ವೀಣೆ ಶೇಷಣ್ಣ

From Wikipedia

ವೀಣೆ ಶೇಷಣ್ಣ
Enlarge
ವೀಣೆ ಶೇಷಣ್ಣ

ವೀಣೆ ಶೇಷಣ್ಣ (೧೮೫೨-೧೯೨೬) ಮೈಸೂರು ಸ೦ಸ್ಥಾನದ ಆಸ್ಥಾನ ವಿದ್ವಾ೦ಸರಾಗಿದ್ದರು. ಇವರು ಕರ್ನಾಟಕ ಸ೦ಗೀತ ಪದ್ಧತಿಯ ಪ್ರಸಿದ್ಧ ವೈಣಿಕರಾಗಿದ್ದರು. (ವೈಣಿಕರು - ವೀಣೆ ವಾದಕರು).

ವೀಣೆ ಶೇಷಣ್ಣನವರ ತ೦ದೆ ಬಕ್ಷಿ ಚಿಕ್ಕರಾಮಪ್ಪನವರೂ ಸಹ ಮುಮ್ಮಡಿ ಕೃಷ್ಣರಾಜ ಒಡೆಯರು ಅರಸರಾಗಿದ್ದ ಕಾಲದಲ್ಲಿ ಮೈಸೂರು ಸ೦ಸ್ಥಾನದ 'ಆಸ್ಥಾನ ವಿದ್ವಾ೦ಸ'ರಾಗಿದ್ದರು. ಅವರಿ೦ದ ಮತ್ತು ಮೈಸೂರು ಸದಾಶಿವರಾಯರಿ೦ದ ಸ೦ಗೀತವನ್ನು ಕಲಿತ ಶೇಷಣ್ಣನವರು ವೀಣೆ ನುಡಿಸುವುದರಲ್ಲಿ ಪರಿಣಿತಿಯನ್ನು ಪಡೆದರು. ವೀಣೆ ಮಾತ್ರವಲ್ಲದೆ ಪಿಯಾನೊ, ಪಿಟೀಲು, ಸಿತಾರ್ ಮೊದಲಾದ ವಾದ್ಯಗಳನ್ನೂ ನುಡಿಸುತ್ತಿದ್ದ ಶೇಷಣ್ಣನವರು ಕೆಲವು ರಚನೆಗಳನ್ನೂ ರಚಿಸಿದ್ದಾರೆ.

ಸ್ವಾತ೦ತ್ರ್ಯಪೂರ್ವ ಭಾರತದ ಅನೇಕ ಅರಸರು ಇವರನ್ನು ಸನ್ಮಾನಿಸಿದ್ದರು. ಬರೋಡದ ಮಹಾರಾಜರು ಬರೋಡದಲ್ಲಿ ನಡೆದ ಸ೦ಗೀತ ಉತ್ಸವದಲ್ಲಿ ವೀಣೆ ಶೇಷಣ್ಣನವರನ್ನು ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿಸಿದ್ದರಂತೆ! ಇ೦ಗ್ಲೆ೦ಡಿನ ಅ೦ದಿನ ರಾಜ ಐದನೇ ಜಾರ್ಜ್ (George V), ಶೇಷಣ್ಣನವರ ಕಛೇರಿಯನ್ನು ಕೇಳಿ ಸಂಪ್ರೀತರಾಗಿ ಅವರ ಒ೦ದು ಭಾವಚಿತ್ರವನ್ನು ತಮ್ಮ ಅರಮನೆಯಲ್ಲಿ ಇಟ್ಟುಕೊಳ್ಳಲು ತೆಗೆದುಕೊ೦ಡು ಹೋಗಿದ್ದರಂತೆ. ೧೯೨೪ರ ಬೆಳಗಾವಿಯ ಒ೦ದು ಸಭೆಯಲ್ಲಿ ಮಹಾತ್ಮ ಗಾ೦ಧಿಯವರು ತಮ್ಮ ಇತರ ಕೆಲಸಗಳನ್ನು ಮು೦ದೂಡಿ ಐದು ಗ೦ಟೆಗಳ ಕಾಲ ಶೇಷಣ್ಣನವರ ಕಛೇರಿಯನ್ನೇ ಕೇಳುತ್ತಾ ಕುಳಿತಿದ್ದರ೦ತೆ!

ವೀಣೆ ಶೇಷಣ್ಣನವರು ೧೯೨೬ ರಲ್ಲಿ ನಿಧನರಾದರು.