ಎಂ.ವಿ.ಸೀತಾರಾಮಯ್ಯ

From Wikipedia

ಮೈಸೂರು ವೆಂಕಟದಾಸಪ್ಪ ಸೀತಾರಾಮಯ್ಯನವರು ೧೯೧೦ ಸಪ್ಟಂಬರ ೯ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ಸಾವಿತ್ರಮ್ಮ ; ತಂದೆ ವೆಂಕಟದಾಸಪ್ಪ. ಎಂ.ಎ. ಪದವಿ ಪಡೆದ ಬಳಿಕ ಇವರು ಕನ್ನಡದ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ರಾಘವ ಎನ್ನುವ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಇವರ ಕೃತಿಗಳು ಇಂತಿವೆ:

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನ ಸಂಕಲನ

  • ಹಕ್ಕಿ ಹಾಡು
  • ರಾಗ
  • ಅಶೋಕ ಚಕ್ರ

[ಬದಲಾಯಿಸಿ] ಕಥಾ ಸಂಕಲನ

  • ರತಿದೇವಿ ಮತ್ತು ಇತರ ಕಥೆಗಳು
  • ಬಿಸಿಲು ಬೆಳದಿಂಗಳು
  • ನಿಲ್ದಾಣಗಳ ನಡುವೆ

[ಬದಲಾಯಿಸಿ] ನಾಟಕ

  • ತೆರೆಮರೆಯ ಚಿತ್ರಗಳು
  • ತೊಟ್ಟಿಲು ತೂಗದ ಕೈ
  • ಸ್ವಯಂವರ
  • ಜೀವನ ನಾಟಕ

[ಬದಲಾಯಿಸಿ] ಕಾದಂಬರಿ

  • ಭಾಗ್ಯಲಕ್ಷ್ಮಿ
  • ನಂಜಿನ ಸವಿ
  • ಜೀವನದ ಜೊತೆಗಾರ
  • ಮಾವನ ಮಗಳು

[ಬದಲಾಯಿಸಿ] ಪ್ರಬಂಧ

  • ಧೂಮಲೀಲೆ
  • ಮುಗಿಲುಗಳು
  • ಹಿಡಿಹೂವು

[ಬದಲಾಯಿಸಿ] ಸಂಪಾದನೆ

  • ಚಿನ್ನದ ಬೆಳಸು
  • ಕವಿರಾಜಮಾರ್ಗ
  • ಉದಯಾದಿತ್ಯಾಲಂಕಾರ

[ಬದಲಾಯಿಸಿ] ವಿಮರ್ಶೆ

  • ಹೊಸಗನ್ನಡ ಸಾಹಿತ್ಯ ಮತ್ತು ಇತರ ಲೇಖನಗಳು
  • ಭಾರತೀಯ ಕಾವ್ಯಮೀಮಾಂಸೆಗೆ ಕನ್ನಡ ಕವಿಗಳ ಕೊಡುಗೆ
  • ಕಾವ್ಯ ಮೀಮಾಂಸೆ

[ಬದಲಾಯಿಸಿ] ಬಾಲಸಾಹಿತ್ಯ

  • ಹಾವಾಡಿಗ
  • ಹೂವಾಡಗಿತ್ತಿ

[ಬದಲಾಯಿಸಿ] ಪುರಸ್ಕಾರ

  • ‘ಆ ಚಿತ್ರಗಳು’ ನೀಳ್ಗವನಕ್ಕೆ ಬಿ.ಎಂ.ಶ್ರೀ. ಸ್ವರ್ಣಪದಕ ದೊರೆತಿದೆ.
  • ‘ಹಕ್ಕಿ ಹಾಡು’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ.
  • ‘ಮಾವನ ಮಗಳು’ ಕಾದಂಬರಿಗೆ ‘ದೇವರಾಜ ಬಹಾದ್ದೂರ್’ ಬಹುಮಾನ ಲಭಿಸಿದೆ.
  • ‘ತೊಟ್ಟಿಲು ತೂಗದ ಕೈ’ ಮತ್ತು ‘ಜೀವನ ನಾಟಕ’ ಗಳಿಗೆ ಕರ್ನಾಟಕ ಸರಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಬಹುಮಾನ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಜ.ಚ.ನಿ ಅವರಿಂದ ‘ವಿಚಾರ ರತ್ನಾಕರ’ ಬಿರುದು ದೊರೆತಿವೆ.

ಎಂ.ವಿ.ಸೀತಾರಾಮಯ್ಯನವರು ಒಳ್ಳೆಯ ಚಿತ್ರಕಾರರೂ ಆಗಿದ್ದರು. ಕೆಲ ಕಾಲ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಆಗಿದ್ದರು.