ಎಚ್.ವಿ.ನಂಜುಂಡಯ್ಯ
From Wikipedia
ಎಚ್.ವಿ.ನಂಜುಂಡಯ್ಯನವರು ಕ್ರಿ.ಶ. ೧೮೬೦ರಲ್ಲಿ ಜನಿಸಿದರು. ಬಡತನದಲ್ಲಿಯೆ ಓದಿ ಬಿ.ಎ., ಎಂ.ಎ. ಮಾದಿಕೊಂಡರು. ಗುಮಾಸ್ತೆಗಿರಿಯಿಂದ ವೃತ್ತಿಯನ್ನಾರಂಭಿಸಿದ ನಂಜುಂಡಯ್ಯನವರು ಸಬ್ ರಜಿಸ್ಟ್ರಾರ, ಮುನಸೀಫ್, ನ್ಯಾಯಾಧೀಶ, ದಿವಾನರ ಮಂತ್ರಾಲೋಚನೆ ಮಂಡಲಿಯ ಸದಸ್ಯ ಹೀಗೆ ಹಂತ ಹಂತವಾಗಿ ಮೇಲೇರುತ್ತ ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ೧೯೧೫ರಲ್ಲಿ ಬೆಂಗಳೂರಿನಲ್ಲಿ ಜರುಗಿದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹೆಗ್ಗಳಿಕೆ ಇವರದು.೧೯೧೬ರಲ್ಲಿ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವೂ ಬೆಂಗಳೂರಿನಲ್ಲಿಯೆ, ಇವರ ಅಧ್ಯಕ್ಷತೆಯಲ್ಲಿಯೆ ಜರುಗಿತು.೧೯೧೭ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಇವರೇ ಅಧ್ಯಕ್ಷರು. ಇದನ್ನು "ಹ್ಯಾಟ್ರಿಕ್" ಎನ್ನಬಹುದೆ?!
ಎಚ್.ವಿ.ನಂಜುಂಡಯ್ಯನವರು ಬಹುಭಾಷಾ ಪ್ರವೀಣರು. ಕನ್ನಡವಲ್ಲದೆ ತೆಲುಗು, ಸಂಸ್ಕೃತ, ಇಂಗ್ಲಿಷ್ ಹಾಗು ಫ್ರೆಂಚ್ ಭಾಷೆಗಳಲ್ಲೂ ಪರಿಣತರು.
[ಬದಲಾಯಿಸಿ] ಕೃತಿಗಳು
ಎಚ್.ವಿ.ನಂಜುಂಡಯ್ಯನವರು ಆ ಕಾಲದಲ್ಲಿಯೆ ಆಡಳಿತ , ಕಾನೂನು ಹಾಗು ಅರ್ಥಶಾಸ್ತ್ರಗಳಿಗೆ ಸಂಬಂಧಿಸಿದಂತೆ ಅಮೂಲ್ಯ ಕನ್ನಡ ಕೃತಿಗಳನ್ನು ರಚಿಸಿದರು:
- ಲೇಖ್ಯಬೋಧಿನಿ (ಆಡಳಿತ)
- ವ್ಯವಹಾರ ದೀಪಿಕೆ(ಕಾನೂನು)
- ಅರ್ಥಶಾಸ್ತ್ರ
[ಬದಲಾಯಿಸಿ] ಪುರಸ್ಕಾರ
ಇವರ ಬಹುಮುಖ ಸೇವೆಗಾಗಿ ಅಂದಿನ ಬ್ರಿಟಿಷ್ ಸರಕಾರ ಇವರಿಗೆ ‘ಸಿ.ಡಿ.ಇ.’ (ಕಂಪ್ಯಾನಿಯನ್ ಆಫ್ ದಿ ಇಂಡಿಯನ್ ಎಂಪೈರ್) ಪುರಸ್ಕಾರವನ್ನು ನೀಡಿತು.
ಎಚ್.ವಿ.ನಂಜುಂಡಯ್ಯನವರು ಉಪಕುಲಪತಿಯಾಗಿ ಸೇವೆಯಲ್ಲಿದ್ದಾಗಲೆ ೧೯೨೦ರಲ್ಲಿ ನಿಧನರಾದರು.