ಶಂಕರ್ ಮೊಕಾಶಿ ಪುಣೇಕರ್
From Wikipedia
ಶಂಕರ ಮೊಕಾಶಿ ಪುಣೇಕರ್ - ಕನ್ನಡದ ಖ್ಯಾತ ಕವಿ ಮತ್ತು ಸಾಹಿತಿ. ಆಂಗ್ಲ ಪ್ರಾಧ್ಯಾಪಕರೂ, ಸಂಸ್ಕೃತ ವಿಧ್ವಾಂಸರೂ , ಕನ್ನಡ ಲೇಖಕರೂ ಆದ ಪುಣೇಕರ್ ಅವರು ಇಂಗ್ಲಿಷ್ ನಲ್ಲಿ ೨೦ ಕೃತಿಗಳನ್ನು ಬರೆದಿರುವರು. ಕನ್ನಡದ ಮಟ್ಟಿಗೆ ಅವರು ಹೆಸರಾಗಿರುವುದು ವಿಮರ್ಶೆ ಮತ್ತು ಕಾದಂಬರಿಗಳಿಂದ. "ಗಂಗವ್ವ ಗಂಗಾಮಾಯಿ" (೧೯೫೬), "ನಟನಾರಾಯಣಿ" (೧೯೮೨), "ಅವಧೇಶ್ವರಿ" (೧೯೮೭)-ಇವು ಇವರ ಕಾದಂಬರಿಗಳು. "ಅವಧೇಶ್ವರಿ" ಎಂಬ ಕೃತಿಗೆ ೧೯೮೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಆದರೆ ಅವರ ಪ್ರತಿಭೆಯ ನಿಜವಾದ ಗುರುತು "ಗಂಗವ್ವ ಗಂಗಾಮಾಯಿ"ಯಿಂದಲೇ. ಪುಣೇಕರರು ಸಂಸ್ಕೃತ ವಿದ್ವಾಂಸರಾದ ಕಾರಣ ಅವರ ಕೃತಿಗಳಲ್ಲಿ ಸಂಸ್ಕೃತ ಉಲ್ಲೇಖಗಳು ಬಹಳವಾಗಿ ಕಂಡುಬರುತ್ತದೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಕನ್ನಡಸಾಹಿತ್ಯ.ಕಾಮ್ನಲ್ಲಿ ಅವಧೇಶ್ವರಿ
ಟೆಂಪ್ಲೇಟ್ ದೊಡ್ಡದಾಗಿರುವುದರಿಂದ ಇನ್ನು ಮುಂದೆ ಸಾಹಿತಿಗಳು ಟೆಂಪ್ಲೇಟನ್ನು ಬಳಸಲಾಗುವುದಿಲ್ಲ. ಈ ಟೆಂಪ್ಲೇಟ್ ಲೇಖನವೊಂದರಲ್ಲಿ ನಿಮಗೆ ಕಂಡುಬಂದಲ್ಲಿ ಲೇಖನ ಪುಟದಿಂದ {{ಸಾಹಿತಿಗಳು}}ಎಂಬ ಸೇರ್ಪಡೆಯನ್ನು ತೆಗೆದುಹಾಕಿ.