ಸೋಮಶೇಖರ ಇಮ್ರಾಪೂರ

From Wikipedia

ಸೋಮಶೇಖರ ಇಮ್ರಾಪೂರ ಇವರು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರ ಕವನ ಸಂಕಲನ ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ ಕೃತಿಗೆ ೧೯೭೧ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

ಡಾ| ಸೋಮಶೇಖರ ಇಮ್ರಾಪೂರ ಇವರ ಕೃತಿಗಳು ಇಂತಿವೆ:

[ಬದಲಾಯಿಸಿ] ಕಾವ್ಯ

  • ಬಿಸಿಲ ಹೂ
  • ಬೆಳದಿಂಗಳು
  • ಬೆಂಕಿ
  • ಗಂಡ ಹೆಂಡಿರ ಜಗಳ ಗಂಧ ತೀಡಿಧಾಂಗ
  • ಬಿರುಗಾಳಿ
  • ಹುತ್ತಗಳು

[ಬದಲಾಯಿಸಿ] ವಿಮರ್ಶೆ, ಸಂಶೋಧನೆ

  • ಇತ್ತೀಚಿನ ಕನ್ನಡ ಕಾವ್ಯ ಮತ್ತು ಪರಿಸರ
  • ಜಾನಪದ ವಿಜ್ಞಾನ
  • ನಮ್ಮ ಜಾನಪದ ಸಮೀಕ್ಷೆ
  • ಜಾನಪದ ಕಿತ್ತೂರಿನ ಕಿಡಿಗಳು
  • ಜಾನಪದದಲ್ಲಿ ನರಗುಂದ ಬಾಬಾಸಾಹೇಬ
  • ಹಂತಿ,ಗೀಗಿ,ಲಾವಣಿ ಸಂಪ್ರದಾಯಗಳು
  • ಜಾನಪದ ವ್ಯಾಸಂಗ
  • ಜನಪದ ಒಗಟುಗಳು (ಮಹಾಪ್ರಬಂಧ)
  • ಕುವೆಂಪು-ಬೇಂದ್ರೆ (ತೌಲನಿಕ ವಿಮರ್ಶೆ)

[ಬದಲಾಯಿಸಿ] ಸಂಪಾದನೆ

  • ಮೂವತ್ತಾರು ಮುಖ ಅರವತ್ಮೂರು ಕವನಗಳು
  • ಸಾವಿರದ ಒಗಟಗಳು
  • ಜನಪದ ಮಹಾಭಾರತ
  • ಹನುಮಂತನ ಲಿಂಗಧಾರಣ
  • ಚಿತ್ರಕೇತು
  • ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ