ಅಬ್ದುಲ್ ಕಲಾಮ್

From Wikipedia

ಅಬುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್
ಅಬ್ದುಲ್ ಕಲಾಮ್
Enlarge
ಅಬ್ದುಲ್ ಕಲಾಮ್
ಜನ್ಮ ದಿನಾಂಕ: ೧೫ ಅಕ್ಟೊಬರ್ ೧೯೩೧
ನಿಧನರಾದ ದಿನಾಂಕ:  
ಭಾರತದ ರಾಷ್ಟ್ರಪತಿಗಳು
ಅವಧಿಯ ಕ್ರಮಾಂಕ: ೧೧ನೆ ರಾಷ್ಟ್ರಪತಿ
ಅಧಿಕಾರ ವಹಿಸಿದ ದಿನಾಂಕ: ೨೫ ಜುಲೈ ೨೦೦೨
ಅಧಿಕಾರ ತ್ಯಜಿಸಿದ ದಿನಾಂಕ:  
ಪುರ್ವಾಧಿಕಾರಿ: ಡಾ. ಕೆ ಆರ್ ನಾರಾಯಣನ್
ಉತ್ತರಾಧಿಕಾರಿ:  

ಜುಲೈ ೨೫, ೨೦೦೨ ರಿಂದ ..

ಅಬ್ದುಲ್ ಕಲಾಮ್ ಭಾರತದ ಹನ್ನೊಂದನೇ ರಾಷ್ಟ್ರಪತಿಗಳಾಗಿ ೨೫-೦೭-೨೦೦೨ ರಂದು ಅಧಿಕಾರ ಸ್ವೀಕರಿಸಿದರು. ಅವರ ಜನನ ಅಕ್ಟೋಬರ್ ೧೫,೧೯೩೧ ರಂದು ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಡಿಯಲ್ಲಿ ಆಯಿತು. ೧೯೫೮ರಲ್ಲಿ ಮದ್ರಾಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನೋಲಜಿಯಿಂದ ಏರೋನಾಟಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದರು. ಡಿಆರ್ ಡಿಓ ಹಾಗೂ ಇಸ್ರೋ ದಲ್ಲಿ ವಿಜ್ನಾನಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಭಾರತದ ಅಣುಬಾಂಬು ಹಾಗು ಕ್ಷಿಪಣಿಗಳ ಜನಕ ಎಂದೇ ಪ್ರಸಿದ್ಧರು. ಇವರು ಬ್ರಹ್ಮಚಾರಿಗಳು. ಸದಾ ದೇಶದ ಹಿತ ಮತ್ತು ಬೆಳವಣಿಗೆಯ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ.

ಇವರು ರಚಿಸಿದ ಕೆಳಗಿನ ಪುಸ್ತಕಗಳು ಇಂದಿನ ಯುವ ಜನಾಂಗಕ್ಕೆ ಸ್ಪೂರ್ಥಿಯ ಸೆಲೆಗಳು: 1. Wings of Fire (ಕನ್ನಡ ಅನುವಾದ - ಅಗ್ನಿಯ ರೆಕ್ಕೆಗಳು): ಈ ಪುಸ್ತಕವು ಇವರ ಆತ್ಮಕಥೆಯಾಗಿದ್ದು, ಇವರ ಸರಳ ಹಾಗೂ ಮಾದರಿ ಜೀವನದ ಅನೇಕ ಘಟನೆಗಳನ್ನು ಓದುಗರಿಗೆ ತೆರೆದಿಡುತ್ತದೆ. ಇಂದಿನ ಯುವ ಪೀಳಿಗೆಗೆ ಇದೊಂದು ಅನುರೂಪವಾದ ಮಾರ್ಗದರ್ಶಿ. 2. India 2020 ಈ ಪುಸ್ತಕದಲ್ಲಿ ಕಲಾಮ್ ರವರು ೨೦೨೦ನೇ ಇಸ್ವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಯುವ ಜನಾಂಗಕ್ಕೆ ಸ್ಪೂರ್ಥಿಯಾಗಬಲ್ಲಂಥಹ ಕೃತಿ.



ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.