ರಸಿಕ ಪುತ್ತಿಗೆ

From Wikipedia

ರಸಿಕ ಪುತ್ತಿಗೆ’ ಎಂದೇ ಖ್ಯಾತರಾದ ಪಿ.ಸುಬ್ರಹ್ಮಣ್ಯ ಆಚಾರ್ಯರು ೧೯೩೨ ಜೂನ ೧೫ರಂದು ಕಾರ್ಕಳ ತಾಲೂಕಿನ ಪುತ್ತಿಗೆಯಲ್ಲಿ ಜನಿಸಿದರು. ಇವರ ತಾಯಿ ನಾಗವೇಣಿ ಅಮ್ಮ; ತಂದೆ ವೆಂಕಟರಮಣಾಚಾರ್ಯ.


ಪರಿವಿಡಿ

[ಬದಲಾಯಿಸಿ] ಶಿಕ್ಷಣ ಹಾಗು ವೃತ್ತಿ

ಹಿಂದಿ ಭಾಷೆಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಹಿಂದೀ ಶಿಕ್ಷಕರಾದ ಆಚಾರ್ಯರು,ಆನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ.(ಕನ್ನಡ) ಪದವಿ ಹಾಗು ಭಾಷಾ ಶಿಕ್ಷಣದಲ್ಲಿ ಡಿಪ್ಲೋಮಾ ಪಡೆದರು.

[ಬದಲಾಯಿಸಿ] ಸಾಹಿತ್ಯ ಸೇವೆ

‘ರಸಿಕ ಪುತ್ತಿಗೆ’ ಹೆಸರಿನಲ್ಲಿ ಆಚಾರ್ಯರು ಮಕ್ಕಳಿಗಾಗಿ ಅನೇಕ ಕಥೆ, ಕಾದಂಬರಿ, ನಾಟಕ ಹಾಗು ಜೀವನ ಚರಿತ್ರೆಗಳನ್ನು ರಚಿಸಿದ್ದಾರೆ. ಮಕ್ಕಳಿಂದ ನಾಟಕಗಳನ್ನು ಆಡಿಸಿದ್ದಾರೆ. ಆಕಾಶವಾಣಿಯಲ್ಲಿ ಕಥೆ ಹಾಗು ಕವನಗಳನ್ನು ಓದಿದ್ದಾರೆ.

[ಬದಲಾಯಿಸಿ] ಕೃತಿಗಳು

[ಬದಲಾಯಿಸಿ] ಕಥಾಸಂಕಲನ

  • ಕೊಂಬಿನ ಕಂಬಯ್ಯ
  • ಇಲಿಗೆ ಅಂಜಿದ ಹುಲಿ
  • ನೀತಿ ಕಥೆಗಳು
  • ತುಂಟಾಟದ ಕಥೆಗಳು
  • ಸುಕ್ಕಿನುಂಡೆ ಸುಬ್ಬ ಮತ್ತು ಇತರ ಕಥೆಗಳು
  • ತಪೋವನದ ಸಾಹಸಿಗಳು

[ಬದಲಾಯಿಸಿ] ನಾಟಕ

  • ಸತಿ ಅನುಸೂಯಾ
  • ತಿಲೋತ್ತಮೆ
  • ವೀರ ಜಟಾಯು
  • ಮರೆವೊ ಮರೆವು
  • ಸುಂದೋಪಸುಂದ
  • ಅಗ್ನಿಪರೀಕ್ಷೆ

[ಬದಲಾಯಿಸಿ] ಮಕ್ಕಳ ಕಾದಂಬರಿ

  • ಕೆಂಪು ಕಾದಂಬರಿ
  • ಮಾರುತಿ ಶಾಲೆ ಹುಡುಗರು
  • ಮೂವರು ಮಾಣಿಗಳು

[ಬದಲಾಯಿಸಿ] ಜೀವನಚರಿತ್ರೆ

  • ಸೂರದಾಸ
  • ತುಳಸಿದಾಸ
  • ಸುಭದ್ರಾಕುಮಾರಿ ಚೌಹಾಣ
  • ಟಿ.ಎಲ್.ವಾಸ್ವಾನಿ
  • ಕುರಿಯ ವಿಠ್ಠಲಶಾಸ್ತ್ರಿ
  • ಕೋಟಿ ಚನ್ನಯ್ಯ

[ಬದಲಾಯಿಸಿ] ಪರಿಚಯ ಕೃತಿ

  • ಕಂಬಳ-ಕೊಳಿ ಅಂಕ

[ಬದಲಾಯಿಸಿ] ಪುರಸ್ಕಾರ

  • ಇವರ ‘ಕೆಂಪು ಕಾರು’ ಕೃತಿಗೆ ರಾಷ್ಟ್ರೀಯ ಪ್ರಶಸ್ತಿ (NCERT) ಲಭಿಸಿದೆ.