ನಾಡಿಗೇರ ಕೃಷ್ಣರಾವ್

From Wikipedia

ನಾಡಿಗೇರ ಕೃಷ್ಣರಾವ್ ಇವರು ೧೯೦೮ ಅಗಸ್ಟ ೨೫ರಂದು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಜನಿಸಿದರು. ಇವರ ತಾಯಿ ಕಾಮಾಕ್ಷಮ್ಮ ; ತಂದೆ ದತ್ತಾತ್ರೇಯ.

ನಾಡಿಗೇರ ಕೃಷ್ಣರಾಯರು ‘ಲೋಕಮತ’, ‘ಸಂಯುಕ್ತ ಕರ್ನಾಟಕ’, ‘ಕಥಾಂಜಲಿ’, ‘ಪ್ರಜಾಮತ’ ,ದೇಶಬಂಧು ಮುಂತಾದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ‘ಗೇಡಿನಾರ’ ಕಾವ್ಯನಾಮದಲ್ಲಿ ಸಾಹಿತ್ಯರಚನೆ ಮಾಡಿದ್ದಾರೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಹಾಸ್ಯಸಂಕಲನ

  • ಅಡ್ಡಾದಿಡ್ಡಿ
  • ಏನೋ ಆಯಿತು
  • ಕಸದ ಬುಟ್ಟಿ
  • ಕೇಡಿಗನ ಕಿಡಿಗಳು
  • ತಲೆಹರಟೆ
  • ನಾಡಿಗೇರರ ನಗೆಮಿಂಚುಗಳು
  • ನಾಡಿಗೇರರ ಬರಹಗಳು
  • ನಾಮಕರಣ
  • ನೈಲಾನ್ ಹುಡುಗಿ
  • ಬೇಸ್ತು
  • ಮೆಲ್ಲೋಗರ
  • ಮೈಕಾಸುರನ ಹಾವಳಿ
  • ರಾಯಭೇರಿ
  • ಸ್ವಾರಸ್ಯ ಪ್ರಸಂಗ
  • ಹರಕು-ಮುರುಕು
  • ಹೇಗಿದ್ದರೂ ಕಷ್ಟ

[ಬದಲಾಯಿಸಿ] ಕಾದಂಬರಿ

  • ಅದಲು ಬದಲು
  • ಇಬ್ಬರು ಸುಂದರಿಯರು
  • ಎದಿರೇಟು
  • ಕನಸಿನ ರಾಣಿ
  • ಕಮಲೆಯ ಕನಸು
  • ಗಗನ ಚಂದಿರ
  • ಗಾನನಂದಿನಿ
  • ಗುಲಾಮ
  • ತುಳಸಮ್ಮನ ಸಂಸಾರ
  • ನರಕದಲ್ಲಿ ಸ್ವರ್ಗ
  • ನಾಲ್ಕು ಸುಂದರಿಯರು
  • ನೀಲವೇಣಿ
  • ಪ್ರಿಯಸಖಿ
  • ಪ್ರೇಮಮಂಟಪ
  • ಪ್ರೇಮವಂಚಿತ
  • ಬೆಂಕಿಯ ಹೂವು
  • ಮೂರಕ್ಕೆ ಮುಕ್ತಿ
  • ಮೂವರು ಗೆಳತಿಯರು
  • ರಾಜಕಾರಣಿ
  • ಶಿಲಾಬಾಲಿಕೆ
  • ಸುಜಾತಾ
  • ಸೆರಗಿನಲ್ಲಿ ಬಿದ್ದ ಹೆಣ್ಣು

[ಬದಲಾಯಿಸಿ] ಹಾಸ್ಯ ನಾಟಕ

  • ಪುಢಾರಿ ಪುಟ್ಟಯ್ಯ

[ಬದಲಾಯಿಸಿ] ಕ್ಷೇತ್ರ ಪರಿಚಯ

  • ಶ್ರೀ ಹರಿಹರ ಕ್ಷೇತ್ರ

[ಬದಲಾಯಿಸಿ] ವೈಶಿಷ್ಟ್ಯ

ಕನ್ನಡದ ಕಟ್ಟಾಳು ಅ.ನ.ಕೃಷ್ಣರಾಯರು ನಾಡಿಗೇರರ ಸಾಧನೆಯನ್ನು ಈ ರೀತಿಯಾಗಿ ವರ್ಣಿಸಿದ್ದಾರೆ:

ಪತ್ರಿಕೋದ್ಯಮಿಯಾಗಿಯಾಗಿ ಕಟ್ಟಿದನು ಗೆಜ್ಜೆ

ಕಾದಂಬರಿಗಳನು ಬರೆದು ಹಾಕಿದನು ಹೆಜ್ಜೆ

ನಗೆಹರಟೆಗಳ ರಚಿಸಿ ಬಾರಿಸಿದ ಡೋಲು

ಇವನ ಜೀವನ ಹಿರಿದು -- ಇವಗಿಲ್ಲ ಸೋಲು