ಎಂ.ಎಸ್.ಪುಟ್ಟಣ್ಣ

From Wikipedia

ಮೈಸೂರು ಸೂರ್ಯನಾರಾಯಣಭಟ್ಟ ಪುಟ್ಟಣ್ಣನವರು ೧೮೫೪ ನವೆಂಬರ್ ೨೧ರಂದು ಮೈಸೂರಿನಲ್ಲಿ ಜನಿಸಿದರು. ಹುಟ್ಟಿದ ಹತ್ತೇ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡರು. ಬೇಸರಗೊಂಡ ತಂದೆ ಕಾಶಿಗೆ ಹೋಗಿ ಸನ್ಯಾಸಿಯಾದರು. ಪುಟ್ಟಣ್ಣ ಸೋದರಮಾವನ ಆಶ್ರಯದಲ್ಲಿ ಬೆಳೆದರು.

ಪರಿವಿಡಿ

[ಬದಲಾಯಿಸಿ] ಶಿಕ್ಷಣ

ಖಾಸಗಿ ಮಠದಲ್ಲಿ ಮೊದಲ ಹಂತದ ಶಿಕ್ಷಣ ಮುಗಿಸಿದ ಪುಟ್ಟಣ್ಣ ರಾಜಾ ಕಾಲೇಜಿನಿಂದ (ಈಗಿನ ಮಹಾರಾಜಾ ಕಾಲೆಜು) ಎಫ್.ಎ. ತೇರ್ಗಡೆಯಾದರು. ೧೮೮೫ರಲ್ಲಿ ಮದ್ರಾಸ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದರು.

[ಬದಲಾಯಿಸಿ] ಉದ್ಯೋಗ

ಮೊದಲಿಗೆ ಕೋಲಾರದಲ್ಲಿ ಶಿಕ್ಷಕರಾಗಿದ್ದ ಪುಟ್ಟಣ್ಣ ೧೮೮೩ರಲ್ಲಿ “ಹಿತಬೋಧಿನಿ” ಎನ್ನುವ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಆರು ತಿಂಗಳುಗಳ ನಂತರ ಬೇರೆಯವರಿಗೆ ಪತ್ರಿಕೆ ವಹಿಸಿಕೊಟ್ಟು, ಬಿ.ಎ. ಅಭ್ಯಾಸ ಮಾಡಲು ಮದ್ರಾಸಿಗೆ (ಈಗಿನ ಚೆನ್ನೈ) ಹೋದರು. ೧೮೮೬ರಲ್ಲಿ ಮೈಸೂರಿನ ಚೀಫ್ ಕೋರ್ಟಿನಲ್ಲಿ ಭಾಷಾಂತರಕಾರರಾಗಿ ನೇಮಕಗೊಂಡರು ; ೧೮೯೭ರಲ್ಲಿ ಬಡ್ತಿಯ ಮೇಲೆ ಅಮಲ್ದಾರರಾದರು. ೧೯೦೮ರಲ್ಲಿ ನೌಕರಿಗೆ ರಾಜೀನಾಮೆ ಕೊಟ್ಟು ಸ್ವಲ್ಪ ಸಮಯ ವಕೀಲಿ ಮಾಡಿದರು. ಆ ಬಳಿಕ ಬರವಣಿಗೆಯ ಕಾರ್ಯದಲ್ಲಿಯೆ ಪೂರ್ಣವಾಗಿ ತೊಡಗಿಕೊಂಡರು.

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಥೆ/ಕಾದಂಬರಿ

  • ಜಯಸಿಂಹರಾಜ ಚರಿತ್ರೆ (ಸಿಂಬಲೈನ್ ಕಥನರೂಪ) (೧೮೮೧)
  • ನೀತಿ ಚಿಂತಾಮಣಿ (೧೮೮೪)
  • ಸುಮತಿ ಮದನಕುಮಾರ ಚರಿತ್ರೆ (೧೮೮೭)
  • ಮಾಡಿದ್ದುಣ್ಣೊ ಮಹಾರಾಯ (೧೯೧೫)
  • ಪೇಟೆ ಮಾತೇನಜ್ಜಿ (೧೯೨೭)
  • ಮುಸುಕು ತೆಗೆಯೆ ಮಾಯಾಂಗನೆ (೧೯೨೮)
  • ಅವರಿಲ್ಲದೂಟ (೧೯೫೯)

[ಬದಲಾಯಿಸಿ] ಜೀವನ ಪರಿಚಯ

  • ಕಾಂಪೂಷನ ಚರಿತ್ರೆ (೧೮೯೨)
  • ಕುಣಿಗಲ್ ರಾಮಶಾಸ್ತ್ರಿಗಳ ಚರಿತ್ರೆ (೧೯೧೦)
  • ಸರ್ ಸಾಲಾರ್ ಜಂಗನ ಚರಿತ್ರೆ
  • ಮಹಮೂದ್ ಗವಾನನ ಚರಿತ್ರೆ (೧೯೨೮)

[ಬದಲಾಯಿಸಿ] ಇತರ

  • ಹಿಂದೂ ಚರಿತ್ರೆ ದರ್ಪಣ ಭಾಗ-೧ (೧೮೮೨)
  • ಕನ್ನಡ ಒಂದನೆಯ ಪುಸ್ತಕವು (೧೮೯೫)
  • ಕನ್ನಡ ಲೇಖನ ಲಕ್ಷಣ (೧೯೧೫)
  • ಪಾಳೆಯಗಾರರು (೧೯೨೩)
  • ಚಿತ್ರದುರ್ಗದ ಪಾಳೆಯಗಾರರು (೧೯೨೪)
  • ಇಕ್ಕೆರಿ ಸಂಸ್ಥಾನದ ಚರಿತ್ರೆ (೧೯೩೧)

[ಬದಲಾಯಿಸಿ] ಅನುವಾದ

  • ಹೇಮಚಂದ್ರರಾಜ ವಿಲಾಸ (ಮೂಲ: ಶೇಕ್ಸ್ಪಿಯರನ ‘ಕಿಂಗ್ ಲಿಯರ್) (೧೮೯೯)
  • ಹೇಮಲತ (ಮೂಲ: ಶೇಕ್ಸ್ಪಿಯರನ ‘ಹ್ಯಾಮ್ಲೆಟ್’)