ಕರ್ಪೂರ ಶ್ರೀನಿವಾಸರಾವ್
From Wikipedia
ಕರ್ಪೂರ ಶ್ರೀನಿವಾಸರಾವ್ ಇವರು ೧೮೬೩ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಕರ್ಪೂರ ಸುಬ್ಬರಾವ್. ಕಷ್ಟಗಳ ನಡುವೆಯೆ ಶ್ರೀನಿವಾಸರಾಯರು ಬಿ.ಎಸ್ಸಿ. ಮತ್ತು ಎಲ್.ಸಿ.ಇ ಮುಗಿಸಿದರು.
ಪರಿವಿಡಿ |
[ಬದಲಾಯಿಸಿ] ಉದ್ಯೋಗ
ಎಲ್.ಸಿ.ಇ. ಶಿಕ್ಷಣದ ನಂತರ ಶ್ರೀನಿವಾಸರಾಯರು ಮುಂಬಯಿಯ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದರು. ಆಬಳಿಕ ಮೈಸೂರಿಗೆ ಹಿಂತಿರುಗಿ ಪ್ರಧಾನ ಇಂಜನಿಯರ್ ಹುದ್ದೆಗೆ ಏರಿ ನಿವೃತ್ತರಾದರು.
[ಬದಲಾಯಿಸಿ] ಸಾಧನೆ
ಕನ್ನಡ ಸಾಹಿತ್ಯ ಪರಿಷತ್ತಿನ ನೀಲಿ ನಕ್ಷೆ ತಯಾರಿಸಿ, ಅದರ ನಿರ್ಮಾಣ ಕಾರ್ಯಕ್ಕಾಗಿ ದುಡಿದರು. ೧೩ ವರ್ಷ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಮೂಲ್ಯ ಸೇವೆ ಸಲ್ಲಿಸಿದರು.
[ಬದಲಾಯಿಸಿ] ಸಾಹಿತ್ಯ
- ‘ಸುಬೋಧ ಕುಸುಮಾಂಜಲಿ ಮಾಲಿಕೆ’ ಪ್ರಾರಂಭವಾಗಲು ಇವರು ಕಾರಣಕರ್ತರೆನ್ನಬಹುದು.
- ‘ಸಾಹಿತ್ಯ ಶಾಸ್ತ್ರ’ ಗ್ರಂಥ ರಚನೆ ಮಾಡಿದ್ದಾರೆ.
[ಬದಲಾಯಿಸಿ] ಪುರಸ್ಕಾರ
೧೯೧೯ರಲ್ಲಿ ಹಾಸನದಲ್ಲಿ ಜರುಗಿದ ೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕರ್ಪೂರ ಶ್ರೀನಿವಾಸರಾವ್ ೧೯೩೨ರಲ್ಲಿ ತೀರಿಕೊಂಡರು.