ಕಿಟ್ಟೆಲ್
From Wikipedia
ರೆವರೆಂಡ್ ಎಫ್.ಕಿಟ್ಟೆಲ್ ಇವರು ೧೮೩೨ರಲ್ಲಿ ಜರ್ಮನಿಯಲ್ಲಿ ಜನಿಸಿದರು. ೧೮೫೩ರಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಸಾರಕ್ಕಾಗಿ ಭಾರತಕ್ಕೆ ಬಂದರು.
ಕನ್ನಡಕ್ಕೆ ಕಿಟ್ಟೆಲ್ ಅವರ ಮಹತ್ವದ ಸೇವೆ ಎಂದರೆ ನಿಘಂಟು ರಚನೆ. ೧೬ ವರ್ಷಗಳ ಅವಿರತ ಪರಿಶ್ರಮದಿಂದ ಅತ್ಯುಪಯುಕ್ತ ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟುವನ್ನು ರಚಿಸಿ ೧೮೯೪ರಲ್ಲಿ ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಮೂಲಕ ಪ್ರಕಟಪಡಿಸಿದರು.
ಇದಲ್ಲದೆ ಕಿಟ್ಟೆಲ್ ಅವರು ‘ನಾಗವರ್ಮನ ಕನ್ನಡ ಛಂದಸ್ಸು’, ‘ಪಂಚತಂತ್ರ’ ಇವುಗಳ ಬಗ್ಗೆಯೂ ಬರೆದಿದ್ದಾರೆ. “ಕನ್ನಡ ವ್ಯಾಕರಣ” ಇವರ ಇನ್ನೊಂದು ಅಮೂಲ್ಯ ಕೃತಿ.
ರೆವರೆಂಡ್ ಎಫ್.ಕಿಟ್ಟೆಲ್ ಅವರು ೧೯೦೩ರಲ್ಲಿ ನಿಧನರಾದರು.