ಸುನಂದಾ ಬೆಳಗಾಂವಕರ
From Wikipedia
ಸುನಂದಾ ಬೆಳಗಾವಕರ ಇವರು ಧಾರವಾಡದ ಮಹಿಷಿ ಕುಟುಂಬದವರು. ವಿವಾಹದ ನಂತರ ಆಫ್ರಿಕಾ ಖಂಡದ ಝಾಂಬಿಯಾ ದೇಶದಲ್ಲಿ ತಮ್ಮ ಪತಿಯೊಡನೆ ಮೂವತ್ತು ವರ್ಷ ಕಳೆದು, ಬಳಿಕ ಭಾರತಕ್ಕೆ ಹಿಂತಿರುಗಿದರು.
[ಬದಲಾಯಿಸಿ] ಸಾಹಿತ್ಯ
ಸುನಂದಾ ಬೆಳಗಾವಕರರವರು ಬರೆದ “ಕಜ್ಜಾಯ” ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಲೇಖಕಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಇದಲ್ಲದೆ ಇವರು "ಶಾಲ್ಮಲಿ" ಎನ್ನುವ ಕಾವ್ಯಸಂಕಲನವನ್ನು, “ನಾಸು” ಹಾಗು “ಝವೇರಿ” ಎನ್ನುವ ಎರಡು ಕಾದಂಬರಿಗಳನ್ನು ಬರೆದಿದ್ದಾರೆ.
ಸುನಂದಾ ಬೆಳಗಾವಕರ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.