ಶಾಂತಿನಾಥ ದೇಸಾಯಿ
From Wikipedia
ಶಾಂತಿನಾಥ ದೇಸಾಯಿ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು.
ಪರಿವಿಡಿ |
[ಬದಲಾಯಿಸಿ] ಜೀವನ
೧೯೨೯-೧೯೯೭
ಶಾಂತಿನಾಥ ದೇಸಾಯಿಯವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ೧೯೨೯ ರಲ್ಲಿ ಜನಿಸಿದರು. ಎಂಟನೆಯ ವಯಸ್ಸಿಗೆ ದತ್ತುಪುತ್ರರಾಗಿ ಸೋದರತ್ತೆಯ ಮನೆ ಸೇರಿದರು. ಬಾಲ್ಯ ಮತ್ತು ಇಂಟರ್ವರೆಗಿನ ವಿದ್ಯಾಭ್ಯಾಸ ನಡೆದಿದ್ದು ಧಾರವಾಡದಲ್ಲಿ. ಮುಂದೆ ಉನ್ನತ ಶಿಕ್ಷಣಕ್ಕಾಗಿ ಮುಂಬಯಿಗೆ ಪ್ರಯಾಣ. ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಇಂಗ್ಲೀಷ್ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಅಧ್ಯಾಪದ ವೃತ್ತಿ ಪ್ರಾರಂಭ. ಬ್ರಿಟಿಷ್ ಕೌನ್ಸಿಲ್ ವ್ಯಾಸಂಗವೇತನ ಪಡೆದು ಉನ್ನತ ಶಿಕ್ಷಣಕ್ಕಾಗಿ ಬ್ರಿಟನ್ಗೆ ಪ್ರಯಾಣ.
೧೯೬೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್ ಆಗಿ ಧಾರವಾಡಕ್ಕೆ ವಾಪಸಾದರು. ನಂತರ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿ ಸ್ಥಾನವನ್ನು ವಹಿಸಿಕೊಂಡರು. ನಿವೃತ್ತಿಗೆ ಕೆಲವೇ ದಿನಗಳಿರುವಾಗ ಕುವೆಂಪು ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿದ್ದರು.
ಕೃತಿಗಳು
[ಬದಲಾಯಿಸಿ] ಸಣ್ಣ ಕಥಾ ಸಂಕಲನ
- ಮಂಜುಗಡ್ಡೆ
- ಕ್ಷಿತಿಜ
- ದಂಡೆ
- ರಾಕ್ಷಸ
- ಪರಿವರ್ತನೆ
- ಕೂರ್ಮಾವತಾರ
[ಬದಲಾಯಿಸಿ] ಕಾದಂಬರಿಗಳು
- ಮುಕ್ತಿ
- ವಿಕ್ಷೇಪ
- ಸೃಷ್ಟಿ
- ಸಂಬಂಧ
- ಬೀಜ
- ಅಂತರಾಳ
- ಓಂ ಣಮೋ
[ಬದಲಾಯಿಸಿ] ಅನುವಾದ
- ಯು.ಆರ್.ಅನಂತಮೂರ್ತಿಯವರ ಕಾದಂಬರಿ ಅವಸ್ಥೆ' ಆಂಗ್ಲಭಾಷೆಗೆ
- ಪಿ.ಲಂಕೇಶ್ ಅವರ ಸಂಕ್ರಾಂತಿ ಆಂಗ್ಲಭಾಷೆಗೆ
[ಬದಲಾಯಿಸಿ] ಪ್ರಶಸ್ತಿಗಳು
- ವರ್ಧಮಾನ ಪ್ರಶಸ್ತಿ
- ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಓಂ ಣಮೋ ಎಂಬ ಕೃತಿಗೆ ೨೦೦೦ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ