ಅಕಬರ ಅಲಿ

From Wikipedia

ಡಾ| ಎಂ. ಅಕಬರ ಅಲಿ ಇವರು ೧೯೨೫ ಮಾರ್ಚ್ ೩ರಂದುಬೆಳಗಾವಿ ಜಿಲ್ಲೆಯ ಉಳ್ಳಾಗಡ್ಡಿ ಖಾನಾಪುರದಲ್ಲಿ ಜನಿಸಿದರು. ಇವರ ತಾಯಿ ಅಮೀರಬಿ ; ತಂದೆ ಅಪ್ಪಾ ಸಾಹೇಬ. ಬೆಳಗಾವಿ,ಸಾಂಗ್ಲಿ ಹಾಗು ಪುಣೆಯಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಮೈಸೂರಿನ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು.

ಎಂ.ಅಕಬರ ಅಲಿಯವರು ನವೋದಯ ಕಾಲದ ಪ್ರಮುಖ ಸಾಹಿತಿಗಳು.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನ ಸಂಕಲನ

  • ಅನ್ನ
  • ನವಚೇತನ
  • ತಮಸಾ ನದಿ ಎಡಬಲದಿ

[ಬದಲಾಯಿಸಿ] ಕಾದಂಬರಿ

  • ನಿರೀಕ್ಷೆಯಲ್ಲಿ

[ಬದಲಾಯಿಸಿ] ಇತರ

  • ವಿಷಸಿಂಧು
  • ಗಂಧ ಕೇಶರ
  • ಸರ್ವಜ್ಞನ ಸಮಾಜದರ್ಶನ ಮತ್ತು ಸತ್ವ

೧೯೮೪ ರಲ್ಲಿ ಇವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.

೧೯೮೯‍ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.