ಎಲ್.ಬಸವರಾಜು

From Wikipedia

ಡಾ| ಎಲ್.ಬಸವರಾಜು ಇವರು ೧೯೧೯ ಅಕ್ಟೋಬರ ೫ರಂದು ಕೋಲಾರ ಜಿಲ್ಲೆಯ ಎಡಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ವೀರಮ್ಮ ; ತಂದೆ ಲಿಂಗಪ್ಪ.ವೃತ್ತಿಯಿಂದ ಪ್ರಾಧ್ಯಾಪಕರಾದರೂ,ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ,ವೀರಶೈವ ಸಾಹಿತ್ಯ-ಸಿದ್ಧಾಂತಗಳ ಶೋಧನೆ,ಅಧ್ಯಯನ,ವ್ಯಾಖ್ಯಾನ,ಸಂಪಾದನೆಗಳಲ್ಲಿ ಕಳೆದಿದ್ದಾರೆ.ಅಪ್ಪಟ ಮಾನವತಾವಾದಿ.

ಇವರ ಕೆಲವು ಪ್ರಮುಖ ಕೃತಿಗಳು:

  • ಶೂನ್ಯ ಸಂಪಾದನೆ
  • ಕನ್ನಡ ಛಂದಸ್ಸು
  • ಶಿವದಾಸ ಗೀತಾಂಜಲಿ
  • ಭಾಸನ ಭಾರತ ರೂಪಕ
  • ನಾಟಕಾಮೃತ ಬಿಂದುಗಳು
  • ಅಲ್ಲಮನ ವಚನಗಳು
  • ದೇವರ ದಾಸೀಮಯ್ಯನ ವಚನಗಳು
  • ಭಾಸರಾಮಾಯಣ
  • ನಾಟಕ ತ್ರಿವೇಣಿ

ಇವರಿಗೆ 'ಪಂಪ ಪ್ರಶಸ್ತಿ','ಬಸವ ಪುರಸ್ಕಾರ' ವಲ್ಲದೆ ೧೯೯೪ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೬ರ 'ಭಾಷಾ ಸಮ್ಮಾನ್' ಗೌರವ ದೊರಕಿದೆ.