆಯ ಮೇಲಿದಾರೆ, ಗೊತ್ತೆ ಇಲ್ವೆ ನಿಮಗೆ ?” {{gap}}ನೀನು ಬಂದುದು ಗಿರಿಜಾಬಾಯಿಗೋಸ್ಕರವೇ ಎನ್ನುವುದನ್ನು ಬಲ್ಲೆಎಂಬ ಸೂಚ್ಯಾರ್ಥವೂ ಇತ್ತು ಆ ಧ್ವನಿಯಲ್ಲಿ.. {{gap}}“ಇಲ್ಲವಲ್ರೀ...ಯಾಕೆ ? ಬೆಂಗಳೂರಿಗೆ ಹೋಗಿದಾರೇನು ?” “ಜ್ವರ ಅಂತ ಕಾಣುತ್ತೆ. ಲೀವ್‌ಲೆಟರಿನಲ್ಲಿ ಹಾಗಿದೆಯಪ್ಪ, ಇನ್ನು” {{gap}}ಅದನ್ನು ಕೇಳುತ್ತ ವಿಶಾಲಾಕ್ಷಿಯ ಮನಸಿನೊಳಗಾದ ಕಸಿವಿಸಿ, ಮಾತಿನ ರೂಪ ತಳೆಯಲಿಲ್ಲ. ಆ ಅಸ್ವಾಸ್ಥಕ್ಕೆ ತಾನೇನೂ ಪ್ರಾಧಾನ್ಯ ಕೊಡುತ್ತಿಲ್ಲವೆನ್ನುವಂತೆ ಸುಮ್ಮನಿದ್ದು, ದುಗುಡವನ್ನು ಶಾಂತಾದೇವಿಯಿಂದ ಮರೆಮಾಚಿ; ಅವಳೆಂದಳು: {{gap}}“ಇನ್ನೇನ್ರೀ ಸಮಾಚಾರ ?” . {{gap}}“ಏನಿರುತ್ತೆ ಹೇಳಿ? ಗಡಿಯಾರದ ಮುಳ್ಳಿನ ಹಾಗೆ ಜೀವನ ಇಲ್ಲಿ ನಡೀತಿದೆ.” {{gap}}ಮತ್ತೂ ಹೆಚ್ಚು ಹೊತ್ತು ಅಲ್ಲಿರಲು ಇಷ್ಟಪಡದೆ, “ಬರ್ತೀನ್ರಿ” ಎಂದು, ವಿಶಾಲಾಕ್ಷಿ ಹೊರಟಳು. {{gap}}ಗಿರಿಜಾಬಾಯಿಗೆ ಜ್ವರ, ವಿಶಾಲಾಕ್ಷಿಯ ಮನಸ್ಸನ್ನು ಆ ಸುದ್ದಿ ಅಲ್ಲೋಲಕಲ್ಲೋಲಗೊಳಿಸಿಬಿಟ್ಟಿತ್ತು.. ಎಷ್ಟು ತೊಂದರೆಯೊ-ಪಾಪ, ಎಷ್ಟು ಕಷ್ಟವೋ....ಶಾಂತಾದೇವಿ ಹೇಳಿದಾಗಲೇ, ನೋಡಲು ತಾನು ಹೋಗಬೇಕೆಂದು ವಿಶಾಲಾಕ್ಷಿ ನಿರ್ಧರಿಸಿದ್ದಳು.... {{gap}}ಶಿವರಾಮಪೇಟೆಯ ಮೂಲಕ ಬೇಗಬೇಗನೆ ಆಕೆ ದೇವರಾಜ `ಮಾರ್ಕೆಟ್ ಗೆ ನಡೆದಳು. ಮತ್ತೆ ಹತ್ತು ನಿಮಿಷಗಳಲ್ಲಿ ಕೆಸರೆಗೆ ಹೋಗುವ ಬಸ್ಸು ಬರ ಬೇಕು, ಬರಿಗೈಯಲ್ಲಿ ಹೋಗಬಾರದು ; ನಾಲ್ಕಾರು ಕಿತ್ತಳೆಹಣ್ಣುಗಳನ್ನಾದರೂ<noinclude></noinclude> jzvel9ubc0ugukmywa6cs0jv1i0dtnm ಪುಟ:VISHAALAAKSHI - Niranjana.pdf/೪೪ 104 37880 323957 100039 2026-06-02T03:40:11Z Shreesha Sharma 7840 /* Proofread */ 323957 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೪೨|right=}} ಒಯ್ಯಬೇಕು ಎನಿಸಿತು. ಆದರೆ, ಆಕೆಯಲ್ಲಿದ್ದುದು ಕೆಲವೇ ಚಿಲ್ಲರೆ ಆಣಿಗಳು. ಅಷ್ಟನ್ನೂ ಖರ್ಚುಮಾಡಿದರೆ, ಹಿಂತಿರುಗಿ ಬರುವ-ಮನೆ ತಲಪುವ-ಬಸ್ ವೆಚ್ಚಕ್ಕಾಗಿ ಗಿರಿಜಾಬಾಯಿಯನ್ನು ಕೇಳಿ ಇಸಕೊಳ್ಳಬೇಕು, ಅವರೊಳಗಿನ ಸ್ನೇಹ ಅಷ್ಟೊಂದು ಗಾಢವಾಗಿದ್ದರೂ, ಕೈಗಡ ಕೇಳುವುದು ಮಾತ್ರ ವಿಶಾಲಿಯಿಂದ ಆಗದಮಾತು. [ಗಿರಿಜಾಬಾಯಿಯಂತೂ ಎಂದೂ ಕೇಳಿದವರಲ್ಲ.] 'ಹಾಗೆಯೇ ಹೋದರಾಯಿತು; ಹಣ್ಣು ತರಿಸಿರ್ತಾರೆ,' ಎಂದುಕೊಂಡಳು, ಸ್ವಾಭಿಮಾನವೇ ಗೆದ್ದಿತು. {{gap}}ವಿಶಾಲಾಕ್ಷಿ ಬಸ್ಸಿನಲ್ಲಿ ಕುಳಿತಾಗ, ಅವಳ ಎಡಗೈಯಲ್ಲಿದ್ದ ಪ್ಯಾಕೆಟ್ಟು ಒಡತಿಯನ್ನು ನೋಡಿ ನಕ್ಕಿತು,ತನ್ನ ಹಿಂದಿನ ಸಹೋದ್ಯೋಗಿಗಳನ್ನು ಕಂಡಾಗ ಅವಳಿಗೆ ಅದರ ನೆನಪಿತ್ತು. ಆದರೆ, ಗಿರಿಜಾಬಾಯಿಯ ಅನಾರೋಗ್ಯದ ಸುದ್ದಿ ಕೇಳಿದೊಡನೆ, ಉಳಿದುದೆಲ್ಲ ಮರೆತುಹೋಗಿತ್ತು, {{gap}}ಲವಲವಿಕೆಯಿಂದ ಉತ್ಸಾಹದಿಂದ ವಿಶಾಲಾಕ್ಷಿ ಮನೆ ಬಿಟ್ಟಿದ್ದಳು , ಪ್ರಾಧ್ಯಾಪಕರನ್ನು ಕಾಣುವವರೆಗೂ ಬಲಗೊಳ್ಳುತ್ತ ಹರಿದಿತ್ತು ಸಂತಸದಹೊನಲು. {{gap}}ಮೊದಲು ಅವರಿಂದ ಬಂದ ಟೀಕೆ, ಅನಂತರ ಸ್ನೇಹಿತೆಯನ್ನು ಕುರಿತ . ಅಶುಭವಾರ್ತೆ. {{gap}}ನಿರ್ಮಲವಾಗಿದೆ ಆಕಾಶ-ಎಂದು ಅಂದಾಗಲೇ, ಮೂತಿ ತೋರುವ ಕರಿ. ಮೋಡ... {{gap}}ತಾನು ಇಳಿಯಬೇಕಾದ ಬಸ್ ಸ್ಟಾಪನ್ನೆ ಇದಿರುನೋಡುತ್ತ, ವಿಷಣ್ಣ ವದನಳಾಗಿ ವಿಶಾಲಾಕ್ಷಿ ಕುಳಿತಳು. :<noinclude></noinclude> rquuk9d1jxxablj6gmia578ewhqemsw 323959 323957 2026-06-02T03:44:40Z Shreelatha.Halemane 7642 /* Validated */ 323959 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವಿಶಾಲಾಕ್ಷಿ|left=೪೨|right=}} ಒಯ್ಯಬೇಕು ಎನಿಸಿತು. ಆದರೆ, ಆಕೆಯಲ್ಲಿದ್ದುದು ಕೆಲವೇ ಚಿಲ್ಲರೆ ಆಣಿಗಳು. ಅಷ್ಟನ್ನೂ ಖರ್ಚುಮಾಡಿದರೆ, ಹಿಂತಿರುಗಿ ಬರುವ-ಮನೆ ತಲಪುವ-ಬಸ್ ವೆಚ್ಚಕ್ಕಾಗಿ ಗಿರಿಜಾಬಾಯಿಯನ್ನು ಕೇಳಿ ಇಸಕೊಳ್ಳಬೇಕು, ಅವರೊಳಗಿನ ಸ್ನೇಹ ಅಷ್ಟೊಂದು ಗಾಢವಾಗಿದ್ದರೂ, ಕೈಗಡ ಕೇಳುವುದು ಮಾತ್ರ ವಿಶಾಲಿಯಿಂದ ಆಗದಮಾತು. [ಗಿರಿಜಾಬಾಯಿಯಂತೂ ಎಂದೂ ಕೇಳಿದವರಲ್ಲ.] 'ಹಾಗೆಯೇ ಹೋದರಾಯಿತು; ಹಣ್ಣು ತರಿಸಿರ್ತಾರೆ,' ಎಂದುಕೊಂಡಳು, ಸ್ವಾಭಿಮಾನವೇ ಗೆದ್ದಿತು. {{gap}}ವಿಶಾಲಾಕ್ಷಿ ಬಸ್ಸಿನಲ್ಲಿ ಕುಳಿತಾಗ, ಅವಳ ಎಡಗೈಯಲ್ಲಿದ್ದ ಪ್ಯಾಕೆಟ್ಟು ಒಡತಿಯನ್ನು ನೋಡಿ ನಕ್ಕಿತು,ತನ್ನ ಹಿಂದಿನ ಸಹೋದ್ಯೋಗಿಗಳನ್ನು ಕಂಡಾಗ ಅವಳಿಗೆ ಅದರ ನೆನಪಿತ್ತು. ಆದರೆ, ಗಿರಿಜಾಬಾಯಿಯ ಅನಾರೋಗ್ಯದ ಸುದ್ದಿ ಕೇಳಿದೊಡನೆ, ಉಳಿದುದೆಲ್ಲ ಮರೆತುಹೋಗಿತ್ತು, {{gap}}ಲವಲವಿಕೆಯಿಂದ ಉತ್ಸಾಹದಿಂದ ವಿಶಾಲಾಕ್ಷಿ ಮನೆ ಬಿಟ್ಟಿದ್ದಳು , ಪ್ರಾಧ್ಯಾಪಕರನ್ನು ಕಾಣುವವರೆಗೂ ಬಲಗೊಳ್ಳುತ್ತ ಹರಿದಿತ್ತು ಸಂತಸದಹೊನಲು. {{gap}}ಮೊದಲು ಅವರಿಂದ ಬಂದ ಟೀಕೆ, ಅನಂತರ ಸ್ನೇಹಿತೆಯನ್ನು ಕುರಿತ . ಅಶುಭವಾರ್ತೆ. {{gap}}ನಿರ್ಮಲವಾಗಿದೆ ಆಕಾಶ-ಎಂದು ಅಂದಾಗಲೇ, ಮೂತಿ ತೋರುವ ಕರಿ. ಮೋಡ... {{gap}}ತಾನು ಇಳಿಯಬೇಕಾದ ಬಸ್ ಸ್ಟಾಪನ್ನೆ ಇದಿರುನೋಡುತ್ತ, ವಿಷಣ್ಣ ವದನಳಾಗಿ ವಿಶಾಲಾಕ್ಷಿ ಕುಳಿತಳು. :<noinclude></noinclude> e5bgpf4ir7ni26yljzfgizcawv7c5f1 ಪುಟ:VISHAALAAKSHI - Niranjana.pdf/೪೫ 104 37881 323958 100040 2026-06-02T03:43:36Z Shreesha Sharma 7840 /* Proofread */ 323958 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center='''೫'''|left=|right=}} {{gap}}ಸ್ವಲ್ಪ ಸೊರಗಿದ್ದ ಗಿರಿಜಾಬಾಯಿ, ತಮ್ಮ ಮನೆ ಬಾಗಿಲಲ್ಲೆ ಗೆಳತಿಯನ್ನು ಸ್ವಾಗತಿಸಿದರು, {{gap}}ಹಾಸಿಗೆಯ ಮೇಲೆ ಸ್ನೇಹಿತೆ ಮಲಗಿಯೇ ಇರಬಹುದೆಂದು ಚಿತ್ರಿಸಿ ಕೊಂಡಿದ್ದ ವಿಶಾಲಾಕ್ಷಿಗೆ, ಅವರು ಎದ್ದು ಓಡಾಡುತ್ತಿದ್ದುದನ್ನು ಕ೦ಡು ಆನಂದವಾಯಿತು, {{gap}}“ಜ್ವರ ಬಂದಿತ್ತಂತೆ,” ಎಂದು ಅವಳೆಂದಳು. {{gap}}“ಬಂತು, ಹೋಯ್ತು,” ಎಂದರು ಗಿರಿಜಾಬಾಯಿ, ಬಿಳುಪೇರಿದ್ದ ತುಟಿಗಳನ್ನು ತೆರೆದು ಸಣ್ಣನೆ ನಕ್ಕು. {{gap}}“ಹೇಳಿ ಕಳಿಸ್ಬಾರದಾಗಿತ್ತೆ ನನಗೆ ?” {{gap}}“ಇವತ್ತು ನಾಳೇಲಿ ಒಂದು ಲೋಕಲ್ ಕಾರ್ಡು ಹಾಕೋಣಾಂತಿದ್ದೆ. ಅಷ್ಟರಲ್ಲೇ, ಜ್ವರವೇ ಓಡಿಹೊಯ್ತು !” {{gap}}ಕಿರಿಯ ಮಗಳಾಗಲೇ ಬಂದಿದ್ದಳು, ಗಿರಿಜಾಬಾಯಿ-ವಿಶಾಲಾಕ್ಷಿಯರು ಕುಳಿತು ಆ ಮಾತು ಆಡುವುದರೊಳಗೇ, ಹಿರಿಯ ಹುಡುಗಿಯರೂ ಬಂದರು... {{gap}}ದೊಡ್ಡವಳು ವಿಶಾಲಾಕ್ಷಿಗೆ ವಂದಿಸಿ ತಾಯಿಯ ಕಡೆ ನೋಡಿ ಅಂದಳು: - {{gap}}ಎದ್ದು ಓಡಾಡ್ತಿದೀಯಲ್ಲಮ್ಮ! ಮಲಕೊಂಡೇ ಇದ್ದಿದ್ದರೆ ಏನಾಗ್ತಿತ್ತು ?” .. {{gap}}ಆಗಲೇ ಹಿರಿತನ ವಹಿಸಿದ್ದಳು ಮಗಳು, ಗಿರಿಜಾಬಾಯಿಯ ಮಾತ್ರ. ಹೃದಯ ಆನಂದದಿಂದ ಅರಳಿತು, ವಿಶಾಲಾಕ್ಷಿಯ ಕಡೆಗೊಮ್ಮೆ ಮುಗುಳು ನಗೆಯ ನೋಟ ಬೀರಿ, ಅವರೆಂದರು: {{gap}}“ಬೆಳಗಿಂದ ಜ್ವರ ಬಂದೇ ಇಲ್ಲ, ರಮಾ...ಓವಲ್ವಿನ್ ಮಾಡ್ತೀಯೇನು ಒಂದಿಷ್ಟು ?”<noinclude></noinclude> l9g0s76ajeq6tgn37dqq0rug0e0l72o 323960 323958 2026-06-02T03:44:49Z Shreelatha.Halemane 7642 /* Validated */ 323960 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center='''೫'''|left=|right=}} {{gap}}ಸ್ವಲ್ಪ ಸೊರಗಿದ್ದ ಗಿರಿಜಾಬಾಯಿ, ತಮ್ಮ ಮನೆ ಬಾಗಿಲಲ್ಲೆ ಗೆಳತಿಯನ್ನು ಸ್ವಾಗತಿಸಿದರು, {{gap}}ಹಾಸಿಗೆಯ ಮೇಲೆ ಸ್ನೇಹಿತೆ ಮಲಗಿಯೇ ಇರಬಹುದೆಂದು ಚಿತ್ರಿಸಿ ಕೊಂಡಿದ್ದ ವಿಶಾಲಾಕ್ಷಿಗೆ, ಅವರು ಎದ್ದು ಓಡಾಡುತ್ತಿದ್ದುದನ್ನು ಕ೦ಡು ಆನಂದವಾಯಿತು, {{gap}}“ಜ್ವರ ಬಂದಿತ್ತಂತೆ,” ಎಂದು ಅವಳೆಂದಳು. {{gap}}“ಬಂತು, ಹೋಯ್ತು,” ಎಂದರು ಗಿರಿಜಾಬಾಯಿ, ಬಿಳುಪೇರಿದ್ದ ತುಟಿಗಳನ್ನು ತೆರೆದು ಸಣ್ಣನೆ ನಕ್ಕು. {{gap}}“ಹೇಳಿ ಕಳಿಸ್ಬಾರದಾಗಿತ್ತೆ ನನಗೆ ?” {{gap}}“ಇವತ್ತು ನಾಳೇಲಿ ಒಂದು ಲೋಕಲ್ ಕಾರ್ಡು ಹಾಕೋಣಾಂತಿದ್ದೆ. ಅಷ್ಟರಲ್ಲೇ, ಜ್ವರವೇ ಓಡಿಹೊಯ್ತು !” {{gap}}ಕಿರಿಯ ಮಗಳಾಗಲೇ ಬಂದಿದ್ದಳು, ಗಿರಿಜಾಬಾಯಿ-ವಿಶಾಲಾಕ್ಷಿಯರು ಕುಳಿತು ಆ ಮಾತು ಆಡುವುದರೊಳಗೇ, ಹಿರಿಯ ಹುಡುಗಿಯರೂ ಬಂದರು... {{gap}}ದೊಡ್ಡವಳು ವಿಶಾಲಾಕ್ಷಿಗೆ ವಂದಿಸಿ ತಾಯಿಯ ಕಡೆ ನೋಡಿ ಅಂದಳು: - {{gap}}ಎದ್ದು ಓಡಾಡ್ತಿದೀಯಲ್ಲಮ್ಮ! ಮಲಕೊಂಡೇ ಇದ್ದಿದ್ದರೆ ಏನಾಗ್ತಿತ್ತು ?” .. {{gap}}ಆಗಲೇ ಹಿರಿತನ ವಹಿಸಿದ್ದಳು ಮಗಳು, ಗಿರಿಜಾಬಾಯಿಯ ಮಾತ್ರ. ಹೃದಯ ಆನಂದದಿಂದ ಅರಳಿತು, ವಿಶಾಲಾಕ್ಷಿಯ ಕಡೆಗೊಮ್ಮೆ ಮುಗುಳು ನಗೆಯ ನೋಟ ಬೀರಿ, ಅವರೆಂದರು: {{gap}}“ಬೆಳಗಿಂದ ಜ್ವರ ಬಂದೇ ಇಲ್ಲ, ರಮಾ...ಓವಲ್ವಿನ್ ಮಾಡ್ತೀಯೇನು ಒಂದಿಷ್ಟು ?”<noinclude></noinclude> fos3sqvf1j7sj0hio9c31ewccujqtvg ಪುಟ:VISHAALAAKSHI - Niranjana.pdf/೪೬ 104 37882 323964 100041 2026-06-02T04:01:40Z Shreesha Sharma 7840 /* Proofread */ 323964 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೪೪|right=}} {{gap}}“ಹೂಂ.” {{gap}}ವಿಶಾಲಾಕ್ಷಿ ಕೇಳಿದಳು : {{gap}}“ಒಲೆ ಹಚ್ಚಿಕೊಡ್ಲಾ, ರಮಾ ?” {{gap}}ಅಮ್ಮನಿಗೆ ಜ್ವರ ಬಿಟ್ಟಿದೆಯೆಂದು ಹರ್ಷಿತಳಾದ ರಮಾ ಅಂದಳು :- {{gap}}“ಬೇಡ್ರೀ : ನನಗೆ ಒಲೆ ಹೆಚ್ಚೋಕೆ ಬರುತ್ತೆ!”: {{gap}}ನಾಲ್ಕು ಮಕ್ಕಳನ್ನು ಹೆತ್ತಿದ್ದ ಗಿರಿಜಾಬಾಯಿಗಿನ್ನೂ ನಾಲ್ವತ್ತು ದಾಟಿರಲಿಲ್ಲ. ನೋಡಲು ಮಾತ್ರ ಹೆಚ್ಚು ವಯಸ್ಸಾದವರಂತೆ ಕಾಣುತ್ತಿದ್ದರು, ಆ. ಭಾವನೆಗೆ ಕಾರಣವಾಗಿದ್ದುದು ಬಿಳಿಯ ತಲೆಗೂದಲು, ರಾಧಾಕೃಷ್ಣನ ಸಾವಿಗೆ ಮುನ್ನ ಒಂದು ಕೂದಲೂ ಬಿಳುಪಾಗಿರಲಿಲ್ಲ... ಆ ಬಳಿಕ, ಬಲು ಬೇಗನೆ, ಅರ್ಧಕ್ಕರ್ಧ ನರೆತಿತು. . .. {{gap}}ಟೀಪಾಯ್'ಯ ಮೇಲೆ ವಿಶಾಲಾಕ್ಷಿ ಇರಿಸಿದ್ದ ಪ್ಯಾಕೆಟನ್ನು ಗಿರಿಜಾ ಬಾಯಿ ಎತ್ತಿಕೊಂಡರು, ಹಿಂದುಮುಂದು ನೋಡದೆ, ಗೆಳತಿಯ ಸಮ್ಮತಿಯನ್ನೂ ಕೇಳದೆ, ಅದನ್ನು ಬಿಚ್ಚಿದರು, ಒಳಗಿದ್ದುದನ್ನು ನೋಡಿ ಉದ್ಗರಿಸಿದರು : {{gap}}ಓ ! ಬಂತೇನ್ರೀ ಲೇಖನ ?” {{gap}}ವಿಶಾಲಾಕ್ಷಿಗೆ ಆದಷ್ಟೇ ಸಂತೋಷವಾಯಿತು ಅವರಿಗೂ. ಮತ್ತೂ ಉಳಿದಿದ್ದ ಲೇಖನದ ಪ್ರತಿಯ ಮೇಲೆ, ವಿಶಾಲಿ ಬರೆದಳು.: {{gap}}ಆತ್ಮೀಯರಾದ ಗಿರಿಜಾಬಾಯಿ-ಗೆ.. {{gap}}ಪ್ರೀತಿಪೂರ್ವಕ ಕಾಣಿಕೆ. {{gap}}ಅದರ ಕೆಳಗೆ “ವಿ' ಎಂಬ ಅಂಕಿತಿವಷ್ಟೇ ಸಾಕೆನಿಸಿತು. {{gap}}ಇಪ್ಪತ್ತೈದು ಕೊಟ್ಟಿದ್ದಾರೆ, ಅಲ್ವಾ? ಹಂಚಿಬಿಡಿ, ಹತ್ತಾರು ಜನ ಓದಿ,” ಎಂದರು ಗಿರಿಜಾಬಾಯಿ.. - {{gap}}“ಸರಿ, ಸರಿ! ಏನು ಮಹಾ ಅಂತ ಹಂಚೋದು ? {{gap}}“ಏನು ಮಹಾ ಅಂದರೆ ? ಇಷ್ಟೊಳ್ಳೆ ಲೇಖನ ಬೇರೆ ಯಾರಾದರೂ " ಬರೀಲಿ ನೋಡೋಣ !” {{gap}}“ಸುಮ್ಮನೆ ಮುಖಸ್ತುತಿ ಮಾಡ್ತೀರಾ ....” {{gap}}“ಯಾರು ನಾನೇ ? ಈ ಮಿತಿಮಿಾರಿದ ಸೌಜನ್ಯ ಬಿಟ್ಟುಬಿಡಿ ವಿಶಾಲಿ....”<noinclude></noinclude> qu1drvkyvpoz6sqkyied7sa6204df5o 323965 323964 2026-06-02T04:04:29Z Shreelatha.Halemane 7642 /* Validated */ 323965 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವಿಶಾಲಾಕ್ಷಿ|left=೪೪|right=}} {{gap}}“ಹೂಂ.” {{gap}}ವಿಶಾಲಾಕ್ಷಿ ಕೇಳಿದಳು : {{gap}}“ಒಲೆ ಹಚ್ಚಿಕೊಡ್ಲಾ, ರಮಾ ?” {{gap}}ಅಮ್ಮನಿಗೆ ಜ್ವರ ಬಿಟ್ಟಿದೆಯೆಂದು ಹರ್ಷಿತಳಾದ ರಮಾ ಅಂದಳು :- {{gap}}“ಬೇಡ್ರೀ : ನನಗೆ ಒಲೆ ಹೆಚ್ಚೋಕೆ ಬರುತ್ತೆ!”: {{gap}}ನಾಲ್ಕು ಮಕ್ಕಳನ್ನು ಹೆತ್ತಿದ್ದ ಗಿರಿಜಾಬಾಯಿಗಿನ್ನೂ ನಾಲ್ವತ್ತು ದಾಟಿರಲಿಲ್ಲ. ನೋಡಲು ಮಾತ್ರ ಹೆಚ್ಚು ವಯಸ್ಸಾದವರಂತೆ ಕಾಣುತ್ತಿದ್ದರು, ಆ. ಭಾವನೆಗೆ ಕಾರಣವಾಗಿದ್ದುದು ಬಿಳಿಯ ತಲೆಗೂದಲು, ರಾಧಾಕೃಷ್ಣನ ಸಾವಿಗೆ ಮುನ್ನ ಒಂದು ಕೂದಲೂ ಬಿಳುಪಾಗಿರಲಿಲ್ಲ... ಆ ಬಳಿಕ, ಬಲು ಬೇಗನೆ, ಅರ್ಧಕ್ಕರ್ಧ ನರೆತಿತು. . .. {{gap}}ಟೀಪಾಯ್'ಯ ಮೇಲೆ ವಿಶಾಲಾಕ್ಷಿ ಇರಿಸಿದ್ದ ಪ್ಯಾಕೆಟನ್ನು ಗಿರಿಜಾ ಬಾಯಿ ಎತ್ತಿಕೊಂಡರು, ಹಿಂದುಮುಂದು ನೋಡದೆ, ಗೆಳತಿಯ ಸಮ್ಮತಿಯನ್ನೂ ಕೇಳದೆ, ಅದನ್ನು ಬಿಚ್ಚಿದರು, ಒಳಗಿದ್ದುದನ್ನು ನೋಡಿ ಉದ್ಗರಿಸಿದರು : {{gap}}ಓ ! ಬಂತೇನ್ರೀ ಲೇಖನ ?” {{gap}}ವಿಶಾಲಾಕ್ಷಿಗೆ ಆದಷ್ಟೇ ಸಂತೋಷವಾಯಿತು ಅವರಿಗೂ. ಮತ್ತೂ ಉಳಿದಿದ್ದ ಲೇಖನದ ಪ್ರತಿಯ ಮೇಲೆ, ವಿಶಾಲಿ ಬರೆದಳು.: {{gap}}ಆತ್ಮೀಯರಾದ ಗಿರಿಜಾಬಾಯಿ-ಗೆ.. {{gap}}ಪ್ರೀತಿಪೂರ್ವಕ ಕಾಣಿಕೆ. {{gap}}ಅದರ ಕೆಳಗೆ “ವಿ' ಎಂಬ ಅಂಕಿತಿವಷ್ಟೇ ಸಾಕೆನಿಸಿತು. {{gap}}ಇಪ್ಪತ್ತೈದು ಕೊಟ್ಟಿದ್ದಾರೆ, ಅಲ್ವಾ? ಹಂಚಿಬಿಡಿ, ಹತ್ತಾರು ಜನ ಓದಿ,” ಎಂದರು ಗಿರಿಜಾಬಾಯಿ.. - {{gap}}“ಸರಿ, ಸರಿ! ಏನು ಮಹಾ ಅಂತ ಹಂಚೋದು ? {{gap}}“ಏನು ಮಹಾ ಅಂದರೆ ? ಇಷ್ಟೊಳ್ಳೆ ಲೇಖನ ಬೇರೆ ಯಾರಾದರೂ " ಬರೀಲಿ ನೋಡೋಣ !” {{gap}}“ಸುಮ್ಮನೆ ಮುಖಸ್ತುತಿ ಮಾಡ್ತೀರಾ ....” {{gap}}“ಯಾರು ನಾನೇ ? ಈ ಮಿತಿಮಿಾರಿದ ಸೌಜನ್ಯ ಬಿಟ್ಟುಬಿಡಿ ವಿಶಾಲಿ....”<noinclude></noinclude> 6p3u7uc9hpzvv5y7xbw7a4w8r3ejix5 ಪುಟ:VISHAALAAKSHI - Niranjana.pdf/೪೭ 104 37883 323967 100042 2026-06-02T04:08:32Z Shreesha Sharma 7840 /* Proofread */ 323967 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೪೫}} {{gap}}ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೇ ನುಂಗಿದ್ದ ತುತ್ತು ಖಾರದ ಬಳಿಕ, ಈ ಸಿಹಿ. {{gap}}“ನನ್ನ ಪ್ರೊಫೆಸರು ಏನಂದರು ಗೊತ್ತೆ ?”-- {{gap}}“ಹ್ಲಾ, ಏನಂದರು ? ಅವರಿಗೆ ತೋರಿಸಿದಿರಾ?” {{gap}}“ಹೂಂ, ಇಂಗ್ಲಿಷಿನಲ್ಲಿ ಯಾಕೆ ಬರೀಲಿಲ್ಲ-ಅಂದರು, ನಮ್ಮಲ್ಲಿನ ಇಂಗ್ಲಿಷ್ ಪ್ರಾಧ್ಯಾಪಕರೆಷ್ಟೋ ಜನ...” {{gap}}ವಿಶಾಲಾಕ್ಷಿ ಒಪ್ಪಿಸಿದ ವರದಿಯನ್ನು ಆಸಕ್ತಿಯಿಂದ ಗಿರಿಜಾಬಾಯಿ ಲಾಲಿಸಿದರು, ಮುಗುಳುನಗುತ್ತ ಅಸಮ್ಮತಿ ಸೂಚಕವಾಗಿ ತಲೆಯಲ್ಲಾಡಿಸಿದರು. {{gap}}''ಅವರು ಬಾಣ ಎಸೆದದ್ದು ಯಾರ ಮೇಲೆ ತಿಳೀತೆ ?” | {{gap}}ಪ್ರಾಧ್ಯಾಪಕರು ಆ ಮಾತು ಆಡಿದಾಗ, ತಿಳಿದಿರಲಿಲ್ಲ. ಆದರೆ ಈಗ, ಅದನ್ನು ಕುರಿತು ಯೋಚಿಸತೊಡಗಿದಾಗೆ, ಹೊಳೆಯಿತು. {{gap}}ಅವರಂದದ್ದು ದಿವಂಗತ ಬಿ. ಎಂ. ಶ್ರೀ.ಯವರ ವಿಷಯವಾಗಿ ಅಲ್ಲವೆ ??? - {{gap}}“ಹೌದು, ಆಮೇಲೂ ಅಷ್ಟೆ : ರಂಗಣ್ಣನವರು, ಮೂರ್ತಿರಾಯರು, ಉತ್ತರದ ಕಡೆ ಗೋಕಾಕರು-ಎಲ್ಲಾ ಇಂಗ್ಲಿಷ್ ಪ್ರಾಧ್ಯಾಪಕರು ; ಜತೆಯಲ್ಲೇ ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖರು, ಈ ಜನರ ಹಾಗೆ ನಿಮ್ಮ ಪ್ರೊಫೆಸರು ಹೆಸರಾಂತವರಲ್ಲ. ಸ್ವಲ್ಪ ಕಟುವಾಗಿ ಹೇಳೋದಾದರೆ, ಇವರ ಕೈಗೆ ಎಟಕದ ದ್ರಾಕ್ಷೆ, ಸ್ವಲ್ಪ ಹುಳಿ.“ {{gap}}“ನೀವು ಹೇಳ್ತಿರೋದು ನಿಜ, ಮಾತೃಭಾಷೆಯ ವಿಷಯದಲ್ಲಿ ತಾತ್ಸಾರ ಸರಿಯಲ್ಲ ಅಂತ ನನಗೂ ಅನಿಸುತ್ತ ಪ್ರ.”. {{gap}}ಗಿರಿಜಾಬಾಯಿ ಸಂಚಿಕೆಯಲ್ಲಿದ್ದ ಇತರ ಲೇಖನಗಳನ್ನೂ ನೋಡಿದರು. ವಿಶಾಲಾಕ್ಷಿ ಬರೆದಿದ್ದ ಲೇಖನದ ಪುಟಗಳ ಮೇಲೆ ಒಲವಿನ ನೋಟ ಬೀರಿದರು, ಬಳಿಕ ಸಂಚಿಕೆಯನ್ನು ವಿಶಾಲಾಕ್ಷಿಯ ಕಡೆಗೆ ಸರಿಸಿದರು: {{gap}}“ತಗೊಳ್ಳಿ.” {{gap}}ಇಲ್ಲೇ ಇರಲಿ, ಎಲ್ಲಾ ಓದಿದ ಮೇಲೆ ಕೊಡುವಿರಂತೆ.” {{gap}}“ಬೇಡ, ಕಾಲೇಜಿಗೆ ಬಂದಿರುತ್ತೆ, ಸಂಚಿಕೆಯ ಒಂದು ಪ್ರತಿಯಾದರೂ . ನಿಮ್ಮಲ್ಲೆ ಇರಬೇಕು,”<noinclude></noinclude> mqagsrlvdj0shlbx8l8sny1jcyysn9v 323971 323967 2026-06-02T04:24:39Z Shreesha Sharma 7840 323971 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೪೫}} {{gap}}ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೇ ನುಂಗಿದ್ದ ತುತ್ತು ಖಾರದ ಬಳಿಕ, ಈ ಸಿಹಿ. {{gap}}“ನನ್ನ ಪ್ರೊಫೆಸರು ಏನಂದರು ಗೊತ್ತೆ ?”-- {{gap}}“ಹ್ಲಾ, ಏನಂದರು ? ಅವರಿಗೆ ತೋರಿಸಿದಿರಾ?” {{gap}}“ಹೂಂ, ಇಂಗ್ಲಿಷಿನಲ್ಲಿ ಯಾಕೆ ಬರೀಲಿಲ್ಲ-ಅಂದರು, ನಮ್ಮಲ್ಲಿನ ಇಂಗ್ಲಿಷ್ ಪ್ರಾಧ್ಯಾಪಕರೆಷ್ಟೋ ಜನ...” {{gap}}ವಿಶಾಲಾಕ್ಷಿ ಒಪ್ಪಿಸಿದ ವರದಿಯನ್ನು ಆಸಕ್ತಿಯಿಂದ ಗಿರಿಜಾಬಾಯಿ ಲಾಲಿಸಿದರು, ಮುಗುಳುನಗುತ್ತ ಅಸಮ್ಮತಿ ಸೂಚಕವಾಗಿ ತಲೆಯಲ್ಲಾಡಿಸಿದರು. {{gap}}''ಅವರು ಬಾಣ ಎಸೆದದ್ದು ಯಾರ ಮೇಲೆ ತಿಳೀತೆ ?” | {{gap}}ಪ್ರಾಧ್ಯಾಪಕರು ಆ ಮಾತು ಆಡಿದಾಗ, ತಿಳಿದಿರಲಿಲ್ಲ. ಆದರೆ ಈಗ, ಅದನ್ನು ಕುರಿತು ಯೋಚಿಸತೊಡಗಿದಾಗೆ, ಹೊಳೆಯಿತು. {{gap}}ಅವರಂದದ್ದು ದಿವಂಗತ ಬಿ. ಎಂ. ಶ್ರೀ.ಯವರ ವಿಷಯವಾಗಿ ಅಲ್ಲವೆ ??? - {{gap}}“ಹೌದು, ಆಮೇಲೂ ಅಷ್ಟೆ : ರಂಗಣ್ಣನವರು, ಮೂರ್ತಿರಾಯರು, ಉತ್ತರದ ಕಡೆ ಗೋಕಾಕರು-ಎಲ್ಲಾ ಇಂಗ್ಲಿಷ್ ಪ್ರಾಧ್ಯಾಪಕರು ; ಜತೆಯಲ್ಲೇ ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖರು, ಈ ಜನರ ಹಾಗೆ ನಿಮ್ಮ ಪ್ರೊಫೆಸರು ಹೆಸರಾಂತವರಲ್ಲ. ಸ್ವಲ್ಪ ಕಟುವಾಗಿ ಹೇಳೋದಾದರೆ, ಇವರ ಕೈಗೆ ಎಟಕದ ದ್ರಾಕ್ಷೆ, ಸ್ವಲ್ಪ ಹುಳಿ.“ {{gap}}“ನೀವು ಹೇಳ್ತಿರೋದು ನಿಜ, ಮಾತೃಭಾಷೆಯ ವಿಷಯದಲ್ಲಿ ತಾತ್ಸಾರ ಸರಿಯಲ್ಲ ಅಂತ ನನಗೂ ಅನಿಸುತ್ತಪ್ಪ”. {{gap}}ಗಿರಿಜಾಬಾಯಿ ಸಂಚಿಕೆಯಲ್ಲಿದ್ದ ಇತರ ಲೇಖನಗಳನ್ನೂ ನೋಡಿದರು. ವಿಶಾಲಾಕ್ಷಿ ಬರೆದಿದ್ದ ಲೇಖನದ ಪುಟಗಳ ಮೇಲೆ ಒಲವಿನ ನೋಟ ಬೀರಿದರು, ಬಳಿಕ ಸಂಚಿಕೆಯನ್ನು ವಿಶಾಲಾಕ್ಷಿಯ ಕಡೆಗೆ ಸರಿಸಿದರು: {{gap}}“ತಗೊಳ್ಳಿ.” {{gap}}ಇಲ್ಲೇ ಇರಲಿ, ಎಲ್ಲಾ ಓದಿದ ಮೇಲೆ ಕೊಡುವಿರಂತೆ.” {{gap}}“ಬೇಡ, ಕಾಲೇಜಿಗೆ ಬಂದಿರುತ್ತೆ, ಸಂಚಿಕೆಯ ಒಂದು ಪ್ರತಿಯಾದರೂ . ನಿಮ್ಮಲ್ಲೆ ಇರಬೇಕು,”<noinclude></noinclude> 8bbp8lkh5lp129oegh77go7sgd7t27a 323972 323971 2026-06-02T04:25:01Z Shreelatha.Halemane 7642 /* Validated */ 323972 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೪೫}} {{gap}}ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೇ ನುಂಗಿದ್ದ ತುತ್ತು ಖಾರದ ಬಳಿಕ, ಈ ಸಿಹಿ. {{gap}}“ನನ್ನ ಪ್ರೊಫೆಸರು ಏನಂದರು ಗೊತ್ತೆ ?”-- {{gap}}“ಹ್ಲಾ, ಏನಂದರು ? ಅವರಿಗೆ ತೋರಿಸಿದಿರಾ?” {{gap}}“ಹೂಂ, ಇಂಗ್ಲಿಷಿನಲ್ಲಿ ಯಾಕೆ ಬರೀಲಿಲ್ಲ-ಅಂದರು, ನಮ್ಮಲ್ಲಿನ ಇಂಗ್ಲಿಷ್ ಪ್ರಾಧ್ಯಾಪಕರೆಷ್ಟೋ ಜನ...” {{gap}}ವಿಶಾಲಾಕ್ಷಿ ಒಪ್ಪಿಸಿದ ವರದಿಯನ್ನು ಆಸಕ್ತಿಯಿಂದ ಗಿರಿಜಾಬಾಯಿ ಲಾಲಿಸಿದರು, ಮುಗುಳುನಗುತ್ತ ಅಸಮ್ಮತಿ ಸೂಚಕವಾಗಿ ತಲೆಯಲ್ಲಾಡಿಸಿದರು. {{gap}}''ಅವರು ಬಾಣ ಎಸೆದದ್ದು ಯಾರ ಮೇಲೆ ತಿಳೀತೆ ?” | {{gap}}ಪ್ರಾಧ್ಯಾಪಕರು ಆ ಮಾತು ಆಡಿದಾಗ, ತಿಳಿದಿರಲಿಲ್ಲ. ಆದರೆ ಈಗ, ಅದನ್ನು ಕುರಿತು ಯೋಚಿಸತೊಡಗಿದಾಗೆ, ಹೊಳೆಯಿತು. {{gap}}ಅವರಂದದ್ದು ದಿವಂಗತ ಬಿ. ಎಂ. ಶ್ರೀ.ಯವರ ವಿಷಯವಾಗಿ ಅಲ್ಲವೆ ??? - {{gap}}“ಹೌದು, ಆಮೇಲೂ ಅಷ್ಟೆ : ರಂಗಣ್ಣನವರು, ಮೂರ್ತಿರಾಯರು, ಉತ್ತರದ ಕಡೆ ಗೋಕಾಕರು-ಎಲ್ಲಾ ಇಂಗ್ಲಿಷ್ ಪ್ರಾಧ್ಯಾಪಕರು ; ಜತೆಯಲ್ಲೇ ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖರು, ಈ ಜನರ ಹಾಗೆ ನಿಮ್ಮ ಪ್ರೊಫೆಸರು ಹೆಸರಾಂತವರಲ್ಲ. ಸ್ವಲ್ಪ ಕಟುವಾಗಿ ಹೇಳೋದಾದರೆ, ಇವರ ಕೈಗೆ ಎಟಕದ ದ್ರಾಕ್ಷೆ, ಸ್ವಲ್ಪ ಹುಳಿ.“ {{gap}}“ನೀವು ಹೇಳ್ತಿರೋದು ನಿಜ, ಮಾತೃಭಾಷೆಯ ವಿಷಯದಲ್ಲಿ ತಾತ್ಸಾರ ಸರಿಯಲ್ಲ ಅಂತ ನನಗೂ ಅನಿಸುತ್ತಪ್ಪ”. {{gap}}ಗಿರಿಜಾಬಾಯಿ ಸಂಚಿಕೆಯಲ್ಲಿದ್ದ ಇತರ ಲೇಖನಗಳನ್ನೂ ನೋಡಿದರು. ವಿಶಾಲಾಕ್ಷಿ ಬರೆದಿದ್ದ ಲೇಖನದ ಪುಟಗಳ ಮೇಲೆ ಒಲವಿನ ನೋಟ ಬೀರಿದರು, ಬಳಿಕ ಸಂಚಿಕೆಯನ್ನು ವಿಶಾಲಾಕ್ಷಿಯ ಕಡೆಗೆ ಸರಿಸಿದರು: {{gap}}“ತಗೊಳ್ಳಿ.” {{gap}}ಇಲ್ಲೇ ಇರಲಿ, ಎಲ್ಲಾ ಓದಿದ ಮೇಲೆ ಕೊಡುವಿರಂತೆ.” {{gap}}“ಬೇಡ, ಕಾಲೇಜಿಗೆ ಬಂದಿರುತ್ತೆ, ಸಂಚಿಕೆಯ ಒಂದು ಪ್ರತಿಯಾದರೂ . ನಿಮ್ಮಲ್ಲೆ ಇರಬೇಕು,”<noinclude></noinclude> lxq5jvmb187gcu8oegqvrc1dnc2gbx5 ಪುಟ:VISHAALAAKSHI - Niranjana.pdf/೪೮ 104 37884 323977 100043 2026-06-02T05:01:24Z Shreesha Sharma 7840 /* Proofread */ 323977 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left೪೬=|right=}} {{gap}}ಟೀಪಾಯ್'ಯ ಮೇಲಿದ್ದ ಪೇಪರಿನ ತುಂಡನ್ನು ನೋಡಿ, ಅವರು ಮುಂದುವರಿಸಿದರು : {{gap}}“ಯಾರೂ ನೋಡಬಾರದೂಂತ ಮುಚ್ಚಿಕೊಂಡು ಬಂದಿರಿ, ಅಲ್ವಾ ? ಅವಮಾನವಾಗುತ್ತೇನು ಹಿಡ್ಕೊಂಡು ಹೋಗೋಕೆ ? ಎಲ್ಲಿ, ಕೊಡಿ-ಒಂದು ರಟ್ಟು ಹಾಕ್ಕೊಡ್ತೀನಿ.” {{gap}}ವಿಶಾಲಾಕ್ಷಿ ನಗುತ್ತ ಅಂದಳು : - {{gap}}“ಬೇಡ, ನಾನೇ ಹಾಕ್ಕೊಳ್ಳಿನಿ.” {{gap}}ಕಟ್ಟಿ ತಂದಿದ್ದ ಕಾಗದವೇ: ಅಚ್ಚುಕಟ್ಟಾದ ಹೊದಿಕೆಯಾಯಿತು ಪುಸ್ತಕಕ್ಕೆ. {{gap}}ರಮಾ ಹೊರಗಿಣಿಕಿ ನೋಡಿ ಅಂದಳು:. {{gap}}“ನಿನಗೂ ತರಲಾ ಅಮ್ಮ?” “ಹೂ.. ಸ್ವಲ್ಪ ಸಾಕು.” : {{gap}}ರುಚಿಕರವಾದ ಓವಲ್ಕಿನ್ನು, ಜತೆಗೆ ಬಿಸ್ಕತ್ತು. {{gap}}“ಹಸಿವಾಗಿದೆ ಅಲ್ವಾ? ತಿಂಡಿ ಮಾಡೋ ಸ್ಥಿತೀಲಿಲ್ಲ ನಾನು. . ಬಿಸ್ಕತ್ತು ಯಾವ ಮೂಲೆಗೆ ? ಆದರೂ ತಿನ್ನಿ.” {{gap}}ತನ್ನನ್ನು ಕುರಿತು ಹಾಗೆ' ಗಿರಿಜಾಬಾಯಿ ಅಂದಾಗ, ವಿಶಾಲಾಕ್ಷಿ ಪ್ರತಿ.ಭಟಿಸಿದಳು: {{gap}}“ಇಲ್ರೀ, ನನಗೆ ಹಸಿವಿಲ್ಲ.” {{gap}}“ಶಾಂತಾದೇವಿ ಕಾಫಿ ಕುಡಿಸಿದ್ರಾ ?” : {{gap}}“ಇಲ್ಲ, ಕ್ಲಾಸಿಗೆ ಮುಂಚೆ ನರ್ಮದೆಯ ಮನೆಗೆ ಹೋಗಿದ್ದೆ, ಅಲ್ಲಿ ತಿಂಡಿಯಾಯ್ತು.” {{gap}}ಭಾಗೀರಥಮ್ಮ ಕೊಟ್ಟಿದ್ದ ಹಣ್ಣು ಕೂಡಾ 'ಯಾವ ಮೂಲೆಗೆ ?” ಆದರೂ ಗಿರಿಜಾಬಾಯಿಯನ್ನು ಸಮಾಧಾನಪಡಿಸಲು ಆ ಸುಳ್ಳು ಅಗತ್ಯವಾಗಿತ್ತು. {{gap}}ನರ್ಮದೆಯ ಮನೆಗೆ ವಿಶಾಲಾಕ್ಷಿ ಹೋಗಿದ್ದಳೆಂಬುದಕ್ಕೆ ಹಣೆಯ ಕಿರಿ ಬೊಟ್ಟು ಸಾಕ್ಷಿಯಾಗಿತ್ತು, ಅದನ್ನು ಒಮ್ಮೆ ನೋಡಿ ಗಿರಿಜಾಬಾಯಿ ಅಂದರು : {{gap}}“ತಾಯಿ-ಮಗು ಚೆನ್ನಾಗಿದಾರಾ ?” {{gap}}ಓಹೋ ! ಮುರಲಿ ಮುದ್ದಾಗಿದಾನೆ.” :<noinclude></noinclude> 928nvrpul56byln3pa1dt9064aoausm 323979 323977 2026-06-02T05:07:39Z Shreelatha.Halemane 7642 /* Validated */ 323979 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವಿಶಾಲಾಕ್ಷಿ|left೪೬=|right=}} {{gap}}ಟೀಪಾಯ್'ಯ ಮೇಲಿದ್ದ ಪೇಪರಿನ ತುಂಡನ್ನು ನೋಡಿ, ಅವರು ಮುಂದುವರಿಸಿದರು : {{gap}}“ಯಾರೂ ನೋಡಬಾರದೂಂತ ಮುಚ್ಚಿಕೊಂಡು ಬಂದಿರಿ, ಅಲ್ವಾ ? ಅವಮಾನವಾಗುತ್ತೇನು ಹಿಡ್ಕೊಂಡು ಹೋಗೋಕೆ ? ಎಲ್ಲಿ, ಕೊಡಿ-ಒಂದು ರಟ್ಟು ಹಾಕ್ಕೊಡ್ತೀನಿ.” {{gap}}ವಿಶಾಲಾಕ್ಷಿ ನಗುತ್ತ ಅಂದಳು : - {{gap}}“ಬೇಡ, ನಾನೇ ಹಾಕ್ಕೊಳ್ಳಿನಿ.” {{gap}}ಕಟ್ಟಿ ತಂದಿದ್ದ ಕಾಗದವೇ: ಅಚ್ಚುಕಟ್ಟಾದ ಹೊದಿಕೆಯಾಯಿತು ಪುಸ್ತಕಕ್ಕೆ. {{gap}}ರಮಾ ಹೊರಗಿಣಿಕಿ ನೋಡಿ ಅಂದಳು:. {{gap}}“ನಿನಗೂ ತರಲಾ ಅಮ್ಮ?” “ಹೂ.. ಸ್ವಲ್ಪ ಸಾಕು.” : {{gap}}ರುಚಿಕರವಾದ ಓವಲ್ಕಿನ್ನು, ಜತೆಗೆ ಬಿಸ್ಕತ್ತು. {{gap}}“ಹಸಿವಾಗಿದೆ ಅಲ್ವಾ? ತಿಂಡಿ ಮಾಡೋ ಸ್ಥಿತೀಲಿಲ್ಲ ನಾನು. . ಬಿಸ್ಕತ್ತು ಯಾವ ಮೂಲೆಗೆ ? ಆದರೂ ತಿನ್ನಿ.” {{gap}}ತನ್ನನ್ನು ಕುರಿತು ಹಾಗೆ' ಗಿರಿಜಾಬಾಯಿ ಅಂದಾಗ, ವಿಶಾಲಾಕ್ಷಿ ಪ್ರತಿ.ಭಟಿಸಿದಳು: {{gap}}“ಇಲ್ರೀ, ನನಗೆ ಹಸಿವಿಲ್ಲ.” {{gap}}“ಶಾಂತಾದೇವಿ ಕಾಫಿ ಕುಡಿಸಿದ್ರಾ ?” : {{gap}}“ಇಲ್ಲ, ಕ್ಲಾಸಿಗೆ ಮುಂಚೆ ನರ್ಮದೆಯ ಮನೆಗೆ ಹೋಗಿದ್ದೆ, ಅಲ್ಲಿ ತಿಂಡಿಯಾಯ್ತು.” {{gap}}ಭಾಗೀರಥಮ್ಮ ಕೊಟ್ಟಿದ್ದ ಹಣ್ಣು ಕೂಡಾ 'ಯಾವ ಮೂಲೆಗೆ ?” ಆದರೂ ಗಿರಿಜಾಬಾಯಿಯನ್ನು ಸಮಾಧಾನಪಡಿಸಲು ಆ ಸುಳ್ಳು ಅಗತ್ಯವಾಗಿತ್ತು. {{gap}}ನರ್ಮದೆಯ ಮನೆಗೆ ವಿಶಾಲಾಕ್ಷಿ ಹೋಗಿದ್ದಳೆಂಬುದಕ್ಕೆ ಹಣೆಯ ಕಿರಿ ಬೊಟ್ಟು ಸಾಕ್ಷಿಯಾಗಿತ್ತು, ಅದನ್ನು ಒಮ್ಮೆ ನೋಡಿ ಗಿರಿಜಾಬಾಯಿ ಅಂದರು : {{gap}}“ತಾಯಿ-ಮಗು ಚೆನ್ನಾಗಿದಾರಾ ?” {{gap}}ಓಹೋ ! ಮುರಲಿ ಮುದ್ದಾಗಿದಾನೆ.” :<noinclude></noinclude> srjpi3g4hn8g4yidbb0qae5pkmofulw ಪುಟ:VISHAALAAKSHI - Niranjana.pdf/೪೯ 104 37885 323978 100044 2026-06-02T05:07:14Z Shreesha Sharma 7840 /* Proofread */ 323978 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೪೭}} {{gap}}ನರ್ಮದೆ ಹಿಂದೆ ಎಂತಹ ಹೆಣ್ಣಾಗಿದ್ದಳೆಂಬುದನ್ನು ವಿಶಾಲಾಕ್ಷಿಯ ಬಣ್ಣನೆಯಿಂದ ತಿಳಿದಿದ್ದ ಗಿರಿಜಾಬಾಯಿ ತಮ್ಮಷ್ಟಕ್ಕೇ ಮುಗುಳು ನಕ್ಕರು. ಬಣ್ಣದ ಚಿಟ್ಟೆಯಂತೆ ಕಂಡ ನರ್ಮದೆಯನ್ನು ಹಿಂದೆಯೊಮ್ಮೆ ದಸರಾ ವಸ್ತು ಪ್ರದರ್ಶನದಲ್ಲಿ ಕಂಡಿದ್ದುಇನ್ನೂ ಅವರಿಗೆ ನೆನಪಿತ್ತು. ತಾಯ್ತನದ ಫಲವಾಗಿ ಅವಳಲ್ಲಾದ ಅಪೂರ್ವ ಬದಲಾವಣೆಯ ವಿಷಯವನ್ನೂ ಅವರು ತಿಳಿದಿದ್ದರು. ಮುಗ್ಧ ಹೃದಯದಿಂದ ತನ್ನೆಲ್ಲ ಒಲವನ್ನೂ ಬಾಲ್ಯದ ಗೆಳತಿಗಾಗಿ ಕೊಟ್ಟಿದ್ದವಳು ವಿಶಾಲಾಕ್ಷಿ. ಪ್ರತಿಯಾಗಿ ಏನನ್ನೂ ಅಪೇಕ್ಷಿಸಿರಲಿಲ್ಲ ಎಂದೂ, ಗೆಳತಿಯ ವರ್ತನೆಯಿಂದ ಒಮ್ಮೊಮ್ಮೆ ಮನಸ್ಸು ನೊಂದಾಗಲೂ ಬೇರೊಬ್ಬರೊಡನೆ ದೂರಿಕೊಂಡಿರಲಿಲ್ಲ. ಹೀಗಿದ್ದರೂ, ಲೋಕಾನುಭವಿಯಾದ ಗಿರಿಜಾಬಾಯಿ ನರ್ಮದೆಯನ್ನು ಸರಿಯಾಗಿ ತಿಳಿದುಕೊಳ್ಳಲು ಶಕ್ತರಾಗಿದ್ದರು. {{gap}}[ಈ ವಿಶಾಲಾಕ್ಷಿ ಇನ್ನೂ ಎಳೇ ಮಗುವೇ, ವಯಸ್ಸು-ಮಾತ್ರ.... ಮುರಲಿ ತನ್ನದೇ ಶಿಶುವೇನೋ ಎನ್ನುವಷ್ಟು ಇವಳಿಗೆ ಉತ್ಸಾಹ, ಒಳಗೆ ಬಯಕೆಗಳೇ ಇಲ್ಲವೆಂದೆ ? ಇದ್ದರೂ ಈ ಸಮಸ್ಯೆಗೆ ಪರಿಹಾರ ? ಪ್ರೀತಿಯ ಈ ಖಣಿಯ ಒಡೆಯನಾಗುವವನು, ಇವಳ ಕೈಹಿಡಿಯುವವನು, ನಿಜವಾಗಿಯೂ ಅದೃಷ್ಟಶಾಲಿಯೇ ಸರಿ, ಆದರೆ ಅಂಥವನು ಎಂದು ಬರುವ ? ಎಂದು ?”] {{gap}}“ನಿಮ್ಮನ್ನೊಮ್ಮೆ ಕರಕೊಂಡು ಬರಬೇಕೂಂತ ನರ್ಮದಾ ಹೇಳಿದಾಳೆ, ಕಣ್ರೀ, {{gap}}“ಆ ?” {{gap}}[ಯಾವ ಯೋಚನೆಯಲ್ಲಿದ್ದರೋ] ? {{gap}}“ಗಿರಿಜಾಬಾಯಿಯನ್ನೂ ಒಮ್ಮೆ ಕರಕೊಂಡುಬಾ ಅಂದ್ಲು ನರ್ಮದಾ..? {{gap}}ಆಗಲಿ, ಅದಕ್ಕೇನಂತೆ ? ಒಂದು ದಿವಸ ಹೋಗೋಣ.” {{gap}}ಮನೆಯೊಳಗೆ ಮಸಕಾಯಿತು. ಕತ್ತಲು ಕವಿಯುತ್ತ ಬಂದಿತ್ತು ಹೊರಗೆ {{gap}}“ರಮಾ, ಸ್ವಿಚ್ ಹಾಕೇ.'' {{gap}}ವಿಶಾಲಾಕ್ಷಿ ಗಡಬಡಿಸಿ ಎದ್ದಳು. {{gap}}“ಹೊತ್ತಾಗೋಯ್ತು ! ಅಮ್ಮ ಹಾದಿನೋಡ್ತಾ ಇದ್ದಾರೆ.” {{gap}}ಗಿರಿಜಾಬಾಯಿಯೂ ಎದ್ದು, ಕ್ಯಾಲೆಂಡರಿನ ಮೊಳೆಗೆ ತೂಗಹಾಕಿದ್ದ ತಮ್ಮ ಕೈಗಡಿಯಾರದ ಜಡೆ ನೋಡಿ ಅಂದರು.<noinclude></noinclude> 594sokbsvj101wfkp30wedzndqpxcml 323981 323978 2026-06-02T05:07:49Z Shreelatha.Halemane 7642 /* Validated */ 323981 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೪೭}} {{gap}}ನರ್ಮದೆ ಹಿಂದೆ ಎಂತಹ ಹೆಣ್ಣಾಗಿದ್ದಳೆಂಬುದನ್ನು ವಿಶಾಲಾಕ್ಷಿಯ ಬಣ್ಣನೆಯಿಂದ ತಿಳಿದಿದ್ದ ಗಿರಿಜಾಬಾಯಿ ತಮ್ಮಷ್ಟಕ್ಕೇ ಮುಗುಳು ನಕ್ಕರು. ಬಣ್ಣದ ಚಿಟ್ಟೆಯಂತೆ ಕಂಡ ನರ್ಮದೆಯನ್ನು ಹಿಂದೆಯೊಮ್ಮೆ ದಸರಾ ವಸ್ತು ಪ್ರದರ್ಶನದಲ್ಲಿ ಕಂಡಿದ್ದುಇನ್ನೂ ಅವರಿಗೆ ನೆನಪಿತ್ತು. ತಾಯ್ತನದ ಫಲವಾಗಿ ಅವಳಲ್ಲಾದ ಅಪೂರ್ವ ಬದಲಾವಣೆಯ ವಿಷಯವನ್ನೂ ಅವರು ತಿಳಿದಿದ್ದರು. ಮುಗ್ಧ ಹೃದಯದಿಂದ ತನ್ನೆಲ್ಲ ಒಲವನ್ನೂ ಬಾಲ್ಯದ ಗೆಳತಿಗಾಗಿ ಕೊಟ್ಟಿದ್ದವಳು ವಿಶಾಲಾಕ್ಷಿ. ಪ್ರತಿಯಾಗಿ ಏನನ್ನೂ ಅಪೇಕ್ಷಿಸಿರಲಿಲ್ಲ ಎಂದೂ, ಗೆಳತಿಯ ವರ್ತನೆಯಿಂದ ಒಮ್ಮೊಮ್ಮೆ ಮನಸ್ಸು ನೊಂದಾಗಲೂ ಬೇರೊಬ್ಬರೊಡನೆ ದೂರಿಕೊಂಡಿರಲಿಲ್ಲ. ಹೀಗಿದ್ದರೂ, ಲೋಕಾನುಭವಿಯಾದ ಗಿರಿಜಾಬಾಯಿ ನರ್ಮದೆಯನ್ನು ಸರಿಯಾಗಿ ತಿಳಿದುಕೊಳ್ಳಲು ಶಕ್ತರಾಗಿದ್ದರು. {{gap}}[ಈ ವಿಶಾಲಾಕ್ಷಿ ಇನ್ನೂ ಎಳೇ ಮಗುವೇ, ವಯಸ್ಸು-ಮಾತ್ರ.... ಮುರಲಿ ತನ್ನದೇ ಶಿಶುವೇನೋ ಎನ್ನುವಷ್ಟು ಇವಳಿಗೆ ಉತ್ಸಾಹ, ಒಳಗೆ ಬಯಕೆಗಳೇ ಇಲ್ಲವೆಂದೆ ? ಇದ್ದರೂ ಈ ಸಮಸ್ಯೆಗೆ ಪರಿಹಾರ ? ಪ್ರೀತಿಯ ಈ ಖಣಿಯ ಒಡೆಯನಾಗುವವನು, ಇವಳ ಕೈಹಿಡಿಯುವವನು, ನಿಜವಾಗಿಯೂ ಅದೃಷ್ಟಶಾಲಿಯೇ ಸರಿ, ಆದರೆ ಅಂಥವನು ಎಂದು ಬರುವ ? ಎಂದು ?”] {{gap}}“ನಿಮ್ಮನ್ನೊಮ್ಮೆ ಕರಕೊಂಡು ಬರಬೇಕೂಂತ ನರ್ಮದಾ ಹೇಳಿದಾಳೆ, ಕಣ್ರೀ, {{gap}}“ಆ ?” {{gap}}[ಯಾವ ಯೋಚನೆಯಲ್ಲಿದ್ದರೋ] ? {{gap}}“ಗಿರಿಜಾಬಾಯಿಯನ್ನೂ ಒಮ್ಮೆ ಕರಕೊಂಡುಬಾ ಅಂದ್ಲು ನರ್ಮದಾ..? {{gap}}ಆಗಲಿ, ಅದಕ್ಕೇನಂತೆ ? ಒಂದು ದಿವಸ ಹೋಗೋಣ.” {{gap}}ಮನೆಯೊಳಗೆ ಮಸಕಾಯಿತು. ಕತ್ತಲು ಕವಿಯುತ್ತ ಬಂದಿತ್ತು ಹೊರಗೆ {{gap}}“ರಮಾ, ಸ್ವಿಚ್ ಹಾಕೇ.'' {{gap}}ವಿಶಾಲಾಕ್ಷಿ ಗಡಬಡಿಸಿ ಎದ್ದಳು. {{gap}}“ಹೊತ್ತಾಗೋಯ್ತು ! ಅಮ್ಮ ಹಾದಿನೋಡ್ತಾ ಇದ್ದಾರೆ.” {{gap}}ಗಿರಿಜಾಬಾಯಿಯೂ ಎದ್ದು, ಕ್ಯಾಲೆಂಡರಿನ ಮೊಳೆಗೆ ತೂಗಹಾಕಿದ್ದ ತಮ್ಮ ಕೈಗಡಿಯಾರದ ಜಡೆ ನೋಡಿ ಅಂದರು.<noinclude></noinclude> 65zosl0qa3nf8j6tfu43pd343vau4pj ಪುಟ:VISHAALAAKSHI - Niranjana.pdf/೫೦ 104 37886 323982 100045 2026-06-02T05:12:35Z Shreesha Sharma 7840 /* Proofread */ 323982 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೪೮|right=}}೪೮ {{gap}}''ಇನ್ನೂ ಹತ್ತು ನಿಮಿಷ ಇದೆ, ಬಸ್ಸು ಬರೋಕೆ, ಬಸ್‌ಸ್ಟಾಪ್‌ವರೆಗೂ ಬರ್ತೀನಿ” {{gap}}“ಬೇಡ್ರಿ, ನಿಮಗೆ ಆಯಾಸವಾಗುತ್ತೆ.” {{gap}}“ಕಾಲು ಗಟ್ಟಿಯಾಗದೇ ಇದ್ರೆ ನಾಳೆ ಕಾಲೇಜಿಗೆ ಹೋದಹಾಗೆಯೇ! ನಡೆಯೋದು ಅಭ್ಯಾಸವಾಗಲಿ. ಬನ್ನಿ.” {{gap}}ಚಿಕ್ಕ ಹುಡುಗಿಯರಾಗಲೇ ಹಿಂದಿನ ಬಾಗಿಲಿಂದ ಹೊರಬಿದ್ದು ಪಕ್ಕದ " ಮನೆ ಸೇರಿದ್ದರು, ಓರಗೆಯವರೊಡನೆ ಆಡಲೆಂದು, ರಮೆಯೊಬ್ಬಳೇ, ಮನೆಯ - ಹೊರ ದೀಪವನ್ನು ಹತ್ತಿಸಿ, ವಿಶಾಲಾಕ್ಷಿಯನ್ನು ಬೀಳ್ಕೊಡಲು ಬಾಗಿಲವರೆಗೆ ಬಂದಳು. {{gap}}ಬಸ್‌ಸ್ಟಾಪಿನ ಕೆಳಗೆ ಬೇರೆ ಯಾರೂ ಇರಲಿಲ್ಲ. ಬೀದಿಯೂ ಪ್ರಶಾಂತ ವಾಗಿತ್ತು, ವಿದ್ಯುದ್ದೀಪಗಳು ಆಗಲೇ ಹತ್ತಿಕೊಂಡಿದ್ದವು. ದೂರದ ಮನೆಗಳ ಸಂಜೆಯ ಕಲವರ ಕಡಮೆಯಾಗುತ್ತ ನಡೆದಿತ್ತು. {{gap}}“ನಾಳೆ ಕಾಲೇಜಿಗೆ ಹೊರಟೇಬಿಡ್ತೀರಿ ಹಾಗಾದರೆ,” ಎಂದಳು ವಿಶಾಲಾಕ್ಷಿ {{gap}}“ಮನೆಯಲ್ಲಿ ಕೂತೇನು ಮಾಡಲಿ ? ಹಾಸಿಗೆ ಮೇಲೆ ಮಲಗಿರೋದು ಅಂದರೆ ಭಯ ನನಗೆ-ಕಾಹಿಲೆ ಎಲ್ಲಿ ಜಾಸ್ತಿಯಾಗಿಬಿಡುತ್ತೋ ಅಂತ !” ಎಂದು ನಕ್ಕರು ಗಿರಿಜಾಬಾಯಿ. {{gap}}ಸಂಜೆಯ ಗಾಳಿ ತಣ್ಣನೆ ಬೀಸಿತು, ಮೋಟಾರು ಬಂದ ಸದ್ದಾಯಿತು. ಲಾರಿ ರೊಯೋ೦ ಎಂದು ಬಿರುಗಾಳಿಯ ವೇಗದಿಂದ ಅದು ಹೊರಟುಹೋಯಿತು. {{gap}}ಗಿರಿಜಾಬಾಯಿ ಕೇಳಿದರು : | {{gap}}“ನಿಮ್ಮ ತಾಯಿ ಆರೋಗ್ಯವಾಗಿದಾರೆ, ಅಲ್ವಾ ?”. {{gap}}“ಹೂಂ” {{gap}}“ನಿಮ್ಮಣ್ಣ ಈ ವರ್ಷ ಬರ್ತಾರೇನು ?” {{gap}}“ಆ ವಿಷಯ ಅಣ್ಣ ಬರೆದೇ ಇಲ್ಲ ನೋಡ್ರಿ... ರಜಾ ಸಿಗುತ್ತೋ ಇಲ್ಲೋ.......? {{gap}}ಕ್ಷಣಕಾಲ ಸುಮ್ಮನಿದ್ದು ಗಿರಿಜಾಬಾಯಿ ಕೇಳಿದರು : {{gap}}“ಇನ್ನೊಂದು ಯಾವತ್ತು ಬರೀತೀರಾ ?” {{gap}}ಪ್ರಶ್ನೆ ಅರ್ಥವಾಗದೆ ವಿಶಾಲಾಕ್ಷಿ ಕೇಳಿದಳು ; :<noinclude></noinclude> 8d478ropw7uncm93wc8oj4p8mdxlj14 323983 323982 2026-06-02T05:12:55Z Shreesha Sharma 7840 323983 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೪೮|right=}} {{gap}}''ಇನ್ನೂ ಹತ್ತು ನಿಮಿಷ ಇದೆ, ಬಸ್ಸು ಬರೋಕೆ, ಬಸ್‌ಸ್ಟಾಪ್‌ವರೆಗೂ ಬರ್ತೀನಿ” {{gap}}“ಬೇಡ್ರಿ, ನಿಮಗೆ ಆಯಾಸವಾಗುತ್ತೆ.” {{gap}}“ಕಾಲು ಗಟ್ಟಿಯಾಗದೇ ಇದ್ರೆ ನಾಳೆ ಕಾಲೇಜಿಗೆ ಹೋದಹಾಗೆಯೇ! ನಡೆಯೋದು ಅಭ್ಯಾಸವಾಗಲಿ. ಬನ್ನಿ.” {{gap}}ಚಿಕ್ಕ ಹುಡುಗಿಯರಾಗಲೇ ಹಿಂದಿನ ಬಾಗಿಲಿಂದ ಹೊರಬಿದ್ದು ಪಕ್ಕದ " ಮನೆ ಸೇರಿದ್ದರು, ಓರಗೆಯವರೊಡನೆ ಆಡಲೆಂದು, ರಮೆಯೊಬ್ಬಳೇ, ಮನೆಯ - ಹೊರ ದೀಪವನ್ನು ಹತ್ತಿಸಿ, ವಿಶಾಲಾಕ್ಷಿಯನ್ನು ಬೀಳ್ಕೊಡಲು ಬಾಗಿಲವರೆಗೆ ಬಂದಳು. {{gap}}ಬಸ್‌ಸ್ಟಾಪಿನ ಕೆಳಗೆ ಬೇರೆ ಯಾರೂ ಇರಲಿಲ್ಲ. ಬೀದಿಯೂ ಪ್ರಶಾಂತ ವಾಗಿತ್ತು, ವಿದ್ಯುದ್ದೀಪಗಳು ಆಗಲೇ ಹತ್ತಿಕೊಂಡಿದ್ದವು. ದೂರದ ಮನೆಗಳ ಸಂಜೆಯ ಕಲವರ ಕಡಮೆಯಾಗುತ್ತ ನಡೆದಿತ್ತು. {{gap}}“ನಾಳೆ ಕಾಲೇಜಿಗೆ ಹೊರಟೇಬಿಡ್ತೀರಿ ಹಾಗಾದರೆ,” ಎಂದಳು ವಿಶಾಲಾಕ್ಷಿ {{gap}}“ಮನೆಯಲ್ಲಿ ಕೂತೇನು ಮಾಡಲಿ ? ಹಾಸಿಗೆ ಮೇಲೆ ಮಲಗಿರೋದು ಅಂದರೆ ಭಯ ನನಗೆ-ಕಾಹಿಲೆ ಎಲ್ಲಿ ಜಾಸ್ತಿಯಾಗಿಬಿಡುತ್ತೋ ಅಂತ !” ಎಂದು ನಕ್ಕರು ಗಿರಿಜಾಬಾಯಿ. {{gap}}ಸಂಜೆಯ ಗಾಳಿ ತಣ್ಣನೆ ಬೀಸಿತು, ಮೋಟಾರು ಬಂದ ಸದ್ದಾಯಿತು. ಲಾರಿ ರೊಯೋ೦ ಎಂದು ಬಿರುಗಾಳಿಯ ವೇಗದಿಂದ ಅದು ಹೊರಟುಹೋಯಿತು. {{gap}}ಗಿರಿಜಾಬಾಯಿ ಕೇಳಿದರು : | {{gap}}“ನಿಮ್ಮ ತಾಯಿ ಆರೋಗ್ಯವಾಗಿದಾರೆ, ಅಲ್ವಾ ?”. {{gap}}“ಹೂಂ” {{gap}}“ನಿಮ್ಮಣ್ಣ ಈ ವರ್ಷ ಬರ್ತಾರೇನು ?” {{gap}}“ಆ ವಿಷಯ ಅಣ್ಣ ಬರೆದೇ ಇಲ್ಲ ನೋಡ್ರಿ... ರಜಾ ಸಿಗುತ್ತೋ ಇಲ್ಲೋ.......? {{gap}}ಕ್ಷಣಕಾಲ ಸುಮ್ಮನಿದ್ದು ಗಿರಿಜಾಬಾಯಿ ಕೇಳಿದರು : {{gap}}“ಇನ್ನೊಂದು ಯಾವತ್ತು ಬರೀತೀರಾ ?” {{gap}}ಪ್ರಶ್ನೆ ಅರ್ಥವಾಗದೆ ವಿಶಾಲಾಕ್ಷಿ ಕೇಳಿದಳು ; :<noinclude></noinclude> c408r5o35mdqmh2ec9sffiivxi25kt1 323993 323983 2026-06-02T05:23:04Z Shreelatha.Halemane 7642 /* Validated */ 323993 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ವಿಶಾಲಾಕ್ಷಿ|left=೪೮|right=}} {{gap}}''ಇನ್ನೂ ಹತ್ತು ನಿಮಿಷ ಇದೆ, ಬಸ್ಸು ಬರೋಕೆ, ಬಸ್‌ಸ್ಟಾಪ್‌ವರೆಗೂ ಬರ್ತೀನಿ” {{gap}}“ಬೇಡ್ರಿ, ನಿಮಗೆ ಆಯಾಸವಾಗುತ್ತೆ.” {{gap}}“ಕಾಲು ಗಟ್ಟಿಯಾಗದೇ ಇದ್ರೆ ನಾಳೆ ಕಾಲೇಜಿಗೆ ಹೋದಹಾಗೆಯೇ! ನಡೆಯೋದು ಅಭ್ಯಾಸವಾಗಲಿ. ಬನ್ನಿ.” {{gap}}ಚಿಕ್ಕ ಹುಡುಗಿಯರಾಗಲೇ ಹಿಂದಿನ ಬಾಗಿಲಿಂದ ಹೊರಬಿದ್ದು ಪಕ್ಕದ " ಮನೆ ಸೇರಿದ್ದರು, ಓರಗೆಯವರೊಡನೆ ಆಡಲೆಂದು, ರಮೆಯೊಬ್ಬಳೇ, ಮನೆಯ - ಹೊರ ದೀಪವನ್ನು ಹತ್ತಿಸಿ, ವಿಶಾಲಾಕ್ಷಿಯನ್ನು ಬೀಳ್ಕೊಡಲು ಬಾಗಿಲವರೆಗೆ ಬಂದಳು. {{gap}}ಬಸ್‌ಸ್ಟಾಪಿನ ಕೆಳಗೆ ಬೇರೆ ಯಾರೂ ಇರಲಿಲ್ಲ. ಬೀದಿಯೂ ಪ್ರಶಾಂತ ವಾಗಿತ್ತು, ವಿದ್ಯುದ್ದೀಪಗಳು ಆಗಲೇ ಹತ್ತಿಕೊಂಡಿದ್ದವು. ದೂರದ ಮನೆಗಳ ಸಂಜೆಯ ಕಲವರ ಕಡಮೆಯಾಗುತ್ತ ನಡೆದಿತ್ತು. {{gap}}“ನಾಳೆ ಕಾಲೇಜಿಗೆ ಹೊರಟೇಬಿಡ್ತೀರಿ ಹಾಗಾದರೆ,” ಎಂದಳು ವಿಶಾಲಾಕ್ಷಿ {{gap}}“ಮನೆಯಲ್ಲಿ ಕೂತೇನು ಮಾಡಲಿ ? ಹಾಸಿಗೆ ಮೇಲೆ ಮಲಗಿರೋದು ಅಂದರೆ ಭಯ ನನಗೆ-ಕಾಹಿಲೆ ಎಲ್ಲಿ ಜಾಸ್ತಿಯಾಗಿಬಿಡುತ್ತೋ ಅಂತ !” ಎಂದು ನಕ್ಕರು ಗಿರಿಜಾಬಾಯಿ. {{gap}}ಸಂಜೆಯ ಗಾಳಿ ತಣ್ಣನೆ ಬೀಸಿತು, ಮೋಟಾರು ಬಂದ ಸದ್ದಾಯಿತು. ಲಾರಿ ರೊಯೋ೦ ಎಂದು ಬಿರುಗಾಳಿಯ ವೇಗದಿಂದ ಅದು ಹೊರಟುಹೋಯಿತು. {{gap}}ಗಿರಿಜಾಬಾಯಿ ಕೇಳಿದರು : | {{gap}}“ನಿಮ್ಮ ತಾಯಿ ಆರೋಗ್ಯವಾಗಿದಾರೆ, ಅಲ್ವಾ ?”. {{gap}}“ಹೂಂ” {{gap}}“ನಿಮ್ಮಣ್ಣ ಈ ವರ್ಷ ಬರ್ತಾರೇನು ?” {{gap}}“ಆ ವಿಷಯ ಅಣ್ಣ ಬರೆದೇ ಇಲ್ಲ ನೋಡ್ರಿ... ರಜಾ ಸಿಗುತ್ತೋ ಇಲ್ಲೋ.......? {{gap}}ಕ್ಷಣಕಾಲ ಸುಮ್ಮನಿದ್ದು ಗಿರಿಜಾಬಾಯಿ ಕೇಳಿದರು : {{gap}}“ಇನ್ನೊಂದು ಯಾವತ್ತು ಬರೀತೀರಾ ?” {{gap}}ಪ್ರಶ್ನೆ ಅರ್ಥವಾಗದೆ ವಿಶಾಲಾಕ್ಷಿ ಕೇಳಿದಳು ; :<noinclude></noinclude> t22dvgd0koqwv89535oowv88s27t6lw ಪುಟ:VISHAALAAKSHI - Niranjana.pdf/೫೧ 104 37887 323992 100046 2026-06-02T05:22:35Z Shreesha Sharma 7840 /* Proofread */ 323992 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=}} {{gap}}“ಏನು?”. {{gap}}“ಇನ್ನೊಂದು ಲೇಖನ.” - * {{gap}}ಓ! ನೀವೂ ಸರಿ! {{gap}}“ಛೇ! ತಮಾಷೆಗೆ ಹೇಳ್ದೆ ಅಂದ್ರೋಂಡಿರಾ? ಬೇಗನೆ ಬೇರೊಂದು ನೀವು : ಬರೆಯಲೇಬೇಕು.” - {{gap}}“ಸದ್ಯಃ ನನ್ನ ಪರೀಕ್ಷೆಯೊಮ್ಮೆ ಮುಗೀಲಿ, ಆಮೇಲೆ-ಮಾತು ಪೂರ್ಣ ವಾಗುವುದರೊಳಗೇ ಬಸ್ಸು ಬಂತು. {{gap}}ಗಿರಿಜಾಯಿ ಕೇಳಿದರು: {{gap}}“ಚಿಲ್ಲರೆ ಇದೆ ತಾನೆ ?” (ಹಾಗೆ ಕೇಳುವುದಂತೂ ಅವರ ಅಭ್ಯಾಸ.] {{gap}}ಇದೆರೀ. {{gap}}“ಹತ್ತಿಹಾಗಾದರೆ.”. {{gap}}ನಿಂತ ಬಸ್ಸನ್ನು ಏರಿ ಕುಳಿತಳು ವಿಶಾಲಾಕ್ಷಿ, ವಾಹನ ಹೊರಟಿತು. ಮಂದಹಾಸ ಸೂಸುತ್ತ ಗಿರಿಜಾಬಾಯಿ ಕೈಬೀಸಿದರು. {{gap}}ಕಡ್ಡಿಯಂತಹ ಕೈ, ಸೊರಗಿದ ದೇಹ, 'ಎಷ್ಟೊಂದು ಇಳಿದುಹೋಗಿದಾರೆ!' ಎಂದುಕೊಂಡಳು ವಿಶಾಲಿ. - {{gap}}“ಮಾರ್ಕೆಟಿಗೆ ಕೊಡಲಾ?” {{gap}}ಟಿಕೆಟ್‌ ಹರಿಯಲು ಸಿದ್ಧನಾಗಿದ್ದ ಕಂಡಕ್ಟರ್‌ ಸಾಹೇಬ. ಹೌದು, ಅಲ್ಲಿಗೇ, ಅಲ್ಲಿಂದ ಮನೆಯ ಕಡೆಗೆ. {{gap}} .... ಕರಿಮೂತಿ ತೋರಿದ ಮೋಡ ಬೇರೆಲ್ಲಿಗೋ ತೇಲಿಹೋಗಿತ್ತು, ಮತ್ತೆ ನಿರ್ಮಲವಾಗಿತ್ತು ಆಕಾಶ. {{gap}}ಈ ರಾತ್ರೆ ಇನ್ನು ಉಳಿದಿರುವ ಕೆಲಸವೇನು? {{gap}}ಊಟ-ನಿದ್ದ. {{gap}}ಊಹೂಂ, ನಿದ್ದೆಗೆ ಮುಂಚೆ ಮಾಡಬೇಕಾದುದೊಂದಿದೆ, ಅಣ್ಣನಿಗೆ ಕಾಗದ ಬರೆವುದು. ಅದಾದಮೇಲೆಯೇ ಶಯನ.<noinclude></noinclude> odrn2pymosftxl52lz8rnx2pwci596z 323994 323992 2026-06-02T05:23:13Z Shreelatha.Halemane 7642 /* Validated */ 323994 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=}} {{gap}}“ಏನು?”. {{gap}}“ಇನ್ನೊಂದು ಲೇಖನ.” - * {{gap}}ಓ! ನೀವೂ ಸರಿ! {{gap}}“ಛೇ! ತಮಾಷೆಗೆ ಹೇಳ್ದೆ ಅಂದ್ರೋಂಡಿರಾ? ಬೇಗನೆ ಬೇರೊಂದು ನೀವು : ಬರೆಯಲೇಬೇಕು.” - {{gap}}“ಸದ್ಯಃ ನನ್ನ ಪರೀಕ್ಷೆಯೊಮ್ಮೆ ಮುಗೀಲಿ, ಆಮೇಲೆ-ಮಾತು ಪೂರ್ಣ ವಾಗುವುದರೊಳಗೇ ಬಸ್ಸು ಬಂತು. {{gap}}ಗಿರಿಜಾಯಿ ಕೇಳಿದರು: {{gap}}“ಚಿಲ್ಲರೆ ಇದೆ ತಾನೆ ?” (ಹಾಗೆ ಕೇಳುವುದಂತೂ ಅವರ ಅಭ್ಯಾಸ.] {{gap}}ಇದೆರೀ. {{gap}}“ಹತ್ತಿಹಾಗಾದರೆ.”. {{gap}}ನಿಂತ ಬಸ್ಸನ್ನು ಏರಿ ಕುಳಿತಳು ವಿಶಾಲಾಕ್ಷಿ, ವಾಹನ ಹೊರಟಿತು. ಮಂದಹಾಸ ಸೂಸುತ್ತ ಗಿರಿಜಾಬಾಯಿ ಕೈಬೀಸಿದರು. {{gap}}ಕಡ್ಡಿಯಂತಹ ಕೈ, ಸೊರಗಿದ ದೇಹ, 'ಎಷ್ಟೊಂದು ಇಳಿದುಹೋಗಿದಾರೆ!' ಎಂದುಕೊಂಡಳು ವಿಶಾಲಿ. - {{gap}}“ಮಾರ್ಕೆಟಿಗೆ ಕೊಡಲಾ?” {{gap}}ಟಿಕೆಟ್‌ ಹರಿಯಲು ಸಿದ್ಧನಾಗಿದ್ದ ಕಂಡಕ್ಟರ್‌ ಸಾಹೇಬ. ಹೌದು, ಅಲ್ಲಿಗೇ, ಅಲ್ಲಿಂದ ಮನೆಯ ಕಡೆಗೆ. {{gap}} .... ಕರಿಮೂತಿ ತೋರಿದ ಮೋಡ ಬೇರೆಲ್ಲಿಗೋ ತೇಲಿಹೋಗಿತ್ತು, ಮತ್ತೆ ನಿರ್ಮಲವಾಗಿತ್ತು ಆಕಾಶ. {{gap}}ಈ ರಾತ್ರೆ ಇನ್ನು ಉಳಿದಿರುವ ಕೆಲಸವೇನು? {{gap}}ಊಟ-ನಿದ್ದ. {{gap}}ಊಹೂಂ, ನಿದ್ದೆಗೆ ಮುಂಚೆ ಮಾಡಬೇಕಾದುದೊಂದಿದೆ, ಅಣ್ಣನಿಗೆ ಕಾಗದ ಬರೆವುದು. ಅದಾದಮೇಲೆಯೇ ಶಯನ.<noinclude></noinclude> om1ytcfzdrbby1wrwhtliar1af3owxl ಪುಟ:VISHAALAAKSHI - Niranjana.pdf/೫೨ 104 37888 323973 100047 2026-06-02T04:48:29Z Shreesha Sharma 7840 /* Proofread */ 323973 proofread-page text/x-wiki <noinclude><pagequality level="3" user="Shreesha Sharma" /></noinclude>{{center|'''೬'''}} {{gap}}ಮನೆಯಲ್ಲಿ ಅಣ್ಣನ ಕಾಗದ ವಿಶಾಲಾಕ್ಷಿಗಾಗಿ ಕಾದಿತ್ತು. {{gap}}“ಬೇಗನೆ ಬರಬಾರದಾಗಿತ್ತೇನೇ ಸ್ವಲ್ಪ ? ಎಷ್ಟೊಂದು ತಡಮಾಡಿದೆಯೇ? ಎಂದು ನಾಗಮ್ಮ ಗೊಣಗಿದರು. {{gap}}“ಗಿರಿಜಾಬಾಯಿಾನ ನೋಡೋಕೆ ಹೋಗಿದ್ದೆ, ಅವರಿಗೆ ಜ್ವರ ಬಂದಿತ್ತು.” ಎಂದಳು ವಿಶಾಲಾಕ್ಷಿ {{gap}}“ಹಾಗೇನು ? {{gap}}“ಈಗ ಸ್ವಲ್ಪ ವಾಸಿ.” {{gap}}“ನೋಡು, , ರಾಜೂ ಕಾಗದ ಬಂದಿದೆ. ಪೋಸ್ಟಿನೋನು ಸಾಯಂಕಾಲ ತಂದ್ಕೊಟ್ಟ. ಅದೇನೇನೋ ಬರೆದಿದಾನೆ, ಸರಿಯಾಗಿ ಓದಿ ಕೂಡಾ | ಹೇಳವಲ್ಲ ಚಂದ್ರು.”. {{gap}}ಕಳವಳ, ದುಗುಡ, ಅವಸರ...ಎಲ್ಲವೂ ತುಂಬಿದ್ದ ಧ್ವನಿ, ವಿಶಾಲಾಕ್ಷಿಗೂ ತುಸು ಗಾಬರಿಯಾಯಿತು. {{gap}}“ಚಂದ್ರ ಎಲ್ಲಿ ?” - {{gap}}“ಇದೇ ಈಗ ಇಬ್ಬರೂ ಹೋದರು. ಕತ್ತಲಾಯ್ತು, ಹೋಗಬೇಡ್ರೋ ಅಂದೆ. ನನ್ನ ಮಾತು ಯಾರು ಕೇಳ್ತಾರೆ ?”... {{gap}}ಉಟ್ಟಿದ್ದ ಸೀರೆಯಲ್ಲೇ ಕುಳಿತು, ಕಾಗದವನ್ನು ವಿಶಾಲಾಕ್ಷಿ ಕೈಗೆತ್ತಿ ಕೊಂಡಳು." {{gap}}ಮೊದಲು ಮನಸಿನಲ್ಲೇ ಪಠನ, ಬೇಗಬೇಗನೆ.<noinclude></noinclude> j9dzwfutoahcrrrb2ph19o5bhoz9lnw 323975 323973 2026-06-02T04:56:20Z Shreelatha.Halemane 7642 /* Validated */ 323975 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|'''೬'''}} {{gap}}ಮನೆಯಲ್ಲಿ ಅಣ್ಣನ ಕಾಗದ ವಿಶಾಲಾಕ್ಷಿಗಾಗಿ ಕಾದಿತ್ತು. {{gap}}“ಬೇಗನೆ ಬರಬಾರದಾಗಿತ್ತೇನೇ ಸ್ವಲ್ಪ ? ಎಷ್ಟೊಂದು ತಡಮಾಡಿದೆಯೇ? ಎಂದು ನಾಗಮ್ಮ ಗೊಣಗಿದರು. {{gap}}“ಗಿರಿಜಾಬಾಯಿಾನ ನೋಡೋಕೆ ಹೋಗಿದ್ದೆ, ಅವರಿಗೆ ಜ್ವರ ಬಂದಿತ್ತು.” ಎಂದಳು ವಿಶಾಲಾಕ್ಷಿ {{gap}}“ಹಾಗೇನು ? {{gap}}“ಈಗ ಸ್ವಲ್ಪ ವಾಸಿ.” {{gap}}“ನೋಡು, , ರಾಜೂ ಕಾಗದ ಬಂದಿದೆ. ಪೋಸ್ಟಿನೋನು ಸಾಯಂಕಾಲ ತಂದ್ಕೊಟ್ಟ. ಅದೇನೇನೋ ಬರೆದಿದಾನೆ, ಸರಿಯಾಗಿ ಓದಿ ಕೂಡಾ | ಹೇಳವಲ್ಲ ಚಂದ್ರು.”. {{gap}}ಕಳವಳ, ದುಗುಡ, ಅವಸರ...ಎಲ್ಲವೂ ತುಂಬಿದ್ದ ಧ್ವನಿ, ವಿಶಾಲಾಕ್ಷಿಗೂ ತುಸು ಗಾಬರಿಯಾಯಿತು. {{gap}}“ಚಂದ್ರ ಎಲ್ಲಿ ?” - {{gap}}“ಇದೇ ಈಗ ಇಬ್ಬರೂ ಹೋದರು. ಕತ್ತಲಾಯ್ತು, ಹೋಗಬೇಡ್ರೋ ಅಂದೆ. ನನ್ನ ಮಾತು ಯಾರು ಕೇಳ್ತಾರೆ ?”... {{gap}}ಉಟ್ಟಿದ್ದ ಸೀರೆಯಲ್ಲೇ ಕುಳಿತು, ಕಾಗದವನ್ನು ವಿಶಾಲಾಕ್ಷಿ ಕೈಗೆತ್ತಿ ಕೊಂಡಳು." {{gap}}ಮೊದಲು ಮನಸಿನಲ್ಲೇ ಪಠನ, ಬೇಗಬೇಗನೆ.<noinclude></noinclude> 2y56cq0kpix59ttbm6474ku0p6xqxly ಪುಟ:VISHAALAAKSHI - Niranjana.pdf/೫೩ 104 37889 323974 100048 2026-06-02T04:55:45Z Shreesha Sharma 7840 /* Proofread */ 323974 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ |left=|right=೫೧}} [ನಾಗಮ್ಮನೂ ಒಳಕ್ಕೆ ಬಂದು, ಗೋಡೆಗೊರಗಿ ಕುಳಿತೇಬಿಟ್ಟರು, ಮಗಳನ್ನೇ ದಿಟ್ಟಿಸುತ್ತ.] {{rh|center=|left=|right=ಭಿಲಾಯಿ}} {{rh|center=|left=|right=೬-೮-೧೯೫೬}} {{Left|ಪ್ರೀತಿಯ ತಂಗಿಗೆ,}} {{gap}}ನಿನ್ನ ಕಾಗದ ಸಕಾಲದಲ್ಲೇ ಬಂತು. ಮನೆಯಲ್ಲಿ ನೀವೆಲ್ಲ ಆರೋಗ್ಯ ವಾಗಿದೀರೆಂದು ತಿಳಿದು ಸಂತೋಷವಾಯಿತು. {{gap}}ಡ್ರಾಫ್ಟಿನ ಜತೆ ಬರೆಯಬೇಕಾಗಿದ್ದವನು ಸ್ವಲ್ಪ ಮುಂಚೆಯೇ ಆ . ಕೆಲಸಕ್ಕೆ ಕುಳಿತಿದ್ದೇನೆ, ಯಾಕಿರಬಹುದು, ಹೇಳು ? ಊಹೂಂ, ಊಹಿಸುವುದು ಖಂಡಿತ ನಿನ್ನಿಂದ ಸಾಧ್ಯವಾಗದು. {{gap}}['ಮಹತ್ವದ್ದೆನೋ ಇದೆ, ಅಮ್ಮ ಕಕ್ಕಾಬಿಕ್ಕಿಯಾಗಿರುವುದು ಇದಕ್ಕೋಸ್ಕರವೇ ಇರಬೇಕು,' ಎಂದುಕೊಂಡಳು ವಿಶಾಲಾಕ್ಷಿ.. {{gap}}ನಿರ್ಮಾಣವಾಗುತ್ತಿರುವ ಈ ಬೃಹತ್ ಕಾರಖಾನೆಯ ವಿಷಯ ಹಿಂದೆಯೇ ನಿನಗೆ ಎಷ್ಟೋ ಸಾರೆ ಹೇಳಿದೇನೆ... {{gap}}(ರಷ್ಯಾದೇಶದ ನೆರವು ಪಡೆದು ರಚಿತವಾಗುತ್ತಿರುವ ಉಕ್ಕಿನ ಕಾರ್ಖಾನೆ, ಪ್ರತಿಸಾರೆಯೂ ತನ್ನ ಉದ್ಯೋಗಕ್ಕೆ ಸಂಬಂಧಿಸಿ ಸ್ವಾರಸ್ಯಕರ ವೆನಿಸುವಂತಹದೇನನ್ನಾದರೂ ಅಣ್ಣ ತಪ್ಪದೆ ಬರೆಯುತ್ತಿದ್ದ.] {{gap}}.... ಈಗ, ತಾಂತ್ರಿಕ ಶಿಕ್ಷಣಕ್ಕಾಗಿ ನಮ್ಮಲ್ಲಿಂದ ಇಪ್ಪತ್ತು ಜನ ಎಂಜಿನಿಯರುಗಳನ್ನು ರಷ್ಯಾದೇಶಕ್ಕೆ ಕಳಿಸಲಿದ್ದಾರೆ. ಇವತ್ತು ಜನರಲ್ ಮ್ಯಾನೇಜರಿಂದ ನನಗೆ ಕರೆ ಬಂತು, 'ಈ ತಂಡದಲ್ಲಿ ನೀವೂ ಇರಬೇಕೂಂತ ನನ್ನ ಅಪೇಕ್ಷೆ, ಉತ್ತರಕ್ಕೆ ಒಂದು ವಾರದ ಅವಧಿಕೊಡ್ತೀನಿ, ಈ ಅವಕಾಶ ಕಳೆದುಕೊಳ್ಳಬೇಡಿ,' ಎಂದರು, ಹೊರಗೆ ಬಂದವನಿಗೆ, ಚೇತರಿಸಿ ಕೊಳ್ಳುವುದಕ್ಕೇ ಸ್ವಲ್ಪ ಸಮಯಬೇಕಾಯಿತು. ಈ ಶಿಕ್ಷಣದ ಅವಧಿ ಒಟ್ಟು ಆರು ತಿಂಗಳು ಅಷ್ಟು ಕಾಲ ಸಂಬಳವೂ ಇದೆ. ಪ್ರವಾಸಕ್ಕಾಗಿ ನಾವೇನೂ ವೆಚ್ಚಮಾಡಬೇಕಾಗಿಲ್ಲ. ಈ ಅವಕಾಶ ಕಳೆದುಕೊಳ್ಳಬೇಡಿ' ಅಂತ ಜಿ.ಎಂ. ಹೇಳಿದ್ದರಲ್ಲಿ ಅರ್ಥವಿದೆ, ಔದ್ಯೋಗೀಕರಣದ ವಿಷಯದಲ್ಲಿ ರಷ್ಯಾ ಮುಂದು ವರಿದ ರಾಷ್ಟ್ರ, ಶಿಕ್ಷಣದ ದೃಷ್ಟಿಯಿಂದ ಲಾಭವಿದ್ದೇ ಇದೆ. ಮುಂದೆ<noinclude></noinclude> 942k3l4rb7x04g2pg0zpp4iwb3skcmb 323976 323974 2026-06-02T04:56:31Z Shreelatha.Halemane 7642 /* Validated */ 323976 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ |left=|right=೫೧}} [ನಾಗಮ್ಮನೂ ಒಳಕ್ಕೆ ಬಂದು, ಗೋಡೆಗೊರಗಿ ಕುಳಿತೇಬಿಟ್ಟರು, ಮಗಳನ್ನೇ ದಿಟ್ಟಿಸುತ್ತ.] {{rh|center=|left=|right=ಭಿಲಾಯಿ}} {{rh|center=|left=|right=೬-೮-೧೯೫೬}} {{Left|ಪ್ರೀತಿಯ ತಂಗಿಗೆ,}} {{gap}}ನಿನ್ನ ಕಾಗದ ಸಕಾಲದಲ್ಲೇ ಬಂತು. ಮನೆಯಲ್ಲಿ ನೀವೆಲ್ಲ ಆರೋಗ್ಯ ವಾಗಿದೀರೆಂದು ತಿಳಿದು ಸಂತೋಷವಾಯಿತು. {{gap}}ಡ್ರಾಫ್ಟಿನ ಜತೆ ಬರೆಯಬೇಕಾಗಿದ್ದವನು ಸ್ವಲ್ಪ ಮುಂಚೆಯೇ ಆ . ಕೆಲಸಕ್ಕೆ ಕುಳಿತಿದ್ದೇನೆ, ಯಾಕಿರಬಹುದು, ಹೇಳು ? ಊಹೂಂ, ಊಹಿಸುವುದು ಖಂಡಿತ ನಿನ್ನಿಂದ ಸಾಧ್ಯವಾಗದು. {{gap}}['ಮಹತ್ವದ್ದೆನೋ ಇದೆ, ಅಮ್ಮ ಕಕ್ಕಾಬಿಕ್ಕಿಯಾಗಿರುವುದು ಇದಕ್ಕೋಸ್ಕರವೇ ಇರಬೇಕು,' ಎಂದುಕೊಂಡಳು ವಿಶಾಲಾಕ್ಷಿ.. {{gap}}ನಿರ್ಮಾಣವಾಗುತ್ತಿರುವ ಈ ಬೃಹತ್ ಕಾರಖಾನೆಯ ವಿಷಯ ಹಿಂದೆಯೇ ನಿನಗೆ ಎಷ್ಟೋ ಸಾರೆ ಹೇಳಿದೇನೆ... {{gap}}(ರಷ್ಯಾದೇಶದ ನೆರವು ಪಡೆದು ರಚಿತವಾಗುತ್ತಿರುವ ಉಕ್ಕಿನ ಕಾರ್ಖಾನೆ, ಪ್ರತಿಸಾರೆಯೂ ತನ್ನ ಉದ್ಯೋಗಕ್ಕೆ ಸಂಬಂಧಿಸಿ ಸ್ವಾರಸ್ಯಕರ ವೆನಿಸುವಂತಹದೇನನ್ನಾದರೂ ಅಣ್ಣ ತಪ್ಪದೆ ಬರೆಯುತ್ತಿದ್ದ.] {{gap}}.... ಈಗ, ತಾಂತ್ರಿಕ ಶಿಕ್ಷಣಕ್ಕಾಗಿ ನಮ್ಮಲ್ಲಿಂದ ಇಪ್ಪತ್ತು ಜನ ಎಂಜಿನಿಯರುಗಳನ್ನು ರಷ್ಯಾದೇಶಕ್ಕೆ ಕಳಿಸಲಿದ್ದಾರೆ. ಇವತ್ತು ಜನರಲ್ ಮ್ಯಾನೇಜರಿಂದ ನನಗೆ ಕರೆ ಬಂತು, 'ಈ ತಂಡದಲ್ಲಿ ನೀವೂ ಇರಬೇಕೂಂತ ನನ್ನ ಅಪೇಕ್ಷೆ, ಉತ್ತರಕ್ಕೆ ಒಂದು ವಾರದ ಅವಧಿಕೊಡ್ತೀನಿ, ಈ ಅವಕಾಶ ಕಳೆದುಕೊಳ್ಳಬೇಡಿ,' ಎಂದರು, ಹೊರಗೆ ಬಂದವನಿಗೆ, ಚೇತರಿಸಿ ಕೊಳ್ಳುವುದಕ್ಕೇ ಸ್ವಲ್ಪ ಸಮಯಬೇಕಾಯಿತು. ಈ ಶಿಕ್ಷಣದ ಅವಧಿ ಒಟ್ಟು ಆರು ತಿಂಗಳು ಅಷ್ಟು ಕಾಲ ಸಂಬಳವೂ ಇದೆ. ಪ್ರವಾಸಕ್ಕಾಗಿ ನಾವೇನೂ ವೆಚ್ಚಮಾಡಬೇಕಾಗಿಲ್ಲ. ಈ ಅವಕಾಶ ಕಳೆದುಕೊಳ್ಳಬೇಡಿ' ಅಂತ ಜಿ.ಎಂ. ಹೇಳಿದ್ದರಲ್ಲಿ ಅರ್ಥವಿದೆ, ಔದ್ಯೋಗೀಕರಣದ ವಿಷಯದಲ್ಲಿ ರಷ್ಯಾ ಮುಂದು ವರಿದ ರಾಷ್ಟ್ರ, ಶಿಕ್ಷಣದ ದೃಷ್ಟಿಯಿಂದ ಲಾಭವಿದ್ದೇ ಇದೆ. ಮುಂದೆ<noinclude></noinclude> 2woeewiiyg9puafphdjbyirbyea7qtv ಪುಟ:VISHAALAAKSHI - Niranjana.pdf/೫೪ 104 37890 324013 100049 2026-06-02T06:27:44Z Shreelatha.Halemane 7642 /* Proofread */ 324013 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|center=ವಿಶಾಲಾಕ್ಷಿ|left=೫೨|right=}} ಉದ್ಯೋಗ ಖಾಯಂ ಆಗುವುದೂ ಸುಲಭವಾಗದೆ, ಕಳೆದಸಾರೆ ನೀನು ಊರಿಗೆ ಬಂದಿದ್ದಾಗ, ವಿದೇಶ ವ್ಯಾಸಂಗದ ವಿಷಯ ಮಾತನಾಡಿದ್ದು ನೆನಪಿದೆಯೊ ? ನಮ್ಮಂಥವರಿಗೆ ಅದೆಲ್ಲಿ ಹೇಳಿಸಿದಲ್ಲ' ಎಂದಿದ್ದೆ ನೀನು. ಈಗ ಅನಿರೀಕ್ಷಿತವಾಗಿ ಸಂದರ್ಭ ಹೀಗೆ ರೂಪುಗೊಂಡಿದೆ, ರಷ್ಯಾದೇಶವೇನೂ ದೂರವಲ್ಲ. ಅಮ್ಮನಿಗೆ ಹೇಳು, ಇಲ್ಲಿಯೇ ಸಮೀಪ.... {{gap}}[ಮೊದಲು ಅರ್ಥವಾಗಲಿಲ್ಲ ವಿಶಾಲಿಗೆ, ಇಲ್ಲಿಯೇ ಸಮಾಸ' ಎಂದರೇನು ? ಬಳಿಕ ಹೊಳೆಯಿತು: “ಅಮ್ಮನಿಗೆ ಹೇಳು.] {{gap}}....ಹಾ, ಹಾ-ಅನ್ನುವುದರೊಳಗೇ ಆರು ತಿಂಗಳು ಕಳೆದುಹೋಗಿದೆ. ಅಭ್ಯಾಸಿಗಳ ತಂಡ ಹೊರಡುವುದು .ಡಿಸೆಂಬರ್‌ ತಿಂಗಳಲ್ಲಿ, ಅದಕ್ಕೂ ಮುಂಚಿತವಾಗಿಯೊಮ್ಮೆ ಊರಿಗೆ ಬರಬಲ್ಲೆ, .. {{gap}}ನಿನ್ನ ಅಭಿಪ್ರಾಯವೇನು ? ಆ ದಿನವೇ ನಾನು ಹೇಳಿದ್ದೆ-ಮನೆಗೆ ನೀನೇ ದೊಡ್ಡವಳೂಂತ ನೀನ್ನು ಒಪ್ಪಿಯೇ ಒಪ್ಪುತ್ತೀಯಾ ಎನ್ನುವ ಭರವಸೆ ಇದೆ. ಅಷ್ಟೇ ಅಲ್ಲ, ತಾಯಿಯನ್ನೂ ಒಪ್ಪಿಸುತ್ತೀಯಾ ಅಂತ ನಂಬಿಕೆಯೂ ಇದೆ. {{gap}}ನಿನ್ನ ಅಧ್ಯಯನ ಚೆನ್ನಾಗಿಯೇ ನಡೆದಿದೆ, ಅಲ್ಲವೆ? ಚಂದ್ರ-ಜಯ : ರಾಮುಗೆ ಒಲವು ತಿಳಿಸು.. ಅಮ್ಮನಿಗೆ ಪ್ರಣಾಮಗಳು. {{rh|center=|left=|right=ಎಂದು ನಿನ್ನ ಪ್ರೀತಿಯ}} {{rh|center=|left=|right=ರಾಜು }}` ಮರೆತುದು: {{gap}}ಜಿ. ಎಂ. ಒಂದು ವಾರದೊಳಗೆ ಉತ್ತರ ಅಪೇಕ್ಷಿಸಿದ್ದಾರೆ. ಇದು ನಿನ್ನ ಕೈಸೇರಲು ಎಂದಿನಂತೆ ನಾಲೈದು ದಿನಗಳಾಗಬಹುದು. ನಿನಗೆ ಒಪ್ಪಿಗೆ ಎಂದು ತಿಳಿಸಿ ಒಂದು ತಂತಿ ಕೊಡುತ್ತೀಯಾ ? ಅದು ಬಂದಾಗ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ.... {{Right|ರಾ.}} {{gap}}ಓದಿ ಮುಗಿಸಿದ ವಿಶಾಲಾಕ್ಷಿ ಒಂದು ಕ್ಷಣ ಮೂಕಿಯಾಗಿ ಕುಳಿತಳು. ಸಮಾಜಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಪರಿಚಿತೆಯೊಬ್ಬಳು ಅಮೆರಿಕಕ್ಕೆ ಹೋದಾಗ, ಆಗಾಗ್ಗೆ ಪತ್ರಿಕೆಗಳಲ್ಲಿ ಭಾವಚಿತ್ರಗಳೊಡನೆ ವಿದೇಶ ವ್ಯಾಸಂಗಗಳ ಪ್ರವಾಸದ ಸುದ್ದಿಗಳನ್ನು ಓದಿದಾಗ, ಯಾವ ಬಗೆಯಿಂದಲೂ ವಿಶಾಲಾಕ್ಷಿಗೆ ಅಚ್ಚರಿ<noinclude></noinclude> 11usmg82o2eib6bor6394azl8foplmr 324015 324013 2026-06-02T06:33:17Z Shreesha Sharma 7840 /* Validated */ 324015 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೫೨|right=}} ಉದ್ಯೋಗ ಖಾಯಂ ಆಗುವುದೂ ಸುಲಭವಾಗದೆ, ಕಳೆದಸಾರೆ ನೀನು ಊರಿಗೆ ಬಂದಿದ್ದಾಗ, ವಿದೇಶ ವ್ಯಾಸಂಗದ ವಿಷಯ ಮಾತನಾಡಿದ್ದು ನೆನಪಿದೆಯೊ ? ನಮ್ಮಂಥವರಿಗೆ ಅದೆಲ್ಲಿ ಹೇಳಿಸಿದಲ್ಲ' ಎಂದಿದ್ದೆ ನೀನು. ಈಗ ಅನಿರೀಕ್ಷಿತವಾಗಿ ಸಂದರ್ಭ ಹೀಗೆ ರೂಪುಗೊಂಡಿದೆ, ರಷ್ಯಾದೇಶವೇನೂ ದೂರವಲ್ಲ. ಅಮ್ಮನಿಗೆ ಹೇಳು, ಇಲ್ಲಿಯೇ ಸಮೀಪ.... {{gap}}[ಮೊದಲು ಅರ್ಥವಾಗಲಿಲ್ಲ ವಿಶಾಲಿಗೆ, ಇಲ್ಲಿಯೇ ಸಮಾಸ' ಎಂದರೇನು ? ಬಳಿಕ ಹೊಳೆಯಿತು: “ಅಮ್ಮನಿಗೆ ಹೇಳು.] {{gap}}....ಹಾ, ಹಾ-ಅನ್ನುವುದರೊಳಗೇ ಆರು ತಿಂಗಳು ಕಳೆದುಹೋಗಿದೆ. ಅಭ್ಯಾಸಿಗಳ ತಂಡ ಹೊರಡುವುದು .ಡಿಸೆಂಬರ್‌ ತಿಂಗಳಲ್ಲಿ, ಅದಕ್ಕೂ ಮುಂಚಿತವಾಗಿಯೊಮ್ಮೆ ಊರಿಗೆ ಬರಬಲ್ಲೆ, .. {{gap}}ನಿನ್ನ ಅಭಿಪ್ರಾಯವೇನು ? ಆ ದಿನವೇ ನಾನು ಹೇಳಿದ್ದೆ-ಮನೆಗೆ ನೀನೇ ದೊಡ್ಡವಳೂಂತ ನೀನ್ನು ಒಪ್ಪಿಯೇ ಒಪ್ಪುತ್ತೀಯಾ ಎನ್ನುವ ಭರವಸೆ ಇದೆ. ಅಷ್ಟೇ ಅಲ್ಲ, ತಾಯಿಯನ್ನೂ ಒಪ್ಪಿಸುತ್ತೀಯಾ ಅಂತ ನಂಬಿಕೆಯೂ ಇದೆ. {{gap}}ನಿನ್ನ ಅಧ್ಯಯನ ಚೆನ್ನಾಗಿಯೇ ನಡೆದಿದೆ, ಅಲ್ಲವೆ? ಚಂದ್ರ-ಜಯ : ರಾಮುಗೆ ಒಲವು ತಿಳಿಸು.. ಅಮ್ಮನಿಗೆ ಪ್ರಣಾಮಗಳು. {{rh|center=|left=|right=ಎಂದು ನಿನ್ನ ಪ್ರೀತಿಯ}} {{rh|center=|left=|right=ರಾಜು }}` ಮರೆತುದು: {{gap}}ಜಿ. ಎಂ. ಒಂದು ವಾರದೊಳಗೆ ಉತ್ತರ ಅಪೇಕ್ಷಿಸಿದ್ದಾರೆ. ಇದು ನಿನ್ನ ಕೈಸೇರಲು ಎಂದಿನಂತೆ ನಾಲೈದು ದಿನಗಳಾಗಬಹುದು. ನಿನಗೆ ಒಪ್ಪಿಗೆ ಎಂದು ತಿಳಿಸಿ ಒಂದು ತಂತಿ ಕೊಡುತ್ತೀಯಾ ? ಅದು ಬಂದಾಗ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ.... {{Right|ರಾ.}} {{gap}}ಓದಿ ಮುಗಿಸಿದ ವಿಶಾಲಾಕ್ಷಿ ಒಂದು ಕ್ಷಣ ಮೂಕಿಯಾಗಿ ಕುಳಿತಳು. ಸಮಾಜಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಪರಿಚಿತೆಯೊಬ್ಬಳು ಅಮೆರಿಕಕ್ಕೆ ಹೋದಾಗ, ಆಗಾಗ್ಗೆ ಪತ್ರಿಕೆಗಳಲ್ಲಿ ಭಾವಚಿತ್ರಗಳೊಡನೆ ವಿದೇಶ ವ್ಯಾಸಂಗಗಳ ಪ್ರವಾಸದ ಸುದ್ದಿಗಳನ್ನು ಓದಿದಾಗ, ಯಾವ ಬಗೆಯಿಂದಲೂ ವಿಶಾಲಾಕ್ಷಿಗೆ ಅಚ್ಚರಿ<noinclude></noinclude> 28xwl30k24rwtxd00hufbry20iq67w6 ಪುಟ:VISHAALAAKSHI - Niranjana.pdf/೫೫ 104 37891 324014 100050 2026-06-02T06:32:31Z Shreelatha.Halemane 7642 /* Proofread */ 324014 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೫೩}} ಎನಿಸುತ್ತಿರಲಿಲ್ಲ. ದುಡ್ಡಿದೆ, ಹೋಗ್ತಾರೆ,' ಎಂದುಕೊಳ್ಳುತ್ತಿದ್ದಳು, ಅಲ್ಲವೆ, “ವಿದ್ಯಾರ್ಥಿವೇತನ ದೊರೆತಿದೆ, ಭಾಗ್ಯವಂತರು,' ಎಂದು, ಆದರೆ ಈಗ, ಸ್ವತಃ ತನ್ನ ಅಣ್ಣನೇ ವಿದೇಶಯಾತ್ರೆ ಕೈಗೊಳ್ಳುವನೆಂದಾಗ, ವಿಶಾಲಾಕ್ಷಿ ಅಧೀರಳಾದಳು. ತಮ್ಮೆಲ್ಲರನ್ನು ಬಿಟ್ಟು-ಅಷ್ಟು ದೂರಕ್ಕೆ.... - {{gap}}ಮಗಳು ಕಾಗದವನ್ನಿನ್ನೂ ಓದುತ್ತಲೇ ಇರುವಳೇನೋ ಎಂದು, ನಾಗಮ್ಮ ಮತ್ತೂ ಒಂದೆರಡು ನಿಮಿಷ ಕಾದರು. ಓದು ಆಗಲೇ ಮುಗಿಯಿತೆಂಬ ಶಂಕೆ ಮೂಡಿದಾಗ, ಕೇಳಿದರು : - {{gap}}“ಏನಂತೆ ?” {{gap}}ಆರೋಗ್ಯವಾಗಿದಾನಂತೆ.” (ಅದ್ಸರಿ, ಕಾಗದದಲ್ಲಿ ಬೇರೆಯೂ ಏನೋ ಇದೆಯಂತಲ್ಲ.” {{gap}}“ರಷ್ಯಾದೇಶಕ್ಕೆ ಆರು ತಿಂಗಳಕಾಲ ಹೋಗಿಬರ್ತೀನಿ-ಅಂತ ಬರದಿದಾನೆ.” {{gap}}(ಅದೇ ನಾನು ಕೇಳಿದ್ದು, ಹಾಗೆಂದರೇನು ? ಅದು ಯಾವ ದೇಶ? ಸಾಗರ ದಾಟಿ ಹೋಗ್ಬೇಕೆ ?” “ {{gap}}[ತಾಯಿಯ ವಿರೋಧ ಸ್ಪಷ್ಟ, ಆ ವಿರೋಧಕ್ಕೆ ತಾನೂ ಧ್ವನಿ ಕೂಡಿಸಬೇಕೇನು ? ಅಶಿಕ್ಷಿತೆಯಾದ ತಾಯಿಯಂತೆ ತಾನೂ ಕೂಡಾ ? ಅಕೆಯ ಪ್ರಪಂಚ ಚಿಕ್ಕದು, ಅವಳ ದೃಷ್ಟಿಯಲ್ಲಿ ಭಿಲಾಯಿಯೇ ಸಾವಿರ ಹರದಾರಿ ದೂರವಿದ್ದಂತೆ....] {{gap}}ಸಾಗರ ದಾಟಿ ಹೋಗಬೇಕೆ ? -ಎನ್ನುವ ಪ್ರಶ್ನೆ.... . {{gap}}“ಇಲ್ಲವಮ್ಮ! ಸಾಗರ ದಾಟಿ ಹೋಗಬೇಕಾದ್ದಿಲ್ಲ. [ಸುಳ್ಳಲ್ಲ, ನಿಜ.] (ರಷ್ಯಾದೇಶವೇನೂ ದೂರವಿಲ್ಲ....ಇಲ್ಲಿಯೇ ಸಮೀಪ' ಅಂತ ಬರೆದಿದಾನೆ.” {{gap}}“ಒಂದೂ ಬೇಡ, ಮೊದಲು ಕೆಲಸ ಬಿಟ್ಟಿಟ್ಟು ತಕ್ಷಣ ಊರಿಗೆ ವಾಪಸು ಬರಬೇಕೂಂತ ಬರಿ.” | {{gap}}“ಡಿಸೆಂಬರ್‌ನಲ್ಲಂತೆ ರಷ್ಯಾಕ್ಕೆ ಹೋಗೋದು, ಅದಕ್ಮುಂಚೆ ಊರಿಗೆ ಬರ್ತೀನೀಂತ ಅವನೇ ಬರೆದಿದಾನೆ. ಓದಿ ಹೇಳ್ಲಾ ?” {{gap}}ಚಂದ್ರ ಒಮ್ಮೆ ಆತುರ ಆತುರವಾಗಿ ಓದಿ ಹೇಳಿದ್ದ. ತಾಯಿ ಆಪೇಕ್ಷೆ. ಪಟ್ಟಳೆಂದು ವಿಶಾಲಾಕ್ಷಿಯೂ ಗಟ್ಟಿಯಾಗಿ ಓದತೊಡಗಿದಳು. ಓದಿದಳುಮುಕ್ತಾಯಕ್ಕೆ ಮುಂಚೆ ಇದ್ದ ಒಂದು ವಾಕ್ಯವೃಂದವನ್ನು ಬಿಟ್ಟು.<noinclude></noinclude> 6jdvw5hlrirnmmu2xuj4h8ui3510bmu 324016 324014 2026-06-02T06:33:30Z Shreesha Sharma 7840 /* Validated */ 324016 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ|left=|right=೫೩}} ಎನಿಸುತ್ತಿರಲಿಲ್ಲ. ದುಡ್ಡಿದೆ, ಹೋಗ್ತಾರೆ,' ಎಂದುಕೊಳ್ಳುತ್ತಿದ್ದಳು, ಅಲ್ಲವೆ, “ವಿದ್ಯಾರ್ಥಿವೇತನ ದೊರೆತಿದೆ, ಭಾಗ್ಯವಂತರು,' ಎಂದು, ಆದರೆ ಈಗ, ಸ್ವತಃ ತನ್ನ ಅಣ್ಣನೇ ವಿದೇಶಯಾತ್ರೆ ಕೈಗೊಳ್ಳುವನೆಂದಾಗ, ವಿಶಾಲಾಕ್ಷಿ ಅಧೀರಳಾದಳು. ತಮ್ಮೆಲ್ಲರನ್ನು ಬಿಟ್ಟು-ಅಷ್ಟು ದೂರಕ್ಕೆ.... - {{gap}}ಮಗಳು ಕಾಗದವನ್ನಿನ್ನೂ ಓದುತ್ತಲೇ ಇರುವಳೇನೋ ಎಂದು, ನಾಗಮ್ಮ ಮತ್ತೂ ಒಂದೆರಡು ನಿಮಿಷ ಕಾದರು. ಓದು ಆಗಲೇ ಮುಗಿಯಿತೆಂಬ ಶಂಕೆ ಮೂಡಿದಾಗ, ಕೇಳಿದರು : - {{gap}}“ಏನಂತೆ ?” {{gap}}ಆರೋಗ್ಯವಾಗಿದಾನಂತೆ.” (ಅದ್ಸರಿ, ಕಾಗದದಲ್ಲಿ ಬೇರೆಯೂ ಏನೋ ಇದೆಯಂತಲ್ಲ.” {{gap}}“ರಷ್ಯಾದೇಶಕ್ಕೆ ಆರು ತಿಂಗಳಕಾಲ ಹೋಗಿಬರ್ತೀನಿ-ಅಂತ ಬರದಿದಾನೆ.” {{gap}}(ಅದೇ ನಾನು ಕೇಳಿದ್ದು, ಹಾಗೆಂದರೇನು ? ಅದು ಯಾವ ದೇಶ? ಸಾಗರ ದಾಟಿ ಹೋಗ್ಬೇಕೆ ?” “ {{gap}}[ತಾಯಿಯ ವಿರೋಧ ಸ್ಪಷ್ಟ, ಆ ವಿರೋಧಕ್ಕೆ ತಾನೂ ಧ್ವನಿ ಕೂಡಿಸಬೇಕೇನು ? ಅಶಿಕ್ಷಿತೆಯಾದ ತಾಯಿಯಂತೆ ತಾನೂ ಕೂಡಾ ? ಅಕೆಯ ಪ್ರಪಂಚ ಚಿಕ್ಕದು, ಅವಳ ದೃಷ್ಟಿಯಲ್ಲಿ ಭಿಲಾಯಿಯೇ ಸಾವಿರ ಹರದಾರಿ ದೂರವಿದ್ದಂತೆ....] {{gap}}ಸಾಗರ ದಾಟಿ ಹೋಗಬೇಕೆ ? -ಎನ್ನುವ ಪ್ರಶ್ನೆ.... . {{gap}}“ಇಲ್ಲವಮ್ಮ! ಸಾಗರ ದಾಟಿ ಹೋಗಬೇಕಾದ್ದಿಲ್ಲ. [ಸುಳ್ಳಲ್ಲ, ನಿಜ.] (ರಷ್ಯಾದೇಶವೇನೂ ದೂರವಿಲ್ಲ....ಇಲ್ಲಿಯೇ ಸಮೀಪ' ಅಂತ ಬರೆದಿದಾನೆ.” {{gap}}“ಒಂದೂ ಬೇಡ, ಮೊದಲು ಕೆಲಸ ಬಿಟ್ಟಿಟ್ಟು ತಕ್ಷಣ ಊರಿಗೆ ವಾಪಸು ಬರಬೇಕೂಂತ ಬರಿ.” | {{gap}}“ಡಿಸೆಂಬರ್‌ನಲ್ಲಂತೆ ರಷ್ಯಾಕ್ಕೆ ಹೋಗೋದು, ಅದಕ್ಮುಂಚೆ ಊರಿಗೆ ಬರ್ತೀನೀಂತ ಅವನೇ ಬರೆದಿದಾನೆ. ಓದಿ ಹೇಳ್ಲಾ ?” {{gap}}ಚಂದ್ರ ಒಮ್ಮೆ ಆತುರ ಆತುರವಾಗಿ ಓದಿ ಹೇಳಿದ್ದ. ತಾಯಿ ಆಪೇಕ್ಷೆ. ಪಟ್ಟಳೆಂದು ವಿಶಾಲಾಕ್ಷಿಯೂ ಗಟ್ಟಿಯಾಗಿ ಓದತೊಡಗಿದಳು. ಓದಿದಳುಮುಕ್ತಾಯಕ್ಕೆ ಮುಂಚೆ ಇದ್ದ ಒಂದು ವಾಕ್ಯವೃಂದವನ್ನು ಬಿಟ್ಟು.<noinclude></noinclude> fqzjgljn1h4gjg2j9k5q6ymz2q9cnq4 ಪುಟ:VISHAALAAKSHI - Niranjana.pdf/೫೬ 104 37892 324067 100051 2026-06-02T11:24:52Z Shreesha Sharma 7840 /* Proofread */ 324067 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ವಿಶಾಲಾಕ್ಷಿ|left=೫೪|right=}} {{gap}}(ರಷ್ಯಾದೇಶವೇನೂ ದೂರವಲ್ಲ'-ಇಲ್ಲಿಯೇ ಸಮೀಪ'...ಆ ಪದಗಳನ್ನು ವಿಶಾಲಾಕ್ಷಿ ತುಸು ಗಟ್ಟಿಯಾಗಿ ಉಚ್ಚರಿಸಿದಳು. {{gap}}ಸುಳ್ಳು, ಕಾರ್ಯ ಸಾಧಿಸಿತ್ತು. ಹೆತ್ತವಳ ವಿರೋಧ ಕರಗತೊಡಗಿತ್ತು. ಆ ಮನೋಸ್ಥಿತಿಗೆ ಸಂಕೇತವಾಗಿ ನಾಗಮ್ಮ ಅಳತೊಡಗಿದರು. {{gap}}ಅಳುತ್ತ, ಸೆರಗಿನ ಅಂಚಿನಿಂದ ಕಣ್ಣು ಗಳನ್ನು ಒತ್ತು, ಪುನಃ ಅಳುತ್ತ, ಅವರೆಂದರು: {{gap}}“ಆರು ತಿಂಗಳಂತೆ. ' ಹೆತ್ತವರ ಹೊಟ್ಟೆ ಉರಿಸೋದಕ್ಕೆ ಮಕ್ಕಳು ಇರೋದು...ರಾಜೂಗೆ ಏನೂ ಬುದ್ದಿ ಇಲ್ಲ....ಮನೆಯ ಯೋಚನೆ ಸ್ವಲ್ಪವಾದರೂ ಬೇಡವೆ? ...ನಮಗೆ ಯಾರು ದಿಕ್ಕಿದಾರೆ ಇಲ್ಲಿ ? ಊರಿಗೆ ಬರೋದರ ಬದಲು ಪ್ರವಾಸ ಹೋಗ್ತಾನಂತೆ...ಅಯ್ಯೋ !” {{gap}}ತಾಯಿಯ ಸಂಕಟ ಕಂಡು ವಿಶಾಲಾಕ್ಷಿಯೂ ಒಂದು ಕ್ಷಣ ವಿವಂಚನೆಗೆ ಒಳಗಾದಳು, ಅಣ್ಣ, ತಮ್ಮೆಲ್ಲರ ಜತೆಯಲ್ಲೇ ಇಲ್ಲೇ ಇದ್ದರೆ ಎಷ್ಟು ಚೆನ್ನು ! {{gap}}ಆದರೆ ಮರುಕ್ಷಣವೇ, ಒಡಹುಟ್ಟಿದವನು ಪ್ರಖ್ಯಾತ ಎಂಜಿನಿಯರಾಗುವ ಚಿತ್ರ ತಂಗಿಯ ಕಣ್ಣೆದುರು ಕಟ್ಟಿತು, ಪತ್ರಿಕೆಯಲ್ಲಿ ಫೋಟೋ, ಬೀಳ್ಕೊಡುಗೆಯ ಸಮಾರಂಭ, ವಿಮಾನ ಮಾರ್ಗವಾಗಿ ರಷ್ಯಾದೇಶಕ್ಕೆ, ಮುಂದೆ ಖಾಯಂ ಉದ್ಯೋಗ ಭಡ್ತಿ, ದೊಡ್ಡ ಹುದ್ದೆ, ಕೈತುಂಬ ಸಂಬಳ, ಯಾರ ಹಂಗೂ ಇಲ್ಲದ ಬದುಕು, ಬಡವರು ಎಂದು ತಮ್ಮನ್ನು ದೂರವಿಟ್ಟವರೆಲ್ಲ ಆಗ ಹೊಟ್ಟೆ ಯುರಿಯಿಂದ ಕರುಬುವರು ತಮ್ಮ ಪಾಲಿಗೆ ವಿದೇಶ ವ್ಯಾಸಂಗ ಮರೀಚಿಕೆಯೇ ಸರಿ-ಎಂದು ಹಿಂದೆ ನಂಬಿದ್ದುದು ಸುಳ್ಳಾಗುತ್ತದೆನ್ನುವ ಸಂತೋಷ.... {{gap}}“ಇಷ್ಟಕ್ಕೆಲ್ಲಾ ಅಳಬೇಕೆ ಅಮ್ಮ?” {{gap}}“ಸುಮ್ಮನಿರೇ, ನಿನಗೆ ಒಂದೂ ಗೊತ್ತಾಗೋದಿಲ್ಲ.” {{gap}}'ತಾಯಿಯ ದೃಷ್ಟಿಯಲ್ಲಿ ತಾನು ಯಾವಾಗ್ಲೂ ಎಳೆಯ ಹುಡುಗಿಯೇ. ಬಯಕೆಯ ಕಲ್ಪನೆಯನ್ನು ನಿಜವೆಂದು ಸಾರುವುದೇ ಪರಿಣಾಮಕಾರಿ. {{gap}}“ಆಮೇಲೆ ಅಣ್ಣನಿಗೆ ಹೆಚ್ಚು ಸಂಬಳ ಸಿಗುತ್ತಮ್ಮ.” {{gap}}“ಹೆಚ್ಚು ಸಂಬಳವಂತೆ. ಒಪ್ಪೊತ್ತಿನ ಊಟ ಸಿಕ್ಕರೆ ಸಾಲದೇನೊ ?” {{gap}}“ದೊಡ್ಡ ಕೆಲಸ...” “ಈ ಊರಲ್ಲಿ ಕೊಡ್ತಾರೇನು ?”<noinclude></noinclude> cpwy96czc4lpzxpym4g4yaxm24z52r6 ಪುಟ:VISHAALAAKSHI - Niranjana.pdf/೫೭ 104 37893 324068 100052 2026-06-02T11:29:27Z Shreesha Sharma 7840 /* Proofread */ 324068 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ |left=|right=೫೫}} {{gap}}''ಭದ್ರಾವತಿಯಲ್ಲೂ ಉಕ್ಕಿನ ಕಾರ್ಖಾನೆ ಇದೆ, ಅಲ್ಲಿಗೆ ವರ್ಗಮಾಡಿಸ್ಕೋ ಬಹುದು, ಅದು ಬೇಡವೆಂದಾದರೆ, ಈ ಊರಲ್ಲೆ .. {{gap}}“ಇಲ್ಲದ ಆಸೆ ತೋರಿಸ್ತೀಯಾ ನೀನು.” {{gap}}“ಸುಳ್ಳಲ್ಲವಮ್ಮ....” {{gap}}ನಾಗಮ್ಮ ಕಣ್ಣೊರಸಿಕೊಂಡು, ಬೇಸರದ ಮುಖಮುದ್ರೆಯೊಡನೆ ಸುಮ್ಮನೆ ಕುಳಿತರು. {{gap}}ವಿಶಾಲಾಕ್ಷಿ ಎದ್ದು ಸೀರೆ ಬದಲಾಯಿಸಿ ಬಂದಳು. ಸೋದರರ ಆಗಮನವಾಯಿತು. {{gap}}`ರಾತ್ರೆಯ ಅಡುಗೆಯ ನೆನಪಾಗಿ, ನಿಟ್ಟುಸಿರು ಬಿಟ್ಟು, ನಾಗಮ್ಮ ಎದ್ದರು. ಗಂಡ ತೀರಿಕೊಂಡ ಬಳಿಕ ಒಂದೇ ಹೊತ್ತು ಉಣ್ಣ ತೊಡಗಿದ್ದ ಅವರು ಕೇಳಿದರು: {{gap}}“ಅಕ್ಕಿ ಎಷ್ಟು ಹಾಕ್ಲಿ ?” {{gap}}“ಯಾವಾಗಲೂ ಎಷ್ಟು ಹಾಕ್ತಿಯೋ ಅಷ್ಟೇ ಹಾಕು.” {{gap}}“ಸಂಜೆ ಹುಡುಗರಿಗೆ ಉಪ್ಪಿಟ್ಟು ಮಾಡ್ಕೊಟ್ಟೆ, ನಿನ್ನ ಪಾಲು ಇರಿಸಿದೀನಿ ಬಾ.” {{gap}}“ನೀನು ತಗೊಂಡೆಯಾ, ಅಮ್ಮ?” . {{gap}}“ಹೂಂ” {{gap}}..ಒಲೆಯ ಮೇಲೆ ಅನ್ನದ ತಪ್ಪಲೆ ಇತ್ತು, ನೀರು ಕಾದಿದೆಯೇ ಎಂದು ನೋಡಿ, ಬೆಂಕಿಯನ್ನು ಸರಿಪಡಿಸಿ, ನಾಗಮ್ಮ ಡಬ್ಬದ ಮುಚ್ಚಳ ತೆಗೆದು ಅಕ್ಕಿ ಅಳೆದರು, ವಿಶಾಲಾಕ್ಷಿ ತಿಂಡಿಯ ತಟ್ಟೆಯನ್ನೆತ್ತಿಕೊಂಡಳು: {{gap}}ಉಪ್ಪಿಟ್ಟು ಮೆಲ್ಲುತ್ತ, ಒಲಿಸಿಕೊಳ್ಳುವ ಧ್ವನಿಯಲ್ಲಿ ವಿಶಾಲಾಕ್ಷಿ ಕೇಳಿದಳು: “ರಾಜೂಗೆ ಏನೂಂತ ತಾರು ಕೊಡಲೇ ? {{gap}}“ತಾರು ಯಾತಕ್ಕೆ ?” {{gap}}“ಹೌದು ಮತ್ತೆ ಒಂದು ವಾರದೊಳಗೆ ಉತ್ತರ ಕೊಡಬೇಕೂಂತ ಹೇಳಿದಾರಂತಲ್ಲಾ.”, {{gap}}“ಉತ್ತರ ?” {{gap}}“ಹೂನಮ್ಮಾ, ಅದೇ-ಆರು ತಿಂಗಳು ಹೋಗಿಬರೋ ವಿಷಯ.” {{gap}}“ತಾರು ಬೇಡ, ಕಾಗದ ಬರಿ, ಮೊದಲು ಇಲ್ಲಿಗೆ ಬಂದುಹೋಗಲಿ.”<noinclude></noinclude> 74rvfyqulqozksgufth6o3hhn26tia3 ಪುಟ:ಕಥಾ ಸಂಗ್ರಹ - ಭಾಗ ೨.djvu/೧೬ 104 44576 323885 106928 2026-06-01T14:14:42Z Shreesha Sharma 7840 /* Proofread */ 323885 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=ಕಥಾಸಂಗ್ರಹ-೪ ನೆಯ ಭಾಗ|left=6|right=}} ಕೃತ್ಯನಾದೆನು. ಯಾವ ವಿಧವಾದ ಆಪತ್ತು ಬಂದರೂ ಧರ್ಮಕ್ಕೆ ಚ್ಯುತಿಯಿಲ್ಲದಂತೆ ಕಾಪಾಡಿಕೊಳ್ಳುವುದಕ್ಕೆ ಯೋಗ್ಯವಾದ ವರವನ್ನು ನನಗೆ ದಯಪಾಲಿಸು ಮತ್ತು ಅಭ್ಯಾಸವನ್ನು ಮಾಡದೆ ನಿನ್ನ ಅಸ್ತ್ರವೇ ಮೊದಲಾದ ಸಕಲದೇವತಾಮಂತ್ರಾಸ್ತ್ರಗಳ ಸಂಧಾನವನ್ನೂ ಉಪಸಂಹಾರವನ್ನೂ ಮಾಡುವ ವಿದ್ಯೆಯು ನನಗೆ ಲಭಿಸುವ ಹಾಗೆ ವರವನ್ನು ಕರುಣಿಸಬೇಕು ಎಂದು ಬೇಡಿಕೊಂಡನು. ಆಗ ಕಮಲಸಂಭವನು ಅವನು ಪ್ರಾರ್ಥಿಸಿಕೊಂಡ ಎರಡು ವರಗಳನ್ನೂ ಕೊಟ್ಟು, ಚಿರಜೀವಿಯಾಗಿರು ಎಂದು ತಾನಾಗಿ ಮತ್ತೊಂದು ವರವನ್ನು ದಯಪಾಲಿಸಿ ಆಶೀರ್ವದಿಸಿದನು. {{gap}}ಅನಂತರದಲ್ಲಿ ಹಿರಣ್ಯಗರ್ಭನು ಕುಂಭಕರ್ಣನಿಗೆ ವರವನ್ನು ಕೊಡಬೇಕೆಂದು ಆತನಿರುವ ತಪೋವನಾಭಿಮುಖನಾಗಿ ಬರುತ್ತಿರಲು ; ಆಗ ಇಂದ್ರಾದಿ ದೇವತೆಗಳೆ ಲ್ಲರೂ ಬಂದು ಸರಸ್ವತೀಪತಿಯನ್ನು ಕುರಿತು-ದೇವನೇ, ನೀನು ಕುಂಭಕರ್ಣನಿಗೆ ವರವನ್ನು ಕೊಡುವುದು ಉಚಿತವಲ್ಲ, ಇವನು ಈಗಲೇ ತ್ರಿಜಗಜ್ಜನರನ್ನೆಲ್ಲಾ ಹಿಡಿದು ಹಿಂಸಿಸುತ್ತ ಭಕ್ಷಿಸುತ್ತ ಇರುವನು. ಇಂಥ ದುಸ್ಸಭಾವವುಳ್ಳವನಿಗೆ ನೀನು ಹೋಗಿ ವರವನ್ನೂ ಕೊಟ್ಟರೆ ಎಲ್ಲಾ ಲೋಕಗಳೂ ಒಂದೇ ದಿವಸದಲ್ಲಿ ವಿನಾಶವಾಗುವುವು ಎಂದು ಕೈಮುಗಿದು ಬಹುವಿಧವಾಗಿ ಬೇಡಿಕೊಳ್ಳಲು; ಆಗ ಬ್ರಹ್ಮನು ಸರಸ್ವತಿಯನ್ನು ಬರಮಾಡಿ-ಎಲೈ ವಾಣಿಯೇ, ಈ ಕುಂಭಕರ್ಣನು ವರವನ್ನು ಕೇಳಿಕೊಳ್ಳುವ ಸಮ ಯದಲ್ಲಿ ನೀನು ಇವನ ಹೃದಯದಲ್ಲಿ ಸೇರಿಕೊಂಡಿದ್ದು ದೇವತೆಗಳಿಗೆ ಹಿತವಾಗುವು ದಕ್ಕೆ ಯೋಗ್ಯವಾದ ಮಾತುಗಳನ್ನು ಇವನ ಬಾಯಿಂದ ಹೊರಡಿಸು ಎಂದು ಮೊ ದಲೇ ಹೇಳಿಕಳುಹಿಸಲು ; ಆಕೆಯು ಅದರಂತೆ ಹೋಗಿ ಅವನ ಹೃದಯವನ್ನು ಪ್ರವೇ ಶಿಸಿ ಸ್ವಾನುಕೂಲ ವಿಷಯದಲ್ಲಿ ಅವನಿಗೆ ವಿಕಲ್ಪವಾದ ಬುದ್ದಿಯನ್ನುಂಟುಮಾಡಿದಳು. ಆ ಸಮಯದಲ್ಲಿ ಬ್ರಹ್ಮನು ಕುಂಭಕರ್ಣನ ಬಳಿಗೈತಂದು ಎಲೈ ಖಳಶಿರೋಮಣಿ ಯಾದ ಕುಂಭಕರ್ಣನೇ, ನಾನು ನಿನ್ನ ತಪಸ್ಸಿಗೆ ಮೆಚ್ಚಿದೆನು. ವರಗಳನ್ನು ಬೇಡು, ಕೊಡುವೆನು ಎನ್ನಲು ; ಆಗ ಆ ಕುಂಭಕರ್ಣನು-ಎಲೈ ಅಬ್ಜ ಸಂಭವನೇ, ಬಹು ಕಾಲ ನಿದ್ರೆಯನ್ನು ಅನುಭವಿಸುತ್ತಿರುವ ಹಾಗೆ ನನಗೆ ವರವನ್ನು ಕರುಣಿಸೆನಲು ; ಚತುರಾನನನು ಹಾಗೇ ಆಗಲಿ ಎಂದು ಹರಸಿ ಸರಸ್ವತೀ ಸಮೇತನಾಗಿ ಹೊರಟು ಸತ್ಯ ಲೋಕವನ್ನು ಕುರಿತು ತೆರಳಿದನು. ಅನಂತರದಲ್ಲಿ ಸರಸ್ವತಿಯಿಂದ ಬಿಡಲ್ಪಟ್ಟ ಕುಂಭ ಕರ್ಣನು--ದೇವತೆಗಳ ಮೋಸಕೃತ್ಯದಿಂದ ತನಗೆ ಈ ವಿಧವಾದ ಅವಿಚಾರಮತಿ ಯುಂಟಾಯಿತೆಂದು ತನ್ನ ಅಕೃತ್ಯವನ್ನು ನಿಂದಿಸಿ ವ್ಯಸನಪಟ್ಟನು. ಅನಂತರದಲ್ಲಿ ಸಹೋದರರಾದ ಆ ಮೂರು ಮಂದಿಯ ಬ್ರಹ್ಮದೇವನಿಂದ ವರಗಳನ್ನು ಪಡೆದು ಕೊಂಡು ಬಂದು ಇನ್ನು ಮೇಲೆ ನಾವು ಮಾಡತಕ್ಕೆ ಕಾರ್ಯವಾವುದು ಎಂದು ಯೋಚಿಸುತ್ತ ಶ್ಲೇಷ್ಠಾತಕವೆಂಬ ಮನದಲ್ಲಿರುತ್ತಿದ್ದರು." {{gap}}ಅನಂತರದಲ್ಲಿ ಸುಮಾಲಿಯು ತನ್ನ ಮಗಳ ಮಕ್ಕಳು ತಪಸ್ಸು ಮಾಡಿ ಬ್ರಹ್ಮ, ನಿಂದ ವರಗಳನ್ನು ಪಡೆದ ವರ್ತಮಾನವನ್ನು ಕೇಳಿ ಬಹಳವಾಗಿ ಸಂತೋಷಿಸಿದವನಾಗಿ ಮಹೋದರ ವಜ್ರದಂಷ್ಟ್ರ ಸುಪಾರ್ಶ್ವ ಮಾರೀಚ ಪ್ರಹಸ್ತ ಅಕಂಪ ಧೂಮ್ರಾಕ್ಷ<noinclude></noinclude> nxn8spdmtolam3or7kq9k7utes6woew 323891 323885 2026-06-01T14:46:39Z Shreelatha.Halemane 7642 /* Validated */ 323891 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=ಕಥಾಸಂಗ್ರಹ-೪ ನೆಯ ಭಾಗ|left=6|right=}} ಕೃತ್ಯನಾದೆನು. ಯಾವ ವಿಧವಾದ ಆಪತ್ತು ಬಂದರೂ ಧರ್ಮಕ್ಕೆ ಚ್ಯುತಿಯಿಲ್ಲದಂತೆ ಕಾಪಾಡಿಕೊಳ್ಳುವುದಕ್ಕೆ ಯೋಗ್ಯವಾದ ವರವನ್ನು ನನಗೆ ದಯಪಾಲಿಸು ಮತ್ತು ಅಭ್ಯಾಸವನ್ನು ಮಾಡದೆ ನಿನ್ನ ಅಸ್ತ್ರವೇ ಮೊದಲಾದ ಸಕಲದೇವತಾಮಂತ್ರಾಸ್ತ್ರಗಳ ಸಂಧಾನವನ್ನೂ ಉಪಸಂಹಾರವನ್ನೂ ಮಾಡುವ ವಿದ್ಯೆಯು ನನಗೆ ಲಭಿಸುವ ಹಾಗೆ ವರವನ್ನು ಕರುಣಿಸಬೇಕು ಎಂದು ಬೇಡಿಕೊಂಡನು. ಆಗ ಕಮಲಸಂಭವನು ಅವನು ಪ್ರಾರ್ಥಿಸಿಕೊಂಡ ಎರಡು ವರಗಳನ್ನೂ ಕೊಟ್ಟು, ಚಿರಜೀವಿಯಾಗಿರು ಎಂದು ತಾನಾಗಿ ಮತ್ತೊಂದು ವರವನ್ನು ದಯಪಾಲಿಸಿ ಆಶೀರ್ವದಿಸಿದನು. {{gap}}ಅನಂತರದಲ್ಲಿ ಹಿರಣ್ಯಗರ್ಭನು ಕುಂಭಕರ್ಣನಿಗೆ ವರವನ್ನು ಕೊಡಬೇಕೆಂದು ಆತನಿರುವ ತಪೋವನಾಭಿಮುಖನಾಗಿ ಬರುತ್ತಿರಲು ; ಆಗ ಇಂದ್ರಾದಿ ದೇವತೆಗಳೆ ಲ್ಲರೂ ಬಂದು ಸರಸ್ವತೀಪತಿಯನ್ನು ಕುರಿತು-ದೇವನೇ, ನೀನು ಕುಂಭಕರ್ಣನಿಗೆ ವರವನ್ನು ಕೊಡುವುದು ಉಚಿತವಲ್ಲ, ಇವನು ಈಗಲೇ ತ್ರಿಜಗಜ್ಜನರನ್ನೆಲ್ಲಾ ಹಿಡಿದು ಹಿಂಸಿಸುತ್ತ ಭಕ್ಷಿಸುತ್ತ ಇರುವನು. ಇಂಥ ದುಸ್ಸಭಾವವುಳ್ಳವನಿಗೆ ನೀನು ಹೋಗಿ ವರವನ್ನೂ ಕೊಟ್ಟರೆ ಎಲ್ಲಾ ಲೋಕಗಳೂ ಒಂದೇ ದಿವಸದಲ್ಲಿ ವಿನಾಶವಾಗುವುವು ಎಂದು ಕೈಮುಗಿದು ಬಹುವಿಧವಾಗಿ ಬೇಡಿಕೊಳ್ಳಲು; ಆಗ ಬ್ರಹ್ಮನು ಸರಸ್ವತಿಯನ್ನು ಬರಮಾಡಿ-ಎಲೈ ವಾಣಿಯೇ, ಈ ಕುಂಭಕರ್ಣನು ವರವನ್ನು ಕೇಳಿಕೊಳ್ಳುವ ಸಮ ಯದಲ್ಲಿ ನೀನು ಇವನ ಹೃದಯದಲ್ಲಿ ಸೇರಿಕೊಂಡಿದ್ದು ದೇವತೆಗಳಿಗೆ ಹಿತವಾಗುವು ದಕ್ಕೆ ಯೋಗ್ಯವಾದ ಮಾತುಗಳನ್ನು ಇವನ ಬಾಯಿಂದ ಹೊರಡಿಸು ಎಂದು ಮೊ ದಲೇ ಹೇಳಿಕಳುಹಿಸಲು ; ಆಕೆಯು ಅದರಂತೆ ಹೋಗಿ ಅವನ ಹೃದಯವನ್ನು ಪ್ರವೇ ಶಿಸಿ ಸ್ವಾನುಕೂಲ ವಿಷಯದಲ್ಲಿ ಅವನಿಗೆ ವಿಕಲ್ಪವಾದ ಬುದ್ದಿಯನ್ನುಂಟುಮಾಡಿದಳು. ಆ ಸಮಯದಲ್ಲಿ ಬ್ರಹ್ಮನು ಕುಂಭಕರ್ಣನ ಬಳಿಗೈತಂದು ಎಲೈ ಖಳಶಿರೋಮಣಿ ಯಾದ ಕುಂಭಕರ್ಣನೇ, ನಾನು ನಿನ್ನ ತಪಸ್ಸಿಗೆ ಮೆಚ್ಚಿದೆನು. ವರಗಳನ್ನು ಬೇಡು, ಕೊಡುವೆನು ಎನ್ನಲು ; ಆಗ ಆ ಕುಂಭಕರ್ಣನು-ಎಲೈ ಅಬ್ಜ ಸಂಭವನೇ, ಬಹು ಕಾಲ ನಿದ್ರೆಯನ್ನು ಅನುಭವಿಸುತ್ತಿರುವ ಹಾಗೆ ನನಗೆ ವರವನ್ನು ಕರುಣಿಸೆನಲು ; ಚತುರಾನನನು ಹಾಗೇ ಆಗಲಿ ಎಂದು ಹರಸಿ ಸರಸ್ವತೀ ಸಮೇತನಾಗಿ ಹೊರಟು ಸತ್ಯ ಲೋಕವನ್ನು ಕುರಿತು ತೆರಳಿದನು. ಅನಂತರದಲ್ಲಿ ಸರಸ್ವತಿಯಿಂದ ಬಿಡಲ್ಪಟ್ಟ ಕುಂಭ ಕರ್ಣನು--ದೇವತೆಗಳ ಮೋಸಕೃತ್ಯದಿಂದ ತನಗೆ ಈ ವಿಧವಾದ ಅವಿಚಾರಮತಿ ಯುಂಟಾಯಿತೆಂದು ತನ್ನ ಅಕೃತ್ಯವನ್ನು ನಿಂದಿಸಿ ವ್ಯಸನಪಟ್ಟನು. ಅನಂತರದಲ್ಲಿ ಸಹೋದರರಾದ ಆ ಮೂರು ಮಂದಿಯ ಬ್ರಹ್ಮದೇವನಿಂದ ವರಗಳನ್ನು ಪಡೆದು ಕೊಂಡು ಬಂದು ಇನ್ನು ಮೇಲೆ ನಾವು ಮಾಡತಕ್ಕೆ ಕಾರ್ಯವಾವುದು ಎಂದು ಯೋಚಿಸುತ್ತ ಶ್ಲೇಷ್ಠಾತಕವೆಂಬ ಮನದಲ್ಲಿರುತ್ತಿದ್ದರು." {{gap}}ಅನಂತರದಲ್ಲಿ ಸುಮಾಲಿಯು ತನ್ನ ಮಗಳ ಮಕ್ಕಳು ತಪಸ್ಸು ಮಾಡಿ ಬ್ರಹ್ಮ, ನಿಂದ ವರಗಳನ್ನು ಪಡೆದ ವರ್ತಮಾನವನ್ನು ಕೇಳಿ ಬಹಳವಾಗಿ ಸಂತೋಷಿಸಿದವನಾಗಿ ಮಹೋದರ ವಜ್ರದಂಷ್ಟ್ರ ಸುಪಾರ್ಶ್ವ ಮಾರೀಚ ಪ್ರಹಸ್ತ ಅಕಂಪ ಧೂಮ್ರಾಕ್ಷ<noinclude></noinclude> gsd7319dy0fo3yd0vekvborqm38lud0 ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೨೪ 104 66631 323930 204707 2026-06-02T00:34:40Z Ashwini Rai K 8475 /* Validated */ 323930 proofread-page text/x-wiki <noinclude><pagequality level="4" user="Ashwini Rai K" /></noinclude>ಅ XVII{{center|-334-}} ಕೊಲೆರಾ ಮುಂತಾದ ಕ್ಷೀಣಿಸತಕ್ಕ ವ್ಯಾಧಿಗಳಲ್ಲಿಯೂ, ರಕ್ತಪ್ರವಾಹದಿಂದಲೂ ನಾಡಿಯು ಬಲಹೀನವಾಗಿ ನೂಲಿನಂತೆ ಇರುವದು. ಮದ್ಯಪಾನಶೀಲನ ನಾಡಿಯು ಹೆಚ್ಚು ವೇಗವುಳ್ಳದ್ದಾಗಿರುತ್ತದೆ. ಸ್ವಸ್ಧನ ನಾಡಿಯ ಸಂಖ್ಯೆಯು ಮಧ್ಯರಾತ್ರಿ ಸಮಯ ಕಡಿಮೆಯಾಗಿ ಪ್ರಾತಃಕಾಲದಲ್ಲಿ ಹೆಚ್ಚುತ್ತದೆ. ಸಾಧಾರಣವಾಗಿ ಜ್ವರದಲ್ಲಿ ಮೈಕಾವು ಏರಿದ ಹಾಗೆ ನಾಡಿಯ ಸಂಖ್ಯೆಯು ಹೆಚ್ಚುವುದು, ಆದರೆ ಕೆಲವು ಜ್ವರದ ಆರಂಭದಲ್ಲಿ, ಜ್ವರ ಹೆಚ್ಚಾಗಿದ್ದರೂ, ನಾಡಿಯ ವೇಗವು ಸ್ವಾಭಾವಿಕಕ್ಕೆ ಹೆಚ್ಚು ಮಿಕ್ಕಿರುವುದಿಲ್ಲ ಮತ್ತು ಜ್ವರವು ಗುಣವಾಗುತ್ತಾ ಬರುವಾಗ್ಗೆ ನಾಡಿಯ ವೇಗವು ಅಶಕ್ತಿಯಿಂದ ಹೆಚ್ಚುತ್ತದೆ ಕೆಲವು ರೋಗಿಗಳಲ್ಲಿ ಜ್ವರ ಕಠಿಣವಾಗಿದ್ದಾಗ್ಗೆ ನಾಡಿಯ ಸಂಖ್ಯೆಯು ಸ್ವಾಭಾವಿಕ ಸ್ಥಿತಿನಿಂತಿರುವದುಂಟು. ಕೆಲವು ರೋಗಗಳಲ್ಲಿ ನಾಡಿಪೆಟ್ಟುಗಳ ಸಂಖ್ಯೆಯು 20ಕ್ಕೂ ಕಡಿಮೆಗೆ ಇಳಿಯ ಬಹುದು. ಹೃದಯದೊಳಗಣ ಮಾಂಸದ ನರಗಳು ಕ್ಷಯಿಸಿ ಕೆಡುವುದರಿಂದ, ನಾಡಿಯ ವೇಗವು ಬಹಳ ಕಡಿಮೆಯಾಗುತ್ತದೆ. ಕೆಲವು ಸಮಯದಲ್ಲಿ ಅಪಸ್ಮಾರ ರೋಗವುಳ್ಳವನ ನಾಡಿಯು ಬಹು ಮೆಲ್ಲಗೆ ಚಲಿಸುವದುಂಟು. ರೋಗಿಯು ಕೈಯನ್ನು ಅಡಿಗಿಟ್ಟು ಮಲಗಿ ಉಂಟಾಗುವ ಒತ್ತುವಿಕೆಯಿಂದ, ಅಥವಾ ತೊಡಿಗೆಯು ಬಿಗಿಯಾಗುವುದರಿಂದ, ಕೈನಾಡಿಯ ನಿಜಸ್ಥಿತಿಯು ವ್ಯಕ್ತವಾಗದೆ ಹೋಗುತ್ತದೆ. ಕೆಲವರ ಕೈಯ ಧಮನಿಯು ಸಾಧಾರಣವಾಗಿರುವುದಕ್ಕಿಂತ ಯಾವಾಗಲೂ ಸಪೂರವಾಗಿಯೇ ಇರುವದುಂಟು ಅನೇಕ ಸಾರಿ ಎಡಕೈಯ ಧಮನಿಯೂ ಬಲಗೈಯ ಧಮನಿಯೂ ಒಂದೇ ಪ್ರಮಾಣವಾಗಿ ದಪ್ಪವಿರುವದಿಲ್ಲ ಇವೇ ಮೊದಲಾದ ಕಾರಣಗಳಿಂದ ನಾಡಿಯು ಅಬಲಿಯಾಗಿ ಕಾಣಬಹುದು. ಧಮನಿಯ ಹೊದಿಕೆಯಲ್ಲಿ ಕಲ್ಲುಕಟ್ಟಿದ ಹಾಗೆ, ಅ‌ಥವಾ ತಿಪ್ಪಿದ ಹಾಗೆ, ಅಥವಾ ಎತ್ತರತಗ್ಗು, ಇರಬಹುದು ಅದರಿಂದ ನಾಡಿಯ ಚಲನೆ ವ್ಯತ್ಯಾಸವಾಗಬಹುದು. ಕೈನಾಡಿಪೆಟ್ಟುಗಳಲ್ಲಿ ಲೋಪಗಳು ಕಾಣುವಾಗ್ಗೆ, ಹೃದಯದಲ್ಲಿ ಆ ಲೋಪಗಳು ಕಾಣದೆ ಇರಬಹುದು. ಮೈ ಬಿಸಿಯು ಒಂದು ಡಿಗ್ರಿ ಹೆಚ್ಚಿದ್ದರೆ, ನಾಡಿಯ ಗತಿಯಲ್ಲಿ ಮಿನಿಟಿಗೆ ಸುಮಾರು 10 ಹೆಚ್ಚು ಕಾಣುವದು; ಮತ್ತು ಶ್ವಾಸಗಳಲ್ಲಿ 2 ಅಥವಾ 3 ಹೆಚ್ಚಿರುವದು. ರೋಗಗಳ ಲಕ್ಷಣವಾಗಿ ಎಶೇಷವಾದ ನಾಡಿಭೇದಗಳು ಇರುವ ಸಂಗತಿಯಲ್ಲಿ, ಆಯಾ ರೋಗದ ಲಕ್ಷಣಾದಿಗಳನ್ನು ವರ್ಣಿಸುವಾಗ ಸಂದರ್ಭಾನುಸಾರವಾಗಿ ಅವುಗಳನ್ನು ಸೂಚಿ ಸೋಣಾಗುವುದು. ೨೩. ಸಾಧಾರಣವಾಗಿ ಜ್ವರದ ಡಿಗ್ರಿಯೆಂತ ಕರೆಯಲ್ಪಡುವ ಉಷ್ಣ ಪ್ರದರ್ಶಕ ಕಡ್ಡಿ (ಧರ್ಮೋಮೀಟರ್)ಯನ್ನು ಉಪಯೋಗಿಸುವುದಾದರೆ ಅದನ್ನು ಬಾಯಿಯೊಳಗೆ, ಕಂಕುಳ ಮೈ ಬಿಸಿ ಏರಿಕೆ ಸಂಕಲ್ಲುಕಟ್ಟಿದಸನದೊಳಗೆ ಅಥವಾ ಹೆಂಗಸಿನ ಶರೀರದೊಳಗೆ, ಇಟ್ಟು ಪಾಶ್ಚಾತ್ಯರೀತಾ ನೋಡಬೇಕು ಬಾಯಿಯೊಳಗೆ ಇಡುವದಾದರೆ ನಾಲಿಗೆಯ ಅಡಿ<noinclude></noinclude> 9tig80shay0cir865pmnbg3wdc372h8 323931 323930 2026-06-02T00:36:15Z Ashwini Rai K 8475 323931 proofread-page text/x-wiki <noinclude><pagequality level="4" user="Ashwini Rai K" /></noinclude>{{Left|ಅ XVII}}{{center|-334-}} ಕೊಲೆರಾ ಮುಂತಾದ ಕ್ಷೀಣಿಸತಕ್ಕ ವ್ಯಾಧಿಗಳಲ್ಲಿಯೂ, ರಕ್ತಪ್ರವಾಹದಿಂದಲೂ ನಾಡಿಯು ಬಲಹೀನವಾಗಿ ನೂಲಿನಂತೆ ಇರುವದು. ಮದ್ಯಪಾನಶೀಲನ ನಾಡಿಯು ಹೆಚ್ಚು ವೇಗವುಳ್ಳದ್ದಾಗಿರುತ್ತದೆ. ಸ್ವಸ್ಧನ ನಾಡಿಯ ಸಂಖ್ಯೆಯು ಮಧ್ಯರಾತ್ರಿ ಸಮಯ ಕಡಿಮೆಯಾಗಿ ಪ್ರಾತಃಕಾಲದಲ್ಲಿ ಹೆಚ್ಚುತ್ತದೆ. ಸಾಧಾರಣವಾಗಿ ಜ್ವರದಲ್ಲಿ ಮೈಕಾವು ಏರಿದ ಹಾಗೆ ನಾಡಿಯ ಸಂಖ್ಯೆಯು ಹೆಚ್ಚುವುದು, ಆದರೆ ಕೆಲವು ಜ್ವರದ ಆರಂಭದಲ್ಲಿ, ಜ್ವರ ಹೆಚ್ಚಾಗಿದ್ದರೂ, ನಾಡಿಯ ವೇಗವು ಸ್ವಾಭಾವಿಕಕ್ಕೆ ಹೆಚ್ಚು ಮಿಕ್ಕಿರುವುದಿಲ್ಲ ಮತ್ತು ಜ್ವರವು ಗುಣವಾಗುತ್ತಾ ಬರುವಾಗ್ಗೆ ನಾಡಿಯ ವೇಗವು ಅಶಕ್ತಿಯಿಂದ ಹೆಚ್ಚುತ್ತದೆ ಕೆಲವು ರೋಗಿಗಳಲ್ಲಿ ಜ್ವರ ಕಠಿಣವಾಗಿದ್ದಾಗ್ಗೆ ನಾಡಿಯ ಸಂಖ್ಯೆಯು ಸ್ವಾಭಾವಿಕ ಸ್ಥಿತಿನಿಂತಿರುವದುಂಟು. ಕೆಲವು ರೋಗಗಳಲ್ಲಿ ನಾಡಿಪೆಟ್ಟುಗಳ ಸಂಖ್ಯೆಯು 20ಕ್ಕೂ ಕಡಿಮೆಗೆ ಇಳಿಯ ಬಹುದು. ಹೃದಯದೊಳಗಣ ಮಾಂಸದ ನರಗಳು ಕ್ಷಯಿಸಿ ಕೆಡುವುದರಿಂದ, ನಾಡಿಯ ವೇಗವು ಬಹಳ ಕಡಿಮೆಯಾಗುತ್ತದೆ. ಕೆಲವು ಸಮಯದಲ್ಲಿ ಅಪಸ್ಮಾರ ರೋಗವುಳ್ಳವನ ನಾಡಿಯು ಬಹು ಮೆಲ್ಲಗೆ ಚಲಿಸುವದುಂಟು. ರೋಗಿಯು ಕೈಯನ್ನು ಅಡಿಗಿಟ್ಟು ಮಲಗಿ ಉಂಟಾಗುವ ಒತ್ತುವಿಕೆಯಿಂದ, ಅಥವಾ ತೊಡಿಗೆಯು ಬಿಗಿಯಾಗುವುದರಿಂದ, ಕೈನಾಡಿಯ ನಿಜಸ್ಥಿತಿಯು ವ್ಯಕ್ತವಾಗದೆ ಹೋಗುತ್ತದೆ. ಕೆಲವರ ಕೈಯ ಧಮನಿಯು ಸಾಧಾರಣವಾಗಿರುವುದಕ್ಕಿಂತ ಯಾವಾಗಲೂ ಸಪೂರವಾಗಿಯೇ ಇರುವದುಂಟು ಅನೇಕ ಸಾರಿ ಎಡಕೈಯ ಧಮನಿಯೂ ಬಲಗೈಯ ಧಮನಿಯೂ ಒಂದೇ ಪ್ರಮಾಣವಾಗಿ ದಪ್ಪವಿರುವದಿಲ್ಲ ಇವೇ ಮೊದಲಾದ ಕಾರಣಗಳಿಂದ ನಾಡಿಯು ಅಬಲಿಯಾಗಿ ಕಾಣಬಹುದು. ಧಮನಿಯ ಹೊದಿಕೆಯಲ್ಲಿ ಕಲ್ಲುಕಟ್ಟಿದ ಹಾಗೆ, ಅ‌ಥವಾ ತಿಪ್ಪಿದ ಹಾಗೆ, ಅಥವಾ ಎತ್ತರತಗ್ಗು, ಇರಬಹುದು ಅದರಿಂದ ನಾಡಿಯ ಚಲನೆ ವ್ಯತ್ಯಾಸವಾಗಬಹುದು. ಕೈನಾಡಿಪೆಟ್ಟುಗಳಲ್ಲಿ ಲೋಪಗಳು ಕಾಣುವಾಗ್ಗೆ, ಹೃದಯದಲ್ಲಿ ಆ ಲೋಪಗಳು ಕಾಣದೆ ಇರಬಹುದು. ಮೈ ಬಿಸಿಯು ಒಂದು ಡಿಗ್ರಿ ಹೆಚ್ಚಿದ್ದರೆ, ನಾಡಿಯ ಗತಿಯಲ್ಲಿ ಮಿನಿಟಿಗೆ ಸುಮಾರು 10 ಹೆಚ್ಚು ಕಾಣುವದು; ಮತ್ತು ಶ್ವಾಸಗಳಲ್ಲಿ 2 ಅಥವಾ 3 ಹೆಚ್ಚಿರುವದು. ರೋಗಗಳ ಲಕ್ಷಣವಾಗಿ ಎಶೇಷವಾದ ನಾಡಿಭೇದಗಳು ಇರುವ ಸಂಗತಿಯಲ್ಲಿ, ಆಯಾ ರೋಗದ ಲಕ್ಷಣಾದಿಗಳನ್ನು ವರ್ಣಿಸುವಾಗ ಸಂದರ್ಭಾನುಸಾರವಾಗಿ ಅವುಗಳನ್ನು ಸೂಚಿ ಸೋಣಾಗುವುದು. 23. ಸಾಧಾರಣವಾಗಿ ಜ್ವರದ ಡಿಗ್ರಿಯೆಂತ ಕರೆಯಲ್ಪಡುವ ಉಷ್ಣ ಪ್ರದರ್ಶಕ ಕಡ್ಡಿ (ಧರ್ಮೋಮೀಟರ್)ಯನ್ನು ಉಪಯೋಗಿಸುವುದಾದರೆ ಅದನ್ನು ಬಾಯಿಯೊಳಗೆ, ಕಂಕುಳ ಮೈ ಬಿಸಿ ಏರಿಕೆ ಸಂಕಲ್ಲುಕಟ್ಟಿದಸನದೊಳಗೆ ಅಥವಾ ಹೆಂಗಸಿನ ಶರೀರದೊಳಗೆ, ಇಟ್ಟು ಪಾಶ್ಚಾತ್ಯರೀತಾ ನೋಡಬೇಕು ಬಾಯಿಯೊಳಗೆ ಇಡುವದಾದರೆ ನಾಲಿಗೆಯ ಅಡಿ<noinclude></noinclude> 5hqc237mjwpcm084c1kzbbnokq5ro8c ಪುಟ:ಶ್ರೀ ಕೃಷ್ಣ ಲೀಲೆ.djvu/೯ 104 68683 323984 169133 2026-06-02T05:13:22Z Hariprasad Shetty10 7490 323984 proofread-page text/x-wiki <noinclude><pagequality level="3" user="Ravi Mundkur" />{{center|4}}</noinclude>ಸಂವತ್ಸರ ಶಾವಣ ಬಹುಳ ನವಮಿ ವಿದ್ದಾಷ್ಠಮೀ ಮಂಗಳವಾರ ಮಧ್ಯರಾತ್ರಿ ರೋಹಿಣಿ ನಕ್ಷತ್ರದ ವೃಷಭಲಗ್ನದಲ್ಲಿ ಸಂಭವಿಸಿದ ಸರ್ವೋತ್ತಮವಾದ ಅಭಿಜಿನ್ಮುಹೂರ್ತದಲ್ಲಿ ವರಬ್ರಹ್ಮನಾದ ಶ್ರೀಮನ್ನಾರಾಯಣನು ಇಚ್ಛಾಮಾತ್ರವಾದ ಲೀಲಾಮಾನುಷ ಶರೀರವನ್ನು ಪರಿಗ್ರಹಿಸಿ,ಪರಮ ಪುಣ್ಯಾತ್ಮರಾದ ದೇವಕೀ ವಸುದೇವರಿಗೆ ಪುತ್ರನಾಗಿ ಮಧುರಾನಗರದ ಸೆರೆಮನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನವತರಿಸಿದನು. {{Right|* ತತ್ಕಾಲಗ್ರಹ ಸಂಪತ್ತಿ, *}} {| class="wikitable" |- | - - || ಗುರು || ಲಗ್ನ/ ಚಂದ್ರ, || ರಾಹು |- | - - || ರಾಶಿ ಚಕ್ರ || ರಾಶಿ ಚಕ್ರ || ಕುಜ/ ಬುಧ |- | - - || ರಾಶಿ ಚಕ್ರ || ರಾಶಿ ಚಕ್ರ || ರವಿ/ಶನಿ |- | ಕೇತು || - - || - - || ಶುಕ್ರ |} ಶ್ರೀಕೃಷ್ಣ ಪರಮಾತ್ಮನು ಅವತರಿಸಿದ ಕಾಲದಲ್ಲಿ ದಿಕ್ಕುಗಳು ನಿರ್ಮಲಗಳಾದುವು. ಸೂರ್ಯಚಂದ್ರಾದಿ ಗ್ರಹತಾರೆಗಳು ಶಾಂತವಾಗಿ ಪ್ರಕಾಶಿಸಿದುವು. ಗಗನಮಂಡಲವು ನಿಷ್ಕಳಂಕವಾಗಿ ಶೋಭಿಸಿತು. ಸಮುದ್ರಗಳು ಉತ್ತುಂಗ ತರಂಗ ರಂಜಿತವಾಗಿ ಮೆರೆದುವು. ನದೀನದಗಳು ನಿರ್ಮಲ ಜಲವಾಹಿನಿಗಳಾಗಿ ಕಂಗೊಳಿಸಿದುವು. ಸರೋವರಗಳಲ್ಲಿ ಕಮಲ ಪುಷ್ಪಗಳು ಅರುಣ ಕಾಂತಿಯಿಂದ ರಾಜಿಸಿದುವು, ಮಲಯಮಾರುತವು ಬೀಸಲಾರಂಭಿಸಿತು. ಫಲ-ಪುಷ್ಪಶೋಭಿತಮಾದ ತರುಲಾದಿಗಳು ಸುಗಂಧ ಬಂಧುರವಾಗಿ ವಿರಾಜಿಸಿದುವು. ದೇವತೆಗಳಾದಿಯಾಗಿ ಸಾಧು ಸಜ್ಜನರಿಗೆ ಆನಂದವುಕ್ಕಳಿಸಿತು. ಇಂತಹ ಪರಮಮಂಗಳಕರವಾದ ಸುಸಮಯದಲ್ಲಿ ಶ್ರೀಕೃಷ್ಣ ಪರಮಾತ್ಮನು ಪದ್ಮಪತ್ರಗಳಮೇಲೆ ಪೂರ್ವ ಶಿರಸ್ಕನಾಗಿಯೂ, ಶಂಖಚಕ್ರ ಗದಾಪದ್ಮಗಳನ್ನು ಧರಿಸಿದ ಚತುರ್ಭುಜ ಪ್ರಶಸ್ತನಾಗಿಯೂ, ಕಮಲಾಕ್ಷನಾಗಿಯೂ, ವೈಜಯಂತೀ ವನಮಾಲಾ ವಿರಾಜಿತನಾಗಿಯೂ, ಪೀತಾಂಬರಧಾರಿಯಾಗಿಯೂ, ಮೇಘಮಾಲಿಕೆ<noinclude></noinclude> e0wbl8ucvas5ldfw69d6h44fr1ntsaw 323985 323984 2026-06-02T05:13:40Z Hariprasad Shetty10 7490 323985 proofread-page text/x-wiki <noinclude><pagequality level="3" user="Ravi Mundkur" />{{center|4}}</noinclude>ಸಂವತ್ಸರ ಶಾವಣ ಬಹುಳ ನವಮಿ ವಿದ್ದಾಷ್ಠಮೀ ಮಂಗಳವಾರ ಮಧ್ಯರಾತ್ರಿ ರೋಹಿಣಿ ನಕ್ಷತ್ರದ ವೃಷಭಲಗ್ನದಲ್ಲಿ ಸಂಭವಿಸಿದ ಸರ್ವೋತ್ತಮವಾದ ಅಭಿಜಿನ್ಮುಹೂರ್ತದಲ್ಲಿ ವರಬ್ರಹ್ಮನಾದ ಶ್ರೀಮನ್ನಾರಾಯಣನು ಇಚ್ಛಾಮಾತ್ರವಾದ ಲೀಲಾಮಾನುಷ ಶರೀರವನ್ನು ಪರಿಗ್ರಹಿಸಿ,ಪರಮ ಪುಣ್ಯಾತ್ಮರಾದ ದೇವಕೀ ವಸುದೇವರಿಗೆ ಪುತ್ರನಾಗಿ ಮಧುರಾನಗರದ ಸೆರೆಮನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನವತರಿಸಿದನು. {{Right|* ತತ್ಕಾಲಗ್ರಹ ಸಂಪತ್ತಿ, *}} {| class="wikitable" |- | - - || ಗುರು || ಲಗ್ನ/ ಚಂದ್ರ, || ರಾಹು |- | - - || ರಾಶಿ ಚಕ್ರ || ರಾಶಿ ಚಕ್ರ || ಕುಜ/ ಬುಧ |- | - - || ರಾಶಿ ಚಕ್ರ || ರಾಶಿ ಚಕ್ರ || ರವಿ/ಶನಿ |- | ಕೇತು || - - || - - || ಶುಕ್ರ |} ಶ್ರೀಕೃಷ್ಣ ಪರಮಾತ್ಮನು ಅವತರಿಸಿದ ಕಾಲದಲ್ಲಿ ದಿಕ್ಕುಗಳು ನಿರ್ಮಲಗಳಾದುವು. ಸೂರ್ಯಚಂದ್ರಾದಿ ಗ್ರಹತಾರೆಗಳು ಶಾಂತವಾಗಿ ಪ್ರಕಾಶಿಸಿದುವು. ಗಗನಮಂಡಲವು ನಿಷ್ಕಳಂಕವಾಗಿ ಶೋಭಿಸಿತು. ಸಮುದ್ರಗಳು ಉತ್ತುಂಗ ತರಂಗ ರಂಜಿತವಾಗಿ ಮೆರೆದುವು. ನದೀನದಗಳು ನಿರ್ಮಲ ಜಲವಾಹಿನಿಗಳಾಗಿ ಕಂಗೊಳಿಸಿದುವು. ಸರೋವರಗಳಲ್ಲಿ ಕಮಲ ಪುಷ್ಪಗಳು ಅರುಣ ಕಾಂತಿಯಿಂದ ರಾಜಿಸಿದುವು, ಮಲಯಮಾರುತವು ಬೀಸಲಾರಂಭಿಸಿತು. ಫಲ-ಪುಷ್ಪಶೋಭಿತಮಾದ ತರುಲಾದಿಗಳು ಸುಗಂಧ ಬಂಧುರವಾಗಿ ವಿರಾಜಿಸಿದುವು. ದೇವತೆಗಳಾದಿಯಾಗಿ ಸಾಧು ಸಜ್ಜನರಿಗೆ ಆನಂದವುಕ್ಕಳಿಸಿತು. ಇಂತಹ ಪರಮಮಂಗಳಕರವಾದ ಸುಸಮಯದಲ್ಲಿ ಶ್ರೀಕೃಷ್ಣ ಪರಮಾತ್ಮನು ಪದ್ಮಪತ್ರಗಳಮೇಲೆ ಪೂರ್ವ ಶಿರಸ್ಕನಾಗಿಯೂ, ಶಂಖಚಕ್ರ ಗದಾಪದ್ಮಗಳನ್ನು ಧರಿಸಿದ ಚತುರ್ಭುಜ ಪ್ರಶಸ್ತನಾಗಿಯೂ, ಕಮಲಾಕ್ಷನಾಗಿಯೂ, ವೈಜಯಂತೀ ವನಮಾಲಾ ವಿರಾಜಿತನಾಗಿಯೂ, ಪೀತಾಂಬರಧಾರಿಯಾಗಿಯೂ, ಮೇಘಮಾಲಿಕೆ<noinclude></noinclude> itvqh3pitu1pkoxx3tl9e2b9lzeqsb7 323986 323985 2026-06-02T05:13:57Z Hariprasad Shetty10 7490 323986 proofread-page text/x-wiki <noinclude><pagequality level="3" user="Ravi Mundkur" />{{center|4}}</noinclude>ಸಂವತ್ಸರ ಶಾವಣ ಬಹುಳ ನವಮಿ ವಿದ್ದಾಷ್ಠಮೀ ಮಂಗಳವಾರ ಮಧ್ಯರಾತ್ರಿ ರೋಹಿಣಿ ನಕ್ಷತ್ರದ ವೃಷಭಲಗ್ನದಲ್ಲಿ ಸಂಭವಿಸಿದ ಸರ್ವೋತ್ತಮವಾದ ಅಭಿಜಿನ್ಮುಹೂರ್ತದಲ್ಲಿ ವರಬ್ರಹ್ಮನಾದ ಶ್ರೀಮನ್ನಾರಾಯಣನು ಇಚ್ಛಾಮಾತ್ರವಾದ ಲೀಲಾಮಾನುಷ ಶರೀರವನ್ನು ಪರಿಗ್ರಹಿಸಿ,ಪರಮ ಪುಣ್ಯಾತ್ಮರಾದ ದೇವಕೀ ವಸುದೇವರಿಗೆ ಪುತ್ರನಾಗಿ ಮಧುರಾನಗರದ ಸೆರೆಮನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನವತರಿಸಿದನು. {{Right|*ತತ್ಕಾಲಗ್ರಹ ಸಂಪತ್ತಿ.*}} {| class="wikitable" |- | - - || ಗುರು || ಲಗ್ನ/ ಚಂದ್ರ, || ರಾಹು |- | - - || ರಾಶಿ ಚಕ್ರ || ರಾಶಿ ಚಕ್ರ || ಕುಜ/ ಬುಧ |- | - - || ರಾಶಿ ಚಕ್ರ || ರಾಶಿ ಚಕ್ರ || ರವಿ/ಶನಿ |- | ಕೇತು || - - || - - || ಶುಕ್ರ |} ಶ್ರೀಕೃಷ್ಣ ಪರಮಾತ್ಮನು ಅವತರಿಸಿದ ಕಾಲದಲ್ಲಿ ದಿಕ್ಕುಗಳು ನಿರ್ಮಲಗಳಾದುವು. ಸೂರ್ಯಚಂದ್ರಾದಿ ಗ್ರಹತಾರೆಗಳು ಶಾಂತವಾಗಿ ಪ್ರಕಾಶಿಸಿದುವು. ಗಗನಮಂಡಲವು ನಿಷ್ಕಳಂಕವಾಗಿ ಶೋಭಿಸಿತು. ಸಮುದ್ರಗಳು ಉತ್ತುಂಗ ತರಂಗ ರಂಜಿತವಾಗಿ ಮೆರೆದುವು. ನದೀನದಗಳು ನಿರ್ಮಲ ಜಲವಾಹಿನಿಗಳಾಗಿ ಕಂಗೊಳಿಸಿದುವು. ಸರೋವರಗಳಲ್ಲಿ ಕಮಲ ಪುಷ್ಪಗಳು ಅರುಣ ಕಾಂತಿಯಿಂದ ರಾಜಿಸಿದುವು, ಮಲಯಮಾರುತವು ಬೀಸಲಾರಂಭಿಸಿತು. ಫಲ-ಪುಷ್ಪಶೋಭಿತಮಾದ ತರುಲಾದಿಗಳು ಸುಗಂಧ ಬಂಧುರವಾಗಿ ವಿರಾಜಿಸಿದುವು. ದೇವತೆಗಳಾದಿಯಾಗಿ ಸಾಧು ಸಜ್ಜನರಿಗೆ ಆನಂದವುಕ್ಕಳಿಸಿತು. ಇಂತಹ ಪರಮಮಂಗಳಕರವಾದ ಸುಸಮಯದಲ್ಲಿ ಶ್ರೀಕೃಷ್ಣ ಪರಮಾತ್ಮನು ಪದ್ಮಪತ್ರಗಳಮೇಲೆ ಪೂರ್ವ ಶಿರಸ್ಕನಾಗಿಯೂ, ಶಂಖಚಕ್ರ ಗದಾಪದ್ಮಗಳನ್ನು ಧರಿಸಿದ ಚತುರ್ಭುಜ ಪ್ರಶಸ್ತನಾಗಿಯೂ, ಕಮಲಾಕ್ಷನಾಗಿಯೂ, ವೈಜಯಂತೀ ವನಮಾಲಾ ವಿರಾಜಿತನಾಗಿಯೂ, ಪೀತಾಂಬರಧಾರಿಯಾಗಿಯೂ, ಮೇಘಮಾಲಿಕೆ<noinclude></noinclude> hw02ooyx9cybbb47n95kmzb8m0qc79i 323987 323986 2026-06-02T05:14:20Z Hariprasad Shetty10 7490 323987 proofread-page text/x-wiki <noinclude><pagequality level="3" user="Ravi Mundkur" />{{center|4}}</noinclude>ಸಂವತ್ಸರ ಶಾವಣ ಬಹುಳ ನವಮಿ ವಿದ್ದಾಷ್ಠಮೀ ಮಂಗಳವಾರ ಮಧ್ಯರಾತ್ರಿ ರೋಹಿಣಿ ನಕ್ಷತ್ರದ ವೃಷಭಲಗ್ನದಲ್ಲಿ ಸಂಭವಿಸಿದ ಸರ್ವೋತ್ತಮವಾದ ಅಭಿಜಿನ್ಮುಹೂರ್ತದಲ್ಲಿ ವರಬ್ರಹ್ಮನಾದ ಶ್ರೀಮನ್ನಾರಾಯಣನು ಇಚ್ಛಾಮಾತ್ರವಾದ ಲೀಲಾಮಾನುಷ ಶರೀರವನ್ನು ಪರಿಗ್ರಹಿಸಿ,ಪರಮ ಪುಣ್ಯಾತ್ಮರಾದ ದೇವಕೀ ವಸುದೇವರಿಗೆ ಪುತ್ರನಾಗಿ ಮಧುರಾನಗರದ ಸೆರೆಮನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನವತರಿಸಿದನು. {{center|*ತತ್ಕಾಲಗ್ರಹ ಸಂಪತ್ತಿ.*}} {| class="wikitable" |- | - - || ಗುರು || ಲಗ್ನ/ ಚಂದ್ರ, || ರಾಹು |- | - - || ರಾಶಿ ಚಕ್ರ || ರಾಶಿ ಚಕ್ರ || ಕುಜ/ ಬುಧ |- | - - || ರಾಶಿ ಚಕ್ರ || ರಾಶಿ ಚಕ್ರ || ರವಿ/ಶನಿ |- | ಕೇತು || - - || - - || ಶುಕ್ರ |} ಶ್ರೀಕೃಷ್ಣ ಪರಮಾತ್ಮನು ಅವತರಿಸಿದ ಕಾಲದಲ್ಲಿ ದಿಕ್ಕುಗಳು ನಿರ್ಮಲಗಳಾದುವು. ಸೂರ್ಯಚಂದ್ರಾದಿ ಗ್ರಹತಾರೆಗಳು ಶಾಂತವಾಗಿ ಪ್ರಕಾಶಿಸಿದುವು. ಗಗನಮಂಡಲವು ನಿಷ್ಕಳಂಕವಾಗಿ ಶೋಭಿಸಿತು. ಸಮುದ್ರಗಳು ಉತ್ತುಂಗ ತರಂಗ ರಂಜಿತವಾಗಿ ಮೆರೆದುವು. ನದೀನದಗಳು ನಿರ್ಮಲ ಜಲವಾಹಿನಿಗಳಾಗಿ ಕಂಗೊಳಿಸಿದುವು. ಸರೋವರಗಳಲ್ಲಿ ಕಮಲ ಪುಷ್ಪಗಳು ಅರುಣ ಕಾಂತಿಯಿಂದ ರಾಜಿಸಿದುವು, ಮಲಯಮಾರುತವು ಬೀಸಲಾರಂಭಿಸಿತು. ಫಲ-ಪುಷ್ಪಶೋಭಿತಮಾದ ತರುಲಾದಿಗಳು ಸುಗಂಧ ಬಂಧುರವಾಗಿ ವಿರಾಜಿಸಿದುವು. ದೇವತೆಗಳಾದಿಯಾಗಿ ಸಾಧು ಸಜ್ಜನರಿಗೆ ಆನಂದವುಕ್ಕಳಿಸಿತು. ಇಂತಹ ಪರಮಮಂಗಳಕರವಾದ ಸುಸಮಯದಲ್ಲಿ ಶ್ರೀಕೃಷ್ಣ ಪರಮಾತ್ಮನು ಪದ್ಮಪತ್ರಗಳಮೇಲೆ ಪೂರ್ವ ಶಿರಸ್ಕನಾಗಿಯೂ, ಶಂಖಚಕ್ರ ಗದಾಪದ್ಮಗಳನ್ನು ಧರಿಸಿದ ಚತುರ್ಭುಜ ಪ್ರಶಸ್ತನಾಗಿಯೂ, ಕಮಲಾಕ್ಷನಾಗಿಯೂ, ವೈಜಯಂತೀ ವನಮಾಲಾ ವಿರಾಜಿತನಾಗಿಯೂ, ಪೀತಾಂಬರಧಾರಿಯಾಗಿಯೂ, ಮೇಘಮಾಲಿಕೆ<noinclude></noinclude> j8645ve020wtd6plyn12q5gy649083a 323988 323987 2026-06-02T05:14:42Z Hariprasad Shetty10 7490 323988 proofread-page text/x-wiki <noinclude><pagequality level="3" user="Ravi Mundkur" />{{center|4}}</noinclude>ಸಂವತ್ಸರ ಶಾವಣ ಬಹುಳ ನವಮಿ ವಿದ್ದಾಷ್ಠಮೀ ಮಂಗಳವಾರ ಮಧ್ಯರಾತ್ರಿ ರೋಹಿಣಿ ನಕ್ಷತ್ರದ ವೃಷಭಲಗ್ನದಲ್ಲಿ ಸಂಭವಿಸಿದ ಸರ್ವೋತ್ತಮವಾದ ಅಭಿಜಿನ್ಮುಹೂರ್ತದಲ್ಲಿ ವರಬ್ರಹ್ಮನಾದ ಶ್ರೀಮನ್ನಾರಾಯಣನು ಇಚ್ಛಾಮಾತ್ರವಾದ ಲೀಲಾಮಾನುಷ ಶರೀರವನ್ನು ಪರಿಗ್ರಹಿಸಿ,ಪರಮ ಪುಣ್ಯಾತ್ಮರಾದ ದೇವಕೀ ವಸುದೇವರಿಗೆ ಪುತ್ರನಾಗಿ ಮಧುರಾನಗರದ ಸೆರೆಮನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನವತರಿಸಿದನು.<br /> {{center|*ತತ್ಕಾಲಗ್ರಹ ಸಂಪತ್ತಿ.*}} {| class="wikitable" |- | - - || ಗುರು || ಲಗ್ನ/ ಚಂದ್ರ, || ರಾಹು |- | - - || ರಾಶಿ ಚಕ್ರ || ರಾಶಿ ಚಕ್ರ || ಕುಜ/ ಬುಧ |- | - - || ರಾಶಿ ಚಕ್ರ || ರಾಶಿ ಚಕ್ರ || ರವಿ/ಶನಿ |- | ಕೇತು || - - || - - || ಶುಕ್ರ |} ಶ್ರೀಕೃಷ್ಣ ಪರಮಾತ್ಮನು ಅವತರಿಸಿದ ಕಾಲದಲ್ಲಿ ದಿಕ್ಕುಗಳು ನಿರ್ಮಲಗಳಾದುವು. ಸೂರ್ಯಚಂದ್ರಾದಿ ಗ್ರಹತಾರೆಗಳು ಶಾಂತವಾಗಿ ಪ್ರಕಾಶಿಸಿದುವು. ಗಗನಮಂಡಲವು ನಿಷ್ಕಳಂಕವಾಗಿ ಶೋಭಿಸಿತು. ಸಮುದ್ರಗಳು ಉತ್ತುಂಗ ತರಂಗ ರಂಜಿತವಾಗಿ ಮೆರೆದುವು. ನದೀನದಗಳು ನಿರ್ಮಲ ಜಲವಾಹಿನಿಗಳಾಗಿ ಕಂಗೊಳಿಸಿದುವು. ಸರೋವರಗಳಲ್ಲಿ ಕಮಲ ಪುಷ್ಪಗಳು ಅರುಣ ಕಾಂತಿಯಿಂದ ರಾಜಿಸಿದುವು, ಮಲಯಮಾರುತವು ಬೀಸಲಾರಂಭಿಸಿತು. ಫಲ-ಪುಷ್ಪಶೋಭಿತಮಾದ ತರುಲಾದಿಗಳು ಸುಗಂಧ ಬಂಧುರವಾಗಿ ವಿರಾಜಿಸಿದುವು. ದೇವತೆಗಳಾದಿಯಾಗಿ ಸಾಧು ಸಜ್ಜನರಿಗೆ ಆನಂದವುಕ್ಕಳಿಸಿತು. ಇಂತಹ ಪರಮಮಂಗಳಕರವಾದ ಸುಸಮಯದಲ್ಲಿ ಶ್ರೀಕೃಷ್ಣ ಪರಮಾತ್ಮನು ಪದ್ಮಪತ್ರಗಳಮೇಲೆ ಪೂರ್ವ ಶಿರಸ್ಕನಾಗಿಯೂ, ಶಂಖಚಕ್ರ ಗದಾಪದ್ಮಗಳನ್ನು ಧರಿಸಿದ ಚತುರ್ಭುಜ ಪ್ರಶಸ್ತನಾಗಿಯೂ, ಕಮಲಾಕ್ಷನಾಗಿಯೂ, ವೈಜಯಂತೀ ವನಮಾಲಾ ವಿರಾಜಿತನಾಗಿಯೂ, ಪೀತಾಂಬರಧಾರಿಯಾಗಿಯೂ, ಮೇಘಮಾಲಿಕೆ<noinclude></noinclude> qc2dh97ee8wgogzrgbmx1ioayhz57f4 323989 323988 2026-06-02T05:15:11Z Hariprasad Shetty10 7490 323989 proofread-page text/x-wiki <noinclude><pagequality level="3" user="Ravi Mundkur" />{{center|4}}</noinclude>ಸಂವತ್ಸರ ಶಾವಣ ಬಹುಳ ನವಮಿ ವಿದ್ದಾಷ್ಠಮೀ ಮಂಗಳವಾರ ಮಧ್ಯರಾತ್ರಿ ರೋಹಿಣಿ ನಕ್ಷತ್ರದ ವೃಷಭಲಗ್ನದಲ್ಲಿ ಸಂಭವಿಸಿದ ಸರ್ವೋತ್ತಮವಾದ ಅಭಿಜಿನ್ಮುಹೂರ್ತದಲ್ಲಿ ವರಬ್ರಹ್ಮನಾದ ಶ್ರೀಮನ್ನಾರಾಯಣನು ಇಚ್ಛಾಮಾತ್ರವಾದ ಲೀಲಾಮಾನುಷ ಶರೀರವನ್ನು ಪರಿಗ್ರಹಿಸಿ,ಪರಮ ಪುಣ್ಯಾತ್ಮರಾದ ದೇವಕೀ ವಸುದೇವರಿಗೆ ಪುತ್ರನಾಗಿ ಮಧುರಾನಗರದ ಸೆರೆಮನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನವತರಿಸಿದನು.<br /> {{center|*ತತ್ಕಾಲಗ್ರಹ ಸಂಪತ್ತಿ.*}}<br /> {| class="wikitable" |- | - - || ಗುರು || ಲಗ್ನ/ ಚಂದ್ರ, || ರಾಹು |- | - - || ರಾಶಿ ಚಕ್ರ || ರಾಶಿ ಚಕ್ರ || ಕುಜ/ ಬುಧ |- | - - || ರಾಶಿ ಚಕ್ರ || ರಾಶಿ ಚಕ್ರ || ರವಿ/ಶನಿ |- | ಕೇತು || - - || - - || ಶುಕ್ರ |} ಶ್ರೀಕೃಷ್ಣ ಪರಮಾತ್ಮನು ಅವತರಿಸಿದ ಕಾಲದಲ್ಲಿ ದಿಕ್ಕುಗಳು ನಿರ್ಮಲಗಳಾದುವು. ಸೂರ್ಯಚಂದ್ರಾದಿ ಗ್ರಹತಾರೆಗಳು ಶಾಂತವಾಗಿ ಪ್ರಕಾಶಿಸಿದುವು. ಗಗನಮಂಡಲವು ನಿಷ್ಕಳಂಕವಾಗಿ ಶೋಭಿಸಿತು. ಸಮುದ್ರಗಳು ಉತ್ತುಂಗ ತರಂಗ ರಂಜಿತವಾಗಿ ಮೆರೆದುವು. ನದೀನದಗಳು ನಿರ್ಮಲ ಜಲವಾಹಿನಿಗಳಾಗಿ ಕಂಗೊಳಿಸಿದುವು. ಸರೋವರಗಳಲ್ಲಿ ಕಮಲ ಪುಷ್ಪಗಳು ಅರುಣ ಕಾಂತಿಯಿಂದ ರಾಜಿಸಿದುವು, ಮಲಯಮಾರುತವು ಬೀಸಲಾರಂಭಿಸಿತು. ಫಲ-ಪುಷ್ಪಶೋಭಿತಮಾದ ತರುಲಾದಿಗಳು ಸುಗಂಧ ಬಂಧುರವಾಗಿ ವಿರಾಜಿಸಿದುವು. ದೇವತೆಗಳಾದಿಯಾಗಿ ಸಾಧು ಸಜ್ಜನರಿಗೆ ಆನಂದವುಕ್ಕಳಿಸಿತು. ಇಂತಹ ಪರಮಮಂಗಳಕರವಾದ ಸುಸಮಯದಲ್ಲಿ ಶ್ರೀಕೃಷ್ಣ ಪರಮಾತ್ಮನು ಪದ್ಮಪತ್ರಗಳಮೇಲೆ ಪೂರ್ವ ಶಿರಸ್ಕನಾಗಿಯೂ, ಶಂಖಚಕ್ರ ಗದಾಪದ್ಮಗಳನ್ನು ಧರಿಸಿದ ಚತುರ್ಭುಜ ಪ್ರಶಸ್ತನಾಗಿಯೂ, ಕಮಲಾಕ್ಷನಾಗಿಯೂ, ವೈಜಯಂತೀ ವನಮಾಲಾ ವಿರಾಜಿತನಾಗಿಯೂ, ಪೀತಾಂಬರಧಾರಿಯಾಗಿಯೂ, ಮೇಘಮಾಲಿಕೆ<noinclude></noinclude> q8q7b8jfkfudzc5gjg94r7mg1cz1mes 323990 323989 2026-06-02T05:15:34Z Hariprasad Shetty10 7490 323990 proofread-page text/x-wiki <noinclude><pagequality level="3" user="Ravi Mundkur" />{{center|4}}</noinclude>ಸಂವತ್ಸರ ಶಾವಣ ಬಹುಳ ನವಮಿ ವಿದ್ದಾಷ್ಠಮೀ ಮಂಗಳವಾರ ಮಧ್ಯರಾತ್ರಿ ರೋಹಿಣಿ ನಕ್ಷತ್ರದ ವೃಷಭಲಗ್ನದಲ್ಲಿ ಸಂಭವಿಸಿದ ಸರ್ವೋತ್ತಮವಾದ ಅಭಿಜಿನ್ಮುಹೂರ್ತದಲ್ಲಿ ವರಬ್ರಹ್ಮನಾದ ಶ್ರೀಮನ್ನಾರಾಯಣನು ಇಚ್ಛಾಮಾತ್ರವಾದ ಲೀಲಾಮಾನುಷ ಶರೀರವನ್ನು ಪರಿಗ್ರಹಿಸಿ,ಪರಮ ಪುಣ್ಯಾತ್ಮರಾದ ದೇವಕೀ ವಸುದೇವರಿಗೆ ಪುತ್ರನಾಗಿ ಮಧುರಾನಗರದ ಸೆರೆಮನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನವತರಿಸಿದನು.<br /> {{center|*ತತ್ಕಾಲಗ್ರಹ ಸಂಪತ್ತಿ.*}}<br /> {| class="wikitable" |- | - - || ಗುರು || ಲಗ್ನ/ ಚಂದ್ರ, || ರಾಹು |- | - - || ರಾಶಿ ಚಕ್ರ || ರಾಶಿ ಚಕ್ರ || ಕುಜ/ ಬುಧ |- | - - || ರಾಶಿ ಚಕ್ರ || ರಾಶಿ ಚಕ್ರ || ರವಿ/ಶನಿ |- | ಕೇತು || - - || - - || ಶುಕ್ರ |} {{gap}}ಶ್ರೀಕೃಷ್ಣ ಪರಮಾತ್ಮನು ಅವತರಿಸಿದ ಕಾಲದಲ್ಲಿ ದಿಕ್ಕುಗಳು ನಿರ್ಮಲಗಳಾದುವು. ಸೂರ್ಯಚಂದ್ರಾದಿ ಗ್ರಹತಾರೆಗಳು ಶಾಂತವಾಗಿ ಪ್ರಕಾಶಿಸಿದುವು. ಗಗನಮಂಡಲವು ನಿಷ್ಕಳಂಕವಾಗಿ ಶೋಭಿಸಿತು. ಸಮುದ್ರಗಳು ಉತ್ತುಂಗ ತರಂಗ ರಂಜಿತವಾಗಿ ಮೆರೆದುವು. ನದೀನದಗಳು ನಿರ್ಮಲ ಜಲವಾಹಿನಿಗಳಾಗಿ ಕಂಗೊಳಿಸಿದುವು. ಸರೋವರಗಳಲ್ಲಿ ಕಮಲ ಪುಷ್ಪಗಳು ಅರುಣ ಕಾಂತಿಯಿಂದ ರಾಜಿಸಿದುವು, ಮಲಯಮಾರುತವು ಬೀಸಲಾರಂಭಿಸಿತು. ಫಲ-ಪುಷ್ಪಶೋಭಿತಮಾದ ತರುಲಾದಿಗಳು ಸುಗಂಧ ಬಂಧುರವಾಗಿ ವಿರಾಜಿಸಿದುವು. ದೇವತೆಗಳಾದಿಯಾಗಿ ಸಾಧು ಸಜ್ಜನರಿಗೆ ಆನಂದವುಕ್ಕಳಿಸಿತು. ಇಂತಹ ಪರಮಮಂಗಳಕರವಾದ ಸುಸಮಯದಲ್ಲಿ ಶ್ರೀಕೃಷ್ಣ ಪರಮಾತ್ಮನು ಪದ್ಮಪತ್ರಗಳಮೇಲೆ ಪೂರ್ವ ಶಿರಸ್ಕನಾಗಿಯೂ, ಶಂಖಚಕ್ರ ಗದಾಪದ್ಮಗಳನ್ನು ಧರಿಸಿದ ಚತುರ್ಭುಜ ಪ್ರಶಸ್ತನಾಗಿಯೂ, ಕಮಲಾಕ್ಷನಾಗಿಯೂ, ವೈಜಯಂತೀ ವನಮಾಲಾ ವಿರಾಜಿತನಾಗಿಯೂ, ಪೀತಾಂಬರಧಾರಿಯಾಗಿಯೂ, ಮೇಘಮಾಲಿಕೆ<noinclude></noinclude> iqpjpcp244a0bdg8qzq3o1o6wtme7y4 323991 323990 2026-06-02T05:17:12Z Hariprasad Shetty10 7490 /* Validated */ 323991 proofread-page text/x-wiki <noinclude><pagequality level="4" user="Hariprasad Shetty10" />{{center|4}}</noinclude>ಸಂವತ್ಸರ ಶಾವಣ ಬಹುಳ ನವಮಿ ವಿದ್ದಾಷ್ಠಮೀ ಮಂಗಳವಾರ ಮಧ್ಯರಾತ್ರಿ ರೋಹಿಣಿ ನಕ್ಷತ್ರದ ವೃಷಭಲಗ್ನದಲ್ಲಿ ಸಂಭವಿಸಿದ ಸರ್ವೋತ್ತಮವಾದ ಅಭಿಜಿನ್ಮುಹೂರ್ತದಲ್ಲಿ ವರಬ್ರಹ್ಮನಾದ ಶ್ರೀಮನ್ನಾರಾಯಣನು ಇಚ್ಛಾಮಾತ್ರವಾದ ಲೀಲಾಮಾನುಷ ಶರೀರವನ್ನು ಪರಿಗ್ರಹಿಸಿ,ಪರಮ ಪುಣ್ಯಾತ್ಮರಾದ ದೇವಕೀ ವಸುದೇವರಿಗೆ ಪುತ್ರನಾಗಿ ಮಧುರಾನಗರದ ಸೆರೆಮನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನವತರಿಸಿದನು.<br /> {{center|*ತತ್ಕಾಲಗ್ರಹ ಸಂಪತ್ತಿ.*}}<br /> {| class="wikitable" |- | - - || ಗುರು || ಲಗ್ನ/ ಚಂದ್ರ, || ರಾಹು |- | - - || ರಾಶಿ ಚಕ್ರ || ರಾಶಿ ಚಕ್ರ || ಕುಜ/ ಬುಧ |- | - - || ರಾಶಿ ಚಕ್ರ || ರಾಶಿ ಚಕ್ರ || ರವಿ/ಶನಿ |- | ಕೇತು || - - || - - || ಶುಕ್ರ |} {{gap}}ಶ್ರೀಕೃಷ್ಣ ಪರಮಾತ್ಮನು ಅವತರಿಸಿದ ಕಾಲದಲ್ಲಿ ದಿಕ್ಕುಗಳು ನಿರ್ಮಲಗಳಾದುವು. ಸೂರ್ಯಚಂದ್ರಾದಿ ಗ್ರಹತಾರೆಗಳು ಶಾಂತವಾಗಿ ಪ್ರಕಾಶಿಸಿದುವು. ಗಗನಮಂಡಲವು ನಿಷ್ಕಳಂಕವಾಗಿ ಶೋಭಿಸಿತು. ಸಮುದ್ರಗಳು ಉತ್ತುಂಗ ತರಂಗ ರಂಜಿತವಾಗಿ ಮೆರೆದುವು. ನದೀನದಗಳು ನಿರ್ಮಲ ಜಲವಾಹಿನಿಗಳಾಗಿ ಕಂಗೊಳಿಸಿದುವು. ಸರೋವರಗಳಲ್ಲಿ ಕಮಲ ಪುಷ್ಪಗಳು ಅರುಣ ಕಾಂತಿಯಿಂದ ರಾಜಿಸಿದುವು, ಮಲಯಮಾರುತವು ಬೀಸಲಾರಂಭಿಸಿತು. ಫಲ-ಪುಷ್ಪಶೋಭಿತಮಾದ ತರುಲಾದಿಗಳು ಸುಗಂಧ ಬಂಧುರವಾಗಿ ವಿರಾಜಿಸಿದುವು. ದೇವತೆಗಳಾದಿಯಾಗಿ ಸಾಧು ಸಜ್ಜನರಿಗೆ ಆನಂದವುಕ್ಕಳಿಸಿತು. ಇಂತಹ ಪರಮಮಂಗಳಕರವಾದ ಸುಸಮಯದಲ್ಲಿ ಶ್ರೀಕೃಷ್ಣ ಪರಮಾತ್ಮನು ಪದ್ಮಪತ್ರಗಳಮೇಲೆ ಪೂರ್ವ ಶಿರಸ್ಕನಾಗಿಯೂ, ಶಂಖಚಕ್ರ ಗದಾಪದ್ಮಗಳನ್ನು ಧರಿಸಿದ ಚತುರ್ಭುಜ ಪ್ರಶಸ್ತನಾಗಿಯೂ, ಕಮಲಾಕ್ಷನಾಗಿಯೂ, ವೈಜಯಂತೀ ವನಮಾಲಾ ವಿರಾಜಿತನಾಗಿಯೂ, ಪೀತಾಂಬರಧಾರಿಯಾಗಿಯೂ, ಮೇಘಮಾಲಿಕೆ<noinclude></noinclude> c0fb58qqhjrmf4hp50m8oat1krzc77m ಪುಟ:ಶ್ರೀ ಕೃಷ್ಣ ಲೀಲೆ.djvu/೧೪೦ 104 68814 323995 322598 2026-06-02T05:52:36Z Hariprasad Shetty10 7490 323995 proofread-page text/x-wiki <noinclude><pagequality level="3" user="Pragathi. BH" />{{rh|left=೧೨೪|center=ಕೃಷ್ಣ ಲೀಲೆ|right=}}</noinclude>ಪರಬ್ರಹ್ಮಮೂರ್ತಿಯಾದ ತನ್ನ ಅದ್ರಾಕೃತ ದಿವ್ಯಸಂದರ್ಶನವನ್ನು ಮಾಡಬೇಕೆಂದಪೇಕ್ಷಿಸಿದ ಗೋಪಿಯರ ವಸ್ತ್ರಗಳೆಂಬ ಅಜ್ಞಾನಾವರಣಗಳನ್ನು ಅಪಹರಿಸಿ, ಅವರಿಗೆ ತನ್ನ ಅಮಾನುಷವಾದ ಪರಂಜ್ಯೋತಿ ಸ್ವರೂಪಸಂದರ್ಶನವನ್ನು ಅನುಗ್ರಹಿಸಿ ತನ್ಮೂಲಕವಾಗಿ ಶ್ರೀರಾಮಾವತಾರದಲ್ಲಿ ತಾನು ಮಾಡಿದ್ದ ವಾಗ್ದಾನವನ್ನು ಸಫಲಗೊಳಿಸಿದನು. ಒಮ್ಮೆ ಅವರು ತಮ್ಮ ಪೂರ್ವಸ್ಮ್ರತಿಯುಂಟಾಗಿರುವರು. ಮತ್ತೊಮ್ಮೆ ಭಗವನ್ಮಾಯೆಗೆ ಸಿಲುಕಿ ಅದನ್ನು ಮರೆತು ಪರಿತಪಿಸುವರು. ಇಂತು ಬ್ರಹ್ಮರ್ಷಿಗಳಾದ ಗೋಪಿಯರ ಸ್ಥಿತಿಯೇ ಈ ರೀತಿಯಾಗಿರುವಲ್ಲಿ ಕೇವಲ ಆಹಾರನಿದ್ರಾದಿ ತುಚ್ಛಭೋಗಗಳಲ್ಲಿ ಮಗ್ನರಾಗಿರುವ ನರಪಶುಗಳಿಗೆ ದೈವಲೀಲೆಗಳು ಅರ್ಥವಾಗಬಲ್ಲವೆ! ಪಾಂಡುರೋಗಿಯ ಕಣ್ಗಳಿಗೆ ಪ್ರಪಂಚವೆಲ್ಲವೂ ಹಳದಿಯಾಗಿ ಕಾಣುವಂತೆ, ಕೇವಲ ಲೌಕಿಕ ಕ್ಷರ ಮತ್ರರಿಗೂ, ಧನಾಧಿಕಾರ ಮದಾಂಧರಾದ ಡಾಂಬಿಕರಿಗೂ, ಭ ಗವದ್ಗೀಲಾಸಗಳು ವಿಲಕ್ಷಣವಾಗಿ ಕಾಣುವುದರಲ್ಲಿ ಆಶ್ರವೇನು? ನಿದರ್ಶ ನಕ್ಕ ಕಂಸನೊಬ್ಬನೇ ಸಾಕಾಗಿರುವನು. ಈ ದುರಭಿಮಾನಿಯು ಐಕ್ಷ ರದಲ್ಲಿಯೂ, ಅಧಿಕಾರದಲ್ಲಿಯೂ, ಪ್ರತಾಪದಲ್ಲಿಯೂ, ತಾನೇ ಅಗ್ರ ಗಣ್ಯನೆಂತಲೂ, ತನಗೆ ಸಮಾನವಾದ ತಿಳಿವಳಿಕ ಯುಂಟಾದವರು, ಮತ್ತಾರೂ ಇಲ್ಲವೆಂತಲೂ ಕೊಬ್ಬಿರುವನು. ತನ್ನ ವಿನಾಶಕಾಲವನ್ನ ರಿಯದೆ, ಋಷಿಮುನಿಗಳನ4, ಬಚ್ಚವೇತ್ತರಾದ ಸಾಧುಜನರನ್ನೂ ಸಾಧೀಮಣಿಯರನ ಬಗೆಬಗೆಯ ಸುತ್ತಲೂ, ದ್ವೇಷಿಸು ತಲೂ ಉನ್ಮತ್ತನಾಗಿರುವನು. ತನ್ನ ತಂದೆಯನ್ನೆ ಸೆರೆಯಲ್ಲಿ ಬಂಧಿ ಸಿರುವನು. ಮೂರ್ಖನಾದ ಕಂಸನಿಗೆ ಲೇವಾದರೂ ವಿವೇಕವಿಲ್ಲ ವಲ್ಲಾ ! ಪ್ರಪಂಚದಲ್ಲಿ ಯಾವ ಮನುಷ್ಯನೇ ಆಗಲಿ, ತನ್ನ ಹಿರಿಯರ ನ್ನು ಅವಿವೇಕಿಗಳೆಂದು 'ತಾನು ಅಲ್ಲಗಳೆಯುವುದಾದರೆ ತನ್ನ ಮಕ್ಕಳು ಮೊಮ್ಮಕ್ಕಳು ಮುಂತಾದವರು ತನ್ನನ್ನು ವಜ್ರಕುಂಠನೆಂದು ದೂಷಿಸ ಲೇ ದೂಷಿಸುತ್ತಾರೆಂಬ ಪರಿಜ್ಞಾನವಿಲ್ಲದೆ ತನಗೆ ಎದುರಿಲ್ಲವೆಂದು ಗರ್ವಿಸಿ ಹಿರಿಯರಾದ ಋಷಿಮುನಿಗಳನ್ನು ದೂಷಿಸುತ್ತ ಹಾರಿಬೀಳು ತಿರುವನು. ಆಗಲಾಗಲಿ! ಇವನ ವಿನಾಶಕಾಲವೂ ಹಿತ್ರದಲ್ಲಿಯೇ ಎದಿರುನೋಡುತ್ತಿರುವುದಲ್ಲವೆ! * ವಿನಾಶಕಾಲೇ ವಿಪರೀತಬುಧ್ಧಿಃ” ಈ<noinclude></noinclude> 21ok549lorwv4wkzk5kv1jvnn5dc5qi 323996 323995 2026-06-02T05:52:52Z Hariprasad Shetty10 7490 /* Validated */ 323996 proofread-page text/x-wiki <noinclude><pagequality level="4" user="Hariprasad Shetty10" />{{rh|left=೧೨೪|center=ಕೃಷ್ಣ ಲೀಲೆ|right=}}</noinclude>ಪರಬ್ರಹ್ಮಮೂರ್ತಿಯಾದ ತನ್ನ ಅದ್ರಾಕೃತ ದಿವ್ಯಸಂದರ್ಶನವನ್ನು ಮಾಡಬೇಕೆಂದಪೇಕ್ಷಿಸಿದ ಗೋಪಿಯರ ವಸ್ತ್ರಗಳೆಂಬ ಅಜ್ಞಾನಾವರಣಗಳನ್ನು ಅಪಹರಿಸಿ, ಅವರಿಗೆ ತನ್ನ ಅಮಾನುಷವಾದ ಪರಂಜ್ಯೋತಿ ಸ್ವರೂಪಸಂದರ್ಶನವನ್ನು ಅನುಗ್ರಹಿಸಿ ತನ್ಮೂಲಕವಾಗಿ ಶ್ರೀರಾಮಾವತಾರದಲ್ಲಿ ತಾನು ಮಾಡಿದ್ದ ವಾಗ್ದಾನವನ್ನು ಸಫಲಗೊಳಿಸಿದನು. ಒಮ್ಮೆ ಅವರು ತಮ್ಮ ಪೂರ್ವಸ್ಮ್ರತಿಯುಂಟಾಗಿರುವರು. ಮತ್ತೊಮ್ಮೆ ಭಗವನ್ಮಾಯೆಗೆ ಸಿಲುಕಿ ಅದನ್ನು ಮರೆತು ಪರಿತಪಿಸುವರು. ಇಂತು ಬ್ರಹ್ಮರ್ಷಿಗಳಾದ ಗೋಪಿಯರ ಸ್ಥಿತಿಯೇ ಈ ರೀತಿಯಾಗಿರುವಲ್ಲಿ ಕೇವಲ ಆಹಾರನಿದ್ರಾದಿ ತುಚ್ಛಭೋಗಗಳಲ್ಲಿ ಮಗ್ನರಾಗಿರುವ ನರಪಶುಗಳಿಗೆ ದೈವಲೀಲೆಗಳು ಅರ್ಥವಾಗಬಲ್ಲವೆ! ಪಾಂಡುರೋಗಿಯ ಕಣ್ಗಳಿಗೆ ಪ್ರಪಂಚವೆಲ್ಲವೂ ಹಳದಿಯಾಗಿ ಕಾಣುವಂತೆ, ಕೇವಲ ಲೌಕಿಕ ಕ್ಷರ ಮತ್ರರಿಗೂ, ಧನಾಧಿಕಾರ ಮದಾಂಧರಾದ ಡಾಂಬಿಕರಿಗೂ, ಭ ಗವದ್ಗೀಲಾಸಗಳು ವಿಲಕ್ಷಣವಾಗಿ ಕಾಣುವುದರಲ್ಲಿ ಆಶ್ರವೇನು? ನಿದರ್ಶ ನಕ್ಕ ಕಂಸನೊಬ್ಬನೇ ಸಾಕಾಗಿರುವನು. ಈ ದುರಭಿಮಾನಿಯು ಐಕ್ಷ ರದಲ್ಲಿಯೂ, ಅಧಿಕಾರದಲ್ಲಿಯೂ, ಪ್ರತಾಪದಲ್ಲಿಯೂ, ತಾನೇ ಅಗ್ರ ಗಣ್ಯನೆಂತಲೂ, ತನಗೆ ಸಮಾನವಾದ ತಿಳಿವಳಿಕ ಯುಂಟಾದವರು, ಮತ್ತಾರೂ ಇಲ್ಲವೆಂತಲೂ ಕೊಬ್ಬಿರುವನು. ತನ್ನ ವಿನಾಶಕಾಲವನ್ನ ರಿಯದೆ, ಋಷಿಮುನಿಗಳನ4, ಬಚ್ಚವೇತ್ತರಾದ ಸಾಧುಜನರನ್ನೂ ಸಾಧೀಮಣಿಯರನ ಬಗೆಬಗೆಯ ಸುತ್ತಲೂ, ದ್ವೇಷಿಸು ತಲೂ ಉನ್ಮತ್ತನಾಗಿರುವನು. ತನ್ನ ತಂದೆಯನ್ನೆ ಸೆರೆಯಲ್ಲಿ ಬಂಧಿ ಸಿರುವನು. ಮೂರ್ಖನಾದ ಕಂಸನಿಗೆ ಲೇವಾದರೂ ವಿವೇಕವಿಲ್ಲ ವಲ್ಲಾ ! ಪ್ರಪಂಚದಲ್ಲಿ ಯಾವ ಮನುಷ್ಯನೇ ಆಗಲಿ, ತನ್ನ ಹಿರಿಯರ ನ್ನು ಅವಿವೇಕಿಗಳೆಂದು 'ತಾನು ಅಲ್ಲಗಳೆಯುವುದಾದರೆ ತನ್ನ ಮಕ್ಕಳು ಮೊಮ್ಮಕ್ಕಳು ಮುಂತಾದವರು ತನ್ನನ್ನು ವಜ್ರಕುಂಠನೆಂದು ದೂಷಿಸ ಲೇ ದೂಷಿಸುತ್ತಾರೆಂಬ ಪರಿಜ್ಞಾನವಿಲ್ಲದೆ ತನಗೆ ಎದುರಿಲ್ಲವೆಂದು ಗರ್ವಿಸಿ ಹಿರಿಯರಾದ ಋಷಿಮುನಿಗಳನ್ನು ದೂಷಿಸುತ್ತ ಹಾರಿಬೀಳು ತಿರುವನು. ಆಗಲಾಗಲಿ! ಇವನ ವಿನಾಶಕಾಲವೂ ಹಿತ್ರದಲ್ಲಿಯೇ ಎದಿರುನೋಡುತ್ತಿರುವುದಲ್ಲವೆ! * ವಿನಾಶಕಾಲೇ ವಿಪರೀತಬುಧ್ಧಿಃ” ಈ<noinclude></noinclude> q050sboo4boborb2kf8h4utrfw0pfuv 323997 323996 2026-06-02T05:53:14Z Hariprasad Shetty10 7490 323997 proofread-page text/x-wiki <noinclude><pagequality level="4" user="Hariprasad Shetty10" />{{rh|left=೧೨೪|center=ಕೃಷ್ಣ ಲೀಲೆ|right=}}</noinclude>ಪರಬ್ರಹ್ಮಮೂರ್ತಿಯಾದ ತನ್ನ ಅದ್ರಾಕೃತ ದಿವ್ಯಸಂದರ್ಶನವನ್ನು ಮಾಡಬೇಕೆಂದಪೇಕ್ಷಿಸಿದ ಗೋಪಿಯರ ವಸ್ತ್ರಗಳೆಂಬ ಅಜ್ಞಾನಾವರಣಗಳನ್ನು ಅಪಹರಿಸಿ, ಅವರಿಗೆ ತನ್ನ ಅಮಾನುಷವಾದ ಪರಂಜ್ಯೋತಿ ಸ್ವರೂಪಸಂದರ್ಶನವನ್ನು ಅನುಗ್ರಹಿಸಿ ತನ್ಮೂಲಕವಾಗಿ ಶ್ರೀರಾಮಾವತಾರದಲ್ಲಿ ತಾನು ಮಾಡಿದ್ದ ವಾಗ್ದಾನವನ್ನು ಸಫಲಗೊಳಿಸಿದನು. ಒಮ್ಮೆ ಅವರು ತಮ್ಮ ಪೂರ್ವಸ್ಮ್ರತಿಯುಂಟಾಗಿರುವರು. ಮತ್ತೊಮ್ಮೆ ಭಗವನ್ಮಾಯೆಗೆ ಸಿಲುಕಿ ಅದನ್ನು ಮರೆತು ಪರಿತಪಿಸುವರು. ಇಂತು ಬ್ರಹ್ಮರ್ಷಿಗಳಾದ ಗೋಪಿಯರ ಸ್ಥಿತಿಯೇ ಈ ರೀತಿಯಾಗಿರುವಲ್ಲಿ ಕೇವಲ ಆಹಾರನಿದ್ರಾದಿ ತುಚ್ಛಭೋಗಗಳಲ್ಲಿ ಮಗ್ನರಾಗಿರುವ ನರಪಶುಗಳಿಗೆ ದೈವಲೀಲೆಗಳು ಅರ್ಥವಾಗಬಲ್ಲವೆ! ಪಾಂಡುರೋಗಿಯ ಕಣ್ಗಳಿಗೆ ಪ್ರಪಂಚವೆಲ್ಲವೂ ಹಳದಿಯಾಗಿ ಕಾಣುವಂತೆ, ಕೇವಲ ಲೌಕಿಕ ಕ್ಷರ ಮತ್ರರಿಗೂ, ಧನಾಧಿಕಾರ ಮದಾಂಧರಾದ ಡಾಂಬಿಕರಿಗೂ, ಭ ಗವದ್ಗೀಲಾಸಗಳು ವಿಲಕ್ಷಣವಾಗಿ ಕಾಣುವುದರಲ್ಲಿ ಆಶ್ರವೇನು? ನಿದರ್ಶ ನಕ್ಕ ಕಂಸನೊಬ್ಬನೇ ಸಾಕಾಗಿರುವನು. ಈ ದುರಭಿಮಾನಿಯು ಐಕ್ಷ ರದಲ್ಲಿಯೂ, ಅಧಿಕಾರದಲ್ಲಿಯೂ, ಪ್ರತಾಪದಲ್ಲಿಯೂ, ತಾನೇ ಅಗ್ರ ಗಣ್ಯನೆಂತಲೂ, ತನಗೆ ಸಮಾನವಾದ ತಿಳಿವಳಿಕ ಯುಂಟಾದವರು, ಮತ್ತಾರೂ ಇಲ್ಲವೆಂತಲೂ ಕೊಬ್ಬಿರುವನು. ತನ್ನ ವಿನಾಶಕಾಲವನ್ನ ರಿಯದೆ, ಋಷಿಮುನಿಗಳನ4, ಬಚ್ಚವೇತ್ತರಾದ ಸಾಧುಜನರನ್ನೂ ಸಾಧೀಮಣಿಯರನ ಬಗೆಬಗೆಯ ಸುತ್ತಲೂ, ದ್ವೇಷಿಸು ತಲೂ ಉನ್ಮತ್ತನಾಗಿರುವನು. ತನ್ನ ತಂದೆಯನ್ನೆ ಸೆರೆಯಲ್ಲಿ ಬಂಧಿ ಸಿರುವನು. ಮೂರ್ಖನಾದ ಕಂಸನಿಗೆ ಲೇವಾದರೂ ವಿವೇಕವಿಲ್ಲ ವಲ್ಲಾ ! ಪ್ರಪಂಚದಲ್ಲಿ ಯಾವ ಮನುಷ್ಯನೇ ಆಗಲಿ, ತನ್ನ ಹಿರಿಯರ ನ್ನು ಅವಿವೇಕಿಗಳೆಂದು 'ತಾನು ಅಲ್ಲಗಳೆಯುವುದಾದರೆ ತನ್ನ ಮಕ್ಕಳು ಮೊಮ್ಮಕ್ಕಳು ಮುಂತಾದವರು ತನ್ನನ್ನು ವಜ್ರಕುಂಠನೆಂದು ದೂಷಿಸ ಲೇ ದೂಷಿಸುತ್ತಾರೆಂಬ ಪರಿಜ್ಞಾನವಿಲ್ಲದೆ ತನಗೆ ಎದುರಿಲ್ಲವೆಂದು ಗರ್ವಿಸಿ ಹಿರಿಯರಾದ ಋಷಿಮುನಿಗಳನ್ನು ದೂಷಿಸುತ್ತ ಹಾರಿಬೀಳು ತಿರುವನು. ಆಗಲಾಗಲಿ! ಇವನ ವಿನಾಶಕಾಲವೂ ಹಿತ್ರದಲ್ಲಿಯೇ ಎದಿರುನೋಡುತ್ತಿರುವುದಲ್ಲವೆ! "ವಿನಾಶಕಾಲೇ ವಿಪರೀತಬುಧ್ಧಿಃ” ಈ<noinclude></noinclude> 7i5t18jdc8m6g9q8d4am4dkt4kramgo ಪುಟ:ಶ್ರೀ ಕೃಷ್ಣ ಲೀಲೆ.djvu/೧೪೧ 104 68815 323998 139401 2026-06-02T05:54:54Z Hariprasad Shetty10 7490 /* ಪರಿಶೀಲಿಸಲಾಗಿಲ್ಲ */ 323998 proofread-page text/x-wiki <noinclude><pagequality level="1" user="Hariprasad Shetty10" />{{center|ಚತುರ್ಥಾ೦ಕಂ}}</noinclude> ೧೨೫ ದುಷ್ಟಜಂತುಗಳ ನಿರಸ್ಕಲನಕ್ಕಾಗಿಯೇ ಭಗವಂತನವತರಿಸಿರುವನಲ್ಲವೆ ! ಪರಂತು ಗೋಪಿಯರು ನನಗೆ ಚಿರಪರಿಚಿತರಾದ ಬ್ರಹ್ಮರ್ಷಿಗಳೆಂಬ ವಿಚಾರವನ್ನು ಈಗಾಗಲೇ ಅವರಿಗೆ ಸೂಚಿಸಬಾರದು, ಅವರು ತಮ್ಮ ಸ್ವರೂಪ ಜ್ಞಾನವನ್ನು ತಾವಾಗಿಯೇ ಅರಿತು, ಶ್ರೀಕೃಷ್ಣನು ಸತ್ತಿ ದಾ ನಂದಸ್ವರೂಪನಾದ ಭಗವಂತನೆಂದು ಪರಿಷ್ಕಾರವಾಗಿ ತಿಳಿದಮೇಲೆ ಅವರನ್ನು ನಾನು ಕಾಣಿಸಿಕೊಳ್ಳುವೆನು, ಪ್ರಕೃತದಲ್ಲಿ ಗೋಕುಲದ ಯೋಗಕ್ಷೇಮವನ್ನು ದೇವಕೀವಸುದೇವರಿಗೆ ತಿಳಿಸುವೆನು. [ಎಂದು ನಾರದರು ನಿ ಮಿಸುವರು.] ಪಂಚಮಾಂಕಂ-ದ್ವಿತೀಯರಂಗಂ, ಪ್ರದೇಶ-ಬೃಂದಾವನ. ಬೃಂದಾವನದಲ್ಲಿ ಗೋವುಗಳನ್ನು ಮೇಯಿಸುತ್ತಿದ್ದ ಗೋಪಾಲ ಕರು ಹಸಿವಿನಿಂದಲೂ, ಬಾಯಾರಿಕೆಯಿಂದಲೂ ಪೀಡಿತರಾಗಿ ಕೃವ ನೊಂದಿಗೆ ಮೊರೆಯಿಡುವರು. ಗೋಪಾಲಕರು:-ಕೃಷಾಣ! ಮಧ್ಯಾಹ್ನವಾಗುತ್ತ ಬಂದಿತು. ನಾವು ತಂದಿದ್ದ ತಂಗಳು ಬುತ್ತಿಗಳನ್ನು ದಾರಿಗರಾದ ವೃದ್ದರಿಗೆ ಕೂಡಿ ಸಿಬಿಟ್ಟೆ. ನಾವೆಲ್ಲರೂ ಕನಸೆಗಳಿಂದ ಬಳಲುತ್ತಿರುವೆವು, ಮನ ಗಳಿಗಾದರೂ ಈಗಲೇ ಹೋಗೋಣವೆಂದರೆ ಬಹಳ ದೂರದಲ್ಲಿರುವುವು. ಹಸಿವಿನ ವೇದನೆಯನ್ನು ತಡೆಯಲಾರೆವು. ಆಗ ಮಾಡತಕ್ಕುದೇನು? ಶ್ರೀಕೃಷಣ-ಆಹ ! ಮನುಷ್ಯಮಾತ್ರರು ಕುವಾಸೆಗಳನ್ನು ತಡೆಯಲಾರರು. ಈ ಗೋಪಾಲಕರು ತೀವ್ರವಾದ ಹಸಿವಿನಿಂದಲೂ ತೃಷೆಯಿಂದಲೂ ಪೀಡಿಸಲ್ಪಡುತ್ತಿರುವರು. ಇವರಿಗೀಗಲೇ ಅನ್ನ ದಾನ ಗಳನ್ನು ಒದಗಿಸಿ ಕೊಡಬೇಕು. ಗೋಪಾಲಕರು ಕಲವರು:-ಕೃಷಾ ! ಹಸಿವು !ಹಸಿವು !! ಮತ್ತೆ ಕೆಲವರು:-ಕೃಪಾ ! ಬಾಯಾರಿಕೆ, ಶ್ರೀಕೃಷಣ:-ಗೋಪಾಲಕರೆ 1 ಸ್ಪಲ್ಪ ತಾಳಿರಿ, ಅಗೆ ನೋಡಿರಲ್ಲೊಂದು ಋವತ್ರಮವು ಕಾಣುತ್ತದೆ. ಎಲ್ಲರೂ ನಡೆಯಿರಿ,<noinclude></noinclude> 3mq1kauosceu4e1rf2jpwdb1b6tx5jy 323999 323998 2026-06-02T05:55:16Z Hariprasad Shetty10 7490 323999 proofread-page text/x-wiki <noinclude><pagequality level="1" user="Hariprasad Shetty10" />{{rh|left=|center=ಚತುರ್ಥಾ೦ಕಂ|right=೧೨೫}}</noinclude> ೧೨೫ ದುಷ್ಟಜಂತುಗಳ ನಿರಸ್ಕಲನಕ್ಕಾಗಿಯೇ ಭಗವಂತನವತರಿಸಿರುವನಲ್ಲವೆ ! ಪರಂತು ಗೋಪಿಯರು ನನಗೆ ಚಿರಪರಿಚಿತರಾದ ಬ್ರಹ್ಮರ್ಷಿಗಳೆಂಬ ವಿಚಾರವನ್ನು ಈಗಾಗಲೇ ಅವರಿಗೆ ಸೂಚಿಸಬಾರದು, ಅವರು ತಮ್ಮ ಸ್ವರೂಪ ಜ್ಞಾನವನ್ನು ತಾವಾಗಿಯೇ ಅರಿತು, ಶ್ರೀಕೃಷ್ಣನು ಸತ್ತಿ ದಾ ನಂದಸ್ವರೂಪನಾದ ಭಗವಂತನೆಂದು ಪರಿಷ್ಕಾರವಾಗಿ ತಿಳಿದಮೇಲೆ ಅವರನ್ನು ನಾನು ಕಾಣಿಸಿಕೊಳ್ಳುವೆನು, ಪ್ರಕೃತದಲ್ಲಿ ಗೋಕುಲದ ಯೋಗಕ್ಷೇಮವನ್ನು ದೇವಕೀವಸುದೇವರಿಗೆ ತಿಳಿಸುವೆನು. [ಎಂದು ನಾರದರು ನಿ ಮಿಸುವರು.] ಪಂಚಮಾಂಕಂ-ದ್ವಿತೀಯರಂಗಂ, ಪ್ರದೇಶ-ಬೃಂದಾವನ. ಬೃಂದಾವನದಲ್ಲಿ ಗೋವುಗಳನ್ನು ಮೇಯಿಸುತ್ತಿದ್ದ ಗೋಪಾಲ ಕರು ಹಸಿವಿನಿಂದಲೂ, ಬಾಯಾರಿಕೆಯಿಂದಲೂ ಪೀಡಿತರಾಗಿ ಕೃವ ನೊಂದಿಗೆ ಮೊರೆಯಿಡುವರು. ಗೋಪಾಲಕರು:-ಕೃಷಾಣ! ಮಧ್ಯಾಹ್ನವಾಗುತ್ತ ಬಂದಿತು. ನಾವು ತಂದಿದ್ದ ತಂಗಳು ಬುತ್ತಿಗಳನ್ನು ದಾರಿಗರಾದ ವೃದ್ದರಿಗೆ ಕೂಡಿ ಸಿಬಿಟ್ಟೆ. ನಾವೆಲ್ಲರೂ ಕನಸೆಗಳಿಂದ ಬಳಲುತ್ತಿರುವೆವು, ಮನ ಗಳಿಗಾದರೂ ಈಗಲೇ ಹೋಗೋಣವೆಂದರೆ ಬಹಳ ದೂರದಲ್ಲಿರುವುವು. ಹಸಿವಿನ ವೇದನೆಯನ್ನು ತಡೆಯಲಾರೆವು. ಆಗ ಮಾಡತಕ್ಕುದೇನು? ಶ್ರೀಕೃಷಣ-ಆಹ ! ಮನುಷ್ಯಮಾತ್ರರು ಕುವಾಸೆಗಳನ್ನು ತಡೆಯಲಾರರು. ಈ ಗೋಪಾಲಕರು ತೀವ್ರವಾದ ಹಸಿವಿನಿಂದಲೂ ತೃಷೆಯಿಂದಲೂ ಪೀಡಿಸಲ್ಪಡುತ್ತಿರುವರು. ಇವರಿಗೀಗಲೇ ಅನ್ನ ದಾನ ಗಳನ್ನು ಒದಗಿಸಿ ಕೊಡಬೇಕು. ಗೋಪಾಲಕರು ಕಲವರು:-ಕೃಷಾ ! ಹಸಿವು !ಹಸಿವು !! ಮತ್ತೆ ಕೆಲವರು:-ಕೃಪಾ ! ಬಾಯಾರಿಕೆ, ಶ್ರೀಕೃಷಣ:-ಗೋಪಾಲಕರೆ 1 ಸ್ಪಲ್ಪ ತಾಳಿರಿ, ಅಗೆ ನೋಡಿರಲ್ಲೊಂದು ಋವತ್ರಮವು ಕಾಣುತ್ತದೆ. ಎಲ್ಲರೂ ನಡೆಯಿರಿ,<noinclude></noinclude> m92h7grgz2mjyrcrrwi7z4qrmd68x7h ಪುಟ:ನನ್ನ ನಲ್ಲ.pdf/೧೬೧ 104 75558 323918 284529 2026-06-01T17:03:45Z Vikashegde 1258 /* Proofread */ 323918 proofread-page text/x-wiki <noinclude><pagequality level="3" user="Vikashegde" />{{rh|center=|left=೧೩೮|right=ನನ್ನ ನಲ್ಲ}}</noinclude><poem> {{Left|ನೀನು ನಿನ್ನಯ ಹೊಳೆವ ಮನದನ್ನನೆಡೆಗೈದು-}} {{Right|ವುದನೆಲ್ಲ ನಾನು ಒಲ್ಲೆ}} {{Left|ನಿನ್ನಂತೆ ನಿನ್ನಿನಿಯನುಂ ಮಹೋತ್ಸುಕನಾಗಿ ಹಣಿಕೆ}} {{Right|ಹಾಕುವುದು ಸುಳ್ಳೇ?}} {{Left|ಸಂತಸದಿ ನೀಂ ಮುಗುಳುನಗೆ ನಗುತಲೊನಪಿನಿಂ}} {{Right|ಹರೆಯದೇರುವಿಕೆಯಲ್ಲಿ}} {{Left|ಅಂತೆಯೇ ಕುಚಪೂದೇಶದ ವಸ್ತ್ರವನಿಂತು}} {{Right|ತುಸು ಸರಿಸಿ ತುಸು ಮುಚ್ಚುವೆ}}</poem> {{center|೮}} <poem>ಏಳಿರೇಳಿರಿ ನಮಗೆ ಚೈತನ್ಯವನ್ನು ಕೊಡುವ ಪ್ರಾಣಮೂರುತಿ ಬಂದಳುನನ್ನ ನಲ್ಲ ಏಳಿರೇಳಿರಿ ಕತ್ತಲೋಡಿ ಹೋಯಿತು ಬೆಳಗುತಿಹ ಬೆಳಕು ಬರುತಲಿಹುದು ಜನರೆದ್ದು ದುಡಿಯಹತ್ತಿದರೀಗ ಹಕ್ಕಿಪಕ್ಕಿಗಳುಲಿಯ ಹತ್ತಿರುವವು ಧಣಧಣಿಸಹತ್ತಿದವು ಮಂಗಳದ ವಾದ್ಯಗಳು ನೋಡು ನೋಡುವ ಕಡೆಯೊಳು ಹೊತ್ತು ಹುಟ್ಟುವ ಮೊದಲು ಬರುವ ಮುಂಜಾವುಗಳೆ ಬರುತಿರಲಿ ಬಹಳವಾಗಿ ಹೊತ್ತಿನೊಡನಿರ್ಪುಷೆಯು ಎತ್ತಾದಿಗಳ ಕೊಂಡು ನಮಗಾಗಿ ಬರುತಲಿರಲಿ ಜಗದ ಕಡೆಗೊಂದು ಸಲ ದಿಟ್ಟಿಯನು ಚೆಲ್ಲು ಮತ್ತಾ ದಿಟ್ಟಿಯನು ತಿರುಗಿಸಿ ಜಗದೊಳ್ ಪ್ರಕಾಶವಂ ಹರಡಿ ಸುಳಿವವಳನಿದೊ ಕವಿಕುಲವು ನುತಿಗೆಯ್ವುದು</poem> <poem>ಕಂದ || ಸಲೆ ಋಗ್ವೇದದ ಋಚೆಗಳ ಸುಲಲಿತ ಗದ್ಯಾನುವಾದದಿಂ ಮನವೊಲೆದು ಕೆಲವಂಶಗಳನಾಯ್ಡು ಸ- ರಲ ಛಂದದಿನಿಂತು ಚೆನ್ನಮಲ್ಲಪನೊರೆದಂ</poem><noinclude></noinclude> bi4p51eph1rzdl0wz3gig8tyjcxhn3c 323919 323918 2026-06-01T17:04:39Z Vikashegde 1258 323919 proofread-page text/x-wiki <noinclude><pagequality level="3" user="Vikashegde" />{{rh|center=|left=೧೩೮|right=ನನ್ನ ನಲ್ಲ}}</noinclude> {{Left|ನೀನು ನಿನ್ನಯ ಹೊಳೆವ ಮನದನ್ನನೆಡೆಗೈದು-}} {{Right|ವುದನೆಲ್ಲ ನಾನು ಒಲ್ಲೆ}} {{Left|ನಿನ್ನಂತೆ ನಿನ್ನಿನಿಯನುಂ ಮಹೋತ್ಸುಕನಾಗಿ ಹಣಿಕೆ}} {{Right|ಹಾಕುವುದು ಸುಳ್ಳೇ?}} {{Left|ಸಂತಸದಿ ನೀಂ ಮುಗುಳುನಗೆ ನಗುತಲೊನಪಿನಿಂ}} {{Right|ಹರೆಯದೇರುವಿಕೆಯಲ್ಲಿ}} {{Left|ಅಂತೆಯೇ ಕುಚಪೂದೇಶದ ವಸ್ತ್ರವನಿಂತು}} {{Right|ತುಸು ಸರಿಸಿ ತುಸು ಮುಚ್ಚುವೆ}} {{center|೮}} <poem>ಏಳಿರೇಳಿರಿ ನಮಗೆ ಚೈತನ್ಯವನ್ನು ಕೊಡುವ ಪ್ರಾಣಮೂರುತಿ ಬಂದಳುನನ್ನ ನಲ್ಲ ಏಳಿರೇಳಿರಿ ಕತ್ತಲೋಡಿ ಹೋಯಿತು ಬೆಳಗುತಿಹ ಬೆಳಕು ಬರುತಲಿಹುದು ಜನರೆದ್ದು ದುಡಿಯಹತ್ತಿದರೀಗ ಹಕ್ಕಿಪಕ್ಕಿಗಳುಲಿಯ ಹತ್ತಿರುವವು ಧಣಧಣಿಸಹತ್ತಿದವು ಮಂಗಳದ ವಾದ್ಯಗಳು ನೋಡು ನೋಡುವ ಕಡೆಯೊಳು ಹೊತ್ತು ಹುಟ್ಟುವ ಮೊದಲು ಬರುವ ಮುಂಜಾವುಗಳೆ ಬರುತಿರಲಿ ಬಹಳವಾಗಿ ಹೊತ್ತಿನೊಡನಿರ್ಪುಷೆಯು ಎತ್ತಾದಿಗಳ ಕೊಂಡು ನಮಗಾಗಿ ಬರುತಲಿರಲಿ ಜಗದ ಕಡೆಗೊಂದು ಸಲ ದಿಟ್ಟಿಯನು ಚೆಲ್ಲು ಮತ್ತಾ ದಿಟ್ಟಿಯನು ತಿರುಗಿಸಿ ಜಗದೊಳ್ ಪ್ರಕಾಶವಂ ಹರಡಿ ಸುಳಿವವಳನಿದೊ ಕವಿಕುಲವು ನುತಿಗೆಯ್ವುದು</poem> <poem>ಕಂದ || ಸಲೆ ಋಗ್ವೇದದ ಋಚೆಗಳ ಸುಲಲಿತ ಗದ್ಯಾನುವಾದದಿಂ ಮನವೊಲೆದು ಕೆಲವಂಶಗಳನಾಯ್ಡು ಸ- ರಲ ಛಂದದಿನಿಂತು ಚೆನ್ನಮಲ್ಲಪನೊರೆದಂ</poem><noinclude></noinclude> hjpojxvovqv2lj042qqe25vgehc29u2 323920 323919 2026-06-01T17:08:08Z Vikashegde 1258 323920 proofread-page text/x-wiki <noinclude><pagequality level="3" user="Vikashegde" />{{rh|center=|left=೧೩೮|right=ನನ್ನ ನಲ್ಲ}}</noinclude> {{Left|ನೀನು ನಿನ್ನಯ ಹೊಳೆವ ಮನದನ್ನನೆಡೆಗೈದು-}} {{Right|ವುದನೆಲ್ಲ ನಾನು ಒಲ್ಲೆ}} {{Left|ನಿನ್ನಂತೆ ನಿನ್ನಿನಿಯನುಂ ಮಹೋತ್ಸುಕನಾಗಿ ಹಣಿಕೆ}} {{Right|ಹಾಕುವುದು ಸುಳ್ಳೇ?}} {{Left|ಸಂತಸದಿ ನೀಂ ಮುಗುಳುನಗೆ ನಗುತಲೊನಪಿನಿಂ}} {{Right|ಹರೆಯದೇರುವಿಕೆಯಲ್ಲಿ}} {{Left|ಅಂತೆಯೇ ಕುಚಪೂದೇಶದ ವಸ್ತ್ರವನಿಂತು}} {{Right|ತುಸು ಸರಿಸಿ ತುಸು ಮುಚ್ಚುವೆ}} {{center|೮}} {{Left|ಏಳಿರೇಳಿರಿ ನಮಗೆ ಚೈತನ್ಯವನ್ನು ಕೊಡುವ}} {{Right|ಪ್ರಾಣಮೂರುತಿ ಬಂದಳುನನ್ನ ನಲ್ಲ}} {{Left|ಏಳಿರೇಳಿರಿ ಕತ್ತಲೋಡಿ ಹೋಯಿತು ಬೆಳಗುತಿಹ}} {{Right|ಬೆಳಕು ಬರುತಲಿಹುದು}} {{Left|ಜನರೆದ್ದು ದುಡಿಯಹತ್ತಿದರೀಗ ಹಕ್ಕಿಪಕ್ಕಿಗಳುಲಿಯ}} {{Right|ಹತ್ತಿರುವವು}} {{Left|ಧಣಧಣಿಸಹತ್ತಿದವು ಮಂಗಳದ ವಾದ್ಯಗಳು}} {{Right|ನೋಡು ನೋಡುವ ಕಡೆಯೊಳು}} {{Left|ಹೊತ್ತು ಹುಟ್ಟುವ ಮೊದಲು ಬರುವ ಮುಂಜಾವುಗಳೆ}} {{Right|ಬರುತಿರಲಿ ಬಹಳವಾಗಿ}} {{Left|ಹೊತ್ತಿನೊಡನಿರ್ಪುಷೆಯು ಎತ್ತಾದಿಗಳ ಕೊಂಡು}} {{Right|ನಮಗಾಗಿ ಬರುತಲಿರಲಿ}} {{Left|ಜಗದ ಕಡೆಗೊಂದು ಸಲ ದಿಟ್ಟಿಯನು ಚೆಲ್ಲು ಮತ್ತಾ}} {{Right|ದಿಟ್ಟಿಯನು ತಿರುಗಿಸಿ}} {{Left|ಜಗದೊಳ್ ಪ್ರಕಾಶವಂ ಹರಡಿ ಸುಳಿವವಳನಿದೊ}} {{Right|ಕವಿಕುಲವು ನುತಿಗೆಯ್ವುದು}} <poem>ಕಂದ || ಸಲೆ ಋಗ್ವೇದದ ಋಚೆಗಳ {{gap}}ಸುಲಲಿತ ಗದ್ಯಾನುವಾದದಿಂ ಮನವೊಲೆದು {{gap}}ಕೆಲವಂಶಗಳನಾಯ್ಡು ಸ- {{gap}}ರಲ ಛಂದದಿನಿಂತು ಚೆನ್ನಮಲ್ಲಪನೊರೆದಂ</poem><noinclude></noinclude> 2db01y3ffitunjgazwqz18nn5drige0 323921 323920 2026-06-01T17:09:19Z Vikashegde 1258 323921 proofread-page text/x-wiki <noinclude><pagequality level="3" user="Vikashegde" />{{rh|center=|left=೧೩೮|right=ನನ್ನ ನಲ್ಲ}}</noinclude> {{Left|ನೀನು ನಿನ್ನಯ ಹೊಳೆವ ಮನದನ್ನನೆಡೆಗೈದು-}} {{Right|ವುದನೆಲ್ಲ ನಾನು ಒಲ್ಲೆ}} {{Left|ನಿನ್ನಂತೆ ನಿನ್ನಿನಿಯನುಂ ಮಹೋತ್ಸುಕನಾಗಿ ಹಣಿಕೆ}} {{Right|ಹಾಕುವುದು ಸುಳ್ಳೇ?}} {{Left|ಸಂತಸದಿ ನೀಂ ಮುಗುಳುನಗೆ ನಗುತಲೊನಪಿನಿಂ}} {{Right|ಹರೆಯದೇರುವಿಕೆಯಲ್ಲಿ}} {{Left|ಅಂತೆಯೇ ಕುಚಪೂದೇಶದ ವಸ್ತ್ರವನಿಂತು}} {{Right|ತುಸು ಸರಿಸಿ ತುಸು ಮುಚ್ಚುವೆ}} {{center|೮}} {{Left|ಏಳಿರೇಳಿರಿ ನಮಗೆ ಚೈತನ್ಯವನ್ನು ಕೊಡುವ}} {{Right|ಪ್ರಾಣಮೂರುತಿ ಬಂದಳುನನ್ನ ನಲ್ಲ}} {{Left|ಏಳಿರೇಳಿರಿ ಕತ್ತಲೋಡಿ ಹೋಯಿತು ಬೆಳಗುತಿಹ}} {{Right|ಬೆಳಕು ಬರುತಲಿಹುದು}} {{Left|ಜನರೆದ್ದು ದುಡಿಯಹತ್ತಿದರೀಗ ಹಕ್ಕಿಪಕ್ಕಿಗಳುಲಿಯ}} {{Right|ಹತ್ತಿರುವವು}} {{Left|ಧಣಧಣಿಸಹತ್ತಿದವು ಮಂಗಳದ ವಾದ್ಯಗಳು}} {{Right|ನೋಡು ನೋಡುವ ಕಡೆಯೊಳು}} {{Left|ಹೊತ್ತು ಹುಟ್ಟುವ ಮೊದಲು ಬರುವ ಮುಂಜಾವುಗಳೆ}} {{Right|ಬರುತಿರಲಿ ಬಹಳವಾಗಿ}} {{Left|ಹೊತ್ತಿನೊಡನಿರ್ಪುಷೆಯು ಎತ್ತಾದಿಗಳ ಕೊಂಡು}} {{Right|ನಮಗಾಗಿ ಬರುತಲಿರಲಿ}} {{Left|ಜಗದ ಕಡೆಗೊಂದು ಸಲ ದಿಟ್ಟಿಯನು ಚೆಲ್ಲು ಮತ್ತಾ}} {{Right|ದಿಟ್ಟಿಯನು ತಿರುಗಿಸಿ}} {{Left|ಜಗದೊಳ್ ಪ್ರಕಾಶವಂ ಹರಡಿ ಸುಳಿವವಳನಿದೊ}} {{Right|ಕವಿಕುಲವು ನುತಿಗೆಯ್ವುದು}} <poem>ಕಂದ || ಸಲೆ ಋಗ್ವೇದದ ಋಚೆಗಳ {{gap}}ಸುಲಲಿತ ಗದ್ಯಾನುವಾದದಿಂ ಮನವೊಲೆದು {{gap}}ಕೆಲವಂಶಗಳನಾಯ್ಡು ಸ- {{gap}}ರಲ ಛಂದದಿನಿಂತು ಚೆನ್ನಮಲ್ಲಪನೊರೆದಂ</poem> {{rule|5em}}<noinclude></noinclude> n2q9lw4fn534lxk9on40mq3l8gk9ack ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೯೨ 104 80866 323980 190969 2026-06-02T05:07:46Z Hariprasad Shetty10 7490 /* ಪರಿಶೀಲಿಸಲಾಗಿಲ್ಲ */ 323980 proofread-page text/x-wiki <noinclude><pagequality level="1" user="Hariprasad Shetty10" />{{rh|left=|center=ದಿಗ್ವಿಜಯಿಯಾದ ಸಮುದ್ರಗುಪ್ತನು,|right=೨೫೫}}</noinclude>ಕಣ್ಣುಗಳಿಂದ ಇಡೀ ಜನಾ೦ಗದ ಸ್ಥಿತಿಯನ್ನು ಮುoಗಂಡು ಎಲ್ಲರೂ ನೋಡುತ್ತಿರುವ ಹಾಗೆ ಈಗಿನ ಉತ್ತರಹಿ೦ದುಸ್ಥಾನದ ಎಲ್ಲ ಭಾಗವನ್ನೂ, ದಕ್ಷಿಣಹಿಂದು ಸ್ಥಾನದ ಅರ್ಧಕರ್ಧ ಭಾಗವನ್ನು ಗೆದ್ದುಕೊ೦ಡದ್ದಲ್ಲದೆ, ಹಿಂದೂ ದೇಶದಾಚೆಗಿರುವ ಸಿಧಿಯ ನ್ ರಾಜರ ಸ೦ಗಡಲೂ, ಸಿ೦ಹಲದ್ವೀಪದಂತಹ ಬೇರೆ ದೂರಿನ ದ್ವೀಪಾ೦ತರಗಳಲ್ಲಿರುವ ರಾಜರ ಕೂಡಲೂ, ಈ ತನು ಹೊಕ್ಕು ಬಳಿ ಕೆಯನ್ನಿಟ್ಟು ಕೊಂಡಿದ್ದನು. ಇಷ್ಟೆಲ್ಲ ರಾಜ್ಯ ವಿಸ್ತಾರವನ್ನು ತನ್ನ ಒಲೆಯಲ್ಲಿ ರಿಸಲಿಕ್ಕೆಂದು ಅವನು ಒಂದೊಂದು ಸಲ ಒಂದೊಂದು ದಿಕ್ಕಿಗೆ ದಂಡಯಾತ್ರೆ ಹೊರಡಿಸಿ, ಏಳು ಮೆಟ್ಟಿನ ಹುಲಿಯು ತನ್ನ ಕಣ್ಣಿಟ್ಟ ಬೇಟೆಯನ್ನು ಬಹು ಸುಲಭವಾಗಿ ಸಾಧಿಸು ವಂತೆ ಈ ತನು ಗೆದ್ದ ಅಯಾ ರಾಜರುಗಳನ್ನು ತನ್ನ ನಾರ್ವಭೌಮತ್ವ ವನ್ನು ಒಪ್ಪಲಿಕ್ಕೆ ಹಚ್ಚಿದನು; ಮತ್ತು ಈ ದಿಗ್ವಿಜಯದ ನಿಮಿತ್ತವನ್ನು ಮಾಡಿಕೊಂಡು, ಪ್ರಾಚೀನರ ಪದ್ಧತಿಯಂತೆ, ಅಶ್ವಮೇಧಯಾಗವನ್ನು ಮಾಡಿ ಅಗ್ನಿಕುಂಡದ ಮುಂದೆ ಯ ದ ಕುದುರೆಯು ನಿಂತಿರುವ ಚಿತ್ರ ದಿ೦ರೊಡಗೂಡಿದ ಚಿನ್ನದ ಪದಕಗಳನ್ನು ಬ್ರಾ ಮೈ ಣರಿಗೆ ದಾನವಾಗಿ ಕೊಟ್ಟನು. ಅವುಗಳಲ್ಲಿ ಕೆಲವೀಗ ಸಿಕ್ಕಿವೆ. ಸಮುದ್ರಗುಪ್ತನು ಸಾಹಿತ್ಯ ರಲ್ಲಿ ಹೇಗೋ ಹಾಗೇ ಸ೦ಗೀತ ಕಲೆಯಲ್ಲಿಯೂ, ಒಲವಳ್ಳವನಾದ್ದ ರಿಂದ ಬಹು ರಸಿಕ ನಿದ್ದನು. ವೈದಿಕ ಧರ್ಮದಲ್ಲಿ ಆತನ ಭಕ್ತಿಯು ನಿಮ್ಮ ಟವಾಗಿದ್ದರೂ, ಬೌದ್ಧ ಮತ ತತ್ವಗಳನ್ನೆಲ್ಲ ವಸು ಬ೦ಧು ಎಂಬ ಬೌದ್ಧ ಸಾ ಧುವಿನಿಂದ ತಿಳಿಸಿಕೊ೦ಡಿದ್ದನು. ಸಮುದ್ರಗುಪ್ತನ ಒಮ್ಮೊಲಗದ ಕವಿಯಾದ ಹರಿಸೇನನೆಂಬವನು ಈ ಚಕ್ರವರ್ತಿಯನ್ನು ಕುರಿತು, ಗದ್ಯ ಪದ್ಯಮಯವಾಗಿ ವರ್ಣಿಸಿದ ಸಂಗತಿಗಳು ಇನ್ನೂ ದೊರಕುತ್ತವೆ; ಅವುಗಳನ್ನು ನೋಡಿದರೆ, ಈ ತನು ಹಿಂದು ನ್ಯಾನದ ಎರಡನೇ ಚಕ್ರ ವರ್ತಿಯೆನ್ನಲು ಅಡ್ಡಿಯಿಲ್ಲ. ಆ ಶೋಕನ ತರುವಾಯ ಭರತಖಂಡ ವನ್ನೆಲ್ಲ ತನ್ನ ಅಧೀನಕ್ಕೊಳ ಪಡಿಸಿದ ರಾಜನೆಂದರೆ ಸಮುದ್ರಗುಪ್ತನೇ ಸರಿ, ೫೦ ವರ್ಷ ಕಾಲ ಅತ್ಯಂತ ವೈಭವದಿಂದಲೂ, ಮಿಕ್ಕ ರಾಜರಂತೆ ಮೆತ್ತನ್ನ ಹಾಸಿಗೆಯ ಮೇಲೆ ಉರುಳಾಡಿ ಕಾಲಕಳೆಯದೆ ವೀರನಿಗುಚಿತ ವಾದ ಶಿರದಿಂದ ರಾಜ್ಯಭಾರವನ್ನು ನಿರ್ವಹಿಸಿ,ಕ್ರಿ.ಶ. ೩೭೫ರಲ್ಲಿ ಮಡಿದನು, .<noinclude></noinclude> qhpadxgv8mx56e803lt39uj9vm9m2c5 ಪುಟ:ಕ್ರಾಂತಿ ಕಲ್ಯಾಣ.pdf/೪೪೨ 104 86367 323935 203691 2026-06-02T02:59:04Z Shreesha Sharma 7840 /* Proofread */ 323935 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೨೯}} ಆಗ ಅವನ ಸಂಗಡಿದ್ದ ಬೊಮ್ಮರಸ ಬ್ರಹ್ಮಶಿವರನ್ನೂ ಬಸವಣ್ಣನವರಿಗೆ ಪರಿಚಯ ಮಾಡಿಕೊಟ್ಟಿದ್ದರು. ಆ ಅಲ್ಪ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು ಬಸವಣ್ಣನವರು ಪ್ರಶ್ನಿಸಿದ್ದನ್ನು ಕೇಳಿದಾಗ ಅಗ್ಗಳನು ಸಹಜವಾಗಿ ಅಚ್ಚರಿಗೊಂಡನು. ಅಲ್ಲಿಂದೀಚೆಗೆ ನಡೆದ ಘಟನೆಗಳಲ್ಲಿ ತನ್ನ ಹಾಗೂ ತನ್ನ ಗೆಳೆಯರ ಪಾತ್ರವನ್ನು ನೆನೆಸಿಕೊಂಡಾಗ ಭೀತಿ ಆತಂಕಗಳು ತಲೆದೋರದೆ ಇರಲಿಲ್ಲ. {{gap}}“ನನ್ನ ಗೆಳೆಯರೊಬ್ಬರು ಸ್ವಸ್ಥಳಕ್ಕೆ ಹಿಂದಿರುಗಿದರು. ಇನ್ನೊಬ್ಬರು ಸಂಗಡಿದ್ದಾರೆ,” ಎಂದು ಅವನು ಜಂಗಮ ತಂಡದೊಡನೆ ನಾಗರಿಕ ವೇಷದಲ್ಲಿದ್ದ ಬ್ರಹ್ಮಶಿವನನ್ನು ತೋರಿಸಿದನು. {{gap}}ಈ ಮಾತುಗಳು ನಡೆಯುತ್ತಿದ್ದಂತೆ ಬ್ರಹ್ಮಶಿವನು ಉತ್ತರಾಪಥದ ಜಂಗಮರನ್ನು ವೇದಿಕೆಯ ಸುತ್ತ ನಿಲ್ಲಿಸಿದನು. ವಿಚಿತ್ರ ವೇಷಭೂಷಣಗಳ ಆ ಜಂಗಮರನ್ನು ಏಕಕಾಲದಲ್ಲಿ ಅಲ್ಲಿ ಕಂಡು ಬಸವಣ್ಣನವರು ಅವರೆಲ್ಲರಿಗೆ ಕೈಯೆತ್ತಿ ನಮಸ್ಕಾರ ಮಾಡಿದರು. ಅವರ ಪರಿಚಯ ಮಾಡಿಕೊಡುತ್ತ ಅಗ್ಗಳನು ಹೇಳಿದನು : “ಈ ಜಂಗಮರು ಉತ್ತಾರಾಪಥದ ಸಪಾದಲಕ್ಷ ದೇಶದಿಂದ ಅಣ್ಣನವರ ದರ್ಶನಕ್ಕಾಗಿ ಕಲ್ಯಾಣಕ್ಕೆ ಬಂದರು. ನೀವು ಕೂಡಲ ಸಂಗಮದಲ್ಲಿರುವುದಾಗಿ ಕೇಳಿ ಆ ದಿನವೇ ಇಲ್ಲಿಗೆ ಪಯಣ ಮಾಡಿದರು. ಕರ್ಹಾಡಕ್ಕೆ ಹೊರಟಿದ್ದ ನಾವು ಅವರ ಸಂಗಡ ಬಂದೆವು. - ಬಸವಣ್ಣನವರ ಮುಖದಲ್ಲಿ ವಿಷಾದದ ನೆರಳು ಸುಳಿಯಿತು. “ಬಂದ ಜಂಗಮಕ್ಕೆ ದಾಸೋಹ ನಡೆಸಲು ಈಗ ನಾನು ಅಸಮರ್ಥನು. ಗುರುಕುಲದ ಪ್ರಾಧ್ಯಾಪಕರಿಗೆ ಇವರು ಬಂದಿರುವ ವಿಚಾರ ತಿಳಿಸಿದರೆ ಒಳ್ಳೆಯದು,” ಎಂದರು. “ಇವರು ಕಲ್ಯಾಣದಲ್ಲಿ ಒಂದು ದಿನ ಮಹಮನೆಯ ಅತಿಥಿಗಳಾಗಿದ್ದು ದಾಸೋಹ ಮುಗಿಸಿಕೊಂಡು ಇಲ್ಲಿಗೆ ಬಂದರು, ಅಣ್ಣನವರೆ. ನಿಮ್ಮ ಪ್ರವಚನ ಕೇಳಿ ದಾಸೋಹಕ್ಕಿಂತ ಹೆಚ್ಚಿನ ತೃಪ್ತಿ ಆಗಿದೆ ಅವರಿಗೆ, ಪ್ರಭುದೇವರ ವಚನಗಳನ್ನು ಪ್ರಾಕೃತಕ್ಕೆ ಅನುವಾದ ಮಾಡಿ ಹೇಳಿದಾಗ ಅವರಿಗಾದ ಆನಂದ ಅಷ್ಟಿಷ್ಟಲ್ಲ.” ಎಂದು ಅಗ್ಗಳನು ಸಮಾಧಾನ ಹೇಳಿದನು. ಬಸವಣ್ಣನವರು ಉತ್ತರ ಕೊಡಲಿಲ್ಲ. ಅನ್ಯಮನಸ್ಕರಾಗಿ ಶೂನ್ಯದ ಕಡೆಗೆ ನೋಡುತ್ತಿದ್ದರು ಅವರು. ಅಗ್ಗಳನು ಪುನಃ ಹೇಳಿದನು : “ಕಲ್ಯಾಣದ ದುರ್ವಾರ್ತೆಯಿಂದ ನಿಮ್ಮ ಮನಸ್ಸು ಕಲಕಿದೆ, ಅಣ್ಣನವರೆ. ಈಗ ನಾನು ಹೆಚ್ಚು ತೊಂದರೆ ಕೊಡುವುದಿಲ್ಲ. ಈ ಜಂಗಮರಿಗೆ ಪ್ರಾಕೃತದಲ್ಲಿ ನಾಲ್ಕು ಮಾತು ಹೇಳಿದರೆ ಸಾಕು.”<noinclude></noinclude> t4jbe32w4xlhyq5esqx00did7hvs3hn 323936 323935 2026-06-02T03:00:40Z Shreelatha.Halemane 7642 /* Validated */ 323936 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೨೯}} ಆಗ ಅವನ ಸಂಗಡಿದ್ದ ಬೊಮ್ಮರಸ ಬ್ರಹ್ಮಶಿವರನ್ನೂ ಬಸವಣ್ಣನವರಿಗೆ ಪರಿಚಯ ಮಾಡಿಕೊಟ್ಟಿದ್ದರು. ಆ ಅಲ್ಪ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು ಬಸವಣ್ಣನವರು ಪ್ರಶ್ನಿಸಿದ್ದನ್ನು ಕೇಳಿದಾಗ ಅಗ್ಗಳನು ಸಹಜವಾಗಿ ಅಚ್ಚರಿಗೊಂಡನು. ಅಲ್ಲಿಂದೀಚೆಗೆ ನಡೆದ ಘಟನೆಗಳಲ್ಲಿ ತನ್ನ ಹಾಗೂ ತನ್ನ ಗೆಳೆಯರ ಪಾತ್ರವನ್ನು ನೆನೆಸಿಕೊಂಡಾಗ ಭೀತಿ ಆತಂಕಗಳು ತಲೆದೋರದೆ ಇರಲಿಲ್ಲ. {{gap}}“ನನ್ನ ಗೆಳೆಯರೊಬ್ಬರು ಸ್ವಸ್ಥಳಕ್ಕೆ ಹಿಂದಿರುಗಿದರು. ಇನ್ನೊಬ್ಬರು ಸಂಗಡಿದ್ದಾರೆ,” ಎಂದು ಅವನು ಜಂಗಮ ತಂಡದೊಡನೆ ನಾಗರಿಕ ವೇಷದಲ್ಲಿದ್ದ ಬ್ರಹ್ಮಶಿವನನ್ನು ತೋರಿಸಿದನು. {{gap}}ಈ ಮಾತುಗಳು ನಡೆಯುತ್ತಿದ್ದಂತೆ ಬ್ರಹ್ಮಶಿವನು ಉತ್ತರಾಪಥದ ಜಂಗಮರನ್ನು ವೇದಿಕೆಯ ಸುತ್ತ ನಿಲ್ಲಿಸಿದನು. ವಿಚಿತ್ರ ವೇಷಭೂಷಣಗಳ ಆ ಜಂಗಮರನ್ನು ಏಕಕಾಲದಲ್ಲಿ ಅಲ್ಲಿ ಕಂಡು ಬಸವಣ್ಣನವರು ಅವರೆಲ್ಲರಿಗೆ ಕೈಯೆತ್ತಿ ನಮಸ್ಕಾರ ಮಾಡಿದರು. ಅವರ ಪರಿಚಯ ಮಾಡಿಕೊಡುತ್ತ ಅಗ್ಗಳನು ಹೇಳಿದನು : “ಈ ಜಂಗಮರು ಉತ್ತಾರಾಪಥದ ಸಪಾದಲಕ್ಷ ದೇಶದಿಂದ ಅಣ್ಣನವರ ದರ್ಶನಕ್ಕಾಗಿ ಕಲ್ಯಾಣಕ್ಕೆ ಬಂದರು. ನೀವು ಕೂಡಲ ಸಂಗಮದಲ್ಲಿರುವುದಾಗಿ ಕೇಳಿ ಆ ದಿನವೇ ಇಲ್ಲಿಗೆ ಪಯಣ ಮಾಡಿದರು. ಕರ್ಹಾಡಕ್ಕೆ ಹೊರಟಿದ್ದ ನಾವು ಅವರ ಸಂಗಡ ಬಂದೆವು. - ಬಸವಣ್ಣನವರ ಮುಖದಲ್ಲಿ ವಿಷಾದದ ನೆರಳು ಸುಳಿಯಿತು. “ಬಂದ ಜಂಗಮಕ್ಕೆ ದಾಸೋಹ ನಡೆಸಲು ಈಗ ನಾನು ಅಸಮರ್ಥನು. ಗುರುಕುಲದ ಪ್ರಾಧ್ಯಾಪಕರಿಗೆ ಇವರು ಬಂದಿರುವ ವಿಚಾರ ತಿಳಿಸಿದರೆ ಒಳ್ಳೆಯದು,” ಎಂದರು. “ಇವರು ಕಲ್ಯಾಣದಲ್ಲಿ ಒಂದು ದಿನ ಮಹಮನೆಯ ಅತಿಥಿಗಳಾಗಿದ್ದು ದಾಸೋಹ ಮುಗಿಸಿಕೊಂಡು ಇಲ್ಲಿಗೆ ಬಂದರು, ಅಣ್ಣನವರೆ. ನಿಮ್ಮ ಪ್ರವಚನ ಕೇಳಿ ದಾಸೋಹಕ್ಕಿಂತ ಹೆಚ್ಚಿನ ತೃಪ್ತಿ ಆಗಿದೆ ಅವರಿಗೆ, ಪ್ರಭುದೇವರ ವಚನಗಳನ್ನು ಪ್ರಾಕೃತಕ್ಕೆ ಅನುವಾದ ಮಾಡಿ ಹೇಳಿದಾಗ ಅವರಿಗಾದ ಆನಂದ ಅಷ್ಟಿಷ್ಟಲ್ಲ.” ಎಂದು ಅಗ್ಗಳನು ಸಮಾಧಾನ ಹೇಳಿದನು. ಬಸವಣ್ಣನವರು ಉತ್ತರ ಕೊಡಲಿಲ್ಲ. ಅನ್ಯಮನಸ್ಕರಾಗಿ ಶೂನ್ಯದ ಕಡೆಗೆ ನೋಡುತ್ತಿದ್ದರು ಅವರು. ಅಗ್ಗಳನು ಪುನಃ ಹೇಳಿದನು : “ಕಲ್ಯಾಣದ ದುರ್ವಾರ್ತೆಯಿಂದ ನಿಮ್ಮ ಮನಸ್ಸು ಕಲಕಿದೆ, ಅಣ್ಣನವರೆ. ಈಗ ನಾನು ಹೆಚ್ಚು ತೊಂದರೆ ಕೊಡುವುದಿಲ್ಲ. ಈ ಜಂಗಮರಿಗೆ ಪ್ರಾಕೃತದಲ್ಲಿ ನಾಲ್ಕು ಮಾತು ಹೇಳಿದರೆ ಸಾಕು.”<noinclude></noinclude> 4kehti72xb8dnwnt9kh5jtpqs2vwj6i 323938 323936 2026-06-02T03:01:50Z Shreelatha.Halemane 7642 323938 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೨೯}} ಆಗ ಅವನ ಸಂಗಡಿದ್ದ ಬೊಮ್ಮರಸ ಬ್ರಹ್ಮಶಿವರನ್ನೂ ಬಸವಣ್ಣನವರಿಗೆ ಪರಿಚಯ ಮಾಡಿಕೊಟ್ಟಿದ್ದರು. ಆ ಅಲ್ಪ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು ಬಸವಣ್ಣನವರು ಪ್ರಶ್ನಿಸಿದ್ದನ್ನು ಕೇಳಿದಾಗ ಅಗ್ಗಳನು ಸಹಜವಾಗಿ ಅಚ್ಚರಿಗೊಂಡನು. ಅಲ್ಲಿಂದೀಚೆಗೆ ನಡೆದ ಘಟನೆಗಳಲ್ಲಿ ತನ್ನ ಹಾಗೂ ತನ್ನ ಗೆಳೆಯರ ಪಾತ್ರವನ್ನು ನೆನೆಸಿಕೊಂಡಾಗ ಭೀತಿ ಆತಂಕಗಳು ತಲೆದೋರದೆ ಇರಲಿಲ್ಲ. {{gap}}“ನನ್ನ ಗೆಳೆಯರೊಬ್ಬರು ಸ್ವಸ್ಥಳಕ್ಕೆ ಹಿಂದಿರುಗಿದರು. ಇನ್ನೊಬ್ಬರು ಸಂಗಡಿದ್ದಾರೆ,” ಎಂದು ಅವನು ಜಂಗಮ ತಂಡದೊಡನೆ ನಾಗರಿಕ ವೇಷದಲ್ಲಿದ್ದ ಬ್ರಹ್ಮಶಿವನನ್ನು ತೋರಿಸಿದನು. {{gap}}ಈ ಮಾತುಗಳು ನಡೆಯುತ್ತಿದ್ದಂತೆ ಬ್ರಹ್ಮಶಿವನು ಉತ್ತರಾಪಥದ ಜಂಗಮರನ್ನು ವೇದಿಕೆಯ ಸುತ್ತ ನಿಲ್ಲಿಸಿದನು. ವಿಚಿತ್ರ ವೇಷಭೂಷಣಗಳ ಆ ಜಂಗಮರನ್ನು ಏಕಕಾಲದಲ್ಲಿ ಅಲ್ಲಿ ಕಂಡು ಬಸವಣ್ಣನವರು ಅವರೆಲ್ಲರಿಗೆ ಕೈಯೆತ್ತಿ ನಮಸ್ಕಾರ ಮಾಡಿದರು. {{gap}}ಅವರ ಪರಿಚಯ ಮಾಡಿಕೊಡುತ್ತ ಅಗ್ಗಳನು ಹೇಳಿದನು : “ಈ ಜಂಗಮರು ಉತ್ತಾರಾಪಥದ ಸಪಾದಲಕ್ಷ ದೇಶದಿಂದ ಅಣ್ಣನವರ ದರ್ಶನಕ್ಕಾಗಿ ಕಲ್ಯಾಣಕ್ಕೆ ಬಂದರು. ನೀವು ಕೂಡಲ ಸಂಗಮದಲ್ಲಿರುವುದಾಗಿ ಕೇಳಿ ಆ ದಿನವೇ ಇಲ್ಲಿಗೆ ಪಯಣ ಮಾಡಿದರು. ಕರ್ಹಾಡಕ್ಕೆ ಹೊರಟಿದ್ದ ನಾವು ಅವರ ಸಂಗಡ ಬಂದೆವು. {{gap}}ಬಸವಣ್ಣನವರ ಮುಖದಲ್ಲಿ ವಿಷಾದದ ನೆರಳು ಸುಳಿಯಿತು. “ಬಂದ ಜಂಗಮಕ್ಕೆ ದಾಸೋಹ ನಡೆಸಲು ಈಗ ನಾನು ಅಸಮರ್ಥನು. ಗುರುಕುಲದ ಪ್ರಾಧ್ಯಾಪಕರಿಗೆ ಇವರು ಬಂದಿರುವ ವಿಚಾರ ತಿಳಿಸಿದರೆ ಒಳ್ಳೆಯದು,” ಎಂದರು. {{gap}}“ಇವರು ಕಲ್ಯಾಣದಲ್ಲಿ ಒಂದು ದಿನ ಮಹಮನೆಯ ಅತಿಥಿಗಳಾಗಿದ್ದು ದಾಸೋಹ ಮುಗಿಸಿಕೊಂಡು ಇಲ್ಲಿಗೆ ಬಂದರು, ಅಣ್ಣನವರೆ. ನಿಮ್ಮ ಪ್ರವಚನ ಕೇಳಿ ದಾಸೋಹಕ್ಕಿಂತ ಹೆಚ್ಚಿನ ತೃಪ್ತಿ ಆಗಿದೆ ಅವರಿಗೆ, ಪ್ರಭುದೇವರ ವಚನಗಳನ್ನು ಪ್ರಾಕೃತಕ್ಕೆ ಅನುವಾದ ಮಾಡಿ ಹೇಳಿದಾಗ ಅವರಿಗಾದ ಆನಂದ ಅಷ್ಟಿಷ್ಟಲ್ಲ.” ಎಂದು ಅಗ್ಗಳನು ಸಮಾಧಾನ ಹೇಳಿದನು. ಬಸವಣ್ಣನವರು ಉತ್ತರ ಕೊಡಲಿಲ್ಲ. ಅನ್ಯಮನಸ್ಕರಾಗಿ ಶೂನ್ಯದ ಕಡೆಗೆ ನೋಡುತ್ತಿದ್ದರು ಅವರು. {{gap}}ಅಗ್ಗಳನು ಪುನಃ ಹೇಳಿದನು : “ಕಲ್ಯಾಣದ ದುರ್ವಾರ್ತೆಯಿಂದ ನಿಮ್ಮ ಮನಸ್ಸು ಕಲಕಿದೆ, ಅಣ್ಣನವರೆ. ಈಗ ನಾನು ಹೆಚ್ಚು ತೊಂದರೆ ಕೊಡುವುದಿಲ್ಲ. ಈ ಜಂಗಮರಿಗೆ ಪ್ರಾಕೃತದಲ್ಲಿ ನಾಲ್ಕು ಮಾತು ಹೇಳಿದರೆ ಸಾಕು.”<noinclude></noinclude> asu4a7kzv70xms5tfx9ogf373t8n5g2 ಪುಟ:ಕ್ರಾಂತಿ ಕಲ್ಯಾಣ.pdf/೪೪೧ 104 86377 323934 203701 2026-06-02T02:56:21Z Shreesha Sharma 7840 /* Proofread */ 323934 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೨೮|right=ಕ್ರಾಂತಿ ಕಲ್ಯಾಣ}} ನಾನು ನಿಮ್ಮ ತೊತ್ತಿನ ಪಡುಗವ ತೆಗೆವ ಪಡಿಗತೊತ್ತಯ್ಯ. ಕೂಡಲ ಸಂಗನ ಶರಣರಿಗೆಲ್ಲ ಸಂಗನ ಬಸವನ ಬಿನ್ನಪ : ಕವಳಿಗೆ ಸಂದುದು. ನಿಮ್ಮ ಜನಪದದಲ್ಲಿ ಬೆರೆಸೆಂದು ಕೃಪೆ ಮಾಡಿರಯ್ಯ. ''ಆನು ಮಾಡಿದ ತಪ್ಪನೆಣೆಸಿಹೆನೆಂದಡೆ ಗಣನೆಯಿಲ್ಲ. ನಡೆದು ತಪ್ಪುವೆನು, ನುಡಿದು ತಪ್ಪುವೆನು, ಮಾಡಿ ತಪ್ಪುವೆ, ನೀಡಿ ತಪ್ಪುವೆ, ಕೂಡಿ ತಪ್ಪುವೆ, ಅರಿದು ತಪ್ಪುವೆ, ಮರೆದು ತಪ್ಪುವೆ. ಎನ್ನ ತಪ್ಪನೊಪ್ಪಮಾಡಿಕೊಂಬುದಲ್ಲದೆ ಚಿತ್ತಕ್ಕೆ ತರಲಾಗದು. ಕೂಡಲ ಸಂಗಮದೇವಯ್ಯನೆಂಬ ಗಂಡನೆನ್ನ ಬೆರೆಯಬೇಕೆಂದು ಕರೆಯಲಟ್ಟಿದನು. ಶಿವಶರಣರೆಲ್ಲರಿಗೆ ಶರಣೆಂದು ಬೀಳ್ಕೊಂಬ ತವಕದಲ್ಲಿದ್ದೆ.” {{gap}}ಎಂದು ಬಸವಣ್ಣನವರು ಮುಗಿಸಿದಾಗ ಸಭ್ಯರೆಲ್ಲ ಭಾವಪರವಶರಾಗಿ ಚಲಿಸದೆ ಕುಳಿತಿದ್ದರು. ಪ್ರಾಧ್ಯಾಪಕನು ವಂದನಾರ್ಪಣೆಗಾಗಿ ಎದ್ದು ನಿಂತಾಗ ಅವರಿಗೆ ತಾವೆಲ್ಲಿರುವೆವೆಂಬ ಅರಿವಾಯಿತು. {{gap}}ಉತ್ತರಾಪಥದ ಪ್ರವಾಸಿ ಜಂಗಮರೊಡನೆ ಅಂದು ಅಪರಾಹ್ನ ಸಂಗಮಕ್ಕೆ ಬಂದಿದ್ದ ಅಗ್ಗಳನು, ಸಭೆ ಚದುರಿ, ವೇದಿಕೆ ನೆರವಾಗುತ್ತಲೆ ಬಸವಣ್ಣನವರ ಬಳಿಗೆ ಬಂದು ನಮಸ್ಕಾರ ಮಾಡಿ, “ಅಣ್ಣನವರಿಗೆ ನನ್ನ ಪರಿಚಯವಿರಬೇಕು. ನೀವು ಕಲ್ಯಾಣವನ್ನು ಬಿಟ್ಟು ಬಂದ ಆ ದುರ್ದಿನ ನಾನು ಮೋಳಿಗೆಯ ಮಾರಯ್ಯನವರ ಆಶ್ರಮದಲ್ಲಿ ನಿಮ್ಮನ್ನು ನೋಡಿದ್ದೆ,” ಎಂದು ಬಿನ್ನವಿಸಿಕೊಂಡನು. {{gap}}ಸುಮಾರು ಮೂರೂವರೆ ತಿಂಗಳ ಹಿಂದೆ ನಡೆದ ಆ ಘಟನೆಗಳನ್ನು ಬಸವಣ್ಣನವರು ನೆನಪಿಗೆ ತಂದುಕೊಂಡು, “ಮೋಳಿಗೆಯ ಮಾರಯ್ಯನವರ ನೇತೃತ್ವದಲ್ಲಿ ರಕ್ಷಕ ಪಡೆಯನ್ನು ಅಡ್ಡಗಟ್ಟಿದವರಲ್ಲಿ ನೀವೂ ಒಬ್ಬರಲ್ಲವೆ? ಆಗ ನಿಮ್ಮ ಸಂಗಡ ಇದ್ದ ಇಬ್ಬರು ಗೆಳೆಯರು ಕ್ಷೇಮವೆ ?” ಎಂದು ಪ್ರಶ್ನಿಸಿದರು. {{gap}}ಚತುರನಾದ ಅಗ್ಗಳನು ಕೆಲವು ಕ್ಷಣಗಳು ಅಪ್ರತಿಭನಾದನು. ಆ ದಿನ ನಾಗರಿಕರಿಂದ ಬೀಳ್ಕೊಂಡ ಮೇಲೆ ಮೋಳಿಗೆಯ ಮಾರಯ್ಯನವರು ಅಗ್ಗಳನನ್ನೂ ——————— {{gap}}* ಶೂನ್ಯ ಸಂಪಾದನೆ, ಪು. ೪೫೬. ಲೆಂಕ=ಸೇವಕ, ಪಡುಗ=ಉಗುಳುವ ಪಾತ್ರೆ ಕವಳಿಗೆ=(ಕಪಾಲಿಕಾ) ಭಿಕ್ಷಾಪಾತ್ರೆ<noinclude></noinclude> iz5c70k2py8vke3dcd4h9m4w85ti8b8 323937 323934 2026-06-02T03:01:01Z Shreelatha.Halemane 7642 /* Validated */ 323937 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೨೮|right=ಕ್ರಾಂತಿ ಕಲ್ಯಾಣ}} ನಾನು ನಿಮ್ಮ ತೊತ್ತಿನ ಪಡುಗವ ತೆಗೆವ ಪಡಿಗತೊತ್ತಯ್ಯ. ಕೂಡಲ ಸಂಗನ ಶರಣರಿಗೆಲ್ಲ ಸಂಗನ ಬಸವನ ಬಿನ್ನಪ : ಕವಳಿಗೆ ಸಂದುದು. ನಿಮ್ಮ ಜನಪದದಲ್ಲಿ ಬೆರೆಸೆಂದು ಕೃಪೆ ಮಾಡಿರಯ್ಯ. ''ಆನು ಮಾಡಿದ ತಪ್ಪನೆಣೆಸಿಹೆನೆಂದಡೆ ಗಣನೆಯಿಲ್ಲ. ನಡೆದು ತಪ್ಪುವೆನು, ನುಡಿದು ತಪ್ಪುವೆನು, ಮಾಡಿ ತಪ್ಪುವೆ, ನೀಡಿ ತಪ್ಪುವೆ, ಕೂಡಿ ತಪ್ಪುವೆ, ಅರಿದು ತಪ್ಪುವೆ, ಮರೆದು ತಪ್ಪುವೆ. ಎನ್ನ ತಪ್ಪನೊಪ್ಪಮಾಡಿಕೊಂಬುದಲ್ಲದೆ ಚಿತ್ತಕ್ಕೆ ತರಲಾಗದು. ಕೂಡಲ ಸಂಗಮದೇವಯ್ಯನೆಂಬ ಗಂಡನೆನ್ನ ಬೆರೆಯಬೇಕೆಂದು ಕರೆಯಲಟ್ಟಿದನು. ಶಿವಶರಣರೆಲ್ಲರಿಗೆ ಶರಣೆಂದು ಬೀಳ್ಕೊಂಬ ತವಕದಲ್ಲಿದ್ದೆ.” {{gap}}ಎಂದು ಬಸವಣ್ಣನವರು ಮುಗಿಸಿದಾಗ ಸಭ್ಯರೆಲ್ಲ ಭಾವಪರವಶರಾಗಿ ಚಲಿಸದೆ ಕುಳಿತಿದ್ದರು. ಪ್ರಾಧ್ಯಾಪಕನು ವಂದನಾರ್ಪಣೆಗಾಗಿ ಎದ್ದು ನಿಂತಾಗ ಅವರಿಗೆ ತಾವೆಲ್ಲಿರುವೆವೆಂಬ ಅರಿವಾಯಿತು. {{gap}}ಉತ್ತರಾಪಥದ ಪ್ರವಾಸಿ ಜಂಗಮರೊಡನೆ ಅಂದು ಅಪರಾಹ್ನ ಸಂಗಮಕ್ಕೆ ಬಂದಿದ್ದ ಅಗ್ಗಳನು, ಸಭೆ ಚದುರಿ, ವೇದಿಕೆ ನೆರವಾಗುತ್ತಲೆ ಬಸವಣ್ಣನವರ ಬಳಿಗೆ ಬಂದು ನಮಸ್ಕಾರ ಮಾಡಿ, “ಅಣ್ಣನವರಿಗೆ ನನ್ನ ಪರಿಚಯವಿರಬೇಕು. ನೀವು ಕಲ್ಯಾಣವನ್ನು ಬಿಟ್ಟು ಬಂದ ಆ ದುರ್ದಿನ ನಾನು ಮೋಳಿಗೆಯ ಮಾರಯ್ಯನವರ ಆಶ್ರಮದಲ್ಲಿ ನಿಮ್ಮನ್ನು ನೋಡಿದ್ದೆ,” ಎಂದು ಬಿನ್ನವಿಸಿಕೊಂಡನು. {{gap}}ಸುಮಾರು ಮೂರೂವರೆ ತಿಂಗಳ ಹಿಂದೆ ನಡೆದ ಆ ಘಟನೆಗಳನ್ನು ಬಸವಣ್ಣನವರು ನೆನಪಿಗೆ ತಂದುಕೊಂಡು, “ಮೋಳಿಗೆಯ ಮಾರಯ್ಯನವರ ನೇತೃತ್ವದಲ್ಲಿ ರಕ್ಷಕ ಪಡೆಯನ್ನು ಅಡ್ಡಗಟ್ಟಿದವರಲ್ಲಿ ನೀವೂ ಒಬ್ಬರಲ್ಲವೆ? ಆಗ ನಿಮ್ಮ ಸಂಗಡ ಇದ್ದ ಇಬ್ಬರು ಗೆಳೆಯರು ಕ್ಷೇಮವೆ ?” ಎಂದು ಪ್ರಶ್ನಿಸಿದರು. {{gap}}ಚತುರನಾದ ಅಗ್ಗಳನು ಕೆಲವು ಕ್ಷಣಗಳು ಅಪ್ರತಿಭನಾದನು. ಆ ದಿನ ನಾಗರಿಕರಿಂದ ಬೀಳ್ಕೊಂಡ ಮೇಲೆ ಮೋಳಿಗೆಯ ಮಾರಯ್ಯನವರು ಅಗ್ಗಳನನ್ನೂ ——————— {{gap}}* ಶೂನ್ಯ ಸಂಪಾದನೆ, ಪು. ೪೫೬. ಲೆಂಕ=ಸೇವಕ, ಪಡುಗ=ಉಗುಳುವ ಪಾತ್ರೆ ಕವಳಿಗೆ=(ಕಪಾಲಿಕಾ) ಭಿಕ್ಷಾಪಾತ್ರೆ<noinclude></noinclude> omnmy806jik3euplfvy51n8tb6kqxbr ಪುಟ:ಕ್ರಾಂತಿ ಕಲ್ಯಾಣ.pdf/೪೪೪ 104 86378 323940 203703 2026-06-02T03:05:21Z Shreesha Sharma 7840 /* Proofread */ 323940 proofread-page text/x-wiki <noinclude><pagequality level="3" user="Shreesha Sharma" /></noinclude> {{rh|center=|left=ಮಹಾಪ್ರಸ್ಥಾನ|right=೪೩೧}} {{gap}}ಆಮೇಲೆ ಬಸವಣ್ಣನವರು ತಮ್ಮ ನಿತ್ಯ ಪದ್ಧತಿಯಂತೆ ಅಲ್ಲಿಂದ ಹೊರಟು ನದಿಯ ತೀರದಲ್ಲಿದ್ದ ಇನ್ನೊಂದು ಶಿಲಾಮಂಟಪಕ್ಕೆ ಹೋದರು. ಅವರ ಸೇವೆಗಾಗಿ ನಿಯುಕ್ತನಾಗಿದ್ದ ಗುರುಕುಲದ ವಟು, ಪೂಜೆಗಾಗಿ ಅಲ್ಲಿ ಅಗ್ಗವಣಿ ಬಿಲ್ವಪತ್ರೆಗಳನ್ನು ಸಿದ್ಧಗೊಳಿಸಿ ಕಾದು ಕುಳಿತಿದ್ದನು. {{center|***}} {{gap}}ನದೀತೀರದ ಬಂಡೆಯೊಂದರ ಮೇಲೆ ಕುಳಿತು ಅಗ್ಗಳನು ಸಂಧ್ಯಾ ಸೂರ್ಯನ ವರ್ಣರಂಜಿತ ಕಿರಣಗಳು ಅಲೆಗಳೊಡನೆ ಕಣ್ಣಾಮುಚ್ಚಾಲೆ ಯಾಡುವುದನ್ನು ನೋಡುತ್ತಿದ್ದನು. ಅವನ ಮನಸ್ಸು ಬಸವಣ್ಣನವರ ಪ್ರವಚನ, ಅವರು ಬೀಳ್ಕೊಳ್ಳುವ ಮುನ್ನ ನುಡಿದ ಎರಡು ಆಶುವಚನಗಳು, ಇವುಗಳನ್ನು ಕುರಿತು ಚಿಂತನಮಂಥನದಲ್ಲಿ ತೊಡಗಿತ್ತು. {{gap}}ಪ್ರಭುದೇವರ ವಚನಗಳ ವಿವರಣೆಯಲ್ಲಿ ಬಸವಣ್ಣನವರು ಅನುಸರಿಸಿದ ನವ ವಿಧಾನವನ್ನು ಅಗ್ಗಳನು ಗುರುತಿಸಿದನು. ಶರಣಧರ್ಮದಲ್ಲಿ ಮಾತ್ರವೇ ಪ್ರಚಾರದಲ್ಲಿದ್ದ ಪಾರಿಭಾಷಿಕ ಶಬ್ದಗಳ ಪ್ರತಿಯಾಗಿ, ಆಗಿನ ಕಾಲಕ್ಕೆ ಎಲ್ಲರಲ್ಲಿಯೂ ಪ್ರಚಾರದಲ್ಲಿದ್ದ ಅದೈತ ಪಂಥದ ಪಾರಿಭಾಷಿಕ ಶಬ್ದಗಳನ್ನು ಬಸವಣ್ಣನವರು ಉಪಯೋಗಿಸಿದ್ದರು. ಅದರಿಂದಾಗಿ ವಚನಗಳ ಅರ್ಥ ಅಗ್ಗಳನಿಗೆ ಹೆಚ್ಚು ಪರಿಸ್ಪುಟವಾಗಿತ್ತು. {{gap}}ಶರಣಧರ್ಮದ ಪ್ರವಚನಕಾರರು ಈ ಮಾರ್ಗವನ್ನೇಕೆ ಅನುಸರಿಸುತ್ತಿಲ್ಲ? ಶರಣಧರ್ಮದ ಪ್ರಗಾಢ ಸರ್ವವ್ಯಾಪಿ ತತ್ವಗಳನ್ನು ಪಾರಿಭಾಷಿಕ ಶಬ್ದಗಳ ಆವರಣದಿಂದ ಮುಚ್ಚಿಡಲು ಏಕೆ ಪ್ರಯತ್ನಿಸುತ್ತಿದ್ದಾರೆ ? ರಹಸ್ಯ ರಕ್ಷಣೆ ಇದರ ಉದ್ದೇಶವೇ? -ಎಂದು ಅವನ ವಿವೇಕ ಪ್ರಶ್ನಿಸಿತು. {{gap}}ಪ್ರವಚನದಲ್ಲಿ ಬಸವಣ್ಣನವರು ಸೂಚಿಸಿದ ಇನ್ನೊಂದು ವಿಚಾರ ಅಗ್ಗಳನಿಗೆ ಹೆಚ್ಚು ಮೆಚ್ಚುಗೆ ಆಯಿತು. ಪಂಚಶೀಲ ಅಷ್ಟಾವರಣಗಳ ಬಾಹ್ಯ ಲಾಂಛನಗಳಿಗೆ ಪ್ರಾಮುಖ್ಯತೆ ಕೊಡದೆ, ಸಾಧಕನ ಅಂತರಂಗದಲ್ಲಿ ಆಗಬೇಕಾದ ಪರಿವರ್ತನೆಯನ್ನು ಕುರಿತು ಬಸವಣ್ಣನವರು ವಿಸ್ತಾರವಾಗಿ ಪ್ರಸ್ತಾಪಿಸಿದ್ದರು. ಸುಮಾರು ಒಂದು ವರ್ಷಕ್ಕೆ ಹಿಂದೆ ದೇವಗಿರಿಯಲ್ಲಿ ಚೆನ್ನಬಸವಣ್ಣನವರನ್ನು ಕಂಡಾಗಿನಿಂದ ಅಗ್ಗಳನ ಒಲವು ಶರಣಧರ್ಮದ ಕಡೆಗೆ ತಿರುಗಿತ್ತಾದರೂ, ಪಂಚಶೀಲ ಅಷ್ಟಾವರಣಗಳ ಬಾಹ್ಯ ಲಾಂಛನಗಳಿಗೆ ಶರಣರು ಕೊಡುತ್ತಿದ್ದ ಮಹತ್ವ ಅವನನ್ನು ಶರಣದೀಕ್ಷೆಗೆ ವಿಮುಖನನ್ನಾಗಿ ಮಾಡಿದ್ದವು. ಶರಣಧರ್ಮ ವಿಶ್ವಧರ್ಮವಾಗುವ ಒಂದೇ ಒಂದು ಅಡಚಣೆಯೆಂದರೆ ಈ ಬಾಹ್ಯ ಲಾಂಛನಗಳ ಕಠಿಣತೆಯೇ ಎಂದು<noinclude></noinclude> 248jc8mggq41txwjh6x9b7206rz1sf5 323942 323940 2026-06-02T03:05:55Z Shreelatha.Halemane 7642 /* Validated */ 323942 proofread-page text/x-wiki <noinclude><pagequality level="4" user="Shreelatha.Halemane" /></noinclude> {{rh|center=|left=ಮಹಾಪ್ರಸ್ಥಾನ|right=೪೩೧}} {{gap}}ಆಮೇಲೆ ಬಸವಣ್ಣನವರು ತಮ್ಮ ನಿತ್ಯ ಪದ್ಧತಿಯಂತೆ ಅಲ್ಲಿಂದ ಹೊರಟು ನದಿಯ ತೀರದಲ್ಲಿದ್ದ ಇನ್ನೊಂದು ಶಿಲಾಮಂಟಪಕ್ಕೆ ಹೋದರು. ಅವರ ಸೇವೆಗಾಗಿ ನಿಯುಕ್ತನಾಗಿದ್ದ ಗುರುಕುಲದ ವಟು, ಪೂಜೆಗಾಗಿ ಅಲ್ಲಿ ಅಗ್ಗವಣಿ ಬಿಲ್ವಪತ್ರೆಗಳನ್ನು ಸಿದ್ಧಗೊಳಿಸಿ ಕಾದು ಕುಳಿತಿದ್ದನು. {{center|***}} {{gap}}ನದೀತೀರದ ಬಂಡೆಯೊಂದರ ಮೇಲೆ ಕುಳಿತು ಅಗ್ಗಳನು ಸಂಧ್ಯಾ ಸೂರ್ಯನ ವರ್ಣರಂಜಿತ ಕಿರಣಗಳು ಅಲೆಗಳೊಡನೆ ಕಣ್ಣಾಮುಚ್ಚಾಲೆ ಯಾಡುವುದನ್ನು ನೋಡುತ್ತಿದ್ದನು. ಅವನ ಮನಸ್ಸು ಬಸವಣ್ಣನವರ ಪ್ರವಚನ, ಅವರು ಬೀಳ್ಕೊಳ್ಳುವ ಮುನ್ನ ನುಡಿದ ಎರಡು ಆಶುವಚನಗಳು, ಇವುಗಳನ್ನು ಕುರಿತು ಚಿಂತನಮಂಥನದಲ್ಲಿ ತೊಡಗಿತ್ತು. {{gap}}ಪ್ರಭುದೇವರ ವಚನಗಳ ವಿವರಣೆಯಲ್ಲಿ ಬಸವಣ್ಣನವರು ಅನುಸರಿಸಿದ ನವ ವಿಧಾನವನ್ನು ಅಗ್ಗಳನು ಗುರುತಿಸಿದನು. ಶರಣಧರ್ಮದಲ್ಲಿ ಮಾತ್ರವೇ ಪ್ರಚಾರದಲ್ಲಿದ್ದ ಪಾರಿಭಾಷಿಕ ಶಬ್ದಗಳ ಪ್ರತಿಯಾಗಿ, ಆಗಿನ ಕಾಲಕ್ಕೆ ಎಲ್ಲರಲ್ಲಿಯೂ ಪ್ರಚಾರದಲ್ಲಿದ್ದ ಅದೈತ ಪಂಥದ ಪಾರಿಭಾಷಿಕ ಶಬ್ದಗಳನ್ನು ಬಸವಣ್ಣನವರು ಉಪಯೋಗಿಸಿದ್ದರು. ಅದರಿಂದಾಗಿ ವಚನಗಳ ಅರ್ಥ ಅಗ್ಗಳನಿಗೆ ಹೆಚ್ಚು ಪರಿಸ್ಪುಟವಾಗಿತ್ತು. {{gap}}ಶರಣಧರ್ಮದ ಪ್ರವಚನಕಾರರು ಈ ಮಾರ್ಗವನ್ನೇಕೆ ಅನುಸರಿಸುತ್ತಿಲ್ಲ? ಶರಣಧರ್ಮದ ಪ್ರಗಾಢ ಸರ್ವವ್ಯಾಪಿ ತತ್ವಗಳನ್ನು ಪಾರಿಭಾಷಿಕ ಶಬ್ದಗಳ ಆವರಣದಿಂದ ಮುಚ್ಚಿಡಲು ಏಕೆ ಪ್ರಯತ್ನಿಸುತ್ತಿದ್ದಾರೆ ? ರಹಸ್ಯ ರಕ್ಷಣೆ ಇದರ ಉದ್ದೇಶವೇ? -ಎಂದು ಅವನ ವಿವೇಕ ಪ್ರಶ್ನಿಸಿತು. {{gap}}ಪ್ರವಚನದಲ್ಲಿ ಬಸವಣ್ಣನವರು ಸೂಚಿಸಿದ ಇನ್ನೊಂದು ವಿಚಾರ ಅಗ್ಗಳನಿಗೆ ಹೆಚ್ಚು ಮೆಚ್ಚುಗೆ ಆಯಿತು. ಪಂಚಶೀಲ ಅಷ್ಟಾವರಣಗಳ ಬಾಹ್ಯ ಲಾಂಛನಗಳಿಗೆ ಪ್ರಾಮುಖ್ಯತೆ ಕೊಡದೆ, ಸಾಧಕನ ಅಂತರಂಗದಲ್ಲಿ ಆಗಬೇಕಾದ ಪರಿವರ್ತನೆಯನ್ನು ಕುರಿತು ಬಸವಣ್ಣನವರು ವಿಸ್ತಾರವಾಗಿ ಪ್ರಸ್ತಾಪಿಸಿದ್ದರು. ಸುಮಾರು ಒಂದು ವರ್ಷಕ್ಕೆ ಹಿಂದೆ ದೇವಗಿರಿಯಲ್ಲಿ ಚೆನ್ನಬಸವಣ್ಣನವರನ್ನು ಕಂಡಾಗಿನಿಂದ ಅಗ್ಗಳನ ಒಲವು ಶರಣಧರ್ಮದ ಕಡೆಗೆ ತಿರುಗಿತ್ತಾದರೂ, ಪಂಚಶೀಲ ಅಷ್ಟಾವರಣಗಳ ಬಾಹ್ಯ ಲಾಂಛನಗಳಿಗೆ ಶರಣರು ಕೊಡುತ್ತಿದ್ದ ಮಹತ್ವ ಅವನನ್ನು ಶರಣದೀಕ್ಷೆಗೆ ವಿಮುಖನನ್ನಾಗಿ ಮಾಡಿದ್ದವು. ಶರಣಧರ್ಮ ವಿಶ್ವಧರ್ಮವಾಗುವ ಒಂದೇ ಒಂದು ಅಡಚಣೆಯೆಂದರೆ ಈ ಬಾಹ್ಯ ಲಾಂಛನಗಳ ಕಠಿಣತೆಯೇ ಎಂದು<noinclude></noinclude> 3ews04jkoutuka80q5150lrabewbn4g ಪುಟ:ಕ್ರಾಂತಿ ಕಲ್ಯಾಣ.pdf/೪೪೬ 104 86385 323944 203710 2026-06-02T03:15:44Z Shreesha Sharma 7840 /* Proofread */ 323944 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೩೩}} ಹೋದರು ಎಂಬುದನ್ನು ತಿಳಿಯಲು ಇನ್ನೆರಡು ದಿನಗಳಾದರೂ ನಾವು ಕಲ್ಯಾಣದಲ್ಲಿರಬೇಕಾಗಿತ್ತು,” ಎಂದನು ಬ್ರಹ್ಮಶಿವ. {{gap}}“ನಾವು ಹಾಗೆ ಮಾಡಿದ್ದರೆ ಮಾಧವ ನಾಯಕನ ಸೈನಿಕರಿಗೆ ಸಿಕ್ಕಿಬೀಳುತ್ತಿದ್ದೆವು. ಬಿಜ್ಜಳನ ಅಂತ್ಯಸಂಸ್ಕಾರ ಮುಗಿದ ಕೂಡಲೆ ಮಾಧವ ನಾಯಕನು ನಗರದ ಮಹಾದ್ವಾರಗಳನ್ನು ಮುಚ್ಚಿಸಿ ತನ್ನ ಸೈನಿಕರನ್ನು ಕಾವಲಿಟ್ಟನು. ಬೋನಿಗೆ ಸಿಕ್ಕ ಇಲಿಗಳಂತೆ ನಾವು ನಗರದ ಸೆರೆಮನೆಯಲ್ಲಿ ಕೊಳೆಯಬೇಕಾಗುತ್ತಿತ್ತು.” {{gap}}“ಚಾಲುಕ್ಯ ಸರ್ವಾಧಿಕಾರಿಯ ಶವಸಂಸ್ಕಾರಕ್ಕೆ ಅದೆಷ್ಟೊಂದು ಸೈನ್ಯ ! ಅದೆಷ್ಟೊಂದು ವೈಭವ ! ಚಾಲುಕ್ಯ ಚಕ್ರೇಶ್ವರ ಜಗದೇಕಮಲ್ಲನ ಶವಸಂಸ್ಕಾರ ಅದೊಂದೂ ಇಲ್ಲದೆ ಸಾಮಾನ್ಯ ರೀತಿಯಲ್ಲಿ ಮುಗಿಯಿತು.” {{gap}}“ಮೃತದೇಹವನ್ನು ಕರ್ಣದೇವ ರಹಸ್ಯವಾಗಿ ರಾಜಗೃಹಕ್ಕೆ ತರದೇ ಹೋಗಿದ್ದರೆ ಜಗದೇಕಮಲ್ಲರಸರು ಕೊಲೆಗಡುಕನ ಅನಾಮಿಕ ಸಂಸ್ಕಾರ ಪಡೆಯುತ್ತಿದ್ದರು. ಕರ್ಣದೇವನ ಸಮಯೋಚಿತ ಚತುರತೆ ಅವರನ್ನು ಆ ಅಪಮಾನದಿಂದ ರಕ್ಷಿಸಿತು. ಬೊಮ್ಮರಸನು ಆ ರಾತ್ರಿಯೇ ನಗರದಿಂದ ಪಾರಾಗಿರಬೇಕು,” {{gap}}ಅಗ್ಗಳನ ಉತ್ತರದಿಂದ ಬ್ರಹ್ಮಶಿವನಿಗೆ ಸಮಾಧಾನವಾಗಲಿಲ್ಲ. “ನಿಡುಗಲ್ ದುರ್ಗದಲ್ಲಿ ರಸವಾದದ ಗೀಳಿಗೆ ಬಿದ್ದಿದ್ದ ಬೊಮ್ಮರಸನನ್ನು ಈ ಒಳಸಂಚಿನಲ್ಲಿ ಸಿಕ್ಕಿಸಿದವನು ನಾನು. ಈಗ ಅವನೇನಾದನೆಂದು ಚಿಂತಿಸಬೇಡವೇ,” ಎಂದು ಭಾವಿಸಿ ಅವನು ತುಸು ಹೊತ್ತು ಮೌನವಾಗಿದ್ದು ಬಳಿಕ, “ಮುಂದೆ ನಾವೇನು ಮಾಡುವುದು, ಅಗ್ಗಳ?” ಎಂದನು. {{gap}}“ಉತ್ತರಾಪಥದ ಜಂಗಮರ ತಂಡ ಕಲ್ಯಾಣ ನೌಕಾಶ್ರಯದ ಮಾರ್ಗವಾಗಿ ಸೋಮನಾಥಕ್ಕೆ ಹೋಗುತ್ತದೆ. ಕರ್ಹಾಡದವರೆಗೆ ನಾವೂ ಅವರ ಸಂಗಡ ಹೋಗುವುದು. ಅದೇ ಸದ್ಯದಲ್ಲಿ ಸುರಕ್ಷಿತವಾದ ಮಾರ್ಗ. {{gap}}ಬ್ರಹ್ಮಶಿವ ಉತ್ತರ ಕೊಡಲಿಲ್ಲ. {{gap}}“ಈಗ ಆ ಜಂಗಮಯ್ಯಗಳಲ್ಲಿದ್ದಾರೆ ? {{gap}}ಅಗ್ಗಳನು ಮತ್ತೆ ಪ್ರಶ್ನಿಸಿದನು. {{gap}}"ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದಾರೆ. ಅವರಿಗೆ ತೊಂದರೆಯಾಗದಿರಲೆಂದು ನಾನು ನಿನ್ನನ್ನು ಹುಡುಕುತ್ತ ಬಂದೆ,” ಎಂದು ಬ್ರಹ್ಮಶಿವ ಸಮೀಪದ ಇನ್ನೊಂದು ಕಲ್ಲಿನ ಮೇಲೆ ಕುಳಿತನು. {{gap}}ಅಗ್ಗಳನ ದೃಷ್ಟಿ ಬಸವಣ್ಣನವರಿದ್ದ ಶಿಲಾಮಂಟಪದ ಕಡೆ ತಿರುಗಿತು. ಆ ನಿಬಿಡಾಂಧಕಾರದಲ್ಲಿ ನದಿಯ ಜಾಡು ಹಿಡಿದು ಶಿಲಾಮಂಟಪ ಇರುವ ಸ್ಥಳವನ್ನು<noinclude></noinclude> 940dp1rqvn9ouz6ivgvw0omwn1oc6m9 323949 323944 2026-06-02T03:24:34Z Shreelatha.Halemane 7642 /* Validated */ 323949 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೩೩}} ಹೋದರು ಎಂಬುದನ್ನು ತಿಳಿಯಲು ಇನ್ನೆರಡು ದಿನಗಳಾದರೂ ನಾವು ಕಲ್ಯಾಣದಲ್ಲಿರಬೇಕಾಗಿತ್ತು,” ಎಂದನು ಬ್ರಹ್ಮಶಿವ. {{gap}}“ನಾವು ಹಾಗೆ ಮಾಡಿದ್ದರೆ ಮಾಧವ ನಾಯಕನ ಸೈನಿಕರಿಗೆ ಸಿಕ್ಕಿಬೀಳುತ್ತಿದ್ದೆವು. ಬಿಜ್ಜಳನ ಅಂತ್ಯಸಂಸ್ಕಾರ ಮುಗಿದ ಕೂಡಲೆ ಮಾಧವ ನಾಯಕನು ನಗರದ ಮಹಾದ್ವಾರಗಳನ್ನು ಮುಚ್ಚಿಸಿ ತನ್ನ ಸೈನಿಕರನ್ನು ಕಾವಲಿಟ್ಟನು. ಬೋನಿಗೆ ಸಿಕ್ಕ ಇಲಿಗಳಂತೆ ನಾವು ನಗರದ ಸೆರೆಮನೆಯಲ್ಲಿ ಕೊಳೆಯಬೇಕಾಗುತ್ತಿತ್ತು.” {{gap}}“ಚಾಲುಕ್ಯ ಸರ್ವಾಧಿಕಾರಿಯ ಶವಸಂಸ್ಕಾರಕ್ಕೆ ಅದೆಷ್ಟೊಂದು ಸೈನ್ಯ ! ಅದೆಷ್ಟೊಂದು ವೈಭವ ! ಚಾಲುಕ್ಯ ಚಕ್ರೇಶ್ವರ ಜಗದೇಕಮಲ್ಲನ ಶವಸಂಸ್ಕಾರ ಅದೊಂದೂ ಇಲ್ಲದೆ ಸಾಮಾನ್ಯ ರೀತಿಯಲ್ಲಿ ಮುಗಿಯಿತು.” {{gap}}“ಮೃತದೇಹವನ್ನು ಕರ್ಣದೇವ ರಹಸ್ಯವಾಗಿ ರಾಜಗೃಹಕ್ಕೆ ತರದೇ ಹೋಗಿದ್ದರೆ ಜಗದೇಕಮಲ್ಲರಸರು ಕೊಲೆಗಡುಕನ ಅನಾಮಿಕ ಸಂಸ್ಕಾರ ಪಡೆಯುತ್ತಿದ್ದರು. ಕರ್ಣದೇವನ ಸಮಯೋಚಿತ ಚತುರತೆ ಅವರನ್ನು ಆ ಅಪಮಾನದಿಂದ ರಕ್ಷಿಸಿತು. ಬೊಮ್ಮರಸನು ಆ ರಾತ್ರಿಯೇ ನಗರದಿಂದ ಪಾರಾಗಿರಬೇಕು,” {{gap}}ಅಗ್ಗಳನ ಉತ್ತರದಿಂದ ಬ್ರಹ್ಮಶಿವನಿಗೆ ಸಮಾಧಾನವಾಗಲಿಲ್ಲ. “ನಿಡುಗಲ್ ದುರ್ಗದಲ್ಲಿ ರಸವಾದದ ಗೀಳಿಗೆ ಬಿದ್ದಿದ್ದ ಬೊಮ್ಮರಸನನ್ನು ಈ ಒಳಸಂಚಿನಲ್ಲಿ ಸಿಕ್ಕಿಸಿದವನು ನಾನು. ಈಗ ಅವನೇನಾದನೆಂದು ಚಿಂತಿಸಬೇಡವೇ,” ಎಂದು ಭಾವಿಸಿ ಅವನು ತುಸು ಹೊತ್ತು ಮೌನವಾಗಿದ್ದು ಬಳಿಕ, “ಮುಂದೆ ನಾವೇನು ಮಾಡುವುದು, ಅಗ್ಗಳ?” ಎಂದನು. {{gap}}“ಉತ್ತರಾಪಥದ ಜಂಗಮರ ತಂಡ ಕಲ್ಯಾಣ ನೌಕಾಶ್ರಯದ ಮಾರ್ಗವಾಗಿ ಸೋಮನಾಥಕ್ಕೆ ಹೋಗುತ್ತದೆ. ಕರ್ಹಾಡದವರೆಗೆ ನಾವೂ ಅವರ ಸಂಗಡ ಹೋಗುವುದು. ಅದೇ ಸದ್ಯದಲ್ಲಿ ಸುರಕ್ಷಿತವಾದ ಮಾರ್ಗ. {{gap}}ಬ್ರಹ್ಮಶಿವ ಉತ್ತರ ಕೊಡಲಿಲ್ಲ. {{gap}}“ಈಗ ಆ ಜಂಗಮಯ್ಯಗಳಲ್ಲಿದ್ದಾರೆ ? {{gap}}ಅಗ್ಗಳನು ಮತ್ತೆ ಪ್ರಶ್ನಿಸಿದನು. {{gap}}"ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದಾರೆ. ಅವರಿಗೆ ತೊಂದರೆಯಾಗದಿರಲೆಂದು ನಾನು ನಿನ್ನನ್ನು ಹುಡುಕುತ್ತ ಬಂದೆ,” ಎಂದು ಬ್ರಹ್ಮಶಿವ ಸಮೀಪದ ಇನ್ನೊಂದು ಕಲ್ಲಿನ ಮೇಲೆ ಕುಳಿತನು. {{gap}}ಅಗ್ಗಳನ ದೃಷ್ಟಿ ಬಸವಣ್ಣನವರಿದ್ದ ಶಿಲಾಮಂಟಪದ ಕಡೆ ತಿರುಗಿತು. ಆ ನಿಬಿಡಾಂಧಕಾರದಲ್ಲಿ ನದಿಯ ಜಾಡು ಹಿಡಿದು ಶಿಲಾಮಂಟಪ ಇರುವ ಸ್ಥಳವನ್ನು<noinclude></noinclude> n3yj7zx0ezpgneakmw3ncqr6hejy8f5 ಪುಟ:ಕ್ರಾಂತಿ ಕಲ್ಯಾಣ.pdf/೪೪೮ 104 86386 323946 203711 2026-06-02T03:20:44Z Shreesha Sharma 7840 /* Proofread */ 323946 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೩೫}} ನೋಡಲಾರದೆ ಅಗ್ಗಳನು ಕಣ್ಣುಗಳನ್ನು ಮುಚ್ಚಿದನು. {{gap}}ಹಠಾತ್ತನೆ ಸಾವಿರ ಸಿಡಿಲುಗಳು ಹೊಡೆದಂತೆ ದೊಡ್ಡ ಶಬ್ಬವಾಗಿ ಭೂಮಿ ನಡುಗಿತು. ಅಗ್ಗಳನ ಸಮೀಪದಲ್ಲಿ ಕುಳಿತಿದ್ದ ಬ್ರಹ್ಮಶಿವ ಚೀರುತ್ತ ಎದ್ದು ನಿಂತನು. ಬಿರುಗಾಳಿಗೆ ಸಿಕ್ಕ ಬಾಳೆಯ ಮರದಂತೆ ತೂಗಾಡುತ್ತಿತ್ತು ಅವನ ದೇಹ. {{gap}}ಅಗ್ಗಳನು ಎದ್ದು ಅವನನ್ನು ಹಿಡಿದು ನಿಲ್ಲಿಸಿ, “ಏನಾಯಿತು, ಬ್ರಹ್ಮಶಿವ ? ಏಕೆ ಬೆದರಿದೆ?” ಎಂದು ಕೇಳಿದನು. {{gap}}“ಭೂಕಂಪ .... ಭೂಮಿ ನಡುಗಿತು !.....ಎಂಥ ಮಹಾಶಬ್ದ !” {{gap}}-ಬ್ರಹ್ಮಶಿವ ತೊದಲುತ್ತ ಹೇಳಿದನು. {{gap}}“ನನಗೆ ಆ ಶಬ್ದ ಕೇಳಿಸಲಿಲ್ಲ. ನಾನು ಕಂಪಿಸಲಿಲ್ಲ. ಸ್ಥಿರವಾಗಿ ಕುಳಿತು ಭುವಿಗಿಳಿದ ಮಹಾಘನವೊಂದು ಮತ್ತೆ ಗಗನದ ಉನ್ನತ ಸ್ಥಾನ ಸೇರಿದುದನ್ನು ಕಂಡೆ ನಾನು. ಇದು ನನ್ನ ಜೀವನದ ಶ್ರೇಷ್ಠತಮ ಮುಹೂರ್ತ. ಇದುವರೆಗೆ ನಾನು ಜೀವಿಸಿದ್ದದ್ದು, ಇಂದು ಈ ಪವಿತ್ರ ಕ್ಷೇತ್ರಕ್ಕೆ ಬಂದದ್ದು, ಈ ಅನುಭಾವಕ್ಕಾಗಿಯೇ ಎಂದು ತಿಳಿದಿದ್ದೇನೆ,” {{gap}}-ಎಂದು ನುಡಿದು ಅಗ್ಗಳನು ಸುತ್ತ ನೋಡಿದನು. ವ್ಯಾವಹಾರಿಕ ಜಗತ್ತಿನ ಅರಿವಾಯಿತು ಅವನಿಗೆ ಆಗ. ಹಿಂದಿನಂತೆ ಶೀಲಾಮಂಟಪ ಕತ್ತಲಲ್ಲಿ ಮರೆಯಾಗಿತ್ತು. ನದಿಯ ದಡದಲ್ಲಿ ಪೂಜಾನುಷ್ಠಾನಗಳಿಗೆ ಕುಳಿತಿದ್ದ ಉತ್ತರಾಪಥದ ಜಂಗಮರು ಬೆದರಿ ಎದ್ದು ನಿಂತು ದಿಗ್ಗಾಂತರಂತೆ ಗಗನದತ್ತ ನೋಡುತ್ತಿದ್ದರು. {{gap}}ಅಗ್ಗಳನು ಅವರ ಹತ್ತಿರ ಹೋಗಿ, “ಬೆದರುವ ಕಾರಣವಿಲ್ಲ, ಅಯ್ಯನವರೆ, ಅತ್ತನೋಡಿರಿ, ಗುರುಕುಲದ ಜನ ದೀಪಗಳನ್ನು ಹಿಡಿದುಬರುತ್ತಿದ್ದಾರೆ,” ಎಂದನು. {{gap}}ಗುರುಕುಲದ ಅಧ್ಯಾಪಕ ವಿದ್ಯಾರ್ಥಿಗಳು ಸಮೀಪದ ಹಳ್ಳಿಯ ನಿವಾಸಿಗಳು ಭಯಗ್ರಸ್ತರಾಗಿ ಮಂಟಪದ ಬಳಿ ಹೋಗುತ್ತಿದ್ದರು. {{gap}}ಇಷ್ಟು ಹೊತ್ತಾದರೂ ಬಸವಣ್ಣನವರೇಕೆ ಅತಿಥಿಶಾಲೆಗೆ ಹಿಂದಿರುಗಲಿಲ್ಲ? ಅವರ ಸಂಗಡಿದ್ದ ವಟುವೆಲ್ಲಿ? ಎಂಬುದನ್ನು ತಿಳಿಯಲು ತವಕಿಸುತ್ತಿದ್ದರು ಅವರು. {{gap}}ಆ ಶಿಲಾಮಂಟಪದ ನಡುವೆ, ಹಿಂದಿನ ಗೋಡೆಗೆ ಒರಗಿಸಿದ ಶಿಲಾನಿರ್ಮಿತ ವಿಗ್ರಹದಂತೆ, ಪದ್ಮಾಸನದಲ್ಲಿ ಪೂಜಾಭಾವದಿಂದ ನಿಶ್ಚಲವಾಗಿ ಮೂರ್ತಗೊಂಡಿದ್ದ ಬಸವಣ್ಣನವರನ್ನು ಕಂಡರು ಅವರು. ಮುಂದೆ ಚಾಚಿದ ಬಸವಣ್ಣನವರ ಕರಸ್ಥಳದಲ್ಲಿ, ಬಿಲ್ವಪತ್ರೆಗಳಿಂದ ಅರೆ ಮುಚ್ಚಿದ ಇಷ್ಟಲಿಂಗ ಉರಿಯಿಂಗಿದ ಕೆಂಡದಂತೆ ಬೆಳಗಿತ್ತು. ಅರೆ ಮುಚ್ಚಿದ್ದ ಅವರ ಕಣ್ಣುಗಳ ದೃಷ್ಟಿ, ನಾಸಿಕಾಗ್ರದಲ್ಲಿ ನೆಲೆಸಿ, ಮುಂದೆ ಹರಿಯದೆ ಅಲ್ಲಿಯೇ ಲೀನವಾದಂತೆ ಕಂಡಿತು. ಹಣೆ ಕೊರಳುಗಳ ವಿಭೂತಿ ರುದ್ರಾಕ್ಷಿಗಳು,<noinclude></noinclude> ia6k6mzqqktvs7cycf7e5ihv3ui611z 323951 323946 2026-06-02T03:24:55Z Shreelatha.Halemane 7642 /* Validated */ 323951 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೩೫}} ನೋಡಲಾರದೆ ಅಗ್ಗಳನು ಕಣ್ಣುಗಳನ್ನು ಮುಚ್ಚಿದನು. {{gap}}ಹಠಾತ್ತನೆ ಸಾವಿರ ಸಿಡಿಲುಗಳು ಹೊಡೆದಂತೆ ದೊಡ್ಡ ಶಬ್ಬವಾಗಿ ಭೂಮಿ ನಡುಗಿತು. ಅಗ್ಗಳನ ಸಮೀಪದಲ್ಲಿ ಕುಳಿತಿದ್ದ ಬ್ರಹ್ಮಶಿವ ಚೀರುತ್ತ ಎದ್ದು ನಿಂತನು. ಬಿರುಗಾಳಿಗೆ ಸಿಕ್ಕ ಬಾಳೆಯ ಮರದಂತೆ ತೂಗಾಡುತ್ತಿತ್ತು ಅವನ ದೇಹ. {{gap}}ಅಗ್ಗಳನು ಎದ್ದು ಅವನನ್ನು ಹಿಡಿದು ನಿಲ್ಲಿಸಿ, “ಏನಾಯಿತು, ಬ್ರಹ್ಮಶಿವ ? ಏಕೆ ಬೆದರಿದೆ?” ಎಂದು ಕೇಳಿದನು. {{gap}}“ಭೂಕಂಪ .... ಭೂಮಿ ನಡುಗಿತು !.....ಎಂಥ ಮಹಾಶಬ್ದ !” {{gap}}-ಬ್ರಹ್ಮಶಿವ ತೊದಲುತ್ತ ಹೇಳಿದನು. {{gap}}“ನನಗೆ ಆ ಶಬ್ದ ಕೇಳಿಸಲಿಲ್ಲ. ನಾನು ಕಂಪಿಸಲಿಲ್ಲ. ಸ್ಥಿರವಾಗಿ ಕುಳಿತು ಭುವಿಗಿಳಿದ ಮಹಾಘನವೊಂದು ಮತ್ತೆ ಗಗನದ ಉನ್ನತ ಸ್ಥಾನ ಸೇರಿದುದನ್ನು ಕಂಡೆ ನಾನು. ಇದು ನನ್ನ ಜೀವನದ ಶ್ರೇಷ್ಠತಮ ಮುಹೂರ್ತ. ಇದುವರೆಗೆ ನಾನು ಜೀವಿಸಿದ್ದದ್ದು, ಇಂದು ಈ ಪವಿತ್ರ ಕ್ಷೇತ್ರಕ್ಕೆ ಬಂದದ್ದು, ಈ ಅನುಭಾವಕ್ಕಾಗಿಯೇ ಎಂದು ತಿಳಿದಿದ್ದೇನೆ,” {{gap}}-ಎಂದು ನುಡಿದು ಅಗ್ಗಳನು ಸುತ್ತ ನೋಡಿದನು. ವ್ಯಾವಹಾರಿಕ ಜಗತ್ತಿನ ಅರಿವಾಯಿತು ಅವನಿಗೆ ಆಗ. ಹಿಂದಿನಂತೆ ಶೀಲಾಮಂಟಪ ಕತ್ತಲಲ್ಲಿ ಮರೆಯಾಗಿತ್ತು. ನದಿಯ ದಡದಲ್ಲಿ ಪೂಜಾನುಷ್ಠಾನಗಳಿಗೆ ಕುಳಿತಿದ್ದ ಉತ್ತರಾಪಥದ ಜಂಗಮರು ಬೆದರಿ ಎದ್ದು ನಿಂತು ದಿಗ್ಗಾಂತರಂತೆ ಗಗನದತ್ತ ನೋಡುತ್ತಿದ್ದರು. {{gap}}ಅಗ್ಗಳನು ಅವರ ಹತ್ತಿರ ಹೋಗಿ, “ಬೆದರುವ ಕಾರಣವಿಲ್ಲ, ಅಯ್ಯನವರೆ, ಅತ್ತನೋಡಿರಿ, ಗುರುಕುಲದ ಜನ ದೀಪಗಳನ್ನು ಹಿಡಿದುಬರುತ್ತಿದ್ದಾರೆ,” ಎಂದನು. {{gap}}ಗುರುಕುಲದ ಅಧ್ಯಾಪಕ ವಿದ್ಯಾರ್ಥಿಗಳು ಸಮೀಪದ ಹಳ್ಳಿಯ ನಿವಾಸಿಗಳು ಭಯಗ್ರಸ್ತರಾಗಿ ಮಂಟಪದ ಬಳಿ ಹೋಗುತ್ತಿದ್ದರು. {{gap}}ಇಷ್ಟು ಹೊತ್ತಾದರೂ ಬಸವಣ್ಣನವರೇಕೆ ಅತಿಥಿಶಾಲೆಗೆ ಹಿಂದಿರುಗಲಿಲ್ಲ? ಅವರ ಸಂಗಡಿದ್ದ ವಟುವೆಲ್ಲಿ? ಎಂಬುದನ್ನು ತಿಳಿಯಲು ತವಕಿಸುತ್ತಿದ್ದರು ಅವರು. {{gap}}ಆ ಶಿಲಾಮಂಟಪದ ನಡುವೆ, ಹಿಂದಿನ ಗೋಡೆಗೆ ಒರಗಿಸಿದ ಶಿಲಾನಿರ್ಮಿತ ವಿಗ್ರಹದಂತೆ, ಪದ್ಮಾಸನದಲ್ಲಿ ಪೂಜಾಭಾವದಿಂದ ನಿಶ್ಚಲವಾಗಿ ಮೂರ್ತಗೊಂಡಿದ್ದ ಬಸವಣ್ಣನವರನ್ನು ಕಂಡರು ಅವರು. ಮುಂದೆ ಚಾಚಿದ ಬಸವಣ್ಣನವರ ಕರಸ್ಥಳದಲ್ಲಿ, ಬಿಲ್ವಪತ್ರೆಗಳಿಂದ ಅರೆ ಮುಚ್ಚಿದ ಇಷ್ಟಲಿಂಗ ಉರಿಯಿಂಗಿದ ಕೆಂಡದಂತೆ ಬೆಳಗಿತ್ತು. ಅರೆ ಮುಚ್ಚಿದ್ದ ಅವರ ಕಣ್ಣುಗಳ ದೃಷ್ಟಿ, ನಾಸಿಕಾಗ್ರದಲ್ಲಿ ನೆಲೆಸಿ, ಮುಂದೆ ಹರಿಯದೆ ಅಲ್ಲಿಯೇ ಲೀನವಾದಂತೆ ಕಂಡಿತು. ಹಣೆ ಕೊರಳುಗಳ ವಿಭೂತಿ ರುದ್ರಾಕ್ಷಿಗಳು,<noinclude></noinclude> sibm84dund7hgxs2s9irfcjhu70tb7u ಪುಟ:ಕ್ರಾಂತಿ ಕಲ್ಯಾಣ.pdf/೪೪೫ 104 86387 323943 203712 2026-06-02T03:09:39Z Shreesha Sharma 7840 /* Proofread */ 323943 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೩೨|right=ಕ್ರಾಂತಿ ಕಲ್ಯಾಣ}} ಅಗ್ಗಳನ್ನು ನಿರ್ಧರಿಸಿಕೊಂಡನು. {{gap}}“ದೀಕ್ಷೆಯಾದರೂ ನಾನು ಶರಣನಾಗಲಿಲ್ಲ. ನಿನಗೆ ದೀಕ್ಷೆ ಇಲ್ಲದಿದ್ದರೂ ನಿಜವಾಗಿ ಶರಣನೇ ಆಗಿರುವೆ,” ಎಂದು ಬ್ರಹ್ಮಶಿವ ತನ್ನನ್ನು ಹಾಸ್ಯಮಾಡಿ ಹೇಳುತ್ತಿದ್ದದ್ದು ಅಸತ್ಯವಲ್ಲವೆಂದು ಅಗ್ಗಳನು ತಿಳಿದನು. {{gap}}ಬಿಜ್ಜಳನ ಬಗೆಗೆ ಪರೋಕ್ಷ ವಿನಯವನ್ನು ಮುಗಿಸುತ್ತ ಬಸವಣ್ಣನವರು ಹೇಳಿದ ಎರಡು ಆಶುವಚನಗಳ ಮುಕ್ತಾಯದ ನುಡಿಗಳು ಅಗ್ಗಳನನ್ನು ಅಚ್ಚರಿಗೊಳಿಸಿದ್ದವು. “ಕವಳಿಗೆ ಸಂದುದು ನಿಮ್ಮ ನಿಜಪದದಲ್ಲಿ ಬೆರೆಸೆಂದು ಕೃಪೆ ಮಾಡಿರಯ್ಯ” “ಶರಣರೆಲ್ಲರಿಗೆ ಶರಣೆಂದು ಬೀಳ್ಕೊಂಬ ತವಕದಲ್ಲಿದ್ದೆ.” -ಎಂದು ಬಸವಣ್ಣನವರು ಹೇಳಿದ್ದರು. “ಕವಳಿಗೆ ಸಂದುದು, ನನ್ನ ಭಿಕ್ಷಾ ಪಾತ್ರೆ ತುಂಬಿತು. ಶರಣರೆಲ್ಲರಿಂದ ಬೀಳ್ಕೊಳ್ಳುವ ಅವಸರದಲ್ಲಿದ್ದೇನೆ ನಾನು,” ಎಂಬುದರ ಅರ್ಥವೇನು? {{gap}}ಸಂಗಮವನ್ನು ಬಿಟ್ಟು ಯಾವುದಾದರೊಂದು ಅಜ್ಞಾತ ಅನಿರ್ದಿಷ್ಟ ಸ್ಥಾನಕ್ಕೆ ಹೋಗುವುದು ಬಸವಣ್ಣನವರ ಉದ್ದೇಶವೆ? ವಚನಗಳ ಈ ನಿಗೂಢಾರ್ಥವನ್ನು ತಿಳಿಯಲು ಶರಣರು ಅಸಮರ್ಥರಾದರೆ? {{gap}}ಕಲ್ಯಾಣದಿಂದ ಶರಣರ ವಲಸೆ, ಕೂಡಲ ಸಂಗಮದಿಂದ ಬಸವಣ್ಣನವರ ನಿಷ್ಕ್ರಮಣ, -ಈ ಘಟನೆಗಳು ಚಾಲುಕ್ಯ ರಾಜ್ಯಕ್ಕೆ ಶುಭಸೂಚಕವಲ್ಲ, ಎಂದು ಭಾವಿಸಿ ಅಗ್ಗಳನು ಅಳುಕಿದನು. {{gap}}ಅವನಿದ್ದ ಸ್ಥಳದಿಂದ ಬಸವಣ್ಣನವರು ಪೂಜೆಗೆ ಕುಳಿತಿದ್ದ ಶಿಲಾಮಂಟಪ ಕಾಣಿಸುತ್ತಿತ್ತು. ತದೇಕ ದೃಷ್ಟಿಯಿಂದ ಅವನು ಆ ಕಡೆ ನೋಡುತ್ತಿದ್ದಂತೆ ಸೂರ್ಯನು ಅಸ್ತನಾಗಿ ಸುತ್ತ ಕತ್ತಲೆ ಹರಡಿತು. ಮಂಟಪದ ಆಕೃತಿ ಕ್ರಮ ಕ್ರಮವಾಗಿ ಮಂಜು ಮುಸುಕಿದಂತೆ ಅಸ್ಪಷ್ಟವಾಗುತ್ತ ಕೊನೆಗೆ ಹರಡಿದ ಕತ್ತಲೆಯಲ್ಲಿ ಬೆರೆಯಿತು. ಅಗ್ಗಳನು ನಿಡುಸುಯ್ದನು. {{gap}}ಆಗಬ್ರಹ್ಮಶಿವ ಅಲ್ಲಿಗೆ ಬಂದು, “ಅಣ್ಣನವರಂತೆ ನೀನೂ ಧ್ಯಾನಮಗ್ನನಾದೆಯ, ಅಗ್ಗಳ?” ಎಂದನು. {{gap}}“ಅಂತಹ ಪುಣ್ಯ ನನಗೆಲ್ಲಿಯದು, ಬ್ರಹ್ಮಶಿವ, ಬಿಜ್ಜಳನ ಬಗೆಗೆ ಬಸವಣ್ಣನವರು ಹೇಳಿದುದನ್ನು ಕುರಿತು ಯೋಚಿಸುತ್ತಿದ್ದೆ,” ಎಂದು ಅಗ್ಗಳನು ಉತ್ತರ ಕೊಟ್ಟನು. {{gap}}“ನನ್ನ ಚಿಂತೆ ಬೊಮ್ಮರಸರ ವಿಚಾರದಲ್ಲಿ. ಅವರೇನಾದರು, ಎಲ್ಲಿಗೆ<noinclude></noinclude> 17lk0mt7fbkj700jb7o8getk9dovxum 323948 323943 2026-06-02T03:24:25Z Shreelatha.Halemane 7642 /* Validated */ 323948 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೩೨|right=ಕ್ರಾಂತಿ ಕಲ್ಯಾಣ}} ಅಗ್ಗಳನ್ನು ನಿರ್ಧರಿಸಿಕೊಂಡನು. {{gap}}“ದೀಕ್ಷೆಯಾದರೂ ನಾನು ಶರಣನಾಗಲಿಲ್ಲ. ನಿನಗೆ ದೀಕ್ಷೆ ಇಲ್ಲದಿದ್ದರೂ ನಿಜವಾಗಿ ಶರಣನೇ ಆಗಿರುವೆ,” ಎಂದು ಬ್ರಹ್ಮಶಿವ ತನ್ನನ್ನು ಹಾಸ್ಯಮಾಡಿ ಹೇಳುತ್ತಿದ್ದದ್ದು ಅಸತ್ಯವಲ್ಲವೆಂದು ಅಗ್ಗಳನು ತಿಳಿದನು. {{gap}}ಬಿಜ್ಜಳನ ಬಗೆಗೆ ಪರೋಕ್ಷ ವಿನಯವನ್ನು ಮುಗಿಸುತ್ತ ಬಸವಣ್ಣನವರು ಹೇಳಿದ ಎರಡು ಆಶುವಚನಗಳ ಮುಕ್ತಾಯದ ನುಡಿಗಳು ಅಗ್ಗಳನನ್ನು ಅಚ್ಚರಿಗೊಳಿಸಿದ್ದವು. “ಕವಳಿಗೆ ಸಂದುದು ನಿಮ್ಮ ನಿಜಪದದಲ್ಲಿ ಬೆರೆಸೆಂದು ಕೃಪೆ ಮಾಡಿರಯ್ಯ” “ಶರಣರೆಲ್ಲರಿಗೆ ಶರಣೆಂದು ಬೀಳ್ಕೊಂಬ ತವಕದಲ್ಲಿದ್ದೆ.” -ಎಂದು ಬಸವಣ್ಣನವರು ಹೇಳಿದ್ದರು. “ಕವಳಿಗೆ ಸಂದುದು, ನನ್ನ ಭಿಕ್ಷಾ ಪಾತ್ರೆ ತುಂಬಿತು. ಶರಣರೆಲ್ಲರಿಂದ ಬೀಳ್ಕೊಳ್ಳುವ ಅವಸರದಲ್ಲಿದ್ದೇನೆ ನಾನು,” ಎಂಬುದರ ಅರ್ಥವೇನು? {{gap}}ಸಂಗಮವನ್ನು ಬಿಟ್ಟು ಯಾವುದಾದರೊಂದು ಅಜ್ಞಾತ ಅನಿರ್ದಿಷ್ಟ ಸ್ಥಾನಕ್ಕೆ ಹೋಗುವುದು ಬಸವಣ್ಣನವರ ಉದ್ದೇಶವೆ? ವಚನಗಳ ಈ ನಿಗೂಢಾರ್ಥವನ್ನು ತಿಳಿಯಲು ಶರಣರು ಅಸಮರ್ಥರಾದರೆ? {{gap}}ಕಲ್ಯಾಣದಿಂದ ಶರಣರ ವಲಸೆ, ಕೂಡಲ ಸಂಗಮದಿಂದ ಬಸವಣ್ಣನವರ ನಿಷ್ಕ್ರಮಣ, -ಈ ಘಟನೆಗಳು ಚಾಲುಕ್ಯ ರಾಜ್ಯಕ್ಕೆ ಶುಭಸೂಚಕವಲ್ಲ, ಎಂದು ಭಾವಿಸಿ ಅಗ್ಗಳನು ಅಳುಕಿದನು. {{gap}}ಅವನಿದ್ದ ಸ್ಥಳದಿಂದ ಬಸವಣ್ಣನವರು ಪೂಜೆಗೆ ಕುಳಿತಿದ್ದ ಶಿಲಾಮಂಟಪ ಕಾಣಿಸುತ್ತಿತ್ತು. ತದೇಕ ದೃಷ್ಟಿಯಿಂದ ಅವನು ಆ ಕಡೆ ನೋಡುತ್ತಿದ್ದಂತೆ ಸೂರ್ಯನು ಅಸ್ತನಾಗಿ ಸುತ್ತ ಕತ್ತಲೆ ಹರಡಿತು. ಮಂಟಪದ ಆಕೃತಿ ಕ್ರಮ ಕ್ರಮವಾಗಿ ಮಂಜು ಮುಸುಕಿದಂತೆ ಅಸ್ಪಷ್ಟವಾಗುತ್ತ ಕೊನೆಗೆ ಹರಡಿದ ಕತ್ತಲೆಯಲ್ಲಿ ಬೆರೆಯಿತು. ಅಗ್ಗಳನು ನಿಡುಸುಯ್ದನು. {{gap}}ಆಗಬ್ರಹ್ಮಶಿವ ಅಲ್ಲಿಗೆ ಬಂದು, “ಅಣ್ಣನವರಂತೆ ನೀನೂ ಧ್ಯಾನಮಗ್ನನಾದೆಯ, ಅಗ್ಗಳ?” ಎಂದನು. {{gap}}“ಅಂತಹ ಪುಣ್ಯ ನನಗೆಲ್ಲಿಯದು, ಬ್ರಹ್ಮಶಿವ, ಬಿಜ್ಜಳನ ಬಗೆಗೆ ಬಸವಣ್ಣನವರು ಹೇಳಿದುದನ್ನು ಕುರಿತು ಯೋಚಿಸುತ್ತಿದ್ದೆ,” ಎಂದು ಅಗ್ಗಳನು ಉತ್ತರ ಕೊಟ್ಟನು. {{gap}}“ನನ್ನ ಚಿಂತೆ ಬೊಮ್ಮರಸರ ವಿಚಾರದಲ್ಲಿ. ಅವರೇನಾದರು, ಎಲ್ಲಿಗೆ<noinclude></noinclude> erqam9x9tkl34f5mzjc11nvjpqw1d5h ಪುಟ:ಕ್ರಾಂತಿ ಕಲ್ಯಾಣ.pdf/೪೪೭ 104 86388 323945 203713 2026-06-02T03:18:52Z Shreesha Sharma 7840 /* Proofread */ 323945 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೩೪|right=ಕ್ರಾಂತಿ ಕಲ್ಯಾಣ}} ಗುರುತಿಸಬೇಕಾಗಿತ್ತು. ಹೆಪ್ಪುಗಟ್ಟಿದ ಕತ್ತಲೆಯ ಹೊರತಾಗಿ ಅಲ್ಲಿ ಮತ್ತೇನೂ ಕಾಣುತ್ತಿರಲಿಲ್ಲ. {{gap}}“ಏನು ಯೋಚಿಸುತ್ತಿರುವೆ, ಅಗ್ಗಳ?” {{gap}}-ತುಸು ಹೊತ್ತಿನ ಮೇಲೆ ಬ್ರಹ್ಮಶಿವ ಕೇಳಿದನು. {{gap}}“ಪೂಜೆಗೆ ಕುಳಿತ ಬಸವಣ್ಣನವರು ಮಂಟಪವನ್ನು ಬಿಟ್ಟರೆ, ಅಥವಾ ಇನ್ನೂ ಅಲ್ಲಿಯೇ ಇರುವರೇ ಎಂದು. ಕತ್ತಲಲ್ಲಿ ಏನೂ ಕಾಣುತ್ತಿಲ್ಲ,” ಅಗ್ಗಳನೆಂದನು. {{gap}}“ಶರಣರಿಗೆ ಅರಿವಿನ ಕಣ್ಣು ತೆರೆಯುವುದಂತೆ, ಅಗ್ಗಳ, ಕತ್ತಲಲ್ಲಿ ನೀಡುವ ಶಕ್ತಿ ಇದೆಯೋ ಏನೋ ಅವರಿಗೆ!” ಎಂದು ಬ್ರಹ್ಮಶಿವ ನಕ್ಕನು. - {{gap}}“ನಿನ್ನ ಕುಚೇಷ್ಟೆ ನಿಲ್ಲಿಸು, ಬ್ರಹ್ಮಶಿವ...ಮಂಟಪದ ಹತ್ತಿರ ಬೆಳಕು ಕಾಣುತ್ತಿಲ್ಲವೆ ಈಗ?” {{gap}}“ಅದು ದೀಪವಲ್ಲ, ನಕ್ಷತ್ರ” {{gap}}ನೋಡುತ್ತಿದ್ದಂತೆ ನಕ್ಷತ್ರದ ಆಕಾರ ದೊಡ್ಡದಾಯಿತು. ಬೆಳಕು ಹೆಚ್ಚಿ ಮಂಟಪ ಮಸಕಾಗಿ ಕಂಡಿತು. {{gap}}“ಮಂಟಪದಲ್ಲಿ ದೀಪ ಹಚ್ಚಿಟ್ಟಿದ್ದಾರೆ,” ಎಂದನು ಬ್ರಹ್ಮಶಿವ. {{gap}}ಮಂಟಪದಲ್ಲೆಲ್ಲ ಹರಡಿತು ಆ ಬೆಳಕು. ಕತ್ತಲ ತೆರೆಯ ಮೇಲೆ, ಮಿರುಗುವ ಬೆಳ್ಳಿಯ ಬಣ್ಣದಿಂದ ಬರೆದ ಬೃಹದಾಕಾರದ ಚಿತ್ತಾರದಂತೆ ಬೆಳಗಿತು ಆ ಶಿಲಾ ಮಂಟಪ. ಅದರ ನಡುವೆ ಬಸವಣ್ಣನವರು ಪದ್ಮಾಸನದಲ್ಲಿ ಕುಳಿತು ಪೂಜಾಭಾವದಿಂದ ಎಡಗೈಯನ್ನು ಮುಂದೆ ಚಾಚಿದ್ದರು. ಅರೆ ತೆರೆದ ಅವರ ಕಣ್ಣುಗಳ ದೃಷ್ಟಿಜ್ವಾಲೆ ಮುಂಗೈಯಲ್ಲಿ ಮಿರುಗುತ್ತಿದ್ದ ಜ್ಯೋತಿರ್ಮಯ ಲಿಂಗಮೂರ್ತಿಯ ಮೇಲೆ ನೆಟ್ಟಿತ್ತು. {{gap}}ಅಗ್ಗಳನ ಉದ್ರಿಕ್ತ ಅಂತಃಚಕ್ಷುಗಳು ಈ ಅದ್ಭುತ ಅಭೌಮ ದೃಶ್ಯವನ್ನು ನೋಡುತ್ತಿದ್ದಂತೆ ಮಂಟಪದಲ್ಲಿ ಹರಡಿದ್ದ ಬೆಳಕು, ಬಸವಣ್ಣನವರ ದೃಷ್ಟಿಜ್ವಾಲೆಯೊಡನೆ ಬೆರೆತು, ಕರಸ್ಥಲದಲ್ಲಿ ಕೇಂದ್ರೀಕೃತವಾಗಿ, ಬೃಹದಾಕಾರದ ವಜ್ರದಂತೆ ಬೆಳಗಿತು. ತಿಳಿನೀಲಿ ಬಣ್ಣದ ಅದರ ಕಿರಣ ಮಾಲಿಕೆ, ಬಸವಣ್ಣನವರ ದೇಹದ ಮೇಲೆ ಬಿದ್ದು, ಒಂದುಗೂಡಿ, ಬೆಳಕಿನ ಎಳೆಯಂತೆ ಕಂಡಿತು. ಭಾವಾವೇಶದಿಂದ ಉದ್ದೀಪಿತನಾಗಿ ಸೂಕ್ಷ್ಮಾತಿಸೂಕ್ಷವನ್ನು ಕಾಣಲು ತವಕಿಸುತ್ತಿದ್ದ ಅಗ್ಗಳನು, ಆ ಬೆಳಕಿನ ಎಳೆ ಮೂರಾಗಿ ಕವಲೊಡೆದು, ಅದರಲ್ಲಿ ಮಧ್ಯದ ಎಳೆ, ಮಣಿಗಳಂತೆ ಮಿರುಗುವ ತಾವರೆ ಆಕಾರದ ಆರು ಗಂಟುಗಳಿಂದ ಬೆಳಗುತ್ತಿರುವುದನ್ನು ಕಂಡನು. ಮಧ್ಯದ ಎಳೆಯ ಮುಡಿಯಲ್ಲಿ ಸಹಸ್ರ ಸೂರ್ಯಕಾಂತಿಯಿಂದ ಸಹಸ್ರಾರ ಬೆಳಗುತ್ತಿತ್ತು.<noinclude></noinclude> d27e1qkwlu7hf1yo3vxiz0p63im0nbe 323950 323945 2026-06-02T03:24:44Z Shreelatha.Halemane 7642 /* Validated */ 323950 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೩೪|right=ಕ್ರಾಂತಿ ಕಲ್ಯಾಣ}} ಗುರುತಿಸಬೇಕಾಗಿತ್ತು. ಹೆಪ್ಪುಗಟ್ಟಿದ ಕತ್ತಲೆಯ ಹೊರತಾಗಿ ಅಲ್ಲಿ ಮತ್ತೇನೂ ಕಾಣುತ್ತಿರಲಿಲ್ಲ. {{gap}}“ಏನು ಯೋಚಿಸುತ್ತಿರುವೆ, ಅಗ್ಗಳ?” {{gap}}-ತುಸು ಹೊತ್ತಿನ ಮೇಲೆ ಬ್ರಹ್ಮಶಿವ ಕೇಳಿದನು. {{gap}}“ಪೂಜೆಗೆ ಕುಳಿತ ಬಸವಣ್ಣನವರು ಮಂಟಪವನ್ನು ಬಿಟ್ಟರೆ, ಅಥವಾ ಇನ್ನೂ ಅಲ್ಲಿಯೇ ಇರುವರೇ ಎಂದು. ಕತ್ತಲಲ್ಲಿ ಏನೂ ಕಾಣುತ್ತಿಲ್ಲ,” ಅಗ್ಗಳನೆಂದನು. {{gap}}“ಶರಣರಿಗೆ ಅರಿವಿನ ಕಣ್ಣು ತೆರೆಯುವುದಂತೆ, ಅಗ್ಗಳ, ಕತ್ತಲಲ್ಲಿ ನೀಡುವ ಶಕ್ತಿ ಇದೆಯೋ ಏನೋ ಅವರಿಗೆ!” ಎಂದು ಬ್ರಹ್ಮಶಿವ ನಕ್ಕನು. - {{gap}}“ನಿನ್ನ ಕುಚೇಷ್ಟೆ ನಿಲ್ಲಿಸು, ಬ್ರಹ್ಮಶಿವ...ಮಂಟಪದ ಹತ್ತಿರ ಬೆಳಕು ಕಾಣುತ್ತಿಲ್ಲವೆ ಈಗ?” {{gap}}“ಅದು ದೀಪವಲ್ಲ, ನಕ್ಷತ್ರ” {{gap}}ನೋಡುತ್ತಿದ್ದಂತೆ ನಕ್ಷತ್ರದ ಆಕಾರ ದೊಡ್ಡದಾಯಿತು. ಬೆಳಕು ಹೆಚ್ಚಿ ಮಂಟಪ ಮಸಕಾಗಿ ಕಂಡಿತು. {{gap}}“ಮಂಟಪದಲ್ಲಿ ದೀಪ ಹಚ್ಚಿಟ್ಟಿದ್ದಾರೆ,” ಎಂದನು ಬ್ರಹ್ಮಶಿವ. {{gap}}ಮಂಟಪದಲ್ಲೆಲ್ಲ ಹರಡಿತು ಆ ಬೆಳಕು. ಕತ್ತಲ ತೆರೆಯ ಮೇಲೆ, ಮಿರುಗುವ ಬೆಳ್ಳಿಯ ಬಣ್ಣದಿಂದ ಬರೆದ ಬೃಹದಾಕಾರದ ಚಿತ್ತಾರದಂತೆ ಬೆಳಗಿತು ಆ ಶಿಲಾ ಮಂಟಪ. ಅದರ ನಡುವೆ ಬಸವಣ್ಣನವರು ಪದ್ಮಾಸನದಲ್ಲಿ ಕುಳಿತು ಪೂಜಾಭಾವದಿಂದ ಎಡಗೈಯನ್ನು ಮುಂದೆ ಚಾಚಿದ್ದರು. ಅರೆ ತೆರೆದ ಅವರ ಕಣ್ಣುಗಳ ದೃಷ್ಟಿಜ್ವಾಲೆ ಮುಂಗೈಯಲ್ಲಿ ಮಿರುಗುತ್ತಿದ್ದ ಜ್ಯೋತಿರ್ಮಯ ಲಿಂಗಮೂರ್ತಿಯ ಮೇಲೆ ನೆಟ್ಟಿತ್ತು. {{gap}}ಅಗ್ಗಳನ ಉದ್ರಿಕ್ತ ಅಂತಃಚಕ್ಷುಗಳು ಈ ಅದ್ಭುತ ಅಭೌಮ ದೃಶ್ಯವನ್ನು ನೋಡುತ್ತಿದ್ದಂತೆ ಮಂಟಪದಲ್ಲಿ ಹರಡಿದ್ದ ಬೆಳಕು, ಬಸವಣ್ಣನವರ ದೃಷ್ಟಿಜ್ವಾಲೆಯೊಡನೆ ಬೆರೆತು, ಕರಸ್ಥಲದಲ್ಲಿ ಕೇಂದ್ರೀಕೃತವಾಗಿ, ಬೃಹದಾಕಾರದ ವಜ್ರದಂತೆ ಬೆಳಗಿತು. ತಿಳಿನೀಲಿ ಬಣ್ಣದ ಅದರ ಕಿರಣ ಮಾಲಿಕೆ, ಬಸವಣ್ಣನವರ ದೇಹದ ಮೇಲೆ ಬಿದ್ದು, ಒಂದುಗೂಡಿ, ಬೆಳಕಿನ ಎಳೆಯಂತೆ ಕಂಡಿತು. ಭಾವಾವೇಶದಿಂದ ಉದ್ದೀಪಿತನಾಗಿ ಸೂಕ್ಷ್ಮಾತಿಸೂಕ್ಷವನ್ನು ಕಾಣಲು ತವಕಿಸುತ್ತಿದ್ದ ಅಗ್ಗಳನು, ಆ ಬೆಳಕಿನ ಎಳೆ ಮೂರಾಗಿ ಕವಲೊಡೆದು, ಅದರಲ್ಲಿ ಮಧ್ಯದ ಎಳೆ, ಮಣಿಗಳಂತೆ ಮಿರುಗುವ ತಾವರೆ ಆಕಾರದ ಆರು ಗಂಟುಗಳಿಂದ ಬೆಳಗುತ್ತಿರುವುದನ್ನು ಕಂಡನು. ಮಧ್ಯದ ಎಳೆಯ ಮುಡಿಯಲ್ಲಿ ಸಹಸ್ರ ಸೂರ್ಯಕಾಂತಿಯಿಂದ ಸಹಸ್ರಾರ ಬೆಳಗುತ್ತಿತ್ತು.<noinclude></noinclude> 36yra96qrbve3gvo26ylbcirlsxlcaj ಪುಟ:ಕ್ರಾಂತಿ ಕಲ್ಯಾಣ.pdf/೪೪೩ 104 86389 323939 203714 2026-06-02T03:03:07Z Shreesha Sharma 7840 /* Proofread */ 323939 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೩೦|right=ಕ್ರಾಂತಿ ಕಲ್ಯಾಣ}} {{gap}}ಬಸವಣ್ಣನವರು ಜಂಗಮ ತಂಡಕ್ಕೆ ಕೈ ಮುಗಿದು ಹೇಳಿದರು : “ನೀವು ಉತ್ತರಾಪಥದಿಂದ ದೂರ ದಕ್ಷಿಣದ ಸಂಗಮಕ್ಕೆ ಸಂಗಮನಾಥನ ದರ್ಶನಕ್ಕಾಗಿ ಬಂದದ್ದು ನನಗೆ ಹೆಚ್ಚು ಆನಂದವನ್ನುಂಟುಮಾಡಿದೆ. ಭಕ್ತಿ ಪ್ರಧಾನವಾದ ಶೈವ ಧರ್ಮವು ಭಾರತಕ್ಕೆ ದಕ್ಷಿಣದ ಕಾಣಿಕೆ. ಶರಣರನ್ನು ಉದ್ದರಿಸಿದಂತೆ ಭಾರತವರ್ಷದ ಜನಸಮುದಾಯವನ್ನೂ ಉದ್ಧರಿಸಬಲ್ಲ ಶಕ್ತಿಯಿದೆ ಅದಕ್ಕೆ ಉತ್ತರ ದಕ್ಷಿಣ, ಪೂರ್ವ ಪಶ್ಚಿಮಗಳೆಂಬ ಭೇದಭಾವಗಳೆಲ್ಲ ಅಳಿದು, ಶಿವ ಭಕ್ತರೆಲ್ಲ ಒಂದೇ ಎಂಬ ಐಕ್ಯಭಾವನೆ ಜನರಲ್ಲಿ ಮೂಡುವಂತೆ ಕೂಡಲ ಸಂಗಮದೇವನು ಕರುಣಿಸಲಿ. ನನ್ನ ಈ ಸಂದೇಶವನ್ನು ನೀವು ಆಸೇತುಹಿಮಾಚಲವೂ ಹರಡಿರಿ.” {{gap}}ಬಸವಣ್ಣನವರ ಅಸ್ಕಲಿತ ಪ್ರಾಕೃತ ವಾಣಿ ಉತ್ತರಾಪಥದ ಜಂಗಮರನ್ನು ಅಚ್ಚರಿಗೊಳಿಸಿತು. ಅವರ ನಾಯಕನು ಬಸವಣ್ಣನವರಿಗೆ ಕೈಯೆತ್ತಿ ನಮಸ್ಕಾರ ಮಾಡಿ, “ಇಂದು ನಮ್ಮ ಪ್ರವಾಸ ಫಲಿಸಿತು, ಅಣ್ಣನವರೆ. ನಾವು ಧನ್ಯರಾದೆವು,” ಎಂದನು. ಎಲ್ಲರ ಕಣ್ಣುಗಳಲ್ಲಿ ಆನಂದಬಾಷ್ಪಗಳು ಸುರಿಯುತ್ತಿದ್ದವು. {{gap}}ಜಂಗಮ ತಂಡದಿಂದ ಬೀಳ್ಕೊಂಡ ಮೇಲೆ ಬಸವಣ್ಣನವರು ಅಪ್ಪಣ್ಣನಿಂದ ಕಲ್ಯಾಣದ ಘಟನೆಗಳ ಬಗೆಗೆ ವಿವರಗಳನ್ನು ತಿಳಿದುಕೊಂಡರು. ಶರಣರು ಮಹಮನೆಯನ್ನು ಬಿಟ್ಟು ಆಂಜನೇಯ ಹೊಳೆಯಾಚಿನ ಗಣಾಚಾರಿ ಯೋಧರ ಶಿಬಿರವನ್ನು ಸೇರುವವರೆಗೆ ನಡೆದುದೆಲ್ಲವನ್ನೂ ಅಪ್ಪಣ್ಣ ಹೇಳಿದನು. {{gap}}ಕೊನೆಗೆ ಬಸವಣ್ಣನವರೆಂದರು : “ನಡೆಯಬಾರದುದು ನಡೆದುಹೋಯಿತು, ಅಪಣ್ಣ, ಕೊಲೆಗಡುಕರಾರೇ ಆಗಲಿ, ಪರೋಕ್ಷವಾಗಿ ಅದಕ್ಕೆ ಕಾರಣರೆಂಬ ಅಪವಾದ ಶರಣರಿಗೆ ತಪ್ಪಿದ್ದಲ್ಲ. ಅದೇ ನನ್ನ ಮುಖ್ಯ ಚಿಂತೆ. ನೀನು ಶಿಬಿರವನ್ನು ಬಿಟ್ಟಾಗ ನಗರದ ಸ್ಥಿತಿ ಹೇಗಿತ್ತೆಂಬುದು ತಿಳಿದಿದೆಯೆ?” {{gap}}“ನನಗೆ ಆ ವಿಚಾರಗಳೊಂದೂ ತಿಳಿಯದು, ಅಣ್ಣನವರೆ. ಇದು ನೀಲಲೋಚನೆ ಅಕ್ಕನವರು ಕಳುಹಿಸಿರುವ ಪತ್ರ” ಎಂದು ಅಪ್ಪಣ್ಣ ಅಂಗಿಯಿಂದ ಓಲೆ ತೆಗೆದುಕೊಟ್ಟನು. {{gap}}ಬಸವಣ್ಣನವರು ಓಲೆಯನ್ನು ಓದಿಕೊಂಡು ತುಸು ಹೊತ್ತು ಚಿಂತಿಸಿ ಬಳಿಕ ಹೇಳಿದರು : "ತನ್ನನ್ನು ತಾನು ತಿಳಿಯುವುದು ಮುಕ್ತಿಯ ರಾಜಪಥ. ಜನರನ್ನು ಈ ಮಾರ್ಗದಲ್ಲಿ ನಡೆಸುವ ಪರಮೋದ್ದೇಶದಿಂದ ಶರಣಧರ್ಮದ ಸಿದ್ಧಿಸಾಧನೆಗಳೆಲ್ಲ ರೂಪಿತವಾಗಿವೆ. ನೀನು ಆ ಮಾರ್ಗವನ್ನು ಮುಟ್ಟಿದುದು ನನಗೆ ಸಮಾಧಾನವನ್ನುಂಟುಮಾಡಿದೆ,” ಎಂದು ನಾನು ಹೇಳಿದುದಾಗಿ ನೀಲಲೋಚನೆಗೆ ತಿಳಿಸು.<noinclude></noinclude> jd5a6q8gkiz2u2w0zt796pjehmq4c58 323941 323939 2026-06-02T03:05:44Z Shreelatha.Halemane 7642 /* Validated */ 323941 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೩೦|right=ಕ್ರಾಂತಿ ಕಲ್ಯಾಣ}} {{gap}}ಬಸವಣ್ಣನವರು ಜಂಗಮ ತಂಡಕ್ಕೆ ಕೈ ಮುಗಿದು ಹೇಳಿದರು : “ನೀವು ಉತ್ತರಾಪಥದಿಂದ ದೂರ ದಕ್ಷಿಣದ ಸಂಗಮಕ್ಕೆ ಸಂಗಮನಾಥನ ದರ್ಶನಕ್ಕಾಗಿ ಬಂದದ್ದು ನನಗೆ ಹೆಚ್ಚು ಆನಂದವನ್ನುಂಟುಮಾಡಿದೆ. ಭಕ್ತಿ ಪ್ರಧಾನವಾದ ಶೈವ ಧರ್ಮವು ಭಾರತಕ್ಕೆ ದಕ್ಷಿಣದ ಕಾಣಿಕೆ. ಶರಣರನ್ನು ಉದ್ದರಿಸಿದಂತೆ ಭಾರತವರ್ಷದ ಜನಸಮುದಾಯವನ್ನೂ ಉದ್ಧರಿಸಬಲ್ಲ ಶಕ್ತಿಯಿದೆ ಅದಕ್ಕೆ ಉತ್ತರ ದಕ್ಷಿಣ, ಪೂರ್ವ ಪಶ್ಚಿಮಗಳೆಂಬ ಭೇದಭಾವಗಳೆಲ್ಲ ಅಳಿದು, ಶಿವ ಭಕ್ತರೆಲ್ಲ ಒಂದೇ ಎಂಬ ಐಕ್ಯಭಾವನೆ ಜನರಲ್ಲಿ ಮೂಡುವಂತೆ ಕೂಡಲ ಸಂಗಮದೇವನು ಕರುಣಿಸಲಿ. ನನ್ನ ಈ ಸಂದೇಶವನ್ನು ನೀವು ಆಸೇತುಹಿಮಾಚಲವೂ ಹರಡಿರಿ.” {{gap}}ಬಸವಣ್ಣನವರ ಅಸ್ಕಲಿತ ಪ್ರಾಕೃತ ವಾಣಿ ಉತ್ತರಾಪಥದ ಜಂಗಮರನ್ನು ಅಚ್ಚರಿಗೊಳಿಸಿತು. ಅವರ ನಾಯಕನು ಬಸವಣ್ಣನವರಿಗೆ ಕೈಯೆತ್ತಿ ನಮಸ್ಕಾರ ಮಾಡಿ, “ಇಂದು ನಮ್ಮ ಪ್ರವಾಸ ಫಲಿಸಿತು, ಅಣ್ಣನವರೆ. ನಾವು ಧನ್ಯರಾದೆವು,” ಎಂದನು. ಎಲ್ಲರ ಕಣ್ಣುಗಳಲ್ಲಿ ಆನಂದಬಾಷ್ಪಗಳು ಸುರಿಯುತ್ತಿದ್ದವು. {{gap}}ಜಂಗಮ ತಂಡದಿಂದ ಬೀಳ್ಕೊಂಡ ಮೇಲೆ ಬಸವಣ್ಣನವರು ಅಪ್ಪಣ್ಣನಿಂದ ಕಲ್ಯಾಣದ ಘಟನೆಗಳ ಬಗೆಗೆ ವಿವರಗಳನ್ನು ತಿಳಿದುಕೊಂಡರು. ಶರಣರು ಮಹಮನೆಯನ್ನು ಬಿಟ್ಟು ಆಂಜನೇಯ ಹೊಳೆಯಾಚಿನ ಗಣಾಚಾರಿ ಯೋಧರ ಶಿಬಿರವನ್ನು ಸೇರುವವರೆಗೆ ನಡೆದುದೆಲ್ಲವನ್ನೂ ಅಪ್ಪಣ್ಣ ಹೇಳಿದನು. {{gap}}ಕೊನೆಗೆ ಬಸವಣ್ಣನವರೆಂದರು : “ನಡೆಯಬಾರದುದು ನಡೆದುಹೋಯಿತು, ಅಪಣ್ಣ, ಕೊಲೆಗಡುಕರಾರೇ ಆಗಲಿ, ಪರೋಕ್ಷವಾಗಿ ಅದಕ್ಕೆ ಕಾರಣರೆಂಬ ಅಪವಾದ ಶರಣರಿಗೆ ತಪ್ಪಿದ್ದಲ್ಲ. ಅದೇ ನನ್ನ ಮುಖ್ಯ ಚಿಂತೆ. ನೀನು ಶಿಬಿರವನ್ನು ಬಿಟ್ಟಾಗ ನಗರದ ಸ್ಥಿತಿ ಹೇಗಿತ್ತೆಂಬುದು ತಿಳಿದಿದೆಯೆ?” {{gap}}“ನನಗೆ ಆ ವಿಚಾರಗಳೊಂದೂ ತಿಳಿಯದು, ಅಣ್ಣನವರೆ. ಇದು ನೀಲಲೋಚನೆ ಅಕ್ಕನವರು ಕಳುಹಿಸಿರುವ ಪತ್ರ” ಎಂದು ಅಪ್ಪಣ್ಣ ಅಂಗಿಯಿಂದ ಓಲೆ ತೆಗೆದುಕೊಟ್ಟನು. {{gap}}ಬಸವಣ್ಣನವರು ಓಲೆಯನ್ನು ಓದಿಕೊಂಡು ತುಸು ಹೊತ್ತು ಚಿಂತಿಸಿ ಬಳಿಕ ಹೇಳಿದರು : "ತನ್ನನ್ನು ತಾನು ತಿಳಿಯುವುದು ಮುಕ್ತಿಯ ರಾಜಪಥ. ಜನರನ್ನು ಈ ಮಾರ್ಗದಲ್ಲಿ ನಡೆಸುವ ಪರಮೋದ್ದೇಶದಿಂದ ಶರಣಧರ್ಮದ ಸಿದ್ಧಿಸಾಧನೆಗಳೆಲ್ಲ ರೂಪಿತವಾಗಿವೆ. ನೀನು ಆ ಮಾರ್ಗವನ್ನು ಮುಟ್ಟಿದುದು ನನಗೆ ಸಮಾಧಾನವನ್ನುಂಟುಮಾಡಿದೆ,” ಎಂದು ನಾನು ಹೇಳಿದುದಾಗಿ ನೀಲಲೋಚನೆಗೆ ತಿಳಿಸು.<noinclude></noinclude> shk4dkks42reyq6p3l2wkggv6lx730m ಪುಟ:ಕ್ರಾಂತಿ ಕಲ್ಯಾಣ.pdf/೪೪೯ 104 86392 323947 203717 2026-06-02T03:22:40Z Shreesha Sharma 7840 /* Proofread */ 323947 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೩೬|right=ಕ್ರಾಂತಿ ಕಲ್ಯಾಣ}} ದೀಪಗಳ ಮಂದಕಾಂತಿಯಲ್ಲಿ, ಮೇಘ ಮುಚ್ಚಿದ ಚಂದ್ರಲೇಖೆಗಳಂತೆ ಅಸ್ಪುಟವಾಗಿ ತೋರುತ್ತಿದ್ದವು. {{gap}}ಆಶ್ಚರ್ಯಚಕಿತರಂತೆ ಅವಾಕ್ಕಾಗಿ, ಸ್ತಂಭಿತರಾಗಿ, ಆ ಗಂಭೀರ ಶಾಂತ ಮಯದೃಶ್ಯವನ್ನು ನೋಡುತ್ತ ನಿಂತರು, ಅವರು. {{gap}}ಎಲ್ಲ ಕಡೆ ನಿಶ್ಯಬ್ದ. ಆ ಶಬ್ದ ಶೂನ್ಯ, ಭಾವಶೂನ್ಯ ಪ್ರಾಣಶೂನ್ಯ ಶಾಂತಿ ಮಹಾಸಾಗರದ ಅಲೆಯಂತೆ, ಕಲಕಲ ನಿನಾದದಿಂದ ಹರಿಯುತ್ತಿತ್ತು ಮಲಪ್ರಭೆ! {{gap}}ನಿಸರ್ಗದ ಆ ಗಂಭೀರ ಸ್ತಬ್ದತೆಯನ್ನು ಭೇದಿಸುವ ಗಂಭೀರ ಕಂಠದಿಂದ ನುಡಿದ ಪಂಚಾಕ್ಷರಿಯ ಅಮೃತ ಬಿಂದುಗಳು ಗಾಳಿಯಲ್ಲಿ ತೇಲುತ್ತ ಬಂದವು ಅಲ್ಲಿಗೆ ತುಸುಹೊತ್ತಿನ ಮೇಲೆ ಪಡಿಹಾರಿ ಅಪ್ಪಣ್ಣ ಕಾಣಿಸಿಕೊಂಡಾಗ ಎಲ್ಲರೂ ಏಕಕಾಲದಲ್ಲಿ, “ಹರ ಹರ ಮಹಾದೇವ” ಎಂದು ಉಗ್ಗಡಿಸಿದರು. {{gap}}“ಭಕ್ತಿ ಭಂಡಾರಿ ಬಸವಣ್ಣನವರು ಲಿಂಗೈಕ್ಯರಾದರು. ಜೀವನ್ಮುಕ್ತರಾಗಿ ಬದುಕಿದ ಅವರ ಅಮರ ಆತ್ಮ ಕೂಡಲ ಸಂಗಮದೇವನ ಚರಣಕಮಲಗಳಲ್ಲಿ ಬೆರೆತು ಬಯಲಿಗೆ ಬಯಲಾಯಿತು. ನೀವು ಕೇಳಿದ ಮಹಾಶಬ್ದ ಆ ಪ್ರಳಯದ ನಿರ್ಘೋಷ ! ನೀವು ಕಂಡ ಮಹಾತೇಜ ಆ ಮಹಾಮಿಲನದ ದಿವ್ಯಪ್ರಭೆ ! ಬಸವರಾಜದೇವ, ಉಘ, ಉg !” -ಎಂದು ಪಡಿಹಾರಿ ಅಪ್ಪಣ್ಣ ಘೋಷಿಸಿದನು. {{gap}}ನದೀತೀರದ ಎಲ್ಲ ಕಡೆ, ಸಾವಿರ ಕಂಠಗಳಲ್ಲಿ ಪ್ರತಿಧ್ವನಿಸಿತು ಆ ಘೋಷಣೆ. {{gap}}ಆಮೇಲೆ ಅವರು ಮಂಟಪದ ಹತ್ತಿರ ಮೂರ್ಛಿತನಾಗಿ ಬಿದ್ದಿದ್ದ ವಟುವನ್ನು ಕಂಡರು. ಹಣೆ ಮುಖಗಳಿಗೆ ನೀರೆರೆಚಿ ಶೈತ್ಯೋಪಚಾರ ಮಾಡಿದ ಮೇಲೆ ವಟು ಎಚ್ಚೆತ್ತು ಹೇಳಿದನು : ಮಂಟಪದೊಳಗೆ ದೊಡ್ಡ ಬೆಳಕು ಕಾಣಿಸ್ತು, ಅಣ್ಣಾವ್ರ. ಆಮೇಲೆ ಆ ಬೆಳಕು ಆಕಾಶದ ಕಡೆ ನೆಗೆದು ದೊಡ್ಡ ಶಬ್ದ ಆತು. ನಾ ಬಿದ್ದು ಬಿಟ್ಟಿನ್ನಿ!” ಉಳಿದವರ ವಿವರಣೆಗಳು ಅಷ್ಟೇ ಅಸ್ಪಷ್ಟವಾಗಿದ್ದವು. {{gap}}ಉತ್ತರಾಪಥದ ಜಂಗಮ ತಂಡದ ನಾಯಕನು ಹೇಳಿದನು : “ನಾನು ಪೂಜೆ ಮುಗಿಸಿ ಕಣ್ಣೆರೆದಾಗ ಮಂಟಪದಲ್ಲಿ ನೀಲಿಯ ಬೆಳಕು ಹರಡಿತ್ತು. ಆ ಬೆಳಕಿನ ನಡುವೆ ಬಸವಣ್ಣನವರು ಧ್ಯಾನಮಗ್ನ ಶಂಕರನಂತೆ ನಿಶ್ಚಲರಾಗಿ ಕುಳಿತಿದ್ದರು. ಕ್ರಮ ಕ್ರಮವಾಗಿ ಬೆಳಕು ಹೆಚ್ಚಿತು. ನಾನು ನೋಡಲಾರದೆ ಕಣ್ಣುಗಳನ್ನು ಮುಚ್ಚಿದೆ. ಆಮೇಲೆ ದೊಡ್ಡ ಶಬ್ದವಾಗಿ ಭೂಮಿ ನಡುಗಿತು. ನಾನು ಪುನಃ ಕರೆದಾಗ ಎಲ್ಲ ಕಡೆ ಕತ್ತಲೆ ಕವಿದಿತ್ತು. ಮಂಟಪ ಕಾಣುತ್ತಿರಲಿಲ್ಲ.” {{gap}}- ಅಧ್ಯಾಪಕ ವರ್ಗದಲ್ಲಿ ಅನುಭಾವಿಯಂತೆ ಕಾಣುತ್ತಿದ್ದ ವೃದ್ದ ಜಂಗಮನು ಹೇಳಿದನು : “ಬಸವಣ್ಣನವರ ಭಿಕ್ಷಾಪಾತ್ರೆ ತುಂಬಿತು. ಜೀವನ್ಮುಕ್ತರಾಗಿ ಬದುಕಿದ<noinclude></noinclude> cfmr6l1gq540ra6v65nvxylamnkjkq8 323952 323947 2026-06-02T03:25:06Z Shreelatha.Halemane 7642 /* Validated */ 323952 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೩೬|right=ಕ್ರಾಂತಿ ಕಲ್ಯಾಣ}} ದೀಪಗಳ ಮಂದಕಾಂತಿಯಲ್ಲಿ, ಮೇಘ ಮುಚ್ಚಿದ ಚಂದ್ರಲೇಖೆಗಳಂತೆ ಅಸ್ಪುಟವಾಗಿ ತೋರುತ್ತಿದ್ದವು. {{gap}}ಆಶ್ಚರ್ಯಚಕಿತರಂತೆ ಅವಾಕ್ಕಾಗಿ, ಸ್ತಂಭಿತರಾಗಿ, ಆ ಗಂಭೀರ ಶಾಂತ ಮಯದೃಶ್ಯವನ್ನು ನೋಡುತ್ತ ನಿಂತರು, ಅವರು. {{gap}}ಎಲ್ಲ ಕಡೆ ನಿಶ್ಯಬ್ದ. ಆ ಶಬ್ದ ಶೂನ್ಯ, ಭಾವಶೂನ್ಯ ಪ್ರಾಣಶೂನ್ಯ ಶಾಂತಿ ಮಹಾಸಾಗರದ ಅಲೆಯಂತೆ, ಕಲಕಲ ನಿನಾದದಿಂದ ಹರಿಯುತ್ತಿತ್ತು ಮಲಪ್ರಭೆ! {{gap}}ನಿಸರ್ಗದ ಆ ಗಂಭೀರ ಸ್ತಬ್ದತೆಯನ್ನು ಭೇದಿಸುವ ಗಂಭೀರ ಕಂಠದಿಂದ ನುಡಿದ ಪಂಚಾಕ್ಷರಿಯ ಅಮೃತ ಬಿಂದುಗಳು ಗಾಳಿಯಲ್ಲಿ ತೇಲುತ್ತ ಬಂದವು ಅಲ್ಲಿಗೆ ತುಸುಹೊತ್ತಿನ ಮೇಲೆ ಪಡಿಹಾರಿ ಅಪ್ಪಣ್ಣ ಕಾಣಿಸಿಕೊಂಡಾಗ ಎಲ್ಲರೂ ಏಕಕಾಲದಲ್ಲಿ, “ಹರ ಹರ ಮಹಾದೇವ” ಎಂದು ಉಗ್ಗಡಿಸಿದರು. {{gap}}“ಭಕ್ತಿ ಭಂಡಾರಿ ಬಸವಣ್ಣನವರು ಲಿಂಗೈಕ್ಯರಾದರು. ಜೀವನ್ಮುಕ್ತರಾಗಿ ಬದುಕಿದ ಅವರ ಅಮರ ಆತ್ಮ ಕೂಡಲ ಸಂಗಮದೇವನ ಚರಣಕಮಲಗಳಲ್ಲಿ ಬೆರೆತು ಬಯಲಿಗೆ ಬಯಲಾಯಿತು. ನೀವು ಕೇಳಿದ ಮಹಾಶಬ್ದ ಆ ಪ್ರಳಯದ ನಿರ್ಘೋಷ ! ನೀವು ಕಂಡ ಮಹಾತೇಜ ಆ ಮಹಾಮಿಲನದ ದಿವ್ಯಪ್ರಭೆ ! ಬಸವರಾಜದೇವ, ಉಘ, ಉg !” -ಎಂದು ಪಡಿಹಾರಿ ಅಪ್ಪಣ್ಣ ಘೋಷಿಸಿದನು. {{gap}}ನದೀತೀರದ ಎಲ್ಲ ಕಡೆ, ಸಾವಿರ ಕಂಠಗಳಲ್ಲಿ ಪ್ರತಿಧ್ವನಿಸಿತು ಆ ಘೋಷಣೆ. {{gap}}ಆಮೇಲೆ ಅವರು ಮಂಟಪದ ಹತ್ತಿರ ಮೂರ್ಛಿತನಾಗಿ ಬಿದ್ದಿದ್ದ ವಟುವನ್ನು ಕಂಡರು. ಹಣೆ ಮುಖಗಳಿಗೆ ನೀರೆರೆಚಿ ಶೈತ್ಯೋಪಚಾರ ಮಾಡಿದ ಮೇಲೆ ವಟು ಎಚ್ಚೆತ್ತು ಹೇಳಿದನು : ಮಂಟಪದೊಳಗೆ ದೊಡ್ಡ ಬೆಳಕು ಕಾಣಿಸ್ತು, ಅಣ್ಣಾವ್ರ. ಆಮೇಲೆ ಆ ಬೆಳಕು ಆಕಾಶದ ಕಡೆ ನೆಗೆದು ದೊಡ್ಡ ಶಬ್ದ ಆತು. ನಾ ಬಿದ್ದು ಬಿಟ್ಟಿನ್ನಿ!” ಉಳಿದವರ ವಿವರಣೆಗಳು ಅಷ್ಟೇ ಅಸ್ಪಷ್ಟವಾಗಿದ್ದವು. {{gap}}ಉತ್ತರಾಪಥದ ಜಂಗಮ ತಂಡದ ನಾಯಕನು ಹೇಳಿದನು : “ನಾನು ಪೂಜೆ ಮುಗಿಸಿ ಕಣ್ಣೆರೆದಾಗ ಮಂಟಪದಲ್ಲಿ ನೀಲಿಯ ಬೆಳಕು ಹರಡಿತ್ತು. ಆ ಬೆಳಕಿನ ನಡುವೆ ಬಸವಣ್ಣನವರು ಧ್ಯಾನಮಗ್ನ ಶಂಕರನಂತೆ ನಿಶ್ಚಲರಾಗಿ ಕುಳಿತಿದ್ದರು. ಕ್ರಮ ಕ್ರಮವಾಗಿ ಬೆಳಕು ಹೆಚ್ಚಿತು. ನಾನು ನೋಡಲಾರದೆ ಕಣ್ಣುಗಳನ್ನು ಮುಚ್ಚಿದೆ. ಆಮೇಲೆ ದೊಡ್ಡ ಶಬ್ದವಾಗಿ ಭೂಮಿ ನಡುಗಿತು. ನಾನು ಪುನಃ ಕರೆದಾಗ ಎಲ್ಲ ಕಡೆ ಕತ್ತಲೆ ಕವಿದಿತ್ತು. ಮಂಟಪ ಕಾಣುತ್ತಿರಲಿಲ್ಲ.” {{gap}}- ಅಧ್ಯಾಪಕ ವರ್ಗದಲ್ಲಿ ಅನುಭಾವಿಯಂತೆ ಕಾಣುತ್ತಿದ್ದ ವೃದ್ದ ಜಂಗಮನು ಹೇಳಿದನು : “ಬಸವಣ್ಣನವರ ಭಿಕ್ಷಾಪಾತ್ರೆ ತುಂಬಿತು. ಜೀವನ್ಮುಕ್ತರಾಗಿ ಬದುಕಿದ<noinclude></noinclude> 64tux599lzr0yb6mdqrqtncghcoz8sx ಪುಟ:ಕ್ರಾಂತಿ ಕಲ್ಯಾಣ.pdf/೪೫೦ 104 86393 323953 203718 2026-06-02T03:30:43Z Shreesha Sharma 7840 /* Proofread */ 323953 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೩೭}} ಅವರು, ಇಂದು ಕೂಡಲ ಸಂಗಮದೇವನ ನಿಜಪದದಲ್ಲಿ ಬೆರೆದರು. ಆ ದಿವ್ಯಾನು ಭಾವದ ತೆರೆಯನ್ನು ಭೇದಿಸಲು ನಾವು ಶಕ್ತರಲ್ಲ.” {{gap}}ಪಡಿಹಾರಿ ಅಪ್ಪಣ್ಣ ನುಡಿದನು : “ನಾನು ಏನನ್ನು ಕಂಡೆ, ಏನನ್ನು ಕಾಣಲಿಲ್ಲ ಎಂಬುದು ನುಡಿಗೆ ಸಿಕ್ಕುವ ವಿಷಯವಲ್ಲ. ಕೂಡಲ ಸಂಗಮದೇವನು ಅಣ್ಣನವರನ್ನು ತನ್ನ ಹೃದಯದಲ್ಲಿ ಇಂಬಿಟ್ಟುಕೊಂಡನು.” {{gap}}ಆ ರಾತ್ರಿಯೇ ಸಮೀಪದ ಗ್ರಾಮ ನಗರ ಅಗ್ರಹಾರ ಮಠಮಂದಿರಗಳಿಗೆ ಬಸವಣ್ಣನವರ ಲಿಂಗೈಕ್ಯದ ಸುದ್ದಿ ಪ್ರಸಾರಿತವಾಯಿತು. ಮರುದಿನ ಬೆಳಕು ಮೂಡುತ್ತಿದ್ದಂತೆ ಅಂತ್ಯದರ್ಶನಕ್ಕಾಗಿ ಜನರು ತಂಡ ತಂಡವಾಗಿ ಬರಲು ಪ್ರಾರಂಭಿಸಿದರು. ನದಿಯ ದಂಡೆ ಜನರಿಂದ ತುಂಬಿತು. {{gap}}ಕಲ್ಯಾಣಕ್ಕೆ ಹೊರಟು ದಾರಿಯಲ್ಲಿ ಶಿಬಿರ ಹಾಕಿಕೊಂಡಿದ್ದ ಪಟ್ಟದಕಲ್ ಸೀಮೆಯ ಮಂಡಲಾಧಿಕಾರಿಗೆ ಸುದ್ದಿ ತಿಳಿಯುತ್ತಲೆ, ಆನೆ ಕುದುರೆ ಅಂದಣಗಳನ್ನು ತೆಗೆದುಕೊಂಡು ಸಂಗಮಕ್ಕೆ ಬಂದು, ಗುರುಕುಲದ ಕುಲಪತಿ ಪ್ರಾಧ್ಯಾಪಕರನ್ನು ಭೇಟಿಮಾಡಿ, “ಬಸವಣ್ಣನವರು ಚಾಲುಕ್ಯ ರಾಜ್ಯದ ನಿವೃತ್ತ ಮಹಾಮಂತ್ರಿ ದಂಡ ನಾಯಕರು. ಅವರ ಅಂತ್ಯಯಾತ್ರೆ ರಾಜಮರ್ಯಾದೆಯಿಂದ ನಡೆಯಬೇಕು. ಕುಲಪತಿಗಳು ಅನುಮತಿ ಕೊಟ್ಟರೆ ನಾನು ಎಲ್ಲವನ್ನೂ ಏರ್ಪಡಿಸುತ್ತೇನೆ” ಎಂದು ಬಿನ್ನವಿಸಿಕೊಂಡನು. {{gap}}ಕಲ್ಯಾಣದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಮಂಡಲಾಧಿಕಾರಿಯ ಸಲಹೆಯನ್ನು ನಿರಾಕರಿಸುವುದು ಉಚಿತವಲ್ಲವೆಂದು ತಿಳಿದು ಕುಲಪತಿಗಳು ಒಪ್ಪಿದರು. ಅದರಂತೆ ಕಾರ್ಯ ನಿರ್ವಹಿಸಲು ಸಾರಂಗಮಠದ ಕಲ್ಯಾಣ ಶಕ್ತಿಪಂಡಿತರ ಅಧ್ಯಕ್ಷತೆಯಲ್ಲಿ ಶಿಷ್ಟರ ತಾತ್ಕಾಲಿಕ ಸಮಿತಿಯೊಂದು ರಚಿತವಾಯಿತು. ಮಧ್ಯಾಹ್ನದ ಸುಮಾರಿಗೆ ಬಸವಣ್ಣನವರ ಪಾರ್ಥಿವ ದೇಹವನ್ನು ದಂಡನಾಯಕನಿಗೆ ಉಚಿತವಾದ ವಸ್ತ್ರಾಭರಣಗಳಿಂದ ಅಲಂಕರಿಸಿ ಅಂದಣದಲ್ಲಿಟ್ಟು ರಾಜಮರ್ಯಾದೆಯೊಡನೆ ಗುರುಕುಲದ ಸುತ್ತ ಮೆರವಣಿಗೆ ಮಾಡಿದರು. {{gap}}ಗುರುಮಠ ಅಗ್ರಹಾರಗಳ ಜಂಗಮ ಸನ್ಯಾಸಿಗಳು, ಮಂಡಲಾಧಿಕಾರಿ ರಾಜ ಪ್ರತಿನಿಧಿಗಳು, ಮಠಮಂದಿರಗಳ ಸ್ಥಾನಿಕ ಅರ್ಚಕ ಪರಿವಾರದವರು, ಗ್ರಾಮ ನಗರಗಳ ಪ್ರಮುಖ ನಾಗರಿಕರು, ಮೆರವಣಿಗೆಯ ಮುಂಭಾಗದಲ್ಲಿ, ಬಳಿಕ ಅಲಂಕೃತವಾದ ಅಂದಣ, ಅದರ ಹಿಂದೆ ಉತ್ತರಾಪಥದ ಜಂಗಮರು ಮತ್ತು ಅವರೊಡನೆ ಬ್ರಹ್ಮಶಿವ ಅಗ್ಗಳರು, ಕೊನೆಯದಾಗಿ ಗುರುಕುಲದ ಅಧ್ಯಾಪಕ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಂತ್ಯ ದರ್ಶನಕ್ಕಾಗಿ ಬಂದಿದ್ದ ಸ್ತ್ರೀ ಪುರುಷ ಆಬಾಲವೃದ್ಧರ<noinclude></noinclude> jscmwey92wtvikbtb30ehk679f8a8hw 323955 323953 2026-06-02T03:35:49Z Shreelatha.Halemane 7642 /* Validated */ 323955 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೩೭}} ಅವರು, ಇಂದು ಕೂಡಲ ಸಂಗಮದೇವನ ನಿಜಪದದಲ್ಲಿ ಬೆರೆದರು. ಆ ದಿವ್ಯಾನು ಭಾವದ ತೆರೆಯನ್ನು ಭೇದಿಸಲು ನಾವು ಶಕ್ತರಲ್ಲ.” {{gap}}ಪಡಿಹಾರಿ ಅಪ್ಪಣ್ಣ ನುಡಿದನು : “ನಾನು ಏನನ್ನು ಕಂಡೆ, ಏನನ್ನು ಕಾಣಲಿಲ್ಲ ಎಂಬುದು ನುಡಿಗೆ ಸಿಕ್ಕುವ ವಿಷಯವಲ್ಲ. ಕೂಡಲ ಸಂಗಮದೇವನು ಅಣ್ಣನವರನ್ನು ತನ್ನ ಹೃದಯದಲ್ಲಿ ಇಂಬಿಟ್ಟುಕೊಂಡನು.” {{gap}}ಆ ರಾತ್ರಿಯೇ ಸಮೀಪದ ಗ್ರಾಮ ನಗರ ಅಗ್ರಹಾರ ಮಠಮಂದಿರಗಳಿಗೆ ಬಸವಣ್ಣನವರ ಲಿಂಗೈಕ್ಯದ ಸುದ್ದಿ ಪ್ರಸಾರಿತವಾಯಿತು. ಮರುದಿನ ಬೆಳಕು ಮೂಡುತ್ತಿದ್ದಂತೆ ಅಂತ್ಯದರ್ಶನಕ್ಕಾಗಿ ಜನರು ತಂಡ ತಂಡವಾಗಿ ಬರಲು ಪ್ರಾರಂಭಿಸಿದರು. ನದಿಯ ದಂಡೆ ಜನರಿಂದ ತುಂಬಿತು. {{gap}}ಕಲ್ಯಾಣಕ್ಕೆ ಹೊರಟು ದಾರಿಯಲ್ಲಿ ಶಿಬಿರ ಹಾಕಿಕೊಂಡಿದ್ದ ಪಟ್ಟದಕಲ್ ಸೀಮೆಯ ಮಂಡಲಾಧಿಕಾರಿಗೆ ಸುದ್ದಿ ತಿಳಿಯುತ್ತಲೆ, ಆನೆ ಕುದುರೆ ಅಂದಣಗಳನ್ನು ತೆಗೆದುಕೊಂಡು ಸಂಗಮಕ್ಕೆ ಬಂದು, ಗುರುಕುಲದ ಕುಲಪತಿ ಪ್ರಾಧ್ಯಾಪಕರನ್ನು ಭೇಟಿಮಾಡಿ, “ಬಸವಣ್ಣನವರು ಚಾಲುಕ್ಯ ರಾಜ್ಯದ ನಿವೃತ್ತ ಮಹಾಮಂತ್ರಿ ದಂಡ ನಾಯಕರು. ಅವರ ಅಂತ್ಯಯಾತ್ರೆ ರಾಜಮರ್ಯಾದೆಯಿಂದ ನಡೆಯಬೇಕು. ಕುಲಪತಿಗಳು ಅನುಮತಿ ಕೊಟ್ಟರೆ ನಾನು ಎಲ್ಲವನ್ನೂ ಏರ್ಪಡಿಸುತ್ತೇನೆ” ಎಂದು ಬಿನ್ನವಿಸಿಕೊಂಡನು. {{gap}}ಕಲ್ಯಾಣದ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಮಂಡಲಾಧಿಕಾರಿಯ ಸಲಹೆಯನ್ನು ನಿರಾಕರಿಸುವುದು ಉಚಿತವಲ್ಲವೆಂದು ತಿಳಿದು ಕುಲಪತಿಗಳು ಒಪ್ಪಿದರು. ಅದರಂತೆ ಕಾರ್ಯ ನಿರ್ವಹಿಸಲು ಸಾರಂಗಮಠದ ಕಲ್ಯಾಣ ಶಕ್ತಿಪಂಡಿತರ ಅಧ್ಯಕ್ಷತೆಯಲ್ಲಿ ಶಿಷ್ಟರ ತಾತ್ಕಾಲಿಕ ಸಮಿತಿಯೊಂದು ರಚಿತವಾಯಿತು. ಮಧ್ಯಾಹ್ನದ ಸುಮಾರಿಗೆ ಬಸವಣ್ಣನವರ ಪಾರ್ಥಿವ ದೇಹವನ್ನು ದಂಡನಾಯಕನಿಗೆ ಉಚಿತವಾದ ವಸ್ತ್ರಾಭರಣಗಳಿಂದ ಅಲಂಕರಿಸಿ ಅಂದಣದಲ್ಲಿಟ್ಟು ರಾಜಮರ್ಯಾದೆಯೊಡನೆ ಗುರುಕುಲದ ಸುತ್ತ ಮೆರವಣಿಗೆ ಮಾಡಿದರು. {{gap}}ಗುರುಮಠ ಅಗ್ರಹಾರಗಳ ಜಂಗಮ ಸನ್ಯಾಸಿಗಳು, ಮಂಡಲಾಧಿಕಾರಿ ರಾಜ ಪ್ರತಿನಿಧಿಗಳು, ಮಠಮಂದಿರಗಳ ಸ್ಥಾನಿಕ ಅರ್ಚಕ ಪರಿವಾರದವರು, ಗ್ರಾಮ ನಗರಗಳ ಪ್ರಮುಖ ನಾಗರಿಕರು, ಮೆರವಣಿಗೆಯ ಮುಂಭಾಗದಲ್ಲಿ, ಬಳಿಕ ಅಲಂಕೃತವಾದ ಅಂದಣ, ಅದರ ಹಿಂದೆ ಉತ್ತರಾಪಥದ ಜಂಗಮರು ಮತ್ತು ಅವರೊಡನೆ ಬ್ರಹ್ಮಶಿವ ಅಗ್ಗಳರು, ಕೊನೆಯದಾಗಿ ಗುರುಕುಲದ ಅಧ್ಯಾಪಕ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಂತ್ಯ ದರ್ಶನಕ್ಕಾಗಿ ಬಂದಿದ್ದ ಸ್ತ್ರೀ ಪುರುಷ ಆಬಾಲವೃದ್ಧರ<noinclude></noinclude> os2luib0dc2bkdex6e75t7r215420vn ಪುಟ:ಕ್ರಾಂತಿ ಕಲ್ಯಾಣ.pdf/೪೬೮ 104 86395 324066 203720 2026-06-02T11:20:43Z Shreesha Sharma 7840 /* Proofread */ 324066 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೫೫}} ಅಚಾತುರ್ಯ ಅವಿವೇಕಗಳ ಫಲವಾಗಿ ಈಗ ಬಿಜ್ಜಳನ ಕೊಲೆಯ ಮಿಥ್ಯಾಪವಾದ ಶರಣರ ಮೇಲೆ ಬಂದಿದೆ. ಶರಣಧರ್ಮದ ವಿರೋಧಿಯಾದ ಮಾಧವ ನಾಯಕನು ಈ ಅಪವಾದ ಹರಡಲು ಸರ್ವಪ್ರಯತ್ನ ಮಾಡುತ್ತಿದ್ದಾನೆ. ನನ್ನ ಅಂತರಾತ್ಮನಿಗೆ ವಿರುದ್ಧವಾಗಿ ನಾನು ಈ ಕಾರ್ಯಗಳನ್ನು ಮಾಡಿದೆನೇ? ಅಥವಾ ನನ್ನ ಹೃದಯದಲ್ಲಿ ಇಂಬಿಟ್ಟುಕೊಂಡ ಕಲಿ ದೇವರ ದೇವನೇ ನನ್ನಿಂದ ಈ ಕಾರ್ಯಗಳನ್ನು ಮಾಡಿಸಿದನೇ? ಎಂಬುದನ್ನು ನಿರ್ಧರಿಸಲೂ ನಾನು ಅಸಮರ್ಥನಾಗಿದ್ದೇನೆ. ನೀವು ಶರಣಧರ್ಮದ ಜ್ಞಾನನಿಧಿ. ಇದರಲ್ಲಿ ನನ್ನ ಅಪರಾಧವೇನೆಂಬುದನ್ನು ಪರಿಶೀಲಿಸಿ ನಿಷ್ಪಕ್ಷಪಾತವಾಗಿ ಪ್ರಾಯಶ್ಚಿತ್ತ ವಿಧಿಸಬೇಕಾಗಿ ಬೇಡುತ್ತೇನೆ.” {{gap}}ಚೆನ್ನಬಸವಣ್ಣನವರು ಅಪ್ರತಿಭರಾದರು. ಮಾಚೀದೇವರಂತಹ ಹಿರಿಯ ಶರಣರ ತಪ್ಪುಗಳನ್ನು ನಿರ್ಧರಿಸುವ ವಿವೇಕ ನನಗಿದೆಯೆ? ಎಂದು ಶಂಕಿಸಿತು ಅವರ ಮನಸ್ಸು, ಹೃದಯ. {{gap}}ಕೊನೆಗೆ ಅವರು ಹೇಳಿದರು : “ನೀವು ಹಿರಿಯ ಅನುಭಾವಿಗಳು, ಮಾಚಿದೇವಯ್ಯನವರೆ. ಬಸವಣ್ಣನವರ ನಿರ್ವಾಸನದ ಅನಂತರ, ಅನಾಥವಾಗಿದ್ದ ಅನುಭವ ಮಂಟಪ ನಿಮ್ಮ ಶಕ್ತಿ ಸಾಮರ್ಥ್ಯಗಳಿಂದ ಕೆಲವು ದಿನಗಳಾದರೂ ತಲೆಯೆತ್ತಿ ನಿಲ್ಲುವಂತಾಯಿತು. ಮಧುವರಸಾದಿಗಳನ್ನು ಉಳಿಸಲು ನೀವು ಮಾಡಿದ ಪ್ರಯತ್ನವನ್ನು ಶರಣರು ಎಂದೂ ಮರೆಯುವುದಿಲ್ಲ. ನಮ್ಮವಲಸೆಯ ನಿರ್ಧಾರ ಕಾರ್ಯಗತವಾದದ್ದು ನಿಮ್ಮ ಸಲಹೆ ಸಹಕಾರ ಸಾಹಸಗಳಿಂದ, ನಿಮ್ಮ ಒಪ್ಪು ತಪ್ಪುಗಳನ್ನು ನಿರ್ಧರಿಸಲು ನಾನು ಅರ್ಹನಲ್ಲ. ಆದರೂ ಸಮಯ ಧರ್ಮಕ್ಕೆ ಬದ್ದನಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ. {{gap}}“ಬಿಜ್ಜಳನ ಕೊಲೆಯಲ್ಲಿ ಮುಗಿದ ಒಳಸಂಚಿಗೆ ನೀವು ಉದ್ದೇಶಪೂರ್ವಕವಾಗಿ ಸಹಾಯ ಮಾಡಲಿಲ್ಲವೆಂಬುದು ನಿಮ್ಮ ವಿವರಣೆಯಿಂದ ವ್ಯಕ್ತವಾಗಿದೆ. ಐನೂರ್ವರ ಮಹಾಸಂಘದ ಸದಸ್ಯರಾಗಿ ನೀವು ಮಾಡಿದ ಕಾರ್ಯಗಳು ನಿಮಗೂ ನಿಮ್ಮ ಅಂತರಾತ್ಮನಿಗೂ ಸಂಬಂಧಿಸಿದ ವೈಯಕ್ತಿಕ ವಿಚಾರ. ಅದರ ಒಪ್ಪು ತಪ್ಪುಗಳನ್ನು ನಿಮ್ಮ ಇಷ್ಟದೈವ ಕಲಿದೇವರ ದೇವನು ನಿರ್ಧರಿಸಲಿ. ಶರಣಧರ್ಮ ಅದರಲ್ಲಿ ಪ್ರವೇಶಿಸುವುದಿಲ್ಲ. ಐನೂರ್ವರ ಮಹಾಸಂಘ, ಅದರ ಕ್ರಿಯಾರೂಪವಾದ ವೀರಬಣಂಜು ಸಂಘ, ಈ ಎರಡು ಸಂಸ್ಥೆಗಳು ಮೊದಲಿಂದ ಶರಣಧರ್ಮಕ್ಕೆ ಪ್ರೋತ್ಸಾಹವಿತ್ತಿವೆ ; ಶರಣರಿಗೆ ಸಹಾಯ ಮಾಡಿವೆ. ರಾಜಕೀಯ ಸಂಸ್ಥೆಗಳೆಂಬ ಕಾರಣದಿಂದ ಬಸವಣ್ಣನವರು ಅವುಗಳಿಂದ ಪ್ರತ್ಯೇಕವಾಗಿ ನಿಂತರು. ಆದರೆ ಶರಣರಿಗೆ ಸಂಸ್ಥೆಗಳ ಸಂಬಂಧವನ್ನು ನಿರಾಕರಿಸಲಿಲ್ಲ.<noinclude></noinclude> kz9hc8io0ijbb8uppbvk621m1lqf676 324071 324066 2026-06-02T11:30:17Z Shreelatha.Halemane 7642 /* Validated */ 324071 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೫೫}} ಅಚಾತುರ್ಯ ಅವಿವೇಕಗಳ ಫಲವಾಗಿ ಈಗ ಬಿಜ್ಜಳನ ಕೊಲೆಯ ಮಿಥ್ಯಾಪವಾದ ಶರಣರ ಮೇಲೆ ಬಂದಿದೆ. ಶರಣಧರ್ಮದ ವಿರೋಧಿಯಾದ ಮಾಧವ ನಾಯಕನು ಈ ಅಪವಾದ ಹರಡಲು ಸರ್ವಪ್ರಯತ್ನ ಮಾಡುತ್ತಿದ್ದಾನೆ. ನನ್ನ ಅಂತರಾತ್ಮನಿಗೆ ವಿರುದ್ಧವಾಗಿ ನಾನು ಈ ಕಾರ್ಯಗಳನ್ನು ಮಾಡಿದೆನೇ? ಅಥವಾ ನನ್ನ ಹೃದಯದಲ್ಲಿ ಇಂಬಿಟ್ಟುಕೊಂಡ ಕಲಿ ದೇವರ ದೇವನೇ ನನ್ನಿಂದ ಈ ಕಾರ್ಯಗಳನ್ನು ಮಾಡಿಸಿದನೇ? ಎಂಬುದನ್ನು ನಿರ್ಧರಿಸಲೂ ನಾನು ಅಸಮರ್ಥನಾಗಿದ್ದೇನೆ. ನೀವು ಶರಣಧರ್ಮದ ಜ್ಞಾನನಿಧಿ. ಇದರಲ್ಲಿ ನನ್ನ ಅಪರಾಧವೇನೆಂಬುದನ್ನು ಪರಿಶೀಲಿಸಿ ನಿಷ್ಪಕ್ಷಪಾತವಾಗಿ ಪ್ರಾಯಶ್ಚಿತ್ತ ವಿಧಿಸಬೇಕಾಗಿ ಬೇಡುತ್ತೇನೆ.” {{gap}}ಚೆನ್ನಬಸವಣ್ಣನವರು ಅಪ್ರತಿಭರಾದರು. ಮಾಚೀದೇವರಂತಹ ಹಿರಿಯ ಶರಣರ ತಪ್ಪುಗಳನ್ನು ನಿರ್ಧರಿಸುವ ವಿವೇಕ ನನಗಿದೆಯೆ? ಎಂದು ಶಂಕಿಸಿತು ಅವರ ಮನಸ್ಸು, ಹೃದಯ. {{gap}}ಕೊನೆಗೆ ಅವರು ಹೇಳಿದರು : “ನೀವು ಹಿರಿಯ ಅನುಭಾವಿಗಳು, ಮಾಚಿದೇವಯ್ಯನವರೆ. ಬಸವಣ್ಣನವರ ನಿರ್ವಾಸನದ ಅನಂತರ, ಅನಾಥವಾಗಿದ್ದ ಅನುಭವ ಮಂಟಪ ನಿಮ್ಮ ಶಕ್ತಿ ಸಾಮರ್ಥ್ಯಗಳಿಂದ ಕೆಲವು ದಿನಗಳಾದರೂ ತಲೆಯೆತ್ತಿ ನಿಲ್ಲುವಂತಾಯಿತು. ಮಧುವರಸಾದಿಗಳನ್ನು ಉಳಿಸಲು ನೀವು ಮಾಡಿದ ಪ್ರಯತ್ನವನ್ನು ಶರಣರು ಎಂದೂ ಮರೆಯುವುದಿಲ್ಲ. ನಮ್ಮವಲಸೆಯ ನಿರ್ಧಾರ ಕಾರ್ಯಗತವಾದದ್ದು ನಿಮ್ಮ ಸಲಹೆ ಸಹಕಾರ ಸಾಹಸಗಳಿಂದ, ನಿಮ್ಮ ಒಪ್ಪು ತಪ್ಪುಗಳನ್ನು ನಿರ್ಧರಿಸಲು ನಾನು ಅರ್ಹನಲ್ಲ. ಆದರೂ ಸಮಯ ಧರ್ಮಕ್ಕೆ ಬದ್ದನಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ. {{gap}}“ಬಿಜ್ಜಳನ ಕೊಲೆಯಲ್ಲಿ ಮುಗಿದ ಒಳಸಂಚಿಗೆ ನೀವು ಉದ್ದೇಶಪೂರ್ವಕವಾಗಿ ಸಹಾಯ ಮಾಡಲಿಲ್ಲವೆಂಬುದು ನಿಮ್ಮ ವಿವರಣೆಯಿಂದ ವ್ಯಕ್ತವಾಗಿದೆ. ಐನೂರ್ವರ ಮಹಾಸಂಘದ ಸದಸ್ಯರಾಗಿ ನೀವು ಮಾಡಿದ ಕಾರ್ಯಗಳು ನಿಮಗೂ ನಿಮ್ಮ ಅಂತರಾತ್ಮನಿಗೂ ಸಂಬಂಧಿಸಿದ ವೈಯಕ್ತಿಕ ವಿಚಾರ. ಅದರ ಒಪ್ಪು ತಪ್ಪುಗಳನ್ನು ನಿಮ್ಮ ಇಷ್ಟದೈವ ಕಲಿದೇವರ ದೇವನು ನಿರ್ಧರಿಸಲಿ. ಶರಣಧರ್ಮ ಅದರಲ್ಲಿ ಪ್ರವೇಶಿಸುವುದಿಲ್ಲ. ಐನೂರ್ವರ ಮಹಾಸಂಘ, ಅದರ ಕ್ರಿಯಾರೂಪವಾದ ವೀರಬಣಂಜು ಸಂಘ, ಈ ಎರಡು ಸಂಸ್ಥೆಗಳು ಮೊದಲಿಂದ ಶರಣಧರ್ಮಕ್ಕೆ ಪ್ರೋತ್ಸಾಹವಿತ್ತಿವೆ ; ಶರಣರಿಗೆ ಸಹಾಯ ಮಾಡಿವೆ. ರಾಜಕೀಯ ಸಂಸ್ಥೆಗಳೆಂಬ ಕಾರಣದಿಂದ ಬಸವಣ್ಣನವರು ಅವುಗಳಿಂದ ಪ್ರತ್ಯೇಕವಾಗಿ ನಿಂತರು. ಆದರೆ ಶರಣರಿಗೆ ಸಂಸ್ಥೆಗಳ ಸಂಬಂಧವನ್ನು ನಿರಾಕರಿಸಲಿಲ್ಲ.<noinclude></noinclude> 0lxek68ov5r4rvql6rzjthggfi7cjar ಪುಟ:ಕ್ರಾಂತಿ ಕಲ್ಯಾಣ.pdf/೪೫೪ 104 86396 324019 203721 2026-06-02T06:41:28Z Shreesha Sharma 7840 /* Proofread */ 324019 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೪೧}} ಎಂಬ ಮತ್ತೊಬ್ಬ ಹಿರಿಯ ಭಕ್ತನು, “ಈಗ ನಮಗೆ ಇಷ್ಟೆಲ್ಲ ಎಚ್ಚರಿಕೆಯ ಅಗತ್ಯವಿರುವುದಿಲ್ಲ. ಸುಮಾರು ಮೂರು ಸಾವಿರ ಮಂದಿ ಗಣಾಚಾರಿ ಯೋಧರು ಈಗ ನಮ್ಮ ಸಂಗಡಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಶಿಕ್ಷಣ ಪಡೆದ ಸೈನಿಕರು. ಬಿಲ್ಲು ಬಾಣ ಕತ್ತಿ ಭಲ್ಯಗಳನ್ನು ದಕ್ಷತೆಯಿಂದ ಉಪಯೋಗಿಸಬಲ್ಲರು. ಉಳಿದವರು ಗರಡಿ ಸಾಧಕ ಕಲಿತ ಜಟ್ಟಿಗಳು, ಮಾಧವ ನಾಯಕನ ಸೈನ್ಯದೊಡನೆ ಹೋರಾಡುವ ಶಕ್ತಿ ನಮಗಿದೆ,” ಎಂದು ಅಭಿಮಾನದಿಂದ ನುಡಿದನು. {{gap}}“ಹೋರಾಟ ನಮ್ಮ ಉದ್ದೇಶವಲ್ಲ ಮಾರಿ ತಂದೆಗಳೆ” ಮಾಚಿದೇವರು ಹೇಳಿದರು : “ಯಾತ್ರಾದಳ ಕೃಷ್ಣಾ ನದಿಯನ್ನು ದಾಟಿದರೆ ಮುಂದೆ ಉಳಿವೆಯ ಮಾರ್ಗ ಸುರಕ್ಷಿತವಾಗುತ್ತದೆ. ಮಾಧವ ನಾಯಕನ ಸುಶಿಕ್ಷಿತ ಸೈನ್ಯದೊಡನೆ ಹೋರಾಡುವುದು ಗಣಾಚಾರಿ ಯೋಧರಿಗೆ ಸಾಧ್ಯವಲ್ಲ. ನಮ್ಮಲ್ಲಿ ಆನೆ ಕುದುರೆ ರಥಗಳಿರುವುದಿಲ್ಲ. ಗಜತುರಗ ರಥಗಳೆದುರಿಗೆ ಪದಾತಿ ಸೈನ್ಯ ಹೋರಾಡುವುದು ಹರಿಯುವ ನೀರಿಗೆ ಹುಲ್ಲಿಂದ ಕಟ್ಟೆ ಕಟ್ಟಿದಂತೆ, ವಿಫಲವಾಗುವ ವ್ಯರ್ಥ ಸಾಹಸ.” {{gap}}ಮಾಚಿದೇವರ ಅಭಿಪ್ರಾಯವನ್ನು ಅನುಮೋದಿಸಿ ಚೆನ್ನಬಸವಣ್ಣನವರು ಹೇಳಿದರು “ಅಕಾರಣ ನಾಯಕನ ಸೈನ್ಯ ನಮ್ಮನ್ನು ಬೆನ್ನಟ್ಟಿಬಂದರೆ ಆತ್ಮರಕ್ಷಣೆಗಾಗಿ ನಾವು ಹೋರಾಡಲು ಸಿದ್ದ. ಅಂತಹ ಸಂದರ್ಭದಲ್ಲಿ ನಾನೂ ಶಸ್ತ್ರ ಹಿಡಿಯುತ್ತೇನೆ. ಆದರೆ ಬುದ್ಧಿಪೂರ್ವಕವಾಗಿ ಹೋರಾಟವನ್ನು ಪ್ರಚೋದಿಸುವುದು ನಮಗಿಷ್ಟವಿಲ್ಲ.” {{gap}}ಈ ಮಾತುಗಳು ಮುಗಿಯುತ್ತಿದ್ದಂತೆ ಗಣಾಚಾರಿ ಯೋಧ ದಳಗಳ ಮುಖ್ಯ ನಾಯಕನು ಸೊಡ್ಡಲ ಬಾಚರಸನನ್ನು ಕರೆದುಕೊಂಡು ಅಲ್ಲಿಗೆ ಬಂದನು. “ನಾವು ನಗರವನ್ನು ಬಿಟ್ಟ ಮೇಲೆ ಅಲ್ಲಿ ಏನು ನಡೆಯಿತು ಎಂಬುದು ಇವರಿಗೆ ತಿಳಿದಿದೆ, ಅದನ್ನು ಕೇಳಿ ನಾವು ಮುಂದಿನ ಕಾರ್ಯಕ್ರಮ ನಿರ್ಧರಿಸಬೇಕಾಗುವುದು,” ಎಂದು ಅವನು ಹೇಳಿದನು. {{gap}}ಸಕಲೇಶ ಮಾದರಸರನ್ನು ಶ್ರೀಶೈಲದಲ್ಲಿ ಬಿಟ್ಟು ಸುರಪುರದ ಮಾರ್ಗವಾಗಿ ಉಳಿವೆಗೆ ಬರಲು ನಿಯುಕ್ತನಾಗಿದ್ದ ಸೊಡ್ಡಲ ಬಾಚರಸನು ಹಠತ್ತಾಗಿ ಹಿಂದಿರುಗಿದ್ದನ್ನು ಕಂಡು ಮಾಚಿದೇವರಿಗೆ ಅಚ್ಚರಿ ಆಗಿತ್ತು. ತುಸು ಗಡುಸಾದ ದನಿಯಿಂದ ಅವರು, “ನಿನಗೆ ಗೊತ್ತಾಗಿದ್ದ ಕಾರ್ಯವನ್ನು ಸಂಪೂರ್ಣವಾಗಿ ನಿರ್ವಹಿಸಿದೆಯಾ, ಬಾಚರಸ ?” ಎಂದರು. {{gap}}ಬಾಚರಸ ಕೈಮುಗಿದು ಹೇಳಿದನು : “ಕೋಪ ಮಾಡಬೇಡಿ, ಅಣ್ಣನವರೆ. ಇದರಲ್ಲಿ ನನ್ನ ಅಪರಾಧವೇನೂ ಇರುವುದಿಲ್ಲ. ಮಹಾದ್ವಾರವನ್ನು ದಾಟಿ ನಗರದಿಂದ ಹೊರಗೆ ಬಂದ ಮೇಲೆ ನಿಮ್ಮಿಂದ ಬೀಳ್ಕೊಂಡು ನಾನು ಮತ್ತು ಸಕಲೇಶ<noinclude></noinclude> 082ch768xkh9383aljjlxxfkp9yjawp 324021 324019 2026-06-02T06:44:09Z Shreelatha.Halemane 7642 /* Validated */ 324021 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೪೧}} ಎಂಬ ಮತ್ತೊಬ್ಬ ಹಿರಿಯ ಭಕ್ತನು, “ಈಗ ನಮಗೆ ಇಷ್ಟೆಲ್ಲ ಎಚ್ಚರಿಕೆಯ ಅಗತ್ಯವಿರುವುದಿಲ್ಲ. ಸುಮಾರು ಮೂರು ಸಾವಿರ ಮಂದಿ ಗಣಾಚಾರಿ ಯೋಧರು ಈಗ ನಮ್ಮ ಸಂಗಡಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಶಿಕ್ಷಣ ಪಡೆದ ಸೈನಿಕರು. ಬಿಲ್ಲು ಬಾಣ ಕತ್ತಿ ಭಲ್ಯಗಳನ್ನು ದಕ್ಷತೆಯಿಂದ ಉಪಯೋಗಿಸಬಲ್ಲರು. ಉಳಿದವರು ಗರಡಿ ಸಾಧಕ ಕಲಿತ ಜಟ್ಟಿಗಳು, ಮಾಧವ ನಾಯಕನ ಸೈನ್ಯದೊಡನೆ ಹೋರಾಡುವ ಶಕ್ತಿ ನಮಗಿದೆ,” ಎಂದು ಅಭಿಮಾನದಿಂದ ನುಡಿದನು. {{gap}}“ಹೋರಾಟ ನಮ್ಮ ಉದ್ದೇಶವಲ್ಲ ಮಾರಿ ತಂದೆಗಳೆ” ಮಾಚಿದೇವರು ಹೇಳಿದರು : “ಯಾತ್ರಾದಳ ಕೃಷ್ಣಾ ನದಿಯನ್ನು ದಾಟಿದರೆ ಮುಂದೆ ಉಳಿವೆಯ ಮಾರ್ಗ ಸುರಕ್ಷಿತವಾಗುತ್ತದೆ. ಮಾಧವ ನಾಯಕನ ಸುಶಿಕ್ಷಿತ ಸೈನ್ಯದೊಡನೆ ಹೋರಾಡುವುದು ಗಣಾಚಾರಿ ಯೋಧರಿಗೆ ಸಾಧ್ಯವಲ್ಲ. ನಮ್ಮಲ್ಲಿ ಆನೆ ಕುದುರೆ ರಥಗಳಿರುವುದಿಲ್ಲ. ಗಜತುರಗ ರಥಗಳೆದುರಿಗೆ ಪದಾತಿ ಸೈನ್ಯ ಹೋರಾಡುವುದು ಹರಿಯುವ ನೀರಿಗೆ ಹುಲ್ಲಿಂದ ಕಟ್ಟೆ ಕಟ್ಟಿದಂತೆ, ವಿಫಲವಾಗುವ ವ್ಯರ್ಥ ಸಾಹಸ.” {{gap}}ಮಾಚಿದೇವರ ಅಭಿಪ್ರಾಯವನ್ನು ಅನುಮೋದಿಸಿ ಚೆನ್ನಬಸವಣ್ಣನವರು ಹೇಳಿದರು “ಅಕಾರಣ ನಾಯಕನ ಸೈನ್ಯ ನಮ್ಮನ್ನು ಬೆನ್ನಟ್ಟಿಬಂದರೆ ಆತ್ಮರಕ್ಷಣೆಗಾಗಿ ನಾವು ಹೋರಾಡಲು ಸಿದ್ದ. ಅಂತಹ ಸಂದರ್ಭದಲ್ಲಿ ನಾನೂ ಶಸ್ತ್ರ ಹಿಡಿಯುತ್ತೇನೆ. ಆದರೆ ಬುದ್ಧಿಪೂರ್ವಕವಾಗಿ ಹೋರಾಟವನ್ನು ಪ್ರಚೋದಿಸುವುದು ನಮಗಿಷ್ಟವಿಲ್ಲ.” {{gap}}ಈ ಮಾತುಗಳು ಮುಗಿಯುತ್ತಿದ್ದಂತೆ ಗಣಾಚಾರಿ ಯೋಧ ದಳಗಳ ಮುಖ್ಯ ನಾಯಕನು ಸೊಡ್ಡಲ ಬಾಚರಸನನ್ನು ಕರೆದುಕೊಂಡು ಅಲ್ಲಿಗೆ ಬಂದನು. “ನಾವು ನಗರವನ್ನು ಬಿಟ್ಟ ಮೇಲೆ ಅಲ್ಲಿ ಏನು ನಡೆಯಿತು ಎಂಬುದು ಇವರಿಗೆ ತಿಳಿದಿದೆ, ಅದನ್ನು ಕೇಳಿ ನಾವು ಮುಂದಿನ ಕಾರ್ಯಕ್ರಮ ನಿರ್ಧರಿಸಬೇಕಾಗುವುದು,” ಎಂದು ಅವನು ಹೇಳಿದನು. {{gap}}ಸಕಲೇಶ ಮಾದರಸರನ್ನು ಶ್ರೀಶೈಲದಲ್ಲಿ ಬಿಟ್ಟು ಸುರಪುರದ ಮಾರ್ಗವಾಗಿ ಉಳಿವೆಗೆ ಬರಲು ನಿಯುಕ್ತನಾಗಿದ್ದ ಸೊಡ್ಡಲ ಬಾಚರಸನು ಹಠತ್ತಾಗಿ ಹಿಂದಿರುಗಿದ್ದನ್ನು ಕಂಡು ಮಾಚಿದೇವರಿಗೆ ಅಚ್ಚರಿ ಆಗಿತ್ತು. ತುಸು ಗಡುಸಾದ ದನಿಯಿಂದ ಅವರು, “ನಿನಗೆ ಗೊತ್ತಾಗಿದ್ದ ಕಾರ್ಯವನ್ನು ಸಂಪೂರ್ಣವಾಗಿ ನಿರ್ವಹಿಸಿದೆಯಾ, ಬಾಚರಸ ?” ಎಂದರು. {{gap}}ಬಾಚರಸ ಕೈಮುಗಿದು ಹೇಳಿದನು : “ಕೋಪ ಮಾಡಬೇಡಿ, ಅಣ್ಣನವರೆ. ಇದರಲ್ಲಿ ನನ್ನ ಅಪರಾಧವೇನೂ ಇರುವುದಿಲ್ಲ. ಮಹಾದ್ವಾರವನ್ನು ದಾಟಿ ನಗರದಿಂದ ಹೊರಗೆ ಬಂದ ಮೇಲೆ ನಿಮ್ಮಿಂದ ಬೀಳ್ಕೊಂಡು ನಾನು ಮತ್ತು ಸಕಲೇಶ<noinclude></noinclude> dvfl7nh3n15z49i9ayihy7nfi64etjw ಪುಟ:ಕ್ರಾಂತಿ ಕಲ್ಯಾಣ.pdf/೪೫೨ 104 86397 323954 203722 2026-06-02T03:35:26Z Shreesha Sharma 7840 /* Proofread */ 323954 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೩೯}} ಸನ್ಯಾಸಿಗಳು, ಅಧ್ಯಾಪಕ ವಿದ್ಯಾರ್ಥಿಗಳು, ಅಧಿಕಾರಿ ರಾಜಪ್ರತಿನಿಧಿಗಳು, ನಾಗರಿಕ ಸ್ತ್ರೀ ಪುರುಷರು ಏಕಕಂಠದಿಮದ ನಿರಂತರವಾಗಿ ಪಂಚಾಕ್ಷರಿಯನ್ನು ನುಡಿದರು. ನದೀತೀರದ ಶಿಲಾಖಂಡಗಳಲ್ಲಿ, ತರುಲತೆಗಳಲ್ಲಿ ನಿಂತ ನೆಲದಲ್ಲಿ ಹರಿಯುವ ನೀರಲ್ಲಿ ಬೀಸುವ ಗಾಳಿಯಲ್ಲಿ ಮಂತ್ರಘೋಷ ತುಂಬಿತು. {{gap}}ಭಾವಪರವಶನಾದ ಕವಿಯಂತೆ ಅಗ್ಗಳನು ಹಾಡಿದನು : {{gap}}ಪಾರ್ಥಿವ ಜಗತ್ತಿನೊಡನೆ ನಿನ್ನ ಸಂಬಂಧ {{gap}}ಕಳೆದುದು, ಅಣ್ಣಾ ! {{gap}}ಅಂಧಶ್ರದ್ದೆ ಸಂಪ್ರದಾಯಗಳ ಸಂಕೋಲೆಯಿಂದ {{gap}}ಬಂಧಿಸಲ್ಪಟ್ಟು ಅಂಗಾಂಗಳೆಲ್ಲ ಜಡವಾಗಿದ್ದ {{gap}}ಸಮಾಜ ಪುರುಷನನ್ನು ಎಚ್ಚರಗೊಳಿಸಿದೆ ನೀನು ! {{gap}}ಬಂಧನ ಬಿಡಿಸಿ, ಆತ್ರೋದ್ದಾರದ ಶುಭಪಥದಲ್ಲಿ {{gap}}ನಡೆಸಲು ನಿರಂತರವಾಗಿ ಪರಿಶ್ರಮಿಸಿದೆ, ಅಣ್ಣಾ ! {{gap}}ಜೀವನ್ಮುಕ್ತನು ನೀನು ! {{gap}}ಹೋಗು, ಅಮರ ಪಥದ ಮಹಾನ್ ಪಥಿಕ {{gap}}ನಿನ್ನ ಅಗಲಿಕೆಯ ತೀವ್ರ ವೇದನೆಯನ್ನು {{gap}}ಹೃದಯದಲ್ಲಿ ಇಂಬಿಟ್ಟು {{gap}}ನಿರಂತರ ನಿನ್ನ ನಾಮಸ್ಮರಣೆ ಮಡುತ್ತ {{gap}}ಬದುಕುವೆನು ನಾನು. {{gap}}ಚಾಲುಕ್ಯ ರಾಜ್ಯದ ಧರ್ಮಜ್ಯೋತಿಯಾಗಿ, {{gap}}ಸತ್ಯದ ಸೊಡರಾಗಿ, ನಿತ್ಯದ ನೆಲೆಯಾಗಿ, {{gap}}ನೀನು ರಚಿಸಿದ ಆದರ್ಶ ಜೀವನದ ಅಮರ ಇತಿಹಾಸ ಅನಂತಕಾಲವೂ ನಿನ್ನ ಜ್ವಲಂತ ಸ್ಮಾರಕವಾಗಿ {{gap}}ನಿಲ್ಲುವುದು. {{gap}}ಓಂ ಶಾಂತಿಃ ಶಾಂತಿಃ ಶಾಂತಿಃ {{gap}}ಈಗಲೂ ಕೂಡಲ ಸಂಗಮವು ಶರಣರಿಗೆ ಪವಿತ್ರ ಯಾತ್ರಾಸ್ಥಳ. ಕಾಶಿ ಕೇದಾರಗಳಿಗಿಂತ ಅದು ಹೆಚ್ಚು ಪವಿತ್ರವೆಂದು ಶರಣರು ಭಾವಿಸುತ್ತಾರೆ. ಕಾಲಕ್ರಮದಲ್ಲಿ ನದಿಯ ಪಾತ್ರ ವಿಸ್ತಾರವಾಗಿರುವುದರಿಂದ ಬಸವಣ್ಣನವರ ಗದ್ದಿಗೆ ನದಿಯಲ್ಲಿ ಮುಳುಗಿ ಅದರ ಮೇಲೆ ಮಂಟಪ ಕಟ್ಟಿದೆ.<noinclude></noinclude> 8ek7nuku6bhpf1l7ae3v5ae6swrm1bw 323956 323954 2026-06-02T03:36:01Z Shreelatha.Halemane 7642 /* Validated */ 323956 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೩೯}} ಸನ್ಯಾಸಿಗಳು, ಅಧ್ಯಾಪಕ ವಿದ್ಯಾರ್ಥಿಗಳು, ಅಧಿಕಾರಿ ರಾಜಪ್ರತಿನಿಧಿಗಳು, ನಾಗರಿಕ ಸ್ತ್ರೀ ಪುರುಷರು ಏಕಕಂಠದಿಮದ ನಿರಂತರವಾಗಿ ಪಂಚಾಕ್ಷರಿಯನ್ನು ನುಡಿದರು. ನದೀತೀರದ ಶಿಲಾಖಂಡಗಳಲ್ಲಿ, ತರುಲತೆಗಳಲ್ಲಿ ನಿಂತ ನೆಲದಲ್ಲಿ ಹರಿಯುವ ನೀರಲ್ಲಿ ಬೀಸುವ ಗಾಳಿಯಲ್ಲಿ ಮಂತ್ರಘೋಷ ತುಂಬಿತು. {{gap}}ಭಾವಪರವಶನಾದ ಕವಿಯಂತೆ ಅಗ್ಗಳನು ಹಾಡಿದನು : {{gap}}ಪಾರ್ಥಿವ ಜಗತ್ತಿನೊಡನೆ ನಿನ್ನ ಸಂಬಂಧ {{gap}}ಕಳೆದುದು, ಅಣ್ಣಾ ! {{gap}}ಅಂಧಶ್ರದ್ದೆ ಸಂಪ್ರದಾಯಗಳ ಸಂಕೋಲೆಯಿಂದ {{gap}}ಬಂಧಿಸಲ್ಪಟ್ಟು ಅಂಗಾಂಗಳೆಲ್ಲ ಜಡವಾಗಿದ್ದ {{gap}}ಸಮಾಜ ಪುರುಷನನ್ನು ಎಚ್ಚರಗೊಳಿಸಿದೆ ನೀನು ! {{gap}}ಬಂಧನ ಬಿಡಿಸಿ, ಆತ್ರೋದ್ದಾರದ ಶುಭಪಥದಲ್ಲಿ {{gap}}ನಡೆಸಲು ನಿರಂತರವಾಗಿ ಪರಿಶ್ರಮಿಸಿದೆ, ಅಣ್ಣಾ ! {{gap}}ಜೀವನ್ಮುಕ್ತನು ನೀನು ! {{gap}}ಹೋಗು, ಅಮರ ಪಥದ ಮಹಾನ್ ಪಥಿಕ {{gap}}ನಿನ್ನ ಅಗಲಿಕೆಯ ತೀವ್ರ ವೇದನೆಯನ್ನು {{gap}}ಹೃದಯದಲ್ಲಿ ಇಂಬಿಟ್ಟು {{gap}}ನಿರಂತರ ನಿನ್ನ ನಾಮಸ್ಮರಣೆ ಮಡುತ್ತ {{gap}}ಬದುಕುವೆನು ನಾನು. {{gap}}ಚಾಲುಕ್ಯ ರಾಜ್ಯದ ಧರ್ಮಜ್ಯೋತಿಯಾಗಿ, {{gap}}ಸತ್ಯದ ಸೊಡರಾಗಿ, ನಿತ್ಯದ ನೆಲೆಯಾಗಿ, {{gap}}ನೀನು ರಚಿಸಿದ ಆದರ್ಶ ಜೀವನದ ಅಮರ ಇತಿಹಾಸ ಅನಂತಕಾಲವೂ ನಿನ್ನ ಜ್ವಲಂತ ಸ್ಮಾರಕವಾಗಿ {{gap}}ನಿಲ್ಲುವುದು. {{gap}}ಓಂ ಶಾಂತಿಃ ಶಾಂತಿಃ ಶಾಂತಿಃ {{gap}}ಈಗಲೂ ಕೂಡಲ ಸಂಗಮವು ಶರಣರಿಗೆ ಪವಿತ್ರ ಯಾತ್ರಾಸ್ಥಳ. ಕಾಶಿ ಕೇದಾರಗಳಿಗಿಂತ ಅದು ಹೆಚ್ಚು ಪವಿತ್ರವೆಂದು ಶರಣರು ಭಾವಿಸುತ್ತಾರೆ. ಕಾಲಕ್ರಮದಲ್ಲಿ ನದಿಯ ಪಾತ್ರ ವಿಸ್ತಾರವಾಗಿರುವುದರಿಂದ ಬಸವಣ್ಣನವರ ಗದ್ದಿಗೆ ನದಿಯಲ್ಲಿ ಮುಳುಗಿ ಅದರ ಮೇಲೆ ಮಂಟಪ ಕಟ್ಟಿದೆ.<noinclude></noinclude> hounoy7a60083t0ulrvz9kaywr5nuy5 ಪುಟ:ಕ್ರಾಂತಿ ಕಲ್ಯಾಣ.pdf/೪೫೩ 104 86398 324017 203723 2026-06-02T06:38:49Z Shreesha Sharma 7840 /* Proofread */ 324017 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೪೦|right=ಕ್ರಾಂತಿ ಕಲ್ಯಾಣ}} {{gap}}ಉಳಿವೆಗೆ ಹೊರಟ ಶರಣರ ಯಾತ್ರಾದಳ ಕಲ್ಯಾಣವನ್ನು ಬಿಟ್ಟು ಒಂದು ವಾರದ ಮೇಲೆ ಕೃಷ್ಣಾ ನದಿಯ ಉತ್ತರ ದಡದಲ್ಲಿದ್ದ ತಂಗಡಿ ಎಂಬ ಗ್ರಾಮಕ್ಕೆ ಬಂದಿತು. ಆ ದಿನ ರಾತ್ರಿ ಶಿಬಿರದ ಹೊರಗೆ ಬಯಲಲ್ಲಿ ಕುಳಿತು ದಳದ ನಾಯಕರು ಯಾತ್ರೆಯ ಮುನ್ನಡೆಯ ಬಗೆಗೆ ಪರ್ಯಾಲೋಚನೆ ನಡೆಸುತ್ತಿದ್ದರು. {{gap}}ಮಾಚಿದೇವರು ಹೇಳಿದರು : “ಕೃಷ್ಣ ತುಂಬಿ ಹರಿಯುತ್ತಿದೆ. ಪ್ರವಾಹ ಇಳಿಯುವವರೆಗೆ ದಾಟುವುದು ಸಾಧ್ಯವಲ್ಲವೆಂದು ಅಂಬಿಗರು ಹೇಳುತ್ತಾರೆ. ನಾವು ಎರಡು ದಿನ ಇಲ್ಲಿಯೇ ಉಳಿಯಬೇಕಾಗಬಹುದು.” {{gap}}ಚೆನ್ನಬಸವಣ್ಣನವರು ತುಸು ಹೊತ್ತು ಯೋಚಿಸುತ್ತಿದ್ದು, “ನಾವು ಮುನ್ನೆಚ್ಚರಿಕೆಯಿಂದ ಸರಸ್ವತೀ ಭಂಡಾರವನ್ನು ಮೊದಲೇ ಕಳುಹಿಸಿದ್ದು ಉತ್ತಮವಾಯಿತು. ಸಂಗಡ ಹೋದ ಕಿನ್ನರಿ ಬ್ರಹ್ಮಯ್ಯನಿಂದ ಸುದ್ದಿ ಬಂದಿತೆ?” ಎಂದು ಪ್ರಶ್ನಿಸಿದರು. {{gap}}“ಓಲೆ ಕಡತದ ಹೇರುಗಳೊಡನೆ ಅವರು ಮುರುಗೋಡು ಹಾಯ್ದಡವನ್ನು ದಾಟಿದುದಾಗಿ ಅಂಬಿಗರು ಹೇಳುತ್ತಾರೆ. ಇನ್ನೆರಡು ದಿನಗಳಲ್ಲಿ ಅವರು ಉಳಿವೆಯ ಮಹಾಮನೆ ಸೇರಬಹುದು,” ಎಂದು ಮಾಚಿದೇವರು ಹೇಳಿದರು. {{gap}}“ಇಲ್ಲಿಂದ ಹರಿದಾರಿ ದೂರದಲ್ಲಿರುವ ತಡಸಿಯ ಹಾಯ್ದಡವನ್ನು ದುರಸ್ತು ಮಾಡಲು ಬಿಜ್ಜಳರಾಯರು ಹೆಚ್ಚು ಹಣ ವೆಚ್ಚ ಮಾಡಿದರೆಂದು ಕೇಳಿದ್ದೇನೆ. ಪ್ರವಾಹದ ಬಿರುಸು ಅಲ್ಲಿ ಹೇಗಿದೆಯೆಂದು ತಿಳಿಯಿತೆ?” {{gap}}“ನಾವು ತಡಸದ ಹಾಯ್ದಡದಿಂದಲೇ ನದಿಯನ್ನು ದಾಟುವುದು, ಚೆನ್ನಬಸವಣ್ಣನವರೆ. ಆದರೆ ಅಲ್ಲಿ ಶಿಬಿರಕ್ಕೆ ಸ್ಥಳ ಅನುಕೂಲವಾಗಿಲ್ಲ,” ಎಂದರು ಮಾಚಿದೇವರು. {{gap}}ಚೆನ್ನಬಸವಣ್ಣನವರು ಮೌನ, ಮತ್ತೊಬ್ಬ ಹಿರಿಯ ಶರಣನು, “ತಡಸದ ಹಾಯ್ದಡದಿಂದ ಹರಿದಾರಿ ದೂರದಲ್ಲಿ ನಾವು ಶಿಬಿರ ಹಾಕಲು ಕಾರಣ ?” ಎಂದನು. {{gap}}ಮಾಚಿದೇವರು ಹೇಳಿದರು: “ತಡಸದ ಹಾಯ್ದಡ ಬಯಲಲ್ಲಿರುವುದರಿಂದ ಶಿಬಿರಕ್ಕೆ ಸಾಕಾದಷ್ಟು ರಕ್ಷಣೆಯಿರುವುದಿಲ್ಲ. ತಂಗಡಿಯ ಹಾಯ್ದಡದ ವಿಚಾರ ಹಾಗಲ್ಲ. ಸಣ್ಣ ಕಣಿವೆಯೊಂದನ್ನು ಹಾದು ನಾವಿಲ್ಲಿಗೆ ಬರಬೇಕು. ಶಿಬಿರವೆಲ್ಲಿದೆಯೆಂದು ಯಾರಿಗೂ ತಟ್ಟನೆ ತಿಳಿಯುವುದಿಲ್ಲ. ಕಣಿವೆಯಲ್ಲಿ ಗಣಾಚಾರಿ ಯೋಧರ ರಕ್ಷಕ ದಳಗಳು ಕಾವಲಿವೆ.” {{gap}}ನಾಲ್ಕು ದಿನಗಳ ಹಿಂದೆ ಯಾತ್ರಾದಳವನ್ನು ಸೇರಿದ್ದ ಕೂಗಿನಮಾರಿ ತಂದೆ<noinclude></noinclude> qibbftfbwepmgjvgasq07iaetzsbees 324018 324017 2026-06-02T06:40:09Z Shreelatha.Halemane 7642 /* Validated */ 324018 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೪೦|right=ಕ್ರಾಂತಿ ಕಲ್ಯಾಣ}} {{gap}}ಉಳಿವೆಗೆ ಹೊರಟ ಶರಣರ ಯಾತ್ರಾದಳ ಕಲ್ಯಾಣವನ್ನು ಬಿಟ್ಟು ಒಂದು ವಾರದ ಮೇಲೆ ಕೃಷ್ಣಾ ನದಿಯ ಉತ್ತರ ದಡದಲ್ಲಿದ್ದ ತಂಗಡಿ ಎಂಬ ಗ್ರಾಮಕ್ಕೆ ಬಂದಿತು. ಆ ದಿನ ರಾತ್ರಿ ಶಿಬಿರದ ಹೊರಗೆ ಬಯಲಲ್ಲಿ ಕುಳಿತು ದಳದ ನಾಯಕರು ಯಾತ್ರೆಯ ಮುನ್ನಡೆಯ ಬಗೆಗೆ ಪರ್ಯಾಲೋಚನೆ ನಡೆಸುತ್ತಿದ್ದರು. {{gap}}ಮಾಚಿದೇವರು ಹೇಳಿದರು : “ಕೃಷ್ಣ ತುಂಬಿ ಹರಿಯುತ್ತಿದೆ. ಪ್ರವಾಹ ಇಳಿಯುವವರೆಗೆ ದಾಟುವುದು ಸಾಧ್ಯವಲ್ಲವೆಂದು ಅಂಬಿಗರು ಹೇಳುತ್ತಾರೆ. ನಾವು ಎರಡು ದಿನ ಇಲ್ಲಿಯೇ ಉಳಿಯಬೇಕಾಗಬಹುದು.” {{gap}}ಚೆನ್ನಬಸವಣ್ಣನವರು ತುಸು ಹೊತ್ತು ಯೋಚಿಸುತ್ತಿದ್ದು, “ನಾವು ಮುನ್ನೆಚ್ಚರಿಕೆಯಿಂದ ಸರಸ್ವತೀ ಭಂಡಾರವನ್ನು ಮೊದಲೇ ಕಳುಹಿಸಿದ್ದು ಉತ್ತಮವಾಯಿತು. ಸಂಗಡ ಹೋದ ಕಿನ್ನರಿ ಬ್ರಹ್ಮಯ್ಯನಿಂದ ಸುದ್ದಿ ಬಂದಿತೆ?” ಎಂದು ಪ್ರಶ್ನಿಸಿದರು. {{gap}}“ಓಲೆ ಕಡತದ ಹೇರುಗಳೊಡನೆ ಅವರು ಮುರುಗೋಡು ಹಾಯ್ದಡವನ್ನು ದಾಟಿದುದಾಗಿ ಅಂಬಿಗರು ಹೇಳುತ್ತಾರೆ. ಇನ್ನೆರಡು ದಿನಗಳಲ್ಲಿ ಅವರು ಉಳಿವೆಯ ಮಹಾಮನೆ ಸೇರಬಹುದು,” ಎಂದು ಮಾಚಿದೇವರು ಹೇಳಿದರು. {{gap}}“ಇಲ್ಲಿಂದ ಹರಿದಾರಿ ದೂರದಲ್ಲಿರುವ ತಡಸಿಯ ಹಾಯ್ದಡವನ್ನು ದುರಸ್ತು ಮಾಡಲು ಬಿಜ್ಜಳರಾಯರು ಹೆಚ್ಚು ಹಣ ವೆಚ್ಚ ಮಾಡಿದರೆಂದು ಕೇಳಿದ್ದೇನೆ. ಪ್ರವಾಹದ ಬಿರುಸು ಅಲ್ಲಿ ಹೇಗಿದೆಯೆಂದು ತಿಳಿಯಿತೆ?” {{gap}}“ನಾವು ತಡಸದ ಹಾಯ್ದಡದಿಂದಲೇ ನದಿಯನ್ನು ದಾಟುವುದು, ಚೆನ್ನಬಸವಣ್ಣನವರೆ. ಆದರೆ ಅಲ್ಲಿ ಶಿಬಿರಕ್ಕೆ ಸ್ಥಳ ಅನುಕೂಲವಾಗಿಲ್ಲ,” ಎಂದರು ಮಾಚಿದೇವರು. {{gap}}ಚೆನ್ನಬಸವಣ್ಣನವರು ಮೌನ, ಮತ್ತೊಬ್ಬ ಹಿರಿಯ ಶರಣನು, “ತಡಸದ ಹಾಯ್ದಡದಿಂದ ಹರಿದಾರಿ ದೂರದಲ್ಲಿ ನಾವು ಶಿಬಿರ ಹಾಕಲು ಕಾರಣ ?” ಎಂದನು. {{gap}}ಮಾಚಿದೇವರು ಹೇಳಿದರು: “ತಡಸದ ಹಾಯ್ದಡ ಬಯಲಲ್ಲಿರುವುದರಿಂದ ಶಿಬಿರಕ್ಕೆ ಸಾಕಾದಷ್ಟು ರಕ್ಷಣೆಯಿರುವುದಿಲ್ಲ. ತಂಗಡಿಯ ಹಾಯ್ದಡದ ವಿಚಾರ ಹಾಗಲ್ಲ. ಸಣ್ಣ ಕಣಿವೆಯೊಂದನ್ನು ಹಾದು ನಾವಿಲ್ಲಿಗೆ ಬರಬೇಕು. ಶಿಬಿರವೆಲ್ಲಿದೆಯೆಂದು ಯಾರಿಗೂ ತಟ್ಟನೆ ತಿಳಿಯುವುದಿಲ್ಲ. ಕಣಿವೆಯಲ್ಲಿ ಗಣಾಚಾರಿ ಯೋಧರ ರಕ್ಷಕ ದಳಗಳು ಕಾವಲಿವೆ.” {{gap}}ನಾಲ್ಕು ದಿನಗಳ ಹಿಂದೆ ಯಾತ್ರಾದಳವನ್ನು ಸೇರಿದ್ದ ಕೂಗಿನಮಾರಿ ತಂದೆ<noinclude></noinclude> nfvdgyt9ctci3j05a6imsvdx018vm5f ಪುಟ:ಕ್ರಾಂತಿ ಕಲ್ಯಾಣ.pdf/೪೫೫ 104 86399 324020 203724 2026-06-02T06:43:46Z Shreesha Sharma 7840 /* Proofread */ 324020 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೪೨|right=ಕ್ರಾಂತಿ ಕಲ್ಯಾಣ}} ಮಾದರಸರು ನಗರದ ಹೊರಗಿರುವ ಶೀಲವಂತರ ಮಠಕ್ಕೆ ಹೋದೆವು. ಮಠಪತಿಯ ಪ್ರಾರ್ಥನೆಯಂತೆ ನಾವು ಸ್ನಾನ ಪೂಜೆ ಆರೋಗಣೆಗಳನ್ನು ಮುಗಿಸಿಕೊಂಡು ಸಂಜೆಯ ಹೊತ್ತಿಗೆ ಮೋಳಿಗೆ ಮಾರಯ್ಯನವರ ಆಶ್ರಮ ಸೇರಿದೆವು. ಅಲ್ಲಿ ಮಾರಯ್ಯನವರಿರಲಿಲ್ಲ. {{gap}}ಅವರಿಗಾಗಿ ಕಾಯುತ್ತ ಅಲ್ಲಿಯೇ ಕುಳಿತೆವು. ಸೂರ್ಯಾಸ್ತವಾಗಿ ಕೊಂಚ ಹೊತ್ತಿನ ಮೇಲೆ ಸಿದ್ದರಾಮೇಶ್ವರ ಶಿವಯೋಗಿಗಳೊಡನೆ ಅವರು ಹಿಂದಿರುಗಿದರು. ಸಕಲೇಶ ಮಾದರಸರು ಶ್ರೀಶೈಲಕ್ಕೆ ಹೊರಟಿರುವ ವಿಚಾರ ತಿಳಿದಾಗ ಸಿದ್ದರಾಮೇಶ್ವರರು 'ಇನ್ನೊಂದು ವಾರದಲ್ಲಿ ಸೊನ್ನಲಾಪುರದಿಂದ ಯಾತ್ರಾತಂಡವೊಂದು ಶ್ರೀಶೈಲಕ್ಕೆ ಹೋಗುತ್ತದೆ. ಸಕಲೇಶ ಮಾದರಸರನ್ನು ನಾನು ಅವರ ಸಂಗಡ ಕಳುಹಿಸುತ್ತೇನೆ. ನೀನು ಉಳಿವೆಯ ಯಾತ್ರಾದಳವನ್ನು ಸೇರಿಕೊಂಡರೆ ಒಳ್ಳೆಯದು,' ಎಂದು ನನಗೆ ಹೇಳಿದರು. ಸಕಲೇಶ ಮಾದರಸರು ಸಲಹೆಯನ್ನು ಅನುಮೋದಿಸಿದರು. ನಾನು ಒಪ್ಪಬೇಕಾಯಿತು. ಮರುದಿನ ಮುಂಜಾವಿನಲ್ಲಿ ಸಕಲೇಶ ಮಾದರಸರೂ ಸಿದ್ದರಾಮೇಶ್ವರರೂ ಸೊನ್ನಲಾಪುರಕ್ಕೆ ಹೊರಟರು. ನಾನು ಬಾಂಧವರ ಓಣಿಯಲ್ಲಿ ಮಾರಯ್ಯನವರ ಆಶ್ರಮದಲ್ಲಿ ಉಳಿದೆ.” {{gap}}“ನೀನು ಆ ದಿನವೇ ಹೊರಟಿದ್ದರೆ ನಾಲ್ಕು ದಿನ ಮೊದಲೆ ನಮ್ಮನ್ನು ಸೇರಬಹುದಾಗಿತ್ತು. ತಡವಾದ ಕಾರಣ ?” {{gap}}ಪುನಃ ಮಾಚಿದೇವರು ಪ್ರಶ್ನಿಸಿದರು. {{gap}}ಬಾಚರಸ ಹೇಳಿದನು : "ಮಾರಯ್ಯನವರು ತಡೆದರು..... ಕಲ್ಯಾಣದಲ್ಲಿ ಇನ್ನೂ ಬಹಳ ಜನ ಶರಣರಿದ್ದಾರೆ. ಅವರನ್ನು ನಗರದಿಂದ ಹೊರಗೆ ಕರೆತಂದು ಸುರಕ್ಷಿತ ಸ್ಥಾನಗಳಿಗೆ ಕಳುಹಿಸಲು ನಿರ್ಧರಿಸಿದ್ದೇನೆ. ಅದಕ್ಕಾಗಿ ಇಂದು ನಗರಕ್ಕೆ ಹೋಗಬೇಕಾಗಿದೆ, ನೀನು ಸಂಗಡಿದ್ದರೆ ಒಳ್ಳೆಯದು. ಶರಣರು ವಲಸೆ ಹೋದ ಮೇಲೆ ನಗರದಲ್ಲಿ ಏನು ನಡೆಯಿತೆಂಬುದನ್ನು ತಿಳಿದು ಮಾಚಿದೇವರಿಗೆ ವರದಿ ಮಾಡಲು ಅನುಕೂಲ, ಎಂದು ಹೇಳಿದರು.” {{gap}}“ಹಾಗಾದರೆ ನೀವು ನಗರದೊಳಗೆ ಹೋಗಿದ್ದಿರಾ? ಶರಣರನ್ನು ರಕ್ಷಿಸುವುದು ನಿಮಗೆ ಸಾಧ್ಯವಾಯಿತೆ?” –ಅಡ್ಡ ಬಂದು ಚೆನ್ನಬಸವಣ್ಣನವರು ಕೇಳಿದರು. {{gap}}“ಅದಕ್ಕಾಗಿ ಮೋಳಿಗೆಯ ಮಾರಯ್ಯನವರು ಆ ದಿನವೇ ನಗರಕ್ಕೆ ಹೋಗಿ ಮಾಧವ ನಾಯಕನನ್ನು ನೋಡಿದರು. ಮಾಳವ, ಮೇಧಾಪಥ, ಸೌರಾಷ್ಟ್ರ ದೇಶಗಳ ಅರಸರು ಮಾರಯ್ಯನವರ ಸಂಬಂಧಿಗಳು ಮತ್ತು ಶಿಷ್ಯರು ಎಂದು<noinclude></noinclude> o63xb5il6dhsce7lh0j4ko2v0w9y1n4 324022 324020 2026-06-02T06:44:19Z Shreelatha.Halemane 7642 /* Validated */ 324022 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೪೨|right=ಕ್ರಾಂತಿ ಕಲ್ಯಾಣ}} ಮಾದರಸರು ನಗರದ ಹೊರಗಿರುವ ಶೀಲವಂತರ ಮಠಕ್ಕೆ ಹೋದೆವು. ಮಠಪತಿಯ ಪ್ರಾರ್ಥನೆಯಂತೆ ನಾವು ಸ್ನಾನ ಪೂಜೆ ಆರೋಗಣೆಗಳನ್ನು ಮುಗಿಸಿಕೊಂಡು ಸಂಜೆಯ ಹೊತ್ತಿಗೆ ಮೋಳಿಗೆ ಮಾರಯ್ಯನವರ ಆಶ್ರಮ ಸೇರಿದೆವು. ಅಲ್ಲಿ ಮಾರಯ್ಯನವರಿರಲಿಲ್ಲ. {{gap}}ಅವರಿಗಾಗಿ ಕಾಯುತ್ತ ಅಲ್ಲಿಯೇ ಕುಳಿತೆವು. ಸೂರ್ಯಾಸ್ತವಾಗಿ ಕೊಂಚ ಹೊತ್ತಿನ ಮೇಲೆ ಸಿದ್ದರಾಮೇಶ್ವರ ಶಿವಯೋಗಿಗಳೊಡನೆ ಅವರು ಹಿಂದಿರುಗಿದರು. ಸಕಲೇಶ ಮಾದರಸರು ಶ್ರೀಶೈಲಕ್ಕೆ ಹೊರಟಿರುವ ವಿಚಾರ ತಿಳಿದಾಗ ಸಿದ್ದರಾಮೇಶ್ವರರು 'ಇನ್ನೊಂದು ವಾರದಲ್ಲಿ ಸೊನ್ನಲಾಪುರದಿಂದ ಯಾತ್ರಾತಂಡವೊಂದು ಶ್ರೀಶೈಲಕ್ಕೆ ಹೋಗುತ್ತದೆ. ಸಕಲೇಶ ಮಾದರಸರನ್ನು ನಾನು ಅವರ ಸಂಗಡ ಕಳುಹಿಸುತ್ತೇನೆ. ನೀನು ಉಳಿವೆಯ ಯಾತ್ರಾದಳವನ್ನು ಸೇರಿಕೊಂಡರೆ ಒಳ್ಳೆಯದು,' ಎಂದು ನನಗೆ ಹೇಳಿದರು. ಸಕಲೇಶ ಮಾದರಸರು ಸಲಹೆಯನ್ನು ಅನುಮೋದಿಸಿದರು. ನಾನು ಒಪ್ಪಬೇಕಾಯಿತು. ಮರುದಿನ ಮುಂಜಾವಿನಲ್ಲಿ ಸಕಲೇಶ ಮಾದರಸರೂ ಸಿದ್ದರಾಮೇಶ್ವರರೂ ಸೊನ್ನಲಾಪುರಕ್ಕೆ ಹೊರಟರು. ನಾನು ಬಾಂಧವರ ಓಣಿಯಲ್ಲಿ ಮಾರಯ್ಯನವರ ಆಶ್ರಮದಲ್ಲಿ ಉಳಿದೆ.” {{gap}}“ನೀನು ಆ ದಿನವೇ ಹೊರಟಿದ್ದರೆ ನಾಲ್ಕು ದಿನ ಮೊದಲೆ ನಮ್ಮನ್ನು ಸೇರಬಹುದಾಗಿತ್ತು. ತಡವಾದ ಕಾರಣ ?” {{gap}}ಪುನಃ ಮಾಚಿದೇವರು ಪ್ರಶ್ನಿಸಿದರು. {{gap}}ಬಾಚರಸ ಹೇಳಿದನು : "ಮಾರಯ್ಯನವರು ತಡೆದರು..... ಕಲ್ಯಾಣದಲ್ಲಿ ಇನ್ನೂ ಬಹಳ ಜನ ಶರಣರಿದ್ದಾರೆ. ಅವರನ್ನು ನಗರದಿಂದ ಹೊರಗೆ ಕರೆತಂದು ಸುರಕ್ಷಿತ ಸ್ಥಾನಗಳಿಗೆ ಕಳುಹಿಸಲು ನಿರ್ಧರಿಸಿದ್ದೇನೆ. ಅದಕ್ಕಾಗಿ ಇಂದು ನಗರಕ್ಕೆ ಹೋಗಬೇಕಾಗಿದೆ, ನೀನು ಸಂಗಡಿದ್ದರೆ ಒಳ್ಳೆಯದು. ಶರಣರು ವಲಸೆ ಹೋದ ಮೇಲೆ ನಗರದಲ್ಲಿ ಏನು ನಡೆಯಿತೆಂಬುದನ್ನು ತಿಳಿದು ಮಾಚಿದೇವರಿಗೆ ವರದಿ ಮಾಡಲು ಅನುಕೂಲ, ಎಂದು ಹೇಳಿದರು.” {{gap}}“ಹಾಗಾದರೆ ನೀವು ನಗರದೊಳಗೆ ಹೋಗಿದ್ದಿರಾ? ಶರಣರನ್ನು ರಕ್ಷಿಸುವುದು ನಿಮಗೆ ಸಾಧ್ಯವಾಯಿತೆ?” –ಅಡ್ಡ ಬಂದು ಚೆನ್ನಬಸವಣ್ಣನವರು ಕೇಳಿದರು. {{gap}}“ಅದಕ್ಕಾಗಿ ಮೋಳಿಗೆಯ ಮಾರಯ್ಯನವರು ಆ ದಿನವೇ ನಗರಕ್ಕೆ ಹೋಗಿ ಮಾಧವ ನಾಯಕನನ್ನು ನೋಡಿದರು. ಮಾಳವ, ಮೇಧಾಪಥ, ಸೌರಾಷ್ಟ್ರ ದೇಶಗಳ ಅರಸರು ಮಾರಯ್ಯನವರ ಸಂಬಂಧಿಗಳು ಮತ್ತು ಶಿಷ್ಯರು ಎಂದು<noinclude></noinclude> rmapdlsyb59zoi71ycamuf4czgmsqal ಪುಟ:ಕ್ರಾಂತಿ ಕಲ್ಯಾಣ.pdf/೪೫೭ 104 86400 324024 203725 2026-06-02T06:53:23Z Shreesha Sharma 7840 /* Proofread */ 324024 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೪೪|right=ಕ್ರಾಂತಿ ಕಲ್ಯಾಣ}} ಸಣ್ಣ ಪುಟ್ಟ ಹೋರಾಟಗಳು ನಡೆಯುತ್ತಲೆ ಇದ್ದವು.” {{gap}}ಬಾಚರಸನ ಉತ್ತರ ಶರಣರ ತಲ್ಲಣವನ್ನು ಹೆಚ್ಚಿಸಿತು. “ಕರ್ಣದೇವ ಹತನಾಗಿ ನಗರ ಸಂಪೂರ್ಣವಾಗಿ ತನ್ನ ವಶವಾದ ಬಳಿಕ ಮಾಧವ ನಾಯಕನ ದೃಷ್ಟಿ ಶರಣರ ಕಡೆಗೆ ತಿರುಗುವುದು. ಶರಣಧರ್ಮದ ಉಗ್ರ ವಿರೋಧಿಯಾದ ಅವನಿಂದ ಶರಣರು ಹಿಂಸೆಗೆ ಗುರಿಯಾಗುವುದು ಅಸಂಭವವಲ್ಲ.” ಎಂದು ಭಾವಿಸಿ ಚೆನ್ನಬಸವಣ್ಣನವರು ತಳಮಳಗೊಂಡರು. {{gap}}“ಬೀಳ್ಕೊಡುವಾಗ ಮಾರಯ್ಯನವರು ಏನಾದರೂ ಹೇಳಿದರೆ ?” ತುಸು ಹೊತ್ತಿನ ಮೇಲೆ ಮಾಚಿದೇವರು ಕೇಳಿದರು. {{gap}}“ಏನೂ ಹೇಳಲಿಲ್ಲ. ನಾವು ಮಹಾದ್ವಾರದಿಂದ ಹೊರಗೆ ಬರುತ್ತಿದ್ದಾಗ ಕಾವಲು ಪಡೆಯ ನಾಯಕ ನಾಗರಾಜಯ್ಯ...” ಎಂದು ಬಾಚರಸ ಅರ್ಧದಲ್ಲಿ ನಿಲ್ಲಿಸಿದನು. {{gap}}“ಏನು ಹೇಳಿದ ನಾಗರಾಜ?” {{gap}}“ಮಾಧವ ನಾಯಕನು ಶರಣರ ಮೇಲೆ ಒಂದು ಅಪವಾದದ ಸುದ್ದಿ ಹರಡುತ್ತಿದ್ದಾನೆ. ಆ ವಿಚಾರದಲ್ಲಿ ಎಚ್ಚರವಾಗಿರುವಂತೆ ಮಾಚಿದೇವರಿಗೆ ತಿಳಿಸು ಎಂದು.” {{gap}}“ಅಪವಾದದ ಸುದ್ದಿಯೇನು?” {{gap}}“ಬಿಜ್ಜಳನನ್ನು ಕೊಲೆಮಾಡಿದ ಹಂತಕರು, 'ಹರಳಯ್ಯ ಮಧುವಯ್ಯಗಳನ್ನು ನೋಯಿಸಿದ ಪರವಾದಿ ಬಿಜ್ಜಳನನ್ನು ಕೊಂದ ನಾವು ವೀರಕುಮಾರರು, ಜಂಗಮದ ನೃತ್ಯರು, ಜಗದೇಕಮಲ್ಲ ಬೊಮ್ಮರಸರು,' ಎಂದು ಬೊಬ್ಬಿಡುತ್ತ ಹೊರಗೆ ಬಂದರಂತೆ. ಬಿಜ್ಜಳರಾಯರ ಕೊಲೆಗೆ ಶರಣರು ಕಾರಣರು ಎಂದು ಮಾಧವ ನಾಯಕನ ಕಡೆಯವರು ಪ್ರಚಾರ ಮಾಡುತ್ತಿರುವುದಾಗಿ ನಾಗರಾಜ ಹೇಳಿದನು.” {{gap}}“ಹಂತಕರನ್ನು ಹಿಡಿದರೆ? ಅವರ ವಿಚಾರ ಏನಾದರೂ ತಿಳಿದಿದೆಯೆ? - {{gap}}ತುಸು ಹೊತ್ತಿನ ಮೇಲೆ ಮಾಚಿದೇವರು ಪುನಃ ಬಾಚರಸನನ್ನು ಪ್ರಶ್ನಿಸಿದರು. {{gap}}“ಹಂತಕರಲ್ಲೊಬ್ಬನು ಹತನಾದನೆಂದೂ, ಇನ್ನೊಬ್ಬನು ತಪ್ಪಿಸಿಕೊಂಡನೆಂದೂ ಜನ ಹೇಳುತ್ತಾರೆ.” {{gap}}“ಅವರು ಯಾರೆಂದು ತಿಳಿದಿದೆಯೆ ” {{gap}}“ತಿಳಿಯದು.* {{gap}}ಶರಣರ ಕಡೆ ತಿರುಗಿ ಮಾಚಿದೇವರು ಹೇಳಿದರು : “ಈ ಎಲ್ಲ ಘಟನೆಗಳು ನಮ್ಮನ್ನು ಹೆಚ್ಚು ತೊಂದರೆಗೆ ಸಿಕ್ಕಿಸುತ್ತವೆ. ಕೊಲೆಯ ಹೊಣೆಯನ್ನು ಶರಣರ<noinclude></noinclude> el07w8271qy39ahgbdn5j5xrezi0jqx 324026 324024 2026-06-02T06:53:55Z Shreelatha.Halemane 7642 /* Validated */ 324026 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೪೪|right=ಕ್ರಾಂತಿ ಕಲ್ಯಾಣ}} ಸಣ್ಣ ಪುಟ್ಟ ಹೋರಾಟಗಳು ನಡೆಯುತ್ತಲೆ ಇದ್ದವು.” {{gap}}ಬಾಚರಸನ ಉತ್ತರ ಶರಣರ ತಲ್ಲಣವನ್ನು ಹೆಚ್ಚಿಸಿತು. “ಕರ್ಣದೇವ ಹತನಾಗಿ ನಗರ ಸಂಪೂರ್ಣವಾಗಿ ತನ್ನ ವಶವಾದ ಬಳಿಕ ಮಾಧವ ನಾಯಕನ ದೃಷ್ಟಿ ಶರಣರ ಕಡೆಗೆ ತಿರುಗುವುದು. ಶರಣಧರ್ಮದ ಉಗ್ರ ವಿರೋಧಿಯಾದ ಅವನಿಂದ ಶರಣರು ಹಿಂಸೆಗೆ ಗುರಿಯಾಗುವುದು ಅಸಂಭವವಲ್ಲ.” ಎಂದು ಭಾವಿಸಿ ಚೆನ್ನಬಸವಣ್ಣನವರು ತಳಮಳಗೊಂಡರು. {{gap}}“ಬೀಳ್ಕೊಡುವಾಗ ಮಾರಯ್ಯನವರು ಏನಾದರೂ ಹೇಳಿದರೆ ?” ತುಸು ಹೊತ್ತಿನ ಮೇಲೆ ಮಾಚಿದೇವರು ಕೇಳಿದರು. {{gap}}“ಏನೂ ಹೇಳಲಿಲ್ಲ. ನಾವು ಮಹಾದ್ವಾರದಿಂದ ಹೊರಗೆ ಬರುತ್ತಿದ್ದಾಗ ಕಾವಲು ಪಡೆಯ ನಾಯಕ ನಾಗರಾಜಯ್ಯ...” ಎಂದು ಬಾಚರಸ ಅರ್ಧದಲ್ಲಿ ನಿಲ್ಲಿಸಿದನು. {{gap}}“ಏನು ಹೇಳಿದ ನಾಗರಾಜ?” {{gap}}“ಮಾಧವ ನಾಯಕನು ಶರಣರ ಮೇಲೆ ಒಂದು ಅಪವಾದದ ಸುದ್ದಿ ಹರಡುತ್ತಿದ್ದಾನೆ. ಆ ವಿಚಾರದಲ್ಲಿ ಎಚ್ಚರವಾಗಿರುವಂತೆ ಮಾಚಿದೇವರಿಗೆ ತಿಳಿಸು ಎಂದು.” {{gap}}“ಅಪವಾದದ ಸುದ್ದಿಯೇನು?” {{gap}}“ಬಿಜ್ಜಳನನ್ನು ಕೊಲೆಮಾಡಿದ ಹಂತಕರು, 'ಹರಳಯ್ಯ ಮಧುವಯ್ಯಗಳನ್ನು ನೋಯಿಸಿದ ಪರವಾದಿ ಬಿಜ್ಜಳನನ್ನು ಕೊಂದ ನಾವು ವೀರಕುಮಾರರು, ಜಂಗಮದ ನೃತ್ಯರು, ಜಗದೇಕಮಲ್ಲ ಬೊಮ್ಮರಸರು,' ಎಂದು ಬೊಬ್ಬಿಡುತ್ತ ಹೊರಗೆ ಬಂದರಂತೆ. ಬಿಜ್ಜಳರಾಯರ ಕೊಲೆಗೆ ಶರಣರು ಕಾರಣರು ಎಂದು ಮಾಧವ ನಾಯಕನ ಕಡೆಯವರು ಪ್ರಚಾರ ಮಾಡುತ್ತಿರುವುದಾಗಿ ನಾಗರಾಜ ಹೇಳಿದನು.” {{gap}}“ಹಂತಕರನ್ನು ಹಿಡಿದರೆ? ಅವರ ವಿಚಾರ ಏನಾದರೂ ತಿಳಿದಿದೆಯೆ? - {{gap}}ತುಸು ಹೊತ್ತಿನ ಮೇಲೆ ಮಾಚಿದೇವರು ಪುನಃ ಬಾಚರಸನನ್ನು ಪ್ರಶ್ನಿಸಿದರು. {{gap}}“ಹಂತಕರಲ್ಲೊಬ್ಬನು ಹತನಾದನೆಂದೂ, ಇನ್ನೊಬ್ಬನು ತಪ್ಪಿಸಿಕೊಂಡನೆಂದೂ ಜನ ಹೇಳುತ್ತಾರೆ.” {{gap}}“ಅವರು ಯಾರೆಂದು ತಿಳಿದಿದೆಯೆ ” {{gap}}“ತಿಳಿಯದು.* {{gap}}ಶರಣರ ಕಡೆ ತಿರುಗಿ ಮಾಚಿದೇವರು ಹೇಳಿದರು : “ಈ ಎಲ್ಲ ಘಟನೆಗಳು ನಮ್ಮನ್ನು ಹೆಚ್ಚು ತೊಂದರೆಗೆ ಸಿಕ್ಕಿಸುತ್ತವೆ. ಕೊಲೆಯ ಹೊಣೆಯನ್ನು ಶರಣರ<noinclude></noinclude> 8nf5e097u8kauzmvom6nzvjc793s2i4 ಪುಟ:ಕ್ರಾಂತಿ ಕಲ್ಯಾಣ.pdf/೪೬೨ 104 86403 324056 203728 2026-06-02T10:29:12Z Shreesha Sharma 7840 /* Proofread */ 324056 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಮಹಾಪ್ರಸ್ಥಾನ|center=|right=೪೪೯}} ಸಂಚಾರವಾಯಿತು. ಉಕ್ಕಿ ಬರುತ್ತಿದ್ದ ಅಳುವನ್ನು ತಡೆದು ಗದ್ಗದವಾದರೂ ದೃಢಕಂಠದಿಂದ ಭಾವನೆ ಮೊನೆಮೂಡಿ ನುಡಿದರು : “ಲಿಂಗಜಂಗಮ, ಜಂಗಮಲಿಂಗವೆಂಬುದ ತೋರಿ, ನಿಜೈಕ್ಯನಾದೆಯಲ್ಲಾ, ನಿಜಗುರು ಬಸವಣ್ಣಾ ! ಪ್ರಸಾದಕಾಯ, ಕಾಯಪ್ರಸಾದವೆಂಬುದ | ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ, ಎನ್ನನಾಗು ಮಾಡಿ, ಮುಂದುವರಿದೆಯಯ್ಯ ಬಸವಣ್ಣಾ ! ಲಿಂಗಪ್ರಾಣ, ಪ್ರಾಣಲಿಂಗವೆಂಬುದ ಎನ್ನಂತರಂಗದಲ್ಲಿ ಸ್ಟಾಷ್ಯವ ಮಾಡಿ, ಎನ್ನ ನಿನ್ನಂತೆ ಮಾಡಿ, ನಿಜಲಿಂಗದೊಳಗೆ ನಿರವಯವಾದೆಯಲ್ಲಾ ಬಸವಣ್ಣಾ ! ಎನ್ನ ಮನವ ಮಹಾತತ್ವದಲ್ಲಿ ಲಯವ ಮಾಡಿ, ನಿರ್ವಯಲಾಗಿ, ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ ! ನಿನ್ನ ಒಕ್ಕು ಮಿಕ್ಕ ಶೇಷವನಿಕ್ಕಿ ಆಗುಮಾಡಿ ನಿನ್ನಂತರಂಗದಲ್ಲಿ ಅವೈ ನಾಗಾಯಿಯನಿಂಬುಗೊಂಡಡೆ, ಎನ್ನ ಮನ ನಿಮ್ಮ ಪಾದದಲ್ಲಿ ಕೊರಗಿತ್ತಯ್ಯ ಸಂಗನ ಬಸವಣ್ಣಾ ! ಕೂಡಲ ಚೆನ್ನಸಂಗಯ್ಯನಿಗೆ ಸುಜ್ಞಾನವಾಹನವಾಗಬೇಕೆಂದು ನಿರವಯವಾದೆಯಲ್ಲಾ ಸಂಗನ ಬಸವಣ್ಣಾ !** {{gap}}ಚೆನ್ನಬಸವಣ್ಣನವರ ನುಡಿಗಳು ನೆರೆದಿದ್ದ ಶರಣರಿಗೆ ಚೈತನ್ಯ ಕೊಟ್ಟವು. ಗರಿಕೆಯ ಮೊನೆಯಲ್ಲಿ ನಿಂತ ಮಂಜಿನ ಹನಿಯಂತೆ ಕಂಬನಿ ಕಣ್ಣೆವೆಯಲ್ಲಿ ನಿಂತಿತು. ಶರಣನೊಬ್ಬನು, “ಬಸವಣ್ಣನವರ ಬಗೆಗೆ ಅಕ್ಕನಾಗಾಯಿಯವರ ಪರೋಕ್ಷ ವಿನಯವನ್ನು ಕೇಳಲೆಳೆಸುತ್ತೇವೆ,” ಎಂದು ಬಿನ್ನವಿಸಿಕೊಂಡನು. ನಾಗಲಾಂಬೆ ಹೇಳಿದಳು : {{gap}}“ನೀವು ಮರ್ತ್ಯಕ್ಕೆ ಬಂದು ನಿಂದರೆ, ಭಕ್ತಿಯ ಬೆಳವಿಗೆ {{gap}}ದೆಸೆ ದೆಸೆಗೆಲ್ಲಾ ಪಸರಿಸಿತಯ್ಯ, ಬಸವಣ್ಣಾ ! {{gap}}ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ ನಿಮ್ಮ ಭಕ್ತಿಯ {{gap}}ಬೆಳವಳಿಗೆಯ ಘನವನಾರು ಬಲ್ಲರೋ, ಅಣ್ಣಾ ! —————— * ಶೂ, ಸಂ. ಪುಟ ೪೬೫-೪೬೬<noinclude></noinclude> gn5yhvpdf76r5296worzlb6c55xpxur 324059 324056 2026-06-02T10:34:14Z Shreelatha.Halemane 7642 /* Validated */ 324059 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಮಹಾಪ್ರಸ್ಥಾನ|center=|right=೪೪೯}} ಸಂಚಾರವಾಯಿತು. ಉಕ್ಕಿ ಬರುತ್ತಿದ್ದ ಅಳುವನ್ನು ತಡೆದು ಗದ್ಗದವಾದರೂ ದೃಢಕಂಠದಿಂದ ಭಾವನೆ ಮೊನೆಮೂಡಿ ನುಡಿದರು : “ಲಿಂಗಜಂಗಮ, ಜಂಗಮಲಿಂಗವೆಂಬುದ ತೋರಿ, ನಿಜೈಕ್ಯನಾದೆಯಲ್ಲಾ, ನಿಜಗುರು ಬಸವಣ್ಣಾ ! ಪ್ರಸಾದಕಾಯ, ಕಾಯಪ್ರಸಾದವೆಂಬುದ | ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ, ಎನ್ನನಾಗು ಮಾಡಿ, ಮುಂದುವರಿದೆಯಯ್ಯ ಬಸವಣ್ಣಾ ! ಲಿಂಗಪ್ರಾಣ, ಪ್ರಾಣಲಿಂಗವೆಂಬುದ ಎನ್ನಂತರಂಗದಲ್ಲಿ ಸ್ಟಾಷ್ಯವ ಮಾಡಿ, ಎನ್ನ ನಿನ್ನಂತೆ ಮಾಡಿ, ನಿಜಲಿಂಗದೊಳಗೆ ನಿರವಯವಾದೆಯಲ್ಲಾ ಬಸವಣ್ಣಾ ! ಎನ್ನ ಮನವ ಮಹಾತತ್ವದಲ್ಲಿ ಲಯವ ಮಾಡಿ, ನಿರ್ವಯಲಾಗಿ, ಹೋದೆಯಲ್ಲಾ ನಿಜಲಿಂಗೈಕ್ಯ ಬಸವಣ್ಣಾ ! ನಿನ್ನ ಒಕ್ಕು ಮಿಕ್ಕ ಶೇಷವನಿಕ್ಕಿ ಆಗುಮಾಡಿ ನಿನ್ನಂತರಂಗದಲ್ಲಿ ಅವೈ ನಾಗಾಯಿಯನಿಂಬುಗೊಂಡಡೆ, ಎನ್ನ ಮನ ನಿಮ್ಮ ಪಾದದಲ್ಲಿ ಕೊರಗಿತ್ತಯ್ಯ ಸಂಗನ ಬಸವಣ್ಣಾ ! ಕೂಡಲ ಚೆನ್ನಸಂಗಯ್ಯನಿಗೆ ಸುಜ್ಞಾನವಾಹನವಾಗಬೇಕೆಂದು ನಿರವಯವಾದೆಯಲ್ಲಾ ಸಂಗನ ಬಸವಣ್ಣಾ !** {{gap}}ಚೆನ್ನಬಸವಣ್ಣನವರ ನುಡಿಗಳು ನೆರೆದಿದ್ದ ಶರಣರಿಗೆ ಚೈತನ್ಯ ಕೊಟ್ಟವು. ಗರಿಕೆಯ ಮೊನೆಯಲ್ಲಿ ನಿಂತ ಮಂಜಿನ ಹನಿಯಂತೆ ಕಂಬನಿ ಕಣ್ಣೆವೆಯಲ್ಲಿ ನಿಂತಿತು. ಶರಣನೊಬ್ಬನು, “ಬಸವಣ್ಣನವರ ಬಗೆಗೆ ಅಕ್ಕನಾಗಾಯಿಯವರ ಪರೋಕ್ಷ ವಿನಯವನ್ನು ಕೇಳಲೆಳೆಸುತ್ತೇವೆ,” ಎಂದು ಬಿನ್ನವಿಸಿಕೊಂಡನು. ನಾಗಲಾಂಬೆ ಹೇಳಿದಳು : {{gap}}“ನೀವು ಮರ್ತ್ಯಕ್ಕೆ ಬಂದು ನಿಂದರೆ, ಭಕ್ತಿಯ ಬೆಳವಿಗೆ {{gap}}ದೆಸೆ ದೆಸೆಗೆಲ್ಲಾ ಪಸರಿಸಿತಯ್ಯ, ಬಸವಣ್ಣಾ ! {{gap}}ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ ನಿಮ್ಮ ಭಕ್ತಿಯ {{gap}}ಬೆಳವಳಿಗೆಯ ಘನವನಾರು ಬಲ್ಲರೋ, ಅಣ್ಣಾ ! —————— * ಶೂ, ಸಂ. ಪುಟ ೪೬೫-೪೬೬<noinclude></noinclude> pok6gx0gtqvpceu1xo11e9jpgn8axqj ಪುಟ:ಕ್ರಾಂತಿ ಕಲ್ಯಾಣ.pdf/೪೫೯ 104 86404 324028 203729 2026-06-02T07:04:23Z Shreesha Sharma 7840 /* Proofread */ 324028 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೪೬|right=ಕ್ರಾಂತಿ ಕಲ್ಯಾಣ}} ಭಾವಪರವಶೆಯಾದ ನೀನು ಆ ದನಿ ಕೇಳಿದ್ದು ಆಶ್ಚರ್ಯವೇನೂ ಅಲ್ಲ.” {{gap}}ಅವರು ಎದ್ದು ಗೂಡಾರದಿಂದ ಹೊರಗೆ ಬಂದು ಸ್ನಾನಕ್ಕಾಗಿ ಕಟ್ಟಿದ ಆವಾರದ ಬಳಿ ಹೋದರು. ಕೃಷ್ಣೆಯ ಸಣ್ಣ ಕಾಲುವೆ ಅಲ್ಲಿ ಹರಿಯುತ್ತಿತ್ತು. ಮೊದಲು ನೀಲಲೋಚನೆ ಸ್ನಾನಮಾಡಿ ಮಡಿಯುಟ್ಟು ಹೊರಗೆ ಬಂದಳು. * {{gap}}ಉದಯ ರವಿಯ ಹೊಂಗಿರಣಗಳು ಆ ಪ್ರದೇಶವನ್ನು ಆಲೋಕಮಯವಾಗಿ ಮಾಡಿದ್ದವು. ಕಾಲುದಾರಿಯ ಇಕ್ಕೆಲದಲ್ಲಿ ಬೆಳೆದಿದ್ದ ಹಸಿರು ಹುಲ್ಲು, ಬಣ್ಣ ಬಣ್ಣದ ಕಾಡು ಹೂಗಳು, ಬೆಳಕನ್ನು ಸೆರೆಹಿಡಿದಂತೆ ಮಿರುಗುತ್ತಿದ್ದವು. ನೆಲದ ಆ ಚಲುವಿಕೆ ಮಾರ್ದವಗಳು ತುಳಿತದಿಂದ ಮಲಿನವಾಗದಿರಲೆಂದು ನೀಲಲೋಚನೆ ಮೆಲ್ಲನೆ ಅಡಿಯಿಟ್ಟು ನಡೆದಳು. {{gap}}ಅವರು ಕರೆ ಕಳುಹಿಸಿದಾಗ ನಾನೇಕ ಸಂಗಮಕ್ಕೆ ಹೋಗಲಿಲ್ಲ? ಈಗ ಅವರಿಗಾಗಿ ಏಕೆ ತಪಿಸುತ್ತಿದ್ದೇನೆ? ನಾನು ಅವರಿಗೆ ಕಳುಹಿಸಿದ ಎರಡು ವಚನಗಳು ನನ್ನ ಅವಿವೇಕ ಉದ್ಧಟತನಗಳ ಸಂಕೇತ, ಸೂರ್ಯನೆದುರು ದೀಪವಿಟ್ಟಂತೆ. ಅವರ ಸಹಧರ್ಮಿಣಿಯಾಗಿ ಆರು ವರ್ಷಗಳನ್ನು ಕಳೆದರೂ ಕಲಚೂರ್ಯ ರಾಜಕನ್ಯಯ ಅಭಿಮಾನ ನನ್ನನ್ನು ಕಾಡಿಸುತ್ತಿದೆ. ಆ ವಾಸನೆಯನ್ನು ಕಳೆಯಬಲ್ಲ ಶ್ರೀಚರಣಗಳಿಂದ ದೂರವಾಗಲು ಸಂಕಲ್ಪಿಸಿ ನಾನು ಅಪರಾಧ ಮಾಡಿದೆ!” ಎಂಬ ಚಿಂತೆಯಿಂದ ಭಾರವಾಗಿತ್ತು ಅವಳ ಮನಸ್ಸು. {{gap}}“ಹುತ್ತವ ಬಡಿದರೆ ಹಾವು ಸಾಯಬಲ್ಲುದೆ, ಅಯ್ಯ?” {{gap}}ನೀಲಲೋಚನೆ ವಿಸ್ಮಿತೆಯಾದಳು. ಶಿಬಿರದಲ್ಲಿ ಯಾರೋ ಆ ವಚನ ಪಠಿಸುತ್ತಿರಬೇಕು ಎಂದು ಭಾವಿಸಿ ಅವಳು ಎರಡು ಹೆಜ್ಜೆ ಮುಂದೆ ಹೋದಳು, ಆದರೆ ಅದೇ ಪರಿಚಿತ ಶೃತಿಮಧುರ ಕಂಠ. {{gap}}ಇದು ನನ್ನ ಕಲ್ಪನೆ ! ಭ್ರಾಂತಿ ! ಎಂದುಕೊಂಡಳು ನೀಲಲೋಚನೆ. {{gap}}ಕೆಲವು ಕ್ಷಣಗಳು ನಿಸರ್ಗ ಸ್ತಂಭಿತವಾಯಿತು. ಶಿಬಿರದ ಎಲ್ಲ ಶಬ್ದಗಳು ಶೂನ್ಯದಲ್ಲಿ ಅಡಗಿದವು. ಪ್ರಭಾತದ ಸೂರ್ಯಲೋಕ ಉಜ್ವಲವಾಗಿ ಆ ಪ್ರದೇಶವನ್ನೆಲ್ಲ ಅರುಣ ಕೋಮಲ ಕಾಂತಿಯಿಂದ ಬೆಳಗಿತು. {{gap}}ಆ ಪರಿಚಿತ ಶೃತಿಮಧುರ ಗಂಭೀರಕಂಠ ಮತ್ತೆ ಕೇಳಿಸಿತು. {{gap}}“ಹುತ್ತವ ಬಡಿದರೆ ಹಾವು ಸಾಯುವುದೇ, ಅಯ್ಯ? {{gap}}ಅಘೋರ ತಪವ ಮಾಡಿದರೇನು ? {{gap}}ಅಂತರಂಗ ಆತ್ಮಶುದ್ದಿ ಇಲ್ಲದವರನೆಂತು {{gap}}ನಂಬುವನಯ್ಯ, ಕೂಡಲ ಸಂಗಮದೇವ?”<noinclude></noinclude> 6dx38pu0nv37v7j4c7x8pwgkjtx3rxl 324032 324028 2026-06-02T07:13:26Z Shreelatha.Halemane 7642 /* Validated */ 324032 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೪೬|right=ಕ್ರಾಂತಿ ಕಲ್ಯಾಣ}} ಭಾವಪರವಶೆಯಾದ ನೀನು ಆ ದನಿ ಕೇಳಿದ್ದು ಆಶ್ಚರ್ಯವೇನೂ ಅಲ್ಲ.” {{gap}}ಅವರು ಎದ್ದು ಗೂಡಾರದಿಂದ ಹೊರಗೆ ಬಂದು ಸ್ನಾನಕ್ಕಾಗಿ ಕಟ್ಟಿದ ಆವಾರದ ಬಳಿ ಹೋದರು. ಕೃಷ್ಣೆಯ ಸಣ್ಣ ಕಾಲುವೆ ಅಲ್ಲಿ ಹರಿಯುತ್ತಿತ್ತು. ಮೊದಲು ನೀಲಲೋಚನೆ ಸ್ನಾನಮಾಡಿ ಮಡಿಯುಟ್ಟು ಹೊರಗೆ ಬಂದಳು. * {{gap}}ಉದಯ ರವಿಯ ಹೊಂಗಿರಣಗಳು ಆ ಪ್ರದೇಶವನ್ನು ಆಲೋಕಮಯವಾಗಿ ಮಾಡಿದ್ದವು. ಕಾಲುದಾರಿಯ ಇಕ್ಕೆಲದಲ್ಲಿ ಬೆಳೆದಿದ್ದ ಹಸಿರು ಹುಲ್ಲು, ಬಣ್ಣ ಬಣ್ಣದ ಕಾಡು ಹೂಗಳು, ಬೆಳಕನ್ನು ಸೆರೆಹಿಡಿದಂತೆ ಮಿರುಗುತ್ತಿದ್ದವು. ನೆಲದ ಆ ಚಲುವಿಕೆ ಮಾರ್ದವಗಳು ತುಳಿತದಿಂದ ಮಲಿನವಾಗದಿರಲೆಂದು ನೀಲಲೋಚನೆ ಮೆಲ್ಲನೆ ಅಡಿಯಿಟ್ಟು ನಡೆದಳು. {{gap}}ಅವರು ಕರೆ ಕಳುಹಿಸಿದಾಗ ನಾನೇಕ ಸಂಗಮಕ್ಕೆ ಹೋಗಲಿಲ್ಲ? ಈಗ ಅವರಿಗಾಗಿ ಏಕೆ ತಪಿಸುತ್ತಿದ್ದೇನೆ? ನಾನು ಅವರಿಗೆ ಕಳುಹಿಸಿದ ಎರಡು ವಚನಗಳು ನನ್ನ ಅವಿವೇಕ ಉದ್ಧಟತನಗಳ ಸಂಕೇತ, ಸೂರ್ಯನೆದುರು ದೀಪವಿಟ್ಟಂತೆ. ಅವರ ಸಹಧರ್ಮಿಣಿಯಾಗಿ ಆರು ವರ್ಷಗಳನ್ನು ಕಳೆದರೂ ಕಲಚೂರ್ಯ ರಾಜಕನ್ಯಯ ಅಭಿಮಾನ ನನ್ನನ್ನು ಕಾಡಿಸುತ್ತಿದೆ. ಆ ವಾಸನೆಯನ್ನು ಕಳೆಯಬಲ್ಲ ಶ್ರೀಚರಣಗಳಿಂದ ದೂರವಾಗಲು ಸಂಕಲ್ಪಿಸಿ ನಾನು ಅಪರಾಧ ಮಾಡಿದೆ!” ಎಂಬ ಚಿಂತೆಯಿಂದ ಭಾರವಾಗಿತ್ತು ಅವಳ ಮನಸ್ಸು. {{gap}}“ಹುತ್ತವ ಬಡಿದರೆ ಹಾವು ಸಾಯಬಲ್ಲುದೆ, ಅಯ್ಯ?” {{gap}}ನೀಲಲೋಚನೆ ವಿಸ್ಮಿತೆಯಾದಳು. ಶಿಬಿರದಲ್ಲಿ ಯಾರೋ ಆ ವಚನ ಪಠಿಸುತ್ತಿರಬೇಕು ಎಂದು ಭಾವಿಸಿ ಅವಳು ಎರಡು ಹೆಜ್ಜೆ ಮುಂದೆ ಹೋದಳು, ಆದರೆ ಅದೇ ಪರಿಚಿತ ಶೃತಿಮಧುರ ಕಂಠ. {{gap}}ಇದು ನನ್ನ ಕಲ್ಪನೆ ! ಭ್ರಾಂತಿ ! ಎಂದುಕೊಂಡಳು ನೀಲಲೋಚನೆ. {{gap}}ಕೆಲವು ಕ್ಷಣಗಳು ನಿಸರ್ಗ ಸ್ತಂಭಿತವಾಯಿತು. ಶಿಬಿರದ ಎಲ್ಲ ಶಬ್ದಗಳು ಶೂನ್ಯದಲ್ಲಿ ಅಡಗಿದವು. ಪ್ರಭಾತದ ಸೂರ್ಯಲೋಕ ಉಜ್ವಲವಾಗಿ ಆ ಪ್ರದೇಶವನ್ನೆಲ್ಲ ಅರುಣ ಕೋಮಲ ಕಾಂತಿಯಿಂದ ಬೆಳಗಿತು. {{gap}}ಆ ಪರಿಚಿತ ಶೃತಿಮಧುರ ಗಂಭೀರಕಂಠ ಮತ್ತೆ ಕೇಳಿಸಿತು. {{gap}}“ಹುತ್ತವ ಬಡಿದರೆ ಹಾವು ಸಾಯುವುದೇ, ಅಯ್ಯ? {{gap}}ಅಘೋರ ತಪವ ಮಾಡಿದರೇನು ? {{gap}}ಅಂತರಂಗ ಆತ್ಮಶುದ್ದಿ ಇಲ್ಲದವರನೆಂತು {{gap}}ನಂಬುವನಯ್ಯ, ಕೂಡಲ ಸಂಗಮದೇವ?”<noinclude></noinclude> dnw0exxxxsw48yu7t5he6wjwuqx8hdo ಪುಟ:ಕ್ರಾಂತಿ ಕಲ್ಯಾಣ.pdf/೪೫೬ 104 86405 324023 203730 2026-06-02T06:50:16Z Shreesha Sharma 7840 /* Proofread */ 324023 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೪೩}} ತಿಳಿದಾಗ ಮಾಧವ ನಾಯಕನು ನಗರವನ್ನು ಬಿಟ್ಟು ಹೋಗಲು ಶರಣರಿಗೆ ಅನುಮತಿ ಕೊಟ್ಟನು. ಅದರಂತೆ ಆ ದಿನ ಬಹುಮಂದಿ ಜಂಗಮರು ಮತ್ತು ಭಕ್ತರು ನಗರವನ್ನು ಬಿಟ್ಟರು.” {{gap}}ಶರಣರು ಹರ್ಷಧ್ವನಿ ಮಾಡಿದರು. ಮೋಳಿಗೆಯ ಮಾರಯ್ಯನವರನ್ನು ಪ್ರಶಂಸಿಸುವ ನುಡಿಗಳು ಕೇಳಿಬಂದವು. {{gap}}ಮಾಚಿದೇವರು ಶರಣರಿಗೆ ಸುಮ್ಮನಿರುವಂತೆ ಸನ್ನೆಮಾಡಿ, "ಈಗ ಕಲ್ಯಾಣದಲ್ಲಿ ಶರಣರು ಯಾರೂ ಇಲ್ಲವೆ?” ಎಂದು ಬಾಚರಸನನ್ನು ಕೇಳಿದರು. {{gap}}ಬಾಚರಸ ಹೇಳಿದನು : “ಇನ್ನೊಂದು ದಿನ ಅವಕಾಶವಿದ್ದಿದ್ದರೆ ಶರಣರೆಲ್ಲ ನಗರವನ್ನು ಬಿಡುವುದು ಸಾಧ್ಯವಾಗುತ್ತಿತ್ತು. ಆದರೆ ಮರುದಿನವೇ ಕರ್ಣದೇವನ ಸೈನಿಕರಿಗೂ ಮಾಧವ ನಾಯಕನ ಸೈನಿಕರಿಗೂ ಹೋರಾಟ ಪ್ರಾರಂಭವಾಯಿತು. ನಗರವನ್ನು ಬಿಡಲು ಶರಣರಿಗೆ ಕೊಟ್ಟಿದ್ದ ಅನುಮತಿಯನ್ನು ಮಾಧವ ನಾಯಕನು ಹಿಂದಕ್ಕೆ ತೆಗೆದುಕೊಂಡನು. {{gap}}“ಹೋರಾಟದ ಕಾರಣ?” {{gap}}ಚೆನ್ನಬಸವಣ್ಣನವರು ಪ್ರಶ್ನಿಸಿದರು. {{gap}}“ಚಾಲುಕ್ಯ ಸರ್ವಾಧಿಕಾರಿ ಪದವಿ. ಕರ್ಣದೇವ ಸರ್ವಾಧಿಕಾರಿಯಾಗುವುದು ಮಾಧವ ನಾಯಕನಿಗೆ ಇಷ್ಟವಿರಲಿಲ್ಲ. ವಿರಸ ಬೆಳೆದು ಹೋರಾಟಕ್ಕೆ ಮೊದಲಾಯಿತು. ಎರಡು ದಿನ ಘೋರ ಯುದ್ದ ನಡೆದು ಕರ್ಣದೇವ ಹತನಾದನು.” {{gap}}“ಯುದ್ಧ ನಡೆದ ದಿನವೂ ನೀವು ನಗರದಲ್ಲಿಯೇ ಇದ್ದಿರಾ?” {{gap}}“ಹೋರಾಟ ಮೊದಲಾದ ದಿನ ನಗರದ ದ್ವಾರಗಳು ಬಂಧಿಸಲ್ಪಟ್ಟವು. ಮರುದಿನ ಸಂಜೆ ನಾವು, ಕೆಲವು ಮಂದಿ ಶರಣರೊಡನೆ ಕರ್ಣದೇವನ ಸೈನಿಕರ ಸಹಾಯದಿಂದ ಹೊರಗೆ ಬಂದೆವು. ಕರ್ಣದೇವ ಹತನಾದ ವಿಚಾರ ಆಮೇಲೆ ನಮಗೆ ತಿಳಿದದ್ದು, ಆ ದಿನವೇ ನಾನು ಮಾರಯ್ಯನವರ ಅನುಮತಿ ಪಡೆದು ಅಲ್ಲಿಂದ ಹೊರಟೆ.” {{gap}}ಶರಣರು ಮೌನ, ಹೋರಾಟ ನಡೆದಾಗ ನಗರದಲ್ಲಿದ್ದ ಶರಣರಿಗೆ ಆಗಿರಬಹುದಾದ ಕಷ್ಟನಷ್ಟಗಳನ್ನು ಚಿಂತಿಸಿ ಅವರು ತಲ್ಲಣಗೊಂಡಿದ್ದರು. {{gap}}“ಕರ್ಣದೇವ ಹತನಾದ ಮೇಲೆ ಹೋರಾಟ ನಿಂತಿತೆ ? ಈಗ ನಗರ ಶಾಂತವಾಗಿದೆಯೆ?” {{gap}}ಬದಲಿಸಿದ ದನಿಯಿಂದ ಮಾಚಿದೇವರು ಬಾಚರಸನನ್ನು ಕೇಳಿದರು. {{gap}}“ಅದು ನನಗೆ ತಿಳಿಯದು, ಅಣ್ಣನವರೆ. ನಾವು ನಗರವನ್ನು ಬಿಟ್ಟಾಗ ಅಲ್ಲಲ್ಲಿ<noinclude></noinclude> jbxl03ecgrbb7zvil8jdjlzixvr7yh7 324025 324023 2026-06-02T06:53:44Z Shreelatha.Halemane 7642 /* Validated */ 324025 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೪೩}} ತಿಳಿದಾಗ ಮಾಧವ ನಾಯಕನು ನಗರವನ್ನು ಬಿಟ್ಟು ಹೋಗಲು ಶರಣರಿಗೆ ಅನುಮತಿ ಕೊಟ್ಟನು. ಅದರಂತೆ ಆ ದಿನ ಬಹುಮಂದಿ ಜಂಗಮರು ಮತ್ತು ಭಕ್ತರು ನಗರವನ್ನು ಬಿಟ್ಟರು.” {{gap}}ಶರಣರು ಹರ್ಷಧ್ವನಿ ಮಾಡಿದರು. ಮೋಳಿಗೆಯ ಮಾರಯ್ಯನವರನ್ನು ಪ್ರಶಂಸಿಸುವ ನುಡಿಗಳು ಕೇಳಿಬಂದವು. {{gap}}ಮಾಚಿದೇವರು ಶರಣರಿಗೆ ಸುಮ್ಮನಿರುವಂತೆ ಸನ್ನೆಮಾಡಿ, "ಈಗ ಕಲ್ಯಾಣದಲ್ಲಿ ಶರಣರು ಯಾರೂ ಇಲ್ಲವೆ?” ಎಂದು ಬಾಚರಸನನ್ನು ಕೇಳಿದರು. {{gap}}ಬಾಚರಸ ಹೇಳಿದನು : “ಇನ್ನೊಂದು ದಿನ ಅವಕಾಶವಿದ್ದಿದ್ದರೆ ಶರಣರೆಲ್ಲ ನಗರವನ್ನು ಬಿಡುವುದು ಸಾಧ್ಯವಾಗುತ್ತಿತ್ತು. ಆದರೆ ಮರುದಿನವೇ ಕರ್ಣದೇವನ ಸೈನಿಕರಿಗೂ ಮಾಧವ ನಾಯಕನ ಸೈನಿಕರಿಗೂ ಹೋರಾಟ ಪ್ರಾರಂಭವಾಯಿತು. ನಗರವನ್ನು ಬಿಡಲು ಶರಣರಿಗೆ ಕೊಟ್ಟಿದ್ದ ಅನುಮತಿಯನ್ನು ಮಾಧವ ನಾಯಕನು ಹಿಂದಕ್ಕೆ ತೆಗೆದುಕೊಂಡನು. {{gap}}“ಹೋರಾಟದ ಕಾರಣ?” {{gap}}ಚೆನ್ನಬಸವಣ್ಣನವರು ಪ್ರಶ್ನಿಸಿದರು. {{gap}}“ಚಾಲುಕ್ಯ ಸರ್ವಾಧಿಕಾರಿ ಪದವಿ. ಕರ್ಣದೇವ ಸರ್ವಾಧಿಕಾರಿಯಾಗುವುದು ಮಾಧವ ನಾಯಕನಿಗೆ ಇಷ್ಟವಿರಲಿಲ್ಲ. ವಿರಸ ಬೆಳೆದು ಹೋರಾಟಕ್ಕೆ ಮೊದಲಾಯಿತು. ಎರಡು ದಿನ ಘೋರ ಯುದ್ದ ನಡೆದು ಕರ್ಣದೇವ ಹತನಾದನು.” {{gap}}“ಯುದ್ಧ ನಡೆದ ದಿನವೂ ನೀವು ನಗರದಲ್ಲಿಯೇ ಇದ್ದಿರಾ?” {{gap}}“ಹೋರಾಟ ಮೊದಲಾದ ದಿನ ನಗರದ ದ್ವಾರಗಳು ಬಂಧಿಸಲ್ಪಟ್ಟವು. ಮರುದಿನ ಸಂಜೆ ನಾವು, ಕೆಲವು ಮಂದಿ ಶರಣರೊಡನೆ ಕರ್ಣದೇವನ ಸೈನಿಕರ ಸಹಾಯದಿಂದ ಹೊರಗೆ ಬಂದೆವು. ಕರ್ಣದೇವ ಹತನಾದ ವಿಚಾರ ಆಮೇಲೆ ನಮಗೆ ತಿಳಿದದ್ದು, ಆ ದಿನವೇ ನಾನು ಮಾರಯ್ಯನವರ ಅನುಮತಿ ಪಡೆದು ಅಲ್ಲಿಂದ ಹೊರಟೆ.” {{gap}}ಶರಣರು ಮೌನ, ಹೋರಾಟ ನಡೆದಾಗ ನಗರದಲ್ಲಿದ್ದ ಶರಣರಿಗೆ ಆಗಿರಬಹುದಾದ ಕಷ್ಟನಷ್ಟಗಳನ್ನು ಚಿಂತಿಸಿ ಅವರು ತಲ್ಲಣಗೊಂಡಿದ್ದರು. {{gap}}“ಕರ್ಣದೇವ ಹತನಾದ ಮೇಲೆ ಹೋರಾಟ ನಿಂತಿತೆ ? ಈಗ ನಗರ ಶಾಂತವಾಗಿದೆಯೆ?” {{gap}}ಬದಲಿಸಿದ ದನಿಯಿಂದ ಮಾಚಿದೇವರು ಬಾಚರಸನನ್ನು ಕೇಳಿದರು. {{gap}}“ಅದು ನನಗೆ ತಿಳಿಯದು, ಅಣ್ಣನವರೆ. ನಾವು ನಗರವನ್ನು ಬಿಟ್ಟಾಗ ಅಲ್ಲಲ್ಲಿ<noinclude></noinclude> gjcqba8of9pja7z6v96g1oywr00h8jp ಪುಟ:ಕ್ರಾಂತಿ ಕಲ್ಯಾಣ.pdf/೪೬೫ 104 86412 324061 203737 2026-06-02T11:12:02Z Shreesha Sharma 7840 /* Proofread */ 324061 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೫೨|right=ಕ್ರಾಂತಿ ಕಲ್ಯಾಣ}} {{gap}}ಪಡಿಹಾರಿ ಅಪ್ಪಣ್ಣ ಆ ಪುಣ್ಯಾಂಗನೆಯ ಸಮಾಧಿಯನ್ನು ಪ್ರತಿನಿತ್ಯ ಹೂಗಳಿಂದ ಅಲಂಕರಿಸಲು ನಿಯುಕ್ತನಾಗಿ ಅಲ್ಲಿಯೇ ಕೆಲವು ವರ್ಷಗಳಿದ್ದು ಲಿಂಗೈಕ್ಯನಾದನೆಂದು ಐತಿಹ್ಯ ಹೇಳುತ್ತದೆ. {{gap}}ನೀಲಲೋಚನೆ ಲಿಂಗೈಕ್ಯಳಾದ ಸುದ್ದಿ ಕೇಳಿದ ಸಿದ್ದರಾಮೇಶ್ವರ ಶಿವಯೋಗಿಗಳು ನುಡಿದ ಪರೋಕ್ಷ ವಿನಯದ ಶ್ರದ್ದಾಂಜಲಿಯಿದು : “ತಾಯೆ, ಪರಮಸುಖಾಚಾರ ಮೂರ್ತಿಯನಡಗಿಸಿ ನೀನೆಯಾದೆಯವ್ವಾ ! ತಾಯೆ, ಮಹಾಜ್ಞಾನ ಕಲ್ಪಿತದಲ್ಲಿ ನೀನೆಯಡಗಿದೆಯಪ್ಪಾ! ತಾಯೆ, ನೀಲಮ್ಮನೆಂಬ ಸುಖವಾಸಿ ಮೂರ್ತಿ ! ಕಪಿಲಸಿದ್ಧ ಮಲ್ಲಿನಾಥಯ್ಯಾ, ನಿಮ್ಮ ತಾಯಿ ನೀಲಮ್ಮ ನೀನಾದಳು !” {{center|***}} {{gap}}“ಈ ಎಲ್ಲ ಅನರ್ಥಗಳಿಗೆ ನನ್ನ ಆಚಾತುರ್ಯವೇ ಕಾರಣ. ಈ ಅಪರಾಧಕ್ಕಾಗಿ ನಾನು ಮಾಡಿಕೊಳ್ಳಬೇಕಾದ ಪ್ರಾಯಶ್ಚಿತ್ತವೇನು ?” {{gap}}-ಎಂದು ಮಾಚಿದೇವರು ಚಿಂತಿಸಿದರು. {{gap}}ಹೀಗೆ ಎರಡು ದಿನಗಳು ಕಳೆದವು. ಮೂರನೆಯ ದಿನ ಮುಂಜಾವಿನಲ್ಲಿ ತಡಸದ ಹಾಯ್ದಡಕ್ಕೆ ಹೋಗಿದ್ದ ಅಂಬಿಗರ ನಾಯಕನು ಹಿಂದಿರುಗಿ, “ಹೊಳೀ ಇಳೀತಾ ಬಂದೈತ್ರಿ, ಅಣ್ಣ, ಈ ಸಂಜೆ ಹೊತ್ತಿಗೆ ಇನ್ನೂ ಕಡಿಮೆ ಆದಾತು. ನೀವು ಈಗ ಶಿಬಿರ ಎತ್ತಿದ್ರೆ ಸೂರ್ಯ ನಡುನೆತ್ತಿಗೇರೋ ಹೊತ್ತಿಗೆ ತಡಸ ಸೇರಬೋದು, ಅಲ್ಲಿ ಎಲ್ಲವೂ ಅಣಿಯಾಗೈತಿ,” ಎಂದು ವರದಿ ಮಾಡಿದನು. {{gap}}“ಏನು ಸಿದ್ಧವಾಗಿದೆ ?” ಎಂದು ಮಾಚಿದೇವರು ಕೇಳಿದರು. {{gap}}“ಎತ್ತುಗಳು, ಚಕ್ಕಡಿಗಳು, ಸಾಮಾನು ಸರಂಜಾಮು ಸಾಗಿಸಲು ನಾಕು ದೊಡ್ಡ ತೆಪ್ಪಗಳು, ಜನಗಳಿಗೆ ನೂರು ದೋಣಿ. ಸಂಜೀ ಮುನ್ನ ನಿಮ್ಮನ್ನ ಆ ದಡ ಸೇರಿಸೇವು,” -ಅಂಬಿಗರ ನಾಯಕ ಉತ್ತರಿಸಿದನು. {{gap}}ಅಂಬಿಗನ ವರದಿ ಎಷ್ಟು ಉತ್ಸಾಹದಾಯಕವಾಗಿ ಕಲ್ಯಾಣದಿಂದ ಬಂದ ಸುದ್ದಿ ಅಷ್ಟೇ ಭೀತಿಜನಕವಾಗಿತ್ತು. ಹರದನ ವೇಷದಲ್ಲಿ ಬಂದ ಶರಣನು ಹೇಳಿದನು : “ನಿಮ್ಮನ್ನು ತಡೆಯಲು ಮಾಧವ ನಾಯಕನು ಸೈನ್ಯದೊಡನೆ —————— * ಶೂ, ಸಂ. ಪುಟ ೪೬೪.<noinclude></noinclude> p70jabtu4n2cwlrjovkz9y6xx13x695 324062 324061 2026-06-02T11:13:08Z Shreelatha.Halemane 7642 /* Validated */ 324062 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೫೨|right=ಕ್ರಾಂತಿ ಕಲ್ಯಾಣ}} {{gap}}ಪಡಿಹಾರಿ ಅಪ್ಪಣ್ಣ ಆ ಪುಣ್ಯಾಂಗನೆಯ ಸಮಾಧಿಯನ್ನು ಪ್ರತಿನಿತ್ಯ ಹೂಗಳಿಂದ ಅಲಂಕರಿಸಲು ನಿಯುಕ್ತನಾಗಿ ಅಲ್ಲಿಯೇ ಕೆಲವು ವರ್ಷಗಳಿದ್ದು ಲಿಂಗೈಕ್ಯನಾದನೆಂದು ಐತಿಹ್ಯ ಹೇಳುತ್ತದೆ. {{gap}}ನೀಲಲೋಚನೆ ಲಿಂಗೈಕ್ಯಳಾದ ಸುದ್ದಿ ಕೇಳಿದ ಸಿದ್ದರಾಮೇಶ್ವರ ಶಿವಯೋಗಿಗಳು ನುಡಿದ ಪರೋಕ್ಷ ವಿನಯದ ಶ್ರದ್ದಾಂಜಲಿಯಿದು : “ತಾಯೆ, ಪರಮಸುಖಾಚಾರ ಮೂರ್ತಿಯನಡಗಿಸಿ ನೀನೆಯಾದೆಯವ್ವಾ ! ತಾಯೆ, ಮಹಾಜ್ಞಾನ ಕಲ್ಪಿತದಲ್ಲಿ ನೀನೆಯಡಗಿದೆಯಪ್ಪಾ! ತಾಯೆ, ನೀಲಮ್ಮನೆಂಬ ಸುಖವಾಸಿ ಮೂರ್ತಿ ! ಕಪಿಲಸಿದ್ಧ ಮಲ್ಲಿನಾಥಯ್ಯಾ, ನಿಮ್ಮ ತಾಯಿ ನೀಲಮ್ಮ ನೀನಾದಳು !” {{center|***}} {{gap}}“ಈ ಎಲ್ಲ ಅನರ್ಥಗಳಿಗೆ ನನ್ನ ಆಚಾತುರ್ಯವೇ ಕಾರಣ. ಈ ಅಪರಾಧಕ್ಕಾಗಿ ನಾನು ಮಾಡಿಕೊಳ್ಳಬೇಕಾದ ಪ್ರಾಯಶ್ಚಿತ್ತವೇನು ?” {{gap}}-ಎಂದು ಮಾಚಿದೇವರು ಚಿಂತಿಸಿದರು. {{gap}}ಹೀಗೆ ಎರಡು ದಿನಗಳು ಕಳೆದವು. ಮೂರನೆಯ ದಿನ ಮುಂಜಾವಿನಲ್ಲಿ ತಡಸದ ಹಾಯ್ದಡಕ್ಕೆ ಹೋಗಿದ್ದ ಅಂಬಿಗರ ನಾಯಕನು ಹಿಂದಿರುಗಿ, “ಹೊಳೀ ಇಳೀತಾ ಬಂದೈತ್ರಿ, ಅಣ್ಣ, ಈ ಸಂಜೆ ಹೊತ್ತಿಗೆ ಇನ್ನೂ ಕಡಿಮೆ ಆದಾತು. ನೀವು ಈಗ ಶಿಬಿರ ಎತ್ತಿದ್ರೆ ಸೂರ್ಯ ನಡುನೆತ್ತಿಗೇರೋ ಹೊತ್ತಿಗೆ ತಡಸ ಸೇರಬೋದು, ಅಲ್ಲಿ ಎಲ್ಲವೂ ಅಣಿಯಾಗೈತಿ,” ಎಂದು ವರದಿ ಮಾಡಿದನು. {{gap}}“ಏನು ಸಿದ್ಧವಾಗಿದೆ ?” ಎಂದು ಮಾಚಿದೇವರು ಕೇಳಿದರು. {{gap}}“ಎತ್ತುಗಳು, ಚಕ್ಕಡಿಗಳು, ಸಾಮಾನು ಸರಂಜಾಮು ಸಾಗಿಸಲು ನಾಕು ದೊಡ್ಡ ತೆಪ್ಪಗಳು, ಜನಗಳಿಗೆ ನೂರು ದೋಣಿ. ಸಂಜೀ ಮುನ್ನ ನಿಮ್ಮನ್ನ ಆ ದಡ ಸೇರಿಸೇವು,” -ಅಂಬಿಗರ ನಾಯಕ ಉತ್ತರಿಸಿದನು. {{gap}}ಅಂಬಿಗನ ವರದಿ ಎಷ್ಟು ಉತ್ಸಾಹದಾಯಕವಾಗಿ ಕಲ್ಯಾಣದಿಂದ ಬಂದ ಸುದ್ದಿ ಅಷ್ಟೇ ಭೀತಿಜನಕವಾಗಿತ್ತು. ಹರದನ ವೇಷದಲ್ಲಿ ಬಂದ ಶರಣನು ಹೇಳಿದನು : “ನಿಮ್ಮನ್ನು ತಡೆಯಲು ಮಾಧವ ನಾಯಕನು ಸೈನ್ಯದೊಡನೆ —————— * ಶೂ, ಸಂ. ಪುಟ ೪೬೪.<noinclude></noinclude> 7ul2kf2hxft57u8n81xnpp7nhjv38jh ಪುಟ:ಕ್ರಾಂತಿ ಕಲ್ಯಾಣ.pdf/೪೫೮ 104 86414 324027 203739 2026-06-02T06:56:31Z Shreesha Sharma 7840 /* Proofread */ 324027 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೪೫}} ಮೇಲೆ ಹೊರಿಸಲು ಹವಣಿಸುತ್ತಿರುವ ಮಾಧವ ನಾಯಕನು, ಮುಂದೆ ನಮ್ಮನ್ನು ತಡೆಯಲು ಸೈನ್ಯ ಕಳುಹಿಸಬಹುದು. ನಾವು ಕೂಡಲೇ ಕೃಷ್ಣೆಯನ್ನು ದಾಟಬೇಕು. ತಡಸದ ಹಾಯ್ದಡ ಇಲ್ಲಿಗಿಂತ ಅನುಕೂಲವಾಗಿದೆಯೇ ಎಂಬುದನ್ನು ತಿಳಿದು ಬರಲು ನಾನು ಈ ರಾತ್ರಿಯೇ ಅಂಬಿಗರನ್ನು ಕಳುಹಿಸುತ್ತೇನೆ. ಅವರು ಹಿಂದಿರುಗಿದ ಮೇಲೆ ಪುನಃ ಸಭೆ ಸೇರಿ ಮುಂದಿನ ಕಾರ್ಯವನ್ನು ನಿರ್ಧರಿಸಬೇಕಾಗುವುದು.” {{gap}}ಸಲಹೆಗೆ ಶರಣರೆಲ್ಲ ಒಪ್ಪಿದರು. {{gap}}ಆ ದಿನ ರಾತ್ರಿ ಶಿಬಿರದ ಸುತ್ತಮುತ್ತ ಸಮೀಪದ ಗುಡ್ಡಗಳಲ್ಲಿ, ಗಣಾಚಾರಿ ಯೋಧರ ಕಾವಲು ಹೆಚ್ಚಿಸುವಂತೆ ಮಾಚಿದೇವರು ನಾಯಕನಿಗೆ ಹೇಳಿದರು. {{gap}}ಮರುದಿನ ಮುಂಜಾವಿನಲ್ಲಿ ಶರಣೆಯರಿಗೆ ಗೊತ್ತಾಗಿದ್ದ ಗೂಡಾರದಲ್ಲಿ ಮಲಗಿ ನಿದ್ರೆ ಮಾಡುತ್ತಿದ್ದ ನೀಲಲೋಚನೆ ಹಠಾತ್ತಾಗಿ ಎಚ್ಚೆತ್ತಳು. ಪರಿಚಿತವಾದ ಕಂಠವೊಂದು ಅವಳನ್ನು ತನ್ನೆಡೆಗೆ ಕರೆಯುತ್ತಿತ್ತು. {{gap}}ಶಿಬಿರದ ಗಲಿಬಿಲಿ, ತುಂಬಿ ಹರಿಯುತ್ತಿದ್ದ ಕೃಷ್ಣಯ ಅಬ್ಬರ ಇವುಗಳ ನಡುವೆ ಕ್ಷೀಣವಾಗಿ, ಅಸ್ಪುಟವಾಗಿ ಕೇಳಿ ಬರುತ್ತಿದ್ದ ಆ ದನಿಯನ್ನು ನೀಲಲೋಚನೆ ಕೂಡಲೆ ಗುರುತಿಸಿದಳು. ಬಸವಣ್ಣನವರ ಶೃತಿಮಧುರ ಗಂಭೀರ ಕಂಠ, ದೂರದ ಸಂಗೀತದಂತೆ ಅವಳನ್ನು ಕರೆಯುತ್ತಿತ್ತು. {{gap}}ನೀಲಲೋಚನೆ ಎದ್ದು ಕುಳಿತಳು. ರಾತ್ರಿ ಬಹಳ ಹೊತ್ತು ಅವಳಿಗೆ ನಿದ್ರೆ ಬಂದಿರಲಿಲ್ಲ. ಮುಂಜಾವಿನಲ್ಲಿ ಜೋಂಪು ಹತ್ತಿ ಕಣ್ಣು ಮುಚ್ಚಿದಾಗ ಆ ಅಸ್ಪುಟ ದನಿ ಕೇಳಿ ಅವಳು, ನಿದ್ರೆಯ ಯೋಚನೆಯನ್ನೇ ಬಿಟ್ಟು, ಮೈಯೆಲ್ಲ ಕಿವಿಯಾಗಿ, ಕೃಷಿತ ಚಾತಕಿಯಂತೆ ಆ ಶಬ್ದರೂಪ ಸುಧೆಯ ಒಂದೊಂದು ಹನಿಯನ್ನೂ ಹಿಡಿಯಲು ಪ್ರಯತ್ನಿಸಿದಳು. ಆದರೆ ಕೊನೆಯವರೆಗೆ ಕರೆ ಅಸ್ಪುಟವಾಗಿಯೇ ಉಳಿಯಿತು. {{gap}}“ಏಕೆ ನೀಲಾ ? ಆಗಲೆ ಎಚ್ಚರವಾಯಿತೆ?” {{gap}}ಮಲಗಿದ್ದಂತೆಯೇ ನಾಗಲಾಂಬೆ ಕೇಳಿದಳು. {{gap}}ತನಗಾದ ವಿಚಿತ್ರ ಅನುಭವವನ್ನು ನೀಲಲೋಚನೆ ವಿವರಿಸಿದಾಗ ನಾಗಲಾಂಬೆ ಹೇಳಿದಳು : “ಅದರಲ್ಲಿ ವಿಚಿತ್ರವೇನೂ ಇಲ್ಲ. ಬಸವೇಶ ಸಂಗಮದಲ್ಲಿದ್ದರೂ ಅವನ ಮನಸ್ಸು ಶರಣರ ಯಾತ್ರಾದಳದ ಸಂಗಡಿದೆ. ಚಕ್ಕಡಿಯವರು ಮೊದಲಾಗಿ ಮಾಚಿದೇವರವರೆಗೆ ಯಾತ್ರಾದಳದಲ್ಲಿರುವವರೆಲ್ಲ 'ಬಸವಾ!” ಎಂದು ನಾಮಸ್ಮರಣೆ ಮಾಡಿ ಏಳುತ್ತಾರೆ. ಬಸವೇಶನ ವಚನಗೀತೆಗಳು ಎಲ್ಲರ ಬಾಯಲ್ಲಿ ನಲಿಯುತ್ತಿವೆ.<noinclude></noinclude> 6vnjr81j4v1gxyh3xu0fey7sxli8y2f 324031 324027 2026-06-02T07:13:17Z Shreelatha.Halemane 7642 /* Validated */ 324031 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೪೫}} ಮೇಲೆ ಹೊರಿಸಲು ಹವಣಿಸುತ್ತಿರುವ ಮಾಧವ ನಾಯಕನು, ಮುಂದೆ ನಮ್ಮನ್ನು ತಡೆಯಲು ಸೈನ್ಯ ಕಳುಹಿಸಬಹುದು. ನಾವು ಕೂಡಲೇ ಕೃಷ್ಣೆಯನ್ನು ದಾಟಬೇಕು. ತಡಸದ ಹಾಯ್ದಡ ಇಲ್ಲಿಗಿಂತ ಅನುಕೂಲವಾಗಿದೆಯೇ ಎಂಬುದನ್ನು ತಿಳಿದು ಬರಲು ನಾನು ಈ ರಾತ್ರಿಯೇ ಅಂಬಿಗರನ್ನು ಕಳುಹಿಸುತ್ತೇನೆ. ಅವರು ಹಿಂದಿರುಗಿದ ಮೇಲೆ ಪುನಃ ಸಭೆ ಸೇರಿ ಮುಂದಿನ ಕಾರ್ಯವನ್ನು ನಿರ್ಧರಿಸಬೇಕಾಗುವುದು.” {{gap}}ಸಲಹೆಗೆ ಶರಣರೆಲ್ಲ ಒಪ್ಪಿದರು. {{gap}}ಆ ದಿನ ರಾತ್ರಿ ಶಿಬಿರದ ಸುತ್ತಮುತ್ತ ಸಮೀಪದ ಗುಡ್ಡಗಳಲ್ಲಿ, ಗಣಾಚಾರಿ ಯೋಧರ ಕಾವಲು ಹೆಚ್ಚಿಸುವಂತೆ ಮಾಚಿದೇವರು ನಾಯಕನಿಗೆ ಹೇಳಿದರು. {{gap}}ಮರುದಿನ ಮುಂಜಾವಿನಲ್ಲಿ ಶರಣೆಯರಿಗೆ ಗೊತ್ತಾಗಿದ್ದ ಗೂಡಾರದಲ್ಲಿ ಮಲಗಿ ನಿದ್ರೆ ಮಾಡುತ್ತಿದ್ದ ನೀಲಲೋಚನೆ ಹಠಾತ್ತಾಗಿ ಎಚ್ಚೆತ್ತಳು. ಪರಿಚಿತವಾದ ಕಂಠವೊಂದು ಅವಳನ್ನು ತನ್ನೆಡೆಗೆ ಕರೆಯುತ್ತಿತ್ತು. {{gap}}ಶಿಬಿರದ ಗಲಿಬಿಲಿ, ತುಂಬಿ ಹರಿಯುತ್ತಿದ್ದ ಕೃಷ್ಣಯ ಅಬ್ಬರ ಇವುಗಳ ನಡುವೆ ಕ್ಷೀಣವಾಗಿ, ಅಸ್ಪುಟವಾಗಿ ಕೇಳಿ ಬರುತ್ತಿದ್ದ ಆ ದನಿಯನ್ನು ನೀಲಲೋಚನೆ ಕೂಡಲೆ ಗುರುತಿಸಿದಳು. ಬಸವಣ್ಣನವರ ಶೃತಿಮಧುರ ಗಂಭೀರ ಕಂಠ, ದೂರದ ಸಂಗೀತದಂತೆ ಅವಳನ್ನು ಕರೆಯುತ್ತಿತ್ತು. {{gap}}ನೀಲಲೋಚನೆ ಎದ್ದು ಕುಳಿತಳು. ರಾತ್ರಿ ಬಹಳ ಹೊತ್ತು ಅವಳಿಗೆ ನಿದ್ರೆ ಬಂದಿರಲಿಲ್ಲ. ಮುಂಜಾವಿನಲ್ಲಿ ಜೋಂಪು ಹತ್ತಿ ಕಣ್ಣು ಮುಚ್ಚಿದಾಗ ಆ ಅಸ್ಪುಟ ದನಿ ಕೇಳಿ ಅವಳು, ನಿದ್ರೆಯ ಯೋಚನೆಯನ್ನೇ ಬಿಟ್ಟು, ಮೈಯೆಲ್ಲ ಕಿವಿಯಾಗಿ, ಕೃಷಿತ ಚಾತಕಿಯಂತೆ ಆ ಶಬ್ದರೂಪ ಸುಧೆಯ ಒಂದೊಂದು ಹನಿಯನ್ನೂ ಹಿಡಿಯಲು ಪ್ರಯತ್ನಿಸಿದಳು. ಆದರೆ ಕೊನೆಯವರೆಗೆ ಕರೆ ಅಸ್ಪುಟವಾಗಿಯೇ ಉಳಿಯಿತು. {{gap}}“ಏಕೆ ನೀಲಾ ? ಆಗಲೆ ಎಚ್ಚರವಾಯಿತೆ?” {{gap}}ಮಲಗಿದ್ದಂತೆಯೇ ನಾಗಲಾಂಬೆ ಕೇಳಿದಳು. {{gap}}ತನಗಾದ ವಿಚಿತ್ರ ಅನುಭವವನ್ನು ನೀಲಲೋಚನೆ ವಿವರಿಸಿದಾಗ ನಾಗಲಾಂಬೆ ಹೇಳಿದಳು : “ಅದರಲ್ಲಿ ವಿಚಿತ್ರವೇನೂ ಇಲ್ಲ. ಬಸವೇಶ ಸಂಗಮದಲ್ಲಿದ್ದರೂ ಅವನ ಮನಸ್ಸು ಶರಣರ ಯಾತ್ರಾದಳದ ಸಂಗಡಿದೆ. ಚಕ್ಕಡಿಯವರು ಮೊದಲಾಗಿ ಮಾಚಿದೇವರವರೆಗೆ ಯಾತ್ರಾದಳದಲ್ಲಿರುವವರೆಲ್ಲ 'ಬಸವಾ!” ಎಂದು ನಾಮಸ್ಮರಣೆ ಮಾಡಿ ಏಳುತ್ತಾರೆ. ಬಸವೇಶನ ವಚನಗೀತೆಗಳು ಎಲ್ಲರ ಬಾಯಲ್ಲಿ ನಲಿಯುತ್ತಿವೆ.<noinclude></noinclude> sw5dzasiga2but0grw3ckrsx0aun5o9 ಪುಟ:ಕ್ರಾಂತಿ ಕಲ್ಯಾಣ.pdf/೪೬೧ 104 86415 324030 203740 2026-06-02T07:12:54Z Shreesha Sharma 7840 /* Proofread */ 324030 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೪೮|right=ಕ್ರಾಂತಿ ಕಲ್ಯಾಣ}} {{gap}}ಗಂಗಾಂಬಿಕೆಗೆ ಸುಮ್ಮನಿರುವಂತೆ ಸನ್ನೆ ಮಾಡಿ ನಾಗಲಾಂಬೆ, “ಸ್ನಾನ ಮಾಡಿ ಹಿಂದಿರುಗುತ್ತ ನೀನು ಎಡವಿ ಬಿದ್ದೆ, ನೀಲಾ, ಪೆಟ್ಟಾಗಿರಬೇಕು. ಸ್ವಲ್ಪ ಹೊತ್ತು ವಿಶ್ರಮಿಸಿಕೊ,” ಎಂದು ಹೇಳಿ ನೀಲಲೋಚನೆಯ ಮೈದಡವಿದಳು. {{gap}}“ಇದೇನು ಹೇಳುವೆ, ನಾಗತ್ತೆ ? ಜಳಕ ಮಾಡಿ ಬಂದ ನಾನು ಪೂಜೆ ಮುಗಿಸಬೇಡವೇ? ಬೆಳಕಿನೊಳಗಣ ಮಹಾಘನದಂತೆ ಅವರು ಕ್ಷಣ ಮಾತ್ರ ಕಾಣಿಸಿಕೊಂಡು ಮತ್ತೆ ಅದೃಶ್ಯರಾದರು. ಪೂಜೆಗೆ ಕುಳಿತರೆ ಅವರ ಅನ್ವೇಷಣೆ ಸುಲಭವಾಗುವುದು,” ಎಂದು ನೀಲಲೋಚನೆ ಎದ್ದಳು. {{gap}}ನಾಗಲಾಂಬೆ ಗಂಗಾಂಬಿಕೆಯರು ಅವಳನ್ನು ಪಾರ್ಶ್ವದ ಪೂಜಾ ಗೂಡಾರಕ್ಕೆ ಕರೆದುಕೊಂಡು ಹೋದರು. ಪೂಜೆಗೆ ಬೇಕಾದ ಅಗ್ಗವಣಿ ಪತ್ರ ಪುಷ್ಪಗಳು ಅಲ್ಲಿ ಸಿದ್ಧವಾಗಿದ್ದವು. ದೀಪಗಳು ಉರಿಯುತ್ತಿದ್ದವು. {{gap}}ನೀಲಲೋಚನೆಯನ್ನು ಮಣೆಯ ಮೇಲೆ ಕುಳ್ಳಿರಿಸಿ, ಗಂಗಾಂಬಿಕೆಗೆ ಹತ್ತಿರಿರುವಂತೆ ಹೇಳಿ ನಾಗಲಾಂಬೆ ಹೊರಗೆ ಬಂದಳು. {{gap}}ಶಿಬಿರದ ನಡುವೆ ಚೆನ್ನಬಸವಣ್ಣನವರ ಗೂಡಾರದ ಎದುರಿಗೆ ಶರಣರ ಸಣ್ಣ ಗುಂಪು ಸೇರಿತ್ತು. ನೋಡುತ್ತಿದ್ದಂತೆ ಮಾಚಿದೇವರು ಚೆನ್ನಬಸವಣ್ಣನವರು ಗೂಡಾರದಿಂದ ಹೊರಗೆ ಬಂದರು. ಸಂಗಡ ಪಡಿಹಾರಿ ಅಪ್ಪಣ್ಣ. {{gap}}“ಅಪ್ಪಣ್ಣ ಯಾವಾಗ ಸಂಗಮದಿಂದ ಹಿಂದಿರುಗಿದ್ದು ? ಅಲ್ಲಿಂದ ಸುದ್ದಿಯೇನು?” ಎಂದು ಚಿಂತಿಸುತ್ತ ನಾಗಲಾಂಬೆ ಹತ್ತಿರ ಹೋದಳು. {{gap}}ಪಡಿಹಾರಿ ಅಪ್ಪಣ್ಣ ತಲೆತಗ್ಗಿಸಿ ಕಣ್ಣೀರು ಸುರಿಸುತ್ತಿದ್ದನು. ಮಾಚಿದೇವರ ಮುಖ ಬಾಡಿತ್ತು. ಚೆನ್ನಬಸವಣ್ಣನವರು ಉದ್ವೇಲಿತ ಮಹಾಸಾಗರದಂತೆ ತಳಮಳಿಸುತ್ತ ಶರಣರ ಕಡೆ ತಿರುಗಿ ಕೈಮುಗಿದು ಕಂಪಿತಕಂಠದಿಂದ ಹೇಳಿದರು : {{gap}}“ಸಂಗಮದ ದುರ್ವಾರ್ತೆ ಬರಸಿಡಿಲಂತೆ ಹಠಾತ್ತಾಗಿ ಎರಗಿ ಬಂದು ನಮ್ಮನ್ನು ದುಃಖಸಾಗರದಲ್ಲಿ ಮುಳುಗಿಸಿದೆ. ಶರಣರ ಜೀವನಾಡಿಯಂತಿದ್ದ ಬಸವಣ್ಣನವರು ಮೂರು ದಿನಗಳ ಹಿಂದೆ ಸಂಗಮದಲ್ಲಿ ಲಿಂಗೈಕ್ಯರಾದರು. ಕೂಡಲ ಸಂಗಮ ದೇವನು ತನ್ನ ಹೃದಯಮಧ್ಯದಲ್ಲಿ ಅವರನ್ನು ಇಂಬಿಟ್ಟುಕೊಂಡನು.” {{gap}}ನುಡಿಯುತ್ತಿದ್ದಂತೆ ಅವರಿಗೆ ಗಂಟಲು ಹಿಡಿಯಿತು. ಕಣ್ಣೀರು ಉಕ್ಕಿ ಹರಿಯಿತು. ನಾಗಲಾಂಬೆಯು ಹತ್ತಿರ ಹೋಗಿ ಮಗನ ಕೈಹಿಡಿದು, “ಸ್ಥಿರನಾಗು, ಚೆನ್ನ ಬಸವಣ್ಣ. ಬಸವೇಶ ನಿರ್ವಯಲಾದನು. ಈಗ ನೀನು ಶರಣರ ಆಲಂಬನ, ಆದರ್ಶ ! ನೀನು ಹೀಗಾದರೆ ಹೇಗೆ ?” ಎಂದು ಸಂತೈಸಿದಳು. {{gap}}ಶಕ್ತಿದೇವಿಯ ಸ್ಪರ್ಶವಾದಂತೆ ಚೆನ್ನಬಸವಣ್ಣನವರ ದೇಹದಲ್ಲಿ ಶಕ್ತಿ<noinclude></noinclude> 7zg7qks9v90nyuvxaekvebbr3v0l9ts 324034 324030 2026-06-02T07:13:51Z Shreelatha.Halemane 7642 /* Validated */ 324034 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೪೮|right=ಕ್ರಾಂತಿ ಕಲ್ಯಾಣ}} {{gap}}ಗಂಗಾಂಬಿಕೆಗೆ ಸುಮ್ಮನಿರುವಂತೆ ಸನ್ನೆ ಮಾಡಿ ನಾಗಲಾಂಬೆ, “ಸ್ನಾನ ಮಾಡಿ ಹಿಂದಿರುಗುತ್ತ ನೀನು ಎಡವಿ ಬಿದ್ದೆ, ನೀಲಾ, ಪೆಟ್ಟಾಗಿರಬೇಕು. ಸ್ವಲ್ಪ ಹೊತ್ತು ವಿಶ್ರಮಿಸಿಕೊ,” ಎಂದು ಹೇಳಿ ನೀಲಲೋಚನೆಯ ಮೈದಡವಿದಳು. {{gap}}“ಇದೇನು ಹೇಳುವೆ, ನಾಗತ್ತೆ ? ಜಳಕ ಮಾಡಿ ಬಂದ ನಾನು ಪೂಜೆ ಮುಗಿಸಬೇಡವೇ? ಬೆಳಕಿನೊಳಗಣ ಮಹಾಘನದಂತೆ ಅವರು ಕ್ಷಣ ಮಾತ್ರ ಕಾಣಿಸಿಕೊಂಡು ಮತ್ತೆ ಅದೃಶ್ಯರಾದರು. ಪೂಜೆಗೆ ಕುಳಿತರೆ ಅವರ ಅನ್ವೇಷಣೆ ಸುಲಭವಾಗುವುದು,” ಎಂದು ನೀಲಲೋಚನೆ ಎದ್ದಳು. {{gap}}ನಾಗಲಾಂಬೆ ಗಂಗಾಂಬಿಕೆಯರು ಅವಳನ್ನು ಪಾರ್ಶ್ವದ ಪೂಜಾ ಗೂಡಾರಕ್ಕೆ ಕರೆದುಕೊಂಡು ಹೋದರು. ಪೂಜೆಗೆ ಬೇಕಾದ ಅಗ್ಗವಣಿ ಪತ್ರ ಪುಷ್ಪಗಳು ಅಲ್ಲಿ ಸಿದ್ಧವಾಗಿದ್ದವು. ದೀಪಗಳು ಉರಿಯುತ್ತಿದ್ದವು. {{gap}}ನೀಲಲೋಚನೆಯನ್ನು ಮಣೆಯ ಮೇಲೆ ಕುಳ್ಳಿರಿಸಿ, ಗಂಗಾಂಬಿಕೆಗೆ ಹತ್ತಿರಿರುವಂತೆ ಹೇಳಿ ನಾಗಲಾಂಬೆ ಹೊರಗೆ ಬಂದಳು. {{gap}}ಶಿಬಿರದ ನಡುವೆ ಚೆನ್ನಬಸವಣ್ಣನವರ ಗೂಡಾರದ ಎದುರಿಗೆ ಶರಣರ ಸಣ್ಣ ಗುಂಪು ಸೇರಿತ್ತು. ನೋಡುತ್ತಿದ್ದಂತೆ ಮಾಚಿದೇವರು ಚೆನ್ನಬಸವಣ್ಣನವರು ಗೂಡಾರದಿಂದ ಹೊರಗೆ ಬಂದರು. ಸಂಗಡ ಪಡಿಹಾರಿ ಅಪ್ಪಣ್ಣ. {{gap}}“ಅಪ್ಪಣ್ಣ ಯಾವಾಗ ಸಂಗಮದಿಂದ ಹಿಂದಿರುಗಿದ್ದು ? ಅಲ್ಲಿಂದ ಸುದ್ದಿಯೇನು?” ಎಂದು ಚಿಂತಿಸುತ್ತ ನಾಗಲಾಂಬೆ ಹತ್ತಿರ ಹೋದಳು. {{gap}}ಪಡಿಹಾರಿ ಅಪ್ಪಣ್ಣ ತಲೆತಗ್ಗಿಸಿ ಕಣ್ಣೀರು ಸುರಿಸುತ್ತಿದ್ದನು. ಮಾಚಿದೇವರ ಮುಖ ಬಾಡಿತ್ತು. ಚೆನ್ನಬಸವಣ್ಣನವರು ಉದ್ವೇಲಿತ ಮಹಾಸಾಗರದಂತೆ ತಳಮಳಿಸುತ್ತ ಶರಣರ ಕಡೆ ತಿರುಗಿ ಕೈಮುಗಿದು ಕಂಪಿತಕಂಠದಿಂದ ಹೇಳಿದರು : {{gap}}“ಸಂಗಮದ ದುರ್ವಾರ್ತೆ ಬರಸಿಡಿಲಂತೆ ಹಠಾತ್ತಾಗಿ ಎರಗಿ ಬಂದು ನಮ್ಮನ್ನು ದುಃಖಸಾಗರದಲ್ಲಿ ಮುಳುಗಿಸಿದೆ. ಶರಣರ ಜೀವನಾಡಿಯಂತಿದ್ದ ಬಸವಣ್ಣನವರು ಮೂರು ದಿನಗಳ ಹಿಂದೆ ಸಂಗಮದಲ್ಲಿ ಲಿಂಗೈಕ್ಯರಾದರು. ಕೂಡಲ ಸಂಗಮ ದೇವನು ತನ್ನ ಹೃದಯಮಧ್ಯದಲ್ಲಿ ಅವರನ್ನು ಇಂಬಿಟ್ಟುಕೊಂಡನು.” {{gap}}ನುಡಿಯುತ್ತಿದ್ದಂತೆ ಅವರಿಗೆ ಗಂಟಲು ಹಿಡಿಯಿತು. ಕಣ್ಣೀರು ಉಕ್ಕಿ ಹರಿಯಿತು. ನಾಗಲಾಂಬೆಯು ಹತ್ತಿರ ಹೋಗಿ ಮಗನ ಕೈಹಿಡಿದು, “ಸ್ಥಿರನಾಗು, ಚೆನ್ನ ಬಸವಣ್ಣ. ಬಸವೇಶ ನಿರ್ವಯಲಾದನು. ಈಗ ನೀನು ಶರಣರ ಆಲಂಬನ, ಆದರ್ಶ ! ನೀನು ಹೀಗಾದರೆ ಹೇಗೆ ?” ಎಂದು ಸಂತೈಸಿದಳು. {{gap}}ಶಕ್ತಿದೇವಿಯ ಸ್ಪರ್ಶವಾದಂತೆ ಚೆನ್ನಬಸವಣ್ಣನವರ ದೇಹದಲ್ಲಿ ಶಕ್ತಿ<noinclude></noinclude> qixpzs18404tcyn8q5myqdjr4iwkag2 ಪುಟ:ಕ್ರಾಂತಿ ಕಲ್ಯಾಣ.pdf/೪೬೦ 104 86416 324029 203741 2026-06-02T07:09:27Z Shreesha Sharma 7840 /* Proofread */ 324029 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೪೭}} {{gap}}“ನನ್ನ ಬೆಂಬತ್ತಿ ಬರುತ್ತಿದೆ ಆ ಕಂಠ !” ಎಂದು ನೀಲಲೋಚನೆ ತಿರುಗಿ ನೋಡಿದಳು. {{gap}}ಹಸಿರು ಹುಲ್ಲು ಕಾಡುಹೂಗಳಿಂದ ಚಲುವಾದ ಕೃಷ್ಣಾ ತೀರದ ಆ ನೆಲದ ಮೇಲೆ ಆ ಸುಂದರ ಶ್ರೀಚರಣಗಳು | ಸಂಗಮಕ್ಕೆ ಹೊರಟು ನಿಂತಾಗ ತಾನು ಅಡಿಗೆರಗಿ ಗೋರೋಚನದಿಂದ ತಿದ್ದಿ ಬರೆದ ಸ್ವಾಸ್ತಿಕ ಚಿಹ್ನೆ ಇನ್ನೂ ಅಳಿಸಿಲ್ಲ? {{gap}}ನೀಲಲೋಚನೆ ತಲೆಯೆತ್ತಿ ನೋಡಿದಳು. {{gap}}ಎದುರಿಗೆ ಬಸವಣ್ಣನವರ ದಿವ್ಯ ಮಂಗಳ ವಿಗ್ರಹ. {{gap}}ಸಂಗಮಕ್ಕೆ ಹೊರಡುವಾಗ ಧರಿಸಿದ್ದ ಆ ವಲ್ಕಲದಂತಹ ಒರಟು ಧೋತ್ರ ನಿಲುವಂಗಿ, ಉತ್ತರೀಯಗಳು, ಕೊರಳಲ್ಲಿ ಚಂದನದ ಕರಡಿಗೆ, ಹಣೆಯಲ್ಲಿ ವಿಭೂತಿ, ಉಷ್ಣೀಷ ಶಿರಸ್ತ್ರಾಣಗಳಿಲ್ಲದ ಬರಿದಲೆ. {{gap}}ಗಾಳಿಯಲ್ಲಿ ಸುಳಿಗಾಳಿ ಬರೆದಂತೆ, {{gap}}ಗಗನದ ತಟಿಲ್ಲತೆ ಕ್ಷಣಾರ್ಧ ಗಗನವನ್ನು ಬೆಳಗಿ ಪುನಃ ಗಗನದಲ್ಲಿ ಅಡಗಿದಂತೆ, {{gap}}ಉದಕದಿಂದಾದ ವಾರಿಶಿಲೆ ಮತ್ತೆ ಉದಕವನ್ನು ಸೇರಿದಂತೆ. {{gap}}ಚಂದ್ರನ ಕಳೆ ಉದಯಿಸಿ ಮರಳಿ ಚಂದ್ರನಲ್ಲಿ ಲೀನವಾದಂತೆ, {{gap}}ಬೆಳಕಿನಲ್ಲಿ ಬೆಳಕಾಗಿ ಅದೃಶ್ಯವಾಯಿತು ಆ ದಿವ್ಯಾಕೃತಿ ! {{gap}}ನೀಲಲೋಚನೆ ಚಿಟ್ಟನೆ ಚೀರಿ ನೆಲಕ್ಕುರುಳಿದಳು. {{gap}}ನಾಗಲಾಂಬೆ ಗಂಗಾಂಬಿಕೆಯರು ಅವಳನ್ನು ಗೂಡಾರಕ್ಕೆ ಕರೆದುಕೊಂಡು ಹೋಗಿ ಶುಶ್ರೂಷೆ ಮಾಡಿದರು. ಎಚ್ಚೆತ್ತು ಅವಳು, “ಶಿಬಿರದಲ್ಲಿ ಅವರನ್ನು ಕಂಡೆ ಅಕ್ಕ!” ಎಂದು ಆವೇಗದಿಂದ ತೊದಲುತ್ತ ಹೇಳಿದಳು. {{gap}}ನಾಗಲಾಂಬೆ ಮೌನ. {{gap}}ಗಂಗಾಂಬಿಕೆ ಕೇಳಿದಳು, “ಯಾರನ್ನು ನೀನು ಕಂಡದ್ದು, ನೀಲಾ ?” {{gap}}“ನನ್ನ ಸ್ವಾಮಿಯನ್ನು. ಈಗ ಅವರು ಸಂಗಮದಲ್ಲಿಲ್ಲ. ಶಿಬಿರಕ್ಕೆ ಬಂದಿದ್ದಾರೆ, ತುಸು ಹೊತ್ತಿನ ಮೊದಲು ನಾನವರನ್ನು ನೋಡಿದೆ.” {{gap}}ನೀಲಲೋಚನೆಯ ನುಡಿಗಳಲ್ಲಿ ಉನ್ಮನೀಭಾವದ ದೃಢತೆ ಆವೇಶಗಳು ಎದ್ದು ಕಾಣುತ್ತಿದ್ದವು. —————— * ಬಸವೇಶ್ವರ ವಚನಗಳು, ಪುಟ ೩೧.<noinclude></noinclude> 14ybc4e5z71x5u6w63oalysq8qwm10a 324033 324029 2026-06-02T07:13:35Z Shreelatha.Halemane 7642 /* Validated */ 324033 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೪೭}} {{gap}}“ನನ್ನ ಬೆಂಬತ್ತಿ ಬರುತ್ತಿದೆ ಆ ಕಂಠ !” ಎಂದು ನೀಲಲೋಚನೆ ತಿರುಗಿ ನೋಡಿದಳು. {{gap}}ಹಸಿರು ಹುಲ್ಲು ಕಾಡುಹೂಗಳಿಂದ ಚಲುವಾದ ಕೃಷ್ಣಾ ತೀರದ ಆ ನೆಲದ ಮೇಲೆ ಆ ಸುಂದರ ಶ್ರೀಚರಣಗಳು | ಸಂಗಮಕ್ಕೆ ಹೊರಟು ನಿಂತಾಗ ತಾನು ಅಡಿಗೆರಗಿ ಗೋರೋಚನದಿಂದ ತಿದ್ದಿ ಬರೆದ ಸ್ವಾಸ್ತಿಕ ಚಿಹ್ನೆ ಇನ್ನೂ ಅಳಿಸಿಲ್ಲ? {{gap}}ನೀಲಲೋಚನೆ ತಲೆಯೆತ್ತಿ ನೋಡಿದಳು. {{gap}}ಎದುರಿಗೆ ಬಸವಣ್ಣನವರ ದಿವ್ಯ ಮಂಗಳ ವಿಗ್ರಹ. {{gap}}ಸಂಗಮಕ್ಕೆ ಹೊರಡುವಾಗ ಧರಿಸಿದ್ದ ಆ ವಲ್ಕಲದಂತಹ ಒರಟು ಧೋತ್ರ ನಿಲುವಂಗಿ, ಉತ್ತರೀಯಗಳು, ಕೊರಳಲ್ಲಿ ಚಂದನದ ಕರಡಿಗೆ, ಹಣೆಯಲ್ಲಿ ವಿಭೂತಿ, ಉಷ್ಣೀಷ ಶಿರಸ್ತ್ರಾಣಗಳಿಲ್ಲದ ಬರಿದಲೆ. {{gap}}ಗಾಳಿಯಲ್ಲಿ ಸುಳಿಗಾಳಿ ಬರೆದಂತೆ, {{gap}}ಗಗನದ ತಟಿಲ್ಲತೆ ಕ್ಷಣಾರ್ಧ ಗಗನವನ್ನು ಬೆಳಗಿ ಪುನಃ ಗಗನದಲ್ಲಿ ಅಡಗಿದಂತೆ, {{gap}}ಉದಕದಿಂದಾದ ವಾರಿಶಿಲೆ ಮತ್ತೆ ಉದಕವನ್ನು ಸೇರಿದಂತೆ. {{gap}}ಚಂದ್ರನ ಕಳೆ ಉದಯಿಸಿ ಮರಳಿ ಚಂದ್ರನಲ್ಲಿ ಲೀನವಾದಂತೆ, {{gap}}ಬೆಳಕಿನಲ್ಲಿ ಬೆಳಕಾಗಿ ಅದೃಶ್ಯವಾಯಿತು ಆ ದಿವ್ಯಾಕೃತಿ ! {{gap}}ನೀಲಲೋಚನೆ ಚಿಟ್ಟನೆ ಚೀರಿ ನೆಲಕ್ಕುರುಳಿದಳು. {{gap}}ನಾಗಲಾಂಬೆ ಗಂಗಾಂಬಿಕೆಯರು ಅವಳನ್ನು ಗೂಡಾರಕ್ಕೆ ಕರೆದುಕೊಂಡು ಹೋಗಿ ಶುಶ್ರೂಷೆ ಮಾಡಿದರು. ಎಚ್ಚೆತ್ತು ಅವಳು, “ಶಿಬಿರದಲ್ಲಿ ಅವರನ್ನು ಕಂಡೆ ಅಕ್ಕ!” ಎಂದು ಆವೇಗದಿಂದ ತೊದಲುತ್ತ ಹೇಳಿದಳು. {{gap}}ನಾಗಲಾಂಬೆ ಮೌನ. {{gap}}ಗಂಗಾಂಬಿಕೆ ಕೇಳಿದಳು, “ಯಾರನ್ನು ನೀನು ಕಂಡದ್ದು, ನೀಲಾ ?” {{gap}}“ನನ್ನ ಸ್ವಾಮಿಯನ್ನು. ಈಗ ಅವರು ಸಂಗಮದಲ್ಲಿಲ್ಲ. ಶಿಬಿರಕ್ಕೆ ಬಂದಿದ್ದಾರೆ, ತುಸು ಹೊತ್ತಿನ ಮೊದಲು ನಾನವರನ್ನು ನೋಡಿದೆ.” {{gap}}ನೀಲಲೋಚನೆಯ ನುಡಿಗಳಲ್ಲಿ ಉನ್ಮನೀಭಾವದ ದೃಢತೆ ಆವೇಶಗಳು ಎದ್ದು ಕಾಣುತ್ತಿದ್ದವು. —————— * ಬಸವೇಶ್ವರ ವಚನಗಳು, ಪುಟ ೩೧.<noinclude></noinclude> 5vl071evb4jdszbglajso43r7eh8lgx ಪುಟ:ಕ್ರಾಂತಿ ಕಲ್ಯಾಣ.pdf/೪೬೪ 104 86417 324060 203742 2026-06-02T11:06:50Z Shreesha Sharma 7840 /* Proofread */ 324060 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೫೧}} {{gap}}ಕರಸ್ಥಳದಲ್ಲಿ ಬೆಳಗುತ್ತಿದ್ದ ಇಷ್ಟಲಿಂಗದ ಮೇಲೆ ನೆಟ್ಟಿದ್ದ ನೀಲಲೋಚನೆಯ ದೃಷ್ಟಿ ಅಪೂರ್ವಕಾಂತಿಯಿಂದ ಜ್ವಲಿಸಿತು,-ಆರುವ ಮೊದಲು ದೀಪ ನಗುವಂತೆ. {{gap}}ನಿಮ್ನ ಗಂಭೀರ ಕಂಠದಿಂದ ನೀಲಲೋಚನೆ ಹೇಳಿದಳು : “ಕಾಮಿತವ ಕಂಗೊಳಿಸಿದ ಗುರುವೇ, ಕಲ್ಪಿತವ ನಷ್ಟವ ಮಾಡಿದ ಗುರುವೆ, ಎತ್ತಲಡಗಿದೆಯಯ್ಯ ! ಸುಖ ದುಃಖವನೊಂದು ರೂಪ ಮಾಡಿದ ಗುರುವೆ, ಎತ್ತಲಡಗಿದೆಯಯ್ಯ ಸಂಗಯ್ಯ ಗುರು ಬಸವಾ ! ಕರಸ್ಥಲ ಬಯಲಾಯಿತ್ತೆನಗೆ, ಎಲೆ ಅಯ್ಯ ! ಕರಸ್ಥಲ ಮನಸ್ಥಲವಾಯಿತ್ತು, ಸಂಗಯ್ಯ ! ಬಸವ ಹೋದನು, ನಾನಡಗಿದೆನಯ್ಯ ನಿನ್ನತ್ತ !” {{gap}}ನುಡಿಯುತ್ತಿದ್ದಂತೆ ನೀಲಲೋಚನೆಯ ಮಾತು ಅಸ್ಪುಟವಾಯಿತು, ದನಿಯುಡುಗಿತು, ಉಸಿರೆಳೆದು ನಿಶ್ಲೇಷ್ಟಿತೆಯಾಗಿ, ಗಂಗಾಂಬಿಕೆಯ ಎದೆಗೊರಗಿ ತಲೆಯಿಟ್ಟು ಕಣ್ಣು ಮುಚ್ಚಿದಳು. {{gap}}ಶರಣೆಯರು ಮೆಲ್ಲದನಿಯಲ್ಲಿ ಪಠಿಸುತ್ತಿದ್ದ ಷಡಕ್ಷರದ ಗಂಭೀರ ನಾದ ಗೂಡಾರವನ್ನೆಲ್ಲ ತುಂಬಿತು. {{gap}}“ನೀಲಲೋಚನೆ ಪುಣ್ಯವತಿ, ನಾಗತ್ತೆ ! ನನಗೆ ಬರಬಾರದಾಗಿತ್ತೆ ಆ ಮೃತ್ಯು!” ಎಂದು ಹಂಬಲಿಸಿದಳು ಗಂಗಾಂಬಿಕೆ. {{gap}}“ಅಶುಭವನ್ನಾಡಬೇಡ, ಗಂಗಾ. ಸಂಗಮನಾಥನು ದೊಡ್ಡವನಾದಾಗ ಇಹಲೋಕದಲ್ಲಿ ನಿನ್ನ ಮಣಿಹ ಮುಗಿಯುವುದು,” ಎಂದು ನಾಗಲಾಂಬೆ ಎಚ್ಚರಿಸಿದಳು. {{gap}}ನೀಲಲೋಚನೆ ಲಿಂಗೈಕ್ಯಳಾದ ಸುದ್ದಿ ಕೇಳಿ ಚೆನ್ನಬಸವಣ್ಣನವರು ಮತ್ತೆ ತಳಮಳಗೊಂಡರು. “ನಾನೆಂತಹ ನಿರ್ಭಾಗ್ಯನು ಮಾಚಿದೇವಯ್ಯನವರೆ !” ಎಂದು ಹಂಬಲಿಸಿದರು. {{gap}}ಆ ದಿನವೆಲ್ಲ ಶಿಬಿರದಲ್ಲಿ ಎಲ್ಲ ಕಡೆ ಷಡಕ್ಷರ ಮಂತ್ರದ ಪುನರಾವರ್ತ ಮತ್ತೆ ಮತ್ತೆ ಕೇಳಿ ಬರುತ್ತಿತ್ತು. ತಂಗಡಿಯ ಹತ್ತಿರ ಕೃಷ್ಣಾ ತೀರದ ಒಂದು ರಮ್ಯ ಸ್ಥಳದಲ್ಲಿ ಶರಣರು ನೀಲಲೋಚನೆಯ ಪಾರ್ಥಿವ ದೇಹವನ್ನು ಭೂಸ್ಥಾಪನೆ ಮಾಡಿ ಸಮಾಧಿ ರಚಿಸಿದರು. ——————— * ಶೂ, ಸಂ. ಪುಟ ೪೬೨-೪೬೩<noinclude></noinclude> o6f655zrrwxqnw629part3agcc5wfid 324063 324060 2026-06-02T11:13:17Z Shreelatha.Halemane 7642 /* Validated */ 324063 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೫೧}} {{gap}}ಕರಸ್ಥಳದಲ್ಲಿ ಬೆಳಗುತ್ತಿದ್ದ ಇಷ್ಟಲಿಂಗದ ಮೇಲೆ ನೆಟ್ಟಿದ್ದ ನೀಲಲೋಚನೆಯ ದೃಷ್ಟಿ ಅಪೂರ್ವಕಾಂತಿಯಿಂದ ಜ್ವಲಿಸಿತು,-ಆರುವ ಮೊದಲು ದೀಪ ನಗುವಂತೆ. {{gap}}ನಿಮ್ನ ಗಂಭೀರ ಕಂಠದಿಂದ ನೀಲಲೋಚನೆ ಹೇಳಿದಳು : “ಕಾಮಿತವ ಕಂಗೊಳಿಸಿದ ಗುರುವೇ, ಕಲ್ಪಿತವ ನಷ್ಟವ ಮಾಡಿದ ಗುರುವೆ, ಎತ್ತಲಡಗಿದೆಯಯ್ಯ ! ಸುಖ ದುಃಖವನೊಂದು ರೂಪ ಮಾಡಿದ ಗುರುವೆ, ಎತ್ತಲಡಗಿದೆಯಯ್ಯ ಸಂಗಯ್ಯ ಗುರು ಬಸವಾ ! ಕರಸ್ಥಲ ಬಯಲಾಯಿತ್ತೆನಗೆ, ಎಲೆ ಅಯ್ಯ ! ಕರಸ್ಥಲ ಮನಸ್ಥಲವಾಯಿತ್ತು, ಸಂಗಯ್ಯ ! ಬಸವ ಹೋದನು, ನಾನಡಗಿದೆನಯ್ಯ ನಿನ್ನತ್ತ !” {{gap}}ನುಡಿಯುತ್ತಿದ್ದಂತೆ ನೀಲಲೋಚನೆಯ ಮಾತು ಅಸ್ಪುಟವಾಯಿತು, ದನಿಯುಡುಗಿತು, ಉಸಿರೆಳೆದು ನಿಶ್ಲೇಷ್ಟಿತೆಯಾಗಿ, ಗಂಗಾಂಬಿಕೆಯ ಎದೆಗೊರಗಿ ತಲೆಯಿಟ್ಟು ಕಣ್ಣು ಮುಚ್ಚಿದಳು. {{gap}}ಶರಣೆಯರು ಮೆಲ್ಲದನಿಯಲ್ಲಿ ಪಠಿಸುತ್ತಿದ್ದ ಷಡಕ್ಷರದ ಗಂಭೀರ ನಾದ ಗೂಡಾರವನ್ನೆಲ್ಲ ತುಂಬಿತು. {{gap}}“ನೀಲಲೋಚನೆ ಪುಣ್ಯವತಿ, ನಾಗತ್ತೆ ! ನನಗೆ ಬರಬಾರದಾಗಿತ್ತೆ ಆ ಮೃತ್ಯು!” ಎಂದು ಹಂಬಲಿಸಿದಳು ಗಂಗಾಂಬಿಕೆ. {{gap}}“ಅಶುಭವನ್ನಾಡಬೇಡ, ಗಂಗಾ. ಸಂಗಮನಾಥನು ದೊಡ್ಡವನಾದಾಗ ಇಹಲೋಕದಲ್ಲಿ ನಿನ್ನ ಮಣಿಹ ಮುಗಿಯುವುದು,” ಎಂದು ನಾಗಲಾಂಬೆ ಎಚ್ಚರಿಸಿದಳು. {{gap}}ನೀಲಲೋಚನೆ ಲಿಂಗೈಕ್ಯಳಾದ ಸುದ್ದಿ ಕೇಳಿ ಚೆನ್ನಬಸವಣ್ಣನವರು ಮತ್ತೆ ತಳಮಳಗೊಂಡರು. “ನಾನೆಂತಹ ನಿರ್ಭಾಗ್ಯನು ಮಾಚಿದೇವಯ್ಯನವರೆ !” ಎಂದು ಹಂಬಲಿಸಿದರು. {{gap}}ಆ ದಿನವೆಲ್ಲ ಶಿಬಿರದಲ್ಲಿ ಎಲ್ಲ ಕಡೆ ಷಡಕ್ಷರ ಮಂತ್ರದ ಪುನರಾವರ್ತ ಮತ್ತೆ ಮತ್ತೆ ಕೇಳಿ ಬರುತ್ತಿತ್ತು. ತಂಗಡಿಯ ಹತ್ತಿರ ಕೃಷ್ಣಾ ತೀರದ ಒಂದು ರಮ್ಯ ಸ್ಥಳದಲ್ಲಿ ಶರಣರು ನೀಲಲೋಚನೆಯ ಪಾರ್ಥಿವ ದೇಹವನ್ನು ಭೂಸ್ಥಾಪನೆ ಮಾಡಿ ಸಮಾಧಿ ರಚಿಸಿದರು. ——————— * ಶೂ, ಸಂ. ಪುಟ ೪೬೨-೪೬೩<noinclude></noinclude> ku7k6emm9oszd13g3fn1tvdzmrsdb2d ಪುಟ:ಕ್ರಾಂತಿ ಕಲ್ಯಾಣ.pdf/೪೬೩ 104 86418 324057 203743 2026-06-02T10:33:24Z Shreesha Sharma 7840 /* Proofread */ 324057 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೪೫೦|center=|right=ಕ್ರಾಂತಿ ಕಲ್ಯಾಣ}} ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು ನೀವು ಲಿಂಗೈಕ್ಯವಾದರೆ, ಭಕ್ತಿ ನಿಮ್ಮೊಡನೆ ಹೋಯಿತ್ತಯ್ಯ ! ನಿಮ್ಮೊಡನೆ ಸದಾಚಾರ ಹೋಯಿತ್ತಯ್ಯ ! ನಿಮ್ಮೊಡನೆ ಅಸಂಖ್ಯಾತರು ಹೋದರು, ಅಣ್ಣಾ ! ಮರ್ತ್ಯ ಲೋಕದ ಮಹಾಮನೆ ಶೂನ್ಯವಾಯಿತ್ತು, ಬಸವಣ್ಣಾ ! ಎನ್ನನೊಯ್ಯದೆ ಹೋದೆಯಲ್ಲಾ, ಪಂಚ ಪುರುಷ ಮೂರ್ತಿ ಬಸವಣ್ಣಾ ! ಬಸವಣ್ಣಪ್ರಿಯ ಚೆನ್ನ ಸಂಗಯ್ಯಂಗೆ ಪ್ರಾಣಲಿಂಗವಾಗಿ ಹೋದೆಯಲ್ಲಾ, ಸಂಗನ ಬಸವಣ್ಣಾ !” {{gap}}ಚೆನ್ನಬಸವಣ್ಣನಾಗಲಾಂಬೆಯರ ನುಡಿಗಳಿಗೆ ಮುಡಿಯಿಟ್ಟಂತೆ ಮಾಚಿದೇವರು ಹೇಳಿದರು : “ಆಕಾರ ನಿರಾಕಾರವಾಯಿತ್ತಲ್ಲಾ ಬಸವಣ್ಣಾ ! ಪ್ರಾಣ ನಿಃಪ್ರಾಣವಾಯಿತ್ತಲ್ಲಾ, ಬಸವಣ್ಣಾ ! ಲಿಂಗಜಂಗಮದ ಮಾಟಕೂಟ ಸಮಾಪ್ತಿಯಾಯಿತಲ್ಲಾ, ಬಸವಣ್ಣಾ ! ನಿಃಶಬ್ದ ವೇದ್ಯವಾದೆಯಲ್ಲಾ, ಬಸವಣ್ಣಾ ? ಕಲಿದೇವರ ದೇವನ ಹೃದಯಕಮಲದ ಹೊಕ್ಕು, ದೇವರಿಗೆ ದೇವನಾಗಿ ಹೋದೆಯಲ್ಲಾ, ಸಂಗನ ಬಸವಣ್ಣಾ !” {{gap}}ಶರಣರಲ್ಲ ಉಗ್ಗಡಿಸಿದರು, “ಹರ ಹರ ಮಹಾದೇವ ! ಉಘೇ ಉಘೇ! ಬಸವೇಶ | ಬಸವ ಪ್ರಭು | ಬಸವರಾಜ ಉಘೇ !” ಎಂದು. {{gap}}ನಾಗಲಾಂಬೆ ಪುನಃ ಪೂಜೆಯ ಗೂಡಾರಕ್ಕೆ ಬಂದಾಗ ಪೂಜೆಗೆ ಕುಳಿತಿದ್ದ ನೀಲಲೋಚನೆಯ ಬೆನ್ನು ಹಿಡಿದು ಆಸರೆಯಾಗಿ ಕುಳಿತಿದ್ದಳು ಗಂಗಾಂಬಿಕೆ. ನಾಲ್ಕಾರು ಮಂದಿ ಶರಣೆಯರು ಸುತ್ತನಿಂತು ಕಣ್ಣೀರಿಡುತ್ತಿದ್ದರು. {{gap}}ಗಂಗಾಂಬಿಕೆಯ ಬಳಿ ಕುಳಿತು ನಾಗಲಾಂಬೆ, “ಬಸವೇಶ ನಮ್ಮನ್ನಗಲಿದನು, ಗಂಗಾ, ಅಪ್ಪಣ್ಣ ಸಂಗಮದಿಂದ ಹಿಂದಿರುಗಿದನು,” ಎಂದಳು. {{gap}}“ನೀಲಾ ಹೇಳಿದಳು, ಅಕ್ಕಾ ! ಎಂತಹ ಭಾಗ್ಯಹೀನರು ನಾವು !” ಎಂದು ಗಂಗಾಂಬಿಕೆ ಕಣ್ಣೀರಿಟ್ಟಳು. ———— * ಶೂನ್ಯ ಸಂಪಾದನೆ, ಪುಟ ೪೬೪ ಶೂ, ಸಂ. ಪುಟ ೪೬೮<noinclude></noinclude> khh9mxu9zwhpm70hcmljzzz5nnfcnsy 324058 324057 2026-06-02T10:33:57Z Shreelatha.Halemane 7642 /* Validated */ 324058 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೪೫೦|center=|right=ಕ್ರಾಂತಿ ಕಲ್ಯಾಣ}} ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು ನೀವು ಲಿಂಗೈಕ್ಯವಾದರೆ, ಭಕ್ತಿ ನಿಮ್ಮೊಡನೆ ಹೋಯಿತ್ತಯ್ಯ ! ನಿಮ್ಮೊಡನೆ ಸದಾಚಾರ ಹೋಯಿತ್ತಯ್ಯ ! ನಿಮ್ಮೊಡನೆ ಅಸಂಖ್ಯಾತರು ಹೋದರು, ಅಣ್ಣಾ ! ಮರ್ತ್ಯ ಲೋಕದ ಮಹಾಮನೆ ಶೂನ್ಯವಾಯಿತ್ತು, ಬಸವಣ್ಣಾ ! ಎನ್ನನೊಯ್ಯದೆ ಹೋದೆಯಲ್ಲಾ, ಪಂಚ ಪುರುಷ ಮೂರ್ತಿ ಬಸವಣ್ಣಾ ! ಬಸವಣ್ಣಪ್ರಿಯ ಚೆನ್ನ ಸಂಗಯ್ಯಂಗೆ ಪ್ರಾಣಲಿಂಗವಾಗಿ ಹೋದೆಯಲ್ಲಾ, ಸಂಗನ ಬಸವಣ್ಣಾ !” {{gap}}ಚೆನ್ನಬಸವಣ್ಣನಾಗಲಾಂಬೆಯರ ನುಡಿಗಳಿಗೆ ಮುಡಿಯಿಟ್ಟಂತೆ ಮಾಚಿದೇವರು ಹೇಳಿದರು : “ಆಕಾರ ನಿರಾಕಾರವಾಯಿತ್ತಲ್ಲಾ ಬಸವಣ್ಣಾ ! ಪ್ರಾಣ ನಿಃಪ್ರಾಣವಾಯಿತ್ತಲ್ಲಾ, ಬಸವಣ್ಣಾ ! ಲಿಂಗಜಂಗಮದ ಮಾಟಕೂಟ ಸಮಾಪ್ತಿಯಾಯಿತಲ್ಲಾ, ಬಸವಣ್ಣಾ ! ನಿಃಶಬ್ದ ವೇದ್ಯವಾದೆಯಲ್ಲಾ, ಬಸವಣ್ಣಾ ? ಕಲಿದೇವರ ದೇವನ ಹೃದಯಕಮಲದ ಹೊಕ್ಕು, ದೇವರಿಗೆ ದೇವನಾಗಿ ಹೋದೆಯಲ್ಲಾ, ಸಂಗನ ಬಸವಣ್ಣಾ !” {{gap}}ಶರಣರಲ್ಲ ಉಗ್ಗಡಿಸಿದರು, “ಹರ ಹರ ಮಹಾದೇವ ! ಉಘೇ ಉಘೇ! ಬಸವೇಶ | ಬಸವ ಪ್ರಭು | ಬಸವರಾಜ ಉಘೇ !” ಎಂದು. {{gap}}ನಾಗಲಾಂಬೆ ಪುನಃ ಪೂಜೆಯ ಗೂಡಾರಕ್ಕೆ ಬಂದಾಗ ಪೂಜೆಗೆ ಕುಳಿತಿದ್ದ ನೀಲಲೋಚನೆಯ ಬೆನ್ನು ಹಿಡಿದು ಆಸರೆಯಾಗಿ ಕುಳಿತಿದ್ದಳು ಗಂಗಾಂಬಿಕೆ. ನಾಲ್ಕಾರು ಮಂದಿ ಶರಣೆಯರು ಸುತ್ತನಿಂತು ಕಣ್ಣೀರಿಡುತ್ತಿದ್ದರು. {{gap}}ಗಂಗಾಂಬಿಕೆಯ ಬಳಿ ಕುಳಿತು ನಾಗಲಾಂಬೆ, “ಬಸವೇಶ ನಮ್ಮನ್ನಗಲಿದನು, ಗಂಗಾ, ಅಪ್ಪಣ್ಣ ಸಂಗಮದಿಂದ ಹಿಂದಿರುಗಿದನು,” ಎಂದಳು. {{gap}}“ನೀಲಾ ಹೇಳಿದಳು, ಅಕ್ಕಾ ! ಎಂತಹ ಭಾಗ್ಯಹೀನರು ನಾವು !” ಎಂದು ಗಂಗಾಂಬಿಕೆ ಕಣ್ಣೀರಿಟ್ಟಳು. ———— * ಶೂನ್ಯ ಸಂಪಾದನೆ, ಪುಟ ೪೬೪ ಶೂ, ಸಂ. ಪುಟ ೪೬೮<noinclude></noinclude> 6pqh8i5m6714dl00kn9jdqx79wy34v9 ಪುಟ:ಕ್ರಾಂತಿ ಕಲ್ಯಾಣ.pdf/೪೬೭ 104 86423 324065 203748 2026-06-02T11:18:54Z Shreesha Sharma 7840 /* Proofread */ 324065 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೫೪|right=ಕ್ರಾಂತಿ ಕಲ್ಯಾಣ}} ಅಧಿಕೃತ ಮುಂದಾಳು. ನಿಮ್ಮಲ್ಲಿ ನನ್ನ ಬಿನ್ನಪವೊಂದಿದೆ,” ಎಂದರು. {{gap}}ಚೆನ್ನಬಸವಣ್ಣನವರು ಸಹಜ ವಿನಯದಿಂದ, “ವಯಸ್ಸಿನಂತೆ ನೀವು ಜ್ಞಾನದಲ್ಲಿಯೂ ನನಗಿಂತ ಹಿರಿಯರು, ಅಣ್ಣ. ನನ್ನಲ್ಲಿ ನಿಮ್ಮ ಬಿನ್ನಪವೇ ? ನಿಮ್ಮ ಕರುಣೆ ಆದರಗಳ ಫಲವಾಗಿ ನಾನು ಅಧ್ಯಕ್ಷನಾಗಿದ್ದೇನೆ,” ಎಂದರು. {{gap}}ಆದರೂ ವಿವೇಕ ತೋರಿಸುವ ಮಾರ್ಗದಲ್ಲಿ ನಡೆಯುವುದು ನನ್ನ ಕರ್ತವ್ಯ. ನನ್ನ ಬಿನ್ನಪವನ್ನು ಕೇಳಿ, ಅದರ ಪರಿಹಾರ ಮಾರ್ಗವನ್ನು ನೀವು ಸೂಚಿಸಬೇಕಾಗಿದೆ,” ಎಂದು ಮಾಚಿದೇವರು ಒತ್ತಾಯ ಪಡಿಸಿದರು. {{gap}}“ನಾನು ಅಧ್ಯಕ್ಷನೆಂಬುದನ್ನು ಮರೆತು, ನೆಚ್ಚಿನ ಗೆಳೆಯನಂತೆ ನೀವು ಹೇಳತಕ್ಕದ್ದನ್ನು ಹೇಳಬಹುದು, ಅಣ್ಣನವರೆ,” ಎಂದು ಕೊನೆಗೆ ನುಡಿದರು, ಚೆನ್ನಬಸವಣ್ಣನವರು. {{gap}}“ಶರಣರ ವಿಚಾರದಲ್ಲಿ ನಾನು ಒಂದು ಅಪರಾಧ ಮಾಡಿದ್ದೇನೆ. ನಾವು ಕಲ್ಯಾಣವನ್ನು ಬಿಟ್ಟಂದಿನಿಂದ ನಡೆದ ಎಲ್ಲ ಅನರ್ಥಗಳಿಗೆ ನನ್ನ ಅವಿವೇಕ ಅಚಾತುರ್ಯಗಳು ಕಾರಣ. ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ.” ಎಂದು ಮಾಚಿದೇವರು ನುಡಿದರು. {{gap}}“ನಿಮ್ಮ ಅಪರಾಧವೇನು ?” ಎಂದು ಚೆನ್ನಬಸವಣ್ಣನವರು ಸಹಜವಾಗಿ ಪ್ರಶ್ನಿಸಿದರು. {{gap}}ಮಾಚಿದೇವರು ಹೇಳಿದರು : “ನಾನು ಶರಣದೀಕ್ಷೆ ಪಡೆದು ಅನುಭವ ಮಂಟಪವನ್ನು ಸೇರುವ ಮೊದಲು ಐಯಾವಳೆಯ ಐನೂರ್ವರು ಮಹಾಸಂಘದ ಕ್ರಿಯಾಸಮಿತಿಯ ಪ್ರಾಂತೀಯ ಅಧ್ಯಕ್ಷನಾಗಿದ್ದೆ. ಸಂಘದ ಆಜ್ಞೆ ಆದೇಶಗಳನ್ನು ಪ್ರಶ್ನಿಸದೆ, ಪರ್ಯಾಲೋಚಿಸದೆ, ಕಾರ್ಯಗತ ಮಾಡುವುದಾಗಿ ಆಗ ನಾನು ಮಾಡಿದ ಪ್ರತಿಜ್ಞೆಯಂತೆ ನಡೆಯುವುದು ಬದುಕಿರುವವರೆಗೆ ನನ್ನ ಆದ್ಯ ಕರ್ತವ್ಯ. ಈ ನಿಯಮಕ್ಕೆ ಅಧೀನವಾಗಿ ನಾನು ಜಂಗಮ ವೇಷಧಾರಿ ಬೊಮ್ಮರಸನಿಗೆ ಮಹಮನೆಯಲ್ಲಿ ಆಶ್ರಯ ದೊರಕುವಂತೆ ಮಾಡಿ, ಅವನು ಧರ್ಮೋಪದೇಶಿಯಾಗಿ ರಾಜಗೃಹವನ್ನು ಪ್ರವೇಶಿಸುವಂತೆ ಅವಕಾಶ ಕಲ್ಪಿಸಿದೆ. ಮಹಾಸಂಘದ ಸಹಾಯದಿಂದ ಮಧುವರಸಾದಿಗಳನ್ನು ಉದ್ಧರಿಸಲು ಪ್ರಯತ್ನಿಸಿದೆ. ಜಗದೇಕಮಲ್ಲ ಬೊಮ್ಮರಸರು ರಾಜಗೃಹದ ಬಂಧನದಿಂದ ಪಾರಾಗಲು ಬೇಕಾಗಿದ್ದ ದೀವಟಿಗೆಯವರ ಸಮವಸ್ತ್ರ ಜಮದಂಡಿಗಳನ್ನು ಒದಗಿಸಿದೆ. ಚಾಲುಕ್ಯ ಅರಸೊತ್ತಿಗೆಯ ಪುನಃಪ್ರತಿಷ್ಠೆಗಾಗಿ ನಡೆಯುತ್ತಿದ್ದ ರಾಜಕೀಯ ಒಳಸಂಚಿಗೆ ಸಹಾಯಕನಾದೆ. ಅದು ಬಿಜ್ಜಳನ ಕೊಲೆಯಲ್ಲಿ ಪರ್ಯವಸಾನವಾಗುವುದೆಂದು ನಾನು ಭಾವಿಸಿರಲಿಲ್ಲ. ಈ ನನ್ನ<noinclude></noinclude> 14tprur9rryh20arxhxagenoafiztt8 324070 324065 2026-06-02T11:30:09Z Shreelatha.Halemane 7642 /* Validated */ 324070 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೫೪|right=ಕ್ರಾಂತಿ ಕಲ್ಯಾಣ}} ಅಧಿಕೃತ ಮುಂದಾಳು. ನಿಮ್ಮಲ್ಲಿ ನನ್ನ ಬಿನ್ನಪವೊಂದಿದೆ,” ಎಂದರು. {{gap}}ಚೆನ್ನಬಸವಣ್ಣನವರು ಸಹಜ ವಿನಯದಿಂದ, “ವಯಸ್ಸಿನಂತೆ ನೀವು ಜ್ಞಾನದಲ್ಲಿಯೂ ನನಗಿಂತ ಹಿರಿಯರು, ಅಣ್ಣ. ನನ್ನಲ್ಲಿ ನಿಮ್ಮ ಬಿನ್ನಪವೇ ? ನಿಮ್ಮ ಕರುಣೆ ಆದರಗಳ ಫಲವಾಗಿ ನಾನು ಅಧ್ಯಕ್ಷನಾಗಿದ್ದೇನೆ,” ಎಂದರು. {{gap}}ಆದರೂ ವಿವೇಕ ತೋರಿಸುವ ಮಾರ್ಗದಲ್ಲಿ ನಡೆಯುವುದು ನನ್ನ ಕರ್ತವ್ಯ. ನನ್ನ ಬಿನ್ನಪವನ್ನು ಕೇಳಿ, ಅದರ ಪರಿಹಾರ ಮಾರ್ಗವನ್ನು ನೀವು ಸೂಚಿಸಬೇಕಾಗಿದೆ,” ಎಂದು ಮಾಚಿದೇವರು ಒತ್ತಾಯ ಪಡಿಸಿದರು. {{gap}}“ನಾನು ಅಧ್ಯಕ್ಷನೆಂಬುದನ್ನು ಮರೆತು, ನೆಚ್ಚಿನ ಗೆಳೆಯನಂತೆ ನೀವು ಹೇಳತಕ್ಕದ್ದನ್ನು ಹೇಳಬಹುದು, ಅಣ್ಣನವರೆ,” ಎಂದು ಕೊನೆಗೆ ನುಡಿದರು, ಚೆನ್ನಬಸವಣ್ಣನವರು. {{gap}}“ಶರಣರ ವಿಚಾರದಲ್ಲಿ ನಾನು ಒಂದು ಅಪರಾಧ ಮಾಡಿದ್ದೇನೆ. ನಾವು ಕಲ್ಯಾಣವನ್ನು ಬಿಟ್ಟಂದಿನಿಂದ ನಡೆದ ಎಲ್ಲ ಅನರ್ಥಗಳಿಗೆ ನನ್ನ ಅವಿವೇಕ ಅಚಾತುರ್ಯಗಳು ಕಾರಣ. ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ.” ಎಂದು ಮಾಚಿದೇವರು ನುಡಿದರು. {{gap}}“ನಿಮ್ಮ ಅಪರಾಧವೇನು ?” ಎಂದು ಚೆನ್ನಬಸವಣ್ಣನವರು ಸಹಜವಾಗಿ ಪ್ರಶ್ನಿಸಿದರು. {{gap}}ಮಾಚಿದೇವರು ಹೇಳಿದರು : “ನಾನು ಶರಣದೀಕ್ಷೆ ಪಡೆದು ಅನುಭವ ಮಂಟಪವನ್ನು ಸೇರುವ ಮೊದಲು ಐಯಾವಳೆಯ ಐನೂರ್ವರು ಮಹಾಸಂಘದ ಕ್ರಿಯಾಸಮಿತಿಯ ಪ್ರಾಂತೀಯ ಅಧ್ಯಕ್ಷನಾಗಿದ್ದೆ. ಸಂಘದ ಆಜ್ಞೆ ಆದೇಶಗಳನ್ನು ಪ್ರಶ್ನಿಸದೆ, ಪರ್ಯಾಲೋಚಿಸದೆ, ಕಾರ್ಯಗತ ಮಾಡುವುದಾಗಿ ಆಗ ನಾನು ಮಾಡಿದ ಪ್ರತಿಜ್ಞೆಯಂತೆ ನಡೆಯುವುದು ಬದುಕಿರುವವರೆಗೆ ನನ್ನ ಆದ್ಯ ಕರ್ತವ್ಯ. ಈ ನಿಯಮಕ್ಕೆ ಅಧೀನವಾಗಿ ನಾನು ಜಂಗಮ ವೇಷಧಾರಿ ಬೊಮ್ಮರಸನಿಗೆ ಮಹಮನೆಯಲ್ಲಿ ಆಶ್ರಯ ದೊರಕುವಂತೆ ಮಾಡಿ, ಅವನು ಧರ್ಮೋಪದೇಶಿಯಾಗಿ ರಾಜಗೃಹವನ್ನು ಪ್ರವೇಶಿಸುವಂತೆ ಅವಕಾಶ ಕಲ್ಪಿಸಿದೆ. ಮಹಾಸಂಘದ ಸಹಾಯದಿಂದ ಮಧುವರಸಾದಿಗಳನ್ನು ಉದ್ಧರಿಸಲು ಪ್ರಯತ್ನಿಸಿದೆ. ಜಗದೇಕಮಲ್ಲ ಬೊಮ್ಮರಸರು ರಾಜಗೃಹದ ಬಂಧನದಿಂದ ಪಾರಾಗಲು ಬೇಕಾಗಿದ್ದ ದೀವಟಿಗೆಯವರ ಸಮವಸ್ತ್ರ ಜಮದಂಡಿಗಳನ್ನು ಒದಗಿಸಿದೆ. ಚಾಲುಕ್ಯ ಅರಸೊತ್ತಿಗೆಯ ಪುನಃಪ್ರತಿಷ್ಠೆಗಾಗಿ ನಡೆಯುತ್ತಿದ್ದ ರಾಜಕೀಯ ಒಳಸಂಚಿಗೆ ಸಹಾಯಕನಾದೆ. ಅದು ಬಿಜ್ಜಳನ ಕೊಲೆಯಲ್ಲಿ ಪರ್ಯವಸಾನವಾಗುವುದೆಂದು ನಾನು ಭಾವಿಸಿರಲಿಲ್ಲ. ಈ ನನ್ನ<noinclude></noinclude> s96z19tmsvv2nnnzn0un8vmc5xa182t ಪುಟ:ಕ್ರಾಂತಿ ಕಲ್ಯಾಣ.pdf/೪೬೬ 104 86424 324064 203749 2026-06-02T11:16:55Z Shreesha Sharma 7840 /* Proofread */ 324064 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೫೩}} ಬರುತ್ತಿದ್ದಾರೆ, ಅಣ್ಣನವರೆ. ಅವನ ಮಂಚೂಣಿ ದಳಗಳು ಇಲ್ಲಿಂದ ಸುಮಾರು ಎರಡು ಹರಿದಾರಿ ದೂರದಲ್ಲಿವೆ. ಇಂದು ಸಂಜೆಗೆ ಅವು ತಂಗಡಿಯ ಗಡಿ ಮುಟ್ಟುವುವು.” {{gap}}“ಸೈನ್ಯ ಎಷ್ಟಿದೆ ಎಂದು ತಿಳಿದಿದೆಯೆ ?” {{gap}}ಕೆಲವು ಕ್ಷಣಗಳು ಯೋಚಿಸುತ್ತಿದ್ದ ಮಾಚಿದೇವರು ಕೇಳಿದರು. {{gap}}“ಹತ್ತು ಸಾವಿರ ಎಂದು ಜನರು ಹೇಳುತ್ತಾರೆ. ನನಗೆ ತಿಳಿದಮಟ್ಟಿಗೆ ಸುಮಾರು ಎರಡು ಸಾವಿರ ಪದಾತಿ, ಐನೂರು ಅಶ್ವದಳ, ಇನ್ನೂರು ರಥಗಳು.” {{gap}}ಮಾಚಿದೇವರ ಹೃದಯ ಕಂಪಿಸಿತು. ಇದರಲ್ಲಿ ನಾಲ್ಕನೆಯ ಒಂದು ಪಾಲು ಸೈನ್ಯವಿದ್ದರೂ ನಮ್ಮಗಣಾಚಾರಿ ಯೋಧದಳಗಳು ಧೂಳೀಪಟವಾಗುವವು. ಕಲಿ ದೇವರ ದೇವನೇ ನಮ್ಮನ್ನು ರಕ್ಷಿಸಬೇಕು. ಪ್ರವಾಹ ಇಳಿಯಲಿ, ಇಳಿಯದಿರಲಿ ನದಿಯನ್ನು ದಾಟಿ ಆಚಿನ ದಡ ಸೇರುವುದೊಂದೇ ನಾವು ಉಳಿಯುವ ಉಪಾಯ.” {{gap}}ಎಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡು, ತಮ್ಮ ಆಜ್ಞೆಗಾಗಿ ಕಾದಿರುವಂತೆ ಅಂಬಿಗರ ನಾಯಕನಿಗೆ ಹೇಳಿ, ಕಲ್ಯಾಣದಿಂದ ಬಂದ ಶರಣನನ್ನು ಕರೆದುಕೊಂಡು ಚೆನ್ನಬಸವಣ್ಣನವರ ಬಳಿಗೆ ಹೋದರು. {{gap}}ಚೆನ್ನಬಸವಣ್ಣನವರು ತಮ್ಮ ಪ್ರಾತಃಕೃತ್ಯಗಳನ್ನು ಮುಗಿಸಿಕೊಂಡು ಮಾಚಿ ದೇವರಿಗಾಗಿ ಕಾಯುತ್ತಿದ್ದರು. {{gap}}“ನಮ್ಮ ಅಗ್ನಿಪರೀಕ್ಷೆ ಸನ್ನಿಹಿತವಾಗಿದೆ, ಅಣ್ಣನವರೆ,” ಎಂದು ಪ್ರಾರಂಭಿಸಿ ಮಾಚಿದೇವರು ಕಲ್ಯಾಣದಿಂದ ಬಂದ ಸುದ್ದಿಯನ್ನು ವಿವರಿಸಿದರು. {{gap}}“ಹಾಗಾದರೆ ಈ ವಿಷಮ ಸಂಕಟದಿಂದ ನಾವು ಉದ್ದಾರವಾಗುವುದು ಹೇಗೆ?” ಎಂದು ಚೆನ್ನಬಸವಣ್ಣನವರು ನುಡಿದರು. {{gap}}“ಕಲಿದೇವರ ದೇವನು ದಾರಿ ತೋರಿಸುವನೆಂದು ನನಗೆ ವಿಶ್ವಾಸವಿದೆ. ನಾವು ಕೂಡಲೆ ಶಿಬಿರವನ್ನು ಬಿಡಬೇಕಾಗಬಹುದು. ಗಣಾಚಾರಿ ದಳದ ನಾಯಕನಿಗೆ ಹೇಳಿ ಕಳುಹಿಸಿದ್ದೇನೆ. ಅವನು ಬಂದ ಮೇಲೆ ಮುಂದಿನ ಕಾರ್ಯವಿಧಾನವನ್ನು ನಿರ್ಧರಿಸಬೇಕು,” ಎಂದರು ಮಾಚಿದೇವರು. {{gap}}ಯಾತ್ರಾದಳದ ಪ್ರವಾಸ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮಾಚಿದೇವರು ವಹಿಸಿಕೊಂಡಿದ್ದರಿಂದ ಚೆನ್ನಬಸವಣ್ಣನವರು ಹೆಚ್ಚಿನ ವಿವರಗಳನ್ನು ಕೇಳಲು ಹೋಗಲಿಲ್ಲ. {{gap}}ತುಸು ಹೊತ್ತಿನ ಮೇಲೆ ಮಾಚಿದೇವರು ಬದಲಿಸಿದ ಕಂಠದಿಂದ, “ಸಕಲೇಶ ಮಾದರಸರ ಪರೋಕ್ಷದಲ್ಲಿ ನೀವು ಅನುಭವ ಮಂಟಪದ ಅಧ್ಯಕ್ಷರು : ಶರಣರ<noinclude></noinclude> p40w98k46js7rz1olf9ql5076a3vg99 324069 324064 2026-06-02T11:29:55Z Shreelatha.Halemane 7642 /* Validated */ 324069 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೫೩}} ಬರುತ್ತಿದ್ದಾರೆ, ಅಣ್ಣನವರೆ. ಅವನ ಮಂಚೂಣಿ ದಳಗಳು ಇಲ್ಲಿಂದ ಸುಮಾರು ಎರಡು ಹರಿದಾರಿ ದೂರದಲ್ಲಿವೆ. ಇಂದು ಸಂಜೆಗೆ ಅವು ತಂಗಡಿಯ ಗಡಿ ಮುಟ್ಟುವುವು.” {{gap}}“ಸೈನ್ಯ ಎಷ್ಟಿದೆ ಎಂದು ತಿಳಿದಿದೆಯೆ ?” {{gap}}ಕೆಲವು ಕ್ಷಣಗಳು ಯೋಚಿಸುತ್ತಿದ್ದ ಮಾಚಿದೇವರು ಕೇಳಿದರು. {{gap}}“ಹತ್ತು ಸಾವಿರ ಎಂದು ಜನರು ಹೇಳುತ್ತಾರೆ. ನನಗೆ ತಿಳಿದಮಟ್ಟಿಗೆ ಸುಮಾರು ಎರಡು ಸಾವಿರ ಪದಾತಿ, ಐನೂರು ಅಶ್ವದಳ, ಇನ್ನೂರು ರಥಗಳು.” {{gap}}ಮಾಚಿದೇವರ ಹೃದಯ ಕಂಪಿಸಿತು. ಇದರಲ್ಲಿ ನಾಲ್ಕನೆಯ ಒಂದು ಪಾಲು ಸೈನ್ಯವಿದ್ದರೂ ನಮ್ಮಗಣಾಚಾರಿ ಯೋಧದಳಗಳು ಧೂಳೀಪಟವಾಗುವವು. ಕಲಿ ದೇವರ ದೇವನೇ ನಮ್ಮನ್ನು ರಕ್ಷಿಸಬೇಕು. ಪ್ರವಾಹ ಇಳಿಯಲಿ, ಇಳಿಯದಿರಲಿ ನದಿಯನ್ನು ದಾಟಿ ಆಚಿನ ದಡ ಸೇರುವುದೊಂದೇ ನಾವು ಉಳಿಯುವ ಉಪಾಯ.” {{gap}}ಎಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡು, ತಮ್ಮ ಆಜ್ಞೆಗಾಗಿ ಕಾದಿರುವಂತೆ ಅಂಬಿಗರ ನಾಯಕನಿಗೆ ಹೇಳಿ, ಕಲ್ಯಾಣದಿಂದ ಬಂದ ಶರಣನನ್ನು ಕರೆದುಕೊಂಡು ಚೆನ್ನಬಸವಣ್ಣನವರ ಬಳಿಗೆ ಹೋದರು. {{gap}}ಚೆನ್ನಬಸವಣ್ಣನವರು ತಮ್ಮ ಪ್ರಾತಃಕೃತ್ಯಗಳನ್ನು ಮುಗಿಸಿಕೊಂಡು ಮಾಚಿ ದೇವರಿಗಾಗಿ ಕಾಯುತ್ತಿದ್ದರು. {{gap}}“ನಮ್ಮ ಅಗ್ನಿಪರೀಕ್ಷೆ ಸನ್ನಿಹಿತವಾಗಿದೆ, ಅಣ್ಣನವರೆ,” ಎಂದು ಪ್ರಾರಂಭಿಸಿ ಮಾಚಿದೇವರು ಕಲ್ಯಾಣದಿಂದ ಬಂದ ಸುದ್ದಿಯನ್ನು ವಿವರಿಸಿದರು. {{gap}}“ಹಾಗಾದರೆ ಈ ವಿಷಮ ಸಂಕಟದಿಂದ ನಾವು ಉದ್ದಾರವಾಗುವುದು ಹೇಗೆ?” ಎಂದು ಚೆನ್ನಬಸವಣ್ಣನವರು ನುಡಿದರು. {{gap}}“ಕಲಿದೇವರ ದೇವನು ದಾರಿ ತೋರಿಸುವನೆಂದು ನನಗೆ ವಿಶ್ವಾಸವಿದೆ. ನಾವು ಕೂಡಲೆ ಶಿಬಿರವನ್ನು ಬಿಡಬೇಕಾಗಬಹುದು. ಗಣಾಚಾರಿ ದಳದ ನಾಯಕನಿಗೆ ಹೇಳಿ ಕಳುಹಿಸಿದ್ದೇನೆ. ಅವನು ಬಂದ ಮೇಲೆ ಮುಂದಿನ ಕಾರ್ಯವಿಧಾನವನ್ನು ನಿರ್ಧರಿಸಬೇಕು,” ಎಂದರು ಮಾಚಿದೇವರು. {{gap}}ಯಾತ್ರಾದಳದ ಪ್ರವಾಸ ಹಾಗೂ ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮಾಚಿದೇವರು ವಹಿಸಿಕೊಂಡಿದ್ದರಿಂದ ಚೆನ್ನಬಸವಣ್ಣನವರು ಹೆಚ್ಚಿನ ವಿವರಗಳನ್ನು ಕೇಳಲು ಹೋಗಲಿಲ್ಲ. {{gap}}ತುಸು ಹೊತ್ತಿನ ಮೇಲೆ ಮಾಚಿದೇವರು ಬದಲಿಸಿದ ಕಂಠದಿಂದ, “ಸಕಲೇಶ ಮಾದರಸರ ಪರೋಕ್ಷದಲ್ಲಿ ನೀವು ಅನುಭವ ಮಂಟಪದ ಅಧ್ಯಕ್ಷರು : ಶರಣರ<noinclude></noinclude> 1eybo9rl4cft5fxdn9qn1qa40u40vwv ಪುಟ:ಅರಮನೆ.pdf/೩೭೫ 104 86769 323970 323840 2026-06-02T04:20:59Z Hariprasad Shetty10 7490 323970 proofread-page text/x-wiki <noinclude><pagequality level="3" user="Hariprasad Shetty10" />{{rh|left=೩೪೪|center=|right=ಅರಮನೆ}}</noinclude>ನೀರು ಸುರುವುತಲೂ, ಸೀಗೇಕಾಯಿ ಪುಡಿಯಿಂದ ಅದರ ಮಯ್ಯನ್ನು ಗಸಗಸ ವುಜ್ಜುತಲೂ, ಮಜ್ಜಣವನ್ನು ತಾಸುಗಟ್ಟಲೆ ಮಾಡಿಸಿದರು. ತರುವಾಯ ರೇಶಿಮೆ ಅರಿವೆಯಿಂದ ಮಯ್ಯ ತಂಗಲನ್ನು ವರೆಸಿದರು. ಹೊಚ್ಚ ಹೊಸ ಬಟ್ಟೆಬರೆ ತೊಡಿಸಿದರು. ಮುಖಕ ಅರುಷಣ ಕೊಂಬಿನ ಲೇಹ್ಯವ ಸೂಸಿದರು.. ಲೋಬಾನದ ಹೊಗೆ ಆಡಿಸಿದರು. ವುತ್ತು, ಕರಬೂರ, ದ್ರಾಕ್ಷಿ, ಗೋಡಂಬಿ, ಬಾದಾಮು ತಿನ್ನಿಸಿದರು. ಕೆನೆವಾಲು, ನೊರೆವಾಲು ಕುಡಿಸಿದರು. ಜೋಂಪಿನಿಂದ ತೂಕಡಿಸಲಾರಂಭಿಸಿದ ವಸ್ತಿಯನ್ನು ತೂಗು ತೊಟ್ಟಿಲೊಳಗೆ ಮಲಗಿಸಿದರು.. “ಮಲಗವ್ವಾ ತಾಯಿ ಮಲಗವ್ವಾ ಮಾಮಾಯಿ” ಯಂದು ಪದ ಹಾಡುತ ತೂಗಿದರು.. ಹಂಗ ವಸ್ತಿಯು ಗಪ್ಪಂತ ಕಣ್ಣುಮುಚ್ಚಿ ಮೊಂಕಾರ ಸದ್ರುಸ ಗೊರಕೆಯನ್ನು.... <br /> {{gap}}ಹ್ಹಾ.. ಯಿನ್ನೇನು.. ತಾಯಿ ಸಾಂಬವಿ ನಿದ್ದೆಮಾಡುತಾಳ.. ಆಕೆ ಯಚ್ಚರಾಗುವುದರೊಳ ಗಾಗಿ ಹಿಡಿಯಲು ಬಂದ ಅಣ್ಣಂಗಳಿಗೆ ಅಜೇಯನಾಗಿ ವುಳಕೊಂಡಿರುವ ಮಾಬಲಿಯನ್ನು ಹಿಡಿಯಬೇಕದೆ, ಹಿಡಿದು ಕಟ್ಟಬೇಕದೆ! ಕಟ್ಟಿ ಸೊಕ್ಕಡಗಿಸಬೇಕದೆ.. ಅದನೆಂಗ ಹಿಡಿಯೋದು? ಯಂಬ ಪ್ರಶ್ನೆಯೊಂದೆ ನೆಲಮುಗುಲಿಗೇಕಾಗಿ ವುಳಕೊಂತು. ಸದರಿ ಸಮಸ್ಯೆಯನ್ನು ಬಗೆಹರಿಸಲು ನೆರೆತಿದ್ದ ಸಭೆಯ ಯಾರೊಬ್ಬರ ಬಾಯಿಯಿಂದ ವಂದೇ ವಂದು ಸರಿಯಾದ ಸಮಾಧಾನ ವುದುರಲಿಲ್ಲ.. ಯೇಟಿ ಭರಚಿ ಹಿಡಕೊಂಡು ಅದರ ಮ್ಯಾಲ ಯೇರಿ ಹೋಗುವಂತಿಲ್ಲ.. ಕಾಳಗ ಮಾಡುವಂತಿಲ್ಲ. ಅದರ ಸರೀರದಿಂದ ಮದೇ ವಂದು ಹನಿಯನ್ನು ನೆಲಕ್ಕ ವುದುರಿಸುವಂತಿಲ್ಲ. ಯದು ವುಪಾಯದಿಂದ ಸಾಧಿಸಬೇಕಿರುವ ಗುರುತರ ಕಾರವು.. ಯೇನು ಮಾಡುವುದು? ಹೆಂಗ ಮಾಡುವುದು? ದಾರಿ ಹುಡುಕಿರಪ್ಪಾ.. ದಾರಿ ಹುಡುಕಿರಿ.. ಯೀ ಪ್ರಕಾರವಾಗಿ ಕೇಳಿಕೊಂಡ ಹಿರೀಕರಿಗೆ ಗೊತ್ತಿಲ್ಲದ್ದೇನಯ್ಯ?<br /> {{gap}}ಹುಲಿ ಹಿಡಕೊಂಡು ಬಿಂದರ ಯೇಳುಪಟ್ಟೆ ಹುಲಿಯನ್ನು ರೆಪ್ಪೆ ಮುಚ್ಚಿ ತೆರೆಯುವು ದರೊಳಗ ತಂದು ಮಲಗಿಸತೇವಃ ಸಿಮ್ರಾನ ಹಿಡಕೊಂಡು ಬರೆಂದರ ಮಯ್ಯ ಲಟಲಟ ಮುರಿಯುವುದರೊಳಗ ಹಿಡತಂದು ಕೆಡವತೇವss ಆದರs ಆ ಮಾಬಲಿ ಮಾಬಲನೇ ಸಯ್ಯ... ಯಂದು ಜವಾಬು ನೀಡಿದರು ಕಿರೀಕರು...<br /> {{gap}}ಅದರ ಹೊರ ರೂಪ ಕೋಣದ್ದೇನೋ ಸರಿ. ಆದರ ಅದರೊಳಗ<noinclude></noinclude> h94jfqkynf14kbkyhvahbn1n0t4swi5 ಪುಟ:ಕಮ್ಯೂನಿಸಂ.djvu/೧೦೨ 104 88819 323932 323826 2026-06-02T02:08:45Z Shreesha Sharma 7840 /* Validated */ 323932 proofread-page text/x-wiki <noinclude><pagequality level="4" user="Shreesha Sharma" />{{rh|center=ವೈಜ್ಞಾನಿಕ ಸಮಾಜವಾದ|left=೯೨|right=}}</noinclude>ಕಾರ್ಮಿಕವರ್ಗಕ್ಕೆ ಅವರು ಬಗೆದ ದ್ರೋಹವನ್ನೂ ಮತ್ತು ಅವರುಗಳು ಪ್ರಸಾರಮಾಡಿದ ತತ್ತ್ವವನ್ನೂ ಲೆನಿನ್ ಕಟುವಾಗಿ ಮೂದಲಿಸಿದನು. ಸಾಮ್ರಾಜ್ಯವಾದಿ ಯುದ್ಧವನ್ನು (Imperialist war) ಕಾರ್ಮಿಕರು ಬಹಿಷ್ಕರಿಸುವಂತೆಯೂ ಯುದ್ಧಕ್ಕೆ ಆಸರೆಯಾಗಿರುವ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ನಾಶಪಡಿಸುವಂತೆಯೂ ಮತ್ತು ಬಂಡವಾಳವರ್ಗದ ಮೇಲೆ ಯುದ್ಧವನ್ನು ಘೋಷಿಸುವಂತೆಯೂ ಕರೆಯಿತ್ತನು. ಆತನ ವಾಣಿ ಯುದ್ಧಮಯ ವಾತಾವರಣದಲ್ಲಿ ಬಂಡವಾಳವರ್ಗವನ್ನು ಸಿಡಿಲಿನಂತೆ ತಟ್ಟಿತು. ಸುಧಾರಕರು ಕಾರ್ಮಿಕವರ್ಗವನ್ನು ಎಳೆದೊಯ್ದು ತಪ್ಪುಹಾದಿ ಬಯಲಾಯಿತು. ಲೆನಿನ್ ತನ್ನ ಕರೆಯನ್ನು ಕಾರ್ಯಗತಮಾಡಲು 1919 ರಲ್ಲಿ ಹೊಸ ಕಾರ್ಮಿಕವರ್ಗದ ರಂಗವೊಂದನ್ನು ರಚಿಸಿದನು. ಈ ರಂಗ ಸಮಾಜವಾದದ ಇತಿಹಾಸದಲ್ಲಿ “ಮೂರನೇ ಅಂತರರಾಷ್ಟ್ರೀಯ” (Third International) ಎಂದು ಹೆಸರು ಪಡೆದಿದೆ. ಲೆನಿನ್ ಮಾರ್ಕ್ಸ್-ಏಂಗೆಲ್ಸರ ತತ್ತ್ವ ಸಮುಚ್ಚಯದ ಆಧಾರದ ಮೇಲೆ ಹೊಸ ಸಿದ್ಧಾಂತವೊಂದನ್ನು ರಚಿಸಿದನು. ಸಮಾಜವಾದೀ ಕ್ರಾಂತಿಗೆ ಕರೆಯಿತ್ತನು. {{gap}}ಲೆನಿನ್ನನ ನೂತನ ಸಿದ್ದಾಂತ ಸಮಾಜವಾದದ ಮುನ್ನಡೆಯಲ್ಲಿ ಅತಿಪ್ರಾಮುಖ್ಯವಾದುದು. ಸುಧಾರಕರು ಮಾರ್ಕ್ಸ್‌ವಾದದಲ್ಲಿರುವ ಚೇತನಾ ಶಕ್ತಿ, ಮಾರ್ಕ್ಸ್-ಏಂಗೆಲ್ಸರ ವಿಮರ್ಶಾಕ್ರಮ, ಆ ವಾದದ ಚಾರಿತ್ರಿಕ ಸನ್ನಿವೇಶ ಮತ್ತು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉಂಟಾಗಿರುವ ಬದಲಾವಣೆಗಳು ಇವುಗಳನ್ನು ತಿಳಿಯಲು ಅಸಮರ್ಥರಾಗಿ ದಾರಿ ತಪ್ಪಿದವರೆಂದನು. ಮಾರ್ಕ್ಸ್-ಏಂಗೆಲ್ಸರು ತಮ್ಮ ವೈಜ್ಞಾನಿಕ ಸಮಾಜವಾದದ ರಚನೆಗಾಗಿ 19 ನೇ ಶತಮಾನದಲ್ಲಿ ವಿಮರ್ಶೆಮಾಡಿದ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಪುನಃ ವಿಮರ್ಶೆಗೊಳಪಡಿಸಿ ಅದರಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಲೆನಿನ್ ನಿರೂಪಿಸಿದನು. ಈಗ 20 ನೇ ಶತಮಾನದಲ್ಲಿ ಬಂಡವಾಳ ಆರ್ಥಿಕವ್ಯವಸ್ಥೆ ಸಾಮ್ರಾಜ್ಯವಾದೀ ರೂಪವನ್ನು (Imperialism) ಹೊಂದಿರುವುದಾಗಿ ವಾದಿಸಿದನು. ಈ ಅವಸ್ಥೆಯಲ್ಲಿ ಬಂಡವಾಳ ಆರ್ಥಿಕ ವ್ಯವಸ್ಥೆ ಮರಣಾವಸ್ಥೆಯಲ್ಲಿದ್ದು (Moribund) ಅದರಿಂದ ಹೊಮ್ಮು<noinclude></noinclude> sqzqvpocvxgplpsvujbdmhpf6yjglst ಪುಟ:ಕಮ್ಯೂನಿಸಂ.djvu/೧೦೩ 104 88820 323929 210989 2026-06-01T17:52:41Z Vikashegde 1258 /* Proofread */ 323929 proofread-page text/x-wiki <noinclude><pagequality level="3" user="Vikashegde" /></noinclude>{{Css image crop |Image = ಕಮ್ಯೂನಿಸಂ.djvu |Page = 103 |bSize = {{#expr:372*2}} |cWidth = {{#expr:303*2}} |cHeight = {{#expr:405*2}} |oTop = {{#expr:84*2}} |oLeft = {{#expr:35*2}} |Location = center |Description = }} {{center|ಲೆನಿನ್}}<noinclude></noinclude> sxyeczdjugvfotynd3q6xe9t1uy74yz ಪುಟ:ಕಮ್ಯೂನಿಸಂ.djvu/೧೦೫ 104 89417 323922 224251 2026-06-01T17:16:21Z Vikashegde 1258 /* Proofread */ 323922 proofread-page text/x-wiki <noinclude><pagequality level="3" user="Vikashegde" />{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=೯೩}}</noinclude>ತಿರುವ ವಿರಸಗಳು ಮತ್ತಷ್ಟು ವಿಸ್ತರಣೆ ಮತ್ತು ಗಾತ್ರವನ್ನು ತಾಳಿ ಪ್ರಪಂಚವನ್ನೆಲ್ಲಾ ಅಡ್ಡ ಬಳಸಿವೆ ಎಂದನು.<sup>1</sup> ಸಾಮ್ರಾಜ್ಯವಾದೀ ಬಂಡವಾಳ ಆರ್ಥಿಕ ವ್ಯವಸ್ಥೆ ಪೈಪೋಟಿಯಿಂದ ಪ್ರಪಂಚದ ಮಾರುಕಟ್ಟೆಯನ್ನೆಲ್ಲಾ ಆಕ್ರಮಿಸಿದೆ ಎಂದೂ, ಸ್ಥಳ ಸಂಕೋಚವಾಗಿ ಲಾಭಕ್ಕೆ ಧಕ್ಕೆ ಬಂದಿದೆ ಎಂದೂ, ಹಿಂಗುತ್ತಿರುವ ಲಾಭದ ಅಂಚನ್ನು ತಡೆಗಟ್ಟಲು ಮತ್ತಷ್ಟು ವಸಾಹತು ಮತ್ತು ಮಾರುಕಟ್ಟೆಗಳ ಆಕ್ರಮಣಕ್ಕಾಗಿ ಬಂಡವಾಳಶಾಹಿ ರಾಷ್ಟ್ರಗಳು ಯತ್ನಿಸಿವೆ ಎಂದೂ, ಪೈಪೋಟಿಯ ವ್ಯಾಪಾರ ವೈಷಮ್ಯವನ್ನು ತಂದಿದೆ ಎಂದೂ, ಯುದ್ಧ ಅನಿವಾರ್ಯವಾಗಿದೆ ಎಂದೂ, ಒಂದನೇ ಮಹಾಘೋರ ಯುದ್ಧ (1914-18) ಬಂಡವಾಳ ರಾಷ್ಟ್ರಗಳಲ್ಲೇ ಉಂಟಾಗಿರುವ ಸಾಮ್ರಾಜ್ಯವಾದೀ ಯುದ್ಧವಾಗಿದೆ ಎಂದೂ ಲೆನಿನ್ ತಿಳಿಸಿದನು. {{gap}}ಸಾಮ್ರಾಜ್ಯವಾದೀ ಬಂಡವಾಳ ಆರ್ಥಿಕ ವ್ಯವಸ್ಥೆಯ ಕಾಲದ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ಲೆನಿನ್ ವಿವರಿಸಿ ಕಾರ್ಮಿಕವರ್ಗದ ಕರ್ತವ್ಯದ ಬಗ್ಗೆ ವಿವರಣೆಯಿತ್ತನು. ಸಾಮ್ರಾಜ್ಯವಾದೀ ರೂಪ ಬಂಡವಾಳಶಾಹಿ ವ್ಯವಸ್ಥೆಯ ಅತ್ಯಂತ ಕ್ರೂರ ರೂಪ, ಶೋಷಣೆಯ ಸರಮಾವಧಿ. ವಂಚನೆ, ಮೋಸ, ಮತ್ತು ಯುದ್ಧ ಸಾಮ್ರಾಜ್ಯವಾದೀ ವ್ಯವಸ್ಥೆಯ ಅಸ್ತ್ರಗಳು. ಇವು ಕಾರ್ಮಿಕ ವರ್ಗವನ್ನು ಮತ್ತಷ್ಟು ಆರ್ಥಿಕ ಅಭದ್ರತೆಯಲ್ಲಿ, ನಿರುದ್ಯೋಗದಲ್ಲಿ ಮತ್ತು ಶೋಷಣೆಗೆ ಸಿಲುಕಿಸುತ್ತವೆ. ಸಾಮ್ರಾಜ್ಯವಾದಿ ಬಂಡವಾಳಶಾಹಿ ವ್ಯವಸ್ಥೆ ವಿರಸಗಳಿಂದ ಪಾರಾಗಲು ಸದಾ ಯುದ್ದದಲ್ಲಿ ನಿರತವಾಗಿರುತ್ತವೆ, ಇಲ್ಲವೇ ಪ್ರಪಂಚವನ್ನು ಯುದ್ಧದ ಕಾರ್ಮೋಡಗಳಿಂದ ಹೆದರಿಸುತ್ತಿರುತದೆ, ಜನಸಮುದಾಯವನ್ನು ಸದಾ ಯದ್ಧದ ವಾತಾವರಣದಲ್ಲಿಟ್ಟು ಅದು ತನ್ನ ಕಷ್ಟ ನಷ್ಟಗಳನ್ನು ಕುರಿತು ಯೋಚಿಸಲೂ ಸಹ ಸಮಯ ಸಿಗದ ಹಾಗೆ ಮಾಡುತ್ತಿರುತ್ತದೆ. ಅಲ್ಲದೆ, ಜನಸ್ತೋಮದಲ್ಲಿ ನಿರುದ್ಯೋಗವನ್ನು ತಪ್ಪಿಸಲು ಬಂಡವಾಳಶಾಹಿ ವ್ಯವಸ್ಥೆಗೆ ಯುದ್ಧವೇ ಹೆದ್ದಾರಿಯಾಗಿದೆ. ಆದುದೆರಿಂದ ಕಾರ್ಮಿಕರು ಜಾಗೃತಿಗೊಂಡು, ಸಾಮ್ರಾಜ್ಯವಾದೀ ಸರ್ಕಾರ {{rule}} <small>(1) ಮಾರ್ಕ್ಸ್- ಏಂಗೆಲ್ಸರೂ ಸಹ ಬಂಡವಾಳ ಆರ್ಥಿಕ ವ್ಯವಸ್ಥೆಯ ಚಲನೆಯ ಬಗ್ಗೆ ಇದೇ ತೀರ್ಮಾನಕ್ಕೆ ಬಂದಿದ್ದರು. ಆದರೆ ಅವರು ತಮ್ಮ ವಿಮರ್ಶೆಯನ್ನು ಪ್ರಕಟಿಸಿದಾಗ ಈ ರೂಪ ವ್ಯಕ್ತವಾಗಿರಲಿಲ್ಲ.</small><noinclude></noinclude> cqnlby365j3lfyhkkfl27j01aeueftm 323933 323922 2026-06-02T02:12:43Z Shreesha Sharma 7840 /* Validated */ 323933 proofread-page text/x-wiki <noinclude><pagequality level="4" user="Shreesha Sharma" />{{rh|center=ಕಾರ್ಯರಂಗದಲ್ಲಿ ಮಾರ್ಕ್ಸ್‌ವಾದ|left=|right=೯೩}}</noinclude>{{rh|left=|center=ಕಾರ್ಯರಂಗದಲ್ಲಿ ಮಾರ್ಕ್ಸ್ ವಾದ|right=೯೩}} ತ್ತಿರುವ ವಿರಸಗಳು ಮತ್ತಷ್ಟು ವಿಸ್ತರಣೆ ಮತ್ತು ಗಾತ್ರವನ್ನು ತಾಳಿ ಪ್ರಪಂಚವನ್ನೆಲ್ಲಾ ಅಡ್ಡ ಬಳಸಿವೆ ಎಂದನು.<sup>1</sup> ಸಾಮ್ರಾಜ್ಯವಾದೀ ಬಂಡವಾಳ ಆರ್ಥಿಕ ವ್ಯವಸ್ಥೆ ಪೈಪೋಟಿಯಿಂದ ಪ್ರಪಂಚದ ಮಾರುಕಟ್ಟೆಯನ್ನೆಲ್ಲಾ ಆಕ್ರಮಿಸಿದೆ ಎಂದೂ, ಸ್ಥಳ ಸಂಕೋಚವಾಗಿ ಲಾಭಕ್ಕೆ ಧಕ್ಕೆ ಬಂದಿದೆ ಎಂದೂ, ಹಿಂಗುತ್ತಿರುವ ಲಾಭದ ಅಂಚನ್ನು ತಡೆಗಟ್ಟಲು ಮತ್ತಷ್ಟು ವಸಾಹತು ಮತ್ತು ಮಾರುಕಟ್ಟೆಗಳ ಆಕ್ರಮಣಕ್ಕಾಗಿ ಬಂಡವಾಳಶಾಹಿ ರಾಷ್ಟ್ರಗಳು ಯತ್ನಿಸಿವೆ ಎಂದೂ, ಪೈಪೋಟಿಯ ವ್ಯಾಪಾರ ವೈಷಮ್ಯವನ್ನು ತಂದಿದೆ ಎಂದೂ, ಯುದ್ಧ ಅನಿವಾರ್ಯವಾಗಿದೆ ಎಂದೂ, ಒಂದನೇ ಮಹಾಘೋರ ಯುದ್ಧ (1914-18) ಬಂಡವಾಳ ರಾಷ್ಟ್ರಗಳಲ್ಲೇ ಉಂಟಾಗಿರುವ ಸಾಮ್ರಾಜ್ಯವಾದೀ ಯುದ್ಧವಾಗಿದೆ ಎಂದೂ ಲೆನಿನ್ ತಿಳಿಸಿದನು. {{gap}}ಸಾಮ್ರಾಜ್ಯವಾದೀ ಬಂಡವಾಳ ಆರ್ಥಿಕ ವ್ಯವಸ್ಥೆಯ ಕಾಲದ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ಲೆನಿನ್ ವಿವರಿಸಿ ಕಾರ್ಮಿಕವರ್ಗದ ಕರ್ತವ್ಯದ ಬಗ್ಗೆ ವಿವರಣೆಯಿತ್ತನು. ಸಾಮ್ರಾಜ್ಯವಾದೀ ರೂಪ ಬಂಡವಾಳಶಾಹಿ ವ್ಯವಸ್ಥೆಯ ಅತ್ಯಂತ ಕ್ರೂರ ರೂಪ, ಶೋಷಣೆಯ ಪರಮಾವಧಿ. ವಂಚನೆ, ಮೋಸ, ಮತ್ತು ಯುದ್ಧ ಸಾಮ್ರಾಜ್ಯವಾದೀ ವ್ಯವಸ್ಥೆಯ ಅಸ್ತ್ರಗಳು. ಇವು ಕಾರ್ಮಿಕ ವರ್ಗವನ್ನು ಮತ್ತಷ್ಟು ಆರ್ಥಿಕ ಅಭದ್ರತೆಯಲ್ಲಿ, ನಿರುದ್ಯೋಗದಲ್ಲಿ ಮತ್ತು ಶೋಷಣೆಗೆ ಸಿಲುಕಿಸುತ್ತವೆ. ಸಾಮ್ರಾಜ್ಯವಾದಿ ಬಂಡವಾಳಶಾಹಿ ವ್ಯವಸ್ಥೆ ವಿರಸಗಳಿಂದ ಪಾರಾಗಲು ಸದಾ ಯುದ್ದದಲ್ಲಿ ನಿರತವಾಗಿರುತ್ತವೆ, ಇಲ್ಲವೇ ಪ್ರಪಂಚವನ್ನು ಯುದ್ಧದ ಕಾರ್ಮೋಡಗಳಿಂದ ಹೆದರಿಸುತ್ತಿರುತ್ತದೆ, ಜನಸಮುದಾಯವನ್ನು ಸದಾ ಯದ್ಧದ ವಾತಾವರಣದಲ್ಲಿಟ್ಟು ಅದು ತನ್ನ ಕಷ್ಟ ನಷ್ಟಗಳನ್ನು ಕುರಿತು ಯೋಚಿಸಲೂ ಸಹ ಸಮಯ ಸಿಗದ ಹಾಗೆ ಮಾಡುತ್ತಿರುತ್ತದೆ. ಅಲ್ಲದೆ, ಜನಸ್ತೋಮದಲ್ಲಿ ನಿರುದ್ಯೋಗವನ್ನು ತಪ್ಪಿಸಲು ಬಂಡವಾಳಶಾಹಿ ವ್ಯವಸ್ಥೆಗೆ ಯುದ್ಧವೇ ಹೆದ್ದಾರಿಯಾಗಿದೆ. ಆದುದರಿಂದ ಕಾರ್ಮಿಕರು ಜಾಗೃತಿಗೊಂಡು, ಸಾಮ್ರಾಜ್ಯವಾದೀ ಸರ್ಕಾರ {{rule}} <small>(1) ಮಾರ್ಕ್ಸ್- ಏಂಗೆಲ್ಸರೂ ಸಹ ಬಂಡವಾಳ ಆರ್ಥಿಕ ವ್ಯವಸ್ಥೆಯ ಚಲನೆಯ ಬಗ್ಗೆ ಇದೇ ತೀರ್ಮಾನಕ್ಕೆ ಬಂದಿದ್ದರು. ಆದರೆ ಅವರು ತಮ್ಮ ವಿಮರ್ಶೆಯನ್ನು ಪ್ರಕಟಿಸಿದಾಗ ಈ ರೂಪ ವ್ಯಕ್ತವಾಗಿರಲಿಲ್ಲ.</small><noinclude></noinclude> 1bq2j2qhowegym47mlyrejac65kgqh8 ಪುಟ:ಕಮ್ಯೂನಿಸಂ.djvu/೧೦೬ 104 89418 323923 224252 2026-06-01T17:26:27Z Vikashegde 1258 /* Proofread */ 323923 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೯೪|right=}}</noinclude>ಗಳಿಗೆ ಮನಸೋಲದೆ ಯುದ್ಧದಲ್ಲಿ ಭಾಗಿಗಳಾಗದೆ, ಬಂಡವಾಳಶಾಹಿ ವ್ಯವಸ್ಥೆಯ ನಿರ್ಮೂಲಕ್ಕೆ ಸಿದ್ಧರಾಗಬೇಕೆಂದು ಲೆನಿನ್ ಕರೆಕೊಟ್ಟನು. ಇಷ್ಟಲ್ಲದೆ ಸುಧಾರಕರು ಕಾರ್ಮಿಕರ ಕ್ರಾಂತಿಯ ಬಗ್ಗೆ ತಿಳಿಸಿದ್ದ ತಪ್ಪು ಅಭಿಪ್ರಾಯಗಳನ್ನು ಖಂಡಿಸಿದನು. ಯಾವ ಮಾರ್ಕ್ಸ್‌ವಾದಿಗಳು ಕೇವಲ ವರ್ಗ ಹೋರಾಟವನ್ನು ಮಾತ್ರ ಒಪ್ಪಿಕೊಂಡು, ಬಂಡವಾಳ ಆರ್ಥಿಕವ್ಯವಸ್ಥೆಯನ್ನು ಮೂಲೋತ್ಪಾಟನೆಮಾಡಿರುವ ಕ್ರಾಂತಿಯ ಸಂರಕ್ಷಣೆಗಾಗಿ ಕಾರ್ಮಿಕರ ಏಕೈಕ ಪ್ರಭುತ್ವದ ಆವಶ್ಯಕತೆಯನ್ನು ಒಪ್ಪುವುದಿಲ್ಲವೋ ಅವರುಗಳು ಮಾರ್ಕ್ಸ್‌ವಾದದಲ್ಲಿ ಸ್ವಲ್ಪ ಭಾಗವನ್ನೂ ಅರ್ಥ ಮಾಡಿಕೊಂಡಿಲ್ಲವೆಂದು. {{gap}}ಲೆನಿನ್ ಇಪ್ಪತ್ತನೇ ಶತಮಾನದಲ್ಲಿ ಮಾರ್ಕ್ಸ್ ವಾದವನ್ನು ಬೆಳಸಿ, ರಷ್ಯಾದೇಶದಲ್ಲಿ ಕಾರ್ಯಗತಮಾಡಿ, ಯಶಸ್ವಿಯಾದ ಮಹಾ ಪುರುಷ. ಚೈತನ್ಯದಾಯಕ ಮಾರ್ಕ್ಸ್‌ವಾದದ (Creative Marxism) ಸ್ಥಾಪನಾಚಾರ್ಯ. ಆದುದರಿಂದಲೇ ಲೆನಿನ್‌ವಾದವನ್ನು ಸಾಮ್ರಾಜ್ಯವಾದಿ ಕಾಲದ ಮಾರ್ಕ್ಸ್ವ ವಾದವೆಂದು ಕರೆಯಲಾಗಿದೆ (Leninism is Marxism in the era of Imperialism). {{center|ಅಧ್ಯಯನ.}} <poem>The class struggles in France : MarX: M & E. S. W. {{gap}}Vol. 1, Pages 109-207. Ed. 1951. The Eighteenth Brumaire of Louis Bonaparte : Marx: {{gap}}M & E. S. W. Vol.1, Pages 211-298. Ed. 1951. The Critique of Gotha Programme: Marx : M & E. S. W: {{gap}}Vol. II, Pages 13-42. Ed. 1951. Germany: Revolution and Counter Revolution : Engels. The Civil War in France : Marx : Historical Writings, {{gap}}Vol. 1, Page 416-444. Letters to Dr Kugelmann on the Paris Commune : Marx : {{gap}}Historical Writings, Vol. I, 493-496 Letters on the Struggle for the Proletarian Party : {{gap}}Historical Writings, Vol. 1, 547-581. On the Paris Commune : Lenin : F. L. P. H, Moscow ; {{gap}}P. P. H. Bombay, 1944. Selected Works of Lenin, Volumes 5, 6, 7 & 10, {{gap}}L & W. 1937, London.</poem><noinclude></noinclude> brdmfz02yb354ql3sq55nx5jfai7pi9 ಪುಟ:ಕಮ್ಯೂನಿಸಂ.djvu/೧೦೭ 104 89419 323924 224253 2026-06-01T17:35:46Z Vikashegde 1258 /* Proofread */ 323924 proofread-page text/x-wiki <noinclude><pagequality level="3" user="Vikashegde" /></noinclude>{{larger|{{center|'''ರಷ್ಯಾದಲ್ಲಿ ಸಮಾಜವಾದ'''}}}} {{center|'''ಅಧ್ಯಾಯ 6'''}} ಆಧುನಿಕ ಸಮಾಜವಾದದ (ಮಾರ್ಕ್ಸ್ ವಾದ) ಇತಿಹಾಸದಲ್ಲಿ 1917 ನೇ ವರ್ಷ ಬಹಳ ಮುಖ್ಯವಾದದ್ದು. ಈ ವರ್ಷ ರಷ್ಯಾದೇಶದ ಕಾರ್ಮಿಕವರ್ಗ ಕಮ್ಯೂನಿಸ್ಟ್ ಪಕ್ಷದ ಮುಖಂಡತ್ವದಲ್ಲಿ ಜಯಪ್ರದವಾಗಿ ಸಮಾಜಕ್ರಾಂತಿಯನ್ನು ನಡೆಸಿತು. ಬಂಡವಾಳಶಾಹಿ ವ್ಯವಸ್ಥೆ ಮತ್ತು ವರ್ಗಗಳು ಮೂಲೋತ್ಪಾಟನೆ ಹೊಂದಿದವು. ಸಮಾಜವಾದೀ ಆರ್ಥಿಕವ್ಯವಸ್ಥೆ ಸ್ಥಾಪನೆಯಾಯಿತು. ರಷ್ಯಾ ದೇಶದಲ್ಲಿ ಕ್ರಾಂತಿಯು ನಡೆದಂತೆ ಇತರ ದೇಶಗಳಲ್ಲೂ ಕ್ರಾಂತಿ ನಡೆದಿದೆ. ಆದರೆ ಇತರ ದೇಶಗಳಲ್ಲಿ ಆಗಿರುವ ಯಾವ ಕ್ರಾಂತಿಯೂ ಸಹ ರಷ್ಯಾ ದೇಶದ ಕ್ರಾಂತಿಯ ಸ್ವರೂಪವನ್ನಾಗಲೀ ಅಥವಾ ರಷ್ಯಾದ ಕ್ರಾಂತಿಯ ವೈಶಿಷ್ಟ್ಯವನ್ನಾಗಲೀ ಹೊಂದಿಲ್ಲ. ಇತರ ದೇಶಗಳ ಕ್ರಾಂತಿಗಳು ಕೊನೆಗೊಂಡಂತೆ ರಷ್ಯಾ ದೇಶವ ಕ್ರಾಂತಿಯನ್ನೂ ಸಹ ಸಾಂಕುಶ ಪ್ರಭುತ್ವದ ಸ್ಥಾಪನೆಯಲ್ಲಿ ಮತ್ತು ಪೌರ ಮತ್ತು ರಾಜಕೀಯ ಹಕ್ಕುಗಳ ಘೋಷಣೆಯಲ್ಲಿ ಮುಕ್ತಾಯಗೊಳಿಸಲು ಸ್ವಾಮ್ಯವರ್ಗ ಯತ್ನಿಸಿತು (Bourgeoisie Revolution). ಆದರೆ ಸಂಘಟನೆ ಹೊಂದಿದ್ದ ಕಾರ್ಮಿಕವರ್ಗ ಆರ್ಥಿಕ ಪ್ರಶ್ನೆಯನ್ನು ಮುಂದಿಟ್ಟು ಬಂಡವಾಳಶಾಹಿ ವ್ಯವಸ್ಥೆಯನ್ನು ಚ್ಯುತಿಗೊಳಿಸಲು ಚಳವಳಿ ಹೂಡಿತು. ಬಂಡವಾಳ ಆರ್ಥಿಕ ವ್ಯವಸ್ಥೆಯ ವಿನಾಶ ಮತ್ತು ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯದ ನಾಶ ಇವು ಆಗುವವರೆಗೂ ಕಾರ್ಮಿಕವರ್ಗ ಕ್ರಾಂತಿಯನ್ನು ಮುಂದುವರಿಸಿತು. (Proletarian Revolution) ಆರ್ಥಿಕ ಪ್ರಶ್ನೆಯನ್ನು ಮುಂದಿಟ್ಟು, ಆರ್ಥಿಕ ಸಮಾನತೆಗಾಗಿ ಪಣತೊಟ್ಟು, ಮೊಟ್ಟ ಮೊದಲನೆಯ ಬಾರಿಗೆ ರಷ್ಯಾದ ಕಾರ್ಮಿಕರು ದಿಗ್ವಿಜಯವನ್ನು ಗಳಿಸಿದರು. {{gap}}ರಷ್ಯಾ ದೇಶದಲ್ಲಿ ವಿಜಯೀಪ್ರದವಾದ ಕಾರ್ಮಿಕರ ಕ್ರಾಂತಿಯಲ್ಲಿ ಕಾರ್ಮಿಕವರ್ಗದ ಮತ್ತು ಕಮ್ಯೂನಿಸ್ಟ್ ಪಕ್ಷದ ಮುಖಂಡನಾಗಿ ನಿಂತ ಲೆನಿನ್ನನ ಪಾತ್ರ ಅತಿ ಮಹತ್ವವಾದದ್ದು, ಕ್ರಾಂತಿಕಾರಕ ಮಾರ್ಕ್ಸ್ ವಾದ ಕಮ್ಯೂನಿಸ್ಟ್ ಪಕ್ಷದ ಪತಾಕೆಯಾಯಿತು. ಶೋಷಿತವರ್ಗದ ಬೇಡಿಕೆ<noinclude></noinclude> 167cynjcha8abjvzb13kbe9suk6yo0v ಪುಟ:ಕಮ್ಯೂನಿಸಂ.djvu/೧೦೮ 104 89420 323925 224254 2026-06-01T17:38:57Z Vikashegde 1258 /* Proofread */ 323925 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೯೬|right=}}</noinclude>ಯಾದ ಆರ್ಥಿಕ ಸಮಾನತೆಯ ಸಮಾಜವಾದೀ ಆರ್ಥಿಕವ್ಯವಸ್ಥೆಯ ಸ್ಥಾಪನೆಯ ಮೂಲಕ ಬರುವುದಾಗಿಯೂ ಸಮಾಜವಾದೀ ವ್ಯವಸ್ಥೆಯ ಅನಿವಾರ್ಯತೆಯನ್ನು ರಷ್ಯಾದೇಶದ ಸ್ಥಿತಿಗತಿಗಳು ಸಾಧ್ಯಮಾಡಿಕೊಟ್ಟರುವುದಾಗಿಯೂ ಲೆನಿನ್ ವಿವರಣೆ ಇತ್ತನು. ಅಂತರರಾಷ್ಟ್ರೀಯ ಬಂಡವಾಳಶಾಹಿಯ (International Capitalism) ಭಾಗವಾಗಿ, ಅದರ ಏರಿಳಿತಗಳ ಅಲೆಗೂಸಾಗಿ, ಅಬಲವಾಗಿರುವ ಮತ್ತು ವಿರಸಪೂರಿತವಾಗಿರುವ ರಷ್ಯಾದ ಬಂಡವಾಳ ಆರ್ಥಿಕವ್ಯವಸ್ಥೆಯನ್ನು ಕಾರ್ಮಿಕರು ಕಿತ್ತೊಗೆದು, ಸಮಾಜವಾದೀ ಆರ್ಥಿಕವ್ಯವಸ್ಥೆಯನ್ನು ಸ್ಥಾಪಿಸುವಂತೆ ಕಾರ್ಮಿಕರಿಗೆ ಕರೆ ಇತ್ತನು. ಈ ಮಹಾಕಾರ್ಯ ಕಾರ್ಮಿಕರಿಂದಲ್ಲದೆ ಮತ್ತಾರಿಂದಲೂ ಸಾಧ್ಯವಿಲ್ಲವೆಂದನು. ಕಾರ್ಮಿಕರ ವಿಮೋಚನೆ, ಶೋಷಣೆಯ ನಾಶ, ವರ್ಗಗಳ ನಾಶ, ಎಲ್ಲವೂ ರಷ್ಯಾ ದೇಶದ ಬಂಡವಾಳ ವರ್ಗವನ್ನೂ ಅದಕ್ಕೆ ಆಶ್ರಯದಾತನಾಗಿರುವ ರಷ್ಯಾದ ರಾಜಮನೆತನ, ಅದರ ಪೀಳಿಗೆಯವರು ಮತ್ತು ಹಿಂಬಾಲಕರನ್ನು ಸದೆಬಡಿಯುವುದರಲ್ಲೂ ಮತ್ತು ಕಾರ್ಮಿಕರ ಆಡಳಿತದ ಘೋಷಣೆಯಲ್ಲೂ ಅಡಗಿರುವುದಾಗಿ ತಿಳಿಸಿದನು. {{gap}}ರಷ್ಯಾದಲ್ಲಿ ಸಮಾಜವಾದೀ ವ್ಯವಸ್ಥೆಯ ಸ್ಥಾಪನೆಯ ಸಾಧ್ಯತೆಯನ್ನು ಮಾತ್ರ ಹೇಳಿ ಲೆನಿನ್ ತನ್ನ ವಿವರಣೆಯನ್ನು ಮುಗಿಸಲಿಲ್ಲ. ಕಾರ್ಮಿಕ ವರ್ಗದ ಮುಖಂಡತ್ವದಲ್ಲಿ ಎಲ್ಲಾ ಶೋಷಿತವರ್ಗಗಳನ್ನು ಸಂಘಟಿಸಿ, ಕ್ರಾಂತಿಮುಖರನ್ನಾಗಿ ಮಾಡಿದನು. ಕಾರ್ಮಿಕವರ್ಗಕ್ಕೆ ಎಚ್ಚರಿಕೆಯಿತ್ತು ಗಳಿಸಿರುವ ವಿಜಯವನ್ನು ಸಂರಕ್ಷಿಸಲೂ, ಬಂಡವಾಳವರ್ಗದಿಂದ ಬರುವ ಪ್ರತಿಭಟನೆಯನ್ನು ಮುರಿಯಲೂ ಮತ್ತು ಸಮಾಜವಾದೀ ಆರ್ಥಿಕ ವ್ಯವಸ್ಥೆಯನ್ನು ಸ್ಥಾಪಿಸಲೂ ಕಾರ್ಮಿಕವರ್ಗದ ಏಕೈಕ ಪ್ರಭುತ್ವ (The Dictatorship of the Proletariat) ಮತ್ತು ರಾಜ್ಯಶಕ್ತಿಯ ಉಪಯೋಗ ಇವು (The Retention of the State) ಅತ್ಯಗತ್ಯವಾಗಿವೆಯೆಂದು ತಿಳಿಸಿದನು. ಅದರಂತೆ ಕಾರ್ಮಿಕರ ಆಡಳಿತ ಮತ್ತು ಕಾರ್ಮಿಕವರ್ಗದ ಏಕೈಕ ಪ್ರಭುತ್ವ ಸ್ಥಾಪಿತವಾದವು. {{gap}}ರಷ್ಯಾದ ಮಹಾಕ್ರಾಂತಿಯಲ್ಲಿ ನಾಯಕ ಲೆನಿನ್ನನ ಮುಖಂಡತ್ವದಷ್ಟೆ ರಷ್ಯಾದ ಕಮ್ಯೂನಿಸ್ಟ್ ಪಕ್ಷದ ಪಾತ್ರವೂ ಹಿರಿದಾಗಿದೆ. ಲೆನಿನ್ನನಂತಹ<noinclude></noinclude> jbpymwnby43lau68d4jji757gfyr6tl ಪುಟ:ಕಮ್ಯೂನಿಸಂ.djvu/೧೦೯ 104 89493 323926 224395 2026-06-01T17:43:41Z Vikashegde 1258 /* Proofread */ 323926 proofread-page text/x-wiki <noinclude><pagequality level="3" user="Vikashegde" />{{rh|center=ರಷ್ಯಾದಲ್ಲಿ ಸಮಾಜವಾದ|left=|right=೯೭}}</noinclude>ವ್ಯಕ್ತಿಯನ್ನು ಮುಖಂಡನನ್ನಾಗಿ ಪಡೆದದ್ದು ರಷ್ಯಾದ ಕಮ್ಯೂನಿಸ್ಟ್ ಪಕ್ಷದ ಭಾಗ್ಯವೆನ್ನಬಹುದು. ಮಾರ್ಕ್ಸ್ ತತ್ತ್ವ ಕಮ್ಯೂನಿಸ್ಟ್ ಪಕ್ಷಕ್ಕೆ ತಾತ್ವಿಕ ತಳಹದಿಯಾಯಿತು. ಕಮ್ಯೂನಿಸ್ಟ್ ಪಕ್ಷವು ಕಾರ್ಯಾಚರಣೆಯಲ್ಲಿ ತೊಡಗಿ ಅಪಾರ ಅನುಭವವನ್ನು ಗಳಿಸಿತ್ತು; ಜನಪ್ರಿಯವಾಗಿತ್ತು. ಜನಸಮುದಾಯದ ಆಶೋತ್ತರಗಳಿಗೆ ಮಾರ್ಕ್ಸ್-ಏಂಗೆಲ್ಸರ ವಾದದಿಂದ ಭರವಸೆಯನ್ನು ದೊರಕಿಸಿಕೊಟ್ಟು, ಜನಸಮುದಾಯವು ರಾಜಕೀಯ ಜಾಗೃತಿಯನ್ನೂ ಮತ್ತು ಕ್ರಾಂತಿಕಾರ ತೀಕ್ಷಣತೆಯನ್ನೂ ಹೊಂದುವಂತೆ ಮಾಡಿತು. ಕಾರ್ಮಿಕರ ಕ್ರಾಂತಿಯು ಯಶಸ್ವಿಯಾದ ನಂತರ ಸಮಾಜವಾದೀ ಮಾರ್ಗದಲ್ಲಿ ಸಮಾಜದ ಪುನರಚನೆಯ ಕರ್ತವ್ಯಗಳ ಕಡೆಗೆ ಕಮ್ಯೂನಿಸ್ಟ್ ಪಕ್ಷ ಗಮನಕೊಟ್ಟಿತು. ಬಹುಶಃ ರಷ್ಯಾದ ಕಾರ್ಮಿಕವರ್ಗ ಸಾಧಿಸಿದ ಘಟನೆಯ ಮಹತ್ವವನ್ನು ಅದು ಅರಿಯುವುದಕ್ಕೆ ಸಮಯವಿತ್ತೋ ಇಲ್ಲವೋ ಕಾಣದು ಆದರೆ ರಷ್ಯಾದ ಸಮಾಜವಾದೀ ಕ್ರಾಂತಿ ವಿಶ್ವದ ಘಟನೆಯಾಗಿತ್ತು. ಅದುವರೆಗೂ ಶಾಶ್ವತವೆಂದು ನಂಬಿದ್ದ ಖಾಸಗೀ ಸ್ವಾಮ್ಯ, ಬಂಡವಾಳ ಆರ್ಥಿಕ ವ್ಯವಸ್ಥೆ, ಅವನ್ನು ಪುಷ್ಟೀಕರಿಸುವ ತತ್ತ್ವ, ರಾಜಕೀಯ, ನ್ಯಾಯ ಎಲ್ಲವೂ ತಲೆಕೆಳಗಾದುದನ್ನು ರಾಜಕಾರಣ ಪಟುಗಳು ಕಂಡರು. ಅವರ ಪಾಲಿಗೆ ನಾಗರಿಕತೆಯೇ ಮುಕ್ತಾಯಗೊಂಡಂತೆ ಭಾಸವಾಯಿತು. ಖಾಸಗೀ ಸ್ವಾಮ್ಯದ ವಿರುದ್ದ ರಷ್ಯಾದ ಕಾರ್ಮಿಕವರ್ಗ ನಡೆಸಿದ ಕ್ರಾಂತಿ ಇತರ ಬಂಡವಾಳಶಾಹಿ ದೇಶಗಳ ಕಾರ್ಮಿಕವರ್ಗಕ್ಕೆ ಹರಡದಂತೆ ತಡೆಯಲೂ ಮತ್ತು ರಷ್ಯಾದ ಕಾರ್ಮಿಕ ಕ್ರಾಂತಿಯನ್ನು ಮುರಿಯಲೂ ಬಂಡವಾಳಶಾಹಿ ಸರ್ಕಾರಗಳಾದ ಅಮೆರಿಕಾ, ಇಂಗ್ಲೆಂಡ್, ಫ್ರ್ರಾನ್ ಇತ್ಯಾದಿ ದೇಶಗಳು ತಮ್ಮ ಸೈನ್ಯಗಳನ್ನು ನುಗ್ಗಿಸಿದವು. ರಷ್ಯಾದಲ್ಲಿ ವಿನಾಶಮಾಡಲ್ಪಟ್ಟಿದ್ದ ಬಂಡವಾಳವರ್ಗ ದಂಗೆ ಏಳುವಂತೆ ಪ್ರೇರೇಪಿಸಿದವು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ರಷ್ಯಾದ ಸಮಾಜವಾದೀ ಕ್ರಾಂತಿಯ ಅಳಿವು ಅಥವಾ ಉಳಿವು ತೀರ್ಮಾನವಾಗಬೇಕಾಗಿತ್ತು. {{gap}}ಆದರೆ ರಷ್ಯಾದ ಕಾರ್ಮಿಕವರ್ಗ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ದಿಟ್ಟತನದಿಂದಲೂ ಧೈರ್ಯದಿಂದಲೂ ಸರಿಸ್ಥಿತಿಯನ್ನು ಎದುರಿಸಿತು. ವಿದೇಶಿ ಸೈನ್ಯಗಳನ್ನು ಹಿಮ್ಮೆಟ್ಟಿಸಲಾಯಿತು. ದಂಗೆ ಎದ್ದಿದ್ದ ಬಂಡವಾಳ<noinclude></noinclude> 9iu8rbfendqnwmopiucc5oloe3iz8pr ಪುಟ:ಕಮ್ಯೂನಿಸಂ.djvu/೧೧೦ 104 89494 323927 224396 2026-06-01T17:47:15Z Vikashegde 1258 /* Proofread */ 323927 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೯೮|right=}}</noinclude>ವರ್ಗದ ಪೀಳಿಗೆಗಳನ್ನು ಧ್ವಂಸಮಾಡಲಾಯಿತು. ಈ ಸಮಯದಲ್ಲಿ ರಷ್ಯಾದ ಕಾರ್ಮಿಕವರ್ಗಕ್ಕೆ ಅಂತರರಾಷ್ಟ್ರೀಯ ಕಾರ್ಮಿಕವರ್ಗ ನೀಡಿದ ಬೆಂಬಲ, ಕೊಟ್ಟ ಪ್ರೋತ್ಸಾಹ ಮತ್ತು ತೋರಿಸಿದ ಸಹಾನುಭೂತಿ ಚಿರಸ್ಮರಣೀಯವಾಗಿವೆ. ಇತಿಹಾಸದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಪ್ರಪಂಚದ ಆರನೇ ಒಂದು ಭಾಗದಷ್ಟು ಪ್ರದೇಶದಲ್ಲಿ ಸಮಾಜವಾದೀ ವ್ಯವಸ್ಥೆ ಸ್ಥಾಪನೆಯಾಯಿತು. ಕೂಡಲೇ ಕಮ್ಯೂನಿಸ್ಟ್ ಪಕ್ಷ ವಿರಸಗಳಿಗೂ, ಆರ್ಥಿಕ ದುಃಸ್ಥಿತಿಗೂ ಶೋಷಣೆಗೂ, ನಿರುದ್ಯೋಗಕ್ಕೂ ಆವಾಸಸ್ಥಾನವಾಗಿದ್ದ ಬಂಡವಾಳ ಆರ್ಥಿಕವ್ಯವಸ್ಥೆ ಮತ್ತು ಅದರ ಪ್ರತಿನಿಧಿಯಾದ ಬಂಡವಾಳವರ್ಗದ ವಿನಾಶಕ್ಕೆಗಮನಕೊಟ್ಟಿತು. ದೇಶದ ಸಂಪತ್ತು ಮತ್ತು ಉತ್ಪಾದನಾ ಸಾಧನಗಳು ಸಮಾಜದ ಸ್ವತ್ತೆಂದು ಘೋಷಿಸಲಾಯಿತು. ದೇಶದ ಕೈಗಾರಿಕಾ ಉದ್ಯಮಗಳು, ಸಂಚಾರ ಮಾರ್ಗಗಳು ಬ್ಯಾಂಕುಗಳು, ಗಣಿಗಳು, ಭೂಮಿ ಇತ್ಯಾದಿ ಎಲ್ಲವೂ ರಾಷ್ಟ್ರೀಕರಣವಾದವು. ಪ್ರತಿಯೊಬ್ಬನೂ ಅವನವನ ಯೋಗ್ಯತಾನುಸಾರ ದುಡಿಯಲು ಮತ್ತು ಪ್ರತಿಫಲ ಹೊಂದಲು ಶಾಸನವಾಯಿತು. ಎಲ್ಲರೂ ದುಡಿಮೆಯವರಾದರು. ಉತ್ಪಾದನೆಯಿಂದ ದೊರಕುವ ಹೆಚ್ಚು ಸಂಪತ್ತು ಸಮಾಜಕ್ಕೆ ಸೇರುವಂತಾಯಿತು. ಉಳುವವನಿಗೆ ಮಾತ್ರ ಭೂಮಿ ಎಂದು ಘೋಷಿಸಲಾಯಿತು. ಜಮೀನ್ದಾರವರ್ಗಕ್ಕೆ ಸೇರಿದ ಭೂಮಿಯನ್ನು ಯಾವ ಪರಿಹಾರವನ್ನೂ ಕೊಡದೆ ವಶಪಡಿಸಿಕೊಂಡು ರೈತರಿಗೆ ಮುಫತ್ತಾಗಿ ಹಂಚಲಾಯಿತು. ಬಡರೈತರಿಗೆ ಸಹಾಯಕ ಬೇಸಾಯ ಸಾಮಗ್ರಿಗಳನ್ನೂ ಸಹ ಕೊಡಲಾಯಿತು. ನಿರುದ್ಯೋಗವನ್ನು ಹೋಗಲಾಡಿಸಲು, ಬಡತನವನ್ನು ನೀಗಿಸಲು ಮತ್ತು ದೇಶದ ಆರ್ಥಿಕ ಅಭಿವೃದ್ಧಿಯನ್ನು ಶೀಘ್ರವಾಗಿ ಸಾಧಿಸಲು ಉತ್ಪಾದನೆಯ ಕಡೆ ಗಮನ ಕೊಡಲಾಯಿತು. {{gap}}ಈ ಉದ್ದೇಶ ಸಾಧಿಸಲು ಯೋಜನೆ ಮತ್ತು ಯೋಜನೆಗೆ ಒಳಪಟ್ಟ ಕೈಗಾರಿಕಾ ಮತ್ತು ಬೇಸಾಯ ರಂಗಗಳ ಅಭಿವೃದ್ಧಿ ರಾಷ್ಟ್ರದ ಪ್ರಮುಖ ಅಂಗವಾಯಿತು. ಮೂಲಕೈಗಾರಿಕೆಗಳನ್ನು (Capital Industries) ಸ್ಥಾಪಿಸುವುದಕ್ಕೆ ಹೆಚ್ಚು ಗಮನಕೊಡಲಾಯಿತು. ವ್ಯವಸಾಯ ಕ್ಷೇತ್ರದಲ್ಲಿ ಸಾಮೂಹಿಕ ವ್ಯವಸಾಯದಿಂದ ಆಗುವ ಪ್ರಯೋಜನಗಳನ್ನು ಸಣ್ಣ ಪುಟ್ಟ ಸ್ವಾವಲಂಬೀ ಹಿಡುವಳಿದಾರರಿಗೆ ತಿಳಿಸಿ ಅವರುಗಳನ್ನು ಪರಸ್ಪರ ಸಹಾಯದ<noinclude></noinclude> fbagrr8ifxdioccq83h106z9g63jcs3 ಪುಟ:ಕಮ್ಯೂನಿಸಂ.djvu/೧೧೧ 104 89495 323928 224397 2026-06-01T17:51:42Z Vikashegde 1258 /* Proofread */ 323928 proofread-page text/x-wiki <noinclude><pagequality level="3" user="Vikashegde" />{{rh|center=ರಷ್ಯಾದಲ್ಲಿ ಸಮಾಜವಾದ|left=|right=೯೯}}</noinclude>ಬೇಸಾಯ ಕ್ಷೇತ್ರಗಳಲ್ಲಿ ಒಟ್ಟುಗೂಡಿಸಲು (Co-operative Farming) ಯತ್ನಿಸಲಾಯಿತು. ಇದರ ಜೊತೆಗೆ ಸಾಮೂಹಿಕ ಬೇಸಾಯ ಕ್ಷೇತ್ರಗಳನ್ನು (Collective Farming) ನಿರ್ಮಿಸಲಾಯಿತು. ಇದರ ಫಲವಾಗಿ ಮತ್ತು ಉತ್ಪಾದನೆ ಹೆಚ್ಚಿಸಲು ಉಪಯೋಗಿಸಲಾದ ಆಧುನಿಕ ಉಪಕರಣಗಳು, ವಿಜ್ಞಾನ, ಔದ್ಯೋಗಿಕ ಪರಿಶ್ರಮ ಇವುಗಳ ನೆರವಿನಿಂದಲೂ ಕೈಗಾರಿಕಾ ಮತ್ತು ಬೇಸಾಯದ ರಂಗಗಳಲ್ಲಿ ಉತ್ಪಾದನೆ ಹೆಚ್ಚಲಾರಂಭಿಸಿತು. {{gap}}ಒಟ್ಟಿನಲ್ಲಿ ಆದ ಬದಲಾವಣೆಗಳು ಜನಸಮುದಾಯವನ್ನು ಆಕರ್ಷಿಸಿದವು. ಸಮಾಜವಾದೀ ಆರ್ಥಿಕ ವ್ಯವಸ್ಥೆಯ ಮೇಲ್ಮೈ ಪ್ರದರ್ಶನವಾಯಿತು. ನಿರುದ್ಯೋಗವಿಲ್ಲದಂತಾಯಿತು. ಪ್ರತಿಯೊಬ್ಬನೂ ತನ್ನ ಯೋಗ್ಯತಾನುಸಾರದ ದುಡಿಮೆಗೆ ತಕ್ಕ ಫಲವನ್ನು ಹೊಂದುವ ಅವಕಾಶವನ್ನು ಕಣ್ಣಾರೆ ಕಂಡನು. ಶೋಷಣೆ, ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ಯಾಮ್ಯ, ಲಾಭಕ್ಕಾಗಿ ಉತ್ಪಾದನೆ ಇವುಗಳಿಲ್ಲದಿರುವ ಸುಗಮ ಸಮಾಜವಾದೀ ಆರ್ಥಿಕವ್ಯವಸ್ಥೆಯನ್ನು ಜನತೆ ಕಂಡಿತ್ತು. ಸಮಾಜವಾದೀ ಆರ್ಥಿಕ ವ್ಯವಸ್ಥೆಯಲ್ಲಿ ವ್ಯಕ್ತಿಗಳು ತಮ್ಮ ಸ್ಥಾನಮಾನಗಳನ್ನು ವೀಕ್ಷಿಸಿ ನೋಡಿದರು. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿರುವ ಸಮಾನತೆಯ ಜೊತೆಗೆ ಆರ್ಥಿಕ ಕ್ಷೇತ್ರದಲ್ಲೂ ಸಮಾನತೆಯು ಇರುವುದನ್ನು ಕಂಡರು. ಸಮಾಜದ ಉತ್ಪಾದನಾ ವಸ್ತುಗಳು ಯಾರಿಗೂ ಸೇರಿರದೆ, ಎಲ್ಲರೂ ಅವುಗಳಿಗೆ ಬಾಧ್ಯರಾಗಿರುವುದನ್ನು ಕಂಡರು. ಅವರವರ ದುಡಿಮೆಗೆ ತಕ್ಕಂತೆ ಪ್ರತಿಫಲ ಹೊಂದಲು ಮತ್ತು ತಾವುಗಳು ಕೆಲಸ ಮಾಡುವ ಕಾರ್ಖಾನೆ ಮತ್ತು ಬೇಸಾಯ ಕೇಂದ್ರಗಳ ಆಡಳಿತದಲ್ಲಿ ಭಾಗವಹಿಸಲು ಇರುವ ಅವಕಾಶವನ್ನು ಜನರು ಕಂಡರು. {{gap}}ಸಮಾಜವಾದೀ ವ್ಯವಸ್ಥೆ ಸುಗಮವಾಗಿ ಯೋಜನೆಗಳ ಮೂಲಕ ಮುಂದೆ ಸಾಗುತ್ತಿರುವಾಗ ಸಮಾಜವಾದೀ ವ್ಯವಸ್ಥೆಯ ಬಗ್ಗೆ ಕೆಲವು ತಪ್ಪು ಅಭಿಪ್ರಾಯಗಳು ಕಾಣಿಸಿಕೊಂಡವು. ಈ ತಪ್ಪು ಅಭಿಪ್ರಾಯಗಳಿಗೆ ಸಮಾಜವಾದ ಮನ್ನಣೆ ಇತ್ತಿದೆ ಎಂದೂ ಅಪಪ್ರಚಾರ ನಡೆಯಿತು. ಇಂತಹ ಅಭಿಪ್ರಾಯಗಳಲ್ಲಿ ಸಮಾನತೆಯ ಬಗ್ಗೆ ಬಂದ ತಪ್ಪು ವಿವರಣೆ 'ಬಹು ಮುಖ<noinclude></noinclude> 5v64sznhgia1zlw0sy4imxsq0mbfkwp ಪುಟ:ಕಮ್ಯೂನಿಸಂ.djvu/೧೧೨ 104 89496 323962 224401 2026-06-02T03:56:08Z Vikashegde 1258 /* Proofread */ 323962 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೧೦೦|right=}}</noinclude>ವಾದದ್ದು.<sup>1</sup> ಸಮಾನತೆ ಎಂದರೆ ಎಲ್ಲಾ ವಿಷಯದಲ್ಲಿ ಸಮಾನತೆ ಎಂದೂ, ವ್ಯಕ್ತಿ ವ್ಯಕ್ತಿಗಳಿಗೆ ಯಾವ ವ್ಯತ್ಯಾಸವೂ ಇಲ್ಲವೆಂದೂ, ವೈಯುಕ್ತಿಕ ವ್ಯಕ್ತಿತ್ವಕ್ಕೆ ಅವಕಾಶವೇ ಇಲ್ಲವೆಂದೂ ವಿವರಣೆಗಳು ಬಂದವು. ಲೆನಿನ್ನನ ಮರಣಾನಂತರ ರಷ್ಯಾದ ಕಮ್ಯೂನಿಸ್ಟ್ ಪಕ್ಷದ ನಾಯಕನಾಗಿ ನಿಂತ ಸ್ಟಾಲಿನ್ ಈ ತಪ್ಪು ಅಭಿಪ್ರಾಯವನ್ನು ಮೂದಲಿಸಿದನು. ಸಮಾನತೆಯಬಗ್ಗೆ ಆತನು ಕೊಟ್ಟಿರುವ ವಿವರಣೆ ಬಹು ಮುಖ್ಯವಾದದು: 'ಸಮಾನತೆಯನ್ನು ತರಲು ಹೊರಟಿರುವ ಸಮಾಜವಾದ ವ್ಯಕ್ತಿಗಳ ಆವಶ್ಯಕತೆಗಳನ್ನೂ ಮತ್ತು ಅವರುಗಳ ಜೀವನವನ್ನೂ ಸಮಗೊಳಿಸುವುದಾಗಿದೆ ಎಂದು ಯೋಚಿಸುವವರು ಇದ್ದಾರೆ. ಇಂತಹ ಭಾವನೆಗಳು ಮಾರ್ಕ್ಸ್-ಲೆನಿನ್ನರ ವಾದದೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲವೆಂದು ಹೇಳಬೇಕಾಗಿದೆ. ಮಾರ್ಕ್ಸ್‌ವಾದದ ಪ್ರಕಾರ, ಸಮಾನತೆ ಎಂದರೆ ವ್ಯಕ್ತಿಗಳ ಅವಶ್ಯಕತೆಗಳನ್ನೂ ಅವರ ಜೀವನವನ್ನೂ ಸಮಗೊಳಿಸುವುದಲ್ಲ, '''ವರ್ಗಗಳನ್ನು ನಾಶಪಡಿಸುವುದಾಗಿದೆ'''. ಎಂದರೆ : (1) ಬಂಡವಾಳವರ್ಗವನ್ನು ಉರುಳಿಸಿ, ಅವರಿಗೆ ಸೇರಿರುವುದನ್ನು ವಶಪಡಿಸಿಕೊಂಡು, ಎಲ್ಲಾ ದುಡಿಮೆ ಮಾಡುವ ಜನರನ್ನೂ ಶೋಷಣೆಯಿಂದ ತಪ್ಪಿಸುವುದು. (2) ಉತ್ಪಾದನಾ ಸಾಧನಗಳನ್ನು ಸಮಾಜದ ವಶಕ್ಕೆ ತಂದು ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನು ನಾಶಮಾಡುವುದು. (3) ಪ್ರತಿಯೊಬ್ಬನೂ ತನ್ನ ಶಕ್ತ್ಯಾನುಸಾರ ಕೆಲಸಮಾಡುವ ಸಮಾನಕರ್ತವ್ಯವನ್ನು ಮತ್ತು ಎಲ್ಲ ದುಡಿಮೆಯ ಜನರು ಕೆಲಸಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವ ಸಮಾನ ಹಕ್ಕನ್ನು (ಸಮಾಜವಾದೀ ಸಮಾಜ) ಹೊಂದುವುದು.<sup>2</sup> ಮಾರ್ಕ್ಸ್‌ವಾದವು ಸಮಾಜವಾದೀ ವ್ಯವಸ್ಥೆಯ ಕಾಲವಲ್ಲಾಗಲೀ ಅಥವಾ {{rule}} <small> (1) ಕೆಲವು ಕಾಲ ಹಿಂದುಳಿದ ರಷ್ಯಾದಲ್ಲಿ ಸಮಾಜವಾದೀ ವ್ಯವಸ್ಥೆ ಸಾಧ್ಯವೇ ಎಂಬುದರ ವಿಷಯವಾಗಿ ಬಹಳ ಜಿಜ್ಞಾಸೆ ನಡೆಯಿತು. ಈ ಜಿಜ್ಞಾಸೆಯನ್ನು 9 ಮತ್ತು 10 ನೇ ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. (2) ಸಮಾಜವಾದೀ ಕ್ರಾಂತಿಯಾದ ಕೂಡಲೆ ಸಮಾಜವಾದೀ ಸಮಾಜ (Socialist Society) ವ್ಯವಸ್ಥೆ ಹೊಂದುತ್ತದೆ. ತದನಂತರ ಸಮವಾದೀ (ಕಮ್ಯೂನಿಸ್ಟ್) ಸಮಾಜ ರೂಪಗೊಳ್ಳುತ್ತದೆ. ಈ ಸಂದರ್ಭದಲ್ಲಿ ಸಮಾಜವಾದೀ ಮತ್ತು ಸಮುವಾದೀ (ಕಮ್ಯೂನಿಸ್ಟ್) ಎಂಬ ಶಬ್ದಗಳ ಪ್ರಯೋಗಾರ್ಥಕ್ಕೂ ಮತ್ತು ವಿವರಣೆಗೂ ಪುಟ 29 ನೋಡಿ.</small><noinclude></noinclude> h45az3id4it0j4tixd15b2r4g0s2m2a ಪುಟ:ಕಮ್ಯೂನಿಸಂ.djvu/೧೧೩ 104 89497 323963 224400 2026-06-02T04:01:39Z Vikashegde 1258 /* Proofread */ 323963 proofread-page text/x-wiki <noinclude><pagequality level="3" user="Vikashegde" />{{rh|center=ರಷ್ಯಾದಲ್ಲಿ ಸಮಾಜವಾದ|left=|right=೧೦೧}}</noinclude>ಕಮ್ಯೂನಿಸ್ಟ್ ವ್ಯವಸ್ಥೆಯ ಕಾಲದಲ್ಲಾಗಲೀ ಜನರ ಅಭಿರುಚಿ ಮತ್ತು ಆವಶ್ಯಕತೆಗಳು ಗುಣದಲ್ಲಾಗಲೀ ಗಾತ್ರದಲ್ಲಾಗಲೀ ಒಂದೇ ಸಮಾನವಾಗಿರುವುದಿಲ್ಲವೆಂಬ ಆಧಾರದ ಮೇಲೆ ಮುಂದುವರೆದಿದೆ. ಇದೇ ಮಾರ್ಕ್ಸ್‌ವಾದದಲ್ಲಿ ಸಮತ್ವ ಶಬ್ದಕ್ಕೆ ಇರುವ ಅರ್ಥ. ಮಾರ್ಕ್ಸ್ ವಾದ ಇನ್ನಾವ ವಿಧವಾದ ಸಮಾನತೆಯನ್ನು ಒಪ್ಪಿಲ್ಲ ಮತ್ತು ಅಂಗೀಕರಿಸಿಯೂ ಇಲ್ಲ. {{gap}}'ಸಮಾಜವಾದ ವ್ಯಕ್ತಿಗಳ ಜೀವನ ಮತ್ತು ಅಭಿರುಚಿಯನ್ನು ಮಟ್ಟಮಾಡು (Levelling)ವುದರ ಮೂಲಕ ಸಮಾನತೆ ತರುತ್ತಿದೆ ಎನ್ನುವ ಅಭಿಪ್ರಾಯಕ್ಕೆ ಬರುವುದೂ ಮತ್ತು ಮಾರ್ಕ್ಸ್‌ವಾದಿಗಳ ಪ್ರಕಾರ ಎಲ್ಲರೂ ಒಂದೇ ವಿಧವಾದ ಬಟ್ಟೆಯನ್ನು ಧರಿಸಬೇಕು, ಒಂದೇ ವಿಧವಾದ ಆಹಾರವನ್ನು ಒಂದೇ ಪ್ರಮಾಣದಲ್ಲಿ ಎಲ್ಲರೂ ತೆಗೆದುಕೊಳ್ಳಬೇಕು' ಎನ್ನುವುದೂ ಮಾರ್ಕ್ಸ್‌ವಾದವನ್ನು ಅಪಹಾಸ್ಯಕ್ಕೆ ಗುರಿಮಾಡುವುದಾಗಿದೆ. {{gap}}'ಮಾರ್ಕ್ಸ್‌ವಾದ ಎಲ್ಲರನ್ನೂ ಒಂದೇ ಮಟ್ಟಕ್ಕೆ ತರುವ ಕ್ರಿಯೆಗೆ ವಿರುದ್ಧವಾದ ಶಕ್ತಿ ಎಂಬುದನ್ನು ಎಷ್ಟು ಬೇಗನೆ ತಿಳಿದುಕೊಂಡರೆ ಅಷ್ಟು ಉತ್ತಮ. ಈ ಕಾರಣದಿಂದಲೇ ಮಾರ್ಕ್ಸ್-ಏಂಗೆಲ್ಸರು ತಮ್ಮ ಕಮ್ಯೂನಿಸ್ಟ್ ಪ್ರಣಾಳಿಕೆಯಲ್ಲಿ ಪ್ರಾಚೀನ ಸಮಾಜವಾದಗಳನ್ನು ಬಹುಉಗ್ರವಾಗಿ ಟೀಕಿಸಬೇಕಾಯಿತು. ಪ್ರಾಚೀನ ಸಮಾಜವಾದಗಳು ಎಲ್ಲರಲ್ಲಿಯೂ ವಿರಕ್ತಿಯನ್ನೂ ಮತ್ತು ಅತಿ ಅನಾಗರಿಕ ಸಮಾಜದಲ್ಲಿರುವ ಸಮಾನತೆಯನ್ನೂ ಬೋಧಿಸಿದ್ದರಿಂದ ಅವನ್ನು ಪ್ರಗತಿ ವಿರೋಧಿ ಎಂದರು. ಸಮಾನತೆಗಾಗಿ ಕಾರ್ಮಿಕರು ಮಾಡುತ್ತಿರುವ ಬೇಡಿಕೆಯ ನಿಜಸ್ವರೂಪವೆಂದರೆ ವರ್ಗಗಳನ್ನು ನಾಶಮಾಡಬೇಕೆನ್ನುವ ಬೇಡಿಕೆಯಾಗಿದೆ.'<sub>1</sub> {{gap}}ಈ ವಿವರಣೆ ಸಮಾಜವಾದೀ ಆರ್ಥಿಕವ್ಯವಸ್ಥೆಯಲ್ಲಿ ವ್ಯಕ್ತಿಗಳ ಆರ್ಥಿಕ ಸ್ಥಾನಮಾನಗಳನ್ನು ಅರಿಯುವುದಕ್ಕೆ ಸಾಧ್ಯ ಮಾಡಿಕೊಟ್ಟಿದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವಂತೆ ವ್ಯಕ್ತಿಗಳು ಉತ್ಪಾದನಾ ಸಾಧನಗಳನ್ನು ಖಾಸಗಿಯಾಗಿ ಹೊಂದಿರಲೂ ಮತ್ತು ಕೂಲಿಗಾರರನ್ನು ನೇಮಿಸಿಕೊಂಡು ತಮಗೆ ಲಾಭ ದೊರಕುವ ರೀತಿಯಲ್ಲಿ ಪದಾರ್ಥಗಳನ್ನು ಉತ್ಪಾದಿಸಿ {{rule}} <small>(1) 17 ನೇ ಕಮ್ಯೂನಿಸ್ಟ್ ಪಕ್ಷದ ಕಾಂಗ್ರೆಸಿಗೆ ಸ್ಟಾಲಿನ್ ಇತ್ತ ವರದಿಯಿಂದ : (Stalin Reports-P. P. H. Bombay, 1944, Page 161).</small><noinclude></noinclude> 0a7sdlxq8ypsgz5imcys79dt7elowzz ಪುಟ:ಕಮ್ಯೂನಿಸಂ.djvu/೧೧೪ 104 89498 323966 224402 2026-06-02T04:08:23Z Vikashegde 1258 /* Proofread */ 323966 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೧0೨|right=}}</noinclude>ವಿಕ್ರಯಮಾಡಲೂ ಸಮಾಜವಾದೀ ಆರ್ಥಿಕ ವ್ಯವಸ್ಥೆಯಲ್ಲಿ ಅವಕಾಶವೇ ಇಲ್ಲ. ಈ ಬಗೆಯ ಸ್ವಾತಂತ್ರ್ಯ ಆರ್ಥಿಕ ರಂಗದಲ್ಲಿ ವರ್ಗ ವಿರಸ, ಶೋಷಣೆ, ನಿರುದ್ಯೋಗಗಳನ್ನು ತರುವುದರಿಂದಲೂ, ಸಮಾಜವನ್ನು ಇಬ್ಬಾಗವಾಗಿ--ಸ್ವಾಮ್ಯವುಳ್ಳವರ್ಗ ಮತ್ತು ಸ್ವಾಮ್ಯವಿಲ್ಲದವರ್ಗ-ಒಡೆಯುವುದರಿಂದಲೂ, ಐಶ್ವರ್ಯವಂತರಾದವರು ಇನ್ನೂ ಐಶ್ವರ್ಯವಂತರಾಗುವಂತೆ ಮತ್ತು ಸ್ವಾಮ್ಯವಿಲ್ಲದವರು ಇನ್ನೂ ದುಃಸ್ಥಿತಿಯ ಜೀವನ ನಡೆಸುವಂತೆ ಮಾಡುವುದರಿಂದಲೂ ಬಂಡವಾಳಶಾಹಿ ವ್ಯವಸ್ಥೆ ಮತ್ತು ಅದರ ಪ್ರತಿನಿಧಿ ಬಂಡವಾಳವರ್ಗವನ್ನು ತೊಡೆದು ಹಾಕಲಾಗಿದೆ. ಉತ್ಪಾದನಾ ಸಾಧನಗಳನ್ನು ಖಾಸಗಿಯಾಗಿ ಹೊಂದಿರುವುದು ಸಮಾಜಕ್ಕೆ ಕಂಟಕವೆಂದು ಬಗೆದ ಅವುಗಳನ್ನು ಸಮಾಜೀಕರಣ ಮಾಡಲಾಗಿದೆ. ದುಡಿಮೆ ಮಾಡಲು ಮತ್ತು ದುಡಿಮೆಗೆ ತಕ್ಕ ಪ್ರತಿಫಲ ಪಡೆಯಲು ಹಕ್ಕು ಇದೆ. ಶೋಷಣೆಗೆ ಅವಕಾಶವಿಲ್ಲದಿರುವ ಹೊಸ ಬಗೆಯ ಸಮಾಜವಾದೀ ಸ್ವಾತಂತ್ರ್ಯವನ್ನೂ ಸಮಾನತೆಯನ್ನೂ ವ್ಯಕ್ತಿಗಳು ಹೊಂದಿದ್ದಾರೆ. ಉತ್ಪಾದನಾ ಸಾಧನಗಳಲ್ಲಿ ಸ್ವಾಮ್ಯ, ಸಮಾಜದ ಏಳಿಗೆಗೆ ಮತ್ತು ವ್ಯಕ್ತಿಗಳ ಅಭಿವೃದ್ದಿಗೆ ಅಡ್ಡಿ ಬರುವ ಆರ್ಥಿಕ ಸ್ವಾತಂತ್ರ್ಯ ಇವುಗಳು ಹೊರತು, ಮಿಕ್ಕ ಎಲ್ಲ ವಿಧದ ಸ್ವಾತಂತ್ರ್ಯಗಳನ್ನು ವ್ಯಕ್ತಿಗಳು ಅನುಭವಿಸಲು ಬಾಧ್ಯರಿದ್ದಾರೆ. {{gap}}ರಷ್ಯಾದಲ್ಲಿ ಸಮಾಜವಾದೀ ವ್ಯವಸ್ಥೆ ಆರ್ಥಿಕವಾಗಿ ವರ್ಗರಹಿತ ಸಮಾಜವನ್ನು ಉದ್ಘೋಷಿಸಿದ್ದರೆ ರಾಜಕೀಯ ರಂಗದಲ್ಲಿ ಪ್ರಜಾಸತ್ತಾತ್ಮಕ ಧ್ಯೇಯಗಳಿಗೆ ಮಾನ್ಯತೆ ಕೊಟ್ಟಿದೆ.<sup>1</sup> {{rule}} <small>(1) ಸೋವಿಯಟ್ ಪ್ರಜಾಪ್ರಭುತ್ವಕ್ಕೂ ಬಂಡವಾಳಶಾಹಿ ಪ್ರಜಾಪ್ರಭುತ್ವಕ್ಕೂ ಹಲವು ವ್ಯತ್ಯಾಸಗಳಿವೆ. ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯ, ಕೂಲಿಯವರನ್ನು ನೇಮಿಸಿಕೊಂಡು ಲಾಭಕ್ಕಾಗಿ ನಡೆಯುವ ಉತ್ಪಾದನೆ, ಖಾಸಗಿ ಆರ್ಥಿಕ ವ್ಯವಹಾರ ಉದ್ಯಮಗಳಲ್ಲಿ ಸರ್ಕಾರ ಪ್ರವೇಶಿಸದಿರುವುದು, ಇವು ಬಂಡವಾಳಶಾಹಿ ಪ್ರಜಾಸತ್ತೆ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯಾಗಿದೆ. ಇದಕ್ಕೆ ಪ್ರತಿಯಾಗಿ ಸಮಾಜವಾದೀ ಆರ್ಥಿಕವ್ಯವಸ್ಥೆ ಸೋವಿಯಟ್ ಪ್ರಜಾಸತ್ತೆಯ ಆಧಾರವಾಗಿದೆ, ಆರ್ಥಿಕ ವ್ಯವಸ್ಥೆಗೂ ರಾಜ್ಯ ವ್ಯವಸ್ಥೆಗೂ ನಿಕಟ ಸಂಬಂಧವಿದೆ ಎಂದು ಸೋವಿಯಟ್ ಪ್ರಜಾಸತ್ತೆ ತಿಳಿಸುತ್ತದೆ. ಬಂಡವಾಳ ಆರ್ಥಿಕವ್ಯವಸ್ಥೆಯ</small><noinclude></noinclude> pz9apkdbaq99z8u61ejc0ft7a8l53p1 323968 323966 2026-06-02T04:08:58Z Vikashegde 1258 323968 proofread-page text/x-wiki <noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೧೦೨|right=}}</noinclude>ವಿಕ್ರಯಮಾಡಲೂ ಸಮಾಜವಾದೀ ಆರ್ಥಿಕ ವ್ಯವಸ್ಥೆಯಲ್ಲಿ ಅವಕಾಶವೇ ಇಲ್ಲ. ಈ ಬಗೆಯ ಸ್ವಾತಂತ್ರ್ಯ ಆರ್ಥಿಕ ರಂಗದಲ್ಲಿ ವರ್ಗ ವಿರಸ, ಶೋಷಣೆ, ನಿರುದ್ಯೋಗಗಳನ್ನು ತರುವುದರಿಂದಲೂ, ಸಮಾಜವನ್ನು ಇಬ್ಬಾಗವಾಗಿ--ಸ್ವಾಮ್ಯವುಳ್ಳವರ್ಗ ಮತ್ತು ಸ್ವಾಮ್ಯವಿಲ್ಲದವರ್ಗ-ಒಡೆಯುವುದರಿಂದಲೂ, ಐಶ್ವರ್ಯವಂತರಾದವರು ಇನ್ನೂ ಐಶ್ವರ್ಯವಂತರಾಗುವಂತೆ ಮತ್ತು ಸ್ವಾಮ್ಯವಿಲ್ಲದವರು ಇನ್ನೂ ದುಃಸ್ಥಿತಿಯ ಜೀವನ ನಡೆಸುವಂತೆ ಮಾಡುವುದರಿಂದಲೂ ಬಂಡವಾಳಶಾಹಿ ವ್ಯವಸ್ಥೆ ಮತ್ತು ಅದರ ಪ್ರತಿನಿಧಿ ಬಂಡವಾಳವರ್ಗವನ್ನು ತೊಡೆದು ಹಾಕಲಾಗಿದೆ. ಉತ್ಪಾದನಾ ಸಾಧನಗಳನ್ನು ಖಾಸಗಿಯಾಗಿ ಹೊಂದಿರುವುದು ಸಮಾಜಕ್ಕೆ ಕಂಟಕವೆಂದು ಬಗೆದ ಅವುಗಳನ್ನು ಸಮಾಜೀಕರಣ ಮಾಡಲಾಗಿದೆ. ದುಡಿಮೆ ಮಾಡಲು ಮತ್ತು ದುಡಿಮೆಗೆ ತಕ್ಕ ಪ್ರತಿಫಲ ಪಡೆಯಲು ಹಕ್ಕು ಇದೆ. ಶೋಷಣೆಗೆ ಅವಕಾಶವಿಲ್ಲದಿರುವ ಹೊಸ ಬಗೆಯ ಸಮಾಜವಾದೀ ಸ್ವಾತಂತ್ರ್ಯವನ್ನೂ ಸಮಾನತೆಯನ್ನೂ ವ್ಯಕ್ತಿಗಳು ಹೊಂದಿದ್ದಾರೆ. ಉತ್ಪಾದನಾ ಸಾಧನಗಳಲ್ಲಿ ಸ್ವಾಮ್ಯ, ಸಮಾಜದ ಏಳಿಗೆಗೆ ಮತ್ತು ವ್ಯಕ್ತಿಗಳ ಅಭಿವೃದ್ದಿಗೆ ಅಡ್ಡಿ ಬರುವ ಆರ್ಥಿಕ ಸ್ವಾತಂತ್ರ್ಯ ಇವುಗಳು ಹೊರತು, ಮಿಕ್ಕ ಎಲ್ಲ ವಿಧದ ಸ್ವಾತಂತ್ರ್ಯಗಳನ್ನು ವ್ಯಕ್ತಿಗಳು ಅನುಭವಿಸಲು ಬಾಧ್ಯರಿದ್ದಾರೆ. {{gap}}ರಷ್ಯಾದಲ್ಲಿ ಸಮಾಜವಾದೀ ವ್ಯವಸ್ಥೆ ಆರ್ಥಿಕವಾಗಿ ವರ್ಗರಹಿತ ಸಮಾಜವನ್ನು ಉದ್ಘೋಷಿಸಿದ್ದರೆ ರಾಜಕೀಯ ರಂಗದಲ್ಲಿ ಪ್ರಜಾಸತ್ತಾತ್ಮಕ ಧ್ಯೇಯಗಳಿಗೆ ಮಾನ್ಯತೆ ಕೊಟ್ಟಿದೆ.<sup>1</sup> {{rule}} <small>(1) ಸೋವಿಯಟ್ ಪ್ರಜಾಪ್ರಭುತ್ವಕ್ಕೂ ಬಂಡವಾಳಶಾಹಿ ಪ್ರಜಾಪ್ರಭುತ್ವಕ್ಕೂ ಹಲವು ವ್ಯತ್ಯಾಸಗಳಿವೆ. ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯ, ಕೂಲಿಯವರನ್ನು ನೇಮಿಸಿಕೊಂಡು ಲಾಭಕ್ಕಾಗಿ ನಡೆಯುವ ಉತ್ಪಾದನೆ, ಖಾಸಗಿ ಆರ್ಥಿಕ ವ್ಯವಹಾರ ಉದ್ಯಮಗಳಲ್ಲಿ ಸರ್ಕಾರ ಪ್ರವೇಶಿಸದಿರುವುದು, ಇವು ಬಂಡವಾಳಶಾಹಿ ಪ್ರಜಾಸತ್ತೆ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯಾಗಿದೆ. ಇದಕ್ಕೆ ಪ್ರತಿಯಾಗಿ ಸಮಾಜವಾದೀ ಆರ್ಥಿಕವ್ಯವಸ್ಥೆ ಸೋವಿಯಟ್ ಪ್ರಜಾಸತ್ತೆಯ ಆಧಾರವಾಗಿದೆ, ಆರ್ಥಿಕ ವ್ಯವಸ್ಥೆಗೂ ರಾಜ್ಯ ವ್ಯವಸ್ಥೆಗೂ ನಿಕಟ ಸಂಬಂಧವಿದೆ ಎಂದು ಸೋವಿಯಟ್ ಪ್ರಜಾಸತ್ತೆ ತಿಳಿಸುತ್ತದೆ. ಬಂಡವಾಳ ಆರ್ಥಿಕವ್ಯವಸ್ಥೆಯ</small><noinclude></noinclude> nkt1im4rv4hl2dl3w64ep4t6mf0kapu ಪುಟ:ಕಮ್ಯೂನಿಸಂ.djvu/೧೧೫ 104 90740 323969 230743 2026-06-02T04:13:52Z Vikashegde 1258 /* Proofread */ 323969 proofread-page text/x-wiki <noinclude><pagequality level="3" user="Vikashegde" />{{rh|center=ರಷ್ಯಾದಲ್ಲಿ ಸಮಾಜವಾದ|left=|right=೧೦೩}}</noinclude>{{gap}}ಮೊದಲನೆಯದಾಗಿ, ರಷ್ಯಾದಲ್ಲಿದ್ದ ವಿವಿಧ ಜನಾಂಗಗಳಿಗೆ ಸ್ವಯಂ ನಿರ್ಣಯದ ಹಕ್ಕನ್ನು (Right of Self Determination) ನೀಡಲಾಗಿದೆ. ಪ್ರತಿ ಜನಾಂಗ ತನ್ನ ಸ್ವಂತ ಇಚ್ಛೆಯಿಂದ ಸಮಾಜವಾದೀ ರಾಜ್ಯ ವ್ಯವಸ್ಥೆಯಲ್ಲಿ ಭಾಗವಹಿಸಲು ಅವಕಾಶ ಕೊಡಲಾಗಿದೆ. ಈ ಜನಾಂಗಗಳು ರಷ್ಯಾದೇಶದಲ್ಲಿ ಸಂಯುಕ್ತ ಸಮಾಜವಾದೀ ಸೋವಿಯಟ್ ರಾಷ್ಟ್ರ (Union of the Soviet Socialist Republics) ಎಂಬ ಹೆಸರಿನಿಂದ ಒಂದು ಒಕ್ಕೂಟಕ್ಕೆ ಸೇರಿವೆ. {{gap}}ಎರಡನೆಯದಾಗಿ, ಕ್ರಾಂತಿಯ ಕಾಲದಲ್ಲಿ ಕಾರ್ಮಿಕವರ್ಗದ ಅಧಿಕಾರವನ್ನು ವ್ಯಕ್ತಪಡಿಸುವ ಸೋವಿಯಟ್ ಗಳು (ಆಡಳಿತ ಸಮಿತಿಗಳು) ಪ್ರತಿಸರ್ಕಾರದ ಹಾಗೆ (Counter Government) ದೇಶದಾದ್ಯಂತ ಉದ್ಭವಿಸಿದವು. ಕಾರ್ಮಿಕರ ಏಕೈಕ ಪ್ರಭುತ್ವವನ್ನು ಪ್ರತಿಬಿಂಬಿಸುವ ಕೇಂದ್ರಗಳಾದವು. ಸೋವಿಯಟ್ ಗಳಿಂದ ಚುನಾಯಿತರಾದ ಪ್ರತಿನಿಧಿಗಳಿಂದ ಪ್ರಾಂತೀಯ ಮತ್ತು ಕೇಂದ್ರ ಸರ್ಕಾರ ರಚನೆಯಾಯಿತು. {{gap}}ಮೂರನೆಯದಾಗಿ, ಸೋವಿಯಟ್ ಪೌರರು ವಾಕ್ ಸ್ವಾತಂತ್ರ ವನ್ನೂ, ಅಭಿಪ್ರಾಯ ಸ್ವಾತಂತ್ರ್ಯವನ್ನೂ, ಸಂಘ ಸ್ವಾತಂತ್ರ್ಯವನ್ನೂ, ಮತಕೊಡುವ {{rule}} <small> ಆಧಾರದ ಮೇಲೆ ರೂಪಿತವಾಗಿರುವ ಪ್ರಜಾಸತ್ತೆ ನೈಜ ಪ್ರಜಾಸತ್ತೆಯಾಗುವುದಿಲ್ಲ. (Real Dermocracy), ಹಣದ ಪ್ರಭಾವವಿದ್ದು, ರಾಜಕೀಯವೂ, ಸಾರ್ವಜನಿಕ ಜೀವನವೂ ಹಣವುಳ್ಳವರ ಅಥವ ಅವರ ಹಿಂಬಾಲಕರ ಅಥವ ರಾಜಕೀಯ ನಡೆಸಿ ಹಣ ಸಂಪಾದನೆ ಮಾಡಿಕೊಳ್ಳುವವರ ಸ್ವತ್ತು ಅಥವ ಉದ್ಯೋಗವಾಗುತ್ತದೆ. ಸರ್ಕಾರವು ಹಣಗಾರರ ಅಥವ ಸ್ವಾಮ್ಯವುಳ್ಳವರ ಹಿತರಕ್ಷಣೆಗಾಗಿ ಇರುತ್ತದೆ. ವರ್ಗಗಳ ಇರುವಿಕೆಯನ್ನೂ ಸ್ವಾಮ್ಯದ ಪ್ರಭಾವವನ್ನೂ ಹೋರಾಟ ಹೂಡಿದ ರಷ್ಯಾದ ಸಮಾಜವಾದೀ ಕ್ರಾಂತಿ ತನ್ನದೇ ಆದ ಮತ್ತು ಕಾರ್ಮಿಕ ವರ್ಗದ ಏಕೈಕ ಪ್ರಭುತ್ವವಿರುವ ಕಾರ್ಮಿಕರ ಪ್ರಜಾಸತ್ತೆಯನ್ನು ಸ್ಥಾಪಿಸಿದೆ, ಹೊಸ ಆರ್ಥಿಕವ್ಯವಸ್ಥೆಯ ಸನ್ನಿವೇಶದಲ್ಲಿ ಹೊಸ ರೂಪದ ರಾಜಕೀಯವ್ಯವಸ್ಥೆಗೆ ಅಣಿಮಾಡಿದೆ. ಆದುದರಿಂದ ರಷ್ಯಾದ ಕಾರ್ಮಿಕರ ಪ್ರಜಾಸತ್ತೆಯನ್ನು ಬಂಡವಾಳಶಾಹಿ ಪ್ರಜಾಸತ್ತೆ ಕೊಟ್ಟಿರುವ ಲಕ್ಷಣಗಳಿಂದ ಅಳೆದು ನೋಡುವುದು ತಪ್ಪಾಗುತ್ತದೆ. {{gap}}ಬಂಡವಾಳಶಾಹಿ ಪ್ರಜಾಸತ್ತೆಗೂ ಪಾರ್ಲಿಯಮೆಂಟರಿ ಪ್ರಜಾಸತ್ತೆಗೂ ಇರುವ ಸಂಬಂಧದಬಗ್ಗೆ ಮತ್ತು ಪ್ರಜಾಸತ್ತೆಯಬಗ್ಗೆ ಮಾರ್ಕ್ಸ್ ವಾದದ ಧೋರಣೆ ಬಗ್ಗೆ ಮುಂದೆ 9 ನೇ ಅಧ್ಯಾಯವನ್ನು ನೋಡಿ.</small><noinclude></noinclude> k8ela1zu7txv3eqpn2m6xwdhcho7jyv 324000 323969 2026-06-02T06:00:39Z Pragathi. BH 7585 /* Validated */ 324000 proofread-page text/x-wiki <noinclude><pagequality level="4" user="Pragathi. BH" />{{rh|center=ರಷ್ಯಾದಲ್ಲಿ ಸಮಾಜವಾದ|left=|right=೧೦೩}}</noinclude>{{gap}}ಮೊದಲನೆಯದಾಗಿ, ರಷ್ಯಾದಲ್ಲಿದ್ದ ವಿವಿಧ ಜನಾಂಗಗಳಿಗೆ ಸ್ವಯಂ ನಿರ್ಣಯದ ಹಕ್ಕನ್ನು (Right of Self Determination) ನೀಡಲಾಗಿದೆ. ಪ್ರತಿ ಜನಾಂಗ ತನ್ನ ಸ್ವಂತ ಇಚ್ಛೆಯಿಂದ ಸಮಾಜವಾದೀ ರಾಜ್ಯ ವ್ಯವಸ್ಥೆಯಲ್ಲಿ ಭಾಗವಹಿಸಲು ಅವಕಾಶ ಕೊಡಲಾಗಿದೆ. ಈ ಜನಾಂಗಗಳು ರಷ್ಯಾದೇಶದಲ್ಲಿ ಸಂಯುಕ್ತ ಸಮಾಜವಾದೀ ಸೋವಿಯಟ್ ರಾಷ್ಟ್ರ (Union of the Soviet Socialist Republics) ಎಂಬ ಹೆಸರಿನಿಂದ ಒಂದು ಒಕ್ಕೂಟಕ್ಕೆ ಸೇರಿವೆ. {{gap}}ಎರಡನೆಯದಾಗಿ, ಕ್ರಾಂತಿಯ ಕಾಲದಲ್ಲಿ ಕಾರ್ಮಿಕವರ್ಗದ ಅಧಿಕಾರವನ್ನು ವ್ಯಕ್ತಪಡಿಸುವ ಸೋವಿಯಟ್ ಗಳು (ಆಡಳಿತ ಸಮಿತಿಗಳು) ಪ್ರತಿಸರ್ಕಾರದ ಹಾಗೆ (Counter Government) ದೇಶದಾದ್ಯಂತ ಉದ್ಭವಿಸಿದವು. ಕಾರ್ಮಿಕರ ಏಕೈಕ ಪ್ರಭುತ್ವವನ್ನು ಪ್ರತಿಬಿಂಬಿಸುವ ಕೇಂದ್ರಗಳಾದವು. ಸೋವಿಯಟ್ ಗಳಿಂದ ಚುನಾಯಿತರಾದ ಪ್ರತಿನಿಧಿಗಳಿಂದ ಪ್ರಾಂತೀಯ ಮತ್ತು ಕೇಂದ್ರ ಸರ್ಕಾರ ರಚನೆಯಾಯಿತು. {{gap}}ಮೂರನೆಯದಾಗಿ, ಸೋವಿಯಟ್ ಪೌರರು ವಾಕ್ ಸ್ವಾತಂತ್ರ ವನ್ನೂ, ಅಭಿಪ್ರಾಯ ಸ್ವಾತಂತ್ರ್ಯವನ್ನೂ, ಸಂಘ ಸ್ವಾತಂತ್ರ್ಯವನ್ನೂ, ಮತಕೊಡುವ {{rule}} <small> ಆಧಾರದ ಮೇಲೆ ರೂಪಿತವಾಗಿರುವ ಪ್ರಜಾಸತ್ತೆ ನೈಜ ಪ್ರಜಾಸತ್ತೆಯಾಗುವುದಿಲ್ಲ. (Real Dermocracy), ಹಣದ ಪ್ರಭಾವವಿದ್ದು, ರಾಜಕೀಯವೂ, ಸಾರ್ವಜನಿಕ ಜೀವನವೂ ಹಣವುಳ್ಳವರ ಅಥವ ಅವರ ಹಿಂಬಾಲಕರ ಅಥವ ರಾಜಕೀಯ ನಡೆಸಿ ಹಣ ಸಂಪಾದನೆ ಮಾಡಿಕೊಳ್ಳುವವರ ಸ್ವತ್ತು ಅಥವ ಉದ್ಯೋಗವಾಗುತ್ತದೆ. ಸರ್ಕಾರವು ಹಣಗಾರರ ಅಥವ ಸ್ವಾಮ್ಯವುಳ್ಳವರ ಹಿತರಕ್ಷಣೆಗಾಗಿ ಇರುತ್ತದೆ. ವರ್ಗಗಳ ಇರುವಿಕೆಯನ್ನೂ ಸ್ವಾಮ್ಯದ ಪ್ರಭಾವವನ್ನೂ ಹೋರಾಟ ಹೂಡಿದ ರಷ್ಯಾದ ಸಮಾಜವಾದೀ ಕ್ರಾಂತಿ ತನ್ನದೇ ಆದ ಮತ್ತು ಕಾರ್ಮಿಕ ವರ್ಗದ ಏಕೈಕ ಪ್ರಭುತ್ವವಿರುವ ಕಾರ್ಮಿಕರ ಪ್ರಜಾಸತ್ತೆಯನ್ನು ಸ್ಥಾಪಿಸಿದೆ, ಹೊಸ ಆರ್ಥಿಕವ್ಯವಸ್ಥೆಯ ಸನ್ನಿವೇಶದಲ್ಲಿ ಹೊಸ ರೂಪದ ರಾಜಕೀಯವ್ಯವಸ್ಥೆಗೆ ಅಣಿಮಾಡಿದೆ. ಆದುದರಿಂದ ರಷ್ಯಾದ ಕಾರ್ಮಿಕರ ಪ್ರಜಾಸತ್ತೆಯನ್ನು ಬಂಡವಾಳಶಾಹಿ ಪ್ರಜಾಸತ್ತೆ ಕೊಟ್ಟಿರುವ ಲಕ್ಷಣಗಳಿಂದ ಅಳೆದು ನೋಡುವುದು ತಪ್ಪಾಗುತ್ತದೆ. {{gap}}ಬಂಡವಾಳಶಾಹಿ ಪ್ರಜಾಸತ್ತೆಗೂ ಪಾರ್ಲಿಯಮೆಂಟರಿ ಪ್ರಜಾಸತ್ತೆಗೂ ಇರುವ ಸಂಬಂಧದಬಗ್ಗೆ ಮತ್ತು ಪ್ರಜಾಸತ್ತೆಯಬಗ್ಗೆ ಮಾರ್ಕ್ಸ್ ವಾದದ ಧೋರಣೆ ಬಗ್ಗೆ ಮುಂದೆ 9 ನೇ ಅಧ್ಯಾಯವನ್ನು ನೋಡಿ.</small><noinclude></noinclude> m068rcsr2enmngh303r53zzy0nu1tix ಪುಟ:ಕಮ್ಯೂನಿಸಂ.djvu/೧೧೬ 104 90741 324001 230744 2026-06-02T06:06:32Z Adhya.B 8391 /* Proofread */ 324001 proofread-page text/x-wiki <noinclude><pagequality level="3" user="Adhya.B" />{{rh|left=೧೦೪|center=ವೈಜ್ಞಾನಿಕ ಸಮಾಜವಾದ|right=}}</noinclude> ಸ್ವಾತಂತ್ರ್ಯವನ್ನೂ ಮತ್ತು ಪ್ರತಿನಿಧಿಯಾಗಿ ಚುನಾವಣೆಗೆ ನಿಲ್ಲುವ ಸ್ವಾತಂತ್ರ್ಯದ ಹಕ್ಕನ್ನೂ ಪಡೆದಿದ್ದಾರೆ, ಆದರೆ ಯಾವ ವ್ಯಕ್ತಿಗೂ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಪುಷ್ಟಿಕರಿಸಿ ಪ್ರಚಾರಮಾಡುವ ಸ್ವಾತಂತ್ರ್ಯಕ್ಕೂ ಅಥವಾ ಆ ರೀತಿಯ ವ್ಯವಸ್ಥೆಯನ್ನು ತರುವ ಉದ್ದೇಶ ದಿಂದ ರಾಜಕೀಯಪಕ್ಷವೊಂದರ ನಿರ್ಮಾಣಕ್ಕೂ ಅವಕಾಶವಿಲ್ಲ, ಏಕೆಂದರೆ, ಶೋಷಣೆ ಮತ್ತು ಬಂಡವಾಳ ಆರ್ಥಿಕ ವ್ಯವಸ್ಥೆ ಯ ನಿರ್ಮೂಲಕ್ಕಾಗಿ ಕ್ರಾಂತಿಯು ನಡೆದಿದೆ. ಆದುದರಿಂದ ಕ್ರಾಂತಿಯ ರಕ್ಷಣೆ, ವ್ಯವಸ್ಥೆ ಹೊಂದು ತಲಿರುವ ಸಮಾಜವಾದೀ ವ್ಯವಸ್ಥೆಯ ಸಂರಕ್ಷಣೆ ಕಾರ್ಮಿಕವರ್ಗದ ಪ್ರಥಮ ಕರ್ತವ್ಯವಾಗಿದೆ. ಸ್ವಾಮ್ಯದ ಪುಷ್ಟಿಕರಣದ ಬಗ್ಗೆ ಅಭಿಪ್ರಾಯ ಸ್ವಾತಂತ್ರ ಪ್ರಚಾರ ಸ್ವಾತಂತ್ರ್ಯ, ಇತ್ಯಾದಿ ಕೂಡಲು ಕಾರ್ಮಿಕವರ್ಗ ಇನ್ನೂ ಸಿದ್ಧವಾಗಿಲ್ಲ. ಆದುದರಿಂದ ಕ್ರಾಂತಿಯ ವಿರುದ್ಧ ವರ್ತಿಸುವವ ರನ್ನು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಮಾಜವಾದೀ ವ್ಯವಸ್ಥೆಗೆ ಚ್ಯುತಿ ತರುವ ಕ್ರಿಯಾತ್ಮಕರನ್ನು ದಂಡಿಸಲಾಗುವುದು, {{gap}}ನಾಲ್ಕ ಯದಾಗಿ, ಸೋವಿಯಟ್ ಪ್ರಜಾಪ್ರಭುತ್ವದಲ್ಲಿ ವಿವಿಧ ರಾಜ ಕೀಯ ಪಕ್ಷಗಳ ರಚನೆಗೆ ಸ್ವಾತಂತ್ರ್ಯವಿಲ್ಲ; ಒಂದೇ ಒಂದು “ಮುಂದಾಳು ಸಮೂಹ ” (Vanguard) ಇರಲು ಅವಕಾಶವಿದೆ. ಇದಕ್ಕೆ ಕಾರಣ ಗಳನ್ನು ಕೊಡಲಾಗಿದೆ. ಕೇವಲ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದಾ ಗಿದ್ದರೆ ವಿವಿಧ ಮತ್ತು ಪ್ರತಿ (Counter) ರಾಜಕೀಯ ಪಕ್ಷಗಳ ನಿರ್ಮಾಣ {{Rule}} {{gap}} 1.ಈ ಮುಂದಾಳು ಸಮೂಹವನ್ನು ಪಕ್ಷ (Party) ಎಂಮ ಸಂಭೋದಿಸು ವುದೂ ಉಂಟು. ಆದರೆ ಇದು ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿರುವ ರಾಜ ಕೀಯ ಪಕ್ಷಗಳಂತೆ (Political Parties) ರಾಜಕೀಯ ಪಕ್ಷವಲ್ಲ, ಸಮಾಜವಾದೀ ವ್ಯವಸ್ಥೆಯಲ್ಲಿ ವರ್ಗಗಳು ನಾಶ ಮಾಡಲ್ಪಟ್ಟಿರುವುದರಿಂದ ವರ್ಗ ಹಿತವನ್ನು (clas8-interest) ಸಂರಕ್ಷಿಸಲಿಕ್ಕೆ ಯಾವ ರಾಜಕೀಯ ಪಕ್ಷದ ಆವಶ್ಯಕತೆಯೂ ಇಲ್ಲ. ವರ್ಗರಹಿತ (class-less) ಸಮಾಜದಲ್ಲಿ ಸಮಾಜವಾದೀ ವ್ಯವಸ್ಥೆಯ ಅಭಿವೃದ್ಧಿಗಾಗಿ ಮುಂದಾಳತ್ವವನ್ನು ನಿರ್ವಹಿಸುವ ಪ್ರಶ್ನೆ ಮಾತ್ರ ಇರುತ್ತದೆ. ಆದುದರಿಂದ ಈ ಮುಂದಾಳು ಸಮೂಹದ ನೇತೃತ್ವವನ್ನು ಏಕಪಕ್ಷದ ಸರ್ಕಾರ ನಂದು ಬಗೆಯುವುದು ತಪ್ಪಾಗುತ್ತದೆ. ಸಮಾಜವಾದೀ ವ್ಯವಸ್ಥೆಯಲ್ಲಿ ಪಕ್ಷದ ಆವಶ್ಯಕತೆಯೇ ಇಲ್ಲದಿರುವಾಗ ಏಕಪಕ್ಷದ ಸರ್ಕಾರದ (one party Government) ಸಮಸ್ಯೆಯೇ ಉದ್ಭವಿಸುವುದಿಲ್ಲ. 1 1.<noinclude></noinclude> lg4l87be9tuvssxavivlgoymgrkdq8b 324002 324001 2026-06-02T06:07:54Z Adhya.B 8391 324002 proofread-page text/x-wiki <noinclude><pagequality level="3" user="Adhya.B" />{{rh|left=೧೦೪|center=ವೈಜ್ಞಾನಿಕ ಸಮಾಜವಾದ|right=}}</noinclude> ಸ್ವಾತಂತ್ರ್ಯವನ್ನೂ ಮತ್ತು ಪ್ರತಿನಿಧಿಯಾಗಿ ಚುನಾವಣೆಗೆ ನಿಲ್ಲುವ ಸ್ವಾತಂತ್ರ್ಯದ ಹಕ್ಕನ್ನೂ ಪಡೆದಿದ್ದಾರೆ, ಆದರೆ ಯಾವ ವ್ಯಕ್ತಿಗೂ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಪುಷ್ಟಿಕರಿಸಿ ಪ್ರಚಾರಮಾಡುವ ಸ್ವಾತಂತ್ರ್ಯಕ್ಕೂ ಅಥವಾ ಆ ರೀತಿಯ ವ್ಯವಸ್ಥೆಯನ್ನು ತರುವ ಉದ್ದೇಶ ದಿಂದ ರಾಜಕೀಯಪಕ್ಷವೊಂದರ ನಿರ್ಮಾಣಕ್ಕೂ ಅವಕಾಶವಿಲ್ಲ, ಏಕೆಂದರೆ, ಶೋಷಣೆ ಮತ್ತು ಬಂಡವಾಳ ಆರ್ಥಿಕ ವ್ಯವಸ್ಥೆ ಯ ನಿರ್ಮೂಲಕ್ಕಾಗಿ ಕ್ರಾಂತಿಯು ನಡೆದಿದೆ. ಆದುದರಿಂದ ಕ್ರಾಂತಿಯ ರಕ್ಷಣೆ, ವ್ಯವಸ್ಥೆ ಹೊಂದು ತಲಿರುವ ಸಮಾಜವಾದೀ ವ್ಯವಸ್ಥೆಯ ಸಂರಕ್ಷಣೆ ಕಾರ್ಮಿಕವರ್ಗದ ಪ್ರಥಮ ಕರ್ತವ್ಯವಾಗಿದೆ. ಸ್ವಾಮ್ಯದ ಪುಷ್ಟಿಕರಣದ ಬಗ್ಗೆ ಅಭಿಪ್ರಾಯ ಸ್ವಾತಂತ್ರ ಪ್ರಚಾರ ಸ್ವಾತಂತ್ರ್ಯ, ಇತ್ಯಾದಿ ಕೂಡಲು ಕಾರ್ಮಿಕವರ್ಗ ಇನ್ನೂ ಸಿದ್ಧವಾಗಿಲ್ಲ. ಆದುದರಿಂದ ಕ್ರಾಂತಿಯ ವಿರುದ್ಧ ವರ್ತಿಸುವವ ರನ್ನು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಮಾಜವಾದೀ ವ್ಯವಸ್ಥೆಗೆ ಚ್ಯುತಿ ತರುವ ಕ್ರಿಯಾತ್ಮಕರನ್ನು ದಂಡಿಸಲಾಗುವುದು, {{gap}}ನಾಲ್ಕ ಯದಾಗಿ, ಸೋವಿಯಟ್ ಪ್ರಜಾಪ್ರಭುತ್ವದಲ್ಲಿ ವಿವಿಧ ರಾಜ ಕೀಯ ಪಕ್ಷಗಳ ರಚನೆಗೆ ಸ್ವಾತಂತ್ರ್ಯವಿಲ್ಲ; ಒಂದೇ ಒಂದು “ಮುಂದಾಳು ಸಮೂಹ ” (Vanguard) ಇರಲು ಅವಕಾಶವಿದೆ. ಇದಕ್ಕೆ ಕಾರಣ ಗಳನ್ನು ಕೊಡಲಾಗಿದೆ. ಕೇವಲ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದಾ ಗಿದ್ದರೆ ವಿವಿಧ ಮತ್ತು ಪ್ರತಿ (Counter) ರಾಜಕೀಯ ಪಕ್ಷಗಳ ನಿರ್ಮಾಣ {{Rule}} {{gap}} 1.ಈ ಮುಂದಾಳು ಸಮೂಹವನ್ನು ಪಕ್ಷ (Party) ಎಂಮ ಸಂಭೋದಿಸು ವುದೂ ಉಂಟು. ಆದರೆ ಇದು ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿರುವ ರಾಜ ಕೀಯ ಪಕ್ಷಗಳಂತೆ (Political Parties) ರಾಜಕೀಯ ಪಕ್ಷವಲ್ಲ, ಸಮಾಜವಾದೀ ವ್ಯವಸ್ಥೆಯಲ್ಲಿ ವರ್ಗಗಳು ನಾಶ ಮಾಡಲ್ಪಟ್ಟಿರುವುದರಿಂದ ವರ್ಗ ಹಿತವನ್ನು (clas8-interest) ಸಂರಕ್ಷಿಸಲಿಕ್ಕೆ ಯಾವ ರಾಜಕೀಯ ಪಕ್ಷದ ಆವಶ್ಯಕತೆಯೂ ಇಲ್ಲ. ವರ್ಗರಹಿತ (class-less) ಸಮಾಜದಲ್ಲಿ ಸಮಾಜವಾದೀ ವ್ಯವಸ್ಥೆಯ ಅಭಿವೃದ್ಧಿಗಾಗಿ ಮುಂದಾಳತ್ವವನ್ನು ನಿರ್ವಹಿಸುವ ಪ್ರಶ್ನೆ ಮಾತ್ರ ಇರುತ್ತದೆ. ಆದುದರಿಂದ ಈ ಮುಂದಾಳು ಸಮೂಹದ ನೇತೃತ್ವವನ್ನು ಏಕಪಕ್ಷದ ಸರ್ಕಾರ ನಂದು ಬಗೆಯುವುದು ತಪ್ಪಾಗುತ್ತದೆ. ಸಮಾಜವಾದೀ ವ್ಯವಸ್ಥೆಯಲ್ಲಿ ಪಕ್ಷದ ಆವಶ್ಯಕತೆಯೇ ಇಲ್ಲದಿರುವಾಗ ಏಕಪಕ್ಷದ ಸರ್ಕಾರದ (one party Government) ಸಮಸ್ಯೆಯೇ ಉದ್ಭವಿಸುವುದಿಲ್ಲ.<noinclude></noinclude> svkrpvb79jzzwdjdbgsowe10q9rp66i 324003 324002 2026-06-02T06:08:58Z Adhya.B 8391 324003 proofread-page text/x-wiki <noinclude><pagequality level="3" user="Adhya.B" />{{rh|left=೧೦೪|center=ವೈಜ್ಞಾನಿಕ ಸಮಾಜವಾದ|right=}}</noinclude> ಸ್ವಾತಂತ್ರ್ಯವನ್ನೂ ಮತ್ತು ಪ್ರತಿನಿಧಿಯಾಗಿ ಚುನಾವಣೆಗೆ ನಿಲ್ಲುವ ಸ್ವಾತಂತ್ರ್ಯದ ಹಕ್ಕನ್ನೂ ಪಡೆದಿದ್ದಾರೆ, ಆದರೆ ಯಾವ ವ್ಯಕ್ತಿಗೂ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಪುಷ್ಟಿಕರಿಸಿ ಪ್ರಚಾರಮಾಡುವ ಸ್ವಾತಂತ್ರ್ಯಕ್ಕೂ ಅಥವಾ ಆ ರೀತಿಯ ವ್ಯವಸ್ಥೆಯನ್ನು ತರುವ ಉದ್ದೇಶ ದಿಂದ ರಾಜಕೀಯಪಕ್ಷವೊಂದರ ನಿರ್ಮಾಣಕ್ಕೂ ಅವಕಾಶವಿಲ್ಲ, ಏಕೆಂದರೆ, ಶೋಷಣೆ ಮತ್ತು ಬಂಡವಾಳ ಆರ್ಥಿಕ ವ್ಯವಸ್ಥೆ ಯ ನಿರ್ಮೂಲಕ್ಕಾಗಿ ಕ್ರಾಂತಿಯು ನಡೆದಿದೆ. ಆದುದರಿಂದ ಕ್ರಾಂತಿಯ ರಕ್ಷಣೆ, ವ್ಯವಸ್ಥೆ ಹೊಂದು ತಲಿರುವ ಸಮಾಜವಾದೀ ವ್ಯವಸ್ಥೆಯ ಸಂರಕ್ಷಣೆ ಕಾರ್ಮಿಕವರ್ಗದ ಪ್ರಥಮ ಕರ್ತವ್ಯವಾಗಿದೆ. ಸ್ವಾಮ್ಯದ ಪುಷ್ಟಿಕರಣದ ಬಗ್ಗೆ ಅಭಿಪ್ರಾಯ ಸ್ವಾತಂತ್ರ ಪ್ರಚಾರ ಸ್ವಾತಂತ್ರ್ಯ, ಇತ್ಯಾದಿ ಕೂಡಲು ಕಾರ್ಮಿಕವರ್ಗ ಇನ್ನೂ ಸಿದ್ಧವಾಗಿಲ್ಲ. ಆದುದರಿಂದ ಕ್ರಾಂತಿಯ ವಿರುದ್ಧ ವರ್ತಿಸುವವ ರನ್ನು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಮಾಜವಾದೀ ವ್ಯವಸ್ಥೆಗೆ ಚ್ಯುತಿ ತರುವ ಕ್ರಿಯಾತ್ಮಕರನ್ನು ದಂಡಿಸಲಾಗುವುದು, {{gap}}ನಾಲ್ಕ ಯದಾಗಿ, ಸೋವಿಯಟ್ ಪ್ರಜಾಪ್ರಭುತ್ವದಲ್ಲಿ ವಿವಿಧ ರಾಜ ಕೀಯ ಪಕ್ಷಗಳ ರಚನೆಗೆ ಸ್ವಾತಂತ್ರ್ಯವಿಲ್ಲ; ಒಂದೇ ಒಂದು “ಮುಂದಾಳು ಸಮೂಹ ” (Vanguard) ಇರಲು ಅವಕಾಶವಿದೆ. ಇದಕ್ಕೆ ಕಾರಣ ಗಳನ್ನು ಕೊಡಲಾಗಿದೆ. ಕೇವಲ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದಾ ಗಿದ್ದರೆ ವಿವಿಧ ಮತ್ತು ಪ್ರತಿ (Counter) ರಾಜಕೀಯ ಪಕ್ಷಗಳ ನಿರ್ಮಾಣ {{Rule}} <small> {{gap}} 1.ಈ ಮುಂದಾಳು ಸಮೂಹವನ್ನು ಪಕ್ಷ (Party) ಎಂಮ ಸಂಭೋದಿಸು ವುದೂ ಉಂಟು. ಆದರೆ ಇದು ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿರುವ ರಾಜ ಕೀಯ ಪಕ್ಷಗಳಂತೆ (Political Parties) ರಾಜಕೀಯ ಪಕ್ಷವಲ್ಲ, ಸಮಾಜವಾದೀ ವ್ಯವಸ್ಥೆಯಲ್ಲಿ ವರ್ಗಗಳು ನಾಶ ಮಾಡಲ್ಪಟ್ಟಿರುವುದರಿಂದ ವರ್ಗ ಹಿತವನ್ನು (clas8-interest) ಸಂರಕ್ಷಿಸಲಿಕ್ಕೆ ಯಾವ ರಾಜಕೀಯ ಪಕ್ಷದ ಆವಶ್ಯಕತೆಯೂ ಇಲ್ಲ. ವರ್ಗರಹಿತ (class-less) ಸಮಾಜದಲ್ಲಿ ಸಮಾಜವಾದೀ ವ್ಯವಸ್ಥೆಯ ಅಭಿವೃದ್ಧಿಗಾಗಿ ಮುಂದಾಳತ್ವವನ್ನು ನಿರ್ವಹಿಸುವ ಪ್ರಶ್ನೆ ಮಾತ್ರ ಇರುತ್ತದೆ. ಆದುದರಿಂದ ಈ ಮುಂದಾಳು ಸಮೂಹದ ನೇತೃತ್ವವನ್ನು ಏಕಪಕ್ಷದ ಸರ್ಕಾರ ನಂದು ಬಗೆಯುವುದು ತಪ್ಪಾಗುತ್ತದೆ. ಸಮಾಜವಾದೀ ವ್ಯವಸ್ಥೆಯಲ್ಲಿ ಪಕ್ಷದ ಆವಶ್ಯಕತೆಯೇ ಇಲ್ಲದಿರುವಾಗ ಏಕಪಕ್ಷದ ಸರ್ಕಾರದ (one party Government) ಸಮಸ್ಯೆಯೇ ಉದ್ಭವಿಸುವುದಿಲ್ಲ. </small><noinclude></noinclude> ovupl1t2y6w678voma9quaf6ta3ca72 324012 324003 2026-06-02T06:22:04Z Pragathi. BH 7585 /* Validated */ 324012 proofread-page text/x-wiki <noinclude><pagequality level="4" user="Pragathi. BH" />{{rh|left=೧೦೪|center=ವೈಜ್ಞಾನಿಕ ಸಮಾಜವಾದ|right=}}</noinclude> ಸ್ವಾತಂತ್ರ್ಯವನ್ನೂ ಮತ್ತು ಪ್ರತಿನಿಧಿಯಾಗಿ ಚುನಾವಣೆಗೆ ನಿಲ್ಲುವ ಸ್ವಾತಂತ್ರ್ಯದ ಹಕ್ಕನ್ನೂ ಪಡೆದಿದ್ದಾರೆ, ಆದರೆ ಯಾವ ವ್ಯಕ್ತಿಗೂ ಬಂಡವಾಳ ಆರ್ಥಿಕ ವ್ಯವಸ್ಥೆಯನ್ನು ಪುಷ್ಟಿಕರಿಸಿ ಪ್ರಚಾರಮಾಡುವ ಸ್ವಾತಂತ್ರ್ಯಕ್ಕೂ ಅಥವಾ ಆ ರೀತಿಯ ವ್ಯವಸ್ಥೆಯನ್ನು ತರುವ ಉದ್ದೇಶ ದಿಂದ ರಾಜಕೀಯಪಕ್ಷವೊಂದರ ನಿರ್ಮಾಣಕ್ಕೂ ಅವಕಾಶವಿಲ್ಲ, ಏಕೆಂದರೆ, ಶೋಷಣೆ ಮತ್ತು ಬಂಡವಾಳ ಆರ್ಥಿಕ ವ್ಯವಸ್ಥೆ ಯ ನಿರ್ಮೂಲಕ್ಕಾಗಿ ಕ್ರಾಂತಿಯು ನಡೆದಿದೆ. ಆದುದರಿಂದ ಕ್ರಾಂತಿಯ ರಕ್ಷಣೆ, ವ್ಯವಸ್ಥೆ ಹೊಂದು ತಲಿರುವ ಸಮಾಜವಾದೀ ವ್ಯವಸ್ಥೆಯ ಸಂರಕ್ಷಣೆ ಕಾರ್ಮಿಕವರ್ಗದ ಪ್ರಥಮ ಕರ್ತವ್ಯವಾಗಿದೆ. ಸ್ವಾಮ್ಯದ ಪುಷ್ಟಿಕರಣದ ಬಗ್ಗೆ ಅಭಿಪ್ರಾಯ ಸ್ವಾತಂತ್ರ ಪ್ರಚಾರ ಸ್ವಾತಂತ್ರ್ಯ, ಇತ್ಯಾದಿ ಕೂಡಲು ಕಾರ್ಮಿಕವರ್ಗ ಇನ್ನೂ ಸಿದ್ಧವಾಗಿಲ್ಲ. ಆದುದರಿಂದ ಕ್ರಾಂತಿಯ ವಿರುದ್ಧ ವರ್ತಿಸುವವ ರನ್ನು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಮಾಜವಾದೀ ವ್ಯವಸ್ಥೆಗೆ ಚ್ಯುತಿ ತರುವ ಕ್ರಿಯಾತ್ಮಕರನ್ನು ದಂಡಿಸಲಾಗುವುದು, {{gap}}ನಾಲ್ಕ ಯದಾಗಿ, ಸೋವಿಯಟ್ ಪ್ರಜಾಪ್ರಭುತ್ವದಲ್ಲಿ ವಿವಿಧ ರಾಜ ಕೀಯ ಪಕ್ಷಗಳ ರಚನೆಗೆ ಸ್ವಾತಂತ್ರ್ಯವಿಲ್ಲ; ಒಂದೇ ಒಂದು “ಮುಂದಾಳು ಸಮೂಹ ” (Vanguard) ಇರಲು ಅವಕಾಶವಿದೆ. ಇದಕ್ಕೆ ಕಾರಣ ಗಳನ್ನು ಕೊಡಲಾಗಿದೆ. ಕೇವಲ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದಾ ಗಿದ್ದರೆ ವಿವಿಧ ಮತ್ತು ಪ್ರತಿ (Counter) ರಾಜಕೀಯ ಪಕ್ಷಗಳ ನಿರ್ಮಾಣ {{Rule}} <small> {{gap}} 1.ಈ ಮುಂದಾಳು ಸಮೂಹವನ್ನು ಪಕ್ಷ (Party) ಎಂಮ ಸಂಭೋದಿಸು ವುದೂ ಉಂಟು. ಆದರೆ ಇದು ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿರುವ ರಾಜ ಕೀಯ ಪಕ್ಷಗಳಂತೆ (Political Parties) ರಾಜಕೀಯ ಪಕ್ಷವಲ್ಲ, ಸಮಾಜವಾದೀ ವ್ಯವಸ್ಥೆಯಲ್ಲಿ ವರ್ಗಗಳು ನಾಶ ಮಾಡಲ್ಪಟ್ಟಿರುವುದರಿಂದ ವರ್ಗ ಹಿತವನ್ನು (clas8-interest) ಸಂರಕ್ಷಿಸಲಿಕ್ಕೆ ಯಾವ ರಾಜಕೀಯ ಪಕ್ಷದ ಆವಶ್ಯಕತೆಯೂ ಇಲ್ಲ. ವರ್ಗರಹಿತ (class-less) ಸಮಾಜದಲ್ಲಿ ಸಮಾಜವಾದೀ ವ್ಯವಸ್ಥೆಯ ಅಭಿವೃದ್ಧಿಗಾಗಿ ಮುಂದಾಳತ್ವವನ್ನು ನಿರ್ವಹಿಸುವ ಪ್ರಶ್ನೆ ಮಾತ್ರ ಇರುತ್ತದೆ. ಆದುದರಿಂದ ಈ ಮುಂದಾಳು ಸಮೂಹದ ನೇತೃತ್ವವನ್ನು ಏಕಪಕ್ಷದ ಸರ್ಕಾರ ನಂದು ಬಗೆಯುವುದು ತಪ್ಪಾಗುತ್ತದೆ. ಸಮಾಜವಾದೀ ವ್ಯವಸ್ಥೆಯಲ್ಲಿ ಪಕ್ಷದ ಆವಶ್ಯಕತೆಯೇ ಇಲ್ಲದಿರುವಾಗ ಏಕಪಕ್ಷದ ಸರ್ಕಾರದ (one party Government) ಸಮಸ್ಯೆಯೇ ಉದ್ಭವಿಸುವುದಿಲ್ಲ. </small><noinclude></noinclude> 7ug7skmtcm6bsn9uj4us6okw6qi890m ಪುಟ:ಕಮ್ಯೂನಿಸಂ.djvu/೧೧೭ 104 90742 324004 230745 2026-06-02T06:13:24Z Adhya.B 8391 /* Proofread */ 324004 proofread-page text/x-wiki <noinclude><pagequality level="3" user="Adhya.B" />{{rh|center=ರಷ್ಯಾದಲ್ಲಿ ಸಮಾಜವಾದ|left=|right=೧೦೫}}</noinclude>81 ಇರುವ ಅಭಿಪ್ರಾಯಕ್ಕೆ ವಿಲ್ಲದೆ ಅದನ್ನು ವ್ಯಕ್ತಪಡಿಸಲು ಸಾಧ್ಯವಿದೆ. ಬರುವ ಅಭಿಪ್ರಾಯ ಬಹು ಮತದ್ದು ಇಲ್ಲವೇ ಅಲ್ಪಸಂಖ್ಯಾತರದು, ಸಮಾಜ ವ್ಯವಸ್ಥೆ ನಡೆಯಬೇಕಾ ದರೆ ಬಹುಮತದ ಅಭಿಪ್ರಾಯಕ್ಕೆ ಮಾನ್ಯತೆ ಇರಬೇಕು. ಭಿನ್ನಾಭಿ ಪ್ರಾಯವುಳ್ಳವರು ಒಂದು ಸಮಸ್ಯೆ ನಿರ್ಧಾರವಾಗುವ ವೇಳೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶವಿದೆ. ಭಿನ್ನಾಭಿಪ್ರಾಯವನ್ನು ಸಭೆ ಬಹುಮತದಿಂದ ಅನುಮೋದಿಸುವುದಾದರೆ ಅದೇ ಕಾರ್ಯನೀತಿಯಾ ಗುತ್ತದೆ, ಶಾಸನವಾಗುತ್ತದೆ. ಇಲ್ಲವಾದರೆ, ಅಲ್ಪ ಸಂಖ್ಯಾತರು ಬಹುಮತ ತಲೆಬಾಗಬೇಕು. {{gap}}ಅಭಿಪ್ರಾಯಗಳಲ್ಲಿ ಭಿನ್ನತೆ ಎರಡು ರೂಪಗಳಲ್ಲಿದೆ. ಒಂದನೆಯದು, ಆರ್ಥಿಕ ಸಮಾನತೆ ಇಲ್ಲದಿರುವ ವ್ಯವಸ್ಥೆಯಲ್ಲಿ ಬರಬಹುದಾದ ಭಿನ್ನಾಭಿ ಪ್ರಾಯಗಳು, ಭಿನ್ನಾಭಿಪ್ರಾಯ ಸ್ವಾಭಾವಿಕವಾದರೂ ಸ್ವಾಮ್ಯದ ಪ್ರಶ್ನೆ ಬಂದಾಗ ಸ್ವಾಮ್ಯ ಉಳ್ಳವರ ಮತ್ತು ಇಲ್ಲದವರ ಅಭಿಪ್ರಾಯ ಪರಸ್ಪರ ವ್ಯತಿರಿಕ್ತವಾಗಿ ಇರುತ್ತದೆ. ಏಕೆಂದರೆ, ಸ್ವಾಮ್ಯದ ಪ್ರಶ್ನೆ ಒಂದು ವರ್ಗದ ಜನರಿಗೆ ಸಂಬಂಧಿಸಿದೆ ಮತ್ತು ಸ್ವಾಮ್ಯವರ್ಗದ ಸ್ಥಾನಮಾನಗಳು ಅವರು ಹೊಂದಿರುವ ಸ್ವಾಮ್ಯದಿಂದ ನಿರ್ಧಾರವಾಗುತ್ತಿವೆ. ಆದುದರಿಂದ, ಸ್ವಾಮ್ಯ ವರ್ಗದ ಅಭಿಪ್ರಾಯವು ಪ್ರತ್ಯೇಕತೆ ಅಥವಾ ವಿಶೇಷಣತೆಯನ್ನು ಹೊಂದಿರು ವಂತೆ ಖಾಸಗೀ ಸ್ವಾಮ್ಯವು ಮಾಡಿವೆ. ಈ ವಿಶೇಷಣತೆಯಿಂದ ಕೂಡಿ ರುವ ಭಿನ್ನಾಭಿಪ್ರಾಯ ಮೂಲಭೂತವಾದದ್ದು ; ಮತ್ತು ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯಕ್ಕೆ ಎಡೆಯಿರ ವ ಆರ್ಥಿಕ ವ್ಯವಸ್ಥೆಗಳ ಲೆಲ್ಲಾ ಸ್ವಾಮ್ಯದ ರಕ್ಷಣೆಯೇ ವರ್ಗ ರಾಜಕೀಯಕ್ಕೂ (Class- politics) ಮತ್ತು ವಿವಿಧ ರಾಜಕೀಯ ಪಕ್ಷಗಳು ಜನ್ಮತಾಳುವುದಕ್ಕೂ ಕಾರಣವಾಗಿದೆ. ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿರುವ (Capitalist or Bourgeoisie Democracy) ವಿವಿಧ ರಾಜಕೀಯ ಪಕ್ಷಗಳ ಒಳ೦ತರಾಳ (ಸಮಾಜವಾದೀ ಪಕ್ಷಗಳು ಹೊರತು) ಇದೇ ಆಗಿದೆ. ಇದರಿಂದಾಗಿ, ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿರುವ ವಿವಿಧ ರಾಜಕೀಯ ಪಕ್ಷಗಳ ಸ್ವರೂಪವನ್ನೂ ಮತ್ತು ಧೈಯಗಳನ್ನೂ ವಿಂಗಡಿಸುವಾಗ ಇವು ಖಾಸಗೀ ಸ್ವಾಮ್ಯದ ಬಗ್ಗೆ ಹೊಂದಿರುವ ಧೋರಣೆಯನ್ನು ಮುಖ್ಯವಾಗಿ ಪರಿಗಣಿಸಬೇಕು. ಆಗಲೇ ಖಾಸಗೀ ಸ್ವಾಮ್ಯ ಇರುವ ಎಡೆ, ವಿವಿಧ<noinclude></noinclude> 5p97qbncy5l2wdu827opxsmtpgw2wht 324011 324004 2026-06-02T06:21:23Z Pragathi. BH 7585 /* Validated */ 324011 proofread-page text/x-wiki <noinclude><pagequality level="4" user="Pragathi. BH" />{{rh|center=ರಷ್ಯಾದಲ್ಲಿ ಸಮಾಜವಾದ|left=|right=೧೦೫}}</noinclude>81 ಇರುವ ಅಭಿಪ್ರಾಯಕ್ಕೆ ವಿಲ್ಲದೆ ಅದನ್ನು ವ್ಯಕ್ತಪಡಿಸಲು ಸಾಧ್ಯವಿದೆ. ಬರುವ ಅಭಿಪ್ರಾಯ ಬಹು ಮತದ್ದು ಇಲ್ಲವೇ ಅಲ್ಪಸಂಖ್ಯಾತರದು, ಸಮಾಜ ವ್ಯವಸ್ಥೆ ನಡೆಯಬೇಕಾ ದರೆ ಬಹುಮತದ ಅಭಿಪ್ರಾಯಕ್ಕೆ ಮಾನ್ಯತೆ ಇರಬೇಕು. ಭಿನ್ನಾಭಿ ಪ್ರಾಯವುಳ್ಳವರು ಒಂದು ಸಮಸ್ಯೆ ನಿರ್ಧಾರವಾಗುವ ವೇಳೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶವಿದೆ. ಭಿನ್ನಾಭಿಪ್ರಾಯವನ್ನು ಸಭೆ ಬಹುಮತದಿಂದ ಅನುಮೋದಿಸುವುದಾದರೆ ಅದೇ ಕಾರ್ಯನೀತಿಯಾ ಗುತ್ತದೆ, ಶಾಸನವಾಗುತ್ತದೆ. ಇಲ್ಲವಾದರೆ, ಅಲ್ಪ ಸಂಖ್ಯಾತರು ಬಹುಮತ ತಲೆಬಾಗಬೇಕು. {{gap}}ಅಭಿಪ್ರಾಯಗಳಲ್ಲಿ ಭಿನ್ನತೆ ಎರಡು ರೂಪಗಳಲ್ಲಿದೆ. ಒಂದನೆಯದು, ಆರ್ಥಿಕ ಸಮಾನತೆ ಇಲ್ಲದಿರುವ ವ್ಯವಸ್ಥೆಯಲ್ಲಿ ಬರಬಹುದಾದ ಭಿನ್ನಾಭಿ ಪ್ರಾಯಗಳು, ಭಿನ್ನಾಭಿಪ್ರಾಯ ಸ್ವಾಭಾವಿಕವಾದರೂ ಸ್ವಾಮ್ಯದ ಪ್ರಶ್ನೆ ಬಂದಾಗ ಸ್ವಾಮ್ಯ ಉಳ್ಳವರ ಮತ್ತು ಇಲ್ಲದವರ ಅಭಿಪ್ರಾಯ ಪರಸ್ಪರ ವ್ಯತಿರಿಕ್ತವಾಗಿ ಇರುತ್ತದೆ. ಏಕೆಂದರೆ, ಸ್ವಾಮ್ಯದ ಪ್ರಶ್ನೆ ಒಂದು ವರ್ಗದ ಜನರಿಗೆ ಸಂಬಂಧಿಸಿದೆ ಮತ್ತು ಸ್ವಾಮ್ಯವರ್ಗದ ಸ್ಥಾನಮಾನಗಳು ಅವರು ಹೊಂದಿರುವ ಸ್ವಾಮ್ಯದಿಂದ ನಿರ್ಧಾರವಾಗುತ್ತಿವೆ. ಆದುದರಿಂದ, ಸ್ವಾಮ್ಯ ವರ್ಗದ ಅಭಿಪ್ರಾಯವು ಪ್ರತ್ಯೇಕತೆ ಅಥವಾ ವಿಶೇಷಣತೆಯನ್ನು ಹೊಂದಿರು ವಂತೆ ಖಾಸಗೀ ಸ್ವಾಮ್ಯವು ಮಾಡಿವೆ. ಈ ವಿಶೇಷಣತೆಯಿಂದ ಕೂಡಿ ರುವ ಭಿನ್ನಾಭಿಪ್ರಾಯ ಮೂಲಭೂತವಾದದ್ದು ; ಮತ್ತು ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯಕ್ಕೆ ಎಡೆಯಿರ ವ ಆರ್ಥಿಕ ವ್ಯವಸ್ಥೆಗಳ ಲೆಲ್ಲಾ ಸ್ವಾಮ್ಯದ ರಕ್ಷಣೆಯೇ ವರ್ಗ ರಾಜಕೀಯಕ್ಕೂ (Class- politics) ಮತ್ತು ವಿವಿಧ ರಾಜಕೀಯ ಪಕ್ಷಗಳು ಜನ್ಮತಾಳುವುದಕ್ಕೂ ಕಾರಣವಾಗಿದೆ. ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿರುವ (Capitalist or Bourgeoisie Democracy) ವಿವಿಧ ರಾಜಕೀಯ ಪಕ್ಷಗಳ ಒಳ೦ತರಾಳ (ಸಮಾಜವಾದೀ ಪಕ್ಷಗಳು ಹೊರತು) ಇದೇ ಆಗಿದೆ. ಇದರಿಂದಾಗಿ, ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿರುವ ವಿವಿಧ ರಾಜಕೀಯ ಪಕ್ಷಗಳ ಸ್ವರೂಪವನ್ನೂ ಮತ್ತು ಧೈಯಗಳನ್ನೂ ವಿಂಗಡಿಸುವಾಗ ಇವು ಖಾಸಗೀ ಸ್ವಾಮ್ಯದ ಬಗ್ಗೆ ಹೊಂದಿರುವ ಧೋರಣೆಯನ್ನು ಮುಖ್ಯವಾಗಿ ಪರಿಗಣಿಸಬೇಕು. ಆಗಲೇ ಖಾಸಗೀ ಸ್ವಾಮ್ಯ ಇರುವ ಎಡೆ, ವಿವಿಧ<noinclude></noinclude> rudbytpxku57rieawv4luf9aheat76y ಪುಟ:ಕಮ್ಯೂನಿಸಂ.djvu/೧೧೮ 104 90743 324007 230746 2026-06-02T06:18:16Z Adhya.B 8391 /* Proofread */ 324007 proofread-page text/x-wiki <noinclude><pagequality level="3" user="Adhya.B" />{{rh|center=ವೈಜ್ಞಾನಿಕ ಸಮಾಜವಾದ|left=೧೦೬|right=}}</noinclude> ರಾಜಕೀಯ ಪಕ್ಷಗಳು ತಮ್ಮ ಇರುವಿಕೆಯನ್ನು ಸಮರ್ಥಿಸಿಕೊಂಡಿರುವುದೂ ಮತ್ತು ಬಗೆಹರಿಯದ ಭಿನ್ನಾಭಿಪ್ರಾಯವು ಸಮಾಜದಲ್ಲಿ ಪ್ರವೇಶಿಸಿ ವರ್ಗ ವಿರಸಕ್ಕೆ ಕಾರಣವಾಗಿರುವುದೂ ಅರ್ಥವಾಗುತ್ತದೆ, ಆದರೆ ಈಗ ಕಾರ್ಮಿ ಕರ ಕ್ರಾಂತಿಯು ವಿವಿಧ ರಾಜಕೀಯ ಪಕ್ಷಗಳ ಇರುವಿಕೆಗೆ ಆಧಾರವಾಗಿದ್ದ ಖಾಸಗೀ ಸ್ವಾಮ್ಯವನ್ನು ನಾಶಪಡಿಸಿದೆ, ಮತ್ತು ಹಾಗೆಯೇ ಭಿನ್ನಾಭಿ ಪ್ರಾಯದಲ್ಲಿದ್ದ ಪ್ರತ್ಯೇಕತೆ ಅಥವ ವಿಶೇಷಣತೆಯೂ ಸಹ ನಾಶಹೊಂದಿದೆ. {{gap}}ಎರಡನೆಯದು ಆರ್ಥಿಕ ಸಮಾನತೆ ಇರುವ ವ್ಯವಸ್ಥೆಯಲ್ಲಿ ಬರಬಹು ದಾದ ಭಿನ್ನಾಭಿಪ್ರಾಯಗಳು ಈ ವರ್ಗರಹಿತ ಸಮಾಜ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳಿಗೆ ವಿಶೇಷಣತೆಯಾಗಲೀ ಅಥವಾ ಪ್ರತ್ಯೇಕತೆಯಾಗಲೀ ಇರುವುದಿಲ್ಲ; ವಿಶೇಷಣಕ್ಕೆ ಕಾರಣವಾಗಿದ್ದ ಸ್ವಾಮ್ಯವನ್ನು ನಾಶಪಡಿಸ ಲಾಗಿದೆ. ಸಮಾಜವಾದೀ ವ್ಯವಸ್ಥೆ ವ್ಯಕ್ತಿಗಳಿಗೆ ಆರ್ಥಿಕವಾಗಿ ಸಮಾನ ಸ್ಥಾನಮಾನಗಳನ್ನು ಗಳಿಸಿಕೊಟ್ಟಿದೆ. ಇಂತಹ ವ್ಯವಸ್ಥೆಯಲ್ಲಿ ಸಂಭವಿಸುವ ಭಿನ್ನಾಭಿಪ್ರಾಯಗಳು ಸಾಮಾನ್ಯ ಸ್ವಭಾವದ್ದಾಗಿವೆ. ಆದುದರಿಂದಲೇ ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನು ರಕ್ಷಿಸಲು ಇರುವ ವಿವಿಧ ರಾಜಕೀಯ ಪಕ್ಷಗಳಿಗೆ ಸ್ಥಳವಿಲ್ಲ. ಸಂಭವಿಸುವ ಸಾಮಾನ್ಯ ಭಿನ್ನಾಭಿ ಪ್ರಾಯಗಳು ಬಹುಮತದ ತದ ಮೇಲೆ ನಿರ್ಧಾರವಾಗುವುದರಿಂದ, ಅಭಿವೃದ್ಧಿ ಸಾಧಿಸಬೇಕಾಗಿರುವ ರಷ್ಯಾದ ಸಮಾಜವಾದೀ ವ್ಯವಸ್ಥೆಯಲ್ಲಿ ಮುಂದಾಳತ್ವ ವಹಿಸಲು ಕಮ್ಯೂನಿಸ್ಟ್ ಪಕ್ಷಕ್ಕೆ ಮುಂದಾಳು' ಸಮೂಹ ಮಾತ್ರ ಅವಕಾಶವಿದೆ. ಈ ಪಕ್ಷದ ಪ್ರಥಮ ಕರ್ತವ್ಯವೆಂದರೆ ಕ್ರಾಂತಿಯಿಂದ ಲಭಿಸಿರುವ ಸಮಾಜವಾದೀ ವ್ಯವಸ್ಥೆಯನ್ನು ಸಂರಕ್ಷಿಸುವುದು ಮತ್ತು ಸಮಾಜವಾದೀ ವ್ಯವಸ್ಥೆಗೆ ಕುಂದು ತರುವ ಪ್ರತಿಗಾಮಿ ಶಕ್ತಿಗಳನ್ನು (Reactionary forces) ದಮನಮಾಡುವುದು, ಸಮಾಜವಾದೀ ವ್ಯವಸ್ಥೆ ಕ್ರಮೇಣ ಬಲಗೊಂಡ ಹಾಗೆ ಬೇರೂರಿದಹಾಗೆ, ಯಾವ ಪಕ್ಷದ ಆವಶ್ಯಕತೆಯೂ ಇಲ್ಲವಾಗುತ್ತದೆ. ಸಮಾನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಪಡೆದಿರುವ ಜನ ಸಮುದಾಯ ಬಹುಮತ ಅಭಿಪ್ರಾಯದಂತೆ ಸಮಾಜವನ್ನು ನಿರ್ವಹಿಸುತ್ತದೆ. {{Rule}} (1) ಆರ್ಥಿಕ ಸಮಾನತೆ ಇರುವ ಮತ್ತ ಇಲ್ಲದಿರುವ ಎರಡು ವ್ಯವಸ್ಥೆ ಗಳಲ್ಲೂ ಬಹುಮತ ತತ್ವಕ್ಕೆ (Majority Principle) ಮಾನ್ಯತೆ ಇದ್ದರೂ, ಆರ್ಥಿಕ ಸಮಾನತೆ ಇಲ್ಲದಿರುವ (ಖಾಸಗಿ ಸ್ವಾಮ್ಯವಿರುವ) ವ್ಯವಸ್ಥೆಯಲ್ಲಿ ಅಭಿಪ್ರಾಯ ಸೂಚನೆಯಲ್ಲಿ ಸ್ವಾಮ್ಯವರ್ಗಕ್ಕಿರುವ ಸೌಲಭ್ಯಗಳನ್ನು ಗಮನಿಸು ವುದು ಅಗತ್ಯವಾಗಿದೆ. <<noinclude></noinclude> sk78x35eh5e6fhnenc5lp5yrp31yw2x 324008 324007 2026-06-02T06:20:01Z Adhya.B 8391 324008 proofread-page text/x-wiki <noinclude><pagequality level="3" user="Adhya.B" />{{rh|center=ವೈಜ್ಞಾನಿಕ ಸಮಾಜವಾದ|left=೧೦೬|right=}}</noinclude> ರಾಜಕೀಯ ಪಕ್ಷಗಳು ತಮ್ಮ ಇರುವಿಕೆಯನ್ನು ಸಮರ್ಥಿಸಿಕೊಂಡಿರುವುದೂ ಮತ್ತು ಬಗೆಹರಿಯದ ಭಿನ್ನಾಭಿಪ್ರಾಯವು ಸಮಾಜದಲ್ಲಿ ಪ್ರವೇಶಿಸಿ ವರ್ಗ ವಿರಸಕ್ಕೆ ಕಾರಣವಾಗಿರುವುದೂ ಅರ್ಥವಾಗುತ್ತದೆ, ಆದರೆ ಈಗ ಕಾರ್ಮಿ ಕರ ಕ್ರಾಂತಿಯು ವಿವಿಧ ರಾಜಕೀಯ ಪಕ್ಷಗಳ ಇರುವಿಕೆಗೆ ಆಧಾರವಾಗಿದ್ದ ಖಾಸಗೀ ಸ್ವಾಮ್ಯವನ್ನು ನಾಶಪಡಿಸಿದೆ, ಮತ್ತು ಹಾಗೆಯೇ ಭಿನ್ನಾಭಿ ಪ್ರಾಯದಲ್ಲಿದ್ದ ಪ್ರತ್ಯೇಕತೆ ಅಥವ ವಿಶೇಷಣತೆಯೂ ಸಹ ನಾಶಹೊಂದಿದೆ. {{gap}}ಎರಡನೆಯದು ಆರ್ಥಿಕ ಸಮಾನತೆ ಇರುವ ವ್ಯವಸ್ಥೆಯಲ್ಲಿ ಬರಬಹು ದಾದ ಭಿನ್ನಾಭಿಪ್ರಾಯಗಳು ಈ ವರ್ಗರಹಿತ ಸಮಾಜ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳಿಗೆ ವಿಶೇಷಣತೆಯಾಗಲೀ ಅಥವಾ ಪ್ರತ್ಯೇಕತೆಯಾಗಲೀ ಇರುವುದಿಲ್ಲ; ವಿಶೇಷಣಕ್ಕೆ ಕಾರಣವಾಗಿದ್ದ ಸ್ವಾಮ್ಯವನ್ನು ನಾಶಪಡಿಸ ಲಾಗಿದೆ. ಸಮಾಜವಾದೀ ವ್ಯವಸ್ಥೆ ವ್ಯಕ್ತಿಗಳಿಗೆ ಆರ್ಥಿಕವಾಗಿ ಸಮಾನ ಸ್ಥಾನಮಾನಗಳನ್ನು ಗಳಿಸಿಕೊಟ್ಟಿದೆ. ಇಂತಹ ವ್ಯವಸ್ಥೆಯಲ್ಲಿ ಸಂಭವಿಸುವ ಭಿನ್ನಾಭಿಪ್ರಾಯಗಳು ಸಾಮಾನ್ಯ ಸ್ವಭಾವದ್ದಾಗಿವೆ. ಆದುದರಿಂದಲೇ ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನು ರಕ್ಷಿಸಲು ಇರುವ ವಿವಿಧ ರಾಜಕೀಯ ಪಕ್ಷಗಳಿಗೆ ಸ್ಥಳವಿಲ್ಲ. ಸಂಭವಿಸುವ ಸಾಮಾನ್ಯ ಭಿನ್ನಾಭಿ ಪ್ರಾಯಗಳು ಬಹುಮತದ ತದ ಮೇಲೆ ನಿರ್ಧಾರವಾಗುವುದರಿಂದ, ಅಭಿವೃದ್ಧಿ ಸಾಧಿಸಬೇಕಾಗಿರುವ ರಷ್ಯಾದ ಸಮಾಜವಾದೀ ವ್ಯವಸ್ಥೆಯಲ್ಲಿ ಮುಂದಾಳತ್ವ ವಹಿಸಲು ಕಮ್ಯೂನಿಸ್ಟ್ ಪಕ್ಷಕ್ಕೆ ಮುಂದಾಳು' ಸಮೂಹ ಮಾತ್ರ ಅವಕಾಶವಿದೆ. ಈ ಪಕ್ಷದ ಪ್ರಥಮ ಕರ್ತವ್ಯವೆಂದರೆ ಕ್ರಾಂತಿಯಿಂದ ಲಭಿಸಿರುವ ಸಮಾಜವಾದೀ ವ್ಯವಸ್ಥೆಯನ್ನು ಸಂರಕ್ಷಿಸುವುದು ಮತ್ತು ಸಮಾಜವಾದೀ ವ್ಯವಸ್ಥೆಗೆ ಕುಂದು ತರುವ ಪ್ರತಿಗಾಮಿ ಶಕ್ತಿಗಳನ್ನು (Reactionary forces) ದಮನಮಾಡುವುದು, ಸಮಾಜವಾದೀ ವ್ಯವಸ್ಥೆ ಕ್ರಮೇಣ ಬಲಗೊಂಡ ಹಾಗೆ ಬೇರೂರಿದಹಾಗೆ, ಯಾವ ಪಕ್ಷದ ಆವಶ್ಯಕತೆಯೂ ಇಲ್ಲವಾಗುತ್ತದೆ. ಸಮಾನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಪಡೆದಿರುವ ಜನ ಸಮುದಾಯ ಬಹುಮತ ಅಭಿಪ್ರಾಯದಂತೆ ಸಮಾಜವನ್ನು ನಿರ್ವಹಿಸುತ್ತದೆ. {{Rule}} <small> (1) ಆರ್ಥಿಕ ಸಮಾನತೆ ಇರುವ ಮತ್ತ ಇಲ್ಲದಿರುವ ಎರಡು ವ್ಯವಸ್ಥೆ ಗಳಲ್ಲೂ ಬಹುಮತ ತತ್ವಕ್ಕೆ (Majority Principle) ಮಾನ್ಯತೆ ಇದ್ದರೂ, ಆರ್ಥಿಕ ಸಮಾನತೆ ಇಲ್ಲದಿರುವ (ಖಾಸಗಿ ಸ್ವಾಮ್ಯವಿರುವ) ವ್ಯವಸ್ಥೆಯಲ್ಲಿ ಅಭಿಪ್ರಾಯ ಸೂಚನೆಯಲ್ಲಿ ಸ್ವಾಮ್ಯವರ್ಗಕ್ಕಿರುವ ಸೌಲಭ್ಯಗಳನ್ನು ಗಮನಿಸು ವುದು ಅಗತ್ಯವಾಗಿದೆ. </small><noinclude></noinclude> tvsf5l83deg99qyw3oobt7k6ut1fcr9 324009 324008 2026-06-02T06:20:44Z Adhya.B 8391 324009 proofread-page text/x-wiki <noinclude><pagequality level="3" user="Adhya.B" />{{rh|center=ವೈಜ್ಞಾನಿಕ ಸಮಾಜವಾದ|left=೧೦೬|right=}}</noinclude> ರಾಜಕೀಯ ಪಕ್ಷಗಳು ತಮ್ಮ ಇರುವಿಕೆಯನ್ನು ಸಮರ್ಥಿಸಿಕೊಂಡಿರುವುದೂ ಮತ್ತು ಬಗೆಹರಿಯದ ಭಿನ್ನಾಭಿಪ್ರಾಯವು ಸಮಾಜದಲ್ಲಿ ಪ್ರವೇಶಿಸಿ ವರ್ಗ ವಿರಸಕ್ಕೆ ಕಾರಣವಾಗಿರುವುದೂ ಅರ್ಥವಾಗುತ್ತದೆ, ಆದರೆ ಈಗ ಕಾರ್ಮಿ ಕರ ಕ್ರಾಂತಿಯು ವಿವಿಧ ರಾಜಕೀಯ ಪಕ್ಷಗಳ ಇರುವಿಕೆಗೆ ಆಧಾರವಾಗಿದ್ದ ಖಾಸಗೀ ಸ್ವಾಮ್ಯವನ್ನು ನಾಶಪಡಿಸಿದೆ, ಮತ್ತು ಹಾಗೆಯೇ ಭಿನ್ನಾಭಿ ಪ್ರಾಯದಲ್ಲಿದ್ದ ಪ್ರತ್ಯೇಕತೆ ಅಥವ ವಿಶೇಷಣತೆಯೂ ಸಹ ನಾಶಹೊಂದಿದೆ. {{gap}}ಎರಡನೆಯದು ಆರ್ಥಿಕ ಸಮಾನತೆ ಇರುವ ವ್ಯವಸ್ಥೆಯಲ್ಲಿ ಬರಬಹು ದಾದ ಭಿನ್ನಾಭಿಪ್ರಾಯಗಳು ಈ ವರ್ಗರಹಿತ ಸಮಾಜ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳಿಗೆ ವಿಶೇಷಣತೆಯಾಗಲೀ ಅಥವಾ ಪ್ರತ್ಯೇಕತೆಯಾಗಲೀ ಇರುವುದಿಲ್ಲ; ವಿಶೇಷಣಕ್ಕೆ ಕಾರಣವಾಗಿದ್ದ ಸ್ವಾಮ್ಯವನ್ನು ನಾಶಪಡಿಸ ಲಾಗಿದೆ. ಸಮಾಜವಾದೀ ವ್ಯವಸ್ಥೆ ವ್ಯಕ್ತಿಗಳಿಗೆ ಆರ್ಥಿಕವಾಗಿ ಸಮಾನ ಸ್ಥಾನಮಾನಗಳನ್ನು ಗಳಿಸಿಕೊಟ್ಟಿದೆ. ಇಂತಹ ವ್ಯವಸ್ಥೆಯಲ್ಲಿ ಸಂಭವಿಸುವ ಭಿನ್ನಾಭಿಪ್ರಾಯಗಳು ಸಾಮಾನ್ಯ ಸ್ವಭಾವದ್ದಾಗಿವೆ. ಆದುದರಿಂದಲೇ ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನು ರಕ್ಷಿಸಲು ಇರುವ ವಿವಿಧ ರಾಜಕೀಯ ಪಕ್ಷಗಳಿಗೆ ಸ್ಥಳವಿಲ್ಲ. ಸಂಭವಿಸುವ ಸಾಮಾನ್ಯ ಭಿನ್ನಾಭಿ ಪ್ರಾಯಗಳು ಬಹುಮತದ ತದ ಮೇಲೆ ನಿರ್ಧಾರವಾಗುವುದರಿಂದ, ಅಭಿವೃದ್ಧಿ ಸಾಧಿಸಬೇಕಾಗಿರುವ ರಷ್ಯಾದ ಸಮಾಜವಾದೀ ವ್ಯವಸ್ಥೆಯಲ್ಲಿ ಮುಂದಾಳತ್ವ ವಹಿಸಲು ಕಮ್ಯೂನಿಸ್ಟ್ ಪಕ್ಷಕ್ಕೆ ಮುಂದಾಳು' ಸಮೂಹ ಮಾತ್ರ ಅವಕಾಶವಿದೆ. ಈ ಪಕ್ಷದ ಪ್ರಥಮ ಕರ್ತವ್ಯವೆಂದರೆ ಕ್ರಾಂತಿಯಿಂದ ಲಭಿಸಿರುವ ಸಮಾಜವಾದೀ ವ್ಯವಸ್ಥೆಯನ್ನು ಸಂರಕ್ಷಿಸುವುದು ಮತ್ತು ಸಮಾಜವಾದೀ ವ್ಯವಸ್ಥೆಗೆ ಕುಂದು ತರುವ ಪ್ರತಿಗಾಮಿ ಶಕ್ತಿಗಳನ್ನು (Reactionary forces) ದಮನಮಾಡುವುದು, ಸಮಾಜವಾದೀ ವ್ಯವಸ್ಥೆ ಕ್ರಮೇಣ ಬಲಗೊಂಡ ಹಾಗೆ ಬೇರೂರಿದಹಾಗೆ, ಯಾವ ಪಕ್ಷದ ಆವಶ್ಯಕತೆಯೂ ಇಲ್ಲವಾಗುತ್ತದೆ. ಸಮಾನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಪಡೆದಿರುವ ಜನ ಸಮುದಾಯ ಬಹುಮತ ಅಭಿಪ್ರಾಯದಂತೆ ಸಮಾಜವನ್ನು ನಿರ್ವಹಿಸುತ್ತದೆ. {{Rule}} <small> {{gap}}(1) ಆರ್ಥಿಕ ಸಮಾನತೆ ಇರುವ ಮತ್ತ ಇಲ್ಲದಿರುವ ಎರಡು ವ್ಯವಸ್ಥೆ ಗಳಲ್ಲೂ ಬಹುಮತ ತತ್ವಕ್ಕೆ (Majority Principle) ಮಾನ್ಯತೆ ಇದ್ದರೂ, ಆರ್ಥಿಕ ಸಮಾನತೆ ಇಲ್ಲದಿರುವ (ಖಾಸಗಿ ಸ್ವಾಮ್ಯವಿರುವ) ವ್ಯವಸ್ಥೆಯಲ್ಲಿ ಅಭಿಪ್ರಾಯ ಸೂಚನೆಯಲ್ಲಿ ಸ್ವಾಮ್ಯವರ್ಗಕ್ಕಿರುವ ಸೌಲಭ್ಯಗಳನ್ನು ಗಮನಿಸು ವುದು ಅಗತ್ಯವಾಗಿದೆ. </small><noinclude></noinclude> 3t54amrlxq3fhzbrnjm27jr22dvt9b4 324010 324009 2026-06-02T06:21:09Z Pragathi. BH 7585 /* Validated */ 324010 proofread-page text/x-wiki <noinclude><pagequality level="4" user="Pragathi. BH" />{{rh|center=ವೈಜ್ಞಾನಿಕ ಸಮಾಜವಾದ|left=೧೦೬|right=}}</noinclude> ರಾಜಕೀಯ ಪಕ್ಷಗಳು ತಮ್ಮ ಇರುವಿಕೆಯನ್ನು ಸಮರ್ಥಿಸಿಕೊಂಡಿರುವುದೂ ಮತ್ತು ಬಗೆಹರಿಯದ ಭಿನ್ನಾಭಿಪ್ರಾಯವು ಸಮಾಜದಲ್ಲಿ ಪ್ರವೇಶಿಸಿ ವರ್ಗ ವಿರಸಕ್ಕೆ ಕಾರಣವಾಗಿರುವುದೂ ಅರ್ಥವಾಗುತ್ತದೆ, ಆದರೆ ಈಗ ಕಾರ್ಮಿ ಕರ ಕ್ರಾಂತಿಯು ವಿವಿಧ ರಾಜಕೀಯ ಪಕ್ಷಗಳ ಇರುವಿಕೆಗೆ ಆಧಾರವಾಗಿದ್ದ ಖಾಸಗೀ ಸ್ವಾಮ್ಯವನ್ನು ನಾಶಪಡಿಸಿದೆ, ಮತ್ತು ಹಾಗೆಯೇ ಭಿನ್ನಾಭಿ ಪ್ರಾಯದಲ್ಲಿದ್ದ ಪ್ರತ್ಯೇಕತೆ ಅಥವ ವಿಶೇಷಣತೆಯೂ ಸಹ ನಾಶಹೊಂದಿದೆ. {{gap}}ಎರಡನೆಯದು ಆರ್ಥಿಕ ಸಮಾನತೆ ಇರುವ ವ್ಯವಸ್ಥೆಯಲ್ಲಿ ಬರಬಹು ದಾದ ಭಿನ್ನಾಭಿಪ್ರಾಯಗಳು ಈ ವರ್ಗರಹಿತ ಸಮಾಜ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳಿಗೆ ವಿಶೇಷಣತೆಯಾಗಲೀ ಅಥವಾ ಪ್ರತ್ಯೇಕತೆಯಾಗಲೀ ಇರುವುದಿಲ್ಲ; ವಿಶೇಷಣಕ್ಕೆ ಕಾರಣವಾಗಿದ್ದ ಸ್ವಾಮ್ಯವನ್ನು ನಾಶಪಡಿಸ ಲಾಗಿದೆ. ಸಮಾಜವಾದೀ ವ್ಯವಸ್ಥೆ ವ್ಯಕ್ತಿಗಳಿಗೆ ಆರ್ಥಿಕವಾಗಿ ಸಮಾನ ಸ್ಥಾನಮಾನಗಳನ್ನು ಗಳಿಸಿಕೊಟ್ಟಿದೆ. ಇಂತಹ ವ್ಯವಸ್ಥೆಯಲ್ಲಿ ಸಂಭವಿಸುವ ಭಿನ್ನಾಭಿಪ್ರಾಯಗಳು ಸಾಮಾನ್ಯ ಸ್ವಭಾವದ್ದಾಗಿವೆ. ಆದುದರಿಂದಲೇ ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನು ರಕ್ಷಿಸಲು ಇರುವ ವಿವಿಧ ರಾಜಕೀಯ ಪಕ್ಷಗಳಿಗೆ ಸ್ಥಳವಿಲ್ಲ. ಸಂಭವಿಸುವ ಸಾಮಾನ್ಯ ಭಿನ್ನಾಭಿ ಪ್ರಾಯಗಳು ಬಹುಮತದ ತದ ಮೇಲೆ ನಿರ್ಧಾರವಾಗುವುದರಿಂದ, ಅಭಿವೃದ್ಧಿ ಸಾಧಿಸಬೇಕಾಗಿರುವ ರಷ್ಯಾದ ಸಮಾಜವಾದೀ ವ್ಯವಸ್ಥೆಯಲ್ಲಿ ಮುಂದಾಳತ್ವ ವಹಿಸಲು ಕಮ್ಯೂನಿಸ್ಟ್ ಪಕ್ಷಕ್ಕೆ ಮುಂದಾಳು' ಸಮೂಹ ಮಾತ್ರ ಅವಕಾಶವಿದೆ. ಈ ಪಕ್ಷದ ಪ್ರಥಮ ಕರ್ತವ್ಯವೆಂದರೆ ಕ್ರಾಂತಿಯಿಂದ ಲಭಿಸಿರುವ ಸಮಾಜವಾದೀ ವ್ಯವಸ್ಥೆಯನ್ನು ಸಂರಕ್ಷಿಸುವುದು ಮತ್ತು ಸಮಾಜವಾದೀ ವ್ಯವಸ್ಥೆಗೆ ಕುಂದು ತರುವ ಪ್ರತಿಗಾಮಿ ಶಕ್ತಿಗಳನ್ನು (Reactionary forces) ದಮನಮಾಡುವುದು, ಸಮಾಜವಾದೀ ವ್ಯವಸ್ಥೆ ಕ್ರಮೇಣ ಬಲಗೊಂಡ ಹಾಗೆ ಬೇರೂರಿದಹಾಗೆ, ಯಾವ ಪಕ್ಷದ ಆವಶ್ಯಕತೆಯೂ ಇಲ್ಲವಾಗುತ್ತದೆ. ಸಮಾನ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಪಡೆದಿರುವ ಜನ ಸಮುದಾಯ ಬಹುಮತ ಅಭಿಪ್ರಾಯದಂತೆ ಸಮಾಜವನ್ನು ನಿರ್ವಹಿಸುತ್ತದೆ. {{Rule}} <small> {{gap}}(1) ಆರ್ಥಿಕ ಸಮಾನತೆ ಇರುವ ಮತ್ತ ಇಲ್ಲದಿರುವ ಎರಡು ವ್ಯವಸ್ಥೆ ಗಳಲ್ಲೂ ಬಹುಮತ ತತ್ವಕ್ಕೆ (Majority Principle) ಮಾನ್ಯತೆ ಇದ್ದರೂ, ಆರ್ಥಿಕ ಸಮಾನತೆ ಇಲ್ಲದಿರುವ (ಖಾಸಗಿ ಸ್ವಾಮ್ಯವಿರುವ) ವ್ಯವಸ್ಥೆಯಲ್ಲಿ ಅಭಿಪ್ರಾಯ ಸೂಚನೆಯಲ್ಲಿ ಸ್ವಾಮ್ಯವರ್ಗಕ್ಕಿರುವ ಸೌಲಭ್ಯಗಳನ್ನು ಗಮನಿಸು ವುದು ಅಗತ್ಯವಾಗಿದೆ. </small><noinclude></noinclude> p9tszx9gace350qxn9res0nfdyttf8o ಪುಟ:ತೊಳೆದ ಮುತ್ತು.pdf/೧೧ 104 91124 324035 239959 2026-06-02T08:51:40Z Pragathi. BH 7585 /* Validated */ 324035 proofread-page text/x-wiki <noinclude><pagequality level="4" user="Pragathi. BH" /></noinclude> == ಪ್ರಥಮ ದರ್ಶನದ ಪ್ರೇಮ == {{gap}}ಭಾಗೀರಥೀ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಬಿಕ್ಕದಾದ ನಗರವಿತ್ತು ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ ಮಾಲತೀ, ಪುನ್ನಾಗ, ಗುಲಾಬ, ಸೇವಂತಿ ಮುಂತಾದ ಸಕಲ ಪುಪ್ಪಜಾತಿಗಳಿಗೂ ವಿಲಕ್ಷಣವಾದ ಸುಗಂಧವಿರುವದರಿಂದ ಆ ನಗರಕ್ಕೆ ಕುಸುಮವುರವೆಂಬ ಹೆಸರು ಈ ವಿಶೇಷವಾದ ಗುಣಕ್ಕಾಗಿಯೇ ಚಿತ್ರರಧಾದಿ ಗಂಧರ್ವರು ಮೆಚ್ಚಿ ಆ ಸ್ಥಳದಲ್ಲಿ ಮನಸೋತು ವಿಹಾರ ಮಾಡುತ್ತಿದ್ದರೆಂದು ಗ್ರಾಮ ಪುರೋಹಿತರು ಹೇಳುವುದುಂಟು, ಆ ಕುಸನಪುರದ ಪೂರ್ವದಿಕ್ಕಿಗೆ ಗೋಪುರಾಕಾರದ ದಿನ್ನೆಯು ವಿವಿಧವಾದ ವೃಕ್ಷಲತೆಗಳಿಂದ ಆಚ್ಛಾದಿತವಾಗಿ ಅದೊಂದು ಪಚ್ಚ ಮಣಿಗಳ ಅಗಾಧವಾದ ರಾಶಿಯೇ ಆಗಿ ತೋರುತ್ತಿತ್ತು. ಆ ಮರಳಘಗಿರಿ ಬದಿಯ ಮೇಲಿರುವ ವಿಸ್ತಾರವಾದ ತಪ್ಪಲಿನ ಮೇಲೆ ಕಾರಜಾಪ್ರಸಾದ ಕಾಲೇಜದ ಶೋಭಾನುಯವಾದ ಮಂದಿರಗಳು ಉಳಿದು ತೋರಣ ಬಾಳೆಗಂಬಗಳಿಂದ ಅಲಂಕೃತವಾದ ಹೆದ್ದೇರಿನ ತುದಿಗಿರುವ ಪ್ರೇಕ್ಷಣೀಯವಾದ ಕಳಸಗಳ ಮೆರೆಯುತ್ತಿದ್ದವು ಕಾಲೇಜದ ಮಂದಿರ ಗಳಿಂದ ದಿನೈ ಯನ್ನಿಳಿದು ಕೆಳಗೆ ಬಗಬೇಕಾಗಿ ಮಲಸೂತ್ರದಾಕಾರವುಳ್ಳ ವಿಸ್ತಾರವಾದ ಬೀದಿಯಿದ್ದು, ಈ ಬೀದಿಗೆ ಕೆ೦ಪುಗಸಿನ ನೆಲಗಟ್ಟು ಮಾಡಿರುವದರಿಂದ ಆ ಪ್ರದೇಶಕ್ಕೆ ಅದೊಂದು ವಿಲಕ್ಷಣವಾದ ಅಲಂಕಾರವೇ ಆಗಿ ತೋರುತ್ತಿತ್ತು, ಕಾಲೇಜದ ಉನ್ನತವಾದ ಮಂದಿರಗಳಲ್ಲಿ ಇಂತು ನೋಡಿದರೆ ಆನೇಕ ಯೋಜನೆಗಳವರೆಗೆ ಹಬ್ಬಿ ಕೊಂಡಿರುವ ಭೂಶೋಭೆಯು ಜಗ್ಗನೆ ಹೊಳೆದು ತೋರಿ ಪ್ರೇಕ್ಷಕರ ಚಿತ್ರಗಳನ್ನು ಬಲವತ್ತರವಾಗಿ ಆಕರ್ಷಿಸಿ ಕೊಳ್ಳುತ್ತಿತ್ತು. ಎತ್ತ ನೋಡಿದ ನೆಲ್ಲು ಹುಲ್ಲುಗಳ ಗದ್ದೆಗಳ ಹೂದೋಟಗಳೂ ಹಣ್ಣು ಗಿಡಗಳ ತೋಪುಗಳೂ ಅವಿಚ್ಛಿನ್ನವಾಗಿ ಕಂಗೊಳಿಸುವವು. ಭವನಿತೆಯು ಉಟ್ಟಿರುವ ಮರಕತಮಯವಾದ ಮಹಾವಸ್ತ್ರದ ಮೇಲೆ ಚಿತ್ರ ವಿಚಿತ್ರವಾಗಿ ಭೆಗೆದಿರುವ ಕಶೀದೆಗಳಂತೆ ಅಲ್ಲಲ್ಲಿ ಮೆರೆಯುವ ಹಳ್ಳಿಪಳ್ಳಿ<noinclude></noinclude> p4ee27joqnfuuk7knn4gormo7j4dd83 ಪುಟ:ತೊಳೆದ ಮುತ್ತು.pdf/೧೨ 104 91857 324036 239960 2026-06-02T08:52:10Z Pragathi. BH 7585 /* Validated */ 324036 proofread-page text/x-wiki <noinclude><pagequality level="4" user="Pragathi. BH" />{{rh|೨|ಸಂಪೂರ್ಣ-ಕಥೆಗಳು|}}</noinclude>ಗಳೂ ವುರವತ್ರನಗಳೂ ಬಹು ಚಮತ್ಕಾರವಾಗಿ ತೋರುತ್ತಿದ್ದವು. ಧರ್ಮದ ಮಾರ್ಗವು ಪ್ರಶಸ್ತವಾಗಿಯೂ ನಿಷ್ಕಂಟಕವಾಗಿಯೂ ಸಮನಾಗಿಯ ಇರುವದಾಗಿ ಭಕ್ತಜನರಿಗೆ ತೋರಿಸಬೇಕೆಂದು ಗಂಗಾದೇವಿಯು ತಾನು ಪೂರ್ವಗಾಮಿಯಾಗಿ ನಡೆದಿರುವ ಶೋಭೆಯಾದರೂ ಬಹು ಪ್ರೇಕ್ಷಣೀಯ ವಾಗಿತ್ತು ಕಾಲೇಜದ ಉನ್ನತವಾದ ಪ್ರದೇಶದಲ್ಲಿರುವ ಹವೆಯ ನಿರ್ಮಲ ವಾಗಿಯೂ ಅರೆ ಗ್ಯಕರವಾಗಿಯ ಮಕರಂದಮಯವಾಗಿಯೂ ಇರುವದ ರಿಂದ ಅಲ್ಲಿಯ ವಿದ್ಯಾರ್ಥಿಗಳಿಗೆ ವಿನ್ಯಾಲಾಭದಿಂದ ಮನಸ್ತುಷ್ಟಿಯಾಗು ವಂತೆಯೇ ದೇಹವುಷ್ಟಿಯು ಕೂಡಾ ಆಗುತ್ತಿತ್ತು {{gap}}ಬ್ರಿಟಿಶ್ ಸಾಮ್ರಾಜ್ಯವು ನಮ್ಮಲ್ಲಿ ನೆಲೆಗೊಂಡಾಗಿನಿಂದ ಪಾಶ್ಚಾತ್ಯ ಪದ್ಧತಿಯ ವಿದ್ಯಾಭಿರುಚಿಯು ನಮ್ಮಲ್ಲಿ ಹಚ್ಚಿ ಅಲ್ಲಲ್ಲಿ ಹಾಯಸ್ಕೂಲುಗಳೂ ಕಾಲೇಜಗಳೂ ಸ್ಥಾಪಿತವಾದವು. ಸಚಸಾವಧಿ ಜನ ಶರಣರು ವಿಶ್ವವಿದ್ಯಾ ಲ ಗುದ ಪದವೀಧರರಾದರು ಪುರೋಪಿಯನ್ ಗುರುಗಳಿಗೆ ಬುದ್ಧಿ ಗಳಿಸು ವಂದ ಪಂಡಿತರೂ, ಮೆಕಾಲೇಸಂಧ ದುರಭಿಮಾನ ಹೃಪ್ತನ ಜೊಟ್ಟೆಯಲ್ಲಿ ಬೆಂಕಿಬೀಳುವಂತೆ ನಾಗಾತುರ್ಯದಿಂದಲೂ ಪ್ರಮಾಣ ಶಾಸ್ತ್ರಕ್ಕನುಸರಿ ಸಿಯ ಪ್ರೌಢವಾದ ಬ್ಯಾರಿಷ್ಟರರು ನ್ಯಾಯಸಭೆಗಳಲ್ಲಿ ವಾದವಿವಾದಗಳನ್ನು ನಡಿಸಿದರು ನ್ಯಾಯಾಧೀಶ, ಕೌನ್ಸಿಲರ, ಕಮಿಶನರ, ಕಲೆಕ್ಷದ ಮುಂತಾದ ಅಧಿಕಾರಗಳನ್ನು ನಮ್ಮವರು ಒಳ್ಳೆ ಚಾತುರ್ಯದಿಂದ ಘಡಿಸಿದರು. ಕೌನ್ಸಿಲಿನಲ್ಲಿ ಹೊಕ್ಕರೆ ನಾನೇ ಪ್ರಬಲರು, ಯುನಿವರ್ಸಿಟಿಗಳಲ್ಲಿ ಹೊಕ್ಕರೆ ನಾವೇ ಸೀನಿಯರ್ ಲ್ಯಾಂಗ್ಲಭರು. ಹೀಗೆ ವಿದ್ಯಾಪ್ರಸಾದಣವು ಪುರುಷರಲ್ಲಿ ಹಬ್ಬುತ್ತಲಿರಲು ನನ್ನ ಅರ್ಧಾಂಗಿಯರೂ ಅಕ್ಕತಂಗೆಂದಿರೂ ವಿದ್ಯೆಯಲ್ಲಿ ಹಿಂದುಳಿಯಲಾಗದೆಂದು ನೆನಿಸಿ ನಾವು ಸ್ತ್ರೀಶಿಕ್ಷಣವನ್ನು ಕೂಡ ಕೈಕೊಂಡೆವು. ಹೆಣ್ಣು ಮಕ್ಕಳಿಗಾಗಿ ತಕ್ಕಮಟ್ಟಿಗೆ ಅಲ್ಲಲ್ಲಿ ಪ್ರಾಥಮಿಕ ಶಾಲೆಗಳಾದವು. ಆದರೆ ಉಚ್ಚ ಪ್ರತಿಯ ಶಿಕ್ಷಣದ ಸ್ವತಂತ್ರವಾದ ಶಾಲೆಗಳ ಸಂಖ್ಯೆಯು ಕಡಿಮೆ; ಕಾಲೇಜಗಳಂತೂ ಇಲ್ಲವೇ ಇಲ್ಲ. ಅಲ್ಪ ವಯಸ್ಸಿನಲ್ಲಿ ಹೆಣ್ಣು ಗಂಡುಮಕ್ಕಳು ಒತ್ತಟ್ಟಿಗೆ ಕಲೆತು ಶಿಕ್ಷಣವನ್ನು ಹೊಂದಬಹುದು; ಆದರೆ ತರುಣ ತರುಣಿ ಕುರು ಒಂದೇ ಸಂಸ್ಥೆಯಲ್ಲಿರುವದು ವಿಹಿತವೋ ಅಲ್ಲವೋ ಎಂಬ ಮಾತಿನ ಬಗ್ಗೆ ಮತಭೇದವು, ಆದರೆ ಸ್ತ್ರೀ ಪುರುಷರ ಮಿಶ್ರ ಶಾಲೆಗಳು ಪ್ರಶಸ್ತ<noinclude></noinclude> lgfu8mann9xdip4ko9ntr5yjbg7rnmq ಪುಟ:ಕಂಬನಿ-ಗೌರಮ್ಮ.pdf/೨೯ 104 92166 324037 239552 2026-06-02T09:52:08Z Pragathi. BH 7585 /* Validated */ 324037 proofread-page text/x-wiki <noinclude><pagequality level="4" user="Pragathi. BH" />{{rh||ನಾನ; ಈಂಡ ಗೌರಮ್ಮನವರು|೧೩}}</noinclude>{{gap}}ಒಂದೂ ಬಿಡದೆ-ನನ್ನ ಗೆಳತಿ ಕನಡಾ ಸವತಿಯ ವಿಷಯ</br> {{gap}}ಸಹ-ಬರೆಯಬೇಕೆಂದು ಆಸೆ ನನಗೆ. ಪತ್ರಿಕೆಗಳಲ್ಲಿ ಕೇವಲ</br> {{gap}}ಣ-ನದ ಜಗಳಗಳಲ್ಲದೆ ಬೇರೇನೂ ಇಲ್ಲ. ಹೇಗೆ ? ಬರೆಯುವಿರೋ?</br> {{gap}}ಇಲ್ಲವೆ ?..! {{gap}}{{xx-larger|'''ಗೌ'''}}ರಮ್ಮನವರಿಗೆ ಪ್ರಕೃತಿಸೌಂದರನಿರೀಕ್ಷಣೆಯ ದೃಷ್ಟಿ ಚೆನ್ನಾಗಿತ್ತು, ನಾನಲ್ಲಿದ್ದಾಗ ನಾಲತಿರುಗಾಡಲು ಹೋಗುತ್ತಿದ್ದೆವು. ಒಬ್ಬೊಬ್ಬರೆ ಇರದ ಸ್ಥಳಗಳಿಗೆ ಮೊದಲದಿನ ಶ್ರೀ, ಗೋವಾ ಅವರು ಕಾಫಿಯ ಕಾಡು, ತೋಟದಲ್ಲ, ಕಡಿದಾದ ದಾರಿಯಲ್ಲಿ ಕರೆದೊಯ್ದರು. ನೆಗಳಿಗೆ ಸುತ್ತಿಕೊಂಡ ಬಳ್ಳಿಗಳ ಕು. ನನಗೂ ಸುತ್ತಿಕೊಳ್ಳ.. ನಾನು, ಗೌರವ, '''ಶ್ರೀ ಗೋವಿಂದಯ್ಯ''' (ಗೌರಮ್ಮನವರ ನನ ಮೈದನ)ಗೋಪಾಲ ಕೃಷ್ಣರ ಬಂದೆ : ವಿಸುತ್ತ ಸಾಗಿದ್ದೆವು. ಗೌರಮ್ಮನವರ ಸೀರೆಯ ಸೆರಗನ್ನು ಒಂದ, ಮುಳ್ಳುಕಂಟಿ ಏಜಿತ. ಹಸಿ ಸಿಟ್ಟ ತೋರಿ ಎಂತ ದಾರಿ ನಿಮ್ಮದು ? ಇನ್ನು ನೀವು ಕರೆದೊಯ್ಯುವದಾದರ ಎಲ್ಲಿಗೆ? ನಾನು ನಿಮ್ಮ ಕೂಲಿಗನೆಂದು ತಿಳಿದಿರಾ?” ಎನ್ನುತ್ತ ನಿಲ್ಲದೆ ನಡೆದು ಬರುತ್ತಿದ್ದರು. ಅದೇ ಕಾಡಿನಲ್ಲಿ ದಿನಾಲು ತಿರಿ. ತಿದ್ದ ವಾನರ್ ಗೋಪಾಲಕೃಷ್ಣರಿಗೇನು ತೊಂದರೆ ? ಹಿಂತಿರುಗಿ ತನು “ ಓದಾಕಯ' ಅವಸ್ಥೆ ನೋಡಿ ಕೈಕೊಟ್ಟು ಕರೆದುಕೊಂಡು ಸದರು, ನಾವೆ, ಒಂದು ಕಾರಹೊಳೆಗೆ ಬಂದೆ. ಬಾರಿಗೆ ಅಡ್ಡವಾಗಿ ಚಾಕಿ ಒಂಗtಡದ ಬೇರು ಹಿಡಿದು ನೇತಾಡಿದರು ಗೋವಿಂದಯ್ಯನವರು. ಅಂದದೇ ಎರಡೂ ಬದಿಗೆ ಹಿಡಕೊಂಡೆ ಇನ್ನೊಂದು ಬೇಂಗೆ ಬೇಕ ವಾಡಿದರ, ಗೌರಮ್ಮನವರ, ನರ ನಿರಿನವರೆಗೆ ಚಾಚಿಕೊಂಡ ಒಂದು ಗಿಡ ಬಳಸಿ ಹೋಗಿ, ನಾನು-ಗೋಪಾಲಕೃಷ್ಣಯ್ಯ ನಿಂತಿದ್ದೆ. ಅಲ್ಲಿ ನೀರು ಒು ಆಳವಾಗಿದೆಯಂತೆ. ಗೋವಿಂದಯ್ಯ ಒಳ್ಳೆಯ ಈಜುಗಾರರು. 'ಹಾರಲೇ ಅಣ್ಣಯ್ಯ?' ಎಂದರು. 'ಹೂ' ಗಟ್ಟಿಗರು ಗೌರಮ್ಮ; 'ಮೊಸಳೆಗಳಿವೆ' ಎಂದರು ಗೋಪಾಲಯ್ಯ, ಸುಮ್ಮನೆ ನಿಂತಿದ್ದೆ ನಾನು<noinclude></noinclude> 4nl6bxiso7uye579rxcw8q1lqk9f003 ಪುಟ:ಕಂಬನಿ-ಗೌರಮ್ಮ.pdf/೩೦ 104 92167 324038 240493 2026-06-02T09:53:30Z Pragathi. BH 7585 /* Validated */ 324038 proofread-page text/x-wiki <noinclude><pagequality level="4" user="Pragathi. BH" />{{rh|೧೪|ಕಂಬನಿ|}}</noinclude>ಮುಗಿಲಿನ ವರೆಗೆ ಹಬ್ಬಿ ನಿಂತ ಬೆಟ್ಟವನ್ನೂ ಅದರಲ್ಲೆಲ್ಲ ನೆಟ್ಟು ನಿಂತ ಗಿಡಗಳನ್ನೂ ನೋಡುತ್ತ, “ನೋಡಿ, ಎಂತಹ ರಮಣೀಯ ದೃಶ್ಯ!” ಎಂದರು ಗೋಪಾಲಯ್ಯ. “ ನನಗೆ ನಿಮ್ಮ ಕಣ್ಣಲ್ಲ'' ಎಂದರು ಗೌರಮ್ಮ, "ಮತ್ತೆ ನಿಮ್ಮ ಸ್ಥಳವಾವುದು ?' ನಾನೆಂದೆ. “ ನನ್ನದು ಬಹಳ ಸುಂದರ ವಾಗಿದೆ. ನಾವಿಬ್ಬರೇ ಹೋಗೋಣ, ಈ ಜನರ ದೃಷ್ಟಿ ತಾಕೀತು ನನ್ನ ಆ ಸ್ಥಳಕ್ಕೆ” ಎಂದರವರು. {{gap}}ಅದರಂತೆಯೇ ಮರುದಿನ ನಾವಿಬ್ಬರೇ ಹೊರಟೆವು. ಅದೂ ಕಾಡಾ ದರೂ ದಾರಿಯಿತ್ತು. ಸ್ವಲ್ಪ ದಿಬ್ಬ ಹತ್ತಿದ ಮೇಲೆ, ಕೆಳಗೆ ದೂರದ ವರೆಗೆ ಬಯಲು ಹಬ್ಬಿದೆ. ಅಲ್ಲೊಂದು ಹೊಳೆ, ಥಳಥಳ ಹೊಳೆಯುತ್ತ ಸಾಗಿದೆ. ನಾನು ಹೋದ ಸಮಯದಲ್ಲಿ ಬಂಜೆಭೂಮಿ; ಬೆಳೆಗಾಲದಲ್ಲಾ ದರೆ ಬಯಲೆಲ್ಲ 'ಹಸಿರು ಹಾಸಿ 'ನಂತಿರುತ್ತದಂತೆ. ಅಲ್ಲಿಯೇ ಒಂದು ಕೃತ್ರಿಮ ಆಸನ ಸಿದ್ಧಪಡಿಸಿದ್ದಾರೆ ಗೌರಮ್ಮನವರು, ತಾವೊಬ್ಬರೇ ಬಂದು ಹಾಗೆಯೇ ನೋಡುತ್ತ ಕೂಡುವುದಕ್ಕೆಂದು. ಮಳೆಗಾಲದಲ್ಲಿ ಮಳೆಯ ಪರಿವೆಯಿಲ್ಲದೆ ಅಲ್ಲಿ ನೋಡುತ್ತ ಕುಳಿತಿರುತ್ತಿದ್ದರಂತೆ ಗೌರಮ್ಮ, ಅಲ್ಲಿಂದ ಇಳಿಯುತ್ತ ಇಳಿಯುತ್ತ ನದಿಯ ದಾರಿಗೆ ಬಂದೆವು. ಒಂದು ಲಾರಿ-ಇವರದೇ-ಕಾಫಿ ಬೀಜ ತರುವಂತಹದು-ಬರುತ್ತಿತ್ತು. 'ಅವರಿದ್ದಾರೆಯೇ ನೋಡಿ' ಎಂದರು. ಮುಂದೆಯೇ ಇದ್ದಾರಲ್ಲ ! ಕಾಣುವದಿಲ್ಲವೇ ನಿಮಗೆ?' ಎಂದೆ. ಅವರು ಬಿಟ್ಟು ಬಿದ್ದು ನಗಹತ್ತಿದರು, ನಾನು ಪೆಟ್ಟು ಬಿದ್ದು ಕೇಳಿದೆ: “ಏನದು?' ಎಂದು ಅವರು ಹೇಳಿದರು: “ ನೋಡಿ, ನಾನು ಮೊನ್ನೆ ಮಡಿಕೇರಿಗೆ ಹೋದಾಗ ದಾರಿಯ ಒಂದು ಬದಿಯಿಂದೆ ಹೋಗುತ್ತಿದ್ದೆ. ನನ್ನ ಹಿರಿಯಣ್ಣ ಅದೇ ದಾರಿಯಿಂದ ಎದು ರಾಗಿ ಬರುತ್ತಿದ್ದ. ನನಗೆ ಕಾಣಲಿಲ್ಲ. ಏನು ಗೌರಮ್ಮ, ಯಾವಾಗ ಬಂದೆ ? ಹಾಗೆ ಹೊರಟಿದ್ದೀಯಲ್ಲ !' ಎಂದು ಆರಂಭಿಸಿದ. ನನಗೆ ಬಹಳ ನಾಚಿಕೆಯಾಯಿತು. ಈಗ ಬೇಗನೆ ಕಣ್ಣಿನ ಚಿಕಿತ್ಸೆ ಮಾಡಿಸುವುದೆಂದು ನಿರ್ಧರಿಸಿದ್ದೇನೆ. ತಾರೀಖು ಗೊತ್ತಾಗಿದೆ. ನನ್ನಣ್ಣನೊಡನೆ ಬೆಂಗಳೂರಿಗೆ ಹೊಗುರುವೆ. ನಾಲ್ಕು ಕಣ್ಣು' ಆಗದಂತೆ ಕಳೆಗೊಳಿಸಲು ಕೇಳಿ ಕೊಂಡಿದ್ದೇನೆ ಡಾಕ್ಟರನ್ನು-ನೋಡಬೇಕು' ಎಂದರು.<noinclude></noinclude> tr9nm6mx3vyj4tnw3iosax2jn2qklt6 ಪುಟ:ಕಂಬನಿ-ಗೌರಮ್ಮ.pdf/೩೨ 104 92169 324039 240499 2026-06-02T09:55:15Z Pragathi. BH 7585 324039 proofread-page text/x-wiki <noinclude><pagequality level="3" user="Akasmita" />{{rh|೧೬|ಕಂಬನಿ|}}</noinclude>ಗೊತ್ತಿಲ್ಲವೇ ನಿನಗೆ? ಕನ್ನಡ ನಾಡಿನ ಶೇಕ್ಸ್‌ಪಿಯರ್ ಆವರು. ಕೇವಲ ಕನ್ನಡ ನಾಡಿನಲ್ಲಿ ಏಕೆ ? ರವೀಂದ್ರರಿಗೆ ದೇಶಬಂಧುಗಳು ದೊರೆತಂತೆ ಅಂಬಿಕಾತನಯರ ಕವಿತೆಗಳನ್ನು ಇಂಗ್ಲಿಷಿಗೆ ತರ್ಜುಮೆ ಮಾಡಬಲ್ಲವರು ಯಾರಾದರೂ ಇದ್ದಿದ್ದರೆ, ಇಂದು ಬೇಂದ್ರೆ ಯವರ ಹೆಸರು ವಿಶ್ವಸಾಹಿತ್ಯದಲ್ಲಿ ಮೆರೆಯುತ್ತಿತ್ತು. ಅವರ ಕವಿತೆ ಗಳನ್ನು ಓದಿಲ್ಲವೇ ನಿವ್ರ?' ಇನ್ನೂ ಬಹಳ ಮಾತುಗಳು ಉಕ್ಕಿಬಂದವ." ಎಂದು ಬರೆದಿದ್ದಾರೆ. {{gap}}<big><big>'''ಗೌ'''</big></big>ರಮ್ಮನವರಿಗೆ ಪ್ರಾಣಿದಯೆ ತುಂಬ ಇತ್ತು. ಮನೆಯಲ್ಲಿ ನಾಯಿ, ಬೆಕ್ಕು, ಹಸು, ದನ ಎಲ್ಲ ಇದ್ದವು, ನಾಲಗೆ ಇವರು 'ಫೆಡ್ಡಿ' ಗ್ರೆಟಾ' ಎಂದು ಕರೆಯುತ್ತಿದ್ದರು. 'ನಾಯುಗೆ ಇಂಗ್ಲಿಷ್ ಹೆಸರೇಕೆ ?' ಎಂದು ನಾನು ಕೇಳಿದ್ದಕ್ಕೆ' ಇಂಗ್ಲಿಷು ಹೆಸರು ನಾಯಿಗೂ ಒಪ್ಪುವುದಿಲ್ಲವೋ?' ಎಂದು ಅವರು ಹೇಳಿದರು. {{gap}}ಗೌರಮ್ಮನವರ ಪತಿಭಕ್ತಿ ಅಪಾರವಾತ, ದುಡಿದು ಬಂದ ಗಂಡನ ಸ್ವಾಗತಕ್ಕಾಗಿ ಬಾಗಿಲಲ್ಲಿ ನಿಂತ ಗೌರಮ್ಮ, ಗಂಡಬರುತ್ತಲೆ 'ಹಲೋ' ಎಂದು ಕೈಹಿಡಿದು ಕರೆದುಕೊಂಡು ಬಂದು ಖುರ್ಚಿಯಲ್ಲಿ ಕೂರಿಸಿ, ಬಟ-ಕಾಲುಚೀಲ ಉಚ್ಚುತ್ತಿದ್ದರು. ಒಳಸಿಂದ ತಾನೇ ಕಾಫಿ ತಂದುಕೊಡುತ್ತಿದ್ದರು. ಎಂತಹ ಆಯಾಸವಾಗಿದ್ದ ಗೋಪಾಲ ನಮ್ಮನವರಿಗೆ ಆಗ ಹಗುರೆನಿಸುತ್ತಿರಬಹುದು,' ಇವರಿಗೆ ಇಂಒ ಕೆಲಸ, ನಾಸಿಗರಿಗೇನೂ ಸಹಾಯಮಾಡಲಾರೆನಲ್ಲಾ!' ಎನ್ನುತ್ತಿದ್ದರು. ಒಂದು ದಿನ ಊಟವಾದ ಮೇಲೆ ನಾವು ಮೂವರೂ ಮಾತನಾಡುತ್ತ ಕುಳಿತಿ ದೈವ; ಆಯಾಸವಾಗಿತ್ತೆಂದು ಕಾಣುತ್ತದೆ-ಗೋಪಾಲಯ್ಯನವರು ಖುರ್ಚಿಯಲ್ಲಿ ನಿದ್ದೆ ಹೋದರು. ಅದನ್ನು ಕಂಡ ಗೌರಮ್ಮನವರು ನನ್ನನ್ನು ಸನ್ನೆ ಯಿಂದ ಸುಮ್ಮನಿರಿಸಿ, ಎರಡು ಮತ್ತೆ ತಂದು ತಲೆಯು ಬುಡದಲ್ಲೊಂದನ್ನು ಎಲ್ಲರಿಸಿದರು. ಇನ್ನೊಂದನ್ನು ಕಾಲಮಿಗ ದಲ್ಲಿ ಸರಿಸಿ, ನನ್ನನ್ನು ಒಳಗೆ ಕರೆದೆ ನಮ್ಮ ಮಾತ: ಆನಂಗೆ ಹೇಳಿಸಿ ಎಚ್ಚರಾಗದಂತೆ ಕನ್ನಡಿಯ ಬಾಗಿಲನ್ನು ಎಳೆದರು. ಆದರಂತೆಯೇ<noinclude></noinclude> 6bezjnw9aka5hjrzg1ht740vjrfmegn 324040 324039 2026-06-02T09:55:27Z Pragathi. BH 7585 /* Validated */ 324040 proofread-page text/x-wiki <noinclude><pagequality level="4" user="Pragathi. BH" />{{rh|೧೬|ಕಂಬನಿ|}}</noinclude>ಗೊತ್ತಿಲ್ಲವೇ ನಿನಗೆ? ಕನ್ನಡ ನಾಡಿನ ಶೇಕ್ಸ್‌ಪಿಯರ್ ಆವರು. ಕೇವಲ ಕನ್ನಡ ನಾಡಿನಲ್ಲಿ ಏಕೆ ? ರವೀಂದ್ರರಿಗೆ ದೇಶಬಂಧುಗಳು ದೊರೆತಂತೆ ಅಂಬಿಕಾತನಯರ ಕವಿತೆಗಳನ್ನು ಇಂಗ್ಲಿಷಿಗೆ ತರ್ಜುಮೆ ಮಾಡಬಲ್ಲವರು ಯಾರಾದರೂ ಇದ್ದಿದ್ದರೆ, ಇಂದು ಬೇಂದ್ರೆ ಯವರ ಹೆಸರು ವಿಶ್ವಸಾಹಿತ್ಯದಲ್ಲಿ ಮೆರೆಯುತ್ತಿತ್ತು. ಅವರ ಕವಿತೆ ಗಳನ್ನು ಓದಿಲ್ಲವೇ ನಿವ್ರ?' ಇನ್ನೂ ಬಹಳ ಮಾತುಗಳು ಉಕ್ಕಿಬಂದವ." ಎಂದು ಬರೆದಿದ್ದಾರೆ. {{gap}}<big><big>'''ಗೌ'''</big></big>ರಮ್ಮನವರಿಗೆ ಪ್ರಾಣಿದಯೆ ತುಂಬ ಇತ್ತು. ಮನೆಯಲ್ಲಿ ನಾಯಿ, ಬೆಕ್ಕು, ಹಸು, ದನ ಎಲ್ಲ ಇದ್ದವು, ನಾಲಗೆ ಇವರು 'ಫೆಡ್ಡಿ' ಗ್ರೆಟಾ' ಎಂದು ಕರೆಯುತ್ತಿದ್ದರು. 'ನಾಯುಗೆ ಇಂಗ್ಲಿಷ್ ಹೆಸರೇಕೆ ?' ಎಂದು ನಾನು ಕೇಳಿದ್ದಕ್ಕೆ' ಇಂಗ್ಲಿಷು ಹೆಸರು ನಾಯಿಗೂ ಒಪ್ಪುವುದಿಲ್ಲವೋ?' ಎಂದು ಅವರು ಹೇಳಿದರು. {{gap}}ಗೌರಮ್ಮನವರ ಪತಿಭಕ್ತಿ ಅಪಾರವಾತ, ದುಡಿದು ಬಂದ ಗಂಡನ ಸ್ವಾಗತಕ್ಕಾಗಿ ಬಾಗಿಲಲ್ಲಿ ನಿಂತ ಗೌರಮ್ಮ, ಗಂಡಬರುತ್ತಲೆ 'ಹಲೋ' ಎಂದು ಕೈಹಿಡಿದು ಕರೆದುಕೊಂಡು ಬಂದು ಖುರ್ಚಿಯಲ್ಲಿ ಕೂರಿಸಿ, ಬಟ-ಕಾಲುಚೀಲ ಉಚ್ಚುತ್ತಿದ್ದರು. ಒಳಸಿಂದ ತಾನೇ ಕಾಫಿ ತಂದುಕೊಡುತ್ತಿದ್ದರು. ಎಂತಹ ಆಯಾಸವಾಗಿದ್ದ ಗೋಪಾಲ ನಮ್ಮನವರಿಗೆ ಆಗ ಹಗುರೆನಿಸುತ್ತಿರಬಹುದು,' ಇವರಿಗೆ ಇಂಒ ಕೆಲಸ, ನಾಸಿಗರಿಗೇನೂ ಸಹಾಯಮಾಡಲಾರೆನಲ್ಲಾ!' ಎನ್ನುತ್ತಿದ್ದರು. ಒಂದು ದಿನ ಊಟವಾದ ಮೇಲೆ ನಾವು ಮೂವರೂ ಮಾತನಾಡುತ್ತ ಕುಳಿತಿ ದೈವ; ಆಯಾಸವಾಗಿತ್ತೆಂದು ಕಾಣುತ್ತದೆ-ಗೋಪಾಲಯ್ಯನವರು ಖುರ್ಚಿಯಲ್ಲಿ ನಿದ್ದೆ ಹೋದರು. ಅದನ್ನು ಕಂಡ ಗೌರಮ್ಮನವರು ನನ್ನನ್ನು ಸನ್ನೆ ಯಿಂದ ಸುಮ್ಮನಿರಿಸಿ, ಎರಡು ಮತ್ತೆ ತಂದು ತಲೆಯು ಬುಡದಲ್ಲೊಂದನ್ನು ಎಲ್ಲರಿಸಿದರು. ಇನ್ನೊಂದನ್ನು ಕಾಲಮಿಗ ದಲ್ಲಿ ಸರಿಸಿ, ನನ್ನನ್ನು ಒಳಗೆ ಕರೆದೆ ನಮ್ಮ ಮಾತ: ಆನಂಗೆ ಹೇಳಿಸಿ ಎಚ್ಚರಾಗದಂತೆ ಕನ್ನಡಿಯ ಬಾಗಿಲನ್ನು ಎಳೆದರು. ಆದರಂತೆಯೇ<noinclude></noinclude> apt9fnl55omtufwbdtn1i6wyhs9r2it ಪುಟ:ಕಂಬನಿ-ಗೌರಮ್ಮ.pdf/೩೩ 104 92170 324041 240500 2026-06-02T09:55:48Z Pragathi. BH 7585 /* Validated */ 324041 proofread-page text/x-wiki <noinclude><pagequality level="4" user="Pragathi. BH" />{{rh||ನಾನು ಕಂಡ ಗೌರಮ್ಮನವರು|೧೭}}</noinclude>ಶ್ರೀ ಗೋಪಾಲಯ್ಯನವರೂ ಗೌರಮ್ಮನವರನ್ನು ತುಂಬ ಪ್ರೀತಿಸುತ್ತಿ ದ್ದರು. ಗೋಪಾಲಯ್ಯನವರು ಬರೆದ ಒಂದು ಕಾಗದದಲ್ಲಿ ಹೀಗಿದೆ: ನೀವು ನನ್ನ ಗೌರಮ್ಮನಿಗೆ ಬರೆದ ಕಾಗದ ನೋಡಿದೆ. ಅದರಲ್ಲಿ ಮಾಸ್ತಿಯವರು ಮತ್ತೆ ಬೇಂದ್ರೆಯವರೂ ಸಹ, ರಾಮ-ಲಕ್ಷ್ಮಣರಂತೆ ನಮ್ಮ ದಂಡ ಕಾರಣ್ಯಕ್ಕೆ ಬರುವವರಾಗಿ ತಿಳಿದೆ. ನನ್ನ ಗೌರಮ್ಮ-ಶಬರಿಗಂತೂ ಹಿಗ್ಗೆ ಹಿಗ್ಗು. ನೀವು ಪ್ರಕಟಿಸುವ 'ಚಿಗರಿಗಿಂತಲೂ ಚಿಗರಿಬಿಟ್ಟಿದ್ದಾಳೆ. {{gap}}<big><big>'''ಗೌ'''</big></big>ರಮ್ಮನವರಲ್ಲಿ ದೇಶಭಕ್ತಿಯ ಉಜ್ವಲವಾಗಿತ್ತು. ಹತ್ತು, ಹನ್ನೆರಡು ವರುಷಗಳಿಂದ ಸಂಪೂರ್ಣವಾಗಿ ಖಾದಿ ಧರಿಸುತ್ತಿದ್ದರು. ಬಾದಿಯನ್ನು ಉಡ-ತೊಡುವವರನ್ನು ಕಂಡರೆ ಅವರಿಗೆ ತುಂಬಸಂತೋಷ, '''ಮಹಾತ್ಮಾ ಗಾಂಧಿ'''ಯವರೊಮ್ಮೆ ಕೊಡಗಿಗೆ ಒಂದಾಗ, ಶ್ರೀ ಮಂಜು ನಾಥಯ್ಯನವರಲ್ಲಿ ಬಂದರಂತೆ. ಆಗ ಗೌರಮ್ಮನವರು ತಮ್ಮ ಮನೆಗೂ ಮಹಾತ್ಮರನ್ನು ಕರೆದರಂತೆ. ಸಮಯವಿಲ್ಲದ್ದರಿಂದ ಅವರು ಹೋಗಲು ಅಷ್ಟ ಆತುರಪಡಲಿಲ್ಲವಂತೆ. ಗೌರಮ್ಮನವರು '''' ಫಾಸ್ಟ'''' ಆರಂಭಿಸುವೆ ಸಂದು ಹೇಳಿ ಕಳಿಸಿದರು; ಹೆದರಿ ಒಂದ '''ಮುದುಕ'''. ಗೌರಮ್ಮ ತಮ್ಮ ಮೈಮೇಲಿನ ಎಲ್ಲ ಆಭರಣ ಬಿಚ್ಚಿ ಕೊಟ್ಟುಬಿಟ್ಟರಂತೆ. ಮಹಾತ್ಮರು ಗೋಪಾಲಯ್ಯನವರನ್ನು ಕರೆದು “ ನಿಮ್ಮ ಆಕ್ಷೇಪಣೆ ಇಲ್ಲವಷ್ಟೇ ?' ಎಂದರಂತೆ. ಅವಳಿನ್ನು ಆಭರಣ ಬೇಡದಿದ್ದರಾಯಿತು !' ಎಂದು ನಕ್ಕು ನುಡಿದರಂತೆ ಗೋಪಾಲಯ್ಯ, ಆಗ '''“ ಹರಿಜನ"''' ದಲ್ಲಿ ಮಹಾತ್ಮರು ಈ ವಿಷಯದಲ್ಲಿ ಒಂದು ಲೇಖನ ಬರೆದರಂತೆ. ನನಗಿದನ್ನು ಮಡಿಕೇರಿ ಯಲ್ಲಿ ಒಬ್ಬ ಸ್ನೇಹಿತರು ಹೇಳಿದರು. ನಾನು ಬಂದು ಈ ವಿಷಯ ನೀವೂ ನನಗೆ ತಿಳಿಸಲಿಲ್ಲವಲ್ಲ!' ಎಂದೆ. ಇಲ್ಲಿಯ ಒಹಳ ಜನರಿಗೆ ಈ ವಿಷಯ ಸೇರುವುದಿಲ್ಲವೆಂದು ನನೀ ವಿಷಯವನ್ನು ಎತ್ತುವುದಿಲ್ಲ' ಎಂದು ಹೇಳಿ ದರು. ಕೊಡಗು ಟಿಶ್ ಕನ್ನಡನಾಡಿನೊಡನೆ ಒಂದಾಗದೆ ಗತಿಯಿಲ್ಲ!' ಎಂದು ಅವರು ಅಲ್ಲಿಯ ಕಿಕರಣ ನಕ್ಷದ ಮುಖಂಡರಾಗಿ ಕೆಲಸ ಮಾಡುತ್ತಿದ್ದರು.<noinclude></noinclude> 2pzkryijeprvvvj81vi2z7x8bo7bq0v ಪುಟ:ಯಕ್ಷಗಾನ ಮಕರಂದ.pdf/೩೨೮ 104 100250 324050 323820 2026-06-02T10:08:50Z Pragathi. BH 7585 324050 proofread-page text/x-wiki <noinclude><pagequality level="3" user="Hariprasad Shetty10" />{{Left|76}}</noinclude>ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ.ಜನಪದ ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಫುರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು.ರಾಗ—— ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. {{gap}}ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ—— <poem> <s> ಪಾಠ್ಯ ಗೇಯೇಚ ಮಧುರಂ ಪ್ರಮಾಣೆಸ್ತ್ರಿಭಿರನ್ವಿತಂ | ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರೀಲಯ ಸಮನ್ವಿತಂ | ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕೈಃ | ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ |}} </s></poem> ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ,ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು.ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. {{gap}}ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> jk6honzyzrkccb4gbpnyozqdw1y6v7j 324051 324050 2026-06-02T10:09:35Z Pragathi. BH 7585 /* Validated */ 324051 proofread-page text/x-wiki <noinclude><pagequality level="4" user="Pragathi. BH" />{{Left|76}}</noinclude>ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ.ಜನಪದ ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಫುರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು.ರಾಗ—— ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. {{gap}}ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ—— <poem> <small> ಪಾಠ್ಯ ಗೇಯೇಚ ಮಧುರಂ ಪ್ರಮಾಣೆಸ್ತ್ರಿಭಿರನ್ವಿತಂ | ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರೀಲಯ ಸಮನ್ವಿತಂ | ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕೈಃ | ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ |}} </small></poem> ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ,ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು.ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. {{gap}}ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> 7kdxhrlpin8xt5s1umjcbnizcnrgf2d 324052 324051 2026-06-02T10:10:21Z Pragathi. BH 7585 324052 proofread-page text/x-wiki <noinclude><pagequality level="4" user="Pragathi. BH" />{{Left|76}}</noinclude>ಅರ್ಥಗಳೇ ಮುಖ್ಯವಾಗಿ ಭಾವವ್ಯಂಜಕಗಳು; ಗೇಯತೆಯು ಗೌಣ.ಜನಪದ ಕಾವ್ಯಗಳಂತೆ ಅವನ್ನು ಹಾಡಲಾಗುವುದಿಲ್ಲ. ಒತ್ತಾಯದಿಂದ ಹಾಡಿದರೆ ಭಾವ ಕೆಡಲೂ ಬಹುದು. ಧ್ವನಿಕಾವ್ಯದಲ್ಲಿ ಮಾತು ಭಾವಕ್ಕೆ ವಾಹಕ, ಜನಪದ ಕಾವ್ಯ ದಲ್ಲಿ ಮಾತು ಗೇಯಕ್ಕೆ ವಾಹಕ, ಜನಪದ ಕಾವ್ಯವನ್ನು ಹಾಡಿದರೆ ಮಾತ್ರ ಭಾವವು ಸ್ಪುಟವಾಗುತ್ತದೆ. ಧ್ವನಿಕಾವ್ಯವನ್ನು ಓದಿದರೂ ಭಾವವು ಸ್ಫುರಿಸುವುದು. ಗೇಯ ಕಾವ್ಯದಲ್ಲಿ ಮಾತಿನ ಅರ್ಥ ವಾಚ್ಯಕಕ್ಷೆಯನ್ನು ಮೀರಿಹೋಗಲಾರದು.ರಾಗ—— ಅಭಿನಯಗಳಿಂದ ಭಾವವುಂಟಾಗಬೇಕು. ಆದುದರಿಂದ ಗೇಯಕಾವ್ಯವು ವಾಚ್ಯ ವಾದಷ್ಟೂ ಒಳ್ಳೆಯದು. ಧ್ವನಿಕಾವ್ಯ ಬರೆಯುವ ಕವಿ ತನ್ನ ಕಾವ್ಯ ವಾಚ್ಯವಾಗ ದಂತೆ ಎಚ್ಚರರವಹಿಸಬೇಕು. ಗೇಯಕಾವ್ಯದ ಕವಿ ವಾಚ್ಯವನ್ನೇ ಪುರಸ್ಕರಿಸಬೇಕು. ಈ ಕಾರಣದಿಂದಲೇ ಗೇಯಕಾವ್ಯದಲ್ಲಿ ಯತಿ, ಪ್ರಾಸ, ಯಮಕ ಮುಂತಾದ ಶಬ್ದಾಲಂಕಾರ ಗಳಿಗೆ ಶೋಭೆ ಹೆಚ್ಚು. ಧ್ವನಿಕಾವ್ಯದಲ್ಲಿ ಇವು ಕೆಲವೊಮ್ಮೆದೋಷವೂ ಆಗಬಹುದು. {{gap}}ಗೇಯಕಾವ್ಯ-ಧ್ವನಿಕಾವ್ಯಗಳು ತೀರ ವಿಜಾತೀಯವಾದವೆಂಬ ಮಾತೂ ಸರಿ ಯಲ್ಲ, ಕೆಲವು ಕಾವ್ಯಗಳನ್ನು ಓದಿದರೆ ಹೇಗೋ ಹಾಡಿದರೂ ಹಾಗೆ ರಂಜನೆ ಯಾಗಬಹುದು. ರಾಮಾಯಣದಲ್ಲಿ—— <poem> <small> ಪಾಠ್ಯ ಗೇಯೇಚ ಮಧುರಂ ಪ್ರಮಾಣೆಸ್ತ್ರಿಭಿರನ್ವಿತಂ | ಜಾತಿಭಿಃ ಸಪ್ತಭಿರ್ಯುಕ್ತಂ ತಂತ್ರೀಲಯ ಸಮನ್ವಿತಂ | ರಸ್ತೆ: ಶೃಂಗಾರ ಕರುಣ ಹಾಸ್ಯ ರೌದ್ರ, ಭಯಾನಕೈಃ | ವೀರಾದಿಭೀ ರಸೈರ್ಯುಕಂ ಕಾವ್ಯಮೇತದಗಾಯತಾಂ |}} </small></poem> ಎಂಬ ಮಾತು ಬರುತ್ತದೆ. ಇದು ಓದಿದರೂ ಹಾಡಿದರೂ ಮಧುರವಾಗಿರುವ ಉತ್ತಮ ಕಾವ್ಯ. ಲವಕುಶರು ವೀಣೆ ನುಡಿಸಿಕೊಂಡು ರಾಮಾಯಣವನ್ನು ಹಾಡಿದ್ದೂ ಉಂಟು ಎಂದ ಮೇಲೆ ಇದರ ಗೇಯತೆಯ ಕುರಿತು ಎರಡನೆಯ ಮಾತಿಲ್ಲ. ಆದರೆ ಹೇಗೆ ಹಾಡಿರಬಹುದು ? ಅರ್ಥ-ಭಾವಗಳು ಕೆಡದ ಹಾಗೆ ಮೃದುವಾಗಿ ಹಾಡಿರಬೇಕಲ್ಲವೆ? ಕನ್ನಡದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ ಮುಂತಾದವರ ಕಾವ್ಯ ಆದರೆ ದಾಸರ ಕೀರ್ತನೆಗಳು, ಯಕ್ಷಗಾನ,ಭಾವಗೀತೆಗಳು, ಜನಪದ ಹಾಡುಗಳು ಇವೆಲ್ಲಾ ಗೇಯಕಾವ್ಯದ ಗುಂಪಿಗೆ ಸೇರತಕ್ಕವು. ಇವುಗಳನ್ನು ಬರೇ ಓದುವುದರಿಂದ ಉದ್ದಿಷ್ಟ ಭಾವವು ಸ್ಪುರಿಸಲಾರದು.ಯಕ್ಷಗಾನದ ಹಾಡುಗಳನ್ನು ಹಾಡಿದಾಗಲೇ ಅವುಗಳ ಭಾವ ಕಾಣಬೇಕಾದುದು. {{gap}}ಯಕ್ಷಗಾನ ಪ್ರಸಂಗಗಳನ್ನು ಈಗ ಯಾವ ಧಾಟಿಯಲ್ಲಿ ಹಾಡುತ್ತಾರೋ ಹಾಗೆ ಮೊದಲು ಹಾಡುತ್ತಿರಲಿಲ್ಲವೆಂಬುದು ಆ ಪ್ರಸಂಗಗಳ ರಚನೆಯನ್ನು ನೋಡುವಾಗ ತಿಳಿಯುತ್ತದೆ. ಯಕ್ಷಗಾನವು ಒಂದು ಹಾಡುಗಬ್ಬ. ಇದರಲ್ಲಿ ಛಂದೋಬದ್ಧವಾದ ಹಾಡುಗಳೇ ಹೆಚ್ಚು. ರಾಗ-ತಾಳ ನಿಬದ್ಧವಾದವೂ ಇವೆ, ಛಂದಸ್ಸುಗಳಲ್ಲಿ ಗೇಯ<noinclude></noinclude> ds4ephggc22owbv4recu50y9rwgooou ಪುಟ:ಯಕ್ಷಗಾನ ಮಕರಂದ.pdf/೭೦೦ 104 100543 324042 323348 2026-06-02T09:58:15Z Pragathi. BH 7585 /* Validated */ 324042 proofread-page text/x-wiki <noinclude><pagequality level="4" user="Pragathi. BH" />{{left|438}}</noinclude> ಭಸ್ಮವನ್ನು ಕೈಯಲ್ಲಿ ತೆಗೆದು ದೇಹದ ನಾನಾ ಭಾಗಗಳಿಗೆ ವಿಲೇಪನ ಮಾಡುವನು. ತನ್ನ ಶಾಲಿನ ಕೊನೆಯನ್ನೇ ಉಂಡೆಯಾಗಿ ಸುತ್ತಿ ಶಿವಲಿಂಗವಾಗಿ ಮಾಡಿ ಷೋಡಶೋಪಚಾರ ಪೂಜೆ ಸಲ್ಲಿಸುವ ಅಭಿನಯ. ಹಾಲಿನ, ಜೇನಿನ, ಎಳನೀರ, ತುಪ್ಪದ, ನೀರಿನ ಅಭಿಷೇಕ. ಆ ಮೇಲೆ ಲಿಂಗಕ್ಕೆ ಪುಷ್ಪಸಮರ್ಪಣೆ, ಮತ್ತೆ ಆರತಿ ಎತ್ತುವನು. ಶಿವನು ತನ್ನ ಮೇಲೆ ಪ್ರಸನ್ನನಾಗಿರುವನೆಂಬುದರ ಸೂಚನಾರ್ಥವಾಗಿ ಲಿಂಗದ ಮೇಲಿನಿಂದ ಒಂದು ಹೂವನ್ನೆತ್ತಿ ತಲೆಯಲ್ಲಿ ಧರಿಸುವನು. ನಾಜೂಕಿನ ಮುಖವರ್ಣಿಕೆ, ಭಾರವಾದ ಆ ಭೂಷಣ, ಸಮತೋಲದಲ್ಲಿಡಲು ದುಸ್ಸಾಧ್ಯವಾದ ಕಿರೀಟ—ಇವುಗಳ ತೊಡಕಿನಿಂದಾಗಿ ನಿಧಾನವಾದ, ಭಾರವಾದ, ಒಂದು ಪರಿಮಿತಿಯ ಹೆಜ್ಜೆಗಳನ್ನಿಟ್ಟು ಪ್ರೇಕ್ಷಕರ ಸಮಗ್ರ ನೋಟಕ್ಕೆ ರಂಗಸ್ಥಳ ಮಧ್ಯದಲ್ಲಿ ಪ್ರವೇಶಿಸಿ ನಾಟ್ಯವಾಡುವಾಗ ಅವನು ತನ್ನ ರಾಜ್ಯದ ಸರ್ವಾಧಿಕಾರಿ ಎಂದು ಭಾಸವಾಗುವುದು. {{gap}}ಕುಟಿಲೆಯಾದ ರಾಕ್ಷಸಿಯ ಪಾತ್ರವು ಮಾತ್ರ ರಾಕ್ಷಸನಷ್ಟು ಪ್ರೇಕ್ಷಕರ ಮೆಚ್ಚುಗೆ ಗಳಿಸುವುದಿಲ್ಲ. ನಿರ್ದಾಕ್ಷಿಣ್ಯವಾಗಿ, ತನಗೆ ತೋಚಿದ ಯಾವುದೇ ಮೋಸ, ವಂಚನೆ, ಕುಯುಕ್ತಿಯಿಂದ ತನ್ನ ಕಾರ್ಯ ಸಾಧಿಸುವ ಪಾತ್ರವದು. ಅವಳ ಹೆಚ್ಚಿನ ಅಭಿನಯವು ವಿನೋದಪೂರ್ಣವಾದುದರಿಂದ ಪ್ರೇಕ್ಷಕರು ನಗೆಗಡಲಲ್ಲಿ ತೇಲುತ್ತಾರೆ. ಅವಳ ಒಡ್ಡೋಲಗವು ರಾಕ್ಷಸನ ದಿನಚರಿಯ ಒಡ್ಡೋಲಗದ ವರೆಗೆ (ಆರ್ಭಟ ಇತ್ಯಾದಿ) ಒಂದೇ ತೆರನಾದುದು. ಹಲ್ಲುಜ್ಜಿಯಾದ ಮೇಲೆ ತಲೆಬಾಚುವುದು, ಒಮ್ಮೆ ಒಂದು ಭಾಗ, ಮತ್ತೊಮ್ಮೆ ಇನ್ನೊಂದು. ಮಧ್ಯೆ ಕೆಲವು ಹೇನುಗಳನ್ನು ಹೆಕ್ಕಿ ಕೊಂದು ಕೂದಲನ್ನು ಭುಜದ ಮೇಲೆ ಹರವಿ ಬಿಡುತ್ತಾಳೆ. ಒಂದು ಕನ್ನಡಿಯಲ್ಲಿ ಮುಖ ನೋಡಿದಂತೆ ಮಾಡಿ, ಮುಖಕ್ಕೇನೆ ಬಳಿದಂತೆ, ಕಣ್ಣಿಗೆ ಕಾಡಿಗೆ ಹಚ್ಚಿದಂತೆ ಅಭಿನಯಿಸಿ, ಕೂದಲನ್ನು ಸರಿಪಡಿಸುತ್ತಾಳೆ. ಮತ್ತೆ ನಿರ್ಗಮಿಸಿ ದೊಂದಿಗಳೊಂದಿಗೆ ಪ್ರವೇಶ. ಮತ್ತೆ ನಾಟ್ಯ ಪೂರ್ಣವಾಗುತ್ತದೆ. ಆಭರಣ, ಕಿರೀಟಗಳ ಭಾರದಿಂದಾಗಿ ಅದು ರಾಕ್ಷಸನ ನಾಟ್ಯದಂತೆ ತುಂಬಾ ಸರಳವಾಗಿರುತ್ತದೆ. {{gap}}ಕಥಾವಸ್ತುವಿನಲ್ಲಿ ಬರುವ ವಿಶೇಷ ನಾಟ್ಯ ಪ್ರಸಂಗಗಳು ಯಾವುವೆಂದರೆ ಹೊಳೆಯಲ್ಲಾಗಲಿ, ಸರಸ್ಸಿನಲ್ಲಾಗಲಿ ಆಡುವ ಜಲಕ್ರೀಡೆ, ಪ್ರಯಾಣ ಮತ್ತು ಯುದ್ಧ. ಯಕ್ಷಗಾನ ಕಥೆಗಳಲ್ಲಿ ಹೆಚ್ಚಾಗಿ ಅಂತಃಪುರದ ಅಥವಾ ದೇವಲೋಕದ ಸ್ತ್ರೀಯರು ನೈಸರ್ಗಿಕವಾದ ಜಲಾಶಯಗಳಿಗೆ ಸ್ನಾನಕ್ಕೆ ಹೋಗುವ ದೃಶ್ಯಗಳು, ಕ್ರೀಡಾನೃತ್ಯಗಳು, ಹೆಚ್ಚಾಗಿ ವರ್ತುಲದ ಮಾದರಿಯಲ್ಲಿ ತೂಗುವ ಚಲನಗಳು (ನೀರಿನ ಚಲನೆಯನ್ನು ಸೂಚಿಸುವಂತೆ), ಕೂದಲನ್ನು ತೊಳೆಯುವುದು, ಇತರರ ಮೇಲೆ ವಿನೋದಕ್ಕಾಗಿ ನೀರೆರಚುವುದು ಇತ್ಯಾದಿ ಇವೆ. ಸಾಮಾನ್ಯವಾಗಿ ಸ್ತ್ರೀಯರು ತಮ್ಮೊಳಗೆ ಈ ರೀತಿ ನೀರಾಟವಾಡಿ ಬೇಸರವಾದಾಗ ತಮ್ಮ ರಕ್ಷಕರನ್ನು ಕೋಲಾಟವಾಡುವಂತೆ ಹುರಿದುಂಬಿಸುತ್ತಾರೆ. ಈ ವಿನೋದದ ನೃತ್ಯವು ವರ್ತುಲಾಕಾರದಲ್ಲಿ<noinclude></noinclude> mkflzxqrqvhk6j87sykko870j9yfr49 ಪುಟ:ಯಕ್ಷಗಾನ ಮಕರಂದ.pdf/೬೮೨ 104 100609 324053 323254 2026-06-02T10:17:12Z Shreesha Sharma 7840 324053 proofread-page text/x-wiki <noinclude><pagequality level="3" user="Viveka BG" /></noinclude>{{Left|422}} X ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್ ದಿಗ್ಡ್।ತೋಂ ತೋಂ- X ದಿ ರ್ರ್ ರ್ರ್ ರ್ರ್ ರ್ರ್ ರ್ರ್ ರ್ರ್ ರ್ರ್ ರ್ರ್ .....। ತೋಂ ತೋಂ॥ । ಈ ಅಬ್ಬರ ದಸ್ತೆ ಮುಗಿದ ತತ್‌ಕ್ಷಣ ರಕ್ಕಸನ ಆರ್ಭಟೆ. (ಬಣ್ಣದ ಕೂಗು ಎಂದೇ ಇದಕ್ಕೆ ಹೆಸರು ಮತ್ತೆ ಅಬ್ಬರ ದಸ್ತೆ. ಮತ್ತೆ ಆರ್ಭಟೆ. ಮೂರನೆಯ ಅಬ್ಬರ ದಸ್ತೆಯ ಅಂತ್ಯಕ್ಕೆ ಪಾತ್ರಧಾರಿ ರಂಗಕ್ಕೆ ಬಂದು ತೆರೆಯ ಮರೆಯಲ್ಲಿ ಆರ್ಭ ಟಿಸುತ್ತಾನೆ. ಅದರ ಅಂತ್ಯದಲ್ಲಿ ತೆರೆಯನ್ನು ಕೆಳಗಿಳಿಸದೇ (ಬಣ್ಣದ ಕಿರೀಟದ ಹಿಂಭಾಗ ಮಾತ್ರ ಕಾಣಿಸುವಂತೆ) ಬೆನ್ನು ಹಾಕಿ ಕೆಳಗಿನ ಮೂರು ವಿಧದ ತೆರೆ ಕುಣಿತ X X 1. ದೇಂ - ದಿನ್ನಾ ದೇಂ - ದಿನ್ನಾ | X 4 ಸಲ ದೇಂ ದೇಂತ ದಿ - ತ್ತಾ| ದೀಗಡ ದಿನ್ನಾ ದೀಗಡ ದಿನ್ನ । ದಿತ್ತೋoತ | ಕಡತಕ ದೀಗಡ | ದಿತ್ತಾಂತಯತ್ತ ದಿನ್ನ॥ಮುಕ್ತಾಯ -4 ಸಲ 2. ದಿಗಣಾಂತಯತ್ತ ದಿನ್ನ | ದೀಗಡ ಕಡತಕ ತರಿಕಿಟ ಕಡತಕ | ದೇಂದೇಂತ ದಿತ್ತಾ ದಿತ್ತಾoತಯತ್ತ ದಿನ್ನ. - ಮುಕ್ತಾಯ - 4 ಸಲ X X X X 3. ತೈಯತಾತಾ ತಾ ತೈಯ್ಯತಾತಾ ತೋದಿಂದ ಕಡತದಿಂದ ತೋಂತದಿನ್ನಕ ದಿನ್ನ 4 ಸಲ ಮುಕ್ತಾಯ ಅಷ್ಟತಾಳ ಮೇಲಿನ ಭಾಗಗಳಲ್ಲಿ ಹಿಂದೆ ಸರಿದು ಮತ್ತೆ ಕುಣಿತದ ಭಾಗಕ್ಕೆ ತೆರೆಯ ಬಳಿ ತಾಗಬೇಕು. ಕೊನೆಯ ಮುಕ್ತಾಯದ ಕೊನೆಗೆ “ದೇಂತತ ಕಿಟತಕ....” ಎಂಬ ಏಕತಾಳ ದಸ್ತೆಯ ಭಾಗವನ್ನು ಹಿಂದೆ ರಾಜನ ಒಡ್ಡೋಲಗಕ್ಕೆ ಇರುವಂತೆ ಮಾಡಿ ಮುಕ್ತಾಯದ ಕೊನೆಯಲ್ಲಿ ಕೆಳಗಿನ ದಸ್ತೆಯಲ್ಲಿ ಮೊದಲು ಎಡಕ್ಕೆ, ಕ್ರಮೇಣ ತೆರೆಯನ್ನು ಸ್ವಲ್ಪ ಸ್ವಲ್ಪವೇ ಇಳಿಸುತ್ತಾ ಮುಖ ತೋರಿಸುವುದು. X X X 1. -ತೋದಿಂದ ತಾಂ ದಿತ್ತೊಂತದಿನ್ನಾ ಕಡತಕ ದೀಂ।..,....| ದೇಂ - ತ ದಿಂದತ್ತಾಂ || ದಿಂತ್ತೊಂತ ಕಡತಕ....ದಿನ್ನಾ ಮುಕ್ತಾಯ 0060 APPL<noinclude></noinclude> du3crpf9piwv7774y6uvijjcxrws91x ಪುಟ:ಯಕ್ಷಗಾನ ಮಕರಂದ.pdf/೬೯೨ 104 100618 324049 323422 2026-06-02T10:04:23Z Pragathi. BH 7585 /* Validated */ 324049 proofread-page text/x-wiki <noinclude><pagequality level="4" user="Pragathi. BH" />{{Left|432}}</noinclude> ಜ್ಞಾನವಿದ್ದುದರಿಂದ ಭಾಗವತನ ಸೂಚನೆಗಳನ್ನು ಲಕ್ಷ್ಯದಲ್ಲಿರಿಸಿ ಅವನ ಹಾಡಿನ ಕೊನೆಯ ವರ್ಣವನ್ನು ಹಾಡಿ ಮುಗಿಸುವುದರ ಜೊತೆಗೆ ಮುಕ್ತಾಯದ ಹೆಜ್ಜೆಗಳನ್ನು ಅಳವಡಿಸುತ್ತಾನೆ ('ಗಜ ಮುಖದವಗೆ' ಪದ್ಯಕ್ಕೆ ಮಾತ್ರ ಈ ವಿವರಣೆ ಅನ್ವಯಿಸು ಇದೆ). ಆ ಮೇಲೆ ಸಂಭಾಷಣೆ, ಮತ್ತೆ ನಾಟ್ಯ ಹೀಗೆ ಒಂದರ ನಂತರ ಒಂದು ಪ್ರಸಂಗೋಚಿತವಾಗಿ ನಡೆಯುತ್ತಿರುತ್ತದೆ. ಕಥೆ ಮುಗಿಯುವ ವರೆಗೆ ಇದೇ ರೀತಿ ನಡೆ ಯುತ್ತದೆ. ವಿಶೇಷ ಸನ್ನಿವೇಶಗಳಿದ್ದಾಗ ಮತ್ತು ವಿಶಿಷ್ಟ ನಾಟ್ಯವಿದ್ದಾಗ ಈ ಗತಿ ಭಂಗವಾಗುವುದು. ನಾಟ್ಯಭಂಗಿಯು ಹಾಡಿನ ವಿಷಯ ಮತ್ತು ಕಥಾಸನ್ನಿವೇಶ ಗಳನ್ನು ಹೊಂದಿಕೊಂಡಿದೆ. ಇದೇ ಯಕ್ಷಗಾನ ರೂಪಕದ ಅವಿಭಾಜ್ಯಅಂಗವಾಗಿದೆ. ಸಂಭಾಷಣೆಯು ಕೂಡಾ ನಾಟ್ಯದ ನಂತರ ನಾಟ್ಯವನ್ನನುಸರಿಸಿಯೇ ಇರುತ್ತದೆ. ವೇಷಭೂಷಣಗಳು ನಟನ ನಾಟ್ಯಗತಿಯ ಮೇಲೆ ಪರಿಣಾಮ ಮಾಡುವುವೆಂಬುದು ಸ್ವತಃ ಸಿದ್ಧ. ಉದಾಹರಣೆಗೆ ನಟನ ಕಿರೀಟವು ಅವನ ಭುಜದಿಂದ ಕೆಳಗೆ ಇಳಿದಿದ್ದರೆ ತಲೆಯ ಚಲನೆಗೆ ಬಾಧೆ. ಬಿರುಸಿನ ಹೆಜ್ಜೆಗಳನ್ನು ಹಾಕುವಾಗ ಕಿರೀಟದ ಭಾರ ವನ್ನೂ ಶರೀರದ ಸಮತೋಲವನ್ನೂ ಗಮನಿಸಬೇಕಾಗುತ್ತದೆ. {{gap}}ಬಣ್ಣಗಳ ಬೆಡಗು, ಚಂಡೆ ಮದ್ದಳೆಗಳ ಸದ್ದು, ಗೆಜ್ಜೆಗಳ ಉಲಿಯಿಂದ ತನ್ನದೇ ವೈಖರಿಯುಳ್ಳ ಯಕ್ಷಗಾನ ನೃತ್ಯವನ್ನು ರಂಗದ ಮೇಲೆ ಮೊದಲು ಪರಿಚಯ ಮಾಡಿ ಕೊಡುವವರು ಕೆಂಪು ಮುಂಡಾಸು, ಕಪ್ಪು ಪಾಯಿಜಾಮಾ, ಮತ್ತು ಹಸಿರು ಅಂಗಿ ಗಳನ್ನು ತೊಟ್ಟು ಚಂಡೆ ಮದ್ದಳೆಗಳ ಬಡಿತಕ್ಕೆ ಸರಿಯಾಗಿ ಲೀಲಾಜಾಲವಾಗಿ ಕುಣಿ ಯುವ 10 ರಿಂದ 12 ವರ್ಷ ಪ್ರಾಯದ ಹುಡುಗರು. ತಮ್ಮ ಬಿರುಸಿನ ಕುಣಿತದಿಂದ ದೇವರನ್ನು ಸ್ತುತಿಸುವುದು ಅಥವಾ ನಿಂದಾ ಸ್ತುತಿಗೈಯುವುದೂ ಇದೆ. ಮೊಣ ಕೈಗಳಂತೆ ಮೊಣಕಾಲುಗಳನ್ನು ಕಾಲು ಗಂಟುಗಳು ಹೊರಕ್ಕಿರುವಂತೆ ಬಗ್ಗೆ ಸುತ್ತಾ ಕುಣಿಯುತ್ತಾರೆ. ಆಗ ತೋಳುಗಳು ಪಕ್ಕಕ್ಕೆ ಚಾಚಿದ್ದು ಮೊಣಕೈಗಳು ಎದೆಯ ವಟ್ಟದಲ್ಲಿರುತ್ತವೆ. ಈ ತರದ ದೇಹಭಂಗಿಯೇ ಯಕ್ಷಗಾನ ನೃತ್ಯದಲ್ಲಿ ಮೂಲಭೂತವಾದುದು. ಮೈವೆತ್ತ ಶಿಲ್ಪದಂತೆ ಈ ಚಿಕ್ಕ ಕಲಾವಿದರು ಚಲಿಸುತ್ತಾರೆ. ಈ ಬಾಲಕಲಾವಿದರ ನಾಟ್ಯದಲ್ಲಿ ಕಾಣುವ ಮತ್ತೊಂದು ಗುಣವಿಶೇಷವೆಂದರೆ, ಮದ್ದಳೆ ಳೆಯ ಬಡಿತಕ್ಕೂ ಇವರ ನಾಟ್ಯಕ್ಕೂ ಇರುವ ಅನ್ನೋನ್ಯತೆ, ಕೈಗಳ ಚಲನೆ ಕಾಲಿನ ಹೆಜ್ಜೆಗಳಿಗೆ ಪೂರಕವಾಗಿ ದೇಹವನ್ನು ಸಮತೋಲದಲ್ಲಿರಿಸಲು ಸಹಾಯಕ ವಾಗಿದೆ. ವೇಗದ ಹೆಜ್ಜೆ, ಸಶಕ್ತ ನೆಗೆತಗಳು ಅಂದಿನ ಕಾರ್ಯಕ್ರಮದ ಗರುವಿಕೆಗೆ, ದೇವದೇವತೆಗಳ ಸಾಹಸದ ಕಥೆಗೆ ಸೂಚನೆ ಮಾತ್ರವಲ್ಲ ಮನೋರಂಜಕವಾಗಿ ವಿನೋದಪೂರ್ಣವಾಗಿ ಪ್ರೇಕ್ಷಕರಿಗೆ ತಿಳಿಯಪಡಿಸುವ ವಿಧಾನವೂ ಆಗಿವೆ. ಈ ರೀತಿಯಾಗಿ ಅವರು ಸುಮಾರು ಅರ್ಧ ಅಥವಾ ಮುಕ್ಕಾಲು ಘಂಟೆ ಕುಣಿಯುತ್ತಾರೆ.<noinclude></noinclude> f859eh92h26cdf7poo3fzbd2me9o8iw ಪುಟ:ಯಕ್ಷಗಾನ ಮಕರಂದ.pdf/೬೯೫ 104 100621 324045 323539 2026-06-02T10:00:34Z Pragathi. BH 7585 /* Validated */ 324045 proofread-page text/x-wiki <noinclude><pagequality level="4" user="Pragathi. BH" /></noinclude>{{Right|433}} {{gap}}ಅನಂತರ ನಮ್ಮ ಕಣ್ಣಿಗೆ ಹಬ್ಬವನ್ನುಂಟುಮಾಡುವವರು ಕೃಷ್ಣ, ಬಲರಾಮ ರೆಂದು ಕರೆಸಿಕೊಳ್ಳುವ ಸುಮಾರು 13ರಿಂದ 15 ವರ್ಷಗಳೊಳಗಿನ ಹುಡುಗರು. ಕೋಡಂಗಿ ವೇಷಕ್ಕಿಂತಲೂ ವರ್ಣರಂಜಿತವಾದ ಸೂಕ್ಷ್ಮ ಕುಸುರಿಯ ಭರ್ಜರಿ ಪೋಷಾಕಿನ ಕೃಷ್ಣ-ಬಲರಾಮರಾಗಿ ಮಿಂಚಿನಂತೆ, ಮನುಷ್ಯರೇ ಹಿಡಿದ ತೆರೆಯನ್ನು ಸರಿಸಿ, ರಂಗಪ್ರವೇಶ ಮಾಡುತ್ತಾರೆ. ಕೆಂಪು, ಕಿತ್ತಳೆ ಮತ್ತು ಹಳದಿ ಚೌಕುಳಿಯ ಉದ್ದವಾದ ಲಂಗ, ಕೆಂಪು ಅಂಗಿ ಧರಿಸಿ, ಮರದಿಂದ ತಯಾರಿಸಲ್ಪಟ್ಟು ಚಿನ್ನ- ಬೆಳ್ಳಿಯ ಬೇಗಡೆಯಿಂದ ಅಲಂಕೃತವಾದ ಆಕರ್ಷಕವಾದ ಕೇದಗೆ ಮುಂದಲೆಯೆಂಬ ಕಿರೀಟವನ್ನಿಟ್ಟಿರುತ್ತಾರೆ. ಈ ವೇಷಭೂಷಣಗಳು ನಟರಿಗೆ ಸಮಸ್ಯಾತ್ಮಕವಾಗಿವೆ. ಸುತ್ತಿಕೊಂಡ ಬಟ್ಟೆ, ಕಾಲು ಮತ್ತು ಪಾದಗಳನ್ನು ಮರೆಮಾಡುವುದರಿಂದ ಪಾದಗಳ ಚಲನೆ ಪ್ರೇಕ್ಷಕರಿಗೆ ಕಾಣಿಸದು. ಆದ ಕಾರಣ ನೃತ್ಯವು ಅದಕ್ಕನುಗುಣವಾಗಿ ಅಳವಟ್ಟಿರುತ್ತದೆ. ನಟರ ತಿರುವು ಮುರುವುಗಳು ಲಂಗವನ್ನು ಬಹುವರ್ಣಪ್ರದರ್ಶಿನಿಯಂತೆ (ಕೆಲಿಡೊಸ್ಕೋಪ್) ಬೆಳಗಿಸಿ ಅವನ ನಾಜೂಕಾದ ಹೆಜ್ಜೆಗಳ ಗತಿಯನ್ನುತೋರಿಸುತ್ತವೆ. ಈ ನೃತ್ಯವು ನಮಗೆ ಅನೇಕ ಮಾದರಿಯ ನೃತ್ಯದ ಹೆಜ್ಜೆಗಳನ್ನು ಕಾಣುವ ಅವಕಾಶ ಒದಗಿಸುತ್ತದೆ. ಒಂದು ಶ್ರೇಣಿಯ ನೃತ್ಯದ ಹೆಜ್ಜೆಗಳಲ್ಲಿ ಇದು ಪ್ರಥಮ ಹೆಜ್ಜೆ; ಎರಡನೆಯದು ಮತ್ತು ಅದಕ್ಕೆ ಸೇರಿಕೊಂಡು ಚಲನೆ; ಮೂರನೆ ಸಲ ಪ್ರಥಮ ಹೆಜ್ಜೆ ಮತ್ತಿನ ಚಲನೆ ಆ ಮೇಲೆ ಕೂಡಿಕೆಯಾಗಿ ಇನ್ನೊಂದು ವಿಧದ ಚಲನೆ -ಹೀಗೆ ಆ ಶ್ರೇಣಿಯ ನಾಟ್ಯ ಇಡಿಯಾಗಿ ಪ್ರದರ್ಶಿಸಲ್ಪಡುತ್ತದೆ. ಎಲ್ಲಾ ಹೆಜ್ಜೆಗಳ ಗತಿ ಅನುಕ್ರಮವಾಗಿ ತೋರಿಸಲ್ಪಡುತ್ತದೆ. < {{gap}}ಈ ನಾಟ್ಯಗತಿಯಿಂದ ಯಕ್ಷಗಾನ ನೃತ್ಯದ ಪರಿಪೂರ್ಣತೆಗೆ ಅತ್ಯಾವಶ್ಯಕವೆನಿಸಿದ ತೂಕವನ್ನು ಸರಿಸುವ ತಂತ್ರ ನಟರಿಗೆ ವಿದಿತವಾಗುತ್ತದೆ; ಅಭ್ಯಾಸವಾಗುತ್ತದೆ. ಇದರಿಂದ ಹೆಜ್ಜೆಯ ಸ್ವರೂಪವೇ ಬದಲಾಗುತ್ತದೆ. ಇದನ್ನು ಕ್ರಮಬದ್ಧವಾಗಿ ಆಚರಿಸದಿದ್ದರೆ ಒಂದು ಹೆಜ್ಜೆಯಿಂದ ಇನ್ನೊಂದಕ್ಕೆ ಗತಿ ತಪ್ಪುತ್ತದೆ. ಈ ಹೆಜ್ಜೆಯ ಬದಲಾವಣೆಯನ್ನು ಸರಿಯಾಗಿ ನಿರ್ವಹಿಸಲು ಭಾರಬಿದ್ದ ಕಾಲಿನ ಪಾರ್ಶ್ವದ ಸೊಂಟದ ಭಾಗವು ವಿಶೇಷವಾಗಿ ಮುಂದಕ್ಕೆ ಚಾಚಲ್ಪಟ್ಟು ದೇಹದ ಸಮತೋಲ ವನ್ನು ಕಾಪಾಡಲು ಸೊಂಟದ ಮೇಲಿನ ಹುರಿಯ ಮೇಲ್ಬಾಗವು ಚಲಿಸಿ ಎದೆಗೂಡು ಮತ್ತು ಭುಜಗಳು ವಿರೋಧ ದಿಕ್ಕಿನಲ್ಲಿ ಚಾಚಲ್ಪಡುತ್ತವೆ. ಹೆಜ್ಜೆ ಬದಲಾವಣೆಯಂ ಸಂಟಿಯಾಗಿ ಚೈತನ್ಯಪೂರ್ಣವಾಗಿ ನಡೆಯಲು ಒಂದು ಕಾಲಿನ ಹಿಮ್ಮಡಿಯನ್ನು ಹಠಾತ್ತನೆ ಇನ್ನೊಂದರ ಮೊಣಕಾಲಿನ ಎತ್ತರಕ್ಕೆ ಎತ್ತುವಾಗಲೇ ಆ ಇನ್ನೊಂದು ಕಾಲಿನ ಪಾದವನ್ನು ಒಂದು ಅಂಗುಲದಷ್ಟು ಮುಂದೆ ಜಾರಿಸುವರು. ಆಗ ಕ್ಷಣದಲ್ಲಿ ಒಂದು ಕಾಲಿನ ಭಾರವು ಇನ್ನೊಂದರ ಮೇಲೆ ವರ್ಗಾಯಿಸಲ್ಪಟ್ಟು ಭಾರಕಳಕೊಂಡ ಕಾಲು ಮುಂದಿನ ಹೆಜ್ಜೆಯ ವೇಗಕ್ಕೆ ಸಿದ್ಧವಾಗುತ್ತದೆ.<noinclude></noinclude> d9tmpyj8hfjeg1u8oimzbaembhqiijc ಪುಟ:ಯಕ್ಷಗಾನ ಮಕರಂದ.pdf/೬೯೬ 104 100622 324046 323547 2026-06-02T10:01:19Z Pragathi. BH 7585 /* Validated */ 324046 proofread-page text/x-wiki <noinclude><pagequality level="4" user="Pragathi. BH" /></noinclude>434<br /> {{gap}}ಸ್ಥೂಲವಾಗಿ ನೋಡಿದರೆ ಸಾಂಪ್ರದಾಯಿಕವಾಗಿ ಯೋಜಿಸಿದ ಕೆಲವು ನೃತ್ಯ ವಿಧಾನಗಳನ್ನು ಬಿಟ್ಟರೆ ಯಕ್ಷಗಾನದಲ್ಲಿ ಉಳಿದೆಲ್ಲ ಕಡೆಯಲ್ಲಿ ಕೈಯ ಅಭಿನಯ ಗೌಣವಾಗಿದೆ. ಹೆಚ್ಚಾಗಿ ನಿತ್ಯಜೀವನದಲ್ಲಿ ತೋರುವ 'ಇಲ್ಲಿ ಬಾ', 'ಹೋಗು' ಮೊದಲಾದ ಸಾಮಾನ್ಯ ಸಂಕೇತಗಳು ಮಾತ್ರ ಕೈಯಿಂದ ಅಭಿನಯಿಸಲ್ಪಡುತ್ತವೆ. ಸಾಂಪ್ರದಾಯಿಕವಾದ ಕೆಲವು ಕೈಯ ಸಂಕೇತಗಳು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂಥವು. ಉಹಾಹರಣೆಗೆ ಕೃಷ್ಣನ ಕೊಳಲದುವಿಕೆ, ತಾವರೆ ಬಿರಿಯುವುದು, ಅಭಯ ಹಸ್ತ, ಬಾಲಗೋಪಾಲ ನೃತ್ಯದಲ್ಲಿ ದೇವತಾಸ್ತುತಿಪರವಾದ ಹಾಡುಗಳಿಗೆ ಸರಳವಾದ ಕೈಯ ಚಲನೆಯನ್ನು ಹೊಂದಿಕೊಂಡಿದ್ದರೂ ಆಯಾ ಪಾತ್ರ ಮತ್ತು ನೃತ್ಯಕ್ಕೆ ಉಚಿತವಾದ ಕಲಾವಂತಿಕೆಯ ಮಾದರಿಯನ್ನು ಅನುಸರಿಸುತ್ತವೆ. ಸಾಮಾನ್ಯವಾಗಿ ಮಣಿಗಂಟು ಒಂದು ತಿರುಗಾಣಿಯಂತಿದ್ದು ಎದೆಯ ಮಟ್ಟಕ್ಕೆ ಚಾಚಿದ ಕೈಗಳು ಹಿಂದೆ ಮುಂದೆ ಸಮಮಟ್ಟವಾಗಿ ತಿರುಗುತ್ತವೆ. ಪುರುಷ ಪಾತ್ರಗಳ ನೃತ್ಯಗಳಲ್ಲಿ ಸಾಮಾನ್ಯವಾಗಿ ಭುಜದ ಕೊನೆಯ ಒಂದು ವರ್ತುಲವನ್ನುಂಟು ಮಾಡುವಂತೆ ರಟ್ಟೆಯು ಚಲಿಸುತ್ತದೆ. ಆಗ ಅದರ ವ್ಯಾಸವು ಮುಂಗಡೆ ಇದ್ದು ಅಂಗೈನೆಲದೆಡೆಗೆ ಲಂಬವಾಗಿ ಚಾಚಿರುತ್ತದೆ. ಈ ಹಸ್ತವಿನ್ಯಾಸದಿಂದ ಬಾಲಗೋಪಾಲ ವೇಷಗಳಿಗೆ ತಮ್ಮ ಭುಜಕೀರ್ತಿಗಳನ್ನು ಪ್ರದರ್ಶಿಸಲು ಅವಕಾಶವಾಗುತ್ತದೆ. <br />{{gap}} ಈ ನರ್ತಕರ ಮುಖಚರ್ಯೆಯು ನಿತ್ಯಜೀವನದ ಸಹಜ ಮುಖಚರ್ಯೆಗಿಂತ ಸ್ವಲ್ಪ ಅತಿಶಯವಾಗಿರುತ್ತದೆ. ಕಣ್ಣುಗಳ ಸಂಯಮಿತ ಚಲನೆಯು ಯಕ್ಷಗಾನದ ಒಂದು ಅಂಗವಾದರೂ ಇತರ ಭಾರತೀಯ ನೃತ್ಯ ಪದ್ಧತಿಗಳಲ್ಲಿದ್ದಂತೆ ಅದುವೇ ಮುಖ್ಯವಲ್ಲ. ಕೋಡಂಗಿಗಳು ಮೊದಲು ಕುಣಿದಂತೆಯೇ ಬಾಲಗೋಪಾಲರು ಕೂಡಾ ಅರ್ಧ ತಾಸು, ಮುಕ್ಕಾಲು ತಾಸು ನೃತ್ಯ ಮಾಡುತ್ತಾರೆ. ಉದ್ದ ಲಂಗ, ಬಲುಭಾರದ ಆಭರಣ, ಬಿಗಿಯಾದ ಕಿರೀಟಗಳನ್ನು ಧರಿಸಿ, ನೃತ್ಯದಲ್ಲೇ ಮನಸ್ಸ ನ್ನಿಟ್ಟು ಅನಾಯಾಸವಾಗಿ ನರ್ತಿಸಲು ದೀರ್ಘಕಾಲದ ತರಬೇತಿ ಬೇಕಾಗಿದೆ. {{gap}}ತೆರೆಯ ಮರೆಯಿಂದ ಕೃಷ್ಣನ ಪತ್ನಿಯರಾದ ರುಕ್ಷ್ಮಿಣಿ-ಸತ್ಯಭಾಮೆಯರೆನಿಸಿ ಕೊಳ್ಳುವ ಸ್ತ್ರೀವೇಷಗಳು ವಿಲಾಸ-ವಿಭ್ರಮಗಳಿಂದ ಕಾಣಿಸಿಕೊಳ್ಳುವಾಗ ನಮ್ಮ ಚಿಂತನೆಗಳು ಹೃದಯದ ಮಧುರಭಾವಗಳ ಕಡೆಗೆ ತಿರುಗುತ್ತವೆ. ಈ ವೇಷಗಳಂ ಆರು ಗಜದ ಆಧುನಿಕ ಸೀರೆ, ಬಣ್ಣನೆಗೆ ಬಾರದ ಬಳೆಗಳು, ಕಿವಿಯ ಆಭರಣ, ಹಾರ ಗಳನ್ನು ಧರಿಸುತ್ತವೆ. 16ರಿಂದ 18ರ ಒಳಗಿನ ಹದಿ ಹರೆಯದ ಹುಡುಗರು ಸ್ತ್ರೀ ವೇಷ ಧರಿಸಿ ಮೇಲು ಮೇಲಕ್ಕೇರುವ ಗರುಡನ ರೆಕ್ಕೆಯ ವಿಲಾಸದಿಂದ, ಗಜಗಮ ನದ ನಯದಿಂದ, ಹೂವಿಂದ ಹೂವಿಗೆ ಹಾರುವ ಪಾತರಗಿತ್ತಿಯ ವೇಗದಿಂದ ಕುಣಿ ಯುತ್ತಾರೆ. ನೃತ್ಯದ ಸತ್ವವನ್ನು ತಮ್ಮದಾಗಿಸಿಕೊಳ್ಳಬೇಕಾದರೆ ಈ ನರ್ತಕರು ಕೈತೋಳುಗಳನ್ನ ಮೆಲುಗಾಳಿಗೆ ಹಾರುವ ಜೇಡನ ಬಲೆಯ ನೂಲೆಳೆಯಂತೆ<noinclude></noinclude> 2wr9xa43uov9vi92717jkqkwqjed4g1 ಪುಟ:ಯಕ್ಷಗಾನ ಮಕರಂದ.pdf/೬೯೮ 104 100624 324047 323344 2026-06-02T10:02:19Z Pragathi. BH 7585 /* Validated */ 324047 proofread-page text/x-wiki <noinclude><pagequality level="4" user="Pragathi. BH" />{{left|436}}</noinclude> ಚಾಚಿದ ಕೈಗಳು ಎದೆಯ ವರೆಗೆ ಬಂದು ಪುನಃ ಹಿಂದಕ್ಕೆ ಹೋಗುವುದರಿಂದ ನಾಟ್ಯಕ್ಕೆ ವೇಗ, ತೀವ್ರತೆಯುಂಟಾಗುತ್ತದೆ. ಜೀವಂತ ಮನುಷ್ಯನು ಬುಗರಿಯಂತೆ ವರ್ತುಲದೊಳಗೆ ವರ್ತುಲವಾಗಿ ತಿರುಗುತ್ತಾನೆ. ಇದಲ್ಲದೆ ಇನ್ನೂ ತಾಳಲಯ ಬದ್ಧವಾದ ಹಲವು ನೃತ್ಯ ಪ್ರಕಾರಗಳಿವೆ. ಇವು ವೃಂದನೃತ್ಯ ಅಥವಾ ಏಕಾಂಗ ನೃತ್ಯವೂ ಆಗಬಹುದು. ಇವುಗಳಲ್ಲೆಲ್ಲ ವೇಗದಿಂದ ಕುಕ್ಕರಿಸುವುದು, ತಿರುಗುವುದು, ಸುತ್ತುವುದು ಆಗಿದ್ದರೂ ಹೆಜ್ಜೆಗಳು ಬಹಳ ಸಂಕೀರ್ಣವಾಗಿರುತ್ತವೆ. ಕೆಂಪು, ಕಿತ್ತಳೆ, ಹಳದಿ, ಕಚ್ಚೆ ಸೀರೆಯನ್ನು ಕಾಲುಗಳ ಮಧ್ಯದಿಂದ ತಂದು (ಕಸೆಯನ್ನು) ಸೊಂಟಕ್ಕೆ ಸಿಕ್ಕಿಸಿದುದರಿಂದ ಈ ರೀತಿಯ ತೊಡುವಿಕೆಯು ನೃತ್ಯದಲ್ಲಿ ಕಾಲುಗಳನ್ನು ಅನಾಯಾಸವಾಗಿ ಚಲಿಸಲು ಅನುಕೂಲವಾಗುತ್ತದೆ. ಪೌರಾಣಿಕ ವೀರರ ಶೌರ್ಯ ಸಾಹಸಗಳ ಪ್ರದರ್ಶನಕ್ಕೂ ಇದು ಉಪಯುಕ್ತವಾಗಿದೆ. ದೃಢವಾಗಿ ಊರಿದ ಹೆಜ್ಜೆಗಳು, ನಿಯತವಾಗಿ ಭಾರವನ್ನು ಕಾಲಿನಿಂದ ಕಾಲಿಗೆ ಸರಿಸುವಿಕೆ, ಭುಜಗಳ-ಬೆನ್ನಿನ ಬಾಗು, ನಿಶ್ಚಿತವಾದ ಖಚಿತವಾದ ಕೈಗಳ-ಕಣ್ಣುಗಳ ಚಲನೆ ಒಂದಕ್ಕೊಂದು ಹೊಂದಿಕೊಂಡು ಲಯದಲ್ಲಿ ನಡೆವ ಈ ಕ್ರಿಯೆಗಳಿಂದ ಪೌರಾಣಿಕ ವೀರರ ಶೌರ್ಯ-ಸಾಹಸ-ಧೃತಿಗಳು ಪ್ರದರ್ಶಿತವಾಗುತ್ತವೆ. ಸುಮಾರು ಅರ್ಧ ತಾಸಿನ ಈ ನೃತ್ಯದಲ್ಲಿ ದೇಹದ ಅಂಗಾಂಗಗಳು ಒಂದರೊಡನೊಂದು ಬೆಸೆದುಕೊಂಡಿದ್ದು ಚಲನೆಯು ದೇಹದ ಒಳಗೇ ಅಡಕವಾಗಿರುತ್ತದೆ. ಸ್ತ್ರೀ ವೇಷದ ಕುಣಿತವು ಇದಕ್ಕೆ ತೀರ ವಿರುದ್ಧವಾದುದು. ಅಲ್ಲಿ ಚಲನೆಯು ಬೆರಳ ತುದಿಗಳಿಂದ ಹರಿದು ದೇವತೆಗಳಿಗೆ ಕಾಣಿಕೆಯನ್ನು ಅರ್ಪಿಸುತ್ತಿದೆಯೋ ಎಂಬಂತೆ ಕಾಣುವುದು. {{gap}}ಕಥೆಯ ಉದ್ದಕ್ಕೂ ಒಡ್ಡೋಲಗದಲ್ಲಿ ಸೇರಿರದ ಇತರ ಮುಖ್ಯ ಪಾತ್ರಗಳು ಏಕಾಕಿ ಒಡ್ಡೋಲಗವನ್ನು ಕೊಡುತ್ತವೆ. ಮೊದಲ ಪ್ರಮುಖ ಒಡ್ಡೋಲಗದ ಗುಂಪಿನ ಕೆಲವು ಹೆಜ್ಜೆಗಳನ್ನೇ ಇವು ತೋರಿಸುತ್ತವೆ. ಆದರೆ ವ್ಯಕ್ತಿ ವಿಶಿಷ್ಟವಾದ ನೃತ್ಯವನ್ನು ಪರಿಚಯಿಸುವ ಇತರ ಪಾತ್ರಗಳಿವೆ. ಉದಾಹರಣೆಗೆ, ಸಾತ್ವಿಕವಾದರೂ ವೀರೋಚಿತವಾದ ನೃತ್ಯದ ಕೃಷ್ಣ, ಗದ್ದಲದ ಕಿರಾತ, ಪ್ರಚಂಡ ರಾಕ್ಷಸ ಮತ್ತು ವಂಚಕಿಯರಾದ ರಾಕ್ಷಸಿ. {{gap}}ಕೃಷ್ಣನ ಒಡ್ಡೋಲಗದಲ್ಲಿ ಕ್ರಮಾನುಗತಿಯಾಗಿ ಎರಡು ವಿಭಾಗಗಳು. ಮೊದಲ ಭಾಗದಲ್ಲಿ ಚಕ್ರಗಳುಳ್ಳ ನಾಲ್ಕು ಕಾಲಿನ ಮಂಚ ಒಂದರ ಮೇಲೆ ಸಿಂಹಾಸನವೆಂದು ಆಸೀನನಾಗಿರುತ್ತಾನೆ. ಅವನ ಎಡಬಲಗಳಲ್ಲಿ ರುಕ್ಮಿಣಿ, ಸತ್ಯಭಾಮೆಯರಿರುತ್ತಾರೆ. ತೆರೆಯೊಂದು ಅವರ ಅರ್ಧ ದೇಹವನ್ನು ಮಾತ್ರ ತೋರಿಸುತ್ತದೆ. ಕೈಗಳ ಚಲನೆಯಿಂದ ಹಾಡಿನ ಭಾವಕ್ಕೆ ಸರಿಯಾಗಿ ಅವನು ತನ್ನನ್ನು ಬಣ್ಣಿಸುತ್ತಾನೆ. ತಾನು ಶೇಷಶಾಯಿ, ಗರುಡಗಮನ, ಗೋವರ್ಧನೋದ್ಧರಣದಿಂದ ಭಕ್ತರನ್ನು, ಗೋವು, ಗೋವಳರನ್ನೂ ಇಂದ್ರನ ಕೋಪದಿಂದುಂಟಾದ ನೆರೆಯಿಂದ ಕಾಪಾಡಿದವನು,<noinclude></noinclude> 4fv8thbi8w5x1kas6ts6c7i4mey20xa ಪುಟ:ಯಕ್ಷಗಾನ ಮಕರಂದ.pdf/೬೯೯ 104 100625 324048 323345 2026-06-02T10:02:58Z Pragathi. BH 7585 /* Validated */ 324048 proofread-page text/x-wiki <noinclude><pagequality level="4" user="Pragathi. BH" />{{right|437}}</noinclude> ಇತ್ಯಾದಿ. ಈ ಭಾಗ ಮುಗಿದ ಮೇಲೆ ತೆರೆ ತೀರ ಎಲ್ಲರನ್ನೂ ಮುಚ್ಚುತ್ತದೆ. ಅದರ ಮರೆಯಲ್ಲಿ ಪತ್ನಿಯರು ನಿರ್ಗಮಿಸುತ್ತಾರೆ; ಸಿಂಹಾಸನವೂ ಅಲ್ಲಿಂದ ಸರಿಸಲ್ಪಡುತ್ತದೆ. ಮದ್ದಳೆಯ ಒಂದು ವಿಶಿಷ್ಟವಾದ ಬಡಿತಕ್ಕೆ ಕೃಷ್ಣನ ಪಾತ್ರವು ತೆರೆಹಿಡಿದವರಿಂದ ತೆರೆಯನ್ನು ಕಸಿದು ಬಿಸುಟು ರಂಗಸ್ಥಳಕ್ಕೆ ಧುಮುಕುತ್ತದೆ. ಬಾಲಗೋಪಾಲನಂತೆಯೇ ವೇಷಭೂಷಣಗಳಿದ್ದರೂ ವೀರೋಚಿತವಾದ ಹೆಚ್ಚಿನ ಆಭರಣಗಳೂ ಕೈಯಲ್ಲಿ ಆಯುಧವಾಗಿ ಚಕ್ರವೂ ಇದ್ದು ಅವನನ್ನು ಇನ್ನೂ ಬಣ್ಣಿಸುತ್ತಿದ್ದ ಹಾಡಿಗೆ ಸರಿಯಾಗಿ ಕುಣಿಯುತ್ತಾನೆ. {{gap}}ಕಿರಾತನ ಒಡ್ಡೋಲಗವು ಪ್ರಕೃತಿಯ ವೈಚಿತ್ರ್ಯವನ್ನು ನೆನಪಿಗೆ ತರುತ್ತದೆ. ಮಾವಿನೆಲೆಗಳನ್ನು ಎದೆಯ ಸುತ್ತ ಹೆಣೆದುಕೊಂಡು ವಿಲಕ್ಷಣವಾದ ಕೆಂಪು ಮುಂಡಾಸು ಧರಿಸಿ ತನ್ನ ಇಬ್ಬರು ಸಹಚರರೊಡನೆ ರಂಗಸ್ಥಳ ದ್ವಾರದಲ್ಲಿ ಹೊತ್ತಿಸಿದ ಭಾರೀ ಬೆಂಕಿಯ ಸುತ್ತಲೂ ಕುಣಿಯುತ್ತಾನೆ. ಮತ್ತೆ ಹತ್ತಿರದ ಪೀಠದ ಮೇಲೆ ಚಂಗನೆ ಹಾರಿ ಕುಣಿಯುತ್ತಾನೆ. ಬೊಬ್ಬೆ, ಗಲಭೆಗಳ ನಡುವೆ ರಂಗಸ್ಥಳದ ಒಂದು ಬದಿಗೆ ಹಾರಿ, ಮೊಣಕಾಲೂರಿ, ಲಾ, ಲಾ, ಲಾ, ಲಾ ಎಂದು ಬೊಬ್ಬೆ ಹಾಕುತ್ತಾನೆ. ಬಿಲ್ಲಿಗೆ ಹೆದೆಯೇರಿಸಿ ಕಿವಿಯಾನಿಸುತ್ತಾನೆ. ಇದೇ ಕ್ರಮದಲ್ಲಿ ರಂಗಸ್ಥಳದ ಇನ್ನೊಂದು ಬದಿಯಲ್ಲೂ ಮಾಡಿ ಪುನಃ ಬೆಂಕಿಯ ಸುತ್ತಲೂ ಕುಣಿಯುತ್ತಾನೆ. ಕೊನೆಗೆ ಯಾರು ಬೇಟೆಗೆ ಎಲ್ಲಿ ಹೋಗಬೇಕೆಂಬ ಬಗ್ಗೆ ಅವರೊಳಗೆ ಚರ್ಚೆಯಾಗುತ್ತದೆ. ಇನ್ನೊಮ್ಮೆ ಮೊಣಕಾಲೂರಿ ಕಿವಿಯಾನಿಸಿ ಬಾಣಪ್ರಯೋಗ ಮಾಡುವ ಅಭಿನಯ. ಸಿಕ್ಕಿದ ಮೃಗವನ್ನು (ಬೇಟೆ) ಅವನು ತರಲು ಹೋದಾಗ ಅಲ್ಲಿ ಅದು ತನ್ನದೆಂದು ವಾದಿಸುವವನೊಬ್ಬನಿರುತ್ತಾನೆ. ಹೀಗೆ ಕಥೆಯ ಮುನ್ನಡೆ. {{gap}}ಓ ........ ಹಾ! ಹಾ! ಹಾ! ಹಾ! ಹಾ! ಹಾ! ಹಾ! ಪ್ರಚಂಡ ರಾಕ್ಷಸನ ಅಟ್ಟಹಾಸದ ಹುಚ್ಚು ಆರ್ಭಟ, ಚಂಡೆಯ ಕರ್ಣಕಠೋರ ಧ್ವನಿ, ಪೈಶಾಚಿಕ ನಗು ಕಿವಿಗೆ ಅಪ್ಪಳಿಸುತ್ತದೆ, ರಾಕ್ಷಸನು ಕಾಣಿಸಿಕೊಳ್ಳುವಾಗ. ಕಾಡಿನ ಕತ್ತಲೆಯಿಂದ ನಿಧಾನವಾಗಿ ಅವನು ರಂಗಸ್ಥಳ ಪ್ರವೇಶಿಸುತ್ತಾನೆ. ಧಿಟ್ಟನಾಗಿ ತೆರೆಯ ಹಿಂದೆ ನಿಲ್ಲುತ್ತಾ ಸಿಂಹಗರ್ಜನೆ ಮಾಡುತ್ತಾ ಬರುತ್ತಾನೆ. ಪ್ರೇಕ್ಷಕರಿಗೆ ಅವನ ಭೀಕರ ರೂಪದ ಭವ್ಯತೆ, ಭಯವನ್ನು ಹುಟ್ಟಿಸುತ್ತದೆ. ಅವನ ವೇಷಭೂಷಣಗಳ ಕಪ್ಪು, ಕೆಂಪು, ಬಿಳೇ ಬಣ್ಣಗಳು ದೀಪದ ಬೆಳಕಿನಲ್ಲಿ ಝಗಝಗಿಸುತ್ತವೆ. ಮುಖದ ಮೇಲಿನ ಬಿಳೇ ಮುಳ್ಳುಗಳಂಥ ಚಿಟ್ಟೆಗಳು (ಮುಖದ ಮೇಲೆ) ವಿಕಾರವಾದ, ಭಯೋತ್ಪಾದಕ ನೆಳಲು ಚೆಲ್ಲುತ್ತವೆ. ವಿಧ್ವಂಸಕ ಶಕ್ತಿಯ ಸಂಕೇತವಾಗಿ, ಭಾರೀ ಗಾತ್ರದ ಕಿರೀಟವು ಅವನ ತಲೆಯ ಮೇಲೆ ಎದ್ದು ಕಾಣುತ್ತದೆ. ಅರ್ಧ ತೆರೆಯ ಹಿಂದೆ, ಚಂಡೆ ಮದ್ದಳೆ ತಾಳಗಳ ವಿಶಿಷ್ಟ ಸಾಮರಸ್ಯದಲ್ಲಿ ಸರಳವಾದ ನೃತ್ಯದಿಂದ ತನ್ನ ದಿನಚರಿಯ ಶಿವಪೂಜೆಯನ್ನು ಅಭಿನಯಿಸುತ್ತಾನೆ. ಮೊದಲು ಹಲ್ಲುಜ್ಜುವನು, ಆ ಮೇಲೆ ಸ್ನಾನ ಮಾಡುವನು,<noinclude></noinclude> 7huy8hmnbe4a9viiaa55mbw4xknhtl9 ಪುಟ:ಯಕ್ಷಗಾನ ಮಕರಂದ.pdf/೭೦೧ 104 100638 324043 323352 2026-06-02T09:58:57Z Pragathi. BH 7585 /* Validated */ 324043 proofread-page text/x-wiki <noinclude><pagequality level="4" user="Pragathi. BH" />{{right|439}}</noinclude> ನಡೆಯುತ್ತದೆ. ಪ್ರತಿಯೊಬ್ಬರ ಕೈಯಲ್ಲಿ ಕೋಲಾಟದ ಕೋಲುಗಳಿರುತ್ತವೆ. ಭಾಗವಹಿಸುವವರು ತಮ್ಮೊಳಗೆ ಒಬ್ಬರೊಬ್ಬರ ಹಿಂದೆ ಮುಂದೆ ಹೆಣೆದಂತೆ, ಸರಳ ಹೆಜ್ಜೆಗಳಲ್ಲಿ ಕೋಲಾಟವಾಡುತ್ತಾರೆ. ಕೋಲಾಟಕ್ಕೂ ತಾಳಲಯವಿದೆ. ಜಲಕ್ರೀಡೆ ಮತ್ತು ಕೋಲಾಟವು ಸುಮಾರು ಹತ್ತು ನಿಮಿಷಗಳಷ್ಟು ನಡೆಯುತ್ತದೆ. {{gap}}ಪ್ರಾಚೀನ ಕಾಲದಲ್ಲಿ ಪ್ರಯಾಣವೆಂದರೆ ಪರಸ್ಪರ ಸಂಪರ್ಕ-ಸಾರಿಗೆಯಲ್ಲಿ ಮುಖ್ಯವಾದ ವಿಷಯವಾಗಿತ್ತು. ಹಲವು ಸಲ ಯಕ್ಷಗಾನ ಪ್ರಸಂಗಗಳಲ್ಲಿ ಪಾತ್ರಗಳು ಪಯಣಿಸುವ ಸನ್ನಿವೇಶಗಳಿರುತ್ತವೆ—ಸಂದೇಶ ಒಯ್ಯುವುದು (ಮದುವೆ ಮೊದಲಾದುವಕ್ಕೆ), ಸಾಮಾಜಿಕ ಭೇಟಿಗಳು ಅಥವಾ ಯುದ್ಧರಂಗಕ್ಕೆ ಸಾಗುವುದು—ಇವುಗಳು ತಾಳ ಮತ್ತು ಚಂಡೆಮದ್ದಳೆಗಳ ಮೇಳದಲ್ಲಿ ಮಾತ್ರ ನಡೆಯುವುವು. ಮೊದಲ ಸಿದ್ಧತೆಯ ಸಂದರ್ಭದಲ್ಲಿ ನಟನು ಸರಳರೇಖೆಯಲ್ಲಿ ಹೆಜ್ಜೆಗಳನ್ನಿಡುತ್ತಾನೆ. ಪ್ರತಿಸಲವೂ ವಿರುದ್ಧ ದಿಕ್ಕಿನಲ್ಲಿ ತಿರುಗುವಾಗ ಅವನು ಬೇರೆಯೇ ಹೆಜ್ಜೆ ಇಡುತ್ತಾನೆ. ಸಿದ್ಧತೆಯ ಕೊನೆಗೆ ಅವನು ನಿರ್ಗಮಿಸುತ್ತಾನೆ. ನಿಜವಾದ ಪ್ರಯಾಣದ ಸಂದರ್ಭದಲ್ಲಿ ನಟನು ಬಿರುಸಾಗಿ, ಆವೇಶದಿಂದ ರಂಗಪ್ರವೇಶಿಸಿ ಪ್ರಾರಂಭದ ಹೆಜ್ಜೆಗಳನ್ನು ತೊಡಗುತ್ತಾನೆ; ಮುಕ್ತಾಯದ ಹೆಜ್ಜೆಯೊಂದಿಗೆ ನಿರ್ಗಮಿಸುತ್ತಾನೆ. ಪುನಃ ಪ್ರವೇಶಿಸಿ ಮೂಲದ ಹೆಜ್ಜೆಗಳಿಗೆ ಹೊಸತನ್ನು ಸೇರಿಸಿ ಬೇಕಿದ್ದಷ್ಟು ಸಲ ಪ್ರಯಾಣದ ಎಲ್ಲ ಹೆಜ್ಜೆಗಳನ್ನು ಕುಣಿಯುತ್ತಾನೆ. {{gap}}ಯಕ್ಷಗಾನದ ಅತಿಕ್ಲಿಷ್ಟ ಹೆಜ್ಜೆಗಳೆಂದರೆ ಪ್ರಯಾಣದ ಹೆಜ್ಜೆಗಳು. ಬಹು ಬೇಗಬೇಗನೆ ನರ್ತಕನು ಕುಕ್ಕರಿಸಬೇಕು, ಹಾರಬೇಕು, ನೆಗೆಯಬೇಕು, ತಿರುಗಬೇಕು, ನಾಲಿಯಲ್ಲಿ ಸುತ್ತಬೇಕು; ಹೆಜ್ಜೆಯ ಗತಿ ಶೀಘ್ರವಾಗಿರಬೇಕು. ಎಷ್ಟೋ ಪ್ರಸಂಗಗಳಲ್ಲಿ ಪಾತ್ರಗಳು ದಟ್ಟವಾದ ನಿಬಿಡವಾದ ಕತ್ತಲಿನ ಭಯಾನಕ ಅರಣ್ಯಗಳಲ್ಲಿ ಹೋಗಲಿಕ್ಕಿರುತ್ತದೆ. ಅಲ್ಲಿ ಕ್ರೂರ ಮೃಗಗಳ, ರಾಕ್ಷಸರ, ಮತ್ತಿತರರ ಬಾಧೆಯನ್ನು ಎದುರಿಸಬೇಕಾಗುತ್ತದೆ. ಅಪಾಯದ ಎಚ್ಚರದಿಂದ ಎಲ್ಲ ಯುದ್ಧವೀರರು ತಲೆಯನ್ನು ಅರ್ಧಂಬರ್ಧ ಅತ್ತಿತ್ತ ತಿರುಗಿಸುವರು. ಹೆಜ್ಜೆಗಳಿಗೆ ಹೊಂದಿಕೊಂಡು ಪುರುಷ ಪಾತ್ರಗಳಿಗೆ ಈ ತರದ ನೃತ್ಯ ಬಹಳ ಬಿರುಸು, ಖಚಿತ ಮತ್ತು ಅತ್ಯಗತ್ಯ. ಇಂಥ ನೃತ್ಯದಲ್ಲಿ ಸಫಲತೆ ನಿಜವಾಗಿಯೂ ಕಷ್ಟಸಾಧ್ಯವೆಂದು ನಾನು ಭಾವಿಸುತ್ತೇನೆ. ಅಬಲೆಯರಾದ ಸ್ತ್ರೀ ಪಾತ್ರಗಳು ಸಾಧಾರಣವಾಗಿ ಪುರುಷ ಪಾತ್ರದ ರಕ್ಷಣೆಯಲ್ಲೇ ಪ್ರಯಾಣಿಸುವುದರಿಂದ ಅಪಾಯದ ವಿಚಾರ ಅವುಗಳಿಗಿಲ್ಲ. ಆದುದರಿಂದ ಅವುಗಳ ಪ್ರಯಾಣದ ಹೆಜ್ಜೆಗಳು ಪುರುಷ ಪಾತ್ರದ ಹೆಜ್ಜೆಗಳೇ ಆಗಿದ್ದರೂ ಅವು ಸ್ತ್ರೀ ಸಹಜವಾದ ವಿಲಾಸದಿಂದ ಕೂಡಿದ್ದು ದುರ್ಬಲವಾಗಿರುತ್ತವೆ. {{gap}}ಯಕ್ಷಗಾನ ಪ್ರಸಂಗಗಳಲ್ಲಿ ಮುಖ್ಯ ರಸ ವೀರ. ಹೆಚ್ಚಾಗಿ ಯುದ್ಧದ ದೃಶ್ಯಗಳೇ ಪ್ರಸಂಗಗಳಲ್ಲಿರುತ್ತವೆ. ಸರ್ವಸಾಧಾರಣವಾಗಿ ಇವು ಮಹಾಭಾರತದಲ್ಲಿ<noinclude></noinclude> 31jrit6uwasu6nxroiec80o8m1fwa6w ಪುಟ:ಯಕ್ಷಗಾನ ಮಕರಂದ.pdf/೭೦೨ 104 100639 324044 323354 2026-06-02T09:59:37Z Pragathi. BH 7585 /* Validated */ 324044 proofread-page text/x-wiki <noinclude><pagequality level="4" user="Pragathi. BH" />{{left|440}}</noinclude> ವರ್ಣಿತವಾದ ಯುದ್ಧಗಳನ್ನೇ ರೂಪಿಸುತ್ತವೆ. ರಾಕ್ಷಸ ಸಂಹಾರ ಅಥವಾ ಹೆಣ್ಣಿನ ಅಪಹರಣದಿಂದುಂಟಾದ ಜಗಳಗಳು ಪುನಃ ತಾಳ, ಮದ್ದಳೆ, ಚಂಡೆಗಳ ಮೇಳದಲ್ಲಿ ಪ್ರಯಾಣ ನೃತ್ಯದಂತೆ. ಯುದ್ಧದ ನೃತ್ಯದಲ್ಲಿ ಎರಡು ಪ್ರಭೇದಗಳಿವೆ. ಪಂಥಾಹ್ವಾನ ಮತ್ತು ಯುದ್ಧ. ಪಂಥಾಹ್ವಾನ ಸಂದರ್ಭದಲ್ಲಿ ವೀರರು ಒಬ್ಬರನ್ನೊಬ್ಬರು ಮೂದಲಿಸುವಾಗ ಮಾತನಾಡುವವನು ರಂಗಸ್ಥಳದ ಮುಂಭಾಗದ ಒಂದು ಪಕ್ಕದಲ್ಲಿರುತ್ತಾನೆ. ಸ್ಥಾಪಿತವಾದ ರಾಜನೀತಿ ವ್ಯವಸ್ಥೆಯಂತೆ ಮಾತನಾಡುವ ವ್ಯಕ್ತಿಯು ರಂಗಮಧ್ಯದಲ್ಲಿ ಹಾಡು ಸಾಗುತಿದ್ದಂತೆಯೇ ನರ್ತಿಸುತ್ತಾನೆ. ನೃತ್ಯ ಮುಗಿದಾಗ ಅದೇ ಸ್ಥಳದಿಂದ ಅವನು ಮಾತನಾಡತೊಡಗುತ್ತಾನೆ. ಬಾರಿಬಾರಿಗೆ ಸ್ಥಾನ ಬದಲಾಯಿಸುತ್ತಾರೆ. ಪಂಥಾಹ್ವಾನ ಮುಗಿದೊಡನೆ ನೃತ್ಯಾರಂಭ. ಇಂಥ ತೀಕ್ಷ್ಣವಾದ ವಾಗ್ವಾದಗಳು ಯುದ್ಧ ಪೂರ್ವದ ನೃತ್ಯಕ್ಕೆ ಪೂರಕವಾಗಿವೆ. ಪೋಷಕವಾಗಿವೆ, ಮತ್ತು ನರ್ತಕರನ್ನೂ ಪ್ರೇಕ್ಷಕರನ್ನೂ ಮುಂದಿನ ಭಯಂಕರ ಸದ್ದುಗದ್ದಲದ ನಾಟ್ಯಕ್ಕೆ ಅಣಿಗೊಳಿಸುತ್ತವೆ. {{gap}}ಯುದ್ಧ ನಾಟ್ಯ ಎರಡು ವಿಧ. ಸೋಲುವ ವೀರನು ಅಮುಖ್ಯ ಪಾತ್ರವಾದರೆ ಹಾಡಿನಲ್ಲಿ ಅಭಿವ್ಯಕ್ತವಾದಂತೆ ನಟನು ಸಾಮಾನ್ಯವಾಗಿ ಕೇವಲ ಬಿಲ್ಲುಬಾಣ ಮಾತ್ರ ಹಿಡಿದಿರುತ್ತಾನೆ. ಸೋಲಿಸಲ್ಪಡುವ ವೀರನು ಮುಖ್ಯ ಪಾತ್ರವಾದರೆ, ಹಾಡಿನಲ್ಲಿ ವಿವಿಧ ಆಯುಧಗಳ ಸೂಚನೆ ಇದ್ದರೆ ನೃತ್ಯದ ಗತಿಯಲ್ಲಿ ಪದ್ಯದಲ್ಲಿ ವರ್ಣಿತವಾದ ಅನೇಕ ಅಭಿನಯಗಳಿರುತ್ತವೆ. ಉದಾಹರಣೆಗೆ ಬಿಲ್ಲುಬಾಣಗಳ ಉಪಯೋಗ, ಗದೆ, ಖಡ್ಗ, ಮುಷ್ಟಿಯುದ್ಧ, ಭುಜಾಸ್ಫಾಲನ, ಲತ್ತೆ ಕೊಡುವುದು, ಒದೆತ ಇತ್ಯಾದಿ. {{gap}}ಒಂದೇ ಆಯುಧವನ್ನು ಉಪಯೋಗಿಸುವ ಯುದ್ಧ ನಾಟ್ಯದಲ್ಲಿ ಬಹುವಿಧಗಳಿವೆ. ಇವು S ಆಕೃತಿಯಲ್ಲಿ ಆರಂಭವಾಗುವಂಥವು. ಮೊದಲ ಹೆಜ್ಜೆಯಲ್ಲಿ ಒಬ್ಬ ನಟನು Sನ ಅರ್ಧ ವೃತ್ತ ಕುಣಿಯುತ್ತಾನೆ. ಇದರಲ್ಲಿ ನಾಲ್ಕು ಬೇರೆ ಬೇರೆ ರೀತಿಯ ಹೆಜ್ಜೆಗಳಿವೆ. ನಟರು S ಆಕೃತಿಯ ಒಂದು ತುದಿಯಿಂದ ಇನ್ನೊಂದರ ವರೆಗೆ ಸ್ಥಳ ಬದಲಾಯಿಸುತ್ತಾ ಕುಣಿಯುತ್ತಾರೆ. ಮಲ್ಲರಾದರೆ ನೇರವಾಗಿ ಸಂಧಿಸುತ್ತಾರೆ. ಒಬ್ಬರನ್ನೊಬ್ಬರು ದ್ವಂದ್ವ ಯುದ್ಧಕ್ಕೆ ಆಹ್ವಾನ ನೀಡುತ್ತಾರೆ, ತಿರುಗುತ್ತಾರೆ, ಮತ್ತು ತಮ್ಮ ಮುಂಚಿನ ಸ್ಥಾನಕ್ಕೆ ಹೆಜ್ಜೆ ಹಾಕುತ್ತಾರೆ. ಈ ದೃಶ್ಯದಿಂದ ಮುಂದೆ ಸರಳರೇಖೆಯಲ್ಲಿ ಕುಣಿದು ಸಂಧಿಸುತ್ತಾರೆ. ಸಣ್ಣದಾಗಿ ಪುಟನಿಗೆದು ಮತ್ತೆ ಕುಕ್ಕರಿಸಿ ರಂಗದ ತಮ್ಮ ಮುಂಚಿನ ಸ್ಥಾನಕ್ಕೆ ಬರುತ್ತಾರೆ. {{gap}}ಇನ್ನೊಂದು ವಿಧದ ನಾಟ್ಯದಲ್ಲಿ ಇಬ್ಬರೂ ಅರ್ಧವೃತ್ತಾಕಾರದ ರೀತಿಯಲ್ಲಿ ಕುಣಿಯುತ್ತಾ ಇರುವಾಗ ಒಬ್ಬೊಬ್ಬರಿಂದ ನಾಲ್ಕು ಹೆಜ್ಜೆಗಳು ಜೊತೆಯಾಗಿ ಬೀಳುತ್ತವೆ. ಬಾಷ್ಪ ಬಿಂದುವಿನಂತೆ ಉದುರುವ ಇನ್ನೊಂದು ತರದ ನೃತ್ಯವಿದೆ. ಒಂದೇ ಆಯುಧದ ಯುದ್ಧ ನೃತ್ಯದ ಮುಕ್ತಾಯದ ಹೆಜ್ಜೆಗಳು ಸಂಖ್ಯೆ 8ರ ಆಕೃತಿಯಲ್ಲಿ<noinclude></noinclude> c6a2lvn4yjp6ipabdhvohzdpm0ryctu ಪುಟ:ಯಕ್ಷಗಾನ ಮಕರಂದ.pdf/೮೪೬ 104 100785 324054 282417 2026-06-02T10:20:29Z Shreesha Sharma 7840 /* Proofread */ 324054 proofread-page text/x-wiki <noinclude><pagequality level="3" user="Shreesha Sharma" /></noinclude>{{Right|577}} {{gap}}ಸೋವಿಯಟ್ ಒಕ್ಕೂಟದಲ್ಲಿ ರಂಗಮಂದಿರಕ್ಕಿರುವ ಪ್ರಾಧಾನ್ಯ ಗಮನಾರ್ಹ. ಇಲ್ಲಿ ಸೂತ್ರದ ಗೊಂಬೆಯಾಟಕ್ಕಾಗಿಯೇ ರಂಗಮಂದಿರಗಳು ಮೀಸಲಾಗಿ ಸ್ಥಿರ ಪ್ರದರ್ಶನ ನೀಡುತ್ತಿವೆ. ಪ್ರತಿವರ್ಷ ಎಪ್ಪತ್ತು ಸಾವಿರ ಪ್ರದರ್ಶನ ನೀಡುತ್ತಾ, ಕೋಟ್ಯಂತರ ಮಕ್ಕಳಿಗೆ ಮನೋರಂಜನೆಯೊಂದಿಗೆ ಮನೋವಿಕಾಸಕ್ಕೂ ಕಾರಣ ವಾಗುತ್ತಾ ಇವೆ. ಜರ್ಮನಿಯಲ್ಲಿ ಸೂತ್ರದ ಬೊಂಬೆಗಳ ಮೂಲಕ ನಾಟಕ ಪ್ರದ ರ್ಶನ ಸಹ ಜನಪ್ರಿಯವಾಗಿತ್ತು. {{gap}}ಬೊಂಬೆಯಾಟಗಳಲ್ಲಿ ಸ್ಥಳೀಯ ಹಾಗೂ ಸ್ವಂತಿಕೆಯ ಮೆರಂಗು ಹೇರಳವಾಗಿ ಕಾಣಿಸುತ್ತದೆ. ಇತಿಹಾಸದಲ್ಲಿ ಬೊಂಬೆಯಾಟಗಳಲ್ಲಿ ಹಲವಾರು ಪ್ರಭೇದಗಳು ಬೆಳಕಿಗೆ ಇಣುಕಿದ್ದು ಕಂಡುಬರುತ್ತದೆ. ಸಿಂಹಳ, ಬರ್ಮಾ, ವಲಯಾ, ಇಂಡೋ ನೇಷಿಯಾ ಹಾಗೂ ಇಂಡಿಯಾದಲ್ಲಿ ಪ್ರಸಿದ್ಧವಾಗಿರುವ ತೊಗಲು ಬೊಂಬೆಯಾಟ, ಸತ್ರದ ಬೊಂಬೆಯಾಟದ ಒಂದು ವಿಶೇಷ ಕವಲು, ಇದಲ್ಲದೆ ಸರಳು ಬೊಂಬೆ ಯಾಟ, ಕೈಗವಸು ಬೊಂಬೆಯಾಟ, ಸ್ಪ್ರಿಂಗ್ ಬೊಂಬೆಯಾಟ, ಯಕ್ಷಗಾನ ಬೊಂಬೆ ಯಾಟ ಮುಂತಾದ ಸ್ಥಳೀಯ ಪ್ರಭೇದಗಳು ಹುಟ್ಟಿಕೊಂಡವು. ವಿದೇಶಗಳ ನೆರಳು ಬೊಂಬೆಯಾಟವೂ ಗಮನಾರ್ಹ ಕಲಾಮಾಧ್ಯಮ. {{center|'''ಭಾರತದಲ್ಲಿ ಬೊಂಬೆಯಾಟ'''}} {{gap}}ಧನಪಾಲನ “ತಿಲಕಮಂಜರಿ'ಯಲ್ಲಿ, ವಿದ್ಯಾರಣ್ಯರ “ಪಂಚಾ-ದಶಿ”ಯಲ್ಲಿ, ಭಾರತೀಯ ತೊಗಲು ಬೊಂಬೆಯಾಟದ ಶುದ್ದ ಸ್ವರೂಪವನ್ನು ವರ್ಣಿಸಲಾಗಿದೆ. {{gap}}ಲಂಡನ್ನಿನ ಭಾರತೀಯ ಇತಿಹಾಸ ಗ್ರಂಥಾಲಯದಲ್ಲಿ ಬೊಂಬೆಯಾಟದ ಪ್ರಾಚೀನತೆಯ ಕುರಿತು ಈ ಉಲ್ಲೇಖವಿದೆ. “ಮೂರನೆಯ ಶತಮಾನದಲ್ಲಿ ಶಿವ ಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬೊಂಬೆಯಾಟ ಸತತವಾಗಿ ನಡೆಯುತ್ತಿತ್ತು. ಅನೇಕ ಮನೆತನದವರು ಇದನ್ನು ಕುಲಕಸುಬಾಗಿಸಿಕೊಂಡು ಬದುಕುತ್ತಿದ್ದರು.” {{gap}}ಬೊಂಬೆಯಾಟದ ಮೂಲಪುರುಷರು ಮಹಾರಾಷ್ಟ್ರಕ್ಕೆ ಸೇರಿದವರೆನ್ನಲಾಗಿದೆ. ಕಟಾರಿ ಕಾಳಾಚಾರಿ ಹಾಗೂ ಒಕ್ಕಲಿಗ ಹೆಣ್ಣು ಮಗಳ ವರ್ಣಸಂಕರ ಸಂತಾನವೇ ತೊಗಲು ಬೊಂಬೆಯಾಟದ ಮೂಲಪುರುಷರೆನ್ನಲಾಗಿದೆ. ವಿಜಯನಗರ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಈ ಕಲೆ ಅನಂತಪುರ ಜಿಲ್ಲೆಯ “ಬೊಮ್ಮಲಾಟ ಪಲ್ಲಿ” ಎಂಬ ಹಳ್ಳಿಯ ಕಲಾವಿದರಿಂದ ದೇಶಾದ್ಯಂತ ಪ್ರದರ್ಶಿಸಲ್ಪಡುತ್ತಿತ್ತು. {{gap}}ಹತ್ತನೆಯ ಶತಮಾನದಲ್ಲಿ ಬರೆದ ರಾಜಶೇಖರ ಬಾಲರಾಮಾಯಣದ ಐದನೇ ಅಧ್ಯಾಯ ಬೊಂಬೆಯಾಟಕ್ಕೆ ಅನುಕೂಲವಾಗಿ ಬರೆದಿದ್ದು, ಈ ಕಲೆಯ ಜನ ಪ್ರಿಯತೆಯನ್ನು ಸಾರುತ್ತದೆ. ರಾಮಾಯಣ, ಮಹಾಭಾರತ ಅಲ್ಲದೇ ಹದಿನಾರನೇ<noinclude></noinclude> elr03wv3ozeoyiftppwoo9fstygyj5e 324055 324054 2026-06-02T10:21:42Z Shreelatha.Halemane 7642 /* Validated */ 324055 proofread-page text/x-wiki <noinclude><pagequality level="4" user="Shreelatha.Halemane" /></noinclude>{{Right|577}} {{gap}}ಸೋವಿಯಟ್ ಒಕ್ಕೂಟದಲ್ಲಿ ರಂಗಮಂದಿರಕ್ಕಿರುವ ಪ್ರಾಧಾನ್ಯ ಗಮನಾರ್ಹ. ಇಲ್ಲಿ ಸೂತ್ರದ ಗೊಂಬೆಯಾಟಕ್ಕಾಗಿಯೇ ರಂಗಮಂದಿರಗಳು ಮೀಸಲಾಗಿ ಸ್ಥಿರ ಪ್ರದರ್ಶನ ನೀಡುತ್ತಿವೆ. ಪ್ರತಿವರ್ಷ ಎಪ್ಪತ್ತು ಸಾವಿರ ಪ್ರದರ್ಶನ ನೀಡುತ್ತಾ, ಕೋಟ್ಯಂತರ ಮಕ್ಕಳಿಗೆ ಮನೋರಂಜನೆಯೊಂದಿಗೆ ಮನೋವಿಕಾಸಕ್ಕೂ ಕಾರಣ ವಾಗುತ್ತಾ ಇವೆ. ಜರ್ಮನಿಯಲ್ಲಿ ಸೂತ್ರದ ಬೊಂಬೆಗಳ ಮೂಲಕ ನಾಟಕ ಪ್ರದ ರ್ಶನ ಸಹ ಜನಪ್ರಿಯವಾಗಿತ್ತು. {{gap}}ಬೊಂಬೆಯಾಟಗಳಲ್ಲಿ ಸ್ಥಳೀಯ ಹಾಗೂ ಸ್ವಂತಿಕೆಯ ಮೆರಂಗು ಹೇರಳವಾಗಿ ಕಾಣಿಸುತ್ತದೆ. ಇತಿಹಾಸದಲ್ಲಿ ಬೊಂಬೆಯಾಟಗಳಲ್ಲಿ ಹಲವಾರು ಪ್ರಭೇದಗಳು ಬೆಳಕಿಗೆ ಇಣುಕಿದ್ದು ಕಂಡುಬರುತ್ತದೆ. ಸಿಂಹಳ, ಬರ್ಮಾ, ವಲಯಾ, ಇಂಡೋ ನೇಷಿಯಾ ಹಾಗೂ ಇಂಡಿಯಾದಲ್ಲಿ ಪ್ರಸಿದ್ಧವಾಗಿರುವ ತೊಗಲು ಬೊಂಬೆಯಾಟ, ಸತ್ರದ ಬೊಂಬೆಯಾಟದ ಒಂದು ವಿಶೇಷ ಕವಲು, ಇದಲ್ಲದೆ ಸರಳು ಬೊಂಬೆ ಯಾಟ, ಕೈಗವಸು ಬೊಂಬೆಯಾಟ, ಸ್ಪ್ರಿಂಗ್ ಬೊಂಬೆಯಾಟ, ಯಕ್ಷಗಾನ ಬೊಂಬೆ ಯಾಟ ಮುಂತಾದ ಸ್ಥಳೀಯ ಪ್ರಭೇದಗಳು ಹುಟ್ಟಿಕೊಂಡವು. ವಿದೇಶಗಳ ನೆರಳು ಬೊಂಬೆಯಾಟವೂ ಗಮನಾರ್ಹ ಕಲಾಮಾಧ್ಯಮ. {{center|'''ಭಾರತದಲ್ಲಿ ಬೊಂಬೆಯಾಟ'''}} {{gap}}ಧನಪಾಲನ “ತಿಲಕಮಂಜರಿ'ಯಲ್ಲಿ, ವಿದ್ಯಾರಣ್ಯರ “ಪಂಚಾ-ದಶಿ”ಯಲ್ಲಿ, ಭಾರತೀಯ ತೊಗಲು ಬೊಂಬೆಯಾಟದ ಶುದ್ದ ಸ್ವರೂಪವನ್ನು ವರ್ಣಿಸಲಾಗಿದೆ. {{gap}}ಲಂಡನ್ನಿನ ಭಾರತೀಯ ಇತಿಹಾಸ ಗ್ರಂಥಾಲಯದಲ್ಲಿ ಬೊಂಬೆಯಾಟದ ಪ್ರಾಚೀನತೆಯ ಕುರಿತು ಈ ಉಲ್ಲೇಖವಿದೆ. “ಮೂರನೆಯ ಶತಮಾನದಲ್ಲಿ ಶಿವ ಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬೊಂಬೆಯಾಟ ಸತತವಾಗಿ ನಡೆಯುತ್ತಿತ್ತು. ಅನೇಕ ಮನೆತನದವರು ಇದನ್ನು ಕುಲಕಸುಬಾಗಿಸಿಕೊಂಡು ಬದುಕುತ್ತಿದ್ದರು.” {{gap}}ಬೊಂಬೆಯಾಟದ ಮೂಲಪುರುಷರು ಮಹಾರಾಷ್ಟ್ರಕ್ಕೆ ಸೇರಿದವರೆನ್ನಲಾಗಿದೆ. ಕಟಾರಿ ಕಾಳಾಚಾರಿ ಹಾಗೂ ಒಕ್ಕಲಿಗ ಹೆಣ್ಣು ಮಗಳ ವರ್ಣಸಂಕರ ಸಂತಾನವೇ ತೊಗಲು ಬೊಂಬೆಯಾಟದ ಮೂಲಪುರುಷರೆನ್ನಲಾಗಿದೆ. ವಿಜಯನಗರ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಈ ಕಲೆ ಅನಂತಪುರ ಜಿಲ್ಲೆಯ “ಬೊಮ್ಮಲಾಟ ಪಲ್ಲಿ” ಎಂಬ ಹಳ್ಳಿಯ ಕಲಾವಿದರಿಂದ ದೇಶಾದ್ಯಂತ ಪ್ರದರ್ಶಿಸಲ್ಪಡುತ್ತಿತ್ತು. {{gap}}ಹತ್ತನೆಯ ಶತಮಾನದಲ್ಲಿ ಬರೆದ ರಾಜಶೇಖರ ಬಾಲರಾಮಾಯಣದ ಐದನೇ ಅಧ್ಯಾಯ ಬೊಂಬೆಯಾಟಕ್ಕೆ ಅನುಕೂಲವಾಗಿ ಬರೆದಿದ್ದು, ಈ ಕಲೆಯ ಜನ ಪ್ರಿಯತೆಯನ್ನು ಸಾರುತ್ತದೆ. ರಾಮಾಯಣ, ಮಹಾಭಾರತ ಅಲ್ಲದೇ ಹದಿನಾರನೇ<noinclude></noinclude> gs5e6s7vlazajo7n7ch3osj5nmxjyo8 ವಿಕಿಸೋರ್ಸ್:ವಿಕಿಸೋರ್ಸ್೨೦ 4 100811 324006 318113 2026-06-02T06:16:33Z A826 6806 324006 wikitext text/x-wiki __NOEDITSECTION__ __NOTOC__ <div style="border: 3px solid #2c3e50; border-radius: 15px; background: #1B1E2B; padding: 20px; margin: 20px auto; box-shadow: 0 8px 20px rgba(0,0,0,0.1); font-family: 'Inter', 'Noto Sans Kannada', sans-serif; color: #fef9e4; max-width: 100%; overflow-x: hidden;"> <div style="text-align: center; margin-bottom: 5px; max-width: 100%;"> <div style="text-align: center; font-size: 2em; font-weight: bold; word-wrap: break-word;">ವಿಕಿಸೋರ್ಸ್೨೦<br /> ಕನ್ನಡ ವಿಕಿಸೋರ್ಸ್ ೨೦ ವಾರ್ಷಿಕೋತ್ಸವದ ಪ್ರೂಫ್‌ರೀಡಿಂಗ್ ಸ್ಪರ್ಧೆ</div> <div style="display: block; border-bottom: 1px solid #f0e2c5; text-align: center; max-width: 100%; overflow-x: auto;"> <div style="display: inline-block; background: white; padding: 12px 24px; border-radius: 60px; box-shadow: 0 4px 12px rgba(0,0,0,0.08); margin: 5px;"> [[File:Wikisource-logo-20th_anniversary-kannada.svg|100px|link=ವಿಕಿಸೋರ್ಸ್:ವಿಕಿಸೋರ್ಸ್೨೦]] </div> <div style="display: inline-block; background: white; padding: 12px 24px; border-radius: 60px; box-shadow: 0 4px 12px rgba(0,0,0,0.08); margin: 5px;"> [[File:Wikisource-logo-kn-v3.svg|90px|link=ಮುಖ್ಯ_ಪುಟ]] </div> <div style="display: inline-block; background: white; padding: 12px 24px; border-radius: 60px; box-shadow: 0 4px 12px rgba(0,0,0,0.08); margin: 5px;"> [[File:Wikisource-logo-kn-sticker.svg|275px|link=ಮುಖ್ಯ_ಪುಟ]] </div> </div> </div> <div style="background-color: #ADD8E6; color: #2c5282; padding-top: 5px; border-radius: 10px; margin: auto; align:center; text-align: center; max-width: 100%;"> 19 ಏಪ್ರಿಲ್ 2026 ರಿಂದ 3 ಜೂನ್ 2026 ರವರೆಗೆ<br />'''45 ದಿನಗಳ ಪ್ರೂಫ್‌ರೀಡಿಂಗ್ ಸ್ಪರ್ಧೆ''' </div> <div style="text-align: justify; max-width: 100%; word-wrap: break-word;">'''ಕನ್ನಡ ವಿಕಿಸೋರ್ಸ್ ತನ್ನ ೨೦ ಪೂರೈಸಿದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ''', ಕನ್ನಡ ವಿಕಿಸೋರ್ಸ್ ಯೋಜನೆಯು '''3 ಜೂನ್ 2006''' ರಂದು ಪ್ರಾರಂಭವಾಯಿತು ([[special:diff/1|03:32, 3 ಜೂನ್ 2006 ರಂದು ಮೊದಲ ಪುನರಾವರ್ತನೆ]]). ಈ ಸಂದರ್ಭದಲ್ಲಿ, ನಾವು '''45 ದಿನಗಳ ಕಾಲ''' ನಡೆಯುವ '''ಪ್ರೂಫ್ ರೀಡಿಂಗ್ (ಪುನರ್ ಪರಿಶೀಲನ) ಸ್ಪರ್ಧೆ'''ಯನ್ನು ಆಯೋಜಿಸುತ್ತಿದ್ದೇವೆ. ನಿಮ್ಮ ಟೈಪಿಂಗ್ ಕೌಶಲ್ಯ, ನಿಖರತೆ ಮೂಲಕ ಕನ್ನಡದ ಅಮೂಲ್ಯ ಗ್ರಂಥಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲು ಸಹಕರಿಸಿ.</div> <div style="max-width: 100%; margin: 20px 0; overflow: hidden;"> <div style="display: inline-block; vertical-align: top; width: 50%; box-sizing: border-box; padding-right: 20px;"> <div style="margin: 0 0 20px 0; text-align: center; max-width: 100%; overflow-x: auto;"> <div style="background-color: #ADD8E6; border: none; padding: 6px; font-size: 20px; border-radius: 30px; color: #2c5282; font-weight: bold;">ಸ್ಪರ್ಧೆಯ ವಿವರಗಳು</div> <div style="border: 2px solid #ADD8E6; border-radius: 30px; text-align: left; padding: 12px; margin-top: 5px; max-width: 100%; overflow-x: auto;"> * '''ಆರಂಭ:''' 19 ಏಪ್ರಿಲ್ 2026 (ಬೆಳಿಗ್ಗೆ 00:01 UTC) * '''ಅಂತ್ಯ:''' 3 ಜೂನ್ 2026 (ರಾತ್ರಿ 11:59 UTC) * '''ಒಟ್ಟು ಅವಧಿ:''' 45 ದಿನಗಳು * '''ಸ್ಥಳ:''' [https://kn.wikisource.org ಕನ್ನಡ ವಿಕಿಸೋರ್ಸ್] * '''ಉದ್ದೇಶ:''' ವಿಕಿಸೋರ್ಸ್‌ನಲ್ಲಿ ಲಭ್ಯವಿರುವ ಪುಟಗಳನ್ನು ಪುನರ್ ಪರಿಶೀಲನೆ (ಪ್ರೂಫ್ ರೀಡಿಂಗ್) ಮಾಡಿ, ದೋಷರಹಿತವಾಗಿ ಸಂಪಾದಿಸುವುದು. * '''ಪುಸ್ತಕಗಳ ಪಟ್ಟಿ:''' ಅಪ್ಲೋಡ್ ಮಾಡಿದ ಯಾವುದೇ ಕನ್ನಡ [[ವಿಶೇಷ:Indexpages]] ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕೆಲವು ಪುಸ್ತಕಗಳನ್ನು ಕೆಳಗೆ ನೀಡಲಾಗಿದೆ. * ಸಂಪೂರ್ಣ ಪುಸ್ತಕಗಳ ಪಟ್ಟಿ [[ವಿಶೇಷ:Indexpages]] <div style="max-width: 100%; overflow-x: auto;"> # [[Index:ಹಗಲಿರುಳು.djvu]] [93 pages] # [[Index:ನಿತ್ಯ ನೇಮಾವಲಿ.pdf]] [307 pages] # [[Index:ನನ್ನ ನಲ್ಲ.pdf]] [161 pages] # [[ಪರಿವಿಡಿ:ಯಕ್ಷಗಾನ ಮಕರಂದ.pdf]] [879 pages] # [[Index:ಅರಮನೆ.pdf]] [745 pages] # [[Index:VISHAALAAKSHI - Niranjana.pdf]] [214 pages] # [[ಪರಿವಿಡಿ:ನನ್ನ ಸಂಸಾರ.djvu]] - [323 pages] # [[ಪರಿವಿಡಿ:ಕುರುಕ್ಷೇತ್ರ_ಗ್ರಂಥ.djvu]] - [145 pages] # [[ಪರಿವಿಡಿ:Sankeerana_vachanasamputa_14.pdf]] - [690 pages] # [[ಪರಿವಿಡಿ:ವೈಶಾಖ.pdf]] - [408 pages] </div> * ಸಂಪೂರ್ಣ ಪುಸ್ತಕಗಳ ಪಟ್ಟಿ [[ವಿಶೇಷ:Indexpages]] </div> </div> </div> <div style="display: inline-block; vertical-align: top; width: 45%; box-sizing: border-box;"> <div style="margin-bottom:30px; max-width: 100%; overflow-x: auto;"> <div style="background-color: #ADD8E6; border: none; padding: 6px; font-size: 20px; border-radius: 30px; color: #2c5282; font-weight: bold; text-align: center;">ಹೊಸ ಸಂಪಾದಕರಿಗೆ ಮಾರ್ಗದರ್ಶಿ </div> <ul style="list-style:none; margin:0; padding:15px; border: 2px solid #ADD8E6; border-radius: 30px;"> <li style="margin-bottom:12px;"> <strong style="display:inline-block;width:26px;background:#0645ad;color:white;text-align:center;border-radius:4px;padding:3px 0;margin-right:4px;">1</strong> <strong>ಫೈಲ್ ಅಪ್ಲೋಡ್ ಮತ್ತು ಪರಿವಿಡಿ</strong><br> <span style="margin-left:32px;font-size:0.85em;">ಫೈಲ್ ಅನ್ನು Commons ಅಥವಾ ಸ್ಥಳೀಯವಾಗಿ ಅಪ್ಲೋಡ್ ಮಾಡುವುದು ಮತ್ತು Index ಪುಟ ರಚಿಸುವುದು</span><br> <span style="margin-left:32px;">→ [[ಸಹಾಯ:ವಿಕಿಸೋರ್ಸ್ ಪರಿಚಯ/1|ಪ್ರಾರಂಭಿಸಿ]]</span> </li> <li style="margin-bottom:12px;"> <strong style="display:inline-block;width:26px;background:#0645ad;color:white;text-align:center;border-radius:4px;padding:3px 0;margin-right:4px;">2</strong> <strong>ಪ್ರೂಫ್ ರೀಡಿಂಗ್ ಮತ್ತು ಪುಟ ಸ್ಥಿತಿ</strong><br> <span style="margin-left:32px;font-size:0.85em;">OCR ಬಳಸಿ ಪಠ್ಯ ಪಡೆಯುವುದು, ಪುಟಗಳನ್ನು ಸರಿಪಡಿಸುವುದು ಮತ್ತು ಸ್ಥಿತಿಗಳನ್ನು ನಿಗದಿಪಡಿಸುವುದು</span><br> <span style="margin-left:32px;">→ [[ಸಹಾಯ:ವಿಕಿಸೋರ್ಸ್ ಪರಿಚಯ/2|ಪ್ರಾರಂಭಿಸಿ]]</span> </li> <li style="margin-bottom:12px;"> <strong style="display:inline-block;width:26px;background:#0645ad;color:white;text-align:center;border-radius:4px;padding:3px 0;margin-right:4px;">3</strong> <strong>ಮೌಲ್ಯೀಕರಣ ಮತ್ತು ಟ್ರಾನ್ಸ್ಕ್ಲೂಷನ್</strong><br> <span style="margin-left:32px;font-size:0.85em;">ಪುಟಗಳನ್ನು ಮೌಲ್ಯೀಕರಿಸುವುದು ಮತ್ತು ಮುಖ್ಯ ನೇಮ್ಸ್ಪೇಸ್‌ನಲ್ಲಿ ಪುಸ್ತಕವನ್ನು ಸೇರಿಸುವುದು</span><br> <span style="margin-left:32px;">→ [[ಸಹಾಯ:ವಿಕಿಸೋರ್ಸ್ ಪರಿಚಯ/3|ಪ್ರಾರಂಭಿಸಿ]]</span> </li> <li style="margin-bottom:12px;"> <strong style="display:inline-block;width:26px;background:#0645ad;color:white;text-align:center;border-radius:4px;padding:3px 0;margin-right:4px;">4</strong> <strong>ವಿಕಿಡಾಟ ಸಂಪರ್ಕ</strong><br> <span style="margin-left:32px;font-size:0.85em;">ಪುಸ್ತಕ ಮತ್ತು ಲೇಖಕರಿಗೆ ವಿಕಿಡಾಟ ಐಟಂಗಳನ್ನು ರಚಿಸುವುದು ಮತ್ತು ಸಂಪರ್ಕಿಸುವುದು</span><br> <span style="margin-left:32px;">→ [[ಸಹಾಯ:ವಿಕಿಸೋರ್ಸ್ ಪರಿಚಯ/4|ಪ್ರಾರಂಭಿಸಿ]]</span> </li> <li style="margin-bottom:16px;"> <strong style="display:inline-block;width:26px;background:#0645ad;color:white;text-align:center;border-radius:4px;padding:3px 0;margin-right:4px;">5</strong> <strong>ಅಂತಿಮ ಹಂತಗಳು</strong><br> <span style="margin-left:32px;font-size:0.85em;">ಪರಿಶೀಲನಾಪಟ್ಟಿ, ಸಾಮಾನ್ಯ ಸಮಸ್ಯೆಗಳು ಮತ್ತು ಹೆಚ್ಚಿನ ಸಹಾಯ</span><br> <span style="margin-left:32px;">→ [[ಸಹಾಯ:ವಿಕಿಸೋರ್ಸ್ ಪರಿಚಯ/5|ಪ್ರಾರಂಭಿಸಿ]]</span> </li> <div style="background:#f0f0f0;padding:10px;border-radius:30px;font-size:0.85em;text-align:center; color: grey;"> <strong>ಸಹಾಯಕ ಸಂಪನ್ಮೂಲಗಳು:</strong> [[ವಿಕಿಸೋರ್ಸ್:ಅರಳಿ ಕಟ್ಟೆ|ಚರ್ಚಾ ಪುಟ]] | [[c:Commons:Licensing|ಪರವಾನಗಿ]] | [[wikidata:Help:Items|ವಿಕಿಡಾಟ]] </div> </ul> </div> </div> </div> <div style="margin: 20px auto; max-width: 100%; overflow-x: auto;"> <div style="margin: 0 auto; text-align: center;"> <div style="background-color: #ADD8E6; border: none; padding: 6px; font-size: 20px; border-radius: 30px; color: #2c5282; font-weight: bold;">ಅಂಕಗಳ ವಿವರ</div> <div style="border: 2px solid #ADD8E6; border-radius: 30px; padding: 12px 20px; text-align: left; margin-top: 5px; "> * ಪ್ರತಿ ವಿಶಿಷ್ಟ ಪುಟಕ್ಕೆ 1 ಅಂಕ (ಒಂದೇ ಪುಟದಲ್ಲಿ ಅನೇಕ ಸಂಪಾದನೆಗಳಿದ್ದರೂ ಕೇವಲ 1 ಅಂಕ) * ಅಂಕಗಳು: ಪುಟ ಸೃಷ್ಟಿ=1, ಪ್ರೂಫ್ ರೀಡ್=2, ವ್ಯಾಲಿಡೇಶನ್=3, ಸಾಮಾನ್ಯ ಸಂಪಾದನೆ=1 ** '''ಅಂಕ''': ವಿಧಾನ [[ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು]] ಪುಟದಲ್ಲಿ ಇದೆ. {{/ಅಂಕೆಗಳು}} '''ಹೆಚ್ಚಿನ ಅಂಕ ಗಳಿಸಿದ ಸಂಪಾದಕರಿಗೆ ಈ ಕೆಳಗಿನ ಪ್ರಶಸ್ತಿಗಳನ್ನು ನೀಡಲಾಗುವುದು:''' * '''ಪ್ರಥಮ ಸ್ಥಾನ:''' ವಿಕಿಲರ್ನ್ ಉಡುಗೊರೆ (Gift) * '''ದ್ವಿತೀಯ ಸ್ಥಾನ:''' ವಿಕಿಲರ್ನ್ ಉಡುಗೊರೆ (Gift) * '''ತೃತೀಯ ಸ್ಥಾನ:''' ವಿಕಿಲರ್ನ್ ಉಡುಗೊರೆ (Gift) * '''೪ ರಿಂದ ೧೦ನೇ ಸ್ಥಾನ:''' ವಿಕಿಲರ್ನ್ ಉಡುಗೊರೆ (Gift) </div> </div> </div> <div style="margin: 20px auto; padding: 20px; border-radius: 10px; border: 1px dashed #8b8b6b; text-align: center; max-width: 100%; overflow-x: auto;"> <div style="font-size: 1.5em; color: #2c3e50; margin: 10px 0; word-wrap: break-word;">[[File:KLW-wiki-kn.svg|40px]] - [[meta:Kannada-Tulu_Wikilearn|ಕನ್ನಡ-ತುಳು ವಿಕಿಲರ್ನ್ (Kannada-Tulu Wikilearn)]]</div> <p style="font-size: 1.1em;">ಈ ಸ್ಪರ್ಧೆಯನ್ನು '''ಕನ್ನಡ-ತುಳು ವಿಕಿಲರ್ನ್''' ಕಾರ್ಯಕ್ರಮದ ವತಿಯಿಂದ ಆಯೋಜಿಸಲಾಗಿದೆ ಮತ್ತು ಪ್ರಾಯೋಜಿಸಲಾಗಿದೆ.</p> '''ಕಾರ್ಯಕ್ರಮದ ಬಗ್ಗೆ:''' ಕನ್ನಡ-ತುಳು ವಿಕಿಲರ್ನ್ ಎಂಬುದು ಕನ್ನಡ ಮತ್ತು ತುಳು ವಿಕಿಮೀಡಿಯ ಯೋಜನೆಗಳ ಸುತ್ತ ಕಲಿಕೆ, ತರಬೇತಿ ಮತ್ತು ಸಮುದಾಯ ನಿರ್ಮಾಣಕ್ಕೆ ಮೀಸಲಾಗಿರುವ ಒಂದು ಕಾರ್ಯಕ್ರಮ. ೨೦೨೬ ರ ಏಪ್ರಿಲ್-ಜೂನ್ ತಿಂಗಳುಗಳಲ್ಲಿ ನಡೆಯುವ '''ವಿಕಿಸೋರ್ಸ್ ೨೦ನೇ ವಾರ್ಷಿಕೋತ್ಸವದ ಪ್ರೂಫ್‌ರೀಡಥಾನ್''' ಇದರ ಒಂದು ಪ್ರಮುಖ ಚಟುವಟಿಕೆಯಾಗಿದೆ. <span class="plainlinks">'''[https://meta.wikimedia.org/wiki/Kannada-Tulu_Wikilearn ಕನ್ನಡ-ತುಳು ವಿಕಿಲರ್ನ್ ಕುರಿತು ಇನ್ನಷ್ಟು ತಿಳಿಯಿರಿ (ಮೆಟಾ-ವಿಕಿ)]'''</span> </div> </div> </div> [[ವರ್ಗ:ವಿಕಿಸೋರ್ಸ್೨೦]] tg49tro3yiyr5biuq27nxk0rjfcki10 ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 324005 323676 2026-06-02T06:13:54Z A826 6806 324005 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 40181<br><small>ದತ್ತಾಂಶ ಪಡೆದ ಸಮಯ: 2026-06-02 06:13:26 UTC / 2026-06-02 11:43:26 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ<br /> (1 ಅಂಕ ಒಂದು ಪುಟ ಸಂಪಾದನೆಗೆ) !! ಪ್ರೂಫ್ ರೀಡ್<br /> (2 ಅಂಕ ಒಂದು ಪುಟ ಸಂಪಾದನೆಗೆ) !! ವ್ಯಾಲಿಡೇಶನ್ <br /> (3 ಅಂಕ ಒಂದು ಪುಟ ಸಂಪಾದನೆಗೆ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Shreelatha.Halemane|Shreelatha.Halemane]] || 0 || 0 || 7720 (12063) || 0 || 0 || 4890 || 873 (1746) || 1848 (5544) || 8148 || '''12063''' |- | 2 || [[Special:Contributions/Pragathi. BH|Pragathi. BH]] || 0 || 0 || 9445 (11384) || 0 || 0 || 7987 || 163 (326) || 1245 (3735) || 10161 || '''11384''' |- | 3 || [[Special:Contributions/Shreesha Sharma|Shreesha Sharma]] || 0 || 0 || 3706 (5345) || 0 || 0 || 2097 || 705 (1410) || 496 (1488) || 4248 || '''5345''' |- | 4 || [[Special:Contributions/Sharanya K H|Sharanya K H]] || 0 || 0 || 3832 (3992) || 0 || 0 || 3626 || 210 (420) || 5 (15) || 3966 || '''3992''' |- | 5 || [[Special:Contributions/Ashwini Rai K|Ashwini Rai K]] || 0 || 0 || 537 (1272) || 0 || 0 || 70 || 64 (128) || 398 (1194) || 668 || '''1272''' |- | 6 || [[Special:Contributions/Adhya.B|Adhya.B]] || 0 || 0 || 575 (589) || 0 || 0 || 553 || 20 (40) || 0 (0) || 599 || '''589''' |- | 7 || [[Special:Contributions/Vikashegde|Vikashegde]] || 0 || 0 || 231 (458) || 13 || 0 || 0 || 113 (226) || 92 (276) || 313 || '''466''' |- | 8 || [[Special:Contributions/A826|A826]] || 10740 || 1 || 213 (271) || 28 || 0 || 6 || 9 (18) || 34 (102) || 11009 || '''297''' |- | 9 || [[Special:Contributions/Hariprasad Shetty10|Hariprasad Shetty10]] || 0 || 0 || 107 (224) || 0 || 0 || 0 || 36 (72) || 48 (144) || 448 || '''224''' |- | 10 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 11 || [[Special:Contributions/Anzx-ooo|Anzx-ooo]] || 2 || 0 || 70 (152) || 1 || 0 || 0 || 8 (16) || 49 (147) || 105 || '''155''' |- | 12 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 15 || [[Special:Contributions/Viveka BG|Viveka BG]] || 0 || 0 || 6 (12) || 0 || 0 || 0 || 6 (12) || 0 (0) || 12 || '''12''' |- | 16 || [[Special:Contributions/Shyam 2808|Shyam 2808]] || 0 || 0 || 6 (10) || 0 || 0 || 0 || 6 (12) || 0 (0) || 9 || '''10''' |- | 17 || [[Special:Contributions/Vikas shetty14|Vikas shetty14]] || 0 || 0 || 6 (9) || 0 || 0 || 0 || 6 (12) || 0 (0) || 14 || '''9''' |- | 18 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 19 || [[Special:Contributions/Reema Jalihal|Reema Jalihal]] || 0 || 0 || 6 (7) || 0 || 0 || 0 || 6 (12) || 0 (0) || 26 || '''7''' |- | 20 || [[Special:Contributions/Nihar Chakravarti|Nihar Chakravarti]] || 0 || 0 || 6 (6) || 0 || 0 || 0 || 6 (12) || 0 (0) || 13 || '''6''' |- | 21 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 22 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 23 || [[Special:Contributions/~2026-31610-21|~2026-31610-21]] || 0 || 0 || 1 (3) || 0 || 0 || 0 || 0 (0) || 1 (3) || 1 || '''3''' |- | 24 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 25 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 26 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 27 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 28 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 29 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 30 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 31 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 32 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 33 || [[Special:Contributions/~2026-32030-28|~2026-32030-28]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] q1738m1a2rhtjty1nt4ghi9sxotozj8 ವಿಕಿಸೋರ್ಸ್:ಇಂಟರ್ನ್‌ಶಿಪ್ ಕಾರ್ಯಕ್ರಮ ಮೇ-ಜೂನ್ ೨೦೨೬ 4 120710 323882 323877 2026-06-01T13:41:43Z A826 6806 /* ಭಾಗವಹಿಸುವವರು */ 323882 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 |- |Vikas R Shetty |Vikas shetty14 | ✓ | ✓ | ✓ |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |- |Viveka B G |Viveka B G | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ |- |Nihar Chakravarti |Nihar Chakravarti | {{color|red|×}} | ✓ | ✓ |- |Deepak V S |vyangyeah | {{color|red|×}} | {{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{inprogress}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{inprogress}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] qkyx290s7kiugadgo2309yfv9vynajk 323883 323882 2026-06-01T13:49:01Z A826 6806 /* ಭಾಗವಹಿಸುವವರು */ 323883 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 |- |Vikas R Shetty |Vikas shetty14 | ✓ | ✓ | ✓ |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |- |Viveka B G |Viveka B G | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ |- |Nihar Chakravarti |Nihar Chakravarti | {{color|red|×}} | ✓ | ✓ |- |Deepak V S |vyangyeah | {{color|red|×}} | {{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{inprogress}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{inprogress}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] cfkg1ildaadijc5kcjh1h9lm8nf6m71 323884 323883 2026-06-01T13:50:09Z A826 6806 /* ವಿಕಿಸೋರ್ಸ್ ಫ್ರೂಫ಼್‌ರೀಡ್ */ 323884 wikitext text/x-wiki [[File:Kannada Wikisource Workflow.svg|thumb|Kannada Wikisource Workflow]] [[File:Open refine workflow in Kannada Language.svg|thumb|Open refine workflow in Kannada Language]] ವಿಕಿ ಇಂಟರ್ನ್‌ಶಿಪ್ ಕಾರ್ಯಕ್ರಮ ಕನ್ನಡ ವಿಕಿಮೀಡಿಯ ಯೋಜನೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾದ ಒಂದು ತಿಂಗಳ ಇಂಟರ್ನ್‌ಶಿಪ್ ಕಾರ್ಯಕ್ರಮವಾಗಿದೆ. ಈ ಇಂಟರ್ನ್‌ಶಿಪ್ ಕಾರ್ಯಕ್ರಮದಲ್ಲಿ, ವಿವಿಧ ಯೋಜನೆಗಳ ವಿಕಿಮೀಡಿಯನ್ನರು ಭಾಗವಹಿಸುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ವಿಕಿಸೋರ್ಸ್, ವಿಕಿಡೇಟಾ, ವಿಕಿಕಾಮನ್ಸ್ ಮತ್ತು ವಿಕಿಪೀಡಿಯದಂತಹ ಯೋಜನೆಗಳಲ್ಲಿ ತರಬೇತಿ ನೀಡಲಾಗುತ್ತಾದೆ ಮತ್ತು ವಿದ್ಯಾರ್ಥಿಗಳು ಕೊಡುಗೆ ನೀಡಲು ಗುರಿಗಳನ್ನು ನಿಗದಿಪಡಿಸುತ್ತಾರೆ. == ಅವಧಿ & ಸಹಾಯ ಪುಟಗಳು == * ಮೇ ೦೮, ೨೦೨೬ - ಜೂನ್ ೨೧, ೨೦೨೬ * [[ಸಹಾಯ:ವಿಕಿಸೋರ್ಸ್ ಕೈಪಿಡಿ]] * [[ಸಹಾಯ:ವಿಕಿಸೋರ್ಸ್ ಪರಿಚಯ]] == ಭಾಗವಹಿಸುವವರು == * Mentor: --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:A826|A826]] · [[user_talk:A826|<big>✉</big>]] · [[Special:Contributions/A826|<big> ©</big>]]</span> ೧೯:೫೩, ೧೬ ಮೇ ೨೦೨೬ (IST) #--[[ಸದಸ್ಯ:Vaishnu Pilar|Vaishnu Pilar]] ([[ಸದಸ್ಯರ ಚರ್ಚೆಪುಟ:Vaishnu Pilar|ಚರ್ಚೆ]]) ೨೦:೦೩, ೧೬ ಮೇ ೨೦೨೬ (IST) #--[[ಸದಸ್ಯ:Vikas shetty14|Vikas shetty14]] ([[ಸದಸ್ಯರ ಚರ್ಚೆಪುಟ:Vikas shetty14|ಚರ್ಚೆ]]) ೨೦:೧೮, ೧೬ ಮೇ ೨೦೨೬ (IST) #[[ಸದಸ್ಯ:Reema Jalihal|Reema Jalihal]] ([[ಸದಸ್ಯರ ಚರ್ಚೆಪುಟ:Reema Jalihal|ಚರ್ಚೆ]]) ೧೬:೪೩, ೨೪ ಮೇ ೨೦೨೬ (IST) {| class="wikitable" style="margin: auto;" |+ participants of weekly roundup hours ! Name ! Wikipedia User Name ! Week 1 ! Week 2 ! Week 3 ! Week 4 |- |Vikas R Shetty |Vikas shetty14 | ✓ | ✓ | ✓ |- |Hemanth Krishni P |Hemanth .03 |{{color|red|×}} | {{color|red|×}} |{{color|red|×}} |- |Viveka B G |Viveka B G | ✓ | ✓ | ✓ |- |Reema Krishna Jalihal |Reema Jalihal | {{color|red|×}} | ✓ | ✓ |- |Shyama Sundara Shastry K R |Shyam 2808 | {{color|red|×}} |✓ | ✓ |- |Nihar Chakravarti |Nihar Chakravarti | {{color|red|×}} | ✓ | ✓ |- |Deepak V S |vyangyeah | {{color|red|×}} | {{color|red|×}} |{{color|red|×}} |- |Vaishnu Pilar |Vaishnu Pilar | ✓ | ✓ | ✓ |} == ಪಠ್ಯಕ್ರಮ == === ವಾರ ೧ === ;ಕನ್ನಡ ಪುಸ್ತಕಗಳ ಕ್ಯಾಟಲಾಗ್ ಮಾಡುವುದು * ಈ ಯೋಜನೆಯು ಸಾರ್ವಜನಿಕ ಡೊಮೇನ್‍ನಲ್ಲಿರುವ ಕನ್ನಡ ಪುಸ್ತಕಗಳನ್ನು ಗುರುತಿಸಿ, ಅವುಗಳನ್ನು Dublin Core ಮಾನದಂಡಗಳ ಪ್ರಕಾರ ಕ್ಯಾಟಲಾಗ್ ಮಾಡುವುದು. ಹೆಚ್ಚು ಸ್ಥಳೀಯ (ನೇಟಿವ್) ಕನ್ನಡ ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೊನೆಯ ದಿನದಂದು ಡೇಟಾ ಅಪ್ಲೋಡ್ ಮಾಡಿ ಸರಿಯಾದ ನಾಮಕರಣ ನಿಯಮಗಳನ್ನು ಪಾಲಿಸಬೇಕು. ** ಸಾರ್ವಜನಿಕ ಡೊಮೇನ್ (Public Domain): ಯಾವುದೇ ಕೃತಿಸ್ವಾಮ್ಯ (Copyright) ಇಲ್ಲದ, ಸಾರ್ವಜನಿಕವಾಗಿ ಬಳಸಬಹುದಾದ ಪುಸ್ತಕಗಳು. ** ನೇಟಿವ್ ಫೋಕಸ್ (Native Focus): ಹೆಚ್ಚಾಗಿ ಮೂಲ ಕನ್ನಡ ಲೇಖಕರು ಬರೆದ '''ಕಾಲ್ಪನಿಕವಲ್ಲದ''' ಪುಸ್ತಕಗಳು. ** ಡಬ್ಲಿನ್ ಕೋರ್ (Dublin Core): ಹೆಸರು, ಲೇಖಕ, ದಿನಾಂಕ, ಪ್ರಕಾಶಕ ಇತ್ಯಾದಿ 15 ಮೂಲಭೂತ ಕ್ಷೇತ್ರಗಳನ್ನು ಒಳಗೊಂಡ ಮಾನದಂಡ. ಇದು ಸರಳ, ಅಂತಾರಾಷ್ಟ್ರೀಯ ಮಾನದಂಡ. ಹುಡುಕಾಟ ಸುಲಭ, ಯಾವುದೇ ಗ್ರಂಥಾಲಯ ಸಾಫ್ಟ್ವೇರ್ನಲ್ಲಿ ಕೆಲಸ ಮಾಡುತ್ತದೆ, ಮತ್ತು ಮುಂದೆ ವಿಸ್ತರಿಸಲು ಅನುಕೂಲಕರವಾಗಿದೆ. === ವಾರ ೨ === ==== ವಿಕಿಡಾಟ ==== ವಿಕಿಡಾಟದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಲೇಬಲ್ ಮತ್ತು ವಿವರಣೆಯನ್ನು ನವೀಕರಿಸಿ https://docs.google.com/spreadsheets/d/1qbe7Vm_eKsKq4V6k59QGvKQyz_lriAkc/edit?usp=sharing&ouid=101571014255749292585&rtpof=true&sd=true === ವಾರ ೩ === ==== ವಿಕಿಸೋರ್ಸ್ ಫ್ರೂಫ಼್‌ರೀಡ್ ==== ಮಾಡುವುದು ಹೇಗೆ: [[ಸಹಾಯ:ವಿಕಿಸೋರ್ಸ್_ಕೈಪಿಡಿ]], [[ಸಹಾಯ:ವಿಕಿಸೋರ್ಸ್_ಪರಿಚಯ]] {| class="wikitable sortable" ! Wikipedia User Name !! Assigned pages !! progress !! reviewer notes |- |Vikas shetty14 || * [[ಪುಟ:ಯಕ್ಷಗಾನ_ಮಕರಂದ.pdf/೬೬೭]] * [[ಪುಟ:ಯಕ್ಷಗಾನ_ಮಕರಂದ.pdf/೬೬೮]] * [[ಪುಟ:ಯಕ್ಷಗಾನ_ಮಕರಂದ.pdf/೬೬೯]] * [[ಪುಟ:ಯಕ್ಷಗಾನ_ಮಕರಂದ.pdf/೬೭೦]] * [[ಪುಟ:ಯಕ್ಷಗಾನ_ಮಕರಂದ.pdf/೬೭೧]] * [[ಪುಟ:ಯಕ್ಷಗಾನ_ಮಕರಂದ.pdf/೬೭೨]] | {{done}} <!--replace inprogress with {{done}} when proofreading in done--> | |- |Hemanth .03 || * [[ಪುಟ:ಯಕ್ಷಗಾನ_ಮಕರಂದ.pdf/೬೭೩]] * [[ಪುಟ:ಯಕ್ಷಗಾನ_ಮಕರಂದ.pdf/೬೭೪]] * [[ಪುಟ:ಯಕ್ಷಗಾನ_ಮಕರಂದ.pdf/೬೭೫]] * [[ಪುಟ:ಯಕ್ಷಗಾನ_ಮಕರಂದ.pdf/೬೭೬]] * [[ಪುಟ:ಯಕ್ಷಗಾನ_ಮಕರಂದ.pdf/೬೭೭]] * [[ಪುಟ:ಯಕ್ಷಗಾನ_ಮಕರಂದ.pdf/೬೭೮]] | {{inprogress}} <!--replace Done with {{done}} when proofreading in done--> | |- |Viveka B G || * [[ಪುಟ:ಯಕ್ಷಗಾನ_ಮಕರಂದ.pdf/೬೭೯]] * [[ಪುಟ:ಯಕ್ಷಗಾನ_ಮಕರಂದ.pdf/೬೮೦]] * [[ಪುಟ:ಯಕ್ಷಗಾನ_ಮಕರಂದ.pdf/೬೮೧]] * [[ಪುಟ:ಯಕ್ಷಗಾನ_ಮಕರಂದ.pdf/೬೮೨]] * [[ಪುಟ:ಯಕ್ಷಗಾನ_ಮಕರಂದ.pdf/೬೮೩]] * [[ಪುಟ:ಯಕ್ಷಗಾನ_ಮಕರಂದ.pdf/೬೮೪]] | {{Done}} <!--replace Done with {{done}} when proofreading in done--> | |- |Reema Jalihal || * [[ಪುಟ:ಯಕ್ಷಗಾನ_ಮಕರಂದ.pdf/೬೮೫]] * [[ಪುಟ:ಯಕ್ಷಗಾನ_ಮಕರಂದ.pdf/೬೮೬]] * [[ಪುಟ:ಯಕ್ಷಗಾನ_ಮಕರಂದ.pdf/೬೮೭]] * [[ಪುಟ:ಯಕ್ಷಗಾನ_ಮಕರಂದ.pdf/೬೮೮]] * [[ಪುಟ:ಯಕ್ಷಗಾನ_ಮಕರಂದ.pdf/೬೮೯]] * [[ಪುಟ:ಯಕ್ಷಗಾನ_ಮಕರಂದ.pdf/೬೯೦]] | {{done}} <!--replace inprogress with {{done}} when proofreading in done--> | |- |Shyam 2808 || * [[ಪುಟ:ಯಕ್ಷಗಾನ_ಮಕರಂದ.pdf/೬೯೧]] * [[ಪುಟ:ಯಕ್ಷಗಾನ_ಮಕರಂದ.pdf/೬೯೨]] * [[ಪುಟ:ಯಕ್ಷಗಾನ_ಮಕರಂದ.pdf/೬೯೩]] * [[ಪುಟ:ಯಕ್ಷಗಾನ_ಮಕರಂದ.pdf/೬೯೪]] * [[ಪುಟ:ಯಕ್ಷಗಾನ_ಮಕರಂದ.pdf/೬೯೫]] * [[ಪುಟ:ಯಕ್ಷಗಾನ_ಮಕರಂದ.pdf/೬೯೬]] | {{Done}} <!--replace inprogress with {{done}} when proofreading in done--> | |- |Nihar Chakravarti || * [[ಪುಟ:ಯಕ್ಷಗಾನ_ಮಕರಂದ.pdf/೬೯೭]] * [[ಪುಟ:ಯಕ್ಷಗಾನ_ಮಕರಂದ.pdf/೬೯೮]] * [[ಪುಟ:ಯಕ್ಷಗಾನ_ಮಕರಂದ.pdf/೬೯೯]] * [[ಪುಟ:ಯಕ್ಷಗಾನ_ಮಕರಂದ.pdf/೭೦೦]] * [[ಪುಟ:ಯಕ್ಷಗಾನ_ಮಕರಂದ.pdf/೭೦೧]] * [[ಪುಟ:ಯಕ್ಷಗಾನ_ಮಕರಂದ.pdf/೭೦೨]] | {{Done}} <!--replace inprogress with {{done}} when proofreading in done--> | |- |vyangyeah || * [[ಪುಟ:ಯಕ್ಷಗಾನ_ಮಕರಂದ.pdf/೭೦೩]] * [[ಪುಟ:ಯಕ್ಷಗಾನ_ಮಕರಂದ.pdf/೭೦೪]] * [[ಪುಟ:ಯಕ್ಷಗಾನ_ಮಕರಂದ.pdf/೭೦೫]] * [[ಪುಟ:ಯಕ್ಷಗಾನ_ಮಕರಂದ.pdf/೭೦೬]] * [[ಪುಟ:ಯಕ್ಷಗಾನ_ಮಕರಂದ.pdf/೭೦೭]] * [[ಪುಟ:ಯಕ್ಷಗಾನ_ಮಕರಂದ.pdf/೭೦೮]] | {{inprogress}} <!--replace inprogress with {{done}} when proofreading in done--> | |- |Vaishnu Pilar || * [[ಪುಟ:ಯಕ್ಷಗಾನ_ಮಕರಂದ.pdf/೭೦೯]] * [[ಪುಟ:ಯಕ್ಷಗಾನ_ಮಕರಂದ.pdf/೭೧೦]] * [[ಪುಟ:ಯಕ್ಷಗಾನ_ಮಕರಂದ.pdf/೭೧೧]] * [[ಪುಟ:ಯಕ್ಷಗಾನ_ಮಕರಂದ.pdf/೭೧೨]] * [[ಪುಟ:ಯಕ್ಷಗಾನ_ಮಕರಂದ.pdf/೭೧೩]] * [[ಪುಟ:ಯಕ್ಷಗಾನ_ಮಕರಂದ.pdf/೭೧೪]] | {{inprogress}} <!--replace inprogress with {{done}} when proofreading in done--> | |} [[ವರ್ಗ:ವಿಕಿಸೋರ್ಸ್ ಕಾರ್ಯಾಗಾರ]] bh98toe3j8e69rnwibghnmggrz5x7v3 ವಿಕಿಸೋರ್ಸ್ ಚರ್ಚೆ:ವಿಕಿಸೋರ್ಸ್೨೦ 5 120725 323961 2026-06-02T03:48:53Z Vikashegde 1258 /* ಪಾಯಿಂಟ್ಸ್ */ ಹೊಸ ವಿಭಾಗ 323961 wikitext text/x-wiki == ಪಾಯಿಂಟ್ಸ್ == ನಾನು ಗಮನಿಸಿದಂತೆ ಎರಡು ದಿನಗಳಿಂದ ಪಾಯಿಂಟ್ಸ್ ಎಣಿಕೆ ಅಪ್ಡೇಟ್ ಆಗಿಲ್ಲ. ತಾಂತ್ರಿಕವಾಗಿ ಏನಾದರೂ ಸಮಸ್ಯೆ ಇದ್ದಲ್ಲಿ ಸರಿಪಡಿಸಬೇಕಾಗಿ ಕೋರಿಕೆ. -[[ಸದಸ್ಯ:Vikashegde|ವಿಕಾಸ್ ಹೆಗಡೆ &#124; Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೦೯:೧೮, ೨ ಜೂನ್ ೨೦೨೬ (IST) a3maz865mqdn0zyzjcmg44qy4sy477b