ಅ.ನ.ಕೃಷ್ಣರಾಯ

From Wikipedia

ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ ನ ಕೃ) (ಮೇ ೯, ೧೯೦೮ - ಜುಲೈ ೮, ೧೯೭೧) ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಇವರು ಕಾದಂಬರಿ ಸಾರ್ವಭೌಮ ಎಂದೇ ಖ್ಯಾತರಾಗಿದ್ದರು.

ಅ.ನ.ಕೃಷ್ಣರಾವ್
ಅ.ನ.ಕೃಷ್ಣರಾವ್


ಪರಿವಿಡಿ

[ಬದಲಾಯಿಸಿ] ಜೀವನ

ಅನಕೃ ಹುಟ್ಟಿದ್ದು ಹಾಸನ ಜಿಲ್ಲೆಯ ಅರಕಲಗೂಡು. ತಂದೆ ನರಸಿಂಗರಾಯರು ಮತ್ತು ತಾಯಿ ಅನ್ನಪೂರ್ಣಮ್ಮನವರು. ಅಜ್ಜ ಕೃಷ್ಟಪ್ಪನವರು ದೊಡ್ಡ ವಿದ್ವಾಂಸರಾಗಿದ್ದರೆಂದು ಹೇಳಲಾಗುತ್ತದೆ.

[ಬದಲಾಯಿಸಿ] ಕನ್ನಡದ ಕಟ್ಟಾಳು ಅನಕೃ

ಅನಕೃ ಮಹಾನ್ ಕನ್ನಡಾಭಿಮಾನಿಯಾಗಿದ್ದರು. ಆದರೆ ಪರಭಾಷಿಕರನ್ನು ಹಿಂಸಿಸಿ, ದ್ವೇಷಿಸಿ, ನಾಡಿನಿಂದ ಓಡಿಸಿ ಎಂಬ ಅತಿರೇಕ ವಾದ ಅವರದ್ದಲ್ಲ. ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಜನರೂ ಇರಲಿ, ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಹೋಗಲಿ, ಮಾತೃ ಭಾಷೆಯನ್ನು ಮೆಟ್ಟಿ, ಮುನ್ನುಗ್ಗುವುದು ಸರಿಯಲ್ಲ ಎಂಬುದು ಅವರ ಮೂಲತತ್ವವಾಗಿತ್ತು. ತಮ್ಮ ಜೀವಮಾನದುದ್ದಕ್ಕೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಿದರು. ಅದಕ್ಕಾಗಿ ಕರ್ನಾಟಕದಲ್ಲೆಲ್ಲಾ ಸುತ್ತಾಡಿದರು. ತಮ್ಮ ಚಳುವಳಿ, ಭಾಷಣಗಳ ಮೂಲಕ ಕನ್ನಡಿಗರನ್ನು ಹುರಿದುಂಬಿಸಿದರು. ಕನ್ನಡಿಗಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಜಾಗೃತಗೊಳಿಸಿದರು.

ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಅನಕೃ ಅದಕ್ಕಾಗಿ ಹೋರಾಟ ನಡೆಸಿದರು. ಅನಕೃ ಅವರ ಚಳುವಳಿಯಿಂದ , ಬೆಂಗಳೂರಿನ ಅಲಂಕಾರ್ ಚಿತ್ರಮಂದಿರದಲ್ಲಿ ಮೊತ್ತಮೊದಲ ಬಾರಿಗೆ ಕನ್ನಡ ಚಿತ್ರ ಪ್ರದರ್ಶನಗೊಂಡಿತ್ತು. ಹೀಗೆ ಪ್ರದರ್ಶಿತವಾದ ಮೊದಲ ಚಿತ್ರ ೧೯೬೩ರಲ್ಲಿ ತೆರೆಕಂಡ ಜಿ.ವಿ.ಅಯ್ಯರ್ ನಿರ್ದೇಶನದ ಬಂಗಾರಿ.


ಅಂದು ಸಂಗೀತಕ್ಕೆ ಸಂಬಂಧಪಟ್ಟ ಸಂಘಸಂಸ್ಥೆಗಳು ಕನ್ನಡ ಸಂಗೀತಗಾರರನ್ನು ನಿರ್ಲಕ್ಷಿಸಿ, ಮದರಾಸಿನಿಂದ ಗಾಯಕರನ್ನು ಕರೆಸಿ ಹಾಡಿಸುತ್ತಿದ್ದವು. ಅನಕೃ ಇದನ್ನು ವಿರೋಧಿಸಿದರು. ಒಮ್ಮೆ ಹೀಗೆ ಮದರಾಸಿನಿಂದ ಎಮ್ ಎಸ್ ಸುಬ್ಬುಲಕ್ಷ್ಮಿಯವರು ಹಾಡಲು ಬಂದಿದ್ದಾಗ, ಅನಕೃ ಅವರಿಗೆ ತಮ್ಮ ಚಳುವಳಿಯ ಉದ್ದೇಶವನ್ನು ವಿವರಿಸಿದರು. ಆಗ ಸುಬ್ಬುಲಕ್ಶ್ಮಿಯವರು ಚಳುವಳಿಯ ಉದ್ದೇಶವನ್ನು ಒಪ್ಪಿಕೊಂಡು, ತಮ್ಮ ಸಂಗೀತವನ್ನು ರದ್ದುಮಾಡಿ, ಹಿಂತಿರುಗಿದ್ದರು.


ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಒಂದು ಸಭೆಯಲ್ಲಿ ಅನಕೃ ಕುರಿತು ಹೇಳಿದ ಮಾತಿದು - "ನಾನು ತಮಿಳು ಕನ್ನಡಿಗ, ಮಿರ್ಜಾ ಇಸ್ಮಾಯಿಲ್ಲರು ಮುಸ್ಲಿಂ ಕನ್ನಡಿಗರು, ಅನಕೃ ಅಚ್ಚ ಕನ್ನಡಿಗರು ".

ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ - ಎಂಬ ಮಾತು ಅನಕೃ ಅವರ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿದೆ.

[ಬದಲಾಯಿಸಿ] ಅನಕೃ ಸಾಹಿತ್ಯ

ಶಾಲಾ ದಿನಗಳಿಂದಲೂ ಸಾಹಿತ್ಯದ ಅಭಿರುಚಿ ಹೊಂದಿದ್ದರು. ನಟ ವರದಾಚಾರ್ಯರು ಒಡ್ಡಿದ ಸವಾಲಿಗೆ ಉತ್ತರವಾಗಿ ಒಂದೇ ರಾತ್ರಿಯಲ್ಲಿ ಮದುವೆಯೋ ಮನೆಹಾಳೋ ಎಂಬ ನಾಟಕ ರಚಿಸುವ ಮೂಲಕ ಸಾಹಿತ್ಯ ರಚನೆ ಆರಂಭಿಸಿದರು.

ಅನಕೃ ಅವರಿಗೆ ಬರವಣಿಗೆಯೇ ಜೀವನೋಪಾಯವಾಗಿತ್ತು. ಅವರು ರಚಿಸಿರುವ ಸಾಹಿತ್ಯ ೮೦,೦೦೦ ಪುಟಗಳಿಗೂ ಅಧಿಕ. ಅದರಲ್ಲಿ ಕಾದಂಬರಿಗಳು ೧೧೦, ೧೫ ನಾಟಕಗಳು, ೮ ಕಥಾ ಸಂಕಲನಗಳು, ಕಲೆ,ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದ ಇಪ್ಪತ್ತು ಪುಸ್ತಕಗಳು, ೮ ಜೀವನ ಚರಿತ್ರೆಗಳು, ೩ ಅನುವಾದ, ೧೨ ಸಂಪಾದಿತ ಕೃತಿಗಳು, ಅಲ್ಲದೆ ಪ್ರಬಂಧ,ಹರಟೆಗಳೂ ಸೇರಿವೆ. ೧೯೩೪-೧೯೬೪ ರ ಅವಧಿಯಲ್ಲಿ ೧೦೦ ಕಾದಂಬರಿಗಳನ್ನು ರಚಿಸಿರುವ , ಅನಕೃ ಅವರ ಮೊದಲನೆಯ ಕಾದಂಬರಿ ಜೀವನ ಯಾತ್ರೆ, ನೂರನೆಯ ಕಾದಂಬರಿ ಗರುಡ ಮಚ್ಚೆ.

[ಬದಲಾಯಿಸಿ] ಪ್ರಶಸ್ತಿ ಪುರಸ್ಕಾರಗಳು

ಮಣಿಪಾಲದಲ್ಲಿ ನಡೆದ ೪೩ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿಶ್ವವಿದ್ಯಾಲಯ ಅನಕೃ ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದ ಅನಕೃ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಸಚೇತನ ಎಂಬುದು ಅನಕೃ ಅವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ. ಶಾ.ಮಂ.ಕೃಷ್ಣರಾಯ , ಜಿ.ಎಸ್. ಅಮೂರ, ಸೇವಾನಮಿ ರಾಜಾಮಲ್ಲ ಮುಂತಾದ ಸಾಹಿತಿಗಳು ಅನಕೃ ಕುರಿತು ಗ್ರಂಥ ರಚಿಸಿ ಗೌರವ ಸಲ್ಲಿಸಿದ್ದಾರೆ.


[ಬದಲಾಯಿಸಿ] ಕಾದಂಬರಿಗಳು

  • ಜೀವನ ಯಾತ್ರೆ
  • ಸಂಧ್ಯಾರಾಗ
  • ಉದಯರಾಗ
  • ನಗ್ನಸತ್ಯ
  • ಸಂಜೆಗತ್ತಲು
  • ಮಂಗಳಸೂತ್ರ
  • ಗೃಹಲಕ್ಷ್ಮಿ
  • ರುಕ್ಮಿಣಿ
  • ಕಲಾವಿದ
  • ಅನುಗ್ರಹ
  • ಆಶೀರ್ವಾದ
  • ಅಣ್ಣ ತಂಗಿ
  • ಸಾಹಿತ್ಯ ರತ್ನ
  • ತಾಯಿ ಕರುಳು
  • ಅಕ್ಕಯ್ಯ
  • ಕನ್ನಡಮ್ಮನ ಗುಡಿಯಲ್ಲಿ
  • ಕಾಲಚಕ್ರ
  • ತಾಯಿ ಮಕ್ಕಳು
  • ಶನಿಸಂತಾನ
  • ಚಿತ್ರ ವಿಚಿತ್ರ
  • ಅಪರಂಜಿ
  • ಪಶ್ಚಾತ್ತಾಪ
  • ಧರ್ಮಪತ್ನಿ
  • ದಾದಿಯ ಮಗ
  • ಹೊನ್ನೇ ಮೊದಲು
  • ಏಣಾಕ್ಷಿ
  • ಕಣ್ಣಿನ ಗೊಂಬೆ
  • ಜನತಾ ಜನಾರ್ಧನ
  • ಶುಭ ಸಮಯ
  • ಭಾಗ್ಯದ ಬಾಗಿಲು
  • ನರಬಲಿ
  • ಹೊಸ ಸುಗ್ಗಿ
  • ನರ ನಾರಾಯಣ
  • ಚಿನ್ನದ ಕಳಸ
  • ಹೇಗಾದರೂ ಬದುಕೋಣ
  • ಚರಣದಾಸಿ
  • ಭಾಮಾಮಣಿ
  • ಸುಮುಹೂರ್ತ
  • ಮಾರ್ಜಾಲ ಸನ್ಸಾಸಿ
  • ಅದೃಷ್ಟ ನಕ್ಷತ್ರ
  • ಸುಂದರ ಸಂಸಾರ
  • ಹೆಣ್ಣು ಜನ್ಮ
  • ಮಣ್ಣಿನ ದೋಣಿ
  • ಹೊಸಿಲು ದಾಟಿದ ಹೆಣ್ಣು
  • ಭೂಮಿಗಿಳಿದು ಬಂದ ಭಗವಂತ
  • ಮುಯ್ಯಿಗೆ ಮುಯ್ಯಿ
  • ರೂಪಶ್ರೀ
  • ಕಳಂಕಿನಿ
  • ಅಪರಂಜಿ
  • ಪಂಜರದ ಗಿಳಿ
  • ಪಾಪಿಯ ನೆಲೆ
  • ಕಾಮಿನಿ ಕಾಂಚನಾ
  • ಕಾಂಚನಗಂಗಾ
  • ಕಣ್ಣೀರು
  • ಕುಂಕುಮಪ್ರಸಾದ
  • ಹುಲಿಯುಗುರು (೩ ಭಾಗಗಳು)
  • ಕಸ್ತೂರಿ
  • ಪಂಕಜ
  • ಮನೆಯಲ್ಲೇ ಮಹಾಯುದ್ಧ
  • ಮಿಯಾ ಮಲ್ಹಾರ
  • ಕಬ್ಬಿಣದ ಕಾಗೆ
  • ಆ ದಾರಿ ಈ ದಾರಿ
  • ಕಟ್ಟಿದ ಬಣ್ಣ
  • ಸ್ತ್ರೀಮುಖ ವ್ಯಾಘ್ರ

(ಪಟ್ಟಿ ಅಪೂರ್ಣ)

[ಬದಲಾಯಿಸಿ] ಐತಿಹಾಸಿಕ ಕಾದಂಬರಿಗಳು

  • ಗರುಡ ಮಚ್ಚೆ
  • ಯಲಹಂಕ ಭೂಪಾಲ
  • ವೀರರಾಣಿ ಕಿತ್ತೂರ ಚೆನ್ನಮ್ಮ
  • ರಣ ವಿಕ್ರಮ
  • ಪ್ರೌಢಪ್ರತಾಪಿ
  • ಅಳಿಯ ರಾಮರಾಯ
  • ತೇಜೋಭಂಗ
  • ಮೋಹನ ಮುರಾರಿ
  • ವಿಜಯ ವಿದ್ಯಾರಣ್ಯ
  • ಅಭಯಪ್ರಧಾನ
  • ಭುವನ ಮೋಹಿನಿ
  • ಪ್ರಳಯಾನಂತರ
  • ಸಂಗ್ರಾಮ ಧುರೀಣ
  • ಯಶೋದುಂದುಬಿ
  • ಪುಣ್ಯ ಪ್ರಭಾವ

[ಬದಲಾಯಿಸಿ] ಕಥಾ ಸಂಕಲನ

  • ಅಗ್ನಿ ಕನ್ಯೆ
  • ಕಾಮನ ಸೋಲು
  • ಕಣ್ಣುಮುಚ್ಚಾಲೆ
  • ಕಿಡಿ
  • ಶಿಲ್ಪಿ
  • ಮಿಂಚು
  • ಸಮರ ಸುಂದರಿ
  • ಪಾಪ ಪುಣ್ಯ

[ಬದಲಾಯಿಸಿ] ಅನುವಾದಿತ ಗ್ರಂಥಗಳು

  • ನೀಲಲೋಚನೆ
  • ರಸಿಕಾಗ್ರಣಿ
  • ರುಬಾಯತ್ ಕಾವ್ಯ
  • ಭಾರತದ ಕಥೆ

[ಬದಲಾಯಿಸಿ] ಸಂಪಾದಿತ ಪತ್ರಿಕೆಗಳು

  • ವಿಶ್ವವಾಣಿ(ಮಾಸಿಕ) ೧೯೩೬
  • ಕಥಾಂಜಲಿ(ಮಾಸಿಕ) ೧೯೨೮
  • ಕನ್ನಡನುಡಿ(ವಾರಪತ್ರಿಕೆ)೧೯೨೯
  • ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ೧೯೪೪

[ಬದಲಾಯಿಸಿ] ನಾಟಕಗಳು

  • ಮದುವೆಯೋ ಮನೆಹಾಳೋ?
  • ಆದದ್ದೇನು?
  • ಜ್ವಾಲಾಮುಖಿ
  • ಗೋಮುಖ ವ್ಯಾಘ್ರ
  • ಸೂತಪುತ್ರ ಕರ್ಣ
  • ಮಾಗಡಿ ಕೆಂಪೇಗೌಡ
  • ಕಿತ್ತೂರರಾಣಿ ಚೆನ್ನಮ್ಮ
  • ಜಗಜ್ಯೋತಿ ಬಸವೇಶ್ವರ
  • ರಾಜನರ್ತಕಿ
  • ಪಾಲು
  • ಆಹುತಿ
  • ದರ್ಮ ಸಂಕಟ
  • ರಾಷ್ಟ್ರಧುರೀಣ ಬೆಂಗಳೂರು ಕೆಂಪೇಗೌಡ
  • ಶ್ರೀರಾಮ ಪಾದುಕಾ ಪಟ್ಟಾಭಿಷೇಕ
  • ರಜಪೂತ ಲಕ್ಷ್ಮಿ
  • ಸ್ವರ್ಣಮೂರ್ತಿ
  • ಗುಬ್ಬಚ್ಚಿಯ ಗೂಡು
  • ಹಿರಣ್ಯ ಕಶಿಪು
  • ವಿಶ್ವ ಧರ್ಮ
  • ಜೀವದಾಸೆಯ ಸಮಸ್ಯೆ
  • ಬಣ್ಣದ ಬೀಸಣಿಗೆ ( ೨ ಭಾಗಗಳು)


[ಬದಲಾಯಿಸಿ] ಜೀವನ ಚರಿತ್ರೆಗಳು

  • ಅಲ್ಲಮಪ್ರಭು
  • ಕನ್ನಡ ಕುಲರಸಿಕರು
  • ಕೈಲಾಸಂ
  • ದೀನಬಂಧು ಕಬೀರ
  • ಸ್ವಾಮಿ ವಿವೇಕಾನಂದ
  • ನಿಡುಮಾಮಿಡಿ ಸನ್ನಿಧಿಯವರು
  • ವಿಶ್ವಬಂಧು ಬಸವೇಶ್ವರ
  • ಭಾರತದ ಬಾಪೂ
  • ನನ್ನನ್ನು ನಾನೇ ಕಂಡೆ ( ಸ್ವಂತ ಸಂದರ್ಶನ )
  • ಬರಹಗಾರನ ಬದುಕು (ಆತ್ಮ ಕತೆ)

[ಬದಲಾಯಿಸಿ] ಸಂಪಾದಿತ ಗ್ರಂಥಗಳು

  • ರಸ ಋಷಿ
  • ಪ್ರಣಯ ಗೀತೆಗಳು
  • ಮ್ಯಾಕ್ಸಿಂ ಗಾರ್ಕಿ
  • ಪ್ರಗತಿಶೀಲ ಸಾಹಿತ್ಯ
  • ಭಾರತೀಯ ಕಲಾದರ್ಶನ
  • ಭಾರತೀಯ ಸಂಸ್ಕೃತಿ ದರ್ಶನ
  • ಮರುಳ ಸಿದ್ಧ ಕಾವ್ಯ (ದೇಪ ಕವಿ)
  • ಭಗವದ್ಗೀತಾರ್ಥ ಸಾರ
  • ಕಾಮನ ಬಿಲ್ಲು (೨ ಭಾಗಗಳು)
  • ಮೈಸೂರು ರಾಜ್ಯದ ಸಂಗೀತ ನಾಟಕ ಅಕಾಡೆಮಿಯ ಪ್ರಕಟನೆಗಳು

[ಬದಲಾಯಿಸಿ] ಪ್ರಬಂಧ , ವಿಮರ್ಶೆಗಳು

  • ಸಾಹಿತ್ಯ ಮತ್ತು ಕಾಮ ಪ್ರಚೋದನೆ
  • ಸಾಹಿತ್ಯ ಮತ್ತು ಯುಗಧರ್ಮ
  • ಸಾಹಿತ್ಯ ಮತ್ತು ಜೀವನ
  • ಸಾಹಿತ್ಯ ಸಮಾರಾಧನೆ
  • ಸಮದರ್ಶನ
  • ಸಂಸ್ಕೃತಿಯ ವಿಶ್ವರೂಪ
  • ಸಜೀವ ಸಾಹಿತ್ಯ
  • ಕರ್ನಾಟಕದ ಹಿತಚಿಂತನೆ
  • ಹೊಸ ಹುಟ್ಟು
  • ಬಳ್ಳಾರಿ ಸಮಸ್ಯೆ
  • ಭಾರತೀಯ ಚಿತ್ರ ಕಲೆ
  • ಕನ್ನಡದ ದಾರಿ
  • ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ
  • ಅಖಂಡ ಕರ್ನಾಟಕ
  • ಬಸವಣ್ಣನ ಅಮೃತವಾಣಿ
  • ಪೊರಕೆ (ಹರಟೆ)
  • ಭಾರತೀಯ ಚಿತ್ರಕಲೆಯಲ್ಲಿ ರಾಜಾ ರವಿವರ್ಮನ ಸ್ಥಾನ
  • ನಾಟಕ ಕಲೆ
  • ರಾಘವಾಂಕನ ಹರಿಶ್ಚಂದ್ರ ಕಾವ್ಯ
  • ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿ

ಅನಕೃ ಒಂದು ಜೀವಮಾನದಲ್ಲಿ ಮಾಡಿದ್ದು ನೂರು ಜೀವಮಾನಗಳ ಕೆಲಸ - ನಿರಂಜನ

[ಬದಲಾಯಿಸಿ] ಹೊರಗಿನ ಸಂಪರ್ಕಗಳು