ಸವಾಯಿ ಗಂಧರ್ವ
From Wikipedia
ಸವಾಯಿ ಗಂಧರ್ವ (ಕುಂದಗೋಳ ರಾಮರಾವ್ ಅಥವಾ ರಾಮಭಾವು ಕುಂದಗೋಳಕರ) (೧೮೮೬ - ೧೨ ಸೆಪ್ಟೆಂಬರ್ ೧೯೫೨) ಅಬ್ದುಲ್ ಕರೀಂಖಾನ್ ಅವರ ಶಿಷ್ಯರಾಗಿ ಕಿರಾಣಾ ಘರಾಣೆ ಯಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿದ್ದಾರೆ. ೧೮೮೬ರಲ್ಲಿ ಧಾರವಾಡದ ಹತ್ತಿರ ಕುಂದಗೋಳದಲ್ಲಿ ಜನಿಸಿದ ಇವರು, ಸಣ್ಣ ವಯಸ್ಸಿನಲ್ಲೇ ತಮ್ಮ ಊರಿನ ಕೀರ್ತನಕಾರರಲ್ಲಿ ಸಂಗೀತಾಭ್ಯಾಸ ಮಾಡಿ ಹದಿವಯಸ್ಸಿನಲ್ಲೇ ಕರೀಂಖಾನರ ಹತ್ತಿರ ಶಿಷ್ಯತ್ವವನ್ನು ಪ್ರಾರಂಭಮಾಡಿ ಮುಂದೆ ಕಿರಾಣಾ ಘರಾಣೆಯ ಅಪ್ರತಿಮ ಸಾಧಕರಾದರು.