ಸರೋಜಿನಿ ಮಹಿಷಿ
From Wikipedia
ಸರೋಜಿನಿ ಮಹಿಷಿಯವರು ಧಾರವಾಡದವರು. ಮಹಿಳೆಯರ ಏಳಿಗೆಗಾಗಿ ವನಿತಾ ಸೇವಾ ಸಮಾಜವನ್ನು ಸ್ಥಾಪಿಸಿದವರು. ವೀರಮಾತಾ ಎನ್ನುವ ಮಾಸಪತ್ರಿಕೆಯ ಸ್ಥಾಪಕ ಸಂಪಾದಕಿಯರಾಗಿದ್ದರು.
ಇವರಿಗೆ ನವಿಲು,ಇಂಚರಎನ್ನುವ ಮಕ್ಕಳ ಸಾಹಿತ್ಯಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಈ ಪುಸ್ತಕಗಳಲ್ಲದೆ ಮುಳ್ಳು ಗುಲಾಬಿಗಾಗಿ ಕರ್ನಾಟಕ ರಾಜ್ಯ ಸರಕಾರದ ಪ್ರಶಸ್ತಿ ದೊರೆತಿದೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಕರ್ನಾಟಕ ಸರಕಾರವು ಶ್ರೀಮತಿ ಸರೋಜಿನಿ ಮಹಷಿಯವರಿಗೆ ಕೇಳಿಕೊಂಡಿತ್ತು. ಶ್ರೀಮತಿ ಮಹಿಷಿಯವರು ನೀಡಿದ ವರದಿಯು ಸರೋಜಿನಿ ಮಹಿಷಿ ವರದಿ ಎಂದು ಖ್ಯಾತವಾಗಿದೆ.
ಸರೋಜಿನಿ ಮಹಿಷಿಯವರು ಶ್ರೀ ಚಂದ್ರಶೇಖರರವರ ಸಂಪುಟದಲ್ಲಿ ಭಾರತ ಕೇಂದ್ರ ಮಂತ್ರಿಮಂಡಲದಲ್ಲಿ ರಾಜ್ಯಮಂತ್ರಿಗಳಾಗಿದ್ದರು