ಬಿ.ಎಚ್.ಶ್ರೀಧರ
From Wikipedia
ಬಿ.ಎಚ್.ಶ್ರೀಧರ ಇವರು ದಕ್ಷಿಣ ಕನ್ನಡ ಜಿಲ್ಲೆಯ ಬವಳಾಡಿಯಲ್ಲಿ ೧೯೧೮ ಮಾರ್ಚ ೩ರಂದು ಜನಿಸಿದರು. ಎಮ್.ಎ. ಪದವಿ ಪಡೆದ ಬಳಿಕ ಡಿಫೆನ್ಸ್ ಅಕೌಂಟ್ಸ್ ವಿಭಾಗದಲ್ಲಿ ಸೇವೆ ಕೈಕೊಂಡ ಶ್ರೀಧರರು ಕೆಲ ಸಮಯದ ನಂತರ, ಆ ವೃತ್ತಿಯನ್ನು ತ್ಯಜಿಸಿ ಅಧ್ಯಾಪನ ವೃತ್ತಿಯನ್ನು ಸ್ವೀಕರಿಸಿದರು.
ಭಟಕಳದ ಮಾಧ್ಯಮಿಕ ಶಾಲೆ , ಕುಮಟಾದ ಕೆನರಾ ಕಾಲೇಜು, ಶಿರಸಿಯ ಆರ್ಟ್ಸ್ ಎಂಡ್ ಸಾಯನ್ಸ್ ಕಾಲೇಜು ಹಾಗು ಸಿದ್ದಾಪುರದ ಗಾಂಧಿ ಶತಾಬ್ದಿ ಕಾಲೇಜಿನಲ್ಲಿ ಉಪಾಧ್ಯಾಯರಾಗಿ, ಉಪನ್ಯಾಸಕರಾಗಿ ಹಾಗು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಕೆಲ ಕಾಲ ಹುಬ್ಬಳ್ಳಿಯ ಕರ್ಮವೀರ ಪತ್ರಿಕೆಯ ಉಪಸಂಪಾದಕರಾಗಿದ್ದರು.
ಬಿ.ಎಚ್.ಶ್ರೀಧರರು ಪ್ರಸಿದ್ಧ ವಿಮರ್ಶಕರು.
[ಬದಲಾಯಿಸಿ] ಕೃತಿಗಳು
- ರಸಯಜ್ಞ
- ರಾಷ್ಟ್ರಸೂತ್ರ
- ಜ್ಞಾನಸೂತ್ರ
- ಕಾವ್ಯಸೂತ್ರ
- ಪರಿಸರಿಪ ಕನ್ನಡಕ್ಕೊಡೆಯನೀಗದರಾಂಕಿತ ಬೇಂದ್ರೆ
[ಬದಲಾಯಿಸಿ] ಪುರಸ್ಕಾರ
ಇವರ “ಕಾವ್ಯಸೂತ್ರ”ಕ್ಕೆ ತೀ.ನಂ.ಶ್ರೀ ಸ್ಮಾರಕ ಬಹುಮಾನ ಹಾಗು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿವೆ.
ಬಿ.ಎಚ್.ಶ್ರೀಧರ ಸ್ಮಾರಕ ಪ್ರತಿಷ್ಠಾನವು ಶಿರಸಿಯಲ್ಲಿ ಸ್ಥಾಪಿತವಾಗಿದೆ.