ಜ.ಚ.ನಿ.

From Wikipedia

ಜ.ಚ.ನಿ.(ಜನನ:೧೯೧೧, ಸೆಪ್ಟೆಂಬರ್ ೧೧) - ಜಗದ್ಗುರು ಶ್ರೀ ಚನ್ನಬಸವರಾಜದೇಶಿಕೇಂದ್ರ ಶಿವಾಚಾರ್ಯರು ನಿಡುಮಾಮಿಡಿಯವರು ಕನ್ನಡದಲ್ಲಿನ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಾಹಿತಿಗಳಲ್ಲಿ ಪ್ರಮುಖರು.

[ಬದಲಾಯಿಸಿ] ಜೀವನ

ಜ.ಚ.ನಿ ಅವರು ೧೯೧೧ಸೆಪ್ಟೆಂಬರ್ ೧೧ರಂದು ಬೆಳಗಾವಿ ಜಿಲ್ಲೆಯ ಅಂಬಡಗಟ್ಟಿಯಲ್ಲಿ ಜನಿಸಿದರು. ಇವರು ೪೦೦೦ಕ್ಕೂ ಹೆಚ್ಚು ವಚನಗಳನ್ನೂ , ೧೪೦ಕ್ಕೂ ಹೆಚ್ಚು ಕೃತಿಗಳನ್ನೂ ರಚಿಸಿದ್ದಾರೆ. ಇವರ ಅಂಕಿತ: “ನಿಡುಮಾಮಿಡಿ ಶ್ರೀ ಗಿರಿಸೂರ್ಯ ಸಿಂಹಾಸನಾಧೀಶ್ವರ”.


ಆದಿರೇಣುಕ‍ರ ಸಂಸ್ಕೃತ ಗ್ರಂಥ “ಸಿದ್ಧಾಂತ ಶಿಖಾಮಣಿ”ಯನ್ನು “ಮಣಿಕಾಂತಿ” ಎನ್ನುವ ಹೆಸರಿನಿಂದ ಗದ್ಯರೂಪದಲ್ಲಿ ಹಾಗು “ಮಣಿಮುಕುರಂ” ಎನ್ನುವ ಹೆಸರಿನಲ್ಲಿ ಪದ್ಯರೂಪದಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.


[ಬದಲಾಯಿಸಿ] ಸಾಹಿತ್ಯ ಕೃತಿಗಳು

  • ವಚನಾಂಜಲಿ
  • ವಚನ ಮಂಜರಿ
  • ಮಣಿ ವಚನಗಳು
  • ಶಿವಾದ್ವೈತ ದರ್ಶನ




ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.