ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.5
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:Chirasmarane-Niranjana.pdf/೨೫೯
104
13078
324572
65749
2026-06-07T16:08:25Z
Vikashegde
1258
/* Proofread */
324572
proofread-page
text/x-wiki
<noinclude><pagequality level="3" user="Vikashegde" />೨೬೦ ಚಿರಸ್ಮರಣೆ</noinclude>{{gap}}"ಈಗಾದರೂ ಮುಗಿಯಿತಲ್ಲ!" ಎಂದ ಅಪ್ಪು, ಹೃದಯದೊಳಗಿನ
ಬೇಗುದಿಯನ್ನು ಅಂಕೆಯೊಳಗಿಡಲು ಯತ್ನಿಸುತ್ತ.
{{gap}}ಆಗಲೂ ಮುಗಿದಿರಲಿಲ್ಲ. ರಕ್ಷಣಾ ಸಮಿತಿಯ ಕಡೆಯಿಂದ ವಕೀಲರೊಬ್ಬರು
ಬಂದು ಆ ನಾಲ್ವರ ಸಹಿ ಕೇಳಿದರು.
{{gap}}"ಇನ್ನು ಯಾವ ಕ್ರಮ ಕೈಗೊಳ್ತೀರಿ?" ಎಂದ ಚಿರುಕಂಡ.
{{gap}}"ಜೀವದಾನಕ್ಕೆ ಅರ್ಜಿ ಹಾಕ್ಬೇಕಲ್ಲ?"
{{gap}}ಅಪ್ಪು ಗುಡುಗಿದ:
{{gap}}"ಎಂಥ ಜೀವದಾನ? ಯಾರ ಜೀವವನ್ನು ಯಾರು ದಾನ ಮಾಡೋದು?
ಒಂದೂ ಬೇಡ. ಹೋಗಿ ನೀವು !”
{{gap}}"ಹಾಗಲ್ಲ ಸಂಗಾತಿ!”
{{gap}}"ಗೌರವದಿಂದ ನಾವು ಸಾಯೋದಕ್ಕಾದರೂ ಬಿಡ್ತೀರೊ ಇಲ್ಲವೊ?"
{{gap}}ವಕೀಲರು ವಿಫಲರಾಗಿ ಹಿಂತಿರುಗಿದರು. ಆದರೆ ಆ ಬಳಿಕ, ಮಾಸ್ತರು ಮತ್ತು ಇತರರ ನಡುವೆ ರಹಸ್ಯವಾಗಿ ಚೀಟೆ ಕಾಗದಗಳೋಡಿದುವು. ಸಂದೇಶಗಳು ಅತ್ತಿತ್ತ ಹೋಗಿ ಬಂದುವು.
{{gap}}ಮಾಸ್ತರು ಸೈರಣೆಯಿಂದ ವಾದಿಸಿದರು:
{{gap}}"ಹಾಗೆ ನೋಡಿದರೆ ಆ ನ್ಮಾಯಸ್ಥಾನದಲ್ಲಿ ನಮಗೆ ನಂಬಿಕೆ ಇತ್ತೆ? ಆದರೂ
ನಾವು ಅವರೆದುರು ಕೈಕಟ್ಟಿ ನಿಂತು ವಿಚಾರಣೆಗೆ ಒಳಗಾದೆವು. ಇದೆಲ್ಲ ಒಂದು
ಪದ್ಧತಿ ಅಪ್ಪು. ನಮ್ಮ ಗುರಿ ಏನು? ಆ ಗುರಿಯ ಸಾಧನೆಗಾಗಿ ನೀವು ನಾಲ್ಕು
ಜೀವಿಗಳು ಉಳಿಯೋದು ಬೇಡವೆ? ಜೀವದಾನ ಕೇಳುವದರಲ್ಲಿ
ಅವಮಾನವಾದದ್ದೇನೂ ಇಲ್ಲ. ನಮ್ಮ ಉದ್ದೇಶವನ್ನು ನೆನಪಿನಲ್ಲಿಟ್ಟುಕೊಂಡು
ಸಹಿಮಾಡಿ. ದೇಶದ ಎಲ್ಲ ಕಡೆ ನಿಮ್ಮನ್ನು ಉಳಿಸಬೇಕೂಂತ ಚಳವಳಿಯೇ ಆಗ್ತಿದೆ.
ಅನ್ನೋದನ್ನು ಮರೀಬೇಡಿ."
{{gap}}ಮಾಸ್ತರು ಗೆದ್ದರು. ಅರ್ಜಿಗೆ ಆ ನಾಲ್ವರ ಸಹಿ ಬಿತ್ತು.
{{gap}}ಕುಟ್ಟಿಕೃಷ್ಣನನ್ನು ದೂರದ ಬೆಜವಾಡದ ಸೆರೆಮನೆಗೊಯ್ದರು. ಉಳಿದವರು.
ಶಿಕ್ಷೆ ಅನುಭವಿಸುತ್ತ ದಿನ ಕಳೆದರು. ನಾಲ್ವರ ಪ್ರಾಣ ಉಳಿಸಲು ಮಾತ್ರ
ರಾಷ್ಟ್ರದಾದ್ಯಂತ ಚಳವಳಿ ನಡೆಯಿತು. ಲೋಕದ ಇತರ ಪ್ರಮುಖ ನಗೆರಗಳಲ್ಲೂ
ಕಯ್ಯೂರಿನ ಹೆಸರು ಪ್ರತಿಧ್ವನಿಸಿತು.
{{gap}}ಆದರೂ ಆಳುವವರು ಮಿಸುಕಲಿಲ್ಲ. ವಿಷಮಿಸುತ್ತಿದ್ದ ವಿಶ್ವಸಮರದ
ಬೇಗೆಯಲ್ಲಿ ಸಿಲುಕಿದ್ದ ಆ ಸರಕಾರ, ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟು ತಲೆ<noinclude></noinclude>
7xa1vx6czfyid84nkyf0oa9khg3rxoa
324573
324572
2026-06-07T16:09:45Z
Vikashegde
1258
324573
proofread-page
text/x-wiki
<noinclude><pagequality level="3" user="Vikashegde" />{{rh|center= |left=೨೬೦|right=ಚಿರಸ್ಮರಣೆ}}</noinclude>{{gap}}"ಈಗಾದರೂ ಮುಗಿಯಿತಲ್ಲ!" ಎಂದ ಅಪ್ಪು, ಹೃದಯದೊಳಗಿನ
ಬೇಗುದಿಯನ್ನು ಅಂಕೆಯೊಳಗಿಡಲು ಯತ್ನಿಸುತ್ತ.
{{gap}}ಆಗಲೂ ಮುಗಿದಿರಲಿಲ್ಲ. ರಕ್ಷಣಾ ಸಮಿತಿಯ ಕಡೆಯಿಂದ ವಕೀಲರೊಬ್ಬರು
ಬಂದು ಆ ನಾಲ್ವರ ಸಹಿ ಕೇಳಿದರು.
{{gap}}"ಇನ್ನು ಯಾವ ಕ್ರಮ ಕೈಗೊಳ್ತೀರಿ?" ಎಂದ ಚಿರುಕಂಡ.
{{gap}}"ಜೀವದಾನಕ್ಕೆ ಅರ್ಜಿ ಹಾಕ್ಬೇಕಲ್ಲ?"
{{gap}}ಅಪ್ಪು ಗುಡುಗಿದ:
{{gap}}"ಎಂಥ ಜೀವದಾನ? ಯಾರ ಜೀವವನ್ನು ಯಾರು ದಾನ ಮಾಡೋದು?
ಒಂದೂ ಬೇಡ. ಹೋಗಿ ನೀವು !”
{{gap}}"ಹಾಗಲ್ಲ ಸಂಗಾತಿ!”
{{gap}}"ಗೌರವದಿಂದ ನಾವು ಸಾಯೋದಕ್ಕಾದರೂ ಬಿಡ್ತೀರೊ ಇಲ್ಲವೊ?"
{{gap}}ವಕೀಲರು ವಿಫಲರಾಗಿ ಹಿಂತಿರುಗಿದರು. ಆದರೆ ಆ ಬಳಿಕ, ಮಾಸ್ತರು ಮತ್ತು ಇತರರ ನಡುವೆ ರಹಸ್ಯವಾಗಿ ಚೀಟೆ ಕಾಗದಗಳೋಡಿದುವು. ಸಂದೇಶಗಳು ಅತ್ತಿತ್ತ ಹೋಗಿ ಬಂದುವು.
{{gap}}ಮಾಸ್ತರು ಸೈರಣೆಯಿಂದ ವಾದಿಸಿದರು:
{{gap}}"ಹಾಗೆ ನೋಡಿದರೆ ಆ ನ್ಮಾಯಸ್ಥಾನದಲ್ಲಿ ನಮಗೆ ನಂಬಿಕೆ ಇತ್ತೆ? ಆದರೂ
ನಾವು ಅವರೆದುರು ಕೈಕಟ್ಟಿ ನಿಂತು ವಿಚಾರಣೆಗೆ ಒಳಗಾದೆವು. ಇದೆಲ್ಲ ಒಂದು
ಪದ್ಧತಿ ಅಪ್ಪು. ನಮ್ಮ ಗುರಿ ಏನು? ಆ ಗುರಿಯ ಸಾಧನೆಗಾಗಿ ನೀವು ನಾಲ್ಕು
ಜೀವಿಗಳು ಉಳಿಯೋದು ಬೇಡವೆ? ಜೀವದಾನ ಕೇಳುವದರಲ್ಲಿ
ಅವಮಾನವಾದದ್ದೇನೂ ಇಲ್ಲ. ನಮ್ಮ ಉದ್ದೇಶವನ್ನು ನೆನಪಿನಲ್ಲಿಟ್ಟುಕೊಂಡು
ಸಹಿಮಾಡಿ. ದೇಶದ ಎಲ್ಲ ಕಡೆ ನಿಮ್ಮನ್ನು ಉಳಿಸಬೇಕೂಂತ ಚಳವಳಿಯೇ ಆಗ್ತಿದೆ.
ಅನ್ನೋದನ್ನು ಮರೀಬೇಡಿ."
{{gap}}ಮಾಸ್ತರು ಗೆದ್ದರು. ಅರ್ಜಿಗೆ ಆ ನಾಲ್ವರ ಸಹಿ ಬಿತ್ತು.
{{gap}}ಕುಟ್ಟಿಕೃಷ್ಣನನ್ನು ದೂರದ ಬೆಜವಾಡದ ಸೆರೆಮನೆಗೊಯ್ದರು. ಉಳಿದವರು.
ಶಿಕ್ಷೆ ಅನುಭವಿಸುತ್ತ ದಿನ ಕಳೆದರು. ನಾಲ್ವರ ಪ್ರಾಣ ಉಳಿಸಲು ಮಾತ್ರ
ರಾಷ್ಟ್ರದಾದ್ಯಂತ ಚಳವಳಿ ನಡೆಯಿತು. ಲೋಕದ ಇತರ ಪ್ರಮುಖ ನಗೆರಗಳಲ್ಲೂ
ಕಯ್ಯೂರಿನ ಹೆಸರು ಪ್ರತಿಧ್ವನಿಸಿತು.
{{gap}}ಆದರೂ ಆಳುವವರು ಮಿಸುಕಲಿಲ್ಲ. ವಿಷಮಿಸುತ್ತಿದ್ದ ವಿಶ್ವಸಮರದ
ಬೇಗೆಯಲ್ಲಿ ಸಿಲುಕಿದ್ದ ಆ ಸರಕಾರ, ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟು ತಲೆ<noinclude></noinclude>
gr4hzkmiuqi4dzxutys40o5w03ud8cv
ಪುಟ:Chirasmarane-Niranjana.pdf/೨೬೦
104
13079
324574
65751
2026-06-07T16:19:35Z
Vikashegde
1258
/* Proofread */
324574
proofread-page
text/x-wiki
<noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=|right=೨೬೧}}</noinclude>ಬಾಗುವುದು ದೌರ್ಬಲ್ಯದ ಸಂಕೇತವಾದೀತೆಂದು, ಮೌನ ತಳೆಯಿತು.
{{gap}}ರಕ್ಷಣಾ ಸಮಿತಿಯವರು, ರಾಷ್ಟ್ರದ ಎಲ್ಲ ಕಡೆಗಳ ದೇಶಪ್ರೇಮಿಗಳು,
ಕಯ್ಯೂರಿನ ಕುಟುಂಬಗಳು, ಗವರ್ನರ ಆಜ್ಞೆ ಏನೆಂದು ಬರುವುದೋ ಎಂದು
ಇನ್ನೂ ಕಾದರು.
{{gap}}ಆ ಅವಧಿಯಲ್ಲಿ ಭಾರತದ ರಾಜಕೀಯ ಆಕಾಶ ಕರಿಮೋಡಗಳಿಂದ ತುಂಬಿತು. ನಾಲ್ಕು ದಿಕ್ಕುಗಳಿಂದ ಬಿರುಗಾಳಿ ಬೀಸಿತು. ಕೋಲ್ಮಿಂಚು ಕಣ್ಣು ಕೋರೈಸಿತು. ಗುಡುಗುಗಳಿಂದ ಕಿವಿಯೊಡೆಯಿತು. ಮತ್ತೆ ಒಮ್ಮೆಲೆ, ಆಗಸ್ಟ್ ಒಂಭತ್ತರ ಮುಂಜಾನೆ, ಆಕಾಶವೆ ಬಿರುಕು ಬಿಟ್ಟು ನೀರು ಸೋರಿದಂತೆ, ಸಾಗರವೇ
ಕಟ್ಟೆಯೊಡೆದಂತೆ, ಧೋಧೋ ಎಂದು ಮಳೆ ಸುರಿಯಿತು. ಬೀದಿ ಬೀದಿಗಳಲ್ಲಿ
ಕೇರಿಕೇರಿಗಳಲ್ಲಿ ಆಗ ಹರಿದುದು ಜಲಪ್ರವಾಹದಂತೆ ಕಂಡ ಜನಪ್ರವಾಹ. ಆ
ಹಿಂಸೆಯ ಮಾಯಾಬಲೆಯನ್ನು ಹರಿದು, ಜನರ ಬಡತೋಳುಗಳು
ಭೀಮಬಾಹುಗಳಾದುವು. ಸಿಡಿದೆದ್ದ ಗುಲಾಮರ ನಡಿಗೆಯ ಸದ್ದು ಗಿರಿಕಂದರಗಳಲ್ಲಿ
ಪ್ರತಿಧ್ವನಿಸಿತು.
{{gap}}ತತ್ತರಿಸಿದ ಸರಕಾರ ಆಗ, ನ್ಮಾಯಸ್ಥಾನಗಳ ಕಾನೂನಿನ ಕ್ರಮಬದ್ದತೆಯ
ಸೋಗನ್ನು ಬಿಟ್ಟು, ತನ್ನ ನಗ್ನರೂಪವನ್ನು ತೋರಿತು.
{{gap}}ಆ ಸ್ಫಾತಂತ್ರ್ಯ ಹೋರಾಟದ ಮಹಾ ತೆರೆಗಳು ಸೆರೆಮನೆಯ ಪ್ರಾಕಾರಗಳಿಗೆ
ಬಡೆದೇ ಬಡೆದುವು. ಒಳಗಿದ್ದವರು ಕಿವಿನಿಗುರಿಸಿ ಕೇಳಿದರು... ಜೈಲು ಜನರಿಂದ
ತುಂಬಿತು.
{{gap}}ಅಂಥ ಒಂದು ದಿನ, ಕಯ್ಯೂರಿನ ನಾಲ್ವರ ಮೇಲಿನ ಫಾಶೀ ಶಿಕ್ಷೆಯನ್ನು
ರದ್ದುಗೊಳಿಸಲು ನಿರಾಕರಿಸಿ ಮದರಾಸಿನ ಆಂಗ್ಲ ಗವರ್ನರು ಆಜ್ಞೆ ಮಾಡಿದ ಸುದ್ದಿ
ಸೆರೆಮನೆ ತಲಪಿತು.
{{gap}}ಆಗ ಅಪ್ಪು ಚಿರುಕಂಡನನ್ನು ಕೇಳಿದ:
{{gap}}"ಈ ಸಲವಾದರೂ ಮುಗಿದುದು ನಿಜವಷ್ಟೆ?"
{{gap}}ಚಿರುಕಂಡ ನಕ್ಕು ನುಡಿದ: "ಹೂಂ ಇನ್ನು ಸಮಾಧಾನದಿಂದ ಒಬ್ಬರು
ಇನ್ನೊಬ್ಬರ ಕೈಹಿಡಿದು ನಗುತ್ತಲೇ ಗಲ್ಲಿಗೇರೋಣ ಅಪ್ಪು!"
{{gap}}....ಆದರೆ ಸರಕಾರಕ್ಕಿನ್ನೂ ಬಿಡುವಿರಲಿಲ್ಲ. ಆ ನಾಲ್ವರು ಫಾಶೀಶಿಕ್ಷೆ
ಅನುಭವಿಸಬೇಕಾದ ದಿನವನ್ನು ಆಮೇಲೂ ಬಹಳ ಕಾಲ ಅದು ಗೊತ್ತು ಮಾಡಲಿಲ್ಲ.<noinclude></noinclude>
cr5l31u5y4aglv04peyju517199vgvu
324575
324574
2026-06-07T16:20:07Z
Vikashegde
1258
324575
proofread-page
text/x-wiki
<noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=|right=೨೬೧}}</noinclude>ಬಾಗುವುದು ದೌರ್ಬಲ್ಯದ ಸಂಕೇತವಾದೀತೆಂದು, ಮೌನ ತಳೆಯಿತು.
{{gap}}ರಕ್ಷಣಾ ಸಮಿತಿಯವರು, ರಾಷ್ಟ್ರದ ಎಲ್ಲ ಕಡೆಗಳ ದೇಶಪ್ರೇಮಿಗಳು,
ಕಯ್ಯೂರಿನ ಕುಟುಂಬಗಳು, ಗವರ್ನರ ಆಜ್ಞೆ ಏನೆಂದು ಬರುವುದೋ ಎಂದು
ಇನ್ನೂ ಕಾದರು.
{{gap}}............
{{gap}}ಆ ಅವಧಿಯಲ್ಲಿ ಭಾರತದ ರಾಜಕೀಯ ಆಕಾಶ ಕರಿಮೋಡಗಳಿಂದ ತುಂಬಿತು. ನಾಲ್ಕು ದಿಕ್ಕುಗಳಿಂದ ಬಿರುಗಾಳಿ ಬೀಸಿತು. ಕೋಲ್ಮಿಂಚು ಕಣ್ಣು ಕೋರೈಸಿತು. ಗುಡುಗುಗಳಿಂದ ಕಿವಿಯೊಡೆಯಿತು. ಮತ್ತೆ ಒಮ್ಮೆಲೆ, ಆಗಸ್ಟ್ ಒಂಭತ್ತರ ಮುಂಜಾನೆ, ಆಕಾಶವೆ ಬಿರುಕು ಬಿಟ್ಟು ನೀರು ಸೋರಿದಂತೆ, ಸಾಗರವೇ
ಕಟ್ಟೆಯೊಡೆದಂತೆ, ಧೋಧೋ ಎಂದು ಮಳೆ ಸುರಿಯಿತು. ಬೀದಿ ಬೀದಿಗಳಲ್ಲಿ
ಕೇರಿಕೇರಿಗಳಲ್ಲಿ ಆಗ ಹರಿದುದು ಜಲಪ್ರವಾಹದಂತೆ ಕಂಡ ಜನಪ್ರವಾಹ. ಆ
ಹಿಂಸೆಯ ಮಾಯಾಬಲೆಯನ್ನು ಹರಿದು, ಜನರ ಬಡತೋಳುಗಳು
ಭೀಮಬಾಹುಗಳಾದುವು. ಸಿಡಿದೆದ್ದ ಗುಲಾಮರ ನಡಿಗೆಯ ಸದ್ದು ಗಿರಿಕಂದರಗಳಲ್ಲಿ
ಪ್ರತಿಧ್ವನಿಸಿತು.
{{gap}}ತತ್ತರಿಸಿದ ಸರಕಾರ ಆಗ, ನ್ಮಾಯಸ್ಥಾನಗಳ ಕಾನೂನಿನ ಕ್ರಮಬದ್ದತೆಯ
ಸೋಗನ್ನು ಬಿಟ್ಟು, ತನ್ನ ನಗ್ನರೂಪವನ್ನು ತೋರಿತು.
{{gap}}ಆ ಸ್ಫಾತಂತ್ರ್ಯ ಹೋರಾಟದ ಮಹಾ ತೆರೆಗಳು ಸೆರೆಮನೆಯ ಪ್ರಾಕಾರಗಳಿಗೆ
ಬಡೆದೇ ಬಡೆದುವು. ಒಳಗಿದ್ದವರು ಕಿವಿನಿಗುರಿಸಿ ಕೇಳಿದರು... ಜೈಲು ಜನರಿಂದ
ತುಂಬಿತು.
{{gap}}ಅಂಥ ಒಂದು ದಿನ, ಕಯ್ಯೂರಿನ ನಾಲ್ವರ ಮೇಲಿನ ಫಾಶೀ ಶಿಕ್ಷೆಯನ್ನು
ರದ್ದುಗೊಳಿಸಲು ನಿರಾಕರಿಸಿ ಮದರಾಸಿನ ಆಂಗ್ಲ ಗವರ್ನರು ಆಜ್ಞೆ ಮಾಡಿದ ಸುದ್ದಿ
ಸೆರೆಮನೆ ತಲಪಿತು.
{{gap}}ಆಗ ಅಪ್ಪು ಚಿರುಕಂಡನನ್ನು ಕೇಳಿದ:
{{gap}}"ಈ ಸಲವಾದರೂ ಮುಗಿದುದು ನಿಜವಷ್ಟೆ?"
{{gap}}ಚಿರುಕಂಡ ನಕ್ಕು ನುಡಿದ: "ಹೂಂ ಇನ್ನು ಸಮಾಧಾನದಿಂದ ಒಬ್ಬರು
ಇನ್ನೊಬ್ಬರ ಕೈಹಿಡಿದು ನಗುತ್ತಲೇ ಗಲ್ಲಿಗೇರೋಣ ಅಪ್ಪು!"
{{gap}}....ಆದರೆ ಸರಕಾರಕ್ಕಿನ್ನೂ ಬಿಡುವಿರಲಿಲ್ಲ. ಆ ನಾಲ್ವರು ಫಾಶೀಶಿಕ್ಷೆ
ಅನುಭವಿಸಬೇಕಾದ ದಿನವನ್ನು ಆಮೇಲೂ ಬಹಳ ಕಾಲ ಅದು ಗೊತ್ತು ಮಾಡಲಿಲ್ಲ.<noinclude></noinclude>
b5d2ip4au6gic3lceo4nn1gr7h724jv
324576
324575
2026-06-07T16:20:36Z
Vikashegde
1258
324576
proofread-page
text/x-wiki
<noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=|right=೨೬೧}}</noinclude>ಬಾಗುವುದು ದೌರ್ಬಲ್ಯದ ಸಂಕೇತವಾದೀತೆಂದು, ಮೌನ ತಳೆಯಿತು.
{{gap}}ರಕ್ಷಣಾ ಸಮಿತಿಯವರು, ರಾಷ್ಟ್ರದ ಎಲ್ಲ ಕಡೆಗಳ ದೇಶಪ್ರೇಮಿಗಳು,
ಕಯ್ಯೂರಿನ ಕುಟುಂಬಗಳು, ಗವರ್ನರ ಆಜ್ಞೆ ಏನೆಂದು ಬರುವುದೋ ಎಂದು
ಇನ್ನೂ ಕಾದರು.
{{gap}}............
{{gap}}ಆ ಅವಧಿಯಲ್ಲಿ ಭಾರತದ ರಾಜಕೀಯ ಆಕಾಶ ಕರಿಮೋಡಗಳಿಂದ ತುಂಬಿತು. ನಾಲ್ಕು ದಿಕ್ಕುಗಳಿಂದ ಬಿರುಗಾಳಿ ಬೀಸಿತು. ಕೋಲ್ಮಿಂಚು ಕಣ್ಣು ಕೋರೈಸಿತು. ಗುಡುಗುಗಳಿಂದ ಕಿವಿಯೊಡೆಯಿತು. ಮತ್ತೆ ಒಮ್ಮೆಲೆ, ಆಗಸ್ಟ್ ಒಂಭತ್ತರ ಮುಂಜಾನೆ, ಆಕಾಶವೆ ಬಿರುಕು ಬಿಟ್ಟು ನೀರು ಸೋರಿದಂತೆ, ಸಾಗರವೇ
ಕಟ್ಟೆಯೊಡೆದಂತೆ, ಧೋಧೋ ಎಂದು ಮಳೆ ಸುರಿಯಿತು. ಬೀದಿ ಬೀದಿಗಳಲ್ಲಿ
ಕೇರಿಕೇರಿಗಳಲ್ಲಿ ಆಗ ಹರಿದುದು ಜಲಪ್ರವಾಹದಂತೆ ಕಂಡ ಜನಪ್ರವಾಹ. ಆ
ಹಿಂಸೆಯ ಮಾಯಾಬಲೆಯನ್ನು ಹರಿದು, ಜನರ ಬಡತೋಳುಗಳು
ಭೀಮಬಾಹುಗಳಾದುವು. ಸಿಡಿದೆದ್ದ ಗುಲಾಮರ ನಡಿಗೆಯ ಸದ್ದು ಗಿರಿಕಂದರಗಳಲ್ಲಿ
ಪ್ರತಿಧ್ವನಿಸಿತು.
{{gap}}ತತ್ತರಿಸಿದ ಸರಕಾರ ಆಗ, ನ್ಮಾಯಸ್ಥಾನಗಳ ಕಾನೂನಿನ ಕ್ರಮಬದ್ದತೆಯ
ಸೋಗನ್ನು ಬಿಟ್ಟು, ತನ್ನ ನಗ್ನರೂಪವನ್ನು ತೋರಿತು.
{{gap}}ಆ ಸ್ವಾತಂತ್ರ್ಯ ಹೋರಾಟದ ಮಹಾ ತೆರೆಗಳು ಸೆರೆಮನೆಯ ಪ್ರಾಕಾರಗಳಿಗೆ
ಬಡೆದೇ ಬಡೆದುವು. ಒಳಗಿದ್ದವರು ಕಿವಿನಿಗುರಿಸಿ ಕೇಳಿದರು... ಜೈಲು ಜನರಿಂದ
ತುಂಬಿತು.
{{gap}}ಅಂಥ ಒಂದು ದಿನ, ಕಯ್ಯೂರಿನ ನಾಲ್ವರ ಮೇಲಿನ ಫಾಶೀ ಶಿಕ್ಷೆಯನ್ನು
ರದ್ದುಗೊಳಿಸಲು ನಿರಾಕರಿಸಿ ಮದರಾಸಿನ ಆಂಗ್ಲ ಗವರ್ನರು ಆಜ್ಞೆ ಮಾಡಿದ ಸುದ್ದಿ
ಸೆರೆಮನೆ ತಲಪಿತು.
{{gap}}ಆಗ ಅಪ್ಪು ಚಿರುಕಂಡನನ್ನು ಕೇಳಿದ:
{{gap}}"ಈ ಸಲವಾದರೂ ಮುಗಿದುದು ನಿಜವಷ್ಟೆ?"
{{gap}}ಚಿರುಕಂಡ ನಕ್ಕು ನುಡಿದ: "ಹೂಂ ಇನ್ನು ಸಮಾಧಾನದಿಂದ ಒಬ್ಬರು
ಇನ್ನೊಬ್ಬರ ಕೈಹಿಡಿದು ನಗುತ್ತಲೇ ಗಲ್ಲಿಗೇರೋಣ ಅಪ್ಪು!"
{{gap}}....ಆದರೆ ಸರಕಾರಕ್ಕಿನ್ನೂ ಬಿಡುವಿರಲಿಲ್ಲ. ಆ ನಾಲ್ವರು ಫಾಶೀಶಿಕ್ಷೆ
ಅನುಭವಿಸಬೇಕಾದ ದಿನವನ್ನು ಆಮೇಲೂ ಬಹಳ ಕಾಲ ಅದು ಗೊತ್ತು ಮಾಡಲಿಲ್ಲ.<noinclude></noinclude>
0yanljr5rflegskjos7qz8oyv7pd1tf
ಪುಟ:Chirasmarane-Niranjana.pdf/೨೭೨
104
13091
324577
65336
2026-06-07T16:26:00Z
Vikashegde
1258
/* Proofread */
324577
proofread-page
text/x-wiki
<noinclude><pagequality level="3" user="Vikashegde" />{{rh|center=|left=ಚಿರಸ್ಮರಣೆ|right=೨೭೩}}</noinclude>“ನಿಮ್ಮ ಕೊನೇ ಆಸೆಯೇನು? ನಡೆಸಿಕೊಡ್ತೇವೆ."
"ಏನಪ್ಪ? ಏನು ಕುಂಞಂಬು? ಅಬೂಬಕರ್–? ಹೇಳಿ. ನಮ್ಮ ಕೊನೆ ಆಸೆ ತಿಳಿಸಿದರೆ ನಡೆಸಿಕೊಡ್ತಾರಂತೆ!"
ಅಬೂಬಕರ್ ನ ನಗೆ. ವ್ಯಂಗ್ಯ ಧ್ವನಿ:
"ಸಾಮ್ರಾಜ್ಯಶಾಹಿ ನಾಶವಾಗೋದನ್ನ ನೋಡಿ ಸಾಯ್ಬೇಕೂಂತ ನಮ್ಮ ಆಸೆ. ನಡೆಸಿಕೊಡ್ತಾರಾ ಕೇಳು ಚಿರುಕಂಡ!"
"ಆಹ್ಹಾ!"
ಆದರೂ ಅಪ್ಪೂ ಚಿರುಕಂಡನನ್ನು ಒಂದು ವಿಷಯ ಕಾಡುತ್ತಿತ್ತು: ಮಾಸ್ತರು....ಮಾಸ್ತರನ್ನು ಕಾಣುವುದು ಸಾಧ್ಯವಾದರೆ?
"ಇದೊಂದು ಆಸೆಯಿದೆ ಕುಂಞಂಬು. ಕೇಳೋಣವೇ ಅಬೂಬಕರ್?"
"ಕೇಳು ಸಂಗಾತಿ."
"ಜೇಲರೆ, ನಮಗೆಲ್ಲ ಇರುವುದೊಂದೇ ಆಸೆ.. ನಮ್ಮ ಮಾಸ್ತರೊಡನೆ ಭೇಟಿ ಏರ್ಪಾಟು ಮಾಡಿ."
ಸೆರೆಮನೆಯ ನಿಯಮಗಳು....
"ಆತ ಕೈದಿ. ಅದು ಸಾಧ್ಯವಿದೆಯೋ ಇಲ್ಲವೋ.... ಸೂಪರಿಂಟೆಂಡೆಂಟರನ್ನು ಕೇಳ್ತೇನೆ"
{{center|***}}
{{gap}}ಎರಡು ಜತೆ ಬೂಟುಗಳು ಸದ್ದು, ಮತ್ತೆ ಯಾರು? ಸೂಪರಿಂಟೆಂಡೆಂಟರೆ ಬಂದರೆ?
{{gap}}ಅವರು ಬಂದೂಕುಧಾರಿಗಳಾದ ಪಹರೆಯವರು, ನಡುವೆ ಮಾಸ್ತರು ಒಂದೊಂದು ಕೈಗೂ ಒಂದೊಂದು ಸರಪಳಿ....
{{gap}}ನಾಲ್ಪರೂ ಎದ್ದು ನಿಂತರು. ತರಗತಿಯ ವಿದಾರ್ಥಿಗಳ ಹಾಗೆ.
{{gap}}ಜೇಲರು ಬಂದು ಹೇಳಿದ:
{{gap}}"ಭೇಟಿಗೆ ಸಮ್ಮತಿ ಕೊಟ್ಟಿದಾರೆ. ಆದರೆ ಹೆಚ್ಚು ತಡ ಮಾಡ್ಬೇಡಿ!"
{{gap}}ಕಂಪಿಸುತ್ತಿದ್ದ ಧ್ವನಿಯಲ್ಲಿ ಚಿರುಕಂಡನೆಂದ.
{{gap}}"ನೀವೆಲ್ಲಾ ಸ್ವಲ್ಪ ದೂರ ಹೋಗ್ತೀರಾ?"
{{gap}}"Sorry ಭೇಟಿಯ ಸಮಯದಲ್ಲಿ ನಾವಿಲ್ಲೇ ಇರ್ಬೇಕೂಂತ ಆಜ್ಞೆಯಾಗಿದೆ."
{{gap}}ಅಬೂಬಕರ್ ಸಿಡಿದು ನುಡಿದ:<noinclude></noinclude>
a3j6pw32crb70019bl835mt67a4gjsp
324578
324577
2026-06-07T16:29:23Z
Vikashegde
1258
324578
proofread-page
text/x-wiki
<noinclude><pagequality level="3" user="Vikashegde" />{{rh|center=|left=ಚಿರಸ್ಮರಣೆ|right=೨೭೩}}</noinclude>“ನಿಮ್ಮ ಕೊನೇ ಆಸೆಯೇನು? ನಡೆಸಿಕೊಡ್ತೇವೆ."
"ಏನಪ್ಪ? ಏನು ಕುಂಞಂಬು? ಅಬೂಬಕರ್–? ಹೇಳಿ. ನಮ್ಮ ಕೊನೆ ಆಸೆ ತಿಳಿಸಿದರೆ ನಡೆಸಿಕೊಡ್ತಾರಂತೆ!"
ಅಬೂಬಕರ್ ನ ನಗೆ. ವ್ಯಂಗ್ಯ ಧ್ವನಿ:
"ಸಾಮ್ರಾಜ್ಯಶಾಹಿ ನಾಶವಾಗೋದನ್ನ ನೋಡಿ ಸಾಯ್ಬೇಕೂಂತ ನಮ್ಮ ಆಸೆ. ನಡೆಸಿಕೊಡ್ತಾರಾ ಕೇಳು ಚಿರುಕಂಡ!"
"ಆಹ್ಹಾ!"
ಆದರೂ ಅಪ್ಪೂ ಚಿರುಕಂಡನನ್ನು ಒಂದು ವಿಷಯ ಕಾಡುತ್ತಿತ್ತು: ಮಾಸ್ತರು....ಮಾಸ್ತರನ್ನು ಕಾಣುವುದು ಸಾಧ್ಯವಾದರೆ?
"ಇದೊಂದು ಆಸೆಯಿದೆ ಕುಂಞಂಬು. ಕೇಳೋಣವೇ ಅಬೂಬಕರ್?"
"ಕೇಳು ಸಂಗಾತಿ."
"ಜೇಲರೆ, ನಮಗೆಲ್ಲ ಇರುವುದೊಂದೇ ಆಸೆ.. ನಮ್ಮ ಮಾಸ್ತರೊಡನೆ ಭೇಟಿ ಏರ್ಪಾಟು ಮಾಡಿ."
ಸೆರೆಮನೆಯ ನಿಯಮಗಳು....
"ಆತ ಕೈದಿ. ಅದು ಸಾಧ್ಯವಿದೆಯೋ ಇಲ್ಲವೋ.... ಸೂಪರಿಂಟೆಂಡೆಂಟರನ್ನು ಕೇಳ್ತೇನೆ"
{{***|3}}
{{gap}}ಎರಡು ಜತೆ ಬೂಟುಗಳು ಸದ್ದು, ಮತ್ತೆ ಯಾರು? ಸೂಪರಿಂಟೆಂಡೆಂಟರೆ ಬಂದರೆ?
{{gap}}ಅವರು ಬಂದೂಕುಧಾರಿಗಳಾದ ಪಹರೆಯವರು, ನಡುವೆ ಮಾಸ್ತರು ಒಂದೊಂದು ಕೈಗೂ ಒಂದೊಂದು ಸರಪಳಿ....
{{gap}}ನಾಲ್ಪರೂ ಎದ್ದು ನಿಂತರು. ತರಗತಿಯ ವಿದಾರ್ಥಿಗಳ ಹಾಗೆ.
{{gap}}ಜೇಲರು ಬಂದು ಹೇಳಿದ:
{{gap}}"ಭೇಟಿಗೆ ಸಮ್ಮತಿ ಕೊಟ್ಟಿದಾರೆ. ಆದರೆ ಹೆಚ್ಚು ತಡ ಮಾಡ್ಬೇಡಿ!"
{{gap}}ಕಂಪಿಸುತ್ತಿದ್ದ ಧ್ವನಿಯಲ್ಲಿ ಚಿರುಕಂಡನೆಂದ.
{{gap}}"ನೀವೆಲ್ಲಾ ಸ್ವಲ್ಪ ದೂರ ಹೋಗ್ತೀರಾ?"
{{gap}}"Sorry ಭೇಟಿಯ ಸಮಯದಲ್ಲಿ ನಾವಿಲ್ಲೇ ಇರ್ಬೇಕೂಂತ ಆಜ್ಞೆಯಾಗಿದೆ."
{{gap}}ಅಬೂಬಕರ್ ಸಿಡಿದು ನುಡಿದ:<noinclude></noinclude>
ogu158040rwwf9xxgznrb2yifp6ilqq
324579
324578
2026-06-07T16:31:24Z
Vikashegde
1258
324579
proofread-page
text/x-wiki
<noinclude><pagequality level="3" user="Vikashegde" />{{rh|center=|left=ಚಿರಸ್ಮರಣೆ|right=೨೭೩}}</noinclude>“ನಿಮ್ಮ ಕೊನೇ ಆಸೆಯೇನು? ನಡೆಸಿಕೊಡ್ತೇವೆ."
"ಏನಪ್ಪ? ಏನು ಕುಂಞಂಬು? ಅಬೂಬಕರ್–? ಹೇಳಿ. ನಮ್ಮ ಕೊನೆ ಆಸೆ ತಿಳಿಸಿದರೆ ನಡೆಸಿಕೊಡ್ತಾರಂತೆ!"
ಅಬೂಬಕರ್ ನ ನಗೆ. ವ್ಯಂಗ್ಯ ಧ್ವನಿ:
"ಸಾಮ್ರಾಜ್ಯಶಾಹಿ ನಾಶವಾಗೋದನ್ನ ನೋಡಿ ಸಾಯ್ಬೇಕೂಂತ ನಮ್ಮ ಆಸೆ. ನಡೆಸಿಕೊಡ್ತಾರಾ ಕೇಳು ಚಿರುಕಂಡ!"
"ಆಹ್ಹಾ!"
ಆದರೂ ಅಪ್ಪೂ ಚಿರುಕಂಡನನ್ನು ಒಂದು ವಿಷಯ ಕಾಡುತ್ತಿತ್ತು: ಮಾಸ್ತರು....ಮಾಸ್ತರನ್ನು ಕಾಣುವುದು ಸಾಧ್ಯವಾದರೆ?
"ಇದೊಂದು ಆಸೆಯಿದೆ ಕುಂಞಂಬು. ಕೇಳೋಣವೇ ಅಬೂಬಕರ್?"
"ಕೇಳು ಸಂಗಾತಿ."
"ಜೇಲರೆ, ನಮಗೆಲ್ಲ ಇರುವುದೊಂದೇ ಆಸೆ.. ನಮ್ಮ ಮಾಸ್ತರೊಡನೆ ಭೇಟಿ ಏರ್ಪಾಟು ಮಾಡಿ."
ಸೆರೆಮನೆಯ ನಿಯಮಗಳು....
"ಆತ ಕೈದಿ. ಅದು ಸಾಧ್ಯವಿದೆಯೋ ಇಲ್ಲವೋ.... ಸೂಪರಿಂಟೆಂಡೆಂಟರನ್ನು ಕೇಳ್ತೇನೆ"
{{rule|3em}}
{{gap}}ಎರಡು ಜತೆ ಬೂಟುಗಳು ಸದ್ದು, ಮತ್ತೆ ಯಾರು? ಸೂಪರಿಂಟೆಂಡೆಂಟರೆ ಬಂದರೆ?
{{gap}}ಅವರು ಬಂದೂಕುಧಾರಿಗಳಾದ ಪಹರೆಯವರು, ನಡುವೆ ಮಾಸ್ತರು ಒಂದೊಂದು ಕೈಗೂ ಒಂದೊಂದು ಸರಪಳಿ....
{{gap}}ನಾಲ್ಪರೂ ಎದ್ದು ನಿಂತರು. ತರಗತಿಯ ವಿದಾರ್ಥಿಗಳ ಹಾಗೆ.
{{gap}}ಜೇಲರು ಬಂದು ಹೇಳಿದ:
{{gap}}"ಭೇಟಿಗೆ ಸಮ್ಮತಿ ಕೊಟ್ಟಿದಾರೆ. ಆದರೆ ಹೆಚ್ಚು ತಡ ಮಾಡ್ಬೇಡಿ!"
{{gap}}ಕಂಪಿಸುತ್ತಿದ್ದ ಧ್ವನಿಯಲ್ಲಿ ಚಿರುಕಂಡನೆಂದ.
{{gap}}"ನೀವೆಲ್ಲಾ ಸ್ವಲ್ಪ ದೂರ ಹೋಗ್ತೀರಾ?"
{{gap}}"Sorry ಭೇಟಿಯ ಸಮಯದಲ್ಲಿ ನಾವಿಲ್ಲೇ ಇರ್ಬೇಕೂಂತ ಆಜ್ಞೆಯಾಗಿದೆ."
{{gap}}ಅಬೂಬಕರ್ ಸಿಡಿದು ನುಡಿದ:<noinclude></noinclude>
jdi4uku90qj5s8m2nckf1jwkmsz0g2z
ಪುಟ:Chirasmarane-Niranjana.pdf/೨೭೩
104
13092
324580
65349
2026-06-07T16:39:08Z
Vikashegde
1258
/* Proofread */
324580
proofread-page
text/x-wiki
<noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=೨೭೪|right=}}</noinclude>{{gap}}"ಗೋಪ್ಯವಾಗಿ ನಾವು ಇಷ್ಟರಲ್ಲೇ ಇನ್ನೊಂದು ಒಳಸಂಚು ನಡೆಸ್ಟಹುದು
ಅಂತ ಭಯ, ಅಲ್ಲ?"
{{gap}}"ಇರಲಿ ಬಿಡು, ಅಬೂಬಕರ್..."
{{gap}}ಮಾಸ್ತರು ಆ ನಾಲ್ಕೂ ಕೊಠಡಿಗಳ ಎದುರು ನಿಂತು ಆ ನಾಲ್ವರನ್ನೂ
ನೋಡಿದರು ಮುಗುಳುನಗಲು ಯತ್ನಿಸಿದರು.
{{gap}}ಮಾತು--ಮಾತನಾಡಬೇಕು. ಭೇಟಿಯಿರುವುದು ಸಂಭಾಷಣೆಗೋಸ್ಕರ
ಅದರಲ್ಲೂ ಕೊನೆಯ ಭೇಟಿ.
{{gap}}ಆದರೆ ನಿಮಿಷಗಳು ಸದ್ದಿಲ್ಲದೆಯೆ ಉರುಳಿದುವು.
{{gap}}ಮಾಸ್ತರ ಆಪ್ತ ಶಿಷ್ಕನಾಗಿದ್ದ ಚಿರುಕಂಡನೆಂದ:
{{gap}}"ನಾಳೆ ಬೆಳಿಗ್ಗೆ ನಾವೆಲ್ಲ ಹೋಗ್ತೇವೆ ಸರ್"
{{gap}}ಪ್ರಿಯಶಿಷ್ಠನಾದ ಅಪ್ಪವೆಂದ:
{{gap}}"ನಮ್ಮನ್ನು ಮರೀಬೇಡಿ ಸರ್."
{{gap}}ಆ ಮಾತುಗಳಿಗೆ ಕಿವಿಗೊಡುವುದು ತಡೆಯಲಾಗದ ಸಂಕಟ. ಯಾಕಾದರೂ
ಈ ಹುಡುಗರು ಇಂತಹ ಭೇಟಿ ಬೇಕೆಂದರೋ? ಇನ್ನು ಆ ಕುಂಇಂಬು-
ಅಬೂಬಕರ್... ಒಬ್ಬರ ಮುಖದಿಂದೊಬ್ಬರ ಮುಖವನ್ನು ಮಾಸ್ತರು
ನೋಡುತ್ತಲೇ ನಿಂತರು.
{{gap}}ಇಲ್ಲ, ಮಾತನಾಡುವುದೇನೂ ಇರಲಿಲ್ಲ. ಮಾತು ಸಾಧ್ಯವಿರಲಿಲ್ಲ.
{{gap}}ಇನ್ನೂ ಒಂದು ನಿಮಿಷ ತಡವಾದರೆ ಅಳಲಿನ ಕಟ್ಟೆ ಒಡೆಯಬಹುದು. ಅದು ಸರಿಯಲ್ಲ, ಅಂಥ ಬೀಳ್ಕೊಡುಗೆ ಸರಿಯಲ್ಲ.
{{gap}}ಏನನ್ನೋ ಆಡಬೇಕೆಂದು ಮಾಸ್ತರೆಂದರು:
{{gap}}"ಅಪ್ಪು-ಚಿರುಕಂಡ, ಎಲ್ಲಾ ಜತೇಲೇ ಇರಿ... ಕುಂಇಂಬು-ಅಬೂಬಕರ್."
{{gap}}"ಇರ್ರೇವೆ, ಜತೆಯಾಗೇ ಇದ್ದೇವೆ."
{{gap}}ಇನ್ನು ಅಲ್ಲಿಂದ ಹೊರಡುವುದೇ ಮೇಲೆಂದು ಸರಪಳಿ ಬಿಗಿದಿದ್ದ
ಬಲಗೈಯನ್ನೆತ್ತಿ ಬಿಗಿಮುಷ್ಟಿಯ ವಂದನೆ ಕೊಡುತ್ತ ಮಾಸ್ತರೆಂದರು:
{{gap}}"ರಕ್ತನಮಸ್ಕಾರ ಬಾಂಧವರೇ!"
{{gap}}"ರಕ್ತನಮಸ್ಕಾರ ಸರ್! ರಕ್ತನಮಸ್ಕುರ ಸಂಗಾತಿ!”
ಕೊನೆಯ ಆಸೆಯ ಭೇಟಿ ಹಾಗೆ ಮುಗಿಯಿತು.
{{rule|3em}}<noinclude></noinclude>
8zgys6gal5lmnpp5uktpboeln3qxl9p
ಪುಟ:Chirasmarane-Niranjana.pdf/೨೭೪
104
13093
324581
65392
2026-06-07T16:43:44Z
Vikashegde
1258
/* Proofread */
324581
proofread-page
text/x-wiki
<noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=|right=೨೭೫}}</noinclude>{{gap}}ಕಾರಿರುಳು. ಕೊಠಡಿಗಳ ಹೊರಗೆ ನಕ್ಷತ್ರ ರಾಶಿ ಬೀರಿದ ಮಬ್ಬುಬೆಳಕು. ಆಗಾಗ್ಗೆ 'ಆಲ್-ಬೇಲ್' ಕೂಗು. ಪಹರಿ ಗಂಟೆ ಹೊಡೆಯುತ್ತಿದ್ದಾನೆ. ಎಂಟು, ಒಂಭತ್ತು ಹತ್ತು...
{{gap}}ನಿದ್ದೆಗೆ ಆ ರಾತ್ರಿ ಕೆಲಸವಿರಲಿಲ್ಲ. ಘಳಿಗೆ ಬಟ್ಟಲು ಸ್ವಲ್ಪವಾಗಿಯೇ ಬರಿದಾಗುತ್ತಿದೆ. ಆದರೂ ಅವರ ವಿಚಾರಗಳು ಲೋಕ ಸಂಚಾರ ಮಾಡುತ್ತಿವೆ. ಕಯ್ಯೂರು-ಕಯ್ಯೂರಿನಿಂದ ಸ್ಟಲಿನ್ ಗ್ರಾಡಿಗೆ; ಅಲ್ಲಿಂದ ಲಂಡನಿಗೆ.... ದಿಲ್ಲಿಗೆ...
{{gap}}-"ಚಿರುಕಂಡ, ಕುಂಞಂಬು ಏನ್ಮಾಡ್ತಿದ್ದಾನೆ? ಮಾತಾಡು ಅನ್ನು ಅಬೂಬಕರ್ ಗೆ"
{{gap}}–"ಏನನ್ನ ಮಾತಾಡ್ಬೇಕಂತೆ?"
{{gap}}-"ಏನಾದರೂ....
{{gap}}ಬಾಲ್ಕಕ್ಕೆ ಸಂಬಂಧಿಸಿದ ಯಾವುದೋ ವಿಷಯ. ಯಾವುದೋ ನೆನಪು.
{{gap}}ಚಿರುಕಂಡನ ಮೆದುಳು, ರೈತ ಸಮ್ಮೇಳನ ಏರ್ಪಡಿಸಲು ತಾವು ಸಿದ್ದತೆ ಮಾಡುತ್ತಿದ್ದ ದಿನಗಳನ್ನು ಕುರಿತು ಯೋಚಿಸುತ್ತಿದೆ. ಆ ಸುಬ್ಬಯ್ಯ... ಆತನಿಗೂ ಹೆಂಡತಿ ಮಕ್ಕಳಿದ್ದರಂತೆ. ಆದರೆ ಆತ ಪರಕೀಯ ಸರಕಾರದ ಕಾವಲುನಾಯಿಯಾಗಿದ್ದ, ನಾಯಿಯಂತೆ ಸತ್ತ. ತಾವು ಆತನನ್ನು ಕೊಲ್ಲಲಿಲ್ಲ, ಆದರೆ ಆ ಸಾವಿನ ನೆಪ ಹೇಳಿ ತಮ್ಮ ಕೊಲೆಗೆ ಏರ್ಪಾಟಾಗಿದೆ... ಕುಂಞಂಬು- ಸಂಘದ ಕಟ್ಟಡಕ್ಕೆ ಆತ ಹಿಂದೆ ಜಾಗ ಕೊಟ್ಟುದಕ್ಕೆ ಈಗ ತೆರಬೇಕಾಗಿ ಬಂದಿರುವ ಬೆಲೆ ಎಂಥದು! ಅಬೂಬಕರ್-ತನ್ನ ಸ್ವಂತದ ವಿಷಯ ಒಮ್ಮೆಯಾದರೂ ಆತ ಯೋಚಿಸಿದ್ದನೋ ಇಲ್ಲವೋ....
{{gap}}ನರಳುವ ಹಾಗೆ ಆಗುತ್ತಿದೆ ಅಪುವಿಗೆ.
{{gap}}"ಯಾಕೆ ಅಪ್ಪು? ಏನಾಗ್ತಿದೆ ಅಪ್ಪು?"
{{gap}}"ಏನೂ ಇಲ್ಲ.. ಏನೂ ಇಲ್ಲ."
{{gap}}ತಾವು ಯಾರೂ ಇನ್ನು ಸಪ್ಪೆ ಮುಖ ಹಾಕಬಾರದು.'ವೀರರ ಹಾಗೆ ಗಲ್ಲಿಗೆ ಏರಿದರು" ಎಂದು ನಾಳೆಯ ಇತಿಹಾಸಕಾರ ಬರೆಯಬೇಕು.
{{gap}}"ನನಗೊಂದು ಕೊರಗು ಚಿರುಕಂಡ"
{{gap}}"ಏನಪ್ಪು?"
{{gap}}"ನಾವು ನಾಲ್ಕು ಜನರಲ್ಲಿ ಹಾಡೋರು ಒಬ್ಬರೂ ಇಲ್ಲ... ಇದ್ದಿದ್ದರೆ ಹಾಡು ಹೇಳ್ತಾ ಗಲ್ಲಿಗೇರಿಸುವಲ್ಲಿಗೆ ಹೋಗ್ಬಹುದಿತ್ತು..."
{{gap}}"ಈಗ ಜಯಘೋಷ ಮಾಡ್ತಾ ಹೋಗೋಣವಂತೆ."
{{gap}}ಕುಂಞಂಬುವಿಗೆ ಒಡಹುಟ್ಟಿದವರ ನೆನಪಾಗುತ್ತಿದೆ. ಬಹಳ ಸಹಸ್ರ ಸೋದರರ<noinclude></noinclude>
kk7tvjoaznnmxczt8yo0bphgib60bku
ಪುಟ:Chirasmarane-Niranjana.pdf/೨೭೫
104
13094
324582
65410
2026-06-07T16:47:13Z
Vikashegde
1258
/* Proofread */
324582
proofread-page
text/x-wiki
<noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=೨೭೬|right=}}</noinclude>–ರಾಷ್ಟದ ಕೋಟಿ ಸೋದರರ–ನೆನಪು ಇನ್ನೊಮ್ಮೆ ಅವಕಾಶ ದೊರೆತರೆ ಇದನ್ನೇ ತಾನು ಮಾಡುವುದು; ಮತ್ತೂ ಇದೇ ಹಾದಿಯನ್ನೇ ತಾನು ತುಳಿಯುವುದು.
{{gap}}ಅಬೂಬಕರ್ ಗೆ ಕುಟ್ಟಿಕೃಷ್ಣನ ಚಿತ್ರ ಕಣ್ಣೆದುರಿಗೆ ಕುಟ್ಟಿತ್ತಿದೆ. 'ಸಂಗಾತಿ' ಎನ್ನುವುದು ಸಾಲದೆಂದು, 'ಅಣ್ಣಾ' ಎಂದೂ ಆತ ತನ್ನನ್ನು ಕರೆಯುತ್ತಿದ್ದ.... ನಾಳೆ ದೇಶ ಸ್ವತಂತ್ರವಾದಾಗ ಜನರಾಜ್ಯ ಬಂದಾಗ ಆತ ಬಿಡುಗಡೆ ಹೊಂದಿ ಕಯ್ಯೂರಿಗೆ ಮರಳುವ; ಬಾಲಸಂಘದ ಬದಲು ಸ್ವಯಂ ಸೇವಕ ಪಡೆಗೇ ಆತ ನಾಯಕನಾಗುವ.
{{gap}}"ಚಿರುಕಂಡ, ಮೀನು ಕಚ್ತದೇಂತ ನೀನು ನೀರಿಗಿಳೀದೆ ದಡದ ಮೇಲೇ ಕೂತಿರ್ತಿದ್ದೆ- ನೆನಪಿದೆಯಾ?"
{{gap}}"ಹೂಂ"
{{gap}}....ನಡುರಾತ್ರಿ ಕಳೆದಿದೆ. ಪಹರೆಯವರು ಅತ್ತಿತ್ತ ಕಂದೀಲು ಹಿಡಿದು ಹೋಗಿ ಬರುತ್ತಿದ್ದಾರೆ. ಸುಂಯ್ ಗುಡುತ್ತಿದೆಯಲ್ಲ ಗಾಳಿ? ಯಾಕೆ, ಯಾರೂ ನಿದ್ರಿಸಿಲ್ಲವೆ? ಮಾಸ್ತರು, ಕಣ್ಣ, ಯಾರೂ ನಿದ್ರಿಸಿಲ್ಲವೆ?
{{gap}}ಹಾಡು! ಅವರಿಗೆಲ್ಲ ಪ್ರಿಯವಾದ ಹಾಡು! ಅವರಿಗೆಲ್ಲ ಪ್ರಿಯನಾದ ಕಣ್ಣ ಹಾಡುತ್ತಿದ್ದಾನೆ! ಗಾಳಿಯಲ್ಲಿ ತೇಲುತ್ತ ಬಂದು ಕೊಠಡಿಯೊಳಕ್ಕೆ ಅದು ನುಸುಳುತ್ತಿದೆ.
{{gap}}ಅಗೋ, ಬೇರೆ ಕಡೆಗಳಿ೦ದ! ಎಲ್ಲರೂ ಹಾಡುವವರೇ.. ಯಾಕೆ, ಅದು ಕಳ್ಳಕಾಕರಿರುವ ಬರಾಕು ಅಲ್ಲವೆ? ಎಂಥ ಕಳ್ಳರು? ಅವರಿಗೆ ಇದೊಂದು ಅರ್ಥವಾಗುತ್ತಿಲ್ಲವೆಂದೆ? ಅವರಿಗೇನು ಹಾಡಲು ಬರದೆಂದೆ?
{{gap}}ಅದು ಯಾರ ಸ್ವರವೊ? ಅದು ಯಾರದೊ? ಯಾರದೊ ಅದು?
{{gap}}"ಅಪ್ಪು, ಕೇಳಿಸ್ತಿದೆಯಾ? ಯಾರೂ ಮಲಗಿಲ್ಲ. ನಾವು ಹೊರಡುವ ಹೊತ್ತಿಗೆ ಮುಂಚೆ ಎಲ್ಲರೂ ಎಚ್ಚರವಿದ್ದು ವಿದಾಯ ಹೇಳ್ತಿದ್ದಾರೆ..."
{{gap}}"ಹೂಂ"
{{gap}}ಕುಂಞಂಬುವಿಗೆ ಭಾವೋದ್ವೇಗದಿಂದ ಸಂಕಟವಾಗುತ್ತಿದೆ. ಆತ, ಕತ್ತಲನ್ನು ಬೆದರಿಸಿ ಗುಡುಗುತ್ತಿದ್ದಾನೆ:
{{gap}}"ದಲಿತಕೋಟಿಯ ಎಲುಬುಗೂಡಿನ ಮೇಲೆ ಕಟ್ಟಿದ ಈ ಸಾಮ್ರಾಜ್ಯ ಖಂಡಿತ ಪುಡಿಪುಡಿಯಾಗ್ತದೆ! ಲೋಕದೆಲ್ಲ ದುಡಿಯುವ ಜನ ವಿಜಯಪತಾಕ ಹಾರಿಸಿಯೇ ಹಾರಿಸ್ತಾರೆ!"
{{gap}}ಗೊಗ್ಗರಸ್ವರದಲ್ಲಿ ಅದೇನನ್ನೋ ಅಬೂಬಕರ್ ಹಾಡತೊಡಗುತ್ತಾನೆ. ಅದು<noinclude></noinclude>
fi2la8fv4zg19frjyhhpwdatuu6go83
ಪುಟ:Chirasmarane-Niranjana.pdf/೨೭೬
104
13095
324583
65578
2026-06-07T16:52:30Z
Vikashegde
1258
/* Proofread */
324583
proofread-page
text/x-wiki
<noinclude><pagequality level="3" user="Vikashegde" />{{rh|center=ಚಿರಸ್ಮರಣೆ|left=|right=೨೩೩}}</noinclude>ಗದೃವೊ ಪದ್ಯವೊ? ಲೆಫ್ಟ್ ರೈಟ್ ನಿರ್ದೇಶವೊ? ನಾಭಿಯಿಂದ ಹೊರಟು
ಗಗನವೇರಿದ ಆಲಾಪನೆಯೊ?
{{gap}}ತನ್ನ ಕೊಠಡಿಯೊಳಗಿಂದಲೆ ಯಾರೊ ಹಾಡಿದಂತಾಗುತ್ತಿದೆ ಅಪ್ಪುವಿಗೆ, ಹೆಣ್ಣು ಧ್ವನಿ. ಮಂಜುಳ ಕಂಠ....
{{gap}}"ಓಮನ ಕಿಡಾವೇ..."
{{gap}}ತಾಯಿ!
{{gap}}"ಅಮ್ಮಾ-ಅಮ್ಮಾ...."
{{gap}}....ಧಣ್, ಢಣ್, ಢಣ್, ಢಣ್... ಇನ್ನೆರಡು ಘಂಟಿ ಹೊತ್ತು .
{{gap}}ಎಚ್ಚತ್ತೇ ಇದೆ ಸೆರೆಮನೆ. ಕೋಳಿ ಕೂಗುತ್ತಿದೆ. ಸರಿಯಾದ ಹೊತ್ತು ಹೌದೋ
ಅಲ್ಲವೋ--ಆದರೂ ವಾತಾವರಣದ ಪ್ರಭಾವಕ್ಕೊಳಗಾಗಿ ಪ್ರಾಕಾರದಾಚೆಗಿನ.
ಮರಗಳಿಂದ ಕಾಗೆಗಳು ಕಾಕಾ ಎನ್ನುತ್ತಿವೆ...
{{gap}}ಮತ್ತೆ ಅದೊಂದೂ ಕೇಳಿಸದ ಹಾಗೆ ಸಹಸ್ರ ಕಂಠಗಳಿಂದ ಹಾಡು, ಎಂದೂ
ಮುಗಿಯದ ಹಾಡು.
{{gap}}ತಣ್ಣನೆಯ ಗಾಳಿ. ಉಷೆ ಬರುತ್ತಿದ್ದಾಳೆ, ಅವರ ಪಾಲಿಗೆ, ಕೊನೆಯ ಬಾರಿಗೆ.
ಆದರೆ ಅದೇಕೋ ಆಕೆ ಅವಕುಂಠನವತಿ ಈಗ. ಉಟ್ಟಿರುವುದು ಕರಿಯ ಸೀರೆ.
{{gap}}ಚಿರುಕಂಡ ಎದ್ದು ನಿಂತು ಹೇಳಿದ:
{{gap}}"ಸಂಗಾತಿಗಳೇ ! ಏಳಿ! ಬೆಳಗಾಯ್ತು...!"
{{gap}}ಸಶಸ್ತ್ರದಳ ಬೆಂಗಾವಲಿಗೆ. ಜೇಲರು, ಮೇಲಧಿಕಾರಿ; ಜಿಲ್ಲೆಯ ಕಲೆಕ್ಟರು.
{{gap}}"ಮಾರ್ಚ್ !”
{{gap}}ಆ ನಾಲ್ವರನ್ನು ಮುಂದಕ್ಕೆ ನಡೆಸಿದರು. ದೃಢವಾಗಿತ್ತು ಅವರೆಲ್ಲರ ನಡಿಗೆ.
{{gap}}“ಹಾಲ್ಟ್”
{{gap}}ಜೇಲಿನ ಅಧಿಕಾರಿ ಕೈಗಡಿಯಾರ ನೋಡಿದ. ಇನ್ನೈದು ನಿಮಿಷ:
{{gap}}ಬೇಡಿಗಳನ್ನು ಬಿಚ್ಚಿದರು. ಕೆಳಗಿನಿಂದ ಅವರನ್ನು ವಧಾಸ್ಥಾನಕ್ಕೆ ಒಯ್ಯಬೇಕಿನ್ನು.
{{gap}}ಆಗ ಚಿರುಕಂಡ ನಿರ್ಭೀತವಾದ ಏಕಪ್ರಕಾರವಾದ ಧೃನಿಯಲ್ಲಿ ಹೇಳಿದ:
{{gap}}"ಮೈ ಮುಟ್ಟಬೇಡಿ. ನಾವೇ ಮೇಲಕ್ಕೆ ಹೋಗ್ತೇವೆ!"
{{gap}}"ಹೋಗಲಿ ಬಿಡಿ” ಎಂದರು ಕಲೆಕ್ಟರು.
{{gap}}ಸಂದರ್ಭ ಬಂದರೆ ಸಿದ್ಧರಾಗುವುದೇ ಮೇಲೆಂದು ಸಶಸ್ತ್ರ ದಳದೊಂದು.
ಸಾಲಿನವರು ಬಂದೂಕು ಗುರಿ ಇಟ್ಟು ನಿಂತರು.<noinclude></noinclude>
0fnxjhz1zeq9jomp8e0ywcadl61bwlx
ಪುಟ:Chirasmarane-Niranjana.pdf/೨೭೭
104
13096
324584
324359
2026-06-07T16:53:49Z
Vikashegde
1258
324584
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|left=೨೭೮|center=|right=ಚಿರಸ್ಮರಣೆ}}
{{gap}}ಇನ್ನೂ ಎರಡು ನಿಮಿಷ.
{{gap}}ಸೆರೆಮನೆಯೊಳಗಿಂದ ಜನಯೋಧರ ಗೀತ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತ ಕೇಳಿ
ಬಂತು.
{{center|***}}
{{gap}}ಕಲೆಕ್ಟರ್ ಮುಖದ ಮೇಲೆ ಸಿಡುಕು ಭಾವ ತೋರಿದರು. ಅಧಿಕಾರಿ ಕೈಗಡಿಯಾರವನ್ನೇ ನೋಡಿದ.
{{gap}}ಕೆಳಗೆ ಕಂದಕ.ಅದಕ್ಕೆ ಅನಿಸಿ ನಾಲ್ಕು ಹಲಿಗೆಗಳು.ಮೇಲುಗಡೆ ತೂಗಾಡುತ್ತಿದ್ದ
ಉರುಳುಗಳು.
{{gap}}"ಮುಖಗಳಿಗೆ ಮುಸುಕು ಹಾಕಿ!"
{{gap}}"ಇಲ್ಲ ನಮಗೆ ಮುಸುಕು ಬೇಕಾಗಿಲ್ಲ!"
{{gap}}ಉರುಳು ಒಂದೊಂದು ಕೊರಳಿಗೂ ಆಭರಣವಾಯಿತು.
{{gap}}ಉಚ್ಚಕಂಠದಿಂದ ಚಿರುಕಂಡ ಕೂಗಿದ:
{{gap}}"ಇಂಕ್ವಿಲಾಬ್-"
{{gap}}ಅಪ್ಪು, ಕುಂಬು, ಅಬೂಬಕರ್ ಉತ್ತರವಿತ್ತರು:
{{gap}}ಜಿಂದಾಬಾದ್!"
{{gap}}"ಸಾಮ್ರಾಜ್ಯಶಾಹಿ--"
{{gap}}"ನಾಶವಾಗಲಿ!"
{{gap}}"ಕ್ರಾಂತಿಗೆ--"
{{gap}}"ಜಯವಾಗಲಿ!"
{{gap}}ಅಧಿಕಾರಿ ಸನ್ನೆ ಮಾಡಿದ. ಉರುಳುಗಳು ಕತ್ತನ್ನು ಹಿಸುಕಿದುವು; ಹೊರಡಲು ಸಿದ್ಧವಾಗಿದ್ದ ಸ್ವರಗಳನ್ನು ತಡೆದುವು. ಹಲಿಗೆಗಳನ್ನು ಅರೆಕ್ಷಣದೆಲ್ಲಿ
ತಪ್ಪಿಸಿದ್ದಾಯಿತು. ಆ ನಾಲ್ಕು ದೇಹಗಳೂ ಕಂದಕದಲ್ಲಿ ತೂಗಾಡಿದುವು. ಉರುಳು
ಮತ್ತಷ್ಟು ಮತ್ತಷ್ಟು ಬಿಗಿಯಾಯಿತು.
{{gap}}'ಸಾಯುವವರೆಗೂ ನೇಣು...'
{{gap}}ತೂಗಾಡುತ್ತಿದ್ದ ಜೀವಗಳಿಂದ ಸ್ವರ ಹೊರಡುತ್ತಿಲ್ಲ, ಆದರೆ ಸೆರೆಮನೆಗೆ
ಸೆರೆಮನೆಯೇ ಘೋಷಗಳಿಂದ ಪ್ರತಿಧ್ವನಿಸುತ್ತಿದೆ.
{{gap}}ಬೆಳಗಾಗಿತ್ತು. ಸೂರ್ಯ ತೋರಿಸಿಕೊಳ್ಳಬೇಕಾದ ಹೊತ್ತು. ಆದರೂ ಯಾಕೋ ಅವನ ಸುಳಿವಿಲ್ಲ.<noinclude></noinclude>
lvdpmpm6iyle5npq8gqebfw0k9n9ajh
ಪರಿವಿಡಿ:ಚಂದ್ರನಾಥ.pdf
106
120799
324557
2026-06-07T12:54:10Z
Reema Jalihal
7674
ಹೊಸ ಪುಟ:
324557
proofread-index
text/x-wiki
{{:MediaWiki:Proofreadpage_index_template
|Type=book
|Title=[[ಚಂದ್ರನಾಥ]]
|Language=kn
|Volume=
|Author=ಸರತ್ ಚಂದ್ರ ಚಟ್ಟೋಪಾಧ್ಯಾಯ
|Translator=ಗುರುನಾಥ ಜೋಶಿ
|Editor=
|Illustrator=
|School=
|Publisher=ಸಕಲ ಸ್ವಾತಂತ್ರ್ಯ
|Address=
|Year=1944
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=
|Image=1
|Progress=X
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
15qdylmaphk9axvk5zrzvz2g4055ybk
324558
324557
2026-06-07T12:56:12Z
Reema Jalihal
7674
324558
proofread-index
text/x-wiki
{{:MediaWiki:Proofreadpage_index_template
|Type=book
|Title=[[ಚಂದ್ರನಾಥ]]
|Language=kn
|Volume=
|Author=ಸರತ್ ಚಂದ್ರ ಚಟ್ಟೋಪಾಧ್ಯಾಯ
|Translator=ಗುರುನಾಥ ಜೋಶಿ
|Editor=
|Illustrator=
|School=
|Publisher=ಸಕಲ ಸ್ವಾತಂತ್ರ್ಯ
|Address=
|Year=1944
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=pdf
|Image=1
|Progress=X
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
nvrt9kr2814312j9tv3d1vdbgrqztgu
324559
324558
2026-06-07T13:04:13Z
Reema Jalihal
7674
324559
proofread-index
text/x-wiki
{{:MediaWiki:Proofreadpage_index_template
|Type=book
|Title=[[ಚಂದ್ರನಾಥ]]
|Language=kn
|Volume=
|Author=ಸರತ್ ಚಂದ್ರ ಚಟ್ಟೋಪಾಧ್ಯಾಯ
|Translator=ಗುರುನಾಥ ಜೋಶಿ
|Editor=
|Illustrator=
|School=
|Publisher=ಸಕಲ ಸ್ವಾತಂತ್ರ್ಯ
|Address=
|Year=1944
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=pdf
|Image=4
|Progress=X
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
4zrcvjoodn991y0jf1l54jkjqlhdevr
324563
324559
2026-06-07T13:22:36Z
Reema Jalihal
7674
324563
proofread-index
text/x-wiki
{{:MediaWiki:Proofreadpage_index_template
|Type=book
|Title=[[ಚಂದ್ರನಾಥ]]
|Language=kn
|Volume=
|Author=ಸರತ್ ಚಂದ್ರ ಚಟ್ಟೋಪಾಧ್ಯಾಯ
|Translator=ಗುರುನಾಥ ಜೋಶಿ
|Editor=
|Illustrator=
|School=
|Publisher=ಸಕಲ ಸ್ವಾತಂತ್ರ್ಯ
|Address=
|Year=1944
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=pdf
|Image=1
|Progress=X
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
nvrt9kr2814312j9tv3d1vdbgrqztgu
324564
324563
2026-06-07T13:24:02Z
Reema Jalihal
7674
324564
proofread-index
text/x-wiki
{{:MediaWiki:Proofreadpage_index_template
|Type=book
|Title=[[ಚಂದ್ರನಾಥ]]
|Language=kn
|Volume=
|Author=ಸರತ್ ಚಂದ್ರ ಚಟ್ಟೋಪಾಧ್ಯಾಯ
|Translator=ಗುರುನಾಥ ಜೋಶಿ
|Editor=
|Illustrator=
|School=
|Publisher=ಸಕಲ ಸ್ವಾತಂತ್ರ್ಯ
|Address=
|Year=1944
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=pdf
|Image=5
|Progress=X
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
eahz8z2zngcl3vwjkpfv9sa8g643opu
ಪುಟ:ಚಂದ್ರನಾಥ.pdf/೧
104
120800
324560
2026-06-07T13:09:57Z
Reema Jalihal
7674
/* ಪರಿಶೀಲಿಸಿದವು */ Created blank page
324560
proofread-page
text/x-wiki
<noinclude><pagequality level="3" user="Reema Jalihal" /></noinclude><noinclude></noinclude>
7booy57trr2os2dscg7i8w9qq0wnu6y
324568
324560
2026-06-07T15:34:44Z
Vikashegde
1258
/* Without text */
324568
proofread-page
text/x-wiki
<noinclude><pagequality level="0" user="Vikashegde" /></noinclude><noinclude></noinclude>
ttvonnlzfeaaugborzg10bkrmnkhx32
324570
324568
2026-06-07T15:35:29Z
Vikashegde
1258
/* Not proofread */
324570
proofread-page
text/x-wiki
<noinclude><pagequality level="1" user="Vikashegde" /></noinclude><noinclude></noinclude>
7faxviatgopi7rpoqh5l196izwoga32
324586
324570
2026-06-08T02:20:35Z
A826
6806
/* Without text */
324586
proofread-page
text/x-wiki
<noinclude><pagequality level="0" user="A826" /></noinclude><noinclude></noinclude>
8jv1m79oqytrvomi8no9d8impdweq4n
ಪುಟ:ಚಂದ್ರನಾಥ.pdf/೨
104
120801
324561
2026-06-07T13:10:13Z
Reema Jalihal
7674
/* Proofread */
324561
proofread-page
text/x-wiki
<noinclude><pagequality level="3" user="Reema Jalihal" /></noinclude><noinclude></noinclude>
7booy57trr2os2dscg7i8w9qq0wnu6y
324569
324561
2026-06-07T15:35:03Z
Vikashegde
1258
/* Without text */
324569
proofread-page
text/x-wiki
<noinclude><pagequality level="0" user="Vikashegde" /></noinclude><noinclude></noinclude>
ttvonnlzfeaaugborzg10bkrmnkhx32
324571
324569
2026-06-07T15:35:46Z
Vikashegde
1258
/* Not proofread */
324571
proofread-page
text/x-wiki
<noinclude><pagequality level="1" user="Vikashegde" /></noinclude><noinclude></noinclude>
7faxviatgopi7rpoqh5l196izwoga32
ಪುಟ:ಚಂದ್ರನಾಥ.pdf/೩
104
120802
324562
2026-06-07T13:10:21Z
Reema Jalihal
7674
/* Proofread */
324562
proofread-page
text/x-wiki
<noinclude><pagequality level="3" user="Reema Jalihal" /></noinclude><noinclude></noinclude>
7booy57trr2os2dscg7i8w9qq0wnu6y
ಪುಟ:ಚಂದ್ರನಾಥ.pdf/೪
104
120803
324565
2026-06-07T13:24:12Z
Reema Jalihal
7674
/* ಪರಿಶೀಲಿಸಲಾಗಿಲ್ಲ */ Created blank page
324565
proofread-page
text/x-wiki
<noinclude><pagequality level="1" user="Reema Jalihal" /></noinclude><noinclude></noinclude>
rpllnwuqhkx3tj5u39fot8bupctwzta
324566
324565
2026-06-07T13:24:25Z
Reema Jalihal
7674
/* Proofread */
324566
proofread-page
text/x-wiki
<noinclude><pagequality level="3" user="Reema Jalihal" /></noinclude><noinclude></noinclude>
7booy57trr2os2dscg7i8w9qq0wnu6y
ಪುಟ:ಚಂದ್ರನಾಥ.pdf/೫
104
120804
324567
2026-06-07T13:27:54Z
Reema Jalihal
7674
/* Proofread */
324567
proofread-page
text/x-wiki
<noinclude><pagequality level="3" user="Reema Jalihal" /></noinclude>{{center|{{xx-larger|ಚಂದ್ರನಾಥ}}}}
{{center|{{x-larger|ಶರಚ್ಚಂದ್ರ ಚಟ್ಟೋಪಾಧ್ಯಾಯರ}}}}
{{center|ಕಾದಂಬರಿ}}
{{center|ಕನ್ನಡಿಸಿದವರು :}}
{{center|{{x-larger|ಶ್ರೀ ಗುರುನಾಥ ಜೋಶಿ}}}}
{{center|ಎರಡನೆಯ ಮುದ್ರಣ}}
{{center|೧೯೪೪ }}
ಸೋಲ್ ಏಜಂಟರು :
{{center|ಸಾಹಿತ್ಯ ಭಾ೦ಡಾರ}}
{{center|ಹುಬ್ಬಳ್ಳಿ}}<noinclude></noinclude>
4oiqnoy6zesfi83cah87gutcnjwfu2x
ಸದಸ್ಯರ ಚರ್ಚೆಪುಟ:JhenkarMC
3
120805
324585
2026-06-07T17:31:17Z
ಕನ್ನಡ ವಿಕಿ ಸಮುದಾಯ
4988
ಹೊಸ ಬಳಕೆದಾರರ ಸ್ವಾಗತ
324585
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=JhenkarMC}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೨೩:೦೧, ೭ ಜೂನ್ ೨೦೨೬ (IST)
cd1xll96cuctr8ayisjs5bmpjrp1oaw