ಜಿ. ಎಸ್. ಶಿವರುದ್ರಪ್ಪ

From Wikipedia

ಜಿ.ಎಸ್.ಶಿವರುದ್ರಪ್ಪನವರು(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ) ಶಿವಮೊಗ್ಗಾ ಜಿಲ್ಲೆಯ ಶಿಕಾರಿಪುರದ ಹತ್ತಿರವಿರುವ ಈಸೂರುಗ್ರಾಮದಲ್ಲಿ ೧೯೨೬ ಫೆಬ್ರುವರಿ ೭ ರಂದು ಜನಿಸಿದರು. ತಂದೆ ಶಾಂತವೀರಪ್ಪ, ತಾಯಿ ವೀರಮ್ಮ. ಡಾ| ಜಿ.ಎಸ್.ಶಿವರುದ್ರಪ್ಪನವರು ಮೈಸೂರು ಮಹಾರಾಜಾ ಕಾಲೇಜಿನಲ್ಲಿ,ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಪರಿವಿಡಿ

[ಬದಲಾಯಿಸಿ] ಸಾಹಿತ್ಯ

[ಬದಲಾಯಿಸಿ] ಕಾವ್ಯಸಂಕಲನ

  • ಸಾಮಗಾನ
  • ಕಾರ್ತೀಕ
  • ದೀಪದ ಹೆಜ್ಜೆ
  • ಪ್ರೀತಿ ಇಲ್ಲದ ಮೇಲೆ
  • ದೇವಶಿಲ್ಪ
  • ಗೋಡೆ
  • ಅನಾವರಣ
  • ತೆರೆದ ದಾರಿ
  • ಕಾಡಿನ ಕತ್ತಲಲ್ಲಿ

[ಬದಲಾಯಿಸಿ] ಜೀವನಚರಿತ್ರೆ

  • ಕರ್ಮಯೋಗಿ( ಸಿದ್ದರಾಮನ ಜೀವನ ಚರಿತ್ರೆ)

[ಬದಲಾಯಿಸಿ] ಪ್ರವಾಸಕಥನ

  • ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ

[ಬದಲಾಯಿಸಿ] ವಿಮರ್ಶೆ

  • ವಿಮರ್ಶೆಯ ಪೂರ್ವಪಶ್ಚಿಮ
  • ಗತಿಬಿಂಬ
  • ಪರಿಶೀಲನ
  • ಪ್ರತಿಕ್ರಿಯೆ
  • ಕನ್ನಡ ಸಾಹಿತ್ಯ ಸಮೀಕ್ಷೆ
  • ನವೋದಯ
  • ಕಾವ್ಯಾರ್ಥಚಿಂತನ
  • ಬೆಡಗು


[ಬದಲಾಯಿಸಿ] ಗೌರವ

ಜಿ.ಎಸ್.ಶಿವರುದ್ರಪ್ಪನವರಿಗೆ ವಿಮರ್ಶೆಗಾಗಿ ೧೯೮೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು.ಇದಲ್ಲದೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸೋವಿಯತ್ ಲ್ಯಾಂಡ ನೆಹರೂ ಪ್ರಶಸ್ತಿ ಸಹ ಶಿವರುದ್ರಪ್ಪನವರಿಗೆ ದೊರೆತಿವೆ.೨೦೦೬ನೆಯ ಸಾಲಿನಲ್ಲಿ ಜರಗುತ್ತಿರುವ ಸುವರ್ಣ ಕರ್ನಾಟಕ ಉತ್ಸವದ ಸಂದರ್ಭದಲ್ಲಿ ಜಿ.ಎಸ್.ಶಿವರುದ್ರಪ್ಪನವರಿಗೆ ಕರ್ನಾಟಕ ಸರಕಾರವು ರಾಷ್ಟ್ರಕವಿ ಎನ್ನುವ ಗೌರವವನ್ನು ಪ್ರದಾನಿಸಿದೆ.

ಜಿ.ಎಸ್.ಶಿವರುದ್ರಪ್ಪನವರು ೧೯೯೨ ರಲ್ಲಿ ದಾವಣಗೆರೆಯಲ್ಲಿ ಜರುಗಿದ ೬೧ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.