ಸಿ.ಪಿ.ಕೆ
From Wikipedia
ಸಿ.ಪಿ.ಕೆ. ಅಂದರೆ ಚಿಕ್ಕನಾಯಕನಹಳ್ಳಿ ಪುಟ್ಟೇಗೌಡರ ಮಗ ಕೃಷ್ಣಕುಮಾರ್ ಅವರು ೧೯೩೯ ಎಪ್ರಿಲ್ ೮ ರಂದು ಜನಿಸಿದರು. ತಾಯಿ ಚಿಕ್ಕಮ್ಮ; ತಂದೆ ಪುಟ್ಟೇಗೌಡರು ಮೋಜಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಸಿ.ಪಿ.ಕೆ. ೯ ತಿಂಗಳ ಕೂಸಿದ್ದಾಗ ತಾಯಿ ತೀರಿಕೊಂಡರು.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ ಹಾಗು ಉದ್ಯೋಗ
ಸಿ.ಪಿ.ಕೆ.ಯವರು ಜಿ.ಎಸ್.ಎಸ್. ಮಹಾರಾಜಾ ಕಾಲೇಜಿ'ನಿಂದ ಬಿ.ಎ. (ಆನರ್ಸ) ಪದವಿಯನ್ನು ಪಡೆದರು.೧೯೬೧ರಲ್ಲಿ ಮಾನಸಗಂಗೋತ್ರಿಯಲ್ಲಿ ಎಮ್.ಎ.ಪಡೆದರು. ಅಲ್ಲದೆ ಭಾರತೀಯ ವಿದ್ಯಾ ಭವನದ ಸಂಸ್ಕೃತ ಕೋವಿದ ಪದವಿಯನ್ನು ಸಹ ಪಡೆದರು. ಅದೇ ವರ್ಷ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ೧೯೬೨ರಲ್ಲಿ ಸಿ.ಪಿ.ಕೆ.ಯವರ ಮದುವೆ ಶಾರದಾ' ಅವರ ಜೊತೆಗೆ ಜರುಗಿತು. ೧೯೬೪ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು. ೧೯೬೭ರಲ್ಲಿ ಮಾನಸ ಗಂಗೋತ್ರಿ ಯಲ್ಲಿ ಅಧ್ಯಾಪಕರಾದರು. ೧೯೬೯ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾದರು. ೧೯೭೪ರಲ್ಲಿ ಪಿ.ಎಚ್.ಡಿ. ಪಡೆದ ಬಳಿಕ ೧೯೮೦ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿಯೆ ಪ್ರಾಧ್ಯಾಪಕರಾದರು. ಅಲ್ಲಿಂದ ಆ ಸಂಸ್ಥೆಯ ನಿರ್ದೇಶಕರೂ ಆದರು.
[ಬದಲಾಯಿಸಿ] ಸಾಹಿತ್ಯ ರಚನೆ
[ಬದಲಾಯಿಸಿ] ಕಾವ್ಯ
- ಅಂತರತಮ (ವಚನಗಳು)
- ಅನಂತ-ಪೃಥ್ವೀ
- ಒಳದನಿ
- ತಾರಾಸಖ
- ನೀವೆ ನಮಗೆ ದಿಕ್ಕು
- ನೂರೊಂದು (ವಚನ, ಕವನ)
- ಪ್ರಕೃತಿ
- ಬೊಗಸೆ
- ವರ್ತಮಾನ
- ಹನಿಮಿನಿ
[ಬದಲಾಯಿಸಿ] ಪ್ರಬಂಧ
- ಚಿಂತನಬಿಂದು
- ಮೆಲುಕು
ವಿಚಾರನಿವಿಷ
[ಬದಲಾಯಿಸಿ] ವಿಮರ್ಶೆ/ವಿಚಾರ/ಸಂಶೋಧನೆ
- ಅಧ್ಯಯನ
- ಅಲೋಚನ
- ಉಪಚಯ
- ಎರಡು ಜೈನ ಪುರಾಣಗಳು
- ಐವರು ವಚನಕಾರರು
- ಕನ್ನಡ ಕಾವ್ಯ : ಹತ್ತು ವರ್ಷ
- ಕನ್ನಡ ಚತುರ್ಮುಖ
- ಕರ್ನಾಟಕ ಕಾದಂಬರಿ
- ಕಲಾಪ
- ಕಾವ್ಯಗೌರವ
- ಕಾವ್ಯತತ್ವ : ಕೆಲವು ಮುಖಗಳು
- ಕಾವ್ಯವಿವೇಕ
- ಕಾವ್ಯಾರಾಧನ
- ಕಾವ್ಯಾಲಾಪ
- ಕುಮಾರವ್ಯಾಸ ಭಾರತ : ಒಂದು ನೋಟ
- ಕುವೆಂಪು ಕಾವ್ಯ ಮೀಮಾಂಸೆ
- ಕುವೆಂಪು ಕಿರಣಗಳು
- ಕುವೆಂಪು ಸಾಹಿತ್ಯ : ಕೆಲವು ಮುಖಗಳು (೧,೨)
- ಜನ್ನ
- ಜನ್ನ ಮತು ಅವನ ಕೃತಿಗಳು
- ಜನ್ನ (ಇತರರೊಡನೆ)
- ಟಾಲ್ಸ್ಟಾಯ್ ಕಲಾಮೀಮಾಂಸೆ
- ನಾಗಚಂದ್ರ
- ನೂರಾರು ವಿಮರ್ಶೆಗಳು
- ಪಂಪ : ಕೆಲವು ಮುಖಗಳು
- ಪರಾಮರ್ಶೆ
- ಪರಿಭಾವನೆ
- ಪರಿವೀಕ್ಷಣ
- ಪು.ತಿ.ನ. ಕಾವ್ಯಮೀಮಾಂಸೆ
- ಬರೆದ ಭಾಷಣಗಳು
- ಬಸವಭಾವನೆ
- ಭಾಸ್ಕರಕವಿ
- ಮುನ್ನುಡಿಮಾಲೆ
- ರನ್ನ
- ರನ್ನಪರೀಕ್ಷೆ
- ಶೋಧನ
- ಶ್ರೀ ರಾಮಾಯಣ ದರ್ಶನಂ
- ಶ್ರೀ ರಾಮಕೃಷ್ಣರು ಮತ್ತು ಯುಗಧರ್ಮ
- ಸಪ್ತಸಮಾಲೋಕ
- ಸಭಾಪರ್ವ ಸಂತುಲನ
- ಸಮಾವೇಶ
- ಸಮಾಹಾರ
- ಸಮ್ಮೇಳ
- ಸಾಹಿತ್ಯಮನನ
- ಸಾಹಿತ್ಯ ಸಂಗತಿ
[ಬದಲಾಯಿಸಿ] ಜಾನಪದ
- ಜನಪದಗೀತೆ
- ಜನಪದ ಸಾಹಿತ್ಯ ಪ್ರವೇಶಿಕೆ
- ಜಾನಪದ ಜಾಗರ
- ಜಾನಪದ ಪ್ರತಿಭೆ
- ಜಾನಪದ ಸರಸ್ವತಿ
[ಬದಲಾಯಿಸಿ] ಜೀವನ ಚಿತ್ರ
- ರತ್ನತ್ರಯ
- ಸಾಕ್ರೆಟೀಸ್
- ಸ್ವಾಮಿ ವಿವೇಕಾನಂದ
- ಹಿರಿಯರ ಗೆರೆಗಳು
[ಬದಲಾಯಿಸಿ] ಸಂಪಾದನ
- ಅರಣ್ಯಪರ್ವ
- ಅಂತಃಕರಣ (ಇತರರೊಡನೆ)
- ಆಯ್ದ ಕುವೆಂಪು ಕವನಗಳು
- ಇಕ್ಷುಕಾವೇರಿ (ಇತರರೊಡನೆ)
- ಕಟ್ಟೀಮನಿ : ಬದುಕು-ಬರಹ (ಇತರರೊಡನೆ)
- ಕನ್ನಡ ಛಂದಸ್ಸಿನ ಚರಿತ್ರೆ (೧,೨)
- ಕನ್ನಡ ವಿಮರ್ಶೆ (ಇತರರೊಡನೆ)
- ಕಾಮಳ್ಳಿ
- ಕಾವ್ಯನಂದನ
- ಚುಂಚನಗಿರಿ
- ಮಾರ್ಗದರ್ಶಕರು (ಇತರರೊಡನೆ)
- ಮುತ್ತ ತುಂಬೇವ ಕಣಜಕೆ (ಇತರರೊಡನೆ)
- ಯದುಗಿರಿ (ಇತರರೊಡನೆ)
- ಯದುಗಿರಿಯ ವೀಣೆ (ಇತರರೊಡನೆ)
- ಶ್ರೀಗಂಧ
- ಸಹ್ಯಾದ್ರಿ (ಇತರರೊಡನೆ)
- ಸಾಹಿತ್ಯವಿಮರ್ಶೆ ೧೯೮೦
- ಸಾಹಿತ್ಯಸೌಧ (ಇತರರೊಡನೆ)
- ಸಾಹಿತ್ಯಾರಾಧನೆ (ಇತರರೊಡನೆ)
- ಸುರನದಿಯ ತೀರ್ಥ
- ಸುರುಚಿ : ನೂರು
- ಸ್ವಸ್ತಿ ( ಇತರರೊಡನೆ )
- ಹಬ್ಬಲಿ ಅವರ ರಸಬಳ್ಳಿ
- ಹರಿಶ್ಚಂದ್ರ ಸಾಂಗತ್ಯ (ರಾಮರಸ ವಿರೂಪಾಕ್ಷ )
- ಹರಿಶ್ಚಂದ್ರ ಸಾಂಗತ್ಯ (ಹಲಗ)
[ಬದಲಾಯಿಸಿ] ಸಂಕೀರ್ಣ
- ಅಹಿಂಸೆ
- ಕುಮಾರವ್ಯಾಸನ ಹತ್ತು ಚಿತ್ರಗಳು
- ಗಂಧದ ಕೋಟೆ ಗಮಗಮ
- ಚೆಲುವಯ್ಯ-ವರನಂದಿ
- ಮಹಾಕವಿಯೊಡನೆ ಮಾತುಕತೆ
- ವಸುಭೂತಿ ಕಥೆ
- ಶೃಂಗಾರಲಹರಿ
[ಬದಲಾಯಿಸಿ] ಸಂಸ್ಕೃತ ಭಾಷಾಂತರ
- ಅಭಿಜ್ಞಾನ ಶಾಕುಂತಲ
- ಊರುಭಂಗ
- ಕನ್ನಡ ಉತ್ತರರಾಮಚರಿತ
- ಕನ್ನಡ ನಾಗಾನಂದ
- ಕನ್ನಡ ಪ್ರಿಯದರ್ಶಿಕಾ
- ಕನ್ನಡ ಯಶೋಧರಚರಿತ
- ಕನ್ನಡ ರತ್ನಾವಳಿ
- ಕನ್ನಡ ವೇಣೀಸಂಹಾರ
- ಕನ್ನಡ ಸೌಂದರ್ಯಲಹರಿ
- ಬೆಳಕಿನ ಹನಿಗಳು
- ಭಾಸನ ಎರಡು ನಾಟಕಗಳು
- ರಾಮಾಯಣ : ಬಾಲಕಾಂಡ ( ಇತರರೊಡನೆ)
- ಶ್ರೀಕೃಷ್ಣ ಕರ್ಣಾಮೃತಸಾರ
- ಸಂಗ್ರಹ ಭಾಗವತ
- ಸಂಗ್ರಹ ಮಹಾಭಾರತ
- ಸಂಗ್ರಹ ರಾಮಾಯಣ
[ಬದಲಾಯಿಸಿ] ಇಂಗ್ಲಿಷ್ ಭಾಷಾಂತರ
- ಇತಿಹಾಸ, ಪುರಾಣಗಳು
- ಎಲಿಯಟ್ಟನ ಮೂರು ಉಪನ್ಯಾಸಗಳು
- ಕಲಾತತ್ವ
- ಕಲೆ ಎಂದರೇನು?
- ಕಾಡಿನ ಹಾಡುಗಳು
- ಕಾವ್ಯ ವಿಚಾರಸಾರ
- ಗಾಂಧೀ ಕಾಣ್ಕೆ
- ಠಾಕೂರ್ ವಚನಾಂಜಲಿ
- ನೋವಿನ ದೇವತೆಗೆ
- ಪಂಡಿತ ಗೋವಿಂದ ವಲ್ಲಭ ಪಂತ್: ವಿಚಾರಧಾರೆ
- ಪಾಶ್ಚಾತ್ಯ ಕಾವ್ಯಚಿಂತನ
- ಪುರಾತನ ನಾವಿಕ
- ಪ್ರೇಮತತ್ವ
- ಭಾರತೀಯ ಶಾಸನಶಾಸ್ತ್ರ ಪರಿಚಯ
- ಭಾಷಾ ಮಾಧ್ಯಮವನ್ನು ಕುರಿತು
- ಮಹತ್ಕಾವ್ಯ ಕಲ್ಪನೆ
- ಮಹಾತ್ಮ (ಇತರರೊಡನೆ)
- ವಿದ್ಯಾಪತಿ
- ಸಂಕಲನ
- ಸಾಹಿತ್ಯಪ್ರವೇಶ
- ಸಾಹಿತ್ಯ ಮತ್ತು ಮನೋವಿಜ್ಞಾನ
- ಸಾಹಿತ್ಯವಿಮರ್ಶೆಯ ತತ್ವಗಳು
- ಹನ್ನೊಂದು ಹೊರಗಿನ ಕತೆಗಳು
- ಹಿಪ್ಪೊಲಿಟಸ್