ಸಾರಾ ಅಬೂಬಕ್ಕರ
From Wikipedia
ಸಾರಾ ಅಬೂಬಕ್ಕರ್ ಇವರು ಕಾಸರಗೋಡಿನಲ್ಲಿ ( ೧೯೩೬ ಜೂನ್ ೩೦) ಜನಿಸಿದರು. ಇದೀಗ ಇವರು ಮಂಗಳೂರು ನಿವಾಸಿಗಳು. ಇವರ ಪತಿ ನೀರಾವರಿ ಇಲಾಖೆಯಲ್ಲಿ ಇಂಜನಿಯರ್ ಆಗಿದ್ದರು.ಸಾರಾರವರು ಸಾಮಾಜಿಕ ಸಮಸ್ಯೆಗಳ ಬಗೆಗೆ ಹಾಗು ಮಹಿಳೆಯ ಶೋಷಣೆಯ ಬಗೆಗೆ ದಿಟ್ಟತನದ ಸಾಹಿತ್ಯ ರಚನೆ ಮಾಡಿದ್ದಾರೆ. ಸಾರಾ ಅವರು ಬರವಣಿಗೆ ಪ್ರಾರಂಭಿಸಿದ್ದು ಕನ್ನಡದ ವಾರಪತ್ರಿಕೆಗಳಲ್ಲೊಂದಾದ ಲಂಕೇಶ್ ಪತ್ರಿಕೆ ಮೂಲಕ.
[ಬದಲಾಯಿಸಿ] ಸಾಹಿತ್ಯ ಕೃತಿಗಳು
- ಚಂದ್ರಗಿರಿಯ ತೀರದಲ್ಲಿ
- ಸಹನಾ
- ವಜ್ರಗಳು
- ಚಪ್ಪಲಿಗಳು
- ತಳ ಒಡೆದ ದೋಣಿಯಲ್ಲಿ
- ಕದನ ವಿರಾಮ
[ಬದಲಾಯಿಸಿ] ಪುರಸ್ಕಾರ
ಇವರ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಬಹುಮಾನವನ್ನು ಹಾಗು ಮಲ್ಲಿಕಾ ಪ್ರಶಸ್ತಿಯನ್ನು ಪಡೆದಿದೆ.