ಹೈದರಾಬಾದ ವಿಮೋಚನಾ ಕಾರ್ಯಾಚರಣೆ
From Wikipedia
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು 'ವಿಕಿ' ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. To meet Wikipedia's quality standards, this article or section may require cleanup. |
೧೯೪೭ ಅಗಸ್ಟ ೧೫ರಂದು ಭಾರತ ಸ್ವತಂತ್ರವಾಯಿತು.ಆದರೆ ಆಗ ಭಾರತದೊಡನೆ ವಿಲೀನವಾಗಲು ಬಯಸಿದ ತನ್ನ ಸಂಸ್ಥಾನದ ಬಹುಜನರ ಅಭಿಪ್ರಾಯವನ್ನು ವಿರೋಧಿಸಿದ ಹೈದರಾಬಾದಿನ ನಿಜಾಮ ಮೀರ್ ಉಸ್ಮಾನ್ ಅಲಿ, "ಡೆಕ್ಕನ್ ರೇಡಿಯೋ" (ಅಥವಾ "ನಿಜಾಮ್ ರೇಡಿಯೋ" ) ಮೂಲಕ ಹೈದರಾಬಾದ ಸಂಸ್ಥಾನವನ್ನು ಸ್ವಾತಂತ್ರ್ಯ ರಾಷ್ಟ್ರವೆಂದು ಘೋಷಿಸಿದ. ನಿರೀಕ್ಷೆಯಂತೆ ಪಾಕಿಸ್ತಾನವು ಹೈದರಾಬಾದ ಸ್ವತಂತ್ರ ರಾಷ್ಟ್ರವೆಂದು ಮಾನ್ಯ ಮಾಡಿದ ಮೊದಲ ದೇಶವಾಯಿತು.
ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ಹಲವು ವರ್ಷಗಳು ಮೊದಲಿನಿಂದ, ನಿಜಾಮ್ "ಸೋಲರಿಯದ ಅಲ್ಲಾಹುವಿನ ಸೈನಿಕರು" ಎಂದು ಕರೆದು ಕೊಳ್ಳುತ್ತಿದ್ದ ತನ್ನ ಸೇನೆಗೆ ಮತ್ತು ನಿಜಾಂ ಪೋಲಿಸರಿಗೆ ಬ್ರಿಟಿಷರ ಸೇನಾಧಿಕಾರಿಗಳಿಂದ ತರಬೇತಿ ಶಿಬಿರಗಳನ್ನು ನೆಡೆಸಿದ್ದ ಮತ್ತು ಆಗ ಪ್ರಸಿದ್ಧವಾಗಿದ್ದ ಸಿಡ್ನಿ ಕಾಟನ್ ಬಂದೂಕುಗಳು ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ಸಂಗ್ರಹಿಸಿದ್ದ.ಆಗ ವಿಶ್ವದ ಗಣನೀಯ ಶ್ರೀಮಂತರಲ್ಲಿ ಒಬ್ಬನಾಗಿದ್ದ ನಿಜಾಮ್ ಮೀರ್ ಉಸ್ಮಾನ್ ಅಲಿಗೆ, ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಲು ಬ್ರಿಟಿಷ್ ಹಾಗು ಪಾಕಿಸ್ತಾನಿ ರಾಜಕಾರಣಿಗಳ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲವಿತ್ತು. ಇದಲ್ಲದೆ, ತನ್ನ ವಿರೋಧಿಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಕಾಸಿಂ ರಜವಿ ಎಂಬ ಭಯೋತ್ಪಾದಕನ ನೇತ್ರತ್ವದಲ್ಲಿ ರಜಾಕಾರ(-ರಜಾಕಾರ ಎನ್ನುವದು ಪರ್ಶಿಯನ್ ಭಾಷೆಯ ಪದ ಮತ್ತು ಇದರ ಅರ್ಥ ಸ್ವಯಂಸೇವಕ-) ಹೆಸರಿನ ಭಯೋತ್ಪಾದಕರ ಪಡೆಯನ್ನು ಕೂಡಾ ನಿಜಾಮ್ ಮೀರ್ ಉಸ್ಮಾನ್ ಅಲಿ ಹುಟ್ಟು ಹಾಕಿದ್ದ. ಕಾಸಿಂ ರಜವಿ ಈಗ ಮಹಾರಾಷ್ಟ್ರ ರಾಜ್ಯದಲ್ಲಿರು ಲಾತೂರಿನಲ್ಲಿ ಒಬ್ಬ ಮಾಮೂಲಿ ವಕೀಲನಾಗಿದ್ದ. ಈತ ಉಗ್ರವಾದಿ ಸಂಘಟನೆ‘ಇತಿಹಾದುಲ್ ಮುಸಲ್ಮಾನ್’ದ ಅಧ್ಯಕ್ಷನಾಗಿದ್ದ ಕೂಡಾ. ನಿಜಾಮನು ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ ದಿನದಂದು, ಈ ರಜಾಕಾರರು,ವಿಶೇಷವಾಗಿ ಹೈದರಾಬಾದಿನಲ್ಲಿ ಸಾವಿರಾರು ಜನ ಅಮಾಯಕರ ಮೇಲೆ ದಾಳಿಯಿಟ್ಟು ಲೂಟಿ, ಅತ್ಯಾಚಾರ, ದೌರ್ಜನ್ಯ ನೆಡೆಸಿದರು. ಇಂದಿನ ತೆಲಂಗಾಣ ಪ್ರದೇಶ, ದಕ್ಷಿಣ ಮಹಾರಾಷ್ಟ್ರ ಮತ್ತು ಹೊಸಪೇಟೆಯ ಬಳಿಯಿರುವ ತುಂಗಭದ್ರಾ ತೀರದವರೆಗೆ ವಿಸ್ತರಿಸಿದ್ದ ಹೈದರಾಬಾದ ಸಂಸ್ಥಾನದ ಜನ, ೧೮ ಸಪ್ಟಂಬರ ೧೯೪೮ ಸಂಜೆ ಆರು ಗಂಟೆಯವರೆಗೆ ನಿರಂತರವಾಗಿ ಹಿಂಸೆ, ಕೊಲೆ, ಸುಲಿಗೆ ಮತ್ತು ದೌರ್ಜನ್ಯಕ್ಕೆ ಸಿಲುಕಿದರೂ, ಭಾರತದೊಡನೆ ಹೈದರಾಬಾದ ಸಂಸ್ಥಾನದ ವಿಲೀನಕ್ಕಾಗಿ ಹೋರಾಡಿದರು.
ಕರ್ನಾಟಕದಲ್ಲಿ ಹೈದರಾಬಾದ ಸಂಸ್ಥಾನ ವಿಮೋಚನಾ ಹೋರಾಟ:
ಅಗಸ್ಟ ೮,೧೯೪೭ ರಂದು ಪಾಕಿಸ್ತಾನದ ಅಧ್ಯಕ್ಷ ಜಿನ್ನಾ ಪ್ರಚೋದನಕಾರಿ ಭಾಷಣವನ್ನು ಮಾಡಿ, ಸ್ವತಂತ್ರ ಹೈದರಾಬಾದ ಸಾಧ್ಯವಾಗಲು "ನೇರ ಕ್ರಮ" ಕೈಗೊಳ್ಳುವಂತೆ ನಿಜಾಮ್ ಮತ್ತು ಆತನ ಬೆಂಬಲಿಗರಿಗೆ ಸಾರ್ವಜನಿಕವಾಗಿ ಕರೆ ನೀಡಿದ ನಂತರ, ಹೈದರಾಬಾದ ಸಂಸ್ಥಾನದಲ್ಲಿ ಪರಿಸ್ಥಿತಿ ಹದೆಗೆಟ್ಟಿತು. ವಿಮೋಚನಾ ಚಳುವಳಿಯ ಪ್ರಮುಖರಾದ ಸ್ವಾಮಿ ರಾಮಾನಂದ ತೀರ್ಥರವರ ಬಂಧನವಾಯಿತು. ಈ ಬಂಧನವನ್ನು ಪ್ರತಿಭಟಿಸಿ ಮತ್ತು ಭಾರತದೊಡನೆ ಹೈದರಾಬಾದ ಸಂಸ್ಥಾನದ ವಿಲೀನವನ್ನು ಒತ್ತಾಯಿಸಿ, ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು, ಓದು ಬಹಿಷ್ಕರಿಸಿ, ಪ್ರತಿಭಟನೆ ನೆಡೆಸಿದರು. ಸಾವಿರಾರು ಜನ ವಿದ್ಯಾರ್ಥಿಗಳು ಮತ್ತು ಕುಟುಂಬಗಳನ್ನು ಸುರಕ್ಷಿತವಾಗಿ ಹೈದರಾಬಾದಿನಿಂದ ಹೊರಗೆ ಕಳುಹಿಸುವಲ್ಲಿ, ಆಗ ಹೈದರಾಬಾದ ಸಂಸ್ಥಾನದ ದಿವಾನ್ ಆಗಿದ್ದ ಮಿರ್ಜಾ ಇಸ್ಮಾಯಿಲ್, ವರ್ತಕರಾಗಿದ್ದ ಅನ್ನಪೂರ್ಣಯ್ಯ ಸ್ವಾಮಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಮುಖಂಡರಾಗಿದ್ದ ಅನ್ನದಾನಯ್ಯ ಪುರಾಣಿಕ ಪ್ರಮುಖ ಪಾತ್ರವಹಿಸಿದರು.
ಈಗ ಗದಗ ಜಿಲ್ಲೆಯಲ್ಲಿರುವಮುಂಡರಗಿಯಲ್ಲಿ ಅನ್ನದಾನೀಶ್ವರ ಸ್ವಾಮಿಗಳ ಹಳೆಯ ಮಠದಲ್ಲಿ ಹೈದರಾಬಾದಿನಿಂದ ಬಂದ ನಿರಾಶ್ರಿತರಿಗಾಗಿ ಮತ್ತು ಸಂತ್ರಸ್ತರಿಗಾಗಿ ಶಿಬಿರ ಸ್ಥಾಪಿಸಲಾಗಿತ್ತು. ಇದೇ ಶಿಬಿರದಲ್ಲಿದ್ದ ಅಳವಂಡಿ ಶಿವಮೂರ್ತಿ ಸ್ವಾಮಿ,ಡಾ.ಚುರ್ಚಿಹಾಳ್,ಪ್ರಭುರಾಜ ಪಾಟೀಲ, ಡಂಬಳ ಸೋಮಪ್ಪ, ದೇವೇಂದ್ರಕುಮಾರ ಹಕಾರಿ, ನೀಲಕಂಠ ಗೌಡ ಮೊದಲಾದ ಯುವಕರನ್ನು ಅನ್ನದಾನಯ್ಯ ಪುರಾಣಿಕರು ಸೇರಿಸಿ, ಹೈದರಾಬಾದ ಪ್ರಾಂತ್ಯವನ್ನು ವಿಮೋಚನೆಗೊಳಿಸಿ, ಭಾರತದೊಡನೆ ವಿಲೀನಗೊಳಿಸಲು ಕರ್ನಾಟಕದಲ್ಲಿ ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟ ಪ್ರಾರಂಭಸಿದರು.
ರಜಾಕಾರರ ಪ್ರಬಲ್ಯವಿದ್ದ ಕುಕುನೂರಿನಲ್ಲಿದ್ದ ಪ್ರಮುಖ ಪೋಲಿಸ್ ಠಾಣೆಯ ಮೇಲೆ ದಾಳಿ ನೆಡೆಸಲುಪ್ರಭುರಾಜ ಪಾಟೀಲ, ಮುರುಘೇಂದ್ರಯ್ಯ ಶಿರೂರಮಠ ಮೊದಲಾಗಿ ಸುಮಾರು ಅರವತ್ತು ಯುವಕರನ್ನು ಮುಂಡರಗಿಯ ಶಿಬಿರದಿಂದ ಬಸರಿಗಿಡ ವೀರಪ್ಪನವರ ಬಸ್ಸಿನಲ್ಲಿ ಕಳುಹಿಸಿದ ಅನ್ನದಾನಯ್ಯ ಪುರಾಣಿಕ, ಮತ್ತೊಂದೆಡೆ ಕುಕುನೂರಿನಲ್ಲಿದ್ದ ರಜಾಕಾರರು ಮತ್ತು ಪೋಲಿಸ್ ಅಧಿಕಾರಿ ರಾಮಿ ರೆಡ್ಡಿಯನ್ನು ಚಿಕೇನಕೊಪ್ಪದಲ್ಲಿ ನೆಡೆಯುತ್ತಿದ್ದ ಜಾತ್ರೆಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದರು. ಪೂರ್ವ ಯೋಜನೆಯಂತೆ ಕುಕುನೂರಿನ ಪೋಲಿಸ್ ಠಾಣೆಯ ಮೇಲೆ ನೆಡೆದ ದಾಳಿಯಲ್ಲಿ ಮುಂಡರಗಿ ಶಿಬಿರದ ಯುವಕರು ವಿಜಯ ಸಾಧಿಸಿ, ಅಪಾರ ಪ್ರಮಾಣದ ಬಂದೂಕು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡರು. ಹೈದರಾಬಾದ ಸಂಸ್ಥಾನದಲ್ಲಿ ಮೊದಲ ಬಾರಿಗೆ ರಜಾಕಾರರು ಸೋಲು ಕಂಡಿದ್ದು ಮತ್ತು ಪ್ರಮುಖ ಪೋಲಿಸ ಠಾಣೆಯ ಮೇಲೆ ಯಶಸ್ವಿ ದಾಳಿ ನೆಡೆದಿದ್ದು ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟಕ್ಕೆ ಹೊಸ ತಿರುವನ್ನು ನೀಡಿತು. ಇದೇ ಮೊದಲಾದ ಹಲವಾರು ಹೋರಾಟಗಳನ್ನು ಮಾಡಿದ ಮುಂಡರಗಿ ಶಿಬಿರದ ಪಾತ್ರ ಪ್ರಮುಖವಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ., ಸರ್ದಾರ್ ವಲ್ಲಭಭಾಯಿ ಪಟೇಲ್ ತಮ್ಮ ಪರವಾಗಿ ಕೇಂದ್ರ ಮಂತ್ರಿ ಗಾಡಗೀಳರನ್ನು ಮುಂಡರಗಿಯ ಶಿಬಿರಕ್ಕೆ ಕಳುಹಿಸಿ ಬೆಂಬಲ ನೀಡಿದ್ದರು. ಸರ್ದಾರ್ ಪಟೇಲ್ ರವರ ಸೂಚನೆಯಂತೆ, ಹೈದರಾಬಾದ ಪ್ರಾಂತ್ಯದಲ್ಲಿ ರಜಾಕಾರರು ನೆಡೆಸುತ್ತಿದ್ದ ದೌರ್ಜನ್ಯ,ಅತ್ಯಾಚಾರ, ಕೊಲೆ, ಸುಲಿಗೆಯನ್ನು ಕುರಿತು ಲೇಖನಗಳನ್ನು ಅನ್ನದಾನಯ್ಯ ಪುರಾಣಿಕರವರು, ದೇಶದ ಪ್ರಮುಖ ಪತ್ರಿಕೆಗಳಲ್ಲಿ "ಅಲ್ಲಮ" ಹೆಸರಿನಲ್ಲಿ ಪ್ರಕಟಿಸಿದ್ದರು. ಇವೆಲ್ಲದರಿಂದ ದೇಶಾದಂತ್ಯ ಹೈದರಾಬಾದ ಪ್ರಾಂತ್ಯದಲ್ಲಿ ಭಾರತ ಸರಕಾರ ಪ್ರವೇಶಿಸಬೇಕು ಮತ್ತು ಈ ಪ್ರಾಂತ್ಯವನ್ನು ಭಾರತದೊಡನೆ ವಿಲೀನಗೊಳಿಸಬೇಕೆಂದು ಜನಾಭಿಪ್ರಾಯ ಮೂಡತೊಡಗಿತು.
ಮುಂಡರಗಿ ಶಿಬಿರದ ಕಾರ್ಯವ್ಯಾಪ್ತಿ ಬಹುಬೇಗ ವಿಸ್ತಾರಗೊಂಡು, ಪ್ರಪಥಮ ಬಾರಿಗೆ ಸುಮಾರು ೪೦ ಹಳ್ಳಿಗಳನ್ನು ನಿಜಾಮ್ ಆಳ್ವಿಕೆಯಿಂದ ಸ್ವತಂತ್ರಗೊಳಿಸಿ "ಜನತಾ ಸರ್ಕಾರ" ವನ್ನು ಸ್ಥಾಪಿಸಲಾಯಿತು. ಇದರಿಂದ ಕೋಪಗೊಂಡ ರಜಾಕಾರರು, ನಿಜಾಂ ಸರ್ಕಾರ ಮತ್ತು ಸೇನೆ, ಮುಂಡರಗಿ ಶಿಬಿರಾರ್ಥಿಗಳು ಮತ್ತು ನಾಯಕರಾದ ಅನ್ನದಾನಯ್ಯನವರ ವಿರುದ್ಧ ತೀವ್ರ ಕ್ರಮ ಕೈಗೊಂಡಿತ್ತು. ಆಗ ಅನೇಕ ಕಷ್ಟಷ್ಟಗಳನ್ನು ಎದುರಿಸಿ, ಬಳ್ಳಾರಿ ಮತ್ತು ಧಾರವಾಡ ಗಡಿಭಾಗದಲ್ಲಿ ಶಿವಮೂರ್ತಿಸ್ವಾಮಿ, ಸೊಲ್ಲಾಪುರ ಗಡಿಭಾಗದಲ್ಲಿ ಶರಣೇಗೌಡ ಮತ್ತು ಬೀದರ ಗಡಿಭಾಗದಲ್ಲಿ ಬಿಡಪ್ಪ, ಬಂಡೆಪ್ಪ ವಕೀಲ, ನಾಗಪ್ಪಣ್ಣ ಕಡಾಡಿ, ಗೋಪಿ ಕಿಶನ್ ಮಾರವಾಡಿ, ಭೀಮಣ್ಣ ಖಂಡ್ರೆ ಮೊದಲಾದವರ ನೇತೃತ್ವದಲ್ಲಿ ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟವನ್ನು ನೆಡೆಸಲಾಗಿತ್ತು. ಭಾಲ್ಕಿಯ ಹಿರೇಮಠದ ಜಗದ್ಗುರುಗಳಾದ ಡಾ.ಚೆನ್ನಬಸವ ಪಟ್ಟದೇವರು ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟಗಾರರಿಗೆ ಬೆಂಬಲ ನೀಡಿದ್ದರು ಮತ್ತು ಸಾವಿರಾರು ಜನ ಸಂತ್ರಸ್ತರಿಗೆ ಮಠದಲ್ಲಿ ಆಶ್ರಯ ನೀಡಿ ಕಾಪಾಡಿದ್ದರು. ನಿಜಾಂ ಆಡಳಿತ, ಪೋಲಿಸ್ ಮತ್ತು ಸೇನೆಯ ಗುಪ್ತ ಮಾಹಿತಿಯನ್ನು ಶೇಖರಿಸಿ, ಭಾರತದ ಸೇನಾಧಿಕಾರಿಗಳಿಗೆ ತಲುಪಿಸುವ ಕೆಲಸವನ್ನು ಮಾಡಲಾಗಿತ್ತು.ಮುಂದೆ ಭಾರತದ ಸೇನೆ ಹೈದರಾಬಾದು ಪ್ರಾಂತ್ಯ ವಿಮೋಚನೆಗಾಗಿ ಕಾರ್ಯಾಚರಣೆ ನೆಡೆಸಿದಾಗ, ಈ ಮಾಹಿತಿ ಸಹಾಯಕವಾಗಿತ್ತು.
ನಿಜಾಂ ಸರ್ಕಾರ ಮತ್ತು ರಜಾಕಾರರ ವಿರುದ್ಧ ಮುಂಡರಗಿ ಶಿಬಿರದ ಹೋರಾಟಗಾರರು, ಸಾಧಿಸಿದ ವಿಜಯ ಮತ್ತು ಪಡೆಯುತ್ತಿದ್ದ ಜನಮನ್ನಣೆಯನ್ನು ಸಹಿಸದೆ ಕೆಲವು ಸ್ಥಳೀಯ ಕಾಂಗ್ರೆಸ್ ಮುಖಂಡರು, ಮುಂಡರಗಿ ಶಿಬಿರವು ರಾಷ್ಟ್ರದೋಹಿ ಕೆಲಸದಲ್ಲಿ ತೊಡಗಿದೆಯಂದು ಮತ್ತು ಅದನ್ನು ನಾಶಪಡಿಸಿ, ಶಿಬಿರಾರ್ಥಿಗಳಿಗೆ ಮರಣ ದಂಡನೆ ವಿಧಿಸಬೇಕೆಂದು, ಆಗ ಮುಂಬೈ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಮುರಾರ್ಜಿ ದೇಸಾಯಿನ್ನು ಕೇಳಿಕೊಂಡಿದ್ದರೆಂದು ಮುಂಬೈ ಸರ್ಕಾರದ ದಾಖಲೆಗಳು ಹೇಳುತ್ತವೆ. ಅಂತಹ ಕಾಂಗ್ರೆಸ್ ಮುಖಂಡರ ಮಾತು ಕೇಳಿ ಮೊರಾರ್ಜಿ ದೇಸಾಯಿ, ಮುಂಡರಗಿ ಶಿಬಿರದ ವಿರುದ್ಧ ಕಾರ್ಯಾಚರಣೆ ನೆಡೆಸಲು ಮತ್ತು ಶಿಬಿರಾರ್ಥಿಗಳನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಪೋಲಿಸರಿಗೆ ಆದೇಶ ನೀಡಿದ್ದರು. ಈ ಮಾಹಿತಿಯನ್ನು ಪೋಲಿಸರು ಹೆಬಸೂರು ಶಿಬಿರದ ನಾಯಕರಾದ ಅನ್ನದಾನಯ್ಯ ಪುರಾಣಿಕರಿಗೆ ನೀಡಿದ್ದರು. ಆಗ ಮುಂಡರಗಿ ಶಿಬಿರವನ್ನು ಖಾಲಿ ಮಾಡಿ,ಸಾವಿರಾರು ಜನ ಶಿಬಿರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ ನಂತರ, ಹಲವಾರು ಪ್ರಮುಖ ದಾಖಲೆಗಳ ಜೊತೆ ತುಂಗಭದ್ರಾ ನದಿ ದಡದಲ್ಲಿರುವ ಹೊಸೂರಿನತ್ತ ನೆಡೆಯತೊಡಗಿದ ಅನ್ನದಾನಯ್ಯ ಪುರಾಣಿಕರನ್ನು ಪೋಲಿಸರು ಮತ್ತು ಕಾಂಗ್ರೆಸ್ ಮುಖಂಡರು ಬೆನ್ನು ಹತ್ತಿದ್ದರು. ಆಗ ಪೋಲಿಸರಿಂದ ದಾಖಲೆಗಳನ್ನು ರಕ್ಷಿಸಲು, ಜೀವದ ಹಂಗು ತೊರೆದು ಹತ್ತಾರು ಮೈಲಿ ದೂರ ಓಡಿ, ಹೊಸೂರು ತಲುಪಿ, ಅಲ್ಲಿ ಕಾಯುತ್ತಿದ್ದ ಶಿಬಿರಾರ್ಥಿಗಳ ಜೊತೆ ಅನ್ನದಾನಯ್ಯ ಪುರಾಣಿಕರು, ತುಂಗಭದ್ರಾ ನದಿ ದಾಟಿ ಮದ್ರಾಸ್ ಪ್ರಾಂತ್ಯ ಪ್ರವೇಶಿಸಿ ಪಾರಾಗಿದ್ದರು. ಮುಂಬೈ ಪೋಲಿಸರು, ಅನುಮತಿ ಇಲ್ಲದೆ ಮದರಾಸ ಪ್ರಾಂತ್ಯ ಪ್ರವೇಶಿಸಲಾಗದೆ, ಹಿಂತಿರುಗಿದರು .
ಮರುದಿನ ಗದಗಿಗೆ ಸ್ವಾಮಿ ರಾಮಾನಂದ ತೀರ್ಥರವರು ಬರುತ್ತಿರುವುದಾಗಿ ಮತ್ತು ಅವರನ್ನು ಗದಗಿನಲ್ಲಿ ಭೇಟಿ ಮಾಡುವಂತೆ ಅನ್ನದಾನಯ್ಯನವರಿಗೆ, ಶಿಬಿರಾಧಿಪತಿ ಶಿವಮೂರ್ತಿ ಸ್ವಾಮಿಯಿಂದ ಸಂದೇಶ ಕಳುಹಿಸಿದ್ದರು. ಆಗ ಹೊಸಪೇಟೆಯಿಂದ ಗದಗಿಗೆ ರೈಲು ಪ್ರಯಾಣ ಮಾಡಬೇಕಿತ್ತು. ಪೋಲಿಸರು ಹೊಸಪೇಟೆಯಿಂದ ಗದಗಿನವರೆಗೆ ಇರುವ ಎಲ್ಲಾ ರೈಲ್ವೇ ನಿಲ್ದಾಣದಲ್ಲಿ ಇವರಿಗಾಗಿ ಕಾಯತೊಡಗಿದ್ದರು. ಕೊಪ್ಪಳ ರೈಲು ನಿಲ್ದಾಣದಲ್ಲಿ ರಜಾಕಾರರು ಪೋಲಿಸಿರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇವರೆಲ್ಲರ ಉದ್ದೇಶ - ಅನ್ನದಾನಯ್ಯ ಪುರಾಣಿಕ ಮತ್ತು ಸಂಗಡಿಗರನ್ನು ಕಂಡಲ್ಲಿ ಗುಂಡಿಕ್ಕಿ ಕೊಂದು, ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟವನ್ನು ವಿಫಲಗೊಳಿಸುವುದಾಗಿತ್ತು. ಆದರೆ ರಾಮಿರೆಡ್ಡಿ ಮೊದಲಾದ ಪೋಲಿಸ ಅಧಿಕಾರಿಗಳ ಮತ್ತು ರಜಾಕಾರರ ಎಣಿಕೆಯಂತೆ, ರಾತ್ರಿ ಹೊಸಪೇಟೆಯಿಂದ ಹೊರಡುವ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸದ ಅನ್ನದಾನಯ್ಯನವರು, ಮುಂಜಾನೆ ಹೊರಟ ಗೂಡ್ಸ ರೈಲಿನಲ್ಲಿ ದನಗಳಿರುವ ಡಬ್ಬಿಯಲ್ಲಿ ಅಡಗಿ ಕುಳಿತು ಪ್ರಯಾಣ ಮಾಡಿದ್ದರು. ಹೀಗೆ ಗದಗ ತಲುಪಿ, ಸ್ವಾಮಿ ರಾಮಾನಂದ ತೀರ್ಥರನ್ನು ಭೇಟಿ ಮಾಡಿದ ಅನ್ನದಾನಯ್ಯ ಪುರಾಣಿಕರು, ಅವರೊಡನೆ ಚರ್ಚಿಸಿ, ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟವನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ತೀವ್ರಗೊಳಿಸುವ ಯೋಜನೆ ರೂಪಿಸಿದ್ದರು.
ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟ ತೀವ್ರವಾದಾಗ, ಸೋತು ಓಡಿದ ನಿಜಾಮ್ ಸೇನೆ, ಪೋಲಿಸರು ಮತ್ತು ರಜಾಕಾರರು, ಜನಸಾಮಾನ್ಯರ ಮೇಲೆ ಹಿಂಸಾಚಾರ, ಮತಾಂತರ, ಲೂಟಿ, ಮಾನಭಂಗ ಮತ್ತು ಕೊಲೆ ನೆಡೆಸಿದ್ದರು ಎಂದು ನಂಬಲಾಗಿದೆ. ಭಾರತೀಯ ಸೇನೆ ಬಂದರೆ ಸೋತು ಹಿಂತಿರುಗ ಬೇಕಾಗುತ್ತದೆ ಎಂದು ಹೇಳುತ್ತಿದ್ದ ನಿಜಾಮ್, ಗುಲ್ಬರ್ಗಾದಲ್ಲಿರುವ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಬಂದಾಗಲಂತೂ, ಇಡೀ ಗುಲ್ಬರ್ಗಾನಗರ ರಜಾಕಾರರಿಂದ ತುಂಬಿತ್ತು. ಪವಿತ್ರ ದರ್ಗಾದಿಂದ ಹೊರಗೆ ಬಂದು ನಿಜಾಮ್ ತನ್ನ ಬೆಂಬಲಿಗರನ್ನು ಉದ್ದೇಶಿಸಿ, ತೀವ್ರವಾದ ಪ್ರಜೋದನಕಾರಿ ಭಾಷಣ ಮಾಡಿದ್ದ. ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿರುವ ಗೋರ್ಟಾ ಗ್ರಾಮದಲ್ಲಿ ರಜಾಕಾರರು ನೆಡೆಸಿದ ನರಮೇಧ, ದಕ್ಷಿಣದ ಜಲ್ಲಿಯನ್ ವಾಲಾ ಬಾಗ್ ಕರ್ಮಕಾಂಡವೆಂದು ಹೇಳಲಾಗುತ್ತದೆ.
೧೯೪೮ ಸಪ್ಟಂಬರ ೧೨ರಂದು ಪ್ರಧಾನಿ ನೆಹರೂ ಸಂಪುಟ ಸಭೆಯನ್ನು ಕರೆದರು. ಸಭೆಯಲ್ಲಿ ಪ್ರಧಾನಿ ನೆಹರೂ, ಗೃಹಮಂತ್ರಿ ಪಟೇಲ, ರಕ್ಷಣಾ ಮಂತ್ರಿ ಬಲದೇವ ಸಿಂಗ. ಗೋಪಾಲಸ್ವಾಮಿ ಅಯ್ಯಂಗಾರ, ಜನರಲ್ ಬುಕರ್,ಜನರಲ್ ಕರಿಯಪ್ಪ ಮತ್ತು ಏರ್ ಮಾರ್ಶಲ್ ಎಲ್ಮ್ಹರ್ಸ್ಟ್ ಉಪಸ್ಥಿತರಿದ್ದರು. ಜನರಲ್ ಬುಕರ್ ಹೈದರಾಬಾದದ ಮೇಲೆ ಸಶಸ್ತ್ರ ಕ್ರಮ ತೆಗೆದುಕೊಳ್ಳಲು ಒಪ್ಪಲಿಲ್ಲ. ಸಶಸ್ತ್ರ ಕ್ರಮ ತೆಗೆದುಕೊಳ್ಳುವದೆ ಆದರೆ, ತಾವು ರಾಜೀನಾಮೆ ಕೊಡುವದಾಗಿ ಘೋಷಿಸಿದರು. ಚಿಂತಾಕ್ರಾಂತರಾದ ನೆಹರೂ ಅತ್ತಿತ್ತ ನೋಡತೊಡಗಿದಾಗ, ಸರದಾರ ವಲ್ಲಭಭಾಯಿ ಪಟೇಲ ಮರುನುಡಿದರು: “ ಜನರಲ್ ಬುಕರ್, ನೀವು ರಾಜೀನಾಮೆ ಕೊಡಬಹುದು; ಸಶಸ್ತ್ರ ಕ್ರಮ ನಾಳೆ ಪ್ರಾರಂಭವಾಗುವದು!”
ಸರದಾರ ಪಟೇಲರ ಆದೇಶದಂತೆ ಸಪ್ಟಂಬರ ೧೩ ರಂದು ಭಾರತೀಯ ಸೇನೆ ಹೈದರಾಬಾದ ಸಂಸ್ಥಾನಕ್ಕೆ ಲಗ್ಗೆ ಇಟ್ಟಿತು. ಸಪ್ಟಂಬರ ೧೮ರಂದು, ಸಂಜೆ ನಾಲ್ಕು ಗಂಟೆಗೆ ಭಾರತೀಯ ಸೇನೆಯ ಮುಖಂಡ ಜನರಲ್ ಚೌಧರಿಗೆ ಹೈದರಾಬಾದ ಸೇನೆಯ ಮುಖಂಡ ಎಲ್ ಎದ್ರೂಸ್ (-ಈತ ಒಬ್ಬ ಅರಬ-) ಶರಣಾಗತನಾದ. ನಿಜಾಮ ಹಾಗು ರಜಾಕಾರರ ದೌರ್ಜನ್ಯದಿಂದ ಜನತೆಗೆ ವಿಮೋಚನೆ ದೊರೆಯಿತು. ಮೊದಲ ಕೆಲದಿನಗಳ ಮಟ್ಟಿಗೆ ಚೌಧರಿ ಸೈನಿಕ ಆಡಳಿತಗಾರರಾಗಿದ್ದರು . ಆ ನಂತರ ಕೆ.ಎಮ್.ಮುನ್ಶಿ ರಾಜ್ಯಪಾಲರೆಂದು ನಿಯಮಿಸಲ್ಪಟ್ಟರು. ಹೈದರಾಬಾದ ಸಂಸ್ಥಾನ ಭಾರತಕ್ಕೆ ಮರಳಿತು.