ಯಶವಂತ ಚಿತ್ತಾಲ

From Wikipedia

ಯಶವಂತ ವಿತೋಬ ಚಿತ್ತಾಲ
ಯಶವಂತ ವಿತೋಬ ಚಿತ್ತಾಲ

ಯಶವಂತ ಚಿತ್ತಾಲ - ಕನ್ನಡದ ಖ್ಯಾತ ಕವಿ ಮತ್ತು ಸಾಹಿತಿ. ಐವತ್ತೊಂದು ಕಥೆಗಳನ್ನು ಬರೆದಿರುವ ಚಿತ್ತಾಲರರು, ಉತ್ತರ ಕನ್ನಡದ ಚಿಕ್ಕ ಗ್ರಾಮ ಹನೇಹಳ್ಳಿಯ ಕಡೆಯವರು. ಪಾಲಿಮರ್ ಟೆಕ್ನೊಲಜಿ ಓದಿ ಮುಂಬಯಿ ಹೋಗಿ ಅಲ್ಲೇ ನೆಲೆಸಿದರು.

[ಬದಲಾಯಿಸಿ] ಚಿತ್ತಾಲರ ಕಥೆಗಳು/ಕಾದಂಬರಿಗಳು

ಕಥಾಸಂಕಲನಗಳು:

  • ಬೊಮ್ಮಿಯ ಹುಲ್ಲು ಹೊರೆ (೧೯೪೯ ರಲ್ಲಿ ಬರೆದ ಅವರ ಮೊತ್ತ ಮೊದಲ ಕಥೆ)
  • ಸಂದರ್ಶನ
  • ಆಬೋಲಿನ
  • ಅಟ
  • ಬೇನ್ಯಾ
  • ಕಥೆಯಾದಳು ಹುಡುಗಿ
  • ಕುಮಟೆಗೆ ಬಂದಾ ಕಿಂದರಿಜೋಗಿ
  • ಓಡಿ ಬಂದಾ ಮುಟ್ಟಿಸಿ ಹೋದಾ
  • ಐವತ್ತೊಂದು ಕತೆಗಳು

ಕಾದಂಬರಿಗಳು:

  • ಪುರುಷೋತ್ತಮ
  • ಛೇದ
  • ಶಿಕಾರಿ
  • ಮೂರು ದಾರಿಗಳು
  • ಕೇಂದ್ರವೃತ್ತಾಂತ

ವಿಮರ್ಶೆ:

  • ಸಾಹಿತ್ಯ, ಸೃಜನಶೀಲತೆ ಮತ್ತು ನಾನು
  • ಸಾಹಿತ್ಯದ ಸಪ್ತಧಾತುಗಳು

ಇವರ "ಕಥೆಯಾದಳು ಹುಡುಗಿ" ಎಂಬ ಕೃತಿಗೆ ೧೯೮೩ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. "ಶಿಕಾರಿ" ಕಾದಂಬರಿಗೆ ೧೯೭೯ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪ್ರಶಸ್ತಿ ದೊರೆತಿದೆ. ೨೦೦೨ ಸಾಲಿನ 'ನಿರಂಜನ ಪ್ರಶಸ್ತಿ' ದೊರೆತಿದೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಮಹಾರಾಷ್ಟ್ರ ಸರ್ಕಾರದ ಸನ್ಮಾನ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳೂ ಲಭಿಸಿವೆ.