ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ)
From Wikipedia
ರಾವಬಹಾದ್ದೂರ ಎಂಬ ಹೆಸರಿನಲ್ಲಿ ಅನೇಕ ಕತೆ ಹಾಗು ಕಾದಂಬರಿಗಳನ್ನು ಬರೆದ ಶ್ರೀ ರಾಮಚಂದ್ರ ಕುಲಕರ್ಣಿಯವರು ೧೯೧೦ ಸಪ್ಟಂಬರ೨೪ರಂದು ವಿಜಾಪುರ ಜಿಲ್ಲೆಯ ಜಮಖಂಡಿತಾಲೂಕಿನ ಹಿರೆಪಡಸಲಗಿಯಲ್ಲಿ ಜನಿಸಿದರು. ಇವರ ತಾಯಿ ಸುಭದ್ರಾಬಾಯಿ ; ತಂದೆ ಭೀಮರಾವ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಓದಿ, ೧೯೩೫ರಲ್ಲಿ ಬಿ.ಎ.ಪದವಿ ಗಳಿಸಿದರು. ಅನೇಕ ವರ್ಷ ಜಯಂತಿ ಮಾಸಪತ್ರಿಕೆಯನ್ನು ನಡೆಯಿಸಿದರು. ೧೯೩೮ರಿಂದ ೧೯೪೬ರವರೆಗೆ ಚರಕಾ ಸಂಘದ ವ್ಯವಸ್ಥಾಪಕರಾಗಿದ್ದರು.
ಇವರ ಕೃತಿಗಳು:
- ಗ್ರಾಮಾಯಣ
- ಅಸುರಾಯಣ
- ಬಿತ್ತಿ ಬೆಳೆದವರು
- ಗೌಡರ ಕೋಣ
- ಸಾಮ್ಯವಾದ
- ಇತಿಹಾಸ ಭೂತ
- ವೃಂದಾವನ
- ಧೂಮಕೇತು
- ಬಾಳು ಬಂಗಾರ
- ಮುತ್ತು ಕಟ್ಟಿದಳು
- ಕಾಂಚನ ಮೃಗ
- ಮರೆಯದ ನೆನಪುಗಳು
ಗ್ರಾಮಾಯಣ ಕಾದಂಬರಿಯು ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಈ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿರುವದಲ್ಲದೆ ಭಾರತದ ಎಲ್ಲ ಭಾಷೆಗಳಿಗೆ ಅನುವಾದವಾಗಿದೆ.
"ಬಿತ್ತಿ ಬೆಳೆದವರು" ಹಾಗು "ಗೌಡರ ಕೋಣ" ಈ ಕಾದಂಬರಿಗಳು ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಗಳಿಸಿವೆ.
ರಾವಬಹಾದ್ದೂರರು ೧೯೮೪ ಡಿಶಂಬರ ೩೧ರಂದು ನಿಧನರಾದರು.