ಕೀರ್ತಿನಾಥ ಕುರ್ತಕೋಟಿ

From Wikipedia

ಕೀರ್ತಿನಾಥ ಕುರ್ತಕೋಟಿ
Enlarge
ಕೀರ್ತಿನಾಥ ಕುರ್ತಕೋಟಿ

ಕೀರ್ತಿನಾಥ ಕುರ್ತಕೋಟಿ ಇವರು ೧೯೨೮ ಅಕ್ಟೋಬರ ೧೨ರಂದು ಗದಗಿನಲ್ಲಿ ಜನಿಸಿದರು. ಇವರ ತಾಯಿ ಪದ್ಮಾವತಿಬಾಯಿ ; ತಂದೆ ಡಿ.ಕೆ. ಕುರ್ತಕೋಟಿ.

ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, ಗುಜರಾತಿಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ ಧಾರವಾಡಕ್ಕೆ ಮರಳಿದರು.

ಕುರ್ತಕೋಟಿಯವರು ಜಿ.ಬಿ.ಜೋಶಿಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯಸಲಹಾಕಾರರು. ೧೯೫೯ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತವರ್ಷದ ಹೊತ್ತಿಗೆ “ನಡೆದು ಬಂದ ದಾರಿ” ಯಲ್ಲಿ ಇವರು ಬರೆದ ಸಾಹಿತ್ಯವಿಮರ್ಶೆ ಕನ್ನಡ ವಿಮರ್ಶಾಲೋಕದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿತು. ಆಬಳಿಕ ಹೊರತಂದ ವಿಮರ್ಶಾ ನಿಯತಕಾಲಿಕ “ಮನ್ವಂತರ”ಕ್ಕೆ ಇವರು ಸಂಪಾದಕರಾಗಿದ್ದರು. ಆದರೆ ಆ ಪತ್ರಿಕೆ ಬಹಳ ಕಾಲ ಬಾಳಲಿಲ್ಲ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕವನ ಸಂಕಲನ

  • ಗಾನಕೇಳಿ ( ಮೂವರು ಮಿತ್ರರ ಸಂಕಲನ)
  • ನಾವು ಬರಿಗೈಯವರು (ನಿಧನದ ನಂತರ ಪ್ರಕಟಿತ)

[ಬದಲಾಯಿಸಿ] ನಾಟಕ

  • ಆ ಮನಿ
  • ಸ್ವಪ್ನದರ್ಶಿ ಮತ್ತು ಇತರ ಗೀತ ನಾಟಕಗಳು
  • ಸ್ವಪ್ನ ವಾಸವದತ್ತೆ (ಭಾಸನ ಸಂಸ್ಕೃತ ನಾಟಕದ ಅನುವಾದ)
  • ಚಂದ್ರಗುಪ್ತ

[ಬದಲಾಯಿಸಿ] ವಿಮರ್ಶೆ

  • ನವ್ಯಕಾವ್ಯ ಪ್ರಯೋಗ
  • ಯುಗಧರ್ಮ ಹಾಗು ಸಾಹಿತ್ಯದರ್ಶನ
  • ಯಶೋಧರ ಚರಿತ್ರೆಯ ಕಾವ್ಯತಂತ್ರ
  • ಉರಿಯ ನಾಲಿಗೆ

[ಬದಲಾಯಿಸಿ] ಅನುವಾದ

[ಬದಲಾಯಿಸಿ] ಅಂಕಣ ಬರಹ ಸಂಕಲನ

  • ಪಂಡಿತರ ತಪ್ಪು

[ಬದಲಾಯಿಸಿ] ಪುರಸ್ಕಾರ

ಕೀರ್ತಿನಾಥ ಕುರ್ತಕೋಟಿಯವರಿಗೆ ೧೯೯೫ರಲ್ಲಿ “ಉರಿಯ ನಾಲಗೆ” ವಿಮರ್ಶಾ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿತು.

ಕೀರ್ತಿನಾಥ ಕುರ್ತಕೋಟಿಯವರು ೨೦೦೩ರಲ್ಲಿ ನಿಧನರಾದರು. ಅವರ ನಿಧನಾನಂತರ ಧಾರವಾಡದಲ್ಲಿ ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್ ಸ್ಥಾಪಿತವಾಗಿದೆ.