ದಾವಣಗೆರೆ
From Wikipedia
ದಾವಣಗೆರೆ - ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆ, ಊರು. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಈಗ ಈ ಊರು ಬಹಳ ವೇಗದಿಂದ ಬೆಳೆಯುತ್ತಿರುವುದು ಅಸಮಂಜಸವೇನಲ್ಲ.
ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಕಡಲೆ, ಸೂರ್ಯಕಾಂತಿ, ಜೋಳ, ಅಕ್ಕಿ/ಭತ್ತ, ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ.
ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ , ಎಂಜಿನಿಯರಿಂಗ್, ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ.
ಪರಿವಿಡಿ |
[ಬದಲಾಯಿಸಿ] ಭೂಗೋಳ
ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಸುತ್ತುವರೆದ ಈ ಊರು, ಪ್ರಮುಖ ಪ್ರದೇಶ. ಬೆಂಗಳೂರಿನಿಂದ ಮುಂಬೈಗೆ ಹೋಗುವ ಯಾತ್ರಿಕರು ದಾವಣಗೆರೆ ಮೂಲಕವೇ ಹೋಗಬೇಕು.
[ಬದಲಾಯಿಸಿ] ಪ್ರೇಕ್ಷಣೀಯ ಸ್ಥಳಗಳು
ಹರಿಹರದ ತುಂಗಭದ್ರೆ ಮತ್ತು ಹರಿಹರೇಶ್ವರ ದೇವಾಲಯ, ಶಾಂತಿಸಾಗರ, ಕೊಂಡಜ್ಜಿಯ ಅರಣ್ಯಧಾಮ, ಬಾಗಳಿ ಕಲ್ಲೇಶ್ವರ ದೇವಾಲಯ, ನೀಲಗುಂದದ ದೇವಾಲಯಗಳು, ಸಂತೆಬೆನ್ನೂರಿನ ಪುಷ್ಕರಿಣಿ.
[ಬದಲಾಯಿಸಿ] ಪ್ರಾದೇಶಿಕ
ದಾವಣಗೆರೆ ಮೊದಲು ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು. ಆಗಸ್ಟ್ ೧೫, ೧೯೯೭ರಂದು ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ಅವರ ನಿರ್ಧಾರದಿಂದ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ, ಹರಿಹರ, ಮತ್ತು ಜಗಳೂರು ತಾಲ್ಲೂಕುಗಳನ್ನು, ಶಿವಮೊಗ್ಗ ಜಿಲ್ಲೆಯಿಂದ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳನ್ನು, ಹಾಗೂ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲ್ಲೂಕುಗಳನ್ನು ಸೇರಿಸಿ ಹೊಸ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು.
[ಬದಲಾಯಿಸಿ] ದಾವಣಗೆರೆಯ ವಿವಿಧ ಭಾಗಗಳು
ದುಗ್ಗಮ್ಮನ ಪೇಟೆ, ಹಳೇ ಪೇಟೆ, ಗಡಿಯಾರ ಕಂಬ, ಹೊಂಡದ ಸರ್ಕಲ್, ವಿನೋಬನಗರ, ಪಿ.ಜೆ. ಬಡಾವಣೆ, ಎಂ.ಸಿ. ಕಾಲೋನಿ, ಆಂಜನೇಯ ಬಡಾವಣೆ, ಮಂಡಿ ಪೇಟೆ, ದೇವರಾಜ್ ಅರಸು ಬಡಾವಣೆ, ಹಗೇದಿಬ್ಬ ಸರ್ಕಲ್, ಗಾಂಧಿ ನಗರ, ವಿದ್ಯಾನಗರ, ಆಜಾದ್ ನಗರ, ಚಿತ್ರಗಾರ ಗಲ್ಲಿ, ಮ್ಯಾಸಬೇಡರ ಕೇರಿ, ಕುರುಬರ ಬೀದಿ, ರೈತರ ಬೀದಿ, ಅಕ್ಕಮಹಾದೇವಿ ರಸ್ತೆ, ಶ್ಯಾಮನೂರು ರಸ್ತೆ, ಹದಡಿ ರಸ್ತೆ, ನಿಟುವಳ್ಳಿ, ಲೇಬರ್ ಕಾಲೋನಿ, ಎಪಿಎಂಸಿ ಮಾರ್ಕೆಟ್, ನೀಲಮ್ಮನ ತೋಟ, ಶಿವಪ್ಪಯ್ಯ ಸರ್ಕಲ್, ಶಿವಯೋಗಿ ಸರ್ಕಲ್, ಲಾಯರ್ ರಸ್ತೆ, ಬೇತೂರು ರಸ್ತೆ, ಅಕ್ಕಮಹಾದೇವಿ ರಸ್ತೆ, ಬೆಣ್ಣೆ ಮಾರ್ಕೆಟ್, ಪ್ರವಾಸಿಮಂದಿರ ರಸ್ತೆ, ಹಳೇ ಅಂಡರ್ ಬ್ರಿಡ್ಜ್ ರಸ್ತೆ, ಮೀನು ಮಾರುಕಟ್ಟೆ, ಕೆ.ಟಿ. ಜಂಬಣ್ಣ ನಗರ, ಬಂದೂರ್ ಕ್ಯಾಂಪ್, ಅವರಗೆರೆ, ಶಿವಕುಮಾರ ಸ್ವಾಮಿ ಬಡಾವಣೆ, ವಿದ್ಯುತ್ ನಗರ, ಯಲ್ಲಮ್ಮ ನಗರ, ಹೈಸ್ಕೂಲ್ ಮೈದಾನ, ಮಾಮಾಸ್ ಜಾಯಿಂಟ್ ರಸ್ತೆ, ಟಿ.ವಿ. ಸ್ಟೇಷನ್, ಕಿರುವಾಡಿ ಬಡಾವಣೆ, ಕೆ.ಬಿ. ಬಡಾವಣೆ, ವಿಶ್ವೇಶ್ವರಯ್ಯ ಪಾರ್ಕ್, ಟ್ಯಾಂಕ್ ಪಾರ್ಕ್, ಡಾಂಗೆ ಪಾರ್ಕ್, ಸಿದ್ದಮ್ಮ ಪಾರ್ಕ್, ಗುಂಡಿ ಮಹಾದೇವಪ್ಪ ಸರ್ಕಲ್, ಅಶೋಕ ರಸ್ತೆ, ಶ್ರೀರಾಮ ಮಂದಿರ, ರಾಯರ ಮಠ, ವನಿತಾ ಸಮಾಜ ರಸ್ತೆ, ವಿದ್ಯಾರ್ಥಿ ಭವನ ರಸ್ತೆ, ಸ್ಟೇಡಿಯಂ ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಮೆಡಿಕಲ್ ಕಾಲೇಜು ರಸ್ತೆ.
[ಬದಲಾಯಿಸಿ] ತಾಲ್ಲೂಕುಗಳು
- ದಾವಣಗೆರೆ
- ಹರಿಹರ
- ಹರಪನಹಳ್ಳಿ
- ಜಗಳೂರು
- ಹೊನ್ನಾಳಿ
- ಚನ್ನಗಿರಿ
[ಬದಲಾಯಿಸಿ] ಇವನ್ನೂ ನೋಡಿ
- ಬೆಣ್ಣೆದೋಸೆ, ಖಾರ ಮಂಡಕ್ಕಿ
- ದಾವಣಗೆರೆಯ ದಾನಿಗಳು
- ದಾವಣಗೆರೆಯ ವ್ಯಾಪಾರೀ ಸಂಸ್ಕೃತಿ
[ಬದಲಾಯಿಸಿ] ದಾವಣಗೆರೆ ವಿಶೀಷ್ಟ ತಿನಿಸುಗಳು
ಬೆಣ್ಣೆದೋಸೆ, ಖಾರ ಮಂಡಕ್ಕಿ, ಗುಲ್ಲಡಕಿ ಉ೦ಡಿ
[ಬದಲಾಯಿಸಿ] ಪ್ರಮುಖ ವಿದ್ಯಾಸಂಸ್ಥೆಗಳು
- ಬಾಪೂಜಿ ವಿದ್ಯಾಸಂಸ್ಥೆ
- ಬ್ರಹ್ಮಪ್ಪ ತವನಪ್ಪನವರ ತಾಂತ್ರಿಕ ಮಹಾವಿದ್ಯಾಲಯ
- ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ
- ಕಲಾನೀಕೇತನ ವಸ್ತ್ರವಿನ್ಯಾಸ ಮಹಾವಿದ್ಯಾಲಯ
- ವಿಶ್ವವಿದ್ಯಾನಿಲಯ ಲಲಿತಕಲಾ ಮಹಾವಿದ್ಯಾಲಯ
- ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯ
- ಬಾಪೂಜಿ ದಂತವಿಜ್ಞಾನ ಮಹಾವಿದ್ಯಾಲಯ
- ಜಿ ಮಲ್ಲಿಕಾರ್ಜುನಪ್ಪ ತಾಂತ್ರಿಕ ಮಹಾವಿದ್ಯಾಲಯ
- ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಕಾನೂನು ವಿದ್ಯಾಲಯ
- ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ಪಾಲಿಟೆಕ್ನಿಕ್
- ಧರ್ಮಪ್ರಕಾಶ ರಾಜನಹಳ್ಳಿ ಮದ್ದೂರಾಯಪ್ಪ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ
[ಬದಲಾಯಿಸಿ] ಪ್ರಮುಖ ವ್ಯಕ್ತಿಗಳು
- ಮಹಾಕವಿ ಮಹಲಿಂಗ ರಂಗ
- ರಾಜನಹಳ್ಳಿ ಮನೆತನ
- ಚಿಗಟೇರಿ ಮುರಿಗೆಪ್ಪ
- ಕಾಸಲ್ ಶ್ರೀನಿವಾಸ ಶೆಟ್ಟಿ
- ಬ್ರಹ್ಮಪ್ಪ ತವನಪ್ಪನವರು
- ಶಾಮನೂರು ಶಿವಶಂಕರಪ್ಪ
- ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ
- ಡಾ. ಎಸ್.ಮ್.ಎಲಿ
- ಮಾಗನೂರು ಬಸಪ್ಪ
- ಕೆ. ಮಲ್ಲಪ್ಪ
- ಜೆ ಹೆಚ್ ಪಟೇಲ್
- ಬಿ.ವಿ. ವೀರಭದ್ರಪ್ಪ
- ಚಿಂದೋಡಿ ಲೀಲಾ
- ಆ.ರಾ.ಸೇತೂರಾಮ ರಾವ್
- ಚಿಂದೋಡಿ ವೀರಪ್ಪ
- ಗೊಪ್ಪೇನಹಳ್ಳಿ ಪರಮೇಶ್ವರಾಚಾರ್
- ಶಂಕರ್ ಪಾಟೀಲ್
- ಕಾಳಿದಾಸ್ ಪತ್ತಾರ್
- ವಿ.ಬಿ. ಹಿರೇಗೌಡರ್
- ನಾ.ರೇವಣ್ಣ
- ಹೆಚ್.ಬಿ. ಆನಂದರಾಮ ಶಾಸ್ತ್ರೀ
- ಬಿದರಹಳ್ಳಿ ನರಸಿಂಹ ಮೊರ್ತಿ
- ಮುದೇನೂರು ಸಂಗಣ್ಣ
- ಎಂ.ಜಿ ಈಶ್ವರಪ್ಪ
- ಚನ್ನಗಿರಿ ರಂಗಪ್ಪ
[ಬದಲಾಯಿಸಿ] ಹೊರಗಿನ ಸಂಪರ್ಕಗಳು
- ಜನತಾವಾಣಿ
- ದಾವಣಗೆರೆ ಜಿಲ್ಲೆಯ ನಕ್ಷೆ
- ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ್ ತಂತ್ರಶಾಸ್ತ್ರ ವಿಶ್ವವಿದ್ಯಾಲಯ
- ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ
- ಜ ಜ ಮು ವೈದ್ಯಕೀಯ ಕಾಲೇಜು
- ಕಲಾನೀಕೇತನ ವಸ್ತ್ರವಿನ್ಯಾಸ ಮಹಾವಿದ್ಯಾಲಯ
- ದಾವಣಗೆರೆ ನಗರಸಭೆ
- ದಾವಣಗೆರೆ ಜಿಲ್ಲೆಯ ವೈದ್ಯರ ಪಟ್ಟಿ
- ದಾವಣಗೆರೆ
- ದಾವಣಗೆರೆ ಜಿಲ್ಲಾ ರಸ್ತೆ ನಕ್ಷೆ
- ಆ೦ಗ್ಲ್ ವಿಕಿ
- ದಾವಣಗೆರೆ ಸುದ್ದಿ
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ