ಉತ್ತಂಗಿ ಚನ್ನಪ್ಪ

From Wikipedia

ಚನ್ನಪ್ಪ ದಾನಿಯೇಲಪ್ಪ ಉತ್ತಂಗಿಯವರು ೧೮೮೧ ಅಕ್ಟೋಬರ ೨೮ ರಂದು ಜನಿಸಿದರು.

ತಿರುಳ್ಗನ್ನಡದ ತಿರುಕ ಎಂದು ಕರೆಯಿಸಿಕೊಂಡ ಉತ್ತಂಗಿಯವರು ಸರ್ವಜ್ಞನ ವಚನಗಳ ಸಂಪಾದನೆಗಾಗಿ ಖ್ಯಾತರಾಗಿದ್ದಾರೆ.

ಇವರ ಇತರ ಸಂಶೋಧನಾ ಕೃತಿಗಳು ಇಂತಿವೆ:

  • ಸಿದ್ಧರಾಮ ಸಾಹಿತ್ಯ ಸಂಗ್ರಹ
  • ಮೋಳಿಗೆ ಮಾರಯ್ಯನ ವಚನಗಳು
  • ರಾಣಿ ಮಹಾದೇವಿಯ ವಚನಗಳು
  • ಆರಯ್ಯನ ವಚನಗಳು
  • Heart of Lingayat Religion

ಉತ್ತಂಗಿ ಚನ್ನಪ್ಪನವರಿಗೆ ದೇವರಾಜ ಬಹಾದ್ದೂರ ಪ್ರಶಸ್ತಿ ಲಭಿಸಿದೆ.

ಉತ್ತಂಗಿ ಚನ್ನಪ್ಪನವರು ೧೯೪೯ರಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.