ಶ್ರೀಕೃಷ್ಣ ಆಲನಹಳ್ಳಿ

From Wikipedia

ಶ್ರೀಕೃಷ್ಣ ಆಲನಹಳ್ಳಿ ಇವರು ೧೯೪೭ ಏಪ್ರಿಲ್ ೩ರಂದು ಮೈಸೂರು ಜಿಲ್ಲೆಯ ಆಲನಹಳ್ಳಿಯಲ್ಲಿ ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನ ಸಂಕಲನ

  • ಮಣ್ಣಿನ ಹಾಡು
  • ಕಾಡುಗಿಡದ ಹಾಡು ಪಾಡು
  • ಡೋಗ್ರಾ ಪಹಾರಿ ಪ್ರೇಮಗೀತೆಗಳು

[ಬದಲಾಯಿಸಿ] ಕಥಾಸಂಕಲನ

  • ತಪ್ತ
  • ಫೀನಿಕ್ಸ

[ಬದಲಾಯಿಸಿ] ಕಾದಂಬರಿ

  • ಭುಜಂಗಯ್ಯನ ದಶಾವತಾರ
  • ಕಾಡು
  • ಪರಸಂಗದ ಗೆಂಡೆ ತಿಮ್ಮ

[ಬದಲಾಯಿಸಿ] ಸಂಪಾದನೆ

  • ಗ್ರಾಮಾಯಣ ಸಮೀಕ್ಷೆ
  • ಅವಲೋಕನ
  • ಅಂತಃಕರಣ

[ಬದಲಾಯಿಸಿ] ಚಿತ್ರೀಕರಣ

  • ಶ್ರೀಕೃಷ್ಣ ಆಲನಹಳ್ಳಿಯವರ ‘ಕಾಡು’ ಕಾದಂಬರಿ ಚಲನಚಿತ್ರವಾಗಿದೆ. ಈ ಚಿತ್ರದಲ್ಲಿ ಹಿಂದಿ ಚಲನಚಿತ್ರಗಳ ಖ್ಯಾತ ನಟ ಅಮರೀಶ ಪುರಿ ಮುಖ್ಯ ಪಾತ್ರದಲ್ಲಿ ಅಭಿಮಯಿಸಿದ್ದಾರೆ. ಗಿರೀಶ ಕಾರ್ನಾಡ ಚಲನಚಿತ್ರದ ನಿರ್ದೇಶಕರು.
  • ‘ಪರಸಂಗದ ಗೆಂಡೆ ತಿಮ್ಮ’ ಈ ಚಲನಚಿತ್ರದಲ್ಲಿ ಕನ್ನಡಚಿತ್ರರಂಗದ ಚರಿತ್ರನಟ ಲೋಕೇಶ ಮುಖ್ಯ ಪಾತ್ರದಲ್ಲಿದ್ದಾರೆ. ‘ರಾ.ಶಿ.ಸಹೋದರರು’ ಈ ಚಿತ್ರದ ನಿರ್ಮಾಪಕರು.
  • ಭುಜಂಗಯ್ಯನ ದಶಾವತಾರ ಕಾದಂಬರಿಯು ಚಲನಚಿತ್ರವಾಗಿದೆ. ಗಿರಿಜಾ ಲೋಕೇಶ್ ಈ ಚಿತ್ರದ ನಿರ್ಮಾಪಕರಾಗಿದ್ದರೆ, ಲೋಕೇಶ ಚಿತ್ರವನ್ನು ನಿರ್ದೇಶಿಸಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ.

[ಬದಲಾಯಿಸಿ] ಪುರಸ್ಕಾರ

  • ‘ಕಾಡು’ ಕಾದಂಬರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ
  • ‘ಮಣ್ಣಿನ ಹಾಡು’ ಕವಿತಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.

ಶ್ರೀಕೃಷ್ಣ ಆಲನಹಳ್ಳಿಯವರು ೧೯೮೯ ಜನೆವರಿ ೪ ರಂದು ನಿಧನರಾದರು.