ಡಿ.ಎಸ್.ಕರ್ಕಿ

From Wikipedia

"ಹಚ್ಚೇವು ಕನ್ನಡದ ದೀಪ" ಎಂದು ಹಾಡಿದ ದುಂಡಪ್ಪ ಸಿದ್ದಪ್ಪ ಕರ್ಕಿಯವರು ನವೋದಯ ಕಾಲದ ಕವಿಗಳು. ಇವರು ಬೆಳಗಾವಿ ಜಿಲ್ಲೆಯ ಹಿರೆಕೊಪ್ಪ ಗ್ರಾಮದಲ್ಲಿ ೧೯೦೭ ನವೆಂಬರ್ ೧೫ರಂದು ಜನಿಸಿದರು. ಇವರ ತಾಯಿ ದುಂಡವ್ವ ; ತಂದೆ ಸಿದ್ದಪ್ಪ. ಇವರು ಸುಮಾರು ೧೫ ಕೃತಿಗಳನ್ನು ರಚಿಸಿದ್ದಾರೆ. ಇವರ “ಗೀತ ಗೌರವ” ಕೃತಿಗೆ ೧೯೭೨ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.


ಇವರ ಕೆಲವು ಕೃತಿಗಳು:

  • ಗೀತ ಗೌರವ
  • ನಕ್ಷತ್ರಗಾನ
  • ಭಾವತೀರ್ಥ
  • ಕರಿಕೆ-ಕಣಗಲು
  • ನಾಲ್ದೆಸೆಯ ನೋಟ
  • ಛಂದೋವಿಕಾಸ