ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.5 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಸದಸ್ಯ:Vikashegde 2 9037 324100 323701 2026-06-02T18:03:24Z Vikashegde 1258 /* WIP */ 324100 wikitext text/x-wiki ವಿಕಿ ಸಂಪಾದಕರಲ್ಲೊಬ್ಬ. * [[ವಿಕಿಸೋರ್ಸ್:ಯೋಜನೆ]] * [[ವಿಕಿಸೋರ್ಸ್:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ]] * [[ವಿಕಿಸೋರ್ಸ್:ಯೋಜನೆ/ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ]] * [[:ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]] <div style="background-color: #f8f8ff; border: 2px solid #e2e2ff; padding: 0.6em; padding-top: none;"> '''[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]''' :‌ [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅ| ಅ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಆ| ಆ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಇ| ಇ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಈ| ಈ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಉ| ಉ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಊ| ಊ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಎ| ಎ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಏ| ಏ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಐ| ಐ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಒ| ಒ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಓ| ಓ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಔ| ಔ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಂ| ಅಂ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಅಃ| ಅಃ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಕ| ಕ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಚ| ಚ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಟ| ಟ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ತ| ತ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಪ| ಪ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಗ| ಗ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಜ| ಜ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಡ| ಡ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ದ| ದ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಬ| ಬ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ನ| ನ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಮ| ಮ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಯ| ಯ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ರ| ರ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಲ| ಲ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ವ| ವ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಶ| ಶ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಷ| ಷ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಸ| ಸ ]] [[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ#ಹ| ಹ ]] </div> == ಪ್ರಕಟಿಸಿದ ಕೆಲವು ಪುಸ್ತಕಗಳು - ರೆಫರೆನ್ಸ್ == * [[ಪರಿವಿಡಿ:Kannadigara Karma Kathe.pdf]] * [[ಪರಿವಿಡಿ:ಹಳ್ಳಿಯ ಚಿತ್ರಗಳು.djvu]] ==ಉಪಯುಕ್ತ ಪುಟಗಳು== * [[ವಿಕಿಸೋರ್ಸ್:ವಿಕಿಸೋರ್ಸ್ ಕೈಪಿಡಿ]] * [[ಪುಟ:ಮನಮಂಥನ.pdf/೨೮೩]] - index * [[ಪುಟ:ಮನಮಂಥನ.pdf/೨೮೨]] - page vertical/horizontal centre alignment * [[ಪುಟ:ಹಗಲಿರುಳು.djvu/೬]] - image crop * [[ಪುಟ:Yugaantara - Gokaak.pdf/೧೦೩]] - table, list * [[ಪುಟ:Yugaantara - Gokaak.pdf/೧೦೪]] - table, list * [[ಪುಟ:ಕಮ್ಯೂನಿಸಂ.djvu/೩೧]] - page full image ==WIP== * [[ಪರಿವಿಡಿ:ಹಗಲಿರುಳು.djvu]] * [[ಪರಿವಿಡಿ:ಕಮ್ಯೂನಿಸಂ.djvu]] * [[ಪರಿವಿಡಿ:ಕಥಾವಳಿ.djvu]] * [[ಪರಿವಿಡಿ:Chirasmarane-Niranjana.pdf]] d8pxiicacj5stffo1iebyyupi3vkxmr ಪುಟ:Chirasmarane-Niranjana.pdf/೧ 104 12820 324111 151711 2026-06-02T18:14:22Z Vikashegde 1258 /* Proofread */ 324111 proofread-page text/x-wiki <noinclude><pagequality level="3" user="Vikashegde" /></noinclude>{{Css image crop |Image = Chirasmarane-Niranjana.pdf |Page = 1 |bSize = {{#expr:372*2}} |cWidth = {{#expr:303*2}} |cHeight = {{#expr:405*2}} |oTop = {{#expr:84*2}} |oLeft = {{#expr:35*2}} |Location = center |Description = }}<noinclude></noinclude> tiwt7lkio4xx8sf2idzaw1fzze7z7t9 324112 324111 2026-06-02T18:15:17Z Vikashegde 1258 /* Not proofread */ 324112 proofread-page text/x-wiki <noinclude><pagequality level="1" user="Vikashegde" /></noinclude>{{Css image crop |Image = Chirasmarane-Niranjana.pdf |Page = 1 |bSize = {{#expr:372*2}} |cWidth = {{#expr:303*2}} |cHeight = {{#expr:405*2}} |oTop = {{#expr:84*2}} |oLeft = {{#expr:35*2}} |Location = center |Description = }}<noinclude></noinclude> 6hvxcd0o5mgazh3eqls0c1mhbt1lb9p ಪುಟ:Chirasmarane-Niranjana.pdf/೧೨೩ 104 12942 324092 320437 2026-06-02T17:12:18Z Vikashegde 1258 /* Validated */ 324092 proofread-page text/x-wiki <noinclude><pagequality level="4" user="Vikashegde" />{{rh|center=|left=೧೨೪|right=ಚಿರಸ್ಮರಣೆ}}</noinclude>{{gap}}"ಬೆಳಕಾದರೂ ಹಿಡಕೊಂಡು ಬರಬಾರ್ದೇನೊ? ರಾತ್ರೆ ದೆವ್ವದ ಹಾಗೆ ಒಬ್ನೇ ನಡೀತಿಯಲ್ಲ?" {{gap}}ಈಗಲೂ ಮಗ ಮೌನವಾಗಿದ್ದುದನ್ನು ಕಂಡು, ಆತನಿಗೆ ಊಟಕ್ಕಿಡುತ್ತಿದ್ದ ತಾಯಿ ಹೇಳಿದಳು: {{gap}}"ಹುಡುಗ ಒಂದು ಬ್ಯಾಟರಿ ತೆಗೆಸ್ಕೊಡೂಂತ ಹೋದ ವರ್ಷವೇ ಹೇಳಿದ್ದ." {{gap}}"ಇವನೊಬ್ಬ ಬ್ಯಾಟರಿ ಹಿಡಕೊಂಡು ಬೇಟೆಗೆ ಹೊರಡೊ ದೊಡ್ಡ ಮನುಷ್ಯ, ತೆಗೆಸಿಕೊಡ್ಬೇಕಾಗಿತ್ತು." {{gap}}ತಂದೆ ಹಾಗೆ ಆಡುತ್ತಿದ್ದರೂ ಆ ಹೃದಯ ಮೃದುವಾಗಿತ್ತೆಂದು ಅಪ್ಪು ಚೆನ್ನಾಗಿ ತಿಳಿದಿದ್ದ. {{gap}}"ದುಡ್ಡಿರ್ಲಿಲ್ಲ" ಎಂದಳು ತಾಯಿ ಮೆಲ್ಲನೆ ನಕ್ಕು. {{gap}}"ಹೂಂ--" ಎಂದು ತಂದೆ ಮಾತು ನಿಲ್ಲಿಸಿದ. {{gap}}..ಮಲಗಿಕೊಂಡು ಬಹಳ ಹೊತ್ತಾದರೂ ಅಪ್ಪುವಿಗೆ ನಿದ್ದೆ ಬರಲಿಲ್ಲ. ಆ ಪ್ರಾಣಿ ಎಲ್ಲಾದರೂ ಸತ್ತೇಹೋದರೆ? ನಾಳೆ ಗೊಂದಲವಾಗುವುದು ಖಂಡಿತ. ಆದರೆ, ಅವನು ಸತ್ತಹಾಗಿರಲಿಲ್ಲ. ಉಸಿರೂ ಸ್ವಲ್ಪ ಆಡುತ್ತಿತ್ತು... ಅಂತೂ ಬೆಳಗ್ಗೆ ಓಡಿಹೋಗಿ ಚಿರುಕಂಡನಿಗೆ ಈ ವಿಷಯ ಹೇಳಬೇಕು; ಇಬ್ಬರೂ ಹೋಗಿ ಮಾಸ್ತರರಿಗೂ ತಿಳಿಸಬೇಕು.. ಆ ಕಣ್ಣ ಎಷ್ಟು ಒಳ್ಳೆಯವನು! ದೇವಕಿ ಕೂಡಾ-- ಆ ಎಳೆಯ ಮಗುವೂ.... {{gap}}ಈ ರೀತಿಯ ಯೋಚನೆಯಲ್ಲೆ ಅಪ್ಪು ನಿದ್ರಿಸಿದ. {{gap}}.... ರಾತ್ರೆ ಕಳೆಯಿತು. ನಸುಕಿನಲ್ಲೆ ಎದ್ದು ಅಪ್ಪು ಜಮೀನ್ದಾರರ ಚಾಕರನನ್ನ ತಾವು ಕಟ್ಟಿಹಾಕಿದ್ದ ದಿಕ್ಕಿಗೆ ಓಡಿ, ದೂರದಲ್ಲಿ ನಿಂತು, ಆ ಮರದತ್ತ ದೃಷ್ಟಿ ಹರಿಸಿದ. ಮರದ ಬುಡದಲ್ಲಿ ಏನೂ ಇರಲಿಲ್ಲ. ಆ ಮನುಷ್ಯ ಎದ್ದು ಹೋಗಿದ್ದನೆಂಬುದು ಸ್ಪಷ್ಟವಾಗಿತ್ತು. ಅಪ್ಪುವಿಗೆ ಹೃದಯ ಹಗುರವೆನಿಸಿತು. ಹಕ್ಕಿಯ ವೇಗದಲ್ಲಿ ಚಿರುಕಂಡನ ಮನೆಗೆ ಹೋಗಿ ಆತನನ್ನು ಎಬ್ಬಿಸಿದ. {{gap}}ಉದ್ವೇಗ ತುಂಬಿದ ಧ್ವನಿಯಲ್ಲಿ ಅಪ್ಪು ಒಪ್ಪಿಸಿದ ವರದಿ ಕೇಳಿ, ಚಿರುಕಂಡನ ಮುಖ ಗಂಭೀರವಾಯಿತು. ಎತ್ತ ಹೋಗಬೇಕೆಂದು ಅವರು ಮಾತನಾಡದೆ ಇದ್ದರೂ, ಇಬ್ಬರ ಕಾಲುಗಳೂ ಮಾಸ್ತರಲ್ಲಿಗೇ ನಡೆದವು. ಗೆಳೆಯನ ಮೌನ ಕಂಡು ಒಂದು ರೀತಿಯ ದಿಗಿಲಾಗಿ ಹಾದಿಯಲ್ಲಿ ಅಪ್ಪು ಕೇಳಿದ: {{gap}}"ನಾವು ಹಾಗೆ ಮಾಡಿದ್ದು ತಪ್ಪಾಯ್ತಾ?" {{gap}}ಚಿರುಕಂಡ ಯೋಚಿಸುತ್ತಿದ್ದುದೂ ಆ ವಿಷಯವನ್ನು ಕುರಿತೇ.<noinclude></noinclude> b7ujc04pw6lwu21epeze9mc9d0bg0e6 ಪುಟ:Chirasmarane-Niranjana.pdf/೧೩೧ 104 12950 324095 151716 2026-06-02T17:36:01Z Vikashegde 1258 /* Proofread */ 324095 proofread-page text/x-wiki <noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=೧೩೨|right=}}</noinclude>ಮಾಸ್ತರು ಹೇಳಿದರು: {{gap}}"ಈಗ ನಿಮಗೊಂದು ಸಂತೋಷದ ವಿಷಯ ಹೇಳ್ತೇನೆ. ನಮ್ಮ ಶಾಲೆಯ ವಿದ್ಯಾರ್ಥಿ ಕಣ್ಣ ನಿಮಗೆಲ್ಲರಿಗೂ ಪರಿಚಿತಳೇ ಅಗಿರುವ ದೇವಕಿಯನ್ನು ಮದುವೆಯಾಗಲಿದ್ದಾರೆ. ಈ ಶುಭಕಾರ್ಯ ಅದಷ್ಟು ಬೇಗನೆ ಜರಗಿ ನಿಮಗೆಲ್ಲರಿಗೂ ಭೂರಿ ಭೋಜನ ಸಿಗುವಂತಾಗಲಿ ಅನ್ನೋದೆ ನಮ್ಮ ಹಾರೈಕೆ. ಅಲ್ಲವೇನ್ರಪ್ಪಾ? ಬೇರೇನು ಹೇಳೋಣ?" {{gap}}ಕುಳಿತವರಿಂದ, ಪಿಸುಪಿಸು ಗುಜುಗುಜು ಮಾತು, ಮೆಚ್ಚುಗೆಯ ಉದ್ಗಾರಗಳು... {{gap}}...ಒಂದು ಕಾಲದಲ್ಲಿ ಎಳೆಯ ಮಗುವನ್ನೆತ್ತಿಕೊಂಡು ತಾನೂ ಪಾಡು ಪಟ್ಟಿದ್ದ ಕಣ್ಣನ ವಿಧವೆ ತಾಯಿ ಮದುವೆಗೆ ಅಕ್ಷೇಪಿಸಲಿಲ್ಲ. ಗುಣವತಿಯಾದ ರೂಪವತಿಯಾದ ದೇವಕಿ ತನ್ನ ಸೊಸೆಯಾಗುವಳೆಂದು ಮುದುಕಿಗೆ ಹೆಮ್ಮೆಯೆ ಆಯಿತು. {{gap}}ಮದುವೆ ಹೆಚ್ಚಿನ ವೆಚ್ಚವಿಲ್ಲದೆ ನಡೆಯಿತು. ಆ ಸಮಯದಲ್ಲಿ ಹಿರಿಯನಾಗಿ ಓಡಾಡಿದವನು ಚಿರುಕಂಡನ ತಂದೆ. ಒಂದು ಕಾಲದಲ್ಲಿ ಸಾಧುಪ್ರಾಣಿಯಾಗಿ ಮೂಕನಾಗಿರುತ್ತಿದ್ದ ಈತ, ಪುನರ್ಜನ್ಮ ಪಡೆದ ಹೊಸ ಮನುಷ್ಯನ ಹಾಗೆ ಲವಲವಿಕೆಯಿಂದಿದ್ದುದು, ಬೆರಗುಗೊಳಿಸುವ ಸಂಗತಿಯಾಗಿತ್ತು. ಜಮೀನ್ದಾರರ ಕೆಂಗಣ್ಣು ಉರಿಯುತ್ತಿದ್ದಂತೆಯೇ. ಅವರ ನಂಬುಗೆಯ ಚಾಕರ ತನ್ನ ಸೊಂಟವನ್ನಿನ್ನೂ ಮುಟ್ಟಿ ನೋಡುತ್ತಿದ್ದಂತೆಯೇ. ಕಣ್ಣ-ದೇವಕಿ ಗಂಡ-ಹೆಂಡತಿಯಾದರು. ಮಾಸ್ತರು ಮದುವೆಯ ಸಮಯದಲ್ಲಿ ಅತ್ತ ಸುಳಿಯದೇ ಇದ್ದರೂ, ರಾತ್ರಿ ಊಟಕ್ಕೆ ತಪ್ಪದೆ ಬಂದರು. {{gap}}ಕಣ್ಣನ ಸೂಚನೆಯಂತೆ, ಮಾಸ್ತರ ಒಪ್ಪಿಗೆ ಪಡೆದು ಕೋರ, ತನ್ನ ಹಟ್ಟಿಯನ್ನು ಬಿಟ್ಟು, ಈಗ ತೆರವಾಗಿದ್ದ ದೇವಕಿಯ ಗುಡಿಸಲಿಗೆ ಬಂದು ನೆಲಸಿದ. ರಾತ್ರಿ ಶಾಲೆಗೆ ಬರುತ್ತಿದ್ದ ರೈತರು ಅಲ್ಲಿ ಇಲ್ಲಿ ಆ ಗುಡಿಸಲನ್ನು ದುರಸ್ತಿಪಡಿಸಿ ಮತ್ತಷ್ಟು ಭದ್ರಗೊಳಿಸಿದರು. {{gap}}ಕಣ್ಣ ಕಯ್ಕೂರಿನವನಾಗಿಯೇ ಉಳಿದ. ಕೇಳಿ ಕಲಿತ, ಓದಿ ಕಲಿತ, ಹಳೆಯ ಹೊಸ ಹಾಡುಗಳೆಲ್ಲವನ್ನು ಈಗಲೂ ಆತನ ಚೇತನಕಂಠ ಹಾಡಿತು. {{gap}}ಹಳ್ಳಿಯ ಹುಡುಗಿಯರು ಯುವತಿಯರು ದೇವಕಿಯದಾದ ಆ ಒಡವೆಯನ್ನು ಇನ್ನೂ ನೋಡಿದರು. ಆದರೆ ನೋಟದಲ್ಲೀಗ ಆಕ್ರಮಣದ ಆಕಾಂಕ್ಷೆ ಇರಲಿಲ್ಲ; ಆಸೆ ಇರಲಿಲ್ಲ.{{nop}}<noinclude></noinclude> 4pxdin61lqr7ckx2s8rppbtwz16m92s 324103 324095 2026-06-02T18:04:31Z Pragathi. BH 7585 /* Validated */ 324103 proofread-page text/x-wiki <noinclude><pagequality level="4" user="Pragathi. BH" />{{rh|center=ಚಿರಸ್ಮರಣೆ|left=೧೩೨|right=}}</noinclude>ಮಾಸ್ತರು ಹೇಳಿದರು: {{gap}}"ಈಗ ನಿಮಗೊಂದು ಸಂತೋಷದ ವಿಷಯ ಹೇಳ್ತೇನೆ. ನಮ್ಮ ಶಾಲೆಯ ವಿದ್ಯಾರ್ಥಿ ಕಣ್ಣ ನಿಮಗೆಲ್ಲರಿಗೂ ಪರಿಚಿತಳೇ ಅಗಿರುವ ದೇವಕಿಯನ್ನು ಮದುವೆಯಾಗಲಿದ್ದಾರೆ. ಈ ಶುಭಕಾರ್ಯ ಅದಷ್ಟು ಬೇಗನೆ ಜರಗಿ ನಿಮಗೆಲ್ಲರಿಗೂ ಭೂರಿ ಭೋಜನ ಸಿಗುವಂತಾಗಲಿ ಅನ್ನೋದೆ ನಮ್ಮ ಹಾರೈಕೆ. ಅಲ್ಲವೇನ್ರಪ್ಪಾ? ಬೇರೇನು ಹೇಳೋಣ?" {{gap}}ಕುಳಿತವರಿಂದ, ಪಿಸುಪಿಸು ಗುಜುಗುಜು ಮಾತು, ಮೆಚ್ಚುಗೆಯ ಉದ್ಗಾರಗಳು... {{gap}}...ಒಂದು ಕಾಲದಲ್ಲಿ ಎಳೆಯ ಮಗುವನ್ನೆತ್ತಿಕೊಂಡು ತಾನೂ ಪಾಡು ಪಟ್ಟಿದ್ದ ಕಣ್ಣನ ವಿಧವೆ ತಾಯಿ ಮದುವೆಗೆ ಅಕ್ಷೇಪಿಸಲಿಲ್ಲ. ಗುಣವತಿಯಾದ ರೂಪವತಿಯಾದ ದೇವಕಿ ತನ್ನ ಸೊಸೆಯಾಗುವಳೆಂದು ಮುದುಕಿಗೆ ಹೆಮ್ಮೆಯೆ ಆಯಿತು. {{gap}}ಮದುವೆ ಹೆಚ್ಚಿನ ವೆಚ್ಚವಿಲ್ಲದೆ ನಡೆಯಿತು. ಆ ಸಮಯದಲ್ಲಿ ಹಿರಿಯನಾಗಿ ಓಡಾಡಿದವನು ಚಿರುಕಂಡನ ತಂದೆ. ಒಂದು ಕಾಲದಲ್ಲಿ ಸಾಧುಪ್ರಾಣಿಯಾಗಿ ಮೂಕನಾಗಿರುತ್ತಿದ್ದ ಈತ, ಪುನರ್ಜನ್ಮ ಪಡೆದ ಹೊಸ ಮನುಷ್ಯನ ಹಾಗೆ ಲವಲವಿಕೆಯಿಂದಿದ್ದುದು, ಬೆರಗುಗೊಳಿಸುವ ಸಂಗತಿಯಾಗಿತ್ತು. ಜಮೀನ್ದಾರರ ಕೆಂಗಣ್ಣು ಉರಿಯುತ್ತಿದ್ದಂತೆಯೇ. ಅವರ ನಂಬುಗೆಯ ಚಾಕರ ತನ್ನ ಸೊಂಟವನ್ನಿನ್ನೂ ಮುಟ್ಟಿ ನೋಡುತ್ತಿದ್ದಂತೆಯೇ. ಕಣ್ಣ-ದೇವಕಿ ಗಂಡ-ಹೆಂಡತಿಯಾದರು. ಮಾಸ್ತರು ಮದುವೆಯ ಸಮಯದಲ್ಲಿ ಅತ್ತ ಸುಳಿಯದೇ ಇದ್ದರೂ, ರಾತ್ರಿ ಊಟಕ್ಕೆ ತಪ್ಪದೆ ಬಂದರು. {{gap}}ಕಣ್ಣನ ಸೂಚನೆಯಂತೆ, ಮಾಸ್ತರ ಒಪ್ಪಿಗೆ ಪಡೆದು ಕೋರ, ತನ್ನ ಹಟ್ಟಿಯನ್ನು ಬಿಟ್ಟು, ಈಗ ತೆರವಾಗಿದ್ದ ದೇವಕಿಯ ಗುಡಿಸಲಿಗೆ ಬಂದು ನೆಲಸಿದ. ರಾತ್ರಿ ಶಾಲೆಗೆ ಬರುತ್ತಿದ್ದ ರೈತರು ಅಲ್ಲಿ ಇಲ್ಲಿ ಆ ಗುಡಿಸಲನ್ನು ದುರಸ್ತಿಪಡಿಸಿ ಮತ್ತಷ್ಟು ಭದ್ರಗೊಳಿಸಿದರು. {{gap}}ಕಣ್ಣ ಕಯ್ಕೂರಿನವನಾಗಿಯೇ ಉಳಿದ. ಕೇಳಿ ಕಲಿತ, ಓದಿ ಕಲಿತ, ಹಳೆಯ ಹೊಸ ಹಾಡುಗಳೆಲ್ಲವನ್ನು ಈಗಲೂ ಆತನ ಚೇತನಕಂಠ ಹಾಡಿತು. {{gap}}ಹಳ್ಳಿಯ ಹುಡುಗಿಯರು ಯುವತಿಯರು ದೇವಕಿಯದಾದ ಆ ಒಡವೆಯನ್ನು ಇನ್ನೂ ನೋಡಿದರು. ಆದರೆ ನೋಟದಲ್ಲೀಗ ಆಕ್ರಮಣದ ಆಕಾಂಕ್ಷೆ ಇರಲಿಲ್ಲ; ಆಸೆ ಇರಲಿಲ್ಲ.{{nop}}<noinclude></noinclude> 1xl63ae02797tnhsc3u66by4ngmyq5t ಪುಟ:Chirasmarane-Niranjana.pdf/೧೩೨ 104 12951 324096 151717 2026-06-02T17:41:32Z Vikashegde 1258 /* Proofread */ 324096 proofread-page text/x-wiki <noinclude><pagequality level="3" user="Vikashegde" /></noinclude>{{x-larger|{{center|೧೦}}}} ಕಾಲ ಎಂದಿನಂತೆ ಕಳೆಯಿತು. ರೈತರ ಪಾಲಿಗೆ ಅದು ಉರುಳುತ್ತಿದ್ದುದು ಒಂದೇ ಬಗೆಯಾಗಿ. ನಿಸರ್ಗದ ನಿಯಮದಂತೆ ಬಂದು ಹೋಗುತ್ತಿದ್ದ ಋತುಗಳು. ಋತುಗಳಿಗೆ ಅನುಗುಣವಾಗಿ ಉಳುಮೆ, ಬಿತ್ತನೆ, ಕುಯಿಲು, ಒಂದೋ ಹೆಚ್ಚು ಬೆಳೆ, ಇಲ್ಲಿ ಕಡಮೆ ಬೆಳೆ, ಸ್ವಲ್ಪ ಸುಖ, ಇಲ್ಲವೆ ಹೆಚ್ಚು ಸಂಕಟ. ಅವರಲ್ಲಿ ಬಹು ಜನರ ಸಾಮಾನ್ಯ ದೃಷ್ಟಿಗೆ ಕಾಣಿಸುತ್ತಿದ್ದುದು ನೀರಸವಾದ ಏರಿಳಿತವಿಲ್ಲದ ಬದುಕು. ಮನುಷ್ಯ ಹುಟ್ಟುತ್ತಾನೆ, ಬೆಳೆಯುತ್ತಾನೆ, ಸಾಯುತ್ತಾನೆ. ಹಿಂದೆಯೂ ಹಾಗಾಗುತ್ತಿತ್ತು. ಈಗಲೂ ಹಾಗಾಗುತ್ತಿದೆ. ಮುಂದೆಯೂ ಅಷ್ಟೆ. ಆದರೆ ಬೇರೆ ಕೆಲವರಿದ್ದರು. ಹೊಸ ವಿಚಾರಗಳ ಸಾಣೆಗೆ ಮೆದುಳನ್ನು ತೀಡಿ ನೋಡಿದವರು. ಬದುಕು ಯಾಕೆ ಹೀಗಿದೆ ಎಂಬುದು ಅವರಿಗೆ ತಿಳಿದಿತ್ತು. ಅದನ್ನು ಹಸನುಗೊಳಿಸಬೇಕೆಂಬ ಬಲವತ್ತರವಾದ ಆಸೆ ಆ ಜನಕ್ಕೆ. ಯಾವಾಗ ಹಾಗೆ ಮಾಡುವೆವೋ ಎಂಬ ತವಕ. ಕಾಲ ಬಲು ನಿಧಾನವಾಗಿ ಉರುಳುತ್ತಿದೆ, ಎಂದು ಅವರು ಆಕ್ಷೇಪಿಸುತ್ತಿದ್ದರು. {{gap}}ಅಪ್ಪು ಮತ್ತು ಚಿರುಕಂಡ ಈಗ 'ಬರಿಯ ಪೋರರು' ಎಂದು ತಾತ್ಸಾರ ಮಾಡಬಹುದಾದ ಎಳೆಯರಲ್ಲ. ವರ್ಷವರ್ಷವೂ ಮಳೆಗಾಲದಲ್ಲಿ ಚಿಗುರಿ ಬಲಿತಹಾಗೆ ಅವರು ಬೆಳೆದಿದ್ದರು. {{gap}}"ಹುಡುಗ ದೊಡ್ಡವನಾದ" ಎನ್ನುತ್ತಿದ್ದಳು ಕಲ್ಯಾಣಿ, ತೆಳ್ಳಗೆ ಎತ್ತರಕ್ಕೆ ಬೆಳೆದಿದ್ದ ಮಗ ಚಿರುಕಂಡನನ್ನು ನೋಡುತ್ತ. ಎಲ್ಲಾದರೂ ಹೆಣ್ಣು ನೋಡುತ್ತಿರಬೇಕು-ಎಂಬ ಪರೋಕ್ಷ ಸೂಚನೆಯೇ ಆ ಮಾತಿನ ಅರ್ಥ. ಆದರೆ ದಿನಹೋದಂತೆ ಎಳೆಯನಾಗುತ್ತ ನಡೆದಿದ್ದ ಆಕೆಯ ಗಂಡನಿಗೆ ಅದರ ಲಕ್ಷ್ಯವಿರಲಿಲ್ಲ. {{gap}}ನೋಡಲು ಅಪ್ಪುವೇ ಕಟ್ಟಾಳು. ತಾಯಿ ಬ್ಯಾಟರಿಯನ್ನೂ ಕೊಡಿಸಿದ್ದಳು; ಚಪ್ಪಲಿಯನ್ನೂ ಕೊಡಿಸಿದ್ದಳು. ರಾತ್ರೆ ವಿಶೇಷ ಕೆಲಸವೇನೂ ಇಲ್ಲದೆ ಹೊರಹೋದಾಗ ಅಪ್ಪು ಬ್ಯಾಟರಿ ಉಪಯೋಗಿಸುತ್ತಿದ್ದ. ಮಂದ ಪ್ರಕಾಶದ ಒಂದು ಬ್ಯಾಟರಿ ಕಂಡೊಡನೆ ಅದು ಅಪ್ಪುವಿರಬೇಕೆಂದು ಊರವರ ನಂಬಿಕೆ. ಆದರೆ, ವಿಶಿಷ್ಟವಾದ ಯಾವುದಾದರೂ ಕೆಲಸಕ್ಕಾಗಿ ಹೊರಬಿದ್ದಾಗ ಅಪ್ಪು ಅದನ್ನು ಉಪಯೋಗಿಸುತ್ತಿರಲಿಲ್ಲ. ಗೋಪ್ಕ ಚಲನವಲನಕ್ಕೆ ಹಾಗಿರುವುದೇ ಅನುಕೂಲವಾಗಿತ್ತು. ಚಪ್ಪಲಿಯ ವಿಷಯದಲ್ಲೂ ಅಷ್ಟೆ. ಚಿರುಕಂಡನಿಗೆ ಇಲ್ಲದ್ದು ತನಗೆ ಯಾಕೆ? ಎಂದಿದ್ದ ಅಪ್ಪು. "ಹೆಚ್ಚು ಓಡಾಡುವವನು ನೀನೋ? ನಾನೋ?<noinclude></noinclude> a1ymftbtgbyufjd9wvajmv77h5milcq 324104 324096 2026-06-02T18:04:52Z Pragathi. BH 7585 /* Validated */ 324104 proofread-page text/x-wiki <noinclude><pagequality level="4" user="Pragathi. BH" /></noinclude>{{x-larger|{{center|೧೦}}}} ಕಾಲ ಎಂದಿನಂತೆ ಕಳೆಯಿತು. ರೈತರ ಪಾಲಿಗೆ ಅದು ಉರುಳುತ್ತಿದ್ದುದು ಒಂದೇ ಬಗೆಯಾಗಿ. ನಿಸರ್ಗದ ನಿಯಮದಂತೆ ಬಂದು ಹೋಗುತ್ತಿದ್ದ ಋತುಗಳು. ಋತುಗಳಿಗೆ ಅನುಗುಣವಾಗಿ ಉಳುಮೆ, ಬಿತ್ತನೆ, ಕುಯಿಲು, ಒಂದೋ ಹೆಚ್ಚು ಬೆಳೆ, ಇಲ್ಲಿ ಕಡಮೆ ಬೆಳೆ, ಸ್ವಲ್ಪ ಸುಖ, ಇಲ್ಲವೆ ಹೆಚ್ಚು ಸಂಕಟ. ಅವರಲ್ಲಿ ಬಹು ಜನರ ಸಾಮಾನ್ಯ ದೃಷ್ಟಿಗೆ ಕಾಣಿಸುತ್ತಿದ್ದುದು ನೀರಸವಾದ ಏರಿಳಿತವಿಲ್ಲದ ಬದುಕು. ಮನುಷ್ಯ ಹುಟ್ಟುತ್ತಾನೆ, ಬೆಳೆಯುತ್ತಾನೆ, ಸಾಯುತ್ತಾನೆ. ಹಿಂದೆಯೂ ಹಾಗಾಗುತ್ತಿತ್ತು. ಈಗಲೂ ಹಾಗಾಗುತ್ತಿದೆ. ಮುಂದೆಯೂ ಅಷ್ಟೆ. ಆದರೆ ಬೇರೆ ಕೆಲವರಿದ್ದರು. ಹೊಸ ವಿಚಾರಗಳ ಸಾಣೆಗೆ ಮೆದುಳನ್ನು ತೀಡಿ ನೋಡಿದವರು. ಬದುಕು ಯಾಕೆ ಹೀಗಿದೆ ಎಂಬುದು ಅವರಿಗೆ ತಿಳಿದಿತ್ತು. ಅದನ್ನು ಹಸನುಗೊಳಿಸಬೇಕೆಂಬ ಬಲವತ್ತರವಾದ ಆಸೆ ಆ ಜನಕ್ಕೆ. ಯಾವಾಗ ಹಾಗೆ ಮಾಡುವೆವೋ ಎಂಬ ತವಕ. ಕಾಲ ಬಲು ನಿಧಾನವಾಗಿ ಉರುಳುತ್ತಿದೆ, ಎಂದು ಅವರು ಆಕ್ಷೇಪಿಸುತ್ತಿದ್ದರು. {{gap}}ಅಪ್ಪು ಮತ್ತು ಚಿರುಕಂಡ ಈಗ 'ಬರಿಯ ಪೋರರು' ಎಂದು ತಾತ್ಸಾರ ಮಾಡಬಹುದಾದ ಎಳೆಯರಲ್ಲ. ವರ್ಷವರ್ಷವೂ ಮಳೆಗಾಲದಲ್ಲಿ ಚಿಗುರಿ ಬಲಿತಹಾಗೆ ಅವರು ಬೆಳೆದಿದ್ದರು. {{gap}}"ಹುಡುಗ ದೊಡ್ಡವನಾದ" ಎನ್ನುತ್ತಿದ್ದಳು ಕಲ್ಯಾಣಿ, ತೆಳ್ಳಗೆ ಎತ್ತರಕ್ಕೆ ಬೆಳೆದಿದ್ದ ಮಗ ಚಿರುಕಂಡನನ್ನು ನೋಡುತ್ತ. ಎಲ್ಲಾದರೂ ಹೆಣ್ಣು ನೋಡುತ್ತಿರಬೇಕು-ಎಂಬ ಪರೋಕ್ಷ ಸೂಚನೆಯೇ ಆ ಮಾತಿನ ಅರ್ಥ. ಆದರೆ ದಿನಹೋದಂತೆ ಎಳೆಯನಾಗುತ್ತ ನಡೆದಿದ್ದ ಆಕೆಯ ಗಂಡನಿಗೆ ಅದರ ಲಕ್ಷ್ಯವಿರಲಿಲ್ಲ. {{gap}}ನೋಡಲು ಅಪ್ಪುವೇ ಕಟ್ಟಾಳು. ತಾಯಿ ಬ್ಯಾಟರಿಯನ್ನೂ ಕೊಡಿಸಿದ್ದಳು; ಚಪ್ಪಲಿಯನ್ನೂ ಕೊಡಿಸಿದ್ದಳು. ರಾತ್ರೆ ವಿಶೇಷ ಕೆಲಸವೇನೂ ಇಲ್ಲದೆ ಹೊರಹೋದಾಗ ಅಪ್ಪು ಬ್ಯಾಟರಿ ಉಪಯೋಗಿಸುತ್ತಿದ್ದ. ಮಂದ ಪ್ರಕಾಶದ ಒಂದು ಬ್ಯಾಟರಿ ಕಂಡೊಡನೆ ಅದು ಅಪ್ಪುವಿರಬೇಕೆಂದು ಊರವರ ನಂಬಿಕೆ. ಆದರೆ, ವಿಶಿಷ್ಟವಾದ ಯಾವುದಾದರೂ ಕೆಲಸಕ್ಕಾಗಿ ಹೊರಬಿದ್ದಾಗ ಅಪ್ಪು ಅದನ್ನು ಉಪಯೋಗಿಸುತ್ತಿರಲಿಲ್ಲ. ಗೋಪ್ಕ ಚಲನವಲನಕ್ಕೆ ಹಾಗಿರುವುದೇ ಅನುಕೂಲವಾಗಿತ್ತು. ಚಪ್ಪಲಿಯ ವಿಷಯದಲ್ಲೂ ಅಷ್ಟೆ. ಚಿರುಕಂಡನಿಗೆ ಇಲ್ಲದ್ದು ತನಗೆ ಯಾಕೆ? ಎಂದಿದ್ದ ಅಪ್ಪು. "ಹೆಚ್ಚು ಓಡಾಡುವವನು ನೀನೋ? ನಾನೋ?<noinclude></noinclude> 2je47cmcyiustugremcu1wfhgq229s8 ಪುಟ:Chirasmarane-Niranjana.pdf/೧೩೩ 104 12952 324097 151718 2026-06-02T17:46:44Z Vikashegde 1258 /* Proofread */ 324097 proofread-page text/x-wiki <noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=೧೩೪|right=}}</noinclude>ಮುಜುಗರ ಮಾಡದೆ ತಗೋ" ಎಂದು ಚಿರುಕಂಡ ಒತ್ತಾಯಿಸಿದ್ದ. ಆದರೆ, ಗುಪ್ತವಾಗಿ ಬರುತ್ತಿದ್ದ ಮಾಸ್ತರರ ಸ್ನೇಹಿತರನ್ನು ಕರೆತರುವುದಕ್ಕೋ ಬಿಟ್ಟುಬರುವುದಕ್ಕೋ ರಾತ್ರೆ ಹೊತ್ತು ಹೊರಬಿದ್ದಾಗ, ಅಪ್ಪು ಚಪ್ಪಲಿ ಉಪಯೋಗಿಸುತ್ತಿರಲಿಲ್ಲ, ಸದ್ದಾಗಬಾರದೆಂದು. {{gap}}ಪದೇ ಪದೇ ಅಪ್ಪು ಮಾಸ್ತರನ್ನು ಕೇಳುತ್ತಿದ್ದ: {{gap}}"ಯಾವಾಗ ಸರ್‌ ಸಂಘ ಕಟ್ಟೋದು? ಯಾಕೆ ಸರ್‌ ತಡ?" {{gap}}ಅವರು ಬಾರಿಬಾರಿಗೂ ಸಮಾಧಾನ ಹೇಳುತ್ತಿದ್ದರು: {{gap}}“ಇನ್ನೂ ಸ್ವಲ್ಪ ತಡಿಯಪ್ಪ. ಕಬ್ಬಿಣ ಕಾದಾಗ ಅಲ್ವ ಹೊಡೀಬೇಕು?" {{gap}}ಒಂದು ದಿನ ಅಪ್ಪು, ಮಾಸ್ತರು ಒಪ್ಪಿಸಿದ ಕೆಲಸದ ಮೇಲೆ ಆ ತಾಲೂಕಿನ ಕೇಂದ್ರವಾದ ಹೊಸದುರ್ಗಕ್ಕೆ ಹೋಗಿ ಬಂದ. ಅಲ್ಲಿ ಒಂದು ಮನೆಯಲ್ಲಿ ಗುಪ್ತವಾಗಿದ್ದ ಪಂಡಿತರು ಆತನಿಗೆ ಕಾಣಲು ಸಿಕ್ಕಿದರು. ಅಪ್ಪು ಅಷ್ಟು ದೂರ ಪ್ರವಾಸ ಮಾಡಿದುದು ಅದೇ ಮೊದಲು. ಒಪ್ಪೊತ್ತಿನ ದಾರಿಯಾದರೂ, ಅದು. ನೂರಾರು ಮೈಲಿಯ ಹಾದಿ ಎನ್ನುನಂತೆ ಅಪ್ಪುವಿಗೆ ಭಾಸವಾಗಿತ್ತು. {{gap}}ಅಲ್ಲಿ ಆತನನ್ನು ಕಂಡ ಧಾಂಡಿಗ ಹೇಳಿದ: {{gap}}"ಭೂಮಿ ಗೋಳವಾಗಿದೆ ಅನ್ನೋದಕ್ಕೆ ಇನ್ನೊಂದು ಸಾಕ್ಷ್ಯ ಇವತ್ತು ನನಗೆ ಸಿಕ್ತು. {{gap}}ನಗೆ ಮಾತಿಗೆ ಇದು ಪೀಠಿಕೆ ಎಂದು ತಿಳಿದರೂ ಅದೇನೆಂದು ಅರ್ಥವಾಗದೆ ಅಪ್ಪು ಕೇಳಿದ: {{gap}}"ಯಾವುದು ಹೇಳಿ?...." {{gap}}"ಬೇರೆ ಬೇರೆ ಹಾದಿಯಿಂದ ಹೊರಟರೂ ನಾವು ಆಗಾಗ್ಗೆ ಒಬ್ಬರನ್ನೊಬ್ಬರು ಸಂಧಿಸ್ತಾನೇ ಇದ್ದೇವೆ!" {{gap}}ಅಪ್ಪು ನಕ್ಕ. ಆಮೇಲೆ ಒಂದು ಮಾತು ಸೇರಿಸಿದ: {{gap}}"ಇಷ್ಟು ದೂರ ಬಂದಿದ್ದೇನೆ. ಇನ್ನು ಕಯ್ಯೂರಿನವರನ್ನು ಕಪ್ಪೆಗಳೂಂತ ಹೇಳ್ಬೇಡಿ!" {{gap}}ಹುಬ್ಬುಗಳನ್ನು ಹಣೆಯ ನಡುವೆಗೊಯ್ದು ಸರ್ಕಸಿನ ವಿದೂಷಕನಂತೆ ಕಣ್ಣು ಹೊರಳಿಸುತ್ತ ಧಾಂಡಿಗ "ಅಪ್ಪಣೆ" ಎಂದ. {{gap}}....ಕಯ್ಯೂರಿಗೆ ಹಿಂತಿರುಗಿ ಮಾಸ್ತರಿಗೆ ಪ್ರವಾಸದ ವರದಿಯನ್ನೊಪ್ಪಿಸುತ್ತ ಅಪ್ಪು ಹೇಳಿದ. {{gap}}"ಹೊಸದುರ್ಗದಲ್ಲಿ ಬಹಳ ಜನ ಕನ್ನಡ ಮಾತಾಡ್ತಾರೆ.”{{nop}}<noinclude></noinclude> gmj1hq6rqwn5nploqjqugz4jsy0yw6c 324105 324097 2026-06-02T18:05:07Z Pragathi. BH 7585 /* Validated */ 324105 proofread-page text/x-wiki <noinclude><pagequality level="4" user="Pragathi. BH" />{{rh|center=ಚಿರಸ್ಮರಣೆ|left=೧೩೪|right=}}</noinclude>ಮುಜುಗರ ಮಾಡದೆ ತಗೋ" ಎಂದು ಚಿರುಕಂಡ ಒತ್ತಾಯಿಸಿದ್ದ. ಆದರೆ, ಗುಪ್ತವಾಗಿ ಬರುತ್ತಿದ್ದ ಮಾಸ್ತರರ ಸ್ನೇಹಿತರನ್ನು ಕರೆತರುವುದಕ್ಕೋ ಬಿಟ್ಟುಬರುವುದಕ್ಕೋ ರಾತ್ರೆ ಹೊತ್ತು ಹೊರಬಿದ್ದಾಗ, ಅಪ್ಪು ಚಪ್ಪಲಿ ಉಪಯೋಗಿಸುತ್ತಿರಲಿಲ್ಲ, ಸದ್ದಾಗಬಾರದೆಂದು. {{gap}}ಪದೇ ಪದೇ ಅಪ್ಪು ಮಾಸ್ತರನ್ನು ಕೇಳುತ್ತಿದ್ದ: {{gap}}"ಯಾವಾಗ ಸರ್‌ ಸಂಘ ಕಟ್ಟೋದು? ಯಾಕೆ ಸರ್‌ ತಡ?" {{gap}}ಅವರು ಬಾರಿಬಾರಿಗೂ ಸಮಾಧಾನ ಹೇಳುತ್ತಿದ್ದರು: {{gap}}“ಇನ್ನೂ ಸ್ವಲ್ಪ ತಡಿಯಪ್ಪ. ಕಬ್ಬಿಣ ಕಾದಾಗ ಅಲ್ವ ಹೊಡೀಬೇಕು?" {{gap}}ಒಂದು ದಿನ ಅಪ್ಪು, ಮಾಸ್ತರು ಒಪ್ಪಿಸಿದ ಕೆಲಸದ ಮೇಲೆ ಆ ತಾಲೂಕಿನ ಕೇಂದ್ರವಾದ ಹೊಸದುರ್ಗಕ್ಕೆ ಹೋಗಿ ಬಂದ. ಅಲ್ಲಿ ಒಂದು ಮನೆಯಲ್ಲಿ ಗುಪ್ತವಾಗಿದ್ದ ಪಂಡಿತರು ಆತನಿಗೆ ಕಾಣಲು ಸಿಕ್ಕಿದರು. ಅಪ್ಪು ಅಷ್ಟು ದೂರ ಪ್ರವಾಸ ಮಾಡಿದುದು ಅದೇ ಮೊದಲು. ಒಪ್ಪೊತ್ತಿನ ದಾರಿಯಾದರೂ, ಅದು. ನೂರಾರು ಮೈಲಿಯ ಹಾದಿ ಎನ್ನುನಂತೆ ಅಪ್ಪುವಿಗೆ ಭಾಸವಾಗಿತ್ತು. {{gap}}ಅಲ್ಲಿ ಆತನನ್ನು ಕಂಡ ಧಾಂಡಿಗ ಹೇಳಿದ: {{gap}}"ಭೂಮಿ ಗೋಳವಾಗಿದೆ ಅನ್ನೋದಕ್ಕೆ ಇನ್ನೊಂದು ಸಾಕ್ಷ್ಯ ಇವತ್ತು ನನಗೆ ಸಿಕ್ತು. {{gap}}ನಗೆ ಮಾತಿಗೆ ಇದು ಪೀಠಿಕೆ ಎಂದು ತಿಳಿದರೂ ಅದೇನೆಂದು ಅರ್ಥವಾಗದೆ ಅಪ್ಪು ಕೇಳಿದ: {{gap}}"ಯಾವುದು ಹೇಳಿ?...." {{gap}}"ಬೇರೆ ಬೇರೆ ಹಾದಿಯಿಂದ ಹೊರಟರೂ ನಾವು ಆಗಾಗ್ಗೆ ಒಬ್ಬರನ್ನೊಬ್ಬರು ಸಂಧಿಸ್ತಾನೇ ಇದ್ದೇವೆ!" {{gap}}ಅಪ್ಪು ನಕ್ಕ. ಆಮೇಲೆ ಒಂದು ಮಾತು ಸೇರಿಸಿದ: {{gap}}"ಇಷ್ಟು ದೂರ ಬಂದಿದ್ದೇನೆ. ಇನ್ನು ಕಯ್ಯೂರಿನವರನ್ನು ಕಪ್ಪೆಗಳೂಂತ ಹೇಳ್ಬೇಡಿ!" {{gap}}ಹುಬ್ಬುಗಳನ್ನು ಹಣೆಯ ನಡುವೆಗೊಯ್ದು ಸರ್ಕಸಿನ ವಿದೂಷಕನಂತೆ ಕಣ್ಣು ಹೊರಳಿಸುತ್ತ ಧಾಂಡಿಗ "ಅಪ್ಪಣೆ" ಎಂದ. {{gap}}....ಕಯ್ಯೂರಿಗೆ ಹಿಂತಿರುಗಿ ಮಾಸ್ತರಿಗೆ ಪ್ರವಾಸದ ವರದಿಯನ್ನೊಪ್ಪಿಸುತ್ತ ಅಪ್ಪು ಹೇಳಿದ. {{gap}}"ಹೊಸದುರ್ಗದಲ್ಲಿ ಬಹಳ ಜನ ಕನ್ನಡ ಮಾತಾಡ್ತಾರೆ.”{{nop}}<noinclude></noinclude> ngk3ekb012kdpfvvzhv57q4sde7qv9g ಪುಟ:Chirasmarane-Niranjana.pdf/೧೩೪ 104 12953 324098 151719 2026-06-02T17:52:39Z Vikashegde 1258 /* Proofread */ 324098 proofread-page text/x-wiki <noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=|right=೧೩೫}}</noinclude>ಮಾಸ್ತರು ಆತನಿಗೆ ಮತ್ತೊಮ್ಮೆ ಭೂಗೋಳ ಪಾಠದ ನೆನಪು ಮಾಡಿ ಕೊಟ್ಟರು: {{gap}}"ಹೌದು, ಇನ್ನೂ ಉತ್ತರಕ್ಕೆ ಹೋದ ಹಾಗೆ ಕನ್ನಡವೇ ಜಾಸ್ತಿ. ಅದೆಲ್ಲ ಕರ್ನಾಟಕ. ದಕ್ಷಿಣಕ್ಕೆ ಹೋದರೆ ಅದೆಲ್ಲ ಕೇರಳ. ನಮ್ಮ ಪ್ರದೇಶ ನಿಜವಾಗಿ ಮಲಬಾರಿಗೆ ಸೇರಬೇಕು. ಆದರೆ ಇಂಗ್ಲೀಷಿನವರು ಬೇಕುಬೇಕೆಂದೇ ಕರ್ನಾಟಕಕ್ಕೆ ಸೇರಿಸಿದ್ದಾರೆ, ಯಾಕೆ ಹೇಳು?" {{gap}}ಕನ್ನಡಿಗರೂ ಮಲೆಯಾಳಿಗಳೂ ಪರಸ್ಪರ ಜಗಳ ಆಡ್ತಾ ಇರ್ಲೀಂತ. {{gap}}"ಸರಿ ಹೇಳ್ದಿ." {{gap}}....ಚಿರುಕಂಡ ಎಷ್ಟೋ ವೇಳೆ ಬೇರೆಯ ರೀತಿಯ ಕೆಲಸದಲ್ಲಿ ನಿರತನಾಗುತ್ತಿದ್ದ. ಯಾರ ಮನೆಯಲ್ಲಾದರೂ ಬಜ್ಚಿಟ್ಟುಕೊಂಡು, ಮಾಸ್ತರು ಒದಗಿಸುತ್ತಿದ್ದ ಲೇಖನಗಳನ್ನು ಪ್ರತಿಮಾಡುತ್ತಿದ್ದ. ಬೇರೆ ಹಳ್ಳಿಗೋ ಊರಿಗೋ ಸಂಬಂಧಿಸಿದ ಕರಪತ್ರಗಳನ್ನು ಬರೆದು ಪ್ರತಿ ತೆಗೆದು ಸಿದ್ಧಗೊಳಿಸುತ್ತಿದ್ದ. ಹಾಗೆ ಬರೆದು ಬರೆದು ಕೈ ಸೋಲುತ್ತಿತ್ತು, ಆಯಾಸವಾಗುತ್ತಿತ್ತು. ಆಗ ತೋಳನ್ನೇ ದಿಂಬಾಗಿ ಮಾಡಿ ಸ್ವಲ್ಪ ಹೊತ್ತು ನಿದ್ದೆಹೋಗುತ್ತಿದ್ದ. ಹಾಗೆ ಐದೇ ನಿಮಿಷ ಕಳೆದರೂ ಎಷ್ಟು ಹೊತ್ತಾಯಿತೋ ಏನೋ ಎಂದ ಗಡಬಡಿಸಿ ಏಳುತ್ತಿದ್ದ. ಎದ್ದ ಮೇಲೆ ಮತ್ತೆ ಬರವಣಿಗೆ ಮುಂದುವರಿಯುತ್ತಿತ್ತು. {{gap}}ತ್ರಿಕರಪುರದ ಚಂದುವಾಗಲೇ, ಅಪ್ಪ ಚಿರುಕಂಡರ ಪಾಲಿಗೆ 'ನಮ್ಮವ'ನಾಗಿದ್ದ. ಚಂದುವಿನ ಬೀಡಿಯಂಗಡಿ, ಚಳುವಳಿಯ ಒಂದು ಕೊಂಡಿಯಾಯಿತು. ಆ ಸಂಬಂಧಿಗೆ ಅಪ್ಪು ಹೇಳಿದ್ದ: {{gap}}"ನಮ್ಮದಿನ್ನು ಇಮ್ಮಡಿ ಬಾಂಧವ್ಮ ಚಂದು. ಒಂದು ಮನೆತನದ ಸಂಬಂಧ; ಇನ್ನೊಂದು ಅದಕ್ಕಿಂತಲೂ ಗಾಢವಾದ ರಕ್ತ ಸಂಬಂಧ." {{gap}}ಕರಪತ್ರಗಳ ಕಟ್ಟನ್ನು ಅಲ್ಲಿಗೆ ಒಯ್ದು ಮುಟ್ಟಿಸಿದಾಗಲೆಲ್ಲ, ಹೇಳಬಾರದೆಂಬ ನಿಯಮವನ್ನು ಸ್ವಲ್ಪ ಮಟ್ಟಿಗೆ ಮುರಿದೇ ಚಂದುವಿಗೆ ಅಪ್ಪು ತಿಳಸುತ್ತಿದ್ದ: {{gap}}"ಇದೆಲ್ಲ ಚಿರುಕಂಡ ಬರೆದದ್ದು ಕಣೋ." {{gap}}ಆದರೆ ಈವೆಗೂ ಚಿರುಕಂಡನನ್ನು ನೋಡದೆ ಇದ್ದ ಚಂದುವಿಗೆ ಅಷ್ಟರಿಂದ ತೃಪ್ತಿಯಾಗುತ್ತಿರಲಿಲ್ಲ. ಒಮ್ಮೆ ಆತನೆಂದ: {{gap}}"ಪ್ರತಿ ಸಾರಿಯೂ ಅದನ್ನೇ ಹೇಳ್ತೀಯ. ಒಂದ್ಸಲ ಕರಕೊಂಡು ಬರಬಾರ್ದೇನು?" {{gap}}ಒಬ್ಬೊಬ್ಬರದು ಒಂದೊಂದು ಜವಾಬ್ದಾರಿ ಎಂಬ ನಿಯಮವನ್ನು ಉದ್ಭೇಗ ತುಂಬಿದ ಮೆಲುದನಿಯಲ್ಲಿ ವಿವರಿಸಿ ಅಪ್ಪು ಹೇಳಿದ:<noinclude></noinclude> aystlap00d1ir0tfc5i8e2xid1pa99t 324106 324098 2026-06-02T18:05:26Z Pragathi. BH 7585 /* Validated */ 324106 proofread-page text/x-wiki <noinclude><pagequality level="4" user="Pragathi. BH" />{{rh|center=ಚಿರಸ್ಮರಣೆ|left=|right=೧೩೫}}</noinclude>ಮಾಸ್ತರು ಆತನಿಗೆ ಮತ್ತೊಮ್ಮೆ ಭೂಗೋಳ ಪಾಠದ ನೆನಪು ಮಾಡಿ ಕೊಟ್ಟರು: {{gap}}"ಹೌದು, ಇನ್ನೂ ಉತ್ತರಕ್ಕೆ ಹೋದ ಹಾಗೆ ಕನ್ನಡವೇ ಜಾಸ್ತಿ. ಅದೆಲ್ಲ ಕರ್ನಾಟಕ. ದಕ್ಷಿಣಕ್ಕೆ ಹೋದರೆ ಅದೆಲ್ಲ ಕೇರಳ. ನಮ್ಮ ಪ್ರದೇಶ ನಿಜವಾಗಿ ಮಲಬಾರಿಗೆ ಸೇರಬೇಕು. ಆದರೆ ಇಂಗ್ಲೀಷಿನವರು ಬೇಕುಬೇಕೆಂದೇ ಕರ್ನಾಟಕಕ್ಕೆ ಸೇರಿಸಿದ್ದಾರೆ, ಯಾಕೆ ಹೇಳು?" {{gap}}ಕನ್ನಡಿಗರೂ ಮಲೆಯಾಳಿಗಳೂ ಪರಸ್ಪರ ಜಗಳ ಆಡ್ತಾ ಇರ್ಲೀಂತ. {{gap}}"ಸರಿ ಹೇಳ್ದಿ." {{gap}}....ಚಿರುಕಂಡ ಎಷ್ಟೋ ವೇಳೆ ಬೇರೆಯ ರೀತಿಯ ಕೆಲಸದಲ್ಲಿ ನಿರತನಾಗುತ್ತಿದ್ದ. ಯಾರ ಮನೆಯಲ್ಲಾದರೂ ಬಜ್ಚಿಟ್ಟುಕೊಂಡು, ಮಾಸ್ತರು ಒದಗಿಸುತ್ತಿದ್ದ ಲೇಖನಗಳನ್ನು ಪ್ರತಿಮಾಡುತ್ತಿದ್ದ. ಬೇರೆ ಹಳ್ಳಿಗೋ ಊರಿಗೋ ಸಂಬಂಧಿಸಿದ ಕರಪತ್ರಗಳನ್ನು ಬರೆದು ಪ್ರತಿ ತೆಗೆದು ಸಿದ್ಧಗೊಳಿಸುತ್ತಿದ್ದ. ಹಾಗೆ ಬರೆದು ಬರೆದು ಕೈ ಸೋಲುತ್ತಿತ್ತು, ಆಯಾಸವಾಗುತ್ತಿತ್ತು. ಆಗ ತೋಳನ್ನೇ ದಿಂಬಾಗಿ ಮಾಡಿ ಸ್ವಲ್ಪ ಹೊತ್ತು ನಿದ್ದೆಹೋಗುತ್ತಿದ್ದ. ಹಾಗೆ ಐದೇ ನಿಮಿಷ ಕಳೆದರೂ ಎಷ್ಟು ಹೊತ್ತಾಯಿತೋ ಏನೋ ಎಂದ ಗಡಬಡಿಸಿ ಏಳುತ್ತಿದ್ದ. ಎದ್ದ ಮೇಲೆ ಮತ್ತೆ ಬರವಣಿಗೆ ಮುಂದುವರಿಯುತ್ತಿತ್ತು. {{gap}}ತ್ರಿಕರಪುರದ ಚಂದುವಾಗಲೇ, ಅಪ್ಪ ಚಿರುಕಂಡರ ಪಾಲಿಗೆ 'ನಮ್ಮವ'ನಾಗಿದ್ದ. ಚಂದುವಿನ ಬೀಡಿಯಂಗಡಿ, ಚಳುವಳಿಯ ಒಂದು ಕೊಂಡಿಯಾಯಿತು. ಆ ಸಂಬಂಧಿಗೆ ಅಪ್ಪು ಹೇಳಿದ್ದ: {{gap}}"ನಮ್ಮದಿನ್ನು ಇಮ್ಮಡಿ ಬಾಂಧವ್ಮ ಚಂದು. ಒಂದು ಮನೆತನದ ಸಂಬಂಧ; ಇನ್ನೊಂದು ಅದಕ್ಕಿಂತಲೂ ಗಾಢವಾದ ರಕ್ತ ಸಂಬಂಧ." {{gap}}ಕರಪತ್ರಗಳ ಕಟ್ಟನ್ನು ಅಲ್ಲಿಗೆ ಒಯ್ದು ಮುಟ್ಟಿಸಿದಾಗಲೆಲ್ಲ, ಹೇಳಬಾರದೆಂಬ ನಿಯಮವನ್ನು ಸ್ವಲ್ಪ ಮಟ್ಟಿಗೆ ಮುರಿದೇ ಚಂದುವಿಗೆ ಅಪ್ಪು ತಿಳಸುತ್ತಿದ್ದ: {{gap}}"ಇದೆಲ್ಲ ಚಿರುಕಂಡ ಬರೆದದ್ದು ಕಣೋ." {{gap}}ಆದರೆ ಈವೆಗೂ ಚಿರುಕಂಡನನ್ನು ನೋಡದೆ ಇದ್ದ ಚಂದುವಿಗೆ ಅಷ್ಟರಿಂದ ತೃಪ್ತಿಯಾಗುತ್ತಿರಲಿಲ್ಲ. ಒಮ್ಮೆ ಆತನೆಂದ: {{gap}}"ಪ್ರತಿ ಸಾರಿಯೂ ಅದನ್ನೇ ಹೇಳ್ತೀಯ. ಒಂದ್ಸಲ ಕರಕೊಂಡು ಬರಬಾರ್ದೇನು?" {{gap}}ಒಬ್ಬೊಬ್ಬರದು ಒಂದೊಂದು ಜವಾಬ್ದಾರಿ ಎಂಬ ನಿಯಮವನ್ನು ಉದ್ಭೇಗ ತುಂಬಿದ ಮೆಲುದನಿಯಲ್ಲಿ ವಿವರಿಸಿ ಅಪ್ಪು ಹೇಳಿದ:<noinclude></noinclude> o9ikik6gh1ywgsts3dwbhzlkwffya35 ಪುಟ:Chirasmarane-Niranjana.pdf/೧೩೫ 104 12954 324109 151720 2026-06-02T18:07:12Z Vikashegde 1258 /* Proofread */ 324109 proofread-page text/x-wiki <noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=೧೩೬ |right=}}</noinclude>{{gap}}"ತಾಳು. ಈ ಪ್ರದೇಶದ ನಮ್ಮವರೆಲ್ಲ ಗುಪ್ತವಾಗಿ ಒಂದೆಡೆ ಸೇರುವ ಪ್ರಮೇಯ ಬರ್ತದೆ. ಆಗ ನೋಡುವೆಯಂತೆ." {{gap}}"ಅದು ಯಾವತ್ತೊ?" {{gap}}"ಯಾವತ್ತೂಂತ ಈಗ್ಲೆ ಹ್ಯಾಗೆ ಹೇಳೋಣ? ಕಬ್ಬಿಣ ಕಾದಾಗ ಅಲ್ವ ಹೊಡೆಯೋದು?" {{gap}}ಮಾಸ್ತರು ತನಗೆ ಹೇಳಿದ್ದನ್ನೇ ಅಪ್ಪು ಚಂದುವಿಗೆ ಹೇಳಿದ್ದ. ಅದು ಪರಿಣಾಮ ಬೀರಿತು. {{gap}}"ಬೇರೆ ಮುಖಂಡರನ್ನೂ ಆಗ ನನಗೆ ತೋರಿಸ್ತೀಯಾ?" {{gap}}"ಹೂಂ." {{gap}}ತನಗೆ ಪರಿಚಯವಿದ್ದ ದೊಡ್ಡ ಮುಖಂಡ ಒಬ್ಬರೇ. ಅವರ ವಿಷಯ, ತಾನು ಕಂಡಿದ್ದ ಅವರ ಸಂಗಡಿಗರು ಕೆಲವರ ವಿಷಯ, ಆಗಲೆ ಅಲ್ಲಿಯೆ ಚಂದುವಿಗೆ ಎಲ್ಲವನ್ನೂ ಹೇಳಬೇಕೆಂಬ ಬಯಕೆ ಅಪ್ಪುವಿನ ಹೃದಯದಲ್ಲಿ ಒತ್ತರಿಸಿ ಬಂತು. ಆದರೂ ರಹಸ್ಮ ಚಟುವಟಿಕೆಯ ಉಗ್ರನಿಯಮಾವಳಿಯ ನೆನಪಾಗಿ, ಆತ ಸುಮ್ಮನಾದ. {{gap}}ಚಂದು ಒಂದೆರಡು ಪುಸ್ತಕ ಓದಿ ಶಾಲೆ ಬಿಟ್ಟವನು. ಅಲ್ಲಿ ಸಂಪಾದಿಸಿದ ಅಕ್ಷರಜ್ಞಾನವನ್ನು ಉಳಿಸಿಕೊಳ್ಳಬೇಕೆಂಬ ಹಿರಿಯಾಸೆಯೇನೂ ಶಾಲೆ ಬಿಟ್ಟಾಗ ಆತನಿಗಿರಲಿಲ್ಲ. ಕ್ರಮೇಣ, ಪುಸ್ತಕ ಕೈಗೆತ್ತಿಕೊಳ್ಳುವ ಅಭ್ಯಾಸವೂ ತಪ್ಪಿಹೋಗಿ, ತಡೆಯಿಲ್ಲದೆ ಏನನ್ನೂ ಓದಲಾಗುತ್ತಿರಲಿಲ್ಲ. 'ನನ್ನ ವಿದ್ಯೆ ಏನಿದ್ದರೂ ಸಹಿ ಹಾಕೋದಕ್ಕೆ ಮಾತ್ರ'--ಎಂದು ಆತ ಸುಮ್ಮನಾಗಿದ್ದ. ಆದರೆ ಅಪ್ಪುವಿನ ಒಡನಾಟದಿಂದ, ರೈತ ಚಳವಳಿಯ ಸಂಬಂಧದಿಂದ ಆತನ ಜ್ಞಾನದಾಹ ಮತ್ತೆ ಕಾಣಿಸಿಕೊಂಡಿತು. ಆತ ಪತ್ರಿಕೆಯೋದಿದ; ಕರಪತ್ರಗಳನ್ನೋದಿದ. ಹೀಗೆ ಅಂಗಡಿಯಲ್ಲಿ ಕುಳಿತಾಗ ಅಲ್ಲಿಗೆ ಬಂದವರೊಡನೆ ಹರಟೆ ಹೊಡೆಯಲು ಆತನಿಗೆ ಬೇರೆ ವಿಷಯಗಳು ದೊರೆತುವು. {{gap}}ವಿದ್ಯಾರ್ಜನೆಯ ಹುಚ್ಚು ಆ ಅವಧಿಯಲ್ಲಿ ಹೆಚ್ಚಾಯಿತು. ಮಾಸ್ತರ ಸೂಚನೆಯಂತೆ, ನಾಲ್ಕಾರು ಹೆಂಗಸರಿಗೆ ಚಿರುಕಂಡ ಅಕ್ಷರಾಭ್ಯಾಸ ಮಾಡಿಸಿದ. ಬಳಿಕ ಆ ಹೆಂಗಸರೇ ವಿದ್ಯೆಯ ಸೊಡರನ್ನೆತ್ತಿಕೊಂಡು ಕತ್ತಲಿದ್ದಲ್ಲಿ ಬೆಳಕು ಅಂಟಿಸಲು ಹೊರಟರು. {{gap}}ಈ ದಿನಗಳಲ್ಲಿ ನೆಮ್ಮದಿ ಕೆಡಿಸಿಕೊಂಡು ಸಿಡುಕನಾದ ವ್ಯಕ್ತಿ ನಂಬಿಯಾರರು. ಮೊದಲು ಭಾವಿಸಿದ್ದಂತೆ ಈ ಮಾಸ್ತರು ಪ್ರಾಮಾಣಿಕನೆಂದು ಒಪ್ಪಿಕೊಳ್ಳಲು ಈಗ<noinclude></noinclude> 0gv9actx8yv1t21jijgo7mkvmgtfg32 324211 324109 2026-06-03T07:27:40Z Shreelatha.Halemane 7642 /* Validated */ 324211 proofread-page text/x-wiki <noinclude><pagequality level="4" user="Shreelatha.Halemane" />{{rh|center=ಚಿರಸ್ಮರಣೆ|left=೧೩೬ |right=}}</noinclude>{{gap}}"ತಾಳು. ಈ ಪ್ರದೇಶದ ನಮ್ಮವರೆಲ್ಲ ಗುಪ್ತವಾಗಿ ಒಂದೆಡೆ ಸೇರುವ ಪ್ರಮೇಯ ಬರ್ತದೆ. ಆಗ ನೋಡುವೆಯಂತೆ." {{gap}}"ಅದು ಯಾವತ್ತೊ?" {{gap}}"ಯಾವತ್ತೂಂತ ಈಗ್ಲೆ ಹ್ಯಾಗೆ ಹೇಳೋಣ? ಕಬ್ಬಿಣ ಕಾದಾಗ ಅಲ್ವ ಹೊಡೆಯೋದು?" {{gap}}ಮಾಸ್ತರು ತನಗೆ ಹೇಳಿದ್ದನ್ನೇ ಅಪ್ಪು ಚಂದುವಿಗೆ ಹೇಳಿದ್ದ. ಅದು ಪರಿಣಾಮ ಬೀರಿತು. {{gap}}"ಬೇರೆ ಮುಖಂಡರನ್ನೂ ಆಗ ನನಗೆ ತೋರಿಸ್ತೀಯಾ?" {{gap}}"ಹೂಂ." {{gap}}ತನಗೆ ಪರಿಚಯವಿದ್ದ ದೊಡ್ಡ ಮುಖಂಡ ಒಬ್ಬರೇ. ಅವರ ವಿಷಯ, ತಾನು ಕಂಡಿದ್ದ ಅವರ ಸಂಗಡಿಗರು ಕೆಲವರ ವಿಷಯ, ಆಗಲೆ ಅಲ್ಲಿಯೆ ಚಂದುವಿಗೆ ಎಲ್ಲವನ್ನೂ ಹೇಳಬೇಕೆಂಬ ಬಯಕೆ ಅಪ್ಪುವಿನ ಹೃದಯದಲ್ಲಿ ಒತ್ತರಿಸಿ ಬಂತು. ಆದರೂ ರಹಸ್ಮ ಚಟುವಟಿಕೆಯ ಉಗ್ರನಿಯಮಾವಳಿಯ ನೆನಪಾಗಿ, ಆತ ಸುಮ್ಮನಾದ. {{gap}}ಚಂದು ಒಂದೆರಡು ಪುಸ್ತಕ ಓದಿ ಶಾಲೆ ಬಿಟ್ಟವನು. ಅಲ್ಲಿ ಸಂಪಾದಿಸಿದ ಅಕ್ಷರಜ್ಞಾನವನ್ನು ಉಳಿಸಿಕೊಳ್ಳಬೇಕೆಂಬ ಹಿರಿಯಾಸೆಯೇನೂ ಶಾಲೆ ಬಿಟ್ಟಾಗ ಆತನಿಗಿರಲಿಲ್ಲ. ಕ್ರಮೇಣ, ಪುಸ್ತಕ ಕೈಗೆತ್ತಿಕೊಳ್ಳುವ ಅಭ್ಯಾಸವೂ ತಪ್ಪಿಹೋಗಿ, ತಡೆಯಿಲ್ಲದೆ ಏನನ್ನೂ ಓದಲಾಗುತ್ತಿರಲಿಲ್ಲ. 'ನನ್ನ ವಿದ್ಯೆ ಏನಿದ್ದರೂ ಸಹಿ ಹಾಕೋದಕ್ಕೆ ಮಾತ್ರ'--ಎಂದು ಆತ ಸುಮ್ಮನಾಗಿದ್ದ. ಆದರೆ ಅಪ್ಪುವಿನ ಒಡನಾಟದಿಂದ, ರೈತ ಚಳವಳಿಯ ಸಂಬಂಧದಿಂದ ಆತನ ಜ್ಞಾನದಾಹ ಮತ್ತೆ ಕಾಣಿಸಿಕೊಂಡಿತು. ಆತ ಪತ್ರಿಕೆಯೋದಿದ; ಕರಪತ್ರಗಳನ್ನೋದಿದ. ಹೀಗೆ ಅಂಗಡಿಯಲ್ಲಿ ಕುಳಿತಾಗ ಅಲ್ಲಿಗೆ ಬಂದವರೊಡನೆ ಹರಟೆ ಹೊಡೆಯಲು ಆತನಿಗೆ ಬೇರೆ ವಿಷಯಗಳು ದೊರೆತುವು. {{gap}}ವಿದ್ಯಾರ್ಜನೆಯ ಹುಚ್ಚು ಆ ಅವಧಿಯಲ್ಲಿ ಹೆಚ್ಚಾಯಿತು. ಮಾಸ್ತರ ಸೂಚನೆಯಂತೆ, ನಾಲ್ಕಾರು ಹೆಂಗಸರಿಗೆ ಚಿರುಕಂಡ ಅಕ್ಷರಾಭ್ಯಾಸ ಮಾಡಿಸಿದ. ಬಳಿಕ ಆ ಹೆಂಗಸರೇ ವಿದ್ಯೆಯ ಸೊಡರನ್ನೆತ್ತಿಕೊಂಡು ಕತ್ತಲಿದ್ದಲ್ಲಿ ಬೆಳಕು ಅಂಟಿಸಲು ಹೊರಟರು. {{gap}}ಈ ದಿನಗಳಲ್ಲಿ ನೆಮ್ಮದಿ ಕೆಡಿಸಿಕೊಂಡು ಸಿಡುಕನಾದ ವ್ಯಕ್ತಿ ನಂಬಿಯಾರರು. ಮೊದಲು ಭಾವಿಸಿದ್ದಂತೆ ಈ ಮಾಸ್ತರು ಪ್ರಾಮಾಣಿಕನೆಂದು ಒಪ್ಪಿಕೊಳ್ಳಲು ಈಗ<noinclude></noinclude> lcv9bg2cm72owh2c517ojfbx0apqs05 ಪುಟ:Chirasmarane-Niranjana.pdf/೧೪೦ 104 12959 324093 320443 2026-06-02T17:16:08Z Vikashegde 1258 /* Validated */ 324093 proofread-page text/x-wiki <noinclude><pagequality level="4" user="Vikashegde" />{{rh|center=|left=ಚಿರಸ್ಮರಣೆ|right=೧೪೧}}</noinclude>ಸ೦ಭ್ರಮ. ಸಹಬಾ೦ಧವನಿಗೆ ನೆರವಾಗಲು ರೈತರ ತ೦ಡವೆ ಬ೦ದಿತ್ತು. ತಮ್ಮ ಕುಯಿಲು ಮುಗಿದಿದ್ದ ಅಕ್ಕಪಕ್ಕದವರೂ ಹೊಲಕ್ಕಿಳಿದರು. ಮೇಲೇರುತ್ತಿದ್ದ ಸೂರ್ಯನೊಡನೆ ಸ್ಪರ್ಧಿಸುತ್ತ ಕುಡುಗೋಲು ಹಿಡಿದ ಕೈಗಳು ಫಲಭಾರದಿ೦ದ ಬಾಗಿದ್ದ ಭತ್ತದ ಸಸಿಗಳನ್ನು ಕರಕರನೆ ಕುಯ್ದವು. ರೈತಹೆಂಗಳೆಯರು ಪಾಡ್ಡನಗಳನ್ನು ಹಾಡಿದರು. ಕಣ್ಣ ಹೊಸ ಹಾಡಿನಿ೦ದ ದುಡಿಯುವವರ ಉಲ್ಲಾಸ ಹೆಚ್ಚುವ೦ತೆ, ಕೈಗಳ ಬಿರುಸು ಇಮ್ಮಡಿಯಾಗುವ೦ತೆ ಮಾಡಿದ. ಮಧ್ಯಾಹ್ನದ ವಿರಾಮದ ವೇಳೆಗೆ ಉಳಿದುದು ಸ್ವಲ್ಪವೇ. ಮೂರು ಗ೦ಟೆಯ ಹೊತ್ತಿಗೆಲ್ಲ ಕುಯ್ಲು ಮುಗಿದೇ ಹೋಯಿತು. ಕೃಷ್ಣನ್ ನಾಯರ ಮುಖ ಅರಳಿ, ಮೊರದಷ್ಟು ಅಗಲವಾಯಿತು. {{gap}}ಇನ್ನೇನು, ಕುಯ್ದುದನ್ನು ರಾಶಿ ಹಾಕಿ ಕೃಷ್ಣನ್ ನಾಯರ ಗುಡಿಸಲಿಗೆ ಒಯ್ದು ಮುಟ್ಟಿಸುವುದೊ೦ದೇ ಕೆಲಸ. ಅದಕ್ಕೆ ಪೂರ್ವಭಾವಿಯಾಗಿ ನಾಲ್ಕು ನಿಮಿಷ ದಣಿವಾರಿಸಿಕೊಳ್ಳಲೆ೦ದು ರೈತರೆಲ್ಲ ಕುಳಿತರು. ಅಷ್ಟರಲ್ಲಿ, ಪುಷ್ಟವಾದ ಎತ್ತುಗಳನ್ನು ಹೂಡಿದ್ದ ಗಾಡಿ ಅತ್ತ ಬರತೊಡಗಿತ್ತು. {{gap}}"ಗಾಡಿಗೆ ಹೇಳಿದ್ದೆ ಏನಪ್ಪ ಕೃಷ್ಣನ್ ನಾಯರ್? ಬರ್ತಾ ಇದೆಯಲ್ಲ ಯಾವುದೋ ರಥ!"ಎ೦ದು ಯಾರೋ ಅ೦ದರು. {{gap}}ಇದೇನು ತಮಾಷೆಯೋ ವಾಸ್ತವವೋ ಎ೦ದು ತಿಳಿಯಲು ಎಲ್ಲರೂ ಅತ್ತ ಕತ್ತು ತಿರುಗಿಸಿ ನೋಡಿದರು. {{gap}}ಕೃಷ್ಣನ್ ನಾಯರೇ ಮೊದಲು ಹೋರಿಗಳನ್ನು ಗುರುತಿಸಿ, "ಅದು ಜಮೀನ್ದಾರರ ಗಾಡಿ" ಎ೦ದ. ಹಾಗೆ ಹೇಳುತ್ತಲಿದ್ದ೦ತೆ ಆತನ ಮುಖ ಕಪ್ಪಿಟ್ಟಿತು. {{gap}}"ತನ್ನ ಸಹಾಯವೂ ಒ೦ದಿಷ್ಟು ಇರಲೀ೦ತ ನ೦ಬಿಯಾರರೇ ಕಳಿಸಿದ್ದಾರೋ?" ಎ೦ದು ಹೇಳಿ ಯಾರೋ ನಕ್ಕರು . {{gap}}ಆದರೆ ಆ ವಾತಾವರಣ ಬದಲಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಕೃಷ್ಣನ್ ನಾಯರ್ ಊಹಿಸಿದ್ದ೦ತೆಯೇ ಆಯಿತು. ಆತನ ಪೈರನ್ನು ವಶಪಡಿಸಿಕೊ೦ಡು ಜಮೀನ್ದಾರರ ಮನೆಗೊಯ್ಯುವುದಕ್ಕೇ ಆ ಗಾಡಿ ಬ೦ದಿತ್ತು. ಗಾಡಿಯ ಜತೆಯಲ್ಲಿ ಜಮೀನ್ದಾರರ ಕಡೆಯ ಕ್ರೂರಿಗಳೆ೦ದು ಕುಪ್ರಸಿದ್ಧರಾಗಿದ್ದ ಇಬ್ಬರು ಆಳುಗಳೂ ಇದ್ದರು. ಇಷ್ಟೆ೦ದು ಜನರನ್ನು ನೋಡಿ ಆಳುಗಳು ಸ್ವಲ್ಪ ಹಿ೦ತೆಗೆದರೂ ಅವರಲ್ಲೊಬ್ಬ ಕೃಷ್ಣನ್ ನಾಯರನ್ನು ಉದ್ದೇಶಿಸಿ ಹೇಳಿದ: {{gap}}"ಪೈರನ್ನು ಸಾಗಿಸ್ಕೊ೦ಡು ಬರೋದಕ್ಕೆ ಜಮೀನ್ದಾರರು ಹೇಳಿದ್ದಾರೆ." {{gap}}ಅದನ್ನು ಕೇಳಿ, ಮೊದಲು ನಿ೦ದೆಯ ಮಾತುಗಳನ್ನಾಡುತ್ತ ಆಕ್ರೋಶ ಮಾಡಿದವಳು ಕೃಷ್ಣನ್ ನಾಯರ ಹೆ೦ಡತಿ. ಅಷ್ಟೊ೦ದು ಜನರ ಸಾಮೀಪ್ಯದಲ್ಲಿ<noinclude></noinclude> 9aidg6h1z29jshkmhl29v3d1lsu1ruc ಪುಟ:Chirasmarane-Niranjana.pdf/೧೪೩ 104 12962 324094 320447 2026-06-02T17:19:44Z Vikashegde 1258 /* Validated */ 324094 proofread-page text/x-wiki <noinclude><pagequality level="4" user="Vikashegde" />{{rh|center=|left=೧೪೪|right= ಚಿರಸ್ಮರಣೆ}}</noinclude> {{gap}}"ಇವತು ನೀವು ಇಷ್ಟೆಲ್ಲ ಮಾಡಿದ್ದು ನನಗೋಸ್ಕರ, ನಾನು ನಿಮ್ಜತೇಲಿ ಬರಬೇಕೂಂತ. ಈಗಿನ ಸ್ಥಿತೀಲಿ ನಾನಂತೂ ಬರೋಹಾಗಿಲ್ಲ. ದಯವಿಟ್ಟ ನೀವೆಲ್ಲ ಸಮ್ಮೇಳನಕ್ಕೆ ಹೋಗ್ಬನ್ನಿ." {{gap}}ಆ ಮಾತಿಗೆ ಯಾರೂ ಏನನ್ನೂ ಪ್ರತಿ ಹೇಳಲಿಲ್ಲ, ಎಲ್ಲರೂ ಪರಸ್ಪರರ ಮುಖ ನೋಡಿದರು. ಕೊನೆಗೆ ಕೋರನೆಂದ: {{gap}}"ನಾನು ಬಂದು ಆಗ್ಬೇಕಾದ್ದೇನು? ನನಗೆ ಅರ್ಥಾವಾಗೋದು ಅಷ್ಟರಲ್ಲೇ ಇದೆ. ನಾನು ಇಲ್ಲೇ ಇರ್ತೇನೆ.' {{gap}}ಆ ಮಾತನ್ನು ವಿಮರ್ಶಿಸುತ್ತ ಚಿರುಕಂಡ ನುಡಿದ: {{gap}}"ಅರ್ಥವಾಗೋದಿಲ್ಲ ಅನ್ನೋದೆಲ್ಲ ಬಿಟ್ಬಿಡಿ ಕೋರಣ್ಣ. ಹಾಗಲ್ಲ, ಯಾರಾದರೂ ಒಬ್ಬಿಬ್ಬರು ಇಲ್ಲೇ ಇರಬೇಕಾದದ್ದು ಧರ್ಮ. ನೀವು ಇರೋ ಹಾಗಿದ್ದರೆ ಸಂತೋಷವೇ. ಅಂತೂ ಹೋಗುವ ಕಾರ್ಯಕ್ರಮ ರದ್ದಾಗಬಾರ್ದು." {{gap}}"ಹೇಗೆ ಹೇಳಿದರೂ ಒಂದೇ ನಿನ್ನ ಮಾತೇ ಇರಲಿ, ನಾನು ಬುದ್ಧಿವಂತ ಅಂತಲೇ ಒಪ್ಪ್ಕೊಳ್ಳೋಣ" ಎಂದ ಕೋರ ನಗುತ್ತ. {{gap}}ಪ್ರಯಾಣದ ಸಿದ್ದತೆಗಾಗಿ ಅವರೆಲ್ಲ ತಮ್ಮ ಗುಡಿಸಲುಗಳತ್ತ ಹೊರಟಾಗ ಕೋರ ಇಳಿಧ್ವನಿಯಲ್ಲಿ ಅಪ್ಪುವಿಗೆಂದ: {{gap}}"ಹೋಗ್ತಾ ಮಾಸ್ತರಿಗೆ ಹೇಳ್ಬಿಡು ನಾನು ಇಲ್ಲೇ ಇದೇನೇಂತ." {{gap}}ಕಯ್ಯೂರಿನ ಎಂಟು ಜನ ರೈತರು, ತಳಿಪರಂಬ ಜಾತ್ರೆಗೆ ಹೋಗುತ್ತಿದ್ದೇವೆ ಎಂದು ಹೇಳಿ ಸಮ್ಮೇಳನಕ್ಕೆ ಹೋದರು. ರಾತ್ರಿಯೇ ರೈತರು ಜಾತ್ರೆಗೆ ಹೋದ ವಾರ್ತೆ ನಂಬಿಯಾರರಿಗೆ ಸಿಗದೆ ಇದುದರಿಂದ, ಕೃಷ್ಣನ್ ನಾಯರನ ಪೈರಿನ ವಿಷಯದಲ್ಲಿ ಅವರೇನನ್ನೂ ಮಾಡಲಿಲ್ಲ. ರೇಗಿ ಕಿಡಿ ಕಾರಿದರೂ, ತಮಗಿರುವ ವಿರೋಧ ಎಷ್ಟೆಂಬುದನ್ನು ಮೊದಲು ಅಳೆದು ನೋಡಬೇಕೆಂಬ ವಿವೇಕ ಅವರಿಗಿತ್ತು. ಅದರ ಫಲವಾಗಿ, ಕೋರ ಮತ್ತು ಕೃಷ್ಣನ್ ನಾಯರ್ ನಸುಕಿನಲ್ಲಿ ಒಂದಿಷ್ಟು ಜೊಂಪು ಹತ್ತಿದ ಕಣ್ಣುಗಳನ್ನು ತಿಕ್ಕಿಕೊಂಡು ಎದ್ದಾಗಲೂ, ಅಂಗಳದಲ್ಲಿ ಪೈರಿನ ರಾಶಿ ನಿಶ್ಚಿಂತೆಯಿಂದ ಮಲಗಿಯೇ ಇತ್ತು. {{gap}}ಮಾಸ್ತರು ಸಮ್ಮೇಳನಕ್ಕೆ ಹೋಗಲ್ಲಿಲ. "ಬನ್ನಿ ನಾವಿದ್ದೇವೆ" ಎಂದು ರೈತರು ಕರೆದರೂ ಅವರು ಹೊರಡಲಿಲ್ಲ... ಬೆಳಗ್ಗೆ ಎದು ಅವರು 'ಸಾಹಿತ್ಯ' ಓದುತ್ತಾ ಕುಳಿತಿದ್ದರು. 'ಮಾಸ್ತರೆ' ಎಂಬ ಕೂಗು ಕೇಳಿದಾಗ ಒಮ್ಮೆ ಅವರಿಗೆ ಅಳುಕಿತು. ಒಡನೆಯೇ 'ಸಾಹಿತ್ಯ'ವನ್ನು ಹಾಸಿಗೆಯ ಕೆಳಗೆ ಮುಚ್ಚಿಟ್ಟು, ಕರೆದ ಸ್ವರವನ್ನು ಗುರುತಿಸಿ ಅವರು ಹೊರಕ್ಕೆ ಬಂದರು.{{nop}}<noinclude></noinclude> mczr9clhg5fm91f4pj7og4ej2wminzh ಪುಟ:Chirasmarane-Niranjana.pdf/೧೪೪ 104 12963 324110 64813 2026-06-02T18:12:37Z Vikashegde 1258 /* Proofread */ 324110 proofread-page text/x-wiki <noinclude><pagequality level="3" user="Vikashegde" />{{rh|center=|left=ಚಿರಸ್ಮರಣೆ|right=೧೪೫}}</noinclude>{{gap}}"ಯಾಕೆ ಗಾಬರಿಯಾಯ್ತೆ?" ಎಂದರು ನಂಬಿಯಾರರು; ಸ್ವತಃ ತಮ್ಮ ಹೃದಯದೊಳಗಿನ ಅವ್ಯವಸ್ಥೆಯನ್ನು ಹತೋಟಿಗೆ ತಂದುಕೊಳ್ಳುತ್ತ. {{gap}}"ಇಲ್ಬಲ್ಲ! ಕರೆದದ್ದು ತಾವೂಂತ ತಕ್ಷಣ ತಿಳೀತು." {{gap}}ಮಾಸ್ತರು ಉತ್ತರ ಕೊಟ್ಟರೇ ಹೊರತು ನಂಬಿಯಾರರನ್ನು ತಮ್ಮ ಕೊಠಡಿಗೆ ಕರೆಯಲಿಲ್ಲ. ನಿಂತಲ್ಲಿಂದಲೇ ನಂಬಿಯಾರರೊಮ್ಮೆ ಅತ್ತ ಇಣಿಕಿ ನೋಡಿದರು. "ಎಲ್ಲಿ, ನಿಮ್ಮ ರಾತ್ರಿ ಶಾಲೆ ನಿನ್ನೆ ಇರ್ಲಿಲ್ಬಂತೆ!" {{gap}}"ಹೌದು. ಎಲ್ಲಾ ತಳಿಪರಂಬ ಜಾತ್ರೆಗೆ ಎದ್ದಿಟ್ಟಿದ್ದಾರೆ." {{gap}}"ಹಾಗೇಂತ ಬೆಳಿಗ್ಗೆ ತಿಳೀತು. ಮೊದಲೆಲ್ಲ ನಮ್ಮಲ್ಲಿ ಹೇಳದೆ ಕೇಳದೆ ಯಾರೂ ಎಲ್ಲಿಗೂ ಹೋಗ್ಲಿದ್ಲಿಲ್ಲ; ಹೂಂ... ನಿಮಗಾದರೂ ವಿಷಯ ಗೊತ್ತಿರ್ತದೇನೋಂತ ಬಂದೆ." {{gap}}"ಇಲ್ಲ ಹಾಗೇ ಹೊರಟಿದ್ದಾರೆ ನೋಡಿ." {{gap}}ಶಾಲೆಯ ಛಾವಣಿಯ ಒಂದು ಬೊಂಬನ್ನು ಹಿಡಿದು, ಗಟ್ಟಿಯಾಗಿದೆಯೇ ಎಂದು ಅಲುಗಿಸಿ ನೋಡಿ, ನಂಬಿಯಾರರೆಂದರು: {{gap}}"ಹಾಗೇ ಹೊರಡದೇನು ಮಾಡಿಯಾರು? ನಿನ್ನೆ ಏನಾಯ್ತೂಂತ ನಿಮಗೆ ಗೊತ್ತಿದ್ದೀತು." {{gap}}ವಿಷಯ ತಿಳಿದಿದ್ದರೂ ಮಾಸ್ತರರೆಂದರು: {{gap}}"ಇಲ್ಲ, ಏನಾಯ್ತು?" {{gap}}ಮಾಸ್ತರ ಮಾತನ್ನು ನಂಬಬೇಕೋ ಬೇಡವೋ ಎಂದು ಕ್ಷಣ ಕಾಲ ಅನುಮಾನಿಸಿ ನಂಬಿಯಾರರು, ಹಿಂದಿನ ದಿನದ ಘಟನೆಯನ್ನು ತಮ್ಮ ದೃಷ್ಟಿಯಿಂದ ಸೂಕ್ಷ್ಮವಾಗಿ ವಿವರಿಸಿ ಅಂದರು: {{gap}}"....ಆ ಕೃಷ್ಣನ್‌ ನಾಯರ್‌--ಅವನನ್ನು ಅವತ್ತೇ ಜೈಲಿಗೆ ಕಳಿಸ್ಬೇಕಾಗಿತ್ತು. ಈಗ ನೋಡಿ ಅಹಂಕಾರ! ಕಯ್ಕೂರಿನಲ್ಲಿನ್ನು ಈ ಬಡ್ಡಿ ಮಕ್ಕಳಿಗೆ ಬುದ್ಧಿ ಕಲಿಸೋರೆ ಇಲ್ಲಾಂತಾಯ್ತೆ ಹಾಗಾದರೆ? ಮನಸ್ಸು ಮಾಡಿದರೆ ಅಷ್ಟೂ ಜನರ ಮೇಲೆ ಕೇಸು ಹಾಕಿಸಿ ಅವರನ್ನೆಲ್ಲ ಅರೆಸ್ಟ್‌ ಮಾಡಿಸ್ಪಹುದು. ಇಷ್ಟಾದರೂ ಅರ್ಥವಾಗದೇನು ಅವರಿಗೆ?” {{gap}}ರಾತ್ರೆ ಮತ್ತೇನಾಯಿತೆಂಬುದು ಮಾಸ್ತರಿಗೆ ಗೊತ್ತಿರಲಿಲ್ಲ. ಅಲ್ಲೇನಾದರೂ ಅನಾಹುತವಾಯಿತೆ ಎಂದು ತಿಳಿಯುವ ಆತುರ ಅವರಿಗಿತ್ತು. ಸುದ್ದಿ ಮುಟ್ಟಿಸುವವರಿಲ್ಲದೆ ಅವರು ವಿವಂಚೆನೆಗೆ ಒಳಗಾಗಿದ್ದರು. ನಂಬಿಯಾರರ ಬಾಯಿಂದಲೇ ಏನಾದರೂ ತಿಳಿಯೋಣವೆಂದು ಮೆಲ್ಲನೆ ಅವರೆಂದರು:<noinclude></noinclude> 5eiu15ww90pcbtve7jctozd1i6pwotc 324203 324110 2026-06-03T07:17:53Z Shreelatha.Halemane 7642 /* Validated */ 324203 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=ಚಿರಸ್ಮರಣೆ|right=೧೪೫}}</noinclude>{{gap}}"ಯಾಕೆ ಗಾಬರಿಯಾಯ್ತೆ?" ಎಂದರು ನಂಬಿಯಾರರು; ಸ್ವತಃ ತಮ್ಮ ಹೃದಯದೊಳಗಿನ ಅವ್ಯವಸ್ಥೆಯನ್ನು ಹತೋಟಿಗೆ ತಂದುಕೊಳ್ಳುತ್ತ. {{gap}}"ಇಲ್ವಲ್ಲ! ಕರೆದದ್ದು ತಾವೂಂತ ತಕ್ಷಣ ತಿಳೀತು." {{gap}}ಮಾಸ್ತರು ಉತ್ತರ ಕೊಟ್ಟರೇ ಹೊರತು ನಂಬಿಯಾರರನ್ನು ತಮ್ಮ ಕೊಠಡಿಗೆ ಕರೆಯಲಿಲ್ಲ. ನಿಂತಲ್ಲಿಂದಲೇ ನಂಬಿಯಾರರೊಮ್ಮೆ ಅತ್ತ ಇಣಿಕಿ ನೋಡಿದರು. {{gap}}"ಎಲ್ಲಿ, ನಿಮ್ಮ ರಾತ್ರಿ ಶಾಲೆ ನಿನ್ನೆ ಇರ್ಲಿಲ್ವಂತೆ!" {{gap}}"ಹೌದು. ಎಲ್ಲಾ ತಳಿಪರಂಬ ಜಾತ್ರೆಗೆ ಎದ್ದಿಟ್ಟಿದ್ದಾರೆ." {{gap}}"ಹಾಗೇಂತ ಬೆಳಿಗ್ಗೆ ತಿಳೀತು. ಮೊದಲೆಲ್ಲ ನಮ್ಮಲ್ಲಿ ಹೇಳದೆ ಕೇಳದೆ ಯಾರೂ ಎಲ್ಲಿಗೂ ಹೋಗ್ತಿರ್ಲಿಲ್ಲ; ಹೂಂ... ನಿಮಗಾದರೂ ವಿಷಯ ಗೊತ್ತಿರ್ತದೇನೋಂತ ಬಂದೆ." {{gap}}"ಇಲ್ಲ ಹಾಗೇ ಹೊರಟಿದ್ದಾರೆ ನೋಡಿ." {{gap}}ಶಾಲೆಯ ಛಾವಣಿಯ ಒಂದು ಬೊಂಬನ್ನು ಹಿಡಿದು, ಗಟ್ಟಿಯಾಗಿದೆಯೇ ಎಂದು ಅಲುಗಿಸಿ ನೋಡಿ, ನಂಬಿಯಾರರೆಂದರು: {{gap}}"ಹಾಗೇ ಹೊರಡದೇನು ಮಾಡಿಯಾರು? ನಿನ್ನೆ ಏನಾಯ್ತೂಂತ ನಿಮಗೆ ಗೊತ್ತಿದ್ದೀತು." {{gap}}ವಿಷಯ ತಿಳಿದಿದ್ದರೂ ಮಾಸ್ತರರೆಂದರು: {{gap}}"ಇಲ್ಲ, ಏನಾಯ್ತು?" {{gap}}ಮಾಸ್ತರ ಮಾತನ್ನು ನಂಬಬೇಕೋ ಬೇಡವೋ ಎಂದು ಕ್ಷಣ ಕಾಲ ಅನುಮಾನಿಸಿ ನಂಬಿಯಾರರು, ಹಿಂದಿನ ದಿನದ ಘಟನೆಯನ್ನು ತಮ್ಮ ದೃಷ್ಟಿಯಿಂದ ಸೂಕ್ಷ್ಮವಾಗಿ ವಿವರಿಸಿ ಅಂದರು: {{gap}}"....ಆ ಕೃಷ್ಣನ್‌ ನಾಯರ್‌--ಅವನನ್ನು ಅವತ್ತೇ ಜೈಲಿಗೆ ಕಳಿಸ್ಬೇಕಾಗಿತ್ತು. ಈಗ ನೋಡಿ ಅಹಂಕಾರ! ಕಯ್ಯೂರಿನಲ್ಲಿನ್ನು ಈ ಬಡ್ಡಿ ಮಕ್ಕಳಿಗೆ ಬುದ್ಧಿ ಕಲಿಸೋರೆ ಇಲ್ಲಾಂತಾಯ್ತೆ ಹಾಗಾದರೆ? ಮನಸ್ಸು ಮಾಡಿದರೆ ಅಷ್ಟೂ ಜನರ ಮೇಲೆ ಕೇಸು ಹಾಕಿಸಿ ಅವರನ್ನೆಲ್ಲ ಅರೆಸ್ಟ್‌ ಮಾಡಿಸ್ಪಹುದು. ಇಷ್ಟಾದರೂ ಅರ್ಥವಾಗದೇನು ಅವರಿಗೆ?” {{gap}}ರಾತ್ರೆ ಮತ್ತೇನಾಯಿತೆಂಬುದು ಮಾಸ್ತರಿಗೆ ಗೊತ್ತಿರಲಿಲ್ಲ. ಅಲ್ಲೇನಾದರೂ ಅನಾಹುತವಾಯಿತೆ ಎಂದು ತಿಳಿಯುವ ಆತುರ ಅವರಿಗಿತ್ತು. ಸುದ್ದಿ ಮುಟ್ಟಿಸುವವರಿಲ್ಲದೆ ಅವರು ವಿವಂಚೆನೆಗೆ ಒಳಗಾಗಿದ್ದರು. ನಂಬಿಯಾರರ ಬಾಯಿಂದಲೇ ಏನಾದರೂ ತಿಳಿಯೋಣವೆಂದು ಮೆಲ್ಲನೆ ಅವರೆಂದರು:<noinclude></noinclude> ioa12hs48mcjyy1u6slscfu3cn19cnu ಪುಟ:Chirasmarane-Niranjana.pdf/೧೪೫ 104 12964 324204 320448 2026-06-03T07:19:14Z Shreelatha.Halemane 7642 324204 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೪೬|right=ಚಿರಸ್ಮರಣೆ}} {{gap}}"ಆಮೇಲೇನಾಯ್ತು?"<br/> {{gap}}"ಆಗೋದೇನು?ನಿನ್ನೆ ಸುಮ್ನಿದ್ದೆ. ಇವತ್ತು ನಮ್ಮ ಅಂಗಳಕ್ಕೆ ಪೈರು ಹೊರಿಸಿ ಹಾಕ್ತೇನೆ. ಯಾವನು ಅಡ್ಡಿ ಮಾಡ್ತಾನೋ ಬರ್ಲಿ. ಅಲ್ಲ ಮಾಸ್ತರೆ, ನನ್ನ ತಾಳ್ಮೆ ನೋಡಿ ಒಮ್ಮೊಮ್ಮೆ ನನಗೇ ಆಶ್ಚರ್ಯವಾಗ್ತದೆ. ನಾನು ಸೀದಾ ಮನುಷ್ಯ. ಖಂಡಿತವಾದಿ. ಹೇಳ್ತೀನೆ ಕೇಳಿ. ಇವರಿಗೆ ನಂಬೂದಿರಿಯಂತ ಯಜಮಾನರು ಸಿಗ್ಬೇಕು. ಬೆಣ್ಣೆಲಿ ಕೂದಲು ತೆಗೆಯೋವಂಥ ಮಾತಾಡ್ತಾ ಆಡ್ತಾ ಹ್ಯಾಗೆ ಅರೀತಾನೆ ಅಂತೀರಾ! ಮುಠಾಳ ನನ್ಮಕ್ಳು ಥೂ!"<br/> {{gap}}ಮಾಸ್ತರು, ನಂಬಿಯಾರರ ಆಲಾಪನೆಗೆ ಕಿವಿಗೊಡುತ್ತಿದ್ದರೂ ಮನಸ್ಸೆಲ್ಲ ಕೃಷ್ಣನ್ ನಾಯರನ್ನು ಕುರಿತು ಚಿಂತಿಸುತ್ತಿತ್ತು. ಆತನಾಗಲೀ ಕೋರನಾಗಲೀ ಏನೂ ಮಾಡುವಂತಿರಲಿಲ್ಲ. ಪ್ರತಿಭಟನೆಯಿಂದ ಪ್ರಯೋಜನವೂ ಇರಲಿಲ್ಲ.ನಿನ್ನೆಯ ಸಾಧನೆ, ಸಮ್ಮೇಳನ ಮುಗಿಸಿ ಉತ್ಸಾಹದಿಂದ ಅವರೆಲ್ಲ ಹಿಂದಿರುಗುವ ವೇಳೆಗೆ ಮಣ್ಣಗೂಡುವ ಪ್ರಮೇಯ.... ಆದರೆ ಹಾಗಾಗುವುದನ್ನು ತಡೆಯಲು ಹಾದಿಯೇ ಇರಲಿಲ್ಲ. ಅದು ಅನಿವಾರ್ಯವಾಗಿತ್ತು.....<br/> {{gap}} ಹೆಚ್ಚು ಮಾತಿಗೆ ನಿಲ್ಲದೆ ನಂಬಿಯಾರರು ಹೊರಟೇ ಹೋದರು. ಜತೆಯಲ್ಲಿ ಬಂದಿದ್ದ ಆಳೂ ಒಡೆಯನನ್ನು ಹಿಂಬಾಲಿಸಿದ...<br/> {{gap}}....................<br/> {{gap}}ಮಾಸ್ತರು ನಿರೀಕ್ಷಿಸಿದ್ದಂತೆಯೇ ಆಯಿತು.ಜಮೀನ್ದಾರರ ಎಂಟು ಜನ ದೂತರು ಕೃಷ್ಣನ್ ನಾಯರನ ಅಂಗಳದಲ್ಲಿದ್ದುದನ್ನೆಲ್ಲ ವಶಪಡಿಸಿಕೊಂಡರು, ಅಂತಹ ಪರಿಸ್ಥಿತಿಯಲ್ಲಿ ಅರ್ಥವಿಲ್ಲದ ಪ್ರತಿಭಟನೆಯನ್ನು ಕೋರನಾಗಲೀ ನಾಯರಾಗಲೀ ಮಾಡಲಿಲ್ಲ. ದೂರದೂರದಿಂದಲೇ ಇತರ ರೈತರು ನಡೆಯುತ್ತಿದುದನ್ನೆಲ್ಲ ನೋಡಿದರು. ಅವರಲ್ಲಿ, ಇಬ್ಬರು ಜಮೀನಾರರ ಒಕ್ಕಲುಗಳೂ ಇದ್ದರು; ಕೆಲವರು ಸ್ವತಂತ್ರ ರೈತರೂ ಇದ್ದರು. ಆದರೆ ಯಾರೂ ಕೃಷ್ಣನ್ ನಾಯರನ ರಕ್ಷಣೆಗೆ ಬರಲಿಲ್ಲ. ಇದು ಎಷ್ಟೋ ಕಾಲದಿಂದ ನಡೆದು ಬರುತ್ತಿದ್ದುದರ ಸಹಜ ಪುನರಾವರ್ತನೆ-ಎಂದು ಅವರು ಸುಮ್ಮನಾದರು.<br/> {{gap}}ರಾತ್ರೆ ಕೋರ, ತನ್ನನ್ನು ಯಾರೂ ಹಿಂಬಾಲಿಸಿದಂತೆ ಎಚ್ಚರ ವಹಿಸಿ ಬಂದು, ಮಾಸ್ತರನ್ನು ಸಂಧಿಸಿದ.<br/> {{gap}}"ಕೃಷ್ಣನ್ ನಾಯರನ್ನು ಗುಡಿಸಿಲಿನಿಂದ ಹೊರಹಾಕಿಲ್ಲ, ಅಲ್ವ?" ಎಂದು ಮಾಸ್ತರು ಕೇಳಿದರು. {{gap}}"ಇಲ್ಲ."<br/><noinclude></noinclude> hzz34cy5ccy7s4u5x1z44gt753x871p ಪುಟ:Chirasmarane-Niranjana.pdf/೧೪೯ 104 12968 324184 64368 2026-06-03T03:56:34Z Vikashegde 1258 /* Proofread */ 324184 proofread-page text/x-wiki <noinclude><pagequality level="3" user="Vikashegde" />{{rh|center=೧೨|left=|right=}}</noinclude>ಕಯ್ಯೂರಿನ ರೈತರ ಸಭೆಯಲ್ಲಿ ಮೊದಲ ಬಾರಿಗೆ ಹಾರಾಡಿದ ಕೆಂಪು ಬಾವುಟ ಸಂಘದ ತಾತ್ಕಾಲಿಕ ಕಛೇರಿಯಾದ ಅಪ್ಪುವಿನ ಮನೆಯಲ್ಲಿ ನೆಲೆ ನಿಂತಿತು. ತನ್ನ ಶಾಲೆಯ ಪರೀಕ್ಷೆಗಾಗಿ ಸಿದ್ಧತೆ ಮಾಡುತ್ತಿದ್ದ ಅಪ್ಪುವಿನ ತಮ್ಮನೂ ಅದೇ ಆಗ ಸರಾಗವಾಗಿ ಓದತೊಡಗಿದ್ದ. ಕಿರಿಯವನಾದ ಕುಟ್ಟಿ ಅಭಿಮಾನದ ಆ ಬಾವುಟವನ್ನು ನೋಡಿದನು. ಅವರ ಅಜ್ಜಿ ಬಾರಿಬಾರಿಗೂ ಆ ಬಾವುಟದ ಅರ್ಥವನ್ನು ಕೇಳುತ್ತ, ಎನಾದರೂ ನೆಪ ಹೂಡಿಕೊಂಡು ಹೆಚ್ಚುಹೆಚ್ಚಾಗಿ ಹೊರ ಹೋಗಿ ಛಾವಣಿಯ ಮೇಲೆ ಪಟಪಟನೆ ಹಾರಾಡುತ್ತಿದ್ದ ಬಾವುಟವನ್ನು ನೋಡುತ್ತ ಸಂತೋಷಪಟ್ಟಳು. ಅಪ್ಪುವಿನ ತಾಯಿ ನೀರು ಸೇದಲು ಬಂದಾಗ, ಮುಸುರೆ ತಿಕ್ಕುತ್ತಿದ್ದಾಗ, ಇಲ್ಲವೆ ಹೋರಿಗಳಿಗೆ ಮೇವು ನೀಡಲು ಹೊರಟಾಗ, ಬಾವುಟವನ್ನು ಕದ್ದುಕದ್ದು ನೋಡಿದಳು. ಮಹಡಿಯ ಮನೆಯ ಸಿರಿವಂತಿಕೆಯೇ ತನಗೆ ದೊರೆಯಿತೆನ್ನುವಂತೆ ಆಕೆಗೆ ಮಹದಾನಂದವಾಯಿತು. <poem> {{gap}}ಚಿರುಕಂಡನ ಮನೆಯಲ್ಲಿ ಆತನ ತಾಯಿ ಕೇಳಿದಳು: {{gap}}"ಕಾರ್ಯದರ್ಶಿ ನೀನಲ್ವ ಚಿರುಕಂಡ?" {{gap}}"ಹೌದು." {{gap}}"ಮತ್ತೆ ಬಾವುಟ ಅಲ್ಲಿ ನೆಟ್ಟಿದ್ದಾರೇ....."</poem> {{gap}}ತಾಯಿಯ ಈ ಅಸೂಯೆ ಕ್ಷಮ್ಯವಾದುದೆಂದು ತೋರಿತು ಚಿರುಕಂಡನಿಗೆ. ಆತ ಮುಗುಳುನಕ್ಕ. {{gap}}"ಬಾವುಟ ಅಲ್ಲೇ ಇರ್ರ್ಬೇಕಮ್ಮ. ನಾವು ಜಮೀನ್ದಾರರ ಒಕ್ಕಲು. ಬಾವುಟ ಇಲ್ಲಿದ್ದರೆ, ಯಾವಾಗಬೇಕಾದರೂ ಅವರು ಅದನ್ನು ಕಿತ್ತು ಹಾಕಿಸ್ಬಹುದು. ಅಪ್ಪು ಮನೇಲಾದರೆ ಹಾಗಲ್ಲ." {{gap}}ಮಗ ಆಡಿದ ತಿಳಿವಳಿಕೆಯ ಮಾತು ಕೇಳಿ ತಾಯಿ ತಲೆದೂಗಿದಳು. ತಾವು ಹೊಲ ಕಳೆದುಕೊಂಡ ನೆನಪು ಕಹಿಯಾಗಿದ್ದರೂ ತಮ್ಮೊಬ್ಬನೇ ಮಗ ಊರಿನ ರೈತರಲ್ಲರ ಗೌರವಕ್ಕೆ ಪಾತ್ರನೆಂಬ ಹೆಮ್ಮೆ ಸಿಹಿಯಾಗಿತ್ತು. {{gap}}ಸಂಘಶಕ್ತಿಯ ಸಂಕೇತವಾದ ಬಾವುಟ ಉದ್ದಗಲಕ್ಕೂ ತನ್ನ ಸಂದೇಶ ಸಾರಿತು. ಅದರೆ ಪ್ರಭಾವ ಎಷ್ಟೆಂಬುದನ್ನು ತಿಳಿಯಲು ಹೆಚ್ಚು ದಿನ ಬೇಕಾಗಲಿಲ್ಲ. ಆ ವಾರದ ಅಂತ್ಯದೊಳಗೆ, ಮಾಸ್ತರು ನೀಲೇಶ್ವರಕ್ಕೆ ಹೋಗಿದ್ದ ಒಂದು ಭಾನುವಾರ, ಹೊಸದುರ್ಗದ ಪೋಲಿಸ್ ಫೌಜದಾರರು (ಸಬ್ ಇನ್ಸ್ ಪೆಕ್ಟರು) ಇಬ್ಬರು<noinclude></noinclude> 06t6ez0x72yu1tr5ifeikx1jxnrd506 324205 324184 2026-06-03T07:20:49Z Shreelatha.Halemane 7642 /* Validated */ 324205 proofread-page text/x-wiki <noinclude><pagequality level="4" user="Shreelatha.Halemane" />{{rh|center=೧೨|left=|right=}}</noinclude>ಕಯ್ಯೂರಿನ ರೈತರ ಸಭೆಯಲ್ಲಿ ಮೊದಲ ಬಾರಿಗೆ ಹಾರಾಡಿದ ಕೆಂಪು ಬಾವುಟ ಸಂಘದ ತಾತ್ಕಾಲಿಕ ಕಛೇರಿಯಾದ ಅಪ್ಪುವಿನ ಮನೆಯಲ್ಲಿ ನೆಲೆ ನಿಂತಿತು. ತನ್ನ ಶಾಲೆಯ ಪರೀಕ್ಷೆಗಾಗಿ ಸಿದ್ಧತೆ ಮಾಡುತ್ತಿದ್ದ ಅಪ್ಪುವಿನ ತಮ್ಮನೂ ಅದೇ ಆಗ ಸರಾಗವಾಗಿ ಓದತೊಡಗಿದ್ದ. ಕಿರಿಯವನಾದ ಕುಟ್ಟಿ ಅಭಿಮಾನದ ಆ ಬಾವುಟವನ್ನು ನೋಡಿದನು. ಅವರ ಅಜ್ಜಿ ಬಾರಿಬಾರಿಗೂ ಆ ಬಾವುಟದ ಅರ್ಥವನ್ನು ಕೇಳುತ್ತ, ಎನಾದರೂ ನೆಪ ಹೂಡಿಕೊಂಡು ಹೆಚ್ಚುಹೆಚ್ಚಾಗಿ ಹೊರ ಹೋಗಿ ಛಾವಣಿಯ ಮೇಲೆ ಪಟಪಟನೆ ಹಾರಾಡುತ್ತಿದ್ದ ಬಾವುಟವನ್ನು ನೋಡುತ್ತ ಸಂತೋಷಪಟ್ಟಳು. ಅಪ್ಪುವಿನ ತಾಯಿ ನೀರು ಸೇದಲು ಬಂದಾಗ, ಮುಸುರೆ ತಿಕ್ಕುತ್ತಿದ್ದಾಗ, ಇಲ್ಲವೆ ಹೋರಿಗಳಿಗೆ ಮೇವು ನೀಡಲು ಹೊರಟಾಗ, ಬಾವುಟವನ್ನು ಕದ್ದುಕದ್ದು ನೋಡಿದಳು. ಮಹಡಿಯ ಮನೆಯ ಸಿರಿವಂತಿಕೆಯೇ ತನಗೆ ದೊರೆಯಿತೆನ್ನುವಂತೆ ಆಕೆಗೆ ಮಹದಾನಂದವಾಯಿತು. {{gap}}ಚಿರುಕಂಡನ ಮನೆಯಲ್ಲಿ ಆತನ ತಾಯಿ ಕೇಳಿದಳು: {{gap}}"ಕಾರ್ಯದರ್ಶಿ ನೀನಲ್ವ ಚಿರುಕಂಡ?" {{gap}}"ಹೌದು." {{gap}}"ಮತ್ತೆ ಬಾವುಟ ಅಲ್ಲಿ ನೆಟ್ಟಿದ್ದಾರೇ....." {{gap}}ತಾಯಿಯ ಈ ಅಸೂಯೆ ಕ್ಷಮ್ಯವಾದುದೆಂದು ತೋರಿತು ಚಿರುಕಂಡನಿಗೆ. ಆತ ಮುಗುಳುನಕ್ಕ. {{gap}}"ಬಾವುಟ ಅಲ್ಲೇ ಇರ್ರ್ಬೇಕಮ್ಮ. ನಾವು ಜಮೀನ್ದಾರರ ಒಕ್ಕಲು. ಬಾವುಟ ಇಲ್ಲಿದ್ದರೆ, ಯಾವಾಗಬೇಕಾದರೂ ಅವರು ಅದನ್ನು ಕಿತ್ತು ಹಾಕಿಸ್ಬಹುದು. ಅಪ್ಪು ಮನೇಲಾದರೆ ಹಾಗಲ್ಲ." {{gap}}ಮಗ ಆಡಿದ ತಿಳಿವಳಿಕೆಯ ಮಾತು ಕೇಳಿ ತಾಯಿ ತಲೆದೂಗಿದಳು. ತಾವು ಹೊಲ ಕಳೆದುಕೊಂಡ ನೆನಪು ಕಹಿಯಾಗಿದ್ದರೂ ತಮ್ಮೊಬ್ಬನೇ ಮಗ ಊರಿನ ರೈತರಲ್ಲರ ಗೌರವಕ್ಕೆ ಪಾತ್ರನೆಂಬ ಹೆಮ್ಮೆ ಸಿಹಿಯಾಗಿತ್ತು. {{gap}}ಸಂಘಶಕ್ತಿಯ ಸಂಕೇತವಾದ ಬಾವುಟ ಉದ್ದಗಲಕ್ಕೂ ತನ್ನ ಸಂದೇಶ ಸಾರಿತು. ಅದರೆ ಪ್ರಭಾವ ಎಷ್ಟೆಂಬುದನ್ನು ತಿಳಿಯಲು ಹೆಚ್ಚು ದಿನ ಬೇಕಾಗಲಿಲ್ಲ. ಆ ವಾರದ ಅಂತ್ಯದೊಳಗೆ, ಮಾಸ್ತರು ನೀಲೇಶ್ವರಕ್ಕೆ ಹೋಗಿದ್ದ ಒಂದು ಭಾನುವಾರ, ಹೊಸದುರ್ಗದ ಪೋಲಿಸ್ ಫೌಜದಾರರು (ಸಬ್ ಇನ್ಸ್ ಪೆಕ್ಟರು) ಇಬ್ಬರು<noinclude></noinclude> czozqjyranhmwmpevdmv6f10am6ts67 ಪುಟ:Chirasmarane-Niranjana.pdf/೧೫೦ 104 12969 324185 63578 2026-06-03T04:00:17Z Vikashegde 1258 /* Proofread */ 324185 proofread-page text/x-wiki <noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=|right=೧೫೧}}</noinclude>ಪೋಲೀಸರೊಡನೆ ಬಂದರು. ಆ ಆಗಮನ ಎಷ್ಟೋ ಜನ ರೈತರನ್ನು ಕಳವಳಕ್ಕೆ ಈಡುಮಾಡಿತು. ಸಂಘದ ಜನವನ್ನು ಸಂದೇಹದಿಂದಲೇ ಕಂಡಿದ್ದ ಸಾಕಷ್ಟು ಹೊಲವಿದ್ದ ಶ್ರೀಮಂತ ರೈತರು ಕೆಲವರು, "ಹೀಗಾಗ್ತದೆ ಅಂತ ನಮಗೆ ಗೊತ್ತೇ ಇತ್ತು" ಎಂದರು. ಯಾವ ಪಕ್ಷವನ್ನೂ ವಹಿಸದೆ ತಟಸ್ಥರಾಗಿದ್ದ ಬೇರೆ ಕೆಲವರು ಮುಂದೇನಾಗುವುದೋ ಎಂದು ಕುತೂಹಲದಿಂದ ಕಾದು ನೋಡಿದರು. {{gap}}ಬಂದ ಪೋಲೀಸರ ಸ್ನಾನ, ಊಟ, ವಿಶ್ರಾಂತಿ ಮುಗಿದು, ಮಧ್ಯಾಹ್ನ ದಾಟಿದ ಮೇಲೆ, ಅಪ್ಪುವಿಗೆ ಕರೆ ಬಂತು. ಜಮೀನ್ದಾರರ ಒಬ್ಬ ಆಳೂ ಕೆಂಪು ಟೋಪಿಯ ಒಬ್ಬ ಪೋಲೀಸನೂ ಅಂಗಳದಲ್ಲಿ ನಿಂತು, "ತಕ್ಷಣ ಬರಬೇಕಂತೆ" ಎಂದರು. {{gap}}"ಎಲ್ಲಿಗೆ?" ಎಂದ ಅಪ್ಪು. {{gap}}"ಜಮೀನ್ದಾರರ ಮನೆಗೆ." {{gap}}"ನಾವು ಅವರ ಒಕ್ಕಲಲ್ಲ. ಏನಾದರೂ ಕೆಲಸವಿದ್ದರೆ ಇಲ್ಲಿಗೆ ಬರ್ಲಿ. ಅವರ ಬದಲು ಪಟೇಲರೇನಾದರೂ ನನ್ನನ್ನು ಕರೆದರೆ ಖಂಡಿತ ಬರ್ರ್ತೇನೆ." {{gap}}ಆಳು ಸಿಡಿಮಿಡಿಗುಟ್ಟುತ್ತ ಪೋಲೀಸರೊಡನೆ ಹಿಂತಿರುಗಿದ. ಅಪ್ಪುವಿನ ತಂದೆ ಮನೆಯಲ್ಲಿರಲಿಲ್ಲ. ಮಗ ಹೀಗೆ ಉತ್ತರಕೊಟ್ಟುದು ಸರಿಯಾಯಿತೊ ಇಲ್ಲವೊ ಎಂಬ ಸಂಶಯ ತಾಯಿಗಿದ್ದರೂ, ಮಗನ ಧೈರ್ಯವನ್ನು ಕಂಡು ಮೂಕಸಂತೋಷ ಆಕೆಯನ್ನು ಆವರಿಸಿತು. ಅಜ್ಜಿ ಗಾಬರಿಯಾಗಬಹುದು ಎಂದಿದ್ದ ಅಪ್ಪು. ಆದರೆ ಆ ವೃದ್ಢೆಯೂ ಮೌನವಾಗಿ ಗಂಭೀರವಾಗಿಯೇ ಇದ್ದಳು. {{gap}}ಅಷ್ಟರಲ್ಲೇ ಚಿರುಕಂಡ ಬಂದ. {{gap}}ಸ್ವಲ್ಪ ಹೊತ್ತಿನಲ್ಲಿ ಜಮೀನ್ದಾರರ ಮನೆಯಲ್ಲದ್ದ ಪಟೇಲರಿಂದ ಕರೆಬಂತು. ಅಲ್ಲೇ ಪೋಲೀಸರೂ ಇದ್ದರೆಂಬುದು ಸ್ಪಷ್ಟವಾಗಿತ್ತು. ಆಳುವ ಶಕ್ತಿಯ ಬಾಡಿಗೆಯ ಭಟರೊಡನೆ ಮೊದಲ ಪ್ರತ್ಯಕ್ಷ ಭೇಟಿಗಾಗಿ ಜನಶಕ್ತಿಯ ಪ್ರತಿನಿಧಿಗಳಾಗಿದ್ದ ಅಪ್ಪು ಮತ್ತು ಚಿರುಕಂಡ ಅಲ್ಲಿಗೆ ಹೊರಟರು. {{gap}}ದೂರದಲ್ಲಿ ಪ್ರೇಕ್ಷಕನಾಗಿ ನಿಂತಿದ್ದ ಕೋರ ಒಬ್ಬನ ಹೊರತಾಗಿ, ರೈತ ಸಂಘದ ಕಡೆಯವರು ಯಾರೂ ಅಲ್ಲಿರಲಿಲ್ಲ. ನಂಬಿಯಾರರೂ ನಂಬೂದಿರಿಯೂ ಫೌಜದಾರರೂ ಮೊಗಸಾಲೆಯಲ್ಲಿ ಕುಳಿತಿದ್ದರು. ಪಕ್ಕದಲ್ಲೆ ಬೆಂಚಿನ ಮೇಲೆ ಪಟೇಲರಿದ್ದರು. ಅವರ ಹಿಂದೆ ಜವಾನ. ಬಳಿಯಲ್ಲೇ ಖಾಕಿ ಪೋಷಾಕು ಧರಿಸಿ ನಿಂತಿದ್ದ ಪೊಲೀಸರು. ಜಮೀನ್ದಾರರ ಅನಧಿಕೃತ ಕಾಲಾಳುಗಳಾದ ಹಲವರು. {{gap}}ಫೌಜದಾರರು ಮತ್ತು ನಂಬಿಯಾರರು ಸಿಗರೇಟು ಸೇದುತ್ತಲೇ ಇದ್ದರು. ನಂಬೂದಿರಿಗಿಂತ ತಾನು ಹೆಚ್ಚು ವಿದಾವಂತನೆಂಬುದನ್ನು ತೋರಿಸುವ ಆ<noinclude></noinclude> 4fn9y9wnnbta69jmi7j1i6xtryvdwx2 324206 324185 2026-06-03T07:22:24Z Shreelatha.Halemane 7642 /* Validated */ 324206 proofread-page text/x-wiki <noinclude><pagequality level="4" user="Shreelatha.Halemane" />{{rh|center=ಚಿರಸ್ಮರಣೆ|left=|right=೧೫೧}}</noinclude>ಪೋಲೀಸರೊಡನೆ ಬಂದರು. ಆ ಆಗಮನ ಎಷ್ಟೋ ಜನ ರೈತರನ್ನು ಕಳವಳಕ್ಕೆ ಈಡುಮಾಡಿತು. ಸಂಘದ ಜನವನ್ನು ಸಂದೇಹದಿಂದಲೇ ಕಂಡಿದ್ದ ಸಾಕಷ್ಟು ಹೊಲವಿದ್ದ ಶ್ರೀಮಂತ ರೈತರು ಕೆಲವರು, "ಹೀಗಾಗ್ತದೆ ಅಂತ ನಮಗೆ ಗೊತ್ತೇ ಇತ್ತು" ಎಂದರು. ಯಾವ ಪಕ್ಷವನ್ನೂ ವಹಿಸದೆ ತಟಸ್ಥರಾಗಿದ್ದ ಬೇರೆ ಕೆಲವರು ಮುಂದೇನಾಗುವುದೋ ಎಂದು ಕುತೂಹಲದಿಂದ ಕಾದು ನೋಡಿದರು. {{gap}}ಬಂದ ಪೋಲೀಸರ ಸ್ನಾನ, ಊಟ, ವಿಶ್ರಾಂತಿ ಮುಗಿದು, ಮಧ್ಯಾಹ್ನ ದಾಟಿದ ಮೇಲೆ, ಅಪ್ಪುವಿಗೆ ಕರೆ ಬಂತು. ಜಮೀನ್ದಾರರ ಒಬ್ಬ ಆಳೂ ಕೆಂಪು ಟೋಪಿಯ ಒಬ್ಬ ಪೋಲೀಸನೂ ಅಂಗಳದಲ್ಲಿ ನಿಂತು, "ತಕ್ಷಣ ಬರಬೇಕಂತೆ" ಎಂದರು. {{gap}}"ಎಲ್ಲಿಗೆ?" ಎಂದ ಅಪ್ಪು. {{gap}}"ಜಮೀನ್ದಾರರ ಮನೆಗೆ." {{gap}}"ನಾವು ಅವರ ಒಕ್ಕಲಲ್ಲ. ಏನಾದರೂ ಕೆಲಸವಿದ್ದರೆ ಇಲ್ಲಿಗೆ ಬರ್ಲಿ. ಅವರ ಬದಲು ಪಟೇಲರೇನಾದರೂ ನನ್ನನ್ನು ಕರೆದರೆ ಖಂಡಿತ ಬರ್ರ್ತೇನೆ." {{gap}}ಆಳು ಸಿಡಿಮಿಡಿಗುಟ್ಟುತ್ತ ಪೋಲೀಸರೊಡನೆ ಹಿಂತಿರುಗಿದ. ಅಪ್ಪುವಿನ ತಂದೆ ಮನೆಯಲ್ಲಿರಲಿಲ್ಲ. ಮಗ ಹೀಗೆ ಉತ್ತರಕೊಟ್ಟುದು ಸರಿಯಾಯಿತೊ ಇಲ್ಲವೊ ಎಂಬ ಸಂಶಯ ತಾಯಿಗಿದ್ದರೂ, ಮಗನ ಧೈರ್ಯವನ್ನು ಕಂಡು ಮೂಕಸಂತೋಷ ಆಕೆಯನ್ನು ಆವರಿಸಿತು. ಅಜ್ಜಿ ಗಾಬರಿಯಾಗಬಹುದು ಎಂದಿದ್ದ ಅಪ್ಪು. ಆದರೆ ಆ ವೃದ್ಢೆಯೂ ಮೌನವಾಗಿ ಗಂಭೀರವಾಗಿಯೇ ಇದ್ದಳು. {{gap}}ಅಷ್ಟರಲ್ಲೇ ಚಿರುಕಂಡ ಬಂದ. {{gap}}ಸ್ವಲ್ಪ ಹೊತ್ತಿನಲ್ಲಿ ಜಮೀನ್ದಾರರ ಮನೆಯಲ್ಲಿದ್ದ ಪಟೇಲರಿಂದ ಕರೆಬಂತು. ಅಲ್ಲೇ ಪೋಲೀಸರೂ ಇದ್ದರೆಂಬುದು ಸ್ಪಷ್ಟವಾಗಿತ್ತು. ಆಳುವ ಶಕ್ತಿಯ ಬಾಡಿಗೆಯ ಭಟರೊಡನೆ ಮೊದಲ ಪ್ರತ್ಯಕ್ಷ ಭೇಟಿಗಾಗಿ ಜನಶಕ್ತಿಯ ಪ್ರತಿನಿಧಿಗಳಾಗಿದ್ದ ಅಪ್ಪು ಮತ್ತು ಚಿರುಕಂಡ ಅಲ್ಲಿಗೆ ಹೊರಟರು. {{gap}}ದೂರದಲ್ಲಿ ಪ್ರೇಕ್ಷಕನಾಗಿ ನಿಂತಿದ್ದ ಕೋರ ಒಬ್ಬನ ಹೊರತಾಗಿ, ರೈತ ಸಂಘದ ಕಡೆಯವರು ಯಾರೂ ಅಲ್ಲಿರಲಿಲ್ಲ. ನಂಬಿಯಾರರೂ ನಂಬೂದಿರಿಯೂ ಫೌಜದಾರರೂ ಮೊಗಸಾಲೆಯಲ್ಲಿ ಕುಳಿತಿದ್ದರು. ಪಕ್ಕದಲ್ಲೆ ಬೆಂಚಿನ ಮೇಲೆ ಪಟೇಲರಿದ್ದರು. ಅವರ ಹಿಂದೆ ಜವಾನ. ಬಳಿಯಲ್ಲೇ ಖಾಕಿ ಪೋಷಾಕು ಧರಿಸಿ ನಿಂತಿದ್ದ ಪೊಲೀಸರು. ಜಮೀನ್ದಾರರ ಅನಧಿಕೃತ ಕಾಲಾಳುಗಳಾದ ಹಲವರು. {{gap}}ಫೌಜದಾರರು ಮತ್ತು ನಂಬಿಯಾರರು ಸಿಗರೇಟು ಸೇದುತ್ತಲೇ ಇದ್ದರು. ನಂಬೂದಿರಿಗಿಂತ ತಾನು ಹೆಚ್ಚು ವಿದ್ಯಾವಂತನೆಂಬುದನ್ನು ತೋರಿಸುವ ಆ<noinclude></noinclude> 1bt5l6qiav361pt0gf6s91mbje4pid7 ಪುಟ:Chirasmarane-Niranjana.pdf/೧೫೧ 104 12970 324186 65363 2026-06-03T04:04:20Z Vikashegde 1258 /* Proofread */ 324186 proofread-page text/x-wiki <noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=೧೫೨ |right=}}</noinclude>ಅವಕಾಶವನ್ನು ಬಿಟ್ಟುಕೊಡಲಾರದೆ ನಂಬಿಯಾರರು, ಆಗೊಮ್ಮೆ ಈಗೊಮ್ಮೆ, ತಮಗೆ ತಿಳಿದ ಹರಕು ಮುರುಕು ಇಂಗ್ಲಿಷಿನಲ್ಲಿ ಪೋಲೀಸ್ ಅದ್ದಿಕಾರಿಯೊಡನೆ ಮಾತನಾಡುತ್ತಿದ್ದರು. {{gap}}ಅಪ್ಪು ಮತ್ತು ಚಿರುಕಂಡ ಮೊಗಸಾಲೆಯನ್ನು ತಲಪಿ ಪಟೇಲರಿಗೆ ವಂದಿಸಿದರು. ಸ್ವಭಾವತ: ಪುಕ್ಕಲು ಮನುಷ್ಯನಾಗಿದ್ದ ಪಟೇಲರೆಂದರು: "ಕೂತ್ಕೊಳ್ಳಿ." {{gap}}ಆದರೆ ಕುಳಿತುಕೊಳ್ಳಲು ಆಗ ಯಾವ ಆಸನವೂ ಅಲ್ಲಿ ಇರಲಿಲ್ಲ. ಅದನ್ನು ಗಮನಿಸದೆಯೆ ಪಟೇಲರು ಹಾಗೆ ಹೇಳಿದ್ದರು. ಆ ರೀತಿ ಅವರು ವಿನಯ ತೋರಿ ಮಾತನಾಡಿದುದನ್ನು ಕಂಡ ನಂಬಿಯಾರರ ಮೈ ಉರಿಯಿತು. {{gap}}ಅವರು ಸಿಗರೇಟನ್ನು ಕಚ್ಚಿದರು. ಹೊಗೆಸೊಪ್ಪು ತುಟಿಗಳಿಗೆ ಅಂಟಿಕೊಂಡಿತು. 'ಕೆಲಸ ಆರಂಭಿಸಿ,' ಎನ್ನುವಂತೆ ಘೌಜದಾರರತ್ತ ನೋಡಿದರು. ಆದರೆ ಪ್ರಾಸ್ತಾವಿಕವಾಗಿ ಒಂದು ಮಾತು ಹೇಳಬೇಕಾಯಿತು: {{gap}}"ಹೊಸದುರ್ಗದಿಂದ ಇನ್ಸಪೆಕ್ಟರ್ ಸಾಹೇಬರು ತನಿಖೆಗೆ ಬಂದಿದ್ದಾರೆ. ಇದ್ದದ್ದನ್ನು ಇದ್ದ ಹಾಗೇ ಹೇಳಿ. ನಿಮಗೇನೂ ತೊಂದರೆಯಾಗೋದಿಲ್ಲ." {{gap}}ಅದು ಅಭ್ಯಾಸಬಲದಿಂದ ಅವರು ಆಡಿದ ಮಾತು.ನಿಂತಿದ್ದ ಅಪ್ಪುವಿಗೆ ತನ್ನ ಕೈಗಳನ್ನೇನು ಮಾಡಬೇಕೋ ತೋರಲಿಲ್ಲ. ಅಪರಾಧಿಯ ಹಾಗೆ ಕೈಕಟ್ಟಿ ನಿಲ್ಲುವುದಂತೂ ಆತನಿಗೆ ಇಷ್ಟವಿರಲಿಲ್ಲ. ಒಂದು ಕೈಯನ್ನು ಆತ ಬೆನ್ನ ಹಿಂದೆ ಇರಿಸಿದ; ಇನ್ನೊಂದನ್ನು ಅಡ್ಡಾದಿಡ್ಡಿಯಾಗಿ ಚಲಿಸಿದ. ಚಿರುಕಂಡನಿಗೂ ಹಾಗೆಯೇ ಆಯಿತು. ಆದರೂ ಆತ ನಿಶ್ಚಲನಾಗಿದ್ದ, ಎಂಥಂಥ ಪ್ರಶ್ನೆಗಳು ಬರಬಹುದೆಂಬುದನ್ನು ಊಹಿಸುವುದರಲ್ಲೇ ಆತನ ಮನಸ್ಸು ನೆಟ್ಟಿತು. {{gap}}ಮೀಸೆ ಬಿಡದೆ ನುಣ್ಣನೆ ಮುಖಕ್ಷೌರ ಮಾಡಿಕೊಂಡಿದ್ದ ಸುರೂಪಿಯಾಗಿದ್ದ ಘೌಜದಾರರು ಕೇಳಿದರು: "ನಿಮ್ಮ ಮುಖಂಡರು ಯಾರು?" <poem> {{gap}}ಚಿರುಕಂಡನೆ ಮುಂದಾಗಿ ಉತ್ತರವಿತ್ತ: {{gap}}"ನಮ್ಮಲ್ಲಿ ಮುಖಂಡರೂ ಇಲ್ಲ, ಹಿಂಬಾಲಕರೂ ಇಲ್ಲ. ನಾವೆಲ್ಲಾ ರೈತರು." {{gap}}"ಈತ ಚಿರುಕಂಡ" ಎಂದರು ಪಟೇಲರು. {{gap}}"ಓಹೋ!ನೀನೇ ಏನು ಕಾರ್ಯದರ್ಶಿ ಚಿರುಕಂಡ ಅನ್ನೋನು?" {{gap}}ಉಗ್ರವಾಗಿದ್ದ ಧ್ವನಿಯಲ್ಲಿ ಅಪ್ಪುವೆಂದ: {{gap}}"ನಮ್ಮಲ್ಲಿ ಬಹುವಚನದಿಂದ ಸಂಬೋಧಿಸಿ ಮಾತನಾಡೋದು ಪದ್ದತಿ."</poem> ಘೌಜದಾರರು ಹುಬ್ಬು ಗಂಟಿಕ್ಕಿ ಅಪ್ಪುವನ್ನು ನೋಡಿದರು.ನಂಬಿಯಾರರು<noinclude></noinclude> ozf8ygikenq55wlxza9e9kfeec24qpw 324187 324186 2026-06-03T04:04:38Z Vikashegde 1258 324187 proofread-page text/x-wiki <noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=೧೫೨ |right=}}</noinclude>ಅವಕಾಶವನ್ನು ಬಿಟ್ಟುಕೊಡಲಾರದೆ ನಂಬಿಯಾರರು, ಆಗೊಮ್ಮೆ ಈಗೊಮ್ಮೆ, ತಮಗೆ ತಿಳಿದ ಹರಕು ಮುರುಕು ಇಂಗ್ಲಿಷಿನಲ್ಲಿ ಪೋಲೀಸ್ ಅದ್ದಿಕಾರಿಯೊಡನೆ ಮಾತನಾಡುತ್ತಿದ್ದರು. {{gap}}ಅಪ್ಪು ಮತ್ತು ಚಿರುಕಂಡ ಮೊಗಸಾಲೆಯನ್ನು ತಲಪಿ ಪಟೇಲರಿಗೆ ವಂದಿಸಿದರು. ಸ್ವಭಾವತ: ಪುಕ್ಕಲು ಮನುಷ್ಯನಾಗಿದ್ದ ಪಟೇಲರೆಂದರು: "ಕೂತ್ಕೊಳ್ಳಿ." {{gap}}ಆದರೆ ಕುಳಿತುಕೊಳ್ಳಲು ಆಗ ಯಾವ ಆಸನವೂ ಅಲ್ಲಿ ಇರಲಿಲ್ಲ. ಅದನ್ನು ಗಮನಿಸದೆಯೆ ಪಟೇಲರು ಹಾಗೆ ಹೇಳಿದ್ದರು. ಆ ರೀತಿ ಅವರು ವಿನಯ ತೋರಿ ಮಾತನಾಡಿದುದನ್ನು ಕಂಡ ನಂಬಿಯಾರರ ಮೈ ಉರಿಯಿತು. {{gap}}ಅವರು ಸಿಗರೇಟನ್ನು ಕಚ್ಚಿದರು. ಹೊಗೆಸೊಪ್ಪು ತುಟಿಗಳಿಗೆ ಅಂಟಿಕೊಂಡಿತು. 'ಕೆಲಸ ಆರಂಭಿಸಿ,' ಎನ್ನುವಂತೆ ಘೌಜದಾರರತ್ತ ನೋಡಿದರು. ಆದರೆ ಪ್ರಾಸ್ತಾವಿಕವಾಗಿ ಒಂದು ಮಾತು ಹೇಳಬೇಕಾಯಿತು: {{gap}}"ಹೊಸದುರ್ಗದಿಂದ ಇನ್ಸಪೆಕ್ಟರ್ ಸಾಹೇಬರು ತನಿಖೆಗೆ ಬಂದಿದ್ದಾರೆ. ಇದ್ದದ್ದನ್ನು ಇದ್ದ ಹಾಗೇ ಹೇಳಿ. ನಿಮಗೇನೂ ತೊಂದರೆಯಾಗೋದಿಲ್ಲ." {{gap}}ಅದು ಅಭ್ಯಾಸಬಲದಿಂದ ಅವರು ಆಡಿದ ಮಾತು.ನಿಂತಿದ್ದ ಅಪ್ಪುವಿಗೆ ತನ್ನ ಕೈಗಳನ್ನೇನು ಮಾಡಬೇಕೋ ತೋರಲಿಲ್ಲ. ಅಪರಾಧಿಯ ಹಾಗೆ ಕೈಕಟ್ಟಿ ನಿಲ್ಲುವುದಂತೂ ಆತನಿಗೆ ಇಷ್ಟವಿರಲಿಲ್ಲ. ಒಂದು ಕೈಯನ್ನು ಆತ ಬೆನ್ನ ಹಿಂದೆ ಇರಿಸಿದ; ಇನ್ನೊಂದನ್ನು ಅಡ್ಡಾದಿಡ್ಡಿಯಾಗಿ ಚಲಿಸಿದ. ಚಿರುಕಂಡನಿಗೂ ಹಾಗೆಯೇ ಆಯಿತು. ಆದರೂ ಆತ ನಿಶ್ಚಲನಾಗಿದ್ದ, ಎಂಥಂಥ ಪ್ರಶ್ನೆಗಳು ಬರಬಹುದೆಂಬುದನ್ನು ಊಹಿಸುವುದರಲ್ಲೇ ಆತನ ಮನಸ್ಸು ನೆಟ್ಟಿತು. {{gap}}ಮೀಸೆ ಬಿಡದೆ ನುಣ್ಣನೆ ಮುಖಕ್ಷೌರ ಮಾಡಿಕೊಂಡಿದ್ದ ಸುರೂಪಿಯಾಗಿದ್ದ ಘೌಜದಾರರು ಕೇಳಿದರು: "ನಿಮ್ಮ ಮುಖಂಡರು ಯಾರು?" <poem> {{gap}}ಚಿರುಕಂಡನೆ ಮುಂದಾಗಿ ಉತ್ತರವಿತ್ತ: {{gap}}"ನಮ್ಮಲ್ಲಿ ಮುಖಂಡರೂ ಇಲ್ಲ, ಹಿಂಬಾಲಕರೂ ಇಲ್ಲ. ನಾವೆಲ್ಲಾ ರೈತರು." {{gap}}"ಈತ ಚಿರುಕಂಡ" ಎಂದರು ಪಟೇಲರು. {{gap}}"ಓಹೋ!ನೀನೇ ಏನು ಕಾರ್ಯದರ್ಶಿ ಚಿರುಕಂಡ ಅನ್ನೋನು?" {{gap}}ಉಗ್ರವಾಗಿದ್ದ ಧ್ವನಿಯಲ್ಲಿ ಅಪ್ಪುವೆಂದ: {{gap}}"ನಮ್ಮಲ್ಲಿ ಬಹುವಚನದಿಂದ ಸಂಬೋಧಿಸಿ ಮಾತನಾಡೋದು ಪದ್ದತಿ."</poem> ಘೌಜದಾರರು ಹುಬ್ಬು ಗಂಟಿಕ್ಕಿ ಅಪ್ಪುವನ್ನು ನೋಡಿದರು. ನಂಬಿಯಾರರು<noinclude></noinclude> 0z9j0jtfzd4rp2eihv5y16m6g9cq4yj 324207 324187 2026-06-03T07:24:02Z Shreelatha.Halemane 7642 /* Validated */ 324207 proofread-page text/x-wiki <noinclude><pagequality level="4" user="Shreelatha.Halemane" />{{rh|center=ಚಿರಸ್ಮರಣೆ|left=೧೫೨ |right=}}</noinclude>ಅವಕಾಶವನ್ನು ಬಿಟ್ಟುಕೊಡಲಾರದೆ ನಂಬಿಯಾರರು, ಆಗೊಮ್ಮೆ ಈಗೊಮ್ಮೆ, ತಮಗೆ ತಿಳಿದ ಹರಕು ಮುರುಕು ಇಂಗ್ಲಿಷಿನಲ್ಲಿ ಪೋಲೀಸ್ ಅಧಿಕಾರಿಯೊಡನೆ ಮಾತನಾಡುತ್ತಿದ್ದರು. {{gap}}ಅಪ್ಪು ಮತ್ತು ಚಿರುಕಂಡ ಮೊಗಸಾಲೆಯನ್ನು ತಲಪಿ ಪಟೇಲರಿಗೆ ವಂದಿಸಿದರು. ಸ್ವಭಾವತ: ಪುಕ್ಕಲು ಮನುಷ್ಯನಾಗಿದ್ದ ಪಟೇಲರೆಂದರು: {{gap}}"ಕೂತ್ಕೊಳ್ಳಿ." {{gap}}ಆದರೆ ಕುಳಿತುಕೊಳ್ಳಲು ಆಗ ಯಾವ ಆಸನವೂ ಅಲ್ಲಿ ಇರಲಿಲ್ಲ. ಅದನ್ನು ಗಮನಿಸದೆಯೆ ಪಟೇಲರು ಹಾಗೆ ಹೇಳಿದ್ದರು. ಆ ರೀತಿ ಅವರು ವಿನಯ ತೋರಿ ಮಾತನಾಡಿದುದನ್ನು ಕಂಡ ನಂಬಿಯಾರರ ಮೈ ಉರಿಯಿತು. {{gap}}ಅವರು ಸಿಗರೇಟನ್ನು ಕಚ್ಚಿದರು. ಹೊಗೆಸೊಪ್ಪು ತುಟಿಗಳಿಗೆ ಅಂಟಿಕೊಂಡಿತು. 'ಕೆಲಸ ಆರಂಭಿಸಿ,' ಎನ್ನುವಂತೆ ಘೌಜದಾರರತ್ತ ನೋಡಿದರು. ಆದರೆ ಪ್ರಾಸ್ತಾವಿಕವಾಗಿ ಒಂದು ಮಾತು ಹೇಳಬೇಕಾಯಿತು: {{gap}}"ಹೊಸದುರ್ಗದಿಂದ ಇನ್ಸಪೆಕ್ಟರ್ ಸಾಹೇಬರು ತನಿಖೆಗೆ ಬಂದಿದ್ದಾರೆ. ಇದ್ದದ್ದನ್ನು ಇದ್ದ ಹಾಗೇ ಹೇಳಿ. ನಿಮಗೇನೂ ತೊಂದರೆಯಾಗೋದಿಲ್ಲ." {{gap}}ಅದು ಅಭ್ಯಾಸಬಲದಿಂದ ಅವರು ಆಡಿದ ಮಾತು.ನಿಂತಿದ್ದ ಅಪ್ಪುವಿಗೆ ತನ್ನ ಕೈಗಳನ್ನೇನು ಮಾಡಬೇಕೋ ತೋರಲಿಲ್ಲ. ಅಪರಾಧಿಯ ಹಾಗೆ ಕೈಕಟ್ಟಿ ನಿಲ್ಲುವುದಂತೂ ಆತನಿಗೆ ಇಷ್ಟವಿರಲಿಲ್ಲ. ಒಂದು ಕೈಯನ್ನು ಆತ ಬೆನ್ನ ಹಿಂದೆ ಇರಿಸಿದ; ಇನ್ನೊಂದನ್ನು ಅಡ್ಡಾದಿಡ್ಡಿಯಾಗಿ ಚಲಿಸಿದ. ಚಿರುಕಂಡನಿಗೂ ಹಾಗೆಯೇ ಆಯಿತು. ಆದರೂ ಆತ ನಿಶ್ಚಲನಾಗಿದ್ದ, ಎಂಥಂಥ ಪ್ರಶ್ನೆಗಳು ಬರಬಹುದೆಂಬುದನ್ನು ಊಹಿಸುವುದರಲ್ಲೇ ಆತನ ಮನಸ್ಸು ನೆಟ್ಟಿತು. {{gap}}ಮೀಸೆ ಬಿಡದೆ ನುಣ್ಣನೆ ಮುಖಕ್ಷೌರ ಮಾಡಿಕೊಂಡಿದ್ದ ಸುರೂಪಿಯಾಗಿದ್ದ ಘೌಜದಾರರು ಕೇಳಿದರು: "ನಿಮ್ಮ ಮುಖಂಡರು ಯಾರು?" {{gap}}ಚಿರುಕಂಡನೆ ಮುಂದಾಗಿ ಉತ್ತರವಿತ್ತ: {{gap}}"ನಮ್ಮಲ್ಲಿ ಮುಖಂಡರೂ ಇಲ್ಲ, ಹಿಂಬಾಲಕರೂ ಇಲ್ಲ. ನಾವೆಲ್ಲಾ ರೈತರು." {{gap}}"ಈತ ಚಿರುಕಂಡ" ಎಂದರು ಪಟೇಲರು. {{gap}}"ಓಹೋ!ನೀನೇ ಏನು ಕಾರ್ಯದರ್ಶಿ ಚಿರುಕಂಡ ಅನ್ನೋನು?" {{gap}}ಉಗ್ರವಾಗಿದ್ದ ಧ್ವನಿಯಲ್ಲಿ ಅಪ್ಪುವೆಂದ: {{gap}}"ನಮ್ಮಲ್ಲಿ ಬಹುವಚನದಿಂದ ಸಂಬೋಧಿಸಿ ಮಾತನಾಡೋದು ಪದ್ದತಿ." {{gap}}ಘೌಜದಾರರು ಹುಬ್ಬು ಗಂಟಿಕ್ಕಿ ಅಪ್ಪುವನ್ನು ನೋಡಿದರು. ನಂಬಿಯಾರರು<noinclude></noinclude> 3pny5ppal295byafp9qqzc4b6dfgt76 ಪುಟ:Chirasmarane-Niranjana.pdf/೧೫೨ 104 12971 324188 65413 2026-06-03T04:07:45Z Vikashegde 1258 /* Proofread */ 324188 proofread-page text/x-wiki <noinclude><pagequality level="3" user="Vikashegde" />ಚಿರಸ್ಮರಣೆ ೧೫೩</noinclude>ಅಸಹನೆಯಿಂದ ಆಸನದ ಮೇಲೆಯೇ ಅತ್ತಿತ್ತ ಮಿಸುಕುತ್ತ ಮತ್ತೊಂದು ಸಿಗರೇಟು ಹಚ್ಚಿದರು. ನಂಬೂದಿರಿ ಕಲ್ಲಿನಲ್ಲಿ ಕಡೆದ ವಿಗ್ರಹದ ಹಾಗೆ ನಿರ್ವಿಕಾರವಾಗಿ ಕುಳಿತರು. ಅಪ್ಪುವಿನ ಉದ್ದಟತನದ ಮಾತು ಕೇಳಿದ ಊಳಿಗದ ಕೆಲವರು, ಅದಕ್ಕೆ ಶಿಕ್ಷೆಯಾಗಿ ಈಗಲೆ ಆತನಿಗೆ ಹೊಡೆತ ಬೀಳಬಹುದೆಂದು ಭಾವಿಸಿದರು. ಕೋರ ಹೆಜ್ಜೆ ಇಡುತ್ತ ಸಮೀಪಕ್ಕೆ ಬಂದ. <poem> {{gap}}ಮುಗುಳುನಕ್ಕು,'ಹೂಂ'ಕರಸಿ ವ್ಯಂಗ್ಯಧ್ವನಿಯಲ್ಲಿ ಘೌಜದಾರರೆಂದರು: {{gap}}"ತಾವೇನೋ ಹಾಗಾದರೆ ಕಾರ್ಯದರ್ಶಿಯವರು?" {{gap}}"ಹೌದು ನಾನೇ?" {{gap}}"ನಿಮಗೆ ತಲೆಮರೆಸ್ಕೊಂಡು ತಿರುಗಾಡೋ ಕ್ರಾಂತಿಕಾರರ ಪರಿಚಯ ಇಲ್ವೋ?" {{gap}}"ನಮಗೆ ಅದೊಂದೂ ಗೊತ್ತಿಲ್ಲ." {{gap}}"ಪಂಡಿತ ಅಂತ ಒಬ್ಬನ ಹೆಸರು ಕೇಳಿದ್ದೀರೋ?" {{gap}}ಅಪ್ಪುವಿನ ಮುಖ ಕೆಂಪಗಾಯಿತು. ಚಿರುಕಂಡ ಶಾಂತನಾಗಿಯೇ ನುಡಿದ: {{gap}}"ನಮಗೆ ಯಾವ ಪಂಡಿತರ ಪರಿಚಯವೂ ಇಲ್ಲ." {{gap}}"ಹಾಗೇನು? ತಳಿಪರಂಬ ರೈತ ಸಮ್ಮೇಳನಕ್ಕೆ ಯಾರು ನಿಮ್ಮನ್ನು ಕಳಿಸ್ದೋರು?" {{gap}}"ಯಾರೂ ಇಲ್ಲ. ಜಾತ್ರೆಗೆ ಹೋದವರು ನಾವಾಗಿಯೇ ಸಮ್ಮೇಳವನ್ನೂ ನೋಡಿದೆವು."</poem> {{gap}}ಅವರೆಗೂ ಸುಮ್ಮನಿದ್ದ ನಂಬೂದಿರಿ ಬಾಯಿ ತೆರೆದು, "ಜಾತ್ರೆಗೆ ಹೋದರು, ಮರುಳಾದರು" ಎಂದು ಹೇಳಿ ಖೊಖೋ ಎಂದು ನಕ್ಕರು. ನಂಬೂದಿರಿಯ ನಗು ಕೇಳಿ ಘೌಜದಾರರ ವಿಚಾರ ಸರಣಿ ಕಡಿದುಹೋಯಿತು. ಆದರೂ ಸುಧಾರಿಸಿಕೊಂಡು ಅವರೆಂದರು: <poem> {{gap}}"ನಿಮ್ಮ ಸಂಘದ ಉದ್ದೇಶವೇನು?" {{gap}}ಅಪ್ಪು ಉದ್ವೇಗದ ಸ್ವರದಲ್ಲಿ ಕೇಳಿದ: {{gap}}"ಯಾವುದೋ ವಿಚಾರಣೆ ಮಾಡೋ ಹಾಗೆ ಪ್ರಶ್ನೆ ಕೇಳ್ತಿದ್ದೀರಲ್ಲ!" {{gap}}ಘೌಜದಾರರು ಸ್ವರವೇರಿಸಿದರು: {{gap}}"ಹೌದು, ವಿಚಾರಣೆಯೇ!ನಿಮ್ಮ ಮೇಲೆ ದೂರು ಬಂದಿದೆ." {{gap}}ಅಪ್ಪು ಕೆಣಕಿ ನುಡಿದ: {{gap}}"ಹಾಗಾದರೆ ಹಿಡಕಂಡು ಹೋಗಿ;ನ್ಯಾಯಸ್ಥಾನದಲ್ಲಿ ವಿಚಾರಣೆ ನಡೀಲಿ!" {{gap}}"ಯಾಕೆ, ಜೈಲಿಗೆ ಹೋಗೋದಕ್ಕೆ ಆಸೆಯಾಗ್ತಿದೆಯೊ?"</poem> {{gap}}ಸಂವಾದದ ರೀತಿ ಬದಲಾಗಬೇಕೆಂದು ಚಿರುಕಂಡನೆಂದ:<noinclude></noinclude> izhg16b7nvz52x8y4394nbi2f7d7tz4 324208 324188 2026-06-03T07:26:03Z Shreelatha.Halemane 7642 /* Validated */ 324208 proofread-page text/x-wiki <noinclude><pagequality level="4" user="Shreelatha.Halemane" />{{rh|left=ಚಿರಸ್ಮರಣೆ|center=|right=೧೫೩}}</noinclude>ಅಸಹನೆಯಿಂದ ಆಸನದ ಮೇಲೆಯೇ ಅತ್ತಿತ್ತ ಮಿಸುಕುತ್ತ ಮತ್ತೊಂದು ಸಿಗರೇಟು ಹಚ್ಚಿದರು. ನಂಬೂದಿರಿ ಕಲ್ಲಿನಲ್ಲಿ ಕಡೆದ ವಿಗ್ರಹದ ಹಾಗೆ ನಿರ್ವಿಕಾರವಾಗಿ ಕುಳಿತರು. ಅಪ್ಪುವಿನ ಉದ್ದಟತನದ ಮಾತು ಕೇಳಿದ ಊಳಿಗದ ಕೆಲವರು, ಅದಕ್ಕೆ ಶಿಕ್ಷೆಯಾಗಿ ಈಗಲೆ ಆತನಿಗೆ ಹೊಡೆತ ಬೀಳಬಹುದೆಂದು ಭಾವಿಸಿದರು. ಕೋರ ಹೆಜ್ಜೆ ಇಡುತ್ತ ಸಮೀಪಕ್ಕೆ ಬಂದ. {{gap}}ಮುಗುಳುನಕ್ಕು,'ಹೂಂ'ಕರಿಸಿ ವ್ಯಂಗ್ಯಧ್ವನಿಯಲ್ಲಿ ಘೌಜದಾರರೆಂದರು: {{gap}}"ತಾವೇನೋ ಹಾಗಾದರೆ ಕಾರ್ಯದರ್ಶಿಯವರು?" {{gap}}"ಹೌದು ನಾನೇ?" {{gap}}"ನಿಮಗೆ ತಲೆಮರೆಸ್ಕೊಂಡು ತಿರುಗಾಡೋ ಕ್ರಾಂತಿಕಾರರ ಪರಿಚಯ ಇಲ್ವೋ?" {{gap}}"ನಮಗೆ ಅದೊಂದೂ ಗೊತ್ತಿಲ್ಲ." {{gap}}"ಪಂಡಿತ ಅಂತ ಒಬ್ಬನ ಹೆಸರು ಕೇಳಿದ್ದೀರೋ?" {{gap}}ಅಪ್ಪುವಿನ ಮುಖ ಕೆಂಪಗಾಯಿತು. ಚಿರುಕಂಡ ಶಾಂತನಾಗಿಯೇ ನುಡಿದ: {{gap}}"ನಮಗೆ ಯಾವ ಪಂಡಿತರ ಪರಿಚಯವೂ ಇಲ್ಲ." {{gap}}"ಹಾಗೇನು? ತಳಿಪರಂಬ ರೈತ ಸಮ್ಮೇಳನಕ್ಕೆ ಯಾರು ನಿಮ್ಮನ್ನು ಕಳಿಸ್ದೋರು?" {{gap}}"ಯಾರೂ ಇಲ್ಲ. ಜಾತ್ರೆಗೆ ಹೋದವರು ನಾವಾಗಿಯೇ ಸಮ್ಮೇಳವನ್ನೂ ನೋಡಿದೆವು." {{gap}}ಅವರೆಗೂ ಸುಮ್ಮನಿದ್ದ ನಂಬೂದಿರಿ ಬಾಯಿ ತೆರೆದು, "ಜಾತ್ರೆಗೆ ಹೋದರು, ಮರುಳಾದರು" ಎಂದು ಹೇಳಿ ಖೊಖೋ ಎಂದು ನಕ್ಕರು. ನಂಬೂದಿರಿಯ ನಗು ಕೇಳಿ ಘೌಜದಾರರ ವಿಚಾರ ಸರಣಿ ಕಡಿದುಹೋಯಿತು. ಆದರೂ ಸುಧಾರಿಸಿಕೊಂಡು ಅವರೆಂದರು: {{gap}}"ನಿಮ್ಮ ಸಂಘದ ಉದ್ದೇಶವೇನು?" {{gap}}ಅಪ್ಪು ಉದ್ವೇಗದ ಸ್ವರದಲ್ಲಿ ಕೇಳಿದ: {{gap}}"ಯಾವುದೋ ವಿಚಾರಣೆ ಮಾಡೋ ಹಾಗೆ ಪ್ರಶ್ನೆ ಕೇಳ್ತಿದ್ದೀರಲ್ಲ!" {{gap}}ಘೌಜದಾರರು ಸ್ವರವೇರಿಸಿದರು: {{gap}}"ಹೌದು, ವಿಚಾರಣೆಯೇ!ನಿಮ್ಮ ಮೇಲೆ ದೂರು ಬಂದಿದೆ." {{gap}}ಅಪ್ಪು ಕೆಣಕಿ ನುಡಿದ: {{gap}}"ಹಾಗಾದರೆ ಹಿಡಕಂಡು ಹೋಗಿ;ನ್ಯಾಯಸ್ಥಾನದಲ್ಲಿ ವಿಚಾರಣೆ ನಡೀಲಿ!" {{gap}}"ಯಾಕೆ, ಜೈಲಿಗೆ ಹೋಗೋದಕ್ಕೆ ಆಸೆಯಾಗ್ತಿದೆಯೊ?" {{gap}}ಸಂವಾದದ ರೀತಿ ಬದಲಾಗಬೇಕೆಂದು ಚಿರುಕಂಡನೆಂದ:<noinclude></noinclude> akremcpxlhzc5ui60rsnxf8yz97xjyo ಪುಟ:Chirasmarane-Niranjana.pdf/೧೫೩ 104 12972 324189 65555 2026-06-03T04:11:03Z Vikashegde 1258 /* Proofread */ 324189 proofread-page text/x-wiki <noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=೧೫೪|right=}}</noinclude>{{gap}}"ನಮ್ಮ ಸಂಘದ ಧ್ಯೇಯ ಧೋರಣೆ ಏನೂಂತ ವಿವರಿಸಿ ನಾವೊಂದು ಕರಪತ್ರ ಹೊರಡಿಸಿದ್ದೇವೆ. ನೀವು ನೋಡಿರಬಹುದು." {{gap}}"ಹೂಂ." {{gap}}"ಅದನ್ನೋದಿ. ಎಲ್ಲ ವಿಷಯವೂ ನಿಮಗೆ ತಿಳೀತದೆ." {{gap}}"ರೈತರ ಹಿತರಕ್ಷಣೆ ಮಾಡೋದರ ಹೊರತು ಬೇರೆ. ಉದ್ದೇಶವೇನೂ ಇಲ್ಲವೊ?" {{gap}}"ಹೇಳಿದೆನಲ್ಲ. ಎಲ್ಲಾ ಆ ಕರಪತ್ರದಲ್ಲಿದೆ." {{gap}}ತೃಪ್ತಿಕರವಾದ ರೀತಿಯಲ್ಲಿ ಪ್ರಶ್ನೋತ್ತರ ನಡೆಯುತ್ತಿಲ್ಲವೆಂದು ನಂಬಿಯಾರರು ಫೌಜದಾರರಿಗೆ ಹೇಳಿದರು: “ಆ ಬಾವುಟದ ವಿಷಯ ಕೇಳಿ." {{gap}}ಫೌಜದಾರರು ಒಂದು ನಿಮಿಷ ಮೌನವಾಗಿದ್ದು ಅಂದರು: {{gap}}ಆ ಬಾವುಟ ನಿಮಗೆ ಯಾರು ಕೊಟ್ಟರು?" {{gap}}"ನಾವೇ ಮಾಡಿದವು.” {{gap}}"ಅದನ್ನು ಹಾರಿಸೋದು ರಾಜದ್ರೋಹ ಅಂತ ನಿಮಗೆ ಗೊತ್ತೊ?" {{gap}}"ಅದು ಯಾವ ದ್ರೋಹವೂ ಅಲ್ಲ. ಅದು ಅಖಿಲ ಭಾರತ ರೈತ ಸಂಘದ ನಿಶಾನೆ. ಕಾನೂನುಬದ್ಧ. {{gap}}"ಓಹೋ! ಕಾನೂನು ಬೇರೆ ಮಾತಾಡ್ತೀರೋ? ಎಷ್ಟು ಓದಿದ್ದೀರಪ್ಪ ನೀವು?" {{gap}}ನಿಮ್ಮಷ್ಟು ಓದಿಲ್ಲ!” ಎಂದ ಅಪ್ಪು. {{gap}}ನಂಬಿಯಾರರು ಥಟಕ್ಕನೆ ಕುರ್ಚಿಯಲ್ಲೇ ಮೈ ನಿಡಿದು ಕುಳಿತು ಕೈಬೀಸಿ ಕೂಗಾಡಿದರು. {{gap}}"ಬಿಗಿಯಿರಿ ಅವನಿಗೆ ನಾಲ್ಕೇಟು | ರಾಸ್ಕಲ್‌ ! ಹ್ಯಾಗೆ ಆಡ್ತಿದ್ದಾನೆ ನೋಡಿ!" {{gap}}ನಂಬಿಯಾರರ ಆಳುಗಳು ಅಪ್ಪುವಿನ ಮೇಲೆ ಧುಮುಕಲು ಮುಂದಾದರು. ಆದರೆ ಆ ಕೆಲಸವನ್ನು ಕ್ರಮಬದ್ಧವಾಗಿ ಮಾಡಲು ಪೋಲೀಸರಿರುವರೆಂದು ಅವರು ಸುಮ್ಮನಿರಬೇಕಾಯಿತು. ಪೋಲಿಸರೇನೋ ಸಿದ್ಧವಾಗಿದ್ದರು. ಆದರೆ ಫೌಜದಾರರ ಸೂಚನೆ ಬರದೆ ಇದ್ದುದರಿಂದ, ಅವರು ಮುಂದುವರಿಯಲಿಲ್ಲ. {{gap}}ಜಮೀನ್ದಾರರು ಕತ್ತನ್ನು ಮುಂದಕ್ಕೆ ಚಾಚಿ ಮೊಗಸಾಲೆಯ ಅಡ್ಡ ಗೋಡೆಯಾಚೆ "ಥೂ!" ಎಂದು ಉಗುಳಿದರು. {{gap}}ಫೌಜದಾರರು ಏರುದನಿಯಲ್ಲಿ ನುಡಿದರು: {{gap}}"ಮಲಬಾರನಲ್ಲಿರೋ ಈ ರೋಗ ನಮ್ಮ ತಾಲ್ಲೂಕಿಗೂ ಹಬ್ಬಬೇಕೂಂತ ಮಾಡಿದ್ದೀರೇನು? ಖಂಡಿತ ಬಿಡೋದಿಲ್ಲ! ನಾವಿರೋದು ಯಾತಕ್ಕೆ? ಹಿಂದೆ ದೊಡ್ಡ<noinclude></noinclude> jzs47piq86d4j1vbgf9vw2tt99p4ncc 324190 324189 2026-06-03T06:45:16Z Shreesha Sharma 7840 /* Validated */ 324190 proofread-page text/x-wiki <noinclude><pagequality level="4" user="Shreesha Sharma" />{{rh|center=ಚಿರಸ್ಮರಣೆ|left=೧೫೪|right=}}</noinclude>{{gap}}"ನಮ್ಮ ಸಂಘದ ಧ್ಯೇಯ ಧೋರಣೆ ಏನೂಂತ ವಿವರಿಸಿ ನಾವೊಂದು ಕರಪತ್ರ ಹೊರಡಿಸಿದ್ದೇವೆ. ನೀವು ನೋಡಿರಬಹುದು." {{gap}}"ಹೂಂ." {{gap}}"ಅದನ್ನೋದಿ. ಎಲ್ಲ ವಿಷಯವೂ ನಿಮಗೆ ತಿಳೀತದೆ." {{gap}}"ರೈತರ ಹಿತರಕ್ಷಣೆ ಮಾಡೋದರ ಹೊರತು ಬೇರೆ. ಉದ್ದೇಶವೇನೂ ಇಲ್ಲವೊ?" {{gap}}"ಹೇಳಿದೆನಲ್ಲ. ಎಲ್ಲಾ ಆ ಕರಪತ್ರದಲ್ಲಿದೆ." {{gap}}ತೃಪ್ತಿಕರವಾದ ರೀತಿಯಲ್ಲಿ ಪ್ರಶ್ನೋತ್ತರ ನಡೆಯುತ್ತಿಲ್ಲವೆಂದು ನಂಬಿಯಾರರು ಫೌಜದಾರರಿಗೆ ಹೇಳಿದರು: “ಆ ಬಾವುಟದ ವಿಷಯ ಕೇಳಿ." {{gap}}ಫೌಜದಾರರು ಒಂದು ನಿಮಿಷ ಮೌನವಾಗಿದ್ದು ಅಂದರು: {{gap}}ಆ ಬಾವುಟ ನಿಮಗೆ ಯಾರು ಕೊಟ್ಟರು?" {{gap}}"ನಾವೇ ಮಾಡಿದೆವು.” {{gap}}"ಅದನ್ನು ಹಾರಿಸೋದು ರಾಜದ್ರೋಹ ಅಂತ ನಿಮಗೆ ಗೊತ್ತೊ?" {{gap}}"ಅದು ಯಾವ ದ್ರೋಹವೂ ಅಲ್ಲ. ಅದು ಅಖಿಲ ಭಾರತ ರೈತ ಸಂಘದ ನಿಶಾನೆ. ಕಾನೂನುಬದ್ಧ. {{gap}}"ಓಹೋ! ಕಾನೂನು ಬೇರೆ ಮಾತಾಡ್ತೀರೋ? ಎಷ್ಟು ಓದಿದ್ದೀರಪ್ಪ ನೀವು?" {{gap}}ನಿಮ್ಮಷ್ಟು ಓದಿಲ್ಲ!” ಎಂದ ಅಪ್ಪು. {{gap}}ನಂಬಿಯಾರರು ಥಟಕ್ಕನೆ ಕುರ್ಚಿಯಲ್ಲೇ ಮೈ ನಿಡಿದು ಕುಳಿತು ಕೈಬೀಸಿ ಕೂಗಾಡಿದರು. {{gap}}"ಬಿಗಿಯಿರಿ ಅವನಿಗೆ ನಾಲ್ಕೇಟು | ರಾಸ್ಕಲ್‌ ! ಹ್ಯಾಗೆ ಆಡ್ತಿದ್ದಾನೆ ನೋಡಿ!" {{gap}}ನಂಬಿಯಾರರ ಆಳುಗಳು ಅಪ್ಪುವಿನ ಮೇಲೆ ಧುಮುಕಲು ಮುಂದಾದರು. ಆದರೆ ಆ ಕೆಲಸವನ್ನು ಕ್ರಮಬದ್ಧವಾಗಿ ಮಾಡಲು ಪೋಲೀಸರಿರುವರೆಂದು ಅವರು ಸುಮ್ಮನಿರಬೇಕಾಯಿತು. ಪೋಲಿಸರೇನೋ ಸಿದ್ಧವಾಗಿದ್ದರು. ಆದರೆ ಫೌಜದಾರರ ಸೂಚನೆ ಬರದೆ ಇದ್ದುದರಿಂದ, ಅವರು ಮುಂದುವರಿಯಲಿಲ್ಲ. {{gap}}ಜಮೀನ್ದಾರರು ಕತ್ತನ್ನು ಮುಂದಕ್ಕೆ ಚಾಚಿ ಮೊಗಸಾಲೆಯ ಅಡ್ಡ ಗೋಡೆಯಾಚೆ "ಥೂ!" ಎಂದು ಉಗುಳಿದರು. {{gap}}ಫೌಜದಾರರು ಏರುದನಿಯಲ್ಲಿ ನುಡಿದರು: {{gap}}"ಮಲಬಾರನಲ್ಲಿರೋ ಈ ರೋಗ ನಮ್ಮ ತಾಲ್ಲೂಕಿಗೂ ಹಬ್ಬಬೇಕೂಂತ ಮಾಡಿದ್ದೀರೇನು? ಖಂಡಿತ ಬಿಡೋದಿಲ್ಲ! ನಾವಿರೋದು ಯಾತಕ್ಕೆ? ಹಿಂದೆ ದೊಡ್ಡ<noinclude></noinclude> rt7lazl7cq52pfgsfee4frieyvmgfpp ಪುಟ:Chirasmarane-Niranjana.pdf/೧೫೬ 104 12975 324191 63933 2026-06-03T06:50:06Z Shreesha Sharma 7840 /* Proofread */ 324191 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ |center=|right=೧೫೭}} {{gap}}ಆ ಮಾತಿನಲ್ಲಿ ಸೂಚ್ಯವಾಗಿದ್ದುದು ತಮಗೆ ಅರ್ಥವಾಯಿತೆಂದು ಹಲವರು ನಕ್ಕರು. {{gap}}ಮುಂದೆ ಜನ,ಅರ್ಧಲ್ಲೇ ಬಿಟ್ಟು ಬಂದಿದ್ದ ಕೆಲಸಗಳನ್ನು ಪೂರ್ತಿಗೊಳಿಸಿಲೆಂದು ಚದರಿದರು. {{gap}}....ಹೊಸದುರ್ಗಕ್ಕೆ ಹೊರಟುನಿಂತ ಫೌಜದಾರರಿಗೂ ಪೋಲೀಸರಿಗೂ ಉಡುಗೊರೆಯನ್ನೇನ್ನೋ ಜಮೀನ್ದಾರರು ಕೊಟ್ಟರು. ಆದರೆ ತಮ್ಮ ಅಸಮಾದಾನವನ್ನು ವ್ಯಕ್ತಪಡಿಸದಿರಲಿಲ್ಲ. ಅವರೆಂದರು: {{gap}}"ನೀವು ಮೃದು, ಬಹಳ ಮೃದು." {{gap}}ತಮ್ಮ ಕಷ್ಟ ನಿಮಗೆ ಅರ್ಥವಾಗೋದಿಲ್ಲ. ನೀವಿನ್ನೂ ಹತ್ತೊಂಭತ್ತನೇ ಶತಮಾನದ ನ್ಯಾಯ ಮಾತಾಡ್ತೀರಿ. ಈಗ ಪರಿಸ್ಥಿತಿ ಬದಲಾಗಿದೆ. ಮೊದಲಾದರೆ ಇಷ್ಟ ಬಂದಹಾಗೆ ಏನು ಬೇಕಾದರೂ ಮಾಡಬಹುದಿತ್ತು. ಈಗ ಹಾಗಲ್ಲ. ಪತ್ರಿಕೆಗಳಿವೆ. ಕಾಂಗ್ರೆಸಿನವರೂ ಗಲಾಟೆ ಎಬ್ಬಿಸ್ತಾರೆ.ಆದ್ದರಿಂದ ಪ್ರತಿಯೊಂದೂ ನ್ಯಾಯ ಪ್ರಕಾರ ನಡೀತಿದೆ ಅಂತ ತೋರಿಸ್ಕೊಂಡೇ ಮುಂದುವರೀಬೇಕು." {{gap}}"ಆದರೆ ನೀವು ಮುಂದುವರಿಯೋ ಹೊತ್ತಿಗೆ ಎಲ್ಲಾ ಮುಗಿದಿರತ್ತದೆ!" {{gap}}"ಹಾಗಂದರೇನು?" {{gap}}"ಆ ಅಪ್ಪು-ಚಿರುಕಂಡ ಎಲ್ಲಾ ನನ್ನ ಕಣ್ಣೆದುರಲ್ಲೇ ಹುಟ್ಟಿ ಬೆಳ್ದೋರು. ನೋಡಿ, ಹ್ಯಾಗೆ ಸೊಕ್ಕಿದ್ದಾರೆ ! ಅವರಿಗೆ ಏರಡು ಬಿಗೀಬೇಕಾಗಿತ್ತು." {{gap}}ತಮ್ಮ ಖಾಕಿ ಚಡ್ಡಿಯೊಳಕ್ಕೆ ಕೈತೂರಿಸುತ್ತ ಘೌಜದಾರರೆಂದರು: {{gap}}"ಬಿಗಿಯೋದು ದೊಡ್ಡ ಮಾತಲ್ಲ. ಆದರೆ ಎಷ್ಟೊಂದು ಜನ ಸೇರಿಬಿಟ್ಟ್ಟರೂ ಅಂತ ನೋಡಿದಿರೋ ಇಲ್ವೋ?" {{gap}}"ಜನ ನೋಡಿ ಗಾಬರಿಯಾದ್ರೇನೋ ನೀವು? ಅಷ್ಟೇ ಜನ ಇಲ್ಲಿಗೆ ಬಂದು ನಿಮ್ಮೆದುರಲ್ಲೇ ಮನೆಗೆ ಬೆಂಕಿ ಇಡ್ತೇವೇಂತ ಹೇಳಿದರೂ ಸುಮ್ಮನಿರ್ತೀರೇನೊ?" {{gap}}"ಹಾಗಲ್ಲ ಸರ್." {{gap}}"ಹಾಗಲ್ಲ ಹೀಗೆ!" {{gap}}"ನೀವು ತಪ್ಪು ತಿಳಕೊಂಡಿದ್ದೀರಿ. ನಿಮಗೆ ಅಸಮಾಧಾನಪಡಿಸಿ ನಮಗೆ ಸಿಗೋ ಲಾಭವಾದರೂ ಏನು? ಇನ್ನೊಂದ್ಸಲ ನೋಡಿ. ಹೀಗಾಗೋದಿಲ್ಲ." {{gap}}ಘೌಜದಾರರು ಸ್ಟಲ್ಪ ಹಾದಿಗೆ ಬಂದರೆಂದು ಜಮೀನ್ದಾರರೆಂದರು:<noinclude></noinclude> 6gpbvsl08n71lh84g9fz2vcuhagxjtf 324194 324191 2026-06-03T06:59:22Z Shreelatha.Halemane 7642 /* Validated */ 324194 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ |center=|right=೧೫೭}} {{gap}}ಆ ಮಾತಿನಲ್ಲಿ ಸೂಚ್ಯವಾಗಿದ್ದುದು ತಮಗೆ ಅರ್ಥವಾಯಿತೆಂದು ಹಲವರು ನಕ್ಕರು. {{gap}}ಮುಂದೆ ಜನ,ಅರ್ಧಲ್ಲೇ ಬಿಟ್ಟು ಬಂದಿದ್ದ ಕೆಲಸಗಳನ್ನು ಪೂರ್ತಿಗೊಳಿಸಿಲೆಂದು ಚದರಿದರು. {{gap}}....ಹೊಸದುರ್ಗಕ್ಕೆ ಹೊರಟುನಿಂತ ಫೌಜದಾರರಿಗೂ ಪೋಲೀಸರಿಗೂ ಉಡುಗೊರೆಯನ್ನೇನ್ನೋ ಜಮೀನ್ದಾರರು ಕೊಟ್ಟರು. ಆದರೆ ತಮ್ಮ ಅಸಮಾದಾನವನ್ನು ವ್ಯಕ್ತಪಡಿಸದಿರಲಿಲ್ಲ. ಅವರೆಂದರು: {{gap}}"ನೀವು ಮೃದು, ಬಹಳ ಮೃದು." {{gap}}ತಮ್ಮ ಕಷ್ಟ ನಿಮಗೆ ಅರ್ಥವಾಗೋದಿಲ್ಲ. ನೀವಿನ್ನೂ ಹತ್ತೊಂಭತ್ತನೇ ಶತಮಾನದ ನ್ಯಾಯ ಮಾತಾಡ್ತೀರಿ. ಈಗ ಪರಿಸ್ಥಿತಿ ಬದಲಾಗಿದೆ. ಮೊದಲಾದರೆ ಇಷ್ಟ ಬಂದಹಾಗೆ ಏನು ಬೇಕಾದರೂ ಮಾಡಬಹುದಿತ್ತು. ಈಗ ಹಾಗಲ್ಲ. ಪತ್ರಿಕೆಗಳಿವೆ. ಕಾಂಗ್ರೆಸಿನವರೂ ಗಲಾಟೆ ಎಬ್ಬಿಸ್ತಾರೆ.ಆದ್ದರಿಂದ ಪ್ರತಿಯೊಂದೂ ನ್ಯಾಯ ಪ್ರಕಾರ ನಡೀತಿದೆ ಅಂತ ತೋರಿಸ್ಕೊಂಡೇ ಮುಂದುವರೀಬೇಕು." {{gap}}"ಆದರೆ ನೀವು ಮುಂದುವರಿಯೋ ಹೊತ್ತಿಗೆ ಎಲ್ಲಾ ಮುಗಿದಿರತ್ತದೆ!" {{gap}}"ಹಾಗಂದರೇನು?" {{gap}}"ಆ ಅಪ್ಪು-ಚಿರುಕಂಡ ಎಲ್ಲಾ ನನ್ನ ಕಣ್ಣೆದುರಲ್ಲೇ ಹುಟ್ಟಿ ಬೆಳ್ದೋರು. ನೋಡಿ, ಹ್ಯಾಗೆ ಸೊಕ್ಕಿದ್ದಾರೆ ! ಅವರಿಗೆ ಏರಡು ಬಿಗೀಬೇಕಾಗಿತ್ತು." {{gap}}ತಮ್ಮ ಖಾಕಿ ಚಡ್ಡಿಯೊಳಕ್ಕೆ ಕೈತೂರಿಸುತ್ತ ಘೌಜದಾರರೆಂದರು: {{gap}}"ಬಿಗಿಯೋದು ದೊಡ್ಡ ಮಾತಲ್ಲ. ಆದರೆ ಎಷ್ಟೊಂದು ಜನ ಸೇರಿಬಿಟ್ಟ್ಟರೂ ಅಂತ ನೋಡಿದಿರೋ ಇಲ್ವೋ?" {{gap}}"ಜನ ನೋಡಿ ಗಾಬರಿಯಾದ್ರೇನೋ ನೀವು? ಅಷ್ಟೇ ಜನ ಇಲ್ಲಿಗೆ ಬಂದು ನಿಮ್ಮೆದುರಲ್ಲೇ ಮನೆಗೆ ಬೆಂಕಿ ಇಡ್ತೇವೇಂತ ಹೇಳಿದರೂ ಸುಮ್ಮನಿರ್ತೀರೇನೊ?" {{gap}}"ಹಾಗಲ್ಲ ಸರ್." {{gap}}"ಹಾಗಲ್ಲ ಹೀಗೆ!" {{gap}}"ನೀವು ತಪ್ಪು ತಿಳಕೊಂಡಿದ್ದೀರಿ. ನಿಮಗೆ ಅಸಮಾಧಾನಪಡಿಸಿ ನಮಗೆ ಸಿಗೋ ಲಾಭವಾದರೂ ಏನು? ಇನ್ನೊಂದ್ಸಲ ನೋಡಿ. ಹೀಗಾಗೋದಿಲ್ಲ." {{gap}}ಘೌಜದಾರರು ಸ್ಟಲ್ಪ ಹಾದಿಗೆ ಬಂದರೆಂದು ಜಮೀನ್ದಾರರೆಂದರು:<noinclude></noinclude> sudxnzpolxmu043ii4xm6pjungsnlfg ಪುಟ:Chirasmarane-Niranjana.pdf/೧೫೭ 104 12976 324192 63960 2026-06-03T06:55:54Z Shreesha Sharma 7840 /* Proofread */ 324192 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೧೫೮ |center=|right= ಚಿರಸ್ಮರಣೆ}} {{gap}}"ನನಗೆ ಕೋಪ ಬಂತೂಂತ ನೀವು ತಪ್ಪು ತಿಳೀಬೇಡಿ. ಬೇಸರವಾಯ್ತು ಅದಕ್ಕೆ ಹಾಗೆಂದೆ." {{gap}}"ಇರಲಿ, ದೊಡ್ಡದಲ್ಲ" {{gap}}"ನೀವು ಇಲ್ಲಿಯ ಪರಿಸ್ಥಿತಿ ವಿಷಯ ಮೇಲಧಿಕಾರಿಗಳಿಗೆ ಜೋರಗಿಯೇ ವರದಿ ಮಾಡ್ಬೇಕು." {{gap}}"ಮಾಡ್ತೇನೆ." {{gap}}"ಮೊಳಕೇಲೇ ಚಿವುಟದಿದ್ದರೆ, ಮರವಾದ್ಮೇಲೆ ಕಷ್ಟ. ಇವರ ಒಗ್ಗಟ್ಟಿನಿಂದಾಗಿ ನಮಗಿನ್ನು ಇದರಿಂದ ಯಾವ ರೀತಿಯ ಸಹಾಯವೂ ಸಿಗೋದಿಲ್ಲ. ನಮ್ಮ ಸಾಲ ವಸೂಲಾಗೋದು ಕಷ್ಟವಾಗ್ತದೆ. ಗೇಣಿ ಸಂದಾಯವೂ ನಿಂತು ಹೋಗ್ಬಹುದು. ಗೌರವ ಮರ್ಯಾದೆ ಯಾವುದೂ ಇಲ್ಲದೆ ನಾವು ಊರು ಬಿಡ್ಭೇಕಾಗ್ತದೆ, ಅಷ್ಟೆ... ಹಾಂ... ಇದು ನಮಗೆ ಸಂಬಂಧಿಸಿದ್ದು ಮಾತ್ರವಲ್ಲ ಇವರೆಲ್ಲ ಸರಕಾರದ ಮಾತನ್ನೂ ಆಡ್ತಾರೆ. ಸಮ್ರಾಜ್ಯಶಾಹಿಯನ್ನು ನಿರ್ನಾಮ ಮಾಡ್ತೇವೇಂತ ಪ್ರತಿಜ್ಞೆ ತಗೊಂಡಿದ್ದಾರಂತೆ. ಆ ಮಾಸ್ತರು ಹುಡುಗರನ್ನ ಹ್ಯಾಗೆ ಕೆಡಿಸ್ತಿದ್ದ ಅನ್ನೋದಂತೂ ಮಧ್ಯಾಹ್ನವೇ ಹೇಳಿದ್ದೇನೆ. ಇವರು ಗಾಂಧೀವಾದಿಗಳಂತೂ ಅಲ್ಲ. ನೀವು ಊಹಿಸಿದ ಹಾಗೆ ಕ್ರಾಂತಿಕಾರರೇ ಇರಬಹುದು.ನನ್ನ ಅಭಿಪ್ರಾಯ, ಈ ರೈತ ಸಂಘದ ಮೇಲೆಯೇ ನಿಷೇಧಾಜ್ಞೆ ಹೊರಿಸ್ಬೇಕು. ಏನೇಳ್ತಿರಾ?" {{gap}}ನಂಬಿಯಾರರ ಮಾತುಗಳನ್ನೆಲ್ಲ ಮೌನವಾಗಿ ಕೇಳಿದ ಘೌಜದಾರರೆಂದರು: {{gap}}"ನಿಷೇಧಾಜ್ಞೆ ಹೊರಡಿಸೋದು ಪ್ರಾಂತ ಸರಕಾರಕ್ಕೆ ಸಂಬಂಧಿಸಿದ ವಿಷಯ. ರೈತ ಸಂಘ ಅನ್ನೋದು ಎಲ್ಲಾ ಕಡೇಲೂ ಇದೆನೋಡಿ." {{gap}}"ಅದು ನನಗೆ ತಿಳೀದಾ? ನಿಷೇಧಿಸೋ ಹಾಗೆ ನೀವು ಒತ್ತಾಯಿಸ್ಬೇಕೂಂತ ನಾನಂದೆ." {{gap}}"ಹೂಂ." {{gap}}"ಇದು ನನ್ನೊಬ್ಬನದೇ ಅಲ್ಲ; ನಂಬೂದಿರಿ ಜಮೀನ್ದಾರರ ಅಭಿಪ್ರಾಯವೂ ಇದೇ ಅಂತ ಬರೆದ್ಬಿಡಿ.... ಆತ ಮಹಾ ಪುಕ್ಕಲು. ಹ್ಯಾಗೆ ಕೂತಿದ್ದಾಂತ ನೋಡಿದಿರೋ ಇಲ್ಲವೊ? ನಾಳೆ ಈ ರೈತರೆಲ್ಲ, 'ಜಮೀನು ನಮ್ಮದೇ'- ಅಂದರೆ, 'ಒಪ್ದೆ, ನಿಮ್ಮದೇ'- ಅನ್ನೋ ಜಾತಿ. ಇಂಥವರನ್ನು ನಂಬಿಕೊಂಡು ನಾವು ಕೆಲಸ ಮಾಡ್ಬೇಕು! ಇಲ್ಲಿ ದಿನ ಕಳೆಯೋದು ಎಷ್ಟು ಕಷ್ಟ ಗೊತ್ತೋ?" {{gap}}ಹೌದು, ಹೌದೆನ್ನುವಂತೆ ಘೌಜದಾರರು ಮಖಬಾವದ ಮೂಲಕ ಸಂಪೂರ್ಣ ಸಹಾನುಭೂತಿಯನ್ನು ವ್ಯಕ್ತಪಡಿಸಿದರು.....<noinclude></noinclude> sjf3i73ijkkhmstht1qdbknrce8p7fs 324193 324192 2026-06-03T06:59:12Z Shreelatha.Halemane 7642 /* Validated */ 324193 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೫೮ |center=|right= ಚಿರಸ್ಮರಣೆ}} {{gap}}"ನನಗೆ ಕೋಪ ಬಂತೂಂತ ನೀವು ತಪ್ಪು ತಿಳೀಬೇಡಿ. ಬೇಸರವಾಯ್ತು ಅದಕ್ಕೆ ಹಾಗೆಂದೆ." {{gap}}"ಇರಲಿ, ದೊಡ್ಡದಲ್ಲ" {{gap}}"ನೀವು ಇಲ್ಲಿಯ ಪರಿಸ್ಥಿತಿ ವಿಷಯ ಮೇಲಧಿಕಾರಿಗಳಿಗೆ ಜೋರಗಿಯೇ ವರದಿ ಮಾಡ್ಬೇಕು." {{gap}}"ಮಾಡ್ತೇನೆ." {{gap}}"ಮೊಳಕೇಲೇ ಚಿವುಟದಿದ್ದರೆ, ಮರವಾದ್ಮೇಲೆ ಕಷ್ಟ. ಇವರ ಒಗ್ಗಟ್ಟಿನಿಂದಾಗಿ ನಮಗಿನ್ನು ಇದರಿಂದ ಯಾವ ರೀತಿಯ ಸಹಾಯವೂ ಸಿಗೋದಿಲ್ಲ. ನಮ್ಮ ಸಾಲ ವಸೂಲಾಗೋದು ಕಷ್ಟವಾಗ್ತದೆ. ಗೇಣಿ ಸಂದಾಯವೂ ನಿಂತು ಹೋಗ್ಬಹುದು. ಗೌರವ ಮರ್ಯಾದೆ ಯಾವುದೂ ಇಲ್ಲದೆ ನಾವು ಊರು ಬಿಡ್ಭೇಕಾಗ್ತದೆ, ಅಷ್ಟೆ... ಹಾಂ... ಇದು ನಮಗೆ ಸಂಬಂಧಿಸಿದ್ದು ಮಾತ್ರವಲ್ಲ ಇವರೆಲ್ಲ ಸರಕಾರದ ಮಾತನ್ನೂ ಆಡ್ತಾರೆ. ಸಮ್ರಾಜ್ಯಶಾಹಿಯನ್ನು ನಿರ್ನಾಮ ಮಾಡ್ತೇವೇಂತ ಪ್ರತಿಜ್ಞೆ ತಗೊಂಡಿದ್ದಾರಂತೆ. ಆ ಮಾಸ್ತರು ಹುಡುಗರನ್ನ ಹ್ಯಾಗೆ ಕೆಡಿಸ್ತಿದ್ದ ಅನ್ನೋದಂತೂ ಮಧ್ಯಾಹ್ನವೇ ಹೇಳಿದ್ದೇನೆ. ಇವರು ಗಾಂಧೀವಾದಿಗಳಂತೂ ಅಲ್ಲ. ನೀವು ಊಹಿಸಿದ ಹಾಗೆ ಕ್ರಾಂತಿಕಾರರೇ ಇರಬಹುದು.ನನ್ನ ಅಭಿಪ್ರಾಯ, ಈ ರೈತ ಸಂಘದ ಮೇಲೆಯೇ ನಿಷೇಧಾಜ್ಞೆ ಹೊರಿಸ್ಬೇಕು. ಏನೇಳ್ತಿರಾ?" {{gap}}ನಂಬಿಯಾರರ ಮಾತುಗಳನ್ನೆಲ್ಲ ಮೌನವಾಗಿ ಕೇಳಿದ ಘೌಜದಾರರೆಂದರು: {{gap}}"ನಿಷೇಧಾಜ್ಞೆ ಹೊರಡಿಸೋದು ಪ್ರಾಂತ ಸರಕಾರಕ್ಕೆ ಸಂಬಂಧಿಸಿದ ವಿಷಯ. ರೈತ ಸಂಘ ಅನ್ನೋದು ಎಲ್ಲಾ ಕಡೇಲೂ ಇದೆನೋಡಿ." {{gap}}"ಅದು ನನಗೆ ತಿಳೀದಾ? ನಿಷೇಧಿಸೋ ಹಾಗೆ ನೀವು ಒತ್ತಾಯಿಸ್ಬೇಕೂಂತ ನಾನಂದೆ." {{gap}}"ಹೂಂ." {{gap}}"ಇದು ನನ್ನೊಬ್ಬನದೇ ಅಲ್ಲ; ನಂಬೂದಿರಿ ಜಮೀನ್ದಾರರ ಅಭಿಪ್ರಾಯವೂ ಇದೇ ಅಂತ ಬರೆದ್ಬಿಡಿ.... ಆತ ಮಹಾ ಪುಕ್ಕಲು. ಹ್ಯಾಗೆ ಕೂತಿದ್ದಾಂತ ನೋಡಿದಿರೋ ಇಲ್ಲವೊ? ನಾಳೆ ಈ ರೈತರೆಲ್ಲ, 'ಜಮೀನು ನಮ್ಮದೇ'- ಅಂದರೆ, 'ಒಪ್ದೆ, ನಿಮ್ಮದೇ'- ಅನ್ನೋ ಜಾತಿ. ಇಂಥವರನ್ನು ನಂಬಿಕೊಂಡು ನಾವು ಕೆಲಸ ಮಾಡ್ಬೇಕು! ಇಲ್ಲಿ ದಿನ ಕಳೆಯೋದು ಎಷ್ಟು ಕಷ್ಟ ಗೊತ್ತೋ?" {{gap}}ಹೌದು, ಹೌದೆನ್ನುವಂತೆ ಘೌಜದಾರರು ಮಖಬಾವದ ಮೂಲಕ ಸಂಪೂರ್ಣ ಸಹಾನುಭೂತಿಯನ್ನು ವ್ಯಕ್ತಪಡಿಸಿದರು.....<noinclude></noinclude> lk9kpovbp8mva15fy4cwoamwkj619ep ಪುಟ:Chirasmarane-Niranjana.pdf/೧೫೮ 104 12977 324195 64164 2026-06-03T07:01:45Z Shreesha Sharma 7840 /* Proofread */ 324195 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ |center=|right=೧೫೮}} {{gap}}ಘೌಜದಾರರು ಹೊಸದುಗರ್ಗಕ್ಕೆ ಒಯ್ಯಲೆಂದು ಕಯ್ಯೂರಿನ ತರಕಾರಿ ಹಣ್ಣು ಹಂಪಲುಗಳ ದೊಡ್ಡ ಬುಟ್ಟಿ ಸಿದ್ಧವಾಯಿತು. ಹೊತ್ತುಕೊಳ್ಳಲು ಪೋಲೀಸರು ಮುಂದಾದರೂ, ರೈತರೆದುರು ಪೋಲೀಸರ ಘನತೆಗೆ ಚ್ಯುತಿ ಬರಬಾರದೆಂದು, ಚರ್ವತ್ತೂರು ರೈಲು ನಿಲ್ದಾಣದವರೆಗೂ ಒಬ್ಬ ಆಳನ್ನು ನಂಬಿಯಾರರು ಕಳುಹಿಸಿಕೊಟ್ಟರು. {{gap}}ಬೀಳ್ಕೊಡುತ್ತ ಅವರು, ಅಗಾಗ್ಗೆ ಭೇಟಿಕೊಡುತ್ತಿರಲು ಆಹ್ವಾನ ನೀಡಿದರು. ಅವರೆಂದರು: {{gap}}"ಈ ಸಲ ಎಲ್ಲ ಅವಸರದಲ್ಲೇ ಆಯ್ತು. ಮುಂದಿನ ಸಾರಿ ಬಂದಾಗ ಏಳೆಂಟು ದಿವಸ ಇಲ್ಲೇ ಕ್ಯಾಂಪ್ ಮಾಡಿ. ಕಯ್ಯೂರಿನ ಆತಿಥ್ಯ ಎಂಥದೂಂತ ತೋರಿಸಿಕೊಡ್ತೇನೆ!...." {{gap}}....ಆ ರಾತ್ರಿಯೇ ರೈತಸಂಘದ ಕಯ್ಯೂರಿನ ಸಭೆ ಸೇರಿ ಹಗಲು ಹೊತ್ತು ನಡೆದ ಘಟನೆಗಳನ್ನು ಪರಿಶೀಲಿಸಿತು. ನೀಲೇಶ್ವರದಿಂದ ಕತ್ತಲಾದಾಗ ಹಿಂತಿರುಗಿದ ಮಾಸ್ತರೂ ಸಭೆಯಲ್ಲಿ ಭಾಗವಹಿಸಿದರು. {{gap}}ತಾವು ಇಲ್ಲದೇ ಇದ್ದಾಗ ಪೋಲೀಸರ ಆಗಮನದಂತಹ ಮುಖ್ಯ ಘಟನೆಯೊಂದು ಜರಗಿ ಎಲ್ಲವೂ ಸರಿಯಾದ ರೀತಿಯಲ್ಲೇ ನಡೆದುದನ್ನು ಕಂಡು, ಮಾಸ್ತರಿಗೆ ಸಂತೋಷಾವಾಯಿತು. ತಾವು ಕಯ್ಯೂರು ಬಿಡಬೇಕಾದ ಪರಿಸ್ಥಿತಿಯನ್ನು ಕುರಿತು ನೀಲೇಶ್ವರದಲ್ಲಿ ಸಹಬಾಂಧವರೊಡನೆ ಚರ್ಚಿಸಿ ಬರಲು ಹೋಗಿದ್ದ ಅವರಿಗೆ, ನಿಶ್ಟಿಂತೆಯಿಂದ ತಾವಿನ್ನು ಈ ಊರಿನಿಂದ ಹೊರಡಬಹುದೆಂದು ತೋರಿತು. {{gap}}ಸಂಘ ಮುಂದೆ ಮಾಡಬೇಕಾದ ಕೆಲಸ ಕಾರ್ಯಗಳ ಬಗೆಗೆ ದೀರ್ಘ ಚರ್ಚೆ ನಡೆಯಿತು. ಬರಲಿದ್ದುದು ಮಳೆಗಾಲ. ರೈತರಿಗೆ ಹೆಚ್ಚು ಬಿಡುವಿರುವ ಸಮಯ. ಆಗ ಹಳ್ಳಿಯ ರೈತರನ್ನು ಹಲವಾರು ಗುಂಪುಗಳಾಗಿ ವಿಂಗಡಿಸಿ, ಕಥೆ ಹಾಡುಗಾರಿಕೆಗಳ ಕಾಲಕ್ಷೇಪದ ಜತೆಗೆ ಅಬ್ಯಾಸ ಕೂಟಗಳು ನಡೆಯಬೇಕೆಂದಾಯಿತು. ಇನ್ನು ಓದು ಬಾರದ ಗಂಡಸರು ಹೆಂಗಸರಿಗೆ ಅಲ್ಲಲ್ಲಿ ತರಗತಿಗಳು. ವರ್ಷಕ್ಕೆ ಒಂದಾಣೆ ಪಡೆದು ಪ್ರಾಯಸ್ಥರಾದ ರೈತರೆಲ್ಲರನ್ನೂ ಸಂಘಕ್ಕೆ ಸೇರಿಸುವುದು. {{gap}}ಮಳೆಗಾಲ ಮುಗಿಯುವ ಹೊತ್ತಿಗೆ ಸಂಘಕ್ಕೋಸ್ಕರ ಸ್ಟಂತದ್ದೊಂದು ಗುಡಿಸಲನ್ನು ಕಟ್ಟುವ, ಅಲ್ಲಿ ವಾಚನಾಲಯ ತೆರೆಯುವ, ಸಲಹೆ ಬಂತು. ಅದಕ್ಕೆ, ಊರಿನ ಕೇಂದ್ರದಲ್ಲೇ ಎಲ್ಲಾದರೂ ಜಾಗ ಸಿಗುವುದೇನೋ ಎಂದು ಅವರು ವಿಚಾರಿಸಿದರು.<noinclude></noinclude> fncw7ev30x96z6kmqudrqae4i4s82ym 324209 324195 2026-06-03T07:26:31Z Shreelatha.Halemane 7642 /* Validated */ 324209 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ |center=|right=೧೫೮}} {{gap}}ಘೌಜದಾರರು ಹೊಸದುಗರ್ಗಕ್ಕೆ ಒಯ್ಯಲೆಂದು ಕಯ್ಯೂರಿನ ತರಕಾರಿ ಹಣ್ಣು ಹಂಪಲುಗಳ ದೊಡ್ಡ ಬುಟ್ಟಿ ಸಿದ್ಧವಾಯಿತು. ಹೊತ್ತುಕೊಳ್ಳಲು ಪೋಲೀಸರು ಮುಂದಾದರೂ, ರೈತರೆದುರು ಪೋಲೀಸರ ಘನತೆಗೆ ಚ್ಯುತಿ ಬರಬಾರದೆಂದು, ಚರ್ವತ್ತೂರು ರೈಲು ನಿಲ್ದಾಣದವರೆಗೂ ಒಬ್ಬ ಆಳನ್ನು ನಂಬಿಯಾರರು ಕಳುಹಿಸಿಕೊಟ್ಟರು. {{gap}}ಬೀಳ್ಕೊಡುತ್ತ ಅವರು, ಅಗಾಗ್ಗೆ ಭೇಟಿಕೊಡುತ್ತಿರಲು ಆಹ್ವಾನ ನೀಡಿದರು. ಅವರೆಂದರು: {{gap}}"ಈ ಸಲ ಎಲ್ಲ ಅವಸರದಲ್ಲೇ ಆಯ್ತು. ಮುಂದಿನ ಸಾರಿ ಬಂದಾಗ ಏಳೆಂಟು ದಿವಸ ಇಲ್ಲೇ ಕ್ಯಾಂಪ್ ಮಾಡಿ. ಕಯ್ಯೂರಿನ ಆತಿಥ್ಯ ಎಂಥದೂಂತ ತೋರಿಸಿಕೊಡ್ತೇನೆ!...." {{gap}}....ಆ ರಾತ್ರಿಯೇ ರೈತಸಂಘದ ಕಯ್ಯೂರಿನ ಸಭೆ ಸೇರಿ ಹಗಲು ಹೊತ್ತು ನಡೆದ ಘಟನೆಗಳನ್ನು ಪರಿಶೀಲಿಸಿತು. ನೀಲೇಶ್ವರದಿಂದ ಕತ್ತಲಾದಾಗ ಹಿಂತಿರುಗಿದ ಮಾಸ್ತರೂ ಸಭೆಯಲ್ಲಿ ಭಾಗವಹಿಸಿದರು. {{gap}}ತಾವು ಇಲ್ಲದೇ ಇದ್ದಾಗ ಪೋಲೀಸರ ಆಗಮನದಂತಹ ಮುಖ್ಯ ಘಟನೆಯೊಂದು ಜರಗಿ ಎಲ್ಲವೂ ಸರಿಯಾದ ರೀತಿಯಲ್ಲೇ ನಡೆದುದನ್ನು ಕಂಡು, ಮಾಸ್ತರಿಗೆ ಸಂತೋಷಾವಾಯಿತು. ತಾವು ಕಯ್ಯೂರು ಬಿಡಬೇಕಾದ ಪರಿಸ್ಥಿತಿಯನ್ನು ಕುರಿತು ನೀಲೇಶ್ವರದಲ್ಲಿ ಸಹಬಾಂಧವರೊಡನೆ ಚರ್ಚಿಸಿ ಬರಲು ಹೋಗಿದ್ದ ಅವರಿಗೆ, ನಿಶ್ಟಿಂತೆಯಿಂದ ತಾವಿನ್ನು ಈ ಊರಿನಿಂದ ಹೊರಡಬಹುದೆಂದು ತೋರಿತು. {{gap}}ಸಂಘ ಮುಂದೆ ಮಾಡಬೇಕಾದ ಕೆಲಸ ಕಾರ್ಯಗಳ ಬಗೆಗೆ ದೀರ್ಘ ಚರ್ಚೆ ನಡೆಯಿತು. ಬರಲಿದ್ದುದು ಮಳೆಗಾಲ. ರೈತರಿಗೆ ಹೆಚ್ಚು ಬಿಡುವಿರುವ ಸಮಯ. ಆಗ ಹಳ್ಳಿಯ ರೈತರನ್ನು ಹಲವಾರು ಗುಂಪುಗಳಾಗಿ ವಿಂಗಡಿಸಿ, ಕಥೆ ಹಾಡುಗಾರಿಕೆಗಳ ಕಾಲಕ್ಷೇಪದ ಜತೆಗೆ ಅಬ್ಯಾಸ ಕೂಟಗಳು ನಡೆಯಬೇಕೆಂದಾಯಿತು. ಇನ್ನು ಓದು ಬಾರದ ಗಂಡಸರು ಹೆಂಗಸರಿಗೆ ಅಲ್ಲಲ್ಲಿ ತರಗತಿಗಳು. ವರ್ಷಕ್ಕೆ ಒಂದಾಣೆ ಪಡೆದು ಪ್ರಾಯಸ್ಥರಾದ ರೈತರೆಲ್ಲರನ್ನೂ ಸಂಘಕ್ಕೆ ಸೇರಿಸುವುದು. {{gap}}ಮಳೆಗಾಲ ಮುಗಿಯುವ ಹೊತ್ತಿಗೆ ಸಂಘಕ್ಕೋಸ್ಕರ ಸ್ಟಂತದ್ದೊಂದು ಗುಡಿಸಲನ್ನು ಕಟ್ಟುವ, ಅಲ್ಲಿ ವಾಚನಾಲಯ ತೆರೆಯುವ, ಸಲಹೆ ಬಂತು. ಅದಕ್ಕೆ, ಊರಿನ ಕೇಂದ್ರದಲ್ಲೇ ಎಲ್ಲಾದರೂ ಜಾಗ ಸಿಗುವುದೇನೋ ಎಂದು ಅವರು ವಿಚಾರಿಸಿದರು.<noinclude></noinclude> adhkdui1tmv26xp0atpfq6jdswyv9ot ಪುಟ:Chirasmarane-Niranjana.pdf/೧೫೯ 104 12978 324196 64633 2026-06-03T07:05:54Z Shreesha Sharma 7840 /* Proofread */ 324196 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೧೬೦ |center=|right=ಚಿರಸ್ಮರಣೆ}} {{gap}}ಸಮಿತಿಯ ಒಬ್ಬ ಸದಸ್ಯ ನುಡಿದ: {{gap}}"ಜಾಗ ಗೊತ್ತು ಮಾಡುವ ಜವಾಬ್ದಾರಿ ನನಗಿರಲಿ. ತಂದೆಗೂ ಅಣ್ಣನಿಗೂ ಹೇಳಿ ಒಪ್ಪಿಸ್ತೇನೆ. ನಮ್ಮ ಹೊಲದ ಉತ್ತರಕ್ಕೆ ಖಾಲಿ ಜಾಗ ಇದೆಯಲ್ಲ ಅಲ್ಲೇ ಕಟ್ಟಬಹುದು. ಕಯ್ಯೂ ರಿಗೆಲ್ಲ ಅದು ಕೇಂದ್ರವೇ." {{gap}}ಆ ಸಲಹೆ ಮಾಡಿದವನು ಪೊಡವರ ಕುಂಇಂಬು. {{gap}}ಅಪ್ಪುವಿನ ತಂದೆಯೆಂದ: {{gap}}"ನಮ್ಮ ಜಾಗದಲ್ಲೂ ಕಟ್ಟಬಹುದಾಗಿತ್ತು. ಆದರೆ ಇದು ಹಳ್ಳಿಗೆ ಕೇಂದ್ರವಲ್ಲ.... ಆಗಲಿ. ಹಾಗೇ ಆಗಲಿ. ಪೊಡವರ ಕುಂಇಂಬು ಹೇಳಿದ್ದನ್ನು ವರದಿ ಪುಸ್ತಕದಲ್ಲಿ ಬರ್ಕೊಳ್ಳಿ." {{gap}}ಸೀಮೆ ಎಣ್ಣೆ ದೀಪದ ಹೊಗೆ ಬೆಳಕಿನಲ್ಲಿ, ನೆಲದ ಮೇಲೆ ಮಂಡಿಯೂರಿ, ಚಿರುಕಂಡ ಅದನ್ನು ಬರೆದುಕೊಂಡ; ನೇರವಾಗಿ ಕುಳಿತು, ಕೆಳಕ್ಕೆ ನೋಡುತ್ತ ಇತರರಿಗೆ ಕೇಳಿಸುವಂತೆ ಬರೆದುದನ್ನೋದಿದ. {{gap}}ಹಿಂದೆ ಗೋಡೆಗೊರಗಿ ಕುಳಿತಿದ್ದರು ಮಾಸ್ತರು. ಅವರ ಕಣ್ಣು ಮಂಜಾಯಿತು. ಯಾರಿಗೂ ಕಾಣಿಸದಂತೆ, ಭುಜದ ಮೇಲಿದ್ದ ಅಂಗವಸ್ರ್ತವನ್ನೆತ್ತಿ ಅವರು ತಮ್ಮ ಕಣ್ಣಗಳಿಗೆ ಒತ್ತಿಕೊಂಡರು. {{center|೧೩}} {{gap}}ಒಂದು ಸಂಜೆ ಕಣ್ಣ ಅಪ್ಪುವನ್ನು ಹುಡುಕಿ ಬಂದು, :ರಾತ್ರೆಯ ಊಟಕ್ಕೆ ನಮ್ಮನೆಗೆ ಬಾ ರಾಜ" ಎಂದ. {{gap}}"ಕೇಳಿದಿಯಾ ಅಮ್ಮ?" ಎಂದು ಅಪ್ಪು ತಾಯಿಯನ್ನು ಕರೆದ. {{gap}}"ಏನೋ ಕಣ್ಣ ಸಮಾಚಾರ? ದೇವಕಿಗೆ ಬಯಕೆ ಊಟವೇನೋ?" ಎಂದಳು ಅಪ್ಪುವಿನ ತಾಯಿ. {{gap}}ಆ ಊಹೆಯಲ್ಲಿ ನಿಜಾಂಶವಿದ್ದುದರಿಂದ ಕಣ್ಣನ ಮುಖ ರಂಗೇರಿತು. ಆತ ಮಾತನಾಡಲಿಲ್ಲ. {{gap}}"ಆಹ್ಹಾ!" ಎಂದ ಅಪ್ಪು, "ಅಮ್ಮ ಊಹಿಸಿದ್ದು ನಿಜವೇ." ತಾಯಿಯತ್ತ ನೋಡಿ ಆತನೆಂದು: "ಅಲ್ಲ, ನಿನಗೆ ಹ್ಯಾಗಮ್ಮ ಹೊಳೀತು ಇದು?" {{gap}}"ಸಾಕು ಸಾಕು! ಎಲ್ಲರೂ ನಿನ್ನ ಹಾಗೆ ಹಗಲು ರಾತ್ರೆ ಸಂಘ--ಬಾವುಟಗಳ ಧ್ಯಾನ ಮಾತ್ರ ಮಾಡ್ತಾರೇಂತೆ ತಿಳಿದ್ಯಾ?" {{gap}}ಅಪ್ಪು ನಕ್ಕ; ಮರುಮಾತನ್ನಾಡಲಿಲ್ಲ. ಕಣ್ಣನತ್ತ ತಿರುಗಿ ಹೇಳಿದ:<noinclude></noinclude> qlf71p65wlzssczjzd52r31jeplpz52 324210 324196 2026-06-03T07:26:47Z Shreelatha.Halemane 7642 /* Validated */ 324210 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೬೦ |center=|right=ಚಿರಸ್ಮರಣೆ}} {{gap}}ಸಮಿತಿಯ ಒಬ್ಬ ಸದಸ್ಯ ನುಡಿದ: {{gap}}"ಜಾಗ ಗೊತ್ತು ಮಾಡುವ ಜವಾಬ್ದಾರಿ ನನಗಿರಲಿ. ತಂದೆಗೂ ಅಣ್ಣನಿಗೂ ಹೇಳಿ ಒಪ್ಪಿಸ್ತೇನೆ. ನಮ್ಮ ಹೊಲದ ಉತ್ತರಕ್ಕೆ ಖಾಲಿ ಜಾಗ ಇದೆಯಲ್ಲ ಅಲ್ಲೇ ಕಟ್ಟಬಹುದು. ಕಯ್ಯೂ ರಿಗೆಲ್ಲ ಅದು ಕೇಂದ್ರವೇ." {{gap}}ಆ ಸಲಹೆ ಮಾಡಿದವನು ಪೊಡವರ ಕುಂಇಂಬು. {{gap}}ಅಪ್ಪುವಿನ ತಂದೆಯೆಂದ: {{gap}}"ನಮ್ಮ ಜಾಗದಲ್ಲೂ ಕಟ್ಟಬಹುದಾಗಿತ್ತು. ಆದರೆ ಇದು ಹಳ್ಳಿಗೆ ಕೇಂದ್ರವಲ್ಲ.... ಆಗಲಿ. ಹಾಗೇ ಆಗಲಿ. ಪೊಡವರ ಕುಂಇಂಬು ಹೇಳಿದ್ದನ್ನು ವರದಿ ಪುಸ್ತಕದಲ್ಲಿ ಬರ್ಕೊಳ್ಳಿ." {{gap}}ಸೀಮೆ ಎಣ್ಣೆ ದೀಪದ ಹೊಗೆ ಬೆಳಕಿನಲ್ಲಿ, ನೆಲದ ಮೇಲೆ ಮಂಡಿಯೂರಿ, ಚಿರುಕಂಡ ಅದನ್ನು ಬರೆದುಕೊಂಡ; ನೇರವಾಗಿ ಕುಳಿತು, ಕೆಳಕ್ಕೆ ನೋಡುತ್ತ ಇತರರಿಗೆ ಕೇಳಿಸುವಂತೆ ಬರೆದುದನ್ನೋದಿದ. {{gap}}ಹಿಂದೆ ಗೋಡೆಗೊರಗಿ ಕುಳಿತಿದ್ದರು ಮಾಸ್ತರು. ಅವರ ಕಣ್ಣು ಮಂಜಾಯಿತು. ಯಾರಿಗೂ ಕಾಣಿಸದಂತೆ, ಭುಜದ ಮೇಲಿದ್ದ ಅಂಗವಸ್ರ್ತವನ್ನೆತ್ತಿ ಅವರು ತಮ್ಮ ಕಣ್ಣಗಳಿಗೆ ಒತ್ತಿಕೊಂಡರು. {{center|೧೩}} {{gap}}ಒಂದು ಸಂಜೆ ಕಣ್ಣ ಅಪ್ಪುವನ್ನು ಹುಡುಕಿ ಬಂದು, :ರಾತ್ರೆಯ ಊಟಕ್ಕೆ ನಮ್ಮನೆಗೆ ಬಾ ರಾಜ" ಎಂದ. {{gap}}"ಕೇಳಿದಿಯಾ ಅಮ್ಮ?" ಎಂದು ಅಪ್ಪು ತಾಯಿಯನ್ನು ಕರೆದ. {{gap}}"ಏನೋ ಕಣ್ಣ ಸಮಾಚಾರ? ದೇವಕಿಗೆ ಬಯಕೆ ಊಟವೇನೋ?" ಎಂದಳು ಅಪ್ಪುವಿನ ತಾಯಿ. {{gap}}ಆ ಊಹೆಯಲ್ಲಿ ನಿಜಾಂಶವಿದ್ದುದರಿಂದ ಕಣ್ಣನ ಮುಖ ರಂಗೇರಿತು. ಆತ ಮಾತನಾಡಲಿಲ್ಲ. {{gap}}"ಆಹ್ಹಾ!" ಎಂದ ಅಪ್ಪು, "ಅಮ್ಮ ಊಹಿಸಿದ್ದು ನಿಜವೇ." ತಾಯಿಯತ್ತ ನೋಡಿ ಆತನೆಂದು: "ಅಲ್ಲ, ನಿನಗೆ ಹ್ಯಾಗಮ್ಮ ಹೊಳೀತು ಇದು?" {{gap}}"ಸಾಕು ಸಾಕು! ಎಲ್ಲರೂ ನಿನ್ನ ಹಾಗೆ ಹಗಲು ರಾತ್ರೆ ಸಂಘ--ಬಾವುಟಗಳ ಧ್ಯಾನ ಮಾತ್ರ ಮಾಡ್ತಾರೇಂತೆ ತಿಳಿದ್ಯಾ?" {{gap}}ಅಪ್ಪು ನಕ್ಕ; ಮರುಮಾತನ್ನಾಡಲಿಲ್ಲ. ಕಣ್ಣನತ್ತ ತಿರುಗಿ ಹೇಳಿದ:<noinclude></noinclude> e0qvq8nv4tpz5huzb8xggj1l6tbt728 ಪುಟ:Chirasmarane-Niranjana.pdf/೧೬೨ 104 12981 324197 65377 2026-06-03T07:09:00Z Shreesha Sharma 7840 /* Proofread */ 324197 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೧೬೩}} ಕರಕೊಂಡುಬಂದಿದ್ದೆ, ನೆನಪಿದೆಯಾ? ಆದರೆ ಆ ಸಲ ಹಾಗೇ ಹೊರಟುಹೋದೆ. ಆಮೇಲೆ ಎಷ್ಟೋಸಾರೆ ನೀನು ಊಟಕ್ಕೆ ಬಂದಿದ್ದರೂ ಕರಿಗಡುಬು ಮಾಡಿರ್ಲಿಲ್ಲ. ಇವತ್ತು ಮಾಡಿದೆ. ಅದಕ್ಕೇ, ನಿನ್ನೊಬ್ಬನನ್ನೇ ಕರೆದದ್ದು." {{gap}}ಕರಿಗಡುಬು ತಿನ್ನಲೆಂದು ಮೊದಲೊಮ್ಮೆ ಬಂದಿದ್ದ. ಆ ರಾತ್ರೆಯೊ, ಅದೆಂದೂ ಮರೆಯಲಾಗದ ನೆನಪು. ಕಣ್ಣನ ಮಾತುಗಳನ್ನು ಕೇಳುತ್ತ ಅಪ್ಪುವಿನ ಮನಸ್ಸು ನಿರ್ಮಲವಾಯಿತು; ಹೃದಯ ಹಗುರವಾಯಿತು. ಆತ ಲವಲವಿಕೆಯಿಂದ ಮಾತನಾಡತೊಡಗಿದ. ಹೆಂಗಸರು ಮುಖ್ಯವಾಗಿ-ದೇವಕಿ ಜಾನಕಿಯರು-ಜಾನಕಿ ದೇವಕಿಯರು-ತಮ್ಮ ಸಂಭಾಷಣೆಗೆ ಕಿವಿಗೊಡುತ್ತಿರುವೆಂಬ ಅರಿವಿನಿಂದಲೇ, ಆ ವಿಷಯ ಈ ವಿಷಯ ಪ್ರಸ್ತಾಪಿಸಿ ಅಪ್ಪು ಸ್ವಾರಸ್ಯವಾಗಿ ಮಾತನಾಡಿದ.... ಊಟವಾಯಿತು. ಅಪ್ಪು ವೀಳ್ಯದೆಲೆ ಹಾಕಿಕೊಳ್ಳಲಿಲ್ಲ. ಕಣ್ಣ ಒತ್ತಾಯಿಸಿದಾಗ ದೇವಕಿ, "ಅವರು ವೀಳ್ಯ ಹಾಕಿಕೊಳ್ಳದ ಬ್ರಹ್ಮಚಾರಿ! ಬಲವಂತ ಮಾಡ್ಬೇಡಿ" ಎಂದಳು. ಕಣ್ಣ ನಕ್ಕ. ಏನು ಹೇಳಬೇಕೆಂದು ತಿಳಿಯದೆ ಪೆಚ್ಚಾಗಿ ಅಪ್ಪುವೂ ನಕ್ಕ. {{gap}}ಆತ ಹೊರಟು ನಿಂತಾಗ ಬಾಗಿಲ ಬಳಿಗೆ ಬಂದು ದೇವಕಿ ಕೇಳಿದಳು: {{gap}}"ಬ್ಯಾಟರಿ ತರ್ಲಿಲ್ವ ಇವತ್ತು?" {{gap}}"ಇಷ್ಟೊಂದು ತಿಂಗಳ ಬೆಳಕಿದೆ!" {{gap}}"ಆದರೂ ತರಲಿಲ್ವೇನೋಂತ ಕೇಳ್ದೆ." {{gap}}ಇದು ಅರ್ಥವಿಲ್ಲದ ಮಾತಾಗಿ ಅಪ್ಪುವಿಗೆ ತೋರಿತು. ಆದರೆ ದೇವಕಿ ಒಳಕ್ಕೆ ತಿರುಗಿ ಹೇಳಿದಳು: {{gap}}"ಬ್ಯಾಟರಿ ಅಂದರೆ ಇವರಿಗೆ ಪ್ರಾಣವಿದ್ದ ಹಾಗೆ!" {{gap}}ಒಳಗಿನಿಂದ ಇಂಪಾದ ಕಿಲಕಿಲ ಮುಗ್ಧನಗು ಕೇಳಿಸಿತು. ಆ ನಗೆಯ ಗುಂಗಿನಲ್ಲೇ ಅಪ್ಪು ಹಾದಿ ನಡೆದ. {{gap}}".....ಅಡುಗೆ ಚೆನ್ನಾಗಿ ಮಾಡಿದ್ದರೇನೊ?" ಎಂದು ತಾಯಿ ಮನೆಯಲ್ಲಿ ಕೇಳಿದಳು. {{gap}}ಆತ "ಹೂಂ" ಎಂದ. {{gap}}"ಎಲ್ಲರೂ ಬಂದಿದ್ದರಾ?" {{gap}}ಮತ್ತೊಮ್ಮೆ "ಹೂಂ." {{gap}}.....ಆ ರಾತ್ರೆ ನಿದ್ದೆ ಅಪ್ಪುವಿನ ಬಳಿಗೆ ಬರುವುದು ತಡವಾಯಿತು.<noinclude></noinclude> ju50osbir6ciqtbp4sefe35jilgtd70 324202 324197 2026-06-03T07:15:21Z Shreelatha.Halemane 7642 /* Validated */ 324202 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೧೬೩}} ಕರಕೊಂಡುಬಂದಿದ್ದೆ, ನೆನಪಿದೆಯಾ? ಆದರೆ ಆ ಸಲ ಹಾಗೇ ಹೊರಟುಹೋದೆ. ಆಮೇಲೆ ಎಷ್ಟೋಸಾರೆ ನೀನು ಊಟಕ್ಕೆ ಬಂದಿದ್ದರೂ ಕರಿಗಡುಬು ಮಾಡಿರ್ಲಿಲ್ಲ. ಇವತ್ತು ಮಾಡಿದೆ. ಅದಕ್ಕೇ, ನಿನ್ನೊಬ್ಬನನ್ನೇ ಕರೆದದ್ದು." {{gap}}ಕರಿಗಡುಬು ತಿನ್ನಲೆಂದು ಮೊದಲೊಮ್ಮೆ ಬಂದಿದ್ದ. ಆ ರಾತ್ರೆಯೊ, ಅದೆಂದೂ ಮರೆಯಲಾಗದ ನೆನಪು. ಕಣ್ಣನ ಮಾತುಗಳನ್ನು ಕೇಳುತ್ತ ಅಪ್ಪುವಿನ ಮನಸ್ಸು ನಿರ್ಮಲವಾಯಿತು; ಹೃದಯ ಹಗುರವಾಯಿತು. ಆತ ಲವಲವಿಕೆಯಿಂದ ಮಾತನಾಡತೊಡಗಿದ. ಹೆಂಗಸರು ಮುಖ್ಯವಾಗಿ-ದೇವಕಿ ಜಾನಕಿಯರು-ಜಾನಕಿ ದೇವಕಿಯರು-ತಮ್ಮ ಸಂಭಾಷಣೆಗೆ ಕಿವಿಗೊಡುತ್ತಿರುವೆಂಬ ಅರಿವಿನಿಂದಲೇ, ಆ ವಿಷಯ ಈ ವಿಷಯ ಪ್ರಸ್ತಾಪಿಸಿ ಅಪ್ಪು ಸ್ವಾರಸ್ಯವಾಗಿ ಮಾತನಾಡಿದ.... ಊಟವಾಯಿತು. ಅಪ್ಪು ವೀಳ್ಯದೆಲೆ ಹಾಕಿಕೊಳ್ಳಲಿಲ್ಲ. ಕಣ್ಣ ಒತ್ತಾಯಿಸಿದಾಗ ದೇವಕಿ, "ಅವರು ವೀಳ್ಯ ಹಾಕಿಕೊಳ್ಳದ ಬ್ರಹ್ಮಚಾರಿ! ಬಲವಂತ ಮಾಡ್ಬೇಡಿ" ಎಂದಳು. ಕಣ್ಣ ನಕ್ಕ. ಏನು ಹೇಳಬೇಕೆಂದು ತಿಳಿಯದೆ ಪೆಚ್ಚಾಗಿ ಅಪ್ಪುವೂ ನಕ್ಕ. {{gap}}ಆತ ಹೊರಟು ನಿಂತಾಗ ಬಾಗಿಲ ಬಳಿಗೆ ಬಂದು ದೇವಕಿ ಕೇಳಿದಳು: {{gap}}"ಬ್ಯಾಟರಿ ತರ್ಲಿಲ್ವ ಇವತ್ತು?" {{gap}}"ಇಷ್ಟೊಂದು ತಿಂಗಳ ಬೆಳಕಿದೆ!" {{gap}}"ಆದರೂ ತರಲಿಲ್ವೇನೋಂತ ಕೇಳ್ದೆ." {{gap}}ಇದು ಅರ್ಥವಿಲ್ಲದ ಮಾತಾಗಿ ಅಪ್ಪುವಿಗೆ ತೋರಿತು. ಆದರೆ ದೇವಕಿ ಒಳಕ್ಕೆ ತಿರುಗಿ ಹೇಳಿದಳು: {{gap}}"ಬ್ಯಾಟರಿ ಅಂದರೆ ಇವರಿಗೆ ಪ್ರಾಣವಿದ್ದ ಹಾಗೆ!" {{gap}}ಒಳಗಿನಿಂದ ಇಂಪಾದ ಕಿಲಕಿಲ ಮುಗ್ಧನಗು ಕೇಳಿಸಿತು. ಆ ನಗೆಯ ಗುಂಗಿನಲ್ಲೇ ಅಪ್ಪು ಹಾದಿ ನಡೆದ. {{gap}}".....ಅಡುಗೆ ಚೆನ್ನಾಗಿ ಮಾಡಿದ್ದರೇನೊ?" ಎಂದು ತಾಯಿ ಮನೆಯಲ್ಲಿ ಕೇಳಿದಳು. {{gap}}ಆತ "ಹೂಂ" ಎಂದ. {{gap}}"ಎಲ್ಲರೂ ಬಂದಿದ್ದರಾ?" {{gap}}ಮತ್ತೊಮ್ಮೆ "ಹೂಂ." {{gap}}.....ಆ ರಾತ್ರೆ ನಿದ್ದೆ ಅಪ್ಪುವಿನ ಬಳಿಗೆ ಬರುವುದು ತಡವಾಯಿತು.<noinclude></noinclude> 4pedch3wxvfdcidgb0z3jjr16fvfeil ಪುಟ:Chirasmarane-Niranjana.pdf/೧೬೩ 104 12982 324198 65847 2026-06-03T07:12:01Z Shreesha Sharma 7840 /* Proofread */ 324198 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೧೬೪|center=|right=ಚಿರಸ್ಮರಣೆ}} {{gap}}......ಬೆಳಿಗ್ಗೆ ಎದ್ದ ಅಪ್ಪು ಎಲ್ಲವನ್ನೂ ಮರೆತವನಂತೆ ತಲೆಕೊಡವಿ, ಭತ್ತದ ಕಣಜ ಕಟ್ಟುವ ಕೆಲಸದಲ್ಲಿ ತಂದೆಗೆ ನೆರವಾದ. ಸಂಜೆ ಚಿರುಕಂಡನ ಭೇಟಿಯಾಯಿತು. ಆಗ, ರಾತ್ರೆ ತಾನು ಕಣ್ಣನ ಮನೆಗೆ ಊಟಕ್ಕೆ ಹೋಗಿದ್ದ ವಿಷಯ ಚಿರುಕಂಡನಿಗೆ ತಿಳಿಸಬೇಕೆಂದಿತು ಅಪ್ಪುವಿನ ಮನಸ್ಸು. ಆದರೆ ತನ್ನಿಂತಾನಾಗಿಯೇ ಆ ಯೋಚನೆ ಮರೆಯಾಯಿತು! {{gap}}ಕಣ್ಣ ಯಾಕೆ ತನ್ನನ್ನು ಒಬ್ಬನನ್ನೇ ಊಟಕ್ಕೆ ಕರೆದಿದ್ದನೆಂಬುದನ್ನು ಅಪ್ಪು ತರ್ಕಿಸಿದ್ದ. ಕ್ರಾಂತಿಕಾರನಾದ ತಾನು ಅಂತಹ ಯೋಚನೆ ಮಾಡುವುದೇ ತಪ್ಪೆಂದು ಒಳದನಿ ಚೀರುತ್ತಿತ್ತು. ಕಣ್ಣನೇನಾದರೂ ಬಂದು ಆ ಪ್ರಸ್ತಾಪವೆತ್ತಿದರೆ ಚೆನ್ನಾಗಿ ಬಯ್ದುಬಿಡಬೇಕು ಎಂದುಕೊಂಡ ಅಪ್ಪು. ಆದರೆ ಕಣ್ಣ ಸಂಜೆ ಸಿಗಲಿಲ್ಲ. ಆದರಿಂದ ಅಪ್ಪುವಿಗೆ ಬೇಸರವಾಯಿತು. {{gap}}ಮಾರನೆಯ ದಿನ ಉರಿಬಿಸಿಲಲ್ಲಿ ಅಪ್ಪು ನದಿಗೆ ಹೋಗಿ ತಣ್ಣನೆ ಸ್ನಾನ ಮಾಡಿದ. ಹಿಂದೊಮ್ಮೆ ಕಲ್ಲುಬಂಡೆಯ ಮೇಲೆ ಬಿಸಿಲಲ್ಲಿ ಮೈಯ ನೀರು ಆರಿಸಿಕೊಳ್ಳುತ್ತಿದ್ದಾಗ ದೇವಕಿಗೆ ಸಂಬಂಧಿಸಿ ಕಣ್ಣ ಆಡಿದ್ದ ಮಾತು ನೆನಪಾಗಿ ನಗುಬಂತು. ಆದರೆ ಮರುಕ್ಷಣವೇ ಕಸಿವಿಸಿ ಎನಿಸಿತು. 'ನದಿಯದಂಡೆಯುದ್ದಕ್ಕೂ ಮೇಲಕ್ಕೆ ಹೋದರೆ ಕಣ್ಣನ ಮನೆ ಸಿಗ್ತದೆ. ನಿನ್ನೆಯೆಲ್ಲ ಆತ ಕಾಣಿಸಿಕೊಂಡೇ ಇಲ್ಲ, ಮನೇಲಿದ್ದಾನೇನೋ ನೋಡ್ಬಹುದು'ಎಂದಿತು ಮನಸ್ಸು. ಮರುಕ್ಷಣವೇ ಆ ಬಯಕೆಯೊಳಗಿನ ಬಯಕೆ ಸ್ಪಷ್ಟವಾಗಿ, ಆತ ತನಗೆ ತಾನೇ ಛೀಮಾರಿ ಹಾಕಿದ. {{gap}}ಆ ದಿನವೂ ಕಣ್ಣ ಕಾಣಿಸದಿದ್ದಾಗ ಅಪ್ಪುವಿನ ಮನಸ್ಸು ಅಸ್ತವ್ಯಸ್ತವಾಯಿತು. {{gap}}"ಮೈ ಸರಿಯಾಗಿಲ್ವೇನೋ?"ಎಂದ ಚಿರುಕಂಡ. {{gap}}"ಯಾಕೋ ಒಂಥರಾ ಇದ್ದೀಯಲ್ಲ ಅಪ್ಪು?"ಎಂದು ಮಾಸ್ತರು ಕೇಳಿದರು. {{gap}}"ಏನಿಲ್ಲ, ಏನಿಲ್ಲ" ಎಂದು ಹೇಳಿ ಅಪ್ಪು ಅವರಿಂದ ತಪ್ಪಿಸಿಕೊಂಡ.ಆದರೆ ಮನಸ್ಸನ್ನು ಸುತ್ತುವರಿದ ಯೋಚನೆಗಳ ಮುತ್ತಿಗೆಯಿಂದ ಅಷ್ಟೇ ಸುಲಭವಾಗಿ ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. {{gap}}ಆದರೆ ಮರುದಿನ ಕಣ್ಣ ಸಿಕ್ಕಿದಾಗ ಅಪ್ಪು ಕೇಳಿದ: {{gap}}"ಎಲ್ಲಿಘೋಗಿದ್ದೆ ಎರಡು ದಿವಸ?" {{gap}}"ಮನೇಲಿ ಇದ್ದೆನಪ್ಪ." {{gap}}"ಹಾಗೇನು? ನಿಮ್ಮ ಅತ್ತೇನ ಬಿಟ್ಟುಬರೋದಕ್ಕೆ ನೀನೆಲ್ಲಾದರೂ ಊರಿಗೆ ಹೋದೆಯೇನೋಂತಿದ್ದೆ."<noinclude></noinclude> 3p1r9wk9l7wrbgz8jtteu627tcwuopb 324201 324198 2026-06-03T07:15:12Z Shreelatha.Halemane 7642 /* Validated */ 324201 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೬೪|center=|right=ಚಿರಸ್ಮರಣೆ}} {{gap}}......ಬೆಳಿಗ್ಗೆ ಎದ್ದ ಅಪ್ಪು ಎಲ್ಲವನ್ನೂ ಮರೆತವನಂತೆ ತಲೆಕೊಡವಿ, ಭತ್ತದ ಕಣಜ ಕಟ್ಟುವ ಕೆಲಸದಲ್ಲಿ ತಂದೆಗೆ ನೆರವಾದ. ಸಂಜೆ ಚಿರುಕಂಡನ ಭೇಟಿಯಾಯಿತು. ಆಗ, ರಾತ್ರೆ ತಾನು ಕಣ್ಣನ ಮನೆಗೆ ಊಟಕ್ಕೆ ಹೋಗಿದ್ದ ವಿಷಯ ಚಿರುಕಂಡನಿಗೆ ತಿಳಿಸಬೇಕೆಂದಿತು ಅಪ್ಪುವಿನ ಮನಸ್ಸು. ಆದರೆ ತನ್ನಿಂತಾನಾಗಿಯೇ ಆ ಯೋಚನೆ ಮರೆಯಾಯಿತು! {{gap}}ಕಣ್ಣ ಯಾಕೆ ತನ್ನನ್ನು ಒಬ್ಬನನ್ನೇ ಊಟಕ್ಕೆ ಕರೆದಿದ್ದನೆಂಬುದನ್ನು ಅಪ್ಪು ತರ್ಕಿಸಿದ್ದ. ಕ್ರಾಂತಿಕಾರನಾದ ತಾನು ಅಂತಹ ಯೋಚನೆ ಮಾಡುವುದೇ ತಪ್ಪೆಂದು ಒಳದನಿ ಚೀರುತ್ತಿತ್ತು. ಕಣ್ಣನೇನಾದರೂ ಬಂದು ಆ ಪ್ರಸ್ತಾಪವೆತ್ತಿದರೆ ಚೆನ್ನಾಗಿ ಬಯ್ದುಬಿಡಬೇಕು ಎಂದುಕೊಂಡ ಅಪ್ಪು. ಆದರೆ ಕಣ್ಣ ಸಂಜೆ ಸಿಗಲಿಲ್ಲ. ಆದರಿಂದ ಅಪ್ಪುವಿಗೆ ಬೇಸರವಾಯಿತು. {{gap}}ಮಾರನೆಯ ದಿನ ಉರಿಬಿಸಿಲಲ್ಲಿ ಅಪ್ಪು ನದಿಗೆ ಹೋಗಿ ತಣ್ಣನೆ ಸ್ನಾನ ಮಾಡಿದ. ಹಿಂದೊಮ್ಮೆ ಕಲ್ಲುಬಂಡೆಯ ಮೇಲೆ ಬಿಸಿಲಲ್ಲಿ ಮೈಯ ನೀರು ಆರಿಸಿಕೊಳ್ಳುತ್ತಿದ್ದಾಗ ದೇವಕಿಗೆ ಸಂಬಂಧಿಸಿ ಕಣ್ಣ ಆಡಿದ್ದ ಮಾತು ನೆನಪಾಗಿ ನಗುಬಂತು. ಆದರೆ ಮರುಕ್ಷಣವೇ ಕಸಿವಿಸಿ ಎನಿಸಿತು. 'ನದಿಯದಂಡೆಯುದ್ದಕ್ಕೂ ಮೇಲಕ್ಕೆ ಹೋದರೆ ಕಣ್ಣನ ಮನೆ ಸಿಗ್ತದೆ. ನಿನ್ನೆಯೆಲ್ಲ ಆತ ಕಾಣಿಸಿಕೊಂಡೇ ಇಲ್ಲ, ಮನೇಲಿದ್ದಾನೇನೋ ನೋಡ್ಬಹುದು'ಎಂದಿತು ಮನಸ್ಸು. ಮರುಕ್ಷಣವೇ ಆ ಬಯಕೆಯೊಳಗಿನ ಬಯಕೆ ಸ್ಪಷ್ಟವಾಗಿ, ಆತ ತನಗೆ ತಾನೇ ಛೀಮಾರಿ ಹಾಕಿದ. {{gap}}ಆ ದಿನವೂ ಕಣ್ಣ ಕಾಣಿಸದಿದ್ದಾಗ ಅಪ್ಪುವಿನ ಮನಸ್ಸು ಅಸ್ತವ್ಯಸ್ತವಾಯಿತು. {{gap}}"ಮೈ ಸರಿಯಾಗಿಲ್ವೇನೋ?"ಎಂದ ಚಿರುಕಂಡ. {{gap}}"ಯಾಕೋ ಒಂಥರಾ ಇದ್ದೀಯಲ್ಲ ಅಪ್ಪು?"ಎಂದು ಮಾಸ್ತರು ಕೇಳಿದರು. {{gap}}"ಏನಿಲ್ಲ, ಏನಿಲ್ಲ" ಎಂದು ಹೇಳಿ ಅಪ್ಪು ಅವರಿಂದ ತಪ್ಪಿಸಿಕೊಂಡ.ಆದರೆ ಮನಸ್ಸನ್ನು ಸುತ್ತುವರಿದ ಯೋಚನೆಗಳ ಮುತ್ತಿಗೆಯಿಂದ ಅಷ್ಟೇ ಸುಲಭವಾಗಿ ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. {{gap}}ಆದರೆ ಮರುದಿನ ಕಣ್ಣ ಸಿಕ್ಕಿದಾಗ ಅಪ್ಪು ಕೇಳಿದ: {{gap}}"ಎಲ್ಲಿಘೋಗಿದ್ದೆ ಎರಡು ದಿವಸ?" {{gap}}"ಮನೇಲಿ ಇದ್ದೆನಪ್ಪ." {{gap}}"ಹಾಗೇನು? ನಿಮ್ಮ ಅತ್ತೇನ ಬಿಟ್ಟುಬರೋದಕ್ಕೆ ನೀನೆಲ್ಲಾದರೂ ಊರಿಗೆ ಹೋದೆಯೇನೋಂತಿದ್ದೆ."<noinclude></noinclude> eouecvp1ej9s81f79r5kz7di7p6a13r ಪುಟ:Chirasmarane-Niranjana.pdf/೧೬೪ 104 12983 324199 65852 2026-06-03T07:14:36Z Shreesha Sharma 7840 /* Proofread */ 324199 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೧೬೫}} {{gap}}"ಬಿಟ್ಟು ಬರೋದೆ? ದೇವಕಿ ಬಾಣಂತಿಯಾಗೋವರೆಗೂ ಅವರೆಲ್ಲ ಇಲ್ಲೇ ಇರ್ತಾರೆ." {{gap}} 'ಅವರೆಲ್ಲ'-ಎಂದ ಪುಣ್ಯತ್ಮ! ಜಾನಕಿಯೂ ಇನ್ನಷ್ಟು ದಿವಸ ಇಲ್ಲೇ ಇರುವಳೆಂದಾಯಿತು. {{gap}}ಕಣ್ಣ ಅಪ್ಪುವನ್ನೆ ನೆಟ್ಟದೃಷ್ಟಿಯಿಂದ ನೋಡುತ್ತಿದ್ದ. ತನ್ನ ಮನಸ್ಸಿನೊಳಗಿದ್ದುದನ್ನೇನಾದರೂ ಕಣ್ಣ ಓದಬಹುದೆಂದು ಅಪ್ಪು ಗಂಭೀರನಾಗಿ, "ಬಾ ಚಿರುಕಂಡನಲ್ಲಿಗೆ ಹೋಗೋಣ. ಮಳೆಗಾಲದ ಕಾರ್ಯಕ್ರಮದ ವಿಷಯ ಚರ್ಚಿಸ್ಬೇಕು" ಎಂದ. {{gap}}ತನ್ನ ಜತೆಗಾತಿಯಾಗಬೇಕಾದ ಹೆಣ್ಣು ಜೀವಕ್ಕೆ ಸಂಬಂಧಿಸಿದ ಯೋಚನೆಗಳೆಲ್ಲಾ ಈವರೆಗೂ ಜಾನಕಿಯ ಆಗಮನಕ್ಕೋಸ್ಕರವೇ ಕಾದಿದ್ದುವೇನೋ ಎಂಬಂತೆ, ಈಗ ನೊಗಹರಿದು ಓಡಾಡಿದುವು. ಮಾಡಬೇಕಾದ ಕೆಲಸ ಬೆಟ್ಟದ ಹೊರೆಯಷ್ಟಿರುವಾಗ, ಸಾಧಿಸಬೇಕಾದ ಗುರಿ ಇನ್ನೂ ದೂರವಿರುವಾಗ, ಇಂತಹ ಯೋಚನೆ ಮಾಡಬಾರದು ಎಂದು ತನ್ನನ್ನು ತಾನೇ ಅಪ್ಪು ಟೀಕಿಸುತ್ತಿದ್ದ. ಯಾರೊಡನಾದರೂ ಈ ವಿಷಯ ಹೃದಯ ತೆರೆದು ಮಾತನಾಡಬೇಕು ಎನಿಸುತ್ತಿತ್ತು. ಆದರೆ, ಅವರೇನೆನ್ನುವರೋ ಎಂಬ ಅಳುಕು ಬಾಧಿಸುತ್ತಿತ್ತು. ಉದಾಹರಣೆಗೆ ಮಾಸ್ತರು. ಅವರಿಗೆ ತಿಳಿಸದೆ, ಸಲಹೆ ಕೇಳದೆ, ಯಾವ ಕೆಲಸವನ್ನೂ ಎಂದೂ ಅಪ್ಪು ಮಾಡಿದವನಲ್ಲ. ಆದರೆ. ಈ ವಿಷಯ ಅವರೊಡನೆ ಪ್ರಸ್ತಾಪಿಸುವುದು ಹೇಗೆ? ಸದ್ಯ: ಈ ಯೋಚನೆ ಬೇಡವೆಂದು ಸುಮ್ಮನಿರುವುದು ಸಾಧ್ಯವಿತ್ತು. ಆದರೆ ಆ ತಿಂಗಳ ಕೊನೆಯಲ್ಲಿ- ಇನ್ನು ಕೆಲವೇ ದಿನಗಳಲ್ಲಿ-ಮಾಸ್ತರು ಕಯ್ಯೂರು ಬಿಟ್ಟು ಹೋಗುವರೆಂಬ ಅರಿವು ಅಪ್ಪುವಿನ ಕಳವಳವನ್ನು ತೀವ್ರಗೊಳಿಸಿತು. {{gap}}ಇದೆಲ್ಲದರ ಸೂಕ್ಷ್ಮ ಪ್ರತಿಬಿಂಬ ಆತನ ನಡೆನುಡಿಯಲ್ಲಿ ಕಾಣಿಸದೆ ಇರಲಿಲ್ಲ. ಚಿರುಕಂಡ, ಅಪ್ಪುವನ್ನೇನೋ ಬಾಧಿಸುತ್ತಿದೆ ಎಂದು ಮನಗಂಡ. {{gap}}ಒಂದು ದಿನ ಅಗತ್ಯದೊಂದು ಕೆಲಸಕ್ಕಾಗಿ ಅಪ್ಪುವನ್ನು ಹುಡುಕಿಕೊಂಡು ಚಿರುಕಂಡ ಬಂದ. ಅಪ್ಪು ಮನೆಯಲ್ಲಿರಲಿಲ್ಲ. ಹೋಟಲಿನಲ್ಲೂ ಇರಲಿಲ್ಲ. ಕಣ್ಣನ ಮನೆಯಲ್ಲಿರಬಹುದೇನೋ ಎಂದು ಅಲ್ಲಿಗೆ ಹೋದ. ಅಲ್ಲಿಯೂ ಇರಲಿಲ್ಲ. ಆ ಮನೆಯಲ್ಲಿ "ಇಲ್ಲ" ಎಂದು ಉತ್ತರ ಕೊಟ್ಟವಳು ಒಬ್ಬ ಹುಡುಗಿ. ಮುಖಲಕ್ಷಣದಿಂದಲೇ ದೇವಕಿಯ ತಂಗಿ ಇರಬೇಕೆಂದು ಚಿರುಕಂಡ ಊಹಿಸಿದ. ನದಿಗೇನಾದರೂ ಹೋಗಿರಬಹುದೆಂದು ಅತ್ತ ನಡೆದ. ಅಲ್ಲಿ ಮರದ ನೆರಳಿನಲ್ಲಿ ಹಾಸುಗಲ್ಲಿನ ಮೇಲೆ, ತುಂಬಾ ವ್ಯಾಕುಲಕ್ಕೆ ಒಳಗಾದವನ ಹಾಗೆ ಮಲಗಿದ್ದ ಅಪ್ಪು.<noinclude></noinclude> icd0cs2e0lzyh1snqtzp0omxz5hz0gn 324200 324199 2026-06-03T07:15:02Z Shreelatha.Halemane 7642 /* Validated */ 324200 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೧೬೫}} {{gap}}"ಬಿಟ್ಟು ಬರೋದೆ? ದೇವಕಿ ಬಾಣಂತಿಯಾಗೋವರೆಗೂ ಅವರೆಲ್ಲ ಇಲ್ಲೇ ಇರ್ತಾರೆ." {{gap}} 'ಅವರೆಲ್ಲ'-ಎಂದ ಪುಣ್ಯತ್ಮ! ಜಾನಕಿಯೂ ಇನ್ನಷ್ಟು ದಿವಸ ಇಲ್ಲೇ ಇರುವಳೆಂದಾಯಿತು. {{gap}}ಕಣ್ಣ ಅಪ್ಪುವನ್ನೆ ನೆಟ್ಟದೃಷ್ಟಿಯಿಂದ ನೋಡುತ್ತಿದ್ದ. ತನ್ನ ಮನಸ್ಸಿನೊಳಗಿದ್ದುದನ್ನೇನಾದರೂ ಕಣ್ಣ ಓದಬಹುದೆಂದು ಅಪ್ಪು ಗಂಭೀರನಾಗಿ, "ಬಾ ಚಿರುಕಂಡನಲ್ಲಿಗೆ ಹೋಗೋಣ. ಮಳೆಗಾಲದ ಕಾರ್ಯಕ್ರಮದ ವಿಷಯ ಚರ್ಚಿಸ್ಬೇಕು" ಎಂದ. {{gap}}ತನ್ನ ಜತೆಗಾತಿಯಾಗಬೇಕಾದ ಹೆಣ್ಣು ಜೀವಕ್ಕೆ ಸಂಬಂಧಿಸಿದ ಯೋಚನೆಗಳೆಲ್ಲಾ ಈವರೆಗೂ ಜಾನಕಿಯ ಆಗಮನಕ್ಕೋಸ್ಕರವೇ ಕಾದಿದ್ದುವೇನೋ ಎಂಬಂತೆ, ಈಗ ನೊಗಹರಿದು ಓಡಾಡಿದುವು. ಮಾಡಬೇಕಾದ ಕೆಲಸ ಬೆಟ್ಟದ ಹೊರೆಯಷ್ಟಿರುವಾಗ, ಸಾಧಿಸಬೇಕಾದ ಗುರಿ ಇನ್ನೂ ದೂರವಿರುವಾಗ, ಇಂತಹ ಯೋಚನೆ ಮಾಡಬಾರದು ಎಂದು ತನ್ನನ್ನು ತಾನೇ ಅಪ್ಪು ಟೀಕಿಸುತ್ತಿದ್ದ. ಯಾರೊಡನಾದರೂ ಈ ವಿಷಯ ಹೃದಯ ತೆರೆದು ಮಾತನಾಡಬೇಕು ಎನಿಸುತ್ತಿತ್ತು. ಆದರೆ, ಅವರೇನೆನ್ನುವರೋ ಎಂಬ ಅಳುಕು ಬಾಧಿಸುತ್ತಿತ್ತು. ಉದಾಹರಣೆಗೆ ಮಾಸ್ತರು. ಅವರಿಗೆ ತಿಳಿಸದೆ, ಸಲಹೆ ಕೇಳದೆ, ಯಾವ ಕೆಲಸವನ್ನೂ ಎಂದೂ ಅಪ್ಪು ಮಾಡಿದವನಲ್ಲ. ಆದರೆ. ಈ ವಿಷಯ ಅವರೊಡನೆ ಪ್ರಸ್ತಾಪಿಸುವುದು ಹೇಗೆ? ಸದ್ಯ: ಈ ಯೋಚನೆ ಬೇಡವೆಂದು ಸುಮ್ಮನಿರುವುದು ಸಾಧ್ಯವಿತ್ತು. ಆದರೆ ಆ ತಿಂಗಳ ಕೊನೆಯಲ್ಲಿ- ಇನ್ನು ಕೆಲವೇ ದಿನಗಳಲ್ಲಿ-ಮಾಸ್ತರು ಕಯ್ಯೂರು ಬಿಟ್ಟು ಹೋಗುವರೆಂಬ ಅರಿವು ಅಪ್ಪುವಿನ ಕಳವಳವನ್ನು ತೀವ್ರಗೊಳಿಸಿತು. {{gap}}ಇದೆಲ್ಲದರ ಸೂಕ್ಷ್ಮ ಪ್ರತಿಬಿಂಬ ಆತನ ನಡೆನುಡಿಯಲ್ಲಿ ಕಾಣಿಸದೆ ಇರಲಿಲ್ಲ. ಚಿರುಕಂಡ, ಅಪ್ಪುವನ್ನೇನೋ ಬಾಧಿಸುತ್ತಿದೆ ಎಂದು ಮನಗಂಡ. {{gap}}ಒಂದು ದಿನ ಅಗತ್ಯದೊಂದು ಕೆಲಸಕ್ಕಾಗಿ ಅಪ್ಪುವನ್ನು ಹುಡುಕಿಕೊಂಡು ಚಿರುಕಂಡ ಬಂದ. ಅಪ್ಪು ಮನೆಯಲ್ಲಿರಲಿಲ್ಲ. ಹೋಟಲಿನಲ್ಲೂ ಇರಲಿಲ್ಲ. ಕಣ್ಣನ ಮನೆಯಲ್ಲಿರಬಹುದೇನೋ ಎಂದು ಅಲ್ಲಿಗೆ ಹೋದ. ಅಲ್ಲಿಯೂ ಇರಲಿಲ್ಲ. ಆ ಮನೆಯಲ್ಲಿ "ಇಲ್ಲ" ಎಂದು ಉತ್ತರ ಕೊಟ್ಟವಳು ಒಬ್ಬ ಹುಡುಗಿ. ಮುಖಲಕ್ಷಣದಿಂದಲೇ ದೇವಕಿಯ ತಂಗಿ ಇರಬೇಕೆಂದು ಚಿರುಕಂಡ ಊಹಿಸಿದ. ನದಿಗೇನಾದರೂ ಹೋಗಿರಬಹುದೆಂದು ಅತ್ತ ನಡೆದ. ಅಲ್ಲಿ ಮರದ ನೆರಳಿನಲ್ಲಿ ಹಾಸುಗಲ್ಲಿನ ಮೇಲೆ, ತುಂಬಾ ವ್ಯಾಕುಲಕ್ಕೆ ಒಳಗಾದವನ ಹಾಗೆ ಮಲಗಿದ್ದ ಅಪ್ಪು.<noinclude></noinclude> 0zshsg9s0wnkqrx26igi74hateopvz1 ಪುಟ:Chirasmarane-Niranjana.pdf/೧೬೬ 104 12985 324212 151724 2026-06-03T09:13:00Z Shreesha Sharma 7840 /* Proofread */ 324212 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೧೬೭}} {{gap}}“ಬರ್ತಾ ಅಲ್ಲೇನಾದರೂ ಇದ್ದೀಯೇನೋಂತ ಹೋದದ್ದು.” {{gap}}"ಅಲ್ಯಾಕೆ ಇರ್ತೇನೆ ನಾನು?” ಎಂದ ಅಪ್ಪು ಗೊಗ್ಗರವಾಗಿತ್ತು ಧ್ವನಿ. {{gap}}"ಊರೆಲ್ಲ ಹುಡುಕಿ ನೀನು ಸಿಗದೆ ಅಲ್ಲಿಗೆ ಬಂದೆ” ಎಂದ ಚಿರುಕಂಡ, ನಾಲ್ಕು ಹೆಜ್ಜೆ ನಡೆಯುವ ತನಕ ಸುಮ್ಮನಿದ್ದು ಮತ್ತೆ ಹೇಳಿದ: {{gap}}"ದೇವಕಿಯ ತಂಗಿ ಬಂದಿದ್ದಾಳೇಂತ ತೋರ್ತದೆ." {{gap}}"ಹೌದು" ಎಂದ ಅಪ್ಪು ಸ್ವಲ್ಪ ಹೊತ್ತು ಮಾತು ಅಲ್ಲಿಗೆ ನಿಂತಿತು. {{gap}}ಚಿರುಕಂಡನೇ ತಿರುಗಿ ಮೊದಲು ಮಾಡಿದ: {{gap}}“ಇನ್ನು ಮಳೆಗಾಲ, ಮದುವೆ ವಾಲಗ ದಿಬ್ಬಣಗಳಿಗೆ ಶುರು." {{gap}}"ನನಗೆ ಯಾಕೆ ಹೇಳ್ತೀಯಾ ಅದನ್ನು?” ಎಂದ ಅಪ್ಪು, ಸಿಟ್ಟಾಗಿ, ಅಷ್ಟೇ ಸ್ವರವೇರಿಸಿ ಚಿರುಕಂಡ ನುಡಿದ: {{gap}}"ಯಾಕೆ, ನೀನು ಮದುವೆ ಮಾಡ್ಕೊಬೇಕೂಂತಿದ್ದೀಯೇನು?” {{gap}}"ಚಿರುಕಂಡ!" {{gap}}ಪರಸ್ಪರರನ್ನು ತಿವಿದು ನೋಡಿದ ನೋಟಗಳೆರಡು, ಮತ್ತೆ ಅವರಿಬ್ಬರ ನಡುವೆ ಇಳಿಬಿಟ್ಟ ಮೌನದ ಪರದೆ.... {{gap}}ಸಂಜೆಯವರಗೂ ಅವರು ಜತೆಯಾಗಿಯೇ ಇದ್ದರು. ಹಲವಾರು ಮನೆಗಳಿಗೆ ಹೋಗಿ ಸದಸ್ಯರನ್ನು ಸೇರಿಸಿದರು. ಮಾತುಕತೆ, ಎಷ್ಟು ಬೇಕೋ ಅಷ್ಟೇ, ಹಾಂ ಹೂಂ... ಹೌದು ಅಲ್ಲ. {{gap}}ರಾತ್ರ ಇಬ್ಬರೂ ಮನೆಗಳಕಡೆ ತಿರುಗಿದರು. ಚಿರುಕಂಡನನ್ನು ತನ್ನ ಹಾದಿ ಹಿಡಿಯಬೇಕು, ಆತ, “ಬರ್ತೇನೆ" ಎಂತಲೂ ಅಂದ. ಆದರೆ ಅಪ್ಪುವಿನ ಮಾತು ಅವನನ್ನು ತಡೆಯಿತು. {{gap}}ನಿಲ್ಲು ಚಿರುಕಂಡ, ನಿನ್ನ ಜತೆ ಸ್ವಲ್ಪ ಮಾತಾಡೇಕು.” {{gap}}ದುಗುಡದ ಹೊರೆ ಇಳಿದು ಮನಸ್ಸು ಹಗುರವಾಗಿ ಚಿರುಕಂಡ ಪಕ್ಕದ ಗುಡ್ಡದತ್ತ ನೋಡಿದ. ಇಳಿಜಾರಿನಲ್ಲಿ ಗೋಡಂಬಿಯ ಮರಗಳು..... ಆತನಿಗೆ ನೆನಪಾಯಿತು. ಆರು ವರ್ಷಗಳ ಹಿಂದೆ ಒಂದು ದಿನ ಅಲ್ಲಿಯೇ ಒಂದು ಗೋಡಂಬಿ ಮರದ ಕಳಗೆ ಅವರು ಕುಳಿತು ಆತ್ಮೀಯವಾಗಿ ಮಾತನಾಡಿದ್ದರು... ಅತ್ತ ತಿರುಗಿದ ಚಿರುಕಂಡನನ್ನು ಅಪ್ಪು ಹಿಂಬಾಲಿಸಿದ. ಯಾವುದೋ ಆ ಮರ? ಅಲ್ಲಿಯೇ, ಅದೇ ಇರಬೇಕು... ಅಪ್ಪುವಿಗೂ ನೆನಪಾಗಿ ಕಣ್ಣುಗಳು ಕಾಂತಿಯುತವಾದುವು. ಆದರ ಆತ ಸುಮ್ಮನಿದ್ದ.... ಆ ದಿನ ಅದು ಹಗಲು ಹೊತ್ತು ಬಿಸಿಲಿತ್ತು. ಇದು ಹುಣ್ಣಿಮೆ ಸಮೀಪಿಸುತ್ತಿದ್ದ ರಾತ್ರೆ. ವಿಷಯವೂ ಹಾಗೆಯೇ ಹಿಂದಿನಕ್ಕಿಂತ ಭಿನ್ನ...<noinclude></noinclude> 4ia7xgg0g9cthxspjw3pibpkbwg2t49 324216 324212 2026-06-03T09:35:11Z Shreelatha.Halemane 7642 /* Validated */ 324216 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೧೬೭}} {{gap}}“ಬರ್ತಾ ಅಲ್ಲೇನಾದರೂ ಇದ್ದೀಯೇನೋಂತ ಹೋದದ್ದು.” {{gap}}"ಅಲ್ಯಾಕೆ ಇರ್ತೇನೆ ನಾನು?” ಎಂದ ಅಪ್ಪು ಗೊಗ್ಗರವಾಗಿತ್ತು ಧ್ವನಿ. {{gap}}"ಊರೆಲ್ಲ ಹುಡುಕಿ ನೀನು ಸಿಗದೆ ಅಲ್ಲಿಗೆ ಬಂದೆ” ಎಂದ ಚಿರುಕಂಡ, ನಾಲ್ಕು ಹೆಜ್ಜೆ ನಡೆಯುವ ತನಕ ಸುಮ್ಮನಿದ್ದು ಮತ್ತೆ ಹೇಳಿದ: {{gap}}"ದೇವಕಿಯ ತಂಗಿ ಬಂದಿದ್ದಾಳೇಂತ ತೋರ್ತದೆ." {{gap}}"ಹೌದು" ಎಂದ ಅಪ್ಪು ಸ್ವಲ್ಪ ಹೊತ್ತು ಮಾತು ಅಲ್ಲಿಗೆ ನಿಂತಿತು. {{gap}}ಚಿರುಕಂಡನೇ ತಿರುಗಿ ಮೊದಲು ಮಾಡಿದ: {{gap}}“ಇನ್ನು ಮಳೆಗಾಲ, ಮದುವೆ ವಾಲಗ ದಿಬ್ಬಣಗಳಿಗೆ ಶುರು." {{gap}}"ನನಗೆ ಯಾಕೆ ಹೇಳ್ತೀಯಾ ಅದನ್ನು?” ಎಂದ ಅಪ್ಪು, ಸಿಟ್ಟಾಗಿ, ಅಷ್ಟೇ ಸ್ವರವೇರಿಸಿ ಚಿರುಕಂಡ ನುಡಿದ: {{gap}}"ಯಾಕೆ, ನೀನು ಮದುವೆ ಮಾಡ್ಕೊಬೇಕೂಂತಿದ್ದೀಯೇನು?” {{gap}}"ಚಿರುಕಂಡ!" {{gap}}ಪರಸ್ಪರರನ್ನು ತಿವಿದು ನೋಡಿದ ನೋಟಗಳೆರಡು, ಮತ್ತೆ ಅವರಿಬ್ಬರ ನಡುವೆ ಇಳಿಬಿಟ್ಟ ಮೌನದ ಪರದೆ.... {{gap}}ಸಂಜೆಯವರಗೂ ಅವರು ಜತೆಯಾಗಿಯೇ ಇದ್ದರು. ಹಲವಾರು ಮನೆಗಳಿಗೆ ಹೋಗಿ ಸದಸ್ಯರನ್ನು ಸೇರಿಸಿದರು. ಮಾತುಕತೆ, ಎಷ್ಟು ಬೇಕೋ ಅಷ್ಟೇ, ಹಾಂ ಹೂಂ... ಹೌದು ಅಲ್ಲ. {{gap}}ರಾತ್ರ ಇಬ್ಬರೂ ಮನೆಗಳಕಡೆ ತಿರುಗಿದರು. ಚಿರುಕಂಡನನ್ನು ತನ್ನ ಹಾದಿ ಹಿಡಿಯಬೇಕು, ಆತ, “ಬರ್ತೇನೆ" ಎಂತಲೂ ಅಂದ. ಆದರೆ ಅಪ್ಪುವಿನ ಮಾತು ಅವನನ್ನು ತಡೆಯಿತು. {{gap}}ನಿಲ್ಲು ಚಿರುಕಂಡ, ನಿನ್ನ ಜತೆ ಸ್ವಲ್ಪ ಮಾತಾಡೇಕು.” {{gap}}ದುಗುಡದ ಹೊರೆ ಇಳಿದು ಮನಸ್ಸು ಹಗುರವಾಗಿ ಚಿರುಕಂಡ ಪಕ್ಕದ ಗುಡ್ಡದತ್ತ ನೋಡಿದ. ಇಳಿಜಾರಿನಲ್ಲಿ ಗೋಡಂಬಿಯ ಮರಗಳು..... ಆತನಿಗೆ ನೆನಪಾಯಿತು. ಆರು ವರ್ಷಗಳ ಹಿಂದೆ ಒಂದು ದಿನ ಅಲ್ಲಿಯೇ ಒಂದು ಗೋಡಂಬಿ ಮರದ ಕಳಗೆ ಅವರು ಕುಳಿತು ಆತ್ಮೀಯವಾಗಿ ಮಾತನಾಡಿದ್ದರು... ಅತ್ತ ತಿರುಗಿದ ಚಿರುಕಂಡನನ್ನು ಅಪ್ಪು ಹಿಂಬಾಲಿಸಿದ. ಯಾವುದೋ ಆ ಮರ? ಅಲ್ಲಿಯೇ, ಅದೇ ಇರಬೇಕು... ಅಪ್ಪುವಿಗೂ ನೆನಪಾಗಿ ಕಣ್ಣುಗಳು ಕಾಂತಿಯುತವಾದುವು. ಆದರ ಆತ ಸುಮ್ಮನಿದ್ದ.... ಆ ದಿನ ಅದು ಹಗಲು ಹೊತ್ತು ಬಿಸಿಲಿತ್ತು. ಇದು ಹುಣ್ಣಿಮೆ ಸಮೀಪಿಸುತ್ತಿದ್ದ ರಾತ್ರೆ. ವಿಷಯವೂ ಹಾಗೆಯೇ ಹಿಂದಿನಕ್ಕಿಂತ ಭಿನ್ನ...<noinclude></noinclude> bx4dc8uyriwt27tuf802fwho4k13oyh ಪುಟ:Chirasmarane-Niranjana.pdf/೧೬೭ 104 12986 324213 151725 2026-06-03T09:17:41Z Shreesha Sharma 7840 /* Proofread */ 324213 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೧೬೮|center=|right=ಚಿರಸ್ಮರಣೆ}} {{gap}}ಆ ನೀರವತೆಯಲ್ಲಿ ಈ ಮಾತು ಕುಲುಕಿ ಕುಲುಕಿ ಕಡಿದು ಕಡಿದು ಬಂತು. ತಣ್ಣನೆಯ ಗಾಳಿ ನವುರಾಗಿ ಬೀಸಿ, ಸಂಕಟಪಡುತ್ತಿದ್ದ ಅಪ್ಪುವಿನ ಹೃದಯದ ನೋವನ್ನು ಕಡಮಮಾಡಿತು. {{gap}}ಚಿರುಕಂಡ ಸುಮ್ಮನೆ ಕುಳಿತು ಕೇಳುತ್ತಲೇ ಇದ್ದ. ಹೇಳುವುದು ಮುಗಿದಮೇಲೆ ತೀರ್ಪಿನ ಹಾದಿ ನೋಡುವ ಆರೋಪಿಯಂತೆ, ಕಾತರಗೊಂಡಿದ್ದ ಮನಸ್ಸನ್ನು ಬಿಗಿಹಿಡಿದು ಅಪ್ಪುವೂ ಮೌನವಾಗಿ ಕುಳಿತ. {{gap}}ಬಹಳ ಹೊತ್ತು ಇಬ್ಬರೂ ಹಾಗೆಯೇ ಇದ್ದರು. ಕೊನೆಗೆ ಅಪ್ಪುವೇ ಕೇಳ ಬೇಕಾಯಿತು: {{gap}}“ಏನು ಹೇಳ್ತೀಯಾ ಚಿರುಕಂಡ?" {{gap}}ನಿಟ್ಟುಸಿರು ಬಿಟ್ಟು, ಸಣ್ಣನೆ ನಕ್ಕು ಚಿರುಕಂಡ ಹೇಳಿದ: {{gap}}"ನಾನೇನಪ್ಪ ಹೇಳ್ಲಿ? ನಾನು ನಿನಗಿಂತ ಒಂದು ವರ್ಷ ಚಿಕ್ಕೋನು." {{gap}}“ಆಗೋ! ವಯಸ್ಸಿನ ಮಾತು! ಪ್ರತಿಯೊಂದು ವಿಷಯದಲ್ಲೂ ನೀನು ನನಗೆ ಅಣ್ಣ ಇರೋ ಹಾಗೆ ಅನ್ನೋದನ್ನ ಮರೆತಿಯಾ?" {{gap}}"ಇದೆಲ್ಲ ತಪ್ಪಂತ ನಾನು ಹಾಗೆ ಹೇಳ್ಲಿ? ಆದರೆ, ಮಧ್ಯಾಹ್ನ ನಿನ್ನ ಸಿಡುಕು ನೋಡ್ಡಾಗ, ನೀನು ಚಳವಳಿ ಬಿಟ್ಟ್ಬಿಡ್ತಿಯೇನೋಂತ ದಿಗಿಲಾಯ್ತು." {{gap}}“ಚಳವಳಿ ಬಿಡೋದಲ್ಲ, ಪ್ರಾಣ ಬಿಡೋದು. ಅಂಥ ಮಾತಾಡಿ ಯಾಕೆ ನೋಯಿಸ್ತೀಯಾ?" {{gap}}"ಇರಲಿ ಬಿಡು.... ನಾಳೆ ಚರ್ವತ್ತೂರಿಗೆ ಹೋಗ್ತಾ ಮಾಸ್ತರ ಹತ್ತಿರ ಪ್ರಸ್ತಾಪ ಮಾಡೋಣ." {{gap}}ಕೊನೆಯ ತೀರ್ಮಾನ ಸದ್ಯ: ಮುಂದಕ್ಕೆ ಬಿತ್ತೆಂದು ಅಪುವಿಗೆ ಸಮಾಧಾನವಾಯಿತು. ಆದರೆ ನಾಳೆ ಮಾಸ್ತರೊಡನೆ ಈ ವಿಷಯ ಮಾತನಾಡುವ ಪ್ರಮೇಯವನ್ನು ಚಿತ್ರಿಸಿದಾಗ ಹೃದಯ ಕುಗ್ಗಿತು. ಅವನೆಂದ: {{gap}}“ನಾನಾಗಿಯೇ ಹೇಳೋದಕ್ಕೆ ಸಂಕೋಚ ಕಣೋ, ಅವರು ಏನು ತಿಳ್ಕೊಳ್ತಾರೋ ಏನೋ." {{gap}}ಒಮ್ಮೆಲೆ ಅಪ್ಪುವಿಗೆ ಹಿಂದೆ ಕಣ್ಣನೂ ಹೀಗೆಯೇ ಹೇಳಿದ್ದುದು ಆತನ ಪರವಾಗಿ ತಾನು ಮಾಸ್ತರೊಡನೆ ಮಾತನಾಡಿದುದು ನೆನಪಾಗಿ, ಸೋಜಿಗ ಎನಿಸಿತು. {{gap}}'ಇದರಲ್ಲೆಲ್ಲ ಸಂಕೋಚ ಯಾತರದು?" ಎಂದು ಚಿರುಕಂಡ ಕುಳಿತಲ್ಲಿಂದ ಎದ್ದ. ಅಪ್ಪುವೂ ಏಳುತ್ತ, ಮತ್ತೊಮ್ಮೆ ಸುತ್ತಲೂ ನೋಡಿ ಹೇಳಿದ: {{gap}}“ಇದೇ ಜಾಗದಲ್ಲಿ ಹಿಂದೆ<noinclude></noinclude> n9d6grdnt0rcmecnujzwz0mvbj88d2u 324217 324213 2026-06-03T09:35:22Z Shreelatha.Halemane 7642 /* Validated */ 324217 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೬೮|center=|right=ಚಿರಸ್ಮರಣೆ}} {{gap}}ಆ ನೀರವತೆಯಲ್ಲಿ ಈ ಮಾತು ಕುಲುಕಿ ಕುಲುಕಿ ಕಡಿದು ಕಡಿದು ಬಂತು. ತಣ್ಣನೆಯ ಗಾಳಿ ನವುರಾಗಿ ಬೀಸಿ, ಸಂಕಟಪಡುತ್ತಿದ್ದ ಅಪ್ಪುವಿನ ಹೃದಯದ ನೋವನ್ನು ಕಡಮಮಾಡಿತು. {{gap}}ಚಿರುಕಂಡ ಸುಮ್ಮನೆ ಕುಳಿತು ಕೇಳುತ್ತಲೇ ಇದ್ದ. ಹೇಳುವುದು ಮುಗಿದಮೇಲೆ ತೀರ್ಪಿನ ಹಾದಿ ನೋಡುವ ಆರೋಪಿಯಂತೆ, ಕಾತರಗೊಂಡಿದ್ದ ಮನಸ್ಸನ್ನು ಬಿಗಿಹಿಡಿದು ಅಪ್ಪುವೂ ಮೌನವಾಗಿ ಕುಳಿತ. {{gap}}ಬಹಳ ಹೊತ್ತು ಇಬ್ಬರೂ ಹಾಗೆಯೇ ಇದ್ದರು. ಕೊನೆಗೆ ಅಪ್ಪುವೇ ಕೇಳ ಬೇಕಾಯಿತು: {{gap}}“ಏನು ಹೇಳ್ತೀಯಾ ಚಿರುಕಂಡ?" {{gap}}ನಿಟ್ಟುಸಿರು ಬಿಟ್ಟು, ಸಣ್ಣನೆ ನಕ್ಕು ಚಿರುಕಂಡ ಹೇಳಿದ: {{gap}}"ನಾನೇನಪ್ಪ ಹೇಳ್ಲಿ? ನಾನು ನಿನಗಿಂತ ಒಂದು ವರ್ಷ ಚಿಕ್ಕೋನು." {{gap}}“ಆಗೋ! ವಯಸ್ಸಿನ ಮಾತು! ಪ್ರತಿಯೊಂದು ವಿಷಯದಲ್ಲೂ ನೀನು ನನಗೆ ಅಣ್ಣ ಇರೋ ಹಾಗೆ ಅನ್ನೋದನ್ನ ಮರೆತಿಯಾ?" {{gap}}"ಇದೆಲ್ಲ ತಪ್ಪಂತ ನಾನು ಹಾಗೆ ಹೇಳ್ಲಿ? ಆದರೆ, ಮಧ್ಯಾಹ್ನ ನಿನ್ನ ಸಿಡುಕು ನೋಡ್ಡಾಗ, ನೀನು ಚಳವಳಿ ಬಿಟ್ಟ್ಬಿಡ್ತಿಯೇನೋಂತ ದಿಗಿಲಾಯ್ತು." {{gap}}“ಚಳವಳಿ ಬಿಡೋದಲ್ಲ, ಪ್ರಾಣ ಬಿಡೋದು. ಅಂಥ ಮಾತಾಡಿ ಯಾಕೆ ನೋಯಿಸ್ತೀಯಾ?" {{gap}}"ಇರಲಿ ಬಿಡು.... ನಾಳೆ ಚರ್ವತ್ತೂರಿಗೆ ಹೋಗ್ತಾ ಮಾಸ್ತರ ಹತ್ತಿರ ಪ್ರಸ್ತಾಪ ಮಾಡೋಣ." {{gap}}ಕೊನೆಯ ತೀರ್ಮಾನ ಸದ್ಯ: ಮುಂದಕ್ಕೆ ಬಿತ್ತೆಂದು ಅಪುವಿಗೆ ಸಮಾಧಾನವಾಯಿತು. ಆದರೆ ನಾಳೆ ಮಾಸ್ತರೊಡನೆ ಈ ವಿಷಯ ಮಾತನಾಡುವ ಪ್ರಮೇಯವನ್ನು ಚಿತ್ರಿಸಿದಾಗ ಹೃದಯ ಕುಗ್ಗಿತು. ಅವನೆಂದ: {{gap}}“ನಾನಾಗಿಯೇ ಹೇಳೋದಕ್ಕೆ ಸಂಕೋಚ ಕಣೋ, ಅವರು ಏನು ತಿಳ್ಕೊಳ್ತಾರೋ ಏನೋ." {{gap}}ಒಮ್ಮೆಲೆ ಅಪ್ಪುವಿಗೆ ಹಿಂದೆ ಕಣ್ಣನೂ ಹೀಗೆಯೇ ಹೇಳಿದ್ದುದು ಆತನ ಪರವಾಗಿ ತಾನು ಮಾಸ್ತರೊಡನೆ ಮಾತನಾಡಿದುದು ನೆನಪಾಗಿ, ಸೋಜಿಗ ಎನಿಸಿತು. {{gap}}'ಇದರಲ್ಲೆಲ್ಲ ಸಂಕೋಚ ಯಾತರದು?" ಎಂದು ಚಿರುಕಂಡ ಕುಳಿತಲ್ಲಿಂದ ಎದ್ದ. ಅಪ್ಪುವೂ ಏಳುತ್ತ, ಮತ್ತೊಮ್ಮೆ ಸುತ್ತಲೂ ನೋಡಿ ಹೇಳಿದ: {{gap}}“ಇದೇ ಜಾಗದಲ್ಲಿ ಹಿಂದೆ<noinclude></noinclude> r6ddgj7fquaaypxcu9corr328wndziq ಪುಟ:Chirasmarane-Niranjana.pdf/೧೬೮ 104 12987 324214 151726 2026-06-03T09:20:48Z Shreesha Sharma 7840 /* Proofread */ 324214 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೧೬೯}} {{gap}}'ಹೌದು, ಗೊತ್ತಿದೆ --ಎನ್ನುವಂತೆ ಚಿರುಕಂಡ ತಲೆದೂಗಿದ. {{gap}}"ಕ್ರಾಂತಿಕಾರಿಗಳೂ ಮದುವೆಯಾಗ್ಬಹುದಾ ಸರ್?" {{gap}}ಚರ್ವತ್ತೂರಿಗೆ ಹಾದಿ ನಡೆಯುತ್ತಿದ್ದಂತೆ ಚಿರುಕಂಡ ಕೇಳಿದ ಪ್ರಶ್ನೆ ಮಾಸ್ತರನ್ನ ಚಕಿತಗೊಳಿಸಿತು. ತಮಗೆ ಸಂಬಂಧಿಸಿಯೇ ಆತ ಹಾಗೆ ಕೇಳಿರಬಹುದೆಂದು ಅವರಿಗೆ ತಮಾಷೆ ಎನಿಸಿತು. ಹಸನ್ಮುಖಿಯಾಗಿ ಅವರೆಂದರು: {{gap}}"ಬೆಳೆಯೋದು ಸಾಯೋದೊಂದೇ ಬದುಕಿನ ಗುರಿ ಆಗಿರೋ ಜನಕ್ಕೆ ಮದುವೆ ಅಂದರೆ ಬರೆ ಚಿಲ್ಲರೆ ವಿಷಯ. ಆದರೆ ಕ್ರಾಂತಿಕಾರಿಗಳಿಗೆ ಹಾಗಲ್ಲ. ಸಾಮಾನ್ಯವಾಗಿ ಅವರಿಗೆ ಮದುವೆ ಅನ್ನೋದು ಕೊರಳಿಗೆ ಕೊರಡು ಕಟ್ಟಿದ ಹಾಗೆ. ಅವರ ಪಾಲಿಗೆ ಸಂಸಾರ ಸುಖ ಸಾಧ್ಯವೇ ಇಲ್ಲ. ಸಂಸಾರ ಸುಖ ಅಂದರೆ ಅರ್ಥವಾಯ್ತನೋ? ಗಂಡ ಹೆಂಡತಿ ಜತೆಯಾಗಿರೋದು, ಮಕ್ಕಳ ಸಾಕೋದು, ಬೆಳೆಸೋದು..." {{gap}}ಹೃದಯ ಬಿಗಿ ಹಿಡಿದುಕೊಂಡು ಅಪ್ಪು ಈ ಮಾತುಗಳನ್ನು ಕೇಳಿದ. ತಡೆಯಾಲಾಗದ ಚಳಿಗಾಳಿ ಬೀಸಿತೇನೋ ಎನ್ನುವಂತ ಆತನ ಮೈನಡುಗಿತು. ಆದರೆ, ವಿಷಯದ ಎಲ್ಲ ಮುಖಗಳನ್ನೂ ವಿವರಿಸಿ ಹೇಳುವ ಮಾಸ್ತರ ಪ್ರತಿಪಾದನಾ ವೈಖರಿಯನ್ನು ಚೆನ್ನಾಗಿ ತಿಳಿದಿದ್ದ ಚಿರುಕಂಡ ಕುತೂಹಲದಿಂದ ಕಿವಿಕೊಡುತ್ತ ನಡೆದ. {{gap}}ಮಾಸ್ತರು ಮುಂದುವರಿಸಿದರು: {{gap}}"ಆದರೆ ಕ್ರಾಂತಿಕಾರಿಯೂ ಮನುಷ್ಯನೇ, ಆ‌ಕೆ ಪೋಷಣೆ ಉಪಚಾರ ಸಿಗದೇ ಹೋದರೂ ಆತನಿಗೆ ಪ್ರೀತಿ ಬೇಕು. ಜನ ತೋರಿಸೋ ಪ್ರೀತಿಯ ಜತೇಲಿ ತನಗೋಸ್ಕರವಾದ ಒಂದು ವಿಶಿಷ್ಟ ಪ್ರೀತಿಯನ್ನೂ ಆತ ಬಯಸ್ತಾನೆ. ಅದು ಅವನ ಹಾಗೆಯೇ ಕ್ರಾಂತಿಕಾರಿಯಾದ ಹೆಣ್ಣಿನಿಂದ ಸಿಗ್ತದೆ. ಕ್ರಾಂತಿಕಾರಿಯಲ್ಲದೇ ಹೋದರೂ ಆಕೆ ಅವನನ್ನು ಚೆನ್ನಾಗಿ ತಿಳಿದುಕೊಂಡು ಅನುಕೂಲೆಯಾಗಿರ್ಬೇಕು... ಆದರೂ, ಕ್ರಾಂತಿಕಾರಿಯ ದಾಂಪತ್ಯ ಜೀವನಕ್ಕೆ ಒಂದು ಮಿತಿಯಿದೆ ಅನ್ನೋದು ನಿಜ." {{gap}}ಚಿರುಕಂಡ ಮುಂದೆ ನಡೆಯುತ್ತಿದ್ದ, ಅಪ್ಪು ಹಿಂದೆ. ನಡುವೆ ಮಾಸ್ತರು ಇದ್ದರು. ಕೇಳುವವರ ಮುಖಭಾವವನ್ನು ನೋಡುತ್ತ ತಮ್ಮ ಮಾತಿನ ಪರಿಣಾಮವೇನೆಂಬುದನ್ನು ತಿಳಿಯುವ ಅಭ್ಯಾಸವಿದ್ದ ಮಾಸ್ತರು ಈಗ ಅದನ್ನು ತಿಳಿಯಲಾರದ ನಿರುತ್ಸಾಹ ತಳೆದರು. ಹುಡುಗರು ಹಾಗೆ ಮೌನವಾಗಿರುವುದು ಸರಿಯಲ್ಲವೆನಿಸಿತು. ಅವರೆಂದರು:<noinclude></noinclude> kkwtwuz8r5p8aelu6cwox3dbkghzdo8 324218 324214 2026-06-03T09:35:31Z Shreelatha.Halemane 7642 /* Validated */ 324218 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೧೬೯}} {{gap}}'ಹೌದು, ಗೊತ್ತಿದೆ --ಎನ್ನುವಂತೆ ಚಿರುಕಂಡ ತಲೆದೂಗಿದ. {{gap}}"ಕ್ರಾಂತಿಕಾರಿಗಳೂ ಮದುವೆಯಾಗ್ಬಹುದಾ ಸರ್?" {{gap}}ಚರ್ವತ್ತೂರಿಗೆ ಹಾದಿ ನಡೆಯುತ್ತಿದ್ದಂತೆ ಚಿರುಕಂಡ ಕೇಳಿದ ಪ್ರಶ್ನೆ ಮಾಸ್ತರನ್ನ ಚಕಿತಗೊಳಿಸಿತು. ತಮಗೆ ಸಂಬಂಧಿಸಿಯೇ ಆತ ಹಾಗೆ ಕೇಳಿರಬಹುದೆಂದು ಅವರಿಗೆ ತಮಾಷೆ ಎನಿಸಿತು. ಹಸನ್ಮುಖಿಯಾಗಿ ಅವರೆಂದರು: {{gap}}"ಬೆಳೆಯೋದು ಸಾಯೋದೊಂದೇ ಬದುಕಿನ ಗುರಿ ಆಗಿರೋ ಜನಕ್ಕೆ ಮದುವೆ ಅಂದರೆ ಬರೆ ಚಿಲ್ಲರೆ ವಿಷಯ. ಆದರೆ ಕ್ರಾಂತಿಕಾರಿಗಳಿಗೆ ಹಾಗಲ್ಲ. ಸಾಮಾನ್ಯವಾಗಿ ಅವರಿಗೆ ಮದುವೆ ಅನ್ನೋದು ಕೊರಳಿಗೆ ಕೊರಡು ಕಟ್ಟಿದ ಹಾಗೆ. ಅವರ ಪಾಲಿಗೆ ಸಂಸಾರ ಸುಖ ಸಾಧ್ಯವೇ ಇಲ್ಲ. ಸಂಸಾರ ಸುಖ ಅಂದರೆ ಅರ್ಥವಾಯ್ತನೋ? ಗಂಡ ಹೆಂಡತಿ ಜತೆಯಾಗಿರೋದು, ಮಕ್ಕಳ ಸಾಕೋದು, ಬೆಳೆಸೋದು..." {{gap}}ಹೃದಯ ಬಿಗಿ ಹಿಡಿದುಕೊಂಡು ಅಪ್ಪು ಈ ಮಾತುಗಳನ್ನು ಕೇಳಿದ. ತಡೆಯಾಲಾಗದ ಚಳಿಗಾಳಿ ಬೀಸಿತೇನೋ ಎನ್ನುವಂತ ಆತನ ಮೈನಡುಗಿತು. ಆದರೆ, ವಿಷಯದ ಎಲ್ಲ ಮುಖಗಳನ್ನೂ ವಿವರಿಸಿ ಹೇಳುವ ಮಾಸ್ತರ ಪ್ರತಿಪಾದನಾ ವೈಖರಿಯನ್ನು ಚೆನ್ನಾಗಿ ತಿಳಿದಿದ್ದ ಚಿರುಕಂಡ ಕುತೂಹಲದಿಂದ ಕಿವಿಕೊಡುತ್ತ ನಡೆದ. {{gap}}ಮಾಸ್ತರು ಮುಂದುವರಿಸಿದರು: {{gap}}"ಆದರೆ ಕ್ರಾಂತಿಕಾರಿಯೂ ಮನುಷ್ಯನೇ, ಆ‌ಕೆ ಪೋಷಣೆ ಉಪಚಾರ ಸಿಗದೇ ಹೋದರೂ ಆತನಿಗೆ ಪ್ರೀತಿ ಬೇಕು. ಜನ ತೋರಿಸೋ ಪ್ರೀತಿಯ ಜತೇಲಿ ತನಗೋಸ್ಕರವಾದ ಒಂದು ವಿಶಿಷ್ಟ ಪ್ರೀತಿಯನ್ನೂ ಆತ ಬಯಸ್ತಾನೆ. ಅದು ಅವನ ಹಾಗೆಯೇ ಕ್ರಾಂತಿಕಾರಿಯಾದ ಹೆಣ್ಣಿನಿಂದ ಸಿಗ್ತದೆ. ಕ್ರಾಂತಿಕಾರಿಯಲ್ಲದೇ ಹೋದರೂ ಆಕೆ ಅವನನ್ನು ಚೆನ್ನಾಗಿ ತಿಳಿದುಕೊಂಡು ಅನುಕೂಲೆಯಾಗಿರ್ಬೇಕು... ಆದರೂ, ಕ್ರಾಂತಿಕಾರಿಯ ದಾಂಪತ್ಯ ಜೀವನಕ್ಕೆ ಒಂದು ಮಿತಿಯಿದೆ ಅನ್ನೋದು ನಿಜ." {{gap}}ಚಿರುಕಂಡ ಮುಂದೆ ನಡೆಯುತ್ತಿದ್ದ, ಅಪ್ಪು ಹಿಂದೆ. ನಡುವೆ ಮಾಸ್ತರು ಇದ್ದರು. ಕೇಳುವವರ ಮುಖಭಾವವನ್ನು ನೋಡುತ್ತ ತಮ್ಮ ಮಾತಿನ ಪರಿಣಾಮವೇನೆಂಬುದನ್ನು ತಿಳಿಯುವ ಅಭ್ಯಾಸವಿದ್ದ ಮಾಸ್ತರು ಈಗ ಅದನ್ನು ತಿಳಿಯಲಾರದ ನಿರುತ್ಸಾಹ ತಳೆದರು. ಹುಡುಗರು ಹಾಗೆ ಮೌನವಾಗಿರುವುದು ಸರಿಯಲ್ಲವೆನಿಸಿತು. ಅವರೆಂದರು:<noinclude></noinclude> jncgqtvcrozuwo1gl0nf40hgq9eppvk ಪುಟ:Chirasmarane-Niranjana.pdf/೧೬೯ 104 12988 324215 151727 2026-06-03T09:32:44Z Shreesha Sharma 7840 /* Proofread */ 324215 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೧೭೦|center=|right=ಚಿರಸ್ಮರಣೆ}} {{gap}}"ಈ ವಿಷಯ ಯಾಕೆ ಕೇಳಿದಿರಿ? ಏನು ಸಮಾಚಾರ?" {{gap}}ತಾವು ಅವಿವಾಹಿತರಾಗಿಯೇ ಇದ್ದುದಕ್ಕೆ ಅವರು ಕಾರಣ ಕೇಳುವರೆಂದು ಮಾಸ್ತರು ಎಣಿಸಿದ್ದರು. ಆ ಎಣಿಕೆ ತಪ್ಪಾಗಿತ್ತು. {{gap}}“ನಮ್ಮ ಅಪ್ಪು-" {{gap}}ಹಳೆಯ ನೆನಪುಗಳ ಲೋಕಕ್ಕೆ ಹಾರಿಹೋಗಲು ಸಿದ್ಧರಾಗುತ್ತಿದ್ದ ಮಾಸ್ತರು ಚಿರುಕಂಡನ ಮಾತು ಕೇಳಿ, ಕಣ್ಣರಳಿಸಿ ನಿಂತರು. {{gap}}“ಹೀಗೇನು? ಹುಂ." {{gap}}ಚಿರುಕಂಡ ನಿಧಾನವಾಗಿ ಮಾತನಾಡಿದ ಅಪ್ಪುವೂ ನಡುನಡುವೆ ಒಂದು ಮಾತು ಸೇರಿಸಿದ. ಹೂಂಗುಡುತ್ತ, ಎಲ್ಲವನ್ನೂ ಕೇಳುತ್ತ, ಮೆಲುಕು ಹಾಕುತ್ತ ಮಾಸ್ತರು ನಡೆದರು. {{gap}}ತಮ್ಮ ಅಭಿಪ್ರಾಯ ಕೇಳಲು ಅಪ್ಪು ಮತ್ತು ಚಿರುಕಂಡ ಕಾತರರಾಗಿದ್ದುದನ್ನು ತಿಳಿದಿದ್ದ ಮಾಸ್ತರು ತಡಮಾಡದೆ ಅಂದರು: {{gap}}"ಸಂತೋಷ ಅಪ್ಪು, ಸಂಘಕ್ಕೆ ಕಾರ್ಯಕರ್ತೆಯೂ ಒಬ್ಬಾಕೆ ಸಿಕ್ಕಿದ ಹಾಗಾಯ್ತು. ಓದು ಬರಹ ಬರ್ತದೋ ಇಲ್ಲ್ವೋ? ಬರದಿದ್ರೆ ನೀನೇ ಕಲಿಸುವಿಯಂತೆ." {{gap}}ಹಿರಿಯಣ್ಣನ ಹಾಗೆ-- ತಂದೆಯ ಹಾಗೆ ಮಾಸ್ತರು ಹರಸಿದರೆಂದು, ಅಪ್ಪುವಿನ ಕಣ್ಣುಗಳಲ್ಲಿ ಆನಂದಾಶ್ರು ತುಂಬಿತು. ಚಿರುಕಂಡನೂ ಸಮಾಧಾನದ ಉಸಿರುಬಿಟ್ಟ ಮಾಸ್ತರು ಹೇಳಿದರು: {{gap}}ಇದು ದೊಡ್ಡ ಜವಾಬ್ದಾರಿ, ಅಪ್ಪು, ಆದರೆ ಚಳವಳಿಯಿಂದ ನೀನು ದೂರವಾಗೋದಿಲ್ಲಾಂತ ನನಗೆ ನಂಬಿಕೆ ಇದೆ. ಒಂದು ರೀತೀಲಿ ಇದು ಒಳ್ಳೆಯದೇ ಮದುವೆಯಾಗದ ಒಂಟಿ ಜೀವಕ್ಕೆ ನಮ್ಮಲ್ಲಿ ಗೌರವ ಕಮ್ಮಿ, ಏನೇ ಇರಲಿ. ಅವಳನ್ನೂ ಕ್ರಾಂತಿಕಾರಿಯಾಗಿ ಮಾಡೋದು ನಿನ್ನ ಜವಾಬ್ದಾರಿ.” {{gap}}"ಹೂಂ" ಎಂದ ಅಪ್ಪು, ತನ್ನ ಆ ಕರ್ತವ್ಯವನ್ನು ತಾನು ಬಲ್ಲೆ ಎಂಬಂತೆ. {{gap}}"ಹುಡುಗಿಯ ಹಸರೇನು?” {{gap}}"ಜಾನಕಿ." {{gap}}ಆ ಅಂಶ ಮಹತ್ವದ್ದೆಂಬಂತೆ ಮಾಸ್ತರು, “ಒಳ್ಳೇ ಹೆಸರು" ಎಂದರು. {{gap}}ಸ್ವಲ್ಪ ಹೊತ್ತಾದ ಮೇಲೆ ಚಿರುಕಂಡ ತಾನು ಕೇಳಬೇಕೆಂದಿದ್ದುದಕ್ಕೆ ಪೂರ್ವಭಾವಿಯಾಗಿ ಪ್ರಶ್ನಿಸಿದ {{gap}}"ಪ೦ಡಿತರಿಗೆ ಮದುವೆಯಾಗಿದೆಯಾ ಸರ್?” ಇನ್ನಾದರೂ ತನ್ನ ಸರದಿ<noinclude></noinclude> p5ff5ti2g0d18eat9spazibheypiv3g 324219 324215 2026-06-03T09:35:41Z Shreelatha.Halemane 7642 /* Validated */ 324219 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೭೦|center=|right=ಚಿರಸ್ಮರಣೆ}} {{gap}}"ಈ ವಿಷಯ ಯಾಕೆ ಕೇಳಿದಿರಿ? ಏನು ಸಮಾಚಾರ?" {{gap}}ತಾವು ಅವಿವಾಹಿತರಾಗಿಯೇ ಇದ್ದುದಕ್ಕೆ ಅವರು ಕಾರಣ ಕೇಳುವರೆಂದು ಮಾಸ್ತರು ಎಣಿಸಿದ್ದರು. ಆ ಎಣಿಕೆ ತಪ್ಪಾಗಿತ್ತು. {{gap}}“ನಮ್ಮ ಅಪ್ಪು-" {{gap}}ಹಳೆಯ ನೆನಪುಗಳ ಲೋಕಕ್ಕೆ ಹಾರಿಹೋಗಲು ಸಿದ್ಧರಾಗುತ್ತಿದ್ದ ಮಾಸ್ತರು ಚಿರುಕಂಡನ ಮಾತು ಕೇಳಿ, ಕಣ್ಣರಳಿಸಿ ನಿಂತರು. {{gap}}“ಹೀಗೇನು? ಹುಂ." {{gap}}ಚಿರುಕಂಡ ನಿಧಾನವಾಗಿ ಮಾತನಾಡಿದ ಅಪ್ಪುವೂ ನಡುನಡುವೆ ಒಂದು ಮಾತು ಸೇರಿಸಿದ. ಹೂಂಗುಡುತ್ತ, ಎಲ್ಲವನ್ನೂ ಕೇಳುತ್ತ, ಮೆಲುಕು ಹಾಕುತ್ತ ಮಾಸ್ತರು ನಡೆದರು. {{gap}}ತಮ್ಮ ಅಭಿಪ್ರಾಯ ಕೇಳಲು ಅಪ್ಪು ಮತ್ತು ಚಿರುಕಂಡ ಕಾತರರಾಗಿದ್ದುದನ್ನು ತಿಳಿದಿದ್ದ ಮಾಸ್ತರು ತಡಮಾಡದೆ ಅಂದರು: {{gap}}"ಸಂತೋಷ ಅಪ್ಪು, ಸಂಘಕ್ಕೆ ಕಾರ್ಯಕರ್ತೆಯೂ ಒಬ್ಬಾಕೆ ಸಿಕ್ಕಿದ ಹಾಗಾಯ್ತು. ಓದು ಬರಹ ಬರ್ತದೋ ಇಲ್ಲ್ವೋ? ಬರದಿದ್ರೆ ನೀನೇ ಕಲಿಸುವಿಯಂತೆ." {{gap}}ಹಿರಿಯಣ್ಣನ ಹಾಗೆ-- ತಂದೆಯ ಹಾಗೆ ಮಾಸ್ತರು ಹರಸಿದರೆಂದು, ಅಪ್ಪುವಿನ ಕಣ್ಣುಗಳಲ್ಲಿ ಆನಂದಾಶ್ರು ತುಂಬಿತು. ಚಿರುಕಂಡನೂ ಸಮಾಧಾನದ ಉಸಿರುಬಿಟ್ಟ ಮಾಸ್ತರು ಹೇಳಿದರು: {{gap}}ಇದು ದೊಡ್ಡ ಜವಾಬ್ದಾರಿ, ಅಪ್ಪು, ಆದರೆ ಚಳವಳಿಯಿಂದ ನೀನು ದೂರವಾಗೋದಿಲ್ಲಾಂತ ನನಗೆ ನಂಬಿಕೆ ಇದೆ. ಒಂದು ರೀತೀಲಿ ಇದು ಒಳ್ಳೆಯದೇ ಮದುವೆಯಾಗದ ಒಂಟಿ ಜೀವಕ್ಕೆ ನಮ್ಮಲ್ಲಿ ಗೌರವ ಕಮ್ಮಿ, ಏನೇ ಇರಲಿ. ಅವಳನ್ನೂ ಕ್ರಾಂತಿಕಾರಿಯಾಗಿ ಮಾಡೋದು ನಿನ್ನ ಜವಾಬ್ದಾರಿ.” {{gap}}"ಹೂಂ" ಎಂದ ಅಪ್ಪು, ತನ್ನ ಆ ಕರ್ತವ್ಯವನ್ನು ತಾನು ಬಲ್ಲೆ ಎಂಬಂತೆ. {{gap}}"ಹುಡುಗಿಯ ಹಸರೇನು?” {{gap}}"ಜಾನಕಿ." {{gap}}ಆ ಅಂಶ ಮಹತ್ವದ್ದೆಂಬಂತೆ ಮಾಸ್ತರು, “ಒಳ್ಳೇ ಹೆಸರು" ಎಂದರು. {{gap}}ಸ್ವಲ್ಪ ಹೊತ್ತಾದ ಮೇಲೆ ಚಿರುಕಂಡ ತಾನು ಕೇಳಬೇಕೆಂದಿದ್ದುದಕ್ಕೆ ಪೂರ್ವಭಾವಿಯಾಗಿ ಪ್ರಶ್ನಿಸಿದ {{gap}}"ಪ೦ಡಿತರಿಗೆ ಮದುವೆಯಾಗಿದೆಯಾ ಸರ್?” ಇನ್ನಾದರೂ ತನ್ನ ಸರದಿ<noinclude></noinclude> oq82er0gu9ed4zjzv01y7o78zt9nmqn ಪುಟ:Chirasmarane-Niranjana.pdf/೧೭೭ 104 12996 324220 65194 2026-06-03T09:48:08Z Shreesha Sharma 7840 /* Proofread */ 324220 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೧೭೮|center=|right=ಚಿರಸ್ಮರಣೆ}} ಉದ್ದೇಶಕ್ಕೋಸ್ಕರ ಊರು ಬಿಟ್ಟರು:ಒಬ್ಬ ಅಪ್ಪುವಿನ ತಮ್ಮ, ಇನ್ನೊಬ್ಬ ಕುಂಞ್ಂಬುವಿನ ತಮ್ಮ.ರೈತರು ತಮ್ಮ ಮಕ್ಕಳನ್ನು ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಹೊರಗೆ ಕಳುಹಿಸಿದುದು ಅದೇ ಮೊದಲು.ಅದು ಸಾಮಾನ್ಯ ವಿಷಯವಾಗಿರಲಿಲ್ಲ. {{gap}}ಮಕ್ಕಳೇ ಇಲ್ಲದ ಕೋರನೆಂದ: {{gap}}'ರೈತ ಮಕ್ಕಳೆಲ್ಲ ಮಹಾ ದಡ್ಡರೂಂತ ಹೇಳ್ತಿದ್ರು.ಈಗ ನೋಡೋಣ.ಯಾರ ಹುಡುಗರು ಚೆನ್ನಾಗಿ ಕಲೀತಾರೆ,ಯಾರ ಹುಡುಗರು ಮೇಲಕ್ಕೆ ಬರ್ತ್ತಾರೇಂತ,ಈಗ ನೋಡೋಣ." {{gap}}ಅಂಥ ಸಂದರ್ಭಗಳಲ್ಲೆಲ್ಲ,ಆ ಮಾತು ಬಂದಾಗಲೆಲ್ಲ,ಕೋರನಿಗೂ ಇತರರಿಗೂ ಮಾಸ್ತರು ನೆನಪಾಗುತ್ತಿತ್ತು. {{gap}}ಮಾಸ್ತರು ಹೋದಮೇಲೆ ಅವರಿಂದ ಮೊದಲ ಕಾಗದವನ್ನು ಯಾರೋ ತಂದು ಕೊಟ್ಟಾಗ,ರೈತರು ತಂಡತಂಡವಾಗಿ ಬಂದು,"ಏನು ಬರೆದಿದ್ದಾರೆ?"ಎಂದು ಕೇಳಿ ಹೋದರು.ಎಲ್ಲರೂ ಓದಿಯಾದ ಮೇಲೂ ಓದಿಸಿ ಕೇಳಿಯಾದ ಮೇಲೂ ಅಪ್ಪು ಅದನ್ನು ಮನೆಗೊಯ್ದು ಒಬ್ಬನೇ ಓದಿದ;ಹೆಂಡತಿ ಜಾನಕಿಗೆ ಅದನ್ನು ತೋರಿಸಿದ. {{gap}}ಅಪ್ಪುವಿನ ತಂದೆಯೆಂದ: {{gap}}ಮಾಸ್ತರು ಚಿನ್ನದಂಥ ಮನುಷ್ಯ.ಅವರನ್ನ ಇಲ್ಲೇ ಇರಿಸಿಕೊಳ್ಳೋ ಅದೃಷ್ಟ ನಮಗಿಲ್ದೇಹೋಯ್ತು.ಇದ್ದಾಗಲೂ ಅವರನ್ನು ನಾವು ಸರಿಯಾಗಿ ನೋಡಿಕೊಳ್ಲಿಲ್ಲ." {{gap}}ಹೊಸ ಮಾಸ್ತರು ಯಾರು ಬರುವರೋ ಎಂದು ಹಲವರು ಕುತೂಹಲದಿಂದ ಕಾದು ನೋಡಿದರು.ಹಾದಿ ನೋಡಿದರು.ಆದರೆ ಯಾರ ಸುಳಿವು ಇರಲಿಲ್ಲ.ಉಪಾಧ್ಯಾಯರು ಸಿಗದ ನೆಪ ಹೇಳಿ ಜಮೀನ್ಡಾರರು ಶಾಲೆಯನ್ನೇ ಮುಚ್ಚಿಬಿಡಬಹುದೆಂದು ರೈತರಿಗೆ ಸಂದೇಹ ಬಂತು.ಅವರ ಆಪೇಕ್ಷೆಯಂತೆ, ಸಂಘದ ಕಾರ್ಯದರ್ಶಿ ಚಿರುಕಂಡನೂ ವಯಸ್ಸಾದ ಇಬ್ಬರು ರೈತರೂ ಜಮೀನ್ದಾರರಿಬ್ಬನ್ನು ಕಾಣಲು ಹೋದರು. {{gap}}ನಂಬಿಯಾರರು ಬಂದವರನ್ನು ಕಡೆಗಣ್ಣಿನಿಂದ ನೋಡಿ, "ನೀವು ಯಾರು ಕೇಳೋದಕ್ಕೆ?"ಎಂದು ಅಬ್ಬರಿಸಿದರು. {{gap}}"ನಾವು ಸಂಘದವರು." {{gap}}"ಸಂಘಕ್ಕೂ ನಮಗೂ ಯಾವ ಸಂಬಂಧವೂ ಇಲ್ಲ." {{gap}}ಶಾಲೆ ನಡೆಸೋ ಮುಖ್ಯಸ್ಥರು ನೀವಾದ್ದರಿಂದ ನಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕೆ ಸಂಬಂಧಿಸಿ ಮಾತಾಡೋದಕ್ಕೆ ನಾವು ನಿಮ್ಮಲ್ಲಿಗೆ ಬಂದಿದ್ದೇವೆ." <noinclude></noinclude> e4vkd4c9mngi9e36pvvg0bvjr6ajgu7 324223 324220 2026-06-03T10:05:32Z Shreelatha.Halemane 7642 /* Validated */ 324223 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೭೮|center=|right=ಚಿರಸ್ಮರಣೆ}} ಉದ್ದೇಶಕ್ಕೋಸ್ಕರ ಊರು ಬಿಟ್ಟರು:ಒಬ್ಬ ಅಪ್ಪುವಿನ ತಮ್ಮ, ಇನ್ನೊಬ್ಬ ಕುಂಞ್ಂಬುವಿನ ತಮ್ಮ.ರೈತರು ತಮ್ಮ ಮಕ್ಕಳನ್ನು ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಹೊರಗೆ ಕಳುಹಿಸಿದುದು ಅದೇ ಮೊದಲು.ಅದು ಸಾಮಾನ್ಯ ವಿಷಯವಾಗಿರಲಿಲ್ಲ. {{gap}}ಮಕ್ಕಳೇ ಇಲ್ಲದ ಕೋರನೆಂದ: {{gap}}'ರೈತ ಮಕ್ಕಳೆಲ್ಲ ಮಹಾ ದಡ್ಡರೂಂತ ಹೇಳ್ತಿದ್ರು.ಈಗ ನೋಡೋಣ.ಯಾರ ಹುಡುಗರು ಚೆನ್ನಾಗಿ ಕಲೀತಾರೆ,ಯಾರ ಹುಡುಗರು ಮೇಲಕ್ಕೆ ಬರ್ತ್ತಾರೇಂತ,ಈಗ ನೋಡೋಣ." {{gap}}ಅಂಥ ಸಂದರ್ಭಗಳಲ್ಲೆಲ್ಲ,ಆ ಮಾತು ಬಂದಾಗಲೆಲ್ಲ,ಕೋರನಿಗೂ ಇತರರಿಗೂ ಮಾಸ್ತರು ನೆನಪಾಗುತ್ತಿತ್ತು. {{gap}}ಮಾಸ್ತರು ಹೋದಮೇಲೆ ಅವರಿಂದ ಮೊದಲ ಕಾಗದವನ್ನು ಯಾರೋ ತಂದು ಕೊಟ್ಟಾಗ,ರೈತರು ತಂಡತಂಡವಾಗಿ ಬಂದು,"ಏನು ಬರೆದಿದ್ದಾರೆ?"ಎಂದು ಕೇಳಿ ಹೋದರು.ಎಲ್ಲರೂ ಓದಿಯಾದ ಮೇಲೂ ಓದಿಸಿ ಕೇಳಿಯಾದ ಮೇಲೂ ಅಪ್ಪು ಅದನ್ನು ಮನೆಗೊಯ್ದು ಒಬ್ಬನೇ ಓದಿದ;ಹೆಂಡತಿ ಜಾನಕಿಗೆ ಅದನ್ನು ತೋರಿಸಿದ. {{gap}}ಅಪ್ಪುವಿನ ತಂದೆಯೆಂದ: {{gap}}ಮಾಸ್ತರು ಚಿನ್ನದಂಥ ಮನುಷ್ಯ.ಅವರನ್ನ ಇಲ್ಲೇ ಇರಿಸಿಕೊಳ್ಳೋ ಅದೃಷ್ಟ ನಮಗಿಲ್ದೇಹೋಯ್ತು.ಇದ್ದಾಗಲೂ ಅವರನ್ನು ನಾವು ಸರಿಯಾಗಿ ನೋಡಿಕೊಳ್ಲಿಲ್ಲ." {{gap}}ಹೊಸ ಮಾಸ್ತರು ಯಾರು ಬರುವರೋ ಎಂದು ಹಲವರು ಕುತೂಹಲದಿಂದ ಕಾದು ನೋಡಿದರು.ಹಾದಿ ನೋಡಿದರು.ಆದರೆ ಯಾರ ಸುಳಿವು ಇರಲಿಲ್ಲ.ಉಪಾಧ್ಯಾಯರು ಸಿಗದ ನೆಪ ಹೇಳಿ ಜಮೀನ್ಡಾರರು ಶಾಲೆಯನ್ನೇ ಮುಚ್ಚಿಬಿಡಬಹುದೆಂದು ರೈತರಿಗೆ ಸಂದೇಹ ಬಂತು.ಅವರ ಆಪೇಕ್ಷೆಯಂತೆ, ಸಂಘದ ಕಾರ್ಯದರ್ಶಿ ಚಿರುಕಂಡನೂ ವಯಸ್ಸಾದ ಇಬ್ಬರು ರೈತರೂ ಜಮೀನ್ದಾರರಿಬ್ಬನ್ನು ಕಾಣಲು ಹೋದರು. {{gap}}ನಂಬಿಯಾರರು ಬಂದವರನ್ನು ಕಡೆಗಣ್ಣಿನಿಂದ ನೋಡಿ, "ನೀವು ಯಾರು ಕೇಳೋದಕ್ಕೆ?"ಎಂದು ಅಬ್ಬರಿಸಿದರು. {{gap}}"ನಾವು ಸಂಘದವರು." {{gap}}"ಸಂಘಕ್ಕೂ ನಮಗೂ ಯಾವ ಸಂಬಂಧವೂ ಇಲ್ಲ." {{gap}}ಶಾಲೆ ನಡೆಸೋ ಮುಖ್ಯಸ್ಥರು ನೀವಾದ್ದರಿಂದ ನಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕೆ ಸಂಬಂಧಿಸಿ ಮಾತಾಡೋದಕ್ಕೆ ನಾವು ನಿಮ್ಮಲ್ಲಿಗೆ ಬಂದಿದ್ದೇವೆ." <noinclude></noinclude> g063wlq8bbpr2w4ceoucv5jvbyj56bn ಪುಟ:Chirasmarane-Niranjana.pdf/೧೭೮ 104 12997 324221 65192 2026-06-03T09:56:45Z Shreesha Sharma 7840 /* Proofread */ 324221 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೧೭೯}} {{gap}}ಹಾಗೆ ಹೇಳಿದ ಚಿರುಕಂಡನನ್ನು ನಂಬಿಯಾರರು ಮೇಲಿನಿಂದ ಕೆಳಗಿನವರೆಗೂ ನೋಡಿ ಕುತ್ಸಿತನಗೆ ನಕ್ಕು,ಅಂದರು: {{gap}}"ಆಗಲೇ ಮಕ್ಕಳೂ ಅದರೇನಪ್ಪ ನಿನಗೆ?" {{gap}}ಆ ಪ್ರಶ್ನೆ ಕೇಳಿಯೂ ಕೇಳಿಸದಂತೆ ಚಿರುಕಂಡನೆಂದ: {{gap}}"ಇಲ್ಲಿ ಇನ್ನೂ ಗ್ರಾಮಪಂಚಾಯಿತಿ ಇಲ್ಲ.ನೀವು ಆದಕ್ಕೆ ಆಸ್ಪದವನ್ನೇ ಕೊಟ್ಟಿಲ್ಲ.ಇದ್ದಿದ್ದರೆ ಪಂಚಾಯಿತಿಯವರೇ ಶಾಲೆ ನಡೆಸ್ತಿದ್ರು." {{gap}}"ಓಹೋ! ನಡೆಸದೇನು ಮಾಡ್ತಿದ್ರು?ಈಗಲೂ ಪಂಚಾಯಿತಿ ಸ್ಥಾಪಿಸೋದಕ್ಕೆ ನಿಮ್ಮನ್ನು ಯಾರು ತಡೀತಾರೆ?ಬರೀರಿ ಸರ್ಕಾರಕ್ಕೆ.ಬರ್ಲಿ ಕಲೆಕ್ಟರು ಚುನಾವಣೆ ನಡೆಸ್ಲಿ!" {{gap}}"ಮಾಡಬೇಕಾಗಿ ಬಂದಾಗ ಅದನ್ನು ಮಾಡಿಯೇ ಮಾಡ್ತೇವೆ,ಆದರೆ ಈಗ ಶಾಲೆ ಮುಚ್ಚಿರೋದು ಸರಿಯಲ್ಲ." {{gap}}"ನಿಮ್ಮ ಸಂಘದಲ್ಲಿ ಒಬ್ಬ ಗುಮಾಸ್ತ ಇಲ್ಲದೆ ಬಹಳ ತೊಂದರೆಯಾಗಿದೆ,ಅಲ್ಲ? ಯಾವನಾದರೂ ಪೇಪರು ಓದೋ ಮಾಸ್ತರು ಬಂದರೆ ಸರಿಯಾಗ್ತದೆ!" {{gap}}ಕೆಣಕುವ ಎಂತಹ ನುಡಿಗಳಿದ್ದರೂ ರೇಗದೆಯೇ ಮಾತನಾಡುವ ಚಿರುಕಂಡನ ಸಾಮರ್ಥ್ಯ ವಿಸ್ಮಯಕರವಾಗಿತ್ತು. {{gap}}"ನಮ್ಮ ಸಂಘದಲ್ಲಿ ಕೆಲಸ ಮಾಡೋರಿಗೇನೂ ಈಗ ಅಭಾವ ಇಲ್ಲ ಹುಡುಗರಿಗೆ ಪಾಠ ಹೇಳಿಕೊಡೋದಕ್ಕೆ ಮಾಸ್ತರರಿದ್ದರೆ ಸಾಕು." {{gap}}ಚಿರುಕಂಡನ ನಿರ್ಭೀತ ಶಾಂತ ಮುಖಮುದ್ರೆಯನ್ನು ಕಂಡು ಸಹಿಸುವುದಾಗಲಿಲ್ಲ ನಂಬಿಯಾರರಿಂದ. ಅವರು ಕೂಗಾಡಿದರು: {{gap}}"ಹೋಗಿ!ಹೋರಟೋಗಿ!ನಾನು ಶಾಲೆ ತೆರೆಯೋದಿಲ್ಲ.ನನ್ನಿಷ್ಟ!" ಕೊನೆಯದಾಗಿ ಚಿರುಕಂಡನೆಂದ. {{gap}}"ಇನ್ನು ಸ್ವಲ್ಪ ದಿನ ಕಾದು ನೋಡ್ತೇವೆ. ಆಗಲೂ ಶಾಲೆ ಶುರುವಾಗದಿದ್ರೆ ಮುಂದಿನ ಕ್ರಮ ಕೈಗೊಳ್ತೇವೆ." {{gap}}ಕಟ್ಟ ಕಡೆಯದಾಗಿ ಮಾತು ತನ್ನದೇ ಆಗಬೇಕೆಂದು ನಂಬಿಯಾರರೆಂದರು: "ಓಹೋ! ಸಂತೋಷವಾಗಿ ಹಾಗೆ ಮಾಡಿ!" {{gap}}ಅಲ್ಲಿಂದ ಸಂತೋಷವಾಗಿ ಹಾಗೆ ಮಾಡಿ!" {{gap}}ಅಲ್ಲಿಂದ ಸಂಘದ ಪ್ರತಿನಿಧಿಗಳು ನಂಬೂದಿರಿಯಲ್ಲಿಗೆ ಹೋದರು. {{gap}}"ಸಂಘದವರು!ಬನ್ನಿ-ಬನ್ನಿ-ಏನ್ಸಮಾಚಾರ?"ಎಂದು ಆತ ದೇಶಾವರದ ನಗೆ ಬೀರಿದರು. {{gap}}ವಿಷಯವೇನೆಂದು ಚಿರುಕಂಡ ವಿವರಿಸಿದಾಗ,ಆ ಜಮೀನ್ದಾರರೆಂದರು:<noinclude></noinclude> rtl4czucw9ko7y5dokqyl7n55i1mahz 324224 324221 2026-06-03T10:05:42Z Shreelatha.Halemane 7642 /* Validated */ 324224 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೧೭೯}} {{gap}}ಹಾಗೆ ಹೇಳಿದ ಚಿರುಕಂಡನನ್ನು ನಂಬಿಯಾರರು ಮೇಲಿನಿಂದ ಕೆಳಗಿನವರೆಗೂ ನೋಡಿ ಕುತ್ಸಿತನಗೆ ನಕ್ಕು,ಅಂದರು: {{gap}}"ಆಗಲೇ ಮಕ್ಕಳೂ ಅದರೇನಪ್ಪ ನಿನಗೆ?" {{gap}}ಆ ಪ್ರಶ್ನೆ ಕೇಳಿಯೂ ಕೇಳಿಸದಂತೆ ಚಿರುಕಂಡನೆಂದ: {{gap}}"ಇಲ್ಲಿ ಇನ್ನೂ ಗ್ರಾಮಪಂಚಾಯಿತಿ ಇಲ್ಲ.ನೀವು ಆದಕ್ಕೆ ಆಸ್ಪದವನ್ನೇ ಕೊಟ್ಟಿಲ್ಲ.ಇದ್ದಿದ್ದರೆ ಪಂಚಾಯಿತಿಯವರೇ ಶಾಲೆ ನಡೆಸ್ತಿದ್ರು." {{gap}}"ಓಹೋ! ನಡೆಸದೇನು ಮಾಡ್ತಿದ್ರು?ಈಗಲೂ ಪಂಚಾಯಿತಿ ಸ್ಥಾಪಿಸೋದಕ್ಕೆ ನಿಮ್ಮನ್ನು ಯಾರು ತಡೀತಾರೆ?ಬರೀರಿ ಸರ್ಕಾರಕ್ಕೆ.ಬರ್ಲಿ ಕಲೆಕ್ಟರು ಚುನಾವಣೆ ನಡೆಸ್ಲಿ!" {{gap}}"ಮಾಡಬೇಕಾಗಿ ಬಂದಾಗ ಅದನ್ನು ಮಾಡಿಯೇ ಮಾಡ್ತೇವೆ,ಆದರೆ ಈಗ ಶಾಲೆ ಮುಚ್ಚಿರೋದು ಸರಿಯಲ್ಲ." {{gap}}"ನಿಮ್ಮ ಸಂಘದಲ್ಲಿ ಒಬ್ಬ ಗುಮಾಸ್ತ ಇಲ್ಲದೆ ಬಹಳ ತೊಂದರೆಯಾಗಿದೆ,ಅಲ್ಲ? ಯಾವನಾದರೂ ಪೇಪರು ಓದೋ ಮಾಸ್ತರು ಬಂದರೆ ಸರಿಯಾಗ್ತದೆ!" {{gap}}ಕೆಣಕುವ ಎಂತಹ ನುಡಿಗಳಿದ್ದರೂ ರೇಗದೆಯೇ ಮಾತನಾಡುವ ಚಿರುಕಂಡನ ಸಾಮರ್ಥ್ಯ ವಿಸ್ಮಯಕರವಾಗಿತ್ತು. {{gap}}"ನಮ್ಮ ಸಂಘದಲ್ಲಿ ಕೆಲಸ ಮಾಡೋರಿಗೇನೂ ಈಗ ಅಭಾವ ಇಲ್ಲ ಹುಡುಗರಿಗೆ ಪಾಠ ಹೇಳಿಕೊಡೋದಕ್ಕೆ ಮಾಸ್ತರರಿದ್ದರೆ ಸಾಕು." {{gap}}ಚಿರುಕಂಡನ ನಿರ್ಭೀತ ಶಾಂತ ಮುಖಮುದ್ರೆಯನ್ನು ಕಂಡು ಸಹಿಸುವುದಾಗಲಿಲ್ಲ ನಂಬಿಯಾರರಿಂದ. ಅವರು ಕೂಗಾಡಿದರು: {{gap}}"ಹೋಗಿ!ಹೋರಟೋಗಿ!ನಾನು ಶಾಲೆ ತೆರೆಯೋದಿಲ್ಲ.ನನ್ನಿಷ್ಟ!" ಕೊನೆಯದಾಗಿ ಚಿರುಕಂಡನೆಂದ. {{gap}}"ಇನ್ನು ಸ್ವಲ್ಪ ದಿನ ಕಾದು ನೋಡ್ತೇವೆ. ಆಗಲೂ ಶಾಲೆ ಶುರುವಾಗದಿದ್ರೆ ಮುಂದಿನ ಕ್ರಮ ಕೈಗೊಳ್ತೇವೆ." {{gap}}ಕಟ್ಟ ಕಡೆಯದಾಗಿ ಮಾತು ತನ್ನದೇ ಆಗಬೇಕೆಂದು ನಂಬಿಯಾರರೆಂದರು: "ಓಹೋ! ಸಂತೋಷವಾಗಿ ಹಾಗೆ ಮಾಡಿ!" {{gap}}ಅಲ್ಲಿಂದ ಸಂತೋಷವಾಗಿ ಹಾಗೆ ಮಾಡಿ!" {{gap}}ಅಲ್ಲಿಂದ ಸಂಘದ ಪ್ರತಿನಿಧಿಗಳು ನಂಬೂದಿರಿಯಲ್ಲಿಗೆ ಹೋದರು. {{gap}}"ಸಂಘದವರು!ಬನ್ನಿ-ಬನ್ನಿ-ಏನ್ಸಮಾಚಾರ?"ಎಂದು ಆತ ದೇಶಾವರದ ನಗೆ ಬೀರಿದರು. {{gap}}ವಿಷಯವೇನೆಂದು ಚಿರುಕಂಡ ವಿವರಿಸಿದಾಗ,ಆ ಜಮೀನ್ದಾರರೆಂದರು:<noinclude></noinclude> sx01crv2pp0l8gx5clb9g02dewttwu7 ಪುಟ:Chirasmarane-Niranjana.pdf/೧೭೯ 104 12998 324222 65155 2026-06-03T10:03:54Z Shreesha Sharma 7840 /* Proofread */ 324222 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೧೮೦|center=|right=ಚಿರಸ್ಮರಣೆ}} {{gap}}"ಏನಪ್ಪ ಮಾಡೋದು?ನಂಬಿಯಾರರಿಗೋ ಬೇರೆ ಮಕ್ಕಳಿಲ್ಲ.ನನಗೆ ಇದ್ದಾರೆ. ಶಾಲೆ ಮುಚ್ಚಿದರೂ ಈಗ ಆವರಿಗೆ ಚಿಂತೆಯಿಲ್ಲ.ಚಿಂತೆ ನನಗೆ ಮಾತ್ರ! ನಮ್ಮಿಂದಾಗಿ ನಿಮಗೂ ತೊಂದರೆ.ನಮ್ಮ ಸಣ್ಣ ಹುಡುಗರನ್ನೂ ನೀಲೇಶ್ವರಕ್ಕೇ ಕಳಿಸಿ,ಅಲ್ಲಿಯೇ ಮನೆಮಾಡೋಣಾಂತ ಒಂದು ಯೋಚನೆಯೂ ನನಗಿದೆ.... ಏನಪ್ಪ ಮಾಡೋದು?" {{gap}}"ನಿಮ್ಮಿಷ್ಟ ಶಾಲೆ ಮುಚ್ಚಿದರೆ ಎಷ್ಟೋ ಹುಡುಗರಿಗೆ ತೊಂದರೆಯಾಗ್ತದೆ.ಶಾಲೆಗೇಂತ ವರ್ಷವೂ ಎಲ್ಲ ರೈತರೂ ವಂತಿಗೆ ಕೊಡ್ತಾ ಬಂದಿದ್ದಾರೆ. ಈವರೆಗೂ ಯಾರೂ ಅದರ ಲೆಕ್ಕ ಕೇಳಿಲ್ಲ.ಈಗ ಮುಚ್ಚೋದಕ್ಕೆ ಕಾರಣವಾದರೂ ಏನು? ಕಾರಣ ಕೇಳೋ ಹಕ್ಕಾದರೂ ರೈತರಿಗಿದೆಯಷ್ಟೆ?" {{gap}}ನೀಳವಾದ ಕರಿಯ ದೇಹ, ತಳ್ಳಗಿನ ಕುಡಿಮೀಸೆ.ಕಿರಿದಾಗಿ ಕತ್ತರಿಸಿದ್ದ ಕ್ರಾಪು, ಶುಭ್ರವಾದ ಬಿಳಿಯ ಅಡ್ಡಪಂಚೆ,ನೀಳವಾದ ಬಿಳಿಯ ಶರಟು-ಹಾಗಿದ್ದ ಚಿರುಕಂಡನನ್ನು ನಂಬೂದಿರಿ ನೋಡಿಯೇ ನೋಡಿದರು.ಈತ ಕಯ್ಯೂರಿನವನೇ ತಾನೆ? ಎಂದು ಅವರಿಗೆ ಆಶ್ಚರ್ಯವಾಯಿತು.ತಮಗೆ ತಿಳಿಯದೆಯೇ ಜನ ಹೇಗೆ ಬದಲಾಗಿದ್ದಾರೆ ಎಂದು ಅಚ್ಚರಿಯೂ ಅನಿಸಿತು.ಚಿರುಕಂಡ ಏನು ಹೇಳುತ್ತಿದ್ದನೆಂಬುದನ್ನು ಆಗಲೆ ಮರೆತಿದ್ದ ಆವರು, ಕನಸಿನಿಂದ ಎಚ್ಚೆತ್ತವರೆಂತೆ ಅಂದರು: {{gap}}"ಹೂ.ಏನಂದಿರಿ?ಮುಚ್ಚೋದಕ್ಕೆ ಏನು ಕಾರಣ ಅಂತ್ಲೆ? ನನಗೆ ಗೊತ್ತಿಲ್ಲಪ್ಪ ನಂಬಿಯಾರನ್ನೇ ಕೇಳ್ಬೇಕು.ಶಾಲೆ ತೆರೀಲೇಬೇಕೂಂತ ಹಿಂದೆ ಗಲಾಟೆ ಮಾಡಿದವರೂ ಅವರೇ,ಈಗ ಮುಚ್ಚಿರೋದೂ ಅವರೇ." {{gap}}"ಆದರೂ ನೀವಿಬ್ಬರೂ ಇದಕ್ಕೆ ಕಾರಣ ಅಂತ ಜನ ಆಡಿಕೊಳ್ತಾರೆ." {{gap}}ವೈರಿಬಣದಲ್ಲಿ ಬಿರುಕು ಹುಟ್ಟಿಸುವ ಕೌಶಲವಿತ್ತು ಚಿರುಕಂಡನ ಆ ಮಾತಿನಲ್ಲಿ. {{gap}}"ಛೇ!ಛೆ!ಅದು ಸರಿಯಲ್ಲ.ನಂಬಿಯಾರಿಗೆ ನಾನು ಹೇಳ್ತೀನಪ್ಪ;ಬೇಗ ಯಾರನ್ನಾದರೂ ಕರೆಸೀಂತ ಹೇಳ್ತೇನೆ." {{gap}}ಸಂಘದ ನಿಯೋಗ ಹಿಂತಿರುಗಿತು. {{gap}}ನಂಬೂದಿರಿ ನಂಬಿಯಾರರೊಡನೆ ಅದೇನು ಮಾತನಾಡಿದರೋ ಬಿಟ್ಟಿರೋ ಶಾಲೆ ಮತ್ತೆ ಶುರುವಾಗಲೇ ಇಲ್ಲ. {{gap}}ಸಂಘದ ಕಾರ್ಯಸಮಿತಿ ಮತ್ತೆ ಸಭೆ ಸೇರಿ ಚರ್ಚಿಸಿ ಶಾಲೆಯ ವಿಶ್ವಸ್ಥ ಸಮಿತಿಯ ಮುಖ್ಯಸ್ಥರಿಗೆ ಪತ್ರ ಬರೆಯಲು ತೀರ್ಮಾನಿಸಿತು. {{gap}}ಪತ್ರದ ಸಾರಾಂಶವಿಷ್ಟು:"ಶಾಲೆಯ ಲೆಕ್ಕಪತ್ರಗಳನ್ನೆಲ್ಲ ಒಡನೆಯೇ<noinclude></noinclude> g41dldrhybxjoomhcwbi5s19f5aww9c 324225 324222 2026-06-03T10:05:51Z Shreelatha.Halemane 7642 /* Validated */ 324225 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೮೦|center=|right=ಚಿರಸ್ಮರಣೆ}} {{gap}}"ಏನಪ್ಪ ಮಾಡೋದು?ನಂಬಿಯಾರರಿಗೋ ಬೇರೆ ಮಕ್ಕಳಿಲ್ಲ.ನನಗೆ ಇದ್ದಾರೆ. ಶಾಲೆ ಮುಚ್ಚಿದರೂ ಈಗ ಆವರಿಗೆ ಚಿಂತೆಯಿಲ್ಲ.ಚಿಂತೆ ನನಗೆ ಮಾತ್ರ! ನಮ್ಮಿಂದಾಗಿ ನಿಮಗೂ ತೊಂದರೆ.ನಮ್ಮ ಸಣ್ಣ ಹುಡುಗರನ್ನೂ ನೀಲೇಶ್ವರಕ್ಕೇ ಕಳಿಸಿ,ಅಲ್ಲಿಯೇ ಮನೆಮಾಡೋಣಾಂತ ಒಂದು ಯೋಚನೆಯೂ ನನಗಿದೆ.... ಏನಪ್ಪ ಮಾಡೋದು?" {{gap}}"ನಿಮ್ಮಿಷ್ಟ ಶಾಲೆ ಮುಚ್ಚಿದರೆ ಎಷ್ಟೋ ಹುಡುಗರಿಗೆ ತೊಂದರೆಯಾಗ್ತದೆ.ಶಾಲೆಗೇಂತ ವರ್ಷವೂ ಎಲ್ಲ ರೈತರೂ ವಂತಿಗೆ ಕೊಡ್ತಾ ಬಂದಿದ್ದಾರೆ. ಈವರೆಗೂ ಯಾರೂ ಅದರ ಲೆಕ್ಕ ಕೇಳಿಲ್ಲ.ಈಗ ಮುಚ್ಚೋದಕ್ಕೆ ಕಾರಣವಾದರೂ ಏನು? ಕಾರಣ ಕೇಳೋ ಹಕ್ಕಾದರೂ ರೈತರಿಗಿದೆಯಷ್ಟೆ?" {{gap}}ನೀಳವಾದ ಕರಿಯ ದೇಹ, ತಳ್ಳಗಿನ ಕುಡಿಮೀಸೆ.ಕಿರಿದಾಗಿ ಕತ್ತರಿಸಿದ್ದ ಕ್ರಾಪು, ಶುಭ್ರವಾದ ಬಿಳಿಯ ಅಡ್ಡಪಂಚೆ,ನೀಳವಾದ ಬಿಳಿಯ ಶರಟು-ಹಾಗಿದ್ದ ಚಿರುಕಂಡನನ್ನು ನಂಬೂದಿರಿ ನೋಡಿಯೇ ನೋಡಿದರು.ಈತ ಕಯ್ಯೂರಿನವನೇ ತಾನೆ? ಎಂದು ಅವರಿಗೆ ಆಶ್ಚರ್ಯವಾಯಿತು.ತಮಗೆ ತಿಳಿಯದೆಯೇ ಜನ ಹೇಗೆ ಬದಲಾಗಿದ್ದಾರೆ ಎಂದು ಅಚ್ಚರಿಯೂ ಅನಿಸಿತು.ಚಿರುಕಂಡ ಏನು ಹೇಳುತ್ತಿದ್ದನೆಂಬುದನ್ನು ಆಗಲೆ ಮರೆತಿದ್ದ ಆವರು, ಕನಸಿನಿಂದ ಎಚ್ಚೆತ್ತವರೆಂತೆ ಅಂದರು: {{gap}}"ಹೂ.ಏನಂದಿರಿ?ಮುಚ್ಚೋದಕ್ಕೆ ಏನು ಕಾರಣ ಅಂತ್ಲೆ? ನನಗೆ ಗೊತ್ತಿಲ್ಲಪ್ಪ ನಂಬಿಯಾರನ್ನೇ ಕೇಳ್ಬೇಕು.ಶಾಲೆ ತೆರೀಲೇಬೇಕೂಂತ ಹಿಂದೆ ಗಲಾಟೆ ಮಾಡಿದವರೂ ಅವರೇ,ಈಗ ಮುಚ್ಚಿರೋದೂ ಅವರೇ." {{gap}}"ಆದರೂ ನೀವಿಬ್ಬರೂ ಇದಕ್ಕೆ ಕಾರಣ ಅಂತ ಜನ ಆಡಿಕೊಳ್ತಾರೆ." {{gap}}ವೈರಿಬಣದಲ್ಲಿ ಬಿರುಕು ಹುಟ್ಟಿಸುವ ಕೌಶಲವಿತ್ತು ಚಿರುಕಂಡನ ಆ ಮಾತಿನಲ್ಲಿ. {{gap}}"ಛೇ!ಛೆ!ಅದು ಸರಿಯಲ್ಲ.ನಂಬಿಯಾರಿಗೆ ನಾನು ಹೇಳ್ತೀನಪ್ಪ;ಬೇಗ ಯಾರನ್ನಾದರೂ ಕರೆಸೀಂತ ಹೇಳ್ತೇನೆ." {{gap}}ಸಂಘದ ನಿಯೋಗ ಹಿಂತಿರುಗಿತು. {{gap}}ನಂಬೂದಿರಿ ನಂಬಿಯಾರರೊಡನೆ ಅದೇನು ಮಾತನಾಡಿದರೋ ಬಿಟ್ಟಿರೋ ಶಾಲೆ ಮತ್ತೆ ಶುರುವಾಗಲೇ ಇಲ್ಲ. {{gap}}ಸಂಘದ ಕಾರ್ಯಸಮಿತಿ ಮತ್ತೆ ಸಭೆ ಸೇರಿ ಚರ್ಚಿಸಿ ಶಾಲೆಯ ವಿಶ್ವಸ್ಥ ಸಮಿತಿಯ ಮುಖ್ಯಸ್ಥರಿಗೆ ಪತ್ರ ಬರೆಯಲು ತೀರ್ಮಾನಿಸಿತು. {{gap}}ಪತ್ರದ ಸಾರಾಂಶವಿಷ್ಟು:"ಶಾಲೆಯ ಲೆಕ್ಕಪತ್ರಗಳನ್ನೆಲ್ಲ ಒಡನೆಯೇ<noinclude></noinclude> hwep2gob5mxtnwiqnhxl1cs3bwl6gfc ಪುಟ:Chirasmarane-Niranjana.pdf/೧೮೦ 104 12999 324231 65195 2026-06-03T10:30:30Z Shreesha Sharma 7840 /* Proofread */ 324231 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೧೮೧}} ಮಹಾಜನರ ಮುಂದಿಡಬೇಕೆಂದು ಸಂಘ ಆಗ್ರಹಪಡಿಸುತ್ತದೆ.ಸಮಿತಿಯ ಮುಖ್ಯಸ್ಥರು ಮತ್ತೆ ಶಾಲೆಯನ್ನು ತೆರೆಯುವುದಿಲ್ಲವೆಂದಾದರೆ,ಶಾಲೆ ನಡೆಸುವ ಜವಾಬ್ಧಾರಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಸಂಘ ಅಪೇಕ್ಷಿಸುತ್ತದೆ.ಇದ್ದಕೆ ಅಡ್ಡಿಯೊದಗಿದರೆ, ಸ್ವಂತದ ಶಾಲೆಯನ್ನೇ ತೆರೆಯುವ ಉದ್ದೇಶವೂ ಸಂಘಕ್ಕಿದೆ.ಆ ಪರಿಸ್ಥಿತಿಯಲ್ಲಿ ಒಬ್ಬರು ಇಲ್ಲವೆ ಇಬ್ಬರು ನುರಿತ ಉಪಾದ್ಯಾಯರನ್ನು ಸಂಘವೇ ಹೊರಗಿನಿಂದ ತರಿಸುವುದೆಂಬುದು ಸ್ಪಷ್ಟ..." {{gap}}ನಂಬಿಯಾರರು ಕಾಗದವನ್ನೋದಿ ಕನಲಿದರು.ಅದನ್ನು ಚೂರುಚೂರಾಗಿ ಹರಿದೆಸೆದರು.ಅಲ್ಲಿಗೆ ಅದನ್ನೊಯ್ದಿದ್ದ ಕೋರನನ್ನು,"ಹೋಗು ಮೂರ್ಖ!" ಎಂದು ಬಯ್ದರು. {{gap}}ಉತ್ತರ ಕೊಡುವುದಕ್ಕೋಸ್ಕರ ಬಲು ಒಳ್ಳೊಳ್ಳೆಯ ಪದಗಳು ಕೋರನ ನಾಲಿಗೆಯ ತುದಿಯ ಮೇಲೆ ನರ್ತಿಸಿದುವು.ನಂಬಿಯಾರರು ಏನೇ ಮಾಡಿದರೂ ಸಮ್ಮನಿರಬೇಕೆಂದು ಚಿರುಕಂಡ ಕಟ್ಟಾಜ़್ನೆ ಇತ್ತಿದ್ದುದರಿಂದ ಕೋರ ಹಾಗೆಯೇ ಹಿಂತಿರುಗಬೇಕಾಯಿತು. {{gap}}ಆದರೂ ಸಂಘದ ಕಾಗದದಿಂದ ಪರಿಣಾಮ ಆಗಿಯೇಬಿಟ್ಟಿತು. {{gap}}ಆದಾದ ಒಂದು ವಾರದಲ್ಲೇ ವಯಸ್ಸಾದವರೊಬ್ಬರು ಉಪಾದ್ಯಾಯರಾಗಿ ಅಲ್ಲಿಗೆ ಬಂದರು.ಕೂದಲು ಪೂರ್ತಿ ನರೆತಿತ್ತು.ಕೆಲ ಹಲ್ಲುಗಳು ಉದುರಿದ್ದುವು. ಮೂಗಿನ ಮೇಲೆ ಕನ್ನಡಕವಿತ್ತು. {{gap}}ಕಣ್ಣ ಆವರನ್ನು ನೋಡಲು ಹೋಗಿ ಕೇಳಿದ: {{gap}}"ಒಬ್ಬರೇ ಬಂದಿದ್ದೀರಲ್ಲ.ಮಕ್ಕಳು ಮೊಮ್ಮಕ್ಕಳು ಯಾವಾಗ ಬರ್ತಾರೆ?" {{gap}}ಮೊದಲು,ಆ ರೈತ ತನ್ನನ್ನು ಲೇವಡಿ ಮಾಡುತ್ತಿರಬೇಕೆಂದು ಉಪಾಧ್ಯಾಯರಿಗೆ ಸಂದೇಹ ಬಂತು.ಅವರು ದುರದುರನೆ ಆತನನ್ನು ನೋಡಿದರು.ಆದರೆ ನಿಷ್ಕಾಪಟ್ಯದ ಕನ್ನಡಿಯಾಗಿತ್ತು ಕಣ್ಣನ ಮುಖಭಾವ.ಆತ ಒಳ್ಳೆಯವನೇ ಇರಬೇಕೆಂದು ಉಪಾಧ್ಯಾಯರು ತೀರ್ಮಾನಿಸಿ,ಹೇಳಿದರು: {{gap}}"ಇಲ್ಲವಪ್ಪ ಇಲ್ಲ. ನಿವೃತ್ತಿಯಾದೋನು ಕೆಲಸ ಇಲ್ದೆ ಮನೇಲಿದ್ದೆ.ಊಟ ಖರ್ಚು ಹೋಗಿ ಒಂದೈದು ರೂಪಾಯಿ ತಿಂಗಳಿಗೆ ಸಂಪಾದನೆಯಾದರೂ ಆಗಲೀಂತ ಬಂದೆ. ಹೆಚ್ಚೆಂದರೆ ಒಂದು ವರ್ಷ ಇರ್ತೇನೆ.ನನ್ನ ಸಂಸಾರವೆಲ್ಲ ನೀಲೇಶ್ವರದಲ್ಲೇ ಇದೆ..."-ಹಾಗೆ ಹೇಳಿ ಅವರು ಕಣ್ಣನೊಡನೆ,ಸ್ವರ ತಗ್ಗಿಸಿ ಒಂದು ರಹಸ್ಯದ ವಿಷಯ ಪ್ರಸ್ತಾಪಿಸಿದರು: {{gap}}"ಇಲ್ಲಿ ಸಂಘದವರದ್ದು ಭಾರೀ ಗಲಾಟೆಯಂತೆ,ಹೌದಾ?"<noinclude></noinclude> lwtuab3dyyzilybnxjbhuwhw1y9fmde 324235 324231 2026-06-03T10:39:49Z Shreelatha.Halemane 7642 /* Validated */ 324235 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೧೮೧}} ಮಹಾಜನರ ಮುಂದಿಡಬೇಕೆಂದು ಸಂಘ ಆಗ್ರಹಪಡಿಸುತ್ತದೆ.ಸಮಿತಿಯ ಮುಖ್ಯಸ್ಥರು ಮತ್ತೆ ಶಾಲೆಯನ್ನು ತೆರೆಯುವುದಿಲ್ಲವೆಂದಾದರೆ,ಶಾಲೆ ನಡೆಸುವ ಜವಾಬ್ಧಾರಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಸಂಘ ಅಪೇಕ್ಷಿಸುತ್ತದೆ.ಇದ್ದಕೆ ಅಡ್ಡಿಯೊದಗಿದರೆ, ಸ್ವಂತದ ಶಾಲೆಯನ್ನೇ ತೆರೆಯುವ ಉದ್ದೇಶವೂ ಸಂಘಕ್ಕಿದೆ.ಆ ಪರಿಸ್ಥಿತಿಯಲ್ಲಿ ಒಬ್ಬರು ಇಲ್ಲವೆ ಇಬ್ಬರು ನುರಿತ ಉಪಾದ್ಯಾಯರನ್ನು ಸಂಘವೇ ಹೊರಗಿನಿಂದ ತರಿಸುವುದೆಂಬುದು ಸ್ಪಷ್ಟ..." {{gap}}ನಂಬಿಯಾರರು ಕಾಗದವನ್ನೋದಿ ಕನಲಿದರು.ಅದನ್ನು ಚೂರುಚೂರಾಗಿ ಹರಿದೆಸೆದರು.ಅಲ್ಲಿಗೆ ಅದನ್ನೊಯ್ದಿದ್ದ ಕೋರನನ್ನು,"ಹೋಗು ಮೂರ್ಖ!" ಎಂದು ಬಯ್ದರು. {{gap}}ಉತ್ತರ ಕೊಡುವುದಕ್ಕೋಸ್ಕರ ಬಲು ಒಳ್ಳೊಳ್ಳೆಯ ಪದಗಳು ಕೋರನ ನಾಲಿಗೆಯ ತುದಿಯ ಮೇಲೆ ನರ್ತಿಸಿದುವು.ನಂಬಿಯಾರರು ಏನೇ ಮಾಡಿದರೂ ಸಮ್ಮನಿರಬೇಕೆಂದು ಚಿರುಕಂಡ ಕಟ್ಟಾಜ़್ನೆ ಇತ್ತಿದ್ದುದರಿಂದ ಕೋರ ಹಾಗೆಯೇ ಹಿಂತಿರುಗಬೇಕಾಯಿತು. {{gap}}ಆದರೂ ಸಂಘದ ಕಾಗದದಿಂದ ಪರಿಣಾಮ ಆಗಿಯೇಬಿಟ್ಟಿತು. {{gap}}ಆದಾದ ಒಂದು ವಾರದಲ್ಲೇ ವಯಸ್ಸಾದವರೊಬ್ಬರು ಉಪಾದ್ಯಾಯರಾಗಿ ಅಲ್ಲಿಗೆ ಬಂದರು.ಕೂದಲು ಪೂರ್ತಿ ನರೆತಿತ್ತು.ಕೆಲ ಹಲ್ಲುಗಳು ಉದುರಿದ್ದುವು. ಮೂಗಿನ ಮೇಲೆ ಕನ್ನಡಕವಿತ್ತು. {{gap}}ಕಣ್ಣ ಆವರನ್ನು ನೋಡಲು ಹೋಗಿ ಕೇಳಿದ: {{gap}}"ಒಬ್ಬರೇ ಬಂದಿದ್ದೀರಲ್ಲ.ಮಕ್ಕಳು ಮೊಮ್ಮಕ್ಕಳು ಯಾವಾಗ ಬರ್ತಾರೆ?" {{gap}}ಮೊದಲು,ಆ ರೈತ ತನ್ನನ್ನು ಲೇವಡಿ ಮಾಡುತ್ತಿರಬೇಕೆಂದು ಉಪಾಧ್ಯಾಯರಿಗೆ ಸಂದೇಹ ಬಂತು.ಅವರು ದುರದುರನೆ ಆತನನ್ನು ನೋಡಿದರು.ಆದರೆ ನಿಷ್ಕಾಪಟ್ಯದ ಕನ್ನಡಿಯಾಗಿತ್ತು ಕಣ್ಣನ ಮುಖಭಾವ.ಆತ ಒಳ್ಳೆಯವನೇ ಇರಬೇಕೆಂದು ಉಪಾಧ್ಯಾಯರು ತೀರ್ಮಾನಿಸಿ,ಹೇಳಿದರು: {{gap}}"ಇಲ್ಲವಪ್ಪ ಇಲ್ಲ. ನಿವೃತ್ತಿಯಾದೋನು ಕೆಲಸ ಇಲ್ದೆ ಮನೇಲಿದ್ದೆ.ಊಟ ಖರ್ಚು ಹೋಗಿ ಒಂದೈದು ರೂಪಾಯಿ ತಿಂಗಳಿಗೆ ಸಂಪಾದನೆಯಾದರೂ ಆಗಲೀಂತ ಬಂದೆ. ಹೆಚ್ಚೆಂದರೆ ಒಂದು ವರ್ಷ ಇರ್ತೇನೆ.ನನ್ನ ಸಂಸಾರವೆಲ್ಲ ನೀಲೇಶ್ವರದಲ್ಲೇ ಇದೆ..."-ಹಾಗೆ ಹೇಳಿ ಅವರು ಕಣ್ಣನೊಡನೆ,ಸ್ವರ ತಗ್ಗಿಸಿ ಒಂದು ರಹಸ್ಯದ ವಿಷಯ ಪ್ರಸ್ತಾಪಿಸಿದರು: {{gap}}"ಇಲ್ಲಿ ಸಂಘದವರದ್ದು ಭಾರೀ ಗಲಾಟೆಯಂತೆ,ಹೌದಾ?"<noinclude></noinclude> gbqvlr4evqdeg1hm2t9ogipsoxdrjdr ಪುಟ:Chirasmarane-Niranjana.pdf/೧೮೧ 104 13000 324233 65627 2026-06-03T10:36:26Z Shreesha Sharma 7840 /* Proofread */ 324233 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೧೮೨|center=|right=ಚಿರಸ್ಮರಣೆ}} {{gap}}ಕಣ್ಣ ನಗದೆ, ಗಂಭೀರವಾಗಿಯೇ ಆ ಪ್ರಶ್ನೆಯನ್ನು ಆಲಿಸಿದವನಂತೆ ನಟಿಸಿದ. {{gap}}"ಹೂಂ. ಹೂಂ, ಹಾಗೇಂತ್ಲೆ ಹೇಳ್ಬೇಕು." {{gap}}"ಹಿಂದಿನ ಮಾಸ್ತರು ಶಾಲೆ ಕೆಲಸದ ಮೇಲೆ ನಿಗಾ ಇಡದೆ ಸಂಘದವರ ಜತೆ ಇರ್ತಿದ್ರಂತೆ." {{gap}}"ಅದೇನೋಪ್ಪ, ಅಂತೂ ಅವರು ಹೆಚ್ಚಾಗಿ ಸಂಘದೋರ ಜತೇಲಿ ಇರ್ತಿದ್ರು." {{gap}}"ನಾನು ಹೀಗೆಲ್ಲ ಕೇಳ್ದೇಂತ ಯಾರಿಗೆ ಹೇಳ್ಬೇಡಪ್ಪ ಸದ್ಯ;, ನನಗೆ ಯಾಕೆ ಬೇಕು ಇದೆಲ್ಲ? ಜಮೀನ್ದಾರರು ಹಾಗೆ ಹೇಳಿದ್ರೂಂತ ವಿಚಾರಿಸ್ದೆ, ಅಷ್ಟೆ." {{gap}}"ಅಯ್ಯೋ,ಅದಲ್ಲ ಏನು ದೊಡ್ಡ ತಪ್ಪು.?" {{gap}}"ಹಾಗಲ್ಲವಪ್ಪ!ನಾನು ಪರ ಊರಿನೋನು. ವಯಸ್ಸಾಗಿದೆ. ಯಾರ ವೈರವೂ ನನಗೆ ಬೇಡ. ಜಮೀನ್ದಾರರ ಜತೇಲೂ ನಾನು ಸ್ನೇಹದಿಂದಿರ್ಬೇಕು.ರೈತರ ಜತೇಲೂ ಸ್ನೇಹದಿಂದಿರ್ಬೇಕು ಅಲ್ವೇನಪ್ಪ? {{gap}}"ಹೌದು,ಹೌದು'' {{gap}}"ನಿನ್ನ ಮಕ್ಕಳು ಈ ಶಾಲೆಗೆ ಬರ್ತಾರೋ?" {{gap}}"ನನ್ನದಿನ್ನೂ ಚಿಕ್ಕಮಗು." {{gap}}"ಐದು ವರ್ಷ ಆಗಿಲ್ವೊ?" {{gap}}"ಇಲ್ಲ .ಇನ್ನು ಐದೇ ತಿಂಗಳು." {{gap}}"ಬರೇ ಚಿಕ್ಕದು ಹಾಗಾದರೆ"-ಎಂದು ಆ ಉಪಾಧ್ಯಾಯರು ಅಭಿಪ್ರಾಯ ಇತ್ತರು. ನನ್ನ ಮಗಳಿಗೆ ಪಾಠ ಹೇಳೋದಕ್ಕೆ ನೀವು ಇಲ್ಲಿರೋದಿಲ್ಲ' ಎಂದ ಕಣ್ಣ, ಮನಸ್ಸಿನಲ್ಲಿಯೆ. {{gap}}ಇಲ್ಲಿ, ಅಕ್ಕಿ ತರಕಾರಿ ಹಾಲು ಮೊಸರು ಅನುಕೂಲವೆ ಎಂದು ವಿಚಾರಿಸಲು ಹೊರಟು ಉಪಾಧ್ಯಾಯರು, ಮೂಗಿಗೆ ಒಂದು ಚಿಟಿಕೆ ನಶ್ಯವೇರಿಸಿದರು. ಆ ವಿಷಯ ಮತ್ತೂ ಸ್ವಲ್ಪ ಹೊತ್ತು ಅವರೊಡನೆ ಹರಟೆ ಹೂಡೆಯಲು ಕಣ್ಣನೂ ನಿರಾಕರಿಸಲಿಲ್ಲ. {{gap}}ಆದರೆ ಸಂಘದ ಕಟ್ಟಡಕ್ಕೆ ಮರಳಿ ಬಂದೊಡನೆ ಮಾತ್ರ, ನಡೆದುದೆಲ್ಲವನ್ನೂ ಆಭಿನಯಪೂರ್ವಕವಾಗಿ ಕಣ್ಣ ಬಣ್ಣಿಸುತ್ತ, ನೋಡುತ್ತಿದ್ದ ಕೇಳುತ್ತಿದ್ದವರೊಡನೆ ತಾನೂ ಬಿದ್ದುಬಿದ್ದು ನಕ್ಕ. ಇನ್ನು ಪ್ರತಿಯೊಬ್ಬರು ಅ ಬಡ ಉಪಾಧ್ಯಾಯರನ್ನು ಗೇಲಿಮಾಡಲು ತೊಡಗಬಹುದೆಂದು ಚಿರುಕಂಡನೆಂದ: {{gap}}"ಇಲ್ಲಿ ನೋಡಿ. ಯಾರೂ ಅವರ ತಂಟೆಗೆ ಹೋಗಬಾರು. ಬಡಪಾಯಿ ಇದ್ದಷ್ಟು ಕಾಲ ಪಾಠ ಹೇಳ್ಲಿ. ಯಾರೂ ಆ ಮುದುಕನಿಗೆ ಹಿಂಸೆ ಕೊಡ್ಬೇಡಿ."<noinclude></noinclude> oobttx5tsximffuio28vzdw3xtmv2gp 324236 324233 2026-06-03T10:39:57Z Shreelatha.Halemane 7642 /* Validated */ 324236 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೮೨|center=|right=ಚಿರಸ್ಮರಣೆ}} {{gap}}ಕಣ್ಣ ನಗದೆ, ಗಂಭೀರವಾಗಿಯೇ ಆ ಪ್ರಶ್ನೆಯನ್ನು ಆಲಿಸಿದವನಂತೆ ನಟಿಸಿದ. {{gap}}"ಹೂಂ. ಹೂಂ, ಹಾಗೇಂತ್ಲೆ ಹೇಳ್ಬೇಕು." {{gap}}"ಹಿಂದಿನ ಮಾಸ್ತರು ಶಾಲೆ ಕೆಲಸದ ಮೇಲೆ ನಿಗಾ ಇಡದೆ ಸಂಘದವರ ಜತೆ ಇರ್ತಿದ್ರಂತೆ." {{gap}}"ಅದೇನೋಪ್ಪ, ಅಂತೂ ಅವರು ಹೆಚ್ಚಾಗಿ ಸಂಘದೋರ ಜತೇಲಿ ಇರ್ತಿದ್ರು." {{gap}}"ನಾನು ಹೀಗೆಲ್ಲ ಕೇಳ್ದೇಂತ ಯಾರಿಗೆ ಹೇಳ್ಬೇಡಪ್ಪ ಸದ್ಯ;, ನನಗೆ ಯಾಕೆ ಬೇಕು ಇದೆಲ್ಲ? ಜಮೀನ್ದಾರರು ಹಾಗೆ ಹೇಳಿದ್ರೂಂತ ವಿಚಾರಿಸ್ದೆ, ಅಷ್ಟೆ." {{gap}}"ಅಯ್ಯೋ,ಅದಲ್ಲ ಏನು ದೊಡ್ಡ ತಪ್ಪು.?" {{gap}}"ಹಾಗಲ್ಲವಪ್ಪ!ನಾನು ಪರ ಊರಿನೋನು. ವಯಸ್ಸಾಗಿದೆ. ಯಾರ ವೈರವೂ ನನಗೆ ಬೇಡ. ಜಮೀನ್ದಾರರ ಜತೇಲೂ ನಾನು ಸ್ನೇಹದಿಂದಿರ್ಬೇಕು.ರೈತರ ಜತೇಲೂ ಸ್ನೇಹದಿಂದಿರ್ಬೇಕು ಅಲ್ವೇನಪ್ಪ? {{gap}}"ಹೌದು,ಹೌದು'' {{gap}}"ನಿನ್ನ ಮಕ್ಕಳು ಈ ಶಾಲೆಗೆ ಬರ್ತಾರೋ?" {{gap}}"ನನ್ನದಿನ್ನೂ ಚಿಕ್ಕಮಗು." {{gap}}"ಐದು ವರ್ಷ ಆಗಿಲ್ವೊ?" {{gap}}"ಇಲ್ಲ .ಇನ್ನು ಐದೇ ತಿಂಗಳು." {{gap}}"ಬರೇ ಚಿಕ್ಕದು ಹಾಗಾದರೆ"-ಎಂದು ಆ ಉಪಾಧ್ಯಾಯರು ಅಭಿಪ್ರಾಯ ಇತ್ತರು. ನನ್ನ ಮಗಳಿಗೆ ಪಾಠ ಹೇಳೋದಕ್ಕೆ ನೀವು ಇಲ್ಲಿರೋದಿಲ್ಲ' ಎಂದ ಕಣ್ಣ, ಮನಸ್ಸಿನಲ್ಲಿಯೆ. {{gap}}ಇಲ್ಲಿ, ಅಕ್ಕಿ ತರಕಾರಿ ಹಾಲು ಮೊಸರು ಅನುಕೂಲವೆ ಎಂದು ವಿಚಾರಿಸಲು ಹೊರಟು ಉಪಾಧ್ಯಾಯರು, ಮೂಗಿಗೆ ಒಂದು ಚಿಟಿಕೆ ನಶ್ಯವೇರಿಸಿದರು. ಆ ವಿಷಯ ಮತ್ತೂ ಸ್ವಲ್ಪ ಹೊತ್ತು ಅವರೊಡನೆ ಹರಟೆ ಹೂಡೆಯಲು ಕಣ್ಣನೂ ನಿರಾಕರಿಸಲಿಲ್ಲ. {{gap}}ಆದರೆ ಸಂಘದ ಕಟ್ಟಡಕ್ಕೆ ಮರಳಿ ಬಂದೊಡನೆ ಮಾತ್ರ, ನಡೆದುದೆಲ್ಲವನ್ನೂ ಆಭಿನಯಪೂರ್ವಕವಾಗಿ ಕಣ್ಣ ಬಣ್ಣಿಸುತ್ತ, ನೋಡುತ್ತಿದ್ದ ಕೇಳುತ್ತಿದ್ದವರೊಡನೆ ತಾನೂ ಬಿದ್ದುಬಿದ್ದು ನಕ್ಕ. ಇನ್ನು ಪ್ರತಿಯೊಬ್ಬರು ಅ ಬಡ ಉಪಾಧ್ಯಾಯರನ್ನು ಗೇಲಿಮಾಡಲು ತೊಡಗಬಹುದೆಂದು ಚಿರುಕಂಡನೆಂದ: {{gap}}"ಇಲ್ಲಿ ನೋಡಿ. ಯಾರೂ ಅವರ ತಂಟೆಗೆ ಹೋಗಬಾರು. ಬಡಪಾಯಿ ಇದ್ದಷ್ಟು ಕಾಲ ಪಾಠ ಹೇಳ್ಲಿ. ಯಾರೂ ಆ ಮುದುಕನಿಗೆ ಹಿಂಸೆ ಕೊಡ್ಬೇಡಿ."<noinclude></noinclude> 0l62vsrsw2e4uq5aacuecv2b59b0rf3 ಪುಟ:Chirasmarane-Niranjana.pdf/೧೮೨ 104 13001 324234 65404 2026-06-03T10:39:29Z Shreesha Sharma 7840 /* Proofread */ 324234 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೧೮೩}} {{gap}}.....ಶಾಲೆಯ ಪಾಠದ ಬಳಿಕ ಹುಡುಗರ ಆಟದ ಏರ್ಪಾಟನ್ನು ಸಂಘ ಮಾಡಿತು. ಹನ್ನೊಂದು ವರ್ಷ ವಯಸ್ಸಿನ ಕುಟ್ಟಿಕೃಷ್ಣನ ನೇತೃತ್ವದಲ್ಲಿ ಬಾಲ ಸಂಘವೇರ್ಪಟ್ಟಿತು. ಕುಟ್ಟಿಕೃಷ್ಣ ಸಮರ್ಥನಾದ ಬಾಲನಾಯಕನೇ ಆಗಿದ್ದ ಆತನ ಸಂಘಟನಾ ಸಾಮರ್ಥ್ಯಕ್ಕೆ ದೊಡ್ಡವರೂ ಬೆರಗಾದರು. {{gap}}....ಆದರೆ, ಹಾಗೆ ಬೆರಗಾಗುತ್ತ ಕುಳಿತಿರಲು ಇನ್ನು ಅವಕಾಶವಿಲ್ಲವೆಂಬಂತೆ ಘಟನೆಗಳು ನಡೆದವು. ಮುಖ್ಯವಾದುದು: ದ್ವಿತೀಯ ಘೋರ ಮಹಾಯುದ್ಧದ ಆರಂಭ. ಯುದ್ಧ ಶುರುವಾದುದೆಲ್ಲೋ ಲೋಕದೊಂದು ಮೂಲೆಯಲ್ಲಿ, ಬಲು ದೂರದ ಕಾಡಿಗೆ ಬೆಂಕಿ ಬಿದ್ದಹಾಗೆ, ಆದರೆ, ಅದರ ಬೇಗೆ ಕಯ್ಯೂರಿಗೂ ತಟ್ಟದೆ ಹೋಗಲಿಲ್ಲ, ಬೆಂಕಿಪೊಟ್ಟಣದಿಂದ ಹಿಡಿದು ಹಾರೆ ಪಿಕಾಸಿಯವರೆಗೆ ಸಾಮಗ್ರಿಗಳ ಬೆಲೆ ಮೆಲ್ಲಮೆಲ್ಲನೆ ಏರಿತು. {{gap}}ಗುಪ್ತವಾಗಿ ಬರುತ್ತಿದ್ದ ಕರಪತ್ರಗಳೂ, 'ಸಾಹಿತ್ಯ'ವೂ ದೇಶದ ಬಂಧ ವಿಮೋಚನೆಯನ್ನು ಸಾಧ್ಯಗೊಳಿಸಲು ಕ್ರಾಂತಿಕಾರಕ ಶಕ್ತಿಗಳಿಗೆ ದೊರೆತ ಅಪೂರ್ವ ಸಂದರ್ಭದ ಬಗ್ಗೆ ಮಾತಾಡಿದುವು: ಜನ ಹೋರಾಡಲು ಸನ್ನದ್ಧರಾಗುತ್ತಿದ್ದ ವದಂತಿ ಮುಟ್ಟಿಸಿದುವು: ವೀರಘೋಷಗಳು, ಬಾಹುಸ್ಫುರಣಗೊಳಿಸುವ ವಿವರ, ಹೋರಾಟಕ್ಕೆ ಕಹಳೆ.... {{gap}}ಜಾನಕಿಯ ತೋಳತೆಕ್ಕೆಯ ನೆನಪನ್ನು ಬದಿಗೊತ್ತಿ ಒಮ್ಮೆ ಅಪ್ಪು ಹೇಳಿದ: {{gap}}"ನಾವು ಸಿದ್ಧರಾಗ್ಬೇಕು ಚಿರುಕಂಡ." {{gap}}"ಏನು ಸಿದ್ಧವಾಗೋದು ಅಂದರೆ? ಎಲ್ಲಿಗಾದರೂ ಪ್ರವಾಸ ಹೋಗ್ಬೇಕಾಗಿದ್ಯೇನು?" {{gap}}"ಯಾಕೆ ಹೋಗಬಾರ್ದು? ಹೋರಾಟವಾಗುವಲ್ಲಿ-" {{gap}}ಆ ಮಾತಿಗೆ ಚಿರುಕಂಡ ಸಿಟ್ಟಾದ "ಅದನ್ನೋದು,ಇದನ್ನೋದು,ಯೋಚನೆ ಮಾಡು"-ಎಂದು. {{gap}}ಇರುಕಂಡ ಪ್ರತಿ ಸಾರೆಯೂ ವಿವರವಾಗಿ ಹೇಳುವುದಿತ್ತು: {{gap}}"ಸಾಮ್ರಾಜ್ಯಶಾಹಿ ಆಡಳಿತ ಅನ್ನೋದು ಇಡೀ ದೇಶವನ್ನೇ ಅವರಿಸಿದ ವಿಸ್ತಾರವಾದ ಬಲೆಯಿದ್ದ ಹಾಗೆ.ನಮ್ಮ ಊರಿನ ಮೇಲಿರುವ ಭಾಗವನ್ನು ನಾವು ಕತ್ತರಿಸ್ಬೇಕು. ಹಾಗೆಯೆ ಒಂದೂಂದು ಊರಿನವರು ಅವರವರ ಅಂಶಕ್ಕೆ ಕತ್ತರಿ ಹಾಕ್ಬೇಕು. ಆದರೆ ಇದೆಲ್ಲ ಒಂದೇ ಕಾಲದಲ್ಲಿ ಆಗೋದು ಅಗತ್ಯ. ಇಲ್ಲದೆ ಹೋದರೆ ಹರಿದ ಭಾಗವನ್ನು ದುರಸ್ತಿ ಮಾಡೋದಕ್ಕೆ ಸಾಮ್ರಾಜ್ಯಶಾಹಿಗೆ ಸಮಯ ಸಿಗ್ತದೆ. ಸ್ಪಷ್ಟವಾಯ್ತೆ?"<noinclude></noinclude> sn64mxlu3qffuiu8hanz7ovxgnv75s7 324237 324234 2026-06-03T10:40:06Z Shreelatha.Halemane 7642 /* Validated */ 324237 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೧೮೩}} {{gap}}.....ಶಾಲೆಯ ಪಾಠದ ಬಳಿಕ ಹುಡುಗರ ಆಟದ ಏರ್ಪಾಟನ್ನು ಸಂಘ ಮಾಡಿತು. ಹನ್ನೊಂದು ವರ್ಷ ವಯಸ್ಸಿನ ಕುಟ್ಟಿಕೃಷ್ಣನ ನೇತೃತ್ವದಲ್ಲಿ ಬಾಲ ಸಂಘವೇರ್ಪಟ್ಟಿತು. ಕುಟ್ಟಿಕೃಷ್ಣ ಸಮರ್ಥನಾದ ಬಾಲನಾಯಕನೇ ಆಗಿದ್ದ ಆತನ ಸಂಘಟನಾ ಸಾಮರ್ಥ್ಯಕ್ಕೆ ದೊಡ್ಡವರೂ ಬೆರಗಾದರು. {{gap}}....ಆದರೆ, ಹಾಗೆ ಬೆರಗಾಗುತ್ತ ಕುಳಿತಿರಲು ಇನ್ನು ಅವಕಾಶವಿಲ್ಲವೆಂಬಂತೆ ಘಟನೆಗಳು ನಡೆದವು. ಮುಖ್ಯವಾದುದು: ದ್ವಿತೀಯ ಘೋರ ಮಹಾಯುದ್ಧದ ಆರಂಭ. ಯುದ್ಧ ಶುರುವಾದುದೆಲ್ಲೋ ಲೋಕದೊಂದು ಮೂಲೆಯಲ್ಲಿ, ಬಲು ದೂರದ ಕಾಡಿಗೆ ಬೆಂಕಿ ಬಿದ್ದಹಾಗೆ, ಆದರೆ, ಅದರ ಬೇಗೆ ಕಯ್ಯೂರಿಗೂ ತಟ್ಟದೆ ಹೋಗಲಿಲ್ಲ, ಬೆಂಕಿಪೊಟ್ಟಣದಿಂದ ಹಿಡಿದು ಹಾರೆ ಪಿಕಾಸಿಯವರೆಗೆ ಸಾಮಗ್ರಿಗಳ ಬೆಲೆ ಮೆಲ್ಲಮೆಲ್ಲನೆ ಏರಿತು. {{gap}}ಗುಪ್ತವಾಗಿ ಬರುತ್ತಿದ್ದ ಕರಪತ್ರಗಳೂ, 'ಸಾಹಿತ್ಯ'ವೂ ದೇಶದ ಬಂಧ ವಿಮೋಚನೆಯನ್ನು ಸಾಧ್ಯಗೊಳಿಸಲು ಕ್ರಾಂತಿಕಾರಕ ಶಕ್ತಿಗಳಿಗೆ ದೊರೆತ ಅಪೂರ್ವ ಸಂದರ್ಭದ ಬಗ್ಗೆ ಮಾತಾಡಿದುವು: ಜನ ಹೋರಾಡಲು ಸನ್ನದ್ಧರಾಗುತ್ತಿದ್ದ ವದಂತಿ ಮುಟ್ಟಿಸಿದುವು: ವೀರಘೋಷಗಳು, ಬಾಹುಸ್ಫುರಣಗೊಳಿಸುವ ವಿವರ, ಹೋರಾಟಕ್ಕೆ ಕಹಳೆ.... {{gap}}ಜಾನಕಿಯ ತೋಳತೆಕ್ಕೆಯ ನೆನಪನ್ನು ಬದಿಗೊತ್ತಿ ಒಮ್ಮೆ ಅಪ್ಪು ಹೇಳಿದ: {{gap}}"ನಾವು ಸಿದ್ಧರಾಗ್ಬೇಕು ಚಿರುಕಂಡ." {{gap}}"ಏನು ಸಿದ್ಧವಾಗೋದು ಅಂದರೆ? ಎಲ್ಲಿಗಾದರೂ ಪ್ರವಾಸ ಹೋಗ್ಬೇಕಾಗಿದ್ಯೇನು?" {{gap}}"ಯಾಕೆ ಹೋಗಬಾರ್ದು? ಹೋರಾಟವಾಗುವಲ್ಲಿ-" {{gap}}ಆ ಮಾತಿಗೆ ಚಿರುಕಂಡ ಸಿಟ್ಟಾದ "ಅದನ್ನೋದು,ಇದನ್ನೋದು,ಯೋಚನೆ ಮಾಡು"-ಎಂದು. {{gap}}ಇರುಕಂಡ ಪ್ರತಿ ಸಾರೆಯೂ ವಿವರವಾಗಿ ಹೇಳುವುದಿತ್ತು: {{gap}}"ಸಾಮ್ರಾಜ್ಯಶಾಹಿ ಆಡಳಿತ ಅನ್ನೋದು ಇಡೀ ದೇಶವನ್ನೇ ಅವರಿಸಿದ ವಿಸ್ತಾರವಾದ ಬಲೆಯಿದ್ದ ಹಾಗೆ.ನಮ್ಮ ಊರಿನ ಮೇಲಿರುವ ಭಾಗವನ್ನು ನಾವು ಕತ್ತರಿಸ್ಬೇಕು. ಹಾಗೆಯೆ ಒಂದೂಂದು ಊರಿನವರು ಅವರವರ ಅಂಶಕ್ಕೆ ಕತ್ತರಿ ಹಾಕ್ಬೇಕು. ಆದರೆ ಇದೆಲ್ಲ ಒಂದೇ ಕಾಲದಲ್ಲಿ ಆಗೋದು ಅಗತ್ಯ. ಇಲ್ಲದೆ ಹೋದರೆ ಹರಿದ ಭಾಗವನ್ನು ದುರಸ್ತಿ ಮಾಡೋದಕ್ಕೆ ಸಾಮ್ರಾಜ್ಯಶಾಹಿಗೆ ಸಮಯ ಸಿಗ್ತದೆ. ಸ್ಪಷ್ಟವಾಯ್ತೆ?"<noinclude></noinclude> dx0yze7eghhluvg9iykyrvyf022lg2z ಪುಟ:Chirasmarane-Niranjana.pdf/೧೮೩ 104 13002 324260 65661 2026-06-03T11:42:35Z Shreesha Sharma 7840 /* Proofread */ 324260 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೧೮೪|center=|right=ಚಿರಸ್ಮರಣೆ}} {{gap}}ವಿಷಯ ಸ್ಪಷ್ಟವಾಗಿತ್ತು, ಆದರೆ ಬಿಸಿರಕ್ತದ ಜವ್ವನಿಗರು, "ಕಾಯೋದು ಇನ್ನೆಷ್ಟು ದಿನ?" ಎಂದು ಕೇಳುತ್ತಲೇ ಇದ್ದರು. {{gap}}ಅಂತಹ ಸಂದರ್ಭದಲ್ಲೊಮ್ಮೆ ಕಣ್ಣ , "ನಮ್ಮ ಹಳ್ಳೀಲೇನೋ ಸಾಮ್ರಾಜ್ಯ ಶಾಹಿ ಕಾಣ್ತಾನೇ ಇಲ್ಲ, ಇರೋ ಭೂಪರು ಇಬ್ಬರು. ಅವರನ್ನು ಹಾದಿಗೆ ತಂದು, ಅವರೂ ನಾವು-ಎಲ್ಲ ಜತೆಯಾಗಿಯೇ ಹೊಲ ಹಂಚಿಕೊಂಡು ಸ್ವಾತಂತ್ರ್ಯದ ಬಾವುಟಾನ ಸುಲಭವಾಗಿ ಏರಿಸಬಹುದು. ಆದರೆ ಅಕ್ಕ ಪಕ್ಕದ ಹಳ್ಳಿಯೋರೆಲ್ಲ ಸಿದ್ಧವಾಗಿಲ್ಲ. ಅದಕ್ಕಾಗಿ ನಾವೂ ಕಾಯ್ಬೇಕಾಗಿದೆ!"ಎಂದ. {{gap}}ಅವನ ಮಾತನ್ನು ಕೇಳಿದವರು ನಕ್ಕರು. {{gap}}............... {{gap}}ದಿನ ಕಳೆಯಿತು. ಸಾಮ್ರಾಜ್ಯಶಾಹಿ ತಾನು ಸಮೀಪದಲ್ಲೆ ಇರುವೆನೆಂದು ತೋರಿಸಿಕೊಂಡಿತು. {{gap}}ಪೋಲಿಸ್ ಅಧಿಕಾರಿಯೊಡನೆ ತಾಲ್ಲೂಕು ಅಧಿಕಾರಿ ಒಮ್ಮೆ ಅಲ್ಲಿಗೆ ಬಂದು, ನಂಬಿಯಾರ್ ಜಮೀನ್ದಾರರಲ್ಲಿ ಬೀಡುಬಿಟ್ಟರು. ಬಂದಿದ್ದವರು ಹೊಸಬರಾಗಿದ್ದರೂ ಸಂಘಕ್ಕಿದಿರಾಗಿ ಆ ಭೇಟಿಯನ್ನು ಉಪಯೋಗಿಸಿಕೊಳ್ಳಲು ಸಂಘಕ್ಕಿದಿರಾಗಿ ಆ ಭೇಟಿಯನ್ನು ಉಪಯೋಗಿಸಿಕೂಳ್ಳಲು ನಂಬಿಯಾರರು ಯತ್ನಿಸದಿರಲಿಲ್ಲ ಅವರೆಂದರು. {{gap}}ನಾಲ್ಕೈದು ಜನ ರೈತ ಮುಖಂಡರ ಹೊರತು ಸರ್ಕಾರವನ್ನು ವಿರೋಧಿಸೋರು ಇಲ್ಲಿ ಯಾರೂ ಇಲ್ಲ, ಅವರಷ್ಟು ಐಲಿಗೆ ಸೇರಿಸಿದ್ರೆ_" {{gap}}ತಾಲ್ಲೂಕು ಅಧಿಕಾರಿ ಬಂದ ಉದ್ದೇಶ ಅದಾಗಿರಲಿಲ್ಲ. {{gap}}"ಅದನ್ನೆಲ್ಲ ಮಾಡೋಣ ಮಿಸ್ಟರ್ ನಂಬಿಯಾರ್. ಈಗ ನಾವು ಸೈನ್ಯಕ್ಕೆ ಜನ ಭರ್ತಿ ಮಾಡ್ಬೇಕಾಗಿದೆ. ನಿಮ್ಮ ಹಳ್ಳಿಯಿಂದ ಎಷ್ಟು ಜನರನ್ನು ಕೊಡ್ತೀರ." {{gap}}ಆ ವಿಷಯದಲ್ಲಿ. ತಾವು ಕೈಲಾಗದವರೆಂದು. ತಿಳಿದಿದ್ದ ನಂಬಿಯಾರರು: {{gap}}"ನನ್ನನ್ನು ಸೇರಿಸ್ಕೊಳ್ಳಿ" ಎಂದು ನಕ್ಕರು. {{gap}}ಅಧಿಕಾರಿಯೂ ನಕ್ಕು ನುಡಿದರು: {{gap}}"ನೀವೆಲ್ಲ ಯುದ್ದಕ್ಕೆ ಹೋದರೆ ನಮ್ಮನ್ನು ಯಾರು ನೋಡೋಳ್ಳೋರು? ಇದು ತಮಾಷೆ ಮಾತಲ್ಲ. ನಿಮ್ಮ ಗ್ರಾಮದಿಂದ ಇಪ್ಪತ್ತು ಜನರಾದರೂ ಬೇಕು." {{gap}}ಊರೆಲ್ಲ ಡಂಗುರ ಸಾರಿದ್ದಾಯಿತು. ಸಂಜೆಯವರೆಗೂ ಯಾರೂ ಬರಲಿಲ್ಲ.ರಾತ್ರೆ ಅಲ್ಲಿಯೇ ಬೀಡುಬಿಟ್ಟ ಅಧಿಕಾರಿಗಳೆನ್ನುದ್ದೇಶಿಸಿ ನಂಬಿಯಾರ್ ಹೇಳಿದರು: {{gap}}"ನಮ್ಮ ಜನ ಕೆಟ್ಟು ಹೋಗಿದ್ದಾರೆ. ನಾಳೆ ಬೆಳಿಗ್ಗೆ ನನ್ನ ಇಬ್ಬರು,ನಂಬೂದಿರಿಯ ಇಬ್ಬರು ಆಳುಗಳನ್ನು ಕರಕೂಂಡು ಹೋಗಿ."<noinclude></noinclude> qxais6lks0qskb5tvywdxrj5ufrv47k 324269 324260 2026-06-03T11:46:24Z Shreelatha.Halemane 7642 /* Validated */ 324269 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೧೮೪|center=|right=ಚಿರಸ್ಮರಣೆ}} {{gap}}ವಿಷಯ ಸ್ಪಷ್ಟವಾಗಿತ್ತು, ಆದರೆ ಬಿಸಿರಕ್ತದ ಜವ್ವನಿಗರು, "ಕಾಯೋದು ಇನ್ನೆಷ್ಟು ದಿನ?" ಎಂದು ಕೇಳುತ್ತಲೇ ಇದ್ದರು. {{gap}}ಅಂತಹ ಸಂದರ್ಭದಲ್ಲೊಮ್ಮೆ ಕಣ್ಣ , "ನಮ್ಮ ಹಳ್ಳೀಲೇನೋ ಸಾಮ್ರಾಜ್ಯ ಶಾಹಿ ಕಾಣ್ತಾನೇ ಇಲ್ಲ, ಇರೋ ಭೂಪರು ಇಬ್ಬರು. ಅವರನ್ನು ಹಾದಿಗೆ ತಂದು, ಅವರೂ ನಾವು-ಎಲ್ಲ ಜತೆಯಾಗಿಯೇ ಹೊಲ ಹಂಚಿಕೊಂಡು ಸ್ವಾತಂತ್ರ್ಯದ ಬಾವುಟಾನ ಸುಲಭವಾಗಿ ಏರಿಸಬಹುದು. ಆದರೆ ಅಕ್ಕ ಪಕ್ಕದ ಹಳ್ಳಿಯೋರೆಲ್ಲ ಸಿದ್ಧವಾಗಿಲ್ಲ. ಅದಕ್ಕಾಗಿ ನಾವೂ ಕಾಯ್ಬೇಕಾಗಿದೆ!"ಎಂದ. {{gap}}ಅವನ ಮಾತನ್ನು ಕೇಳಿದವರು ನಕ್ಕರು. {{gap}}............... {{gap}}ದಿನ ಕಳೆಯಿತು. ಸಾಮ್ರಾಜ್ಯಶಾಹಿ ತಾನು ಸಮೀಪದಲ್ಲೆ ಇರುವೆನೆಂದು ತೋರಿಸಿಕೊಂಡಿತು. {{gap}}ಪೋಲಿಸ್ ಅಧಿಕಾರಿಯೊಡನೆ ತಾಲ್ಲೂಕು ಅಧಿಕಾರಿ ಒಮ್ಮೆ ಅಲ್ಲಿಗೆ ಬಂದು, ನಂಬಿಯಾರ್ ಜಮೀನ್ದಾರರಲ್ಲಿ ಬೀಡುಬಿಟ್ಟರು. ಬಂದಿದ್ದವರು ಹೊಸಬರಾಗಿದ್ದರೂ ಸಂಘಕ್ಕಿದಿರಾಗಿ ಆ ಭೇಟಿಯನ್ನು ಉಪಯೋಗಿಸಿಕೊಳ್ಳಲು ಸಂಘಕ್ಕಿದಿರಾಗಿ ಆ ಭೇಟಿಯನ್ನು ಉಪಯೋಗಿಸಿಕೂಳ್ಳಲು ನಂಬಿಯಾರರು ಯತ್ನಿಸದಿರಲಿಲ್ಲ ಅವರೆಂದರು. {{gap}}ನಾಲ್ಕೈದು ಜನ ರೈತ ಮುಖಂಡರ ಹೊರತು ಸರ್ಕಾರವನ್ನು ವಿರೋಧಿಸೋರು ಇಲ್ಲಿ ಯಾರೂ ಇಲ್ಲ, ಅವರಷ್ಟು ಐಲಿಗೆ ಸೇರಿಸಿದ್ರೆ_" {{gap}}ತಾಲ್ಲೂಕು ಅಧಿಕಾರಿ ಬಂದ ಉದ್ದೇಶ ಅದಾಗಿರಲಿಲ್ಲ. {{gap}}"ಅದನ್ನೆಲ್ಲ ಮಾಡೋಣ ಮಿಸ್ಟರ್ ನಂಬಿಯಾರ್. ಈಗ ನಾವು ಸೈನ್ಯಕ್ಕೆ ಜನ ಭರ್ತಿ ಮಾಡ್ಬೇಕಾಗಿದೆ. ನಿಮ್ಮ ಹಳ್ಳಿಯಿಂದ ಎಷ್ಟು ಜನರನ್ನು ಕೊಡ್ತೀರ." {{gap}}ಆ ವಿಷಯದಲ್ಲಿ. ತಾವು ಕೈಲಾಗದವರೆಂದು. ತಿಳಿದಿದ್ದ ನಂಬಿಯಾರರು: {{gap}}"ನನ್ನನ್ನು ಸೇರಿಸ್ಕೊಳ್ಳಿ" ಎಂದು ನಕ್ಕರು. {{gap}}ಅಧಿಕಾರಿಯೂ ನಕ್ಕು ನುಡಿದರು: {{gap}}"ನೀವೆಲ್ಲ ಯುದ್ದಕ್ಕೆ ಹೋದರೆ ನಮ್ಮನ್ನು ಯಾರು ನೋಡೋಳ್ಳೋರು? ಇದು ತಮಾಷೆ ಮಾತಲ್ಲ. ನಿಮ್ಮ ಗ್ರಾಮದಿಂದ ಇಪ್ಪತ್ತು ಜನರಾದರೂ ಬೇಕು." {{gap}}ಊರೆಲ್ಲ ಡಂಗುರ ಸಾರಿದ್ದಾಯಿತು. ಸಂಜೆಯವರೆಗೂ ಯಾರೂ ಬರಲಿಲ್ಲ.ರಾತ್ರೆ ಅಲ್ಲಿಯೇ ಬೀಡುಬಿಟ್ಟ ಅಧಿಕಾರಿಗಳೆನ್ನುದ್ದೇಶಿಸಿ ನಂಬಿಯಾರ್ ಹೇಳಿದರು: {{gap}}"ನಮ್ಮ ಜನ ಕೆಟ್ಟು ಹೋಗಿದ್ದಾರೆ. ನಾಳೆ ಬೆಳಿಗ್ಗೆ ನನ್ನ ಇಬ್ಬರು,ನಂಬೂದಿರಿಯ ಇಬ್ಬರು ಆಳುಗಳನ್ನು ಕರಕೂಂಡು ಹೋಗಿ."<noinclude></noinclude> g1yay1uaqdx3rkeojo6nv9to75xlvhj ಪುಟ:Chirasmarane-Niranjana.pdf/೧೮೪ 104 13003 324267 65659 2026-06-03T11:45:48Z Shreesha Sharma 7840 /* Proofread */ 324267 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೧೮೫}} {{gap}}"ಅದಿದ್ದೇ ಇದೆ ಅನ್ನಿ. ಆದರೂ ಬೆಳಿಗ್ಗೆ ಮತ್ತೊಮ್ಮೆ ಡಂಗುರ ಹೊಡಿಸ್ಬೇಕು. ಜನರಿಗೆ ಅರ್ಥವಾಗೇ ಇಲ್ಲಾಂತ ಕಾಣ್ತದೆ." {{gap}}ಅರ್ಥವಾಗಿತ್ತು. ಅಷ್ಟೇ ಅಲ್ಲ, ಸಂಘದ ಕಛೇರಿಯಲ್ಲಿ ಅ ಸಂಬಂಧವಾಗಿ ದೊಡ್ಡ ಗೊಂದಲವೇ ಆಯಿತು. ಉದ್ಯೋಗದ ಪ್ರಶ್ನೆ. ಹಳ್ಳಿಯಲ್ಲಿ ಕೆಲವರು ಸೈನ್ಯ ಸೇರುವ ಮಾತನ್ನಾಡಿಯೇ ಆಡಿದರು. ಅವರಿಗೂ ಉಳಿದವರಿಗೂ ಜಗಳವಾಯಿತು. ತೀರ್ಪಿಗೋಸ್ಕರ ಜಗಳ ಸಂಘದ ಮುಖಂಡರಲ್ಲಿಗೆ ಬಂತು. ಸೈನ್ಯ ಸೇರುವೆವೆ೦ದಿದ್ದ ಅಷ್ಟು ಜನಕ್ಕೂ ಸಾಕಷ್ಟು ಹೊಲವಿರಲಿಲ್ಲ. ಉದ್ಯೋಗವಿರಲಿಲ್ಲ: ಸಾಕಲು ದೊಡ್ಡ ಸಂಸಾರಗಳಿದ್ದುವು. ಅಪ್ಪುವಿನೊಡನೆ ಚಿರುಕಂಡ ಈ ಸಮಸ್ಯೆಯನ್ನು ಕುರಿತು ದೀರ್ಘಸಮಾಲೋಚನೆ ನಡೆಸಿದ. ಅದರ ಫಲವಾಗಿ ಅವರು, ಸರಿಯೆಂದೇ ತಾವು ಭಾವಿಸಿದ ತೀರ್ಮಾನಕ್ಕೆ ಬಂದರು. {{gap}}ಚಿರುಕಂಡ ಅವರನ್ನೆಲ್ಲ ಕೇಳಿದ: {{gap}}"ನೀವು ಯಾವತ್ತಾದರೂ ಸಂಘಕ್ಕಾಗಲೀ ದೇಶಕ್ಕಾಗಲೀ ದ್ರೋಹ ಮಾಡ್ತೀರಾ?" {{gap}}"ಇಲ್ಲ". ಎಂದೂ "ಖಂಡಿತ ಇಲ್ಲ" ಎಂದೂ "ಎಂದಿಗೂ ಇಲ್ಲ" ಎಂದೂ ಒಬ್ಬೂಬ್ಬರು ಒಂದೊಂದು ರೀತಿಯಾಗಿ ಅಂದರು. {{gap}}"ಕ್ಕೆಯಲ್ಲಿ ಬಂದೂಕು ಹಿಡಿದಾಗಲೂ ಈ ವಾಗ್ದಾನ ನೆನಪಿಡ್ತೀರಾ?" {{gap}}"ಖಂಡಿತವಾಗಿಯೂ ಇಡ್ತೇವೆ." {{gap}}"ಸರಿ ಹಾಗಾದರೆ. ನೇಗಿಲು ಹಿಡಿಯೋ ಕೈ ಬಂದೂಕು ಎತ್ತೋದಕ್ಕೂ ಕಲಿತ ಹಾಗಾಗ್ತದೆ. ವಾಪಸು ಬಂದಾಗ ನೀವು ನಮಗೆ ಮುಖ ತೋರಿಸ್ಬೇಕಾಗ್ತದೆ ಅನ್ನೋದು ನೆನಪಿರ್ಲಿ." {{gap}}ತೀವ್ರ ಭಿನ್ನಾಭಿಪ್ರಾಯದಿಂದ ವಾತಾವರಣ ಕಲುಷಿತವಾಗುವಂಥ ಸನ್ನಿವೇಶ ಸುಲಭವಾಗಿ ಸಮಾಧಾನದೆಲ್ಲೇ ಪರ್ಯವಸಾನ ಹೊಂದಿತು. {{gap}}ಮಾರನೆಯ ಬೆಳಗ್ಗೆ ಮತ್ತೊಂದು ಡಂಗೂರದೊಡನೆ ಆರು ಜನ ಸೈನ್ಯದಲ್ಲಿ ಭರ್ತಿಯಾಗಲೆಂದು ಅಧಿಕಾರಿಗಳ ಮುಂದೆ ನಿಂತರು. ಇಬ್ಬರು ಜಮೀನ್ದಾರರ ಚಾಕರರಲ್ಲಿ ನಾಲ್ವರು ಅವರ ಜತೆ ಸೇರಿದರು. {{gap}}" ಕಯ್ಯೂರು ಪರವಾಗಿಲ್ಲ ಮಿಸ್ಟರ್ ನಂಬಿಯಾರ್" ಎಂದರು ಅಧಿಕಾರಿ. {{gap}}..................... {{gap}}ಕಯ್ಯೂರು ನಿಜವಾಗಿಯೂ 'ಪರವಾಗಿರಲಿಲ್ಲ'. ಅಪೂವರ್ವವಾದ ರಾಜೀಕಿಯ ಜಾಗೃತಿಯಿಂದ ಗ್ರಾಮ ಹೊಸ ರೂಪು ತಳೆಯಿತು. ಸಂಘದವರು ರೈತ<noinclude></noinclude> bf1hektyai00p7xt0u0y1gabd8rjdy9 324268 324267 2026-06-03T11:46:10Z Shreelatha.Halemane 7642 /* Validated */ 324268 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೧೮೫}} {{gap}}"ಅದಿದ್ದೇ ಇದೆ ಅನ್ನಿ. ಆದರೂ ಬೆಳಿಗ್ಗೆ ಮತ್ತೊಮ್ಮೆ ಡಂಗುರ ಹೊಡಿಸ್ಬೇಕು. ಜನರಿಗೆ ಅರ್ಥವಾಗೇ ಇಲ್ಲಾಂತ ಕಾಣ್ತದೆ." {{gap}}ಅರ್ಥವಾಗಿತ್ತು. ಅಷ್ಟೇ ಅಲ್ಲ, ಸಂಘದ ಕಛೇರಿಯಲ್ಲಿ ಅ ಸಂಬಂಧವಾಗಿ ದೊಡ್ಡ ಗೊಂದಲವೇ ಆಯಿತು. ಉದ್ಯೋಗದ ಪ್ರಶ್ನೆ. ಹಳ್ಳಿಯಲ್ಲಿ ಕೆಲವರು ಸೈನ್ಯ ಸೇರುವ ಮಾತನ್ನಾಡಿಯೇ ಆಡಿದರು. ಅವರಿಗೂ ಉಳಿದವರಿಗೂ ಜಗಳವಾಯಿತು. ತೀರ್ಪಿಗೋಸ್ಕರ ಜಗಳ ಸಂಘದ ಮುಖಂಡರಲ್ಲಿಗೆ ಬಂತು. ಸೈನ್ಯ ಸೇರುವೆವೆ೦ದಿದ್ದ ಅಷ್ಟು ಜನಕ್ಕೂ ಸಾಕಷ್ಟು ಹೊಲವಿರಲಿಲ್ಲ. ಉದ್ಯೋಗವಿರಲಿಲ್ಲ: ಸಾಕಲು ದೊಡ್ಡ ಸಂಸಾರಗಳಿದ್ದುವು. ಅಪ್ಪುವಿನೊಡನೆ ಚಿರುಕಂಡ ಈ ಸಮಸ್ಯೆಯನ್ನು ಕುರಿತು ದೀರ್ಘಸಮಾಲೋಚನೆ ನಡೆಸಿದ. ಅದರ ಫಲವಾಗಿ ಅವರು, ಸರಿಯೆಂದೇ ತಾವು ಭಾವಿಸಿದ ತೀರ್ಮಾನಕ್ಕೆ ಬಂದರು. {{gap}}ಚಿರುಕಂಡ ಅವರನ್ನೆಲ್ಲ ಕೇಳಿದ: {{gap}}"ನೀವು ಯಾವತ್ತಾದರೂ ಸಂಘಕ್ಕಾಗಲೀ ದೇಶಕ್ಕಾಗಲೀ ದ್ರೋಹ ಮಾಡ್ತೀರಾ?" {{gap}}"ಇಲ್ಲ". ಎಂದೂ "ಖಂಡಿತ ಇಲ್ಲ" ಎಂದೂ "ಎಂದಿಗೂ ಇಲ್ಲ" ಎಂದೂ ಒಬ್ಬೂಬ್ಬರು ಒಂದೊಂದು ರೀತಿಯಾಗಿ ಅಂದರು. {{gap}}"ಕ್ಕೆಯಲ್ಲಿ ಬಂದೂಕು ಹಿಡಿದಾಗಲೂ ಈ ವಾಗ್ದಾನ ನೆನಪಿಡ್ತೀರಾ?" {{gap}}"ಖಂಡಿತವಾಗಿಯೂ ಇಡ್ತೇವೆ." {{gap}}"ಸರಿ ಹಾಗಾದರೆ. ನೇಗಿಲು ಹಿಡಿಯೋ ಕೈ ಬಂದೂಕು ಎತ್ತೋದಕ್ಕೂ ಕಲಿತ ಹಾಗಾಗ್ತದೆ. ವಾಪಸು ಬಂದಾಗ ನೀವು ನಮಗೆ ಮುಖ ತೋರಿಸ್ಬೇಕಾಗ್ತದೆ ಅನ್ನೋದು ನೆನಪಿರ್ಲಿ." {{gap}}ತೀವ್ರ ಭಿನ್ನಾಭಿಪ್ರಾಯದಿಂದ ವಾತಾವರಣ ಕಲುಷಿತವಾಗುವಂಥ ಸನ್ನಿವೇಶ ಸುಲಭವಾಗಿ ಸಮಾಧಾನದೆಲ್ಲೇ ಪರ್ಯವಸಾನ ಹೊಂದಿತು. {{gap}}ಮಾರನೆಯ ಬೆಳಗ್ಗೆ ಮತ್ತೊಂದು ಡಂಗೂರದೊಡನೆ ಆರು ಜನ ಸೈನ್ಯದಲ್ಲಿ ಭರ್ತಿಯಾಗಲೆಂದು ಅಧಿಕಾರಿಗಳ ಮುಂದೆ ನಿಂತರು. ಇಬ್ಬರು ಜಮೀನ್ದಾರರ ಚಾಕರರಲ್ಲಿ ನಾಲ್ವರು ಅವರ ಜತೆ ಸೇರಿದರು. {{gap}}" ಕಯ್ಯೂರು ಪರವಾಗಿಲ್ಲ ಮಿಸ್ಟರ್ ನಂಬಿಯಾರ್" ಎಂದರು ಅಧಿಕಾರಿ. {{gap}}..................... {{gap}}ಕಯ್ಯೂರು ನಿಜವಾಗಿಯೂ 'ಪರವಾಗಿರಲಿಲ್ಲ'. ಅಪೂವರ್ವವಾದ ರಾಜೀಕಿಯ ಜಾಗೃತಿಯಿಂದ ಗ್ರಾಮ ಹೊಸ ರೂಪು ತಳೆಯಿತು. ಸಂಘದವರು ರೈತ<noinclude></noinclude> 4nnn7a5couxr837kp17fu9eszzbzdtc ಪುಟ:Chirasmarane-Niranjana.pdf/೧೮೬ 104 13005 324226 320475 2026-06-03T10:11:02Z Vikashegde 1258 /* Proofread */ 324226 proofread-page text/x-wiki <noinclude><pagequality level="3" user="Vikashegde" />{{rh|center=|left=ಚಿರಸ್ಮರಣೆ|right=೧೮೭}}</noinclude>ಆತ ಮೀನು ಹಿಡಿದು ಮಾರುತ್ತಿದ್ದ ಬಡ ಮುಸಲ್ಮಾನ ಹೆಂಗಸು ಬೂಬಮ್ಮನ ಹಿರಿಯ ಮಗ. ಆತನ ತಂದೆ ಸಾಮಾನು ತುಂಬಿದ ಕಡಲ ದೋಣಿಗಳಲ್ಲಿ-ಮಚ್ವೆಗಳಲ್ಲಿ-ಸಂಚಾರ ಮಾಡುತ್ತಿದ್ದ ನಾವಿಕ. ಅವನು ಕಯ್ಯೂರಿಗೆ ಬರುತ್ತಿದ್ದುದು ಎಂದಾದರೊಮ್ಮೆ. ಮಾರಾಟದ ಸಾಮಾನು ಹೊತ್ತು ಕಲ್ಲಿಕೋಟೆಯಿಂದ ಮಚ್ವೆ ಉತ್ತರಕ್ಕೆ ಹೊರಟಿದ್ದಾಗ ಆತ ಒಮ್ಮೆ ಬಂದು ಹೆಂಡತಿಯನ್ನೂ ಹತ್ತು ವರ್ಷದ ಮಗ ಅಬೂಬಕರನನ್ನೂ ಇನ್ನೂ ಕೈಗೂಸಾಗಿದ್ದ ಎರಡನೆಯ ಗಂಡುಮಗುವನ್ನೂ ನೋಡಿ ಹೋಗಿದ್ದ. ಹಾಗೆ ಹೋದವನು ಮರಳಿ ಬರಲೇ ಇಲ್ಲ. ಮೀನು ಹಿಡಿಯುವ ಕಸುಬನ್ನೇ ಬದುಕಿಗೆ ಆಧಾರವಾಗಿಟ್ಟು ಬೂಬಮ್ಮ ಕಾದು ಕುಳಿತಳು. ಗಂಡ ಸಮುದ್ರದ ಪಾಲಾದನೆಂಬ ಮಾತನ್ನು ಆಕೆ ಎಂದೂ ಒಪ್ಪಲಿಲ್ಲ.... ಅಬೂಬಕರ್ ಸ್ವಲ್ಪ ದೊಡ್ಡವನಾದೊಡನೆ ದುಡಿದು ಸಂಪಾದಿಸುವುದಕ್ಕೋಸ್ಕರ ತಲಚೇರಿಗೆ ಹೋದ. ಅಲ್ಲಿ ಬೀಡಿ ಕಟ್ಟುವುದನ್ನು ಕಲಿತ. ತಾಯಿಗೆ ಒಂದಿಷ್ಟು ಹಣ ಕಳುಹಿಸಿದ. ಮೊದಮೊದಲು ವರ್ಷಕ್ಕೊಮ್ಮೆ ಕಯ್ಯೂರಿಗೆ ಬರುತ್ತಿದ್ದನಾದರೂ ಈ ನಡುವೆ ಬರದೆ ನಾಲ್ಕು ವರ್ಷಗಳಾಗಿದ್ದುವು. {{gap}}ಈಗ ಮಗ ಬಂದನೆಂದು ತಾಯಿಗಾದ ಸಂತೋಷ ಅಷ್ಟಿಷ್ಟಲ್ಲ, ಕಂಡವರಿಗೆಲ್ಲ "ನನ್ನ ಮಗ ಬಂದಿದ್ದಾನೆ" ಎಂದು ಆಕೆ ಹೇಳುತ್ತ ಬಂದಳು. ಹಳ್ಳಿಯವರು ಅಬೂಬಕರನನ್ನು ಹಿಂದೆ ಸರಿಯಾಗಿ ನೋಡಿದ್ದುದು ಚಿಕ್ಕ ಹುಡುಗನಾಗಿದ್ದಾಗ. ಆದರೆ ಈಗ ಆತ ಇಪ್ಪತ್ತರ ಯುವಕ, ಕಟ್ಟುಮಸ್ತಾತದ ಆಳು. ಪದ್ದತಿಯಂತೆ ತಲೆ ಬೋಳಿಸದೆ, ಸಣ್ಣನೆ ಕ್ರಾಪು ಬೇರೆ ಬಿಟ್ಟಿದ್ದ, ಚಡ್ಡಿ: ಅದರೊಳಗೆ ತುರುಕಿದ ಶರಟು, ಅಂತೂ, ನೋಡಿದವರು ಮತ್ತೊಮ್ಮೆ ನೋಡುವಹಾಗಿದ್ದ ಆಸಾಮಿ. {{gap}}ಆತನನ್ನು, "ಯಾವಾಗ ಬಂದೆ?" ಎಂದು ಪ್ರಶ್ನಿಸಿದವರು, "ಎಷ್ಟು ದಿವಸ ಇ‍ರ್ತೀಯಾ? "ಇಲ್ಲವೆ"ಯಾವಾಗ ಹೊರಡೋದು?"ಎಂದು ಕೇಳಿದರು. ಅವರಿಗೆಲ್ಲ ಅಬೂಬಕರ್, "ಇದೇ ಈಗ ಬಂದಿದ್ದೇನೆ. ಇಷ್ಟರಲ್ಲೇ ಹೊರಡ್ಬೇಕೆ?" ಎಂದೋ "ಊರು ನೋಡಿದರೆ ಇಲ್ಲೇ ಇದ್ಬಿಡೋಣ ಅನಿಸ್ತದೆ!"ಎಂತಲೋ'ಹೊರಟ್ಹೋಗು ಅಂದರೆ ಹೋಗ್ತೇನೆ !" ಎನ್ನುತ್ತಲೋ ನಗುತ್ತ ಉತ್ತರವಿತ್ತ. {{gap}}ಬಂದ ರಾತ್ರಿಯೇ ಅಬೂಬಕರ್ ಚಿರುಕಂಡನ ಮನೆಗೆ ಹೋದ."ಬನ್ನಿ" ಎಂಬ ಸಹಜ ಸ್ವಾಗತ ಬೇಗನೆ ಆತ್ಮೀಯ ಹಸ್ತಲಾಘವವಾಗಿ ಮಾರ್ಪಟ್ಟಿತು. ಅದಕ್ಕೆ ಕಾರಣ ಅಬೂಬಕರ್ ತಂದಿದ್ದ ಪರಿಚಯ ಪತ್ರ, ಮಾಸ್ತರು ಅದನ್ನು ಬರೆದಿದ್ದು! ಚಿರುಕಂಡ ಮುಖ ಅರಳಿಸಿಕೊಂಡು ಮತ್ತೆಮತ್ತೆ ಅದನ್ನೇ ಓದಿದ. {{gap}}"ಊಟಕ್ಕೇ ಇಲ್ಲೇ ಏಳಿ" ಎಂದು ಒತ್ತಾಯಿಸಿದ ಚಿರುಕಂಡ.<noinclude></noinclude> ihphltgj9jz3r0c8ntt5nbjeu6b2owe 324238 324226 2026-06-03T10:40:22Z Shreelatha.Halemane 7642 /* Validated */ 324238 proofread-page text/x-wiki <noinclude><pagequality level="4" user="Shreelatha.Halemane" />{{rh|center=|left=ಚಿರಸ್ಮರಣೆ|right=೧೮೭}}</noinclude>ಆತ ಮೀನು ಹಿಡಿದು ಮಾರುತ್ತಿದ್ದ ಬಡ ಮುಸಲ್ಮಾನ ಹೆಂಗಸು ಬೂಬಮ್ಮನ ಹಿರಿಯ ಮಗ. ಆತನ ತಂದೆ ಸಾಮಾನು ತುಂಬಿದ ಕಡಲ ದೋಣಿಗಳಲ್ಲಿ-ಮಚ್ವೆಗಳಲ್ಲಿ-ಸಂಚಾರ ಮಾಡುತ್ತಿದ್ದ ನಾವಿಕ. ಅವನು ಕಯ್ಯೂರಿಗೆ ಬರುತ್ತಿದ್ದುದು ಎಂದಾದರೊಮ್ಮೆ. ಮಾರಾಟದ ಸಾಮಾನು ಹೊತ್ತು ಕಲ್ಲಿಕೋಟೆಯಿಂದ ಮಚ್ವೆ ಉತ್ತರಕ್ಕೆ ಹೊರಟಿದ್ದಾಗ ಆತ ಒಮ್ಮೆ ಬಂದು ಹೆಂಡತಿಯನ್ನೂ ಹತ್ತು ವರ್ಷದ ಮಗ ಅಬೂಬಕರನನ್ನೂ ಇನ್ನೂ ಕೈಗೂಸಾಗಿದ್ದ ಎರಡನೆಯ ಗಂಡುಮಗುವನ್ನೂ ನೋಡಿ ಹೋಗಿದ್ದ. ಹಾಗೆ ಹೋದವನು ಮರಳಿ ಬರಲೇ ಇಲ್ಲ. ಮೀನು ಹಿಡಿಯುವ ಕಸುಬನ್ನೇ ಬದುಕಿಗೆ ಆಧಾರವಾಗಿಟ್ಟು ಬೂಬಮ್ಮ ಕಾದು ಕುಳಿತಳು. ಗಂಡ ಸಮುದ್ರದ ಪಾಲಾದನೆಂಬ ಮಾತನ್ನು ಆಕೆ ಎಂದೂ ಒಪ್ಪಲಿಲ್ಲ.... ಅಬೂಬಕರ್ ಸ್ವಲ್ಪ ದೊಡ್ಡವನಾದೊಡನೆ ದುಡಿದು ಸಂಪಾದಿಸುವುದಕ್ಕೋಸ್ಕರ ತಲಚೇರಿಗೆ ಹೋದ. ಅಲ್ಲಿ ಬೀಡಿ ಕಟ್ಟುವುದನ್ನು ಕಲಿತ. ತಾಯಿಗೆ ಒಂದಿಷ್ಟು ಹಣ ಕಳುಹಿಸಿದ. ಮೊದಮೊದಲು ವರ್ಷಕ್ಕೊಮ್ಮೆ ಕಯ್ಯೂರಿಗೆ ಬರುತ್ತಿದ್ದನಾದರೂ ಈ ನಡುವೆ ಬರದೆ ನಾಲ್ಕು ವರ್ಷಗಳಾಗಿದ್ದುವು. {{gap}}ಈಗ ಮಗ ಬಂದನೆಂದು ತಾಯಿಗಾದ ಸಂತೋಷ ಅಷ್ಟಿಷ್ಟಲ್ಲ, ಕಂಡವರಿಗೆಲ್ಲ "ನನ್ನ ಮಗ ಬಂದಿದ್ದಾನೆ" ಎಂದು ಆಕೆ ಹೇಳುತ್ತ ಬಂದಳು. ಹಳ್ಳಿಯವರು ಅಬೂಬಕರನನ್ನು ಹಿಂದೆ ಸರಿಯಾಗಿ ನೋಡಿದ್ದುದು ಚಿಕ್ಕ ಹುಡುಗನಾಗಿದ್ದಾಗ. ಆದರೆ ಈಗ ಆತ ಇಪ್ಪತ್ತರ ಯುವಕ, ಕಟ್ಟುಮಸ್ತಾತದ ಆಳು. ಪದ್ದತಿಯಂತೆ ತಲೆ ಬೋಳಿಸದೆ, ಸಣ್ಣನೆ ಕ್ರಾಪು ಬೇರೆ ಬಿಟ್ಟಿದ್ದ, ಚಡ್ಡಿ: ಅದರೊಳಗೆ ತುರುಕಿದ ಶರಟು, ಅಂತೂ, ನೋಡಿದವರು ಮತ್ತೊಮ್ಮೆ ನೋಡುವಹಾಗಿದ್ದ ಆಸಾಮಿ. {{gap}}ಆತನನ್ನು, "ಯಾವಾಗ ಬಂದೆ?" ಎಂದು ಪ್ರಶ್ನಿಸಿದವರು, "ಎಷ್ಟು ದಿವಸ ಇ‍ರ್ತೀಯಾ? "ಇಲ್ಲವೆ"ಯಾವಾಗ ಹೊರಡೋದು?"ಎಂದು ಕೇಳಿದರು. ಅವರಿಗೆಲ್ಲ ಅಬೂಬಕರ್, "ಇದೇ ಈಗ ಬಂದಿದ್ದೇನೆ. ಇಷ್ಟರಲ್ಲೇ ಹೊರಡ್ಬೇಕೆ?" ಎಂದೋ "ಊರು ನೋಡಿದರೆ ಇಲ್ಲೇ ಇದ್ಬಿಡೋಣ ಅನಿಸ್ತದೆ!"ಎಂತಲೋ'ಹೊರಟ್ಹೋಗು ಅಂದರೆ ಹೋಗ್ತೇನೆ !" ಎನ್ನುತ್ತಲೋ ನಗುತ್ತ ಉತ್ತರವಿತ್ತ. {{gap}}ಬಂದ ರಾತ್ರಿಯೇ ಅಬೂಬಕರ್ ಚಿರುಕಂಡನ ಮನೆಗೆ ಹೋದ."ಬನ್ನಿ" ಎಂಬ ಸಹಜ ಸ್ವಾಗತ ಬೇಗನೆ ಆತ್ಮೀಯ ಹಸ್ತಲಾಘವವಾಗಿ ಮಾರ್ಪಟ್ಟಿತು. ಅದಕ್ಕೆ ಕಾರಣ ಅಬೂಬಕರ್ ತಂದಿದ್ದ ಪರಿಚಯ ಪತ್ರ, ಮಾಸ್ತರು ಅದನ್ನು ಬರೆದಿದ್ದು! ಚಿರುಕಂಡ ಮುಖ ಅರಳಿಸಿಕೊಂಡು ಮತ್ತೆಮತ್ತೆ ಅದನ್ನೇ ಓದಿದ. {{gap}}"ಊಟಕ್ಕೇ ಇಲ್ಲೇ ಏಳಿ" ಎಂದು ಒತ್ತಾಯಿಸಿದ ಚಿರುಕಂಡ.<noinclude></noinclude> 69vv2immhzrde4ngiuvs0w09ir2daq0 ಪುಟ:Chirasmarane-Niranjana.pdf/೧೯೮ 104 13017 324240 65652 2026-06-03T10:43:41Z Shreesha Sharma 7840 /* Proofread */ 324240 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೧೯೯}} {{gap}}ನಾಲ್ಕೇಟು!" {{gap}}"ಇದರ ಪರಿಣಾಮ ಏನಾದೀತೂಂತ ಗ್ಯಾನ ಇರ್ಲಿ!" ಎಂದು ಸುಬ್ಬಯ್ಯ ಕಿರಿಚಿದ. {{gap}}ನಾಯಕನ ನಿರ್ದೇಶನವನ್ನಿದಿರು ನೋಡುತ್ತ ಜನ ಹಾಗೆಯೇ ನಿಂತರು. ಮುಖ ಕೆಂಪೇರಿದ ಅಬೂಬಕರ್ ಗೆ ತಾನು ತಿರುಗಿ ಹೊಡೆಯಬೇಕೇ ಬೇಡವೇ ಎಂಬುದು ಬಗೆಹರಿಯದ ಪ್ರಶ್ನೆಯಾಯಿತು. ಮಾತು ಮಾತ್ರ ಹೊರಟಿತು: {{gap}}"ಹೊಡೆದಿಯಾ ಮಗನೆ?" {{gap}}"ಮಗ ಅಂದಿಯಾ?" {{gap}}ಮತ್ತೆ ಕೈಬೀಸಿದ ಸುಬ್ಬಯ್ಯ. ಚಿಕ್ಕವನಾದ ಕುಟ್ಟಿಕೃಷ್ಣ ಆತನನ್ನು ಹಿಂದಕ್ಕೆ ತಳ್ಳಿದ. ಮುಗ್ಗರಿಸಿ ಬೀಳುವ ಹಾಗಾಯಿತು. ಕ್ಷಣಾರ್ಧದಲ್ಲಿ ಆತ ಸಾವರಿಸಿಕೊಂಡು, ಕುಟ್ಟಿ ಕೃಷ್ಣನನ್ನು ಬೂಟುಕಾಲಿನಿಂದೊದೆದ. ಹುಡುಗನ ಎಳೆಯ ಕಂಠದಿಂದ "ಆ!" ಎಂದು ಸ್ವರ ಹೊರಟಿತು. ಜನ ಎಲ್ಲರೂ ಒಮ್ಮೆಲೆ ಮಾತನಾಡುತ್ತ ಪೋಲೀಸನ ಮೇಲೇರಿದರು. ಸುತ್ತಮುತ್ತಲಿಂದಲೂ ರೈತರು ಓಡಿಬಂದರು. ಸುಬ್ಬಯ್ಯನಿಗೆ ಏಟುಗಳು ಬಿದ್ದವು. ನೋವು ತಡೆಯಲಾರದೆ ಆತ ಗುಂಪನ್ನು ಭೇದಿಸಿ ಹೊರಬಂದ. ಟೋಪಿ ಹೊಲಕ್ಕೆ ಬಿತ್ತು. ಅದನ್ನು ಲೆಕ್ಕಿಸದೆ ಸುಬ್ಬಯ್ಯ ಓಡಿದ. ಓಡುತ್ತಿದ್ದ ಆತನನ್ನು ಸ್ವಯಂಸೇವಕರೂ ಬೆನ್ನಟ್ಟಿದರು. ಕಣ್ಣನೂ ಬಾವುಟವನ್ನೆತ್ತಿಕೊಂಡೇ ಜನರ ಜತೆಯಲ್ಲಿ ಸಾಗಿದ. ನೂರು ಗಜ ಓಡುವಷ್ಟರಲ್ಲೇ ಸುಬ್ಬಯ್ಯ ಕಾಲು ಜಾರಿ ಬಿದ್ದ. ಎದ್ದು ಮತ್ತೆ ಒಡಿದ. ಜನರ ಕೂಗು ಸಮೀಪದಲ್ಲೆ ಕೇಳಿಸಿ, ಹೊಲದ ಮಣ್ಣು ಹೆಂಟೆಯೊಂದು ಬೆನ್ನಿಗೆ ತಗಲಿದಂತಾಗಿ,ಸುಬ್ಬಯ್ಯ ಅಧೀರನಾದ. 'ಬದುಕಿದರೆ ಸಾಕು' ಎನ್ನುವ ಹಾಗಾಯಿತು ಆತನ ಸ್ಥಿತಿ. ಆದರೂ ರೈತರೆದುರು ಸೋಲನ್ನೊಪ್ಪಿಕೊಳ್ಳಲಾರದೆ ಆತ ನದಿಯ ದಂಡೆಗೆ ಧಾವಿಸಿ ನೀರಿಗೆ ಧುಮುಕಿದ. {{gap}}ಜನ ಬಂದು ನೆರೆದರು. ಆತ ಈಸಿ ಆಚೆಯ ದಡಕ್ಕೆ ಹೋಗಿ ಪಾರಾಗುವ ನೆಂಬುದು ಸ್ಪಷ್ಟವಾಯಿತು. "ಕಳ್ಳ ತಪ್ಪಿಸ್ಕೊಂಡ!" ಎಂದರು ಹಲವರು. "ನೀಲೇಶ್ವರದ ಹಾದಿಯಾಗಿ ನಡೆದುಕೊಂಡೇ ಹೊಸದುರ್ಗಕ್ಕೆ ಹೋಗಲಿ ಘೌಜದಾರರು!" ಎಂದನೊಬ್ಬ. "ಇನ್ನೊಮ್ಮೆ ಬಾ, ಕಲಿಸ್ತೇವೆ" ಎಂದಿತು ಒಂದು ಬಾಲ ಕಂಠ. {{gap}}ಕಣ್ಣನೂ ಬಾವುಟದೊಡನೆ ಬಂದು ತಲಪಿದ. {{gap}}ಯಾರೋ ಅಂದರು: {{gap}}"ಬನ್ನಿರೋ, ನದಿಗಿಳೀರಿ, ಹಿಡಿದು ತರೋಣ ಅವನನ್ನ!" {{gap}}"ಬೇಡಿ, ಬೇಡ! ಎಂದು ಹಲವರೆಂದರು. {{gap}}"ತಗೊಳ್ಳಿ ಒಂದೊಂದು ಕಲ್ಲು. ಉಡುಗೊರೇನಾದರೂ ಕೊಟ್ಟು ಕಳಿಸೋಣ."<noinclude></noinclude> paxt4aoaxjozgdnhgerdtkzzjcg3shq 324241 324240 2026-06-03T10:48:03Z Shreelatha.Halemane 7642 /* Validated */ 324241 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೧೯೯}} {{gap}}ನಾಲ್ಕೇಟು!" {{gap}}"ಇದರ ಪರಿಣಾಮ ಏನಾದೀತೂಂತ ಗ್ಯಾನ ಇರ್ಲಿ!" ಎಂದು ಸುಬ್ಬಯ್ಯ ಕಿರಿಚಿದ. {{gap}}ನಾಯಕನ ನಿರ್ದೇಶನವನ್ನಿದಿರು ನೋಡುತ್ತ ಜನ ಹಾಗೆಯೇ ನಿಂತರು. ಮುಖ ಕೆಂಪೇರಿದ ಅಬೂಬಕರ್ ಗೆ ತಾನು ತಿರುಗಿ ಹೊಡೆಯಬೇಕೇ ಬೇಡವೇ ಎಂಬುದು ಬಗೆಹರಿಯದ ಪ್ರಶ್ನೆಯಾಯಿತು. ಮಾತು ಮಾತ್ರ ಹೊರಟಿತು: {{gap}}"ಹೊಡೆದಿಯಾ ಮಗನೆ?" {{gap}}"ಮಗ ಅಂದಿಯಾ?" {{gap}}ಮತ್ತೆ ಕೈಬೀಸಿದ ಸುಬ್ಬಯ್ಯ. ಚಿಕ್ಕವನಾದ ಕುಟ್ಟಿಕೃಷ್ಣ ಆತನನ್ನು ಹಿಂದಕ್ಕೆ ತಳ್ಳಿದ. ಮುಗ್ಗರಿಸಿ ಬೀಳುವ ಹಾಗಾಯಿತು. ಕ್ಷಣಾರ್ಧದಲ್ಲಿ ಆತ ಸಾವರಿಸಿಕೊಂಡು, ಕುಟ್ಟಿ ಕೃಷ್ಣನನ್ನು ಬೂಟುಕಾಲಿನಿಂದೊದೆದ. ಹುಡುಗನ ಎಳೆಯ ಕಂಠದಿಂದ "ಆ!" ಎಂದು ಸ್ವರ ಹೊರಟಿತು. ಜನ ಎಲ್ಲರೂ ಒಮ್ಮೆಲೆ ಮಾತನಾಡುತ್ತ ಪೋಲೀಸನ ಮೇಲೇರಿದರು. ಸುತ್ತಮುತ್ತಲಿಂದಲೂ ರೈತರು ಓಡಿಬಂದರು. ಸುಬ್ಬಯ್ಯನಿಗೆ ಏಟುಗಳು ಬಿದ್ದವು. ನೋವು ತಡೆಯಲಾರದೆ ಆತ ಗುಂಪನ್ನು ಭೇದಿಸಿ ಹೊರಬಂದ. ಟೋಪಿ ಹೊಲಕ್ಕೆ ಬಿತ್ತು. ಅದನ್ನು ಲೆಕ್ಕಿಸದೆ ಸುಬ್ಬಯ್ಯ ಓಡಿದ. ಓಡುತ್ತಿದ್ದ ಆತನನ್ನು ಸ್ವಯಂಸೇವಕರೂ ಬೆನ್ನಟ್ಟಿದರು. ಕಣ್ಣನೂ ಬಾವುಟವನ್ನೆತ್ತಿಕೊಂಡೇ ಜನರ ಜತೆಯಲ್ಲಿ ಸಾಗಿದ. ನೂರು ಗಜ ಓಡುವಷ್ಟರಲ್ಲೇ ಸುಬ್ಬಯ್ಯ ಕಾಲು ಜಾರಿ ಬಿದ್ದ. ಎದ್ದು ಮತ್ತೆ ಒಡಿದ. ಜನರ ಕೂಗು ಸಮೀಪದಲ್ಲೆ ಕೇಳಿಸಿ, ಹೊಲದ ಮಣ್ಣು ಹೆಂಟೆಯೊಂದು ಬೆನ್ನಿಗೆ ತಗಲಿದಂತಾಗಿ,ಸುಬ್ಬಯ್ಯ ಅಧೀರನಾದ. 'ಬದುಕಿದರೆ ಸಾಕು' ಎನ್ನುವ ಹಾಗಾಯಿತು ಆತನ ಸ್ಥಿತಿ. ಆದರೂ ರೈತರೆದುರು ಸೋಲನ್ನೊಪ್ಪಿಕೊಳ್ಳಲಾರದೆ ಆತ ನದಿಯ ದಂಡೆಗೆ ಧಾವಿಸಿ ನೀರಿಗೆ ಧುಮುಕಿದ. {{gap}}ಜನ ಬಂದು ನೆರೆದರು. ಆತ ಈಸಿ ಆಚೆಯ ದಡಕ್ಕೆ ಹೋಗಿ ಪಾರಾಗುವ ನೆಂಬುದು ಸ್ಪಷ್ಟವಾಯಿತು. "ಕಳ್ಳ ತಪ್ಪಿಸ್ಕೊಂಡ!" ಎಂದರು ಹಲವರು. "ನೀಲೇಶ್ವರದ ಹಾದಿಯಾಗಿ ನಡೆದುಕೊಂಡೇ ಹೊಸದುರ್ಗಕ್ಕೆ ಹೋಗಲಿ ಘೌಜದಾರರು!" ಎಂದನೊಬ್ಬ. "ಇನ್ನೊಮ್ಮೆ ಬಾ, ಕಲಿಸ್ತೇವೆ" ಎಂದಿತು ಒಂದು ಬಾಲ ಕಂಠ. {{gap}}ಕಣ್ಣನೂ ಬಾವುಟದೊಡನೆ ಬಂದು ತಲಪಿದ. {{gap}}ಯಾರೋ ಅಂದರು: {{gap}}"ಬನ್ನಿರೋ, ನದಿಗಿಳೀರಿ, ಹಿಡಿದು ತರೋಣ ಅವನನ್ನ!" {{gap}}"ಬೇಡಿ, ಬೇಡ! ಎಂದು ಹಲವರೆಂದರು. {{gap}}"ತಗೊಳ್ಳಿ ಒಂದೊಂದು ಕಲ್ಲು. ಉಡುಗೊರೇನಾದರೂ ಕೊಟ್ಟು ಕಳಿಸೋಣ."<noinclude></noinclude> enmuy7hx6wpby602q29tsdwgqo8lodf ಪುಟ:Chirasmarane-Niranjana.pdf/೧೯೯ 104 13018 324242 65662 2026-06-03T10:50:16Z Shreesha Sharma 7840 /* Proofread */ 324242 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೨೦೦ |center=|right=ಚಿರಸ್ಮರಣೆ}} {{gap}}ನದಿಯ ದಡದಿಂದ ಕಲುಗಳನ್ನೆತ್ತಿ ಹಲವರು, ಈಸಿ ಹೋಗುತ್ತಿದ್ದ ಸುಬ್ಬಯ್ಯನತ್ತ ಬೀರಿದರು. ಯಾವುದೋ ಒಂದು ಕಲ್ಲು ತಾಕಿದಾಗ ಈಸುತ್ತ ಇದ್ದವನು ತಲೆಕೊಡವಿದ. ದಡದ ಮೇಲಿದ್ದವರು ನಕ್ಕರು. ಸುಬ್ಬಯ್ಯ ಮತ್ತೆ ಈಸಿದ, ಮತ್ತೆ ಕಲ್ಲುಗಳು ಆತನೆಡೆಗೆ ಹೋದುವು. {{gap}}ಆಗ ಕೇಳಿಸಿತು ಅಬೂಬಕರನ ಸ್ವರ; {{gap}}"ಹೋಗಲಿ, ಬಿಟ್ಟುಬಿಡಿ!" {{gap}}ಅಷ್ಟರಲ್ಲೆ, ನಂಬಿಯಾರರ ಮನೆಯಿಂದ ಪೋಲೀಸನು ಮೆರವಣಿಗೆಯನ್ನು ಹಿಂಬಾಲಿಸಿದನೆಂದು ಕೇಳಿ,ಧಾವಿಸಿ ಬಂದ ಅಪ್ಪು ಮತ್ತು ಚಿರುಕಂಡ, ಏದುತ್ತ ಏದುತ್ತ ಜನ ನೆರೆದಿದ್ದ ಸ್ಥಳಕ್ಕೆ ತಲಪಿದರು. ಏನಾಯಿತೆಂದು ಕೇಳ ಬೇಕಾದುದಿರಲಿಲ್ಲ. ಕೆಲವರ ಕೈಯಲ್ಲಿ ಕಲುಗಳಿದ್ದುದನ್ನು ಕಂಡು ಚಿರುಕಂಡ ಎಂದ: {{gap}}"ಹಾಳಾಗಲಿ, ಕಲ್ಲೆಸೀಬೇಡಿ!" {{gap}}ಪಂದ್ಯಾಟದ ಪಟುವೆಂದು ಹಿಂದಿನ ದಿನ ಆತ್ಮಸ್ತುತಿ ಮಾಡಿಕೊಂಡಿದ್ದ ಸುಬ್ಬಯ್ಯನ ಈಸುಗಾರಿಕೆಯ ವಿಷಯದಲ್ಲಿ ಮೂದಲಿಕೆಯ ಮಾತನಾಡುತ್ತ ಜನ ನಕ್ಕರು. {{gap}}ಸುಬ್ಬಯ್ಯನಕ್ಕೆ ಸೋತ ಹಾಗೆ ತೋರಿತು. ಅಪ್ಪು ಕಾತರದಿಂದ ಅತ್ತ ನೋಡಿದ. ಚಿರುಕಂಡನ ಹಣೆ ಯೋಚನೆಯಿಂದ ನೆರಿಗೆ ಕಟ್ಟಿತು. {{gap}}ಯಾರೋ ಒಬ್ಬನೆಂದ: {{gap}}"ವಿಶ್ರಾಂತಿ ತಗೊಳ್ತಿದ್ದಾನೆ ಕಣ್ರೋ..." {{gap}}ಮುಂದೆ ಈಸಲು ಮತ್ತೊಂದು ಯತ್ನ, ಮತ್ತೆ ಸೋಲು. {{gap}}"ಏನಪ್ಪ,ಘಾಜದಾರರು ಕಷ್ಟದಲ್ಲಿದ್ದಾರೇಂತ ಕಾಣ್ತದೆ!" ಎಂದು ಒಬ್ಬ ರಾಗವೆಳೆದ.... {{gap}}...ಅಪ್ಪು ಚಿರುಕಂಡ ಊಹಿಸಿದಂತೆಯೇ ಆಯಿತು. ನಡುನೀರಿನಲ್ಲಿ ಸುಬ್ಬಯ್ಯ ಮುಳುಗಿದ, ಕರಿಯ ಚುಕ್ಕೆಯಾಗಿ ಆವರೆಗೂ ತೋರುತ್ತಿದ್ದ ತಲೆ ಕಾಣಿಸದೇ ಹೋಯಿತು. {{gap}}ಅಲ್ಲಿ ಸೇರಿದ್ದವರೆಲ್ಲ ಮಾತು ನಿಲ್ಲಿಸಿ ಕ್ಷಣಕಾಲ ಮೌನವಾದರು. {{gap}}"ಪಾಪಿ ಮುಳುಗಿದ!" ಎಂದಿತೊಂದು ಸ್ವರ. {{gap}}ಅಪ್ಪು ಮತ್ತು ಚಿರುಕಂಡ ಪರಸ್ಪರ ಮುಖ ನೋಡಿದರು. ಇಬ್ಬರ ದೃಷ್ಟಿಯೂ ಪ್ರಶ್ನಾರ್ಥಕ ಚಿಹ್ನೆಯಾಗಿ ನದಿಯನ್ನು ನೋಡಿತು. ಅಲ್ಲಿ ಅದುದೇನು? ಆತ<noinclude></noinclude> 6cl7e5r7ej7m3dsww4iwn49kwpfjgit 324248 324242 2026-06-03T11:06:55Z Shreelatha.Halemane 7642 /* Validated */ 324248 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೨೦೦ |center=|right=ಚಿರಸ್ಮರಣೆ}} {{gap}}ನದಿಯ ದಡದಿಂದ ಕಲುಗಳನ್ನೆತ್ತಿ ಹಲವರು, ಈಸಿ ಹೋಗುತ್ತಿದ್ದ ಸುಬ್ಬಯ್ಯನತ್ತ ಬೀರಿದರು. ಯಾವುದೋ ಒಂದು ಕಲ್ಲು ತಾಕಿದಾಗ ಈಸುತ್ತ ಇದ್ದವನು ತಲೆಕೊಡವಿದ. ದಡದ ಮೇಲಿದ್ದವರು ನಕ್ಕರು. ಸುಬ್ಬಯ್ಯ ಮತ್ತೆ ಈಸಿದ, ಮತ್ತೆ ಕಲ್ಲುಗಳು ಆತನೆಡೆಗೆ ಹೋದುವು. {{gap}}ಆಗ ಕೇಳಿಸಿತು ಅಬೂಬಕರನ ಸ್ವರ; {{gap}}"ಹೋಗಲಿ, ಬಿಟ್ಟುಬಿಡಿ!" {{gap}}ಅಷ್ಟರಲ್ಲೆ, ನಂಬಿಯಾರರ ಮನೆಯಿಂದ ಪೋಲೀಸನು ಮೆರವಣಿಗೆಯನ್ನು ಹಿಂಬಾಲಿಸಿದನೆಂದು ಕೇಳಿ,ಧಾವಿಸಿ ಬಂದ ಅಪ್ಪು ಮತ್ತು ಚಿರುಕಂಡ, ಏದುತ್ತ ಏದುತ್ತ ಜನ ನೆರೆದಿದ್ದ ಸ್ಥಳಕ್ಕೆ ತಲಪಿದರು. ಏನಾಯಿತೆಂದು ಕೇಳ ಬೇಕಾದುದಿರಲಿಲ್ಲ. ಕೆಲವರ ಕೈಯಲ್ಲಿ ಕಲುಗಳಿದ್ದುದನ್ನು ಕಂಡು ಚಿರುಕಂಡ ಎಂದ: {{gap}}"ಹಾಳಾಗಲಿ, ಕಲ್ಲೆಸೀಬೇಡಿ!" {{gap}}ಪಂದ್ಯಾಟದ ಪಟುವೆಂದು ಹಿಂದಿನ ದಿನ ಆತ್ಮಸ್ತುತಿ ಮಾಡಿಕೊಂಡಿದ್ದ ಸುಬ್ಬಯ್ಯನ ಈಸುಗಾರಿಕೆಯ ವಿಷಯದಲ್ಲಿ ಮೂದಲಿಕೆಯ ಮಾತನಾಡುತ್ತ ಜನ ನಕ್ಕರು. {{gap}}ಸುಬ್ಬಯ್ಯನಕ್ಕೆ ಸೋತ ಹಾಗೆ ತೋರಿತು. ಅಪ್ಪು ಕಾತರದಿಂದ ಅತ್ತ ನೋಡಿದ. ಚಿರುಕಂಡನ ಹಣೆ ಯೋಚನೆಯಿಂದ ನೆರಿಗೆ ಕಟ್ಟಿತು. {{gap}}ಯಾರೋ ಒಬ್ಬನೆಂದ: {{gap}}"ವಿಶ್ರಾಂತಿ ತಗೊಳ್ತಿದ್ದಾನೆ ಕಣ್ರೋ..." {{gap}}ಮುಂದೆ ಈಸಲು ಮತ್ತೊಂದು ಯತ್ನ, ಮತ್ತೆ ಸೋಲು. {{gap}}"ಏನಪ್ಪ,ಘಾಜದಾರರು ಕಷ್ಟದಲ್ಲಿದ್ದಾರೇಂತ ಕಾಣ್ತದೆ!" ಎಂದು ಒಬ್ಬ ರಾಗವೆಳೆದ.... {{gap}}...ಅಪ್ಪು ಚಿರುಕಂಡ ಊಹಿಸಿದಂತೆಯೇ ಆಯಿತು. ನಡುನೀರಿನಲ್ಲಿ ಸುಬ್ಬಯ್ಯ ಮುಳುಗಿದ, ಕರಿಯ ಚುಕ್ಕೆಯಾಗಿ ಆವರೆಗೂ ತೋರುತ್ತಿದ್ದ ತಲೆ ಕಾಣಿಸದೇ ಹೋಯಿತು. {{gap}}ಅಲ್ಲಿ ಸೇರಿದ್ದವರೆಲ್ಲ ಮಾತು ನಿಲ್ಲಿಸಿ ಕ್ಷಣಕಾಲ ಮೌನವಾದರು. {{gap}}"ಪಾಪಿ ಮುಳುಗಿದ!" ಎಂದಿತೊಂದು ಸ್ವರ. {{gap}}ಅಪ್ಪು ಮತ್ತು ಚಿರುಕಂಡ ಪರಸ್ಪರ ಮುಖ ನೋಡಿದರು. ಇಬ್ಬರ ದೃಷ್ಟಿಯೂ ಪ್ರಶ್ನಾರ್ಥಕ ಚಿಹ್ನೆಯಾಗಿ ನದಿಯನ್ನು ನೋಡಿತು. ಅಲ್ಲಿ ಅದುದೇನು? ಆತ<noinclude></noinclude> q424cc60h5z1r8ds7x0osugplif0v3i ಪುಟ:Chirasmarane-Niranjana.pdf/೨೪೮ 104 13067 324243 63420 2026-06-03T10:52:42Z Shreesha Sharma 7840 /* Proofread */ 324243 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೨೪೯}} ಚಿರುಕಂಡರಾಗಲೀ ಅವರ ಸಂಗಡಿಗರಾಗಲೀ ಇಲ್ಲದೆಯೇ ಹಬ್ಬ ಕಳೆಯಿತು.ಕಯ್ಯೂರು ಚೇತರಿಸಿಕೊಂಡಿತ್ತು ನಿಜ. ಪತ್ರಿಕೆಯೋದುವ,ಚರ್ಚಿಸುವ,'ಸಾಹಿತ್ಯ'ವನ್ನು ಪ್ರಸಾರಮಾಡುವ ಚಟುವಟಿಕೆಗಳು ಗುಪ್ತವಾಗಿ ಮತ್ತೆ ನಡೆಯುತ್ತಿದ್ದುದೂ ನಿಜ. ಆದರೂ ತಮ್ಮವರೇ ಆದ ಅರವತ್ತು ಜನರಿಲ್ಲದೆ ಕಯ್ಯೂರು ಬಡವಾಗಿತ್ತು. {{gap}}.... ಆ ಆರವತ್ತು ಜನ ಮಂಗಳೂರಿನ ಸೆರೆಮನೆಯಲ್ಲಿ ದಿನಕಳೆಯುತ್ತಿದ್ದರು, ಮೇಲಿನ ನ್ಯಾಯಸ್ಥಾನದ ವಿಚಾರಣೆಯನ್ನು ಇದಿರುನೋಡುತ್ತ. ಆ ದಿನ ಒಂದಲ್ಲ ಕಾರಣಕ್ಕಾಗಿ ಮುಂದೆ ಬೀಳುತ್ತಿತ್ತು. ಇನ್ನೇನು ವಿಚಾರಣೆ ಮೊದಲಾಗಬೇಕು ಎನ್ನುವಷ್ಟರಲ್ಲಿ ವೃದ್ದ ನ್ಯಾಯಾಧೀಶರು ನಿವೃತ್ತಿಗೆ ಮುನ್ನ ರಜೆ ಪಡೆದರು. ಬಳಿಕ ಕ್ರಿಸ್ಮಸ್ ಬಂತು. ಹೊಸ ವರ್ಷದಲ್ಲಿ ಹೊಸ ನ್ಯಾಯಾಧೀಶರು ತಡವಾಗಿ ಬಂದರು. ಬಂದವರೂ ಮೊದಲು, ಬೇರೆ ಮೂರು ನಾಲ್ಕು ಮೊಕದ್ದಮೆಗಳನ್ನು ಮುಗಿಸಿದರು. {{gap}}ಈ ಸಲ ಕಯ್ಯೂರು ಕೈದಿಗಳು ನ್ಯಾಯಸ್ಥಾನ ಸೇರಿದುದು ಬೆಟ್ಟವನ್ನೇರಿ. ಅದು ಬಾವುಟ ಗುಡ್ಡ, ಅಲ್ಲಿ ನಿಂತರೆ, ಮರಗಳ ಕೆಳಗೆ ವಿರಮಿಸುತ್ತಿದ್ದ ಉದ್ಯಾನದ ಊರಿನಂತಿತ್ತು ಮಂಗಳೂರು. ಪಶ್ಚಿಮದಲ್ಲಿ, ವಿಶಾಲವಾದ ಬೋರ್ಗರೆಯುವ ನೀಲಿ ಸಮುದ್ರ, ಅಂತೂ ಆ ಜಾಗ ನ್ಯಾಯದಾನದ ಕೈಲಾಸ ಪರ್ವತವೇ! {{gap}}ಕೈದಿಗಳಿಗೆ ಈ ಅನುಭವ ಹಿಂದಿನದಕ್ಕಿಂತ ಭಿನ್ನವಾಗಿತ್ತು, ಇಲ್ಲಿ ಹೆಚ್ಚು ಚಟುವಟಿಕೆಯನ್ನು ಅವರು ಕಂಡರು. ಮೊದಲ ದಿನ ಆ ಊರಿನ ವಿದ್ಯಾರ್ಥಿಗಳು, ಬೇರೆ ಹಲವರು, ಕೆಲ ಕಾರ್ಮಿಕರು, ಕಯ್ಯೂರಿನಿಂದ ಬಂದಿದ್ದ ಕೆಲವರು ರೈತರು, ನ್ಯಾಯಸ್ಥಾನದ ಹೊರಗೆ ಗುಂಪುಕಟ್ಟಿನಿಂತ ಪ್ರೇಕ್ಷಕರಾದರು. ಪತ್ರಿಕಾಪ್ರತಿನಿಧಿಗಳೂ ಅಲ್ಲಿದ್ದರು.ನ್ಯಾಯಸ್ಥಾನ ಅಂದರೆ ಸರಕಾರವೇ ನೇಮಿಸಿದ ಜ್ಯೂರಿಗಳು ಬೇರೆ. ಇದರಿಂದ ವಿಚಾರಣೆಯ ಮೊದಲ ದಿನ ಕಳೆ ಕಟ್ಟಿತು. {{gap}}ಆದರೆ ಹೀಗಾದುದು ಅದೊಂದು ದಿನ ಮಾತ್ರ. ಅನಂತರದ ದಿನಗಳು ಮತ್ತೆ ಬೇಸರಕ್ಕೆ ಕಾರಣವಾದುವು. ಪ್ರೇಕ್ಷಕರು ಕಡಮೆಯಾದರು. ಅಲ್ಲಿ ನಡೆದುದೆಲ್ಲ ಹಿಂದಿನ ನ್ಯಾಯಸ್ಥಾನದ ಪುನರಾವೃತ್ತಿಯೇ. {{gap}}ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ಈಗ ಮದರಾಸಿನಿಂದ ಪಿಳ್ಳೆಯೂ ಬಂದಿದ್ದರು. ಓರಣವಾಗಿ ಪೋಷಕು ಧರಿಸುವ ಅವರ ರೀತಿ, ಇಬ್ಬಾಗಮಾಡಿ ಹಿಂದಕ್ಕೆ ಬಾಚಿದ ಕ್ರಾಪು, ಸದಾ ಎಚ್ಚರವಿರುತ್ತಿದ್ದ ಕಣ್ಣುಗಳು ಎಲ್ಲರ ಗಮನವನ್ನೂ ಸೆಳೆಯುವಹಾಗಿದ್ದುವು. ರಾಜಾರಾಯರ ಜತೆ ಕೂಡಿ ದಕ್ಷತೆಯಿಂದ ಅವರು ಕೈದಿಗಳ<noinclude></noinclude> mk522o0b7r1inm353vhrdjraoanp7v4 324249 324243 2026-06-03T11:07:10Z Shreelatha.Halemane 7642 /* Validated */ 324249 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೨೪೯}} ಚಿರುಕಂಡರಾಗಲೀ ಅವರ ಸಂಗಡಿಗರಾಗಲೀ ಇಲ್ಲದೆಯೇ ಹಬ್ಬ ಕಳೆಯಿತು.ಕಯ್ಯೂರು ಚೇತರಿಸಿಕೊಂಡಿತ್ತು ನಿಜ. ಪತ್ರಿಕೆಯೋದುವ,ಚರ್ಚಿಸುವ,'ಸಾಹಿತ್ಯ'ವನ್ನು ಪ್ರಸಾರಮಾಡುವ ಚಟುವಟಿಕೆಗಳು ಗುಪ್ತವಾಗಿ ಮತ್ತೆ ನಡೆಯುತ್ತಿದ್ದುದೂ ನಿಜ. ಆದರೂ ತಮ್ಮವರೇ ಆದ ಅರವತ್ತು ಜನರಿಲ್ಲದೆ ಕಯ್ಯೂರು ಬಡವಾಗಿತ್ತು. {{gap}}.... ಆ ಆರವತ್ತು ಜನ ಮಂಗಳೂರಿನ ಸೆರೆಮನೆಯಲ್ಲಿ ದಿನಕಳೆಯುತ್ತಿದ್ದರು, ಮೇಲಿನ ನ್ಯಾಯಸ್ಥಾನದ ವಿಚಾರಣೆಯನ್ನು ಇದಿರುನೋಡುತ್ತ. ಆ ದಿನ ಒಂದಲ್ಲ ಕಾರಣಕ್ಕಾಗಿ ಮುಂದೆ ಬೀಳುತ್ತಿತ್ತು. ಇನ್ನೇನು ವಿಚಾರಣೆ ಮೊದಲಾಗಬೇಕು ಎನ್ನುವಷ್ಟರಲ್ಲಿ ವೃದ್ದ ನ್ಯಾಯಾಧೀಶರು ನಿವೃತ್ತಿಗೆ ಮುನ್ನ ರಜೆ ಪಡೆದರು. ಬಳಿಕ ಕ್ರಿಸ್ಮಸ್ ಬಂತು. ಹೊಸ ವರ್ಷದಲ್ಲಿ ಹೊಸ ನ್ಯಾಯಾಧೀಶರು ತಡವಾಗಿ ಬಂದರು. ಬಂದವರೂ ಮೊದಲು, ಬೇರೆ ಮೂರು ನಾಲ್ಕು ಮೊಕದ್ದಮೆಗಳನ್ನು ಮುಗಿಸಿದರು. {{gap}}ಈ ಸಲ ಕಯ್ಯೂರು ಕೈದಿಗಳು ನ್ಯಾಯಸ್ಥಾನ ಸೇರಿದುದು ಬೆಟ್ಟವನ್ನೇರಿ. ಅದು ಬಾವುಟ ಗುಡ್ಡ, ಅಲ್ಲಿ ನಿಂತರೆ, ಮರಗಳ ಕೆಳಗೆ ವಿರಮಿಸುತ್ತಿದ್ದ ಉದ್ಯಾನದ ಊರಿನಂತಿತ್ತು ಮಂಗಳೂರು. ಪಶ್ಚಿಮದಲ್ಲಿ, ವಿಶಾಲವಾದ ಬೋರ್ಗರೆಯುವ ನೀಲಿ ಸಮುದ್ರ, ಅಂತೂ ಆ ಜಾಗ ನ್ಯಾಯದಾನದ ಕೈಲಾಸ ಪರ್ವತವೇ! {{gap}}ಕೈದಿಗಳಿಗೆ ಈ ಅನುಭವ ಹಿಂದಿನದಕ್ಕಿಂತ ಭಿನ್ನವಾಗಿತ್ತು, ಇಲ್ಲಿ ಹೆಚ್ಚು ಚಟುವಟಿಕೆಯನ್ನು ಅವರು ಕಂಡರು. ಮೊದಲ ದಿನ ಆ ಊರಿನ ವಿದ್ಯಾರ್ಥಿಗಳು, ಬೇರೆ ಹಲವರು, ಕೆಲ ಕಾರ್ಮಿಕರು, ಕಯ್ಯೂರಿನಿಂದ ಬಂದಿದ್ದ ಕೆಲವರು ರೈತರು, ನ್ಯಾಯಸ್ಥಾನದ ಹೊರಗೆ ಗುಂಪುಕಟ್ಟಿನಿಂತ ಪ್ರೇಕ್ಷಕರಾದರು. ಪತ್ರಿಕಾಪ್ರತಿನಿಧಿಗಳೂ ಅಲ್ಲಿದ್ದರು.ನ್ಯಾಯಸ್ಥಾನ ಅಂದರೆ ಸರಕಾರವೇ ನೇಮಿಸಿದ ಜ್ಯೂರಿಗಳು ಬೇರೆ. ಇದರಿಂದ ವಿಚಾರಣೆಯ ಮೊದಲ ದಿನ ಕಳೆ ಕಟ್ಟಿತು. {{gap}}ಆದರೆ ಹೀಗಾದುದು ಅದೊಂದು ದಿನ ಮಾತ್ರ. ಅನಂತರದ ದಿನಗಳು ಮತ್ತೆ ಬೇಸರಕ್ಕೆ ಕಾರಣವಾದುವು. ಪ್ರೇಕ್ಷಕರು ಕಡಮೆಯಾದರು. ಅಲ್ಲಿ ನಡೆದುದೆಲ್ಲ ಹಿಂದಿನ ನ್ಯಾಯಸ್ಥಾನದ ಪುನರಾವೃತ್ತಿಯೇ. {{gap}}ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ಈಗ ಮದರಾಸಿನಿಂದ ಪಿಳ್ಳೆಯೂ ಬಂದಿದ್ದರು. ಓರಣವಾಗಿ ಪೋಷಕು ಧರಿಸುವ ಅವರ ರೀತಿ, ಇಬ್ಬಾಗಮಾಡಿ ಹಿಂದಕ್ಕೆ ಬಾಚಿದ ಕ್ರಾಪು, ಸದಾ ಎಚ್ಚರವಿರುತ್ತಿದ್ದ ಕಣ್ಣುಗಳು ಎಲ್ಲರ ಗಮನವನ್ನೂ ಸೆಳೆಯುವಹಾಗಿದ್ದುವು. ರಾಜಾರಾಯರ ಜತೆ ಕೂಡಿ ದಕ್ಷತೆಯಿಂದ ಅವರು ಕೈದಿಗಳ<noinclude></noinclude> mfvkhzencmefb3567dy0xqptkc958b7 ಪುಟ:Chirasmarane-Niranjana.pdf/೨೪೯ 104 13068 324244 63436 2026-06-03T10:55:42Z Shreesha Sharma 7840 /* Proofread */ 324244 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೨೫೦|center=|right=ಚಿರಸ್ಮರಣೆ}} ರಕ್ಷಣೆಯಲ್ಲಿ ನಿರತರಾದರು. {{gap}}ಈ ಮೇಲಣ ನ್ಯಾಯಾಧೀಶರ ಹಿಂದೆ ಗೋಡೆಯ ಮೇಲೆ, ಪಂಚಮ ಜಾರ್ಜರ ಚಿತ್ರವಿತ್ತು. ತಲೆಯ ಮೇಲುಗಡೆ ಶ್ರೀಮಂತವಾಗಿ ತೋರುತ್ತಿದ್ದ ಅರಿವೆಯ ಜಾಲರಿ ಪಂಕ. ನ್ಯಾಯಾಧೀಶರ ತುಂಬಿಕೊಂಡಿದ್ದ ಆಗಲ ಮುಖಕ್ಕಿಂತ ಹಿರಿದಾಗಿತ್ತು ಅವರ ಶುಭ್ರ ರುಮಾಲು. ಹಣೆಯ ಮೇಲೆ ಮೂರುನಾಮ. ಅವು ಮೇಲಕ್ಕೇರಿ ರುಮಾಲಿನೊಳಗೆ ಅವಿತಂತೆ ಕಾಣಿಸುತ್ತಿತು, ಯಾರು ಏನೇ ಅಂದರೂ ಅವರು, "ಹೌದು,ಹೌದು" ಎಂದು ತಲೆಯಾಡಿಸಿ ಸುಮ್ಮನಾಗುತ್ತಿದ್ದರು. {{gap}}ಈ ಸಲ ಪೋಲೀಸರ ಪರ ಸಾಕ್ಷಿಗಳ ಸಂಖ್ಯೆ ಇಳಿಮುಖಾವಾಯಿತು. ಹಿಂದೆ ಹೇಳುದುದಕ್ಕೆ ವ್ಯತಿರಿಕ್ತವಾಗಿ ಸಾಕ್ಷ್ಯ ನುಡಿಯಬಹುದೆಂಬ ಶಂಕೆಯಿಂದ, ಕೆಲವರನ್ನು ಅವರು ಬಿಟ್ಟುಬಿಟ್ಟಿದ್ದರು. ಆರೋಪಿಗಳ ಪರವಾಗಿ ಹತ್ತು ಜನ ಗಂಡಸರು ಮತ್ತು ಹೆಂಗಸರು ಸಾಕ್ಷ್ಯ ಕೊಟ್ಟರು. ಅವರ ಮಾತಿನಲ್ಲಿ ದೃಢತೆಯಿತ್ತು. ಘಟನೆಯಾದಾಗ ಆ ಜಾಗದಲ್ಲಿ ಎಷ್ಟೋ ಜನ ಆರೋಪಿಗಳು ಇರಲೇ ಇಲ್ಲವೆಂದು, ಪೋಲೀಸರ ಸಾವು ಆಕಸ್ಮಿಕವೆಂದು, ರೈತ ಸಂಘಟನೆ ಕ್ರಮಬದ್ದ ವಾಗಿತ್ತೆಂದು ವಕೀಲದ್ವಯರು ತೋರಿಸಿಕೊಟ್ಟರು. {{gap}}ಸರಕಾರ ವಕೀಲರ ಮರುಸವಾಲುಗಳಿಗೆ, ಬೆದರಿಕೆ-ಗರ್ಜನೆಗಳಿಗೆ,ಆ ಸಾಕ್ಷಿಗಳು ಯಾರೂ ಮಣಿಯಲಿಲ್ಲ. {{gap}}ಅಂತಹ ಘಳಿಗೆಯಲ್ಲೆಲ್ಲ ಹೆಚ್ಚಿನ ಕೈದಿಗಳಿಗೆ ಅನಿಸುತ್ತಿತ್ತು: {{gap}}"ನಮಗೆ ಜಯ ಖಂಡಿತ. ಬೇಗನೆ ನಾವೆಲ್ಲ ವಾಪಸಾಗುವುದು ಖಂಡಿತ!" {{gap}}ಆದರೆ ಮಾಸ್ತರು, ಚಿರುಕಂಡ, ಅಪ್ಪು ಮತ್ತಿತರರು ಮೌನವಾಗಿಯೇ ಇದ್ದರು. ಅವರು ಹೊರಗೆ ಹಸನ್ಮುಖಿಗಳಾಗಿ ತೋರುತ್ತಿದ್ದರೂ ಒಳಗೆ ಅಂಥದೇ ಎಂದು ಹೇಳಲಾಗದ ಕೊರಗು ಅವರನ್ನ ಬಾಧಿಸುತ್ತಿತು. {{gap}}ವಿಚಾರಣೆ ಮುಕ್ತಾಯವಾಗುವ ದಿನ ಬಂತು. ಆ ದಿನ ಆರೋಪಿಗಳ ಪರವಾಗಿ ಪಿಳ್ಳೆ ಎಣೆ ಇಲ್ಲದ ವಾಕ್ಪ್ರೌಢಿಮೆಯನ್ನು ತೋರಿದರು. ಸೂಜಿ ಬಿದ್ದರೂ ಸದ್ದಾಗುವ ಹಾಗೆ ನ್ಯಾಯಸ್ಥಾನ ನಿಶ್ಯಬ್ದವಾಗಿತ್ತು, ಇಂಗ್ಲಿಷಿನಲ್ಲಿದ್ದ ಆ ವಾದ ಕೈದಿಗಳಲ್ಲಿ ಮಾಸ್ತರೊಬ್ಬರಿಗೇ ಅರ್ಥವಾಯಿತು. ಉಳಿದವರು ಆಗಾಗ್ಗೆ ಮಾಸ್ತರ ಮುಖ ನೋಡಿದರು. ಹಾಗೆ ನೋಡಿ ಅಲ್ಲಿ ಕಂಡ ಪ್ರತಿಕ್ರಿಯೆಯ ಆಧಾರದ ಮೇಲೆ ಅವರು ಪಿಳ್ಳೆ ಹೇಳುತ್ತಿದ್ದುದನ್ನು ಅರ್ಥಮಾಡಿಕೊಂಡರು. {{gap}}ಪಿಳ್ಳೆಯ ವಾದದಲ್ಲಿ ಎದೆಗಾರಿಕೆಯಿತ್ತು.ಮೊನಚಾದ ಬಾಣದ ಹಾಗಿತ್ತು ಒಂದೊಂದು ಮಾತೂ....ಅವರೆಂದರು:<noinclude></noinclude> mficw3gv61yhfu9ody0msm8srfntumc 324250 324244 2026-06-03T11:07:23Z Shreelatha.Halemane 7642 /* Validated */ 324250 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೨೫೦|center=|right=ಚಿರಸ್ಮರಣೆ}} ರಕ್ಷಣೆಯಲ್ಲಿ ನಿರತರಾದರು. {{gap}}ಈ ಮೇಲಣ ನ್ಯಾಯಾಧೀಶರ ಹಿಂದೆ ಗೋಡೆಯ ಮೇಲೆ, ಪಂಚಮ ಜಾರ್ಜರ ಚಿತ್ರವಿತ್ತು. ತಲೆಯ ಮೇಲುಗಡೆ ಶ್ರೀಮಂತವಾಗಿ ತೋರುತ್ತಿದ್ದ ಅರಿವೆಯ ಜಾಲರಿ ಪಂಕ. ನ್ಯಾಯಾಧೀಶರ ತುಂಬಿಕೊಂಡಿದ್ದ ಆಗಲ ಮುಖಕ್ಕಿಂತ ಹಿರಿದಾಗಿತ್ತು ಅವರ ಶುಭ್ರ ರುಮಾಲು. ಹಣೆಯ ಮೇಲೆ ಮೂರುನಾಮ. ಅವು ಮೇಲಕ್ಕೇರಿ ರುಮಾಲಿನೊಳಗೆ ಅವಿತಂತೆ ಕಾಣಿಸುತ್ತಿತು, ಯಾರು ಏನೇ ಅಂದರೂ ಅವರು, "ಹೌದು,ಹೌದು" ಎಂದು ತಲೆಯಾಡಿಸಿ ಸುಮ್ಮನಾಗುತ್ತಿದ್ದರು. {{gap}}ಈ ಸಲ ಪೋಲೀಸರ ಪರ ಸಾಕ್ಷಿಗಳ ಸಂಖ್ಯೆ ಇಳಿಮುಖಾವಾಯಿತು. ಹಿಂದೆ ಹೇಳುದುದಕ್ಕೆ ವ್ಯತಿರಿಕ್ತವಾಗಿ ಸಾಕ್ಷ್ಯ ನುಡಿಯಬಹುದೆಂಬ ಶಂಕೆಯಿಂದ, ಕೆಲವರನ್ನು ಅವರು ಬಿಟ್ಟುಬಿಟ್ಟಿದ್ದರು. ಆರೋಪಿಗಳ ಪರವಾಗಿ ಹತ್ತು ಜನ ಗಂಡಸರು ಮತ್ತು ಹೆಂಗಸರು ಸಾಕ್ಷ್ಯ ಕೊಟ್ಟರು. ಅವರ ಮಾತಿನಲ್ಲಿ ದೃಢತೆಯಿತ್ತು. ಘಟನೆಯಾದಾಗ ಆ ಜಾಗದಲ್ಲಿ ಎಷ್ಟೋ ಜನ ಆರೋಪಿಗಳು ಇರಲೇ ಇಲ್ಲವೆಂದು, ಪೋಲೀಸರ ಸಾವು ಆಕಸ್ಮಿಕವೆಂದು, ರೈತ ಸಂಘಟನೆ ಕ್ರಮಬದ್ದ ವಾಗಿತ್ತೆಂದು ವಕೀಲದ್ವಯರು ತೋರಿಸಿಕೊಟ್ಟರು. {{gap}}ಸರಕಾರ ವಕೀಲರ ಮರುಸವಾಲುಗಳಿಗೆ, ಬೆದರಿಕೆ-ಗರ್ಜನೆಗಳಿಗೆ,ಆ ಸಾಕ್ಷಿಗಳು ಯಾರೂ ಮಣಿಯಲಿಲ್ಲ. {{gap}}ಅಂತಹ ಘಳಿಗೆಯಲ್ಲೆಲ್ಲ ಹೆಚ್ಚಿನ ಕೈದಿಗಳಿಗೆ ಅನಿಸುತ್ತಿತ್ತು: {{gap}}"ನಮಗೆ ಜಯ ಖಂಡಿತ. ಬೇಗನೆ ನಾವೆಲ್ಲ ವಾಪಸಾಗುವುದು ಖಂಡಿತ!" {{gap}}ಆದರೆ ಮಾಸ್ತರು, ಚಿರುಕಂಡ, ಅಪ್ಪು ಮತ್ತಿತರರು ಮೌನವಾಗಿಯೇ ಇದ್ದರು. ಅವರು ಹೊರಗೆ ಹಸನ್ಮುಖಿಗಳಾಗಿ ತೋರುತ್ತಿದ್ದರೂ ಒಳಗೆ ಅಂಥದೇ ಎಂದು ಹೇಳಲಾಗದ ಕೊರಗು ಅವರನ್ನ ಬಾಧಿಸುತ್ತಿತು. {{gap}}ವಿಚಾರಣೆ ಮುಕ್ತಾಯವಾಗುವ ದಿನ ಬಂತು. ಆ ದಿನ ಆರೋಪಿಗಳ ಪರವಾಗಿ ಪಿಳ್ಳೆ ಎಣೆ ಇಲ್ಲದ ವಾಕ್ಪ್ರೌಢಿಮೆಯನ್ನು ತೋರಿದರು. ಸೂಜಿ ಬಿದ್ದರೂ ಸದ್ದಾಗುವ ಹಾಗೆ ನ್ಯಾಯಸ್ಥಾನ ನಿಶ್ಯಬ್ದವಾಗಿತ್ತು, ಇಂಗ್ಲಿಷಿನಲ್ಲಿದ್ದ ಆ ವಾದ ಕೈದಿಗಳಲ್ಲಿ ಮಾಸ್ತರೊಬ್ಬರಿಗೇ ಅರ್ಥವಾಯಿತು. ಉಳಿದವರು ಆಗಾಗ್ಗೆ ಮಾಸ್ತರ ಮುಖ ನೋಡಿದರು. ಹಾಗೆ ನೋಡಿ ಅಲ್ಲಿ ಕಂಡ ಪ್ರತಿಕ್ರಿಯೆಯ ಆಧಾರದ ಮೇಲೆ ಅವರು ಪಿಳ್ಳೆ ಹೇಳುತ್ತಿದ್ದುದನ್ನು ಅರ್ಥಮಾಡಿಕೊಂಡರು. {{gap}}ಪಿಳ್ಳೆಯ ವಾದದಲ್ಲಿ ಎದೆಗಾರಿಕೆಯಿತ್ತು.ಮೊನಚಾದ ಬಾಣದ ಹಾಗಿತ್ತು ಒಂದೊಂದು ಮಾತೂ....ಅವರೆಂದರು:<noinclude></noinclude> mrx3kqh31smkdfel83t9f82nwmtj4pt ಪುಟ:Chirasmarane-Niranjana.pdf/೨೫೫ 104 13074 324247 64395 2026-06-03T11:06:38Z Shreesha Sharma 7840 /* Proofread */ 324247 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=೨೬೩ |center=|right=ಚಿರಸ್ಮರಣೆ}} ಹತ್ತು ವರ್ಷಗಳ ಹಿಂದಿನ ಎಳೆಯರಾದ ಅಪ್ಪು ಚಿರುಕಂಡರು... ಏನೆಂದರು ಅವರು? ನೀವು ಜಾಸ್ತಿ ಬೀಡಿ ಸೇದ್ತೀರಿ,ಅಲ್ವಾ ಸರ್'ಎಂದೆ?ಇಲ್ಲ ಅಪ್ಪು-- ಇಲ್ಲ ಚಿರುಕಂಡ---ನಾನೀಗ ಬೀಡಿ ಸೇದೋದೆ ಇಲ್ಲ! 'ಏನು? ಅದಲ್ಲವೆ? {{gap}}ಪ್ರಶ್ನೆ ಮತ್ತೊಮ್ಮೆ ಬಂತು: {{gap}}"ನಾವು ನಾಲ್ಕು ಜನರನ್ನು ಈಗಲೆ ಒಯ್ತಾರಾ ಸರ್?" {{gap}}ಎದೆಯಿಂದ ಅಳಲಿನ ಮುದ್ದೆ ಎದ್ದು ಗಂಟಲಿನ ಮೇಲಕ್ಕೆ ಬರಲು ಯತ್ನಿಸಿತು. ಆದರೆ ಗಂಟಲು ಚಿಕ್ಕದು. ಉಗುಳು ನುಂಗಿ ಆ ಮುದ್ದೆಯನ್ನು ಕೆಳಕ್ಕೆ ತಳ್ಳುತ್ತ ಮಾಸ್ತರೆಂದರು: {{gap}}"ಇಲ್ಲವಪ್ಪ. ಇನ್ನೂ ನಾವು ಜತೇಲೇ ಇರ್ತೇವೆ." {{gap}}ಯಾರೋ ಕೇಳಿದರು: {{gap}}"ಇವರಿಗೆ ಐದು ವರ್ಷ ಶಿಕ್ಷೆ ಆದ್ಮೇಲೆ ಮರಣದಂಡನೆಯೋ ವಕೀಲರೆ?" ಹಾಗಲ್ಲವೆಂದರು ರಾಜಾರಾಯರು. ಒಂದೊಂದು ಅಪರಾಧಕ್ಕೆ ಒಂದೊಂದು ಬಗೆಯ ಶಿಕ್ಷೆ. ಮರಣದಂಡನೆಯ ಜತೆಗೆ ಬೇರೆ ಶಿಕ್ಷೆ ಇದ್ದಾಗ, ಮರಣದಂಡನೆಯ ಬಸಿರಲ್ಲಿ ಆ ಶಿಕ್ಷೆ. {{gap}}ಚಿರುಕಂಡ ಮಾಸ್ತರನ್ನು ಕೇಳಿದ:"ಬಿಡುಗಡೆಯಾದೋರು ಅವತ್ತೇ ಕಯ್ಯೂರಿಗೆ ಹೋಗೋದು ಮೇಲು, ಅಲ್ವ ಸರ್?" {{gap}}ಆತ ಯಾವಾಗಲೂ ಕಾರ್ಯದರ್ಶಿಯೇ---ಯಾವಾಗಲೂ ಮುಂದಿನ ಕ್ರಮದ ಯೋಚನೆಯೇ ಆತನಿಗೆ. {{gap}}"ಹೂಂ ಹೌದು." {{gap}}"ಅವರ ಖರ್ಚಿಗೆ?---" {{gap}}ಅಲ್ಲೇ ನಿಂತಿದ್ದ ರಾಜಾರಾವ್ ಹೇಳಿದರು: {{gap}}"ಹೊರಗೆ ನಿಮ್ಮವರು ಕೆಲವರಿದ್ದಾರೆ. ಎಲ್ಲಾ ನೋಡಿಕೊಳ್ತಾರೆ. ಆ ಯೋಚನೆ ಮಾಡ್ಬೇಡಿ." {{gap}}ಅಷ್ಟರಲ್ಲಿ ಪೋಲಿಸರ ಸ್ವರ ಕೇಳಿಸಿತು: {{gap}}"ಮುಂದೆ ನಡೀರಿ!" {{gap}}ಇವತ್ತು ಇನ್ನುಳಿದ ಮೂವತ್ತೆಂಟು ಜನ ಬೀದಿಯಲ್ಲಿ ನಡೆಯಬೇಕಾದುದಿಲ್ಲ. ಈ ನ್ಯಾಯಸ್ಥಾನದ ಕೊನೆಯ ದರ್ಶನದ ಬಳಿಕ ಈಗ ಅವರಿಗೆ ಮೋಟಾರು ವಾಹನವಿದೆ. {{gap}}ಜನ ಹತ್ತಿರ ಹತ್ತಿರಕ್ಕೆ ಬಂದರು. ಇವರು ರೈತರಲ್ಲ. ಕಯ್ಯೂರು ಬಲು ದೂರ<noinclude></noinclude> 7q59y8isepz42u3amdz02pbomtssvmb 324251 324247 2026-06-03T11:07:38Z Shreelatha.Halemane 7642 /* Validated */ 324251 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=೨೬೩ |center=|right=ಚಿರಸ್ಮರಣೆ}} ಹತ್ತು ವರ್ಷಗಳ ಹಿಂದಿನ ಎಳೆಯರಾದ ಅಪ್ಪು ಚಿರುಕಂಡರು... ಏನೆಂದರು ಅವರು? ನೀವು ಜಾಸ್ತಿ ಬೀಡಿ ಸೇದ್ತೀರಿ,ಅಲ್ವಾ ಸರ್'ಎಂದೆ?ಇಲ್ಲ ಅಪ್ಪು-- ಇಲ್ಲ ಚಿರುಕಂಡ---ನಾನೀಗ ಬೀಡಿ ಸೇದೋದೆ ಇಲ್ಲ! 'ಏನು? ಅದಲ್ಲವೆ? {{gap}}ಪ್ರಶ್ನೆ ಮತ್ತೊಮ್ಮೆ ಬಂತು: {{gap}}"ನಾವು ನಾಲ್ಕು ಜನರನ್ನು ಈಗಲೆ ಒಯ್ತಾರಾ ಸರ್?" {{gap}}ಎದೆಯಿಂದ ಅಳಲಿನ ಮುದ್ದೆ ಎದ್ದು ಗಂಟಲಿನ ಮೇಲಕ್ಕೆ ಬರಲು ಯತ್ನಿಸಿತು. ಆದರೆ ಗಂಟಲು ಚಿಕ್ಕದು. ಉಗುಳು ನುಂಗಿ ಆ ಮುದ್ದೆಯನ್ನು ಕೆಳಕ್ಕೆ ತಳ್ಳುತ್ತ ಮಾಸ್ತರೆಂದರು: {{gap}}"ಇಲ್ಲವಪ್ಪ. ಇನ್ನೂ ನಾವು ಜತೇಲೇ ಇರ್ತೇವೆ." {{gap}}ಯಾರೋ ಕೇಳಿದರು: {{gap}}"ಇವರಿಗೆ ಐದು ವರ್ಷ ಶಿಕ್ಷೆ ಆದ್ಮೇಲೆ ಮರಣದಂಡನೆಯೋ ವಕೀಲರೆ?" ಹಾಗಲ್ಲವೆಂದರು ರಾಜಾರಾಯರು. ಒಂದೊಂದು ಅಪರಾಧಕ್ಕೆ ಒಂದೊಂದು ಬಗೆಯ ಶಿಕ್ಷೆ. ಮರಣದಂಡನೆಯ ಜತೆಗೆ ಬೇರೆ ಶಿಕ್ಷೆ ಇದ್ದಾಗ, ಮರಣದಂಡನೆಯ ಬಸಿರಲ್ಲಿ ಆ ಶಿಕ್ಷೆ. {{gap}}ಚಿರುಕಂಡ ಮಾಸ್ತರನ್ನು ಕೇಳಿದ:"ಬಿಡುಗಡೆಯಾದೋರು ಅವತ್ತೇ ಕಯ್ಯೂರಿಗೆ ಹೋಗೋದು ಮೇಲು, ಅಲ್ವ ಸರ್?" {{gap}}ಆತ ಯಾವಾಗಲೂ ಕಾರ್ಯದರ್ಶಿಯೇ---ಯಾವಾಗಲೂ ಮುಂದಿನ ಕ್ರಮದ ಯೋಚನೆಯೇ ಆತನಿಗೆ. {{gap}}"ಹೂಂ ಹೌದು." {{gap}}"ಅವರ ಖರ್ಚಿಗೆ?---" {{gap}}ಅಲ್ಲೇ ನಿಂತಿದ್ದ ರಾಜಾರಾವ್ ಹೇಳಿದರು: {{gap}}"ಹೊರಗೆ ನಿಮ್ಮವರು ಕೆಲವರಿದ್ದಾರೆ. ಎಲ್ಲಾ ನೋಡಿಕೊಳ್ತಾರೆ. ಆ ಯೋಚನೆ ಮಾಡ್ಬೇಡಿ." {{gap}}ಅಷ್ಟರಲ್ಲಿ ಪೋಲಿಸರ ಸ್ವರ ಕೇಳಿಸಿತು: {{gap}}"ಮುಂದೆ ನಡೀರಿ!" {{gap}}ಇವತ್ತು ಇನ್ನುಳಿದ ಮೂವತ್ತೆಂಟು ಜನ ಬೀದಿಯಲ್ಲಿ ನಡೆಯಬೇಕಾದುದಿಲ್ಲ. ಈ ನ್ಯಾಯಸ್ಥಾನದ ಕೊನೆಯ ದರ್ಶನದ ಬಳಿಕ ಈಗ ಅವರಿಗೆ ಮೋಟಾರು ವಾಹನವಿದೆ. {{gap}}ಜನ ಹತ್ತಿರ ಹತ್ತಿರಕ್ಕೆ ಬಂದರು. ಇವರು ರೈತರಲ್ಲ. ಕಯ್ಯೂರು ಬಲು ದೂರ<noinclude></noinclude> 3v0xmcxqbe6hprx26ngxa296e3mkzup ಪುಟ:Chirasmarane-Niranjana.pdf/೨೬೧ 104 13080 324246 63843 2026-06-03T11:01:11Z Shreesha Sharma 7840 /* Proofread */ 324246 proofread-page text/x-wiki <noinclude><pagequality level="3" user="Shreesha Sharma" /></noinclude>{{center|೯}} {{gap}}ಅಪ್ಪುವಿಗೆ ಒಂದು ರಾತ್ರೆ ವಿಚಿತ್ರವಾದ ಕನಸು ಬಿತ್ತು: ಕ್ರಾಂತಿಕಾರರ ಪಡೆ ಸೆರೆಮನೆಯ ಪ್ರಾಕಾರಗಳನ್ನು ಭೇದಿಸಿ ಒಳಗಿದ್ದವರ ಬೇಡಿಗಳನ್ನು ಕಳಚಿದ ಹಾಗೆ. ದೇಶದ ಉದ್ದಗಲಕ್ಕು ಬಂಧ ವಿಮೋಚನೆಯ ಜನಸೇನೆ ಜೈತ್ರಯಾತ್ರೆ ಮಾಡುತ್ತ, ಅಂಗ್ಲ ಅಧಿಕಾರಿಗಳನ್ನೂ ಅವರಿಗೆ ಅತ್ಮವನ್ನು ಮಾರಿದ್ದ ದೇಶೀಯ ಚಾಕರರನ್ನೂ ಅಳರಸರು-ಜಮೀನ್ದಾರರು-ಬಂಡವಾಳಗಾರರನ್ನೂ ಬಂಧಿಸಿದ ಹಾಗೆ.... {{gap}}ಕನಸನ್ನು ಚಿರುಕಂಡನಿಗೆ ಬಾಗಿಲ ಸರಳುಗಳೆಡೆಯಿಂದ ವಿವರಿಸುತ್ತ ಅಪ್ಪು ಹೇಳಿದ: {{gap}}"ಹಾಗೆ ಬಂಧಿಸಿ ಸೆರೆಹಿಡಿದವರಲ್ಲಿ ನಂಬಿಯಾರ್ ಇದ್ದ ಕಣೋ. ಆತ ಗೋಳಾಡ್ತಾ,'ಅಪ್ಪು, ರಾತ್ರಿ ಶಾಲೆ ನಡೆಸೋದಕ್ಕೆ ನಾನು ಸಮ್ಮತಿ ಕೊಟ್ಟಿರಲಿಲ್ವ? ನನ್ನನ್ನು ಬಿಡಿಸಪ್ಪ'ಅನ್ತಿದ್ದ. ಆದರೆ ನಾನು,ನೀನು, ಕುಂಞಂಬು,ಅಬೂಬಕರ್ ನಾಲ್ಕು ಜನ ಭುಜದ ಮೇಲೆ ಬಂದೂಕ ಏರಿಸಿ ಕೈ ಕೈ ಹಿಡಿದು ಹಾಡ್ತಾ ನಗ್ತಾ ಮುಂದೆ ಹೋದೆವು. ಕಣ್ಣ ಎಲ್ಲರಿಗಿಂತ ಮುಂದೆ, ಸ್ವರ ಕೇಳಿಸದಷ್ಟು ದೂರ, ಬಾವುಟ ಹಿಡಿದುಕೊಂಡಿದ್ದ. ಮಾಸ್ತರೂ ಪಂಡಿತರೂ ನಮಗಿಂತ ಬಹಳ ಹಿಂದಿದ್ರು.ಪಂಡಿತರು ಮೀಸೆ ಬಿಟ್ಟಿದ್ರು ಕಣೋ...ಮಾಸ್ತರು,'ಓಡಬೇಡ್ರೋ...ನಿಧಾನವಾಗಿ ಹೋಗ್ರೋ' ಅಂತ ಕೂಗಿ ಹೇಳ್ತಿದ್ರು...ಆದರೆ ಅಷ್ಟರಲ್ಲೆ ಎಚ್ಚರವಾಯ್ತು!" {{gap}}ಸ್ವಾರಸ್ಯವಾಗಿದ್ದ ಆ ವಿವರಣೆಯನ್ನು ಚಿರುಕಂಡ ಆಸಕ್ತಿಯಿಂದ ಕೇಳಿ,"ಕನಸು ಅನ್ನೋದು ಯಾವಾಗ್ಲೂ ಮನಸ್ಸಿನೊಳಗಿರೋ ಯಾವುದೋ ಆಸೆಯ ಇನ್ನೊಂದು ರೂಪ"ಎಂದ. {{gap}}ಅಲ್ಲಿಂದ ಇನ್ನೊಂದು ಗೋಡೆಯಾಚೆಗೆ ಕುಂಞಂಬುವಿಗೆ ಆ ವಿವರ ಹೋಯಿತು. ಆತ ಅಬೂಬಕರ್ಗೆ ಅದನ್ನು ತಿಳಿಸಿದ,ಅದು ಬರೇ ಕನಸಿನ ವಿವರಣೆಯಾದರೂ ಎಲ್ಲರೂ ಉಲ್ಲಾಸಗೊಂಡರು. {{gap}}ಅಬೂಬಕರ್ ಹೇಳಿದ: {{gap}}"ನಾವು ನಾಲ್ಕು ಜನ ಇರದೇ ಹೋಗ್ಬಹುದು.ಆದರೆ ಒಂದು ದಿವಸ ಆ ರೀತಿ ಆಗೋದು, ನಂಬಿಯಾರಿಗೆ ಆ ಸ್ಥಿತಿ ಒದಗೋದೂ ಖಂಡಿತ." {{gap}}ಕುಂಞಂಬು, ಅಬೂಬಕರ್ನ ಮಾತನ್ನು ಚಿರುಕಂಡನಿಗೆ ದಾಟಿಸಿದ. ಆತ ಅದನ್ನು ಅಪ್ಪುವಿಗೆ ಮುಟ್ಟಿಸಿದ. {{gap}}ಹೀಗೆ ಸರಪಣಿ ನೆಯ್ದು ಆ ನಾಲ್ವರು ಮಾತುಕತೆಯಲ್ಲಿ ನಿರತರಾದರು.<noinclude></noinclude> 1psyqmiaw61v2enc8udwelfjp5a7g5w 324252 324246 2026-06-03T11:07:54Z Shreelatha.Halemane 7642 /* Validated */ 324252 proofread-page text/x-wiki <noinclude><pagequality level="4" user="Shreelatha.Halemane" /></noinclude>{{center|೯}} {{gap}}ಅಪ್ಪುವಿಗೆ ಒಂದು ರಾತ್ರೆ ವಿಚಿತ್ರವಾದ ಕನಸು ಬಿತ್ತು: ಕ್ರಾಂತಿಕಾರರ ಪಡೆ ಸೆರೆಮನೆಯ ಪ್ರಾಕಾರಗಳನ್ನು ಭೇದಿಸಿ ಒಳಗಿದ್ದವರ ಬೇಡಿಗಳನ್ನು ಕಳಚಿದ ಹಾಗೆ. ದೇಶದ ಉದ್ದಗಲಕ್ಕು ಬಂಧ ವಿಮೋಚನೆಯ ಜನಸೇನೆ ಜೈತ್ರಯಾತ್ರೆ ಮಾಡುತ್ತ, ಅಂಗ್ಲ ಅಧಿಕಾರಿಗಳನ್ನೂ ಅವರಿಗೆ ಅತ್ಮವನ್ನು ಮಾರಿದ್ದ ದೇಶೀಯ ಚಾಕರರನ್ನೂ ಅಳರಸರು-ಜಮೀನ್ದಾರರು-ಬಂಡವಾಳಗಾರರನ್ನೂ ಬಂಧಿಸಿದ ಹಾಗೆ.... {{gap}}ಕನಸನ್ನು ಚಿರುಕಂಡನಿಗೆ ಬಾಗಿಲ ಸರಳುಗಳೆಡೆಯಿಂದ ವಿವರಿಸುತ್ತ ಅಪ್ಪು ಹೇಳಿದ: {{gap}}"ಹಾಗೆ ಬಂಧಿಸಿ ಸೆರೆಹಿಡಿದವರಲ್ಲಿ ನಂಬಿಯಾರ್ ಇದ್ದ ಕಣೋ. ಆತ ಗೋಳಾಡ್ತಾ,'ಅಪ್ಪು, ರಾತ್ರಿ ಶಾಲೆ ನಡೆಸೋದಕ್ಕೆ ನಾನು ಸಮ್ಮತಿ ಕೊಟ್ಟಿರಲಿಲ್ವ? ನನ್ನನ್ನು ಬಿಡಿಸಪ್ಪ'ಅನ್ತಿದ್ದ. ಆದರೆ ನಾನು,ನೀನು, ಕುಂಞಂಬು,ಅಬೂಬಕರ್ ನಾಲ್ಕು ಜನ ಭುಜದ ಮೇಲೆ ಬಂದೂಕ ಏರಿಸಿ ಕೈ ಕೈ ಹಿಡಿದು ಹಾಡ್ತಾ ನಗ್ತಾ ಮುಂದೆ ಹೋದೆವು. ಕಣ್ಣ ಎಲ್ಲರಿಗಿಂತ ಮುಂದೆ, ಸ್ವರ ಕೇಳಿಸದಷ್ಟು ದೂರ, ಬಾವುಟ ಹಿಡಿದುಕೊಂಡಿದ್ದ. ಮಾಸ್ತರೂ ಪಂಡಿತರೂ ನಮಗಿಂತ ಬಹಳ ಹಿಂದಿದ್ರು.ಪಂಡಿತರು ಮೀಸೆ ಬಿಟ್ಟಿದ್ರು ಕಣೋ...ಮಾಸ್ತರು,'ಓಡಬೇಡ್ರೋ...ನಿಧಾನವಾಗಿ ಹೋಗ್ರೋ' ಅಂತ ಕೂಗಿ ಹೇಳ್ತಿದ್ರು...ಆದರೆ ಅಷ್ಟರಲ್ಲೆ ಎಚ್ಚರವಾಯ್ತು!" {{gap}}ಸ್ವಾರಸ್ಯವಾಗಿದ್ದ ಆ ವಿವರಣೆಯನ್ನು ಚಿರುಕಂಡ ಆಸಕ್ತಿಯಿಂದ ಕೇಳಿ,"ಕನಸು ಅನ್ನೋದು ಯಾವಾಗ್ಲೂ ಮನಸ್ಸಿನೊಳಗಿರೋ ಯಾವುದೋ ಆಸೆಯ ಇನ್ನೊಂದು ರೂಪ"ಎಂದ. {{gap}}ಅಲ್ಲಿಂದ ಇನ್ನೊಂದು ಗೋಡೆಯಾಚೆಗೆ ಕುಂಞಂಬುವಿಗೆ ಆ ವಿವರ ಹೋಯಿತು. ಆತ ಅಬೂಬಕರ್ಗೆ ಅದನ್ನು ತಿಳಿಸಿದ,ಅದು ಬರೇ ಕನಸಿನ ವಿವರಣೆಯಾದರೂ ಎಲ್ಲರೂ ಉಲ್ಲಾಸಗೊಂಡರು. {{gap}}ಅಬೂಬಕರ್ ಹೇಳಿದ: {{gap}}"ನಾವು ನಾಲ್ಕು ಜನ ಇರದೇ ಹೋಗ್ಬಹುದು.ಆದರೆ ಒಂದು ದಿವಸ ಆ ರೀತಿ ಆಗೋದು, ನಂಬಿಯಾರಿಗೆ ಆ ಸ್ಥಿತಿ ಒದಗೋದೂ ಖಂಡಿತ." {{gap}}ಕುಂಞಂಬು, ಅಬೂಬಕರ್ನ ಮಾತನ್ನು ಚಿರುಕಂಡನಿಗೆ ದಾಟಿಸಿದ. ಆತ ಅದನ್ನು ಅಪ್ಪುವಿಗೆ ಮುಟ್ಟಿಸಿದ. {{gap}}ಹೀಗೆ ಸರಪಣಿ ನೆಯ್ದು ಆ ನಾಲ್ವರು ಮಾತುಕತೆಯಲ್ಲಿ ನಿರತರಾದರು.<noinclude></noinclude> l83pdbv6pg5dufvxqrlt6hiiy62lm07 ಪುಟ:Chirasmarane-Niranjana.pdf/೨೬೨ 104 13081 324245 64574 2026-06-03T10:58:51Z Shreesha Sharma 7840 /* Proofread */ 324245 proofread-page text/x-wiki <noinclude><pagequality level="3" user="Shreesha Sharma" /></noinclude>{{rh|left=ಚಿರಸ್ಮರಣೆ|center=|right=೨೬೩}} {{gap}}ಆದರೆ,ಕನಸಿಗಿಂತ ದೂರವಾಗಿತ್ತು ವಾಸ್ತವತೆ.ಮಳೆ ನಿಂತಿತು.ಜನ ಪ್ರವಾಹ ಇಳಿದುಹೋಯಿತು.ಒಗ್ಗಟ್ಟಿಲ್ಲದ ನಾಯಕರಿಲ್ಲದ ಹೋರಾಟವನ್ನು ಸರಕಾರ ಮುರಿದಿಕ್ಕಿತು.... . {{gap}}ಕಯ್ಯೂರಿನ ನಾಲ್ವರನ್ನು ಗಲ್ಲಿಗೇರಿಸಲು ಅಳುವವರು ದಿನ ಗೊತ್ತು ಮಾಡಿದರು.ಅದು ಮತ್ತೆ ಮುಂದಕ್ಕೆ ಹೋಯಿತು.ದಿನವನ್ನು ಮೊದಲೇ ಜಾಹೀರು ಮಾಡುವುದು ಮೂರ್ಖತನವಾದೀತೆಂದು, ಕಣ್ಣಾನೂರಿನ ಜನ ಕೆರಳಿ ಪರಿಸ್ಥಿತಿ ವಿಕೋಪಕ್ಕೆ ಹೋದೀತೆಂದು, ಸರಕಾರ ಅಳುಕಿತು. {{gap}}ಅಪ್ಪು ರೇಗಿ ನುಡಿದ: {{gap}}"ಎಂಥ ಹಿಂಸೆ!ಒಂದೇ ಸಾರಿ ಮುಗಿಸಬಾರದೆ?" {{gap}}ಪೆಟ್ಟು ತಿಂದು ಮಲಗಿದ ಹೆಬ್ಬಾವಿನ ಹಾಗೆ ಮನಸ್ಸು ರೋಸಿದ್ದ ಆ ಸ್ಥಿತಿಯಲ್ಲೂ ದಿನವೂ ಮಾಸ್ತರು ಯಾವನಾದರೂ ಕಾವಲುಗಾರನನ್ನು ಆ ನಾಲ್ವರೆಡೆಗೆ ಕಳುಹಿಸಿ ಸುಖದುಃಖ ವಿಚಾರಿಸುತ್ತಿದ್ದರು. {{gap}}ಕುಂಞಂಬುವಿನ ದೇಹಪ್ರಕೃತಿ ಅಷ್ಟೋಂದು ಚೆನ್ನಾಗಿರಲಿಲ್ಲ.ಆತ ಏಳುವುದು ತಡವಾದರೆ, ಎಡಬಲಗಳಿಂದ ಅಬೂಬಕರ್ ಮತ್ತು ಚಿರುಕಂಡ ಕಾತರಗೊಂಡು {{gap}}"ಮೈಚೆನ್ನಾಗಿಲ್ವ ಕುಂಞಂಬು?" ಎಂದು ಕೇಳುತ್ತಿದ್ದರು. ಚಿರುಕಂಡ ನಿದ್ದೆಯಲ್ಲಿ ನರಳಿದರೆ, ಅಪ್ಪು ಎಚ್ಚರಗೊಂಡು ಕರೆದು ಕೇಳುತ್ತಿದ್ದ: {{gap}}"ಚಿರುಕಂಡ.... ಯಾಕೆ ಹಾಗ್ಮಾಡ್ತೀಯಾ?" {{gap}}ಒಬ್ಬರಿಂದ್ದೊಬ್ಬರನ್ನು ಪ್ರತ್ಯೇಕಿಸಿದ ಗೋಡೆಗಳಿದ್ದರು ಒಬ್ಬರು ಮುಖ ಇನ್ನೊಬ್ಬರಿಗೆ ಕಾಣಿಸದಿದ್ದರೂ, ಸದಾ ಕಾಲವೂ ಅನ್ಯೋನ್ಯ ನೋಡುತ್ತ ಮಾತನಾಡುತ್ತ ಜತೆಯಲ್ಲೆ ಇರುವೆವೆನೋ ಎನ್ನುವಹಾಗೆ, ಅವರು ದಿನ ಕಳೆದರು. ಗಲ್ಲಿಗೇರಿಸುವ ದಿನವನ್ನು ಕೊನೆಯವರೆಗೂ ಗೋಪ್ಯವಾಗಿಡುವರೆಂದೂ ತಿಂಗಳ ಕೊನೆಯಲ್ಲಿ ಮರಣದಂಡನೆ ಜಾರಿಯಾಗಬಹುದೆಂದೂ ಖಚಿತ ವಾರ್ತೆ ಅಧಿಕಾರಗಳ ಕಣ್ಣು ತಪ್ಪಿಸಿ ನುಸುಳಿಕೊಂಡು ಸೆರೆಮನೆಯೊಳಗೆ ಬಂತು. ಅಪ್ಪು ಮತ್ತು ಆ ಮೂವರು ಸಂಗಾತಿಗಳ ಸಂಬಂಧಿಕರನ್ನು ಕೊನೆಯ ಭೇಟಿಗೆ ಕರೆಸುವ ವಿಷಯದಲ್ಲಿ ವಿಳಂಬವಾಗಬಾರದೆಂದು ಮಾಸ್ತರು ಕಾರ್ಯೋನ್ಮುಖರಾದರು. {{gap}}....ಆ ನಾಲ್ವರು ಕಯ್ಯೂರು ಯೋಧರ ಸಂಬಂಧಿಕರು ಕಣ್ಣಾನೂರು ಸೇರಿ ಭೇಟಿಗೆಂದು ಬಂದುದು ಒಂದು ಮಧ್ಯಾಹ್ನ. {{gap}}ಸೆಕೆಯ ಕಾರಣದಿಂದ ಅಪ್ಪುವಿಗೆ ಮಂಪರುಬಂದಿತ್ತು. ಕಣ್ಣುಗಳನ್ನು ಅರೆತೆರೆದು<noinclude></noinclude> j3tpc5q97ofrkwesvey5vgpme0kfj10 324253 324245 2026-06-03T11:08:07Z Shreelatha.Halemane 7642 /* Validated */ 324253 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|left=ಚಿರಸ್ಮರಣೆ|center=|right=೨೬೩}} {{gap}}ಆದರೆ,ಕನಸಿಗಿಂತ ದೂರವಾಗಿತ್ತು ವಾಸ್ತವತೆ.ಮಳೆ ನಿಂತಿತು.ಜನ ಪ್ರವಾಹ ಇಳಿದುಹೋಯಿತು.ಒಗ್ಗಟ್ಟಿಲ್ಲದ ನಾಯಕರಿಲ್ಲದ ಹೋರಾಟವನ್ನು ಸರಕಾರ ಮುರಿದಿಕ್ಕಿತು.... . {{gap}}ಕಯ್ಯೂರಿನ ನಾಲ್ವರನ್ನು ಗಲ್ಲಿಗೇರಿಸಲು ಅಳುವವರು ದಿನ ಗೊತ್ತು ಮಾಡಿದರು.ಅದು ಮತ್ತೆ ಮುಂದಕ್ಕೆ ಹೋಯಿತು.ದಿನವನ್ನು ಮೊದಲೇ ಜಾಹೀರು ಮಾಡುವುದು ಮೂರ್ಖತನವಾದೀತೆಂದು, ಕಣ್ಣಾನೂರಿನ ಜನ ಕೆರಳಿ ಪರಿಸ್ಥಿತಿ ವಿಕೋಪಕ್ಕೆ ಹೋದೀತೆಂದು, ಸರಕಾರ ಅಳುಕಿತು. {{gap}}ಅಪ್ಪು ರೇಗಿ ನುಡಿದ: {{gap}}"ಎಂಥ ಹಿಂಸೆ!ಒಂದೇ ಸಾರಿ ಮುಗಿಸಬಾರದೆ?" {{gap}}ಪೆಟ್ಟು ತಿಂದು ಮಲಗಿದ ಹೆಬ್ಬಾವಿನ ಹಾಗೆ ಮನಸ್ಸು ರೋಸಿದ್ದ ಆ ಸ್ಥಿತಿಯಲ್ಲೂ ದಿನವೂ ಮಾಸ್ತರು ಯಾವನಾದರೂ ಕಾವಲುಗಾರನನ್ನು ಆ ನಾಲ್ವರೆಡೆಗೆ ಕಳುಹಿಸಿ ಸುಖದುಃಖ ವಿಚಾರಿಸುತ್ತಿದ್ದರು. {{gap}}ಕುಂಞಂಬುವಿನ ದೇಹಪ್ರಕೃತಿ ಅಷ್ಟೋಂದು ಚೆನ್ನಾಗಿರಲಿಲ್ಲ.ಆತ ಏಳುವುದು ತಡವಾದರೆ, ಎಡಬಲಗಳಿಂದ ಅಬೂಬಕರ್ ಮತ್ತು ಚಿರುಕಂಡ ಕಾತರಗೊಂಡು {{gap}}"ಮೈಚೆನ್ನಾಗಿಲ್ವ ಕುಂಞಂಬು?" ಎಂದು ಕೇಳುತ್ತಿದ್ದರು. ಚಿರುಕಂಡ ನಿದ್ದೆಯಲ್ಲಿ ನರಳಿದರೆ, ಅಪ್ಪು ಎಚ್ಚರಗೊಂಡು ಕರೆದು ಕೇಳುತ್ತಿದ್ದ: {{gap}}"ಚಿರುಕಂಡ.... ಯಾಕೆ ಹಾಗ್ಮಾಡ್ತೀಯಾ?" {{gap}}ಒಬ್ಬರಿಂದ್ದೊಬ್ಬರನ್ನು ಪ್ರತ್ಯೇಕಿಸಿದ ಗೋಡೆಗಳಿದ್ದರು ಒಬ್ಬರು ಮುಖ ಇನ್ನೊಬ್ಬರಿಗೆ ಕಾಣಿಸದಿದ್ದರೂ, ಸದಾ ಕಾಲವೂ ಅನ್ಯೋನ್ಯ ನೋಡುತ್ತ ಮಾತನಾಡುತ್ತ ಜತೆಯಲ್ಲೆ ಇರುವೆವೆನೋ ಎನ್ನುವಹಾಗೆ, ಅವರು ದಿನ ಕಳೆದರು. ಗಲ್ಲಿಗೇರಿಸುವ ದಿನವನ್ನು ಕೊನೆಯವರೆಗೂ ಗೋಪ್ಯವಾಗಿಡುವರೆಂದೂ ತಿಂಗಳ ಕೊನೆಯಲ್ಲಿ ಮರಣದಂಡನೆ ಜಾರಿಯಾಗಬಹುದೆಂದೂ ಖಚಿತ ವಾರ್ತೆ ಅಧಿಕಾರಗಳ ಕಣ್ಣು ತಪ್ಪಿಸಿ ನುಸುಳಿಕೊಂಡು ಸೆರೆಮನೆಯೊಳಗೆ ಬಂತು. ಅಪ್ಪು ಮತ್ತು ಆ ಮೂವರು ಸಂಗಾತಿಗಳ ಸಂಬಂಧಿಕರನ್ನು ಕೊನೆಯ ಭೇಟಿಗೆ ಕರೆಸುವ ವಿಷಯದಲ್ಲಿ ವಿಳಂಬವಾಗಬಾರದೆಂದು ಮಾಸ್ತರು ಕಾರ್ಯೋನ್ಮುಖರಾದರು. {{gap}}....ಆ ನಾಲ್ವರು ಕಯ್ಯೂರು ಯೋಧರ ಸಂಬಂಧಿಕರು ಕಣ್ಣಾನೂರು ಸೇರಿ ಭೇಟಿಗೆಂದು ಬಂದುದು ಒಂದು ಮಧ್ಯಾಹ್ನ. {{gap}}ಸೆಕೆಯ ಕಾರಣದಿಂದ ಅಪ್ಪುವಿಗೆ ಮಂಪರುಬಂದಿತ್ತು. ಕಣ್ಣುಗಳನ್ನು ಅರೆತೆರೆದು<noinclude></noinclude> p7vc5hgkc0pye9t2igtb7gwcuy0u847 ಪುಟ:VISHAALAAKSHI - Niranjana.pdf/೫೬ 104 37892 324108 324067 2026-06-02T18:06:18Z Pragathi. BH 7585 /* Validated */ 324108 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ವಿಶಾಲಾಕ್ಷಿ|left=೫೪|right=}} {{gap}}(ರಷ್ಯಾದೇಶವೇನೂ ದೂರವಲ್ಲ'-ಇಲ್ಲಿಯೇ ಸಮೀಪ'...ಆ ಪದಗಳನ್ನು ವಿಶಾಲಾಕ್ಷಿ ತುಸು ಗಟ್ಟಿಯಾಗಿ ಉಚ್ಚರಿಸಿದಳು. {{gap}}ಸುಳ್ಳು, ಕಾರ್ಯ ಸಾಧಿಸಿತ್ತು. ಹೆತ್ತವಳ ವಿರೋಧ ಕರಗತೊಡಗಿತ್ತು. ಆ ಮನೋಸ್ಥಿತಿಗೆ ಸಂಕೇತವಾಗಿ ನಾಗಮ್ಮ ಅಳತೊಡಗಿದರು. {{gap}}ಅಳುತ್ತ, ಸೆರಗಿನ ಅಂಚಿನಿಂದ ಕಣ್ಣು ಗಳನ್ನು ಒತ್ತು, ಪುನಃ ಅಳುತ್ತ, ಅವರೆಂದರು: {{gap}}“ಆರು ತಿಂಗಳಂತೆ. ' ಹೆತ್ತವರ ಹೊಟ್ಟೆ ಉರಿಸೋದಕ್ಕೆ ಮಕ್ಕಳು ಇರೋದು...ರಾಜೂಗೆ ಏನೂ ಬುದ್ದಿ ಇಲ್ಲ....ಮನೆಯ ಯೋಚನೆ ಸ್ವಲ್ಪವಾದರೂ ಬೇಡವೆ? ...ನಮಗೆ ಯಾರು ದಿಕ್ಕಿದಾರೆ ಇಲ್ಲಿ ? ಊರಿಗೆ ಬರೋದರ ಬದಲು ಪ್ರವಾಸ ಹೋಗ್ತಾನಂತೆ...ಅಯ್ಯೋ !” {{gap}}ತಾಯಿಯ ಸಂಕಟ ಕಂಡು ವಿಶಾಲಾಕ್ಷಿಯೂ ಒಂದು ಕ್ಷಣ ವಿವಂಚನೆಗೆ ಒಳಗಾದಳು, ಅಣ್ಣ, ತಮ್ಮೆಲ್ಲರ ಜತೆಯಲ್ಲೇ ಇಲ್ಲೇ ಇದ್ದರೆ ಎಷ್ಟು ಚೆನ್ನು ! {{gap}}ಆದರೆ ಮರುಕ್ಷಣವೇ, ಒಡಹುಟ್ಟಿದವನು ಪ್ರಖ್ಯಾತ ಎಂಜಿನಿಯರಾಗುವ ಚಿತ್ರ ತಂಗಿಯ ಕಣ್ಣೆದುರು ಕಟ್ಟಿತು, ಪತ್ರಿಕೆಯಲ್ಲಿ ಫೋಟೋ, ಬೀಳ್ಕೊಡುಗೆಯ ಸಮಾರಂಭ, ವಿಮಾನ ಮಾರ್ಗವಾಗಿ ರಷ್ಯಾದೇಶಕ್ಕೆ, ಮುಂದೆ ಖಾಯಂ ಉದ್ಯೋಗ ಭಡ್ತಿ, ದೊಡ್ಡ ಹುದ್ದೆ, ಕೈತುಂಬ ಸಂಬಳ, ಯಾರ ಹಂಗೂ ಇಲ್ಲದ ಬದುಕು, ಬಡವರು ಎಂದು ತಮ್ಮನ್ನು ದೂರವಿಟ್ಟವರೆಲ್ಲ ಆಗ ಹೊಟ್ಟೆ ಯುರಿಯಿಂದ ಕರುಬುವರು ತಮ್ಮ ಪಾಲಿಗೆ ವಿದೇಶ ವ್ಯಾಸಂಗ ಮರೀಚಿಕೆಯೇ ಸರಿ-ಎಂದು ಹಿಂದೆ ನಂಬಿದ್ದುದು ಸುಳ್ಳಾಗುತ್ತದೆನ್ನುವ ಸಂತೋಷ.... {{gap}}“ಇಷ್ಟಕ್ಕೆಲ್ಲಾ ಅಳಬೇಕೆ ಅಮ್ಮ?” {{gap}}“ಸುಮ್ಮನಿರೇ, ನಿನಗೆ ಒಂದೂ ಗೊತ್ತಾಗೋದಿಲ್ಲ.” {{gap}}'ತಾಯಿಯ ದೃಷ್ಟಿಯಲ್ಲಿ ತಾನು ಯಾವಾಗ್ಲೂ ಎಳೆಯ ಹುಡುಗಿಯೇ. ಬಯಕೆಯ ಕಲ್ಪನೆಯನ್ನು ನಿಜವೆಂದು ಸಾರುವುದೇ ಪರಿಣಾಮಕಾರಿ. {{gap}}“ಆಮೇಲೆ ಅಣ್ಣನಿಗೆ ಹೆಚ್ಚು ಸಂಬಳ ಸಿಗುತ್ತಮ್ಮ.” {{gap}}“ಹೆಚ್ಚು ಸಂಬಳವಂತೆ. ಒಪ್ಪೊತ್ತಿನ ಊಟ ಸಿಕ್ಕರೆ ಸಾಲದೇನೊ ?” {{gap}}“ದೊಡ್ಡ ಕೆಲಸ...” “ಈ ಊರಲ್ಲಿ ಕೊಡ್ತಾರೇನು ?”<noinclude></noinclude> gykrd92omzsmt59mcvciw2divx04m4q ಪುಟ:VISHAALAAKSHI - Niranjana.pdf/೫೭ 104 37893 324107 324068 2026-06-02T18:06:02Z Pragathi. BH 7585 /* Validated */ 324107 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=ಪ್ರೇಮಕ್ಕೆ ಕಣ್ಣಿಲ್ಲ |left=|right=೫೫}} {{gap}}''ಭದ್ರಾವತಿಯಲ್ಲೂ ಉಕ್ಕಿನ ಕಾರ್ಖಾನೆ ಇದೆ, ಅಲ್ಲಿಗೆ ವರ್ಗಮಾಡಿಸ್ಕೋ ಬಹುದು, ಅದು ಬೇಡವೆಂದಾದರೆ, ಈ ಊರಲ್ಲೆ .. {{gap}}“ಇಲ್ಲದ ಆಸೆ ತೋರಿಸ್ತೀಯಾ ನೀನು.” {{gap}}“ಸುಳ್ಳಲ್ಲವಮ್ಮ....” {{gap}}ನಾಗಮ್ಮ ಕಣ್ಣೊರಸಿಕೊಂಡು, ಬೇಸರದ ಮುಖಮುದ್ರೆಯೊಡನೆ ಸುಮ್ಮನೆ ಕುಳಿತರು. {{gap}}ವಿಶಾಲಾಕ್ಷಿ ಎದ್ದು ಸೀರೆ ಬದಲಾಯಿಸಿ ಬಂದಳು. ಸೋದರರ ಆಗಮನವಾಯಿತು. {{gap}}`ರಾತ್ರೆಯ ಅಡುಗೆಯ ನೆನಪಾಗಿ, ನಿಟ್ಟುಸಿರು ಬಿಟ್ಟು, ನಾಗಮ್ಮ ಎದ್ದರು. ಗಂಡ ತೀರಿಕೊಂಡ ಬಳಿಕ ಒಂದೇ ಹೊತ್ತು ಉಣ್ಣ ತೊಡಗಿದ್ದ ಅವರು ಕೇಳಿದರು: {{gap}}“ಅಕ್ಕಿ ಎಷ್ಟು ಹಾಕ್ಲಿ ?” {{gap}}“ಯಾವಾಗಲೂ ಎಷ್ಟು ಹಾಕ್ತಿಯೋ ಅಷ್ಟೇ ಹಾಕು.” {{gap}}“ಸಂಜೆ ಹುಡುಗರಿಗೆ ಉಪ್ಪಿಟ್ಟು ಮಾಡ್ಕೊಟ್ಟೆ, ನಿನ್ನ ಪಾಲು ಇರಿಸಿದೀನಿ ಬಾ.” {{gap}}“ನೀನು ತಗೊಂಡೆಯಾ, ಅಮ್ಮ?” . {{gap}}“ಹೂಂ” {{gap}}..ಒಲೆಯ ಮೇಲೆ ಅನ್ನದ ತಪ್ಪಲೆ ಇತ್ತು, ನೀರು ಕಾದಿದೆಯೇ ಎಂದು ನೋಡಿ, ಬೆಂಕಿಯನ್ನು ಸರಿಪಡಿಸಿ, ನಾಗಮ್ಮ ಡಬ್ಬದ ಮುಚ್ಚಳ ತೆಗೆದು ಅಕ್ಕಿ ಅಳೆದರು, ವಿಶಾಲಾಕ್ಷಿ ತಿಂಡಿಯ ತಟ್ಟೆಯನ್ನೆತ್ತಿಕೊಂಡಳು: {{gap}}ಉಪ್ಪಿಟ್ಟು ಮೆಲ್ಲುತ್ತ, ಒಲಿಸಿಕೊಳ್ಳುವ ಧ್ವನಿಯಲ್ಲಿ ವಿಶಾಲಾಕ್ಷಿ ಕೇಳಿದಳು: “ರಾಜೂಗೆ ಏನೂಂತ ತಾರು ಕೊಡಲೇ ? {{gap}}“ತಾರು ಯಾತಕ್ಕೆ ?” {{gap}}“ಹೌದು ಮತ್ತೆ ಒಂದು ವಾರದೊಳಗೆ ಉತ್ತರ ಕೊಡಬೇಕೂಂತ ಹೇಳಿದಾರಂತಲ್ಲಾ.”, {{gap}}“ಉತ್ತರ ?” {{gap}}“ಹೂನಮ್ಮಾ, ಅದೇ-ಆರು ತಿಂಗಳು ಹೋಗಿಬರೋ ವಿಷಯ.” {{gap}}“ತಾರು ಬೇಡ, ಕಾಗದ ಬರಿ, ಮೊದಲು ಇಲ್ಲಿಗೆ ಬಂದುಹೋಗಲಿ.”<noinclude></noinclude> 6rsdmqawgygrpy1ntk4cct032wuvrda ಪುಟ:VISHAALAAKSHI - Niranjana.pdf/೫೮ 104 37894 324130 100053 2026-06-03T02:14:11Z Shreelatha.Halemane 7642 /* Proofread */ 324130 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|left=|center=ವಿಶಾಲಾಕ್ಷಿ |right=}} {{gap}}ತಾಯಿಯ ಮನಸ್ಸನ್ನು ವ್ಯರ್ಥವಾದಿಸಿ ನೋಯಿಸುವುದು ಸರಿಯಲ್ಲವೆಂದು, ಮಗಳು ಸುಮ್ಮನಾದಳು........ {{gap}}ವಿಶಾಲಾಕ್ಷಿಯನ್ನು ನೋಡಿ ಲೇಖನದ ಪ್ರತಿಗಳು, 'ನಾವಿನ್ನೂ ಇಲ್ಲೇ ಇದೇವೆ' ಎಂದು ಮೇಜಿನ ಮೇಲಿಂದ ದೂರುಕೊಟ್ಟುವು, ಅವುಗಳನ್ನು ಆಕೆ ಬಿಟ್ಟು ಹೋಗಿದ್ದುದೇ ಚೆಲ್ಲಾಪಿಲ್ಲಿಯಾಗಿ ಈಗ ನಾವು ಹುಡುಗರ ಕೈತಗಲಿ, .. ಮತ್ತಷ್ಟು ಅಸ್ತವ್ಯಸ್ತವಾಗಿದ್ದುವು, ವಿಶಾಲಾಕ್ಷಿ ಅವನ್ನೆಲ್ಲ ಎತ್ತಿ ಒತ್ತಟ್ಟಿಗೆ ಇರಿಸುತ್ತಿದ್ದಂತೆ, ಇನ್ನೊಂದು ಮೂಲೆಯಲ್ಲಿ ಓದಿನಲ್ಲಿ ಮಗ್ನನಾಗಿದ್ದ ಜಯ, ಪುಸ್ತಕದಿಂದ ತಲೆಯೆತ್ತಿ ಕೇಳಿದ: {{gap}}“ಅಕ್ಕಾ, ನೀನು ಬರೆದದ್ದಾ ಅದು ?” | {{gap}}“ಹೂಂ” ಎಂದಳು ಅಕ್ಕ, ಕಿರಿಯ ತಮ್ಮನ ಪ್ರಶ್ನೆಗೆ ಉತ್ತರವಾಗಿ {{gap}}“ಅದು ಕಥೆ ಅಲ್ಲ ಅಲ್ವಾ ?”. {{gap}}“ಅಲ್ಲವಪ್ಪ.” .. - {{gap}}ಅದಕ್ಕೆ ಅರ್ಥವಾಗೋದಿಲ್ಲ....ಕಥೆ ಬರೆಯೋಕೆ ನಿನಗೆ ಬರೋದಿಲ್ಲ, ಅಲ್ವಾ ಅಕ್ಕಾ ?” {{gap}}“ ಹೂಂ.” {{gap}}ಹಿರಿಯವನು ಬೇರೆ ಪ್ರಶ್ನೆ ಕೇಳಿದ: * {{gap}}“ಅಕ್ಕಾ, ಅಣ್ಣ ರಷ್ಯಾಕ್ಕೆ ಹೋಗೋದು ನಿಜವಾ !” {{gap}}“ಅಮ್ಮ ಒಪ್ಪಿದಳಾ ?”. ... {{gap}}“ಒಪ್ಪದೇನು ಮಾಡ್ತಾಳೆ? ನೀನೇನು ಹೇಳ್ತಿಯಾ-ಹೋಗಲಿ ಅಂತಲೊ ? : ಬೇಡ ಅಂತೆಲೊ ?” {{gap}}“ಹೋಗಲಿ-ಧಾರಾಳವಾಗಿ ಹೋಗಲಿ.” [ತುಂಬು ಒಲವಲ್ಲ. ಏಕೋದರರೊಳಗಿನ ಭ್ರಾತೃಮತ್ಸರ.] {{gap}}ಜಯ ಕೇಳಿದ: {{gap}}“ವಿಮಾನದಲ್ಲೇನಕ್ಕೆ ಪ್ರಯಾಣ ?? {{gap}}ಆ ದೇಶಕ್ಕೆ ಜನ ಹೋಗುವುದು ವಿಮಾನ ಮಾರ್ಗವಾಗಿಯೇ, ಹಾಗೆಂದು. ಕಿವಿಗೆ ಬಿದ್ದರೆ ತಾಯಿ ಗಾಬರಿಯಾಗಬಹುದು, ಹೀಗಾಗಿ ವಿಶಾಲಾಕ್ಷಿ ಅಂದಳು :<noinclude></noinclude> i7djfdh8jmlg381oes8tftzlxkq7syb 324131 324130 2026-06-03T02:15:11Z Shreesha Sharma 7840 /* Validated */ 324131 proofread-page text/x-wiki <noinclude><pagequality level="4" user="Shreesha Sharma" /></noinclude>{{rh|left=|center=ವಿಶಾಲಾಕ್ಷಿ |right=}} {{gap}}ತಾಯಿಯ ಮನಸ್ಸನ್ನು ವ್ಯರ್ಥವಾದಿಸಿ ನೋಯಿಸುವುದು ಸರಿಯಲ್ಲವೆಂದು, ಮಗಳು ಸುಮ್ಮನಾದಳು........ {{gap}}ವಿಶಾಲಾಕ್ಷಿಯನ್ನು ನೋಡಿ ಲೇಖನದ ಪ್ರತಿಗಳು, 'ನಾವಿನ್ನೂ ಇಲ್ಲೇ ಇದೇವೆ' ಎಂದು ಮೇಜಿನ ಮೇಲಿಂದ ದೂರುಕೊಟ್ಟುವು, ಅವುಗಳನ್ನು ಆಕೆ ಬಿಟ್ಟು ಹೋಗಿದ್ದುದೇ ಚೆಲ್ಲಾಪಿಲ್ಲಿಯಾಗಿ ಈಗ ನಾವು ಹುಡುಗರ ಕೈತಗಲಿ, .. ಮತ್ತಷ್ಟು ಅಸ್ತವ್ಯಸ್ತವಾಗಿದ್ದುವು, ವಿಶಾಲಾಕ್ಷಿ ಅವನ್ನೆಲ್ಲ ಎತ್ತಿ ಒತ್ತಟ್ಟಿಗೆ ಇರಿಸುತ್ತಿದ್ದಂತೆ, ಇನ್ನೊಂದು ಮೂಲೆಯಲ್ಲಿ ಓದಿನಲ್ಲಿ ಮಗ್ನನಾಗಿದ್ದ ಜಯ, ಪುಸ್ತಕದಿಂದ ತಲೆಯೆತ್ತಿ ಕೇಳಿದ: {{gap}}“ಅಕ್ಕಾ, ನೀನು ಬರೆದದ್ದಾ ಅದು ?” | {{gap}}“ಹೂಂ” ಎಂದಳು ಅಕ್ಕ, ಕಿರಿಯ ತಮ್ಮನ ಪ್ರಶ್ನೆಗೆ ಉತ್ತರವಾಗಿ {{gap}}“ಅದು ಕಥೆ ಅಲ್ಲ ಅಲ್ವಾ ?”. {{gap}}“ಅಲ್ಲವಪ್ಪ.” .. - {{gap}}ಅದಕ್ಕೆ ಅರ್ಥವಾಗೋದಿಲ್ಲ....ಕಥೆ ಬರೆಯೋಕೆ ನಿನಗೆ ಬರೋದಿಲ್ಲ, ಅಲ್ವಾ ಅಕ್ಕಾ ?” {{gap}}“ ಹೂಂ.” {{gap}}ಹಿರಿಯವನು ಬೇರೆ ಪ್ರಶ್ನೆ ಕೇಳಿದ: * {{gap}}“ಅಕ್ಕಾ, ಅಣ್ಣ ರಷ್ಯಾಕ್ಕೆ ಹೋಗೋದು ನಿಜವಾ !” {{gap}}“ಅಮ್ಮ ಒಪ್ಪಿದಳಾ ?”. ... {{gap}}“ಒಪ್ಪದೇನು ಮಾಡ್ತಾಳೆ? ನೀನೇನು ಹೇಳ್ತಿಯಾ-ಹೋಗಲಿ ಅಂತಲೊ ? : ಬೇಡ ಅಂತೆಲೊ ?” {{gap}}“ಹೋಗಲಿ-ಧಾರಾಳವಾಗಿ ಹೋಗಲಿ.” [ತುಂಬು ಒಲವಲ್ಲ. ಏಕೋದರರೊಳಗಿನ ಭ್ರಾತೃಮತ್ಸರ.] {{gap}}ಜಯ ಕೇಳಿದ: {{gap}}“ವಿಮಾನದಲ್ಲೇನಕ್ಕೆ ಪ್ರಯಾಣ ?? {{gap}}ಆ ದೇಶಕ್ಕೆ ಜನ ಹೋಗುವುದು ವಿಮಾನ ಮಾರ್ಗವಾಗಿಯೇ, ಹಾಗೆಂದು. ಕಿವಿಗೆ ಬಿದ್ದರೆ ತಾಯಿ ಗಾಬರಿಯಾಗಬಹುದು, ಹೀಗಾಗಿ ವಿಶಾಲಾಕ್ಷಿ ಅಂದಳು :<noinclude></noinclude> al7w1pmsw986laiqht2f0n790k5hlie ಪುಟ:ಕಥಾ ಸಂಗ್ರಹ - ಭಾಗ ೨.djvu/೧೫ 104 44575 324072 323881 2026-06-02T12:00:09Z Adhya.B 8391 324072 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು|left=|right=5}}</noinclude> ಮಿಗಿಲಾದ ಭಾಗ್ಯವುಳ್ಳವನೆಂಬ ಪ್ರಖ್ಯಾತಿಯನ್ನು ಹೊಂದುವೆನು ಎಂಬುದಾಗಿ ಹೇಳಿ ಸಹೋದರರೊಡನೆ ಹೊರಟು ಪಡುವಣ ಕಡಲ ದಡದಲ್ಲಿರುವ ಗೋಕರ್ಣವೆಂಬ ಮಹಾ ಪುಣ್ಯಕ್ಷೇತ್ರಕ್ಕೆ ಬಂದನು, ಆ ಪ್ರದೇಶದಲ್ಲಿ ತಪೋಯೋಗ್ಯವಾದ ಆಶ್ರಮ ವನ್ನು ಮಾಡಿಕೊಂಡು ಅಲ್ಲಿ ಶಾಸ್ತ್ರೋಕ್ತವಾದ ವಿಧಿವಿಧಾನಗಳಿಂದಲೂ ನೇಮನಿಷ್ಠೆಗ ೪೦ದಲೂ ಕೂಡಿದವರಾದ ಮೂರು ಮಂದಿ ಸಹೋದರರೂ ನಿಶ್ಚಲಚಿತ್ತರಾಗಿಯೂ ತ್ವಕ್ಕು ಚಕ್ಷುಸ್ಸು ಶ್ರೋತ್ರ ಜಿಹ್ವಾ ಘ್ರಾಣಗಳೆಂಬ ಪಂಚೇಂದ್ರಿಯಗಳಿಗೆ ಸ್ಪರ್ಶ ರೂಪ ಶಬ್ದ ರಸ ಗಂಧಗಳೆಂಬ ವಿಷಯಗಳೊಡನೆ ಸಂಬಂಧವಿಲ್ಲದವರಾಗಿಯ ನಿರಾ ಹಾರಿಗಳಾಗಿಯೂ ಇದ್ದುಕೊಂಡು ಚಿತ್ತೈಕಾಗ್ರತೆಯನ್ನು ಹೊಂದಿ ಅತ್ಯುಗ್ರವಾದ ತಪಸ್ಸನ್ನು ಮಾಡಲಾರಂಭಿಸಿದರು, ಅವರೊಳಗೆ ಮೊದಲನೆಯವನಾದ ದಶಮುಖನು ಮಳೆ ಚಳಿಗಾಲಗಳಲ್ಲಿ ಬೆಟ್ಟದ ತಪ್ಪಲುಗಳಲ್ಲಿರುವ ಹೊಳೆಗಳಲ್ಲಿಯ ಬೇಸಿಗೆಯ ಕಾಲದಲ್ಲಿ ಪಂಚಾಗ್ನಿಗಳ ಮಧ್ಯದಲ್ಲಿಯೂ ನಿಂತು ಘೋರವಾದ ತಪಸ್ಸನ್ನು ಮಾಡುತ್ತಿದ್ದನು, ಕುಂಭಕರ್ಣನು ಒಂದೇ ಕಾಲಿನಿಂದ ನಿಂತು ತಪಸ್ಸನ್ನು ಮಾಡುತ್ತಿದ್ದನು. ವಿಭೀಷಣನು ಊರ್ಧ್ವಮುಖಿಯಾಗಿ ನಿಂತು ಸೂರ್ಯನನ್ನು ನೋಡುತ್ತಾ ತಪಸ್ಸನ್ನು ಮಾಡುತ್ತಿದ್ದನು. ಹೀಗಿರಲು ದಶಮುಖನು ತನ್ನ ತಪಸ್ಸಿನಲ್ಲಿ ಕಳೆದುಹೋಗುತ್ತಿರುವ ಪ್ರತಿಸಂವತ್ಸರದ ಕಡೆಯ ದಿನದಲ್ಲಿ ಕ್ರಮವಾಗಿ ತನ್ನದೊಂದೊಂದು ತಲೆಯನ್ನು ಕಡಿದು ಅಗ್ನಿಯಲ್ಲಿ ಹೋಮಮಾಡುತ್ತ ಬಂದು ಹತ್ತನೆಯ ಸಂವತ್ಸರದ ಕಡೆಯಲ್ಲಿ ಎಂದಿನಂತೆ ತನ್ನ ಹತ್ತನೆಯ ತಲೆಯನ್ನು ಕತ್ತರಿಸುವುದಕ್ಕೆ ಪ್ರಯತ್ನಿಸಲು ; ಆಗ ಬ್ರಹ್ಮದೇವನು ಅವನ ಬಳಿಗೆ ಬಂದು--ಎಲೈ ಮಗನಾದ ದಶಮುಖನೇ, ನೀನು ಬಹಳವಾಗಿ ಬಳಲಿದೆ. ನಿನಗೆ ಬೇಕಾದ ವರಗಳನ್ನು ಕೇಳು, ಕೊಡುವೆನೆನಲು ; ಆಗ ದಶಮುಖನು ಕಣ್ಣೆರೆದು ತನ್ನ ಮುತ್ತಜ್ಜನನ್ನು ನೋಡಿ, ಅತಿ ಭಯಭಕ್ತಿಯಿಂದ ಆತನ ಪಾದಗಳಿಗೆ ವಂದಿಸಿ ಎದ್ದು ಕೈಮುಗಿದುಕೊಂಡು ನಿಂತು-ಎಲೈ ಜಗಜ್ಜನಕನಾದ ಕರುಣಾಳುವೇ, ಸುರಾಸುರೋರಗ ಯಕ್ಷರಾಕ್ಷಸ ಗರುಡ ಗಂಧರ್ವ ಸಿದ್ಧ ಸಾಧ್ಯಾದಿಗಳೊಳಗೆ ಯಾರಿಂದಲೂ ಮರಣವು ಸಂಭವಿಸಿದಂತೆ ನನಗೆ ವರವನ್ನು ಕೊಡು, ಉಳಿದ ಮನುಷ್ಯರೂ ಮೃಗಪಕ್ಷಿಗಳೂ ನನಗೆ ಗಣನೆಯಿಲ್ಲವೆಂದು ಹೇಳಲು; ಚತುರ್ಮುಖನು-ಹಾಗೆಯೇ ಆಗಲಿ ಎಂದು ಹರಸಿ ವರವನ್ನು ಕೊಟ್ಟು--ನೀನು ಮೊದಲು ಕಡಿದು ಹೋಮಮಾಡಿದ ತಲೆಗಳೆಲ್ಲಾ ತಿರುಗಿ ಹುಟ್ಟಲಿ, ಇನ್ನು ಮೇಲೆ ನಿನ್ನ ತಲೆಯನ್ನು ಯಾರು ಕಡಿದಾಗ್ಗೂ ಯಥಾವತ್ತಾಗಿ ಮೂಡುತ್ತಿರಲಿ ಎಂದು ಸಂತೋಷದಿಂದ ತಾನಾಗಿಯೇ ಎರಡು ವರಗಳನ್ನು ಕೊಟ್ಟು ಅಲ್ಲಿಂದ ಹೊರಟು ವಿಭೀಷಣನಿದ್ದ ಸ್ಥಳಕ್ಕೆ ಬಂದು-ಮಗನಾದ ಎಲೈ ವಿಭೀಷಣನೇ, ತಪಸ್ಸಿನಿಂದ ಬಹಳವಾಗಿ ಬಳಲಿದೆಯಲ್ಲಾ! ಕಂದಾ, ಕುಲಶಿರೂಮಣಿಯೇ! ನಿನಗಿಷ್ಟವಾದ ವರಗಳನ್ನು ಬೇಡು ಎನಲು; ಅವನು ತನ್ನ ಮುತ್ತಾತನಿಗೆ ಸಾಷ್ಟಾಂಗನಮಸ್ಕಾರವನ್ನು ಮಾಡಿ, ಕೈಗಳನ್ನು ಜೋಡಿಸಿ, ನಿಂತುಕೊಂಡು--ಎಲೈ ಮಹಾತ್ಮನಾದ ಮುತ್ತಜ್ಜನೇ, ನಾನು ನಿನ್ನ ಪಾದಕಮಲಗಳನ್ನು ಕಂಡುದರಿಂದ ಕೃತ<noinclude></noinclude> edlben8tufsn4i00nh1jxyy8syri4me ಪುಟ:ಕಥಾ ಸಂಗ್ರಹ - ಭಾಗ ೨.djvu/೧೭ 104 44577 324073 106929 2026-06-02T12:12:34Z Vinoda mamatharai 3222 /* Proofread */ 324073 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು|left=|right=7}}</noinclude> ವಿಕಟ ಸಂಪಾತಿ ಶುಕ ಸಾರಣರೆಂಬಿವರೇ ಮೊದಲಾದ ತನ್ನ ಮಕ್ಕಳು ಮೊಮ್ಮಕ್ಕಳು ಮಗಳ ಮಕ್ಕಳು ದಾಯಾದರು ನೆಂಟರು ಇಷ್ಟರು ಇವರುಗಳೊಡನೆ ಕೂಡಿ ರಸಾತಲದಿಂದ ಹೊರಟು ಭೂಲೋಕಕ್ಕೆ ಬಂದು ದಶಾನನನೇ ಮೊದಲಾದ ಮೂರು ಜನ ದೌಹಿತ್ರರನ್ನೂ ಕಾಣಿಸಿಕೊಳ್ಳಲು ; ಅವರು ತಮ್ಮ ಮಾತಾಮಹನಿಗೆ ದೀರ್ಘದಂಡ ನಮಸ್ಕಾರವನ್ನು ಮಾಡಿ ವಿನಯದಿಂದ ನಿಂತಿರಲು ; ಆಗ ಸುಮಾಲಿಯು ಸಂತೋಷದಿಂದ ಅವರನ್ನು ಬಿಗಿದಪ್ಪಿ ಹರಸಿ ಅವರಲ್ಲಿ ಜ್ಯೇಷ್ಠನಾದ ದಶಮುಖನನ್ನು ನೋಡಿ ತಂದೆಯೇ ! ನೀನು ತಮ್ಮಂದಿರೊಡನೆ ಕೂಡಿ ಉಗ್ರವಾದ ತಪಸ್ಸನ್ನು ಮಾಡಿ ಬ್ರಹ್ಮ ದೇವನಿಂದ ವರವನ್ನು ಪಡೆದು ಈ ವರೆಗೂ ಭಯವೆಂಬ ಸಮುದ್ರದಲ್ಲಿ ಮುಳುಗಿ ಹೋಗಿದ್ದ ಅಶೇಷರಾಕ್ಷಸಕುಲವನ್ನೂ ಉದ್ಧಾರಮಾಡಿದೆ. ಇದೋ, ಇವನು ಮಹೋದರನು ಅವನು ಪ್ರಹಸ್ತನು ಇವನು ಮಾರೀಚನು ಅವನು ಸುಪಾರ್ಶ್ವನು ಇವರು ನಾಲ್ಕು ಮಂದಿಯೂ ನಿನಗೆ ಸೋದರಮಾವಂದಿರು, ಈ ಸರ್ವರೂ ಸಾಮಾ ದ್ಯುಪಾಯಗಳಲ್ಲಿ ಸಮರ್ಥರು ಇಲ್ಲಿಂದ ಮುಂದೆ ಇವರೆಲ್ಲರೂ ನಿನಗೆ ವಿಧೇಯರೂ ಸಹಾಯಕರೂ ಆಗಿರುವರು. ಲಂಕಾಪಟ್ಟಣವು ಮೊದಲು ನಾವು ಕಟ್ಟಿದುದು. ಆದರೂ ವಿಷ್ಣುವಿನ ಭಯದಿಂದ ಅಲ್ಲಿ ನಿಲ್ಲಲಾರದೆ ನಾವೆಲ್ಲರೂ ಒಂದು ಕಾಡಿನಲ್ಲಿ ರಸಾತಲಕ್ಕೆ ಓಡಿಹೋದೆವು, ಅದೇ ಕಾಲದಲ್ಲಿ ನಿನ್ನ ಬಲತಾಯಿಯ ಮಗನಾದ ಕುಬೇರನು ಆ ಲಂಕಾನಗರವನ್ನು ಪ್ರವೇಶಿಸಿ ಅಲ್ಲಿ ವಾಸಮಾಡಿಕೊಂಡಿದ್ದಾನೆ. ನೀನು ನನಗೆ ದೌಹಿತ್ರನಾದುದರಿಂದ ಹೋಗಿ ಆತನನ್ನು ಅಲ್ಲಿಂದ ಹೊರಡಿಸಿ ಆ ಲಂಕಾನಗರವನ್ನು ಸ್ವಾಧೀನಮಾಡಿಕೊಂಡು ಅಲ್ಲಿಯೇ ರಾಜ್ಯಭಾರ ಮಾಡಿಕೊಂಡಿರು ಎಂದು ಹೇಳಿದನು. {{gap}}ಆ ಮಾತನ್ನು ಕೇಳಿ ದಶಮುಖನು-ಎಲೈ ಮಾತಾಮಹನೇ, ನೀನು ಹೇಳಿದ ಮಾತು ನಿಜವೇ ಸರಿ ; ಆದರೂ ಕುಬೇರನು ನನ್ನ ಅಣ್ಣನಲ್ಲವೇ ? ಆತನನ್ನು ಹೊರಡಿಸಿ ನಾನು ಅಲ್ಲಿರುವುದು ಉಚಿತವೇ ? ಹೇಳು ಎನಲು ; ಆಗ ಸುಮಾಲಿಯು ಗಹಗಹಿಸಿ ನಗುತ್ತ-ನೀನಿಂಥ ಮಾತುಗಳನ್ನಾಡಬಹುದೇ ? ಸಪತ್ನಿ ಪುತ್ರರಿಗೆ ಸ್ವಭಾವವೈರವುಂಟೆಂದು ನೀತಿಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ. ಅದು ಕಾರಣ ಕುಬೇರನು ನಿನಗೆ ವಿರೋಧಿಯೇ ಹೊರತು ಅಣ್ಣನೆಂದು ಎಂದಿಗೂ ಬಗೆಯದಿರು. ಇದೋ ಈ ಸಾಮ್ಯವನ್ನು ಕೇಳು. ಕಶ್ಯಪಮುನಿಗೆ ದಿತಿ ಅದಿತಿ ಎಂಬವರಿಬ್ಬರೂ ಪತ್ನಿ ಯರು, ಅವರೊಳಗೆ ದಿತಿಯಲ್ಲಿ ದೈತ್ಯರೂ ಅದಿತಿಯಲ್ಲಿ ಆದಿತೇಯರು ಹುಟ್ಟಿದರು. ಈಗ ಅವರವರ ಭಾತೃತ್ವವು ಹೇಗಿದೆ, ನೋಡು, ದೇವತೆಗಳು ತಮಗಿಂತಲೂ ಅಗ್ರಜರೆಂದು ಭಾವಿಸಿ ದೈತ್ಯರನ್ನು ಸಂಹರಿಸದೆ ಬಿಟ್ಟರೇ ? ಈಗ ನೀನು ಅಣ್ಣನೆಂಬ ಭಕ್ತಿಯಿಂದ ಹಿಂದೆಗೆದರೆ ಆ ಮೇಲೆ ಕುಬೇರನು ನಿನ್ನನ್ನು ಕೊಲ್ಲದೆ ಬಿಡುವನೇ ? ಇಲ್ಲವು. ಅದು ಕಾರಣ ನೀನು ಈಗಲೇ ನಾನು ಹೇಳಿದಂತೆ ಮಾಡು ಎಂದನು. ಆ ಮೇಲೆ ಖಳನಾದ ದಶಕಂಧರನು ಅವನ ಮಾತಿಗೆ ಒಪ್ಪಿಕೊಂಡು ಕೂಡಲೆ ಪ್ರಹಸ್ತನನ್ನು ಕರೆದು-ಎಲೈ ಸೋದರಮಾವನೇ ! ನೀನು ಮೊದಲು ನಮ್ಮಣ್ಣನ ಬಳಿಗೆ ಹೋಗಿ--ನೀನಿರುವ ಈ ಲಂಕಾನಗರವು ನಮ್ಮ<noinclude></noinclude> 1fxo32ijjf62pj33ysj8kk0rfnx7j75 324078 324073 2026-06-02T12:59:32Z Pragathi. BH 7585 /* Validated */ 324078 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು|left=|right=7}}</noinclude> ವಿಕಟ ಸಂಪಾತಿ ಶುಕ ಸಾರಣರೆಂಬಿವರೇ ಮೊದಲಾದ ತನ್ನ ಮಕ್ಕಳು ಮೊಮ್ಮಕ್ಕಳು ಮಗಳ ಮಕ್ಕಳು ದಾಯಾದರು ನೆಂಟರು ಇಷ್ಟರು ಇವರುಗಳೊಡನೆ ಕೂಡಿ ರಸಾತಲದಿಂದ ಹೊರಟು ಭೂಲೋಕಕ್ಕೆ ಬಂದು ದಶಾನನನೇ ಮೊದಲಾದ ಮೂರು ಜನ ದೌಹಿತ್ರರನ್ನೂ ಕಾಣಿಸಿಕೊಳ್ಳಲು ; ಅವರು ತಮ್ಮ ಮಾತಾಮಹನಿಗೆ ದೀರ್ಘದಂಡ ನಮಸ್ಕಾರವನ್ನು ಮಾಡಿ ವಿನಯದಿಂದ ನಿಂತಿರಲು ; ಆಗ ಸುಮಾಲಿಯು ಸಂತೋಷದಿಂದ ಅವರನ್ನು ಬಿಗಿದಪ್ಪಿ ಹರಸಿ ಅವರಲ್ಲಿ ಜ್ಯೇಷ್ಠನಾದ ದಶಮುಖನನ್ನು ನೋಡಿ ತಂದೆಯೇ ! ನೀನು ತಮ್ಮಂದಿರೊಡನೆ ಕೂಡಿ ಉಗ್ರವಾದ ತಪಸ್ಸನ್ನು ಮಾಡಿ ಬ್ರಹ್ಮ ದೇವನಿಂದ ವರವನ್ನು ಪಡೆದು ಈ ವರೆಗೂ ಭಯವೆಂಬ ಸಮುದ್ರದಲ್ಲಿ ಮುಳುಗಿ ಹೋಗಿದ್ದ ಅಶೇಷರಾಕ್ಷಸಕುಲವನ್ನೂ ಉದ್ಧಾರಮಾಡಿದೆ. ಇದೋ, ಇವನು ಮಹೋದರನು ಅವನು ಪ್ರಹಸ್ತನು ಇವನು ಮಾರೀಚನು ಅವನು ಸುಪಾರ್ಶ್ವನು ಇವರು ನಾಲ್ಕು ಮಂದಿಯೂ ನಿನಗೆ ಸೋದರಮಾವಂದಿರು, ಈ ಸರ್ವರೂ ಸಾಮಾ ದ್ಯುಪಾಯಗಳಲ್ಲಿ ಸಮರ್ಥರು ಇಲ್ಲಿಂದ ಮುಂದೆ ಇವರೆಲ್ಲರೂ ನಿನಗೆ ವಿಧೇಯರೂ ಸಹಾಯಕರೂ ಆಗಿರುವರು. ಲಂಕಾಪಟ್ಟಣವು ಮೊದಲು ನಾವು ಕಟ್ಟಿದುದು. ಆದರೂ ವಿಷ್ಣುವಿನ ಭಯದಿಂದ ಅಲ್ಲಿ ನಿಲ್ಲಲಾರದೆ ನಾವೆಲ್ಲರೂ ಒಂದು ಕಾಡಿನಲ್ಲಿ ರಸಾತಲಕ್ಕೆ ಓಡಿಹೋದೆವು, ಅದೇ ಕಾಲದಲ್ಲಿ ನಿನ್ನ ಬಲತಾಯಿಯ ಮಗನಾದ ಕುಬೇರನು ಆ ಲಂಕಾನಗರವನ್ನು ಪ್ರವೇಶಿಸಿ ಅಲ್ಲಿ ವಾಸಮಾಡಿಕೊಂಡಿದ್ದಾನೆ. ನೀನು ನನಗೆ ದೌಹಿತ್ರನಾದುದರಿಂದ ಹೋಗಿ ಆತನನ್ನು ಅಲ್ಲಿಂದ ಹೊರಡಿಸಿ ಆ ಲಂಕಾನಗರವನ್ನು ಸ್ವಾಧೀನಮಾಡಿಕೊಂಡು ಅಲ್ಲಿಯೇ ರಾಜ್ಯಭಾರ ಮಾಡಿಕೊಂಡಿರು ಎಂದು ಹೇಳಿದನು. {{gap}}ಆ ಮಾತನ್ನು ಕೇಳಿ ದಶಮುಖನು-ಎಲೈ ಮಾತಾಮಹನೇ, ನೀನು ಹೇಳಿದ ಮಾತು ನಿಜವೇ ಸರಿ ; ಆದರೂ ಕುಬೇರನು ನನ್ನ ಅಣ್ಣನಲ್ಲವೇ ? ಆತನನ್ನು ಹೊರಡಿಸಿ ನಾನು ಅಲ್ಲಿರುವುದು ಉಚಿತವೇ ? ಹೇಳು ಎನಲು ; ಆಗ ಸುಮಾಲಿಯು ಗಹಗಹಿಸಿ ನಗುತ್ತ-ನೀನಿಂಥ ಮಾತುಗಳನ್ನಾಡಬಹುದೇ ? ಸಪತ್ನಿ ಪುತ್ರರಿಗೆ ಸ್ವಭಾವವೈರವುಂಟೆಂದು ನೀತಿಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ. ಅದು ಕಾರಣ ಕುಬೇರನು ನಿನಗೆ ವಿರೋಧಿಯೇ ಹೊರತು ಅಣ್ಣನೆಂದು ಎಂದಿಗೂ ಬಗೆಯದಿರು. ಇದೋ ಈ ಸಾಮ್ಯವನ್ನು ಕೇಳು. ಕಶ್ಯಪಮುನಿಗೆ ದಿತಿ ಅದಿತಿ ಎಂಬವರಿಬ್ಬರೂ ಪತ್ನಿ ಯರು, ಅವರೊಳಗೆ ದಿತಿಯಲ್ಲಿ ದೈತ್ಯರೂ ಅದಿತಿಯಲ್ಲಿ ಆದಿತೇಯರು ಹುಟ್ಟಿದರು. ಈಗ ಅವರವರ ಭಾತೃತ್ವವು ಹೇಗಿದೆ, ನೋಡು, ದೇವತೆಗಳು ತಮಗಿಂತಲೂ ಅಗ್ರಜರೆಂದು ಭಾವಿಸಿ ದೈತ್ಯರನ್ನು ಸಂಹರಿಸದೆ ಬಿಟ್ಟರೇ ? ಈಗ ನೀನು ಅಣ್ಣನೆಂಬ ಭಕ್ತಿಯಿಂದ ಹಿಂದೆಗೆದರೆ ಆ ಮೇಲೆ ಕುಬೇರನು ನಿನ್ನನ್ನು ಕೊಲ್ಲದೆ ಬಿಡುವನೇ ? ಇಲ್ಲವು. ಅದು ಕಾರಣ ನೀನು ಈಗಲೇ ನಾನು ಹೇಳಿದಂತೆ ಮಾಡು ಎಂದನು. ಆ ಮೇಲೆ ಖಳನಾದ ದಶಕಂಧರನು ಅವನ ಮಾತಿಗೆ ಒಪ್ಪಿಕೊಂಡು ಕೂಡಲೆ ಪ್ರಹಸ್ತನನ್ನು ಕರೆದು-ಎಲೈ ಸೋದರಮಾವನೇ ! ನೀನು ಮೊದಲು ನಮ್ಮಣ್ಣನ ಬಳಿಗೆ ಹೋಗಿ--ನೀನಿರುವ ಈ ಲಂಕಾನಗರವು ನಮ್ಮ<noinclude></noinclude> c88bvcpfr9s3oi4iyr93mmxkefgoz7u ಪುಟ:ಕಥಾ ಸಂಗ್ರಹ - ಭಾಗ ೨.djvu/೧೮ 104 44578 324074 106930 2026-06-02T12:27:13Z Vinoda mamatharai 3222 /* Proofread */ 324074 proofread-page text/x-wiki <noinclude><pagequality level="3" user="Vinoda mamatharai" />{{rh|center=ಕಥಾಸಂಗ್ರಹ-೪ ನೆಯ ಭಾಗ|left=|right=8}}</noinclude> ಮಾತಾಮಹರಿಂದ ಸಂಪಾದಿಸಲ್ಪಟ್ಟುದು. ಆದುದರಿಂದ ಅದು ನನಗೆ ಸಲ್ಲ ತಕ್ಕುದಾಗಿದೆ. ನೀನು ಅದನ್ನು ಬಿಟ್ಟು ಹೋಗಬೇಕು ಎಂದು ನಾನು ಹೇಳಿದೆನೆಂಬುದಾಗಿ ಮೊದಲು ಸಾಮದಿಂದ ತಿಳಿಸು ಎಂದು ಹೇಳಿ ಕಳುಹಿಸಿದನು, ಆ ಮೇಲೆ ಪ್ರಹಸ್ತನು ಅಲ್ಲಿಂದ ಹೋಗಿ ಲಂಕಾದ್ವೀಪದಲ್ಲಿದ್ದ ಕುಬೇರನೊಡನೆ ಈ ವರ್ತಮಾನವನ್ನು ತಿಳಿ ಸಲು ; ಆತನು ಒಂದರೆಗಳಿಗೆಯ ವರೆಗೂ ಆಲೋಚಿಸಿ, ಪ್ರಹಸ್ತನನ್ನು ಲಂಕೆಯಲ್ಲಿಯೇ ಬಿಟ್ಟು ತನ್ನ ತಂದೆಯಾದ ವಿಶ್ರವಸ್ಸಿನ ಬಳಿಗೆ ಶೀಘ್ರವಾಗಿ ಬಂದು ದಶಮುಖನು ತನಗೆ ಹೇಳಿಕಳುಹಿಸಿದ ವಾರ್ತೆಯನ್ನು ಬಿನ್ನವಿಸಲು ; ಆ ಮುನಿಯು-ಎಲೈ ಮಗನೇ, ಕೇಳು ; ಆ ದಶಕಂಠನು ಬಲು ಕೆಟ್ಟವನು. ಆದುದರಿಂದ ನೀನು ಆ ಲಂಕಾನಗರವನ್ನು ಬಿಟ್ಟು ಕೈಲಾಸಪರ್ವತಕ್ಕೆ ಹೋಗಿ ಅಲ್ಲಿ ಒಂದು ಪಟ್ಟಣವನ್ನು ಮಾಡಿಕೊಂಡು ಉತ್ತರದಿಗಧಿಪತಿಯಾಗಿರು, ಹೋಗು, ನಿನಗೆ ಶಿವನೊಡನೆ ಸ್ನೇಹವುಂಟಾಗುವುದು ಎಂದು ಹೇಳಿದನು, ಆ ಮೇಲೆ ಕುಬೇರನು ತಂದೆಗೆ ನಮಸ್ಕರಿಸಿ ಲಂಕಾನಗರಕ್ಕೆ ಬಂದು ಪ್ರಹಸ್ತನನ್ನು ಕುರಿತು-ಎಲೈ ಮಂತ್ರಿಯೇ, ದಶಕಂಠನು ಹೇಳಿಕಳುಹಿಸಿದ ಮಾತು ಯುಕ್ತವಾದುದೇ ಸರಿ. ಇನ್ನು ಮೇಲೆ ನಾನು ಇಲ್ಲಿಂದ ಹೊರಟುಹೋಗುವೆನು. ಅವನು ಬಂದು ಇಲ್ಲಿ ಸುಖದಿಂದಿರಲಿ. ಈ ಸಂಗತಿಯನ್ನು ಅವನಿಗೆ ತಿಳಿಸು ಎಂದು ಹೇಳಿ ಆ ಪ್ರಹಸ್ತನನ್ನು ಅಲ್ಲಿಂದ ಕಳುಹಿಸಿ ಆ ಮೇಲೆ ಕುಬೇರನು ತನ್ನ ಪರಿವಾರದೊಡನೆ ವಿಮಾನಾರೂಢನಾಗಿ ಲಂಕೆಯನ್ನು ಬಿಟ್ಟು ಹೊರಟು ಕೈಲಾಸಾಚಲಕ್ಕೆ ಬಂದು ಅಲ್ಲಿ ವಿಶ್ವಕರ್ಮನಿಂದ ಮನೋಹರವಾದ ಒಂದು ಪಟ್ಟಣವನ್ನು ಕಟ್ಟಿಸಿ ಅದಕ್ಕೆ ಅಲಕಾನಗರವೆಂದು ಹೆಸರಿಟ್ಟು ಶಿವನ ಸ್ನೇಹವನ್ನು ಸಂಪಾದಿಸಿಕೊಂಡು ಅಲ್ಲೇ ಸುಖದಿಂದಿರುತ್ತಿದ್ದನು. {{gap}}ಇತ್ತಲಾ ಪ್ರಹಸನು ದಶಮುಖನ ಬಳಿಗೆ ಬಂದು-ನೀನು ಹೇಳಿಕಳುಹಿಸಿದ ಮಾತ್ರದಿಂದಲೇ ಕುಬೇರನು ಹೆದರಿ ಲ೦ಕಾನಗರವನ್ನು ಬಿಟ್ಟು ಓಡಿಹೋದನು ಎಂದು ಹೇಳಲು ; ಆಗ ದಶಗ್ರೀವನು ಸಂತೋಷದಿಂದ ಕೂಡಿದವನಾಗಿ ತನ್ನ ರಾಕ್ಷಸಪರಿವಾರದೊಡನೆ ಹೊರಟು ಬಂದು ಮೃಗರಾಜನು ಹಿಮನಗದ ಗುಹೆಯನ್ನು ಪ್ರವೇಶಿಸುವಂತೆ ಲಂಕಾನಗರವನ್ನು ಪ್ರವೇಶಿಸಿದನು, ಅಲ್ಲಿ ಪ್ರಹಸ್ತ ಮಾರೀಚಾದಿ ಮಂತ್ರಿಗಳು ಸುಮಾಲಿ ಮಾಲ್ಯವಂತಾದಿ ರಾಕ್ಷಸನಾಯಕರನ್ನು ಕೂಡಿಸಿಕೊಂಡು ರಾಕ್ಷಸರಾಜ್ಯಾಧಿಪತ್ಯಾರ್ಥವಾಗಿ ದಶಾನನನಿಗೆ ವಿಜೃಂಭಣೆಯಿಂದ ಪಟ್ಟಾಭಿಷೇಕವನ್ನು ಮಾಡಿದರು. ಆ ಮೇಲೆ ರಾಕ್ಷಸೇಶ್ವರನಾದ ದಶಮುಖನು ತನ್ನ ಸಹೋದರಿಯಾದ ಶೂರ್ಪನಖಿಯನ್ನು ಕಾಲಕೇಯರೆಂಬ ಅಸುರರಲ್ಲಿ ಬಹು ಬಲಿಷ್ಠನಾದ ವಿದ್ಯುಚ್ಛೆಹ್ವನೆಂಬವನಿಗೆ ಕೊಟ್ಟು ಅತಿವಿಭವದಿಂದ ಮದುವೆಮಾಡಿ ಸುಖವಾಗಿ ಲಂಕಾ ಪಟ್ಟಣವನ್ನು ಆಳುತ್ತಿದ್ದನು. {{gap}}ಹೀಗಿರುವಲ್ಲಿ ಒಂದಾನೊಂದು ದಿವಸ ದಶಕಂಠನು ಬೇಟೆಯಾಡಬೇಕೆಂದು ಅಪೇಕ್ಷಿಸಿ ಸಾಯುಧರಾದ ಬೇಟೆಗಾರರೊಡನೆ ಕೂಡಿ ಹೊರಟು ಮೃಗಾನ್ವೇಷಣಾರ್ಥವಾಗಿ ಅರಣ್ಯಗಳಲ್ಲಿಯೂ ಪರ್ವತಗಳಲ್ಲಿಯೂ ಸಂಚರಿಸುತ್ತ ಪೊದೆಗಳೊಳಡಗಿ ಶಬ್ದವ<noinclude></noinclude> kln9uoh73oi87og3mghx0ht73sx4ins 324077 324074 2026-06-02T12:59:21Z Pragathi. BH 7585 /* Validated */ 324077 proofread-page text/x-wiki <noinclude><pagequality level="4" user="Pragathi. BH" />{{rh|center=ಕಥಾಸಂಗ್ರಹ-೪ ನೆಯ ಭಾಗ|left=|right=8}}</noinclude> ಮಾತಾಮಹರಿಂದ ಸಂಪಾದಿಸಲ್ಪಟ್ಟುದು. ಆದುದರಿಂದ ಅದು ನನಗೆ ಸಲ್ಲ ತಕ್ಕುದಾಗಿದೆ. ನೀನು ಅದನ್ನು ಬಿಟ್ಟು ಹೋಗಬೇಕು ಎಂದು ನಾನು ಹೇಳಿದೆನೆಂಬುದಾಗಿ ಮೊದಲು ಸಾಮದಿಂದ ತಿಳಿಸು ಎಂದು ಹೇಳಿ ಕಳುಹಿಸಿದನು, ಆ ಮೇಲೆ ಪ್ರಹಸ್ತನು ಅಲ್ಲಿಂದ ಹೋಗಿ ಲಂಕಾದ್ವೀಪದಲ್ಲಿದ್ದ ಕುಬೇರನೊಡನೆ ಈ ವರ್ತಮಾನವನ್ನು ತಿಳಿ ಸಲು ; ಆತನು ಒಂದರೆಗಳಿಗೆಯ ವರೆಗೂ ಆಲೋಚಿಸಿ, ಪ್ರಹಸ್ತನನ್ನು ಲಂಕೆಯಲ್ಲಿಯೇ ಬಿಟ್ಟು ತನ್ನ ತಂದೆಯಾದ ವಿಶ್ರವಸ್ಸಿನ ಬಳಿಗೆ ಶೀಘ್ರವಾಗಿ ಬಂದು ದಶಮುಖನು ತನಗೆ ಹೇಳಿಕಳುಹಿಸಿದ ವಾರ್ತೆಯನ್ನು ಬಿನ್ನವಿಸಲು ; ಆ ಮುನಿಯು-ಎಲೈ ಮಗನೇ, ಕೇಳು ; ಆ ದಶಕಂಠನು ಬಲು ಕೆಟ್ಟವನು. ಆದುದರಿಂದ ನೀನು ಆ ಲಂಕಾನಗರವನ್ನು ಬಿಟ್ಟು ಕೈಲಾಸಪರ್ವತಕ್ಕೆ ಹೋಗಿ ಅಲ್ಲಿ ಒಂದು ಪಟ್ಟಣವನ್ನು ಮಾಡಿಕೊಂಡು ಉತ್ತರದಿಗಧಿಪತಿಯಾಗಿರು, ಹೋಗು, ನಿನಗೆ ಶಿವನೊಡನೆ ಸ್ನೇಹವುಂಟಾಗುವುದು ಎಂದು ಹೇಳಿದನು, ಆ ಮೇಲೆ ಕುಬೇರನು ತಂದೆಗೆ ನಮಸ್ಕರಿಸಿ ಲಂಕಾನಗರಕ್ಕೆ ಬಂದು ಪ್ರಹಸ್ತನನ್ನು ಕುರಿತು-ಎಲೈ ಮಂತ್ರಿಯೇ, ದಶಕಂಠನು ಹೇಳಿಕಳುಹಿಸಿದ ಮಾತು ಯುಕ್ತವಾದುದೇ ಸರಿ. ಇನ್ನು ಮೇಲೆ ನಾನು ಇಲ್ಲಿಂದ ಹೊರಟುಹೋಗುವೆನು. ಅವನು ಬಂದು ಇಲ್ಲಿ ಸುಖದಿಂದಿರಲಿ. ಈ ಸಂಗತಿಯನ್ನು ಅವನಿಗೆ ತಿಳಿಸು ಎಂದು ಹೇಳಿ ಆ ಪ್ರಹಸ್ತನನ್ನು ಅಲ್ಲಿಂದ ಕಳುಹಿಸಿ ಆ ಮೇಲೆ ಕುಬೇರನು ತನ್ನ ಪರಿವಾರದೊಡನೆ ವಿಮಾನಾರೂಢನಾಗಿ ಲಂಕೆಯನ್ನು ಬಿಟ್ಟು ಹೊರಟು ಕೈಲಾಸಾಚಲಕ್ಕೆ ಬಂದು ಅಲ್ಲಿ ವಿಶ್ವಕರ್ಮನಿಂದ ಮನೋಹರವಾದ ಒಂದು ಪಟ್ಟಣವನ್ನು ಕಟ್ಟಿಸಿ ಅದಕ್ಕೆ ಅಲಕಾನಗರವೆಂದು ಹೆಸರಿಟ್ಟು ಶಿವನ ಸ್ನೇಹವನ್ನು ಸಂಪಾದಿಸಿಕೊಂಡು ಅಲ್ಲೇ ಸುಖದಿಂದಿರುತ್ತಿದ್ದನು. {{gap}}ಇತ್ತಲಾ ಪ್ರಹಸನು ದಶಮುಖನ ಬಳಿಗೆ ಬಂದು-ನೀನು ಹೇಳಿಕಳುಹಿಸಿದ ಮಾತ್ರದಿಂದಲೇ ಕುಬೇರನು ಹೆದರಿ ಲ೦ಕಾನಗರವನ್ನು ಬಿಟ್ಟು ಓಡಿಹೋದನು ಎಂದು ಹೇಳಲು ; ಆಗ ದಶಗ್ರೀವನು ಸಂತೋಷದಿಂದ ಕೂಡಿದವನಾಗಿ ತನ್ನ ರಾಕ್ಷಸಪರಿವಾರದೊಡನೆ ಹೊರಟು ಬಂದು ಮೃಗರಾಜನು ಹಿಮನಗದ ಗುಹೆಯನ್ನು ಪ್ರವೇಶಿಸುವಂತೆ ಲಂಕಾನಗರವನ್ನು ಪ್ರವೇಶಿಸಿದನು, ಅಲ್ಲಿ ಪ್ರಹಸ್ತ ಮಾರೀಚಾದಿ ಮಂತ್ರಿಗಳು ಸುಮಾಲಿ ಮಾಲ್ಯವಂತಾದಿ ರಾಕ್ಷಸನಾಯಕರನ್ನು ಕೂಡಿಸಿಕೊಂಡು ರಾಕ್ಷಸರಾಜ್ಯಾಧಿಪತ್ಯಾರ್ಥವಾಗಿ ದಶಾನನನಿಗೆ ವಿಜೃಂಭಣೆಯಿಂದ ಪಟ್ಟಾಭಿಷೇಕವನ್ನು ಮಾಡಿದರು. ಆ ಮೇಲೆ ರಾಕ್ಷಸೇಶ್ವರನಾದ ದಶಮುಖನು ತನ್ನ ಸಹೋದರಿಯಾದ ಶೂರ್ಪನಖಿಯನ್ನು ಕಾಲಕೇಯರೆಂಬ ಅಸುರರಲ್ಲಿ ಬಹು ಬಲಿಷ್ಠನಾದ ವಿದ್ಯುಚ್ಛೆಹ್ವನೆಂಬವನಿಗೆ ಕೊಟ್ಟು ಅತಿವಿಭವದಿಂದ ಮದುವೆಮಾಡಿ ಸುಖವಾಗಿ ಲಂಕಾ ಪಟ್ಟಣವನ್ನು ಆಳುತ್ತಿದ್ದನು. {{gap}}ಹೀಗಿರುವಲ್ಲಿ ಒಂದಾನೊಂದು ದಿವಸ ದಶಕಂಠನು ಬೇಟೆಯಾಡಬೇಕೆಂದು ಅಪೇಕ್ಷಿಸಿ ಸಾಯುಧರಾದ ಬೇಟೆಗಾರರೊಡನೆ ಕೂಡಿ ಹೊರಟು ಮೃಗಾನ್ವೇಷಣಾರ್ಥವಾಗಿ ಅರಣ್ಯಗಳಲ್ಲಿಯೂ ಪರ್ವತಗಳಲ್ಲಿಯೂ ಸಂಚರಿಸುತ್ತ ಪೊದೆಗಳೊಳಡಗಿ ಶಬ್ದವ<noinclude></noinclude> sbml3ojidbg0f5aj8kk6xp2wfg6f532 ಪುಟ:ಕಥಾ ಸಂಗ್ರಹ - ಭಾಗ ೨.djvu/೧೯ 104 44579 324075 106931 2026-06-02T12:44:49Z Vinoda mamatharai 3222 /* Proofread */ 324075 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು|left=|right=9}}</noinclude> ನ್ನಾಲಿಸುತ್ತ ಗುಹೆಗಳನ್ನು ಪ್ರವೇಶಿಸಿ ನೋಡುತ್ತ ನಾನಾ ವಿಧವಾದ ಮೃಗಗಳನ್ನು ಕೊಲ್ಲುತ್ತ ಬರುತ್ತಿರಲು ; ಅಲ್ಲೊಂದು ಕಡೆಯಲ್ಲಿ ತನ್ನ ಮಗಳೊಡನೆ ವಾಸಿಸುತ್ತಿದ್ದ ಮಯನೆಂಬವನನ್ನು ನೋಡಿ--ನೀನು ಯಾರು ? ಈ ಕಾಡಿನಲ್ಲಿ ವಾಸಿಸುವುದಕ್ಕೆ ಕಾರಣವೇನು ? ಈ ಅಬಲೆಯು ಯಾರ ಮಗಳು ? ನಿನ್ನ ಉದ್ಯೋಗವಾವುದು ? ಎಂದು ಕೇಳಲು ; ಅದಕ್ಕೆ ಮಯನು--ಎಲೈ ವೀರನೇ, ಕೇಳು ; ಈ ಲೋಕದಲ್ಲಿ ನನ್ನನ್ನು ಮಯನೆಂದು ಕರೆಯುತ್ತಾರೆ. ನನಗೆ ಸಂಪ್ರಾಪ್ತವಾಗಿರುವ ಅಪಾರವಾದ ದುಃಖವನ್ನು ಯಾರು ತಾನೆ ಪರಿಹರಿಸಬಲ್ಲರು ? ಆದರೂ ಹೇಳುತ್ತೇನೆ ಕೇಳು. ಅಪ್ಸರ ಸ್ತ್ರೀಯರೊಳಗೆ ಶ್ರೇಷ್ಠಳಾದ ಹೇಮೆ ಎಂಬ ವನಿತಾಮಣಿಯ ವಿಷಯವನ್ನು ನೀನು ಕೇಳಿಬಲ್ಲೆಯಷ್ಟೆ ? ದೇವತೆಗಳು ಪ್ರೀತಿಯಿಂದ ಆಕೆಯನ್ನು ನನಗೆ ಹೆಂಡತಿಯನ್ನಾಗಿ ಮಾಡಿಕೊಟ್ಟರು. ನಾನು ಐನೂರು ಸಂವತ್ಸರಗಳ ವರೆಗೂ ಆಕೆಯೊಡನೆ ಸುಖಿಯಾಗಿದ್ದೆನು, ಆ ಮೇಲೆ ನನಗೆ ಆ ಸುಂದರಿಯಲ್ಲಿ ಮಾಯಾವಿ ದುಂದುಭಿ ಎಂಬಿಬ್ಬರು ಗಂಡುಮಕ್ಕಳೂ ಸ್ತ್ರೀ ಶಿರೋಮಣಿಯಾದ ಮಂಡೋದರಿ ಎಂಬ ಈ ಹೆಣ್ಣು ಮಗಳೂ ಹುಟ್ಟಿದರು. ಆ ಮೇಲೆ ನನ್ನ ದೌರ್ಭಾಗ್ಯವಶದಿಂದ ಆಕೆಯೊಡನೆ ನನಗೆ ವಿಯೋಗ ವುಂಟಾಯಿತು, ಪ್ರಾಣಪ್ರಿಯಳಾದ ಪತ್ನಿಯ ವಿಯೋಗತಾಪವನ್ನು ಸಹಿಸಿಕೊಂಡು ಯಾವನು ತಾನೇ ಬದುಕಬಲ್ಲನು ? ಕಠಿಣಹೃದಯನಾದ ನಾನು ಮೊದಲು ಆಕೆಯನ್ನು ವಿವಾಹವಾಗಿ ಮಾಯೆಯಿಂದ ಹೇಮೆ ಎಂಬ ಪುರವನ್ನು ನಿರ್ಮಿಸಿಕೊಂಡು ಅಲ್ಲಿ ಸುಖಿಯಾಗಿದ್ದೆನು. ಈಗ ಸಹಿಸಲಶಕ್ಯವಾದ ದುಃಖದಿಂದ ಅನಾಥನಾಗಿ ಆ ಪಟ್ಟಣವನ್ನೂ ಬಿಟ್ಟು ಈ ಮಗಳನ್ನು ಕರೆದುಕೊಂಡು ಹೊರಟುಬಂದು ಸದ್ವಂಶಜನೂ ಯೋಗ್ಯನೂ ಆದ ಒಬ್ಬ ವರನಿಗೆ ಈಕೆಯನ್ನು ಕೊಡಬೇಕೆಂಬ ನಿರೀಕ್ಷೆಯಿಂದ ಈ ಅರಣ್ಯದಲ್ಲಿ ಸೇರಿಕೊಂಡಿದ್ದೇನೆಂದು ಹೇಳಿ, ನೀನು ಯಾರು ? ಎಂದು ಕೇಳಿದನು. ದಶಮುಖನು--ಎಲೈ ಮಯನೇ, ಕೇಳು, ನಾನು ಪುಲಸ್ಯ ಮಹಾಮುನಿಯ ಪುತ್ರನಾದ ವಿಶ್ರವಸ್ಸಿನ ತನಯನು, ನನ್ನನ್ನು ದಶಕಂಠನೆಂದು ಕರೆಯುವರು ಎಂದು ಹೇಳಲು; ಈ ಮಾತನ್ನು ಕೇಳಿದ ಮಯನು ಸಂತೋಷಿಸಿ--ಈಗ ನನ್ನಿಷ್ಟಾರ್ಥವು ಸಿದ್ದಿಸಿತು, ಈ ಪುತ್ರಿಗೆ ಯೋಗ್ಯನಾದ ವರನು ದೊರಕಿದನು ಎಂದು ಮನಸ್ಸಿನಲ್ಲಿ ಆಲೋಚಿಸಿ, ದಶಗ್ರೀವನನ್ನು ಕುರಿತು--ಎಲೈ ಮಹಾತ್ಮನೇ, ಬ್ರಹ್ಮಕುಲಸಂಭವನಾದ ನಿನಗಿಂತಲೂ ಸುತ್ಕುಲೋತ್ಪನ್ನ ನದಾರುಂಟು ? ಸುಂದರಿಯೂ ಸುಶೀಲೆಯೂ ಆದ ಈ ನನ್ನ ಪುತ್ರಿಯನ್ನು ಪತ್ನಿಭಾವದಿಂದ ಪರಿಗ್ರಹಿಸಬೇಕೆಂದು ಪ್ರಾರ್ಥಿಸಲು ; ದಶವದನನು ಹಾಗೇ ಆಗಲೆಂದು ಒಪ್ಪಿಕೊಂಡನು, ಆ ಮಯನ ಮಾಯಾಬಲವಿಂತಿರುವುದೆಂದು ಹೇಳಬಲ್ಲ ವರಾರು ? ನವರತ್ನ ಖಚಿತವಾಗಿಯೂ ವಿಚಿತ್ರತರವಾಗಿಯೂ ಸರ್ವಲೋಕರಮ್ಯವಾಗಿಯೂ ಇರುವ ವಿವಾಹಮಂಟಪವು ಆ ಕ್ಷಣದಲ್ಲಿಯೇ ಉಂಟಾಗಿ ಪರಿಶೋಭಿಸಿತು. ಆಗ ಮಯನು ಅನೇಕರಾದ ತತ್ವಜ್ಞಾನಿಗಳನ್ನು ಕರೆಯಿಸಿಕೊಂಡು, ವೈದಿಕವಿಧಾನದಿಂದ ಅಗ್ನಿಯಲ್ಲಿ ಹೋಮಮಾಡಿ ಮಂಡೋದರಿಯನ್ನು ರಾವಣನಿಗೆ ಧಾರಾ ಪೂರ್ವಕವಾಗಿ ಮದುವೆ ಮಾಡಿ ಕೊಟ್ಟನು. ಆ ಮೇಲೆ ಅಳಿಯನಿಗೆ ಬಹುಮಾನವಾಗಿ<noinclude></noinclude> ev4ucgskwvptsma2or0ypblxex4uod4 324080 324075 2026-06-02T13:00:19Z Pragathi. BH 7585 /* Validated */ 324080 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು|left=|right=9}}</noinclude> ನ್ನಾಲಿಸುತ್ತ ಗುಹೆಗಳನ್ನು ಪ್ರವೇಶಿಸಿ ನೋಡುತ್ತ ನಾನಾ ವಿಧವಾದ ಮೃಗಗಳನ್ನು ಕೊಲ್ಲುತ್ತ ಬರುತ್ತಿರಲು ; ಅಲ್ಲೊಂದು ಕಡೆಯಲ್ಲಿ ತನ್ನ ಮಗಳೊಡನೆ ವಾಸಿಸುತ್ತಿದ್ದ ಮಯನೆಂಬವನನ್ನು ನೋಡಿ--ನೀನು ಯಾರು ? ಈ ಕಾಡಿನಲ್ಲಿ ವಾಸಿಸುವುದಕ್ಕೆ ಕಾರಣವೇನು ? ಈ ಅಬಲೆಯು ಯಾರ ಮಗಳು ? ನಿನ್ನ ಉದ್ಯೋಗವಾವುದು ? ಎಂದು ಕೇಳಲು ; ಅದಕ್ಕೆ ಮಯನು--ಎಲೈ ವೀರನೇ, ಕೇಳು ; ಈ ಲೋಕದಲ್ಲಿ ನನ್ನನ್ನು ಮಯನೆಂದು ಕರೆಯುತ್ತಾರೆ. ನನಗೆ ಸಂಪ್ರಾಪ್ತವಾಗಿರುವ ಅಪಾರವಾದ ದುಃಖವನ್ನು ಯಾರು ತಾನೆ ಪರಿಹರಿಸಬಲ್ಲರು ? ಆದರೂ ಹೇಳುತ್ತೇನೆ ಕೇಳು. ಅಪ್ಸರ ಸ್ತ್ರೀಯರೊಳಗೆ ಶ್ರೇಷ್ಠಳಾದ ಹೇಮೆ ಎಂಬ ವನಿತಾಮಣಿಯ ವಿಷಯವನ್ನು ನೀನು ಕೇಳಿಬಲ್ಲೆಯಷ್ಟೆ ? ದೇವತೆಗಳು ಪ್ರೀತಿಯಿಂದ ಆಕೆಯನ್ನು ನನಗೆ ಹೆಂಡತಿಯನ್ನಾಗಿ ಮಾಡಿಕೊಟ್ಟರು. ನಾನು ಐನೂರು ಸಂವತ್ಸರಗಳ ವರೆಗೂ ಆಕೆಯೊಡನೆ ಸುಖಿಯಾಗಿದ್ದೆನು, ಆ ಮೇಲೆ ನನಗೆ ಆ ಸುಂದರಿಯಲ್ಲಿ ಮಾಯಾವಿ ದುಂದುಭಿ ಎಂಬಿಬ್ಬರು ಗಂಡುಮಕ್ಕಳೂ ಸ್ತ್ರೀ ಶಿರೋಮಣಿಯಾದ ಮಂಡೋದರಿ ಎಂಬ ಈ ಹೆಣ್ಣು ಮಗಳೂ ಹುಟ್ಟಿದರು. ಆ ಮೇಲೆ ನನ್ನ ದೌರ್ಭಾಗ್ಯವಶದಿಂದ ಆಕೆಯೊಡನೆ ನನಗೆ ವಿಯೋಗ ವುಂಟಾಯಿತು, ಪ್ರಾಣಪ್ರಿಯಳಾದ ಪತ್ನಿಯ ವಿಯೋಗತಾಪವನ್ನು ಸಹಿಸಿಕೊಂಡು ಯಾವನು ತಾನೇ ಬದುಕಬಲ್ಲನು ? ಕಠಿಣಹೃದಯನಾದ ನಾನು ಮೊದಲು ಆಕೆಯನ್ನು ವಿವಾಹವಾಗಿ ಮಾಯೆಯಿಂದ ಹೇಮೆ ಎಂಬ ಪುರವನ್ನು ನಿರ್ಮಿಸಿಕೊಂಡು ಅಲ್ಲಿ ಸುಖಿಯಾಗಿದ್ದೆನು. ಈಗ ಸಹಿಸಲಶಕ್ಯವಾದ ದುಃಖದಿಂದ ಅನಾಥನಾಗಿ ಆ ಪಟ್ಟಣವನ್ನೂ ಬಿಟ್ಟು ಈ ಮಗಳನ್ನು ಕರೆದುಕೊಂಡು ಹೊರಟುಬಂದು ಸದ್ವಂಶಜನೂ ಯೋಗ್ಯನೂ ಆದ ಒಬ್ಬ ವರನಿಗೆ ಈಕೆಯನ್ನು ಕೊಡಬೇಕೆಂಬ ನಿರೀಕ್ಷೆಯಿಂದ ಈ ಅರಣ್ಯದಲ್ಲಿ ಸೇರಿಕೊಂಡಿದ್ದೇನೆಂದು ಹೇಳಿ, ನೀನು ಯಾರು ? ಎಂದು ಕೇಳಿದನು. ದಶಮುಖನು--ಎಲೈ ಮಯನೇ, ಕೇಳು, ನಾನು ಪುಲಸ್ಯ ಮಹಾಮುನಿಯ ಪುತ್ರನಾದ ವಿಶ್ರವಸ್ಸಿನ ತನಯನು, ನನ್ನನ್ನು ದಶಕಂಠನೆಂದು ಕರೆಯುವರು ಎಂದು ಹೇಳಲು; ಈ ಮಾತನ್ನು ಕೇಳಿದ ಮಯನು ಸಂತೋಷಿಸಿ--ಈಗ ನನ್ನಿಷ್ಟಾರ್ಥವು ಸಿದ್ದಿಸಿತು, ಈ ಪುತ್ರಿಗೆ ಯೋಗ್ಯನಾದ ವರನು ದೊರಕಿದನು ಎಂದು ಮನಸ್ಸಿನಲ್ಲಿ ಆಲೋಚಿಸಿ, ದಶಗ್ರೀವನನ್ನು ಕುರಿತು--ಎಲೈ ಮಹಾತ್ಮನೇ, ಬ್ರಹ್ಮಕುಲಸಂಭವನಾದ ನಿನಗಿಂತಲೂ ಸುತ್ಕುಲೋತ್ಪನ್ನ ನದಾರುಂಟು ? ಸುಂದರಿಯೂ ಸುಶೀಲೆಯೂ ಆದ ಈ ನನ್ನ ಪುತ್ರಿಯನ್ನು ಪತ್ನಿಭಾವದಿಂದ ಪರಿಗ್ರಹಿಸಬೇಕೆಂದು ಪ್ರಾರ್ಥಿಸಲು ; ದಶವದನನು ಹಾಗೇ ಆಗಲೆಂದು ಒಪ್ಪಿಕೊಂಡನು, ಆ ಮಯನ ಮಾಯಾಬಲವಿಂತಿರುವುದೆಂದು ಹೇಳಬಲ್ಲ ವರಾರು ? ನವರತ್ನ ಖಚಿತವಾಗಿಯೂ ವಿಚಿತ್ರತರವಾಗಿಯೂ ಸರ್ವಲೋಕರಮ್ಯವಾಗಿಯೂ ಇರುವ ವಿವಾಹಮಂಟಪವು ಆ ಕ್ಷಣದಲ್ಲಿಯೇ ಉಂಟಾಗಿ ಪರಿಶೋಭಿಸಿತು. ಆಗ ಮಯನು ಅನೇಕರಾದ ತತ್ವಜ್ಞಾನಿಗಳನ್ನು ಕರೆಯಿಸಿಕೊಂಡು, ವೈದಿಕವಿಧಾನದಿಂದ ಅಗ್ನಿಯಲ್ಲಿ ಹೋಮಮಾಡಿ ಮಂಡೋದರಿಯನ್ನು ರಾವಣನಿಗೆ ಧಾರಾ ಪೂರ್ವಕವಾಗಿ ಮದುವೆ ಮಾಡಿ ಕೊಟ್ಟನು. ಆ ಮೇಲೆ ಅಳಿಯನಿಗೆ ಬಹುಮಾನವಾಗಿ<noinclude></noinclude> 89adsrdpuaepi2fn5swrn4gsazr8sve ಪುಟ:ಕಥಾ ಸಂಗ್ರಹ - ಭಾಗ ೨.djvu/೨೦ 104 44580 324076 106932 2026-06-02T12:54:03Z Vinoda mamatharai 3222 /* Proofread */ 324076 proofread-page text/x-wiki <noinclude><pagequality level="3" user="Vinoda mamatharai" />{{rh|center=ಕಥಾಸಂಗ್ರಹ-೪ ನೆಯ ಭಾಗ|left=10|right=}}</noinclude> ಒಂದು ಶಕ್ತಿಯನ್ನಿತ್ತು ತಾನು ಅಂತರಿಕ್ಷ ಮಾರ್ಗದಲ್ಲಿ ಹೊರಟುಹೋದನು, ಅನಂತರದಲ್ಲಿ ದಶಗ್ರೀವನು ಪತ್ನಿಯಾದ ಮಂಡೋದರಿಯೊಡನೆ ಲಂಕಾನಗರವನ್ನು ಪ್ರವೇಶಿಸಿ ತನ್ನ ಹಿರಿಯ ತಮ್ಮನಾದ ಕುಂಭಕರ್ಣನಿಗೆ ಪೌರೋಚನನ ಮಗಳ ಮಗಳಾದ ವಜ್ರಜ್ವಾಲೆ ಎಂಬವಳನ್ನೂ ಕಿರಿಯ ತಮ್ಮ ನಾದ ವಿಭೀಷಣನಿಗೆ ಶೈಲೂಷನೆಂಬ ಗಂಧರ್ವನ ಮಗಳಾದ ಸರಮೆ ಎಂಬವಳನ್ನೂ ತಂದು ಅತಿಸಂಭ್ರಮದಿಂದ ಮದುವೆ ಮಾಡಿಸಿದನು. {{gap}}ಅನಂತರದಲ್ಲಿ ಕೆಲವು ದಿನಗಳು ಕಳೆದ ಮೇಲೆ ಮಂಡೋದರಿಯು ಗರ್ಭವನ್ನು ಧರಿಸಿ ಒಂದು ಗಂಡು ಮಗುವನ್ನು ಹೆತ್ತಳು, ಆ ಕೂಸಿನ ರೋದನಧ್ವನಿಯು ಘನಗರ್ಜಿತದಂತೆ ಗಂಭೀರವಾಗಿಯೂ ಭಯಂಕರವಾಗಿಯೂ ಇದ್ದುದರಿಂದ ದಶವದನನು ಆ ಶಿಶುವಿಗೆ ಮೇಘನಾದನೆಂಬ ಅನ್ವರ್ಥನಾಮವನ್ನಿಟ್ಟನು, ಕುಂಭಕರ್ಣನಿಗೆ ಬ್ರಹ್ಮದತ್ತ ವರಪ್ರಭಾವದಿಂದ ನಿದ್ರಾಭಾರವು ಅಧಿಕವಾಗಲು ; ಒಂದು ದಿನ ಅವನು ದಶಕ೦ಧರನ ಬಳಿಗೆ ಬಂದು-ನಿದ್ರೆಯು ನನ್ನನ್ನು ಸಂಪೂರ್ಣವಾಗಿ ಬಾಧಿಸುತ್ತದೆ. ಒಂದು ಶಯ್ಯಾಗೃಹವನ್ನು ಮಾಡಿಸಿಕೊಡು ಎಂದು ಕೇಳಲು ; ಅವನು ದೇವತೆಗಳ ಬಡಗಿಯಾದ ವಿಶ್ವಕರ್ಮನನ್ನು ಕರಿಸಿ ಸುವರ್ಣಸ್ತಂಭಗಳಿಂದ ಕೂಡಿಯೂ ನವರತ್ನ ಖಚಿತವಾಗಿಯೂ ಶಯನೋಚಿತ ಸಾಮಗ್ರೀ ಸಮೇತವಾಗಿಯೂ ಇರುವ ಒಂದು ಮನೆಯನ್ನು ಮಾಡಿಸಿಕೊಟ್ಟನು, ಕುಂಭಕರ್ಣನು ಆ ಮನೆಯನ್ನು ನೋಡಿ ಸಂತುಷ್ಟನಾಗಿ ಅಲ್ಲಿ ಬಹಳ ಕಾಲದ ವರೆಗೂ ಮಲಗಿಕೊಂಡು ನಿರ್ಬಾಧಕವಾದ ನಿದ್ರಾಸುಖವೆನ್ನನುಭವಿಸುತ್ತಿದ್ದನು. {{gap}}ಇತ್ತಲಾ ದಶಕಂಧರನು ಶೌರ್ಯಾಧಿಕ್ಯದಿಂದುಂಟಾದ ಗರ್ವವುಳ್ಳವನಾಗಿ ಮುನಿಜನಗಳನ್ನು ಬಾಧಿಸಿ ಕೊಲ್ಲುತ್ತ, ದಾನವ ದೈತ್ಯ ಸುರ ನರ ನಾಗ ಕಿನ್ನರಾದಿಗಳ ಸಂದಣಿಗಳನ್ನು ಸವರುತ್ತ, ಕೆರೆ ತೊರೆ ಕುಂಟೆ ಕಾಲಿವೆ ಮೊದಲಾದ ಜಲಾಶಯಗಳನ್ನು ಧ್ವಂಸಮಾಡುತ್ತ ಮದಿಸಿ ಸೊಕ್ಕಿದಾನೆಯ ಚಂದದಿಂದ ಹೊರಟು ಪರ್ವತ ಶಿಖರಗಳನ್ನು ಕಿತ್ತುರುಳಿಸುತ್ತ ಪುರಗೋಪುರಗಳನ್ನು ತುಳಿದು ಹಾಳುಮಾಡುತ್ತ ಯಾರೂ ಎದುರಾಳಿಲ್ಲದೆ ಮದೋನ್ಮತ್ತತೆಯಿಂದ ನಿರರ್ಗಳವಾಗಿ ತಿರುಗುತ್ತಿದ್ದನು. {{gap}}ಹೀಗಿರುವಲ್ಲಿ ಉತ್ತರದಿಗೀಶನಾದ ಕುಬೇರನು ಒಂದು ದಿವಸ ತನ್ನ ತಮ್ಮನಾದ ದಶಮುಖನು ದುರ್ಮಾರ್ಗಿಯಾಗಿರುವುದನ್ನು ಕೇಳಿ-ಅಯ್ಯೋ, ಶ್ರೇಷ್ಠವಾದ ನಮ್ಮ ಕುಲದಲ್ಲಿ ಇಂಥ ದುಷ್ಠನು ಹುಟ್ಟಿದನಲ್ಲಾ! ಎಂದು ಬಹಳವಾಗಿ ವ್ಯಸನ ಪಡುತ್ತ ಒಬ್ಬ ಚಾರನನ್ನು ಕರೆದು-ಎಲೈ, ನೀನು ದಶಾನನನ ಬಳಿಗೆ ಹೋಗಿ ಇಂಥ ದುಷ್ಟತ್ವವನ್ನು ಬಿಟ್ಟು ಸುಖಿಯಾಗಿರು ಎಂದು ನಾನು ಹೇಳಿದೆನೆಂಬುದಾಗಿ ತಿಳಿಸು ಎಂದು ಹೇಳಿಕಳುಹಿಸಿದನು. ಅವನು ಬಂದು ದಶವದನನಿಗೆ ನಮಸ್ಕರಿಸಿ: ಎಲೈ ರಾಕ್ಷಸೇಂದ್ರನೇ, ನಿಮ್ಮಣ್ಣನಾದ ಕುಬೇರನು ಕೈಲಾಸಪರ್ವತದಲ್ಲಿ ಅಲಕಾವತಿಯೆಂಬೊಂದು ಪಟ್ಟಣವನ್ನು ಮಾಡಿಕೊಂಡು ಹರನೊಡನೆ ಸ್ನೇಹವನ್ನು ಸಂಪಾದಿಸಿ ಕೊಂಡು ಸುಖಿಯಾಗಿದ್ದಾನೆ. ಆತನು ನಿನಗೋಸ್ಕರ ನನ್ನೊಡನೆ ಹೇಳಿಕಳುಹಿಸಿರುವ<noinclude></noinclude> 17xpy5t2qzf53l3ve278iyhucgmh5rw 324079 324076 2026-06-02T13:00:09Z Pragathi. BH 7585 /* Validated */ 324079 proofread-page text/x-wiki <noinclude><pagequality level="4" user="Pragathi. BH" />{{rh|center=ಕಥಾಸಂಗ್ರಹ-೪ ನೆಯ ಭಾಗ|left=10|right=}}</noinclude> ಒಂದು ಶಕ್ತಿಯನ್ನಿತ್ತು ತಾನು ಅಂತರಿಕ್ಷ ಮಾರ್ಗದಲ್ಲಿ ಹೊರಟುಹೋದನು, ಅನಂತರದಲ್ಲಿ ದಶಗ್ರೀವನು ಪತ್ನಿಯಾದ ಮಂಡೋದರಿಯೊಡನೆ ಲಂಕಾನಗರವನ್ನು ಪ್ರವೇಶಿಸಿ ತನ್ನ ಹಿರಿಯ ತಮ್ಮನಾದ ಕುಂಭಕರ್ಣನಿಗೆ ಪೌರೋಚನನ ಮಗಳ ಮಗಳಾದ ವಜ್ರಜ್ವಾಲೆ ಎಂಬವಳನ್ನೂ ಕಿರಿಯ ತಮ್ಮ ನಾದ ವಿಭೀಷಣನಿಗೆ ಶೈಲೂಷನೆಂಬ ಗಂಧರ್ವನ ಮಗಳಾದ ಸರಮೆ ಎಂಬವಳನ್ನೂ ತಂದು ಅತಿಸಂಭ್ರಮದಿಂದ ಮದುವೆ ಮಾಡಿಸಿದನು. {{gap}}ಅನಂತರದಲ್ಲಿ ಕೆಲವು ದಿನಗಳು ಕಳೆದ ಮೇಲೆ ಮಂಡೋದರಿಯು ಗರ್ಭವನ್ನು ಧರಿಸಿ ಒಂದು ಗಂಡು ಮಗುವನ್ನು ಹೆತ್ತಳು, ಆ ಕೂಸಿನ ರೋದನಧ್ವನಿಯು ಘನಗರ್ಜಿತದಂತೆ ಗಂಭೀರವಾಗಿಯೂ ಭಯಂಕರವಾಗಿಯೂ ಇದ್ದುದರಿಂದ ದಶವದನನು ಆ ಶಿಶುವಿಗೆ ಮೇಘನಾದನೆಂಬ ಅನ್ವರ್ಥನಾಮವನ್ನಿಟ್ಟನು, ಕುಂಭಕರ್ಣನಿಗೆ ಬ್ರಹ್ಮದತ್ತ ವರಪ್ರಭಾವದಿಂದ ನಿದ್ರಾಭಾರವು ಅಧಿಕವಾಗಲು ; ಒಂದು ದಿನ ಅವನು ದಶಕ೦ಧರನ ಬಳಿಗೆ ಬಂದು-ನಿದ್ರೆಯು ನನ್ನನ್ನು ಸಂಪೂರ್ಣವಾಗಿ ಬಾಧಿಸುತ್ತದೆ. ಒಂದು ಶಯ್ಯಾಗೃಹವನ್ನು ಮಾಡಿಸಿಕೊಡು ಎಂದು ಕೇಳಲು ; ಅವನು ದೇವತೆಗಳ ಬಡಗಿಯಾದ ವಿಶ್ವಕರ್ಮನನ್ನು ಕರಿಸಿ ಸುವರ್ಣಸ್ತಂಭಗಳಿಂದ ಕೂಡಿಯೂ ನವರತ್ನ ಖಚಿತವಾಗಿಯೂ ಶಯನೋಚಿತ ಸಾಮಗ್ರೀ ಸಮೇತವಾಗಿಯೂ ಇರುವ ಒಂದು ಮನೆಯನ್ನು ಮಾಡಿಸಿಕೊಟ್ಟನು, ಕುಂಭಕರ್ಣನು ಆ ಮನೆಯನ್ನು ನೋಡಿ ಸಂತುಷ್ಟನಾಗಿ ಅಲ್ಲಿ ಬಹಳ ಕಾಲದ ವರೆಗೂ ಮಲಗಿಕೊಂಡು ನಿರ್ಬಾಧಕವಾದ ನಿದ್ರಾಸುಖವೆನ್ನನುಭವಿಸುತ್ತಿದ್ದನು. {{gap}}ಇತ್ತಲಾ ದಶಕಂಧರನು ಶೌರ್ಯಾಧಿಕ್ಯದಿಂದುಂಟಾದ ಗರ್ವವುಳ್ಳವನಾಗಿ ಮುನಿಜನಗಳನ್ನು ಬಾಧಿಸಿ ಕೊಲ್ಲುತ್ತ, ದಾನವ ದೈತ್ಯ ಸುರ ನರ ನಾಗ ಕಿನ್ನರಾದಿಗಳ ಸಂದಣಿಗಳನ್ನು ಸವರುತ್ತ, ಕೆರೆ ತೊರೆ ಕುಂಟೆ ಕಾಲಿವೆ ಮೊದಲಾದ ಜಲಾಶಯಗಳನ್ನು ಧ್ವಂಸಮಾಡುತ್ತ ಮದಿಸಿ ಸೊಕ್ಕಿದಾನೆಯ ಚಂದದಿಂದ ಹೊರಟು ಪರ್ವತ ಶಿಖರಗಳನ್ನು ಕಿತ್ತುರುಳಿಸುತ್ತ ಪುರಗೋಪುರಗಳನ್ನು ತುಳಿದು ಹಾಳುಮಾಡುತ್ತ ಯಾರೂ ಎದುರಾಳಿಲ್ಲದೆ ಮದೋನ್ಮತ್ತತೆಯಿಂದ ನಿರರ್ಗಳವಾಗಿ ತಿರುಗುತ್ತಿದ್ದನು. {{gap}}ಹೀಗಿರುವಲ್ಲಿ ಉತ್ತರದಿಗೀಶನಾದ ಕುಬೇರನು ಒಂದು ದಿವಸ ತನ್ನ ತಮ್ಮನಾದ ದಶಮುಖನು ದುರ್ಮಾರ್ಗಿಯಾಗಿರುವುದನ್ನು ಕೇಳಿ-ಅಯ್ಯೋ, ಶ್ರೇಷ್ಠವಾದ ನಮ್ಮ ಕುಲದಲ್ಲಿ ಇಂಥ ದುಷ್ಠನು ಹುಟ್ಟಿದನಲ್ಲಾ! ಎಂದು ಬಹಳವಾಗಿ ವ್ಯಸನ ಪಡುತ್ತ ಒಬ್ಬ ಚಾರನನ್ನು ಕರೆದು-ಎಲೈ, ನೀನು ದಶಾನನನ ಬಳಿಗೆ ಹೋಗಿ ಇಂಥ ದುಷ್ಟತ್ವವನ್ನು ಬಿಟ್ಟು ಸುಖಿಯಾಗಿರು ಎಂದು ನಾನು ಹೇಳಿದೆನೆಂಬುದಾಗಿ ತಿಳಿಸು ಎಂದು ಹೇಳಿಕಳುಹಿಸಿದನು. ಅವನು ಬಂದು ದಶವದನನಿಗೆ ನಮಸ್ಕರಿಸಿ: ಎಲೈ ರಾಕ್ಷಸೇಂದ್ರನೇ, ನಿಮ್ಮಣ್ಣನಾದ ಕುಬೇರನು ಕೈಲಾಸಪರ್ವತದಲ್ಲಿ ಅಲಕಾವತಿಯೆಂಬೊಂದು ಪಟ್ಟಣವನ್ನು ಮಾಡಿಕೊಂಡು ಹರನೊಡನೆ ಸ್ನೇಹವನ್ನು ಸಂಪಾದಿಸಿ ಕೊಂಡು ಸುಖಿಯಾಗಿದ್ದಾನೆ. ಆತನು ನಿನಗೋಸ್ಕರ ನನ್ನೊಡನೆ ಹೇಳಿಕಳುಹಿಸಿರುವ<noinclude></noinclude> rxd7z48rvh0c52fakjx9pitriv29qgd ಪುಟ:ಕಥಾ ಸಂಗ್ರಹ - ಭಾಗ ೨.djvu/೨೧ 104 44581 324081 106933 2026-06-02T13:03:34Z Vinoda mamatharai 3222 /* Proofread */ 324081 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು - |left=|right= 11}}</noinclude> ಮಾತುಗಳನ್ನು ಕೇಳು. ನೀನು ಬ್ರಹ್ಮ ಕುಲದಲ್ಲಿ ಹುಟ್ಟಿ ಮುನಿಗಳನ್ನೂ `ದೇವತಗಳನ್ನೂ ಹೀಗೆ ಬಾಧಿಸುತ್ತ ಬರುವುದರಿಂದ ನಿನಗೆ ಮಹತ್ತರವಾದ ಹಾನಿಯುಂಟಾಗುವುದೇ ಹೊರತು ಸೌಖ್ಯವುಂಟಾಗಲಾರದು. ಆದುದರಿಂದ ಇನ್ನು ಮೇಲೆಯಾದರೂ ಇಂಥ ದುಷ್ಕೃತ್ಯಗಳನ್ನು ಮಾಡದೆ ಸನ್ಮಾರ್ಗದಲ್ಲಿ ನಡೆಯುತ್ತ ಎಲ್ಲರಿಂದಲೂ ಒಳ್ಳೆಯವನೆನಿಸಿಕೊಂಡು ಸುಖವಾಗಿ ಬದುಕೆಂದು ಹೇಳಿಕಳುಹಿಸಿದನು ಎನಲು ; ಈ ಮಾತುಗಳನ್ನು ಕೇಳಿದ ಕೂಡಲೆ ದಶಾಸ್ಯನು ಕೋಪಾಟೋಪದಿಂದ ಕೂಡಿ ಕೆಂಗಣ್ಣು ತಿರುಗಿ ; ಹುಬ್ಬುಗಳನ್ನು ಹಾರಿಸುತ್ತ ತುಟಿಗಳನ್ನು ಕುಣಿಸುತ ಆ ದೂತನನ್ನು ನೋಡಿ ಏನೆಲಾ, ಕುಬೇರನು ತಾನು ಹರಸಖನಾಗಿದ್ದೇನೆಂಬ ದುಗರ್ವದಿಂದ ನನಗೆ ವಿವೇಕವನ್ನು ಹೇಳೆಂದು ನಿನ್ನನ್ನು ಕಳುಹಿಸಿದನೇ ? ದೇವತೆಗಳಿಂದಲೂ ಮುನಿಗಳಿಂದಲೂ ನನಗೆ ಬರುವ ಕೇಡೂ ಉಂಟೇ ? ಬಲುಮಾತುಗಳಿಂದೇನು ? ಅಣ್ಣನಾದರಾಗಲಿ, ಮೊದಲು ಆತನನ್ನು ಕೊಂದು ಆ ಮೇಲೆ ಲೋಕನಾಯಕರನ್ನು ಮೃತ್ಯುಜತರಕ್ಕೆ ಸೇರಿಸಿ ಲೋಕಗಳನ್ನೆಲ್ಲಾ ವಿನಾಶಮಾಡುವೆನು. ಸುರನರೋರಗಾದಿ ನಾಯಕರನ್ನೂ ಆದಿತ್ಯ ಚಂದ್ರಾದಿ ಜ್ಯೋತಿರ್ಮಂಡಲಾಧೀಶರನ್ನೂ ಬಲುಗಡಿತದಿಂದುರುಳಿಸುವೆ ನೆಂದು ವಿಜೃಂಭಿಸಿ ಗಿರಿಸದೃಶವಾದ ತೇರನ್ನೇರಿ ಉತ್ತರದಿಗಭಿಮುಖನಾಗಿ ನಡೆದನು. ಅವನೊಡನೆಯೇ ಆನೆ ಕುದುರೆ ತೇರು ಕಾಲಾಳುಗಳ ತಂಡವು ನೆಲದಗಲಕ್ಕೂ ಹೊರಟುದಲ್ಲದೆ ಶುಕಸಾರಣಾದಿ ಮಂತ್ರಿಗಳೂ ಸೇನಾಪತಿಗಳೂ ಬೆಂಬಲವಾಗಿ ಮುಂ ಕೊಂಡರು. ಈ ಸೇನೆಯನ್ನು ಭೂಮಿಯೇ ಹೆತ್ತುದೋ ? ಅಥವಾ ಎಂಟು ದಿಕ್ಕು ಗಳೇನಾದರೂ ಇದುವೋ ? ಎಂಬಂತೆ ಮಿತಿಮಾರಿದ ದಂಡೈತರುತ್ತಿರಲು ; ಅದರ ರದಘಾತದಿಂದೆದ್ದ ಧೂಳಿಯು ಸೂರ್ಯಮಂಡಲವನ್ನು ಆವರಿಸಿಕೊಂಡು ದಿನವನ್ನು ಮರ್ದಿನವನ್ನಾಗಿ ಮಾಡಿತು. ಈ ರೀತಿಯಾಗಿ ಸಕಲ ಸನ್ನಾಹದಿಂದ ಕೂಡಿದ ದಶ ಮುಖನು ಗಿರಿ ವನ ಪಟ್ಟಣ ನದ ನದ್ಯಾದಿ ಪ್ರದೇಶಗಳನ್ನು ಕಳೆದು ಕೈಲಾಸಾಚ ಲದ ತಪ್ಪಲಲ್ಲಿರುವ ಅಲಕಾವತೀನಗರದ ಸವಿಾಪಕ್ಕೆ ಬಂದು ಹೆಬ್ಬಾಗಿಲಲ್ಲಿ ನಿಂತು ದ್ವಾರಪಾಲಕರಲ್ಲಿ ಒಬ್ಬ ಯಕ್ಷನನ್ನು ಕರೆದು-ಎಲೈ ದ್ವಾರಪಾಲಕನೇ, ನೀನು ನಿಮ್ಮೊ ತೆಯನ ಬಳಿಗೆ ಹೋಗಿ_ಲೋಕೈಕವೀರನಾದ ದಶಕಂಠನು ಯುದ್ದ ಕ್ಕೆ ಬಂದಿದ್ದಾನೆ. ನಿನ್ನನ್ನು ಶೀಘ್ರವಾಗಿ ಬರಹೇಳಿದನೆಂದು ತಿಳಿಸೆನಲು ; ಅವನು ಕೂಡಲೆ ಕುಬೇರನ ಎಲಗದ ಚಾವಡಿಗೆ ಬಂದು ಭೀತಿಯಿಂದ ಕೈಮುಗಿದು-ಒಡೆಯನೇ, ಏಳು. ದಶಕಂಠನೊಡನೆ ಯುದ್ಧ ಮಾಡು ನಡೆ, ಅವನು ನಮ್ಮಲ್ಲಿ ತೋಳೋಟೆಯನ್ನು ಕಳೆಯುವ ತಂತೆ, ನಾನು ಅವನ ಗೆರ್ವಾತಿಶಯೋಕ್ತಿಗಳನ್ನು ವಿವರಿಸಲಾರೆನು, ಬೇಗ ಯುದ್ಧ ಕೈ ಸೈನ್ಯವನ್ನು ಕಳುಹಿಸು ಎಂದು ಹೇಳಲು ; ಕುಬೇರನು ಆ ಮಾತನ್ನು ಕೇಳಿ. ಕೇಳು, ಹೇಳು, ದಶಾನನನ ಆಳುತನದ ಮಾತುಗಳನ್ನು ಇನ್ನೊಂದು ಸಾರಿ ಹೇಳು. ಶಮುಖನಿಗೆ ನಮ್ಮೊಡನ ಕಾಳಗವೇ ? ಶಿವ, ಶಿವಾ ! ಇದು ವಿಪರೀತಕಾಲಗತಿಯು ಎಂದು ಅರೆಗಳಿಗೆಯ ವರೆಗೂ ಚಿಂತಿಸಿ ಕೃತ್ಯವನ್ನು ನೋಡಿ.ಎಲೈ, ಮಹಾಗರ್ವದೂ 3ತನಾದ ಖಳಪತಿಯೊಡನೆ ಕಾಳಗಕ್ಕೆ ಶೂರರಾದ ನಮ್ಮ ಭಟರು ಸನ್ನದ್ಧರಾಗಿ ಒಬ<noinclude></noinclude> 0z5lgo6mmj1oaw07zzcker46d80yzz2 324084 324081 2026-06-02T13:11:50Z Vinoda mamatharai 3222 324084 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು - |left=|right= 11}}</noinclude> ಮಾತುಗಳನ್ನು ಕೇಳು. ನೀನು ಬ್ರಹ್ಮ ಕುಲದಲ್ಲಿ ಹುಟ್ಟಿ ಮುನಿಗಳನ್ನೂ `ದೇವತಗಳನ್ನೂ ಹೀಗೆ ಬಾಧಿಸುತ್ತ ಬರುವುದರಿಂದ ನಿನಗೆ ಮಹತ್ತರವಾದ ಹಾನಿಯುಂಟಾಗುವುದೇ ಹೊರತು ಸೌಖ್ಯವುಂಟಾಗಲಾರದು. ಆದುದರಿಂದ ಇನ್ನು ಮೇಲೆಯಾದರೂ ಇಂಥ ದುಷ್ಕೃತ್ಯಗಳನ್ನು ಮಾಡದೆ ಸನ್ಮಾರ್ಗದಲ್ಲಿ ನಡೆಯುತ್ತ ಎಲ್ಲರಿಂದಲೂ ಒಳ್ಳೆಯವನೆನಿಸಿಕೊಂಡು ಸುಖವಾಗಿ ಬದುಕೆಂದು ಹೇಳಿಕಳುಹಿಸಿದನು ಎನಲು ; ಈ ಮಾತುಗಳನ್ನು ಕೇಳಿದ ಕೂಡಲೆ ದಶಾಸ್ಯನು ಕೋಪಾಟೋಪದಿಂದ ಕೂಡಿ ಕೆಂಗಣ್ಣು ತಿರುಗಿ ; ಹುಬ್ಬುಗಳನ್ನು ಹಾರಿಸುತ್ತ ತುಟಿಗಳನ್ನು ಕುಣಿಸುತ ಆ ದೂತನನ್ನು ನೋಡಿ ಏನೆಲಾ, ಕುಬೇರನು ತಾನು ಹರಸಖನಾಗಿದ್ದೇನೆಂಬ ದುಗರ್ವದಿಂದ ನನಗೆ ವಿವೇಕವನ್ನು ಹೇಳೆಂದು ನಿನ್ನನ್ನು ಕಳುಹಿಸಿದನೇ ? ದೇವತೆಗಳಿಂದಲೂ ಮುನಿಗಳಿಂದಲೂ ನನಗೆ ಬರುವ ಕೇಡೂ ಉಂಟೇ ? ಬಲುಮಾತುಗಳಿಂದೇನು ? ಅಣ್ಣನಾದರಾಗಲಿ, ಮೊದಲು ಆತನನ್ನು ಕೊಂದು ಆ ಮೇಲೆ ಲೋಕನಾಯಕರನ್ನು ಮೃತ್ಯುಜತರಕ್ಕೆ ಸೇರಿಸಿ ಲೋಕಗಳನ್ನೆಲ್ಲಾ ವಿನಾಶಮಾಡುವೆನು. ಸುರನರೋರಗಾದಿ ನಾಯಕರನ್ನೂ ಆದಿತ್ಯ ಚಂದ್ರಾದಿ ಜ್ಯೋತಿರ್ಮಂಡಲಾಧೀಶರನ್ನೂ ಬಲುಗಡಿತದಿಂದುರುಳಿಸುವೆ ನೆಂದು ವಿಜೃಂಭಿಸಿ ಗಿರಿಸದೃಶವಾದ ತೇರನ್ನೇರಿ ಉತ್ತರದಿಗಭಿಮುಖನಾಗಿ ನಡೆದನು. ಅವನೊಡನೆಯೇ ಆನೆ ಕುದುರೆ ತೇರು ಕಾಲಾಳುಗಳ ತಂಡವು ನೆಲದಗಲಕ್ಕೂ ಹೊರಟುದಲ್ಲದೆ ಶುಕಸಾರಣಾದಿ ಮಂತ್ರಿಗಳೂ ಸೇನಾಪತಿಗಳೂ ಬೆಂಬಲವಾಗಿ ಮುಂ ಕೊಂಡರು. ಈ ಸೇನೆಯನ್ನು ಭೂಮಿಯೇ ಹೆತ್ತುದೋ ? ಅಥವಾ ಎಂಟು ದಿಕ್ಕುಗಳೇನಾದರೂ ಇದುವೋ ? ಎಂಬಂತೆ ಮಿತಿಮಾರಿದ ದಂಡೈತರುತ್ತಿರಲು ; ಅದರ ರದಘಾತದಿಂದೆದ್ದ ಧೂಳಿಯು ಸೂರ್ಯಮಂಡಲವನ್ನು ಆವರಿಸಿಕೊಂಡು ದಿನವನ್ನು ದುರ್ದಿನವನ್ನಾಗಿ ಮಾಡಿತು. ಈ ರೀತಿಯಾಗಿ ಸಕಲ ಸನ್ನಾಹದಿಂದ ಕೂಡಿದ ದಶ ಮುಖನು ಗಿರಿ ವನ ಪಟ್ಟಣ ನದ ನದ್ಯಾದಿ ಪ್ರದೇಶಗಳನ್ನು ಕಳೆದು ಕೈಲಾಸಾಚ ಲದ ತಪ್ಪಲಲ್ಲಿರುವ ಅಲಕಾವತೀನಗರದ ಸವಿಾಪಕ್ಕೆ ಬಂದು ಹೆಬ್ಬಾಗಿಲಲ್ಲಿ ನಿಂತು ದ್ವಾರಪಾಲಕರಲ್ಲಿ ಒಬ್ಬ ಯಕ್ಷನನ್ನು ಕರೆದು-ಎಲೈ ದ್ವಾರಪಾಲಕನೇ, ನೀನು ನಿಮ್ಮೊಡೆಯನ ಬಳಿಗೆ ಹೋಗಿ_ಲೋಕೈಕವೀರನಾದ ದಶಕಂಠನು ಯುದ್ದಕ್ಕೆ ಬಂದಿದ್ದಾನೆ. ನಿನ್ನನ್ನು ಶೀಘ್ರವಾಗಿ ಬರಹೇಳಿದನೆಂದು ತಿಳಿಸೆನಲು ; ಅವನು ಕೂಡಲೆ ಕುಬೇರನ ಓಲಗದ ಚಾವಡಿಗೆ ಬಂದು ಭೀತಿಯಿಂದ ಕೈಮುಗಿದು-ಒಡೆಯನೇ, ಏಳು. ದಶಕಂಠನೊಡನೆ ಯುದ್ಧ ಮಾಡು ನಡೆ, ಅವನು ನಮ್ಮಲ್ಲಿ ತೋಳ್ಬೇಟೆಯನ್ನು ಕಳೆಯುವನಂತೆ, ನಾನು ಅವನ ಗೆರ್ವಾತಿಶಯೋಕ್ತಿಗಳನ್ನು ವಿವರಿಸಲಾರೆನು, ಬೇಗ ಯುದ್ಧಕ್ಕೆ ಸೈನ್ಯವನ್ನು ಕಳುಹಿಸು ಎಂದು ಹೇಳಲು ; ಕುಬೇರನು ಆ ಮಾತನ್ನು ಕೇಳಿ. ಕೇಳು, ಹೇಳು, ದಶಾನನನ ಆಳುತನದ ಮಾತುಗಳನ್ನು ಇನ್ನೊಂದು ಸಾರಿ ಹೇಳು. ದಶಮುಖನಿಗೆ ನಮ್ಮೊಡನ ಕಾಳಗವೇ ? ಶಿವ, ಶಿವಾ ! ಇದು ವಿಪರೀತಕಾಲಗತಿಯು ಎಂದು ಅರೆಗಳಿಗೆಯ ವರೆಗೂ ಚಿಂತಿಸಿ ಕೃತ್ಯವನ್ನು ನೋಡಿ.ಎಲೈ, ಮಹಾಗರ್ವದೂರ್ತನಾದ ಖಳಪತಿಯೊಡನೆ ಕಾಳಗಕ್ಕೆ ಶೂರರಾದ ನಮ್ಮ ಭಟರು ಸನ್ನದ್ಧರಾಗಿ ಬರು<noinclude></noinclude> bnv09mt6chmsp9bfmlr8l1nxbpby35s 324085 324084 2026-06-02T13:13:10Z Vinoda mamatharai 3222 324085 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು - |left=|right= 11}}</noinclude> ಮಾತುಗಳನ್ನು ಕೇಳು. ನೀನು ಬ್ರಹ್ಮ ಕುಲದಲ್ಲಿ ಹುಟ್ಟಿ ಮುನಿಗಳನ್ನೂ `ದೇವತಗಳನ್ನೂ ಹೀಗೆ ಬಾಧಿಸುತ್ತ ಬರುವುದರಿಂದ ನಿನಗೆ ಮಹತ್ತರವಾದ ಹಾನಿಯುಂಟಾಗುವುದೇ ಹೊರತು ಸೌಖ್ಯವುಂಟಾಗಲಾರದು. ಆದುದರಿಂದ ಇನ್ನು ಮೇಲೆಯಾದರೂ ಇಂಥ ದುಷ್ಕೃತ್ಯಗಳನ್ನು ಮಾಡದೆ ಸನ್ಮಾರ್ಗದಲ್ಲಿ ನಡೆಯುತ್ತ ಎಲ್ಲರಿಂದಲೂ ಒಳ್ಳೆಯವನೆನಿಸಿಕೊಂಡು ಸುಖವಾಗಿ ಬದುಕೆಂದು ಹೇಳಿಕಳುಹಿಸಿದನು ಎನಲು ; ಈ ಮಾತುಗಳನ್ನು ಕೇಳಿದ ಕೂಡಲೆ ದಶಾಸ್ಯನು ಕೋಪಾಟೋಪದಿಂದ ಕೂಡಿ ಕೆಂಗಣ್ಣು ತಿರುಗಿ ; ಹುಬ್ಬುಗಳನ್ನು ಹಾರಿಸುತ್ತ ತುಟಿಗಳನ್ನು ಕುಣಿಸುತ ಆ ದೂತನನ್ನು ನೋಡಿ ಏನೆಲಾ, ಕುಬೇರನು ತಾನು ಹರಸಖನಾಗಿದ್ದೇನೆಂಬ ದುಗರ್ವದಿಂದ ನನಗೆ ವಿವೇಕವನ್ನು ಹೇಳೆಂದು ನಿನ್ನನ್ನು ಕಳುಹಿಸಿದನೇ ? ದೇವತೆಗಳಿಂದಲೂ ಮುನಿಗಳಿಂದಲೂ ನನಗೆ ಬರುವ ಕೇಡೂ ಉಂಟೇ ? ಬಲುಮಾತುಗಳಿಂದೇನು ? ಅಣ್ಣನಾದರಾಗಲಿ, ಮೊದಲು ಆತನನ್ನು ಕೊಂದು ಆ ಮೇಲೆ ಲೋಕನಾಯಕರನ್ನು ಮೃತ್ಯುಜತರಕ್ಕೆ ಸೇರಿಸಿ ಲೋಕಗಳನ್ನೆಲ್ಲಾ ವಿನಾಶಮಾಡುವೆನು. ಸುರನರೋರಗಾದಿ ನಾಯಕರನ್ನೂ ಆದಿತ್ಯ ಚಂದ್ರಾದಿ ಜ್ಯೋತಿರ್ಮಂಡಲಾಧೀಶರನ್ನೂ ಬಲುಗಡಿತದಿಂದುರುಳಿಸುವೆ ನೆಂದು ವಿಜೃಂಭಿಸಿ ಗಿರಿಸದೃಶವಾದ ತೇರನ್ನೇರಿ ಉತ್ತರದಿಗಭಿಮುಖನಾಗಿ ನಡೆದನು. ಅವನೊಡನೆಯೇ ಆನೆ ಕುದುರೆ ತೇರು ಕಾಲಾಳುಗಳ ತಂಡವು ನೆಲದಗಲಕ್ಕೂ ಹೊರಟುದಲ್ಲದೆ ಶುಕಸಾರಣಾದಿ ಮಂತ್ರಿಗಳೂ ಸೇನಾಪತಿಗಳೂ ಬೆಂಬಲವಾಗಿ ಮುಂ ಕೊಂಡರು. ಈ ಸೇನೆಯನ್ನು ಭೂಮಿಯೇ ಹೆತ್ತುದೋ ? ಅಥವಾ ಎಂಟು ದಿಕ್ಕುಗಳೇನಾದರೂ ಇದುವೋ ? ಎಂಬಂತೆ ಮಿತಿಮಾರಿದ ದಂಡೈತರುತ್ತಿರಲು ; ಅದರ ರದಘಾತದಿಂದೆದ್ದ ಧೂಳಿಯು ಸೂರ್ಯಮಂಡಲವನ್ನು ಆವರಿಸಿಕೊಂಡು ದಿನವನ್ನು ದುರ್ದಿನವನ್ನಾಗಿ ಮಾಡಿತು. ಈ ರೀತಿಯಾಗಿ ಸಕಲ ಸನ್ನಾಹದಿಂದ ಕೂಡಿದ ದಶ ಮುಖನು ಗಿರಿ ವನ ಪಟ್ಟಣ ನದ ನದ್ಯಾದಿ ಪ್ರದೇಶಗಳನ್ನು ಕಳೆದು ಕೈಲಾಸಾಚ ಲದ ತಪ್ಪಲಲ್ಲಿರುವ ಅಲಕಾವತೀನಗರದ ಸವಿಾಪಕ್ಕೆ ಬಂದು ಹೆಬ್ಬಾಗಿಲಲ್ಲಿ ನಿಂತು ದ್ವಾರಪಾಲಕರಲ್ಲಿ ಒಬ್ಬ ಯಕ್ಷನನ್ನು ಕರೆದು-ಎಲೈ ದ್ವಾರಪಾಲಕನೇ, ನೀನು ನಿಮ್ಮೊಡೆಯನ ಬಳಿಗೆ ಹೋಗಿ_ಲೋಕೈಕವೀರನಾದ ದಶಕಂಠನು ಯುದ್ದಕ್ಕೆ ಬಂದಿದ್ದಾನೆ. ನಿನ್ನನ್ನು ಶೀಘ್ರವಾಗಿ ಬರಹೇಳಿದನೆಂದು ತಿಳಿಸೆನಲು ; ಅವನು ಕೂಡಲೆ ಕುಬೇರನ ಓಲಗದ ಚಾವಡಿಗೆ ಬಂದು ಭೀತಿಯಿಂದ ಕೈಮುಗಿದು-ಒಡೆಯನೇ, ಏಳು. ದಶಕಂಠನೊಡನೆ ಯುದ್ಧ ಮಾಡು ನಡೆ, ಅವನು ನಮ್ಮಲ್ಲಿ ತೋಳ್ಬೇಟೆಯನ್ನು ಕಳೆಯುವನಂತೆ, ನಾನು ಅವನ ಗೆರ್ವಾತಿಶಯೋಕ್ತಿಗಳನ್ನು ವಿವರಿಸಲಾರೆನು, ಬೇಗ ಯುದ್ಧಕ್ಕೆ ಸೈನ್ಯವನ್ನು ಕಳುಹಿಸು ಎಂದು ಹೇಳಲು ; ಕುಬೇರನು ಆ ಮಾತನ್ನು ಕೇಳಿ. ಕೇಳು, ಹೇಳು, ದಶಾನನನ ಆಳುತನದ ಮಾತುಗಳನ್ನು ಇನ್ನೊಂದು ಸಾರಿ ಹೇಳು. ದಶಮುಖನಿಗೆ ನಮ್ಮೊಡನ ಕಾಳಗವೇ ? ಶಿವ, ಶಿವಾ ! ಇದು ವಿಪರೀತಕಾಲಗತಿಯು ಎಂದು ಅರೆಗಳಿಗೆಯ ವರೆಗೂ ಚಿಂತಿಸಿ ಭೃತ್ಯನನ್ನು ನೋಡಿ.ಎಲೈ, ಮಹಾಗರ್ವದೂರ್ತನಾದ ಖಳಪತಿಯೊಡನೆ ಕಾಳಗಕ್ಕೆ ಶೂರರಾದ ನಮ್ಮ ಭಟರು ಸನ್ನದ್ಧರಾಗಿ ಬರು<noinclude></noinclude> 5t6n71myh99c8d57s29shl1ytzfdqe3 324099 324085 2026-06-02T18:02:59Z Pragathi. BH 7585 /* Validated */ 324099 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು - |left=|right= 11}}</noinclude> ಮಾತುಗಳನ್ನು ಕೇಳು. ನೀನು ಬ್ರಹ್ಮ ಕುಲದಲ್ಲಿ ಹುಟ್ಟಿ ಮುನಿಗಳನ್ನೂ `ದೇವತಗಳನ್ನೂ ಹೀಗೆ ಬಾಧಿಸುತ್ತ ಬರುವುದರಿಂದ ನಿನಗೆ ಮಹತ್ತರವಾದ ಹಾನಿಯುಂಟಾಗುವುದೇ ಹೊರತು ಸೌಖ್ಯವುಂಟಾಗಲಾರದು. ಆದುದರಿಂದ ಇನ್ನು ಮೇಲೆಯಾದರೂ ಇಂಥ ದುಷ್ಕೃತ್ಯಗಳನ್ನು ಮಾಡದೆ ಸನ್ಮಾರ್ಗದಲ್ಲಿ ನಡೆಯುತ್ತ ಎಲ್ಲರಿಂದಲೂ ಒಳ್ಳೆಯವನೆನಿಸಿಕೊಂಡು ಸುಖವಾಗಿ ಬದುಕೆಂದು ಹೇಳಿಕಳುಹಿಸಿದನು ಎನಲು ; ಈ ಮಾತುಗಳನ್ನು ಕೇಳಿದ ಕೂಡಲೆ ದಶಾಸ್ಯನು ಕೋಪಾಟೋಪದಿಂದ ಕೂಡಿ ಕೆಂಗಣ್ಣು ತಿರುಗಿ ; ಹುಬ್ಬುಗಳನ್ನು ಹಾರಿಸುತ್ತ ತುಟಿಗಳನ್ನು ಕುಣಿಸುತ ಆ ದೂತನನ್ನು ನೋಡಿ ಏನೆಲಾ, ಕುಬೇರನು ತಾನು ಹರಸಖನಾಗಿದ್ದೇನೆಂಬ ದುಗರ್ವದಿಂದ ನನಗೆ ವಿವೇಕವನ್ನು ಹೇಳೆಂದು ನಿನ್ನನ್ನು ಕಳುಹಿಸಿದನೇ ? ದೇವತೆಗಳಿಂದಲೂ ಮುನಿಗಳಿಂದಲೂ ನನಗೆ ಬರುವ ಕೇಡೂ ಉಂಟೇ ? ಬಲುಮಾತುಗಳಿಂದೇನು ? ಅಣ್ಣನಾದರಾಗಲಿ, ಮೊದಲು ಆತನನ್ನು ಕೊಂದು ಆ ಮೇಲೆ ಲೋಕನಾಯಕರನ್ನು ಮೃತ್ಯುಜತರಕ್ಕೆ ಸೇರಿಸಿ ಲೋಕಗಳನ್ನೆಲ್ಲಾ ವಿನಾಶಮಾಡುವೆನು. ಸುರನರೋರಗಾದಿ ನಾಯಕರನ್ನೂ ಆದಿತ್ಯ ಚಂದ್ರಾದಿ ಜ್ಯೋತಿರ್ಮಂಡಲಾಧೀಶರನ್ನೂ ಬಲುಗಡಿತದಿಂದುರುಳಿಸುವೆ ನೆಂದು ವಿಜೃಂಭಿಸಿ ಗಿರಿಸದೃಶವಾದ ತೇರನ್ನೇರಿ ಉತ್ತರದಿಗಭಿಮುಖನಾಗಿ ನಡೆದನು. ಅವನೊಡನೆಯೇ ಆನೆ ಕುದುರೆ ತೇರು ಕಾಲಾಳುಗಳ ತಂಡವು ನೆಲದಗಲಕ್ಕೂ ಹೊರಟುದಲ್ಲದೆ ಶುಕಸಾರಣಾದಿ ಮಂತ್ರಿಗಳೂ ಸೇನಾಪತಿಗಳೂ ಬೆಂಬಲವಾಗಿ ಮುಂ ಕೊಂಡರು. ಈ ಸೇನೆಯನ್ನು ಭೂಮಿಯೇ ಹೆತ್ತುದೋ ? ಅಥವಾ ಎಂಟು ದಿಕ್ಕುಗಳೇನಾದರೂ ಇದುವೋ ? ಎಂಬಂತೆ ಮಿತಿಮಾರಿದ ದಂಡೈತರುತ್ತಿರಲು ; ಅದರ ರದಘಾತದಿಂದೆದ್ದ ಧೂಳಿಯು ಸೂರ್ಯಮಂಡಲವನ್ನು ಆವರಿಸಿಕೊಂಡು ದಿನವನ್ನು ದುರ್ದಿನವನ್ನಾಗಿ ಮಾಡಿತು. ಈ ರೀತಿಯಾಗಿ ಸಕಲ ಸನ್ನಾಹದಿಂದ ಕೂಡಿದ ದಶ ಮುಖನು ಗಿರಿ ವನ ಪಟ್ಟಣ ನದ ನದ್ಯಾದಿ ಪ್ರದೇಶಗಳನ್ನು ಕಳೆದು ಕೈಲಾಸಾಚ ಲದ ತಪ್ಪಲಲ್ಲಿರುವ ಅಲಕಾವತೀನಗರದ ಸವಿಾಪಕ್ಕೆ ಬಂದು ಹೆಬ್ಬಾಗಿಲಲ್ಲಿ ನಿಂತು ದ್ವಾರಪಾಲಕರಲ್ಲಿ ಒಬ್ಬ ಯಕ್ಷನನ್ನು ಕರೆದು-ಎಲೈ ದ್ವಾರಪಾಲಕನೇ, ನೀನು ನಿಮ್ಮೊಡೆಯನ ಬಳಿಗೆ ಹೋಗಿ_ಲೋಕೈಕವೀರನಾದ ದಶಕಂಠನು ಯುದ್ದಕ್ಕೆ ಬಂದಿದ್ದಾನೆ. ನಿನ್ನನ್ನು ಶೀಘ್ರವಾಗಿ ಬರಹೇಳಿದನೆಂದು ತಿಳಿಸೆನಲು ; ಅವನು ಕೂಡಲೆ ಕುಬೇರನ ಓಲಗದ ಚಾವಡಿಗೆ ಬಂದು ಭೀತಿಯಿಂದ ಕೈಮುಗಿದು-ಒಡೆಯನೇ, ಏಳು. ದಶಕಂಠನೊಡನೆ ಯುದ್ಧ ಮಾಡು ನಡೆ, ಅವನು ನಮ್ಮಲ್ಲಿ ತೋಳ್ಬೇಟೆಯನ್ನು ಕಳೆಯುವನಂತೆ, ನಾನು ಅವನ ಗೆರ್ವಾತಿಶಯೋಕ್ತಿಗಳನ್ನು ವಿವರಿಸಲಾರೆನು, ಬೇಗ ಯುದ್ಧಕ್ಕೆ ಸೈನ್ಯವನ್ನು ಕಳುಹಿಸು ಎಂದು ಹೇಳಲು ; ಕುಬೇರನು ಆ ಮಾತನ್ನು ಕೇಳಿ. ಕೇಳು, ಹೇಳು, ದಶಾನನನ ಆಳುತನದ ಮಾತುಗಳನ್ನು ಇನ್ನೊಂದು ಸಾರಿ ಹೇಳು. ದಶಮುಖನಿಗೆ ನಮ್ಮೊಡನ ಕಾಳಗವೇ ? ಶಿವ, ಶಿವಾ ! ಇದು ವಿಪರೀತಕಾಲಗತಿಯು ಎಂದು ಅರೆಗಳಿಗೆಯ ವರೆಗೂ ಚಿಂತಿಸಿ ಭೃತ್ಯನನ್ನು ನೋಡಿ.ಎಲೈ, ಮಹಾಗರ್ವದೂರ್ತನಾದ ಖಳಪತಿಯೊಡನೆ ಕಾಳಗಕ್ಕೆ ಶೂರರಾದ ನಮ್ಮ ಭಟರು ಸನ್ನದ್ಧರಾಗಿ ಬರು<noinclude></noinclude> 53pht9nceykslymhl7jxzmanj79kn58 ಪುಟ:ಕಥಾ ಸಂಗ್ರಹ - ಭಾಗ ೨.djvu/೨೨ 104 44582 324086 106934 2026-06-02T13:24:02Z Vinoda mamatharai 3222 /* Proofread */ 324086 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=12 |right=}}</noinclude> ವಂತೆ ತಿಳಿಸೆಂದು ಆಜ್ಞಾಪಿಸಲು ; ಕೂಡಲೆ ಯಕ್ಷ ಕಿನ್ನರಾದಿಗಳ ಸೇನಾಸಮುದ್ರವು ದಶಕಂಠನೊಡನೆ ಯುದ್ಧ ಮಾಡಲೋಸುಗ ಬಂದು ನಿಂತಿತು. ಆಗ ರಾಕ್ಷಸರ ಬಲವು ಬಂದು ಯಕ್ಷರ ಬಲಕ್ಕೆದುರಾಗಿ ನಿಂತು.ದಶಾನ ನನೂ ಧನಪತಿಯೂ ಭಾತೃಗಳೆಂದು ನಾವೀವರೆಗೂ ಮನ್ನಿಸಿದರೆ ನೀವಿಂತು ಕೊಬ್ಬಿದಿರಾ ? ಎಂದಬ್ಬರಿಸಿ ಮುಂದುವರಿದು ಯಕ್ಷಸೇನೆಗೆ ಬರಸಿಡಿಲೆರಗುವಂತೆರಗಿ ಮುರಿ ಬಡಿವುತ್ತಿರಲು ; ಜವನೋಕರಿಸಿದನೋ ಎಂಬಂತೆ ಬಿದ್ದಿರುವ ಮೆದುಳಳಿಂದಲೂ ಮಚ್ಚಾಮಾಂಸಗಳಿಂದಲೂ ಕುಣಿಕುಣಿದಾಡುವಟ್ಟೆಗಳಿಂದಲೂ ತಲೆಬುರುಡೆಗಳಿಂದಲೂ ನದೀರೂಪವಾಗಿ ಪ್ರವಹಿಸುತ್ತಿರುವ ರಕ್ತದಿಂದಲೂ ನಿಮೇಷಕಾಲದಲ್ಲಿ ವ್ಯಾಪ್ತವಾದ ಆ ರಣರಂಗವು ನೋಡುವುದಕ್ಕೆ ಭಯ೦ಕರವಾಗಿದ್ದಿತು. ಯಕ್ಷಾನೀಕಿನಿಯೂ ಕೂಡ ಧೈರ್ಯಗೆಡದೆ ರಾಕ್ಷಸಪತಾಕಿನಿಯನ್ನು ಬಹಳವಾಗಿ ಕೊಂದಿತು. ಆಗ ದಶವದನನು ಯಕ್ಷರ ಗುಂಪಿನ ಮೇಲೆ ತನ್ನ ಬಾಣಪರಂಪರಾವೃಷ್ಟಿಯನ್ನು ಸುರಿಸಲು ; ಆ ಬಾಣಹತಿಯಿಂದ ಅನೇಕರು ಕೈಕಾಲ್ಮುರಿದು ಕಿವಿಮೂಗುಗಳು ಹರಿದು ತಲೆಗಳೊಡೆದು ಚೂರುಗಳಾಗಿ ನಾಶವಾದುದನ್ನು ಉಳಿದವರೆಲ್ಲರೂ ನೋಡಿ ದಿಕ್ಕು ದಿಕ್ಕಿಗೆ ಓಡಿಹೋಗಲು ; ಕೂಡಲೆ ಕುಬೇರನು ಮಾಣಿಭದ್ರನೆಂಬ ತನ್ನ ಸೇನಾಪತಿಯೊಡನೆ ಕೂಡಿ ಯುದ್ಧಕ್ಕೆ ಬರಲು ; ಆಗ ದಶಗ್ರೀವನು ಬಂದು ಕುಬೇರನಿಗೆದುರಾಗಿ ನಿಂತನು. ಪ್ರ ಹಸ್ತನು ಬಂದು ಮಾಣಿಭದ್ರನನ್ನೆದುರಿಸಿ ನಿಂತನು. ಆ ಮೇಲೆ ಮಾಣಿಭದ್ರನು ಪ್ರಹಸ್ತನೊಡನೆ ಯುದ್ಧಕ್ಕೆ ಆರಂಭಿಸಿ, ಅವನ ಗದಾಘಾತದಿಂದ ಕಿವಿ ಕಣ್ಮಗುಗಳಲ್ಲಿ ರಕ್ತವು ಸುರಿಯುವುದಕ್ಕೆ ಆರಂಭಿಸಲು ; ಬಲಹೀನನಾಗಿ ಭೂಮಿಯ ಮೇಲೆ ಬಿದ್ದು ಮೈಮರೆತನು. ದಶಮುಖನು ಬ್ರಹ್ಮ ವರಪ್ರಭಾವದಿಂದ ಯುದ್ಧದಲ್ಲಿ ಕುಬೇರನನ್ನು ಸೋಲಿಸಿ ಆತನಿಗೆ ಬ್ರಹ್ಮನು ಕೊಟ್ಟಿದ್ದ ವಿಮಾನವನ್ನು ಕಿತ್ತುಕೊಂಡು ತನ್ನ, ಸಕಲ ಸೇನೆಯೊಡನೆ ಕೂಡಿ ಹೊರಟು ಆಕಾಶಮಾರ್ಗದಲ್ಲಿ ಬರುತ್ತ ಶರವಣವೆಂಬ ಸ್ಥಳವನ್ನು ನೋಡಿ ಕೈಲಾಸಗಿರಿಯ ಮೇಲ್ಗಡೆಗೆ ವಿಮಾನವನ್ನು ಹತ್ತಿಸಲು ; ಅದು ಮುಂದಕ್ಕೆ ನಡೆಯದೆ ಕಾಲ್ಮುರಿದ ಕೋಳಿಯಂತೆ ನಿಂತಿತು. - ಆಗ ದಶಮುಖನು-ಈ ವಿಮಾನವು ಇಲ್ಲಿ ಮಾತ್ರ ನಿಲ್ಲುವುದಕ್ಕೆ ಕಾರಣ ವೇನು ? ಯಕ್ಷರ ಮಾಯವೋ ? ಅಥವಾ ಇದರ ನಡೆಯುಡುಗಿತೋ ? ಬುದ್ಧಿಶಾಲಿಯಾದ ಎಲೈ ಮಾರೀಚನೇ, ಇದರ ನಿಜಸ್ಟಿತಿಯನ್ನು ಹೇಳೆಂದು ಕೇಳಲು ; ಆ ಮಾರೀಚನು--ಈ ವಿಮಾನವು ವೈಶ್ರವಣನಿಗಲ್ಲದೆ ಮತ್ತೊಬ್ಬರಿಗೆ ನಡೆಯದಿರಬಹುದೆಂದು ಹೇಳುತ್ತಿರುವಷ್ಟರಲ್ಲಿ-ಈ ಕೈಲಾಸಪರ್ವತಾಗ್ರದಲ್ಲಿ ಬ್ರಹ್ಮೇಂದ್ರಾದಿ ದೇವತೆಗಳಿಗೂ ಯಕ್ಷ ರಾಕ್ಷಸ ಕಿನ್ನರ ಕಿಂಪುರುಪಾದಿ ಕಾಮಚಾರಿಗಳಿಗೂ ಮಹಾದೇವನ ಪ್ರಭಾವದಿಂದ ಗಮಿಸುವುದು ಅಶಕ್ಯವಾಗಿರುವುದು ; ಹಿಂದಿರುಗು. ಮುಂದಕ್ಕೆ ಹೋದರೆ ಕೆಡುವೆ ಎಂದು ದಶವದನನನ್ನು ಕುರಿತು ನಂದೀಶ್ವರನು ಹೇಳಿದನು, ಆಗೆ ದಶಕಂಠನು ಶಂಕರನ ಎರಡನೆಯ ರೂಪಿಯಾದ ನಂದಿಕೇಶ್ವರನ ಮುಖವನ್ನು. ನೋಡಿ--ನಿನ್ನ ಮೋರೆಯು ಕೋತಿಯ ಸೋಡಿಗೆ ಸರಿಯಾಗಿರುವುದರಿಂದ ಬುದ್ದಿ.<noinclude></noinclude> 2y9xmhi4xng7lrm8jlmoklphzr1vu4n 324087 324086 2026-06-02T13:24:53Z Vinoda mamatharai 3222 324087 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=12 |right=}}</noinclude> ವಂತೆ ತಿಳಿಸೆಂದು ಆಜ್ಞಾಪಿಸಲು ; ಕೂಡಲೆ ಯಕ್ಷ ಕಿನ್ನರಾದಿಗಳ ಸೇನಾಸಮುದ್ರವು ದಶಕಂಠನೊಡನೆ ಯುದ್ಧ ಮಾಡಲೋಸುಗ ಬಂದು ನಿಂತಿತು. {{gap}}ಆಗ ರಾಕ್ಷಸರ ಬಲವು ಬಂದು ಯಕ್ಷರ ಬಲಕ್ಕೆದುರಾಗಿ ನಿಂತು.ದಶಾನ ನನೂ ಧನಪತಿಯೂ ಭಾತೃಗಳೆಂದು ನಾವೀವರೆಗೂ ಮನ್ನಿಸಿದರೆ ನೀವಿಂತು ಕೊಬ್ಬಿದಿರಾ ? ಎಂದಬ್ಬರಿಸಿ ಮುಂದುವರಿದು ಯಕ್ಷಸೇನೆಗೆ ಬರಸಿಡಿಲೆರಗುವಂತೆರಗಿ ಮುರಿ ಬಡಿವುತ್ತಿರಲು ; ಜವನೋಕರಿಸಿದನೋ ಎಂಬಂತೆ ಬಿದ್ದಿರುವ ಮೆದುಳಳಿಂದಲೂ ಮಚ್ಚಾಮಾಂಸಗಳಿಂದಲೂ ಕುಣಿಕುಣಿದಾಡುವಟ್ಟೆಗಳಿಂದಲೂ ತಲೆಬುರುಡೆಗಳಿಂದಲೂ ನದೀರೂಪವಾಗಿ ಪ್ರವಹಿಸುತ್ತಿರುವ ರಕ್ತದಿಂದಲೂ ನಿಮೇಷಕಾಲದಲ್ಲಿ ವ್ಯಾಪ್ತವಾದ ಆ ರಣರಂಗವು ನೋಡುವುದಕ್ಕೆ ಭಯ೦ಕರವಾಗಿದ್ದಿತು. ಯಕ್ಷಾನೀಕಿನಿಯೂ ಕೂಡ ಧೈರ್ಯಗೆಡದೆ ರಾಕ್ಷಸಪತಾಕಿನಿಯನ್ನು ಬಹಳವಾಗಿ ಕೊಂದಿತು. ಆಗ ದಶವದನನು ಯಕ್ಷರ ಗುಂಪಿನ ಮೇಲೆ ತನ್ನ ಬಾಣಪರಂಪರಾವೃಷ್ಟಿಯನ್ನು ಸುರಿಸಲು ; ಆ ಬಾಣಹತಿಯಿಂದ ಅನೇಕರು ಕೈಕಾಲ್ಮುರಿದು ಕಿವಿಮೂಗುಗಳು ಹರಿದು ತಲೆಗಳೊಡೆದು ಚೂರುಗಳಾಗಿ ನಾಶವಾದುದನ್ನು ಉಳಿದವರೆಲ್ಲರೂ ನೋಡಿ ದಿಕ್ಕು ದಿಕ್ಕಿಗೆ ಓಡಿಹೋಗಲು ; ಕೂಡಲೆ ಕುಬೇರನು ಮಾಣಿಭದ್ರನೆಂಬ ತನ್ನ ಸೇನಾಪತಿಯೊಡನೆ ಕೂಡಿ ಯುದ್ಧಕ್ಕೆ ಬರಲು ; ಆಗ ದಶಗ್ರೀವನು ಬಂದು ಕುಬೇರನಿಗೆದುರಾಗಿ ನಿಂತನು. ಪ್ರ ಹಸ್ತನು ಬಂದು ಮಾಣಿಭದ್ರನನ್ನೆದುರಿಸಿ ನಿಂತನು. ಆ ಮೇಲೆ ಮಾಣಿಭದ್ರನು ಪ್ರಹಸ್ತನೊಡನೆ ಯುದ್ಧಕ್ಕೆ ಆರಂಭಿಸಿ, ಅವನ ಗದಾಘಾತದಿಂದ ಕಿವಿ ಕಣ್ಮಗುಗಳಲ್ಲಿ ರಕ್ತವು ಸುರಿಯುವುದಕ್ಕೆ ಆರಂಭಿಸಲು ; ಬಲಹೀನನಾಗಿ ಭೂಮಿಯ ಮೇಲೆ ಬಿದ್ದು ಮೈಮರೆತನು. ದಶಮುಖನು ಬ್ರಹ್ಮ ವರಪ್ರಭಾವದಿಂದ ಯುದ್ಧದಲ್ಲಿ ಕುಬೇರನನ್ನು ಸೋಲಿಸಿ ಆತನಿಗೆ ಬ್ರಹ್ಮನು ಕೊಟ್ಟಿದ್ದ ವಿಮಾನವನ್ನು ಕಿತ್ತುಕೊಂಡು ತನ್ನ, ಸಕಲ ಸೇನೆಯೊಡನೆ ಕೂಡಿ ಹೊರಟು ಆಕಾಶಮಾರ್ಗದಲ್ಲಿ ಬರುತ್ತ ಶರವಣವೆಂಬ ಸ್ಥಳವನ್ನು ನೋಡಿ ಕೈಲಾಸಗಿರಿಯ ಮೇಲ್ಗಡೆಗೆ ವಿಮಾನವನ್ನು ಹತ್ತಿಸಲು ; ಅದು ಮುಂದಕ್ಕೆ ನಡೆಯದೆ ಕಾಲ್ಮುರಿದ ಕೋಳಿಯಂತೆ ನಿಂತಿತು. {{gap}}ಆಗ ದಶಮುಖನು-ಈ ವಿಮಾನವು ಇಲ್ಲಿ ಮಾತ್ರ ನಿಲ್ಲುವುದಕ್ಕೆ ಕಾರಣ ವೇನು ? ಯಕ್ಷರ ಮಾಯವೋ ? ಅಥವಾ ಇದರ ನಡೆಯುಡುಗಿತೋ ? ಬುದ್ಧಿಶಾಲಿಯಾದ ಎಲೈ ಮಾರೀಚನೇ, ಇದರ ನಿಜಸ್ಟಿತಿಯನ್ನು ಹೇಳೆಂದು ಕೇಳಲು ; ಆ ಮಾರೀಚನು--ಈ ವಿಮಾನವು ವೈಶ್ರವಣನಿಗಲ್ಲದೆ ಮತ್ತೊಬ್ಬರಿಗೆ ನಡೆಯದಿರಬಹುದೆಂದು ಹೇಳುತ್ತಿರುವಷ್ಟರಲ್ಲಿ-ಈ ಕೈಲಾಸಪರ್ವತಾಗ್ರದಲ್ಲಿ ಬ್ರಹ್ಮೇಂದ್ರಾದಿ ದೇವತೆಗಳಿಗೂ ಯಕ್ಷ ರಾಕ್ಷಸ ಕಿನ್ನರ ಕಿಂಪುರುಪಾದಿ ಕಾಮಚಾರಿಗಳಿಗೂ ಮಹಾದೇವನ ಪ್ರಭಾವದಿಂದ ಗಮಿಸುವುದು ಅಶಕ್ಯವಾಗಿರುವುದು ; ಹಿಂದಿರುಗು. ಮುಂದಕ್ಕೆ ಹೋದರೆ ಕೆಡುವೆ ಎಂದು ದಶವದನನನ್ನು ಕುರಿತು ನಂದೀಶ್ವರನು ಹೇಳಿದನು, ಆಗೆ ದಶಕಂಠನು ಶಂಕರನ ಎರಡನೆಯ ರೂಪಿಯಾದ ನಂದಿಕೇಶ್ವರನ ಮುಖವನ್ನು. ನೋಡಿ--ನಿನ್ನ ಮೋರೆಯು ಕೋತಿಯ ಸೋಡಿಗೆ ಸರಿಯಾಗಿರುವುದರಿಂದ ಬುದ್ದಿ.<noinclude></noinclude> 6ursh9n2wvd7gin534u8n6sn11lksoe 324088 324087 2026-06-02T13:25:48Z Vinoda mamatharai 3222 324088 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=12 |right=}}</noinclude> ವಂತೆ ತಿಳಿಸೆಂದು ಆಜ್ಞಾಪಿಸಲು ; ಕೂಡಲೆ ಯಕ್ಷ ಕಿನ್ನರಾದಿಗಳ ಸೇನಾಸಮುದ್ರವು ದಶಕಂಠನೊಡನೆ ಯುದ್ಧ ಮಾಡಲೋಸುಗ ಬಂದು ನಿಂತಿತು. {{gap}}ಆಗ ರಾಕ್ಷಸರ ಬಲವು ಬಂದು ಯಕ್ಷರ ಬಲಕ್ಕೆದುರಾಗಿ ನಿಂತು.ದಶಾನ ನನೂ ಧನಪತಿಯೂ ಭಾತೃಗಳೆಂದು ನಾವೀವರೆಗೂ ಮನ್ನಿಸಿದರೆ ನೀವಿಂತು ಕೊಬ್ಬಿದಿರಾ ? ಎಂದಬ್ಬರಿಸಿ ಮುಂದುವರಿದು ಯಕ್ಷಸೇನೆಗೆ ಬರಸಿಡಿಲೆರಗುವಂತೆರಗಿ ಮುರಿ ಬಡಿವುತ್ತಿರಲು ; ಜವನೋಕರಿಸಿದನೋ ಎಂಬಂತೆ ಬಿದ್ದಿರುವ ಮೆದುಳಳಿಂದಲೂ ಮಚ್ಚಾಮಾಂಸಗಳಿಂದಲೂ ಕುಣಿಕುಣಿದಾಡುವಟ್ಟೆಗಳಿಂದಲೂ ತಲೆಬುರುಡೆಗಳಿಂದಲೂ ನದೀರೂಪವಾಗಿ ಪ್ರವಹಿಸುತ್ತಿರುವ ರಕ್ತದಿಂದಲೂ ನಿಮೇಷಕಾಲದಲ್ಲಿ ವ್ಯಾಪ್ತವಾದ ಆ ರಣರಂಗವು ನೋಡುವುದಕ್ಕೆ ಭಯ೦ಕರವಾಗಿದ್ದಿತು. ಯಕ್ಷಾನೀಕಿನಿಯೂ ಕೂಡ ಧೈರ್ಯಗೆಡದೆ ರಾಕ್ಷಸಪತಾಕಿನಿಯನ್ನು ಬಹಳವಾಗಿ ಕೊಂದಿತು. ಆಗ ದಶವದನನು ಯಕ್ಷರ ಗುಂಪಿನ ಮೇಲೆ ತನ್ನ ಬಾಣಪರಂಪರಾವೃಷ್ಟಿಯನ್ನು ಸುರಿಸಲು ; ಆ ಬಾಣಹತಿಯಿಂದ ಅನೇಕರು ಕೈಕಾಲ್ಮುರಿದು ಕಿವಿಮೂಗುಗಳು ಹರಿದು ತಲೆಗಳೊಡೆದು ಚೂರುಗಳಾಗಿ ನಾಶವಾದುದನ್ನು ಉಳಿದವರೆಲ್ಲರೂ ನೋಡಿ ದಿಕ್ಕು ದಿಕ್ಕಿಗೆ ಓಡಿಹೋಗಲು ; ಕೂಡಲೆ ಕುಬೇರನು ಮಾಣಿಭದ್ರನೆಂಬ ತನ್ನ ಸೇನಾಪತಿಯೊಡನೆ ಕೂಡಿ ಯುದ್ಧಕ್ಕೆ ಬರಲು ; ಆಗ ದಶಗ್ರೀವನು ಬಂದು ಕುಬೇರನಿಗೆದುರಾಗಿ ನಿಂತನು. ಪ್ರ ಹಸ್ತನು ಬಂದು ಮಾಣಿಭದ್ರನನ್ನೆದುರಿಸಿ ನಿಂತನು. ಆ ಮೇಲೆ ಮಾಣಿಭದ್ರನು ಪ್ರಹಸ್ತನೊಡನೆ ಯುದ್ಧಕ್ಕೆ ಆರಂಭಿಸಿ, ಅವನ ಗದಾಘಾತದಿಂದ ಕಿವಿ ಕಣ್ಮಗುಗಳಲ್ಲಿ ರಕ್ತವು ಸುರಿಯುವುದಕ್ಕೆ ಆರಂಭಿಸಲು ; ಬಲಹೀನನಾಗಿ ಭೂಮಿಯ ಮೇಲೆ ಬಿದ್ದು ಮೈಮರೆತನು. ದಶಮುಖನು ಬ್ರಹ್ಮ ವರಪ್ರಭಾವದಿಂದ ಯುದ್ಧದಲ್ಲಿ ಕುಬೇರನನ್ನು ಸೋಲಿಸಿ ಆತನಿಗೆ ಬ್ರಹ್ಮನು ಕೊಟ್ಟಿದ್ದ ವಿಮಾನವನ್ನು ಕಿತ್ತುಕೊಂಡು ತನ್ನ, ಸಕಲ ಸೇನೆಯೊಡನೆ ಕೂಡಿ ಹೊರಟು ಆಕಾಶಮಾರ್ಗದಲ್ಲಿ ಬರುತ್ತ ಶರವಣವೆಂಬ ಸ್ಥಳವನ್ನು ನೋಡಿ ಕೈಲಾಸಗಿರಿಯ ಮೇಲ್ಗಡೆಗೆ ವಿಮಾನವನ್ನು ಹತ್ತಿಸಲು ; ಅದು ಮುಂದಕ್ಕೆ ನಡೆಯದೆ ಕಾಲ್ಮುರಿದ ಕೋಳಿಯಂತೆ ನಿಂತಿತು. {{gap}}ಆಗ ದಶಮುಖನು-ಈ ವಿಮಾನವು ಇಲ್ಲಿ ಮಾತ್ರ ನಿಲ್ಲುವುದಕ್ಕೆ ಕಾರಣ ವೇನು ? ಯಕ್ಷರ ಮಾಯವೋ ? ಅಥವಾ ಇದರ ನಡೆಯುಡುಗಿತೋ ? ಬುದ್ಧಿಶಾಲಿಯಾದ ಎಲೈ ಮಾರೀಚನೇ, ಇದರ ನಿಜಸ್ಟಿತಿಯನ್ನು ಹೇಳೆಂದು ಕೇಳಲು ; ಆ ಮಾರೀಚನು--ಈ ವಿಮಾನವು ವೈಶ್ರವಣನಿಗಲ್ಲದೆ ಮತ್ತೊಬ್ಬರಿಗೆ ನಡೆಯದಿರಬಹುದೆಂದು ಹೇಳುತ್ತಿರುವಷ್ಟರಲ್ಲಿ-ಈ ಕೈಲಾಸಪರ್ವತಾಗ್ರದಲ್ಲಿ ಬ್ರಹ್ಮೇಂದ್ರಾದಿ ದೇವತೆಗಳಿಗೂ ಯಕ್ಷ ರಾಕ್ಷಸ ಕಿನ್ನರ ಕಿಂಪುರುಪಾದಿ ಕಾಮಚಾರಿಗಳಿಗೂ ಮಹಾದೇವನ ಪ್ರಭಾವದಿಂದ ಗಮಿಸುವುದು ಅಶಕ್ಯವಾಗಿರುವುದು ; ಹಿಂದಿರುಗು. ಮುಂದಕ್ಕೆ ಹೋದರೆ ಕೆಡುವೆ ಎಂದು ದಶವದನನನ್ನು ಕುರಿತು ನಂದೀಶ್ವರನು ಹೇಳಿದನು, ಆಗೆ ದಶಕಂಠನು ಶಂಕರನ ಎರಡನೆಯ ರೂಪಿಯಾದ ನಂದಿಕೇಶ್ವರನ ಮುಖವನ್ನು. ನೋಡಿ--ನಿನ್ನ ಮೋರೆಯು ಕೋತಿಯ ಸೋಡಿಗೆ ಸರಿಯಾಗಿರುವುದರಿಂದ ಬುದ್ದಿ.<noinclude></noinclude> mz4e67cxz36xcacxa7r6gzakgk9ac3y 324089 324088 2026-06-02T13:26:22Z Vinoda mamatharai 3222 324089 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=12 |right=}}</noinclude> ವಂತೆ ತಿಳಿಸೆಂದು ಆಜ್ಞಾಪಿಸಲು ; ಕೂಡಲೆ ಯಕ್ಷ ಕಿನ್ನರಾದಿಗಳ ಸೇನಾಸಮುದ್ರವು ದಶಕಂಠನೊಡನೆ ಯುದ್ಧ ಮಾಡಲೋಸುಗ ಬಂದು ನಿಂತಿತು. {{gap}}ಆಗ ರಾಕ್ಷಸರ ಬಲವು ಬಂದು ಯಕ್ಷರ ಬಲಕ್ಕೆದುರಾಗಿ ನಿಂತು.ದಶಾನ ನನೂ ಧನಪತಿಯೂ ಭಾತೃಗಳೆಂದು ನಾವೀವರೆಗೂ ಮನ್ನಿಸಿದರೆ ನೀವಿಂತು ಕೊಬ್ಬಿದಿರಾ ? ಎಂದಬ್ಬರಿಸಿ ಮುಂದುವರಿದು ಯಕ್ಷಸೇನೆಗೆ ಬರಸಿಡಿಲೆರಗುವಂತೆರಗಿ ಮುರಿ ಬಡಿವುತ್ತಿರಲು ; ಜವನೋಕರಿಸಿದನೋ ಎಂಬಂತೆ ಬಿದ್ದಿರುವ ಮೆದುಳಳಿಂದಲೂ ಮಚ್ಚಾಮಾಂಸಗಳಿಂದಲೂ ಕುಣಿಕುಣಿದಾಡುವಟ್ಟೆಗಳಿಂದಲೂ ತಲೆಬುರುಡೆಗಳಿಂದಲೂ ನದೀರೂಪವಾಗಿ ಪ್ರವಹಿಸುತ್ತಿರುವ ರಕ್ತದಿಂದಲೂ ನಿಮೇಷಕಾಲದಲ್ಲಿ ವ್ಯಾಪ್ತವಾದ ಆ ರಣರಂಗವು ನೋಡುವುದಕ್ಕೆ ಭಯ೦ಕರವಾಗಿದ್ದಿತು. ಯಕ್ಷಾನೀಕಿನಿಯೂ ಕೂಡ ಧೈರ್ಯಗೆಡದೆ ರಾಕ್ಷಸಪತಾಕಿನಿಯನ್ನು ಬಹಳವಾಗಿ ಕೊಂದಿತು. ಆಗ ದಶವದನನು ಯಕ್ಷರ ಗುಂಪಿನ ಮೇಲೆ ತನ್ನ ಬಾಣಪರಂಪರಾವೃಷ್ಟಿಯನ್ನು ಸುರಿಸಲು ; ಆ ಬಾಣಹತಿಯಿಂದ ಅನೇಕರು ಕೈಕಾಲ್ಮುರಿದು ಕಿವಿಮೂಗುಗಳು ಹರಿದು ತಲೆಗಳೊಡೆದು ಚೂರುಗಳಾಗಿ ನಾಶವಾದುದನ್ನು ಉಳಿದವರೆಲ್ಲರೂ ನೋಡಿ ದಿಕ್ಕು ದಿಕ್ಕಿಗೆ ಓಡಿಹೋಗಲು ; ಕೂಡಲೆ ಕುಬೇರನು ಮಾಣಿಭದ್ರನೆಂಬ ತನ್ನ ಸೇನಾಪತಿಯೊಡನೆ ಕೂಡಿ ಯುದ್ಧಕ್ಕೆ ಬರಲು ; ಆಗ ದಶಗ್ರೀವನು ಬಂದು ಕುಬೇರನಿಗೆದುರಾಗಿ ನಿಂತನು. ಪ್ರ ಹಸ್ತನು ಬಂದು ಮಾಣಿಭದ್ರನನ್ನೆದುರಿಸಿ ನಿಂತನು. ಆ ಮೇಲೆ ಮಾಣಿಭದ್ರನು ಪ್ರಹಸ್ತನೊಡನೆ ಯುದ್ಧಕ್ಕೆ ಆರಂಭಿಸಿ, ಅವನ ಗದಾಘಾತದಿಂದ ಕಿವಿ ಕಣ್ಮಗುಗಳಲ್ಲಿ ರಕ್ತವು ಸುರಿಯುವುದಕ್ಕೆ ಆರಂಭಿಸಲು ; ಬಲಹೀನನಾಗಿ ಭೂಮಿಯ ಮೇಲೆ ಬಿದ್ದು ಮೈಮರೆತನು. ದಶಮುಖನು ಬ್ರಹ್ಮ ವರಪ್ರಭಾವದಿಂದ ಯುದ್ಧದಲ್ಲಿ ಕುಬೇರನನ್ನು ಸೋಲಿಸಿ ಆತನಿಗೆ ಬ್ರಹ್ಮನು ಕೊಟ್ಟಿದ್ದ ವಿಮಾನವನ್ನು ಕಿತ್ತುಕೊಂಡು ತನ್ನ, ಸಕಲ ಸೇನೆಯೊಡನೆ ಕೂಡಿ ಹೊರಟು ಆಕಾಶಮಾರ್ಗದಲ್ಲಿ ಬರುತ್ತ ಶರವಣವೆಂಬ ಸ್ಥಳವನ್ನು ನೋಡಿ ಕೈಲಾಸಗಿರಿಯ ಮೇಲ್ಗಡೆಗೆ ವಿಮಾನವನ್ನು ಹತ್ತಿಸಲು ; ಅದು ಮುಂದಕ್ಕೆ ನಡೆಯದೆ ಕಾಲ್ಮುರಿದ ಕೋಳಿಯಂತೆ ನಿಂತಿತು. {{gap}}ಆಗ ದಶಮುಖನು-ಈ ವಿಮಾನವು ಇಲ್ಲಿ ಮಾತ್ರ ನಿಲ್ಲುವುದಕ್ಕೆ ಕಾರಣ ವೇನು ? ಯಕ್ಷರ ಮಾಯವೋ ? ಅಥವಾ ಇದರ ನಡೆಯುಡುಗಿತೋ ? ಬುದ್ಧಿಶಾಲಿಯಾದ ಎಲೈ ಮಾರೀಚನೇ, ಇದರ ನಿಜಸ್ಟಿತಿಯನ್ನು ಹೇಳೆಂದು ಕೇಳಲು ; ಆ ಮಾರೀಚನು--ಈ ವಿಮಾನವು ವೈಶ್ರವಣನಿಗಲ್ಲದೆ ಮತ್ತೊಬ್ಬರಿಗೆ ನಡೆಯದಿರಬಹುದೆಂದು ಹೇಳುತ್ತಿರುವಷ್ಟರಲ್ಲಿ-ಈ ಕೈಲಾಸಪರ್ವತಾಗ್ರದಲ್ಲಿ ಬ್ರಹ್ಮೇಂದ್ರಾದಿ ದೇವತೆಗಳಿಗೂ ಯಕ್ಷ ರಾಕ್ಷಸ ಕಿನ್ನರ ಕಿಂಪುರುಪಾದಿ ಕಾಮಚಾರಿಗಳಿಗೂ ಮಹಾದೇವನ ಪ್ರಭಾವದಿಂದ ಗಮಿಸುವುದು ಅಶಕ್ಯವಾಗಿರುವುದು ; ಹಿಂದಿರುಗು. ಮುಂದಕ್ಕೆ ಹೋದರೆ ಕೆಡುವೆ ಎಂದು ದಶವದನನನ್ನು ಕುರಿತು ನಂದೀಶ್ವರನು ಹೇಳಿದನು, ಆಗೆ ದಶಕಂಠನು ಶಂಕರನ ಎರಡನೆಯ ರೂಪಿಯಾದ ನಂದಿಕೇಶ್ವರನ ಮುಖವನ್ನು. ನೋಡಿ--ನಿನ್ನ ಮೋರೆಯು ಕೋತಿಯ ಸೋಡಿಗೆ ಸರಿಯಾಗಿರುವುದರಿಂದ ಬುದ್ದಿ.<noinclude></noinclude> foaitowmcun10nz2efu4vzr9qp5so8v 324101 324089 2026-06-02T18:03:32Z Pragathi. BH 7585 /* Validated */ 324101 proofread-page text/x-wiki <noinclude><pagequality level="4" user="Pragathi. BH" />{{rh|center= ಕಥಾಸಂಗ್ರಹ-೪ ನೆಯ ಭಾಗ|left=12 |right=}}</noinclude> ವಂತೆ ತಿಳಿಸೆಂದು ಆಜ್ಞಾಪಿಸಲು ; ಕೂಡಲೆ ಯಕ್ಷ ಕಿನ್ನರಾದಿಗಳ ಸೇನಾಸಮುದ್ರವು ದಶಕಂಠನೊಡನೆ ಯುದ್ಧ ಮಾಡಲೋಸುಗ ಬಂದು ನಿಂತಿತು. {{gap}}ಆಗ ರಾಕ್ಷಸರ ಬಲವು ಬಂದು ಯಕ್ಷರ ಬಲಕ್ಕೆದುರಾಗಿ ನಿಂತು.ದಶಾನ ನನೂ ಧನಪತಿಯೂ ಭಾತೃಗಳೆಂದು ನಾವೀವರೆಗೂ ಮನ್ನಿಸಿದರೆ ನೀವಿಂತು ಕೊಬ್ಬಿದಿರಾ ? ಎಂದಬ್ಬರಿಸಿ ಮುಂದುವರಿದು ಯಕ್ಷಸೇನೆಗೆ ಬರಸಿಡಿಲೆರಗುವಂತೆರಗಿ ಮುರಿ ಬಡಿವುತ್ತಿರಲು ; ಜವನೋಕರಿಸಿದನೋ ಎಂಬಂತೆ ಬಿದ್ದಿರುವ ಮೆದುಳಳಿಂದಲೂ ಮಚ್ಚಾಮಾಂಸಗಳಿಂದಲೂ ಕುಣಿಕುಣಿದಾಡುವಟ್ಟೆಗಳಿಂದಲೂ ತಲೆಬುರುಡೆಗಳಿಂದಲೂ ನದೀರೂಪವಾಗಿ ಪ್ರವಹಿಸುತ್ತಿರುವ ರಕ್ತದಿಂದಲೂ ನಿಮೇಷಕಾಲದಲ್ಲಿ ವ್ಯಾಪ್ತವಾದ ಆ ರಣರಂಗವು ನೋಡುವುದಕ್ಕೆ ಭಯ೦ಕರವಾಗಿದ್ದಿತು. ಯಕ್ಷಾನೀಕಿನಿಯೂ ಕೂಡ ಧೈರ್ಯಗೆಡದೆ ರಾಕ್ಷಸಪತಾಕಿನಿಯನ್ನು ಬಹಳವಾಗಿ ಕೊಂದಿತು. ಆಗ ದಶವದನನು ಯಕ್ಷರ ಗುಂಪಿನ ಮೇಲೆ ತನ್ನ ಬಾಣಪರಂಪರಾವೃಷ್ಟಿಯನ್ನು ಸುರಿಸಲು ; ಆ ಬಾಣಹತಿಯಿಂದ ಅನೇಕರು ಕೈಕಾಲ್ಮುರಿದು ಕಿವಿಮೂಗುಗಳು ಹರಿದು ತಲೆಗಳೊಡೆದು ಚೂರುಗಳಾಗಿ ನಾಶವಾದುದನ್ನು ಉಳಿದವರೆಲ್ಲರೂ ನೋಡಿ ದಿಕ್ಕು ದಿಕ್ಕಿಗೆ ಓಡಿಹೋಗಲು ; ಕೂಡಲೆ ಕುಬೇರನು ಮಾಣಿಭದ್ರನೆಂಬ ತನ್ನ ಸೇನಾಪತಿಯೊಡನೆ ಕೂಡಿ ಯುದ್ಧಕ್ಕೆ ಬರಲು ; ಆಗ ದಶಗ್ರೀವನು ಬಂದು ಕುಬೇರನಿಗೆದುರಾಗಿ ನಿಂತನು. ಪ್ರ ಹಸ್ತನು ಬಂದು ಮಾಣಿಭದ್ರನನ್ನೆದುರಿಸಿ ನಿಂತನು. ಆ ಮೇಲೆ ಮಾಣಿಭದ್ರನು ಪ್ರಹಸ್ತನೊಡನೆ ಯುದ್ಧಕ್ಕೆ ಆರಂಭಿಸಿ, ಅವನ ಗದಾಘಾತದಿಂದ ಕಿವಿ ಕಣ್ಮಗುಗಳಲ್ಲಿ ರಕ್ತವು ಸುರಿಯುವುದಕ್ಕೆ ಆರಂಭಿಸಲು ; ಬಲಹೀನನಾಗಿ ಭೂಮಿಯ ಮೇಲೆ ಬಿದ್ದು ಮೈಮರೆತನು. ದಶಮುಖನು ಬ್ರಹ್ಮ ವರಪ್ರಭಾವದಿಂದ ಯುದ್ಧದಲ್ಲಿ ಕುಬೇರನನ್ನು ಸೋಲಿಸಿ ಆತನಿಗೆ ಬ್ರಹ್ಮನು ಕೊಟ್ಟಿದ್ದ ವಿಮಾನವನ್ನು ಕಿತ್ತುಕೊಂಡು ತನ್ನ, ಸಕಲ ಸೇನೆಯೊಡನೆ ಕೂಡಿ ಹೊರಟು ಆಕಾಶಮಾರ್ಗದಲ್ಲಿ ಬರುತ್ತ ಶರವಣವೆಂಬ ಸ್ಥಳವನ್ನು ನೋಡಿ ಕೈಲಾಸಗಿರಿಯ ಮೇಲ್ಗಡೆಗೆ ವಿಮಾನವನ್ನು ಹತ್ತಿಸಲು ; ಅದು ಮುಂದಕ್ಕೆ ನಡೆಯದೆ ಕಾಲ್ಮುರಿದ ಕೋಳಿಯಂತೆ ನಿಂತಿತು. {{gap}}ಆಗ ದಶಮುಖನು-ಈ ವಿಮಾನವು ಇಲ್ಲಿ ಮಾತ್ರ ನಿಲ್ಲುವುದಕ್ಕೆ ಕಾರಣ ವೇನು ? ಯಕ್ಷರ ಮಾಯವೋ ? ಅಥವಾ ಇದರ ನಡೆಯುಡುಗಿತೋ ? ಬುದ್ಧಿಶಾಲಿಯಾದ ಎಲೈ ಮಾರೀಚನೇ, ಇದರ ನಿಜಸ್ಟಿತಿಯನ್ನು ಹೇಳೆಂದು ಕೇಳಲು ; ಆ ಮಾರೀಚನು--ಈ ವಿಮಾನವು ವೈಶ್ರವಣನಿಗಲ್ಲದೆ ಮತ್ತೊಬ್ಬರಿಗೆ ನಡೆಯದಿರಬಹುದೆಂದು ಹೇಳುತ್ತಿರುವಷ್ಟರಲ್ಲಿ-ಈ ಕೈಲಾಸಪರ್ವತಾಗ್ರದಲ್ಲಿ ಬ್ರಹ್ಮೇಂದ್ರಾದಿ ದೇವತೆಗಳಿಗೂ ಯಕ್ಷ ರಾಕ್ಷಸ ಕಿನ್ನರ ಕಿಂಪುರುಪಾದಿ ಕಾಮಚಾರಿಗಳಿಗೂ ಮಹಾದೇವನ ಪ್ರಭಾವದಿಂದ ಗಮಿಸುವುದು ಅಶಕ್ಯವಾಗಿರುವುದು ; ಹಿಂದಿರುಗು. ಮುಂದಕ್ಕೆ ಹೋದರೆ ಕೆಡುವೆ ಎಂದು ದಶವದನನನ್ನು ಕುರಿತು ನಂದೀಶ್ವರನು ಹೇಳಿದನು, ಆಗೆ ದಶಕಂಠನು ಶಂಕರನ ಎರಡನೆಯ ರೂಪಿಯಾದ ನಂದಿಕೇಶ್ವರನ ಮುಖವನ್ನು. ನೋಡಿ--ನಿನ್ನ ಮೋರೆಯು ಕೋತಿಯ ಸೋಡಿಗೆ ಸರಿಯಾಗಿರುವುದರಿಂದ ಬುದ್ದಿ.<noinclude></noinclude> knain7i1pdkeo7howljw2t8hb5uuxct ಪುಟ:ಕಥಾ ಸಂಗ್ರಹ - ಭಾಗ ೨.djvu/೨೩ 104 44583 324090 106935 2026-06-02T14:09:07Z Vinoda mamatharai 3222 /* Proofread */ 324090 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು|left=|right=13}}</noinclude> ಶೂನ್ಯನಾಗಿ ಹೀಗೆ ಹರಟುತ್ತೀಯೆ ಎಂದು ಅಪಹಾಸ್ಯ ಮಾಡಲು ; ನಂದೀಶ್ವರನು ಇವನ ದುರಹಂಕಾರಕ್ಕೆ ಬಹುಕುಪಿತನಾಗಿ ದಶಕಂಠನನ್ನು ಕುರಿತು--ಎಲೈ ಖಳಾ ಧಮನೇ, ನಿನ್ನ ಶೌರ್ಯವು ನನ್ನಿ೦ದ ತೃಣಕ್ಕಾದರೂ ಎಣೆಯಾಗಿ ಎಣಿಸಲ್ಪಡುವುದಿಲ್ಲವು, ನಿನ್ನನ್ನು ಕೊಲ್ಲುವುದು ನನಗೆ ಗಣನೆಯಲ್ಲವು, ನಿನ್ನ ಕೆಟ್ಟ ನಡತೆಗಳಿಂದ ನೀನೇ ಸಮೂಲನಾಗಿ ನಿರ್ಮೂಲನಾಗುವೆ ಇದು ನಿಜವು, ನೀನು ನನ್ನ ಮುಖವನ್ನು ನೋಡಿ ಕೋತಿಯ ಮುಖದಂತಿದೆ ಎಂದು ಹಾಸ್ಯ ಮಾಡಿದುದರಿಂದ ನಿನಗೆ ಕೋತಿಗ ಳಿಂದಲೇ ಪರಾಜಯವುಂಟಾಗಲಿ ಎಂದು ಶಾಪವನ್ನಿತ್ತನು. ಆ ಮೇಲೆ ದಶವಕ್ಕನು-- ಈ ಕೈಲಾಸಪರ್ವತವಲ್ಲವೇ ನನ್ನ ವಿಮಾನದ ಗತಿಯನ್ನು ತಡೆಯಿತು ? ಒಳ್ಳೆಯದು. ಮೊದಲಿದರ ಮಹಿಮೆಯನ್ನು ಮುರಿದು ಆ ಮೇಲೆ ಶಿವನ ಬಲುಮೆಯನ್ನು ನೋಡುವೆನು ಎಂದು ವಿಮಾನದಿಂದಿಳಿದು ಮೊದಲು ಸುರಾಸುರರು ಸಮುದ್ರಮಥನಕ್ಕಾಗಿ ಮಂದರಾಚಲವನ್ನು ಮಹಾ ವಾಸುಕಿಯಿಂದ ಬಿಗಿದಂತೆ ಆ ಹರಾದ್ರಿಯನ್ನು ತನ್ನಿಪ್ಪತ್ತು ತೋಳ್ಗಳಿಂದಲೂ ಬಿಗಿದು ಊರ್ಧ್ವಲೋಕವು ಅಲ್ಲಾಡುತ್ತಿರಲು ಭೂತಲವು ರಸಾತಲಕ್ಕಿಳಿಯುತ್ತಿರಲು ದಿಗಂತಗಳು ಬಿರಿಯುತ್ತಿರಲು ಆರ್ಭಟಿಸಿ ಕಿತ್ತೆತ್ತಿದನು. ಅವನ ಬಾಹುಬಲವಿನ್ನೆನಿತಿರುವುದೋ ? ಖಳನು ಕಿತ್ತೆತ್ತಲು ಕೈಲಾಸಗಿರಿಯು ಮೇಲೆದ್ದಿತು. ಅವನಾಳುತನದ ಬಿಂಕಕ್ಕೆ ಅಖಿಳ ಜನವೂ ಗಡಗಡನೆ ನಡುಗಿತು. ಹರನಿಗೆ ಪಾರ್ವತಿಯಿಂದ ಅಪ್ರಾರ್ಥಿತಾಲಿಂಗನೆಯು ದೊರೆಯಿತು, ಮೃತ್ಯುಂಜಯನು-ಇದು ದಶಕಂಠನ ದುಶ್ಚೇಷ್ಟೆಯೆಂದರಿತು ಕೂಡಲೆ ತನ್ನ ಪಾದಾಂಗುಷ್ಠದಿಂದ ಮೆಟ್ಟಲು ಗಿರಿಯು ಕೆಳಗಿಳಿಯಿತು. ತಿರಿಗಿ ದಶಕಂಠನು ಮೇಲೆತ್ತಿದನು. ಹೀಗೇ ಆನೇಕಾವೃತ್ತಿ ದಶಕಂಠನು ಎತ್ತುತ್ತ ಭೂತೇಶನು ಅಮುಕುತ್ತ ಇರಲು ; ಆ ಕೈಲಾಸನಗವು ಭೂದೇವಿಯಾಡುತ್ತಿರುವ ತಿರಿಕಲ್ಲಿನಂತೊಪ್ಪುತ್ತಿದ್ದಿತು. - ಇಂತಿರಲು ಒಂದುಸಾರಿ ರಕ್ಕಸನ ಇಪ್ಪತ್ತು ನಿಡುದೋಳ್ಗಳೂ ಆ ಗಿರಿಯ ಇರುಬಿನಲ್ಲಿ ಸಿಕ್ಕಲು ; ಅವನು ಕೋಪದಿಂದುಬ್ಬಿ ಬೊಬ್ಬಿರಿದೊಳನೂಕಿ ಎತ್ತಲಾಗಿ ಆಗ ಶಿವನು ಬಲವಾಗಿ ಮೆಟ್ಟಿದನು, ಆ ಮೇಲೆ ಖಳನ ದಿಟ ತನವಡಗಿತು, ಮನಸ್ಸು ವ್ಯಥೆಗೊಳಗಾಯಿತು. ಬುದ್ದಿಯು ವಿಚಾರಗೆಟ್ಟಿತು. ಕಾರ್ಯವೇಗದಲ್ಲಿ ಮಾಂದ್ಯ ವುಂಟಾಯಿತು. ಆಗ ಇತಿಕರ್ತವ್ಯತಾಮೂಢನಾಗಿ ಭೂಮಿಯು ಬಿರಿಯುವಂತೆ ಆರ್ಭಟಿಸಿ ಬಹುಬಾಧೆಗೊಳಗಾಗಿ ಕೊರಗುತ್ತಿರಲು ; ಇದೇನು ? ಅತ್ಯದ್ಭುತಾರ್ಭಟ ಧ್ವನಿಯು ! ಲೋಕಾವಸಾನಸಮಯವೋ ? ಎಂದು ಮಾನವಾಮರ ನಾಗಾದಿಲೋಕಗಳು ಬಲು ನಡುಗಿದುವು. ಆ ಸಮಯದಲ್ಲಿ ಅವನ ಮಂತ್ರಿಗಳು ತನ್ನೊಡೆಯನ ವಿಪದವಸ್ಥೆ ಯನ್ನು ಕಂಡು--ಏನೈ ದಶವದನನೇ, ನಿನ್ನ ಬಲವೇನಾಯಿತು ? ಜಗದೀಶನೊಡನೆ ನಿನಗೆ ಕಲಹವೇ ? ಸರ್ವಲೋಕಾಂತಕಾರಿಯನ್ನು ಕೆಣಕಿ ಬದುಕುವವರುಂಟೇ ? ಇಲ್ಲವು, ಅದು ಕಾರಣ ನೀನು ಶೀಘ್ರವಾಗಿ ಲೋಕಶಂಕರನಾದ ಶಂಕರ ನನ್ನು ಭಜಿಸು, ವೇದಗಳಿಂದ ಸ್ತುತಿಸು ಎಂದು ಹೇಳಲು ; ದಶಾಸ್ಯನು ಹಾಗೇ ಆಗಲೆಂದು ಅನೇಕ ಸಹಸ್ರ ಸಂವತ್ಸರಗಳ ವರೆಗೂ ಸಾಮಗಾನದಿಂದ ಸ್ತುತಿಸಿದನು. ಆಗ<noinclude></noinclude> mxlli5t9ewoyiq7kf2iy587sotzf4o9 324091 324090 2026-06-02T14:09:50Z Vinoda mamatharai 3222 324091 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು|left=|right=13}}</noinclude> ಶೂನ್ಯನಾಗಿ ಹೀಗೆ ಹರಟುತ್ತೀಯೆ ಎಂದು ಅಪಹಾಸ್ಯ ಮಾಡಲು ; ನಂದೀಶ್ವರನು ಇವನ ದುರಹಂಕಾರಕ್ಕೆ ಬಹುಕುಪಿತನಾಗಿ ದಶಕಂಠನನ್ನು ಕುರಿತು--ಎಲೈ ಖಳಾ ಧಮನೇ, ನಿನ್ನ ಶೌರ್ಯವು ನನ್ನಿ೦ದ ತೃಣಕ್ಕಾದರೂ ಎಣೆಯಾಗಿ ಎಣಿಸಲ್ಪಡುವುದಿಲ್ಲವು, ನಿನ್ನನ್ನು ಕೊಲ್ಲುವುದು ನನಗೆ ಗಣನೆಯಲ್ಲವು, ನಿನ್ನ ಕೆಟ್ಟ ನಡತೆಗಳಿಂದ ನೀನೇ ಸಮೂಲನಾಗಿ ನಿರ್ಮೂಲನಾಗುವೆ ಇದು ನಿಜವು, ನೀನು ನನ್ನ ಮುಖವನ್ನು ನೋಡಿ ಕೋತಿಯ ಮುಖದಂತಿದೆ ಎಂದು ಹಾಸ್ಯ ಮಾಡಿದುದರಿಂದ ನಿನಗೆ ಕೋತಿಗ ಳಿಂದಲೇ ಪರಾಜಯವುಂಟಾಗಲಿ ಎಂದು ಶಾಪವನ್ನಿತ್ತನು. ಆ ಮೇಲೆ ದಶವಕ್ಕನು-- ಈ ಕೈಲಾಸಪರ್ವತವಲ್ಲವೇ ನನ್ನ ವಿಮಾನದ ಗತಿಯನ್ನು ತಡೆಯಿತು ? ಒಳ್ಳೆಯದು. ಮೊದಲಿದರ ಮಹಿಮೆಯನ್ನು ಮುರಿದು ಆ ಮೇಲೆ ಶಿವನ ಬಲುಮೆಯನ್ನು ನೋಡುವೆನು ಎಂದು ವಿಮಾನದಿಂದಿಳಿದು ಮೊದಲು ಸುರಾಸುರರು ಸಮುದ್ರಮಥನಕ್ಕಾಗಿ ಮಂದರಾಚಲವನ್ನು ಮಹಾ ವಾಸುಕಿಯಿಂದ ಬಿಗಿದಂತೆ ಆ ಹರಾದ್ರಿಯನ್ನು ತನ್ನಿಪ್ಪತ್ತು ತೋಳ್ಗಳಿಂದಲೂ ಬಿಗಿದು ಊರ್ಧ್ವಲೋಕವು ಅಲ್ಲಾಡುತ್ತಿರಲು ಭೂತಲವು ರಸಾತಲಕ್ಕಿಳಿಯುತ್ತಿರಲು ದಿಗಂತಗಳು ಬಿರಿಯುತ್ತಿರಲು ಆರ್ಭಟಿಸಿ ಕಿತ್ತೆತ್ತಿದನು. ಅವನ ಬಾಹುಬಲವಿನ್ನೆನಿತಿರುವುದೋ ? ಖಳನು ಕಿತ್ತೆತ್ತಲು ಕೈಲಾಸಗಿರಿಯು ಮೇಲೆದ್ದಿತು. ಅವನಾಳುತನದ ಬಿಂಕಕ್ಕೆ ಅಖಿಳ ಜನವೂ ಗಡಗಡನೆ ನಡುಗಿತು. ಹರನಿಗೆ ಪಾರ್ವತಿಯಿಂದ ಅಪ್ರಾರ್ಥಿತಾಲಿಂಗನೆಯು ದೊರೆಯಿತು, ಮೃತ್ಯುಂಜಯನು-ಇದು ದಶಕಂಠನ ದುಶ್ಚೇಷ್ಟೆಯೆಂದರಿತು ಕೂಡಲೆ ತನ್ನ ಪಾದಾಂಗುಷ್ಠದಿಂದ ಮೆಟ್ಟಲು ಗಿರಿಯು ಕೆಳಗಿಳಿಯಿತು. ತಿರಿಗಿ ದಶಕಂಠನು ಮೇಲೆತ್ತಿದನು. ಹೀಗೇ ಆನೇಕಾವೃತ್ತಿ ದಶಕಂಠನು ಎತ್ತುತ್ತ ಭೂತೇಶನು ಅಮುಕುತ್ತ ಇರಲು ; ಆ ಕೈಲಾಸನಗವು ಭೂದೇವಿಯಾಡುತ್ತಿರುವ ತಿರಿಕಲ್ಲಿನಂತೊಪ್ಪುತ್ತಿದ್ದಿತು. ಇಂತಿರಲು ಒಂದುಸಾರಿ ರಕ್ಕಸನ ಇಪ್ಪತ್ತು ನಿಡುದೋಳ್ಗಳೂ ಆ ಗಿರಿಯ ಇರುಬಿನಲ್ಲಿ ಸಿಕ್ಕಲು ; ಅವನು ಕೋಪದಿಂದುಬ್ಬಿ ಬೊಬ್ಬಿರಿದೊಳನೂಕಿ ಎತ್ತಲಾಗಿ ಆಗ ಶಿವನು ಬಲವಾಗಿ ಮೆಟ್ಟಿದನು, ಆ ಮೇಲೆ ಖಳನ ದಿಟ ತನವಡಗಿತು, ಮನಸ್ಸು ವ್ಯಥೆಗೊಳಗಾಯಿತು. ಬುದ್ದಿಯು ವಿಚಾರಗೆಟ್ಟಿತು. ಕಾರ್ಯವೇಗದಲ್ಲಿ ಮಾಂದ್ಯ ವುಂಟಾಯಿತು. ಆಗ ಇತಿಕರ್ತವ್ಯತಾಮೂಢನಾಗಿ ಭೂಮಿಯು ಬಿರಿಯುವಂತೆ ಆರ್ಭಟಿಸಿ ಬಹುಬಾಧೆಗೊಳಗಾಗಿ ಕೊರಗುತ್ತಿರಲು ; ಇದೇನು ? ಅತ್ಯದ್ಭುತಾರ್ಭಟ ಧ್ವನಿಯು ! ಲೋಕಾವಸಾನಸಮಯವೋ ? ಎಂದು ಮಾನವಾಮರ ನಾಗಾದಿಲೋಕಗಳು ಬಲು ನಡುಗಿದುವು. ಆ ಸಮಯದಲ್ಲಿ ಅವನ ಮಂತ್ರಿಗಳು ತನ್ನೊಡೆಯನ ವಿಪದವಸ್ಥೆ ಯನ್ನು ಕಂಡು--ಏನೈ ದಶವದನನೇ, ನಿನ್ನ ಬಲವೇನಾಯಿತು ? ಜಗದೀಶನೊಡನೆ ನಿನಗೆ ಕಲಹವೇ ? ಸರ್ವಲೋಕಾಂತಕಾರಿಯನ್ನು ಕೆಣಕಿ ಬದುಕುವವರುಂಟೇ ? ಇಲ್ಲವು, ಅದು ಕಾರಣ ನೀನು ಶೀಘ್ರವಾಗಿ ಲೋಕಶಂಕರನಾದ ಶಂಕರ ನನ್ನು ಭಜಿಸು, ವೇದಗಳಿಂದ ಸ್ತುತಿಸು ಎಂದು ಹೇಳಲು ; ದಶಾಸ್ಯನು ಹಾಗೇ ಆಗಲೆಂದು ಅನೇಕ ಸಹಸ್ರ ಸಂವತ್ಸರಗಳ ವರೆಗೂ ಸಾಮಗಾನದಿಂದ ಸ್ತುತಿಸಿದನು. ಆಗ<noinclude></noinclude> m2tqi58n6jq9l628mvuco8t349zjs26 324102 324091 2026-06-02T18:04:05Z Pragathi. BH 7585 /* Validated */ 324102 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು|left=|right=13}}</noinclude> ಶೂನ್ಯನಾಗಿ ಹೀಗೆ ಹರಟುತ್ತೀಯೆ ಎಂದು ಅಪಹಾಸ್ಯ ಮಾಡಲು ; ನಂದೀಶ್ವರನು ಇವನ ದುರಹಂಕಾರಕ್ಕೆ ಬಹುಕುಪಿತನಾಗಿ ದಶಕಂಠನನ್ನು ಕುರಿತು--ಎಲೈ ಖಳಾ ಧಮನೇ, ನಿನ್ನ ಶೌರ್ಯವು ನನ್ನಿ೦ದ ತೃಣಕ್ಕಾದರೂ ಎಣೆಯಾಗಿ ಎಣಿಸಲ್ಪಡುವುದಿಲ್ಲವು, ನಿನ್ನನ್ನು ಕೊಲ್ಲುವುದು ನನಗೆ ಗಣನೆಯಲ್ಲವು, ನಿನ್ನ ಕೆಟ್ಟ ನಡತೆಗಳಿಂದ ನೀನೇ ಸಮೂಲನಾಗಿ ನಿರ್ಮೂಲನಾಗುವೆ ಇದು ನಿಜವು, ನೀನು ನನ್ನ ಮುಖವನ್ನು ನೋಡಿ ಕೋತಿಯ ಮುಖದಂತಿದೆ ಎಂದು ಹಾಸ್ಯ ಮಾಡಿದುದರಿಂದ ನಿನಗೆ ಕೋತಿಗ ಳಿಂದಲೇ ಪರಾಜಯವುಂಟಾಗಲಿ ಎಂದು ಶಾಪವನ್ನಿತ್ತನು. ಆ ಮೇಲೆ ದಶವಕ್ಕನು-- ಈ ಕೈಲಾಸಪರ್ವತವಲ್ಲವೇ ನನ್ನ ವಿಮಾನದ ಗತಿಯನ್ನು ತಡೆಯಿತು ? ಒಳ್ಳೆಯದು. ಮೊದಲಿದರ ಮಹಿಮೆಯನ್ನು ಮುರಿದು ಆ ಮೇಲೆ ಶಿವನ ಬಲುಮೆಯನ್ನು ನೋಡುವೆನು ಎಂದು ವಿಮಾನದಿಂದಿಳಿದು ಮೊದಲು ಸುರಾಸುರರು ಸಮುದ್ರಮಥನಕ್ಕಾಗಿ ಮಂದರಾಚಲವನ್ನು ಮಹಾ ವಾಸುಕಿಯಿಂದ ಬಿಗಿದಂತೆ ಆ ಹರಾದ್ರಿಯನ್ನು ತನ್ನಿಪ್ಪತ್ತು ತೋಳ್ಗಳಿಂದಲೂ ಬಿಗಿದು ಊರ್ಧ್ವಲೋಕವು ಅಲ್ಲಾಡುತ್ತಿರಲು ಭೂತಲವು ರಸಾತಲಕ್ಕಿಳಿಯುತ್ತಿರಲು ದಿಗಂತಗಳು ಬಿರಿಯುತ್ತಿರಲು ಆರ್ಭಟಿಸಿ ಕಿತ್ತೆತ್ತಿದನು. ಅವನ ಬಾಹುಬಲವಿನ್ನೆನಿತಿರುವುದೋ ? ಖಳನು ಕಿತ್ತೆತ್ತಲು ಕೈಲಾಸಗಿರಿಯು ಮೇಲೆದ್ದಿತು. ಅವನಾಳುತನದ ಬಿಂಕಕ್ಕೆ ಅಖಿಳ ಜನವೂ ಗಡಗಡನೆ ನಡುಗಿತು. ಹರನಿಗೆ ಪಾರ್ವತಿಯಿಂದ ಅಪ್ರಾರ್ಥಿತಾಲಿಂಗನೆಯು ದೊರೆಯಿತು, ಮೃತ್ಯುಂಜಯನು-ಇದು ದಶಕಂಠನ ದುಶ್ಚೇಷ್ಟೆಯೆಂದರಿತು ಕೂಡಲೆ ತನ್ನ ಪಾದಾಂಗುಷ್ಠದಿಂದ ಮೆಟ್ಟಲು ಗಿರಿಯು ಕೆಳಗಿಳಿಯಿತು. ತಿರಿಗಿ ದಶಕಂಠನು ಮೇಲೆತ್ತಿದನು. ಹೀಗೇ ಆನೇಕಾವೃತ್ತಿ ದಶಕಂಠನು ಎತ್ತುತ್ತ ಭೂತೇಶನು ಅಮುಕುತ್ತ ಇರಲು ; ಆ ಕೈಲಾಸನಗವು ಭೂದೇವಿಯಾಡುತ್ತಿರುವ ತಿರಿಕಲ್ಲಿನಂತೊಪ್ಪುತ್ತಿದ್ದಿತು. ಇಂತಿರಲು ಒಂದುಸಾರಿ ರಕ್ಕಸನ ಇಪ್ಪತ್ತು ನಿಡುದೋಳ್ಗಳೂ ಆ ಗಿರಿಯ ಇರುಬಿನಲ್ಲಿ ಸಿಕ್ಕಲು ; ಅವನು ಕೋಪದಿಂದುಬ್ಬಿ ಬೊಬ್ಬಿರಿದೊಳನೂಕಿ ಎತ್ತಲಾಗಿ ಆಗ ಶಿವನು ಬಲವಾಗಿ ಮೆಟ್ಟಿದನು, ಆ ಮೇಲೆ ಖಳನ ದಿಟ ತನವಡಗಿತು, ಮನಸ್ಸು ವ್ಯಥೆಗೊಳಗಾಯಿತು. ಬುದ್ದಿಯು ವಿಚಾರಗೆಟ್ಟಿತು. ಕಾರ್ಯವೇಗದಲ್ಲಿ ಮಾಂದ್ಯ ವುಂಟಾಯಿತು. ಆಗ ಇತಿಕರ್ತವ್ಯತಾಮೂಢನಾಗಿ ಭೂಮಿಯು ಬಿರಿಯುವಂತೆ ಆರ್ಭಟಿಸಿ ಬಹುಬಾಧೆಗೊಳಗಾಗಿ ಕೊರಗುತ್ತಿರಲು ; ಇದೇನು ? ಅತ್ಯದ್ಭುತಾರ್ಭಟ ಧ್ವನಿಯು ! ಲೋಕಾವಸಾನಸಮಯವೋ ? ಎಂದು ಮಾನವಾಮರ ನಾಗಾದಿಲೋಕಗಳು ಬಲು ನಡುಗಿದುವು. ಆ ಸಮಯದಲ್ಲಿ ಅವನ ಮಂತ್ರಿಗಳು ತನ್ನೊಡೆಯನ ವಿಪದವಸ್ಥೆ ಯನ್ನು ಕಂಡು--ಏನೈ ದಶವದನನೇ, ನಿನ್ನ ಬಲವೇನಾಯಿತು ? ಜಗದೀಶನೊಡನೆ ನಿನಗೆ ಕಲಹವೇ ? ಸರ್ವಲೋಕಾಂತಕಾರಿಯನ್ನು ಕೆಣಕಿ ಬದುಕುವವರುಂಟೇ ? ಇಲ್ಲವು, ಅದು ಕಾರಣ ನೀನು ಶೀಘ್ರವಾಗಿ ಲೋಕಶಂಕರನಾದ ಶಂಕರ ನನ್ನು ಭಜಿಸು, ವೇದಗಳಿಂದ ಸ್ತುತಿಸು ಎಂದು ಹೇಳಲು ; ದಶಾಸ್ಯನು ಹಾಗೇ ಆಗಲೆಂದು ಅನೇಕ ಸಹಸ್ರ ಸಂವತ್ಸರಗಳ ವರೆಗೂ ಸಾಮಗಾನದಿಂದ ಸ್ತುತಿಸಿದನು. ಆಗ<noinclude></noinclude> hkrpjr085yq8mh45s1gp5b8lg9679gt ಪುಟ:ಕಥಾ ಸಂಗ್ರಹ - ಭಾಗ ೨.djvu/೨೪ 104 44584 324227 106936 2026-06-03T10:11:53Z Vinoda mamatharai 3222 /* ಪರಿಶೀಲಿಸಲಾಗಿಲ್ಲ */ 324227 proofread-page text/x-wiki <noinclude><pagequality level="1" user="Vinoda mamatharai" />{{rh|center=ಕಥಾಸಂಗ್ರಹ-೪ ನೆಯ ಭಾಗ.<pages|left=14|right=}}</noinclude> ಕಿಂಕರಸೇವಿತ ಪಾದಪಂಕಜನಾದ ಶಂಕರನು ತುಷ್ಟನಾಗಿ ಗಿರಿಜಾತೆಯೊಡನೆ ತಂದು, ದಶಕಂಠನ ಅಪರಾಧಗಳನ್ನು ಮನ್ನಿಸಿ-ಎಲೈ ಅಸದೃಶವೀರನೇ, ನಿನ್ನ ಭುಜ ವಿಕ್ರಮಕ್ಕೆ ನಾನು ಮೆಚ್ಚಿದೆನು, ನೀನು ಧ್ವನಿಯಿಂದ ಲೋಕತ್ರಯಗಳನ್ನೂ ಬೆಚ್ಚಿಸಿದವನಾದುದರಿಂದ ಇನ್ನು ಮೇಲೆ ನಿನಗೆ ರಾವಣನೆಂದು ಹೆಸರುಂಟಾಗಲಿ, ಸಂತೋಷದಿಂದ ಹೋಗು ಎಂದು ಹೇಳಿದನು, ಆ ಮೇಲೆ ರಾವಣನು ಭಯಭರಿತಭಕ್ತಿಯಿಂದ ಕೂಡಿ, ಕೈಮುಗಿದು ನಿಂತುಕೊಂಡು-ಎಲೈ ದೇವದೇವನೇ, ನೀನು ನನ್ನಲ್ಲಿ ಕೃಪೆ ಯುಳ್ಳವನಾದರೆ ಅಪೂರ್ವವಾದೊಂದು ಖಡ್ಗವನ್ನು ಕರುಣಿಸಬೇಕೆಂದು ಬೇಡಿಕೊಳ್ಳಲು; ಚಂದ್ರಶೇಖರನು ಚಂದ್ರಹಾಸವೆಂಬೊಂದು ಕತ್ತಿಯನ್ನಿತ್ತು ಅಂತರ್ಧಾನನಾದನು. {{gap}}ಆ ಬಳಿಕ ರಾವಣನು ಅಲ್ಲಿಂದ ಹೊರಟು ಭೂಲೋಕದಲ್ಲಿ ಸಂಚರಿಸುತ್ತ ತೋ ಇವು ಕುರಿಮಂದೆಗಳನ್ನು ಕಡಿದೊಟ್ಟು ವಂತೆ ಆಜೆರಂಗದಲ್ಲಿ ಬಲವಂತರಾದ ಅರಸುಗ ಇನ್ನು ಸಂಹರಿಸುತ್ತ ಬಂದು ಹಿಮನಗದ ತಪ್ಪಲಲ್ಲಿರುವ ಮಹಾರಣ್ಯವನ್ನು ಹೊಕ್ಕು ನೋಡಲು; ಅಲ್ಲೊಂದೆಡೆಯಲ್ಲಿ ಅಸಮಾನಸೌಂದರ್ಯದಿಂದ ಕಂಗೊಳಿಸುತ್ತ ದ್ವಿತೀಯ ರತಿಯಂತೆ ಕುಳಿತು ತಪಸ್ಸನ್ನು ಮಾಡುತ್ತಿದ್ದ ಒಬ್ಬ ಸ್ತ್ರೀಯನ್ನು ನೋಡಿ. ಎಲೈ ಸ್ತ್ರೀಯಳೇ, ಇದೇನು ? ಅತ್ಯಾಶ್ಚರ್ಯವು ! ನೀನಾರು ? ನಿನ್ನ ಹೆಸರೇನು ? ಈ ವನ ಭೂಮಿಯಲ್ಲಿ ಸುಕುಮಾರಾಂಗಿಯಾದ ನೀನೊಬ್ಬಳೇ ಇದ್ದುಕೊಂಡು ಕಠಿಣತರ ತಪಶ್ಚರಣಕ್ಕೆ ಕಾರಣವೇನು ? ಈ ಮೊದಲಾದ ವರ್ತಮಾನಗಳನ್ನು ವಿಶದವಾಗಿ ತಿಳಿಸು ಎನ್ನಲು ; ಆಕೆಯು ಪ್ರೀತಿಯಿಂದ ರಾವಣನನ್ನು ಸತ್ಕರಿಸಿ-ಕೇಳ್ಳೆ, ಬೃಹಸ್ಸ ತಿಯ ಕುಮಾರನಾದ ಕುಶಧಜನೆಂಬವನು ವೇದವನ್ನು ಪಠಿಸುತ್ತಿರುವಾಗ ನಾನು ಆತನ ಬಾಯಿಯಿಂದ ಹುಟ್ಟಿದವಳಾದಕಾರಣ ಲೋಕದಲ್ಲಿ ನನಗೆ ವೇದವತಿಯೆಂದು ಹೆಸರಾಯಿತು, ನನ್ನ ತಂದೆಯು ಬಹು ಪ್ರೀತಿಯಿಂದ ನನ್ನನ್ನು ಕಾಪಾಡುತ್ತಿರಲು ; ಮನು ಮುನಿ ಸುರ ಕಿನ್ನರ ಯಕ್ಷ ಕಿಂಪುರುಷಾದಿಗಳಲ್ಲಿ ಸುಂದರರಾದ ಪುರುಷರು ಒಂದು ನನ್ನನ್ನು ಬೇಡಲು ; ಅವರೊಡನೆ ನನ್ನ ತಂದೆಯುಈಕೆಯು ಅಯೋನಿಜೆ ಯಾದುದರಿಂದ ಬಹು ಪವಿತ್ರಳು. ಈಕೆಯನ್ನು ವಿಷ್ಣುವಿಗಲ್ಲದೆ ಮತ್ತಾರಿಗೂ ಕೊಡುವುದಿಲ್ಲ ವೆಂದು ಹೇಳಿಬಿಟ್ಟನು ಆ ಮೇಲೆ ಶಂಭುವೆಂಬೊಬ್ಬ ರಾಕ್ಷಸನು ಬಂದು ನನ್ನನ್ನು ಕೇಳಲು ; ನನ್ನ ತಂದೆಯು ಅವನಿಗೂ ಯಥಾವತ್ತಾಗಿ ಹೇಳಿಬಿಡಲು ; ಅವನು ಕ್ರುದ್ದ ನಾಗಿ ನನ್ನ ತಂದೆಯ ತಲೆಯನ್ನು ಕಡಿದು ಬಿಸುಟು ಹೊರಟುಹೋ ದನು, ಆಗ ನನ್ನ ತಾಯಿಯ ಸಹಗಮನಕ್ರಿಯೆಯಿಂದ ಪ್ರಾಣತ್ಯಾಗವನ್ನು ಮಾಡಿ ದಳು. ಆ ಮೇಲೆ ಅನಾಥಳಾದ ನಾನು ತಾಯ್ತಂದೆಗಳಿಗೆ ಔರ್ಧ್ವದೇಹಿಕವನ್ನು ನಿರ್ವ ರ್ತಿಸಿ ನನ್ನ ತಂದೆಯ ಬಯಕೆಯನ್ನು ಕೊನೆಗಾಣಿಸುವುದಕ್ಕಾಗಿ ವಿಷ್ಣು ಪ್ರೀತ್ಯರ್ಥ ವಾಗಿ ತಪಸ್ಸನ್ನು ಮಾಡುತ್ತ ಇಲ್ಲಿದ್ದೇನೆ ಎಂದು ಹೇಳಿದಳು. ಆಗ ರಾವಣನು. ಎಲೈ ಸ್ತ್ರೀಯೇ, ಕೇಳು, ಹರಿಯೆಲ್ಲಿ ? ನೀನೆಲ್ಲಿ ? ಇಂಥ ನವಯೌವನಕಾಲದಲ್ಲಿ ಸುಖ ವಾಗಿರುವುದನ್ನು ಬಿಟ್ಟು ಹೀಗೆ ಮೂಢಳಾಗಿ ತಪಶ್ಚರಿಸುವುದರಿಂದ ನಿನ್ನ ಯೌವನವು ಅರಣ್ಯ ಪತಿತ ಚಂದ್ರಿಕೆಯಂತೆ ನಿರುಪಯೋಗವಾಗಿ ಹೋಗುವುದು, ಅದು ಕಾರಣ<noinclude></noinclude> fngnk59c9u5hgcg2a6fspdkg0h3uu99 324229 324227 2026-06-03T10:20:19Z Vinoda mamatharai 3222 /* Proofread */ 324229 proofread-page text/x-wiki <noinclude><pagequality level="3" user="Vinoda mamatharai" />{{rh|center=ಕಥಾಸಂಗ್ರಹ-೪ ನೆಯ ಭಾಗ.<pages|left=14|right=}}</noinclude> ಕಿಂಕರಸೇವಿತ ಪಾದಪಂಕಜನಾದ ಶಂಕರನು ತುಷ್ಟನಾಗಿ ಗಿರಿಜಾತೆಯೊಡನೆ ತಂದು, ದಶಕಂಠನ ಅಪರಾಧಗಳನ್ನು ಮನ್ನಿಸಿ-ಎಲೈ ಅಸದೃಶವೀರನೇ, ನಿನ್ನ ಭುಜ ವಿಕ್ರಮಕ್ಕೆ ನಾನು ಮೆಚ್ಚಿದೆನು, ನೀನು ಧ್ವನಿಯಿಂದ ಲೋಕತ್ರಯಗಳನ್ನೂ ಬೆಚ್ಚಿಸಿದವನಾದುದರಿಂದ ಇನ್ನು ಮೇಲೆ ನಿನಗೆ ರಾವಣನೆಂದು ಹೆಸರುಂಟಾಗಲಿ, ಸಂತೋಷದಿಂದ ಹೋಗು ಎಂದು ಹೇಳಿದನು, ಆ ಮೇಲೆ ರಾವಣನು ಭಯಭರಿತಭಕ್ತಿಯಿಂದ ಕೂಡಿ, ಕೈಮುಗಿದು ನಿಂತುಕೊಂಡು-ಎಲೈ ದೇವದೇವನೇ, ನೀನು ನನ್ನಲ್ಲಿ ಕೃಪೆ ಯುಳ್ಳವನಾದರೆ ಅಪೂರ್ವವಾದೊಂದು ಖಡ್ಗವನ್ನು ಕರುಣಿಸಬೇಕೆಂದು ಬೇಡಿಕೊಳ್ಳಲು; ಚಂದ್ರಶೇಖರನು ಚಂದ್ರಹಾಸವೆಂಬೊಂದು ಕತ್ತಿಯನ್ನಿತ್ತು ಅಂತರ್ಧಾನನಾದನು. {{gap}}ಆ ಬಳಿಕ ರಾವಣನು ಅಲ್ಲಿಂದ ಹೊರಟು ಭೂಲೋಕದಲ್ಲಿ ಸಂಚರಿಸುತ್ತ ತೋಳವು ಕುರಿಮಂದೆಗಳನ್ನು ಕಡಿದೊಟ್ಟುವಂತೆ ಆಜೆರಂಗದಲ್ಲಿ ಬಲವಂತರಾದ ಅರಸುಗಳನ್ನು ಸಂಹರಿಸುತ್ತ ಬಂದು ಹಿಮನಗದ ತಪ್ಪಲಲ್ಲಿರುವ ಮಹಾರಣ್ಯವನ್ನು ಹೊಕ್ಕು ನೋಡಲು; ಅಲ್ಲೊಂದೆಡೆಯಲ್ಲಿ ಅಸಮಾನಸೌಂದರ್ಯದಿಂದ ಕಂಗೊಳಿಸುತ್ತ ದ್ವಿತೀಯ ರತಿಯಂತೆ ಕುಳಿತು ತಪಸ್ಸನ್ನು ಮಾಡುತ್ತಿದ್ದ ಒಬ್ಬ ಸ್ತ್ರೀಯನ್ನು ನೋಡಿ. ಎಲೈ ಸ್ತ್ರೀಯಳೇ, ಇದೇನು ? ಅತ್ಯಾಶ್ಚರ್ಯವು ! ನೀನಾರು ? ನಿನ್ನ ಹೆಸರೇನು ? ಈ ವನ ಭೂಮಿಯಲ್ಲಿ ಸುಕುಮಾರಾಂಗಿಯಾದ ನೀನೊಬ್ಬಳೇ ಇದ್ದುಕೊಂಡು ಕಠಿಣತರ ತಪಶ್ಚರಣಕ್ಕೆ ಕಾರಣವೇನು ? ಈ ಮೊದಲಾದ ವರ್ತಮಾನಗಳನ್ನು ವಿಶದವಾಗಿ ತಿಳಿಸು ಎನ್ನಲು ; ಆಕೆಯು ಪ್ರೀತಿಯಿಂದ ರಾವಣನನ್ನು ಸತ್ಕರಿಸಿ-ಕೇಳೈ ಬೃಹಸ್ಪತಿಯ ಕುಮಾರನಾದ ಕುಶಧ್ವಜನೆಂಬವನು ವೇದವನ್ನು ಪಠಿಸುತ್ತಿರುವಾಗ ನಾನು ಆತನ ಬಾಯಿಯಿಂದ ಹುಟ್ಟಿದವಳಾದಕಾರಣ ಲೋಕದಲ್ಲಿ ನನಗೆ ವೇದವತಿಯೆಂದು ಹೆಸರಾಯಿತು, ನನ್ನ ತಂದೆಯು ಬಹು ಪ್ರೀತಿಯಿಂದ ನನ್ನನ್ನು ಕಾಪಾಡುತ್ತಿರಲು ; ಮನು ಮುನಿ ಸುರ ಕಿನ್ನರ ಯಕ್ಷ ಕಿಂಪುರುಷಾದಿಗಳಲ್ಲಿ ಸುಂದರರಾದ ಪುರುಷರು ಬಂದು ನನ್ನನ್ನು ಬೇಡಲು ; ಅವರೊಡನೆ ನನ್ನ ತಂದೆಯು ಈಕೆಯು ಅಯೋನಿಜೆಯಾದುದರಿಂದ ಬಹು ಪವಿತ್ರಳು. ಈಕೆಯನ್ನು ವಿಷ್ಣುವಿಗಲ್ಲದೆ ಮತ್ತಾರಿಗೂ ಕೊಡುವುದಿಲ್ಲವೆಂದು ಹೇಳಿಬಿಟ್ಟನು ಆ ಮೇಲೆ ಶಂಭುವೆಂಬೊಬ್ಬ ರಾಕ್ಷಸನು ಬಂದು ನನ್ನನ್ನು ಕೇಳಲು ; ನನ್ನ ತಂದೆಯು ಅವನಿಗೂ ಯಥಾವತ್ತಾಗಿ ಹೇಳಿಬಿಡಲು ; ಅವನು ಕ್ರುದ್ದನಾಗಿ ನನ್ನ ತಂದೆಯ ತಲೆಯನ್ನು ಕಡಿದು ಬಿಸುಟು ಹೊರಟುಹೋದನು, ಆಗ ನನ್ನ ತಾಯಿಯ ಸಹಗಮನಕ್ರಿಯೆಯಿಂದ ಪ್ರಾಣತ್ಯಾಗವನ್ನು ಮಾಡಿದಳು. ಆ ಮೇಲೆ ಅನಾಥಳಾದ ನಾನು ತಾಯ್ತಂದೆಗಳಿಗೆ ಔರ್ಧ್ವದೇಹಿಕವನ್ನು ನಿರ್ವ ರ್ತಿಸಿ ನನ್ನ ತಂದೆಯ ಬಯಕೆಯನ್ನು ಕೊನೆಗಾಣಿಸುವುದಕ್ಕಾಗಿ ವಿಷ್ಣು ಪ್ರೀತ್ಯರ್ಥವಾಗಿ ತಪಸ್ಸನ್ನು ಮಾಡುತ್ತ ಇಲ್ಲಿದ್ದೇನೆ ಎಂದು ಹೇಳಿದಳು. ಆಗ ರಾವಣನು. ಎಲೈ ಸ್ತ್ರೀಯೇ, ಕೇಳು, ಹರಿಯೆಲ್ಲಿ ? ನೀನೆಲ್ಲಿ ? ಇಂಥ ನವಯೌವನಕಾಲದಲ್ಲಿ ಸುಖವಾಗಿರುವುದನ್ನು ಬಿಟ್ಟು ಹೀಗೆ ಮೂಢಳಾಗಿ ತಪಶ್ಚರಿಸುವುದರಿಂದ ನಿನ್ನ ಯೌವನವು ಅರಣ್ಯ ಪತಿತ ಚಂದ್ರಿಕೆಯಂತೆ ನಿರುಪಯೋಗವಾಗಿ ಹೋಗುವುದು, ಅದು ಕಾರಣ<noinclude></noinclude> 4c22cu3irwtk85dj1aosqheup66wi1c 324266 324229 2026-06-03T11:45:00Z Pragathi. BH 7585 /* Validated */ 324266 proofread-page text/x-wiki <noinclude><pagequality level="4" user="Pragathi. BH" />{{rh|center=ಕಥಾಸಂಗ್ರಹ-೪ ನೆಯ ಭಾಗ.<pages|left=14|right=}}</noinclude> ಕಿಂಕರಸೇವಿತ ಪಾದಪಂಕಜನಾದ ಶಂಕರನು ತುಷ್ಟನಾಗಿ ಗಿರಿಜಾತೆಯೊಡನೆ ತಂದು, ದಶಕಂಠನ ಅಪರಾಧಗಳನ್ನು ಮನ್ನಿಸಿ-ಎಲೈ ಅಸದೃಶವೀರನೇ, ನಿನ್ನ ಭುಜ ವಿಕ್ರಮಕ್ಕೆ ನಾನು ಮೆಚ್ಚಿದೆನು, ನೀನು ಧ್ವನಿಯಿಂದ ಲೋಕತ್ರಯಗಳನ್ನೂ ಬೆಚ್ಚಿಸಿದವನಾದುದರಿಂದ ಇನ್ನು ಮೇಲೆ ನಿನಗೆ ರಾವಣನೆಂದು ಹೆಸರುಂಟಾಗಲಿ, ಸಂತೋಷದಿಂದ ಹೋಗು ಎಂದು ಹೇಳಿದನು, ಆ ಮೇಲೆ ರಾವಣನು ಭಯಭರಿತಭಕ್ತಿಯಿಂದ ಕೂಡಿ, ಕೈಮುಗಿದು ನಿಂತುಕೊಂಡು-ಎಲೈ ದೇವದೇವನೇ, ನೀನು ನನ್ನಲ್ಲಿ ಕೃಪೆ ಯುಳ್ಳವನಾದರೆ ಅಪೂರ್ವವಾದೊಂದು ಖಡ್ಗವನ್ನು ಕರುಣಿಸಬೇಕೆಂದು ಬೇಡಿಕೊಳ್ಳಲು; ಚಂದ್ರಶೇಖರನು ಚಂದ್ರಹಾಸವೆಂಬೊಂದು ಕತ್ತಿಯನ್ನಿತ್ತು ಅಂತರ್ಧಾನನಾದನು. {{gap}}ಆ ಬಳಿಕ ರಾವಣನು ಅಲ್ಲಿಂದ ಹೊರಟು ಭೂಲೋಕದಲ್ಲಿ ಸಂಚರಿಸುತ್ತ ತೋಳವು ಕುರಿಮಂದೆಗಳನ್ನು ಕಡಿದೊಟ್ಟುವಂತೆ ಆಜೆರಂಗದಲ್ಲಿ ಬಲವಂತರಾದ ಅರಸುಗಳನ್ನು ಸಂಹರಿಸುತ್ತ ಬಂದು ಹಿಮನಗದ ತಪ್ಪಲಲ್ಲಿರುವ ಮಹಾರಣ್ಯವನ್ನು ಹೊಕ್ಕು ನೋಡಲು; ಅಲ್ಲೊಂದೆಡೆಯಲ್ಲಿ ಅಸಮಾನಸೌಂದರ್ಯದಿಂದ ಕಂಗೊಳಿಸುತ್ತ ದ್ವಿತೀಯ ರತಿಯಂತೆ ಕುಳಿತು ತಪಸ್ಸನ್ನು ಮಾಡುತ್ತಿದ್ದ ಒಬ್ಬ ಸ್ತ್ರೀಯನ್ನು ನೋಡಿ. ಎಲೈ ಸ್ತ್ರೀಯಳೇ, ಇದೇನು ? ಅತ್ಯಾಶ್ಚರ್ಯವು ! ನೀನಾರು ? ನಿನ್ನ ಹೆಸರೇನು ? ಈ ವನ ಭೂಮಿಯಲ್ಲಿ ಸುಕುಮಾರಾಂಗಿಯಾದ ನೀನೊಬ್ಬಳೇ ಇದ್ದುಕೊಂಡು ಕಠಿಣತರ ತಪಶ್ಚರಣಕ್ಕೆ ಕಾರಣವೇನು ? ಈ ಮೊದಲಾದ ವರ್ತಮಾನಗಳನ್ನು ವಿಶದವಾಗಿ ತಿಳಿಸು ಎನ್ನಲು ; ಆಕೆಯು ಪ್ರೀತಿಯಿಂದ ರಾವಣನನ್ನು ಸತ್ಕರಿಸಿ-ಕೇಳೈ ಬೃಹಸ್ಪತಿಯ ಕುಮಾರನಾದ ಕುಶಧ್ವಜನೆಂಬವನು ವೇದವನ್ನು ಪಠಿಸುತ್ತಿರುವಾಗ ನಾನು ಆತನ ಬಾಯಿಯಿಂದ ಹುಟ್ಟಿದವಳಾದಕಾರಣ ಲೋಕದಲ್ಲಿ ನನಗೆ ವೇದವತಿಯೆಂದು ಹೆಸರಾಯಿತು, ನನ್ನ ತಂದೆಯು ಬಹು ಪ್ರೀತಿಯಿಂದ ನನ್ನನ್ನು ಕಾಪಾಡುತ್ತಿರಲು ; ಮನು ಮುನಿ ಸುರ ಕಿನ್ನರ ಯಕ್ಷ ಕಿಂಪುರುಷಾದಿಗಳಲ್ಲಿ ಸುಂದರರಾದ ಪುರುಷರು ಬಂದು ನನ್ನನ್ನು ಬೇಡಲು ; ಅವರೊಡನೆ ನನ್ನ ತಂದೆಯು ಈಕೆಯು ಅಯೋನಿಜೆಯಾದುದರಿಂದ ಬಹು ಪವಿತ್ರಳು. ಈಕೆಯನ್ನು ವಿಷ್ಣುವಿಗಲ್ಲದೆ ಮತ್ತಾರಿಗೂ ಕೊಡುವುದಿಲ್ಲವೆಂದು ಹೇಳಿಬಿಟ್ಟನು ಆ ಮೇಲೆ ಶಂಭುವೆಂಬೊಬ್ಬ ರಾಕ್ಷಸನು ಬಂದು ನನ್ನನ್ನು ಕೇಳಲು ; ನನ್ನ ತಂದೆಯು ಅವನಿಗೂ ಯಥಾವತ್ತಾಗಿ ಹೇಳಿಬಿಡಲು ; ಅವನು ಕ್ರುದ್ದನಾಗಿ ನನ್ನ ತಂದೆಯ ತಲೆಯನ್ನು ಕಡಿದು ಬಿಸುಟು ಹೊರಟುಹೋದನು, ಆಗ ನನ್ನ ತಾಯಿಯ ಸಹಗಮನಕ್ರಿಯೆಯಿಂದ ಪ್ರಾಣತ್ಯಾಗವನ್ನು ಮಾಡಿದಳು. ಆ ಮೇಲೆ ಅನಾಥಳಾದ ನಾನು ತಾಯ್ತಂದೆಗಳಿಗೆ ಔರ್ಧ್ವದೇಹಿಕವನ್ನು ನಿರ್ವ ರ್ತಿಸಿ ನನ್ನ ತಂದೆಯ ಬಯಕೆಯನ್ನು ಕೊನೆಗಾಣಿಸುವುದಕ್ಕಾಗಿ ವಿಷ್ಣು ಪ್ರೀತ್ಯರ್ಥವಾಗಿ ತಪಸ್ಸನ್ನು ಮಾಡುತ್ತ ಇಲ್ಲಿದ್ದೇನೆ ಎಂದು ಹೇಳಿದಳು. ಆಗ ರಾವಣನು. ಎಲೈ ಸ್ತ್ರೀಯೇ, ಕೇಳು, ಹರಿಯೆಲ್ಲಿ ? ನೀನೆಲ್ಲಿ ? ಇಂಥ ನವಯೌವನಕಾಲದಲ್ಲಿ ಸುಖವಾಗಿರುವುದನ್ನು ಬಿಟ್ಟು ಹೀಗೆ ಮೂಢಳಾಗಿ ತಪಶ್ಚರಿಸುವುದರಿಂದ ನಿನ್ನ ಯೌವನವು ಅರಣ್ಯ ಪತಿತ ಚಂದ್ರಿಕೆಯಂತೆ ನಿರುಪಯೋಗವಾಗಿ ಹೋಗುವುದು, ಅದು ಕಾರಣ<noinclude></noinclude> c1m5m5ra412238loltrbc3me2yjlefx ಪುಟ:ಕಥಾ ಸಂಗ್ರಹ - ಭಾಗ ೨.djvu/೨೫ 104 44585 324230 106937 2026-06-03T10:22:01Z Vinoda mamatharai 3222 /* ಪರಿಶೀಲಿಸಲಾಗಿಲ್ಲ */ 324230 proofread-page text/x-wiki <noinclude><pagequality level="1" user="Vinoda mamatharai" />{{rh|center=ರಾವಣನ ದಿಗ್ವಿಜಯವು|left=|right=15}}</noinclude> ನೀನು ಮತಿಹೀನತೆಯನ್ನು ಬಿಟ್ಟು ಜಗದೇಕವೀರನೂ ಸಮಸ್ತ ದೇವತೆಗಳಿಗೂ ಒಡೆ .ಯನೂ ಆದ ನನ್ನನ್ನು ಮದುವೆಯಾಗಿ ಸುಖದಲ್ಲಿರು ಎಂದು ಎಷ್ಟು ವಿಧವಾಗಿ ಹೇಳಿ ದರೂ ಆಕೆಯು ಒಪ್ಪದಿದ್ದ ಕಾರಣ ರಾವಣನು ಆಕೆಯನ್ನು ಬಲಾತ್ಕರಿಸುವುದಕ್ಕೆ ಯತ್ನಿಸಲು ; ಆಗ ಆ ವೇದವತಿಯು ಅಗ್ನಿಗೆ ಸಮಾನವಾದ ಕೋಪದಿಂದ ಕಣ್ಣಳು ಕೆಂಪಡರಲು- ಎಲೈ ಮಢಾತ್ಮನೇ, ಇಂಥ ದುರ್ವೃತ್ತಿಯಿಂದ ಬಹು ಪಾಪಿಯಾದ ನಿನ್ನನ್ನು ಕೊಲ್ಲುವುದು ನನಗೆ ಅಗಾಧವಲ್ಲ, ಆದರೆ ನನ್ನ ತಪಃಫಲವು ನಿರರ್ಥಕವಾ ಗುವುದು. ಅಲ್ಲದೆ ಸ್ತ್ರೀಯು ಪುರುಷನನ್ನು ವಧಿಸುವುದು ಧರ್ಮಶಾಸ್ತ್ರದಲ್ಲಿ ನಿಷೇಧಿ ಸಲ್ಪಟ್ಟಿದೆ. ಅದು ಕಾರಣ ನಾನು ಈ ದೇಹವನ್ನು ಬಿಟ್ಟು ಪುನಃ ಸೀತೆಯೆಂಬಭಿಧಾನ ದಿಂದವತರಿಸಿ ರಾಮನಾಮದಿಂದವತರಿಸುವ ವಿಷ್ಣು ವನ್ನು ವರಿಸಿ ಮದುವೆಯಾಗಿ ಆತನ ಕೈಯಿಂದ ನಿನ್ನನ್ನು ಕೊಲ್ಲಿಸುವೆನೆಂದು ಬಿರುನುಡಿಯಂ ನುಡಿದು ಆ ಕ್ಷಣವೇ ಅಗ್ನಿಯಲ್ಲಿ ಹೊಕ್ಕು ಶರೀರವನ್ನು ತ್ಯಜಿಸಿದಳು. ಆನಂತರದಲ್ಲಿ ರಾವಣನು ಹತಾಶನಾಗಿ ಪುಷ್ಪಕಾರೋಹಣವನ್ನು ಮಾಡಿ ಭೂಮಂಡಲದಲ್ಲಿ ಸಂಚರಿಸುತ್ತ ಮರುತ್ತನೆಂಬ ಮಹಾರಾಜನು ಯಜ್ಞ ಮಾಡುತ್ತಿ ರಲು ; ಅಲ್ಲಿಗೆ ಬಂದನು. ಆಗ ಯಜ್ಞ ದಲ್ಲಿ ಹವಿರಾಹರಣಾರ್ಥವಾಗಿ ಬಂದಿದ್ದ ಇಂದ್ರನು ದುಷನಾದ ರಾವಣನನ್ನು ನೋಡಿ ಭಯಕಂಪಿತನಾಗಿ ಕೂಡಲೆ ನವಿಲಾ ದನು, ಯಮನು ಕಾಗೆಯಾದನು. ವರುಣನು ಹಂಸವಾದನು, ಕುಬೇರನು ಗೋಸು೦ ಬೆಯಾದನು, ಈ ರೀತಿಯಾಗಿ ದೇವತೆಗಳೆಲ್ಲ ರೂ ಬೇರೆ ಬೇರೆಯಾದ ಪ್ರಾಣಿಗಳಂತಿ ರುವ ರೂಪವನ್ನು ಹೊಂದಿ ನಿಜರೂಪಗಳನ್ನು ಮರೆಮಾಡಿಕೊಂಡರು, ಋಷಿಗಳೆ ಲ್ಲರೂ ತೋರಿದ ಕಡೆಗೆ ಓಡಿಹೋದರು. ರಾವಣನು ಮರುತ್ತರಾಜನೆಡೆಗೈತಂದ. ಎಲೈ ಅರಸೇ, ನೀನು ಶೂರನಾಗಿದ್ದರೆ ಈ ಕ್ಷಣವೇ ನನ್ನೊಡನೆ ಯುದ್ಧಕ್ಕೆ ಸನ್ನದ್ದ ನಾಗು, ಹೇಡಿಯಾದರೆ ಸೋತೆನೆಂದು ಹೇಳಿಬಿಡು, ನಿನ್ನನ್ನು ಕೊಲ್ಲದೆ ಬಿಡುತ್ತೇನೆನಲು; ಆಗ ಮರುತ್ತರಾಜನು-ಎಲಾ, ಮರ್ಖನಾದ ನೀನಾರು ? ಏಕಿಲ್ಲಿಬಂದೆ ? ಎಂದು ಕೇಳಲು--ನಾನು ಧನಪತಿಯಾದ ಕುಬೇರನ ತಮ್ಮ ನು, ದಶಾಸ್ಯನೆಂಬ ನನ್ನ ಹೆಸರು ಸರ್ವಲೋಕವಿದಿತವಾಗಿರುವುದು, ಮತ್ತು ನಾನು ಯುದ್ಧ ರಂಗದಲ್ಲಿ ಕುಬೇರನನ್ನು ಸೋಲಿಸಿ ಆತನ ವಿಮಾನವನ್ನು ಕಿತ್ತು ಕೊಂಡುದರಿಂದ ಶೂರೆನೆಂದು ಲೋಕದಲ್ಲೆಲ್ಲಾ ಪ್ರಖ್ಯಾತನಾಗಿರುವೆನು. ಹೀಗಿರುವಲ್ಲಿ ನೀನು ಮಾತ್ರ ನನ್ನನ್ನು ತಿಳಿಯದಿರುವುದು ಅತ್ಯಾಶ್ಚರ್ಯವಾಗಿದೆ, ಅಥವಾ ನೀನು ಮಢನೂ ಅಪ್ರಸಿದ್ಧನೂ ಆಗಿರಬಹುದು ಎಂದು ಹೇಳಲು ; ಮರುತ್ತರಾಜನು-ಆಹಾ ! ನೀನು ಉತ್ತಮ ಪುರುಷನು ! ಅಣ್ಣ ನೊಡನೆ ಯುದ್ಧ ಮಾಡಿ ಗೆದ್ದವನು ! ನೀನು ಸ್ವಲ್ಪವಾದರೂ ಧರ್ಮಮಾರ್ಗವನ್ನು ತಪ್ಪಿ ನಡೆವವನಲ್ಲಿ ಎಂದು ಸ್ತುತಿನಿಂದಾವಚನಗಳನ್ನಾಡಿ--ಒಳ್ಳೆಯದು, ಯುದ್ಧಕ್ಕೆ ನಿಲ್ಲೆಂದು ಹೇಳಿ, ತಾನು ಸನ್ನದ್ಧನಾಗುತ್ತಿದ್ದನು. ಆ ಸಮಯದಲ್ಲಿ ಬೃಹಸ್ಪತಿಯ ತಮ್ಮ ನಾದ ಸಾಗುತ್ತಿದ್ದನು. ಆ ಸಮಯದಲ್ಲಿ ಬೃಹಸ್ಪತಿಯ ತಮ್ಮ ನಾದ ಸಂವರ್ತನೆಂಬ ಪುರೋಹಿತನು ಬಂದು-ಎಲೈ ರಾಯನೇ, ಈಗ ನೀನು ಯಜ್ಞ ದೀಕ್ಷಿತನಾಗಿದ್ದೀಯೆ. ಈ ವೇಳೆಯಲ್ಲಿ ಇಂಥ ದುಷ್ಟನೊಡನೆ ಯುದ್ಧಕ್ಕೆ<noinclude></noinclude> atmkfa9dc4e06xd1tt0xvdr9hyx4lsy 324232 324230 2026-06-03T10:31:36Z Vinoda mamatharai 3222 /* Proofread */ 324232 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು|left=|right=15}}</noinclude> ನೀನು ಮತಿಹೀನತೆಯನ್ನು ಬಿಟ್ಟು ಜಗದೇಕವೀರನೂ ಸಮಸ್ತ ದೇವತೆಗಳಿಗೂ ಒಡೆಯನೂ ಆದ ನನ್ನನ್ನು ಮದುವೆಯಾಗಿ ಸುಖದಲ್ಲಿರು ಎಂದು ಎಷ್ಟು ವಿಧವಾಗಿ ಹೇಳಿದರೂ ಆಕೆಯು ಒಪ್ಪದಿದ್ದ ಕಾರಣ ರಾವಣನು ಆಕೆಯನ್ನು ಬಲಾತ್ಕರಿಸುವುದಕ್ಕೆ ಯತ್ನಿಸಲು ; ಆಗ ಆ ವೇದವತಿಯು ಅಗ್ನಿಗೆ ಸಮಾನವಾದ ಕೋಪದಿಂದ ಕಣ್ಗಳು ಕೆಂಪಡರಲು- ಎಲೈ ಮೂಢಾತ್ಮನೇ, ಇಂಥ ದುರ್ವೃತ್ತಿಯಿಂದ ಬಹು ಪಾಪಿಯಾದ ನಿನ್ನನ್ನು ಕೊಲ್ಲುವುದು ನನಗೆ ಅಗಾಧವಲ್ಲ, ಆದರೆ ನನ್ನ ತಪಃಫಲವು ನಿರರ್ಥಕವಾಗುವುದು. ಅಲ್ಲದೆ ಸ್ತ್ರೀಯು ಪುರುಷನನ್ನು ವಧಿಸುವುದು ಧರ್ಮಶಾಸ್ತ್ರದಲ್ಲಿ ನಿಷೇಧಿಸಲ್ಪಟ್ಟಿದೆ. ಅದು ಕಾರಣ ನಾನು ಈ ದೇಹವನ್ನು ಬಿಟ್ಟು ಪುನಃ ಸೀತೆಯೆಂಬಭಿಧಾನ ದಿಂದವತರಿಸಿ ರಾಮನಾಮದಿಂದವತರಿಸುವ ವಿಷ್ಣುವನ್ನು ವರಿಸಿ ಮದುವೆಯಾಗಿ ಆತನ ಕೈಯಿಂದ ನಿನ್ನನ್ನು ಕೊಲ್ಲಿಸುವೆನೆಂದು ಬಿರುನುಡಿಯಂ ನುಡಿದು ಆ ಕ್ಷಣವೇ ಅಗ್ನಿಯಲ್ಲಿ ಹೊಕ್ಕು ಶರೀರವನ್ನು ತ್ಯಜಿಸಿದಳು. ಆನಂತರದಲ್ಲಿ ರಾವಣನು ಹತಾಶನಾಗಿ ಪುಷ್ಪಕಾರೋಹಣವನ್ನು ಮಾಡಿ ಭೂಮಂಡಲದಲ್ಲಿ ಸಂಚರಿಸುತ್ತ ಮರುತ್ತನೆಂಬ ಮಹಾರಾಜನು ಯಜ್ಞ ಮಾಡುತ್ತಿರಲು ; ಅಲ್ಲಿಗೆ ಬಂದನು. ಆಗ ಯಜ್ಞದಲ್ಲಿ ಹವಿರಾಹರಣಾರ್ಥವಾಗಿ ಬಂದಿದ್ದ ಇಂದ್ರನು ದುಷ್ಟನಾದ ರಾವಣನನ್ನು ನೋಡಿ ಭಯಕಂಪಿತನಾಗಿ ಕೂಡಲೆ ನವಿಲಾದನು, ಯಮನು ಕಾಗೆಯಾದನು. ವರುಣನು ಹಂಸವಾದನು, ಕುಬೇರನು ಗೋಸು೦ಬೆಯಾದನು, ಈ ರೀತಿಯಾಗಿ ದೇವತೆಗಳೆಲ್ಲರೂ ಬೇರೆ ಬೇರೆಯಾದ ಪ್ರಾಣಿಗಳಂತಿರುವ ರೂಪವನ್ನು ಹೊಂದಿ ನಿಜರೂಪಗಳನ್ನು ಮರೆಮಾಡಿಕೊಂಡರು, ಋಷಿಗಳೆಲ್ಲರೂ ತೋರಿದ ಕಡೆಗೆ ಓಡಿಹೋದರು. ರಾವಣನು ಮರುತ್ತರಾಜನೆಡೆಗೈತಂದ. ಎಲೈ ಅರಸೇ, ನೀನು ಶೂರನಾಗಿದ್ದರೆ ಈ ಕ್ಷಣವೇ ನನ್ನೊಡನೆ ಯುದ್ಧಕ್ಕೆ ಸನ್ನದ್ದ ನಾಗು, ಹೇಡಿಯಾದರೆ ಸೋತೆನೆಂದು ಹೇಳಿಬಿಡು, ನಿನ್ನನ್ನು ಕೊಲ್ಲದೆ ಬಿಡುತ್ತೇನೆನಲು; ಆಗ ಮರುತ್ತರಾಜನು-ಎಲಾ, ಮೂರ್ಖನಾದ ನೀನಾರು ? ಏಕಿಲ್ಲಿಬಂದೆ ? ಎಂದು ಕೇಳಲು--ನಾನು ಧನಪತಿಯಾದ ಕುಬೇರನ ತಮ್ಮ ನು, ದಶಾಸ್ಯನೆಂಬ ನನ್ನ ಹೆಸರು ಸರ್ವಲೋಕವಿದಿತವಾಗಿರುವುದು, ಮತ್ತು ನಾನು ಯುದ್ಧ ರಂಗದಲ್ಲಿ ಕುಬೇರನನ್ನು ಸೋಲಿಸಿ ಆತನ ವಿಮಾನವನ್ನು ಕಿತ್ತು ಕೊಂಡುದರಿಂದ ಶೂರೆನೆಂದು ಲೋಕದಲ್ಲೆಲ್ಲಾ ಪ್ರಖ್ಯಾತನಾಗಿರುವೆನು. ಹೀಗಿರುವಲ್ಲಿ ನೀನು ಮಾತ್ರ ನನ್ನನ್ನು ತಿಳಿಯದಿರುವುದು ಅತ್ಯಾಶ್ಚರ್ಯವಾಗಿದೆ, ಅಥವಾ ನೀನು ಮೂಢನೂ ಅಪ್ರಸಿದ್ಧನೂ ಆಗಿರಬಹುದು ಎಂದು ಹೇಳಲು ; ಮರುತ್ತರಾಜನು-ಆಹಾ ! ನೀನು ಉತ್ತಮ ಪುರುಷನು ! ಅಣ್ಣ ನೊಡನೆ ಯುದ್ಧ ಮಾಡಿ ಗೆದ್ದವನು ! ನೀನು ಸ್ವಲ್ಪವಾದರೂ ಧರ್ಮಮಾರ್ಗವನ್ನು ತಪ್ಪಿ ನಡೆವವನಲ್ಲ ಎಂದು ಸ್ತುತಿನಿಂದಾವಚನಗಳನ್ನಾಡಿ--ಒಳ್ಳೆಯದು, ಯುದ್ಧಕ್ಕೆ ನಿಲ್ಲೆಂದು ಹೇಳಿ, ತಾನು ಸನ್ನದ್ಧನಾಗುತ್ತಿದ್ದನು. ಆ ಸಮಯದಲ್ಲಿ ಬೃಹಸ್ಪತಿಯ ತಮ್ಮ ನಾದ ಸಂವರ್ತನೆಂಬ ಪುರೋಹಿತನು ಬಂದು-ಎಲೈ ರಾಯನೇ, ಈಗ ನೀನು ಯಜ್ಞ ದೀಕ್ಷಿತನಾಗಿದ್ದೀಯೆ. ಈ ವೇಳೆಯಲ್ಲಿ ಇಂಥ ದುಷ್ಟನೊಡನೆ ಯುದ್ಧಕ್ಕೆ<noinclude></noinclude> cjv8yk58s24n3qs51pe7z7cubg5hxo1 324265 324232 2026-06-03T11:44:48Z Pragathi. BH 7585 /* Validated */ 324265 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು|left=|right=15}}</noinclude> ನೀನು ಮತಿಹೀನತೆಯನ್ನು ಬಿಟ್ಟು ಜಗದೇಕವೀರನೂ ಸಮಸ್ತ ದೇವತೆಗಳಿಗೂ ಒಡೆಯನೂ ಆದ ನನ್ನನ್ನು ಮದುವೆಯಾಗಿ ಸುಖದಲ್ಲಿರು ಎಂದು ಎಷ್ಟು ವಿಧವಾಗಿ ಹೇಳಿದರೂ ಆಕೆಯು ಒಪ್ಪದಿದ್ದ ಕಾರಣ ರಾವಣನು ಆಕೆಯನ್ನು ಬಲಾತ್ಕರಿಸುವುದಕ್ಕೆ ಯತ್ನಿಸಲು ; ಆಗ ಆ ವೇದವತಿಯು ಅಗ್ನಿಗೆ ಸಮಾನವಾದ ಕೋಪದಿಂದ ಕಣ್ಗಳು ಕೆಂಪಡರಲು- ಎಲೈ ಮೂಢಾತ್ಮನೇ, ಇಂಥ ದುರ್ವೃತ್ತಿಯಿಂದ ಬಹು ಪಾಪಿಯಾದ ನಿನ್ನನ್ನು ಕೊಲ್ಲುವುದು ನನಗೆ ಅಗಾಧವಲ್ಲ, ಆದರೆ ನನ್ನ ತಪಃಫಲವು ನಿರರ್ಥಕವಾಗುವುದು. ಅಲ್ಲದೆ ಸ್ತ್ರೀಯು ಪುರುಷನನ್ನು ವಧಿಸುವುದು ಧರ್ಮಶಾಸ್ತ್ರದಲ್ಲಿ ನಿಷೇಧಿಸಲ್ಪಟ್ಟಿದೆ. ಅದು ಕಾರಣ ನಾನು ಈ ದೇಹವನ್ನು ಬಿಟ್ಟು ಪುನಃ ಸೀತೆಯೆಂಬಭಿಧಾನ ದಿಂದವತರಿಸಿ ರಾಮನಾಮದಿಂದವತರಿಸುವ ವಿಷ್ಣುವನ್ನು ವರಿಸಿ ಮದುವೆಯಾಗಿ ಆತನ ಕೈಯಿಂದ ನಿನ್ನನ್ನು ಕೊಲ್ಲಿಸುವೆನೆಂದು ಬಿರುನುಡಿಯಂ ನುಡಿದು ಆ ಕ್ಷಣವೇ ಅಗ್ನಿಯಲ್ಲಿ ಹೊಕ್ಕು ಶರೀರವನ್ನು ತ್ಯಜಿಸಿದಳು. {{gap}}ಆನಂತರದಲ್ಲಿ ರಾವಣನು ಹತಾಶನಾಗಿ ಪುಷ್ಪಕಾರೋಹಣವನ್ನು ಮಾಡಿ ಭೂಮಂಡಲದಲ್ಲಿ ಸಂಚರಿಸುತ್ತ ಮರುತ್ತನೆಂಬ ಮಹಾರಾಜನು ಯಜ್ಞ ಮಾಡುತ್ತಿರಲು ; ಅಲ್ಲಿಗೆ ಬಂದನು. ಆಗ ಯಜ್ಞದಲ್ಲಿ ಹವಿರಾಹರಣಾರ್ಥವಾಗಿ ಬಂದಿದ್ದ ಇಂದ್ರನು ದುಷ್ಟನಾದ ರಾವಣನನ್ನು ನೋಡಿ ಭಯಕಂಪಿತನಾಗಿ ಕೂಡಲೆ ನವಿಲಾದನು, ಯಮನು ಕಾಗೆಯಾದನು. ವರುಣನು ಹಂಸವಾದನು, ಕುಬೇರನು ಗೋಸು೦ಬೆಯಾದನು, ಈ ರೀತಿಯಾಗಿ ದೇವತೆಗಳೆಲ್ಲರೂ ಬೇರೆ ಬೇರೆಯಾದ ಪ್ರಾಣಿಗಳಂತಿರುವ ರೂಪವನ್ನು ಹೊಂದಿ ನಿಜರೂಪಗಳನ್ನು ಮರೆಮಾಡಿಕೊಂಡರು, ಋಷಿಗಳೆಲ್ಲರೂ ತೋರಿದ ಕಡೆಗೆ ಓಡಿಹೋದರು. ರಾವಣನು ಮರುತ್ತರಾಜನೆಡೆಗೈತಂದ. ಎಲೈ ಅರಸೇ, ನೀನು ಶೂರನಾಗಿದ್ದರೆ ಈ ಕ್ಷಣವೇ ನನ್ನೊಡನೆ ಯುದ್ಧಕ್ಕೆ ಸನ್ನದ್ದ ನಾಗು, ಹೇಡಿಯಾದರೆ ಸೋತೆನೆಂದು ಹೇಳಿಬಿಡು, ನಿನ್ನನ್ನು ಕೊಲ್ಲದೆ ಬಿಡುತ್ತೇನೆನಲು; ಆಗ ಮರುತ್ತರಾಜನು-ಎಲಾ, ಮೂರ್ಖನಾದ ನೀನಾರು ? ಏಕಿಲ್ಲಿಬಂದೆ ? ಎಂದು ಕೇಳಲು--ನಾನು ಧನಪತಿಯಾದ ಕುಬೇರನ ತಮ್ಮ ನು, ದಶಾಸ್ಯನೆಂಬ ನನ್ನ ಹೆಸರು ಸರ್ವಲೋಕವಿದಿತವಾಗಿರುವುದು, ಮತ್ತು ನಾನು ಯುದ್ಧ ರಂಗದಲ್ಲಿ ಕುಬೇರನನ್ನು ಸೋಲಿಸಿ ಆತನ ವಿಮಾನವನ್ನು ಕಿತ್ತು ಕೊಂಡುದರಿಂದ ಶೂರೆನೆಂದು ಲೋಕದಲ್ಲೆಲ್ಲಾ ಪ್ರಖ್ಯಾತನಾಗಿರುವೆನು. ಹೀಗಿರುವಲ್ಲಿ ನೀನು ಮಾತ್ರ ನನ್ನನ್ನು ತಿಳಿಯದಿರುವುದು ಅತ್ಯಾಶ್ಚರ್ಯವಾಗಿದೆ, ಅಥವಾ ನೀನು ಮೂಢನೂ ಅಪ್ರಸಿದ್ಧನೂ ಆಗಿರಬಹುದು ಎಂದು ಹೇಳಲು ; ಮರುತ್ತರಾಜನು-ಆಹಾ ! ನೀನು ಉತ್ತಮ ಪುರುಷನು ! ಅಣ್ಣ ನೊಡನೆ ಯುದ್ಧ ಮಾಡಿ ಗೆದ್ದವನು ! ನೀನು ಸ್ವಲ್ಪವಾದರೂ ಧರ್ಮಮಾರ್ಗವನ್ನು ತಪ್ಪಿ ನಡೆವವನಲ್ಲ ಎಂದು ಸ್ತುತಿನಿಂದಾವಚನಗಳನ್ನಾಡಿ--ಒಳ್ಳೆಯದು, ಯುದ್ಧಕ್ಕೆ ನಿಲ್ಲೆಂದು ಹೇಳಿ, ತಾನು ಸನ್ನದ್ಧನಾಗುತ್ತಿದ್ದನು. ಆ ಸಮಯದಲ್ಲಿ ಬೃಹಸ್ಪತಿಯ ತಮ್ಮ ನಾದ ಸಂವರ್ತನೆಂಬ ಪುರೋಹಿತನು ಬಂದು-ಎಲೈ ರಾಯನೇ, ಈಗ ನೀನು ಯಜ್ಞ ದೀಕ್ಷಿತನಾಗಿದ್ದೀಯೆ. ಈ ವೇಳೆಯಲ್ಲಿ ಇಂಥ ದುಷ್ಟನೊಡನೆ ಯುದ್ಧಕ್ಕೆ<noinclude></noinclude> 0xnxkkowjer4fy1jmheyp5yu016er6u ಪುಟ:ಕಥಾ ಸಂಗ್ರಹ - ಭಾಗ ೨.djvu/೨೬ 104 44586 324239 106938 2026-06-03T10:42:49Z Vinoda mamatharai 3222 /* Proofread */ 324239 proofread-page text/x-wiki <noinclude><pagequality level="3" user="Vinoda mamatharai" />{{rh|center=ಕಥಾಸಂಗ್ರಹ-೪ ನೆಯ ಭಾಗ|left=16|right=}}</noinclude> ಹೋಗುವುದು ಯುಕ್ತವಲ್ಲವೆಂದುಸಿರಲು ; ಅರಸನು ಆ ಮಾತುಗಳನ್ನು ಗ್ರಹಿಸಿ ಹಿಡಿದಿದ್ದ ಬಿಲ್ಲನ್ನು ಕೆಳಗಿಟ್ಟು ರಾವಣನ ಬಳಿಗೆ ಬಂದು--ಎಲೈ ವೀರನೇ, ನಾನು ನಿನಗೆ ಸೋತೆನೆಂದು ಹೇಳಿಬಿಟ್ಟನು. ಆ ಮೇಲೆ ರಾವಣನು ಅಲ್ಲಿಂದ ಹೊರಟುಹೋಗಲು; ಮೊದಲಿನಂತೆ ನಿಜರೂಪಧಾರಿಗಳಾದ ಇಂದ್ರಾದಿ ದೇವತೆಗಳೂ ಮುನಿಗಳೂ ಯಜ್ಞಶಾಲೆಗೆ ಬಂದು--ಆಕಸ್ಮಾತ್ತಾಗಿನಮಗೊದಗಿದ ರಾಕ್ಷಸರೂಪಮೃತ್ಯುವ ತಪ್ಪಿಹೋಯಿತೆಂದು ಸಂತೋಷಿಸಿದರು. ಇಂದ್ರನು ತಾನು ನವಿಲಾಗಿದ್ದು ವಿಪತ್ತನ್ನು ತಪ್ಪಿಸಿಕೊಂಡನಾದುದರಿದ ಆ ನವಿಲನ್ನು ಕುರಿತು-ನಿನ್ನ ರಕ್ಕೆಯಲ್ಲಿ ನನ್ನ ಕಣ್ಣುಗಳಂತಿರುವ ಚಿನ್ನೆಗಳುಂಟಾಗಲಿ ಮತ್ತು ವರ್ಷಕಾಲದಲ್ಲಿ ನಿನಗೆ ವಿಶೇಷವಾಗಿ ಸಂತೋಷೋದಯವಾಗಲಿ ಎಂದು ವರವನ್ನಿತ್ತನು. ಯಮನು ಹಾಗೇ ಕಾಗೆಯನ್ನು ನೋಡಿ-ಎಲೈ ವಾಯಸವೇ, ಈ ದಿವಸ ಮೊದಲು ನಿನಗೆ ಬೇಗ ಮರಣವಾಗದೆ ಅನೇಕ ದಿನಗಳ ವರೆಗೂ ಬದುಕು ಚಿರಜೀವಿ ಯೆನ್ನಿಸಿಕೊಂಡಿರು, ಇದು ಮೊದಲು ಲೋಕದ ಜನರು ಮಾಡುವ ಪಿತೃಕಾರ್ಯ ಗಳಲ್ಲಿ ಪಿತೃಪ್ರೀತ್ಯರ್ಥವಾಗಿ ಹಾಕುವ ಪಿಂಡಗಳನ್ನು ನೀನು ಭಕ್ಷಿಸಿದರೆ ಅದರಿಂದ ನಾನು ಬಹಳವಾಗಿ ತೃಪ್ತಿಯನ್ನು ಹೊಂದುವೆನೆಂದು ವರವನ್ನು ಕೊಟ್ಟನು. ಕುಬೇರನು ಗೋಸುಂಬೆಯನ್ನು ನೋಡಿ ನಿನ್ನ ಕ೦ಠದಲ್ಲಿ ಸುವರ್ಣರೇಖೆಯಂತಿರುವ ಗೆರೆಯು ಯಾವಾಗಲೂ ಇರಲೆಂದು ವರವನ್ನಿತ್ತನು. ಆ ಮೇಲೆ ಎಲ್ಲರೂ ಯಜ್ಞವನ್ನು ಮುಗಿಸಿಕೊಂಡು ಯಥಾಸ್ಥಾನಗಳನ್ನು ಕುರಿತು ತೆರಳಿದರು. ಇತ್ತ ರಾವಣನು ಅಯೋಧ್ಯಾನಗರವನ್ನು ಕುರಿತು ಹೋಗಿ ಅನರಣ್ಯನೆಂಬ ಆ ಪುರಾಧಿಪತಿಯನ್ನು ಕಂಡು-ಎಲೈ ನೃಪನೇ, ಯುದ್ಧಕ್ಕೆ ಬರುವಿಯೋ ? ಅಥವಾ ಸೋತೆನೆಂದು ಹೇಳಿಬಿಡುವಿಯೋ ? ಎಂದು ಬಲಾತ್ಕರಿಸಲು ; ಆಗ ರಾಯನು ಮಹಾ ಕೋಪವುಳ್ಳವನಾಗಿ ಧನುರ್ಬಾಣಗಳನ್ನು ತೆಗೆದುಕೊಂಡು ಬಂದು ರಾವಣನೊಡನೆ ಬಹುದಿನಗಳ ವರೆಗೂ ಯುದ್ಧವನ್ನು ಮಾಡಿ ಕಡೆಗೆ ಅವನ ಬಾಣಘಾತದಿಂದ ನೊಂದು ಭೂಮಿಯಲ್ಲಿ ಬಿದ್ದು ಅಂತ್ಯಾವಸ್ಥೋಚಿತವಾದ ಬಾಧೆಯನ್ನನುಭವಿಸುತ್ತಿರಲು ; ಆ ಸಮಯದಲ್ಲಿ ರಾವಣನು ಅವನ ಬಳಿಗೆ ಬಂದು--ಏನೈಯ್ಯಾ ಅಲ್ಪ ಬಲಿಯಾದ ಅರಸೇ, ಅಗ್ನಿಯೊಡನೆ ಕಲಹಮಾಡಿದ ಮಿಡಿತೆಯಂತೆ ವ್ಯರ್ಥವಾಗಿ ಸಾಯುತ್ತಿರುವಿಯಲ್ಲಾ ! ನೀನೆಂಥ ಮೂಢನು ? ಮೊದಲೇ ಸೋತೆನೆಂದು ಹೇಳಿಬಿಟ್ಟಿದ್ದರೆ ಜೀವಿಸಿಕೊಂಡಿರಬಹುದಾಗಿದ್ದಿತ್ತು ಎಂದು ಗರ್ವೋಕ್ತಿಗಳಿಂದ ಹಾಸ್ಯಮಾಡಲು; ಅದಕ್ಕಾರಾಯನು--ಎಲೈ ಮೂರ್ಖನೇ, ಯುದ್ಧದಲ್ಲಿ ಜಯಾಪಜಯಗಳು ದೈವಾಧೀನವಾದುವುಗಳು, ಯುದ್ದದಲ್ಲಿ ಎದುರಾಂತ' ವಿರೋಧಿಗಳನ್ನು ಜಯಿಸುವುದೂ ಹಗೆಗಳಿಂದ ಸಾಯುವುದೂ ಶೂರರಾದವರಿಗೆ ನೈಜಧರ್ಮವು, ಇದರಿಂದ ಬಹುಮಾ ನಾಪಮಾನಗಳುಂಟಾಗುವುದಿಲ್ಲ, ನೀನು ದುರಹಂಕೃತಿಯುಳ್ಳವನಾಗಿ ಇಂಥ ಕಾಲದಲ್ಲಿ ನನ್ನನ್ನು ಹಾಸ್ಯ ಮಾಡಿದ ಕಾರಣ ಮುಂದೆ ನನ್ನ ವಂಶದಲ್ಲಿ ರಾಮನೆಂಬವನು ಹುಟ್ಟಿ ನಿನ್ನನ್ನು ಕೊಲ್ಲುವನೆಂದು ಶಾಪವನ್ನಿತ್ತು ಪ್ರಾಣವನ್ನು ಬಿಟ್ಟನು.<noinclude></noinclude> j8rmy1dh10x4ntrbpd6qgdp30adf49z 324264 324239 2026-06-03T11:44:25Z Pragathi. BH 7585 /* Validated */ 324264 proofread-page text/x-wiki <noinclude><pagequality level="4" user="Pragathi. BH" />{{rh|center=ಕಥಾಸಂಗ್ರಹ-೪ ನೆಯ ಭಾಗ|left=16|right=}}</noinclude> ಹೋಗುವುದು ಯುಕ್ತವಲ್ಲವೆಂದುಸಿರಲು ; ಅರಸನು ಆ ಮಾತುಗಳನ್ನು ಗ್ರಹಿಸಿ ಹಿಡಿದಿದ್ದ ಬಿಲ್ಲನ್ನು ಕೆಳಗಿಟ್ಟು ರಾವಣನ ಬಳಿಗೆ ಬಂದು--ಎಲೈ ವೀರನೇ, ನಾನು ನಿನಗೆ ಸೋತೆನೆಂದು ಹೇಳಿಬಿಟ್ಟನು. {{gap}}ಆ ಮೇಲೆ ರಾವಣನು ಅಲ್ಲಿಂದ ಹೊರಟುಹೋಗಲು; ಮೊದಲಿನಂತೆ ನಿಜರೂಪಧಾರಿಗಳಾದ ಇಂದ್ರಾದಿ ದೇವತೆಗಳೂ ಮುನಿಗಳೂ ಯಜ್ಞಶಾಲೆಗೆ ಬಂದು--ಆಕಸ್ಮಾತ್ತಾಗಿನಮಗೊದಗಿದ ರಾಕ್ಷಸರೂಪಮೃತ್ಯುವ ತಪ್ಪಿಹೋಯಿತೆಂದು ಸಂತೋಷಿಸಿದರು. ಇಂದ್ರನು ತಾನು ನವಿಲಾಗಿದ್ದು ವಿಪತ್ತನ್ನು ತಪ್ಪಿಸಿಕೊಂಡನಾದುದರಿದ ಆ ನವಿಲನ್ನು ಕುರಿತು-ನಿನ್ನ ರಕ್ಕೆಯಲ್ಲಿ ನನ್ನ ಕಣ್ಣುಗಳಂತಿರುವ ಚಿನ್ನೆಗಳುಂಟಾಗಲಿ ಮತ್ತು ವರ್ಷಕಾಲದಲ್ಲಿ ನಿನಗೆ ವಿಶೇಷವಾಗಿ ಸಂತೋಷೋದಯವಾಗಲಿ ಎಂದು ವರವನ್ನಿತ್ತನು. ಯಮನು ಹಾಗೇ ಕಾಗೆಯನ್ನು ನೋಡಿ-ಎಲೈ ವಾಯಸವೇ, ಈ ದಿವಸ ಮೊದಲು ನಿನಗೆ ಬೇಗ ಮರಣವಾಗದೆ ಅನೇಕ ದಿನಗಳ ವರೆಗೂ ಬದುಕು ಚಿರಜೀವಿ ಯೆನ್ನಿಸಿಕೊಂಡಿರು, ಇದು ಮೊದಲು ಲೋಕದ ಜನರು ಮಾಡುವ ಪಿತೃಕಾರ್ಯ ಗಳಲ್ಲಿ ಪಿತೃಪ್ರೀತ್ಯರ್ಥವಾಗಿ ಹಾಕುವ ಪಿಂಡಗಳನ್ನು ನೀನು ಭಕ್ಷಿಸಿದರೆ ಅದರಿಂದ ನಾನು ಬಹಳವಾಗಿ ತೃಪ್ತಿಯನ್ನು ಹೊಂದುವೆನೆಂದು ವರವನ್ನು ಕೊಟ್ಟನು. ಕುಬೇರನು ಗೋಸುಂಬೆಯನ್ನು ನೋಡಿ ನಿನ್ನ ಕ೦ಠದಲ್ಲಿ ಸುವರ್ಣರೇಖೆಯಂತಿರುವ ಗೆರೆಯು ಯಾವಾಗಲೂ ಇರಲೆಂದು ವರವನ್ನಿತ್ತನು. ಆ ಮೇಲೆ ಎಲ್ಲರೂ ಯಜ್ಞವನ್ನು ಮುಗಿಸಿಕೊಂಡು ಯಥಾಸ್ಥಾನಗಳನ್ನು ಕುರಿತು ತೆರಳಿದರು. {{gap}}ಇತ್ತ ರಾವಣನು ಅಯೋಧ್ಯಾನಗರವನ್ನು ಕುರಿತು ಹೋಗಿ ಅನರಣ್ಯನೆಂಬ ಆ ಪುರಾಧಿಪತಿಯನ್ನು ಕಂಡು-ಎಲೈ ನೃಪನೇ, ಯುದ್ಧಕ್ಕೆ ಬರುವಿಯೋ ? ಅಥವಾ ಸೋತೆನೆಂದು ಹೇಳಿಬಿಡುವಿಯೋ ? ಎಂದು ಬಲಾತ್ಕರಿಸಲು ; ಆಗ ರಾಯನು ಮಹಾ ಕೋಪವುಳ್ಳವನಾಗಿ ಧನುರ್ಬಾಣಗಳನ್ನು ತೆಗೆದುಕೊಂಡು ಬಂದು ರಾವಣನೊಡನೆ ಬಹುದಿನಗಳ ವರೆಗೂ ಯುದ್ಧವನ್ನು ಮಾಡಿ ಕಡೆಗೆ ಅವನ ಬಾಣಘಾತದಿಂದ ನೊಂದು ಭೂಮಿಯಲ್ಲಿ ಬಿದ್ದು ಅಂತ್ಯಾವಸ್ಥೋಚಿತವಾದ ಬಾಧೆಯನ್ನನುಭವಿಸುತ್ತಿರಲು ; ಆ ಸಮಯದಲ್ಲಿ ರಾವಣನು ಅವನ ಬಳಿಗೆ ಬಂದು--ಏನೈಯ್ಯಾ ಅಲ್ಪ ಬಲಿಯಾದ ಅರಸೇ, ಅಗ್ನಿಯೊಡನೆ ಕಲಹಮಾಡಿದ ಮಿಡಿತೆಯಂತೆ ವ್ಯರ್ಥವಾಗಿ ಸಾಯುತ್ತಿರುವಿಯಲ್ಲಾ ! ನೀನೆಂಥ ಮೂಢನು ? ಮೊದಲೇ ಸೋತೆನೆಂದು ಹೇಳಿಬಿಟ್ಟಿದ್ದರೆ ಜೀವಿಸಿಕೊಂಡಿರಬಹುದಾಗಿದ್ದಿತ್ತು ಎಂದು ಗರ್ವೋಕ್ತಿಗಳಿಂದ ಹಾಸ್ಯಮಾಡಲು; ಅದಕ್ಕಾರಾಯನು--ಎಲೈ ಮೂರ್ಖನೇ, ಯುದ್ಧದಲ್ಲಿ ಜಯಾಪಜಯಗಳು ದೈವಾಧೀನವಾದುವುಗಳು, ಯುದ್ದದಲ್ಲಿ ಎದುರಾಂತ' ವಿರೋಧಿಗಳನ್ನು ಜಯಿಸುವುದೂ ಹಗೆಗಳಿಂದ ಸಾಯುವುದೂ ಶೂರರಾದವರಿಗೆ ನೈಜಧರ್ಮವು, ಇದರಿಂದ ಬಹುಮಾ ನಾಪಮಾನಗಳುಂಟಾಗುವುದಿಲ್ಲ, ನೀನು ದುರಹಂಕೃತಿಯುಳ್ಳವನಾಗಿ ಇಂಥ ಕಾಲದಲ್ಲಿ ನನ್ನನ್ನು ಹಾಸ್ಯ ಮಾಡಿದ ಕಾರಣ ಮುಂದೆ ನನ್ನ ವಂಶದಲ್ಲಿ ರಾಮನೆಂಬವನು ಹುಟ್ಟಿ ನಿನ್ನನ್ನು ಕೊಲ್ಲುವನೆಂದು ಶಾಪವನ್ನಿತ್ತು ಪ್ರಾಣವನ್ನು ಬಿಟ್ಟನು.<noinclude></noinclude> kajv7xptgznhkfr1yr4dlajlr995jzq ಪುಟ:ಕಥಾ ಸಂಗ್ರಹ - ಭಾಗ ೨.djvu/೨೭ 104 44587 324254 106939 2026-06-03T11:25:27Z Vinoda mamatharai 3222 /* Proofread */ 324254 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು |left=|right=17}}</noinclude> ಆಗ ದೇವತೆಗಳು ರಾವಣನ ವಿನಾಶಕ್ಕೆ ಕಾರಣಭೂತವಾಗಿ ಸಂಭವಿಸಿದ ಶಾಪಕೊಸ್ಕರ ಸಂತೋಷಿಸಿ ಲೋಕಗಳೆಲ್ಲವೂ ಗಂಭೀರಧ್ವನಿಮಯವಾಗುವಂತೆ ದಿವ್ಯ ದುಂದುಭಿಗಳನ್ನು ತಾಡಿಸಿದರು. ' ಆ ಶಾಪಕ್ಕೆ ಖಳಪತಿಯಂಜುವನೇ ? ನೃಪವರನು ಮೃತನಾಗಲು; ಅಲ್ಲಿಂದ ಹೊರಟು ತೋಳ್ದೀಟೆಯನ್ನು ಅಡಗಿಸಿಕೊಳ್ಳುವುದಕ್ಕೆ ಅಲ್ಪ ಬಲಯುಕ್ತವಾದ ಈ ನರಸಂಕುಲವು ನನಗೀಡಲ್ಲವೆಂದು ಆಲೋಚಿಸುತ್ತ, ಗಗನ ಮಾರ್ಗದಲ್ಲಿ ಬರುತ್ತಿರಲು; ಅಲ್ಲಿ ಸೈರಗಾಮಿಯಾದ ನಾರದಮುನಿಯನ್ನು ಕಂಡು ನಮಸ್ಕರಿಸಲು; ಆ ಮುನೀಂದ್ರನು ಹರಸಿ-ಎಲೈ ಲಂಕಾಧೀಶನೇ, ನಿನಗೆ ಸೌಖ್ಯವೇ? ಎಂದು ವಿನಯದಿಂದ ಯೋಗಕ್ಷೇಮವನ್ನು ಕೇಳಿ--ಈಗ ನಿನ್ನ ಶೌರ್ಯೋದ್ರೇಕವೆಂಬ ಪ್ರಳಯಾಗ್ನಿ ಜ್ವಾಲೆಯಲ್ಲಿ ಲೋಕವೆಲ್ಲವೂ ಬೆಂದುಹೋಯಿತು. ಅಲ್ಬರಾದ ಈ ಮನುಷ್ಯರನ್ನು ಕೊಲ್ಲುವುದು ನಿನಗೆ ಹಿರಿದಲ್ಲವು, ಈ ಮನುಷ್ಯರಲ್ಲಿ ನಿನಗೆ ಎದುರಾಗಿ ನಿಂತು ಯುದ್ಧ ಮಾಡುವವರುಂಟೇ ? ಇಲ್ಲವು, ಮಹಾವೀರನಾದ ನೀನು ಇಂಥ ಹೀನಬಲರನ್ನು ಕೊಂದರೆ ಅಪ್ರತಿಹತವಾದ ನಿನ್ನ ಭುಜಬಲಕ್ಕೆ ಪ್ರಾಶಸ್ತ್ಯ ವುಂಟಾದೀತೇ ? ಎಂದಿಗೂ ಇಲ್ಲವು. ಈ ನರರು ಅಲ್ಪಾಯುಷ್ಕರು ಮತ್ತು ರೋಗ ಶೋಕ ಕ್ಷುತ ಪಿಪಾಸಾದಿಗಳಿಂದ ಸ್ವಲ್ಪ ಕಾಲದೊಳಗೆ ತಾವಾಗಿಯೇ ಮೃತ್ಯುವಶರಾಗುವವರು, ಇಂಥವರನ್ನು ಕೊಲ್ಲುವುದು ನಿನಗೆ ಅಕೀರ್ತಿಕರವು. ಆದುದರಿಂದ ಇವರನ್ನು ಬಿಟ್ಟು ಬಿಡು, ಯಮನೇ ಮೊದಲಾದ ಲೋಕಪಾಲಕರು ಬಹು ಬಲಿಷ್ಟರಾಗಿರುವರು. ಅವರು ನಿನಗೆ ಸಮಾನವಾದ ಭುಜಬಲವುಳ್ಳವರು. ನೀನು ಹೋಗಿ ಯುದ್ದದಲ್ಲಿ ಅವರನ್ನು ಸೋಲಿಸಿದರೆ ಮಹಾ ಕೀರ್ತಿಯುಂಟಾಗುವುದು, ಅವರೊಳಗೆ ತೆಂಕಣದೆಸೆಗೊಡೆಯನಾದ ಯಮನೆಂಬವನು ಕಾಲದಂಡವನ್ನು ಧರಿಸಿದವ ನಾಗಿ ದೇವ ದಾನವ ಮಾನವೋರಗಾದಿ ಸಕಲ ಪ್ರಾಣಿಗಳನ್ನೂ ಬಾಧಿಸುತ್ತಿರುವನು. ನೀನು ಹೋಗಿ ಅವನನ್ನು ಕೊಂದುಹಾಕಿದರೆ ಸರ್ವಪ್ರಾಣಿಗಳ ಕ್ಷೇಮದಿಂದಿರುವುವು ಎನ್ನಲು ; ರಾವಣನು--ಎಲೈ ಮುನೀಂದ್ರನೇ, ನೀನು ಹೇಳಿದ ಮಾತು ಯುಕ್ತವೇ ಸರಿ, ನಾನು ಹೀಗೆಯೇ ಯೋಚಿಸುತ್ತಿದ್ದೆನು, ನೀನು ಹೇಳಿದಂತೆ ದಿಕ್ಪಾಲಕರಲ್ಲಿ ಒಬ್ಬನಾದ ಕುಬೇರನನ್ನು ಮೊದಲೇ ಜಯಿಸಿದ್ದೇನೆ, ಇನ್ನು ಯಮವರುಣೇಂದ್ರಾದಿ ದಿಗೀಶರನ್ನು ಜಯಿಸಿ ಆ ಮೇಲೆ ರಸಾತಲವನ್ನು ಹೊಕ್ಕು ದೈತ್ಯ ದಾನವ ಪನ್ನಗರೇ ಮೊದಲಾದವರನ್ನು ಸೋಲಿಸಿ ಕೀರ್ತಿಯನ್ನು ಹೊಂದುವೆನೆಂದು ಹೊರಡಲು ; ನಾರದಮುನಿಯು ಅವನಿಗಿಂತಲೂ ಮೊದಲೇ ಯಮಲೋಕಕ್ಕೆ ಬಂದು ಯಮನಿಂದ ಸತ್ಕ್ರುನಾಗಿ ಅವನನ್ನು ಕುರಿತು-ರಾವಣನು ನಿನ್ನೊಡನೆ ಯುದ್ಧ ಮಾಡುವುದಕ್ಕೆ ಬರುವನು, ಅವನನ್ನು ಕಾಲದಂಡದಿಂದ ಬಡಿದು ಕೊಂದುಹಾಕು. ಲೋಕಕ್ಕೆಲ್ಲಾ ಕ್ಷೇಮವುಂಟಾಗುವದೆಂದು ಹೇಳಿ ಹೊರಟುಹೋದನು. ಅನಂತರದಲ್ಲಿ ರಾವಣನು ರಾಕ್ಷಸಸೇನಾಸಮೇತನಾಗಿ ಹೊರಟು ಯಮಲೋ ಕಕ್ಕೆ ಬಂದು ನೋಡಲು ; ನರಕಗಳಲ್ಲಿ ಯಮದೂತರು ಪಾಪಾತ್ಮರನ್ನು ಹಿಡಿದು ಕಾಯ್ದ ಮಳಲಲ್ಲಿ ಎಳೆಯುತ್ತಿರುವುದನ್ನೂ ಕಾಯಿಸಿದ ಉಕ್ಕಿನ ಶಲಾಕೆಗಳಿಂದ<noinclude></noinclude> n0gprq5y0g7tq1ggdxtwx572vip1b87 324259 324254 2026-06-03T11:41:43Z Pragathi. BH 7585 /* Validated */ 324259 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು |left=|right=17}}</noinclude> ಆಗ ದೇವತೆಗಳು ರಾವಣನ ವಿನಾಶಕ್ಕೆ ಕಾರಣಭೂತವಾಗಿ ಸಂಭವಿಸಿದ ಶಾಪಕೊಸ್ಕರ ಸಂತೋಷಿಸಿ ಲೋಕಗಳೆಲ್ಲವೂ ಗಂಭೀರಧ್ವನಿಮಯವಾಗುವಂತೆ ದಿವ್ಯ ದುಂದುಭಿಗಳನ್ನು ತಾಡಿಸಿದರು. ' ಆ ಶಾಪಕ್ಕೆ ಖಳಪತಿಯಂಜುವನೇ ? ನೃಪವರನು ಮೃತನಾಗಲು; ಅಲ್ಲಿಂದ ಹೊರಟು ತೋಳ್ದೀಟೆಯನ್ನು ಅಡಗಿಸಿಕೊಳ್ಳುವುದಕ್ಕೆ ಅಲ್ಪ ಬಲಯುಕ್ತವಾದ ಈ ನರಸಂಕುಲವು ನನಗೀಡಲ್ಲವೆಂದು ಆಲೋಚಿಸುತ್ತ, ಗಗನ ಮಾರ್ಗದಲ್ಲಿ ಬರುತ್ತಿರಲು; ಅಲ್ಲಿ ಸೈರಗಾಮಿಯಾದ ನಾರದಮುನಿಯನ್ನು ಕಂಡು ನಮಸ್ಕರಿಸಲು; ಆ ಮುನೀಂದ್ರನು ಹರಸಿ-ಎಲೈ ಲಂಕಾಧೀಶನೇ, ನಿನಗೆ ಸೌಖ್ಯವೇ? ಎಂದು ವಿನಯದಿಂದ ಯೋಗಕ್ಷೇಮವನ್ನು ಕೇಳಿ--ಈಗ ನಿನ್ನ ಶೌರ್ಯೋದ್ರೇಕವೆಂಬ ಪ್ರಳಯಾಗ್ನಿ ಜ್ವಾಲೆಯಲ್ಲಿ ಲೋಕವೆಲ್ಲವೂ ಬೆಂದುಹೋಯಿತು. ಅಲ್ಬರಾದ ಈ ಮನುಷ್ಯರನ್ನು ಕೊಲ್ಲುವುದು ನಿನಗೆ ಹಿರಿದಲ್ಲವು, ಈ ಮನುಷ್ಯರಲ್ಲಿ ನಿನಗೆ ಎದುರಾಗಿ ನಿಂತು ಯುದ್ಧ ಮಾಡುವವರುಂಟೇ ? ಇಲ್ಲವು, ಮಹಾವೀರನಾದ ನೀನು ಇಂಥ ಹೀನಬಲರನ್ನು ಕೊಂದರೆ ಅಪ್ರತಿಹತವಾದ ನಿನ್ನ ಭುಜಬಲಕ್ಕೆ ಪ್ರಾಶಸ್ತ್ಯ ವುಂಟಾದೀತೇ ? ಎಂದಿಗೂ ಇಲ್ಲವು. ಈ ನರರು ಅಲ್ಪಾಯುಷ್ಕರು ಮತ್ತು ರೋಗ ಶೋಕ ಕ್ಷುತ ಪಿಪಾಸಾದಿಗಳಿಂದ ಸ್ವಲ್ಪ ಕಾಲದೊಳಗೆ ತಾವಾಗಿಯೇ ಮೃತ್ಯುವಶರಾಗುವವರು, ಇಂಥವರನ್ನು ಕೊಲ್ಲುವುದು ನಿನಗೆ ಅಕೀರ್ತಿಕರವು. ಆದುದರಿಂದ ಇವರನ್ನು ಬಿಟ್ಟು ಬಿಡು, ಯಮನೇ ಮೊದಲಾದ ಲೋಕಪಾಲಕರು ಬಹು ಬಲಿಷ್ಟರಾಗಿರುವರು. ಅವರು ನಿನಗೆ ಸಮಾನವಾದ ಭುಜಬಲವುಳ್ಳವರು. ನೀನು ಹೋಗಿ ಯುದ್ದದಲ್ಲಿ ಅವರನ್ನು ಸೋಲಿಸಿದರೆ ಮಹಾ ಕೀರ್ತಿಯುಂಟಾಗುವುದು, ಅವರೊಳಗೆ ತೆಂಕಣದೆಸೆಗೊಡೆಯನಾದ ಯಮನೆಂಬವನು ಕಾಲದಂಡವನ್ನು ಧರಿಸಿದವ ನಾಗಿ ದೇವ ದಾನವ ಮಾನವೋರಗಾದಿ ಸಕಲ ಪ್ರಾಣಿಗಳನ್ನೂ ಬಾಧಿಸುತ್ತಿರುವನು. ನೀನು ಹೋಗಿ ಅವನನ್ನು ಕೊಂದುಹಾಕಿದರೆ ಸರ್ವಪ್ರಾಣಿಗಳ ಕ್ಷೇಮದಿಂದಿರುವುವು ಎನ್ನಲು ; ರಾವಣನು--ಎಲೈ ಮುನೀಂದ್ರನೇ, ನೀನು ಹೇಳಿದ ಮಾತು ಯುಕ್ತವೇ ಸರಿ, ನಾನು ಹೀಗೆಯೇ ಯೋಚಿಸುತ್ತಿದ್ದೆನು, ನೀನು ಹೇಳಿದಂತೆ ದಿಕ್ಪಾಲಕರಲ್ಲಿ ಒಬ್ಬನಾದ ಕುಬೇರನನ್ನು ಮೊದಲೇ ಜಯಿಸಿದ್ದೇನೆ, ಇನ್ನು ಯಮವರುಣೇಂದ್ರಾದಿ ದಿಗೀಶರನ್ನು ಜಯಿಸಿ ಆ ಮೇಲೆ ರಸಾತಲವನ್ನು ಹೊಕ್ಕು ದೈತ್ಯ ದಾನವ ಪನ್ನಗರೇ ಮೊದಲಾದವರನ್ನು ಸೋಲಿಸಿ ಕೀರ್ತಿಯನ್ನು ಹೊಂದುವೆನೆಂದು ಹೊರಡಲು ; ನಾರದಮುನಿಯು ಅವನಿಗಿಂತಲೂ ಮೊದಲೇ ಯಮಲೋಕಕ್ಕೆ ಬಂದು ಯಮನಿಂದ ಸತ್ಕ್ರುನಾಗಿ ಅವನನ್ನು ಕುರಿತು-ರಾವಣನು ನಿನ್ನೊಡನೆ ಯುದ್ಧ ಮಾಡುವುದಕ್ಕೆ ಬರುವನು, ಅವನನ್ನು ಕಾಲದಂಡದಿಂದ ಬಡಿದು ಕೊಂದುಹಾಕು. ಲೋಕಕ್ಕೆಲ್ಲಾ ಕ್ಷೇಮವುಂಟಾಗುವದೆಂದು ಹೇಳಿ ಹೊರಟುಹೋದನು. ಅನಂತರದಲ್ಲಿ ರಾವಣನು ರಾಕ್ಷಸಸೇನಾಸಮೇತನಾಗಿ ಹೊರಟು ಯಮಲೋ ಕಕ್ಕೆ ಬಂದು ನೋಡಲು ; ನರಕಗಳಲ್ಲಿ ಯಮದೂತರು ಪಾಪಾತ್ಮರನ್ನು ಹಿಡಿದು ಕಾಯ್ದ ಮಳಲಲ್ಲಿ ಎಳೆಯುತ್ತಿರುವುದನ್ನೂ ಕಾಯಿಸಿದ ಉಕ್ಕಿನ ಶಲಾಕೆಗಳಿಂದ<noinclude></noinclude> srbzot3w1eybfl8985oxofb9rb7ungv 324263 324259 2026-06-03T11:43:33Z Pragathi. BH 7585 324263 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು |left=|right=17}}</noinclude> ಆಗ ದೇವತೆಗಳು ರಾವಣನ ವಿನಾಶಕ್ಕೆ ಕಾರಣಭೂತವಾಗಿ ಸಂಭವಿಸಿದ ಶಾಪಕೊಸ್ಕರ ಸಂತೋಷಿಸಿ ಲೋಕಗಳೆಲ್ಲವೂ ಗಂಭೀರಧ್ವನಿಮಯವಾಗುವಂತೆ ದಿವ್ಯ ದುಂದುಭಿಗಳನ್ನು ತಾಡಿಸಿದರು. ' ಆ ಶಾಪಕ್ಕೆ ಖಳಪತಿಯಂಜುವನೇ ? ನೃಪವರನು ಮೃತನಾಗಲು; ಅಲ್ಲಿಂದ ಹೊರಟು ತೋಳ್ದೀಟೆಯನ್ನು ಅಡಗಿಸಿಕೊಳ್ಳುವುದಕ್ಕೆ ಅಲ್ಪ ಬಲಯುಕ್ತವಾದ ಈ ನರಸಂಕುಲವು ನನಗೀಡಲ್ಲವೆಂದು ಆಲೋಚಿಸುತ್ತ, ಗಗನ ಮಾರ್ಗದಲ್ಲಿ ಬರುತ್ತಿರಲು; ಅಲ್ಲಿ ಸೈರಗಾಮಿಯಾದ ನಾರದಮುನಿಯನ್ನು ಕಂಡು ನಮಸ್ಕರಿಸಲು; ಆ ಮುನೀಂದ್ರನು ಹರಸಿ-ಎಲೈ ಲಂಕಾಧೀಶನೇ, ನಿನಗೆ ಸೌಖ್ಯವೇ? ಎಂದು ವಿನಯದಿಂದ ಯೋಗಕ್ಷೇಮವನ್ನು ಕೇಳಿ--ಈಗ ನಿನ್ನ ಶೌರ್ಯೋದ್ರೇಕವೆಂಬ ಪ್ರಳಯಾಗ್ನಿ ಜ್ವಾಲೆಯಲ್ಲಿ ಲೋಕವೆಲ್ಲವೂ ಬೆಂದುಹೋಯಿತು. ಅಲ್ಬರಾದ ಈ ಮನುಷ್ಯರನ್ನು ಕೊಲ್ಲುವುದು ನಿನಗೆ ಹಿರಿದಲ್ಲವು, ಈ ಮನುಷ್ಯರಲ್ಲಿ ನಿನಗೆ ಎದುರಾಗಿ ನಿಂತು ಯುದ್ಧ ಮಾಡುವವರುಂಟೇ ? ಇಲ್ಲವು, ಮಹಾವೀರನಾದ ನೀನು ಇಂಥ ಹೀನಬಲರನ್ನು ಕೊಂದರೆ ಅಪ್ರತಿಹತವಾದ ನಿನ್ನ ಭುಜಬಲಕ್ಕೆ ಪ್ರಾಶಸ್ತ್ಯ ವುಂಟಾದೀತೇ ? ಎಂದಿಗೂ ಇಲ್ಲವು. ಈ ನರರು ಅಲ್ಪಾಯುಷ್ಕರು ಮತ್ತು ರೋಗ ಶೋಕ ಕ್ಷುತ ಪಿಪಾಸಾದಿಗಳಿಂದ ಸ್ವಲ್ಪ ಕಾಲದೊಳಗೆ ತಾವಾಗಿಯೇ ಮೃತ್ಯುವಶರಾಗುವವರು, ಇಂಥವರನ್ನು ಕೊಲ್ಲುವುದು ನಿನಗೆ ಅಕೀರ್ತಿಕರವು. ಆದುದರಿಂದ ಇವರನ್ನು ಬಿಟ್ಟು ಬಿಡು, ಯಮನೇ ಮೊದಲಾದ ಲೋಕಪಾಲಕರು ಬಹು ಬಲಿಷ್ಟರಾಗಿರುವರು. ಅವರು ನಿನಗೆ ಸಮಾನವಾದ ಭುಜಬಲವುಳ್ಳವರು. ನೀನು ಹೋಗಿ ಯುದ್ದದಲ್ಲಿ ಅವರನ್ನು ಸೋಲಿಸಿದರೆ ಮಹಾ ಕೀರ್ತಿಯುಂಟಾಗುವುದು, ಅವರೊಳಗೆ ತೆಂಕಣದೆಸೆಗೊಡೆಯನಾದ ಯಮನೆಂಬವನು ಕಾಲದಂಡವನ್ನು ಧರಿಸಿದವ ನಾಗಿ ದೇವ ದಾನವ ಮಾನವೋರಗಾದಿ ಸಕಲ ಪ್ರಾಣಿಗಳನ್ನೂ ಬಾಧಿಸುತ್ತಿರುವನು. ನೀನು ಹೋಗಿ ಅವನನ್ನು ಕೊಂದುಹಾಕಿದರೆ ಸರ್ವಪ್ರಾಣಿಗಳ ಕ್ಷೇಮದಿಂದಿರುವುವು ಎನ್ನಲು ; ರಾವಣನು--ಎಲೈ ಮುನೀಂದ್ರನೇ, ನೀನು ಹೇಳಿದ ಮಾತು ಯುಕ್ತವೇ ಸರಿ, ನಾನು ಹೀಗೆಯೇ ಯೋಚಿಸುತ್ತಿದ್ದೆನು, ನೀನು ಹೇಳಿದಂತೆ ದಿಕ್ಪಾಲಕರಲ್ಲಿ ಒಬ್ಬನಾದ ಕುಬೇರನನ್ನು ಮೊದಲೇ ಜಯಿಸಿದ್ದೇನೆ, ಇನ್ನು ಯಮವರುಣೇಂದ್ರಾದಿ ದಿಗೀಶರನ್ನು ಜಯಿಸಿ ಆ ಮೇಲೆ ರಸಾತಲವನ್ನು ಹೊಕ್ಕು ದೈತ್ಯ ದಾನವ ಪನ್ನಗರೇ ಮೊದಲಾದವರನ್ನು ಸೋಲಿಸಿ ಕೀರ್ತಿಯನ್ನು ಹೊಂದುವೆನೆಂದು ಹೊರಡಲು ; ನಾರದಮುನಿಯು ಅವನಿಗಿಂತಲೂ ಮೊದಲೇ ಯಮಲೋಕಕ್ಕೆ ಬಂದು ಯಮನಿಂದ ಸತ್ಕ್ರುನಾಗಿ ಅವನನ್ನು ಕುರಿತು-ರಾವಣನು ನಿನ್ನೊಡನೆ ಯುದ್ಧ ಮಾಡುವುದಕ್ಕೆ ಬರುವನು, ಅವನನ್ನು ಕಾಲದಂಡದಿಂದ ಬಡಿದು ಕೊಂದುಹಾಕು. ಲೋಕಕ್ಕೆಲ್ಲಾ ಕ್ಷೇಮವುಂಟಾಗುವದೆಂದು ಹೇಳಿ ಹೊರಟುಹೋದನು. {{gap}}ಅನಂತರದಲ್ಲಿ ರಾವಣನು ರಾಕ್ಷಸಸೇನಾಸಮೇತನಾಗಿ ಹೊರಟು ಯಮಲೋ ಕಕ್ಕೆ ಬಂದು ನೋಡಲು ; ನರಕಗಳಲ್ಲಿ ಯಮದೂತರು ಪಾಪಾತ್ಮರನ್ನು ಹಿಡಿದು ಕಾಯ್ದ ಮಳಲಲ್ಲಿ ಎಳೆಯುತ್ತಿರುವುದನ್ನೂ ಕಾಯಿಸಿದ ಉಕ್ಕಿನ ಶಲಾಕೆಗಳಿಂದ<noinclude></noinclude> c2ks69hwgyhwv78au4j555awn2ca1za ಪುಟ:ಕಥಾ ಸಂಗ್ರಹ - ಭಾಗ ೨.djvu/೨೮ 104 44588 324255 106940 2026-06-03T11:28:56Z Vinoda mamatharai 3222 /* Proofread */ 324255 proofread-page text/x-wiki <noinclude><pagequality level="3" user="Vinoda mamatharai" />{{rh|center=ಕಥಾಸಂಗ್ರಹ-೪ ನೆಯ ಭಾಗ|left=18|right=}}</noinclude> ಕಣ್ಣುಗಳನ್ನು ಇರಿಯುತ್ತಿರುವುದನ್ನೂ ಕಬ್ಬಿಣದ ಕಾಗೆಗಳಿಂದ ಮಾಂಸಖಂಡಗೆ ಳನ್ನು ಕೀಳಿಸುತ್ತಿರುವುದನ್ನೂ ಕೆಂಪಗೆ ಕಾಯ್ದ ಉಕ್ಕಿನ ಕಂಬಗಳನ್ನು ತಬ್ಬಿಸುತ್ತಿರುವುದನ್ನೂ ಕೀವು ರಕ್ತ ಇವುಗಳನ್ನು ಕುಡಿಸುತ್ತಿರುವುದನ್ನೂ ವೈತರಣಿಯೆಂಬ ನರಕಕೂಪದಲ್ಲಿ ನೂಕಿ ಮುಳುಗಿಸುತ್ತಿರುವುದನ್ನೂ ನೋಡಿ ಕರುಣದಿಂದ ಕೂಡಿ ಆ ಯಮಭಟರ ಮೇಲೆ ಬಾಣಪ್ರಯೋಗವನ್ನು ಮಾಡಿ ಅವರನ್ನೆಲ್ಲಾ ಓಡಿಸಲು ; ಆಗ ಪಾಪಿಗಳೆಲ್ಲಾ ಕೂಡಿ- ಈ ಮಹಾತ್ಮನಿಂದ ನಮ್ಮ ಬಾಧೆಗಳೆಲ್ಲಾ ತಪ್ಪಿದುವೆಂದು ಸಂತೋಪಿಸಿ ರಾವಣನ ಬಳಿಗೆ ಬಂದು ನಮಸ್ಕರಿಸಿ ನಿಂತು ಕೊಂಡು--ನಾವೂ ನಿನ್ನೊ ಡನೆ ಸೇರಿ ಯ ಮನ ಸಂಗಡ ಯುದ್ಧ ಮಾಡುವುದಕ್ಕೆ ಬರುತ್ತೇವೆಂದು ಬೊಬ್ಬಿರಿದು ಕೂಗಿದರು. ರಾವಣನು ಆ ಪ್ರೇತಗಳನ್ನೂ ಜತೆಯಲ್ಲಿ ಕರೆದು ಕೊಂಡು ಬರುತ್ತ ಅಲ್ಲಿ ಮತ್ತೊಂದು ಸ್ಥಳದಲ್ಲಿ ಒಪ್ಪುತ್ತಿರುವ ದಿವ್ಯಸಭೆಯಲ್ಲಿ ಹಸಿವು ಬಾಯಾರಿಕೆಗಳಿ ಲ್ಲದೆ ದಿವ್ಯ ದೇಹಗಳನ್ನು ಧರಿಸಿಕೊಂಡು ಅಮೂಲ್ಯ ವಸ್ತ್ರಾಭರಣಗಳನ್ನು ಟ್ಟು ತೊಟ್ಟು ಉತ್ತಮ ಪರಿಮಳ ದ್ರವ್ಯಗಳನ್ನು ಲೇಪಿಸಿಕೊಂಡು, ನಿತ್ಯ ಸುಗಂಧ ಯುಕ್ತವಾದ ಪುಷ್ಪಮಾಲಿಕೆಗಳನ್ನು ಧರಿಸಿಕೊಂಡು ಮನೋಜ್ಞವಾದ ಗಾನಗಳನ್ನು ಸಾವಧಾನ ದಿಂದ ಆಕರ್ಣಿಸುತ್ತಿರುವ ಪುಣ್ಯಶಾಲಿಗಳನ್ನು ನೋಡುತ್ತ ಬಂದು ಜವನರಮನೆಯ ಹೆಬ್ಬಾಗಿಲಲ್ಲಿ ನಿಂತು ಸಂಯಮನೀನಗರವು ತಲ್ಲಣಿಸುವಂತೆ ಬೊಬ್ಬಿರಿದನು. ಆಗ ಯಮನು ಅಕಸ್ಮಾತ್ತಾಗಿ ಉಂಟಾದ ಬಲುಬೊಬ್ಬೆಯನ್ನು ಕೇಳಿ ಬೆಚ್ಚಿ ಖಳನು ಜಗಳಕ್ಕೆ ಬಂದನೆಂದೆದ್ದು ಕಾಲದಂಡವೇ ಮೊದಲಾದ ಸಮಸ್ಯಾ ಯುಧಗಳನ್ನೂ ತೆಗೆದು ಕೊಂಡು ಕೋಣನ ಮೇಲೇರಿ ರೂಪವನ್ನು ಧರಿಸಿರುವ ಕ್ಷಯವೇ ಮೊದಲಾದ ಸರ್ವರೋಗಗಳನ್ನೂ ಭಯಂಕರವಾದ ಕಾಲಮೃತ್ಯುವನ್ನೂ ಸಂಗಡ ಕರೆದು ಕೊಂಡು ಹೊರಟುಬಂದು ರಾವಣನೆದುರಿನಲ್ಲಿ ನಿಂತು ಧನುಷ್ಟಂಕಾರವನ್ನು ಮಾಡಿ ನಿಶಾತಮಾ ರ್ಗಣ ವೃಷ್ಟಿಯನ್ನು ಸುರಿಸಲು ; ಮಹೋದರ ಮಾರೀಚ ಪ್ರಹಸ್ತಾದಿ ರಾಕ್ಷಸ ವೀರರು ಯಮನ ಬಾಣಪ್ರಘಾತಗಳನ್ನು ತಡೆಯಲಾರದೆ ಕಂಗೆಟ್ಟು ನೆಲದಲ್ಲಿ ಬಿದ್ದು ಮೂರ್ಛಿಯನ್ನು ಹೊಂದಿದರು. ಲೋಕದಲ್ಲಿ ದೇವ ದಾನವಮಾನವಾದಿ ಸಮಸ್ತ ಪ್ರಾಣಿಗಳಿಗೂ ಅಂತ್ಯವನ್ನುಂಟುಮಾಡುವುದರಲ್ಲಿ ಅಧಿಕರ್ತೃವಾದ ಯಮನು ಎದು' ರಿಗೆ ಬಂದು ಕಾಳಗಕ್ಕೆ ನಿಂತರೆ ಅವನೆದುರಿನಲ್ಲಿ ನಿಂತು ಬದುಕಬಲ್ಲವರಾರುಂಟು ? ಇಂಥವನಿಗೆದುರಾಂತು ನಿಂತ ರಾವಣನ ಶೌರ್ಯಧೈರ್ಯಗಳನ್ನು ಬಣ್ಣಿಸುವವರಾರು? ಅಚಲಸದೃಶವಾದ ಧೈರ್ಯದಿಂದ ಕೂಡಿ ಯಮನಿದಿರಿನಲ್ಲಿ ನಿಂತು ಶಕ್ತಿ ತೋಮರಗದೆ ಕುಂತ ಇವೇ ಮೊದಲಾದ ನಾನಾ ವಿಧಾಯುಧಗಳಿಂದ ಪ್ರಹರಿಸಲು ; ಯಮನವು ಗಳನ್ನೆಲ್ಲಾ ಕ್ಷಣಕಾಲದಲ್ಲಿ ಕಡಿದು ತನ್ನ ಕ್ರೂರವಾದ ಬಾಣಪ್ರಹಾರಗಳಿಂದ ದಶಗ ಳನ ಪುಷ್ಪಕವೆಂಬ ವಿಮಾನವನ್ನು ಕಡಿದಿಡಲು ಅದು ಸರೋಜಭವನ ವರಪ್ರಭಾವ ದಿಂದ ತಿರಿತಿರಿಗಿ ಮೊದಲಿನಂತೆಯೇ ಬೆಳೆಯುತ್ತಿದ್ದಿತು. {{gap}}ಆಗ ರಾವಣನು ಬಹು ಕೋಪೋದ್ದೀಪಿತನಾಗಿ ಬತ್ತಳಿಕೆಯಿಂದ ಹತ್ತುಭಾಣಗಳನ್ನು ತೆಗೆದು ಶಿಂಜಿನಿಯಲ್ಲಿ ಹೂಡಿ ಆಕರ್ಣಾ೦ತವಾಗಿ ಸೇದಿ ಗುರಿಗಟ್ಟಿ ಯಮನ<noinclude></noinclude> kqkbc4co02ddnc7ryap0xtyytavx3qk 324257 324255 2026-06-03T11:37:52Z Vinoda mamatharai 3222 324257 proofread-page text/x-wiki <noinclude><pagequality level="3" user="Vinoda mamatharai" />{{rh|center=ಕಥಾಸಂಗ್ರಹ-೪ ನೆಯ ಭಾಗ|left=18|right=}}</noinclude> ಕಣ್ಣುಗಳನ್ನು ಇರಿಯುತ್ತಿರುವುದನ್ನೂ ಕಬ್ಬಿಣದ ಕಾಗೆಗಳಿಂದ ಮಾಂಸಖಂಡಗೆ ಳನ್ನು ಕೀಳಿಸುತ್ತಿರುವುದನ್ನೂ ಕೆಂಪಗೆ ಕಾಯ್ದ ಉಕ್ಕಿನ ಕಂಬಗಳನ್ನು ತಬ್ಬಿಸುತ್ತಿರುವುದನ್ನೂ ಕೀವು ರಕ್ತ ಇವುಗಳನ್ನು ಕುಡಿಸುತ್ತಿರುವುದನ್ನೂ ವೈತರಣಿಯೆಂಬ ನರಕಕೂಪದಲ್ಲಿ ನೂಕಿ ಮುಳುಗಿಸುತ್ತಿರುವುದನ್ನೂ ನೋಡಿ ಕರುಣದಿಂದ ಕೂಡಿ ಆ ಯಮಭಟರ ಮೇಲೆ ಬಾಣಪ್ರಯೋಗವನ್ನು ಮಾಡಿ ಅವರನ್ನೆಲ್ಲಾ ಓಡಿಸಲು ; ಆಗ ಪಾಪಿಗಳೆಲ್ಲಾ ಕೂಡಿ- ಈ ಮಹಾತ್ಮನಿಂದ ನಮ್ಮ ಬಾಧೆಗಳೆಲ್ಲಾ ತಪ್ಪಿದುವೆಂದು ಸಂತೋಪಿಸಿ ರಾವಣನ ಬಳಿಗೆ ಬಂದು ನಮಸ್ಕರಿಸಿ ನಿಂತು ಕೊಂಡು--ನಾವೂ ನಿನ್ನೊ ಡನೆ ಸೇರಿ ಯ ಮನ ಸಂಗಡ ಯುದ್ಧ ಮಾಡುವುದಕ್ಕೆ ಬರುತ್ತೇವೆಂದು ಬೊಬ್ಬಿರಿದು ಕೂಗಿದರು. ರಾವಣನು ಆ ಪ್ರೇತಗಳನ್ನೂ ಜತೆಯಲ್ಲಿ ಕರೆದು ಕೊಂಡು ಬರುತ್ತ ಅಲ್ಲಿ ಮತ್ತೊಂದು ಸ್ಥಳದಲ್ಲಿ ಒಪ್ಪುತ್ತಿರುವ ದಿವ್ಯಸಭೆಯಲ್ಲಿ ಹಸಿವು ಬಾಯಾರಿಕೆಗಳಿ ಲ್ಲದೆ ದಿವ್ಯ ದೇಹಗಳನ್ನು ಧರಿಸಿಕೊಂಡು ಅಮೂಲ್ಯ ವಸ್ತ್ರಾಭರಣಗಳನ್ನು ಟ್ಟು ತೊಟ್ಟು ಉತ್ತಮ ಪರಿಮಳ ದ್ರವ್ಯಗಳನ್ನು ಲೇಪಿಸಿಕೊಂಡು, ನಿತ್ಯ ಸುಗಂಧ ಯುಕ್ತವಾದ ಪುಷ್ಪಮಾಲಿಕೆಗಳನ್ನು ಧರಿಸಿಕೊಂಡು ಮನೋಜ್ಞವಾದ ಗಾನಗಳನ್ನು ಸಾವಧಾನ ದಿಂದ ಆಕರ್ಣಿಸುತ್ತಿರುವ ಪುಣ್ಯಶಾಲಿಗಳನ್ನು ನೋಡುತ್ತ ಬಂದು ಜವನರಮನೆಯ ಹೆಬ್ಬಾಗಿಲಲ್ಲಿ ನಿಂತು ಸಂಯಮನೀನಗರವು ತಲ್ಲಣಿಸುವಂತೆ ಬೊಬ್ಬಿರಿದನು. ಆಗ ಯಮನು ಅಕಸ್ಮಾತ್ತಾಗಿ ಉಂಟಾದ ಬಲುಬೊಬ್ಬೆಯನ್ನು ಕೇಳಿ ಬೆಚ್ಚಿ ಖಳನು ಜಗಳಕ್ಕೆ ಬಂದನೆಂದೆದ್ದು ಕಾಲದಂಡವೇ ಮೊದಲಾದ ಸಮಸ್ಯಾ ಯುಧಗಳನ್ನೂ ತೆಗೆದು ಕೊಂಡು ಕೋಣನ ಮೇಲೇರಿ ರೂಪವನ್ನು ಧರಿಸಿರುವ ಕ್ಷಯವೇ ಮೊದಲಾದ ಸರ್ವರೋಗಗಳನ್ನೂ ಭಯಂಕರವಾದ ಕಾಲಮೃತ್ಯುವನ್ನೂ ಸಂಗಡ ಕರೆದು ಕೊಂಡು ಹೊರಟುಬಂದು ರಾವಣನೆದುರಿನಲ್ಲಿ ನಿಂತು ಧನುಷ್ಟಂಕಾರವನ್ನು ಮಾಡಿ ನಿಶಾತಮಾ ರ್ಗಣ ವೃಷ್ಟಿಯನ್ನು ಸುರಿಸಲು ; ಮಹೋದರ ಮಾರೀಚ ಪ್ರಹಸ್ತಾದಿ ರಾಕ್ಷಸ ವೀರರು ಯಮನ ಬಾಣಪ್ರಘಾತಗಳನ್ನು ತಡೆಯಲಾರದೆ ಕಂಗೆಟ್ಟು ನೆಲದಲ್ಲಿ ಬಿದ್ದು ಮೂರ್ಛಿಯನ್ನು ಹೊಂದಿದರು. ಲೋಕದಲ್ಲಿ ದೇವ ದಾನವಮಾನವಾದಿ ಸಮಸ್ತ ಪ್ರಾಣಿಗಳಿಗೂ ಅಂತ್ಯವನ್ನುಂಟುಮಾಡುವುದರಲ್ಲಿ ಅಧಿಕರ್ತೃವಾದ ಯಮನು ಎದು' ರಿಗೆ ಬಂದು ಕಾಳಗಕ್ಕೆ ನಿಂತರೆ ಅವನೆದುರಿನಲ್ಲಿ ನಿಂತು ಬದುಕಬಲ್ಲವರಾರುಂಟು ? ಇಂಥವನಿಗೆದುರಾಂತು ನಿಂತ ರಾವಣನ ಶೌರ್ಯಧೈರ್ಯಗಳನ್ನು ಬಣ್ಣಿಸುವವರಾರು? ಅಚಲಸದೃಶವಾದ ಧೈರ್ಯದಿಂದ ಕೂಡಿ ಯಮನಿದಿರಿನಲ್ಲಿ ನಿಂತು ಶಕ್ತಿ ತೋಮರಗದೆ ಕುಂತ ಇವೇ ಮೊದಲಾದ ನಾನಾ ವಿಧಾಯುಧಗಳಿಂದ ಪ್ರಹರಿಸಲು ; ಯಮನವು ಗಳನ್ನೆಲ್ಲಾ ಕ್ಷಣಕಾಲದಲ್ಲಿ ಕಡಿದು ತನ್ನ ಕ್ರೂರವಾದ ಬಾಣಪ್ರಹಾರಗಳಿಂದ ದಶಗಳನ ಪುಷ್ಪಕವೆಂಬ ವಿಮಾನವನ್ನು ಕಡಿದಿಡಲು ಅದು ಸರೋಜಭವನ ವರಪ್ರಭಾವ ದಿಂದ ತಿರಿತಿರಿಗಿ ಮೊದಲಿನಂತೆಯೇ ಬೆಳೆಯುತ್ತಿದ್ದಿತು. {{gap}}ಆಗ ರಾವಣನು ಬಹು ಕೋಪೋದ್ದೀಪಿತನಾಗಿ ಬತ್ತಳಿಕೆಯಿಂದ ಹತ್ತುಭಾಣಗಳನ್ನು ತೆಗೆದು ಶಿಂಜಿನಿಯಲ್ಲಿ ಹೂಡಿ ಆಕರ್ಣಾ೦ತವಾಗಿ ಸೇದಿ ಗುರಿಗಟ್ಟಿ ಯಮನ<noinclude></noinclude> 8vujp0186oroolyql0kam0746k1xc5p 324258 324257 2026-06-03T11:41:23Z Vinoda mamatharai 3222 324258 proofread-page text/x-wiki <noinclude><pagequality level="3" user="Vinoda mamatharai" />{{rh|center=ಕಥಾಸಂಗ್ರಹ-೪ ನೆಯ ಭಾಗ|left=18|right=}}</noinclude> ಕಣ್ಣುಗಳನ್ನು ಇರಿಯುತ್ತಿರುವುದನ್ನೂ ಕಬ್ಬಿಣದ ಕಾಗೆಗಳಿಂದ ಮಾಂಸಖಂಡಗೆ ಳನ್ನು ಕೀಳಿಸುತ್ತಿರುವುದನ್ನೂ ಕೆಂಪಗೆ ಕಾಯ್ದ ಉಕ್ಕಿನ ಕಂಬಗಳನ್ನು ತಬ್ಬಿಸುತ್ತಿರುವುದನ್ನೂ ಕೀವು ರಕ್ತ ಇವುಗಳನ್ನು ಕುಡಿಸುತ್ತಿರುವುದನ್ನೂ ವೈತರಣಿಯೆಂಬ ನರಕಕೂಪದಲ್ಲಿ ನೂಕಿ ಮುಳುಗಿಸುತ್ತಿರುವುದನ್ನೂ ನೋಡಿ ಕರುಣದಿಂದ ಕೂಡಿ ಆ ಯಮಭಟರ ಮೇಲೆ ಬಾಣಪ್ರಯೋಗವನ್ನು ಮಾಡಿ ಅವರನ್ನೆಲ್ಲಾ ಓಡಿಸಲು ; ಆಗ ಪಾಪಿಗಳೆಲ್ಲಾ ಕೂಡಿ- ಈ ಮಹಾತ್ಮನಿಂದ ನಮ್ಮ ಬಾಧೆಗಳೆಲ್ಲಾ ತಪ್ಪಿದುವೆಂದು ಸಂತೋಪಿಸಿ ರಾವಣನ ಬಳಿಗೆ ಬಂದು ನಮಸ್ಕರಿಸಿ ನಿಂತು ಕೊಂಡು--ನಾವೂ ನಿನ್ನೊ ಡನೆ ಸೇರಿ ಯ ಮನ ಸಂಗಡ ಯುದ್ಧ ಮಾಡುವುದಕ್ಕೆ ಬರುತ್ತೇವೆಂದು ಬೊಬ್ಬಿರಿದು ಕೂಗಿದರು. ರಾವಣನು ಆ ಪ್ರೇತಗಳನ್ನೂ ಜತೆಯಲ್ಲಿ ಕರೆದು ಕೊಂಡು ಬರುತ್ತ ಅಲ್ಲಿ ಮತ್ತೊಂದು ಸ್ಥಳದಲ್ಲಿ ಒಪ್ಪುತ್ತಿರುವ ದಿವ್ಯಸಭೆಯಲ್ಲಿ ಹಸಿವು ಬಾಯಾರಿಕೆಗಳಿ ಲ್ಲದೆ ದಿವ್ಯ ದೇಹಗಳನ್ನು ಧರಿಸಿಕೊಂಡು ಅಮೂಲ್ಯ ವಸ್ತ್ರಾಭರಣಗಳನ್ನುಟ್ಟು ತೊಟ್ಟು ಉತ್ತಮ ಪರಿಮಳ ದ್ರವ್ಯಗಳನ್ನು ಲೇಪಿಸಿಕೊಂಡು, ನಿತ್ಯ ಸುಗಂಧ ಯುಕ್ತವಾದ ಪುಷ್ಪಮಾಲಿಕೆಗಳನ್ನು ಧರಿಸಿಕೊಂಡು ಮನೋಜ್ಞವಾದ ಗಾನಗಳನ್ನು ಸಾವಧಾನದಿಂದ ಆಕರ್ಣಿಸುತ್ತಿರುವ ಪುಣ್ಯಶಾಲಿಗಳನ್ನು ನೋಡುತ್ತ ಬಂದು ಜವನರಮನೆಯ ಹೆಬ್ಬಾಗಿಲಲ್ಲಿ ನಿಂತು ಸಂಯಮನೀನಗರವು ತಲ್ಲಣಿಸುವಂತೆ ಬೊಬ್ಬಿರಿದನು. ಆಗ ಯಮನು ಅಕಸ್ಮಾತ್ತಾಗಿ ಉಂಟಾದ ಬಲುಬೊಬ್ಬೆಯನ್ನು ಕೇಳಿ ಬೆಚ್ಚಿ ಖಳನು ಜಗಳಕ್ಕೆ ಬಂದನೆಂದೆದ್ದು ಕಾಲದಂಡವೇ ಮೊದಲಾದ ಸಮಸ್ತಾಯುಧಗಳನ್ನೂ ತೆಗೆದು ಕೊಂಡು ಕೋಣನ ಮೇಲೇರಿ ರೂಪವನ್ನು ಧರಿಸಿರುವ ಕ್ಷಯವೇ ಮೊದಲಾದ ಸರ್ವರೋಗಗಳನ್ನೂ ಭಯಂಕರವಾದ ಕಾಲಮೃತ್ಯುವನ್ನೂ ಸಂಗಡ ಕರೆದು ಕೊಂಡು ಹೊರಟುಬಂದು ರಾವಣನೆದುರಿನಲ್ಲಿ ನಿಂತು ಧನುಷ್ಟಂಕಾರವನ್ನು ಮಾಡಿ ನಿಶಾತಮಾರ್ಗಣ ವೃಷ್ಟಿಯನ್ನು ಸುರಿಸಲು ; ಮಹೋದರ ಮಾರೀಚ ಪ್ರಹಸ್ತಾದಿ ರಾಕ್ಷಸ ವೀರರು ಯಮನ ಬಾಣಪ್ರಘಾತಗಳನ್ನು ತಡೆಯಲಾರದೆ ಕಂಗೆಟ್ಟು ನೆಲದಲ್ಲಿ ಬಿದ್ದು ಮೂರ್ಛಿಯನ್ನು ಹೊಂದಿದರು. ಲೋಕದಲ್ಲಿ ದೇವ ದಾನವಮಾನವಾದಿ ಸಮಸ್ತ ಪ್ರಾಣಿಗಳಿಗೂ ಅಂತ್ಯವನ್ನುಂಟುಮಾಡುವುದರಲ್ಲಿ ಅಧಿಕರ್ತೃವಾದ ಯಮನು ಎದುರಿಗೆ ಬಂದು ಕಾಳಗಕ್ಕೆ ನಿಂತರೆ ಅವನೆದುರಿನಲ್ಲಿ ನಿಂತು ಬದುಕಬಲ್ಲವರಾರುಂಟು ? ಇಂಥವನಿಗೆದುರಾಂತು ನಿಂತ ರಾವಣನ ಶೌರ್ಯಧೈರ್ಯಗಳನ್ನು ಬಣ್ಣಿಸುವವರಾರು? ಅಚಲಸದೃಶವಾದ ಧೈರ್ಯದಿಂದ ಕೂಡಿ ಯಮನಿದಿರಿನಲ್ಲಿ ನಿಂತು ಶಕ್ತಿ ತೋಮರಗದೆ ಕುಂತ ಇವೇ ಮೊದಲಾದ ನಾನಾ ವಿಧಾಯುಧಗಳಿಂದ ಪ್ರಹರಿಸಲು ; ಯಮನವು ಗಳನ್ನೆಲ್ಲಾ ಕ್ಷಣಕಾಲದಲ್ಲಿ ಕಡಿದು ತನ್ನ ಕ್ರೂರವಾದ ಬಾಣಪ್ರಹಾರಗಳಿಂದ ದಶಗಳನ ಪುಷ್ಪಕವೆಂಬ ವಿಮಾನವನ್ನು ಕಡಿದಿಡಲು ಅದು ಸರೋಜಭವನ ವರಪ್ರಭಾವ ದಿಂದ ತಿರಿತಿರಿಗಿ ಮೊದಲಿನಂತೆಯೇ ಬೆಳೆಯುತ್ತಿದ್ದಿತು. {{gap}}ಆಗ ರಾವಣನು ಬಹು ಕೋಪೋದ್ದೀಪಿತನಾಗಿ ಬತ್ತಳಿಕೆಯಿಂದ ಹತ್ತುಭಾಣಗಳನ್ನು ತೆಗೆದು ಶಿಂಜಿನಿಯಲ್ಲಿ ಹೂಡಿ ಆಕರ್ಣಾ೦ತವಾಗಿ ಸೇದಿ ಗುರಿಗಟ್ಟಿ ಯಮನ<noinclude></noinclude> 9q9019dx85z9wauoj2ywk6k87gg9ln0 324261 324258 2026-06-03T11:42:53Z Pragathi. BH 7585 /* Validated */ 324261 proofread-page text/x-wiki <noinclude><pagequality level="4" user="Pragathi. BH" />{{rh|center=ಕಥಾಸಂಗ್ರಹ-೪ ನೆಯ ಭಾಗ|left=18|right=}}</noinclude> ಕಣ್ಣುಗಳನ್ನು ಇರಿಯುತ್ತಿರುವುದನ್ನೂ ಕಬ್ಬಿಣದ ಕಾಗೆಗಳಿಂದ ಮಾಂಸಖಂಡಗೆ ಳನ್ನು ಕೀಳಿಸುತ್ತಿರುವುದನ್ನೂ ಕೆಂಪಗೆ ಕಾಯ್ದ ಉಕ್ಕಿನ ಕಂಬಗಳನ್ನು ತಬ್ಬಿಸುತ್ತಿರುವುದನ್ನೂ ಕೀವು ರಕ್ತ ಇವುಗಳನ್ನು ಕುಡಿಸುತ್ತಿರುವುದನ್ನೂ ವೈತರಣಿಯೆಂಬ ನರಕಕೂಪದಲ್ಲಿ ನೂಕಿ ಮುಳುಗಿಸುತ್ತಿರುವುದನ್ನೂ ನೋಡಿ ಕರುಣದಿಂದ ಕೂಡಿ ಆ ಯಮಭಟರ ಮೇಲೆ ಬಾಣಪ್ರಯೋಗವನ್ನು ಮಾಡಿ ಅವರನ್ನೆಲ್ಲಾ ಓಡಿಸಲು ; ಆಗ ಪಾಪಿಗಳೆಲ್ಲಾ ಕೂಡಿ- ಈ ಮಹಾತ್ಮನಿಂದ ನಮ್ಮ ಬಾಧೆಗಳೆಲ್ಲಾ ತಪ್ಪಿದುವೆಂದು ಸಂತೋಪಿಸಿ ರಾವಣನ ಬಳಿಗೆ ಬಂದು ನಮಸ್ಕರಿಸಿ ನಿಂತು ಕೊಂಡು--ನಾವೂ ನಿನ್ನೊ ಡನೆ ಸೇರಿ ಯ ಮನ ಸಂಗಡ ಯುದ್ಧ ಮಾಡುವುದಕ್ಕೆ ಬರುತ್ತೇವೆಂದು ಬೊಬ್ಬಿರಿದು ಕೂಗಿದರು. ರಾವಣನು ಆ ಪ್ರೇತಗಳನ್ನೂ ಜತೆಯಲ್ಲಿ ಕರೆದು ಕೊಂಡು ಬರುತ್ತ ಅಲ್ಲಿ ಮತ್ತೊಂದು ಸ್ಥಳದಲ್ಲಿ ಒಪ್ಪುತ್ತಿರುವ ದಿವ್ಯಸಭೆಯಲ್ಲಿ ಹಸಿವು ಬಾಯಾರಿಕೆಗಳಿ ಲ್ಲದೆ ದಿವ್ಯ ದೇಹಗಳನ್ನು ಧರಿಸಿಕೊಂಡು ಅಮೂಲ್ಯ ವಸ್ತ್ರಾಭರಣಗಳನ್ನುಟ್ಟು ತೊಟ್ಟು ಉತ್ತಮ ಪರಿಮಳ ದ್ರವ್ಯಗಳನ್ನು ಲೇಪಿಸಿಕೊಂಡು, ನಿತ್ಯ ಸುಗಂಧ ಯುಕ್ತವಾದ ಪುಷ್ಪಮಾಲಿಕೆಗಳನ್ನು ಧರಿಸಿಕೊಂಡು ಮನೋಜ್ಞವಾದ ಗಾನಗಳನ್ನು ಸಾವಧಾನದಿಂದ ಆಕರ್ಣಿಸುತ್ತಿರುವ ಪುಣ್ಯಶಾಲಿಗಳನ್ನು ನೋಡುತ್ತ ಬಂದು ಜವನರಮನೆಯ ಹೆಬ್ಬಾಗಿಲಲ್ಲಿ ನಿಂತು ಸಂಯಮನೀನಗರವು ತಲ್ಲಣಿಸುವಂತೆ ಬೊಬ್ಬಿರಿದನು. ಆಗ ಯಮನು ಅಕಸ್ಮಾತ್ತಾಗಿ ಉಂಟಾದ ಬಲುಬೊಬ್ಬೆಯನ್ನು ಕೇಳಿ ಬೆಚ್ಚಿ ಖಳನು ಜಗಳಕ್ಕೆ ಬಂದನೆಂದೆದ್ದು ಕಾಲದಂಡವೇ ಮೊದಲಾದ ಸಮಸ್ತಾಯುಧಗಳನ್ನೂ ತೆಗೆದು ಕೊಂಡು ಕೋಣನ ಮೇಲೇರಿ ರೂಪವನ್ನು ಧರಿಸಿರುವ ಕ್ಷಯವೇ ಮೊದಲಾದ ಸರ್ವರೋಗಗಳನ್ನೂ ಭಯಂಕರವಾದ ಕಾಲಮೃತ್ಯುವನ್ನೂ ಸಂಗಡ ಕರೆದು ಕೊಂಡು ಹೊರಟುಬಂದು ರಾವಣನೆದುರಿನಲ್ಲಿ ನಿಂತು ಧನುಷ್ಟಂಕಾರವನ್ನು ಮಾಡಿ ನಿಶಾತಮಾರ್ಗಣ ವೃಷ್ಟಿಯನ್ನು ಸುರಿಸಲು ; ಮಹೋದರ ಮಾರೀಚ ಪ್ರಹಸ್ತಾದಿ ರಾಕ್ಷಸ ವೀರರು ಯಮನ ಬಾಣಪ್ರಘಾತಗಳನ್ನು ತಡೆಯಲಾರದೆ ಕಂಗೆಟ್ಟು ನೆಲದಲ್ಲಿ ಬಿದ್ದು ಮೂರ್ಛಿಯನ್ನು ಹೊಂದಿದರು. ಲೋಕದಲ್ಲಿ ದೇವ ದಾನವಮಾನವಾದಿ ಸಮಸ್ತ ಪ್ರಾಣಿಗಳಿಗೂ ಅಂತ್ಯವನ್ನುಂಟುಮಾಡುವುದರಲ್ಲಿ ಅಧಿಕರ್ತೃವಾದ ಯಮನು ಎದುರಿಗೆ ಬಂದು ಕಾಳಗಕ್ಕೆ ನಿಂತರೆ ಅವನೆದುರಿನಲ್ಲಿ ನಿಂತು ಬದುಕಬಲ್ಲವರಾರುಂಟು ? ಇಂಥವನಿಗೆದುರಾಂತು ನಿಂತ ರಾವಣನ ಶೌರ್ಯಧೈರ್ಯಗಳನ್ನು ಬಣ್ಣಿಸುವವರಾರು? ಅಚಲಸದೃಶವಾದ ಧೈರ್ಯದಿಂದ ಕೂಡಿ ಯಮನಿದಿರಿನಲ್ಲಿ ನಿಂತು ಶಕ್ತಿ ತೋಮರಗದೆ ಕುಂತ ಇವೇ ಮೊದಲಾದ ನಾನಾ ವಿಧಾಯುಧಗಳಿಂದ ಪ್ರಹರಿಸಲು ; ಯಮನವು ಗಳನ್ನೆಲ್ಲಾ ಕ್ಷಣಕಾಲದಲ್ಲಿ ಕಡಿದು ತನ್ನ ಕ್ರೂರವಾದ ಬಾಣಪ್ರಹಾರಗಳಿಂದ ದಶಗಳನ ಪುಷ್ಪಕವೆಂಬ ವಿಮಾನವನ್ನು ಕಡಿದಿಡಲು ಅದು ಸರೋಜಭವನ ವರಪ್ರಭಾವ ದಿಂದ ತಿರಿತಿರಿಗಿ ಮೊದಲಿನಂತೆಯೇ ಬೆಳೆಯುತ್ತಿದ್ದಿತು. {{gap}}ಆಗ ರಾವಣನು ಬಹು ಕೋಪೋದ್ದೀಪಿತನಾಗಿ ಬತ್ತಳಿಕೆಯಿಂದ ಹತ್ತುಭಾಣಗಳನ್ನು ತೆಗೆದು ಶಿಂಜಿನಿಯಲ್ಲಿ ಹೂಡಿ ಆಕರ್ಣಾ೦ತವಾಗಿ ಸೇದಿ ಗುರಿಗಟ್ಟಿ ಯಮನ<noinclude></noinclude> ohr22kynlq3vfrm11wmavnzofo3qyk0 ಪುಟ:ಕಥಾ ಸಂಗ್ರಹ - ಭಾಗ ೨.djvu/೨೯ 104 44589 324256 106941 2026-06-03T11:30:38Z Vinoda mamatharai 3222 /* Proofread */ 324256 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವು|left=|right=19}}</noinclude> ಕೋಣನಿಗೆ ಹೊಡೆದು ಕೂಡಲೆ ಕುಪ್ಪಳಿಸಿ ಮುಂದೆ ಬಂದು ಕೋದಂಡದಿಂದಪ್ಪಳಿಸಿ ಹತ್ತು ತೋಳ ಳನ್ನೂ ಮೇಲೆತ್ತಿ ದೀವಟಿಗೆಗಳಂತಿರುವ ಕಣ್ಣುಗಳನ್ನು ತಿರುಗಿಸುತ್ತ ಗಿರಿಗುಹೆಗಳಂತಿರುವ ಹತ್ತು ಬಾಯಿಗಳನ್ನೂ ತೆರೆದುಬ್ಬಿಯಬ್ಬರಿಸಿದನು. ಕಲ್ಪಾಂತ ಘನಗರ್ಜಿತದ ಒಡನಾಡಿಯಂತಿರುವ ಅತ್ಯುಗ್ರಾರ್ಭಟಧ್ವನಿಯನ್ನು ಕೇಳಿದ ಕೋಣವು ದ್ವಿಗುಣಿತವಾದ ಭಯಭ್ರಾಂತಿಯಿಂದ ಕಂಗೆಟ್ಟು ಹಾರಿಯಾಡುತ್ತಿರಲು ; ನಿಲ್ಲಿಸಲೆತ್ನಿ ಸುತ್ತಿರುವ ಪ್ರೇತನಾಯಕನನ್ನು ಗಣಿಸದೆ ಹೊರಟು ಹರಿದಾರಿಯ ದೂರದಲ್ಲಿ ನೆಗೆದು ಅವನನ್ನು ನೆಲಕ್ಕೊಗೆದು ಓಡಿಹೋಯಿತು. ಆಗ ರಾಕ್ಷ ಸರ ಗುಂಪಿನಲ್ಲಿ ಅಪಹಾಸ್ಯ ಚರವಾದ ಅಟ್ಟಹಾಸವುಂಟಾಯಿತು. ಏನು ಹೇಳುವುದು ? ಯಮನ ವಿಪತ್ತನ್ನು ನೋಡಿ ಯಮಭಟರೆಲ್ಲರೂ ಬೆಪ್ಪಾಗಿ ನಿಂತರು. ಆ ಮೇಲೆ ಯಮನೆದ್ದು ಬಂದು ನಿಲ್ಲಲು ; ಕಾಲಮೃತ್ಯುವು ಅವನನ್ನು ನೋಡಿ-ಎಲೈ ಮಹಾನುಭಾವನೇ, ಶೀಘ್ರ ವಾಗಿ ನನಗಪ್ಪಣೆಯನ್ನು ಕೊಡು, ಇವನಿಗಿಂತಲೂ ಅತಿ ಬಲರನ್ನಾದರೂ ಸ್ವಾಧೀನ ಪಡಿಸಿಕೊಳ್ಳುವಂಥ ನನಗೆ ಈ ಖಳನಾದ ದಶಕಂಠನೆಷ್ಟುಮಾತ್ರದವನು ಎಂದು ಹೇಳಲು ; ಯಮನು-ಎಲೆ ಮೃತ್ಯುವೇ, ಒಂದು ನಿಮೇಷಮಾತ್ರ ಸಹಿಸಿ ನೋಡು ಎಂದು ಹೇಳಿ ಘೋರಾಕಾರವನ್ನು ಧರಿಸಿ ಈ ಖಳನನ್ನು ಸದೆಯುವೆನೆಂದು ಭಯಂ ಕರವಾದ ಕಾಲದಂಡವನ್ನು ತೆಗೆದುಕೊಳ್ಳಲು ; ಆಗ ಸ್ವರ್ಗವೇ ಮೊದಲಾದ ಸಮಸ್ತ ಲೋಕಗಳೂ ಭಯ ಕಂಪಿತಗಳಾದುವು. ಆಗ ಇಂದ್ರಾದಿದೇವತೆಗಳೆಲ್ಲಾ ಹಾಹಾಕಾರ ವನ್ನು ಮಾಡುತ್ತ ಬೊಮ್ಮನ ಬಳಿಗೋಡಿಬಂದು ಕೈಮುಗಿದು-ಅಕಾಲದಲ್ಲಿ. ಮಹಾ ಪ್ರಳಯವುಂಟಾಗುವುದೆಂದು ಮೊರೆಯಿಡಲು ; ಪದ್ಮಜನು ತ್ವರಿತದಿಂದ ಯಮಲೋಕಕ್ಕೆ ತಂದು ಎಲ್ಲರಿಗೂ ಅದೃಶ್ಯನಾಗಿ ಅಂತಕನಿಗೆ ಮಾತ್ರ ದೃಶ್ಯ ನಾಗಿ-ಎಲೈ ವೈವಸ್ವತನೆ, ಈಗ ಕಾಲದಂಡವನ್ನು ಕೈಕೊಳ್ಳಬೇಡ, ಯಾಕೆಂದರೆ ಈ ಕಾಲದಂಡವನ್ನು ಯಾರ ಮೇಲೆ ಪ್ರಯೋಗಿಸಿದರೂ ಅವರು ಸಾಯಲೇಬೇಕೆಂದು ನಾನು ಮೊದಲೇ ವರವನ್ನು ಕೊಟ್ಟಿದ್ದೇನೆ. ಈ ರಾವಣನಿಗೆ ಮನುಷ್ಯರೂ ತಿರ್ಯ ಗ್ರ೦ತುಗಳೂ ಹೊರತಾಗಿ ಉಳಿದ ದೇವತೆಗಳೇ ಮೊದಲಾದ ಯಾರಿಂದಲೂ ಮರಣ ವುಂಟಾಗಬಾರದೆಂದೂ ನಾನೇ ವರವನ್ನು ಕೊಟ್ಟಿದ್ದೇನೆ, ಆದುದರಿಂದ ಈ ಕಾಲ ದಂಡವು ರಾವಣನನ್ನು ಕೊಲ್ಲದಿದ್ದರೂ ಇದರಿಂದ ರಾವಣನು ಮೃತನಾದರೂ ನನ್ನ ಮಾತು ಹುಸಿಯಾಗುವುದು. ಹಾಗೆ ನನ್ನ ಮಾತು ಅನೃತವಾದರೆ ಸಕಲಲೋಕಗಳೂ ವಿನಾಶವಾಗಿ ಹೋಗುವುವು. ಅದು ಕಾರಣ ನೀನು ಈಗ ಯುದ್ಧಾ೦ಗಣದಿಂದ ಮರೆಯಾಗಿ ಹೋಗೆಂದು ಹೇಳಿ ತನ್ನ ಲೋಕವನ್ನು ಕುರಿತು ತೆರಳಲು ;* ಆ ಮೇಲೆ ಯಮನು ಬ್ರಹ್ಮದೇವನ ಮಾತಿನಂತೆ ಅದೃಶ್ಯನಾಗಿ ಹೋಗಲು ; ಆಗ ರಾವಣನು ಯಮನೂ ನನಗೆ ಹೆದರಿ ಯುದ್ಧಭೂಮಿಯಿಂದ ತಪ್ಪಿಸಿಕೊಂಡು ಓಡಿಹೋದನೆಂದು ತಿಳಿದುಕೊಂಡು ಸಂತೋಷಿಸಿ ಜಯಭೇರಿಯನ್ನು ಹೊಡಿಸುತ್ತ ಸಮಸ್ತ ಸೇನಾಪರಿ ವೃತನಾಗಿ ಅಲ್ಲಿಂದ ಹೊರಟು ರಸಾತಲಕ್ಕೆ ಬಂದು ಅಲ್ಲಿ ನಿವಾತಕವಚರೆಂಬ ದೈತ್ಯ ರೊಡನೆ ಜಗಳಕ್ಕೆ ತೊಡಗಿ ಒಂದು ಸಂವತ್ಸರಾಂತದ ವರೆಗೂ ಕಾದಾಡಿದಾಗೂ<noinclude></noinclude> 79tyq1duvuq74an27ese4rhapvf7rxa 324262 324256 2026-06-03T11:43:04Z Pragathi. BH 7585 /* Validated */ 324262 proofread-page text/x-wiki <noinclude><pagequality level="4" user="Pragathi. BH" />{{rh|center=ರಾವಣನ ದಿಗ್ವಿಜಯವು|left=|right=19}}</noinclude> ಕೋಣನಿಗೆ ಹೊಡೆದು ಕೂಡಲೆ ಕುಪ್ಪಳಿಸಿ ಮುಂದೆ ಬಂದು ಕೋದಂಡದಿಂದಪ್ಪಳಿಸಿ ಹತ್ತು ತೋಳ ಳನ್ನೂ ಮೇಲೆತ್ತಿ ದೀವಟಿಗೆಗಳಂತಿರುವ ಕಣ್ಣುಗಳನ್ನು ತಿರುಗಿಸುತ್ತ ಗಿರಿಗುಹೆಗಳಂತಿರುವ ಹತ್ತು ಬಾಯಿಗಳನ್ನೂ ತೆರೆದುಬ್ಬಿಯಬ್ಬರಿಸಿದನು. ಕಲ್ಪಾಂತ ಘನಗರ್ಜಿತದ ಒಡನಾಡಿಯಂತಿರುವ ಅತ್ಯುಗ್ರಾರ್ಭಟಧ್ವನಿಯನ್ನು ಕೇಳಿದ ಕೋಣವು ದ್ವಿಗುಣಿತವಾದ ಭಯಭ್ರಾಂತಿಯಿಂದ ಕಂಗೆಟ್ಟು ಹಾರಿಯಾಡುತ್ತಿರಲು ; ನಿಲ್ಲಿಸಲೆತ್ನಿ ಸುತ್ತಿರುವ ಪ್ರೇತನಾಯಕನನ್ನು ಗಣಿಸದೆ ಹೊರಟು ಹರಿದಾರಿಯ ದೂರದಲ್ಲಿ ನೆಗೆದು ಅವನನ್ನು ನೆಲಕ್ಕೊಗೆದು ಓಡಿಹೋಯಿತು. ಆಗ ರಾಕ್ಷ ಸರ ಗುಂಪಿನಲ್ಲಿ ಅಪಹಾಸ್ಯ ಚರವಾದ ಅಟ್ಟಹಾಸವುಂಟಾಯಿತು. ಏನು ಹೇಳುವುದು ? ಯಮನ ವಿಪತ್ತನ್ನು ನೋಡಿ ಯಮಭಟರೆಲ್ಲರೂ ಬೆಪ್ಪಾಗಿ ನಿಂತರು. ಆ ಮೇಲೆ ಯಮನೆದ್ದು ಬಂದು ನಿಲ್ಲಲು ; ಕಾಲಮೃತ್ಯುವು ಅವನನ್ನು ನೋಡಿ-ಎಲೈ ಮಹಾನುಭಾವನೇ, ಶೀಘ್ರ ವಾಗಿ ನನಗಪ್ಪಣೆಯನ್ನು ಕೊಡು, ಇವನಿಗಿಂತಲೂ ಅತಿ ಬಲರನ್ನಾದರೂ ಸ್ವಾಧೀನ ಪಡಿಸಿಕೊಳ್ಳುವಂಥ ನನಗೆ ಈ ಖಳನಾದ ದಶಕಂಠನೆಷ್ಟುಮಾತ್ರದವನು ಎಂದು ಹೇಳಲು ; ಯಮನು-ಎಲೆ ಮೃತ್ಯುವೇ, ಒಂದು ನಿಮೇಷಮಾತ್ರ ಸಹಿಸಿ ನೋಡು ಎಂದು ಹೇಳಿ ಘೋರಾಕಾರವನ್ನು ಧರಿಸಿ ಈ ಖಳನನ್ನು ಸದೆಯುವೆನೆಂದು ಭಯಂ ಕರವಾದ ಕಾಲದಂಡವನ್ನು ತೆಗೆದುಕೊಳ್ಳಲು ; ಆಗ ಸ್ವರ್ಗವೇ ಮೊದಲಾದ ಸಮಸ್ತ ಲೋಕಗಳೂ ಭಯ ಕಂಪಿತಗಳಾದುವು. ಆಗ ಇಂದ್ರಾದಿದೇವತೆಗಳೆಲ್ಲಾ ಹಾಹಾಕಾರ ವನ್ನು ಮಾಡುತ್ತ ಬೊಮ್ಮನ ಬಳಿಗೋಡಿಬಂದು ಕೈಮುಗಿದು-ಅಕಾಲದಲ್ಲಿ. ಮಹಾ ಪ್ರಳಯವುಂಟಾಗುವುದೆಂದು ಮೊರೆಯಿಡಲು ; ಪದ್ಮಜನು ತ್ವರಿತದಿಂದ ಯಮಲೋಕಕ್ಕೆ ತಂದು ಎಲ್ಲರಿಗೂ ಅದೃಶ್ಯನಾಗಿ ಅಂತಕನಿಗೆ ಮಾತ್ರ ದೃಶ್ಯ ನಾಗಿ-ಎಲೈ ವೈವಸ್ವತನೆ, ಈಗ ಕಾಲದಂಡವನ್ನು ಕೈಕೊಳ್ಳಬೇಡ, ಯಾಕೆಂದರೆ ಈ ಕಾಲದಂಡವನ್ನು ಯಾರ ಮೇಲೆ ಪ್ರಯೋಗಿಸಿದರೂ ಅವರು ಸಾಯಲೇಬೇಕೆಂದು ನಾನು ಮೊದಲೇ ವರವನ್ನು ಕೊಟ್ಟಿದ್ದೇನೆ. ಈ ರಾವಣನಿಗೆ ಮನುಷ್ಯರೂ ತಿರ್ಯ ಗ್ರ೦ತುಗಳೂ ಹೊರತಾಗಿ ಉಳಿದ ದೇವತೆಗಳೇ ಮೊದಲಾದ ಯಾರಿಂದಲೂ ಮರಣ ವುಂಟಾಗಬಾರದೆಂದೂ ನಾನೇ ವರವನ್ನು ಕೊಟ್ಟಿದ್ದೇನೆ, ಆದುದರಿಂದ ಈ ಕಾಲ ದಂಡವು ರಾವಣನನ್ನು ಕೊಲ್ಲದಿದ್ದರೂ ಇದರಿಂದ ರಾವಣನು ಮೃತನಾದರೂ ನನ್ನ ಮಾತು ಹುಸಿಯಾಗುವುದು. ಹಾಗೆ ನನ್ನ ಮಾತು ಅನೃತವಾದರೆ ಸಕಲಲೋಕಗಳೂ ವಿನಾಶವಾಗಿ ಹೋಗುವುವು. ಅದು ಕಾರಣ ನೀನು ಈಗ ಯುದ್ಧಾ೦ಗಣದಿಂದ ಮರೆಯಾಗಿ ಹೋಗೆಂದು ಹೇಳಿ ತನ್ನ ಲೋಕವನ್ನು ಕುರಿತು ತೆರಳಲು ;* ಆ ಮೇಲೆ ಯಮನು ಬ್ರಹ್ಮದೇವನ ಮಾತಿನಂತೆ ಅದೃಶ್ಯನಾಗಿ ಹೋಗಲು ; ಆಗ ರಾವಣನು ಯಮನೂ ನನಗೆ ಹೆದರಿ ಯುದ್ಧಭೂಮಿಯಿಂದ ತಪ್ಪಿಸಿಕೊಂಡು ಓಡಿಹೋದನೆಂದು ತಿಳಿದುಕೊಂಡು ಸಂತೋಷಿಸಿ ಜಯಭೇರಿಯನ್ನು ಹೊಡಿಸುತ್ತ ಸಮಸ್ತ ಸೇನಾಪರಿ ವೃತನಾಗಿ ಅಲ್ಲಿಂದ ಹೊರಟು ರಸಾತಲಕ್ಕೆ ಬಂದು ಅಲ್ಲಿ ನಿವಾತಕವಚರೆಂಬ ದೈತ್ಯ ರೊಡನೆ ಜಗಳಕ್ಕೆ ತೊಡಗಿ ಒಂದು ಸಂವತ್ಸರಾಂತದ ವರೆಗೂ ಕಾದಾಡಿದಾಗೂ<noinclude></noinclude> 4tec6hplq9yiy6mio8ru38fri3d21r3 ಪುಟ:ಕಥಾ ಸಂಗ್ರಹ - ಭಾಗ ೨.djvu/೩೦ 104 44590 324270 106942 2026-06-03T11:46:36Z Vinoda mamatharai 3222 /* Proofread */ 324270 proofread-page text/x-wiki <noinclude><pagequality level="3" user="Vinoda mamatharai" />{{rh|center=ಕಥಾಸಂಗ್ರಹ-೪ ನೆಯ ಭಾಗ|left=20|right=}}</noinclude> ಒಬ್ಬರಿಗೂ ಜಯ ಪರಾಜಯಗಳುಂಟಾಗದಿರಲು ; ಆಗ ಪ್ರತ್ಯಕ್ಷನಾಗಿ ಬಂದ ಸರಸ್ವತೀಪತಿಯ ಅಪ್ಪಣೆಯಿಂದ ಉಭಯ ಪಕ್ಷದ ವೀರರೂ ಕೂಡಿ ಅಗ್ನಿಸಾಕ್ಷಿಯಾಗಿ ಸ್ನೇಹವನ್ನು ಮಾಡಿಕೊಂಡರು. {{gap}}ಅನಂತರದಲ್ಲಿ ರಾವಣನು ಅಲ್ಲಿಂದ ಹೊರಟು ಅಶ್ಮಪುರವೆಂಬ ನಗರಕ್ಕೆ ಬಂದು ಅಲ್ಲಿರುವ ಕಾಲಕೇಯರೆಂಬ ದೈತ್ಯನಾಯಕರೊಡನೆ ಬಡಿದಾಟಕ್ಕೆರಗಿ ಕಡೆಗೆ ಅನೇಕ ದೈತ್ಯರೊಡನೆ ಶೂರ್ಪನಖಿಯ ಗಂಡನಾದ ವಿದ್ಯುಚ್ಛೆಹನನ್ನೂ ಕೊಂದು ಆ ನಗರವ ನೈಲ್ಯಾ ಸೂರೆಗೊಯ್ದು ಅಲ್ಲಿಂದ ಹೊರಟು ವರುಣನ ನಗರಾಭಿಮುಖನಾಗಿ ಬಂದು ಯುದ್ಧರಂಗದಲ್ಲಿ ಅವನ ಮಕ್ಕಳನ್ನು ಮೈಮರೆವಂತೆ ಬಡಿದೊರಗಿಸಿದನು, ಆ ಮೇಲೆ ವರುಣನ ಬೊಕ್ಕಸಕ್ಕೆ ನುಗ್ಗಿ ಅಲ್ಲಿದ್ದ ಅನರ್ಘರತ್ನ ಗಳನ್ನು ಅಪಹರಿಸಿಕೊಂಡು ನಾಗ ದೇವ ದೈತ್ಯಾದಿ ಜಾತೀಯರಾದ ಯೌವನಸ್ತ್ರೀಯರನೇಕರನ್ನು ಬಲಾತ್ಕಾರದಿಂದ ಎಳೆದು ಕೊಂಡು ವಿಮಾನಾರೂಢನಾಗಿ ಜಯಭೇರಿಗಳನ್ನು ಹೊಡಿಸುತ್ತ ತಿರಿಗಿ ಲಂಕಾಪಟ್ಟಣಕ್ಕೆ ಬರಲು ; ಆಗ ನಗರನಾರೀಜನವು ಸಂಭ್ರಮದಿಂದ ನಲಿಯುತ್ತ ಚಿನ್ನದ ಹರಿವಾಣಗಳಲ್ಲಿ ಸೊಡರುಗಳನ್ನು ಹೊತ್ತಿಸಿಟ್ಟು ಕೊಂಡು ನವರತ್ನದ ಆರತಿ ಗಳನ್ನು ತಂದು ರಾವಣನಿಗೆ ನಿವಾಳಿಸಿದರು, ಆಗ ರಾವಣನು ಪರಿವಾರಪರಿವೃತನಾಗಿ ಓಲಗದ ಚಾವಡಿಯಲ್ಲಿ ಕುಳಿತು ಕೊಂಡು ವಿಭೀಷಣ ಮಾಲ್ಯವಂತಾದಿ ರಾಕ್ಷಸ ಪ್ರಮುಖರ ಯೋಗಕ್ಷೇಮಗಳನ್ನು ವಿಚಾರಿಸಿ ತಾನು ಮಾಡಿದ ದಿಗ್ವಿಜಯ ವಿಷಯ ಕವಾದ ವೃತ್ತಾಂತವನ್ನು ಅವರೆಲ್ಲರಿಗೂ ತಿಳಿಸಿ ಅಂತಃಪುರಕ್ಕೆ ಬಂದು ಪಟ್ಟಿ ಮಹಿ ಪಿಯಾದ ಮಂಡೋದರಿಯನ್ನು ಕಂಡು ಸಂತೋಪಿಸಿ ಆಕೆಯೊಡನೆ ಸುಖವಾಗಿದ್ದು ಕೊಂಡು ರಾಜ್ಯಭಾರ ಮಾಡುತ್ತಿದ್ದನು. {{gap}}ಹೀಗಿರಲು ಒಂದಾನೊಂದು ದಿನ ಶೂರ್ಪನಖಿಯು ಅಣ್ಣನಾದ ರಾವಣನ ಬಳಿಗೆ ಬಂದು--ಎಲೈ ಅಣ್ಣನೇ, ನನಗೆ ಓಲೆಗಳೂ ಮಾಂಗಲ್ಯಸೂತ್ರವೂ ಇರಬಾರದು. ಇವಳು ಯಾವಾಗಲೂ ಮುಂಡೆಯಾಗಿ ಅಮಂಗಲೆಯೆನ್ನಿಸಿಕೊಂಡಿರಲೆಂದು ನನ್ನ ಗಂಡನನ್ನು ಕೊಂದೆಯಾ ? ಗಂಡಸಿಲ್ಲದವಳ ಬಾಳು ಬಂಡಬಾಳಲ್ಲವೇ ? ಈಗಲೇ ನನ್ನನ್ನೂ ಕೊಂದು ಸತಿಯಾದ ವಿದ್ಯು ಜೈನ ಬಳಿಗೆ ಕಳುಹಿಸೆಂದು ಆತನ ಕಾಲು ಗಳ ಮೇಲೆ ಬಿದ್ದು ದುಃಖಿಸುತ್ತ ಮೊರೆಯಿಡುತ್ತಿರಲು ; ಆಗ ರಾವಣನು ಮನಸ್ಸಿ ನಲ್ಲಿ ಬಹುವಾಗಿ ವ್ಯಸನಪಡುತ್ತ ತಂಗಿಯನ್ನು ಹಿಡಿದೆತ್ತಿ ರಣರಂಗದಲ್ಲಿ ಕಾಲ ಕೇಯರನ್ನು ಕೊಲ್ಲುವ ಸಮಯದಲ್ಲಿ ಕ್ರೋಧದಿಂದ ಮದಿಸಿ ಮೈಮರೆತಿದ್ದೆ ನಾದು ದರಿಂದ ಕಾಣದೆ ನಿನ್ನ ಗಂಡನನ್ನೂ ಕೊಂದುಬಿಟ್ಟೆನು, ಕೈಮಿಾರಿ ಹೋದ ಕಾರ್ಯ ಕ್ಯಾಗಿ ಚಿಂತಿಸುವುದರಿಂದ ಪ್ರಯೋಜನವಿಲ್ಲವು. “ನನ್ನ ಸಕಲೈಶ್ವರ್ಯವೂ ನಿನ್ನ ವಶ ವಾಗಿರುವುದು, ನೀನು ಯಾವುದಕ್ಕೂ ಚಿಂತಿಸಬೇಡೆಂದು ಸಮಾಧಾನಪಡಿಸಿ ಖರ ದೂಷಣಾದಿ ರಾಕ್ಷಸರನ್ನು ಕರಿಸಿ--ನೀವು ಹದಿನಾಲ್ಕು ಸಾವಿರ ಮಂದಿ ರಕ್ಕಸರನ್ನು ಕರೆದುಕೊಂಡು ಈ ಶೂರ್ಪನಖಿ ಸಮೇತರಾಗಿ ಹೋಗಿ ದಂಡಕವನದಲ್ಲಿರುವ ಜನ ಜ್ಞಾನವೆಂದು ಹೆಸರುಳ್ಳ ಈ ಲಂಕಾನಗರದ ಉಕ್ಕಡದಲ್ಲಿರತಕ್ಕುದೆಂದು ಅಪ್ಪಣೆಯನ್ನು<noinclude></noinclude> 7k87irnmtaswu57uajnkvb8xfwngrfw ಪುಟ:ಕಥಾ ಸಂಗ್ರಹ - ಭಾಗ ೨.djvu/೩೧ 104 44591 324271 106943 2026-06-03T11:49:32Z Vinoda mamatharai 3222 /* Proofread */ 324271 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವ|left=|right=21}}</noinclude> ಕೊಡಲು ; ಆಗ ರಾವಣನ ಚಿಕ್ಕಮ್ಮನ ಮಗನಾದ ಖರಾಸುರನು ಶೂರ್ಪನಖಿಸಹಿತ ನಾಗಿ ಹೊರಟು ಜನಸ್ಥಾನಕ್ಕೆ ಬಂದು ಅಲ್ಲಿ ಸುಖದಿಂದಿರುತ್ತಿದ್ದನು. ಅಲ್ಲಿ ಹಾಗಿರಲು ; ಇತ್ತ ರಾವಣನು ರಾಕ್ಷಸಕುಲದೇವತೆಯಾದ ಕಾಳಿಕಾ ದೇವಿಯಿರುವ ನಿಕುಂಭಿಳೆಯೆಂಬ ಉದ್ಯಾನವನಕ್ಕೆ ಬಂದು ನೋಡಲು ; ಅಲ್ಲಿ ಶತ ಯಪಸ್ತಂಭಗಳನ್ನು ನೆಟ್ಟು ಆಸುರಮಂತ್ರಪಠನ ಧ್ವನಿಯಿಂದ ಕೂಡಿ ಆಶ್ಚರ್ಯವಾಗಿ ಶೋಭಿಸುತ್ತಿರುವ ಯಾಗಮಂಟಪದಲ್ಲಿ ಕೃಷ್ಣಾಜಿನ ಜಟಾಭಸ್ಮ ರುದ್ರಾಕ್ಷಿಗಳನ್ನು ಧರಿಸಿಕೊಂಡು ಯಜ್ಞದೀಕ್ಷಾ ಬದ್ಧನಾಗಿ ಕುಳಿತು ತದುಚಿತ ಕರ್ಮಗಳನ್ನು ಮಾಡುತ್ತಲಿರುವ ತನ್ನ ಕುಮಾರನಾದ ಮೇಘನಾದನನ್ನು ನೋಡಿ ಹರ್ಷದಿಂದ ಬಿಗಿ ದಪ್ಪಿ ಮುದ್ದಿಸಿ-ಇದೇನು ನಿನ್ನ ಮಹೋದ್ಯೋಗವು 1 ಶೀಘ್ರವಾಗಿ ತಿಳಿಸೆನಲು ; ಆಗ ಕುಲಗುರುವಾದ ಶುಕ್ರಾಚಾರ್ಯನು ರಾವಣನನ್ನು ಕುರಿತು--ಎಲೈ ರಾಕ್ಷ ಸರಾಜನೇ, ನಿನ್ನ ಕುಮಾರನಾದ ಮೇಘನಾದನು ಅಶ್ವಮೇಧ ಅಗ್ನಿ ಷೇಮ ಆಪ್ಲೊ ರ್ಯಾಮ ಗೋಮೇಧ ವೈಷ್ಣವ ರಾಜಸೂಯವಾಜಪೇಯಗಳೆಂಬ ಸಪ್ತಯಜ್ಞಗ ಳನ್ನು ಮಾಡಿ ಮುಗಿಸಿ ಆ ಮೇಲೆ ಮಾಹೇಶ್ವರ ಯಜ್ಞವನ್ನು ಆರಂಭಿಸಿದನು. ವಿಧ್ಯ ನುಸಾರವಾಗಿ ಅದೂ ಮುಗಿಯುವ ಕಾಲದಲ್ಲಿ ತುಷ್ಟನಾದ ಪರಮೇಶ್ವರನು ಪ್ರತ್ಯ ಕ್ಷನಾಗಿ ಬಂದು ಧನುರ್ಬಾಣ ಶಕ್ತಿಗದಾ ಖಡ್ಡ ಕುಠಾರಾದ್ಯಾಯುಧಗಳನ್ನೂ ರಣದಲ್ಲಿ ಅರಿದುರ್ಜಯವಾದ ರಥವನ್ನೂ ಯುದ್ದ ಕಾಲದಲ್ಲಿ ತಾನು ವೈರಿಗಳಿಗೆ ಗೋಚರನಾಗದೆ ಇದ್ದು ಕೊಂಡು ಅವರ ಮೇಲೆ ಬಾಣಪ್ರಯೋಗವನ್ನು ಮಾಡುತ್ತ ಅವರನ್ನು ಜಯಿಸುವುದಕ್ಕೆ ಸಹಾಯಭೂತವಾದ ತಾಮಸಿಯೆಂಬ ಮಾಯಾವಿದ್ಯೆ ಯನ್ನೂ ನಿನ್ನ ಮಗನಿಗೆ ಕರುಣಿಸಿದನು, ವಂಶರತ್ನ ಪ್ರಾಯನಾದ ಈ ಮೇಘನಾದ ನಿಂದ ಮುಂದೆ ನಿನಗೆ ಸಕಲಕಾರ್ಯಸಿದ್ದಿಯ ಉಂಟಾಗುವುದು ಎಂದನು. ರಾವ ಣನು ಆ ಮಾತನ್ನು ಕೇಳಿ ನಸುನಗುತ್ತ..ಎಲೈ ಪುತ್ರನೇ, ನಮಗೆ ವಿರೋಧಿಪಕ್ಷದ ಲ್ಲಿರುವ ಇಂದ್ರಾದಿ ದೇವತೆಗಳನ್ನು ಸೇವಿಸಬಹುದೇ ? ನೀನು ಬುದ್ಧಿಯಿಲ್ಲದವನೆಂದು ಹೇಳಿ ಮಗನ ಕೈಯನ್ನು ಹಿಡಿದು ಕರೆದುಕೊಂಡು ವಿಭೀಷಣಾದಿಗಳೊಡನೆ ತನ್ನ ರಮ ನೆಗೆ ಬಂದು ಅವರವರ ಮನೆಗಳಿಗೆ ಹೋಗುವಂತೆ ಸರ್ವರಿಗೂ ಅಪ್ಪಣೆಯನ್ನು ಕೊಟ್ಟು ಕಳುಹಿಸಿದನು. ಆಗ ವಿಭೀಷಣನು ಏಕಾಂತಸ್ಥಳದಲ್ಲಿ ರಾವಣನನ್ನು ಕುರಿತು.ಎಲೈ ಅಣ್ಣನೇ, ನೀನು ದಿಗ್ವಿಜಯವನ್ನು ಮಾಡಿದುದು ಸರಿಯಾದ ಕಾರ್ಯವೇ, ಆದರೆ ನೀನು ಪರಪತ್ನಿ ಯರನ್ನು ಬಲಾತ್ಕಾರದಿಂದ ಹಿಡಿದು ತಂದುದು ಮಾತ್ರ ಬಲು ಕೆಟ್ಟ ಕೆಲಸವು, ಆ ಸ್ತ್ರೀಯರ ದುಃಖಾತಿರೇಕವು ನಿನ್ನ ಪರಾಕ್ರಮಾತಿಶಯಕ್ಕೆ ಅಮಂಗಲ ಕರವಾಗಿಯ ಹಾನಿಕರವಾಗಿಯ ಸಂಭವಿಸಿದ ವರ್ತಮಾನವನ್ನು ಹೇಳುವೆನು ಕೇಳು. ಮಧುವೆಂಬ ದನುಜನು ಬಂದು ನಿನ್ನ ಸೇನೆಯನ್ನು ಕೊಂದು ಉಳಿದುದನ್ನು ಹಿಂದಟ್ಟಿ ಅಂತಃಪುರದೊಳಹೊಕ್ಕು ನಮ್ಮ ತಾಯಿಯ ತಂಗಿಯಾದ ಕುಂಭೀನಸಿ ಯನ್ನು ಹಿಡಿದು ಕೊಂಡು ಹೋದನು. ಮಾಡಿದವರಿಗೆ ಮಾಡಿದಷ್ಟೆಂಬ ಗಾಧೆಯು ನಿನ್ನಲ್ಲೇ ನಿದರ್ಶನಕ್ಕೆ ಬಂದಿತೆಂದು ಹೇಳಲು ; ರಾವಣನು-ಇದೇನು ಮಹಾಶ್ವ<noinclude></noinclude> 2xbajxcfticmbdp7hg9inw0iwsxt39e 324272 324271 2026-06-03T11:50:16Z Vinoda mamatharai 3222 324272 proofread-page text/x-wiki <noinclude><pagequality level="3" user="Vinoda mamatharai" />{{rh|center=ರಾವಣನ ದಿಗ್ವಿಜಯವ|left=|right=21}}</noinclude> ಕೊಡಲು ; ಆಗ ರಾವಣನ ಚಿಕ್ಕಮ್ಮನ ಮಗನಾದ ಖರಾಸುರನು ಶೂರ್ಪನಖಿಸಹಿತನಾಗಿ ಹೊರಟು ಜನಸ್ಥಾನಕ್ಕೆ ಬಂದು ಅಲ್ಲಿ ಸುಖದಿಂದಿರುತ್ತಿದ್ದನು. ಅಲ್ಲಿ ಹಾಗಿರಲು ; ಇತ್ತ ರಾವಣನು ರಾಕ್ಷಸಕುಲದೇವತೆಯಾದ ಕಾಳಿಕಾ ದೇವಿಯಿರುವ ನಿಕುಂಭಿಳೆಯೆಂಬ ಉದ್ಯಾನವನಕ್ಕೆ ಬಂದು ನೋಡಲು ; ಅಲ್ಲಿ ಶತ ಯಪಸ್ತಂಭಗಳನ್ನು ನೆಟ್ಟು ಆಸುರಮಂತ್ರಪಠನ ಧ್ವನಿಯಿಂದ ಕೂಡಿ ಆಶ್ಚರ್ಯವಾಗಿ ಶೋಭಿಸುತ್ತಿರುವ ಯಾಗಮಂಟಪದಲ್ಲಿ ಕೃಷ್ಣಾಜಿನ ಜಟಾಭಸ್ಮ ರುದ್ರಾಕ್ಷಿಗಳನ್ನು ಧರಿಸಿಕೊಂಡು ಯಜ್ಞದೀಕ್ಷಾ ಬದ್ಧನಾಗಿ ಕುಳಿತು ತದುಚಿತ ಕರ್ಮಗಳನ್ನು ಮಾಡುತ್ತಲಿರುವ ತನ್ನ ಕುಮಾರನಾದ ಮೇಘನಾದನನ್ನು ನೋಡಿ ಹರ್ಷದಿಂದ ಬಿಗಿ ದಪ್ಪಿ ಮುದ್ದಿಸಿ-ಇದೇನು ನಿನ್ನ ಮಹೋದ್ಯೋಗವು 1 ಶೀಘ್ರವಾಗಿ ತಿಳಿಸೆನಲು ; ಆಗ ಕುಲಗುರುವಾದ ಶುಕ್ರಾಚಾರ್ಯನು ರಾವಣನನ್ನು ಕುರಿತು--ಎಲೈ ರಾಕ್ಷ ಸರಾಜನೇ, ನಿನ್ನ ಕುಮಾರನಾದ ಮೇಘನಾದನು ಅಶ್ವಮೇಧ ಅಗ್ನಿ ಷೇಮ ಆಪ್ಲೊ ರ್ಯಾಮ ಗೋಮೇಧ ವೈಷ್ಣವ ರಾಜಸೂಯವಾಜಪೇಯಗಳೆಂಬ ಸಪ್ತಯಜ್ಞಗ ಳನ್ನು ಮಾಡಿ ಮುಗಿಸಿ ಆ ಮೇಲೆ ಮಾಹೇಶ್ವರ ಯಜ್ಞವನ್ನು ಆರಂಭಿಸಿದನು. ವಿಧ್ಯ ನುಸಾರವಾಗಿ ಅದೂ ಮುಗಿಯುವ ಕಾಲದಲ್ಲಿ ತುಷ್ಟನಾದ ಪರಮೇಶ್ವರನು ಪ್ರತ್ಯ ಕ್ಷನಾಗಿ ಬಂದು ಧನುರ್ಬಾಣ ಶಕ್ತಿಗದಾ ಖಡ್ಡ ಕುಠಾರಾದ್ಯಾಯುಧಗಳನ್ನೂ ರಣದಲ್ಲಿ ಅರಿದುರ್ಜಯವಾದ ರಥವನ್ನೂ ಯುದ್ದ ಕಾಲದಲ್ಲಿ ತಾನು ವೈರಿಗಳಿಗೆ ಗೋಚರನಾಗದೆ ಇದ್ದು ಕೊಂಡು ಅವರ ಮೇಲೆ ಬಾಣಪ್ರಯೋಗವನ್ನು ಮಾಡುತ್ತ ಅವರನ್ನು ಜಯಿಸುವುದಕ್ಕೆ ಸಹಾಯಭೂತವಾದ ತಾಮಸಿಯೆಂಬ ಮಾಯಾವಿದ್ಯೆ ಯನ್ನೂ ನಿನ್ನ ಮಗನಿಗೆ ಕರುಣಿಸಿದನು, ವಂಶರತ್ನ ಪ್ರಾಯನಾದ ಈ ಮೇಘನಾದ ನಿಂದ ಮುಂದೆ ನಿನಗೆ ಸಕಲಕಾರ್ಯಸಿದ್ದಿಯ ಉಂಟಾಗುವುದು ಎಂದನು. ರಾವ ಣನು ಆ ಮಾತನ್ನು ಕೇಳಿ ನಸುನಗುತ್ತ..ಎಲೈ ಪುತ್ರನೇ, ನಮಗೆ ವಿರೋಧಿಪಕ್ಷದ ಲ್ಲಿರುವ ಇಂದ್ರಾದಿ ದೇವತೆಗಳನ್ನು ಸೇವಿಸಬಹುದೇ ? ನೀನು ಬುದ್ಧಿಯಿಲ್ಲದವನೆಂದು ಹೇಳಿ ಮಗನ ಕೈಯನ್ನು ಹಿಡಿದು ಕರೆದುಕೊಂಡು ವಿಭೀಷಣಾದಿಗಳೊಡನೆ ತನ್ನ ರಮ ನೆಗೆ ಬಂದು ಅವರವರ ಮನೆಗಳಿಗೆ ಹೋಗುವಂತೆ ಸರ್ವರಿಗೂ ಅಪ್ಪಣೆಯನ್ನು ಕೊಟ್ಟು ಕಳುಹಿಸಿದನು. ಆಗ ವಿಭೀಷಣನು ಏಕಾಂತಸ್ಥಳದಲ್ಲಿ ರಾವಣನನ್ನು ಕುರಿತು.ಎಲೈ ಅಣ್ಣನೇ, ನೀನು ದಿಗ್ವಿಜಯವನ್ನು ಮಾಡಿದುದು ಸರಿಯಾದ ಕಾರ್ಯವೇ, ಆದರೆ ನೀನು ಪರಪತ್ನಿ ಯರನ್ನು ಬಲಾತ್ಕಾರದಿಂದ ಹಿಡಿದು ತಂದುದು ಮಾತ್ರ ಬಲು ಕೆಟ್ಟ ಕೆಲಸವು, ಆ ಸ್ತ್ರೀಯರ ದುಃಖಾತಿರೇಕವು ನಿನ್ನ ಪರಾಕ್ರಮಾತಿಶಯಕ್ಕೆ ಅಮಂಗಲ ಕರವಾಗಿಯ ಹಾನಿಕರವಾಗಿಯ ಸಂಭವಿಸಿದ ವರ್ತಮಾನವನ್ನು ಹೇಳುವೆನು ಕೇಳು. ಮಧುವೆಂಬ ದನುಜನು ಬಂದು ನಿನ್ನ ಸೇನೆಯನ್ನು ಕೊಂದು ಉಳಿದುದನ್ನು ಹಿಂದಟ್ಟಿ ಅಂತಃಪುರದೊಳಹೊಕ್ಕು ನಮ್ಮ ತಾಯಿಯ ತಂಗಿಯಾದ ಕುಂಭೀನಸಿ ಯನ್ನು ಹಿಡಿದು ಕೊಂಡು ಹೋದನು. ಮಾಡಿದವರಿಗೆ ಮಾಡಿದಷ್ಟೆಂಬ ಗಾಧೆಯು ನಿನ್ನಲ್ಲೇ ನಿದರ್ಶನಕ್ಕೆ ಬಂದಿತೆಂದು ಹೇಳಲು ; ರಾವಣನು-ಇದೇನು ಮಹಾಶ್ವ<noinclude></noinclude> t0kjfzrjsjcqtp6ulai37o8irt3u45s ಪುಟ:ಕಥಾ ಸಂಗ್ರಹ - ಭಾಗ ೨.djvu/೩೨ 104 44592 324273 106944 2026-06-03T11:53:49Z Vinoda mamatharai 3222 /* Proofread */ 324273 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=22 |right=}}</noinclude> ರ್ಯವು ? ನೀನೂ ಮೇಘನಾದನೂ ಕುಂಭಕರ್ಣನೂ ಏನುಮಾಡುತ್ತಿದ್ದೀರಿ ? ಎಲ್ಲಿದ್ವಿರಿ ? ಎಂದು ಕೇಳಲು ; ವಿಭೀಷಣನು-ನಾನು ಆಘಮರ್ಷಣಾಮಂತ್ರವನ್ನು ಜಪಿಸುತ್ತ ನೀರಿನಲ್ಲಿ ಮುಳುಗಿದ್ದೆನು, ಮೇಘನಾದನು ನಿಕುಂಭಿಳೆಯಲ್ಲಿ ಯಾಗಮಾಡುತಿದ್ದನು: ಕುಂಭಕರ್ಣನು ನಿದ್ರಿಸುತ್ತಿದ್ದನು, ಮಿಕ್ಕ ರಾಕ್ಷಸಕುಮಾರರು ಏನು ಮಾಡಬಲ್ಲರು ? ಎಂದು ಹೇಳಿದನು. {{gap}}ಆಗ ರಾವಣನು ಆ ಮಾತನ್ನು ಕೇಳಿದ ಮಾತ್ರದಿಂದಲೇ ಕೋಧಕಂಪಿತಶ ರೀರನಾಗಿ ಇಪ್ಪತ್ತು ಕಣ್ಣಳಿಂದಲೂ ರಕ್ತಿಮೆಯನ್ನು ಗುಳತ್ತ ಕೂಡಲೆ ಲಂಕಾನಗರದ ಸಂರಕ್ಷಣೆಗಾಗಿ ಕೆಲವು ಜನ ರಾಕ್ಷಸ ಸೇನಾಪತಿಗಳೊಡನೆ ವಿಭೀಷಣನನ್ನು ನೇಮಿಸಿ-- ಮಧುದೈತ್ಯನನ್ನು ಮೊದಲು ಯಮಪುರಕ್ಕೆ ಕಳುಹಿಸಿ ಅಲ್ಲಿಂದ ಅಮರಾವತಿಗೆ ಹೋಗಿ ಇಂದ್ರನ ಗರ್ವವನ್ನು ಮುರಿದು ದೇವತೆಗಳನ್ನು ಹಿಂಡುವೆನು, ಜಗಳದಲ್ಲಿ ನನಗೆ ಯಾರಿದಿರು ? ಎಂದು ಔಡುಗಳನ್ನು ಕಚ್ಚು ತ್ಯ ಹಲ್ಲ ಡಿದು ಮೊರೆದು ಗರ್ಜಿಸುತ್ತ ಅನೇಕ ಸೇನಾಜಾಲದೊಡನೆ ಕೂಡಿ ಹೊರಡಲು ; ಆಗ ಜೈತ್ರಯಾತ್ರಾಸೂಚಕವಾದ ಭೇರೀಧ್ವನಿಯು ನರನಾಗಾಮರಲೋಕಗಳನ್ನು ಬೆದರಿಸಿತು, ಕೂಡಲೆ ಕುಂಭಕರ್ಣ ಮೇಘನಾದಾದಿ ಸಮಸ್ತ ರಾಕ್ಷಸವೀರರೂ ಹೊರಟರು. ಆ ಮಹದಾಶ್ಚರ್ಯವನ್ನು ಬಣ್ಣಿಪರಾರು ? ಆನೆ ಕುದುರೆ ತೇರು ಕೋಣ ಗೂಳಿ ಸಿಂಹ ಶರಭ ಹುಲಿ ಹಂದಿ ಹೇಸರಗತ್ತೆ ಇವೇ ಮೊದಲಾದ ತಮ್ಮ ತಮ್ಮ ವಾಹನಗಳನ್ನೇರಿ ವಿವಿಧಾಯುಧಗ ಳನ್ನು ಧರಿಸಿ ಕಾಲಭೈರವನ ದಂಡೋ ? ಮೃತ್ಯುವಿನ ಬಳಗವೋ ? ಭೂತರಾಜನ ಪಡೆಯೋ ? ಎಂಬಂತೆ ಸಮಸ್ಯೆ ಪ್ರಾಣಿಗಳಲ್ಲೂ ಭೀತಿಯ ಬೀಜವನ್ನು ಬಿತ್ತುತ್ಯ ದಶ ಮುಖನ ಸೇನೆಯು ಹೊರಟಿತು. ಆಗ ಸೇನಾಗ್ರದಲ್ಲಿ ಮೇಘನಾದನೂ ಹಿಂಗಡೆ ಯಲ್ಲಿ ಕುಂಭಕರ್ಣನೂ ಮಧ್ಯದಲ್ಲಿ ರಾವಣನೂ ಬರುತ್ತಿದ್ದರು. ಈ ರೀತಿಯಾದ ಸಮರಸನ್ನಾ ಹದಿಂದ ಕೂಡಿದ ರಾಕ್ಷಸಬಲವು ವಿಲಯ ಕಾಲದಲ್ಲಿ ಮೇರೆದಪ್ಪಿ ಬಂದ ಮಹಾಸಾಗರವು ಬ್ರಹ್ಮಾಂಡಮಂಡಲವನ್ನು ವ್ಯಾಪಿಸುವಂತೆ ಮಧುದನು ಜನಪರ ವನ್ನು ಮುತ್ತಿತು, ಅಲ್ಲಿಗೊಡೆಯನಾದ ಮಧುರೈತ್ಯನು ಪೂರ್ವದಲ್ಲಿ ಸದ್ಭಕ್ತಿಯಿಂದ ಶಿವನನ್ನು ಮೆಚ್ಚಿಸಿ ಒಂದು ತ್ರಿಶೂಲಾಯುಧವನ್ನು ಪಡೆದಿರುವನು. ಅದನ್ನು ಕೈಯಲ್ಲಿ ಹಿಡಿದು ಕೊಂಡು ಕಾಳಗಕ್ಕೆ ಹೊರಟರೆ ಹರನೊಬ್ಬನು ಹೊರತು ಮತ್ತಾರೂ ಎದುರಿಗೆ ನಿಂತು ತರಹರಿಸಲಾರರು. ಮಧುದೈತ್ಯನು ತನಗೆ ಇಂಥ ಉತ್ಕೃಷ್ಟಾಯುಧವಿದೆ ಯೆಂಬ ಗರ್ವದಿಂದ ರಾವಣನ ಸೈನ್ಯವನ್ನು ಲಕ್ಷಕ್ಕೆ ತಾರದೆ ಧೈರ್ಯದಿಂದಿದ್ದನು. ಅಷ್ಟರಲ್ಲಿ ರಾವಣನ ಚಿಕ್ಕಮ್ಮನಾದ ಕುಂಭೀನಸಿಯು ಶೀಘ್ರವಾಗಿ ಸೇನಾಮಧ್ಯದ ಲ್ಲಿರುವ ರಾವಣನ ಬಳಿಗೆ ಬಂದು ನಿಂತು ಅವನನ್ನು ಕುರಿತು-ಎಲೈ ಕುಮಾರನಾದ ದಶಕಂಧರನೇ, ಕೇಳು. ನನ್ನಲ್ಲಿ ಕನಿಕರವನ್ನಿಡು. ಕುಲಸ್ತ್ರೀಯರಿಗೆ ವೈಧವ್ಯಕ್ಕಿಂತ ಲೂ ಅತಿಶಯವಾದ ದುಃಖವು ಮತ್ತೊಂದಿಲ್ಲ, ನನ್ನ ಮೇಲೆ ದೃಷ್ಟಿಯಿಟ್ಟು ನನ್ನ ಪತಿಯಾದ ಮಧುದನುಜನನ್ನು ಕಾಪಾಡು, ನನ್ನ ಮಾತನ್ನು ಮಾರದೆ ನಡಿಸೆಂದು ಬಹುವಿಧವಾಗಿ ಬೇಡಿಕೊಳ್ಳಲು ; ಆಗ ರಾವಣನು- ನಿನ್ನ ಗಂಡನನ್ನು ಕರೆ ! ಭಯ<noinclude></noinclude> bp4y8jqku73aboataog0d27j5oeqhn9 324274 324273 2026-06-03T11:54:53Z Vinoda mamatharai 3222 324274 proofread-page text/x-wiki <noinclude><pagequality level="3" user="Vinoda mamatharai" />{{rh|center= ಕಥಾಸಂಗ್ರಹ-೪ ನೆಯ ಭಾಗ|left=22 |right=}}</noinclude> ರ್ಯವು ? ನೀನೂ ಮೇಘನಾದನೂ ಕುಂಭಕರ್ಣನೂ ಏನುಮಾಡುತ್ತಿದ್ದೀರಿ ? ಎಲ್ಲಿದ್ಡೀರಿ ? ಎಂದು ಕೇಳಲು ; ವಿಭೀಷಣನು-ನಾನು ಆಘಮರ್ಷಣಾಮಂತ್ರವನ್ನು ಜಪಿಸುತ್ತ ನೀರಿನಲ್ಲಿ ಮುಳುಗಿದ್ದೆನು, ಮೇಘನಾದನು ನಿಕುಂಭಿಳೆಯಲ್ಲಿ ಯಾಗಮಾಡುತಿದ್ದನು: ಕುಂಭಕರ್ಣನು ನಿದ್ರಿಸುತ್ತಿದ್ದನು, ಮಿಕ್ಕ ರಾಕ್ಷಸಕುಮಾರರು ಏನು ಮಾಡಬಲ್ಲರು ? ಎಂದು ಹೇಳಿದನು. {{gap}}ಆಗ ರಾವಣನು ಆ ಮಾತನ್ನು ಕೇಳಿದ ಮಾತ್ರದಿಂದಲೇ ಕೋಧಕಂಪಿತಶ ರೀರನಾಗಿ ಇಪ್ಪತ್ತು ಕಣ್ಣಳಿಂದಲೂ ರಕ್ತಿಮೆಯನ್ನು ಗುಳತ್ತ ಕೂಡಲೆ ಲಂಕಾನಗರದ ಸಂರಕ್ಷಣೆಗಾಗಿ ಕೆಲವು ಜನ ರಾಕ್ಷಸ ಸೇನಾಪತಿಗಳೊಡನೆ ವಿಭೀಷಣನನ್ನು ನೇಮಿಸಿ-- ಮಧುದೈತ್ಯನನ್ನು ಮೊದಲು ಯಮಪುರಕ್ಕೆ ಕಳುಹಿಸಿ ಅಲ್ಲಿಂದ ಅಮರಾವತಿಗೆ ಹೋಗಿ ಇಂದ್ರನ ಗರ್ವವನ್ನು ಮುರಿದು ದೇವತೆಗಳನ್ನು ಹಿಂಡುವೆನು, ಜಗಳದಲ್ಲಿ ನನಗೆ ಯಾರಿದಿರು ? ಎಂದು ಔಡುಗಳನ್ನು ಕಚ್ಚು ತ್ಯ ಹಲ್ಲ ಡಿದು ಮೊರೆದು ಗರ್ಜಿಸುತ್ತ ಅನೇಕ ಸೇನಾಜಾಲದೊಡನೆ ಕೂಡಿ ಹೊರಡಲು ; ಆಗ ಜೈತ್ರಯಾತ್ರಾಸೂಚಕವಾದ ಭೇರೀಧ್ವನಿಯು ನರನಾಗಾಮರಲೋಕಗಳನ್ನು ಬೆದರಿಸಿತು, ಕೂಡಲೆ ಕುಂಭಕರ್ಣ ಮೇಘನಾದಾದಿ ಸಮಸ್ತ ರಾಕ್ಷಸವೀರರೂ ಹೊರಟರು. ಆ ಮಹದಾಶ್ಚರ್ಯವನ್ನು ಬಣ್ಣಿಪರಾರು ? ಆನೆ ಕುದುರೆ ತೇರು ಕೋಣ ಗೂಳಿ ಸಿಂಹ ಶರಭ ಹುಲಿ ಹಂದಿ ಹೇಸರಗತ್ತೆ ಇವೇ ಮೊದಲಾದ ತಮ್ಮ ತಮ್ಮ ವಾಹನಗಳನ್ನೇರಿ ವಿವಿಧಾಯುಧಗ ಳನ್ನು ಧರಿಸಿ ಕಾಲಭೈರವನ ದಂಡೋ ? ಮೃತ್ಯುವಿನ ಬಳಗವೋ ? ಭೂತರಾಜನ ಪಡೆಯೋ ? ಎಂಬಂತೆ ಸಮಸ್ಯೆ ಪ್ರಾಣಿಗಳಲ್ಲೂ ಭೀತಿಯ ಬೀಜವನ್ನು ಬಿತ್ತುತ್ಯ ದಶ ಮುಖನ ಸೇನೆಯು ಹೊರಟಿತು. ಆಗ ಸೇನಾಗ್ರದಲ್ಲಿ ಮೇಘನಾದನೂ ಹಿಂಗಡೆ ಯಲ್ಲಿ ಕುಂಭಕರ್ಣನೂ ಮಧ್ಯದಲ್ಲಿ ರಾವಣನೂ ಬರುತ್ತಿದ್ದರು. ಈ ರೀತಿಯಾದ ಸಮರಸನ್ನಾ ಹದಿಂದ ಕೂಡಿದ ರಾಕ್ಷಸಬಲವು ವಿಲಯ ಕಾಲದಲ್ಲಿ ಮೇರೆದಪ್ಪಿ ಬಂದ ಮಹಾಸಾಗರವು ಬ್ರಹ್ಮಾಂಡಮಂಡಲವನ್ನು ವ್ಯಾಪಿಸುವಂತೆ ಮಧುದನು ಜನಪರ ವನ್ನು ಮುತ್ತಿತು, ಅಲ್ಲಿಗೊಡೆಯನಾದ ಮಧುರೈತ್ಯನು ಪೂರ್ವದಲ್ಲಿ ಸದ್ಭಕ್ತಿಯಿಂದ ಶಿವನನ್ನು ಮೆಚ್ಚಿಸಿ ಒಂದು ತ್ರಿಶೂಲಾಯುಧವನ್ನು ಪಡೆದಿರುವನು. ಅದನ್ನು ಕೈಯಲ್ಲಿ ಹಿಡಿದು ಕೊಂಡು ಕಾಳಗಕ್ಕೆ ಹೊರಟರೆ ಹರನೊಬ್ಬನು ಹೊರತು ಮತ್ತಾರೂ ಎದುರಿಗೆ ನಿಂತು ತರಹರಿಸಲಾರರು. ಮಧುದೈತ್ಯನು ತನಗೆ ಇಂಥ ಉತ್ಕೃಷ್ಟಾಯುಧವಿದೆ ಯೆಂಬ ಗರ್ವದಿಂದ ರಾವಣನ ಸೈನ್ಯವನ್ನು ಲಕ್ಷಕ್ಕೆ ತಾರದೆ ಧೈರ್ಯದಿಂದಿದ್ದನು. ಅಷ್ಟರಲ್ಲಿ ರಾವಣನ ಚಿಕ್ಕಮ್ಮನಾದ ಕುಂಭೀನಸಿಯು ಶೀಘ್ರವಾಗಿ ಸೇನಾಮಧ್ಯದ ಲ್ಲಿರುವ ರಾವಣನ ಬಳಿಗೆ ಬಂದು ನಿಂತು ಅವನನ್ನು ಕುರಿತು-ಎಲೈ ಕುಮಾರನಾದ ದಶಕಂಧರನೇ, ಕೇಳು. ನನ್ನಲ್ಲಿ ಕನಿಕರವನ್ನಿಡು. ಕುಲಸ್ತ್ರೀಯರಿಗೆ ವೈಧವ್ಯಕ್ಕಿಂತ ಲೂ ಅತಿಶಯವಾದ ದುಃಖವು ಮತ್ತೊಂದಿಲ್ಲ, ನನ್ನ ಮೇಲೆ ದೃಷ್ಟಿಯಿಟ್ಟು ನನ್ನ ಪತಿಯಾದ ಮಧುದನುಜನನ್ನು ಕಾಪಾಡು, ನನ್ನ ಮಾತನ್ನು ಮಾರದೆ ನಡಿಸೆಂದು ಬಹುವಿಧವಾಗಿ ಬೇಡಿಕೊಳ್ಳಲು ; ಆಗ ರಾವಣನು- ನಿನ್ನ ಗಂಡನನ್ನು ಕರೆ ! ಭಯ<noinclude></noinclude> 8w83v5vrxr17rvh7e4mzeht6q33agu5 ಪುಟ:ಅರಮನೆ.pdf/೮೫ 104 77170 324133 169880 2026-06-03T02:21:24Z Shreelatha.Halemane 7642 /* Proofread */ 324133 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|center=|left=೫೪|right=ಅರಮನೆ}} ನಿಲುಗಲ್ಲುಗಳುಳ್ಳ ಕೋಳಿಗುಡ್ಡವು, {{gap}}ಬೂದಿಗುಡ್ಡದ ಮಯ್ಯ ತುಂಬೆಲ್ಲಾ ಯಿರುವ ನಿಲುಗಲ್ಲುಗಳು ವಟ್ಟು ಸಾವುರದಾ ಅಯ್ನೂರಾವಂದು. ಅವುಗಳು ಯಾವುವೆಂದರೆ ಸುಗ್ಗುಣಾಸುರ, ಮಗ್ಗುಲಾಸುರ, ನೆಗ್ಗಲಾಸುರ, ತಗ್ಗಲಾಸುರ, ಯೇಕಾಂತಾಸುರ, ಬೊಮ್ಮಲಾಸುರ, ಕಾಟಾಸುರ, ಜಕ್ಕಂತಾಸುರ ಯಿವೇ ಮೊದಲಾದವು. {{gap}}ಯಿವು ಬರೀ ಕಲ್ಲು ಗುಂಡುಗಳಲ್ಲ. ವಂದೊಂದಕ್ಕೆ ಪಂಚ ಯಿಂದ್ರಿಯಗಳುಂಟು. ಕಯ್ಯಿ ಕಾಲುಗಳುಂಟು. ಮತ್ತೇನೆಲ್ಲಾ ವುಂಟು. ಗುಡ್ಡ ಗುಡ್ಡದ ನಡುವೆ ಯಗಸ್ತನ ವುಂಟು, ಬೀಗಸ್ತನ ವುಂಟು. ಆ ಗುಡ್ಡದ ಕಲ್ಲುಗಳು ಯೀ ಗುಡ್ಡಕೆ, ಯೀ ಗುಡ್ಡದ ಕಲ್ಲುಗಳು ಆ ಗುಡ್ಡಕ ಬರೋದು ಹೋಗೋದು ಮಾಡುತಾಯಿರುತವೆ. ಮಾತಾಡಿಕಂತ ಯಿರುತವೆ, ಜಗಳಾಡುಕಂತವೆ, ಕಿತ್ತಾಡಕಂತವೆ, ಪರಸ್ಪರ ಮದುವೆ ಮುಂಜಿ ಸೋಬನ ಪ್ರಸ್ತ ಮಾಡಕಂತಿರುತ್ತವೆ, ಹೆಣ್ಣು ಕಲ್ಲುಗಳು ಬೊಸುರಾಗ ತಿರುತವೆ, ಯಿನ್ನೊಂದು ಕಲ್ಲಿಗೆ ಜಲುಮ ನೀಡುತಿರುತವೆ. {{gap}}- ಸದರಿ ಪಟ್ಟಣದೊಳಗ ಯಮಧರುಮ ಬರೋ ಧಯ್ರ ಮಾಡೋದು ಕಡಿಮೆ. ಅದಕ ಮುಪ್ಪಾನು ಮುದೇರು ಮನೆಗೊಬ್ಬರಂತಿದಾರ, ತಮಗ ಸಾವು ಬರವಲ್ಲದು ಬರವಲ್ಲದು ಅಂತನ ಕಂತಿರುತಾರ, ತಮ್ಮ ತಮ್ಮ ಪುಣ್ಯ ಬಲವಶಾತ್ ಸತ್ತೋರು ತಾವಂದು ಕೋಡು ಗಲ್ಲಾಗಿ ಯಾದಾರ ಗುಡ್ಡದೊಳಗ ಸ್ಥಾನ ಪಡಕಂತಾರೆ, ಯಿನ್ನೊಂದು ಸಂಗತಿ ಅಂದರೆ ಸದರಿ ಪಟ್ಟಣದ ಹೆಂಗಸರು ತಮ ಬಸುರೊಳಗ ಮೂಡೋದು ನಿಲುಗಲ್ಲು ಯಂದು ನಂಬುತ್ತಾರೆ, ಹುಟ್ಟುವ ಕೂಸಿಗೆ ನಿಡುಗಲ್ಲುಗಳ ಪಯ್ಕೆ ಹೆಸರೊಂದನ್ನು ಹುಡುಕಿ ತೆಗೆಸಿ ಯಿಡುತಾರೆ, ಗುಡ್ಡದ ಕಲ್ಲುಗಳು ಪಟ್ಟಣದ ಮ್ಯಾಲ, ಪಟ್ಟಣದ ಮಂದಿ ಗುಡ್ಡದ ಕಲ್ಲುಗಳ ಮ್ಯಾಲ ಸದಾ ನಿಗಾ ಯಿಟ್ಟಿರುತಾರ.. {{gap}}- ಸದರಿ ಪಟ್ಟಣ ಭೂಮಿ ಮ್ಯಾಲ ಯಾವಾಗ ಮೂಡಿತು, ಯಾವತ್ತು ತನಗ ಕುದುರೆಡವು ಯಂಬ ನಾಮ ಪಡಕಂತು ಯಂಬುದಕ ವಂದು ಕಥವುಂಟು. {{gap}}ಅದು ಯಾವುದೆಂದರೆ.... {{gap}}ಕುದುರೆಡವು ಪಟ್ಟಣದ ಮೂಡಲಗಡೇಲಿರುವ ಗುಡೇಕೋಟೆಯಂಬ ದುಗ್ಗವನ್ನು ವಳಿತು ಮಾಡಿಕೊಂಡು ಆಳುತ್ತಿದ್ದಂಥಾ ರಣ ಕದಿರೇ ನಾಯಕನಿಗೆ ವಂದು ಕಾಲದಲ್ಲಿ ಯುದುರೆಂಬುದು ಯಿರಲಿಲ್ಲ. ತನಗೆ ತಾನೇ<noinclude><references/></noinclude> jnimgi2gupp9c8qs5xn2ituftpzy89r ಪುಟ:ಕ್ರಾಂತಿ ಕಲ್ಯಾಣ.pdf/೪೭೪ 104 86401 324118 203726 2026-06-03T00:56:17Z Shreesha Sharma 7840 /* Proofread */ 324118 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೬೧}} {{gap}}“ಆ ಭಯವಿಲ್ಲ, ಅಣ್ಣನವರೆ, ಪ್ರವಾಹ ಪುನಃ ಹೆಚ್ಚುತ್ತಿದೆ. ಇನ್ನೆರಡು ದಿನಗಳು ನದಿಯನ್ನು ದಾಟುವುದು ಯಾರಿಗೂ ಸಾಧ್ಯವಲ್ಲ.” {{gap}}-ಗಣಾಚಾರಿ ನಾಯಕನು ಉತ್ತರಿಸಿದನು. {{gap}}“ಕಲಿದೇವರ ದೇವನು ಶರಣರನ್ನು ರಕ್ಷಿಸಿದನು, ನಾಯಕ. ಈ ರಾತ್ರಿಯೇ ಈ ಸ್ಥಳವನ್ನು ಬಿಡುವುದು ನನ್ನ ಉದ್ದೇಶವಾಗಿತ್ತು. ಅದಕ್ಕಾಗಿಯೇ ತೆಪ್ಪ ದೋಣಿಗಳನ್ನು ತರುವಂತೆ ಅಂಬಿಗರಿಗೆ ಹೇಳಿದ್ದೆ. ಈಗ ಆ ಆಸೆ ಮಣ್ಣುಗೂಡಿತು.” {{gap}}-ವಿಷಣ್ಣತೆಯಿಂದ ನುಡಿದರು ಮಾಚಿದೇವರು. {{gap}}ತುಸು ಹೊತ್ತಿನ ಮೇಲೆ ಗಣಾಚಾರಿ ನಾಯಕನು ನಿಟ್ಟುಸಿರಿಟ್ಟು ಹೇಳಿದನು: “ಕಣಿವೆಗೆ ನುಗ್ಗಿ ಬಂದ ಶತೃ ರಾಹುತರು ನಮ್ಮ ಬಲೆಯಲ್ಲಿ ಸಿಕ್ಕು ಹತರಾದಂತೆ ಈಗ ನಾವು ಶತೃಗಳ ಪಂಜರದಲ್ಲಿ ಸಿಕ್ಕಿ ಬಿದ್ದಿದ್ದೇವೆ, ಅಣ್ಣನವರೆ. ನದಿಯ ಹೊರತಾಗಿ ಉಳಿದೆಲ್ಲ ಕಡೆ ಶತೃ ಸೈನ್ಯ ನಮ್ಮನ್ನು ಸುತ್ತುಗಟ್ಟಿದೆ. ಬೆಳಕು ಹರಿಯುತ್ತಲೆ ಸೈನ್ಯ ನಮ್ಮ ಮೇಲೆ ಬೀಳುತ್ತದೆ. ನದಿ ದಾಟಿ ತಪ್ಪಿಸಿಕೊಳ್ಳಲು ಪ್ರವಾಹ ಅಡ್ಡಿಯಾಗಿದೆ. ಹೋರಾಡಿ ಶತೃವನ್ನು ಸೋಲಿಸುವುದು, ಇಲ್ಲವೇ ಹತರಾಗಿ ವೀರಸ್ವರ್ಗ ಪಡೆಯುವುದು, ಇವೆರಡೇ ಈಗ ನಮಗುಳಿದಿರುವ ಮಾರ್ಗ” {{gap}}ನಾಯಕನ ನಿರಾಶೆಯ ನುಡಿ ಕೇಳಿ ಮಾಚಿದೇವರ ಚೈತನ್ಯ ಎಚ್ಚೆತ್ತಿತು. ನಸು ನಕ್ಕು ಅವರು ಹೇಳಿದರು : ನಿರಾಶರಾಗುವ ಕಾರಣವಿಲ್ಲ, ತಮ್ಮ ಇಂದು ಮುಂಜಾವಿಯಲ್ಲಿ ಶರಣರ ಯಾತ್ರಾದಳವನ್ನು ನದಿ ದಾಟಿಸುವೆವೆಂಬ ಭರವಸೆ ನಮಗಿರಲಿಲ್ಲ. ಕಲಿದೇವರ ದೇವನ ದಯೆಯಿಂದ ಆ ಕಾರ್ಯ ಸುಗಮವಾಗಿ ನಡೆಯಿತು. ನಮ್ಮನ್ನು ನಾಶಮಾಡಲು ಬಂದ ರಾಹುತರು ದೀಪಕ್ಕೆರಗಿದ ಚಿಟ್ಟೆಗಳಂತೆ ತಮ್ಮ ಅವಿವೇಕದಿಂದ ತಾವೇ ನಾಶವಾದರು. ಇದುವರೆಗೆ ನಮ್ಮನ್ನು ರಕ್ಷಿಸಿದ ಆ ಅದೃಷ್ಟ ಶಕ್ತಿ ಮುಂದೆಯೂ ನಮ್ಮನ್ನು ರಕ್ಷಿಸುವುದು. ನಾಳಿನ ಯುದ್ದದಲ್ಲಿ ನನ್ನ ಎರಡು ನಿಬಂಧನೆಗಳಿವೆ. ಅದರಂತೆ ನೀನು ನಡೆಯಬೇಕು. {{gap}}ನಾಯಕನು ನಡೆಯುವುದಾಗಿ ಒಪ್ಪಿಕೊಂಡನು. {{gap}}ಮಾಚಿದೇವರು ಹೇಳಿದರು : “ನಾಳಿನ ದಿನ ನಾವು ಮಾಧವ ನಾಯಕನ ಆಕ್ರಮಣಕ್ಕಾಗಿ ಎದುರು ನೋಡದೆ ಬೆಳಕು ಹರಿಯುವ ಮುನ್ನ ನಾವೇ ಶತೃ ಶಿಬಿರದ ಮೇಲೆ ಆಕ್ರಮಣ ನಡೆಸಬೇಕು. ಇದು ನಿನಗೊಪ್ಪಿಗೆಯಾದರೆ ನನ್ನ ಎರಡನೆಯ ನಿಬಂಧನೆಯನ್ನು ಹೇಳುತ್ತೇನೆ.” {{gap}}“ನಾನು ಕೂಡ ಅದನ್ನೇ ಯೋಚಿಸುತ್ತಿದ್ದೆ, ಅಣ್ಣನವರೆ. ಶತೃವಿಗೆ ವಿಶ್ರಮಿಸಿಕೊಳ್ಳುವ ಅವಕಾಶವನ್ನೂ ಕೊಡದೆ ನಾವೇ ಆಕ್ರಮಣ ಮಾಡುವುದರಿಂದ<noinclude></noinclude> hyyjwh3zw6ghhjnlvicc9r2mrbjcysr 324126 324118 2026-06-03T01:08:39Z Shreelatha.Halemane 7642 /* Validated */ 324126 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೬೧}} {{gap}}“ಆ ಭಯವಿಲ್ಲ, ಅಣ್ಣನವರೆ, ಪ್ರವಾಹ ಪುನಃ ಹೆಚ್ಚುತ್ತಿದೆ. ಇನ್ನೆರಡು ದಿನಗಳು ನದಿಯನ್ನು ದಾಟುವುದು ಯಾರಿಗೂ ಸಾಧ್ಯವಲ್ಲ.” {{gap}}-ಗಣಾಚಾರಿ ನಾಯಕನು ಉತ್ತರಿಸಿದನು. {{gap}}“ಕಲಿದೇವರ ದೇವನು ಶರಣರನ್ನು ರಕ್ಷಿಸಿದನು, ನಾಯಕ. ಈ ರಾತ್ರಿಯೇ ಈ ಸ್ಥಳವನ್ನು ಬಿಡುವುದು ನನ್ನ ಉದ್ದೇಶವಾಗಿತ್ತು. ಅದಕ್ಕಾಗಿಯೇ ತೆಪ್ಪ ದೋಣಿಗಳನ್ನು ತರುವಂತೆ ಅಂಬಿಗರಿಗೆ ಹೇಳಿದ್ದೆ. ಈಗ ಆ ಆಸೆ ಮಣ್ಣುಗೂಡಿತು.” {{gap}}-ವಿಷಣ್ಣತೆಯಿಂದ ನುಡಿದರು ಮಾಚಿದೇವರು. {{gap}}ತುಸು ಹೊತ್ತಿನ ಮೇಲೆ ಗಣಾಚಾರಿ ನಾಯಕನು ನಿಟ್ಟುಸಿರಿಟ್ಟು ಹೇಳಿದನು: “ಕಣಿವೆಗೆ ನುಗ್ಗಿ ಬಂದ ಶತ್ರು ರಾಹುತರು ನಮ್ಮ ಬಲೆಯಲ್ಲಿ ಸಿಕ್ಕು ಹತರಾದಂತೆ ಈಗ ನಾವು ಶತ್ರುಗಳ ಪಂಜರದಲ್ಲಿ ಸಿಕ್ಕಿ ಬಿದ್ದಿದ್ದೇವೆ, ಅಣ್ಣನವರೆ. ನದಿಯ ಹೊರತಾಗಿ ಉಳಿದೆಲ್ಲ ಕಡೆ ಶತ್ರುಸೈನ್ಯ ನಮ್ಮನ್ನು ಸುತ್ತುಗಟ್ಟಿದೆ. ಬೆಳಕು ಹರಿಯುತ್ತಲೆ ಸೈನ್ಯ ನಮ್ಮ ಮೇಲೆ ಬೀಳುತ್ತದೆ. ನದಿ ದಾಟಿ ತಪ್ಪಿಸಿಕೊಳ್ಳಲು ಪ್ರವಾಹ ಅಡ್ಡಿಯಾಗಿದೆ. ಹೋರಾಡಿ ಶತ್ರುವನ್ನು ಸೋಲಿಸುವುದು, ಇಲ್ಲವೇ ಹತರಾಗಿ ವೀರಸ್ವರ್ಗ ಪಡೆಯುವುದು, ಇವೆರಡೇ ಈಗ ನಮಗುಳಿದಿರುವ ಮಾರ್ಗ” {{gap}}ನಾಯಕನ ನಿರಾಶೆಯ ನುಡಿ ಕೇಳಿ ಮಾಚಿದೇವರ ಚೈತನ್ಯ ಎಚ್ಚೆತ್ತಿತು. ನಸು ನಕ್ಕು ಅವರು ಹೇಳಿದರು : ನಿರಾಶರಾಗುವ ಕಾರಣವಿಲ್ಲ, ತಮ್ಮ ಇಂದು ಮುಂಜಾವಿಯಲ್ಲಿ ಶರಣರ ಯಾತ್ರಾದಳವನ್ನು ನದಿ ದಾಟಿಸುವೆವೆಂಬ ಭರವಸೆ ನಮಗಿರಲಿಲ್ಲ. ಕಲಿದೇವರ ದೇವನ ದಯೆಯಿಂದ ಆ ಕಾರ್ಯ ಸುಗಮವಾಗಿ ನಡೆಯಿತು. ನಮ್ಮನ್ನು ನಾಶಮಾಡಲು ಬಂದ ರಾಹುತರು ದೀಪಕ್ಕೆರಗಿದ ಚಿಟ್ಟೆಗಳಂತೆ ತಮ್ಮ ಅವಿವೇಕದಿಂದ ತಾವೇ ನಾಶವಾದರು. ಇದುವರೆಗೆ ನಮ್ಮನ್ನು ರಕ್ಷಿಸಿದ ಆ ಅದೃಷ್ಟ ಶಕ್ತಿ ಮುಂದೆಯೂ ನಮ್ಮನ್ನು ರಕ್ಷಿಸುವುದು. ನಾಳಿನ ಯುದ್ದದಲ್ಲಿ ನನ್ನ ಎರಡು ನಿಬಂಧನೆಗಳಿವೆ. ಅದರಂತೆ ನೀನು ನಡೆಯಬೇಕು. {{gap}}ನಾಯಕನು ನಡೆಯುವುದಾಗಿ ಒಪ್ಪಿಕೊಂಡನು. {{gap}}ಮಾಚಿದೇವರು ಹೇಳಿದರು : “ನಾಳಿನ ದಿನ ನಾವು ಮಾಧವ ನಾಯಕನ ಆಕ್ರಮಣಕ್ಕಾಗಿ ಎದುರು ನೋಡದೆ ಬೆಳಕು ಹರಿಯುವ ಮುನ್ನ ನಾವೇ ಶತ್ರು ಶಿಬಿರದ ಮೇಲೆ ಆಕ್ರಮಣ ನಡೆಸಬೇಕು. ಇದು ನಿನಗೊಪ್ಪಿಗೆಯಾದರೆ ನನ್ನ ಎರಡನೆಯ ನಿಬಂಧನೆಯನ್ನು ಹೇಳುತ್ತೇನೆ.” {{gap}}“ನಾನು ಕೂಡ ಅದನ್ನೇ ಯೋಚಿಸುತ್ತಿದ್ದೆ, ಅಣ್ಣನವರೆ. ಶತ್ರುವಿಗೆ ವಿಶ್ರಮಿಸಿಕೊಳ್ಳುವ ಅವಕಾಶವನ್ನೂ ಕೊಡದೆ ನಾವೇ ಆಕ್ರಮಣ ಮಾಡುವುದರಿಂದ<noinclude></noinclude> aj8xuk7k8i914i7g2nh1g5ybrk8sdry ಪುಟ:ಕ್ರಾಂತಿ ಕಲ್ಯಾಣ.pdf/೪೭೬ 104 86402 324120 203727 2026-06-03T01:00:19Z Shreesha Sharma 7840 /* Proofread */ 324120 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೬೩}} ಹರಡಿತು. ಅನೇಕ ಮಂದಿ ಪದಾತಿಗಳು ಮಲಗಿದ್ದಂತೆಯೇ ಹತರಾದರು. ಕುದುರೆಗಳನ್ನು ಸಜ್ಜುಗೊಳಿಸುತ್ತಿದ್ದಂತೆ ರಾಹುತರನೇಕರು ಮಡಿದರು. ಸಾರಥಿಯನ್ನು ಹುಡುಕುತ್ತಿದ್ದ ರಥಿಕರಿಗೆ ಗಣಾಚಾರಿ ಯೋಧರ ಕತ್ತಿಗಳು ಮೃತ್ಯುವಾದವು. ಗಣಾಚಾರಿ ಯೋಧರು ಶೌರ್ಯ ಸಾಹಸಗಳಿಂದ ಮುನ್ನುಗ್ಗಿ ಶಿಬಿರದ ನಡುವೆ ಇದ್ದ ಮಾಧವ ನಾಯಕನ ಗೂಡಾರವನ್ನು ಸುತ್ತುಗಟ್ಟಿದರು. {{gap}}ಆಗ ತಾನೆ ಎಚ್ಚೆತ್ತು ಕಣ್ಮರೆಸಿಕೊಳ್ಳುತ್ತಿದ್ದ ಮಾಧವ ನಾಯಕನು, ಗಲಭೆಯ ಸದ್ದು ಕೇಳಿ, ತಟ್ಟನೆ ಎದ್ದು ಕತ್ತಿ ಹಿಡಿದು ಹೊರಗೆ ಬಂದನು. ಗಣಾಚಾರಿ ಯೋಧರ ಒಂದು ತಂಡ ಅವನಿಗೆ ಎದುರಾಯಿತು. ಸ್ವಯಂ ಮಾಚಿದೇವರು ಅದರ ಮುಂದಾಳಾಗಿದ್ದರು. ಗಣಾಚಾರಿ ನಾಯಕನೂ ಚೆನ್ನಬಸವಣ್ಣನವರೂ ಸಂಗಡಿದ್ದರು. {{gap}}ಮಾಧವ ನಾಯಕನನ್ನು ನೋಡುತ್ತಲೆ ಮಾಚಿದೇವರು, “ಕಲಿದೇವರ ದೇವ ಉಘ ಉಘ !” ಎಂದು ಜಯಕಾರ ಮಾಡಿ ಕತ್ತಿಯನ್ನು ಬೀಸುತ್ತ ಮೇಲೆ ಬಿದ್ದರು. ಶರಣರ ನಾಶಕ್ಕಾಗಿ ಪಣ ತೊಟ್ಟಿದ್ದ ಮಾಧವ ನಾಯಕನ ವಿಚಾರವನ್ನು ತನ್ನೊಬ್ಬರಿಗೆ ಬಿಡಬೇಕೆಂದು ಮಾಚಿದೇವರು ಮೊದಲೇ ಗಣಾಚಾರಿ ನಾಯಕನಿಗೆ ಹೇಳಿದ್ದರು. ಅದರಂತೆ ಗಣಾಚಾರಿ ಯೋಧರು ಮಾಧವ ನಾಯಕನ ಸಹಾಯಕ್ಕೆ ಬಂದ ಶಿಬಿರ ರಕ್ಷಕರನ್ನು ಹಿಂದಕ್ಕಟ್ಟಿ ಮಾಚಿದೇವ ಮಾಧವ ನಾಯಕರ ಕತ್ತಿ ಕಾಳಗಕ್ಕೆ ಎಡೆಮಾಡಿಕೊಟ್ಟರು. {{gap}}ಶಸ್ತ್ರಗಳನ್ನು ತ್ಯಜಿಸಿ ಸನ್ಯಾಸಿಯಾಗಿ ಜಂಗಮದೀಕ್ಷೆ ಪಡೆದು ಇಪ್ಪತ್ತು ವರ್ಷಗಳು ಕಳೆದಿದ್ದರೂ ಮಾಚಿದೇವರು ಖಡ್ಡಯುದ್ದದ ವರಿಸೆ ಪಟ್ಟುಗಳನ್ನು ಮರೆತಿರಲಿಲ್ಲ. ಕಾದಿಟ್ಟ ಆಪದ್ಧನದಂತೆ ಅದು ಅವರಿಗೆ ನೆರವಾಯಿತು. ಕೌಶಲದಿಂದ ಅವರು ಕಾಳಗವನ್ನು ಮೊದಲು ಮಾಡಿದರು. {{gap}}ಜಂಗಮವೇಷದ ವೃದ್ದಯೋಧನೊಬ್ಬನು ತನ್ನೊಡನೆ ಸೆಣೆಸಲು ಮುಂದಾದುದನ್ನು ಕಂಡು ಕ್ಷಣಕಾಲ ಸ್ತಬ್ಬನಾಗಿದ್ದ ಮಾಧವ ನಾಯಕನು, ಆಕ್ರಮಣದ ತೀವ್ರತೆಯಿಂದ ಚಮತ್ಕತನಾಗಿ ಮಿಂಚಿನಂತೆ ಹಾರಿ ಕತ್ತಿಯಾಡಿಸುತ್ತ ಪ್ರತಿಭಟಿಸಿದನು. ಪಟ್ಟಿಗೆ ಪಟ್ಟು ವರಿಸೆಗೆ ವರಿಸೆ, ಈ ಅನುಕ್ರಮದಲ್ಲಿ ಕೊಂಚ ಕಾಲ ಕಾಳಗ ನಡೆಯಿತು. ಕೊನೆ ಕೊನೆಗೆ ಮಾಚಿದೇವರ ಕೈಚಳಕ ಹೆಚ್ಚಿತು. “ಉಫ್ } ಉಘ! ಕಲಿದೇವರ ದೇವ !” ಎಂದು ಬೊಬ್ಬಿಡುತ್ತ ಅವರು ಮುನ್ನುಗ್ಗಿ ಕತ್ತಿಯಿರಿದಾಗ ಮಾಧವ ನಾಯಕನು ಆಹತನಾಗಿ ಕೆಳಗುರುಳಿದನು. ಅವನ ಕೊನೆ ಸಮೀಪಿಸಿದಂತೆ ಕಂಡಿತು. ಅಷ್ಟರಲ್ಲಿ ಶಿಬಿರದ ಮತ್ತೊಂದು ಕಡೆಯಿಂದ ತಮ್ಮ ನಾಯಕನ ರಕ್ಷಣೆಗಾಗಿ<noinclude></noinclude> 9meafc5dswjsftoxvgxkssfw8936miu 324128 324120 2026-06-03T01:12:01Z Shreelatha.Halemane 7642 /* Validated */ 324128 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೬೩}} ಹರಡಿತು. ಅನೇಕ ಮಂದಿ ಪದಾತಿಗಳು ಮಲಗಿದ್ದಂತೆಯೇ ಹತರಾದರು. ಕುದುರೆಗಳನ್ನು ಸಜ್ಜುಗೊಳಿಸುತ್ತಿದ್ದಂತೆ ರಾಹುತರನೇಕರು ಮಡಿದರು. ಸಾರಥಿಯನ್ನು ಹುಡುಕುತ್ತಿದ್ದ ರಥಿಕರಿಗೆ ಗಣಾಚಾರಿ ಯೋಧರ ಕತ್ತಿಗಳು ಮೃತ್ಯುವಾದವು. ಗಣಾಚಾರಿ ಯೋಧರು ಶೌರ್ಯ ಸಾಹಸಗಳಿಂದ ಮುನ್ನುಗ್ಗಿ ಶಿಬಿರದ ನಡುವೆ ಇದ್ದ ಮಾಧವ ನಾಯಕನ ಗೂಡಾರವನ್ನು ಸುತ್ತುಗಟ್ಟಿದರು. {{gap}}ಆಗ ತಾನೆ ಎಚ್ಚೆತ್ತು ಕಣ್ಮರೆಸಿಕೊಳ್ಳುತ್ತಿದ್ದ ಮಾಧವ ನಾಯಕನು, ಗಲಭೆಯ ಸದ್ದು ಕೇಳಿ, ತಟ್ಟನೆ ಎದ್ದು ಕತ್ತಿ ಹಿಡಿದು ಹೊರಗೆ ಬಂದನು. ಗಣಾಚಾರಿ ಯೋಧರ ಒಂದು ತಂಡ ಅವನಿಗೆ ಎದುರಾಯಿತು. ಸ್ವಯಂ ಮಾಚಿದೇವರು ಅದರ ಮುಂದಾಳಾಗಿದ್ದರು. ಗಣಾಚಾರಿ ನಾಯಕನೂ ಚೆನ್ನಬಸವಣ್ಣನವರೂ ಸಂಗಡಿದ್ದರು. {{gap}}ಮಾಧವ ನಾಯಕನನ್ನು ನೋಡುತ್ತಲೆ ಮಾಚಿದೇವರು, “ಕಲಿದೇವರ ದೇವ ಉಘೇ ಉಘೇ !” ಎಂದು ಜಯಕಾರ ಮಾಡಿ ಕತ್ತಿಯನ್ನು ಬೀಸುತ್ತ ಮೇಲೆ ಬಿದ್ದರು. ಶರಣರ ನಾಶಕ್ಕಾಗಿ ಪಣ ತೊಟ್ಟಿದ್ದ ಮಾಧವ ನಾಯಕನ ವಿಚಾರವನ್ನು ತನ್ನೊಬ್ಬರಿಗೆ ಬಿಡಬೇಕೆಂದು ಮಾಚಿದೇವರು ಮೊದಲೇ ಗಣಾಚಾರಿ ನಾಯಕನಿಗೆ ಹೇಳಿದ್ದರು. ಅದರಂತೆ ಗಣಾಚಾರಿ ಯೋಧರು ಮಾಧವ ನಾಯಕನ ಸಹಾಯಕ್ಕೆ ಬಂದ ಶಿಬಿರ ರಕ್ಷಕರನ್ನು ಹಿಂದಕ್ಕಟ್ಟಿ ಮಾಚಿದೇವ ಮಾಧವ ನಾಯಕರ ಕತ್ತಿ ಕಾಳಗಕ್ಕೆ ಎಡೆಮಾಡಿಕೊಟ್ಟರು. {{gap}}ಶಸ್ತ್ರಗಳನ್ನು ತ್ಯಜಿಸಿ ಸನ್ಯಾಸಿಯಾಗಿ ಜಂಗಮದೀಕ್ಷೆ ಪಡೆದು ಇಪ್ಪತ್ತು ವರ್ಷಗಳು ಕಳೆದಿದ್ದರೂ ಮಾಚಿದೇವರು ಖಡ್ಡಯುದ್ದದ ವರಿಸೆ ಪಟ್ಟುಗಳನ್ನು ಮರೆತಿರಲಿಲ್ಲ. ಕಾದಿಟ್ಟ ಆಪದ್ಧನದಂತೆ ಅದು ಅವರಿಗೆ ನೆರವಾಯಿತು. ಕೌಶಲದಿಂದ ಅವರು ಕಾಳಗವನ್ನು ಮೊದಲು ಮಾಡಿದರು. {{gap}}ಜಂಗಮವೇಷದ ವೃದ್ದಯೋಧನೊಬ್ಬನು ತನ್ನೊಡನೆ ಸೆಣೆಸಲು ಮುಂದಾದುದನ್ನು ಕಂಡು ಕ್ಷಣಕಾಲ ಸ್ತಬ್ಬನಾಗಿದ್ದ ಮಾಧವ ನಾಯಕನು, ಆಕ್ರಮಣದ ತೀವ್ರತೆಯಿಂದ ಚಮತ್ಕತನಾಗಿ ಮಿಂಚಿನಂತೆ ಹಾರಿ ಕತ್ತಿಯಾಡಿಸುತ್ತ ಪ್ರತಿಭಟಿಸಿದನು. ಪಟ್ಟಿಗೆ ಪಟ್ಟು ವರಿಸೆಗೆ ವರಿಸೆ, ಈ ಅನುಕ್ರಮದಲ್ಲಿ ಕೊಂಚ ಕಾಲ ಕಾಳಗ ನಡೆಯಿತು. ಕೊನೆ ಕೊನೆಗೆ ಮಾಚಿದೇವರ ಕೈಚಳಕ ಹೆಚ್ಚಿತು. “ಉಘೇ! ಉಘೇ! ಕಲಿದೇವರ ದೇವ !” ಎಂದು ಬೊಬ್ಬಿಡುತ್ತ ಅವರು ಮುನ್ನುಗ್ಗಿ ಕತ್ತಿಯಿರಿದಾಗ ಮಾಧವ ನಾಯಕನು ಆಹತನಾಗಿ ಕೆಳಗುರುಳಿದನು. ಅವನ ಕೊನೆ ಸಮೀಪಿಸಿದಂತೆ ಕಂಡಿತು. ಅಷ್ಟರಲ್ಲಿ ಶಿಬಿರದ ಮತ್ತೊಂದು ಕಡೆಯಿಂದ ತಮ್ಮ ನಾಯಕನ ರಕ್ಷಣೆಗಾಗಿ<noinclude></noinclude> 505tktjf9caenkifzhsp27f151zia50 ಪುಟ:ಕ್ರಾಂತಿ ಕಲ್ಯಾಣ.pdf/೪೮೨ 104 86407 324139 203732 2026-06-03T02:37:37Z Shreesha Sharma 7840 /* Proofread */ 324139 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೬೯}} ಸೈನಿಕರು. ಅನುಭವ ಮಂಟಪದ ಶಿಲಾ ಸ್ತಂಭಗಳು ಮಾತ್ರ ಈಗ ನಿಂತಿವೆ ಅಲ್ಲಿ. ಚೆನ್ನಬಸವಣ್ಣನವರ ಮುನ್ನೆಚ್ಚರಿಕೆಯಿಂದ ಶೂನ್ಯ ಸಿಂಹಾಸನ ಉಳಿಯಿತು. ಅವರು ಅದನ್ನು ಬಿಚ್ಚಿಸಿ, ಬಿಡಿಭಾಗಗಳನ್ನು ಪ್ರತ್ಯೇಕವಾಗಿ ವಾರಗಳ ಹಿಂದೆಯೇ ಉಳಿವೆಗೆ ಕಳುಹಿಸಿದ್ದರು. {{gap}}“ಈ ವಿನಾಶ ಕೃತ್ಯವನ್ನು ಮುಗಿಸಿ ಮಾಧವ ನಾಯಕರ ಸೈನಿಕರು ನಗರದಲ್ಲಿ ಇನ್ನೂ ಉಳಿದಿದ್ದ ಶರಣರನ್ನು ಹೆಂಗಸರು ಮಕ್ಕಳು ಬಾಲಕರು ವೃದ್ಧರು ಎಂಬ ಕರುಣೆಯೂ ಇಲ್ಲದೆ, ಸಾಮೂಹಿಕವಾಗಿ ವಧೆ ಮಾಡಿದರು. ಕಲ್ಯಾಣದ ಬೀದಿಗಳಲ್ಲಿ ರಕ್ತದ ಕೋಡಿ ಹರಿಯಿತು. ಆಮೇಲೆ, ಸೈನಿಕರ ದೃಷ್ಟಿ ನಾಗರಿಕರ ಮೇಲೆ ಬಿದ್ದಿತು. ಶರಣಧರ್ಮದ ಪ್ರೋತ್ಸಾಹಕರೆಂದು, ಶರಣರ ಮಿತ್ರರೆಂದು, ಶರಣರೊಡನೆ ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದರೆಂದು ಸೈನಿಕರು ಅನೇಕರನ್ನು ಕೊಂದರು. ಶ್ರೀಮಂತರ ಮನೆ ಮಠಗಳನ್ನು ಸೂರೆ ಮಾಡಿದರು. {{gap}}“ಇಷ್ಟೆಲ್ಲಾ ಮುಗಿದ ಮೇಲೆ, ನಗರದ ಹೊರಗಿನ ತಮ್ಮ ಶಿಬಿರಗಳಿಗೆ ಹಿಂದಿರುಗಿದರು. ಮರುದಿನ ಅವರು ಶಿಬಿರವೆ ವಲಸೆ ಹೋದ ಶರಣರನ್ನು ನಾಶಮಾಡಲು ಸೈನ್ಯದೊಡನೆ ದಕ್ಷಿಣಕ್ಕೆ ಹೋದಾಗ ನಮಗೆ ಉಸಿರಾಡುವ ಧೈರ್ಯ ಬಂದಿತು. ಪಟ್ಟಣಸ್ವಾಮಿ ಮಹಂತ ಶೆಟ್ಟರ ಅಧ್ಯಕ್ಷತೆಯಲ್ಲಿ ನಾಗರಿಕ ಸಮಿತಿಗಳನ್ನು ರಚಿಸಿಕೊಂಡು ಇನ್ನೂ ಉರಿಯುತ್ತಿದ್ದ ಬೆಂಕಿಯನ್ನಾರಿಸಿ, ನಗರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದೆವು. ನಗರ ರಕ್ಷಕದಳ ಪುನರ್ಘಟಿತವಾಯಿತು,” ಎಂದ ಹರದನು ತನ್ನ ವಿವರಣೆ ಮುಗಿಸಿದನು. {{gap}}“ಮಾಧವ ನಾಯಕರ ಸೈನ್ಯ ಈಗ ಎಲ್ಲಿದೆ?” {{gap}}“ಆಂಜನೇಯ ಹೊಳೆ ದಾಟಿ ಕೃಷ್ಣೆಯ ಕಡೆ ಹೋಗುತ್ತಿರುವುದಾಗಿ ಅವರ ಕಡೆಯವರು ಹೇಳುತ್ತಾರೆ. ಸರ್ವಾಧಿಕಾರಿಗಳ ಹತ್ಯೆಗೆ ಶರಣರೇ ಕಾರಣರೆಂದು ಈಗ ಅವರು ನಗರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.” {{gap}}ಸೋಮೇಶ್ವರನು ಎಲ್ಲವನ್ನೂ ಸಾವಧಾನದಿಂದ ಕೇಳಿದನು. ತನ್ನ ಕಡೆಯ ಸೈನ್ಯಾಧಿಕಾರಿಗಳೊಡನೆ ಪರ್ಯಾಲೋಚನೆ ನಡೆಸಿದರು. ಬಳಿಕ ನಾಗರಿಕರಿಗೆ ಪುನಃ ದರ್ಶನಕೊಟ್ಟು “ನಾವು ಈ ಎಲ್ಲ ಘಟನೆಗಳ ಬಗೆಗೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆವಿಧಿಸುತ್ತೇವೆ. ಇಂದಿನಿಂದ ನಗರ ನಮ್ಮ ರಕ್ಷಣೆಯಲ್ಲಿರುವುದಾಗಿ ತಿಳಿದು ನೀವು ಸಮಾಧಾನದಿಂದ ನಿಮ್ಮ ನಿಮ್ಮ ಕಾರ್ಯಗಳಲ್ಲಿ ನಿರತರಾಗಬಹುದು. ಮಹಾದ್ವಾರಗಳನ್ನು ವಶಕ್ಕೆ ತೆಗೆದುಕೊಂಡು ನಗರದಲ್ಲಿ ಶಾಂತಿ ರಕ್ಷಣೆಗಳು ನೆಲಸುವಂತೆ ಏರ್ಪಡಿಸಲು ನಮ್ಮ ಸೈನ್ಯಾಧಿಕಾರಿಗಳಿಗೆ ಆಜ್ಞೆ ಮಾಡಿದ್ದೇವೆ.<noinclude></noinclude> l221hepbkov3ya4ut8bz6tvw1q4h9pn 324143 324139 2026-06-03T02:38:46Z Shreelatha.Halemane 7642 /* Validated */ 324143 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೬೯}} ಸೈನಿಕರು. ಅನುಭವ ಮಂಟಪದ ಶಿಲಾ ಸ್ತಂಭಗಳು ಮಾತ್ರ ಈಗ ನಿಂತಿವೆ ಅಲ್ಲಿ. ಚೆನ್ನಬಸವಣ್ಣನವರ ಮುನ್ನೆಚ್ಚರಿಕೆಯಿಂದ ಶೂನ್ಯ ಸಿಂಹಾಸನ ಉಳಿಯಿತು. ಅವರು ಅದನ್ನು ಬಿಚ್ಚಿಸಿ, ಬಿಡಿಭಾಗಗಳನ್ನು ಪ್ರತ್ಯೇಕವಾಗಿ ವಾರಗಳ ಹಿಂದೆಯೇ ಉಳಿವೆಗೆ ಕಳುಹಿಸಿದ್ದರು. {{gap}}“ಈ ವಿನಾಶ ಕೃತ್ಯವನ್ನು ಮುಗಿಸಿ ಮಾಧವ ನಾಯಕರ ಸೈನಿಕರು ನಗರದಲ್ಲಿ ಇನ್ನೂ ಉಳಿದಿದ್ದ ಶರಣರನ್ನು ಹೆಂಗಸರು ಮಕ್ಕಳು ಬಾಲಕರು ವೃದ್ಧರು ಎಂಬ ಕರುಣೆಯೂ ಇಲ್ಲದೆ, ಸಾಮೂಹಿಕವಾಗಿ ವಧೆ ಮಾಡಿದರು. ಕಲ್ಯಾಣದ ಬೀದಿಗಳಲ್ಲಿ ರಕ್ತದ ಕೋಡಿ ಹರಿಯಿತು. ಆಮೇಲೆ, ಸೈನಿಕರ ದೃಷ್ಟಿ ನಾಗರಿಕರ ಮೇಲೆ ಬಿದ್ದಿತು. ಶರಣಧರ್ಮದ ಪ್ರೋತ್ಸಾಹಕರೆಂದು, ಶರಣರ ಮಿತ್ರರೆಂದು, ಶರಣರೊಡನೆ ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದರೆಂದು ಸೈನಿಕರು ಅನೇಕರನ್ನು ಕೊಂದರು. ಶ್ರೀಮಂತರ ಮನೆ ಮಠಗಳನ್ನು ಸೂರೆ ಮಾಡಿದರು. {{gap}}“ಇಷ್ಟೆಲ್ಲಾ ಮುಗಿದ ಮೇಲೆ, ನಗರದ ಹೊರಗಿನ ತಮ್ಮ ಶಿಬಿರಗಳಿಗೆ ಹಿಂದಿರುಗಿದರು. ಮರುದಿನ ಅವರು ಶಿಬಿರವೆ ವಲಸೆ ಹೋದ ಶರಣರನ್ನು ನಾಶಮಾಡಲು ಸೈನ್ಯದೊಡನೆ ದಕ್ಷಿಣಕ್ಕೆ ಹೋದಾಗ ನಮಗೆ ಉಸಿರಾಡುವ ಧೈರ್ಯ ಬಂದಿತು. ಪಟ್ಟಣಸ್ವಾಮಿ ಮಹಂತ ಶೆಟ್ಟರ ಅಧ್ಯಕ್ಷತೆಯಲ್ಲಿ ನಾಗರಿಕ ಸಮಿತಿಗಳನ್ನು ರಚಿಸಿಕೊಂಡು ಇನ್ನೂ ಉರಿಯುತ್ತಿದ್ದ ಬೆಂಕಿಯನ್ನಾರಿಸಿ, ನಗರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದೆವು. ನಗರ ರಕ್ಷಕದಳ ಪುನರ್ಘಟಿತವಾಯಿತು,” ಎಂದ ಹರದನು ತನ್ನ ವಿವರಣೆ ಮುಗಿಸಿದನು. {{gap}}“ಮಾಧವ ನಾಯಕರ ಸೈನ್ಯ ಈಗ ಎಲ್ಲಿದೆ?” {{gap}}“ಆಂಜನೇಯ ಹೊಳೆ ದಾಟಿ ಕೃಷ್ಣೆಯ ಕಡೆ ಹೋಗುತ್ತಿರುವುದಾಗಿ ಅವರ ಕಡೆಯವರು ಹೇಳುತ್ತಾರೆ. ಸರ್ವಾಧಿಕಾರಿಗಳ ಹತ್ಯೆಗೆ ಶರಣರೇ ಕಾರಣರೆಂದು ಈಗ ಅವರು ನಗರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.” {{gap}}ಸೋಮೇಶ್ವರನು ಎಲ್ಲವನ್ನೂ ಸಾವಧಾನದಿಂದ ಕೇಳಿದನು. ತನ್ನ ಕಡೆಯ ಸೈನ್ಯಾಧಿಕಾರಿಗಳೊಡನೆ ಪರ್ಯಾಲೋಚನೆ ನಡೆಸಿದರು. ಬಳಿಕ ನಾಗರಿಕರಿಗೆ ಪುನಃ ದರ್ಶನಕೊಟ್ಟು “ನಾವು ಈ ಎಲ್ಲ ಘಟನೆಗಳ ಬಗೆಗೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆವಿಧಿಸುತ್ತೇವೆ. ಇಂದಿನಿಂದ ನಗರ ನಮ್ಮ ರಕ್ಷಣೆಯಲ್ಲಿರುವುದಾಗಿ ತಿಳಿದು ನೀವು ಸಮಾಧಾನದಿಂದ ನಿಮ್ಮ ನಿಮ್ಮ ಕಾರ್ಯಗಳಲ್ಲಿ ನಿರತರಾಗಬಹುದು. ಮಹಾದ್ವಾರಗಳನ್ನು ವಶಕ್ಕೆ ತೆಗೆದುಕೊಂಡು ನಗರದಲ್ಲಿ ಶಾಂತಿ ರಕ್ಷಣೆಗಳು ನೆಲಸುವಂತೆ ಏರ್ಪಡಿಸಲು ನಮ್ಮ ಸೈನ್ಯಾಧಿಕಾರಿಗಳಿಗೆ ಆಜ್ಞೆ ಮಾಡಿದ್ದೇವೆ.<noinclude></noinclude> dh0v4niznyrsofqzyz24emp6731zmsb ಪುಟ:ಕ್ರಾಂತಿ ಕಲ್ಯಾಣ.pdf/೪೭೨ 104 86408 324116 203733 2026-06-03T00:51:33Z Shreesha Sharma 7840 /* Proofread */ 324116 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೫೯}} ನಿಂತವು. ಮೊದಲು ರಾಹುತರು ಕಣಿವೆಯನ್ನು ಪ್ರವೇಶಿಸಿ, ಮಾರ್ಗ ನಿರಾಪದವಾಗಿದೆಯೆಂದು ತಿಳಿದ ಮೇಲೆ ರಥಗಳು ಹೋಗಬೇಕೆಂದು ಗೊತ್ತಾಯಿತು. {{gap}}ಸಂಜೆಯಾಗುತ್ತಿದ್ದಂತೆ ಅಶ್ವಾರೋಹಿಗಳು ಕಣಿವೆಯನ್ನು ಪ್ರವೇಶಿಸಿದರು. ಎರಡು ಕಡೆಯ ಗುಡ್ಡಗಳ ಮೇಲೆ ಅವಿತಿದ್ದ ಗಣಾಚಾರಿ ಯೋಧರು ಅವರನ್ನು ತಡೆಯಲಿಲ್ಲ. ಅಶ್ವಾರೋಹಿ ದಳಗಳು ಕಣಿವೆಯನ್ನು ದಾಟಿ ಶಿಬಿರವಿದ್ದ ಬಯಲಿಗೆ ಬಂದ ಮೇಲೆ ಕಣಿವೆಯನ್ನು ಬಂಧಿಸಿ ಏಕಕಾಲದಲ್ಲಿ ಎರಡು ಕಡೆಗಳಿಂದ ಆಕ್ರಮಣ ನಡೆಸುವುದು ಅವರ ಉದ್ದೇಶವಾಗಿತ್ತು. {{gap}}ಶಿಬಿರವಿದ್ದ ಬಯಲಿಗೆ ಬಂದ ಕೂಡಲೆ ರಾಹುತರ ಪಡೆಗಳು ಚಕ್ರಾಕಾರವಾಗಿ ಚದುರಿ ನಾಗಾಲೋಟದಿಂದ ಮುನ್ನುಗ್ಗಿದವು, ಶರಣರು ಬೆದರಿ ಗೂಡಾರಗಳಿಂದ ಹೊರಗೆ ಬಂದಾಗ ಭಲ್ಲೆಯಗಳಿಂದ ಇರಿದು ಅವರನ್ನು ನಾಶಮಾಡುವುದು ರಾಹುತರ ಉದ್ದೇಶವಾಗಿತ್ತು. {{gap}}ಶಿಬಿರ ಜನ ಶೂನ್ಯವೆಂಬುದು ರಾಹುತರಿಗೆ ತಿಳಿದಿರಲಿಲ್ಲ. ಗಣಾಚಾರಿಯೋಧರು ಗೂಡಾರಗಳಿಗೆ ಅಲ್ಲಲ್ಲಿ ಎಣ್ಣೆ ಹೊಯ್ದು ದೀಪಗಳನ್ನು ಹಚ್ಚಿಟ್ಟು ಹೋಗಿದ್ದರು. ರಾಹುತರಿಗೆ ಅಡಚಣೆಯಾಗಲೆಂದು ಚಕ್ಕಡಿಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದರು. {{gap}}ರಾಹುತರ ಆಕ್ರಮಣದ ಮೊದಲರಭಸದಲ್ಲಿಯೇ ದೀಪಗಳು ಉರುಳಿ, ಗೂಡಾರಗಳು ಹತ್ತಿ ಉರಿಯಲು ಮೊದಲಾಯಿತು. ಕ್ಷಣಾರ್ಧದಲ್ಲಿ ಚಕ್ಕಡಿಗಳೂ ಉರಿಯತೊಡಗಿದವು. ಶರಣರು ನದೀತೀರಕ್ಕೆ ಓಡಿಹೋಗಿರಬೇಕೆಂದು ಭಾವಿಸಿ ರಾಹುತರು ಆ ಕಡೆ ಕುದುರೆಗಳನ್ನು ಓಡಿಸಿದರು. ಗಣಾಚಾರಿ ಯೋಧರು ರಚಿಸಿದ್ದ ಸಿಡಿದಾರಗಳೂ ತೋರಿಕೆಯ ಅಡ್ಡಕಟ್ಟೆಗಳೂ ಅಲ್ಲಿ ರಾಹುತರಿಗೆ ಅಡ್ಡಿಯಾದವು. ಅನೇಕ ಕುದುರೆಗಳು ಸಿಡಿದಾರಗಳಿಗೆ ಸಿಕ್ಕು ಮುಗ್ಗರಿಸಿ ಬಿದ್ದವು. ಇನ್ನು ಕೆಲವು ಕುದುರೆಗಳು ಅಡ್ಡಕಟ್ಟೆಗಳನ್ನು ದಾಟಿ ರಾಹುತರೊಡನೆ ನದಿಗೆ ಬಿದ್ದು ಪ್ರವಾಹದಲ್ಲಿ ತೇಲಿಹೋದವು. ಈ ಅನುಕೂಲವಸರಕ್ಕಾಗಿ ಕಾಯುತ್ತಿದ್ದ ಗಣಾಚಾರಿ ಯೋಧರು ಗುಡ್ಡಗಳಿಂದಿಳಿದು ಕತ್ತಿ, ಗದೆ, ದೊಣ್ಣೆ ಮುಂತಾದ ಆಯುಧಗಳನ್ನು ತಿರುಗಿಸುತ್ತ ರಾಹುತರ ಮೇಲೆ ಬಿದ್ದರು. ಅರ್ಧ ಗಳಿಗೆ ಹೋರಾಟ ನಡೆದು ಆಕ್ರಮಣ ನಡೆಸಿದ ಐನೂರು ಮಂದಿ ರಾಹುತರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಹತರಾದರು. ಬೆಂಕಿಗೆ ಬೆದರಿದ ಕುದುರೆಗಳೂ ರಾಹುತರನ್ನು ಕೆಳಗೆ ತಳ್ಳಿ ದಿಕ್ಕಾಪಾಲಾಗಿ ಓಡಿದವು. ಬೆದರಿದ ಕುದುರೆಗಳ ಕಾಲುಗಳಿಗೆ ಸಿಕ್ಕು ರಾಹುತರನೇಕರು ಸತ್ತರು. ಅಳಿದುಳಿದವರು ಭೀತಿಯಿಂದ ಕಣಿವೆಯ ಕಡೆ ಓಡಿದರು.<noinclude></noinclude> hadr4kbyw1dgdmnlgtlr39yzq7x4a2f 324124 324116 2026-06-03T01:05:07Z Shreelatha.Halemane 7642 /* Validated */ 324124 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೫೯}} ನಿಂತವು. ಮೊದಲು ರಾಹುತರು ಕಣಿವೆಯನ್ನು ಪ್ರವೇಶಿಸಿ, ಮಾರ್ಗ ನಿರಾಪದವಾಗಿದೆಯೆಂದು ತಿಳಿದ ಮೇಲೆ ರಥಗಳು ಹೋಗಬೇಕೆಂದು ಗೊತ್ತಾಯಿತು. {{gap}}ಸಂಜೆಯಾಗುತ್ತಿದ್ದಂತೆ ಅಶ್ವಾರೋಹಿಗಳು ಕಣಿವೆಯನ್ನು ಪ್ರವೇಶಿಸಿದರು. ಎರಡು ಕಡೆಯ ಗುಡ್ಡಗಳ ಮೇಲೆ ಅವಿತಿದ್ದ ಗಣಾಚಾರಿ ಯೋಧರು ಅವರನ್ನು ತಡೆಯಲಿಲ್ಲ. ಅಶ್ವಾರೋಹಿ ದಳಗಳು ಕಣಿವೆಯನ್ನು ದಾಟಿ ಶಿಬಿರವಿದ್ದ ಬಯಲಿಗೆ ಬಂದ ಮೇಲೆ ಕಣಿವೆಯನ್ನು ಬಂಧಿಸಿ ಏಕಕಾಲದಲ್ಲಿ ಎರಡು ಕಡೆಗಳಿಂದ ಆಕ್ರಮಣ ನಡೆಸುವುದು ಅವರ ಉದ್ದೇಶವಾಗಿತ್ತು. {{gap}}ಶಿಬಿರವಿದ್ದ ಬಯಲಿಗೆ ಬಂದ ಕೂಡಲೆ ರಾಹುತರ ಪಡೆಗಳು ಚಕ್ರಾಕಾರವಾಗಿ ಚದುರಿ ನಾಗಾಲೋಟದಿಂದ ಮುನ್ನುಗ್ಗಿದವು, ಶರಣರು ಬೆದರಿ ಗೂಡಾರಗಳಿಂದ ಹೊರಗೆ ಬಂದಾಗ ಭಲ್ಲೆಯಗಳಿಂದ ಇರಿದು ಅವರನ್ನು ನಾಶಮಾಡುವುದು ರಾಹುತರ ಉದ್ದೇಶವಾಗಿತ್ತು. {{gap}}ಶಿಬಿರ ಜನ ಶೂನ್ಯವೆಂಬುದು ರಾಹುತರಿಗೆ ತಿಳಿದಿರಲಿಲ್ಲ. ಗಣಾಚಾರಿಯೋಧರು ಗೂಡಾರಗಳಿಗೆ ಅಲ್ಲಲ್ಲಿ ಎಣ್ಣೆ ಹೊಯ್ದು ದೀಪಗಳನ್ನು ಹಚ್ಚಿಟ್ಟು ಹೋಗಿದ್ದರು. ರಾಹುತರಿಗೆ ಅಡಚಣೆಯಾಗಲೆಂದು ಚಕ್ಕಡಿಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದರು. {{gap}}ರಾಹುತರ ಆಕ್ರಮಣದ ಮೊದಲರಭಸದಲ್ಲಿಯೇ ದೀಪಗಳು ಉರುಳಿ, ಗೂಡಾರಗಳು ಹತ್ತಿ ಉರಿಯಲು ಮೊದಲಾಯಿತು. ಕ್ಷಣಾರ್ಧದಲ್ಲಿ ಚಕ್ಕಡಿಗಳೂ ಉರಿಯತೊಡಗಿದವು. ಶರಣರು ನದೀತೀರಕ್ಕೆ ಓಡಿಹೋಗಿರಬೇಕೆಂದು ಭಾವಿಸಿ ರಾಹುತರು ಆ ಕಡೆ ಕುದುರೆಗಳನ್ನು ಓಡಿಸಿದರು. ಗಣಾಚಾರಿ ಯೋಧರು ರಚಿಸಿದ್ದ ಸಿಡಿದಾರಗಳೂ ತೋರಿಕೆಯ ಅಡ್ಡಕಟ್ಟೆಗಳೂ ಅಲ್ಲಿ ರಾಹುತರಿಗೆ ಅಡ್ಡಿಯಾದವು. ಅನೇಕ ಕುದುರೆಗಳು ಸಿಡಿದಾರಗಳಿಗೆ ಸಿಕ್ಕು ಮುಗ್ಗರಿಸಿ ಬಿದ್ದವು. ಇನ್ನು ಕೆಲವು ಕುದುರೆಗಳು ಅಡ್ಡಕಟ್ಟೆಗಳನ್ನು ದಾಟಿ ರಾಹುತರೊಡನೆ ನದಿಗೆ ಬಿದ್ದು ಪ್ರವಾಹದಲ್ಲಿ ತೇಲಿಹೋದವು. ಈ ಅನುಕೂಲವಸರಕ್ಕಾಗಿ ಕಾಯುತ್ತಿದ್ದ ಗಣಾಚಾರಿ ಯೋಧರು ಗುಡ್ಡಗಳಿಂದಿಳಿದು ಕತ್ತಿ, ಗದೆ, ದೊಣ್ಣೆ ಮುಂತಾದ ಆಯುಧಗಳನ್ನು ತಿರುಗಿಸುತ್ತ ರಾಹುತರ ಮೇಲೆ ಬಿದ್ದರು. ಅರ್ಧ ಗಳಿಗೆ ಹೋರಾಟ ನಡೆದು ಆಕ್ರಮಣ ನಡೆಸಿದ ಐನೂರು ಮಂದಿ ರಾಹುತರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಹತರಾದರು. ಬೆಂಕಿಗೆ ಬೆದರಿದ ಕುದುರೆಗಳೂ ರಾಹುತರನ್ನು ಕೆಳಗೆ ತಳ್ಳಿ ದಿಕ್ಕಾಪಾಲಾಗಿ ಓಡಿದವು. ಬೆದರಿದ ಕುದುರೆಗಳ ಕಾಲುಗಳಿಗೆ ಸಿಕ್ಕು ರಾಹುತರನೇಕರು ಸತ್ತರು. ಅಳಿದುಳಿದವರು ಭೀತಿಯಿಂದ ಕಣಿವೆಯ ಕಡೆ ಓಡಿದರು.<noinclude></noinclude> qhoj8imm3lro255pgobhfd46bkdozwd ಪುಟ:ಕ್ರಾಂತಿ ಕಲ್ಯಾಣ.pdf/೪೮೫ 104 86409 324173 203734 2026-06-03T03:32:10Z Shreesha Sharma 7840 /* Proofread */ 324173 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೭೨|right=ಕ್ರಾಂತಿ ಕಲ್ಯಾಣ}} ಸಂಕರದ ಆಪಾದನೆ ಹೂಡಿದೆ. ಆ ವಿಷಚಕ್ರದ ಜ್ವಾಲೆ ಹರಡಿ ಬಸವಣ್ಣನವರು ಕಲ್ಯಾಣವನ್ನು ಬಿಟ್ಟರು. ಅವರು ನಗರದಲ್ಲಿದ್ದಿದ್ದರೆ ಧರ್ಮಾಧಿಕರಣದ ವಿಚಾರಣೆ ನಡೆಯುತ್ತಿರಲಿಲ್ಲ. ವೃದ್ಧಮಂತ್ರಿಮಂಚಣ ನಾಯಕನು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಮಧುವರಸ ಹರಳಯ್ಯ ಶೀಲವಂತರನ್ನು ಶೂಲಕ್ಕೇರಿಸುತ್ತಿರಲಿಲ್ಲ. ಬಿಜ್ಜಳರಾಯರ ಕೊಲೆ ನಡೆಯುತ್ತಿರಲಿಲ್ಲ. ಕಲ್ಯಾಣದ ಶೈವಮಠಗಳು ಉಳಿಯುತ್ತಿದ್ದವು. ಮಾಧವ ನಾಯಕರ ಸೈನಿಕರಿಂದ ನಾಗರಿಕರ ಅಪಮಾನವಾಗುತ್ತಿರಲಿಲ್ಲ. ಈ ಎಲ್ಲ ದುರಂತಗಳಿಗೆ ಕಾರಣನಾದ ನನ್ನನ್ನು ಬಂಧನದಲ್ಲಿಡು, ಸೋಮೇಶ್ವರ. ನನ್ನ ವಧೆಗೆ ಆಜ್ಞೆಮಾಡು. ಪ್ರಕೃತಸ್ಥನಾಗಿ ಶಾಂತ ಮನಸ್ಸಿನಿಂದ ನಾನಿದನ್ನು ಹೇಳುತ್ತಿದ್ದೇನೆ.” {{gap}}“ಶರಣರನ್ನು ಶೂಲಕ್ಕೇರಿಸಿದ್ದು ತಂದೆಯ ಕೊಲೆಗೆ ಕಾರಣವೆಂದು ನಿಮ್ಮ ಅಭಿಪ್ರಾಯವೇ? ಮಾಧವ ನಾಯಕನ ಕಡೆಯವರು ನಗರದಲ್ಲಿ ಅದನ್ನೇ ಪ್ರಚಾರ ಮಾಡುತ್ತಿದ್ದಾರೆ,” ಎಂದನು. {{gap}}“ಮಾಧವ ನಾಯಕನ ಆ ಅಸತ್ಯ ಪ್ರಚಾರವನ್ನು ನೀವು ಕೂಡ ನಂಬಿದಿರಾ, ಸೋಮೇಶ್ವರ ?” {{gap}}-ಕ್ರಮಿತನು ನುಡಿದನು, ತಿರಸ್ಕಾರದ ದನಿಯಿಂದ. ಆಪಾದನೆ ಸಕಾರಣವಾದರೆ ಏಕೆ ನಂಬಬಾರದು?” {{gap}}“ಶರಣರ ಮೇಲಿನ ವಿದ್ವೇಷದಿಂದ ಮಾಧವ ನಾಯಕನು ಈ ಪ್ರಚಾರಕ್ಕೆ ತೊಡಗಿದ್ದಾನೆ. ಆಪಾದನೆ ವಿಶ್ವಾಸಾರ್ಹವಲ್ಲ. ಯಾರೂ ಅದನ್ನು ನಂಬುವುದಿಲ್ಲ.” {{gap}}“ಹಾಗಾದರೆ ನಿಜವಾದ ಕೊಲೆಗಡುಕರಾರು?” {{gap}}ಚಾಲುಕ್ಯ ಅರಸು ಜಗದೇಕಮಲ್ಲ ಮತ್ತು ಅವನ ಯೌವನದ ಗೆಳೆಯ ಸಾಮಂತ ಬೊಮ್ಮರಸ” {{gap}}ಕ್ರಮಿತನ ಉತ್ತರ ಸೋಮೇಶ್ವರನನ್ನು ದಿಗ್ದಮೆಗೊಳಿಸಿತು. ಇದೇನು ಉಪಹಾಸವೇ, ವಾಸ್ತವವೇ ? ಅವಿಶ್ವಾಸದ ದನಿಯಿಂದ ಅವನು, "ರಾಜಗೃಹದಲ್ಲಿ ಬಂಧನದಲ್ಲಿದ್ದ ಜಗದೇಕಮಲ್ಲನಿಂದ ಈ ಕಾರ್ಯ ಹೇಗೆ ಸಾಧ್ಯ? ಅವನು ಅಸ್ವಸ್ಥನಾಗಿದ್ದು ಆ ರಾತ್ರಿಯೇ ಮೃತನಾದನಲ್ಲವೆ?” ಎಂದನು. {{gap}}ಆ ದಿನ ಮೊದಲ ಸಾರಿ ಕ್ರಮಿತನ ಮುಖದಲ್ಲಿ ತಿರಸ್ಕಾರದ ನಗೆ ಮೂಡಿತು. ವಿಶ್ವಾಸದ ದೃಢಕಂಠದಿಂದ ಅವನು ಹೇಳಿದನು : ಅದು ಜನರಲ್ಲಿ ಪ್ರಸಾರವಾದ ಕಥೆ, ಸೋಮೇಶ್ವರ, ವಾಸ್ತವವಾಗಿ ನಡೆದದ್ದು ಬೇರೆ. ಕೊಲೆ ನಡೆದ ಸಂಜೆ ಜಗದೇಕಮಲ್ಲನೂ, ಜಂಗಮ ವೇಷದಿಂದ ರಾಜಗೃಹದಲ್ಲಿ ಧರ್ಮೋಪದೇಶಕನಾಗಿದ್ದ ಬೊಮ್ಮರಸನೂ, ದೀವಟಿಗರ ಸಮವಸ್ತ್ರಗಳನ್ನು ಧರಿಸಿ ಕರ್ಣದೇವನ<noinclude></noinclude> 7ryativyvvn1k67gotng03fiplu2az5 324174 324173 2026-06-03T03:32:44Z Shreelatha.Halemane 7642 /* Validated */ 324174 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೭೨|right=ಕ್ರಾಂತಿ ಕಲ್ಯಾಣ}} ಸಂಕರದ ಆಪಾದನೆ ಹೂಡಿದೆ. ಆ ವಿಷಚಕ್ರದ ಜ್ವಾಲೆ ಹರಡಿ ಬಸವಣ್ಣನವರು ಕಲ್ಯಾಣವನ್ನು ಬಿಟ್ಟರು. ಅವರು ನಗರದಲ್ಲಿದ್ದಿದ್ದರೆ ಧರ್ಮಾಧಿಕರಣದ ವಿಚಾರಣೆ ನಡೆಯುತ್ತಿರಲಿಲ್ಲ. ವೃದ್ಧಮಂತ್ರಿಮಂಚಣ ನಾಯಕನು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಮಧುವರಸ ಹರಳಯ್ಯ ಶೀಲವಂತರನ್ನು ಶೂಲಕ್ಕೇರಿಸುತ್ತಿರಲಿಲ್ಲ. ಬಿಜ್ಜಳರಾಯರ ಕೊಲೆ ನಡೆಯುತ್ತಿರಲಿಲ್ಲ. ಕಲ್ಯಾಣದ ಶೈವಮಠಗಳು ಉಳಿಯುತ್ತಿದ್ದವು. ಮಾಧವ ನಾಯಕರ ಸೈನಿಕರಿಂದ ನಾಗರಿಕರ ಅಪಮಾನವಾಗುತ್ತಿರಲಿಲ್ಲ. ಈ ಎಲ್ಲ ದುರಂತಗಳಿಗೆ ಕಾರಣನಾದ ನನ್ನನ್ನು ಬಂಧನದಲ್ಲಿಡು, ಸೋಮೇಶ್ವರ. ನನ್ನ ವಧೆಗೆ ಆಜ್ಞೆಮಾಡು. ಪ್ರಕೃತಸ್ಥನಾಗಿ ಶಾಂತ ಮನಸ್ಸಿನಿಂದ ನಾನಿದನ್ನು ಹೇಳುತ್ತಿದ್ದೇನೆ.” {{gap}}“ಶರಣರನ್ನು ಶೂಲಕ್ಕೇರಿಸಿದ್ದು ತಂದೆಯ ಕೊಲೆಗೆ ಕಾರಣವೆಂದು ನಿಮ್ಮ ಅಭಿಪ್ರಾಯವೇ? ಮಾಧವ ನಾಯಕನ ಕಡೆಯವರು ನಗರದಲ್ಲಿ ಅದನ್ನೇ ಪ್ರಚಾರ ಮಾಡುತ್ತಿದ್ದಾರೆ,” ಎಂದನು. {{gap}}“ಮಾಧವ ನಾಯಕನ ಆ ಅಸತ್ಯ ಪ್ರಚಾರವನ್ನು ನೀವು ಕೂಡ ನಂಬಿದಿರಾ, ಸೋಮೇಶ್ವರ ?” {{gap}}-ಕ್ರಮಿತನು ನುಡಿದನು, ತಿರಸ್ಕಾರದ ದನಿಯಿಂದ. ಆಪಾದನೆ ಸಕಾರಣವಾದರೆ ಏಕೆ ನಂಬಬಾರದು?” {{gap}}“ಶರಣರ ಮೇಲಿನ ವಿದ್ವೇಷದಿಂದ ಮಾಧವ ನಾಯಕನು ಈ ಪ್ರಚಾರಕ್ಕೆ ತೊಡಗಿದ್ದಾನೆ. ಆಪಾದನೆ ವಿಶ್ವಾಸಾರ್ಹವಲ್ಲ. ಯಾರೂ ಅದನ್ನು ನಂಬುವುದಿಲ್ಲ.” {{gap}}“ಹಾಗಾದರೆ ನಿಜವಾದ ಕೊಲೆಗಡುಕರಾರು?” {{gap}}ಚಾಲುಕ್ಯ ಅರಸು ಜಗದೇಕಮಲ್ಲ ಮತ್ತು ಅವನ ಯೌವನದ ಗೆಳೆಯ ಸಾಮಂತ ಬೊಮ್ಮರಸ” {{gap}}ಕ್ರಮಿತನ ಉತ್ತರ ಸೋಮೇಶ್ವರನನ್ನು ದಿಗ್ದಮೆಗೊಳಿಸಿತು. ಇದೇನು ಉಪಹಾಸವೇ, ವಾಸ್ತವವೇ ? ಅವಿಶ್ವಾಸದ ದನಿಯಿಂದ ಅವನು, "ರಾಜಗೃಹದಲ್ಲಿ ಬಂಧನದಲ್ಲಿದ್ದ ಜಗದೇಕಮಲ್ಲನಿಂದ ಈ ಕಾರ್ಯ ಹೇಗೆ ಸಾಧ್ಯ? ಅವನು ಅಸ್ವಸ್ಥನಾಗಿದ್ದು ಆ ರಾತ್ರಿಯೇ ಮೃತನಾದನಲ್ಲವೆ?” ಎಂದನು. {{gap}}ಆ ದಿನ ಮೊದಲ ಸಾರಿ ಕ್ರಮಿತನ ಮುಖದಲ್ಲಿ ತಿರಸ್ಕಾರದ ನಗೆ ಮೂಡಿತು. ವಿಶ್ವಾಸದ ದೃಢಕಂಠದಿಂದ ಅವನು ಹೇಳಿದನು : ಅದು ಜನರಲ್ಲಿ ಪ್ರಸಾರವಾದ ಕಥೆ, ಸೋಮೇಶ್ವರ, ವಾಸ್ತವವಾಗಿ ನಡೆದದ್ದು ಬೇರೆ. ಕೊಲೆ ನಡೆದ ಸಂಜೆ ಜಗದೇಕಮಲ್ಲನೂ, ಜಂಗಮ ವೇಷದಿಂದ ರಾಜಗೃಹದಲ್ಲಿ ಧರ್ಮೋಪದೇಶಕನಾಗಿದ್ದ ಬೊಮ್ಮರಸನೂ, ದೀವಟಿಗರ ಸಮವಸ್ತ್ರಗಳನ್ನು ಧರಿಸಿ ಕರ್ಣದೇವನ<noinclude></noinclude> 9lb3q24agcystjhrak940d34qh9jylo ಪುಟ:ಕ್ರಾಂತಿ ಕಲ್ಯಾಣ.pdf/೪೭೧ 104 86410 324115 203735 2026-06-03T00:49:25Z Shreesha Sharma 7840 /* Proofread */ 324115 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೫೮|right=ಕ್ರಾಂತಿ ಕಲ್ಯಾಣ}} ಅಗತ್ಯವಾದ ಪಾತ್ರೆ ಪದಾರ್ಥ ಬಟ್ಟೆ ಮುಂತಾದವುಗಳನ್ನು ಚೀಲಗಳಲ್ಲಿ ತುಂಬಿ ಎತ್ತುಗಳ ಮೇಲೆ ಹೇರಿದರು. ಸಣ್ಣ ಗಂಟು ಮೂಟೆಗಳನ್ನು ತಲೆಯ ಮೇಲೆ ಹೊತ್ತರು. ಗಣಾಚಾರಿ ದಳದ ಯೋಧರು ತೋರಿಸಿದ ನದೀ ತೀರದ ಕಾಲುದಾರಿಯಲ್ಲಿ ಶರಣರು ತಂಡತಂಡವಾಗಿ ತಡಸದ ಹಾಯ್ದಡಕ್ಕೆ ಹೊರಟರು. {{gap}}ಚೆನ್ನಬಸವಣ್ಣನವರು, ಶೂಲದ ಬೊಮ್ಮಯ್ಯ, ಕೂಗಿನ ಮಾರಿತಂದೆ ಮುಂತಾದ ಹಿರಿಯ ಶರಣರ ಮೇಲ್ವಿಚಾರಣೆಯಲ್ಲಿ ಈ ಕಾರ್ಯ ನಡೆಯಿತು. ಮಾಚಿದೇವರು ಮೊದಲೆ ತಡಸಕ್ಕೆ ಹೋಗಿ, ಶರಣರೆಲ್ಲ ಗೊಂದಲವಿಲ್ಲದೆ ಸುರಕ್ಷಿತವಾಗಿ ನದಿಯನ್ನು ದಾಟಲು ಏರ್ಪಡಿಸಿದರು. ಮೊದಲು ಗಣಾಚಾರಿ ಯೋಧರ ರಕ್ಷಕದಳ, ಅವರ ತರುವಾಯ ವೃದ್ದರಾದ ಜಂಗಮರು ಮತ್ತು ಶರಣೆಯರು, ಕೊನೆಯದಾಗಿ ಶರಣರು, ಈ ರೀತಿ ಅವರು ಕೃಷ್ಣೆಯನ್ನು ದಾಟಿದರು. ಎತ್ತು ಮತ್ತು ಹೇರುಗಳನ್ನು ತೆಪ್ಪಗಳ ಮೇಲೆ ಸಾಗಿಸಿದರು. ಮಧ್ಯಾಹ್ನದ ಸುಮಾರಿಗೆ ಪ್ರಾರಂಭವಾದ ಈ ಕಾರ್ಯ ಸಂಜೆಗೆ ಮುಗಿಯಿತು. {{gap}}ಆಮೇಲೆ ಮಾಚಿದೇವರು ತಂಗಡಿಗೆ ಹಿಂದಿರುಗಿ ಅಲ್ಲಿ ಅವರಿಗಾಗಿ ಕಾದಿದ್ದ ಚೆನ್ನಬಸವಣ್ಣ, ಕೂಗಿನ ಮಾರಿತಂದೆ, ಶೂಲದ ಬೊಮ್ಮಯ್ಯ, ಮುಂತಾದವರನ್ನು ಸೇರಿಕೊಂಡರು. ಗಣಾಚಾರಿ ಯೋಧರ ಸಂಗಡಿದ್ದು ಹೋರಾಟದಲ್ಲಿ ಸಹಾಯ ಮಾಡುವುದು ಅವರ ಉದ್ದೇಶವಾಗಿತ್ತು. {{gap}}ಸೂರ್ಯನು ಅಸ್ತನಾಗುತ್ತಿದ್ದಂತೆ ಶತೃಸೈನ್ಯದ ಮುಂಚೂಣಿ ಪಡೆಗಳು ತಂಗಡಿಯ ಹತ್ತಿರ ಬಂದವು. ಶರಣರ ಯಾತ್ರಾದಳವನ್ನು ನಾಶಮಾಡಲು ಪಣತೊಟ್ಟಿದ್ದ ಮಾಧವ ನಾಯಕನು ಅದರ ಸಂಗಡಿದ್ದನು. ಮೊದಲೇ ಅಲ್ಲಿಗೆ ಬಂದಿದ್ದ ಗೂಢಚಾರರು, ಪ್ರವಾಹ ಇಳಿಯುತ್ತಿದೆಯೆಂದೂ, ಈ ರಾತ್ರಿಯೋ ನಾಳೆಯೋ ನದಿದಾಟಲು ಶರಣರು ಪ್ರಯತ್ನಿಸಬಹುದೆಂದೂ ವರದಿ ಮಾಡಿದ್ದರು. ತಡಸದ ಹಾಯ್ದಡದಿಂದ ಸಂಜೆಗೆ ಮೊದಲೆ ಶರಣರು ಕೃಷ್ಣೆಯ ಆಚಿನ ದಡವನ್ನು ಸೇರಿದ್ದರೆಂಬುದು ಅವರಿಗೆ ತಿಳಿಯದು. {{gap}}ಶಿಬಿರದಲ್ಲಿ ಎಲ್ಲ ಕಡೆ ದೀಪಗಳು ಉರಿಯುತ್ತಿರುವುದನ್ನು ಕಂಡಾಗ, ಸೈನ್ಯ ಹಿಂದಟ್ಟಿ ಬರುತ್ತಿರುವ ವಿಚಾರ ಶರಣರಿಗೆ ತಿಳಿದಿಲ್ಲವೆಂದೂ, ಹಠಾತ್ತಾಗಿ ಆಕ್ರಮಣ ಮಾಡುವುದರಿಂದ ಶರಣರನ್ನು ನಾಶಮಾಡಬಹುದೆಂದೂ ಭಾವಿಸಿ ಮಾಧವ ನಾಯಕನು ಆಕ್ರಮಣದ ಆಜ್ಞೆಯನ್ನು ಪ್ರಚಾರ ಮಾಡಿದನು. {{gap}}ಅರ್ಧ ಗಳಿಗೆಯೊಳಗಾಗಿ ಇನ್ನೂರು ರಥಗಳೂ, ಐನೂರು ಮಂದಿ ರಾಹುತರ ದೊಡ್ಡ ಅಶ್ವದಳವೂ ಆಕ್ರಮಣಕ್ಕೆ ಸಿದ್ಧವಾಗಿ ಕಣಿವೆಯ ಮುಖದಲ್ಲಿ<noinclude></noinclude> nbzp59dt1ddugq36bu78k3tg06cs7sn 324123 324115 2026-06-03T01:04:08Z Shreelatha.Halemane 7642 /* Validated */ 324123 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೫೮|right=ಕ್ರಾಂತಿ ಕಲ್ಯಾಣ}} ಅಗತ್ಯವಾದ ಪಾತ್ರೆ ಪದಾರ್ಥ ಬಟ್ಟೆ ಮುಂತಾದವುಗಳನ್ನು ಚೀಲಗಳಲ್ಲಿ ತುಂಬಿ ಎತ್ತುಗಳ ಮೇಲೆ ಹೇರಿದರು. ಸಣ್ಣ ಗಂಟು ಮೂಟೆಗಳನ್ನು ತಲೆಯ ಮೇಲೆ ಹೊತ್ತರು. ಗಣಾಚಾರಿ ದಳದ ಯೋಧರು ತೋರಿಸಿದ ನದೀ ತೀರದ ಕಾಲುದಾರಿಯಲ್ಲಿ ಶರಣರು ತಂಡತಂಡವಾಗಿ ತಡಸದ ಹಾಯ್ದಡಕ್ಕೆ ಹೊರಟರು. {{gap}}ಚೆನ್ನಬಸವಣ್ಣನವರು, ಶೂಲದ ಬೊಮ್ಮಯ್ಯ, ಕೂಗಿನ ಮಾರಿತಂದೆ ಮುಂತಾದ ಹಿರಿಯ ಶರಣರ ಮೇಲ್ವಿಚಾರಣೆಯಲ್ಲಿ ಈ ಕಾರ್ಯ ನಡೆಯಿತು. ಮಾಚಿದೇವರು ಮೊದಲೆ ತಡಸಕ್ಕೆ ಹೋಗಿ, ಶರಣರೆಲ್ಲ ಗೊಂದಲವಿಲ್ಲದೆ ಸುರಕ್ಷಿತವಾಗಿ ನದಿಯನ್ನು ದಾಟಲು ಏರ್ಪಡಿಸಿದರು. ಮೊದಲು ಗಣಾಚಾರಿ ಯೋಧರ ರಕ್ಷಕದಳ, ಅವರ ತರುವಾಯ ವೃದ್ದರಾದ ಜಂಗಮರು ಮತ್ತು ಶರಣೆಯರು, ಕೊನೆಯದಾಗಿ ಶರಣರು, ಈ ರೀತಿ ಅವರು ಕೃಷ್ಣೆಯನ್ನು ದಾಟಿದರು. ಎತ್ತು ಮತ್ತು ಹೇರುಗಳನ್ನು ತೆಪ್ಪಗಳ ಮೇಲೆ ಸಾಗಿಸಿದರು. ಮಧ್ಯಾಹ್ನದ ಸುಮಾರಿಗೆ ಪ್ರಾರಂಭವಾದ ಈ ಕಾರ್ಯ ಸಂಜೆಗೆ ಮುಗಿಯಿತು. {{gap}}ಆಮೇಲೆ ಮಾಚಿದೇವರು ತಂಗಡಿಗೆ ಹಿಂದಿರುಗಿ ಅಲ್ಲಿ ಅವರಿಗಾಗಿ ಕಾದಿದ್ದ ಚೆನ್ನಬಸವಣ್ಣ, ಕೂಗಿನ ಮಾರಿತಂದೆ, ಶೂಲದ ಬೊಮ್ಮಯ್ಯ, ಮುಂತಾದವರನ್ನು ಸೇರಿಕೊಂಡರು. ಗಣಾಚಾರಿ ಯೋಧರ ಸಂಗಡಿದ್ದು ಹೋರಾಟದಲ್ಲಿ ಸಹಾಯ ಮಾಡುವುದು ಅವರ ಉದ್ದೇಶವಾಗಿತ್ತು. {{gap}}ಸೂರ್ಯನು ಅಸ್ತನಾಗುತ್ತಿದ್ದಂತೆ ಶತ್ರುಸೈನ್ಯದ ಮುಂಚೂಣಿ ಪಡೆಗಳು ತಂಗಡಿಯ ಹತ್ತಿರ ಬಂದವು. ಶರಣರ ಯಾತ್ರಾದಳವನ್ನು ನಾಶಮಾಡಲು ಪಣತೊಟ್ಟಿದ್ದ ಮಾಧವ ನಾಯಕನು ಅದರ ಸಂಗಡಿದ್ದನು. ಮೊದಲೇ ಅಲ್ಲಿಗೆ ಬಂದಿದ್ದ ಗೂಢಚಾರರು, ಪ್ರವಾಹ ಇಳಿಯುತ್ತಿದೆಯೆಂದೂ, ಈ ರಾತ್ರಿಯೋ ನಾಳೆಯೋ ನದಿದಾಟಲು ಶರಣರು ಪ್ರಯತ್ನಿಸಬಹುದೆಂದೂ ವರದಿ ಮಾಡಿದ್ದರು. ತಡಸದ ಹಾಯ್ದಡದಿಂದ ಸಂಜೆಗೆ ಮೊದಲೆ ಶರಣರು ಕೃಷ್ಣೆಯ ಆಚಿನ ದಡವನ್ನು ಸೇರಿದ್ದರೆಂಬುದು ಅವರಿಗೆ ತಿಳಿಯದು. {{gap}}ಶಿಬಿರದಲ್ಲಿ ಎಲ್ಲ ಕಡೆ ದೀಪಗಳು ಉರಿಯುತ್ತಿರುವುದನ್ನು ಕಂಡಾಗ, ಸೈನ್ಯ ಹಿಂದಟ್ಟಿ ಬರುತ್ತಿರುವ ವಿಚಾರ ಶರಣರಿಗೆ ತಿಳಿದಿಲ್ಲವೆಂದೂ, ಹಠಾತ್ತಾಗಿ ಆಕ್ರಮಣ ಮಾಡುವುದರಿಂದ ಶರಣರನ್ನು ನಾಶಮಾಡಬಹುದೆಂದೂ ಭಾವಿಸಿ ಮಾಧವ ನಾಯಕನು ಆಕ್ರಮಣದ ಆಜ್ಞೆಯನ್ನು ಪ್ರಚಾರ ಮಾಡಿದನು. {{gap}}ಅರ್ಧ ಗಳಿಗೆಯೊಳಗಾಗಿ ಇನ್ನೂರು ರಥಗಳೂ, ಐನೂರು ಮಂದಿ ರಾಹುತರ ದೊಡ್ಡ ಅಶ್ವದಳವೂ ಆಕ್ರಮಣಕ್ಕೆ ಸಿದ್ಧವಾಗಿ ಕಣಿವೆಯ ಮುಖದಲ್ಲಿ<noinclude></noinclude> sc5syusg039g50ivvlwvlgkfzedahio ಪುಟ:ಕ್ರಾಂತಿ ಕಲ್ಯಾಣ.pdf/೫೦೦ 104 86411 324146 203736 2026-06-03T02:49:18Z Shreesha Sharma 7840 /* Proofread */ 324146 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಕಡೆಯ ನಾಲ್ಕು ಮಾತು|right=೪೮೭}} ಆಂದೋಳನಗಳಿಗೂ, ಪರಿಪರಿಯ ಅತ್ಯಾಚಾರ ಪರಂಪರೆಗೂ ದಾರಿಯನ್ನು ತೋರಿಸಿಕೊಟ್ಟು ಜನಾಂಗವನ್ನು ಅಶಾಂತಿಗೂ ನಾನಾ ಕಷ್ಟಗಳಿಗೂ ಈಡುಮಾಡಿತು.” {{gap}}“....ಶಾಸನಗಳಲ್ಲಿ ಬಿಜ್ಜಳನ ರಾಜ್ಯ ಸಂಪಾದನೆಯ ವಿಧಾನವನ್ನು ಹೀಗೆ ವಿವರಿಸಿದೆ : ಆ ಪೆರ್ಮಾಡಿನೃಪಾಳಂಗಾಪಾದಿತ ಸಕಲ ಕುಲತಲೋರ್ವಿ ರಾಜ್ಯಂ ವ್ಯಾಪಾದಿತ ಚಾಲುಕ್ಯ ಮಹೀಪಾಲಕನಿಕರನಾದನಾ ಬಿಜ್ಜನೃಪಂ' ಈ ಕಂದಪದ್ಯದಲ್ಲಿಯ 'ವ್ಯಾಪಾದಿತ ಚಾಲುಕ್ಯ ಮಹೀಪಾಲಕನಿಕರನ್” ಎಂದು ಬಿಜ್ಜಳನನ್ನು ವಿಶ್ಲೇಷಿಸುವ ಪದವನ್ನು ನಾವು ಲಕ್ಷಿಸಬೇಕು. ಇದರಲ್ಲಿ ಬಿಜ್ಜಳನು ಚಾಲುಕ್ಯ ಮನೆತನದ ಅನೇಕ ರಾಜಪುತ್ರರನ್ನು ಕೊಲೆಮಾಡಿದನೆಂದು ಸ್ಪಷ್ಟವಾಗಿ ಹೇಳಿದೆ. ಈ ಕೊಲೆಗಡುಕನ ಕ್ರೂರ ಖಡಕ್ಕೆ ಸ್ವತಃ ಮುಮ್ಮಡಿ ತೈಲಪನೂ ಅವನ ಬಾಂಧವರೂ ಆಹುತಿಯಾಗಿರಬೇಕು.” {{gap}}ಕರ್ನಾಟಕದ ಕಲಚುರಿಗಳು” {{gap}}ಶ್ರೀ ದೇಸಾಯಿ ಪಾಂಡುರಂಗರಾಯರ, ಎಂ.ಎ. {{gap}}ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ {{gap}}ಜೂನ್-ಡಿಸೆಂಬರ್ ೧೯೫೩ {{gap}}ಈ ಉಲ್ಲೇಖಗಳಿಂದ ಚಾಲುಕ್ಯ ಇತಿಹಾಸದಲ್ಲಿ ಕಲಚೂರ್ಯ ಅಂತರಾಯ ಮತ್ತು ಅದರ ಮುಖ್ಯವ್ಯಕ್ಕಿ ಬಿಜ್ಜಳನ ಬಗೆಗೆ ಇತಿಹಾಸಕಾರರ ಅಭಿಪ್ರಾಯವೇನೆಂಬುದನ್ನು ಸ್ಥೂಲವಾಗಿ ತಿಳಿಯಬಹುದು. ವಿಲಾಸಾಸಕ್ತನಾಗಿದ್ದ ಮುಮ್ಮಡಿ ತೈಲಪನ ಕಾಲದಲ್ಲಿ ಪ್ರಾರಂಭವಾದ ಈ ರಾಜ್ಯಾಪಹಾರ ಹಂತ ಹಂತವಾಗಿ ಮುಂದುವರಿದು ಬಿಜ್ಜಳನನ್ನು ಕೌಲ್ಯ, ಹಿಂಸೆ, ಅತ್ಯಾಚಾರಗಳ ಅಧಃಪಾತಾಳಕ್ಕೆ ತಳ್ಳಿ ಕಲ್ಯಾಣದಲ್ಲಿ ರಕ್ತದ ಕೋಡಿ ಹರಿಸಿತು. ಚಾಲುಕ್ಯರಾಜ್ಯದ ಅವಸಾನಕ್ಕೆ ಕಾರಣವಾದ ಈ ದುರಂತ ಕತೆಯನ್ನು ಈ ಕಾದಂಬರೀ ಮಾಲೆಯ ಕೊನೆಯ ಮೂರು ಭಾಗಗಳಲ್ಲಿ ಪುನರ್ಘಟಿಸಲು ಪ್ರಯತ್ನಿಸಿದೆ. {{gap}}ಬಿಜ್ಜಳನ ಅನಂತರ ನಾಲ್ಕು ನೂರು ವರ್ಷಗಳು ಕಳೆದ ಮೇಲೆ ಯೂರೋಪ್ ಖಂಡದಲ್ಲಿ ಪ್ರಾರಂಭವಾದ ಸಾಹಿತ್ಯ ವಾಸ್ತುಶಿಲ್ಪ ಮತ್ತು ಕಲೆಗಳ ಪುನರುಜ್ಜಿವನಗಳ ನವಯುಗದ (Renaissance) ಪ್ರವರ್ತಕರಲ್ಲಿ ಒಬ್ಬನಾದ ಇರಾಸ್‌ಮಸ್‌ನು ತನ್ನ ಕಾಲದ ಅರಸರನ್ನು ಕುರಿತು, {{gap}}".... The Kings are eagles who fatten their eaglets on the flesh ofthe innocent birds. At this scream ofthe eagle, the people tremble, the senate yields, the nobility crings, the judges concur,<noinclude></noinclude> cpd4ilch9j2iv0b5hvjx91wnkro2k50 324154 324146 2026-06-03T02:58:54Z Shreelatha.Halemane 7642 /* Validated */ 324154 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಕಡೆಯ ನಾಲ್ಕು ಮಾತು|right=೪೮೭}} ಆಂದೋಳನಗಳಿಗೂ, ಪರಿಪರಿಯ ಅತ್ಯಾಚಾರ ಪರಂಪರೆಗೂ ದಾರಿಯನ್ನು ತೋರಿಸಿಕೊಟ್ಟು ಜನಾಂಗವನ್ನು ಅಶಾಂತಿಗೂ ನಾನಾ ಕಷ್ಟಗಳಿಗೂ ಈಡುಮಾಡಿತು.” {{gap}}“....ಶಾಸನಗಳಲ್ಲಿ ಬಿಜ್ಜಳನ ರಾಜ್ಯ ಸಂಪಾದನೆಯ ವಿಧಾನವನ್ನು ಹೀಗೆ ವಿವರಿಸಿದೆ : ಆ ಪೆರ್ಮಾಡಿನೃಪಾಳಂಗಾಪಾದಿತ ಸಕಲ ಕುಲತಲೋರ್ವಿ ರಾಜ್ಯಂ ವ್ಯಾಪಾದಿತ ಚಾಲುಕ್ಯ ಮಹೀಪಾಲಕನಿಕರನಾದನಾ ಬಿಜ್ಜನೃಪಂ' ಈ ಕಂದಪದ್ಯದಲ್ಲಿಯ 'ವ್ಯಾಪಾದಿತ ಚಾಲುಕ್ಯ ಮಹೀಪಾಲಕನಿಕರನ್” ಎಂದು ಬಿಜ್ಜಳನನ್ನು ವಿಶ್ಲೇಷಿಸುವ ಪದವನ್ನು ನಾವು ಲಕ್ಷಿಸಬೇಕು. ಇದರಲ್ಲಿ ಬಿಜ್ಜಳನು ಚಾಲುಕ್ಯ ಮನೆತನದ ಅನೇಕ ರಾಜಪುತ್ರರನ್ನು ಕೊಲೆಮಾಡಿದನೆಂದು ಸ್ಪಷ್ಟವಾಗಿ ಹೇಳಿದೆ. ಈ ಕೊಲೆಗಡುಕನ ಕ್ರೂರ ಖಡಕ್ಕೆ ಸ್ವತಃ ಮುಮ್ಮಡಿ ತೈಲಪನೂ ಅವನ ಬಾಂಧವರೂ ಆಹುತಿಯಾಗಿರಬೇಕು.” {{gap}}ಕರ್ನಾಟಕದ ಕಲಚುರಿಗಳು” {{gap}}ಶ್ರೀ ದೇಸಾಯಿ ಪಾಂಡುರಂಗರಾಯರ, ಎಂ.ಎ. {{gap}}ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ {{gap}}ಜೂನ್-ಡಿಸೆಂಬರ್ ೧೯೫೩ {{gap}}ಈ ಉಲ್ಲೇಖಗಳಿಂದ ಚಾಲುಕ್ಯ ಇತಿಹಾಸದಲ್ಲಿ ಕಲಚೂರ್ಯ ಅಂತರಾಯ ಮತ್ತು ಅದರ ಮುಖ್ಯವ್ಯಕ್ಕಿ ಬಿಜ್ಜಳನ ಬಗೆಗೆ ಇತಿಹಾಸಕಾರರ ಅಭಿಪ್ರಾಯವೇನೆಂಬುದನ್ನು ಸ್ಥೂಲವಾಗಿ ತಿಳಿಯಬಹುದು. ವಿಲಾಸಾಸಕ್ತನಾಗಿದ್ದ ಮುಮ್ಮಡಿ ತೈಲಪನ ಕಾಲದಲ್ಲಿ ಪ್ರಾರಂಭವಾದ ಈ ರಾಜ್ಯಾಪಹಾರ ಹಂತ ಹಂತವಾಗಿ ಮುಂದುವರಿದು ಬಿಜ್ಜಳನನ್ನು ಕೌಲ್ಯ, ಹಿಂಸೆ, ಅತ್ಯಾಚಾರಗಳ ಅಧಃಪಾತಾಳಕ್ಕೆ ತಳ್ಳಿ ಕಲ್ಯಾಣದಲ್ಲಿ ರಕ್ತದ ಕೋಡಿ ಹರಿಸಿತು. ಚಾಲುಕ್ಯರಾಜ್ಯದ ಅವಸಾನಕ್ಕೆ ಕಾರಣವಾದ ಈ ದುರಂತ ಕತೆಯನ್ನು ಈ ಕಾದಂಬರೀ ಮಾಲೆಯ ಕೊನೆಯ ಮೂರು ಭಾಗಗಳಲ್ಲಿ ಪುನರ್ಘಟಿಸಲು ಪ್ರಯತ್ನಿಸಿದೆ. {{gap}}ಬಿಜ್ಜಳನ ಅನಂತರ ನಾಲ್ಕು ನೂರು ವರ್ಷಗಳು ಕಳೆದ ಮೇಲೆ ಯೂರೋಪ್ ಖಂಡದಲ್ಲಿ ಪ್ರಾರಂಭವಾದ ಸಾಹಿತ್ಯ ವಾಸ್ತುಶಿಲ್ಪ ಮತ್ತು ಕಲೆಗಳ ಪುನರುಜ್ಜಿವನಗಳ ನವಯುಗದ (Renaissance) ಪ್ರವರ್ತಕರಲ್ಲಿ ಒಬ್ಬನಾದ ಇರಾಸ್‌ಮಸ್‌ನು ತನ್ನ ಕಾಲದ ಅರಸರನ್ನು ಕುರಿತು, {{gap}}".... The Kings are eagles who fatten their eaglets on the flesh ofthe innocent birds. At this scream ofthe eagle, the people tremble, the senate yields, the nobility crings, the judges concur,<noinclude></noinclude> djsmvbodlr7c8ez98z7qjz0g1w5zstf ಪುಟ:ಕ್ರಾಂತಿ ಕಲ್ಯಾಣ.pdf/೪೭೯ 104 86413 324136 203738 2026-06-03T02:29:20Z Shreesha Sharma 7840 /* Proofread */ 324136 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೬೬|right=ಕ್ರಾಂತಿ ಕಲ್ಯಾಣ}} {{gap}}-ಎಂದು ಬಸವಣ್ಣನವರು ನುಡಿದಿದ್ದ ಭವಿಷ್ಯ ನಿಜವಾಯಿತು. ಮಾಚಿದೇವರ ಈ ವೀರತ್ವ ಸಾಹಸಗಳ ಫಲವಾಗಿ “ಶರಣ” ಶೈವಧರ್ಮ, ಮುಂದೆ, “ವೀರ” ಶೈವಧರ್ಮವೆಂದು ಹೆಸರಾಯಿತು. ಮಾಚಿದೇವರು ಶರಣರಿಗೆ, “ಆದರ್ಶ* ವೀರರಾದರು. {{gap}}ಬಿಜ್ಜಳನ ಮರಣದ ಸುದ್ದಿ ಕೇಳಿ ಕುಮಾರ ಸೋಮೇಶ್ವರನು, ತನ್ನ ಅಧೀನದಲ್ಲಿದ್ದ ದೊಡ್ಡ ಸೈನ್ಯದೊಡನೆ ಮಂಗಳವೇಡೆಯಿಂದ ಹೊರಟು, ಒಂದು ವಾರದ ಅನಂತರ ಕಲ್ಯಾಣಕ್ಕೆ ಬಂದನು. ತಂದೆಯ ಕೊಲೆಗೆ ಕಾರಣರಾದವರನ್ನು ಶಿಕ್ಷಿಸುವುದು, ತಂದೆಯ ಇಚ್ಛೆಯಂತೆ ಚಾಲುಕ್ಯ ರಾಜ್ಯದ ಸರ್ವಾಧಿಕಾರಿ ಆಡಳಿತವನ್ನು ವಹಿಸಿಕೊಳ್ಳುವುದು ಅವನ ಉದ್ದೇಶವಾಗಿತ್ತು. ಈ ವಿಚಾರದಲ್ಲಿ ಮಾಧವ ನಾಯಕನಿಂದ ತನಗೆ ಸಹಾಯವಾಗಬಹುದಾಗಿ ಅವನು ನಿರೀಕ್ಷಿಸಿದ್ದನು. ಆದರೆ ಕಲ್ಯಾಣದ ವಾಸ್ತವ ಪರಿಸ್ಥಿತಿ, ಕಳೆದ ಕೆಲವು ದಿನಗಳಲ್ಲಿ ಬದಲಾವಣೆಯಾಗಿತ್ತು. {{gap}}ಪಟ್ಟಣಸ್ವಾಮಿ ಮಹಂತಶೆಟ್ಟಿಯ ನೇತೃತ್ವದಲ್ಲಿ ನಾಗರಿಕರು ಸೋಮೇಶ್ವರನನ್ನು ಸ್ವಾಗತಿಸಿದರು. ಆದರೆ ಅವರ ಬಾಡಿದ ಮುಖಗಳು, ಭಯಗ್ರಸ್ತವರ್ತನೆ ಸೋಮೇಶ್ವರನನ್ನು ತಲ್ಲಣಗೊಳಿಸಿದವು. ಚಾಲುಕ್ಯ ಚಕ್ರೇಶ್ವರ ಜಗದೇಕಮಲ್ಲನ ಅವಸಾನ, ಆಮೇಲೆ ನಡೆದ ಹೋರಾಟದಲ್ಲಿ ಕರ್ಣದೇವನ ಮರಣ, ಈ ವಿಚಾರಗಳು ನಡುದಾರಿಯಲ್ಲಿ ಅವನಿಗೆ ವರದಿಯಾಗಿದ್ದವು. ನಾಗರಿಕರ ವಿಷಣ್ಣತೆ, ಅವುಗಳಿಗಿಂತ ಹೆಚ್ಚಿನ ಮತ್ತಾವುದೋ ದುರ್ಘಟನೆಯ ಸೂಚನೆಯೆಂದು ಸೋಮೇಶ್ವರನು ತಿಳಿದನು. {{gap}}“ಕಳೆದ ಒಂದು ವಾರದಿಂದ ನಾವು ಜೀವದಾಸ ತೊರೆದು ಆತುರದಿಂದ ನಿಮ್ಮ ಬರವನ್ನು ನಿರೀಕ್ಷಿಸುತ್ತಿದ್ದೆವು, ಮಹಾಪ್ರಭು. ಮಾಧವ ನಾಯಕನ ಸೈನಿಕರು ನಗರದ ಅರ್ಧಭಾಗವನ್ನು ನಾಶಮಾಡಿದರು. ನಾಗರಿಕರ ಸಿರಿ ಸಂಪತ್ತುಗಳು ಸೂರೆಯಾದವು, ಪ್ರಭುಗಳು ಕೂಡಲೇ ನಗರದ ಸರ್ವಾಧಿಕಾರವನ್ನು ವಹಿಸಿಕೊಂಡು ನಾಗರಿಕರನ್ನು ವಿಪತ್ತಿನಿಂದ ರಕ್ಷಿಸಿಬೇಕಾಗಿ ಬೇಡುತ್ತೇವೆ.” -ಎಂದು ನಾಗರಿಕರು ಕೈಜೋಡಿಸಿ ಬಿನ್ನವಿಸಿಕೊಂಡರು. {{gap}}ನಗರಾಧಿಕಾರಿಯ ಕಡೆ ತಿರುಗಿ ಸೋಮೇಶ್ವರನು, “ಈ ಬಿನ್ನಪದ ಅರ್ಥವೇನು? ನಗರ ನಾಶವಾದದ್ದು ಹೇಗೆ ? ನಗರ ರಕ್ಷಕರೇನಾದರು ?” ಎಂದು ಕೇಳಿದನು. {{gap}}ನಗರಾಧಿಕಾರಿಯ ಮುಖ ವಿವರ್ಣವಾಯಿತು. ವಾಸ್ತವವಾಗಿ ನಡೆದುದನ್ನು ತಿಳಿಸುವ ಧೈರ್ಯವಿಲ್ಲದೆ ಸುಮ್ಮನೆ ನಿಂತನು. ಕೊನೆಗೆ ಸೋಮೇಶ್ವರನ ಭರವಸೆ<noinclude></noinclude> s1u86004wkwyezhp5qh44bmlmnnsy7h 324140 324136 2026-06-03T02:38:12Z Shreelatha.Halemane 7642 /* Validated */ 324140 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೬೬|right=ಕ್ರಾಂತಿ ಕಲ್ಯಾಣ}} {{gap}}-ಎಂದು ಬಸವಣ್ಣನವರು ನುಡಿದಿದ್ದ ಭವಿಷ್ಯ ನಿಜವಾಯಿತು. ಮಾಚಿದೇವರ ಈ ವೀರತ್ವ ಸಾಹಸಗಳ ಫಲವಾಗಿ “ಶರಣ” ಶೈವಧರ್ಮ, ಮುಂದೆ, “ವೀರ” ಶೈವಧರ್ಮವೆಂದು ಹೆಸರಾಯಿತು. ಮಾಚಿದೇವರು ಶರಣರಿಗೆ, “ಆದರ್ಶ* ವೀರರಾದರು. {{gap}}ಬಿಜ್ಜಳನ ಮರಣದ ಸುದ್ದಿ ಕೇಳಿ ಕುಮಾರ ಸೋಮೇಶ್ವರನು, ತನ್ನ ಅಧೀನದಲ್ಲಿದ್ದ ದೊಡ್ಡ ಸೈನ್ಯದೊಡನೆ ಮಂಗಳವೇಡೆಯಿಂದ ಹೊರಟು, ಒಂದು ವಾರದ ಅನಂತರ ಕಲ್ಯಾಣಕ್ಕೆ ಬಂದನು. ತಂದೆಯ ಕೊಲೆಗೆ ಕಾರಣರಾದವರನ್ನು ಶಿಕ್ಷಿಸುವುದು, ತಂದೆಯ ಇಚ್ಛೆಯಂತೆ ಚಾಲುಕ್ಯ ರಾಜ್ಯದ ಸರ್ವಾಧಿಕಾರಿ ಆಡಳಿತವನ್ನು ವಹಿಸಿಕೊಳ್ಳುವುದು ಅವನ ಉದ್ದೇಶವಾಗಿತ್ತು. ಈ ವಿಚಾರದಲ್ಲಿ ಮಾಧವ ನಾಯಕನಿಂದ ತನಗೆ ಸಹಾಯವಾಗಬಹುದಾಗಿ ಅವನು ನಿರೀಕ್ಷಿಸಿದ್ದನು. ಆದರೆ ಕಲ್ಯಾಣದ ವಾಸ್ತವ ಪರಿಸ್ಥಿತಿ, ಕಳೆದ ಕೆಲವು ದಿನಗಳಲ್ಲಿ ಬದಲಾವಣೆಯಾಗಿತ್ತು. {{gap}}ಪಟ್ಟಣಸ್ವಾಮಿ ಮಹಂತಶೆಟ್ಟಿಯ ನೇತೃತ್ವದಲ್ಲಿ ನಾಗರಿಕರು ಸೋಮೇಶ್ವರನನ್ನು ಸ್ವಾಗತಿಸಿದರು. ಆದರೆ ಅವರ ಬಾಡಿದ ಮುಖಗಳು, ಭಯಗ್ರಸ್ತವರ್ತನೆ ಸೋಮೇಶ್ವರನನ್ನು ತಲ್ಲಣಗೊಳಿಸಿದವು. ಚಾಲುಕ್ಯ ಚಕ್ರೇಶ್ವರ ಜಗದೇಕಮಲ್ಲನ ಅವಸಾನ, ಆಮೇಲೆ ನಡೆದ ಹೋರಾಟದಲ್ಲಿ ಕರ್ಣದೇವನ ಮರಣ, ಈ ವಿಚಾರಗಳು ನಡುದಾರಿಯಲ್ಲಿ ಅವನಿಗೆ ವರದಿಯಾಗಿದ್ದವು. ನಾಗರಿಕರ ವಿಷಣ್ಣತೆ, ಅವುಗಳಿಗಿಂತ ಹೆಚ್ಚಿನ ಮತ್ತಾವುದೋ ದುರ್ಘಟನೆಯ ಸೂಚನೆಯೆಂದು ಸೋಮೇಶ್ವರನು ತಿಳಿದನು. {{gap}}“ಕಳೆದ ಒಂದು ವಾರದಿಂದ ನಾವು ಜೀವದಾಸ ತೊರೆದು ಆತುರದಿಂದ ನಿಮ್ಮ ಬರವನ್ನು ನಿರೀಕ್ಷಿಸುತ್ತಿದ್ದೆವು, ಮಹಾಪ್ರಭು. ಮಾಧವ ನಾಯಕನ ಸೈನಿಕರು ನಗರದ ಅರ್ಧಭಾಗವನ್ನು ನಾಶಮಾಡಿದರು. ನಾಗರಿಕರ ಸಿರಿ ಸಂಪತ್ತುಗಳು ಸೂರೆಯಾದವು, ಪ್ರಭುಗಳು ಕೂಡಲೇ ನಗರದ ಸರ್ವಾಧಿಕಾರವನ್ನು ವಹಿಸಿಕೊಂಡು ನಾಗರಿಕರನ್ನು ವಿಪತ್ತಿನಿಂದ ರಕ್ಷಿಸಿಬೇಕಾಗಿ ಬೇಡುತ್ತೇವೆ.” -ಎಂದು ನಾಗರಿಕರು ಕೈಜೋಡಿಸಿ ಬಿನ್ನವಿಸಿಕೊಂಡರು. {{gap}}ನಗರಾಧಿಕಾರಿಯ ಕಡೆ ತಿರುಗಿ ಸೋಮೇಶ್ವರನು, “ಈ ಬಿನ್ನಪದ ಅರ್ಥವೇನು? ನಗರ ನಾಶವಾದದ್ದು ಹೇಗೆ ? ನಗರ ರಕ್ಷಕರೇನಾದರು ?” ಎಂದು ಕೇಳಿದನು. {{gap}}ನಗರಾಧಿಕಾರಿಯ ಮುಖ ವಿವರ್ಣವಾಯಿತು. ವಾಸ್ತವವಾಗಿ ನಡೆದುದನ್ನು ತಿಳಿಸುವ ಧೈರ್ಯವಿಲ್ಲದೆ ಸುಮ್ಮನೆ ನಿಂತನು. ಕೊನೆಗೆ ಸೋಮೇಶ್ವರನ ಭರವಸೆ<noinclude></noinclude> 72csto1mg4sxydvgothxce39rnkfiww ಪುಟ:ಕ್ರಾಂತಿ ಕಲ್ಯಾಣ.pdf/೪೭೮ 104 86419 324134 203744 2026-06-03T02:25:06Z Shreesha Sharma 7840 /* Proofread */ 324134 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೬೫}} {{gap}}ಗಾಯಗೊಂಡು ನರಳುತ್ತ ಡೋಲಿಯಲ್ಲಿ ಬಿದ್ದಿದ್ದ ಮಾಧವ ನಾಯಕನಿಗೆ ಹೊಸ ಆಕ್ರಮಣದ ವಾರ್ತೆ ವರದಿಯಾದಾಗ ಸೈನ್ಯ ಕಲ್ಯಾಣಕ್ಕೆ ಹಿಂದಿರುಗುವಂತೆ ಆಜ್ಞೆ ಮಾಡಿದನು. ಪೂರ್ವಾಹ್ನ ಮೊದಲನೆಯ ಪ್ರಹರ ಮುಗಿಯುವಷ್ಟರಲ್ಲಿ ಕಣಿವೆಯಾಚಿನ ಸೈನ್ಯ ಶಿಬಿರ ಜನಶೂನ್ಯವಾಯಿತು. ಸೈನಿಕರು ಬಿಟ್ಟು ಹೋದ ಗೂಡಾರಗಳು, ಚಕ್ಕಡಿಗಳು, ಸಾಮಾನು ಸರಂಜಾಮುಗಳು, ಎತ್ತುಗಳು, ಕುದುರೆಗಳು ಗಣಾಚಾರಿ ಯೋಧರ ವಶವಾದವು. {{gap}}ಕಾಳಗ ಮುಗಿದ ಮೇಲೆ ಅಗ್ಗಳನೂ, ಜಂಗಮ ತಂಡದ ನಾಯಕನೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಾಚಿದೇವ, ಚೆನ್ನಬಸವಣ್ಣನವರನ್ನು ನೋಡಿದರು. {{gap}}“ಕಲಿದೇವರ ದೇವನ ಸಹಾಯಕ್ಕಾಗಿ ಕೂಡಲ ಸಂಗಮ ದೇವನು ನಿಮ್ಮಲ್ಲಿಗೆ ಕಳುಹಿಸಿದನು, ಅಗ್ಗಳ, ನೀವು ಸಮಯಕ್ಕೆ ಸರಿಯಗಿ ಬಂದಿದ್ದರಿಂದ ನಾವು ಉಳಿದು ಕೊಂಡೆವು,” ಎಂದು ಅವರು ಅಗ್ಗಳನನ್ನೂ, ಜಂಗಮ ತಂಡದ ನಾಯಕನನ್ನೂ ಅಭಿನಂದಿಸಿ ವಂದನೆ ಸಲ್ಲಿಸಿದರು. {{gap}}ಸುತ್ತಲ ಪ್ರದೇಶದಲ್ಲಿ ಸಾಂಕ್ರಾಮಿಕ ಹರಡದಿರಲೆಂದು ಗಣಾಚಾರಿ ಯೋಧರು ಯುದ್ಧದಲ್ಲಿ ಮಡಿದವರೆಲ್ಲರ ಅಂತ್ಯ ಸಂಸ್ಕಾರ ನಡೆಸಿದರು. ಸಂಜೆಯ ಹೊತ್ತಿಗೆ ಈ ಕಾರ್ಯ ಮುಗಿಯಿತು. ಕೃಷ್ಣಂ ಎರಡು ತಂಡಗಳಲ್ಲಿದ್ದ ತೆಪ್ಪಗಳೂ ದೋಣಿಗಳೂ ತಂಗಡಿಯ ಹಾಯ್ದಡಕ್ಕೆ ಬಂದವು. ಹಠಾತ್ತಾಗಿ ಹೆಚ್ಚಿದ್ದ ಪ್ರವಾಹ ಪುನಃ ಇಳಿಮುಖವಾಯಿತು. ಆ ರಾತ್ರಿಯೇ ಗಣಾಚಾರಿ ಯೋಧದಳಗಳೂ, ಅವರ ಸಂಗಡಿದ್ದ ಮಾಚಿದೇವ, ಚೆನ್ನಬಸವಣ್ಣ ಕೂಗಿನ ಮಾರಿತಂದೆ, ಶೂಲದ ಬೊಮ್ಮಯ್ಯ ಇವರೇ ಮುಂತಾದ ಶರಣರೂ, ಉತ್ತರಾಪಥದ ಜಂಗಮರೂ ನದಿಯನ್ನು ದಾಟಿ ಆಚಿನ ದಡದಲ್ಲಿದ್ದ ಶರಣರ ಯಾತ್ರಾದಳವನ್ನು ಸೇರಿದರು. {{gap}}ಆಮೇಲಿನ ಕೆಲವು ದಿನಗಳಲ್ಲಿ ಯಾವ ದುರ್ಘಟನೆಯೂ ಇಲ್ಲದೆ ಶರಣರು ಮಲಪ್ರಭಾ ಘಟಪ್ರಭಾ ನದಿಗಳನ್ನು ದಾಟಿದರು. ಅಲ್ಲಿಂದ ಉಳಿವೆಯ ಮಾರ್ಗ ನಿರಾಪದವೆಂದು ತಿಳಿದಿದ್ದ ಮಾಚಿದೇವರು ಕುರುಗೋಡಿನ ಜಲಾಶಯದಲ್ಲಿ ಅಸ್ತ್ರಗಳನ್ನು ತೊಳೆದು ಗಣಾಚಾರಿ ಯೋಧರಿಗೊಪ್ಪಿಸಿ, ಶರಣರಿಂದ ಬೀಳ್ಕೊಂಡು ತಮ್ಮ ಸ್ವಸ್ಥಾನವಾದ ಹಿಪ್ಪರಗಿಗೆ ಹಿಂದಿರುಗಿ ಲಿಂಗೈಕ್ಯರಾದರು. {{gap}}“ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು, ನೋಡಾ ! ಒಬ್ಬ ಜಂಗಮನ ಅಭಿಮಾನದಿಂದ ಚಾಲುಕ್ಯ ರಾಯನ ಆಳ್ವಿಕೆ ತೆಗೆಯಿತ್ತು”<noinclude></noinclude> l0rarbss2yyi2i7v31af6tmemsjvvhr 324135 324134 2026-06-03T02:28:31Z Shreelatha.Halemane 7642 /* Validated */ 324135 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೬೫}} {{gap}}ಗಾಯಗೊಂಡು ನರಳುತ್ತ ಡೋಲಿಯಲ್ಲಿ ಬಿದ್ದಿದ್ದ ಮಾಧವ ನಾಯಕನಿಗೆ ಹೊಸ ಆಕ್ರಮಣದ ವಾರ್ತೆ ವರದಿಯಾದಾಗ ಸೈನ್ಯ ಕಲ್ಯಾಣಕ್ಕೆ ಹಿಂದಿರುಗುವಂತೆ ಆಜ್ಞೆ ಮಾಡಿದನು. ಪೂರ್ವಾಹ್ನ ಮೊದಲನೆಯ ಪ್ರಹರ ಮುಗಿಯುವಷ್ಟರಲ್ಲಿ ಕಣಿವೆಯಾಚಿನ ಸೈನ್ಯ ಶಿಬಿರ ಜನಶೂನ್ಯವಾಯಿತು. ಸೈನಿಕರು ಬಿಟ್ಟು ಹೋದ ಗೂಡಾರಗಳು, ಚಕ್ಕಡಿಗಳು, ಸಾಮಾನು ಸರಂಜಾಮುಗಳು, ಎತ್ತುಗಳು, ಕುದುರೆಗಳು ಗಣಾಚಾರಿ ಯೋಧರ ವಶವಾದವು. {{gap}}ಕಾಳಗ ಮುಗಿದ ಮೇಲೆ ಅಗ್ಗಳನೂ, ಜಂಗಮ ತಂಡದ ನಾಯಕನೂ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಾಚಿದೇವ, ಚೆನ್ನಬಸವಣ್ಣನವರನ್ನು ನೋಡಿದರು. {{gap}}“ಕಲಿದೇವರ ದೇವನ ಸಹಾಯಕ್ಕಾಗಿ ಕೂಡಲ ಸಂಗಮ ದೇವನು ನಿಮ್ಮಲ್ಲಿಗೆ ಕಳುಹಿಸಿದನು, ಅಗ್ಗಳ, ನೀವು ಸಮಯಕ್ಕೆ ಸರಿಯಗಿ ಬಂದಿದ್ದರಿಂದ ನಾವು ಉಳಿದು ಕೊಂಡೆವು,” ಎಂದು ಅವರು ಅಗ್ಗಳನನ್ನೂ, ಜಂಗಮ ತಂಡದ ನಾಯಕನನ್ನೂ ಅಭಿನಂದಿಸಿ ವಂದನೆ ಸಲ್ಲಿಸಿದರು. {{gap}}ಸುತ್ತಲ ಪ್ರದೇಶದಲ್ಲಿ ಸಾಂಕ್ರಾಮಿಕ ಹರಡದಿರಲೆಂದು ಗಣಾಚಾರಿ ಯೋಧರು ಯುದ್ಧದಲ್ಲಿ ಮಡಿದವರೆಲ್ಲರ ಅಂತ್ಯ ಸಂಸ್ಕಾರ ನಡೆಸಿದರು. ಸಂಜೆಯ ಹೊತ್ತಿಗೆ ಈ ಕಾರ್ಯ ಮುಗಿಯಿತು. ಕೃಷ್ಣಂ ಎರಡು ತಂಡಗಳಲ್ಲಿದ್ದ ತೆಪ್ಪಗಳೂ ದೋಣಿಗಳೂ ತಂಗಡಿಯ ಹಾಯ್ದಡಕ್ಕೆ ಬಂದವು. ಹಠಾತ್ತಾಗಿ ಹೆಚ್ಚಿದ್ದ ಪ್ರವಾಹ ಪುನಃ ಇಳಿಮುಖವಾಯಿತು. ಆ ರಾತ್ರಿಯೇ ಗಣಾಚಾರಿ ಯೋಧದಳಗಳೂ, ಅವರ ಸಂಗಡಿದ್ದ ಮಾಚಿದೇವ, ಚೆನ್ನಬಸವಣ್ಣ ಕೂಗಿನ ಮಾರಿತಂದೆ, ಶೂಲದ ಬೊಮ್ಮಯ್ಯ ಇವರೇ ಮುಂತಾದ ಶರಣರೂ, ಉತ್ತರಾಪಥದ ಜಂಗಮರೂ ನದಿಯನ್ನು ದಾಟಿ ಆಚಿನ ದಡದಲ್ಲಿದ್ದ ಶರಣರ ಯಾತ್ರಾದಳವನ್ನು ಸೇರಿದರು. {{gap}}ಆಮೇಲಿನ ಕೆಲವು ದಿನಗಳಲ್ಲಿ ಯಾವ ದುರ್ಘಟನೆಯೂ ಇಲ್ಲದೆ ಶರಣರು ಮಲಪ್ರಭಾ ಘಟಪ್ರಭಾ ನದಿಗಳನ್ನು ದಾಟಿದರು. ಅಲ್ಲಿಂದ ಉಳಿವೆಯ ಮಾರ್ಗ ನಿರಾಪದವೆಂದು ತಿಳಿದಿದ್ದ ಮಾಚಿದೇವರು ಕುರುಗೋಡಿನ ಜಲಾಶಯದಲ್ಲಿ ಅಸ್ತ್ರಗಳನ್ನು ತೊಳೆದು ಗಣಾಚಾರಿ ಯೋಧರಿಗೊಪ್ಪಿಸಿ, ಶರಣರಿಂದ ಬೀಳ್ಕೊಂಡು ತಮ್ಮ ಸ್ವಸ್ಥಾನವಾದ ಹಿಪ್ಪರಗಿಗೆ ಹಿಂದಿರುಗಿ ಲಿಂಗೈಕ್ಯರಾದರು. {{gap}}“ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು, ನೋಡಾ ! ಒಬ್ಬ ಜಂಗಮನ ಅಭಿಮಾನದಿಂದ ಚಾಲುಕ್ಯ ರಾಯನ ಆಳ್ವಿಕೆ ತೆಗೆಯಿತ್ತು”<noinclude></noinclude> 9t18flndtktf86xjbt1f2fh56k5uaj8 ಪುಟ:ಕ್ರಾಂತಿ ಕಲ್ಯಾಣ.pdf/೪೯೧ 104 86420 324165 203745 2026-06-03T03:23:05Z Shreesha Sharma 7840 /* Proofread */ 324165 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೭೮|right=ಕ್ರಾಂತಿ ಕಲ್ಯಾಣ}} ಹತ್ಯೆಯ ಬಗೆಗೆ ಕ್ರಮಿತನ ಸಂಶೋಧನೆ ಭದ್ರವಾದ ಅಸ್ತಿವಾರ ಮೇಲೆ ನಿಂತಿದೆ ಎಂಬುದನ್ನು ತಿಳಿದು, ಕ್ರಮಿತನ ಕಡೆ ತಿರುಗಿ, “ಇವು ನಿಮಗೆ ದೊರಕಿದ್ದು ಹೇಗೆ?” ಎಂದು ಕೇಳಿದನು. {{gap}}ಕ್ರಮಿತನು ಹೇಳಿದನು- “ರಾಜಗೃಹ ನಮ್ಮ ವಶವಾದ ಮೇಲೆ ಜಗದೇಕ ಮಲ್ಲರಸರ ಶಯನಾಗಾರದಲ್ಲಿ ಬಟ್ಟೆಗಳ ಅಡಿಯಲ್ಲಿ ರಕ್ತದ ಕಲೆಗಳಿದ್ದ ದೀವಟಿಗ ಸಮವಸ್ತ್ರವೊಂದು ಸಿಕ್ಕಿತು. ಮೃತದೇಹದ ಬಟ್ಟೆಗಳನ್ನು ಬದಲಾಯಿಸಿದವರು ಅಲ್ಲಿ ಅದನ್ನು ಅವಿಚಿಟ್ಟಿದ್ದರು. ಸಮವಸ್ತ್ರದ ಕಿಸೆಯಲ್ಲಿ ಈ ಪತ್ರಗಳಿದ್ದವು.” {{gap}}“ಈ ಸಂಬಂಧದಲ್ಲಿ ಚೆನ್ನಬಸವಣ್ಣನವರು ಕುಮಾರ ಪ್ರೆಮಾರ್ಣವನಿಗೆ ಆಶ್ರಯ ಕೊಟ್ಟದ್ದು, ಅವನನ್ನು ಕರ್ಹಾಡಕ್ಕೆ ಕಳುಹಿಸಲು ಮಾಚಿದೇವರು ಏರ್ಪಡಿಸಿದ್ದು ಯುಕ್ತವೇ ಎಂದು ಯೋಚಿಸುತ್ತಿದ್ದೇನೆ. ಶರಣರು ತಮ್ಮ ವರ್ತನೆಯಿಂದ....” {{gap}}ಸೋಮೇಶ್ವರನಿಗೆ ಮಾತು ಮುಗಿಸುವ ಅವಕಾಶವನ್ನೂ ಕೊಡದೆ ಕ್ರಮಿತನು ಹೇಳಿದನು : “ಮಾಚಿದೇವ, ಚೆನ್ನಬಸವಣ್ಣನವರು ಧರ್ಮನೀತಿಗಳಿಗೆ ಅನುಸಾರವಾಗಿ ನಡೆದುಕೊಂಡರು, ಸೋಮೇಶ್ವರ, ವಿಪದ್ಧಸ್ತರಿಗೆ ನೆರವಾಗುವುದು ಮಾನವ ಧರ್ಮ, ಆ ಬಾಲಕನನ್ನೂ ದಾಸಿಯನ್ನೂ ಬಿಜ್ಜಳರಾಯರೇ ಸುರಕ್ಷಿತವಾಗಿ ಕರ್ಹಾಡಕ್ಕೆ ವಿಜಯಾರ್ಕದೇವರ ಬಳಿಗೆ ಕಳುಹಿಸಬೇಕಾಗಿತ್ತು. ಮಾಚಿದೇವರು ಆ ಕಾರ್ಯ ಮಾಡಿದರು. ಅದರಲ್ಲಿ ಯಾವ ರಾಜಕೀಯ ಉದ್ದೇಶವೂ ಇರಲಿಲ್ಲ.” {{gap}}“ಸಂದೇಶದ ನುಡಿಗಳು ಶರಣರಿಗೆ ತಿಳಿದಿದ್ದಿತೆ ?” {{gap}}“ಜಗದೇಕ ಮಲ್ಲನಿಗೆ ತಿಳಿಸುವವರೆಗೆ ರಾಣಿಯು ಸ೦ದೇಶ ರಹಸ್ಯವಾಗಿತ್ತೆಂಬುದನ್ನು ದಾಸಿಯ ಪತ್ರದಿಂದ ತಿಳಿಯಬಹುದು. ದಾಸಿ ಜಗದೇಕಮಲ್ಲನನ್ನು ನೋಡಿದಳೆಂಬುದು ಶರಣರಿಗೆ ತಿಳಿಯದು. ಆಗ ಅವರು ವಲಸೆ ಹೋಗುವ ಸಿದ್ಧತೆಯಲ್ಲಿ ಮಗ್ನರಾಗಿದ್ದರು.” {{gap}}ಆಗ ಸೋಮೇಶ್ವರನು ಉಷಾವತಿಯ ಪತ್ರವನ್ನೂ ರಾಣಿಯ ಸಂದೇಶವಿದ್ದ ಕಂಚುಕದ ತುಂಡನ್ನೂ ಕೈಯಲ್ಲಿ ಹಿಡಿದು, “ಈಗ ಇವುಗಳನ್ನು ಏನು ಮಾಡಬೇಕೆಂದು ನಿಮ್ಮ ಸಲಹೆ?” ಎಂದನು. {{gap}}“ಇವುಗಳನ್ನು ನಾನೇ ನಿಮಗೆ ಕೊಡುವುದು ನನ್ನ ಉದ್ದೇಶವಾಗಿತ್ತು, ಸೋಮೇಶ್ವರ, ಆ ಕಾರ್ಯ ಮುಗಿಯಿತು. ನೀವು ಈ ಪತ್ರಗಳನ್ನು ಪ್ರೇಮದ ಸರ್ವವ್ಯಾಪೀ ಶಕ್ತಿಯ ನಿದರ್ಶನವಾಗಿ ನಿಮ್ಮಲ್ಲಿಯೇ ಇಟ್ಟುಕೊಳ್ಳಬಹುದು, ಇಲ್ಲವೇ ನಿಮ್ಮ ತಂದೆಯವರ ಅವಿಚಾರ ವರ್ತನೆಯ ಪ್ರತ್ಯಕ್ಷ ಸಾಕ್ಷ್ಯಗಳೆಂದು ತಿಳಿದು ಸುಟ್ಟು ಹಾಕಬಹುದು. ಇನ್ನು ವಾನಪ್ರಸ್ಥಕ್ಕೆ ಅನುಮತಿ ಬೇಡುತ್ತೇನೆ”<noinclude></noinclude> h6dkw23prz3uppd21wa8ci6jlu78wc0 324168 324165 2026-06-03T03:28:23Z Shreelatha.Halemane 7642 /* Validated */ 324168 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೭೮|right=ಕ್ರಾಂತಿ ಕಲ್ಯಾಣ}} ಹತ್ಯೆಯ ಬಗೆಗೆ ಕ್ರಮಿತನ ಸಂಶೋಧನೆ ಭದ್ರವಾದ ಅಸ್ತಿವಾರ ಮೇಲೆ ನಿಂತಿದೆ ಎಂಬುದನ್ನು ತಿಳಿದು, ಕ್ರಮಿತನ ಕಡೆ ತಿರುಗಿ, “ಇವು ನಿಮಗೆ ದೊರಕಿದ್ದು ಹೇಗೆ?” ಎಂದು ಕೇಳಿದನು. {{gap}}ಕ್ರಮಿತನು ಹೇಳಿದನು- “ರಾಜಗೃಹ ನಮ್ಮ ವಶವಾದ ಮೇಲೆ ಜಗದೇಕ ಮಲ್ಲರಸರ ಶಯನಾಗಾರದಲ್ಲಿ ಬಟ್ಟೆಗಳ ಅಡಿಯಲ್ಲಿ ರಕ್ತದ ಕಲೆಗಳಿದ್ದ ದೀವಟಿಗ ಸಮವಸ್ತ್ರವೊಂದು ಸಿಕ್ಕಿತು. ಮೃತದೇಹದ ಬಟ್ಟೆಗಳನ್ನು ಬದಲಾಯಿಸಿದವರು ಅಲ್ಲಿ ಅದನ್ನು ಅವಿಚಿಟ್ಟಿದ್ದರು. ಸಮವಸ್ತ್ರದ ಕಿಸೆಯಲ್ಲಿ ಈ ಪತ್ರಗಳಿದ್ದವು.” {{gap}}“ಈ ಸಂಬಂಧದಲ್ಲಿ ಚೆನ್ನಬಸವಣ್ಣನವರು ಕುಮಾರ ಪ್ರೆಮಾರ್ಣವನಿಗೆ ಆಶ್ರಯ ಕೊಟ್ಟದ್ದು, ಅವನನ್ನು ಕರ್ಹಾಡಕ್ಕೆ ಕಳುಹಿಸಲು ಮಾಚಿದೇವರು ಏರ್ಪಡಿಸಿದ್ದು ಯುಕ್ತವೇ ಎಂದು ಯೋಚಿಸುತ್ತಿದ್ದೇನೆ. ಶರಣರು ತಮ್ಮ ವರ್ತನೆಯಿಂದ....” {{gap}}ಸೋಮೇಶ್ವರನಿಗೆ ಮಾತು ಮುಗಿಸುವ ಅವಕಾಶವನ್ನೂ ಕೊಡದೆ ಕ್ರಮಿತನು ಹೇಳಿದನು : “ಮಾಚಿದೇವ, ಚೆನ್ನಬಸವಣ್ಣನವರು ಧರ್ಮನೀತಿಗಳಿಗೆ ಅನುಸಾರವಾಗಿ ನಡೆದುಕೊಂಡರು, ಸೋಮೇಶ್ವರ, ವಿಪದ್ಧಸ್ತರಿಗೆ ನೆರವಾಗುವುದು ಮಾನವ ಧರ್ಮ, ಆ ಬಾಲಕನನ್ನೂ ದಾಸಿಯನ್ನೂ ಬಿಜ್ಜಳರಾಯರೇ ಸುರಕ್ಷಿತವಾಗಿ ಕರ್ಹಾಡಕ್ಕೆ ವಿಜಯಾರ್ಕದೇವರ ಬಳಿಗೆ ಕಳುಹಿಸಬೇಕಾಗಿತ್ತು. ಮಾಚಿದೇವರು ಆ ಕಾರ್ಯ ಮಾಡಿದರು. ಅದರಲ್ಲಿ ಯಾವ ರಾಜಕೀಯ ಉದ್ದೇಶವೂ ಇರಲಿಲ್ಲ.” {{gap}}“ಸಂದೇಶದ ನುಡಿಗಳು ಶರಣರಿಗೆ ತಿಳಿದಿದ್ದಿತೆ ?” {{gap}}“ಜಗದೇಕ ಮಲ್ಲನಿಗೆ ತಿಳಿಸುವವರೆಗೆ ರಾಣಿಯು ಸ೦ದೇಶ ರಹಸ್ಯವಾಗಿತ್ತೆಂಬುದನ್ನು ದಾಸಿಯ ಪತ್ರದಿಂದ ತಿಳಿಯಬಹುದು. ದಾಸಿ ಜಗದೇಕಮಲ್ಲನನ್ನು ನೋಡಿದಳೆಂಬುದು ಶರಣರಿಗೆ ತಿಳಿಯದು. ಆಗ ಅವರು ವಲಸೆ ಹೋಗುವ ಸಿದ್ಧತೆಯಲ್ಲಿ ಮಗ್ನರಾಗಿದ್ದರು.” {{gap}}ಆಗ ಸೋಮೇಶ್ವರನು ಉಷಾವತಿಯ ಪತ್ರವನ್ನೂ ರಾಣಿಯ ಸಂದೇಶವಿದ್ದ ಕಂಚುಕದ ತುಂಡನ್ನೂ ಕೈಯಲ್ಲಿ ಹಿಡಿದು, “ಈಗ ಇವುಗಳನ್ನು ಏನು ಮಾಡಬೇಕೆಂದು ನಿಮ್ಮ ಸಲಹೆ?” ಎಂದನು. {{gap}}“ಇವುಗಳನ್ನು ನಾನೇ ನಿಮಗೆ ಕೊಡುವುದು ನನ್ನ ಉದ್ದೇಶವಾಗಿತ್ತು, ಸೋಮೇಶ್ವರ, ಆ ಕಾರ್ಯ ಮುಗಿಯಿತು. ನೀವು ಈ ಪತ್ರಗಳನ್ನು ಪ್ರೇಮದ ಸರ್ವವ್ಯಾಪೀ ಶಕ್ತಿಯ ನಿದರ್ಶನವಾಗಿ ನಿಮ್ಮಲ್ಲಿಯೇ ಇಟ್ಟುಕೊಳ್ಳಬಹುದು, ಇಲ್ಲವೇ ನಿಮ್ಮ ತಂದೆಯವರ ಅವಿಚಾರ ವರ್ತನೆಯ ಪ್ರತ್ಯಕ್ಷ ಸಾಕ್ಷ್ಯಗಳೆಂದು ತಿಳಿದು ಸುಟ್ಟು ಹಾಕಬಹುದು. ಇನ್ನು ವಾನಪ್ರಸ್ಥಕ್ಕೆ ಅನುಮತಿ ಬೇಡುತ್ತೇನೆ”<noinclude></noinclude> 6tqp3w5e4srvdfgdgw1ggtbhnf649kv ಪುಟ:ಕ್ರಾಂತಿ ಕಲ್ಯಾಣ.pdf/೪೯೩ 104 86421 324167 203746 2026-06-03T03:28:01Z Shreesha Sharma 7840 /* Proofread */ 324167 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೮೦|right=ಕ್ರಾಂತಿ ಕಲ್ಯಾಣ}} {{gap}}“ಬಸವಣ್ಣನವರು ಕಲ್ಯಾಣವನ್ನು ಬಿಟ್ಟ ಆ ಚರಿತ್ರಾರ್ಹವಾದ ದಿನ, ನಗರದ ಪಾಂಥನಿವಾಸವೊಂದರಲ್ಲಿ ಅಗ್ಗಳನು ಹೇಳಿದ ಸುಭಾಷಿತ ಇಂದು ನನಗೆ ನೆನಪಿಗೆ ಬರುತ್ತಿದೆ : {{gap}}“ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು {{gap}}ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಷ್ಟಂ {{gap}}ಅದ್ವೈವ ವಾ ಮರಣಮಸ್ತು ಯುಗಾಂತರೇ ವಾ {{gap}}ನ್ಯಾಯಾತ್ ಪಥಃ ಪ್ರವಿಚಲಂತಿ ಪದಂ ನ ಧೀರಾಃ {{gap}}“ಬುದ್ದಿಜೀವಿಗಳು ಹೊಗಳಲಿ, ತೆಗಳಲಿ; ಸಿರಿಸಂಪತ್ತು ಬರಲಿ, ಹೋಗಲಿ; ಇಂದೇ ಮೃತ್ಯು ಎದುರಿಗೆ ನಿಲ್ಲಲಿ, ಅಥವಾ ಯುಗಾಂತರದಲ್ಲಿ ಅದು ಸಂಭವಿಸಲಿ; ಧೀರರು ನ್ಯಾಯದ ಹಾದಿಯಿಂದ ಒಂದು ಹೆಜ್ಜೆ ಕೂಡ ಅತ್ತ ಇತ್ತ ಸರಿಯುವುದಿಲ್ಲ. ತಾವು ಅಂತಹ ಧೀರರೆಂಬುದನ್ನು ತಮ್ಮ ವರ್ತನೆಯಿಂದ ಶರಣರು ಜಗತ್ತಿಗೆ ನಿದರ್ಶನ ಮಾಡಿಕೊಟ್ಟಿದ್ದಾರೆ. ಅವರು ತೋರಿಸಿದ ದಾರಿ ನಮ್ಮ ಜೀವನದ ಹೆದ್ದಾರಿಯಾಗಲಿ,” - {{gap}}-ಎಂದು ಹೇಳಿ ಕ್ರಮಿತನು ಬೀಳ್ಕೊಡುಗೆಯ ವಿನಯಾಚಾರಕ್ಕಾಗಿ ಕಾಯದೆ ಅಲ್ಲಿಂದ ಹೊರಟನು. {{gap}}ಆ ರಾತ್ರಿಯೇ ಅವನು ತಾನು ಆರ್ಜಿಸಿದ್ದ ಸಿರಿಸಂಪತ್ತುಗಳನ್ನೂ, ಪತ್ನಿ ಪುತ್ರರನ್ನೂ ತ್ಯಜಿಸಿ, ಏಕಾಂಗಿಯಾಗಿ ಕಲ್ಯಾಣವನ್ನು ಬಿಟ್ಟನು. ಆಮೇಲೆ ಇಹಲೋಕದಲ್ಲಿ ಅವನನ್ನು ಯಾರೂ ನೋಡಲಿಲ್ಲ. {{center|***}}<noinclude></noinclude> an2i5qv63vr7wnw3hwluzq6usjo8s8c 324170 324167 2026-06-03T03:28:41Z Shreelatha.Halemane 7642 /* Validated */ 324170 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೮೦|right=ಕ್ರಾಂತಿ ಕಲ್ಯಾಣ}} {{gap}}“ಬಸವಣ್ಣನವರು ಕಲ್ಯಾಣವನ್ನು ಬಿಟ್ಟ ಆ ಚರಿತ್ರಾರ್ಹವಾದ ದಿನ, ನಗರದ ಪಾಂಥನಿವಾಸವೊಂದರಲ್ಲಿ ಅಗ್ಗಳನು ಹೇಳಿದ ಸುಭಾಷಿತ ಇಂದು ನನಗೆ ನೆನಪಿಗೆ ಬರುತ್ತಿದೆ : {{gap}}“ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು {{gap}}ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಷ್ಟಂ {{gap}}ಅದ್ವೈವ ವಾ ಮರಣಮಸ್ತು ಯುಗಾಂತರೇ ವಾ {{gap}}ನ್ಯಾಯಾತ್ ಪಥಃ ಪ್ರವಿಚಲಂತಿ ಪದಂ ನ ಧೀರಾಃ {{gap}}“ಬುದ್ದಿಜೀವಿಗಳು ಹೊಗಳಲಿ, ತೆಗಳಲಿ; ಸಿರಿಸಂಪತ್ತು ಬರಲಿ, ಹೋಗಲಿ; ಇಂದೇ ಮೃತ್ಯು ಎದುರಿಗೆ ನಿಲ್ಲಲಿ, ಅಥವಾ ಯುಗಾಂತರದಲ್ಲಿ ಅದು ಸಂಭವಿಸಲಿ; ಧೀರರು ನ್ಯಾಯದ ಹಾದಿಯಿಂದ ಒಂದು ಹೆಜ್ಜೆ ಕೂಡ ಅತ್ತ ಇತ್ತ ಸರಿಯುವುದಿಲ್ಲ. ತಾವು ಅಂತಹ ಧೀರರೆಂಬುದನ್ನು ತಮ್ಮ ವರ್ತನೆಯಿಂದ ಶರಣರು ಜಗತ್ತಿಗೆ ನಿದರ್ಶನ ಮಾಡಿಕೊಟ್ಟಿದ್ದಾರೆ. ಅವರು ತೋರಿಸಿದ ದಾರಿ ನಮ್ಮ ಜೀವನದ ಹೆದ್ದಾರಿಯಾಗಲಿ,” - {{gap}}-ಎಂದು ಹೇಳಿ ಕ್ರಮಿತನು ಬೀಳ್ಕೊಡುಗೆಯ ವಿನಯಾಚಾರಕ್ಕಾಗಿ ಕಾಯದೆ ಅಲ್ಲಿಂದ ಹೊರಟನು. {{gap}}ಆ ರಾತ್ರಿಯೇ ಅವನು ತಾನು ಆರ್ಜಿಸಿದ್ದ ಸಿರಿಸಂಪತ್ತುಗಳನ್ನೂ, ಪತ್ನಿ ಪುತ್ರರನ್ನೂ ತ್ಯಜಿಸಿ, ಏಕಾಂಗಿಯಾಗಿ ಕಲ್ಯಾಣವನ್ನು ಬಿಟ್ಟನು. ಆಮೇಲೆ ಇಹಲೋಕದಲ್ಲಿ ಅವನನ್ನು ಯಾರೂ ನೋಡಲಿಲ್ಲ. {{center|***}}<noinclude></noinclude> s976e9svu4anlkh5c4uwoe316hzj99a ಪುಟ:ಕ್ರಾಂತಿ ಕಲ್ಯಾಣ.pdf/೪೮೯ 104 86422 324158 203747 2026-06-03T03:14:23Z Shreesha Sharma 7840 /* Proofread */ 324158 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೭೬|right=ಕ್ರಾಂತಿ ಕಲ್ಯಾಣ}} {{gap}}-ಎಂದು ಹೇಳಿ ಕ್ರಮಿತನು ಅರ್ಥಗರ್ಭಿತವಾಗಿ ಸೋಮೇಶ್ವರನ ಮುಖ ನೋಡಿದನು. {{gap}}“ಆ ಎರಡರ ಹೊರತಾಗಿ ಮತ್ತಾವ ಕಾರಣವಿದೆ ? ಚಾಲುಕ್ಯ ರಾಜಸತ್ತೆಯ ಪುನಃಪ್ರತಿಷ್ಠೆಗಾಗಿ ಒಳಸಂಚು ನಡೆಯುತ್ತಿತ್ತು. ತಂದೆಯವರ ಆಡಳಿತ ನೀತಿಯಿಂದ ಶರಣರು ಅಸಂತುಷ್ಟರಾಗಿದ್ದರು. ಈ ಎರಡು ಶಕ್ತಿಗಳಲ್ಲಿ ಯಾವುದು ಪ್ರಬಲವಾಗಿ ತಂದೆಯವರನ್ನು ಬಲಿತೆಗೆದುಕೊಂಡಿತೆಂಬುದನ್ನು ನಾವು ಮುಂದೆ ತಿಳಿಯಬೇಕಾಗಿದೆ. {{gap}}ಪ್ರಭುವಿಗೆ ಸಹಜವಾದ ದರ್ಪದಿಂದ ಸೋಮೇಶ್ವರ ಹೇಳಿದನು. {{gap}}“ಪ್ರಬಲವಾದ ಮತ್ತೊಂದು ಶಕ್ತಿಯ ಎದುರಿನಲ್ಲಿ ಧಾರ್ಮಿಕ ರಾಜಕೀಯ ಶಕ್ತಿಗಳು ನಿಸ್ತೇಜವಾದವು, ಸೋಮೇಶ್ವರ, ಎಲ್ಲಕ್ಕಿಂತ ಮಿಗಿಲಾದ ಆ ಮಹಾಶಕ್ತಿ ಬಿಜ್ಜಳರಾಯರನ್ನು ಬಲಿತೆಗೆದುಕೊಂಡಿತು.” {{gap}}ತತ್ವದರ್ಶಿಯ ಗಾಂಭೀರ್ಯದಿಂದ ಕ್ರಮಿತನು ಉತ್ತರ ಕೊಟ್ಟನು. {{gap}}ಸೋಮೇಶ್ವರನ ಕುತೂಹಲ ಕೆರಳಿತು. “ಯಾವುದು ಆ ಮಹಾಶಕ್ತಿ ?” ಎಂದನು, ಅವಿಶ್ವಾಸದ ನಗೆಬೀರಿ. {{gap}}“ಪ್ರೇಮವೇ ಆ ಮಹಾಶಕ್ತಿ ಸೋಮೇಶ್ವರ” ಕ್ರಮಿತನು ಹೇಳಿದನು"ಪ್ರೇಮಮೂಲವಾದ ವೈಯಕ್ತಿಕ ವಿದ್ವೇಷ ಬಿಜ್ಜಳರಾಯರ ಹತ್ಯೆಗೆ ಕಾರಣವಾಯಿತು. ಆರು ವರ್ಷಗಳ ಹಿಂದೆ ಒಂದು ದಿನ ಕಾಮೇಶ್ವರಿ ಸಂತಾನಾಪೇಕ್ಷೆಯಿಂದ ವೇಶ್ಯಯ ವೇಷದಲ್ಲಿ, ಜಗದೇಕಮಲ್ಲನ ಮೃಗಯಾಶಿಬಿರಕ್ಕೆ ಹೋಗಿದ್ದಳು. ಆ ಸಂದರ್ಭದಲ್ಲಿ ಕಾಮೇಶ್ವರಿ ತೋರಿದ ಸಾಹಸ ಚತುರತೆಗಳು, ಅವಳಲ್ಲಿ ಜಗದೇಕಮಲ್ಲನ ಅನನ್ಯ ಪ್ರೇಮಕ್ಕೆ ಕಾರಣವಾದುವು. ಅತಿಥಿಯಾಗಿ ಮಂಗಳವೇಡೆಗೆ ಹೋಗಿದ್ದ ರಾಣಿಯೊಡನೆ ಬಿಜ್ಜಳರಾಯರ ಲಂಪಟ ವರ್ತನೆ, ಅಪಮಾನಿತೆಯಾದ ಅವಳು ಬೆಂಕಿಯಲ್ಲಿ ಬಿದ್ದು ಸತ್ತಳೆಂಬ ಜನಾಪವಾದ, ಇವುಗಳನ್ನು ಕೇಳಿ ಉದ್ರೇಕಗೊಂಡ ಜಗದೇಕಮಲ್ಲನು ಈ ಘೋರ ಕೊಲೆಗೆ ಸಿದ್ಧನಾದನು.” {{gap}}ಆ ದಿನ ಸೋಮೇಶ್ವರನು, ಕ್ರಮಿತನೆದುರಿಗೆ ಮೂರನೆಯ ಸಾರಿ ಅಪ್ರತಿಭನಾದನು. ತಂದೆಯ ಬಗೆಗೆ ಮಂಗಳವೇಡೆಯಲ್ಲಿ ಹರಡಿದ್ದ ಅಪವಾದ ಕಲ್ಯಾಣದಲ್ಲಿ ಪೆಡಂಭೂತವಾಗಿ ಎದುರಿಗೆ ನಿಲ್ಲುವುದೆಂದು ಅವನು ಭಾವಿಸಿರಲಿಲ್ಲ. ಅಸಮಾಧಾನದ ಬಿರುದನಿಯಿಂದ ಅವನು, {{gap}}“ಅಡೆತಡೆಯಿಲ್ಲದ ಜನಾಪವಾದಕ್ಕೆ ನೀವು ಸಲ್ಲದ ಪ್ರಾಮುಖ್ಯತೆ ಕೊಡುತ್ತಿದ್ದೀರಿ, ಕ್ರಮಿತರೆ,” ಎಂದನು. {{gap}}ಅರ್ಥಗರ್ಭಿತವಾದ ತೀವ್ರ ದೃಷ್ಟಿಯಿಂದ ಸೋಮೇಶ್ವರನನ್ನು ನೋಡುತ್ತ<noinclude></noinclude> k7lp32q1hhwm54odv4q9pmrslrll1v8 324163 324158 2026-06-03T03:19:24Z Shreelatha.Halemane 7642 /* Validated */ 324163 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೭೬|right=ಕ್ರಾಂತಿ ಕಲ್ಯಾಣ}} {{gap}}-ಎಂದು ಹೇಳಿ ಕ್ರಮಿತನು ಅರ್ಥಗರ್ಭಿತವಾಗಿ ಸೋಮೇಶ್ವರನ ಮುಖ ನೋಡಿದನು. {{gap}}“ಆ ಎರಡರ ಹೊರತಾಗಿ ಮತ್ತಾವ ಕಾರಣವಿದೆ ? ಚಾಲುಕ್ಯ ರಾಜಸತ್ತೆಯ ಪುನಃಪ್ರತಿಷ್ಠೆಗಾಗಿ ಒಳಸಂಚು ನಡೆಯುತ್ತಿತ್ತು. ತಂದೆಯವರ ಆಡಳಿತ ನೀತಿಯಿಂದ ಶರಣರು ಅಸಂತುಷ್ಟರಾಗಿದ್ದರು. ಈ ಎರಡು ಶಕ್ತಿಗಳಲ್ಲಿ ಯಾವುದು ಪ್ರಬಲವಾಗಿ ತಂದೆಯವರನ್ನು ಬಲಿತೆಗೆದುಕೊಂಡಿತೆಂಬುದನ್ನು ನಾವು ಮುಂದೆ ತಿಳಿಯಬೇಕಾಗಿದೆ. {{gap}}ಪ್ರಭುವಿಗೆ ಸಹಜವಾದ ದರ್ಪದಿಂದ ಸೋಮೇಶ್ವರ ಹೇಳಿದನು. {{gap}}“ಪ್ರಬಲವಾದ ಮತ್ತೊಂದು ಶಕ್ತಿಯ ಎದುರಿನಲ್ಲಿ ಧಾರ್ಮಿಕ ರಾಜಕೀಯ ಶಕ್ತಿಗಳು ನಿಸ್ತೇಜವಾದವು, ಸೋಮೇಶ್ವರ, ಎಲ್ಲಕ್ಕಿಂತ ಮಿಗಿಲಾದ ಆ ಮಹಾಶಕ್ತಿ ಬಿಜ್ಜಳರಾಯರನ್ನು ಬಲಿತೆಗೆದುಕೊಂಡಿತು.” {{gap}}ತತ್ವದರ್ಶಿಯ ಗಾಂಭೀರ್ಯದಿಂದ ಕ್ರಮಿತನು ಉತ್ತರ ಕೊಟ್ಟನು. {{gap}}ಸೋಮೇಶ್ವರನ ಕುತೂಹಲ ಕೆರಳಿತು. “ಯಾವುದು ಆ ಮಹಾಶಕ್ತಿ ?” ಎಂದನು, ಅವಿಶ್ವಾಸದ ನಗೆಬೀರಿ. {{gap}}“ಪ್ರೇಮವೇ ಆ ಮಹಾಶಕ್ತಿ ಸೋಮೇಶ್ವರ” ಕ್ರಮಿತನು ಹೇಳಿದನು"ಪ್ರೇಮಮೂಲವಾದ ವೈಯಕ್ತಿಕ ವಿದ್ವೇಷ ಬಿಜ್ಜಳರಾಯರ ಹತ್ಯೆಗೆ ಕಾರಣವಾಯಿತು. ಆರು ವರ್ಷಗಳ ಹಿಂದೆ ಒಂದು ದಿನ ಕಾಮೇಶ್ವರಿ ಸಂತಾನಾಪೇಕ್ಷೆಯಿಂದ ವೇಶ್ಯಯ ವೇಷದಲ್ಲಿ, ಜಗದೇಕಮಲ್ಲನ ಮೃಗಯಾಶಿಬಿರಕ್ಕೆ ಹೋಗಿದ್ದಳು. ಆ ಸಂದರ್ಭದಲ್ಲಿ ಕಾಮೇಶ್ವರಿ ತೋರಿದ ಸಾಹಸ ಚತುರತೆಗಳು, ಅವಳಲ್ಲಿ ಜಗದೇಕಮಲ್ಲನ ಅನನ್ಯ ಪ್ರೇಮಕ್ಕೆ ಕಾರಣವಾದುವು. ಅತಿಥಿಯಾಗಿ ಮಂಗಳವೇಡೆಗೆ ಹೋಗಿದ್ದ ರಾಣಿಯೊಡನೆ ಬಿಜ್ಜಳರಾಯರ ಲಂಪಟ ವರ್ತನೆ, ಅಪಮಾನಿತೆಯಾದ ಅವಳು ಬೆಂಕಿಯಲ್ಲಿ ಬಿದ್ದು ಸತ್ತಳೆಂಬ ಜನಾಪವಾದ, ಇವುಗಳನ್ನು ಕೇಳಿ ಉದ್ರೇಕಗೊಂಡ ಜಗದೇಕಮಲ್ಲನು ಈ ಘೋರ ಕೊಲೆಗೆ ಸಿದ್ಧನಾದನು.” {{gap}}ಆ ದಿನ ಸೋಮೇಶ್ವರನು, ಕ್ರಮಿತನೆದುರಿಗೆ ಮೂರನೆಯ ಸಾರಿ ಅಪ್ರತಿಭನಾದನು. ತಂದೆಯ ಬಗೆಗೆ ಮಂಗಳವೇಡೆಯಲ್ಲಿ ಹರಡಿದ್ದ ಅಪವಾದ ಕಲ್ಯಾಣದಲ್ಲಿ ಪೆಡಂಭೂತವಾಗಿ ಎದುರಿಗೆ ನಿಲ್ಲುವುದೆಂದು ಅವನು ಭಾವಿಸಿರಲಿಲ್ಲ. ಅಸಮಾಧಾನದ ಬಿರುದನಿಯಿಂದ ಅವನು, {{gap}}“ಅಡೆತಡೆಯಿಲ್ಲದ ಜನಾಪವಾದಕ್ಕೆ ನೀವು ಸಲ್ಲದ ಪ್ರಾಮುಖ್ಯತೆ ಕೊಡುತ್ತಿದ್ದೀರಿ, ಕ್ರಮಿತರೆ,” ಎಂದನು. {{gap}}ಅರ್ಥಗರ್ಭಿತವಾದ ತೀವ್ರ ದೃಷ್ಟಿಯಿಂದ ಸೋಮೇಶ್ವರನನ್ನು ನೋಡುತ್ತ<noinclude></noinclude> fzws5o71nxbe1t2ghxr8lfwzi83ftjz ಪುಟ:ಕ್ರಾಂತಿ ಕಲ್ಯಾಣ.pdf/೪೬೯ 104 86425 324113 203750 2026-06-03T00:43:48Z Shreesha Sharma 7840 /* Proofread */ 324113 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೫೬|right=ಕ್ರಾಂತಿ ಕಲ್ಯಾಣ}} {{gap}}“ನಾವು ಕಲ್ಯಾಣವನ್ನು ಬಿಟ್ಟಿದ್ದು ಬಿಜ್ಜಳನ ಕ್ರೌರ್ಯ ದಬ್ಬಾಳಿಕೆಗಳಿಂದ ತಪ್ಪಿಸಿಕೊಳ್ಳುವ ಪರಮೋದ್ದೇಶದಿಂದಲೇ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ಹಿಂಸೆಯನ್ನು ಪ್ರತಿಹಿಂಸೆಯಿಂದ ಎದುರಿಸುವುದು ನಮ್ಮ ಉದ್ದೇಶವಾಗಿದ್ದಿದ್ದರೆ ನಾವು ಕಲ್ಯಾಣವನ್ನು ಬಿಡುವ ಅಗತ್ಯವೇ ಉಂಟಾಗುತ್ತಿರಲಿಲ್ಲ.” {{gap}}“ಪರವಾದಿಗಳು ಇದುವರೆಗೆ ನಮ್ಮ ಮೇಲೆ ಎಲ್ಲ ರೀತಿಯ ಅಪವಾದಗಳನ್ನೂ ಹೊರಿಸಿದ್ದಾರೆ. ಅವುಗಳಿಂದ ಅವರಿಗಾದ ಆಗೇನು? ನಮಗಾದ ಚೀಗೇನು? ಅಂತರಂಗ ಆತ್ಮಶುದ್ದಿ ಇರುವವರೆಗೂ ಅಪವಾದಗಳಿಗೆ ನಾವೇಕೆ ಹೆದರಬೇಕು? ನೀವು ಈ ವಿಚಾರವನ್ನು ಮರೆಯಬೇಕಾಗಿ ಬೇಡುತ್ತೇನೆ.” {{gap}}ಚೆನ್ನಬಸವಣ್ಣನವರ ಭರವಸೆಯ ನುಡಿಗಳಿಂದ ಮಾಚಿದೇವರ ಸಂದೇಹ ಪರಿಹಾರವಾಗಲಿಲ್ಲ. “ನನ್ನಿಂದ ಅಪರಾಧವಾಗಿದೆ. ಪ್ರಾಯಶ್ಚಿತ್ತ ಮಾಡಿಕೊಳ್ಳದೆ ಹೋದರೆ ಕಲಿದೇವರ ದೇವನು ಒಪ್ಪುವುದಿಲ್ಲ,” ಎಂಬ ಚಿಂತೆ ಅವರ ಮನಸ್ಸಿನಲ್ಲಿ ಉಳಿಯಿತು. {{gap}}ಚೆನ್ನಬಸವಣ್ಣನವರಿಗೆ ಏನು ಹೇಳುವುದು? ಎಂದು ಅವರು ಯೋಚಿಸುತ್ತಿದ್ದಂತೆ ಗಣಾಚಾರಿ ದಳದ ನಾಯಕನನ್ನು ಸಂಗಡ ಕರೆದುಕೊಂಡು ಕಲ್ಯಾಣದ ಶರಣನು ಅಲ್ಲಿಗೆ ಬಂದನು. {{gap}}ಮಾಚಿದೇವರು ನಾಯಕನಿಗೆ ಪರಿಸ್ಥಿತಿಯನ್ನು ವಿವರಿಸಿ, “ಇಂದು ಸಂಜೆಯೊಳಗಾಗಿ ತಡಸದ ಹಾಯ್ದಡದಿಂದ ನಾವು ಕೃಷ್ಣೆಯನ್ನು ದಾಟಬೇಕು. ಮಾಧವ ನಾಯಕನ ಮುಂಚೂಣಿ ದಳಗಳು ಅಷ್ಟರಲ್ಲಿ ನಮ್ಮ ಮೇಲೆ ಬಿದ್ದರೆ ನಿಮ್ಮಿಂದ ತಡೆಯುವುದು ಸಾಧ್ಯವೆ?” ಎಂದು ಕೇಳಿದರು. {{gap}}“ಮಾಧವ ನಾಯಕನ ಸೈನ್ಯದೊಡನೆ ಹೋರಾಡಲು ನಮ್ಮ ಯೋಧರು ಆತುರರಾಗಿದ್ದಾರೆ, ಅಣ್ಣನವರೆ. ಆದರೆ ಸುಸಜ್ಜಿತವಾದ ಆ ಬಹುಸಂಖ್ಯಾತ ಸೈನ್ಯದ ಎದುರಿಗೆ ನಿಂತು ಹೋರಾಡುವುದು ನಮಗೆ ಸಾಧ್ಯವಲ್ಲ. ಅದಕ್ಕಾಗಿ ನಾನೊಂದು ಉಪಾಯ ಯೋಚಿಸಿದ್ದೇನೆ,” {{gap}}-ಎಂದು ಗಣಾಚಾರಿ ನಾಯಕನು ಹೇಳಿದನು. {{gap}}“ಉಪಾಯವೇನು?” {{gap}}ನಾಯಕನು ಹೇಳಿದನು : “ತಂಗಡಿಗೆ ಬರುವ ಕಣಿವೆ ಮತ್ತು ಅದರ ಸುತ್ತು ಮುತ್ತಿನ ಗುಡ್ಡಗಳ ಮೇಲೆ ನಮ್ಮ ಯೋಧದಳಗಳು ಆಯಕಟ್ಟಿನ ಸ್ಥಳಗಳನ್ನು ಆಕ್ರಮಿಸಿಕೊಂಡಿವೆ. ಆ ಸ್ಥಳಗಳು ನಮ್ಮ ವಶದಲ್ಲಿರುವವರೆಗೆ ಶತ್ರು ಸೈನ್ಯ ಎಷ್ಟೇ ಬಲಿಷ್ಠವಾಗಿರಲಿ, ಕಣಿವೆಯನ್ನು ದಾಟಿ ಬಂದು ಶಿಬಿರದ ಮೇಲೆ ಆಕ್ರಮಣ<noinclude></noinclude> dxdv6zz94z2s7m6wbox26f7u4qib1iw 324121 324113 2026-06-03T01:01:15Z Shreelatha.Halemane 7642 /* Validated */ 324121 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೫೬|right=ಕ್ರಾಂತಿ ಕಲ್ಯಾಣ}} {{gap}}“ನಾವು ಕಲ್ಯಾಣವನ್ನು ಬಿಟ್ಟಿದ್ದು ಬಿಜ್ಜಳನ ಕ್ರೌರ್ಯ ದಬ್ಬಾಳಿಕೆಗಳಿಂದ ತಪ್ಪಿಸಿಕೊಳ್ಳುವ ಪರಮೋದ್ದೇಶದಿಂದಲೇ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ಹಿಂಸೆಯನ್ನು ಪ್ರತಿಹಿಂಸೆಯಿಂದ ಎದುರಿಸುವುದು ನಮ್ಮ ಉದ್ದೇಶವಾಗಿದ್ದಿದ್ದರೆ ನಾವು ಕಲ್ಯಾಣವನ್ನು ಬಿಡುವ ಅಗತ್ಯವೇ ಉಂಟಾಗುತ್ತಿರಲಿಲ್ಲ.” {{gap}}“ಪರವಾದಿಗಳು ಇದುವರೆಗೆ ನಮ್ಮ ಮೇಲೆ ಎಲ್ಲ ರೀತಿಯ ಅಪವಾದಗಳನ್ನೂ ಹೊರಿಸಿದ್ದಾರೆ. ಅವುಗಳಿಂದ ಅವರಿಗಾದ ಆಗೇನು? ನಮಗಾದ ಚೀಗೇನು? ಅಂತರಂಗ ಆತ್ಮಶುದ್ದಿ ಇರುವವರೆಗೂ ಅಪವಾದಗಳಿಗೆ ನಾವೇಕೆ ಹೆದರಬೇಕು? ನೀವು ಈ ವಿಚಾರವನ್ನು ಮರೆಯಬೇಕಾಗಿ ಬೇಡುತ್ತೇನೆ.” {{gap}}ಚೆನ್ನಬಸವಣ್ಣನವರ ಭರವಸೆಯ ನುಡಿಗಳಿಂದ ಮಾಚಿದೇವರ ಸಂದೇಹ ಪರಿಹಾರವಾಗಲಿಲ್ಲ. “ನನ್ನಿಂದ ಅಪರಾಧವಾಗಿದೆ. ಪ್ರಾಯಶ್ಚಿತ್ತ ಮಾಡಿಕೊಳ್ಳದೆ ಹೋದರೆ ಕಲಿದೇವರ ದೇವನು ಒಪ್ಪುವುದಿಲ್ಲ,” ಎಂಬ ಚಿಂತೆ ಅವರ ಮನಸ್ಸಿನಲ್ಲಿ ಉಳಿಯಿತು. {{gap}}ಚೆನ್ನಬಸವಣ್ಣನವರಿಗೆ ಏನು ಹೇಳುವುದು? ಎಂದು ಅವರು ಯೋಚಿಸುತ್ತಿದ್ದಂತೆ ಗಣಾಚಾರಿ ದಳದ ನಾಯಕನನ್ನು ಸಂಗಡ ಕರೆದುಕೊಂಡು ಕಲ್ಯಾಣದ ಶರಣನು ಅಲ್ಲಿಗೆ ಬಂದನು. {{gap}}ಮಾಚಿದೇವರು ನಾಯಕನಿಗೆ ಪರಿಸ್ಥಿತಿಯನ್ನು ವಿವರಿಸಿ, “ಇಂದು ಸಂಜೆಯೊಳಗಾಗಿ ತಡಸದ ಹಾಯ್ದಡದಿಂದ ನಾವು ಕೃಷ್ಣೆಯನ್ನು ದಾಟಬೇಕು. ಮಾಧವ ನಾಯಕನ ಮುಂಚೂಣಿ ದಳಗಳು ಅಷ್ಟರಲ್ಲಿ ನಮ್ಮ ಮೇಲೆ ಬಿದ್ದರೆ ನಿಮ್ಮಿಂದ ತಡೆಯುವುದು ಸಾಧ್ಯವೆ?” ಎಂದು ಕೇಳಿದರು. {{gap}}“ಮಾಧವ ನಾಯಕನ ಸೈನ್ಯದೊಡನೆ ಹೋರಾಡಲು ನಮ್ಮ ಯೋಧರು ಆತುರರಾಗಿದ್ದಾರೆ, ಅಣ್ಣನವರೆ. ಆದರೆ ಸುಸಜ್ಜಿತವಾದ ಆ ಬಹುಸಂಖ್ಯಾತ ಸೈನ್ಯದ ಎದುರಿಗೆ ನಿಂತು ಹೋರಾಡುವುದು ನಮಗೆ ಸಾಧ್ಯವಲ್ಲ. ಅದಕ್ಕಾಗಿ ನಾನೊಂದು ಉಪಾಯ ಯೋಚಿಸಿದ್ದೇನೆ,” {{gap}}-ಎಂದು ಗಣಾಚಾರಿ ನಾಯಕನು ಹೇಳಿದನು. {{gap}}“ಉಪಾಯವೇನು?” {{gap}}ನಾಯಕನು ಹೇಳಿದನು : “ತಂಗಡಿಗೆ ಬರುವ ಕಣಿವೆ ಮತ್ತು ಅದರ ಸುತ್ತು ಮುತ್ತಿನ ಗುಡ್ಡಗಳ ಮೇಲೆ ನಮ್ಮ ಯೋಧದಳಗಳು ಆಯಕಟ್ಟಿನ ಸ್ಥಳಗಳನ್ನು ಆಕ್ರಮಿಸಿಕೊಂಡಿವೆ. ಆ ಸ್ಥಳಗಳು ನಮ್ಮ ವಶದಲ್ಲಿರುವವರೆಗೆ ಶತ್ರು ಸೈನ್ಯ ಎಷ್ಟೇ ಬಲಿಷ್ಠವಾಗಿರಲಿ, ಕಣಿವೆಯನ್ನು ದಾಟಿ ಬಂದು ಶಿಬಿರದ ಮೇಲೆ ಆಕ್ರಮಣ<noinclude></noinclude> oxfb1ph9r16a0a3og8bxfbmingpur1m ಪುಟ:ಕ್ರಾಂತಿ ಕಲ್ಯಾಣ.pdf/೪೭೦ 104 86426 324114 203751 2026-06-03T00:47:08Z Shreesha Sharma 7840 /* Proofread */ 324114 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೫೭}} ನಡೆಸುವುದು ಸಾಧ್ಯವಲ್ಲ. ಈ ಕಾರಣಗಳಿಂದ ನಾವು ಕೂಡಲೆ ತಂಗಡಿಯನ್ನು ಬಿಟ್ಟು ಹೋಗುವುದು ಸರಿಯಲ್ಲ.” {{gap}}“ನದಿ ದಾಟಲು ತಡಸದ ಹಾಯ್ಗಡ ಹೆಚ್ಚು ಅನುಕೂಲವೆಂದು ಅಂಬಿಗರ ನಾಯಕನು ಹೇಳುತ್ತಾನೆ. ನಮಗಾಗಿ ನಾಲ್ಕು ತೆಪ್ಪಗಳು, ನೂರು ದೋಣಿಗಳು ಅಲ್ಲಿ ಸಿದ್ಧವಾಗಿವೆ....ನಾವು ಕೂಡಲೆ ಶಿಬಿರವನ್ನು ಬಿಡದೆ ಹೋದರೆ ಸಕಾಲದಲ್ಲಿ ತಡಸ ಸೇರಲಾಗುವುದಿಲ್ಲ,” ಎಂದರು ಮಾಚಿದೇವರು. {{gap}}“ತಂಗಡಿ ನಮ್ಮ ವಶದಲ್ಲಿರಬೇಕು. ಶರಣರು ತಡಸದ ಹಾಯ್ದಡದಿಂದ ನದಿಯನ್ನು ದಾಟಬೇಕು. ಈ ಎರಡಕ್ಕೂ ಅನುಕೂಲವಾದ ಉಪಾಯವೊಂದನ್ನು ಯೋಚಿಸಬೇಕು, ಅಣ್ಣನವರೆ. ಇಲ್ಲಿಂದ ತಡಸಕ್ಕೆ ಹೋಗಲು ಅಂಬಿಗರು ಮತ್ತು ಗ್ರಾಮವಾಸಿಗಳು ಮಾತ್ರವೇ ಉಪಯೋಗಿಸುವ ಕಾಲುದಾರಿಯಿದೆ. ಅತ್ಯಗತ್ಯವಾದ ಸಾಮಾನು ಸರಂಜಾಮುಗಳನ್ನು ಎತ್ತುಗಳ ಮೇಲೆ ಹೇರಿಕೊಂಡು ಶರಣರು ರಹಸ್ಯವಾಗಿ ತಡಸದ ಹಾಯ್ದಡಕ್ಕೆ ಹೋಗಲಿ. ಉಳಿದ ಸಾಮಾನು ಸರಂಜಾಮುಗಳು, ಚಕ್ಕಡಿ ಗೂಡಾರಗಳು, ಈಗಿನಂತೆ ಇಲ್ಲಿಯೇ ಇರಲಿ. ಅದರಿಂದ ಶತೃಗಳು ನಾವು ಇಲ್ಲಿಯೇ ಇರುವೆವೆಂದು ತಿಳಿದು, ಕಣಿವೆಯನ್ನು ದಾಟಿ ಶಿಬಿರದ ಮೇಲೆ ಬೀಳಲು ಪ್ರಯತ್ನಿಸುವರು. ಆಯಕಟ್ಟಿನ ಸ್ಥಳಗಳಲ್ಲಿರುವ ಗಣಾಚಾರಿ ಯೋಧರು ಅವರನ್ನು ಎದುರಿಸಲು ಶಕ್ತರಾಗುವರು.” {{gap}}ಆಗ ಮಾಚಿದೇವರಿಗೆ ನಾಯಕನು ಯೋಚಿಸಿದ ಕೂಟಯುದ್ದದ ಅರಿವಾಯಿತು. ತಂಗಡಿಯ ಸಮೀಪದ ಸಣ್ಣ ಕಣಿವೆಯಲ್ಲಿ ಶತೃ ಸೈನ್ಯವನ್ನು ಸಿಕ್ಕಿಸಿ, ಗುಡ್ಡಗಳ ಮೇಲಿಂದ ಆಕ್ರಮಣ ಮಾಡುವುದು ನಾಯಕನ ಉದ್ದೇಶವೆಂದು ತಿಳಿದರು. “ಉಪಾಯ ಚೆನ್ನಾಗಿದೆ,” ಎಂದು ನಾಯಕನನ್ನು ಪ್ರಶಂಸಿಸಿದರು. {{gap}}ನಾಯಕನು ಉತ್ಸಾಹದಿಂದ ಪುನಃ ಹೇಳಿದನು : “ಶತೃಗಳಿಗೆ ತಮ್ಮ ತಪ್ಪಿನ ಅರಿವಾಗುವಷ್ಟರಲ್ಲಿ ಶರಣರು ನದಿಯನ್ನು ದಾಟಿರಬೇಕು, ಅಣ್ಣನವರೆ. ಆಮೇಲೆ ನಡೆಯುವ ಯುದ್ದದಲ್ಲಿ ನಮಗೆ ಜಯವಾದರೆ ಗೂಡಾರ ಚಕ್ಕಡಿಗಳನ್ನು ಆ ದಡಕ್ಕೆ ತೆಗೆದುಕೊಂಡು ಹೋಗಬಹುದು. ಇಲ್ಲವೆ ನಮ್ಮೊಡನೆ ಅವು ನಾಶವಾಗುವುವು.” {{gap}}ಶರಣರ ರಕ್ಷಣೆಗಾಗಿ ಗಣಾಚಾರಿ ಯೋಧರು ಪ್ರಾಣಾರ್ಪಣೆಗೆ ಸಿದ್ದರಾಗಿರುವರೆಂದು ತಿಳಿದು ಮಾಚಿದೇವರು ಚಮತ್ಕತರಾದರು. “ನೀವು ಬಲಿದಾನಕ್ಕೆ ಸಿದ್ದರಾಗಿರುವಿರೆಂದು ತಿಳಿದು ನನ್ನ ಆತ್ಮವಿಶ್ವಾಸ ಮತ್ತೆ ಮೂಡುತ್ತಿದೆ, ನಾಯಕ, ಕಲಿ ದೇವರ ದೇವನು ನಿಮ್ಮನ್ನು ರಕ್ಷಿಸುವನು,” ಎಂದರು ಅವರು. {{gap}}ಒಂದೆರಡು ಗಳಿಗೆಗಳಲ್ಲಿ ಅದರಂತೆ ಕಾರ್ಯಾಚರಣೆ ಪ್ರಾರಂಭವಾಯಿತು.<noinclude></noinclude> b9xpt2907yio248mg7nen3vq23qkhu4 324122 324114 2026-06-03T01:02:47Z Shreelatha.Halemane 7642 /* Validated */ 324122 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೫೭}} ನಡೆಸುವುದು ಸಾಧ್ಯವಲ್ಲ. ಈ ಕಾರಣಗಳಿಂದ ನಾವು ಕೂಡಲೆ ತಂಗಡಿಯನ್ನು ಬಿಟ್ಟು ಹೋಗುವುದು ಸರಿಯಲ್ಲ.” {{gap}}“ನದಿ ದಾಟಲು ತಡಸದ ಹಾಯ್ಗಡ ಹೆಚ್ಚು ಅನುಕೂಲವೆಂದು ಅಂಬಿಗರ ನಾಯಕನು ಹೇಳುತ್ತಾನೆ. ನಮಗಾಗಿ ನಾಲ್ಕು ತೆಪ್ಪಗಳು, ನೂರು ದೋಣಿಗಳು ಅಲ್ಲಿ ಸಿದ್ಧವಾಗಿವೆ....ನಾವು ಕೂಡಲೆ ಶಿಬಿರವನ್ನು ಬಿಡದೆ ಹೋದರೆ ಸಕಾಲದಲ್ಲಿ ತಡಸ ಸೇರಲಾಗುವುದಿಲ್ಲ,” ಎಂದರು ಮಾಚಿದೇವರು. {{gap}}“ತಂಗಡಿ ನಮ್ಮ ವಶದಲ್ಲಿರಬೇಕು. ಶರಣರು ತಡಸದ ಹಾಯ್ದಡದಿಂದ ನದಿಯನ್ನು ದಾಟಬೇಕು. ಈ ಎರಡಕ್ಕೂ ಅನುಕೂಲವಾದ ಉಪಾಯವೊಂದನ್ನು ಯೋಚಿಸಬೇಕು, ಅಣ್ಣನವರೆ. ಇಲ್ಲಿಂದ ತಡಸಕ್ಕೆ ಹೋಗಲು ಅಂಬಿಗರು ಮತ್ತು ಗ್ರಾಮವಾಸಿಗಳು ಮಾತ್ರವೇ ಉಪಯೋಗಿಸುವ ಕಾಲುದಾರಿಯಿದೆ. ಅತ್ಯಗತ್ಯವಾದ ಸಾಮಾನು ಸರಂಜಾಮುಗಳನ್ನು ಎತ್ತುಗಳ ಮೇಲೆ ಹೇರಿಕೊಂಡು ಶರಣರು ರಹಸ್ಯವಾಗಿ ತಡಸದ ಹಾಯ್ದಡಕ್ಕೆ ಹೋಗಲಿ. ಉಳಿದ ಸಾಮಾನು ಸರಂಜಾಮುಗಳು, ಚಕ್ಕಡಿ ಗೂಡಾರಗಳು, ಈಗಿನಂತೆ ಇಲ್ಲಿಯೇ ಇರಲಿ. ಅದರಿಂದ ಶತೃಗಳು ನಾವು ಇಲ್ಲಿಯೇ ಇರುವೆವೆಂದು ತಿಳಿದು, ಕಣಿವೆಯನ್ನು ದಾಟಿ ಶಿಬಿರದ ಮೇಲೆ ಬೀಳಲು ಪ್ರಯತ್ನಿಸುವರು. ಆಯಕಟ್ಟಿನ ಸ್ಥಳಗಳಲ್ಲಿರುವ ಗಣಾಚಾರಿ ಯೋಧರು ಅವರನ್ನು ಎದುರಿಸಲು ಶಕ್ತರಾಗುವರು.” {{gap}}ಆಗ ಮಾಚಿದೇವರಿಗೆ ನಾಯಕನು ಯೋಚಿಸಿದ ಕೂಟಯುದ್ದದ ಅರಿವಾಯಿತು. ತಂಗಡಿಯ ಸಮೀಪದ ಸಣ್ಣ ಕಣಿವೆಯಲ್ಲಿ ಶತೃ ಸೈನ್ಯವನ್ನು ಸಿಕ್ಕಿಸಿ, ಗುಡ್ಡಗಳ ಮೇಲಿಂದ ಆಕ್ರಮಣ ಮಾಡುವುದು ನಾಯಕನ ಉದ್ದೇಶವೆಂದು ತಿಳಿದರು. “ಉಪಾಯ ಚೆನ್ನಾಗಿದೆ,” ಎಂದು ನಾಯಕನನ್ನು ಪ್ರಶಂಸಿಸಿದರು. {{gap}}ನಾಯಕನು ಉತ್ಸಾಹದಿಂದ ಪುನಃ ಹೇಳಿದನು : “ಶತೃಗಳಿಗೆ ತಮ್ಮ ತಪ್ಪಿನ ಅರಿವಾಗುವಷ್ಟರಲ್ಲಿ ಶರಣರು ನದಿಯನ್ನು ದಾಟಿರಬೇಕು, ಅಣ್ಣನವರೆ. ಆಮೇಲೆ ನಡೆಯುವ ಯುದ್ದದಲ್ಲಿ ನಮಗೆ ಜಯವಾದರೆ ಗೂಡಾರ ಚಕ್ಕಡಿಗಳನ್ನು ಆ ದಡಕ್ಕೆ ತೆಗೆದುಕೊಂಡು ಹೋಗಬಹುದು. ಇಲ್ಲವೆ ನಮ್ಮೊಡನೆ ಅವು ನಾಶವಾಗುವುವು.” {{gap}}ಶರಣರ ರಕ್ಷಣೆಗಾಗಿ ಗಣಾಚಾರಿ ಯೋಧರು ಪ್ರಾಣಾರ್ಪಣೆಗೆ ಸಿದ್ದರಾಗಿರುವರೆಂದು ತಿಳಿದು ಮಾಚಿದೇವರು ಚಮತ್ಕೃತರಾದರು. “ನೀವು ಬಲಿದಾನಕ್ಕೆ ಸಿದ್ದರಾಗಿರುವಿರೆಂದು ತಿಳಿದು ನನ್ನ ಆತ್ಮವಿಶ್ವಾಸ ಮತ್ತೆ ಮೂಡುತ್ತಿದೆ, ನಾಯಕ, ಕಲಿ ದೇವರ ದೇವನು ನಿಮ್ಮನ್ನು ರಕ್ಷಿಸುವನು,” ಎಂದರು ಅವರು. {{gap}}ಒಂದೆರಡು ಗಳಿಗೆಗಳಲ್ಲಿ ಅದರಂತೆ ಕಾರ್ಯಾಚರಣೆ ಪ್ರಾರಂಭವಾಯಿತು.<noinclude></noinclude> fmux2z2lq5ww33w0eclvu04812riwzp ಪುಟ:ಕ್ರಾಂತಿ ಕಲ್ಯಾಣ.pdf/೪೭೩ 104 86427 324117 203753 2026-06-03T00:53:11Z Shreesha Sharma 7840 /* Proofread */ 324117 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೬೦|right=ಕ್ರಾಂತಿ ಕಲ್ಯಾಣ}} {{gap}}ಅಲ್ಲಿ ಅವರಿಗೆ ಬೇರೊಂದು ಮೃತ್ಯು ಕಾದಿತ್ತು. ಕುದುರೆಗಳ ಹಿಂದೆ ರಥಗಳ ಮೇಲೆ ಬಂದ ಬಿಲ್ಲುಗಾರರು ಎದುರಿಗೆ ಓಡಿ ಬರುತ್ತಿರುವವರು ಶರಣರೆಂದು ಭಾವಿಸಿ ತಡೆಗಟ್ಟಿ ಕೊಂದರು. ತಮಗಾದ ಸೋಲನ್ನು ಮಾಧವ ನಾಯಕನಿಗೆ ವರದಿ ಮಾಡಲು ಒಬ್ಬ ರಾಹುತನೂ ಉಳಿಯಲಿಲ್ಲ. {{gap}}ರಾಹುತರಿಗಾದ ಗತಿಯೇ ರಥಗಳಿಗೂ ಕಾದಿತ್ತು, ಆ ವಿಧ್ವಂಸಕ ಬಯಲಿನಲ್ಲಿ. ಉರಿಯುತ್ತಿದ್ದ ಶಿಬಿರದ ಹತ್ತಿರ ಬಂದ ಕೂಡಲೆ ಕುದುರೆಗಳು ಬೆದರಿ ನಿಂತವು. ಆಯಕಟ್ಟಿನ ಸ್ಥಳಗಳಲ್ಲಿ ಅವಿತು ನಿಂತಿದ್ದ ಗಣಾಚಾರಿ ಯೋಧರು ಬಾಣಗಳ ಸುರಿ ಮಳೆಗರೆದರು. ಬಾಣ ಯಾವ ಕಡೆಯಿಂದ ಬರುತ್ತಿದೆಯೆಂಬುದನ್ನು ತಿಳಿಯಲೂ ರಥಿಕರು ಶಕ್ತರಾಗಲಿಲ್ಲ. ಅವರಲ್ಲನೇಕರು ರಥಗಳಲ್ಲಿ ಇದ್ದಂತೆಯೆ ಪ್ರಾಣಬಿಟ್ಟರು. ಇನ್ನು ಕೆಲವರು ಬೆಂಕಿಗೆ ಸಿಕ್ಕು ಸತ್ತರು. ಕೆಲವು ರಥಗಳು ನದಿಗೆ ಬಿದ್ದು ಪ್ರವಾಹದಲ್ಲಿ ತೇಲಿಹೋದವು. ಅನೇಕ ಕುದುರೆಗಳೂ ಆಯುಧೋಪಕರಣಗಳೂ ಗಣಾಚಾರಿ ಯೋಧರ ವಶವಾದವು. {{gap}}ಕಣಿವೆಯ ಮುಖದಲ್ಲಿದ್ದ ಮಾಧವ ನಾಯಕನಿಗೆ ಮಧ್ಯರಾತ್ರಿಯ ಹೊತ್ತಿಗೆ ಪರಾಭವದ ಸುದ್ದಿ ಮುಟ್ಟಿತು. ತಡಸದ ಹಾಯ್ದಡದಿಂದ ಶರಣರು ಸಂಜೆಗೆ ಮೊದಲೇ ನದಿ ದಾಟಿದರೆಂದು ತಿಳಿಯಿತು. ಕೋಪ-ಉದ್ರೇಕಗಳಿಂದ ತಳಮಳಿಸುತ್ತ ಅವನು, ಸೈನ್ಯಮಧ್ಯದ ತನ್ನ ಗೂಡಾರದಲ್ಲಿ ಸೂರ್ಯೋದಯಕ್ಕಾಗಿ ಕಾಯುತ್ತ ನಿದ್ರೆಯಿಲ್ಲದೆ ರಾತ್ರಿಯನ್ನು ಕಳೆದನು. {{gap}}ಶಿಬಿರದ ಪಾರ್ಶ್ವದಲ್ಲಿದ್ದ ಸಣ್ಣಗುಡ್ಡದ ಮೇಲೆ ನಿಂತು ಈ ವಿಸ್ಮಯಕರ ಯುದ್ಧವನ್ನು ವೀಕ್ಷಿಸಿದ ಚೆನ್ನಬಸವಣ್ಣ ಮಾಚಿದೇವರು ಇದೇ ಬಗೆಯ ಇನ್ನೊಂದು ಸಂದಿಗ್ಧದಲ್ಲಿ ಬಿದ್ದಿದ್ದರು. ಸದ್ಯದಲ್ಲಿ ಗಣಾಚಾರಿ ಯೋಧರಿಗೆ ಜಯವಾಗಿದ್ದರೂ ಶರಣರು ವಿಪತ್ತಿನಿಂದ ಪಾರಾಗಿಲ್ಲವೆಂದು ಅವರಿಗೆ ತಿಳಿದಿತ್ತು. ನದಿ ದಾಟಿದ ಯಾತ್ರಾದಳ ಮುಂದೆ ಉಳಿವೆಯನ್ನು ಸೇರುವುದು ಹೇಗೆ ? ಎಂದು ಅವರು ಯೋಚಿಸುತ್ತಿದ್ದರು. {{gap}}ಗಣಾಚಾರಿ ಯೋಧ ದಳಗಳ ನಾಯಕನು ಆಗ ಅಲ್ಲಿಗೆ ಬಂದು, “ತಡಸದ ಹಾಯ್ಡ ಶತೃಗಳ ವಶವಾಯಿತು. ಒಂದು ತೆಪ್ಪ ಮತ್ತು ಕೆಲವು ದೋಣಿಗಳನ್ನು ಅವರು ಹಿಡಿದಿದ್ದಾರೆ,” ಎಂದು ಹೇಳಿದನು. {{gap}}“ಹಾಗಾದರೆ ಸೈನಿಕ ಪಡೆಗಳು ನದಿಯನ್ನು ದಾಟಿ ಯಾತ್ರಾದಳದ ಮೇಲೆ ಬೀಳಬಹುದಲ್ಲವೆ?” {{gap}}-ಚೆನ್ನಬಸವಣ್ಣನವರು ಕಾತರಗೊಂಡು ನುಡಿದರು.<noinclude></noinclude> frbx9ryrddv7jrbdm9hecx39d3xo5wz 324125 324117 2026-06-03T01:06:10Z Shreelatha.Halemane 7642 /* Validated */ 324125 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೬೦|right=ಕ್ರಾಂತಿ ಕಲ್ಯಾಣ}} {{gap}}ಅಲ್ಲಿ ಅವರಿಗೆ ಬೇರೊಂದು ಮೃತ್ಯು ಕಾದಿತ್ತು. ಕುದುರೆಗಳ ಹಿಂದೆ ರಥಗಳ ಮೇಲೆ ಬಂದ ಬಿಲ್ಲುಗಾರರು ಎದುರಿಗೆ ಓಡಿ ಬರುತ್ತಿರುವವರು ಶರಣರೆಂದು ಭಾವಿಸಿ ತಡೆಗಟ್ಟಿ ಕೊಂದರು. ತಮಗಾದ ಸೋಲನ್ನು ಮಾಧವ ನಾಯಕನಿಗೆ ವರದಿ ಮಾಡಲು ಒಬ್ಬ ರಾಹುತನೂ ಉಳಿಯಲಿಲ್ಲ. {{gap}}ರಾಹುತರಿಗಾದ ಗತಿಯೇ ರಥಗಳಿಗೂ ಕಾದಿತ್ತು, ಆ ವಿಧ್ವಂಸಕ ಬಯಲಿನಲ್ಲಿ. ಉರಿಯುತ್ತಿದ್ದ ಶಿಬಿರದ ಹತ್ತಿರ ಬಂದ ಕೂಡಲೆ ಕುದುರೆಗಳು ಬೆದರಿ ನಿಂತವು. ಆಯಕಟ್ಟಿನ ಸ್ಥಳಗಳಲ್ಲಿ ಅವಿತು ನಿಂತಿದ್ದ ಗಣಾಚಾರಿ ಯೋಧರು ಬಾಣಗಳ ಸುರಿ ಮಳೆಗರೆದರು. ಬಾಣ ಯಾವ ಕಡೆಯಿಂದ ಬರುತ್ತಿದೆಯೆಂಬುದನ್ನು ತಿಳಿಯಲೂ ರಥಿಕರು ಶಕ್ತರಾಗಲಿಲ್ಲ. ಅವರಲ್ಲನೇಕರು ರಥಗಳಲ್ಲಿ ಇದ್ದಂತೆಯೆ ಪ್ರಾಣಬಿಟ್ಟರು. ಇನ್ನು ಕೆಲವರು ಬೆಂಕಿಗೆ ಸಿಕ್ಕು ಸತ್ತರು. ಕೆಲವು ರಥಗಳು ನದಿಗೆ ಬಿದ್ದು ಪ್ರವಾಹದಲ್ಲಿ ತೇಲಿಹೋದವು. ಅನೇಕ ಕುದುರೆಗಳೂ ಆಯುಧೋಪಕರಣಗಳೂ ಗಣಾಚಾರಿ ಯೋಧರ ವಶವಾದವು. {{gap}}ಕಣಿವೆಯ ಮುಖದಲ್ಲಿದ್ದ ಮಾಧವ ನಾಯಕನಿಗೆ ಮಧ್ಯರಾತ್ರಿಯ ಹೊತ್ತಿಗೆ ಪರಾಭವದ ಸುದ್ದಿ ಮುಟ್ಟಿತು. ತಡಸದ ಹಾಯ್ದಡದಿಂದ ಶರಣರು ಸಂಜೆಗೆ ಮೊದಲೇ ನದಿ ದಾಟಿದರೆಂದು ತಿಳಿಯಿತು. ಕೋಪ-ಉದ್ರೇಕಗಳಿಂದ ತಳಮಳಿಸುತ್ತ ಅವನು, ಸೈನ್ಯಮಧ್ಯದ ತನ್ನ ಗೂಡಾರದಲ್ಲಿ ಸೂರ್ಯೋದಯಕ್ಕಾಗಿ ಕಾಯುತ್ತ ನಿದ್ರೆಯಿಲ್ಲದೆ ರಾತ್ರಿಯನ್ನು ಕಳೆದನು. {{gap}}ಶಿಬಿರದ ಪಾರ್ಶ್ವದಲ್ಲಿದ್ದ ಸಣ್ಣಗುಡ್ಡದ ಮೇಲೆ ನಿಂತು ಈ ವಿಸ್ಮಯಕರ ಯುದ್ಧವನ್ನು ವೀಕ್ಷಿಸಿದ ಚೆನ್ನಬಸವಣ್ಣ ಮಾಚಿದೇವರು ಇದೇ ಬಗೆಯ ಇನ್ನೊಂದು ಸಂದಿಗ್ಧದಲ್ಲಿ ಬಿದ್ದಿದ್ದರು. ಸದ್ಯದಲ್ಲಿ ಗಣಾಚಾರಿ ಯೋಧರಿಗೆ ಜಯವಾಗಿದ್ದರೂ ಶರಣರು ವಿಪತ್ತಿನಿಂದ ಪಾರಾಗಿಲ್ಲವೆಂದು ಅವರಿಗೆ ತಿಳಿದಿತ್ತು. ನದಿ ದಾಟಿದ ಯಾತ್ರಾದಳ ಮುಂದೆ ಉಳಿವೆಯನ್ನು ಸೇರುವುದು ಹೇಗೆ ? ಎಂದು ಅವರು ಯೋಚಿಸುತ್ತಿದ್ದರು. {{gap}}ಗಣಾಚಾರಿ ಯೋಧ ದಳಗಳ ನಾಯಕನು ಆಗ ಅಲ್ಲಿಗೆ ಬಂದು, “ತಡಸದ ಹಾಯ್ಡ ಶತೃಗಳ ವಶವಾಯಿತು. ಒಂದು ತೆಪ್ಪ ಮತ್ತು ಕೆಲವು ದೋಣಿಗಳನ್ನು ಅವರು ಹಿಡಿದಿದ್ದಾರೆ,” ಎಂದು ಹೇಳಿದನು. {{gap}}“ಹಾಗಾದರೆ ಸೈನಿಕ ಪಡೆಗಳು ನದಿಯನ್ನು ದಾಟಿ ಯಾತ್ರಾದಳದ ಮೇಲೆ ಬೀಳಬಹುದಲ್ಲವೆ?” {{gap}}-ಚೆನ್ನಬಸವಣ್ಣನವರು ಕಾತರಗೊಂಡು ನುಡಿದರು.<noinclude></noinclude> i7cei11509ykaeawrmrxiez7s3k4bhk ಪುಟ:ಕ್ರಾಂತಿ ಕಲ್ಯಾಣ.pdf/೪೭೫ 104 86428 324119 203754 2026-06-03T00:58:53Z Shreesha Sharma 7840 /* Proofread */ 324119 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೬೨|right=ಕ್ರಾಂತಿ ಕಲ್ಯಾಣ}} ವಿಜಯ ದೊರಕಿದರೂ ದೊರಕಬಹುದು,” ಎಂದು ನಾಯಕನು ಮಾಚಿದೇವರ ಸಲಹೆಗೆ ಒಪ್ಪಿಗೆ ಕೊಟ್ಟನು. {{gap}}ಮಾಚಿದೇವರು ಮುಂದುವರೆಸಿ ಹೇಳಿದರು : “ನಾನು ಮತ್ತು ಚೆನ್ನಬಸವಣ್ಣನವರು ನಾಳಿನ ಯುದ್ದದಲ್ಲಿ ಶಸ್ತ್ರ ಹಿಡಿದು ನಿಮ್ಮ ಪಾರ್ಶ್ವದಲ್ಲಿ ನಿಂತು ಹೋರಾಡುತ್ತೇವೆ. ಅದಕ್ಕಾಗಿ ನಮಗೆ ಬೇಕಾದ ಕವಚ, ಶಿರಸ್ತ್ರಾಣ, ಕತ್ತಿ, ಗುರಾಣಿ, ಮೊದಲಾದವುಗಳನ್ನು ತಂದು ಕೊಡಬೇಕಾಗುವುದು.” {{gap}}ಮಾಚಿದೇವರ ರಥೋತ್ಸಾಹವನ್ನು ಕಂಡು ನಾಯಕನು ಆಶ್ಚರ್ಯದಿಂದ, “ನೀವು ಹಿಂದೆ ಚಾಲುಕ್ಯ ಸೈನ್ಯದಲ್ಲಿ ಅಧಿಕಾರಿಯಾಗಿದ್ದವರು, ಅಣ್ಣನವರೆ. ಅಭ್ಯಾಸ ಮಾಡಿದ ಅಸ್ತ್ರವಿದ್ಯೆ ನಿಮಗೆ ಮರೆತಿರಲಾರದು. ಆದರೆ ಚಿಕ್ಕ ಡಣ್ಣಾಯಕರು, ಹಿಂದೆ ಯಾವಾಗಲೂ ಶಸ್ತ್ರ ಹಿಡಿದವರಲ್ಲ. ಈಗ ಅವರು ಕತ್ತಿ ಹಿಡಿದು ಹೋರಾಡುವುದೆಂದರೆ.....” ಎಂದು ಸಂದೇಹದಲ್ಲಿ ಮುಗಿಸಿದನು. {{gap}}“ನಾನು ಶಸ್ತ್ರ ಹಿಡಿಯುವುದು ಒಂದು ಗೊತ್ತಾದ ಉದ್ದೇಶದಿಂದ, ನಾಯಕರೆ,” ಚೆನ್ನಬಸವಣ್ಣನವರು ಹೇಳಿದರು. "ವಿಪತ್ತು ಎದುರಿಗೆ ನಿಂತಾಗ ಸರ್ವಸಂಗ ಪರಿತ್ಯಾಗಿಯಾದ ಜಂಗಮನೂ ಆತ್ಮರಕ್ಷಣೆಗಾಗಿ ಶಸ್ತ್ರ ಹಿಡಿಯಬೇಕು. ಇದು ಆಪದ್ಧರ್ಮ. ನಾನು ಹೋರಾಡಲು ಶಕ್ತನೆಂದಾಗಲಿ, ನನ್ನಿಂದ ನಿಮಗೆ ಸಹಾಯವಾಗುವುದೆಂದಾಗಲಿ ನಾನು ಭಾವಿಸಿಲ್ಲ. ಆದರೆ ನಾನು ನನ್ನ ಕರ್ತವ್ಯ ಕರ್ಮವನ್ನು ನೆರವೇರಿಸಬೇಕಲ್ಲವೆ?” {{gap}}ಈ ವಿವರಣೆ ಗಣಾಚಾರಿ ನಾಯಕನಿಗೆ ಅರ್ಥವಾಯಿತೋ ಇಲ್ಲವೋ, ಬೇಕಾದ ತೊಡಿಗೆ ಆಯುಧಗಳನ್ನು ಕೂಡಲೆ ತಂದುಕೊಡಲು ಅವನು ಒಪ್ಪಿಕೊಂಡನು. {{gap}}ಮರುದಿನ ಸೂರ್ಯೋದಯಕ್ಕೆ ಎರಡು ಗಳಿಗೆ ಇರುವಾಗ ಗಣಾಚಾರಿ ಯೋಧರು ಕಣಿವೆಯ ಆ ಪಾರ್ಶ್ವದಲ್ಲಿದ್ದ ಮಾಧವ ನಾಯಕನ ಶಿಬಿರದ ಮೇಲೆ ದಾಳಿ ಮಾಡಿದರು. ನಿಂತಲ್ಲಿಯೇ ನಿದ್ರಿಸುತ್ತಿದ್ದ ಪದಾತಿಗಳೂ ಇನ್ನೂ ಎದ್ದಿರಲಿಲ್ಲ. ಕುದುರೆಗಳಿಗೆ ಜೀನು ಕಡಿವಾಣ ಚರ್ಮಪೀಠಗಳನ್ನು ತೊಡಿಸುವುದರಲ್ಲಿ ರಾಹುತರು ನಿರತರಾಗಿದ್ದರು. ರಥಿಕರು ಸಾರಥಿಗಳನ್ನು ಹುಡುಕುತ್ತಿದ್ದರು. ಸೂರ್ಯೊದಯಾ ನಂತರ ಕಣಿವೆಯನ್ನು ದಾಟಿ ಶರಣರ ಮೇಲೆ ಆಕ್ರಮಣ ನಡೆಸಬೇಕೆಂದು ಮಾಧವ ನಾಯಕನು ಸೈನ್ಯಾಧಿಕಾರಿಗಳಿಗೆ ಆಜ್ಞೆ ಮಾಡಿದ್ದನು. {{gap}}ಹಠಾತ್ತಾಗಿ, ಯಾವ ಮುನ್ಸೂಚನೆಯೂ ಇಲ್ಲದೆ, ಕಣಿವೆಯ ಕಡೆಯಿದ್ದ ಶಿಬಿರದ ಅಂಚಿನಲ್ಲಿ ಪ್ರಾರಂಭವಾದ ದಾಳಿ ಅರ್ಧಗಳಿಗೆಯೊಳಗಾಗಿ ಎಲ್ಲ ಕಡೆ<noinclude></noinclude> qlivvnqnma0ull2mw0jsdjpj4bvb3qz 324127 324119 2026-06-03T01:09:58Z Shreelatha.Halemane 7642 /* Validated */ 324127 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೬೨|right=ಕ್ರಾಂತಿ ಕಲ್ಯಾಣ}} ವಿಜಯ ದೊರಕಿದರೂ ದೊರಕಬಹುದು,” ಎಂದು ನಾಯಕನು ಮಾಚಿದೇವರ ಸಲಹೆಗೆ ಒಪ್ಪಿಗೆ ಕೊಟ್ಟನು. {{gap}}ಮಾಚಿದೇವರು ಮುಂದುವರೆಸಿ ಹೇಳಿದರು : “ನಾನು ಮತ್ತು ಚೆನ್ನಬಸವಣ್ಣನವರು ನಾಳಿನ ಯುದ್ದದಲ್ಲಿ ಶಸ್ತ್ರ ಹಿಡಿದು ನಿಮ್ಮ ಪಾರ್ಶ್ವದಲ್ಲಿ ನಿಂತು ಹೋರಾಡುತ್ತೇವೆ. ಅದಕ್ಕಾಗಿ ನಮಗೆ ಬೇಕಾದ ಕವಚ, ಶಿರಸ್ತ್ರಾಣ, ಕತ್ತಿ, ಗುರಾಣಿ, ಮೊದಲಾದವುಗಳನ್ನು ತಂದು ಕೊಡಬೇಕಾಗುವುದು.” {{gap}}ಮಾಚಿದೇವರ ರಥೋತ್ಸಾಹವನ್ನು ಕಂಡು ನಾಯಕನು ಆಶ್ಚರ್ಯದಿಂದ, “ನೀವು ಹಿಂದೆ ಚಾಲುಕ್ಯ ಸೈನ್ಯದಲ್ಲಿ ಅಧಿಕಾರಿಯಾಗಿದ್ದವರು, ಅಣ್ಣನವರೆ. ಅಭ್ಯಾಸ ಮಾಡಿದ ಅಸ್ತ್ರವಿದ್ಯೆ ನಿಮಗೆ ಮರೆತಿರಲಾರದು. ಆದರೆ ಚಿಕ್ಕ ಡಣ್ಣಾಯಕರು, ಹಿಂದೆ ಯಾವಾಗಲೂ ಶಸ್ತ್ರ ಹಿಡಿದವರಲ್ಲ. ಈಗ ಅವರು ಕತ್ತಿ ಹಿಡಿದು ಹೋರಾಡುವುದೆಂದರೆ.....” ಎಂದು ಸಂದೇಹದಲ್ಲಿ ಮುಗಿಸಿದನು. {{gap}}“ನಾನು ಶಸ್ತ್ರ ಹಿಡಿಯುವುದು ಒಂದು ಗೊತ್ತಾದ ಉದ್ದೇಶದಿಂದ, ನಾಯಕರೆ,” ಚೆನ್ನಬಸವಣ್ಣನವರು ಹೇಳಿದರು. "ವಿಪತ್ತು ಎದುರಿಗೆ ನಿಂತಾಗ ಸರ್ವಸಂಗ ಪರಿತ್ಯಾಗಿಯಾದ ಜಂಗಮನೂ ಆತ್ಮರಕ್ಷಣೆಗಾಗಿ ಶಸ್ತ್ರ ಹಿಡಿಯಬೇಕು. ಇದು ಆಪದ್ಧರ್ಮ. ನಾನು ಹೋರಾಡಲು ಶಕ್ತನೆಂದಾಗಲಿ, ನನ್ನಿಂದ ನಿಮಗೆ ಸಹಾಯವಾಗುವುದೆಂದಾಗಲಿ ನಾನು ಭಾವಿಸಿಲ್ಲ. ಆದರೆ ನಾನು ನನ್ನ ಕರ್ತವ್ಯ ಕರ್ಮವನ್ನು ನೆರವೇರಿಸಬೇಕಲ್ಲವೆ?” {{gap}}ಈ ವಿವರಣೆ ಗಣಾಚಾರಿ ನಾಯಕನಿಗೆ ಅರ್ಥವಾಯಿತೋ ಇಲ್ಲವೋ, ಬೇಕಾದ ತೊಡಿಗೆ ಆಯುಧಗಳನ್ನು ಕೂಡಲೆ ತಂದುಕೊಡಲು ಅವನು ಒಪ್ಪಿಕೊಂಡನು. {{gap}}ಮರುದಿನ ಸೂರ್ಯೋದಯಕ್ಕೆ ಎರಡು ಗಳಿಗೆ ಇರುವಾಗ ಗಣಾಚಾರಿ ಯೋಧರು ಕಣಿವೆಯ ಆ ಪಾರ್ಶ್ವದಲ್ಲಿದ್ದ ಮಾಧವ ನಾಯಕನ ಶಿಬಿರದ ಮೇಲೆ ದಾಳಿ ಮಾಡಿದರು. ನಿಂತಲ್ಲಿಯೇ ನಿದ್ರಿಸುತ್ತಿದ್ದ ಪದಾತಿಗಳೂ ಇನ್ನೂ ಎದ್ದಿರಲಿಲ್ಲ. ಕುದುರೆಗಳಿಗೆ ಜೀನು ಕಡಿವಾಣ ಚರ್ಮಪೀಠಗಳನ್ನು ತೊಡಿಸುವುದರಲ್ಲಿ ರಾಹುತರು ನಿರತರಾಗಿದ್ದರು. ರಥಿಕರು ಸಾರಥಿಗಳನ್ನು ಹುಡುಕುತ್ತಿದ್ದರು. ಸೂರ್ಯೊದಯಾ ನಂತರ ಕಣಿವೆಯನ್ನು ದಾಟಿ ಶರಣರ ಮೇಲೆ ಆಕ್ರಮಣ ನಡೆಸಬೇಕೆಂದು ಮಾಧವ ನಾಯಕನು ಸೈನ್ಯಾಧಿಕಾರಿಗಳಿಗೆ ಆಜ್ಞೆ ಮಾಡಿದ್ದನು. {{gap}}ಹಠಾತ್ತಾಗಿ, ಯಾವ ಮುನ್ಸೂಚನೆಯೂ ಇಲ್ಲದೆ, ಕಣಿವೆಯ ಕಡೆಯಿದ್ದ ಶಿಬಿರದ ಅಂಚಿನಲ್ಲಿ ಪ್ರಾರಂಭವಾದ ದಾಳಿ ಅರ್ಧಗಳಿಗೆಯೊಳಗಾಗಿ ಎಲ್ಲ ಕಡೆ<noinclude></noinclude> n42bardza1kjt2haxs21xvp3qkhuwwu ಪುಟ:ಕ್ರಾಂತಿ ಕಲ್ಯಾಣ.pdf/೪೮೦ 104 86429 324137 203755 2026-06-03T02:32:20Z Shreesha Sharma 7840 /* Proofread */ 324137 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೬೭}} ಪಡೆದು ಪಟ್ಟಣಸ್ವಾಮಿ ಹೇಳಿದನು : {{gap}}“ಸರ್ವಾಧಿಕಾರಿ ಬಿಜ್ಜಳರಾಯರ ಅಂತ್ಯಸಂಸ್ಕಾರ ನಡೆದ ದಿನ ರುದ್ರಭೂಮಿಯಿಂದ ಹಿಂದಿರುಗಿದ ಮೇಲೆ ಸರ್ವಾಧಿಕಾರದ ವಿಚಾರದಲ್ಲಿ ಕರ್ಣದೇವರಸರಿಗೂ ಮಾಧವ ನಾಯಕರಿಗೂ ವಿವಾದ ಮೊದಲಾಯಿತು. ಮರುದಿನ ಪ್ರಾತಃಕಾಲ ಕರ್ಣದೇವರಸರು ತಾವೇ ಚಾಲುಕ್ಯ ಸರ್ವಾಧಿಕಾರಿಗಳೆಂದು ನಗರದಲ್ಲಿ ಘೋಷಣೆ ಹೊರಡಿಸಿದರು. ಮಾಧವ ನಾಯಕರು ಅದನ್ನು ವಿರೋಧಿಸಿ, ಕರ್ಣದೇವರಸರಿದ್ದ ರಾಜಗೃಹದ ಮೇಲೆ ದಾಳಿಗೆ ಪ್ರಾರಂಭಿಸಿದರು. ಎರಡು ಕಡೆಯ ಸೈನಿಕರಿಗೆ ಆ ದಿನವೆಲ್ಲ ಹೋರಾಟ ನಡೆಯಿತು. ಕರ್ಣದೇವರಸರು ಮಡಿದರು. ಅವರ ಕಡೆಯ ಸೈನಿಕರು ಮಾಧವ ನಾಯಕರಿಗೆ ಶರಣಾಗತರಾದರು. ಆ ರಾತ್ರಿಯೇ ಯಾವ ವೈಭವವೂ ಇಲ್ಲದೆ ಕರ್ಣದೇವರಸರ ಅಂತ್ಯಸಂಸ್ಕಾರ ನಡೆಯಿತು. ಮಾಧವ ನಾಯಕರು ರಾಜಗೃಹವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈ ಹೋರಾಟದಲ್ಲಿ ನಗರ ರಕ್ಷಕ ದಳ ಯಾವ ಕಡೆಗೂ ಸೇರದೆ ತಟಸ್ಥವಾಗಿತ್ತು. ಇದನ್ನು ತಮ್ಮ ಮೇಲಿನ ವಿರೋಧ ಪ್ರದರ್ಶನವೆಂದು ತಿಳಿದು ಮಾಧವ ನಾಯಕರು, ಶಸ್ತ್ರಗಳನ್ನು ತ್ಯಜಿಸಿ ಶರಣಾಗತರಾಗುವಂತೆ ರಕ್ಷಕದಳಕ್ಕೆ ಕರೆಯಿತ್ತರು. ದಳದಲ್ಲಿ ಕೆಲವರು ಶರಣಾಗತರಾಗಿ ಜೀವ ಉಳಿಸಿಕೊಂಡರು. ಕೆಲವರು ಆಯುಧಗಳೊಡನೆ ನಗರವನ್ನು ಬಿಟ್ಟೋಡಿದರು. ವಿರೋಧಿಸಿದವರನ್ನು ಮಾಧವ ನಾಯಕರು ಸೆರೆಹಿಡಿದರು. ಮುಖಂಡರನ್ನು ಶೂಲಕ್ಕೇರಿಸಿದರು. ಆಮೇಲೆ ಮಾಧವ ನಾಯಕರು ನಗರದ ಮಹಾದ್ವಾರಗಳನ್ನು ಮುಚ್ಚಿಸಿ, ತಮ್ಮ ಸೈನಿಕರನ್ನು ಕಾವಲಿಟ್ಟರು. ನಗರದ ಎಲ್ಲ ಕಡೆ ಏಕಕಾಲದಲ್ಲಿ ಸೈನಿಕರ ವಿನಾಶ ಕಾರ್ಯ ಪ್ರಾರಂಭವಯಿತು. ಪ್ರಭುಗಳು ನಗರಾಧಿಕಾರಿಯನ್ನು ವಿಚಾರಿಸಿ, ಆ ವಿನಾಶ ಕೃತ್ಯದ ವಿವರಗಳನ್ನು ತಿಳಿದುಕೊಳ್ಳಬೇಕಾಗಿ ಬೇಡುತ್ತೇನೆ.” {{gap}}-ಎಂದು ಪಟ್ಟಣಸ್ವಾಮಿ ಮುಗಿಸಿದನು. ಸೋಮೇಶ್ವರನು ಅಪೇಕ್ಷಿಸಿದ ವಿವರಗಳನ್ನೀಯಲು ನಗರಾಧಿಕಾರಿಯಾಗಲಿ ನಾಗರಿಕರಾಗಲಿ ಸಮರ್ಥರಾಗಲಿಲ್ಲ. {{gap}}ಕೊನೆಗೆ ಇತರರಿಗಿಂತ ಹೆಚ್ಚು ಧೈರ್ಯಶಾಲಿಯೂ ಮಾತುಗಾರನೂ ಆದ ಹರದನೊಬ್ಬನು ಮುಂದೆ ಬಂದು ಹೇಳಿದನು : {{gap}}“ಕರ್ಣದೇವರಸರು ಹತರಾಗಿ ನಗರ ತಮ್ಮ ವಶವಾದ ಮೇಲೆ ಮಾಧವ ನಾಯಕರು ನಗರದ ಎಲ್ಲ ಶೈವಮಠಗಳನ್ನೂ ನಾಶಮಾಡುವಂತೆ ಸೈನಿಕರಿಗೆ ಆಜ್ಞೆ ಮಾಡಿದರು. ನಗರದ ಎಲ್ಲ ಕಡೆ ಏಕಕಾಲದಲ್ಲಿ ಪ್ರಾರಂಭವಾಯಿತು ಆ ವಿನಾಶಕಾರ್ಯ. ಅನೇಕ ಮಠ ಮಂದಿರಗಳನ್ನು ಸೈನಿಕರು ನಾಶಮಾಡಿದರು, ಹತ್ತಿರಿದ್ದ ನಾಗರಿಕರ<noinclude></noinclude> r8tha11v1yrznpat1hg26cuv2irxj8l 324141 324137 2026-06-03T02:38:23Z Shreelatha.Halemane 7642 /* Validated */ 324141 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೬೭}} ಪಡೆದು ಪಟ್ಟಣಸ್ವಾಮಿ ಹೇಳಿದನು : {{gap}}“ಸರ್ವಾಧಿಕಾರಿ ಬಿಜ್ಜಳರಾಯರ ಅಂತ್ಯಸಂಸ್ಕಾರ ನಡೆದ ದಿನ ರುದ್ರಭೂಮಿಯಿಂದ ಹಿಂದಿರುಗಿದ ಮೇಲೆ ಸರ್ವಾಧಿಕಾರದ ವಿಚಾರದಲ್ಲಿ ಕರ್ಣದೇವರಸರಿಗೂ ಮಾಧವ ನಾಯಕರಿಗೂ ವಿವಾದ ಮೊದಲಾಯಿತು. ಮರುದಿನ ಪ್ರಾತಃಕಾಲ ಕರ್ಣದೇವರಸರು ತಾವೇ ಚಾಲುಕ್ಯ ಸರ್ವಾಧಿಕಾರಿಗಳೆಂದು ನಗರದಲ್ಲಿ ಘೋಷಣೆ ಹೊರಡಿಸಿದರು. ಮಾಧವ ನಾಯಕರು ಅದನ್ನು ವಿರೋಧಿಸಿ, ಕರ್ಣದೇವರಸರಿದ್ದ ರಾಜಗೃಹದ ಮೇಲೆ ದಾಳಿಗೆ ಪ್ರಾರಂಭಿಸಿದರು. ಎರಡು ಕಡೆಯ ಸೈನಿಕರಿಗೆ ಆ ದಿನವೆಲ್ಲ ಹೋರಾಟ ನಡೆಯಿತು. ಕರ್ಣದೇವರಸರು ಮಡಿದರು. ಅವರ ಕಡೆಯ ಸೈನಿಕರು ಮಾಧವ ನಾಯಕರಿಗೆ ಶರಣಾಗತರಾದರು. ಆ ರಾತ್ರಿಯೇ ಯಾವ ವೈಭವವೂ ಇಲ್ಲದೆ ಕರ್ಣದೇವರಸರ ಅಂತ್ಯಸಂಸ್ಕಾರ ನಡೆಯಿತು. ಮಾಧವ ನಾಯಕರು ರಾಜಗೃಹವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈ ಹೋರಾಟದಲ್ಲಿ ನಗರ ರಕ್ಷಕ ದಳ ಯಾವ ಕಡೆಗೂ ಸೇರದೆ ತಟಸ್ಥವಾಗಿತ್ತು. ಇದನ್ನು ತಮ್ಮ ಮೇಲಿನ ವಿರೋಧ ಪ್ರದರ್ಶನವೆಂದು ತಿಳಿದು ಮಾಧವ ನಾಯಕರು, ಶಸ್ತ್ರಗಳನ್ನು ತ್ಯಜಿಸಿ ಶರಣಾಗತರಾಗುವಂತೆ ರಕ್ಷಕದಳಕ್ಕೆ ಕರೆಯಿತ್ತರು. ದಳದಲ್ಲಿ ಕೆಲವರು ಶರಣಾಗತರಾಗಿ ಜೀವ ಉಳಿಸಿಕೊಂಡರು. ಕೆಲವರು ಆಯುಧಗಳೊಡನೆ ನಗರವನ್ನು ಬಿಟ್ಟೋಡಿದರು. ವಿರೋಧಿಸಿದವರನ್ನು ಮಾಧವ ನಾಯಕರು ಸೆರೆಹಿಡಿದರು. ಮುಖಂಡರನ್ನು ಶೂಲಕ್ಕೇರಿಸಿದರು. ಆಮೇಲೆ ಮಾಧವ ನಾಯಕರು ನಗರದ ಮಹಾದ್ವಾರಗಳನ್ನು ಮುಚ್ಚಿಸಿ, ತಮ್ಮ ಸೈನಿಕರನ್ನು ಕಾವಲಿಟ್ಟರು. ನಗರದ ಎಲ್ಲ ಕಡೆ ಏಕಕಾಲದಲ್ಲಿ ಸೈನಿಕರ ವಿನಾಶ ಕಾರ್ಯ ಪ್ರಾರಂಭವಯಿತು. ಪ್ರಭುಗಳು ನಗರಾಧಿಕಾರಿಯನ್ನು ವಿಚಾರಿಸಿ, ಆ ವಿನಾಶ ಕೃತ್ಯದ ವಿವರಗಳನ್ನು ತಿಳಿದುಕೊಳ್ಳಬೇಕಾಗಿ ಬೇಡುತ್ತೇನೆ.” {{gap}}-ಎಂದು ಪಟ್ಟಣಸ್ವಾಮಿ ಮುಗಿಸಿದನು. ಸೋಮೇಶ್ವರನು ಅಪೇಕ್ಷಿಸಿದ ವಿವರಗಳನ್ನೀಯಲು ನಗರಾಧಿಕಾರಿಯಾಗಲಿ ನಾಗರಿಕರಾಗಲಿ ಸಮರ್ಥರಾಗಲಿಲ್ಲ. {{gap}}ಕೊನೆಗೆ ಇತರರಿಗಿಂತ ಹೆಚ್ಚು ಧೈರ್ಯಶಾಲಿಯೂ ಮಾತುಗಾರನೂ ಆದ ಹರದನೊಬ್ಬನು ಮುಂದೆ ಬಂದು ಹೇಳಿದನು : {{gap}}“ಕರ್ಣದೇವರಸರು ಹತರಾಗಿ ನಗರ ತಮ್ಮ ವಶವಾದ ಮೇಲೆ ಮಾಧವ ನಾಯಕರು ನಗರದ ಎಲ್ಲ ಶೈವಮಠಗಳನ್ನೂ ನಾಶಮಾಡುವಂತೆ ಸೈನಿಕರಿಗೆ ಆಜ್ಞೆ ಮಾಡಿದರು. ನಗರದ ಎಲ್ಲ ಕಡೆ ಏಕಕಾಲದಲ್ಲಿ ಪ್ರಾರಂಭವಾಯಿತು ಆ ವಿನಾಶಕಾರ್ಯ. ಅನೇಕ ಮಠ ಮಂದಿರಗಳನ್ನು ಸೈನಿಕರು ನಾಶಮಾಡಿದರು, ಹತ್ತಿರಿದ್ದ ನಾಗರಿಕರ<noinclude></noinclude> hvyi25i80m1sa4iu47dvby0popsnqcv ಪುಟ:ಕ್ರಾಂತಿ ಕಲ್ಯಾಣ.pdf/೪೭೭ 104 86430 324129 203756 2026-06-03T01:14:04Z Shreelatha.Halemane 7642 /* Proofread */ 324129 proofread-page text/x-wiki <noinclude><pagequality level="3" user="Shreelatha.Halemane" /></noinclude>{{rh|center=|left=೪೬೪|right=ಕ್ರಾಂತಿ ಕಲ್ಯಾಣ}} ಓಡುತ್ತ ಬಂದ ಹಲವಾರು ಮಂದಿ ಸೈನಿಕರು ಏಕಕಾಲದಲ್ಲಿ ಮಾಚಿದೇವರ ಮೇಲೆ ಬಿದ್ದು ಗಾಯಗೊಳಿಸಿದರು. {{gap}}ಕೂಡಲೆ ಗಣಾಚಾರಿ ಯೋಧರೂ ನಾಯಕನೂ ಮಾಚಿದೇವರ ಸಹಾಯಕ್ಕೆ ಹೋದರು. ಆಮೇಲಿನ ತುಮುಲಯುದ್ಧದಲ್ಲಿ ಚೆನ್ನಬಸವಣ್ಣನವರಿಗೂ ಗಾಯಗಳಾದವು. ಸೈನಿಕರು ದಳಬದ್ದರಾಗಿ ತಮ್ಮ ಮೇಲೆರಗಲು ಬರುತ್ತಿರುವುದನ್ನು ಕಂಡಾಗ ಗಣಾಚಾರಿ ನಾಯಕನು ತನ್ನ ಕಡೆಯವರಿಗೆ ಹಿಮ್ಮೆಟ್ಟಲು ಆಜ್ಞೆ ಮಾಡಿದನು. {{gap}}ಶಿಬಿರದ ಬೇರೆ ಕಡೆಗಳಲ್ಲಿಯೂ ಇದೇ ಪರಿಸ್ಥಿತಿ ಒದಗಿತ್ತು. ಹಠಾತ್ತನೆ ನಡೆದ ಆಕ್ರಮಣದಿಂದ ತಲ್ಲಣಗೊಂಡಿದ್ದ ಸೈನಿಕರು ಚೇತರಿಸಿಕೊಂಡು ದಳಬದ್ದರಾಗಿ ಗಣಾಚಾರಿ ಯೋಧರ ಮೇಲೆ ಬಿದ್ದರು. ಸಂಖ್ಯಾಬಲದ ಒತ್ತಡದಿಂದ ಗಣಾಚಾರಿ ಯೋಧರು ಹಿಮ್ಮೆಟ್ಟಬೇಕಾಯಿತು. ಗಾಯಗೊಂಡವರನ್ನು ಎತ್ತಿಕೊಂಡು ಅವರು ಪುನಃ ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ ಸೂರ್ಯೋದಯವಾಯಿತು. ಕಣಿವೆಯ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಕಾದಾಡುತ್ತ ಮಡಿಯಲು ಅವರು ನಿರ್ಧರಿಸಿ ಕೊಂಡರು. ವಿಜಯದ ಭರವಸೆಯಿಂದ ಪ್ರಾರಂಭವಾದ ಆಕ್ರಮಣ ಕಗ್ಗೊಲೆಯ ಪರಾಜಯದಲ್ಲಿ ಮುಗಿಯಲು ಹೆಚ್ಚು ಹೊತ್ತು ಉಳಿದಿರಲಿಲ್ಲ. ಪದಾತಿಗಳು, ರಾಹುತರು ತಂಡ ತಂಡವಾಗಿ ಅವರ ಮೇಲೆ ಬೀಳಲು ಬರುತ್ತಿದ್ದರು. {{gap}}ಅಷ್ಟರಲ್ಲಿ ಸೈನ್ಯಶಿಬಿರದ ಹೊರಗಡೆ ಅಂಚಿನಲ್ಲಿ, “ಹರ ಹರ ಮಹಾದೇವ ಎಂಬ ಜಯಘೋಷ ಕೇಳಿಸಿತು. ಕೂಡಲ ಸಂಗಮದಿಂದ, ಅಗ್ಗಳನ ನೇತೃತ್ವದಲ್ಲಿ ಶರಣರ ರಕ್ಷಣೆಗಾಗಿ ಹೊರಟಿದ್ದ ಉತ್ತರಾಪಥದ ಜಂಗಮರ ತಂಡ ತಂಗಡಿಯನ್ನು ಸೇರಿ ಮಾಧವ ನಾಯಕನ ಸೈನ್ಯದ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದ್ದರು. {{gap}}ಆ ಜಂಗಮರ ವಿಚಿತ್ರ ವೇಷಭೂಷಣಗಳು, ವಿಕೃತ ಕಂಠದಿಂದ ಅವರು ಕೂಗುತ್ತಿದ್ದ ಜಯಘೋಷಗಳ ಅಬ್ಬರ, ಅವರು ಹಿಡಿದಿದ್ದ ಖಡ್ಗ ಪರಶು ತೊಮರ ಗದೆ ಭಲ್ಲೆ ಮೊದಲಾದ ಆಯುಧಗಳು, ಇವುಗಳಿಂದ ಸೈನಿಕರು ಬೆಬ್ಬೆರಗಾದರು. ತಂಡದ ನಾಯಕನು ಎರಡೂ ಕೈಗಳಲ್ಲಿ ಪರಶು ಗದೆಗಳನ್ನು ತಿರುಗಿಸುತ್ತ ಮುನ್ನುಗ್ಗುತ್ತಿರುವುದನ್ನು ಕಂಡು ಅವರು, ಶರಣರ ರಕ್ಷಣೆಗಾಗಿ ಶಿವಗಣಗಳ ಮೃತ್ಯು ತಂಡ ಕೈಲಾಸದಿಂದ ಭೂಮಿಗಿಳಿದಿದೆಯೆಂದು ಭಾವಿಸಿದರು. ಸೈನಿಕರಲ್ಲಿ ಕೆಲವರು ಭಯದಿಂದ ಚೀರಿ ರಕ್ತಕಾರುತ್ತ ಸತ್ತರು. ಧೈರ್ಯದಿಂದ ಎದುರಾದವರು ಜಂಗಮರ ಆಯುಧಗಳಿಗೆ ಬಲಿಯಾದರು. ಇನ್ನುಳಿದವರು ಶಸ್ತ್ರಗಳನ್ನು ಬಿಸುಟು ಕಲ್ಯಾಣದತ್ತ ಓಡಿದರು. ಕೆಲವೇ ಕ್ಷಣಗಳಲ್ಲಿ ಮಾಧವ ನಾಯಕನ ಮಹಾಸೈನ್ಯ ದೆಸೆಗೆಟ್ಟ ಸಂತ್ರಸ್ತರ ಗೊಂದಲಪುರವಾಯಿತು.<noinclude></noinclude> agdklust01jp2mdq6kx0nry93nnfcly 324132 324129 2026-06-03T02:15:46Z Shreesha Sharma 7840 /* Validated */ 324132 proofread-page text/x-wiki <noinclude><pagequality level="4" user="Shreesha Sharma" /></noinclude>{{rh|center=|left=೪೬೪|right=ಕ್ರಾಂತಿ ಕಲ್ಯಾಣ}} ಓಡುತ್ತ ಬಂದ ಹಲವಾರು ಮಂದಿ ಸೈನಿಕರು ಏಕಕಾಲದಲ್ಲಿ ಮಾಚಿದೇವರ ಮೇಲೆ ಬಿದ್ದು ಗಾಯಗೊಳಿಸಿದರು. {{gap}}ಕೂಡಲೆ ಗಣಾಚಾರಿ ಯೋಧರೂ ನಾಯಕನೂ ಮಾಚಿದೇವರ ಸಹಾಯಕ್ಕೆ ಹೋದರು. ಆಮೇಲಿನ ತುಮುಲಯುದ್ಧದಲ್ಲಿ ಚೆನ್ನಬಸವಣ್ಣನವರಿಗೂ ಗಾಯಗಳಾದವು. ಸೈನಿಕರು ದಳಬದ್ದರಾಗಿ ತಮ್ಮ ಮೇಲೆರಗಲು ಬರುತ್ತಿರುವುದನ್ನು ಕಂಡಾಗ ಗಣಾಚಾರಿ ನಾಯಕನು ತನ್ನ ಕಡೆಯವರಿಗೆ ಹಿಮ್ಮೆಟ್ಟಲು ಆಜ್ಞೆ ಮಾಡಿದನು. {{gap}}ಶಿಬಿರದ ಬೇರೆ ಕಡೆಗಳಲ್ಲಿಯೂ ಇದೇ ಪರಿಸ್ಥಿತಿ ಒದಗಿತ್ತು. ಹಠಾತ್ತನೆ ನಡೆದ ಆಕ್ರಮಣದಿಂದ ತಲ್ಲಣಗೊಂಡಿದ್ದ ಸೈನಿಕರು ಚೇತರಿಸಿಕೊಂಡು ದಳಬದ್ದರಾಗಿ ಗಣಾಚಾರಿ ಯೋಧರ ಮೇಲೆ ಬಿದ್ದರು. ಸಂಖ್ಯಾಬಲದ ಒತ್ತಡದಿಂದ ಗಣಾಚಾರಿ ಯೋಧರು ಹಿಮ್ಮೆಟ್ಟಬೇಕಾಯಿತು. ಗಾಯಗೊಂಡವರನ್ನು ಎತ್ತಿಕೊಂಡು ಅವರು ಪುನಃ ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ ಸೂರ್ಯೋದಯವಾಯಿತು. ಕಣಿವೆಯ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಕಾದಾಡುತ್ತ ಮಡಿಯಲು ಅವರು ನಿರ್ಧರಿಸಿ ಕೊಂಡರು. ವಿಜಯದ ಭರವಸೆಯಿಂದ ಪ್ರಾರಂಭವಾದ ಆಕ್ರಮಣ ಕಗ್ಗೊಲೆಯ ಪರಾಜಯದಲ್ಲಿ ಮುಗಿಯಲು ಹೆಚ್ಚು ಹೊತ್ತು ಉಳಿದಿರಲಿಲ್ಲ. ಪದಾತಿಗಳು, ರಾಹುತರು ತಂಡ ತಂಡವಾಗಿ ಅವರ ಮೇಲೆ ಬೀಳಲು ಬರುತ್ತಿದ್ದರು. {{gap}}ಅಷ್ಟರಲ್ಲಿ ಸೈನ್ಯಶಿಬಿರದ ಹೊರಗಡೆ ಅಂಚಿನಲ್ಲಿ, “ಹರ ಹರ ಮಹಾದೇವ ಎಂಬ ಜಯಘೋಷ ಕೇಳಿಸಿತು. ಕೂಡಲ ಸಂಗಮದಿಂದ, ಅಗ್ಗಳನ ನೇತೃತ್ವದಲ್ಲಿ ಶರಣರ ರಕ್ಷಣೆಗಾಗಿ ಹೊರಟಿದ್ದ ಉತ್ತರಾಪಥದ ಜಂಗಮರ ತಂಡ ತಂಗಡಿಯನ್ನು ಸೇರಿ ಮಾಧವ ನಾಯಕನ ಸೈನ್ಯದ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದ್ದರು. {{gap}}ಆ ಜಂಗಮರ ವಿಚಿತ್ರ ವೇಷಭೂಷಣಗಳು, ವಿಕೃತ ಕಂಠದಿಂದ ಅವರು ಕೂಗುತ್ತಿದ್ದ ಜಯಘೋಷಗಳ ಅಬ್ಬರ, ಅವರು ಹಿಡಿದಿದ್ದ ಖಡ್ಗ ಪರಶು ತೊಮರ ಗದೆ ಭಲ್ಲೆ ಮೊದಲಾದ ಆಯುಧಗಳು, ಇವುಗಳಿಂದ ಸೈನಿಕರು ಬೆಬ್ಬೆರಗಾದರು. ತಂಡದ ನಾಯಕನು ಎರಡೂ ಕೈಗಳಲ್ಲಿ ಪರಶು ಗದೆಗಳನ್ನು ತಿರುಗಿಸುತ್ತ ಮುನ್ನುಗ್ಗುತ್ತಿರುವುದನ್ನು ಕಂಡು ಅವರು, ಶರಣರ ರಕ್ಷಣೆಗಾಗಿ ಶಿವಗಣಗಳ ಮೃತ್ಯು ತಂಡ ಕೈಲಾಸದಿಂದ ಭೂಮಿಗಿಳಿದಿದೆಯೆಂದು ಭಾವಿಸಿದರು. ಸೈನಿಕರಲ್ಲಿ ಕೆಲವರು ಭಯದಿಂದ ಚೀರಿ ರಕ್ತಕಾರುತ್ತ ಸತ್ತರು. ಧೈರ್ಯದಿಂದ ಎದುರಾದವರು ಜಂಗಮರ ಆಯುಧಗಳಿಗೆ ಬಲಿಯಾದರು. ಇನ್ನುಳಿದವರು ಶಸ್ತ್ರಗಳನ್ನು ಬಿಸುಟು ಕಲ್ಯಾಣದತ್ತ ಓಡಿದರು. ಕೆಲವೇ ಕ್ಷಣಗಳಲ್ಲಿ ಮಾಧವ ನಾಯಕನ ಮಹಾಸೈನ್ಯ ದೆಸೆಗೆಟ್ಟ ಸಂತ್ರಸ್ತರ ಗೊಂದಲಪುರವಾಯಿತು.<noinclude></noinclude> 5zqfoals3d2ktodawiwkyii9qplisg0 ಪುಟ:ಕ್ರಾಂತಿ ಕಲ್ಯಾಣ.pdf/೪೮೧ 104 86431 324138 203757 2026-06-03T02:35:00Z Shreesha Sharma 7840 /* Proofread */ 324138 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೬೮|right=ಕ್ರಾಂತಿ ಕಲ್ಯಾಣ}} ಮನೆಗಳೂ ಅಗ್ನಿಯ ಪಾಲಾದವು. ವಿರೋಧಿಸಿದವರನ್ನು ಸೈನಿಕರು ಕೊಂದರು. ಜಪ ತಪ ಅನುಷ್ಠಾನಗಳಲ್ಲಿ ನಿರತರಾಗಿದ್ದ ಜಂಗಮರನ್ನು ಬೀದಿಗೆಳೆದು ತಂದು ವಧಿಸಿದರು. ಸೈನಿಕರ ಹಿಂಸೆ ಅಪಮಾನಗಳಿಂದ ತಪ್ಪಿಸಿಕೊಳ್ಳಲು ಬಹುಮಂದಿ ಶರಣ ಶರಣೆಯರು ಬೆಂಕಿಯಲ್ಲಿ ಬಿದ್ದು ಸತ್ತರು, ಕೆರೆ ಬಾವಿಗಳಿಗೆ ಬಿದ್ದು ಮಡಿದರು. ನಗರದಲ್ಲಿ ಎರಡು ದಿನ ನಡೆಯಿತು ಈ ನರಮೇಧ !” {{gap}}“ಅದಕ್ಕೆ ಮೊದಲೆ ಬಹು ಮಂದಿ ಶರಣರು ನಗರವನ್ನು ಬಿಟ್ಟು ವಲಸೆ ಹೋಗಿದ್ದರಲ್ಲವೆ?” -ದುಗುಡ ತುಂಬಿದ ದನಿಯಿಂದ ಸೋಮೇಶ್ವರನು ಕೇಳಿದನು. - {{gap}}“ಹತ್ಯೆಯ ಹಿಂದಿನ ರಾತ್ರಿ ಶರಣರ ಒಂದು ದೊಡ್ಡ ಗುಂಪು ಚೆನ್ನಬಸವಣ್ಣನವರ ನೇತೃತ್ವದಲ್ಲಿ ವಲಸೆ ಹೋಗಿದ್ದರು. ಉಳಿದವರಲ್ಲಿ ಹೆಚ್ಚು ಮಂದಿ ಮೋಳಿಗೆಯ ಮಾರಯ್ಯನವರ ಒತ್ತಾಯದಿಂದ ಮರುದಿನ ನಗರವನ್ನು ಬಿಟ್ಟರು. ಆಮೇಲೆ ಹೋರಾಟ ಪ್ರಾರಂಭವಾಗಿ ನಗರದ ಮಹಾದ್ವಾರಗಳನ್ನು ಮುಚ್ಚಿದ್ದರಿಂದ ಸುಮಾರು ಐದು ಸಾವಿರ ಮಂದಿ ಶರಣರು ನಗರದಲ್ಲಿಯೇ ಉಳಿದರು.” {{gap}}“ತಮ್ಮ ಮೇಲೆ ಆಕ್ರಮಣ ನಡೆಯುವುದೆಂದು ಅವರಿಗೆ ಮೊದಲೆ ತಿಳಿದಿತ್ತೆ?” {{gap}}“ತಿಳಿದಿತ್ತು ಮಹಾಪ್ರಭು. ಹತ್ಯೆ ನಡೆದ ದಿನ ಧರ್ಮಾಧಿಕರಣದ ಸಮ್ಮುಖದ ಚಾವಡಿಯಲ್ಲಿ ಸೇರಿದ್ದ ಸಾಮಂತಾಧಿಕಾರಿಗಳ ರಹಸ್ಯ ಸಭೆಯಲ್ಲಿ ಶೈವಮಠಗಳನ್ನು ನಾಶಮಾಡುವ ಯೋಜನೆ ಚರ್ಚಿಸಲ್ಪಟ್ಟು ಸರ್ವಾಧಿಕಾರಿಗಳ ಅನುಮೋದನೆ ಪಡೆಯಿತೆಂದು ಮಾಧವ ನಾಯಕರ ಕಡೆಯವರು ಹೇಳುತ್ತಾರೆ.” {{gap}}-ತಂದೆಯ ಒಪ್ಪಿಗೆಯಿಂದ ಈ ವಿನಾಶ ಕೃತ್ಯ ನಡೆಯಿತೆ? ಸೋಮೇಶ್ವರನಿಗೆ ಅದನ್ನು ನಂಬುವ ಇಚ್ಛೆಯೂ ಇರಲಿಲ್ಲ, ಆದರೂ ಭಯಗ್ರಸ್ತರಾದ ನಾಗರಿಕರು ನಿಜ ಹೇಳುತ್ತಿರುವರೆಂದು ಅವನು ತಿಳಿದನು. ಅಧಿಕಾರಿ ಸಾಮಂತರ ಪರಿಷ್ಕೃತ ವರದಿಗಿಂತ ನಾಗರಿಕರ ಮಾತು ಹೆಚ್ಚು ವಿಶ್ವಾಸಾರ್ಹವೆಂಬುದು ಮಂಗಳವೇಡೆಯ ಘಟನೆಗಳಿಂದ ಅವನಿಗೆ ಅನುಭವವಾಗಿತ್ತು. {{gap}}ಹರದನು ಮುಂದುವರಿದು ಹೇಳಿದನು : “ಆ ಎರಡು ದಿನಗಳಲ್ಲಿ ನಡೆದ ಅಮಾನುಷ ರಾಕ್ಷಸೀ ಕೃತ್ಯಗಳನ್ನು ನೆನಸಿಕೊಂಡರೆ ಎದೆ ನಡುಗುವುದು. ಚಾಲುಕ್ಯ ರಾಜ್ಯದಲ್ಲಿ ಹಿಂದೆ ಯಾವಾಗಲೂ ಎಲ್ಲಿಯೂ ನಡೆಯದ ದುಷ್ಕೃತ್ಯಗಳು ಕಲ್ಯಾಣದಲ್ಲಿ ನಡೆದವು. ಶರಣರು ಭಕ್ತಿ ಗೌರವಗಳಿಂದ ಕಟ್ಟಿಸಿದ್ದ ಮಹಮನೆ ಅನುಭವಮಂಟಪಗಳು ಬೆಂಕಿಯಿಂದ ನಾಶವಾದವು. ಕಲ್ಯಾಣದ ವಿಖ್ಯಾತ ಶಿಲ್ಪಗಳು ದೀರ್ಘ ಪರಿಶ್ರಮದಿಂದ ರಚಿಸಿದ್ದ ಕೆತ್ತನೆಯ ಕಂಬಗಳು, ಶೀಲವಂತ ಬರೆದಿದ್ದ ಭಿತ್ತಿಚಿತ್ರಗಳು ಕುಸುರಿ ಕೆಲಸದ ಭುವನೇಶ್ವರಿ, ಎಲ್ಲವನ್ನೂ ನಾಶ ಮಾಡಿದರು ಮಾಧವ ನಾಯಕರ<noinclude></noinclude> epcsx34tgs28unrflzsb8hu0u0r12kq 324142 324138 2026-06-03T02:38:35Z Shreelatha.Halemane 7642 /* Validated */ 324142 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೬೮|right=ಕ್ರಾಂತಿ ಕಲ್ಯಾಣ}} ಮನೆಗಳೂ ಅಗ್ನಿಯ ಪಾಲಾದವು. ವಿರೋಧಿಸಿದವರನ್ನು ಸೈನಿಕರು ಕೊಂದರು. ಜಪ ತಪ ಅನುಷ್ಠಾನಗಳಲ್ಲಿ ನಿರತರಾಗಿದ್ದ ಜಂಗಮರನ್ನು ಬೀದಿಗೆಳೆದು ತಂದು ವಧಿಸಿದರು. ಸೈನಿಕರ ಹಿಂಸೆ ಅಪಮಾನಗಳಿಂದ ತಪ್ಪಿಸಿಕೊಳ್ಳಲು ಬಹುಮಂದಿ ಶರಣ ಶರಣೆಯರು ಬೆಂಕಿಯಲ್ಲಿ ಬಿದ್ದು ಸತ್ತರು, ಕೆರೆ ಬಾವಿಗಳಿಗೆ ಬಿದ್ದು ಮಡಿದರು. ನಗರದಲ್ಲಿ ಎರಡು ದಿನ ನಡೆಯಿತು ಈ ನರಮೇಧ !” {{gap}}“ಅದಕ್ಕೆ ಮೊದಲೆ ಬಹು ಮಂದಿ ಶರಣರು ನಗರವನ್ನು ಬಿಟ್ಟು ವಲಸೆ ಹೋಗಿದ್ದರಲ್ಲವೆ?” -ದುಗುಡ ತುಂಬಿದ ದನಿಯಿಂದ ಸೋಮೇಶ್ವರನು ಕೇಳಿದನು. - {{gap}}“ಹತ್ಯೆಯ ಹಿಂದಿನ ರಾತ್ರಿ ಶರಣರ ಒಂದು ದೊಡ್ಡ ಗುಂಪು ಚೆನ್ನಬಸವಣ್ಣನವರ ನೇತೃತ್ವದಲ್ಲಿ ವಲಸೆ ಹೋಗಿದ್ದರು. ಉಳಿದವರಲ್ಲಿ ಹೆಚ್ಚು ಮಂದಿ ಮೋಳಿಗೆಯ ಮಾರಯ್ಯನವರ ಒತ್ತಾಯದಿಂದ ಮರುದಿನ ನಗರವನ್ನು ಬಿಟ್ಟರು. ಆಮೇಲೆ ಹೋರಾಟ ಪ್ರಾರಂಭವಾಗಿ ನಗರದ ಮಹಾದ್ವಾರಗಳನ್ನು ಮುಚ್ಚಿದ್ದರಿಂದ ಸುಮಾರು ಐದು ಸಾವಿರ ಮಂದಿ ಶರಣರು ನಗರದಲ್ಲಿಯೇ ಉಳಿದರು.” {{gap}}“ತಮ್ಮ ಮೇಲೆ ಆಕ್ರಮಣ ನಡೆಯುವುದೆಂದು ಅವರಿಗೆ ಮೊದಲೆ ತಿಳಿದಿತ್ತೆ?” {{gap}}“ತಿಳಿದಿತ್ತು ಮಹಾಪ್ರಭು. ಹತ್ಯೆ ನಡೆದ ದಿನ ಧರ್ಮಾಧಿಕರಣದ ಸಮ್ಮುಖದ ಚಾವಡಿಯಲ್ಲಿ ಸೇರಿದ್ದ ಸಾಮಂತಾಧಿಕಾರಿಗಳ ರಹಸ್ಯ ಸಭೆಯಲ್ಲಿ ಶೈವಮಠಗಳನ್ನು ನಾಶಮಾಡುವ ಯೋಜನೆ ಚರ್ಚಿಸಲ್ಪಟ್ಟು ಸರ್ವಾಧಿಕಾರಿಗಳ ಅನುಮೋದನೆ ಪಡೆಯಿತೆಂದು ಮಾಧವ ನಾಯಕರ ಕಡೆಯವರು ಹೇಳುತ್ತಾರೆ.” {{gap}}-ತಂದೆಯ ಒಪ್ಪಿಗೆಯಿಂದ ಈ ವಿನಾಶ ಕೃತ್ಯ ನಡೆಯಿತೆ? ಸೋಮೇಶ್ವರನಿಗೆ ಅದನ್ನು ನಂಬುವ ಇಚ್ಛೆಯೂ ಇರಲಿಲ್ಲ, ಆದರೂ ಭಯಗ್ರಸ್ತರಾದ ನಾಗರಿಕರು ನಿಜ ಹೇಳುತ್ತಿರುವರೆಂದು ಅವನು ತಿಳಿದನು. ಅಧಿಕಾರಿ ಸಾಮಂತರ ಪರಿಷ್ಕೃತ ವರದಿಗಿಂತ ನಾಗರಿಕರ ಮಾತು ಹೆಚ್ಚು ವಿಶ್ವಾಸಾರ್ಹವೆಂಬುದು ಮಂಗಳವೇಡೆಯ ಘಟನೆಗಳಿಂದ ಅವನಿಗೆ ಅನುಭವವಾಗಿತ್ತು. {{gap}}ಹರದನು ಮುಂದುವರಿದು ಹೇಳಿದನು : “ಆ ಎರಡು ದಿನಗಳಲ್ಲಿ ನಡೆದ ಅಮಾನುಷ ರಾಕ್ಷಸೀ ಕೃತ್ಯಗಳನ್ನು ನೆನಸಿಕೊಂಡರೆ ಎದೆ ನಡುಗುವುದು. ಚಾಲುಕ್ಯ ರಾಜ್ಯದಲ್ಲಿ ಹಿಂದೆ ಯಾವಾಗಲೂ ಎಲ್ಲಿಯೂ ನಡೆಯದ ದುಷ್ಕೃತ್ಯಗಳು ಕಲ್ಯಾಣದಲ್ಲಿ ನಡೆದವು. ಶರಣರು ಭಕ್ತಿ ಗೌರವಗಳಿಂದ ಕಟ್ಟಿಸಿದ್ದ ಮಹಮನೆ ಅನುಭವಮಂಟಪಗಳು ಬೆಂಕಿಯಿಂದ ನಾಶವಾದವು. ಕಲ್ಯಾಣದ ವಿಖ್ಯಾತ ಶಿಲ್ಪಗಳು ದೀರ್ಘ ಪರಿಶ್ರಮದಿಂದ ರಚಿಸಿದ್ದ ಕೆತ್ತನೆಯ ಕಂಬಗಳು, ಶೀಲವಂತ ಬರೆದಿದ್ದ ಭಿತ್ತಿಚಿತ್ರಗಳು ಕುಸುರಿ ಕೆಲಸದ ಭುವನೇಶ್ವರಿ, ಎಲ್ಲವನ್ನೂ ನಾಶ ಮಾಡಿದರು ಮಾಧವ ನಾಯಕರ<noinclude></noinclude> jcnv2tyc89jm744s6yfx2mmart4cbvv ಪುಟ:ಕ್ರಾಂತಿ ಕಲ್ಯಾಣ.pdf/೪೮೩ 104 86432 324144 203758 2026-06-03T02:41:45Z Shreesha Sharma 7840 /* Proofread */ 324144 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೭೦|right=ಕ್ರಾಂತಿ ಕಲ್ಯಾಣ}} ಆಜ್ಞೆಯ ವಿರುದ್ಧ ನಗರದ ಶಾಂತಿಗೆ ಭಂಗ ತರುವವರು ಯಾರೇ ಆಗಲಿ ಉಗ್ರಶಿಕ್ಷೆಗೆ ಗುರಿಯಾಗುವರು,” ಎಂದು ಘೋಷಿಸಿದನು. {{gap}}ಆಗ ನಾಗರಿಕರಿಗೆ ಸಮಾಧಾನವಾಯಿತು. {{gap}}ಸೋಮೇಶ್ವರನು ಕಲಚೂರ್ಯ ಅರಮನೆಗೆ ಬಂದಾಗ ಬೇರೊಂದು ಪ್ರಸಂಗ ಎದುರಾಯಿತು. ದರ್ಶನಕ್ಕಾಗಿ ಕಾಯುತ್ತಿದ್ದ ರಾಜಪುರೋಹಿತ ನಾರಣ ಕ್ರಮಿತನು ಕೈಜೋಡಿಸಿ ಎದುರಿಗೆ ನಿಂತು, “ನನ್ನನ್ನು ಅಧಿಕಾರ ನಿವೃತ್ತನನ್ನಾಗಿ ಮಾಡಿ ವಾನಪ್ರಸ್ಥಕ್ಕೆ ಅನುಮತಿ ಕೊಡಬೇಕಾಗಿ ಬೇಡುತ್ತೇನೆ” ಎಂದು ಬಿನ್ನವಿಸಿಕೊಂಡು ಅಧಿಕಾರ ಲಾಂಛನಗಳನ್ನು ಮುಂದಿಟ್ಟನು. {{gap}}ಕ್ರಮಿತನ ಕಂಗೆಟ್ಟ ಮುಖ, ದೈನ್ಯವರ್ತನೆ, ಸೋಮೇಶ್ವರನನ್ನು ಸ್ತಂಭಿತಗೊಳಿಸಿದವು. ದುರಭಿಮಾನಿ ನಿಷ್ಟುರ ಅಧಿಕಾರಿಯೆಂದು ಹೆಸರಾಗಿದ್ದು ಅವನಲ್ಲಿ ಈ ಪರಿವರ್ತನೆ ತಲೆದೋರಿದ್ದು ಹೇಗೆ? ಎಂದು ಯೋಚಿಸಿ ಸೋಮೇಶ್ವರನು, “ನೀವು ವಾನಪ್ರಸ್ಥಕ್ಕೆ ಹೋಗಲು ಇನ್ನೂ ಸಮಯವಿದೆ. ನಿಮ್ಮನ್ನು ಅಧಿಕಾರ ನಿವೃತ್ತರನ್ನಾಗಿ ಮಾಡಲು ಯಾವ ಕಾರಣವೂ ಇರುವುದಿಲ್ಲ.” ಎಂದನು. {{gap}}ಕ್ರಮಿತನ ವರ್ತನೆ ಹೆಚ್ಚು ಗಂಭೀರವಾಯಿತು. ದೀರ್ಘವಾಗಿ ಉಸಿರೆಳೆದು ದುಗುಡ ತುಂಬಿದ ದನಿಯಿಂದ ಅವನು ನುಡಿದನು : “ಕಳೆದ ಹತ್ತು ದಿನಗಳಿಂದ ನಗರದಲ್ಲಿ ನಡೆದ ಎಲ್ಲ ದುರ್ಘಟನೆಗಳಿಗೆ ನಾನು ಕಾರಣನು, ಮಹಾಪ್ರಭು. ನನ್ನ ಒಂದು ಅವಿವೇಕ ನಿಮ್ಮ ಪೂಜ್ಯ ತಂದೆಯವರಿಗೆ ಮರಣ ತಂದಿತು, ಕಲ್ಯಾಣವನ್ನು ನಾಶ ಮಾಡಿತು. ನಾಗರಿಕರನ್ನು ಸಂಕಷ್ಟಗಳಿಗೆ ಗುರಿಪಡಿಸಿತು. ಈ ಚಿಂತೆ ಪರ್ವತ ಸಮನಾದ ಭಾರದಿಂದ ನನ್ನನ್ನು ತುಳಿಯುತ್ತಿದೆ. ನನ್ನನ್ನು ಬಂಧನದಲ್ಲಿಟ್ಟು ನನ್ನ ಅಪರಾಧಕ್ಕೆ ತಕ್ಕ ದಂಡನೆ ವಿಧಿಸಿರಿ. ಈ ಕಾರ್ಯ ನಿಮ್ಮಿಂದಾಗದಿದ್ದರೆ ನಾನೇ ವಾನಪ್ರಸ್ಥನಾಗಿ ಅರಣ್ಯಕ್ಕೆ ಹೋಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. {{gap}}ನುಡಿಯುತ್ತಿದ್ದಂತೆ ಕ್ರಮಿತನ ಕಂಠ ಗದ್ಗದಿತವಾಯಿತು, ದೇಹ ಕಂಪಿಸಿತು, ಕಾಲುಗಳು ಕುಸಿದು ನಿಲ್ಲಲು ಅಸಮರ್ಥನಾದನು. ಆಗ ಸೋಮೇಶ್ವರನು ಅವನ ಕೈಹಿಡಿದು ಭದ್ರಾಸನದಲ್ಲಿ ಕುಳ್ಳಿರಿಸಿ, “ಮಂತ್ರಿಮಂಡಲದಲ್ಲಿ ಹಿರಿಯರಾಗಿ ನಮಗೆ ಮಾರ್ಗದರ್ಶನ ಮಾಡಬೇಕಾದ ನೀವೇ ಹೀಗಾದರೆ ನಮ್ಮಗತಿಯೇನು, ಕ್ರಮಿತರೆ? ಕೊಂಚ ಹೊತ್ತು ಇಲ್ಲಿ ವಿಶ್ರಮಿಸಿಕೊಂಡು ಮನಸ್ಸಿಗೆ ಸಮಾಧಾನ ತಂದುಕೊಳ್ಳಬೇಕಾಗಿ ಬೇಡುತ್ತೇನೆ,” ಎಂದು ಹೇಳಿದನು. {{gap}}ಸೋಮೇಶ್ವರನ ನಮ್ಮ ವರ್ತನೆ, ಅನುಕಂಪದ ನುಡಿಗಳು, ಬೀಸಣಿಗೆ<noinclude></noinclude> 1vq3uw0ia9dqpvgcnoq8itspyfqlxq0 324150 324144 2026-06-03T02:56:02Z Shreelatha.Halemane 7642 /* Validated */ 324150 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೭೦|right=ಕ್ರಾಂತಿ ಕಲ್ಯಾಣ}} ಆಜ್ಞೆಯ ವಿರುದ್ಧ ನಗರದ ಶಾಂತಿಗೆ ಭಂಗ ತರುವವರು ಯಾರೇ ಆಗಲಿ ಉಗ್ರಶಿಕ್ಷೆಗೆ ಗುರಿಯಾಗುವರು,” ಎಂದು ಘೋಷಿಸಿದನು. {{gap}}ಆಗ ನಾಗರಿಕರಿಗೆ ಸಮಾಧಾನವಾಯಿತು. {{gap}}ಸೋಮೇಶ್ವರನು ಕಲಚೂರ್ಯ ಅರಮನೆಗೆ ಬಂದಾಗ ಬೇರೊಂದು ಪ್ರಸಂಗ ಎದುರಾಯಿತು. ದರ್ಶನಕ್ಕಾಗಿ ಕಾಯುತ್ತಿದ್ದ ರಾಜಪುರೋಹಿತ ನಾರಣ ಕ್ರಮಿತನು ಕೈಜೋಡಿಸಿ ಎದುರಿಗೆ ನಿಂತು, “ನನ್ನನ್ನು ಅಧಿಕಾರ ನಿವೃತ್ತನನ್ನಾಗಿ ಮಾಡಿ ವಾನಪ್ರಸ್ಥಕ್ಕೆ ಅನುಮತಿ ಕೊಡಬೇಕಾಗಿ ಬೇಡುತ್ತೇನೆ” ಎಂದು ಬಿನ್ನವಿಸಿಕೊಂಡು ಅಧಿಕಾರ ಲಾಂಛನಗಳನ್ನು ಮುಂದಿಟ್ಟನು. {{gap}}ಕ್ರಮಿತನ ಕಂಗೆಟ್ಟ ಮುಖ, ದೈನ್ಯವರ್ತನೆ, ಸೋಮೇಶ್ವರನನ್ನು ಸ್ತಂಭಿತಗೊಳಿಸಿದವು. ದುರಭಿಮಾನಿ ನಿಷ್ಟುರ ಅಧಿಕಾರಿಯೆಂದು ಹೆಸರಾಗಿದ್ದು ಅವನಲ್ಲಿ ಈ ಪರಿವರ್ತನೆ ತಲೆದೋರಿದ್ದು ಹೇಗೆ? ಎಂದು ಯೋಚಿಸಿ ಸೋಮೇಶ್ವರನು, “ನೀವು ವಾನಪ್ರಸ್ಥಕ್ಕೆ ಹೋಗಲು ಇನ್ನೂ ಸಮಯವಿದೆ. ನಿಮ್ಮನ್ನು ಅಧಿಕಾರ ನಿವೃತ್ತರನ್ನಾಗಿ ಮಾಡಲು ಯಾವ ಕಾರಣವೂ ಇರುವುದಿಲ್ಲ.” ಎಂದನು. {{gap}}ಕ್ರಮಿತನ ವರ್ತನೆ ಹೆಚ್ಚು ಗಂಭೀರವಾಯಿತು. ದೀರ್ಘವಾಗಿ ಉಸಿರೆಳೆದು ದುಗುಡ ತುಂಬಿದ ದನಿಯಿಂದ ಅವನು ನುಡಿದನು : “ಕಳೆದ ಹತ್ತು ದಿನಗಳಿಂದ ನಗರದಲ್ಲಿ ನಡೆದ ಎಲ್ಲ ದುರ್ಘಟನೆಗಳಿಗೆ ನಾನು ಕಾರಣನು, ಮಹಾಪ್ರಭು. ನನ್ನ ಒಂದು ಅವಿವೇಕ ನಿಮ್ಮ ಪೂಜ್ಯ ತಂದೆಯವರಿಗೆ ಮರಣ ತಂದಿತು, ಕಲ್ಯಾಣವನ್ನು ನಾಶ ಮಾಡಿತು. ನಾಗರಿಕರನ್ನು ಸಂಕಷ್ಟಗಳಿಗೆ ಗುರಿಪಡಿಸಿತು. ಈ ಚಿಂತೆ ಪರ್ವತ ಸಮನಾದ ಭಾರದಿಂದ ನನ್ನನ್ನು ತುಳಿಯುತ್ತಿದೆ. ನನ್ನನ್ನು ಬಂಧನದಲ್ಲಿಟ್ಟು ನನ್ನ ಅಪರಾಧಕ್ಕೆ ತಕ್ಕ ದಂಡನೆ ವಿಧಿಸಿರಿ. ಈ ಕಾರ್ಯ ನಿಮ್ಮಿಂದಾಗದಿದ್ದರೆ ನಾನೇ ವಾನಪ್ರಸ್ಥನಾಗಿ ಅರಣ್ಯಕ್ಕೆ ಹೋಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. {{gap}}ನುಡಿಯುತ್ತಿದ್ದಂತೆ ಕ್ರಮಿತನ ಕಂಠ ಗದ್ಗದಿತವಾಯಿತು, ದೇಹ ಕಂಪಿಸಿತು, ಕಾಲುಗಳು ಕುಸಿದು ನಿಲ್ಲಲು ಅಸಮರ್ಥನಾದನು. ಆಗ ಸೋಮೇಶ್ವರನು ಅವನ ಕೈಹಿಡಿದು ಭದ್ರಾಸನದಲ್ಲಿ ಕುಳ್ಳಿರಿಸಿ, “ಮಂತ್ರಿಮಂಡಲದಲ್ಲಿ ಹಿರಿಯರಾಗಿ ನಮಗೆ ಮಾರ್ಗದರ್ಶನ ಮಾಡಬೇಕಾದ ನೀವೇ ಹೀಗಾದರೆ ನಮ್ಮಗತಿಯೇನು, ಕ್ರಮಿತರೆ? ಕೊಂಚ ಹೊತ್ತು ಇಲ್ಲಿ ವಿಶ್ರಮಿಸಿಕೊಂಡು ಮನಸ್ಸಿಗೆ ಸಮಾಧಾನ ತಂದುಕೊಳ್ಳಬೇಕಾಗಿ ಬೇಡುತ್ತೇನೆ,” ಎಂದು ಹೇಳಿದನು. {{gap}}ಸೋಮೇಶ್ವರನ ನಮ್ಮ ವರ್ತನೆ, ಅನುಕಂಪದ ನುಡಿಗಳು, ಬೀಸಣಿಗೆ<noinclude></noinclude> 01ook3ehmq1heq2vie245wehpj45yfa ಪುಟ:ಕ್ರಾಂತಿ ಕಲ್ಯಾಣ.pdf/೪೮೭ 104 86433 324177 203759 2026-06-03T03:35:29Z Shreesha Sharma 7840 /* Proofread */ 324177 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೭೪|right=ಕ್ರಾಂತಿ ಕಲ್ಯಾಣ}} ಅರಮನೆಯ ಅಧಿಕಾರಿಗಳು, ರಾಜಭಟರು ಹತನಾದ ಒಬ್ಬ ಹಂತಕನ ದೇಹ ಹಠಾತ್ತಾಗಿ ಮಾಯವಾದುದನ್ನು ಗಮನಿಸಲಿಲ್ಲ.” {{gap}}“ಹಾಗಾದರೆ ತಂದೆಯವರ ಕೊಲೆಯಲ್ಲಿ ಕರ್ಣದೇವರ ಪಾತ್ರವೂ ಇದೆ. ರಾಜವಂಶಗಳ ಬೆನ್ನು ಹಿಡಿದ ಭೇತಾಳನಂತೆ ಈ ಅಣ್ಣತಮ್ಮಂದಿರ ವಿದ್ವೇಷ !” {{gap}}-ಎಂದನು ಸೋಮೇಶ್ವರ, ಹತ್ಯೆಯ ಸಂಚು ಕರ್ಣದೇವನಿಗೆ ಮೊದಲೇ ತಿಳಿದಿರಬೇಕೆಂದು ಅವನು ಭಾವಿಸಿದನು. {{gap}}“ಅವಿವೇಕ ಆಲಸ್ಯಗಳ ಹೊರತಾಗಿ ಹತ್ಯೆಯಲ್ಲಿ ಕರ್ಣದೇವನ ಪಾತ್ರವೇನೂ ಇರುವುದಿಲ್ಲ, ಸೋಮೇಶ್ವರ, ನೀವು ಈ ವಿಚಾರದಲ್ಲಿ ನಿಶ್ಚಿಂತರಾಗಬಹುದು,” ಕ್ರಮಿತನು ಉತ್ತರ ಕೊಟ್ಟನು-ರಾಜಗೃಹದ ರಕ್ಷಣೆಯಲ್ಲಿ ಕರ್ಣದೇವ ಇನ್ನಷ್ಟು ಜಾಗರೂಕನಾಗಿದ್ದಿದ್ದರೆ ಜಗದೇಕಮಲ್ಲ ಬೊಮ್ಮರಸರು ವೇಷಾಂತರದಿಂದ ಹೊರಗೆ ಬರಲು ಕಷ್ಟವಾಗುತ್ತಿತ್ತು. ತನ್ನ ಅವಿವೇಕವನ್ನು ಮುಚ್ಚಿಡಲು ಕರ್ಣದೇವನು ಜಗದೇಕಮಲ್ಲನ ದೇಹವನ್ನು ಅಪಹರಿಸಿದನು.” {{gap}}ಕ್ರಮಿತನ ಉತ್ತರದಿಂದ ಸೋಮೇಶ್ವರನ ಸಂದೇಹ ಹರಿಯಲಿಲ್ಲ. “ಬೊಮ್ಮರಸನು ರಾಜಗೃಹದ ಧರ್ಮೋಪದೇಶಕನಾದದ್ದು ಹೇಗೆ ?” ಎಂದು ಪುನಃ ಪ್ರಶ್ನಿಸಿದನು. {{gap}}ಅದೊಂದು ದೊಡ್ಡ ಕಥೆ, ಸೋಮೇಶ್ವರ, ಕ್ರಮಿತನು ಹೇಳಿದನು"ಚಾಲುಕ್ಯ ರಾಜಸತ್ತೆಯ ಪುನಃಪ್ರತಿಷ್ಠೆಗಾಗಿ ರಾಣಿ ಕಾಮೇಶ್ವರಿಯ ನೇತೃತ್ವದಲ್ಲಿ ಒಳಸಂಚೊಂದು ನಡೆಯುತ್ತಿತ್ತು. ನಿಡುಗಲ್ಲಿನ ದುರ್ಗಾಧಿಪತಿ ಬೊಮ್ಮರಸನು ಅದರ ನಾಯಕ, ಕಲಚೂರ್ಯ ಪ್ರಭುತ್ವದ ವಿರೋಧಿಗಳಾದ ಸಾಮಂತಾಧಿಕಾರಿ ಮಾಂಡಲಿಕರ ಸಹಕಾರ ಪಡೆಯಲು ಚಾಲುಕ್ಯರಾಜ್ಯದ ದಕ್ಷಿಣ ಮಂಡಲಗಳಲ್ಲಿ ಪ್ರವಾಸ ಮಾಡಿ ದೇವಗಿರಿಯ ಮಾರ್ಗವಾಗಿ ಕಲ್ಯಾಣಕ್ಕೆ ಬರುತ್ತಿದ್ದಾಗ ನಮ್ಮ ಬೇಹುಗಾರರು ಬೊಮ್ಮರಸನ ಸುಳಿವು ತಿಳಿದರು. ರಾಣಿ ಕಾಮೇಶ್ವರಿಯ ಮನೆಹೆಗ್ಗಡೆ ಅಗ್ಗಳದೇವನು ಅವನ ಸಂಗಡಿದ್ದನು. ಬಸವಣ್ಣನವರು ನಗರವನ್ನು ಬಿಟ್ಟ ದಿನ ಅವರು ಕಲ್ಯಾಣಕ್ಕೆ ಬಂದರು. ಆ ದಿನವೇ ಅವರನ್ನು ಸೆರೆಹಿಡಿಯುವುದು ನಮ್ಮ ಉದ್ದೇಶವಾಗಿತ್ತು. ಅಗ್ಗಳ ಸಿಕ್ಕಿದನು. ರಾಜಭಟರ ಅಚಾತುರ್ಯದಿಂದ ಬೊಮ್ಮರಸ ತಪ್ಪಿಸಿಕೊಂಡನು. ಆಮೇಲೆ ಅವನು ಜಂಗಮ ವೇಷದಿಂದ ಜಗದೇಕಮಲ್ಲನ ಧರ್ಮೋಪದೇಶಕನಾಗಿ ರಾಜಗೃಹ ಸೇರಿದನು.” {{gap}}“ಮನೆಹೆಗ್ಗಡೆ ಅಗ್ಗಳನನ್ನೇನು ಮಾಡಿದಿರಿ ?” {{gap}}“ಬಿಜ್ಜಳರಾಯರು ಅವನನ್ನು ಜಗದೇಕಮಲ್ಲನ ಕಾಮೋಪದೇಶಕನನ್ನಾಗಿ<noinclude></noinclude> 5vid7qlh5dp35zp6dbdh483nzumn70r 324181 324177 2026-06-03T03:38:36Z Shreelatha.Halemane 7642 /* Validated */ 324181 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೭೪|right=ಕ್ರಾಂತಿ ಕಲ್ಯಾಣ}} ಅರಮನೆಯ ಅಧಿಕಾರಿಗಳು, ರಾಜಭಟರು ಹತನಾದ ಒಬ್ಬ ಹಂತಕನ ದೇಹ ಹಠಾತ್ತಾಗಿ ಮಾಯವಾದುದನ್ನು ಗಮನಿಸಲಿಲ್ಲ.” {{gap}}“ಹಾಗಾದರೆ ತಂದೆಯವರ ಕೊಲೆಯಲ್ಲಿ ಕರ್ಣದೇವರ ಪಾತ್ರವೂ ಇದೆ. ರಾಜವಂಶಗಳ ಬೆನ್ನು ಹಿಡಿದ ಭೇತಾಳನಂತೆ ಈ ಅಣ್ಣತಮ್ಮಂದಿರ ವಿದ್ವೇಷ !” {{gap}}-ಎಂದನು ಸೋಮೇಶ್ವರ, ಹತ್ಯೆಯ ಸಂಚು ಕರ್ಣದೇವನಿಗೆ ಮೊದಲೇ ತಿಳಿದಿರಬೇಕೆಂದು ಅವನು ಭಾವಿಸಿದನು. {{gap}}“ಅವಿವೇಕ ಆಲಸ್ಯಗಳ ಹೊರತಾಗಿ ಹತ್ಯೆಯಲ್ಲಿ ಕರ್ಣದೇವನ ಪಾತ್ರವೇನೂ ಇರುವುದಿಲ್ಲ, ಸೋಮೇಶ್ವರ, ನೀವು ಈ ವಿಚಾರದಲ್ಲಿ ನಿಶ್ಚಿಂತರಾಗಬಹುದು,” ಕ್ರಮಿತನು ಉತ್ತರ ಕೊಟ್ಟನು-ರಾಜಗೃಹದ ರಕ್ಷಣೆಯಲ್ಲಿ ಕರ್ಣದೇವ ಇನ್ನಷ್ಟು ಜಾಗರೂಕನಾಗಿದ್ದಿದ್ದರೆ ಜಗದೇಕಮಲ್ಲ ಬೊಮ್ಮರಸರು ವೇಷಾಂತರದಿಂದ ಹೊರಗೆ ಬರಲು ಕಷ್ಟವಾಗುತ್ತಿತ್ತು. ತನ್ನ ಅವಿವೇಕವನ್ನು ಮುಚ್ಚಿಡಲು ಕರ್ಣದೇವನು ಜಗದೇಕಮಲ್ಲನ ದೇಹವನ್ನು ಅಪಹರಿಸಿದನು.” {{gap}}ಕ್ರಮಿತನ ಉತ್ತರದಿಂದ ಸೋಮೇಶ್ವರನ ಸಂದೇಹ ಹರಿಯಲಿಲ್ಲ. “ಬೊಮ್ಮರಸನು ರಾಜಗೃಹದ ಧರ್ಮೋಪದೇಶಕನಾದದ್ದು ಹೇಗೆ ?” ಎಂದು ಪುನಃ ಪ್ರಶ್ನಿಸಿದನು. {{gap}}ಅದೊಂದು ದೊಡ್ಡ ಕಥೆ, ಸೋಮೇಶ್ವರ, ಕ್ರಮಿತನು ಹೇಳಿದನು"ಚಾಲುಕ್ಯ ರಾಜಸತ್ತೆಯ ಪುನಃಪ್ರತಿಷ್ಠೆಗಾಗಿ ರಾಣಿ ಕಾಮೇಶ್ವರಿಯ ನೇತೃತ್ವದಲ್ಲಿ ಒಳಸಂಚೊಂದು ನಡೆಯುತ್ತಿತ್ತು. ನಿಡುಗಲ್ಲಿನ ದುರ್ಗಾಧಿಪತಿ ಬೊಮ್ಮರಸನು ಅದರ ನಾಯಕ, ಕಲಚೂರ್ಯ ಪ್ರಭುತ್ವದ ವಿರೋಧಿಗಳಾದ ಸಾಮಂತಾಧಿಕಾರಿ ಮಾಂಡಲಿಕರ ಸಹಕಾರ ಪಡೆಯಲು ಚಾಲುಕ್ಯರಾಜ್ಯದ ದಕ್ಷಿಣ ಮಂಡಲಗಳಲ್ಲಿ ಪ್ರವಾಸ ಮಾಡಿ ದೇವಗಿರಿಯ ಮಾರ್ಗವಾಗಿ ಕಲ್ಯಾಣಕ್ಕೆ ಬರುತ್ತಿದ್ದಾಗ ನಮ್ಮ ಬೇಹುಗಾರರು ಬೊಮ್ಮರಸನ ಸುಳಿವು ತಿಳಿದರು. ರಾಣಿ ಕಾಮೇಶ್ವರಿಯ ಮನೆಹೆಗ್ಗಡೆ ಅಗ್ಗಳದೇವನು ಅವನ ಸಂಗಡಿದ್ದನು. ಬಸವಣ್ಣನವರು ನಗರವನ್ನು ಬಿಟ್ಟ ದಿನ ಅವರು ಕಲ್ಯಾಣಕ್ಕೆ ಬಂದರು. ಆ ದಿನವೇ ಅವರನ್ನು ಸೆರೆಹಿಡಿಯುವುದು ನಮ್ಮ ಉದ್ದೇಶವಾಗಿತ್ತು. ಅಗ್ಗಳ ಸಿಕ್ಕಿದನು. ರಾಜಭಟರ ಅಚಾತುರ್ಯದಿಂದ ಬೊಮ್ಮರಸ ತಪ್ಪಿಸಿಕೊಂಡನು. ಆಮೇಲೆ ಅವನು ಜಂಗಮ ವೇಷದಿಂದ ಜಗದೇಕಮಲ್ಲನ ಧರ್ಮೋಪದೇಶಕನಾಗಿ ರಾಜಗೃಹ ಸೇರಿದನು.” {{gap}}“ಮನೆಹೆಗ್ಗಡೆ ಅಗ್ಗಳನನ್ನೇನು ಮಾಡಿದಿರಿ ?” {{gap}}“ಬಿಜ್ಜಳರಾಯರು ಅವನನ್ನು ಜಗದೇಕಮಲ್ಲನ ಕಾಮೋಪದೇಶಕನನ್ನಾಗಿ<noinclude></noinclude> 58wo2dhn77srsrteyeisnbdjwi8m1ev ಪುಟ:ಕ್ರಾಂತಿ ಕಲ್ಯಾಣ.pdf/೪೮೮ 104 86434 324159 203760 2026-06-03T03:16:19Z Shreesha Sharma 7840 /* Proofread */ 324159 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೭೫}} ನೇಮಿಸಿ, ರಾಜಗೃಹದಲ್ಲಿ ಬಂಧನದಲ್ಲಿಟ್ಟರು.” {{gap}}“ನೇಮಕದ ಉದ್ದೇಶ ?” {{gap}}“ರಾಣಿ ಕಾಮೇಶ್ವರಿಯ ಕ್ಷೇತ್ರದಪುತ್ರ ಕುಮಾರ ಪ್ರೇಮಾರ್ಣವನ ಉತ್ತರಾಧಿಕಾರದ ವಿಚಾರವಾಗಿ ಜಗದೇಕಮಲ್ಲನೊಡನೆ ಸಂಧಾನ ನಡೆಸುವುದಕ್ಕಾಗಿ, ಆದರೆ ಬಿಜ್ಜಳರಾಯರು ಉದ್ದೇಶಿಸಿದ್ದುದೊಂದು, ನಡೆದದ್ದು ಮತ್ತೊಂದು. ಅಗ್ಗಳ ಬೊಮ್ಮರಸರಿಬ್ಬರೂ ರಾಜಗೃಹ ಸೇರಿದ್ದರಿಂದ ಒಳಸಂಚಿಗೆ ಅನುಕೂಲವಾಯಿತು.” {{gap}}ಕ್ರಮಿತನ ಉತ್ತರಗಳಿಂದ ಸೋಮೇಶ್ವರನು ಪುನಃ ಗೊಂದಲದಲ್ಲಿ ಬಿದ್ದನು. ರಾಣಿ ಕಾಮೇಶ್ವರಿಯನ್ನು ಪಟ್ಟಾಭಿಷೇಕದ ನೆವದಿಂದ ಮಂಗಳವೇಡೆಗೆ ಕರೆಸಿಕೊಳ್ಳಲು ಬಿಜ್ಜಳನು ನಡೆಸಿದ ಸನ್ನಾಹ ಅಗ್ನಿದಾಹದಲ್ಲಿ ಕಾಮೇಶ್ವರಿಯ ಅಪಮೃತ್ಯು, ರಾಣಿಯೊಡನೆ ಬಿಜ್ಜಳನ ಲಂಪಟ ವರ್ತನೆಯನ್ನು ಕುರಿತು ಜನರಲ್ಲಿ ಹರಡಿದ್ದ ಅಪವಾದ, ಈ ಎಲ್ಲ ವಿಚಾರಗಳು ಸೋಮೇಶ್ವರನ ಮನದಲ್ಲಿ ಸುಳಿದವು. ಕಾಮೇಶ್ವರಿಯ ಅಪಮೃತ್ಯು ತಂದೆಯ ಕೊಲೆಗೆ ಕಾರಣವಾಗಿರಬಹುದೆ? ಕೊಲೆ ಮಾಡಿದವರಾರು? ಕಾಮೇಶ್ವರಿಯ ಸಹೋದರ, ಕರ್ಹಾಡದ ಮಂಡಲಾಧಿಪತಿ ವಿಜಯಾರ್ಕನ ಪ್ರೇರಣೆಯಿಂದ ಕೊಲೆ ನಡೆಯಿತೆ? ಎಲ್ಲವೂ ಸಾಧ್ಯ ಎಂದು ಚಿಂತಿಸಿ ಸೋಮೇಶ್ವರನು, “ಮಂಗಳವೇಡೆಯ ಘಟನೆಗಳು ಜಗದೇಕಮಲ್ಲನಿಗೆ ತಿಳಿದಿತ್ತೆ?” ಎಂದು ಹೇಳಿದನು. {{gap}}ಕ್ರಮಿತನು ಕೂಡಲೆ ಉತ್ತರ ಕೊಡಲಿಲ್ಲ. ಕೆಲವು ಕ್ಷಣಗಳು ಯೋಚಿಸುತ್ತಿದ್ದು ಬಳಿಕ ಹೇಳಿದನು. “ರಾಣಿ ಕಾಮೇಶ್ವರಿಯನ್ನು ಮಂಗಳವೇಡೆಗೆ ಕರೆಸಿಕೊಳ್ಳಲು ಬಿಜ್ಜಳರಾಯರು ನಡೆಸುತ್ತಿದ್ದ ಸಂಧಾನ ಅಗ್ಗಳನಿಂದ ಜಗದೇಕಮಲ್ಲನಿಗೆ ತಿಳಿದಿರಬೇಕು. ಪಟ್ಟಾಭಿಷೇಕ ಮುಗಿದು ಕಲ್ಯಾಣಕ್ಕೆ ಹಿಂದಿರುಗಿದ ಕರ್ಣದೇವ ಆಮೇಲಿನ ಘಟನೆಗಳನ್ನು ತಿಳಿಸಿರಬಹುದು. ಜಗದೇಕಮಲ್ಲನು ಕರ್ಣದೇವನ ಬಂದಿಯಾಗಿದ್ದರೂ ವಾಸ್ತವದಲ್ಲಿ ಅವರು ಗೆಳೆಯರಂತೆ ಸಲಿಗೆಯಿಂದ ನಡೆದುಕೊಳ್ಳುತ್ತಿದ್ದರು. ಸೆರೆಯಲ್ಲಿಯೂ ಚಾಲುಕ್ಯ ಅರಸರ ಸುಖಜೀವನ, ರಾಜೋಚಿತ ವೈಭವದಿಂದ ನಡೆಯ ಬೇಕೆಂಬುದು ಮೊದಲಿನಿಂದ ಬಿಜ್ಜಳರಾಯರ ಉದ್ದೇಶವಾಗಿತ್ತು.” {{gap}}'ತಂದೆಯವರ ಆ ಉದಾರ ವರ್ತನೆಯೇ ಅವರ ಅಂತ್ಯಕ್ಕೆ ಕಾರಣವಾಯಿತು.” -ದೀರ್ಘವಾಗಿ ಉಸಿರೆಳೆದು ಸೋಮೇಶ್ವರ ಹೇಳಿದನು. {{gap}}“ಜನರು ಹಾಗೆ ತಿಳಿದಿಲ್ಲ, ಸೋಮೇಶ್ವರ, ಲೋಕದೃಷ್ಟಿಯಲ್ಲಿ ಹತ್ಯೆಯ ಕಾರಣ ರಾಜಕೀಯವೂ ಅಲ್ಲ, ಧಾರ್ಮಿಕವೂ ಅಲ್ಲ.”<noinclude></noinclude> db8tezpt9dz19dogeqochtedstgflmu 324162 324159 2026-06-03T03:19:08Z Shreelatha.Halemane 7642 /* Validated */ 324162 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೭೫}} ನೇಮಿಸಿ, ರಾಜಗೃಹದಲ್ಲಿ ಬಂಧನದಲ್ಲಿಟ್ಟರು.” {{gap}}“ನೇಮಕದ ಉದ್ದೇಶ ?” {{gap}}“ರಾಣಿ ಕಾಮೇಶ್ವರಿಯ ಕ್ಷೇತ್ರದಪುತ್ರ ಕುಮಾರ ಪ್ರೇಮಾರ್ಣವನ ಉತ್ತರಾಧಿಕಾರದ ವಿಚಾರವಾಗಿ ಜಗದೇಕಮಲ್ಲನೊಡನೆ ಸಂಧಾನ ನಡೆಸುವುದಕ್ಕಾಗಿ, ಆದರೆ ಬಿಜ್ಜಳರಾಯರು ಉದ್ದೇಶಿಸಿದ್ದುದೊಂದು, ನಡೆದದ್ದು ಮತ್ತೊಂದು. ಅಗ್ಗಳ ಬೊಮ್ಮರಸರಿಬ್ಬರೂ ರಾಜಗೃಹ ಸೇರಿದ್ದರಿಂದ ಒಳಸಂಚಿಗೆ ಅನುಕೂಲವಾಯಿತು.” {{gap}}ಕ್ರಮಿತನ ಉತ್ತರಗಳಿಂದ ಸೋಮೇಶ್ವರನು ಪುನಃ ಗೊಂದಲದಲ್ಲಿ ಬಿದ್ದನು. ರಾಣಿ ಕಾಮೇಶ್ವರಿಯನ್ನು ಪಟ್ಟಾಭಿಷೇಕದ ನೆವದಿಂದ ಮಂಗಳವೇಡೆಗೆ ಕರೆಸಿಕೊಳ್ಳಲು ಬಿಜ್ಜಳನು ನಡೆಸಿದ ಸನ್ನಾಹ ಅಗ್ನಿದಾಹದಲ್ಲಿ ಕಾಮೇಶ್ವರಿಯ ಅಪಮೃತ್ಯು, ರಾಣಿಯೊಡನೆ ಬಿಜ್ಜಳನ ಲಂಪಟ ವರ್ತನೆಯನ್ನು ಕುರಿತು ಜನರಲ್ಲಿ ಹರಡಿದ್ದ ಅಪವಾದ, ಈ ಎಲ್ಲ ವಿಚಾರಗಳು ಸೋಮೇಶ್ವರನ ಮನದಲ್ಲಿ ಸುಳಿದವು. ಕಾಮೇಶ್ವರಿಯ ಅಪಮೃತ್ಯು ತಂದೆಯ ಕೊಲೆಗೆ ಕಾರಣವಾಗಿರಬಹುದೆ? ಕೊಲೆ ಮಾಡಿದವರಾರು? ಕಾಮೇಶ್ವರಿಯ ಸಹೋದರ, ಕರ್ಹಾಡದ ಮಂಡಲಾಧಿಪತಿ ವಿಜಯಾರ್ಕನ ಪ್ರೇರಣೆಯಿಂದ ಕೊಲೆ ನಡೆಯಿತೆ? ಎಲ್ಲವೂ ಸಾಧ್ಯ ಎಂದು ಚಿಂತಿಸಿ ಸೋಮೇಶ್ವರನು, “ಮಂಗಳವೇಡೆಯ ಘಟನೆಗಳು ಜಗದೇಕಮಲ್ಲನಿಗೆ ತಿಳಿದಿತ್ತೆ?” ಎಂದು ಹೇಳಿದನು. {{gap}}ಕ್ರಮಿತನು ಕೂಡಲೆ ಉತ್ತರ ಕೊಡಲಿಲ್ಲ. ಕೆಲವು ಕ್ಷಣಗಳು ಯೋಚಿಸುತ್ತಿದ್ದು ಬಳಿಕ ಹೇಳಿದನು. “ರಾಣಿ ಕಾಮೇಶ್ವರಿಯನ್ನು ಮಂಗಳವೇಡೆಗೆ ಕರೆಸಿಕೊಳ್ಳಲು ಬಿಜ್ಜಳರಾಯರು ನಡೆಸುತ್ತಿದ್ದ ಸಂಧಾನ ಅಗ್ಗಳನಿಂದ ಜಗದೇಕಮಲ್ಲನಿಗೆ ತಿಳಿದಿರಬೇಕು. ಪಟ್ಟಾಭಿಷೇಕ ಮುಗಿದು ಕಲ್ಯಾಣಕ್ಕೆ ಹಿಂದಿರುಗಿದ ಕರ್ಣದೇವ ಆಮೇಲಿನ ಘಟನೆಗಳನ್ನು ತಿಳಿಸಿರಬಹುದು. ಜಗದೇಕಮಲ್ಲನು ಕರ್ಣದೇವನ ಬಂದಿಯಾಗಿದ್ದರೂ ವಾಸ್ತವದಲ್ಲಿ ಅವರು ಗೆಳೆಯರಂತೆ ಸಲಿಗೆಯಿಂದ ನಡೆದುಕೊಳ್ಳುತ್ತಿದ್ದರು. ಸೆರೆಯಲ್ಲಿಯೂ ಚಾಲುಕ್ಯ ಅರಸರ ಸುಖಜೀವನ, ರಾಜೋಚಿತ ವೈಭವದಿಂದ ನಡೆಯ ಬೇಕೆಂಬುದು ಮೊದಲಿನಿಂದ ಬಿಜ್ಜಳರಾಯರ ಉದ್ದೇಶವಾಗಿತ್ತು.” {{gap}}'ತಂದೆಯವರ ಆ ಉದಾರ ವರ್ತನೆಯೇ ಅವರ ಅಂತ್ಯಕ್ಕೆ ಕಾರಣವಾಯಿತು.” -ದೀರ್ಘವಾಗಿ ಉಸಿರೆಳೆದು ಸೋಮೇಶ್ವರ ಹೇಳಿದನು. {{gap}}“ಜನರು ಹಾಗೆ ತಿಳಿದಿಲ್ಲ, ಸೋಮೇಶ್ವರ, ಲೋಕದೃಷ್ಟಿಯಲ್ಲಿ ಹತ್ಯೆಯ ಕಾರಣ ರಾಜಕೀಯವೂ ಅಲ್ಲ, ಧಾರ್ಮಿಕವೂ ಅಲ್ಲ.”<noinclude></noinclude> 2kgl8z6176c6bvhl543ii7lrq89cstc ಪುಟ:ಕ್ರಾಂತಿ ಕಲ್ಯಾಣ.pdf/೪೯೬ 104 86435 324156 203761 2026-06-03T03:02:08Z Shreesha Sharma 7840 /* Proofread */ 324156 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಉಪಸಂಹಾರ|right=೪೮೩}} ಪ್ರತಾಪರುದ್ರ, ಸೋವೆಯ ಕದಂಬ ಜಯಕೇಶಿ, ಬನವಾಸಿಯ ಕದಂಬ ಸಾಮಂತ ಕಾಮದೇವ, ಉಚ್ಚಂಗಿಯ ವೀರಪಾಂಡ್ಯ-ಮುಂತಾದವರುಗಳು ಇತಿಹಾಸ ಪ್ರಸಿದ್ದರು. {{gap}}ಬಸವಣ್ಣನವರ ಕುಮಾರ ಸಂಗಮನಾಥನು ಪ್ರಾಪ್ತವಯಸ್ಕನಾಗುವವರೆಗೆ ಗಂಗಾಂಬಿಕೆ ಜೀವಿಸಿದ್ದು ಅನಂತರ ಲಿಂಗೈಕ್ಯಳಾದಳು. ನಾಗಲಾಂಬೆಯು ಅದಕ್ಕಿಂತ ಹೆಚ್ಚು ಕಾಲ ಜೀವಿಸಿದ್ದು ಹೋಳ ನಾಡಿನ ಬಾಳೆಹೊನ್ನೂರಿನಲ್ಲಿ ಲಿಂಗೈಕ್ಯಳಾದಳೆಂದು ಐತಿಹ್ಯ ತಿಳಿಸುತ್ತದೆ. {{gap}}ಅಗ್ಗಳ ಬ್ರಹ್ಮಶಿವಪಂಡಿತರು ಉದ್ದೇಶಿಸಿದ್ದಂತೆ ಉತ್ತರಾಪಥದ ಯಾತ್ರಾತಂಡದೊಡನೆ ಪ್ರಯಾಣಮಾಡಿ ಕರ್ಹಾಡಕ್ಕೆ ಹಿಂದಿರುಗಿದರು. ವಿಜಯಾರ್ಕನು ಅವರಿಗೆ ಆಶ್ರಯ ಕೊಟ್ಟನು. ಅಗ್ಗಳನ ಕೆಲವು ಪದ್ಯಗಳು ವಲ್ಲಭದೇವನ “ಸುಭಾಷಿತಾವಳಿ” ಯಲ್ಲಿ ಉಧೃತವಾಗಿವೆ. {{gap}}ಕುಮಾರ ಪ್ರೇಮಾರ್ಣವನು ಪ್ರಾಪ್ತವಯಸ್ಕನಾಗುವಷ್ಟರಲ್ಲಿ ಕಲಚೂರ್ಯ ಪರ್ಯಾಯ ಮುಗಿದು ಚಾಲುಕ್ಯ ರಾಜ್ಯವು ಚೂರಾಪಾರಾಗಿ ಒಡೆದುಹೋಗಿತ್ತು. ತೈಲಪನ ಕಿರಿಯ ಸಹೋದರ ನಾಲ್ವಡಿ ಸೋಮೇಶ್ವರನು ಚಾಲುಕ್ಯ ಪುನಃಪ್ರತಿಷ್ಠೆಗಾಗಿ ಆಗಾಗ ಪ್ರಯತ್ನ ನಡೆಸುತ್ತಿದನು. ಈ ಬಗೆಯ ಎಲ್ಲ ರಾಜಕೀಯ ಚಟುವಟಿಕೆಗಳಿಂದ ದೂರವಾಗಿದ್ದ ಪ್ರೇಮಾರ್ಣವನು ಕರ್ಹಾಡದಲ್ಲಿ ತನ್ನ ಬಂಧುಗಳ ಆಶ್ರಯದಲ್ಲಿ ಶಾಂತಿಯುತ ಬದುಕನ್ನು ಕಳೆದನು. {{gap}}ಮೋಳಿಗೆ ಮಾರಯ್ಯನವರು ಕ್ರಾಂತಿ ಮುಗಿದ ಮೇಲೂ ಕೆಲವು ವರ್ಷಗಳು ಕಲ್ಯಾಣದಲ್ಲಿದ್ದರು. ಒಂದು ವಚನದಲ್ಲಿ ಅವರು ೧೨೦ ವರ್ಷ ಜೀವಿಸಿದ್ದುದಾಗಿ ತಾವೇ ಹೇಳಿಕೊಂಡಿದ್ದಾರೆ. {{gap}}ಈ ಕಾದಂಬರಿಯಲ್ಲಿ ವರ್ಣಿಸಿದ ಘಟನೆಗಳು ನಡೆದ ಮೇಲೆ ಆರನೆಯ ವರ್ಷದಲ್ಲಿ, ಗೊಂದಲದಲ್ಲಿ ಪ್ರಾರಂಭವಾದ ಕಲಚೂರ್ಯ ಸೋಮೇಶ್ವರನ ಆಳ್ವಿಕೆಯು ಗೊಂದಲದಲ್ಲೇ ಮುಗಿಯಿತು. ಅವನ ಸೋದರರಾದ ಮೈಲುಗಿ, ಸಂಕಮ, ಆಹವಮಲ್ಲ ಮತ್ತು ಸಿಂಘಣರು ಅನುಕ್ರಮವಾಗಿ ಪಟ್ಟಕ್ಕೆ ಬಂದು ಹಲವಾರು ವರ್ಷಗಳು ಆಳಿದರು. ಕೊನೆಕೊನೆಗೆ ಕಲ್ಯಾಣದ ಸುತ್ತುಮುತ್ತಿನ ಪರಿಮಿತಿ ಪ್ರವೇಶ ಮಾತ್ರವೇ ಅವರ ಅಧೀನದಲ್ಲಿತ್ತು. ಕ್ರಿ. ಶ. ೧೧೮೩ ರಲ್ಲಿ, ಬಿಜ್ಜಳನ ಮರಣಾನಂತರ ಹದಿನಾರು ವರ್ಷಗಳ ಅನಂತರ, ಚಾಲುಕ್ಯ ನಾಲ್ವಡಿ ಸೋಮೇಶ್ವರನು ಕೊನೆಯ ಕಲಚೂರ್ಯ ಅರಸು ಸಿಂಘಣನನ್ನು ಯುದ್ಧದಲ್ಲಿ ಸೋಲಿಸಿ ಚಾಲುಕ್ಯ ರಾಜಸತ್ತೆಯನ್ನು ಪುನಃ ಪ್ರತಿಷ್ಠಿಸಿದನು. {{center|***}}<noinclude></noinclude> jrsprv7c5v8qm7o58l628lsx4ii9gcb 324171 324156 2026-06-03T03:28:57Z Shreelatha.Halemane 7642 /* Validated */ 324171 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಉಪಸಂಹಾರ|right=೪೮೩}} ಪ್ರತಾಪರುದ್ರ, ಸೋವೆಯ ಕದಂಬ ಜಯಕೇಶಿ, ಬನವಾಸಿಯ ಕದಂಬ ಸಾಮಂತ ಕಾಮದೇವ, ಉಚ್ಚಂಗಿಯ ವೀರಪಾಂಡ್ಯ-ಮುಂತಾದವರುಗಳು ಇತಿಹಾಸ ಪ್ರಸಿದ್ದರು. {{gap}}ಬಸವಣ್ಣನವರ ಕುಮಾರ ಸಂಗಮನಾಥನು ಪ್ರಾಪ್ತವಯಸ್ಕನಾಗುವವರೆಗೆ ಗಂಗಾಂಬಿಕೆ ಜೀವಿಸಿದ್ದು ಅನಂತರ ಲಿಂಗೈಕ್ಯಳಾದಳು. ನಾಗಲಾಂಬೆಯು ಅದಕ್ಕಿಂತ ಹೆಚ್ಚು ಕಾಲ ಜೀವಿಸಿದ್ದು ಹೋಳ ನಾಡಿನ ಬಾಳೆಹೊನ್ನೂರಿನಲ್ಲಿ ಲಿಂಗೈಕ್ಯಳಾದಳೆಂದು ಐತಿಹ್ಯ ತಿಳಿಸುತ್ತದೆ. {{gap}}ಅಗ್ಗಳ ಬ್ರಹ್ಮಶಿವಪಂಡಿತರು ಉದ್ದೇಶಿಸಿದ್ದಂತೆ ಉತ್ತರಾಪಥದ ಯಾತ್ರಾತಂಡದೊಡನೆ ಪ್ರಯಾಣಮಾಡಿ ಕರ್ಹಾಡಕ್ಕೆ ಹಿಂದಿರುಗಿದರು. ವಿಜಯಾರ್ಕನು ಅವರಿಗೆ ಆಶ್ರಯ ಕೊಟ್ಟನು. ಅಗ್ಗಳನ ಕೆಲವು ಪದ್ಯಗಳು ವಲ್ಲಭದೇವನ “ಸುಭಾಷಿತಾವಳಿ” ಯಲ್ಲಿ ಉಧೃತವಾಗಿವೆ. {{gap}}ಕುಮಾರ ಪ್ರೇಮಾರ್ಣವನು ಪ್ರಾಪ್ತವಯಸ್ಕನಾಗುವಷ್ಟರಲ್ಲಿ ಕಲಚೂರ್ಯ ಪರ್ಯಾಯ ಮುಗಿದು ಚಾಲುಕ್ಯ ರಾಜ್ಯವು ಚೂರಾಪಾರಾಗಿ ಒಡೆದುಹೋಗಿತ್ತು. ತೈಲಪನ ಕಿರಿಯ ಸಹೋದರ ನಾಲ್ವಡಿ ಸೋಮೇಶ್ವರನು ಚಾಲುಕ್ಯ ಪುನಃಪ್ರತಿಷ್ಠೆಗಾಗಿ ಆಗಾಗ ಪ್ರಯತ್ನ ನಡೆಸುತ್ತಿದನು. ಈ ಬಗೆಯ ಎಲ್ಲ ರಾಜಕೀಯ ಚಟುವಟಿಕೆಗಳಿಂದ ದೂರವಾಗಿದ್ದ ಪ್ರೇಮಾರ್ಣವನು ಕರ್ಹಾಡದಲ್ಲಿ ತನ್ನ ಬಂಧುಗಳ ಆಶ್ರಯದಲ್ಲಿ ಶಾಂತಿಯುತ ಬದುಕನ್ನು ಕಳೆದನು. {{gap}}ಮೋಳಿಗೆ ಮಾರಯ್ಯನವರು ಕ್ರಾಂತಿ ಮುಗಿದ ಮೇಲೂ ಕೆಲವು ವರ್ಷಗಳು ಕಲ್ಯಾಣದಲ್ಲಿದ್ದರು. ಒಂದು ವಚನದಲ್ಲಿ ಅವರು ೧೨೦ ವರ್ಷ ಜೀವಿಸಿದ್ದುದಾಗಿ ತಾವೇ ಹೇಳಿಕೊಂಡಿದ್ದಾರೆ. {{gap}}ಈ ಕಾದಂಬರಿಯಲ್ಲಿ ವರ್ಣಿಸಿದ ಘಟನೆಗಳು ನಡೆದ ಮೇಲೆ ಆರನೆಯ ವರ್ಷದಲ್ಲಿ, ಗೊಂದಲದಲ್ಲಿ ಪ್ರಾರಂಭವಾದ ಕಲಚೂರ್ಯ ಸೋಮೇಶ್ವರನ ಆಳ್ವಿಕೆಯು ಗೊಂದಲದಲ್ಲೇ ಮುಗಿಯಿತು. ಅವನ ಸೋದರರಾದ ಮೈಲುಗಿ, ಸಂಕಮ, ಆಹವಮಲ್ಲ ಮತ್ತು ಸಿಂಘಣರು ಅನುಕ್ರಮವಾಗಿ ಪಟ್ಟಕ್ಕೆ ಬಂದು ಹಲವಾರು ವರ್ಷಗಳು ಆಳಿದರು. ಕೊನೆಕೊನೆಗೆ ಕಲ್ಯಾಣದ ಸುತ್ತುಮುತ್ತಿನ ಪರಿಮಿತಿ ಪ್ರವೇಶ ಮಾತ್ರವೇ ಅವರ ಅಧೀನದಲ್ಲಿತ್ತು. ಕ್ರಿ. ಶ. ೧೧೮೩ ರಲ್ಲಿ, ಬಿಜ್ಜಳನ ಮರಣಾನಂತರ ಹದಿನಾರು ವರ್ಷಗಳ ಅನಂತರ, ಚಾಲುಕ್ಯ ನಾಲ್ವಡಿ ಸೋಮೇಶ್ವರನು ಕೊನೆಯ ಕಲಚೂರ್ಯ ಅರಸು ಸಿಂಘಣನನ್ನು ಯುದ್ಧದಲ್ಲಿ ಸೋಲಿಸಿ ಚಾಲುಕ್ಯ ರಾಜಸತ್ತೆಯನ್ನು ಪುನಃ ಪ್ರತಿಷ್ಠಿಸಿದನು. {{center|***}}<noinclude></noinclude> s1g7ifg2nh0d37vx69q8bj8pwuoyvhz ಪುಟ:ಕ್ರಾಂತಿ ಕಲ್ಯಾಣ.pdf/೪೯೪ 104 86436 324178 203762 2026-06-03T03:37:06Z Shreesha Sharma 7840 /* Proofread */ 324178 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center='''ಉಪಸಂಹಾರ'''|left=|right=೪೮೧}} {{gap}}ತಂಗಡಿಯ ಕದನದಲ್ಲಿ ಸೋತು ಗಾಯಗೊಂಡಿದ್ದ ಮಾಧವ ನಾಯಕನು ಎರಡು ದಿನಗಳ ಅನಂತರ ಕಲ್ಯಾಣಕ್ಕೆ ಹಿಂದಿರುಗಿ ನಗರದ ಹೊರಗಿನ ಬಯಲಲ್ಲಿ ಶಿಬಿರ ಹಾಕಿ, ಸಂದರ್ಶನಕ್ಕಾಗಿ ಅನುಮತಿ ಕೇಳಲು ತನ್ನ ಕಾರ್ಯದರ್ಶಿಯನ್ನು ಸೋಮೇಶ್ವರನ ಬಳಿಗೆ ಕಳುಹಿಸಿದನು. ಶರಣರ ಮೇಲೆ ಹಾಗೂ ಕಲ್ಯಾಣದ ನಾಗರಿಕರ ಮೇಲೆ ತಾನು ನಡೆಸಿದ ಹಿಂಸಾಕೃತ್ಯಗಳ ಬಗೆಗೆ ಸೋಮೇಶ್ವರನ ಪ್ರತಿಕ್ರಿಯೆಯನ್ನು ತಿಳಿಯುವುದು ಅವನ ಉದ್ದೇಶವಾಗಿತ್ತು. {{gap}}ನಿರೀಕ್ಷಿಸಿದ್ದಂತೆ ಸೋಮೇಶ್ವರನು ದರ್ಶನಕ್ಕೆ ಅನುಮತಿ ಕೊಡಲಿಲ್ಲ. ಪ್ರತಿಯಾಗಿ ತನ್ನ ಸೈನ್ಯದಳದ ಮುಖ್ಯಾಧಿಕಾರಿಯನ್ನು ತನ್ನ ಸಂದೇಶದೊಡನೆ ಮಾಧವ ನಾಯಕನ ಶಿಬಿರಕ್ಕೆ ಕಳುಹಿಸಿದನು. {{gap}}“ಮಹಾದಂಡನಾಯಕ ಪದವಿಯ ಎಲ್ಲ ಅಧಿಕಾರಗಳನ್ನು ಪ್ರಭುಗಳು ತಾವೇ ವಹಿಸಿಕೊಂಡು ನಿಮ್ಮನ್ನು ಸುರಪುರದ ಮಂಡಲಾಧಿಕಾರಿಯಾಗಿ ನೇಮಿಸಿದ್ದಾರೆ,” ಎಂದು ಹೇಳಿ ಮುಖ್ಯಾಧಿಕಾರಿಯು ನಿರೂಪವನ್ನು ಕೈಗೆ ಕೊಟ್ಟಾಗ ಮಾಧವ ನಾಯಕನಿಗೆ ಆಕಾಶವೇ ಕಳಚಿಬಿದ್ದಂತಾಯಿತು. ನಗರದ ಎಲ್ಲ ಮಹಾದ್ವಾರಗಳು, ಸಮೀಪದ ಕೋಟೆ ಕೊತ್ತಳಗಳು ಸೋಮೇಶ್ವರನ ವಶದಲ್ಲಿರುವುದೆಂದು ಮುಖ್ಯಾಧಿಕಾರಿಯಿಂದ ತಿಳಿದಾಗ ರಾಜಾಜ್ಞೆಯನ್ನು ಪ್ರತಿಭಟಿಸುವ ಅವಕಾಶವೂ ತಪ್ಪಿತೆಂದು ನಿರ್ಧರಿಸಿದಕೊಂಡನು. {{gap}}“ಪ್ರಭುಗಳ ಆಜ್ಞೆಯನ್ನು ಶಿರಸಾವಹಿಸಿ ನಡೆಯುತ್ತೇನೆ,” ಎಂದು ಮುಖ್ಯಾಧಿಕಾರಿಗೆ ಹೇಳಿ ಕಳುಹಿಸಿ, ಆ ರಾತ್ರಿಯೇ ರಹಸ್ಯವಾಗಿ ಶಿಬಿರವೆತ್ತಿ ಉಳಿದಿದ್ದ ತನ್ನ ಅಲ್ಪ ಸೈನ್ಯದೊಡನೆ ವಿಜಯಪುರ ಮಂಡಲದಲ್ಲಿದ್ದ ತನ್ನ ಉಂಬಳಿ ಗ್ರಾಮವಾದ ಮಾಗಳಿಗೆ ಹೋದನು. {{gap}}ಸೋಮೇಶ್ವರನಿಗೆ ಈ ವಿಚಾರ ವರದಿಯಾದಾಗ, “ದಂಡನಾಯಕರಿಗೆ ವಿಶ್ರಾಂತಿ ಅಗತ್ಯ. ನಾವು ಪುನಃ ಆಜ್ಞೆಮಾಡುವವರೆಗೆ ಅವರು ಅಲ್ಲಿಯೇ ಇರಲಿ,” ಎಂದು ಹೇಳಿ ಸುರಪುರಕ್ಕೆ ಬೇರೊಬ್ಬ ಮಾಂಡಲಿಕನನ್ನು ಕಳುಹಿಸಿದನು. ಆಗಲೆ<noinclude></noinclude> hpjgu22x62xbynihd85hrtffwczpvlv 324182 324178 2026-06-03T03:38:57Z Shreelatha.Halemane 7642 /* Validated */ 324182 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center='''ಉಪಸಂಹಾರ'''|left=|right=೪೮೧}} {{gap}}ತಂಗಡಿಯ ಕದನದಲ್ಲಿ ಸೋತು ಗಾಯಗೊಂಡಿದ್ದ ಮಾಧವ ನಾಯಕನು ಎರಡು ದಿನಗಳ ಅನಂತರ ಕಲ್ಯಾಣಕ್ಕೆ ಹಿಂದಿರುಗಿ ನಗರದ ಹೊರಗಿನ ಬಯಲಲ್ಲಿ ಶಿಬಿರ ಹಾಕಿ, ಸಂದರ್ಶನಕ್ಕಾಗಿ ಅನುಮತಿ ಕೇಳಲು ತನ್ನ ಕಾರ್ಯದರ್ಶಿಯನ್ನು ಸೋಮೇಶ್ವರನ ಬಳಿಗೆ ಕಳುಹಿಸಿದನು. ಶರಣರ ಮೇಲೆ ಹಾಗೂ ಕಲ್ಯಾಣದ ನಾಗರಿಕರ ಮೇಲೆ ತಾನು ನಡೆಸಿದ ಹಿಂಸಾಕೃತ್ಯಗಳ ಬಗೆಗೆ ಸೋಮೇಶ್ವರನ ಪ್ರತಿಕ್ರಿಯೆಯನ್ನು ತಿಳಿಯುವುದು ಅವನ ಉದ್ದೇಶವಾಗಿತ್ತು. {{gap}}ನಿರೀಕ್ಷಿಸಿದ್ದಂತೆ ಸೋಮೇಶ್ವರನು ದರ್ಶನಕ್ಕೆ ಅನುಮತಿ ಕೊಡಲಿಲ್ಲ. ಪ್ರತಿಯಾಗಿ ತನ್ನ ಸೈನ್ಯದಳದ ಮುಖ್ಯಾಧಿಕಾರಿಯನ್ನು ತನ್ನ ಸಂದೇಶದೊಡನೆ ಮಾಧವ ನಾಯಕನ ಶಿಬಿರಕ್ಕೆ ಕಳುಹಿಸಿದನು. {{gap}}“ಮಹಾದಂಡನಾಯಕ ಪದವಿಯ ಎಲ್ಲ ಅಧಿಕಾರಗಳನ್ನು ಪ್ರಭುಗಳು ತಾವೇ ವಹಿಸಿಕೊಂಡು ನಿಮ್ಮನ್ನು ಸುರಪುರದ ಮಂಡಲಾಧಿಕಾರಿಯಾಗಿ ನೇಮಿಸಿದ್ದಾರೆ,” ಎಂದು ಹೇಳಿ ಮುಖ್ಯಾಧಿಕಾರಿಯು ನಿರೂಪವನ್ನು ಕೈಗೆ ಕೊಟ್ಟಾಗ ಮಾಧವ ನಾಯಕನಿಗೆ ಆಕಾಶವೇ ಕಳಚಿಬಿದ್ದಂತಾಯಿತು. ನಗರದ ಎಲ್ಲ ಮಹಾದ್ವಾರಗಳು, ಸಮೀಪದ ಕೋಟೆ ಕೊತ್ತಳಗಳು ಸೋಮೇಶ್ವರನ ವಶದಲ್ಲಿರುವುದೆಂದು ಮುಖ್ಯಾಧಿಕಾರಿಯಿಂದ ತಿಳಿದಾಗ ರಾಜಾಜ್ಞೆಯನ್ನು ಪ್ರತಿಭಟಿಸುವ ಅವಕಾಶವೂ ತಪ್ಪಿತೆಂದು ನಿರ್ಧರಿಸಿದಕೊಂಡನು. {{gap}}“ಪ್ರಭುಗಳ ಆಜ್ಞೆಯನ್ನು ಶಿರಸಾವಹಿಸಿ ನಡೆಯುತ್ತೇನೆ,” ಎಂದು ಮುಖ್ಯಾಧಿಕಾರಿಗೆ ಹೇಳಿ ಕಳುಹಿಸಿ, ಆ ರಾತ್ರಿಯೇ ರಹಸ್ಯವಾಗಿ ಶಿಬಿರವೆತ್ತಿ ಉಳಿದಿದ್ದ ತನ್ನ ಅಲ್ಪ ಸೈನ್ಯದೊಡನೆ ವಿಜಯಪುರ ಮಂಡಲದಲ್ಲಿದ್ದ ತನ್ನ ಉಂಬಳಿ ಗ್ರಾಮವಾದ ಮಾಗಳಿಗೆ ಹೋದನು. {{gap}}ಸೋಮೇಶ್ವರನಿಗೆ ಈ ವಿಚಾರ ವರದಿಯಾದಾಗ, “ದಂಡನಾಯಕರಿಗೆ ವಿಶ್ರಾಂತಿ ಅಗತ್ಯ. ನಾವು ಪುನಃ ಆಜ್ಞೆಮಾಡುವವರೆಗೆ ಅವರು ಅಲ್ಲಿಯೇ ಇರಲಿ,” ಎಂದು ಹೇಳಿ ಸುರಪುರಕ್ಕೆ ಬೇರೊಬ್ಬ ಮಾಂಡಲಿಕನನ್ನು ಕಳುಹಿಸಿದನು. ಆಗಲೆ<noinclude></noinclude> sq5z06txf7gx0tddn8v3s0sahgoukaw ಪುಟ:ಕ್ರಾಂತಿ ಕಲ್ಯಾಣ.pdf/೪೯೫ 104 86437 324179 203763 2026-06-03T03:37:58Z Shreesha Sharma 7840 /* Proofread */ 324179 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೮೨|right=ಕ್ರಾಂತಿ ಕಲ್ಯಾಣ}} ಅವನ ಅಸಮಾಧಾನ ಅರ್ಧ ಮುಗಿದಿತ್ತು. ಎರಡು ವರ್ಷಗಳ ಮೇಲೆ ಅವನ ಸಹೋದರ ಮೈಲುಗಿ ಮಂಗಳವೇಡೆಯನ್ನು ಆಕ್ರಮಿಸಿಕೊಂಡು ಅಣ್ಣನ ಮೇಲೆ ಯುದ್ಧ ಹೂಡಿದಾಗ ಸೋಮೇಶ್ವರನು ಮಾಧವ ನಾಯಕನನ್ನು ಹಿಂದಕ್ಕೆ ಕರೆಸಿಕೊಂಡು ಪುನಃ ದಂಡನಾಯಕನನ್ನಾಗಿ ಮಾಡಿದನು. {{gap}}ತೈಲಪನ ಕಿರಿಯ ಸಹೋದರ ನಾಲ್ವಡಿ ಸೋಮೇಶ್ವರನು ಚಾಲುಕ್ಯ ರಾಜಸತ್ತೆಯ ಪುನಃಪ್ರತಿಷ್ಠೆಗಾಗಿ ಆ ಸಂದರ್ಭದಲ್ಲಿ ಮತ್ತೆ ಪ್ರಯತ್ನಿಸಿದನು. ಗೋವೆಯ ಕದಂಬ ಅರಸು ಜಯಕೇಶಿ, ಬನವಾಸಿ, ಹಾನಗಲ್ಲುಗಳ ಕದಂಬ ವಂಶೀಯ ಸಾಮಂತರು, ಓರಂಗಲ್ಲಿನ ಕಾಕತೀಯರು, ಉಚ್ಚಂಗಿಯ ಪಾಂಡ್ಯರು, ಕರ್ಹಾಡದ ವಿದ್ಯಾಧರ ವಂಶದ ವಿಜಯಾರ್ಕನು, ದೇವಗಿರಿಯ ಯಾದವ ಭಿಲ್ಲಮನು, ಚಾಲುಕ್ಯ ಸೋಮೇಶ್ವರನ ಪಕ್ಷ ವಹಿಸಿ ಸಹಕಾರ ನೀಡಿದರು. ಆಗ ನಡೆದ ಯುದ್ದಗಳಲ್ಲಿ ಮಾಧವ ನಾಯಕನಿಗೆ ಜಯವಾಯಿತು. ಕಲಚೂರ್ಯ ಸೋಮೇಶ್ವರನ ಕಾಲದ ಒಂದು ಶಾಸನದಲ್ಲಿ ಮಾಧವ ನಾಯಕನು 'ಕಲಚುರಿ ಭೂಪಾಲವಿಪುಳ ರಾಜ್ಯೋದ್ಧರಣಂ' ಎಂದು ಪ್ರಶಂಸಿಸಲ್ಪಟ್ಟಿದ್ದಾನೆ. {{gap}}ಕುರುಗೋಡಿನಲ್ಲಿ ಮಾಚಿದೇವರಿಂದ ಬೀಳ್ಕೊಂಡ ಶರಣರ ಯಾತ್ರಾ ತಂಡ, ಚೆನ್ನಬಸವಣ್ಣನವರ ನೇತೃತ್ವದಲ್ಲಿ ಹುಬ್ಬಳ್ಳಿ ಧಾರವಾಡಗಳ ಮಾರ್ಗವಾಗಿ ಯಾವ ದುರ್ಘಟನೆಗಳೂ ಇಲ್ಲದೆ ನಿಧಾನವಾಗಿ ಪಯಣಮಾಡುತ್ತ ಉಳಿವೆಯನ್ನು ಸೇರಿತು. ಗೋವೆಯ ಜಯಕೇಶಿಯ ಸಾಮಂತರಾಗಿದ್ದ ಸೂಪಕಂಪಣದ ಹರಿಯಪರಾಣಿ ಮತ್ತು ಬೋಪದೇವರಾಣಿ ಎಂಬ ಹೆಗ್ಗಡಿತಿಯರು ಉಳಿವೆಯ ಮಹಮನೆ ಶಿವಪುರಗಳ ರಚನೆಗೆ ಸಹಾಯ ಮಾಡಿದರು. ಅತ್ಯಲ್ಪ ಕಾಲದಲ್ಲಿ ಉಳಿವೆಯ ಮಹಮನೆ ನಾಡಿನ ಎಲ್ಲ ಕಡೆ ಪ್ರಸಿದ್ದ ಪಡೆದ ಓರಂಗಲ್, ಕೊಂಡವೀಡು, ಅನಂತಪುರ, ಭಾಗಾನಗರ, ರಾಯಚೂರು, ಹಂಪೆ, ಆನೆಗೊಂದಿ, ಹೊನ್ನಾವರು, ಮಂಗಳೂರು, ಬೆಂಗಳೂರು, ಶ್ರೀರಂಗಪಟ್ಟಣ, ತೆರಕಣಾಂಬಿ ಮುಂತಾದ ಕಡೆಗಳಿಂದ ಶರಣರನ್ನು ಆಕರ್ಷಿಸಿತು. ಅಲ್ಲಿ ಆಗಾಗ ನಡೆಯುತ್ತಿದ್ದ ಗಣಪರ್ವಗಳೂ ಚಾಲುಕ್ಯ, ಹೊಯ್ಸಳ, ಕಾಕತೀಯ ನಾಡುಗಳಲ್ಲಿ ಶರಣಧರ್ಮ ಹರಡಲು ಕಾರಣವಾಯಿತು. ಅಪರಿಮಿತ ಪರಿಶ್ರಮದಿಂದ, ಕಲ್ಯಾಣದ ಅನುಭವಮಂಟಪದಿಂದ ಉಳಿವೆಗೆ ತಂದ ಸರಸ್ವತೀ ಭಂಡಾರವನ್ನು ಚೆನ್ನಬಸವಣ್ಣನವರು ವಿಪುಲವಾಗಿ ವೃದ್ಧಿಗೊಳಿಸಿದರು. ವಚನ ಸಂಗ್ರಹ, ಪ್ರಬಂಧಗಳ ಪ್ರತಿ ಮಾಡಿಸಿ ನಾಡಿನ ಎಲ್ಲ ಶೈವಮಠಗಳಿಗೆ ಹಂಚಿಸಿದರು. ಈ ಜ್ಞಾನ ಪ್ರಸಾರ ಕಾರ್ಯದಲ್ಲಿ ಚೆನ್ನಬಸವಣ್ಣನವರಿಗೆ ಅಗತ್ಯವಾದ ಎಲ್ಲಾ ರೀತಿಯ ಜನ, ಮನ, ಧನ ಸಹಾಯಗಳನ್ನು ಒದಗಿಸಿದ ಓರಂಗಲ್ಲಿನ<noinclude></noinclude> aj0edyzlsv89xix4epysqmpdv8a200z 324183 324179 2026-06-03T03:39:06Z Shreelatha.Halemane 7642 /* Validated */ 324183 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೮೨|right=ಕ್ರಾಂತಿ ಕಲ್ಯಾಣ}} ಅವನ ಅಸಮಾಧಾನ ಅರ್ಧ ಮುಗಿದಿತ್ತು. ಎರಡು ವರ್ಷಗಳ ಮೇಲೆ ಅವನ ಸಹೋದರ ಮೈಲುಗಿ ಮಂಗಳವೇಡೆಯನ್ನು ಆಕ್ರಮಿಸಿಕೊಂಡು ಅಣ್ಣನ ಮೇಲೆ ಯುದ್ಧ ಹೂಡಿದಾಗ ಸೋಮೇಶ್ವರನು ಮಾಧವ ನಾಯಕನನ್ನು ಹಿಂದಕ್ಕೆ ಕರೆಸಿಕೊಂಡು ಪುನಃ ದಂಡನಾಯಕನನ್ನಾಗಿ ಮಾಡಿದನು. {{gap}}ತೈಲಪನ ಕಿರಿಯ ಸಹೋದರ ನಾಲ್ವಡಿ ಸೋಮೇಶ್ವರನು ಚಾಲುಕ್ಯ ರಾಜಸತ್ತೆಯ ಪುನಃಪ್ರತಿಷ್ಠೆಗಾಗಿ ಆ ಸಂದರ್ಭದಲ್ಲಿ ಮತ್ತೆ ಪ್ರಯತ್ನಿಸಿದನು. ಗೋವೆಯ ಕದಂಬ ಅರಸು ಜಯಕೇಶಿ, ಬನವಾಸಿ, ಹಾನಗಲ್ಲುಗಳ ಕದಂಬ ವಂಶೀಯ ಸಾಮಂತರು, ಓರಂಗಲ್ಲಿನ ಕಾಕತೀಯರು, ಉಚ್ಚಂಗಿಯ ಪಾಂಡ್ಯರು, ಕರ್ಹಾಡದ ವಿದ್ಯಾಧರ ವಂಶದ ವಿಜಯಾರ್ಕನು, ದೇವಗಿರಿಯ ಯಾದವ ಭಿಲ್ಲಮನು, ಚಾಲುಕ್ಯ ಸೋಮೇಶ್ವರನ ಪಕ್ಷ ವಹಿಸಿ ಸಹಕಾರ ನೀಡಿದರು. ಆಗ ನಡೆದ ಯುದ್ದಗಳಲ್ಲಿ ಮಾಧವ ನಾಯಕನಿಗೆ ಜಯವಾಯಿತು. ಕಲಚೂರ್ಯ ಸೋಮೇಶ್ವರನ ಕಾಲದ ಒಂದು ಶಾಸನದಲ್ಲಿ ಮಾಧವ ನಾಯಕನು 'ಕಲಚುರಿ ಭೂಪಾಲವಿಪುಳ ರಾಜ್ಯೋದ್ಧರಣಂ' ಎಂದು ಪ್ರಶಂಸಿಸಲ್ಪಟ್ಟಿದ್ದಾನೆ. {{gap}}ಕುರುಗೋಡಿನಲ್ಲಿ ಮಾಚಿದೇವರಿಂದ ಬೀಳ್ಕೊಂಡ ಶರಣರ ಯಾತ್ರಾ ತಂಡ, ಚೆನ್ನಬಸವಣ್ಣನವರ ನೇತೃತ್ವದಲ್ಲಿ ಹುಬ್ಬಳ್ಳಿ ಧಾರವಾಡಗಳ ಮಾರ್ಗವಾಗಿ ಯಾವ ದುರ್ಘಟನೆಗಳೂ ಇಲ್ಲದೆ ನಿಧಾನವಾಗಿ ಪಯಣಮಾಡುತ್ತ ಉಳಿವೆಯನ್ನು ಸೇರಿತು. ಗೋವೆಯ ಜಯಕೇಶಿಯ ಸಾಮಂತರಾಗಿದ್ದ ಸೂಪಕಂಪಣದ ಹರಿಯಪರಾಣಿ ಮತ್ತು ಬೋಪದೇವರಾಣಿ ಎಂಬ ಹೆಗ್ಗಡಿತಿಯರು ಉಳಿವೆಯ ಮಹಮನೆ ಶಿವಪುರಗಳ ರಚನೆಗೆ ಸಹಾಯ ಮಾಡಿದರು. ಅತ್ಯಲ್ಪ ಕಾಲದಲ್ಲಿ ಉಳಿವೆಯ ಮಹಮನೆ ನಾಡಿನ ಎಲ್ಲ ಕಡೆ ಪ್ರಸಿದ್ದ ಪಡೆದ ಓರಂಗಲ್, ಕೊಂಡವೀಡು, ಅನಂತಪುರ, ಭಾಗಾನಗರ, ರಾಯಚೂರು, ಹಂಪೆ, ಆನೆಗೊಂದಿ, ಹೊನ್ನಾವರು, ಮಂಗಳೂರು, ಬೆಂಗಳೂರು, ಶ್ರೀರಂಗಪಟ್ಟಣ, ತೆರಕಣಾಂಬಿ ಮುಂತಾದ ಕಡೆಗಳಿಂದ ಶರಣರನ್ನು ಆಕರ್ಷಿಸಿತು. ಅಲ್ಲಿ ಆಗಾಗ ನಡೆಯುತ್ತಿದ್ದ ಗಣಪರ್ವಗಳೂ ಚಾಲುಕ್ಯ, ಹೊಯ್ಸಳ, ಕಾಕತೀಯ ನಾಡುಗಳಲ್ಲಿ ಶರಣಧರ್ಮ ಹರಡಲು ಕಾರಣವಾಯಿತು. ಅಪರಿಮಿತ ಪರಿಶ್ರಮದಿಂದ, ಕಲ್ಯಾಣದ ಅನುಭವಮಂಟಪದಿಂದ ಉಳಿವೆಗೆ ತಂದ ಸರಸ್ವತೀ ಭಂಡಾರವನ್ನು ಚೆನ್ನಬಸವಣ್ಣನವರು ವಿಪುಲವಾಗಿ ವೃದ್ಧಿಗೊಳಿಸಿದರು. ವಚನ ಸಂಗ್ರಹ, ಪ್ರಬಂಧಗಳ ಪ್ರತಿ ಮಾಡಿಸಿ ನಾಡಿನ ಎಲ್ಲ ಶೈವಮಠಗಳಿಗೆ ಹಂಚಿಸಿದರು. ಈ ಜ್ಞಾನ ಪ್ರಸಾರ ಕಾರ್ಯದಲ್ಲಿ ಚೆನ್ನಬಸವಣ್ಣನವರಿಗೆ ಅಗತ್ಯವಾದ ಎಲ್ಲಾ ರೀತಿಯ ಜನ, ಮನ, ಧನ ಸಹಾಯಗಳನ್ನು ಒದಗಿಸಿದ ಓರಂಗಲ್ಲಿನ<noinclude></noinclude> jmxlrxj6qa0kwwkpih6tosungfi9rvv ಪುಟ:ಕ್ರಾಂತಿ ಕಲ್ಯಾಣ.pdf/೪೯೨ 104 86438 324166 203764 2026-06-03T03:25:18Z Shreesha Sharma 7840 /* Proofread */ 324166 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೭೯}} {{gap}}-ಎಂದು ಕ್ರಮಿತನು ಆಸನದಿಂದೆದ್ದನು. {{gap}}“ನಿಮ್ಮ ಕಾರ್ಯದಕ್ಷತೆ ಸ್ವಾಮಿನಿಷ್ಟೆಗಳಿಗಾಗಿ ನಾನು ಕೃತಜ್ಞನು, ಕ್ರಮಿತರೆ. ವಾನಪ್ರಸ್ಥ ನಿಮ್ಮ ಉದ್ದೇಶವಾದರೆ ನಾನು ತಡೆಯುವುದಿಲ್ಲ. ಆತ್ಮೋದ್ದಾರಕ್ಕೆ ಅಡ್ಡಿ ಬರುವುದು ಸಲ್ಲ,” ಎಂದು ಹೇಳಿ ಸೋಮೇಶ್ವರನು ಕ್ರಮಿತನ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಿ, ಬೀಳ್ಕೊಡುವ ಮುನ್ನ ಇನ್ನೊಂದು ಪ್ರಶ್ನೆ ಉಳಿದಿದೆ,” ಎಂದನು. - {{gap}}“ಕೇಳಬಹುದು, ಸೋಮೇಶ್ವರ" {{gap}}“ತಂದೆಯ ಕೊಲೆಗೆ ಶರಣರು ಕಾರಣವೆಂದು ಮಾಧವ ನಾಯಕನು ಮಾಡುತ್ತಿರುವ ಪ್ರಚಾರದ ಅರ್ಥವೇನು ? ಅದರಲ್ಲಿ ಸತ್ಯವಿದೆಯೆ ?” {{gap}}ಆರುವ ಮೊದಲು ದೀಪ ಕೊನೆಯ ಸಾರಿ ಮಿನುಗುವಂತೆ ಕ್ರಮಿತನ ಮುಖದಲ್ಲಿ ತಿರಸ್ಕಾರದ ನಗುವೊಂದು ಮಿನುಗಿತು. ಅವನು ಹೇಳಿದನು : {{gap}}“ಶರಣಧರ್ಮದ ಮೇಲಿನ ವಿದ್ವೇಷವೇ ಮಾಧವ ನಾಯಕನ ಎಲ್ಲ ಚಟುವಟಿಕೆಗಳ ಕಾರಣ. ಬಿಜ್ಜಳರಾಯರು ಅವನನ್ನು ಮಹಾದಂಡನಾಯಕನನ್ನಾಗಿ ನೇಮಿಸಿಕೊಂಡದ್ದೇ ಕಲ್ಯಾಣದ ನಾಶಕ್ಕೆ ಕಾರಣವಾಯಿತು. ಶೈವಮಠ ಮಂದಿರಗಳನ್ನು ನಾಶಮಾಡಿ ಚಾಲುಕ್ಯರಾಜ್ಯದಲ್ಲಿ ಮತೀಯ ಕಲಹದ ವಿಷಬೀಜವನ್ನು ಬಿತ್ತಿದ ದೇಶದ್ರೋಹಿ ಅವನು. ಕೂಡಲೆ ಎಲ್ಲ ಅಧಿಕಾರವನ್ನು ನೀವೇ ವಹಿಸಿಕೊಂಡು ಮಾಧವ ನಾಯಕನನ್ನು ನಿವೃತ್ತನನ್ನಾಗಿ ಮಾಡಿರಿ. ಇಲ್ಲವೇ ಅವನ ಶರಣದ್ವೇಷ ಕಲ್ಯಾಣದಂತೆ ಚಾಲುಕ್ಯರಾಜ್ಯವನ್ನೂ ನಾಶಮಾಡುವುದು. {{gap}}“ರಾಜಾಂತಃಪುರಗಳ ರಹಸ್ಯ ರಕ್ಷಣೆಯಲ್ಲಿ ನಮ್ಮ ರಾಜಮಹಾರಾಜರು ಚತುರರು, ನಿಷ್ಣಾತರು. ರಾಣಿ ಕಾಮೇಶ್ವರಿಯ ಮಾನಸಂರಕ್ಷಣೆಯ ಉದ್ದೇಶದಿಂದ ಜಗದೇಕಮಲ್ಲ ಬೊಮ್ಮರಸರು ಅರಮನೆಯಿಂದ ಹೊರಗೆ ಬಂದಾಗ 'ಹರಳಯ್ಯ ಮಧುವಯ್ಯಗಳನ್ನು ನೋಯಿಸಿದ ಪರವಾದಿ ಬಿಜ್ಜಳನನ್ನು ಕೊಂದ ವೀರ ಕುಮಾರರು ನಾವು !” ಎಂದು ಬೊಬ್ಬಿಟ್ಟುದಾಗಿ ಕಾವಲುಗಾರರು ಹೇಳುತ್ತಾರೆ. ಈ ಅಸತ್ಯ ಪ್ರಚಾರದ ಮರಳು ನೆಲದ ಮೇಲೆ ಅಪವಾದದ ಗೋಪುರ ಕಟ್ಟಲು ಮಾಧವ ನಾಯಕನು ಪ್ರಯತ್ನಿಸುತ್ತಿದ್ದಾನೆ. {{gap}}“ತಮ್ಮ ಕೊನೆಗಾಲದಲ್ಲಿ ಬಿಜ್ಜಳರಾಯರು ಅನುಸರಿಸಿದ ಕಠೋರ ನೀತಿಯಿಂದ ಶರಣರಿಗೆ ಅನ್ಯಾಯವಾಗಿದೆ. ಹಿಂಸೆ ಅತ್ಯಾಚಾರಗಳಿಗೆ ಅವರು ಗುರಿಯಾಗಿದ್ದಾರೆ. ನಿಮ್ಮ ಆಡಳಿತದಲ್ಲಿ ಶರಣರನ್ನು ನ್ಯಾಯ ಔದಾರ್ಯಗಳಿಂದ ನಡೆಸಿಕೊಳ್ಳಿರಿ.<noinclude></noinclude> kh50trg2grl3avcmda6f39qbxeqxevi 324169 324166 2026-06-03T03:28:32Z Shreelatha.Halemane 7642 /* Validated */ 324169 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೭೯}} {{gap}}-ಎಂದು ಕ್ರಮಿತನು ಆಸನದಿಂದೆದ್ದನು. {{gap}}“ನಿಮ್ಮ ಕಾರ್ಯದಕ್ಷತೆ ಸ್ವಾಮಿನಿಷ್ಟೆಗಳಿಗಾಗಿ ನಾನು ಕೃತಜ್ಞನು, ಕ್ರಮಿತರೆ. ವಾನಪ್ರಸ್ಥ ನಿಮ್ಮ ಉದ್ದೇಶವಾದರೆ ನಾನು ತಡೆಯುವುದಿಲ್ಲ. ಆತ್ಮೋದ್ದಾರಕ್ಕೆ ಅಡ್ಡಿ ಬರುವುದು ಸಲ್ಲ,” ಎಂದು ಹೇಳಿ ಸೋಮೇಶ್ವರನು ಕ್ರಮಿತನ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡಿ, ಬೀಳ್ಕೊಡುವ ಮುನ್ನ ಇನ್ನೊಂದು ಪ್ರಶ್ನೆ ಉಳಿದಿದೆ,” ಎಂದನು. - {{gap}}“ಕೇಳಬಹುದು, ಸೋಮೇಶ್ವರ" {{gap}}“ತಂದೆಯ ಕೊಲೆಗೆ ಶರಣರು ಕಾರಣವೆಂದು ಮಾಧವ ನಾಯಕನು ಮಾಡುತ್ತಿರುವ ಪ್ರಚಾರದ ಅರ್ಥವೇನು ? ಅದರಲ್ಲಿ ಸತ್ಯವಿದೆಯೆ ?” {{gap}}ಆರುವ ಮೊದಲು ದೀಪ ಕೊನೆಯ ಸಾರಿ ಮಿನುಗುವಂತೆ ಕ್ರಮಿತನ ಮುಖದಲ್ಲಿ ತಿರಸ್ಕಾರದ ನಗುವೊಂದು ಮಿನುಗಿತು. ಅವನು ಹೇಳಿದನು : {{gap}}“ಶರಣಧರ್ಮದ ಮೇಲಿನ ವಿದ್ವೇಷವೇ ಮಾಧವ ನಾಯಕನ ಎಲ್ಲ ಚಟುವಟಿಕೆಗಳ ಕಾರಣ. ಬಿಜ್ಜಳರಾಯರು ಅವನನ್ನು ಮಹಾದಂಡನಾಯಕನನ್ನಾಗಿ ನೇಮಿಸಿಕೊಂಡದ್ದೇ ಕಲ್ಯಾಣದ ನಾಶಕ್ಕೆ ಕಾರಣವಾಯಿತು. ಶೈವಮಠ ಮಂದಿರಗಳನ್ನು ನಾಶಮಾಡಿ ಚಾಲುಕ್ಯರಾಜ್ಯದಲ್ಲಿ ಮತೀಯ ಕಲಹದ ವಿಷಬೀಜವನ್ನು ಬಿತ್ತಿದ ದೇಶದ್ರೋಹಿ ಅವನು. ಕೂಡಲೆ ಎಲ್ಲ ಅಧಿಕಾರವನ್ನು ನೀವೇ ವಹಿಸಿಕೊಂಡು ಮಾಧವ ನಾಯಕನನ್ನು ನಿವೃತ್ತನನ್ನಾಗಿ ಮಾಡಿರಿ. ಇಲ್ಲವೇ ಅವನ ಶರಣದ್ವೇಷ ಕಲ್ಯಾಣದಂತೆ ಚಾಲುಕ್ಯರಾಜ್ಯವನ್ನೂ ನಾಶಮಾಡುವುದು. {{gap}}“ರಾಜಾಂತಃಪುರಗಳ ರಹಸ್ಯ ರಕ್ಷಣೆಯಲ್ಲಿ ನಮ್ಮ ರಾಜಮಹಾರಾಜರು ಚತುರರು, ನಿಷ್ಣಾತರು. ರಾಣಿ ಕಾಮೇಶ್ವರಿಯ ಮಾನಸಂರಕ್ಷಣೆಯ ಉದ್ದೇಶದಿಂದ ಜಗದೇಕಮಲ್ಲ ಬೊಮ್ಮರಸರು ಅರಮನೆಯಿಂದ ಹೊರಗೆ ಬಂದಾಗ 'ಹರಳಯ್ಯ ಮಧುವಯ್ಯಗಳನ್ನು ನೋಯಿಸಿದ ಪರವಾದಿ ಬಿಜ್ಜಳನನ್ನು ಕೊಂದ ವೀರ ಕುಮಾರರು ನಾವು !” ಎಂದು ಬೊಬ್ಬಿಟ್ಟುದಾಗಿ ಕಾವಲುಗಾರರು ಹೇಳುತ್ತಾರೆ. ಈ ಅಸತ್ಯ ಪ್ರಚಾರದ ಮರಳು ನೆಲದ ಮೇಲೆ ಅಪವಾದದ ಗೋಪುರ ಕಟ್ಟಲು ಮಾಧವ ನಾಯಕನು ಪ್ರಯತ್ನಿಸುತ್ತಿದ್ದಾನೆ. {{gap}}“ತಮ್ಮ ಕೊನೆಗಾಲದಲ್ಲಿ ಬಿಜ್ಜಳರಾಯರು ಅನುಸರಿಸಿದ ಕಠೋರ ನೀತಿಯಿಂದ ಶರಣರಿಗೆ ಅನ್ಯಾಯವಾಗಿದೆ. ಹಿಂಸೆ ಅತ್ಯಾಚಾರಗಳಿಗೆ ಅವರು ಗುರಿಯಾಗಿದ್ದಾರೆ. ನಿಮ್ಮ ಆಡಳಿತದಲ್ಲಿ ಶರಣರನ್ನು ನ್ಯಾಯ ಔದಾರ್ಯಗಳಿಂದ ನಡೆಸಿಕೊಳ್ಳಿರಿ.<noinclude></noinclude> nwy0ic22jzlyd1r2s4s05kofapd2ok0 ಪುಟ:ಕ್ರಾಂತಿ ಕಲ್ಯಾಣ.pdf/೪೯೦ 104 86439 324160 203765 2026-06-03T03:18:19Z Shreesha Sharma 7840 /* Proofread */ 324160 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೭೭}} ಕ್ರಮಿತನು ಹೇಳಿದನು : “ಅಗ್ನಿದಾಹದ ಹಿಂದಿನ ರಾತ್ರಿ ಮಂಗಳವೇಡೆಯ ಚಾಲುಕ್ಯ ಬಿಡಾರದಲ್ಲಿ ಏನು ನಡೆಯಿತೆಂಬುದು ಯಾರಿಗೂ ತಿಳಿಯದು, ಸೋಮೇಶ್ವರ, ಆ ರಹಸ್ಯವನ್ನು ಭೇದಿಸುವುದು ನನ್ನ ಉದ್ದೇಶವೂ ಅಲ್ಲ. ಮರುದಿನ ಮುಂಜಾವಿನಲ್ಲಿ ರಾಣಿ ಕಾಮೇಶ್ವರಿಯ ದಾಸಿಯೊಬ್ಬಳು ಕುಮಾರ ಪ್ರೇಮಾರ್ಣವನನ್ನು ಸಂಗಡ ಕರೆದುಕೊಂಡು ಚಾಲುಕ್ಯ ಬಿಡಾರವನ್ನು ಬಿಟ್ಟಳೆಂಬುದು ಅನೇಕರಿಗೆ ತಿಳಿದಿದೆ. ಶರಣರ ಒಂದು ಯಾತ್ರಾದಳದೊಡನೆ ಆ ದಾಸಿ ಕಲ್ಯಾಣಕ್ಕೆ ಬಂದು ಜಗದೇಕಮಲ್ಲನನ್ನು ನೋಡಿ ಕಾಮೇಶ್ವರಿ ಕಳುಹಿಸಿದ್ದ ಸಂದೇಶವನ್ನು ತಲುಪಿಸಿದಳು. ರಾಜಗೃಹದಲ್ಲಿ ನಾನು ನಡೆಸಿದ ಸಂಶೋಧನೆಯಲ್ಲಿ ಈ ಪತ್ರಗಳು ಸಿಕ್ಕವು.” {{gap}}-ಎಂದು ಕ್ರಮಿತನು ರಾಣಿಯ ಸಂದೇಶವಿದ್ದ ಎದೆಕಟ್ಟಿನ ತುಂಡನ್ನೂ, ದಾಸಿ ಉಷಾವತಿ ಜಗದೇಕಮಲ್ಲನಿಗೆ ಬರೆದಿದ್ದ ಪತ್ರವನ್ನೂ ಮುಂದಿಟ್ಟನು. ರಾಣಿಯ ಸಂದೇಶ ಈ ರೀತಿಯಿತ್ತು : {{gap}}ಕುಮಾರ ಸೋಮೇಶ್ವರನ ಪಟ್ಟಾಭಿಷೇಕಕ್ಕಾಗಿ ರಾಜಾತಿಥಿಯಾಗಿ ಮಂಗಳವೇಡೆಗೆ ಹೋಗಿದ್ದ ನನ್ನ ಬಿಡಾರಕ್ಕೆ ಮಾಘ ಶುದ್ಧ ನವಮಿಯಂದು ಸರಿರಾತ್ರಿಯಲ್ಲಿ ಬಿಜ್ಜಳನು ವಂಚನೆಯಿಂದ ಬಂದು ನನ್ನ ಮಾನಹರಣ ಮಾಡಿದನು. ಆ ದಾನವನ ಸ್ಪರ್ಶದಿಂದ ಕಳಂಕಿತವಾದ ದೇಹವನ್ನು ಅಗ್ನಿಯಿಂದ ದಹಿಸಲು ನಿರ್ಧರಿಸಿದ್ದೇನೆ. ನನ್ನ ಭಾಗಕ್ಕೆ ಮರಣವೇ ಮಹಾನವಮಿ. ಈ ಸಂದೇಶ ನಿಮಗೆ ತಲಪುವಷ್ಟರಲ್ಲಿ ಈ ಅಭಾಗಿನಿಯ ಮರಣದ ಸುದ್ದಿಯನ್ನು ನೀವು ಕೇಳುವಿರಿ. ಬಿಜ್ಜಳನು ಶರಣಧರ್ಮದ ಪರಮಶತೃ. ಚಾಲುಕ್ಯರಾಜ್ಯದ ಎಲ್ಲ ಶೈವಮಠಗಳನ್ನೂ ನಾಶಮಾಡಿ ಶರಣಧರ್ಮವನ್ನು ನಿರ್ಮೂಲಗೊಳಿಸುವುದು ಅವನ ಉದ್ದೇಶ. ಚಾಲುಕ್ಯರ ಹೆಸರನ್ನು ಇತಿಹಾಸದಿಂದ ತೊಡೆದು ಹಾಕಿ ಕಲಚೂರ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು ಅವನು ಹವಣಿಸುತ್ತಿದ್ದಾನೆ. ಈ ದಾನವರೂಪಿ ನಿರಂಕುಶ ಪ್ರಜಾಪೀಡಕನನ್ನು ವಧಿಸಿ ಚಾಲುಕ್ಯ ರಾಜ್ಯವನ್ನು, ಶರಣಧರ್ಮವನ್ನು, ವಿಪತ್ತಿನಿಂದ ಉದ್ದರಿಸುವ ಧೈರ್ಯ ಸಾಹಸಗಳು ನಿಮಗಿದೆಯೆ? ಅದರಿಂದ ಮಾತ್ರವೇ ನಾನು ಕಳಂಕ ವಿಮುಕ್ತಯಾಗುವೆನು. ನನ್ನ ಆತ್ಮಕ್ಕೆ ಶಾಂತಿ ದೊರಕುವುದು. {{Right|- ಇತಿ ಚರಣದಾಸಿ, ಕಾಮೇಶ್ವರಿ. }} {{gap}}ದಾಸಿ ಉಷಾವತಿ ತನ್ನ ಪತ್ರದಲ್ಲಿ, ತಾನು ವೇಷಾಂತರದಿಂದ ರಾಜಗೃಹಕ್ಕೆ ಬಂದು ಜಗದೇಕಮಲ್ಲನಿಗೆ ಸಂದೇಶ ಮುಟ್ಟಿಸಿದ ವಿವರಗಳನ್ನು ತಿಳಿಸಿದ್ದಳು. {{gap}}ಎರಡು ಪತ್ರಗಳನ್ನೂ ಓದಿದಾಗ ಸೋಮೇಶ್ವರನಿಗೆ ಎಲ್ಲವೂ ಅರ್ಥವಾಯಿತು.<noinclude></noinclude> r87w8h9ytashy2m8qmi3bhj5k2lwg20 324164 324160 2026-06-03T03:19:34Z Shreelatha.Halemane 7642 /* Validated */ 324164 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೭೭}} ಕ್ರಮಿತನು ಹೇಳಿದನು : “ಅಗ್ನಿದಾಹದ ಹಿಂದಿನ ರಾತ್ರಿ ಮಂಗಳವೇಡೆಯ ಚಾಲುಕ್ಯ ಬಿಡಾರದಲ್ಲಿ ಏನು ನಡೆಯಿತೆಂಬುದು ಯಾರಿಗೂ ತಿಳಿಯದು, ಸೋಮೇಶ್ವರ, ಆ ರಹಸ್ಯವನ್ನು ಭೇದಿಸುವುದು ನನ್ನ ಉದ್ದೇಶವೂ ಅಲ್ಲ. ಮರುದಿನ ಮುಂಜಾವಿನಲ್ಲಿ ರಾಣಿ ಕಾಮೇಶ್ವರಿಯ ದಾಸಿಯೊಬ್ಬಳು ಕುಮಾರ ಪ್ರೇಮಾರ್ಣವನನ್ನು ಸಂಗಡ ಕರೆದುಕೊಂಡು ಚಾಲುಕ್ಯ ಬಿಡಾರವನ್ನು ಬಿಟ್ಟಳೆಂಬುದು ಅನೇಕರಿಗೆ ತಿಳಿದಿದೆ. ಶರಣರ ಒಂದು ಯಾತ್ರಾದಳದೊಡನೆ ಆ ದಾಸಿ ಕಲ್ಯಾಣಕ್ಕೆ ಬಂದು ಜಗದೇಕಮಲ್ಲನನ್ನು ನೋಡಿ ಕಾಮೇಶ್ವರಿ ಕಳುಹಿಸಿದ್ದ ಸಂದೇಶವನ್ನು ತಲುಪಿಸಿದಳು. ರಾಜಗೃಹದಲ್ಲಿ ನಾನು ನಡೆಸಿದ ಸಂಶೋಧನೆಯಲ್ಲಿ ಈ ಪತ್ರಗಳು ಸಿಕ್ಕವು.” {{gap}}-ಎಂದು ಕ್ರಮಿತನು ರಾಣಿಯ ಸಂದೇಶವಿದ್ದ ಎದೆಕಟ್ಟಿನ ತುಂಡನ್ನೂ, ದಾಸಿ ಉಷಾವತಿ ಜಗದೇಕಮಲ್ಲನಿಗೆ ಬರೆದಿದ್ದ ಪತ್ರವನ್ನೂ ಮುಂದಿಟ್ಟನು. ರಾಣಿಯ ಸಂದೇಶ ಈ ರೀತಿಯಿತ್ತು : {{gap}}ಕುಮಾರ ಸೋಮೇಶ್ವರನ ಪಟ್ಟಾಭಿಷೇಕಕ್ಕಾಗಿ ರಾಜಾತಿಥಿಯಾಗಿ ಮಂಗಳವೇಡೆಗೆ ಹೋಗಿದ್ದ ನನ್ನ ಬಿಡಾರಕ್ಕೆ ಮಾಘ ಶುದ್ಧ ನವಮಿಯಂದು ಸರಿರಾತ್ರಿಯಲ್ಲಿ ಬಿಜ್ಜಳನು ವಂಚನೆಯಿಂದ ಬಂದು ನನ್ನ ಮಾನಹರಣ ಮಾಡಿದನು. ಆ ದಾನವನ ಸ್ಪರ್ಶದಿಂದ ಕಳಂಕಿತವಾದ ದೇಹವನ್ನು ಅಗ್ನಿಯಿಂದ ದಹಿಸಲು ನಿರ್ಧರಿಸಿದ್ದೇನೆ. ನನ್ನ ಭಾಗಕ್ಕೆ ಮರಣವೇ ಮಹಾನವಮಿ. ಈ ಸಂದೇಶ ನಿಮಗೆ ತಲಪುವಷ್ಟರಲ್ಲಿ ಈ ಅಭಾಗಿನಿಯ ಮರಣದ ಸುದ್ದಿಯನ್ನು ನೀವು ಕೇಳುವಿರಿ. ಬಿಜ್ಜಳನು ಶರಣಧರ್ಮದ ಪರಮಶತೃ. ಚಾಲುಕ್ಯರಾಜ್ಯದ ಎಲ್ಲ ಶೈವಮಠಗಳನ್ನೂ ನಾಶಮಾಡಿ ಶರಣಧರ್ಮವನ್ನು ನಿರ್ಮೂಲಗೊಳಿಸುವುದು ಅವನ ಉದ್ದೇಶ. ಚಾಲುಕ್ಯರ ಹೆಸರನ್ನು ಇತಿಹಾಸದಿಂದ ತೊಡೆದು ಹಾಕಿ ಕಲಚೂರ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು ಅವನು ಹವಣಿಸುತ್ತಿದ್ದಾನೆ. ಈ ದಾನವರೂಪಿ ನಿರಂಕುಶ ಪ್ರಜಾಪೀಡಕನನ್ನು ವಧಿಸಿ ಚಾಲುಕ್ಯ ರಾಜ್ಯವನ್ನು, ಶರಣಧರ್ಮವನ್ನು, ವಿಪತ್ತಿನಿಂದ ಉದ್ದರಿಸುವ ಧೈರ್ಯ ಸಾಹಸಗಳು ನಿಮಗಿದೆಯೆ? ಅದರಿಂದ ಮಾತ್ರವೇ ನಾನು ಕಳಂಕ ವಿಮುಕ್ತಯಾಗುವೆನು. ನನ್ನ ಆತ್ಮಕ್ಕೆ ಶಾಂತಿ ದೊರಕುವುದು. {{Right|- ಇತಿ ಚರಣದಾಸಿ, ಕಾಮೇಶ್ವರಿ. }} {{gap}}ದಾಸಿ ಉಷಾವತಿ ತನ್ನ ಪತ್ರದಲ್ಲಿ, ತಾನು ವೇಷಾಂತರದಿಂದ ರಾಜಗೃಹಕ್ಕೆ ಬಂದು ಜಗದೇಕಮಲ್ಲನಿಗೆ ಸಂದೇಶ ಮುಟ್ಟಿಸಿದ ವಿವರಗಳನ್ನು ತಿಳಿಸಿದ್ದಳು. {{gap}}ಎರಡು ಪತ್ರಗಳನ್ನೂ ಓದಿದಾಗ ಸೋಮೇಶ್ವರನಿಗೆ ಎಲ್ಲವೂ ಅರ್ಥವಾಯಿತು.<noinclude></noinclude> lxj2xhducxd62iv271ee1kuuqj9hmm4 ಪುಟ:ಕ್ರಾಂತಿ ಕಲ್ಯಾಣ.pdf/೫೦೨ 104 86440 324172 203766 2026-06-03T03:30:02Z Shreesha Sharma 7840 /* Proofread */ 324172 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಕಡೆಯ ನಾಲ್ಕು ಮಾತು|right=೪೮೯}} ದುಷ್ಟ ಸಂಪ್ರದಾಯ ಮುಸ್ಲಿಂ ಅರಸರಂತೆ ಹಿಂದೂ ಅರಸರಲ್ಲಿಯೂ ಪ್ರಚಾರದಲ್ಲಿ ಇದ್ದಿತೆಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ನಿದರ್ಶನಗಳಿವೆ. “ಶಚಿಯನ್ನು ಪಡೆಯದೆ ಇಂದ್ರತ್ವ ಪೂರ್ಣವಾಗುವುದಿಲ್ಲ” ಎಂದು ಹೇಳಿ ನಮ್ಮ ಪುರಾಣಗಳೂ ಇದನ್ನು ಒಂದು ರೀತಿಯಲ್ಲಿ ಅನುಮೋಸಿದಿವೆ. ನೂರ್ಮಡಿ ತೈಲಪನ ಮರಣಾನಂತರ ಬಿಜ್ಜಳನ ವಂಚನೆ ದೌರ್ಜನ್ಯಗಳಿಗೆ ಬಲಿಯಾದ ತೈಲಪನ ರಾಣಿಯೊಬ್ಬಳು ಅವನ ವಧೆಗೆ ಕಾರಣಳಾದದ್ದು ಮಧ್ಯಯುಗದ ರಾಜವಂಶಗಳ ಇತಿಹಾಸದಲ್ಲಿ ಅಸಂಭವ ಘಟನೆಯಲ್ಲ. {{gap}}ಗೀತೆ ಹೇಳುವಂತೆ ಮತಿಭ್ರಂಶ ವಿನಾಶಗಳಿಗೆ ಕಾರಣವಾದ ಕಾಮ ಕ್ರೋಧ ಲೋಭ ಮೋಹ ಮುಂತಾದ ದುಷ್ಟ ಗುಣಗಳೆಲ್ಲವೂ ಬಿಜ್ಜಳನಲ್ಲಿದ್ದವು. ಕಾಮೇಶ್ವರಿಯ ಮಾತುಗಳಲ್ಲಿ ಅವನು 'ಪ್ರಜಾಪೀಡಕ ಮಾನವರೂಪೀದಾನವ' ನಾಗಿದ್ದನು. ಜನತೆಯ ದೃಷ್ಟಿಯಲ್ಲಿ ಲೋಕಕಂಟಕನಾಗಿದ್ದ ದಾನವೇಶ್ವರ ರಾವಣನನ್ನು "ಪ್ರವರಪುರುಷನನ್ನಾಗಿ ವರ್ಣಿಸಿದ ಒಂದು ವಿಶಿಷ್ಟ ಸಂಪ್ರದಾಯದ ಕವಿಗಳು, ಇತಿಹಾಸ ಶಾಸನಾಧಾರಗಳನ್ನು ಅತ್ತಿಟ್ಟು ಬಿಜ್ಜಳನನ್ನು “ಆದರ್ಶರಾಜ” ನನ್ನಾಗಿ ವರ್ಣಿಸಿದುದು ಸಹಜವಾಗಿದೆ. ಆದರೆ ಸತ್ಯದೂರವೂ ಅತಿರಂಜಿತವೂ ಆದ ಅಂತಹ ರಚನೆಗಳಿಗೆ ಇತಿಹಾಸದ ದೃಷ್ಟಿಯಿಂದ ಯಾವ ಮೌಲ್ಯವೂ ಇರುವುದಿಲ್ಲ. {{gap}}ಬಿಜ್ಜಳನ ವಧೆ ಶರಣರ ಪ್ರಚೋದನೆಯಿಂದ ನಡೆಯಿತೆಂಬ ಸತ್ಯದೂರವಾದ ಅತಿರಂಜಿತ ಅಪವಾದ, ವಧೆ ನಡೆದ ಕೆಲವು ವರ್ಷಗಳ ಮೇಲೆ, ಕಲಚೂರ್ಯ ಅಧಿಕಾರ ಅಸ್ತವಾದ ಅನಂತರ, ನಾಲ್ವಡಿ ಸೋಮೇಶ್ವರನ ಕಾಲದಲ್ಲಿ ಪ್ರಚಾರಕ್ಕೆ ಬಂದಿರಬೇಕು. ಪ್ರಜಾಪೀಡಕನೂ ರಾಜ್ಯಾಪಹಾರಿಯೂ ಆಗಿದ್ದ ಬಿಜ್ಜಳನ ವಧೆ ತಮ್ಮ ಪ್ರಚೋದನೆ ಪ್ರೋತ್ಸಾಹಗಳಿಂದ ನಡೆಯಿತೆಂದು ಶರಣರೇ ಜಂಭದಿಂದ ಹೇಳಿಕೊಂಡಿರಬೇಕು. ಕ್ರಿ.ಶ. ೧೧೯೧ ರಲ್ಲಿ ರಚಿತವಾಗಿರಬಹುದಾದ ತೆಲುಗು “ಬಸವ ಪುರಾಣದಲ್ಲಿ ಮೊಟ್ಟಮೊದಲು ಇದರ ಸೂಚನೆ ದೊರೆಯುತ್ತದೆ. ಅದನ್ನು ರಚಿಸಿದ ಪಾಲ್ಕುರಿಕೆ ಸೋಮನಾಥನು, “ಪ್ರಸ್ತುತಿಂಪಂಗ ಸಧ್ಯಕ್ತಿ ವಿಸ್ಸುರಣ ಪ್ರಸ್ತುತಿಕಿಕ್ಕಿನ ನಸವುನಿ ಚರಿತ ಚೆಪ್ಪಿತಿ ಭಕ್ತುಲಚೆವಿನ್ನಮಾಡಿ,” ಎಂದು ಹೇಳಿಕೊಂಡಿದ್ದಾನೆ. ಸ್ತುತಿರೂಪವಾಗಿ ಜನರಲ್ಲಿ ಹರಡಿ ಪ್ರಖ್ಯಾತಿಗೇರಿದ ಬಸವನ ಚರಿತ್ರೆಯನ್ನು ಭಕ್ತರಿಂದ ಕೇಳಿದಂತೆ ನಾನು ಬರೆಯುತ್ತೇನೆ ಎಂಬ ಅವನ ಈ ಹೇಳಿಕೆ ಅರ್ಥಗರ್ಭಿತವಾಗಿದೆ. ಪಾಲ್ಕುರಿಕೆ ಸೋಮನಾಥನು ಬಸವಣ್ಣನವರ ಸಮಕಾಲೀನನಾಗಿದ್ದು ಅವರ ಚರಿತ್ರೆಯನ್ನು ಸ್ವಯಂ ತಿಳಿದವನಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಘಟನೆಗಳು ನಡೆದ ಸ್ಥಳದಿಂದ ಬಹು ದೂರದ<noinclude></noinclude> szv41rj6e9j227xnc6ydn69rsbm7xg7 324175 324172 2026-06-03T03:32:58Z Shreelatha.Halemane 7642 /* Validated */ 324175 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಕಡೆಯ ನಾಲ್ಕು ಮಾತು|right=೪೮೯}} ದುಷ್ಟ ಸಂಪ್ರದಾಯ ಮುಸ್ಲಿಂ ಅರಸರಂತೆ ಹಿಂದೂ ಅರಸರಲ್ಲಿಯೂ ಪ್ರಚಾರದಲ್ಲಿ ಇದ್ದಿತೆಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ನಿದರ್ಶನಗಳಿವೆ. “ಶಚಿಯನ್ನು ಪಡೆಯದೆ ಇಂದ್ರತ್ವ ಪೂರ್ಣವಾಗುವುದಿಲ್ಲ” ಎಂದು ಹೇಳಿ ನಮ್ಮ ಪುರಾಣಗಳೂ ಇದನ್ನು ಒಂದು ರೀತಿಯಲ್ಲಿ ಅನುಮೋಸಿದಿವೆ. ನೂರ್ಮಡಿ ತೈಲಪನ ಮರಣಾನಂತರ ಬಿಜ್ಜಳನ ವಂಚನೆ ದೌರ್ಜನ್ಯಗಳಿಗೆ ಬಲಿಯಾದ ತೈಲಪನ ರಾಣಿಯೊಬ್ಬಳು ಅವನ ವಧೆಗೆ ಕಾರಣಳಾದದ್ದು ಮಧ್ಯಯುಗದ ರಾಜವಂಶಗಳ ಇತಿಹಾಸದಲ್ಲಿ ಅಸಂಭವ ಘಟನೆಯಲ್ಲ. {{gap}}ಗೀತೆ ಹೇಳುವಂತೆ ಮತಿಭ್ರಂಶ ವಿನಾಶಗಳಿಗೆ ಕಾರಣವಾದ ಕಾಮ ಕ್ರೋಧ ಲೋಭ ಮೋಹ ಮುಂತಾದ ದುಷ್ಟ ಗುಣಗಳೆಲ್ಲವೂ ಬಿಜ್ಜಳನಲ್ಲಿದ್ದವು. ಕಾಮೇಶ್ವರಿಯ ಮಾತುಗಳಲ್ಲಿ ಅವನು 'ಪ್ರಜಾಪೀಡಕ ಮಾನವರೂಪೀದಾನವ' ನಾಗಿದ್ದನು. ಜನತೆಯ ದೃಷ್ಟಿಯಲ್ಲಿ ಲೋಕಕಂಟಕನಾಗಿದ್ದ ದಾನವೇಶ್ವರ ರಾವಣನನ್ನು "ಪ್ರವರಪುರುಷನನ್ನಾಗಿ ವರ್ಣಿಸಿದ ಒಂದು ವಿಶಿಷ್ಟ ಸಂಪ್ರದಾಯದ ಕವಿಗಳು, ಇತಿಹಾಸ ಶಾಸನಾಧಾರಗಳನ್ನು ಅತ್ತಿಟ್ಟು ಬಿಜ್ಜಳನನ್ನು “ಆದರ್ಶರಾಜ” ನನ್ನಾಗಿ ವರ್ಣಿಸಿದುದು ಸಹಜವಾಗಿದೆ. ಆದರೆ ಸತ್ಯದೂರವೂ ಅತಿರಂಜಿತವೂ ಆದ ಅಂತಹ ರಚನೆಗಳಿಗೆ ಇತಿಹಾಸದ ದೃಷ್ಟಿಯಿಂದ ಯಾವ ಮೌಲ್ಯವೂ ಇರುವುದಿಲ್ಲ. {{gap}}ಬಿಜ್ಜಳನ ವಧೆ ಶರಣರ ಪ್ರಚೋದನೆಯಿಂದ ನಡೆಯಿತೆಂಬ ಸತ್ಯದೂರವಾದ ಅತಿರಂಜಿತ ಅಪವಾದ, ವಧೆ ನಡೆದ ಕೆಲವು ವರ್ಷಗಳ ಮೇಲೆ, ಕಲಚೂರ್ಯ ಅಧಿಕಾರ ಅಸ್ತವಾದ ಅನಂತರ, ನಾಲ್ವಡಿ ಸೋಮೇಶ್ವರನ ಕಾಲದಲ್ಲಿ ಪ್ರಚಾರಕ್ಕೆ ಬಂದಿರಬೇಕು. ಪ್ರಜಾಪೀಡಕನೂ ರಾಜ್ಯಾಪಹಾರಿಯೂ ಆಗಿದ್ದ ಬಿಜ್ಜಳನ ವಧೆ ತಮ್ಮ ಪ್ರಚೋದನೆ ಪ್ರೋತ್ಸಾಹಗಳಿಂದ ನಡೆಯಿತೆಂದು ಶರಣರೇ ಜಂಭದಿಂದ ಹೇಳಿಕೊಂಡಿರಬೇಕು. ಕ್ರಿ.ಶ. ೧೧೯೧ ರಲ್ಲಿ ರಚಿತವಾಗಿರಬಹುದಾದ ತೆಲುಗು “ಬಸವ ಪುರಾಣದಲ್ಲಿ ಮೊಟ್ಟಮೊದಲು ಇದರ ಸೂಚನೆ ದೊರೆಯುತ್ತದೆ. ಅದನ್ನು ರಚಿಸಿದ ಪಾಲ್ಕುರಿಕೆ ಸೋಮನಾಥನು, “ಪ್ರಸ್ತುತಿಂಪಂಗ ಸಧ್ಯಕ್ತಿ ವಿಸ್ಸುರಣ ಪ್ರಸ್ತುತಿಕಿಕ್ಕಿನ ನಸವುನಿ ಚರಿತ ಚೆಪ್ಪಿತಿ ಭಕ್ತುಲಚೆವಿನ್ನಮಾಡಿ,” ಎಂದು ಹೇಳಿಕೊಂಡಿದ್ದಾನೆ. ಸ್ತುತಿರೂಪವಾಗಿ ಜನರಲ್ಲಿ ಹರಡಿ ಪ್ರಖ್ಯಾತಿಗೇರಿದ ಬಸವನ ಚರಿತ್ರೆಯನ್ನು ಭಕ್ತರಿಂದ ಕೇಳಿದಂತೆ ನಾನು ಬರೆಯುತ್ತೇನೆ ಎಂಬ ಅವನ ಈ ಹೇಳಿಕೆ ಅರ್ಥಗರ್ಭಿತವಾಗಿದೆ. ಪಾಲ್ಕುರಿಕೆ ಸೋಮನಾಥನು ಬಸವಣ್ಣನವರ ಸಮಕಾಲೀನನಾಗಿದ್ದು ಅವರ ಚರಿತ್ರೆಯನ್ನು ಸ್ವಯಂ ತಿಳಿದವನಲ್ಲವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಘಟನೆಗಳು ನಡೆದ ಸ್ಥಳದಿಂದ ಬಹು ದೂರದ<noinclude></noinclude> 7egg9ymgpb9yufk4w64soigi72oooni ಪುಟ:ಕ್ರಾಂತಿ ಕಲ್ಯಾಣ.pdf/೪೯೮ 104 86441 324148 203767 2026-06-03T02:53:29Z Shreesha Sharma 7840 /* Proofread */ 324148 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center='''ಕಡೆಯ ನಾಲ್ಕು ಮಾತು'''|left=|right=೪೮೫}} {{gap}}ಬಿಜ್ಜಳ ಬಸವೇಶ್ವರರನ್ನು ಕುರಿತ ಕಾದಂಬರೀ ಮಾಲಿಕೆಯ ಕೊನೆಯ ಭಾಗವಾದ ಈ ಆರನೆಯ ಹೊತ್ತಿಗೆ, “ಕ್ರಾಂತಿ ಕಲ್ಯಾಣ'ವು ಈಗ ಮಾನ್ಯ ವಾಚಕರ ಮುಂದಿರುತ್ತದೆ. {{gap}}ಈ ಮಾಲಿಕೆಯ ಮೊದಲ ಕಾದಂಬರಿ “ಉದಯ ರವಿ” ಯಲ್ಲಿ ಬಸವೇಶ್ವರನ ಬಾಲ್ಯ ವಿವಾಹ, ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ನೇಮಕ, ನಿಧಿಶೋಧನೆ, ಈ ಪ್ರಸಂಗಗಳೂ ; ಎರಡನೆಯದಾದ "ರಾಜ್ಯಪಾಲ”ದಲ್ಲಿ, ತೈಲಪ ಬಿಜ್ಜಳರ ನಡುವೆ ನಡೆಯಲಿದ್ದ ಅಂತರ್ಯುದ್ದವನ್ನು ನಿಲ್ಲಿಸಲು ಬಸವೇಶ್ವರನು ನಡೆಸಿದ ಸಂಧಾನ, ಬನವಾಸಿಯ ರಾಜಪ್ರತಿನಿಧಿಯಾಗಿ ನೇಮಕ, ರಾಜ್ಯಾಪಹಾರವೇ ಬಿಜ್ಜಳನ ಉದ್ದೇಶವೆಂದು ತಿಳಿದಾಗ ಬಸವೇಶ್ವರನ ಪ್ರತಿಭಟನೆ ಮತ್ತು ಅಧಿಕಾರ ನಿವೃತ್ತಿ, ಈ ವಿಚಾರಗಳೂ ; ಮೂರನೆಯದಾದ “ಕಲ್ಯಾಣೇಶ್ವರ”ದಲ್ಲಿ, ಬಸವೇಶ್ವರನಿಂದ ಅನುಭವ ಮಂಟಪದ ಸ್ಥಾಪನೆ, ಅದರ ಅಧ್ಯಕ್ಷ ಸ್ಥಾನಕ್ಕೆ ಅಲ್ಲಮಪ್ರಭುದೇವರ ಆಯ್ಕೆ ಮತ್ತು ಶೂನ್ಯ ಸಿಂಹಾಸನಾರೋಹಣ, ಬಸವೇಶ್ವರನು ಆಚರಣೆಗೆ ತಂದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳು-ಇವು ವರ್ಣಿಸಲ್ಪಟ್ಟಿವೆ. ಇದರೊಡನೆ ಈ ಬೃಹತ್ ಕಾದಂಬರಿಯ ಪೂರ್ವಾರ್ಧ ಮುಗಿಯುತ್ತದೆ. {{gap}}ಐದು ವರ್ಷಗಳ ಅನಂತರ, ಚಾಲುಕ್ಯ ಅರಸೊತ್ತಿಗೆಯ ಪುನರ್‌ಪ್ರತಿಷ್ಠೆಗಾಗಿ ತೈಲಪನ ವಿಧವಾರಾಣೀ ಕಾಮೇಶ್ವರಿಯು ಹೂಡುವ ರಾಜಕೀಯ ಒಳಸಂಚಿನಿಂದ ಮಾಲಿಕೆಯ ನಾಲ್ಕನೆಯ ಭಾಗ, “ನಾಗಬಂಧ” ಪ್ರಾರಂಭವಾಗುತ್ತದೆ. ಈ ಸಂಚಿನ ನಿಜಸ್ವರೂಪ, ಚೆನ್ನಬಸವಣ್ಣನ ನೇತೃತ್ವದಲ್ಲಿ ಶರಣರ ದೇವಗಿರಿ ಯಾತ್ರೆ ಅಲ್ಲಿಯ ಗುಹೆಯೊಂದರಲ್ಲಿ ಕುಸುಮಾವಳಿಯ ಬಲಿದಾನ, ರಾಷ್ಟ್ರಕೂಟ ಅರಸು ದಂತಿದುರ್ಗನಿಂದ ಕೈಲಾಸನಾಥ ಗುಹಾಲಯದ ರಚನೆಯನ್ನು ಕುರಿತ ಐತಿಹ್ಯ ಈ ವಿಚಾರಗಳು ಅದರಲ್ಲಿ ನಿರೂಪಿತವಾಗಿವೆ. ಐದನೆಯ ಭಾಗವಾದ “ಮುಗಿಯದ ಕನಸು” ಕಾದಂಬರಿಯಲ್ಲಿ ಸರ್ಪದ್ರಷ್ಟನಾಗಿ ಕಲ್ಯಾಣಕ್ಕೆ ಹಿಂದಿರುಗಿದ ಶೀಲವಂತನನ್ನು ಮರವೆಯಿಂದ ಎಚ್ಚರಿಸಲು ಮಧುವರಸನ ಮಗಳು ಲಾವಣ್ಯವತಿ ಅನುಸರಿಸುವ<noinclude></noinclude> lo8zm5rn41r4ddjsyb3k7t8m9f5768c 324152 324148 2026-06-03T02:56:28Z Shreelatha.Halemane 7642 /* Validated */ 324152 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center='''ಕಡೆಯ ನಾಲ್ಕು ಮಾತು'''|left=|right=೪೮೫}} {{gap}}ಬಿಜ್ಜಳ ಬಸವೇಶ್ವರರನ್ನು ಕುರಿತ ಕಾದಂಬರೀ ಮಾಲಿಕೆಯ ಕೊನೆಯ ಭಾಗವಾದ ಈ ಆರನೆಯ ಹೊತ್ತಿಗೆ, “ಕ್ರಾಂತಿ ಕಲ್ಯಾಣ'ವು ಈಗ ಮಾನ್ಯ ವಾಚಕರ ಮುಂದಿರುತ್ತದೆ. {{gap}}ಈ ಮಾಲಿಕೆಯ ಮೊದಲ ಕಾದಂಬರಿ “ಉದಯ ರವಿ” ಯಲ್ಲಿ ಬಸವೇಶ್ವರನ ಬಾಲ್ಯ ವಿವಾಹ, ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ನೇಮಕ, ನಿಧಿಶೋಧನೆ, ಈ ಪ್ರಸಂಗಗಳೂ ; ಎರಡನೆಯದಾದ "ರಾಜ್ಯಪಾಲ”ದಲ್ಲಿ, ತೈಲಪ ಬಿಜ್ಜಳರ ನಡುವೆ ನಡೆಯಲಿದ್ದ ಅಂತರ್ಯುದ್ದವನ್ನು ನಿಲ್ಲಿಸಲು ಬಸವೇಶ್ವರನು ನಡೆಸಿದ ಸಂಧಾನ, ಬನವಾಸಿಯ ರಾಜಪ್ರತಿನಿಧಿಯಾಗಿ ನೇಮಕ, ರಾಜ್ಯಾಪಹಾರವೇ ಬಿಜ್ಜಳನ ಉದ್ದೇಶವೆಂದು ತಿಳಿದಾಗ ಬಸವೇಶ್ವರನ ಪ್ರತಿಭಟನೆ ಮತ್ತು ಅಧಿಕಾರ ನಿವೃತ್ತಿ, ಈ ವಿಚಾರಗಳೂ ; ಮೂರನೆಯದಾದ “ಕಲ್ಯಾಣೇಶ್ವರ”ದಲ್ಲಿ, ಬಸವೇಶ್ವರನಿಂದ ಅನುಭವ ಮಂಟಪದ ಸ್ಥಾಪನೆ, ಅದರ ಅಧ್ಯಕ್ಷ ಸ್ಥಾನಕ್ಕೆ ಅಲ್ಲಮಪ್ರಭುದೇವರ ಆಯ್ಕೆ ಮತ್ತು ಶೂನ್ಯ ಸಿಂಹಾಸನಾರೋಹಣ, ಬಸವೇಶ್ವರನು ಆಚರಣೆಗೆ ತಂದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳು-ಇವು ವರ್ಣಿಸಲ್ಪಟ್ಟಿವೆ. ಇದರೊಡನೆ ಈ ಬೃಹತ್ ಕಾದಂಬರಿಯ ಪೂರ್ವಾರ್ಧ ಮುಗಿಯುತ್ತದೆ. {{gap}}ಐದು ವರ್ಷಗಳ ಅನಂತರ, ಚಾಲುಕ್ಯ ಅರಸೊತ್ತಿಗೆಯ ಪುನರ್‌ಪ್ರತಿಷ್ಠೆಗಾಗಿ ತೈಲಪನ ವಿಧವಾರಾಣೀ ಕಾಮೇಶ್ವರಿಯು ಹೂಡುವ ರಾಜಕೀಯ ಒಳಸಂಚಿನಿಂದ ಮಾಲಿಕೆಯ ನಾಲ್ಕನೆಯ ಭಾಗ, “ನಾಗಬಂಧ” ಪ್ರಾರಂಭವಾಗುತ್ತದೆ. ಈ ಸಂಚಿನ ನಿಜಸ್ವರೂಪ, ಚೆನ್ನಬಸವಣ್ಣನ ನೇತೃತ್ವದಲ್ಲಿ ಶರಣರ ದೇವಗಿರಿ ಯಾತ್ರೆ ಅಲ್ಲಿಯ ಗುಹೆಯೊಂದರಲ್ಲಿ ಕುಸುಮಾವಳಿಯ ಬಲಿದಾನ, ರಾಷ್ಟ್ರಕೂಟ ಅರಸು ದಂತಿದುರ್ಗನಿಂದ ಕೈಲಾಸನಾಥ ಗುಹಾಲಯದ ರಚನೆಯನ್ನು ಕುರಿತ ಐತಿಹ್ಯ ಈ ವಿಚಾರಗಳು ಅದರಲ್ಲಿ ನಿರೂಪಿತವಾಗಿವೆ. ಐದನೆಯ ಭಾಗವಾದ “ಮುಗಿಯದ ಕನಸು” ಕಾದಂಬರಿಯಲ್ಲಿ ಸರ್ಪದ್ರಷ್ಟನಾಗಿ ಕಲ್ಯಾಣಕ್ಕೆ ಹಿಂದಿರುಗಿದ ಶೀಲವಂತನನ್ನು ಮರವೆಯಿಂದ ಎಚ್ಚರಿಸಲು ಮಧುವರಸನ ಮಗಳು ಲಾವಣ್ಯವತಿ ಅನುಸರಿಸುವ<noinclude></noinclude> q7v1dxe3ok4evltajwgy12j5yaej7at ಪುಟ:ಕ್ರಾಂತಿ ಕಲ್ಯಾಣ.pdf/೪೮೪ 104 86442 324157 203768 2026-06-03T03:07:05Z Shreesha Sharma 7840 /* Proofread */ 324157 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೭೧}} ಪಾನೀಯಗಳನ್ನು ಹಿಡಿದು ನಿಂತಿದ್ದ ದಾಸಿಯರ ಸೇವೆ, ಈ ಎಲ್ಲ ಉಪಚಾರಗಳಿಂದ ಕ್ರಮಿತನ ಉದ್ರೇಕ ಶಾಂತವಾಗುತ್ತಿದ್ದಂತೆ ಸೋಮೇಶ್ವರನು, “ಮಹಾದ್ವಾರದಲ್ಲಿ ನನ್ನ ಸ್ವಾಗತಕ್ಕಾಗಿ ಸೇರಿದ್ದ ನಾಗರಿಕರಿಂದ ನಗರದ ದುರ್ಘಟನೆಯನ್ನು ತಿಳಿದೆ. ಅದರ ಕಾರಣರಾರೆಂಬುದನ್ನೂ ಅವರು ಸ್ಪಷ್ಟಪಡಿಸಿದರು. ಆದರೆ ಒಂದು ಸಾರಿಯಾದರೂ ಅವರು ನಿಮ್ಮ ಹೆಸರು ಹೇಳಲಿಲ್ಲ. ಚಿಂತೆಗೀಡಾದ ನಿಮ್ಮ ಮನಸ್ಸು ಇಲ್ಲದುದನ್ನು ಕಲ್ಪಿಸಿಕೊಳ್ಳುತ್ತಿದೆ,” ಎಂದು ಸಮಾಧಾನ ಪಡಿಸಿದನು. {{gap}}ಕ್ರಮಿತನು ಕೊಂಚ ಹೊತ್ತು ಮೌನವಾಗಿ ಕುಳಿತಿದ್ದನು. ಬಳಿಕ ತಲೆಯೆತ್ತಿ ಪಶ್ಚಾತ್ತಾಪದ ದೈನ್ಯಕಂಠದಿಂದ, “ಕೂಡಲ ಸಂಗಮದ ಸುದ್ದಿ ನಿಮಗಿನ್ನೂ ತಿಳಿದಿಲ್ಲವೆ?” ಎಂದನು. {{gap}}“ಏನಾಯಿತು ಅಲ್ಲಿ?” {{gap}}ಕಾತರನಾಗಿ ಕೇಳಿದನು ಸೋಮೇಶ್ವರ. {{gap}}“ಬಸವಣ್ಣನವರ ಅವಸಾನ” ನಿಟ್ಟುಸಿರಿಟ್ಟು ಕ್ರಮಿತನು ಹೇಳಿದನು“ಬಿಜ್ಜಳರಾಯರ ಕೊಲೆಯ ಸುದ್ದಿ ಕೇಳಿ ದುಃಖಾವೇಗದಿಂದ ಬಸವಣ್ಣನವರು ಅಸುನೀಗಿದರು. ತಮ್ಮ ಇಷ್ಟದೈವ ಕೂಡಲ ಸಂಗಮದೇವನಲ್ಲಿ ಐಕ್ಯವಾದರು. ಚಾಲುಕ್ಯ ರಾಜ್ಯದ ಧರ್ಮಜ್ಯೋತಿ ನಂದಿತು, ಸೋಮೇಶ್ವರ ! ಅವರು ಕಲ್ಯಾಣವನ್ನು ಬಿಟ್ಟದಿನವೇ ನಗರದ ಭಾಗ್ಯತಾರೆ ಅಸ್ತವಾಯಿತು!” {{gap}}ಬಸವಣ್ಣನವರ ಅವಸಾನ-ತಂದೆಯ ಕೊಲೆಯ ಸುದ್ದಿ ಕೇಳಿ ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಹೋಗಲು ಯಾರು ಕಾರಣರೋ ಆ ಪ್ರತಿಷ್ಠಾವಂತ ನಿಷ್ಠುರ ವ್ಯಕ್ತಿ, ರಾಜಪುರೋಹಿತ ನಾರಣಕ್ರಮಿತನು ಅವರ ನಿಧನದ ಸುದ್ದಿ ಕೇಳಿ ಕಣ್ಣೀರಿಡುತ್ತಿದ್ದಾನೆ! ಇದು ಕಲ್ಪನೆಯೇ! ಇಹಲೋಕದ ದ್ವೇಷ ದ್ವಂದ್ವಗಳಿಂದ ದೂರವಾದ ಯಾವುದೋ ಕಲ್ಪನಾಲೋಕದಲ್ಲಿರುವೆನೇ ನಾನು? -ಎಂದು ಯೋಚಿಸುತ್ತ ಸೋಮೇಶ್ವರನು ಮೌನವಾಗಿದ್ದನು. {{gap}}ಆಪ್ತರಲ್ಲಿ ಹೇಳಿಕೊಂಡಾಗ ಮನಸ್ಸಿನ ದುಃಖ ಶಾಂತವಾಗುವುದೆಂದು ಮನಶ್ಯಾಸ್ತದ ಒಂದು ತತ್ವ ಬಿಜ್ಜಳನಂತೆಯೇ ತನ್ನ ಅಭಿಮಾನ ಗೌರವಗಳಿಗೆ ಪಾತ್ರನಾಗಿದ್ದ ಸೋಮೇಶ್ವರನೆದುರಿಗೆ ತನ್ನ ದುಗುಡವನ್ನು ತೋಡಿಕೊಂಡದ್ದರಿಂದ ಕ್ರಮಿತನು ಈಗ ಪ್ರಕೃತಸ್ಥನಾಗಿದ್ದನು. ರಾಜಪುರೋಹಿತನಿಗೆ ಸಹಜವಾದ ಹಮ್ಮುಬಿಮ್ಮು ಮತ್ತೆ ಇಣಕುತ್ತಿದ್ದವು. ಎಂದಿನ ಸಲುಗೆಯಿಂದ ಅವನು ಮುಂದುವರಿದು ಹೇಳಿದನು: {{gap}}“ನನ್ನಿಂದ ಈ ಮಾತುಗಳನ್ನು ಕೇಳಿ ನಿಮಗೆ ಆಶ್ಚರ್ಯವಾಗಿರಬೇಕಲ್ಲವೆ, ಸೋಮೇಶ್ವರ? ಮಧುವರಸನ ಮೇಲಿನ ವೈಯಕ್ತಿಕ ವಿದ್ವೇಷದಿಂದ ನಾನು ರ್ವಣ<noinclude></noinclude> amqg75r2b8ad8mvkoaz3ipc7boowrk0 324161 324157 2026-06-03T03:18:55Z Shreelatha.Halemane 7642 /* Validated */ 324161 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೭೧}} ಪಾನೀಯಗಳನ್ನು ಹಿಡಿದು ನಿಂತಿದ್ದ ದಾಸಿಯರ ಸೇವೆ, ಈ ಎಲ್ಲ ಉಪಚಾರಗಳಿಂದ ಕ್ರಮಿತನ ಉದ್ರೇಕ ಶಾಂತವಾಗುತ್ತಿದ್ದಂತೆ ಸೋಮೇಶ್ವರನು, “ಮಹಾದ್ವಾರದಲ್ಲಿ ನನ್ನ ಸ್ವಾಗತಕ್ಕಾಗಿ ಸೇರಿದ್ದ ನಾಗರಿಕರಿಂದ ನಗರದ ದುರ್ಘಟನೆಯನ್ನು ತಿಳಿದೆ. ಅದರ ಕಾರಣರಾರೆಂಬುದನ್ನೂ ಅವರು ಸ್ಪಷ್ಟಪಡಿಸಿದರು. ಆದರೆ ಒಂದು ಸಾರಿಯಾದರೂ ಅವರು ನಿಮ್ಮ ಹೆಸರು ಹೇಳಲಿಲ್ಲ. ಚಿಂತೆಗೀಡಾದ ನಿಮ್ಮ ಮನಸ್ಸು ಇಲ್ಲದುದನ್ನು ಕಲ್ಪಿಸಿಕೊಳ್ಳುತ್ತಿದೆ,” ಎಂದು ಸಮಾಧಾನ ಪಡಿಸಿದನು. {{gap}}ಕ್ರಮಿತನು ಕೊಂಚ ಹೊತ್ತು ಮೌನವಾಗಿ ಕುಳಿತಿದ್ದನು. ಬಳಿಕ ತಲೆಯೆತ್ತಿ ಪಶ್ಚಾತ್ತಾಪದ ದೈನ್ಯಕಂಠದಿಂದ, “ಕೂಡಲ ಸಂಗಮದ ಸುದ್ದಿ ನಿಮಗಿನ್ನೂ ತಿಳಿದಿಲ್ಲವೆ?” ಎಂದನು. {{gap}}“ಏನಾಯಿತು ಅಲ್ಲಿ?” {{gap}}ಕಾತರನಾಗಿ ಕೇಳಿದನು ಸೋಮೇಶ್ವರ. {{gap}}“ಬಸವಣ್ಣನವರ ಅವಸಾನ” ನಿಟ್ಟುಸಿರಿಟ್ಟು ಕ್ರಮಿತನು ಹೇಳಿದನು“ಬಿಜ್ಜಳರಾಯರ ಕೊಲೆಯ ಸುದ್ದಿ ಕೇಳಿ ದುಃಖಾವೇಗದಿಂದ ಬಸವಣ್ಣನವರು ಅಸುನೀಗಿದರು. ತಮ್ಮ ಇಷ್ಟದೈವ ಕೂಡಲ ಸಂಗಮದೇವನಲ್ಲಿ ಐಕ್ಯವಾದರು. ಚಾಲುಕ್ಯ ರಾಜ್ಯದ ಧರ್ಮಜ್ಯೋತಿ ನಂದಿತು, ಸೋಮೇಶ್ವರ ! ಅವರು ಕಲ್ಯಾಣವನ್ನು ಬಿಟ್ಟದಿನವೇ ನಗರದ ಭಾಗ್ಯತಾರೆ ಅಸ್ತವಾಯಿತು!” {{gap}}ಬಸವಣ್ಣನವರ ಅವಸಾನ-ತಂದೆಯ ಕೊಲೆಯ ಸುದ್ದಿ ಕೇಳಿ ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಹೋಗಲು ಯಾರು ಕಾರಣರೋ ಆ ಪ್ರತಿಷ್ಠಾವಂತ ನಿಷ್ಠುರ ವ್ಯಕ್ತಿ, ರಾಜಪುರೋಹಿತ ನಾರಣಕ್ರಮಿತನು ಅವರ ನಿಧನದ ಸುದ್ದಿ ಕೇಳಿ ಕಣ್ಣೀರಿಡುತ್ತಿದ್ದಾನೆ! ಇದು ಕಲ್ಪನೆಯೇ! ಇಹಲೋಕದ ದ್ವೇಷ ದ್ವಂದ್ವಗಳಿಂದ ದೂರವಾದ ಯಾವುದೋ ಕಲ್ಪನಾಲೋಕದಲ್ಲಿರುವೆನೇ ನಾನು? -ಎಂದು ಯೋಚಿಸುತ್ತ ಸೋಮೇಶ್ವರನು ಮೌನವಾಗಿದ್ದನು. {{gap}}ಆಪ್ತರಲ್ಲಿ ಹೇಳಿಕೊಂಡಾಗ ಮನಸ್ಸಿನ ದುಃಖ ಶಾಂತವಾಗುವುದೆಂದು ಮನಶ್ಯಾಸ್ತದ ಒಂದು ತತ್ವ ಬಿಜ್ಜಳನಂತೆಯೇ ತನ್ನ ಅಭಿಮಾನ ಗೌರವಗಳಿಗೆ ಪಾತ್ರನಾಗಿದ್ದ ಸೋಮೇಶ್ವರನೆದುರಿಗೆ ತನ್ನ ದುಗುಡವನ್ನು ತೋಡಿಕೊಂಡದ್ದರಿಂದ ಕ್ರಮಿತನು ಈಗ ಪ್ರಕೃತಸ್ಥನಾಗಿದ್ದನು. ರಾಜಪುರೋಹಿತನಿಗೆ ಸಹಜವಾದ ಹಮ್ಮುಬಿಮ್ಮು ಮತ್ತೆ ಇಣಕುತ್ತಿದ್ದವು. ಎಂದಿನ ಸಲುಗೆಯಿಂದ ಅವನು ಮುಂದುವರಿದು ಹೇಳಿದನು: {{gap}}“ನನ್ನಿಂದ ಈ ಮಾತುಗಳನ್ನು ಕೇಳಿ ನಿಮಗೆ ಆಶ್ಚರ್ಯವಾಗಿರಬೇಕಲ್ಲವೆ, ಸೋಮೇಶ್ವರ? ಮಧುವರಸನ ಮೇಲಿನ ವೈಯಕ್ತಿಕ ವಿದ್ವೇಷದಿಂದ ನಾನು ರ್ವಣ<noinclude></noinclude> 37dr0egawbv5gnewk2jq1tp6tglk276 ಪುಟ:ಕ್ರಾಂತಿ ಕಲ್ಯಾಣ.pdf/೪೮೬ 104 86443 324176 203769 2026-06-03T03:33:58Z Shreesha Sharma 7840 /* Proofread */ 324176 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=ಮಹಾಪ್ರಸ್ಥಾನ|right=೪೭೩}} ಪರಿವಾರದೊಡನೆ ರಾಜಗೃಹವನ್ನು ಬಿಟ್ಟು ಧರ್ಮಾಧಿಕರಣದ ಸಮುಖದ ಚಾವಡಿಗೆ ಹೋದರು. ಆ ದಿನ ಅಲ್ಲಿ ಸಾಮಂತಾಧಿಕಾರಗಳ ರಹಸ್ಯ ಸಭೆ ಬಿಜ್ಜಳರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಶೈವಮಠಗಳನ್ನೆಲ್ಲ ಏಕಕಾಲದಲ್ಲಿ ನಾಶ ಮಾಡಬೇಕೆಂಬ ಮಾಧವ ನಾಯಕನ ಸಲಹೆ ಸಭೆಯಲ್ಲಿ ಚರ್ಚೆಗೆ ಬಂದಾಗ ಕರ್ಣದೇವ ತೀವ್ರವಾಗಿ ವಿರೋಧಿಸಿದನು. ಅಣ್ಣ ತಮ್ಮಂದಿರಿಗೆ ವಾದ ಬೆಳೆದು, ಕೋಪದಿಂದ ಕರ್ಣದೇವ ಸಭೆಯನ್ನು ಬಿಟ್ಟು ರಾಜಗೃಹಕ್ಕೆ ಹಿಂದಿರುಗಿದನು. ದೀವಟಿಗರ ವೇಷಧರಿಸಿದ್ದ ಜಗದೇಕಮಲ್ಲ ಬೊಮ್ಮರಸರು ಸಮುಖದ ಚಾವಡಿಯಲ್ಲಿಯೇ ಉಳಿದರು. ಸಭೆ ಮುಗಿದು ಬಿಜ್ಜಳರಾಯರು ಅರಮನೆಗೆ ಹೋದಾಗ ವೇಷಧಾರೀ ದೀವಟಿಗರು ಪರಿವಾರದೊಡನೆ ತಾವೂ ಅರಮನೆಯನ್ನು ಸೇರಿ, ಅಡಗಿದ್ದು, ಕೊಂಚ ಹೊತ್ತಿನ ಮೇಲೆ ಬಿಜ್ಜಳರಾಯರು ಏಕಾಕಿಯಾಗಿದ್ದಾಗ ಮೇಲೆ ಬಿದ್ದು ಕೊಂದರು. ಇದು ವಾಸ್ತವದಲ್ಲಿ ನಡೆದ ಘಟನೆ.” {{gap}}ಹತ್ಯೆಗೆ ಸಂಬಂಧಿಸಿದ ಈ ವಿವರಗಳನ್ನು ತಿಳಿಸುವುದಕ್ಕಾಗಿಯೇ ಕ್ರಮಿತನು ವೈರಾಗ್ಯದ ಸೋಗಿನಲ್ಲಿ ದರ್ಶನಕ್ಕಾಗಿ ಬಂದನೇ ಎಂದು ಸೋಮೇಶ್ವರನಿಗೆ ಸಂದೇಹ ಹುಟ್ಟಿತು. ಆದರೆ ಆ ದಿನ ಕ್ರಮಿತನ ನುಡಿಗಳಲ್ಲಿ ವಂಚನೆಗೆ ಎಡೆಯಿರಲಿಲ್ಲ. ಪಶ್ಚಾತ್ತಾಪದ ಜ್ವಾಲೆಯಿಂದ ಅವನ ಮನಸ್ಸಿನ ಮಾಲಿನ್ಯ ಕಳೆದು, ಪ್ರೋತ್ರೀಯ ಬ್ರಾಹ್ಮಣನಿಗೆ ಸಹಜವಾದ ಶಾಂತಿ ಶಿಷ್ಟಾಚಾರಗಳು ಕ್ರಮ ಕ್ರಮವಾಗಿ ಬೆಳಕಿಗೆ ಬರುತ್ತಿದ್ದವು. ಕೊಲೆಯ ಬಗೆಗೆ ವಿವರಗಳನ್ನು ತಿಳಿಯುವ ಕುತೂಹಲದಿಂದ ಸೋಮೇಶ್ವರನು, “ಆಮೇಲೆ ಹಂತಕರೇನಾದರು ? ಜಗದೇಕಮಲ್ಲನು ರಾಜಗೃಹಕ್ಕೆ ಹಿಂದಿರುಗಿದ್ದು ಹೇಗೆ ?” ಎಂದು ಕೇಳಿದನು. {{gap}}ಕ್ರಮಿತನು ಹೇಳಿದನು : "ಹಂತಕರು ಅರಮನೆಯಿಂದ ಹೊರಗೆ ಬಂದಾಗ ಕಾವಲು ಭಟರು ತಡೆದರು. ಹೋರಾಟ ನಡೆಯಿತು. ಇಬ್ಬರು ಭಟರನ್ನು ಕೊಂದು ಜಗದೇಕಮಲ್ಲನು ಮಡಿದನು. ಬೊಮ್ಮರಸ ತಪ್ಪಿಸಿಕೊಂಡನು. ಕೊಂಚ ಹೊತ್ತಿನ ಮೇಲೆ ಕೊಲೆಯ ಸುದ್ದಿ ತಿಳಿದು ಕರ್ಣದೇವ ಅರಮನೆಗೆ ಬಂದನು. ಸತ್ತು ಬಿದ್ದಿದ್ದವರಲ್ಲಿ ಜಗದೇಕಮಲ್ಲನನ್ನು ಗುರುತಿಸಿ ಅವನು, ಶವವನ್ನು ಇಲ್ಲಿಯೇ ಬಿಟ್ಟರೆ ರಾಜಗೃಹದ ರಕ್ಷಕನಾದ ತನ್ನ ಮೇಲೆ ಸಂದೇಹ ಬರಬಹುದೆಂದು ಭಾವಿಸಿ, ಚತುರತೆಯಿಂದ ಶವವನ್ನು ತನ್ನ ಮೇನೆಯಲ್ಲಿಟ್ಟುಕೊಂಡು ರಹಸ್ಯವಾಗಿ ರಾಜಗೃಹಕ್ಕೆ ತೆಗೆದುಕೊಂಡು ಹೋದನು. ಜಗದೇಕಮಲ್ಲನು ಅಸ್ವಸ್ಥನಾಗಿ ಸತ್ತನೆಂದು ಮರುದಿನ ಪ್ರಸಾರವಾಯಿತು. ಮರಣದ ಕಾರಣವನ್ನು ಮುಚ್ಚಿಡುವ ಉದ್ದೇಶದಿಂದ ಅವಸರದಲ್ಲಿ ಅಂತ್ಯಕ್ರಿಯೆ ನಡೆಯಿತು. ಬಿಜ್ಜಳರಾಯರ ಮರಣದಿಂದ ಪ್ರಕ್ಷುಬ್ಧರಾಗಿದ್ದ<noinclude></noinclude> fs1czodminh0vixv155fhdfz5zkmxpt 324180 324176 2026-06-03T03:38:27Z Shreelatha.Halemane 7642 /* Validated */ 324180 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=ಮಹಾಪ್ರಸ್ಥಾನ|right=೪೭೩}} ಪರಿವಾರದೊಡನೆ ರಾಜಗೃಹವನ್ನು ಬಿಟ್ಟು ಧರ್ಮಾಧಿಕರಣದ ಸಮುಖದ ಚಾವಡಿಗೆ ಹೋದರು. ಆ ದಿನ ಅಲ್ಲಿ ಸಾಮಂತಾಧಿಕಾರಗಳ ರಹಸ್ಯ ಸಭೆ ಬಿಜ್ಜಳರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಶೈವಮಠಗಳನ್ನೆಲ್ಲ ಏಕಕಾಲದಲ್ಲಿ ನಾಶ ಮಾಡಬೇಕೆಂಬ ಮಾಧವ ನಾಯಕನ ಸಲಹೆ ಸಭೆಯಲ್ಲಿ ಚರ್ಚೆಗೆ ಬಂದಾಗ ಕರ್ಣದೇವ ತೀವ್ರವಾಗಿ ವಿರೋಧಿಸಿದನು. ಅಣ್ಣ ತಮ್ಮಂದಿರಿಗೆ ವಾದ ಬೆಳೆದು, ಕೋಪದಿಂದ ಕರ್ಣದೇವ ಸಭೆಯನ್ನು ಬಿಟ್ಟು ರಾಜಗೃಹಕ್ಕೆ ಹಿಂದಿರುಗಿದನು. ದೀವಟಿಗರ ವೇಷಧರಿಸಿದ್ದ ಜಗದೇಕಮಲ್ಲ ಬೊಮ್ಮರಸರು ಸಮುಖದ ಚಾವಡಿಯಲ್ಲಿಯೇ ಉಳಿದರು. ಸಭೆ ಮುಗಿದು ಬಿಜ್ಜಳರಾಯರು ಅರಮನೆಗೆ ಹೋದಾಗ ವೇಷಧಾರೀ ದೀವಟಿಗರು ಪರಿವಾರದೊಡನೆ ತಾವೂ ಅರಮನೆಯನ್ನು ಸೇರಿ, ಅಡಗಿದ್ದು, ಕೊಂಚ ಹೊತ್ತಿನ ಮೇಲೆ ಬಿಜ್ಜಳರಾಯರು ಏಕಾಕಿಯಾಗಿದ್ದಾಗ ಮೇಲೆ ಬಿದ್ದು ಕೊಂದರು. ಇದು ವಾಸ್ತವದಲ್ಲಿ ನಡೆದ ಘಟನೆ.” {{gap}}ಹತ್ಯೆಗೆ ಸಂಬಂಧಿಸಿದ ಈ ವಿವರಗಳನ್ನು ತಿಳಿಸುವುದಕ್ಕಾಗಿಯೇ ಕ್ರಮಿತನು ವೈರಾಗ್ಯದ ಸೋಗಿನಲ್ಲಿ ದರ್ಶನಕ್ಕಾಗಿ ಬಂದನೇ ಎಂದು ಸೋಮೇಶ್ವರನಿಗೆ ಸಂದೇಹ ಹುಟ್ಟಿತು. ಆದರೆ ಆ ದಿನ ಕ್ರಮಿತನ ನುಡಿಗಳಲ್ಲಿ ವಂಚನೆಗೆ ಎಡೆಯಿರಲಿಲ್ಲ. ಪಶ್ಚಾತ್ತಾಪದ ಜ್ವಾಲೆಯಿಂದ ಅವನ ಮನಸ್ಸಿನ ಮಾಲಿನ್ಯ ಕಳೆದು, ಪ್ರೋತ್ರೀಯ ಬ್ರಾಹ್ಮಣನಿಗೆ ಸಹಜವಾದ ಶಾಂತಿ ಶಿಷ್ಟಾಚಾರಗಳು ಕ್ರಮ ಕ್ರಮವಾಗಿ ಬೆಳಕಿಗೆ ಬರುತ್ತಿದ್ದವು. ಕೊಲೆಯ ಬಗೆಗೆ ವಿವರಗಳನ್ನು ತಿಳಿಯುವ ಕುತೂಹಲದಿಂದ ಸೋಮೇಶ್ವರನು, “ಆಮೇಲೆ ಹಂತಕರೇನಾದರು ? ಜಗದೇಕಮಲ್ಲನು ರಾಜಗೃಹಕ್ಕೆ ಹಿಂದಿರುಗಿದ್ದು ಹೇಗೆ ?” ಎಂದು ಕೇಳಿದನು. {{gap}}ಕ್ರಮಿತನು ಹೇಳಿದನು : "ಹಂತಕರು ಅರಮನೆಯಿಂದ ಹೊರಗೆ ಬಂದಾಗ ಕಾವಲು ಭಟರು ತಡೆದರು. ಹೋರಾಟ ನಡೆಯಿತು. ಇಬ್ಬರು ಭಟರನ್ನು ಕೊಂದು ಜಗದೇಕಮಲ್ಲನು ಮಡಿದನು. ಬೊಮ್ಮರಸ ತಪ್ಪಿಸಿಕೊಂಡನು. ಕೊಂಚ ಹೊತ್ತಿನ ಮೇಲೆ ಕೊಲೆಯ ಸುದ್ದಿ ತಿಳಿದು ಕರ್ಣದೇವ ಅರಮನೆಗೆ ಬಂದನು. ಸತ್ತು ಬಿದ್ದಿದ್ದವರಲ್ಲಿ ಜಗದೇಕಮಲ್ಲನನ್ನು ಗುರುತಿಸಿ ಅವನು, ಶವವನ್ನು ಇಲ್ಲಿಯೇ ಬಿಟ್ಟರೆ ರಾಜಗೃಹದ ರಕ್ಷಕನಾದ ತನ್ನ ಮೇಲೆ ಸಂದೇಹ ಬರಬಹುದೆಂದು ಭಾವಿಸಿ, ಚತುರತೆಯಿಂದ ಶವವನ್ನು ತನ್ನ ಮೇನೆಯಲ್ಲಿಟ್ಟುಕೊಂಡು ರಹಸ್ಯವಾಗಿ ರಾಜಗೃಹಕ್ಕೆ ತೆಗೆದುಕೊಂಡು ಹೋದನು. ಜಗದೇಕಮಲ್ಲನು ಅಸ್ವಸ್ಥನಾಗಿ ಸತ್ತನೆಂದು ಮರುದಿನ ಪ್ರಸಾರವಾಯಿತು. ಮರಣದ ಕಾರಣವನ್ನು ಮುಚ್ಚಿಡುವ ಉದ್ದೇಶದಿಂದ ಅವಸರದಲ್ಲಿ ಅಂತ್ಯಕ್ರಿಯೆ ನಡೆಯಿತು. ಬಿಜ್ಜಳರಾಯರ ಮರಣದಿಂದ ಪ್ರಕ್ಷುಬ್ಧರಾಗಿದ್ದ<noinclude></noinclude> ldnad4gw3cen6cxxo861rme2zz7q1xk ಪುಟ:ಕ್ರಾಂತಿ ಕಲ್ಯಾಣ.pdf/೫೦೧ 104 86445 324145 203771 2026-06-03T02:44:34Z Shreesha Sharma 7840 /* Proofread */ 324145 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೮೮|right=ಕ್ರಾಂತಿ ಕಲ್ಯಾಣ}} the divines are dumb, the lawyers assent, the laws and constitution gives way, neither justice nor humanity avail.” {{gap}}ಎಂದು ಹೇಳಿದುದನ್ನು ಬಿಜ್ಜಳನಿಗೆ ಅನ್ವಯಿಸಬಹುದು. ಚಾಲುಕ್ಯ ಅರಸರಲ್ಲಿ ವಿಖ್ಯಾತನಾದ ಆರನೆಯ ವಿಕ್ರಮಾದಿತ್ಯನು ವಿಜ್ಞಾನೇಶ್ವರ ಪಂಡಿತನ ನೇತೃತ್ವದಲ್ಲಿ, ರಾಜ್ಯದ ಶಿಷ್ಟ ಸಾಮಂತ ಪ್ರತಿನಿಧಿಗಳ ಸಹಾಯದಿಂದ ರೂಪಿಸಿ ಆಚರಣೆಗೆ ತಂದಿದ್ದ ಆಡಳಿತ ಪದ್ಧತಿ ಬಿಜ್ಜಳನ ಕಾಲಕ್ಕೆ ನೀರಿನ ಮೇಲನ ಬರಹವಾಗಿ ರಾಜ್ಯಾದ್ಯಂತ ಪ್ರಜಾಪೀಡೆ ತಾಂಡವವಾಡುತ್ತಿತ್ತು. ನಿರಂಕುಶ ದಬ್ಬಾಳಿಕೆಯ ಕಾರ್ಮೊಡ ದೇಶದ ಮೇಲೆ ಹರಡಿತ್ತು. ಮಧುವರಸ ಹರಳಯ್ಯಗಳ ಮೇಲಿನ ವರ್ಣಸಂಕರದ ಆಪಾದನೆ, ಅದರ ವಿಚಾರಣೆಯಲ್ಲಿ ಧರ್ಮಾಧಿಕರಣ ಅನುಸರಿಸಿದ ವಿಧಾನ, ಆ ಸಂದರ್ಭದಲ್ಲಿ ಮತ್ತು ಆ ತರುವಾಯ ಬಿಜ್ಜಳನ ಅಧಿಕಾರಿಗಳು ಶರಣರ ಮೇಲೆ ನಡೆಸಿದ ಹಿಂಸಾಕೃತ್ಯಗಳು, ಇವುಗಳಿಂದ ಆಗಿನ ಪರಿಸ್ಥಿತಿಯ ಒಂದು ಮುಖವನ್ನು ಕಾಣಬಹುದು. {{gap}}ಬಿಜ್ಜಳನ ಈ ಅಧಃಪತನಕ್ಕೆ ಕಾರಣಗಳೇನೆಂಬುದನ್ನು ತಿಳಿಯಲು ಹೆಚ್ಚು ಶ್ರಮಿಸಬೇಕಾಗಿಲ್ಲ. ಮನಃಶಾಸ್ತ್ರ ಮತ್ತು ಇತಿಹಾಸದ ತುಲನಾತ್ಮಕ ಸಂಶೋಧನೆಯಿಂದ ಅದಕ್ಕೆ ಸಮರ್ಪಕ ಉತ್ತರಗಳನ್ನು ಪಡೆಯಬಹುದು. ಇತಿಹಾಸ ತಜ್ಞರಲ್ಲಿ ವಿಖ್ಯಾತನಾದ ಲಾರ್ಡ್ಆಕ್ಟನ್‌ನು ಮಾನವನ ಮೇಲೆ ನಿರಂಕುಶ ಸರ್ವಾಧಿಕಾರದ ಪ್ರಭಾವವನ್ನು ಕುರಿತು, {{gap}}“Power always corrupts. Absolute power corrupts absolutely. All great men are bad.” {{gap}}ಎಂದು ಹೇಳಿದ್ದಾನೆ. {{gap}}“In general great poets, artists, and saints, as well as conquerors are strongly sexed.” {{gap}}(Alex Carrel-Man the Unknown.) {{gap}}ಎಂದು ಮನಃಶಾಸ್ತ್ರ ಹೇಳುತ್ತದೆ. {{gap}}ವಿಜಯಗರ್ವಿತನೂ ನಿರಂಕುಶ ಸರ್ವಾಧಿಕಾರಿಯೂ ಆಗಿದ್ದ ಬಿಜ್ಜಳನು ಜಗತ್ತಿನ ಎಲ್ಲ ಸರ್ವಾಧಿಕಾರಿಗಳಂತೆ ಧರ್ಮನೀತಿಗಳನ್ನು ತುಳಿದಿಟ್ಟು, ಜನಸಾಮಾನ್ಯರಿಗೆ ಉನ್ಮಾದದಂತೆ ತೋರಬಹುದಾದ ಅಸಂಯತ ಉದ್ರೇಕಪೂರ್ಣ ದಬ್ಬಾಳಿಕೆ ಹಿಂಸಾಕೃತ್ಯಗಳಿಗೆ ತೊಡಗಿದುದು ಸಹಜವಾಗಿದೆ. ಸೋತ ಅರಸರ ಮಡದಿ ಮಕ್ಕಳನ್ನು ಬಲಾತ್ಕಾರದಿಂದ ತಮ್ಮ ಅಂತಃಪುರಗಳಿಗೆ ಸೇರಿಸಿಕೊಳ್ಳುವ<noinclude></noinclude> t2r0hs68uuegqzu2no9nbq08p6a0mpt 324155 324145 2026-06-03T02:59:03Z Shreelatha.Halemane 7642 /* Validated */ 324155 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೮೮|right=ಕ್ರಾಂತಿ ಕಲ್ಯಾಣ}} the divines are dumb, the lawyers assent, the laws and constitution gives way, neither justice nor humanity avail.” {{gap}}ಎಂದು ಹೇಳಿದುದನ್ನು ಬಿಜ್ಜಳನಿಗೆ ಅನ್ವಯಿಸಬಹುದು. ಚಾಲುಕ್ಯ ಅರಸರಲ್ಲಿ ವಿಖ್ಯಾತನಾದ ಆರನೆಯ ವಿಕ್ರಮಾದಿತ್ಯನು ವಿಜ್ಞಾನೇಶ್ವರ ಪಂಡಿತನ ನೇತೃತ್ವದಲ್ಲಿ, ರಾಜ್ಯದ ಶಿಷ್ಟ ಸಾಮಂತ ಪ್ರತಿನಿಧಿಗಳ ಸಹಾಯದಿಂದ ರೂಪಿಸಿ ಆಚರಣೆಗೆ ತಂದಿದ್ದ ಆಡಳಿತ ಪದ್ಧತಿ ಬಿಜ್ಜಳನ ಕಾಲಕ್ಕೆ ನೀರಿನ ಮೇಲನ ಬರಹವಾಗಿ ರಾಜ್ಯಾದ್ಯಂತ ಪ್ರಜಾಪೀಡೆ ತಾಂಡವವಾಡುತ್ತಿತ್ತು. ನಿರಂಕುಶ ದಬ್ಬಾಳಿಕೆಯ ಕಾರ್ಮೊಡ ದೇಶದ ಮೇಲೆ ಹರಡಿತ್ತು. ಮಧುವರಸ ಹರಳಯ್ಯಗಳ ಮೇಲಿನ ವರ್ಣಸಂಕರದ ಆಪಾದನೆ, ಅದರ ವಿಚಾರಣೆಯಲ್ಲಿ ಧರ್ಮಾಧಿಕರಣ ಅನುಸರಿಸಿದ ವಿಧಾನ, ಆ ಸಂದರ್ಭದಲ್ಲಿ ಮತ್ತು ಆ ತರುವಾಯ ಬಿಜ್ಜಳನ ಅಧಿಕಾರಿಗಳು ಶರಣರ ಮೇಲೆ ನಡೆಸಿದ ಹಿಂಸಾಕೃತ್ಯಗಳು, ಇವುಗಳಿಂದ ಆಗಿನ ಪರಿಸ್ಥಿತಿಯ ಒಂದು ಮುಖವನ್ನು ಕಾಣಬಹುದು. {{gap}}ಬಿಜ್ಜಳನ ಈ ಅಧಃಪತನಕ್ಕೆ ಕಾರಣಗಳೇನೆಂಬುದನ್ನು ತಿಳಿಯಲು ಹೆಚ್ಚು ಶ್ರಮಿಸಬೇಕಾಗಿಲ್ಲ. ಮನಃಶಾಸ್ತ್ರ ಮತ್ತು ಇತಿಹಾಸದ ತುಲನಾತ್ಮಕ ಸಂಶೋಧನೆಯಿಂದ ಅದಕ್ಕೆ ಸಮರ್ಪಕ ಉತ್ತರಗಳನ್ನು ಪಡೆಯಬಹುದು. ಇತಿಹಾಸ ತಜ್ಞರಲ್ಲಿ ವಿಖ್ಯಾತನಾದ ಲಾರ್ಡ್ಆಕ್ಟನ್‌ನು ಮಾನವನ ಮೇಲೆ ನಿರಂಕುಶ ಸರ್ವಾಧಿಕಾರದ ಪ್ರಭಾವವನ್ನು ಕುರಿತು, {{gap}}“Power always corrupts. Absolute power corrupts absolutely. All great men are bad.” {{gap}}ಎಂದು ಹೇಳಿದ್ದಾನೆ. {{gap}}“In general great poets, artists, and saints, as well as conquerors are strongly sexed.” {{gap}}(Alex Carrel-Man the Unknown.) {{gap}}ಎಂದು ಮನಃಶಾಸ್ತ್ರ ಹೇಳುತ್ತದೆ. {{gap}}ವಿಜಯಗರ್ವಿತನೂ ನಿರಂಕುಶ ಸರ್ವಾಧಿಕಾರಿಯೂ ಆಗಿದ್ದ ಬಿಜ್ಜಳನು ಜಗತ್ತಿನ ಎಲ್ಲ ಸರ್ವಾಧಿಕಾರಿಗಳಂತೆ ಧರ್ಮನೀತಿಗಳನ್ನು ತುಳಿದಿಟ್ಟು, ಜನಸಾಮಾನ್ಯರಿಗೆ ಉನ್ಮಾದದಂತೆ ತೋರಬಹುದಾದ ಅಸಂಯತ ಉದ್ರೇಕಪೂರ್ಣ ದಬ್ಬಾಳಿಕೆ ಹಿಂಸಾಕೃತ್ಯಗಳಿಗೆ ತೊಡಗಿದುದು ಸಹಜವಾಗಿದೆ. ಸೋತ ಅರಸರ ಮಡದಿ ಮಕ್ಕಳನ್ನು ಬಲಾತ್ಕಾರದಿಂದ ತಮ್ಮ ಅಂತಃಪುರಗಳಿಗೆ ಸೇರಿಸಿಕೊಳ್ಳುವ<noinclude></noinclude> 35rl9hfpwpu43vqeyy0a9d4hz3tkx9q ಪುಟ:ಕ್ರಾಂತಿ ಕಲ್ಯಾಣ.pdf/೪೯೭ 104 86446 324149 203772 2026-06-03T02:55:29Z Shreesha Sharma 7840 /* Proofread */ 324149 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೮೪|right=ಕ್ರಾಂತಿ ಕಲ್ಯಾಣ}} {{gap}}ಕ್ರಿ.ಶ. ಏಳನೇ ಶತಮಾನದಲ್ಲಿ ಮಧ್ಯಭಾರತದ ಕಲಚೂರ್ಯರು ರಾಜ್ಯಭ್ರಷ್ಟರಾಗಿ ದಕ್ಷಿಣ ಭಾರತಕ್ಕೆ ವಲಸೆ ಬಂದರು. ಅವರ ವಂಶೀಯರಿಗೆ ಕಲ್ಯಾಣಿಯ ಚಾಲುಕ್ಯ ಅರಸರ ಆಶ್ರಯ ದೊರಕಿತು. ಅವರಲ್ಲಿ ಪ್ರಖ್ಯಾತನಾದ ಬಿಜ್ಜಳನು ತನ್ನ ಆಶ್ರಯ ದಾತನಾದ ನೂರ್ಮಡಿ ತೈಲಪನನ್ನು ಸೆರೆಯಲ್ಲಿಟ್ಟು ರಾಜ್ಯವನ್ನು ಅಪಹರಿಸಿದನು. ಅವನ ಆಳ್ವಿಕೆಯಲ್ಲಿ ಪ್ರವರ್ಧಮಾನವಾದ ಶರಣಧರ್ಮ ಕೊನೆಕೊನೆಗೆ ಅವನಿಂದಲೆ ಕಷ್ಟಕ್ಕೀಡಾಯಿತು. ಸಂಪ್ರದಾಯಗಳ ಅಂಧಶಕ್ತಿಗೆ ಅಧೀನರಾಗಿ ಅವನತಿಯ ಮಾರ್ಗ ಹಿಡಿದಿದ್ದ ಆಗಿನ ಕಾಲದ ಜನರನ್ನೂ, ಅವರ ಧಾರ್ಮಿಕ ಭರವಸೆಗಳನ್ನೂ ಸುಧಾರಿಸಿ ಅವರನ್ನು ಪ್ರಗತಿಪಥದಲ್ಲಿ ನಡೆಸಿದ ಮಹಾಪರಾಧಕ್ಕಾಗಿ ಶರಣರು ಬಿಜ್ಜಳನ ಆಕ್ರೋಶಕ್ಕೆ ಪಾತ್ರರಾದರು. ಕೊನೆಗೆ ಬಿಜ್ಜಳನ ಹಿಂಸೆಯಿಂದ ಪಾರಾಗಲು ಅವರು ಕಲ್ಯಾಣವನ್ನೇ ಬಿಡಬೇಕಾಯಿತು. ಅದೇ ಸಮಯಕ್ಕೆ ಚಾಲುಕ್ಯ ರಾಜಸತ್ತೆಯ ಪುನರ್‌ಪ್ರತಿಷ್ಠೆಗಾಗಿ ನಡೆಯುತ್ತಿದ್ದ ಸಂಚಿನಲ್ಲಿ ಬಿಜ್ಜಳನು ಹತನಾದನು. ಅವನ ಪುತ್ರರು ಹೆಚ್ಚು ಕಾಲ ಆಳಲು ಶಕ್ತರಾಗಲಿಲ್ಲ. {{gap}}ಯಾವ ಧರ್ಮವನ್ನು ಬಿಜ್ಜಳನು ಹಿಂಸೆ ದಬ್ಬಾಳಿಕೆಗಳಿಂದ ನಿರ್ಮೂಲಗೊಳಿಸಲು ಪ್ರಯತ್ನಿಸಿ ವಿಫಲನಾದನೋ ಆ ಶರಣಧರ್ಮ ಕಾಲಕ್ರಮದಲ್ಲಿ ಚಾಲುಕ್ಯ ಹೊಯ್ಸಳ ರಾಜ್ಯಗಳ ಪ್ರಭಾವಶಾಲೀ ಧರ್ಮವಾಯಿತು. ಕನ್ನಡನಾಡು ನುಡಿಗಳಿಗೆ ಶರಣರು ಅಪಾರ ಸೇವೆ ಸಲ್ಲಿಸಿದರು. ಬಿಜ್ಜಳನ ಹೆಸರು ಇತಿಹಾಸದಲ್ಲಿ ಇನ್ನೂ ಉಳಿದಿರುವುದು ಆ ಶರಣಧರ್ಮದ ಪ್ರಭಾವದಿಂದಲೆ ಆಗಿದೆ. {{gap}}ಇದೇನು ಯೋಗಾಯೋಗವೆ ?ವಿಧಿವಿಲಾಸವೆ ? ಕಾಲಕರ್ಮವಿಪಾಕದ ವೈಚಿತ್ರ್ಯವೇ? {{center|ಕಾಲಾಯ ತಸ್ಯೆ ನಮಃ}}<noinclude></noinclude> q62q83u7lldhuibp3p0lpl4ipquvw55 324151 324149 2026-06-03T02:56:18Z Shreelatha.Halemane 7642 /* Validated */ 324151 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೮೪|right=ಕ್ರಾಂತಿ ಕಲ್ಯಾಣ}} {{gap}}ಕ್ರಿ.ಶ. ಏಳನೇ ಶತಮಾನದಲ್ಲಿ ಮಧ್ಯಭಾರತದ ಕಲಚೂರ್ಯರು ರಾಜ್ಯಭ್ರಷ್ಟರಾಗಿ ದಕ್ಷಿಣ ಭಾರತಕ್ಕೆ ವಲಸೆ ಬಂದರು. ಅವರ ವಂಶೀಯರಿಗೆ ಕಲ್ಯಾಣಿಯ ಚಾಲುಕ್ಯ ಅರಸರ ಆಶ್ರಯ ದೊರಕಿತು. ಅವರಲ್ಲಿ ಪ್ರಖ್ಯಾತನಾದ ಬಿಜ್ಜಳನು ತನ್ನ ಆಶ್ರಯ ದಾತನಾದ ನೂರ್ಮಡಿ ತೈಲಪನನ್ನು ಸೆರೆಯಲ್ಲಿಟ್ಟು ರಾಜ್ಯವನ್ನು ಅಪಹರಿಸಿದನು. ಅವನ ಆಳ್ವಿಕೆಯಲ್ಲಿ ಪ್ರವರ್ಧಮಾನವಾದ ಶರಣಧರ್ಮ ಕೊನೆಕೊನೆಗೆ ಅವನಿಂದಲೆ ಕಷ್ಟಕ್ಕೀಡಾಯಿತು. ಸಂಪ್ರದಾಯಗಳ ಅಂಧಶಕ್ತಿಗೆ ಅಧೀನರಾಗಿ ಅವನತಿಯ ಮಾರ್ಗ ಹಿಡಿದಿದ್ದ ಆಗಿನ ಕಾಲದ ಜನರನ್ನೂ, ಅವರ ಧಾರ್ಮಿಕ ಭರವಸೆಗಳನ್ನೂ ಸುಧಾರಿಸಿ ಅವರನ್ನು ಪ್ರಗತಿಪಥದಲ್ಲಿ ನಡೆಸಿದ ಮಹಾಪರಾಧಕ್ಕಾಗಿ ಶರಣರು ಬಿಜ್ಜಳನ ಆಕ್ರೋಶಕ್ಕೆ ಪಾತ್ರರಾದರು. ಕೊನೆಗೆ ಬಿಜ್ಜಳನ ಹಿಂಸೆಯಿಂದ ಪಾರಾಗಲು ಅವರು ಕಲ್ಯಾಣವನ್ನೇ ಬಿಡಬೇಕಾಯಿತು. ಅದೇ ಸಮಯಕ್ಕೆ ಚಾಲುಕ್ಯ ರಾಜಸತ್ತೆಯ ಪುನರ್‌ಪ್ರತಿಷ್ಠೆಗಾಗಿ ನಡೆಯುತ್ತಿದ್ದ ಸಂಚಿನಲ್ಲಿ ಬಿಜ್ಜಳನು ಹತನಾದನು. ಅವನ ಪುತ್ರರು ಹೆಚ್ಚು ಕಾಲ ಆಳಲು ಶಕ್ತರಾಗಲಿಲ್ಲ. {{gap}}ಯಾವ ಧರ್ಮವನ್ನು ಬಿಜ್ಜಳನು ಹಿಂಸೆ ದಬ್ಬಾಳಿಕೆಗಳಿಂದ ನಿರ್ಮೂಲಗೊಳಿಸಲು ಪ್ರಯತ್ನಿಸಿ ವಿಫಲನಾದನೋ ಆ ಶರಣಧರ್ಮ ಕಾಲಕ್ರಮದಲ್ಲಿ ಚಾಲುಕ್ಯ ಹೊಯ್ಸಳ ರಾಜ್ಯಗಳ ಪ್ರಭಾವಶಾಲೀ ಧರ್ಮವಾಯಿತು. ಕನ್ನಡನಾಡು ನುಡಿಗಳಿಗೆ ಶರಣರು ಅಪಾರ ಸೇವೆ ಸಲ್ಲಿಸಿದರು. ಬಿಜ್ಜಳನ ಹೆಸರು ಇತಿಹಾಸದಲ್ಲಿ ಇನ್ನೂ ಉಳಿದಿರುವುದು ಆ ಶರಣಧರ್ಮದ ಪ್ರಭಾವದಿಂದಲೆ ಆಗಿದೆ. {{gap}}ಇದೇನು ಯೋಗಾಯೋಗವೆ ?ವಿಧಿವಿಲಾಸವೆ ? ಕಾಲಕರ್ಮವಿಪಾಕದ ವೈಚಿತ್ರ್ಯವೇ? {{center|ಕಾಲಾಯ ತಸ್ಯೆ ನಮಃ}}<noinclude></noinclude> c3x5fndy8z92n16f2cub81p4rqpj5ls ಪುಟ:ಕ್ರಾಂತಿ ಕಲ್ಯಾಣ.pdf/೪೯೯ 104 86447 324147 203773 2026-06-03T02:51:32Z Shreesha Sharma 7840 /* Proofread */ 324147 proofread-page text/x-wiki <noinclude><pagequality level="3" user="Shreesha Sharma" /></noinclude>{{rh|center=|left=೪೮೬|right=ಕ್ರಾಂತಿ ಕಲ್ಯಾಣ}} ವಿಚಿತ್ರ ಚಿಕಿತ್ಸಾ ವಿಧಾನ, ಲಾವಣ್ಯವತಿ ಶಿಲವಂತರ ವಿವಾಹ, ನಾರಣ ಕ್ರಮಿತನಿಂದ ಆ ವಿವಾಹಕ್ಕೆ ಪ್ರತಿಭಟನೆ, ಬಿಜ್ಜಳನಿಂದ ವರ್ಣಸಂಕರವನ್ನು ಕುರಿತ ಮನವಿಯ ವಿಚಾರಣೆ, ಬಸವೇಶ್ವರನ ದೇಶನಿರ್ವಾಸನ, ಈ ಘಟನೆಗಳನ್ನು ನಿರೂಪಿಸಿದೆ. ಆರನೆಯ ಮತ್ತು ಕೊನೆಯ ಭಾಗವಾದ, “ಕ್ರಾಂತಿ ಕಲ್ಯಾಣದಲ್ಲಿ ಬಸವೇಶ್ವರನ ನಿರ್ವಾಸಾನಂತರ ಕಲ್ಯಾಣದಲ್ಲಿ ತಲೆದೋರಿದ ನಿರಾಶೆಯ ಪರಿಸ್ಥಿತಿ, ತನ್ನ ವಿರುದ್ಧ ನಡೆಯುತ್ತಿದ್ದ ಸಂಚನ್ನು ಎದುರಿಸಲು ಬಿಜ್ಜಳನ ತಂತ್ರ ಶರಣಧರ್ಮದ ವಿನಾಶಕ್ಕಾಗಿ ಬಿಜ್ಜಳನ ನಿರ್ಧಾರ, ಮಧುವರಸಾದಿಗಳ ಕಗ್ಗೂಲೆ, ಜಗದೇಕಮಲ್ಲ-ಬೊಮ್ಮರಸರಿಂದ ಬಿಜ್ಜಳನ ವಧೆಗೆ ಹೂಡಿದ ಸಂಚು ಕಾರ್ಯಗತವಾದುದು, ಬಿಜ್ಜಳನ ದಬ್ಬಾಳಿಕೆ ದುರಾಡಳಿತಗಳಿಂದ ತಪ್ಪಿಸಿಕೊಳ್ಳಲು ಶರಣರು ಕಲ್ಯಾಣವನ್ನು ಬಿಟ್ಟು ಹೋದದ್ದು, ಅದರಿಂದ ಶರಣರಿಗಾದ ಕಷ್ಟ ಪರಂಪರೆಗಳು, ಪರಿಸಮಾಪ್ತಿ, ಈ ಪ್ರಸಂಗಗಳನ್ನು ವಿವರಿಸಿದೆ. ಇದರೊಡನೆ ಅಖ್ಯಾಯಿಕೆಯ ಉತ್ತರಾರ್ಧ ಮುಗಿಯುತ್ತದೆ. ಈ ಎಲ್ಲ ಘಟನೆಗಳ ಬಗೆಗೆ ಚರಿತ್ರೆ ಪುರಾಣ, ದಂತಕಥೆಗಳಲ್ಲಿಯೂ ಶರಣರ ವಚನಗಳೇ ಮೊದಲಾದುವುಗಳಲ್ಲಿಯೂ ದೊರಕುವ, ಅನೇಕ ಸಂದರ್ಭಗಳಲ್ಲಿ ಪರಸ್ಪರ ವಿಸಂವಾದಿಯಾದ ಉಲ್ಲೇಖಗಳನ್ನು ಕಲ್ಪನೆಯ ಆಶ್ರಯದಿಂದ ಸಮನ್ವಯಗೊಳಿಸಿ, ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ಪುನರಚಿಸಲು ಪ್ರಸ್ತುತ ಕಾದಂಬರಿಯಲ್ಲಿ ಪ್ರಯತ್ನಿಸಿದೆ. {{gap}}ಐತಿಹಾಸಿಕ ವ್ಯಕ್ತಿಗಳಾದ ಜಗದೇಕಮಲ್ಲ-ಬೊಮ್ಮರಸರೇ ಪುರಾಣ ದಂತಕಥೆಗಳ ಜಗದೇವ-ಮಲ್ಲಬೊಮ್ಮರೆಂಬುದು ಈ ಲೇಖಕರ ಗ್ರಹಿಕೆ. ಹೆಸರುಗಳನ್ನು ಪಲ್ಲಟಗೊಳಿಸಿ ವಾಸ್ತವವ್ಯಕ್ತಿಗಳನ್ನು ಸೂಚ್ಯವಾಗಿ ನಿರ್ದೆಶಿಸುವ ಕವಿ ಸಮಯವು ನಮ್ಮಲ್ಲಿ ಹಿಂದಿನಿಂದ ಪ್ರಚಾರದಲ್ಲಿರುವ ಸಂಗತಿಯು ನಮ್ಮ ಪ್ರಾಚೀನ ಸಾಹಿತ್ಯದ ಅಧ್ಯಯನದಿಂದ ತಿಳಿದುಬರುವುದು. {{gap}}“ಕಲಚುರಿಗಳ ಕರ್ತೃತ್ವವು ಕಟ್ಟುವುದಕ್ಕಿಂತ ಕೆಡಿಸುವ ಕಾರ್ಯದಲ್ಲಿ ಹೆಚ್ಚಾಗಿ ವ್ಯಯವಾದುದರಿಂದ ಅವರ ಕೈವಾಡವನ್ನು ಕನ್ನಡ ನಾಡಿನ ಚಾರಿತ್ರಿಕ ವೃತ್ತಾಂತದಲ್ಲಿ ನಾವು ಮರೆಯುವಂತಿಲ್ಲ.” {{gap}}“ಯುದ್ದಗಳೂ ಕಲಹಗಳೂ ಆಗಾಗ ನಡೆಯುತ್ತಿರುವಾಗಲೂ ಒಟ್ಟಿನ ಮೇಲೆ ಸುಖಶಾಂತಿಯಿಂದ ಬಾಳಿದ ಕನ್ನಡ ನಾಡಿನಲ್ಲಿ ಕಲಚುರಿಗಳ ಆಕ್ರಮಣದಿಂದ ವಿಷಮ ಪರಿಸ್ಥಿತಿ ನಿರ್ಮಾಣವಾಯಿತು. ರಾಜಕೀಯ ರಂಗದಲ್ಲಿ ಮಾತ್ರವಲ್ಲ, ಇತರ ರಂಗಗಳಲ್ಲಿಯೂ ಇದೇ ಕಾಲಕ್ಕೆ ಗಲಭೆಗಳಿದ್ದವು. ಹಿಂಸಾಮಯ ಅತಿಕ್ರಮಣದಿಂದ ಆರಂಭವಾದ ಕಲಚುರಿ ರಾಜ್ಯಕ್ರಾಂತಿ ಬಗೆಬಗೆಯ ರಾಜಕೀಯ<noinclude></noinclude> hcr9o3ghf0eb5u1e7iuozd32stift83 324153 324147 2026-06-03T02:56:37Z Shreelatha.Halemane 7642 /* Validated */ 324153 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center=|left=೪೮೬|right=ಕ್ರಾಂತಿ ಕಲ್ಯಾಣ}} ವಿಚಿತ್ರ ಚಿಕಿತ್ಸಾ ವಿಧಾನ, ಲಾವಣ್ಯವತಿ ಶಿಲವಂತರ ವಿವಾಹ, ನಾರಣ ಕ್ರಮಿತನಿಂದ ಆ ವಿವಾಹಕ್ಕೆ ಪ್ರತಿಭಟನೆ, ಬಿಜ್ಜಳನಿಂದ ವರ್ಣಸಂಕರವನ್ನು ಕುರಿತ ಮನವಿಯ ವಿಚಾರಣೆ, ಬಸವೇಶ್ವರನ ದೇಶನಿರ್ವಾಸನ, ಈ ಘಟನೆಗಳನ್ನು ನಿರೂಪಿಸಿದೆ. ಆರನೆಯ ಮತ್ತು ಕೊನೆಯ ಭಾಗವಾದ, “ಕ್ರಾಂತಿ ಕಲ್ಯಾಣದಲ್ಲಿ ಬಸವೇಶ್ವರನ ನಿರ್ವಾಸಾನಂತರ ಕಲ್ಯಾಣದಲ್ಲಿ ತಲೆದೋರಿದ ನಿರಾಶೆಯ ಪರಿಸ್ಥಿತಿ, ತನ್ನ ವಿರುದ್ಧ ನಡೆಯುತ್ತಿದ್ದ ಸಂಚನ್ನು ಎದುರಿಸಲು ಬಿಜ್ಜಳನ ತಂತ್ರ ಶರಣಧರ್ಮದ ವಿನಾಶಕ್ಕಾಗಿ ಬಿಜ್ಜಳನ ನಿರ್ಧಾರ, ಮಧುವರಸಾದಿಗಳ ಕಗ್ಗೂಲೆ, ಜಗದೇಕಮಲ್ಲ-ಬೊಮ್ಮರಸರಿಂದ ಬಿಜ್ಜಳನ ವಧೆಗೆ ಹೂಡಿದ ಸಂಚು ಕಾರ್ಯಗತವಾದುದು, ಬಿಜ್ಜಳನ ದಬ್ಬಾಳಿಕೆ ದುರಾಡಳಿತಗಳಿಂದ ತಪ್ಪಿಸಿಕೊಳ್ಳಲು ಶರಣರು ಕಲ್ಯಾಣವನ್ನು ಬಿಟ್ಟು ಹೋದದ್ದು, ಅದರಿಂದ ಶರಣರಿಗಾದ ಕಷ್ಟ ಪರಂಪರೆಗಳು, ಪರಿಸಮಾಪ್ತಿ, ಈ ಪ್ರಸಂಗಗಳನ್ನು ವಿವರಿಸಿದೆ. ಇದರೊಡನೆ ಅಖ್ಯಾಯಿಕೆಯ ಉತ್ತರಾರ್ಧ ಮುಗಿಯುತ್ತದೆ. ಈ ಎಲ್ಲ ಘಟನೆಗಳ ಬಗೆಗೆ ಚರಿತ್ರೆ ಪುರಾಣ, ದಂತಕಥೆಗಳಲ್ಲಿಯೂ ಶರಣರ ವಚನಗಳೇ ಮೊದಲಾದುವುಗಳಲ್ಲಿಯೂ ದೊರಕುವ, ಅನೇಕ ಸಂದರ್ಭಗಳಲ್ಲಿ ಪರಸ್ಪರ ವಿಸಂವಾದಿಯಾದ ಉಲ್ಲೇಖಗಳನ್ನು ಕಲ್ಪನೆಯ ಆಶ್ರಯದಿಂದ ಸಮನ್ವಯಗೊಳಿಸಿ, ಕಲ್ಯಾಣಕ್ರಾಂತಿಯ ಕೊನೆಯ ದಿನಗಳನ್ನು ಪುನರಚಿಸಲು ಪ್ರಸ್ತುತ ಕಾದಂಬರಿಯಲ್ಲಿ ಪ್ರಯತ್ನಿಸಿದೆ. {{gap}}ಐತಿಹಾಸಿಕ ವ್ಯಕ್ತಿಗಳಾದ ಜಗದೇಕಮಲ್ಲ-ಬೊಮ್ಮರಸರೇ ಪುರಾಣ ದಂತಕಥೆಗಳ ಜಗದೇವ-ಮಲ್ಲಬೊಮ್ಮರೆಂಬುದು ಈ ಲೇಖಕರ ಗ್ರಹಿಕೆ. ಹೆಸರುಗಳನ್ನು ಪಲ್ಲಟಗೊಳಿಸಿ ವಾಸ್ತವವ್ಯಕ್ತಿಗಳನ್ನು ಸೂಚ್ಯವಾಗಿ ನಿರ್ದೆಶಿಸುವ ಕವಿ ಸಮಯವು ನಮ್ಮಲ್ಲಿ ಹಿಂದಿನಿಂದ ಪ್ರಚಾರದಲ್ಲಿರುವ ಸಂಗತಿಯು ನಮ್ಮ ಪ್ರಾಚೀನ ಸಾಹಿತ್ಯದ ಅಧ್ಯಯನದಿಂದ ತಿಳಿದುಬರುವುದು. {{gap}}“ಕಲಚುರಿಗಳ ಕರ್ತೃತ್ವವು ಕಟ್ಟುವುದಕ್ಕಿಂತ ಕೆಡಿಸುವ ಕಾರ್ಯದಲ್ಲಿ ಹೆಚ್ಚಾಗಿ ವ್ಯಯವಾದುದರಿಂದ ಅವರ ಕೈವಾಡವನ್ನು ಕನ್ನಡ ನಾಡಿನ ಚಾರಿತ್ರಿಕ ವೃತ್ತಾಂತದಲ್ಲಿ ನಾವು ಮರೆಯುವಂತಿಲ್ಲ.” {{gap}}“ಯುದ್ದಗಳೂ ಕಲಹಗಳೂ ಆಗಾಗ ನಡೆಯುತ್ತಿರುವಾಗಲೂ ಒಟ್ಟಿನ ಮೇಲೆ ಸುಖಶಾಂತಿಯಿಂದ ಬಾಳಿದ ಕನ್ನಡ ನಾಡಿನಲ್ಲಿ ಕಲಚುರಿಗಳ ಆಕ್ರಮಣದಿಂದ ವಿಷಮ ಪರಿಸ್ಥಿತಿ ನಿರ್ಮಾಣವಾಯಿತು. ರಾಜಕೀಯ ರಂಗದಲ್ಲಿ ಮಾತ್ರವಲ್ಲ, ಇತರ ರಂಗಗಳಲ್ಲಿಯೂ ಇದೇ ಕಾಲಕ್ಕೆ ಗಲಭೆಗಳಿದ್ದವು. ಹಿಂಸಾಮಯ ಅತಿಕ್ರಮಣದಿಂದ ಆರಂಭವಾದ ಕಲಚುರಿ ರಾಜ್ಯಕ್ರಾಂತಿ ಬಗೆಬಗೆಯ ರಾಜಕೀಯ<noinclude></noinclude> oxqftjthu8lms1ocpcl0qzo9fhuzowg ಸದಸ್ಯರ ಚರ್ಚೆಪುಟ:Pragathi. BH 3 99124 324228 301136 2026-06-03T10:14:27Z Vikashegde 1258 /* ವ್ಯಾಲಿಡೇಶನ್ */ ಹೊಸ ವಿಭಾಗ 324228 wikitext text/x-wiki == ವಿಕಿಸೋರ್ಸ್ ಪ್ರೂಫ್‌ರೀಡ್ ಸ್ಪರ್ಧೆಯ ಬಹುಮಾನ ವಿತರಣೆ == <div style="border: 2px solid #000; padding: 10px; margin: 10px 0;"> ಆತ್ಮೀಯರೆ, <div style="float: right; margin-left: 10px;">[[File:Wikisource-proofreadathon-august-logo-kn.svg|205px]]</div> :[[ವಿಕಿಸೋರ್ಸ್:ಪ್ರೂಫ್ ರೀಡಥಾನ್ ಆಗಸ್ಟ್ ೨೦೨೪ ಸ್ಪರ್ಧೆ|ವಿಕಿಸೋರ್ಸ್ ಪ್ರೂಫ್‍ರೀಡ್ ಸ್ಪರ್ಧೆಯಲ್ಲಿ]] ನಿಮ್ಮ ಭಾಗವಹಿಸುವಿಕೆ ಮತ್ತು ಯಶಸ್ಸಿಗೆ ನಿಮ್ಮನ್ನು ಅಭಿನಂದಿಸಲು ನಾವು ರೋಮಾಂಚನಗೊಂಡಿದ್ದೇವೆ. ಬಹುಮಾನ ಪ್ರಕ್ರಿಯೆಯ ಭಾಗವಾಗಿ, ನಿಮ್ಮ ವಿವರಗಳನ್ನು ಒದಗಿಸಲು ನಾವು ವಿನಂತಿಸುತ್ತೇವೆ ಆದ್ದರಿಂದ ನಾವು ನಿಮ್ಮ ಆದ್ಯತೆಯ ವಿಧಾನದ ಮೂಲಕ ನಿಮ್ಮ ಬಹುಮಾನವನ್ನು ವರ್ಗಾಯಿಸಬಹುದು (ಬ್ಯಾಂಕ್ ವರ್ಗಾವಣೆ, UPI ವರ್ಗಾವಣೆ ಅಥವಾ ಅಮೆಜಾನ್ ಗಿಫ್ಟ್ ವೋಚರ್). :ನಿಮ್ಮ ಬಹುಮಾನಕ್ಕಾಗಿ ಅರ್ಜಿ ಸಲ್ಲಿಸಲು ಕೆಳಗೆ ಲಿಂಕ್ ಮಾಡಲಾದ ಫಾರ್ಮ್ ಅನ್ನು ಭರ್ತಿ ಮಾಡಲು ದಯವಿಟ್ಟು ಕೆಲವು ಕ್ಷಣಗಳನ್ನು ತೆಗೆದುಕೊಳ್ಳಿ: ನಿಮ್ಮ ಬಹುಮಾನಕ್ಕಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ;:[[ವಿಕಿಸೋರ್ಸ್:ಪ್ರೂಫ್_ರೀಡಥಾನ್_ಆಗಸ್ಟ್_೨೦೨೪_ಸ್ಪರ್ಧೆ#ಬಹುಮಾನಗಳು:|ಬಹುಮಾನ]] ಆಯ್ಕೆಗಳು ::* ಬ್ಯಾಂಕ್ ವರ್ಗಾವಣೆ: ನೇರ ವರ್ಗಾವಣೆಗಾಗಿ ನಿಮ್ಮ UPI ಐಡಿ ಅಥವಾ ಬ್ಯಾಂಕ್ ಖಾತೆಯ ವಿವರಗಳನ್ನು ಒದಗಿಸಿ. ::* UPI ವರ್ಗಾವಣೆ: ತ್ವರಿತ ವರ್ಗಾವಣೆಗಾಗಿ ನಿಮ್ಮ UPI ಐಡಿ ಅಥವಾ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಿ. ::* Amazon ಗಿಫ್ಟ್ ವೋಚರ್: ನೀವು Amazon ಗಿಫ್ಟ್ ವೋಚರ್ ಅನ್ನು ಬಯಸಿದರೆ, ನಿಮ್ಮ Amazon ಖಾತೆಗೆ ಲಿಂಕ್ ಮಾಡಲಾದ ಇಮೇಲ್ ID ಅನ್ನು ಒದಗಿಸಿ. :ಎಲ್ಲಾ ಬಹುಮಾನಗಳನ್ನು ಸಮಯೋಚಿತವಾಗಿ ಪ್ರಕ್ರಿಯೆಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುವುದರಿಂದ ದಯವಿಟ್ಟು ಫಾರ್ಮ್ ಅನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ. :ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ಸಹಾಯದ ಅಗತ್ಯವಿದ್ದರೆ,[[ವಿಕಿಸೋರ್ಸ್ ಚರ್ಚೆ:ಪ್ರೂಫ್ ರೀಡಥಾನ್ ಆಗಸ್ಟ್ ೨೦೨೪ ಸ್ಪರ್ಧೆ]] ಪುಟದಲ್ಲಿ ನಮ್ಮನ್ನು ಸಂಪರ್ಕಿಸಬಹುದು. :ವಿಕಿಸೋರ್ಸ್‌ಗೆ ನಿಮ್ಮ ಅಮೂಲ್ಯ ಕೊಡುಗೆಗಾಗಿ ಮತ್ತೊಮ್ಮೆ ಧನ್ಯವಾದಗಳು, ಮತ್ತು ಭವಿಷ್ಯದ ಸ್ಪರ್ಧೆಗಳಲ್ಲಿ ನಿಮ್ಮ ನಿರಂತರ ಪಾಲ್ಗೊಳ್ಳುವಿಕೆಯನ್ನು ಎದುರು ನೋಡುತ್ತೇವೆ! ;:ಶುಭಾಶಯಗಳು, ;:Anoop Rao ;:ನಿರ್ವಾಹಕರು ಮತ್ತು ಸಂಘಟಕರು, ವಿಕಿಸೋರ್ಸ್ </div> <!-- Message sent by User:~aanzx@knwikisource using the list at https://kn.wikisource.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:~aanzx/wikisource2024-rewards&oldid=276262 --> :[[User:~aanzx]] , --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:~aanzx|~aanzx]] · [[user_talk:~aanzx|<big>✉</big>]] · [[Special:Contributions/~aanzx|<big> ©</big>]]</span> ೧೨:೦೩, ೯ ನವೆಂಬರ್ ೨೦೨೪ (IST) :Thank you sir [[ಸದಸ್ಯ:Pragathi. BH|Pragathi. BH]] ([[ಸದಸ್ಯರ ಚರ್ಚೆಪುಟ:Pragathi. BH|ಚರ್ಚೆ]]) ೧೩:೩೦, ೯ ನವೆಂಬರ್ ೨೦೨೪ (IST) == ವ್ಯಾಲಿಡೇಶನ್ == ವ್ಯಾಲಿಡೇಟ್ ಮಾಡುವಾಗ ವಿವರವಾಗಿ ಪರಿಶೀಲಿಸಿ ತಪ್ಪುಗಳಿದ್ದಲ್ಲಿ ಸರಿಮಾಡಿ ಆನಂತರ ವ್ಯಾಲಿಡೇಟ್ ಮಾಡಿ. ಹಲವು ಕಡೆಗಳಲ್ಲಿ ಹಾಗೆಯೇ ವ್ಯಾಲಿಡೇಟ್ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ತಪ್ಪುಗಳು ಹಾಗೆಯೇ ಉಳಿದಿವೆ. ಉದಾಹರಣೆಗೆ [[ಪುಟ:Chirasmarane-Niranjana.pdf/೧೮೭|ಈ ಪುಟದಲ್ಲಿ]] ಮೂಲಪುಟದಂತೆ ಪ್ಯಾರಾಗಳನ್ನು ಮಾಡಿಲ್ಲ. ಆದರೆ ವ್ಯಾಲಿಡೇಟ್ ಮಾಡಿದ್ದೀರಿ. --[[ಸದಸ್ಯ:Vikashegde|ವಿಕಾಸ್ ಹೆಗಡೆ &#124; Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೫:೪೪, ೩ ಜೂನ್ ೨೦೨೬ (IST) cyml1977ypfub90ycz6kcegdw9chynx ಪುಟ:ತೊಳೆದ ಮುತ್ತು.pdf/೧೧೧ 104 106433 324082 306460 2026-06-02T13:03:51Z Pragathi. BH 7585 324082 proofread-page text/x-wiki <noinclude><pagequality level="3" user="Pragathi. BH" />{{rh|center=ಗುಲ್ ಬಾಯಿ|left=|right=೧೦೩}}</noinclude> ಆಸೆಯ ಕಲ್ಲಿನಂತೆ ಅವರ ಮೋರೆಯ ತುಂಬೆಲ್ಲ ಹುಳುಕು ಮೆತ್ತಿತ್ತು. ಮೆಂತೆಯನ್ನಾದರೂ ಅವರು ಅಗ್ಗ ಮಾಡಿದ್ದರು. ಮೀಸೆಯೊಡೆದ ಹೆಂಗಸಿ ಗಿಂತ ಕೊಂಚ ಹೆಚ್ಚಾದ ಕೂದಲುಗಳು ಅವರ ಮೇಲ್ದುಟಿಯ ಮೇಲೆ ವಿರಳವಾಗಿ ಕಾಣುತ್ತಿದ್ದವು ಅವರ ಕಿರಿಗಣ್ಣುಗಳ ದೃಷ್ಟಿಯು ಯಾವಾಗಲೂ ನೆಲವನ್ನೇ ನೋಡುತ್ತಿರುವದಾಗಿ ತೋರಿತು. ದಪ್ಪವಾಗಿರುವ ಕೆಳ ದುಟಿಯ ಮೂಲಕವಾಗಿಯೂ ಕಸಿ ಬಿದ್ದ ಕುತ್ತಿಗೆಯ ಮೂಲಕವಾಗಿಯ ಧೋಂಡೋಪಂತರು ಗೊಗ್ಗರ ಧ್ವನಿಯಿಂದ ತಮ್ಮ ಹೆಸರನ್ನು ಹೇಳಬೇಕಾ ದರೆ ತುಸು ಪ್ರಯಾಸವನ್ನು ಹೊಂದಿದರು. ರಾ ಥಂಡೇರೆಯವರು ಘೋರ ಸ್ವರದಲ್ಲಿ ತಮ್ಮ ಹೆಸರು ಹೇಳಿದ್ದು ಕೇಳಿ ಕುಚೇಷ್ಟೆಗಾಗಿಯೋ ಏನೋ ಹುಡುಗಾಟಿಗೆಯ ಹೊಸಪ್ರಾಯದವರಾದ ನಮ್ಮ ಶ್ಯಾಮರಾಯರು ಅವರನ್ನು ಕುರಿತು, " ದೊಂಡೋಪಂತ ನಿಮ್ಮ ಶಿಷ್ಯರಾದ ಈ ಗುಲ್‌ಬಾಯಿಯವ ರಿಗೆ ಗಾನವನ್ನಾದರೂ ನೀವೆ ಕಲಿಸುವಿರೇನು ? " ಎಂದು ಕೇಳಿದರು. ವಿಪ ರೀತವಾಗಿರುವ ಈ ಪ್ರಶ್ನವನ್ನು ಕೇಳಿದಾಕ್ಷಣವೇ ಗುಲ್‌ಬಾಯಿಗೆ ಹುಚ್ಚು ನಗೆ ತುಂಬಿತು. ಯಥೇಷ್ಟವಾಗಿ ನಗುವಳೇ, ಅದು ಅಪ್ರಶಸ್ತವಾದ ಮಾತಾ ಗಿತ್ತು. ಆ ನಗೆಯನ್ನು ಬಿಗಿದು ಹಿಡಿಯುವಳೇ ಅದು ಅಸಾಧ್ಯವಾಗಿತ್ತು. ಅವಳು ತನ್ನ ಮುಖವನ್ನು ಎರಡೂ ಕೈಗಳಿಂದ ಮುಚ್ಚಿಕೊಂಡು ಕಿಟಕಿಯ ಕಡೆಗೆ ತಿರುಗಿ ಕುಳಿತಳು. ಗುಲ್‌ಬಾಯಿಯ ಆಚರಣವನ್ನು ಕಂಡು ಶ್ಯಾಮ ರಾಯರ ಪ್ರಶ್ನವು ಕುಚೇಷ್ಟಾಯುತವಾಗಿರುವದೆಂದು ಶಂಕಿಸಿ, ಕುಚೇಷ್ಟೆ ಮಾಡುವಿರೇನೆಂದು ಧೋಂಡೋಪಂತರು ಕ್ರುದ್ಧರಾಗಿ ಕೇಳಿದರು. {{gap}}" ಕ್ಷಮಿಸಿರಿ ಮಾಸ್ತರರೆ. ತಮ್ಮೊಡನೆ ಕುಚೇಷ್ಟೆಯೇ ? ತಮ್ಮ ವೇಷ ವನ್ನು ನೋಡಲಾಗಿ ತಾವು ಗಾನಶಾಸ್ತ್ರಿಗಳ ಮನೆತನದಲ್ಲಿ ಹುಟ್ಟಿದವರಾಗಿ ತೋರಿದ್ದರಿಂದ ಹಾಗೆ ಪ್ರಶ್ನೆ ಮಾಡಿದನು.” ಎಂದು ಶ್ಯಾಮರಾಯರು ವಿನೀತ ರಂತೆ ನುಡಿದರು. {{gap}}ಧಂಡೇರೆಯವರ ತಲೆಯ ಮೇಲೆ ಪೇಶ್ವಾಯಿ ಕಾಲದ ಕೆಂಪು ಮುಂಡಾಸವಿತ್ತು. ಜಗನ್ನಾಥೀ ಅರಿವೆಯ ಅವರ ಉದ್ದಂಗಿಯು ಮೊಳಕಾಲ ಕೆಳಗೆ ಒಂದು ಗೇಣು ಇಳಿ ಬಿದ್ದಿತ್ತು. ಉಟ್ಟಿರುವ ಸೊಲ್ಲಾಪುರದ ಗಿರಣಿಯ್ ದೋತರವು ಕಲ್ಲು ನೀರುಗಳ ಹೊಡೆತವನ್ನು ಎರಡು ವರ್ಷಗಳ ವರೆಗೆ ಸಹಿಸಿ<noinclude></noinclude> g69kxs47rr1jmqsnq0fcdnvh3mok08r 324083 324082 2026-06-02T13:04:45Z Adhya.B 8391 /* Validated */ 324083 proofread-page text/x-wiki <noinclude><pagequality level="4" user="Adhya.B" />{{rh|center=ಗುಲ್ ಬಾಯಿ|left=|right=೧೦೩}}</noinclude> ಆಸೆಯ ಕಲ್ಲಿನಂತೆ ಅವರ ಮೋರೆಯ ತುಂಬೆಲ್ಲ ಹುಳುಕು ಮೆತ್ತಿತ್ತು. ಮೆಂತೆಯನ್ನಾದರೂ ಅವರು ಅಗ್ಗ ಮಾಡಿದ್ದರು. ಮೀಸೆಯೊಡೆದ ಹೆಂಗಸಿ ಗಿಂತ ಕೊಂಚ ಹೆಚ್ಚಾದ ಕೂದಲುಗಳು ಅವರ ಮೇಲ್ದುಟಿಯ ಮೇಲೆ ವಿರಳವಾಗಿ ಕಾಣುತ್ತಿದ್ದವು ಅವರ ಕಿರಿಗಣ್ಣುಗಳ ದೃಷ್ಟಿಯು ಯಾವಾಗಲೂ ನೆಲವನ್ನೇ ನೋಡುತ್ತಿರುವದಾಗಿ ತೋರಿತು. ದಪ್ಪವಾಗಿರುವ ಕೆಳ ದುಟಿಯ ಮೂಲಕವಾಗಿಯೂ ಕಸಿ ಬಿದ್ದ ಕುತ್ತಿಗೆಯ ಮೂಲಕವಾಗಿಯ ಧೋಂಡೋಪಂತರು ಗೊಗ್ಗರ ಧ್ವನಿಯಿಂದ ತಮ್ಮ ಹೆಸರನ್ನು ಹೇಳಬೇಕಾ ದರೆ ತುಸು ಪ್ರಯಾಸವನ್ನು ಹೊಂದಿದರು. ರಾ ಥಂಡೇರೆಯವರು ಘೋರ ಸ್ವರದಲ್ಲಿ ತಮ್ಮ ಹೆಸರು ಹೇಳಿದ್ದು ಕೇಳಿ ಕುಚೇಷ್ಟೆಗಾಗಿಯೋ ಏನೋ ಹುಡುಗಾಟಿಗೆಯ ಹೊಸಪ್ರಾಯದವರಾದ ನಮ್ಮ ಶ್ಯಾಮರಾಯರು ಅವರನ್ನು ಕುರಿತು, " ದೊಂಡೋಪಂತ ನಿಮ್ಮ ಶಿಷ್ಯರಾದ ಈ ಗುಲ್‌ಬಾಯಿಯವ ರಿಗೆ ಗಾನವನ್ನಾದರೂ ನೀವೆ ಕಲಿಸುವಿರೇನು ? " ಎಂದು ಕೇಳಿದರು. ವಿಪ ರೀತವಾಗಿರುವ ಈ ಪ್ರಶ್ನವನ್ನು ಕೇಳಿದಾಕ್ಷಣವೇ ಗುಲ್‌ಬಾಯಿಗೆ ಹುಚ್ಚು ನಗೆ ತುಂಬಿತು. ಯಥೇಷ್ಟವಾಗಿ ನಗುವಳೇ, ಅದು ಅಪ್ರಶಸ್ತವಾದ ಮಾತಾ ಗಿತ್ತು. ಆ ನಗೆಯನ್ನು ಬಿಗಿದು ಹಿಡಿಯುವಳೇ ಅದು ಅಸಾಧ್ಯವಾಗಿತ್ತು. ಅವಳು ತನ್ನ ಮುಖವನ್ನು ಎರಡೂ ಕೈಗಳಿಂದ ಮುಚ್ಚಿಕೊಂಡು ಕಿಟಕಿಯ ಕಡೆಗೆ ತಿರುಗಿ ಕುಳಿತಳು. ಗುಲ್‌ಬಾಯಿಯ ಆಚರಣವನ್ನು ಕಂಡು ಶ್ಯಾಮ ರಾಯರ ಪ್ರಶ್ನವು ಕುಚೇಷ್ಟಾಯುತವಾಗಿರುವದೆಂದು ಶಂಕಿಸಿ, ಕುಚೇಷ್ಟೆ ಮಾಡುವಿರೇನೆಂದು ಧೋಂಡೋಪಂತರು ಕ್ರುದ್ಧರಾಗಿ ಕೇಳಿದರು. {{gap}}" ಕ್ಷಮಿಸಿರಿ ಮಾಸ್ತರರೆ. ತಮ್ಮೊಡನೆ ಕುಚೇಷ್ಟೆಯೇ ? ತಮ್ಮ ವೇಷ ವನ್ನು ನೋಡಲಾಗಿ ತಾವು ಗಾನಶಾಸ್ತ್ರಿಗಳ ಮನೆತನದಲ್ಲಿ ಹುಟ್ಟಿದವರಾಗಿ ತೋರಿದ್ದರಿಂದ ಹಾಗೆ ಪ್ರಶ್ನೆ ಮಾಡಿದನು.” ಎಂದು ಶ್ಯಾಮರಾಯರು ವಿನೀತ ರಂತೆ ನುಡಿದರು. {{gap}}ಧಂಡೇರೆಯವರ ತಲೆಯ ಮೇಲೆ ಪೇಶ್ವಾಯಿ ಕಾಲದ ಕೆಂಪು ಮುಂಡಾಸವಿತ್ತು. ಜಗನ್ನಾಥೀ ಅರಿವೆಯ ಅವರ ಉದ್ದಂಗಿಯು ಮೊಳಕಾಲ ಕೆಳಗೆ ಒಂದು ಗೇಣು ಇಳಿ ಬಿದ್ದಿತ್ತು. ಉಟ್ಟಿರುವ ಸೊಲ್ಲಾಪುರದ ಗಿರಣಿಯ್ ದೋತರವು ಕಲ್ಲು ನೀರುಗಳ ಹೊಡೆತವನ್ನು ಎರಡು ವರ್ಷಗಳ ವರೆಗೆ ಸಹಿಸಿ<noinclude></noinclude> oy4d0uo9ybbbf689s4zzs09cy1bcntj