ವೈದೇಹಿ

From Wikipedia

ವೈದೇಹಿ
ವೈದೇಹಿ

ವೈದೇಹಿ ಕನ್ನಡ ಸಾಹಿತ್ಯಲೋಕದಲ್ಲಿ ಅಗ್ರ ಪಂಕ್ತಿಯಲ್ಲಿ ಕಾಣುವ ಹೆಸರು. ಸಣ್ಣಕಥೆ, ಕಾವ್ಯ,ಕಾದಂಬರಿಗಳು, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಲೇಖಕಿ. ಇವರ ನಿಜ ನಾಮಧೇಯ ಜಾನಕಿ ಶ್ರೀನಿವಾಸ್ ಮೂರ್ತಿ.

೧೨-೨-೧೯೪೧ ರಲ್ಲಿ ಜನಿಸಿದ ವೈದೇಹಿ, ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದ ಕಡೆಯವರು. ಬಿ.ಕಾಂ ಪದವೀಧರೆ.

ಪರಿವಿಡಿ

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಸಣ್ಣಕಥೆಗಳು

  • ಮರ ಗಿಡ ಬಳ್ಳಿ (೧೯೭೯)
  • ಅಂತರಂಗದ ಪುಟಗಳು (೧೯೮೪)
  • ಗೋಲ (೧೯೮೬)
  • ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ (೧೯೯೧)
  • ಅಮ್ಮಚ್ಚಿ ಎಂಬ ನೆನಪು (೨೦೦೦)
  • ಹಗಲು ಗೀಚಿದ ನೆಂಟ

[ಬದಲಾಯಿಸಿ] ಕವನಗಳ ಸಂಗ್ರಹ

  • ಬಿಂದು ಬಿಂದಿಗೆ (೧೯೯೦)
  • ಅಸ್ಪೃಶ್ಯರು (೧೯೯೨)
  • ಪಾರಿಜಾತ (೧೯೯೯)

[ಬದಲಾಯಿಸಿ] ಮಕ್ಕಳ ಸಾಹಿತ್ಯ

  • ಧಾಂ ಧೂಂ ಸುಂಟರಗಾಳಿ
  • ಮೂಕನ ಮಕ್ಕಳು
  • ಗೊಂಬೆ ಮ್ಯಾಕ್ ಬೆಥ್
  • ಢಣಾಡಂಗೂರ
  • ನಾಯಿಮರಿ ನಾಟಕ
  • ಕೋಟು ಗುಮ್ಮ
  • ಜುಂ ಜಾಂ ಆನೆ ಮತ್ತು ಪುಟ್ಟ
  • ಸೂರ್ಯ ಬಂದ
  • ಅರ್ಧಚಂದ್ರ ಮಿಠಾಯಿ
  • ಹಕ್ಕಿ ಹಾಡು

[ಬದಲಾಯಿಸಿ] ಅನುವಾದ ಸಾಹಿತ್ಯ

  • ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ ( ಕಮಲಾದೇವಿ ಚಟ್ಟೋಪಾಧ್ಯಾಯ ಅವರ 'Indian women's freedom struggle' ನಿಂದ ಅನುವಾದಿಸಿದ್ದು)
  • ಬೆಳ್ಳಿಯ ಸಂಕೋಲೆಗಳು ( ಮೈತ್ರೇಯಿ ಮುಖ್ಯೋಪಾಧ್ಯಾಯ ಅವರ 'Silver Shakles' ನಿಂದ ಅನುವಾದಿಸಿದ್ದು)
  • ಸೂರ್ಯಕಿನ್ನರಿಯರು ( ಸ್ವಪ್ನ ದತ್ತ ಅವರ 'Sun Fairies' ನಿಂದ ಅನುವಾದಿಸಿದ್ದು)
  • ಸಂಗೀತ ಸಂವಾದ (ಭಾಸ್ಕರ್ ಚಂದಾವರ್ಕರ್ ಅವರ ಟಿಪ್ಪಣಿಗಳಿಂದ)
  • ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ

[ಬದಲಾಯಿಸಿ] ಪ್ರಶಸ್ತಿಗಳು

  • 'ಕರ್ನಾಟಕ ಲೇಖಕಿಯರ ಸಂಘ'ದಿಂದ ಗೀತಾ ದೇಸಾಯಿ ದತ್ತಿ ನಿಧಿ ಪುರಸ್ಕಾರ (ಅಂತರಂಗದ ಪುಟಗಳು ಮತ್ತು ಬಿಂದು ಬಿಂದಿಗೆ ಕೃತಿಗಳಿಗೆ).
  • 'ವರ್ಧಮಾನ ಪ್ರಶಸ್ತಿ ಪೀಠ', ಮೂಡಬಿದಿರೆ ಯಿಂದ ವರ್ಧಮಾನ ಉದಯೋನ್ಮುಖ ಪ್ರಶಸ್ತಿ (ಗೊಲ ಕೃತಿಗೆ).
  • 'ಕಥಾ ಆರ್ಗನೈಝೆಶನ್' ನವದೆಹಲಿ ಯಿಂದ ಕಥಾ ಪುರಸ್ಕಾರ (ಹಗಲು ಗೀಚಿದ ನೆಂಟ ಕೃತಿಗೆ).
  • 'ಕರ್ನಾಟಕ ಲೇಖಕಿಯರ ಸಂಘ'ದಿಂದ ಅನುಪಮಾ ಪುರಸ್ಕಾರ (ಸಮಾಜ ಶಾಸ್ತ್ರಗ್ನೆಯ ಟಿಪ್ಪಣಿಗೆ ಕೃತಿಗೆ).
  • 'ಕರ್ನಾಟಕ ಸಂಘ' ಶಿವಮೊಗ್ಗ ದಿಂದ ಎಂ.ಕೆ.ಇಂದಿರಾ ಪುರಸ್ಕಾರ (ಅಸ್ಪೃಶ್ಯರು ಕೃತಿಗೆ).
  • ಕರ್ನಾಟಕ ಸಾಹಿತ್ಯ ಅಕೆಡಮಿ ಪುರಸ್ಕಾರ (ಐದು ಮಕ್ಕಳ ನಾಟಕಗಳು ಕೃತಿಗೆ)
  • 'ಅತ್ತಿಮಬ್ಬೆ ಪ್ರತಿಷ್ಠಾನ' ದಿಂದ ಅತ್ತಿಮಬ್ಬೆ ಪುರಸ್ಕಾರ.
  • ಸಾಹಿತ್ಯ ಅಕೆಡಮಿ ಪುರಸ್ಕಾರ (ಮಲ್ಲಿನಾಥನ ಧ್ಯಾನ ಕೃತಿಗೆ).
  • ಕರ್ನಾಟಕ ರಾಜ್ಯ ಸರ್ಕಾರದಿಂದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ

[ಬದಲಾಯಿಸಿ] ಇತರೆ ವಿಷಯಗಳು

ಇವರ 'ಅಸ್ಪೃಶ್ಯರು' ಕಾದಂಬರಿ , ಮಂಗಳೂರು ವಿಶ್ವವಿಧ್ಯಾನಿಲಯದಲ್ಲಿ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ. 'ವೈದೇಹಿಯವರ ಸಣ್ಣ ಕಥೆಗಳು' ಬೆಂಗಳೂರು ವಿಶ್ವವಿಧ್ಯಾನಿಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ. ಹಲವಾರು ಸಣ್ಣ ಕಥೆಗಳು ಹಿಂದಿ, ಮಲೆಯಾಳಂ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೆ ಅನುವಾದಿವಾಗಿವೆ.


ಟೆಂಪ್ಲೇಟ್ ದೊಡ್ಡದಾಗಿರುವುದರಿಂದ ಇನ್ನು ಮುಂದೆ ಸಾಹಿತಿಗಳು ಟೆಂಪ್ಲೇಟನ್ನು ಬಳಸಲಾಗುವುದಿಲ್ಲ. ಈ ಟೆಂಪ್ಲೇಟ್ ಲೇಖನವೊಂದರಲ್ಲಿ ನಿಮಗೆ ಕಂಡುಬಂದಲ್ಲಿ ಲೇಖನ ಪುಟದಿಂದ {{ಸಾಹಿತಿಗಳು}}ಎಂಬ ಸೇರ್ಪಡೆಯನ್ನು ತೆಗೆದುಹಾಕಿ.