ಕನ್ನಡ ಚಿತ್ರ ಸಂಗೀತ
From Wikipedia
ಕನ್ನಡ ಚಿತ್ರರಂಗದ ಸಂಗೀತ ಸಾಕಷ್ಟು ಪ್ರಾಕಾರಗಳನ್ನೊಳಗೊಂಡ ಸಂಗೀತಕ್ರಮ. ಚಿತ್ರದೊಂದಿಗೆ, ಚಿತ್ರದ ಮಧ್ಯದಲ್ಲಿ ಮೂಡಿಬರುವ ಸಂಗೀತ ಕನ್ನಡ ಚಿತ್ರ ಸಂಗೀತವಾಗಿ ಒಂದು ಉಪಕ್ರಮವಾಗಿಯೇ ರೂಪುಗೊಂಡಿದೆ. ಜನಮನದಲ್ಲಿ ಕನ್ನಡ ಚಿತ್ರರಂಗದಿಂದ ಹೊರಬಂದ ಸಂಗೀತಕ್ಕೆ ವಿಶಿಷ್ಟ ಸ್ಥಾನಮಾನಗಳು ಬೆಳೆದು ಬಂದಿವೆ.
ಕನ್ನಡ ಚಿತ್ರ ಸಂಗೀತ ಹುಟ್ಟಿಬರುವುದು ಸಂಗೀತ ನಿರ್ದೇಶಕರು, ಹಿನ್ನೆಲೆ ಗಾಯಕರು, ಚಿತ್ರಸಾಹಿತಿಗಳು, ಸಂಗೀತ ವಾದ್ಯಗಾರರು, ಹಿನ್ನೆಲೆ ಸಂಗೀತ ಜೋಡಿಸುವವರು - ಇವರೆಲ್ಲರ ಸಹಯೋಗದಿಂದ. ಕಥೆಯ ಮಧ್ಯೆ, ದೃಶ್ಯಗಳ ನಡುವೆ ಪ್ರಸಂಗಕ್ಕೆ ಕೂಡುವಂತೆ ಮೂಡಿಬರುವ ಅರ್ಥವತ್ತಾದ ಸಂಗೀತ ಇದರ ವಿಶಿಷ್ಟತೆ. ಇತ್ತೀಚಿನ ಚಿತ್ರಗಳಲ್ಲಿ ಪ್ರಾಸಂಗಿಕ ಹೋಲಿಕೆಗಳು ಬಳಕೆಯಲ್ಲಿ ಕಡಿಮೆಯಾದರೂ ಇಂದಿಗೂ ಚಿತ್ರದ ಮಧ್ಯೆ ಹಾಡುಗಳು, ಸಂಗೀತ ಜೋಡಿಸುವ ಪರಂಪರೆ ನಡೆದು ಬಂದಿದೆ.
ಪರಿವಿಡಿ |
[ಬದಲಾಯಿಸಿ] ಇತಿಹಾಸ
ಈ ಲೇಖನದ Neutral point of view ಪ್ರಶ್ನಿಸಲಾಗಿದೆ. ದಯವಿಟ್ಟು ಚರ್ಚಾಪುಟದಲ್ಲಿ ನಡೆಯುತ್ತಿರುವ ಚರ್ಚೆಯನ್ನು ನೋಡಿ. |
ಭಾರತದ ಉಳಿದ ಭಾಷೆಗಳಂತೆಯೇ ಕನ್ನಡ ಚಿತ್ರರಂಗವೂ ಉಗಮಿಸಿದ್ದು ರಂಗ ಮಂಟಪದಿಂದ, ನಾಟಕಗಳಿಂದ. ಮೊಟ್ಟ ಮೊದಲು ಹೊರಬಂದ ಚಿತ್ರಗಳ ಸಂಗೀತ ನಾಟಕಗಳಲ್ಲಿ ಜೋಡಣೆಯಾಗುವ ಸಂಗೀತದ ಹೋಲಿಕೆಗಳೊಂದಿಗೆ ಜನರನ್ನು ತಲುಪಿತ್ತು. ವರ್ಷಗಳು ಕಳೆದಂತೆ ತಂತ್ರಜ್ಞಾನದಲ್ಲಾದ ಬದಲಾವಣೆಗಳಿಂದ ನಾಟಕಗಳು ಹಾಗೂ ಚಲನಚಿತ್ರದ ಮಧ್ಯೆ ಇದ್ದ ವ್ಯತ್ಯಾಸ ಹೆಚ್ಚಾಗಿ ಚಲನಚಿತ್ರ ಸಂಗೀತ ತನ್ನದೇ ಆದ ಛಾಪು ಮೂಡಿಸುತ್ತ ಹೊಸ ಉಪಕ್ರಮವಾಗಿ ಹೊರಹೊಮ್ಮಿತು.
ಮೊದ ಮೊದಲು ಕನ್ನಡ ಚಲನಚಿತ್ರಗಳಲ್ಲಿ ತಮಿಳು ನಾಡು ಮತ್ತು ಆಂಧ್ರ ಪ್ರದೇಶದ ಸಂಗೀತ ನಿರ್ದೇಶಕರನ್ನೇ ಉಪಯೋಗಿಸಿಕೊಳ್ಳಲಾಗುತ್ತಿತ್ತು. ಕನ್ನಡದ ಸಂಗೀತ ನಿರ್ದೇಶಕರು ಯಾರು, ಹೊರಗಿನವರು ಯಾರು ಎಂಬ ವಿಂಗಡನೆಯನ್ನೇ ಮಾಡಲಾಗದಷ್ಟು ಹೊರಗಿನವರು ಕೆಲಸ ಮಾಡಿದ್ದಾರೆ. ಮೊದ ಮೊದಲು ಬಂದವರಲ್ಲಿ ಘಂಟಸಾಲ, ಸತ್ಯಂ, ಟಿ.ಜಿ.ಲಿಂಗಪ್ಪ ಪ್ರಮುಖರು. ರಾಜನ್-ನಾಗೇಂದ್ರ ಜೋಡಿ ಕೂಡ ಮೊದಲು (೧೯೫೦-೬೦ರ ದಶಕದಲ್ಲಿ) ಪೌರಾಣಿಕ ಚಿತ್ರಕ್ಕೆ ಸಂಗೀತ ನೀಡಿದ್ದರು. ಆ ನಂತದ ಅವರು ಜನಪ್ರಿಯರಾದದ್ದು ೧೯೭೦ರ ದಶಕದ ತಮ್ಮ ಹೊಸ ಅಲೆಯ ಸಂಗೀತದಿಂದ. ಎಂ.ರಂಗರಾವ್ ಅವರು ಸಾಕ್ಷಾತ್ಕಾರ ಚಿತ್ರದ ಸಂಗೀತದಿಂದ ಗಮನ ಸೆಳೆದರು.
ಇವರೆಲ್ಲರಿಗಿಂತಜನಪ್ರಿಯತೆಯ ಉತ್ತುಂಗದಲ್ಲಿ ಇದ್ದವರೆಂದರೆ ಜಿ.ಕೆ. ವೆಂಕಟೇಶ್ ಮತ್ತು ವಿಜಯ ಭಾಸ್ಕರ್. ಇವರಿಬ್ಬರು ಹತ್ತಿರ ೩ ದಶಕಗಳ ಕಾಲ ಉತ್ತುಂಗದಲ್ಲಿಯೇ ಇದ್ದರು. ಇವರಲ್ಲಿ ವಿಜಯ ಭಾಸ್ಕರ್ ಅವರ ವಿಶೇಷತೆ ಎಂದರೆ, ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಬಹುತೇಕ ಚಿತ್ರಗಳಿಗೆ ಇವರೇ ಸಂಗೀತ ನೀಡಿದ್ದರು.
ನಂತರ ಹೊರಗಿನ ಸಂಗೀತ ನಿರ್ದೇಶಕರಿಗೂ ಅವಕಾಶ ನೀಡಲಾಯಿತು. ಇಳಯರಾಜ ಅವರು ಕೂಡ ಹಲವಾರು ಚಿತ್ರಗಳಿಗೆ ಸಂಗೀತ ನೀಡಿದರು. ಸಿ.ಅಶ್ವತ್ಥ್ ಮತ್ತು ಎಲ್. ವೈದ್ಯನಾಥನ್ ಅವರು ಅಶ್ವತ್ಥ್-ವೈದಿ ಹೆಸರಿನಲ್ಲಿ ಒಟ್ಟಿಗೆ ಸಂಗೀತ ನೀಡಿದರು (ಚಿತ್ರ ಆಲೆಮನೆ).
ಇವರೆಲ್ಲರ ನಡುವೆ ಭಾರೀ ಹೊಸ ಅಲೆಯನ್ನು ತಂದ ಸಂಗೀತ ನಿರ್ದೇಶಕರು ಎಂದರೆ ಹಂಸಲೇಖ ಅವರು. ಬಂಡಾಯ ಕವಿ ಗಂಗರಾಜು ಕನ್ನಡಿಗರಿಗೆ ಹಂಸಲೇಖ ಎಂದು ಪರಿಚಯವಾಗಿ ಈಗ ಸಾಹಿತ್ಯ ಸರೋವರ-ಸಂಗೀತ ಸಮುದ್ರವಾಗಿ ಬೆಳೆದಿದ್ದಾರೆ. ವಿ.ರವಿಚಂದ್ರನ್ ಅವರ ಚಿತ್ರಗಳು ಗೆಲ್ಲಲು ಅರ್ಧ ಪಾಲು ಹಂಸಲೇಖ ಅವರ ಸಾಹಿತ್ಯ ಸಂಗೀತವೇ ಕಾರಣ ಎಂದೇ ರವಿಚಂದ್ರನ್ ಅವರ ಅಭಿಮಾನಿಗಳೂ ಒಪ್ಪುತ್ತಾರೆ. ಹಾಡುಗಳಲ್ಲೆ ಒಂದು ಕಥೆ ಮತ್ತು ಸಂಭಾಶಣೆ ಇರುವಂಥ ಹೊಸ ರೀತಿಯ ಹಾಡುಗಳನ್ನು ಜನರಿಗೆ ನೀಡಿದರು. ಅದಕ್ಕೆ ಉದಾಹರಣೆ ಎಂದರೆ, ಪ್ರೇಮಲೋಕ ಚಿತ್ರದ "ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ", ರಣಧೀರ ಚಿತ್ರದ "ಪ್ರೀತಿ ಮಾಡಬಾರದು", ಮತ್ತು ಶಾಂತಿ ಕ್ರಾಂತಿ ಚಿತ್ರದ "ಮಧ್ಯ ರಾತ್ರೀಲಿ" ಹಾಡುಗಳು. ಈ ಹಾಡುಗಳಲ್ಲೆ ನೀವು ಒಂದು ಕಥೆಯನ್ನೂ ಗಮನಿಸಬಹುದು. ಇಂತಹ ಪ್ರಯೋಗ ಹಿಂದೆಯೂ ನಡೆದಿತ್ತು. ನಾಗರಹಾವು ಚಿತ್ರದ ಓಬವ್ವನ ಹಾಡು ಒಂದು ಉದಾಹರಣೆ. ೧೯೯೦ರ ದಶಕದಲ್ಲಿ ಬಂದ ಬಹಳ ಚಿತ್ರಗಳಿಗೆ ಹಂಸಲೇಖ ಅವರೇ ಸಾಹಿತ್ಯ ಸಂಗೀತ ಒದಗಿಸುತ್ತಿದ್ದರು.
ನಂತರ ಬಂದವರು ವಿ. ಮನೋಹರ್. ಇವರು ಕಾಶೀನಾಥ್ ಕ್ಯಾಂಪ್ ನಿಂದ ಗುರುತಿಸಿಕೊಂಡರೂ ಸಹ ಹತ್ತು ಹಲವಾರು ನಿರ್ದೇಶಕರ ಬಳಿ ದುಡುದು ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಕನ್ನಡದಲ್ಲಿ ಮೊದಲಿನಂತೆ ಒಳ್ಳೆಯ ಸಂಗೀತ ನೀಡುವ ಸಂಗೀತ ನಿರ್ದೇಶಕರ ಸಾಲಿಗೆ ಸೇರಿದರು. ಮುಂದಿನ ದಿನಗಳಲ್ಲಿ ಓ ಮಲ್ಲಿಗೆ ಎಂಬ ಚಿತ್ರವನ್ನು ನಿರ್ದೇಶಿಸಿ ಅಲೂ ಸೈ ಎನಿಸಿಕೊಂಡರು. ಓ ಮಲ್ಲಿಗೆ ಚಿತ್ರದ "ಮಲಗು ಮಲಗು ಚಾರುಲತೆ" ಹಾಡಿನಲ್ಲಿ ಹೊಸ ಗಾಯಕ ರಮೇಶ್ಚಂದ್ರ ಅವರನ್ನು ಪರಿಚಯಿಸಿದರು.
ನಂತರದ ದಿನಗಳಲ್ಲಿ ಸಾಧು ಕೋಕಿಲ ಮತ್ತು ರಾಜೇಶ್ ರಾಮನಾಥ್ ಅವರು ಹೊಸ ಸಂಗೀತ ನಿರ್ದೇಶಕರಾಗಿ ಪರಿಚಯಗೊಂಡರೂ, ಹಂಸಲೇಖರ ಜಾದೂವನ್ನು ಅವರಿಂದ ತೋರಿಸಲು ಸಾಧ್ಯವಾಗಲಿಲ್ಲ. ಇವರಿಬ್ಬರೂ ಸಂಗೀತ ಪ್ರೇಮಿಗಳು ಇಟ್ಟುಕೊಂಡಿದ್ದ ನಿರೀಕ್ಷೆಗೆ ತಕ್ಕಂತೆ ಸಂಗೀತ ನೀಡಲಿಲ್ಲ. ನಂತರ ದೊಡ್ಡ ಅಲೆಯನ್ನು ಎಬ್ಬಿಸಿದವರು ಎಂದರೆ ಗುರುಕಿರಣ್. ಇಂದಿನ ಯುವಜನತೆಗೆ ಅವರ ಹಾಡುಗಳು ಅಚ್ಚು ಮೆಚ್ಚು. "ಏ" ಚಿತ್ರ್ದಿಂದ ಪರಿಚಯವಾದರು. ನಂತರದ ದಿನಗಳಲ್ಲಿ ಪ್ರೇಮಿ ನಂಬರ್ ವನ್, ಮಜ್ನು ಚಿತ್ರಗಳಿಗೆ ಸಂಗೀತ ನೀಡಿದರೂ ಅವರನ್ನು ಚಿತ್ರರಂಗದ ಜನತೆ ಗಮನಿಸಲಿಲ್ಲ. ದಿನೇಶ್ ಬಾಬು ನಿರ್ದೇಶನದ "ಚಿತ್ರ" ಎಂಬ ಯುವಜನರ ಚಿತ್ರದಲ್ಲಿ ನೀಡಿದ "ಜಿಂಬೋಲೆ" ಹಾಗು "ಜಿಂಕೆ ಮರಿ ಓಡ್ತಾಯ್ತೆ ನೋಡ್ಲಾ ಮಗಾ" ಹಾಡುಗಳು ಯುವಜನರನ್ನು ಆಕರ್ಶಿಸಿದವು. ಚಿತ್ರರಂಗದ ಜನತೆ ಅವರಲ್ಲಿ ಇದ್ದ ಪ್ರತಿಭೆಯನ್ನು ಗಮನಿಸಿತು. ನಂತರದ ದಿನಗಳಲ್ಲಿ ಚಂದು, ತುಂಟಾಟ ಮತ್ತು ಹಲವಾರು ಚಿತ್ರಗಳಿಗೆ ಸಂಗೀತ ನೀಡಿ ಮತ್ತಷ್ಟು ಜನಪ್ರಿಯರಾದರು.
ಈ ಮಧ್ಯೆ ಹಂಸ್ ಮತ್ತು ರವಿಚಂದ್ರನ್ ಜೋಡಿ ಮುರಿದು ಬಿದ್ದಿತು. ಇದರ ಪರಿಣಾಮವಾಗಿ "ಪ್ರೀತ್ಸೋದ್ ತಪ್ಪಾ?" ಚಿತ್ರದ ನಂತರ "ಮಾಂಗಲ್ಯಮ್ ತಂತುನಾನೇನಾ" ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದರು. ನಂತರ ರವಿಚಂದ್ರನ್ ಅವರೇ ಸಂಗೀತ ನಿರ್ದೇಶನ ಮತ್ತು ಸಾಹಿತ್ಯ ರಚನೆಗೆ ಇಳಿದು ಸಂಗೀತ ಅಭಿಮಾನಿಗಳ ಕಿವಿಗಳ ಮೇಲೆ "ಪ್ರಯೋಗ" ಮಾಡಿದರು.
ನಾಗತಿಹಳ್ಳಿ ಚಂದ್ರಶೇಖರ ಅವರ ಅಮೆರಿಕ ಅಮೆರಿಕಾ ಚಿತ್ರದ ಮೂಲಕ ಅನಿವಾಸಿ ಭಾರತೀಯ ಮನೋಹರ ಮೂರ್ತ್ಯ್ ಅವರು ಮನೋ ಮೂರ್ತಿಯಾಗಿ ಕನ್ನಡಿಗರಿಗೆ ಪರಿಚಯವಾದರು. ನಂತರದ ದಿನಗಳಲ್ಲಿ ಹಂಸಲೇಖರ ಬಳಿ ಆರ್ಕ್ಯಾಸ್ಟ್ರಾ taMtrajnya (technician) ಆಗಿದ್ದ ಸ್ಟೀಫನ್ ಅವರನ್ನು ನಾಗತಿಹಳ್ಳಿ ಅವರು ತಮ್ಮ ಪ್ಯಾರಿಸ್ ಪ್ರಣಯ ಚಿತ್ರದ ಮೂಲಕ ಪ್ರಯೋಗ್ ಎಂಬ ಹೆಸರಿನಿಂದ ಪರಿಚಯಿಸಿದರು. ನಂತರ ಗುರುಕಿರಣ್ ಅವರ ಬಳಿ ಗಿಟಾರ್ ವಾದಕರಾಗಿದ್ದ ಆಲ್ವಿನ್ ಫರ್ನಾಂಡಿಸ್ ಅವರು ಕೂಡ ಪ್ರಾಣ ಎಂಬ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು.
ಇತ್ತೀಚಿಗೆ ಪರಿಚಿತರಾದ ಸಂಗೀತ ನಿರ್ದೇಶಕರು ಎಂದರೆ ಅರ್ಜುನ್, ವಿ. ಹರಿ ಕೃಷ್ಣ, ವೆಂಕಟ್ ನಾರಾಯಣ್ ಮುಂತಾದವರು.
.
[ಬದಲಾಯಿಸಿ] ಈ ಪುಟಗಳನ್ನೂ ನೋಡಿ
[ಬದಲಾಯಿಸಿ] ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು
ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ | ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್-ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ.ಎಂ.ಕೀರವಾಣಿ | ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥನ್ | ಕೆ.ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ವಿ.ಹರಿ ಕೃಷ್ಣ
ಕನ್ನಡ ಚಿತ್ರರಂಗದ ಚಿತ್ರಸಾಹಿತಿಗಳು
ಬೆಳ್ಳಾವೆ ನರಹರಿ ಶಾಸ್ತ್ರಿ | ಹುಣಸೂರು ಕೃಷ್ಣಮೂರ್ತಿ | ಚಿ.ಸದಾಶಿವಯ್ಯ | ಸೋರಟ್ ಅಶ್ವಥ್ | ಕು.ರಾ.ಸೀತಾರಾಮಶಾಸ್ತ್ರಿ | ಜಿ.ವಿ.ಅಯ್ಯರ್ | ಕಣಗಾಲ್ ಪ್ರಭಾಕರ ಶಾಸ್ತ್ರಿ | ಚಿ.ಉದಯಶಂಕರ್ | ಆರ್.ಎನ್.ಜಯಗೋಪಾಲ್ | ವಿಜಯನಾರಸಿಂಹ | ಕರೀಂಖಾನ್ | ದೊಡ್ಡರಂಗೇಗೌಡ | ಪಿ.ಲಂಕೇಶ್ | ಹಂಸಲೇಖ | ವಿ.ಮನೋಹರ್ | ಕೆ.ಕಲ್ಯಾಣ್ | ವಿ.ನಾಗೇಂದ್ರ ಪ್ರಸಾದ್ | ಕವಿರಾಜ್ | ಎಸ್.ನಾರಾಯಣ್ | ಉಪೇಂದ್ರ | ರವಿಚಂದ್ರನ್ | ಪ್ರೇಂ | ನಾಗತಿಹಳ್ಳಿ ಚಂದ್ರಶೇಖರ್
[ಬದಲಾಯಿಸಿ] ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು
ಜಿ.ಕೃಷ್ಣಸ್ವಾಮಿ ಅಯ್ಯಂಗಾರ್ | ಸುಬ್ಬಯ್ಯ ನಾಯ್ಡು | ಆರ್.ನಾಗೇಂದ್ರರಾಯ | ಹೊನ್ನಪ್ಪ ಭಾಗವತರ್ | ಪಿ. ಕಾಳಿಂಗರಾವ್ | ಚೆಂಬಯ್ ವೈದ್ಯನಾಥ ಭಾಗವತರ್ | ಪಿ.ಬಿ.ಶ್ರೀನಿವಾಸ್ | ಘಂಟಸಾಲ | ಜಿ.ಕೆ.ವೆಂಕಟೇಶ್ | ಡಾ. ರಾಜ್ಕುಮಾರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಕೆ.ಜೆ.ಯೇಸುದಾಸ್ | ರಾಜೇಶ್ ಕೃಷ್ಣನ್ | ಶಿವರಾಜ್ಕುಮಾರ್ | ಉಪೇಂದ್ರ | ಹರಿಹರನ್ | ಹೇಮಂತ್ | ಶಂಕರ್ ಮಹಾದೇವನ್ | ಪ್ರೇಂ | ಚೇತನ್ ಸಾಸ್ಕ | ಅನೂಪ್ | ಫಯಾಜ್ ಖಾನ್ | ಕಾಶೀನಾಥ್ | ಪುನೀತ್ ರಾಜ್ಕುಮಾರ್ | ರಾಘವೇಂದ್ರ ರಾಜ್ಕುಮಾರ್ | ಭೀಮಸೇನ್ ಜೋಷಿ | ಬಾಲಮುರಳಿ ಕೃಷ್ಣ | ಜಗ್ಗೇಶ್ | ಗುರುಕಿರಣ್ | ರಾಮ್ ಪ್ರಸಾದ್ |
ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು
ತ್ರಿಪುರಾಂಬ | ಕಮಲಾ ಬಾಯಿ | ಎಸ್.ಡಿ.ಸುಬ್ಬುಲಕ್ಷ್ಮಿ | ಲಕ್ಷ್ಮಿ ಬಾಯಿ | ಎಂ.ವಿ.ರಾಜಮ್ಮ | ಅಮೀರ್ಬಾಯಿ ಕರ್ನಾಟಕಿ | ಬಿ.ಜಯಮ್ಮ | ಪಿ. ಲೀಲಾ | ಪಿ.ಸುಶೀಲ | ಎಸ್.ಜಾನಕಿ | ಎಲ್.ಆರ್. ಈಶ್ವರಿ | ಬಿ.ಕೆ. ಸುಮಿತ್ರಾ | ವಾಣಿ ಜಯರಾಂ | ಕಸ್ತೂರಿ ಶಂಕರ್ | ಬೆಂಗಳೂರು ಲತಾ | ಸುಲೋಚನ | ಎಸ್.ಪಿ.ಶೈಲಜಾ | ಬಿ.ಆರ್. ಛಾಯಾ | ರತ್ನಮಾಲ ಪ್ರಕಾಶ್ | ಮಂಜುಳಾ ಗುರುರಾಜ್ | ಕವಿತಾ ಕೃಷ್ಣಮೂರ್ತಿ | ಚಿತ್ರಾ | ಚಂದ್ರಿಕಾ ಗುರುರಾಜ್ | ಲತಾ ಹಂಸಲೇಖ | ಸೌಮ್ಯ ರಾವ್ | ಅನುರಾಧ ಶ್ರೀರಾಮ್ | ನಂದಿತಾ | ಪಲ್ಲವಿ ಎಂ.ಡಿ | ಶಮಿತಾ ಮಲ್ನಾಡ್ | ಚೈತ್ರ | ಸುಮಾ ಶಾಸ್ತ್ರಿ | ಸುಪ್ರಿಯ ಆಚಾರ್ಯ | ಭವತಾರಿಣಿ