ಏ.ಆರ್.ಕೃಷ್ಣಶಾಸ್ತ್ರಿ

From Wikipedia

ಏ.ಆರ್.ಕೃಷ್ಣಶಾಸ್ತ್ರಿಯವರು ೧೮೯೦ ಫೆಬ್ರುವರಿ ೧೨ ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಅಂಬಳೆ ರಾಮಕೃಷ್ಣಶಾಸ್ತ್ರಿ , ತಾಯಿ ಶಂಕರಮ್ಮ. ಕನ್ನಡದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದು, ಕೃಷ್ಣಶಾಸ್ತ್ರಿಯವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಕೃಷ್ಣಶಾಸ್ತ್ರಿಯವರ ಕೆಲವು ಕೃತಿಗಳು

  • ಶ್ರೀಪತಿಯ ಕಥೆಗಳು
  • ಭಾಸಕವಿ
  • ಸರ್ವಜ್ಞ ಕವಿ
  • ಭಾಷಣಗಳು-ಲೇಖನಗಳು
  • ಕಥಾಮೃತ
  • ಕವಿಜಿಹ್ವಾಬಂಧನ
  • ಬಂಕಿಮಚಂದ್ರ
  • ನಿರ್ಮಲ ಭಾರತಿ
  • ನಿಬಂಧಮಾಲಾ

೧೯೪೧ರಲ್ಲಿ ಹೈದರಾಬಾದಿನಲ್ಲಿ ಜರುಗಿದ ೨೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೬೦ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಕೃಷ್ಣಶಾಸ್ತ್ರಿಗಲಿಗೆ ಗೌರವ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿತು.