ಹೊಸಕೋಟೆ ಕೃಷ್ಣಶಾಸ್ತ್ರಿ

From Wikipedia

ಹೊಸಕೋಟೆ ಕೃಷ್ಣಶಾಸ್ತ್ರಿಗಳು ೧೮೭೦ರಲ್ಲಿ ಬೆಂಗಳೂರು ಜಿಲ್ಲೆಯ ಹೊಸಕೋಟೆಯಲ್ಲಿ ಜನಿಸಿದರು. ಇವರು ದಕ್ಷಿಣ ಭಾರತಹೊಯ್ಸಳ,ಚೋಳ,ಅಲೂಪ ಈ ರಾಜ ಮನೆತನಗಳ ಬಗೆಗೆ ಆಳವಾದ ಅಧ್ಯಯನ ಮಾಡಿ ವಿದ್ವತ್ಪೂರ್ಣ ಲೇಖನಗಳನ್ನು ಪ್ರಕಟಿಸಿದ್ದಾರೆ. ‘ದಕ್ಷಿಣ ಭಾರತದ ದೇವದೇವತಾ ಮೂರ್ತಿಗಳು’ ಎನ್ನುವ ಕೃತಿ ಇವರ ವಿದ್ವತ್ತಿನ ದ್ಯೋತಕವಾಗಿದೆ. ಇವರು ‘ಎಪಿಗ್ರಾಫಿಕಾ ಇಂಡಿಯಾ’ದ ಪ್ರಧಾನ ಸಂಪಾದಕರಾಗಿದ್ದರು. ಇವರಿಗೆ ರಾವ್ ಬಹಾದ್ದೂರ್ ಬಿರುದು ದೊರೆತಿತ್ತು.


೧೯೨೪ರಲ್ಲಿ ಕೋಲಾರದಲ್ಲಿ ನಡೆದ ೧೦ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು.


ಹೊಸಕೋಟೆ ಕೃಷ್ಣಶಾಸ್ತ್ರಿಗಳು ೧೯೨೮ರಲ್ಲಿ ನಿಧನರಾದರು.