ಅಮೃತ ಘಳಿಗೆ

From Wikipedia

ಅಮೃತಘಳಿಗೆ
ಬಿಡುಗಡೆ ವರ್ಷ ೧೯೮೪
ಚಿತ್ರ ನಿರ್ಮಾಣ ಸಂಸ್ಥೆ ಜಯಭೇರಿ ಫಿಲಂಸ್
ನಾಯಕ ಶ್ರೀಧರ್
ನಾಯಕಿ ಪದ್ಮಾವಾಸಂತಿ
ಪೋಷಕ ವರ್ಗ ರಾಮಕೃಷ್ಣ, ಸುರೇಖ, ಶಕ್ತಿಪ್ರಸಾದ್
ಸಂಗೀತ ನಿರ್ದೇಶನ ವಿಜಯಭಾಸ್ಕರ್
ಕಥೆ / ಕಾದಂಬರಿ ದೊಡ್ಡೇರಿ ವೆಂಕಟರಾಯ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ
ಹಿನ್ನೆಲೆ ಗಾಯನ ಪಿ.ಜಯಚಂದ್ರನ್
ಛಾಯಾಗ್ರಹಣ ಬಿ.ಎಸ್.ಬಸವರಾಜ್
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ಪುಟ್ಟಣ್ಣ ಕಣಗಾಲ್
ನಿರ್ಮಾಪಕರು ಎಸ್.ಆರ್.ರಾಜನ್
ಪ್ರಶಸ್ತಿಗಳು
ಇತರೆ ಮಾಹಿತಿ ದೊಡ್ಡೇರಿ ವೆಂಕಟಗಿರಿ ರಾವ್ ಅವರ ಅವಧಾನ ಕಾದಂಬರಿ ಆಧಾರಿತ ಚಿತ್ರ


ಅಮೃತ ಘಳಿಗೆ (ಕನ್ನಡ ಕಲರ್ ಚಲನಚಿತ್ರ - ೧೯೮೪)

ದೊಡ್ಡೇರಿ ವೆಂಕಟಗಿರಿ ರಾವ್ ಅವರ 'ಅವಧಾನ' ಎಂಬ ಕಾದಂಬರಿಯೇ ಪುಟ್ಟಣ್ಣ ಕಣಗಾಲ್ ಅವರ ಸೃಜನಶೀಲತೆಯಲ್ಲಿ ಜಯಬೇರಿ ಫಿಲಂಸ್ ಅವರ 'ಅಮೃತ ಘಳಿಗೆ'ಯಾಗಿ ರೂಪುಗೊಂಡಿತು. ಚಿತ್ರದುರ್ಗದ ಬಿ.ಎಲ್. ವೇಣುರವರ ಸಂಭಾಷಣೆ, ವಿಜಯ ಭಾಸ್ಕರರ ಸಂಗೀತ ಮತ್ತು ವಿಜಯ ನಾರಸಿಂಹರ ಚಿತ್ರ ಗೀತೆಗಳನ್ನು ಈ ಚಿತ್ರದಲ್ಲಿ ಬಳಸಲಾಗಿದೆ. ಕಲಾವಿದರಾಗಿ - ಶ್ರೀಧರ್ ಮತ್ತು ಜ್ಯೋತಿ, ಬಿ.ಕೆ. ಶಂಕರ್, ಪದ್ಮಾ ವಾಸಂತಿ, ಉಮಾಶ್ರೀ, ರಾಮಕೃಷ್ಣ ಮತ್ತು ಇತರರು ಅಭಿನಯಿಸಿದ್ದಾರೆ.