ಭಾರತೀಸುತ
From Wikipedia
ಭಾರತೀಸುತ ಇದು ಎಸ್.ಆರ್.ನಾರಾಯಣರಾವ್ ಇವರ ಕಾವ್ಯನಾಮ. ಇವರು ೧೯೧೫ ಮೇ ೧೫ರಂದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಸುಬ್ಬಮ್ಮ ; ತಂದೆ ರಾಮಯ್ಯ.
ಎಸ್.ಆರ್.ನಾರಾಯಣರಾಯರು ಚಿಕ್ಕ ವಯಸ್ಸಿನಲ್ಲಿಯೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಇದು ಅವರ ಶಿಕ್ಷಣವನ್ನು ಅಪೂರ್ಣವನ್ನಾಗಿ ಮಾಡಿತು. ಆದರೂ ಸಹ, ಮದರಾಸಿನ (ಈಗ ಚೆನ್ನೈ) ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆಲಕಾಲ ಮಡಿಕೇರಿಯ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ಕೆಲಕಾಲ “ರಾಷ್ಟ್ರಬಂಧು” ಹಾಗು “ಗುರುವಾಣಿ” ಪತ್ರಿಕೆಗಳಿಗೆ ಸಂಪಾದಕರಾಗಿದ್ದರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ಅಮಾತ್ಯ ನಂದಿನಿ
- ಅವಳ ದಾರಿ
- ಇಳಿದು ಬಾ ತಾಯಿ
- ಎಡಕಲ್ಲು ಗುಡ್ಡದ ಮೇಲೆ - ಇದೇ ಹೆಸರಿನಿಂದ ಚಲನಚಿತ್ರವಾಗಿದೆ.
- ಗಿರಿಕನ್ನಿಕೆ
- ಗಿಳಿಯು ಪಂಜರದೊಳಿಲ್ಲ
- ದೊರೆ ಮಗಳು
- ಪೃಥ್ವಿರಾಜ
- ಬಯಲು ದಾರಿ - ಇದೇ ಹೆಸರಿನಿಂದ ಚಲನಚಿತ್ರವಾಗಿದೆ.
- ಬೆಂಕಿಯ ಮಳೆ
- ಬೆಳೆಕಿನೆಡೆಗೆ
- ವಕ್ರರೇಖೆ
- ಸಾಧನ ಕುಟೀರ
- ಹಾವಿನ ಹುತ್ತ
- ಹುಲಿಯ ಹಾಲಿನ ಮೇವು - ಇದೇ ಹೆಸರಿನಿಂದ ಚಲನಚಿತ್ರವಾಗಿದೆ.
[ಬದಲಾಯಿಸಿ] ಕಥಾಸಂಕಲನ
- ಜಿಂಬ ಹಿಡಿದ ಮೀನು
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ಅಕ್ಕ ತಂಗಿಯರು
- ಕಳ್ಳರ ಫಜೀತಿ
- ಕಾವೇರಿ
- ಕಿನ್ನರರ ಕುಣಿತ
- ಕಿಲಾಡಿ ಗವುಜಗ
- ಕಿಲಾಡಿ ಮಂಗಣ್ಣ
- ಕುಣಿಯುತ ಬಂದರು ಕುಂಬಾರನ ಮಕ್ಕಳು
- ಗೆಳೆಯ ಮೊಲರಾಯ
- ನಳ ದಮಯಂತಿ
- ಬಚ್ಚಣ್ಣ ಬಹದೂರ್ (ಸಚಿತ್ರ)
- ಬೇಸ್ತು ಬಿದ್ದ ನರಿ
- ಮಂತ್ರದ ಕೊಳಲು
- ಹನ್ನೊಂದು ಹಂಸಗಳು ( ಮೂಲ: ಹ್ಯಾನ್ಸ್ ಎಂಡರ್ಸನ್ )
- ಹೊನ್ನು ಹೊಳೆಯ ಅರಸು
[ಬದಲಾಯಿಸಿ] ಇತರ
- ಡಾ|ಜಕೀರ್ ಹುಸೇನ್
- ಮಲ್ಲಿಗೆ ಹಳ್ಳಿಯ ಜಾಣರು
- ಸೊಳ್ಳೆ ಹರಡುವ ರೋಗಗಳು
[ಬದಲಾಯಿಸಿ] ಪುರಸ್ಕಾರ
- 'ಹುಲಿ ಬೋನು' , 'ಗಿರಿಕನ್ನಿಕೆ' , 'ಗಿಳಿಯು ಪಂಜರದೊಳಿಲ್ಲ' ಈ ಕಾದಂಬರಿಗಳಿಗೆ ಹಾಗು 'ಜಿಂಬ ಹಿಡಿದ ಮೀನು' ಈ ಕಥಾಸಂಕಲನಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.