ಕಿಟ್ಟೆಲ್

From Wikipedia

ರೆವರೆಂಡ್ ಎಫ್.ಕಿಟ್ಟೆಲ್ ಇವರು ೧೮೩೨ರಲ್ಲಿ ಜರ್ಮನಿಯಲ್ಲಿ ಜನಿಸಿದರು. ೧೮೫೩ರಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಸಾರಕ್ಕಾಗಿ ಭಾರತಕ್ಕೆ ಬಂದರು.


ಕನ್ನಡಕ್ಕೆ ಕಿಟ್ಟೆಲ್ ಅವರ ಮಹತ್ವದ ಸೇವೆ ಎಂದರೆ ನಿಘಂಟು ರಚನೆ. ೧೬ ವರ್ಷಗಳ ಅವಿರತ ಪರಿಶ್ರಮದಿಂದ ಅತ್ಯುಪಯುಕ್ತ ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟುವನ್ನು ರಚಿಸಿ ೧೮೯೪ರಲ್ಲಿ ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಮೂಲಕ ಪ್ರಕಟಪಡಿಸಿದರು.


ಇದಲ್ಲದೆ ಕಿಟ್ಟೆಲ್ ಅವರು ‘ನಾಗವರ್ಮನ ಕನ್ನಡ ಛಂದಸ್ಸು’, ‘ಪಂಚತಂತ್ರ’ ಇವುಗಳ ಬಗ್ಗೆಯೂ ಬರೆದಿದ್ದಾರೆ. “ಕನ್ನಡ ವ್ಯಾಕರಣ” ಇವರ ಇನ್ನೊಂದು ಅಮೂಲ್ಯ ಕೃತಿ.


ರೆವರೆಂಡ್ ಎಫ್.ಕಿಟ್ಟೆಲ್ ಅವರು ೧೯೦೩ರಲ್ಲಿ ನಿಧನರಾದರು.

ಇತರ ಭಾಷೆಗಳು