ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ)

From Wikipedia

ರಾವಬಹಾದ್ದೂರ ಎಂಬ ಹೆಸರಿನಲ್ಲಿ ಅನೇಕ ಕತೆ ಹಾಗು ಕಾದಂಬರಿಗಳನ್ನು ಬರೆದ ಶ್ರೀ ರಾಮಚಂದ್ರ ಕುಲಕರ್ಣಿಯವರು ೧೯೧೦ ಸಪ್ಟಂಬರ೨೪ರಂದು ವಿಜಾಪುರ ಜಿಲ್ಲೆಯ ಜಮಖಂಡಿತಾಲೂಕಿನ ಹಿರೆಪಡಸಲಗಿಯಲ್ಲಿ ಜನಿಸಿದರು. ಇವರ ತಾಯಿ ಸುಭದ್ರಾಬಾಯಿ ; ತಂದೆ ಭೀಮರಾವ. ಧಾರವಾಡ‍ದ ಕರ್ನಾಟಕ ಕಾಲೇಜಿನಲ್ಲಿ ಓದಿ, ೧೯೩೫‍ರಲ್ಲಿ ಬಿ.ಎ.ಪದವಿ ಗಳಿಸಿದರು. ಅನೇಕ ವರ್ಷ ಜಯಂತಿ ಮಾಸಪತ್ರಿಕೆಯನ್ನು ನಡೆಯಿಸಿದರು. ೧೯೩೮‍ರಿಂದ ೧೯೪೬‍ರವರೆಗೆ ಚರಕಾ ಸಂಘದ ವ್ಯವಸ್ಥಾಪಕರಾಗಿದ್ದರು.

ಇವರ ಕೃತಿಗಳು:

  • ಗ್ರಾಮಾಯಣ
  • ಅಸುರಾಯಣ
  • ಬಿತ್ತಿ ಬೆಳೆದವರು
  • ಗೌಡರ ಕೋಣ
  • ಸಾಮ್ಯವಾದ
  • ಇತಿಹಾಸ ಭೂತ
  • ವೃಂದಾವನ
  • ಧೂಮಕೇತು
  • ಬಾಳು ಬಂಗಾರ
  • ಮುತ್ತು ಕಟ್ಟಿದಳು
  • ಕಾಂಚನ ಮೃಗ
  • ಮರೆಯದ ನೆನಪುಗಳು

ಗ್ರಾಮಾಯಣ ಕಾದಂಬರಿಯು ಕನ್ನಡ‍ದ ಶ್ರೇಷ್ಠ ಕೃತಿಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಈ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿರುವದಲ್ಲದೆ ಭಾರತ‍ದ ಎಲ್ಲ ಭಾಷೆಗಳಿಗೆ ಅನುವಾದವಾಗಿದೆ.

"ಬಿತ್ತಿ ಬೆಳೆದವರು" ಹಾಗು "ಗೌಡರ ಕೋಣ" ಈ ಕಾದಂಬರಿಗಳು ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಗಳಿಸಿವೆ.

ರಾವಬಹಾದ್ದೂರರು ೧೯೮೪ ಡಿಶಂಬರ ೩೧ರಂದು ನಿಧನರಾದರು.