ಮತಿಘಟ್ಟ ಕೃಷ್ಣಮೂರ್ತಿ

From Wikipedia

ಮತಿಘಟ್ಟ ಕೃಷ್ಣಮೂರ್ತಿ - ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಅನೇಕ ಜಾನಪದ ಗೀತೆಗಳನ್ನು ಸಂಗ್ರಹಿಸಿದವರು. ಇವರು ಹಾಸನ ಜಿಲ್ಲೆಯ ಮತಿಘಟ್ಟ ಎಂಬ ಊರಿನವರು. ೫೦ಸಾವಿರಕ್ಕೂ ಅಧಿಕ ಜಾನಪದ ಹಾಡು ಮತ್ತು ಕತೆಗಳನ್ನು ಸಂಗ್ರಹಿಸಿದ್ದರು. ಭಾಷಾಲೋಕ ಖ್ಯಾತಿಯ ಪ್ರಕೃತಿ ಬನವಾಸಿ ಕೃಷ್ಣಮೂರ್ತಿ ಅವರ ಮೊಮ್ಮಗ.

[ಬದಲಾಯಿಸಿ] ಕೃತಿಗಳು

  • ಕಳಸಾಪುರದ ಹುಡುಗರು - ಚಲನಚಿತ್ರವಾಗಿದೆ.
  • ಗೃಹಿಣಿ ಗೀತೆ
  • ಸಾಂಪ್ರದಾಯಿಕ ಗೀತೆಗಳು
  • ಶಕುನದ ಹಕ್ಕಿ,
  • ಹೊನ್ನ ಹೊತ್ತಿಗೆ
  • ಮರುಗಿ
  • ನಮ್ಮ ಹಳ್ಳಿಯ ಹಾಡು

[ಬದಲಾಯಿಸಿ] ನಿಧನ

ಅನಾರೋಗ್ಯದ ಕಾರಣದಿಂದ ಕೃಷ್ಣಮೂರ್ತಿಯವರು ಜುಲೈ.೨೭.೨೦೦೬ರ ಗುರುವಾರದಂದು ಬೆಂಗಳೂರಿನಲ್ಲಿ, ತಮ್ಮ ೯೪ರ ವಯಸ್ಸಿನಲ್ಲಿ, ನಿಧನರಾದರು.