ತ.ಸು.ಶಾಮರಾವ್

From Wikipedia

ಜನನ - ೧೨.ಜೂನ್ -೧೯೦೬
ಮರಣ - ೨೧.ಆಗಸ್ಟ್-೧೯೯೮

[ಬದಲಾಯಿಸಿ] ಜೀವನ

ತ.ಸು.ಶಾಮರಾಯರು ಕನ್ನಡದಪ್ರಮುಖ ಸಾಹಿತಿಗಳು ಮತ್ತು ವಿದ್ವಾಂಸರು.

ಶಾಮರಾಯರು ಜನಿಸಿದ್ದು ಚಿತ್ರದುರ್ಗಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳುಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣ ಮತ್ತು ತಾಯಿ ಲಕ್ಷ್ಮಿದೇವಮ್ಮ.

ಬಿ ಎಂ ಶ್ರೀ, ತೀ ನಂ ಶ್ರೀ, ಕುವೆಂಪು ಅವರ ಶಿಷ್ಯರಾಗಿದ್ದರು. ಬಿ.ಎ.ಆನರ್ಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಕಾಲೇಜ್ ಅಧ್ಯಾಪಕರಾದರು. ಮುಂದೆ ಕು.ವೆಂ.ಪು ಅವರ ಮಾರ್ಗದರ್ಶನದಲ್ಲಿ , 'ಕನ್ನಡ ನಾಟಕ ಎಂಬ ಪ್ರಬಂಧ ಮಂಡಿಸಿ ಎಂ.ಎ. ಪದವಿಯನ್ನು ಪಡೆದು, ಪ್ರಾಧ್ಯಾಪಕ ವೃತ್ತಿಯನ್ನು ಕೈಗೊಂಡರು. ಮೈಸೂರು ವಿಶ್ವವಿದ್ಯಾಲಯಪ್ರಸಾರಾಂಗದ ನಿರ್ದೇಶಕ, ಮಹಾ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

[ಬದಲಾಯಿಸಿ] ಕೃತಿಗಳು

  • ವ್ಯಾಕರಣ ಕೋಶಕ್ಕೆ ಸಂಬಂಧಿಸಿದ ಐದು ಕೃತಿಗಳು
  • ಕನ್ನಡ ನಾಟಕ
  • ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ
  • ವಿಮರ್ಶಾ ಗ್ರಂಥಗಳು
  • ಅಜಿತ ಪುರಾಣ ಸಂಗ್ರಹ
  • ಅರಣ್ಯ ಪುರಾಣ ಸಂಗ್ರಹ ( ಇದೇ ರೀತಿ ಹನ್ನೊಂದು ಕಾವ್ಯ ಸಂಗ್ರಹಗಳು)
  • ಮಂಕನ ಮಡದಿ (ಕಾದಂಬರಿ)
  • ಕಥಾವಲ್ಲರಿ
  • ಮಹಾವೀರ
  • ಶಿವಶರಣ ಕಥಾರತ್ನ ಕೋಶ
  • ಪಂಪ,ಮುದ್ದಣ ,ರತ್ನಾಕರ ವರ್ಣಿ ಕುರಿತ ಸಾಹಿತ್ಯ ಗ್ರಂಥಗಳು - ಒಟ್ಟು ೫೦ ಕೃತಿ ಪ್ರಕಟವಾಗಿವೆ.

[ಬದಲಾಯಿಸಿ] ಪ್ರಶಸ್ತಿಗಳು

  • ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಶಸ್ತಿ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಕನ್ನಡ ಸಾಹಿತ್ಯ ಪರಿಷತ್ತಿನ ಚಾವುಂಡರಾಯ ಪ್ರಶಸ್ತಿ
  • ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್



ಟೆಂಪ್ಲೇಟ್ ದೊಡ್ಡದಾಗಿರುವುದರಿಂದ ಇನ್ನು ಮುಂದೆ ಸಾಹಿತಿಗಳು ಟೆಂಪ್ಲೇಟನ್ನು ಬಳಸಲಾಗುವುದಿಲ್ಲ. ಈ ಟೆಂಪ್ಲೇಟ್ ಲೇಖನವೊಂದರಲ್ಲಿ ನಿಮಗೆ ಕಂಡುಬಂದಲ್ಲಿ ಲೇಖನ ಪುಟದಿಂದ {{ಸಾಹಿತಿಗಳು}}ಎಂಬ ಸೇರ್ಪಡೆಯನ್ನು ತೆಗೆದುಹಾಕಿ.