ಆರ್.ನರಸಿಂಹಾಚಾರ್
From Wikipedia
ಆರ್.ನರಸಿಂಹಾಚಾರ್ಯರು ೧೮೬೦ ಎಪ್ರಿಲ್ ೯ರಂದು ಮಂಡ್ಯ ಜಿಲ್ಲೆಯ ಕೊಪ್ಪಲು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಶಿಂಗಮ್ಮಾಳ್ ; ತಂದೆ ತಿರುನಾರಾಯಣ ಪೆರುಮಾಳ್. ಇವರು ಅನೇಕ ವರ್ಷಗಳ ಸಂಶೋಧನೆಯಿಂದ ೧೫೦೦ ಕವಿಗಳ ಚರಿತ್ರೆಯನ್ನು ಹಾಗು ಕೃತಿಪರಿಚಯವನ್ನು ತಮ್ಮ ಮಹತ್ವದ ಕೃತಿಯಾದ “ಕರ್ನಾಟಕ ಕವಿ ಚರಿತ್ರೆ”ಯಲ್ಲಿ ಮಾಡಿದ್ದಾರೆ.
[ಬದಲಾಯಿಸಿ] ಕೃತಿಗಳು
- ಕರ್ನಾಟಕ ಕವಿಚರಿತ್ರೆ (೩ ಸಂಪುಟಗಳು)
- ಶಾಸನ ಪದ್ಯ ಮಂಜರಿ
- ಕನ್ನಡ ಶಾಸನ ಪದ್ಯ ಸಂಗ್ರಹ
- ಶಬ್ದಾನುಶಾಸನ
- ಕನ್ನಡ ಭಾಷಾ ಚರಿತ್ರೆ
- ನೀತಿ ಮಂಜರಿ ( ತಮಿಳಿನ “ಕುರುಳ್” ಗ್ರಂಥದ ಆಧಾರದ ಮೇಲೆ).
[ಬದಲಾಯಿಸಿ] ಸಂಪಾದನೆ
- ೨ನೆಯ ನಾಗವರ್ಮನ ಭಾಷಾ ಭೂಷಣ
- ೨ನೆಯ ನಾಗವರ್ಮನ ಶಬ್ದಸ್ಮೃತಿ
[ಬದಲಾಯಿಸಿ] ಪುರಸ್ಕಾರ
- ೧೯೧೮ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿತರಾದರು
- ೧೯೩೪ರಲ್ಲಿ ಕೇಂದ್ರ ಸರಕಾರ ಇವರಿಗೆ ಮಹಾಮಹೋಪಾಧ್ಯಾಯ ಪ್ರಶಸ್ತಿ ನೀಡಿ ಗೌರವಿಸಿತು.
- ಕೋಲಕಾಟಾದ ಅಖಿಲ ಭಾರತ ಸಾಹಿತ್ಯ ಸಂಘದಿಂದ ಕರ್ನಾಟಕ ಪ್ರಾಚ್ಯ ವಿದ್ಯಾ ವೈಭವ ಪ್ರಶಸ್ತಿ.
- ರಾವ ಬಹಾದ್ದೂರ ಹಾಗು ಪ್ರಾಕ್ತನ ವಿಮರ್ಶಾ ವಿಚಕ್ಷಣ ಬಿರುದುಗಳು ಇವರಿಗೆ ಸಂದಿವೆ.
ಆರ್.ನರಸಿಂಹಾಚಾರ್ ೧೯೩೬ ಡಿಶಂಬರ ೬ರಂದು ತೀರಿಕೊಂಡರು.