ಮಾಸ್ಟರ್ ಹಿರಣ್ಣಯ್ಯ

From Wikipedia

ಮಾಸ್ಟರ್ ಹಿರಣ್ಣಯ್ಯ (೧೯೩೪,ಫೆಬ್ರುವರಿ ೧೫) - ಹೆಸರಾಂತ ಕನ್ನಡ ನಾಟಕಕಾರ ಮತ್ತು ನಟ. ತಮ್ಮ ಪರಿಣಾಮಕಾರಿ ಭಾಷಣ ಶೈಲಿಯಿಂದ ಜನಮನವನ್ನು ಗೆದ್ದು ರಾಜಕೀಯ ಮತ್ತು ಭ್ರಷ್ಟಾಚಾರಗಳನ್ನು ಟೀಕಿಸಿದ ನಟ.

ಪರಿವಿಡಿ

[ಬದಲಾಯಿಸಿ] ಬದುಕು

ಮಾಸ್ಟರ್ ಹಿರಣ್ಣಯ್ಯನವರ ನಿಜವಾದ ಹೆಸರು ನರಸಿಂಹಮೂರ್ತಿ. ತಂದೆ ಹಿರಣ್ಣಯ್ಯ ಮತು ತಾಯಿ ಶಾರದಮ್ಮನವರು. ಅವರು ತಮ್ಮ ಬಾಲ್ಯದಲ್ಲಿ ತಮ್ಮ ತಂದೆ ಹಿರಣ್ಣಯ್ಯನವರು ನಿರ್ಮಿಸಿದ ವಾಣಿ ಚಿತ್ರದಲ್ಲಿ ಪಾತ್ರವಹಿಸಿದಾಗ ಮಾಸ್ಟರ್ ನರಸಿಂಹಮೂರ್ತಿ ಎಂಬ ಹೆಸರು ಬಂದಿತು. ಮುಂದೆ ಅವರ ತಂದೆಯಿಂದ ಮಾಸ್ಟರ್ ಹಿರಣ್ಣಯ್ಯ ಎಂಬ ಹೆಸರು ಪಡೆದರು.


ಹಿರಣ್ಣಯ್ಯನವರ ವಿದ್ಯಾಭ್ಯಾಸ ಮೈಸೂರಿನ ಬನುಮಯ್ಯ ಪ್ರೌಡಶಾಲೆ ಮತ್ತು ಶಾರದಾ ವಿಲಾಸ್ ಕಾಲೇಜುಗಳಲ್ಲಿ ನಡೆಯಿತು.

[ಬದಲಾಯಿಸಿ] ಪ್ರಮುಖ ನಾಟಕಗಳು

  • ಮಕ್ಮಲ್ ಟೋಪಿ
  • ಕಪಿಮುಷ್ಟಿ
  • ದೇವದಾಸಿ
  • ನಡುಬೀದಿ ನಾರಾಯಣ
  • ಲಂಚಾವತಾರ
  • ಪಶ್ಚಾತ್ತಾಪ
  • ಭ್ರಷ್ಟಾಚಾರ

[ಬದಲಾಯಿಸಿ] ಚಲನಚಿತ್ರಗಳಲ್ಲಿ ಹಿರಣ್ಣಯ್ಯ

ಹಿರಣ್ಣಯ್ಯ ಮಿತ್ರ ಮಂಡಲಿ ಪ್ರಮುಖ ನಾಟಕಗಳಲ್ಲೊಂದಾದ ದೇವದಾಸಿ ಚಲನಚಿತ್ರವಾಗಿದ್ದು, ಅದರಲ್ಲಿ ಹಿರಣ್ಣಯ್ಯನವರು ಪಾತ್ರ ವಹಿಸಿದ್ದರು. ಸಂಪ್ರದಾಯ, ಆನಂದ ಸಾಗರ ಚಿತ್ರಗಳಲ್ಲಿ ನಟಿಸಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪುಣ್ಯಕೋಟಿ, ಅಮೃತ ವಾಹಿನಿ ಧಾರಾವಾಹಿಗಳಲ್ಲಿಯೂ ಮಾಸ್ಟರ್ ಹಿರಣ್ಣಯ್ಯನವರು ಅಭಿನಯಿಸುತ್ತಿದ್ದಾರೆ.

[ಬದಲಾಯಿಸಿ] ಪ್ರಶಸ್ತಿ ಪುರಸ್ಕಾರ

  • ರಾಜ್ಯೋತ್ಸವ ಪ್ರಶಸ್ತಿ
  • ನಾಟಕ ಅಕಾಡೆಮಿ ಪ್ರಶಸ್ತಿ
  • ರಂಗಭೂಮಿ ಪ್ರಶಸ್ತಿ
  • ಗುಬ್ಬಿ ವೀರಣ್ಣ ಪ್ರಶಸ್ತಿ
  • ನವರತ್ನ ರಾಂ ಪ್ರಶಸ್ತಿ
  • ಕಲಾಗಜ ಸಿಂಹ - ಬಿರುದು
  • ನಟ ರತ್ನಾಕರ - ಬಿರುದು