ಎಲ್.ಎಸ್.ಶೇಷಗಿರಿರಾವ
From Wikipedia
ಎಲ್.ಎಸ್.ಶೇಷಗಿರಿರಾವ್ ಅವರು ೧೯೨೫ ಫೆಬ್ರುವರಿ ೧೬ ರಂದು ಬೆಂಗಳೂರಿನಲ್ಲಿ ಜನಿಸಿದರು. ಮೂಲತಃ ದೇಶಪಾಂಡೆ ಮನೆತನದವರಾದ ಇವರ ತಂದೆ ಲಕ್ಷ್ಮೇಶ್ವರ ಸ್ವಾಮಿರಾಯರು. ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ.(ಗೌರವ) ಪದವಿ ಪರೀಕ್ಷೆಯಲ್ಲಿ ಪ್ರಥಮ ತರಗತಿಯಲ್ಲಿ ಉತ್ತೀರ್ಣರಾದರು. ಎಚ್.ವಿ. ನಂಜುಂಡಯ್ಯ ಚಿನ್ನದ ಪದಕ ಪಡೆದ ಮೊದಲ ವಿದ್ಯಾರ್ಥಿ ಇವರು. ತನ್ನಂತರ ಬೆಂಗಳೂರು ಇಂಟರಮೀಡಿಯೆಟ್ ಕಾಲೇಜಿನಲ್ಲಿ ಇಂಗ್ಲಿಷ ಅಧ್ಯಾಪಕರಾದರು.
೧೯೪೮ರಲ್ಲಿ ಶೇಷಗಿರಿರಾವ ಅವರ ಮೊದಲ ಕಥಾಸಂಕಲನ “ ಇದು ಜೀವನ ” ಪ್ರಕಟವಾಯಿತು.
ಇವರ ಮಹತ್ವದ ಕೃತಿಗಳು:
- ಸಾಹಿತ್ಯ ವಿಶ್ಲೇಷಣೆ
- ಇಂಗ್ಲಿಷ ಸಾಹಿತ್ಯ ಚರಿತ್ರೆ
- ಹೊಸಗನ್ನಡ ಸಾಹಿತ್ಯ
- ಮಹಾಭಾರತ( ನಾಲ್ಕು ಸಂಪುಟಗಳು).
ಪುರಸ್ಕಾರಗಳು:
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಸಾಹಿತ್ಯಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ
- ವರ್ಧಮಾನ ಪ್ರಶಸ್ತಿ
- ಡಾ. ಅ.ನ.ಕೃ. ಪ್ರಶಸ್ತಿ
- ಬಿ.ಎಮ್.ಶ್ರೀ ಪ್ರಶಸ್ತಿ
- ಬಿ.ಎಮ್.ಇನಾಮದಾರ ಪ್ರಶಸ್ತಿ
- ಕಾವ್ಯಾನಂದ ಪ್ರಶಸ್ತಿ
- ದೇವರಾಜ ಬಹಾದ್ದೂರ ಪ್ರಶಸ್ತಿ
- ಮಾಸ್ತಿ ಪ್ರಶಸ್ತಿ