ಕೃಷ್ಣಾನಂದ ಕಾಮತ್
From Wikipedia
ಕೃಷ್ಣಾನಂದ ಕಾಮತರು - (೧೯೩೪ - ೨೦೦೨) - ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ೧೯೩೪ ಸೆಪ್ಟೆಂಬರ್ ೨೯ರಂದು ಜನಿಸಿದರು. ತಾಯಿ ರಮಾಬಾಯಿ;ತಂದೆ ಲಕ್ಷ್ಮಣ ವಾಸುದೇವ ಕಾಮತ್.
ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ ಹಾಗು ಎಮ್.ಎಸ್.ಸಿ. ಪದವಿ ಪಡೆದ ಬಳಿಕ ಕಾಮತರು ಅಮೆರಿಕದಲ್ಲಿ ಕೀಟಶಾಸ್ತ್ರದಲ್ಲಿ ಪಿ.ಎಚ್.ಡಿ. ಮಾಡಿದರು. ಅಲ್ಲಿಯೆ ನೆಲೆಸುವ ಅವಕಾಶವನ್ನು ತಿರಸ್ಕರಿಸಿ ಭಾರತಕ್ಕೆ ಮರಳಿ 'ಪೂಲ್ ಆಫೀಸರ್' ಎಂದು ಕೆಲಸಕ್ಕೆ ಸೇರಿದರು. ಕೆಲ ಕಾಲದ ನಂತರ ನೌಕರಿಗೆ ರಾಜೀನಾಮೆ ಕೊಟ್ಟು ಸಂಶೋಧನೆಗಳಿಗೆ ನೆರವಾಗುವಂತಹ ಸ್ಟುಡಿಯೊ ಪ್ರಾರಂಭಿಸಿದರು.
ಕೃಷ್ಣಾನಂದ ಕಾಮತರು ಪ್ರವಾಸಕಥನ, ವಿಜ್ಞಾನ, ಜನಾಂಗೀಯ ಅಧ್ಯಯನ, ಕಲೆ, ಪರಿಸರ ಮೊದಲಾದ ವಿಷಯಗಳ ಬಗೆಗೆ ೨೨ ಪುಸ್ತಕಗಳನ್ನೂ, ನೂರಾರು ಲೇಖನಗಳನ್ನೂ ಪ್ರಕಟಿಸಿದ್ದಾರೆ.
[ಬದಲಾಯಿಸಿ] ಕಾಮತರ ಕೆಲವು ಕೃತಿಗಳು
- ನಾನೂ ಅಮೆರಿಕೆಗೆ ಹೋಗಿದ್ದೆ
- ವಂಗದರ್ಶನ
- ಪ್ರಾಣಿ ಪರಿಸರ
- ಪ್ರೇಯಸಿಗೆ ಪತ್ರಗಳು
- ಮರುಪಯಣ
- ಪತ್ರ-ಪರಾಚಿ
- ಭಗ್ನಸ್ವಪ್ನ
- ನಾ ರಾಜಸ್ಥಾನದಲ್ಲಿ
- ಕಾಲರಂಗ
- ಪಶುಪಕ್ಷಿ ಪ್ರಪಂಚ
- ಕೀಟ ಜಗತ್ತು
- ಸಸ್ಯ ಪ್ರಪಂಚ
- ಕವಿಕಲೆ
- ಮಧ್ಯಪ್ರದೇಶದ ಮಡಿಲಲ್ಲಿ
- ಅಕ್ಷತ
- ಇರುವೆಯ ಇರುವು
- ಕಾಗೆಯ ಕಾಯಕ
- ಪ್ರವಾಸಿಯ ಪ್ರಬಂಧಗಳು
- ಸರ್ಪಸಂಕುಲ
- The Timeless Theater
ಕೃಷ್ಣಾನಂದ ಕಾಮತರ ಪತ್ನಿ ಶ್ರೀಮತಿ ಜ್ಯೋತ್ಸ್ನಾ ಕಾಮತ್ ಸ್ವತಃ ಸಂಶೋಧಕಿ ಹಾಗು ಲೇಖಕಿ.
[ಬದಲಾಯಿಸಿ] ಪ್ರಶಸ್ತಿ ಮತ್ತು ಗೌರವಗಳು
- ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಗೌರೀಶ ಕಾಯ್ಕಿಣಿ ಪ್ರಶಸ್ತಿ
- ಪೈ ಪ್ರತಿಷ್ಠಾನ ವಿಶೇಷ ಬಹುಮಾನ
- ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
[ಬದಲಾಯಿಸಿ] ನಿಧನ
ಕೃಷ್ಣಾನಂದ ಕಾಮತರು ೨೦೦೨ ಫೆಬ್ರುವರಿ ೨೦ರಂದು ನಿಧನರಾದರು.