ವೀರಪ್ಪ ಮೊಯ್ಲಿ
From Wikipedia
ವೀರಪ್ಪ ಮೊಯ್ಲಿ ಕರ್ನಾಟಕ ರಾಜ್ಯದ ೧೩ ನೇ ಮುಖ್ಯಮಂತ್ರಿ ಯಾಗಿ ಸೇವೆ ಸಲ್ಲಿಸಿದ್ದಾರೆ.
ವೀರಪ್ಪ ಮೊಯಿಲಿಯವರು ೧೯೪೦ ಜನೆವರಿ ೧೨ರಂದು ಜನಿಸಿದರು. ಇವರ ತಾಯಿ ಪೂವಮ್ಮ ; ತಂದೆ ತಮ್ಮಯ್ಯ ಮೊಯಿಲಿ.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ
ಮೊಯಿಲಿಯವರು ತಮ್ಮ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣಗಳನ್ನು ಮೂಡಬಿದಿರಿಯಲ್ಲಿ ಪೂರೈಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಪೂರೈಸಿ, ಪದವಿ ಪಡೆದರು. ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯಲ್ಲಿ, ತನ್ನಂತರ ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದಂತೆಯೆ , ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್.ಪದವಿ ಪಡೆದರು.
[ಬದಲಾಯಿಸಿ] ವೃತ್ತಿ ಜೀವನ
ಕಾರ್ಕಳ ಹಾಗು ಮಂಗಳೂರುಗಳಲ್ಲಿ ವೃತ್ತಿಯನ್ನಾರಂಭಿಸಿದ ಮೊಯಿಲಿಯವರು , ಬೆಂಗಳೂರಿನಲ್ಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿ ವೃತ್ತಿಯನ್ನು ಮುಂದುವರಿಸಿದರು.
[ಬದಲಾಯಿಸಿ] ರಾಜಕಾರಣ
೧೯೬೮ರಲ್ಲಿ ಮೊಯಿಲಿಯವರು ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೯ರಲ್ಲಿ ಕಿಸಾನ ಸಭಾ ಸ್ಥಾಪಿಸಿದರು.
೧೯೭೨ರಿಂದ ೧೯೯೯ರವರೆಗೆ ಮೊಯಿಲಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದರು. ೧೯೭೪ರಿಂದ ೧೯೭೭ರವರೆಗೆ ಮೊಯಿಲಿಯವರು ಸಣ್ಣ ಕೈಗಾರಿಕೆ ಖಾತೆಯ ಮಂತ್ರಿಯಾಗಿದ್ದರು. ೧೯೮೦ರಿಂದ ೧೯೮೨ರವರೆಗೆ ಹಣಕಾಸು ಮತ್ತು ಯೋಜನಾ ಖಾತೆಯ ಮಂತ್ರಿಯಾಗಿದ್ದರು. ೧೯೮೩ರಿಂದ ೧೯೮೫ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು. ೧೯೮೯ರಿಂದ ೧೯೯೨ರ ವರೆಗೆ ವಿವಿಧ ಇಲಾಖೆಗಳ ಸಚಿವರಾಗಿದ್ದ ಮೊಯಿಲಿ, ೧೯೯೨ರಿಂದ ೧೯೯೪ರವರೆಗೆ ಕರ್ನಾಟಕದ ೧೩ನೆಯ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು.
[ಬದಲಾಯಿಸಿ] ಸಾಹಿತ್ಯ
ವೀರಪ್ಪ ಮೊಯಿಲಿಯವರು ಗಣ್ಯ ಸಾಹಿತಿಗಳೂ ಆಗಿದ್ದಾರೆ. ಅವರ ಪತ್ನಿ ಶ್ರೀಮತಿ ಮಾಲತಿ ಮೊಯಿಲಿ ಸಹ ಲೇಖಕಿಯಾಗಿದ್ದಾರೆ. ಮೊಯಿಲಿಯವರ ಕೃತಿಗಳು ಇಂತಿವೆ:
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ಸುಳಿಗಾಳಿ
- ಸಾಗರದೀಪ
- ಕೊಟ್ಟ
- ತೆಂಬರೆ
[ಬದಲಾಯಿಸಿ] ನಾಟಕಗಳು
- ಮಿಲನ
- ಪ್ರೇಮವೆಂದರೆ
- ಪರಾಜಿತ
- ಮೂರು ನಾಟಕಗಳು
[ಬದಲಾಯಿಸಿ] ಕವನ ಸಂಕಲನ
- ಹಾಲು ಜೇನು
- ಮತ್ತೆ ಮಡೆಯಲಿ ಸಮರ
- ಯಕ್ಷಪ್ರಶ್ನೆ
- ಜೊತೆಯಾಗಿ ನಡೆಯೋಣ (ಶ್ರೀಮತಿ ಮಾಲತಿ ಮೊಯಿಲಿಯವರ ಜೊತೆಯಲ್ಲಿ)
[ಬದಲಾಯಿಸಿ] ಮಹಾಕಾವ್ಯ
- ಶ್ರೀರಾಮಾಯಣ ಅನ್ವೇಷಣಂ
[ಬದಲಾಯಿಸಿ] ಪುರಸ್ಕಾರ
- ೨೦೦೦ನೆಯ ಸಾಲಿನಲ್ಲಿ ಮೊಯಿಲಿಯವರಿಗೆ ಅಲ್-ಅಮೀನ್ ಸದ್ಭಾವನಾ ಪ್ರಶಸ್ತಿ ಲಭಿಸಿತು.
- ೨೦೦೧ನೆಯ ಸಾಲಿನಲ್ಲಿ ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರ ಸುಧಾರಣೆಗಾಗಿ ಕೊಡಮಾಡುವ ದೇವರಾಜ ಅರಸ ಪ್ರಶಸ್ತಿ ದೊರೆಯಿತು.
- ೨೦೦೧ರ ಆರ್ಯಭಟ ಪುರಸ್ಕಾರ ದೊರೆತಿದೆ.
- ೨೦೦೨ರಲ್ಲಿ ಗೊರೂರು ಪ್ರತಿಷ್ಠಾನದ ಸಮಗ್ರ ಸಾಹಿತ್ಯ ಪುರಸ್ಕಾರ ಲಭಿಸಿತು.
[ಬದಲಾಯಿಸಿ] ಕರ್ನಾಟಕದ ಮುಖ್ಯಮಂತ್ರಿಗಳು
ಹೆಚ್.ಡಿ.ಕುಮಾರಸ್ವಾಮಿ | ಧರಮ್ ಸಿಂಗ್ | ಎಸ್.ಎಂ.ಕೃಷ್ಣ | ಜೆ ಹೆಚ್ ಪಟೇಲ್ | ಹೆಚ್.ಡಿ.ದೇವೇಗೌಡ | ವೀರಪ್ಪ ಮೊಯ್ಲಿ | ಬಂಗಾರಪ್ಪ | ವೀರೇಂದ್ರ ಪಾಟೀಲ್ | ಎಸ್ ಆರ್ ಬೊಮ್ಮಾಯಿ | ರಾಮಕೃಷ್ಣ ಹೆಗಡೆ | ಆರ್ ಗುಂಡೂರಾವ್ | ಡಿ ದೇವರಾಜ ಅರಸ್ | ಎಸ್. ನಿಜಲಿಂಗಪ್ಪ | ಎಸ್ ಆರ್ ಕಂಠಿ | ಬಿ ಡಿ ಜತ್ತಿ | ಕಡಿದಾಳ್ ಮಂಜಪ್ಪ | ಕೆಂಗಲ್ ಹನುಮಂತಯ್ಯ | ಚೆಂಗಲರಾಯ ರೆಡ್ಡಿ