ಪಂಚತಂತ್ರ

From Wikipedia

ಪಂಚತಂತ್ರ ಭಾರತದಲ್ಲಿ ರಚಿಸಲ್ಪಟ್ಟ ಅತ್ಯಂತ ಪುರಾತನ ಕೃತಿಯಲ್ಲೊಂದು. ನೀತಿ ಕಥೆಗಳ ಈ ಸಂಗ್ರಹವು ಮೂಲತಃ ಸಂಸ್ಕೃತದಲ್ಲಿ ಬರೆಯಲ್ಪಟ್ಟಿದ್ದು, ಗದ್ಯ ಹಾಗು ಪದ್ಯಗಳ ಮಿಶ್ರಣದ ರೂಪದಲ್ಲಿದ್ದೆ. ಸುಮಾರು ೨೫೦೦ ವರ್ಷಕ್ಕಿಂತ ಹಳೆಯದು ಎಂದು ನಂಬಲಾಗಿರುವ ಈ ಕೃತಿಯ ರಚನಾಕಾರ, ಕಥೆಯ ಮುನ್ನುಡಿಯೆ ಹೇಳುವಂತೆ ವಿಷ್ಣು ಶರ್ಮ ಎಂಬ ವಿದ್ವಾಂಸ. ಭಾರತಕ್ಕೆ ಬಂದ ಹಲವಾರು ವಿದೇಶಿ ಪ್ರವಾಸಿಗರು ಹಾಗು ವಲಸೆ ಹೋದ ಭಾರತೀಯರ ಮುಖಾಂತರ ಪಂಚತಂತ್ರದ ಕಥೆಗಳು ಪರ್ಷಿಯಾ, ಅರೇಬಿಯ ಹಾಗು ಸುಮಾರು ೧೧ನೆ ಶತಮಾನದಲ್ಲಿ ಗ್ರೀಸ್ ತಲುಪಿತು. ತದನಂತರ ಯುರೋಪಿನ ಅನ್ಯ ಭಾಗಗಳಲ್ಲಿ ಪ್ರಸಿದ್ದಿಗೆ ಬಂದ ಈ ಕೃತಿಯು ಮೌಖಿಕ ಹಾಗು ಲಿಖಿತ ರೂಪಗಳಲ್ಲಿ ಇಂಡೋನೇಷಿಯ ಕೂಡ ತಲುಪಿತು. ಪಂಚತಂತ್ರ ಅಂದರೆ ಐದು ತಂತ್ರಗಳು ಅಥವ ಸೂತ್ರಗಳು. ಈ ತಂತ್ರಗಳನ್ನು ವಿಶ್ಲೇಷಿಸುವ ಕಥೆಗಳನ್ನು ಕೂಡ ಐದು ಭಾಗಗಳಲ್ಲಿ ವಿಂಗಡಿಸಲಾಗಿದೆ. ಭಾಗಗಳು ಹಾಗು ತಂತ್ರಗಳು ಹೀಗಿವೆ

  • ಮಿತ್ರ ಭೇಧ - ಮಿತ್ರರ ನಡುವೆ ಭೇಧ ತಂದು ಜಯ ಸಾಧಿಸುವುದು
  • ಮಿತ್ರ ಲಾಭ - ಮಿತ್ರರ ಸಹಾಯದಿಂದ ಜಯ ಪಡೆಯುವುದು
  • ಕಾಕೊಲೂಕೀಯ - ಶತ್ರುವನ್ನು ನಂಬಬಾರದೇಂಬ ನೀತಿ
  • ಲಬ್ದ ಪ್ರಣಾಶ - ಕಷ್ಟಕರ ಪರಿಸ್ಥಿತಿಗಳು ಎದುರಾದಾಗ ಯುಕ್ತಿಯ ಬಲದಿಂದ ಪಾರಾಗುವುದು
  • ಅಪರೀಕ್ಷಿತ ಕಾರಕ - ದಡ್ಡತನದಿಂದಾಗುವ ನಷ್ಟಗಳು

ಪಂಚತಂತ್ರದ ಜನ್ಮದ ಇತಿಹಾಸ ಹೀಗಿದೆ. ದಕ್ಷಿಣ ಭಾರತದ ಮಹಿಳಾರೋಪ್ಯದ ನಗರದ ರಾಜನಾದ ಅಮರಶಕ್ತಿಗೆ ಬಹುಶಕ್ತಿ, ಉಗ್ರಶಕ್ತಿ ಹಾಗು ಅನಂತಶಕ್ತಿ ಎಂಬ ಮೂವರು ಮಕ್ಕಳಿದ್ದರು. ಮೂರ್ಖರು ಹಾಗು ವಿದ್ಯಾರ್ಜನೆಯ ಬಗ್ಗೆ ಅನಾಸಕ್ತರಾದ ಮೂವರು ಮಕ್ಕಳ ಬಗ್ಗೆ ಅಮರಶಕ್ತಿಗೆ ಚಿಂತೆಯುಂಟಾಗಿ ತನ್ನ ಮಂತ್ರಿಗಳ ಸಲಹೆ ಕೋರಿದನು. ತನ್ನ ಒಬ್ಬ ಮಂತ್ರಿಯ ಸಲಹೆಯಯಂತೆ ರಾಜನಾದ ಅಮರಶಕ್ತಿ ಬ್ರಾಹ್ಮಣ ವಿದ್ವಾಂಸನಾದ ವಿಷ್ಣು ಶರ್ಮನಲ್ಲಿ ಮೂವರು ಮಕ್ಕಳನ್ನು ಶಿಕ್ಷಣಕ್ಕಗಿ ಕಳುಹಿಸಿದನು. ವಿಷ್ಣು ಶರ್ಮನು ನೀತಿ ಕಥೆಗಳ ಮೂಲಕ ರಾಜಕುಮಾರರಿಗೆ ಉಚಿತ ಶಿಕ್ಷಣ ಪ್ರಾಪ್ತಿಯುಂಟಾಗುವಂತೆ ಮಾಡಿದನು. ಈ ಕಥೆಗಳ ಸಂಗ್ರಹವೆ ಪಂಚತಂತ್ರ.

ಸುಮಾರು ೯೦ ಕಥೆಗಳಿರುವ ಪಂಚತಂತ್ರವು ಪಶು ಪಕ್ಷಿ ಹಾಗು ಮಾನವ ಪಾತ್ರಗಳಿಂದ ತುಂಬಿದೆ. ವಿಶ್ವದ ಅನೇಕ ಬಾಷೆಗಳಿಗೆ ತರ್ಜುಮೆಗೊಂಡಿರುವ ಈ ಕೃತಿ, ಇಂದಿಗೂ ಭಾರತದಲ್ಲಿ ಮೌಖಿಕವಾಗಿ ಹಳೆ ಪೀಳಿಗೆಯೊಂದ ಹೊಸ ಪೀಳಿಗೆಗೆ ವರ್ಗಾಯಿಸಲ್ಪಡುತ್ತಿದೆ