ಸಮೇತನಹಳ್ಳಿ ರಾಮರಾವ್
From Wikipedia
ಸಮೇತನಹಳ್ಳಿ ರಾಮರಾಯರು ೧೯೧೭ ನವಂಬರ ೨೪ರಂದು ಬೆಂಗಳೂರು ಜಿಲ್ಲೆಯ ಸಮೇತನಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ರುಕ್ಮಿಣಿಯಮ್ಮ; ತಂದೆ ಶ್ರೀನಿವಾಸರಾವ. ಬಡತನದಲ್ಲಿ ಕಷ್ಟಪಟ್ಟು ಶಿಕ್ಷಣ ಪೂರೈಸಿದ ಇವರು ಆರೋಗ್ಯ ನಿರೀಕ್ಷಕರೆಂದು ನಿವೃತ್ತರಾದರು.
ಇವರ ಕೃತಿಗಳು:
- ಎಲೆಮರೆಯ ಹೂ
- ಕಲಾರಾಧನೆ
- ಜೂಲಿಯಸ್ ಸೀಜರ್
- ತಲಕಾಡುಗೊಂಡ
- ನಾಟ್ಯಮಂದಾರ
- ಪ್ರಾಣವೀಣೆ
- ಮಹಾಶ್ವೇತೆ
- ಯದುವೊಡೆಯ
- ರಾಸಲೀಲೆ
- ಶಾಕುಂತಲ (ಕಾವ್ಯ)
- ಶಿಲ್ಪ ಸಂಗೀತ
- ಸವತಿಗಂಧ ವಾರಣಿ
- ಸಿರಿಯಲ ದೇವಿ
- ಸ್ವರ್ಗ ಸೋಪಾನ
[ಬದಲಾಯಿಸಿ] ಪುರಸ್ಕಾರ
- ‘ಶಾಕುಂತಲ’ (ಕಾವ್ಯ)ಕ್ಕೆ ೧೯೭೧ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.
- ‘ಸ್ವರ್ಗ ಸೋಪಾನ’, ‘ತಲಕಾಡುಗೊಂಡ’ ಕೃತಿಗಳಿಗೆ ರಾಜ್ಯ ಸರಕಾರದ ಬಹುಮಾನ ಲಭಿಸಿದೆ.
- ‘ಸಿರಿಯಲ ದೇವಿ’ ಕೃತಿಗೆ ಸಂಯುಕ್ತ ಕರ್ನಾಟಕ ಕಾದಂಬರಿ ಸ್ಪರ್ಧೆ ಬಹುಮಾನ ದೊರೆತಿದೆ.
- ‘ಶಿಲ್ಪ ಸಂಗೀತ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ದೊರೆತಿದೆ.