ಅಲ್ಲಮಪ್ರಭು

From Wikipedia

ಅಲ್ಲಮ ಪ್ರಭುಗಳು, ನಾಡು ಕಂಡ ಅಸಾಮಾನ್ಯ ಜ್ಞಾನಿ, ಯೋಗಿ, ಸಾಧಕ ಮತ್ತು ಶಿವಶರಣರಲ್ಲಿ ಅಗ್ರಗಣ್ಯರಾಗಿದ್ದಾರೆ. ಇವರ ವಚನ ಅಂಕಿತ ನಾಮ ಗುಹೇಶ್ವರಾ ಎಂದಾಗಿದೆ.

[ಬದಲಾಯಿಸಿ] ವಚನಗಳು

" ಹೆಣ್ಣಿಗಾಗಿ ಸತ್ತವರು ಕೋಟಿ ಮಣ್ಣಿಗಾಗಿ ಸತ್ತವರು ಕೋಟಿ ಹೊನ್ನಿಗಾಗಿ ಸತ್ತವರು ಕೋಟಿ ಗುಹೇಶ್ವರಾ! ನಿಮಗಾಗಿ ಸತ್ತವರನಾರನೂ ಕಾಣೆ"

ಇಲ್ಲಿ ಅಲ್ಲಮ ಪ್ರಭುಗಳು, ಹೆಣ್ಣಿಗಾಗಿ ನೆಡೆದ ರಾಮ-ರಾವಣರ ಯುದ್ಧ, ಮಣ್ಣಿಗಾಗಿ ನೆಡೆದ ಕುರುಕ್ಷೇತ್ರ ಯುದ್ಧ, ಹೊನ್ನಿಗಾಗಿ ನೆಡೆದ ಅಶೋಕನ ಕಳಿಂಗ ಯುದ್ಧವನ್ನು ಉದಹರಿಸಿ, ದೇವರಿಗಾಗಿ ಯಾರೂ ಜೀವ ನೀಡಲು ಸಿದ್ಧರಿಲ್ಲದ, ಮಾನವನ ಸ್ವಾರ್ಥವನ್ನು ಎತ್ತಿ ತೋರಿಸಿದ್ದಾರೆ.